ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಕಾವೇರಿ ನದಿ ಹೂಳೆತ್ತದ ಪರಿಣಾಮ ಪಟ್ಟಣ ಹಾಗೂ ಕಾವೇರಿ ನದಿ ತಟದ ಜನತೆ ಮತ್ತೆ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ.
Karnataka Districts May 3, 2020, 11:53 AM IST
2020 ಆರಂಭವಾದಾಗ ಈ ವರ್ಷ ಒಂದಾದ ಬಳಿಕ ಮತ್ತೊಂದರಂತೆ ಸಂಕಷ್ಟಗಳು ಎದುರಾಗುತ್ತವೆ ಎಂದು ಯಾರೂ ಯೋಚಿಸಿರಲಿಕ್ಕಿಲ್ಲ. ವರ್ಷದಾರಂಭದಲ್ಲಿ ಆಸ್ಟ್ರೇಲಿಯಾದ ಕಾಡ್ಗಿಚ್ಚು ಇಡೀ ದೇಶದ ಗಮನ ಸೆಳೆಯಿತು. ಆದರೆ ಅಷ್ಟರಲ್ಲಾಗಲೇ ಚೀನಾದಲ್ಲಿ ಮಹಾಮಾರಿಯೊಂದು ಹುಟ್ಟಿಕೊಂಡಿತ್ತು. ಆದರೀಗ ಕೊರೋನಾ ವೈರಸ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಮಹಾಮಾರಿ ಅವಾಂತರವನ್ನೇ ಸೃಷ್ಟಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಟ್ಟಹಾಸ ಮುಂದುವರೆಸಿದೆ. ಹಲವಾರು ದೇಶಗಳಲ್ಲಿ ಇದನ್ನು ನಿಯಂತ್ರಿಸಲು ಲಾಕ್ಡೌನ್ ಘೋಷಿಸಲಾಗಿದೆ. ಇದರಲ್ಲಿ ಮಲೇಷ್ಯಾ ಕೂಡಾ ಒಂದು. ಇಲ್ಲಿನ ಪೆನಾಂಗ್ ಎಂಬಲ್ಲಿ ಜನರು ಲಾಕ್ಡೌನ್ನಿಂದ ಮನೆಯಲ್ಲಿದ್ದರು. ಆದರೀಗ ಇಲ್ಲಿನ ಜನ ಮತ್ತೊಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿ ಭಾರೀ ಬಿರುಗಾಳಿ ಬಳಿಕ ಈಗ ಪ್ರವಾಹ ಜನರ ನಿದ್ದೆಗೆಡಿಸಿದೆ. ಬಿರುಗಾಳಿಗೆ ಹಲವಾರು ಮನೆಗಳ ಛಾವಣಿ ಹಾರಿಹೋಗಿದ್ದು, ಜನರು ರಸ್ತೆಯಲ್ಲಿ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿದೆ ಕೆಲ ಪೋಟೋಗಳು.
International Apr 27, 2020, 6:09 PM IST
ಕಳೆದ ವರ್ಷ ದಕ್ಷಿಣ ಕೊಡಗಿನ ತೋರ ಎಂಬ ಗ್ರಾಮದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ತನ್ನ ತಾಯಿ, ಹೆಂಡತಿ, ಮಕ್ಕಳನ್ನೆಲ್ಲ ಕಳೆದುಕೊಂಡು ತೀವ್ರ ಹತಾಶೆಗೊಳಗಾಗಿ ಅನಾಥಭಾವದಲ್ಲಿದ್ದ ಸಂತ್ರಸ್ತ ಪ್ರಭು ಅವರ ಬಾಳಿನಲ್ಲಿ ಈಗ ಹೊಸ ಆಶಾಕಿರಣ ಮೂಡಿದೆ.
Karnataka Districts Apr 9, 2020, 11:47 AM IST
ಹಿಂದೆ ಕೇರಳಲ್ಲಿ ಪ್ರವಾಹ ಉಂಟಾದಾಗಲೂ, ಕರ್ನಾಟಕದಲ್ಲಿ ಪ್ರವಾಹ ಬಂದಾಗಲೂ ಒಂದು ಕಾಲದ ನೀಲಿ ಚಿತ್ರತಾರೆ, ಬಾಳಿವುಡ್ ನಾಯಕಿ ಸನ್ನಿ ಲಿಯೋನ್ ಕೋಟಿ ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಕೊರೋನಾ ಮಾರಿ ಹೋಗಲಾಡಿಸಲು ಬರೋಬ್ಬರಿ 650 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಸ್ ಗಿಂತ ವೇಗವಾಗಿ ಹರಡುತ್ತಿದೆ.
Coronavirus Fact Check Apr 1, 2020, 5:12 PM IST
ಕೊರೋನಾ ಹಬ್ಬುವುದನ್ನು ತಡೆಯಲು ಕೇಂದ್ರ ಸರ್ಕಾರ ಘೋಷಿಸಿದ 21 ದಿನಗಳ ದೇಶವ್ಯಾಪಿ ಲಾಕ್ಡೌನ್, ಸಾವಿರಾರು ವಲಸಿಗ ಕಾರ್ಮಿಕರನ್ನು ಹೈರಾಣಾಗಿಸಿದೆ. ಉದ್ಯೋಗ ಅರಸಿ ಸಾವಿರಾರು ಕಿ.ಮೀ ದೂರದ ಪ್ರದೇಶಗಳಿಗೆ ತೆರಳಿದ್ದ ಕಾರ್ಮಿಕರು, ಇದೀಗ ತವರಿಗೆ ಮರಳಲು ರೈಲು, ಬಸ್ ಸೇರಿದಂತೆ ಯಾವುದೇ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಮುಂದೇನು ಎಂದು ಹಸಿದ ಹೊಟ್ಟೆಯಲ್ಲೇ ಚಿಂತೆಗೆ ಬೀಳುವಂತಾಗಿದೆ.
Coronavirus India Mar 29, 2020, 8:52 AM IST
ಕೇರಳದ ಜೋಡಿಯೊಂದಕ್ಕೆ ಪ್ರಾಕೃತಿಕ ವಿಕೋಪಗಳು ಪದೇ ಪದೇ ವಿಘ್ನ ತರುತ್ತಿದ್ದು, ಮೂರನೇ ಬಾರಿಗೆ ಮದುವೆ ಮುಂದೆ ಹೋಗುವಂತೆ ಮಾಡಿದೆ
India Mar 22, 2020, 11:24 AM IST
ಕಳೆದ ವರ್ಷದ ಮಳೆಗಾಲ ಋತುವಿನಲ್ಲಿ ಕೃಷ್ಣಾ ನದಿ ತನ್ನ ಒಡಲನ್ನು ಮೀರಿ ಹರಿದಿತ್ತು. ಪರಿಣಾಮ ಸಾವಿರಾರು ಕುಟುಂಬಗಳು, ಜಾನುವಾರುಗಳು, ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಬಡವರ ಬದುಕು ಕೃಷ್ಣೆಯ ಒಡಲು ಸೇರಿಹೋಗಿದ್ದವು. ಅಂದಿನ ಆ ರೌದ್ರನರ್ತನ ಆರ್ತನಾದ ಇನ್ನೂ ಸಂತ್ರಸ್ತರ ಮನದಿಂದ ದೂರವಾಗಿಲ್ಲ. ಅಷ್ಟೇ ಏಕೆ ಅಂದು ಪ್ರವಾಹದ ಸಂದರ್ಭದಲ್ಲಿ ಕಳೆದುಕೊಂಡಿದ್ದ ಸಂತ್ರಸ್ತರ ಬದುಕು ಇನ್ನೂ ಸರಿಯಾಗಿಲ್ಲ. ಹೀಗಾಗಿ ಅವರದು ಇನ್ನೂ ಬೀದಿಯೇ ಬದುಕು ಎಂಬಂತಾಗಿದೆ.
Karnataka Districts Mar 12, 2020, 2:09 PM IST
ಜಿಲ್ಲೆಯಲ್ಲಿ ನಡೆದಿರುವ ನೆರೆ ಅಕ್ರಮದ ಮೊತ್ತ ಕೇಳಿದರೆ ಹೌಹಾರುವಂತಿದೆ. ಯಾರದೋ ಜಮೀನಿಗೆ ಮತ್ತಾರಿಗೋ ಪರಿಹಾರ ವಿತರಣೆ ಮಾಡಿ ಭಾರೀ ಗೋಲ್ಮಾಲ್ ನಡೆದಿದೆ. ಹೀಗೆ ನಡೆದಿರುವ ಅಕ್ರಮದ ಮೊತ್ತ 18 ಕೋಟಿಗೂ ಅಧಿಕ!.
Karnataka Districts Mar 11, 2020, 8:16 AM IST
ನೆರೆ ಹಾವಳಿಯಲ್ಲಿ ಸಂಪೂರ್ಣ ಮನೆ ಕುಸಿತಗೊಂಡ ನಿರಾಶ್ರಿತರಿಗೆ ಹೊಸ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಕಳೆದ ನಾಲ್ಕು ತಿಂಗಳು ಹಿಂದೆಯೇ ಮುಂಗಡವಾಗಿ 1 ಲಕ್ಷ ಹಣ ನೀಡಿದೆ. ಅಂಥ ಫಲಾನುಭವಿಗಳ ಮನೆ ನಿರ್ಮಾಣ ಕಾರ್ಯ ಈ ತಿಂಗಳಾಂತ್ಯದಲ್ಲಿ ಆರಂಭಿಸದಿದ್ದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಶಾಸಕ ಉಮೇಶ ಕತ್ತಿ ಎಚ್ಚರಿಸಿದ್ದಾರೆ.
Karnataka Districts Mar 7, 2020, 8:44 AM IST
ನೆರೆ ಹಾಗೂ ಪ್ರವಾಹ, ಕೇಂದ್ರದಿಂದ ಜಿಎಸ್ಟಿ ಕಟ್, ತೆರಿಗೆ ಹಣ ಕಟ್ ಸೇರಿದಂತೆ ರಾಜ್ಯಬೊಕ್ಕಸ ಖಾಲಿಯಾಗಿರುವ ಪರಿಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಆರಕ್ಕೇರದ ಮೂರಕ್ಕಿಳಿಯದ ಬಜೆಟ್ ಮಂಡಿಸಿದ್ದಾರೆ. ಕಾನೂನಿನ ಮೂಲಕ ಗಲ್ಲು ಶಿಕ್ಷೆಯನ್ನು ಮುಂದೂಡುತ್ತಿದ್ದ ನಿರ್ಭಯಾ ಹತ್ಯಾಚಾರಿಗಳಿಗೆ ಕೊನೆಗೂ ಗಲ್ಲು ಫಿಕ್ಸ್ ಆಗಿದೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದೆ, ಕಿಚ್ಚ ಸುದೀಪ್ಗೆ ನಾಯಕಿ ಫೈನಲ್, ಕರ್ನಾಟಕ ಬಂದ್ ಎಚ್ಚರಿಕೆ ಸೇರಿದಂತೆ ಮಾರ್ಚ್ 5ರ ಟಾಾಪ್ 10 ಸುದ್ದಿ ಇಲ್ಲಿವೆ.
News Mar 5, 2020, 4:40 PM IST
ಹಳೆ ಮನೆ ತೆರವುಗೊಳಿಸುವ ವೇಳೆ ಬೆಳ್ಳಿ, ಚಿನ್ನದ ನಾಣ್ಯ ಪತ್ತೆ| ನೆರೆಯಿಂದ ಇವರ ಮನೆ ಕುಸಿದಿತ್ತು. ಹೊಸ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ 5 ಲಕ್ಷ ಪರಿಹಾರ ಮಂಜೂರು
India Mar 4, 2020, 4:47 PM IST
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಳ್ಳುತ್ತಿರುವ ದೃಶ್ಯ ಕಂಡುಬರುತ್ತಿದೆ. ಕಳೆದ ಆಗಸ್ಟ್ನಲ್ಲಿ ತುಂಬಿ ಹರಿದು ಪ್ರವಾಹ ಸೃಷ್ಟಿಸಿದ ಕಾವೇರಿ ನದಿಯಲ್ಲಿ ಇದೀಗ ನೀರಿನ ಬದಲು ಬಂಡೆ ಕಲ್ಲುಗಳು ಗೋಚರಿಸುತ್ತಿವೆ.
Karnataka Districts Feb 27, 2020, 10:23 AM IST
ಕಳೆದ ವರ್ಷ ಬಂದ ಭೀಕರ ಪ್ರವಾಹದಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಸರ್ಕಾರಿ ಶಾಲೆ ಸಂಪೂರ್ಣ ಬಿದ್ದು ಹೋಗಿತ್ತು. ಹೀಗಾಗಿ ಕಳೆದ 8 ತಿಂಗಳಿಂದ ತಗಡಿನ ಶೆಡ್ನಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು.
Karnataka Districts Feb 22, 2020, 3:05 PM IST
ನೆರೆ ಕಳೆದು 6 ತಿಂಗಳಾದರೂ ಸಂತ್ರಸ್ತರ ಪರದಾಟ ತಪ್ಪಿಲ್ಲ. ಸಂತ್ರಸ್ತರ ಜೀವನದ ಜೊತೆ ಬಿಜೆಪಿ ಶಾಸಕಿ ರೂಪಾಲಿ ನಾಯಕ್ ಚೆಲ್ಲಾಟವಾಡುತ್ತಿದ್ದಾರೆ. 6 ತಿಂಗಳಾದ್ರೂ ಜನರಿಗೆ ಕಿಟ್ ನೀಡಿಲ್ಲ. ಕೆಲ ದಿನಗಳ ಹಿಂದೆ ನೆಪಕ್ಕೆಂಬಂತೆ ಕಿಟ್ ನೀಡಿದ್ದಾರೆ. ಅದರಲ್ಲಿ ಅವಧಿ ಮೀರಿದ ಬೇಳೆ, ಎಣ್ಣೆ ನೀಡಿದ್ದಾರೆ ಎಂದು ಸಂತ್ರಸ್ತರು ಅರೋಪಿಸಿದ್ದಾರೆ. ಏನಿದು ಬಿಜಿಪಿ ಶಾಸಕಿಯ ಅವಾಂತರ? ಇಲ್ಲಿದೆ ನೋಡಿ!
Karnataka Districts Feb 16, 2020, 11:40 AM IST
ಟಿಕ್ ಟಾಕ್ ಮೂಲಕ ಜನರನ್ನು ರಂಜಿಸುವ ಪ್ರತಿಭೆಗಳಿಗೆ ಕಡಿಮೆ ಇಲ್ಲ. ಕನ್ನಡದಲ್ಲಿಯೂ ಪ್ರತಿದಿನ ನೂರಾರು ಜನ ಹುಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಬುಟ್ಟಿಗಟ್ಟಲೇ ಲೈಕ್ ಪಡೆದುಕೊಂಡರೆ ಇನ್ನು ಕೆಲವರು ಹರಸಾಹಸ ಮಾಡ್ತಾರೆ. ಕನ್ನಡದದ ಟಿಕ್ ಟಾಕ್ ಸ್ಟಾರ್ ಗಳ ಮೇಲೊಂದು ನೋಟ ಇಲ್ಲಿದೆ.
News Feb 11, 2020, 4:30 PM IST