ಕನ್ನಡಿಗನ ಕುಂಬ್ಳೆ ಹುದ್ದೆಗೆ ಮತ್ತೊಬ್ಬ ಕನ್ನಡಿಗನ ಅರ್ಜಿ!: ಈತ ಕೋಚ್ ಆದ್ರೆ ರವಿಶಾಸ್ತ್ರಿ ಗತಿ ಏನು.?
ಸದ್ಯ ಖಾಲಿ ಇರುವ ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಹೆಸರು ಮುಂಚೂಣಿಯಲ್ಲಿದ್ದಾರೆ. ಅವರೇ ಟೀಂ ಇಂಡಿಯಾದ ಚುಕ್ಕಾಣಿ ಹಿಡಿಯುವುದು ಎಂಬ ಮಾತುಗಳು ಕೇಳಿಬರ್ತಿವೆ. ಆದರೆ ಈ ಅಂತರದಲ್ಲಿ ಕನ್ನಡಿಗನ್ನೊಬ್ಬ ಟೀಂ ಇಂಡಿಯಾ ಕೋಚಿಂಗ್ ಸ್ಟಾಫ್'ಗೆ ಸೇರಿಕೊಳ್ಳಲು ತಯಾರಾಗುತ್ತಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ ಜಾಗ ಖಾಲಿ ಮಾಡಿದ ಮೇಲೆ ಮತ್ತೊಬ್ಬ ಕನ್ನಡಿಗ ಆ ಜಾಗವನ್ನ ಆಕ್ರಮಿಸಲು ತಯಾರಿ ನಡೆಸಿದ್ದಾರೆ.
ಸದ್ಯ ಖಾಲಿ ಇರುವ ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಹೆಸರು ಮುಂಚೂಣಿಯಲ್ಲಿದ್ದಾರೆ. ಅವರೇ ಟೀಂ ಇಂಡಿಯಾದ ಚುಕ್ಕಾಣಿ ಹಿಡಿಯುವುದು ಎಂಬ ಮಾತುಗಳು ಕೇಳಿಬರ್ತಿವೆ. ಆದರೆ ಈ ಅಂತರದಲ್ಲಿ ಕನ್ನಡಿಗನ್ನೊಬ್ಬ ಟೀಂ ಇಂಡಿಯಾ ಕೋಚಿಂಗ್ ಸ್ಟಾಫ್'ಗೆ ಸೇರಿಕೊಳ್ಳಲು ತಯಾರಾಗುತ್ತಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ ಜಾಗ ಖಾಲಿ ಮಾಡಿದ ಮೇಲೆ ಮತ್ತೊಬ್ಬ ಕನ್ನಡಿಗ ಆ ಜಾಗವನ್ನ ಆಕ್ರಮಿಸಲು ತಯಾರಿ ನಡೆಸಿದ್ದಾರೆ.
ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಯಾರಿಗೆ ಬೇಸರವಾಯಿತೋ ಇಲ್ಲವೋ ತಿಳಿದಿಲ್ಲ, ಆದರೆ ಕರ್ನಾಟಕದ ಪ್ರತೀ ಕ್ರಿಕೆಟ್ ಅಭಿಮಾನಿಯೂ ತುಂಬಾ ಬೇಜಾರಾಗಿದ್ದರು. ಕಾರಣ ಟೀಂ ಇಂಡಿಯಾ ಚುಕ್ಕಾಣಿ ಹಿಡಿದಿದ್ದ ನಮ್ಮ ಕನ್ನಡಿಗನೊಬ್ಬ ಸ್ಥಾನ ಕಳೆದುಕೊಂಡನಲ್ಲಾ ಅಂತ. ಆದ್ರೆ ನಿನ್ನೆ ನಡೆದ ಮತ್ತೊಂದು ಬೆಳವಣಿಗೆ ಕನ್ನಡದ ಮಕ್ಕಳಿಗೆ ಥ್ರಿಲ್ ಆಗುವಂತೆ ಮಾಡಿದೆ. ಕುಂಬ್ಳೆಯ ನಂತರ ಮತ್ತೊಬ್ಬ ಕನ್ನಡಿಗ ಟೀಂ ಇಂಡಿಯಾಗೆ ಸೇರಿಕೊಳ್ಳೋ ಸನಿಹದಲ್ಲಿದ್ದಾನೆ.
ಕೋಚ್ ಆಗ್ತಾರೆ ವೆಂಕಟೇಶ್ ಪ್ರಸಾದ್: ಬಿಸಿಸಿಐಗೆ ಅರ್ಜಿ ಗುಜರಾಯಿಸಿದ ಪ್ರಸಾದ್
ಹೌದು, ಟೀಂ ಇಂಡಿಯಾದ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ನಿನ್ನೆ ತಾನೆ ಬಿಸಿಸಿಐಗೆ ಕೋಚ್ ಅರ್ಜಿಯನ್ನ ಸಲ್ಲಿಸಿದ್ದಾರೆ. ಇದರೊಂದಿಗೆ ಕನ್ನಡಿಗ ಅನಿಲ್ ಕುಂಬ್ಳೆ ಸ್ಥಾನ ತುಂಬಲು ಮತ್ತೊಬ್ಬ ಕನ್ನಡಿಗ ವೆಂಕಟೇಶ್ ಪ್ರಸಾದ್ ಸಿದ್ಧನಾಗ್ತಿದ್ದಾನೆ. ಇದರೊಂದಿಗೆ 7 ಕೋಟಿ ಕನ್ನಡಿಗರ ಮನಗೆಲ್ಲಲು ರೆಡಿಯಾಗುತ್ತಿದ್ದಾರೆ.
ಪ್ರಸಾದ್ ಕೋಚ್ ಆದ್ರೆ ರವಿಶಾಸ್ತ್ರಿ ಗತಿ ಏನು.?: ರವಿಶಾಸ್ತ್ರಿ ಈಗಾಗಲೇ ಕೋಚ್ ಆಗೋದು ಕನ್ಫರ್ಮ್ ಆಗಿದೆಯಲ್ಲಾ.?
ಖಂಡಿತ ಇದೊಂದು ಅನುಮಾನ ನಿಮಗೆ ಮೂಡಿರುತ್ತೆ. ಈಗಾಗಲೇ ರವಿಶಾಸ್ತ್ರಿ ಕೋಚ್ ಆಗೋದು ಕನ್ಫರ್ಮ್ ಆಗಿದೆ. ವೆಂಕಟೇಶ್ ಪ್ರಸಾದ್ ಎಲ್ಲಿಂದ ಬಂದ್ರು ಅಂತ. ಇಲ್ಲೇ ಇರುವುದು ನೋಡಿ ಟ್ವಿಸ್ಟ್. ಕನ್ನಡಿಗ ವೆಂಕಟೇಶ್ ಪ್ರಸಾದ್ ಅರ್ಜಿ ಸಲ್ಲಿಸಿರೋದು ಮುಖ್ಯ ಕೋಚ್ ಸ್ಥಾನಕ್ಕಲ್ಲ ಬದಲಿಗೆ ಅನಿಲ್ ಕುಂಬ್ಳೆಯಿಂದ ತೆರವಾಗಿರುವ ಬೌಲಿಂಗ್ ಕೋಚ್ ಸ್ಥಾನಕ್ಕೆ.
ರವಿ ಆದರೇನು..? ವೀರೂ ಆದರೇನು..?: ಯಾರ ಅಡಿಯಲ್ಲೂ ಕೆಲಸ ಮಾಡಲು ಸಿದ್ಧ ಅಂದ ವೆಂಕಿ
ಮುಖ್ಯ ಕೋಚ್ ಯಾರು ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ಆಗಲೇ ವೆಂಕಟೇಶ್ ಪ್ರಸಾದ್ ಬೌಲಿಂಗ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿಬಿಟ್ಟಿದ್ದಾರೆ. ಮುಖ್ಯ ಕೊಚ್ ಆಗಿ ರವಿ ಶಾಸ್ತ್ರಿಯಾಗಲಿ, ವಿರೇಂದ್ರ ಸೆಹ್ವಾಗ್ ಆದ್ರೂ ಆಗಲಿ ನಾನು ಯಾರ ಅಡಿಯಲ್ಲಾದ್ರೂ ಕೆಲಸ ಮಾಡಲು ಸಿದ್ಧ. ನನ್ನ ಕೆಲಸದ ಮೇಲೆ ನನಗೆ ನಂಬಿಕೆ ಇದೆ ಎಂದು ಪ್ರಸಾದ್ ಹೇಳಿಕೊಂಡಿದ್ದಾರೆ.
ಎರಡನೇ ಬಾರಿಗೂ ಬೌಲಿಂಗ್ ಕೋಚ್ ಆಗಿ ಕ್ಲಿಕ್ ಆಗ್ತಾರಾ.?: 2007ರ ವಿಶ್ವಕಪ್ ರಿಪೀಟ್ ಮಾಡಿಸುತ್ತಾರಾ ಪ್ರಸಾದ್..?
ವೆಂಕಿ ಬೌಲಿಂಗ್ ಕೋಚ್ ಆಗ್ತಿರೋದು ಇದೇ ಮೊದಲಲ್ಲ, ಈ ಹಿಂದೆ ಅಂದ್ರೆ 2007ರಿಂದ 2009ರ ವರೆಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿದ್ರು. ಈ ಅವಧಿಯಲ್ಲೇ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್ ಗೆದ್ದಿದ್ದು. ಆ ಎರಡು ವರ್ಷದ ಅವಧಿಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ಸಾಕಷ್ಟು ಸುಧಾರಿಸಿತ್ತು. ಈಗ ಮತ್ತೆ ವೆಂಕಿ ಬೌಲಿಂಗ್ ಕೋಚ್ ಆದ್ರೆ 2019ರ ವಿಶ್ವಕಪ್ ಮತ್ತೆ ಭಾರತದ ಪಾಲಾಗೋದು ಕನ್ಫರ್ಮ್.
ವೆಂಕಿಗೂ ಇದ್ದಾರೆ ದುಷ್ಮನ್ಗಳು: ಬೌಲಿಂಗ್ ಕೋಚ್ ರೇಸ್ನಲ್ಲಿದ್ದಾರೆ ಜ್ಯಾಕ್
ವೆಂಕಟೇಶ್ ಪ್ರಸಾದ್ ಸದ್ಯ ಅರ್ಜಿ ಹಾಕಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ಬೌಲಿಂಗ್ ಕೋಚ್ ಆಗೋದು ಅಷ್ಟು ಸುಲಭವಲ್ಲ. ಕಾರಣ ಅವರಿಗೆ ಟೀಂ ಇಂಡಿಯಾದ ಮತ್ತೊಬ್ಬ ವೇಗಿ ಜಹೀರ್ ಖಾನ್ ಫೈಟ್ ನೀಡ್ತಿದ್ದಾರೆ. ಜಹೀರ್ ಖಾನ್ ಕೂಡ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗೋ ಮನಸ್ಸು ಮಾಡಿದ್ದಾರೆ.
ಒಟ್ಟಿನಲ್ಲಿ ಎಲ್ಲಾ ಅಂದುಕೊಂಡಂತೆ ಆದ್ರೆ, 7 ಕೋಟಿ ಕನ್ನಡಿಗರ ಹಾರೈಕೆ ಇದ್ರೆ ವೆಂಕಿ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾದ ಮೇಷ್ಟ್ರಾಗಲಿದ್ದಾರೆ. ಇದರೊಂದಿಗೆ ಅನಿಲ್ ಕುಂಬ್ಳೆ ಬಿಟ್ಟ ಸ್ಥಾನವನ್ನ ಮತ್ತೊಬ್ಬ ಕನ್ನಡಿಗ ತುಂಬುವ ಮೂಲಕ ಕನ್ನಡಿಗರ ಖುಷಿಗೆ ಕಾರಣವಾಗಲಿದ್ದಾರೆ. ಆಲ್ ದ ಬೆಸ್ಟ್ ವೆಂಕಿ.