Ranji Trophy 2018
(Search results - 21)CRICKETJan 1, 2019, 11:18 AM IST
ರಣಜಿ ಟ್ರೋಫಿ: ವಿನಯ್ ಅಬ್ಬರ, ಕರ್ನಾಟಕದ ಹಿಡಿತದಲ್ಲಿ ಛತ್ತೀಸ್’ಗಢ್
297 ರನ್'ಗೆ ಕರ್ನಾಟಕ 8 ವಿಕೆಟ್ ಕಳೆದುಕೊಂಡಿತು. ಈ ವೇಳೆ 9ನೇ ವಿಕೆಟ್ಗೆ ಜೊತೆಯಾದ ವಿನಯ್ ಮತ್ತು ಮಿಥುನ್ ಚೇತರಿಕೆ ನೀಡಿದರು. 147 ಎಸೆತಗಳನ್ನು ಎದುರಿಸಿದ ವಿನಯ್ 90 ರನ್ಗಳಿಸಿ ಅಜೇಯರಾದರು.
CRICKETDec 24, 2018, 9:04 AM IST
ರಣಜಿ ಟ್ರೋಫಿ: ರೈಲ್ವೇಸ್ ವಿರುದ್ಧ ರಾಜ್ಯಕ್ಕೆ ಇನ್ನಿಂಗ್ಸ್ ಮುನ್ನಡೆ
71 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ಗಿಳಿದ ಕರ್ನಾಟಕ, ಆರಂಭಿಕ ಜೋಡಿಯನ್ನು ಬದಲಿಸಿತು. ಡಿ.ನಿಶ್ಚಲ್ ಜತೆ ಆರ್.ಸಮರ್ಥ್ ಬದಲಿಗೆ ದೇವದತ್ ಪಡಿಕ್ಕಲ್ ಕ್ರೀಸ್ಗಿಳಿದರು. ನಿಶ್ಚಲ್ (25) ಹಾಗೂ ದೇವದತ್ (11) ವಿಕೆಟ್ ಉಳಿಸಿಕೊಂಡು 41 ರನ್ ಜೊತೆಯಾಟವಾಡಿದ್ದಾರೆ.
CRICKETDec 18, 2018, 10:04 AM IST
ರಣಜಿ ಟ್ರೋಫಿ: ಕರ್ನಾಟಕ-ಗುಜರಾತ್ ಪಂದ್ಯ ಡ್ರಾನಲ್ಲಿ ಅಂತ್ಯ
ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ್ದ ವಿನಯ್ ಪಡೆ 3 ಅಂಕ ಬಾಚಿಕೊಂಡರೆ, ಗುಜರಾತ್ 1 ಅಂಕಗಳಿಸಿದೆ. ಆಡಿರುವ 5 ಪಂದ್ಯಗಳಲ್ಲಿ ತಲಾ 1 ಗೆಲುವು, ಸೋಲು 3 ಡ್ರಾ ಸಹಿತ 15 ಅಂಕಗಳಿಸಿರುವ ಕರ್ನಾಟಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.
CRICKETDec 14, 2018, 9:36 AM IST
ರಣಜಿ ಟ್ರೋಫಿ: ರಾಜ್ಯ ತಂಡಕ್ಕೆ ಮಯಾಂಕ್, ಗೌತಮ್ ವಾಪಸ್!
ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡುವ ಸಾಧ್ಯತೆ ಇದ್ದು, ಶ್ರೇಯಸ್, ಸುಚಿತ್ ಹಾಗೂ ಗೌತಮ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಗುಜರಾತ್ಗೆ ಕಾಯಂ ನಾಯಕ ಪಾರ್ಥೀವ್ ಪಟೇಲ್ ಸೇವೆ ಅಲಭ್ಯವಾಗಲಿದ್ದು, ಪ್ರಿಯಾಂಕ್ ಪಾಂಚಾಲ್ ತಂಡವನ್ನು ಮುನ್ನಡೆಸಲಿದ್ದಾರೆ.
CRICKETDec 9, 2018, 1:27 PM IST
ರಣಜಿ ಟ್ರೋಫಿ: ಕರ್ನಾಟಕಕ್ಕೆ ಸೌರಾಷ್ಟ್ರ ಶಾಕ್
ಕಠಿಣ ಸವಾಲು ಬೆನ್ನತ್ತಿದ ಕರ್ನಾಟಕ ಮೊದಲ ಎಸೆತದಲ್ಲೇ ಸಮರ್ಥ್ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 5 ರನ್’ಗಳಾಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ರಾಜ್ಯ ತಂಡ ಸಂಕಷ್ಟಕ್ಕೆ ಸಿಲುಕಿತು.
CRICKETDec 8, 2018, 1:44 PM IST
ವಿದಾಯದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ರಿಯಲ್ ಚಾಂಪಿಯನ್ ಗಂಭೀರ್
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ್ದ ಆಂಧ್ರ ತಂಡ ರಿಕಿ ಬೊಯಿ ಆಕರ್ಷಕ ಶತಕ[187]ದ ನೆರವಿನಿಂದ ಮೊದಲ ಇನ್ನಿಂಗ್ಸ್’ನಲ್ಲಿ 390 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಡೆಲ್ಲಿ ಉತ್ತಮ ಆರಂಭ ಪಡೆದಿದ್ದು, 2 ವಿಕೆಟ್ ಕಳೆದುಕೊಂಡು 295 ರನ್ ಬಾರಿಸಿದೆ.
CRICKETDec 8, 2018, 12:48 PM IST
ರಣಜಿ ಟ್ರೋಫಿ: ಕರ್ನಾಟಕ ಬೌಲರ್’ಗಳ ಕೈಚಳಕ- ಸೌರಾಷ್ಟ್ರ 79 ರನ್’ಗಳಿಗೆ ಆಲೌಟ್
ಟೂರ್ನಿಯುದ್ಧಕ್ಕೂ ಗಮನಾರ್ಹ ಪ್ರದರ್ಶನ ತೋರುತ್ತಿರುವ ಜೆ. ಸುಚಿತ್ ಇಂದು ಮತ್ತೆ ಸೌರಾಷ್ಟ್ರಕ್ಕೆ ಕಂಠಕವಾಗಿ ಪರಿಣಮಿಸಿದರು. ಸುಚಿತ್ ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳಿಗೆ ಶಾಕ್ ನೀಡಿದರೆ, ಪವನ್ ದೇಶ್’ಪಾಂಡೆ ಹಾಗೂ ಶ್ರೇಯಸ್ ಗೋಪಾಲ್ ಸೌರಾಷ್ಟ್ರದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
CRICKETDec 7, 2018, 7:59 PM IST
ರಣಜಿ ಟ್ರೋಫಿ: ಜಡೇಜಾ ದಾಳಿಗೆ ನಲುಗಿದ ಕರ್ನಾಟಕ
ಧರ್ಮೇಂದರ್ ಸಿಂಗ್ ಜಡೇಜಾ ಕರ್ನಾಟಕದ ಪ್ರಮುಖ 7 ವಿಕೆಟ್ ಕಬಳಿಸಿ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಕಮಲೇಶ್ ಮಕ್ವಾನ 2 ಹಾಗೂ ಯುವರಾಜ್ ಚುಡಸಮಾ 1 ವಿಕೆಟ್ ಕಬಳಿಸಿ ಮಿಂಚಿದರು.
CRICKETDec 1, 2018, 4:06 PM IST
ರಣಜಿ ಟ್ರೋಫಿ: ಚೊಚ್ಚಲ ಜಯ ದಾಖಲಿಸಿದ ಕರ್ನಾಟಕ
2018-19ನೇ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ಚೊಚ್ಚಲ ಗೆಲುವು ದಾಖಲಿಸಿದೆ. ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಮಹರಾಷ್ಟ್ರವನ್ನು 7 ವಿಕೆಟ್’ಗಳಿಂದ ಮಣಿಸಿ ಗೆಲುವಿನ ಕೇಕೆ ಹಾಕಿದೆ.
CRICKETNov 28, 2018, 7:01 PM IST
ರಣಜಿ ಟ್ರೋಫಿ 2018: ಮಹರಾಷ್ಟ್ರ ಮೇಲೆ ಸವಾರಿ ಮಾಡಿದ ಕರ್ನಾಟಕ
ಮೈಸೂರಿನಲ್ಲಿ ನಡೆಯುತ್ತಿರುವ ರಣಜಿ ಕದನದಲ್ಲಿ ಮಹರಾಷ್ಟ್ರ ಎದುರು ಕರ್ನಾಟಕ ಬಿಗಿ ಹಿಡಿತ ಸಾಧಿಸಿದೆ. ಜೆ ಸುಚಿತ್ ದಾಳಿಗೆ ತತ್ತರಿಸಿದ ಮಹರಾಷ್ಟ್ರ ಕೇವಲ 113 ರನ್’ಗಳಿಗೆ ಸರ್ವಪತನ ಕಂಡಿದೆ.
CRICKETNov 24, 2018, 11:06 AM IST
ಕರ್ನಾಟಕ-ಮುಂಬೈ ಪಂದ್ಯ ಡ್ರಾನಲ್ಲಿ ಅಂತ್ಯ
4ನೇ ಹಾಗೂ ಅಂತಿಮ ದಿನವಾದ ಶುಕ್ರವಾರ, 3 ವಿಕೆಟ್ಗೆ 81 ರನ್ಗಳಿಂದ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ, 5 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಕೆ.ವಿ.ಸಿದ್ಧಾರ್ಥ್, ಅಜೇಯ 71 ರನ್ ಗಳಿಸಿದರು. ಸ್ಟುವರ್ಟ್ ಬಿನ್ನಿ 30 ರನ್ ಕಲೆಹಾಕಿದರು.
SPORTSNov 20, 2018, 9:23 AM IST
ರಣಜಿ ಟ್ರೋಫಿ: ಬೆಳಗಾವಿಯಲ್ಲಿ ಕರ್ನಾಟಕ- ಮುಂಬೈ ರಣಜಿ ಪಂದ್ಯ!
ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಕರ್ನಾಟಕ ಹಾಗೂ ಮುಂಬೈ ಇದೀಗ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಕರ್ನಾಟಕದ ಸ್ಟಾರ್ ಆಟಗಾರರು ಟೀಂ ಇಂಡಿಯಾ ಹಾಗೂ ಭಾರತ ಎ ಪರ ಆಡುತ್ತಿರುವುದರಿಂದ ಪ್ಲೇಯಿಂಗ್ ಇಲೆವೆನ್ ಆಯ್ಕೆ ತಲೆನೋವಾಗಿದೆ.
SPORTSNov 15, 2018, 5:50 PM IST
ರಣಜಿ ಟ್ರೋಫಿ 2018: ಶುಭಾರಂಭ ಮಾಡಿದ ಕರ್ನಾಟಕ
ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ದಿಟ್ಟ ಹೋರಾಟದ ಮೂಲಕ 3 ಅಂಕ ಪಡೆದಿಕೊಂಡಿದೆ. ವಿದರ್ಭ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಪ್ರದರ್ಶನ ಹೇಗಿತ್ತು? ಇಲ್ಲಿದೆ ಪಂದ್ಯದ ಹೈಲೈಟ್ಸ್.
CRICKETNov 15, 2018, 9:21 AM IST
ರಣಜಿ ಟ್ರೋಫಿ: ಕರ್ನಾಟಕವನ್ನು ಮೇಲೆತ್ತಿದ ನಿಶ್ಚಲ್, ಶರತ್ ಶತಕ
ಶರತ್ 159 ಎಸೆತಗಳಲ್ಲಿ 100 ರನ್ ಗಳಿಸಿ, ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಬಾರಿಸಿದ ಕರ್ನಾಟಕದ 9ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. ರಾಜ್ಯ ತಂಡ ಮುನ್ನಡೆ ಗಳಿಸಿದ ಬಳಿಕ ಶರತ್ ವಿಕೆಟ್ ಕಳೆದುಕೊಂಡರು. 161 ಎಸೆತಗಳಲ್ಲಿ 20 ಬೌಂಡರಿಗಳೊಂದಿಗೆ 103 ರನ್ ಗಳಿಸಿ ಔಟಾದರು.
CRICKETNov 14, 2018, 9:40 AM IST
ಹಾಲಿ ಚಾಂಪಿಯನ್ ವಿರುದ್ಧ ಕರ್ನಾಟಕ ಹೋರಾಟ!
ಎದುರಾಳಿಯನ್ನು ಕಳಪೆ ಮೊತ್ತಕ್ಕೆ ಕಟ್ಟಿಹಾಕುವ ಅವಕಾಶವಿದ್ದರೂ, ಕರ್ನಾಟಕದ ಬೌಲರ್ಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. 300ಕ್ಕೂ ಹೆಚ್ಚು ರನ್ ಕಲೆಹಾಕಿದ ವಿದರ್ಭ, ಆತ್ಮವಿಶ್ವಾಸದೊಂದಿಗೆ ಬೌಲಿಂಗ್ ಆರಂಭಿಸಿತು.