<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 05 Jun 2026 22:49:35 +0530</lastBuildDate>
        <atom:link href="https://kannada.asianetnews.com/rss/yadgir" rel="self" type="application/rss+xml"/>
        <item>
            <title><![CDATA[ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿದ್ದ ಯಾದಗಿರಿ ಯುವಕನಿಗೆ ಹೃದಯಾಘಾತ]]></title>
            <link>https://kannada.asianetnews.com/karnataka-districts/a-young-man-from-yadagir-who-was-preparing-for-a-competitive-exam-in-dharwad-suffered-a-heart-attack-mrq/articleshow-1bow90k</link>
            <guid isPermaLink="true">https://kannada.asianetnews.com/karnataka-districts/a-young-man-from-yadagir-who-was-preparing-for-a-competitive-exam-in-dharwad-suffered-a-heart-attack-mrq/articleshow-1bow90k</guid>
            <pubDate>Thu, 04 Jun 2026 07:58:19 +0530</pubDate>
            <description><![CDATA[&lt;p&gt;ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯಾದಗಿರಿ ಮೂಲದ ಯುವಕನೊಬ್ಬ ಧಾರವಾಡದಲ್ಲಿ ಹೃದಯಾಘಾತದಿಂದ ಮೃತಪಟ್ಟರೆ, ಮತ್ತೊಂದು ಘಟನೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕನಕಗಿರಿ ತಾಲೂಕಿನ ಯುವತಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿದ್ದಾಳೆ. ಈ ಎರಡೂ ದುರಂತ ಘಟನೆಗಳು ಕುಟುಂಬದಲ್ಲಿ ಶೋಕವನ್ನುಂಟು ಮಾಡಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt870ffrwm930mf12fzmkbrg,imgname-youth-death-1780539735544.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ&lt;/strong&gt;: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಧಾರವಾಡಕ್ಕೆ ಬಂದಿದ್ದ, ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ಮೂಲದ 25 ವರ್ಷದ ಮಾರುತಿ ಕಲಬುರಗಿ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.&lt;/p&gt;&lt;p&gt;ಮಾರುತಿ ಕಳೆದ ಮೂರು ವರ್ಷಗಳಿಂದ ಧಾರವಾಡದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಪಡೆಯುತ್ತಿದ್ದನು. ಉತ್ತಮ ಭವಿಷ್ಯದ ಕನಸು ಹೊತ್ತು ಸ್ವಗ್ರಾಮ ತೊರೆದು ಧಾರವಾಡಕ್ಕೆ ಬಂದಿದ್ದ ಆತ, ನಗರದಲ್ಲಿ ಬಾಡಿಗೆ ಕೊಠಡಿ ಮಾಡಿಕೊಂಡು ವಾಸಿಸುತ್ತಿದ್ದನು. ಕೊಠಡಿಯಲ್ಲಿದ್ದ ವೇಳೆ ಬುಧವಾರ ನಸುಕಿನಲ್ಲಿ ಮಾರುತಿಗೆ ಎದೆನೋವು ಕಾಣಿಸಿಕೊಂಡಿದೆ. ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ತೀವ್ರ ಹೃದಯಾಘಾತದಿಂದ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಘಟನೆ ತಿಳಿಯುತ್ತಿದ್ದಂತೆ ಮಾರುತಿ ಕುಟುಂಬದವರು ಧಾರವಾಡಕ್ಕೆ ಆಗಮಿಸಿದ್ದಾರೆ. ಮಗನ ಅಕಾಲಿಕ ನಿಧನದಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಹೊಟ್ಟೆ ನೋವು ತಾಳದೆ ಅವಿವಾಹಿತೆ ನೇಣಿಗೆ ಶರಣು&lt;/strong&gt;&lt;/h2&gt;&lt;p&gt;ಕನಕಗಿರಿ: ಹೊಟ್ಟೆ ನೋವು ತಾಳಲಾರದೆ ಅವಿವಾಹಿತೆ ಮನನೊಂದು ನೇಣಿಗೆ ಶರಣಾದ ಘಟನೆ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಗೌರಮ್ಮ ಜೆಂಜೆರಿ(19) ನೇಣಿಗೆ ಶರಣಾದ ಯುವತಿ. 20 ದಿನಗಳ ಹಿಂದೆ ಮುರ್ಲಾನಹಳ್ಳಿ ಗ್ರಾಮದ ಯಮನೂರಸ್ವಾಮಿ ಜೊತೆ ಗೌರಮ್ಮಳ ವಿವಾಹ ನಿಶ್ಚಯ ಮಾಡಲಾಗಿತ್ತು.&amp;nbsp;&lt;/p&gt;&lt;p&gt;ಗೌರಮ್ಮಳಿಗೆ ಸುಮಾರು 2-3 ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಕಡಿಮೆ ಆಗಿಲ್ಲ. ಇದರಿಂದ ಮಾನಸಿಕ ನೊಂದಿದ್ದ ಗೌರಮ್ಮ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಹುಲಿಗೆಮ್ಮ ಜಿಂಜೆರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>yadgir</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-young-man-from-yadagir-who-was-preparing-for-a-competitive-exam-in-dharwad-suffered-a-heart-attack-mrq/articleshow-1bow90k"/>
        </item>
        <item>
            <title><![CDATA['ಶಾಲೆ ಇದೆ ಶಿಕ್ಷಕರಿಲ್ಲ, ಆಸ್ಪತ್ರೆ ಇದೆ ವೈದ್ಯರಿಲ್ಲ': ಯಾದಗಿರಿ ಸ್ಥಿತಿ ನೋಡಿ ನಿರ್ಮಲಾ ಸೀತಾರಾಮನ್ ಬೇಸರ]]></title>
            <link>https://kannada.asianetnews.com/karnataka-districts/nirmala-sitharaman-yadgir-backward-district-statement-gvd/articleshow-1lt7rnw</link>
            <guid isPermaLink="true">https://kannada.asianetnews.com/karnataka-districts/nirmala-sitharaman-yadgir-backward-district-statement-gvd/articleshow-1lt7rnw</guid>
            <pubDate>Fri, 05 Jun 2026 22:48:27 +0530</pubDate>
            <description><![CDATA[&lt;p&gt;ಕೃಷಿ, ಶಾಲೆ- ಆಸ್ಪತ್ರೆ ಸೇರಿದಂತೆ ಮುಂತಾದ ವ್ಯವಸ್ಥೆಗಳಲ್ಲಿ ಹಿಂದುಳಿದಿರುವ ಯಾದಗಿರಿ ಜಿಲ್ಲೆ ದೇಶದ ಅತೀ ಹಿಂದುಳಿದಿರುವುದು ಅತ್ಯಂತ ದು:ಖಕರ ಸಂಗತಿ ಎಂದು ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgbf96v0xpvpm3xe0njsbf0y,imgname-nirmala-sitharaman-9th-union-budget-2026-reforms-growth-10-points1-1769911655264.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಜೂ.05):&lt;/strong&gt; ಮಹಿಳಾ ಸಾಕ್ಷರತೆ, ಮೂಲಸೌಕರ್ಯಗಳ ಕೊರತೆ, ಕೃಷಿ, ಶಾಲೆ- ಆಸ್ಪತ್ರೆ ಸೇರಿದಂತೆ ಮುಂತಾದ ವ್ಯವಸ್ಥೆಗಳಲ್ಲಿ ಹಿಂದುಳಿದಿರುವ ಯಾದಗಿರಿ ಜಿಲ್ಲೆ ದೇಶದ ಅತೀ ಹಿಂದುಳಿದಿರುವುದು ಅತ್ಯಂತ ದು:ಖಕರ ಸಂಗತಿ ಎಂದು ಭಾರತ ಸರ್ಕಾರದ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಜಿಲ್ಲೆಯ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ನಬಾರ್ಡ್ ಸಹಯೋಗದೊಂದಿಗೆ ನಿರ್ಮಿಸಲಾದ ರೈತರ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ (ಸಿ.ಎಫ್.ಸಿ) ಮತ್ತು ಶೇಂಗಾ ಸಂಸ್ಕರಣಾ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಯಾದಗಿರಿ ಜಿಲ್ಲೆ ಹಿಂದುಳಿದರುವುದು ನನಗೆ ತೀವ್ರ ದುಖಃ ತಂದಿದೆ ಎಂದರು.&lt;/p&gt;&lt;p&gt;ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಶೇ.41 ರಷ್ಟಿದೆ, ನೀರಾವರಿ ಸೌಕರ್ಯ ಈ ಭಾಗದಲ್ಲಿ ಕಡಿಮೆಯಿದೆ, ರೈತರು ಉದ್ಯೋಗ ಅರಸಿ ಮಹಾನಗರಗಳಿಗೆ ಗುಳೇ ಹೋಗುತ್ತಿದ್ದಾರೆ. ಇಲ್ಲಿ ಉತ್ತಮ ರಸ್ತೆಗಳಿಲ್ಲ, ಶಾಲೆಗಳಿದ್ದರೆ ಶಿಕ್ಷಕರಿಲ್ಲ, ಆಸ್ಪತ್ರೆಗಳಿದ್ದರೆ ವೈದ್ಯರು-ಸಿಬ್ಬಂದಿಗಳಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಜಿಲ್ಲೆಯ ದುಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್&zwnj;, ಈ ಭಾಗವನ್ನು ದಶಕಗಳ ಕಾಲ ಪ್ರತಿನಿಧಿಸಿದ ರಾಜಕಾರಣಿಗಳು ಏನು ಕೆಲಸ ಮಾಡಿದ್ದಾರೆ ಎಂಬ ಪ್ರಶ್ನೆ ಮೂಡಿದೆ, ಇದು ನಮಗಷ್ಟೇ ಅಲ್ಲ ಈಗಿಲ್ಲಿ ಜನರ ಕಣ್ಣಿಗೂ ಕಾಣುತ್ತಿದೆ, ಜನರಿಗೂ ದಶಕಗಳ ಕಾಲ ಆಳಿದವರ ಬಗ್ಗೆ ಅರ್ಥವಾಗುತ್ತಿದೆ ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಠಕಲ್&zwnj; ಮತಕ್ಷೇತ್ರವನ್ನು ನಾಲ್ಕೈದು ದಶಕಗಳ ಕಾಲ ಪ್ರತಿನಿಧಿಸಿದ್ದವರು. ಪರೋಕ್ಷವಾಗಿ ಖರ್ಗೆಯವರ ಬಗ್ಗೆ ನಿರ್ಮಲಾ ಸೀತಾರಾಮನ್&zwnj; ಮಾತು ಆಡಿದಂತಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಹಿಂದುಳಿದ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳ ಅಭಿವೃದ್ಧಿಗೆ &quot;ಹಿಂದುಳಿದ&quot; ಎಂಬ ಹಣೆಪಟ್ಟಿ ನೀಡದೆ, &quot;ಮಹತ್ವಾಕಾಂಕ್ಷಿ ಜಿಲ್ಲೆ&quot; ಎಂಬ ಹೆಸರಿನೊಂದಿಗೆ ಅಭಿವೃದ್ಧಿಗೊಳಿಸಬೇಕು ಎಂಬ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ, ಕೇಂದ್ರ ಸರ್ಕಾರ ಇಂತಹ ಭಾಗಗಳಲ್ಲಿ ಎಲ್ಲ ಸ್ತರಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಮಹತ್ವಾಕಾಂಕ್ಷಿ ಜಿಲ್ಲೆಗಳಾಗಿವೆ ಎಂದರು.&lt;/p&gt;&lt;h2&gt;&lt;strong&gt;ಆರ್ಥಿಕ ಪ್ರಗತಿಗೆ ಹೊಸ ದಿಕ್ಕು&lt;/strong&gt;&lt;/h2&gt;&lt;p&gt;ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್&zwnj;ಡಿಆರ್), ಮಹಿಳಾ ಸಾಕ್ಷರತೆ ಹಾಗೂ ತಲಾವಾರು ಆದಾಯದ ಮಟ್ಟ ಇನ್ನೂ ತೃಪ್ತಿಕರವಾಗಿಲ್ಲ. ಈ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದ ಅವರು, ಮಹತ್ವಾಕಾಂಕ್ಷಿ ಜಿಲ್ಲೆಯಾದ ಯಾದಗಿರಿಯನ್ನು ಕೃಷಿ ಆಧಾರಿತ ಕೈಗಾರಿಕೆಗಳ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲೆಯ ಆರ್ಥಿಕ ಪ್ರಗತಿಗೆ ಹೊಸ ದಿಕ್ಕು ನೀಡಲಾಗುತ್ತಿದೆ ಎಂದರು.&lt;/p&gt;&lt;p&gt;ಬದ್ದೇಪಲ್ಲಿ ಮಹಿಳಾ ರೈತ ಉತ್ಪಾದಕ ಸಂಸ್ಥೆ (ಎಫ್&zwnj;ಪಿಒ) ಸಂಪೂರ್ಣ ಮಹಿಳಾ ಸದಸ್ಯರಿಂದ ನಿರ್ವಹಿಸಲ್ಪಡುತ್ತಿರುವುದು ವಿಶೇಷ ಸಾಧನೆಯಾಗಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ ಇಂತಹ ಘಟಕಗಳಲ್ಲಿ ಯಾದಗಿರಿಯ ಘಟಕ ಮಹಿಳೆಯರೇ ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದ ಅವರು, ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಬೆಳೆಸಿಕೊಂಡು ಸ್ವಾವಲಂಬಿಗಳಾಗುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬಹುದಾಗಿದೆ ಎಂದು ಹೇಳಿದರು.&lt;/p&gt;&lt;p&gt;ಯಾದಗಿರಿ ಜಿಲ್ಲೆಯು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಒಟ್ಟು ಭೂಪ್ರದೇಶದ ಶೇ.75ರಷ್ಟು ಭಾಗ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ ದೊರಕಿದಾಗ ಮಾತ್ರ ಜಿಲ್ಲೆಯ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಯಾದಗಿರಿ ಜಿಲ್ಲೆಯಲ್ಲಿ ವರ್ಷಕ್ಕೆ 22,500 ಮೆಟ್ರಿಕ್ ಟನ್ ಶೇಂಗಾ ಉತ್ಪಾದನೆಯಾಗುತ್ತಿದ್ದು, ಅದರ ಸಂಪೂರ್ಣ ಲಾಭ ರೈತರಿಗೆ ದೊರಕುವಂತೆ ಶೇಂಗಾ ಹುರಿಯುವಿಕೆ, ಖಾದ್ಯ ತೈಲ, ಪೀನಟ್ ಬಟರ್ ಹಾಗೂ ಇತರೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ವಿಶೇಷ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಐಟಿಸಿ ಸೇರಿದಂತೆ ಪ್ರಮುಖ ಸಂಸ್ಥೆಗಳ ಮೂಲಕ ರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸಂಪರ್ಕ ಕಲ್ಪಿಸಲಾಗುವುದು. ರೈತರಿಂದ ನೇರ ಖರೀದಿ ವ್ಯವಸ್ಥೆ ಜಾರಿಗೊಳಿಸಿ ಮಧ್ಯವರ್ತಿಗಳ ಹಾವಳಿ ಕಡಿಮೆ ಮಾಡುವ ಗುರಿ ಹೊಂದಲಾಗಿದೆ.-ನಿರ್ಮಲಾ ಸೀತಾರಾಮನ್&zwnj;, ಕೇಂದ್ರ ಹಣಕಾಸು ಸಚಿವೆ&lt;/p&gt;]]></content:encoded>
            <category>yadgir</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/nirmala-sitharaman-yadgir-backward-district-statement-gvd/articleshow-1lt7rnw"/>
        </item>
        <item>
            <title><![CDATA[ರಾಜ್ಯದಲ್ಲಿ ಮಳೆ ಆರ್ಭಟ, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್; ಮುಂಡರಗಿ ಟವರ್ ಢಮಾರ್, ಯಾದಗಿರಿ ಸಿಡಿಲಿಗೆ 50 ಕುರಿ ಬಲಿ!]]></title>
            <link>https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah</link>
            <guid isPermaLink="true">https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah</guid>
            <pubDate>Mon, 27 Apr 2026 20:15:43 +0530</pubDate>
            <description><![CDATA[&lt;p&gt;ಹವಾಮಾನ ಇಲಾಖೆಯು ಕರ್ನಾಟಕದ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಯಾದಗಿರಿಯಲ್ಲಿ ಸಿಡಿಲು ಬಡಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದರೆ, ಗದಗದಲ್ಲಿ ಬಿರುಗಾಳಿಗೆ ಮೊಬೈಲ್ ಟವರ್ ಕುಸಿದುಬಿದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq7pcmhj9phzabq7y5zf6te3,imgname-karnataka-rain-orange-alert-1777301082673.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಗದಗ/ಯಾದಗಿರಿ (ಏ.27): ರಾ&lt;/strong&gt;ಜ್ಯದಲ್ಲಿ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ಹವಾಮಾನ ಇಲಾಖೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂದಿನ ಮೂರು ಗಂಟೆಗಳಲ್ಲಿ ರಾಜ್ಯದ ಒಟ್ಟು ಎಂಟು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಯಾವ ಯಾವ ಜಿಲ್ಲೆಗಳಲ್ಲಿ ಮಳೆ?&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಎರಡು ಪ್ರತ್ಯೇಕ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ:&lt;/p&gt;&lt;p&gt;&lt;strong&gt;ಹೆಚ್ಚಿನ ತೀವ್ರತೆಯ ಮಳೆ (ಗಂಟೆಗೆ 40-50 ಕಿ.ಮೀ ವೇಗದ ಗಾಳಿ):&lt;/strong&gt;&lt;/p&gt;&lt;p&gt;ಚಿಕ್ಕಮಗಳೂರು, ಹಾಸನ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋಮೀಟರ್ ಇರಲಿದ್ದು, ಗುಡುಗು ಸಹಿತ ಮಿಂಚಿನ ಅಬ್ಬರ ಜೋರಾಗಿರಲಿದೆ.&lt;/p&gt;&lt;p&gt;&lt;strong&gt;ಸಾಧಾರಣ ಮಳೆ (ಗಂಟೆಗೆ 30-40 ಕಿ.ಮೀ ವೇಗದ ಗಾಳಿ):&lt;/strong&gt;&lt;/p&gt;&lt;p&gt;ಚಾಮರಾಜನಗರ, ಮೈಸೂರು, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇಲ್ಲಿ ಗಾಳಿಯು ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.&lt;/p&gt;&lt;p&gt;ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಧಾರಾಕಾರ ಮಳೆ ಮತ್ತು ಬಿರುಗಾಳಿ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ಯಾದಗಿರಿ ಜಿಲ್ಲೆಯಲ್ಲಿ ಸಿಡಿಲು ಬಡಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದರೆ, ಗದಗ ಜಿಲ್ಲೆಯಲ್ಲಿ ಬೃಹತ್ ಮೊಬೈಲ್ ಟವರ್ ನೆಲಕ್ಕಪ್ಪಳಿಸಿದೆ. ಈ ಬೆನ್ನಲ್ಲೇ ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ.&lt;/p&gt;&lt;h2&gt;&lt;strong&gt;ಯಾದಗಿರಿ: ಕುರಿಗಾಹಿಗಳ ಬದುಕು ಬೀದಿಗೆ&lt;/strong&gt;&lt;/h2&gt;&lt;p&gt;ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೂದೂರು ಗ್ರಾಮದಲ್ಲಿ ಪ್ರಕೃತಿ ವಿಕೋಪಕ್ಕೆ ರೈತರು ತತ್ತರಿಸಿದ್ದಾರೆ. ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಮಲ್ಲಪ್ಪ, ಆಶಪ್ಪ, ಜಾಲ್ಲಪ್ಪ, ಲಕ್ಸಮಪ್ಪ ಮತ್ತು ಹನುಮಂತ ಎಂಬ ರೈತರಿಗೆ ಸೇರಿದ 50ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ತಮ್ಮ ಜೀವನಾಧಾರವಾಗಿದ್ದ ಕುರಿಗಳ ಮಾರಣಹೋಮ ಕಂಡು ಕುರಿಗಾಹಿಗಳು ಕಣ್ಣೀರು ಹಾಕುತ್ತಿದ್ದಾರೆ. ನೊಂದ ರೈತರಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸ್ಥಳೀಯ ಹೋರಾಟಗಾರರು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಗದಗ: ಗಾಳಿ ಮಳೆಗೆ ಉರುಳಿದ ಮೊಬೈಲ್ ಟವರ್&lt;/strong&gt;&lt;/h2&gt;&lt;p&gt;ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಜಾಗೃತಿ ಸರ್ಕಲ್ ಬಳಿ ಬಿರುಗಾಳಿ ಮಳೆಯ ರಭಸಕ್ಕೆ ಏರ್&zwnj;ಟೆಲ್ ಮೊಬೈಲ್ ಟವರ್&zwnj;ವೊಂದು ಬಿಲ್ಡಿಂಗ್ ಮೇಲಿಂದ ಕೆಳಕ್ಕೆ ಬಿದ್ದಿದೆ. ಸವಣೂರು ಎಂಬುವವರಿಗೆ ಸೇರಿದ ಕಟ್ಟಡದ ಮೇಲೆ ಈ ಟವರ್ ಅಳವಡಿಸಲಾಗಿತ್ತು. ಅದೃಷ್ಟವಶಾತ್ ಟವರ್ ಬೀಳುವ ಸಮಯದಲ್ಲಿ ಜನಸಂಚಾರ ವಿರಳವಾಗಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಭವನೀಯ ಹಾನಿಗಳು:&lt;/strong&gt;&lt;/h2&gt;&lt;ul&gt; &lt;li&gt;ಈ ಹಠಾತ್ ಹವಾಮಾನ ಬದಲಾವಣೆಯಿಂದ ಕೆಲವು ಸಮಸ್ಯೆಗಳು ಎದುರಾಗಬಹುದು ಎಂದು ಇಲಾಖೆ ಎಚ್ಚರಿಸಿದೆ:&lt;/li&gt; &lt;li&gt;ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು.&lt;/li&gt; &lt;li&gt;ರಸ್ತೆಗಳಲ್ಲಿ ಸಣ್ಣಪುಟ್ಟ ಸಂಚಾರ ದಟ್ಟಣೆ ಹಾಗೂ ಮರಗಳ ಕೊಂಬೆಗಳು ಮುರಿದು ಬೀಳುವ ಸಾಧ್ಯತೆಯಿದೆ.&lt;/li&gt; &lt;li&gt;ದುರ್ಬಲವಾದ ಕಟ್ಟಡಗಳು ಅಥವಾ ಕಚ್ಚಾ ಮನೆಗಳಿಗೆ ಹಾನಿಯಾಗಬಹುದು.&lt;/li&gt; &lt;li&gt;ವಿಶೇಷವಾಗಿ ರೈತರು ಕೊಯ್ಲು ಮಾಡಿ ತೆರೆದ ಜಾಗದಲ್ಲಿಟ್ಟಿರುವ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ.&lt;/li&gt; &lt;li&gt;ಸಾರ್ವಜನಿಕರಿಗೆ ಸೂಚನೆಗಳು:&lt;/li&gt; &lt;li&gt;ಮಳೆಯ ಸಮಯದಲ್ಲಿ ಸುರಕ್ಷಿತವಾಗಿರಲು ಹವಾಮಾನ ಇಲಾಖೆಯು ಕೆಲವು ಕ್ರಮಗಳನ್ನು ಸೂಚಿಸಿದೆ:&lt;/li&gt; &lt;li&gt;ಮಳೆಯ ಸಂದರ್ಭದಲ್ಲಿ ಮನೆಯೊಳಗೆ ಇರಿ, ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ.&lt;/li&gt; &lt;li&gt;ಸಾಧ್ಯವಾದರೆ ಪ್ರಯಾಣವನ್ನು ಮುಂದೂಡಿ. ಒಂದು ವೇಳೆ ಪ್ರಯಾಣಿಸುವುದು ಅನಿವಾರ್ಯವಾದರೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ.&lt;/li&gt; &lt;li&gt;ಗುಡುಗು ಸಿಡಿಲು ಇರುವಾಗ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ.&lt;/li&gt; &lt;li&gt;ಮನೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್&zwnj;ಪ್ಲಗ್ (Unplug) ಮಾಡಿ.&lt;/li&gt; &lt;li&gt;ಜಲಮೂಲಗಳಿಂದ (ಕೆರೆ, ನದಿ) ತಕ್ಷಣ ಹೊರಬನ್ನಿ ಮತ್ತು ವಿದ್ಯುತ್ ಕಂಬಗಳಿಂದ ದೂರವಿರಿ.&lt;/li&gt; &lt;li&gt;ರೈತರು ತಮ್ಮ ಬೆಳೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿಡಿ.&lt;/li&gt; &lt;li&gt;ಮುಂದಿನ ಮೂರು ಗಂಟೆಗಳ ಕಾಲ ಈ ಜಿಲ್ಲೆಗಳ ಜನರು ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆಯ ಕರ್ತವ್ಯನಿರತ ಅಧಿಕಾರಿಗಳು ತಿಳಿಸಿದ್ದಾರೆ.&lt;/li&gt;&lt;/ul&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah"/>
        </item>
        <item>
            <title><![CDATA[8 ವರ್ಷ ಪ್ರೀತಿ, 3 ಗರ್ಭಪಾತ, 35 ಲಕ್ಷ; ಮಹಿಳಾ ಪೇದೆಯಿಂದ ಯಾದಗಿರಿ PSIಗೆ ಲವ್ ದೋಖಾ ಆರೋಪ?]]></title>
            <link>https://kannada.asianetnews.com/gallery/karnataka-districts/8-years-of-love-3-abortions-35-lakhs-raichur-rural-police-station-female-constable-accuses-yadgir-psi-of-love-fraud-mrq-4yuhl4q</link>
            <guid isPermaLink="true">https://kannada.asianetnews.com/gallery/karnataka-districts/8-years-of-love-3-abortions-35-lakhs-raichur-rural-police-station-female-constable-accuses-yadgir-psi-of-love-fraud-mrq-4yuhl4q</guid>
            <pubDate>Wed, 06 May 2026 09:05:57 +0530</pubDate>
            <description><![CDATA[&lt;p&gt;ಇಂಟಲಿಜೆನ್ಸ್PSI ವಿರೇಶ್ ಆಲೂರು, 8 ವರ್ಷಗಳಿಂದ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಕುಟುಂಬಕ್ಕೆ 35 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಇದೀಗ ಬೇರೊಬ್ಬರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqxn6cpcy110z4395y33mv0v,imgname-yadagiri-psi-love-dokha--4--1778038026956.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂಟಲಿಜೆನ್ಸ್PSI ವಿರೇಶ್ ಆಲೂರು, 8 ವರ್ಷಗಳಿಂದ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಕುಟುಂಬಕ್ಕೆ 35 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಇದೀಗ ಬೇರೊಬ್ಬರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ತನಗೆ ಮಹಿಳಾ ಪೇದೆಯಿಂದ ಮೋಸವಾಗಿದೆ ಎಂದು ಯಾದಗಿರಿ ಜಿಲ್ಲೆಯ ಶಹಾಪುರ ಠಾಣೆಯಲ್ಲಿ ಇಂಟಲಿಜೆನ್ಸ್ ಪಿಎಸ್&zwnj;ಐ ವಿರೇಶ್ ಆಲೂರು ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ನಾವಿಬ್ಬರು ಕಳೆದ ಎಂಟು ವರ್ಷಗಳಿಂದ ಸಂಬಂಧದಲ್ಲಿದ್ದು, ಇದೀಗ ಜಾತಿ ಕಾರಣ ನೀಡಿ ನನ್ನನ್ನು ದೂರ ಮಾಡ್ತಿದ್ದಾರೆ ಎಂದು ವಿರೇಶ್ ಆರೋಪಿಸಿದ್ದಾರೆ. ಮೇ 7ರಂದು ರಾಯಚೂರಿನಲ್ಲಿ ಮಹಿಳಾ ಪೇದೆಯ ಮದುವೆ ನಡೆಯಲಿದೆ.&lt;/p&gt;&lt;img&gt;&lt;p&gt;ವೀರೇಶ್ ಆಲೂರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡದ ಮೂಲ ನಿವಾಸಿಯಾಗಿದ್ದು, ಮಹಿಳಾ ಪೇದೆ ಸುಮಾ (ಹೆಸರು ಬದಲಾಯಿಸಲಾಗಿದೆ) ವಿಜಯಪುರ ಜಿಲ್ಲೆಯ ಆಲ್&zwnj;ಮೇಲ್ ತಾಲೂಕಿನ ಬಳಗಾನೂರಿನವರು. ಎಂಟು ವರ್ಷದ ಹಿಂದೆ ಸಿಂದಗಿಯ ಶ್ರೀ ಮಾತಾ ಕೋಚಿಂಗ್ ಸೆಂಟರ್&zwnj;ನಲ್ಲಿ ವಿರೇಶ್ ಆಲೂರು ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಸುಮಾ ಪರಿಚಯವಾಗಿತ್ತು.&lt;/p&gt;&lt;img&gt;&lt;p&gt;ಮೊದಲಿಗೆ ಪರಿಚಯ, ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಇದಾದ ಮೇಲೆ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ನಡೆದಿದೆ. ರಾಯಚೂರಿನ ಬಾಲಮರೆಮ್ಮ ಟೆಂಪಲ್ ನಲ್ಲಿ ಹಾರ ಬದಲಿಸಿಕೊಂಡು ಗಂಡ ಹೆಂಡತಿಯಂತೆ ಒಂದೇ ರೂಮಿನಲ್ಲಿ ಸಂಸಾರ ನಡೆಸಿದ್ದೇವೆ. ಬಳಿಕ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಮೂರು ಬಾರಿ ಸುಮಾ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ವಿರೇಶ್ ಆರೋಪಿಸುತ್ತಾರೆ.&lt;/p&gt;&lt;img&gt;&lt;p&gt;ಮೊದಲಿಗೆ ಸುಮಾಗೆ ಎಸ್&zwnj;ಡಿಎ ಹುದ್ದೆಗೆ ಆಯ್ಕೆ ಕೊಪ್ಪಳದಲ್ಲಿ ಡ್ಯೂಟಿ ಇತ್ತು.ಇತ್ತ ಪ್ರೊಬೇಷನರಿ ಪಿಎಸ್&zwnj;ಐ ಆಗಿ ಹೊಸಪೇಟೆಯಲ್ಲಿ ನನ್ನ ಕೆಲಸವಿತ್ತು. ಕೊಪ್ಪಳದಲ್ಲಿ ಇಬ್ಬರೂ ಒಂದೇ ರೂಮಿನಲ್ಲಿ 3 ವರ್ಷ ವಾಸವಾಗಿದ್ದೀವಿ. ಎಸ್&zwnj;ಡಿಎ ಹುದ್ದೆ ಬಿಟ್ಟು ಪೇದೆ&zwnj; ಹುದ್ದೆಗೆ ಸುಮಾ ಆಯ್ಕೆಯಾಗಿ ಸದ್ಯ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಡ್ಯೂಟಿಯಲ್ಲಿದ್ದಾರೆ. ರಾಯಚೂರಿನಲ್ಲೂ 3 ವರ್ಷ&zwnj; ಒಂದೇ ರೂಮಿನಲ್ಲಿದ್ದೀವಿ. ಬೆಂಗಳೂರಿಗೆ ವರ್ಗಾವಣೆಯಾದ್ರೂ ರಾಯಚೂರಿಗೆ ಬಂದು ಹೋಗುತ್ತಿದ್ದೆ ಎಂದು ಹೇಳುತ್ತಾರೆ ವಿರೇಶ್.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಾಸನದಲ್ಲಿ ಘೋರ ಕೃತ್ಯ: ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಖಾಸಗಿ ಭಾಗಕ್ಕೆ ಒದ್ದು ಹತ್ಯೆ&lt;/strong&gt;&lt;/p&gt;&lt;img&gt;&lt;p&gt;ಸುಮಾ ಕುಟುಂಬಕ್ಕೆ 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದು, ಈ ಹಣದಿಂದಲೇ ಮನೆ ಕಟ್ಟಿಸಿಕೊಂಡಿದ್ದಾರೆ. ಆಕೆಯ ತಮ್ಮನಿಗೂ ಟ್ರಾಕ್ಟರ್ ಕೊಡಿಸಿದ್ದೇನೆ. ಮದುವೆ ವಿಷಯ ಬಂದಾಗ ಜಾತಿ ಕಾರಣ ನೀಡಲಾಗುತ್ತಿದೆ. ನನಗೆ ಸುಮಾ ಬೇಕು ಎಂದು ವಿರೇಶ್ ಹೇಳುತ್ತಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಸುಮಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;2ನೇ ಸಂಸಾರ ಪೋಷಿಸುವ ವ್ಯಕ್ತಿ ತನ್ನ ತಾಯಿ ಪೋಷಣೆ ನಿರಾಕರಿಸುವಂತಿಲ್ಲ: ಹೈಕೋರ್ಟ್ ಆದೇಶ&lt;/strong&gt;&lt;/p&gt;]]></content:encoded>
            <category>yadgir</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/8-years-of-love-3-abortions-35-lakhs-raichur-rural-police-station-female-constable-accuses-yadgir-psi-of-love-fraud-mrq-4yuhl4q"/>
        </item>
        <item>
            <title><![CDATA[ಶಿವಮೊಗ್ಗ, ಮಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಅಬ್ಬರಿಸಿದ ಮಳೆರಾಯ: ವಿಮಾನ ಲ್ಯಾಂಡಿಂಗ್ ಸಮಸ್ಯೆ, ಮನೆಗಳು ವಿನಾಶ!]]></title>
            <link>https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn</link>
            <guid isPermaLink="true">https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn</guid>
            <pubDate>Thu, 14 May 2026 21:03:29 +0530</pubDate>
            <description><![CDATA[&lt;p&gt;ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krkhh7vdmgmzcqbvbwd34hj9,imgname-karnataka-rain-update-1778772385645.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು/ಮಂಗಳೂರು: &lt;/strong&gt;ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನಿಂದ ಬೆಂದು ಹೋಗಿದ್ದ ಕರ್ನಾಟಕದ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಆದರೆ, ರಾಜ್ಯದ ಹಲವೆಡೆ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಂದೆಡೆ ಮಳೆ ಖುಷಿ ನೀಡಿದರೆ, ಮತ್ತೊಂದೆಡೆ ಅಪಾರ ಹಾನಿ ಉಂಟುಮಾಡಿದೆ. ವಿಶೇಷವಾಗಿ ಮಂಗಳೂರು, ಯಾದಗಿರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ರೌದ್ರಾವತಾರ ಕಂಡುಬಂದಿದೆ.&lt;/p&gt;&lt;img&gt;&lt;p&gt;ಕರಾವಳಿ ನಗರಿ ಮಂಗಳೂರಿನಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ರನ್ ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಎರಡು ವಿಮಾನಗಳು ಇಳಿಯಲಾಗದೆ ವಿಟ್ಲ ಸಮೀಪದ ಆಕಾಶದಲ್ಲಿ ಸುದೀರ್ಘ ಕಾಲ ಸುತ್ತಾಡುತ್ತಿವೆ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆಯಾದ್ಯಂತ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ. ಯಾದಗಿರಿ ನಗರ, ಶಹಾಪುರ ಮತ್ತು ಸುರಪುರ ತಾಲೂಕುಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿಯ ತಗಡುಗಳು ನೂರಾರು ಅಡಿ ದೂರಕ್ಕೆ ಹಾರಿ ಹೋಗಿವೆ.&amp;nbsp;&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆಯಾದ್ಯಂತ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ಮಳೆ ತಂಪು ನೀಡಿದೆಯಾದರೂ, ಬಡ ಕುಟುಂಬಗಳ ಆಸ್ತಿಪಾಸ್ತಿಗೆ ಹಾನಿಯಾಗಿರುವುದು ನೋವು ತಂದಿದೆ.&lt;/p&gt;&lt;img&gt;&lt;p&gt;ಶಿವಮೊಗ್ಗದಲ್ಲಿ ಹಲವು ದಿನಗಳ ಸುದೀರ್ಘ ಕಾಯುವಿಕೆಯ ನಂತರ ಮಳೆರಾಯ ಧರೆಗಿಳಿದಿದ್ದಾನೆ. ಸಂಜೆ 6 ಗಂಟೆಯ ಸುಮಾರಿಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದೆ. ಆದರೆ, ದಿಢೀರ್ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಯಿತು.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಭಾರಿ ಮಳೆಯಾಗುತ್ತಿದೆ. ಸಂಜೆ 7 ಗಂಟೆಯಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿಯ ಜನರಿಗೆ ಸೆಕೆಯಿಂದ ಮುಕ್ತಿ ಸಿಕ್ಕಿದೆ. ಜಿಲ್ಲೆಯ ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲೂ ಮೋಡಕವಿದ ವಾತಾವರಣವಿದ್ದು, ರಾತ್ರಿಯ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಗುಡುಗು ಸಿಡಿಲಿನ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn"/>
        </item>
        <item>
            <title><![CDATA[ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಮತ್ತೆ ಕೆಮಿಕಲ್ ತ್ಯಾಜ್ಯ ಕಳ್ಳಾಟ? ಗ್ರಾಮಸ್ಥರ ಆತಂಕವೇನು?]]></title>
            <link>https://kannada.asianetnews.com/karnataka-districts/yadgir-kadechur-industrial-area-chemical-waste-water-pollution-gvd/articleshow-eik553g</link>
            <guid isPermaLink="true">https://kannada.asianetnews.com/karnataka-districts/yadgir-kadechur-industrial-area-chemical-waste-water-pollution-gvd/articleshow-eik553g</guid>
            <pubDate>Mon, 01 Jun 2026 21:46:21 +0530</pubDate>
            <description><![CDATA[&lt;p&gt;ಮಳೆಗಾಲ ಆರಂಭಿಸುತ್ತಿದ್ದಂತೆ ಮತ್ತೆ ತಮ್ಮ ಕಳ್ಳಾಟ ಆರಂಭಿಸಿರುವ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು, ಕೆಮಿಕಲ್&zwnj; ತ್ಯಾಜ್ಯ ನೀರನ್ನು ಚರಂಡಿ ಮಾರ್ಗದ ಮೂಲಕ ಹಳ್ಳಕ್ಕೆ ಬಿಡುತ್ತಿದ್ದು, ಇದು ಜೀವಸಂಕುಲಕ್ಕೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1z0kk15az5gyw922nb4bwq,imgname-fjf-1780330024545.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಜೂ.01): &lt;/strong&gt;ಮಳೆಗಾಲ ಆರಂಭಿಸುತ್ತಿದ್ದಂತೆ ಮತ್ತೆ ತಮ್ಮ ಕಳ್ಳಾಟ ಆರಂಭಿಸಿರುವ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು, ಕೆಮಿಕಲ್&zwnj; ತ್ಯಾಜ್ಯ ನೀರನ್ನು ಚರಂಡಿ ಮಾರ್ಗದ ಮೂಲಕ ಹಳ್ಳಕ್ಕೆ ಬಿಡುತ್ತಿದ್ದು, ಇದು ಜೀವಸಂಕುಲಕ್ಕೆ ಕುತ್ತು ತರುವಂತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಕೈಗಾರಿಕಾ ಪ್ರದೇಶದಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕದಿಂದ ವಿಷಯುಕ್ತ ಕೆಮಿಕಲ್&zwnj; ತ್ಯಾಜ್ಯವನ್ನು ಭಾನುವಾರ ಸಂಜೆ ಸದ್ದಿಲ್ಲದೆ ಹೊರಬಿಡಲಾಗಿತ್ತು. ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಕೆಮಿಕಲ್&zwnj; ತ್ಯಾಜ್ಯ ಸಂಗ್ರಹಿಸುವ ಈ ಘಟಕವು, ವೈಜ್ಞಾನಿಕಾಗಿ ತ್ಯಾಜ್ಯ ವಿಲೇವಾರಿ ಮಾಡದೇ, ಯಾರಿಗೂ ಗೊತ್ತಾಗದಂತೆ ಪ್ರತ್ಯೇಕ ಕಳ್ಳಮಾರ್ಗದಿಂದ ಚರಂಡಿ ಮೂಲಕ ಹೊರಬಿಡುತ್ತಿರುವುದರಿಂದ, ಈ ನೀರನ್ನು ಅವಲಂಬಿಸಿರುವ ಗ್ರಾಮಸ್ಥರ ಬದುಕಿಗೆ ಕುತ್ತಾಗಿ ಪರಿಣಮಿಸುವ ಆತಂಕ ಎದುರಾಗಿದೆ. ಜೊತೆಗೆ, ಜೀವಜಂತುಗಳು ಸಾವನ್ನಪ್ಪುವ ಸಾಧ್ಯತೆಯಿದೆ.&lt;/p&gt;&lt;p&gt;ಈ ಹಿಂದೆಯೂ ಕೂಡ, ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಇಲ್ಲಿನ ಕಾರ್ಖಾನೆಗಳ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹಳ್ಳಕ್ಕೆ ತ್ಯಾಜ್ಯ ಬಿಟ್ಟ ಪರಿಣಾಮ ಸಾವಿರಾರು ಮೀನುಗಳು ಹಾಗೂ ಕುರಿ-ದನಕರುಗಳು ಹಳ್ಳದ ನೀರು ಕುಡಿದು ಮೃತಪಟ್ಟಿದ್ದವು. ಈಗ, ಕಳೆದ ಕೆಲವು ದಿನಗಳಿಂದ ಕಾರ್ಖಾನೆಗಳು ಯಾರಿಗೂ ಗೊತ್ತಾಗದ ಹಾಗೆ ರಾತ್ರಿ ವೇಳೆ ಮತ್ತೇ ತ್ಯಾಜ್ಯ ಹೊರಬಿಡುತ್ತಿರುವುದು ಕಂಡುಬರುತ್ತಿದೆ ಎಂದು ದೂರಿದ ಶೆಟ್ಟಿಹಳ್ಳಿ ಗ್ರಾಮದ ಕಾಶೀನಾಥ್&zwnj;, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಗೂ ನಾವು ಮೊನ್ನೆಯೂ ಕೂಡ ಈ ಬಗ್ಗೆ ತಿಳಿಸಿದ್ದೆವಾದರೂ, ಕ್ರಮ ಕೈಗೊಳ್ಳುವುದಾಗಲೀ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವುದಾಗಲೀ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಜಿಲ್ಲಾಡಳಿತ ಸ್ಪಂದಿಸಬೇಕಿದೆ&lt;/strong&gt;&lt;/h2&gt;&lt;p&gt;ಮಳೆಗಾಲದ ಈ ಸಂದರ್ಭದಲ್ಲಿ ಮತ್ತೇ ಇಂತಹ ಕೃತ್ಯಗಳು ಜೀವಸಂಕುಲಕ್ಕೆ ಮಾರಕ. ಕಂಪನಿಗಳು ನಿಯಮಗಳ ಪಾಲಿಸುತ್ತಿಲ್ಲ, ಇದ ತಡೆಯಬೇಕಾದ ಅಧಿಕಾರಿಗಳು ಕಂಡೂ ಕಾಣದ ಹಾಗೆ ಮೌನಕ್ಕೆ ಶರಣಾಗಿದ್ದಾರೆ. ಕಾರ್ಖಾನೆಗಳ ಅವೈಜ್ಞಾನಿಕ ಕ್ರಮ ಗೊತ್ತಿದ್ದರೂ, ಮಾಲೀಕರುಗಳ ಪ್ರಭಾವದಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಬರುವಲ್ಲಿ ಹಿಂದೇಟು ಹಾಕುತ್ತಿರಬಹುದು ಎಂದು ಸಾಮಾಜಿಕ ಕಾರ್ಯಕರ್ತ ಭೀಮಣ್ಣ ವಡವಟ್&zwnj; ಶಂಕೆ ವ್ಯಕ್ತಪಡಿಸಿದರು. ಕಡೇಚೂರ ಭಾಗದಲ್ಲಿನ ಜನರ ಅಹವಾಲುಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕಿದೆ. ದೊಡ್ಡ ಅನಾಹುತಗಳು ನಡೆಯುವ ಮುನ್ನ ಕ್ರಮಕ್ಕೆ ಮುಂದಾಗಬೇಕಿದೆ ಅಂತಾರೆ.&lt;/p&gt;]]></content:encoded>
            <category>yadgir</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/yadgir-kadechur-industrial-area-chemical-waste-water-pollution-gvd/articleshow-eik553g"/>
        </item>
        <item>
            <title><![CDATA[ಸಿಪಿಐ ವೀರಣ್ಣ ದೊಡ್ಡಮನಿ ಲೋಕಾಯುಕ್ತ ಬಲೆಗೆ: 1 ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್!]]></title>
            <link>https://kannada.asianetnews.com/gallery/karnataka-districts/yadagiri-district-gurumitkal-cpi-veeranna-lokayukta-arrested-for-accepting-a-bribe-of-rs-1-lakh-mrq-frm90zc</link>
            <guid isPermaLink="true">https://kannada.asianetnews.com/gallery/karnataka-districts/yadagiri-district-gurumitkal-cpi-veeranna-lokayukta-arrested-for-accepting-a-bribe-of-rs-1-lakh-mrq-frm90zc</guid>
            <pubDate>Sat, 09 May 2026 08:46:21 +0530</pubDate>
            <description><![CDATA[&lt;p&gt;Corruption&quot; ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಿಪಿಐ ವೀರಣ್ಣ ಎಸ್&zwnj;. ದೊಡ್ಡಮನಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5bckk41gs6k430mwmf7qkf,imgname-cpi-veeranna-doddamani-1778296180324.jpg" type="image/jpeg" height="390" width="690"/>
            <content:encoded><![CDATA[&lt;p&gt;Corruption&quot; ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಿಪಿಐ ವೀರಣ್ಣ ಎಸ್&zwnj;. ದೊಡ್ಡಮನಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಸುಮಾರು 1 ಲಕ್ಷ ರೂಪಾಯಿ ಪಡೆಯುತ್ತಿರುವ ಸಂದರ್ಭದಲ್ಲಿ ಗುರುಮಠಕಲ್ ಸಿಪಿಐ ವೀರಣ್ಣ ಎಸ್&zwnj;. ದೊಡ್ಡಮನಿ ಎಂಬವರನ್ನು ಲೋಕಾಯಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಲು ವೀರಣ್ಣ ದೊಡ್ಡಮನಿ ಬೇಡಿಕೆ ಇರಿಸಿರುವ ಆರೋಪ ಕೇಳಿ ಬಂದಿದೆ.&lt;/p&gt;&lt;img&gt;&lt;p&gt;ವೀರಣ್ಣ ಎಸ್.ದೊಡ್ಡಮನಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಆರೋಪಿಸಿ ಆನಂದ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಶುಕ್ರವಾರ ರಾತ್ರಿ ಗುರುಮಠಕಲ್ ಪಟ್ಟಣದ ಸಿಪಿಐ ಕ್ವಾಟರ್ಸ್&zwnj;ನಲ್ಲಿ ಲಂಚ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಲೋಕಾಯುಕ್ತ ಪೊಲೀಸರು ವೀರಣ್ಣ ಎಸ್. ದೊಡ್ಡಮನಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಲೋಕಾಯುಕ್ತ ಡಿವೈಎಸ್&zwnj;ಪಿ ಜೆ.ಹೆಚ್. ಇನಾಮದಾರ, ಪಿಐ ಸಿದ್ದರಾಯ ಬೆಳ್ಳೂರಗಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.&lt;/p&gt;]]></content:encoded>
            <category>yadgir</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/yadagiri-district-gurumitkal-cpi-veeranna-lokayukta-arrested-for-accepting-a-bribe-of-rs-1-lakh-mrq-frm90zc"/>
        </item>
        <item>
            <title><![CDATA[ನೋಂದಾಯಿಸಿದ್ದ ಯಾದಗಿರಿಯ 3000 ಗರ್ಭಿಣಿಯರು ಪತ್ತೆಯೇ ಇಲ್ಲ; ಆರೋಗ್ಯ ಇಲಾಖೆಯೇ ಶಾಕ್]]></title>
            <link>https://kannada.asianetnews.com/karnataka-districts/3000-registered-pregnant-women-missing-in-yadagiri-district-health-department-shocked-mrq/articleshow-gpltxor</link>
            <guid isPermaLink="true">https://kannada.asianetnews.com/karnataka-districts/3000-registered-pregnant-women-missing-in-yadagiri-district-health-department-shocked-mrq/articleshow-gpltxor</guid>
            <pubDate>Tue, 28 Apr 2026 08:51:28 +0530</pubDate>
            <description><![CDATA[&lt;p&gt;ಯಾದಗಿರಿ ಜಿಲ್ಲೆಯಲ್ಲಿ ನೋಂದಣಿಯಾದ 30,000ಕ್ಕೂ ಹೆಚ್ಚು ಗರ್ಭಿಣಿಯರಲ್ಲಿ 3,000ಕ್ಕೂ ಅಧಿಕ ಮಂದಿಯ ಹೆರಿಗೆಯ ಮಾಹಿತಿ ಲಭ್ಯವಿಲ್ಲದಿರುವುದು ಸಾವಿರಾರು ಭ್ರೂಣಹತ್ಯೆಗಳ ಅನುಮಾನಕ್ಕೆ ಕಾರಣವಾಗಿದೆ. ಕನ್ನಡಪ್ರಭ ವರದಿಯ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯಮಟ್ಟದ ಸಮಿತಿ ರಚಿಸಿ ತನಿಖೆ ನಡೆಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq91npebkakk5kbr4rvgnq3m,imgname-pregnant-1777346468299.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆನಂದ್&zwnj; ಎಂ. ಸೌದಿ&lt;/strong&gt;&lt;/p&gt;&lt;p&gt;&lt;strong&gt;ಯಾದಗಿರಿ:&lt;/strong&gt; ಭ್ರೂಣಹತ್ಯೆಗಳ ಮಾಹಿತಿ ಯಾದಗಿರಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವಂತಿದ್ದು, ನೋಂದಣಿ ಮಾಡಿಸಿದ್ದ 30 ಸಾವಿರಕ್ಕೂ ಹೆಚ್ಚು ಗರ್ಭಿಣಿಯರ ಪೈಕಿ 3000ಕ್ಕೂ ಹೆಚ್ಚು ಮಂದಿಗೆ ಹೆರಿಗೆಯಾದ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ. ಕಳೆದ 1 ವರ್ಷದಲ್ಲಿ (2024-25) ಸದ್ದಿಲ್ಲದೆ ಸಾವಿರಕ್ಕೂ ಹೆಚ್ಚು ಭ್ರೂಣಹತ್ಯೆಗಳು ನಡೆದಿದ್ದು, ಆರೋಗ್ಯ ಇಲಾಖೆಗೇ ಆಘಾತ ಮೂಡಿಸಿದೆ.&lt;/p&gt;&lt;p&gt;ಈ ಹಿಂದೆ ಮಾ.18ರಂದು &lsquo;ಯಾದಗಿರಿ ಜಿಲ್ಲೆಯಲ್ಲಿ 7 ತಿಂಗಳಲ್ಲಿ 30 ಹೆಣ್ಣು ಭ್ರೂಣಹತ್ಯೆ&rsquo; ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವಿಶೇಷ ವರದಿ ಸಂಚಲನ ಮೂಡಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಗ್ಯ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ತನಿಖೆಗೆ ಆದೇಶಿಸಿದ್ದರು. ಐವರು ವೈದ್ಯಾಧಿಕಾರಿಗಳನ್ನೊಳಗೊಂಡ ರಾಜ್ಯಮಟ್ಟದ ಸಮಿತಿಯೊಂದನ್ನು ರಚಿಸಿ ಯಾದಗಿರಿಯಷ್ಟೇ ಅಲ್ಲ, ಈ ಬಗ್ಗೆ ರಾಜ್ಯವ್ಯಾಪಿ ಎಲ್ಲ ಜಿಲ್ಲೆಗಳಲ್ಲೂ ಗಂಭೀರವಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು.&lt;/p&gt;&lt;p&gt;&lsquo;ಕನ್ನಡಪ್ರಭ&rsquo; ವರದಿ ಆಧರಿಸಿ, ಆರೋಗ್ಯ ಸಚಿವ ದಿನೇಶ ಗುಂಡೂರಾವ್&zwnj; ಅವರ ನೇತೃತ್ವದಲ್ಲಿ ಮಾ.25ರಂದು ಮಧ್ಯಾಹ್ನ ನಡೆದ ಹಿರಿಯ ಅಧಿಕಾರಿಗಳನ್ನೊಳಗೊಂಡ ವೀಡಿಯೋ ಕಾನ್ಫೆರೆನ್ಸ್&zwnj; ಸಭೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿನ ಈ ಆಘಾತಕಾರಿ ಅಂಶ ಬಯಲಾಗಿತ್ತು. &lsquo;ಕನ್ನಡಪ್ರಭ&rsquo;ಕ್ಕೆ ಲಭ್ಯವಾದ, ಸಭೆಯಲ್ಲಿ ಮಂಡಿಸಲಾದ ಕಟ್ಟುನಿಟ್ಟಿನ ಗೌಪ್ಯ ವರದಿಯಲ್ಲಿನಂತೆ 2025ರ ಏಪ್ರಿಲ್&zwnj;ನಿಂದ ನವೆಂಬರ್&zwnj;ವರೆಗಿನ 7 ತಿಂಗಳಲ್ಲಿ ಒಟ್ಟು 652 ಗರ್ಭಪಾತ ಪ್ರಕರಣಗಳು ಇಲಾಖೆಯಲ್ಲೇ ವರದಿಯಾಗಿವೆ. ಗರ್ಭಪಾತದ ರಾಜ್ಯದ ಸರಾಸರಿ ವರದಿ ಶೇ.5.24 ರಷ್ಟಿದ್ದರೆ, ಯಾದಗಿರಿ ಜಿಲ್ಲೆಯದ್ದು ಶೇ.3.16 ರಷ್ಟಿದೆ.&lt;/p&gt;&lt;h2&gt;&lt;strong&gt;1329 ಗರ್ಭಪಾತ&lt;/strong&gt;&lt;/h2&gt;&lt;p&gt;ಹಾಗೆಯೇ, 2024-25ರ ಸಾಲಿನಲ್ಲಿ ನೋಂದಣಿ ಮಾಡಿಸಿದ್ದ 31,435 ಗರ್ಭಿಣಿಯರ ಪೈಕಿ, 26,584 ಜೀವಂತ ಹೆರಿಗೆಗಳಾಗಿದ್ದು, 188 ಶಿಶು ಮರಣಗಳು ಸಂಭವಿಸಿವೆ. ಇನ್ನೂ 207 ಹೆರಿಗೆಗಳು ಆಗಬೇಕಿದ್ದು, 1329 ಗರ್ಭಪಾತಗಳಾಗಿವೆ. ಅಚ್ಚರಿಯೆಂದರೆ, ಇವೆಲ್ಲಗಳ ಸೇರಿಸಿದಾಗ ಆಗುವ 28,308 ಪ್ರಕರಣಗಳಲ್ಲಿ ಇನ್ನೂ 3,127ರಷ್ಟು ಹೆರಿಗೆಯ ವಿವರಗಳೇ ಸಿಗುತ್ತಿಲ್ಲ. ಈ ಗರ್ಭಿಣಿಯರಿಗೆ ನಂತರದಲ್ಲಿ ಹೆರಿಗೆಯಾಯಿತೇ? ಶಿಶುಗಳು ಜೀವಂತವಿವೆಯೇ? ಅಥವಾ ಮೃತಪಟ್ಟವೇ? ಯಾಕೆ? ಏನು? ಎಂಬ ಅನೇಕ ಅಂಶಗಳಿಗೆ ಉತ್ತರ ಸಿಕ್ಕಿಲ್ಲ.&lt;/p&gt;&lt;h3&gt;&lt;strong&gt;ನಕಲಿ ತಾಯಿ ಕಾರ್ಡ್&zwnj; ಸೃಷ್ಟಿ&lt;/strong&gt;&lt;/h3&gt;&lt;p&gt;&lsquo;ಹೆಣ್ಣು&rsquo; ಶಿಶು ಎಂಬ ಕಾರಣಕ್ಕೆ ಅನೇಕರು ಸದ್ದಿಲ್ಲದೆ ಅಬಾರ್ಷನ್&zwnj; ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ಚರ್ಚೆಗಳಾಗಿವೆ ಎಂದು &lsquo;ಕನ್ನಡಪ್ರಭ&rsquo;ಕ್ಕೆ ಬಲ್ಲ ಮೂಲಗಳು ತಿಳಿಸಿವೆ. ಹರ್ಷ ಗುಪ್ತಾ ಅವರ ಸೂಚನೆಯಂತೆ ರಚಿಸಲಾಗಿದ್ದ ರಾಜ್ಯಮಟ್ಟದ ಸಮಿತಿ ಏ.6ರಿಂದ ಏ.10ರವರೆಗೆ ಜಿಲ್ಲೆಯಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಿದೆ. ಕೆಲವು ಕಡೆಗಳಲ್ಲಿ ಸಮಿತಿಗೆ ದೊರೆತ ಮಾಹಿತಿಗಳು ಅವರನ್ನೂ ಬೆಚ್ಚಿ ಬೀಳಿಸಿವೆ ಎನ್ನಲಾಗಿದೆ. ಟಾರ್ಗೆಟ್&zwnj; ರೀಚ್&zwnj;ಗಾಗಿ ತಾಯಿ ಕಾರ್ಡ್&zwnj;ಗಳನ್ನೂ ಸಹ ನಕಲಿ ಸೃಷ್ಟಿಸಲಾಗುತ್ತಿದೆ ಎಂಬ ಮಾತುಗಳು ಇಲಾಖೆಯಲ್ಲೇ ಕೇಳಿ ಬರುತ್ತಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭ್ರೂಣ ಲಿಂಗ ಪತ್ತೆಕೋರರ ಮಾಹಿತಿ ಕೊಟ್ರೆ ₹1 ಲಕ್ಷ ಬಹುಮಾನ! ಮಹತ್ವದ ಘೋಷಣೆ&lt;/strong&gt;&lt;/p&gt;&lt;p&gt;&lt;strong&gt;ಗರ್ಭಪಾತ ತಡೆಗೆ ಕ್ರಮ&lt;/strong&gt;&lt;/p&gt;&lt;p&gt;ಗರ್ಭಪಾತ ಪ್ರಕರಣಗಳ ಕುರಿತು ರಾಜ್ಯಮಟ್ಟದ ಸಮಿತಿ ಜಿಲ್ಲೆಗೆ ಬಂದು ಮಾಹಿತಿ ಸಂಗ್ರಹಿಸಿದೆ. ಇಷ್ಟರಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದು ತಂಡ ತಮಗೆ ತಿಳಿಸಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದೇನೆ. ನಕಲಿ ವೈದ್ಯರು ಹಾಗೂ ಗರ್ಭಪಾತ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್&zwnj; ಅಧಿಕಾರಿ ನೇಮಕ: ಸಚಿವ ದಿನೇಶ್&zwnj; ಗುಂಡೂರಾವ್&zwnj;&lt;/strong&gt;&lt;/p&gt;]]></content:encoded>
            <category>yadgir</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/3000-registered-pregnant-women-missing-in-yadagiri-district-health-department-shocked-mrq/articleshow-gpltxor"/>
        </item>
        <item>
            <title><![CDATA[ಸರ್ಕಾರಿ ಶಾಲೇಲಿ 1ನೇ ತರಗತಿ ವಿದ್ಯಾರ್ಥಿಗಳಿಗೆ ₹2 ಸಾವಿರ ಠೇವಣಿ: ಶಿಕ್ಷಕನ ಹೊಸ ಪ್ರಯತ್ನವೇನು?]]></title>
            <link>https://kannada.asianetnews.com/karnataka-districts/teacher-deposits-money-for-government-school-students-gvd/articleshow-iah0hkw</link>
            <guid isPermaLink="true">https://kannada.asianetnews.com/karnataka-districts/teacher-deposits-money-for-government-school-students-gvd/articleshow-iah0hkw</guid>
            <pubDate>Sat, 23 May 2026 21:59:36 +0530</pubDate>
            <description><![CDATA[&lt;p&gt;ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗದಂತೆ ತಡೆದು, ಸರ್ಕಾರಿ ಶಾಲೆಗಳತ್ತ ಸೆಳೆಯಲು ಶಿಕ್ಷಕರೊಬ್ಬರು ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲ ಮಕ್ಕಳಿಗೂ ತಲಾ 2 ಸಾವಿರ ಠೇವಣಿ ಮಾಡಿಸಲು ಮುಂದಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksatq4vqjzqgz255tbycwwa6,imgname-kkb-1779553768311.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಸವರಾಜ ಎಂ.ಕಟ್ಟಿಮನಿ&lt;/strong&gt;&lt;/p&gt;&lt;p&gt;&lt;strong&gt;ಹುಣಸಗಿ (ಯಾದಗಿರಿ ಜಿಲ್ಲೆ):&lt;/strong&gt; ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗದಂತೆ ತಡೆದು, ಸರ್ಕಾರಿ ಶಾಲೆಗಳತ್ತ ಸೆಳೆಯಲು ಶಿಕ್ಷಕರೊಬ್ಬರು ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲ ಮಕ್ಕಳಿಗೂ ತಲಾ 2 ಸಾವಿರ ಠೇವಣಿ ಮಾಡಿಸಲು ಮುಂದಾಗಿದ್ದಾರೆ. ತಾಲೂಕಿನ ಚೆನ್ನೂರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರಮೇಶ ಅಂಗಡಿ ಅವರು 2002 ರಲ್ಲಿ ಶಿಕ್ಷಕರಾಗಿ ನೇಮಕವಾಗಿ 7 ವರ್ಷ ಗೆದ್ದಲಮರಿ ಹಾಗೂ15 ವರ್ಷ ಹೆಬ್ಬಾಳ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಚನ್ನೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.&lt;/p&gt;&lt;p&gt;ಗ್ರಾಮೀಣ ಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಸ್ವಂತ ಹಣದಿಂದ ತಮ್ಮ ಸಹೋದರರಾದ ಶಿವಶರಣಪ್ಪ ಅಂಗಡಿ ಅವರ ಸ್ಮರಣಾರ್ಥವಾಗಿ ₹2 ಸಾವಿರ 5 ವರ್ಷದವರೆಗೆ ಬ್ಯಾಂಕಿನಲ್ಲಿ ವಿದ್ಯಾರ್ಥಿ ಹಾಗೂ ಪಾಲಕರ ಜಂಟಿ ಶಾಖೆಯೊಂದಿಗೆ ಠೇವಣಿ ಮಾಡಲು ಮುಂದಾಗಿ ಇತರರಿಗೆ ಮಾದರಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಉಳಿತಾಯ ಮನೋಭಾವನೆ ಮೂಡಿಸುವುದು&lt;/strong&gt;&lt;/h2&gt;&lt;p&gt;ಮಕ್ಕಳ ಶಿಕ್ಷಣದ ಭದ್ರತೆ ಒದಗಿಸುವುದು, ಮಕ್ಕಳಲ್ಲಿ ಉಳಿತಾಯ ಮನೋಭಾವನೆ ಮೂಡಿಸುವುದು, ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕುವುದು ಇದರ ಮುಖ್ಯ ಉದ್ದೇಶ ಎಂದು ರಮೇಶ ಅಂಗಡಿ &quot;ಕನ್ನಡಪ್ರಭ&quot;ಕ್ಕೆ ತಿಳಿಸಿದರು. ಈ ಒಂದು ಲಾಭವನ್ನು ಚನ್ನೂರ ಗ್ರಾಮದ ಪಾಲಕರು ಪಡೆಯಬೇಕು.&zwnj; 1ನೇ ತರಗತಿಗೆ ಪ್ರವೇಶ ಪಡೆವ ವಿದ್ಯಾರ್ಥಿಗಳು ನಿಗದಿತ ಸಂಖ್ಯೆ ಇರುವದಿಲ್ಲ. ಪ್ರವೇಶ ಪಡೆವ ಎಲ್ಲಾ ಮಕ್ಕಳಿಗೂ ಠೇವಣಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ಕಳೆದ ವರ್ಷ ಚನ್ನೂರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡವ 53 ವಿದ್ಯಾರ್ಥಿಗಳಿಗೆ ಸ್ವಂತ ಹಣದಿಂದ ಎಲ್ಲ ವಿದ್ಯಾರ್ಥಿಗಳಿಗೆ, ಅತಿಥಿ ಶಿಕ್ಷಕರಿಗೆ ಹಾಗೂ ಅಡುಗೆ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿದ್ದರು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಾಗೂ ಅಭಿವೃದ್ಧಿಗೆ ಒತ್ತು ನೀಡುವ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;ಸರಕಾರಿ ಶಾಲಾ ಶಿಕ್ಷಕ ರಮೇಶ ಅಂಗಡಿ ಅವರು ಸ್ವಂತ ಹಣದಿಂದ 1 ನೇ ತರಗತಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ₹2 ಸಾವಿರ ಠೇವಣಿ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ನಮ್ಮ ಇಲಾಖೆ ವತಿಯಿಂದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಇಂತಹ ಸಮಾಜಿಕ ಕಳಕಳಿಯ ಕಾರ್ಯ ನಿಜಕ್ಕೂ ಹೆಮ್ಮೆ ಅನಿಸುತ್ತದೆ.- ನಿಂಗರಾಜ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುರಪುರ.&lt;/p&gt;]]></content:encoded>
            <category>yadgir</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/teacher-deposits-money-for-government-school-students-gvd/articleshow-iah0hkw"/>
        </item>
        <item>
            <title><![CDATA[ಮಂಗಳೂರು-ಹೈದರಾಬಾದ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು, 24ಕೋಚ್‌,4 ಟ್ರಿಪ್,3 ರಾಜ್ಯ, ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx</link>
            <guid isPermaLink="true">https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx</guid>
            <pubDate>Tue, 02 Jun 2026 15:53:57 +0530</pubDate>
            <description><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0gwrjmwtt8zae7c8ssgk4mn,imgname-thane-railway-station-1752913693340.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆ ಘೋಷಿಸಿದೆ. ಜೂನ್ ತಿಂಗಳಿನಲ್ಲಿ ನಾಲ್ಕು ಸುತ್ತಿನ ಸಂಚಾರ ನಡೆಸಲಿರುವ ಈ ರೈಲು, ತೆಲಂಗಾಣ, ಕರ್ನಾಟಕ, ಮತ್ತು ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;&lt;img&gt;&lt;p&gt;ಮಂಗಳೂರು: ಬೇಸಿಗೆಯ ನಂತರದ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಲು ಭಾರತೀಯ ರೈಲ್ವೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಈ ವಿಶೇಷ ರೈಲು ಪ್ರಸಕ್ತ ಜೂನ್ ತಿಂಗಳಿನಲ್ಲಿ ಒಟ್ಟು ನಾಲ್ಕು ಸುತ್ತಿನ (4 Trips) ಸಂಚಾರವನ್ನು ನಡೆಸಲಿದ್ದು, ತೆಲಂಗಾಣ, ಕರ್ನಾಟಕದ ಒಳನಾಡು ಹಾಗೂ ಕೇರಳದ ಕರಾವಳಿ ಭಾಗದ ಪ್ರಯಾಣಿಕರಿಗೆ ತಡೆರಹಿತ ಕನೆಕ್ಟಿವಿಟಿ ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಈ ವಿಶೇಷ ರೈಲಿನ ಸಂಪೂರ್ಣ ವೇಳಾಪಟ್ಟಿ ಹಾಗೂ ಕೋಚ್&zwnj;ಗಳ ವಿವರ ಈ ಕೆಳಗಿನಂತಿದೆ:&lt;/p&gt;&lt;h3&gt;ರೈಲು ಸಂಚಾರದ ದಿನ ಹಾಗೂ ವೇಳಾಪಟ್ಟಿ&lt;/h3&gt;&lt;p&gt;1. ಹೈದರಾಬಾದ್&zwnj;ನಿಂದ ಮಂಗಳೂರಿಗೆ (ರೈಲು ಸಂಖ್ಯೆ: 07097)&lt;/p&gt;&lt;p&gt;ಸಂಚಾರದ ಅವಧಿ: ಜೂನ್ 3 ರಿಂದ ಜೂನ್ 24 ರವರೆಗೆ ಪ್ರತಿ ಬುಧವಾರ ಈ ರೈಲು ಚಲಿಸಲಿದೆ.&lt;/p&gt;&lt;p&gt;ಸಮಯ: ಹೈದರಾಬಾದ್ ನಿಲ್ದಾಣದಿಂದ ಬುಧವಾರ ಮುಂಜಾನೆ 4:20 ಕ್ಕೆ ಹೊರಡುವ ಈ ರೈಲು, ಮರುದಿನ (ಗುರುವಾರ) ಮುಂಜಾನೆ 9:30 ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.&lt;/p&gt;&lt;p&gt;2. ಮಂಗಳೂರಿನಿಂದ ಹೈದರಾಬಾದ್&zwnj;ಗೆ (ರೈಲು ಸಂಖ್ಯೆ: 07098) - ಹಿಂತಿರುಗುವ ಪ್ರಯಾಣ&lt;/p&gt;&lt;p&gt;ಸಂಚಾರದ ಅವಧಿ: ಜೂನ್ 4 ರಿಂದ ಜೂನ್ 25 ರವರೆಗೆ ಪ್ರತಿ ಗುರುವಾರ ಈ ರೈಲು ಸಂಚರಿಸಲಿದೆ.&lt;/p&gt;&lt;p&gt;ಸಮಯ: ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಗುರುವಾರ ರಾತ್ರಿ 8:00 ಗಂಟೆಗೆ ಹೊರಡುವ ರೈಲು, ಶನಿವಾರ ಮುಂಜಾನೆ 4:00 ಗಂಟೆಗೆ ಹೈದರಾಬಾದ್ ತಲುಪಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲಿಗೆ ಒಟ್ಟು 24 ಬೋಗಿಗಳನ್ನು (Coaches) ಅಳವಡಿಸಲಾಗಿದೆ. ಇದು ವಿಭಿನ್ನ ಆರ್ಥಿಕ ಪರಿಸ್ಥಿತಿ ಹಾಗೂ ಆದ್ಯತೆಗಳನ್ನು ಹೊಂದಿರುವ ಎಲ್ಲಾ ವರ್ಗದ ಪ್ರಯಾಣಿಕರಿಗೂ ಆಸನ ಸೌಲಭ್ಯವನ್ನು ಖಚಿತಪಡಿಸಲಿದೆ. ಬೋಗಿಗಳ ಸಂಯೋಜನೆ ಈ ಕೆಳಗಿನಂತಿದೆ:&lt;/p&gt;&lt;p&gt;ಎಸಿ 2-ಟೈರ್ ಕೋಚ್&zwnj;ಗಳು: 03&lt;/p&gt;&lt;p&gt;ಎಸಿ 3-ಟೈರ್ ಕೋಚ್&zwnj;ಗಳು: 05&lt;/p&gt;&lt;p&gt;ಸ್ಲೀಪರ್ ಕ್ಲಾಸ್ ಕೋಚ್&zwnj;ಗಳು: 10&lt;/p&gt;&lt;p&gt;ಸಾಮಾನ್ಯ ದ್ವಿತೀಯ ದರ್ಜೆ (General) ಕೋಚ್&zwnj;ಗಳು: 04&lt;/p&gt;&lt;p&gt;ಲಗೇಜ್-ಕಮ್-ಬ್ರೇಕ್ ವ್ಯಾನ್&zwnj;ಗಳು: 02&lt;/p&gt;&lt;img&gt;&lt;p&gt;ಈ ವಿಶೇಷ ರೈಲು ತನ್ನ ಸುದೀರ್ಘ ಪ್ರಯಾಣದ ಅವಧಿಯಲ್ಲಿ ಮೂರೂ ರಾಜ್ಯಗಳ ಪ್ರಮುಖ ವಾಣಿಜ್ಯ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ನಿಲುಗಡೆ ಪಡೆಯಲಿದೆ.&lt;/p&gt;&lt;p&gt;&lt;strong&gt;ತೆಲಂಗಾಣ ಮತ್ತು ಆಂಧ್ರ ಭಾಗ: &lt;/strong&gt;ಬೇಗಂಪೇಟ್, ಲಿಂಗಂಪಲ್ಲಿ, ವಿಕ್ರಾಬಾದ್, ರಾಯಚೂರು, ಮಂತ್ರಾಲಯ ರಸ್ತೆ (ಶ್ರೀ ರಾಘವೇಂದ್ರ ಸ್ವಾಮಿ ಮಠದ ಭಕ್ತರಿಗೆ ಅನುಕೂಲ), ಗುಂತಕಲ್, ಅನಂತಪುರ, ಧರ್ಮಾವರಂ ಮತ್ತು ಹಿಂದೂಪುರ.&lt;/p&gt;&lt;p&gt;&lt;strong&gt;ಕರ್ನಾಟಕದ ಒಳನಾಡು (ಬೆಂಗಳೂರು ಭಾಗ): &lt;/strong&gt;ಸೇಡಂ, ಸೂಳೇಹಳ್ಳಿ ಪಶ್ಚಿಮ, ಯಾದಗಿರಿ, ಕೃಷ್ಣ, ಯಲಹಂಕ, ಕೃಷ್ಣರಾಜಪುರಂ (KR ಪುರಂ) ಮತ್ತು ಬಂಗಾರಪೇಟೆ.&lt;/p&gt;&lt;p&gt;&lt;strong&gt;ತಮಿಳುನಾಡು ಮತ್ತು ಕೇರಳ ಭಾಗ: &lt;/strong&gt;ಕುಪ್ಪಂ, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪುರ್, ಪಾಲಕ್ಕಾಡ್ ಜಂಕ್ಷನ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನೂರು, ಕಾಞಂಗಾಡ್ ಮತ್ತು ಕಾಸರಗೋಡು.&lt;/p&gt;&lt;img&gt;&lt;p&gt;ಪ್ರಸ್ತುತ ಜೂನ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳು ಪುನರಾರಂಭಗೊಳ್ಳುತ್ತಿರುವುದರಿಂದ ಹಾಗೂ ಉದ್ಯೋಗ ನಿಮಿತ್ತ ಮತ್ತು ಪ್ರವಾಸೋದ್ಯಮಕ್ಕಾಗಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಮಾನ್ಯ ರೈಲುಗಳಲ್ಲಿ ಭಾರಿ ವೇಟಿಂಗ್ ಲಿಸ್ಟ್ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಪರಿಚಯಿಸಿರುವ ಈ ವಿಶೇಷ ಸೇವೆಯು ನಿಯಮಿತ ರೈಲುಗಳ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.&lt;/p&gt;&lt;img&gt;&lt;p&gt;ಕೆಲಸದ ನಿಮಿತ್ತ ಐಟಿ ಹಬ್&zwnj;ಗಳಾದ ಹೈದರಾಬಾದ್-ಬೆಂಗಳೂರಿಗೆ ಸಂಚರಿಸುವವರಿಗೆ, ಪ್ರವಾಸಿಗರಿಗೆ ಹಾಗೂ ಕರಾವಳಿ ಮತ್ತು ಮಂತ್ರಾಲಯ ಕ್ಷೇತ್ರಗಳಿಗೆ ಕೌಟುಂಬಿಕ ಭೇಟಿ ನೀಡುವ ಧಾರ್ಮಿಕ ಪ್ರಯಾಣಿಕರಿಗೆ ಈ ರೈಲು ಅತ್ಯಂತ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣದ ಅನುಭವವನ್ನು ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>yadgir</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/indian-railways-announces-hyderabad-mangaluru-central-special-express-trains-for-june-check-timings-route-gdp-igpu8fx"/>
        </item>
        <item>
            <title><![CDATA[BREAKING: ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಯಲ್ಲೋ ಅಲರ್ಟ್'; ಹಾಸನಕ್ಕೆ ಆರೆಂಜ್ ಅಲರ್ಟ್]]></title>
            <link>https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</link>
            <guid isPermaLink="true">https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</guid>
            <pubDate>Mon, 25 May 2026 18:03:58 +0530</pubDate>
            <description><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzxjj84544nkh17j6s99v9v,imgname-karnataka-rain-alert-1779187665156.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.&lt;img&gt;&lt;p&gt;ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಹತ್ವದ ಮುನ್ಸೂಚನೆಯೊಂದನ್ನು ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, 'ಯಲ್ಲೋ ಅಲರ್ಟ್' (Yellow Alert) ಘೋಷಿಸಲಾಗಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇವಲ ಸಾಧಾರಣ ಮಳೆಯಷ್ಟೇ ಅಲ್ಲದೆ, ಗಂಟೆಗೆ ಭಾರಿ ವೇಗದಲ್ಲಿ ಬೀಸಲಿರುವ ಸುಂಟರಗಾಳಿ ಹಾಗೂ ಗುಡುಗು-ಮಿಂಚಿನ ಸಹಿತ ವರುಣ ಆರ್ಭಟಿಸಲಿದ್ದಾನೆ. ಹೀಗಾಗಿ ಸಾರ್ವಜನಿಕರು ಮರಗಳ ಕೆಳಗೆ ಹಾಗೂ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಅತ್ಯಂತ ಹೆಚ್ಚಾಗಿರಲಿದ್ದು, ಹವಾಮಾನ ಇಲಾಖೆಯು ಹಾಸನಕ್ಕೆ ಕಟ್ಟುನಿಟ್ಟಿನ 'ಆರೆಂಜ್ ಅಲರ್ಟ್' (Orange Alert) ಜಾರಿಗೊಳಿಸಿದೆ. ಇಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ನಗರದ ಜೊತೆಗೆ ರಾಜ್ಯದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಯಾದಗಿರಿ, ರಾಮನಗರ, ಚಾಮರಾಜನಗರ ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಗಳಿಗೂ ಮುಂದಿನ 3 ಗಂಟೆಗಳ ಕಾಲ 'ಯಲ್ಲೋ ಅಲರ್ಟ್' ನಿಯೋಜಿಸಲಾಗಿದೆ. ಈ ಜಿಲ್ಲೆಗಳಲ್ಲೂ ದಿಢೀರ್ ಮಳೆ ಸುರಿಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಮುಂದಿನ 3 ಗಂಟೆಗಳ ಅವಧಿ ಅತ್ಯಂತ ನಿರ್ಣಾಯಕವಾಗಿದ್ದು, ಆಯಾ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಲರ್ಟ್ ಆಗಿವೆ. ತಗ್ಗು ಪ್ರದೇಶದ ಜನರಿಗೆ ಮತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಕೋರಿದೆ.&lt;/p&gt;]]></content:encoded>
            <category>yadgir</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4"/>
        </item>
        <item>
            <title><![CDATA[ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಬೆಳಗಾವಿ - ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಖಾಯಂ!]]></title>
            <link>https://kannada.asianetnews.com/gallery/state/indian-railways-good-news-to-north-karnataka-belagavi-charlapalli-weekly-express-train-regularised-sat-nnqhq4r</link>
            <guid isPermaLink="true">https://kannada.asianetnews.com/gallery/state/indian-railways-good-news-to-north-karnataka-belagavi-charlapalli-weekly-express-train-regularised-sat-nnqhq4r</guid>
            <pubDate>Thu, 14 May 2026 20:21:50 +0530</pubDate>
            <description><![CDATA[&lt;p&gt;ಉತ್ತರ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಸಂಪರ್ಕವನ್ನು ಬಲಪಡಿಸಲು, ಚರ್ಲಪಲ್ಲಿ &ndash; ಬೆಳಗಾವಿ ನಡುವೆ ಸಂಚರಿಸುತ್ತಿದ್ದ ವಿಶೇಷ ವಾರಕ್ಕೊಮ್ಮೆ ಎಕ್ಸ್&zwnj;ಪ್ರೆಸ್ ರೈಲನ್ನು ರೈಲ್ವೆ ಮಂಡಳಿ ಖಾಯಂಗೊಳಿಸಿದೆ. ಈ ರೈಲು (17075/17076) ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krkf4pgtkqtym9st7j84f764,imgname-belagavi-charlapalli-weekly-express-train-1778769877529.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಸಂಪರ್ಕವನ್ನು ಬಲಪಡಿಸಲು, ಚರ್ಲಪಲ್ಲಿ &ndash; ಬೆಳಗಾವಿ ನಡುವೆ ಸಂಚರಿಸುತ್ತಿದ್ದ ವಿಶೇಷ ವಾರಕ್ಕೊಮ್ಮೆ ಎಕ್ಸ್&zwnj;ಪ್ರೆಸ್ ರೈಲನ್ನು ರೈಲ್ವೆ ಮಂಡಳಿ ಖಾಯಂಗೊಳಿಸಿದೆ. ಈ ರೈಲು (17075/17076) ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ.&lt;/p&gt;&lt;img&gt;&lt;p&gt;ಬೆಳಗಾವಿ/ಹುಬ್ಬಳ್ಳಿ (ಮೇ 14): ಉತ್ತರ ಕರ್ನಾಟಕದ ಜನತೆಗೆ ತೆಲಂಗಾಣ ರಾಜಧಾನಿ ಹೈದರಾಬಾದ್ ಸಮೀಪದ ಚರ್ಲಪಲ್ಲಿಗೆ ಸಂಚರಿಸಲು ಈಗ ರೈಲ್ವೆ ಇಲಾಖೆಯು ಸುಗಮ ಹಾದಿ ಮಾಡಿಕೊಟ್ಟಿದೆ. ಇದುವರೆಗೆ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ಚರ್ಲಪಲ್ಲಿ &ndash; ಬೆಳಗಾವಿ &ndash; ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್&zwnj;ಪ್ರೆಸ್ ರೈಲನ್ನು (Weekly Express) ರೈಲ್ವೆ ಮಂಡಳಿಯು ಅಧಿಕೃತವಾಗಿ ಖಾಯಂಗೊಳಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದಾಗಿ ಉಭಯ ರಾಜ್ಯಗಳ ನಡುವಿನ ರೈಲು ಸಂಪರ್ಕ ಮತ್ತಷ್ಟು ಬಲಗೊಂಡಿದೆ.&lt;/p&gt;&lt;img&gt;&lt;p&gt;ರೈಲ್ವೆ ಇಲಾಖೆಯ ಮಾಹಿತಿಯ ಪ್ರಕಾರ, ರೈಲು ಸಂಖ್ಯೆ 17075 (ಚರ್ಲಪಲ್ಲಿ - ಬೆಳಗಾವಿ) ಮೇ 16, 2026 ರಿಂದ ಜಾರಿಗೆ ಬರುವಂತೆ ವಾರಕ್ಕೊಮ್ಮೆ ಸಂಚರಿಸಲಿದೆ. ಹಾಗೆಯೇ, ರೈಲು ಸಂಖ್ಯೆ 17076 (ಬೆಳಗಾವಿ - ಚರ್ಲಪಲ್ಲಿ) ಮೇ 17, 2026 ರಿಂದ ಖಾಯಂ ಆಗಿ ಸಂಚರಿಸಲಿದೆ. ಈ ರೈಲು ಒಟ್ಟು 24 ಬೋಗಿಗಳನ್ನು (Coaches) ಹೊಂದಿರಲಿದ್ದು, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಈ ರೈಲು ಕರ್ನಾಟಕದ ಪ್ರಮುಖ ನಗರಗಳಾದ ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಮತ್ತು ಲೋಂಡಾ ಮಾರ್ಗವಾಗಿ ಸಂಚರಿಸುತ್ತದೆ. ಅಲ್ಲದೆ, ಧಾರ್ಮಿಕ ಕೇಂದ್ರವಾದ ಮಂತ್ರಾಲಯಕ್ಕೂ ಈ ರೈಲಿನ ಸಂಪರ್ಕ ಇರುವುದರಿಂದ ಭಕ್ತಾದಿಗಳಿಗೆ ಭಾರಿ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಚರ್ಲಪಲ್ಲಿಯಿಂದ ಬೆಳಗಾವಿಗೆ (17075): ಸಂಜೆ 4:00 ಗಂಟೆಗೆ ಚರ್ಲಪಲ್ಲಿಯಿಂದ ಹೊರಟು, ಮರುದಿನ ಬೆಳಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.&lt;/p&gt;&lt;p&gt;ಬೆಳಗಾವಿಯಿಂದ ಚರ್ಲಪಲ್ಲಿಗೆ (17076): ಮಧ್ಯಾಹ್ನ 1:00 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗ್ಗೆ 08:45ಕ್ಕೆ ಚರ್ಲಪಲ್ಲಿ ತಲುಪಲಿದೆ.&lt;/p&gt;&lt;img&gt;&lt;p&gt;ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿ ಭಾಗದ ಜನರು ಹೈದರಾಬಾದ್ ಕಡೆಗೆ ಹೋಗಲು ಈ ರೈಲು ಅತ್ಯಂತ ಸಹಕಾರಿಯಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ಸಂಚರಿಸುವವರಿಗೆ ಇದು ವರದಾನವಾಗಲಿದೆ. ವ್ಯಾಪಾರಸ್ಥರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಈ ರೈಲಿನ ಖಾಯಂ ಸೇವೆಯಿಂದಾಗಿ ನಿರಂತರವಾಗಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ದೊರೆಯಲಿದೆ.&lt;/p&gt;&lt;p&gt;ಪ್ರಯಾಣಿಕರು ರೈಲಿನ ಹೆಚ್ಚಿನ ವಿವರಗಳು ಮತ್ತು ನಿಖರವಾದ ವೇಳಾಪಟ್ಟಿಗಾಗಿ ಅಧಿಕೃತ ವೆಬ್&zwnj;ಸೈಟ್ www.enquiry.indianrail.gov.in ಅಥವಾ NTES ಆಪ್ ಅನ್ನು ಬಳಸಬಹುದು. ನೈಋತ್ಯ ರೈಲ್ವೆಯ ಈ ಜನಸ್ನೇಹಿ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railways-good-news-to-north-karnataka-belagavi-charlapalli-weekly-express-train-regularised-sat-nnqhq4r"/>
        </item>
        <item>
            <title><![CDATA[ವನ್ಯಜೀವಿ ಬೇಟೆಯ ವೀಡಿಯೋ ವೈರಲ್: ಐವರನ್ನು ಬಂಧಿಸಿದ್ಯಾಕೆ ಅರಣ್ಯ ಇಲಾಖೆ!]]></title>
            <link>https://kannada.asianetnews.com/crime/viral-video-5-arrested-in-yadgir-wildlife-hunting-case-gvd/articleshow-qt40spc</link>
            <guid isPermaLink="true">https://kannada.asianetnews.com/crime/viral-video-5-arrested-in-yadgir-wildlife-hunting-case-gvd/articleshow-qt40spc</guid>
            <pubDate>Thu, 04 Jun 2026 22:28:01 +0530</pubDate>
            <description><![CDATA[&lt;p&gt;ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿದ ಆರೋಪದಡಿ, ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt9qwynkma5fsqwk9hb4chxm,imgname-jkv-1780591000243.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಜೂ.04):&lt;/strong&gt; ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿದ ಆರೋಪದಡಿ, ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;p&gt;ವನ್ಯಪ್ರಾಣಿಗಳಾದ ಮೊಲ, ನರಿ, ಮುಳ್ಳುಹಂದಿ, ಕೃಷ್ಣಮೃಗ ಹಾಗೂ ಕಾಡು ಹಂದಿಗಳನ್ನು ಬೇಟೆಯಾಡುತ್ತಿರುವ ದೃಶ್ಯಗಳಿರುವ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ಅರಣ್ಯ ಇಲಾಖೆ ತನಿಖೆ ಆರಂಭಿಸಿ ವಿಶೇಷ ಕಾರ್ಯಾಚರಣೆ ನಡೆಸಿತು.&lt;/p&gt;&lt;p&gt;ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನೀರ್ ಅಹ್ಮದ್ ಮತ್ತು ರಮೇಶ ಕನಕಟ್ಟಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಮಂಗಳವಾರ ನಸುಕಿನ ಜಾವ ವಲಯ ಅರಣ್ಯಾಧಿಕಾರಿಗಳಾದ ಭಾಗಪ್ಪಗೌಡ, ಬುರಾನುದ್ದೀನ್, ರೇವಣಸಿದ್ದಪ್ಪ ತಾರಖೇಡ್ ಹಾಗೂ ರಾಹುಲ್ ಸಾದುರೆ ಅವರ ತಂಡ ಕಕ್ಕೇರಾ ಗ್ರಾಮದ ಮಲ್ಲಿಕಾರ್ಜುನ ದೊಡ್ಡಿಗೆ ತೆರಳುವ ಸಿಸಿ ರಸ್ತೆಯ ಸಮೀಪ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿತು.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಬಂಧಿತರನ್ನು ಮೌನೇಶ (19), ದೇವಿಂದ್ರ (19), ಚೆನ್ನಪ್ಪ (18), ಯಂಕಪ್ಪ (40) ಹಾಗೂ ಬಸಣ್ಣ (65) ಎಂದು ಗುರುತಿಸಲಾಗಿದೆ. ಇವರು ಕಕ್ಕೇರಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಹೆಚ್.ಬಿ. ಬಿರಾದಾರ, ರಾಯನಗೌಡ, ಕಾಶಪ್ಪ ಹಾಗೂ ಅರಣ್ಯ ಸಿಬ್ಬಂದಿಗಳಾದ ಕಾಶೀನಾಥ ರಾಠೋಡ್, ಮಲ್ಲಪ್ಪ ಚೌಧರಿ, ಲಾಲಮಹ್ಮದ್, ರಾಜು, ಚಿದಾನಂದಯ್ಯ ಹಿರೇಮಠ, ಅರಣ್ಯ ವೀಕ್ಷಕರಾದ ರವಿಕುಮಾರ, ವರುಣಕುಮಾರ ಮತ್ತು ವಾಹನ ಚಾಲಕ ನಾಗೇಶ ಭಾಗವಹಿಸಿದ್ದರು.&lt;/p&gt;]]></content:encoded>
            <category>yadgir</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/viral-video-5-arrested-in-yadgir-wildlife-hunting-case-gvd/articleshow-qt40spc"/>
        </item>
        <item>
            <title><![CDATA[ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?]]></title>
            <link>https://kannada.asianetnews.com/karnataka-districts/karnataka-psi-files-complaint-over-love-dispute-with-former-woman-constable-gdp-videoshow-tbvaht8</link>
            <guid isPermaLink="true">https://kannada.asianetnews.com/karnataka-districts/karnataka-psi-files-complaint-over-love-dispute-with-former-woman-constable-gdp-videoshow-tbvaht8</guid>
            <pubDate>Thu, 07 May 2026 14:47:31 +0530</pubDate>
            <description><![CDATA[ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಒಬ್ಬರು, ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಲೇಡಿ ಕಾನ್ಸ್​​ಟೇಬಲ್ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆಕೆ ಬೇರೊಬ್ಬರೊಂದಿಗೆ ಮದುವೆಯಾಗುತ್ತಿದ್ದು, ಅದನ್ನು ನಿಲ್ಲಿಸುವಂತೆ ಕೋರಿ ಪಿಎಸ್ಐ ಮತ್ತೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xa8e0gq" medium="video" height="768" width="1024"/>
            <content:encoded><![CDATA[&lt;p&gt;ಆತ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್​​.. ಕಷ್ಟಪಟ್ಟು ಓದಿ ಆ ಹುದ್ದೆಗೇರಿದ್ರು.. ಕ್ರೈಂ ಆಗಲಿ.. ಮೋಸವಾಗಲಿ.. ಕಳ್ಳತನವಾಗಲಿ.. ಆ ಭಾಗದ ಜನ ಈತನ ಬಳಿಯೇ ಬರ್ತಿದ್ರು.. ಪ್ರತೀ ನಿತ್ಯ ಹತ್ತಾರು ಮಂದಿಯ ಕಷ್ಟ ಆಲಿಸುತ್ತಿದ್ದ ಇದೇ ಪೊಲೀಸಪ್ಪ ಇವತ್ತು ತಾನೇ ನ್ಯಾಯ ಕೊಡಿಸಿ ಅಂತ ಮತ್ತೊಂದು ಪೊಲೀಸ್​​ ಠಾಣೆ ಏರಿದ್ದಾನೆ.. ಇನ್ನೂ ಆತನಿಗೆ ಮೋಸವಾಗಿರೋದು ತನ್ನದೇ ಠಾಣೆಯಲ್ಲಿ ಒಂದು ಸಮಯದಲ್ಲಿ ಕೆಲಸ ಮಾಡ್ತಿದ್ದ ಲೇಡಿ ಕಾನ್ಸ್​​ಟೇಬಲ್​ನಿಂದ.. ಆ ಲೇಡಿ ಕಾನ್ಸ್​ಟೇಬಲ್​ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ರಂತೆ.. ಅಷ್ಟಕ್ಕೂ ಆ ಲೇಡಿ ಕಾನ್ಸ್​​ಟೇಬಲ್​ ಯಾರು..? ಇವರ ಪ್ರೀತಿ ಹುಟ್ಟಿದ್ದೇಗೆ..? ಆಕೆ ಮಾಡಿದ ಮೋಸ ಎಂಥದ್ದು..? ಒಂದು ಪೊಲೀಸ್​​ ಲವ್​ ಸ್ಟೋರಿಯ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​​.ಐ.ಆರ್​​&lt;/p&gt;&lt;p&gt;ಇವತ್ತು ಪೊಲೀಸಪ್ಪನ ಲವ್​ ಸ್ಟೋರಿ ಬೀದಿಗೆ ಬಂದಿದೆ.. ನಾಳೆ ಆ ಹೆಣ್ಣುಮಗಳ ಮದುವೆ.. &amp;nbsp;ಮದುವೆ ನಿಲ್ಲಿಸಿ ಅಂತ ಪಿಎಸ್​​ಐ ಠಾಣೆ ಮೆಟ್ಟಿಲ್ಲೇರಿದ್ದಾರೆ.. ಮುಂದೆ ಏನ್ಮಾಡಬೇಕು ಅನ್ನೋದನ್ನ ಕಾನೂನು ಹೆಳುತ್ತೆ.. ಆದ್ರೆ ಒಬ್ಬ ಹೆಣ್ಣುಮಗಳು ನೀನು ಬೇಡ ಅಂತ ತಿರಸ್ಕರಿಸಿ ಹೊಸ ದಾರಿಯನ್ನ ಹಿಡಿದಿದ್ದಾಳೆ.. ಅವಳ ಪಾಡಿಗೆ ಅವಳನ್ನ ಬಿಟ್ರೆ ಒಳ್ಳೆದು..&amp;nbsp;&lt;/p&gt;]]></content:encoded>
            <category>yadgir</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-psi-files-complaint-over-love-dispute-with-former-woman-constable-gdp-videoshow-tbvaht8"/>
        </item>
        <item>
            <title><![CDATA[Koh-i-Noor: ಕೋಹಿನೂರ್ ವಾಪಸ್‌ ಕೊಡಿ: ಬ್ರಿಟನ್‌ ರಾಜನಿಗೆ ನ್ಯೂಯಾರ್ಕ್‌ ಮೇಯರ್‌ ಕೋರಿಕೆ]]></title>
            <link>https://kannada.asianetnews.com/gallery/state/mamdani-says-he-would-ask-king-charles-to-return-kohi-noor-rav-ucetrch</link>
            <guid isPermaLink="true">https://kannada.asianetnews.com/gallery/state/mamdani-says-he-would-ask-king-charles-to-return-kohi-noor-rav-ucetrch</guid>
            <pubDate>Fri, 08 May 2026 11:59:16 +0530</pubDate>
            <description><![CDATA[&lt;p&gt;ವಿಶ್ವಪ್ರಸಿದ್ಧ ಕೋಹಿನೂರ್&zwnj; ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್&zwnj; ಕುರಿತು, ಅಮೆರಿಕದ ನ್ಯೂಯಾರ್ಕ್&zwnj;ನ ಮೇಯರ್&zwnj;, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್&zwnj; ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr33585wq4h6s0gxyzw58ej1,imgname-whatsapp-image-2026-05-08-at-11.01.02-am-1778220441788.jpeg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವಪ್ರಸಿದ್ಧ ಕೋಹಿನೂರ್&zwnj; ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್&zwnj; ಕುರಿತು, ಅಮೆರಿಕದ ನ್ಯೂಯಾರ್ಕ್&zwnj;ನ ಮೇಯರ್&zwnj;, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್&zwnj; ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ&lt;/p&gt;&lt;img&gt;&lt;p&gt;ಯಾದಗಿರಿ : ವಿಶ್ವಪ್ರಸಿದ್ಧ ಕೋಹಿನೂರ್&zwnj; ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್&zwnj; ಕುರಿತು, ಅಮೆರಿಕದ ನ್ಯೂಯಾರ್ಕ್&zwnj;ನ ಮೇಯರ್&zwnj;, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್&zwnj; ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂಬೈ ಮೂಲದ ಮೊಹ್ಮದ್&zwnj; ಮಮ್ದಾನಿ ಹಾಗೂ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ನಿರ್ಮಾಪಕಿ ಮೀರಾ ನಾಯರ್&zwnj; ಪುತ್ರ ಜೋಹ್ರನ್&zwnj; ಮಮ್ದಾನಿ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.&lt;/p&gt;&lt;img&gt;&lt;p&gt;9/11 ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲು ನ್ಯೂಯಾರ್ಕ್&zwnj;ಗೆ ಬುಧವಾರ ಬ್ರಿಟನ್&zwnj; ರಾಜ ಚಾರ್ಲ್ಸ್ ಆಗಮಿಸಿದ್ದರು. ಈ ವೇಳೆ, ಅಲ್ಲಿನ ಮೇಯರ್&zwnj; ಜೋಹ್ರನ್&zwnj; ಮಮ್ದಾನಿ ಭೇಟಿ ನಿಗದಿಯಾಗಿತ್ತು. ಭೇಟಿಗೂ ಮುನ್ನ, ಮಾಧ್ಯಗಳೊಂದಿಗೆ ಮಾತನಾಡಿದ ಮಮ್ದಾನಿ, &quot;ನಾನು ರಾಜನೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಸಿಕ್ಕರೆ, ಕೋಹಿನೂರ್ ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ.&quot; ಎಂದು ಹೇಳಿದ್ದರು&lt;/p&gt;&lt;img&gt;&lt;p&gt;ನಂತರದಲ್ಲಿ ಅವರಿಬ್ಬರು ಈ ವಿಷಯದ ಬಗ್ಗೆ ಚರ್ಚೆ ನಡೆಸಿದರೋ ಅಥವಾ ಇಲ್ಲವೋ ಸ್ಪಷ್ಟವಾಗಿಲ್ಲವಾದರೂ, ಆದರೆ, ವಜ್ರ ಹಿಂತಿರುಗಿಸುವ ಕುರಿತು ಮಮ್ದಾನಿ ಹೇಳಿಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;img&gt;&lt;p&gt;ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದ ಕೃಷ್ಣಾ ನದಿಯಲ್ಲಿ ಕೋಹಿನೂರ್&zwnj; ವಜ್ರ ಸಿಕ್ಕ ಐತಿಹ್ಯದ ದಾಖಲೆಗಳಿವೆ. ಬ್ರಿಟಿಷ್&zwnj; ಪ್ರವಾಸಿಗ, ಲೇಖಕ ರಾಬರ್ಟ್&zwnj; ಸೀವೆಲ್&zwnj; ಬರೆದ &quot;ಎ ಫಾರಗಟನ್&zwnj; ಎಂಪಾಯರ್&zwnj;- ವಿಜಯನಗರ&quot; ಹಾಗೂ ವಿಲಿಯಂ ಡೇಲಿಂಪ್ಲ್&zwnj; ಮತ್ತು ಅನಿತಾ ಆನಂದ್&zwnj; ಅವರ 2017ರಲ್ಲಿ ಪ್ರಕಟವಾದ &quot; ಕೋಹಿನೂರ್&zwnj; : ದ ಹಿಸ್ಟರಿ ಆಫ್&zwnj; ವರ್ಲ್ಡ್&zwnj; ಮೋಸ್ಟ್&zwnj; ಇನ್&zwnj;ಫೇಮಸ್ ಡೈಮಂಡ್&zwnj;&quot; ಪುಸ್ತಕದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಇತಿಹಾಸ ಸಂಶೋಧಕರಾಗಿದ್ದ ಶಹಾಪುರದ ದಿ. ಭಾಸ್ಕರರಾವ್&zwnj; ಮುಡಬೂಳ್&zwnj; ಅವರು ಈ ಬಗ್ಗೆ ದಾಖಲೆಗಳ ಸಂಗ್ರಹಕ್ಕೆ ಪ್ರಯತ್ನಿಸಿದ್ದರು. ರಾಜ್ಯ ಸರ್ಕಾರದ ಹಾಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್&zwnj; ಗೋಯಲ್&zwnj; ಅವರು, ಅಂದಿನ ಎಚ್ಕೆಡಿಬಿ ಕಾರ್ಯದರ್ಶಿಯಾಗಿದ್ದ ವೇಳೆ ಇಲ್ಲಿನ ಸರ್ವೆ ನಂ.337 ಹಾಗೂ 342ರಲ್ಲಿನ ಒಟ್ಟು 8 ಎಕರೆ 19 ಗುಂಟೆ ಪ್ರದೇಶವನ್ನು ಸಂರಕ್ಷಿತ ಸ್ಥಳವೆಂದು ಗುರುತಿಸಿದ್ದರಲ್ಲದೆ, ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿದ್ದರು. ಇಲ್ಲಿನ ಉತ್ಕೃಷ್ಟ ಮರಳಿಗೆ ಕನ್ನ ಹಾಕುತ್ತಿದ್ದವರ ತಡೆದು, ಇಲ್ಲಿ ಮರಳು ಗಣಿಗಾರಿಕೆ ನಿಷೇಧ ಹೇರಿ ಆದೇಶಿಸಲಾಗಿದೆ&lt;/p&gt;&lt;img&gt;&lt;p&gt;ಕೋಹ್&zwnj;-ಎ-ನೂರ್&zwnj;&quot;, ಪರ್ಷಿಯನ್&zwnj; ಭಾಷೆಯಲ್ಲಿನ ಈ ಪದದ ಅರ್ಥ ಬೆಳಕಿನ ಪರ್ವತ (ಕೋಹ್&zwnj; ಅಂದರೆ ಪರ್ವತ, ನೂರ್&zwnj; ಅಂದರೆ ಬೆಳಕು). ವಿಶ್ವದಲ್ಲಿನ ಅತಿ ದೊಡ್ಡ ಕತ್ತರಿಸಿದ ವಜ್ರಗಳಲ್ಲೊಂದು.&lt;/p&gt;&lt;img&gt;&lt;p&gt;105.6 ಕ್ಯಾರೆಟ್ ತೂಕದ, ಒಂದು ಕೋಳಿ ಮೊಟ್ಟೆಯಷ್ಟು ಗಾತ್ರದ ಕೋಹಿನೂರ್&zwnj; ವಜ್ರವನ್ನು 1849ರಲ್ಲಿ ಬ್ರಿಟಿಷರು ಸಿಖ್ ಸಾಮ್ರಾಜ್ಯದ 10 ವರ್ಷದ ಮಹಾರಾಜ ದುಲೀಪ್&zwnj; ಸಿಂಗ್&zwnj; ಅವರಿಂದ ಪಡೆಯಲಾಗಿತ್ತು. ಕಾಕತೀಯರು ಹಾಗೂ ಮೊಗಲರ ನಂತರ ಸಿಖ್&zwnj; ದೊರೆಗಳ ವಶದಲ್ಲಿತ್ತು. ಒಪ್ಪಂದವೊಂದಕ್ಕೆ ಸಹಿ ಹಾಕುವ ವೇಳೆ ದುಲೀಪ್&zwnj; ಸಿಂಗ್&zwnj;ರಿಂದ ಪಡೆದು, ವಿಕ್ಟೋರಿಯಾ ರಾಣಿಗೆ ಒಪ್ಪಿಸಲಾಗಿತ್ತು.&lt;/p&gt;&lt;img&gt;&lt;p&gt;ಸದ್ಯ, ಕೋಹಿನೂರ್&zwnj; ವಜ್ರ ಬ್ರಿಟನ್&zwnj; ರಾಜಮನೆತನದ ಎಲಿಜೆಬೆತ್&zwnj; ರಾಣಿ ಕಿರೀಟದಲ್ಲಿ ಅಳವಡಿಸಲಾಗಿದ್ದು, ಲಂಡನ್ ಟವರ್&zwnj;ನಲ್ಲಿರುವ ಕ್ರೌನ್ ಜುವೆಲ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನದಲ್ಲಿದೆ. 2002ರಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ವಜ್ರ ಕೊನೆಯ ಬಾರಿ ಕಂಡುಬಂದಿತ್ತು.&lt;/p&gt;&lt;img&gt;&lt;p&gt;ಬ್ರಿಟನ್ ಪ್ರಧಾನಿಯಾಗಿದ್ದ ಡೇವಿಡ್&zwnj; ಕೆಮರೂನ್&zwnj; 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ, ಕೋಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ, ಇದಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದ ಡೇವಿಡ್&zwnj;, ಬ್ರಿಟನ್&zwnj;ನಲ್ಲಿ ಗ್ರೀಸ್, ಈಜಿಪ್ಟ್ ಮುಂತಾದವು ಸೇರಿದಂತೆ ವಿವಿಧ ರಾಷ್ಟ್ರಗಳ ಅನೇಕ ವಸ್ತುಗಳನ್ನು ಸಂಗ್ರಹಿಸಲ್ಪಟ್ಟಿವೆ. ಒಂದು ವಸ್ತುವನ್ನು ಹಿಂದಿರುಗಿಸಿದರೆ, ಭಾರತ ಮಾತ್ರವಲ್ಲ ಇತರ ದೇಶಗಳೂ ಅದೇ ಬೇಡಿಕೆಯನ್ನು ಮುಂದಿಡುತ್ತವೆ ಎಂದಿದ್ದರು.&lt;/p&gt;&lt;img&gt;&lt;p&gt;ಇನ್ನು, 2016ರಲ್ಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ವೇಳೆ, ಸ್ನೇಹಪೂರ್ವಕವಾಗಿ ಕೋಹಿನೂರ್&zwnj; ವಜ್ರ ವಾಪಸ್&zwnj; ಪಡೆಯಲಾಗುವುದು ಎಂದು ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ಆದರೆ, ಮ್ಯೂಸಿಯಂ ಕಾಯ್ದೆ ಪ್ರಕಾರ ವಸ್ತುಗಳನ್ನು ಹಿಂತಿರುಗಿಸುವುದು ಕಷ್ಟಕರ ಎಂದು ಬ್ರಿಟನ್&zwnj; ಸ್ಪಷ್ಟಪಡಿಸಿತ್ತು. ಸದ್ಯ, ಮಮ್ದಾನಿ ಅವರ ಹೇಳಿಕೆ ಮತ್ತೇ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಮುಂದಿಟ್ಟಂತಾಗಿದೆ.&lt;/p&gt;]]></content:encoded>
            <category>yadgir</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/mamdani-says-he-would-ask-king-charles-to-return-kohi-noor-rav-ucetrch"/>
        </item>
        <item>
            <title><![CDATA[ಬೀದರ್‌ನ ಬಾನಿಗೆ ಮರಳಿದ ಲೋಹದ ಹಕ್ಕಿ! ಬೀದರ್‌-ಬೆಂಗಳೂರು ವಿಮಾನ ಸೇವೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್]]></title>
            <link>https://kannada.asianetnews.com/karnataka-districts/bidar-bengaluru-flight-services-set-to-resume-as-karnataka-govt-approves-funding-support-gdp/articleshow-v6ud2x1</link>
            <guid isPermaLink="true">https://kannada.asianetnews.com/karnataka-districts/bidar-bengaluru-flight-services-set-to-resume-as-karnataka-govt-approves-funding-support-gdp/articleshow-v6ud2x1</guid>
            <pubDate>Fri, 01 May 2026 16:39:34 +0530</pubDate>
            <description><![CDATA[ಸ್ಥಗಿತಗೊಂಡಿದ್ದ ಬೀದರ್&zwnj;-ಬೆಂಗಳೂರು ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರವು ಅನುಮೋದನೆ ನೀಡಿದೆ. ಈ ಸೇವೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಮೂಲಕ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಅನುದಾನ ಒದಗಿಸಲಾಗುತ್ತಿದ್ದು, ಇದು ಜಿಲ್ಲೆಯ ಸಂಪರ್ಕ ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqhkkstz3m20dc86284nr8mz,imgname-star-air-bidar-flights--1--1777633716063.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್&zwnj; ಜಿಲ್ಲೆಗೆ ಮಹತ್ವದ ಬೆಳವಣಿಗೆಯಾಗಿ, ಸ್ಥಗಿತಗೊಂಡಿದ್ದ ನಾಗರಿಕ ವಿಮಾನಯಾನ ಸೇವೆ ಮತ್ತೆ ಆರಂಭಗೊಳ್ಳಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಬೀದರ್&zwnj;&ndash;ಬೆಂಗಳೂರು ನಡುವೆ ಕಾರ್ಯನಿರ್ವಹಿಸುತ್ತಿದ್ದ ವಿಮಾನ ಸೇವೆ ಪುನರಾರಂಭವಾಗಲಿದ್ದು, ಟರ್ಮಿನಲ್ ಕಾರ್ಯಾಚರಣೆಗಳು ಮತ್ತೆ ಚೇತರಿಸಿಕೊಳ್ಳಲು ದಾರಿ ಸುಗಮವಾಗಿದೆ.&lt;/p&gt;&lt;p&gt;ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಸಂಬಂಧ ಮನವಿ ಸಲ್ಲಿಸಿದ್ದರು. ಅವರ ಪ್ರಸ್ತಾವನೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸದಸ್ಯರು, ಬೀದರ್&zwnj;ನ ನಾಗರಿಕ ವಿಮಾನಯಾನ ಸೇವೆಗೆ ಅಗತ್ಯ ಅನುದಾನ ಒದಗಿಸಲು ಒಪ್ಪಿಗೆ ಸೂಚಿಸಿದ್ದಾರೆ.&lt;/p&gt;&lt;h2&gt;ವಿಮಾನಯಾನ ಸಂಸ್ಥೆ ಎದುರಿಸುವ ನಷ್ಟವನ್ನು ಭರಿಸಲು VGF ವ್ಯವಸ್ಥೆಯಡಿ ಅನುದಾನ&lt;/h2&gt;&lt;p&gt;ಈ ನಿರ್ಧಾರದ ಭಾಗವಾಗಿ, ವಿಮಾನಯಾನ ಸಂಸ್ಥೆಗಳು ಎದುರಿಸುವ ನಷ್ಟವನ್ನು ಭರಿಸಲು Viability Gap Funding (VGF) ವ್ಯವಸ್ಥೆಯಡಿ ಅನುದಾನ ನೀಡಲಾಗುತ್ತದೆ. ಈ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಮೂಲಕ ಭರಿಸಲಾಗುವುದು. ಇದರಿಂದ ವಿಮಾನ ಸೇವೆ ನಿರಂತರವಾಗಿ ಕಾರ್ಯನಿರ್ವಹಿಸಲು ಸಹಾಯವಾಗಲಿದ್ದು, ಜಿಲ್ಲೆಯ ಸಂಪರ್ಕ ವ್ಯವಸ್ಥೆಗೆ ಮಹತ್ವದ ಉತ್ತೇಜನ ದೊರೆಯಲಿದೆ.&lt;/p&gt;&lt;p&gt;ಇತ್ತೀಚೆಗೆ, ನಾಗರಿಕ ವಿಮಾನಯಾನ ಸೇವೆಯನ್ನು ನಿರ್ವಹಿಸುತ್ತಿದ್ದ ಸ್ಟಾರ್ ಏರ್ ಸಂಸ್ಥೆಯು ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಗಿದ ಹಿನ್ನೆಲೆಯಲ್ಲಿ ಏಪ್ರಿಲ್ 13ರಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಕಳೆದ ವರ್ಷ ಸರ್ಕಾರವು ಕೆಕೆಆರ್&zwnj;ಡಿಬಿ ನಿಧಿಯಿಂದ ಸುಮಾರು 13 ಕೋಟಿ ರೂಪಾಯಿ ಅನುದಾನವನ್ನು ನೀಡಿತ್ತು. ಇದೀಗ ಹೊಸ ಅವಧಿಗೆ ಸ್ಟಾರ್ ಏರ್ ಸಂಸ್ಥೆಯು 20 ಕೋಟಿ ರೂಪಾಯಿಗಿಂತ ಹೆಚ್ಚು ಅನುದಾನ ಬೇಡಿಕೆ ಇಟ್ಟಿದ್ದುದಾಗಿ ಮೂಲಗಳು ತಿಳಿಸಿವೆ.&lt;/p&gt;&lt;p&gt;ಸಚಿವ ಈಶ್ವರ ಖಂಡ್ರೆ ಅವರ ಸತತ ಪ್ರಯತ್ನದ ಫಲವಾಗಿ ಸರ್ಕಾರ ಮತ್ತೆ ಅನುದಾನ ನೀಡಲು ಸಮ್ಮತಿಸಿರುವುದರಿಂದ, ಬೀದರ್&zwnj;ನಲ್ಲಿ ವಿಮಾನ ಸೇವೆ ಪುನರಾರಂಭವಾಗುವುದು ಖಚಿತವಾಗಿದೆ. ಈ ಕ್ರಮದಿಂದ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ವಲಯಗಳಿಗೆ ಮಹತ್ತರ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.&lt;/p&gt;&lt;h2&gt;ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರಯಾಣಿಕರಿಗೂ ಅನುಕೂಲ&lt;/h2&gt;&lt;p&gt;ಇದರಿಂದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರಯಾಣಿಕರಿಗೂ ಸಹ ಹೆಚ್ಚಿನ ಅನುಕೂಲ ಸಿಗಲಿದೆ, ಏಕೆಂದರೆ ಅವರು ಕೂಡ ಬೀದರ್ ವಿಮಾನ ನಿಲ್ದಾಣವನ್ನು ಬಳಸಿಕೊಂಡು ಪ್ರಯಾಣಿಸುತ್ತಿದ್ದರು. ಒಟ್ಟಿನಲ್ಲಿ, ಈ ನಿರ್ಧಾರ ಉತ್ತರ ಕರ್ನಾಟಕ ಭಾಗದ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.&lt;/p&gt;&lt;p&gt;ಬೀದರ್&zwnj; &ndash; ಬೆಂಗಳೂರು ನಡುವೆ ಮತ್ತೆ ನಾಗರಿಕ ವಿಮಾನಯಾನ ಸೇವೆ ಆರಂಭಿಸಲು ಇಂದು ನಡೆದ ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾಗಲಿದ್ದು, ಸರ್ಕಾರಕ್ಕೆ ಹಾಗೂ ಕೆಕೆಆರ್&zwnj;ಡಿಬಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಬೀದರ್ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.&lt;/p&gt;&lt;p&gt;- ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ&lt;/p&gt;]]></content:encoded>
            <category>yadgir</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bidar-bengaluru-flight-services-set-to-resume-as-karnataka-govt-approves-funding-support-gdp/articleshow-v6ud2x1"/>
        </item>
        <item>
            <title><![CDATA[ಕಾರವಾರಕ್ಕೆ 200 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹100 ಕೋಟಿ ಕೊಟ್ಟ ಸರ್ಕಾರ!]]></title>
            <link>https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz</link>
            <guid isPermaLink="true">https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz</guid>
            <pubDate>Thu, 21 May 2026 22:23:56 +0530</pubDate>
            <description><![CDATA[&lt;p&gt;ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯು ಕಾರವಾರದಲ್ಲಿ 100 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದರೊಂದಿಗೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಯಿ-ಮಗು ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks5qaf6g5wrrt4vm22e5xhna,imgname-karnataka-cabinet-meeting-1779382435023.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 21): ಉ&lt;/strong&gt;ತ್ತರ ಕನ್ನಡ ಜಿಲ್ಲೆಯ ಜನರ ದಶಕಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (KIMS) ಆವರಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇನ್ನು ಜೈಲುಗಳ ಆವರಣದಲ್ಲಿ ಪೆಟ್ರೋಲ್ ಬಂಕ್ ಹಾಗೂ ವ್ಯಾಪಾರಿ ಮಳಿಗೆ ಆರಂಭಿಸಲೂ ಅನುಮೋದನೆ ನೀಡಿದೆ.&lt;/p&gt;&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು ಮತ್ತು ಕಾರಾಗೃಹ ಇಲಾಖೆಯ ಆದಾಯ ಹೆಚ್ಚಿಸಲು ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಕಾರವಾರಕ್ಕೆ ಬಂತು 'ಸೂಪರ್ ಸ್ಪೆಷಾಲಿಟಿ' ಬಲ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತುರ್ತು ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (KIMS) ಆವರಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಬೃಹತ್ ಕಟ್ಟಡ ನಿರ್ಮಾಣಕ್ಕೆ ಅಂದಾಜು 100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದರಿಂದ ಜಿಲ್ಲೆಯ ಜನರು ಇನ್ನು ಮುಂದೆ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಮಂಗಳೂರು ಅಥವಾ ಗೋವಾಕ್ಕೆ ಅಲೆಯುವುದು ತಪ್ಪಲಿದೆ.&lt;/p&gt;&lt;h3&gt;&lt;strong&gt;ಉತ್ತರ ಕರ್ನಾಟಕದಲ್ಲಿ ತಾಯಿ-ಮಗು ಆಸ್ಪತ್ರೆಗಳು&lt;/strong&gt;&lt;/h3&gt;&lt;p&gt;ಹೈದರಾಬಾದ್ ಕರ್ನಾಟಕ ಭಾಗದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಮುಂದಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ ಸಾಮರ್ಥ್ಯದ 'ತಾಯಿ ಮತ್ತು ಮಕ್ಕಳ ಆರೋಗ್ಯ' (MCH) ಆಸ್ಪತ್ರೆಗಳನ್ನು ನಿರ್ಮಿಸಲು ಒಟ್ಟು 38 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇದು ಗ್ರಾಮೀಣ ಭಾಗದ ಮಹಿಳೆಯರಿಗೆ ಮತ್ತು ನವಜಾತ ಶಿಶುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.&lt;/p&gt;&lt;h2&gt;&lt;strong&gt;ಡಿಜಿಟಲೀಕರಣ ಮತ್ತು ನಮ್ಮ ಕ್ಲಿನಿಕ್ ಬಲವರ್ಧನೆ&lt;/strong&gt;&lt;/h2&gt;&lt;p&gt;ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿನ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ABArK) ಕ್ಲೇಮ್ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು 17.85 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಇನ್ನು ರಾಜ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 'ನಮ್ಮ ಕ್ಲಿನಿಕ್'ಗಳಿಗೆ ಅಗತ್ಯವಿರುವ ಪ್ರಯೋಗಾಲಯ ಉಪಕರಣಗಳು ಮತ್ತು ಆರ್&zwnj;ಡಿ ಕಿಟ್ (RD KIT) ಖರೀದಿಸಲು 22 ಕೋಟಿ ರೂಪಾಯಿಗಳನ್ನು 15ನೇ ಹಣಕಾಸು ಆಯೋಗದ ಅನುದಾನದಡಿ ಬಳಸಲು ಅನುಮೋದನೆ ನೀಡಲಾಗಿದೆ.&lt;/p&gt;&lt;h3&gt;&lt;strong&gt;ಜೈಲಿನ ಆವರಣದಲ್ಲಿ ಪೆಟ್ರೋಲ್ ಬಂಕ್&zwnj;ಗಳು!&lt;/strong&gt;&lt;/h3&gt;&lt;p&gt;ಕಾರಾಗೃಹ ಇಲಾಖೆಯ ಜಮೀನನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ವಿನೂತನ ಯೋಜನೆ ರೂಪಿಸಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ) ಮತ್ತು ಧಾರವಾಡ ಕೇಂದ್ರ ಕಾರಾಗೃಹದ ಆವರಣದಲ್ಲಿ ಪೆಟ್ರೋಲ್ ಬಂಕ್ ಹಾಗೂ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಡೀಲರ್&zwnj;ಶಿಪ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಧಾರವಾಡದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ವತಿಯಿಂದ ಈ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಇದು ಸರ್ಕಾರದ ಆದಾಯ ಹೆಚ್ಚಿಸುವುದಲ್ಲದೆ, ಸುಧಾರಣಾ ಮಾರ್ಗದಲ್ಲಿರುವ ಕೈದಿಗಳಿಗೆ ಉದ್ಯೋಗಾವಕಾಶ ನೀಡುವ ಸಾಧ್ಯತೆಯೂ ಇದೆ.&lt;/p&gt;]]></content:encoded>
            <category>yadgir</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz"/>
        </item>
        <item>
            <title><![CDATA[ಯಾದಗಿರಿ: ಅಕ್ಕ-ಭಾವ ಜೊತೆ ಹೋಟೆಲ್‌ಗೆ ಬಂದವನು.. ಎರಡು ದಿನದ ಬಳಿಕ ಶವವಾಗಿ ಪತ್ತೆ! ಸಿಸಿಟಿವಿಯಲ್ಲಿ ಕೊಲೆ ರಹಸ್ಯ ಬಯಲು!]]></title>
            <link>https://kannada.asianetnews.com/gallery/karnataka-districts/hyderabad-man-mysterious-death-in-yadgir-private-hotel-murder-mystery-revealed-on-cctv-ybn4iqk</link>
            <guid isPermaLink="true">https://kannada.asianetnews.com/gallery/karnataka-districts/hyderabad-man-mysterious-death-in-yadgir-private-hotel-murder-mystery-revealed-on-cctv-ybn4iqk</guid>
            <pubDate>Thu, 14 May 2026 13:08:32 +0530</pubDate>
            <description><![CDATA[&lt;p&gt;ಯಾದಗಿರಿ ನಗರದ ಖಾಸಗಿ ಹೋಟೇಲ್ ನಲ್ಲಿ ತಂಗಿದ್ದ ವ್ಯಕ್ತಿ ಅನುಮಾನಸ್ಪಾದ ರೀತಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆ ಅದೇ ಹೋಟೆಲ್&zwnj;ನಲ್ಲಿದ್ದ ಸಂಬಂಧಿಗಳು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಯಾದಗಿರಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krjpjvakbzay6twswa5vtj3j,imgname-----------------------2026-05-14t130513.437-1778744126803.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾದಗಿರಿ ನಗರದ ಖಾಸಗಿ ಹೋಟೇಲ್ ನಲ್ಲಿ ತಂಗಿದ್ದ ವ್ಯಕ್ತಿ ಅನುಮಾನಸ್ಪಾದ ರೀತಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆ ಅದೇ ಹೋಟೆಲ್&zwnj;ನಲ್ಲಿದ್ದ ಸಂಬಂಧಿಗಳು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಯಾದಗಿರಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?&lt;/p&gt;&lt;img&gt;&lt;p&gt;ಯಾದಗಿರಿ ನಗರದಲ್ಲಿ ನಡೆದಿರುವ ಒಂದು ನಿಗೂಢ ಸಾವು ಸ್ಥಳೀಯ ಜನರನ್ನು ಬೆಚ್ಚಿಬೀಳಿಸಿದೆ. ಆ ಖಾಸಗಿ ಹೋಟೆಲ್&zwnj;ನ ಒಂದು ರೂಂ&hellip; ಎರಡು ದಿನಗಳಿಂದ ಬಾಗಿಲೇ ತೆರೆಯಲಿಲ್ಲ&hellip; ಒಳಗಿದ್ದ ವ್ಯಕ್ತಿ ಹೊರಗೂ ಬರಲಿಲ್ಲ&hellip; ಸಿಬ್ಬಂದಿಗೆ ಅನುಮಾನ ಶುರುವಾಯ್ತು. ಕೊನೆಗೆ ರೂಂ ಬಾಗಿಲು ತಟ್ಟಿದರೂ ಒಳಗಿನಿಂದ ಸಣ್ಣ ಪ್ರತಿಕ್ರಿಯೆಯೂ ಇಲ್ಲ. ಕೊನೆಗೆ ಬಾಗಿಲು ತೆರೆಯುತ್ತಿದ್ದಂತೆ ಕಂಡ ದೃಶ್ಯಕ್ಕೆ ಹೋಟೆಲ್ ಸಿಬ್ಬಂದಿ ಬೆಚ್ಚಿಬಿದ್ದರು.&lt;/p&gt;&lt;img&gt;&lt;p&gt;ಆಂಧ್ರಪ್ರದೇಶದ ಹೈದರಾಬಾದ್&zwnj;ನ ವಿನಾಯಕನಗರ ನಿವಾಸಿ ಲಕ್ಷ್ಮಣರಾವ್ (51) ಎಂದು ಗುರುತಿಸಲಾಗಿರುವ ವ್ಯಕ್ತಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೊದಲಿಗೆ ಇದು ಸಹಜ ಸಾವು ಅನ್ನಿಸಿತಾದರೂ ಆದರೆ ಪೊಲೀಸರ ಪ್ರಾಥಮಿಕ ತನಿಖೆ ಶುರುವಾಗುತ್ತಿದ್ದಂತೆಯೇ ಭಯಾನಕ ಸತ್ಯ ಹೊರಬಿದ್ದಿದೆ.&lt;/p&gt;&lt;img&gt;&lt;p&gt;ಮೃತ ಲಕ್ಷ್ಮಣರಾವ್ ಅವರನ್ನು ಅವರ ಅಕ್ಕ ಸಜ್ಜಾ ವರಲಕ್ಷ್ಮಿ ಹಾಗೂ ಭಾವ ಸಜ್ಜಾ ವೆಂಕಟರತ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಪಾತಕರು ಮೂರು ದಿನಗಳ ಹಿಂದೆ ಇದೇ ಖಾಸಗಿ ಹೋಟೆಲ್&zwnj;ನಲ್ಲಿ ತಂಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಒಟ್ಟಾರೆ ಈ ಮೂವರು ನಡುವೆ ಏನೋ ನಡೆದಿದೆ ಎನ್ನಲಾಗಿದೆ. ಅನಂತರ ಅಕ್ಕ-ಭಾವ ಮಾತ್ರ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಪೊಲೀಸ್ ಮೂಲಗಳ ಪ್ರಕಾರ, ಲಕ್ಷ್ಮಣರಾವ್ ಅವರನ್ನು ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿಗಳು ರೂಂ ಬಿಟ್ಟಿದ್ದು ಮತ್ತೆ ವಾಪಸ್ ಆಗಿಲ್ಲ. ಆದರೆ ಇತ್ತ ರೂಮ್&zwnj;ನಲ್ಲಿದ್ದ ಮೃತದೇಹ ಎರಡು ದಿನಗಳ ಕಾಲ ಅದೇ ರೂಂನಲ್ಲಿ ಬಿದ್ದಿದೆ.&lt;/p&gt;&lt;img&gt;&lt;p&gt;ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲೇ ಇದು ಕೊಲೆ ಎಂಬುದು ಬಹುತೇಕ ಖಚಿತವಾಗಿದೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಇದೀಗ ಆರೋಪಿಗಳಾದ ಅಕ್ಕ ಹಾಗೂ ಭಾವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>yadgir</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/hyderabad-man-mysterious-death-in-yadgir-private-hotel-murder-mystery-revealed-on-cctv-ybn4iqk"/>
        </item>
        <item>
            <title><![CDATA[ಯಾದಗಿರಿ ಹೊರಗುತ್ತಿಗೆ ಹಗರಣ: ಇಪಿಎಫ್, ಇಎಸ್‌ಐ ವಂಚನೆ ಬಯಲು, ₹8 ಕೋಟಿ ಬಾಕಿ!]]></title>
            <link>https://kannada.asianetnews.com/karnataka-districts/yadagiri-manpower-agency-rs8-cr-epf-esi-scam-ceo-lavish-oryadia-action-against-outsourcing-agencies-gdp/articleshow-yr61h9a</link>
            <guid isPermaLink="true">https://kannada.asianetnews.com/karnataka-districts/yadagiri-manpower-agency-rs8-cr-epf-esi-scam-ceo-lavish-oryadia-action-against-outsourcing-agencies-gdp/articleshow-yr61h9a</guid>
            <pubDate>Mon, 01 Jun 2026 19:33:13 +0530</pubDate>
            <description><![CDATA[ಯಾದಗಿರಿ ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಒದಗಿಸುತ್ತಿದ್ದ ಮ್ಯಾನ್&zwnj; ಪವರ್ ಏಜೆನ್ಸಿಗಳು ಎಸಗಿದ್ದ ಕೋಟ್ಯಂತರ ರೂಪಾಯಿ ಇಪಿಎಫ್ ಮತ್ತು ಇಎಸ್&zwnj;ಐ ವಂಚನೆ ಬಯಲಾಗಿದೆ. ಜಿ.ಪಂ. ಸಿಇಒ ಲವೀಶ್ ಒರಡಿಯಾ ಅವರು ಈ ಅಕ್ರಮದ ವಿರುದ್ಧ ಕಾನೂನು ಸಮರ ಸಾರಿದ್ದು, ತಪ್ಪಿತಸ್ಥ ಏಜೆನ್ಸಿಗಳ ವಿರುದ್ಧ ಎಫ್&zwnj;ಐಆರ್ ದಾಖಲಿಸಲು ಮತ್ತು ಬಡ್ಡಿ ಸಮೇತ ಹಣ ವಸೂಲಿ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j5cyt9vmgxzdsm4npmxk5ncf,imgname-istockphoto-1464136006-612x612--1-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ: &lt;/strong&gt;ಜಿಲ್ಲೆಯಲ್ಲಿ ಬಾಹ್ಯ ಗುತ್ತಿಗೆ (ಹೊರಗುತ್ತಿಗೆ) ಆಧಾರದ ಮೇಲೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಕಾರ್ಮಿಕರನ್ನು ಒದಗಿಸುವ ಟೆಂಡರ್ ಪಡೆದು, ನಂತರ ಕೋಟ್ಯಂತರ ರೂಪಾಯಿ ಆರ್ಥಿಕ ಅಕ್ರಮ ಎಸಗಿದ್ದ ಮಾನವ ಸಂಪನ್ಮೂಲ ಸಂಸ್ಥೆಗಳ (ಮ್ಯಾನ್&zwnj; ಪವರ್ ಏಜೆನ್ಸಿ) ವಿರುದ್ಧ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಲವೀಶ್ ಒರಡಿಯಾ ಅವರು ಭರ್ಜರಿ ಕಾನೂನು ಸಮರ ಸಾರಿದ್ದಾರೆ. ಕಾರ್ಮಿಕರ ಶೋಷಣೆ ಹಾಗೂ ಅವರಿಗೆ ಶಾಸನಬದ್ಧವಾಗಿ ಸಿಗಬೇಕಿದ್ದ ನಿಧಿಯನ್ನು ದುರುಪಯೋಗಪಡಿಸಿಕೊಂಡ ಗಂಭೀರ ಆರೋಪದಡಿ, ಹತ್ತಕ್ಕೂ ಹೆಚ್ಚು ಏಜೆನ್ಸಿಗಳ ಮಾಲೀಕರು ಹಾಗೂ ನಿರ್ದೇಶಕರ ವಿರುದ್ಧ ವೈಯಕ್ತಿಕವಾಗಿ ಎಫ್&zwnj;ಐಆರ್ (FIR) ದಾಖಲಿಸಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಈ ಬೃಹತ್ ಆರ್ಥಿಕ ವಂಚನೆಯ ಹಿನ್ನೆಲೆಯಲ್ಲಿ ಸಿಇಒ ಲವೀಶ್ ಒರಡಿಯಾ ಅವರು ಕಲಬುರಗಿಯಲ್ಲಿರುವ ಇಎಸ್&zwnj;ಐ ಜಂಟಿ ನಿರ್ದೇಶಕರು, ಇಪಿಎಫ್ ಆಯುಕ್ತರು ಹಾಗೂ ಉಪ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗಳಿಗೆ ವಿವರವಾದ ಪತ್ರಗಳನ್ನು ಬರೆದು ತಕ್ಷಣದ ಕ್ರಮಕ್ಕೆ ಕೋರಿದ್ದಾರೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿ, ಕಾರ್ಮಿಕರ ಹಕ್ಕುಗಳಿಗೆ ದ್ರೋಹ ಬಗೆದ ಏಜೆನ್ಸಿಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿ ಈ ಬಿಸಿ ಮುಟ್ಟಿಸಲಾಗಿದೆ.&lt;/p&gt;&lt;h2&gt;ಮುಖ್ಯ ಲೆಕ್ಕಾಧಿಕಾರಿಗಳ ತನಿಖೆಯಿಂದ ಬಯಲಾದ ದಶಕದ ಆರ್ಥಿಕ ಹಗರಣ&lt;/h2&gt;&lt;p&gt;ಮ್ಯಾನ್&zwnj; ಪವರ್ ಏಜೆನ್ಸಿಗಳು ಕಾರ್ಮಿಕರ ಭವಿಷ್ಯ ನಿಧಿ (EPF) ಹಾಗೂ ಕಾರ್ಮಿಕರ ರಾಜ್ಯ ವಿಮೆ (ESI) ಹಣವನ್ನು ಸರಿಯಾಗಿ ಪಾವತಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿ.ಪಂ. ಸಿಇಒ ಲವೀಶ್ ಒರಡಿಯಾ ಅವರು 2010 ರಿಂದ 2020 ರವರೆಗಿನ ಹತ್ತು ವರ್ಷಗಳ ಅವಧಿಯ ನಿಧಿ ಪಾವತಿಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದರು. ಅದರಂತೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿಯು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಏಜೆನ್ಸಿಗಳು ನಡೆಸಿರುವ ಆಘಾತಕಾರಿ ಆರ್ಥಿಕ ಅಕ್ರಮದ ಸಂಪೂರ್ಣ ಕರಾಳ ಮುಖ ಬಯಲಾಗಿದೆ.&lt;/p&gt;&lt;h2&gt;ಕೋಟ್ಯಂತರ ರೂಪಾಯಿ ಪಿಎಫ್ ಮತ್ತು ಇಎಸ್&zwnj;ಐ ಹಣದ ಇಂಗು ತಿನ್ನಿ&lt;/h2&gt;&lt;p&gt;ವರದಿಯ ಪ್ರಕಾರ, 2010 ರಿಂದ 2020 ರವರೆಗಿನ ಅವಧಿಯಲ್ಲಿ ಸರ್ಕಾರದಿಂದ ವಿವಿಧ ಮ್ಯಾನ್&zwnj; ಪವರ್ ಏಜೆನ್ಸಿಗಳಿಗೆ ಕಾರ್ಮಿಕರ ವೇತನ ಮತ್ತು ಭತ್ಯೆಗಾಗಿ ಒಟ್ಟು 23 ಕೋಟಿ 32 ಲಕ್ಷ 45 ಸಾವಿರದ 939 ರೂಪಾಯಿಗಳನ್ನು ಪಾವತಿಸಲಾಗಿತ್ತು. ನಿಯಮಗಳ ಪ್ರಕಾರ, ಈ ಮೊತ್ತದಲ್ಲಿ ಒಟ್ಟು 3 ಕೋಟಿ 71 ಲಕ್ಷ 93 ಸಾವಿರದ 909 ರೂಪಾಯಿಗಳನ್ನು ಇಪಿಎಫ್ (PF) ಖಾತೆಗೆ ಜಮೆ ಮಾಡಬೇಕಾಗಿತ್ತು. ಆದರೆ, ಕಾರ್ಮಿಕರ ಹೊಟ್ಟೆ ಹೊಡೆದ ಏಜೆನ್ಸಿಗಳು ಕೇವಲ 83 ಲಕ್ಷ 31 sಾವಿರದ 018 ರೂಪಾಯಿಗಳನ್ನು ಮಾತ್ರ ಪಾವತಿಸಿ, ಬರೋಬ್ಬರಿ 2 ಕೋಟಿ 88 ಲಕ್ಷ 62 ಸಾವಿರದ 891 ರೂಪಾಯಿಗಳ ಬೃಹತ್ ಮೊತ್ತವನ್ನು ಬಾಕಿ ಉಳಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದವು.&lt;/p&gt;&lt;p&gt;ಇದೇ ರೀತಿ ಕಾರ್ಮಿಕರ ಆರೋಗ್ಯ ಸುರಕ್ಷತೆಯ ಇಎಸ್&zwnj;ಐ (ESI) ಪಾವತಿಯಲ್ಲೂ ಭಾರಿ ವಂಚನೆ ಎಸಗಲಾಗಿದೆ. ನಿಯಮಾವಳಿಗಳ ಅನ್ವಯ ಒಟ್ಟು 62 ಲಕ್ಷ 10 ಸಾವಿರದ 087 ರೂಪಾಯಿಗಳನ್ನು ಇಎಸ್&zwnj;ಐ ಖಾತೆಗೆ ತುಂಬಬೇಕಿದ್ದ ಜಾಗದಲ್ಲಿ, ಏಜೆನ್ಸಿಗಳು ಕೇವಲ 11 ಲಕ್ಷ 47 ಸಾವಿರದ 614 ರೂಪಾಯಿಗಳನ್ನು ಮಾತ್ರ ಪಾವತಿಸಿದ್ದವು. ಈ ಮೂಲಕ 50 ಲಕ್ಷ 62 ಸಾವಿರದ 473 ರೂಪಾಯಿಗಳ ಇಎಸ್&zwnj;ಐ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಇಪಿಎಫ್ ಮತ್ತು ಇಎಸ್&zwnj;ಐ ಎರಡೂ ಸೇರಿ ಆರಂಭಿಕ ಹಂತದಲ್ಲೇ ಅಂದಾಜು 3.39 ಕೋಟಿ ರೂಪಾಯಿಗಳ ಅಸಲು ಮೊತ್ತದ ನೇರ ಬಾಕಿ ಕಂಡುಬಂದಿದೆ.&lt;/p&gt;&lt;h2&gt;ವಾರ್ಷಿಕ ಶೇಕಡಾ 12 ರ ಬಡ್ಡಿ ಸೇರಿ 8 ಕೋಟಿ ರೂಪಾಯಿ ಜಪ್ತಿಗೆ ಆದೇಶ&lt;/h2&gt;&lt;p&gt;ಕಾರ್ಮಿಕರ ಹಣವನ್ನು ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡಿರುವ ಏಜೆನ್ಸಿಗಳಿಗೆ ಸಿಇಒ ಲವೀಶ್ ಅವರು ಕಾನೂನಿನ ಸರಿಯಾದ ಪಾಠ ಕಲಿಸಲು ಮುಂದಾಗಿದ್ದಾರೆ. ಇಪಿಎಫ್ ಕಾಯ್ದೆಯ ಸೆಕ್ಷನ್ 7-ಕ್ಯು ಅಡಿಯಲ್ಲಿ, ಬಾಕಿ ಉಳಿಸಿಕೊಂಡ ದಿನಾಂಕದಿಂದ ಅಂದರೆ ಕಳೆದ 14 ವರ್ಷಗಳಿಗೂ ಹೆಚ್ಚಿನ ಅವಧಿಗೆ ವಾರ್ಷಿಕ ಶೇಕಡಾ 12 ರಷ್ಟು ಚಕ್ರಬಡ್ಡಿ ದರವನ್ನು ವಿಧಿಸಲಾಗುತ್ತಿದೆ. ಈ ಬಡ್ಡಿಯ ಲೆಕ್ಕಾಚಾರವನ್ನು ಒಳಗೊಂಡರೆ ಒಟ್ಟು ವಸೂಲಾತಿ ಮೊತ್ತವೇ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ ಬರೋಬ್ಬರಿ 8 ಕೋಟಿ ರೂಪಾಯಿಗಳಿಗೂ ಹೆಚ್ಚಾಗಲಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಕೇವಲ 7 ದಿನಗಳ ಅಂತಿಮ ಗಡುವನ್ನು ನೀಡಿರುವ ಸಿಇಒ, ಅಷ್ಟರೊಳಗೆ ಏಜೆನ್ಸಿಗಳು ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಸರ್ಕಾರಿ ಖಜಾನೆಗೆ ಜಮೆ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಒಂದು ವೇಳೆ ಈ ವಸೂಲಾತಿ ಪ್ರಕ್ರಿಯೆಗೆ ತಪ್ಪಿದ್ದಲ್ಲಿ, ಮ್ಯಾನ್&zwnj; ಪವರ್ ಏಜೆನ್ಸಿಗಳ ಮಾಲೀಕರು ಹಾಗೂ ನಿರ್ದೇಶಕರುಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 316 ರ ಅಡಿಯಲ್ಲಿ 'ಕ್ರಿಮಿನಲ್ ನಂಬಿಕೆ ದ್ರೋಹ' (Criminal Breach of Trust) ಆರೋಪದ ಮುಖದ್ದಮೆ ಹೂಡಿ ವೈಯಕ್ತಿಕವಾಗಿ ಎಫ್&zwnj;ಐಆರ್ ದಾಖಲಿಸಲು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.&lt;/p&gt;&lt;h2&gt;ಭ್ರಷ್ಟರ ವಿರುದ್ಧ ನಿರಂತರ ಸಮರ ಸಾರಿರುವ ಯಾದಗಿರಿ ಸಿಇಒ ಲವೀಶ್&lt;/h2&gt;&lt;p&gt;ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಲವೀಶ್ ಒರಡಿಯಾ ಅವರು ಭ್ರಷ್ಟಾಚಾರ ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಸರಣಿ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೇ ಸಾಕ್ಷಿ ಪುರಾವೆಗಳಿಲ್ಲದೆ, ಕೇವಲ ಸ್ವಾರ್ಥ ಹಾಗೂ ದುರುದ್ದೇಶಪೂರಿತವಾಗಿ ಸರ್ಕಾರಿ ಅಧಿಕಾರಿಗಳ ಮೇಲೆ ಸುಳ್ಳು ದೂರುಗಳನ್ನು ಸಲ್ಲಿಸಿ, ನಂತರ ತಪ್ಪು ತಿಳಿವಳಿಕೆ ಅಥವಾ ವೈಯಕ್ತಿಕ ಕಾರಣಗಳನ್ನು ನೀಡಿ ದೂರನ್ನು ಹಿಂಪಡೆಯುವ ಬ್ಲ್ಯಾಕ್&zwnj;ಮೇಲ್ ಪ್ರವೃತ್ತಿಯ ಕೆಲವು ಸಂಘಟನೆಗಳು ಹಾಗೂ ನಕಲಿ ಪತ್ರಕರ್ತರು ಸೇರಿದಂತೆ ಒಟ್ಟು 24 ಜನರ ವಿರುದ್ಧ ವಸೂಲಾತಿ ನೋಟಿಸ್ ಜಾರಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ಬಯೋಮೆಟ್ರಿಕ್ ಹಾಜರಾತಿ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸುತ್ತಿದ್ದ ಜಿಲ್ಲೆಯ 80 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ನೋಟಿಸ್ ನೀಡಿ ಶಿಸ್ತುಕ್ರಮ ಜರುಗಿಸಿದ್ದರು.&lt;/p&gt;&lt;h2&gt;ತನಿಖೆಯ ಮುಂದಿನ ಹಂತ ಮತ್ತು ಕಪ್ಪು ಪಟ್ಟಿ ಭೀತಿ&lt;/h2&gt;&lt;p&gt;ಈ ಇಡೀ ಆಡಳಿತಾತ್ಮಕ ಮತ್ತು ಕಾನೂನು ಮುನ್ನಡೆಯ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಸಿಇಒ ಲವೀಶ್ ಒರಡಿಯಾ ಅವರು, 2010 ರಿಂದ 2020 ರವರೆಗಿನ ಮೊದಲ ಹಂತದ ತನಿಖೆ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಇದರ ಮುಂದುವರಿದ ಭಾಗವಾಗಿ, 2020 ರಿಂದ ಪ್ರಸ್ತುತ 2026 ರವರೆಗಿನ ಇತ್ತೀಚಿನ ಅವಧಿಯಲ್ಲೂ ಮ್ಯಾನ್&zwnj; ಪವರ್ ಏಜೆನ್ಸಿಗಳು ನಡೆಸಿರುವ ವ್ಯವಹಾರಗಳ ಬಗ್ಗೆ ಎರಡನೇ ಹಂತದ ತನಿಖೆ ಪ್ರಗತಿಯಲ್ಲಿದೆ. ಈ ತನಿಖಾ ವರದಿಯು ಕೈಸೇರಿದ ತಕ್ಷಣವೇ, ಇಪಿಎಫ್ ಹಾಗೂ ಇಎಸ್&zwnj;ಐ ಪಾವತಿಸದ ಮತ್ತು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡ ಎಲ್ಲಾ ಗುತ್ತಿಗೆ ಸಂಸ್ಥೆಗಳನ್ನು ಕಾಯಂ ಆಗಿ 'ಕಪ್ಪು ಪಟ್ಟಿ'ಗೆ (Blacklist) ಸೇರಿಸಲಾಗುವುದು ಹಾಗೂ ಅವರ ವಿರುದ್ಧವೂ ಕ್ರಿಮಿನಲ್ ಎಫ್&zwnj;ಐಆರ್ ದಾಖಲಿಸಿ ಜೈಲಿಗಟ್ಟುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಅವರು ಭ್ರಷ್ಟ ಏಜೆನ್ಸಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>yadgir</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/yadagiri-manpower-agency-rs8-cr-epf-esi-scam-ceo-lavish-oryadia-action-against-outsourcing-agencies-gdp/articleshow-yr61h9a"/>
        </item>
        <item>
            <title><![CDATA[ನಕಲಿ ಬಯೋಮೆಟ್ರಿಕ್‌: 80ಕ್ಕೂ ಹೆಚ್ಚು ಪಿಡಿಒಗಳ ಹಾಜರಿ ಹಿಂದಿನ ಮುಖವಾಡ ಕಳಚಿದ ಸಿಇಒ ಲವೀಶ್‌]]></title>
            <link>https://kannada.asianetnews.com/karnataka-districts/yadgir-pdo-fake-biometric-attendance-scam-gvd/articleshow-yy7qxsz</link>
            <guid isPermaLink="true">https://kannada.asianetnews.com/karnataka-districts/yadgir-pdo-fake-biometric-attendance-scam-gvd/articleshow-yy7qxsz</guid>
            <pubDate>Sun, 24 May 2026 16:43:06 +0530</pubDate>
            <description><![CDATA[&lt;p&gt;ಗ್ರಾಮಗಳಲ್ಲೇ ಹಾಜರಿದ್ದು, ಸಮಸ್ಯೆಗಳ ಬಗೆಹರಿಸುವಿಕೆಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳುತ್ತ, ಬಯೋಮೆಟ್ರಿಕ್&zwnj; ಹಾಜರಿಯನ್ನು ಬೇರೊಬ್ಬರಿಗೆ ನೀಡಿ, ದಿನನಿತ್ಯದ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kscv0ddxg6yttvv6tk07eqd7,imgname-chc-1779621180861.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ (ಮೇ.23): &lt;/strong&gt;ಗ್ರಾಮಗಳಲ್ಲೇ ಹಾಜರಿದ್ದು, ಸಮಸ್ಯೆಗಳ ಬಗೆಹರಿಸುವಿಕೆಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳುತ್ತ, ಬಯೋಮೆಟ್ರಿಕ್&zwnj; ಹಾಜರಿಯನ್ನು ಬೇರೊಬ್ಬರಿಗೆ ನೀಡಿ, ದಿನನಿತ್ಯದ ಹಾಜರಿಗೆ &quot;ಕಳ್ಳ&quot;ಮಾರ್ಗ ಅನುಸರಿಸುತ್ತಿದ್ದ 80ಕ್ಕೂ ಹೆಚ್ಚು ಗ್ರಾಮ ಪಂಚಾಯತ್&zwnj; ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕಳ್ಳಾಟವನ್ನು ಪತ್ತೆ ಹಚ್ಚಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ನೋಟೀಸ್&zwnj; ಜಾರಿ ಮಾಡಿದ್ದಾರಲ್ಲದೆ, ಸರ್ಕಾರಕ್ಕೇ ವಂಚನೆ, ನಕಲಿ ದಾಖಲೆ ಸೃಷ್ಟಿ ಆರೋಪದಡಿ ಪೊಲೀಸ್&zwnj; ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.&lt;/p&gt;&lt;p&gt;ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪಿಡಿಒಗಳು ಕರ್ತವ್ಯ ನಿರ್ವಹಿಸದೇ, ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಅಲ್ಲದೆ, ಪಿಡಿಒಗಳು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸದೇ ಇರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ಇಂತಹ ದೂರುಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದ ಸಿಇಒ ಲವೀಶ್&zwnj;, ಜಿಲ್ಲೆಯ ಗ್ರಾಮ ಪಂಚಾಯತ್&zwnj;ಗಳಲ್ಲಿ ಹಾಜರಿ ಬಗ್ಗೆ ಅಳವಡಿಸಿರುವ ಬಯೋಮೆಟ್ರಿಕ್&zwnj; ತಂತ್ರಾಂಶ (ಸಾಫ್ಟವೇರ್&zwnj;)ದ ಅನುಮತಿ ಪಡೆದು, ಸತ್ಯಾಸತ್ಯತೆ ಪರಿಶೀಲಿಸಲು ಮುಂದಾದಾಗ, ಪಿಡಿಒಗಳು ತಮ್ಮದಲ್ಲದ &quot;ನಕಲಿ&quot; ಹಾಜರಿ ನೀಡಿ, ಸರ್ಕಾರಕ್ಕೆ ವಂಚಿಸುತ್ತಿದ್ದುದು ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;ನೀರಿನ ಸಮಸ್ಯೆ ಬಗ್ಗೆ ಸಭೆ ಕರೆದು, ಬಯೋಮೆಟ್ರಿಕ್&zwnj; ಪತ್ತೆ !&lt;/strong&gt;&lt;/h2&gt;&lt;p&gt;ಕುಡಿವ ನೀರಿನ ಸಮಸ್ಯೆ, ಕರವಸೂಲಾತಿ ಸೇರಿದಂತೆ ತುರ್ತು ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲೆಂದು ಶುಕ್ರವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರೇಡ್-1 &amp;amp; 2 ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಸಭೆ ಕರೆಯಲಾಗಿತ್ತು. ಎಂದಿನಂತೆ ಸಿಇಒ ಸಭೆ ಹಿನ್ನೆಲೆ ಎಲ್ಲ ಪಿಡಿಒಗಳು ಹಾಜರಾಗಿದ್ದರು.&lt;/p&gt;&lt;p&gt;ಸಭೆಯಲ್ಲಿ ಕುಡಿವ ನೀರಿನ ಪೂರೈಕೆ ಬಗ್ಗೆ, ಚರಂಡಿಗಳ ಸ್ವಚ್ಛತೆಯ ಬಗ್ಗೆ, ನೀರಿನ ಮಾದರಿಗಳ ಪರೀಕ್ಷೆ ಬಗ್ಗೆ, ಕರವಸೂಲಾತಿ ಬಗ್ಗೆ ಹಾಗೂ ಮನರೇಗಾ ಯೋಜನೆಯಡಿ ಕಡಿಮೆ ಮಾನವ ದಿನಗಳ ಸೃಜನೆ ಬಗ್ಗೆ ಚರ್ಚೆ ಮಾಡಿದ, ಮುಂಬರುವ ದಿನಗಳಲ್ಲಿ ಎಲ್ಲಾ ವಿಷಯಗಳ ಬಗ್ಗೆ ಅತೀ ಗಂಭೀರವಾಗಿ ಎಚ್ಚರಿಕೆ ವಹಿಸಿ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪದೋಷವಾಗದಂತೆ ಕ್ರಮವಹಿಸಲು ಎಲ್ಲರಿಗೂ ಸೂಚಿಸಲಾಯಿತು.&lt;/p&gt;&lt;p&gt;ಇನ್ನೇನು, ಸಭೆ ಮುಗಿಯಿತು ಎಂದುಕೊಂಡು ಹೊರಡಲುನುವಾದ ಅಧಿಕಾರಿಗಳಿಗೆ ಸ್ಥಳದಲ್ಲೇ ಬಯೋಮೆಟ್ರಿಕ್&zwnj; ಹಾಜರಿ ಪಡೆಯಲು ಸಿಇಒ ಸೂಚಿಸಿದರು. ಇದನ್ನು ನಿರೀಕ್ಷಿಸಿದ ಅನೇಕರು ಕಸಿವಿಸಿಗೊಂಡರು. ಬಯೋಮೆಟ್ರಿಕ್ &quot;ಬಂಡವಾಳ&quot; ಬಯಲಾಗುತ್ತದಲ್ಲಾ ಎಂದು ಕೈಕೈ ಹಿಚುಕಿಕೊಂಡು, ನೆಪಗಳ ಹೇಳಲು ಮುಂದಾದರಾದರೂ, ತಕ್ಷಣವೇ ಸಭಾಂಗಣದ ಬಾಗಿಲು ಮುಚ್ಚಿಸಿ, ಬಯೋಮೆಟ್ರಿಕ್ ಸಾಧನ ತರಿಸಿದ ಸಿಇಒ ಪ್ರತಿಯೊಬ್ಬರು ಹಾಜರಿ ನೀಡುವಂತೆ ಕಟ್ಟಪ್ಪಣೆ ನೀಡಿದರು.&lt;/p&gt;&lt;p&gt;ಈ ವೇಳೆ, ಕೆಲವರು ಬೆರಳಿಗೆ ಗಾಯ, ಮುಂತಾದ ಪಿಳ್ಳೆನೆಪಗಳ ಸಾರಿಸಲು ಯತ್ನಿಸಿದರಾದರೂ, ಸತ್ಯ ಹೊರಬಿದ್ದಿತ್ತು. ಶೇ.80 ರಷ್ಟು ಪಿಡಿಒಗಳು ನಕಲಿ ಹಾಜರಿ ನೀಡುತ್ತಿದ್ದುದು ಪತ್ತೆಯಾಯಿತು. ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಪಿಡಿಒಗಳು ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;p&gt;ಗ್ರಾಮದಲ್ಲಿ ಇರದೇ ಪಿಡಿಒಗಳು ನಕಲಿ ಬಯೋಮೆಟ್ರಿಕ್ ನೀಡುತ್ತಿದ್ದರು. ತಮ್ಮ ಪರವಾಗಿ ಗ್ರಾಮದ ಸಿಬ್ಬಂದಿ ಅಥವಾ ಮತ್ತ್ಯಾರದ್ದೋ ಬಯೆಮಟ್ರಿಕ್&zwnj; ನೀಡಿ, ಮೋಸ ಮಾಡುತ್ತಿದ್ದರು. ಅವರಿಗೆ ನೋಟೀಸ್&zwnj; ನೀಡಲಾಗುತ್ತಿದೆ. ವಂಚನೆ ಹಾಗೂ ಐಟಿ ಕಾಯ್ದೆ ದುರುಪಯೋಗದಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.- ಲವೀಶ್&zwnj; ಒರಡಿಯಾ, ಸಿಇಓ, ಜಿ.ಪಂ. ಯಾದಗಿರಿ.&lt;/p&gt;]]></content:encoded>
            <category>yadgir</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/yadgir-pdo-fake-biometric-attendance-scam-gvd/articleshow-yy7qxsz"/>
        </item>
    </channel>
</rss>
