BUSINESS14, Feb 2019, 4:00 PM IST
ಮೋದಿ ಪ್ಲ್ಯಾನ್ ಚೇಂಜ್: ರೈತರಿಗೆ 2 ಸಾವಿರ ರೂ. ಬದಲಿಗೆ....!
ಕೇಂದ್ರದ ಮಧ್ಯಂತರ ಬಜೆಟ್ ಮಂಡನೆಯಾಗಿ ಈಗಿನ್ನೂ 14 ದಿನಗಳು ಸಂದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದಾಗಲೇ ಬಜೆಟ್ ನಲ್ಲಿ ಘೋಷಿಸಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ನೀತಿಯಲ್ಲಿ ಬದಲಾವಣೆ ತಂದಿದೆ.
BUSINESS13, Feb 2019, 3:44 PM IST
ಸರ್ಕಾರಿ ನೌಕರರಿಗೆ ಬಂಪರ್: ಕೇಂದ್ರದ ಘೋಷಣೆ ಸೂಪರ್!
ನೌಕರರ ಎಲ್ ಟಿಸಿ ಪ್ರಯೋಜನಗಳಲ್ಲಿ ಕೆಲವು ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಇನ್ಮುಂದೆ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲೂ ಪ್ರಯಾಣಿಸುವ ಅವಕಾಶ ಒದಗಿಸಿದೆ.
BUSINESS1, Feb 2019, 4:05 PM IST
ಸಬ್ ಕಾ ಸಾಥ್ ಸಬ್ ಕಾ ವಿಕಾಸ್: ಮೋದಿ ಬಜೆಟ್ ಫಸ್ಟ್ಕ್ಲಾಸ್!
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಬಜೆಟ್ ಮಂಡಿಸಲಾಗಿದೆ ಎಂಬ ಆರೋಪದ ಮಧ್ಯೆಯೂ ಜನಪ್ರಿಯ ಬಜೆಟ್ ನ್ನು ಮಂಡಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ. ಸಮಾಜದ ಎಲ್ಲಾ ವರ್ಗಕ್ಕೂ ಅನ್ವಯವಾಗಬಹುದಾದ ಜನಪ್ರಿಯ ಬಜೆಟ್ ಇದಾಗಿದೆ.
BUSINESS1, Feb 2019, 11:37 AM IST
ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: 5 ವರ್ಷದ ರಿಪೋರ್ಟ್ ಬಿಚ್ಚಿಟ್ಟ FM!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ 5 ವರ್ಷಗಳ ಸಾಧನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಗೋಯೆಲ್, ಕಳೆದ 5 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ನಾಗಾಲೋಟಕ್ಕೆ ಜಗತ್ತು ಬೆರಗಾಗಿದೆ ಎಂದು ಹೇಳಿದರು.
BUSINESS1, Feb 2019, 10:09 AM IST
ಮಂಡನೆಗೂ ಮುನ್ನವೇ ಲೀಕ್ ಆಗಿದೆಯಂತೆ ಬಜೆಟ್: ಕಾಂಗ್ರೆಸ್ ಆರೋಪ!
ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಲಿದ್ದು, ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಈಗಾಗಲೇ ಬಜೆಟ್ ಪ್ರತಿಯೊಂದಿಗೆ ಲೋಕಸಭೆ ತಲುಪಿದ್ದಾರೆ. ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಸೋರಿಕೆಯಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
BUSINESS31, Jan 2019, 7:09 PM IST
ಕೇಂದ್ರ ಬಜೆಟ್: ಇಲ್ಲಿವೆ ನಿಮ್ಮ ನಿರೀಕ್ಷೆ, ಮೋದಿ ಪಾಸಾಗಲಿದ್ದಾರಾ ಪರೀಕ್ಷೆ?
ಲೋಕಸಭೆ ಚುನಾವಣೆಗೆ ಹಲವು ಕೆಲವೇ ತಿಂಗಳು ಬಾಕಿ ಇರುವಾಗಲೇ, ನಾಳೆ ಮೋದಿ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. 2019 ಚುನಾವಣಾ ಹೊತ್ತಲ್ಲೇ ಬಜೆಟ್ ಮಂಡನೆಯಿಂದಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂಬುದು ದೇಶವಾಸಿಗಳ ಕುತೂಹಲ.
BUSINESS30, Jan 2019, 2:23 PM IST
ಬಜೆಟ್ಗೂ ಮೊದ್ಲೇ ಗಿಫ್ಟ್: ಗೃಹಸಾಲದ ಸಬ್ಸಿಡಿ ಪಡೆಯಲು IT ನೆರವು!
ಬಜೆಟ್ನಲ್ಲಿ ಜನಸಾಮಾನ್ಯನಿಗೆ ಆದ್ಯತೆ ನೀಡುವ ಮುನ್ಸೂಚನೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಗೃಹಸಾಲದ ಮೇಲಿನ ಸಬ್ಸಿಡಿ ಸಂಬಂಧ ಹೊಸ ಆದೇಶ ಜಾರಿಗೆ ಬರಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಸಾಲಗಳ ಬಡ್ಡಿ ಮೇಲಿನ ಸಬ್ಸಿಡಿ ವಿತರಣೆಗೆ ನೂತನ ವಿಧಾನ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
BUSINESS29, Jan 2019, 4:28 PM IST
ಫೆಬ್ರವರಿಯಿಂದ ಇ-ವ್ಯಾಲೆಟ್ಗಳು ಬಂದ್: ಮೋದಿ ಕನಸು ಭಗ್ನ?
ಇ-ಕಾಮರ್ಸ್ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಇದೀಗ ಇ-ವ್ಯಾಲೆಟ್ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ಫೆಬ್ರವರಿ ಕೊನೆಯ ತಿಂಗಳವರೆಗೆ ಹಲವು ಇ-ವ್ಯಾಲೆಟ್ಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆಗಳಿವೆ.
BUSINESS29, Jan 2019, 12:22 PM IST
ಎಲೆಕ್ಷನ್ಗೂ ಹಣ ಕೇಳ್ತಿದೆ ಸರ್ಕಾರ: ಆರ್ಬಿಐ ಮಾಡ್ತಿದೆ ಸ್ಪಷ್ಟ ನಕಾರ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮುಂಬರುವ ಲೋಕಸಭೆ ಚುನಾವಣೆಗೆ ಧನಸಹಾಯ ಮಾಡುವಂತೆ ಆರ್ಬಿಐ ಮೇಲೆ ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು, ಸಾರ್ವತ್ರಿಕ ಚುನಾವಣೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಬೇಕಿದ್ದು, ಚುನಾವಣಾ ಸಿದ್ದತೆಗಾಗಿ ಕೇಂದ್ರ ಸರ್ಕಾರ ಆರ್ಬಿಐ ಸಹಾಯ ಬೇಡುತ್ತಿದೆ.
INDIA25, Jan 2019, 10:11 PM IST
ಸಾಲುಮರದ ತಿಮ್ಮಕ್ಕ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ
2019ನೇ ಸಾಲಿನ 4 ಪದ್ಮವಿಭೂಷಣ, 14 ಪದ್ಮಭೂಷಣ ಹಾಗೂ 94 ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
BUSINESS22, Jan 2019, 6:09 PM IST
ಆರ್ಥಿಕ ವರ್ಷ ಬದಲಿಸುವತ್ತ ಕೇಂದ್ರದ ಚಿತ್ತ: ನಿಮಗೇನು ಎಫೆಕ್ಟ್?
ದೇಶದ ಆರ್ಥಿಕ ವರ್ಷವನ್ನು ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸಕ್ತ ಏಪ್ರಿಲ್-ಮಾರ್ಚ್ ಆರ್ಥಿಕ ವರ್ಷದ ಬದಲಾಗಿ ಜನೆವರಿ-ಡಿಸೆಂಬರ್ ಆರ್ಥಿಕ ವರ್ಷವನ್ನಾಗಿ ಪರಿಗಣಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ.
NEWS18, Jan 2019, 5:05 PM IST
ಎಲ್ರೂ #10YearChallenge ಅಂತಿದ್ರೆ ಬಿಜೆಪಿ #5YearChallenge ಅಂತಿದೆ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ದೇಶದಲ್ಲಿ ಏನೆನು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದನ್ನು ಸಾರಲು ಬಿಜೆಪಿ #5YearChallenge ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.
BUSINESS16, Jan 2019, 1:56 PM IST
ಕೇಂದ್ರದ ಸುಕನ್ಯಾ ಯೋಜನಾ: ವಿವರ ಇಲ್ಲಿದೆ ಕೇಳೋರಿಗೆ ‘ಏನು ಪ್ರಯೋಜನ’?
ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ನೆರವಾಗುವುದು ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಉಳಿತಾಯ ಖಾತೆಯ ಪ್ರಮುಖ ಉದ್ದೇಶ. ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ.
BUSINESS10, Jan 2019, 1:00 PM IST
ಫೆ.1ಕ್ಕೆ ಕೇಂದ್ರ ಬಜೆಟ್: ನಮಗೆ, ನಿಮಗೆ, ಎಲ್ಲರಿಗೂ ಟ್ಯಾಕ್ಸ್ ವಿನಾಯ್ತಿ?
ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಮಧ್ಯಂತರ ಬಜೆಟ್ ಮೇಲೆಯೇ ಎಲ್ಲರ ದೃಷ್ಟಿ ನೆಟ್ಟಿದೆ. ಮಧ್ಯಮ ವರ್ಗದ ವೇತನದಾರ ಮತದಾರರನ್ನು ಸೆಳೆಯಲು ಮೋದಿ ನೇತೃತ್ವದ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ನೀಡುವ ಸಾಧ್ಯತೆಯಿದೆ.
NEWS9, Jan 2019, 6:39 PM IST
ಐಎಎಸ್ ಟಾಪರ್ ರಾಜೀನಾಮೆ: ಮೋದಿ ವಿರುದ್ಧ ಆರೋಪಗಳ ಸುರಿಮಳೆ!
2010ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಜಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಣಿವೆ ರಾಜ್ಯದ ಕುರಿತು ಕೇಂದ್ರ ಸರ್ಕಾರದ ಧೋರಣೆ ಮತ್ತು ಸರ್ಕಾರಿ ಪೋಷಿತ ಕಗ್ಗೊಲೆಗಳ ವಿರುದ್ಧ ಪ್ರತಿಭಟನೆ ರೂಪದಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಶಾ ಫೈಜಲ್ ತಿಳಿಸಿದ್ದಾರೆ.