Asianet Suvarna News Asianet Suvarna News

ಬೆಂಗಳೂರಿನಲ್ಲಿ ಸೇಸಮ್ಮನ ಸಂಭ್ರಮ: ಮಳೆಯ ಮಧ್ಯೆ ಹಾಟ್ ಆಗಿ ಕಂಡ ಸನ್ನಿ ಲಿಯೋನ್!

ಬಾಲಿವುಡ್ ನಟಿ ಸನ್ನಿ ಲಿಯೋನ್ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದಾರೆ. ಹೌದು! 'ಚಾಂಪಿಯನ್' ಸಿನಿಮಾದ ಆಡಿಯೋ ಲಾಂಚ್‌ಗಾಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಭೇಟಿ ನೀಡಿದ್ದಾರೆ.

sunny leone at champion movie audio launch event gvd
Author
Bangalore, First Published May 20, 2022, 12:06 AM IST

ಬಾಲಿವುಡ್ (Bollwood) ನಟಿ  ಸನ್ನಿ ಲಿಯೋನ್ (Sunny Leone) ಸಿಲಿಕಾನ್ ಸಿಟಿ ಬೆಂಗಳೂರಿಗೆ (Bengaluru) ಆಗಮಿಸಿದ್ದಾರೆ. ಹೌದು! 'ಚಾಂಪಿಯನ್' (Champion) ಸಿನಿಮಾದ ಆಡಿಯೋ ಲಾಂಚ್‌ಗಾಗಿ (Audio Launch) ಸನ್ನಿ ಲಿಯೋನ್ ಬೆಂಗಳೂರಿಗೆ ಭೇಟಿ ನೀಡಿದ್ದು, ಸ್ಪೋರ್ಟ್ಸ್ ಕಥೆ ಆಧಾರಿತ 'ಚಾಂಪಿಯನ್' ಸಿನಿಮಾದಲ್ಲಿ ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ನಟಿಸಿದ್ದಾರೆ. ಶಿವರಾಜ್ ಶಿಂಧೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿನ ವಿಶೇಷ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕುವ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ವಾಪಸಾಗಿದ್ದಾರೆ. 'ಡಿಂಗರ್ ಬಿಲ್ಲಿ' ಅನ್ನೋ  ಹಾಡಿಗೆ ಸನ್ನಿ ಹೆಜ್ಜೆ ಹಾಕಿದ್ದಾರೆ. 

ಇನ್ನು ಕಾರ್ಯಕ್ರಮದಲ್ಲಿ ಚಾಂಪಿಯನ್ ಚಿತ್ರತಂಡ ಸ್ಟೇಜ್ ಮೇಲೆ ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದೆ. ನಂತರ ಮನಬಿಚ್ಚಿ ಮಾತನಾಡಿದ ಸನ್ನಿ, ಚಾಂಪಿಯನ್ ಐ ಲವ್ ದ ಸಾಂಗ್ ನನ್ನ ಫೇವರಿಟ್ ಸಾಂಗ್ ನನಗೆ ತುಂಬಾ ಇಷ್ಟ. ಮಂಡ್ಯ ಜನತೆ ನನ್ನ ಹುಟ್ಟುಹಬ್ಬವನ್ನು (Birthday) ಆಚರಿಸಿದರು. ತುಂಬಾ ಖುಷಿ ಆಯಿತು. ಅಭಿಮಾನಿಗಳ ಪ್ರೀತಿಗೆ ನಾನು ಋಣಿ. ನನಗೆ ಬೆಂಗಳೂರು ತುಂಬಾ ಇಷ್ಟ. ಬೇಸಿಕ್ ಹ್ಯುಮ್ಯಾನಿಟಿ, ಸೋಷಿಯಲ್ ಕೆಲಸಗಳು ಫ್ಯಾಮಿಲಿಗೆ ಹೆಚ್ಚು ಮಹತ್ವ ಕೊಡಬೇಕು ಎಂದು ಹೇಳಿದರು. ಮಾತ್ರವಲ್ಲದೇ ಸನ್ನಿ ಲಿಯೋನ್‌ ಹೆಸರಲ್ಲಿ ಮಟನ್ ಸ್ಟಾರ್ ತೆರೆದ ವಿಚಾರವಾಗಿ ನಾನು ವೆಜಿಟೇರಿಯನ್ ಎಂದು ಸನ್ನಿ ಲಿಯೋನ್ ತಿಳಿಸಿದರು. 

ಮಂಡ್ಯ ಜನರ ಅಭಿಮಾನಕ್ಕೆ‌ ಮನಸೋತ ಹಾಟ್‌ ನಟಿ ಸನ್ನಿ ಲಿಯೋನ್..!

ಕನ್ನಡದಲ್ಲಿ ಒಳ್ಳೆ ಆಫರ್ ಬಂದ್ರೆ, ನಾನು ಸಿನಿಮಾ ಮಾಡುತ್ತಿನಿ. ಈ ವೇಳೆ ಸ್ಟೇಜ್ ಮೇಲೆ ಅಭಿಮಾನಿಯನ್ನು (Fan) ಕರೆದು ಎದೆ ಮೇಲೆ ಸನ್ನಿ ಲಿಯೋನ್ ಸೈನ್ ಹಾಕಿದ್ದಾರೆ. ಕನ್ನಡ ಇಂಡಸ್ಟ್ರಿ (Sandalwood) ತುಂಬಾ ಚೆನ್ನಾಗಿ ಬೆಳವಣಿಗೆ ಆಗಿದೆ. 'ಕೆಜಿಎಫ್ 2' (KGF 2) ಚಿತ್ರ ನೋಡೋಕೆ ಆಗಿಲ್ಲ. ಮುಂದಿನ ದಿನಗಳಲ್ಲಿ ಓಟಿಟಿಯಲ್ಲಿ (OTT) ನೋಡುತ್ತೀನಿ ಎಂದು ಕನ್ನಡ ಸಿನಿಮಾಗಳ ಬಗ್ಗೆ ಸನ್ನಿ ಮಾತನಾಡಿದ್ದಾರೆ. ಮಾತ್ರವಲ್ಲದೇ ನಾನು ಕೇಕ್ ತಿಂತಿನಿ, ವೈರಟಿ ಬಗೆಯ ಪಾನೀಯ ಕುಡಿತೀನಿ, ಸಸ್ಯಹಾರ ಸೇವನೆ ಮಾಡ್ತೀನಿ ಎನ್ನುವ ಮೂಲಕ ತಮ್ಮ ಬ್ಯೂಟಿ ಸೀಕ್ರೇಟ್ಸ್ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. 

Sunny Leone; ಪತಿಯ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಹಾಟ್ ನಟಿ ಸನ್ನಿ ಲಿಯೋನ್

ಇನ್ನು ಸನ್ನಿ ಲಿಯೋನ್ ಹುಟ್ಟುಹಬ್ಬದಂದು ಮಂಡ್ಯದ ಜನತೆ ಕೊಮ್ಮೇರಹಳ್ಳಿಯ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿದ್ದರು. ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 40 ಯುವಕರು ರಕ್ತದಾನ ಮಾಡುವ ಮೂಲಕ ನೆಚ್ಚಿನ ನಟಿಗೆ ಶುಭಾಶಯ ತಿಳಿಸಿದ್ದರು. ಇದಕ್ಕೆ ಸೇಸಮ್ಮ ಇಂದು ಮತ್ತೊಮ್ಮೆ ಧನ್ಯವಾದ ತಿಳಿಸಿದ್ದಾರೆ. ಮಂಡ್ಯ ಜನತೆ ನನಗೆ ಪ್ರೀತಿ ಕೊಟ್ಟಿದ್ದಾರೆ ತುಂಬಾ ಖುಷಿ ಆಯಿತು. ನನ್ನ ಅಭಿಮಾನಿಗಳ ಪ್ರೀತಿಗೆ ನಾನು ಋಣಿ. ನಾನು ಮಂಡ್ಯದ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಆದರೆ ಇಂದು ಅದು ಆಗುವುದಿಲ್ಲ. ಆದರೆ ಇನ್ನೊಮ್ಮೆ ಖಂಡಿತ ಭೇಟಿ ಮಾಡುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
 

Follow Us:
Download App:
  • android
  • ios