Asianet Suvarna News Asianet Suvarna News

ಕರಾವಳಿ, ಮಲೆನಾಡಲ್ಲಿ ಕುಂಭ ದ್ರೋಣ ಮಳೆ, ಸಮಗ್ರ ವರದಿ

ಇದು ನಿಸರ್ಗದ ಕರುಣೆಯೋ, ಮುನಿಸೋ ಗೊತ್ತಿಲ್ಲ. ಕಳೆದೊಂದು ವಾರದಿಂದ ನೆರೆ ರಾಜ್ಯ ಹಾಗೂ ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಲೆನಾಡಂತೂ ತನ್ನ ಗತಕಾಲದ ವೈಭವಕ್ಕೆ ಮರಳಿದೆ. ಕಾನೂರು ಹೆಗ್ಗಡತಿ- ಮಲೆಗಳಲ್ಲಿ ಮದುಮಗಳು ಕಾದ೦ಬರಿಗಳಲ್ಲಿ ಕುವೆ೦ಪು ವರ್ಣಿಸುವ ಮಳೆಗಾಲದ ಚಿತ್ರಣ ಅಕ್ಷರಶಃ ಕಣ್ಣ ಮು೦ದಿದೆ. ತು೦ಗೆ ಕ್ಷಣ ಕ್ಷಣಕ್ಕೂ ತು೦ಬಿ ರುದ್ರ-ರಮಣೀಯವಾಗಿ ಹರಿಯುತ್ತಿದ್ದಾಳೆ. ಇಡೀ ಮಲೆನಾಡು ಧೋ ಎ೦ದು ಸುರಿಯುತ್ತಿರುವ ವರ್ಷಧಾರೆಯ ಶೃತಿಗೆ ಧ್ಯಾನಸ್ಥವಾದ೦ತಿದೆ! ಇತ್ತ ಶರಾವತಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಭರ್ತಿಯಾದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ರಾಜ್ಯದೆಲ್ಲೆಡೆಯಿಂದ ಓದುಗರು ಕಳುಹಿಸಿದ ವೀಡಿಯೋ, ಮಳೆಯ ಚಿತ್ರಣವಿದು.

ಇದು ನಿಸರ್ಗದ ಕರುಣೆಯೋ , ಮುನಿಸೋ ಗೊತ್ತಿಲ್ಲ. ಕಳೆದೊಂದು ವಾರದಿಂದ ನೆರೆ ರಾಜ್ಯ ಹಾಗೂ ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಲೆನಾಡಂತೂ ತನ್ನ ಗತಕಾಲದ ವೈಭವಕ್ಕೆ ಮರಳಿದೆ.  ಕಾನೂರು ಹೆಗ್ಗಡತಿ- ಮಲೆಗಳಲ್ಲಿ ಮದುಮಗಳು ಕಾದ೦ಬರಿಗಳಲ್ಲಿ ಕುವೆ೦ಪು ವರ್ಣಿಸುವ ಮಳೆಗಾಲದ ಚಿತ್ರಣ ಅಕ್ಷರಶಃ ಕಣ್ಣ ಮು೦ದಿದೆ. ತು೦ಗೆ ಕ್ಷಣ ಕ್ಷಣಕ್ಕೂ ತು೦ಬಿ ರುದ್ರ-ರಮಣೀಯವಾಗಿ ಹರಿಯುತ್ತಿದ್ದಾಳೆ. ಇಡೀ ಮಲೆನಾಡು ಧೋ ಎ೦ದು ಸುರಿಯುತ್ತಿರುವ ವರ್ಷಧಾರೆಯ ಶೃತಿಗೆ ಧ್ಯಾನಸ್ಥವಾದ೦ತಿದೆ! ಇತ್ತ ಶರಾವತಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಭರ್ತಿಯಾದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ರಾಜ್ಯದೆಲ್ಲೆಡೆಯಿಂದ ಓದುಗರು ಕಳುಹಿಸಿದ ವೀಡಿಯೋ, ಮಳೆಯ ಚಿತ್ರಣವಿದು.