Asianet Suvarna News Asianet Suvarna News

ಅಟಲ್ ಅಮರ: ಕರುನಾಡ ನಂಟು!

ಅಟಲ್‌ಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ! ಅಟಲ್ ಕರುನಾಡಿನ ನಂಟಿನ ಮೆಲುಕು! ಫೋಟೋಗಳಲ್ಲಿ ಅಟಲ್ ಅಜರಾಮರ!
 

ಬೆಂಗಳೂರು(ಆ.17): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ ಎಂಬುದು ನಿಜವಾದರೂ, ಅವರ ವ್ಯಕ್ತಿತ್ವ, ರಾಜಕೀಯ ಶಿಸ್ತು ಮತ್ತು ಆತ್ಮೀಯತೆ ಎಂದೆಂದಿಗೂ ಭಾರತೀಯರ ಮನದಾಳದಲ್ಲಿ ಅಚ್ಚಳಿಯದೇ ಉಳಿಯುವುದು ಖಚಿತ.

ಮಾಜಿ ಪ್ರಧಾನಿ ಅಟಲ್ ಅವರಿಗೂ ಮತ್ತು ಕನಾರ್ನಾಟಕ್ಕೂ ಅವಿನಾಭಾವ ಸಂಬಂಧ. ಅಟಲ್ ಕನಾರ್ನಾಟಕಕ್ಕೆ ಬರುತ್ತಾರೆ ಎಂದರೆ ಪಕ್ಷಬೇಧ ಮರೆತು ಎಲ್ಲರೂ ಅವರನ್ನು ಸ್ವಾಗತಿಸುತ್ತಿದ್ದರು. ಎಲ್ಲರೊಂಧಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅಟಲ್, ಕರ್ನಾಟಕದ ಅತಿಥಿ ಸತ್ಕಾರಕ್ಕೆ ಮಾರು ಹೋದವರು.

ಇಂದು ಅಟಲ್ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಮತ್ತು ಕರ್ನಾಟಕದ ನಂಟಿನ ನೆನಪು ಮಾತ್ರ ಅಜರಾಮರ..