ಸಂಪುಟ ವಿಸ್ತರಣೆ: ಜಾತಿ, ಹಿರಿತನದ ಒಗ್ಗರಣೆ!
ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್! ಮಂತ್ರಿಗಿರಿಗೆ ಶುರುವಾಯ್ತು ಲಾಬಿ! ಜಾತಿ, ಹಿರಿತನದ ಮೊರೆ ಹೋದ ಶಾಸಕರು! ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನಕ್ಕಾಗಿ ಲಾಬಿ! ಉತ್ತರ ಕರ್ನಾಟಕಕ್ಕೆ ಸಿಗುವುದೇ ಪ್ರಾಶಸ್ತ್ಯ?
ಬೆಂಗಳೂರು(ಸೆ.1): ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ, ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಜಾತಿವಾರು, ಹಿರಿತನದ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಶಾಸಕರು ಸಿದ್ದವಾಗುತ್ತಿದ್ದಾರೆ.
ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಬೆಂಗಳೂರು ಶಾಸಕರ ಒತ್ತಡ ಹೇರಲು ಯೋಜನೆ ರೂಪಿಸಿದ್ದು, ಉತ್ತರ ಕರ್ನಾಟಕಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ನೀಡಲು ಕೂಡ ಕೆಲವು ಶಾಸಕರ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಶಾಸಕರ ನಿಯೋಗದಿಂದ ಸಿದ್ಧರಾಮಯ್ಯ ಮತ್ತು ವೇಣುಗೋಪಾಲ್ ಗೆ ಈ ಕುರಿತು ಮನವಿ ಮಾಡಲಾಗಿದ್ದು, ಮುಸ್ಲಿಂ ಸಮುದಾಯದ ಆಕಾಂಕ್ಷಿಗಳಿಂದಲೂ ಕೇಂದ್ರ ನಾಯಕರ ಭೇಟಿಗೆ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ ಕರಾವಳಿ ಭಾಗದ ನಾಯಕರಿಂದಲೂ ಸಚಿವ ಸ್ಥಾನಕ್ಕೆ ಲಾಬಿ ಶುರುವಾಗಿದ್ದು, ಕಳೆದ ಬಾರಿಯ ಅವಕಾಶ ವಂಚಿತ ಜಿಲ್ಲೆಗಳ ನಾಯಕರಿಂದ ಹೆಚ್ಚಿದ ಒತ್ತಡ ಬರುತ್ತಿದೆ ಎನ್ನಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..