<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 02 Apr 2026 11:26:16 +0530</lastBuildDate>
        <atom:link href="https://kannada.asianetnews.com/rss/yadgir" rel="self" type="application/rss+xml"/>
        <item>
            <title><![CDATA[ಯಾದಗಿರಿ: ಸುರಪುರ ಬಳಿ ಬೈಕ್‌ಗೆ ಕ್ರೂಸರ್ ಡಿಕ್ಕಿ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು]]></title>
            <link>https://kannada.asianetnews.com/gallery/state/yadgir-cruiser-collides-with-bike-in-surapura-two-bikers-died-on-spot-388uv7z</link>
            <guid isPermaLink="true">https://kannada.asianetnews.com/gallery/state/yadgir-cruiser-collides-with-bike-in-surapura-two-bikers-died-on-spot-388uv7z</guid>
            <pubDate>Thu, 12 Mar 2026 14:05:53 +0530</pubDate>
            <description><![CDATA[&lt;p&gt;&lt;strong&gt;Surapur bike cruiser collision: &amp;nbsp;&lt;/strong&gt;ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಮುಖ್ಯ ರಸ್ತೆಯಲ್ಲಿ ಕ್ರೂಸರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkgj7cz9ky1rzyrvhzxe57kf,imgname-yadagiri-accident--2--1773303739369.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Surapur bike cruiser collision: &amp;nbsp;&lt;/strong&gt;ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಮುಖ್ಯ ರಸ್ತೆಯಲ್ಲಿ ಕ್ರೂಸರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಯಾದಗಿರಿ: ಕ್ರೂಸರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ &zwnj;ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಆಲ್ದಾಳ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಕ್ರೂಸರ್ ಗುದ್ದಿರುವ ರಭಸಕ್ಕೆ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಇತ್ತ ಬೈಕ್&zwnj;ಗೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ ರಸ್ತೆ ಬದಿ ಪಲ್ಟಿಯಾಗಿದ್ದು ಕ್ರೂಸರ್ ವಾಹನದಲ್ಲಿದ್ದವರಿಗೂ ಹಲವರಿಗೆ ಗಂಭೀರ ಗಾಯಗಳಾಗಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ಸಾವಿಗೆ ಶರಣು&lt;/strong&gt;&lt;/p&gt;&lt;img&gt;&lt;p&gt;ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತಪಟ್ಟವರನ್ನು ಗೋಗಿ ಮೂಲದವರು ಎಂದು ಗುರುತಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮ&lt;/strong&gt;ಡಿಕೇರಿಯ ಭಾಗಮಂಡಲದಲ್ಲಿ ಲೀವಿಂಗ್ ಟುಗೆದರ್ ಜೋಡಿಯ ಕೊಲೆ: ಮಹಿಳೆ ಸೋದರನಿಂದಲೇ ಕೃತ್ಯ&lt;/p&gt;&lt;img&gt;&lt;p&gt;ಅಪಘಾತ ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಬೀದರ್: ಶಾಲಾ ಕಟ್ಟಡದಿಂದ ಜಿಗಿದು 10ನೇ ಕ್ಲಾಸ್ ಬಾಲಕಿ ಸಾವಿಗೆ ಶರಣು&lt;/p&gt;]]></content:encoded>
            <category>yadgir</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/yadgir-cruiser-collides-with-bike-in-surapura-two-bikers-died-on-spot-388uv7z"/>
        </item>
        <item>
            <title><![CDATA[ಅಯ್ಯೋ ಮಲ್ಲಿಕಾರ್ಜುನ ಮುತ್ಯಾ.., ಜಾಮೀನು ನಿರೀಕ್ಷೆಯಲ್ಲಿದ್ದ ನಿಮಗೆ, ಕೋರ್ಟ್ ಮತ್ತೆ ಶಾಕ್ ಕೊಡ್ತಾ!]]></title>
            <link>https://kannada.asianetnews.com/karnataka-districts/yadgiri-mallikarjun-mutya-pocso-case-bail-rejected-court-update-sat/articleshow-49c7sgq</link>
            <guid isPermaLink="true">https://kannada.asianetnews.com/karnataka-districts/yadgiri-mallikarjun-mutya-pocso-case-bail-rejected-court-update-sat/articleshow-49c7sgq</guid>
            <pubDate>Mon, 09 Mar 2026 18:22:10 +0530</pubDate>
            <description><![CDATA[&lt;p&gt;ಅಪ್ರಾಪ್ತ ಬಾಲಕಿಯೊಂದಿಗಿನ ಅನುಚಿತ ವರ್ತನೆ ಹಾಗೂ ಪೋಕ್ಸೋ ಪ್ರಕರಣದ ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಸಾಕ್ಷ್ಯನಾಶ ಮಾಡುವ ಸಾಧ್ಯತೆಯಿದೆ ಎಂಬ ಸರ್ಕಾರಿ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjcnem5jp1k6b6dk2t8eqd0f,imgname-yadgir-mallikarjun-muthya-1772099162289.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಮಾ.09): ಕ&lt;/strong&gt;ಲ್ಯಾಣ ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಹಾಗೂ ಪೋಕ್ಸೋ (POCSO) ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯದಿಂದ ಭಾರಿ ಹಿನ್ನಡೆಯಾಗಿದೆ. ಜಾಮೀನು ಸಿಗುವ ಭರವಸೆಯಲ್ಲಿದ್ದ ಮುತ್ಯಾ ಮತ್ತು ಆತನ ಭಕ್ತರಿಗೆ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ನಿರಾಕರಿಸುವ ಮೂಲಕ ಶಾಕ್ ನೀಡಿದೆ.&lt;/p&gt;&lt;h2&gt;&lt;strong&gt;ಜಾಮೀನು ಅರ್ಜಿ ತಿರಸ್ಕಾರ:&lt;/strong&gt;&lt;/h2&gt;&lt;p&gt;ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ, ಪರಾರಿ ಆಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಯಾದಗಿರಿ ಜಿಲ್ಲಾ ಪ್ರಧಾನ ನ್ಯಾಯಾಲಯವು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಮುತ್ಯಾಗೆ ಶಾಕ್ ಆಗಿದೆ.&lt;/p&gt;&lt;h2&gt;&lt;strong&gt;ಸರ್ಕಾರಿ ವಕೀಲರ ಪ್ರಬಲ ವಾದ:&lt;/strong&gt;&lt;/h2&gt;&lt;p&gt;ವಿಚಾರಣೆ ವೇಳೆ ಸರ್ಕಾರಿ ವಕೀಲರು ಮುತ್ಯಾನಿಗೆ ಜಾಮೀನು ನೀಡದಂತೆ ಅತ್ಯಂತ ಪ್ರಬಲವಾದ ವಾದ ಮಂಡಿಸಿದರು. 'ಅಪ್ರಾಪ್ತ ಬಾಲಕಿಯೊಂದಿಗೆ ನಡೆಸಿರುವ ಅನುಚಿತ ವರ್ತನೆಯು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರೋಪಿಯು ಪ್ರಭಾವಿಯಾಗಿದ್ದು, ಸಾಕ್ಷ್ಯನಾಶ ಮಾಡುವ ಅಥವಾ ಸಂತ್ರಸ್ತೆಯ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ' ಎಂದು ಸರ್ಕಾರಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದರು.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?:&lt;/strong&gt;&lt;/h2&gt;&lt;p&gt;ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ರಾಜ್ಯಾದ್ಯಂತ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಈ ಮುತ್ಯಾನಿಂದ ಹಲವು ಬಾಲಕಿಯರ ಮೇಲೆ ದೈಹಿಕ ಕಿರುಕುಳ ನಡೆಯುವ ಸಾಧ್ಯತೆಯಿದ್ದು, ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು. ರಾಜ್ಯ ಮಹಿಳಾ ಆಯೋಗವು ಕೂಡ ಬಾಲಕಿಗೆ ಕಿರುಕುಳ ನೀಡಿದ ಮುತ್ಯಾನ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿತ್ತು. ಇದರ ಬೆನ್ನಲ್ಲಿಯೇ ಜಿಲ್ಲಾ ಪೊಲೀಸರು ಮುತ್ಯಾನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್&zwnj;ಐಆರ್ ದಾಖಲಿಸಿದ್ದರು. ಭಕ್ತವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯ ಮೇಲೆ ಇಂತಹ ಗಂಭೀರ ಆರೋಪ ಬಂದಿರುವುದು ಜಿಲ್ಲಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.&lt;/p&gt;&lt;p&gt;ಸದ್ಯ ಜಾಮೀನು ಅರ್ಜಿ ವಜಾಗೊಂಡಿರುವುದು ಮುತ್ಯಾನ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ.&amp;nbsp;&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/yadgiri-mallikarjun-mutya-pocso-case-bail-rejected-court-update-sat/articleshow-49c7sgq"/>
        </item>
        <item>
            <title><![CDATA[ಯಾದಗಿರಿ: ರಸ್ತೆಬದಿ ನವಜಾತ ಗಂಡು ಶಿಶು ಶವಪತ್ತೆ: ತಡರಾತ್ರಿ ಎಸೆದು ಹೋಗಿರುವ ಶಂಕೆ]]></title>
            <link>https://kannada.asianetnews.com/state/dead-body-of-newborn-baby-found-on-the-roadside-in-gurumithakal-town-yadgir/articleshow-5nob1gm</link>
            <guid isPermaLink="true">https://kannada.asianetnews.com/state/dead-body-of-newborn-baby-found-on-the-roadside-in-gurumithakal-town-yadgir/articleshow-5nob1gm</guid>
            <pubDate>Fri, 27 Mar 2026 11:24:25 +0530</pubDate>
            <description><![CDATA[ಯಾದಗಿರಿ ಜಿಲ್ಲೆಯ ಗುರಮಿಠಕಲ್ ಪಟ್ಟಣದಲ್ಲಿ ರಸ್ತೆ ಬದಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಾಮಾಜಿಕ ಕಳಂಕಕ್ಕೆ ಅಂಜಿ ಮಗುವನ್ನು ಎಸೆದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmpxa3zbwy7jdhh2v1cewfhy,imgname-newborn-deadbody-found-in-roadside--2--1774590431210.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಸ್ತೆ ಬದಿ ನವಜಾತ ಶಿಶುವಿನ ಶವ ಪತ್ತೆ&lt;/strong&gt;&lt;/h2&gt;&lt;p&gt;ಯಾದಗಿರಿ: ಬೆಳ್ಳಂಬೆಳಗ್ಗೆ ರಸ್ತೆ ಬದಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ಗುರಮಿಠಲ್ ಪಟ್ಟಣದ ಉಪ್ಪರಗಡ್ಡಾ ಬಡಾವಣೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನವಜಾತ ಶಿಶು ಶವ ಕಂಡು ಆತಂಕಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಹುಟ್ಟಿದ ಕೂಡಲೇ ಮಗುವನ್ನು ತಂದು ಇಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಅಪರಿಚಿತರು ಬೇರೆ ಎಲ್ಲಿಂದಲೂ ಬಂದು ತಡರಾತ್ರಿ ಮಗುವನ್ನು ಇಲ್ಲಿ ಬಿಸಾಕಿ ಹೋಗಿರುವ ಅನುಮಾನ ವ್ಯಕ್ತವಾಗಿದೆ.&lt;/p&gt;&lt;h3&gt;&lt;strong&gt;ರಾತ್ರಿ ತಿಪ್ಪೆಯಲ್ಲಿ ಎಸೆದು ಹೋಗಿರುವ ಶಂಕೆ&lt;/strong&gt;&lt;/h3&gt;&lt;p&gt;ರಾತ್ರಿ ತಿಪ್ಪೆಯಲ್ಲಿ ಒದ್ದಾಡಿ ಮಗು ಸಾವನಪ್ಪಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುಮಿಠಕಲ್ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಇಂತಹ ಎರಡನೇ ಪ್ರಕರಣ ಇದಾಗಿದೆ. ಬಹುಶಃ ಅನೈತಿಕ ಸಂಬಂಧದ ಹಿನ್ನೆಲೆ ಮಗು ಜನಿಸಿರಬಹುದು. ಹೀಗಾಗಿ ಸಾಮಾಜಿಕ ಕಳಂಕಕ್ಕೆ ಅಂಜಿ ಮಗುವನ್ನು ಎಸೆದು ಹೋಗಿರುವ ಅನುಮಾನ ವ್ಯಕ್ತವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೆಟ್ರೋಲ್ ಡಿಸೇಲ್ ಮೇಲಿನ ಅಬಕಾರಿ ಸುಂಕ 10 ರೂ ಇಳಿಸಿದ ಕೇಂದ್ರ ಸರ್ಕಾರ: ಬೆಲೆ ಏರಿಕೆ ಭೀತಿಯಲ್ಲಿದ್ದ ಜನರಿಗೆ ನಿರಾಳ&lt;/strong&gt;&lt;/p&gt;&lt;p&gt;ಮೃತಪಟ್ಟ ಮಗು ಗಂಡು ಮಗುವಾಗಿದೆ. ಅನೈತಿಕ ಸಂಬಂಧ ಅಥವಾ ಅಪ್ರಾಪ್ತ ಬಾಲಕಿ ಗರ್ಭಧಾರಣೆಯಿಂದ ಕೃತ್ಯ ನಡೆದಿರಬಹುದು ಎನ್ನಲಾಗುತ್ತಿದೆ. ಹೀಗಾಗಿ ಗರ್ಭಪಾತ ಮಾಡಿ ಮಗುವನ್ನು ಎಸೆದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆ ರವಾನಿಸಲಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ ಮಗು ಬೇಕು ಎಂದವರಿಗೆ ಎಷ್ಟು ಔಷಧಿ ಮಾಡಿದರೂ ಈ ಕಾಲದಲ್ಲಿ ಮಕ್ಕಳಾಗುತ್ತಿಲ್ಲ, ಆದರೆ ಮಗು ಬೇಡ ಎಂದವರಿಗೆ ಭಗವಂತ ಕರೆದು ಕರೆದು ಕೊಡುತ್ತಾನೆ. ಇತ್ತ ಹೀಗೆ ಸುಲಭವಾಗಿ ಮಕ್ಕಳಾಗುವವರು ಹೀಗೆ ಮಕ್ಕಳ ಮೌಲ್ಯ ತಿಳಿಯದೇ ಅನಾಚಾರ ಮಾಡ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ನಿರ್ಮಾಣವಾದರೂ ಉದ್ಘಾಟನೆಯಾಗದ ಲಿಫ್ಟ್ : ಫ್ಲಾಟ್ ಫಾರ್ಮಿಂದ ಹೊರಗೆ ಬರಲು ಪಡಬಾರದ ಕಷ್ಟಪಟ್ಟ ಕಾಲಿಲ್ಲದ ಯುವಕ&lt;/p&gt;]]></content:encoded>
            <category>yadgir</category>
            <dc:creator>Anusha Kb</dc:creator>
            <atom:link href="https://kannada.asianetnews.com/state/dead-body-of-newborn-baby-found-on-the-roadside-in-gurumithakal-town-yadgir/articleshow-5nob1gm"/>
        </item>
        <item>
            <title><![CDATA[ಮಗನ ಮಾನಗೇಡಿ ಕೆಲಸಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ: ಮನನೊಂದು ನದಿಗೆ ಹಾರಿದ ತಾಯಿ]]></title>
            <link>https://kannada.asianetnews.com/state/mother-jumps-into-river-after-sons-shameful-act-made-her-family-social-bycott/articleshow-72ykne7</link>
            <guid isPermaLink="true">https://kannada.asianetnews.com/state/mother-jumps-into-river-after-sons-shameful-act-made-her-family-social-bycott/articleshow-72ykne7</guid>
            <pubDate>Sun, 15 Mar 2026 23:21:23 +0530</pubDate>
            <description><![CDATA[&lt;p&gt;ಮಗ ಮಾಡಿದ ಅವಾಂತರಕ್ಕೆ ಇಲ್ಲಿ ತಾಯಿಯೊಬ್ಬರು ಪ್ರಾಣ ಬಿಟ್ಟಿದ್ದಾರೆ. ಮಗ ಅನೈತಿಕ ಸಂಬಂಧ ಹೊಂದಿರುವುದಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿ ಕಿರುಕುಳ ನೀಡಿದ್ದರಿಂದ ಆ ಯುವಕನ ತಾಯಿ ಮನನೊಂದು ನದಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kks9djy6k9kqekjywm41nxz5,imgname-yadagiri-suicide-1773596494790.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾದಗಿರಿ: ಗರ್ಭಿಣಿಯೊಬ್ಬಳ ಜೊತೆ ತಮ್ಮ ಪುತ್ರ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ, ಕುಟುಂಬವೊಂದಕ್ಕೆ ಅಲ್ಲಿನ ಸಮುದಾಯದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ, ತೀವ್ರವಾಗಿ ನೊಂದ ಆ ಯುವಕನ ತಾಯಿಯೊಬ್ಬರು, ನದಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಬ್ರಿಡ್ಜ್&zwnj; ಕಂ ಬ್ಯಾರೇಜಿನಲ್ಲಿ ಶನಿವಾರ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಯಾದಗಿರಿಯ ಗಿರಿನಗರದ ನಿವಾಸಿ 42 ವರ್ಷದ ಕಮಲಮ್ಮ ಸಾವಿಗೆ ಶರಣಾದ ಮಹಿಳೆ. ಈ ಮಹಿಳೆಯ ಪುತ್ರ ಎರ್ರಿಸ್ವಾಮಿ ಎಂಬಾತ ಅದೇ ಸಮುದಾಯದ ಗರ್ಭಿಣಿಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ, ಕಮಲಮ್ಮ ಕುಟುಂಬಸ್ಥರಿಗೆ ಕೆಲವು ತಿಂಗಳುಗಳ ಹಿಂದೆ ಶಿಳ್ಳೆಕ್ಯಾತ ಸಮುದಾಯದ ಮುಖಂಡರು 10 ವರ್ಷಗಳ ಕಾಲ ಸಾಮಾಜಿಕ ಬಹಿಷ್ಕಾರ ಹಾಕಿದ್ದರು ಎನ್ನಲಾಗಿದೆ.&lt;/p&gt;&lt;p&gt;ಇಲ್ಲಿಂದ ಮನೆ ಖಾಲಿ ಮಾಡಿಕೊಂಡು ಹೋಗಬೇಕು, ಯಾರ ಜೊತೆಯೂ ಮಾತನಾಡಕೂಡದು ಹಾಗೂ ಯಾರಾದರೂ ಮಾತನಾಡಿದರೆ ಅವರಿಗೂ ಕೂಡ 10 ವರ್ಷಗಳ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದರು ಎಂದು ದೂರಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಸಮುದಾಯದ ಮುಖಂಡರು ಕಮಲಮ್ಮ ಹಾಗೂ ಕುಟುಂಬಕ್ಕೆ ಮತ್ತಷ್ಟೂ ಕಿರುಕುಳ ನೀಡುತ್ತಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೀದರ್, ಬೆಳಗಾವಿಯಲ್ಲಿ ಭಾರಿ ಮಳೆ: ಶಿವಮೊಗ್ಗದಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ&lt;/strong&gt;&lt;/p&gt;&lt;p&gt;ಮೀನುಗಾರಿಕೆ ಹಾಗೂ ಮೀನು ಮಾರಾಟ ಮಾಡಲೂ ಕೂಡ ಸಮುದಾಯದ ಮುಖಂಡರು ಅವಕಾಶ ಮಾಡಿಕೊಡದೇ ಇದ್ದಿದ್ದರಿಂದ ಸಂಕಷ್ಟಕ್ಕೀಡಾಗಿದ್ದ ಕಮಲಮ್ಮ ಈ ಘಟನೆಯಿಂದ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಪುತ್ರನ ಅನೈತಿಕ ಸಂಬಂಧದ ಹಿನ್ನೆಲೆ, 50 ಸಾವಿರ ರು.ಗಳ ದಂಡ ಹಾಗೂ ಸಾಮಾಜಿಕ ಬಹಿಷ್ಕಾರದ ಹಾಕಿದ್ದರಿಂದ, ನಾವು ಬದುಕುವುದು ಹೇಗೆ ಎಂದು ನೊಂದಿದ್ದ ಕಮಲಮ್ಮ, ಸಂಬಂಧಿಕರ ಊರಾದ ಜೋಳದಡಗಿ ಗ್ರಾಮಕ್ಕೆ ಹೋಗಿದ್ದಾರೆ. ಅಲ್ಲಿ ಈ ಬಗ್ಗೆ ನೊಂದುಕೊಂಡು, ಸಮೀಪದ ಭೀಮಾ ನದಿಯ ಬ್ರಿಡ್ಜ್ ಕಂ ಬ್ಯಾರೇಜಿಗೆ ತೆರಳಿ, ಸೇತುವೆ ಮೇಲೆ ಮಾಂಗಲ್ಯ ಇಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.&lt;/p&gt;&lt;p&gt;ಮಾಹಿತಿ ಅರಿತ ವಡಗೇರಾ ಪೊಲೀಸರು, ಸ್ಥಳೀಯರ ಸಹಾಯದಿಂದ ನದಿಯಲ್ಲಿನ ಶವ ಹೊರ ತೆಗೆದಿದ್ದಾರೆ. ಬಳಿಕ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಯಿಮ್ಸ್) ಆಸ್ಪತ್ರೆಯ ಶವಗಾರಕ್ಕೆ ಶವ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ, ವಡಗೇರಾ ಪೊಲೀಸ್ ಠಾಣೆಯಲ್ಲಿ ಬಿಎನ್&zwnj;ಎಸ್ 108 ಸೆಕ್ಷನ್&zwnj;ನಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು, ಇನ್ನೂ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸ್&zwnj; ಮೂಲಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು&amp;nbsp;&lt;/p&gt;&lt;p&gt;&lt;strong&gt;ವಿಶೇಷ ಮನವಿ:&lt;/strong&gt;&lt;/p&gt;&lt;p&gt;ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:&lt;/p&gt;&lt;p&gt;Sahai Helpline - 080 2549 7777&lt;/p&gt;]]></content:encoded>
            <category>yadgir</category>
            <dc:creator>Anusha Kb</dc:creator>
            <atom:link href="https://kannada.asianetnews.com/state/mother-jumps-into-river-after-sons-shameful-act-made-her-family-social-bycott/articleshow-72ykne7"/>
        </item>
        <item>
            <title><![CDATA[ಮಲ್ಲಿಕಾರ್ಜುನ ಮುತ್ಯಾನ ಮತ್ತೊಂದು ಆಡಿಯೋ ವೈರಲ್; ಗೂಟದ ಕಾರು ನಂಬಿಕೆಟ್ಟ ಮಾಜಿ ಶಾಸಕ ಚಿಂಚನಸೂರು!]]></title>
            <link>https://kannada.asianetnews.com/karnataka-districts/mallikarjuna-mutya-pocso-case-baburao-chinchansur-viral-audio-yadgir-news-sat/articleshow-c0g9bf9</link>
            <guid isPermaLink="true">https://kannada.asianetnews.com/karnataka-districts/mallikarjuna-mutya-pocso-case-baburao-chinchansur-viral-audio-yadgir-news-sat/articleshow-c0g9bf9</guid>
            <pubDate>Thu, 26 Feb 2026 15:34:24 +0530</pubDate>
            <description><![CDATA[&lt;p&gt;ಪೋಕ್ಸೋ ಪ್ರಕರಣದಡಿ ತಲೆಮರೆಸಿಕೊಂಡಿರುವ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾನ ಹಳೆಯ ಆಡಿಯೋವೊಂದು ವೈರಲ್ ಆಗಿದೆ. 2023ರ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್&zwnj;ಗೆ ಗೆಲುವಿನ ಭರವಸೆ ನೀಡಿ ವಿಫಲವಾಗಿದ್ದ ಈ ಆಡಿಯೋ, ಮುತ್ಯಾನ ದೈವಶಕ್ತಿಯ ಡೋಂಗಿತನವನ್ನು ಬಯಲು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjcpegjmadpqsgwqpyw997jp,imgname-yadgir-mallikarjun-mutya-baburao-chinchansur-1772100207188.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಫೆ.26): ಕ&lt;/strong&gt;ಲ್ಯಾಣ ಕರ್ನಾಟಕ ಸೇರಿದಂತೆ ನೆರೆಯ ಆಂಧ್ರ ಮತ್ತು ತೆಲಂಗಾಣ ಭಾಗಗಳಲ್ಲಿ 'ಪವಾಡ ಪುರುಷ' ಎಂದು ನಂಬಲಾಗಿದ್ದ ಮಲ್ಲಿಕಾರ್ಜುನ ಮುತ್ಯಾ ಅವರ ಅಸಲಿ ಬಣ್ಣ ಈಗ ಒಂದೊಂದಾಗಿ ಬಯಲಾಗುತ್ತಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿ ಪೋಕ್ಸೋ (POCSO) ಪ್ರಕರಣ ದಾಖಲಾಗುತ್ತಿದ್ದಂತೆಯೇ ಮುತ್ಯಾ ತಲೆಮರೆಸಿಕೊಂಡಿದ್ದಾರೆ. ಈ ನಡುವೆ, ಅವರ ಹಳೆಯ ಆಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಮುತ್ಯಾ ಅವರ 'ದೈವಶಕ್ತಿ' ಕೇವಲ ಡೋಂಗಿತನ ಎಂಬ ಚರ್ಚೆ ಶುರುವಾಗಿದೆ.&lt;/p&gt;&lt;h2&gt;&lt;strong&gt;ಬಾಬುರಾವ್ ಚಿಂಚನಸೂರು ಮತ್ತು ಮುತ್ಯಾ ನಡುವಿನ ಡೀಲ್!&lt;/strong&gt;&lt;/h2&gt;&lt;p&gt;ವೈರಲ್ ಆಗಿರುವ ಈ ಆಡಿಯೋ ರೇಕಾರ್ಡಿಂಗ್ 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದ್ದಾಗಿದೆ. ಅಂದು ಗುರುಮಠಕಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರು ಗೆಲುವಿಗಾಗಿ ಮಲ್ಲಿಕಾರ್ಜುನ ಮುತ್ಯಾ ಅವರ ಮೊರೆ ಹೋಗಿದ್ದರು. ಆಡಿಯೋದಲ್ಲಿ ಚಿಂಚನಸೂರು ಅವರು ಅತ್ಯಂತ ವಿನಮ್ರವಾಗಿ &quot;ಮುತ್ಯಾ ಅವರೇ, ನನ್ನನ್ನು ಗೆಲ್ಲಿಸಿ ಆಶೀರ್ವಾದ ಮಾಡಿ&quot; ಎಂದು ಬೇಡಿಕೊಳ್ಳುತ್ತಿರುವುದು ಕೇಳಿಸುತ್ತದೆ.&lt;/p&gt;&lt;p&gt;&lt;strong&gt;'ಅದು ನಿನ್ನ ಸೀಟ್ ಅಲ್ಲ, ನಂದು!' - ಮುತ್ಯಾ ಅಹಂಕಾರದ ನುಡಿ&lt;/strong&gt;&lt;/p&gt;&lt;p&gt;ಚಿಂಚನಸೂರು ಅವರ ಮನವಿಗೆ ಉತ್ತರಿಸಿದ್ದ ಮುತ್ಯಾ, ಅತ್ಯಂತ ಅಹಂಕಾರದಿಂದ ಮಾತನಾಡಿದ್ದರು. 'ಆ ಗುರುಮಠಕಲ್ ಸೀಟು ನಿನ್ನದಲ್ಲ, ಅದು ನಂದು.. ನಂದು.. ನಂದು..!' ಎಂದು ಅಬ್ಬರಿಸಿದ್ದರು. ಅಷ್ಟೇ ಅಲ್ಲದೆ, 'ನಾನು ಈ ಪೀಠದ ಮೇಲೆ ಕುಳಿತು ಹೇಳುತ್ತಿದ್ದೇನೆ, ಇದು ಭಾರತ ದೇಶವೇ ನೋಡುವಂತಹ ಆಶೀರ್ವಾದ. ನೀನು ರಾಜಕೀಯ ಮಾಡು, ನಿನ್ನ ಹಿಂದೆ ನಾನಿದ್ದೇನೆ. ಇದನ್ನು ಬೇಕಿದ್ದರೆ ರೇಕಾರ್ಡ್ ಮಾಡಿಕೋ' ಎಂದು ಸವಾಲು ಹಾಕಿದ್ದರು. ಆದರೆ ವಿಪರ್ಯಾಸವೆಂದರೆ, ಮುತ್ಯಾ ಅಷ್ಟೊಂದು ಆತ್ಮವಿಶ್ವಾಸದಿಂದ ನೀಡಿದ್ದ 'ದೈವವಾಣಿ' ಚುನಾವಣೆಯಲ್ಲಿ ಅಟ್ಟಕ್ಕೇರಿತ್ತು. ಅಂದು ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ ವಿರುದ್ಧ ಬಾಬುರಾವ್ ಚಿಂಚನಸೂರು ಹೀನಾಯವಾಗಿ ಸೋಲನ್ನಪ್ಪಿದ್ದರು.&lt;/p&gt;&lt;h2&gt;&lt;strong&gt;10 ಎಸ್ಕಾರ್ಟ್ ಗಾಡಿಗಳ ವೈಭವದ ಆಸೆ!&lt;/strong&gt;&lt;/h2&gt;&lt;p&gt;ಇನ್ನು ಸೋಲುವ ಮುನ್ನ ಬಾಬುರಾವ್ ಚಿಂಚನಸೂರು ಅವರು ಮುತ್ಯಾಗೆ ನೀಡಿದ್ದ ಭರವಸೆಗಳು ಕೂಡ ಈಗ ನಗೆಪಾಟಲಿಗೀಡಾಗಿವೆ. 'ಗೆದ್ದ ತಕ್ಷಣ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ನಿಮ್ಮ ದರ್ಶನಕ್ಕೆ ಬರುವಾಗ ನನ್ನ ಕಾರಿನ ಮುಂದೆ 5 ಎಸ್ಕಾರ್ಟ್ ಮತ್ತು ಹಿಂದೆ 5 ಎಸ್ಕಾರ್ಟ್ ಗಾಡಿಗಳು ಇರಲಿವೆ. ನಾನು ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತೇನೆ' ಎಂದು ಚಿಂಚನಸೂರು ಹೇಳಿದ್ದರು. ಆದರೆ ಮುತ್ಯಾ ಮಾಡಿದ ಆಶೀರ್ವಾದ ಫಲಿಸಲೂ ಇಲ್ಲ, ಚಿಂಚನಸೂರು ಸಚಿವರಾಗಲೂ ಇಲ್ಲ.&lt;/p&gt;&lt;h2&gt;&lt;strong&gt;ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ ಮುತ್ಯಾ ಪರಾರಿ&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ ವಿಡಿಯೋ ಸಾಕ್ಷ್ಯವಾಗಿ ಸಿಕ್ಕ ನಂತರ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಸಂಘಟನೆಗಳು ಮುತ್ಯಾ ವಿರುದ್ಧ ದೂರು ದಾಖಲಿಸಿವೆ. ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆಯೇ 'ಪವಾಡ ಪುರುಷ' ಈಗ ಎಸ್ಕೇಪ್ ಆಗಿದ್ದಾರೆ. ಈ ಹಳೆಯ ಆಡಿಯೋ ವೈರಲ್ ಆಗುತ್ತಿರುವುದು ಮುತ್ಯಾ ಅವರ ನಕಲಿ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ಬಯಲು ಮಾಡಿದೆ. ಭಕ್ತರನ್ನು ದಾರಿ ತಪ್ಪಿಸಿ ರಾಜಕೀಯ ಲಾಬಿ ನಡೆಸುತ್ತಿದ್ದ ಈತನನ್ನು ಕೂಡಲೇ ಬಂಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mallikarjuna-mutya-pocso-case-baburao-chinchansur-viral-audio-yadgir-news-sat/articleshow-c0g9bf9"/>
        </item>
        <item>
            <title><![CDATA[ಪೋಕ್ಸೋ ಕೇಸ್‌ ಬೆನ್ನಲ್ಲೇ ಹೈದರಾಬಾದ್‌ನಲ್ಲಿ ತಲೆ ಮರೆಸಿಕೊಂಡ ಖ್ಯಾತ ಸ್ವಾಮೀಜಿ!]]></title>
            <link>https://kannada.asianetnews.com/karnataka-districts/pocso-case-filed-against-yadgiri-swamiji-mallikarjun-mutya-over-alleged-misconduct-with-minor-kvn/articleshow-da2u09k</link>
            <guid isPermaLink="true">https://kannada.asianetnews.com/karnataka-districts/pocso-case-filed-against-yadgiri-swamiji-mallikarjun-mutya-over-alleged-misconduct-with-minor-kvn/articleshow-da2u09k</guid>
            <pubDate>Thu, 26 Feb 2026 09:17:41 +0530</pubDate>
            <description><![CDATA[&lt;p&gt;ಯಾದಗಿರಿಯ ಶಹಪುರ ತಾಲೂಕಿನ ಖ್ಯಾತ ಸ್ವಾಮೀಜಿ ಮಲ್ಲಿಕಾರ್ಜುನ ಮುತ್ಯಾ, ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಅವರ ವಿರುದ್ಧ 75(2) ಬಿಎನ್&zwnj;ಎಸ್&zwnj; ಅಡಿಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjaeh0tvf7006bp75jhk61n7,imgname----------------------12--1772024791899.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾದಗಿರಿ: ಅಪ್ರಾಪ್ತ ಬಾಲಕಿ ಜೊತೆ ಅನುಚಿತ ವರ್ತನೆ ತೋರಿದ ಆರೋಪದಡಿ ಇಲ್ಲಿನ ಶಹಪುರ ತಾಲೂಕಿನ ಮಹಲ್ ರೋಜಾದ ಸ್ವಾಮೀಜಿ ಮಲ್ಲಿಕಾರ್ಜುನ ಮುತ್ಯಾ ವಿರುದ್ದ 75(2) ಬಿಎನ್&zwnj;ಎಸ್&zwnj; ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲೂ ಅಪಾರ ಭಕ್ತರನ್ನ ಹೊಂದಿರುವ ಸ್ವಾಮೀಜಿ ಹೈದರಾಬಾದ್&zwnj;ನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್&lt;/strong&gt;&lt;/h2&gt;&lt;p&gt;ಉತ್ತರ ಕರ್ನಾಟಕದ ಖ್ಯಾತ ಸ್ವಾಮೀಜಿಯಾಗಿರುವ ಮಲ್ಲಿಕಾರ್ಜುನ ಮುತ್ಯಾ, ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾ ಮಠದ ಸ್ವಾಮಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಸಂಬಂಧ ಶಹಪುರ ಸಿಡಿಪಿಒ ಮಲ್ಲಣ್ಣ ಉಮಾಪತಿ ಅವರಿಂದ ದೂರು ದಾಖಲಾಗಿತ್ತು. ಇದೀಗ ಐಪಿಸಿ 12ರ ಅಡಿಯಲ್ಲಿ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ದಾಖಲಾಗಿತ್ತು. ಪೋಕ್ಸೋ ಕೇಸ್ ಬೆನ್ನಲ್ಲೇ ಮುತ್ಯಾ ಹೈದರಾಬಾದ್&zwnj;ನಲ್ಲಿ ತಲೆ ಮರೆಸಿಕೊಂಡಿದ್ಧಾರೆ.&lt;/p&gt;&lt;h3&gt;&lt;strong&gt;ಪೋಕ್ಸೋ ಕೇಸ್&lt;/strong&gt;&lt;/h3&gt;&lt;p&gt;ಅಪ್ರಾಪ್ತ ಮಗುವಿನ ಜತೆ ಮಲ್ಲಿಕಾರ್ಜುನ ಮುತ್ಯಾ ಅನುಚಿತವಾಗಿ ವರ್ತಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ದೂರು ದಾಖಲಿಸಲು ಸೂಚಿಸಿದ್ದರು. ಇದರ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಹಲ್ ರೋಜಾಗೆ ಹೋಗಿ ತನಿಖೆ ನಡೆಸಿದ್ದಾರೆ. ಇದಾದ ನಂತರ ಗೋಗಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ.&lt;/p&gt;]]></content:encoded>
            <category>yadgir</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/pocso-case-filed-against-yadgiri-swamiji-mallikarjun-mutya-over-alleged-misconduct-with-minor-kvn/articleshow-da2u09k"/>
        </item>
        <item>
            <title><![CDATA[ಕಾಂಗ್ರೆಸ್‌ನಿಂದಲೇ ದಲಿತ ವಿರೋಧಿ ಚಟುವಟಿಕೆಗಳು: ಮಾಜಿ ಸಚಿವ ರಾಜುಗೌಡ ವಾಗ್ದಾಳಿ]]></title>
            <link>https://kannada.asianetnews.com/politics/bjp-defends-constitution-rajugouda-attack-congress-kembhavi-gvd/articleshow-dzhn9fz</link>
            <guid isPermaLink="true">https://kannada.asianetnews.com/politics/bjp-defends-constitution-rajugouda-attack-congress-kembhavi-gvd/articleshow-dzhn9fz</guid>
            <pubDate>Mon, 09 Mar 2026 23:02:40 +0530</pubDate>
            <description><![CDATA[&lt;p&gt;ಕೇವಲ ಓಟಿನ ಆಸೆಗಾಗಿ ಬಿಜೆಪಿಯನ್ನು ದಲಿತ ವಿರೋಧಿ ಪಕ್ಷ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್&zwnj;ಗೆ ಈ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ತೀವ್ರ ವಾಗ್ದಾಳಿ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g5pxg38qcdphs3bcxd0857cf,imgname-rajugouda.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೆಂಭಾವಿ (ಮಾ.09):&lt;/strong&gt; ಭಾರತೀಯ ಜನತಾ ಪಕ್ಷ ಶಿಸ್ತಿನ, ತತ್ವ ಸಿದ್ಧಾಂತದ, ಸಂವಿಧಾನ ಬದ್ಧವಾದ ಪಕ್ಷ. ಡಾ. ಬಿ. ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಬಿಜೆಪಿ ಪಕ್ಷ ಮಾಡುತ್ತಿದೆ. ಕೇವಲ ಓಟಿನ ಆಸೆಗಾಗಿ ಬಿಜೆಪಿಯನ್ನು ದಲಿತ ವಿರೋಧಿ ಪಕ್ಷ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್&zwnj;ಗೆ ಈ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ನಗನೂರ ಗ್ರಾಮದ ಬಿಜೆಪಿ ಪಕ್ಷದ ಹಿರಿಯ ಮುಖಂಡ ರಾಜಶೇಖರ ಗೂಗಲ್ ಅವರು ನೂತನವಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೀಸಲಾತಿಯಲ್ಲಿ ಶೇ.7ರಷ್ಟು ಹೆಚ್ಚಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರ ಸಮಾನತೆಯ ನ್ಯಾಯ ಒದಗಿಸಿದೆ. ಊಟದ ತಟ್ಟೆಯಲ್ಲಿ ಮಣ್ಣು ಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದು, ವಿನಾಕಾರಣ ಮೀಸಲಾತಿ ವಿಷಯದಲ್ಲಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಮೊದಲು ತಮ್ಮಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಳ್ಳಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.&lt;/p&gt;&lt;p&gt;ದೇಶ ಕಾಯುವ ಸೈನಿಕರಂತೆ ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷ ಕಟ್ಟುವ ಕೆಲಸ ಮಾಡಬೇಕು. ವಿಜಯೇಂದ್ರ ಅವರ ಅದ್ಯಕ್ಷತೆಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದೆ. ಪಕ್ಷ ಮತ್ತಷ್ಟು ಸದೃಢವಾಗಬೇಕಿದ್ದರೆ ಮತ್ತು ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಿದ್ದರೆ ಕಾರ್ಯಕರ್ತರು ಹಗಲಿರುಳು ಪಕ್ಷಕ್ಕಾಗಿ ದುಡಿಯಬೇಕು ಎಂದು ಕರೆ ನೀಡಿದರು.&lt;/p&gt;&lt;h2&gt;&lt;strong&gt;ನೀರೊದಗಿಸುವ ಬಹುದೊಡ್ಡ ಕೆಲಸ&lt;/strong&gt;&lt;/h2&gt;&lt;p&gt;ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಮಾತನಾಡಿ, ಬಿಜೆಪಿ ಪಕ್ಷಕ್ಕೆ ತನ್ನದೆ ಆದ ಮಹತ್ವದ ತತ್ವ ಸಿದ್ಧಾಂತದ ತಳಹದಿ ಇದ್ದು, ಅದರ ಮೇಲೆ ನಾವೆಲ್ಲ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಸುರಪುರ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ರಾಜುಗೌಡರು ನಿವಾರಿಸಿ ಅಲ್ಲಿನ ಜನತೆಗೆ ದಿನದ 24 ಗಂಟೆ ನೀರೊದಗಿಸುವ ಬಹುದೊಡ್ಡ ಕೆಲಸ ಮಾಡಿದ್ದಾರೆ ಆದರೆ ಅನುಕಂಪ ಅವರ ಸೋಲಿಗೆ ಮುಖ್ಯಕಾರಣವಾಗಿದ್ದು, ಈ ಬಾರಿ ಅವರನ್ನು ಗೆಲ್ಲಿಸಲು ಎಲ್ಲ ಕಾರ್ಯಕರ್ತರು ಪಣ ತೊಡಬೇಕೆಂದು ಕರೆ ನೀಡಿದರು.&lt;/p&gt;&lt;p&gt;ಸನ್ಮಾನ ಸ್ವೀಕರಿಸಿದ ಮಾತನಾಡಿದ ಬಿಜೆಪಿ ಪಕ್ಷದ ನೂತನ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ರಾಜಶೇಖರ ಗೂಗಲ್&zwnj;, ಗ್ರಾಮೀಣ ಪ್ರದೇಶದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಬಹುದೊಡ್ಡ ಹುದ್ದೆ ನೀಡಿದೆ. ಈ ಕಾರ್ಯಕ್ಕೆ ಮಾಜಿ ಸಚಿವ ರಾಜುಗೌಡರೇ ಮುಖ್ಯ ಕಾರಣರಾಗಿದ್ದು, ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಇನ್ನಷ್ಟೂ ಬಲಪಡಿಸುವ ಕೆಲಸ ಮಾಡುವುದಾಗಿ ಹೇಳಿದರು.&lt;/p&gt;&lt;p&gt;ದಾಸೋಹ ಮಠದ ಶ್ರೀ ಶರಣಪ್ಪ ಶರಣರು ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು, ಡಾ. ಚಂದ್ರಶೇಖರ ಸುಬೇದಾರ, ಶಿವರಾಜ ದೇಶಮುಖ, ಮಲ್ಲನಗೌಡ ಏವೂರ, ಚಂದ್ರು ಯಾಳಗಿ, ಅಡಿವೆಪ್ಪ ಜಾಕಾ, ದೇವೇಂದ್ರಪ್ಪ ಕೊನೇರ, ಶಂಕರ ನಾಯಕ, ಸಣ್ಣದೇಸಾಯಿ ದೇರಗೋನಾಲ, ಪರಶುರಾಮ ಕುರಕುಂದಿ, ಭೀಮಣ್ಣ ಬೇವಿನಹಳ್ಳಿ, ಶಾಂತಣ್ಣ ಚನ್ನೂರ, ಮಲ್ಲಿಕಾರ್ಜುನ ಶಾಕಾ, ಮಾಣಿಕರೆಡ್ಡಿ ದೇಶಪಾಂಡೆ ಇದ್ದರು. ಮೌನೇಶ ಹಯ್ಯಾಳಕರ್ ನಿರೂಪಣೆ ಮಾಡಿದರು, ಸಂಗಣ್ಣ ವಣಕ್ಯಾಳ ಸ್ವಾಗತಿಸಿ, ಮಲ್ಲಣ್ಣ ದೇಸಾಯಿ ವಂದಿಸಿದರು.&lt;/p&gt;]]></content:encoded>
            <category>yadgir</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/bjp-defends-constitution-rajugouda-attack-congress-kembhavi-gvd/articleshow-dzhn9fz"/>
        </item>
        <item>
            <title><![CDATA[ಮಲ್ಲಿಕಾರ್ಜುನ ಮುತ್ಯಾ ಕೇಸ್ ರದ್ದು ಮಾಡದಿದ್ದರೆ ಯಾದಗಿರಿ ಬಂದ್; ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ಕೊಟ್ಟ ಭಕ್ತರು]]></title>
            <link>https://kannada.asianetnews.com/karnataka-districts/mallikarjuna-mutya-pocso-case-devotees-gave-yadgir-bandh-warning-and-protest-to-dc-2-day-deadline-sat/articleshow-f3nozh5</link>
            <guid isPermaLink="true">https://kannada.asianetnews.com/karnataka-districts/mallikarjuna-mutya-pocso-case-devotees-gave-yadgir-bandh-warning-and-protest-to-dc-2-day-deadline-sat/articleshow-f3nozh5</guid>
            <pubDate>Fri, 27 Feb 2026 13:40:45 +0530</pubDate>
            <description><![CDATA[ಪೋಕ್ಸೋ ಪ್ರಕರಣ ಎದುರಿಸುತ್ತಿರುವ ವಿವಾದಿತ ಮಲ್ಲಿಕಾರ್ಜುನ ಮುತ್ಯಾ ಪರವಾಗಿ ನಿಂತಿರುವ ಅವರ ಭಕ್ತರು, ಇದು ಕಪೋಲಕಲ್ಪಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಎರಡು ದಿನಗಳಲ್ಲಿ ಪ್ರಕರಣವನ್ನು ರದ್ದುಗೊಳಿಸದಿದ್ದರೆ 'ಯಾದಗಿರಿ ಬಂದ್' ನಡೆಸುವುದಾಗಿ ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kjf2bbdntnhtdnjyd6q1fnjh,imgname-mallikarjuna-mutya-1772179795380.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಫೆ.27): ಅ&lt;/strong&gt;ಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪೋಕ್ಸೋ (POCSO) ಪ್ರಕರಣ ಎದುರಿಸುತ್ತಿರುವ ವಿವಾದಿತ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾ ಪರವಾಗಿ ಈಗ ಅವರ ಭಕ್ತ ಸಾಗರ ದನಿಯೆತ್ತಿದೆ. ಮುತ್ಯಾ ವಿರುದ್ಧ ದಾಖಲಾಗಿರುವ ಪ್ರಕರಣವು ಕಪೋಲಕಲ್ಪಿತ ಮತ್ತು ಷಡ್ಯಂತ್ರ ಎಂದು ಆರೋಪಿಸಿರುವ ಭಕ್ತರು, ಎರಡು ದಿನದೊಳಗೆ ಕೇಸ್ ರದ್ದುಗೊಳಿಸದಿದ್ದರೆ 'ಯಾದಗಿರಿ ಬಂದ್' ಮಾಡುವುದಾಗಿ ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಶ್ರೀಮಠದಲ್ಲಿ ಭಕ್ತರ ಬೃಹತ್ ಸಭೆ:&lt;/strong&gt;&lt;/h2&gt;&lt;p&gt;ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಅವರ ಶ್ರೀಮಠದಲ್ಲಿ ಇಂದು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಭಕ್ತರು ತುರ್ತು ಸಭೆ ನಡೆಸಿದರು. ಈ ವೇಳೆ ಮುತ್ಯಾ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ ಭಕ್ತರು, ಪ್ರಕರಣದ ಹಾದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ನಂತರ ಮಾತನಾಡಿದ ಭಕ್ತರು, &lsquo;ನಮ್ಮ ಅಪ್ಪಾಜಿಯ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಅವರ ಹೆಸರನ್ನು ಹಾಳು ಮಾಡಲು ವಿಡಿಯೋವನ್ನು ತಿರುಚಲಾಗಿದೆ&rsquo; ಎಂದು ಆಕ್ರೋಶ ಹೊರಹಾಕಿದರು.&lt;/p&gt;&lt;h2&gt;&lt;strong&gt;ಮಕ್ಕಳ ಆಯೋಗ ಮತ್ತು ಅಧಿಕಾರಿಗಳ ವಿರುದ್ಧ ಕಿಡಿ:&lt;/strong&gt;&lt;/h2&gt;&lt;p&gt;ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀಮಠದ ಭಕ್ತೆ ಲಲಿತಾ ಅನಪೂರ ಅವರು ಮಾತನಾಡಿ, 'ಮುತ್ಯಾ ಅವರ ವಿಡಿಯೋವನ್ನು ಎಡಿಟ್ ಮಾಡಿ ತಿರುಚಲಾಗಿದೆ. ಮಗು ವಿಡಿಯೋದಲ್ಲಿ ನಗುತ್ತಿರುವುದು ಕಾಣುತ್ತಿದೆ. ಬಾಲಕಿಯ ತಂದೆ-ತಾಯಿಯೇ ಮಠಕ್ಕೆ ಬಂದು ಇದು ಆಶೀರ್ವಾದದ ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಮಕ್ಕಳ ಆಯೋಗದವರು ತರಾತುರಿಯಲ್ಲಿ ಕೇಸ್ ದಾಖಲಿಸಿರುವುದು ಸರಿಯಲ್ಲ. ಈ ಪ್ರಕರಣವನ್ನು ನಿಭಾಯಿಸುವಲ್ಲಿ ಯಾದಗಿರಿ ಎಸ್ಪಿ ಮತ್ತು ಡಿಸಿ ಅವರು ಸಂಪೂರ್ಣವಾಗಿ ಎಡವಿದ್ದಾರೆ' ಎಂದು ದೂರಿದರು. ಅಲ್ಲದೆ, 'ಬಾಲಕಿಯ ಮುಖ ತೋರಿಸಿ ವಿಡಿಯೋ ಬಹಿರಂಗಪಡಿಸಿದ ಮಕ್ಕಳ ಆಯೋಗದ ಸದಸ್ಯರೇ ಈ ಪ್ರಕರಣದಲ್ಲಿ ಮೊದಲ ಆರೋಪಿಗಳಾಗಬೇಕು. ಅವರು ಮಗುವಿನ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ' ಎಂದು ಗಂಭೀರ ಆರೋಪ ಮಾಡಿದರು.&lt;/p&gt;&lt;h2&gt;&lt;strong&gt;ಜಿಲ್ಲಾಡಳಿತಕ್ಕೆ 2 ದಿನಗಳ ಅಂತಿಮ ಗಡುವು:&lt;/strong&gt;&lt;/h2&gt;&lt;p&gt;ಮತ್ತೋರ್ವ ಭಕ್ತ ಮಹಾದೇವಪ್ಪ ಮಾತನಾಡಿ, 'ಮುತ್ಯಾ ಅವರ ಏಳಿಗೆಯನ್ನು ಸಹಿಸದವರು ಮಕ್ಕಳ ಆಯೋಗದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದಲೂ ಅಪಾರ ಭಕ್ತರು ಈ ಮಠಕ್ಕೆ ಬರುತ್ತಾರೆ. ಭಕ್ತರು ದಂಗೆ ಏಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಎರಡು ದಿನದೊಳಗೆ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ನಾವು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಮತ್ತು ಇಡೀ ಜಿಲ್ಲೆಯನ್ನು ಬಂದ್ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣಕ್ಕೆ ಹೊಸ ತಿರುವು:&lt;/strong&gt;&lt;/h2&gt;&lt;p&gt;ಇತ್ತೀಚೆಗಷ್ಟೇ ಸಂತ್ರಸ್ತ ಬಾಲಕಿಯ ಪೋಷಕರು ಸೊಲ್ಲಾಪುರದಿಂದ ವಿಡಿಯೋ ಬಿಡುಗಡೆ ಮಾಡಿ, ಮುತ್ಯಾ ಅವರು ನಮ್ಮ ಮಗಳಿಗೆ ಆಶೀರ್ವಾದ ಮಾಡುತ್ತಿದ್ದರು, ಅಶ್ಲೀಲವಾಗಿ ವರ್ತಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಪೋಷಕರ ಈ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಭಕ್ತರು ಈಗ ಕಾನೂನು ಹೋರಾಟದ ಜೊತೆಗೆ ಬೀದಿ ಹೋರಾಟಕ್ಕೂ ಸಜ್ಜಾಗಿದ್ದಾರೆ. ಸದ್ಯ ಮುತ್ಯಾ ಪರವಾಗಿ ಭಕ್ತರು ಒಗ್ಗಟ್ಟಾಗುತ್ತಿರುವುದು ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಿಸಿದೆ.&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mallikarjuna-mutya-pocso-case-devotees-gave-yadgir-bandh-warning-and-protest-to-dc-2-day-deadline-sat/articleshow-f3nozh5"/>
        </item>
        <item>
            <title><![CDATA[ರಾಜ್ಯಾದ್ಯಂತ ಲೋಕಾಯುಕ್ತ ಮಹಾಬೇಟೆ: ಬೆಚ್ಚಿಬಿದ್ದ ಭ್ರಷ್ಟ ಅಧಿಕಾರಿಗಳು, ಒಬ್ಬೊಬ್ಬರಂದೂ ಒಂದೊಂದು ಕಥೆ!]]></title>
            <link>https://kannada.asianetnews.com/state/karnataka-lokayukta-massive-statewide-raids-senior-officials-corruption-hunt-2026-sat/articleshow-gg0d0eu</link>
            <guid isPermaLink="true">https://kannada.asianetnews.com/state/karnataka-lokayukta-massive-statewide-raids-senior-officials-corruption-hunt-2026-sat/articleshow-gg0d0eu</guid>
            <pubDate>Thu, 05 Mar 2026 09:50:36 +0530</pubDate>
            <description><![CDATA[&lt;p&gt;ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಹಿರಿಯ ಇಂಜಿನಿಯರ್&zwnj;ಗಳು ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjy381nnqke8cyy0q71zy4e9,imgname-karnataka-lokayukta-raid-1772684052148.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮಾ.05): ರಾ&lt;/strong&gt;ಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಗುರುವಾರ ಬೆಳಿಗ್ಗೆ 6 ಗಂಟೆಯಿಂದಲೇ ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಗದಗ, ಯಾದಗಿರಿ, ಹುಬ್ಬಳ್ಳಿ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಹಿರಿಯ ಇಂಜಿನಿಯರ್&zwnj;ಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳನ್ನು ಜಾಲಾಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ಹಾಸನದಲ್ಲಿ ಜೀಪ್ ಏರಿ ಒಳಹೋದ ಅಧಿಕಾರಿಗಳು!&lt;/strong&gt;&lt;/h2&gt;&lt;p&gt;ಇಂದಿನ ದಾಳಿಯ ಅತ್ಯಂತ ರೋಚಕ ಘಟನೆ ನಡೆದದ್ದು ಹಾಸನದಲ್ಲಿ. ಹಾಸನ ಮಹಾನಗರ ಪಾಲಿಕೆಯ ಎಎಇ (AEE) ಸತ್ಯನಾರಾಯಣ ಅವರ ರವೀಂದ್ರ ನಗರದ ನಿವಾಸಕ್ಕೆ ಲೋಕಾಯುಕ್ತ ಡಿವೈಎಸ್&zwnj;ಪಿ ಸುರೇಶ್ ನೇತೃತ್ವದ ತಂಡ ದಾಳಿ ಮಾಡಿದಾಗ, ಅಧಿಕಾರಿ ಬಾಗಿಲು ತೆಗೆಯಲು ನಿರಾಕರಿಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಲೋಕಾಯುಕ್ತ ಅಧಿಕಾರಿಗಳು ಚಾಣಾಕ್ಷತನ ಮೆರೆದರು. ಠಾಣೆಯ ಜೀಪ್ ಅನ್ನು ಮನೆಯ ಗೋಡೆಗೆ ಅಂಟಿಸಿ ನಿಲ್ಲಿಸಿ, ಅದರ ಮೇಲೆ ಹತ್ತಿ ಮೊದಲ ಮಹಡಿಯ ಮೂಲಕ ಮನೆಯೊಳಗೆ ಪ್ರವೇಶಿಸಿ ಸತ್ಯನಾರಾಯಣ ಅವರಿಗೆ ಶಾಕ್ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ವಿಜಯಪುರದಲ್ಲಿ ಶಾಲೆಯ ಮೇಲೂ ದಾಳಿ!&lt;/strong&gt;&lt;/h2&gt;&lt;p&gt;ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೆ.ಬಿ.ಜೆ.ಎನ್.ಎಲ್ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ (ಗೊಡಬಂಡಿ) ಅವರ ಮೇಲೆ ನಡೆದ ದಾಳಿ ಕೂಡ ಗಮನಾರ್ಹವಾಗಿದೆ. ಪ್ರಕಾಶ್ ಅವರ ಇಂಡಿ ಕಚೇರಿ, ನಿವಾಸದ ಜೊತೆಗೆ ಬೆಂಗಳೂರಿನ ಮಹದೇವಪುರದಲ್ಲಿರುವ ಮನೆ ಹಾಗೂ ಬೀದರ್&zwnj;ನ ಹುಮನಾಬಾದ್&zwnj;ನಲ್ಲಿರುವ ಮನೆಯ ಮೇಲೆಯೂ ದಾಳಿ ನಡೆದಿದೆ. ವಿಶೇಷವೆಂದರೆ, ಇವರ ಪತ್ನಿಯ ಹೆಸರಿನಲ್ಲಿರುವ ಶಾಲೆಯ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಬಾಗಲಕೋಟೆ ಮತ್ತು ಹುಬ್ಬಳ್ಳಿಯಲ್ಲಿ ಚೀಫ್ ಇಂಜಿನಿಯರ್ ಬೆವರಿಳಿಸಿದ ಲೋಕಾ&lt;/strong&gt;&lt;/h2&gt;&lt;p&gt;ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (KRDCL) ಚೀಫ್ ಇಂಜಿನಿಯರ್ ವಸಂತ ವಾಲಪ್ಪ ನಾಯಕ್ ಅವರ ಮೇಲೆ ಬೆಂಗಳೂರು, ಹುಬ್ಬಳ್ಳಿ ಮತ್ತು ಬಾಗಲಕೋಟೆಯಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಇವರ ಸಹೋದರ ಭೀಮಸಿಂಗ್ ನಾಯಕ್ ಬಾಗಲಕೋಟೆಯಲ್ಲಿ ಎಎಸ್&zwnj;ಐ (ASI) ಆಗಿ ಕೆಲಸ ಮಾಡುತ್ತಿದ್ದು, ಅವರ ಮನೆಯ ಮೇಲೆಯೂ ದಾಳಿ ಮಾಡಲಾಗಿದೆ. ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿರುವ ವಸಂತ ನಾಯಕ್ ಅವರ ಮನೆಯಲ್ಲಿ ಬೆಲೆಬಾಳುವ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ರಾಜ್ಯದ ವಿವಿಧೆಡೆ ದಾಳಿಗೆ ಒಳಗಾದ ಅಧಿಕಾರಿಗಳ ಪಟ್ಟಿ:&lt;/strong&gt;&lt;/h2&gt;&lt;p&gt;&lt;strong&gt;ಯಾದಗಿರಿ: &lt;/strong&gt;ವೀರೇಶ್ ಹಿರೇಮಠ (ಜೆಸ್ಕಾಂ ಉಪ ವಿದ್ಯುತ್ ಪರಿವೀಕ್ಷಕ) - ಯಾದಗಿರಿ ಮತ್ತು ಬೆಂಗಳೂರಿನ ಮನೆಗಳ ಮೇಲೆ ದಾಳಿ.&lt;/p&gt;&lt;p&gt;&lt;strong&gt;ಮಂಡ್ಯ: &lt;/strong&gt;ಎಸ್. ಸತೀಶ್ (ಎಎಇ, ಪಿಡಬ್ಲ್ಯೂಡಿ) - ಬಂದಿಗೌಡ ಬಡಾವಣೆಯ ಮನೆ ಸೇರಿದಂತೆ 4 ಕಡೆ ದಾಳಿ.&lt;/p&gt;&lt;p&gt;&lt;strong&gt;ಗದಗ: &lt;/strong&gt;ಎಂ.ಕೆ. ಸುರಕೋಡ್ (ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ) - ಗದಗ ನಗರದ ವಿಶ್ವೇಶ್ವರ ಬಡಾವಣೆ ಸೇರಿ 6 ಕಡೆ ರೇಡ್.&lt;/p&gt;&lt;p&gt;&lt;strong&gt;ಮೈಸೂರು: &lt;/strong&gt;ಆಸಿಫ್ ಇಕ್ಬಾಲ್ ಹುಸೇನ್ (ಎಎಇ, ನಗರ ನೀರು ಸರಬರಾಜು ಮಂಡಳಿ) - ಶಿವಾಜಿ ರಸ್ತೆ ನಿವಾಸ ಮತ್ತು ಸರಸ್ವತಿಪುರಂ ಕಚೇರಿ ಮೇಲೆ ದಾಳಿ.&lt;/p&gt;&lt;p&gt;&lt;strong&gt;ಬೆಂಗಳೂರು: &lt;/strong&gt;ಆರ್. ಶಶಿಧರ್ (ಸಿಇಒ, ರೈತ ಸೇವಾ ಸಹಕಾರ ಸಂಘ, ಯಲಹಂಕ) ಮತ್ತು ಹೆಚ್.ಸಿ. ಇಂದ್ರೇಶ್ (ಸಹಾಯಕ ಪ್ರಾಧ್ಯಾಪಕ, ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ).&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-lokayukta-massive-statewide-raids-senior-officials-corruption-hunt-2026-sat/articleshow-gg0d0eu"/>
        </item>
        <item>
            <title><![CDATA[ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ]]></title>
            <link>https://kannada.asianetnews.com/karnataka-districts/who-is-mallikarjun-mutya-viral-video-turns-popular-godman-into-absconding-figure-police-launch-search-videoshow-gz5moxh</link>
            <guid isPermaLink="true">https://kannada.asianetnews.com/karnataka-districts/who-is-mallikarjun-mutya-viral-video-turns-popular-godman-into-absconding-figure-police-launch-search-videoshow-gz5moxh</guid>
            <pubDate>Fri, 27 Feb 2026 15:45:37 +0530</pubDate>
            <description><![CDATA[ಉತ್ತರ ಕರ್ನಾಟಕದಲ್ಲಿ ದೇವಮಾನವನೆಂದು ಪೂಜಿಸಲ್ಪಡುತ್ತಿದ್ದ ಮಲ್ಲಿಕಾರ್ಜುನ ಮುತ್ಯಾ, ಒಂದು ವಿಡಿಯೋ ವೈರಲ್ ಆದ ನಂತರ ಭೂಗತರಾಗಿದ್ದಾರೆ. ಈ ವಿಡಿಯೋದಿಂದಾಗಿ ಪೊಲೀಸರು ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಅವರ ಹಿನ್ನೆಲೆ ಮತ್ತು ಈ ವಿವಾದದ ಹಿಂದಿನ ಕಾರಣಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.]]></description>
            <media:content url="https://geo.dailymotion.com/player/x1tbu.html?video=xa0u196" medium="video" height="768" width="1024"/>
            <content:encoded><![CDATA[&lt;p&gt;&amp;nbsp;ಅವರು ಆ ಭಾಗದ ದೇವಮಾನವ ಅನ್ನಿಸಿಕೊಂಡವರು.. ಏನೇ ಕಷ್ಟ ಬಂದರೂ ಆ ದೇವಮಾನವನನ್ನ ನೆನಪಿಸಿಕೊಂಡ್ರೆ ಸಾಕು.. ಕಷ್ಟವೆಲ್ಲಾ ದೂರವಾಗುತ್ತೆ ಅಂತ ನಂಬ್ತಾರೆ.. ವಾಹನ, ಮನೆ, ಸೈಟು ಏನ್​ ತಗೊಂಡ್ರು ಮೊದಲು ಆತನದ್ದೇ ಮೂಜೆ.. ಕಷ್ಟ ಸುಖಗಳಿಗೂ ಅವರೇ ಪರಿಹಾರ.. &amp;nbsp;ಆದ್ರೆ ಇವತ್ತು ಇದೇ ದೇವಮಾನವ ಅಪ್​ಸ್ಕಾಂಡ್​​ ಆಗಿದ್ದಾರೆ.. ಪೊಲೀಸರು ಆತನಿಗಾಗಿ ಇನ್ನಿಲ್ಲದಂತೆ ಹುಡುಕಾಡುತ್ತಿದ್ದಾರೆ.. ಯಸ್​​.. ನಾವು ಮಾತನ್ನಾಡುತ್ತಿರೋದು ಮಲ್ಲಿಕಾರ್ಜುನ ಮುತ್ಯಾ ಬಗ್ಗೆ.. ಈತನದ್ದೇ ಒಂದು ವಿಡಿಯೋ ವೈರಲ್​ ಆಗಿ ಇವತ್ತು ಅವರು &amp;nbsp;ಭೂಗತನ್ನಾಗೋದಕ್ಕೆ ಕಾರಣವಾಗಿಬಿಟ್ಟಿದೆ.. ಅಷ್ಟಕ್ಕೂ ಯಾವುದು ಆ ವಿಡಿಯೋ..? ಆ ಮುತ್ಯಾನ ಹಿನ್ನಲೆಯಾದ್ರೂ ಏನು..? ಅನ್ನೋ ಕಂಪ್ಲೀಟ್​​ ಡಿಟೇಲ್ಸ್ &amp;nbsp;ಇಲ್ಲಿದೆ.&lt;/p&gt;&lt;p&gt;ಕಳೆದೆರಡು ವರ್ಷದಿಂದ.. ಇಂಥಹ ವಿಡಿಯೋಗಳು ಸಖತ್​​ ವೈರಲ್​ ಆಗಿದ್ವು.. ಬಿಲ್ಡಪ್​​ ಸಾಂಗ್ಸ್​​.. ದೇವರ ಹಾಡುಗಳನ್ನ ಹಾಕೊಂಡು ಒಬ್ಬ ಯುವಕ ಓಡಾಡೋ ರೀಲ್ಸ್​​ಗಳವು.. ಆ ವಿಡಿಯೋವನ್ನ ನೋಡಿದ್ದ ದಕ್ಷಿಣ ಭಾಗದ ಜನ ನೆಗ್ಲೆಕ್ಟ್​​ ಮಾಡಿದ್ರು.. ಆದ್ರೆ ಉತ್ತರ ಕರ್ನಾಟಕದ ಜನ ಮಾತ್ರ ಒಂದು ಕ್ಷಣ ಆ ಯುವಕನನ್ನ ನೆನಪಿಸಿಕೊಂಡು ನಮ್ಮ ಕಷ್ಟಗಳನ್ನ ದೂರ ಮಾಡು ಮುತ್ಯಾ ಅಂತ ಪ್ರಾರ್ಥಿಸಿದ್ರು.. ಅಷ್ಟು ಭಕ್ತಿ.. ನಂಬಿಕೆ ಆ ಯುವಕನ ಮೇಲೆ.. ಅಂದಹಾಗೆ ಆತನ ಹೆಸರು ಮಲ್ಲಿಕಾರ್ಜುನ ಮುತ್ಯಾ.&lt;/p&gt;]]></content:encoded>
            <category>yadgir</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/who-is-mallikarjun-mutya-viral-video-turns-popular-godman-into-absconding-figure-police-launch-search-videoshow-gz5moxh"/>
        </item>
        <item>
            <title><![CDATA[ರಾಜ್ಯದಲ್ಲಿ ಕೆಂಡದಂತಹ ಬಿಸಿಲು ಹವಾಮಾನ ಇಲಾಖೆಯ ಎಚ್ಚರಿಕೆ ಗಂಟೆ, 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲು!]]></title>
            <link>https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v</link>
            <guid isPermaLink="true">https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v</guid>
            <pubDate>Thu, 02 Apr 2026 11:26:01 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಸಿಲಿನ ತೀವ್ರತೆ ಹೆಚ್ಚಿರುವ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjptv959tj7p1s6exffvkc02,imgname-heatwave-1772440364201.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿಯೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಕೆಂಡದಂತಹ ಬಿಸಿಲು ದಾಖಲಾಗುವ ಸಾಧ್ಯತೆ ಇದ್ದು, ಜನಜೀವನದ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಒಣ ಹವಾಮಾನ&lt;/h2&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ಉಷ್ಣಾಂಶವು ಸುಮಾರು 35&deg;C ರಿಂದ 37&deg;C ನಡುವೆಯೇ ಇರಲಿದೆ ಎಂದು ಅಂದಾಜಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ತಂಪಾದ ವಾತಾವರಣ ಕಂಡುಬಂದರೂ, ಮಧ್ಯಾಹ್ನ ವೇಳೆಗೆ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.&lt;/p&gt;&lt;h2&gt;ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆ ತೀವ್ರ&lt;/h2&gt;&lt;p&gt;ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 42&deg;C ತನಕ ಏರಿಕೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಬಿಸಿಗಾಳಿ (Heat Wave) ಉಂಟಾಗುವ ಸಾಧ್ಯತೆಯೂ ಹೆಚ್ಚಿದ್ದು, ಜನರು ಹೆಚ್ಚಿನ ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಬಿಸಿಗಾಳಿಯ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಲಿದೆ. ಈ ಅವಧಿಯಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹಿರಿಯ ನಾಗರಿಕರು, ಮಕ್ಕಳು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆಯಿಂದಿರಬೇಕು.&lt;/p&gt;&lt;h2&gt;ಕರಾವಳಿ ಜಿಲ್ಲೆಗಳಲ್ಲಿ ಸೆಕೆ&ndash;ಹಬೆ ಹೆಚ್ಚಳ&lt;/h2&gt;&lt;p&gt;ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸೆಕೆ ಮತ್ತು ಹಬೆ (humidity) ಹೆಚ್ಚಾಗಲಿದೆ. ಇದರಿಂದ ಜನರಿಗೆ ತೀವ್ರ ಬೆವರಿನ ಜೊತೆಗೆ ಬಿಸಿಲಿನ ಅನುಭವವಾಗುವ ಸಾಧ್ಯತೆ ಇದೆ. ಸಮುದ್ರ ತೀರ ಪ್ರದೇಶಗಳಲ್ಲಿ ಉಷ್ಣಾಂಶ ಅಷ್ಟಾಗಿ ಏರಿಕೆಯಾಗದಿದ್ದರೂ, ಹವಾಮಾನ ಉರಿಯುತ್ತಿರುವ ಅನುಭವವಾಗಲಿದೆ&lt;/p&gt;&lt;h2&gt;ಮಲೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ&lt;/h2&gt;&lt;p&gt;ಮಲೆನಾಡು ಭಾಗಗಳಲ್ಲಿ, ವಿಶೇಷವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ಅಲ್ಲಲ್ಲಿ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಕನಿಷ್ಠ ಉಷ್ಣಾಂಶವು 20&deg;C ರಿಂದ 22&deg;C ನಡುವೆಯೇ ಇರಲಿದೆ.&lt;/p&gt;&lt;h2&gt;ಜನರಿಗೆ ಎಚ್ಚರಿಕೆ ಮತ್ತು ಸಲಹೆಗಳು&lt;/h2&gt;&lt;p&gt;ಹವಾಮಾನ ಇಲಾಖೆಯು ಉತ್ತರ ಕರ್ನಾಟಕದ ಜನರಿಗೆ ವಿಶೇಷ ಎಚ್ಚರಿಕೆ ನೀಡಿದ್ದು, ಬಿಸಿಲಿನ ತೀವ್ರತೆ ಹೆಚ್ಚಿರುವ ಸಮಯದಲ್ಲಿ ಮನೆಯೊಳಗೇ ಇರುವಂತೆ ಸಲಹೆ ನೀಡಿದೆ. ಮಧ್ಯಾಹ್ನ 12ರಿಂದ 4ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ, ಹೆಚ್ಚು ನೀರು ಕುಡಿಯಿರಿ, ಹಗುರವಾದ ಬಟ್ಟೆ ಧರಿಸಿ . ನೇರ ಬಿಸಿಲಿನಿಂದ ದೂರವಿರಿ ಎಂದು ಸಲಹೆ ನೀಡಲಾಗಿದೆ.&lt;/p&gt;&lt;h2&gt;9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಕೆಲಸದ ಸಮಯ ಬದಲು&lt;/h2&gt;&lt;p&gt;ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಕಲಬುರಗಿ ಕಂದಾಯ ವಿಭಾಗದ ಕಲಬುರಗಿ, ಬೀದರ್&zwnj;, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳು, ಬೆಳಗಾವಿ ಕಂದಾಯ ವಿಭಾಗದ ವಿಜಯನಗರ, ಬಾಗಲಕೋಟೆ 2 ಜಿಲ್ಲೆಗಳು ಸೇರಿದಂತೆ 9 ಜಿಲ್ಲೆಗಳಲ್ಲಿನ ಸರ್ಕಾರದ ಕಚೇರಿಗಳ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗಿನ 8 ರಿಂದ ಮಧ್ಯಾಹ್ನ 1.30ರವರೆಗೆ ಸಮಯ ಬದಲಿಸಿ ಏ.1ರಿಂದಲೇ ಜಾರಿಗೆ ಬರುವಂತೆ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;&lt;p&gt;ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲು ಇರುವ ಕಾರಣ ಈ ಬದಲಾವಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿನ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ಎಂದಿನಂತೆ ಯಾವುದೇ ಲೋಷ/ ಅಡೆತಡೆಯಿಲ್ಲದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು/ಜಿಪಂ ಸಿಇಒ ತುರ್ತು ಸಂದರ್ಭಗಳಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಮಿತಿಯಿಲ್ಲದೆ ಕೆಲಸ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಒಟ್ಟಾರೆ, ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಹವಾಮಾನ ಸ್ಥಿತಿಗಳು ಕಂಡುಬರುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ ಹೆಚ್ಚು ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.&lt;/p&gt;]]></content:encoded>
            <category>yadgir</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v"/>
        </item>
        <item>
            <title><![CDATA[ಮಲ್ಲಿಕಾರ್ಜುನ ಮುತ್ಯಾ ಕೇಸ್‌ಗೆ ಬಿಗ್ ಟ್ವಿಸ್ಟ್: 'ಅಪ್ಪಾಜಿ ನಮಗೆ ದೇವರು' ಎಂದು ಕಣ್ಣೀರಿಟ್ಟ ಬಾಲಕಿ ಪೋಷಕರು!]]></title>
            <link>https://kannada.asianetnews.com/karnataka-districts/mallikarjuna-mutya-pocso-case-get-twist-parents-video-statement-solapur-yadgir-news-sat/articleshow-lfxtola</link>
            <guid isPermaLink="true">https://kannada.asianetnews.com/karnataka-districts/mallikarjuna-mutya-pocso-case-get-twist-parents-video-statement-solapur-yadgir-news-sat/articleshow-lfxtola</guid>
            <pubDate>Thu, 26 Feb 2026 16:46:03 +0530</pubDate>
            <description><![CDATA[&lt;p&gt;ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಂತ್ರಸ್ತ ಬಾಲಕಿಯ ಪೋಷಕರೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಮುತ್ಯಾ ಅವರು ತಮ್ಮ ಮಗಳಿಗೆ ಆಶೀರ್ವಾದ ಮಾಡುತ್ತಿದ್ದ ವಿಡಿಯೋವನ್ನು ಕಿಡಿಗೇಡಿಗಳು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjcthja0y44c6eb5xvpt293h,imgname-yadgir-mallikarjun-mutya-1772104501568.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಫೆ.26): ಕ&lt;/strong&gt;ಲ್ಯಾಣ ಕರ್ನಾಟಕ ಭಾಗದಲ್ಲಿ ಪವಾಡ ಪುರುಷನೆಂದೇ ಖ್ಯಾತಿ ಪಡೆದಿದ್ದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿರುವುದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಈಗ ಸ್ವತಃ ಆ ಸಂತ್ರಸ್ತ ಬಾಲಕಿಯ ತಂದೆ-ತಾಯಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದಾರೆ. ಮುತ್ಯಾ ಅವರದ್ದು ಯಾವುದೇ ತಪ್ಪಿಲ್ಲ, ಕಿಡಿಗೇಡಿಗಳು ವಿಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಹುಟ್ಟುಹಬ್ಬದ ಆಶೀರ್ವಾದದ ವಿಡಿಯೋ:&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದ ಸೊಲ್ಲಾಪುರದಿಂದ ವಿಡಿಯೋ ಬಿಡುಗಡೆ ಮಾಡಿರುವ ಪೋಷಕರು ಅಂದಿನ ಘಟನೆಯನ್ನು ವಿವರಿಸಿದ್ದಾರೆ. 'ನಮ್ಮ ಮಗಳ ಹುಟ್ಟುಹಬ್ಬವಿದ್ದ ಕಾರಣ ದರ್ಶನ ಮತ್ತು ಆಶೀರ್ವಾದ ಪಡೆಯಲು ನಾವು ಅಪ್ಪಾಜಿ (ಮುತ್ಯಾ) ಅವರ ಮಠಕ್ಕೆ ಹೋಗಿದ್ದೆವು. ನಾವು ಕಳೆದ 3-4 ವರ್ಷಗಳಿಂದ ಮುತ್ಯಾ ಅವರ ಪರಮ ಭಕ್ತರಾಗಿದ್ದೇವೆ. ಅಂದು ಮಗಳಿಗೆ ಆಶೀರ್ವಾದ ಮಾಡುತ್ತಿದ್ದ ದೃಶ್ಯವನ್ನು ನಾವೇ ಖುಷಿಯಿಂದ ವಿಡಿಯೋ ಮಾಡಿಕೊಂಡಿದ್ದೆವು. ಆ ಪವಿತ್ರ ಕ್ಷಣವನ್ನು ನಮ್ಮ ವಾಟ್ಸಾಪ್ ಸ್ಟೇಟಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ 'ಆಶೀರ್ವಾದ' ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದೆವು' ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿಡಿಯೋ ತಿರುಚಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ:&lt;/strong&gt;&lt;/h2&gt;&lt;p&gt;'ನಮ್ಮ ಮಗಳು ಮತ್ತು ಅಪ್ಪಾಜಿ ಅವರು ಜೊತೆಗಿರುವ ವಿಡಿಯೋವನ್ನು ಕೆಲವರು ದುರುದ್ದೇಶದಿಂದ ಪಡೆದುಕೊಂಡು, ಅದನ್ನು ಎಡಿಟ್ ಮಾಡಿ, ತಪ್ಪು ಸಂದೇಶ ಬರುವಂತೆ ತಿರುಚಿದ್ದಾರೆ. ನಮ್ಮ ಮಗಳಿಗೆ ಅಪ್ಪಾಜಿ ಅವರು ತಂದೆಯ ಸ್ಥಾನದಲ್ಲಿದ್ದು ಆಶೀರ್ವಾದ ಮಾಡಿದ್ದಾರೆ. ಆದರೆ ಸಮಾಜದಲ್ಲಿ ಅವರಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಲಾಗಿದೆ. ಈ ವಿಡಿಯೋವನ್ನು ತಿರುಚಿ ವೈರಲ್ ಮಾಡಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಪೋಷಕರು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ತನಿಖೆಗೆ ಸಹಕಾರ:&lt;/strong&gt;&lt;/h2&gt;&lt;p&gt;ಪ್ರಕರಣ ದಾಖಲಾದ ನಂತರ ಪೊಲೀಸರು ನಡೆಸಿದ ವಿಚಾರಣೆಗೂ ಪೋಷಕರು ಸ್ಪಂದಿಸಿದ್ದಾರೆ. 'ಪೊಲೀಸ್ ಇಲಾಖೆ ಕರೆದಾಗಲೆಲ್ಲಾ ನಾವು ಹೋಗಿ ನಮ್ಮ ಹೇಳಿಕೆ ನೀಡಿದ್ದೇವೆ. ಅಪ್ಪಾಜಿ ಅವರದ್ದು ಯಾವುದೇ ತಪ್ಪಿಲ್ಲ, ಅವರು ನಮಗೆ ದೇವರ ಸಮಾನ ಎಂದು ಪೊಲೀಸರ ಮುಂದೆಯೂ ಹೇಳಿದ್ದೇವೆ. ಮುಗ್ಧ ಮಗುವಿನ ಹುಟ್ಟುಹಬ್ಬದ ಸಂಭ್ರಮವನ್ನು ಈ ರೀತಿ ವಿವಾದಕ್ಕೀಡು ಮಾಡಿರುವುದು ನಮಗೆ ತುಂಬಾ ನೋವು ತಂದಿದೆ' ಎಂದು ನೊಂದ ಪೋಷಕರು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣದ ಮುಂದಿನ ಹಂತ:&lt;/strong&gt;&lt;/h2&gt;&lt;p&gt;ಪೋಷಕರ ಈ ಹೇಳಿಕೆಯು ಈಗ ತನಿಖಾಧಿಕಾರಿಗಳಿಗೆ ಹೊಸ ಸವಾಲೊಡ್ಡಿದೆ. ಪೋಕ್ಸೋ ಕಾಯ್ದೆಯಡಿ ಒಮ್ಮೆ ದೂರು ದಾಖಲಾದರೆ ಅದರ ಪ್ರಕ್ರಿಯೆಗಳು ಹೇಗೆ ನಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ. ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಪೋಷಕರೇ ಮುತ್ಯಾ ಪರ ನಿಂತಿರುವುದು ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಸದ್ಯ ಪೊಲೀಸರು ವಿಡಿಯೋ ನೈಜತೆಯ ಬಗ್ಗೆ ಎಫ್&zwnj;ಎಸ್&zwnj;ಎಲ್ ವರದಿಗಾಗಿ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mallikarjuna-mutya-pocso-case-get-twist-parents-video-statement-solapur-yadgir-news-sat/articleshow-lfxtola"/>
        </item>
        <item>
            <title><![CDATA[ರಾಜ್ಯದ ಜನತೆಗೆ ಅಲರ್ಟ್: ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ!]]></title>
            <link>https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</guid>
            <pubDate>Tue, 24 Mar 2026 20:43:56 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmc4fptfwz060wyzsnqeqzh5,imgname-rain-1774228855631.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.&lt;img&gt;&lt;p&gt;ಕರ್ನಾಟಕದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದೆ.&lt;/p&gt;&lt;img&gt;&lt;p&gt;ರಾಜ್ಯದ ಆರು ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು 'ಯೆಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಿರಲಿದೆ.&lt;/p&gt;&lt;img&gt;&lt;p&gt;ಈ ಜಿಲ್ಲೆಗಳಲ್ಲಿ ಕೇವಲ ಮಳೆ ಮಾತ್ರವಲ್ಲದೆ, ಜೋರಾದ ಗಾಳಿಯೊಂದಿಗೆ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಮಳೆಯ ಸಮಯದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಓಡಾಡಬಾರದು. ವಿಶೇಷವಾಗಿ ಮಿಂಚಿನ ಸಂದರ್ಭದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಮತ್ತು ವಿದ್ಯುತ್ ಕಂಬಗಳು ಅಥವಾ ತಂತಿಗಳ ಬಳಿ ಹೋಗಬಾರದು ಎಂದು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಹವಾಮಾನ ಬದಲಾವಣೆಯ ಈ ಸಂದರ್ಭದಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;p&gt;&lt;/p&gt;]]></content:encoded>
            <category>yadgir</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc"/>
        </item>
        <item>
            <title><![CDATA[ಮಲ್ಲಿಕಾರ್ಜುನ ಮುತ್ಯಾ ಕೇಸಿಗೆ ಎಂಟ್ರಿಕೊಟ್ಟ ರಾಜ್ಯ ಮಹಿಳಾ ಆಯೋಗ; ಮತ್ತಷ್ಟು ಬಿಗಿಯಾಯ್ತು ಪೊಲೀಸ್ ಕುಣಿಕೆ!]]></title>
            <link>https://kannada.asianetnews.com/karnataka-districts/mallikarjuna-mutya-case-karnataka-women-commission-letter-to-yadgir-superintendent-of-police-sat/articleshow-qriddvh</link>
            <guid isPermaLink="true">https://kannada.asianetnews.com/karnataka-districts/mallikarjuna-mutya-case-karnataka-women-commission-letter-to-yadgir-superintendent-of-police-sat/articleshow-qriddvh</guid>
            <pubDate>Thu, 26 Feb 2026 19:41:36 +0530</pubDate>
            <description><![CDATA[&lt;p&gt;ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆದ ಬಳಿಕ, ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಆಯೋಗವು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಯಾದಗಿರಿ ಎಸ್ಪಿಗೆ ನಿರ್ದೇಶನ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjd4hg524er92g4t8rm66xp2,imgname-mallikarjuna-mutya-case--1--1772114985121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಯಾದಗಿರಿ (ಫೆ.26): ಸ&lt;/strong&gt;ಮಾಜದಲ್ಲಿ ಧರ್ಮದ ಹೆಸರಿನಲ್ಲಿ ಪೂಜಿಸಲ್ಪಡುವವರ ಅಸಲಿ ಬಣ್ಣ ಬಯಲಾದಾಗ ಅದು ಇಡೀ ಸಮಾಜಕ್ಕೇ ಆಘಾತ ನೀಡುತ್ತದೆ. ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಎಂಬಾತ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಈಗ ಈ ಪ್ರಕರಣಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಈ ಮೂಲಕ ವಿವಾದಿತ ಮುತ್ಯಾಗೆ ಪೋಕ್ಸೋ (POCSO) ಕಂಟಕ ಎದುರಾಗಿದ್ದು, ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.&lt;/p&gt;&lt;h2&gt;&lt;strong&gt;ಮಹಿಳಾ ಆಯೋಗದ ಹಸ್ತಕ್ಷೇಪ:&lt;/strong&gt;&lt;/h2&gt;&lt;p&gt;ಮಲ್ಲಿಕಾರ್ಜುನ ಮುತ್ಯಾ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಹಾಗೂ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳನ್ನು ಆಧರಿಸಿ ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆಯೋಗದ ಅಧ್ಯಕ್ಷರ ನಿರ್ದೇಶನದ ಮೇರೆಗೆ ಕಾರ್ಯದರ್ಶಿಗಳು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ (SP) ದಿನಾಂಕ 25.02.2026 ರಂದು ಅಧಿಕೃತ ಪತ್ರ ಬರೆದಿದ್ದಾರೆ.&lt;/p&gt;&lt;h3&gt;&lt;strong&gt;ಪತ್ರದಲ್ಲಿನ ಪ್ರಮುಖಾಂಶಗಳು:&lt;/strong&gt;&lt;/h3&gt;&lt;p&gt;ಮಹಿಳಾ ಆಯೋಗವು ಎಸ್ಪಿಗೆ ಬರೆದಿರುವ ಪತ್ರದಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. 'ಮಲ್ಲಿಕಾರ್ಜುನ ಮುತ್ಯಾ ಎಂಬಾತ ಅಪ್ರಾಪ್ತ ಹೆಣ್ಣು ಮಗುವಿನೊಂದಿಗೆ ಅಸಭ್ಯವಾಗಿ ಹಾಗೂ ಅಶ್ಲೀಲವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿರುತ್ತದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ನಿಯಮಾನುಸಾರ ತಕ್ಷಣವೇ ಪರಿಶೀಲಿಸಿ, ಪೋಕ್ಸೋ ಕಾಯ್ದೆಯಡಿ (Protection of Children from Sexual Offences Act) ಪ್ರಕರಣ ದಾಖಲಿಸಿ, ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ನಿರ್ದೇಶನ ನೀಡಿದೆ.&lt;/p&gt;&lt;p&gt;&lt;/p&gt;&lt;h2&gt;&lt;strong&gt;ಪೊಲೀಸರಿಗೆ ಸವಾಲು:&lt;/strong&gt;&lt;/h2&gt;&lt;p&gt;ಸದ್ಯ ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮಹಿಳಾ ಆಯೋಗದ ಪತ್ರವು ಸ್ಥಳೀಯ ಪೊಲೀಸರ ಮೇಲೆ ತನಿಖೆಯನ್ನು ಚುರುಕುಗೊಳಿಸಲು ಹೆಚ್ಚಿನ ಒತ್ತಡ ತಂದಿದೆ. ಅಪ್ರಾಪ್ತ ಬಾಲಕಿಯ ಸುರಕ್ಷತೆ ಮತ್ತು ಇಂತಹ ವಿಕೃತ ಮನಸ್ಥಿತಿಯ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೋಕ್ಸೋ ಅಡಿ ಎಫ್&zwnj;ಐಆರ್ ದಾಖಲಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಮುತ್ಯಾನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;&lt;h2&gt;&lt;strong&gt;ಭಕ್ತರ ಆಕ್ರೋಶ ಮತ್ತು ಸಮಾಜದ ಕಳವಳ:&lt;/strong&gt;&lt;/h2&gt;&lt;p&gt;ಪವಾಡ ಪುರುಷನೆಂದು ನಂಬಿದ್ದ ಮುತ್ಯಾನ ಈ ಕರಾಳ ಮುಖ ನೋಡಿ ಆತನ ಭಕ್ತರು ಮತ್ತು ಸಾರ್ವಜನಿಕರು ದಂಗಾಗಿದ್ದಾರೆ. ಪವಿತ್ರ ಮಠಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಇಂತಹ ಘಟನೆಗಳು ನಡೆಯುವುದು ನಂಬಿಕೆಗೆ ಧಕ್ಕೆ ತರುತ್ತದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಮಹಿಳಾ ಆಯೋಗದ ಮಧ್ಯಸ್ಥಿಕೆಯಿಂದಾಗಿ ಸಂತ್ರಸ್ತ ಬಾಲಕಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ. ಮತ್ತೊಂದೆಡೆ ಸ್ಥಳೀಯ ಭಕ್ತರು ಮುತ್ಯಾ ಅವರನ್ನು ಏನೂ ತಪ್ಪಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ.&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mallikarjuna-mutya-case-karnataka-women-commission-letter-to-yadgir-superintendent-of-police-sat/articleshow-qriddvh"/>
        </item>
        <item>
            <title><![CDATA[ಮಲ್ಲಿಕಾರ್ಜುನ ಮುತ್ಯಾ  ವಿರುದ್ಧ ಪೋಕ್ಸೊ ತನಿಖೆಗೆ ಹೈಕೋರ್ಟ್ ತಡೆ, ನಿಟ್ಟುಸಿರು ಬಿಟ್ಟ ಭಕ್ತರು]]></title>
            <link>https://kannada.asianetnews.com/state/karnataka-high-court-stays-pocso-investigation-against-mallikarjun-mutya-rav/articleshow-t3xh49e</link>
            <guid isPermaLink="true">https://kannada.asianetnews.com/state/karnataka-high-court-stays-pocso-investigation-against-mallikarjun-mutya-rav/articleshow-t3xh49e</guid>
            <pubDate>Sat, 21 Mar 2026 06:22:57 +0530</pubDate>
            <description><![CDATA[&lt;p&gt;ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖೆಗೆ ಕಲಬುರಗಿ ಹೈಕೋರ್ಟ್ ಪೀಠ ತಡೆ ನೀಡಿದೆ. ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ತಡೆಯಾಜ್ಞೆಯಿಂದ ಮುತ್ಯಾ ಹಾಗೂ ಅವರ ಭಕ್ತರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km6xf7wehqrn85x8v3djk5h6,imgname----------------------2--1774053728141.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಮಾ.21):&lt;/strong&gt; ಬಾಲಕಿ ಜೊತೆಗೆ ಅನುಚಿತ ವರ್ತನೆ ಆರೋಪದಡಿ ಯಾದಗಿರಿ ಜಿಲ್ಲೆಯ ಮಹಲ್&zwnj; ರೋಜಾದ ಚಾಂಗ್&zwnj;ದೇವ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣದ ತನಿಖೆಗೆ ಹೈಕೋರ್ಟ್&zwnj;ನ ಕಲಬುರಗಿ ವಿಭಾಗೀಯ ಪೀಠ ತಡೆ ನೀಡಿ ಆದೇಶ ಹೊರಡಿಸಿದೆ.&amp;nbsp;&lt;/p&gt;&lt;p&gt;ಪ್ರಕರಣ ದಾಖಲಾದ ಬಳಿಕ ವಿಚಾರಣೆಗೆ ತಡೆ ನೀಡುವಂತೆ ಮಲ್ಲಿಕಾರ್ಜುನ ಮುತ್ಯಾ&zwnj; ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿರುವ ಹೈಕೋರ್ಟ್ ತನಿಖೆಗೆ ತಡೆ ನೀಡಿದ್ದು, ತಾತ್ಕಾಲಿಕ ರಿಲೀಫ್&zwnj;ನಿಂದ ಮುತ್ಯಾ ಹಾಗೂ ಭಕ್ತರ ವಲಯದಲ್ಲಿ ನಿಟ್ಟುಸಿರು ಮೂಡಿದೆ. ಸಾಮಾಜಿಕ ಜಾಲತಾಣದಲ್ಲಿ ಬಾಲಕಿ ಜೊತೆಗಿನ ವರ್ತನೆಯ ದೃಶ್ಯಗಳು ವೈರಲ್&zwnj; ಆದ ಬಳಿಕ ಶಹಾಪುರ ಸಿಡಿಪಿಓ ಫೆ.25ರಂದು ನೀಡಿದ ದೂರಿನ ಮೇರೆಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು.&lt;/p&gt;&lt;p&gt;ಪ್ರಕರಣದ ರದ್ದು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಮುತ್ಯಾ ಪರ ವಕೀಲರು, ನಂತರ ವಾಪಸ್ ಪಡೆದು, ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಾ.9ರಂದು ಬೇಲ್&zwnj; ಅರ್ಜಿ ತಿರಸ್ಕೃತಗೊಳಿಸಿದ ಕೋರ್ಟ್&zwnj; ತನಿಖೆಗೆ ಎಸ್ಪಿಗೆ ಸೂಚಿಸಿತ್ತು. ಅದರನ್ವಯ, ಶಹಾಪುರ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದರು.&lt;/p&gt;]]></content:encoded>
            <category>yadgir</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-high-court-stays-pocso-investigation-against-mallikarjun-mutya-rav/articleshow-t3xh49e"/>
        </item>
        <item>
            <title><![CDATA[Mallikarjuna Mutya: ಬಾಲಕಿ ಜೊತೆ ಅನುಚಿತ ವರ್ತನೆ; ಕೊನೆಗೂ ವಿಚಾರಣೆಗೆ ಹಾಜರಾದ ಮಲ್ಲಿಕಾರ್ಜುನ ಮುತ್ಯಾ]]></title>
            <link>https://kannada.asianetnews.com/karnataka-districts/yadagir-inappropriate-behavior-with-minor-investigation-underway-against-mallikarjuna-mutya/articleshow-twelkfs</link>
            <guid isPermaLink="true">https://kannada.asianetnews.com/karnataka-districts/yadagir-inappropriate-behavior-with-minor-investigation-underway-against-mallikarjuna-mutya/articleshow-twelkfs</guid>
            <pubDate>Fri, 06 Mar 2026 04:29:43 +0530</pubDate>
            <description><![CDATA[&lt;p&gt;ಬಾಲಕಿ ಜೊತೆ ಅನುಚಿತ ವರ್ತನೆ ಆರೋಪದಡಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮಹಲ್&zwnj; ರೋಜಾದ ಚಾಂಗ್&zwnj;ದೇವ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮುತ್ಯಾ, ಕೊನೆಗೂ ಶಹಾಪುರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk03a2tq2gj45tasgy1j0bd0,imgname----------------------71--1772751227735.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಯಾದಗಿರಿ (ಮಾ.6): &lt;/strong&gt;ಬಾಲಕಿ ಜೊತೆ ಅನುಚಿತ ವರ್ತನೆ ಆರೋಪದಡಿ, ಪೋಕ್ಸೋ ಪ್ರಕರಣದಲ್ಲಿ ಆರೋಪಿ ಆಗಿರುವ ಮಹಲ್&zwnj; ರೋಜಾದ ಚಾಂಗ್&zwnj;ದೇವ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ &lsquo;ಮುತ್ಯಾ&rsquo; ಕೊನೆಗೂ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.&lt;/p&gt;&lt;p&gt;ಬುಧವಾರ (ಮಾ.4) ರಾತ್ರಿ ಶಹಾಪುರ ಪೊಲೀಸ್&zwnj; ಠಾಣೆಗೆ ಬಂದ ಅವರನ್ನು, ಗುರುವಾರ (ಮಾ.5) ಮತ್ತೆ ಹಾಜರಾಗುವಂತೆ ನೋಟಿಸ್&zwnj; ಮೂಲಕ ಸೂಚಿಸಲಾಗಿತ್ತು. ಗುರುವಾರ ಠಾಣೆಗೆ ಬಂದ ಅವರನ್ನು ತನಿಖಾಧಿಕಾರಿ ಶರಣಗೌಡ ನ್ಯಾಮನವರ್&zwnj; 4 ತಾಸು ವಿಚಾರಣೆ ನಡೆಸಿದ್ದಾರೆ.&lt;/p&gt;&lt;p&gt;ಇದಕ್ಕೂ ಮುನ್ನ, ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಮುತ್ಯಾ ಬಳಸುತ್ತಿರುವ ಮೊಬೈಲ್&zwnj; ಹಾಗೂ ಮಠದ ಆವರಣದಲ್ಲಿನ ಮೂರು ಸಿಸಿಟಿವಿಗಳು- ಹಾರ್ಡ್&zwnj;ಡಿಸ್ಕ್&zwnj;ಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಪೋಕ್ಸೋ ಕೇಸ್&zwnj; ದಾಖಲಾದ ದಿನದಿಂದ ಅಜ್ಞಾತಸ್ಥಳದಲ್ಲಿದ್ದ ಮಲ್ಲಿಕಾರ್ಜುನ ಮುತ್ಯಾ, ವಿಚಾರಣೆಗೆ ಹಾಜರಾಗುವುದಾಗಿ ಹೇಳಿ, ವಿಡಿಯೋ ರಿಲೀಸ್&zwnj; ಮಾಡಿದ್ದಾದರೂ, ಪ್ರಕರಣ ರದ್ದು ಕೋರಿ ಹೈಕೋರ್ಟಿ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದರಿಂದ, ಹೈಕೋರ್ಟ್&zwnj;ನಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್&zwnj; ಪಡೆದಿದ್ದರು. ಮಾ.6ರಂದು ಈ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ನಡೆಯಲಿದೆ.&lt;/p&gt;&lt;p&gt;ಮುತ್ಯಾ ಪೊಲೀಸರೆದುರು ವಿಚಾರಣೆಗೆ ಹಾಜರಾದ ಸುದ್ದಿ ಹಬ್ಬಿದ ಬೆನ್ನಲ್ಲೇ, ಗುರವಾರ ಮಧ್ಯಾಹ್ನದಿಂದಲೇ ಭಕ್ತರು- ಬೆಂಬಲಿಗರು, ರಾಜಕೀಯ ಪ್ರಮುಖರು ಠಾಣೆಯೆದುರು ತಂಡೋಪತಂಡವಾಗಿ ಜಮಾಯಿಸತೊಡಗಿದ್ದರು.&lt;/p&gt;&lt;p&gt;ಯಾವುದೇ ತಪ್ಪು ಮಾಡಿಲ್ಲ&lt;/p&gt;&lt;p&gt;ಪೊಲೀಸರ ವಿಚಾರಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಮುತ್ಯ, &lsquo;ನಾನ್ಯಾವುದೇ ತಪ್ಪು ಮಾಡಿಲ್ಲ. ನಾನು ಕಾನೂನನ್ನು ಗೌರವಿಸುತ್ತೇನೆ. ಪೊಲೀಸರ ವಿಚಾರಣೆಗೆ ಸಹಕರಿಸುತ್ತೇನೆ&rsquo; ಎಂದರು.&lt;/p&gt;]]></content:encoded>
            <category>yadgir</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/yadagir-inappropriate-behavior-with-minor-investigation-underway-against-mallikarjuna-mutya/articleshow-twelkfs"/>
        </item>
        <item>
            <title><![CDATA[ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ಪ್ರತ್ಯಕ್ಷ: 'ನಾನು ಓಡಿ ಹೋಗಿಲ್ಲ, ಪೊಲೀಸರು ಕರೆದಾಗ ಬರ್ತೀನಿ']]></title>
            <link>https://kannada.asianetnews.com/karnataka-districts/mallikarjuna-mutya-pocso-case-releases-video-from-unknown-location-yadgir-news-sat/articleshow-tz3kvnd</link>
            <guid isPermaLink="true">https://kannada.asianetnews.com/karnataka-districts/mallikarjuna-mutya-pocso-case-releases-video-from-unknown-location-yadgir-news-sat/articleshow-tz3kvnd</guid>
            <pubDate>Thu, 26 Feb 2026 15:25:24 +0530</pubDate>
            <description><![CDATA[&lt;p&gt;ಯಾದಗಿರಿಯ ಪೋಕ್ಸೋ ಪ್ರಕರಣದ ಆರೋಪಿ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾ, ತಲೆಮರೆಸಿಕೊಂಡ ನಂತರ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ತಾನು ಎಲ್ಲೂ ಹೋಗಿಲ್ಲ, ಮಠದ ಸಾಮೂಹಿಕ ವಿವಾಹದ ಲಗ್ನ ಪತ್ರಿಕೆ ಹಂಚಲು ಹೊರಗೆ ಬಂದಿದ್ದೇನೆ. ಪೊಲೀಸರ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjcnem5jp1k6b6dk2t8eqd0f,imgname-yadgir-mallikarjun-muthya-1772099162289.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಫೆ.26): ಬಾ&lt;/strong&gt;ಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೋಕ್ಸೋ (POCSO) ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಯಾದಗಿರಿಯ ವಿವಾದಿತ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾ ಈಗ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತ್ಯಕ್ಷವಾಗಿದ್ದಾರೆ. ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆ ಎಂಬ ಸತ್ಯ ಗೊತ್ತಿದ್ದರೂ, ತಾನು ಎಲ್ಲಿಯೂ ಹೋಗಿಲ್ಲ, ಸ್ಥಳೀಯವಾಗಿಯೇ ಇದ್ದೇನೆ ಎಂದು ಮುತ್ಯಾ ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಭಕ್ತರಿಗೆ ಅಭಯ ನೀಡಿದ ಮುತ್ಯಾ:&lt;/strong&gt;&lt;/h2&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಮಲ್ಲಿಕಾರ್ಜುನ ಮುತ್ಯಾ ತಮ್ಮ ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. 'ನನ್ನ ಶ್ರೀಮಠದ ಭಕ್ತಾಧಿಗಳೇ, ನೀವು ಯಾರೂ ಆತಂಕಪಡುವ ಅಗತ್ಯವಿಲ್ಲ. ನಾನು ಎಲ್ಲೂ ಓಡಿ ಹೋಗಿಲ್ಲ, ಇಲ್ಲೇ ಲೋಕಲ್&zwnj;ನಲ್ಲೇ ಇದ್ದೇನೆ. ಮಠದಲ್ಲಿ ಶೀಘ್ರದಲ್ಲೇ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಆಮಂತ್ರಣ ಪತ್ರಿಕೆ (ಲಗ್ನ ಪತ್ರಿಕೆ) ಹಂಚಲು ನಾನು ಹೊರಗಡೆ ಬಂದಿದ್ದೇನೆ ಅಷ್ಟೆ' ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ವಿಚಾರಣೆಗೆ ಸಿದ್ಧ ಎಂದ ಆರೋಪಿ:&lt;/strong&gt;&lt;/h2&gt;&lt;p&gt;ತನ್ನ ವಿರುದ್ಧ ದಾಖಲಾಗಿರುವ ಗಂಭೀರ ಪ್ರಕರಣದ ಬಗ್ಗೆಯೂ ವಿಡಿಯೋದಲ್ಲಿ ಪ್ರಸ್ತಾಪಿಸಿರುವ ಮುತ್ಯಾ, 'ಪೊಲೀಸ್ ಸಿಬ್ಬಂದಿ ನನ್ನನ್ನು ವಿಚಾರಣೆಗೆ ಕರೆ ನೀಡಿದ್ದಾರೆ ಎಂಬ ವಿಷಯ ತಿಳಿದಿದೆ. ನಾನು ಕಾನೂನಿಗೆ ಗೌರವ ನೀಡುತ್ತೇನೆ. ಪೊಲೀಸರು ಯಾವಾಗ ಬನ್ನಿ ಅಂತಾರೋ ಆವಾಗ ನಾನು ಅವರ ಮುಂದೆ ಹಾಜರಾಗಲು ಸಿದ್ಧನಿದ್ದೇನೆ. ಇದರಲ್ಲಿ ಹೆದರುವಂತಹ ಅಥವಾ ಆತಂಕ ಪಡುವಂತಹ ವಿಷಯ ಯಾವುದೂ ಇಲ್ಲ' ಎಂದು ಅತೀವ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಕೆಲ ದಿನಗಳ ಹಿಂದೆ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳು ಮುತ್ಯಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದವು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಮುತ್ಯಾ ತಲೆಮರೆಸಿಕೊಂಡಿದ್ದರು. ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದ ಸಮಯದಲ್ಲಿಯೇ ಈಗ ಅಜ್ಞಾತ ಸ್ಥಳದಿಂದ ಈ ವಿಡಿಯೋ ಹೊರಬಿದ್ದಿದೆ.&lt;/p&gt;&lt;h2&gt;&lt;strong&gt;ಡೋಂಗಿತನದ ಬಗ್ಗೆ ಸಾರ್ವಜನಿಕರ ಆಕ್ರೋಶ:&lt;/strong&gt;&lt;/h2&gt;&lt;p&gt;ಒಂದೆಡೆ ಮುತ್ಯಾ ಭಕ್ತರಿಗೆ ಸಮಾಧಾನ ಹೇಳುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕರು ಈತನ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. 'ತಪ್ಪಿತಸ್ಥನಲ್ಲದಿದ್ದರೆ ಪೊಲೀಸರ ಮುಂದೆ ನೇರವಾಗಿ ಹಾಜರಾಗುವ ಬದಲು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುತ್ತಿರುವುದು ಯಾಕೆ?' ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರೊಂದಿಗೆ ನಡೆದಿದೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿದ್ದು, ಮುತ್ಯಾ ಅವರ ಭವಿಷ್ಯವಾಣಿಗಳೆಲ್ಲವೂ ಸುಳ್ಳು ಎಂಬುದು ಸಾಬೀತಾಗಿತ್ತು.&lt;/p&gt;&lt;p&gt;ಸದ್ಯ ಪೊಲೀಸರು ಈ ವಿಡಿಯೋದ ಮೂಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಮುತ್ಯಾ ನಿಜವಾಗಿಯೂ ಮದುವೆಯ ಕಾರ್ಡ್ ಹಂಚುತ್ತಿದ್ದಾರೋ ಅಥವಾ ಬಂಧನದ ಭೀತಿಯಿಂದ ನಾಟಕವಾಡುತ್ತಿದ್ದಾರೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mallikarjuna-mutya-pocso-case-releases-video-from-unknown-location-yadgir-news-sat/articleshow-tz3kvnd"/>
        </item>
        <item>
            <title><![CDATA[Mallikarjuna Mutya: ಅಪ್ರಾಪ್ತ ಬಾಲಕಿಯ ಅಪ್ಪಿಕೊಂಡು ಮುದ್ದಾಟ, ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಮೇಲೆ ಬಿತ್ತು ಕೇಸ್‌!]]></title>
            <link>https://kannada.asianetnews.com/crime/case-filed-against-mallikarjuna-mutya-in-yadgir-over-inappropriate-conduct-with-minor-girl/articleshow-w1ywqaw</link>
            <guid isPermaLink="true">https://kannada.asianetnews.com/crime/case-filed-against-mallikarjuna-mutya-in-yadgir-over-inappropriate-conduct-with-minor-girl/articleshow-w1ywqaw</guid>
            <pubDate>Wed, 25 Feb 2026 18:43:50 +0530</pubDate>
            <description><![CDATA[ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಅವರು ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kjaeh0tvf7006bp75jhk61n7,imgname----------------------12--1772024791899.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಫೆ.25):&lt;/strong&gt; ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಮಹಲ್ ರೋಜಾ ಗ್ರಾಮದ ಪ್ರಖ್ಯಾತ ಯಮನೂರಪ್ಪ ಮುತ್ಯಾ ಮಠದ ಮಲ್ಲಿಕಾರ್ಜುನ ಮುತ್ಯಾ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್ ಆಗಿರುವ ಹಿನ್ನೆಲೆ ಇದರ ಗಂಭೀರತೆ ಅರಿತ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಇದೀಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.&lt;/p&gt;&lt;h2&gt;ಮಲ್ಲಿಕಾರ್ಜುನ ಮುತ್ಯಾ ವಿಡಿಯೋದಲ್ಲೇನಿದೆ?&lt;/h2&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ ಮಲ್ಲಿಕಾರ್ಜುನ ಮುತ್ಯಾ ಬೆಡ್ ಮೇಲೆ ಕುಳಿತು ಅಪ್ರಾಪ್ತ ಬಾಲಕಿಯನ್ನು ಮಲಗಿಸಿಕೊಂಡಿರುವ ದೃಶ್ಯವಿದೆ. ಈ ವೇಳೆ ಬಾಲಕಿಗೆ ಮುತ್ತು ಕೊಡುತ್ತಾ ಅನುಚಿತವಾಗಿ ವರ್ತಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ, ಮತ್ತೊಂದು ವಿಡಿಯೋದಲ್ಲಿ ಅದೇ ಬಾಲಕಿಯೊಂದಿಗೆ ಬಲವಂತವಾಗಿ ನೃತ್ಯ ಮಾಡುತ್ತಾ, ಬಾಲಕಿಯ ಜಡೆ ಎಳೆಯುವುದು, ಮುದ್ದಾಡುವುದು ಬಾಲಕಿಯೊಂದಿಗೆ ವಿಕೃತವಾಗಿ ವರ್ತಿಸಿರುವ ದೃಶ್ಯಗಳು ಕಂಡುಬಂದಿವೆ. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;h3&gt;ಅಂತರರಾಜ್ಯ ಭಕ್ತರನ್ನು ಹೊಂದಿರುವ ಮುತ್ಯಾ&lt;/h3&gt;&lt;p&gt;ಮಲ್ಲಿಕಾರ್ಜುನ ಮುತ್ಯಾ ಅವರು ಕೇವಲ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ. ಆದರೆ ಈ ವಿಡಿಯೋ ಬಹಿರಂಗವಾದ ನಂತರ ಭಕ್ತ ವರ್ಗದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. 'ಇವನು ದೇವರಲ್ಲ, ಜನರ ನಂಬಿಕೆಯೊಂದಿಗೆ ಆಟವಾಡುತ್ತಾ ಮಕ್ಕಳೊಂದಿಗೆ ವಿಕೃತವಾಗಿ ವರ್ತಿಸುತ್ತಿದ್ದಾನೆ. ತಕ್ಷಣ ಎಫ್&zwnj;ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು' ಎಂದು ನೆಟ್ಟಿಗರು ಹಾಗೂ ಪ್ರಜ್ಞಾವಂತ ನಾಗರಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಪರ-ವಿರೋಧದ ನಡುವೆ ಮಕ್ಕಳ ಆಯೋಗ ಎಂಟ್ರಿ&lt;/strong&gt;&lt;/p&gt;&lt;p&gt;ಈ ವಿವಾದದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವರು 'ಉತ್ತರ ಕರ್ನಾಟಕ ಭಾಗದಲ್ಲಿ ಸಣ್ಣ ಮಕ್ಕಳನ್ನು ಈ ರೀತಿ ಮುದ್ದು ಮಾಡುವುದು ಸಾಮಾನ್ಯ, ಬಾಲಕಿ ಮಠದ ಆಪ್ತರ ಮಗಳಿರಬಹುದು' ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ವಿಡಿಯೋದಲ್ಲಿನ ವರ್ತನೆ ಅಸಭ್ಯವಾಗಿದೆ ಎಂದು ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮಕ್ಕಳ ಹಕ್ಕುಗಳ ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ವಿಚಾರಣೆಗೆ ಮುಂದಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>yadgir</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/case-filed-against-mallikarjuna-mutya-in-yadgir-over-inappropriate-conduct-with-minor-girl/articleshow-w1ywqaw"/>
        </item>
        <item>
            <title><![CDATA[ಹೊಸಕೋಟೆ ದುರಂತ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಯಾದಗಿರಿಯ ಶಿವನ ಭಕ್ತರ ಸಾವು!]]></title>
            <link>https://kannada.asianetnews.com/karnataka-districts/yadagiri-devotees-killed-in-tragic-road-accident-in-andhra-pradesh-while-traveling-to-srisailam-shivaratri/articleshow-yp7gxwz</link>
            <guid isPermaLink="true">https://kannada.asianetnews.com/karnataka-districts/yadagiri-devotees-killed-in-tragic-road-accident-in-andhra-pradesh-while-traveling-to-srisailam-shivaratri/articleshow-yp7gxwz</guid>
            <pubDate>Sat, 14 Feb 2026 16:05:14 +0530</pubDate>
            <description><![CDATA[&lt;p&gt;ಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀಶೈಲಂಗೆ ತೆರಳುತ್ತಿದ್ದ ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮದ ಮೂವರು ಭಕ್ತರು ಆಂಧ್ರಪ್ರದೇಶದ ಕಲಕುರ್ತಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. &amp;nbsp;ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್&zwnj;ಗೆ ಡಿಕ್ಕಿ ಹೊಡೆದು &amp;nbsp;ಈ ದುರ್ಘಟನೆ ಸಂಭವಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khdvas69mdb5mnyzhaeq7txe,imgname----1771065140425.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ: &lt;/strong&gt;ಹೊಸಕೋಟೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಜನ ಮೃತಪಟ್ಟ ದಾರುಣ ಘಟನೆ ಫೆಬ್ರವರಿ 13ರಂದು ನಡೆದಿತ್ತು. ಈ ಕರಾಳ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಶಿವರಾತ್ರಿ ಹಿನ್ನೆಲೆ ಶ್ರೀಶೈಲಂಗೆ ತೆರಳುತ್ತಿದ್ದ ಯಾದಗಿರಿ ಜಿಲ್ಲೆಯ ಮೂವರು ಭಕ್ತರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಆಂಧ್ರಪ್ರದೇಶದ ಕಲಕುರ್ತಿ ಸಮೀಪ ಈ ಘಟನೆ ನಡೆದಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;h2&gt;ಗೋಗಿ ಗ್ರಾಮದ ನಿವಾಸಿಗಳು&lt;/h2&gt;&lt;p&gt;ಪೊಲೀಸ್ ಮೂಲಗಳ ಪ್ರಕಾರ, ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮದ ನಿವಾಸಿಗಳಾದ ರಾಮನಗೌಡ (52), ಮೇಘಾ (48) ಮತ್ತು ಮಹಾದೇವಮ್ಮ ಕಲಕೇರಿ (70) ಎಂಬವರು ಶಿವರಾತ್ರಿ ವಿಶೇಷ ದರ್ಶನಕ್ಕಾಗಿ ಶ್ರೀಶೈಲಂ ಮಲ್ಲಯ್ಯನ ದರ್ಶನಕ್ಕೆ ಹೊರಟಿದ್ದರು. ಭಕ್ತರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನವು ವೇಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್&zwnj;ಗೆ ಡಿಕ್ಕಿ ಹೊಡೆದಿದೆ.&lt;/p&gt;&lt;h2&gt;ಹಲವರಿಗೆ ಗಾಯ&lt;/h2&gt;&lt;p&gt;ಡಿಕ್ಕಿಯ ತೀವ್ರತೆಗೆ ಕ್ರೂಸರ್ ವಾಹನ ಪಲ್ಟಿಯಾಗಿದ್ದು, ಇದರ ಪರಿಣಾಮವಾಗಿ ಮೂವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ವೇಳೆ ವಾಹನದಲ್ಲಿದ್ದ ಇನ್ನೂ ಐದು ರಿಂದ ಆರು ಜನರಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ..&lt;/p&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ. ಘಟನೆ ಬಳಿಕ ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದ ಮೃತರ ಗೋಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></content:encoded>
            <category>yadgir</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yadagiri-devotees-killed-in-tragic-road-accident-in-andhra-pradesh-while-traveling-to-srisailam-shivaratri/articleshow-yp7gxwz"/>
        </item>
        <item>
            <title><![CDATA[ಯಾದಗಿರಿ: ಚಾಲಕನಿಂದಲೇ ಸರ್ಕಾರಿ ಬಸ್ ಕಳ್ಳತನ! ಕುಡಿದ ಮತ್ತಿನಲ್ಲಿ KKRTC ಬಸ್ ಎಸ್ಕೇಪ್‌ ಮಾಡಿದ ಕಿಲಾಡಿ]]></title>
            <link>https://kannada.asianetnews.com/karnataka-districts/yadgiri-kkrtc-bus-theft-by-dismissed-driver-mahipal-reddy-saidapur-police-case-san/articleshow-ypu79ha</link>
            <guid isPermaLink="true">https://kannada.asianetnews.com/karnataka-districts/yadgiri-kkrtc-bus-theft-by-dismissed-driver-mahipal-reddy-saidapur-police-case-san/articleshow-ypu79ha</guid>
            <pubDate>Sat, 21 Mar 2026 17:07:47 +0530</pubDate>
            <description><![CDATA[&lt;p&gt;ಯಾದಗಿರಿಯ ಸೈದಾಪುರದಲ್ಲಿ, ಕೆಕೆಆರ್&zwnj;ಟಿಸಿಯಿಂದ ವಜಾಗೊಂಡಿದ್ದ ಮಾಜಿ ಚಾಲಕ ಮಹಿಪಾಲರೆಡ್ಡಿ ಎಂಬಾತ ಕುಡಿದ ಮತ್ತಿನಲ್ಲಿ ಸರ್ಕಾರಿ ಬಸ್ಸನ್ನೇ ಕದ್ದೊಯ್ದಿದ್ದಾನೆ. ಬಸ್ಸನ್ನು ತನ್ನ ಸ್ವಗ್ರಾಮದ ದೇವಸ್ಥಾನದ ಮುಂದೆ ನಿಲ್ಲಿಸಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km82s0d60m7vy54ep11a69m5,imgname-screenshot-2026-03-21-170050-1774092845478.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಮಾ.21):&lt;/strong&gt; ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಕೆಕೆಆರ್&zwnj;ಟಿಸಿ (KKRTC) ಸಂಸ್ಥೆಗೆ ಶಾಕ್ ನೀಡುವಂತಹ ಘಟನೆಯೊಂದು ನಡೆದಿದೆ. ಸಂಸ್ಥೆಯಿಂದಲೇ ವಜಾಗೊಂಡಿದ್ದ ಮಾಜಿ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಬಸ್ ನಿಲ್ದಾಣದಲ್ಲಿದ್ದ ಸರ್ಕಾರಿ ಬಸ್ಸನ್ನೇ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ಸನ್ನು ಮಹಿಪಾಲರೆಡ್ಡಿ ಎಂಬ ಮಾಜಿ ಚಾಲಕ ಕದ್ದೊಯ್ದಿದ್ದಾನೆ. ಈತ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬಸ್ ಕಳ್ಳತನ ಮಾಡಿದ ಈತ, ಅದನ್ನು ತನ್ನ ಸ್ವಗ್ರಾಮವಾದ ರಾಚನಳ್ಳಿಯ ದೇವಸ್ಥಾನದ ಮುಂದೆ ತಂದು ನಿಲ್ಲಿಸಿದ್ದಾನೆ.&lt;/p&gt;&lt;h2&gt;&lt;strong&gt;ಯಾರು ಈ ಮಹಿಪಾಲರೆಡ್ಡಿ?&lt;/strong&gt;&lt;/h2&gt;&lt;p&gt;ಮಹಿಪಾಲರೆಡ್ಡಿ ಈ ಹಿಂದೆ ಕೆಕೆಆರ್&zwnj;ಟಿಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಈತನ ವಿರುದ್ಧ ಪ್ರಯಾಣಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ (ಜೇಬಿಗೆ ಇಳಿಸಿಕೊಳ್ಳುತ್ತಿದ್ದ) ಗಂಭೀರ ಆರೋಪಗಳಿದ್ದವು. ಇಂತಹ ಹಲವು ದೂರುಗಳ ಹಿನ್ನೆಲೆಯಲ್ಲಿ ಸಂಸ್ಥೆಯು ಈತನನ್ನು ಸೇವೆಯಿಂದ ವಜಾಗೊಳಿಸಿತ್ತು. ಕೆಲಸ ಹೋದ ಸಿಟ್ಟೋ ಅಥವಾ ಕುಡಿದ ಮತ್ತಿನ ಅವಾಂತರವೋ, ಈತ ಈಗ ಬಸ್ಸನ್ನೇ ಕದ್ದು ಸುದ್ದಿಯಾಗಿದ್ದಾನೆ.&lt;/p&gt;&lt;h2&gt;&lt;strong&gt;ಪೊಲೀಸ್ ದೂರು ದಾಖಲು&lt;/strong&gt;&lt;/h2&gt;&lt;p&gt;ತಮ್ಮ ಬಸ್ ನಾಪತ್ತೆಯಾಗಿರುವುದನ್ನು ಕಂಡು ಬೆಚ್ಚಿಬಿದ್ದ ಕೆಕೆಆರ್&zwnj;ಟಿಸಿ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಬಸ್ ಪತ್ತೆ ಮಾಡಿದ್ದಾರೆ. ಸದ್ಯ ಮಹಿಪಾಲರೆಡ್ಡಿ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>yadgir</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/yadgiri-kkrtc-bus-theft-by-dismissed-driver-mahipal-reddy-saidapur-police-case-san/articleshow-ypu79ha"/>
        </item>
    </channel>
</rss>
