Lakhan Jarakiholi
(Search results - 9)Karnataka DistrictsJun 20, 2020, 11:46 AM IST
ಉಪಚುನಾವಣೆ ನಂತರ ಭೇಟಿ: ಒಂದಾದ್ರಾ ರಮೇಶ, ಲಖನ್ ಜಾರಕಿಹೊಳಿ?
ಗೋಕಾಕ ವಿಧಾನಸಭೆಯ ಉಪಚುನಾವಣೆ ನಂತರ ಜಾರಕಿಹೊಳಿ ಸಹೋದರರು ಮತ್ತೆ ಒಂದಾಗಿದ್ದು, ಈ ಬೆಳವಣಿಗೆ ಗೋಕಾಕ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.
Karnataka DistrictsJan 4, 2020, 12:08 PM IST
'ಲಖನ್ ಕುಟುಂಬದ ವಿಚಾರದಲ್ಲಿ ನನ್ನ ಸಹೋದರ, ರಾಜಕೀಯವಾಗಿ ನನ್ನ ವಿರೋಧಿ'
ಮುಸ್ಲಿಂ ಸಮಾಜದವರು ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸುವ ಅಥವಾ ಈ ಕಾಯ್ದೆಗೆ ಹೆದರುವ ಅವಶ್ಯಕತೆ ಇಲ್ಲ. ಸ್ಥಳೀಯ ಮುಸ್ಲಿಮರು ಹಿಂದುಸ್ಥಾನದ ನಿವಾಸಿಗಳಾಗಿದ್ದು, ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸುವಂತೆ ವಿಪಕ್ಷಗಳು ತಪ್ಪು ಸಂದೇಶ ರವಾನಿಸುತ್ತಿದ್ದು, ಇದಕ್ಕೆ ಕಿವಿಗೊಡದಂತೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
Karnataka DistrictsDec 15, 2019, 1:10 PM IST
ಗೋಕಾಕ್: ಎಲೆಕ್ಷನ್ ಮುಗಿದ್ರೂ ನಿಲ್ಲದ ಜಾರಕಿಹೊಳಿ ಸಹೋದರರ ಕಚ್ಚಾಟ!
ಎಲೆಕ್ಷನ್ ಮುಗಿದರೂ ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ಹಾಗೂ ಗೋಕಾಕ್ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಸಮರವನ್ನ ಮುಂದುವರೆಸಿದ್ದಾರೆ.
Karnataka DistrictsDec 5, 2019, 3:05 PM IST
'ಡಿ.9ರ ನಂತರ ರಮೇಶ್ ಜಾರಕಿಹೊಳಿಯನ್ನ ಹುಚ್ಚಾಸ್ಪತ್ರೆಗೆ ಕಳಿಸೋಣ'
ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ನಾವು ದುಡ್ಡು ಹಂಚಿಕೆ ಮಾಡಿಲ್ಲ. ಜಿಲ್ಲೆಯ ಯಮಕನಮರಡಿ ಪ್ರಚಾರಕ್ಕೆಂದು ನಮ್ಮನ್ನು ಕಳಿಸುತ್ತಿದ್ದವರು ರಮೇಶ್ ಜಾರಕಿಹೊಳಿ, ಅಣ್ಣ ತಮ್ಮಂದಿರಿಗೆ ಜಗಳ ಹಚ್ಚಿಸುತ್ತಿದ್ದರು ಎಂದು ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಸಹೋದರ ರಮೇಶ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Karnataka DistrictsDec 1, 2019, 1:38 PM IST
'ರಮೇಶ್ ಜಾರಕಿಹೊಳಿ ಗೂಂಡಾಗಿರಿಯಿಂದ ಬೇಸತ್ತು ಹೊರ ಬಂದಿದ್ದೇವೆ'
ನಾವು ಕೂಡಾ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ಅಳಿಯಂದಿರು ಭ್ರಷ್ಟಾಚಾರ, ಗೂಂಡಾಗಿರಿಗೆ ನಾವು ಬೇಸತ್ತು ಹೊರ ಬಂದಿದ್ದೇವೆ. ಜನರಿಗೆ ಮೋಸ ಮಾಡಿ ಗೂಂಡಾಗಿರಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಾಡಿ ಭಯಭೀತಿ ವಾತಾವರಣ ಸೃಷ್ಠಿ ಮಾಡಿದ್ದಾರೆ. ಅದಕ್ಕೆ ನಮಗೆ ಜನರು ಮತ ಹಾಕಲಿ, ನಾವು ಕ್ಷೇತ್ರವನ್ನು ಭಯಮುಕ್ತ, ಭ್ರಷ್ಟಾಚಾರ ಮುಕ್ತ ವಾತಾವರಣ ಮಾಡ್ತೀವಿ ಅಂತ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಹೇಳಿದ್ದಾರೆ.
Karnataka DistrictsNov 28, 2019, 2:41 PM IST
ಗೋಕಾಕ್ ಉಪಕದನ: ದಲಿತ ಮತ ಸೆಳೆಯೋಕೆ ಜಾರಕಿಹೊಳಿ ಬ್ರದರ್ಸ್ ಫೈಟ್!
ರಾಜ್ಯದಲ್ಲಿ ಹೈ ವೋಲ್ಟೇಜ್ ಕದನವೆಂದೇ ಬಿಂಬಿತವಾಗಿರೋ ಗೋಕಾಕ್ ವಿಧಾನಸಭಾ ಮತಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರವೂ ಸಹ ಜೋರಾಗಿದ್ದು, ಇದೀಗ ಮಾಜಿ ಸಿಎಂ ಸಿದ್ದರಾಮಯ್ಯನಂತಹ ರಾಜ್ಯ ನಾಯಕರನ್ನ ಟಾರ್ಗೆಟ್ ಮಾಡಿಕೊಂಡು ಮಾದಿಗ ದಲಿತ ಸಮುದಾಯ ಬಿಜೆಪಿ ಬೆಂಬಲಿಸಲು ಮುಂದಾಗಿದೆ. ಇದರಿಂದ ಸಾಂಪ್ರದಾಯಿಕ ಮತಗಳನ್ನ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
Karnataka DistrictsNov 27, 2019, 11:15 AM IST
'ಗೋಕಾಕ್ ರಾಜಕಾರಣ ಹೇಗೆ ಮಾಡೋದಂತ ನಮಗೆ ಗೊತ್ತಿದೆ'
ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರ ಬಾಯಿ ಮುಚ್ಚಿಸಿದೆ. ನಮ್ಮ ಬಾಯಿ ಓಪನ್ ಇದೆ, ನಾವು ಅರಾಮವಾಗಿ ಜನರ ಜೊತೆ ಮಾತಾನಾಡಿಕೊಂಡು ಹೋಗುತ್ತಿದ್ದೇವೆ. ಅವರ ಹೈಕಮಾಂಡೇ ಅವರಿಗೆ ಗಪ್ ಚುಪ್ ಅಂತ ಹೇಳಿದೆ, ನಾವು ಅವರ ಬಗ್ಗೆ ಏನು ಹೇಳೋಕೆ ಆಗುವುದಿಲ್ಲ, ಗೋಕಾಕ್ ರಾಜಕಾರಣ ಹೇಗೆ ಮಾಡೋದಂತ ನಮಗೆ ಗೊತ್ತಿದೆ. ಜನರ ಮನಸ್ಸಲ್ಲಿ ಹಾಗೆ ಇದೆ ಇವರೇನು ಮಾಡೋಕಾಗಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Karnataka DistrictsNov 23, 2019, 12:10 PM IST
ರಮೇಶ್ಗೆ ಆದ ಪರಿಸ್ಥಿತಿ ಜನ ಮಾಡಿದ್ದಲ್ಲ, ತಾವೇ ಮಾಡಿಕೊಂಡಿದ್ದು'
ಚುನಾವಣೆ ವೇಳೆ 'ತಾರೇ ಜಮೀನ್ ಪರ್' ಅಂತಾರೆ. 'ಬಾದ್ಮೆ ತುಮ್ ಜಮೀನ್ ಪರ್ ವೋ ತಾರೇ ಪರ್' ಎಂದು ಹೇಳುತ್ತಾರೆ ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹಾಗೂ ಅವರ ಅಳಿಯಂದಿರ ಕುರಿತು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
PoliticsNov 15, 2019, 6:23 PM IST
ರಮೇಶ್ ಜಾರಕಿಹೊಳಿ ಜತೆ ಒಳ ಮೈತ್ರಿ, ಲಖನ್ ಬದಲಿಗೆ ಹೊಸ ಹೆಸ್ರು ತೇಲಿ ಬಿಟ್ಟ ಡಿಕೆಶಿ, ಲಕ್ಷ್ಮೀ
ಕಾಂಗ್ರೆಸ್ ಗೆ ಅನ್ಯಾಯ ಮಾಡಿದ ಶತಾಯಗತಾಯ ರಮೇಶ್ ಜಾರಕಿಹೊಳಿಯನ್ನು ಸೋಲಿಸಲೇಬೇಕೆಂದು ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣನನ್ನು ಮಣಿಸಲು ತಮ್ಮ ಲಖನ್ ಜಾರಕಿಹೊಳಿಯನ್ನು ಗೋಕಾಕ್ ಅಖಾಡಕ್ಕಿಳಿಸಲಾಗಿದೆ. ಆದ್ರೆ, ಇದೀಗ ಲಖನ್ ಕೊನೆ ಹಂತದಲ್ಲಿ ರಮೇಶ್ ಜಾರಕಿಹೊಳಿ ಜತೆ ಒಳ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎನ್ನುವ ಅನುಮಾನ ಕಾಂಗ್ರೆಸ್ ಗೆ ಇದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯ ಹೆಸರನ್ನು ತೇಲಿಬಿಟ್ಟಿದ್ದಾರೆ.