ನೆನಪುಗಳು ಎಲ್ಲೆಲ್ಲಿಯೋ ಇರುತ್ತದೆ. ಅದು ಆಗಾಗ್ಗೆ ಮರಳಿ ಬರುತ್ತದೆ. ಖುಷಿ, ದುಃಖ ಎಲ್ಲವನ್ನೂ ತರುತ್ತದೆ. ಆದರೀಗ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಹೋದ ಹಲವು ದಶಕಗಳ ಊರ ಇತಿಹಾಸ, ಮನೆಯ, ತಮ್ಮ ಕುಟುಂಬ ಎಲ್ಲದರ ನೆನಪುಗಳೆಲ್ಲವೂ ಬಟಾ ಬಯಲಾಗಿ ಹೊರಗೆ ಬಂದು ಹರಡಿಕೊಂಡಿದೆ. ಹಲವು ದಶಕಗಳ ನೋವುಂಡ ಶರಾವತಿ ಸಂತ್ರಸ್ಥರಿಗೆ ಈ ನೆನಪುಗಳು ಮತ್ತೆ ಮರಳಿ ಬರುವಂತೆ ಪ್ರಕೃತಿ ಮಾಡಿದೆ.
Karnataka Districts Jun 10, 2023, 6:15 AM IST
ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರೊದಗಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುತ್ತಿರುವುದು ಸರಿಯಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
NEWS Jun 24, 2019, 8:07 AM IST
ಉದ್ಯಾನನಗರಿ ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಿ ಸಾಧಕ-ಬಾಧಕಗಳ ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿ ನೇಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
NEWS Jun 22, 2019, 8:22 AM IST
ಉದ್ಯಾನ ನಗರಿ ಬೆಂಗಳೂರಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ವಿವಾದಿತ ಯೋಜನೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ.
NEWS Jun 21, 2019, 8:28 AM IST
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯದ್ದೇ ಕಾರುಬಾರು. ಇತ್ತ ಕಾವೇರ, ಅತ್ತ ತುಂಗೆ, ಶರವಾತಿ ನದಿಗಳು ತುಂಬಿ ಹರಿಯುತ್ತಿವೆ. ಕೆಆರ್ಎಸ್, ಲಿಂಗನಮಕ್ಕಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ರಾಜ್ಯದ ಮಳೆಯ ಸಂಭ್ರಮದ ಕೆಲವು ಫೋಟೋಗಳು ಇಲ್ಲಿವೆ.
state Aug 14, 2018, 5:39 PM IST
ಇದು ನಿಸರ್ಗದ ಕರುಣೆಯೋ , ಮುನಿಸೋ ಗೊತ್ತಿಲ್ಲ. ಕಳೆದೊಂದು ವಾರದಿಂದ ನೆರೆ ರಾಜ್ಯ ಹಾಗೂ ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಲೆನಾಡಂತೂ ತನ್ನ ಗತಕಾಲದ ವೈಭವಕ್ಕೆ ಮರಳಿದೆ. ಕಾನೂರು ಹೆಗ್ಗಡತಿ- ಮಲೆಗಳಲ್ಲಿ ಮದುಮಗಳು ಕಾದ೦ಬರಿಗಳಲ್ಲಿ ಕುವೆ೦ಪು ವರ್ಣಿಸುವ ಮಳೆಗಾಲದ ಚಿತ್ರಣ ಅಕ್ಷರಶಃ ಕಣ್ಣ ಮು೦ದಿದೆ. ತು೦ಗೆ ಕ್ಷಣ ಕ್ಷಣಕ್ಕೂ ತು೦ಬಿ ರುದ್ರ-ರಮಣೀಯವಾಗಿ ಹರಿಯುತ್ತಿದ್ದಾಳೆ. ಇಡೀ ಮಲೆನಾಡು ಧೋ ಎ೦ದು ಸುರಿಯುತ್ತಿರುವ ವರ್ಷಧಾರೆಯ ಶೃತಿಗೆ ಧ್ಯಾನಸ್ಥವಾದ೦ತಿದೆ! ಇತ್ತ ಶರಾವತಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಭರ್ತಿಯಾದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ರಾಜ್ಯದೆಲ್ಲೆಡೆಯಿಂದ ಓದುಗರು ಕಳುಹಿಸಿದ ವೀಡಿಯೋ, ಮಳೆಯ ಚಿತ್ರಣವಿದು.
state Aug 14, 2018, 3:33 PM IST
ಲಿಂಗನಮಕ್ಕಿ ಅಣೆಕಟ್ಟು ವ್ಯಾಪ್ತಿ ಪ್ರದೇಶದ ಜನರಿಗೆ ಇದು ಮಹತ್ವದ ಸುದ್ದಿ. ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಿದ್ದು ಅಣೆಕಟ್ಟು ಕೆಳದಂಡೆ, ನದಿಪಾತ್ರದ ನಿವಾಸಿಗಳಿಗೆ ಎಚ್ಚರದಿಂದಿರುವಂತೆ ಕೆಪಿಸಿಎಲ್ ಸೂಚನೆ ನೀಡಿದೆ.
Shivamogga Jul 23, 2018, 9:19 PM IST
ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಸುವ ಸಲುವಾಗಿ ರೂಪುಗೊಳ್ಳುತ್ತಿರುವ ‘ಕಾಗದದ ಮೇಲಿನ ಯೋಜನೆ’ಯೊಂದು ಇದೀಗ ಮಲೆನಾಡಿನಲ್ಲಿ ಕಿಚ್ಚು ಹತ್ತಿಸಿದೆ.
NEWS Jul 5, 2018, 9:59 AM IST