ನಿತ್ಯಾನಂದನಿಗೆ ವರವಾದ ಕೊರೋನಾ ವೈರಸ್ ಭೀತಿ!
ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಮುಂದೂಡಿದ ಕೋರ್ಟ್| ನಿತ್ಯಾನಂದನಿಗೆ ವರವಾದ ಕೊರೋನಾ ಭೀತಿ
ರಾಮನಗರ(ಮಾ.24): ಬಿಡದಿಯ ನಿತ್ಯಾನಂದ ಸ್ವಾಮಿ ವಿರುದ್ಧದ ಭಕ್ತೆ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಜಿಲ್ಲಾ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊರೋನಾ ವೈಸರ್ ಭೀತಿ ಹಿನ್ನೆಲೆಯಲ್ಲಿ ಏ.15ಕ್ಕೆ ಮುಂದೂಡಿದೆ.
ದೇಶಾದ್ಯಂತ ನಿತ್ಯಾನಂದಸ್ವಾಮಿ ಹೆಸರಿನಲ್ಲಿರುವ ಚರ-ಸ್ಥಿರ ಆಸ್ತಿಯ ವಿವರ ಸಂಗ್ರಹಿಸುವಂತೆ ನ್ಯಾಯಾಲಯ ಮಾ.4ರಂದು ಸಿಐಡಿ ಪೊಲೀಸರಿಗೆ ಆದೇಶಿಸಿ ಪ್ರಕರಣದ ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿತ್ತು.
ಆದರೀಗ ವೈರಸ್ ಭೀತಿ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಎಲ್ಲಾ ವಿಚಾರಣೆಗಳನ್ನು ಸ್ಥಗಿತಗೊಳಿಸಿರುವುದರಿಂದ ಪ್ರಕರಣವನ್ನು ಮುಂದೂಡಿದೆ.