Asianet Suvarna News Asianet Suvarna News

ಸಿದ್ದು ಸಿಟ್ಟು, ಗೌಡರ ಪಟ್ಟು: ಮೈತ್ರಿಗಿಲ್ಲ ಖಾತ್ರಿ!

ಸಿದ್ದುಗೇಕೆ ಕುಮಾರಸ್ವಾಮಿ ಮೇಲೆ ಸಿಟ್ಟು?! ಸಿದ್ದು ಸಿಟ್ಟು ತಣಿಸಲು ಗೌಡರ ಪ್ಲ್ಯಾನ್! ದೋಸ್ತಿಗಳ ನಡುವೆ ಪೈಪೋಟಿ ಏಕೆ?

ಬೆಂಗಳೂರು(ಆ.5): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಿಟ್ಟಿಗೆ ಕಾರಣವೇನು?. ಅದನ್ನು ತಣ್ಣಗಾಗಿಸಲು ಗೌಡರ ಹಿಡಿದಿರುವ ಪಟ್ಟು ಏನು?. ಇಡೀ ರಾಜ್ಯವನ್ನು ಕಾಡುತ್ತಿರುವ ಈ ಕೌತುಕಕ್ಕೆ ಇಲ್ಲಿದೆ ಉತ್ತರ.

ಅದಕ್ಕಿಂತ ಹೆಚ್ಚಾಗಿ ಈ ಇಬ್ಬರು ನಾಯಕರ ನಡುವಿನ ವೈಮನಸ್ಸು ಸಮ್ಮಿಶ್ರ ಸರ್ಕಾರಕ್ಕೆ ಹೇಗೆ ಡ್ಯಾಮೇಜ್ ಮಾಡಬಹುದು ಎಂಬುದೇ ಸದ್ಯದ ಕುತೂಹಲವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಕಟ್ಟಿ ಹಾಕುವ ಉದ್ದೇಶದಿಂದ ರಚಿತವಾದ ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ.

ರಾಜ್ಯ ಸಮ್ಮಿಶ್ರ ಸರ್ಕಾರದ ಯಶಸ್ಸು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳ ಒಗ್ಗಟ್ಟಿಗೆ ಕಾರಣವಾಗಲಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಗ್ಗಟ್ಟಿನ ಬಲ ಪ್ರದರ್ಶನ ಮಾಡ್ತಾರಾ ಎಂಬುದೇ ಸದ್ಯದ ಪ್ರಶ್ನೆ.