Asianet Suvarna News Asianet Suvarna News

ಬೆಂಗಳೂರಿನ ಸಾಯ್‌ ಕೇಂದ್ರದ ಕೊಡುಗೆ ಮಹತ್ವದ್ದು: ಕ್ರೀಡಾ ಸಚಿವ ಅನುರಾಗ್ ಠಾಕೂರ್

* ಸಾಯ್‌ನಲ್ಲಿ 2 ಕ್ರೀಡಾ ಹಾಸ್ಟೆ​ಲ್‌​ಗ​ಳು ಲೋಕಾ​ರ್ಪ​ಣೆಗೆ ಸಿದ್ದತೆ
* ಬೆಂಗ​ಳೂ​ರಿ​ನ​ ಸಾಯ್‌ ಕೇಂದ್ರ​ದಲ್ಲಿ ಶೀಘ್ರ​ದಲ್ಲೇ 70 ಕೋಟಿ ರುಪಾಯಿ ವೆಚ್ಚದಲ್ಲಿ ಕ್ರೀಡಾ ಹಾಸ್ಟೆಲ್ ನಿರ್ಮಾಣ
* ಹಲವು ಕ್ರೀಡಾಪಟುಗಳ ಜತೆ ಕೇಂದ್ರ ಕ್ರೀಡಾ ಸಚಿವರು ಮಾತುಕತೆ

Union Sports Minister Anurag Thakur inaugurates sports hall at Sports Authority of India NSSC Bengaluru kvn
Author
First Published Feb 23, 2023, 10:02 AM IST

ಬೆಂಗ​ಳೂ​ರು(ಫೆ.23): ಬೆಂಗ​ಳೂ​ರಿ​ನ​ ಸಾಯ್‌ ಕೇಂದ್ರ​ದಲ್ಲಿ ಶೀಘ್ರ​ದಲ್ಲೇ 70 ಕೋಟಿ ರು. ವೆಚ್ಚ​ದಲ್ಲಿ 630 ಬೆಡ್‌ ವ್ಯವಸ್ಥೆ ಇರುವ 2 ಕ್ರೀಡಾ ಹಾಸ್ಟೆ​ಲ್‌​ಗ​ಳು ಲೋಕಾ​ರ್ಪ​ಣೆ​ಗೊ​ಳ್ಳ​ಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನು​ರಾಗ್‌ ಠಾಕೂ​ರ್‌ ಅವರು ತಿಳಿ​ಸಿ​ದರು.

ಬುಧ​ವಾರ ನಗ​ರದ ಭಾರ​ತೀಯ ಕ್ರೀಡಾ ಪ್ರಾಧಿ​ಕಾ​ರ​(​ಸಾ​ಯ್‌​)ದಲ್ಲಿ ನೂತ​ನ​ವಾಗಿ ನಿರ್ಮಾ​ಣ​ಗೊಂಡ ಬಹು​ ಉ​ಪ​ಯೋಗಿ ಒಳಾಂಗಣ ಹಾಲ್‌​ ಉದ್ಘಾಟಿಸಿದ ಬಳಿಕ ಮಾತ​ನಾ​ಡಿದ ಅವರು, ‘ಬೆಂಗ​ಳೂ​ರಿನ ಸಾಯ್‌ ಕೇಂದ್ರ​ದಲ್ಲಿ ಸದ್ಯ 750 ಬೆಡ್‌ ವ್ಯವಸ್ಥೆ ಇದೆ. ಇನ್ನೆ​ರಡು ತಿಂಗ​ಳಲ್ಲಿ ಬಾಲಕ, ಬಾಲ​ಕಿ​ಯ​ರ ಹಾಸ್ಟೆಲ್‌ಗಳಿಗೆ ಒಟ್ಟು 630 ಹೆಚ್ಚುವರಿ ಬೆಡ್‌ ಸೌಲಭ್ಯ ಸಿಗ​ಲಿದೆ. ಇಲ್ಲಿನ ಕೇಂದ್ರ ಹಲವು 50ಕ್ಕೂ ಹೆಚ್ಚು ಒಲಿಂಪಿ​ಯ​ನ್‌​ಗಳು, 50ಕ್ಕೂ ಹೆಚ್ಚು ಅಂತಾ​ರಾ​ಷ್ಟ್ರೀಯ ಪದಕ ವಿಜೇ​ತ​ರನ್ನು ದೇಶಕ್ಕೆ ನೀಡಿದೆæ’ ಎಂದು ಹೇಳಿ​ದರು.

2014ರಲ್ಲಿ ಕ್ರೀಡೆಗೆ ಬಜೆ​ಟ್‌​ನಲ್ಲಿ 964 ಕೋಟಿ ರುಪಾಯಿ ಅನು​ದಾನ ನೀಡ​ಲಾ​ಗಿತ್ತು. ಈಗ ಅದು 3397 ಕೋಟಿ ರುಪಾಯಿಗೆ ಏರಿ​ಕೆ​ಯಾ​ಗಿದೆ. ಕಳೆದ ಒಂದೂ​ವರೆ ವರ್ಷ​ದಲ್ಲಿ 450ಕ್ಕೂ ಹೆಚ್ಚು ಹೊಸ ಕೋಚ್‌​ಗ​ಳನ್ನು ನೇಮಿ​ಸಿ​ದ್ದೇವೆ. ಕ್ರೀಡಾ ಕ್ಷೇತ್ರದ ಅಭ್ಯು​ದ​ಯಕ್ಕೆ ಶ್ರಮಿ​ಸು​ತ್ತಿ​ರುವ ಪ್ರಧಾ​ನಿ ಮೋದಿಗೆ ಧನ್ಯ​ವಾ​ದ​’ ಎಂದರು. 

ಇದೇ ವೇಳೆ ಅನು​ರಾಗ್‌ ಅವರು ಹಾಕಿ ಪಟು​ಗ​ಳಾದ ಹರ್ಮ​ನ್‌​ಪ್ರೀತ್‌ ಸಿಂಗ್‌, ಮನ್‌​ಪ್ರೀತ್‌ ಸಿಂಗ್‌, ಶ್ರೀಜೇಶ್‌ ಸೇರಿ​ದಂತೆ ಹಲವು ಅಥ್ಲೀ​ಟ್‌​ಗಳು, ಕೋಚ್‌​ಗಳ ಜೊತೆ ಸಮಾ​ಲೋ​ಚನೆ ನಡೆ​ಸಿ​ದರು. ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾರ್ಜ್‌ ಸೇರಿ​ ಸಾಯ್‌ ಕೇಂದ್ರದ ಪ್ರಮು​ಖರು ಪಾಲ್ಗೊಂಡಿ​ದ್ದ​ರು.

ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಐಶ್ವರಿಗೆ ಚಿನ್ನ

ಕೈರೋ: ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತಕ್ಕೆ 4ನೇ ಚಿನ್ನದ ಪದಕ ದೊರೆತಿದೆ. ಪುರುಷರ 50 ಮೀ. ರೈಫಲ್‌ 3 ಪೊಸಿಷನ್ಸ್‌ ವಿಭಾಗದಲ್ಲಿ ಐಶ್ವರಿ ಪ್ರತಾಪ್‌ ಚಿನ್ನ ಜಯಿಸಿದರು. ಫೈನಲ್‌ನಲ್ಲಿ ಆಸ್ಟ್ರಿಯಾದ ಅಲೆಕ್ಸಾಂಡರ್‌ ಶಿಮಿಲ್‌ರ್‍ ವಿರುದ್ಧ 16-6ರಲ್ಲಿ ಜಯಗಳಿಸಿದರು. ಟೂರ್ನಿಯಲ್ಲಿ ಈವರೆಗೂ ಭಾರತ ಒಟ್ಟು 6 ಪದಕ ಜಯಿಸಿದೆ.

ಹಾಕಿ: ಕ್ವಾರ್ಟ​ರಲ್ಲಿ ರಾಜ್ಯ​ಕ್ಕೆ ಇಂದು ಮಧ್ಯಪ್ರದೇಶ ಸವಾ​ಲು

ಕಾಕಿ​ನಾ​ಡ​(​ಆಂಧ್ರ​ಪ್ರ​ದೇ​ಶ): 13ನೇ ಆವೃತ್ತಿ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿ​ಯ​ನ್‌​ಶಿ​ಪ್‌​ನ ಕ್ವಾರ್ಟರ್‌ ಫೈನ​ಲ್‌​ನಲ್ಲಿ ಗುರು​ವಾರ ಕರ್ನಾ​ಟಕ ತಂಡ ಮಧ್ಯ​ಪ್ರ​ದೇ​ಶ ವಿರುದ್ಧ ಸೆಣ​ಸಾ​ಡ​ಲಿದೆ. ‘ಬಿ’ ಗುಂಪಿ​ನ​ಲ್ಲಿದ್ದ ರಾಜ್ಯ ತಂಡ ಗೋವಾ ವಿರುದ್ಧ 10-0, ಚಂಡೀ​ಗಢ ವಿರುದ್ಧ 2-1 ಗೋಲು​ಗ​ಳಿಂದ ಗೆಲುವು ಸಾಧಿಸಿ ಕ್ವಾರ್ಟ​ರ್‌​ಗೇ​ರಿತ್ತು. ಮತ್ತೊಂದೆ​ಡೆ​ ಮಧ್ಯ​ಪ್ರ​ದೇಶ ಆಡಿದ 3 ಪಂದ್ಯ​ಗ​ಳಲ್ಲೂ ಗೆದ್ದು ಕ್ವಾರ್ಟರ್‌ಗೇರಿದೆ. ಈ ಪೈಕಿ ತೆಲಂಗಾಣ ವಿರುದ್ಧ ಬರೋ​ಬ್ಬರಿ 36-0 ಗೋಲು​ಗ​ಳ ಗೆಲುವೂ ಸೇರಿದೆ.

Bengaluru Open: ತಡವಾಗಿ ಬಂದ ಸಿಎಂ ಬೊಮ್ಮಾಯಿ, ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್‌ ಬೋರ್ಗ್‌..!

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ

ಚೆಸ್‌: ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ವಿರುದ್ಧ ಗೆದ್ದ ವಿದಿತ್‌

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಗುಜರಾತಿ, ವಿಶ್ವ ಚಾಂಪಿಯನ್‌ ನಾರ್ವೆಯ ಮ್ಯಾಗ್ನಸ್‌ ಕಾಲ್‌ರ್‍ಸನ್‌ ವಿರುದ್ಧ ಪ್ರೊ ಚೆಸ್‌ ಲೀಗ್‌ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಭಾರತದ ಯುವ ಗ್ರ್ಯಾಂಡ್‌ ಮಾಸ್ಟರ್‌ಗೆ ಹಾಲಿ ವಿಶ್ವ ಚಾಂಪಿಯನ್‌ ವಿರುದ್ಧ ಇದು ಮೊದಲ ಜಯ. ಲೀಗ್‌ನಲ್ಲಿ ವಿದಿತ್‌ ಇಂಡಿಯನ್‌ ಯೋಗಿಸ್‌ ತಂಡದ ಪರ ಆಡುತ್ತಿದ್ದಾರೆ. ಕಾಲ್‌ರ್‍ಸನ್‌ ಕೆನಡಾ ಚೆಸ್‌ಬ್ರಾಹ್‌್ಸ ತಂಡವನ್ನು ಪತ್ರನಿಧಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ನಡೆಯುತ್ತಿರುವ ರಾರ‍ಯಪಿಡ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಬೇರೆ ಬೇರೆ ದೇಶಗಳ ಒಟ್ಟು 16 ತಂಡಗಳು ಪಾಲ್ಗೊಂಡಿವೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ 1.24 ಕೋಟಿ ರು. ಆಗಿದೆ.

Follow Us:
Download App:
  • android
  • ios