ಕ್ರಿಕೆಟ್ನಿಂದ ವಿಶ್ರಾಂತಿ- ಕಬಡ್ಡಿ ಕೋರ್ಟ್ಗೆ ಇಳಿದ ಧೋನಿ
ವಿಂಡೀಸ್ ವಿರುದ್ಧದ ಸರಣಿ ಬಳಿಕ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಇದೀಗ ಕಬಡ್ಡಿ ಆಟಕ್ಕೆ ಮುಂದಾಗಿದ್ದಾರೆ. ಸಿಕ್ಕಿರೋ ಸಮಯದಲ್ಲಿ ಧೋನ ಕಬಡ್ಡಿ ಆಡಲು ಮುಂದಾಗಿದ್ದೇಕೆ? ಇಲ್ಲಿದೆ.
ಮುಂಬೈ(ನ.13): ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಬಳಿಕ ವಿಶ್ರಾಂತಿಗೆ ಜಾರಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ಕಬಡ್ಡಿ ಕೋರ್ಟ್ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.
ಅಷ್ಟಕ್ಕೂ ಧೋನಿ ಕಬಡ್ಡಿ ಕೋರ್ಟ್ನಲ್ಲಿ ಕಾಣಿಸಿಕೊಂಡಿದ್ದು ಪ್ರೊ ಕಬಡ್ಡಿ ಪ್ರಚಾರದ ಜಾಹೀರಾತಿಗಾಗಿ. ಸದ್ಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ನಡೆಯುತ್ತಿದೆ. ಇದರ ಪ್ರಚಾರದ ಜಾಹೀರಾತಿಗಾಗಿ ಎಂ.ಎಸ್.ಧೋನಿ ಕಬಡ್ಡಿ ಕೋರ್ಟ್ಗೆ ಇಳಿದಿದ್ದಾರೆ.
MS Dhoni on set in Mumbai! #shootday #mahi #dhoni #msd pic.twitter.com/gURQzZHZbK
— Rhiti Sports (@RhitiSports) November 13, 2018
ವಿಶೇಷ ಅಂದರೆ ಈ ಪ್ರಚಾರದ ಜಾಹೀರಾತು ಶೂಟಿಂಗ್ಗಾಗಿ ಧೋನಿ ಕಬಡ್ಡಿ ಆಡಿದ್ದಾರೆ. ರೈಡ್ ಮೂಲಕ ಎದುರಾಳಿಗಳನ್ನ ಚಕಿತಗೊಳಿಸಿದ್ದಾರೆ. ಧೋನಿ ಸ್ಪೋರ್ಟ್ ಮ್ಯಾನೇಜ್ಮೆಂಟ್ ರಿತಿ ಸ್ಪೋರ್ಟ್ ಟ್ವೀಟ್ ಮೂಲಕ ಧೋನಿ ಕಬಡ್ಡಿ ಪ್ರಮೋಶನಲ್ ಚಿತ್ರಗಳನ್ನ ಪೋಸ್ಟ್ ಮಾಡಿದೆ.