09:49 PM (IST) Mar 03

ಫೇಸ್​ಬುಕ್​ ಸ್ನೇಹ, ರಾತ್ರಿ ತಂಗಿದ್ದ ಆರೋಪಿ... ಅಂದು ನಡೆದದ್ದೇನು? ಹಿಮಾನಿ ಸಾವಿನ ರಹಸ್ಯ ತಿಳಿಸಿದ ಪೊಲೀಸರು

ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಜೊತೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಸತ್ತದ್ದು ಹೇಗೆ? ಪೊಲೀಸರು ವಿವರಿಸಿದ್ದು ಹೀಗೆ..

ಪೂರ್ತಿ ಓದಿ
05:35 PM (IST) Mar 03

ಅಮೋಘ ನೃತ್ಯದಿಂದ ಬ್ರಿಟಿಷರು ಬೆರಗಾಗುವಂತೆ ಮಾಡಿದ ಭಾರತೀಯ ಬಾಲೆ

ಅಸ್ಸಾಂನ 8 ವರ್ಷದ ಬಾಲಕಿ ಬಿನಿತಾ ಚೆಟ್ರಿ ಬ್ರಿಟನ್ ಗಾಟ್ ಟ್ಯಾಲೆಂಟ್‌ನಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆಯ ಅದ್ಭುತ ನೃತ್ಯಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
04:16 PM (IST) Mar 03

ವಿದೇಶಿ ಮಹಿಳೆಯ ತೊಡೆಯ ಮೇಲೆ ಜಗನ್ನಾಥ ದೇವರ ಫೋಟೋ, ಕೇಸ್‌ ದಾಖಲಿಸಿದ ಪೊಲೀಸ್‌!

ಒಡಿಯಾದಲ್ಲಿ ವಿದೇಶಿ ಮಹಿಳೆಯೊಬ್ಬರು ತೊಡೆಯ ಮೇಲೆ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
03:57 PM (IST) Mar 03

ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದೇ ಮಹಿಳೆ ಡ್ರೀಮ್ ಜಾಬ್! ಏಕೆ ಗೊತ್ತಾ?

ಪಿಜಿ ಓನರ್ ಆದ್ರೆ ಏನೆಲ್ಲ ಲಾಭವಿದೆ? ಈ ಪ್ರಶ್ನೆಗೆ ಮಹಿಳೆಯೊಬ್ಬಳು ಉತ್ತರ ನೀಡಿದ್ದಾಳೆ. ಎಕ್ಸ್ ಖಾತೆಯಲ್ಲಿ ಆಕೆ ಪೋಸ್ಟ್ ವೈರಲ್ ಆಗಿದೆ. 

ಪೂರ್ತಿ ಓದಿ
03:23 PM (IST) Mar 03

ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಇಟ್ಟು, ರಣವೀರ್‌ ಶೋಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್‌!

ಯೂಟ್ಯೂಬರ್ ರಣವೀರ್ ಅಲಹಬಾದಿಯಾ ಅವರ ವಿವಾದಾತ್ಮಕ ಕಾಮೆಂಟ್‌ನ ನಂತರ, ಡಿಜಿಟಲ್ ಕಂಟೆಂಟ್‌ಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಮುನ್ನ ನೈತಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮತೋಲನದಲ್ಲಿರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲಹಬಾದಿಯಾ ಅವರ ಕಾರ್ಯಕ್ರಮಗಳು ನೈತಿಕ ಮಾನದಂಡಗಳನ್ನು ಪಾಲಿಸುವಂತೆ ಕೋರ್ಟ್ ಸೂಚಿಸಿದೆ.

ಪೂರ್ತಿ ಓದಿ
01:57 PM (IST) Mar 03

ರಾಜ್ಯದ ಕರಾವಳಿಗೆ ಬಿಸಿಲ ತಾಪದಿಂದ ಇನ್ನೂ ಎರಡು ದಿನ ಉಷ್ಣ ಅಲೆ: ಹವಾಮಾನ ಇಲಾಖೆ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ತಾಪದಿಂದ ಇನ್ನೂ ಎರಡು ದಿನ ಉಷ್ಣ ಅಲೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ. 

ಪೂರ್ತಿ ಓದಿ
01:33 PM (IST) Mar 03

3 ತಿಂಗಳಲ್ಲಿ ಪಕ್ಷ ಸಂಘಟಿಸದಿದ್ದರೆ ಅಭ್ಯರ್ಥಿ ಬದಲಾವಣೆ: ಡಿ.ಕೆ. ಶಿವಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ 9 ಮಂದಿ ಶಾಸಕರನ್ನು ಗೆಲ್ಲಿಸಬೇಕು, ಪಕ್ಷ ಸಂಘಟನೆಗೆ 3 ತಿಂಗಳು ಕೊಡುತ್ತೇನೆ, ಇಲ್ಲದಿದ್ದಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪೂರ್ತಿ ಓದಿ
01:11 PM (IST) Mar 03

ಶ್ವೇತಾ ಜೊತೆ ನೈಟ್ ಗೇಮ್ ಇಷ್ಟ ಎಂದ ಆಕಾಶ್ ಅಂಬಾನಿ, ಹೆಂಡ್ತಿ ಜೊತೆ ನೈಟ್ ಔಟ್

ಪತ್ನಿ ಜೊತೆ ನೈಟ್ ಗೇಮ್ ಇಷ್ಟ ಎಂದಿದ್ದ ಆಕಾಶ್ ಅಂಬಾನಿ ನೈಟ್ ಔಟ್ ಮುಗಿಸಿದ್ದಾರೆ. ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಫೋಟೋಗಳ ವೈರಲ್ ಆಗ್ತಿವೆ. 

ಪೂರ್ತಿ ಓದಿ
01:10 PM (IST) Mar 03

ಹಣಕಾಸು ವರ್ಷಾಂತ್ಯ: ಮಾರ್ಚ್‌ನಲ್ಲಿ ನಿಮ್ಮ ಪರ್ಸ್‌ ಮೇಲೆ ಪರಿಣಾಮ ಬೀರಲಿದೆ ಈ ಐದು ಬದಲಾವಣೆಗಳು!

2024-25ನೇ ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿದ್ದಂತೆ, ತೆರಿಗೆ ಉಳಿತಾಯ ಹೂಡಿಕೆ, ಬಂಡವಾಳ ಲಾಭಗಳ ಸರಿದೂಗಿಸುವಿಕೆ, ವಿಶೇಷ FD ಯೋಜನೆಗಳಲ್ಲಿ ಹೂಡಿಕೆ ಮತ್ತು ಮುಂಗಡ ತೆರಿಗೆ ಪಾವತಿಯಂತಹ ಪ್ರಮುಖ ಹಣಕಾಸು ಕಾರ್ಯಗಳನ್ನು ಪೂರ್ಣಗೊಳಿಸಲು ಗಮನಹರಿಸಿ. ಮಾರ್ಚ್ 31ರ ಗಡುವನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಹಣಕಾಸು ಯೋಜನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ.

ಪೂರ್ತಿ ಓದಿ
12:38 PM (IST) Mar 03

ಸಾಲು ಸಾಲು ನಷ್ಟ, 1 ಸಾವಿರ ಉದ್ಯೋಗಿಗಳಿಗೆ ಓಲಾ ಎಲೆಕ್ಟ್ರಿಕ್‌ ಕೊಕ್‌?

ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ 1 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಲು ಯೋಜನೆ ರೂಪಿಸುತ್ತಿದೆ. ನಷ್ಟ ಸರಿದೂಗಿಸಲು ಮತ್ತು ಕಾರ್ಯಾಚರಣೆಗಳನ್ನು ಪುನರ್ರಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಪೂರ್ತಿ ಓದಿ
10:53 AM (IST) Mar 03

ರಿಪೋಟರ್ಸ್ ಡೈರಿ: ಕಲಬುರಗಿ ಜೈಲು ಸಿಬ್ಬಂದಿಗೆ ಈಗ ಅಗ್ನಿಪರೀಕ್ಷೆ!

ಅಂಕಪಟ್ಟಿ ಕೊಡೋನು, ಪರೀಕ್ಷೆ ಪಾಸು ಮಾಡಿಸೋರಿಬ್ಬರೂ ಅಲ್ಲೇ ಸೇರಿಬಿಟ್ರು, ಮುಂದೇನು ಗತಿ? ಎಂದು ಸುದ್ದಿಗಾರರ ಪ್ರಶ್ನೆಗೆ ಪೊಲೀಸ್‌ ಕಮೀಶ್ವರ್ ಸಾಹೇಬ್ರು ತುಸು ವಿಚಲಿತರಾದವರಂತೆ ಕಂಡರೂ ತಕ್ಷಣ ಅಧಿಕಾರಿಗಳನ್ನ ಕರೆದು ಈ ಡೆಡ್ಲಿ ಕಾಂಬಿನೇಷನ್ ಬಗ್ಗೆ ಎಚ್ಚರವಹಿಸಲು ಸೂಚಿಸಿದರೆನ್ನಿ, 

ಪೂರ್ತಿ ಓದಿ
10:40 AM (IST) Mar 03

ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಸಭೆ: ಸುದೀರ್ಘ ಚರ್ಚೆ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ನಾಯಕರ ಸಭೆ ನಡೆಯಿತು. 

ಪೂರ್ತಿ ಓದಿ
08:31 AM (IST) Mar 03

ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್ ಕೊಟ್ಟ ಆಂಧ್ರ ಸರ್ಕಾರ; ನಮ್ಮಲ್ಲಿಯೂ ಸಿಗುತ್ತಾ?

ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಮತ್ತು ವೇತನ ಸಹಿತ ಮಾತೃತ್ವ ರಜೆಯನ್ನು ನೀಡಲು ನಿರ್ಧರಿಸಿದೆ. ನಿವೃತ್ತಿ ವಯಸ್ಸನ್ನು ಹೆಚ್ಚಿಸಿ, 30 ವರ್ಷ ಸೇವೆ ಸಲ್ಲಿಸಿದವರಿಗೆ 1.5 ಲಕ್ಷ ರು. ಗ್ರಾಚ್ಯುಟಿ ನೀಡಲಾಗುವುದು.

ಪೂರ್ತಿ ಓದಿ