ಇಬ್ಬರು ದಿಗ್ಗಜರನ್ನು ಕಳೆದುಕೊಂಡ ದೇಶ: ನುಡಿನಮನ ಸಲ್ಲಿಸಿದ ಕೊಹ್ಲಿ
ಆಗಸ್ಟ್ 15ರಂದು ವಾಡೇಕರ್ ಮರಣ ಹೊಂದಿದರೆ, ವಾಜಪೇಯಿ ಆಗಸ್ಟ್ 16ರ ಸಂಜೆ ಏಮ್ಸ್ ಆಸ್ಫತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಇಬ್ಬರು ದಿಗ್ಗಜರು ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಇಬ್ಬರು ದಿಗ್ಗಜರ ನಿಧನಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಂಬನಿ ಮಿಡಿದಿದ್ದಾರೆ.
ಲಾರ್ಡ್ಸ್[ಆ.17]: ಭಾರತ ಕಳೆದೆರಡು ದಿನಗಳಲ್ಲಿ ಇಬ್ಬರು ಮಹಾನ್ ದಿಗ್ಗಜರನ್ನು ಕಳೆದುಕೊಂಡಿದೆ. ಭಾರತ ಏಕದಿನ ತಂಡದ ಮೊದಲ ನಾಯಕ ಅಜಿತ್ ವಾಡೇಕರ್ ಹಾಗೂ ಅಜಾತಶತೃ ಎಂದೇ ಹೆಸರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಳೆದೆರಡು ದಿನಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಆಗಸ್ಟ್ 15ರಂದು ವಾಡೇಕರ್ ಮರಣ ಹೊಂದಿದರೆ, ವಾಜಪೇಯಿ ಆಗಸ್ಟ್ 16ರ ಸಂಜೆ ಏಮ್ಸ್ ಆಸ್ಫತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಇಬ್ಬರು ದಿಗ್ಗಜರು ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಇಬ್ಬರು ದಿಗ್ಗಜರ ನಿಧನಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಂಬನಿ ಮಿಡಿದಿದ್ದಾರೆ.
A sombre day for us as we mourn the loss of former PM Atal Bihari Vajpayee ji and Legendary Indian Captain Ajit Wadekar sir. May your souls rest in peace. India and its millions will always remember you fondly. 🙏🏻
— Virat Kohli (@imVkohli) August 16, 2018
ಭಾರತ ಇಬ್ಬರು ದಿಗ್ಗಜರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಸಾಧನೆಯನ್ನು ಭಾರತ ಯಾವತ್ತಿಗೂ ಸ್ಮರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದು, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-2ರ ಹಿನ್ನಡೆ ಅನುಭವಿಸಿದೆ. ಇದೀಗ ನಾಳೆ[ಶನಿವಾರ] ನಾಟಿಂಗ್’ಹ್ಯಾಮ್’ನಲ್ಲಿ ಮೂರನೇ ಟೆಸ್ಟ್ ಆಡಲಿದೆ.