Ganesha Idols
(Search results - 13)Karnataka DistrictsAug 24, 2020, 7:54 AM IST
ಬಳ್ಳಾರಿಯಲ್ಲೊಂದು ಗಣೇಶ ಹಬ್ಬದ ಅಪರೂಪದ ಘಟನೆ
ಒಂದೇ ಮನೆಯಲ್ಲಿ 500 ಕ್ಕಿಂತಲೂ ಹೆಚ್ಚು ಗಣೇಶ ವಿಗ್ರಹಗಳನ್ನು ಪ್ರತಿಷ್ಟಾಪಿಸಿ ಪೂಜಿಸಲಾಗುವ ಅಪರೂಪದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
stateAug 22, 2020, 8:12 AM IST
ಗಣಪತಿ ಪ್ರತಿಷ್ಠಾಪನೆಗೆ 3 ದಿನ ಮಾತ್ರ ಅನುಮತಿ: ಮೆರವಣಿಗೆಗೆ ಅವಕಾಶವಿಲ್ಲ
ನಗರದಲ್ಲಿ ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ, ಗರಿಷ್ಠ ಮೂರು ದಿನಕ್ಕೆ ಗಣೇಶಮೂರ್ತಿ ವಿಸರ್ಜನೆ ಮಾಡಬೇಕು ಎಂಬುದು ಸೇರಿದಂತೆ ಹೊಸ ಮಾರ್ಗಸೂಚಿಯನ್ನು ಬಿಬಿಎಂಪಿ ಪ್ರಕಟಿಸಿದೆ.
stateAug 20, 2020, 8:56 AM IST
ಬೆಂಗಳೂರಲ್ಲಿ ಗಣೇಶ ವಿಗ್ರಹಗಳ ವ್ಯಾಪಾರ ಜೋರು..!
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರ ನಡುವೆಯೂ ರಾಜ್ಯ ಸರ್ಕಾರ ಸಾರ್ವಜನಿಕ ಗಣೋತ್ಸವಕ್ಕೆ ಷರತ್ತು ಬದ್ಧ ಅವಕಾಶ ನೀಡಿದ ಬೆನ್ನಲ್ಲೇ ರಾಜಧಾನಿಯಲ್ಲಿ ಗಣೇಶಮೂರ್ತಿ ವ್ಯಾಪಾರ ಗರಿಗೆದರಿದೆ.
stateAug 19, 2020, 8:49 AM IST
ಬೆಂಗಳೂರಲ್ಲಿ ಮೂರ್ತಿ ತಯಾರಕರಿಂದಲೇ ಗಣೇಶ ವಿಸರ್ಜನೆಗೆ ವ್ಯವಸ್ಥೆ!
ರಾಜಧಾನಿಯಲ್ಲಿ ಗಣೇಶಮೂರ್ತಿ ಮಾರಾಟಗಾರರೇ ಉಚಿತವಾಗಿ ಗಣೇಶಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಮಾಡಿದ್ದು, ವಿಸರ್ಜನೆ ಬಳಿಕ ಆ ಮೂರ್ತಿಯನ್ನು ಕ್ರಷಿಂಗ್ ಮಷಿನ್ನಲ್ಲಿ ಪುಡಿ ಮಾಡಿ ಮುಂದಿನ ವರ್ಷ ಮರುಬಳಕೆ ಮಾಡಲು ತೀರ್ಮಾನಿಸಿದ್ದಾರೆ.
stateJul 31, 2020, 6:23 PM IST
ಗೌರಿ ಗಣೇಶ ವಿಸರ್ಜನೆಗೆ ಕೆರೆ ಕಲ್ಯಾಣಿಗಳಲ್ಲಿ ಅವಕಾಶವಿಲ್ಲ..!
ಸಾರ್ವಜನಿಕವಾಗಿ ಪ್ರಾಣಿ ವಧೆ ಹಾಗೂ ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಆಯಾ ಹಬ್ಬಗಳು ಕುಟುಂಬಕ್ಕೆ ಸೀಮಿತವಾಗಿರಲಿ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
NEWSSep 1, 2019, 9:40 AM IST
ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬದಲು ಅಂಗಳದಲ್ಲಿಟ್ಟರೆ ಬೆಳೆಯುತ್ತದೆ ಸಸಿ!
ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕಗಳನ್ನು ಬಳಸಿದ ಗಣಪತಿ ವಿಸರ್ಜನೆಯಿಂದ ಪರಿಸರಕ್ಕೆ ಹಾನಿ ಆಗುತ್ತಿರುವುದರಿಂದ ಜನರು ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣಪತಿ ಬಳಸುತ್ತಿರುವುದು ಹೆಚ್ಚಾಗುತ್ತಿದೆ.
WEB SPECIALAug 31, 2019, 6:13 PM IST
ಗಣಪನ ಮಾರಿ ಬಂದ ಹಣ: ಧೃಡತೆಯತ್ತ ಹೆಣ್ಣುಮಕ್ಕಳ ಶಿಕ್ಷಣ!
ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಬೇಕು. ಆದರೆ, ಅದು ಪರಿಸರ ಸ್ನೇಹಿಯಾಗಿರಬೇಕು. ಗಣೇಶನ ಮೂರ್ತಿಗೆ ನೀಡುವ ಹಣ ಸಾಮಾಜಿಕ ಕಾರ್ಯಕ್ಕೆ ಉಪಯೋಗವಾಗಬೇಕು ಎಂಬ ನಿರ್ಧಾರ ನಿಮ್ಮದಾಗಿದ್ದರೆ ಬೆಂಗಳೂರು ರೋಟರಿ ಕ್ಲಬ್'ನ 'ಈ ಕ್ಲಬ್ ಆಫ್ ಗ್ರೀನ್ ಸಿಟಿ' ಸಂಸ್ಥೆ ಅದನ್ನು ಕಾರ್ಯರೂಪಕ್ಕೆ ತಂದಿದೆ. ಅಲ್ಲದೇ ಮಣ್ಣಿನ ಗಣಪತಿ ಮೂರ್ತಿಗಳ ಮಾರಾಟದಿಂದ ಬಂದ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವ ಕಾರ್ಯ ಮಾಡುತ್ತಿದೆ. ಈ ಕ್ಲಬ್ ಆಫ್ ಗ್ರೀನ್ ಸಿಟಿ ಕಾರ್ಯ ಉಳಿದ ಸ್ವಯಂ ಸೇವಾ ಸಂಸ್ಥೆಗಳಿಗೂ ಮಾದರಿ. ಒಟ್ಟಿನಲ್ಲಿ ಒಂದು ಕಡೆ ಪರಿಸರ ಪ್ರೇಮ ಇನ್ನೊಂದು ಕಡೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗೆ ಅಭಿನಂದನೆ ಹೇಳೋಣ.
Karnataka DistrictsAug 31, 2019, 4:43 PM IST
ಬೆಂಗಳೂರಿಗರೆ ಗಮನಿಸಿ...ಈ ಕೆರೆಗಳಲ್ಲಿ ಮಾತ್ರ ಗಣೇಶ ವಿಸರ್ಜನೆಗೆ ಅವಕಾಶ
ಗಣೇಶ ಹಬ್ಬ ಬಂದಿದೆ.. ಸಂಭ್ರಮ ಸಡಗರ ಎಲ್ಲರಲ್ಲೂ ಮನೆ ಮಾಡಿದೆ. ಇದೇ ಕಾರಣಕ್ಕೆ ಪಿಒಪಿ ಗಣೇಶ ವಿಗ್ರಹ ಮನೆಗೆ ತಂದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಪಿಒಪಿ ಅಥವಾ ವಿಷಯುಕ್ತ ರಾಸಾಯನಿಕ ಬಣ್ಣಗಳಿಂದ ಲೇಪಿತ ವಿಗ್ರಹಗಳನ್ನು ಈಗಾಗಲೇ ನಿಷೇಧ ಮಾಡಲಾಗಿದೆ.
WEB SPECIALAug 29, 2019, 8:12 PM IST
ಬೆರಣಿ ಗಣೇಶ ಬಂದ.. ಪರಿಸರಕ್ಕೆ ತಾನೇ ಪೂರಕ ಎಂದ
ಪರಿಸರ ಸ್ನೇಹಿ ಗಣೇಶ ವಿಗ್ರಹ ಹೇಗಿರಬೇಕು? ಇಲ್ಲಿದೆ ನೋಡಿ ಉತ್ತರ... ಈ ಕುಟುಂಬ ಹೈನುಗಾರಿಕೆಯನ್ನು ಪರಂಪರೆ ಮಾಡಿಕೊಂಡಿದೆ. ಇದೀಗ ಚಂದ್ರು ಹಾಗೂ ಅವರ ಸ್ನೇಹಿತರ ಬಳಗ ಪರಿಸರ ಸ್ನೇಹಿಯಾಗಿ ಸೆಗಣಿಯಿಂದ ಗಣೇಶನ ವಿಗ್ರಹ ತಯಾರಿಸುತ್ತಿದೆ. ಪರಿಸರಕ್ಕೆ ಪೂರಕವಾಗಿ ಹಬ್ಬ ಆಚರಣೆ ಮಾಡುವ ಸಂಕಲ್ಪವನ್ನು ನಾವು ಇಂದೇ ಮಾಡೋಣ.. ಚಂದ್ರು ಹಾಗೂ ಅವರ ಸ್ನೇಹಿತರ ಬಳಗ ಮಾದರಿ ಕೆಲಸವನ್ನು ಶ್ಲಾಘಿಸೋಣ...
NEWSAug 26, 2019, 10:28 AM IST
ಗಣಪತಿಯ ಪಿಒಪಿ ರೂಪ, ಪರಿಸರಕ್ಕೆ ಕೊಳೆ ಕೂಪ!
ಗಣೇಶ ಚತುರ್ಥಿ ಬಂದಿದೆ. ಸಿದ್ಧಿವಿನಾಯಕ ಈಗ ಮಣ್ಣಿನಲ್ಲಿ, ಪೇಪರ್ನಲ್ಲಿ ಅಷ್ಟೇ ಅಲ್ಲ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ನಲ್ಲಿ ವಿಭಿನ್ನ ಅವತಾರಗಳಲ್ಲಿ ಸೃಷ್ಟಿಯ ಕಲಾಜನಕರ ಕೈಚಳದಲ್ಲಿ, ವ್ಯಾಪಾರಸ್ಥರ ಗೋದಾಮುಗಳಲ್ಲಿ ಬಂಧಿಯಾಗಿದ್ದಾನೆ. ಕ್ರೇಜಿ ಭಕ್ತರ ಕೈಲಿ ಪೂಜೆ ಮಾಡಿಸಿಕೊಳ್ಳಲು ಕ್ಯೂನಲ್ಲಿ ನಿಂತಿದ್ದಾನೆ. ಬಗೆ ಬಗೆಯ ಬಣ್ಣ, ವಿಧವಿಧದ ಸುಣ್ಣ (ಪಿಒಪಿ), ಸುಂದರವಾದ ಗುಣಾವತಾರಗಳಲ್ಲಿ ರಚನೆಯಾಗಿರುವ ವಿಘ್ನೇಶ್ವರ ಮೂರ್ತಿಗಳು ಭಕ್ತರ ಕೈಸೇರಲು ಸಿದ್ಧವಾಗಿವೆ.
Karnataka DistrictsAug 1, 2019, 9:02 AM IST
ಪಿಒಪಿ ಗಣೇಶ ಪ್ರತಿಷ್ಠಾಪನೆಗೆ ಖಂಡಿತ ಅನುಮತಿ ಸಿಗಲ್ಲ!
ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳಿಗೆ ಯಾವುದೇ ಕಾರಣಕ್ಕೂ ಈ ಬಾರಿ ಬಿಬಿಎಂಪಿ ಅನುಮತಿ ನೀಡುವುದಿಲ್ಲ ಎಂದು ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.
NEWSSep 9, 2018, 10:05 AM IST
ಬೆಂಗಳೂರಿಗರಿಗೆ ಪ್ರಿಯವಾದ ಗಣೇಶ ಇವನು
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿ ಎಷ್ಟೇ ಜಾಗೃತಿ ಮೂಡಿಸಿದರೂ ಉದ್ಯಾನನಗರಿ ನಾಗರಿಕರಲ್ಲಿ ಪಿಒಪಿ ಬೇಡಿಕೆ ಹಾಗೂ ಜನಪ್ರಿಯತೆ ಎರಡೂ ಕುಸಿದಿಲ್ಲ. ಇದಕ್ಕೆ ಪಿಒಪಿ ಮೂರ್ತಿಗಳ ಅಗ್ಗದ ದರ, ಆಕರ್ಷಕ ಮತ್ತು ಬೃಹತ್ ರೂಪವೇ ಕಾರಣವಾಗಿದೆ.
NEWSAug 30, 2018, 9:14 AM IST
ಈ ಗಣೇಶನಿಗೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ
ಇನ್ನೇನು ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಂತಹ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಜನರು ಇಂತಹ ಗಣೇಶ ಮೂರ್ತಿ ಕೊಳ್ಳಲು ಮುಂದಾಗುತ್ತಿದ್ದಾರೆ.