Asianet Suvarna News Asianet Suvarna News

ಸಾಕು ನಾಯಿಯ ಕಚ್ಚಿತೆಂದು ಬೀದಿ ನಾಯಿಯ ಬಡಿದು ಕೊಂದ ಕುಡುಕ

ದೊಣ್ಣೆಯಿಂದ ಬಡಿದು ಬೀದಿ ನಾಯಿ ಹತ್ಯೆ ಮಾಡಿದ ಯುವಕ| ಬೆಂಗಳೂರಿನ ಚಿಕ್ಕಬಾಣವಾರದಲ್ಲಿ ನಡೆದ ಘಟನೆ| ಯುವಕನನ್ನು ವಶಕ್ಕೆ ಪಡೆದ ಸೋಲದೇವಹನಹಳ್ಳಿ ಠಾಣೆ ಪೊಲೀಸರು|

Drunken Man Killed Street Dog in Bengaluru
Author
Bengaluru, First Published Sep 2, 2020, 7:48 AM IST

ಬೆಂಗಳೂರು(ಸೆ.02): ಚಿಕ್ಕಬಾಣವಾರದಲ್ಲಿ ಪಾನಮತ್ತನಾಗಿದ್ದ ಯುವಕನೊಬ್ಬ ದೊಣ್ಣೆಯಿಂದ ಬಡಿದು ಬೀದಿ ನಾಯಿಯನ್ನು ಹತ್ಯೆ ಮಾಡಿದ್ದಾನೆ.

ಸಾಕು ನಾಯಿಯನ್ನು ಹೊರಗೆ ಕರೆತಂದಾಗ ಬೀದಿ ನಾಯಿಯೊಂದು ಸಾಕಿದ ನಾಯಿಯನ್ನು ಕಚ್ಚಿತ್ತು. ಇದರಿಂದ ಯುವಕ ಬೀದಿ ನಾಯಿಯ ಮೇಲೆ ಆಕ್ರೋಶಗೊಂಡಿದ್ದ. ಮಂಗಳವಾರ ಬೆಳಗ್ಗೆ ಪಾನಮತ್ತನಾಗಿ ಬಂದು ಬೀದಿಯಲ್ಲಿದ್ದ ನಾಯಿಯನ್ನು ದೊಣ್ಣೆಯಿಂದ ಮನಸೋ ಇಚ್ಛೆ ಹೊಡೆದಿದ್ದಾನೆ. ಇದರಿಂದ ರಸ್ತೆಯಲ್ಲೇ ನಾಯಿ ಮೃತಪಟ್ಟಿದ್ದು, ಬಳಿಕ ಅದನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ. ಪ್ರಾಣಿ ದಯಾ ಸಂಘದವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೋಲದೇವಹನಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮಾಜಿ ಶಾಸಕ ಮುನಿರತ್ನ ವಿರುದ್ಧ ಅವಹೇಳನಾಕಾರಿ ಪೋಸ್ಟ್‌: ಓರ್ವನ ಬಂಧನ

ನಾಯಿ ಹತ್ಯೆ ಮಾಡಿದ ಸ್ಥಳದಲ್ಲಿನ ಸಿಸಿಟಿವಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಯುವಕನ ಬಗ್ಗೆ ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ. ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios