Banashankari Fair
(Search results - 12)Karnataka DistrictsDec 13, 2020, 11:33 AM IST
ಬಾದಾಮಿ: ಕಲಾವಿದರ ಬದುಕು ಕಸಿದುಕೊಂಡ ಕೊರೋನಾ ಮಹಾಮಾರಿ
ಪ್ರತಿ ವರ್ಷ ನೂರಾರು ಜನ ರಂಗಭೂಮಿ ಕಲಾವಿದರಿಗೆ ವರದಾನವಾಗಿದ್ದ ಐತಿಹಾಸಿಕ ಬಾದಾಮಿಯ ಬನಶಂಕರಿ ಜಾತ್ರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ರದ್ದಾಗಿದ್ದು, ಇದೀಗ ರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದು ನಿಲ್ಲುವಂತಾಗಿದೆ.
Karnataka DistrictsNov 28, 2020, 12:54 PM IST
ಕೊರೋನಾ ಎಫೆಕ್ಟ್: ಬಾದಾಮಿ ಬನಶಂಕರಿ ಜಾತ್ರೆ ರದ್ದು
ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪ್ರಸಿದ್ಧ ಬನಶಂಕರಿ ಜಾತ್ರೆ ರದ್ದು ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರುವ ರಾಜ್ಯ ಸರ್ಕಾರದ ಆದೇಶದನ್ವಯ ಬಾದಾಮಿಯ ಬನಶಂಕರಿ ದೇವಿ ಜಾತ್ರೆ ರದ್ದು ಪಡಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Karnataka DistrictsJan 27, 2020, 12:24 PM IST
ಬಾದಾಮಿ ಬನಶಂಕರಿ ಜಾತ್ರೆಯಲ್ಲಿ 'ಹೌದ್ದ ಹುಲಿಯಾ' ಪೀರಪ್ಪ ಪ್ರತ್ಯಕ್ಷ!
ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಭಾಷಣ ವೇಳೆ ಹೌದ್ದ ಹುಲಿಯಾ ಡೈಲಾಗ್ ಫುಲ್ ಫೇಮಸ್ ಆಗಿತ್ತು. ಇದೇ ಡೈಲಾಗ್ ಟೈಟಲ್ನಟಿ ನಾಟಕವೊಂದು ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹುನಗುಂದ ತಾಲೂಕಿನ ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘ ಈ ನಾಟಕವನ್ನ ಪ್ರದರ್ಶನ ಮಾಡುತ್ತಿದೆ.
Karnataka DistrictsJan 18, 2020, 12:56 PM IST
ಬನಶಂಕರಿ ಜಾತ್ರೆಯಲ್ಲಿ ಸೊಂಟ ಬಳಕಿಸಿದ ನಟಿ ರಾಗಿಣಿ: ಹುಚ್ಚೆದ್ದು ಕುಣಿದ ಫ್ಯಾನ್ಸ್!
ಜಿಲ್ಲೆಯ ಬಾದಾಮಿ ಬನಶಂಕರಿದೇವಿ ಜಾತ್ರೆಯ ನಾಟಕದಲ್ಲಿ ಸ್ಯಾಂಡಲ್ವುಡ್ ನಟಿ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ. ತುಪ್ಪಾ ಬೇಕಾ ತುಪ್ಪ ಹಾಡಿಗೆ ಡ್ಯಾನ್ಸ್ಗೆ ನಟಿ ರಾಗಿಣಿ ಸೊಂಟ ಬಳಕಿಸಿದ್ದಾರೆ. ಮನಸ್ಯಾಕ ಕೊಟ್ಟಿ, ಕೈಯಾಕ ಬಿಟ್ಟಿ ನಾಟಕದಲ್ಲಿ ಹೆಜ್ಜೆ ಹಾಕಿದ್ದಾರೆ.
Karnataka DistrictsJan 13, 2020, 9:20 PM IST
ಬನಶಂಕರಿ ರಥೋತ್ಸವಕ್ಕೆ ಹಗ್ಗ ಹೊತ್ತು ತಂದ ಬಸವ ಇನ್ನಿಲ್ಲ
ಬನಶಂಕರಿ ರಥೋತ್ಸವ ಎಳೆಯಲು 15 ಕ್ವಿಂಟಾಲ್ ಬಾರದ ಹಗ್ಗ ಹೊತ್ತು ತಂದಿದ್ದ ಬಸವ [ಎತ್ತು] ಸಾವನ್ನಪ್ಪಿದೆ. ರಥೋತ್ಸವ ಮುಗಿಸಿ ವಾಪಸ್ ಆಗೋ ವೇಳೆ ಎತ್ತು ಮೃತಪಟ್ಟಿದೆ. ಅನ್ನಪ್ಪ ಎನ್ನುವರಿಗೆ ಸೇರಿದ್ದ ಎತ್ತು.
Karnataka DistrictsJan 13, 2020, 1:43 PM IST
ಬಾದಾಮಿ ಬನಶಂಕರಿ ಜಾತ್ರೆಯಲ್ಲೂ ಸದ್ದು ಮಾಡ್ತಿದೆ 'ಹೌದ್ದ ಹುಲಿಯಾ' ನಾಟಕ!
ಬನಶಂಕರಿ ದೇವಿ ಜಾತ್ರೆ ರಂಗಭೂಮಿ ಕಲಾವಿದರಿಗೆ ತವರೂರು ಇದ್ದಂತೆ. ಹೊಸ ವರ್ಷದ ಆರಂಭದಲ್ಲಿಯೇ ಈ ಜಾತ್ರೆ ಇರುವುದರಿಂದ ಈ ಜಾತ್ರೆಯಲ್ಲಿ ತಿಂಗಳು ಗಟ್ಟಲೆ ಬೀಡು ಬಿಟ್ಟು ನಾಟಕಗಳನ್ನು ಪ್ರದರ್ಶಿಸಿ ರಂಗಭೂಮಿ ಕಲೆಯನ್ನು ಆಸಕ್ತರಿಗೆ ಉಣ ಬಡಿಸುತ್ತಾರೆ.
Karnataka DistrictsJan 11, 2020, 11:10 AM IST
ಸಂಭ್ರಮದಿಂದ ಜರುಗಿದ ಬನಶಂಕರಿ ದೇವಿ ರಥೋತ್ಸವ: ಸಹಸ್ರಾರು ಭಕ್ತರು ಭಾಗಿ
ಚಾಲುಕ್ಯರ ನಾಡಿನ ಆರಾಧ್ಯ ದೇವತೆ ಉತ್ತರ ಕರ್ನಾಟಕ ಭಾಗದಲ್ಲಿ ಅಧಿದೇವತೆ ಬಾದಾಮಿ ಬನಶಂಕರಿ ದೇವಿಯ ರಥೋತ್ಸವ ಶುಕ್ರವಾರ ಸಂಜೆ ಗೋಧೂಳಿ ಸಮಯದಲ್ಲಿ ಲಕ್ಷಾಂತರ ಭಕ್ತರು ಜಯ ಘೋಷಗಳ ಮಧ್ಯ ವಿಜೃಂಭಣೆಯಿಂದ ಜರುಗಿತು.
Karnataka DistrictsJan 9, 2020, 10:05 AM IST
ಜೀವನದಲ್ಲಿ ಒಮ್ಮೆಯಾದ್ರೂ ನೋಡ್ಲೇಬೇಕು ಬಾದಾಮಿ ಬನಶಂಕರಿ ಜಾತ್ರೆ
ಬಾದಾಮಿ ಬನಶಂಕರಿ ಜಾತ್ರೆ ಹಲವಾರು ವೈಶಿಷ್ಟಗಳಿಂದ ರಾಜ್ಯದ ಮನೆ, ಮನದ ಮಾತಾಗಿದೆ. ಇದೇ ಕಾರಣ ನಾಡಿನ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ. ಅಲ್ಲದೆ, ಈ ಜಾತ್ರೆಯಲ್ಲಿ ಎಲ್ಲವೂ ದೊರೆಯುತ್ತವೆ. ಹೀಗಾಗಿ ಜೀವನದಲ್ಲಿ ಒಮ್ಮೆಯಾದರೂ ಬಾದಾಮಿ ಬನಶಂಕರಿ ಜಾತ್ರೆಯನ್ನು ನೋಡಬೇಕು ಎಂದು ಎನಿಸುವುದು.
Karnataka DistrictsJan 8, 2020, 3:15 PM IST
ಬಾದಾಮಿ ಬನಶಂಕರಿ ಜಾತ್ರೆ: ಟ್ರಾಫಿಕ್ ಸಮಸ್ಯೆಗೆ ಬೇಕಿದೆ ಅಗತ್ಯಕ್ರಮ
ಐತಿಹಾಸಿಕ ಬಾದಾಮಿ ಬನಶಂಕರಿ ಜಾತ್ರೆಗೆ ದಿನಗಣನೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ಅಧಿಕಾರಿಗಳು ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಜಾತ್ರೆಯ ದಿನ ಭಕ್ತರು ವಾಹನಗಳ ಸಂಚಾರಕ್ಕೆ ಹೈರಾಣಾಗುವುದರಲ್ಲಿ ಅನುಮಾನ ಇಲ್ಲ.
Karnataka DistrictsDec 28, 2019, 11:02 AM IST
ಬನಶಂಕರಿ ಜಾತ್ರೆ ವೇಳೆ ಒಂದು ಸೆಕೆಂಡ್ ವಿದ್ಯುತ್ ಹೋದರೆ ಕ್ರಮ: ಸಿದ್ದರಾಮಯ್ಯ
ಜಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಅಧಿಕಾರಿಗಳಿಗೆ ಮಾಜಿ ಸಿಎಂ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Karnataka DistrictsDec 13, 2019, 8:27 AM IST
ಬನಶಂಕರಿ ಜಾತ್ರೆ: ವ್ಯಾಪಾರಸ್ಥರು ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು
ಜನವರಿ ತಿಂಗಳಲ್ಲಿ ಬನಶಂಕರಿ ಜಾತ್ರೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳಾಗಲಿ, ಅಪರಾಧಗಳಾಗಲಿ ಜರುಗದಂತೆ ಎಲ್ಲಾ ವ್ಯಾಪಾರಸ್ಥರು ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಅಪರಾಧಗಳನ್ನು ತಡೆಯಲು ತಪ್ಪಿತಸ್ಥರನ್ನು ಬಂಧಿಸಲು ಸಹಕಾರಿಯಾಗುತ್ತದೆ ಎಂದು ತಹಸೀಲ್ದಾರ್ ಎಸ್.ಎಸ್.ಇಂಗಳೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
BagalkotJan 21, 2019, 9:15 PM IST
ಶ್ರೀ ಲಿಂಗೈಕ್ಯ:ಬನಶಂಕರಿ ದೇವಿ ರಥೋತ್ಸವ ಚಾಲನೆಗೂ ಮುನ್ನ ಸಿದ್ದರಾಮಯ್ಯ ಮೌನಾಚರಣೆ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ಬನಶಂಕರಿ ದೇವಿ ರಥೋತ್ಸವಕ್ಕೆ ಚಾಲನೆ ನೀಡುವ ಮುನ್ನ ಸಿದ್ಧಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಿದ್ದಾರೆ.