ರಾಜ್ಯ ಕಾಂಗ್ರೆಸ್ನ ಬೇಗುದಿ, ಒಳಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಡುವಿನ ಜಗಳ ತಾರಕಕ್ಕೇರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯನ್ನು ಹೊರಗಿಟ್ಟು ಸಭೆ ನಡೆಸುತ್ತಿದ್ದಾರೆ. ಮತ್ತೆ ಎರಡು ಡಿಸಿಎಂ ಹುದ್ದೆ ಸೃಷ್ಟಿಸಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
state Oct 30, 2023, 4:24 AM IST
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಎಫ್ಡಿಎ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮವೆಸಗಲು ಅಭ್ಯರ್ಥಿಗಳು ಗುಪ್ತಾಂಗದಲ್ಲಿ ಬ್ಲೂಟೂತ್ ಇಟ್ಟುಕೊಂಡು ಬಂದಿದ್ದರು.
State Govt Jobs Oct 29, 2023, 9:21 PM IST
ಮನೆಯ ಮುಂದೆ ನೀರು ಹರಿಸುವ ವಿಚಾರಕ್ಕೆ ನಡೆದ ಜಗಳಲ್ಲಿ ಎಲ್ಲರ ಮುಂದೆಯೇ ಪರ ಪುರುಷನೊಬ್ಬ ಸೀರೆ ಹಿಡಿದು ಎಳೆದಿದ್ದಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
CRIME Oct 29, 2023, 4:45 PM IST
ಪರೀಕ್ಷೆ ವೇಳೆ, ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಲಿಲ್ಲ. ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ತೆರಳುವ ಮುನ್ನ ನಾಮ್ ಕೆ ವಾಸ್ತೆಯಂತೆ ಒಂದಿಷ್ಟು ಮೈದಡವಿ ಚೆಕ್ ಮಾಡಿದ್ದು ಬಿಟ್ಟರೆ, ಅಂತಹ ಭದ್ರತೆ ಕೈಗೊಂಡಿರಲಿಲ್ಲ.
state Oct 29, 2023, 11:07 AM IST
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪಿಗಳೇ ಈ ಕೆಇಎ ಪರೀಕ್ಷೆ ಅಕ್ರಮದ ಹಿಂದಿರುವ ಶಂಕೆ ಇದೆ. ಕಲಬುರಗಿಯಲ್ಲಿ ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆರ್.ಡಿ.ಪಾಟೀಲ್ ಮೇಲೆ ಕೇಸ್ ದಾಖಲಾಗಿರುವುದು ಮತ್ತು ಆರ್.ಡಿ.ಪಾಟೀಲನ ಊರಾದ ಅಫಜಲ್ಪುರದ ಸೊನ್ನ ಗ್ರಾಮದವರ ಹಲವರು ಇರುವುದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
state Oct 29, 2023, 6:29 AM IST
ಕಿವಿಯೊಳಗೆ ಅಡಗಿಸಿಡಬಹುದಾದ ಬರಿಗಣ್ಣಿಗೆ ಸುಲಭವಾಗಿ ಕಾಣಿಸದ ಅತ್ಯಾಧುನಿಕ ಕಿರು ಬ್ಲೂಟೂತ್ ಅನ್ನು ಪರೀಕ್ಷಾ ಅಕ್ರಮಕ್ಕಾಗಿ ಬಳಕೆ ಮಾಡಲಾಗಿದೆ. ಇದಕ್ಕೆ ಪೂರಕ ಸಂಪರ್ಕ ಕಲ್ಪಿಸುವ ಸಿಮ್ಕಾರ್ಡ್ ಹೊಂದಿದ ಬ್ಲೂಟೂತ್ ಡಿವೈಸ್ ಅನ್ನು ಶರ್ಟಿನ ಕಾಲರ್, ಅಂಡರ್ವೇರ್ ಅಥವಾ ಬನಿಯಾನ್ನಲ್ಲಿ ಅಡಗಿಸಿಡಲಾಗಿರುತ್ತದೆ.
state Oct 29, 2023, 5:10 AM IST
ಇಂದು ರಾಜ್ಯಾದ್ಯಂತ ಕೆಪಿಎಸ್ಸಿಯ ವಿವಿಧ ಇಲಾಖೆಗಳ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಬ್ಲೂಟೂತ್ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
state Oct 28, 2023, 2:44 PM IST
ಯಾದಗಿರಿ ಜಿಲ್ಲೆಯಲ್ಲಿ 85 ತಾಂಡಾ/ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ 12,400 ಕುಟುಂಬಗಳಿಗೆ ಜ.19ರಂದು ಕಲಬುರಗಿ ಜಿಲ್ಲೆ ಮಳಖೇಡದಲ್ಲಿ ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಆದರೆ ಇದರಲ್ಲಿ 24 ತಾಂಡಾ/ಹಟ್ಟಿಗಳ 3,257 ಕುಟುಂಬಗಳಿಗೆ ಅಂತಿಮ ಅಧಿಸೂಚನೆಯೇ ಆಗದೆಯೇ ಹಕ್ಕುಪತ್ರ ನೀಡಲಾಗಿದೆ.
Karnataka Districts Oct 28, 2023, 9:22 AM IST
ಯಾದಗಿರಿ ಜಿಲ್ಲೆಯಲ್ಲಿ ಮರಳು ಮಾಫಿಯಾ ಮತ್ತೆ ತಲೆ ಎತ್ತಿದಂತಿದೆ. ಅಕ್ರಮ ಮರಳು ದಂಧೆಯ ದೃಶ್ಯಗಳನ್ನು ಚಿತ್ರೀಕರಿಸಿದ್ದಕ್ಕೆ ವ್ಯಕ್ತಿಗಳಿಬ್ಬರನ್ನು ಕಾರಿನ ಡಿಕ್ಕಿಯೊಳಗೆ ಎಳೆದು, ಹಿಗ್ಗಾಮುಗ್ಗಾ ಥಳಿಸಿದ ದಂಧೆಕೋರರು, ಇಬ್ಬರನ್ನೂ ಕೃಷ್ಣಾ ನದಿಯಲ್ಲಿ ಜೀವಂತವಾಗಿ ಎಸೆದು ಹತ್ಯೆಗೈಯ್ಯುವ ಸಂಚು ನಡೆಸಿರುವ ಆರೋಪ ಕೇಳಿಬಂದಿದೆ.
state Oct 23, 2023, 5:18 AM IST
ಹೇಗಾದರೂ ಮಾಡಿ ಬೆಳೆ ರಕ್ಷಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಎತ್ತಿನ ಗಾಡಿಗಳಲ್ಲಿ, ಕೊಡ ತಲೆ ಮೇಲೆ ಹೊತ್ತು, ಟ್ಯಾಂಕರ್ಗಳ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಆದರೆ, ಅದು ತಾತ್ಕಾಲಿಕ ಪರಿಹಾರವಷ್ಟೇ. ಮಳೆ ಬಾರದ ಹೊರತು ಬೆಳೆಗಳು ಉಳಿಸಿಕೊಳ್ಳುವುದು ಕಷ್ಟ. ಉತ್ತಮ ರೀತಿಯಲ್ಲಿ ಬೆಳೆ ಬಾರದಿದ್ದಲ್ಲಿ ಮುಂದೆ ಇಳುವರಿ ಕೂಡ ಕುಂಠಿತಗೊಳ್ಳಲಿದೆ.
Karnataka Districts Oct 21, 2023, 10:30 PM IST
ಬೆಳೆಗಳು ಒಣಗಿ ಹೋಗುತ್ತಿರುವುದನ್ನು ಕಂಡು ರೈತರು ಸಾಲ ಮಾಡಿ ಹೊಲಗಳಿಗೆ ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದಾರೆ. ಈಗಾಗಲೇ ರೈತರು ಬಿತ್ತನೆ ಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕ ಕಳೆ ತೆಗೆಸುವುದು ಇನ್ನಿತರ ಕೆಲಸಗಳಿಗೆ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿ ಹೈರಾಣಾಗಿದ್ದಾರೆ.
Karnataka Districts Oct 20, 2023, 10:30 PM IST
ವಾಣಿಜ್ಯ ನಗರಿಯತ್ತ ದಾಪುಗಾಲು ಇಡುತ್ತಿರುವ ಶಹಾಪುರ ತಾಲೂಕಿನಲ್ಲಿ ಸುಮಾರು ಒಂಬತ್ತು ಕಚೇರಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಸರಕಾರಿ ಕಟ್ಟಡಗಳು ಆನೇಕ ಖಾಲಿ ಮತ್ತು ಪಾಳುಬಿದ್ದಿವೆ. ಇವುಗಳನ್ನು ಕೊಂಚ ದುರಸ್ತಿಗೊಳಿಸಿ ಸುಣ್ಣಬಣ್ಣ ಬಳಿದು ಕೊಟ್ಟರೆ ಸರಕಾರಿ ಆಸ್ತಿಯೂ ಉಳಿಸಿದಂತಾಗುತ್ತದೆ ಮತ್ತು ದೊಡ್ಡ ಮೊತ್ತದ ಬಾಡಿಗೆಯೂ ಉಳಿಯುತ್ತದೆ. ಆದರೆ, ಅಂತಹ ಯಾವ ಕೆಲಸಕ್ಕೂ ಒಬ್ಬ ಅಧಿಕಾರಿಯೂ ಮುಂದಾಗುತ್ತಿಲ್ಲ.
Karnataka Districts Oct 19, 2023, 11:00 PM IST
ರಾಜ್ಯದಲ್ಲಿ ಕಂಡು ಕೇಳರಿಯದಷ್ಟು ಬರ ಪರಿಸ್ಥಿತಿ ಎದುರಾಗಿದೆ. ಮಳೆಯಿಲ್ಲದೇ ಬೆಳೆ ಒಣಗುತ್ತಿವೆ. ಇದರಿಂದ ರೈತಾಪಿ ವರ್ಗ ಸಂಪೂರ್ಣ ಕಂಗಲಾಗಿದ್ದು, ಜಮೀನುಗಳಲ್ಲಿ ಕೆಲಸವಿಲ್ಲದೇ ಗ್ರಾಮೀಣ ಭಾಗದ ಜನರು ಬದುಕಲು ಸಂಕಷ್ಟಪಡುವಂತಾಗಿದೆ. ಆದ್ರೆ ಸರ್ಕಾರದ ನರೇಗಾ ಕೆಲಸ ಮಾಡಿಯಾದ್ರು ಬದುಕು ನಡೆಸಬೇಕು ಅಂದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಇಲ್ಲದಂತಾಗಿದೆ. ಇದರಿಂದ ಕೆಲಸಕ್ಕಾಗಿ ಮಹಿಳಾ ಕಾರ್ಮಿಕರು ಅಲೆದಾಡುವಂತಾಗಿದೆ.
state Oct 19, 2023, 6:52 PM IST
ಆಕೆ ವಿಷಜಂತು ಹಾವು ಕಡಿತಕ್ಕೊಳಗಾದವರಿಗೆ ಉಚಿತ ಚಿಕಿತ್ಸೆ ನೀಡುವ ಮಹಾತಾಯಿ. ಕಳೆದ 35 ವರ್ಷದಿಂದ ಜನರಿಂದ ಒಂದು ಪೈಸೆ ಹಣವನ್ನು ಪಡೆಯದೇ ಜನರ ಪಾಲಿಗೆ ಸಂಜೀವಿನಿಯಾಗಿದ್ದಾರೆ.
Karnataka Districts Oct 16, 2023, 9:43 PM IST
ಪಿಡಿಓನಿಂದ ಮತ್ತೋರ್ವ ಗ್ರಾಮಸ್ಥನಿಗೆ ಕೈತಿರುವಿ ಕಪಾಳಮೋಕ್ಷ । ಸುರಪುರದ ಮಲ್ಲಾ (ಬಿ) ಗ್ರಾಪಂನಲ್ಲಿ ಘಟನೆ। ದೌರ್ಜನ್ಯದ ವೀಡಿಯೋ ವೈರಲ್
Karnataka Districts Oct 15, 2023, 11:28 AM IST