ರಣಜಿ ಟ್ರೋಫಿ 2018: ಶುಭಾರಂಭ ಮಾಡಿದ ಕರ್ನಾಟಕ
ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ದಿಟ್ಟ ಹೋರಾಟದ ಮೂಲಕ 3 ಅಂಕ ಪಡೆದಿಕೊಂಡಿದೆ. ವಿದರ್ಭ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಪ್ರದರ್ಶನ ಹೇಗಿತ್ತು? ಇಲ್ಲಿದೆ ಪಂದ್ಯದ ಹೈಲೈಟ್ಸ್.
ನಾಗ್ಪುರ(ನ.15): ಪ್ರಸಕ್ತ ರಣಜಿ ಟೂರ್ನಿಯಲ್ಲಿ ಕರ್ನಾಟಕ ಶುಭಾರಂಭ ಮಾಡಿದೆ. ವಿದರ್ಭ ವಿರುದ್ಧದ ಮೊದಲ ಪಂದ್ಯವನ್ನ ಕರ್ನಾಟಕ ಡ್ರಾ ಮಾಡಿಕೊಂಡರೂ, ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಗಳಿಸಿದೆ.
ಮೊದಲು ಇನ್ನಿಂಗ್ಸ್ನಲ್ಲಿ ವಿದರ್ಭ 3017 ರನ್ಗೆ ಆಲೌಟ್ ಆಗಿತ್ತು. ಕರ್ನಾಟಕ ಪರ ಜೆ ಸುಚಿತ 4 ಹಾಗೂ ಅಭಿಮನ್ಯು ಮಿಥುನ್ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇದಕ್ಕುತ್ತರವಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 378 ರನ್ ಸಿಡಿಸಿತು. ಈ ಮೂಲಕ 71 ರನ್ ಮುನ್ನೆಡೆ ಪಡೆದುಕೊಂಡಿತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಮತ್ತೆ ಜೆ ಸುಚಿತ್ ದಾಳಿಗೆ ಕುಸಿದ ವಿದರ್ಭ 228 ರನ್ಗೆ ಆಲೌಟ್ ಆಯಿತು. ಸುಚಿತ್ 5 ವಿಕೆಟ್ ಕಬಳಿಸಿದರು. ಗೆಲುವಿಗೆ 158 ರನ್ ಟಾರ್ಗೆಟ್ ಪಡೆದ ಕರ್ನಾಟಕ ನಾಲ್ಕನೇ ದಿನದಾಟದಲ್ಲಿ 6 ವಿಕೆಟ್ ನಷ್ಟಕ್ಕೆ 76 ರನ್ ಸಿಡಿಸಿತು. ಈ ಮೂಲಕ ಪಂದ್ಯವನ್ನ ಡ್ರಾ ಮಾಡಿಕೊಂಡಿತು.