Karatagi
(Search results - 18)Karnataka DistrictsDec 13, 2020, 9:47 AM IST
ಕಿಡಿಗೇಡಿಗಳ ಸಿಗರೇಟ್ ಚಟಕ್ಕೆ 12 ಎಕರೆ ಭತ್ತ ಭಸ್ಮ: ಕಂಗಾಲಾದ ರೈತ
ಕಿಡಿಗೇಡಿಗಳು ಸಿಗರೇಟ್ ಸೇದಿ ಭತ್ತದ ಗದ್ದೆಯಲ್ಲಿ ಬಿಸಾಡಿದ್ದರಿಂದ ಸುಮಾರು 12 ಎಕರೆ ಪ್ರದೇಶದ ಬೆಳೆದು ನಿಂತು ಕಟಾವಿಗೆ ಬಂದಿದ್ದ ಭತ್ತದ ಪೈರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಬೂದುಗುಂಪಾ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
Karnataka DistrictsNov 12, 2020, 11:55 AM IST
ಕೊಪ್ಪಳ: ಭುಗಿಲೆದ್ದ ಮಾಜಿ ಸಚಿವ ತಂಗಡಗಿ ಸಹೋದರನ ನಿವೇಶನ ವಿವಾದ
ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಅವರ ಸಹೋದರನ ನಿವೇಶನಕ್ಕೆ ಸಂಬಂಧಿಸಿದ ವಿವಾದ ಹಿನ್ನೆಲೆ ಮತ್ತೆ ಭುಗಿಲೆದ್ದಿದೆ. ಸಚಿವರ ಸಹೋದರ ನಾಗರಾಜ ತಂಗಡಗಿ ಒತ್ತುವರಿ ಮಾಡಿಕೊಂಡು ಭವ್ಯ ಬಂಗಲೆ ನಿರ್ಮಿಸಿದ್ದಾರೆ ಎಂಬ ಆರೋಪ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ, ಸರ್ವೆ ಮಾಡುವಂತೆ ಜಿಲ್ಲಾಡಳಿತ ಆದೇಶ ನೀಡಿದೆ.
Karnataka DistrictsOct 30, 2020, 11:54 AM IST
ಕೊಪ್ಪಳ: ಮಾರಾಮಾರಿ ಪ್ರಕರಣ, ಏಳು ಜನ ದಲಿತರ ಮೇಲೆ ದೂರು
ತಾಲೂಕಿನ ಹಗೇದಾಳ ಗ್ರಾಮದ ದಲಿತರ ಮತ್ತು ಸವರ್ಣೀಯರ ನಡುವಿನ ಮಾರಾಮಾರಿ ಪ್ರಕರಣಕ್ಕೆ ಸಂಬಂಧ ಏಳು ಜನ ದಲಿತರ ಮೇಲೆ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CRIMEOct 25, 2020, 11:35 AM IST
ಕೊಪ್ಪಳ: ಬಾಲಕನ ಕೈ ಕಾಲು ಕಟ್ಟಿ ಕಾಲುವೆಗೆ ಎಸೆದು ಕೊಲೆಗೈದ ದುಷ್ಕರ್ಮಿಗಳು
ದುಷ್ಕರ್ಮಿಗಳ ತಂಡವೊಂದು ಹತ್ತು ವರ್ಷದ ಬಾಲಕನ ಕೈ ಕಾಲು ಕಟ್ಟಿ ಕಾಲುವೆಗೆ ಹಾಕಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಮಲ್ಲಿಕಾರ್ಜುನ ಎಂಬಾತನೇ ಕೊಲೆಗೀಡಾದ ಬಾಲಕನಾಗಿದ್ದಾನೆ.
Karnataka DistrictsOct 25, 2020, 10:13 AM IST
ಕೊಪ್ಪಳ: ಕೊಲೆ ಪ್ರಕರಣ ಭೇದಿಸುವ ನೆಪದಲ್ಲಿ ಅಮಾಯಕರಿಗೆ ಥಳಿತ?
ಕಾರಟಗಿಯಲ್ಲಿ ಅ. 17ರಂದು ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವ ನೆಪದಲ್ಲಿ ಕಾರಟಗಿ ಪಿಎಸ್ಐ ಅವಿನಾಶ ಕಾಂಬ್ಳೆ ತಮ್ಮ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಧಾರವಾಡ ಮೂಲದ ಇಬ್ಬರು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
CRIMEOct 18, 2020, 2:16 PM IST
ಕೊಪ್ಪಳ: ದಂಪತಿ ಮೇಲೆ ಹಲ್ಲೆ, ಪತ್ನಿ ಸ್ಥಳದಲ್ಲೇ ಸಾವು
ಬ್ಯಾಂಕ್ ಉದ್ಯೋಗಿಗಳಾಗಿರುವ ನೂತನ ದಂಪತಿ ಕೊಲೆಯ ಯತ್ನ ಶನಿವಾರ ಸಂಜೆಯ ಬಳಿಕ ಜರುಗಿದೆ. ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟರೆ, ಪತಿ ಅರೆ ಪ್ರಜ್ಞಾವಸ್ಥೆಯಲ್ಲಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಘಟನೆಯು ಪಟ್ಟಣದ ಜನರಲ್ಲಿ ತಲ್ಲಣ ಮೂಡಿಸಿದೆ.
Karnataka DistrictsJul 5, 2020, 7:27 AM IST
ಕಾರಟಗಿ: ಹೈದರಾಬಾದ್ನಿಂದ ಬಂದ ವ್ಯಕ್ತಿಗೆ ಕೊರೋನಾ, ಆತಂಕದಲ್ಲಿ ಜನತೆ
ಕೊರೋನಾ ವೈರಸ್ ತನ್ನ ಅಟ್ಟಹಾಸ ಮುಂದುವರಿಸಿದ್ದು, ತಾಲೂಕಿನ ಹುಳ್ಕಿಹಾಳ ಕ್ಯಾಂಪ್(ಮಾರಿಕ್ಯಾಂಪ್)ನಲ್ಲಿ ಹೈದರಾಬಾದ್ನಿಂದ ಬಂದ ವ್ಯಕ್ತಿಗೆ ಶನಿವಾರ ಸೋಂಕು ಕಾಣಿಸಿಕೊಂಡಿದೆ. ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ದಿನಕ್ಕೊಬ್ಬರಲ್ಲಿ ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
Karnataka DistrictsJun 17, 2020, 7:29 AM IST
ಕಾರಟಗಿಯಲ್ಲಿ ಅಪರೂಪದ ಬಿಳಿ ಕಾಗೆ ಮರಿ ಪ್ರತ್ಯಕ್ಷ: ನೋಡಲು ಮುಗಿಬಿದ್ದ ಜನತೆ..!
ಕಾರಟಗಿ(ಜೂ.15): ತಾಲೂಕಿನ ಬಸವಣ್ಣ ಕ್ಯಾಂಪ್ನ ಜಮೀನಿನಲ್ಲಿ ಭಾನುವಾರ ಬೆಳಗ್ಗೆ ಬಿಳಿ ಕಾಗೆ ಮರಿಯೊಂದು ದೊರೆಕಿದೆ. ಕ್ಯಾಂಪಿನ ರೈತ ಮತ್ತಿಪಾಟಿ ಕೃಷ್ಣ ಇವರ ಬತ್ತದ ಜಮೀನಿನಲ್ಲಿನ ಕೆರೆಯ ಬಳಿ ಗಿಡದಲ್ಲಿದ್ದ ಕಾಗೆಗೂಡಿನಿಂದ ಬಿಳಿ ಕಾಗೆ ಬೆಳಿಗ್ಗೆ ಕೆಳಗೆ ಬಿದ್ದಾಗ ಪತ್ತೆಯಾಗಿದೆ.
Karnataka DistrictsApr 26, 2020, 7:58 AM IST
ಟ್ರಕ್ ಟರ್ಮಿನಲ್: ತಪಾಸಣೆ ಬಳಿಕವೇ ಲಾರಿಗಳಿಗೆ ನಗರ ಪ್ರವೇಶಕ್ಕೆ ಅವಕಾಶ
ಬತ್ತ ವಹಿವಾಟಿಗೆ ನೆರೆ ರಾಜ್ಯಗಳಿಂದ ಬರುವ ಪ್ರತಿ ಲಾರಿಗಳಲ್ಲಿದ್ದವರ ಆರೋಗ್ಯ ಪರೀಕ್ಷಿಸಿ ವಾಣಿಜ್ಯ ಪಟ್ಟಣದೊಳಗೆ ಪ್ರವೇಶ ಮಾಡಲು ಅವಕಾಶ ನೀಡಲಾಗುತ್ತಿದ್ದು, ಉದ್ಯಮಿಗಳು, ವರ್ತಕರು ಮತ್ತು ರೈತರು ಆತಂಕ ಪಡುವ ವಾತಾವರಣವಿಲ್ಲ ಎಂದು ಶಾಸಕ ಬಸವರಾಜ್ ದಢೇಸ್ಗೂರು ಹೇಳಿದ್ದಾರೆ.
Karnataka DistrictsApr 25, 2020, 7:38 AM IST
ಕೋವಿಡ್-19 ವಿರುದ್ಧ ಹೋರಾಟ: ಕೊರೋನಾ ತಡೆಯಲು ಟ್ರಕ್ ಟರ್ಮಿನಲ್
ಇಲ್ಲಿನ ಅಕ್ಕಿ ಮತ್ತು ಬತ್ತದ ಮಾರುಕಟ್ಟೆಗೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಂದ ಈಗ ನಿತ್ಯ ಬರುವ ನೂರಾರು ಲಾರಿಗಳಿಂದ ಉಂಟಾದ ಕೊರೋನಾ ವೈರಸ್ ಹರಡುವ ಆತಂಕವನ್ನು ದೂರ ಮಾಡಲು ತಾತ್ಕಾಲಿಕವಾಗಿ ‘ಟ್ರಕ್ ಟರ್ಮಿನಲ್’ ಅನ್ನು ಹೊರವಲಯದಲ್ಲಿ ಸ್ಥಾಪಿಸಲಾಗಿದೆ.
Karnataka DistrictsApr 12, 2020, 8:11 AM IST
ಕೊರೋನಾ ಭೀತಿ: ಗುಜರಾತ್ನಿಂದ ಕೊಪ್ಪಳಕ್ಕೆ ಬಂದ 8 ಜನರ ಪರೀಕ್ಷೆ
ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸುವಾಗ ಪತ್ತೆ ಹಚ್ಚಿದ ಗುಜರಾತ್ನ ಆನಂದ್ ಜಿಲ್ಲೆಯಿಂದ ಪಟ್ಟಣಕ್ಕೆ ಬಂದಿರುವ 8 ಜನರನ್ನು ಶನಿವಾರ ಸಂಜೆ ಆರೋಗ್ಯ ಪರೀಕ್ಷೆ ನಡೆಸಿದ್ದು ಪರಿಣಾಮ ಗಂಭೀರವಾದರೆ ಕ್ವಾರಂಟೈನ್ಗೆ ಸೇರಿಸಲು ಗಂಗಾವತಿಗೆ ಕರೆದೊಯ್ಯಲಾಗಿದೆ.
Coronavirus KarnatakaApr 5, 2020, 8:31 AM IST
ಕೊರೋನಾ ಮಧ್ಯೆಯೂ ಸಾಮೂಹಿಕ ನಮಾಜ್: ಐವರ ಬಂಧನ
ಕೊರೋನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವುದರ ಜತೆಗೆ ಸಾಮೂಹಿಕ ನಮಾಜ್ ರದ್ದು ಆದೇಶ ಉಲ್ಲಂಘಿಸಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಸಾಮೂಹಿಕ ನಮಾಜ್ ಮಾಡುತ್ತಿದ್ದವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Karnataka DistrictsJan 3, 2020, 8:34 AM IST
ಕೊಪ್ಪಳ: ನಿಷೇಧದ ಮಧ್ಯೆಯೂ ನಡೆದ ಕೋಳಿ ಜೂಜಾಟ
ಹೊಸ ವರ್ಷದ ಪ್ರಯುಕ್ತ ಕಾರಟಗಿ ತಾಲೂಕಿನ ಬೂದುಗುಂಪಾ, ಮೈಲಾಪುರ ಸೀಮೆಗಳಲ್ಲಿ ಮೂರು ದಿನಗಳಿಂದ ನಿಷೇಧಿತ ಕೋಳಿ ಪಂದ್ಯಾವಳಿ ಭಾರಿ ಪ್ರಮಾಣದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.
Karnataka DistrictsDec 11, 2019, 7:53 AM IST
ಕಾರಟಗಿ: ನಿರ್ಮಾಣವಾಗದ ಕಟ್ಟಡ, ಮರದ ನೆರಳಿನಲ್ಲಿಯೇ ಮಕ್ಕಳಿಗೆ ಪಾಠ!
ಹುಳ್ಕಿಹಾಳ ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಾಣಕ್ಕೆ 2014-15 ರಲ್ಲಿಯೇ 2 ಎಕರೆ ಜಮೀನು ಮಂಜೂರಾಗಿದ್ದರೂ ಈ ವರೆಗೂ ಕಟ್ಟಡ ನಿರ್ಮಾಣವಾಗದೆ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಪಾಠ ಆಲಿಸುತ್ತಿದ್ದಾರೆ.
Karnataka DistrictsDec 7, 2019, 9:03 AM IST
ಕಾರಟಗಿ ಬಳಿ ಬಸ್ ಹರಿದು 39 ಕುರಿಗಳ ಸಾವು
ರಸ್ತೆ ಮೇಲೆ ಹೋಗುತ್ತಿದ್ದ ಕುರಿಗಳ ಮೇಲೆ ಸಾರಿಗೆ ಸಂಸ್ಥೆ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ 39 ಕುರಿಗಳು ಮೃತಪಟ್ಟು, 25 ಕುರಿಗಳು ಗಾಯಗೊಂಡ ಘಟನೆ ಪಟ್ಟಣದ ಹೊರವಲಯದ ಸಿದ್ಧಲಿಂಗನಗರದ ಬಳಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.