Asianet Suvarna News Asianet Suvarna News

ಮನೋಕಾಮನೆ ಈಡೇರಿಸೋ ಸಂತಾನೇಶ್ವರ ಮಹಾದೇವ...

ಭಾರತದಲ್ಲಿರೋ ಒಂದೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷತೆಗಳಿವೆ. ಉತ್ತರ ಪ್ರದೇಶದಲ್ಲಿರೋ ಈ ದೇವಸ್ಥಾನಕ್ಕೆ ಹೋಗಿ ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುತ್ತಂತೆ. ಮತ್ತೆ?

Goddess Manakamana Temple to grace pregnancy and Safe delivery
Author
Bengaluru, First Published Mar 8, 2019, 5:01 PM IST

ಭಾರತದಲ್ಲಿ ಹಲವು ದೇವಸ್ಥಾನಗಳಿವೆ. ಅಲ್ಲಿ ಹೋಗಿ ಬೇಡಿಕೊಂಡರೆ ಮನೋಕಾಮನೆಗಳು ಈಡೇರುತ್ತದೆ ಎಂದೇ ಜನರು ನಂಬುತ್ತಾರೆ. ಅಂಥ ಮಂದಿರಗಳಲ್ಲಿ ಉತ್ತರ ಪ್ರದೇಶದಲ್ಲಿರುವ ಈ ಸಂತಾನೇಶ್ವರ ಮಹಾದೇವನ ಮಂದಿರವೂ ಒಂದು. ಈ ದೇವರನ್ನು ಬೇಡಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ. ಪತಿ -ಪತ್ನಿ ಈ ದೇವರ ಬಳಿ ಹೋಗಿ ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುವಂತೆ ಬೇಡಿಕೊಂಡರೆ, ಬೇಗ ಮಗುವಾಗುತ್ತಂತೆ. 

ಇಲ್ಲಿಗೆ ಪ್ರತಿದಿನ ನೂರಾರು ಭಕ್ತರು ಸಂತಾನೇಶ್ವರನ ದರ್ಶನಕ್ಕೆ ಬರುತ್ತಾರೆ. ಸೋಮವಾರ ಈ ಮಂದಿರದಲ್ಲಿ ಸಂತಾನ ಪ್ರಾಪ್ತಿಗಾಗಿ ಬರುವ ಜೋಡಿಗಳ ಸಂಖ್ಯೆ ಅಧಿಕವಾಗಿರುತ್ತದೆ.  ಈ ದಿನ ಅಲ್ಲಿ ರುದ್ರಾಭಿಷೇಕ ಮಾಡುವುದು ಅಲ್ಲಿನ ವಿಶೇಷ. 

ಈ ಮಂದಿರ ನಿರ್ಮಾಣದ ಕುರಿತಂತೆ ಯಾವುದೇ ಸ್ಪಷ್ಟ ಇತಿಹಾಸವೂ ಇಲ್ಲ. ಆದರೆ ಸ್ಕಂದ ಪುರಾಣದ ಪ್ರಕಾರ ಕಾಶಿ ಖಂಡದಲ್ಲಿ ಸಂತಾನೇಶ್ವರ ಮಹಾದೇವನ ಉಲ್ಲೇಖನವಿದೆ. 

ಶಿವ ಪುರಾಣದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಇದರ ಅನುಸಾರ ಕಾಶಿಯ ಸಂತಾನೇಶ್ವರ ಮಹಾದೇವನ ಮುಂದೆ ಯಾವುದೇ ಮಕ್ಕಳಿಲ್ಲದ ದಂಪತಿ ಬಂದು ಜಲಾಭಿಷೇಕ ಮಾಡಿ, ಶಿವನಿಗೆ ಬಿಲ್ವ ಪತ್ರೆ ಸಮರ್ಪಿಸಿದರೆ, ಸಂತಾಸ ಸುಖ ಸಿಗುತ್ತದೆ. 

ಮಂದಿರದ ಪರಿಸರದೊಳಗೇ ಅಮೃತೇಶ್ವರ ಮಹಾದೇವನ ಮಂದಿರವಿದೆ. ಈ ದೇವನ ದರ್ಶನ ಪಡೆದರೆ ಜ್ಯೋತಿಷ್ಯದಲ್ಲಿ ಅಲ್ಪಾಯು ಯೋಗವಿದ್ದವರು ಮುಕ್ತಿ ಪಡೆಯಬಹುದೆಂಬ ನಂಬಿಕೆ ಇದೆ. ಜೊತೆಗೆ ಧೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ. 

ಈ ಮಂದಿರ ಕಾಶಿಯ ಕಾಲಭೈರವದಿಂದ ಚೌಖಂಬಾ ಕಡೆಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. 

Follow Us:
Download App:
  • android
  • ios