ಮಾಜಿ ಅಧಿಕಾರಿ ಮನೆಯಿಂದ ವಿದ್ಯಾರ್ಥಿ ನಾಪತ್ತೆ!
ಮಾಜಿ ಪೊಲೀಸ್ ಅಧಿಕಾರಿ ಕಂ ರಾಜಕಾರಣಿ ಮನೆಯಿಂದ ವಿದ್ಯಾರ್ಥಿ ಅನುಮಾನಾಸ್ಪದ ನಾಪತ್ತೆ! ಬಜ್ಪೆ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿದ್ದ ಮದನ್ ರಾಜೀನಾಮೆ ನೀಡಿದ್ದರು! ಮದನ್ ಕಳೆದ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದಾಗ ವಿದ್ಯಾರ್ಥಿ ವಿನಾಯಕ ಪರಿಚಯ! ಕಳೆದ 7 ತಿಂಗಳಿಂದ ಮದನ್ ಜೊತೆ ಓಡಾಡಿಕೊಂಡಿದ್ದ ವಿನಾಯಕ್ ನಾಪತ್ತೆ
ಮಂಗಳೂರು(ನ.8): ಮಾಜಿ ಪೊಲೀಸ್ ಅಧಿಕಾರಿ ಕಂ ರಾಜಕಾರಣಿಯ ಮನೆಯಿಂದ ಅನುಮಾನಾಸ್ಪದವಾಗಿ ವಿದ್ಯಾರ್ಥಿ ಒಬ್ಬ ನಾಪತ್ತೆಯಾಗಿರಯವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿದ್ದ ಮದನ್ ರಾಜೀನಾಮೆಯನ್ನು ನೀಡಿ ಈ ಭಾರೀ ವಿಧಾನಸಭೆಗೆ ಸ್ಪರ್ಧಿಸಿದ್ರು. ಈ ವೇಳೆ ಶಕ್ತಿನಗರ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ ಎಂಬಾತ ಪರಿಚಯ ಆಗಿ ಕಳೆದ 7 ತಿಂಗಳಿಂದ ಮದನ್ ಜೊತೆ ಓಡಾಡಿಕೊಂಡು ಅವರ ಮನೆಯಲ್ಲೆ ವಾಸವಿದ್ದ. ಆದ್ರೆ ಕಳೆದ ತಿಂಗಳು 8 ರಿಂದ ವಿನಾಯಕ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ವಿನಾಯಕ ಪೋಷಕರಿಗೆ, ಮದನ್ ದಿನಾಂಕ 15 ಕ್ಕೆ ವಿಷಯ ತಿಳಿಸಿದ್ದಾರೆ. ಇದ್ರಿಂದ ಅನುಮಾನ ಗೊಂಡ ವಿನಾಯಕನ ಪೊಷಕರಾದ ಶಿವಕುಮಾರ್, ಸಾಕಮ್ಮ ದಂಪತಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮಗನ ನಾಪತ್ತೆ ಹಿಂದೆ ಮದನ್ ಕೈವಾಡ ಇದೆ ಅಂತಾ ಆರೋಪಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..