<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 28 May 2026 14:02:21 +0530</lastBuildDate>
        <atom:link href="https://kannada.asianetnews.com/rss/world-news" rel="self" type="application/rss+xml"/>
        <item>
            <title><![CDATA[ಒಂದು ವರ್ಷ ಕೈ-ಕೈ ಹಿಡಿದು ಪ್ರೀತಿಸಿ ಮದುವೆಯಾದ ಹೆಂಡತಿ, 12 ದಿನದ ಬಳಿಕ 'ಗಂಡಸು' ಎಂಬ ಸತ್ಯ ಹೊರಬಿತ್ತು!]]></title>
            <link>https://kannada.asianetnews.com/relationship/indonesia-marriage-scam-young-man-disguised-as-woman-viral-news-sat/articleshow-00vuouc</link>
            <guid isPermaLink="true">https://kannada.asianetnews.com/relationship/indonesia-marriage-scam-young-man-disguised-as-woman-viral-news-sat/articleshow-00vuouc</guid>
            <pubDate>Mon, 25 May 2026 15:07:52 +0530</pubDate>
            <description><![CDATA[&lt;p&gt;ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನಿಗೆ, 12 ದಿನಗಳ ನಂತರ ತನ್ನ ಪತ್ನಿ ಹೆಣ್ಣಲ್ಲ, ಬದಲಾಗಿ ಆಸ್ತಿಗಾಗಿ ವಂಚಿಸಲು ಬಂದ ಪುರುಷ ಎಂಬ ಆಘಾತಕಾರಿ ಸತ್ಯ ತಿಳಿದುಬಂದಿದೆ. ಒಂದು ವರ್ಷದ ಪ್ರೀತಿಯ ನಾಟಕ ಎಲ್ಲೆಡೆ ಚರ್ಚೆಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf7x2bxg7mdt1sxv7hb98st,imgname-indonesia-marriage-scam-1779701811581.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರೀತಿ ಕುರುಡು ಎನ್ನುವ ಮಾತಿದೆ, ಆದರೆ ಇಲ್ಲೊಬ್ಬ ಯುವಕನ ಪ್ರೀತಿ ಅವನನ್ನೇ ದಾರಿ ತಪ್ಪಿಸಿ ಅಕ್ಷರಶಃ ಪಂಗನಾಮ ಹಾಕಿದೆ. ಒಂದು ವರ್ಷ ಕಾಲ ಪ್ರೀತಿಸಿ, ಸಂಪ್ರದಾಯಬದ್ಧವಾಗಿ ಮದುವೆಯಾದ 12 ದಿನಗಳ ನಂತರ, ತನ್ನ ಪತ್ನಿ ಹೆಣ್ಣಲ್ಲ ಬದಲಾಗಿ ಗಂಡು ಎಂಬ ಆಘಾತಕಾರಿ ಸತ್ಯ ಪತಿಗೆ ತಿಳಿದುಬಂದಿದೆ. ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ನಡೆದ ಈ ಘಟನೆ ಈಗ ವಿಶ್ವದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಪ್ರೀತಿ:&lt;/strong&gt;&lt;/h3&gt;&lt;p&gt;ಇಂಡೋನೇಷ್ಯಾದ ನಾರಿಂಗುಲ್ ನಿವಾಸಿಯಾಗಿರುವ 26 ವರ್ಷದ ಯುವಕ (ಹೆಸರು ಎಕೆ - AK), 2023 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ 'ಅದಿನಾ ಕನ್ಜಾ' ಎಂಬ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಸುಮಾರು ಒಂದು ವರ್ಷ ಕಾಲ ಇಬ್ಬರೂ ಪರಸ್ಪರ ಭೇಟಿಯಾಗುತ್ತಿದ್ದರು. ಆದರೆ, ಪ್ರತಿ ಬಾರಿ ಭೇಟಿಯಾದಾಗಲೂ ಅದಿನಾ ಕನ್ಜಾ ಮುಖವನ್ನು ಪೂರ್ತಿಯಾಗಿ ಮುಚ್ಚುವ ಮುಸ್ಲಿಂ ಸಂಪ್ರದಾಯದ 'ನಿಕಾಬ್' ಧರಿಸುತ್ತಿದ್ದಳು. ತಾನು ಧರ್ಮನಿಷ್ಠ ಮಹಿಳೆಯಾದ್ದರಿಂದ ಮುಖ ತೋರಿಸುವುದಿಲ್ಲ ಎಂದು ಅವಳು ಹೇಳಿದಾಗ, ಎಕೆ ಅದನ್ನು ಗೌರವದಿಂದ ಒಪ್ಪಿಕೊಂಡಿದ್ದನು.&lt;/p&gt;&lt;h2&gt;&lt;strong&gt;ಸರಳ ವಿವಾಹ:&lt;/strong&gt;&lt;/h2&gt;&lt;p&gt;ಒಂದು ವರ್ಷದ ಪ್ರೀತಿಯ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮದುವೆಯ ಮಾತುಕತೆ ಬಂದಾಗ, ತನಗೆ ಯಾರೂ ಕುಟುಂಬದವರಿಲ್ಲ, ತಾನೊಬ್ಬ ಅನಾಥೆ ಎಂದು ಅದಿನಾ ಕನ್ಜಾ ನಂಬಿಸಿದ್ದಳು. ಈ ಕಾರಣದಿಂದಾಗಿ ಏಪ್ರಿಲ್ 12 ರಂದು ಎಕೆ ಅವರ ಮನೆಯಲ್ಲೇ ಅತ್ಯಂತ ಸರಳವಾಗಿ ಮದುವೆ ಸಮಾರಂಭ ನಡೆಯಿತು. ಮದುವೆಯ ನಂತರವೂ ಅದಿನಾ ತನ್ನ ನಿಕಾಬ್ (ಹಿಜಾಬ್) ತೆಗೆಯಲು ನಿರಾಕರಿಸುತ್ತಿದ್ದಳು.&lt;/p&gt;&lt;p&gt;&lt;strong&gt;ಅನುಮಾನ ಮೂಡಿದ್ದು ಹೇಗೆ?&lt;/strong&gt;&lt;/p&gt;&lt;h3&gt;ಮದುವೆಯಾದ 12 ದಿನಗಳ ಕಾಲ ಅದಿನಾ ಪತಿಯ ಕುಟುಂಬದವರೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದಳು ಮತ್ತು ಮನೆಯಲ್ಲೂ ಮುಖವನ್ನು ಮುಚ್ಚಿಕೊಂಡೇ ಇರುತ್ತಿದ್ದಳು. ಇದರಿಂದ ಅನುಮಾನಗೊಂಡ ಎಕೆ, ಅವಳ ಹಿನ್ನೆಲೆಯನ್ನು ಹುಡುಕುತ್ತಾ ಅವಳು ಹೇಳಿದ್ದ ಹಳೆಯ ವಿಳಾಸಕ್ಕೆ ಹೋದಾಗ ಆಘಾತಕಾರಿ ಸತ್ಯಗಳು ಹೊರಬಂದವು. ಅದಿನಾ ಹೇಳಿದಂತೆ ಅವಳು ಅನಾಥೆಯಲ್ಲ, ಅವಳ ತಂದೆ-ತಾಯಿ ಇಬ್ಬರೂ ಬದುಕಿದ್ದರು!&lt;/h3&gt;&lt;h2&gt;&lt;strong&gt;ಅದಿನಾ ಅಸಲಿಗೆ ವೇಷ ಮರೆಸಿಕೊಂಡ ಪುರುಷ:&lt;/strong&gt;&lt;/h2&gt;&lt;p&gt;ಎಕೆ ತನ್ನ ಪತ್ನಿಯ ಪೋಷಕರನ್ನು ಭೇಟಿಯಾದಾಗ, ಅವರಿಗೆ ತಮ್ಮ ಮಗನ ಮದುವೆಯ ಬಗ್ಗೆ ಕಿಂಚಿತ್ತೂ ಸುಳಿವಿರಲಿಲ್ಲ. ತನಿಖೆಯ ನಂತರ ತಿಳಿದುಬಂದ ವಿಷಯವೇನೆಂದರೆ, ಅದಿನಾ ಕನ್ಜಾ ಎಂಬ ಹೆಸರಿನಲ್ಲಿ ಎಕೆ ಜೊತೆ ಸಂಸಾರ ಮಾಡುತ್ತಿದ್ದವಳು ಹೆಣ್ಣಲ್ಲ, ಬದಲಾಗಿ 2020 ರಿಂದ ಹೆಣ್ಣಿನ ವೇಷ ಧರಿಸುತ್ತಿದ್ದ 'ಇಎಸ್ ಹೆಚ್' ಎಂಬ ವೇಷ ಮರೆಸಿಕೊಂಡ ಪುರುಷ ಎಂಬುದು ಪತ್ತೆಯಾಗಿದೆ.&lt;/p&gt;&lt;h3&gt;&lt;strong&gt;ವಂಚನೆಯ ಉದ್ದೇಶ:&lt;/strong&gt;&lt;/h3&gt;&lt;p&gt;ತಕ್ಷಣ ಪೊಲೀಸರಿಗೆ ದೂರು ನೀಡಿದಾಗ, ಪುರುಷ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಎಕೆ ಕುಟುಂಬದ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದಿಂದ ತಾನು ಹೆಣ್ಣಿನ ವೇಷ ಧರಿಸಿ ಪ್ರೀತಿಯ ನಾಟಕವಾಡಿ ಮದುವೆಯಾಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ವರ್ಷ ಕಾಲ ಜೊತೆಯಲ್ಲಿದ್ದರೂ ತನ್ನ ಸಂಗಾತಿ ಗಂಡು ಎಂಬುದನ್ನು ಪತ್ತೆಹಚ್ಚಲು ಎಕೆಗೆ ಸಾಧ್ಯವಾಗದಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/relationship/indonesia-marriage-scam-young-man-disguised-as-woman-viral-news-sat/articleshow-00vuouc"/>
        </item>
        <item>
            <title><![CDATA[ಭಾರತದಲ್ಲಿ ಸುಮ್‌ ಸುಮ್ನೆ ವೆಹಿಕಲ್ ಹಾರ್ನ್‌ ಮಾಡ್ತಾರೆ; ಅಮೆರಿಕದಲ್ಲಿ ಹಾರ್ನ್‌ ಮಾಡೋದೇ ಇಲ್ಲ! ಯಾಕೆ?]]></title>
            <link>https://kannada.asianetnews.com/gallery/world-news/why-vehicle-do-not-horn-in-america-road-india-vs-us-4x0iwo7</link>
            <guid isPermaLink="true">https://kannada.asianetnews.com/gallery/world-news/why-vehicle-do-not-horn-in-america-road-india-vs-us-4x0iwo7</guid>
            <pubDate>Mon, 25 May 2026 15:14:21 +0530</pubDate>
            <description><![CDATA[&lt;p&gt;What is a car horn called in America: ಭಾರತದಲ್ಲಿ ಗಾಡಿಯಿದೆ ಎಂದು ಹಾರ್ನ್&zwnj; ಮಾಡೋದುಂಟು. ಯಾರನ್ನೋ ಕರೆಯಲು ಕೂಡ ಹಾರ್ನ್&zwnj; ಮಾಡ್ತಾರೆ. ಆದರೆ ಅಮೆರಿಕದಲ್ಲಿ ಆ ರೀತಿ ಹಾರ್ನ್&zwnj; ಮಾಡೋದು ತುಂಬ ಅಪರೂಪ. ಇದಕ್ಕೂ ಕಾರಣ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf861nyj2fb8zy5e4388ye6,imgname-new-project---2026-05-25t150537.925-1779702105790.jpg" type="image/jpeg" height="390" width="690"/>
            <content:encoded><![CDATA[&lt;p&gt;What is a car horn called in America: ಭಾರತದಲ್ಲಿ ಗಾಡಿಯಿದೆ ಎಂದು ಹಾರ್ನ್&zwnj; ಮಾಡೋದುಂಟು. ಯಾರನ್ನೋ ಕರೆಯಲು ಕೂಡ ಹಾರ್ನ್&zwnj; ಮಾಡ್ತಾರೆ. ಆದರೆ ಅಮೆರಿಕದಲ್ಲಿ ಆ ರೀತಿ ಹಾರ್ನ್&zwnj; ಮಾಡೋದು ತುಂಬ ಅಪರೂಪ. ಇದಕ್ಕೂ ಕಾರಣ ಇದೆ.&lt;/p&gt;&lt;img&gt;&lt;p&gt;ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಹಾರ್ನ್ ಮಾಡೋ ಹಾಗಿಲ್ಲ. ಇದಕ್ಕೆ ಒಂದಿಷ್ಟು ನಿಯಮ ಇದೆ. ಅಪಘಾತವನ್ನು ತಪ್ಪಿಸೋದಿಕ್ಕೆ, ತುರ್ತು ಸಂದರ್ಭಗಳಲ್ಲಿ ಮಾತ್ರ ಹಾರ್ನ್&zwnj; ಮಾಡಬೇಕು. ಗ್ರೀನ್&zwnj; ಸಿಗ್ನಲ್&zwnj; ಬಂತು ಎಂದು ಹಾರ್ನ್&zwnj; ಮಾಡಿದರೆ ದಂಡ ಕಟ್ಟಬೇಕು.&lt;/p&gt;&lt;img&gt;&lt;p&gt;ಅಮೆರಿಕದವರ ಪ್ರಕಾರ ಹಾರ್ನ್ ಮಾಡೋದು ಅತ್ಯಂತ ಅಸಭ್ಯ ನಡವಳಿಕೆಯಂತೆ. ಹಾರ್ನ್&zwnj; ಮಾಡಿದರೆ ಎದುರಿಗಿರುವ ಚಾಲಕನಿಗೆ ಬೈಯ್ದರು ಅಥವಾ ಸಿಟ್ಟು ಮಾಡಿಕೊಂಡರು ಎಂಬ ಅರ್ಥ ಬರುತ್ತದೆ. ಅಲ್ಲಿ ಕೂಲ್&zwnj; ಆಗಿ ಗಾಡಿ ಓಡಿಸಬೇಕು.&lt;/p&gt;&lt;img&gt;&lt;p&gt;ಅಮೆರಿಕದ ರಸ್ತೆಗಳು, ಟ್ರಾಫಿಕ್ ವ್ಯವಸ್ಥೆ ನಿಜಕ್ಕೂ ಚೆನ್ನಾಗಿವೆ, ವೈಜ್ಞಾನಿಕವಾಗಿ, ಹೀಗಾಗಿ ಹಾರ್ನ್&zwnj; ಮಾಡೋ ಅವಶ್ಯಕತೆ ಕೂಡ ಇರೋದಿಲ್ಲ. ಪ್ರತಿ ರಸ್ತೆಯಲ್ಲೂ ಲೇನ್ ಮಾರ್ಕಿಂಗ್&zwnj;ಗಳು, ಸೈನ್ ಬೋರ್ಡ್&zwnj;ಗಳು, ಜಿಪಿಎಸ್ ಕೂಡ ಇರುತ್ತದೆ. ಡ್ರೈವರ್&zwnj;ಗಳಿಗೆ ಮೊದಲು ಎಲ್ಲಿಗೆ ಹೋಗಬೇಕು, ಎಲ್ಲಿ ನಿಲ್ಲಬೇಕು ಎಂದು ಗೊತ್ತಿರುತ್ತದೆ, ಹೀಗಾಗಿ ಹಾರ್ನ್&zwnj; ಮಾಡಿ ಬೇರೆಯವರಿಗೆ ಹೇಳಬೇಕು ಎಂಬುದಿಲ್ಲ.&lt;/p&gt;&lt;img&gt;&lt;p&gt;ಪಾದಚಾರಿಗಳು ರಸ್ತೆ ದಾಟುವಾಗ ಡ್ರೈವರ್&zwnj;ಗಳು ವಾಹನವನ್ನು ತಾವಾಗಿಯೇ ನಿಲ್ಲಿಸುತ್ತಾರೆ, ಆದರೆ ಹಾರ್ನ್&zwnj; ಮಾಡೋದಿಲ್ಲ, ದಾರಿ ಬಿಡಿ ಎಂದು ಹೇಳೋದಿಲ್ಲ.&lt;/p&gt;&lt;img&gt;&lt;p&gt;ಅಮೆರಿಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅಷ್ಟು ಸುಲಭವಲ್ಲ. ಅಲ್ಲಿ ಡ್ರೈವರ್&zwnj;ಗಳು ಉತ್ತಮ ತರಬೇತಿ ಪಡೆದು ಪರೀಕ್ಷೆಗಳನ್ನು ಪಾಸ್ ಮಾಡಿರುತ್ತಾರೆ. ಮುಂದೆ ಇರೋದು ತಪ್ಪಾಗಿ ವಾಹನ ಓಡಿಸಿದರೂ ಕೂಡ, ನಾವು ನಮ್ಮ ವಾಹನವನ್ನು ಹೇಗೆ ಕಂಟ್ರೋಲ್&zwnj; ಮಾಡಬೇಕು ಎಂದು ಅವರು ಫಿಕ್ಸ್&zwnj; ಆಗಿರುತ್ತಾರೆ.&lt;/p&gt;&lt;img&gt;&lt;p&gt;ಅನಗತ್ಯವಾಗಿ ಏನಾದರೂ ಹಾರ್ನ್&zwnj; ಮಾಡಿದ್ರೆ ಮುಂದೆ ಇರುವ ಡ್ರೈವರ್&zwnj; ಬಂದು ಜಗಳ ಮಾಡ್ತಾರೆ. ಇದರಿಂದ ಇನ್ನೊಂದಿಷ್ಟು ಹೊಡೆದಾಟ ಆಗಲೂಬಹುದು.&lt;/p&gt;]]></content:encoded>
            <category>world-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/world-news/why-vehicle-do-not-horn-in-america-road-india-vs-us-4x0iwo7"/>
        </item>
        <item>
            <title><![CDATA[Yash: ಟಾಕ್ಸಿಕ್‌ಗೂ ಮೊದಲೇ ರಾಮಾಯಣ; ದೀಪಾವಳಿಗೆ 'ರಾವಣ'ನಾಗಿ ಡಿಸೆಂಬರ್‌ಗೆ 'ರಾಯ'ನಾಗಲಿರುವ ಯಶ್!]]></title>
            <link>https://kannada.asianetnews.com/cine-world/rocking-star-yash-ramayana-releases-before-toxic-news-becomes-viral-now/articleshow-5hsigt0</link>
            <guid isPermaLink="true">https://kannada.asianetnews.com/cine-world/rocking-star-yash-ramayana-releases-before-toxic-news-becomes-viral-now/articleshow-5hsigt0</guid>
            <pubDate>Mon, 25 May 2026 17:28:18 +0530</pubDate>
            <description><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಯಾವಾಗ ಖಂಡಿತ ಗೊತ್ತಿಲ್ಲ. ಆದರೆ ಟಾಕ್ಸಿಕ್​ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ. ದೀಪಾವಳಿಗೆ ರಿಲೀಸ್ ಆಗಬೇಕಿದ್ದ ರಾಮಾಯಣ ಅದಕ್ಕೂ ಮುನ್ನ ಥಿಯೇಟರ್ ಅಂಗಳಕ್ಕೆ ಬರ್ತಾ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksamqafc81mgt1d1xa3q5x0g,imgname-vcjj-1779547482604.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;'ಟಾಕ್ಸಿಕ್'ಗೂ ಮೊದಲೇ ರಾಮಾಯಣ..!&lt;/strong&gt;&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಯಾವಾಗ ಖಂಡಿತ ಗೊತ್ತಿಲ್ಲ. ಆದರೆ ಟಾಕ್ಸಿಕ್​ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ. ದೀಪಾವಳಿಗೆ ರಿಲೀಸ್ ಆಗಬೇಕಿದ್ದ ರಾಮಾಯಣ ಅದಕ್ಕೂ ಮುನ್ನ ಥಿಯೇಟರ್ ಅಂಗಳಕ್ಕೆ ಬರ್ತಾ ಇದೆ.&lt;/p&gt;&lt;p&gt;ಟಾಕ್ಸಿಕ್ ಪೋಸ್ಟ್​ಪೋನ್.. ರಾಮಾಯಣ ಪ್ರೀ-ಪೋನ್..!&lt;/p&gt;&lt;p&gt;ದೀಪಾವಳಿಗೂ ಮೊದಲೇ ರಿಲೀಸ್ ರಾಕಿ ರಾಮಾಯಣ..!&lt;/p&gt;&lt;p&gt;ಯೆಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮತ್ತೆ ಪೋಸ್ಟ್ ಪೋನ್ ಆದ ಮೇಲೆ, ಫ್ಯಾನ್ಸ್ ಯಾವಾಗ ರಿಲೀಸ್ ಅನ್ನೋದನ್ನ ಕೇಳೋದೇ ಬಿಟ್ಟುಬಿಟ್ಟಿದ್ದಾರೆ. ಅದ್ಯಾವಾಗ ಬರುತ್ತೋ ಬರಲಿ ಅಂತ ಸೈಲೆಂಟ್ ಆಗಿಬಿಟ್ಟಿದ್ದಾರೆ.&lt;/p&gt;&lt;p&gt;ಆದ್ರೆ ಇದರ ನಡುವೆ ರಾಮಾಯಣ ಟೀಂ ಮಾತ್ರ ಫ್ಯಾನ್ಸ್​ಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಅಸಲಿಗೆ 2026 ದೀಪಾವಳಿಗೆ ರಾಮಾಯಣ ಭಾಗ-1 ರಿಲೀಸ್. 2027 ದೀಪಾವಳಿಗೆ ಭಾಗ-2 ರಿಲೀಸ್ ಅಂತ ಹಿಂದೆ ಅನೌನ್ಸ್ ಮಾಡಲಾಗಿತ್ತು.&lt;/p&gt;&lt;p&gt;ಹೊಸ ಅಪ್​ಡೇಟ್ ಏನು ಅಂದರೆ ರಾಮಾಯಣ ದೀಪಾವಳಿಗೂ ಒಂದು ವಾರ ಮೊದಲೇ ಅಂದರೆ ಅಕ್ಟೋಬರ್ 30ಕ್ಕೆ ತೆರೆಗೆ ಬರ್ತಾ ಇದೆ. ಹಿಂದಿನ ವೀಕೆಂಡ್​ಗೆ ರಿಲೀಸ್ ಮಾಡಿ ದೀಪಾವಳಿ ಹೊತ್ತಿಗೆ ಬಾಕ್ಸಾಫೀಸ್​ನಲ್ಲಿ ಪಟಾಕಿ ಹೊಡೆಯೋ ಪ್ಲಾನ್ ಮಾಡಿದೆ.&lt;/p&gt;&lt;p&gt;ನಿಮಗೆಲ್ಲಾ ಗೊತ್ತಿರೋ ಹಾಗೆ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾದ್ರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಮ್ಮ ರಾಕಿಂಗ್ ಸ್ಟಾರ್ ಯಶ್ ದಶಕಂಠ ರಾವಣನಾಗಿ ಮಿಂಚಿದ್ದಾರೆ.&lt;/p&gt;&lt;p&gt;ಆದ್ರೆ ಯಶ್ ಫ್ಯಾನ್ಸ್ ಪಾಲಿಗೆ ಏಕೈಕ ಬೇಸರದ ಸಂಗತಿ ಅಂದ್ರೆ ರಾವಣನ ಪಾತ್ರ ಭಾಗ-1ರ ಕೊನೆ ಕೊನೆಗೆ ಬರಲಿದೆಯಂತೆ. ಸೋ ಯಶ್ ಸಿನಿಮಾ ಬರ್ತಿದೆ ಅಂತ ಖುಷಿಯಾದ್ರೂ ಅವರು ತೆರೆ ಮೇಲೆ ಬರೋದು ಸಿನಿಮಾದ ಕೊನೆ ಕೊನೆಗೆ.&lt;/p&gt;&lt;p&gt;ಇನ್ನೂ ಟಾಕ್ಸಿಕ್ ಕಥೆ ಏನಾಯ್ತು ಅಂತ ನೋಡಹೋದ್ರೆ ಒಂದು ಕಡೆ ಸಿನಿಮಾ ಬ್ಯುಸಿನೆಸ್ ಮಾತುಕತೆ ನಡೀತಾ ಇದ್ರೆ, ಇನ್ನೊಂದು ಕಡೆಗೆ ಯಶ್ ಈಗಲೂ ಸಿನಿಮಾವನ್ನ ತಿದ್ದಿ ತೀಡುವ ಕೆಲಸದಲ್ಲೇ ಇದ್ದಾರಂತೆ. ಈಗಲೂ ಚಿತ್ರದ ಪ್ಯಾಚ್ ವರ್ಕ್ ನಡೀತಾನೆ ಇದೆ.&lt;/p&gt;&lt;h2&gt;ಡಿಸೆಂಬರ್​ಗೆ ಟಾಕ್ಸಿಕ್ ರಿಲೀಸ್ ಮಾಡುವ ಪ್ಲ್ಯಾನ್..?&lt;/h2&gt;&lt;p&gt;ಹೌದು ಮೂಲಗಳ ಪ್ರಕಾರ ರಾಮಾಯಣ ರಿಲೀಸ್ ಆದ ಬಳಿಕ, ಡಿಸೆಂಬರ್​​ ನಲ್ಲಿ ಟಾಕ್ಸಿಕ್ ರಿಲೀಸ್ ಮಾಡ್ಲಿಕ್ಕೆ ಯಶ್ ಪ್ಲಾನ್ ಮಾಡಿದ್ದಾರಂತೆ. ಡಿಸೆಂಬರ್ ಯಶ್ ಪಾಲಿಗೆ ಲಕ್ಕಿ ಮಂತ್ ಮಿಸ್ಟರ್ ಌಂಡ್ ಮಿಸೆಸ್ ರಾಮಾಚಾರಿ ಟಾಕ್ಸಿಕ್ ಚಿತ್ರಗಳು ರಿಲೀಸ್ ಆಗಿದ್ದು ಕೂಡ ಡಿಸೆಂಬರ್​ನಲ್ಲೇ ಸೋ ಟಾಕ್ಸಿಕ್​ ಕೂಡ ಡಿಸೆಂಬರ್​ಗೆ ಬರೋದು ಬಹುತೇಕ ಫಿಕ್ಸ್,&lt;/p&gt;&lt;h3&gt;ಯಶ್​ನ ತೆರೆ ಮೇಲೆ ನೋಡದೇ ಕಾದಿರೋ ಫ್ಯಾನ್ಸ್​&lt;/h3&gt;&lt;p&gt;ಒಟ್ಟಾರೆ 4 ವರ್ಷ ಯಶ್​ನ ತೆರೆ ಮೇಲೆ ನೋಡದೇ ಕಾದಿರೋ ಫ್ಯಾನ್ಸ್​ಗೆ ಈ ವರ್ಷ ದ್ವಿತಿಯಾರ್ಧದಲ್ಲಿ ಎರಡೆರಡು ಸಿನಿಮಾಗಳನ್ನ ನೋಡೋದಕ್ಕೆ ಸಿಗಲಿದೆ. ಸೋ ದೀಪಾವಳಿ ಮತ್ತು ಕ್ರಿಸ್ ಮಸ್ ಎರಡನ್ನೂ ಸೆಲೆಬ್ರೇಟ್ ಮಾಡ್ಲಿಕ್ಕೆ ಸಜ್ಜಾಗಿ.!&lt;/p&gt;&lt;p&gt;ಹೆಚ್ಚಿನ ಮನರಂಜನೆಗೆ ಸಿನಿಮಾ ಹಂಗಾಮ ನೋಡಿ..&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rocking-star-yash-ramayana-releases-before-toxic-news-becomes-viral-now/articleshow-5hsigt0"/>
        </item>
        <item>
            <title><![CDATA[ಬಕ್ರೀದ್​ ಬಲಿಯಿಂದ ಬಚಾವಾಯ್ತು ಡೊನಾಲ್ಡ್​ ಟ್ರಂಪ್​ ಎಮ್ಮೆ: ಝೂಗೆ ಶಿಫ್ಟ್​- ಏನಿದು ಸ್ಟೋರಿ]]></title>
            <link>https://kannada.asianetnews.com/gallery/festivals/donald-trump-buffalo-spared-from-eid-sacrifice-in-bangladesh-shifts-it-to-national-zoo-suc-6gmf6qq</link>
            <guid isPermaLink="true">https://kannada.asianetnews.com/gallery/festivals/donald-trump-buffalo-spared-from-eid-sacrifice-in-bangladesh-shifts-it-to-national-zoo-suc-6gmf6qq</guid>
            <pubDate>Thu, 28 May 2026 12:07:28 +0530</pubDate>
            <description><![CDATA[ಬಾಂಗ್ಲಾದೇಶದಲ್ಲಿ 'ಡೊನಾಲ್ಡ್ ಟ್ರಂಪ್' ಎಂದು ಅಡ್ಡಹೆಸರಿಟ್ಟಿದ್ದ ಅಪರೂಪದ ಆಲ್ಬಿನೋ ಎಮ್ಮೆ ಬಕ್ರೀದ್&zwnj;ಗೆ ಬಲಿಯಾಗಲು ಮಾರಾಟವಾಗಿತ್ತು. ಆದರೆ, ಕೊನೆಗೆ ಅದನ್ನು ಬಲಿ ಕೊಡದೆ, ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂಬ ವರದಿಗಳು ಬಂದಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kspmjkjs2q7ajc6jt21ra1bz,imgname-trump-buffalo-1779949981273.jpg" type="image/jpeg" height="390" width="690"/>
            <content:encoded><![CDATA[ಬಾಂಗ್ಲಾದೇಶದಲ್ಲಿ 'ಡೊನಾಲ್ಡ್ ಟ್ರಂಪ್' ಎಂದು ಅಡ್ಡಹೆಸರಿಟ್ಟಿದ್ದ ಅಪರೂಪದ ಆಲ್ಬಿನೋ ಎಮ್ಮೆ ಬಕ್ರೀದ್&zwnj;ಗೆ ಬಲಿಯಾಗಲು ಮಾರಾಟವಾಗಿತ್ತು. ಆದರೆ, ಕೊನೆಗೆ ಅದನ್ನು ಬಲಿ ಕೊಡದೆ, ಮೃಗಾಲಯಕ್ಕೆ ಕಳುಹಿಸಲಾಗಿದೆ ಎಂಬ ವರದಿಗಳು ಬಂದಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;img&gt;&lt;p&gt;ಬಾಂಗ್ಲಾದೇಶದಲ್ಲಿ ಈದ್ ಅಲ್-ಅಧಾ ಅಥವಾ ಬಕ್ರೀದ್ ಹಬ್ಬಕ್ಕೂ ಮುನ್ನ, ಒಂದು ವಿಶಿಷ್ಟ ಮತ್ತು ಅಪರೂಪದ ಆಲ್ಬಿನೋ ಎಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಅದರ ವಿಶಿಷ್ಟ ನೋಟ ಮತ್ತು ಕೂದಲಿನ ರಚನೆಯಿಂದಾಗಿ ಈ ಎಮ್ಮೆಗೆ ತಮಾಷೆಯಾಗಿ &quot;ಡೊನಾಲ್ಡ್ ಟ್ರಂಪ್&quot; ಎಂದು ಅಡ್ಡಹೆಸರು ಇಡಲಾಯಿತು ಮತ್ತು ವೀಡಿಯೊ ಶೀಘ್ರವಾಗಿ ವೈರಲ್ ಆಯಿತು.&lt;/p&gt;&lt;img&gt;&lt;p&gt;ಬಕ್ರೀದ್ ಸಂದರ್ಭದಲ್ಲಿ ಬಲಿ ನೀಡಲು ಪ್ರಾಣಿಗಳನ್ನು ಸಿದ್ಧಪಡಿಸುವ ಢಾಕಾ ಬಳಿಯ ನಾರಾಯಣಗಂಜ್ ಜಿಲ್ಲೆಯ ರಬೆಯಾ ಆಗ್ರೋ ಫಾರ್ಮ್&zwnj;ನಲ್ಲಿ ಈ ಎಮ್ಮೆಯನ್ನು ಸಾಕಲಾಯಿತು. ಈ ಎಮ್ಮೆಯ ವೀಡಿಯೊಗಳು ಇತ್ತೀಚೆಗೆ ವೈರಲ್ ಆಗಿದ್ದವು ಮತ್ತು ಈಗ ಬಕ್ರೀದ್&zwnj;ನಲ್ಲಿ ಅದನ್ನು ಬಲಿ ನೀಡಲು ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು.&lt;/p&gt;&lt;img&gt;&lt;p&gt;ಆದರೆ, ಇದೀಗ ಟ್ರಂಪ್​ ಎಮ್ಮೆ ಬಲಿ ಕೊಟ್ಟಿಲ್ಲ, ಬದಲಿಗೆ ಅದನ್ನು ಬಾಂಗ್ಲಾದೇಶದ ಜೂನಲ್ಲಿ ಇಡಲಾಗಿದೆ ಎನ್ನುವ ವರದಿಯಾಗಿದೆ. ಒಟ್ಟಿನಲ್ಲಿ ಟ್ರಂಪ್​ ಎಮ್ಮೆ ಸದ್ಯ ಸಾಯುವುದರಿಂದ ತಪ್ಪಿಸಿಕೊಂಡಿದೆ. ಇದರ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಈ 4 ವರ್ಷದ ಎಮ್ಮೆ ಒಂದು ಆಲ್ಬಿನೋ ತಳಿ ಎಂದು ತೋಟದ ಮಾಲೀಕ ಜಿಯಾವುದ್ದೀನ್ ಮೈರಾಧಾ ವಿವರಿಸಿದರು. ಎಮ್ಮೆ ತಿಳಿ ಗುಲಾಬಿ ಬಣ್ಣದ್ದಾಗಿದ್ದು, ಇದನ್ನು ಅಪರೂಪವೆಂದು ಪರಿಗಣಿಸಲಾಗಿದೆ. ಸುಮಾರು 10 ತಿಂಗಳ ಹಿಂದೆ ರಾಜ್&zwnj;ಶಾಹಿ ನಗರ ಮಾರುಕಟ್ಟೆಯಿಂದ ಎಮ್ಮೆಯನ್ನು ಖರೀದಿಸಲಾಗಿದೆ ಎಂದು ಅವರು ವಿವರಿಸಿದರು. ನಂತರ ಅವರ ಕಿರಿಯ ಸಹೋದರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೂದಲಿನ ಶೈಲಿಯನ್ನು ಹೋಲುವ ಅದರ ಕೂದಲಿನ ಶೈಲಿಯನ್ನು ಗಮನಿಸಿದ ನಂತರ ಆ ಎಮ್ಮೆಗೆ &quot;ಡೊನಾಲ್ಡ್ ಟ್ರಂಪ್&quot; ಎಂದು ಹೆಸರಿಟ್ಟರು. &quot;ಇದು ಕೇವಲ ಸಾಂಕೇತಿಕ ಹೆಸರು. ಪ್ರಾಣಿಗಳು ಮತ್ತು ಮನುಷ್ಯರನ್ನು ಹೋಲಿಸಲು ಸಾಧ್ಯವಿಲ್ಲ. ಇದಕ್ಕೆ ಈ ಹೆಸರನ್ನು ಕೇವಲ ತಮಾಷೆಗಾಗಿ ನೀಡಲಾಗಿದೆ&quot; ಎಂದು ತೋಟದ ಮಾಲೀಕರು ಹೇಳಿದರು.&lt;/p&gt;&lt;img&gt;&lt;p&gt;ಸಾಮಾಜಿಕ ಮಾಧ್ಯಮ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ಎಮ್ಮೆಯ ಹೆಸರು ವೈರಲ್ ಆಗಿದ್ದು, ಹೆಚ್ಚಿನ ಸಂಖ್ಯೆಯ ಜನರು ಅದನ್ನು ನೋಡಲು ತೋಟಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು ಎಂದು ಜಿಯಾವುದ್ದೀನ್ ಹೇಳಿದರು. ಎಮ್ಮೆಯನ್ನು ಅಂತಿಮವಾಗಿ ಜೀವಂತ ತೂಕದ ಆಧಾರದ ಮೇಲೆ ವ್ಯಾಪಾರಿಗೆ ಪ್ರತಿ ಕಿಲೋಗ್ರಾಂಗೆ 550 ಟಾಕಾಗೆ ಮಾರಾಟ ಮಾಡಲಾಯಿತು ಎಂದು ಅವರು ಹೇಳಿದರು.&lt;/p&gt;&lt;img&gt;&lt;p&gt;ಎಮ್ಮೆ ಸುಮಾರು 700 ಕಿಲೋಗ್ರಾಂಗಳಷ್ಟು ತೂಕವಿತ್ತು ಎಂದು ಅವರು ಹೇಳಿದರು. ಸುಮಾರು 3.85 ಲಕ್ಷ ಟಾಕಾ (ಸುಮಾರು 3 ಲಕ್ಷ ರೂಪಾಯಿ) ಗೆ ಒಪ್ಪಂದವನ್ನು ಅಂತಿಮಗೊಳಿಸಲಾಯಿತು. ಖರೀದಿದಾರನನ್ನು ಜಿಂಜಿರಾದ ರಸೂಲ್ಪುರ್ ಪ್ರದೇಶದ ನಿವಾಸಿ ಮೊಹಮ್ಮದ್ ಶೋರಾನ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಅವರು ಬಕ್ರೀದ್ ದಿನದಂದು ಬಲಿ ನೀಡಲು ಎಮ್ಮೆಯನ್ನು ಖರೀದಿಸಿದ್ದರು.&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/festivals/donald-trump-buffalo-spared-from-eid-sacrifice-in-bangladesh-shifts-it-to-national-zoo-suc-6gmf6qq"/>
        </item>
        <item>
            <title><![CDATA[ಭಾರತದಲ್ಲಿ ಮನೆ ಮುಂದೆ ಗೇಟ್‌, ಕಾಂಪೌಂಡ್‌ಗಾಗಿ ಜಗಳ; ಅಮೆರಿಕದಲ್ಲಿ ಗೇಟ್‌, ಕಾಂಪೌಂಡ್‌ ಹಾಕೋದೇ ಇಲ್ಲ; ಯಾಕೆ?]]></title>
            <link>https://kannada.asianetnews.com/gallery/world-news/why-no-gate-no-compound-in-front-home-in-america-78ntoo7</link>
            <guid isPermaLink="true">https://kannada.asianetnews.com/gallery/world-news/why-no-gate-no-compound-in-front-home-in-america-78ntoo7</guid>
            <pubDate>Mon, 25 May 2026 15:43:51 +0530</pubDate>
            <description><![CDATA[&lt;p&gt;Why American Houses Don't Have Gates: ಭಾರತದಲ್ಲಿ ಸ್ವಲ್ಪ ಜಾಗ ಸಿಕ್ರೂ, ಗೇಟ್&zwnj; ಹಾಕಿ ಇದು ನನ್ನ ಜಾಗ ಅಂತಾರೆ. ಆದರೆ ಅಮೆರಿಕದಲ್ಲಿ ಮಾತ್ರ ಎಲ್ಲಿಯೂ ಕಾಂಪೌಂಡ್&zwnj; ಇರೋದಿಲ್ಲ, ಗೇಟ್&zwnj; ಇರೋದಿಲ್ಲ. ಅಮೆರಿಕದಲ್ಲಿ ಮನೆಯ ರಸ್ತೆಯಿಂದ ನೇರವಾಗಿ ಹುಲ್ಲು ಕಾಣುತ್ತದೆ. ಇದಕ್ಕೂ ಕೂಡ ಕಾರಣ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf9vh86cyp7k7407d719g5r,imgname-new-project---2026-05-25t153435.423-1779703858438.jpg" type="image/jpeg" height="390" width="690"/>
            <content:encoded><![CDATA[&lt;p&gt;Why American Houses Don't Have Gates: ಭಾರತದಲ್ಲಿ ಸ್ವಲ್ಪ ಜಾಗ ಸಿಕ್ರೂ, ಗೇಟ್&zwnj; ಹಾಕಿ ಇದು ನನ್ನ ಜಾಗ ಅಂತಾರೆ. ಆದರೆ ಅಮೆರಿಕದಲ್ಲಿ ಮಾತ್ರ ಎಲ್ಲಿಯೂ ಕಾಂಪೌಂಡ್&zwnj; ಇರೋದಿಲ್ಲ, ಗೇಟ್&zwnj; ಇರೋದಿಲ್ಲ. ಅಮೆರಿಕದಲ್ಲಿ ಮನೆಯ ರಸ್ತೆಯಿಂದ ನೇರವಾಗಿ ಹುಲ್ಲು ಕಾಣುತ್ತದೆ. ಇದಕ್ಕೂ ಕೂಡ ಕಾರಣ ಇದೆ.&lt;/p&gt;&lt;img&gt;&lt;p&gt;ಅಮೆರಿಕದಲ್ಲಿ 'ಹೋಮ್ ಓನರ್ಸ್ ಅಸೋಸಿಯೇಷನ್' (HOA) ಎಂಬ ಸಮಿತಿ ಇದೆ. ಅಕ್ಕ ಪಕ್ಕದ ಮನೆ ಕೂಡ ಒಂದೇ ರೀತಿ ಇರಬೇಕು, ಸುಂದರವಾಗಿರಬೇಕು ಎಂದುಕೊಳ್ತಾರೆ. ಹೀಗಾಗಿ ಮನೆಯ ಸೌಂದರ್ಯ ಹಾಳಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಗೇಟ್&zwnj;, ಕಾಂಪೌಂಡ್&zwnj; ಹಾಕೋ ಹಾಗಿಲ್ಲ.&lt;/p&gt;&lt;img&gt;&lt;p&gt;ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಕಳ್ಳತನ ಅಥವಾ ಅಪರಾಧ ಆಗೋದು ಕಡಿಮೆ. ಅಲ್ಲಿ ಪೊಲೀಸ್&zwnj; ವ್ಯವಸ್ಥೆ ಚೆನ್ನಾಗಿದೆ, CCTV ಕ್ಯಾಮೆರಾ, ಸೆಕ್ಯೂರಿಟಿ ಅಲಾರಂ, ಸ್ಮಾರ್ಟ್ ಡೋರ್ ಬೆಲ್&zwnj; ಕೂಡ ಇರುತ್ತದೆ. ಹೀಗಾಗಿ ಗೇಟ್&zwnj;, ಕಾಂಪೌಂಡ್&zwnj; ಬೇಡ.&lt;/p&gt;&lt;img&gt;&lt;p&gt;ಅಮೆರಿಕದಲ್ಲಿ ಮುಕ್ತತೆಗೆ (Openness) ಹೆಚ್ಚು ಮಹತ್ವ ಕೊಡ್ತಾರೆ. ಮನೆಯ ಮುಂದೆ ಗೇಟ್ ಅಥವಾ ಕಾಂಪೌಂಡ್&zwnj; ಹಾಕಿದರೆ, ಪಕ್ಕದಮನೆಯವರಿಂದ ನಮ್ಮನ್ನು ಬೇರ್ಪಡಿಸಿದಂತೆ ಎಂದು ನಂಬಲಾಇದೆ. ಅಷ್ಟೇ ಅಲ್ಲದೆ ಅದನ್ನು ಅಸಹ್ಯ ಎಂದು ಕೂಡ ಅಂದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಯಾವುದೇ ಸಮಸ್ಯೆ ಬಂದಾಗಲೂ ಅಲ್ಲಿ, ಗೇಟ್&zwnj;ಗಳು ಅಡ್ಡಿಯಾಗಬಾರದು. ಮನೆಗೆ ಬೆಂಕಿ ಬಿದ್ದಾಗ ಅಥವಾ ಯಾರಿಗಾದರೂ ಆರೋಗ್ಯ ಸಮಸ್ಯೆ ಆದಾಗ ಬಹಳ ಸುಲಭವಾಗಿ ರೋಗಿಗಳನ್ನು ಆಂಬುಲೆನ್ಸ್&zwnj;ಗೆ ಹಾಕಲು ಅನುಕೂಲ ಆಗಬೇಕು.&lt;/p&gt;&lt;img&gt;&lt;p&gt;ಅಮೆರಿಕದ ಮನೆಗಳನ್ನು ಮುಂಭಾಗ ಹೀಗೆ ಇರಬೇಕು, ಹಿಂಭಾಗ ಹೀಗೆ ಇರಬೇಕು ಎಂದು ನಿಯಮ ಇದೆ. ಮನೆಯ ಹಿಂಭಾಗ ಮರದ ಅಥವಾ ಪ್ಲಾಸ್ಟಿಕ್&zwnj;ನ ಬೇಲಿ ಹಾಕಿರುತ್ತಾರೆ.&lt;/p&gt;&lt;p&gt;&lt;strong&gt;ಪಾರ್ಸೆಲ್ ಡೆಲಿವರಿ ಸುಲಭವಾಗಲು&lt;/strong&gt;&lt;/p&gt;&lt;p&gt;ಅಮೆರಿಕದಲ್ಲಿ ರಸ್ತೆಯ ಪಕ್ಕದಲ್ಲೇ ಅಂಚೆ ಪೆಟ್ಟಿಗೆಗಳು ಇರುತ್ತವೆ. ಡೆಲಿವರಿ ಬಾಯ್&zwnj;ಗಳು ನೇರವಾಗಿ ಬಂದು ಮನೆಯ ಮುಂಭಾಗದ ಬಾಗಿಲ ಬಳಿ ಇಟ್ಟು ಹೋಗುತ್ತಾರೆ.&lt;/p&gt;]]></content:encoded>
            <category>world-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/world-news/why-no-gate-no-compound-in-front-home-in-america-78ntoo7"/>
        </item>
        <item>
            <title><![CDATA[ಯಶ್ ನಿಜವಾದ ಹೆಸರು ನವೀನ್ ಅಲ್ಲ, ಇನ್ನೊಂದು.. ಹೊಸ ಸೀಕ್ರೆಟ್ ಹೇಳಿ ಟ್ವಿಸ್ಟ್ ಕೊಟ್ಟ Yash ತಾಯಿ ಪುಷ್ಪಾ!]]></title>
            <link>https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f</link>
            <guid isPermaLink="true">https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f</guid>
            <pubDate>Thu, 28 May 2026 13:55:40 +0530</pubDate>
            <description><![CDATA[&lt;p&gt;ನಾಟಕ, ಧಾರಾವಾಹಿಗಳಲ್ಲಿ ನಟಿಸುವಾಗ ಯಶ್ ಅವರ ಹೆಸರು ಇದ್ದಿದ್ದು ನವೀನ್ ಅಂತಲೇ ಅಗಿತ್ತು. ಆದರೆ, ಯಾವಾಗ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಿದರೋ ಆಗ ಅವರ ಹೆಸರನ್ನು 'ಯಶ್' ಎಂದು ಬದಲಾಯಿಸಲಾಯಿತು. ಈ ಸಂಗತಿ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಆದರೆ, ಈಗ ನೋಡಿದರೆ ಯಶ್ ಅಮ್ಮ ಹೊಸ ರಹಸ್ಯ ಹೇಳಿದ್ದಾರೆ!..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk1bxvwmm8ccd76aegfsg1a3,imgname-rocking-star-yash--1--1772793819028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಶ್ ಮೂಲ ಹೆಸರಿನ ಸೀಕ್ರೆಟ್!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Yash) ಅವರೀಗ ಇಡೀ ಜಗತ್ತಿಗೆ 'ಯಶ್' ಎಂದೇ ಪರಿಚಿತರು. ಆದರೆ ಅವರ ಮೂಲ ಹೆಸರು, ಸ್ಕೂಲ್-ಕಾಲೇಜಿನ ಹೆಸರು (ಮೂಲ ಹೆಸರು) ನವೀನ್ ಕುಮಾರ್ ಗೌಡ (Naveen Kumar Gowda) ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಅದನ್ನೇ ಯಶ್ ಸಿನಿಮಾರಂಗಕ್ಕೆ ಬಂದಮೇಲೆ ಅವರನ್ನು ಲವ್ ಮಾಡಿ ಮದುವೆಯಾಗಿರುವ ರಾಧಿಕಾ ಪಂಡಿತ್ (Radhika Pandit) ಕೂಡ ಹೇಳಿದ್ದರು. (ಯಶ್ ಅವರು ಈಗ ಕಾನೂನಾತ್ಮಕವಾಗಿಯೂ ತಮ್ಮ ಹೆಸರನ್ನು 'ಯಶ್' ಎಂದೇ ಬದಲಾಯಿಸಿಕೊಂಡಿದ್ದಾರೆ ಎಂದು ರಾಧಿಕಾ ಒಮ್ಮೆ ಸ್ಪಷ್ಟಪಡಿಸಿದ್ದಾರೆ.)&lt;/p&gt;&lt;p&gt;&lt;img&gt;&lt;/p&gt;&lt;p&gt;ಆದರೆ ಸ್ವತಃ ಯಶ್ ಅವರನ್ನು ಹೆತ್ತಿರುವ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಯಶ್ ಅವರ ಮೊಟ್ಟಮೊದಲ ಹೆಸರು ನವೀನ್ ಕುಮಾರ್ ಅಲ್ಲ, ಜನವರಿಯಲ್ಲಿ ಅವರು ಹುಟ್ಟಿರುವುದರಿಂದ (ಹೊಸ ವರ್ಷ, ನವೀನ ವರ್ಷ) ಅವರನ್ನು &lsquo;ನವೀನ&rsquo; ಅಂತ ಕರೆಯುತ್ತಿದ್ದೆವು. ಅದೇ ಸ್ಕೂಲು-ಕಾಲೇಜ್ ಸೇರಿದಂತೆ ಎಲ್ಲಾ ದಾಖಲೆಯಲ್ಲಿ ಬಂದಿತ್ತು. ಆದರೆ, ಅವರಿಗೆ ಹುಟ್ಟಿದಾಗ ನಮ್ಮ ತಾಯಿಯ ಮನೆಯಲ್ಲಿ, ಕುಟುಂಬದವರು ಪ್ರೀತಿಯಿಂದ ನಾವೆಲ್ಲಾ ಇಟ್ಟ ಹೆಸರು ಯಶವಂತ್ ಎಂಬ ಸೀಕ್ರೆಟ್&zwnj; ಬಿಚ್ಚಿಟ್ಟಿದ್ದಾರೆ.&lt;/p&gt;&lt;h2&gt;ಯಶ್ ಅವರ ನಿಜ ಹೆಸರು ನವೀನ್ ಕುಮಾರ್ ಅಲ್ಲ!&lt;/h2&gt;&lt;p&gt;ಇತ್ತೀಚೆಗೆ ('ಲೋ ನವೀನ' ಸಿನಿಮಾ ವೇಳೆ) ಯಶ್ ಅವರ ತಾಯಿ ಪುಷ್ಪಾ ಅವರು ಯಶ್ ಅವರ ನಿಜ ಹೆಸರು ನವೀನ್ ಕುಮಾರ್ ಅಲ್ಲ, ಅವರನ್ನು ನಾವು ಪ್ರೀತಿಯಿಂದ ಯಶವಂತ್ ಅಂತ ಕರೆಯುತ್ತಿದ್ದೆವು. ಆದರೆ, ಜನವರಿಯಲ್ಲಿ ಹುಟ್ಟಿದ್ದಾನೆ ಎಂಬ ಕಾರಣಕ್ಕೆ ಆಮೇಲೆ ನವೀನ್ ಅಂತ ಇಟ್ಟಿದ್ದೇವೆ. ಆದರೆ, ಸಿನಿಮಾಕ್ಕೆ ಬಂದ ಮೇಲೆ ಮತ್ತೆ ಆತನ ಮೊದಲ ಹೆಸರು ಯಶವಂತ್ ಎಂಬುದೇ ಯಶ್ ಆಗಿ ಮತ್ತೆ ಬಂತು' ಎಂದು ಹೇಳಿದ್ದಾರೆ. ಈ ಮೂಲಕ, ಇಷ್ಟು ದಿನವೂ ಇಡೀ ಜಗತ್ತಿಗೆ ಗೊತ್ತಿಲ್ಲದ ಯಶ್ ನಿಜವಾದ ಹೆಸರು, ಅಂದರೆ ಹುಟ್ಟಿದಾಗ ಇಟ್ಟ ಹೆಸರು 'ಯಶವಂತ್' ಅಥವಾ 'ಯಶ್&zwnj;ವಂತ್' ಎಂಬುದು ಗೊತ್ತಿರಲಿಲ್ಲ. ಅದೀಗ ಯಶ್ ಅಮ್ಮ ಪುಷ್ಪಾ ಅವರ ಮೂಲಕ ಜಗಜ್ಜಾಹೀರಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹೌದು, ಯಶ್ ನಾಟಕ, ಧಾರಾವಾಹಿಗಳಲ್ಲಿ ನಟಿಸುವಾಗ ಅವರ ಹೆಸರು ಇದ್ದಿದ್ದು ನವೀನ್ ಅಂತಲೇ ಅಗಿತ್ತು. ಆದರೆ, ಯಾವಾಗ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿಸಿದರೋ ಆಗ ಅವರ ಹೆಸರನ್ನು 'ಯಶ್' ಎಂದು ಬದಲಾಯಿಸಲಾಯಿತು. ಈ ಸಂಗತಿ ಹೆಚ್ಚಿನ ಎಲ್ಲರಿಗೂ ಗೊತ್ತಿದೆ. ಆದರೆ, ಈಗ ಇರುವ ಹೆಸರು ಯಶ್ ಈ ಸೂಪರ್ ಸ್ಟಾರ್ ನಟನ ಮೊಟ್ಟಮೊದಲ ಹೆಸರಿನ ಶಾರ್ಟ್ ರೂಪ ಎಂಬುದು ಸತ್ಯ ಸಂಗತಿ. ಅದೆಷ್ಟೋ ಜನರಿಗೆ ಗೊತ್ತಿಲ್ಲದ ಈ ಸತ್ಯ ಇಂದು ವೈರಲ್ ಆಗುತ್ತಿದೆ.&lt;/p&gt;&lt;h3&gt;'ಟಾಕ್ಸಿಕ್' ಹಾಗೂ 'ರಾಮಾಯಣ' ಬಿಡುಗಡೆ!&lt;/h3&gt;&lt;p&gt;ಅಂದಹಾಗೆ, ನಟ ಯಶ್ ಅವರ ಮುಂಬರುವ ಸಿನಿಮಾಗಳಾದ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಇದೇ ವರ್ಷ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ. ರಾಮಾಯಣ ಚಿತ್ರವು 'ಟಾಕ್ಸಿಕ್&zwnj;'ಗಿಂತಲೂ ಮೊದಲೇ ಚಿತ್ರಮಂದಿರಗಳಿಗೆ ಬರಲಿದೆ ಎಂಬ ಸಂಗತಿ ಈಗಾಗಲೇ ಸುದ್ದಿಯಾಗಿದೆ. ಯಶ್ ನಟನೆ ಮಾತ್ರವಲ್ಲ, ನಿರ್ಮಾಣದಲ್ಲೂ ಪಾಲುದಾರರಾಗಿರುವ 'ರಾಮಾಯಣ' ಚಿತ್ರವು ದೀಪಾವಳಿ ಸಮಯಕ್ಕೆ ತೆರೆಗೆ ಬರಲಿದ್ದು, ಟಾಕ್ಸಿಕ್ ಚಿತ್ರವು ಡಿಸೆಂಬರ್&zwnj;ನಲ್ಲಿ ತೆರೆಯ ಮೇಲೆ ದರ್ಶನ ನೀಡಲಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಟಾಕ್ಸಿಕ್ ಚಿತ್ರವು ಹಾಲಿವುಡ್ ರೇಂಜ್&zwnj; ಮೇಕಿಂಗ್ ಮೂಲಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕೆಜಿಎಫ್ (KGF) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ನಟ ಯಶ್ ಅವರು 'ಟಾಕ್ಸಿಕ್' ಮೂಲಕ 'ಪ್ಯಾನ್ ವರ್ಲ್ಡ್' ಸ್ಟಾರ್ ಆಗಿ ಕನ್ನಡನಾಡನ್ನು ಬೆಳಗಿಸಲಿದ್ದಾರೆ. ಈ ಮೂಲಕ ಕನ್ನಡಿಗರ ಹೆಸರು ವಿಶ್ವಮಟ್ಟದಲ್ಲಿ ರಾರಾಜಿಸಲಿದ್ದು, ಇದು ಟಾಕ್ಸಿಕ್ ಚಿತ್ರದ ಮೂಲಕ ಕನ್ನಡನಾಡಿಗೆ ಸಿಗಲಿರುವ ಮತ್ತೊಮದು 'ಬೋನಸ್' ಎನ್ನಬಹುದು.&lt;/p&gt;&lt;p&gt;&lt;img&gt;&lt;/p&gt;&lt;p&gt;ಒಟ್ಟಿನಲ್ಲಿ, ಯಶ್ ಆಗಿರುವ ಯಶ್&zwnj;ವಂತ್ ಅವರ ಮುಂಬರುವ ಸಿನಿಮಾಗಳಿಗಾಗಿ ಇಡೀ ಜಗತ್ತು ಕಾಯುತ್ತಿದೆ. ಆ ರೇಂಜ್&zwnj;ಗೆ ನಟ ಯಶ್ ಇಂದು ಬೆಳೆದುನಿಂತಿದ್ದಾರೆ. ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕಗಳಿಗಾಗಿ ಇಡೀ ಜಗತ್ತು ಈಗ ಕಾಯುತ್ತಿದೆ. ಎಂದು ಬರಲಿವೆ ಯಶ್ ಸಿನಿಮಾಗಳು? ಸ್ವಲ್ಪ ಕಾಯಬೇಕಷ್ಟೇ, ತೆರೆಯ ಮೇಲಿನ ಅಬ್ಬರಕ್ಕೆ ಇನ್ನೇನು ತುಂಬಾ ಕಾಲ ಕಾಯಬೇಕಿಲ್ಲ ಬಿಡಿ!&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Cinistore (@cinistorekannada)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/yash-mother-pushpa-arunkumar-recently-shared-a-secret-that-rocking-star-real-name-is-yashwanth-and-not-naveen/articleshow-9083a4f"/>
        </item>
        <item>
            <title><![CDATA[NEET ಬಗ್ಗೆ ದನಿಯೆತ್ತಿದ್ದಕ್ಕೆ‌, ಪಾಕಿಸ್ತಾನಿ ಪತ್ರಕರ್ತೆ ಜೊತೆ ಮಾತನಾಡಿದ್ದಕ್ಕೆ ರಿಯಾಲಿಟಿ ಶೋನಿಂದಲೇ ಜಡ್ಜ್‌ ಔಟ್?]]></title>
            <link>https://kannada.asianetnews.com/gallery/entertainment/will-judge-music-director-vishal-dadlani-out-from-indian-idol-season-16-show-bmnvg02</link>
            <guid isPermaLink="true">https://kannada.asianetnews.com/gallery/entertainment/will-judge-music-director-vishal-dadlani-out-from-indian-idol-season-16-show-bmnvg02</guid>
            <pubDate>Mon, 25 May 2026 12:06:30 +0530</pubDate>
            <description><![CDATA[&lt;p&gt;NEET ಪರೀಕ್ಷೆ ಪೇಪರ್&zwnj; ಲೀಕ್&zwnj; ಆಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರೋದು ವ್ಯರ್ಥವಾಗಿದೆ. ಹೀಗಿರುವಾಗ ಸಂಗೀತ ನಿರ್ದೇಶಕ, ಗಾಯಕ ವಿಶಾಲ್ ದದ್ಲಾನಿ ಅವರು ಆನ್&zwnj;ಲೈನ್&zwnj;ನಲ್ಲಿ ಈ ಬಗ್ಗ ಆಕ್ರೋಶ ಹೊರಹಾಕಿದ್ದರು. ಈಗ ಅವರು &lsquo;ಇಂಡಿಯನ್&zwnj; ಐಡಲ್&rsquo;&zwnj; ಶೋನಿಂದ ಹೊರಬರುತ್ತಾರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jm3rcvnz97wrgb7v42bs8jhs,imgname-Screenshot-2025-02-15-082238-1739588005567.png" type="image/jpeg" height="390" width="690"/>
            <content:encoded><![CDATA[&lt;p&gt;NEET ಪರೀಕ್ಷೆ ಪೇಪರ್&zwnj; ಲೀಕ್&zwnj; ಆಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರೋದು ವ್ಯರ್ಥವಾಗಿದೆ. ಹೀಗಿರುವಾಗ ಸಂಗೀತ ನಿರ್ದೇಶಕ, ಗಾಯಕ ವಿಶಾಲ್ ದದ್ಲಾನಿ ಅವರು ಆನ್&zwnj;ಲೈನ್&zwnj;ನಲ್ಲಿ ಈ ಬಗ್ಗ ಆಕ್ರೋಶ ಹೊರಹಾಕಿದ್ದರು. ಈಗ ಅವರು &lsquo;ಇಂಡಿಯನ್&zwnj; ಐಡಲ್&rsquo;&zwnj; ಶೋನಿಂದ ಹೊರಬರುತ್ತಾರಾ?&lt;/p&gt;&lt;img&gt;&lt;p&gt;ವಿಶಾಲ್ ದದ್ಲಾನಿ ಅವರು ಪಾಕಿಸ್ತಾನಿ ಭಯೋತ್ಪಾದಕರ ಜೊತೆ ಕೈಜೋಡಿಸುವ ಮೂಲಕ ನಮ್ಮ ಸಾರ್ವಭೌಮತ್ವ, ರಾಷ್ಟ್ರವಾಗಿ ಬದುಕುವ ನಮ್ಮ ಹಕ್ಕನ್ನು ಪ್ರಶ್ನಿಸಿದ್ದಾರೆ. ಇದನ್ನು ಕೆಲವರು ಸ್ಪಷ್ಟವಾಗಿ ಭಯೋತ್ಪಾದನಾ ಕೃತ್ಯ ಎಂದು ಹೇಳಿದ್ದಾರೆ. ದಯವಿಟ್ಟು ಅವರ ಮೇಲೆ ಯುಎಪಿಎ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿ ಎಂದು ಕೆಲವರು ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಲಂಡನ್&zwnj;ನಲ್ಲಿ ವಿಶಾಲ್ ದದ್ಲಾನಿ ಅವರು ಪಾಕಿಸ್ತಾನಿ ಪತ್ರಕರ್ತೆ ಸಫೀನಾ ಖಾನ್ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್&zwnj; ಆಗಿತ್ತು. ಸಫೀನಾ ಖಾನ್ ಅವರ ಭಾರತ ವಿರೋಧಿ ರಾಜಕೀಯ ದೃಷ್ಟಿಕೋನಗಳಲ್ಲಿ ಮಾತನಾಡುತ್ತಾರೆ. ಹೀಗಾಗಿ ಈ ವಿಡಿಯೋ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗ್ತಿದೆ.&lt;/p&gt;&lt;img&gt;&lt;p&gt;ಈ ಸಂವಾದವು ಸಾರ್ವಜನಿಕವಾಗಿ ನಡೆದಿದ್ದು, ಇವರಿಬ್ಬರು ಅನೌಪಚಾರಿಕವಾಗಿ ಮಾತನಾಡಿದ್ದಾರೆ. ಈ ಬಗ್ಗೆ ವಿಶಾಲ್&zwnj; ದದ್ಲಾನಿ ಮಾತನಾಡಿದ್ದಾರೆ. ಇಂಡಿಯನ್&zwnj; ಐಡಲ್&zwnj; ಶೋನಲ್ಲಿ ವಿಶಾಲ್&zwnj; ದದ್ಲಾನಿ ಅವರು ಕೂಡ ಜಡ್ಜ್&zwnj; ಆಗಿದ್ದಾರೆ. ಪಾಕಿಸ್ತಾನಿ ಪತ್ರಕರ್ತೆ ಜೊತೆಗೆ ಮಾತನಾಡಿದರು, NEET ವಿರುದ್ಧ ಮಾತನಾಡಿದರು ಎಂದು ಅವರನ್ನು ಶೋನಿಂದ ಕೈಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/entertainment/will-judge-music-director-vishal-dadlani-out-from-indian-idol-season-16-show-bmnvg02"/>
        </item>
        <item>
            <title><![CDATA[ನಾನು ದೇವಸ್ಥಾನಕ್ಕೆ ಹೋಗೋದು ದೇವರನ್ನು ನೋಡೋಕೂ ಅಲ್ಲ; ಪ್ರಾರ್ಥಿಸೋಕೂ ಅಲ್ಲ: ISRO ಮಾಜಿ ಅಧ್ಯಕ್ಷ ಸೋಮನಾಥ್]]></title>
            <link>https://kannada.asianetnews.com/india-news/isro-ex-chairman-somanath-on-belief-god-temple/articleshow-cw4gc6r</link>
            <guid isPermaLink="true">https://kannada.asianetnews.com/india-news/isro-ex-chairman-somanath-on-belief-god-temple/articleshow-cw4gc6r</guid>
            <pubDate>Mon, 25 May 2026 10:49:19 +0530</pubDate>
            <description><![CDATA[&lt;p&gt;ISRO Chairman S Somanath full name: ಇಸ್ರೋದ ಮಾಜಿ ಅಧ್ಯಕ್ಷ ಸೋಮನಾಥ್&zwnj; ಅವರು ದೇವರು ಎಂದರೇನು? ದೇವರು ಹುಟ್ಟಿನ ಬಗ್ಗೆ, ದೇವರನ್ನು ಅವರು ನಂಬುತ್ತಾರಾ? ಇಲ್ಲವಾ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kses0ft13fyj7rba22j6ykyz,imgname-new-project---2026-05-25t102858.392-1779686195009.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಸ್ರೋದ ( ISRO ) ಮಾಜಿ ಅಧ್ಯಕ್ಷ ಸೋಮನಾಥ್&zwnj; ಅವರು ದೇವರ ಬಗ್ಗೆ ಸಂದರ್ಶನ ಕೊಟ್ಟಿರೋದು ಈಗ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗ್ತಿದೆ. ಹಾಗಾದರೆ ಅವರು ಹೇಳಿದ್ದೇನು?&lt;/p&gt;&lt;h2&gt;ಸೋಮನಾಥ್&zwnj; ಏನಂದ್ರು?&lt;/h2&gt;&lt;p&gt;ನಾನು ದೇವಸ್ಥಾನಗಳಿಗೆ ಹೋಗುವ ವ್ಯಕ್ತಿ. ದೇವಸ್ಥಾನಗಳಿಗೆ ಜನರು ಹಲವಾರು ಕಾರಣಗಳಿಂದ ಹೋಗುತ್ತಾರೆ. ದೇವಸ್ಥಾನ ಎನ್ನುವುದು ಕೇವಲ ಪೂಜೆಯ ಸ್ಥಳವಲ್ಲ; ಅದು ನಮ್ಮ ಪೀಳಿಗೆಯ ಸಂಸ್ಕೃತಿಯ ಉಳಿವು, ನಮ್ಮ ಪರಂಪರೆಯ ಒಂದು ಭಾಗ. ಹೊಸ ದೇವಸ್ಥಾನಗಳಾಗಲಿ ಹಳೆಯ ದೇವಸ್ಥಾನಗಳಾಗಲಿ &mdash; ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ.&lt;/p&gt;&lt;h2&gt;ಪ್ರಾರ್ಥನೆ ಮಾಡೋಕೆ ಅಲ್ಲ&lt;/h2&gt;&lt;p&gt;ನಾನು ದೇವಸ್ಥಾನಕ್ಕೆ ಹೋಗುವುದು ದೇವರನ್ನು ನೋಡಲು ಅಥವಾ ಬೇಡಿಕೊಳ್ಳಲು ಅಲ್ಲ. ಅಲ್ಲಿ ಪ್ರಾರ್ಥನೆ ಮಾಡಿದರೆ ಏನಾದರೂ ಸಿಗುತ್ತದೆ ಎಂಬ ನಂಬಿಕೆ ನನಗಿಲ್ಲ. ನಾನು ದೇವಸ್ಥಾನಕ್ಕೆ ಹೋಗುವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ, ಆ ಅನುಭವವನ್ನು ಅರ್ಥಮಾಡಿಕೊಳ್ಳಲು.&lt;/p&gt;&lt;p&gt;ನಾನು ನನ್ನನ್ನು &ldquo;ಭಕ್ತ&rdquo; ಎಂದು ಕರೆಯುವುದಿಲ್ಲ. ನಾನು ಆತ್ಮಶೋಧನೆಯ ಒಂದು ಪ್ರಕ್ರಿಯೆಯಲ್ಲಿ ಇರುವ ವ್ಯಕ್ತಿ. ನಾನು ಹುಡುಕುವವನು &mdash; ಪ್ರಶ್ನೆಗಳನ್ನು ಕೇಳುತ್ತಾ, ಅರಿತುಕೊಳ್ಳಲು ಪ್ರಯತ್ನಿಸುತ್ತಿರುವವನು. ಬಹಳ ಓದಿದ್ದೇನೆ, ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಆದರೂ ಇನ್ನೂ ಸಂಪೂರ್ಣ ಉತ್ತರಗಳು ಸಿಕ್ಕಿಲ್ಲ. ನನ್ನ ಬಳಿ ಇನ್ನೂ ಅನೇಕ ಪ್ರಶ್ನೆಗಳಿವೆ, ಆದರೆ ಉತ್ತರಗಳಿಲ್ಲ.&lt;/p&gt;&lt;p&gt;ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ!&lt;/p&gt;&lt;p&gt;ದೇವರು ಎಂದರೇನು? ಜೀವನದ ಅರ್ಥ ಏನು? ಇಂತಹ ಪ್ರಶ್ನೆಗಳಿಗೆ ಸುಲಭ ಉತ್ತರಗಳಿಲ್ಲ. ವಿಜ್ಞಾನಕ್ಕೂ ತನ್ನ ಮಿತಿಗಳಿವೆ. ನಾನು ವಿಜ್ಞಾನಿ ಅಲ್ಲ, ಆದರೆ ಸ್ವಲ್ಪ ಮಟ್ಟಿಗೆ ಓದಿದ್ದೇನೆ. ಆ ಓದು ನನಗೆ ಒಂದು ವಿಷಯ ಕಲಿಸಿತು. ನಾವು ತಿಳಿದಿರುವುದಕ್ಕಿಂತ ತಿಳಿಯದಿರುವುದು ತುಂಬಾ ಹೆಚ್ಚು. ಒಂದು ಜೀವನದಲ್ಲಿ ಈ ಎಲ್ಲ ಪ್ರಶ್ನೆಗಳ ಉತ್ತರ ಸಿಗುತ್ತವೆಯೇ ಎಂಬ ಖಾತರಿ ನನಗಿಲ್ಲ. ಆದರೂ ಹುಡುಕಾಟ ನಿಲ್ಲಬಾರದು.&lt;/p&gt;&lt;h2&gt;ಯಾಕೆ ದೇವಸ್ಥಾನಕ್ಕೆ ಹೋಗುತ್ತೀರಿ?&lt;/h2&gt;&lt;p&gt;&ldquo;ನೀವು ವಿಜ್ಞಾನವನ್ನು ನಂಬುತ್ತಿದ್ದರೆ ದೇವಸ್ಥಾನಕ್ಕೆ ಯಾಕೆ ಹೋಗುತ್ತೀರಿ?&rdquo; ಕೆಲವರು ಕೇಳಬಹುದು. ನನ್ನ ಅನಿಸಿಕೆಯಲ್ಲಿ ಜೀವನವನ್ನು ಕೇವಲ ವೈಜ್ಞಾನಿಕ ಚಿಂತನೆಯ ಮೂಲಕವೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ವಿಜ್ಞಾನವೂ ಬೇಕು, ಆತ್ಮಶೋಧನೆಯೂ ಬೇಕು. ಓದು, ವಿಚಾರ, ವಿಜ್ಞಾನ &mdash; ಇವೆಲ್ಲ ಜ್ಞಾನ ಕೊಡುತ್ತವೆ. ಆದರೆ ಸ್ವತಃ ನಮ್ಮೊಳಗಿನ ಹುಡುಕಾಟವೂ ಅಷ್ಟೇ ಮುಖ್ಯ. ಬಹಳ ಬಾರಿ ಉತ್ತರಗಳು ಪುಸ್ತಕಗಳಲ್ಲಿ ಇಲ್ಲ, ದೇವಸ್ಥಾನಗಳಲ್ಲಿ ಇಲ್ಲ, ಸ್ವಾಮೀಜಿಗಳ ಬಳಿಯೂ ಇಲ್ಲ. ಅವನ್ನು ನಾವು ನಮ್ಮೊಳಗೇ ಹುಡುಕಬೇಕು.&lt;/p&gt;&lt;h2&gt;ಪೂಜೆ ಮಾಡುತ್ತಿದ್ದರೆ ತಪ್ಪು ಎಂದು ಹೇಳಲ್ಲ&lt;/h2&gt;&lt;p&gt;ಜನರು ಪೂಜೆ ಮಾಡುತ್ತಾರೆ. ದೇವಸ್ಥಾನಕ್ಕೆ ಹೋಗುತ್ತಾರೆ. ರಾಕೆಟ್ ಲಾಂಚ್ ಮಾಡುವ ಮೊದಲು ನಿಂಬೆಕಾಯಿ, ಮೆಣಸಿನಕಾಯಿ ಕಟ್ಟುತ್ತಾರೆ. ಇದನ್ನು ನೋಡಿ ಹಾಸ್ಯ ಮಾಡಬೇಕೇ? ನನ್ನ ಅಭಿಪ್ರಾಯದಲ್ಲಿ ಬೇಡ. ಅದು ಅವರ ಸಂಸ್ಕಾರ, ಅವರ ಮನೋಭಾವ, ಅವರ ಬೆಳೆವಣಿಗೆಯ ಭಾಗ.&lt;/p&gt;&lt;p&gt;ಯಾರಾದರೂ ಪೂಜೆ ಮಾಡುತ್ತಿದ್ದರೆ, &ldquo;ಇದು ತಪ್ಪು&rdquo; ಎಂದು ಹೇಳಬೇಕಾದ ಅಗತ್ಯ ನನಗಿಲ್ಲ. ಅದು ಸಮಾಜದ ಸೌಹಾರ್ದತೆಗೆ ಅಥವಾ ಮತ್ತೊಬ್ಬರ ಜೀವನಕ್ಕೆ ಹಾನಿ ಮಾಡದವರೆಗೆ, ಅದು ಅವರ ವೈಯಕ್ತಿಕ ಸ್ವಾತಂತ್ರ್ಯ.&lt;/p&gt;&lt;p&gt;ನಾವು ಸಮಾಜದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬರಿಗೂ ತಮ್ಮದೇ ನಂಬಿಕೆ, ಅನುಭವ, ಮನಸ್ಥಿತಿ ಇರುತ್ತದೆ. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ವಿಜ್ಞಾನ ಮತ್ತು ನಂಬಿಕೆ ಎರಡನ್ನೂ ಒಂದೇ ರೀತಿಯಲ್ಲಿ ಅಳೆಯಲು ಸಾಧ್ಯವಿಲ್ಲ. ವಿಜ್ಞಾನಕ್ಕೆ ಸಾಕ್ಷಿ ಬೇಕು. ನಂಬಿಕೆಗೆ ಸಾಕ್ಷಿ ಬೇಕೆಂಬುದು ಅವಶ್ಯಕವಲ್ಲ. ನಾನು ಯಾವುದನ್ನೂ ಕಣ್ಣುಮುಚ್ಚಿ ನಂಬುವುದಿಲ್ಲ. ಆದರೆ &ldquo;ಇಲ್ಲ&rdquo; ಎಂದು ಕೂಡ ತೀರ್ಮಾನಿಸಲು ಸಾಧ್ಯವಿಲ್ಲ. ನನಗೆ ಸತ್ಯವಾಗಿ ಹೇಳಬೇಕಾದರೆ &ldquo;ನನಗೆ ತಿಳಿದಿಲ್ಲ.&rdquo; &ldquo;ತಿಳಿದಿಲ್ಲ&rdquo; ಎಂದು ಹೇಳಲು ಬಹಳ ವಿನಯ ಬೇಕು.&lt;/p&gt;&lt;p&gt;ಜ್ಯೋತಿಷ್ಯ, ವಾಸ್ತು, ಹಸ್ತರೇಖೆ &mdash; ಇವು ಸತ್ಯವೇ ತಪ್ಪೇ ಎಂಬುದಕ್ಕೂ ನಾನು ಖಚಿತ ಉತ್ತರ ಕೊಡಲಾರೆ. &ldquo;ತಪ್ಪು&rdquo; ಎಂದು ಹೇಳುವುದಕ್ಕಿಂತ &ldquo;ನನಗೆ ಗೊತ್ತಿಲ್ಲ&rdquo; ಎಂದು ಹೇಳುವುದು ಹೆಚ್ಚು ಪ್ರಾಮಾಣಿಕ.&lt;/p&gt;&lt;p&gt;ಆಯುರ್ವೇದ, ಹೋಮಿಯೋಪತಿ ಇತ್ಯಾದಿಗಳ ಬಗ್ಗೆ ಕೂಡ ಇದೇ ಅನಿಸಿಕೆ. ಅವು ವೈಜ್ಞಾನಿಕವಾಗಿ ಸಂಪೂರ್ಣ ಸಾಬೀತಾಗಿಲ್ಲ ಎಂದು ಕೆಲವರು ಹೇಳಬಹುದು. ಆದರೆ ಅನೇಕ ಜನರಿಗೆ ಅವು ಕಾರ್ಯನಿರ್ವಹಿಸುತ್ತವೆ ಎಂಬ ಅನುಭವವೂ ಇದೆ. ಅದು ವೈಜ್ಞಾನಿಕ ಸಾಕ್ಷಿಯೇ ಅಲ್ಲದಿರಬಹುದು, ಆದರೆ ಅನುಭವವನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ.&lt;/p&gt;&lt;p&gt;ಕೊನೆಯಲ್ಲಿ, ಪ್ರತಿಯೊಬ್ಬರಿಗೂ ತಮ್ಮದೇ ಆಯ್ಕೆ ಮಾಡುವ ಸ್ವಾತಂತ್ರ್ಯ ಇರಬೇಕು. ಯಾರ ಮೇಲೂ ನಂಬಿಕೆ ಅಥವಾ ಅನಂಬಿಕೆಯನ್ನು ಬಲವಂತವಾಗಿ ಹೇರಬಾರದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/india-news/isro-ex-chairman-somanath-on-belief-god-temple/articleshow-cw4gc6r"/>
        </item>
        <item>
            <title><![CDATA[ಮದುವೆಯಾಗದೆ ತಾಯಿಯಾದ ಜಾರ್ಜಿಯಾ ಮೆಲೋನಿ,  ಆಕೆಯ ಗೆಳೆಯ ಯಾರು ಗೊತ್ತಾ?]]></title>
            <link>https://kannada.asianetnews.com/gallery/world-news/giorgia-meloni-s-personal-life-10-year-relationship-with-andrea-giambruno-and-breakup-explained-ekxp8cm</link>
            <guid isPermaLink="true">https://kannada.asianetnews.com/gallery/world-news/giorgia-meloni-s-personal-life-10-year-relationship-with-andrea-giambruno-and-breakup-explained-ekxp8cm</guid>
            <pubDate>Sun, 24 May 2026 13:25:00 +0530</pubDate>
            <description><![CDATA[&lt;p&gt;ಪ್ರಧಾನಿ ಮೋದಿ ಭೇಟಿ ಬಳಿಕ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಾಗುತ್ತಿದೆ. ಆಂಡ್ರಿಯಾ ಜಿಯಾಂಬ್ರುನೊ ಜೊತೆಗಿನ 10 ವರ್ಷದ ಸಂಬಂಧ, ಪುತ್ರಿಯ ಜನನ ಮತ್ತು 2023ರಲ್ಲಿ ನಡೆದ ಬ್ರೇಕಪ್ ಹಿನ್ನೆಲೆಯ ಬಗ್ಗೆ ಕುತೂಹಲಕರ ವಿವರ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kscfd74ns06mbvsfwbhwyrsk,imgname-----------------------2026-05-24t123304.480-1779609017493.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಧಾನಿ ಮೋದಿ ಭೇಟಿ ಬಳಿಕ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಾಗುತ್ತಿದೆ. ಆಂಡ್ರಿಯಾ ಜಿಯಾಂಬ್ರುನೊ ಜೊತೆಗಿನ 10 ವರ್ಷದ ಸಂಬಂಧ, ಪುತ್ರಿಯ ಜನನ ಮತ್ತು 2023ರಲ್ಲಿ ನಡೆದ ಬ್ರೇಕಪ್ ಹಿನ್ನೆಲೆಯ ಬಗ್ಗೆ ಕುತೂಹಲಕರ ವಿವರ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪ್ರಧಾನಿ ನರೇಂದ್ರ ಮೋದಿ(PM Modi) ಅವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಇತ್ತೀಚೆಗೆ ಇಟಲಿಗೆ ನೀಡಿದ್ದರು. ಅವರನ್ನು ರೋಮ್&zwnj;ನಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ(Georgia Meloni) ಆತ್ಮೀಯವಾಗಿ ಸ್ವಾಗತಿಸಿದ್ದರು. ಈ ಭೇಟಿಯ ಸಮಯದಲ್ಲಿ ಮೆಲೋನಿ ಅವರು ಪ್ರಧಾನಿ ಮೋದಿ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಅವರನ್ನು 'ನನ್ನ ಸ್ನೇಹಿತ' ಎಂದು ಬಣ್ಣಿಸಿದ್ದರು. ಈ ಬೇಟಿ ವೇಳೆ 'ಮೆಲೋಡಿ' ಚಾಕೊಲೆಟ್ ಫೋಟೋ ಜಗತ್ತಿನಾದ್ಯಂತ ವೈರಲ್ ಆಯ್ತು. ಪ್ರಧಾನಿ ಮೋದಿ ಇಟಲಿಗೆ ಭೇಟಿ ಬೆನ್ನಲ್ಲೇ ಇದೀಗ ಜಾರ್ಜಿಯಾ ಮೆಲೋನಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅನೇಕರು ಕೂತುಹಲದಿಂದ ಕೆದಕಲು ಶುರು ಮಾಡಿದ್ದಾರೆ. ಮದುವೆಯಾಗದೆ ತಾಯಿಯಾದಳಾ ಮೆಲೋನಿ? ಜಾರ್ಜಿಯಾ ಮೆಲೋನಿ ಅವರ ಗೆಳೆಯ ಯಾರು? ಕುತೂಹಲಕಾರಿ ವಿಚಾರ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಜಾರ್ಜಿಯಾ ಮೆಲೋನಿ ಅವರ ದೀರ್ಘಕಾಲದ ಸಂಗಾತಿಯಾಗಿದ್ದ, ಇಟಾಲಿಯನ್ ಪತ್ರಕರ್ತ ಮತ್ತು ಟಿವಿ ನಿರೂಪಕ ಆಂಡ್ರಿಯಾ ಜಿಯಾಂಬ್ರುನೊ. ಇಬ್ಬರೂ ಮೊದಲ ಬಾರಿ 2014ರಲ್ಲಿ ಟಿವಿ ಸ್ಟುಡಿಯೋದಲ್ಲಿ ಭೇಟಿಯಾದರು. ಅದೇ ಸ್ಟುಡಿಯೋಗೆ ಅತಿಥಿಯಾಗಿ ಬಂದಿದ್ದ ಮೆಲೋನಿ ಮತ್ತು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಜಿಯಾಂಬ್ರುನೊ ನಡುವಿನ ಪರಿಚಯ ಕ್ರಮೇಣ ಗಾಢ ಸಂಬಂಧವಾಗಿ ಬೆಳೆಯಿತು.&lt;/p&gt;&lt;img&gt;&lt;p&gt;ಇಬ್ಬರೂ ಅಧಿಕೃತವಾಗಿ ಮದುವೆಯಾಗಿರಲಿಲ್ಲ. ಆದರೂ ಸುಮಾರು 10 ವರ್ಷಗಳ ಕಾಲ ಒಟ್ಟಿಗೆ ಲಿವಿಂಗ್ ಟುಗೆದರ್ ಇದ್ದರು. ಈ ಅವಧಿಯಲ್ಲಿ ಅವರ ಸಂಬಂಧವನ್ನು ಇಟಲಿಯ ರಾಜಕೀಯ ಮತ್ತು ಮಾಧ್ಯಮ ವಲಯಗಳು ಸದಾ ಗಮನಿಸುತ್ತಿದ್ದವು.&lt;/p&gt;&lt;img&gt;&lt;p&gt;ಹತ್ತು ವರ್ಷಗಳ ಒಟ್ಟಿಗೆ ಇದ್ದ ಪರಿಣಾಮವಾಗಿ 2016ರಲ್ಲಿ ಈ ದಂಪತಿಗೆ ಗಿನೆವ್ರಾ ಎಂಬ ಪುತ್ರಿ ಜನಿಸಿದರು. ಪ್ರಧಾನಿಯಾಗಿದ್ದರೂ ಕುಟುಂಬ ಜೀವನ ಮತ್ತು ತಾಯ್ತನವನ್ನು ಹೇಗೆ ಬ್ಯಾಲೆನ್ಸ್ ಮಾಡಿದರು ಎಂಬ ಬಗ್ಗೆ ಮೆಲೋನಿ ಹಲವಾರು ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದರು.&lt;/p&gt;&lt;img&gt;&lt;p&gt;ಅಕ್ಟೋಬರ್ 2023ರಲ್ಲಿ ಇಬ್ಬರೂ ಬೇರ್ಪಟ್ಟಿದ್ದೇವೆ ಎಂದು ಮೆಲೋನಿ ಸ್ವತಃ ಘೋಷಿಸಿದರು. ಜಿಯಾಂಬ್ರುನೊ ಅವರ ಆಫ್-ಏರ್ ವಿಡಿಯೋ ಮತ್ತು ಆಡಿಯೋ ಕ್ಲಿಪ್&zwnj;ಗಳು ಲೀಕ್ ಆದ ನಂತರ ಈ ನಿರ್ಧಾರ ಕೈಗೊಳ್ಳಲಾಯಿತು ಎಂಬುದು ತಿಳಿದುಬಂದಿದೆ. ಈ ಕ್ಲಿಪ್&zwnj;ಗಳಲ್ಲಿ ಸಹೋದ್ಯೋಗಿಗಳ ಜೊತೆಗೆ ಅನುಚಿತವಾಗಿ ವರ್ತಿಸಿರುವುದು ಇಬ್ಬರ ನಡುವೆ ನಂಬಿಕೆ ಮುರಿದುಬೀಳಲು ಕಾರಣವಾಯ್ತು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಸುಮಾರು ಒಂದು ದಶಕದ ದೀರ್ಘ ಸಂಬಂಧದ ನಂತರ ಇಬ್ಬರೂ ತಮ್ಮ ಸಂಬಂಧಗಳನ್ನ ಬೇರ್ಪಡಿಸಿಕೊಂಡರು. ಜಾರ್ಜಿಯಾ ಮೆಲೋನಿ ತಮ್ಮ ಸ್ಥಾನಮಾನ ಮತ್ತು ಸಾರ್ವಜನಿಕ ಘನತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ.&lt;/p&gt;]]></content:encoded>
            <category>world-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/world-news/giorgia-meloni-s-personal-life-10-year-relationship-with-andrea-giambruno-and-breakup-explained-ekxp8cm"/>
        </item>
        <item>
            <title><![CDATA[Aishwarya Rai: ಹೊಸಬರಿಗೆ 'ಗೋಲ್ಡನ್ ಸಲಹೆ' ನೀಡಿದ ಐಶ್ವರ್ಯಾ ರೈ; ವಿಶ್ವಸುಂದರಿ ಏನ್ ಹೇಳಿದ್ರು ನೋಡಿ!]]></title>
            <link>https://kannada.asianetnews.com/cine-world/aishwarya-rai-dishes-advice-for-newcomers-at-cannes-2026-says-too-much-is-created-today-be-your-own-best-friend/articleshow-ey0xzle</link>
            <guid isPermaLink="true">https://kannada.asianetnews.com/cine-world/aishwarya-rai-dishes-advice-for-newcomers-at-cannes-2026-says-too-much-is-created-today-be-your-own-best-friend/articleshow-ey0xzle</guid>
            <pubDate>Sun, 24 May 2026 17:59:41 +0530</pubDate>
            <description><![CDATA[&lt;p&gt;ಕೇನ್ಸ್ ವೇದಿಕೆಯಲ್ಲಿ ತನ್ನ ಸೌಂದರ್ಯದ ಜೊತೆಗೆ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ ಐಶ್ವರ್ಯಾ ರೈ ಬಚ್ಚನ್, ತಾವು ಯಾಕೆ ಬಾಲಿವುಡ್&zwnj;ನ 'ಕ್ವೀನ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಐಶ್ ಅವರ ಈ ಮಾತುಗಳು ಕೇವಲ ಸಿನಿಮಾ ಮಂದಿಗಷ್ಟೇ ಅಲ್ಲ, ಜೀವನದಲ್ಲಿ ಸಾಧನೆ ಮಾಡಬಯಸುವ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcb3z41jmhmnabx4z0wdgkyn,imgname-aishwarya-rai-bachchan-1765604823090.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೇನ್ಸ್ ವೇದಿಕೆಯಲ್ಲಿ ಐಶ್ವರ್ಯಾ ರೈ ಮ್ಯಾಜಿಕ್! ಹೊಸಬರಿಗೆ 'ವಿಶ್ವಸುಂದರಿ' ನೀಡಿದ ಆ 'ಗೋಲ್ಡನ್ ಅಡ್ವೈಸ್' ಏನು ಗೊತ್ತಾ?&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನ ಎವರ್&zwnj;ಗ್ರೀನ್ ಬ್ಯೂಟಿ, ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರ ಹೆಸರಿಲ್ಲದೆ ಕೇನ್ಸ್ ಚಿತ್ರೋತ್ಸವ (Cannes Film Festival) ಪೂರ್ಣಗೊಳ್ಳುವುದೇ ಇಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಅಭಿಮಾನಿಗಳು ಐಶ್ವರ್ಯಾ ಅವರ ರೆಡ್ ಕಾರ್ಪೆಟ್ ಎಂಟ್ರಿಗಾಗಿ ಕಾದು ಕುಳಿತಿದ್ದರು. ಕೊನೆಗೂ ಐಶ್ವರ್ಯಾ ರೈ ತಮ್ಮ ದೈವಿಕ ಸೌಂದರ್ಯದೊಂದಿಗೆ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕುತ್ತಿದ್ದಂತೆ ಅಲ್ಲಿ ನೆರೆದಿದ್ದವರ ಕಣ್ಣುಗಳು ಕುಕ್ಕಿದವು. ಆದರೆ ಈ ಬಾರಿ ಐಶ್ವರ್ಯಾ ಕೇವಲ ತನ್ನ ಸೌಂದರ್ಯದಿಂದ ಮಾತ್ರವಲ್ಲ, ಚಿತ್ರರಂಗಕ್ಕೆ ಬರಲಿರುವ ಹೊಸಬರಿಗೆ ನೀಡಿದ ಒಂದು 'ಪವರ್&zwnj;ಫುಲ್' ಸಂದೇಶದಿಂದಾಗಿ ಸುದ್ದಿಯಲ್ಲಿದ್ದಾರೆ.&lt;/p&gt;&lt;h2&gt;ಎಲ್ಲವೂ ಕೃತಕ.. ನಿಮಗೇ ನೀವೇ ಬೆಸ್ಟ್ ಫ್ರೆಂಡ್ ಆಗಿ!&lt;/h2&gt;&lt;p&gt;ಕೇನ್ಸ್&zwnj;ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಐಶ್ವರ್ಯಾ ರೈ, ಇಂದಿನ ಸಿನಿಮಾ ಪ್ರಪಂಚದ ಬಗ್ಗೆ ಮತ್ತು ಹೊಸ ಕಲಾವಿದರ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. &quot;ಇಂದಿನ ಕಾಲದಲ್ಲಿ ಎಲ್ಲವೂ 'ಮ್ಯಾನ್ಯುಫ್ಯಾಕ್ಚರ್ಡ್' (Manufactured) ಆಗುತ್ತಿದೆ. ಅಂದರೆ ಎಲ್ಲವನ್ನೂ ಪ್ಲಾನ್ ಮಾಡಿ ಕೃತಕವಾಗಿ ಸೃಷ್ಟಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಲಾವಿದರು ತಮ್ಮತನವನ್ನು ಕಳೆದುಕೊಳ್ಳಬಾರದು,&quot; ಎಂದು ಅವರು ಎಚ್ಚರಿಸಿದ್ದಾರೆ.&lt;/p&gt;&lt;p&gt;ಹೊಸಬರಿಗೆ ಸಲಹೆ ನೀಡುತ್ತಾ, &quot;ಪ್ರತಿಯೊಬ್ಬ ಕಲಾವಿದನ ಪಯಣವೂ ವಿಭಿನ್ನವಾಗಿರುತ್ತದೆ. ನಿಮ್ಮ ಅನುಭವಗಳೇ ನಿಮ್ಮನ್ನು ಶ್ರೀಮಂತಗೊಳಿಸುತ್ತವೆ. ಇಲ್ಲಿ ಬೇರೆಯವರನ್ನು ಅನುಕರಿಸುವ ಬದಲು, ನಿಮ್ಮ ಆಯ್ಕೆಗಳಿಗೆ ನೀವು ಪ್ರಾಮಾಣಿಕವಾಗಿರಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ನಿಮಗೇ ಬೆಸ್ಟ್ ಫ್ರೆಂಡ್ ಆಗಿರಬೇಕು. ನಿಮ್ಮ ಪರವಾಗಿ ನೀವು ನಿಲ್ಲದಿದ್ದರೆ ಬೇರೆ ಯಾರೂ ಬರುವುದಿಲ್ಲ. ಕಲೆಯ ಜಗತ್ತಿನಲ್ಲಿ ಮ್ಯಾಜಿಕ್ ಅಡಗಿರುವುದು ನೀವು ಹೊಸದನ್ನು ಅನ್ವೇಷಿಸುವುದರಲ್ಲಿ ಮತ್ತು ಜೀವನವನ್ನು ಅನುಭವಿಸುವುದರಲ್ಲಿ,&quot; ಎಂದು ಐಶ್ವರ್ಯಾ ಮಾರ್ಮಿಕವಾಗಿ ನುಡಿದಿದ್ದಾರೆ.&lt;/p&gt;&lt;p&gt;ಮತ್ಸ್ಯಕನ್ಯೆಯಂತೆ ಮಿಂಚಿದ ಐಶ್ವರ್ಯಾ!&lt;/p&gt;&lt;p&gt;ಸಂದೇಶದ ಜೊತೆಗೆ ಐಶ್ವರ್ಯಾ ಅವರ ಲುಕ್ ಕೂಡ ಸಖತ್ ವೈರಲ್ ಆಗಿದೆ. ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ 'ಅಬಿಸ್-ಬ್ಲೂ' (Abyss-blue) ಬಣ್ಣದ ಸ್ಕಲ್ಪ್ಟರಲ್ ಗೌನ್&zwnj;ನಲ್ಲಿ ಐಶ್ವರ್ಯಾ ಮತ್ಸ್ಯಕನ್ಯೆಯಂತೆ ಕಾಣುತ್ತಿದ್ದರು. ಸಾವಿರಾರು ಹರಳುಗಳಿಂದ (Crystal Vein embroidery) ಅಲಂಕರಿಸಲ್ಪಟ್ಟ ಈ ಉಡುಪು ಬೆಳಕಿನ ಪ್ರತಿಫಲನದಲ್ಲಿ ಮಿನುಗುತ್ತಿತ್ತು. ಸ್ಟೈಲಿಸ್ಟ್ ಮೋಹಿತ್ ರೈ ಅವರ ವಿನ್ಯಾಸದಲ್ಲಿ ಐಶ್ವರ್ಯಾ ಅವರ ಈ ಅವತಾರ ಫ್ಯಾಷನ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.&lt;/p&gt;&lt;h3&gt;ಪ್ರಾಮಾಣಿಕತೆಗಿಂತ ದೊಡ್ಡದು ಯಾವುದೂ ಇಲ್ಲ!&lt;/h3&gt;&lt;p&gt;&quot;ನಿಮ್ಮ ಬಗ್ಗೆ ನೀವು ತುಂಬಾ ಪ್ರಾಮಾಣಿಕವಾಗಿರಿ (Brutally Honest). ಜೀವನದಲ್ಲಿ ಏನನ್ನು ಕಲಿಯಲು ಸಾಧ್ಯವೋ ಅದೆಲ್ಲವನ್ನೂ ಕಲಿಯಿರಿ. ಪ್ರತಿಯೊಂದು ಕ್ಷಣವನ್ನು ಆನಂದಿಸಿ. ಉಳಿದವೆಲ್ಲವೂ ತನ್ನಿಂದ ತಾನೇ ಸರಿಯಾದ ಜಾಗಕ್ಕೆ ಬರುತ್ತದೆ,&quot; ಎಂದು ಐಶ್ವರ್ಯಾ ಯುವ ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಕೇನ್ಸ್ ವೇದಿಕೆಯಲ್ಲಿ ತನ್ನ ಸೌಂದರ್ಯದ ಜೊತೆಗೆ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ ಐಶ್ವರ್ಯಾ ರೈ ಬಚ್ಚನ್, ತಾವು ಯಾಕೆ ಬಾಲಿವುಡ್&zwnj;ನ 'ಕ್ವೀನ್' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಐಶ್ ಅವರ ಈ ಮಾತುಗಳು ಕೇವಲ ಸಿನಿಮಾ ಮಂದಿಗಷ್ಟೇ ಅಲ್ಲ, ಜೀವನದಲ್ಲಿ ಸಾಧನೆ ಮಾಡಬಯಸುವ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ.&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/aishwarya-rai-dishes-advice-for-newcomers-at-cannes-2026-says-too-much-is-created-today-be-your-own-best-friend/articleshow-ey0xzle"/>
        </item>
        <item>
            <title><![CDATA[ಮಾವಿನ ರಫ್ತುದಾರರಿಗೆ ಬಿಗ್ ಶಾಕ್: ಸತತ ಎರಡು ದಶಕಗಳ ಬಳಿಕ ಭಾರತದ ಹಣ್ಣಿಗೆ ಜಪಾನ್ ನೋ ಎಂಟ್ರಿ!]]></title>
            <link>https://kannada.asianetnews.com/world-news/japan-halts-indian-mango-imports-after-20-years-exporters-raise-monopoly-concerns-over-quality-control/articleshow-fdanzv5</link>
            <guid isPermaLink="true">https://kannada.asianetnews.com/world-news/japan-halts-indian-mango-imports-after-20-years-exporters-raise-monopoly-concerns-over-quality-control/articleshow-fdanzv5</guid>
            <pubDate>Thu, 28 May 2026 11:32:36 +0530</pubDate>
            <description><![CDATA[&lt;p&gt;&lt;strong&gt;Indian Mango Export Ban: &lt;/strong&gt;ಜಪಾನ್ ಭಾರತದ ಅತ್ಯಂತ ಪ್ರಮುಖ ಮಾವು ಖರೀದಿದಾರ ರಾಷ್ಟ್ರವಲ್ಲದಿದ್ದರೂ, ಅಲ್ಲಿನ ಈ ನಿರ್ಧಾರದಿಂದ ರಫ್ತುದಾರರು ಅಸಮಾಧಾನಗೊಂಡಿದ್ದಾರೆ. ಸಂಸ್ಕರಣೆ ಮತ್ತು ಗುಣಮಟ್ಟದ ನಿಯಂತ್ರಣದಲ್ಲಿ ಜಪಾನ್ ತನ್ನ ಏಕಸ್ವಾಮ್ಯವನ್ನು ಸಾಧಿಸಲು ಬಯಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqgy1fjyzdr7ftzprt393nv,imgname-mangoes-2-1778905974258.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಾ&lt;/strong&gt;ರತೀಯ ಮಾವಿನ ಹಣ್ಣುಗಳು ಜಾಗತಿಕವಾಗಿ ಮನ್ನಣೆ ಪಡೆಯುತ್ತಿರುವ ಬೆನ್ನಲ್ಲೇ, ಈ ಋತುವಿನಲ್ಲಿ ಜಪಾನ್ ಭಾರತದಿಂದ ಮಾವಿನ ಹಣ್ಣುಗಳ ಆಮದನ್ನು ಸ್ಥಗಿತಗೊಳಿಸಿದೆ. ಭಾರತದ ಸಂಸ್ಕರಣಾ ಕೇಂದ್ರಗಳಲ್ಲಿ ಉತ್ಪಾದನಾ ವ್ಯತ್ಯಯಗಳು ಕಂಡುಬಂದಿವೆ ಎಂದು ಜಪಾನ್&zwnj;ನ ತಪಾಸಣಾ ತಂಡ ವರದಿ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;2006 ರಿಂದ ಪ್ರತಿ ವರ್ಷ ಟನ್&zwnj;ಗಟ್ಟಲೆ ಕೇಸರ್, ಅಲ್ಫಾನ್ಸೊ, ಲಂಗ್ರಾ ಮತ್ತು ಬಂಗನಪಲ್ಲಿ ತಳಿಗಳು ಜಪಾನ್&zwnj;ಗೆ ರಫ್ತಾಗುತ್ತಿದ್ದವು. ಆದರೆ ಎರಡು ದಶಕಗಳ ನಂತರ ಈ ವರ್ಷ ನಿಷೇಧ ಹೇರಲಾಗಿದೆ. ಈ ಹಿಂದೆ 1986ರಲ್ಲಿ ಹಣ್ಣಿನ ನೊಣಗಳ ಬಾಧೆಯ ಕಾರಣಕ್ಕೆ ಜಪಾನ್ ಭಾರತೀಯ ಮಾವಿನ ಹಣ್ಣುಗಳನ್ನು ನಿಷೇಧಿಸಿತ್ತು. ಆ ನಿಷೇಧವು 20 ವರ್ಷಗಳ ನಂತರವಷ್ಟೇ ತೆರವುಗೊಂಡಿತ್ತು.&lt;/p&gt;&lt;p&gt;ಪ್ರತಿ ವರ್ಷ ಮಾವಿನ ಸೀಸನ್ ಆರಂಭವಾಗುವ ಮೊದಲು, ಜಪಾನ್ ತನ್ನ ನಿರೀಕ್ಷಕರನ್ನು ಭಾರತಕ್ಕೆ ಕಳುಹಿಸುತ್ತದೆ. ಅವರು ಇಲ್ಲಿನ 'ವೇಪರ್ ಹೀಟ್ ಟ್ರೀಟ್&zwnj;ಮೆಂಟ್' (VHT) ಪ್ರಕ್ರಿಯೆಯನ್ನು ಪರಿಶೀಲಿಸುತ್ತಾರೆ. ಇದು ರಾಸಾಯನಿಕ ಮುಕ್ತ ಪ್ರಕ್ರಿಯೆಯಾಗಿದ್ದು, ಬಿಸಿ ಮತ್ತು ಆರ್ದ್ರ ಗಾಳಿಯ ಮೂಲಕ ಮಾವಿನ ಹಣ್ಣುಗಳನ್ನು ಕೀಟಮುಕ್ತವಾಗಿರಿಸುತ್ತದೆ.&lt;/p&gt;&lt;p&gt;ಈ ವರ್ಷವೂ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ರೆಹಮಾನ್&zwnj;ಪುರಕ್ಕೆ ಬಂದಿದ್ದ ಜಪಾನ್&zwnj;ನ ಕ್ವಾರಂಟೈನ್ ಅಧಿಕಾರಿಗಳ ತಂಡವು, ಭಾರತೀಯ ಸಂಸ್ಕರಣಾ ಕೇಂದ್ರಗಳಲ್ಲಿ ಸೋಂಕು ನಿವಾರಕ ಕ್ರಮಗಳಲ್ಲಿ ಲೋಪಗಳನ್ನು ಪತ್ತೆಹಚ್ಚಿದೆ. ಈ ಹಿನ್ನೆಲೆಯಲ್ಲಿ ಆಮದಿನ ಮೇಲೆ ನಿಷೇಧ ಹೇರಲಾಗಿದೆ.&lt;/p&gt;&lt;p&gt;ಮಾರ್ಚ್ 25 ರ ನಂತರ ಭಾರತ ನೀಡಿರುವ ತಪಾಸಣಾ ಪ್ರಮಾಣಪತ್ರಗಳನ್ನು ಹೊಂದಿರುವ ಮಾವಿನ ರಫ್ತುಗಳನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ ಎಂದು ಜಪಾನ್&zwnj;ನ 'ಯೊಕೊಹಾಮಾ ಸಸ್ಯ ಸಂರಕ್ಷಣಾ ಸಂಸ್ಥೆ' ತಿಳಿಸಿದೆ. ಕಾರ್ಯಾಚರಣೆಯ ಮಾನದಂಡಗಳನ್ನು ಸುಧಾರಿಸಿದ ನಂತರವಷ್ಟೇ ಮಾವುಗಳನ್ನು ಸ್ವೀಕರಿಸಲಾಗುವುದು ಎಂದು ಸಂಸ್ಥೆ ಹೇಳಿದೆ.&lt;/p&gt;&lt;p&gt;&quot;ಭಾರತೀಯ ಮಾವಿನ ಗುಣಮಟ್ಟ ಹೆಚ್ಚಿಸಲು ಸಂಪೂರ್ಣ ಹೊಸ ಸಂಸ್ಕರಣಾ ವ್ಯವಸ್ಥೆಯಿದೆ. ಒಂದು ವೇಳೆ ಜಪಾನ್ ನಿರ್ಮಿತ ವ್ಯವಸ್ಥೆಗಳಿಗೆ ಮಾತ್ರ ಅನುಮೋದನೆ ನೀಡಿದರೆ, ಅದು ತಾಂತ್ರಿಕ ಪಾಲನೆಗಿಂತ ಹೆಚ್ಚಾಗಿ ಏಕಸ್ವಾಮ್ಯ ಮತ್ತು ರಾಜತಾಂತ್ರಿಕತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ&quot; ಎಂದು ಉತ್ತರ ಪ್ರದೇಶದ ರಫ್ತುದಾರ ಅಕ್ರಮ್ ಬೇಗ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಅತೃಪ್ತ ರಫ್ತುದಾರರು&lt;/strong&gt;&lt;/h2&gt;&lt;p&gt;ಜಪಾನ್ ತನ್ನ ಕಟ್ಟುನಿಟ್ಟಾದ ಗುಣಮಟ್ಟದ ನಿಯಮಗಳಿಗೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು 2007ರಲ್ಲಿ ತಿರುಪತಿಯಲ್ಲಿ ಮೊದಲ VHT ಪ್ಲಾಂಟ್ ಆರಂಭಿಸಿತ್ತು. ಅಂದಿನಿಂದ ಭಾರತವು ಬಹಳ ಎಚ್ಚರಿಕೆಯಿಂದ ಸಂಸ್ಕರಿಸಿದ ನಂತರವೇ ಮಾವಿನ ಹಣ್ಣುಗಳನ್ನು ರಫ್ತು ಮಾಡುತ್ತಿದೆ.&lt;/p&gt;&lt;p&gt;ಜಪಾನ್ ದೊಡ್ಡ ಮಾರುಕಟ್ಟೆಯಲ್ಲದಿದ್ದರೂ, ಪ್ರಸ್ತುತ ದೇಶೀಯ ಮಾರುಕಟ್ಟೆಯೂ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಈ ನಿಷೇಧವು ರಫ್ತುದಾರರಿಗೆ ಹೊರೆಯಾಗಿದೆ. &quot;ಎಲ್ಲಾ ಕೇಂದ್ರಗಳ ಮಾವಿನ ಹಣ್ಣುಗಳನ್ನು ತಿರಸ್ಕರಿಸಲು ಹೇಗೆ ಸಾಧ್ಯ? ತಪಾಸಣಾ ತಂಡವು ಈ ಕೇಂದ್ರಗಳನ್ನು ಹೇಗಾದರೂ ಮಾಡಿ ಅನುತ್ತೀರ್ಣಗೊಳಿಸುವ ಉದ್ದೇಶದಿಂದಲೇ ಬಂದಂತಿದೆ&quot; ಎಂದು ಬೇಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಪ್ರಮುಖ 5 ಮಾವು ರಫ್ತುದಾರರು&lt;/strong&gt;&lt;/h3&gt;&lt;p&gt;ಕಳೆದ ವರ್ಷ ಜಪಾನ್&zwnj;ಗೆ ಸುಮಾರು ಎರಡು ಮಿಲಿಯನ್ ಡಾಲರ್ ಮೌಲ್ಯದ ಮಾವಿನ ಹಣ್ಣುಗಳನ್ನು (ವಿಶೇಷವಾಗಿ ಗುಜರಾತ್&zwnj;ನ ಕೇಸರ್) ರಫ್ತು ಮಾಡಲಾಗಿತ್ತು. ಭಾರತದ ಟಾಪ್ 5 ಮಾವು ರಫ್ತು ರಾಷ್ಟ್ರಗಳೆಂದರೆ:&lt;/p&gt;&lt;p&gt;ಅಮೆರಿಕ (US)ಯುಎಇ (UAE)ಯುನೈಟೆಡ್ ಕಿಂಗ್&zwnj;ಡಮ್ (UK)ನೆದರ್ಲೆಂಡ್ಸ್ಸೌದಿ ಅರೇಬಿಯ&lt;/p&gt;&lt;p&gt;ಭಾರತ ಸರ್ಕಾರವು ಈ ನಿಷೇಧದ ಬಗ್ಗೆ ಬಹಿರಂಗವಾಗಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಭಾರತೀಯ ಮಾವು ಬೆಳೆಗಾರರ ​​ಸಂಘದ ಅಧ್ಯಕ್ಷ ಎಸ್. ಇನ್ಸ್ರಾಮ್ ಅಲಿ ಅವರು, ಕೇಂದ್ರ ಸರ್ಕಾರ ಈಗಾಗಲೇ ಜಪಾನ್ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಶೀಘ್ರದಲ್ಲೇ ಪರಿಹಾರ ಸಿಗುವ ಭರವಸೆಯಿದೆ ಎಂದು ತಿಳಿಸಿದ್ದಾರೆ. ಆದರೆ, ಸೀಸನ್ ಮುಗಿಯುತ್ತಾ ಬಂದಿರುವುದರಿಂದ ಈ ವರ್ಷ ನಿಷೇಧ ತೆರವುಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. &amp;nbsp;&amp;nbsp;&lt;/p&gt;]]></content:encoded>
            <category>world-news</category>
            <dc:creator>Ashwini HR</dc:creator>
            <atom:link href="https://kannada.asianetnews.com/world-news/japan-halts-indian-mango-imports-after-20-years-exporters-raise-monopoly-concerns-over-quality-control/articleshow-fdanzv5"/>
        </item>
        <item>
            <title><![CDATA[Viral: ನಡುಆಕಾಶದಲ್ಲೇ ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದ ಲಘು ವಿಮಾನ: ರೆಕ್ಕೆ ಸೀಳಿಬಿದ್ದರೂ ಪ್ರಾಣಾಪಾಯದಿಂದ ಪಾರಾದ ಮಹಿಳೆ!]]></title>
            <link>https://kannada.asianetnews.com/viral/plane-hits-paraglider-mid-air-austria-alps-sabrina-viral-video-san/articleshow-g37rm42</link>
            <guid isPermaLink="true">https://kannada.asianetnews.com/viral/plane-hits-paraglider-mid-air-austria-alps-sabrina-viral-video-san/articleshow-g37rm42</guid>
            <pubDate>Mon, 25 May 2026 18:31:45 +0530</pubDate>
            <description><![CDATA[&lt;p&gt;ಆಸ್ಟ್ರಿಯಾದ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ, ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಮಹಿಳೆಗೆ ಲಘು ವಿಮಾನವೊಂದು ಡಿಕ್ಕಿ ಹೊಡೆದಿದೆ. ವಿಮಾನದ ಪ್ರೊಪೆಲ್ಲರ್&zwnj;ನಿಂದ ಪ್ಯಾರಾಚೂಟ್ ಹರಿದರೂ, ಮಹಿಳೆ ತನ್ನ ತುರ್ತು ಪ್ಯಾರಾಚೂಟ್ ಬಳಸಿ ಪವಾಡಸದೃಶವಾಗಿ ಪಾರಾಗಿದ್ದು, ಈ ದೃಶ್ಯ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfk9mkchgv0e6fcwphqr4hh,imgname-plane-hits-paraglider-mid-air-1779713757804.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಯೆನ್ನಾ (ಮೇ.25): &lt;/strong&gt;ನಡುಆಕಾಶದಲ್ಲಿ ಹಾರಾಡುತ್ತಿದ್ದ ಪ್ಯಾರಾಗ್ಲೈಡರ್&zwnj;ಗೆ ಲಘು ವಿಮಾನವೊಂದು ನೇರವಾಗಿ ಡಿಕ್ಕಿ ಹೊಡೆದು, ಅದರ ಪ್ಯಾರಾಚೂಟ್ ರೆಕ್ಕೆಗಳನ್ನು ಸೀಳಿಕೊಂಡು ಹೋದ ಅತ್ಯಂತ ಭಯಾನಕ ಹಾಗೂ ರೋಚಕ ಘಟನೆಯೊಂದು ಆಸ್ಟ್ರಿಯಾದ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಸಂಭವಿಸಿದೆ. ವಿಮಾನ ಡಿಕ್ಕಿಯಾದ ರಭಸಕ್ಕೆ ಮಹಿಳಾ ಪ್ಯಾರಾಗ್ಲೈಡರ್ ನಿಯಂತ್ರಣ ತಪ್ಪಿ ಆಕಾಶದಿಂದ ಭೂಮಿಯತ್ತ ವೇಗವಾಗಿ ಸುರುಳಿಸುತ್ತುತ್ತಾ ಬಿದ್ದರೂ, ಕೊನೆಕ್ಷಣದಲ್ಲಿ ತುರ್ತು ಪ್ಯಾರಾಚೂಟ್ (Reserve Parachute) ಬಳಸುವ ಮೂಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಇಡೀ ರೋಮಾಂಚಕ ದೃಶ್ಯಗಳು ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.&lt;/p&gt;&lt;p&gt;ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಉತ್ತರ ಆಸ್ಟ್ರಿಯಾದ ಪ್ಯಾರಾಗ್ಲೈಡಿಂಗ್&zwnj;ಗೆ ಅತ್ಯಂತ ಪ್ರಸಿದ್ಧ ತಾಣವಾಗಿರುವ 'ಶ್ಮಿಟ್ಟೆನ್&zwnj;ಹೋಹೆ' (Schmittenhohe) ಪರ್ವತದ ಬಳಿ ಶನಿವಾರ ಮಧ್ಯಾಹ್ನ ಈ ಆಘಾತಕಾರಿ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ರೆಕ್ಕೆ ಸೀಳಿದ ಪ್ರೊಪೆಲ್ಲರ್; ಆಕಾಶದಲ್ಲೇ ಕಿರುಚಾಡಿದ ಸಬ್ರಿನಾ!&lt;/strong&gt;&lt;/h2&gt;&lt;p&gt;ಸಾಲ್ಜ್&zwnj;ಬರ್ಗ್ ರಾಜ್ಯ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, 44 ವರ್ಷದ ಅತ್ಯಂತ ಅನುಭವಿ ಪ್ಯಾರಾಗ್ಲೈಡರ್ ಆಗಿರುವ ಸಬ್ರಿನಾ ಎಂಬುವವರು ತಮ್ಮ ಪ್ಯಾರಾಚೂಟ್&zwnj;ಗೆ ಕ್ಯಾಮೆರಾ ಅಳವಡಿಸಿಕೊಂಡು ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದರು. ಈ ವೇಳೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ದೃಶ್ಯವೀಕ್ಷಣೆ ವಿಮಾನವೊಂದು (Sightseeing Plane) ಹಠಾತ್ ಆಗಿ ಅವರ ತಲೆಯ ಕೆಲವೇ ಅಡಿಗಳ ಮೇಲಿಂದ ಹಾದುಹೋಗಿದೆ. ಈ ವೇಳೆ ವಿಮಾನದ ಪ್ರೊಪೆಲ್ಲರ್ ಪ್ಯಾರಾಗ್ಲೈಡರ್&zwnj;ನ ಮೇಲ್ಛಾವಣಿಯ (Canopy) ರೆಕ್ಕೆಗಳನ್ನು ಭೀಕರವಾಗಿ ಸೀಳಿಕೊಂಡು ಮುನ್ನುಗ್ಗಿದೆ.&lt;/p&gt;&lt;p&gt;ಸಬ್ರಿನಾ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ಫರ್ಸ್ಟ್&zwnj; ಪರ್ಸನ್&zwnj; ವಿಡಿಯೋ ತುಣುಕಿನಲ್ಲಿ, ವಿಮಾನ ಡಿಕ್ಕಿಯಾದ ತಕ್ಷಣ ಪ್ಯಾರಾಚೂಟ್ ರೆಕ್ಕೆಗಳು ಎರಡು ಭಾಗವಾಗಿ ಸೀಳಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ತಕ್ಷಣವೇ ನಿಯಂತ್ರಣ ಕಳೆದುಕೊಂಡ ಸಬ್ರಿನಾ ಆಕಾಶದಲ್ಲೇ ಜೋರಾಗಿ ಕಿರುಚಾಡುತ್ತಾ ತಲೆಕೆಳಗಾಗಿ ಭೂಮಿಯತ್ತ ಬೀಳಲು ಆರಂಭಿಸಿದ್ದಾರೆ. ಆದರೆ, ಅತ್ಯಂತ ಅನುಭವಿಯಾಗಿದ್ದ ಅವರು ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದೆ, ತಕ್ಷಣವೇ ತಮ್ಮ ಬಳಿಯಿದ್ದ ತುರ್ತು ಮೀಸಲು ಪ್ಯಾರಾಚೂಟ್ ಅನ್ನು (Reserve Parachute) ಎಳೆದು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಅವರು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ಹೆಲಿಕಾಪ್ಟರ್ ಮೂಲಕ ರಕ್ಷಣೆ; ಇಬ್ಬರೂ ಸೇಫ್!&lt;/strong&gt;&lt;/h2&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಆಸ್ಟ್ರಿಯನ್ ಪೊಲೀಸರು, ಹೆಲಿಕಾಪ್ಟರ್ ಮೂಲಕ ದುರಂತ ನಡೆದ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ತದನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ. &quot;ಮೋಟರ್ ವಿಮಾನದ ಪ್ರೊಪೆಲ್ಲರ್ ಪ್ಯಾರಾಗ್ಲೈಡರ್&zwnj;ಗೆ ತೀವ್ರ ಹಾನಿ ಮಾಡಿತ್ತು. ಆದರೆ, ಅನುಭವಿ ಪ್ಯಾರಾಗ್ಲೈಡರ್ ಸಮಯಪ್ರಜ್ಞೆ ಮೆರೆದು ಮೀಸಲು ಪ್ಯಾರಾಚೂಟ್ ನಿಯೋಜಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ&quot; ಎಂದು ಎನ್&zwnj;ಬಿಸಿ (NBC) ನ್ಯೂಸ್ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿದೆ.&lt;/p&gt;&lt;p&gt;ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಪ್ಯಾರಾಗ್ಲೈಡರ್ ಮಹಿಳೆ ಹಾಗೂ ಲಘು ವಿಮಾನದ ಪೈಲಟ್ ಇಬ್ಬರೂ ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಘಟನೆಯ ನಂತರ 'ಜೆಲ್ ಆಮ್ ಸೀ' (Zell am See) ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ 28 ವರ್ಷದ ಯುವ ಪೈಲಟ್, ಆಕಾಶದಲ್ಲಿ ಹಠಾತ್ ಆಗಿ ಎದುರಾದ ಆ ಘರ್ಷಣೆಯನ್ನು ತಪ್ಪಿಸಲು ತನಗೆ ಯಾವುದೇ ಅವಕಾಶವೇ ಸಿಗಲಿಲ್ಲ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.&lt;/p&gt;&lt;h2&gt;&lt;strong&gt;ವಿಶ್ವಾಸವೇ ಆಗುತ್ತಿಲ್ಲ ಎಂದ ಮಹಿಳೆ!&lt;/strong&gt;&lt;/h2&gt;&lt;p&gt;ಸಾವಿನ ಅಂಚಿನಿಂದ ಪಾರಾದ ಸಬ್ರಿನಾ ತದನಂತರ ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಜರ್ಮನ್ ಭಾಷೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. &quot;ನಾನು ಇಲ್ಲಿ ಕುಳಿತು ಈ ಸಂದೇಶವನ್ನು ಟೈಪ್ ಮಾಡುತ್ತಿದ್ದೇನೆ ಎಂಬುದನ್ನು ನನಗೇ ನಂಬಲು ಸಾಧ್ಯವಾಗುತ್ತಿಲ್ಲ. ಮೈಮೇಲೆ ಬಿದ್ದಿರುವ ಕೆಲವು ಸಣ್ಣಪುಟ್ಟ ಗಾಯ ಹಾಗೂ ರಕ್ತಗಟ್ಟಿದ ಕಲೆಗಳನ್ನು ಹೊರತುಪಡಿಸಿದರೆ ನನಗೆ ಬೇರೆ ಯಾವುದೇ ಗಂಭೀರ ಪೆಟ್ಟಾಗಿಲ್ಲ&quot; ಎಂದು ಬರೆದುಕೊಂಡು ತಮ್ಮ ಪ್ರಾಣ ಉಳಿದಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt; A paraglider collided midair with a Cessna 172 over Austria and somehow survived.She deployed her emergency parachute seconds after impact and landed safely.The plane pilot also managed to land safely at Zell am See Airport.pic.twitter.com/6IH7sTi3Ic&lt;/p&gt;&lt;p&gt;&mdash; Mario Nawfal (@MarioNawfal) May 24, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Santosh Naik</dc:creator>
            <atom:link href="https://kannada.asianetnews.com/viral/plane-hits-paraglider-mid-air-austria-alps-sabrina-viral-video-san/articleshow-g37rm42"/>
        </item>
        <item>
            <title><![CDATA[ನಾನೊಬ್ಬನೇ ಸಾಯಲ್ಲ: ಸೂಪರ್‌ ಮಾರ್ಕೆಟ್‌ನಲ್ಲಿ ಮಲಗಿ, ತನ್ನ ಲಕ್ಷುರಿ ಅಪಾರ್ಟ್‌ಮೆಂಟ್‌ನ್ನು ಕೆಲಸದಾಕೆಗೆ ಕೊಟ್ಟ!]]></title>
            <link>https://kannada.asianetnews.com/gallery/life/a-man-gift-apartment-to-nani-in-china-due-to-loneliness-hor019w</link>
            <guid isPermaLink="true">https://kannada.asianetnews.com/gallery/life/a-man-gift-apartment-to-nani-in-china-due-to-loneliness-hor019w</guid>
            <pubDate>Sun, 24 May 2026 16:07:22 +0530</pubDate>
            <description><![CDATA[&lt;p&gt;ಒಂಟಿತನ ಒಮ್ಮೊಮ್ಮೆ ಎದ್ದು ಕಾಣಿಸೋದಿಲ್ಲ. ನಾವು ನಗುತ್ತೇವೆ, ಅಳುತ್ತೇವೆ, ಕೆಲಸ ಮಾಡುತ್ತಿರುತ್ತೇವೆ. ಹೀಗಿದ್ದರೂ, ಎಲ್ಲ ಇದ್ದರೂ ಕೂಡ ನಮಗೆ ಒಂಟಿತನ ಕಾಡುತ್ತದೆ. ಚೀನಾದಲ್ಲಿರುವ ವ್ಯಕ್ತಿಗೆ ಲಕ್ಷುರಿ ಫ್ಲ್ಯಾಟ್&zwnj; ಇದ್ದರೂ ಕೂಡ ನಿದ್ದೆ ಮಾಡಲು ಭಯ ಆಗುತ್ತಿತ್ತಂತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kscrj2f1s5gqa6vzsk03rcyq,imgname-new-project---2026-05-24t155723.309-1779618613729.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂಟಿತನ ಒಮ್ಮೊಮ್ಮೆ ಎದ್ದು ಕಾಣಿಸೋದಿಲ್ಲ. ನಾವು ನಗುತ್ತೇವೆ, ಅಳುತ್ತೇವೆ, ಕೆಲಸ ಮಾಡುತ್ತಿರುತ್ತೇವೆ. ಹೀಗಿದ್ದರೂ, ಎಲ್ಲ ಇದ್ದರೂ ಕೂಡ ನಮಗೆ ಒಂಟಿತನ ಕಾಡುತ್ತದೆ. ಚೀನಾದಲ್ಲಿರುವ ವ್ಯಕ್ತಿಗೆ ಲಕ್ಷುರಿ ಫ್ಲ್ಯಾಟ್&zwnj; ಇದ್ದರೂ ಕೂಡ ನಿದ್ದೆ ಮಾಡಲು ಭಯ ಆಗುತ್ತಿತ್ತಂತೆ.&lt;/p&gt;&lt;img&gt;&lt;p&gt;10 ವರ್ಷಗಳ ಕಾಲ ಓರ್ವ ವ್ಯಕ್ತಿ ( ಕಿಯಾಂಗ್ಮಿಂಗ್&zwnj; ) ತನ್ನದೇ ಆದ ಲಕ್ಷುರಿ ಫ್ಲ್ಯಾಟ್&zwnj; ಇದ್ದರೂ ಕೂಡ, ಸೂಪರ್&zwnj; ಮಾರ್ಕೆಟ್&zwnj;ನ ಸಿಬ್ಬಂದಿಯ ಎಂಟ್ರೆನ್ಸ್&zwnj;ನಲ್ಲಿ ನಿದ್ದೆ ಮಾಡಿದ್ದರು. ಅವರಿಗೆ ಫ್ಲಾಟ್&zwnj; ಇದ್ದರೂ ಕೂಡ ಒಂಟಿಯಾಗಿ ನಿದ್ದೆ ಮಾಡಲು ಭಯ ಆಗುತ್ತಿತ್ತಂತೆ. ನನಗೆ ಒಂಟಿಯಾಗಿ ಸಾಯಲು ಇಷ್ಟ ಇಲ್ಲ ಎಂದು ಅವರು ಹೇಳುತ್ತಿದ್ದರು. ಡಿವೋರ್ಸ್&zwnj; ಆಗಿತ್ತು, ಮಗ ಕೂಡ ದೂರ ಇದ್ದನು, ಒಂಟಿತನ ಕಾಡುತ್ತಿತ್ತು. ಎಷ್ಟೇ ವ್ಯವಸ್ಥೆ, ಲಕ್ಷುರಿ ಇದ್ದರೂ ಕೂಡ ಅವರಿಗೆ ಒಂಟಿತನ ಕಾಡುತ್ತಿತ್ತು.&lt;/p&gt;&lt;img&gt;&lt;p&gt;ಸೂಪರ್&zwnj;ಮಾರ್ಕೆಟ್&zwnj;ನಲ್ಲಿ ಅವರು ಚಾಪೆಯ ಮೇಲೆ ಮಲಗುತ್ತಿದ್ದರು, ಜೇಬಿನಲ್ಲಿ ಹಣ ಇಟ್ಟುಕೊಳ್ಳುತ್ತಿದ್ದರು, ಹೋಟೆಲ್&zwnj;ನಲ್ಲಿ ದಿನವಿಡೀ ಕಳೆಯುತ್ತಿದ್ದರು. ಅವರನ್ನು ನೋಡಿದವರೆಲ್ಲ ಭಿಕ್ಷುಕ ಎಂದುಕೊಂಡರು. ಆದರೆ ಅವರು ಭಿಕ್ಷುಕ ಆಗಿರಲಿಲ್ಲ.&lt;/p&gt;&lt;img&gt;&lt;p&gt;ಕಿಯಾಂಗ್ಮಿಂಗ್&zwnj; ಅವರಿಗೆ 2000 ರಲ್ಲಿ ಡಿವೋರ್ಸ್&zwnj; ಆದ ಬಳಿಕ ಮಗ ಕೂಡ ದೂರ ಆದನು. ಅಪ್ಪ-ಮಗ ಮಾತನಾಡೋದು ನಿಲ್ಲಿಸಿದರು. ಒಂಟಿತನವು ನಿಜಕ್ಕೂ ಖಿನ್ನತೆ, ಹೃದಯ ಸಮಸ್ಯೆ, ದೌರ್ಬಲ್ಯ ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಕಿಯಾಂಗ್ಮಿಂಗ್ ಅವರು ಒಂಟಿಯಾಗಿ ಬದುಕಬಾರದು ಎಂದು ಹೀಗೆಲ್ಲ ಮಾಡಿದರು. ಆದರೆ ಎಷ್ಟೋ ಜನರು ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ.&lt;/p&gt;&lt;img&gt;&lt;p&gt;2021 ರಲ್ಲಿ ಕಿಯಾಂಗ್ಮಿಂಗ್ ಅವರನ್ನು ಹುಹಾಂಗ್ ( ಕೆಲಸ ಮಾಡುವ ವ್ಯಕ್ತಿ ) ಫಸ್ಟ್&zwnj; ಟೈಮ್&zwnj; ಭೇಟಿಯಾದರು. ಆಮೇಲೆ ಸಂಪೂರ್ಣವಾಗಿ ಕಿಯಾಂಗ್ಮಿಂಗ್&zwnj; ಅವರನ್ನು ನೋಡಿಕೊಂಡರು. ಅನೇಕರಿಗೆ ಈ ಬದಲಾವಣೆ ಅರ್ಥ ಆಯ್ತು. ಆಮೇಲೆ ಕಿಯಾಂಗ್ಮಿಂಗ್&zwnj; ಅವರು ಹುಹಾಂಗ್&zwnj;ರನ್ನು ಮಗಳು ಎಂದು ಕರೆದರು. ಆಮೇಲೆ ತನ್ನ ಫ್ಲ್ಯಾಟ್&zwnj;ನ್ನು ಅವರಿಗೆ ಬಿಟ್ಟುಕೊಡಲು ರೆಡಿಯಾದರು.&lt;/p&gt;&lt;img&gt;&lt;p&gt;ಇಂದು ಡಿವೋರ್ಸ್&zwnj;, ಸಿಟಿ ಜೀವನ ಎಂದು ಹಳ್ಳಿಯಲ್ಲಿ ವೃದ್ಧರು ಇರುತ್ತಾರೆ. ಅವಿಭಕ್ತ ಕುಟುಂಬ ಹೋಗಿ ವಿಭಕ್ತ ಕುಟುಂಬವಾಗಿದೆ. ಇಂದು ಅನಾರೋಗ್ಯದಲ್ಲಿ ಇರುವವರನ್ನು, ಅಶಕ್ತರನ್ನು, ವೃದ್ಧರನ್ನು ನೋಡಿಕೊಳ್ಳೋದು ಟಾಸ್ಕ್&zwnj; ಆಗಿದೆ. ಹೀಗಾಗಿ ಆರೈಕೆ ಮಾಡುವುದು ಸ್ವತಃ ಒಂದು ಭಾವನಾತ್ಮಕ ಶ್ರಮವಾಗಿದೆ.&lt;/p&gt;&lt;p&gt;ಕಿಯಾಂಗ್ಮಿಂಗ್&zwnj; ಅವರು ಹುಹಾಂಗ್&zwnj;ಗೆ ತನ್ನ ಆಸ್ತಿಯನ್ನು ವರ್ಗಾವಣೆ ಮಾಡೋದು ಸುಲಭ ಆಗಿರಲಿಲ್ಲ. ಚೀನಾದಲ್ಲಿರುವ ಕೋರ್ಟ್&zwnj; ಈ ವಿಷಯವನ್ನು ಮಗನಿಗೆ ಹೇಳಬೇಕು ಎಂದರು, ಮಗ ಮಾತ್ರ ಆಸ್ತಿ ವರ್ಗಾವಣೆಯನ್ನು ಒಪ್ಪಲಿಲ್ಲ. ನ್ಯಾನಿ ಮೇಲೆ ಆರೋಪ ಮಾಡಿ ಆಮೇಲೆ ಆ ಫ್ಲಾಟ್&zwnj;ನ ಮಾಲೀಕತ್ವವನ್ನು ಪಡೆದನು.&lt;/p&gt;]]></content:encoded>
            <category>world-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/life/a-man-gift-apartment-to-nani-in-china-due-to-loneliness-hor019w"/>
        </item>
        <item>
            <title><![CDATA[ರೋಲ್ಸ್​ ರಾಯ್​ ಕಾರಿನ ಜೊತೆ 70ರ ಅಜ್ಜ ಫ್ರೀ: 20ರ ಸುಂದ್ರಿಯ ಭರ್ಜರಿ ಮದುವೆ- ಯುವಕರ ಹೊಟ್ಟೆಯಲ್ಲಿ ಬೆಂಕಿ]]></title>
            <link>https://kannada.asianetnews.com/relationship/a-70-year-old-saudi-man-hakim-babar-zia-married-a-20-year-old-woman-suc/articleshow-hztkfgr</link>
            <guid isPermaLink="true">https://kannada.asianetnews.com/relationship/a-70-year-old-saudi-man-hakim-babar-zia-married-a-20-year-old-woman-suc/articleshow-hztkfgr</guid>
            <pubDate>Mon, 25 May 2026 14:15:25 +0530</pubDate>
            <description><![CDATA[ಸೌದಿ ಅರೇಬಿಯಾದಲ್ಲಿ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಯುವತಿಯನ್ನು ಒಪ್ಪಿಸಲು, ವರನು ರೋಲ್ಸ್ ರಾಯ್ಸ್ ಕಾರು ಮತ್ತು 5 ಕೆ.ಜಿ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದು, ಈ ಸುದ್ದಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksf4y0v3f5r29vv74js83kzt,imgname-strange-marriage-1779698697059.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು ಎಷ್ಟೋ ಗಂಡುಮಕ್ಕಳು ಹೆಣ್ಣೇ ಸಿಕ್ತಿಲ್ಲ ಎಂದು ಗೋಳೋ ಎನ್ನುತ್ತಿದ್ದಾರೆ. ಇಂದಿನ ಬಹುತೇಕ ಹೆಣ್ಣುಮಕ್ಕಳ ಡಿಮಾಂಡ್​ ಕೇಳಿ ಗಂಡುಮಕ್ಕಳು ಮದ್ವೆನೇ ಬೇಡ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವು ಗಂಡುಮಕ್ಕಳು ಲಕ್ಷ ಲಕ್ಷ ದುಡಿದರೂ, ಸುರಸುಂದರ ಆಗಿದ್ರೂ ಯಾಕೋ ಮದುವೆಗೆ ಕಂಕಣ ಭಾಗ್ಯ ಕೂಡಿ ಬರುವುದೇ ಇಲ್ಲ. ಅದಕ್ಕೇ ಹೇಳೋದು ಮದುವೆ ಸ್ವರ್ಗದಲ್ಲಿಯೇ ಆಗಿರತ್ತೆ ಅಂತ. ಆದರೆ ಕೆಲವು ಗಂಡಸರಿಗೆ ಮಾತ್ರ ಒಂದಲ್ಲ, ಸ್ವರ್ಗದಲ್ಲಿಯೇ ನಾಲ್ಕೈದು ಮದುವೆನೂ ಆಗಿರುತ್ತೋ ಗೊತ್ತಿಲ್ಲ, ಅದಕ್ಕಾಗಿಯೇ ಈ ಭೂಮಿಯ ಮೇಲೂ ಅಷ್ಟೇ ಮಕ್ಕಳಾದರೆ, ಒಂದು ಡಜನ್​ಗೂ ಹೆಚ್ಚು ಮಕ್ಕಳು ಹುಟ್ಟುತ್ತಾರೆ.&lt;/p&gt;&lt;h2&gt;&lt;strong&gt;ಅಜ್ಜನ ಮದುವೆ&lt;/strong&gt;&lt;/h2&gt;&lt;p&gt;ಅದಕ್ಕಿಂತಲೂ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಇಲ್ಲಿ ವರನಿಗೆ 70 ವರ್ಷ, ವಧುವಿಗೆ 20 ವರ್ಷ. ಕೆಲ ದಿನಗಳ ಹಿಂದಷ್ಟೇ ಇಂಥದ್ದೊಂದು ಕೇಸ್​, ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದ ಕೈಲಾ ಭಟ್ಟ ಪ್ರದೇಶದಲ್ಲಿ ನಡೆದಿತ್ತು. ಸಮಾಜವಾದಿ ಪಕ್ಷದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಹಾಜಿ ಖಲೀಲ್ ಅವರ ನಾಲ್ಕನೇ ಮದುವೆಯ ಬಗ್ಗೆ ಇದೀಗ ಭಾರಿ ವಿವಾದ ಸೃಷ್ಟಿಸಿತ್ತು. ಹಾಜಿ ಖಲೀಲ್​ ಅವರ ಎರಡನೇ ಪತ್ನಿ ನಜ್ರೀನ್ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿರುವ ಕಾರಣ ವಿಷಯ ಬೆಳಕಿಗೆ ಬಂದಿತ್ತು.&lt;/p&gt;&lt;h3&gt;&lt;strong&gt;20ರ ಚೆಲುವೆ&lt;/strong&gt;&lt;/h3&gt;&lt;p&gt;ಆದರೆ ಈ ಕೇಸ್​ನಲ್ಲಿ ಸದ್ಯ ಯಾರೂ ದೂರು ಕೊಡಲಿಲ್ಲ. ಏಕೆಂದ್ರೆ ಇದು ನಡೆದಿರುವುದು ಸೌದಿ ಅರೇಬಿಯಾದಲ್ಲಿ. ಹಕೀಮ್ ಬಾಬರ್ ಜಿಯಾ ಎಂಬ 70 ವರ್ಷದ ಅಜ್ಜನ ಮದುವೆ ಮೊಮ್ಮಗಳ ವಯಸ್ಸಿನ ಅರ್ಥಾತ್​ 20ರ ಚೆಲುವೆಯ ಜೊತೆ ಆಗಿದೆ. ಹಾಗೆಂದು ಆಕೆ ಏನೂ ಈ ಮದುವೆಗೆ ಸುಮ್ಮನೇ ಒಪ್ಪಿಕೊಳ್ಳಲಿಲ್ಲ ಬಿಡಿ. ಹಕೀಮ್​ ಬಾಬಾ ಈಕೆಗೆ ರೋಲ್ಸ್​ ರಾಯ್ಸ್​ ಕಾರಿನ ಜೊತೆ 5 ಕೆ.ಜಿ ಚಿನ್ನ ಗಿಫ್ಟ್​ ಕೊಟ್ಟಿದ್ದಾನಂತೆ. ಅದಕ್ಕಾಗಿ ಮದುವೆಯಾಗಿದ್ದು, ಈ ಕಾರಿನ ಜೊತೆನೋ ಅಥ್ವಾ ಅಜ್ಜನ ಜೊತೆನೋ ಅನ್ನೋದು ಕನ್​ಫ್ಯೂಸ್​ ಇದೆ. ಅದೇನೇ ಆದ್ರೂ, ಇದರ ಸುದ್ದಿ ವೈರಲ್​ ಆಗುತ್ತಲೇ ಯುವಕರಂತೂ ಹೊಟ್ಟೆ ಉರಿದುಕೊಂಡದ್ದು ನಿಜ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/a-70-year-old-saudi-man-hakim-babar-zia-married-a-20-year-old-woman-suc/articleshow-hztkfgr"/>
        </item>
        <item>
            <title><![CDATA[ಅಮೆರಿಕ- ಇರಾನ್‌ ಕದನವೋ, ಸಂಧಾನವೋ?  ಒಪ್ಪಂದಕ್ಕೆ ಆತುರ ಬೇಡ, ಬನ್ನಿ: ಟ್ರಂಪ್‌ ಸೂಚನೆ]]></title>
            <link>https://kannada.asianetnews.com/world-news/ceasefire-talks-between-the-us-and-iran-are-in-disarray-donald-trump-made-a-confusing-statement-mrq/articleshow-i3929mp</link>
            <guid isPermaLink="true">https://kannada.asianetnews.com/world-news/ceasefire-talks-between-the-us-and-iran-are-in-disarray-donald-trump-made-a-confusing-statement-mrq/articleshow-i3929mp</guid>
            <pubDate>Mon, 25 May 2026 05:31:39 +0530</pubDate>
            <description><![CDATA[ಅಮೆರಿಕ ಮತ್ತು ಇರಾನ್&zwnj; ನಡುವಿನ ಯುದ್ಧಸ್ಥಗಿತ ಮಾತುಕತೆ ಕಗ್ಗಂಟಾಗಿದೆ. ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಒಮ್ಮೆ ಒಪ್ಪಂದ ಅಂತಿಮ ಎಂದೂ, ಮತ್ತೊಮ್ಮೆ ದಾಳಿಯ ಸುಳಿವು ನೀಡಿಯೂ ಗೊಂದಲ ಸೃಷ್ಟಿಸಿದ್ದಾರೆ. ಈ ಅನಿಶ್ಚಿತತೆಯ ನಡುವೆ, ಸಂಧಾನ ಯಶಸ್ವಿಯಾಗುವುದೇ ಅಥವಾ ಯುದ್ಧ ಮರುಕಳಿಸುವುದೇ ಎಂಬ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kenre5fypxj18kh7j4k0d6rd,imgname-iran-america-1768109315581.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;/ಟೆಹ್ರಾನ್&zwnj;&lt;/strong&gt;: 2 ತಿಂಗಳಿಂದ ಯುದ್ಧಸ್ಥಗಿತದ ವಿಚಾರದಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್&zwnj; ನಡುವಿನ ಮಾತುಕತೆ ದಿನ ಕಳೆದಂತೆ ಕಗ್ಗಂಟಾಗುತ್ತಲೇ ಸಾಗಿದೆ. ಸಂಧಾನವು ಬಹುತೇಕ ಆಗಿದೆ ಎಂದು ಭಾನುವಾರ ಬೆಳಗ್ಗೆಯಷ್ಟೇ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj;, ಸಂಜೆಯಾಗುವಷ್ಟರಲ್ಲಿ ಇರಾನ್&zwnj; ಹಡಗುಗಳ ಮೇಲೆ ದಾಳಿ ಮಾಡುವ ಫೋಟೋ ಹಂಚಿಕೊಂಡು ಗೊಂದಲದ ಹೇಳಿಕೆ ನೀಡಿದ್ದಾರೆ. &lsquo;ಒಪ್ಪಂದಕ್ಕೆ ಆತುರ ಬೇಡ&rsquo; ಎಂದು ತಮ್ಮ ಸಂಧಾನಕಾರರಿಗೆ ಸೂಚಿಸಿರುವ ಅವರು ಎರಡೂ ಕಡೆಯವರು ಸೂಕ್ತ ನಿರ್ಧಾರ ಕೈಗೊಳ್ಳಬೇಕು&rsquo; ಎಂದು ಹೇಳಿದ್ದಾರೆ. ಈ ಮೂಲಕ ಸಂಧಾನಕ್ಕೆ ಬರುವಂತೆ ಇರಾನ್&zwnj; ಮೇಲಿನ ಒತ್ತಡ ಹೆಚ್ಚಿಸುವ ಯತ್ನ ನಡೆಸಿದ್ದಾರೆ.&lt;/p&gt;&lt;p&gt;ಇದರ ನಡುವೆ ಸದ್ಯ ಭಾರತದಲ್ಲಿರುವ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಮಾತುಕತೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಒಂದೆರೆಡು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಇದೆ. ಯಾವುದೇ ಕ್ಷಣದಲ್ಲಿ ಶುಭ ಸುದ್ದಿ ಹೊರಬೀಳಬಹುದು ಬಗ್ಗೆ ಸಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಉಭಯ ದೇಶಗಳ ನಡುವೆ ಸಂಧಾನ ಕುದುರಲಿದೆಯೇ? ಅಥವಾ ಮರಳಿ ಯುದ್ಧ ಆರಂಭವಾಗಿದೆಯೋ ಎಂಬ ಕುತೂಹಲ ಮೂಡಿದೆ.&lt;/p&gt;&lt;h2&gt;&lt;strong&gt;ಡೀಲ್&zwnj; ಸನ್ನಿಹಿತ:&lt;/strong&gt;&lt;/h2&gt;&lt;p&gt;ಇಸ್ರೇಲ್&zwnj; ಹಾಗೂ ಮಧ್ಯಪ್ರಾಚ್ಯದ ಮಿತ್ರರಾಷ್ಟ್ರಗಳ ಜತೆ ಕರೆಯಲ್ಲಿ ಮಾತನಾಡಿದ ಟ್ರಂಪ್&zwnj;, &lsquo;ಹೋರ್ಮುಜ್&zwnj; ಜಲಸಂಧಿಯನ್ನು ಮುಕ್ತ ಮಾಡುವುದು ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದ ಮಾತುಕತೆ ದೊಡ್ಡಮಟ್ಟದಲ್ಲಿ ನಡೆಯಿತು. ಒಪ್ಪಂದವು ಕೊನೆಯ ಹಂತದಲ್ಲಿದೆ&rsquo; ಎಂದು ಭಾನುವಾರ ಬೆಳಗ್ಗೆ ಹೇಳಿದ್ದರು. ಅತ್ತ ರುಬಿಯೋ, &lsquo;ಕೆಲವೇ ದಿನಗಳಲ್ಲಿ ಸಿಹಿಸುದ್ದಿ ಸಿಗಲಿದೆ. ಇರಾನ್&zwnj; ಅಣ್ವಸ್ತ್ರ ಹೊಂದುತ್ತದೆ ಎಂದು ಇನ್ನು ಜಗತ್ತು ಭಯಪಡುವ ಅಗತ್ಯವಿಲ್ಲ&rsquo; ಎಂದು ಹೇಳಿದ್ದರು.&lt;/p&gt;&lt;h3&gt;&lt;strong&gt;ಉಲ್ಟಾ ಹೊಡೆದ ಟ್ರಂಪ್&zwnj;:&lt;/strong&gt;&lt;/h3&gt;&lt;p&gt;ಸಂಜೆಯಷ್ಟರಲ್ಲಿ ವರಸೆ ಬದಲಿಸಿದ ಟ್ರಂಪ್&zwnj;, ಇರಾನ್&zwnj;ನ ಧ್ವಜ ಹೊತ್ತಿರುವ ಬೃಹತ್&zwnj; ನೌಕೆಗಳ ಮೇಲೆ ಅಮೆರಿಕದ ಡ್ರೋನ್&zwnj; ದಾಳಿ ಮಾಡುತ್ತಿರುವ, ಮೇಲೆ ದೊಡ್ಡದಾಗಿ &lsquo;ಅಡಿಯೋಸ್&zwnj;&rsquo;(ವಿದಾಯ) ಎಂದು ಬರೆದಿರುವ ಫೋಟೋ ಹಂಚಿಕೊಂಡಿದ್ದಾರೆ. ಇದು, ಟ್ರಂಪ್&zwnj; ಮತ್ತೆ ದಾಳಿ ಆರಂಭಿಸಲಿದ್ದಾರೆಯೇ ಎಂಬ ಭೀತಿ ಹುಟ್ಟಿಹಾಕಿದೆ.&lt;/p&gt;&lt;p&gt;&lt;strong&gt;ಡೀಲ್&zwnj;ಗೆ ಆತುರ ಬೇಡ:&lt;/strong&gt;&lt;/p&gt;&lt;p&gt;ಇದಾದ 1 ಗಂಟೆಯ ಬಳಿಕ ಟ್ರಂಪ್&zwnj;, &lsquo;ಒಪ್ಪಂದ ಮಾಡಿಕೊಳ್ಳುವುದರಲ್ಲಿ ಆತುರ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ತಪ್ಪಾಗಬಾರದು. ಅಲ್ಲಿಯವರೆಗೆ ಹೋರ್ಮುಜ್&zwnj; ಮೇಲಿನ ದಿಗ್ಬಂಧನ ಮುಂದುವರಿಯುತ್ತದೆ&rsquo; ಎಂದು ಪೋಸ್ಟ್&zwnj; ಮಾಡುವ ಮೂಲಕ ಮತ್ತೆ ಮಾತುಕತೆಯಲ್ಲಿ ಆಸಕ್ತಿ ತೋರಿಸಿದ್ದಾರೆ.&lt;/p&gt;&lt;p&gt;&lt;strong&gt;30 ದಿನದಲ್ಲಿ ಸಹಜಸ್ಥಿತಿ-ಇರಾನ್&zwnj;:&lt;/strong&gt;&lt;/p&gt;&lt;p&gt;ಅತ್ತ, ಕದನವಿರಾಮ ಏರ್ಪಟ್ಟ 30 ದಿನಗಳಲ್ಲಿ ಹೋರ್ಮುಜ್&zwnj; ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಓಡಾಟ ಮತ್ತೆ ಮೊದಲಿನಂತಾಗುತ್ತದೆ ಎಂದು ಇರಾನ್&zwnj;ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ.&lt;/p&gt;&lt;p&gt;&lt;strong&gt;ಯುರೇನಿಯಂ ತ್ಯಾಗಕ್ಕೆ ಇರಾನ್&zwnj; ಸಿದ್ಧ?:&lt;/strong&gt;&lt;/p&gt;&lt;p&gt;ಇರಾನ್&zwnj; ಅಣ್ವಸ್ತ್ರ ಹೊಂದಬಾರದು ಎಂಬುದೇ ಅಮೆರಿಕದ ಪ್ರಮುಖ ಬೇಡಿಕೆಯಾಗಿರುವ ಹೊತ್ತಿನಲ್ಲಿ, ಇರಾನ್&zwnj; ತನ್ನ ಬಳಿ ಇರುವ ಸಂಸ್ಕರಿಸಿದ ಯುರೇನಿಯಂಅನ್ನು ತ್ಯಜಿಸಲು ಸಿದ್ಧವಾಗಿದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್&zwnj; ಟೈಮ್ಸ್&zwnj; ವರದಿ ಮಾಡಿದೆ.&lt;/p&gt;]]></content:encoded>
            <category>world-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/ceasefire-talks-between-the-us-and-iran-are-in-disarray-donald-trump-made-a-confusing-statement-mrq/articleshow-i3929mp"/>
        </item>
        <item>
            <title><![CDATA[ಇರಾನ್‌ ಜತೆಗಿನ ಸಂಧಾನದ ಮಾತುಕತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ, ಒಬಾಮಾ ಮಾಡಿದಂತೆ ಮಾಡಲ್ಲ: ಟ್ರಂಪ್]]></title>
            <link>https://kannada.asianetnews.com/world-news/donald-trump-links-iran-peace-deal-to-mandatory-abraham-accords-gdp/articleshow-kb4wckz</link>
            <guid isPermaLink="true">https://kannada.asianetnews.com/world-news/donald-trump-links-iran-peace-deal-to-mandatory-abraham-accords-gdp/articleshow-kb4wckz</guid>
            <pubDate>Tue, 26 May 2026 09:50:29 +0530</pubDate>
            <description><![CDATA[ಇರಾನ್&zwnj; ಜೊತೆಗಿನ ಮಾತುಕತೆ ಉತ್ತಮವಾಗಿ ಸಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಹೇಳಿದ್ದಾರೆ. ಒಂದೋ ಅದ್ಭುತ ಒಪ್ಪಂದವಾಗಲಿದೆ ಅಥವಾ ಒಪ್ಪಂದವೇ ಆಗುವುದಿಲ್ಲ ಎಂದಿರುವ ಅವರು, ಅಬ್ರಹಾಂ ಅಕಾರ್ಡ್&zwnj;ಗೆ ಸಹಿ ಹಾಕುವಂತೆಯೂ ಒತ್ತಾಯಿಸಿದ್ದಾರೆ. ಇರಾನ್&zwnj;ನ ಸರ್ವೋಚ್ಚ ನಾಯಕ ಖಮೇನಿಯವರ ನಿರ್ಧಾರದಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksf5w37xfmjcrqy5xy5jf1s1,imgname-gettyimages-2277690732-1779699682557.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;:&lt;/strong&gt; ಇರಾನ್&zwnj; ಜತೆಗಿನ ಸಂಧಾನದ ಮಾತುಕತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj;, &lsquo;ಒಂದೋ ಅದ್ಭುತವಾದ ಒಪ್ಪಂದ ಏರ್ಪಡಲಿದೆ. ಇಲ್ಲವೇ ಒಪ್ಪಂದವೇ ಆಗುವುದಿಲ್ಲ&rsquo; ಎಂದು ಹೇಳಿದ್ದಾರೆ.ಈ ಬಗ್ಗೆ ಟ್ರುತ್&zwnj;ನಲ್ಲಿ ಪೋಸ್ಟ್&zwnj; ಮಾಡಿರುವ ಅವರು, &lsquo;ಇರಾನ್ ಜೊತೆ 2015ರಲ್ಲಿ ಒಬಾಮಾ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಪರಮಾಣು ಒಪ್ಪಂದಕ್ಕೆ ಪೂರ್ಣ ವಿರುದ್ಧವಾದ ನಿರ್ಧಾರ ನನ್ನದಾಗಿರಲಿದೆ&rsquo; ಎಂದಿದ್ದಾರೆ. ಆ ಒಪ್ಪಂದದಲ್ಲಿ ಇರಾನ್&zwnj; ಪರಮಾಣುವಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ತಗ್ಗಿಸಿತ್ತು ಹಾಗೂ ಅದಕ್ಕೆ ಪ್ರತಿಯಾಗಿ ಅಮೆರಿಕ ನಿರ್ಬಂಧಗಳನ್ನು ಸಡಿಲಿಸಿತ್ತು. ಆದರೆ ತಾವು ಇರಾನ್&zwnj; ಮೇಲೆ ಅಣ್ವಸ್ತ್ರ ಹೊಂದದಂತೆ ಅಧಿಕ ಒತ್ತಡ ಹೇರುತ್ತೇವೆ ಎಂಬರ್ಥದಲ್ಲಿ ಟ್ರಂಪ್&zwnj; ಹೇಳಿದ್ದಾರೆ.&lt;/p&gt;&lt;h2&gt;ಅಬ್ರಹಾಂ ಅಕಾರ್ಡ್&zwnj; ಸೇರಿ:&lt;/h2&gt;&lt;p&gt;ಇಸ್ರೇಲ್&zwnj; ಜತೆ ಅರಬ್&zwnj; ರಾಷ್ಟ್ರಗಳ ಸಂಬಂಧ ವೃದ್ಧಿಸಲೆಂದು ಸೃಷ್ಟಿಸಲಾಗಿರುವ ಅಬ್ರಹಾಂ ಅಕಾರ್ಡ್&zwnj;ಗೆ ಸಹಿ ಹಾಕುವಂತೆ ಅಧ್ಯಕ್ಷ ಟ್ರಂಪ್&zwnj; ಅವರು ಇರಾನ್&zwnj; ಹಾಗೂ ಅದರೊಂದಿಗಿನ ತಮ್ಮ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳಿಗೆ ಒತ್ತಾಯಿಸಿದ್ದಾರೆ. &lsquo;ಎಲ್ಲಾ ರಾಷ್ಟ್ರಗಳು ಕಡ್ಡಾಯವಾಗಿ ಅಕಾರ್ಡ್&zwnj;ಗೆ ಸಹಿ ಮಾಡಬೇಕು. ಹಾಗೆ ಮಾಡದಿರಲು ಬಲವಾದ ಕಾರಣವಿದ್ದಲ್ಲಿ ಒಂದೆರಡು ದೇಶಗಳಿಗೆ ವಿನಾಯಿತಿ ನೀಡುತ್ತೇವೆ&rsquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಯುಎಇ ಮತ್ತು ಬಹ್ರೈನ್&zwnj; ಈಗಾಗಲೇ ಅಕಾರ್ಡ್&zwnj;ನ ಭಾಗವಾಗಿವೆ. ಪ್ರಮುಖ ಸಂಧಾನಕಾರ ಪಾಕಿಸ್ತಾನ ಸೇರಿದಂತೆ ಸೌದಿ ಅರೇಬಿಯಾ, ಕತಾರ್, ಟರ್ಕಿ, ಈಜಿಪ್ಟ್ ಮತ್ತು ಜೋರ್ಡಾನ್&zwnj;ಗಳು ಇದಕ್ಕಿನ್ನೂ ಸಹಿ ಮಾಡಿಲ್ಲ.&lt;/p&gt;&lt;h2&gt;ಡೀಲ್&zwnj; ಬಗ್ಗೆ ಖಮೇನಿ ನಿರ್ಧಾರ&lt;/h2&gt;&lt;p&gt;ಫೆ.28ರಂದು ಯುದ್ಧ ಶುರುವಾದಾಗಿನಿಂದ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡೇ ಇರದ ಇರಾನ್&zwnj;ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಯವರು ಒಪ್ಪಂದದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿರುವರಾದ ಕಾರಣ ಪ್ರಕ್ರಿಯೆಯಲ್ಲಿ ತಡವಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಜತೆಗೆ, ಖಮೇನಿ ಪ್ರಸ್ತುತ ಅಮೆರಿಕ ಪ್ರಸ್ತಾಪಿಸಿರುವ ಕರಡು ಒಪ್ಪಂದಕ್ಕೆ ಒಪ್ಪಿಕೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.&lt;/p&gt;&lt;p&gt;ಅಮೆರಿಕದ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಖಮೇನಿ, ಇರಾನ್&zwnj;ನ ಯಾವ ಅಧಿಕಾರಿಯನ್ನೂ ನೇರವಾಗಿ ಭೇಟಿ ಆಗುತ್ತಿಲ್ಲ. ಅವರೊಂದಿಗಿನ ಎಲ್ಲಾ ಸಂವಹನಗಳು ಪತ್ರಗಳ ಮುಖೇನ ನಡೆಯುತ್ತಿದೆ ಎನ್ನಲಾಗಿದೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/donald-trump-links-iran-peace-deal-to-mandatory-abraham-accords-gdp/articleshow-kb4wckz"/>
        </item>
        <item>
            <title><![CDATA[Ope. Safed sagar: ಆಗಸದಿಂದ ಭಾರತದ ಬೆಂಕಿ ಮಳೆ- ಪಾಕಿಗಳ ಹುಟ್ಟಡಗಿಸಿದ್ದ ಯೋಧರು]]></title>
            <link>https://kannada.asianetnews.com/india-news/anniversary-of-operation-safed-sagar-launched-during-1999-kargil-war-suc/articleshow-nnefmop</link>
            <guid isPermaLink="true">https://kannada.asianetnews.com/india-news/anniversary-of-operation-safed-sagar-launched-during-1999-kargil-war-suc/articleshow-nnefmop</guid>
            <pubDate>Tue, 26 May 2026 18:27:19 +0530</pubDate>
            <description><![CDATA[1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಪಾಕಿಸ್ತಾನಿ ಪಡೆಗಳು ದುರ್ಗಮ ಶಿಖರಗಳನ್ನು ಆಕ್ರಮಿಸಿಕೊಂಡಿದ್ದವು. ಆರಂಭಿಕ ಹಿಂಜರಿಕೆಯ ನಂತರ, ಭಾರತೀಯ ವಾಯುಪಡೆಯು 'ಆಪರೇಷನ್ ಸಫೇದ್ ಸಾಗರ್' ಅನ್ನು ಪ್ರಾರಂಭಿಸಿ, ಅತಿ ಎತ್ತರದಲ್ಲಿ ವೈಮಾನಿಕ ದಾಳಿ ನಡೆಸಿ ಶತ್ರು ನೆಲೆಗಳನ್ನು ಧ್ವಂಸಗೊಳಿಸಿತು. ಈ ಕಾರ್ಯಾಚರಣೆಯು ಭಾರತದ ಅಂತಿಮ ವಿಜಯಕ್ಕೆ ನಿರ್ಣಾಯಕವಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01ksj5qa1snds4zwtxzrr4dtnd,imgname-kargil-war-1779800188984.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಂದು ಮೇ 26 1999. ಅಂದರೆ ಇಂದಿಗೆ 27 ವರ್ಷಗಳ ಹಿಂದಿನ ಸ್ಟೋರಿ ಇದು. ಕಾರ್ಗಿಲ್, ದ್ರಾಸ್ ಮತ್ತು ಬಟಾಲಿಕ್ ವಲಯಗಳಲ್ಲಿ ಪಾಕಿಸ್ತಾನಿ ಪಡೆಗಳು ಎತ್ತರದ ಪರ್ವತ ಶಿಖರಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದರು. ಪರ್ವತದ ಶಿಖರದಿಂದ ಗುಂಡು ಹಾರಿಸಿದರೆ, ಕೆಳಗೆ ಇರುವ ಭಾರತೀಯ ಯೋಧರು ಹೇಗೆ ಮಾಡಿದರೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಅವರ ಪ್ಲ್ಯಾನ್​ ಇದಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಥಾನಗಳನ್ನು ಆಕ್ರಮಿಸಿಕೊಂಡಿತ್ತಯ ಪಾಕಿಸ್ತಾನಿ ಸೇನೆ. ಗೆಲುವು ನಮ್ಮದೇ ಎನ್ನುವ ಅಹಂನಲ್ಲಿತ್ತು ಪಾಕಿಸ್ತಾನ. ಏಕೆಂದರೆ ಅಷ್ಟು ದುರ್ಗಮ ಸ್ಥಾನವನ್ನು ಏರಿ ಕುಳಿತಿದ್ದರು.&lt;/p&gt;&lt;p&gt;ಆದರೆ ನಮ್ಮದು ಭಾರತೀಯ ಸೇನೆ ಎನ್ನುವುದನ್ನೇ ಅವರು ಮರೆತುಬಿಟ್ಟಿದ್ದರು. ಅಟಲ್​ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವಿದ್ದ ಅವಧಿಯದು. ಭಾರತೀಯ ಸೇನೆ ಅಂದು ಮಾಡಿದ ಕಾರ್ಯಾಚರಣೆಯೇ ಆಪರೇಷನ್​ ಸಫೇದ್​ ಸಾಗರ್​. ಆದರೆ ಈ ಆಪರೇಷನ್​ ಅದೆಷ್ಟು ಅಪಾಯಕಾರಿಯಾಗಿತ್ತು ಎಂದರೆ, ಇದಕ್ಕೆ ಕೇಂದ್ರ ಸರ್ಕಾರ ಯೋಧರಿಗೆ ಅನುಮತಿಯನ್ನೇ ನೀಡಿರಲಿಲ್ಲ. ಯುದ್ಧ ಶುರುವಾಗಿ 14 ದಿನ ಕಳೆದರು ಕೂಡ ವಾಯುಪಡೆ ಬಳಸೋಕೆ ಸರ್ಕಾರ ಆರಂಭದಲ್ಲಿ ಧೈರ್ಯ ತೋರಿಸಿರಲಿಲ್ಲ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, 1998 ರಲ್ಲಿಷ್ಟೇ ಭಾರತ ಪಾಕಿ ಎರಡು ರಾಷ್ಟ್ರಗಳು ಅಣ್ವಸ್ತ್ರ ಪರೀಕ್ಷೆ ಮಾಡಿದ್ದವು. ಆದ್ದರಿಂದ ಬಹಳ ಚರ್ಚೆಯ ಬಳಿಕ ಕೊನೆಗೆ ಅನುಮತಿ ಸಿಕ್ಕಿತ್ತು.&lt;/p&gt;&lt;p&gt;ಒರಟಾದ ಪರ್ವತ ಪ್ರದೇಶದಲ್ಲಿ ಅತಿ ಎತ್ತರದ ನಿಖರ ಕಾರ್ಯಾಚರಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಐಎಎಫ್&zwnj; ಅತ್ಯಂತ ಕರಾರುವಕ್ಕಾಗಿ ಪೂರ್ಣಗೊಳಿಸಿತ್ತು. ಪಾಕಿಗಳು ಅಡಗಿ ಕುಳಿತಿದ್ದ ಜಾಗಕ್ಕಿಂತಲೂ ಮೇಲೆ ಆಗಸದ ಎತ್ತರಕ್ಕೆ ಹೋಗಿದ್ದ ನಮ್ಮ ಯೋಧರು, ಅಲ್ಲಿಂದ ಬೆಂಕಿಯ ಮಳೆಯನ್ನೇ ಸುರಿಸಿಬಿಟ್ಟರು. ಹದಿನಾರುವರೆ ಸಾವಿರ ಅಡಿಗಿಂತಲೂ ಎತ್ತರಕ್ಕೆ ಯೋಧರು ದುರ್ಗಮ ಹಾದಿಯಲ್ಲಿ ಸಾಗಿದ್ದರು. ಕೆಲವು ಯೋಧರು ಪ್ರಾಣ ಕಳೆದುಕೊಂಡರು. ಕೊನೆಗೆ ಕಾರ್ಗಿಲ್​ ಯುದ್ಧದಲ್ಲಿ ಭಾರತಕ್ಕೆ ಜಯ ಸಿಕ್ಕಿತು.&lt;/p&gt;&lt;h2&gt;&lt;strong&gt;ಇತಿಹಾಸದಲ್ಲಿ ದಾಖಲೆ&lt;/strong&gt;&lt;/h2&gt;&lt;p&gt;ಈ ಕಾರ್ಯಾಚರಣೆ ಇತಿಹಾಸದಲ್ಲಿ ದಾಖಲಾಗಿದೆ. ಅದಕ್ಕೆ ಕಾರಣ, ಮಿರಾಜ್ 2000, ಮಿಗ್ 21, ಎಂಐ 17,s ಜಾಗ್ವಾರ್&zwnj;, ಮಿಗ್ 23, ಮಿಗ್ 27, ಚೇತಕ್ ಮತ್ತು ಮಿಗ್ 29ನಂತಹ ಯುದ್ಧ ವಿಮಾನಗಳನ್ನು ಬಳಸಲಾಗಿತ್ತು. ಈ ಯುದ್ಧ ವಿಮಾನಗಳು ಶತ್ರು ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಯಿತು. ಅದು ಜಗತ್ತಿನ ಮಿಲಿಟರಿ ಇತಿಹಾಸದಲ್ಲಿ ನಡೆದ ಹೈ ಆಲ್ಟಿಟ್ಯೂಡ್ ಏರ್ ವಾರ್ ಎಂದೇ ಫೇಮಸ್​ ಆಗಿದೆ. ಮೊದಲ ಬಾರಿಗೆ ಪಾಕಿಗಳಿಗೆ ಇಸ್ರೇಲ್ ಬಾಂಬ್​ಗಳ ರುಚಿಯನ್ನು ಭಾರತ ತೋರಿತ್ತು.&lt;/p&gt;&lt;h3&gt;&lt;strong&gt;ಕಾರ್ಗಿಲ್​ ವಿಜಯೋತ್ಸವ&lt;/strong&gt;&lt;/h3&gt;&lt;p&gt;ಕಾರ್ಗಿಲ್ ಪರ್ವತಗಳ ಹಿಮಾವೃತ ಶಿಖರಗಳಲ್ಲಿ ಸುಮಾರು ಮೂರು ತಿಂಗಳ ಕಾಲ ಯುದ್ಧ ನಡೆಯಿತು. ಮೇ ತಿಂಗಳಲ್ಲಿ ಪಾಕಿಸ್ತಾನಿ ಪಡೆಗಳು ಮತ್ತು ಭಯೋತ್ಪಾದಕರು ಕಾರ್ಗಿಲ್ ವಲಯದ ಶಿಖರಗಳನ್ನು ಆಕ್ರಮಿಸಿಕೊಂಡಾಗ, ಭಾರತೀಯ ಸೇನೆ ತಕ್ಷಣ ಪ್ರತಿಕ್ರಿಯೆ ನೀಡಿತು. ಭಾರತವು ತನ್ನ ಭೂಪ್ರದೇಶವನ್ನು ಮರಳಿ ಪಡೆಯಲು 'ಆಪರೇಷನ್ ವಿಜಯ್'ನ್ನು ಪ್ರಾರಂಭಿಸಿತು. ಜುಲೈ 26 ರಂದು ಭಾರತ ಅಂತಿಮವಾಗಿ ಕಾರ್ಗಿಲ್&zwnj; ಯುದ್ಧವನ್ನು ಗೆದ್ದುಕೊಂಡಿತು. ಭಾರತವು ಪ್ರತಿ ವರ್ಷದ ಜುಲೈ 26ನ್ನು 'ಕಾರ್ಗಿಲ್ ವಿಜಯ್ ದಿವಸ್' ಎಂದು ಆಚರಿಸುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/anniversary-of-operation-safed-sagar-launched-during-1999-kargil-war-suc/articleshow-nnefmop"/>
        </item>
        <item>
            <title><![CDATA[ರಾಜ್ಯದಲ್ಲಿ SIRಗೆ ವಿರೋಧ:  ಬಂಗಾಳದಿಂದ ಕರ್ನಾಟಕ ನುಗ್ಗುತ್ತಿರುವ ನುಸುಳುಕೋರರು- ಶಾಕಿಂಗ್​ ವಿಡಿಯೋ ವೈರಲ್​]]></title>
            <link>https://kannada.asianetnews.com/india-news/bangladeshis-entering-karnataka-from-west-bengal-shocking-video-goes-viral-suc/articleshow-p9y0o1z</link>
            <guid isPermaLink="true">https://kannada.asianetnews.com/india-news/bangladeshis-entering-karnataka-from-west-bengal-shocking-video-goes-viral-suc/articleshow-p9y0o1z</guid>
            <pubDate>Mon, 25 May 2026 16:22:23 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹೊರಬಿದ್ದ ಬಾಂಗ್ಲಾ ನುಸುಳುಕೋರರು ಈಗ ಕರ್ನಾಟಕದತ್ತ ಮುಖಮಾಡುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ನಕಲಿ ಆಧಾರ್ ಕಾರ್ಡ್ ಬಳಸಿ ವಲಸಿಗರು ರಾಜ್ಯ ಪ್ರವೇಶಿಸುತ್ತಿದ್ದು, ಇದು ರಾಜ್ಯದ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡಬಹುದು ಎಂದು ಹಿಂದೂಪರ ಸಂಘಟನೆಗಳು ಎಚ್ಚರಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksfc64m9t0c0ysjz1tg5jy0a,imgname-bangladeshis-1779706303113.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದ ನುಸುಳುಕೋರರನ್ನು ಮತದಾರರ ಪಟ್ಟಿ ಪರಿಷ್ಕರಣೆ (SIR) ಮಾಡುವ ಮೂಲಕ ಹೊರಕ್ಕೆ ದಬ್ಬಿರುವುದು ಗೊತ್ತೇ ಇದೆ. ಮಮತಾ ಬ್ಯಾನರ್ಜಿ ಅವರ ವೋಟ್​ ಬ್ಯಾಂಕ್​ ಆಗಿದ್ದ ಈ ನುಸುಳುಕೋರರು, ಪಶ್ಚಿಮ ಬಂಗಾಳದಲ್ಲಿ ಇನ್ನಿಲ್ಲದ ಭಯೋತ್ಪಾದನಾ ಕೃತ್ಯ ಸೇರಿದಂತೆ ದೇಶ ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದರು. ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಈ ನುಸುಳುಕೋರರಿಗೆ ರಕ್ಷಣೆ ಒದಗಿಸುತ್ತಿದ್ದ ದೀದಿ, ಅಲ್ಲಿಯ ಹಿಂದೂಗಳ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದರು. ತಮ್ಮ ವೋಟ್​ಬ್ಯಾಂಕ್​ ಹೋಗುತ್ತೆ ಎನ್ನುವಕಾರಣಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡದಂತೆ ಕೋರ್ಟ್​ ಮೆಟ್ಟಿಲೆಲ್ಲಾ ಏರಿದ್ದರೂ ಸಾಧ್ಯವಾಗಿರಲಿಲ್ಲ. ಕೊನೆಗೆ, ನುಸುಳುಕೋರರು ಬಂಗಾಳ ಬಿಟ್ಟು ಹೋಗುವಂತಾಯಿತು.&lt;/p&gt;&lt;p&gt;ಮುಸ್ಲಿಂ ನುಸುಳುಕೋರರರಿಗೆ ಯಾವ ಮುಸ್ಲಿಂ ರಾಷ್ಟ್ರಗಳೂ ಸ್ವಾಗತ ಕೋರುವುದಿಲ್ಲ. ಬಾಂಗ್ಲಾದೇಶಿಗರಿಗೂ ಹಾಗೆಯೇ ಆಗಿದೆ. ನುಸುಳುಕೋರರಾಗಿ ಸದ್ಯ ಇರುವುದು ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ತುಂಬು ಹೃದಯದ ಸ್ವಾಗತ ಎನ್ನುವ ವಿಷಯಗಳು ಕೇಳಿಬರುತ್ತಿದೆ. ಇತ್ತ ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯದಂತೆ ಸರ್ಕಾರ ಭಾರಿ ಪ್ರಯತ್ನ ಮಾಡುತ್ತಿದೆ. ಕೋರ್ಟ್​ಗೆ ಹೋಗಲಿದೆ. ಇದಾಗಲೇ ಈ ಬಗ್ಗೆ ಮೀಟಿಂಗ್​ ಕೂಡ ನಡೆದಿದೆ. ಇದರ ಬೆನ್ನಲ್ಲೇ ನುಸುಳುಕೋರರು ಕರ್ನಾಟಕವನ್ನು ಪ್ರವೇಶಿಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್​ ಆಗ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ನುಸುಳುಕೋರರಿಗೆ ಕರ್ನಾಟಕವೇ ಸೇಫ್​?&lt;/strong&gt;&lt;/h2&gt;&lt;p&gt;ಇದಾಗಲೇ ಬಾಂಗ್ಲಾ ವಲಸಿಗರು ಹುಬ್ಬಳ್ಳಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳತ್ತ ಮುಖ ಮಾಡುತ್ತಿರುವ ವಿಡಿಯೋಗಳು ವೈರಲ್​ ಆಗುತ್ತವೆ. ಇತ್ತೀಚೆಗೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಕೆಲ ಶಂಕಿತರನ್ನು ರೈಲ್ವೆ ಪೊಲೀಸರು ಕೇವಲ ಆಧಾರ್ ಕಾರ್ಡ್ ಪರಿಶೀಲಿಸಿ ಬಿಟ್ಟು ಕಳುಹಿಸಿದ್ದರು. ಅವರು ಬಾಗಲಕೋಟೆಗೆ ಕೂಲಿ ಕೆಲಸಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಆದರೆ, ನಕಲಿ ಆಧಾರ್ ಕಾರ್ಡ್&zwnj;ಗಳನ್ನು ಸೃಷ್ಟಿಸಿ ವಲಸಿಗರು ಬರುತ್ತಿರುವ ಸಾಧ್ಯತೆ ಇರುವುದರಿಂದ ಸಮಗ್ರ ತನಿಖೆ ನಡೆಸಬೇಕು ಎನ್ನುವುದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹವಾಗಿದೆ. ಏಕೆಂದರೆ ಪಶ್ಚಿಮ ಬಂಗಾಳದಲ್ಲಿಯೂ ಇವರಿಗೆಲ್ಲಾ ಮಮತಾ ಬ್ಯಾನರ್ಜಿ ನಕಲಿ ಆಧಾರ್​ ಕಾರ್ಡ್​ ಮಾಡಿಸಿಕೊಟ್ಟಿದ್ದರು. ಇಲ್ಲಿಯೂ ಆ ರೀತಿ ಆಗಿರುವ ಸಾಧ್ಯತೆ ಇದೆ, ಇದರಿಂದ ರಾಜ್ಯಕ್ಕೆ ಭಾರಿ ಸಂಕಷ್ಟ ಎದುರಾಗಲಿದ್ದು, ಭದ್ರತೆ ದೃಷ್ಟಿಯಿಂದ ಇದು ಅತ್ಯಂತ ಕಠಿಣ ಪರಿಸ್ಥಿತಿಯಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಹೇಳುತ್ತಿವೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ನಕಲಿ ಆಧಾರ್​ ಕಾರ್ಡ್​?&lt;/strong&gt;&lt;/h3&gt;&lt;p&gt;ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಗೆ ತಂಡೋಪತಂಡವಾಗಿ ಬಾಂಗ್ಲಾದೇಶಿಯರು ಬಂದಿರುವ ಅನುಮಾನ ವ್ಯಕ್ತವಾಗುತ್ತಿದೆ. ಅದಕ್ಕೆ ಪುರಾವೆ ಎನ್ನುವಂತೆ ಅವರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿದಾಗ, ಅವರು ಪಶ್ಚಿಮ ಬಂಗಾಳದಿಂದ ಬಂದಿದ್ದು, ಕೂಲಿ ಕೆಲಸಕ್ಕೆ ಬಾಗಲಕೋಟೆಗೆ ಹೋಗುತ್ತಿರುವುದಾಗಿ ಹೇಳಿದ್ದರು! ಆದರೆ ಆಧಾರ ಕಾರ್ಡ್ ತೋರಿಸಿದ್ದರಿಂದ ಅವರನ್ನು ರೈಲ್ವೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಇದೀಗ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕೇವಲ ಆಧಾರ ಕಾರ್ಡ್ ನೋಡಿ ಬಿಟ್ಟು ಕಳುಹಿಸಿದರೆ ಸಾಲದು, ಏಕೆಂದರೆ ನಕಲಿ ಆಧಾರ ಕಾರ್ಡ್ ಮಾಡಿಸಿಕೊಂಡು ಅನೇಕರು ಬರುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಿಂದ ಯಾರೆಲ್ಲಾ ಹುಬ್ಬಳ್ಳಿಗೆ ಬರುತ್ತಾರೆ ಅವರನ್ನು ಸಮಗ್ರ ತನಿಖೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಕಾಟಾಚಾರಕ್ಕೆ ತಪಾಸಣೆ&lt;/strong&gt;&lt;/h3&gt;&lt;p&gt;ಹಿಂದೂ ಪರ ಸಂಘಟನೆ ಪ್ರತಿಭಟನೆ ಜೋರಾದಂತೆ, ಕಾಟಾಚಾರಕ್ಕೆ ಪೊಲೀಸರು ರೈಲಿನಲ್ಲಿ ಬರುವವರ ತಪಾಸಣೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನೂರಾರು ಪ್ರಯಾಣಿಕರು ಬಂದಿದ್ದರಿಂದ ಪೊಲೀಸರು ಯಾರನ್ನು ಕೂಡ ಸರಿಯಾಗಿ ತಪಾಸಣೆ ಮಾಡಲು ಸಾಧ್ಯವಾಗಲಿಲ್ಲ. ಹಿಂದೂಪರ ಸಂಘಟನೆಗಳ ಆರೋಪಗಳ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಮಾಹಿತಿ ನೀಡದೇ ಇದ್ದರು ಕೂಡ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.ಹೀಗೆ ಕಾಟಾಚಾರಕ್ಕೆ ಅವರ ತಪಾಸಣೆ ಒಂದೆಡೆಯಾದರೆ, SIR ಗೆ ಕಾಂಗ್ರೆಸ್​ ಸರ್ಕಾರದ ವಿರೋಧ ಇನ್ನೊಂದೆಡೆ. ಇದು ಕರ್ನಾಟಕ ದೀದೀ ನಾಡು ಪಶ್ಚಿಮ ಬಂಗಾಳ ಆಗುತ್ತದೆಯೇ ಎನ್ನುವ ಆತಂಕ ಹಲವರಲ್ಲಿ ಮನೆಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/bangladeshis-entering-karnataka-from-west-bengal-shocking-video-goes-viral-suc/articleshow-p9y0o1z"/>
        </item>
        <item>
            <title><![CDATA[ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆ ನಟಿಸಿದ್ದ ಕನ್ನಡದ ಏಕೈಕ ಈ ನಟ ಈಗ ಫುಟ್‌ಪಾತ್‌ ಪಾಲಾದ್ರಾ?]]></title>
            <link>https://kannada.asianetnews.com/cine-world/is-the-kannada-actor-acted-with-miss-world-aishwarya-rai-now-driving-a-taxi-and-doing-odd-jobs-to-make-a-living-abroad/articleshow-sehg77c</link>
            <guid isPermaLink="true">https://kannada.asianetnews.com/cine-world/is-the-kannada-actor-acted-with-miss-world-aishwarya-rai-now-driving-a-taxi-and-doing-odd-jobs-to-make-a-living-abroad/articleshow-sehg77c</guid>
            <pubDate>Mon, 25 May 2026 11:27:50 +0530</pubDate>
            <description><![CDATA[&lt;p&gt;ಸೋಲು-ಗೆಲುವು ಜೀವನದ ಭಾಗ. ಈ ನಟ ಇಂದು ಸಿನಿಮಾದಿಂದ ದೂರವಿದ್ದರೂ, ತಮ್ಮ ಕಷ್ಟದ ದಿನಗಳನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಐಶ್ವರ್ಯಾ ರೈ ಜೊತೆ ರೊಮ್ಯಾನ್ಸ್ ಮಾಡಿದ್ದ ಈ ನಟ, ಇಂದು ಜೀವನದ ಜೊತೆ ಹೋರಾಟ ಮಾಡುತ್ತಿರುವುದು ಸಿನಿಮಾ ಕಥೆಗಿಂತಲೂ ಭಯಾನಕವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k8x0zk3z3dax09np6hv89g8c,imgname-aishwarya-rai-family-education-qualification-1761910705279.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆ ನಟಿಸಿದ್ದ ಈ ಕನ್ನಡದ 'ಚಾಕೊಲೇಟ್ ಹಿರೋ' ಈಗ ಎಲ್ಲಿದ್ದಾರೆ?&lt;/strong&gt;&lt;/p&gt;&lt;p&gt;ಸಿನಿಮಾ ರಂಗ ಅಂದರೆ ಹಾಗೆ, ಇಲ್ಲಿ ಇಂದು ರೇಷ್ಮೆ ಹಾಸಿಗೆಯ ಮೇಲೆ ಮಲಗಿದವರು ನಾಳೆ ಬೀದಿಗೆ ಬರಬಹುದು, ಬೀದಿಯಲ್ಲಿದ್ದವರು ರಾತ್ರೋರಾತ್ರಿ ಸ್ಟಾರ್ ಆಗಬಹುದು. ಇಂತಹದ್ದೇ ಒಂದು ನಂಬಲಾಗದ, ಎದೆ ನಡುಗಿಸುವ ಕಥೆ ನಟ ಅಬ್ಬಾಸ್ ಅವರದ್ದು. ಒಂದು ಕಾಲದಲ್ಲಿ ಹುಡುಗಿಯರ ಹಾರ್ಟ್ ಫೇವರೆಟ್ ಆಗಿದ್ದ ಈ ನಟ, ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಜೊತೆ ತೆರೆ ಹಂಚಿಕೊಂಡ ಏಕೈಕ 'ಕನ್ನಡದ ನಟ' ಎನ್ನುವ ಹೆಗ್ಗಳಿಕೆಗೂ ಪಾತ್ರರಾದವರು. ಆದರೆ ಇವತ್ತು ಅವರು ಎಲ್ಲಿದ್ದಾರೆ ಗೊತ್ತಾ?&lt;/p&gt;&lt;p&gt;ಐಶ್ವರ್ಯಾ ರೈ ಮತ್ತು ಅಬ್ಬಾಸ್ ಕನೆಕ್ಷನ್!&lt;/p&gt;&lt;p&gt;ನಮಗೆಲ್ಲಾ ತಿಳಿದಿರುವಂತೆ ಐಶ್ವರ್ಯಾ ರೈ ಮೂಲತಃ ಮಂಗಳೂರಿನವರು. ಕರಾವಳಿ ಬೆಡಗಿ ಬಾಲಿವುಡ್ ಆಳಿದರೂ, ಅವರು ಒಂದೇ ಒಂದು ನೇರ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ ಎನ್ನುವ ಬೇಸರ ಕನ್ನಡಿಗರಿಗಿದೆ. ಹೀಗಾಗಿ, ಕನ್ನಡದ ಯಾವ ನಟನ ಜೊತೆಯೂ ಐಶ್ವರ್ಯಾ ನಟಿಸಿಲ್ಲ ಎಂದು ಅನೇಕರು ಭಾವಿಸಿದ್ದಾರೆ. ಆದರೆ, ಅಬ್ಬಾಸ್ (Abbas Ali) ಅವರು ಕನ್ನಡದ 'ಶಾಂತಿ ಶಾಂತಿ ಶಾಂತಿ' ಮತ್ತು 'ಪಪ್ಪು ಅಪ್ಪು' ಅಂತಹ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾದವರು. ತಮಿಳಿನ 'ಕಂಡುಕೊಂಡೇನ್ ಕಂಡುಕೊಂಡೇನ್' ಚಿತ್ರದಲ್ಲಿ ಐಶ್ವರ್ಯಾ ರೈಗೆ ಜೋಡಿಯಾಗಿ ನಟಿಸುವ ಮೂಲಕ ಈ &quot;ಕನ್ನಡದ ಕನೆಕ್ಷನ್&quot; ಹೊಂದಿರುವ ನಟ ಇತಿಹಾಸ ಸೃಷ್ಟಿಸಿದ್ದರು.&lt;/p&gt;&lt;h2&gt;ರಾತ್ರೋರಾತ್ರಿ ಬದಲಾದ ವಿಧಿಯಾಟ!&lt;/h2&gt;&lt;p&gt;90ರ ದಶಕದಲ್ಲಿ ಅಬ್ಬಾಸ್ ಅಕ್ಷರಶಃ ಸೌತ್ ಇಂಡಿಯಾದ 'ಚಾಕೊಲೇಟ್ ಬಾಯ್'. 1996ರಲ್ಲಿ ಬಂದ 'ಕಾದಲ್ ದೇಶಂ' ಸಿನಿಮಾ ಅವರನ್ನು ಸೂಪರ್ ಸ್ಟಾರ್ ಮಾಡಿತು. ಬೆಂಗಳೂರಿನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಈ ಹುಡುಗ ತಮಿಳು, ತೆಲುಗು, ಕನ್ನಡ ಎಂದು ಎಲ್ಲೂ ಫೇಮಸ್ ಆದರು. ರಜನಿಕಾಂತ್ ಅವರ 'ಪಡೆಯಪ್ಪ' ಚಿತ್ರದಲ್ಲಿ ವಿಲನ್ ಆಗಿ, ಕಮಲ್ ಹಾಸನ್ ಅವರ 'ಹೇ ರಾಮ್' ಚಿತ್ರದಲ್ಲಿ ಪೋಷಕ ನಟನಾಗಿ ಮಿಂಚಿದರು. ಅಜಿತ್, ಟಬು ಅವರಂತಹ ದೊಡ್ಡ ಸ್ಟಾರ್&zwnj;ಗಳ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡರು. ಆಗ ಅಬ್ಬಾಸ್ ಅವರಿಗೆ ಎದುರೇ ಇಲ್ಲ ಅಂದುಕೊಂಡಿದ್ದರು ಜನ.&lt;/p&gt;&lt;p&gt;ಆದರೆ, 2002ರ ನಂತರ ಪರಿಸ್ಥಿತಿ ತಲೆಕೆಳಗಾಯಿತು. ಸಾಲು ಸಾಲು ಸಿನಿಮಾಗಳು ಸೋತವು. ಕೈಯಲ್ಲಿದ್ದ ದೊಡ್ಡ ಪ್ರಾಜೆಕ್ಟ್&zwnj;ಗಳು ಕೈತಪ್ಪಿದವು. ಯಾವ ನಟನನ್ನು ನೋಡಲು ಸಾವಿರಾರು ಜನ ಮುಗಿಬೀಳುತ್ತಿದ್ದರೋ, ಅದೇ ನಟನಿಗೆ 30 ವರ್ಷ ತುಂಬುವ ಮೊದಲೇ ಆರ್ಥಿಕ ಮುಗ್ಗಟ್ಟು ಎದುರಾಯಿತು. ನೋಡನೋಡುತ್ತಲೇ ಅಬ್ಬಾಸ್ ದಿವಾಳಿಯಾದರು!&lt;/p&gt;&lt;p&gt;&lt;img&gt;&lt;/p&gt;&lt;p&gt;ಬದುಕಿಗಾಗಿ ಶೌಚಾಲಯ ಸ್ವಚ್ಛಗೊಳಿಸಿದರೇ ಅಬ್ಬಾಸ್?&lt;/p&gt;&lt;p&gt;ಸಿನಿಮಾ ಅವಕಾಶಗಳು ಇಲ್ಲದಾದಾಗ ಅಬ್ಬಾಸ್ ಸುಮ್ಮನೆ ಕೂರಲಿಲ್ಲ. ತನ್ನ ಕುಟುಂಬವನ್ನು ಸಲಹಲು ಅವರು ಆರಿಸಿಕೊಂಡ ಹಾದಿ ಯಾರಿಗೂ ಬೇಡದ ಅಗ್ನಿಪರೀಕ್ಷೆ. ಭಾರತವನ್ನು ತೊರೆದು ನ್ಯೂಜಿಲೆಂಡ್&zwnj;ಗೆ ತೆರಳಿದ ಅಬ್ಬಾಸ್, ಅಲ್ಲಿ ತುತ್ತು ಅನ್ನಕ್ಕಾಗಿ ಮಾಡದ ಕೆಲಸವಿಲ್ಲ. ವರದಿಗಳ ಪ್ರಕಾರ, ಅಲ್ಲಿ ಅವರು ಬದುಕು ಸಾಗಿಸಲು ಮೆಕ್ಯಾನಿಕ್ ಆಗಿ ಕೆಲಸ ಮಾಡಿದರು, ಟ್ಯಾಕ್ಸಿ ಓಡಿಸಿದರು. ಅಷ್ಟೇ ಏಕೆ, ಹೊಟ್ಟೆಪಾಡಿಗಾಗಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಸಹ ಅಬ್ಬಾಸ್ ಮಾಡಿದ್ದಾರೆ ಎನ್ನಲಾಗುತ್ತದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಅರಮನೆಯಿಂದ ಫುಟ್&zwnj;ಪಾತ್&zwnj;ವರೆಗಿನ ಕಣ್ಣೀರಿನ ಕಥೆ!&lt;/h3&gt;&lt;p&gt;ಒಂದು ಕಾಲದ ಸೂಪರ್ ಸ್ಟಾರ್, ಇಂದು ಪರದೇಶದಲ್ಲಿ ಸಾಮಾನ್ಯ ಕಾರ್ಮಿಕನಾಗಿ ದುಡಿಯುತ್ತಿರುವುದು ಕೇಳಿದರೆ ಕರುಳು ಚುರುಕ್ ಎನ್ನುತ್ತದೆ. ಬಣ್ಣದ ಲೋಕದ ಹೊಳಪು ಎಷ್ಟು ತಾತ್ಕಾಲಿಕ ಎಂಬುದಕ್ಕೆ ಅಬ್ಬಾಸ್ ಅವರ ಜೀವನವೇ ಸಾಕ್ಷಿ.&lt;/p&gt;&lt;p&gt;ಕೊನೆಯ ಮಾತು: ಸೋಲು-ಗೆಲುವು ಜೀವನದ ಭಾಗ. ಅಬ್ಬಾಸ್ ಇಂದು ಸಿನಿಮಾದಿಂದ ದೂರವಿದ್ದರೂ, ತಮ್ಮ ಕಷ್ಟದ ದಿನಗಳನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಐಶ್ವರ್ಯಾ ರೈ ಜೊತೆ ರೊಮ್ಯಾನ್ಸ್ ಮಾಡಿದ್ದ ಈ ನಟ, ಇಂದು ಜೀವನದ ಜೊತೆ ಹೋರಾಟ ಮಾಡುತ್ತಿರುವುದು ಸಿನಿಮಾ ಕಥೆಗಿಂತಲೂ ಭಯಾನಕವಾಗಿದೆ.&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/is-the-kannada-actor-acted-with-miss-world-aishwarya-rai-now-driving-a-taxi-and-doing-odd-jobs-to-make-a-living-abroad/articleshow-sehg77c"/>
        </item>
        <item>
            <title><![CDATA[ಪಾಕ್ ಪ್ರಜಾಪ್ರಭುತ್ವದ ಮುಖವಾಡ ಕಳಚಿದ ಸೈಫರ್‌; ಇಮ್ರಾನ್ ಖಾನ್ ಪದಚ್ಯುತಿಯ ಹಿಂದೆ ಅಮೆರಿಕದ ಕುತಂತ್ರ ಬಯಲು!]]></title>
            <link>https://kannada.asianetnews.com/world-news/cypher-exposes-pakistan-s-democratic-facade-shocking-revelations-surface-rav/articleshow-vzqy8zm</link>
            <guid isPermaLink="true">https://kannada.asianetnews.com/world-news/cypher-exposes-pakistan-s-democratic-facade-shocking-revelations-surface-rav/articleshow-vzqy8zm</guid>
            <pubDate>Tue, 26 May 2026 08:37:09 +0530</pubDate>
            <description><![CDATA[&lt;p&gt;&lsquo;ಸೈಫರ್ ನಂ. ಐ-0678&rsquo; ಎಂಬ ರಹಸ್ಯ ವರದಿಯು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪದಚ್ಯುತಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂಬ ಆರೋಪವನ್ನು ಸಾಬೀತುಪಡಿಸಿದೆ. &amp;nbsp;ಅಮೆರಿಕದ ಅಧಿಕಾರಿಗಳು ನೀಡಿದ ಆಮಿಷವನ್ನು ಈ ವರದಿ ಬಹಿರಂಗಪಡಿಸುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksh35sj44rdz05yd9nhcw6eq,imgname-----------------------2026-05-26t082225.099-1779763963460.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ದಿವ್ಯಾ ಹೆಗಡೆ ಕಬ್ಬಿನಗದ್ದೆ&lt;/li&gt;&lt;/ul&gt;&lt;h2&gt;ಮಾಜಿ ಪ್ರಧಾನಿ ಇಮ್ರಾನ್&zwnj; ಖಾನ್&zwnj; ಪದಚ್ಯುತಿಯಲ್ಲಿ ಅಮೆರಿಕ ಕುತಂತ್ರ ಬಟಾಬಯಲು!&lt;/h2&gt;&lt;p&gt;--&lt;/p&gt;&lt;p&gt;&lsquo;ಸೈಫರ್ ನಂ. ಐ-0678&rsquo; ಸಮಕಾಲೀನ ಪಾಕ್ ಇತಿಹಾಸದಲ್ಲೇ ತೀವ್ರ ವಿವಾದ ಸೃಷ್ಟಿಸಿದ ರಹಸ್ಯ ವರದಿ. ಕಳೆದ 4 ವರ್ಷಗಳಿಂದ ದೇಶದ ರಾಜಕೀಯ ಪ್ರಹಸನದ ಕೇಂದ್ರಬಿಂದು. ತಮ್ಮ ಪದಚ್ಯುತಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂಬ ಮಾಜಿ ಪ್ರಧಾನಿ ಇಮ್ರಾನ್ ಖಾನ್&zwnj;ರ ಆರೋಪವನ್ನು ಈ ವರದಿ ಸಾಬೀತುಪಡಿಸಿದೆ. ಈ ಮೂಲಕ ಪ್ರಪಂಚಕ್ಕೆ ಸಾರ್ವಭೌಮತ್ವದ ಪಾಠ ಮಾಡುವ ಪಾಕ್ ಸ್ವತಃ ತಾನೇ ಅಮೆರಿಕದ ಕೈಗೊಂಬೆ ಎಂಬುದು ಜಗಜ್ಜಾಹೀರಾಗಿದೆ.&lt;/p&gt;&lt;p&gt;--&lt;/p&gt;&lt;p&gt;ಅಮೆರಿಕ-ಇರಾನ್ ಉದ್ವಿಗ್ನತೆಯ ಬಿಸಿ ಇಡೀ ಜಗತ್ತನ್ನೇ ಸುಡುತ್ತಿರುವ ನಡುವೆ ನೆರೆಯ ಪಾಕಿಸ್ತಾನ ಅಚ್ಚರಿಯ ರೀತಿಯಲ್ಲಿ &lsquo;ಶಾಂತಿ ಸಂಧಾನ&rsquo;ಕ್ಕೆ ಮಧ್ಯಸ್ಥಿಕೆ ವಹಿಸುತ್ತಿದೆ. ಭಯೋತ್ಪಾದನೆ, ಆರ್ಥಿಕ ದಿವಾಳಿತನ, ಸಾಲದ ಸುಳಿಯಿಂದ ಜಾಗತಿಕ ಮಟ್ಟದಲ್ಲಿ ಗೌರವ ಕಳೆದುಕೊಂಡರೂ, ಯುದ್ಧ ನಿಲ್ಲಿಸಿ ಜಾಗತಿಕ ಹೀರೋ ಎನ್ನಿಸಿಕೊಳ್ಳುವ ಹುರುಪಿನಲ್ಲಿದೆ. ಆಪರೇಷನ್ ಸಿಂದೂರದ ಸಮಯದಿಂದಲೂ ಅಮೆರಿಕಕ್ಕೆ ಹತ್ತಿರವಾಗಲು, ಅದರ ಮೆಚ್ಚುಗೆ ಪಡೆಯಲು ಪಾಕ್ ನಡೆಸಿದ ಹರಸಾಹಸವನ್ನು ಇಡೀ ವಿಶ್ವವೇ ಕಂಡಿದೆ. ಈ ನಡುವೆ ಪಾಕ್&zwnj;ನ ಮಾನ ಹರಾಜು ಹಾಕುವ ಸ್ಫೋಟಕ ವರದಿಯೊಂದನ್ನು ಸ್ವತಃ ಅಮೆರಿಕದ ಡ್ರಾಪ್&zwnj;ಸೈಟ್ ಎಂಬ ವೆಬ್&zwnj;ಸೈಟ್ ಬಹಿರಂಗಪಡಿಸಿದೆ.&lt;/p&gt;&lt;p&gt;&lsquo;ಸೈಫರ್ ನಂ. ಐ-0678&rsquo; ಸಮಕಾಲೀನ ಪಾಕ್ ಇತಿಹಾಸದಲ್ಲೇ ತೀವ್ರ ವಿವಾದ ಸೃಷ್ಟಿಸಿದ ರಹಸ್ಯ ವರದಿ. ಕಳೆದ 4 ವರ್ಷಗಳಿಂದ ದೇಶದ ರಾಜಕೀಯ ಪ್ರಹಸನದ ಕೇಂದ್ರಬಿಂದು. ತಮ್ಮ ಪದಚ್ಯುತಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂಬ ಮಾಜಿ ಪ್ರಧಾನಿ ಇಮ್ರಾನ್ ಖಾನ್&zwnj;ರ ಆರೋಪವನ್ನು ಈ ವರದಿ ಸಾಬೀತುಪಡಿಸಿದೆ. ಈ ಮೂಲಕ ಪ್ರಪಂಚಕ್ಕೆ ಸಾರ್ವಭೌಮತ್ವದ ಪಾಠ ಮಾಡುವ ಪಾಕ್ ಸ್ವತಃ ತಾನೇ ಅಮೆರಿಕದ ಕೈಗೊಂಬೆ ಎಂಬುದು ಜಗಜ್ಜಾಹೀರಾಗಿದೆ.&lt;/p&gt;&lt;h3&gt;ರಹಸ್ಯ ವರದಿಯ ಗುಟ್ಟೇನು?&lt;/h3&gt;&lt;p&gt;ಅದು 2022ರ ಮಾ.7. ಅಮೆರಿಕದಲ್ಲಿನ ಪಾಕಿಸ್ತಾನದ ರಾಯಭಾರಿ ಅಸಾದ್ ಮಜೀದ್ ಖಾನ್ ಹಾಗೂ ಅಮೆರಿಕದ ದಕ್ಷಿಣ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳ ಉಪಕಾರ್ಯದರ್ಶಿ ಡೊನಾಲ್ಡ್ ಲು ಭೇಟಿಯಾಗಿದ್ದರು. ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದ ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿಗೆ ವೇದಿಕೆ ಸಿದ್ಧವಾಗಿದ್ದೇ ಅಲ್ಲಿ! ಆ ಸಭೆಯಲ್ಲಿ ಖಾನ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ ಲು, &lsquo;ಅವಿಶ್ವಾಸ ಗೊತ್ತುವಳಿ ಹೊರಡಿಸಿ ಖಾನ್&zwnj;ರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿ. ಹೀಗೆ ಮಾಡಿದರೆ ಮಾತ್ರ ಅಮೆರಿಕ ಮತ್ತು ಯುರೋಪ್ ಜೊತೆ ಪಾಕ್ ಸಂಬಂಧ ಸುಧಾರಿಸಲು ಸಾಧ್ಯ. ಇದೊಂದು ಕೆಲಸ ಮಾಡಿದರೆ ಸಾಕು, ಪಾಕ್&zwnj;ನ ಎಲ್ಲ ತಪ್ಪುಗಳನ್ನೂ ಮನ್ನಿಸಲಾಗುವುದು&rsquo; ಎಂದು ತಾಕೀತು ಮಾಡಿದ್ದರು. ಸಭೆಯ ಸಾರಾಂಶವನ್ನು ರಹಸ್ಯಮಯ ಲಿಪಿಯಲ್ಲಿ ಬರೆದ ಅಸಾದ್ ಮಜೀದ್ ಖಾನ್ ಅದನ್ನು ಪಾಕ್ ಸರ್ಕಾರಕ್ಕೆ ಕಳಿಸಿಕೊಟ್ಟರು. ಅಲ್ಲದೆ, ಶ್ವೇತಭವನದ ಅನುಮತಿಯಿಲ್ಲದೆ ಲು ಇಂಥ ಆಗ್ರಹವನ್ನು ಮಾಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.&lt;/p&gt;&lt;p&gt;ಇದಾಗಿ ಒಂದೇ ತಿಂಗಳಿಗೆ ಪಾಕ್ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಯಿತು. ಸೇನೆ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ತಿರುಗಿಬಿತ್ತು. ಅವರ ವಿರುದ್ಧ ಹತ್ತಾರು ಆರೋಪಗಳನ್ನು ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಲಾಯಿತು. ವಿರೋಧ ಪಕ್ಷಗಳು ಒಗ್ಗೂಡಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದವು. ಕೊನೆಗೂ ಖಾನ್&zwnj;ರನ್ನು ಅಧಿಕಾರದಿಂದ ಕೆಳಗಿಳಿಸುವ ತಂತ್ರ ಯಶಸ್ವಿಯಾಯಿತು. ಹಾಗಾದರೆ ಖಾನ್ ಪದಚ್ಯುತಿ ಸಂಸದೀಯ ಪ್ರಕ್ರಿಯೆಯ ಮೂಲಕವೇ ನಡೆದಿತ್ತೇ? ಅಥವಾ ಅದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿತ್ತೇ? ಈ ಪ್ರಶ್ನೆಗೆ &lsquo;ಕೇಬಲ್ ಐ-0678&rsquo; ಉತ್ತರ ನೀಡುತ್ತದೆ.&lt;/p&gt;&lt;p&gt;&lt;strong&gt;&lsquo;ನಯಾ ಪಾಕ್&rsquo;ನಿಂದ ಪ್ರಧಾನಿವರೆಗೆ&lt;/strong&gt;:&lt;/p&gt;&lt;p&gt;3 ಸಲ ಪಾಕ್ ಪ್ರಧಾನಿಯಗಿದ್ದ ನವಾಜ್ ಷರೀಫ್ ಪನಾಮಾ ಪೇಪರ್ ಹಗರಣದಲ್ಲಿ ಸಿಲುಕಿ ಜನವಿರೋಧಕ್ಕೆ ತುತ್ತಾಗಿದ್ದರು. ಅವರ ಸ್ವಜನಪಕ್ಷಪಾತ, ಐಷಾರಾಮಿ ಬದುಕು, ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದರು. ಇಂಥ ಸಂದರ್ಭದಲ್ಲಿ ಜನತೆ ಉತ್ತಮ ಆಡಳಿತ ನೀಡಬಲ್ಲ ಹೊಸ ಮುಖದ ಹುಡುಕಾಟದಲ್ಲಿದ್ದರು. ಆಗ ಪ್ರವರ್ಧಮಾನಕ್ಕೆ ಬಂದವರೇ ಕ್ರಿಕೆಟ್ ದಿಗ್ಗಜನಾಗಿ ಜನಪ್ರಿಯನಾಗಿದ್ದ ಇಮ್ರಾನ್ ಖಾನ್.&lt;/p&gt;&lt;p&gt;ಖಾನ್ ಸ್ಥಾಪಿಸಿದ ಪಿಟಿಐ ಪಕ್ಷ ಭ್ರಷ್ಟಾಚಾರ ವಿರೋಧಿ ನೀತಿ ಮತ್ತು ನಯಾ ಪಾಕಿಸ್ತಾನ್ ಪರಿಕಲ್ಪನೆಯ ಮೂಲಕ ಜನರನ್ನು ತಲುಪುವಲ್ಲಿ ಯಶಸ್ವಿಯಾಯಿತು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ಮೈತ್ರಿ ಸರ್ಕಾರವನ್ನು ರಚಿಸಿತು. ಇಮ್ರಾನ್ ಖಾನ್ ಪ್ರಧಾನಿಯಾದರು. 2018ರಿಂದ 2020ರವರೆಗೆ ಖಾನ್ ಸರ್ಕಾರ ಅಭೂತಪೂರ್ವ ಜನಪ್ರೀತಿ ಗಳಿಸಿತು. ಹೊರಜಗತ್ತಿಗೆ ಆಡಳಿತ ಸರ್ಕಾರದ ಕೈಯಲ್ಲಿದ್ದರೂ, ವಿದೇಶಾಂಗ ನೀತಿ, ಭದ್ರತೆ ಮತ್ತು ಆಡಳಿತ ನೀತಿಗಳ ಮೇಲೆ ಸೇನೆಯೇ ಸಂಪೂರ್ಣ ನಿಯಂತ್ರಣ ಹೊಂದಿತ್ತು. ಆದರೆ ಖಾನ್ ಮತ್ತು ಸೇನಾ ಮುಖ್ಯಸ್ಥ ಜ. ಖಮರ್ ಜಾವೇದ್ ಬಾಜ್ವಾ ಒಗ್ಗಟ್ಟು ಪ್ರದರ್ಶಿಸಿದರು. ಒಟ್ಟಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.&lt;/p&gt;&lt;p&gt;ಆದರೆ ನಿಧಾನವಾಗಿ ಖಾನ್ ಮತ್ತು ಸೇನೆಯ ನಡುವೆ ಬಿರುಕು ಆರಂಭವಾಯಿತು. ನಂತರ ಹಠಾತ್ತಾಗಿ ಬಹಿರಂಗವಾಗಿಯೇ ಗೋಚರವಾಗತೊಡಗಿತು. ಸೇನೆ ಆಡಳಿತದಲ್ಲಿ ಮೂಗು ತೂರಿಸದಂತೆ ಖಾನ್ ಕಡಿವಾಣ ಹಾಕತೊಡಗಿದರು. ತಮಗೆ ಒಪ್ಪದ ಸೇನೆಯ ಸಲಹೆಗಳನ್ನು ನಿರಾಕರಿಸುತ್ತಿದ್ದರು. 2021ರಲ್ಲಿ ಗುಪ್ತಚರ ಸಂಸ್ಥೆ ಐಎಸ್&zwnj;ಐ ಮುಖ್ಯಸ್ಥರ ನೇಮಕಾತಿ ವಿಷಯದಲ್ಲಿ ಸಂಘರ್ಷ ಸ್ಫೋಟವಾಯಿತು. ಲೆ.ಜ. ನದೀಂ ಅಜುಂ ಅವರನ್ನು ಐಎಸ್&zwnj;ಐ ಮುಖ್ಯಸ್ಥರಾಗಿ ನೇಮಕ ಮಾಡುವ ಸೇನೆಯ ನಿರ್ಧಾರಕ್ಕೆ ಖಾನ್ ವಿರೋಧ ವ್ಯಕ್ತಪಡಿಸಿದರು. ಅದೇ ಸಮಯದಲ್ಲಿ ಸರ್ಕಾರ ಹಣಕಾಸು ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿತ್ತು. ರುಪಾಯಿ ಮೌಲ್ಯ ಕುಸಿಯಿತು, ಹಣದುಬ್ಬರ ಉತ್ತುಂಗಕ್ಕೇರಿತು, ಸಾರ್ವಜನಿಕ ಅಸಮಾಧಾನವೂ ಭುಗಿಲೆದ್ದಿತು. ಸೇನೆಯನ್ನು ಬೆಂಬಲಿಸಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅಲೆ ಎದ್ದಿತು.&lt;/p&gt;&lt;p&gt;&lt;strong&gt;ಶತ್ರುಗಳ ಸೃಷ್ಟಿಸಿದ ಕಠಿಣ ನಿಲುವು:&lt;/strong&gt;&lt;/p&gt;&lt;p&gt;ಪಾಕಿಸ್ತಾನ ತನ್ನ ಆರ್ಥಿಕತೆಗಾಗಿ ಸೌದಿ ಅರೇಬಿಯಾ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಪಾಕಿಸ್ತಾನೀಯರು ಸೌದಿಯಲ್ಲಿ ಕೆಲಸ ಮಾಡಿ ಕಳಿಸುವ ಹಣ (ರೆಮಿಟೆನ್ಸ್), ಸೌದಿಯಿಂದ ಬರುವ ತುರ್ತು ಸಾಲಗಳು ಮತ್ತು ಬ್ಯಾಂಕ್&zwnj;ನಲ್ಲಿ ಇಡುವ ಡಾಲರ್ ಠೇವಣಿಗಳು ಪಾಕ್ ಆರ್ಥಿಕತೆಗೆ ಬಹಳ ಮುಖ್ಯ. ಆದರೆ ಇಮ್ರಾನ್ ಖಾನ್ ಸೌದಿ ರಾಜಕುಮಾರನಿಗೆ ಸಡ್ಡು ಹೊಡೆಯತೊಡಗಿದರು. ಅವರ ಸ್ವತಂತ್ರ ವಿದೇಶಾಂಗ ನೀತಿ ಮತ್ತು ಮುಸ್ಲಿಂ ದೇಶಗಳಿಗೆ ತಾನೇ ಬಾಸ್ ಆಗಬೇಕೆನ್ನುವ ನಡೆ ಸೌದಿಯ ಅಸಮಾಧಾನಕ್ಕೆ ಕಾರಣವಾಯಿತು. ಇದನ್ನು ಸೌದಿ ತನ್ನ ಇಸ್ಲಾಮಿಕ್ ಜಗತ್ತಿನ ನಾಯಕತ್ವಕ್ಕೆ ಸವಾಲು ಎಂದು ಭಾವಿಸಿತು. ಪಾಕ್&zwnj;ಗೆ ಹಣ ಸಹಾಯವನ್ನು ಕಡಿಮೆ ಮಾಡಿತು. ಇದರಿಂದ ದೇಶದ ಆರ್ಥಿಕ ಸಂಕಷ್ಟ ತೀವ್ರಗೊಂಡಿತು.&lt;/p&gt;&lt;p&gt;2022ರ ಫೆ.24ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದರು. ಅದೇ ಸಮಯದಲ್ಲಿ ಇಮ್ರಾನ್ ಖಾನ್ ಪೂರ್ವನಿಗದಿಯಂತೆ ಪುಟಿನ್ ಜೊತೆ ಸಭೆಯಲ್ಲಿ ಕಾಣಿಸಿಕೊಂಡರು. ಇಡೀ ಯುರೋಪ್&zwnj;ನಲ್ಲಿ ಅತಿ ದೊಡ್ಡ ಸೇನಾ ಸಂಘರ್ಷ ತಲೆದೋರಿರುವ ಸಂದರ್ಭದಲ್ಲಿ, ಪಶ್ಚಿಮ ದೇಶಗಳ ಸಹಾಯವನ್ನು ಅವಲಂಬಿಸಿರುವ ಪಾಕಿಸ್ತಾನದ ಪ್ರಧಾನಿ ರಷ್ಯಾ ರಾಜಧಾನಿಯಲ್ಲಿದ್ದರು! ಇದೇ ವೇಳೆ, ಪಾಕಿಸ್ತಾನದ ನೆಲವನ್ನು ತನ್ನ ಸೇನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಮುಂದಾಗಿದ್ದ ಅಮೆರಿಕಕ್ಕೆ ಖಾನ್ ತಡೆಯೊಡ್ಡಿದರು. ಈ ಕಾರಣಗಳೆಲ್ಲ ಒಟ್ಟುಗೂಡಿ ಖಾನ್ ವಿರುದ್ಧ ಅಮೆರಿಕದ ಅಸಮಾಧಾನ ಭುಗಿಲೆದ್ದಿತು.&lt;/p&gt;&lt;p&gt;&lt;strong&gt;ಪ್ರಧಾನಿಯನ್ನೇ ಪದಚ್ಯುತಗೊಳಿಸಿದ ಬೆಳವಣಿಗೆ:&lt;/strong&gt;&lt;/p&gt;&lt;p&gt;ಇದಾಗಿ ಕೆಲವೇ ದಿನಗಳಲ್ಲಿ ಪಾಕ್ ರಾಜಕೀಯದಲ್ಲಿ ವಿಚಿತ್ರ ಬೆಳವಣಿಗೆಗಳು ಆರಂಭವಾದವು. ಖಾನ್&zwnj;ಗೆ ಮಾಧ್ಯಮ ಬೆಂಬಲ ಸ್ಥಗಿತವಾಯಿತು. ಅವರ ವಿರುದ್ಧದ ಕೋರ್ಟ್ ಪ್ರಕರಣಗಳು ತೀವ್ರತೆ ಪಡೆದುಕೊಂಡವು. ಒಂದು ಕಾಲದಲ್ಲಿ ಒಟ್ಟಿಗೆ ಕುಳಿತುಕೊಳ್ಳಲೂ ಸಾಧ್ಯವಿಲ್ಲದಂತಿದ್ದ ವಿರೋಧ ಪಕ್ಷಗಳು ಇದ್ದಕ್ಕಿದ್ದಂತೆ ಒಂದುಗೂಡಿದವು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಸೇರಿದಂತೆ ವಿಪಕ್ಷಗಳೆಲ್ಲ ಒಟ್ಟಾಗಿ 2022ರ ಏ.10ರಂದು ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದವು. ಪಾಕಿಸ್ತಾನದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಂಸತ್ತಿನ ಮತದಾನದ ಮೂಲಕ ಪ್ರಧಾನಿಯನ್ನು ಹೊರಹಾಕಲಾಯ್ತು.&lt;/p&gt;&lt;p&gt;ಖಾನ್&zwnj;ಗೆ ಏನಾಗುತ್ತಿದೆ ಎಂಬುದು ತಿಳಿದಿತ್ತು. ಮಾ.27ರಂದು ಇಸ್ಲಾಮಾಬಾದ್&zwnj;ನಲ್ಲಿ ದೊಡ್ಡ ರ&zwj;್ಯಾಲಿಯಲ್ಲಿ ಮಾತನಾಡುತ್ತಾ, ತಮ್ಮ ಜೇಬಿನಿಂದ ಒಂದು ಕಾಗದವನ್ನು ಹೊರತೆಗೆದರು. ಅದು ಸೈಫರ್ (ಗುಪ್ತ ಸಂದೇಶ) ಎಂದು ಹೇಳಿ, ಒಂದು ವಿದೇಶಿ ಪಿತೂರಿಯಿಂದ ತನ್ನನ್ನು ಹೊರಹಾಕಲಾಗುತ್ತಿದೆ ಎಂದು ಆರೋಪಿಸಿದರು. ಕೆಲ ದಿನಗಳ ನಂತರ ಖಾನ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ, ದೇಶದ ಆಂತರಿಕ ವಿಚಾರದಲ್ಲಿ ಅಮೆರಿಕದ ಮಧ್ಯಪ್ರವೇಶ ಸ್ವೀಕಾರಾರ್ಹವಲ್ಲ ಎಂದು ಘೋಷಿಸಲಾಯಿತು. ಆದರೆ ಖಾನ್ ಪದಚ್ಯುತಿ ಬಳಿಕ ಹೊಸ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ಅದೇ ಸಮಿತಿ ಮತ್ತೆ ಸಭೆ ಸೇರಿತು. ಈ ಬಾರಿ ಸಮಿತಿ ತನ್ನ ಹಿಂದಿನ ನಿರ್ಧಾರವನ್ನು ಸಂಪೂರ್ಣವಾಗಿ ಬದಲಿಸಿತ್ತು. ಅಮೆರಿಕದ ಮಧ್ಯಪ್ರವೇಶ ನಡೆದಿದೆ ಎಂದು ಒಪ್ಪಿಕೊಂಡಿತಾದರೂ ಅದು ಪಿತೂರಿ ಎನ್ನಲು ಯಾವುದೇ ಪುರಾವೆಯಿಲ್ಲ ಎಂದು ಕೈತೊಳೆದುಕೊಂಡಿತು. ವಿಚಿತ್ರವೆಂದರೆ ಎರಡೂ ಸಭೆಗಳಿಗೂ ಸೈನ್ಯದ ಮುಖ್ಯಸ್ಥರು ಹಾಜರಿದ್ದರು. ಆದರೆ ಸಭೆಯ ಅಧ್ಯಕ್ಷತೆ ಯಾರು ವಹಿಸಿದ್ದಾರೆ ಎಂಬುದರ ಮೇಲೆ ಸೇನಾ ಮುಖ್ಯಸ್ಥರ ಅಭಿಪ್ರಾಯ ಬದಲಾಗುತ್ತಿತ್ತು!&lt;/p&gt;&lt;p&gt;ಪದಚ್ಯುತಿಯ ನಂತರ ಖಾನ್ ಸುಮ್ಮನೆ ಕೂರಲಿಲ್ಲ. ಸರ್ಕಾರದ ವಿರುದ್ಧ ಬೀದಿಗಿಳಿದರು. ಬೃಹತ್ ರ&zwj;್ಯಾಲಿಗಳನ್ನು ಆಯೋಜಿಸಿ ಲಕ್ಷಾಂತರ ಜನರನ್ನು ಆಕರ್ಷಿಸತೊಡಗಿತು. ಅಲ್ಲೆಲ್ಲ ತಮ್ಮ ಪದಚ್ಯುತಿಯ ಹಿಂದೆ ಪಾಕ್ ಸೇನೆ ಮತ್ತು ಅಮೆರಿಕದ ಷಡ್ಯಂತ್ರವಿದೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದರು. ಇದು ಜನಸಮೂಹದೊಂದಿಗೆ ಅವರ ಒಡನಾಟ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಈ ಹೋರಾಟ ಷರೀಫ್ ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು. ಅಂತಿಮವಾಗಿ 2023ರ ಮೇ 9ರಂದು ಖಾನ್&zwnj;ರ ಬಂಧನವಾಯಿತು. ಅವರ ಬೆಂಬಲಿಗರು ಮತ್ತು ಪಕ್ಷದ ನಾಯಕರನ್ನೆಲ್ಲ ಸಾಲು ಸಾಲಾಗಿ ಜೈಲಿಗಟ್ಟಲಾಯಿತು. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಕೋರ್ಟ್ ಖಾನ್&zwnj;ರನ್ನು ದೋಷಿ ಎಂದು ಘೋಷಿಸಿ 3 ವರ್ಷಗಳ ಜೈಲುಶಿಕ್ಷೆ ವಿಧಿಸಿತು. 2024ರ ಜೂನ್&zwnj;ನಲ್ಲಿ ಸೈಫರ್ ಪ್ರಕರಣವನ್ನೇ ರದ್ದುಪಡಿಸಿತು. ನಂತರ 2025ರ ಜನವರಿಯಲ್ಲಿ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ 14 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಸದ್ಯ ಜೈಲಿನಲ್ಲಿರುವ ಖಾನ್&zwnj;ಗೆ ಚಿತ್ರಹಿಂಸೆ ನೀಡಲಾಗುತ್ತಿದೆ, ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗುತ್ತಿಲ್ಲ. ಅವರ ಎರಡೂ ಕಣ್ಣುಗಳು ದೃಷ್ಟಿ ಕಳೆದುಕೊಂಡಿವೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;strong&gt;ಅಮೆರಿಕ ಆಪ್ತ ವಲಯಕ್ಕೆ ಪಾಕ್ ಸೇನೆ:&lt;/strong&gt;&lt;/p&gt;&lt;p&gt;ಪಾಕಿಸ್ತಾನದ ಆಂತರಿಕ ರಾಜಕೀಯದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ, ಅಮೆರಿಕ ಮತ್ತು ಪಾಕ್ ಸೇನೆಯ ಬಾಂಧವ್ಯ ವಿಶೇಷ ಎತ್ತರಕ್ಕೆ ಏರಿತು. ಆಪರೇಷನ್ ಸಿಂದೂರದ ಸಮಯದಲ್ಲಿ ಪಾಕ್ ಅಮೆರಿಕದ ಮಧ್ಯಪ್ರವೇಶಕ್ಕೆ ಆಹ್ವಾನಿಸಿತು. ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನವನ್ನೂ ಮಾಡಿತು. ಇತ್ತ ಸೇನಾ ಮುಖ್ಯಸ್ಥ ಆಸೀಂ ಮುನೀರ್&zwnj;ಗೆ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ದಯಪಾಲಿಸಲಾಯಿತು. ಟ್ರಂಪ್ ಮುನೀರ್&zwnj;ನನ್ನು &lsquo;ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್&rsquo; ಎಂದು ಕೊಂಡಾಡಿದರು. ಈ ನಡುವೆ ಭುಗಿಲೆದ್ದ ಇರಾನ್-ಅಮೆರಿಕ ಸಂಘರ್ಷವನ್ನು ತಣಿಸಲು ಪಾಕ್ ಸಂಧಾನಕಾರನ ವೇಷ ತೊಟ್ಟಿತು. ಕಾಕತಾಳೀಯವೋ ಎನ್ನುವಂತೆ ಇದೇ ಸಂದರ್ಭದಲ್ಲೇ ಸೈಫರ್ ಗುಪ್ತ ವರದಿ ಸೋರಿಕೆಯಾಗಿದೆ! ಪಾಕಿಸ್ತಾನದಲ್ಲಿ ಹೆಸರಿಗೆ ಪ್ರಜಾಪ್ರಭುತ್ವ ಇದ್ದರೂ ಅದರ ನಿಯಂತ್ರಣವಿರುವುದು ಸೇನೆಯ ಕೈಯಲ್ಲಿ. ಅಮೆರಿಕ, ಚೀನಾ, ಸೌದಿಯಂತಹ ವಿದೇಶಿ ಶಕ್ತಿಗಳೇ ಪಾಕ್&zwnj;ನ ನಿಜವಾದ ನಿಯಂತ್ರಕರು ಎಂಬ ಸತ್ಯ ಜಗಜ್ಜಾಹೀರಾಗಿದೆ.&lt;/p&gt;]]></content:encoded>
            <category>world-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/cypher-exposes-pakistan-s-democratic-facade-shocking-revelations-surface-rav/articleshow-vzqy8zm"/>
        </item>
    </channel>
</rss>
