ಲಾಕ್ಡೌನ್ನಿಂದ ಕೊರೋನಾ ಸೋಂಕು ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದೇ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
state Jul 3, 2020, 7:32 AM IST
ಕರೋನಾದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ಅನೇಕ ಜನರು ಈ ವೈರಸ್ಗೆ ಬಲಿಯಾಗುತ್ತಿದ್ದಾರೆ. ಈಗ ದೇಶದಲ್ಲಿ ಲಾಕ್ಡೌನ್ ಸಡಿಲಗೊಂಡಿದ್ದು, ಜನರು ಮನೆಯಿಂದ ಹೊರಹೋಗಲು ಅನುಮತಿ ಇರುವುದರಿಂದ ಸಾಮಾನ್ಯ ಜನರಂತೆ ಬಾಲಿವುಡ್ನ ನಟ ನಟಿಯರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಮನೆಯಿಂದ ಹೊರ ಹೋಗುತ್ತಿದ್ದಾರೆ. ಮುಂಬೈನ ವಿವಿಧ ಸ್ಥಳಗಳಲ್ಲಿ ಅನೇಕ ಸೆಲೆಬ್ರೆಟಿಗಳು ಮನೆಯಿಂದ ಅಚೆ ಬಂದಿರುವುದನ್ನು ಗುರುತಿಸಲಾಗಿದೆ. ಸಾರಾ ಅಲಿ ಖಾನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಡೈಸಿ ಷಾ ಸೇರಿದಂತೆ ಇತರ ಬಾಲಿವುಡ್ ಗಣ್ಯರು ಮುಂಬಯಿಯ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ.
Cine World Jul 2, 2020, 3:20 PM IST
ಸ್ಯಾಂಡಲ್ವುಡ್ನಲ್ಲಿ ಅಭಿನಯಿಸಿದ್ದು ಒಂದೇ ಸಿನಿಮಾ ಆದರೂ ತಮಿಳು-ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಗ್ಲಾಮರ್ ಗೊಂಬೆ ರೆಜಿನಾ ಕಸ್ಸಂದ್ರ ಕೊರೋನಾಗೆ ಭಯ ಪಟ್ಟು ರೊಮ್ಯನ್ಸ್ಗೆ ನೋ ಅಂದಿದ್ದಾರಂತೆ....
Sandalwood Jul 2, 2020, 1:10 PM IST
ಸ್ವಯಂ ಲಾಕ್ಡೌನ್ ನಿರ್ಧಾರಕ್ಕೆ ತಿಲಾಂಜಲಿ| 7ರಿಂದ ಸರ್ಕಾರದಿಂದಲೇ ಲಾಕ್ಡೌನ್ ಬಗ್ಗೆ ವದಂತಿ| ಲಾಕ್ಡೌನ್ನಿಂದ ಹಿಂದೆ ಸರಿದ ವರ್ತಕರು
state Jul 2, 2020, 7:29 AM IST
ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ಮಹಾಮಾರಿ ಭಾನುವಾರ ಭಾರೀ ಆಘಾತವನ್ನೇ ನೀಡಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿತ ಮೂವರು ಮೃತಪಟ್ಟಿದ್ದಲ್ಲದೆ, ಬರೋಬ್ಬರಿ 97 ಮಂದಿ ಪಾಸಿಟಿವ್ ಆಗುವುದರೊಂದಿಗೆ ಜನರಲ್ಲಿ ತೀವ್ರ ಆತಂಕ ಮಡುಗಟ್ಟಿದೆ.
Karnataka Districts Jul 2, 2020, 7:23 AM IST
ಖಾಸಗಿ ಶಾಲಾ ಶಿಕ್ಷಕನೋರ್ವ ಲಾಕ್ ಡೌನ್ ನಿಂದಾಗಿ ಸಂಬಳವಿಲ್ಲದೇ ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವಂತಹ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಮೊನ್ನೆ ತಾನೇ ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ವಾಗ್ತಿದ್ದಂತೆ ಆ ಶಿಕ್ಷಕನ ಸಹಾಯಕ್ಕೆ ಜನರು ಕೈ ಚಾಚಿ ಮುಂದೆ ಬಂದಿದ್ದಾರೆ.
Karnataka Districts Jul 1, 2020, 10:35 PM IST
ಮತ್ತೆ ಲಾಕ್ಡೌನ್ ಆಗಬಹುದಾ? ಎಂಬ ಚರ್ಚೆಯ ಬೆನ್ನಲ್ಲೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವುದು ಇನ್ನಷ್ಟು ಕುತೂಹಲವನ್ನು ಹೆಚ್ಚು ಮಾಡಿದೆ. ಕಂಟೈನ್ಮೆಂಟ್ ಝೋನ್ನಿಂದ ಯಾರೂ ಹೊರ ಬರದಂತೆ, ಯಾರೂ ಒಳ ಹೋಗದಂತೆ ನಿಗಾ ವಹಿಸುವುದು, ಹೋಂ ಕ್ವಾರಂಟೈನ್ನಲ್ಲಿ ಇರುವವರು ಮನೆಯಿಂದ ಹೊರಬರದಂತೆ ಎಚ್ಚರ ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಅಂತ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
state Jul 1, 2020, 4:38 PM IST
ಮಾಸ್ಕ್ ಹಾಕದೇ ಹೊರಬರುವವರಿಗೆ ದಂಡ ಹಾಗೂ ಸಂಜೆ 6 ಗಂಟೆ ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಿದ್ದೇವೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
Karnataka Districts Jul 1, 2020, 1:07 PM IST
ಹಳ್ಳಿ ಜನರು ಗ್ರಾಮದ ಎಲ್ಲರೊಂದಿಗೂ ಒಡನಾಟ ಹೊಂದಿರುವುದರಿಂದ ಗ್ರಾಮದಲ್ಲಿ ಒಬ್ಬನಿಗೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡರೆ ಗ್ರಾಮವನ್ನೇ ಸೀಲ್ಡೌನ್ ಮಾಡುವುದು ಸೂಕ್ತ. ಆದ್ದರಿಂದ ಮನೆ ಬದಲು ಗ್ರಾಮವನ್ನೇ ಸೀಲ್ಡೌನ್ ಮಾಡಬೇಕು ಎಂದು ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಿರ್ಣಯ ಕೈಗೊಳ್ಳಲಾಗಿದೆ.
Karnataka Districts Jul 1, 2020, 11:47 AM IST
ಕೊರೊನಾ ತಡೆಗೆ ಸರ್ಕಾರ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಜುಲೈ 7 ರ ಬಳಿಕ ಕರ್ನಾಟಕದ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ. ಎಸ್ಎಸ್ಎಲ್ಸಿ ಪರೀಕ್ಷೆ ಬಳಿಕ ಇನ್ನಷ್ಟು ಕಠಿಣ ಕಾನೂನು ಜಾರಿಯಾಗುವ ಸಾಧ್ಯತೆ ಇದೆ. ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಆರ್ ಅಶೋಕ್ ಹೇಳಿಕೆ ಈ ಸುಳಿವನ್ನು ನೀಡಿದೆ.
state Jul 1, 2020, 11:38 AM IST
ಕೊರೋನಾ ಪ್ರಕರಣ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ವಾರದೊಳಗೆ ಕೊರೋನಾ ಚಿಕಿತ್ಸೆಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
Karnataka Districts Jul 1, 2020, 7:41 AM IST
ಕೊರೋನಾ ಪಾಸಿಟಿವ್ ಬಂದ ಪ್ರದೇಶಗಳಲ್ಲಿ ಮಾತ್ರ ಸದ್ಯ ಸೀಲ್ಡೌನ್ ಮಾಡಲಾಗುತ್ತಿದ್ದು, ಜು. 7ನೇ ತಾರೀಕಿನ ನಂತರ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
Karnataka Districts Jul 1, 2020, 7:21 AM IST
ಕೋವಿಡ್19 ಹಿನ್ನೆಲೆಯಲ್ಲಿ ಪಟ್ಟಣ ಬಿಟ್ಟು ಹಳ್ಳಿ ಸೇರಿ ಕೆಲಸವಿಲ್ಲದೇ ಖಾಲಿ ಇರುವ ನಿರುದ್ಯೋಗಿಗಳಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚೇರ್ ಮನ್ ಗೋಪಿಕೃಷ್ಣ ಕೆಲ ಸಲಹೆಗಳನ್ನ ಕೊಟ್ಟದ್ದಾರೆ.
Karnataka Districts Jun 30, 2020, 10:04 PM IST
ಚೀನಾ ಮೂಲದ 59 ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ಚೀನಾದಲ್ಲಿ ಆತಂಕ ಹೆಚ್ಚಾಗಿದೆ. ಸೇನಾ ಶಕ್ತಿ ಬಳಸಿ ಭಾರತದ ಪ್ರಹಾರಕ್ಕೆ ಮುಂದಾಗಿದ್ದ ಚೀನಾಗೆ ಇದೀಗ ಆರ್ಥಿಕ ಹೊಡೆತ ನೀಡಿದೆ. ಇಷ್ಟೇ ಅಲ್ಲ 5 ಜಿಯಿಂದ ಚೀನಾ ಹೊರಗಿಡಲು ಭಾರತ ಚಿಂತಿಸಿದೆ. ಕೊರೋನಾ ವೈರಸ್ ಆತಿಯಾಗುತ್ತಿರುವ ಕಾರಣ ಮತ್ತೆ ಕರ್ನಾಟಕ ಲಾಕ್ಡೌನ್ ಆಗಲಿದೆಯಾ ಅನ್ನೋ ಅನುಮಾನ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಹುಟ್ಟಿಕೊಂಡಿದೆ. ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರ, ಗಲ್ವಾನ್ ಗರ್ಷಣೆ ಸೀಕ್ರೆಟ್ ಸೇರಿದಂತೆ ಜೂನ್ 30ರ ಟಾಪ್ 10 ಸುದ್ದಿ ಇಲ್ಲಿವೆ.
News Jun 30, 2020, 4:56 PM IST
ಕೊರೊನಾ ಮರಣ ಮೃದಂಗಕ್ಕೆ ಬೆಂಗಳೂರು ಬೆಚ್ಚಿ ಬಿದ್ದಿದೆ. ಇಂದಿನಿಂದ ಗಾಂಧಿಬಜಾರ್ ಕಂಪ್ಲೀಟ್ ಲಾಕ್ಡೌನ್ ಆಗಲಿದೆ. ಜುಲೈ 06 ರವರೆಗೆ ಸಂಪೂರ್ಣವಾಗಿ ಲಾಕ್ಡೌನ್ ಆಗಲಿದೆ. ಕೊರೊನಾ ತಡೆಗೆ ಮರ್ಚೆಂಟ್ ಫೋರಂ ನಿರ್ಧಾರ ಮಾಡಿದೆ. ಇದೊಂದು ಒಳ್ಳೆಯ ನಿರ್ಧಾರವಾಗಿದ್ದು ಕೊರೊನಾ ತಡೆಗೆ ಇದು ಅನಿವಾರ್ಯವೂ ಹೌದು.
state Jun 30, 2020, 4:36 PM IST