Rishi Kapoor
(Search results - 29)Cine WorldDec 29, 2020, 8:34 PM IST
ಸುಶಾಂತ್, ಇರ್ಫಾನ್..ರಿಷಿ..2020ರಲ್ಲಿ ಕಳೆದುಕೊಂಡ ಬಾಲಿವುಡ್ ನಕ್ಷತ್ರಗಳು
ಕೊರೋನಾ ವೈರಸ್ ನಿಂದ ಇಡೀ ಚಿತ್ರರಂಗ ತನ್ನ ಬಣ್ಣ ಕಳೆದುಕೊಂಡಿತು, ಕೊರೋನಾ ಸೋಂಕು ಅನೇಕ ಕಲಾವಿದರನ್ನು ತನ್ನ ಜತೆ ಕರೆದುಕೊಂಡು ಹೋಯಿತು.ಬಾಲಿವುಡ್ ಗೆ ಈ ವರ್ಷ ತುಂಬಲಾರದ ನಷ್ಟ ಆಗಿದೆ. ಇರ್ಫಾನ್ ಖಾನ್ ಕ್ಯಾನ್ಸರ್ ನಿಂದ ದೂರವಾದರು. ರಿಷಿ ಕಪೂರ್ ಅಗಲಿಕೆಯೂ ದೊಡ್ಡ ಹೊಡೆತ ನೀಡಿತು. ಸುಶಾಂತ್ ಸಿಂಗ್ ಅಗಲಿಕೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.
Cine WorldJul 8, 2020, 5:08 PM IST
62ನೇ ವಯಸ್ಸಿನಲ್ಲೂ ಫಿಟ್ ಆಗಿರುವ ನೀತು ಸಿಂಗ್ ಸಿಕ್ರೇಟ್ ಏನು?
ನಟಿ ನೀತು ಸಿಂಗ್ಗೆ 62 ವರ್ಷ. 8 ಜುಲೈ 1958 ರಂದು ದೆಹಲಿಯಲ್ಲಿ ಜನಿಸಿದ ನೀತು. 1966ರಲ್ಲಿ ಬಾಲ ಕಲಾವಿದೆಯಾಗಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ನಂತರ 'ರಿಕ್ಷಾವಾಲಾ' ಚಿತ್ರದಲ್ಲಿ ಪ್ರಮುಖ ನಟಿಯಾಗಿ ಸಿನಿ ಜಗತ್ತಿಗೆ ಕಾಲಿಟ್ಟರು. ಬಾಲಿವುಡ್ ನಟ ರಿಷಿಕಪೂರ್ರನ್ನು ವರಿಸಿದ್ದ ನೀತು ಮಗ ರಣಬೀರ್ ಕಪೂರ್ ಸಿನಿಮಾ ನಟ ಹಾಗೂ ಮಗಳು ರಿಧಿಮಾ ಫ್ಯಾಷನ್ ಡಿಸೈನರ್. ಹುಟ್ಟುಹಬ್ಬದಂದು, ಮಗಳು ರಿಧಿಮಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ತಾಯಿಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ. ಈ ವಯಸ್ಸಿನಲ್ಲಿಯೂ ನೀತು ಸಾಕಷ್ಟು ಫಿಟ್ ಆಗಿದ್ದಾರೆ. ಅವರ ಫಿಟ್ನೆಸ್ನ ರಹಸ್ಯವೇನು?
Cine WorldJun 26, 2020, 6:48 PM IST
ಆಲಿಯಾ ಭಟ್ ಮದುವೆ: ಮಹೇಶ್ ಭಟ್ ಒಪ್ಪಿಗೆಗೆ ಕಣ್ಣೀರಿಟ್ಟ ರಣಬೀರ್ ಕಪೂರ್
ಬಾಲಿವುಡ್ನ ಹ್ಯಾಂಡ್ಸಮ್ ನಟ ರಣಬೀರ್ ಕಪೂರ್. ಸಿನಿಮಾಗಳಿಗಿಂತ ಹೆಚ್ಚು ಇವನ ಅಫೇರ್ಗಳಿಂದ ಫೇಮಸ್. ಬಹುತೇಕ ಎಲ್ಲಾ ಸಹನಟಿಯರ ಜೊತೆ ಲಿಂಕ್ಅಪ್ ರೂಮರ್ ಇದೆ. ಅಂತಿಮವಾಗಿ ನಟಿ ಆಲಿಯಾ ಭಟ್ ಜೊತೆ ರಿಲೆಷನ್ಶಿಪ್ನಲ್ಲಿರುವ ನಟ ಇದೀಗ ಮದುವೆಗೂ ಸಿದ್ಧರಾಗಿದ್ದಾರೆ. ಈ ಹಿಂದೆ ಕಾಫಿ ವಿಥ್ ಕರಣ್ನಲ್ಲಿ ಆಲಿಯಾರ ತಂದೆ ಮಹೇಶ್ಭಟ್ ಭಾವಿ ಆಳಿಯನಿಗೆ ಲೇಡಿಸ್ ಮ್ಯಾನ್ ಎಂದು ಕರೆದಿದ್ದರು. ರಣಬೀರ್ ಕಪೂರ್ ಮಹೇಶ್ ಭಟ್ ಅವರನ್ನು ಭೇಟಿಯಾಗಿ ಮಗಳನ್ನು ಮದುವೆಯಾಗಲು ಅನುಮತಿ ಕೋರಿದಾಗ, ಏನಾಯಿತು?
Cine WorldMay 4, 2020, 7:25 PM IST
ಸಲ್ಮಾನ್ ಖಾನ್ ಮೇಲಿತ್ತು ಸ್ನೇಹಜೀವ ರಿಷಿ ಕಪೂರ್ಗೆ ಮುನಿಸು!
ಚಲನಚಿತ್ರೋದ್ಯಮದಲ್ಲಿ, ಸೆಲೆಬ್ರೆಟಿಗಳ ನಡುವೆ ಪರಸ್ಪರ ಸಂಬಂಧ ಕೆಲಮೊಮ್ಮೆ ಚೆನ್ನಾಗಿದ್ದರೆ ಕೆಲವೊಮ್ಮೆ ಹದಗಟ್ಟಿರುತ್ತದೆ. ಕೆಲವರ ನಡುವೆ ಕೊನೆವರೆಗೂ ಸ್ನೇಹ ನೇರವೇರುವುದೇ ಇಲ್ಲ. ಬಾಲಿವುಡ್ನ ಹಿರಿಯ ನಟ ನಾಲ್ಕು ದಿನಗಳ ಹಿಂದೆ ನಿಧನರಾಗಿದ್ದಾರೆ. ಅವರ ಜೀವನದ ಹಲವು ವಿಷಯ ಹಾಗೂ ಸಂಬಂಧಗಳು ಚರ್ಚೆಯಾಗುತ್ತಿವೆ ಈಗ. ರಿಷಿ ಕಪೂರ್ ಸ್ನೇಹಮಯ ವ್ಯಕ್ತಿಯಾಗಿದ್ದರೂ ಇಂಡಸ್ಟ್ರಿಯಲ್ಲಿ ಒಬ್ಬ ಸ್ಟಾರ್ನ ಜೊತೆ ಸಂಬಂಧ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಆ ಸ್ಟಾರ್ ಸಲ್ಮಾನ್ ಖಾನ್ ಅವರೇ ಆಗಿದ್ದರು. ಹೌದು ಬಾಲಿವುಡ್ನ ಈ ನಟರ ನಡುವೆಯ ಸಂಬಂಧ ಕೊನೆವರೆಗೂ ಚೆನ್ನಾಗಿರಲಿಲ್ಲ.
InterviewsMay 3, 2020, 5:30 PM IST
'ದೃಶ್ಯಂ' ಸಿನಿಮಾ ಮೆಚ್ಚಿದ್ದ ರಿಷಿ ಕಪೂರ್ ಬಗ್ಗೆ ನಿರ್ದೇಶಕ ಜೀತು ಮಾತು!
ಜೀತು ಜೋಸೆಫ್ ನಿರ್ದೇಶನದ `ದೃಶ್ಯಂ' ಚಿತ್ರ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರಿಮೇಕ್ ಆಗಿತ್ತು. ಮೂಲ ಸಿನಿಮಾವಾದ ಮಲಯಾಳಂನ `ದೃಶ್ಯಂ' ಚಿತ್ರವನ್ನು ನಿರ್ದೇಶಿಸಿದ್ದ ಜೀತು ಜೋಸೆಫ್ ಅವರದೇ ನಿರ್ದೇಶನದ `ದಿ ಬಾಡಿ' ಸಿನಿಮಾ ರಿಷಿ ಕಪೂರ್ ಅವರ ಕೊನೆಯ ಚಿತ್ರವಾಗಿತ್ತು. ದೃಶ್ಯಂ ಚಿತ್ರವನ್ನು ನೋಡಿ ಮೆಚ್ಚಿದ್ದ ರಿಷಿ ಕಪೂರ್ ಅವರು `ಬಾಡಿ' ಚಿತ್ರದಲ್ಲಿ ನಟಿಸಲು ಒಪ್ಪಿದ ರೀತಿಯ ಬಗ್ಗೆ, ಶೂಟಿಂಗ್ ಅನುಭವಗಳ ಬಗ್ಗೆ ಸ್ವತಃ ನಿರ್ದೇಶಕ ಜೀತು ಜೋಸೆಫ್ ಅವರು ಸುವರ್ಣ ನ್ಯೂಸ್ .ಕಾಮ್ ಜತೆಗೆ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.
Cine WorldMay 3, 2020, 4:06 PM IST
'ನಮ್ಮ ಕಥೆಯ ಕೊನೆ ಕ್ಷಣಗಳಿವು'! ರಿಷಿ ಕಪೂರ್ ಜೊತೆಗಿನ ಖುಷಿಯ ಕ್ಷಣಗಳಿವು!
ಬಾಲಿವುಡ್ ರಿಷಿ ಕಪೂರ್ ಪತ್ನಿ ನೀತು ಸಿಂಗ್ ಇನ್ಸ್ಟಾಗ್ರಾಂನಲ್ಲಿ ಪತಿಯ ಹ್ಯಾಪಿ ಫೋಟೋ ಶೇರ್ ಮಾಡಿಕೊಂಡು ಅಂತಿಮ ವಿದಾಯ ಎಂದು ಬರೆದುಕೊಂಡಿದ್ದಾರೆ.
Cine WorldMay 2, 2020, 11:46 AM IST
ರಿಷಿ ಕಪೂರ್ ಸಂಸ್ಕಾರದಲ್ಲಿ ಆಲಿಯಾ ಭಟ್ ಟ್ರೋಲ್; Iphone ಅಂತ ಪೋಸ್ ಕೊಡ್ತಿದ್ದೀರಾ?
ಬಾಲಿವುಡ್ ನಟ ರಿಷಿ ಕಪೂರ್ ಅಂತಿಮ ಸಂಸ್ಕಾರದಲ್ಲಿ ಆಪ್ತರಿಗೆ ಆಲಿಯಾ ಭಟ್ ವಿಡಿಯೋ ಕಾಲ್. ಕೈಯಲ್ಲಿ ಮೊಬೈಲ್ ನೋಡಿ ಸುರಿದು ಬಂತು ನೆಟ್ಟಿಗರ ನೆಗೆಟಿವ್ ಕಾಮೆಂಟ್ಸ್, ಆದರೆ...
Cine WorldMay 1, 2020, 7:07 PM IST
ಸ್ನಾನ ಮಾಡುವ ವಿಡಿಯೋ ಪೋಸ್ಟ್ ಮಾಡಿ, ವ್ಯೂಸ್ ಗಿಟ್ಟಿಸಿಕೊಂಡ ನಟಿ
ಮಾಜಿ ಮಿಸ್ ಯೂನಿವರ್ಸ್ ಸ್ಪರ್ಧಿ ಹಾಗೂ ಬಿ-ಟೌನ್ನ ಹಾಟ್ ಬೋಲ್ಡ್ ನಟಿಯರಲ್ಲಿ ಒಬ್ಬರು ಊರ್ವಶಿ ರೌತೆಲಾ. ನಟಿ ಸಾಮಾಜಿಕ ಮಾಧ್ಯಮದ ಪ್ಲಾಟ್ಫಾರ್ಮ್ಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ನಲ್ಲಿ ಸಖತ್ ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿರುತ್ತಾರೆ ಈ ಸುಂದರಿ. ಇತ್ತೀಚೆಗೆ, ನಟಿ ಹಾಟ್ ಆ್ಯಂಡ್ ಬೋಲ್ದ್ ಸ್ನಾನದ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ, ವೀಡಿಯೊ ವೈರಲ್ ಆಗಿದೆ. ಇಲ್ಲಿಯವರೆಗೆ, ವೀಡಿಯೊಗೆ ಇನ್ಸ್ಟಾಗ್ರಾಮ್ನಲ್ಲಿ 600 ಮಿಲಿಯನ್ಕ್ಕೂ ಹೆಚ್ಚು ವ್ಯೂಸ್ ಸಿಕ್ಕಿದೆ.
AutomobileMay 1, 2020, 2:47 PM IST
ಭಾರತಕ್ಕೆ ಗುಡ್ಬೈ ಹೇಳಲು ರೆಡಿಯಾಗಿದ್ದ ರಾಜದೂತ್ ಬೈಕ್ ನಸೀಬು ಬದಲಾಯಿಸಿದ್ದೇ ರಿಶಿ ಕಪೂರ್!
ರೋಮ್ಯಾಂಟಿಕ್ ಹೀರೋ ರಿಶಿ ಕಪೂರ್ ನಿಧನ ಬಾಲಿವುಡ್, ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲಾ ಕ್ಷೇತ್ರಕ್ಕೂ ತೀವ್ರ ನೋವು ನೀಡಿದೆ. ಇದಕ್ಕೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಹೊರತಾಗಿಲ್ಲ. ರಿಶಿ ಕಪೂರ್ ಹಾಗೂ ಭಾರತದ ಆಟೋಮೊಬೈಲ್ ಇಂಡಸ್ಟ್ರಿಗೆ ಅವಿನಾಭ ನಂಟಿದೆ. 1970ರ ವೇಳೆ ಭಾರತದಲ್ಲಿ ಬಿಡುಗಡೆಯಾದ ರಾಜದೂತ್ ಬೈಕ್ ಮಾರಾಟ ಕಾಣದೇ ಇನ್ನೇನು ಸ್ಥಗಿತಗೊಳ್ಳುವ ಹಂತದಲ್ಲಿತ್ತು. ಆದರೆ ರಿಶಿ ಕಪೂರ್ ಎಂಟ್ರಿಯಿಂದ ರಾಜದೂತ್ ಬೈಕ್ ಹೊಸ ಸಂಚಲ ಮೂಡಿಸಿತು.
Cine WorldMay 1, 2020, 11:51 AM IST
ವಿಷ್ಣುವರ್ಧನ್ ಅವರ 'ನಾಗರಹಾವು' ರಾಮಾಚಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಷಿ....
ಅಮರ್, ಅಕ್ಬರ್, ಆಂಥೋಣಿ ಚಿತ್ರವನ್ನು ಯಾರು ಮರೆಯಲು ಸಾಧ್ಯ? ಅಮಿತಾಭ್ ಜೊತೆ ರಿಷಿ ಚಿತ್ರಿಸಿದ ಸಿನಿಮಾವಿದು. ಡಾ. ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಾಗರಹಾವಿನ ಹಿಂದಿ ವರ್ಷನ್ನಲ್ಲಿ ರಾಮಾಚಾರಿಯಾಗಿ ನಟಿಸಿದ್ದು ರಿಷಿ ಕಪೂರ್. ಯಾವ ಚಿತ್ರವದು? ಹಾವಿನ ರೋಷ, ಹನ್ನೆರಡು ವರುಷವೆಂದು ವಿಷ್ಣು ಜಾಗದಲ್ಲಿ ರಿಷಿ ಹೇಗೆ ನಟಿಸಿದ್ದರು? ನೀವೇ ನೋಡಿ..
Cine WorldMay 1, 2020, 10:54 AM IST
ಅಪ್ಪನ ಮಾತಿಗೆ ಆ ನಟಿಯ ಸಂಬಂಧವನ್ನೇ ಕಡಿದುಕೊಂಡಿದ್ದರು ರಿಷಿ ಕಪೂರ್
ಬಾಲಿವುಡ್ ಪ್ರಣಯರಾಜನಾಗಿ ಐದು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ರಿಷಿ ಕಪೂರ್ ಕ್ಯಾನ್ಸರ್ನಿಂದ ಕೊನೆಯುಸಿರೆಳೆದಿದ್ದಾರೆ. ಆದರೆ, ಅವರು ಬಿಟ್ಟು ಹೋದ ನೆನಪುಗಳು ಸದಾ ಅಮರ. ಇವರ ಬಗ್ಗೆ ಹತ್ತು ಹಲವು ಗೊತ್ತಿರದ ವಿಷಯಗಳಿವೆ. ಪಿತೃ ವಾಕ್ಯ ಪಾಲನೆಗಾಗಿ ಆ ನಟಿಯ ಸಂಬಂಧವನ್ನೇ ಕಡಿಕೊಂಡಿದ್ದರು ಈ ಎವರ್ಗ್ರೀನ್ ಹೀರೋ. ಯಾರು ಆ ನಟಿ? ನೋಡಿ..
Cine WorldMay 1, 2020, 8:48 AM IST
ಒಲಿಸುವ ಕಲೆಗಾರ ರಿಷಿ ಕಪೂರ್ ಬಗ್ಗೆ ಜಯಂತ ಕಾಯ್ಕಿಣಿ ಮಾತು!
ಇವತ್ತು ಲಾಕ್ಡೌನ್ ಸಮಯದಲ್ಲಿ ನಾವೆಲ್ಲ ನಮ್ಮನಮ್ಮ ಕಮರೆಗಳಲ್ಲಿ ಬಂಧಿಗಳಾಗಿದ್ದೇವೆ. ಇಂಥಾ ಟೈಮ್ನಲ್ಲಿ ರಿಷಿ ಕಪೂರ್ ಚಾವಿ ಇಲ್ಲದೆಯೂ ಕೂಡ ಮುಕ್ತವಾಗಿ, ಲಹರಿಯಾಗಿ, ಅಲೆಯಾಗಿ ಸುಂದರ ನೆನಪಾಗಿ ಮನೆಯಿಂದ ಆಚೆ ಹೋಗಿದ್ದಾರೆ. ಅವರ ನೆನಪನ್ನು ಸಂಭ್ರಮಿಸೋಣ
NewsApr 30, 2020, 9:01 PM IST
ಇರ್ಫಾನ್ ಖಾನ್, ರಿಷಿ ಕಪೂರ್ ನಿಧನ: ಮೇರುನಟರ ಅಗಲಿಕೆಗೆ ಆರೆಸ್ಸೆಸ್ ಸಂತಾಪ
- ಇಬ್ಬರು ಮೇರುನಟರನ್ನು ಕಳೆದುಕೊಂಡ ಭಾರತೀಯ ಚಿತ್ರರಂಗ
- ನಿನ್ನೆ ಇರ್ಫಾನ್ ಖಾನ್, ಇವತ್ತು ರಿಷಿ ಕಪೂರ್ ನಿಧನ
- ಭಾರತೀಯ ನಟರ ನಿಧನಕ್ಕೆ ಆರೆಸ್ಸೆಸ್ ಸಂತಾಪ
Cine WorldApr 30, 2020, 5:47 PM IST
ಕೊನೆಗೂ ಈಡೇರಲೇ ಇಲ್ಲ ರಿಷಿ ಕಪೂರ್ ಕಡೇ ಆಸೆ!
ಒಂದೆಡೆ ದೇಶವೇ ಕೊರೋನಾ ಮಾಹಾಮಾರಿಗೆ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಬಾಲಿವುಡ್ನ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಸಾವು ಮನಸ್ಸಿಗೆ ನೋವು ತಂದಿದೆ. ಅಪರೂಪದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಇರ್ಫಾನ್ಗೆ ಐಷಾರಾಮಿ ಕಾರು ಓಡಿಸುವ ಆಸೆ ಇತ್ತು. ಆದರೆ, ಸಾಯೋ ಮುನ್ನ ಅದು ಈಡೇರಲೇ ಇಲ್ಲ. ಇತ್ತ ರಿಷಿಗೆ ಕಾಶಿ ವಿಶ್ವನಾಥನ ದರ್ಶನ ಮತ್ತು ಆಸ್ತಿ ಘಾಟ್ನಲ್ಲಿ ನಡೆಯುವ ಗಂಗಾರತಿಯಲ್ಲಿ ಪಾಲ್ಗೊಳ್ಳುವ ಇರಾದೆ ಇತ್ತು. ಅದೂ ಹಾಗೇ ಉಳಿಯಿತು. 2019ರಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಶೂಟಿಂಗ್ ವಾರಣಾಸಿಗೆ ಬಂದಿದ್ದ ಮಗ ರಣ್ಬೀರ್ ಕಪೂರ್ ವಿಡಿಯೋ ಕಾಲ್ ಮೂಲಕ ಕಾಶಿ ವಿಶ್ವನಾಥನ ಜೊತೆಗೆ ಗಂಗಾ ಘಾಟ್ ಹಾಗೂ ಆರತಿ ದರ್ಶನವನ್ನು ರಿಷಿಗೆ ಮಾಡಿಸಿದ್ದರಂತೆ!
NewsApr 30, 2020, 5:06 PM IST
ಬಾಲಿವುಡ್ಗೆ ಆಘಾತ ತಂದ ರಿಶಿ ಕಪೂರ್ ಅಗಲಿಕೆ, ಎಲ್ಲಿಗೆ ಬಂತು ಕೊರೋನಾ ಲಸಿಕೆ? ಏ.30ರ ಟಾಪ್ 10 ಸುದ್ದಿ!
ಲಾಕ್ಡೌನ್ ವಿಸ್ತರಣೆ ಕುರಿತು ಕೇಂದ್ರ ಗೃಹ ಸಚಿವಾಲಯ ಮಹತ್ವದ ಸೂಚನೆ ಸುಳಿವು ನೀಡಿದೆ. ಇದರ ನಡುವೆ ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕುರಿತು ಆರ್ ಅಶೋಕ್ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಲಾಕ್ಡೌನ್ ಕಾರಣ ದಿನಸಿ ತರಲು ಅಂಗಡಿಗೆ ಕಳುಹಿಸಿದ ಮಗ, ಮದುವೆಯಾಗಿ ಪತ್ನಿ ಜೊತೆ ವಾಪಸ್ ಆದ ಘಟನೆ ನಡೆದಿದೆ. ಬಾಲಿವುಡ್ಗೆ ಮತ್ತೊಂದು ಆಘಾತ ಎದುರಾಗಿದೆ. ಇರ್ಫಾನ್ ಖಾನ್ ಅಗಲಿಕೆ ನೋವಿನಲ್ಲಿದ್ದ ಬಾಲಿವುಡ್ಗೆ ಇದೀಗ ಹಿರಿಯ ನಟ ರಿಷಿ ಕಪೂರ್ ನಿಧನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಚೀನಾದಲ್ಲಿದ್ದ ಅಮೆರಿಕಾ ಕಂಪನಿ ಭಾರತಕ್ಕೆ, ರೋಹಿತ್ ಶರ್ಮಾಗೆ ಹುಟ್ಟು ಹಬ್ಬ ಸಂಭ್ರಮ ಸೇರಿದಂತೆ ಏಪ್ರಿಲ್ 30ರ ಟಾಪ್ 10 ಸುದ್ದಿ ಇಲ್ಲಿವೆ.