ಬಾಗಲಕೋಟೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತೆ ನೆರೆಭೀತಿ ಎದುರಾಗಿದೆ. ಬಹುತೇಕ ಕಡೆ ಮನೆ-ಮಠ, ರಸ್ತೆ-ಮೈದಾನಗಳೆಲ್ಲವೂ ಜಲಾವೃತವಾಗಿವೆ. ಗದ್ದೆಗಳಲ್ಲಿ ನೀರು ತುಂಬಿ ಬೆಳೆ ನಾಶವಾಗಿದೆ. ವಿಶೇಷವಾಗಿ, ಈರುಳ್ಳಿ ಬೆಳೆದಿರುವವರ ಪಾಡು ಹೇಳತೀರದು.
Bagalkot Oct 22, 2019, 4:05 PM IST
ವಾರದಿಂದ ಸಾಕಷ್ಟು ಮಳೆಯಾದ ಹಿನ್ನೆಲೆಯಲ್ಲಿ ಟೊಮೊಟೊ ಪೂರೈಕೆಯಲ್ಲಿ ವ್ಯತ್ಯಾಸ| ಈರುಳ್ಳಿ ಬಳಿಕ ಟೊಮೊಟೊ ಶಾಕ್: ದರ ಕೆಜಿಗೆ 80 ರುಪಾಯಿ!|
BUSINESS Oct 10, 2019, 11:13 AM IST
ಬಾಗಲಕೋಟೆ/ಗದಗ[ಅ. 07] ನೆರೆಯ ಸಂಕಷ್ಟ ಸದ್ಯಕ್ಕೆಂತೂ ಮುಗಿಯುವ ಲಕ್ಷಣ ಕಾಣುತ್ತಲೇ ಇಲ್ಲ. ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗುತ್ತಿದೆ.
ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೊಲ ಗದ್ದೆಗಳಲ್ಲಿ ನೀರು ನಿಂತು ಕೈಗೆ ಬಂದ ಬೆಳೆ ನಾಶವಾಗಿ ಹೋಗುತ್ತಿದೆ.
Karnataka Districts Oct 7, 2019, 8:47 PM IST
ಜಿಲ್ಲೆಯಾದ್ಯಂತ ಶನಿವಾರ ಮಧ್ಯರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಕೆರೆ, ಹಳ್ಳಗಳು ಭರ್ತಿಯಾಗಿ ಹರಿಯಲಾರಂಭಿಸಿದೆ. ಇನ್ನು ಕಾರಟಗಿ ತಾಲೂಕಿನ ಹುಳ್ಕಿಹಾಳ- ಗುಂಡೂರು 4.5 ಕಿ.ಮೀ ಉದ್ದದ ಉಪಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಬತ್ತದ ಬೆಳೆಗೆ ನುಗ್ಗಿ ಅಪಾರ ನಷ್ಟವನ್ನುಂಟು ಮಾಡಿದೆ.
Karnataka Districts Oct 7, 2019, 8:24 AM IST
ಈರುಳ್ಳಿ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ದಿನೇ ದಿನೇ ಏರಿಳಿತ ಕಾಣುತ್ತಿರುವ ಈರುಳ್ಳಿ ಬೆಲೆ ಇತ್ತೀಚೆಗೆ ಕೆಲವೆಡೆ ಕೆ.ಜಿ.ಗೆ 80 ರು. ಮುಟ್ಟಿತ್ತು. ಕೇಂದ್ರ ಸರ್ಕಾರ ರಫ್ತು ನಿಷೇಧ, ದಾಸ್ತಾನಿಗೆ ಮಿತಿ ಹೇರಿದ ಬೆನ್ನಲ್ಲೇ ಅಲ್ಪ ಮಟ್ಟಿಗೆ ದರ ಇಳಿಕೆಯಾಗಿದೆ. ಏಷ್ಯಾದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಾಸಲ್ಗಾಂವ್ನಲ್ಲಿ ಕೆ.ಜಿ. ಈರುಳ್ಳಿ ಬೆಲೆ 30 ರು.ಗೆ ಬಂದಿದೆ. ಆದರೆ ಬೆಂಗಳೂರು, ದೆಹಲಿಯಲ್ಲಿ 50 ರು. ಮೇಲೇಯೇ ಇದ್ದು, ಬೆಲೆ ಇನ್ನೂ ಗಮನಾರ್ಹ ಇಳಿಕೆ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಏರಿಳಿತಕ್ಕೆ ಕಾರಣ ಏನು? ಭಾರತದಲ್ಲಿ ಎಷ್ಟು ಈರುಳ್ಳಿ ಉತ್ಪಾದನೆಯಾಗುತ್ತದೆ? ಈರುಳ್ಳಿ ಬೆಲೆ ಏರಿಕೆಯಿಂದ ಏನೇನಾಗುತ್ತೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.
News Oct 5, 2019, 4:36 PM IST
ನಗರ ಸೇರಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಸಮಸ್ಯೆ ಅನುಭವಿಸಿದರು. ಎಪಿಎಂಸಿ ಆವರಣದಲ್ಲಿ ರೈತರು ಮಾರಾಟಕ್ಕೆ ತಂದಿಟ್ಟ ಈರುಳ್ಳಿ ಬೆಳೆಗೆ ನೀರು ನುಗ್ಗಿದ ಪರಿಣಾಮ ರೈತರಿಗೆ ನಷ್ಟವಾಗಿದೆ.
Karnataka Districts Oct 5, 2019, 11:24 AM IST
ಬಾಂಗ್ಲಾ ಪ್ರಧಾನಿಗೂ ತಟ್ತು ಈರುಳ್ಳಿ ಬಿಸಿ: ಅಡುಗೆಗೆ ಈರುಳ್ಳಿ ಬಳಸದಂತೆ ಸೂಚನೆ| ಭಾರತ-ಬಾಂಗ್ಲಾದೇಶ ವ್ಯಾಪಾರ ವೇದಿಕೆ ಸಭೆಯಲ್ಲಿ ಮಾತನಾಡಿದ ಹಸೀನಾ
News Oct 5, 2019, 11:16 AM IST
ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬ ಹತ್ತಿರವಾಗುತ್ತಿದ್ದಂತೆ ಮಾರುಕಟ್ಟೆಯ ವಹಿವಾಟು ಜೀವ ತಳೆದಿದೆ. ಮಳೆಯ ನಡುವೆಯೂ ಜನರು ಹಬ್ಬಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ.
Karnataka Districts Oct 5, 2019, 11:08 AM IST
ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏಕಾಏಕಿ ಕ್ವಿಂಟಲ್ಗೆ 1000 ದವರೆಗೆ ಕುಸಿತ ಕಂಡ ಪರಿಣಾಮ ಆಕ್ರೋಶಗೊಂಡ ರೈತರು ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಗುರುವಾರ ನಡೆದಿದೆ. ಕಳೆದ ವಾರವಷ್ಟೇ ಎಪಿಎಂಸಿಯಲ್ಲಿ ಗುಣಮಟ್ಟದ ಈರುಳ್ಳಿಗೆ ಒಂದು ಕ್ವಿಂಟಲ್ಗೆ 3700 ದರ ಇತ್ತು. ಗುರುವಾರ ಏಕಾಏಕಿ ದರ ಕ್ವಿಂಟಲ್ಗೆ 2700ಕ್ಕೆ ಕುಸಿತ ಕಂಡಿದ್ದರಿಂದ ರೈತರಿಗೆ ಆಘಾತವುಂಟಾಗಿತ್ತು.
Karnataka Districts Oct 4, 2019, 9:23 AM IST
ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 80-90 ರು.ಗೆ ತಲುಪಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿದೆ. ಅಲ್ಲದೆ ವ್ಯಾಪಾರಿಗಳು ಈರುಳ್ಳಿ ದಾಸ್ತಾನು ಮಾಡುವ ಪ್ರಮಾಣಕ್ಕೂ ಮಿತಿ ಹೇರಿದೆ.
NEWS Sep 30, 2019, 8:09 AM IST
ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಕೇಂದ್ರ ಸರ್ಕಾರ, ತಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಎಲ್ಲಾ ರೀತಿಯ ಈರುಳ್ಳಿ ರಪ್ತುನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.
BUSINESS Sep 29, 2019, 4:56 PM IST
ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಕಳೆದ ವಾರಕ್ಕೆ ಹೋಲಿಸಿದಲ್ಲಿ ಬೆಲೆ ಕೊಂಚ ತಗ್ಗಿದ್ದರೂ ದೀಪಾವಳಿಗೆ ಮುನ್ನವೆ ಈರುಳ್ಳಿ ಕೊಳ್ಳುವಾಗ ಕಣ್ಣೀರು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಆಗಸ್ಟ್ ಮೊದಲೆರಡು ವಾರ ಸುರಿದ ಮಳೆ ಈರುಳ್ಳಿ ರೈತನ ಹೊಟ್ಟೆ ಮೇಲೆ ಹೊಡೆದಿದೆ. ಅದರ ಪರಿಣಾಮವೀಗ ಗ್ರಾಹಕರ ಮೇಲಾಗುತ್ತಿದೆ.
Karnataka Districts Sep 29, 2019, 7:55 AM IST
ಈರುಳ್ಳಿ ಬೆನ್ನಲ್ಲೇ ತರಕಾರಿಗಳು ಗಗನಮುಖಿ| ಪ್ರವಾಹದಿಂದ ನೆಲ ಕಚ್ಚಿದ ತರಕಾರಿ| ಇಳುವರಿ ಇಳಿಕೆ ಹಿನ್ನೆಲೆ ಬೆಲೆ ನಿಧಾನವಾಗಿ ಏರಿಕೆ, ಗ್ರಾಹಕರಿಗೆ ಹೊರೆ
BUSINESS Sep 29, 2019, 7:43 AM IST
ಬೆಂಗಳೂರಿನಲ್ಲಿ ಏಕಾಏಕಿ ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇದಕ್ಕೆ ಕಾರಣ ಇದೀಗ ಬಯಲಾಗಿದೆ. ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳ್ಳತನವಾಗಿದ್ದು, ದೇಶಾದಯಂತ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
BUSINESS Sep 24, 2019, 7:58 PM IST
ಮುಂಗಾರು ಆರ್ಭಟದಿಂದ ಈರುಳ್ಳಿ ಉತ್ಪಾದನೆ ಕುಂಠಿತಗೊಂಡು, ದರ ಎಲ್ಲೆಡೆ ಏರಿಕೆ ಕಾಣುತ್ತಿದೆ. ವಿಶೇಷವೆಂದರೆ ಹಿಮಾಚಲಪ್ರದೇಶದಲ್ಲಿ ಈರುಳ್ಳಿಗಿಂತಲೂ ಸೇಬು ಹಣ್ಣು ಅಗ್ಗದ ದರದಲ್ಲಿ ಸಿಗುತ್ತಿದೆ. ಶಿಮ್ಲಾದ ಮಾರುಕಟ್ಟೆಯಲ್ಲಿ ಪ್ರತಿ ಕೇಜಿ ಸೇಬು 30 ರು.ಗೆ ಸಿಗುತ್ತಿದೆ.
NEWS Sep 24, 2019, 11:06 AM IST