Asianet Suvarna News Asianet Suvarna News

ಪೌರತ್ವ ಜಾಗೃತಿಗೆ ಬಿಜೆಪಿ ಮನೆಮನೆ ಅಭಿಯಾನ ಶುರು

ಇಂದಿನಿಂದ ಬಿಜೆಪಿ ಮುಖಂಡರು ರಾಜ್ಯದಲ್ಲಿ ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ನಡೆಸುತ್ತಾರೆ. 12 ಕಡೆ ಅಭಿಯಾನ ಆರಂಭ ಮಾಡಲಿದೆ. 

BJP Will Start Campaign For CAA in Karnataka
Author
Bengaluru, First Published Jan 5, 2020, 8:14 AM IST

ಬೆಂಗಳೂರು [ಜ.05]:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ರಾಜ್ಯ ಬಿಜೆಪಿಯು ಮನೆ-ಮನೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ.

ದೇಶಾದ್ಯಂತ ನಡೆಯಲಿರುವ ಈ ಅಭಿಯಾನಕ್ಕೆ ರಾಜ್ಯದ 12 ಕಡೆ ಜ.5ರ ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಬೆಂಗಳೂರಿನ ವಸಂತನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ತಿಳಿಸಿದ್ದಾರೆ.

ಪೌರತ್ವ ಕಾಯ್ದೆಗೆ ವಿದೇಶಗಳಲ್ಲೂ ಬೆಂಬಲ ಕ್ರೋಡೀಕರಣ...

ಈ ಕೆಳಗಿನ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲಿ, ಯಾರಿಂದ ಚಾಲನೆ:

ಬೆಂಗಳೂರು ಕೇಂದ್ರ- ಬಿ.ಎಸ್‌.ಯಡಿಯೂರಪ್ಪ (ವಸಂತನಗರ), ಹುಬ್ಬಳ್ಳಿ-ಧಾರವಾಡ- ಪ್ರಹ್ಲಾದ್‌ ಜೋಶಿ (ಧಾರವಾಡ ಪಶ್ಚಿಮ), ಬೆಂಗಳೂರು ಉತ್ತರ- ಡಿ.ವಿ.ಸದಾನಂದಗೌಡ (ದಾಸರಹಳ್ಳಿ), ಬೆಂಗಳೂರು ದಕ್ಷಿಣ-ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ (ಬಸವನಗುಡಿ), ಬಳ್ಳಾರಿ- ಲಕ್ಷ್ಮಣ ಸವದಿ (ಹೊಸಪೇಟೆ), ಗದಗ- ಗೋವಿಂದ ಕಾರಜೋಳ, ಧಾರವಾಡ-ಜಗದೀಶ್‌ ಶೆಟ್ಟರ್‌ (ಹುಬ್ಬಳ್ಳಿ ಪೂರ್ವ), ಶಿವಮೊಗ್ಗ- ಕೆ.ಎಸ್‌.ಈಶ್ವರಪ್ಪ (ಶಿವಮೊಗ್ಗ ನಗರ), ತುಮಕೂರು- ಆರ್‌.ಅಶೋಕ (ತುಮಕೂರು ನಗರ), ಮೈಸೂರು- ಅರವಿಂದ ಲಿಂಬಾವಳಿ (ಮೈಸೂರು ನಗರ), ಚಿಕ್ಕಮಗಳೂರು- ಸಿ.ಟಿ.ರವಿ (ಚಿಕ್ಕಮಗಳೂರು ನಗರ), ಬೆಂಗಳೂರು ಕೇಂದ್ರ- ವಿ.ಸೋಮಣ್ಣ (ಗೋವಿಂದರಾಜನಗರ), ಚಿತ್ರದುರ್ಗ- ಶಶಿಕಲಾ ಜೊಲ್ಲೆ (ಚಿತ್ರದುರ್ಗ ನಗರ), ಕೊಪ್ಪಳ- ಸಿ.ಸಿ.ಪಾಟೀಲ್‌ (ಕೊಪ್ಪಳ ನಗರ), ದಕ್ಷಿಣ ಕನ್ನಡ - ಕೋಟ ಶ್ರೀನಿವಾಸ ಪೂಜಾರಿ (ಮಂಗಳೂರು), ಚಿಕ್ಕಬಳ್ಳಾಪುರ- ಶೋಭಾ ಕರಂದ್ಲಾಜೆ, ಹಾವೇರಿ- ಶಿವಕುಮಾರ್‌ ಉದಾಸಿ (ಹಾವೇರಿ ನಗರ), ಬಾಗಲಕೋಟೆ- ಪಿ.ಸಿ.ಗದ್ದಿಗೌಡರ (ಬಾಗಲಕೋಟೆ ನಗರ), ವಿಜಯಪುರ- ರಮೇಶ್‌ ಜಿಗಜಿಣಗಿ (ವಿಜಯಪುರ ನಗರ), ಬೀದರ್‌- ಭಗವಂತ ಖೂಬಾ (ಬೀದರ್‌ ನಗರ), ಚಿಕ್ಕೋಡಿ-ಮಹಾಂತೇಶ್‌ ಕವಟಗಿ (ಚಿಕ್ಕೋಡಿ ನಗರ) ಚಾಲನೆ ನೀಡಲಿದ್ದಾರೆ.

ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್‌ ಪೌರತ್ವ?...

"

Follow Us:
Download App:
  • android
  • ios