Water Scarcity
(Search results - 39)Karnataka DistrictsSep 23, 2019, 5:59 PM IST
ತುಮಕೂರು: ಬತ್ತಿದ ಬೋರ್ವೆಲ್, ಕುಡಿಯೋಕೂ ನೀರಿಲ್ಲ..!
ತುಮಕೂರಿನ ತಿಪಟೂರು ತಾಲೂಕಿನಲ್ಲಿ ನೀರಿಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ. ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿಲ್ಲದೆ ಇಲ್ಲಿನ ಜನ ತೊಂದರೆಗೊಳಗಾಗಿದ್ದಾರೆ. ನೀರಿಗಾಗಿ ನಿರ್ಮಾಣ ಮಾಡಲಾಗಿರುವ ಬೋರ್ವೆಲ್ಗಳಲ್ಲಿಯೂ ನೀರಿನ ಸೆಲೆ ಬತ್ತಿದ್ದು, ಜನರು ಕುಡಿಯಲೂ ನೀರಿಲ್ಲದೆ ಕಷ್ಟಪಡುತ್ತಿದ್ದಾರೆ.
Karnataka DistrictsAug 27, 2019, 3:03 PM IST
ಚಿಕ್ಕಬಳ್ಳಾಪುರ: ಬಿಸಿಯೂಟಕ್ಕೂ ನೀರಿನ ಕೊರತೆ..!
ಚಿಕ್ಕಬಳ್ಳಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ನೀರಿನ ಸಮಸ್ಯೆ ತಲೆದೋರಿದೆ. ಕೊಳವೆ ಬಾವಿಗಳು ಬತ್ತಿಹೋಗಿರುವ ಪರಿಣಾಮ ತಾಲೂಕಿನಲ್ಲಿ ಈಗಾಗಲೇ ನಿರ್ಮಿಸಿರುವ 9 ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿವೆ, ಅಲ್ಲದೆ ತಾಲೂಕಿನ 57 ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಕಾಡುತ್ತಿದೆ.
Karnataka DistrictsAug 17, 2019, 11:46 AM IST
ಎತ್ತ ನೋಡಿದರೂ ನೀರು, ಕುಡಿಯೋಕೆ ಮಾತ್ರ ಹನಿ ನೀರಿಲ್ಲ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಬಂದರೂ ಕುಡಿಯೋಕೆ ಮಾತ್ರ ನೀರಿಲ್ಲ. ನೀರಿನ ಮೂಲಗಳಾದ ಬಾವಿಗಳಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು ಕುಡಿಯಲು ಯೋಗ್ಯ ನೀರಿಗೆ ಅಭಾವ ತಲೆದೋರಿದೆ. ಬೇಸಿಗೆಯ ಬರಕ್ಕಿಂತ ಪ್ರವಾಹದ ನಂತರ ಉಂಟಾಗಿರುವ ನೀರಿನ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ.
Karnataka DistrictsAug 15, 2019, 10:43 AM IST
NEWSAug 14, 2019, 8:17 AM IST
ಸದ್ಯಕ್ಕೆ ನಗರಕ್ಕಿಲ್ಲ ನೀರಿನ ಸಮಸ್ಯೆ!
ಸದ್ಯಕ್ಕೆ ನಗರಕ್ಕಿಲ್ಲ ನೀರಿನ ಸಮಸ್ಯೆ!| -ಜೂನ್, ಜುಲೈನಲ್ಲಿ ಬಾರದ ಮಳೆ, ಆತಂಕ ಸೃಷ್ಟಿಸಿದ್ದ ನೀರಿನ ಕೊರತೆ| ಭರ್ಜರಿ ಮಳೆಯಿಂದ ತುಂಬಿದ ಕೆಆರ್ಎಸ್| ನೀರು ಪೂರೈಕೆ ಸುಗಮ
BUSINESSAug 4, 2019, 12:09 PM IST
ತೈಲ ಕಂಪನಿಗೂ ತಟ್ಟಿದ ಬೇಸಿಗೆ ನೀರಿನ ಕೊರತೆ; MRPL 500 ಕೋಟಿ ರು. ನಷ್ಟ!
ತೈಲ ಕಂಪನಿಗೂ ತಟ್ಟಿದ ಬೇಸಿಗೆ ನೀರಿನ ಕೊರತೆ| ಎಂಆರ್ಪಿಎಲ್ 500 ಕೋಟಿ ರು. ನಷ್ಟ| ಬೇಸಿಗೆಯಲ್ಲಿ 45 ದಿನಗಳ ಕಾಲ ನೀರಿನ ಕೊರತೆಯಿಂದ ಎಂಆರ್ಪಿಎಲ್ನ ವಿವಿಧ ಘಟಕಗಳು ಸ್ಥಗಿತಗೊಂಡ ಕಾರಣ ಕಂಪನಿ ನಷ್ಟಅನುಭವಿಸಿದೆ
Karnataka DistrictsJul 27, 2019, 12:49 PM IST
ಚಿಕ್ಕಬಳ್ಳಾಪುರಕ್ಕೆ ಎದುರಾಗಲಿದ್ಯಾ ಜಲಕಂಟಕ..?
ಈವರೆಗೂ ನಂದಿಗಿರಿಧಾಮದ ಪಶ್ಚಿಮ ಭಾಗದಲ್ಲಿ ಮತ್ತು ದೊಡ್ಡಬಳ್ಳಾಪುರ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದ ಕಾರಣ ಜಕ್ಕಲಮಡಗು ಜಲಾಶಯಕ್ಕೆ ಯಥೇಚ್ಛವಾಗಿ ನೀರು ಹರಿದು ಬರುತ್ತಿತ್ತು. ಜಕ್ಕಲಮಡಗು ಜಲಾಶಯ ಭರ್ತಿಯಾಗಿ ನೀರಿನ ಕೊರತೆ ಕಾಡುತ್ತಿರಲಿಲ್ಲ. ಇದೀಗ ಜಲಾಶಯ ಸಂಪೂರ್ಣ ಬರಿದಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ನೀರಿನ ಅಭಾವ ತಲೆದೋರಲಿದೆ.
NEWSJul 18, 2019, 8:44 AM IST
ಅರ್ಧ ಮಳೆಗಾಲ ಕಳೆದರೂ ರಾಜ್ಯದಲ್ಲಿ ನೀರಿಗೆ ಬರ!
ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ರಾಜ್ಯದ ಶೇ.70ರಷ್ಟುಕೆರೆಗಳಿಗೆ ಹನಿ ನೀರು ಬಂದಿಲ್ಲ. ಇನ್ನು ರಾಜ್ಯದ 25 ಜಿಲ್ಲೆಗಳ 1,323 ಗ್ರಾಮಗಳಿಗೆ ನಿತ್ಯ 2,237 ಟ್ಯಾಂಕರ್ಗಳಿಂದ ನೀರು ಪೂರೈಕೆ. ಇದು ರಾಜ್ಯಅನುಭವಿಸುತ್ತಿರುವ ಜಲಕ್ಷಾಮ ಚಿತ್ರಣ...!
Karnataka DistrictsJul 7, 2019, 8:23 AM IST
ಇನ್ನೊಂದು ತಿಂಗಳಷ್ಟೇ ಬೆಂಗಳೂರಿಗೆ ಕಾವೇರಿ ನೀರು
ಬೆಂಗಳೂರಿಗರೇ ಎಚ್ಚರ, ಇನ್ನೊಂದು ತಿಂಗಳಷ್ಟೇ ನಿಮಗೆ ಕಾವೇರಿ ನೀರು ಸಿಗುವುದು. ಕಾರಣ ಏನು..?
NEWSJul 1, 2019, 2:12 PM IST
ಚೆನ್ನೈನಲ್ಲಿ ಹನಿ ನೀರಿಗೂ ತತ್ವಾರ ಬೆಂಗಳೂರಿಗೂ ಕಾದಿದೆ ಗಂಡಾಂತರ
ಬೆಂಗಳೂರಿಗೆ ನೀರು ಪೂರೈಸುವ ಪ್ರಮುಖ ಮೂಲಗಳಾಗಿದ್ದ ಅರ್ಕಾವತಿ ನಶಿಸಿದೆ. ವೃಷಭಾವತಿ ನದಿಗೆ ಕಟ್ಟಲಾಗಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ಬಳಕೆಗೆ ಯೋಗ್ಯವಲ್ಲದ ಮಟ್ಟಿಗೆ ಹಾಳಾಗಿದೆ. ಇರುವ ಒಂದೇ ಮೂಲವೆಂದರೆ ಕಾವೇರಿ ನದಿ. ಅಲ್ಲಿಂದಲೂ 5ನೇ ಹಂತದಲ್ಲಿ ನೀರು ತರುವ ಕಾರ್ಯ ಚಾಲ್ತಿಯಲ್ಲಿದೆಯಾದರೂ, ಪ್ರಸ್ತುವ ವರ್ಷ ಕಾವೇರಿ ಮೂಲ ತಲಕಾವೇರಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ.
NEWSJun 28, 2019, 8:14 AM IST
ಬೆಂಗಳೂರಲ್ಲಿ 5 ವರ್ಷ ಹೊಸ ಅಪಾರ್ಟ್ಮೆಂಟ್ ನಿಷೇಧ?
ರಾಜಧಾನಿಯಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯದ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳವರೆಗೆ ಅಪಾರ್ಟ್ಮೆಂಟ್ ನಿರ್ಮಾಣ ನಿಷೇಧಿಸುವ ಚಿಂತನೆ ಹೊಂದಿರುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
NEWSJun 27, 2019, 8:13 AM IST
ಕಾವೇರಿ ಕಣಿವೆಯಲ್ಲಿಲ್ಲ ನೀರು : ನಾಲ್ಕೂ ಜಲಾಶಯಗಳು ಖಾಲಿ
ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದ್ದು, ಇದರಿಂದ ನೀರಿನ ದಾಹ ನೀಗಿಸುವುದು ಕಷ್ಟವಾಗುತ್ತಿದೆ. ಕಾವೇರಿ ಕಣಿವೆಗಳು ಖಾಲಿ ಖಾಲಿಯಾಗಿವೆ.
Karnataka DistrictsJun 22, 2019, 8:35 AM IST
ಅಪಾರ್ಟ್ಮೆಂಟ್ ನಿವಾಸಿಗಳಿಗೆ ನೀರು ಪೂರೈಕೆ ಮಾಡುವ ಹೊಣೆ ಬಿಲ್ಡರ್ಗಳ ಹೆಗಲಿಗೆ
ಸಿಲಿಕಾನ್ ಸಿಟಿ ಕಂಡ್ ಕಂಡಲ್ಲಿ ಅಪಾರ್ಟ್ಮೆಂಟ್ಗಳು ತಲೆ ಎತ್ತುತ್ತಿವೆ. ಬಹುತೇಕ ಕಟ್ಟಡಗಳಿಗೆ ಸುಸೂತ್ರ ನೀರಿನ ವ್ಯವಸ್ಥೆಯೇ ಇಲ್ಲ. ಮನೆ ಕೊಂಡ ಮಂದಿ ಪಡುವ ಪಾಡು ಅಷ್ಟಿಷ್ಟಲ್ಲ. ಈ ಸಂಕಷ್ಟ ದೂರ ಮಾಡಲು ಇನ್ನು ಬ್ಯುಲ್ಡರ್ಗಳೇ ಮನೆಗೆ ನೀರು ನೀಡುವ ವ್ಯವಸ್ಥೆ ಮಾಡಬೇಕು.
NEWSJun 8, 2019, 1:39 PM IST
ಪ್ರಾಣಿಗಳಿಗೂ ತಟ್ಟಿದ ಬಿಸಿಲ ಬೇಗೆ : ನೀರಿಲ್ಲದೇ ಮಂಗಗಳ ಮಾರಣ ಹೋಮ
ದೇಶದಲ್ಲಿ ಈ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದೆ. ಮುಂಗಾರು ಪೂರ್ವದಲ್ಲಿ ಸುರಿಯಬೇಕಿದ್ದ ಮಳೆಯಲ್ಲಿ ಭಾರಿ ಕೊರತೆ ಕಂಡು ಬಂದಿದೆ. ನೀರಿನ ಸಮಸ್ಯೆ, ಬಿಸಿನ ಬೇಗೆ ಪ್ರಾಣಿಗಳಿಗೂ ತಟ್ಟಿದ್ದು ಕಾಡಿನಲ್ಲಿ ಮಂಗಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ.
NEWSMay 22, 2019, 3:52 PM IST
ದೇವರಿಗೂ ತಟ್ಟಿದ ಬರದ ಬಿಸಿ; 15 ದಿನದಲ್ಲಿ ಮಳೆಯಾಗದಿದ್ದರೆ ಕಷ್ಟ ಕಷ್ಟ!
ಕೆಲವೆಡೆ ಅಭಿಷೇಕದ ನೀರಿಗೂ ಅಳಿದುಳಿದ ಒರತೆ ನೀರನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ. ಶೀಘ್ರದಲ್ಲೇ ಮಳೆ ಬಾರದೇ ಹೋದರೆ ದೇವರೇ ಗತಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ್ಯಾವ ದೇವಾಲಯ ನೀರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ವಿವರ ಇಲ್ಲಿದೆ.