ಇಂದು ಉಪವಾಸ ಮಾಡಿ ನಾಳಿನ ನಾಗರ ಪಂಚಮಿಯ ಪೂಜೆ ಮಾಡಿ: ಡಾ. ಹರೀಶ್ ಕಶ್ಯಪ್
ಇಂದು ಚತುರ್ಥಿಯಲ್ಲಿ ಉಪವಾಸವಿರಬೇಕು ಹಾಗೂ ಪಂಚಮಿಗೆ ನಾಗನಿಗೆ ಅಭಿಷೇಕ ಮಾಡಬೇಕು ಎಂದು ಆಧ್ಯಾತ್ಮಿಕ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದರು. ಅವರು ನಾಗರ ಪಂಚಮಿಯ ಹಾಗೂ ಚತುರ್ಥಿ ಆಚರಣೆ ಕುರಿತು ಮಾಹಿತಿ ನೀಡಿದ್ದಾರೆ.
ನಾಗರ ಪಂಚಮಿಯ ಹಿಂದಿನ ದಿನವಾದ ಚತುರ್ಥಿಯಂದು ಹೊರಗಡೆ ಏನನ್ನು ತಿನ್ನಬಾರದು ಎಂದು ಆಧ್ಯಾತ್ಮಿಕ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದರು. ಇಂದು ಚತುರ್ಥಿ, ಆದ್ದರಿಂದ ಮನೆಯಲ್ಲಿ ಇದ್ದು ನಾಳಿನ ನಾಗರ ಪೂಜೆಗೆ ಮನೆ ಹಾಗೂ ಮನಸ್ಸನ್ನು ಸಿದ್ಧಗೊಳಿಸಬೇಕು. ಪಂಚಮಿಯಂತೆ ಚತುರ್ಥಿಗೂ ಕೂಡ ಮಹತ್ವವಿದೆ ಎಂದು ಅವರು ತಿಳಿಸಿದರು. ನಾಡಿ ಶುದ್ಧಿಗೆ ನಾಗನ ಅನುಗ್ರಹ ಬೇಕು ಎಂದು ಅವರು ಹೇಳಿದರು.