Asianet Suvarna News Asianet Suvarna News

ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿ; ಭಾರತದಿಂದ ಏಕೈಕ ಸ್ಪರ್ಧಿ

ಬ್ಯಾಂಕಾಂಕ್‌ನಲ್ಲಿ ಇಂದಿನಿಂದ ಬಿಡ್ಲ್ಯುಎಫ್‌ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿ
ಪ್ರಣಯ್‌ ಟೂರ್ನಿಯಲ್ಲಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದಾರೆ.
ಪಿ.ವಿ.ಸಿಂಧು ಗಾಯಗೊಂಡಿರುವ ಕಾರಣ ಈ ಟೂರ್ನಿಯಲ್ಲಿ ಆಡುತ್ತಿಲ್ಲ

BWF World Tour Finals 2022 HS Prannoy carries India hope in season finale kvn
Author
First Published Dec 7, 2022, 11:34 AM IST

ಬ್ಯಾಂಕಾಕ್‌(ಡಿ.07): ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಬುಧವಾರ ಇಲ್ಲಿ ಆರಂಭಗೊಳ್ಳಲಿರುವ ಬಿಡ್ಲ್ಯುಎಫ್‌ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಪಿ.ವಿ.ಸಿಂಧು ಗಾಯಗೊಂಡಿರುವ ಕಾರಣ ಆಡುತ್ತಿಲ್ಲ, ಹೀಗಾಗಿ ಪ್ರಣಯ್‌ ಟೂರ್ನಿಯಲ್ಲಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದಾರೆ.

ಈ ಋುತುವಿನ ಅಗ್ರ 8 ಆಟಗಾರರು ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, ತಲಾ 4 ಆಟಗಾರರ ಎರಡು ಗುಂಪು ರಚಿಸಲಾಗಿದೆ. ಪ್ರಣಯ್‌ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಒಲಿಂಪಿಕ್‌ ಚಾಂಪಿಯನ್‌ ಡೆನ್ಮಾರ್ಕ್ನ ವಿಕ್ಟರ್‌ ಆಕ್ಸೆಲ್ಸೆನ್‌, ಜಪಾನ್‌ನ ಕೊಡೈ ನರವೊಕಾ ಹಾಗೂ ಚೀನಾದ ಲು ಗುವಾಂಗ್‌ ಜು ವಿರುದ್ಧ ಸೆಣಸಲಿದ್ದಾರೆ. ಈ ಮೂರೂ ಆಟಗಾರರ ವಿರುದ್ಧ ಪ್ರಣಯ್‌ ಕಳಪೆ ದಾಖಲೆ ಹೊಂದಿದ್ದಾರೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ಆಟಗಾರರು ಸೆಮಿಫೈನಲ್‌ ಪ್ರವೇಶಿಸಲಿದ್ದಾರೆ.

ಪ್ಲೇಆಫ್‌ ರೇಸ್‌ನಲ್ಲಿ ಉಳಿದ ದಬಾಂಗ್ ಡೆಲ್ಲಿ

ಹೈದರಾಬಾದ್‌: ಪ್ರೊ ಕಬಡ್ಡಿ 9ನೇ ಆವೃತ್ತಿಯ ಪ್ಲೇ-ಆಫ್‌ ರೇಸ್‌ನಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಉಳಿದುಕೊಂಡಿದೆ. ಮಂಗಳವಾರ ಯು ಮುಂಬಾ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ 41-21 ಅಂಕಗಳ ಅಂತರದಲ್ಲಿ ಜಯಿಸಿತು. ಈ ಸೋಲು ಮುಂಬಾ ತಂಡವನ್ನು ಪ್ಲೇ-ಆಫ್‌ ರೇಸ್‌ನಿಂದ ಹೊರಹಾಕಿತು. 21 ಪಂದ್ಯಗಳಲ್ಲಿ 60 ಅಂಕ ಗಳಿಸಿರುವ ಡೆಲ್ಲಿ, ಕೊನೆ ಪಂದ್ಯವನ್ನು ಟೈ ಮಾಡಿಕೊಂಡರೂ ಸಾಕು ಪ್ಲೇ-ಆಫ್‌ಗೆ ಪ್ರವೇಶ ಪಡೆಯಲಿದೆ.

ಪ್ರೊ ಕಬಡ್ಡಿ ಲೀಗ್‌: ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬುಲ್ಸ್‌!

ಈಗಾಗಲೇ 4 ತಂಡಗಳು ಪ್ಲೇ-ಆಫ್‌ಗೆ ಮುನ್ನಡೆದಿದ್ದು ಇನ್ನೆರಡು ಸ್ಥಾನಗಳಿಗೆ ತಮಿಳ್ ತಲೈವಾಸ್‌, ದಬಾಂಗ್ ಡೆಲ್ಲಿ, ಹರ್ಯಾಣ ಸ್ಟೀಲರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳ ನಡುವೆ ಸ್ಪರ್ಧೆ ಇದೆ. ಬುಧವಾರ ತಮಿಳ್ ತಲೈವಾಸ್‌ ಭವಿಷ್ಯ ನಿರ್ಧಾರವಾಗಲಿದೆ. ಯುಪಿ ಯೋಧಾಸ್‌ ವಿರುದ್ಧ ಗೆದ್ದರೆ ಪ್ಲೇ-ಆಫ್‌ ಸ್ಥಾನ ಖಚಿತವಾಗಲಿದೆ. ಈಗಾಗಲೇ ಜೈಪುರ ಪಿಂಕ್ ಪ್ಯಾಂಥರ್ಸ್‌, ಪುಣೇರಿ ಪಲ್ಟಾನ್, ಬೆಂಗಳೂರು ಬುಲ್ಸ್‌ ಹಾಗೂ ಯುಪಿ ಯೋಧಾಸ್ ತಂಡಗಳು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. 

ಭಾರತ ಮಹಿಳಾ ತಂಡದ ಕೋಚ್‌ ಪೊವಾರ್‌ಗೆ ಹಿಂಬಡ್ತಿ

ನವದೆಹಲಿ: ಟಿ20 ವಿಶ್ವಕಪ್‌ಗೆ ಎರಡೂವರೆ ತಿಂಗಳಷ್ಟೇ ಬಾಕಿ ಉಳಿದಿರುವಾಗ ಭಾರತ ಮಹಿಳಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಯಿಂದ ರಮೇಶ್‌ ಪೊವಾರ್‌ಗೆ ಗೇಟ್‌ಪಾಸ್‌ ನೀಡಲಾಗಿದೆ. ಅವರನ್ನು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ವರ್ಗಾವಣೆ ಮಾಡಲಾಗಿದೆ. ಪೊವಾರ್‌ ಕಾರ್ಯವೈಖರಿ ಬಗ್ಗೆ ತಂಡದೊಳಗೆ ಅಸಮಾಧಾನವಿದ್ದ ಕಾರಣ ಈ ಬದಲಾವಣೆಗೆ ಬಿಸಿಸಿಐ ಮುಂದಾಯಿತು ಎನ್ನಲಾಗಿದೆ. ಇದೇ ವೇಳೆ ಹೃಷಿಕೇಶ್‌ ಕಾನಿಟ್ಕರ್‌ರನ್ನು ಬ್ಯಾಟಿಂಗ್‌ ಕೋಚ್‌ ಆಗಿ ನೇಮಕ ಮಾಡಲಾಗಿದ್ದು, ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ) ಹೊಸ ಕೋಚ್‌ ಹೆಸರು ಶಿಫಾರಸು ಮಾಡಿ ನೇಮಕಗೊಳ್ಳುವ ವರೆಗೂ ಕಾನಿಟ್ಕರ್‌ಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
 

Follow Us:
Download App:
  • android
  • ios