ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿಯುತ್ತಿದ್ದಂತೆಯೇ ಜೂನ್ 02ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆರಂಭವಾಗಲಿದೆ. ಈ ಟೂರ್ನಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ನೆಚ್ಚಿನ 15 ಆಟಗಾರರ ತಂಡವನ್ನು ಪ್ರಕಟಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
Cricket Apr 24, 2024, 1:04 PM IST
ಬೆಂಗಳೂರು: ಒಂದು ಕಡೆ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಮತ್ತೊಂದೆಡೆ ಸದ್ದಿಲ್ಲದೇ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಕೂಡಾ ನಡೆಯುತ್ತಿದೆ. ಹೀಗಿರುವಾಗಲೇ ಟಿ20 ವಿಶ್ವಕಪ್ ಟೂರ್ನಿಗೆ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯಲು ಆರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Apr 23, 2024, 6:08 PM IST
‘ಟ್ರ್ಯಾವಿಸ್ ಹೆಡ್ರಂತೆ ಕೊಹ್ಲಿಯೂ 40 ಎಸೆತದಲ್ಲಿ 100 ರನ್ ಸಿಡಿಸುವ ಸಾಮರ್ಥ್ಯವಿದೆ. ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿ, ಮುಕ್ತವಾಗಿ ಸ್ಫೋಟಕ ಆಟವಾಡಲು ಬಿಡಬೇಕು’ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ವಿಶ್ವಕಪ್ನಲ್ಲಿ ಅನುಭವಿಗಳ ಜೊತೆ ಯುವ ಆಟಗಾರರ ಸಂಯೋಜನೆ ಇರಬೇಕು. ಬರೀ ಐಪಿಎಲ್ನ ಆಟ ನೋಡಿ ಆಯ್ಕೆ ಮಾಡಬಾರದು ಎಂದಿದ್ದಾರೆ.
Cricket Apr 23, 2024, 10:21 AM IST
ಬೆಂಗಳೂರು: ಸದ್ಯ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಈ ಐಪಿಎಲ್ ಟೂರ್ನಿಯು ಮುಗಿಯುತ್ತಿದ್ದಂತೆಯೇ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಹೀಗಿರುವಾಗಲೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಂಭಾವ್ಯ ಆಟಗಾರರು ಯಾರು ಎನ್ನುವುದನ್ನು ನಾವಿಂದು ಹೇಳ್ತೀವಿ ನೋಡಿ.
Cricket Apr 22, 2024, 6:22 PM IST
ಬಿಸಿಸಿಐ ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್ ಸದ್ಯ ರಜೆ ಮೇಲೆ ಸ್ಪೇನ್ಗೆ ತೆರಳಿದ್ದು, ಅವರು ಒಂದೆರಡು ದಿನಗಳಲ್ಲಿ ಭಾರತಕ್ಕೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 15 ಸದಸ್ಯರ ತಂಡ ಪ್ರಕಟಿಸಲು ಮೇ 1 ಕೊನೆಯ ದಿನವಾಗಿದೆ. ಜೂ.1ರಿಂದ 29ರ ವರೆಗೂ ವೆಸ್ಟ್ಇಂಡೀಸ್, ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.
Cricket Apr 21, 2024, 1:11 PM IST
ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಆಟಗಾರರ ಜೆರ್ಸಿಯ ತೋಳಿನ ಭಾಗ (ಉದಾ. ಬಲಗೈ ಆಟಗಾರನ ಎಡ ತೋಳು, ಎಡಗೈ ಆಟಗಾರ ಬಲ ತೋಳು)ದ ಮೇಲೆ ಕೆಎಂಎಫ್ನ ಲೋಗೋ ಇರಲಿದೆ. ಈ ಎರಡೂ ತಂಡಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ತಾಣಗಳಲ್ಲಿ ನಡೆಸುವ ಅಭಿಯಾನ, ಫೋಟೋಶೂಟ್ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Cricket Apr 21, 2024, 9:58 AM IST
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನು, ಆರಂಭಿಕ ಸ್ಥಾನಕ್ಕೆ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್, ಫಿನಿಶರ್ ಸ್ಥಾನಕ್ಕೆ ರಿಂಕು ಸಿಂಗ್-ಶಿವಂ ದುಬೆ ನಡುವೆ ಪೈಪೋಟಿ ಇದೆ.
Cricket Apr 19, 2024, 8:21 AM IST
ಕಳೆದ ವಾರ ಭಾರತದ ನಾಯಕ ರೋಹಿತ್ ಶರ್ಮಾ, ಕೋಚ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಾರ್ದಿಕ್ ಬಗ್ಗೆಯೂ ಚರ್ಚೆಯಾಗಿದ್ದು, ಅವರು ಐಪಿಎಲ್ನಲ್ಲಿ ಉತ್ತಮವಾಗಿ ಬೌಲ್ ಮಾಡಿದರಷ್ಟೇ ವಿಶ್ವಕಪ್ಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
Cricket Apr 17, 2024, 10:44 AM IST
ಮುಂಬೈ: ಸದ್ಯ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಹೀಗಿರುವಾಗಲೇ ಮುಂಬರುವ ಐಸಿಸಿ ಟಿ20 ವಿಶ್ವಕಪ್ಗೂ ಸಿದ್ದತೆ ನಡೆಯುತ್ತಿದೆ. ಇದೆಲ್ಲದರ ನಡುವೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಬೇಕಿದ್ದರೇ, ಹೊಸ ಟಾಸ್ಕ್ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
Cricket Apr 16, 2024, 5:11 PM IST
ಈ ಬಾರಿಯ IPLನಲ್ಲಿ ಭಾರತದ ಹಲವು ಆಟಗಾರರು ಅಬ್ಬರಿಸ್ತಿದ್ದಾರೆ. ಅದರಲ್ಲೂ ಯಂಗಸ್ಟರ್ಸ್ ಆರ್ಭಟ ಜೋರಾಗಿದೆ. ಕಳೆದ ಸೀಸನ್ನಲ್ಲಿ ಫ್ಲಾಪ್ ಶೋ ನೀಡಿದವ್ರು, ಈ ಸಲ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ. ಆದ್ರೆ, ಕಳೆದ ಬಾರಿ ಆರ್ಭಟಿಸಿದ್ದ ಕೆಲ ಆಟಗಾರರು, ಈ ಬಾರಿ ವೈಫಲ್ಯದ ಹಾದಿ ಹಿಡಿದಿದ್ದಾರೆ. ಆ ಲೀಸ್ಟಲ್ಲಿ ಯಶಸ್ವಿ ಜೈಸ್ವಾಲ್ ಎಲ್ಲರಿಗಿಂತ ಮುಂದಿದ್ದಾರೆ.
Cricket Apr 14, 2024, 4:51 PM IST
ಮುಂಬೈ ಇಂಡಿಯನ್ಸ್ನ ಬ್ಯಾಟರ್ ರೋಹಿತ್ ಶರ್ಮಾ, ಮೈದಾನದಲ್ಲಿ ಕಾಲೆಳೆಯುವುದರಲ್ಲಿ ಎತ್ತಿದ ಕೈ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ಆರ್ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯದ ವೇಳೆ ರೋಹಿತ್ ಶರ್ಮಾ, ಅರ್ಸಿಬಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರನ್ನು ಸ್ಲೆಡ್ಜಿಂಗ್ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Cricket Apr 12, 2024, 12:20 PM IST
ಸ್ಟಾರ್ಸ್ಟೋರ್ಟ್ಸ್ ಬಗ್ಗೆ ಜೊತೆ ಮಾತನಾಡಿದ ಅವರು, ಸ್ಟ್ರೈಕ್ರೇಟ್ ಯಾವತ್ತೂ ಬ್ಯಾಟಿಂಗ್ ಕ್ರಮಾಂಕದ ಮೇಲೆ ಅವಲಂಬಿತವಾಗಿರುತ್ತದೆ. ಆರಂಭಿಕ ಆಟಗಾರನ ಸ್ಟ್ರೈಕ್ರೇಟ್ 130-140 ಇರುವುದು ತಪ್ಪಲ್ಲ ಎಂದಿದ್ದಾರೆ. ಅಲ್ಲದೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತದ ಅಗ್ರ-3 ಆಟಗಾರರಾಗಿರಬೇಕು ಎಂದು ಲಾರಾ ತಿಳಿಸಿದ್ದಾರೆ.
Cricket Apr 9, 2024, 12:31 PM IST
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದೆ. ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಐಪಿಎಲ್ನಲ್ಲಿ ಹಲವು ಆಟಗಾರರು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ.
Cricket Apr 8, 2024, 5:25 PM IST
ಕುಲ್ದೀಪ್ ಯಾದವ್, ಭಾರತದ ಮಿಸ್ಟರಿ ಸ್ಪಿನ್ನರ್. ಸದ್ಯ ಭಾರತ ತಂಡದ ಖಾಯಂ ಮೆಂಬರ್. ಒನ್ಡೇ ವರ್ಲ್ಡ್ಕಪ್ ಆಡಿದ್ದ ಕುಲ್ದೀಪ್, ಆ ಬಳಿಕ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಆಡಿದ್ದರು. ಸದ್ಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಆದ್ರೀಗ ಇಂಜುರಿಯಾಗಿ ಕ್ಯಾಪಿಟಲ್ಸ್ ತಂಡದಿಂದ ಕಿಕೌಟ್ ಆಗಿದ್ದಾರೆ.
Cricket Apr 7, 2024, 12:10 PM IST
ಇಂದು IPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗ್ತಿವೆ. ಈ ಪಂದ್ಯ ಯಾರಿಗೆ ಮಹತ್ವದ್ದೋ ಗೊತ್ತಿಲ್ಲ ಕಂಡ್ರಿ. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ಗೆ ಮಾತ್ರ ಮಹತ್ವದ ಪಂದ್ಯ. ಇದೊಂದು ಪಂದ್ಯ ಮಾತ್ರವಲ್ಲ. 17ನೇ ಸೀಸನ್ IPL ಟೂರ್ನಿಯೇ ಪಂತ್ಗೆ ಮಹತ್ವದ್ದು. ಯಾಕಂದ್ರೆ ಅವರು ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ.
Cricket Apr 3, 2024, 12:41 PM IST