LIVE: ಬಿಜೆಪಿ ನಾಗಲೋಟ, ಕುಂಟಿದ ಕಾಂಗ್ರೆಸ್, ಮುಗ್ಗರಿಸಿದ ಜೆಡಿಎಸ್

Karnataka assembly by elections results 2019 live updates in Kannada

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಿಂದ ಬೇಸತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಕ್ಷೇತ್ರಗಳ ಪೈಕಿ 15ಕ್ಕೆ ಉಪ ಚುನಾವಣೆ ನಡೆದಿತ್ತು. ಅರ್ಹತೆ ಹಾಗೂ ಅನರ್ಹತೆ ನಡುವೆ ನಡೆದ ಪೈಪೋಟಿಯಲ್ಲಿಯೇ ಅನರ್ಹ ಶಾಸಕರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಕಾಂಗ್ರೆಸ್ ಅಂತೂ ಇಂತು ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರೆ, ಜೆಡಿಎಸ್ ಸಾಧಿಸಿದ್ದು ಶೂನ್ಯ.

4:53 PM IST

ಸೋತವರಿಗೆ ಆಗೋಲ್ಲ ಅನ್ಯಾಯ

ಉಪ ಚುನಾವಣೆಯಲ್ಲಿ ಗೆದ್ದವರಿಗೆಲ್ಲ‌ ಮಂತ್ರಿ ಸ್ಥಾನ ಪಕ್ಕಾ. ವಿರೋಧ ಪಕ್ಷಗಳ ಆರೋಪದ ವಿಶ್ಲೇಷಣೆಯ ಮಾಡುವ ಅಗತ್ಯವಿಲ್ಲ, ನಮ್ಮ ಜಿಲ್ಲೆಗೆ ಇನ್ನೊಂದು ಡಿಸಿಎಮ್ ಸ್ಥಾನ ಕೊಟ್ಟರೆ ಸಂತೋಷದಿಂದ ಸ್ವಾಗತಿಸುತ್ತೇವೆ.

- ಲಕ್ಷ್ಣಣ ಸವದಿ, ಡಿಸಿಎಂ

4:39 PM IST

'ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟು ರಾಜೀನಾಮೆ'

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

 

 

4:37 PM IST

ಹುಣಸೂರಿನಲ್ಲಿ ಕಾಂಗ್ರೆಸ್‌ಗೆ ಗೆಲವು: ಮೌನಕ್ಕೆ ಜಾರಿದ ಜೆಡಿಎಸ್ ಶಾಸಕ

ಪರೋಕ್ಷವಾಗಿ ಬಿಜೆಪಿ ಬೆಂಬಲಿಸುವ ಚಾಮುಂಡೇಶ್ವರಿ ಶಾಸಕ ಜಿಟಿಡಿ ಉಪು ಚುನಾವಣೆ ಫಲಿತಾಂಶದ ಬಗ್ಗೇ ಹೇಳಿದ್ದಿಷ್ಟು...

ಫಲಿತಾಂಶದ ಬಗ್ಗೆ ತುಟಿ ಬಿಚ್ಚದ ಶಾಸಕ

4:34 PM IST

ಭ್ರಷ್ಟತೆ, ಅತಂತ್ರಕ್ಕೆ ಮುಕ್ತಿ: ರಾಜೀವ್ ಚಂದ್ರಶೇಖರ್

ಕೈ-ಜೆಡಿಎಸ್ ಮೈತ್ರಿ ಸರಕಾರದಿಂದ ಬೇಸತ್ತ ಜನರು ಇದೀಗ ಬಿಜೆಪಿಗೆ ಬಹುಮತ ನೀಡಿದೆ.

ಬಿಜೆಪಿ ರಾಜೀವ್ ಚಂದ್ರಶೇಕರ್ ಹೇಳಿದ್ದೇನು?

 

3:58 PM IST

ನಿಜವಾಯ್ತು ನೀಲಿ ಪುಸ್ತಕದ ಭವಿಷ್ಯ

ಇವರು ಹೇಳಿದ್ದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ. 

ಅಷ್ಟಕ್ಕೂ ಇವರು ಹೇಳಿದ ಭವಿಷ್ಯವೇನು?

3:46 PM IST

ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅತೀವ ಕಳಪೆ ಪ್ರದರ್ಶನ ತೋರಿದ್ದು, ಶಾಸಕಾಂಗ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸೋಲಿನ ಹೊಣೆ: ಸಿದ್ದರಾಮಯ್ಯ ರಾಜೀನಾಮೆ

3:31 PM IST

ಏನಿದು ಕುಮಾರಸ್ವಾಮಿ ಟ್ವೀಟಿನ ಅರ್ಥ?

ಉಪ ಚುನಾವಣೆಗೂ ಮೊದಲೇ ಬಿಜೆಪಿಯೊಂದಿಗೆ ಕೈ ಜೋಡಿಸುವ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹೀಗ್ಯಾಕೆ ಟ್ವೀಟ್ ಮಾಡಿದರು?

ಸುಭದ್ರ ಸರಕಾರಕ್ಕೆ ಅಭಿನಂದನೆಗಳು

3:13 PM IST

ಶರತ್ ಬಚ್ಚೇಗೌಡ ಬೆಂಬಲಿಗ ಸಾವು!

ಶರತ್ ಬೆಂಬಲಿಗ ರಿಯಾಜ್ ಬೇಗ್ (50) ಸಾವನ್ನಪ್ಪಿದ್ದಾನೆ. ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಸಂಭ್ರಮಾಚರಣೆ ವೇಳೆ ಹೃದಯಾಘಾತ ಸಂಭವಿಸಿ ಈತ ಮೃತಪಟ್ಟಿದ್ದಾನೆ. 

2:19 PM IST

'ಮಂಡ್ಯದಲ್ಲಿ ಖಾತೆ ತೆರೆದಿದ್ದೇ ಬಿಜೆಪಿಯ ಸಾಧನೆ'

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ. ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಿಷ್ಟು...

ಮಂಡ್ಯದಲ್ಲಿ ಖಾತೆ ತೆರೆದಿದ್ದೇ ಬಿಜೆಪಿಯ ದೊಡ್ಡ ಸಾಧನೆ

 

1:43 PM IST

ಉಪ ಚುನಾವಣೆಯಲ್ಲಿ ಅನರ್ಹರು ಗೆದ್ದಿದ್ದು ಹೇಗೆ?

ಉಪ ಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12ರಲ್ಲಿ ಅನರ್ಹರು ಎಂದೆನಸಿಕೊಂಡ ಶಾಕರು ಗೆದ್ದಿದ್ದಾರೆ. ಇದಕ್ಕೇನು ಕಾರಣ.

ಸುವರ್ಣನ್ಯೂಸ್‌ನ ರಮಾಕಾಂತ್ ವಿಶ್ಲೇಷಣೆ

1:35 PM IST

ಸೋಲು ನೋವು ತಂದಿದೆ: ಜೆಡಿಎಸ್ ಅಭ್ಯರ್ಥಿ

2018ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಈ ಉಪ ಚುನಾವಣೆಯಲ್ಲಿ ಒಂದೂ ಕ್ಷೇತ್ರವನ್ನೂ ಗೆದ್ದಿಲ್ಲ.

ಜಿಡಿಎಸ್ ಅಭ್ಯರ್ಥಿ ಹೇಳಿದ್ದೇನು?

1:25 PM IST

ಕಾಂಗ್ರೆಸ್ ನಾಯಕರ ವರ್ತನೆ ನಮ್ಮ ಗೆಲುವಿಗೆ ಕಾರಣ

ಕಾಂಗ್ರೆಸ್ ಭದ್ರಕೋಟೆ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಜಯ ಸಾಧಿಸಿದ್ದಾರೆ. ಅವರು ಹೇಳಿದ್ದೇನು?

ನಮ್ಮ ಗೆಲುವಿಗೆ ಕೈ ನಾಯಕರ ವರ್ತನೆಯೇ ಕಾರಣ

 

 

1:21 PM IST

'ಕೈ, ದಳದ ವಿರುದ್ಧ ಸೇಡು ತೀರಿಸಿಕೊಂಡ ಜನತೆ'

ಶಿವಮೊಗ್ಗ:  ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಇದೊಂದು ಐತಿಹಾಸಿಕ ಜಯ. ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಕುತಂತ್ರದಿಂದ ಬಿಎಸ್ವೈ ಅವರನ್ನು ಅಧಿಕಾರದಿಂದ ವಂಚಿತರನ್ನಾಗಿಸಿದ್ದಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ದೂಳಿಫಟವಾಗಿದೆ. ಜೆಡಿಎಸ್ ಜೀರೋ ಆಗಿದೆ. ಇವರಿಬ್ಬರ ಕುತಂತ್ರಕ್ಕೆ ಜನತೆ ತಕ್ಕ ಫಲಿತಾಂಶದ ಉತ್ತರ ನೀಡಿದೆ. ಚುನಾವಣಾ ಫಲಿತಾಂಶದ ಮೂಲಕ ಬಿಜೆಪಿ ಪಕ್ಷ ಮತ್ತು ಬಿಎಸ್ ವೈ ಪ್ರಭಾವಳಿಗೆ ಉತ್ತರ ಸಿಕ್ಕಿದೆ, ಎಂದಿದ್ದಾರೆ ಎಂಎಲ್‌ಸಿ ಆಯನೂರು ಮಂಜುನಾಥ್.

1:04 PM IST

'ಬಿಜೆಪಿ ಗೆಲ್ಲುತ್ತೆ, ಕಾಂಗ್ರೆಸ್ ಸಾಯುತ್ತೆ'

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದಾಗಲೇ ವಿರೋಧಿಸಿದ್ದ ಕೈ ಮುಖಂಡ ಜನಾರ್ದನ ಪೂಜಾರಿ ರಿಯಾಕ್ಟ್ ಮಾಡಿದ್ದು ಹೀಗೆ...

ಕಾಂಗ್ರೆಸ್ ಸಾಯುತ್ತೆ

12:57 PM IST

ಬೆಳಗಾವಿ ಜಿಲ್ಲೆಗೆ ಮತ್ತೊಂದು ಡಿಸಿಎಂ ಸ್ಥಾನ!

2018ರ ಚುನಾವಣೆಯಲ್ಲಿ ಸೋತರೂ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡವರು ಬಿಜೆಪಿ ಮುಖಂಡ ಲಕ್ಷಣ ಸವದಿ. ಇದೀಗ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆದ್ದಿರುವುದಕ್ಕೆ ಸವದಿ ಹೇಳಿದ್ದಿಷ್ಟು...

ಬೆಳಗಾವಿಗೆ ಮತ್ತೊಂದು ಡಿಸಿಎಂ ಹುದ್ದೆ

12:34 PM IST

ಕಾಂಗ್ರೆಸ್ ಮುಕ್ತವಾದ ಹಾವೇರಿ...

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೀರೇಕೆರೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಅಲ್ಲದೇ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೆಜೆವಿಪಿ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಇದೀಗ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರಿಂದ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ.

ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿದ್ದಿಷ್ಟು...
ಅನರ್ಹತೆಯ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು ಸಿಕ್ಕಿದೆ. ಎರಡೂ ಕ್ಷೇತ್ರಗಳ ಗೆಲುವಿನ ಮೂಲಕ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾದಂತಾಯಿತು. ಇನ್ನು ರಾಜ್ಯ ಮತ್ತು ದೇಶ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ. ಬಣಕಾರ ಮತ್ತು ನಾನು ಒಂದಾದ ಪರಿಣಾಮ ಗೆಲುವು ಸುಲಭವಾಯಿತು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ಹಣ, ಅಧಿಕಾರ ದುರುಪಯೋಗದ ಕುರಿತ ಬನ್ನಿಕೋಡ ಆರೋಪಕ್ಕೆ ಉತ್ತರಿಸಿದ ಬಿಸಿಪಿ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ತಿರುಗೇಟು ನೀಡಿದರು.

12:30 PM IST

ಅಭಿವೃದ್ಧಿ ಮಂತ್ರವೇ ಗೋಪಾಲಯ್ಯ ಗೆಲುವಿಗೆ ಕಾರಣ

ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಹೊರತುಪಡಿಸಿ, ಬಿಜೆಪಿ ಎಂದಿಗೂ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಗೆದ್ದಿರಲೇ ಇಲ್ಲ. ಆದರೆ, ಅಲ್ಲಿಯೂ ಇತಿಹಾಸ ಸೃಷ್ಟಿಸಿದೆ.

ಗೋಪಾಲಯ್ಯ ಗೆಲುವಿಗೆ ಕಾರಣವಾಗಿದ್ದೇನು?

 

12:29 PM IST

ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?

ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಸತ್ಯ ಬಿಟ್ಟ ಸಿಎಂ ಪುತ್ರ 

12:16 PM IST

ಸಿಎಂ ಬಿಎಸ್‌ವೈ ಕೈ ಹಿಡಿದ ತವರು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರೂರಾದ ಬೂಕನಕೆರೆ ಇರೋ ಮಂಡ್ಯದ ಕೆ.ಆರ್.ಪೇಟೆ ವಿಧಾನಸಬಾ ಕ್ಷೇತ್ರದಲ್ಲಿಯೂ ಇದೇ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ. ಅದಕ್ಕೆ ಡಿಸಿಎಂ ಅಶ್ವಥ ನಾರಾಯಣ್ ಹೇಳಿದ್ದಿಷ್ಟು.

 

ಕೆಆರ್‌ ಪೇಟೆಯ ಮಗ, ರೈತ ನಾಯಕರಾದ ಮುಖ್ಯಮಂತ್ರಿ @BSYBJP ಅವರ ಮೇಲಿನ ಅಭಿಮಾನವನ್ನು ಕೆಆರ್‌ ಪೇಟೆ ಜನ ಇಡೀ ಜಗತ್ತಿಗೆ ಸಾಬೀತು ಮಾಡಿದ್ದಾರೆ. ಯುವ ನಾಯಕ @BYVijayendra, ಪಕ್ಷದ ನಾಯಕರು, ಕಾರ್ಯಕರ್ತರು ಚುನಾವಣೆ ಘೋಷಣೆಯಾದ ದಿನದಿಂದಲೂ ಕ್ಷೇತ್ರದಲ್ಲೇ ಹೆಚ್ಚು ಸಮಯ ಇದ್ದು, ಜನರೊಂದಿಗೆ ಬೆರೆತು ಕೆಲಸ ಮಾಡಿದ್ದಾರೆ.

— Dr. Ashwathnarayan C. N. (@drashwathcn) December 9, 2019

 

12:12 PM IST

'ಸೋತ ವಿಶ್ವನಾಥ್‌ಗೂ ಸೂಕ್ತ"

ಉಪ ಚುನಾವಣೆಯಲ್ಲಿ ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಶಾಸಕ ವಿಶ್ವನಾಥ್ ರಾಜೀನಾಮೆ ನೀಡಿ, ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ, ಜನರ ವಿಶ್ವಾಸ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಸಚಿವ ಸಿ.ಟಿ.ರವಿ ಹೇಳಿದ್ದಿಷ್ಟು...

ಸೋತ ಅನರ್ಹ ಶಾಸಕರಿಗೂ ಸೂಕ್ತ ಸ್ಥಾನ

12:07 PM IST

ವಿಜಯಲಕ್ಷ್ಮಿ ಒಲಿದಿದ್ದಕ್ಕೆ ಹಂಪಿಯಲ್ಲಿ ಆನಂದ್ ಸಿಂಗ್ ಪೂಜೆ

2018ರ ವಿಧಾನಸಭಾ ಚುನಾವಣೆ ನಂತರವೇ ಬಿಜೆಪಿಯತ್ತ ಒಲವು ತೋರಿದ್ದ ಆನಂದ್ ಸಿಂಗ್, ಕಾಂಗ್ರೆಸ್-ಜೆಡಿಎಸ್ ಸರಕಾರದ ವಿರುದ್ಧ ಬಂಡಾಯವೆದ್ದು ಮೊದಲೇ ರಾಜೀನಾಮೆ ನೀಡಿದವರು. ಆದರೂ ಅವರಿಗೆ ಅನರ್ಹ ಸಾಸಕ ಪಟ್ಟ ತಪ್ಪಿರಲಿಲ್ಲ. ಇದೀಗ ಬಿಜೆಪಿಯಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲವು ಸಾಧಿಸಿದ್ದಾರೆ. ಗೆಲುವಿನ ಖುಷಿಯಲ್ಲಿ ದೇವರನ್ನು ಸ್ಮರಿಸಿದ್ದು ಹೀಗೆ.

11:57 AM IST

ಚಿಕ್ಕಬಳ್ಳಾಪುರ: ಬಿಜೆಪಿ ಗೆಲುವಿಗೆ ಅಭಿಮಾನಿಗಳ ಸಂಭ್ರಮ

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವಿನ ನಗೆ ಬೀರುತ್ತಿದ್ದು, ಕಾಂಗ್ರೆಸ್ ಭದ್ರ ಕೋಟೆಯನ್ನು ಭೇದಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಿಜೆಪಿ ಅಭ್ಯರ್ಥಿ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ..

11:55 AM IST

ಯಶವಂತಪುರದಲ್ಲೂ ಬಿಜೆಪಿ ಅಭ್ಯರ್ಥಿಯ ಗೆಲುವಿನ ಸೂಚನೆ

16ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಜವರಾಯಿಗೌಡ - 88,924
ಎಸ್.ಟಿ.ಸೋಮಶೇಖರ್ - 1,5,694
ಪಿ.ನಾಗರಾಜ್ - 10,461
ನೋಟಾ - 2,010

 16,770ಮತಗಳ ಅಂತರದಿಂದ  ಸೋಮಶೇಖರ್ ಮುನ್ನಡೆ

11:52 AM IST

ತಂದೆಯ ಕಾಲಿಗೆರಗಿ ಆಶೀರ್ವಾದ ಪಡೆದ ಸಿಎಂ ಪುತ್ರ

ಉಪು ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ನಗೆಯ ಗೆಲವು ಬೀರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ತಂದೆಯ ಆಶೀರ್ವಾದ ಪಡೆದಿದ್ದು ಹೀಗೆ..

 

 

Bengaluru: Karnataka Chief Minister BS Yediyurappa celebrates with his son BY Vijayendra as BJP leads on 12 out of 15 seats in #KarnatakaAssemblyBypolls. pic.twitter.com/0uualeU8Yg

— ANI (@ANI) December 9, 2019

 

11:49 AM IST

'ಅಭಿಮಾನಿ ದೃಷ್ಟಿಯಲ್ಲಿ ಹುಲಿಯಾ, ಮತದಾರರಿಗೆ ಇಲಿಯಾ'

ಕಳೆದ ಲೋಕಸಭಾ ಚುನಾವಣೆ ವೇಳೆ 'ನಿಖಿಲ್ ಎಲ್ಲಿದ್ದೀಯಪ್ಪಾ?' ಟ್ರೆಂಡ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಈ ಉಪ ಚುನಾವಣೆಯಲ್ಲಿ 'ಹೌದು ಹುಲಿಯಾ' ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಆದರೆ, ಉಪ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಸ್ಥಾನಗಳಲ್ಲಿ ಗಲವು ಸಾಧಿಸಿತುತ್ತಿದ್ದು, ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದು  ಹೀಗೆ...

 

 

 

ಅಭಿಮಾನಿ ದೃಷ್ಟಿಯಲ್ಲಿ ಹುಲಿಯಾ . . .

ಮತದಾರರ ದೃಷ್ಟಿಯಲ್ಲಿ ಇಲ್ಲಿಯಾ ! ! !#BJPSweepsKarnataka

— C T Ravi 🇮🇳 ಸಿ ಟಿ ರವಿ (@CTRavi_BJP) December 9, 2019

 

 

11:41 AM IST

ಉಪ ಚುನಾವಣೇಲಿ ಕೈಗೆ ಮುಖಭಂಗ: ಡಿಕೆಶಿ ಹೇಳಿದ್ದೇನು?

15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ಡಿಕೆಶಿ ಹೇಳಿದ್ದಿಷ್ಟು...

ಡಿಕೆಶಿ ಮೊದಲ ರಿಯಾಕ್ಷನ್

 

11:36 AM IST

2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆ...

ರಾಜ್ಯದಲ್ಲಿ ನಡೆದ 15 ವಿಧನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದ್ದು, 12 ಕ್ಷೇತ್ರಗಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಮತ್ತೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 

 

 

 

11:33 AM IST

'ಹೊಸಕೋಟೆ: ಬಿಜೆಪಿ ಬಂಡಾಯ ಅಭ್ಯರ್ಥಿ ಗೆಲವು ಬಿಜೆಪಿಯದ್ದೇ'

ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲವಿನತ್ತ ದಾಪುಗಾಲು ಹಾಕುತ್ತಿದ್ದು, ಈ ಗೆಲವೂ ಬಿಜೆಪಿಯದ್ದೇ ಎಂದು ಟ್ವೀಟ್ ಮಾಡಿದ್ದಾರೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ

 

BJP 12 leading and one in Hosakote is BJP rebel. Son of BJP MP.
So the result is
BJP 13
Con 02
JDS 00
Clear message to SS and NCP?#KarnatakaBypolls

— Chakravarty Sulibele (@astitvam) December 9, 2019

 

11:30 AM IST

ಸಿದ್ಧರಾಮಯ್ಯ ನಾಯಕತ್ವಕ್ಕೆ ಸೋಲು

ಉಪಚುನಾವಣೆಯಲ್ಲಿ ಕೈ ನಾಯಕತ್ವ ವಹಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಕೇವಲ ಶಿವಾಜಿನಗರ ಹಾಗೂ ಹುಣಸೂರಿಗೆ ತೃಪ್ತಿ ಪಟ್ಟು ಕೊಳ್ಳಬೇಕಾಗಿದೆ ಕಾಂಗ್ರೆಸ್ ಪಾಳಯ. ಸೋಲಿಗೆ ತೀವ್ರ ನಿರಾಸೆ ವ್ಯಕ್ತಪಡಿಸಿದ ಸಿದ್ಧರಾಮಯ್ಯ. ಕಾಗವಾಡ, ರಾಣೆಬೆನ್ನೂರು ಸೋಲಿಗೆ ತೀವ್ರ ನಿರಾಸೆ ಪಟ್ಟ ಪ್ರತಿಪಕ್ಷ ನಾಯಕ. ಸಿದ್ಧರಾಮಯ್ಯ ನಿವಾಸಕ್ಕೆ ಆಗಮಿಸದ ಕಾಂಗ್ರೆಸ್ ನಾಯಕರು.

11:26 AM IST

ಸಂಪುಟ ವಿಸ್ತರಣೆ: ದಿಲ್ಲಿಯತ್ತ ಸಿಎಂ ಯಡಿಯೂರಪ್ಪ

 ಉಪ ಚುನಾವಣೆ ಫಲಿತಾಂಶಗಳು ಹೊರ ಬೀಳುತ್ತಿದ್ದು, ಬಹುತೇಕ ಅನರ್ಹ ಶಾಸಕರು ಗೆಲುವಿನ ನಗೆ ಬೀರುತ್ತಿದ್ದಾರೆ. ಈ ಬೆನ್ನಲ್ಲೇ ಸಂಪುಟ ಪುನರ್‌ರಚನೆ ಬಗ್ಗೆ ಚರ್ಚಿಸಲು ಸಿಎಂ ಯಡಿಯೂರಪ್ಪ ಡಿ.10ರಂದು ದಿಲ್ಲಿಗೆ ತೆರಳಲಿದ್ದಾರೆ.

 

11:23 AM IST

ಕಾಗವಾಡದಲ್ಲಿ ಕಾಗೆಗಿಲ್ಲ ಮಣೆ

ಕಳೆದ 20 ವರ್ಷಗಳಿಂದಲೂ ರಾಜು ಕಾಗೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು 2018ರ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ್ ಗೆದ್ದು ಕೊಂಡಿದ್ದರು. ಇದೀಗ ಕಾಂಗ್ರೆಸ್‌ನಲ್ಲಿದ್ದ ಶ್ರೀಮಂತ ಪಾಟೀಲ್ ಬಿಜೆಪಿಗೆ ಸೇರಿ, ಬಿಜೆಪಿಯಲ್ಲಿದ್ದ ರಾಜು ಕಾಗೆ ಕಾಂಗ್ರೆಸ್‌ಗೆ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತ್ತೆ ಬಿಜೆಪಿ ಗೆಲ್ಲುವಂತಾಗಿದೆ.

ಬಿಜೆಪಿ ಕೈ ಬಿಡದ ಕಾಗವಾಡ ಮತದಾರರು

 

 

11:22 AM IST

ಶಿವಾಜಿನಗರದಲ್ಲಿ ಕಾಂಗ್ರೆಸ್ ಸಂಭ್ರಮ

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷಾದ್ ಲೀಡ್ ಹೆಚ್ಚಾಗುತ್ತಿದ್ದಂತೆ. ಕೌಂಟಿಂಗ್ ಸೆಂಟರ್ ಬಳಿ ಸೇರುತ್ತಿರುವ ಅಭಿಮಾನಿಗಳು. ಕಾಂಗ್ರೆಸ್. ರಿಜ್ವಾನ್ ಪರ ಘೋಷಣೆ ಕೂಗುತ್ತಿರುವ ಕಾರ್ಯಕರ್ತರು. ಕಾಂಗ್ರಸ್ ಬಾವುಟ ಹಿಡಿದು ಸಂಭ್ರಮಿಸುತ್ತಿರುವ ಕಾಂಗ್ರೆಸ್ಸಿಗರು.

 

11:18 AM IST

ಕಾಂಗ್ರೆಸ್ ಭದ್ರಕೋಟೆ ಛಿದ್ರ: ಚಿಕ್ಕಬಳ್ಳಾಪುರದಲ್ಲಿ ಅರಳಿದ ಕಮಲ

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲವಿನ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಕಾಂಗ್ರೆಸ್‌ನಿಂದ ಗೆಲವು ಸಾಧಿಸಿ, ಅನರ್ಹತೆ ಪಟ್ಟ ಕೊಂಡಿದ್ದ ಸುಧಾಕರ್ ಅವರಿಗೆ ಜನರು ವಿಜಯಲಕ್ಷ್ಮಿ ಒಲಿಯುವಂತೆ ಮಾಡಿದ್ದಾರೆ. 

 

11:15 AM IST

'ತೊಲಗಿತು ನಮ್ಮ ಅನರ್ಹತೆಯ ಕಳಂಕ'

ಬೆಳಗಾವಿ: 'ನಮ್ಮ ಮೇಲೆ ಅನರ್ಹತೆಯ ಕಳಂಕ ಇತ್ತು. ಮತದಾರನ ತೀರ್ಪಿನ ನಂತರ ಯಾರಿಗೂ ಮಾತನಾಡುವ ಅಧಿಕಾರವಿಲ್ಲ‌. ನಾವು ದುಡ್ಡಿಗಾಗಿ ಬಿಜೆಪಿಗೆ ಹೋಗಿಲ್ಲ. ವರ್ಷಕ್ಕೆ ಎರಡು-ಮೂರು‌ ಕೋಟಿ ನಾನೇ ದಾನ ಮಾಡುತ್ತೇನೆ.
ಕ್ಚೇತ್ರದ ಅಭಿವೃದ್ಧಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ.ನಮ್ಮದು ಪಕ್ಷಾಂತರವಲ್ಲ ಹೋರಾಟ,' ಎಂದು ಸುವರ್ಣ ನ್ಯೂಸ್‌ಗೆ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಹೇಳಿಕೆ ನೀಡಿದ್ದಾರೆ.

ನನಗೆ ಸಣ್ಣ ನೀರಾವರಿ, ಕೃಷಿ, ಸಹಕಾರ ಇಲಾಖೆಯಲ್ಲಿ ಆಸಕ್ತಿಯಿದೆ‌. ಈ ಕ್ಷೇತ್ರಗಳಲ್ಲಿ ನನಗೆ ಬಹಳ ಅನುಭವವಿದೆ. ಇದೇ ಇಲಾಖೆಗಳ ಸಚಿವ ಸ್ಥಾನ ಕೊಟ್ಟರೆ ಅಭಿವೃದ್ದಿ ಮಾಡಲು ಅನುಕೂಲ ಆಗುತ್ತೆ. ನಮ್ಮ ಕ್ಷೇತ್ರದ ಜನರೆಲ್ಲ ಒಂದೇ ಕುಟುಂಬದ ಮಕ್ಕಳಂತೆ ಇದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ, ಯೋಚನೆಗಳಿವೆ, ಎಂದಿದ್ದಾರೆ.

 

11:12 AM IST

ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಇದೇ ಮೊದಲು ಬಿಜೆಪಿಗೆ ಗೆಲವು

ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೋಪಾಲಯ್ಯ ಗೆಲುವು ಖಚಿತ. ಈ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಗೋಪಾಲಯ್ಯ. ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಿರುವುದು. ಈ ಕ್ಷೇತ್ರದಲ್ಲಿ ಇಲ್ಲೀವರೆಗೆ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು ಮಾತ್ರ ಗೆಲವು ಕಂಡಿದ್ದರು.

ಈಗ ಬಿಜೆಪಿ ಅಭ್ಯರ್ಥಿ ಗೆಲುವಿನ ಮೂಲಕ ಹೊಸ ಇತಿಹಾಸ ಸೃಷ್ಟಿ. ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಿದ ಗೋಪಾಲಯ್ಯ. ತಾನೇ ಕಟ್ಟಿದ್ದ ಜೆಡಿ ಎಸ್ ಕೋಟೆಯನ್ನ ಕಡೆವಿದ ಗೋಪಾಲಯ್ಯ. 

11:10 AM IST

ಗೋಕಾಕ್: ತಮ್ಮನನ್ನು ಸೋಲಿಸುವತ್ತ ಅಣ್ಣ

ಬೆಳಗಾವಿ: ಗೋಕಾಕ್ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ರಮೇಶ್ ಗೆಲುವಿನ ದಡ ಸೇರುತ್ತಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಮನೆ ಮುಂಭಾಗದಲ್ಲಿ ವಿಜಯೋತ್ಸವ. ಬಿಜೆಪಿ ಹಾಗೂ ರಮೇಶ್ ಅಭಿಮಾನಿಗಳಿಂದ ಸಂಭ್ರಮ. ಬಿಜೆಪಿ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ ಅಭಿಮಾನಿಗಳು.ಮನೆಯಲ್ಲಿ ಪೂಜೆಗೆ ಕುಳಿತಿರುವ ರಮೇಶ್ ಜಾರಕಿಹೊಳಿ.

11:02 AM IST

'ಸೋತ ಬಿಜೆಪಿ ಅಭ್ಯರ್ಥಿಗಳಿಗೂ ಸೂಕ್ತ ಸ್ಥಾನಮಾನ'

ಹುಬ್ಬಳ್ಳಿ: ಉಪಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಗೆ ಭ್ರಮನಿರಸನವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ಹೇಳಿಕೊಂಡು ತಿರುಗುತ್ತಿದ್ರು.ಆದ್ರೆ ಜನರ ಒಲವು ಬಿಜೆಪಿ ಪರ ಇತ್ತು.ಹೀಗಾಗಿ ಬಿಜೆಪಿ ಎಲ್ಲ ಕ್ಷೇತ್ರಗಳು ಗೆಲ್ಲುವು ಖಚಿತವಾಗಿದೆ, ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

 ಹೊಸಕೋಟೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ಅವರಿಗೂ ಸ್ಥಾನಮಾನ ಕೊಡುವುದು ಖಚಿತ.ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದಕ್ಕೆ ನಮ್ಮ ಸರ್ಕಾರ ಬಂದಿದೆ, ಎಂದರು. 

ಜೆಡಿಎಸ್ ಭದ್ರಕೋಟೆಯಲ್ಲಿ ಖಾತೆ ತೆರೆದ ಬಿಜೆಪಿ

10:59 AM IST

KR ಪುರದಲ್ಲೂ ಬಿಜೆಪಿಗೆ ಮುನ್ನಡೆ

ಕೆ.ಆರ್.ಪುರಂ ವಿಧಾನ ಸಭಾ ಕ್ಷೇತ್ರದ 7ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಮುನ್ನಡೆ ಕಾಯ್ದುಕೊಂಡಿದ್ದಾರೆ 

ಬೆಜೆಪಿ: 4,901
ಕಾಂಗ್ರೆಸ್: 1823

ಬಿಜೆಪಿ ಅಭ್ಯರ್ಥಿ ಸುಮಾರು 22 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. 

 

 

 

10:58 AM IST

ಶಿವಾಜಿನಗರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಶಿವಾಜಿನಗರ ಬೈ ಎಲೆಕ್ಷನ್.. 5 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ರಿಜ್ವಾನ್ ಅರ್ಷದ್ - 19537
ಸರವಣ - 11981
ನೋಟಾ - 325.

ಅಂತರ - 7550..

10:54 AM IST

ಗೆಲುವಿನತ್ತ ಬಿ.ಸಿ.ಪಾಟೀಲ್

ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಮುನ್ನಡೆ ಸಾಧಿಸಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ.

 

10:53 AM IST

ಕಾಗವಾಡದಲ್ಲೂ ಬಿಜೆಪಿ ಗೆಲವು ಬಹುತೇಕ ಖಚಿತ

ಬೆಳಗಾವಿ ಜಿಲ್ಲೆಯ ಮೂರು ವಿಧಾನಸಬಾ ಕ್ಷೇತ್ರಗಳಲ್ಲಿ ಉಪ ಚುನಾವಣ ನಡೆದಿದ್ದು, ಮೂರೂ ಕಡೆ ಕಮಲ ಅರಳುವ ನಿರೀಕ್ಷೆ ಇದೆ. ಕಾಗವಾಡದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

10:50 AM IST

ಕಾಂಗ್ರೆಸ್ ಭದ್ರಕೋಟೆಯಲ್ಲಿ ಅರಳಿತು ಕಮಲ

ಯಲ್ಲಾಪುರದಲ್ಲಿ ನಿರೀಕ್ಷೆಯಂತೆ ಕಮಲ ಅರಳಿದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿದ್ದು ಹೀಗೆ?

ಉಪ ಚುನಾವಣೆ ಮೊದಲ ರಿಸಲ್ಟ್ ಔಟ್

10:39 AM IST

ಯಶವಂತಪುರ: ಬಿಜೆಪಿ-ಜೆಡಿಎಸ್ ಹಾವು-ಏಣಿಯಾಟ

ಯಶವಂತಪುರ: 9 ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಬಿಜೆಪಿಯ ಅಭ್ಯರ್ಥಿ ಕೇವಲ 435 ಮತಗಳ ಅಂತರದಿಂದ ಮುಂದಿದ್ದು, ಜೆಡಿಎಸ್ ಅಭ್ಯರ್ಥಿ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ.

ಜವರಾಯಿಗೌಡ (ಜೆಡಿಎಸ್) - 55214
ಎಸ್.ಟಿ.ಸೋಮಶೇಖರ್ (ಬಿಜಪಿ) - 55649
ಪಿ.ನಾಗರಾಜ್ (ಕಾಂಗ್ರೆಸ್) - 4306
ನೋಟಾ - 1021

435 ಮತಗಳ ಅಂತರದಿಂದ ಎಸ್ ಟಿ ಸೋಮಶೇಖರ್ ಮುನ್ನಡೆ

10:34 AM IST

ಗೆಲುವಿನತ್ತ ಕೆ.ಗೋಪಾಲಯ್ಯ

ಮಹಾಲಕ್ಷ್ಮಿ ಲೇಔಟ್ - 7ನೇ ಸುತ್ತು

ಕೆ. ಗೋಪಾಲಯ್ಯ - 32262
ಎಂ ಶಿವರಾಜ್ - 9572
ಡಾ. ಗಿರೀಶ್ ಕೆ ನಾಶಿ - 10953

7ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ 21309 ಮತಗಳ ಮುನ್ನಡೆ

10:24 AM IST

ಬಿಜೆಪಿ ಅಭ್ಯರ್ಥಿಗಳ ಮುನ್ನಡೆ: ಎಲ್ಲೆಡೆ ವಿಜಯೋತ್ಸವ

ಹೀರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಮುನ್ನಡೆ ಕಾಯ್ದುಕೊಂಡಿದ್ದು, ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

 

10:10 AM IST

ಹೊಸಕೋಟೆಯಲ್ಲಿ ಬಿಜೆಪಿಯ ಶರತ್ ಬಚ್ಚೇಗೌಡರಿಗೆ ಮುನ್ನಡೆ

ಕ್ಷೇತ್ರ - ಹೊಸಕೋಟೆ
ಸುತ್ತು - 5
ಬಿಜೆಪಿ - 13786
ಕಾಂಗ್ರೆಸ್ - 9859
ಪಕ್ಷೇತರ - 21903
ಮುನ್ನಡೆ - 8117

10:03 AM IST

ಗೋಕಾಕ್‌ನಲ್ಲಿ ಬಿಜೆಪಿಗೆ 11 ಸಾವಿರ ಮತಗಳ ಮುನ್ನಡೆ

ಗೋಕಾಕ್

ಐದನೇ ಸುತ್ತಿನ ಮತ‌ಎಣಿಕೆಯಲ್ಲಿ 11,229 ಮತಗಳ ಮುನ್ನಡೆ
ಬಿಜೆಪಿ - 27,009
ಕಾಂಗ್ರೆಸ್ - 15,710
ಜೆಎಡಿಎಸ್ - 9071
ಮುನ್ನಡೆ - ಬಿಜೆಪಿ (11229 ಮತಗಳಿಂದ ಮುನ್ನಡೆ)

10:01 AM IST

ಯಲ್ಲಾಪುರದಲ್ಲಿ ಗೆದ್ದು ಬೀಗಿದ ಶಿವರಾಮ್ ಹೆಬ್ಬಾರ್

ಯಲ್ಲಾಪುರದಲ್ಲಿ ಬಹುತೇಕ ಮತ ಎಣಿಕೆ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದ್ದು, ಮೊದಲ ಸುತ್ತಿನಿಂದಲೂ ಬಿಜೆಪಿ ಅಭ್ಯರ್ಥಿ ಶಿವರಾಮೇ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ. 

9:59 AM IST

KR ಪೇಟೆಯಲ್ಲೂ ಬಿಜೆಪಿಗೆ ಮುನ್ನಡೆ

ಕೆ.ಆರ್‌.ಪೇಟೆ: 
ಚಂದ್ರಶೇಖರ್ 8072 (Cong)
ದೇವರಾಜು 12758 ( JDS)
ನಾರಾಯಣಗೌಡ 13018 (BJP)
BJP ಮುನ್ನಡೆ ಅಂತರ 260

9:56 AM IST

ಹುಣಸೂರಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಹುಣಸೂರಿನಲ್ಲಿ 8 ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಅಭ್ಯರ್ಥಿಗಳು ಪಡೆದ ಮತಗಳು ಹೀಗಿವೆ...

ಬಿಜೆಪಿ ವಿಶ್ವನಾಥ್ - 21856
ಕಾಂಗ್ರೆಸ್ ಮಂಜುನಾಥ್ - 36134
ಜೆಡಿಎಸ್ ಸೋಮಶೇಖರ್ - 16028
ಲೀಡ್ - 14278
ನೋಟಾ- 406

9:54 AM IST

ಬಿಜೆಪಿ ಅಭ್ಯರ್ಥಿ ಮುನ್ನಡೆ: ಆಗಲೇ ಸಂಭ್ರಮಾಚರಣೆ

ಬೆಳಗಾವಿ:- ಮತ ಎಣಿಕೆ ಕೇಂದ್ರ ಎದುರು ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಸಂಭ್ರಮಾಚರಣೆ.ಬೆಳಗಾವಿಯ ಆರ್.ಪಿ.ಡಿ ಸಕ೯ಲ್‌ನಲ್ಲಿ ಮುಗಿಲು ಮುಟ್ಟಿದ ಸಂಭ್ರಮ. ರಮೇಶ್ ಪರ ಘೋಷಣೆ ಕೂಗಿ ಸಂಚರಿಸುತ್ತಿರೋ ಬೆಂಬಲಿಗರು.

ಯಡಿಯೂರಪ್ಪ ಹಣೆಬರಹ ಬರೆದ ರಮೇಶ್ ಅಣ್ಣಾಗೆ ಜೈ ಎಂದ ಬೆಂಬಲಿಗರು. 5ನೇ ಸುತ್ತಿನ ಮತ ಎಣಿಕೆ ಬಳಿಕ 9,185 ಮತಗಳ ಮುನ್ನಡೆ ಕಾಯ್ದುಕೊಂಡಿರುವ ರಮೇಶ್ ಜಾರಕಿಹೊಳಿ. ನಗರದ ಆರ್.ಪಿ.ಡಿ‌ ಕಾಲೇಜ್ ನಲ್ಲಿ ನಡೆಯುತ್ತಿದೆ ಮತ ಎಣಿಕೆ

9:51 AM IST

'ನನ್ನ ಗೆಲವು ನಿಶ್ಚಿತ, ಮಂತ್ರಿ ಆಗ್ತೀನೋ ಇಲ್ಲ ಗೊತ್ತಿಲ್ಲ'

'20 ಸಾವಿರ ಮತಗಳ ಅಂತರದಲ್ಲಿ ವಿಜಯ ಸಾಧಿಸುತ್ತೇನೆ. ಕೆ.ಆರ್ ಪೇಟೆ ಮತದಾರರು ನನ್ನನ್ನು ಗೆಲ್ಲಿಸಲಿದ್ದಾರೆ. ಮಂತ್ರಿಯಾಗುವ ಆಸೆ ಇದೆ, ಆದ್ರೆ ದುರಾಸೆ ಇಲ್ಲ. ಯಡಿಯೂರಪ್ಪ ದೊಡ್ಡವರಿದ್ದಾರೆ, ನನ್ನ ಮಂತ್ರಿ ಮಾಡ್ತೀನಿ ಅಂತಾ ಹೇಳಿದ್ದಾರೆ. ಎದುರಾಳಿ ಯಾರೆಂದು ನಾನು ಹೇಳುವುದಿಲ್ಲ, ದೊಡ್ಡವರ ಬಗ್ಗೆ ಮಾತಾಡಲ್ಲ,' ಎಂದಿದ್ದಾರೆ ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರು. 

ಸುಪ್ರೀಂ ಕೋರ್ಟ್ ತೀರ್ಪಿನಷ್ಟೆ ಕುತೂಹಲ ಇಂದು ಇದೆ. ನಾನು ಅರ್ಹನೋ ..ಅನರ್ಹನೋ ಜನತೆ ಇಂದು ತೀರ್ಪು ಕೊಡ್ತಾರೆ. ಇಂದಿನ ಫಲಿತಾಂಶದ ನಂತರ ಯಡಿಯೂರಪ್ಪ ನೇತೃತ್ವದಲ್ಲೆ ಸ್ಥಿರ ಸರ್ಕಾರ ಇರಲಿದೆ. ಕೆ.ಆರ್ ಪೇಟೆ ಕ್ಷೇತ್ರ ಸಂಪೂರ್ಣ ‌ಅಭಿವೃದ್ದಿ ನನ್ನ ಗುರಿ.

- ಬಿಜೆಪಿ ಅಭ್ಯರ್ಥಿ ನಾರಾಯಣಗೌಡ

9:50 AM IST

ವಿಜಯನಗರ: ಬಿಜೆಪಿಯ ಆನಂದ್ ಸಿಂಗ್‌ಗೆ ಮುನ್ನಡೆ

ಬಳ್ಳಾರಿ

ಕ್ಷೇತ್ರ - ವಿಜಯನಗರ 
ಎಷ್ಟನೇ ಸುತ್ತು  ಅಧಿಕೃತ ‌ಮುಕ್ತಾಯ.. 
ಬಿಜೆಪಿ - 22701
ಕಾಂಗ್ರೆಸ್ - 16676
ಜೆಡಿಎಸ್ - 991
ಮುನ್ನಡೆ - 6025 ಮತಗಳಿಂದ ಮುನ್ನಡೆ
 

9:48 AM IST

ಅಥಣಿಯಲ್ಲಿ ಮತ ಎಣಿಕೆ ಸ್ಥಗಿತ

ಅಥಣಿ ಮತ ಎಣಿಕೆ 3 ನೇ ಸುತ್ತಿನಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಮತ ಎಣಿಕೆ ಸ್ಥಗಿತ.

9:47 AM IST

ಹಾವೇರಿಯ ಎರಡೂ ಕ್ಷೇತ್ರಗಲಲ್ಲಿ ಬಿಜೆಪಿಗೆ ಮುನ್ನಡೆ

5ಸುತ್ತಿನಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ.

ಹಿರೇಕೆರೂರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ 8905   ಮತಗಳ ಮುನ್ನಡೆ.

ರಾಣೆಬೆನ್ನೂರ ಕ್ಷೇತ್ರದಲ್ಲಿ ಬಿಜೆಪಿಯ ಅರುಣಕುಮಾರ್ ಪೂಜಾರ  4790 ಮತಗಳ ಮುನ್ನಡೆ.

9:45 AM IST

ಹೊಸಕೋಟೆ: ಸ್ವತಂತ್ರ ಅಭ್ಯರ್ಥಿ ಬಚ್ಚೇಗೌಡರಿಗೆ ಮುನ್ನಡೆ

ಕ್ಷೇತ್ರ - ಹೊಸಕೋಟೆ
ಸುತ್ತು - 3
ಬಿಜೆಪಿ - 7626
ಕಾಂಗ್ರೆಸ್ - 5654
ಪಕ್ಷೇತರ - 13134
ಮುನ್ನಡೆ - 5508

9:44 AM IST

ಹುಣಸೂರು: ಬಿಜೆಪಿಯ ವಿಶ್ವನಾಥ್‌ಗೆ ಭಾರೀ ಹಿನ್ನಡೆ

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 6ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯ 

ಬಿಜೆಪಿಯ ವಿಶ್ವನಾಥ್ 15,433

ಕಾಂಗ್ರೆಸ್ ನ ಮಂಜುನಾಥ್ 24,874

ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 13,602

ಕಾಂಗ್ರೆಸ್ ನ ಮಂಜುನಾಥ್ ಗೆ 9,441   ಮತಗಳ ಮುನ್ನಡೆ

9:43 AM IST

ಯಲ್ಲಾಪುರದಲ್ಲಿ ಜೆಡಿಎಸ್‌ಗಿಂತ ನೋಟಾಗೆ ಹೆಚ್ಚು ಮತ

ಯಲ್ಲಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಜೆಡಿಎಸ್ ಗಿಂತ ನೋಟಾಕ್ಕೆ ಹೆಚ್ಚು ಮತ. 7 ಅಭ್ಯರ್ಥಿಗಳಲ್ಲಿ 5 ಅಭ್ಯರ್ಥಿಗಳ ಠೇವಣಿ ಹೋಗುವ ಸಾಧ್ಯತೆ.

ಅಥಣಿ ವಿಧಾನಸಭೆ ಕ್ಷೇತ್ರ.........
ಮಹೇಶ್ ಕುಮಠಳ್ಳಿ(ಬಿಜೆಪಿ)
6457
ಗಜಾನನ ಮಂಗಸೂಳಿ(ಕಾಂಗ್ರೆಸ್)
2642

9:37 AM IST

ಗೋಕಾಕ್‌: ಬಿಜೆಪಿ ರಮೇಶ್ ಜಾರಕಿಹೊಳಿಗೆ ಮುನ್ನಡೆ

ಗೋಕಾಕ್, 4ನೇ ಸುತ್ತಿನ ಮತ ಎಣಿಕೆ ಮುಕ್ತಾಯ..

ಬಿಜೆಪಿಯ ರಮೇಶ್ ಜಾರಕಿಹೊಳಿ: 4395

ಕಾಂಗ್ರೆಸ್‌ನ ಲಖನ್ ಜಾರಕಿಹೊಳಿ-4395

9:29 AM IST

ಹೀರೇಕೆರೂರು ಬಿಜೆಪಿ ಅಭ್ಯರ್ಥಿ ಮುನ್ನಡೆ, ಅಭಿನಂದನೆ ಸಲ್ಲಿಕೆ

ಬಿ.ಸಿ.ಪಾಟೀಲ್‌ ಮತ ಎಣಿಕೆಯಲ್ಲಿ ಮುಂದಿದ್ದು, ಆಗಲೇ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ.

9:22 AM IST

ಕೆಆರ್ ಪೇಟೆಯಲ್ಲಿ ಬಿಜೆಪಿಗೆ ಮೂರನೇ ಸ್ಥಾನ

ಕೆ.ಆರ್.ಪೇಟೆಯಲ್ಲಿ ಮತ ವಿವರ ಹೀಗಿದೆ...


ಚಂದ್ರಶೇಖರ್ 6012 (Cong)
ದೇವರಾಜು 9841 ( JDS)
ನಾರಾಯಣಗೌಡ 9429 (BJP)
ಮುನ್ನಡೆ ಅಂತರ 412

9:16 AM IST

ಯಶವಂತಪುರದಲ್ಲಿ ಬಿಜೆಪಿಗೆ ಹಿನ್ನಡೆ

ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಜವರಾಯಿಗೌಗ 13,760
ಸೋಮಶೇಖರ್ 11,669
ನಾಗರಾಜ್ 1059
ನೋಟಾ 213
ಎರಡನೇ ಸುತ್ತಿನಲ್ಲೂ ಜೆಡಿಎಸ್ ಮುನ್ನಡೆ

9:07 AM IST

ಕಾಗವಾಡದಲ್ಲಿಯೂ ಬಿಜೆಪಿಗೆ ಮುನ್ನಡೆ

ಕಾಗವಾಡ..  ಮೂರನೆಯ  ಸುತ್ತಿನಲ್ಲಿ  ಬಿಜೆಪಿಯ ಶ್ರೀಮಂತ ಪಾಟೀಲ್‌ಗೆ ಮುನ್ನಡೆ.

ಮೂರನೆಯ ಸುತ್ತಿನಲ್ಲಿ 5136 ಬಿಜೆಪಿ  ಅಭ್ಯರ್ಥಿ ಪಡೆದ ಮತಗಳು...

ಮೂರನೇ ಸುತ್ತಿನಲ್ಲಿ  4708 ಮತಗಳ ಮುನ್ನಡೆ

 

 

9:03 AM IST

ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಹಿನ್ನಡೆ

ಹುಣಸೂರಿನ ಹಳ್ಳಿ ಹಕ್ಕಿ ವಿಶ್ವನಾಥ್ ಹಾಗೂ ಜೆಡಿಎಸ್ ಭದ್ರ ಕೋಟೆಯಾದ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ಕೆ.ಸಿ.ನಾರಾಯಣ ಗೌಡ ಹಿಂದಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. 

9:01 AM IST

ಹಿರೇಕೆರೂರಿನಲ್ಲಿ ಪಾಟೀಲ್ ಸಂಭ್ರಮಾಚರಣೆಗೆ ಸಿದ್ಧತೆ

ಹಿರೇಕೆರೂರು ಹಾಗೂ ಗೋಕಾಕ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಬಿ.ಸಿ.ಪಾಟೀಲ್ ಹಾಗೂ ರಮೇಶ್ ಜಾರಕಿಕೊಳ್ಳಿ ಆರಂಭದ ಅಂತರ ಕಾಯ್ದುಕೊಂಡಿದ್ದು, ಪ್ರತಿಸ್ಪರ್ಧಿಗಳಿಗಿಂತ ಮುಂದಿದ್ದಾರೆ. ಆಗಲೇ ಸಂಭ್ರಮ ಆಚರಿಸಿಕೊಳ್ಳಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. 

9:00 AM IST

ರಾಣೆಬೆನ್ನೂರಿನಲ್ಲೂ ಬಿಜೆಪಿಗೆ ಮುನ್ನಡೆ

ರಾಣಿಬೆನ್ನೂರಿನಲ್ಲಿ ಬಿಜೆಪಿ ಮುನ್ನಡೆ.
ಬಿಜೆಪಿಯ ಅರುಣಕುಮಾರಗೆ 4611
ಕೋಳಿವಾಡ 4149

8:59 AM IST

ಮುನ್ನಡೆ ಕಾಯ್ದಕೊಂಡ ಶಿವರಾಮ್ ಹೆಬ್ಬಾರ್

ಉತ್ತರ ಕನ್ನಡ ಶಿರಸಿ: ಯಲ್ಲಾಪುರ ಉಪಚುನಾವಣಾ ಮತ ಎಣಿಕೆ. ಯಲ್ಲಾಪುರ ಮುಂಡಗೋಡು ವಿಧಾನಸಭಾ ಕ್ಷೇತ್ರದ 4 ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 

ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮುನ್ನಡೆ.  8102 ಮತಗಳ ಮುನ್ನಡೆಯಲ್ಲಿ ಹೆಬ್ಬಾರ್. 
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗಿಂತ 8102 ಮತಗಳ ಮುನ್ನಡೆ

ಶಿವರಾಮ್ ಹೆಬ್ಬಾರ್ - 17951

ಭೀಮಣ್ಣ ನಾಯ್ಕ - 9849

ಚೈತ್ರಾ ಗೌಡ - 357

8:58 AM IST

ಚಿಕ್ಕಬಳ್ಳಾಪುರ: ಡಾ.ಸುಧಾಕರ್‌ಗೆ ಮುನ್ನಡೆ

ಚಿಕ್ಕಬಳ್ಳಾಪುರದಲ್ಲಿಯೂ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್‌ಗೆ ಮುನ್ನಡೆ

8:56 AM IST

ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ

ಮೊದಲಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಬಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಹೊಸಕೋಟೆಯಲ್ಲಿ ತುಸು ಹಿನ್ನಡೆ. ಎಂಟಿಬಿ ನಾಗರಾಜ್‌ಗೆ ಮುನ್ನಡೆ

8:54 AM IST

ಹಿರೇಕೆರೂರಿನಲ್ಲಿಯೂ ಬಿಜೆಪಿಯ ಪಾಟೀಲ್‌ಗೆ ಮುನ್ನಡೆ

ಹಿರೇಕೆರೂರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್  5071
ಕಾಂಗ್ರೆಸ್ ಬನ್ನಿಕೋಡಗೆ 2883

8:51 AM IST

ಯಲ್ಲಾಪುರ: ಬಿಜೆಪಿ ಅಭ್ಯರ್ಥಿಗೆ ಮುನ್ನಡೆ

ಯಲ್ಲಾಪುರ ಉಪಚುನಾವಣಾ ಮತ ಎಣಿಕೆ. 

3ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮುನ್ನಡೆ.  5918 ಮತಗಳ ಮುನ್ನಡೆಯಲ್ಲಿ ಹೆಬ್ಬಾರ್.

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗಿಂತ 5918 ಮತಗಳ ಮುನ್ನಡೆ

ಶಿವರಾಮ್ ಹೆಬ್ಬಾರ್ - 13994

ಭೀಮಣ್ಣ ನಾಯ್ಕ - 8076

ಚೈತ್ರಾ ಗೌಡ - 279

8:44 AM IST

ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ

ಉತ್ತರ ಕನ್ನಡದ ಯಲ್ಲಾಪುರದಲ್ಲಿ ಎರಡನೆ ಸುತ್ತಿನ ಮತ ಎಣಿಕೆ ಮುಕ್ತಾಯ.

ಶಿವರಾಮ ಹೆಬ್ಬಾರ್- ಬಿಜೆಪಿ 9628 ( 5004 ಮತಗಳ ಅಂತರದಿಂದ ಮುನ್ನಡೆ)

ಭೀಮಣ್ಣ ನಾಯ್ಕ- 4624 ಕಾಂಗ್ರೆಸ್ 

ಚೈತ್ರಾ ಗೌಡ- ಜೆಡಿಎಸ್ 194

8:43 AM IST

ಹುಣಸೂರು: ಕೈಗೆ ಮುನ್ನಡೆ

ಹುಣಸೂರಿನಲ್ಲಿ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಹೀಗಿದೆ ಲೆಕ್ಕಚಾರ... 

ಕಾಂಗ್ರೆಸ್ - 4707
ಬಿಜೆಪಿ - 3855
ಜೆಡಿಎಸ್ - 1871

8:40 AM IST

ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ: ರಮೇಶ್ ಜಾರಕಿಹೊಳಿಗೆ ಮುನ್ನಡೆ

ಬೆಳಗಾವಿಯ ಗೋಕಾಕ್ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಿಕಿಹೊಳಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ವಿರುದ್ಧ 2 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. 

8:37 AM IST

ಯಲ್ಲಾಪುರ: 8 ಅಂಚೆ ಮತಗಳು ರಿಜೆಕ್ಟ್

ಕಾರವಾರ, ಉತ್ತರಕನ್ನಡ ಪೋಸ್ಟಲ್ ಮತ ಎಣಿಕೆ

ಒಟ್ಟು 11 ಪೋಸ್ಟಲ್ ಮತಗಳು. 8 ಮತಗಳು ರಿಜೆಕ್ಟ್. 2 ಮತಗಳು ಬಿಜೆಪಿ ಪಾಲಿಗೆ.

8:36 AM IST

ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ: ಕೆ.ಆರ.ಪೇಟೆಯಲ್ಲಿ ಜೆಡಿಎಸ್ ಮುನ್ನಡೆ

ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ: ಕೆ.ಆರ.ಪೇಟೆಯಲ್ಲಿ ಜೆಡಿಎಸ್ ಮುನ್ನಡೆ. 17 ಮತಗಳ ಮುನ್ನಡೆ.

ಗೋಕಾಕ್‌ ಹಾಗೂ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ.

8:31 AM IST

ಹೊಸಕೋಟೆಯಲ್ಲಿ ಸ್ವತಂತ್ರ ಅಭ್ಯರ್ಥಿ ಶರತ್‌ಗೆ ಮುನ್ನಡೆ

ಮತ ಎಣಿಕಗೆ ಮುನ್ನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶರತ್ ಬಚ್ಚೇಗೌಡ

ಶರತ್ ಹೇಳಿದ್ದಿಷ್ಟು

8:18 AM IST

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಮುನ್ನಡೆ

13 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್, ಹೊಸಕೋಟೆಯಲ್ಲಿ ಸ್ವತಂತ್ರ ಅಭ್ಯರ್ಥಿ ಮುನ್ನಡೆ.

 

Counting of votes in Karnataka to begin from 8 am today, stakes high for BJP

Read @ANI Story | https://t.co/LeQoiep0fD pic.twitter.com/71y5tSQL00

— ANI Digital (@ani_digital) December 9, 2019

8:11 AM IST

ನಕಲಿ ಪಾಸ್‌ ಹಿಡಿದು ಸ್ಟ್ರಾಂಗ್ ರೂಂ ಪ್ರವೇಶಿಸಲು ಯತ್ನ

8:07 AM IST

ಖಾತೆ ತೆಗೆಯದ ಜೆಡಿಎಸ್, ಶಿವಾಜಿನಗರದಲ್ಲಿ ಮಾತ್ರ ಕಾಂಗ್ರೆಸ್‌ಗೆ ಮುನ್ನಡೆ

ಎಲ್ಲೆಡೆ ಮತ ಎಣಿಕೆ ಆರಂಭವಾಗಿದ್ದು, ಶಿವಾಜಿನಗರ ಹೊರತು ಪಡಿಸಿ ಉಳಿದ 14 ಕೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್ ಎಲ್ಲಿಯೂ ಖಾತೆ ತೆಗೆಯುವ ಸೂಚನೆ ಕಾಣಿಸುತ್ತಿಲ್ಲ. 

8:02 AM IST

ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ

15 ವಿಧಾನಸಭಾ ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದ್ದು, ಹುಣಸೂರು ಹಾಗೂ ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. ಉಳಿದೆಡೆ ಬಿಜೆಪಿ ಅಭ್ಯರ್ಥಿಗಳು ಮುಂದಿದ್ದಾರೆ. 

7:58 AM IST

ಹುಣಸೂರಲ್ಲಿ ಕಾಂಗ್ರೆಸ್, ಬೆಳಗಾವಿಯಲ್ಲಿ ರಮೇಶ್ ಜಾರಿಕೊಳೆ ಮುನ್ನಡೆ

ಹುಣಸೂರಲ್ಲಿ ಕಾಂಗ್ರೆಸ್, ಬೆಳಗಾವಿಯಲ್ಲಿ ರಮೇಶ್ ಜಾರಿಕೊಳೆ ಮುನ್ನಡೆ, ಎಲ್ಲೆಡೆ ಮತ ಎಣಿಕೆ ಆರಂಭ.

7:46 AM IST

ಮತ ಎಣಿಕೆ: ಎಲ್ಲೆಡೆ ಬಿಗಿ ಭದ್ರತೆ...

ಮತ ಎಣಿಕೆ ಇನ್ನೇನು ಆರಂಭವಾಗಲಿದ್ದು, ಬೆಂಗಳೂರಿನ ಮತ ಎಣಿಕೆಗೆ ಬಿಗಿ ಭದ್ರತೆ ಹೀಗಿದೆ.


 

Counting of votes for Karnataka by-elections to take place today. Visuals from a counting centre in Bengaluru. pic.twitter.com/NlqlKdx707

— ANI (@ANI) December 9, 2019

6:46 AM IST

ಬಿಎಸ್‌ವೈ ಸಂಪುಟ ಏನಾಗಲಿದೆ?

ಗೆಲ್ಲುವ ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ಸುಕರಾಗಿದ್ದಾರೆ. ಆದರೆ, ಸಂಪುಟ ಪುನಾರಚಿಸುತ್ತಾರೋ, ವಿಸ್ತಾರಣೆಯಾಗುತ್ತೋ?

ಪುನಾರಚನೆಯೋ, ವಿಸ್ತರಣೆಯೋ?

6:44 AM IST

ಉಪ ಚುನಾವಣೆ ಫಲಿತಾಂಶ: 11 ಗಂಟೆಗೆ ಚಿತ್ರಣ

ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, 11ರ ಹೊತ್ತಿಗೆ ಬಿಎಸ್‌ವೈ ಸರಕಾರದ ಭವಿಷ್ಯದ ಬಗ್ಗೆ ಚಿತ್ರಣ ಸಿಗಲಿದೆ. ಎಲ್ಲೆಲ್ಲಿ ನಡೆಯುತ್ತೆ ಮತ ಎಣಿಕೆ.

ಎಲ್ಲೆಲ್ಲಿ ಮತ ಎಣಿಕೆ

12:00 AM IST

ಸ್ಟ್ರಾಂಗ್ ರೂಂ ಓಪನ್...

ಕೆ.ಆರ್.ಪೇಟೆ ಉಪ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಂ ತೆರೆದ ಅಧಿಕಾರಿಗಳು, ಸಿಬ್ಬಂದಿ. ಅಭ್ಯರ್ಥಿಗಳ ಪರ ಚುನಾವಣಾ ಏಜೆಂಟ್ ಸಮ್ಮುಖದಲ್ಲಿ ಲಾಕ್ ಓಪನ್.

4:53 PM IST:

ಉಪ ಚುನಾವಣೆಯಲ್ಲಿ ಗೆದ್ದವರಿಗೆಲ್ಲ‌ ಮಂತ್ರಿ ಸ್ಥಾನ ಪಕ್ಕಾ. ವಿರೋಧ ಪಕ್ಷಗಳ ಆರೋಪದ ವಿಶ್ಲೇಷಣೆಯ ಮಾಡುವ ಅಗತ್ಯವಿಲ್ಲ, ನಮ್ಮ ಜಿಲ್ಲೆಗೆ ಇನ್ನೊಂದು ಡಿಸಿಎಮ್ ಸ್ಥಾನ ಕೊಟ್ಟರೆ ಸಂತೋಷದಿಂದ ಸ್ವಾಗತಿಸುತ್ತೇವೆ.

- ಲಕ್ಷ್ಣಣ ಸವದಿ, ಡಿಸಿಎಂ

4:39 PM IST:

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

 

 

4:37 PM IST:

ಪರೋಕ್ಷವಾಗಿ ಬಿಜೆಪಿ ಬೆಂಬಲಿಸುವ ಚಾಮುಂಡೇಶ್ವರಿ ಶಾಸಕ ಜಿಟಿಡಿ ಉಪು ಚುನಾವಣೆ ಫಲಿತಾಂಶದ ಬಗ್ಗೇ ಹೇಳಿದ್ದಿಷ್ಟು...

ಫಲಿತಾಂಶದ ಬಗ್ಗೆ ತುಟಿ ಬಿಚ್ಚದ ಶಾಸಕ

4:34 PM IST:

ಕೈ-ಜೆಡಿಎಸ್ ಮೈತ್ರಿ ಸರಕಾರದಿಂದ ಬೇಸತ್ತ ಜನರು ಇದೀಗ ಬಿಜೆಪಿಗೆ ಬಹುಮತ ನೀಡಿದೆ.

ಬಿಜೆಪಿ ರಾಜೀವ್ ಚಂದ್ರಶೇಕರ್ ಹೇಳಿದ್ದೇನು?

 

3:59 PM IST:

ಇವರು ಹೇಳಿದ್ದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ. 

ಅಷ್ಟಕ್ಕೂ ಇವರು ಹೇಳಿದ ಭವಿಷ್ಯವೇನು?

3:48 PM IST:

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅತೀವ ಕಳಪೆ ಪ್ರದರ್ಶನ ತೋರಿದ್ದು, ಶಾಸಕಾಂಗ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸೋಲಿನ ಹೊಣೆ: ಸಿದ್ದರಾಮಯ್ಯ ರಾಜೀನಾಮೆ

3:33 PM IST:

ಉಪ ಚುನಾವಣೆಗೂ ಮೊದಲೇ ಬಿಜೆಪಿಯೊಂದಿಗೆ ಕೈ ಜೋಡಿಸುವ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹೀಗ್ಯಾಕೆ ಟ್ವೀಟ್ ಮಾಡಿದರು?

ಸುಭದ್ರ ಸರಕಾರಕ್ಕೆ ಅಭಿನಂದನೆಗಳು

3:14 PM IST:

ಶರತ್ ಬೆಂಬಲಿಗ ರಿಯಾಜ್ ಬೇಗ್ (50) ಸಾವನ್ನಪ್ಪಿದ್ದಾನೆ. ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಸಂಭ್ರಮಾಚರಣೆ ವೇಳೆ ಹೃದಯಾಘಾತ ಸಂಭವಿಸಿ ಈತ ಮೃತಪಟ್ಟಿದ್ದಾನೆ. 

2:20 PM IST:

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ. ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಿಷ್ಟು...

ಮಂಡ್ಯದಲ್ಲಿ ಖಾತೆ ತೆರೆದಿದ್ದೇ ಬಿಜೆಪಿಯ ದೊಡ್ಡ ಸಾಧನೆ

 

1:43 PM IST:

ಉಪ ಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12ರಲ್ಲಿ ಅನರ್ಹರು ಎಂದೆನಸಿಕೊಂಡ ಶಾಕರು ಗೆದ್ದಿದ್ದಾರೆ. ಇದಕ್ಕೇನು ಕಾರಣ.

ಸುವರ್ಣನ್ಯೂಸ್‌ನ ರಮಾಕಾಂತ್ ವಿಶ್ಲೇಷಣೆ

1:35 PM IST:

2018ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಈ ಉಪ ಚುನಾವಣೆಯಲ್ಲಿ ಒಂದೂ ಕ್ಷೇತ್ರವನ್ನೂ ಗೆದ್ದಿಲ್ಲ.

ಜಿಡಿಎಸ್ ಅಭ್ಯರ್ಥಿ ಹೇಳಿದ್ದೇನು?

1:31 PM IST:

ಕಾಂಗ್ರೆಸ್ ಭದ್ರಕೋಟೆ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಜಯ ಸಾಧಿಸಿದ್ದಾರೆ. ಅವರು ಹೇಳಿದ್ದೇನು?

ನಮ್ಮ ಗೆಲುವಿಗೆ ಕೈ ನಾಯಕರ ವರ್ತನೆಯೇ ಕಾರಣ

 

 

1:21 PM IST:

ಶಿವಮೊಗ್ಗ:  ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಇದೊಂದು ಐತಿಹಾಸಿಕ ಜಯ. ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಕುತಂತ್ರದಿಂದ ಬಿಎಸ್ವೈ ಅವರನ್ನು ಅಧಿಕಾರದಿಂದ ವಂಚಿತರನ್ನಾಗಿಸಿದ್ದಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ದೂಳಿಫಟವಾಗಿದೆ. ಜೆಡಿಎಸ್ ಜೀರೋ ಆಗಿದೆ. ಇವರಿಬ್ಬರ ಕುತಂತ್ರಕ್ಕೆ ಜನತೆ ತಕ್ಕ ಫಲಿತಾಂಶದ ಉತ್ತರ ನೀಡಿದೆ. ಚುನಾವಣಾ ಫಲಿತಾಂಶದ ಮೂಲಕ ಬಿಜೆಪಿ ಪಕ್ಷ ಮತ್ತು ಬಿಎಸ್ ವೈ ಪ್ರಭಾವಳಿಗೆ ಉತ್ತರ ಸಿಕ್ಕಿದೆ, ಎಂದಿದ್ದಾರೆ ಎಂಎಲ್‌ಸಿ ಆಯನೂರು ಮಂಜುನಾಥ್.

1:06 PM IST:

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದಾಗಲೇ ವಿರೋಧಿಸಿದ್ದ ಕೈ ಮುಖಂಡ ಜನಾರ್ದನ ಪೂಜಾರಿ ರಿಯಾಕ್ಟ್ ಮಾಡಿದ್ದು ಹೀಗೆ...

ಕಾಂಗ್ರೆಸ್ ಸಾಯುತ್ತೆ

1:00 PM IST:

2018ರ ಚುನಾವಣೆಯಲ್ಲಿ ಸೋತರೂ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡವರು ಬಿಜೆಪಿ ಮುಖಂಡ ಲಕ್ಷಣ ಸವದಿ. ಇದೀಗ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆದ್ದಿರುವುದಕ್ಕೆ ಸವದಿ ಹೇಳಿದ್ದಿಷ್ಟು...

ಬೆಳಗಾವಿಗೆ ಮತ್ತೊಂದು ಡಿಸಿಎಂ ಹುದ್ದೆ

12:38 PM IST:

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೀರೇಕೆರೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಅಲ್ಲದೇ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೆಜೆವಿಪಿ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಇದೀಗ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರಿಂದ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಿದೆ.

ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿದ್ದಿಷ್ಟು...
ಅನರ್ಹತೆಯ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು ಸಿಕ್ಕಿದೆ. ಎರಡೂ ಕ್ಷೇತ್ರಗಳ ಗೆಲುವಿನ ಮೂಲಕ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾದಂತಾಯಿತು. ಇನ್ನು ರಾಜ್ಯ ಮತ್ತು ದೇಶ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ. ಬಣಕಾರ ಮತ್ತು ನಾನು ಒಂದಾದ ಪರಿಣಾಮ ಗೆಲುವು ಸುಲಭವಾಯಿತು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ಹಣ, ಅಧಿಕಾರ ದುರುಪಯೋಗದ ಕುರಿತ ಬನ್ನಿಕೋಡ ಆರೋಪಕ್ಕೆ ಉತ್ತರಿಸಿದ ಬಿಸಿಪಿ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ತಿರುಗೇಟು ನೀಡಿದರು.

12:32 PM IST:

ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳನ್ನು ಹೊರತುಪಡಿಸಿ, ಬಿಜೆಪಿ ಎಂದಿಗೂ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಗೆದ್ದಿರಲೇ ಇಲ್ಲ. ಆದರೆ, ಅಲ್ಲಿಯೂ ಇತಿಹಾಸ ಸೃಷ್ಟಿಸಿದೆ.

ಗೋಪಾಲಯ್ಯ ಗೆಲುವಿಗೆ ಕಾರಣವಾಗಿದ್ದೇನು?

 

12:30 PM IST:

ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?
ಸತ್ಯ ಬಿಟ್ಟ ಸಿಎಂ ಪುತ್ರ 

12:17 PM IST:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರೂರಾದ ಬೂಕನಕೆರೆ ಇರೋ ಮಂಡ್ಯದ ಕೆ.ಆರ್.ಪೇಟೆ ವಿಧಾನಸಬಾ ಕ್ಷೇತ್ರದಲ್ಲಿಯೂ ಇದೇ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿದೆ. ಅದಕ್ಕೆ ಡಿಸಿಎಂ ಅಶ್ವಥ ನಾರಾಯಣ್ ಹೇಳಿದ್ದಿಷ್ಟು.

 

ಕೆಆರ್‌ ಪೇಟೆಯ ಮಗ, ರೈತ ನಾಯಕರಾದ ಮುಖ್ಯಮಂತ್ರಿ @BSYBJP ಅವರ ಮೇಲಿನ ಅಭಿಮಾನವನ್ನು ಕೆಆರ್‌ ಪೇಟೆ ಜನ ಇಡೀ ಜಗತ್ತಿಗೆ ಸಾಬೀತು ಮಾಡಿದ್ದಾರೆ. ಯುವ ನಾಯಕ @BYVijayendra, ಪಕ್ಷದ ನಾಯಕರು, ಕಾರ್ಯಕರ್ತರು ಚುನಾವಣೆ ಘೋಷಣೆಯಾದ ದಿನದಿಂದಲೂ ಕ್ಷೇತ್ರದಲ್ಲೇ ಹೆಚ್ಚು ಸಮಯ ಇದ್ದು, ಜನರೊಂದಿಗೆ ಬೆರೆತು ಕೆಲಸ ಮಾಡಿದ್ದಾರೆ.

— Dr. Ashwathnarayan C. N. (@drashwathcn) December 9, 2019

 

12:14 PM IST:

ಉಪ ಚುನಾವಣೆಯಲ್ಲಿ ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಶಾಸಕ ವಿಶ್ವನಾಥ್ ರಾಜೀನಾಮೆ ನೀಡಿ, ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ, ಜನರ ವಿಶ್ವಾಸ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಸಚಿವ ಸಿ.ಟಿ.ರವಿ ಹೇಳಿದ್ದಿಷ್ಟು...

ಸೋತ ಅನರ್ಹ ಶಾಸಕರಿಗೂ ಸೂಕ್ತ ಸ್ಥಾನ

12:11 PM IST:

2018ರ ವಿಧಾನಸಭಾ ಚುನಾವಣೆ ನಂತರವೇ ಬಿಜೆಪಿಯತ್ತ ಒಲವು ತೋರಿದ್ದ ಆನಂದ್ ಸಿಂಗ್, ಕಾಂಗ್ರೆಸ್-ಜೆಡಿಎಸ್ ಸರಕಾರದ ವಿರುದ್ಧ ಬಂಡಾಯವೆದ್ದು ಮೊದಲೇ ರಾಜೀನಾಮೆ ನೀಡಿದವರು. ಆದರೂ ಅವರಿಗೆ ಅನರ್ಹ ಸಾಸಕ ಪಟ್ಟ ತಪ್ಪಿರಲಿಲ್ಲ. ಇದೀಗ ಬಿಜೆಪಿಯಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲವು ಸಾಧಿಸಿದ್ದಾರೆ. ಗೆಲುವಿನ ಖುಷಿಯಲ್ಲಿ ದೇವರನ್ನು ಸ್ಮರಿಸಿದ್ದು ಹೀಗೆ.

12:00 PM IST:

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವಿನ ನಗೆ ಬೀರುತ್ತಿದ್ದು, ಕಾಂಗ್ರೆಸ್ ಭದ್ರ ಕೋಟೆಯನ್ನು ಭೇದಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಿಜೆಪಿ ಅಭ್ಯರ್ಥಿ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸಿದ್ದು ಹೀಗೆ..

11:55 AM IST:

16ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಜವರಾಯಿಗೌಡ - 88,924
ಎಸ್.ಟಿ.ಸೋಮಶೇಖರ್ - 1,5,694
ಪಿ.ನಾಗರಾಜ್ - 10,461
ನೋಟಾ - 2,010

 16,770ಮತಗಳ ಅಂತರದಿಂದ  ಸೋಮಶೇಖರ್ ಮುನ್ನಡೆ

11:53 AM IST:

ಉಪು ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ನಗೆಯ ಗೆಲವು ಬೀರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ತಂದೆಯ ಆಶೀರ್ವಾದ ಪಡೆದಿದ್ದು ಹೀಗೆ..

 

 

Bengaluru: Karnataka Chief Minister BS Yediyurappa celebrates with his son BY Vijayendra as BJP leads on 12 out of 15 seats in #KarnatakaAssemblyBypolls. pic.twitter.com/0uualeU8Yg

— ANI (@ANI) December 9, 2019

 

11:51 AM IST:

ಕಳೆದ ಲೋಕಸಭಾ ಚುನಾವಣೆ ವೇಳೆ 'ನಿಖಿಲ್ ಎಲ್ಲಿದ್ದೀಯಪ್ಪಾ?' ಟ್ರೆಂಡ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಈ ಉಪ ಚುನಾವಣೆಯಲ್ಲಿ 'ಹೌದು ಹುಲಿಯಾ' ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಆದರೆ, ಉಪ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಸ್ಥಾನಗಳಲ್ಲಿ ಗಲವು ಸಾಧಿಸಿತುತ್ತಿದ್ದು, ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದು  ಹೀಗೆ...

 

 

 

ಅಭಿಮಾನಿ ದೃಷ್ಟಿಯಲ್ಲಿ ಹುಲಿಯಾ . . .

ಮತದಾರರ ದೃಷ್ಟಿಯಲ್ಲಿ ಇಲ್ಲಿಯಾ ! ! !#BJPSweepsKarnataka

— C T Ravi 🇮🇳 ಸಿ ಟಿ ರವಿ (@CTRavi_BJP) December 9, 2019

 

 

11:42 AM IST:

15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ಡಿಕೆಶಿ ಹೇಳಿದ್ದಿಷ್ಟು...

ಡಿಕೆಶಿ ಮೊದಲ ರಿಯಾಕ್ಷನ್

 

12:46 PM IST:

ರಾಜ್ಯದಲ್ಲಿ ನಡೆದ 15 ವಿಧನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದ್ದು, 12 ಕ್ಷೇತ್ರಗಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಮತ್ತೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 

 

 

 

11:34 AM IST:

ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲವಿನತ್ತ ದಾಪುಗಾಲು ಹಾಕುತ್ತಿದ್ದು, ಈ ಗೆಲವೂ ಬಿಜೆಪಿಯದ್ದೇ ಎಂದು ಟ್ವೀಟ್ ಮಾಡಿದ್ದಾರೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ

 

BJP 12 leading and one in Hosakote is BJP rebel. Son of BJP MP.
So the result is
BJP 13
Con 02
JDS 00
Clear message to SS and NCP?#KarnatakaBypolls

— Chakravarty Sulibele (@astitvam) December 9, 2019

 

11:32 AM IST:

ಉಪಚುನಾವಣೆಯಲ್ಲಿ ಕೈ ನಾಯಕತ್ವ ವಹಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಕೇವಲ ಶಿವಾಜಿನಗರ ಹಾಗೂ ಹುಣಸೂರಿಗೆ ತೃಪ್ತಿ ಪಟ್ಟು ಕೊಳ್ಳಬೇಕಾಗಿದೆ ಕಾಂಗ್ರೆಸ್ ಪಾಳಯ. ಸೋಲಿಗೆ ತೀವ್ರ ನಿರಾಸೆ ವ್ಯಕ್ತಪಡಿಸಿದ ಸಿದ್ಧರಾಮಯ್ಯ. ಕಾಗವಾಡ, ರಾಣೆಬೆನ್ನೂರು ಸೋಲಿಗೆ ತೀವ್ರ ನಿರಾಸೆ ಪಟ್ಟ ಪ್ರತಿಪಕ್ಷ ನಾಯಕ. ಸಿದ್ಧರಾಮಯ್ಯ ನಿವಾಸಕ್ಕೆ ಆಗಮಿಸದ ಕಾಂಗ್ರೆಸ್ ನಾಯಕರು.

11:29 AM IST:

 ಉಪ ಚುನಾವಣೆ ಫಲಿತಾಂಶಗಳು ಹೊರ ಬೀಳುತ್ತಿದ್ದು, ಬಹುತೇಕ ಅನರ್ಹ ಶಾಸಕರು ಗೆಲುವಿನ ನಗೆ ಬೀರುತ್ತಿದ್ದಾರೆ. ಈ ಬೆನ್ನಲ್ಲೇ ಸಂಪುಟ ಪುನರ್‌ರಚನೆ ಬಗ್ಗೆ ಚರ್ಚಿಸಲು ಸಿಎಂ ಯಡಿಯೂರಪ್ಪ ಡಿ.10ರಂದು ದಿಲ್ಲಿಗೆ ತೆರಳಲಿದ್ದಾರೆ.

 

11:26 AM IST:

ಕಳೆದ 20 ವರ್ಷಗಳಿಂದಲೂ ರಾಜು ಕಾಗೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು 2018ರ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ್ ಗೆದ್ದು ಕೊಂಡಿದ್ದರು. ಇದೀಗ ಕಾಂಗ್ರೆಸ್‌ನಲ್ಲಿದ್ದ ಶ್ರೀಮಂತ ಪಾಟೀಲ್ ಬಿಜೆಪಿಗೆ ಸೇರಿ, ಬಿಜೆಪಿಯಲ್ಲಿದ್ದ ರಾಜು ಕಾಗೆ ಕಾಂಗ್ರೆಸ್‌ಗೆ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತ್ತೆ ಬಿಜೆಪಿ ಗೆಲ್ಲುವಂತಾಗಿದೆ.

ಬಿಜೆಪಿ ಕೈ ಬಿಡದ ಕಾಗವಾಡ ಮತದಾರರು

 

 

11:22 AM IST:

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷಾದ್ ಲೀಡ್ ಹೆಚ್ಚಾಗುತ್ತಿದ್ದಂತೆ. ಕೌಂಟಿಂಗ್ ಸೆಂಟರ್ ಬಳಿ ಸೇರುತ್ತಿರುವ ಅಭಿಮಾನಿಗಳು. ಕಾಂಗ್ರೆಸ್. ರಿಜ್ವಾನ್ ಪರ ಘೋಷಣೆ ಕೂಗುತ್ತಿರುವ ಕಾರ್ಯಕರ್ತರು. ಕಾಂಗ್ರಸ್ ಬಾವುಟ ಹಿಡಿದು ಸಂಭ್ರಮಿಸುತ್ತಿರುವ ಕಾಂಗ್ರೆಸ್ಸಿಗರು.

 

11:19 AM IST:

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲವಿನ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಕಾಂಗ್ರೆಸ್‌ನಿಂದ ಗೆಲವು ಸಾಧಿಸಿ, ಅನರ್ಹತೆ ಪಟ್ಟ ಕೊಂಡಿದ್ದ ಸುಧಾಕರ್ ಅವರಿಗೆ ಜನರು ವಿಜಯಲಕ್ಷ್ಮಿ ಒಲಿಯುವಂತೆ ಮಾಡಿದ್ದಾರೆ. 

 

11:17 AM IST:

ಬೆಳಗಾವಿ: 'ನಮ್ಮ ಮೇಲೆ ಅನರ್ಹತೆಯ ಕಳಂಕ ಇತ್ತು. ಮತದಾರನ ತೀರ್ಪಿನ ನಂತರ ಯಾರಿಗೂ ಮಾತನಾಡುವ ಅಧಿಕಾರವಿಲ್ಲ‌. ನಾವು ದುಡ್ಡಿಗಾಗಿ ಬಿಜೆಪಿಗೆ ಹೋಗಿಲ್ಲ. ವರ್ಷಕ್ಕೆ ಎರಡು-ಮೂರು‌ ಕೋಟಿ ನಾನೇ ದಾನ ಮಾಡುತ್ತೇನೆ.
ಕ್ಚೇತ್ರದ ಅಭಿವೃದ್ಧಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ.ನಮ್ಮದು ಪಕ್ಷಾಂತರವಲ್ಲ ಹೋರಾಟ,' ಎಂದು ಸುವರ್ಣ ನ್ಯೂಸ್‌ಗೆ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಹೇಳಿಕೆ ನೀಡಿದ್ದಾರೆ.

ನನಗೆ ಸಣ್ಣ ನೀರಾವರಿ, ಕೃಷಿ, ಸಹಕಾರ ಇಲಾಖೆಯಲ್ಲಿ ಆಸಕ್ತಿಯಿದೆ‌. ಈ ಕ್ಷೇತ್ರಗಳಲ್ಲಿ ನನಗೆ ಬಹಳ ಅನುಭವವಿದೆ. ಇದೇ ಇಲಾಖೆಗಳ ಸಚಿವ ಸ್ಥಾನ ಕೊಟ್ಟರೆ ಅಭಿವೃದ್ದಿ ಮಾಡಲು ಅನುಕೂಲ ಆಗುತ್ತೆ. ನಮ್ಮ ಕ್ಷೇತ್ರದ ಜನರೆಲ್ಲ ಒಂದೇ ಕುಟುಂಬದ ಮಕ್ಕಳಂತೆ ಇದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ, ಯೋಚನೆಗಳಿವೆ, ಎಂದಿದ್ದಾರೆ.

 

11:13 AM IST:

ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೋಪಾಲಯ್ಯ ಗೆಲುವು ಖಚಿತ. ಈ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಗೋಪಾಲಯ್ಯ. ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುತ್ತಿರುವುದು. ಈ ಕ್ಷೇತ್ರದಲ್ಲಿ ಇಲ್ಲೀವರೆಗೆ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು ಮಾತ್ರ ಗೆಲವು ಕಂಡಿದ್ದರು.

ಈಗ ಬಿಜೆಪಿ ಅಭ್ಯರ್ಥಿ ಗೆಲುವಿನ ಮೂಲಕ ಹೊಸ ಇತಿಹಾಸ ಸೃಷ್ಟಿ. ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಿದ ಗೋಪಾಲಯ್ಯ. ತಾನೇ ಕಟ್ಟಿದ್ದ ಜೆಡಿ ಎಸ್ ಕೋಟೆಯನ್ನ ಕಡೆವಿದ ಗೋಪಾಲಯ್ಯ. 

11:10 AM IST:

ಬೆಳಗಾವಿ: ಗೋಕಾಕ್ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ರಮೇಶ್ ಗೆಲುವಿನ ದಡ ಸೇರುತ್ತಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಮನೆ ಮುಂಭಾಗದಲ್ಲಿ ವಿಜಯೋತ್ಸವ. ಬಿಜೆಪಿ ಹಾಗೂ ರಮೇಶ್ ಅಭಿಮಾನಿಗಳಿಂದ ಸಂಭ್ರಮ. ಬಿಜೆಪಿ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ ಅಭಿಮಾನಿಗಳು.ಮನೆಯಲ್ಲಿ ಪೂಜೆಗೆ ಕುಳಿತಿರುವ ರಮೇಶ್ ಜಾರಕಿಹೊಳಿ.

11:06 AM IST:

ಹುಬ್ಬಳ್ಳಿ: ಉಪಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಗೆ ಭ್ರಮನಿರಸನವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ಹೇಳಿಕೊಂಡು ತಿರುಗುತ್ತಿದ್ರು.ಆದ್ರೆ ಜನರ ಒಲವು ಬಿಜೆಪಿ ಪರ ಇತ್ತು.ಹೀಗಾಗಿ ಬಿಜೆಪಿ ಎಲ್ಲ ಕ್ಷೇತ್ರಗಳು ಗೆಲ್ಲುವು ಖಚಿತವಾಗಿದೆ, ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

 ಹೊಸಕೋಟೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ಅವರಿಗೂ ಸ್ಥಾನಮಾನ ಕೊಡುವುದು ಖಚಿತ.ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದಕ್ಕೆ ನಮ್ಮ ಸರ್ಕಾರ ಬಂದಿದೆ, ಎಂದರು. 

ಜೆಡಿಎಸ್ ಭದ್ರಕೋಟೆಯಲ್ಲಿ ಖಾತೆ ತೆರೆದ ಬಿಜೆಪಿ

11:01 AM IST:

ಕೆ.ಆರ್.ಪುರಂ ವಿಧಾನ ಸಭಾ ಕ್ಷೇತ್ರದ 7ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಮುನ್ನಡೆ ಕಾಯ್ದುಕೊಂಡಿದ್ದಾರೆ 

ಬೆಜೆಪಿ: 4,901
ಕಾಂಗ್ರೆಸ್: 1823

ಬಿಜೆಪಿ ಅಭ್ಯರ್ಥಿ ಸುಮಾರು 22 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. 

 

 

 

10:58 AM IST:

ಶಿವಾಜಿನಗರ ಬೈ ಎಲೆಕ್ಷನ್.. 5 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ರಿಜ್ವಾನ್ ಅರ್ಷದ್ - 19537
ಸರವಣ - 11981
ನೋಟಾ - 325.

ಅಂತರ - 7550..

10:55 AM IST:

ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಮುನ್ನಡೆ ಸಾಧಿಸಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ.

 

10:53 AM IST:

ಬೆಳಗಾವಿ ಜಿಲ್ಲೆಯ ಮೂರು ವಿಧಾನಸಬಾ ಕ್ಷೇತ್ರಗಳಲ್ಲಿ ಉಪ ಚುನಾವಣ ನಡೆದಿದ್ದು, ಮೂರೂ ಕಡೆ ಕಮಲ ಅರಳುವ ನಿರೀಕ್ಷೆ ಇದೆ. ಕಾಗವಾಡದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

10:50 AM IST:

ಯಲ್ಲಾಪುರದಲ್ಲಿ ನಿರೀಕ್ಷೆಯಂತೆ ಕಮಲ ಅರಳಿದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿದ್ದು ಹೀಗೆ?

ಉಪ ಚುನಾವಣೆ ಮೊದಲ ರಿಸಲ್ಟ್ ಔಟ್

10:39 AM IST:

ಯಶವಂತಪುರ: 9 ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಬಿಜೆಪಿಯ ಅಭ್ಯರ್ಥಿ ಕೇವಲ 435 ಮತಗಳ ಅಂತರದಿಂದ ಮುಂದಿದ್ದು, ಜೆಡಿಎಸ್ ಅಭ್ಯರ್ಥಿ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ.

ಜವರಾಯಿಗೌಡ (ಜೆಡಿಎಸ್) - 55214
ಎಸ್.ಟಿ.ಸೋಮಶೇಖರ್ (ಬಿಜಪಿ) - 55649
ಪಿ.ನಾಗರಾಜ್ (ಕಾಂಗ್ರೆಸ್) - 4306
ನೋಟಾ - 1021

435 ಮತಗಳ ಅಂತರದಿಂದ ಎಸ್ ಟಿ ಸೋಮಶೇಖರ್ ಮುನ್ನಡೆ

10:34 AM IST:

ಮಹಾಲಕ್ಷ್ಮಿ ಲೇಔಟ್ - 7ನೇ ಸುತ್ತು

ಕೆ. ಗೋಪಾಲಯ್ಯ - 32262
ಎಂ ಶಿವರಾಜ್ - 9572
ಡಾ. ಗಿರೀಶ್ ಕೆ ನಾಶಿ - 10953

7ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ 21309 ಮತಗಳ ಮುನ್ನಡೆ

10:25 AM IST:

ಹೀರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಮುನ್ನಡೆ ಕಾಯ್ದುಕೊಂಡಿದ್ದು, ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

 

10:10 AM IST:

ಕ್ಷೇತ್ರ - ಹೊಸಕೋಟೆ
ಸುತ್ತು - 5
ಬಿಜೆಪಿ - 13786
ಕಾಂಗ್ರೆಸ್ - 9859
ಪಕ್ಷೇತರ - 21903
ಮುನ್ನಡೆ - 8117

10:04 AM IST:

ಗೋಕಾಕ್

ಐದನೇ ಸುತ್ತಿನ ಮತ‌ಎಣಿಕೆಯಲ್ಲಿ 11,229 ಮತಗಳ ಮುನ್ನಡೆ
ಬಿಜೆಪಿ - 27,009
ಕಾಂಗ್ರೆಸ್ - 15,710
ಜೆಎಡಿಎಸ್ - 9071
ಮುನ್ನಡೆ - ಬಿಜೆಪಿ (11229 ಮತಗಳಿಂದ ಮುನ್ನಡೆ)

10:01 AM IST:

ಯಲ್ಲಾಪುರದಲ್ಲಿ ಬಹುತೇಕ ಮತ ಎಣಿಕೆ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದ್ದು, ಮೊದಲ ಸುತ್ತಿನಿಂದಲೂ ಬಿಜೆಪಿ ಅಭ್ಯರ್ಥಿ ಶಿವರಾಮೇ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ. 

9:59 AM IST:

ಕೆ.ಆರ್‌.ಪೇಟೆ: 
ಚಂದ್ರಶೇಖರ್ 8072 (Cong)
ದೇವರಾಜು 12758 ( JDS)
ನಾರಾಯಣಗೌಡ 13018 (BJP)
BJP ಮುನ್ನಡೆ ಅಂತರ 260

9:58 AM IST:

ಹುಣಸೂರಿನಲ್ಲಿ 8 ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಅಭ್ಯರ್ಥಿಗಳು ಪಡೆದ ಮತಗಳು ಹೀಗಿವೆ...

ಬಿಜೆಪಿ ವಿಶ್ವನಾಥ್ - 21856
ಕಾಂಗ್ರೆಸ್ ಮಂಜುನಾಥ್ - 36134
ಜೆಡಿಎಸ್ ಸೋಮಶೇಖರ್ - 16028
ಲೀಡ್ - 14278
ನೋಟಾ- 406

9:55 AM IST:

ಬೆಳಗಾವಿ:- ಮತ ಎಣಿಕೆ ಕೇಂದ್ರ ಎದುರು ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಸಂಭ್ರಮಾಚರಣೆ.ಬೆಳಗಾವಿಯ ಆರ್.ಪಿ.ಡಿ ಸಕ೯ಲ್‌ನಲ್ಲಿ ಮುಗಿಲು ಮುಟ್ಟಿದ ಸಂಭ್ರಮ. ರಮೇಶ್ ಪರ ಘೋಷಣೆ ಕೂಗಿ ಸಂಚರಿಸುತ್ತಿರೋ ಬೆಂಬಲಿಗರು.

ಯಡಿಯೂರಪ್ಪ ಹಣೆಬರಹ ಬರೆದ ರಮೇಶ್ ಅಣ್ಣಾಗೆ ಜೈ ಎಂದ ಬೆಂಬಲಿಗರು. 5ನೇ ಸುತ್ತಿನ ಮತ ಎಣಿಕೆ ಬಳಿಕ 9,185 ಮತಗಳ ಮುನ್ನಡೆ ಕಾಯ್ದುಕೊಂಡಿರುವ ರಮೇಶ್ ಜಾರಕಿಹೊಳಿ. ನಗರದ ಆರ್.ಪಿ.ಡಿ‌ ಕಾಲೇಜ್ ನಲ್ಲಿ ನಡೆಯುತ್ತಿದೆ ಮತ ಎಣಿಕೆ

9:52 AM IST:

'20 ಸಾವಿರ ಮತಗಳ ಅಂತರದಲ್ಲಿ ವಿಜಯ ಸಾಧಿಸುತ್ತೇನೆ. ಕೆ.ಆರ್ ಪೇಟೆ ಮತದಾರರು ನನ್ನನ್ನು ಗೆಲ್ಲಿಸಲಿದ್ದಾರೆ. ಮಂತ್ರಿಯಾಗುವ ಆಸೆ ಇದೆ, ಆದ್ರೆ ದುರಾಸೆ ಇಲ್ಲ. ಯಡಿಯೂರಪ್ಪ ದೊಡ್ಡವರಿದ್ದಾರೆ, ನನ್ನ ಮಂತ್ರಿ ಮಾಡ್ತೀನಿ ಅಂತಾ ಹೇಳಿದ್ದಾರೆ. ಎದುರಾಳಿ ಯಾರೆಂದು ನಾನು ಹೇಳುವುದಿಲ್ಲ, ದೊಡ್ಡವರ ಬಗ್ಗೆ ಮಾತಾಡಲ್ಲ,' ಎಂದಿದ್ದಾರೆ ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರು. 

ಸುಪ್ರೀಂ ಕೋರ್ಟ್ ತೀರ್ಪಿನಷ್ಟೆ ಕುತೂಹಲ ಇಂದು ಇದೆ. ನಾನು ಅರ್ಹನೋ ..ಅನರ್ಹನೋ ಜನತೆ ಇಂದು ತೀರ್ಪು ಕೊಡ್ತಾರೆ. ಇಂದಿನ ಫಲಿತಾಂಶದ ನಂತರ ಯಡಿಯೂರಪ್ಪ ನೇತೃತ್ವದಲ್ಲೆ ಸ್ಥಿರ ಸರ್ಕಾರ ಇರಲಿದೆ. ಕೆ.ಆರ್ ಪೇಟೆ ಕ್ಷೇತ್ರ ಸಂಪೂರ್ಣ ‌ಅಭಿವೃದ್ದಿ ನನ್ನ ಗುರಿ.

- ಬಿಜೆಪಿ ಅಭ್ಯರ್ಥಿ ನಾರಾಯಣಗೌಡ

9:50 AM IST:

ಬಳ್ಳಾರಿ

ಕ್ಷೇತ್ರ - ವಿಜಯನಗರ 
ಎಷ್ಟನೇ ಸುತ್ತು  ಅಧಿಕೃತ ‌ಮುಕ್ತಾಯ.. 
ಬಿಜೆಪಿ - 22701
ಕಾಂಗ್ರೆಸ್ - 16676
ಜೆಡಿಎಸ್ - 991
ಮುನ್ನಡೆ - 6025 ಮತಗಳಿಂದ ಮುನ್ನಡೆ
 

9:48 AM IST:

ಅಥಣಿ ಮತ ಎಣಿಕೆ 3 ನೇ ಸುತ್ತಿನಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಮತ ಎಣಿಕೆ ಸ್ಥಗಿತ.

9:47 AM IST:

5ಸುತ್ತಿನಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ.

ಹಿರೇಕೆರೂರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ 8905   ಮತಗಳ ಮುನ್ನಡೆ.

ರಾಣೆಬೆನ್ನೂರ ಕ್ಷೇತ್ರದಲ್ಲಿ ಬಿಜೆಪಿಯ ಅರುಣಕುಮಾರ್ ಪೂಜಾರ  4790 ಮತಗಳ ಮುನ್ನಡೆ.

9:45 AM IST:

ಕ್ಷೇತ್ರ - ಹೊಸಕೋಟೆ
ಸುತ್ತು - 3
ಬಿಜೆಪಿ - 7626
ಕಾಂಗ್ರೆಸ್ - 5654
ಪಕ್ಷೇತರ - 13134
ಮುನ್ನಡೆ - 5508

9:44 AM IST:

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 6ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯ 

ಬಿಜೆಪಿಯ ವಿಶ್ವನಾಥ್ 15,433

ಕಾಂಗ್ರೆಸ್ ನ ಮಂಜುನಾಥ್ 24,874

ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 13,602

ಕಾಂಗ್ರೆಸ್ ನ ಮಂಜುನಾಥ್ ಗೆ 9,441   ಮತಗಳ ಮುನ್ನಡೆ

9:43 AM IST:

ಯಲ್ಲಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಜೆಡಿಎಸ್ ಗಿಂತ ನೋಟಾಕ್ಕೆ ಹೆಚ್ಚು ಮತ. 7 ಅಭ್ಯರ್ಥಿಗಳಲ್ಲಿ 5 ಅಭ್ಯರ್ಥಿಗಳ ಠೇವಣಿ ಹೋಗುವ ಸಾಧ್ಯತೆ.

ಅಥಣಿ ವಿಧಾನಸಭೆ ಕ್ಷೇತ್ರ.........
ಮಹೇಶ್ ಕುಮಠಳ್ಳಿ(ಬಿಜೆಪಿ)
6457
ಗಜಾನನ ಮಂಗಸೂಳಿ(ಕಾಂಗ್ರೆಸ್)
2642

9:37 AM IST:

ಗೋಕಾಕ್, 4ನೇ ಸುತ್ತಿನ ಮತ ಎಣಿಕೆ ಮುಕ್ತಾಯ..

ಬಿಜೆಪಿಯ ರಮೇಶ್ ಜಾರಕಿಹೊಳಿ: 4395

ಕಾಂಗ್ರೆಸ್‌ನ ಲಖನ್ ಜಾರಕಿಹೊಳಿ-4395

9:29 AM IST:

ಬಿ.ಸಿ.ಪಾಟೀಲ್‌ ಮತ ಎಣಿಕೆಯಲ್ಲಿ ಮುಂದಿದ್ದು, ಆಗಲೇ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ.

9:22 AM IST:

ಕೆ.ಆರ್.ಪೇಟೆಯಲ್ಲಿ ಮತ ವಿವರ ಹೀಗಿದೆ...


ಚಂದ್ರಶೇಖರ್ 6012 (Cong)
ದೇವರಾಜು 9841 ( JDS)
ನಾರಾಯಣಗೌಡ 9429 (BJP)
ಮುನ್ನಡೆ ಅಂತರ 412

9:16 AM IST:

ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಜವರಾಯಿಗೌಗ 13,760
ಸೋಮಶೇಖರ್ 11,669
ನಾಗರಾಜ್ 1059
ನೋಟಾ 213
ಎರಡನೇ ಸುತ್ತಿನಲ್ಲೂ ಜೆಡಿಎಸ್ ಮುನ್ನಡೆ

9:07 AM IST:

ಕಾಗವಾಡ..  ಮೂರನೆಯ  ಸುತ್ತಿನಲ್ಲಿ  ಬಿಜೆಪಿಯ ಶ್ರೀಮಂತ ಪಾಟೀಲ್‌ಗೆ ಮುನ್ನಡೆ.

ಮೂರನೆಯ ಸುತ್ತಿನಲ್ಲಿ 5136 ಬಿಜೆಪಿ  ಅಭ್ಯರ್ಥಿ ಪಡೆದ ಮತಗಳು...

ಮೂರನೇ ಸುತ್ತಿನಲ್ಲಿ  4708 ಮತಗಳ ಮುನ್ನಡೆ

 

 

9:05 AM IST:

ಹುಣಸೂರಿನ ಹಳ್ಳಿ ಹಕ್ಕಿ ವಿಶ್ವನಾಥ್ ಹಾಗೂ ಜೆಡಿಎಸ್ ಭದ್ರ ಕೋಟೆಯಾದ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಬಿಜೆಪಿಯ ಕೆ.ಸಿ.ನಾರಾಯಣ ಗೌಡ ಹಿಂದಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. 

9:01 AM IST:

ಹಿರೇಕೆರೂರು ಹಾಗೂ ಗೋಕಾಕ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಬಿ.ಸಿ.ಪಾಟೀಲ್ ಹಾಗೂ ರಮೇಶ್ ಜಾರಕಿಕೊಳ್ಳಿ ಆರಂಭದ ಅಂತರ ಕಾಯ್ದುಕೊಂಡಿದ್ದು, ಪ್ರತಿಸ್ಪರ್ಧಿಗಳಿಗಿಂತ ಮುಂದಿದ್ದಾರೆ. ಆಗಲೇ ಸಂಭ್ರಮ ಆಚರಿಸಿಕೊಳ್ಳಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. 

9:00 AM IST:

ರಾಣಿಬೆನ್ನೂರಿನಲ್ಲಿ ಬಿಜೆಪಿ ಮುನ್ನಡೆ.
ಬಿಜೆಪಿಯ ಅರುಣಕುಮಾರಗೆ 4611
ಕೋಳಿವಾಡ 4149

8:59 AM IST:

ಉತ್ತರ ಕನ್ನಡ ಶಿರಸಿ: ಯಲ್ಲಾಪುರ ಉಪಚುನಾವಣಾ ಮತ ಎಣಿಕೆ. ಯಲ್ಲಾಪುರ ಮುಂಡಗೋಡು ವಿಧಾನಸಭಾ ಕ್ಷೇತ್ರದ 4 ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 

ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮುನ್ನಡೆ.  8102 ಮತಗಳ ಮುನ್ನಡೆಯಲ್ಲಿ ಹೆಬ್ಬಾರ್. 
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗಿಂತ 8102 ಮತಗಳ ಮುನ್ನಡೆ

ಶಿವರಾಮ್ ಹೆಬ್ಬಾರ್ - 17951

ಭೀಮಣ್ಣ ನಾಯ್ಕ - 9849

ಚೈತ್ರಾ ಗೌಡ - 357

8:58 AM IST:

ಚಿಕ್ಕಬಳ್ಳಾಪುರದಲ್ಲಿಯೂ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್‌ಗೆ ಮುನ್ನಡೆ

8:56 AM IST:

ಮೊದಲಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಬಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಹೊಸಕೋಟೆಯಲ್ಲಿ ತುಸು ಹಿನ್ನಡೆ. ಎಂಟಿಬಿ ನಾಗರಾಜ್‌ಗೆ ಮುನ್ನಡೆ

8:54 AM IST:

ಹಿರೇಕೆರೂರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್  5071
ಕಾಂಗ್ರೆಸ್ ಬನ್ನಿಕೋಡಗೆ 2883

8:52 AM IST:

ಯಲ್ಲಾಪುರ ಉಪಚುನಾವಣಾ ಮತ ಎಣಿಕೆ. 

3ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮುನ್ನಡೆ.  5918 ಮತಗಳ ಮುನ್ನಡೆಯಲ್ಲಿ ಹೆಬ್ಬಾರ್.

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗಿಂತ 5918 ಮತಗಳ ಮುನ್ನಡೆ

ಶಿವರಾಮ್ ಹೆಬ್ಬಾರ್ - 13994

ಭೀಮಣ್ಣ ನಾಯ್ಕ - 8076

ಚೈತ್ರಾ ಗೌಡ - 279

8:45 AM IST:

ಉತ್ತರ ಕನ್ನಡದ ಯಲ್ಲಾಪುರದಲ್ಲಿ ಎರಡನೆ ಸುತ್ತಿನ ಮತ ಎಣಿಕೆ ಮುಕ್ತಾಯ.

ಶಿವರಾಮ ಹೆಬ್ಬಾರ್- ಬಿಜೆಪಿ 9628 ( 5004 ಮತಗಳ ಅಂತರದಿಂದ ಮುನ್ನಡೆ)

ಭೀಮಣ್ಣ ನಾಯ್ಕ- 4624 ಕಾಂಗ್ರೆಸ್ 

ಚೈತ್ರಾ ಗೌಡ- ಜೆಡಿಎಸ್ 194

8:43 AM IST:

ಹುಣಸೂರಿನಲ್ಲಿ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಹೀಗಿದೆ ಲೆಕ್ಕಚಾರ... 

ಕಾಂಗ್ರೆಸ್ - 4707
ಬಿಜೆಪಿ - 3855
ಜೆಡಿಎಸ್ - 1871

8:40 AM IST:

ಬೆಳಗಾವಿಯ ಗೋಕಾಕ್ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಿಕಿಹೊಳಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ವಿರುದ್ಧ 2 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. 

8:37 AM IST:

ಕಾರವಾರ, ಉತ್ತರಕನ್ನಡ ಪೋಸ್ಟಲ್ ಮತ ಎಣಿಕೆ

ಒಟ್ಟು 11 ಪೋಸ್ಟಲ್ ಮತಗಳು. 8 ಮತಗಳು ರಿಜೆಕ್ಟ್. 2 ಮತಗಳು ಬಿಜೆಪಿ ಪಾಲಿಗೆ.

8:36 AM IST:

ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ: ಕೆ.ಆರ.ಪೇಟೆಯಲ್ಲಿ ಜೆಡಿಎಸ್ ಮುನ್ನಡೆ. 17 ಮತಗಳ ಮುನ್ನಡೆ.

ಗೋಕಾಕ್‌ ಹಾಗೂ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ.

8:32 AM IST:

ಮತ ಎಣಿಕಗೆ ಮುನ್ನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶರತ್ ಬಚ್ಚೇಗೌಡ

ಶರತ್ ಹೇಳಿದ್ದಿಷ್ಟು

8:19 AM IST:

13 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್, ಹೊಸಕೋಟೆಯಲ್ಲಿ ಸ್ವತಂತ್ರ ಅಭ್ಯರ್ಥಿ ಮುನ್ನಡೆ.

 

Counting of votes in Karnataka to begin from 8 am today, stakes high for BJP

Read @ANI Story | https://t.co/LeQoiep0fD pic.twitter.com/71y5tSQL00

— ANI Digital (@ani_digital) December 9, 2019

8:08 AM IST:

ಎಲ್ಲೆಡೆ ಮತ ಎಣಿಕೆ ಆರಂಭವಾಗಿದ್ದು, ಶಿವಾಜಿನಗರ ಹೊರತು ಪಡಿಸಿ ಉಳಿದ 14 ಕೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್ ಎಲ್ಲಿಯೂ ಖಾತೆ ತೆಗೆಯುವ ಸೂಚನೆ ಕಾಣಿಸುತ್ತಿಲ್ಲ. 

8:03 AM IST:

15 ವಿಧಾನಸಭಾ ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದ್ದು, ಹುಣಸೂರು ಹಾಗೂ ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. ಉಳಿದೆಡೆ ಬಿಜೆಪಿ ಅಭ್ಯರ್ಥಿಗಳು ಮುಂದಿದ್ದಾರೆ. 

7:59 AM IST:

ಹುಣಸೂರಲ್ಲಿ ಕಾಂಗ್ರೆಸ್, ಬೆಳಗಾವಿಯಲ್ಲಿ ರಮೇಶ್ ಜಾರಿಕೊಳೆ ಮುನ್ನಡೆ, ಎಲ್ಲೆಡೆ ಮತ ಎಣಿಕೆ ಆರಂಭ.

9:18 AM IST:

ಮತ ಎಣಿಕೆ ಇನ್ನೇನು ಆರಂಭವಾಗಲಿದ್ದು, ಬೆಂಗಳೂರಿನ ಮತ ಎಣಿಕೆಗೆ ಬಿಗಿ ಭದ್ರತೆ ಹೀಗಿದೆ.


 

Counting of votes for Karnataka by-elections to take place today. Visuals from a counting centre in Bengaluru. pic.twitter.com/NlqlKdx707

— ANI (@ANI) December 9, 2019

6:47 AM IST:

ಗೆಲ್ಲುವ ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ಸುಕರಾಗಿದ್ದಾರೆ. ಆದರೆ, ಸಂಪುಟ ಪುನಾರಚಿಸುತ್ತಾರೋ, ವಿಸ್ತಾರಣೆಯಾಗುತ್ತೋ?

ಪುನಾರಚನೆಯೋ, ವಿಸ್ತರಣೆಯೋ?

6:46 AM IST:

ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, 11ರ ಹೊತ್ತಿಗೆ ಬಿಎಸ್‌ವೈ ಸರಕಾರದ ಭವಿಷ್ಯದ ಬಗ್ಗೆ ಚಿತ್ರಣ ಸಿಗಲಿದೆ. ಎಲ್ಲೆಲ್ಲಿ ನಡೆಯುತ್ತೆ ಮತ ಎಣಿಕೆ.

ಎಲ್ಲೆಲ್ಲಿ ಮತ ಎಣಿಕೆ

7:54 AM IST:

ಕೆ.ಆರ್.ಪೇಟೆ ಉಪ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಂ ತೆರೆದ ಅಧಿಕಾರಿಗಳು, ಸಿಬ್ಬಂದಿ. ಅಭ್ಯರ್ಥಿಗಳ ಪರ ಚುನಾವಣಾ ಏಜೆಂಟ್ ಸಮ್ಮುಖದಲ್ಲಿ ಲಾಕ್ ಓಪನ್.