ಕ್ರಿಕೆಟ್ ಪಂದ್ಯದ ವೇಳೆ ಗುಂಡಿನ ದಾಳಿ- ಐವರು ಗಂಭೀರ ಗಾಯ
ಪ್ರತಿಭೆಗೆ ವೇದಿಕೆಯಾಗಬೇಕಿದ್ದ ಕ್ರಿಕೆಟ್ ಮೈದಾನ ಗುಂಡಿನ ದಾಳಿಗೆ ತುತ್ತಾಗಿರೋದು ನಿಜಕ್ಕು ದುರಂತ. ಎರಡು ಗುಂಪಗಳ ನಡುವಿನ ದಾಳಿಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏನಿದು ಪ್ರಕಣ? ಇಲ್ಲಿದೆ ವಿವರ.
ನವಹೆದಲಿ(ಆ.30): ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ ಅದು ಧರ್ಮವಾಗಿ ಆವರಿಸಿಬಿಟ್ಟಿದೆ. ಆದರೆ ಕೆಲವು ಬಾರಿ ಕ್ರಿಕೆಟ್ ಮೈದಾನದಲ್ಲಿನ ಘಟನೆಗಳು ಜಂಟಲ್ಮೆನ್ ಆಟಕ್ಕೆ ಮಸಿಬಳಿಯುತ್ತದೆ. ಇದೀಗ ಗ್ರೇಟರ್ ನೋಯ್ಡಾದಲ್ಲಿನ ಘಟನೆ ಭಾರತದ ಕ್ರಿಕೆಟ್ಗೆ ಕಪ್ಪು ಚುಕ್ಕೆ ಇಟ್ಟಂತಿದೆ.
ಗ್ರೇಟರ್ ನೋಯ್ಡಾದಲ್ಲಿ ನಡೆದ ಮಕ್ಕಳ ಕ್ರಿಕೆಟ್ ಟೂರ್ನಿಯಲ್ಲಿ ಮಾರಾ ಮಾರಿ ನಡೆದಿದೆ. ಎರಡು ಗುಂಪುಗಳ ನಡುವಿನ ಜಗಳ ಕೊನೆಗೆ ಗುಂಡಿನ ದಾಳಿ ಹಂತಕ್ಕೂ ಹೋಗಿದೆ. ಗುಂಡಿನ ದಾಳಿಯಲ್ಲಿ ಮೊಹಮ್ಮದ್ ರಿಜ್ವಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಸೀಮ್, ಮೊಹಮ್ಮದ್ ಆರಿಫ್, ವಾಖಿಲ್ ಖಾನ್ ಹಾಗೂ ಉಮರ್ ಖಾನ್ ಕೂಡ ಗಾಯಗೊಂಡಿದ್ದಾರೆ. ಕ್ಷುಲಕ ಕಾರಣಕ್ಕೆ ನಡೆದ ಜಗಳ ತಾರಕಕ್ಕೇರಿದೆ. ಹೀಗಾಗಿ ಆರಂಭದಲ್ಲಿ ಕಲ್ಲು ಎಸೆಯೋ ಮೂಲಕ ಜಗಳ ಆರಂಭಗೊಂಡಿತ್ತು. ಬಳಿಕ ಎರಡು ಗುಂಪುಗಳ ಜಗಳ ಗುಂಡಿನ ದಾಳಿಗೆ ತಲುಪಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡು ಗುಂಪಿನ ಹಲವರನ್ನ ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗ ದಾಖಲಿಸಲಾಗಿದೆ. ಇದೀಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.