<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 07 Jul 2026 22:53:35 +0530</lastBuildDate>
        <atom:link href="https://kannada.asianetnews.com/rss/world-news" rel="self" type="application/rss+xml"/>
        <item>
            <title><![CDATA[ಜಸ್ಟ್ 14 ವರ್ಷಕ್ಕೆ ಬುರ್ಜ್ ಖಲೀಫಾದಲ್ಲಿ AI ಕಚೇರಿ ಸ್ಥಾಪನೆ! ಈ ಜೈನಂ ಜೈನ್ ಯಾರು?]]></title>
            <link>https://kannada.asianetnews.com/gallery/business/who-is-jainam-jain-and-14-year-old-boy-who-set-up-an-ai-startup-in-burj-khalif-2y4cfm8</link>
            <guid isPermaLink="true">https://kannada.asianetnews.com/gallery/business/who-is-jainam-jain-and-14-year-old-boy-who-set-up-an-ai-startup-in-burj-khalif-2y4cfm8</guid>
            <pubDate>Sat, 04 Jul 2026 19:37:55 +0530</pubDate>
            <description><![CDATA[14 ವರ್ಷದ ಭಾರತೀಯ ಮೂಲದ ಜೈನಂ ಜೈನ್, ದುಬೈನ ಬುರ್ಜ್ ಖಲೀಫಾದಲ್ಲಿ 'ಮೆಂಗೊ ಇಂಜಿನ್' ಎಂಬ ಕೃತಕ ಬುದ್ಧಿಮತ್ತೆ ಕಂಪನಿಯನ್ನು ಸ್ಥಾಪಿಸಿದ್ದಾರೆ. ಕೇವಲ 105 ದಿನಗಳಲ್ಲಿ 10ನೇ ತರಗತಿ ಮುಗಿಸಿದ ಇವರ ಸಾಧನೆಯು, ಯಶಸ್ಸಿಗೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಸ್ಫೂರ್ತಿದಾಯಕ ಉದಾಹರಣೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwppe05a0w5weaqarsg9415t,imgname-who-is-jainam-jain--3--1783173152938.jpg" type="image/jpeg" height="390" width="690"/>
            <content:encoded><![CDATA[14 ವರ್ಷದ ಭಾರತೀಯ ಮೂಲದ ಜೈನಂ ಜೈನ್, ದುಬೈನ ಬುರ್ಜ್ ಖಲೀಫಾದಲ್ಲಿ 'ಮೆಂಗೊ ಇಂಜಿನ್' ಎಂಬ ಕೃತಕ ಬುದ್ಧಿಮತ್ತೆ ಕಂಪನಿಯನ್ನು ಸ್ಥಾಪಿಸಿದ್ದಾರೆ. ಕೇವಲ 105 ದಿನಗಳಲ್ಲಿ 10ನೇ ತರಗತಿ ಮುಗಿಸಿದ ಇವರ ಸಾಧನೆಯು, ಯಶಸ್ಸಿಗೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಸ್ಫೂರ್ತಿದಾಯಕ ಉದಾಹರಣೆಯಾಗಿದೆ.&lt;img&gt;&lt;p&gt;ಸಾಮಾನ್ಯವಾಗಿ 14 ವರ್ಷದ ಮಕ್ಕಳು ಶಾಲಾ ಪಠ್ಯ, ವಿಡಿಯೋ ಗೇಮ್ಸ್ ಅಥವಾ ಆಟೋಟಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಭಾರತೀಯ ಮೂಲದ ಜೈನಂ ಜೈನ್ (Jainam Jain) ಎಂಬ ಬಾಲಕ ಇಡೀ ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದ್ದಾರೆ. ಹದಿಹರೆಯದಲ್ಲೇ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಈತ, ಈಗ ದುಬೈನ ಬುರ್ಜ್ ಖಲೀಫಾದಲ್ಲಿ ತನ್ನದೇ ಆದ ಕಂಪನಿಯನ್ನು ಆರಂಭಿಸಿದ್ದಾರೆ.&lt;/p&gt;&lt;p&gt;ಯಾರು ಈ ಜೈನಂ ಜೈನ್?&lt;/p&gt;&lt;p&gt;ಜೈನಂ ಜೈನ್ ಭಾರತೀಯ ಮೂಲದ ಒಬ್ಬ ಯುವ ಉದ್ಯಮಿ. ಇವರು ದುಬೈನಲ್ಲಿ ಮೆಂಗೊ ಇಂಜಿನ್ (Mengo Engine) ಎಂಬ ಎಐ ಸ್ಟಾರ್ಟ್ ಅಪ್ ಆರಂಭಿಸಿದ್ದಾರೆ. ಈ ಕಂಪನಿಯು ವ್ಯಾಪಾರ ಸಂಸ್ಥೆಗಳಿಗೆ ಮಾರ್ಕೆಟಿಂಗ್, ಕಸ್ಟಮರ್ ಕಮ್ಯುನಿಕೇಶನ್ ಮತ್ತು ಕಂಟೆಂಟ್ ಕ್ರಿಯೇಷನ್&zwnj;ನಂತಹ ಕೆಲಸಗಳಿಗೆ ಸಹಾಯ ಮಾಡಲಿದೆ. ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಕಚೇರಿ ಹೊಂದಿರುವ ಅತ್ಯಂತ ಕಿರಿಯ ಉದ್ಯಮಿಗಳಲ್ಲಿ ಇವರು ಒಬ್ಬರು.&lt;/p&gt;&lt;img&gt;&lt;p&gt;ಜೈನಂ ಉದ್ಯಮಶೀಲತೆಯ ಪಯಣ ಆರಂಭವಾಗಿದ್ದು ಕೇವಲ 6ನೇ ವಯಸ್ಸಿನಲ್ಲಿ! ತನ್ನ ತಂದೆಯ ಜೊತೆ ಬಿಸಿನೆಸ್ ಮೀಟಿಂಗ್&zwnj;ಗಳಿಗೆ ಹೋಗುತ್ತಿದ್ದ ಇವರಿಗೆ ಉದ್ಯಮ ಲೋಕದ ಬಗ್ಗೆ ಕುತೂಹಲ ಮೂಡಿತು. ಅಂದಿನಿಂದ ಇವರು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ ಪ್ರಾಯೋಗಿಕ ಜ್ಞಾನ ಮತ್ತು ತಂತ್ರಜ್ಞಾನದತ್ತ ಗಮನ ಹರಿಸಿದರು.&lt;/p&gt;&lt;img&gt;&lt;p&gt;ಜೈನಂ ಅವರ ಕಲಿಕೆಯ ವೇಗ ಆಶ್ಚರ್ಯ ಹುಟ್ಟಿಸುವಂತಿದೆ. ಇವರು ತಮ್ಮ 13ನೇ ವಯಸ್ಸಿನಲ್ಲಿ ಐಜಿಸಿಎಸ್&zwnj;ಇ (IGCSE) 10ನೇ ತರಗತಿಯ ಪಠ್ಯಕ್ರಮವನ್ನು ಕೇವಲ 105 ದಿನಗಳಲ್ಲಿ ಮುಗಿಸಿದರು. ಕಂಪನಿಯನ್ನು ಕಟ್ಟುವುದು ಮತ್ತು ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಲು ಸಮಯ ಉಳಿಸಲು ಇವರು ಈ ಹಾದಿ ಹಿಡಿದರು.&lt;/p&gt;&lt;img&gt;&lt;ul&gt; &lt;li&gt;ಪ್ರತಿಷ್ಠಿತ TEDx ವೇದಿಕೆಯಲ್ಲಿ ಭಾಷಣ&lt;/li&gt; &lt;li&gt;ಇವರ ಹೆಸರಲ್ಲಿ ಎರಡು ಪೇಟೆಂಟ್&zwnj;ಗಳಿವೆ&lt;/li&gt; &lt;li&gt;ಇವರು ಒಂದು ಪುಸ್ತಕವನ್ನೂ ಬರೆದಿದ್ದಾರೆ&lt;/li&gt; &lt;li&gt;ಇವರ ಯೂಟ್ಯೂಬ್ ಚಾನಲ್ 1,45,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ&lt;/li&gt; &lt;li&gt;50 ದಿನಗಳಲ್ಲಿ 50 ಪುಸ್ತಕಗಳನ್ನು ಓದುವುದು&lt;/li&gt;&lt;/ul&gt;&lt;img&gt;&lt;p&gt;ಯಶಸ್ಸಿಗೆ ವಯಸ್ಸು ಅಡ್ಡಿಯಲ್ಲ. ನಮ್ಮ ಐಡಿಯಾಗಳು, ನಿರಂತರ ಶ್ರಮ ಮತ್ತು ಶಿಸ್ತು ನಮ್ಮನ್ನು ಗುರಿ ತಲುಪಿಸುತ್ತವೆ ಎಂದು ಜೈನಂ ನಂಬುತ್ತಾರೆ. ಜಗತ್ತು ಗುರುತಿಸುವಂತಹ ದೊಡ್ಡ ಕಂಪನಿಯನ್ನು ಕಟ್ಟುವುದು ಇವರ ಮುಂದಿನ ಗುರಿಯಾಗಿದೆ. ಭಾರತೀಯ ಮೂಲದ ಈ ಬಾಲಕನ ಸಾಧನೆ ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಂದಿನ ಯುವ ಪೀಳಿಗೆಗೆ ಜೈನಂ ಜೈನ್ ನಿಜಕ್ಕೂ ಒಂದು ದೊಡ್ಡ ಸ್ಫೂರ್ತಿ.&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/business/who-is-jainam-jain-and-14-year-old-boy-who-set-up-an-ai-startup-in-burj-khalif-2y4cfm8"/>
        </item>
        <item>
            <title><![CDATA[NASA ಜೊತೆ ಕೈಜೋಡಿಸಿದ ಕರ್ನಾಟಕದ ಸ್ಪೇಸ್ ಸ್ಟಾರ್; ಕನ್ನಡ ಮಣ್ಣಿನ ಅಪ್ರತಿಮ ಪ್ರತಿಭೆಯ ಸಾಹಸದ ಕತೆ..!]]></title>
            <link>https://kannada.asianetnews.com/gallery/chikkamagalur/story-about-space-star-awais-ahmed-space-startup-pixxel-bags-nasa-contract-gkn-7unbia1</link>
            <guid isPermaLink="true">https://kannada.asianetnews.com/gallery/chikkamagalur/story-about-space-star-awais-ahmed-space-startup-pixxel-bags-nasa-contract-gkn-7unbia1</guid>
            <pubDate>Mon, 06 Jul 2026 15:59:18 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ 'Pixxel' ಸ್ಟಾರ್ಟ್&zwnj;ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಯಿಂದ ಬಂದು, ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಖಾಸಗಿ ಸಂಸ್ಥೆ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvez147yp9zs19vq65nt975,imgname-awais-ahmed-nasa--6--1783333094535.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ 'Pixxel' ಸ್ಟಾರ್ಟ್&zwnj;ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಯಿಂದ ಬಂದು, ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಖಾಸಗಿ ಸಂಸ್ಥೆ ಆಗಿದೆ.&lt;/p&gt;&lt;img&gt;&lt;p&gt;ಕನಸು ಕಾಣಲು ಬಡತನ ಅಡ್ಡಿಯಾಗಬಾರದು, ಗುರಿ ತಲುಪಲು ಅಡೆತಡೆಗಳು ಎದುರಾದಾಗ ಎದೆಗುಂದಬಾರದು ಎನ್ನುವುದಕ್ಕೆ ಚಿಕ್ಕಮಗಳೂರಿನ ಈ ಯುವಕನೇ ಸಾಕ್ಷಿ. ಹಳ್ಳಿಯೊಂದರಲ್ಲಿ ಇಂಟರ್ನೆಟ್ ಸೌಲಭ್ಯವೂ ಇಲ್ಲದ ವಾತಾವರಣದಲ್ಲಿ ಬೆಳೆದ ಯುವಕ ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರೇ ಅವೈಸ್ ಅಹ್ಮದ್. ಅವರ ನೇತೃತ್ವದ 'Pixxel' ಸಂಸ್ಥೆ ಈಗ ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ 'NASA' ಜೊತೆ ಐತಿಹಾಸಿಕ ಒಪ್ಪಂದ ಮಾಡಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ತಾಲೂಕಿನ ಆಲ್ದೂರು ಎಂಬ ಪುಟ್ಟ ಗ್ರಾಮದವರಾದ ಅವೈಸ್ ಅಹ್ಮದ್ ಪಯಣ ಸುಲಭದ್ದಾಗಿರಲಿಲ್ಲ. ಬಾಲ್ಯದಲ್ಲಿ ಇಂಟರ್ನೆಟ್ ಸಂಪರ್ಕವೂ ಸರಿಯಾಗಿಲ್ಲದ ಹಳ್ಳಿಯಲ್ಲಿ ಬೆಳೆದ ಈ ಹುಡುಗನಿಗೆ ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಅಪಾರ ಆಸಕ್ತಿ. ಮಗನ ದೊಡ್ಡ ಕನಸಿಗೆ ಪೋಷಕರು ಬೆನ್ನೆಲುಬಾಗಿ ನಿಂತರು. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮಗನ ಶಿಕ್ಷಣಕ್ಕಾಗಿ ಸಾಲ ಮಾಡಿದರು, ಮನೆಯಲ್ಲಿದ್ದ ಚಿನ್ನವನ್ನು ಅಡವಿಟ್ಟರು. ಪೋಷಕರ ಈ ತ್ಯಾಗ ಇಂದು ವಿಶ್ವಮಟ್ಟದಲ್ಲಿ ಪ್ರತಿಫಲ ನೀಡಿದೆ.&lt;/p&gt;&lt;img&gt;&lt;p&gt;ಅವೈಸ್ ಅಹ್ಮದ್ ಬಿಟ್ಸ್ ಪಿಲಾನಿ (BITS Pilani) ಸಂಸ್ಥೆಯಲ್ಲಿ ಓದುತ್ತಿದ್ದಾಗಲೇ ಏನಾದರೂ ಹೊಸತು ಮಾಡಬೇಕೆಂಬ ಹಂಬಲ ಹೊಂದಿದ್ದರು. ಈ ಆಲೋಚನೆಯ ಫಲವೇ 'Pixxel'. ವಿದ್ಯಾರ್ಥಿಯಾಗಿದ್ದಾಗಲೇ ಈ ಸ್ಟಾರ್ಟ್&zwnj;ಅಪ್&zwnj;ಗೆ ಚಾಲನೆ ನೀಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಲು ಮುಂದಾದರು. ಇಸ್ರೋ (ISRO) ಸಹಯೋಗದೊಂದಿಗೆ ಬೆಳೆದ ಈ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.&lt;/p&gt;&lt;img&gt;&lt;p&gt;ಅವೈಸ್ ಅಹ್ಮದ್ ಅವರ ಸಾಧನೆಯ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊದಲ ಖಾಸಗಿ ಸ್ಪೇಸ್ ಸ್ಟಾರ್ಟ್&zwnj;ಅಪ್ ಎಂಬ ಹೆಗ್ಗಳಿಕೆಗೆ Pixxel ಪಾತ್ರವಾಗಿದೆ.&lt;/p&gt;&lt;p&gt;ಇದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ವಿಷಯ.&lt;/p&gt;&lt;img&gt;&lt;ul&gt; &lt;li&gt;ಇದುವರೆಗೆ 9 ಅತ್ಯಾಧುನಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.&lt;/li&gt; &lt;li&gt;ಜಾಗತಿಕ ಹೂಡಿಕೆದಾರರಿಂದ ಸುಮಾರು 960 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯನ್ನು ಈ ಸಂಸ್ಥೆ ಪಡೆದಿದೆ.&lt;/li&gt; &lt;li&gt;ಇಂದು ಈ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ 275ಕ್ಕೂ ಹೆಚ್ಚು ಪರಿಣಿತ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.&lt;/li&gt;&lt;/ul&gt;&lt;h2&gt;&amp;nbsp;&lt;/h2&gt;&lt;h2&gt;&lt;strong&gt;ಯುವಜನತೆಗೆ ಸ್ಫೂರ್ತಿ&lt;/strong&gt;&lt;/h2&gt;&lt;p&gt;ಗ್ರಾಮೀಣ ಭಾಗದ ಪ್ರತಿಭೆಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವೈಸ್ ಅಹ್ಮದ್ ಅವರ ಈ ಪಯಣವೇ ಸಾಕ್ಷಿ. ಇಂಟರ್ನೆಟ್ ಇಲ್ಲದ ಬಾಲ್ಯದಿಂದ ಬಾಹ್ಯಾಕಾಶದ ಯಶಸ್ವಿ ಉದ್ಯಮಿಯವರೆಗೆ ಅವರ ಈ ಜರ್ನಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.&lt;/p&gt;&lt;img&gt;&lt;p&gt;ತಮ್ಮ ಪೋಷಕರ ತ್ಯಾಗಕ್ಕೆ ವಿಶ್ವಮಟ್ಟದ ಸಾಧನೆಯ ಮೂಲಕ ಗೌರವ ತಂದಿರುವ ಅವೈಸ್ ಅಹ್ಮದ್, ಇಂದು ಕಾಫಿನಾಡು ಚಿಕ್ಕಮಗಳೂರಿನ ಹೆಮ್ಮೆಯ ಪುತ್ರನಾಗಿ ಹೊರಹೊಮ್ಮಿದ್ದಾರೆ. ಅವರ ಈ ಪಯಣ ಇನ್ನೂ ಎತ್ತರಕ್ಕೆ ಬೆಳೆಯಲಿ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿ ಎಂಬುದು ನಮ್ಮ ಆಶಯ.&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/chikkamagalur/story-about-space-star-awais-ahmed-space-startup-pixxel-bags-nasa-contract-gkn-7unbia1"/>
        </item>
        <item>
            <title><![CDATA[Iran: ಖಮೇನಿ ಪಕ್ಕದಲ್ಲಿ 14 ತಿಂಗಳ ಮಗುವಿನ ಪುಟ್ಟ ಶವಪೆಟ್ಟಿಗೆ ಕಂಡ ಇರಾನ್;  ಕಣ್ಣೀರ ಕಡಲಾದ ಟೆಹ್ರಾನ್! ಯಾರು ಗೊತ್ತಾ ಆ ಪುಟ್ಟ ಹುಡುಗಿ!]]></title>
            <link>https://kannada.asianetnews.com/world-news/iran-sees-14-month-old-baby-small-coffin-next-to-khamenei-tehran-in-tears-who-knows-that-little-girl/articleshow-8vuhg5y</link>
            <guid isPermaLink="true">https://kannada.asianetnews.com/world-news/iran-sees-14-month-old-baby-small-coffin-next-to-khamenei-tehran-in-tears-who-knows-that-little-girl/articleshow-8vuhg5y</guid>
            <pubDate>Sat, 04 Jul 2026 14:13:51 +0530</pubDate>
            <description><![CDATA[&lt;p&gt;Zahra Mohammadi Golpayegani: ಖಮೇನಿ ಶವಪೆಟ್ಟಿಗೆ ಪಕ್ಕದಲ್ಲಿಯೇ ಒಂದು ಚಿಕ್ಕ ಶವಪೆಟ್ಟಿಗೆ ಇತ್ತು, ಅದು ಸುಮಾರು 10 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಶವಪೆಟ್ಟಿಗೆಯು ಸೈನಿಕ ಅಥವಾ ಪ್ರಮುಖ ನಾಯಕನದ್ದಲ್ಲ, ಬದಲಿಗೆ ಅವರ 14 ತಿಂಗಳ ಮಗುವಿನದ್ದು, ಆ ಮಗು ಯಾರು ಗೊತ್ತಾ? ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwp4n14vymknhwndbr0k5chr,imgname-untitled-design--19--1783154508955.jpg" type="image/jpeg" height="390" width="690"/>
            <content:encoded><![CDATA[&lt;p&gt;ಖಮೀನಿ ಸಾವನ್ನಪ್ಪಿದೆ ಹಲವು ತಿಂಗಳ ನಂತರ ಅವರ ಅಂತ್ಯಕ್ರಿಯೆ ಈಗ ನಡೆಯುತ್ತಿದೆ. ಸಂಪೂರ್ಣ ಇರಾನ್ ಶೋಕದಿಂದ ಕೂಡಿದೆ. ಇನ್ನು ಟೆಹ್ರಾನ್&zwnj; ಲಕ್ಷಾಂತರ ಜನ, ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಧ್ವನಿಸುವ ಪ್ರಾರ್ಥನೆಗಳೊಂದಿಗೆ ಬೆಳಗುತ್ತಿದೆ. ಇರಾನ್&zwnj;ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ವಿದಾಯ ಹೇಳವುದಕ್ಕಾಗಿ ಸಾವಿರಾರು ಜನ ಇಮಾಮ್ ಖಮೇನಿ ಗ್ರ್ಯಾಂಡ್ ಮೊಸಲ್ಲಾ ಭವನದಲ್ಲಿ ನೆರೆದಿದ್ದರು. ಆದರೆ ಈ ಬೃಹತ್ ಜನಸಮೂಹದ ನಡುವೆ, ಎಲ್ಲರ ಹೃದಯಗಳನ್ನು ಘಾಸಿಗೊಳಿಸುವ ದೃಶ್ಯವೊಂದಿತ್ತು.&lt;/p&gt;&lt;h2&gt;&lt;strong&gt;ಯಾರು ಆ 14 ತಿಂಗಳ ಕಂದಮ್ಮ!&lt;/strong&gt;&lt;/h2&gt;&lt;p&gt;ಖಮೇನಿ ಶವಪೆಟ್ಟಿಗೆ ಪಕ್ಕದಲ್ಲಿಯೇ ಒಂದು ಚಿಕ್ಕ ಶವಪೆಟ್ಟಿಗೆ ಇತ್ತು, ಅದು ಸುಮಾರು 10 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಶವಪೆಟ್ಟಿಗೆಯು ಸೈನಿಕ ಅಥವಾ ಪ್ರಮುಖ ನಾಯಕನದ್ದಲ್ಲ, ಬದಲಿಗೆ ಅವರ 14 ತಿಂಗಳ ಮೊಮ್ಮಗಳು ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿಯದ್ದಾಗಿತ್ತು. ಸಣ್ಣ ಶವಪೆಟ್ಟಿಗೆಯ ತೂಕ ಕಡಿಮೆಯಿತ್ತು, ಆದರೆ ನೋವು ತುಂಬಾ ಅಗಾಧವಾಗಿದ್ದು, ಹೃದಯ ವಿದ್ರಾವಕವಾಗಿಸುವಂತಿತ್ತು. ಆ ಶವ ಪೆಟ್ಟಿಗೆ ಅನೇಕರ ಹೃದಯ ಭಾರಗೊಳಿಸಿ ಕಣ್ಣೀರ ಕೊಡಿಯನ್ನೇ ಹರಿಸಿದೆ. . ಜನಸಮೂಹವು ಅಮೆರಿಕದ ವಿರುದ್ಧ ಘೋಷಣೆ ಕೂಗುತ್ತ ಶವಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;14 ತಿಂಗಳ ಮಗು ಜಹ್ರಾಳನ್ನು ಕೊಂದವರು ಯಾರು?&lt;/strong&gt;&lt;/h2&gt;&lt;p&gt;ಇರಾನಿನ ಮಾಧ್ಯಮಗಳ ಪ್ರಕಾರ, ಫೆಬ್ರವರಿ 28 ರಂದು ನಡೆದ ಅಮೆರಿಕ-ಇಸ್ರೇಲಿ ಜಂಟಿ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಅವರ ಕುಟುಂಬದ ಹಲವಾರು ಸದಸ್ಯರು ಅವರೊಂದಿಗೆ ಸಾವನ್ನಪ್ಪಿದರು. ಈ ಸದಸ್ಯರಲ್ಲಿ ಒಬ್ಬರು ಅವರ ಮೊಮ್ಮಗಳು ಜಹ್ರಾ. ಮಗುವಿನ ಶವಪೆಟ್ಟಿಗೆಯನ್ನು ಇರಾನಿನ ಧ್ವಜದಿಂದ ಹೊದಿಸಲಾಗಿತ್ತು ಮತ್ತು ಅದರ ಪಕ್ಕದಲ್ಲಿ ಆಕೆಯ ಛಾಯಾಚಿತ್ರ ಸಹ ಇರಿಸಲಾಗಿತ್ತು. ಗೌರವ ಸಲ್ಲಿಸಲು ಬಂದವರು ಒಂದು ಕ್ಷಣ ನಿಂತು, ಛಾಯಾಚಿತ್ರವನ್ನು ನೋಡಿ, ನಂತರ ಮೌನವಾಗಿ ಮುಂದೆ ಸಾಗುತ್ತಿದ್ದರು. ಖಮೇನಿ ಅವರ ಕುಟುಂಬದ ಇತರ ಸದಸ್ಯರನ್ನು ಸಹ ಸಮಾರಂಭದಲ್ಲಿ ಗೌರವಿಸಲಾಯಿತು. ಅವರ ಅಳಿಯ, ಹಿರಿಯ ಮಗಳು ಮತ್ತು ಇರಾನ್&zwnj;ನ ಹೊಸ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರ ಪತ್ನಿಯ ಶವಪೆಟ್ಟಿಗೆಯನ್ನು ಸಹ ಹತ್ತಿರದಲ್ಲಿ ಇರಿಸಲಾಗಿತ್ತು.&lt;/p&gt;&lt;h2&gt;&lt;strong&gt;ಭಾವುಕರಾದ ಇರಾನ್&zwnj; ಅಧ್ಯಕ್ಷ!&lt;/strong&gt;&lt;/h2&gt;&lt;p&gt;ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೂಡ ಭಾವುಕರಾಗಿ, ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದಾರೆ. ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಗರ್ ಗಾಲಿಬಾಫ್, ಹಿರಿಯ ಮಿಲಿಟರಿ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳು ಸಹ ಖಮೇನಿಗೆ ಗೌರವ ಸಲ್ಲಿಸಿದ್ದಾರೆ. ಇರಾನ್&zwnj;ನಲ್ಲಿ ಅಂತ್ಯಕ್ರಿಯೆಯ ಮೆರವಣಿಗೆ ಹಲವಾರು ದಿನಗಳವರೆಗೆ ಇರುತ್ತದೆ. ಜುಲೈ 5 ರಿಂದ 7 ರವರೆಗೆ ಟೆಹ್ರಾನ್ ಮತ್ತು ಕೋಮ್&zwnj;ನಲ್ಲಿ ಸಾರ್ವಜನಿಕ ಸ್ಮರಣಾರ್ಥ ಸೇವೆಗಳು ನಡೆಯಲಿವೆ. ನಂತರ ಜುಲೈ 9 ರಂದು ಖಮೇನಿ ಅವರನ್ನು ಅವರ ಹುಟ್ಟೂರು ಮಶಾದ್&zwnj;ನಲ್ಲಿ ಸಮಾಧಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಹೃದಯ ಸ್ಪರ್ಶಿಸಿದ ಸಣ್ಣ ಶವಪೆಟ್ಟಿಗೆ!&lt;/strong&gt;&lt;/h2&gt;&lt;p&gt;ಈ ಅಂತಿಮ ವಿದಾಯ ಲಕ್ಷಾಂತರ ಜನರನ್ನು ಭಾವುಕರನ್ನಾಗಿಸಿದೆ. ಆದರೆ ಹೆಚ್ಚಿನ ಹೃದಯಗಳನ್ನು ಸ್ಪರ್ಶಿಸಿದ ದೃಶ್ಯವೆಂದರೆ ಅದು 14 ತಿಂಗಳ ಹುಡುಗಿಯ ಸಣ್ಣ ಶವಪೆಟ್ಟಿಗೆ. ಇಡೀ ಟೆಹ್ರಾನ್ ಅನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ. ಖಮೇನಿಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಜನಸಮೂಹವು ಕೇವಲ ಅಳುವುದಷ್ಟೆ ಅ, ಟೆಹ್ರಾನ್ ಅಮೆರಿಕದ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಜೋರಾಗಿ ಘೋಷಣೆ ಕೂಗಿದೆ. ಇದರ ನಡುವೆ ಅಮೆರಿಕ ತನ್ನ 250 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ ಮತ್ತು ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಯನ್ನು ತಮ್ಮ ಸಾಧನೆಗಳಲ್ಲಿ ಒಂದು ಎಂದು ಪರಿಗಣಿಸುತ್ತಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/world-news/iran-sees-14-month-old-baby-small-coffin-next-to-khamenei-tehran-in-tears-who-knows-that-little-girl/articleshow-8vuhg5y"/>
        </item>
        <item>
            <title><![CDATA[ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ, ಪುಸರಖಿತಸ ರಹಸ್ಯ ಬಯಲು]]></title>
            <link>https://kannada.asianetnews.com/world-news/ancient-indian-gold-ring-discovered-in-thailand-tomb-dating-back-2000-years-reveals-secre/articleshow-9u3ikvc</link>
            <guid isPermaLink="true">https://kannada.asianetnews.com/world-news/ancient-indian-gold-ring-discovered-in-thailand-tomb-dating-back-2000-years-reveals-secre/articleshow-9u3ikvc</guid>
            <pubDate>Mon, 06 Jul 2026 15:11:01 +0530</pubDate>
            <description><![CDATA[&lt;p&gt;ಬರೋಬ್ಬರಿ 2000 ವರ್ಷ ಹಳೇ ಭಾರತದ ಚಿನ್ನದ ಉಂಗುರ ಥೈಲ್ಯಾಂಡ್&zwnj;ನ ಸಮಾಧಿ ಸ್ಥಳದಲ್ಲಿ ಪತ್ತೆಯಾಗಿದೆ. ಈ ಉಂಗುರದ ಮೇಲಿದ್ದ ಬ್ರಾಹ್ಮಿ ಲಿಪಿಯಲ್ಲಿನ ಬರಹ ಹಾಗೂ ಇತಿಹಾಸವನ್ನು ಪುರಾತತ್ವ ಇಲಾಖೆ ಬಯಲು ಮಾಡಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvctmc1b1vzssy1h9qgdpa0,imgname-indian-gold-ring-found-in-thailand-1783330853247.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಥೈಲ್ಯಾಂಡ್ (ಜು.06)&lt;/strong&gt; ಭಾರತ ಶತಶತಮಾನಗಳ ಹಿಂದೆ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು ಅನ್ನೋದರ ಕುರುಹು ಈಗಲೂ ಸಿಗುತ್ತಿದೆ. ಭಾರತದ ರಾಜ ಮಹಾರಾಜರ ಸಾಮ್ರಾಜ್ಯ ಅತ್ಯಂತ ವಿಸ್ತಾರಗೊಂಡಿತ್ತು. ಥೈಲ್ಯಾಂಡ್ ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳು ಅಂದು ಭಾರತರ ರಾಜರ ಆಳ್ವಿಕೆಯಲ್ಲಿತ್ತು. ಇದೀಗ ಬರೋಬ್ಬರಿ 2000 ವರ್ಷಗಳ ಹಳೇ ಸಾಂಸ್ಕೃತಿಕ ಹಾಗೂ ವಾಣಿಜ್ಯ ಸಂಬಂಧ ಇತಿಹಾಸದ ಕುರುಹು ಥೈಲ್ಯಾಂಡ್&zwnj;ನಲ್ಲಿ ಪತ್ತೆಯಾಗಿದೆ. ಭಾರತದ ಚಿನ್ನದ ಉಂಗುರವೊಂದು ಧೈಲ್ಯಾಂಡ್ ಸಮಾಧಿ ಸ್ಥಳದಲ್ಲಿ ಪತ್ತೆಯಾಗಿದೆ. ಈ ಉಂಗುರದ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಅಕ್ಷರಗಳಿವೆ. ಈ ಲಿಪಿಯ ರಹಸ್ಯವನ್ನು ಪುರಾತತ್ವ ಇಲಾಖೆ ಬಹಿರಂಗಪಡಿಸಿದೆ.&lt;/p&gt;&lt;h2&gt;ಪುಸರಖಿತಸ ಸೀಕ್ರೆಟ್&lt;/h2&gt;&lt;p&gt;ಥೈಲ್ಯಾಂಡ್&zwnj;ನ ಲಲಿತ ಕಲಾ ಇಲಾಖೆ ಪತ್ತೆಯಾದ ಉಂಗುರದ ಕುರಿತು ಸಂಶೋಧನೆ ನಡೆಸಿದೆ. ಇದು ಭಾರತದ ಉಂಗುರ ಅನ್ನೋದು ಖಚಿತಪಡಿಸಿದೆ. ಬ್ರಾಹ್ಮಿ ಲಿಪಿಯಲ್ಲಿ &quot;ಪುಸರಖಿತಸ&quot; ಎಂಬ ಅಕ್ಷರಗಳನ್ನು ಕೆತ್ತಲಾಗಿದೆ. ಈ ಪದಗಳನ್ನು ಜೋಡಿಸಿ ಸಂಸ್ಕೃತ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಪುಷ್ಯ ನಕ್ಷತ್ರದಿಂದ ರಕ್ಷಿಸಲ್ಪಟ್ಟವನು ಎಂದಾಗಿದೆ.ಅಂದರೆ ಪವಿತ್ರ ಹಾಗೂ ಶುಭಮಂಗಳ ಪುಷ್ಯ ನಕ್ಷತ್ರ ಉಲ್ಲೇಖ ಥೈಲ್ಯಾಂಡ್&zwnj;ನಲ್ಲಿ ಪತ್ತೆಯಾದ ಉಂಗುರದಲ್ಲಿದೆ.&lt;/p&gt;&lt;h2&gt;ಎರಡು ಚಿನ್ನದ ಉಂಗುರ ಪತ್ತೆ&lt;/h2&gt;&lt;p&gt;ಸಂಶೋಧನೆ ವೇಳೆ ಎರಡು ಚಿನ್ನದ ಉಂಗುರಗಳು ಪತ್ತೆಯಾಗಿದೆ. ಒಂದರಲ್ಲಿ ಮಾತ್ರ ಬ್ರಾಹ್ಮಿ ಲಿಪಿಯ ಕೆತ್ತನೆ ಇದೆ. ಮತ್ತೊಂದರಲ್ಲಿ ಯಾವುದೇ ಕೆತ್ತನೇ ಇಲ್ಲ. ಚಿನ್ನದ ಉಂಗುರ ಜೊತೆ ಮಾನವನ ಪ್ರಾಚೀನ ಕಾಲದ ಅಸ್ಥಿಪಂಜರಗಳು ಪತ್ತೆಯಾಗಿದೆ. ಬ್ರಾಹ್ಮಿ ಲಿಪಿ ಹಾಗೂ ಸಮಾಧಿ ಶೈಲಿಯನ್ನು ಆಧರಿಸಿ ಇದು ಭಾರತದ ಪ್ರಾಚೀನ ವರ್ತಕರ ಸಮುದಾಯಕ್ಕೆ ಸೇರಿದ ಶ್ರೀಮಂತ ವ್ಯಾಪಾರಿಯ ಉಂಗುರವಾಗಿರಬಹುದು ಎಂದಿದ್ದಾರೆ. ಭಾರತ ಹಾಗೂ ಥೈಲ್ಯಾಂಡ್ ನಡುವೆ ಸಮುದ್ರ ವ್ಯಾಪಾರ ನಡೆಸುವ ಸಂದರ್ಭದಲ್ಲಿ ವರ್ತಕ ಕುಟುಂಬ ಸಮಾಧಿ ಮಾಡಿರುವ ಸಾಧ್ಯತೆ ಇದೆ. ಸಮಾಧಿ ವೇಳೆ ಅವರ ಪ್ರಿಯ ವಸ್ತುಗಳನ್ನು ಸಮಾಧಿ ಮಾಡುವ ಪದ್ಥತಿ ಈಗಲೂ ಹಲವೆಡೆ ಇದೆ.&lt;/p&gt;&lt;p&gt;ಬ್ಯಾಂಕಾಕ್&zwnj;ನಿಂದ 130 ಕಿಲೋಮೀಟರ್ ದೂರದ ಡಾನ್&zwnj;ಯಾಯಿ ಥಾಂಗ್ ಪ್ರದೇಶದಲ್ಲಿ ಈ ಚಿನ್ನದ ಉಂಗುರ ಪತ್ತೆಯಾಗಿದೆ. ರೈತನೊಬ್ಬ ತನ್ನ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ಸಜ್ಜುಗೊಳಿಸುವಾಗ ಪರಂಪರೆ ಕುರುಹುಗಳ ಪತ್ತೆಯಾಗಿದೆ. ಹೀಗಾಗಿ ರೈತ ನೇರವಾಗಿ ಥೈಲ್ಯಾಂಡ್ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದ. ಹೀಗಾಗಿ ಸಂಶೋಧಕರು ಉಲ್ಲಿ ಉತ್ಖನನ ಮಾಡುತ್ತಿದ್ದಾರೆ. ಇತಿಹಾಸದ ಹಲವು ಕುರುಹುಗಳು ಪತ್ತೆಯಾಗಿದೆ. ಈ ಪೈಕಿ ಭಾರತ ಹಾಗೂ ಥೈಲ್ಯಾಂಡ್ ನಡುವಿನ ಸಂಬಂಧ, ಇತಿಹಾಸಗಳ ಕರುಹುಗಳೇ ಹೆಚ್ಚಾಗಿದೆ.&lt;/p&gt;&lt;p&gt;ಸದ್ಯ ಉತ್ಖನನ ನಡೆಸುತ್ತಿರುವ ಪ್ರದೇಶ ಥೈಲ್ಯಾಂಡ್&zwnj; ಇತಿಹಾಸದಲ್ಲಿ ಕಬ್ಬಿಣದ ಪ್ರಾಂತ್ಯವಾಗಿ ಹೆಸರುವಾಸಿಯಾಗಿತ್ತು. ರಾಜ ಮಹಾರಾಜರು ಇಲ್ಲಿಂದ ಕಬ್ಬಿಣದ ವಿವಿಧ ಹಲವು ಸಲಕರಣೆಗಳ ಖರೀದಿ ನಡೆಯುತ್ತಿತ್ತು ಎಂಬ ಇತಿಹಾಸವಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/ancient-indian-gold-ring-discovered-in-thailand-tomb-dating-back-2000-years-reveals-secre/articleshow-9u3ikvc"/>
        </item>
        <item>
            <title><![CDATA[ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು: ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ]]></title>
            <link>https://kannada.asianetnews.com/relationship/microsoft-techie-recalls-father-selling-mothers-jewellery-to-pay-college-fee-now-earning-crores-suc/articleshow-a2ept2l</link>
            <guid isPermaLink="true">https://kannada.asianetnews.com/relationship/microsoft-techie-recalls-father-selling-mothers-jewellery-to-pay-college-fee-now-earning-crores-suc/articleshow-a2ept2l</guid>
            <pubDate>Mon, 06 Jul 2026 13:14:02 +0530</pubDate>
            <description><![CDATA[ಬೆಂಗಳೂರು ಮೂಲದ ಮೈಕ್ರೋಸಾಫ್ಟ್ ತಂತ್ರಜ್ಞ ಮನು ಅಗರ್ವಾಲ್, ತಮ್ಮ ಯಶಸ್ಸಿನ ಹಿಂದಿನ ಭಾವನಾತ್ಮಕ ಕಥೆಯನ್ನು ಹಂಚಿಕೊಂಡಿದ್ದಾರೆ. ಕಾಲೇಜು ಶುಲ್ಕಕ್ಕಾಗಿ ತಮ್ಮ ತಾಯಿ ಚಿನ್ನದ ಬಳೆಗಳನ್ನು ಮಾರಿದ್ದನ್ನು ನೆನಪಿಸಿಕೊಂಡ ಅವರು, ಇಂದು 1.9 ಕೋಟಿ ರೂಪಾಯಿ ಸಂಬಳ ಗಳಿಸುತ್ತಿದ್ದು, ತಮ್ಮ ಕುಟುಂಬದ ತ್ಯಾಗವೇ ಯಶಸ್ಸಿಗೆ ಕಾರಣ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwv63yjsap8y3xwn6pma7q8e,imgname-manu-agarwal-1783323818585.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಠಿಣ ಶ್ರಮದ ಜೊತೆಗೆ ಅದೃಷ್ಟವೂ ಮನುಷ್ಯನ ಜೀವನದ ದಿಕ್ಕೇ ಬದಲಾಗಿ ಬಿಡುತ್ತದೆ. ಎಷ್ಟೋ ಬಾರಿ ಎಷ್ಟೇ ಶ್ರಮ ವಹಿಸಿ ದುಡಿದರೂ ಅದೃಷ್ಟ ಒದಗಿ ಬರುವುದಿಲ್ಲ. ಕೆಲವೊಮ್ಮೆ ಅದೃಷ್ಟ ನಮ್ಮ ಜೊತೆ ಇದ್ದರೂ, ಅದಕ್ಕೆ ತಕ್ಕನಾದ ಪ್ರಯತ್ನ ಮಾಡದೇ ಎಲ್ಲವನ್ನೂ ಕಳೆದುಕೊಳ್ಳುವುದು ಇದೆ. ಆದರೆ ಎರಡೂ ಜೊತೆಗಿದ್ದಾಗ ಏನಾಗುತ್ತದೆ ಎನ್ನುವುದಕ್ಕೆ ಬೆಂಗಳೂರಿನ ಈ ಯುವಕನ ಯಶೋಗಾಥೆಯೇ ಸಾಕ್ಷಿಯಾಗಿದೆ. ಬೆಂಗಳೂರು ಮೂಲದ ಮೈಕ್ರೋಸಾಫ್ಟ್ ತಂತ್ರಜ್ಞ ಮನು ಅಗರ್ವಾಲ್ ಅವರ ಸ್ಟೋರಿ ಇದು. ಸದ್ಯ ಅಮೆರಿಕದ ಸಿಯಾಟಲ್&zwnj;ನಲ್ಲಿ ಸುಮಾರು 1.9 ಕೋಟಿ ರೂಪಾಯಿ (US$1.9 ಮಿಲಿಯನ್) ಸಂಬಳ ಗಳಿಸುತ್ತಿರುವ ಇವರು ತಮ್ಮ ಪ್ರಯಾಣದ ಹಿಂದಿನ ಭಾವನಾತ್ಮಕ ಕಥೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಕುಟುಂಬವು ತಮ್ಮ ಒಂದು ಸೆಮಿಸ್ಟರ್ ಶುಲ್ಕವನ್ನು ಸಹ ಭರಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಅವರು ನೆನಪಿಸಿಕೊಂಡಿದ್ದಾರೆ. ಶುಲ್ಕ ಭರಿಸುವುದಕ್ಕಾಗಿ ತಮ್ಮ ತಂದೆ ಅಮ್ಮನ ಚಿನ್ನದ ಬಳೆಗಳನ್ನು ಮಾರಾಟ ಮಾಡಿದ್ದನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಲಿಂಕ್ಡ್&zwnj;ಇನ್ ಪೋಸ್ಟ್&zwnj;ನಲ್ಲಿ, ಮೈಕ್ರೋಸಾಫ್ಟ್&zwnj;ನ ಹಿರಿಯ ಸಾಫ್ಟ್&zwnj;ವೇರ್ ಎಂಜಿನಿಯರ್ ಮನು ಅಗರ್ವಾಲ್ ಅವರು ತಮ್ಮ ಕಾಲೇಜು ದಿನಗಳಲ್ಲಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. 15,000 ರೂಪಾಯಿಗಾಗಿ ಸೆಮಿಸ್ಟರ್ ಶುಲ್ಕವನ್ನು ಸಹ ಭರಿಸುವುದು ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಅಮ್ಮನ ಬಳೆ ಮಾರಿದ್ರು&lt;/strong&gt;&lt;/h2&gt;&lt;p&gt;&quot;ನನ್ನ ತಂದೆ ನನ್ನ ಬಿಸಿಎ ಶುಲ್ಕವನ್ನು ಪಾವತಿಸಲು ನನ್ನ ತಾಯಿಯ ಬಳೆಗಳನ್ನು ಮಾರಿದರು. ಪ್ರತಿ ಸೆಮಿಸ್ಟರ್&zwnj;ಗೆ 15 ಸಾವಿರ ರೂಪಾಯಿ ಅಷ್ಟೇ ಬೇಕಾಗಿತ್ತು. ಆದರೆ ನಮ್ಮ ಬಳಿ ಅಷ್ಟೊಂದು ಹಣವಿರಲಿಲ್ಲ. ನನ್ನ ಶಿಕ್ಷಣಕ್ಕಾಗಿ ನನ್ನಮ್ಮ ಮೌನವಾಗಿ ತಮ್ಮ ಚಿನ್ನದ ಬಳೆಗಳನ್ನು ತಂದೆಯ ಕೈಗೆ ಇತ್ತರು. ಇರುವ ಒಂದೇ ಆಭರಣವನ್ನು ಕೊಡುವಾಗ ನನ್ನಮ್ಮ ಅಳಲಿಲ್ಲ. ಅವರು ನನ್ನನ್ನು ನೋಡುತ್ತಿದ್ದರು ಅಷ್ಟೇ. ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;&quot;ನೀವು ನಿಮ್ಮ ಶಿಕ್ಷಣಕ್ಕಾಗಿ ತ್ಯಾಗ ಮಾಡಿದ ಕುಟುಂಬದಿಂದ ಬಂದಿದ್ದರೆ, ಈ ಪೋಸ್ಟ್ ನಿಮಗಾಗಿ&quot; ಎಂದು ಶೀರ್ಷಿಕೆಯಲ್ಲಿ ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ಇಂದು ನನ್ನ ವಾರ್ಷಿಕ ಆದಾಯ 1.9 ಕೋಟಿಯದ್ದಾಗಿದೆ. ಇದಾಗಲೇ ನನ್ನ ಅಮ್ಮನಿಗೆ ಬೇಕಾದ ಎಲ್ಲಾ ಆಭರಣಗಳನ್ನೂ ಖರೀದಿಸಲು ಹೇಳಿದ್ದೇನೆ. ಏಕೆಂದರೆ, ನನ್ನ ಇಂದಿನ ಈ ಸ್ಥಿತಿಗೆ ಅಂದು ನನ್ನಮ್ಮ ಕೊಟ್ಟ ಆ ಬಂಗಾರದ ಬಳೆಗಳೇ ಕಾರಣ ಎಂದಿದ್ದಾರೆ ಮನು. ಅವರ ಲಿಂಕ್ಡ್&zwnj;ಇನ್ ಪ್ರೊಫೈಲ್ ಪ್ರಕಾರ, ಅಗರ್ವಾಲ್ 2016 ರಲ್ಲಿ ಮೈಕ್ರೋಸಾಫ್ಟ್ ಹೈದರಾಬಾದ್&zwnj;ನಲ್ಲಿ ಬೇಸಿಗೆ ಇಂಟರ್ನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೈಕ್ರೋಸಾಫ್ಟ್&zwnj;ಗೆ ಪೂರ್ಣ ಸಮಯ ಸೇರುವ ಮೊದಲು, ಅವರು ಬೆಂಗಳೂರಿನ ಜಿಇ ಹೆಲ್ತ್&zwnj;ಕೇರ್&zwnj;ನಲ್ಲಿಯೂ ಇಂಟರ್ನ್&zwnj; ಆಗಿದ್ದರು.&lt;/p&gt;&lt;h3&gt;&lt;strong&gt;ಮನು ಅವರ ಹಿನ್ನೆಲೆ&lt;/strong&gt;&lt;/h3&gt;&lt;p&gt;2017 ರಲ್ಲಿ, ಅವರು ಮೈಕ್ರೋಸಾಫ್ಟ್ ಹೈದರಾಬಾದ್&zwnj;ನಲ್ಲಿ ಸಾಫ್ಟ್&zwnj;ವೇರ್ ಡೆವಲಪ್&zwnj;ಮೆಂಟ್ ಎಂಜಿನಿಯರ್ ಆಗಿ ಸೇರಿದರು, ನಂತರ ಅವರು ವಾಷಿಂಗ್ಟನ್&zwnj;ನ ರೆಡ್&zwnj;ಮಂಡ್&zwnj;ಗೆ ತೆರಳಿದರು, ಅಲ್ಲಿ ಅವರು 2020 ರವರೆಗೆ ಕೆಲಸ ಮಾಡಿದರು. ನಂತರ ಅವರು ಗೂಗಲ್ ಬೆಂಗಳೂರಿನಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಕಳೆದರು ಮತ್ತು 2025 ರಲ್ಲಿ ಬೆಂಗಳೂರಿನ ಮೈಕ್ರೋಸಾಫ್ಟ್&zwnj;ನಲ್ಲಿ ಹಿರಿಯ ಸಾಫ್ಟ್&zwnj;ವೇರ್ ಎಂಜಿನಿಯರ್ ಆಗಿ ಮತ್ತೆ ಸೇರಿದರು. ಇವರ ಈ ಹೃದಯಸ್ಪರ್ಶಿ ಬರಹಕ್ಕೆ ಸಹಸ್ರಾರು ಮಂದಿ ಕಮೆಂಟ್ಸ್​ ಮಾಡುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/microsoft-techie-recalls-father-selling-mothers-jewellery-to-pay-college-fee-now-earning-crores-suc/articleshow-a2ept2l"/>
        </item>
        <item>
            <title><![CDATA[ಡಾಲರ್ ನಾಡಲ್ಲಿ ಭಾರತದ ದೇಸಿ ಸೊಗಡಿಗಾಗಿ ಮುಗಿಬಿದ್ದ ಜನ: ಇದು ನಮ್ಮ ತಾಕತ್ತು ಅಂತಿರೋ ಭಾರತೀಯರು]]></title>
            <link>https://kannada.asianetnews.com/india-news/new-indian-grocery-store-in-new-jersey-draws-huge-crowds-internet-mixed-reactions-suc/articleshow-ahihpw4</link>
            <guid isPermaLink="true">https://kannada.asianetnews.com/india-news/new-indian-grocery-store-in-new-jersey-draws-huge-crowds-internet-mixed-reactions-suc/articleshow-ahihpw4</guid>
            <pubDate>Sun, 05 Jul 2026 18:27:47 +0530</pubDate>
            <description><![CDATA[ವಿದೇಶದಲ್ಲಿ ನೆಲೆಸುವ ಕನಸಿನ ವಾಸ್ತವವನ್ನು ಬಿಚ್ಚಿಡುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ನ್ಯೂಜೆರ್ಸಿಯಲ್ಲಿ ಹೊಸದಾಗಿ ತೆರೆದ ಭಾರತೀಯ ದಿನಸಿ ಅಂಗಡಿಯಲ್ಲಿ, ಭಾರತೀಯ ಉತ್ಪನ್ನಗಳಿಗಾಗಿ ಜನರು ಮುಗಿಬಿದ್ದು ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿದೆ. ಇದು ವಿದೇಶದಲ್ಲಿ ಭಾರತೀಯ ವಸ್ತುಗಳಿಗೆ ಇರುವ ಅಗಾಧ ಬೇಡಿಕೆಯನ್ನು ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws5nv8ep1xb6gdjnbbewqv0,imgname-usa-1783256247566.jpg" type="image/jpeg" height="390" width="690"/>
            <content:encoded><![CDATA[&lt;p&gt;ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತಿದೆ. ಇದು ವಿದೇಶಗಳ ಕನಸು ಕಾಣುವ ಹಲವು ಯುವ ಸಮುದಾಯಕ್ಕೂ, ಅದರಲ್ಲಿಯೂ ವಿಶೇಷವಾಗಿ ತಮ್ಮ ಮಕ್ಕಳು ವಿದೇಶಕ್ಕೆ ಹಾರಲಿ ಎಂದು ಜೀವಬಿಟ್ಟು ದುಡಿಯುವ ಅಪ್ಪ-ಅಮ್ಮಂದಿರಿಗೆ ಅನ್ವಯ ಆಗುತ್ತದೆ. ಡಾಲರ್​ಗಳಲ್ಲಿ ದುಡಿಯಬಹುದು ಎಂಬ ಆಸೆ ಹೊತ್ತು ತಮ್ಮವರನ್ನೆಲ್ಲಾ ತವರಲ್ಲಿ ಮರೆತು ಹೋಗುವ ಜನರನ್ನು ಒಮ್ಮೆ ಕೇಳಿನೋಡಿ... ಕೈತುಂಬಾ ಸಂಪಾದಿಸಬಹುದು ಎಂದು ದುಬೈಗೋ ಇನ್ನೆಲ್ಲೋ ಹಾರುವ ಜನರು ಅಲ್ಲಿ ಹೇಗಿದ್ದಾರೆ ಎಂದು ವಿಚಾರಿಸಿ ನೋಡಿ... ನಮ್ಮ ಮಗ ಅಮೆರಿಕದಲ್ಲಿ ಕೆಲ್ಸ ಮಾಡ್ತಾನೆ, ನಮ್ಮ ಮಗಳು ಇನ್ನಾವುದೋ ದೇಶದಲ್ಲಿ ವಾಸಿಸ್ತಾಳೆ ಎಂದು ಬೇರೆಯವರ ಮುಂದೆ ಹೆಮ್ಮೆಯಿಂದ ಕೊಂಡಾಡುವ ವೃದ್ಧ ಅಪ್ಪ-ಅಮ್ಮನನ್ನು ಪಕ್ಕಕ್ಕೆ ಕರೆಸಿ ಮಾತನಾಡಿಸಿ ನೋಡಿ... ಅಪ್ಪ-ಅಮ್ಮ ಸತ್ತಾಗ ಪಿಂಡದಾನ ಮಾಡಲೂ ಬರದ ಪರಿಸ್ಥಿತಿಯಲ್ಲಿ ಅದೆಷ್ಟು ಕುಟುಂಬಗಳಿವೆ ಎನ್ನೋದನ್ನೊಮ್ಮೆ ಕಣ್ಣಾಡಿಸಿ ನೋಡಿ...&lt;/p&gt;&lt;p&gt;ಇದು ಇಂದು ನಿನ್ನೆಯ ಕಥೆಯಲ್ಲ. ವಿದೇಶ ಅದರಲ್ಲಿಯೂ ಅಮೆರಿಕಕ್ಕೆ ಮಕ್ಕಳನ್ನು ಮುಂದೊಮ್ಮೆ ಕಳುಹಿಸಬೇಕು ಎಂದು ಮಗು ಗರ್ಭದಲ್ಲಿ ಇದ್ದಾಗಲೇ ಹಲವು ಅಪ್ಪ-ಅಮ್ಮ ಯೋಚನೆ ಮಾಡುವುದು ಉಂಟು. ಫಾರಿನ್​ ರಿಟರ್ನ್​ ಎಂದು ಹೇಳಿಕೊಳ್ಳುವ ಆಸೆ ಅವರದ್ದು. ಆದರೆ ಈಗಿನ ಸ್ಥಿತಿ ಬಿಡಿ. ಆಗುತ್ತಿರುವುದೇ ಬೇರೆ. ಫಾರಿನ್​ ಎಂದರೆ ಸಾಕಪ್ಪಾ ಸಾಕು ಎಂದು ವಾಪಸ್​ ತಾಯ್ನಾಡಿಗೆ ವಾಪಸಾಗುತ್ತಿರುವವರು ಹಲವರು. ಆದರೆ ಭಾರತ ಎಂದರೆ ಏನು ಎನ್ನುವುದಕ್ಕೆ ಈ ವಿಡಿಯೋ ಒಂದು ಸಾಕ್ಷಿಯಾಗಿದೆ.&lt;/p&gt;&lt;h2&gt;&lt;strong&gt;ದಿನಸಿ ಅಂಗಡಿಯಲ್ಲಿ ಕಾಲ್ತುಳಿತ&lt;/strong&gt;&lt;/h2&gt;&lt;p&gt;ನ್ಯೂಜೆರ್ಸಿಯಲ್ಲಿ ಹೊಸದಾಗಿ ತೆರೆಯಲಾದ ಭಾರತೀಯ ದಿನಸಿ ಅಂಗಡಿಯೊಂದು ಉದ್ಘಾಟನೆ ಆಗುತ್ತಿದ್ದಂತೆಯೇ, ಭಾರತದ ತರಕಾರಿ, ದಿನಸಿ ಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಅಲ್ಲಿ ಕಾಲ್ತುಳಿತವೂ ಆಗಿದೆ. ಇದರ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತದೆ. ವಿಡಿಯೋದಲ್ಲಿ ಉದ್ದನೆಯ ಸರತಿ ಸಾಲುಗಳು ಮತ್ತು ಕಿಕ್ಕಿರಿದ ಜನ ಸಮೂಹವನ್ನು ನೋಡಬಹುದು.&lt;/p&gt;&lt;h3&gt;&lt;strong&gt;ಭಾರತೀಯ ಸೂಪರ್&zwnj;ಮಾರ್ಕೆಟ್&zwnj;ಗಳಿಗೆ ಹೆಚ್ಚಾದ ಬೇಡಿಕೆ&lt;/strong&gt;&lt;/h3&gt;&lt;p&gt;ಇದು ಅಮೆರಿಕದಲ್ಲಿ ಭಾರತೀಯ ಸೂಪರ್&zwnj;ಮಾರ್ಕೆಟ್&zwnj;ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸುತ್ತಿದೆ. ಭಾರತೀಯ ವಲಸೆಗಾರರು ಅಮೆರಿಕದಲ್ಲಿ ಹೆಚ್ಚುತ್ತಲೇ ಇರುವ ಕಾರಣ, ಭಾರತದಲ್ಲಿ ಸಿಗುವ ತಾಜಾ ತಾಜಾ ತರಕಾರಿಗಳಿಂದ ದೂರವಾಗಿರುವ ಜನರು, ಕಾಲ್ತುಳಿತವನ್ನೂ ಲೆಕ್ಕಿಸದೇ ಈ ಅಂಗಡಿಯ ಮುಂದೆ ಮುಗಿಬಿದ್ದಿದ್ದಾರೆ. ಭಾರತದ ಪ್ರಾದೇಶಿಕ ದಿನಸಿಗಳು, ಮಸಾಲೆಗಳು, ತಿಂಡಿಗಳು ಮತ್ತು ಪರಿಚಿತ ಭಾರತೀಯ ಬ್ರ್ಯಾಂಡ್&zwnj;ಗಳನ್ನು ಒಂದೇ ಸೂರಿನಡಿ ನೀಡುವ ಅಂಗಡಿಗಳನ್ನು ಹುಡುಕುತ್ತಿದ್ದಾರೆ.&lt;/p&gt;&lt;p&gt;ಈ ಭವ್ಯ ಉದ್ಘಾಟನೆಯು ಸಂಚಲನ ಮೂಡಿಸುತ್ತಲೇ ಇದೆ, ವಿಡಿಯೋಗಳು ವೈರಲ್​ ಆಗುತ್ತಲೇ ಕಾಲ್ತುಳಿತ ನೋಡಿ, ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ನಮ್ಮ ಭಾರತದ ಮಹಿಮೆ ಎಂದು ಭಾರತೀಯರು ಹೇಳುತ್ತಿದ್ದರೆ, ಭಾರತದವರಿಗೆ ಮ್ಯಾನರ್ಸೇ ಇಲ್ಲ ಎನ್ನುತ್ತಿದ್ದಾರೆ ಅಮೆರಿಕನ್ನರು!&lt;/p&gt;&lt;p&gt;&amp;nbsp;&lt;/p&gt;&lt;p&gt;Like I said, in the next 10 years, Indians will not get respect in any country.pic.twitter.com/VESutXyJfx&lt;/p&gt;&lt;p&gt;&mdash; Kapil (@kapsology) July 3, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/new-indian-grocery-store-in-new-jersey-draws-huge-crowds-internet-mixed-reactions-suc/articleshow-ahihpw4"/>
        </item>
        <item>
            <title><![CDATA[ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ]]></title>
            <link>https://kannada.asianetnews.com/gallery/india-news/for-love-the-crazy-lover-zeeshan-mir-crossed-the-border-from-pakistan-to-india-what-is-the-story-gkn-cxy3ogh</link>
            <guid isPermaLink="true">https://kannada.asianetnews.com/gallery/india-news/for-love-the-crazy-lover-zeeshan-mir-crossed-the-border-from-pakistan-to-india-what-is-the-story-gkn-cxy3ogh</guid>
            <pubDate>Sun, 05 Jul 2026 12:18:17 +0530</pubDate>
            <description><![CDATA[&lt;p&gt;ಸ್ನ್ಯಾಪ್&zwnj;ಚಾಟ್&zwnj;ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwrfwnvw6tgv29pqvvwp5ckf,imgname-pok-man-who-crossed-loc-1783233402748.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ನ್ಯಾಪ್&zwnj;ಚಾಟ್&zwnj;ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ&lt;/p&gt;&lt;img&gt;&lt;p&gt;&lt;strong&gt;ಶ್ರೀನಗರ: &lt;/strong&gt;ಪ್ರೀತಿ ಹುಡುಕುತ್ತ ಗಡಿದಾಟಿ ಭಾರತ ಪ್ರವೇಶ ಮಾಡುವ ಪಾಕಿಸ್ತಾನಿಯರ ಸುದ್ದಿ ಹೊಸತೇನೂ ಅಲ್ಲ. ಇದೀಗ ಅಂತಹುದೇ ಮತ್ತೊಂದು ಪ್ರಸಂಗ ನಡೆದಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಮೇಲಿನ ಪ್ರೀತಿ ಹಾಗೂ ತನ್ನ ಪೂರ್ವಜರ ಆಸ್ತಿಯನ್ನು ಮರಳಿ ಪಡೆಯುವ ಹಂಬಲದಿಂದ ಗಡಿ ದಾಟಿ ಭಾರತಕ್ಕೆ ಬಂದಿದ್ದ 22 ವರ್ಷದ ಪಾಕ್ ಆಕ್ರಮಿತ ಕಾಶ್ಮೀರದ (POJK) ಯುವಕನನ್ನು ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.&lt;/p&gt;&lt;img&gt;&lt;p&gt;ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿ ಜೀಶನ್ ಮಿರ್ (22) ಎಂಬಾತ ಮೇ 31 ರಂದು ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್&zwnj;ನಲ್ಲಿ ನಿಯಂತ್ರಣ ರೇಖೆಯನ್ನು (LoC) ದಾಟಿ ಭಾರತದೊಳಗೆ ಪ್ರವೇಶಿಸಿದ್ದ. ಆತನನ್ನು ಭಾರತೀಯ ಸೇನೆಯು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಸುಮಾರು ಒಂದು ತಿಂಗಳ ನಂತರ, ಜುಲೈ 4 ರಂದು ಮಧ್ಯಾಹ್ನ 12:24 ಕ್ಕೆ ಆತನನ್ನು ಅಧಿಕೃತವಾಗಿ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀನಗರದ ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದೆ.&lt;/p&gt;&lt;img&gt;&lt;p&gt;ತನಿಖಾ ಸಂಸ್ಥೆಗಳ ಮಾಹಿತಿಯ ಪ್ರಕಾರ, ಜೀಶನ್ ಮಿರ್&zwnj;ಗೆ ಬಾರಾಮುಲ್ಲಾದ ತುಲ್ವಾರಿ ಗ್ರಾಮದ ನಿವಾಸಿ ಇರಮ್ ಬಾನೊ ಎಂಬ ಯುವತಿಯ ಪರಿಚಯ ಸ್ನ್ಯಾಪ್&zwnj;ಚಾಟ್&zwnj;ನಲ್ಲಿ ಆಗಿತ್ತು. ಈ ಸ್ನೇಹ ಕ್ರಮೇಣ ಗಾಢವಾದ ಪ್ರೀತಿಗೆ ತಿರುಗಿತ್ತು. ಪಾಕಿಸ್ತಾನದಲ್ಲಿದ್ದ ಜೀಶನ್ ಕುಟುಂಬ ನಿರ್ವಹಣೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಮಾನಸಿಕ ಒತ್ತಡದಲ್ಲಿದ್ದನು. ಇದೇ ಸಮಯದಲ್ಲಿ ತನ್ನ ಪೂರ್ವಜರು ಸಹ ಇರಮ್ ಬಾನೊ ವಾಸಿಸುವ ಅದೇ ತುಲ್ವಾರಿ ಗ್ರಾಮದವರು ಎಂಬ ವಿಷಯ ಆತನಿಗೆ ತಿಳಿದುಬಂದಿತ್ತು.&lt;/p&gt;&lt;img&gt;&lt;p&gt;ತನ್ನ ಕಷ್ಟಗಳನ್ನು ಇರಮ್ ಬಾನೊ ಜೊತೆ ಹಂಚಿಕೊಂಡಾಗ, ಆಕೆ ಜೀಶನ್&zwnj;ಗೆ ಗಡಿ ದಾಟಿ ಭಾರತಕ್ಕೆ ಬರುವಂತೆ ಸಲಹೆ ನೀಡಿದ್ದಳು. ಗಡಿ ದಾಟಿ ನೇರವಾಗಿ ಭಾರತೀಯ ಸೇನೆಗೆ ಶರಣಾಗುವುದು, ನಂತರ ಅಕ್ರಮ ಪ್ರವೇಶಕ್ಕಾಗಿ ನೀಡಲಾಗುವ ಕಾನೂನುಬದ್ಧ ಶಿಕ್ಷೆಯನ್ನು ಅನುಭವಿಸುವುದು ಮತ್ತು ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಪೂರ್ವಜರ ಆಸ್ತಿಯನ್ನು ಕಾನೂನುಬದ್ಧವಾಗಿ ಪಡೆದು ಇಲ್ಲೇ ನೆಲೆಸುವುದು ಇವರಿಬ್ಬರ ಯೋಜನೆಯಾಗಿತ್ತು.&lt;/p&gt;&lt;img&gt;&lt;p&gt;ಮೇ ತಿಂಗಳಲ್ಲಿ ಗಡಿ ದಾಟುವಾಗ ಜೀಶನ್ ಸಿಕ್ಕಿಬಿದ್ದಿದ್ದ. ವಿಚಾರಣೆಯ ವೇಳೆ ಜೀಶನ್ ನೀಡಿದ ಮಾಹಿತಿಯನ್ನು ದೃಢೀಕರಿಸಲು ಸೇನೆಯು ಇರಮ್ ಬಾನೊಳನ್ನು ವಿಚಾರಣೆಗೆ ಒಳಪಡಿಸಿತ್ತು. ಆಕೆ ಜೀಶನ್ ಹೇಳಿದ್ದೆಲ್ಲವೂ ನಿಜವೆಂದು ಒಪ್ಪಿಕೊಂಡು, ಆತನನ್ನು ಇಲ್ಲೇ ಇರಲು ಬಿಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಳು. ಯಾವುದೇ ಬಾಹ್ಯ ಸಂಚು ಅಥವಾ ದೇಶವಿರೋಧಿ ಅಂಶಗಳಿಲ್ಲ ಎಂಬುದು ಖಚಿತವಾದ ನಂತರ ಭಾರತೀಯ ಸೇನೆಯು ಆತನನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿತು.&lt;/p&gt;&lt;p&gt;ಶನಿವಾರ 'ಕಮನ್ ಅಮನ್ ಸೇತು' ಮೂಲಕ ಜೀಶನ್&zwnj;ನನ್ನು ಪಾಕ್ ಸೇನೆಗೆ ಒಪ್ಪಿಸಲಾಯಿತು. ಭಾರತದಲ್ಲಿದ್ದ ಸಮಯದಲ್ಲಿ ಜೀಶನ್&zwnj;ನನ್ನು ಅತ್ಯಂತ ಗೌರವ ಮತ್ತು ಕಾಳಜಿಯಿಂದ ನಡೆಸಿಕೊಳ್ಳಲಾಗಿದೆ. ಇದು ಭಾರತೀಯ ಸೇನೆಯ ವೃತ್ತಿಪರತೆ ಮತ್ತು ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/india-news/for-love-the-crazy-lover-zeeshan-mir-crossed-the-border-from-pakistan-to-india-what-is-the-story-gkn-cxy3ogh"/>
        </item>
        <item>
            <title><![CDATA[ಪ್ರೀತಿ ಹುಟ್ಟಲಿ, ರೊಮ್ಯಾನ್ಸ್ ಹೆಚ್ಚಾಗಲಿ, ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಒಂದು ವಾರ ಫೈಂಡ್ ಲವ್ ರಜೆ]]></title>
            <link>https://kannada.asianetnews.com/gallery/relationship/find-love-leave-china-univeristy-grants-one-week-break-for-students-to-explore-romance-dwaes4q</link>
            <guid isPermaLink="true">https://kannada.asianetnews.com/gallery/relationship/find-love-leave-china-univeristy-grants-one-week-break-for-students-to-explore-romance-dwaes4q</guid>
            <pubDate>Tue, 07 Jul 2026 11:37:42 +0530</pubDate>
            <description><![CDATA[&lt;p&gt;ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ವಿದ್ಯಾಭ್ಯಾಸ, ಓದಿನ ಕಡಗೆ ಗಮನಹರಿಸಬೇಕು ಅನ್ನೋ ಕಾಲ ಹೋಯಿತು. ಇದೀಗ ವಿಶ್ವವಿದ್ಯಾಲ ಒಂದು ತನ್ನ ವಿದ್ಯಾರ್ಥಿಗಳಿಗೆ ಪ್ರೀತಿ , ರೊಮ್ಯಾನ್ಸ್&zwnj;ಗಾಗಿ ಒಂದು ವಾರ ರಜೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxjfxngg3qpwtrtq70cmr8n,imgname-love-week-on-campus-1783403902639.png" type="image/jpeg" height="390" width="690"/>
            <content:encoded><![CDATA[&lt;p&gt;ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ವಿದ್ಯಾಭ್ಯಾಸ, ಓದಿನ ಕಡಗೆ ಗಮನಹರಿಸಬೇಕು ಅನ್ನೋ ಕಾಲ ಹೋಯಿತು. ಇದೀಗ ವಿಶ್ವವಿದ್ಯಾಲ ಒಂದು ತನ್ನ ವಿದ್ಯಾರ್ಥಿಗಳಿಗೆ ಪ್ರೀತಿ , ರೊಮ್ಯಾನ್ಸ್&zwnj;ಗಾಗಿ ಒಂದು ವಾರ ರಜೆ ನೀಡಿದೆ.&lt;/p&gt;&lt;img&gt;&lt;p&gt;ಕಾಲೇಜು ದಿನಗಳಲ್ಲಿ ಹುಟ್ಟುವ ಪ್ರೀತಿಯ ಸಕ್ಸಸ್ ರೇಟ್ ಕಡಿಮೆ ಅಂತಾರೆ. ಓದುವ ಸಮಯದಲ್ಲಿ ಪ್ರೀತಿ ಪ್ರೇಮಕ್ಕೆ ಯಾರೂ ಅವಕಾಶ ನೀಡುವುದಿಲ್ಲ. ಆದರೆ ಇಲ್ಲೊಂದು ವಿಶ್ವಿವಿದ್ಯಾಲಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸೇರಿದಂತೆ ಎಲ್ಲರಿಗೂ ವಸಂತಕಾಲದ ರಜೆ ಘೋಷಿಸಿದೆ. ಟಾಸ್ಕ್ ಇಷ್ಟೇ ಪ್ರೀತಿ ಹುಟ್ಟಬೇಕು, ರೊಮ್ಯಾನ್ಸ್ ಶುರುವಾಗಬೇಕು. ಒಂದು ವಾರಗಳ ಕಾಲ ಫೈಂಡ್ ಲವ್ ರಜೆ ನೀಡಲಾಗುತ್ತದೆ. ಈ ಬಾರಿ ಹೋವುಗಳ ವೀಕ್ಷಿಸಿ, ಪ್ರಣಯ ಅನುಭವಿಸಿ ಅನ್ನೋ ಪರಿಕಲ್ಪನೆ ಅಡಿಯಲ್ಲಿ ರಜೆ ನೀಡಲಾಗಿದೆ. ಈ ರಜಾ ದಿನದಲ್ಲಿ ಪುಸ್ತಕ, ಓದು, ಕಲಿಕೆ ಎಲ್ಲಾ ಬದಿಗಿಟ್ಟು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು ಪ್ರೀತಿಯಲ್ಲಿ ಬೀಳಬೇಕು. ಅಥವಾ ಪ್ರಯತ್ನ ಮಾಡಬೇಕು. ಪ್ರೀತಿಯಲ್ಲಿದ್ದರೆ, ರೊಮ್ಯಾನ್ಸ್&zwnj; ಪ್ರಯತ್ನಕ್ಕೆ ಕೈಹಾಕಬಹುದು.&lt;/p&gt;&lt;img&gt;&lt;p&gt;ವಿಶ್ವವಿದ್ಯಾಲಯದ ಈ ಘೋಷಣೆ ಹೊರಬೀಳುತ್ತಿದ್ದಂತೆ ಇದೀಗ ಹಲವರು ಈ ವಿಶ್ವಿವಿದ್ಯಾಲಯದಲ್ಲಿ ಅಡ್ಮಿಷನ್ ಮಾಡಿಕೊಳ್ಳಲು ಗೂಗಲ್&zwnj;ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಆದರೆ ಈ ವಿಶ್ವಿವಿದ್ಯಾಲಯ ಇರೋದು ಚೀನಾದ ಸಿಚುವಾನ್ ವೊಕೇಶನ್ ಏವಿಯೇಶನ್ ಕಾಲೇಜಿನಲ್ಲಿ. ಪ್ರತಿ ವರ್ಷ ವಸಂತಕಾಲದ ರಜೆ ಘೋಷಿಸಾಗುತ್ತದೆ. ಇದು ಪ್ರೀತಿಗಾಗಿ,ರೊಮ್ಯನ್ಸ್&zwnj;ಗಾಗಿ ಮಾತ್ರ.&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳಿಗೆ ಒಂದು ವಾರದ ಪ್ರೀತಿ ರಜೆಯಲ್ಲಿ ವಿದ್ಯಾರ್ಥಿಗಳು ಪ್ರೀತಿಯಲ್ಲಿ ಮುಳುಗಿದರೆ ಉತ್ತಮ. ಆದರೆ ಈ ರಜೆಯ ಉದ್ದೇಶ ವಿದ್ಯಾರ್ಥಿಗಳ ಪ್ರೀತಿ ಅಲ್ಲ. ಪ್ರಮುಖವಾಗಿ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರಿಗೆ ಸಿಗುವ ಸ್ವಾತಂತ್ರ್ಯವಾಗಿದೆ. ಈ ಸಮಯದಲ್ಲಿ ಮತ್ತೊಂದು ಮಗುವಿಗೆ, ಅಥವಾ ಮೊದಲ ಮಗುವಿಗೆ ಪ್ರಯತ್ನಸುವ ಸಮಯ ನೀಡುವುದಾಗಿದೆ.&lt;/p&gt;&lt;img&gt;&lt;p&gt;ಚೀನಾದ ಜನನ ಪ್ರಮಾಣ ಭಾರಿ ಕುಸಿತ ಕಂಡಿದೆ.ಸತತ ನಾಲ್ಕನೇ ವರ್ಷ ಜನನ ಪ್ರಮಾಣ ಗನೀಯವಾಗಿ ಇಳಿಕೆಯಾಗುತ್ತಾ ಸಾಗಿದೆ. ಹೀಗಾಗಿ ವಿಶ್ವವಿದ್ಯಾಲಯ ಈ ಕ್ರಮ ಘೋಷಿಸಿದೆ. ಇದರಿಂದ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರಿಗೆ ಸಮಯ ಸಿಗಲಿದೆ. ಈ ಮೂಲಕ ಜನನ ಪ್ರಮಾಣ ಹೆಚ್ಚಿಸಲು ರಜೆ ನೀಡಿದೆ. ಇನ್ನು ವಿದ್ಯಾರ್ಥಿಗಳಲ್ಲಿ ಪ್ರೀತಿ ಮೂಡಿ ಮದುವೆ, ಮಕ್ಕಳು ಎಂದು ಮುಂದುವರಿದರೆ ವಿಶೇಷ ಸೌಲಭ್ಯ ನೀಡಲು ಕಾಲೇಜು ಮುಂದಾಗಿದೆ. ಪ್ರತಿ ವರ್ಷ ಎಪ್ರಿಲ್ 1 ರಿಂದ 6 ವರೆಗೆ ವಸಂತಕಾಲ ರಜೆ ನೀಡುತ್ತಿದೆ.&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳು ರಜೆಯಿಂದ ಪ್ರವಾಸ ಹೆಚ್ಚಾಗಲಿದೆ. ಆಂತರಿಕ ಆರ್ಥಿಕತೆ ಉತ್ತಮವಾಗಲಿದೆ. ವಿದ್ಯಾರ್ಥಿಗಳು, ಸಿಬ್ಬಂದಿಗಳು ಪ್ರವಾಸಕ್ಕೆ ಹಣ ಖರ್ಚು ಮಾಡಲಿದ್ದಾರೆ. ವ್ಯಾಪಾರ, ಖರೀದಿ, ಮಾರಾಟಗಳು ಹೆಚ್ಚಾಗಲಿದೆ. ಇದರಿಂದ ಆಂತರಿಕ ಆರ್ಥಿಕತೆಗೆ ಉತ್ತೇಜನ ನೀಡಲು ಸಾಧ್ಯವಿದೆ. ಹೀಗಾಗಿ ಹಲವು ಕಾರಣಗಳಿಂದ ಇದೀಗ ವಿಶ್ವವಿದ್ಯಾಲಯ ಈ ರೀತಿಯ ಪ್ರಯತ್ನ ಮಾಡುತ್ತಿದೆ.&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳು ರಜೆ ಮುಗಿಸಿ ಬಂದ ಮೇಲೆ ವಿದ್ಯಾರ್ಥಿಗಳು ಪ್ರಕೃತಿ ಹಾಗೂ ಪ್ರೀತಿ ಕುರಿತು ವ್ಲಾಗ್,ರೀಲ್ಸ್ ಮಾಡಬೇಕು. ಅನುಭವಗಳ ವಿಡಿಯೋಗಳು, ಬರಹಗಳನ್ನು ನೀಡಬೇಕು. ಈ ಮೂಲಕ ತಮ್ಮ ಒಂದು ವಾರ ರಜೆಯನ್ನು ಅರ್ಥಪೂರ್ಣವಾಗಿ ಕಳೆಯುವಂತೆ ಮಾಡಲು ವಿಶ್ವವಿದ್ಯಾಲಯ ಕೆಲ ಪ್ರಯೋಗ ಮಾಡಿದೆ.&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/relationship/find-love-leave-china-univeristy-grants-one-week-break-for-students-to-explore-romance-dwaes4q"/>
        </item>
        <item>
            <title><![CDATA[ಪಹಲ್ಗಾಮ್ ನರಮೇಧಕ್ಕೆ ಕಾರಣ ಪಾಕ್ ಉಗ್ರ ಹಫೀಜ್ ಸಯೀದ್! NIA ಚಾರ್ಜ್‌ಶೀಟ್ ಸಲ್ಲಿಕೆ]]></title>
            <link>https://kannada.asianetnews.com/india-news/pahalgam-terror-attack-nia-names-let-chief-hafiz-saeed-accused-in-chargesheet-gdp/articleshow-fr8fy6v</link>
            <guid isPermaLink="true">https://kannada.asianetnews.com/india-news/pahalgam-terror-attack-nia-names-let-chief-hafiz-saeed-accused-in-chargesheet-gdp/articleshow-fr8fy6v</guid>
            <pubDate>Tue, 07 Jul 2026 13:39:13 +0530</pubDate>
            <description><![CDATA[ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣದಲ್ಲಿ ಎನ್&zwnj;ಐಎ ಹೆಚ್ಚುವರಿ ಚಾರ್ಜ್&zwnj;ಶೀಟ್ ಸಲ್ಲಿಸಿದೆ. ಈ ದಾಳಿಯಲ್ಲಿ ಕನ್ನಡಿಗರೂ ಸೇರಿದಂತೆ 26 ಮಂದಿ ಮೃತಪಟ್ಟಿದ್ದು, ಲಷ್ಕರ್-ಎ-ತೊಯ್ದಾ ಮುಖ್ಯಸ್ಥ ಹಫೀಜ್ ಸಯೀದ್&zwnj;ನನ್ನು ಪ್ರಮುಖ ಆರೋಪಿಯನ್ನಾಗಿಸಲಾಗಿದೆ. ಈ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಪಾತ್ರವನ್ನು ಎನ್&zwnj;ಐಎ ಬಯಲು ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ke9wfzgwt96pf97w84y66a6c,imgname-hafiz-saeed-pic-1767710916124.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಕನ್ನಡಿಗರಾದ ಮಂಜುನಾಥ್ ಮತ್ತು ಭರತ್ ಸೇರಿದಂತೆ ಒಟ್ಟು 26 ಅಮಾಯಕರನ್ನು ಬಲಿಪಡೆದಿದ್ದ ಜಮ್ಮು-ಕಾಶ್ಮೀರದ ಪಹಲ್ಗಾಮ್ ಭೀಕರ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖಾ ವರದಿ ಸಿದ್ದಪಡಿಸಿದೆ. ಈ ದಾಳಿಯ ಹಿಂದೆ ಲಷ್ಕರ್-ಎ-ತೊಯ್ದಾ (LeT) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ ಇರುವುದನ್ನು ಎನ್&zwnj;ಐಎ ಪತ್ತೆಹಚ್ಚಿದ್ದು, ಆತನನ್ನು ಪ್ರಮುಖ ಆರೋಪಿಯನ್ನಾಗಿಸಿ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ (ಚಾರ್ಜ್&zwnj;ಶೀಟ್) ಸಲ್ಲಿಸಿದೆ. ಈ ಮೂಲಕ ಕಾಶ್ಮೀರದಲ್ಲಿ ನಡೆದಿದ್ದ ಈ ನರಮೇಧದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಪಾತ್ರ ಮತ್ತೊಮ್ಮೆ ಜಗತ್ತಿನೆದುರು ಬಟಾ ಬಯಲಾಗಿದೆ.&lt;/p&gt;&lt;p&gt;ಜಮ್ಮುವಿನ ಎನ್&zwnj;ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಈ ಹೆಚ್ಚುವರಿ ಚಾರ್ಜ್&zwnj;ಶೀಟ್&zwnj;ನಲ್ಲಿ, ಪಾಕಿಸ್ತಾನ ಮೂಲದ ಹಫೀಜ್ ಸಯೀದ್ ಭಾರತದ ವಿರುದ್ಧ ಯುದ್ಧ ಸಾರಲು ಗಡಿಯಾಚೆಗಿನಿಂದಲೇ ಪಿತೂರಿ ನಡೆಸಿದ್ದ ಎಂದು ಉಲ್ಲೇಖಿಸಲಾಗಿದೆ. ನಿಷೇಧಿತ 'ಲಷ್ಕರ್-ಎ-ತೊಯ್ದಾ' ಹಾಗೂ ಅದರ ಸಹ ಸಂಘಟನೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಮುಖ್ಯಸ್ಥನಾಗಿ ಆತ ವೈಯಕ್ತಿಕ ನೆಲೆಯಲ್ಲೇ ಈ ದಾಳಿಗೆ ಸಂಚು ರೂಪಿಸಿದ್ದ ಎಂದು ಎನ್&zwnj;ಐಎ ಗಂಭೀರ ಆರೋಪ ಹೊರಿಸಿದೆ.&lt;/p&gt;&lt;h2&gt;ವೈಜ್ಞಾನಿಕ ತನಿಖೆ ಮತ್ತು ಪೂರಕ ಸಾಕ್ಷ್ಯಗಳು&lt;/h2&gt;&lt;p&gt;ಎನ್&zwnj;ಐಎ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1,597 ಪುಟಗಳ ಮೂಲ ಚಾರ್ಜ್&zwnj;ಶೀಟ್ ಅನ್ನು ಸಲ್ಲಿಕೆ ಮಾಡಿತ್ತು. ಅದಕ್ಕೆ ಪೂರಕವಾಗಿ ಈಗ ಸಲ್ಲಿಸಲಾಗಿರುವ ಹೆಚ್ಚುವರಿ ಚಾರ್ಜ್&zwnj;ಶೀಟ್&zwnj;ನಲ್ಲಿ, ದಾಳಿಯ ಹಿಂದೆ ಪಾಕಿಸ್ತಾನ ನಡೆಸಿದ ವ್ಯವಸ್ಥಿತ ಷಡ್ಯಂತ್ರ, ಸಯೀದ್&zwnj;ನ ಪ್ರತ್ಯಕ್ಷ ಪಾತ್ರ ಹಾಗೂ ಸ್ಥಳ ಪರಿಶೀಲನೆಯ ನಂತರ ಕಲೆಹಾಕಿದ ಸೂಕ್ಷ್ಮ ವೈಜ್ಞಾನಿಕ ತನಿಖೆಯ ಮಹತ್ವದ ಸಾಕ್ಷ್ಯಗಳನ್ನು ಒದಗಿಸಲಾಗಿದೆ.&lt;/p&gt;&lt;p&gt;ಇದಕ್ಕೂ ಮುನ್ನ ಕಳೆದ ವರ್ಷದ ಡಿಸೆಂಬರ್ 15 ರಂದು ಸಲ್ಲಿಕೆಯಾಗಿದ್ದ ಚಾರ್ಜ್&zwnj;ಶೀಟ್&zwnj;ನಲ್ಲಿ, ಪಾಕಿಸ್ತಾನಿ ಹ್ಯಾಂಡ್ಲರ್ ಸಾಜಿದ್ ಜಟ್&zwnj;ನನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಹಾಗೆಯೇ 2025 ರ ಜುಲೈನಲ್ಲಿ ನಡೆದ 'ಆಪರೇಷನ್ ಮಹಾದೇವ್' ವೇಳೆ ಹತರಾದ ಮೂವರು ಭಯೋತ್ಪಾದಕರು ಹಾಗೂ ಬಂಧಿತ ಇಬ್ಬರು ಆರೋಪಿಗಳ ವಿರುದ್ಧವೂ ದೋಷಾರೋಪ ಹೊರಿಸಲಾಗಿತ್ತು.&lt;/p&gt;&lt;h2&gt;ಅಂದು ಪಹಲ್ಗಾಮ್&zwnj;ನಲ್ಲಿ ಏನಾಗಿತ್ತು?&lt;/h2&gt;&lt;p&gt;2025ರ ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್&zwnj;ನ ಬೈಸರನ್ ಕಣಿವೆಯಲ್ಲಿ ಪಾಕ್ ಪ್ರಾಯೋಜಿತ ಉಗ್ರರು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ಭೀಕರ ಗುಂಡಿನ ದಾಳಿ ನಡೆಸಿದ್ದರು. ಈ ನರಮೇಧದಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ವ್ಯಕ್ತಿ ಸೇರಿದಂತೆ ಒಟ್ಟು 26 ಮಂದಿಯನ್ನು ಉಗ್ರರು ಕೊಂದು ಹಾಕಿದ್ದರು.&lt;/p&gt;&lt;p&gt;ಈ ಭೀಕರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು 'ಆಪರೇಷನ್ ಸಿಂದೂರ' ಕಾರ್ಯಾಚರಣೆ ನಡೆಸಿತ್ತು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇದ್ದ ಪಾಕಿಸ್ತಾನದ ಉಗ್ರ ನೆಲೆಗಳು ಮತ್ತು ಅವರಿಗೆ ಸಾಥ್ ನೀಡುತ್ತಿದ್ದ ಸೇನಾ ನೆಲೆಗಳನ್ನು ಭಾರತೀಯ ಪಡೆಗಳು ಧ್ವಂಸಗೊಳಿಸಿದ್ದವು. ಈ ಪ್ರಬಲ ಪ್ರತಿದಾಳಿಗೆ 150ಕ್ಕೂ ಹೆಚ್ಚು ಉಗ್ರರು ಸತ್ತಿದ್ದರು.&lt;/p&gt;&lt;h2&gt;ದೆಹಲಿ ಕಾರು ಬಾಂಬ್ ಸ್ಫೋಟ: 11 ಮೃತರ ವಿಧಿವಿಜ್ಞಾನ ವರದಿ ಸಲ್ಲಿಕೆ&lt;/h2&gt;&lt;p&gt;ಕಳೆದ ವರ್ಷ ನವೆಂಬರ್ 10 ರಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆ ಪ್ರದೇಶದಲ್ಲಿ ನಡೆದಿದ್ದ ಭೀಕರ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆಯೂ ಚುರುಕುಗೊಂಡಿದೆ. ಈ ಹೈ-ಇಂಟೆನ್ಸಿಟಿ ಐಇಡಿ (IED) ಸ್ಫೋಟದಲ್ಲಿ ಮೃತಪಟ್ಟಿದ್ದ 11 ಜನರ ವಿಧಿವಿಜ್ಞಾನ (Forensic) ವರದಿಯನ್ನು ಎನ್&zwnj;ಐಎ ಸೋಮವಾರ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.&lt;/p&gt;&lt;p&gt;ವಿಶೇಷ ನ್ಯಾಯಾಧೀಶ ಪೀತಾಂಬರ್ ದತ್ ಅವರ ಮುಂದೆ ಈ ವರದಿಯನ್ನು ಮಂಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 9 ಉಗ್ರರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯವು ಜುಲೈ 13ರವರೆಗೆ ವಿಸ್ತರಿಸಿ ಆದೇಶಿಸಿದೆ. ಈ ಭೀಕರ ಸ್ಫೋಟದ ತನಿಖೆ ನಡೆಸುತ್ತಿರುವ ಎನ್&zwnj;ಐಎ, ಈಗಾಗಲೇ ಒಟ್ಟು 13 ಆರೋಪಿಗಳ ವಿರುದ್ಧ ಕೋರ್ಟ್&zwnj;ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/pahalgam-terror-attack-nia-names-let-chief-hafiz-saeed-accused-in-chargesheet-gdp/articleshow-fr8fy6v"/>
        </item>
        <item>
            <title><![CDATA[Childless Couple: ಸ್ವಂತ ಮಕ್ಕಳಿಲ್ಲ ಅಂದ್ರೆ ಏನಂತೆ? ಹೊಟ್ಟೆ ಬಟ್ಟೆ ಕಟ್ಟಿ 455 ಮಕ್ಕಳ ಜೀವ ಕಾಪಾಡಿದ ದಂಪತಿ!]]></title>
            <link>https://kannada.asianetnews.com/life/china-childless-couple-who-save-the-lives-of-455-children/articleshow-g9cfgmf</link>
            <guid isPermaLink="true">https://kannada.asianetnews.com/life/china-childless-couple-who-save-the-lives-of-455-children/articleshow-g9cfgmf</guid>
            <pubDate>Tue, 07 Jul 2026 22:53:16 +0530</pubDate>
            <description><![CDATA[&lt;p&gt;Chinese couple donated 7 crores: ದಿನಕ್ಕೆ ಕೇವಲ ₹200 ಖರ್ಚು ಮಾಡಿ ಸರಳವಾಗಿ ಬದುಕುತ್ತಿದ್ದ ಮಕ್ಕಳಿಲ್ಲದ ವೃದ್ಧ ದಂಪತಿ, ತಮ್ಮ ಜೀವನದ ಇಡೀ ಉಳಿತಾಯವಾದ ₹7 ಕೋಟಿಯನ್ನು ದಾರಿದ್ರ್ಯ ನಿವಾರಣೆ ಮತ್ತು ಚಿಕಿತ್ಸೆಗೆ ದಾನ ಮಾಡಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyskbsq5dp42bra8xsz4jaz,imgname-new-project---2026-07-07t224509.570-1783444909879.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೀನಾದ ಶಾಂಘೈನಲ್ಲಿದ್ದ ಡು ಯಿಂಗ್ರಾಂಗ್ ಮತ್ತು ಲು ಸುಯಿಂಗ್ ದಂಪತಿಗೆ ಮಕ್ಕಳಿರಲಿಲ್ಲ. ಡು ಅವರು ಶಿಕ್ಷಕರಾಗಿ ಮತ್ತು ಲು ಅವರು ವೈದ್ಯರಾಗಿ ನಿವೃತ್ತರಾಗಿದ್ದರು. ಇಬ್ಬರಿಗೂ ಸಾಕಷ್ಟು ಪೆನ್ಷನ್ ಬರುತ್ತಿದ್ದರೂ, ಅವರು ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಹಳೆಯ ಪೀಠೋಪಕರಣಗಳನ್ನು ಬಳಸುವುದು, ಸುಮಾರು 238 ರೂಪಾಯಿಯ ಮಧ್ಯಾಹ್ನದ ಊಟವನ್ನು ಇಬ್ಬರು ಹಂಚಿಕೊಂಡು ತಿನ್ನುವಷ್ಟು ಮಿತವ್ಯಯದ ಬದುಕು ಇವರದ್ದಾಗಿತ್ತು. ಅಂದರೆ ದಿನಕ್ಕೆ ಅಂದಾಜು 200 ರೂಪಾಯಿಯಷ್ಟೇ ಖರ್ಚು ಮಾಡುತ್ತಿದ್ದರು.&lt;/p&gt;&lt;h2&gt;7 ಕೋಟಿ ರೂಪಾಯಿ ದಾನ ಮಾಡಿದ್ರು!&amp;nbsp;&lt;/h2&gt;&lt;p&gt;2018ರಲ್ಲಿ ಆಸ್ಪತ್ರೆಯೊಂದರ ಮುಂದೆ ಜನ್ಮಜಾತ ಹೃದ್ರೋಗದಿಂದ ಬಳಲುತ್ತಿರುವ ಬಡ ಮಕ್ಕಳ ಚಿಕಿತ್ಸೆಗೆ ಸಹಾಯ ಕೇಳುವ ಪೋಸ್ಟರ್ ಅನ್ನು ಇವರು ನೋಡಿದರು. ಇದನ್ನು ಕಂಡ ತಕ್ಷಣವೇ ದಂಪತಿ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದರು. ತಮಗಾಗಿ ಹಣವನ್ನು ಉಳಿಸಿಕೊಳ್ಳುವಂತೆ ಆಸ್ಪತ್ರೆಯ ಸಿಬ್ಬಂದಿ ವಿನಂತಿಸಿದರೂ ಕೇಳದ ಡು ಅವರು, &quot;ನಮ್ಮಿಬ್ಬರಿಗೂ ಇನ್ನು ಹೆಚ್ಚು ಸಮಯ ಉಳಿದಿಲ್ಲ. ನಮಗೆ ಪೆನ್ಷನ್ ಬರುತ್ತದೆ, ನಮಗೆ ಇಷ್ಟೊಂದು ಹಣದ ಅಗತ್ಯವಿಲ್ಲ&quot; ಎಂದು ಹೇಳಿ ತಮ್ಮ ಜೀವಿತಾವಧಿಯ ಸಂಪೂರ್ಣ ಉಳಿತಾಯವಾದ 7 ಕೋಟಿ ರೂಪಾಯಿಯನ್ನು (5 ಮಿಲಿಯನ್ ಯುವಾನ್) ಚಾರಿಟಿಗೆ ದಾನ ಮಾಡಿದರು.&lt;/p&gt;&lt;h2&gt;ಏಪ್ರಿಲ್&zwnj;ನಲ್ಲಿ ಅಂತ್ಯಕ್ರಿಯೆ&lt;/h2&gt;&lt;p&gt;ಕ್ಯಾನ್ಸರ್&zwnj;ನಿಂದ ಬಳಲುತ್ತಿದ್ದ ಡು ಅವರು 2018ರಲ್ಲಿ ನಿಧನರಾದರೆ, ಅವರ ಪತ್ನಿ ಲು ಕಳೆದ ವರ್ಷ (2025) ನಿಧನರಾದರು. ಇವರ ಕೊನೆಯ ಆಸೆಯಂತೆ ಈ ವರ್ಷದ ಏಪ್ರಿಲ್&zwnj;ನಲ್ಲಿ ಸಮುದ್ರದಲ್ಲಿ ಅಂತ್ಯಕ್ರಿಯೆ (ಚಿತಾಭಸ್ಮ ವಿಸರ್ಜನೆ) ನೆರವೇರಿಸಲಾಯಿತು.&lt;/p&gt;&lt;p&gt;ಇತ್ತೀಚೆಗೆ ಶಾಂಘೈನಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಅಧಿಕಾರಿಗಳು ಈ ದಂಪತಿಯ ದಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ದಂಪತಿ ನೀಡಿದ ಈ ದೊಡ್ಡ ಮೊತ್ತದಿಂದಾಗಿ ಇದುವರೆಗೆ ಒಟ್ಟು 455 ಕಡುಬಡ ಮಕ್ಕಳ ಹೃದಯದ ಚಿಕಿತ್ಸೆ ಸಾಧ್ಯವಾಗಿದೆ. ತಮಗಾಗಿ ಏನನ್ನೂ ಬಯಸದೆ, ನೂರಾರು ಮಕ್ಕಳ ಜೀವ ಉಳಿಸಿದ ಈ ವೃದ್ಧ ದಂಪತಿಯ ಕರುಣೆ ಮತ್ತು ತ್ಯಾಗದ ಕಥೆ ಇಂದು ಜಗತ್ತಿಗೆ ದೊಡ್ಡ ಮಾದರಿಯಾಗಿದೆ.&lt;/p&gt;]]></content:encoded>
            <category>world-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/life/china-childless-couple-who-save-the-lives-of-455-children/articleshow-g9cfgmf"/>
        </item>
        <item>
            <title><![CDATA[ಜೀವಂತ ಇದ್ದಾರಾ ಇರಾನ್ ಸುಪ್ರೀಂ ಲೀಡರ್? ಅಲ್ ಖಮೇನಿ ಅಂತ್ಯಕ್ರಿಯೆಲ್ಲಿ ಪುತ್ರರ ಪೈಕಿ ಮೊಜ್ತಾಬ ಗೈರು]]></title>
            <link>https://kannada.asianetnews.com/world-news/mojtaba-khamenei-absence-at-funeral-fuels-questions-over-iran-supreme-leader-status/articleshow-igeydp0</link>
            <guid isPermaLink="true">https://kannada.asianetnews.com/world-news/mojtaba-khamenei-absence-at-funeral-fuels-questions-over-iran-supreme-leader-status/articleshow-igeydp0</guid>
            <pubDate>Sun, 05 Jul 2026 19:36:26 +0530</pubDate>
            <description><![CDATA[&lt;p&gt;ಅಮೆರಿಕ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ ಸುಪ್ರೀಂ ಲೀಡರ್ ಅಲ್ ಖಮೇನಿ ಅಂತ್ಯಕ್ರಿಯೆ ನಾಲ್ಕು ತಿಂಗಳ ಬಳಿಕ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ನಾಲ್ವರು ಪುತ್ರರ ಪೈಕಿ ಉತ್ತರಾಧಿಕಾರಿ ಮೊಜ್ತಾಬ ಖಮೇನಿ ಗೈರು ಹಲವು ಅನುಮಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwnrdd7v7hbx4946nsef8yxf,imgname-ani-20260703110447-1783141676283.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೆಹ್ರಾನ್ (ಜು.05) &lt;/strong&gt;ಇರಾನ್ ಸುಪ್ರೀಂ ಲೀಡರ್ ಆಯತೊಲ್ಹಾ ಆಲಿ ಖಮೇನಿ ಅಂತ್ಯಸಂಸ್ಕಾರ ಬರೋಬ್ಬರಿ 4 ತಿಂಗಳ ಬಳಿಕ ನಡೆಯುತ್ತಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ದಾಳಿಯಲ್ಲಿ ಅಲಿ ಖಮೇನಿ ಸೇರಿದಂತೆ ಕುಟುಂಬದ ಹಲವು ಸದಸ್ಯರು ಹತ್ಯೆಯಾಗಿದ್ದರು. ಸರಿಸುಮಾರು 130 ದಿನಗಳ ಬಳಿಕ ಅಲ್ ಖಮೇನಿ ಅಂತ್ಯಕ್ರಿಯೆ ನಡೆಯುತ್ತಿದೆ. ಆದರೆ ಈ ಅಂತ್ಯಸಂಸ್ಕಾರದಲ್ಲಿ ಅಲ್ ಖಮೇನಿ ನಾಲ್ವರು ಪುತ್ರರ ಪೈಕಿ ಮೂವರು ಹಾಜರಾಗಿದ್ದಾರೆ. ಅಲ್ ಖಮೇನಿ ಹತ್ಯೆ ಬಳಿಕ ಉತ್ತರಾಧಿಕಾರಿಯಾಗಿ ನೇಮಕಕೊಂಡ ಮೊಜ್ತಾಬ ಖಮೇನಿ ಅಂತ್ಯಸಂಸ್ಕಾರಕ್ಕೆ ಗೈರಾಗಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.&lt;/p&gt;&lt;h2&gt;ಟ್ರಂಪ್ ಹೇಳಿದಂತೆ ಗಂಭೀರವಾಗಿ ಗಾಯಗೊಂಡಿದ್ದಾರಾ ಖಮೇನಿ?&lt;/h2&gt;&lt;p&gt;ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೊಜ್ತಬಾ ಖಮೇನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದರು. ಅಲ್ ಖಮೇನಿ ಮೇಲಿನ ದಾಳಿ ವೇಳೆ ಮೊಜ್ತಬಾ ಖಮೇನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲು ಕಳೆದುಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಹಲವು ಬಾರಿ ಮೊಜ್ತಾಬ ಖಮೇನಿ ಹತ್ಯೆಯಾಗಿರುವ ಸಾಧ್ಯತೆಯನ್ನು ಹೇಳಿದ್ದರು. ಇದೀಗ ಅಂತ್ಯಕ್ರಿಯೆಯಲ್ಲಿ ಮೊಜ್ತಾಬ ಖಮೇನಿ ಗೈರು ಈ ಅನುಮಾನಗಳಿಗೆ ಪುಷ್ಠಿ ನೀಡಿದೆ.&lt;/p&gt;&lt;h2&gt;ಮೂವರು ಮಕ್ಕಳು ಭಾಗಿ&lt;/h2&gt;&lt;p&gt;ಅಲ್ ಖಮೇನಿ ನಾಲ್ವರು ಪುತ್ರರ ಪೈಕಿ ಮೂವರಾದ ಮೊಸ್ತಾಫಾ ಖಮೇನಿ, ಮೇಯ್ಸಮ್ ಖಮೇನಿ ಹಾಗೂ ಮಸೊದ್ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಖಮೇನಿ ಕುಟುಂಬದ ಆಪ್ತರು, ಇತರ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ವಿಧಿವಿಧಾನಗಳ ವೇಳೆ ಮೂವರು ಪುತ್ರರು ಕಣ್ಣೀರಿಟ್ಟಿದ್ದಾರೆ. ಇತ್ತ ಇರಾನ್&zwnj;ನಲ್ಲಿ ಒಂದು ವಾರ ಶೋಕಾಚರಣೆ ನಡೆಸಲಾಗುತ್ತಿದೆ. ಇರಾನ್ ಬೀದಿ ಬೀದಿಗಳಲ್ಲಿ ಮಹಿಳೆಯರು, ನಾಗರೀತರು ಕಣ್ಣೀರಿಟ್ಟಿದ್ದಾರೆ. ಮೊಜ್ತಬಾ ಖಮೇನಿ ಗೈರಾಗಿರುವ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಹೀಗಾಗಿ ಅನುಮಾನಗಳು ಹೆಚ್ಚಾಗಿದೆ. ಮೊಜ್ತಬಾ ಖಮೇನಿ ನಿಜಕ್ಕೂ ಅಮೆರಿಕ ದಾಳಿಯಲ್ಲಿ ಗಾಯಗೊಂಡಿದ್ದಾರಾ ಅನ್ನೋ ಚರ್ಚೆಗಳು ಶುರುವಾಗಿದೆ.&lt;/p&gt;&lt;p&gt;ಮೊಜ್ತಾಬ ಖಮೇನಿ ಗಾಯಗೊಂಡಿದ್ದಾರೆ ಎಂಬ ಟ್ರಂಪ್ ಹೇಳಿಕೆ ಬಳಿಕ ಕೆಲ ವಿಡಿಯೋಗಳು ಹರಿದಾಡಿತ್ತು. ಮೊಜ್ತಾಬ ಖಮೇನಿ ಭಾಷಣದ ಕೆಲ ವಿಡಿಯೋ, ಟ್ವೀಟ್ ಉಲ್ಲೇಖಿಸಿ ಟ್ರಂಪ್ ಮಾತಿಗೆ ಇರಾನ್ ತಿರುಗೇಟು ನೀಡಿತ್ತು. ಆದರೆ ಮೊಜ್ತಾಬ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದೀಗ ಗೈರು ಅನುಮಾನಗಳನ್ನು ಹೆಚ್ಚಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/mojtaba-khamenei-absence-at-funeral-fuels-questions-over-iran-supreme-leader-status/articleshow-igeydp0"/>
        </item>
        <item>
            <title><![CDATA[ರೂಫ್ ಕ್ಲೋಸ್ ಮಾಡಿ ಇಲ್ಲದಿದ್ದರೆ ಸಾವು ಖಚಿತ, ಮೋದಿ ಆಸ್ಟ್ರೇಲಿಯಾ ಕಾರ್ಯಕ್ರಮಕ್ಕೂ ಮುನ್ನ ಹತ್ಯೆ ಬೆದರಿಕೆ]]></title>
            <link>https://kannada.asianetnews.com/india-news/threat-issued-ahead-of-pm-modi-australia-event-melbourne-meets-security-on-high-alert/articleshow-iib22bs</link>
            <guid isPermaLink="true">https://kannada.asianetnews.com/india-news/threat-issued-ahead-of-pm-modi-australia-event-melbourne-meets-security-on-high-alert/articleshow-iib22bs</guid>
            <pubDate>Sat, 04 Jul 2026 21:05:41 +0530</pubDate>
            <description><![CDATA[&lt;p&gt;ಮೋದಿ ಆಸ್ಟ್ರೇಲಿಯಾಗೆ ಸಾವಿಗಾಗಿ ಬರುತ್ತಿದ್ದಾರೆ ಅನ್ನೋ ಬೆದರಿಕೆ ಸಂದೇಶ ಭದ್ರತಾ ಪಡೆಯನ್ನು ಮತ್ತಷ್ಟು ಅಲರ್ಟ್ ಮಾಡಿದೆ. ಅಬು ಮುಸ್ತಾಫಾ ಖಾತೆಯಿಂದ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮಕ್ಕೆ ಬೆದರಿಕೆ ಹಾಕಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw8thk65jc7p5s1rdda0pbc1,imgname-pm-modi-1782707702981.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.04) &lt;/strong&gt;ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆ ಸಂದೇಶಗಳು ಬಂದಿದೆ. ಮುಂದಿನ ವಾರ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಈ ಪ್ರವಾಸದಲ್ಲಿ ಮಾರ್ವೆಲ್ ಕ್ರೀಡಾಂಗಣದಲ್ಲಿ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಕುರಿತು ಫೇಸ್&zwnj;ಬುಕ್&zwnj;ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವೇಳೆ ಬಂದಿರುವ ಒಂದು ಕಮೆಂಟ್&zwnj;ನಿಂದ ಭದ್ರತಾ ಪಡೆ ಅಲರ್ಟ್ ಆಗಿದೆ. ಕ್ರೀಡಾಂಗಣದ ಮೆಲ್ಛಾವಣಿ ಕ್ಲೋಸ್ ಮಾಡಿ. ಇಲ್ಲದಿದ್ದರೆ ಮೋದಿ ಸಾವಿಗಾಗಿ ಆಸ್ಟ್ರೇಲಿಯಾ ಬರುತ್ತಾರೆ ಎಂಬ ಬೆದರಿಕೆ ಕಮೆಂಟ್ ಹಾಕಲಾಗಿದೆ.&lt;/p&gt;&lt;h2&gt;ಅಬು ಮುಸ್ತಾಫ ಹೆಸರಿನಲ್ಲಿ ಬೆದರಿಕೆ ಕಮೆಂಟ್&lt;/h2&gt;&lt;p&gt;ಜುಲೈ 6 ರಿಂದ 11ರ ವರೆಗೆ ಪ್ರಧಾನಿ ಮೋದಿ ಇಂಡೋನೇಷಿಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಲವು ದ್ವಿಪಕ್ಷೀಯ ಮಾತುಕತೆ, ವ್ಯಾಪಾರ ವಹಿವಾಟು ಒಪ್ಪಂದ ಸೇರಿದಂತೆ ಹಲವು ಮಾತುಕತೆಗಳು ನಡೆಯಲಿದೆ. ಇದರ ನಡುವೆ ಜುಲೈ 9 ರಂದು ಮಾರ್ವೆಲ್ ಕ್ರೀಡಾಂಗಣದಲ್ಲಿ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಕುರಿತು ಆಸ್ಟ್ರೇಲಿಯಾದಲ್ಲಿ ಪೋಸ್ಟ್ ಹಾಕಲಾಗಿತ್ತು. ಈ ಪೋಸ್ಟ್&zwnj;ಗೆ ಅಬು ಮುಸ್ತಾಫಾ ಹೆಸರಿನಲ್ಲಿ ಬೆದರಿಕೆ ಕಮೆಂಟ್ ಹಾಕಲಾಗಿದೆ.&lt;/p&gt;&lt;p&gt;ಆಸ್ಟ್ರೇಲಿಯಾ ಫೆಡರಲ್ ಪೊಲೀಸ್ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಐಪಿ ವಿಳಾಸ ಸೇರಿದಂತೆ ಇತರ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ಫೆಡರಲ್ ಪೊಲೀಸ್ ಸೋಶಿಯಲ್ ಮೀಡಿಯಾದ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ. ಹಲವು ಹಂತಗಳಲ್ಲಿ ಆಸ್ಟ್ರೇಲಿಯಾ ಭದ್ರತೆ ನೀಡಲಿದೆ.&lt;/p&gt;&lt;p&gt;ನರೇಂದ್ರ ಮೋದಿ ಜುಲೈ 6 ರಿಂದ 8ರ ವರೆಗೆ ಇಂಡೋನೇಷಿಯಾ ಪ್ರವಾಸ ಮಾಡಿದರೆ, ಬಳಿಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸದೊಂದಿಗೆ ಭಾರತಕ್ಕೆ ಮರಳಲಿದ್ದಾರೆ. ಜುಲೈ 8 ರಿಂದ 10ವರೆಗೆ ಆಸ್ಟ್ರೇಲಿಯಾದಲ್ಲಿ ಮೋದಿ ಹಲವು ಮಾತುಕತೆ ನಡೆಸಲಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಆಲ್ಬನಿಸ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಭಾರತ ಆಸ್ಟ್ರೇಲಿಯಾ ಮೂರನೇ ವಾರ್ಷಿಕ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಗಣಿ, ಸೈಬರ್ ಸೆಕ್ಯೂರಿಟಿ, ದ್ವಿಪಕ್ಷೀಯ ಸಂಬಂಧ ವೃದ್ಧಿ, ಸರಕು ಸಾಗಾಣಿಕೆ ಹಾಗೂ ಪೂರೈಕೆ, ತಂತ್ರಜ್ಞಾನ ಸೇರಿದಂತೆ ಹಲವು ದ್ವಿಪಕ್ಷೀಯ ಸಂಬಂಧ ಕುರಿತು ಚರ್ಚಿಸಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/threat-issued-ahead-of-pm-modi-australia-event-melbourne-meets-security-on-high-alert/articleshow-iib22bs"/>
        </item>
        <item>
            <title><![CDATA[ಮರಳಲ್ಲಿ ಹೂತಿದ್ದ 1700 ವರ್ಷಗಳ ನಗರ ಪತ್ತೆ; ಚಿನ್ನದ ನಾಲಿಗೆ, ಓವನ್ ಮಾದರಿ ಒಲೆ ಪತ್ತೆ]]></title>
            <link>https://kannada.asianetnews.com/gallery/world-news/byzantine-city-found-in-egypt-dakhla-oasis-excavation-golden-tongue-mummies-found-mrq-kfivgmu</link>
            <guid isPermaLink="true">https://kannada.asianetnews.com/gallery/world-news/byzantine-city-found-in-egypt-dakhla-oasis-excavation-golden-tongue-mummies-found-mrq-kfivgmu</guid>
            <pubDate>Mon, 06 Jul 2026 08:46:17 +0530</pubDate>
            <description><![CDATA[&lt;p&gt;ಪುರಾತತ್ತ್ವಜ್ಞರು ಸುಮಾರು 1700 ವರ್ಷಗಳಷ್ಟು ಹಳೆಯ, ಸಂಪೂರ್ಣವಾಗಿ ಹೂತುಹೋಗಿದ್ದ ನಗರವನ್ನು ಪತ್ತೆ ಮಾಡಿದ್ದಾರೆ. ಸುಸಜ್ಜಿತ ಮನೆಗಳು, ಚರ್ಚ್&zwnj;ಗಳನ್ನು ಹೊಂದಿದ್ದ ಈ ನಗರದ ಸಮಾಧಿಗಳಲ್ಲಿ ಚಿನ್ನದ ನಾಲಿಗೆಗಳು ಕಂಡುಬಂದಿದ್ದು, ಇದು ಸಾವಿನ ನಂತರದ ಬದುಕಿನ ನಂಬಿಕೆಗಳ ಬಗ್ಗೆ ಕುತೂಹಲ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwtpe5sb90c7y99ptgrtm508,imgname-byzantine-city--2--1783307376427.jpg" type="image/jpeg" height="390" width="690"/>
            <content:encoded><![CDATA[&lt;p&gt;ಪುರಾತತ್ತ್ವಜ್ಞರು ಸುಮಾರು 1700 ವರ್ಷಗಳಷ್ಟು ಹಳೆಯ, ಸಂಪೂರ್ಣವಾಗಿ ಹೂತುಹೋಗಿದ್ದ ನಗರವನ್ನು ಪತ್ತೆ ಮಾಡಿದ್ದಾರೆ. ಸುಸಜ್ಜಿತ ಮನೆಗಳು, ಚರ್ಚ್&zwnj;ಗಳನ್ನು ಹೊಂದಿದ್ದ ಈ ನಗರದ ಸಮಾಧಿಗಳಲ್ಲಿ ಚಿನ್ನದ ನಾಲಿಗೆಗಳು ಕಂಡುಬಂದಿದ್ದು, ಇದು ಸಾವಿನ ನಂತರದ ಬದುಕಿನ ನಂಬಿಕೆಗಳ ಬಗ್ಗೆ ಕುತೂಹಲ ಮೂಡಿಸಿದೆ.&lt;/p&gt;&lt;img&gt;&lt;p&gt;ಸುಮಾರು 1700 ವರ್ಷಗಳಷ್ಟು ಹಳೆಯದಾದ ನಗರವೊಂದನ್ನು ಪುರಾತತ್ತ್ವಜ್ಞರು ಪತ್ತೆ ಮಾಡಿದ್ದಾರೆ. ಮರಭೂಮಿಯ ಮರಳಿನಲ್ಲಿ ನಗರವೊಂದು ಸಂಪೂರ್ಣವಾಗಿ ಹೂತು ಆಗಿತ್ತು ಎಂಬ ವಿಷಯ ತಿಳಿದು ಇಡೀ ವಿಶ್ವ ಆಶ್ಚರ್ಯಗೊಂಡಿದೆ. ಪತ್ತೆಯಾಗಿರುವ ನಗರವನ್ನು 4ನೇ ಶತಮಾನದ ಈಜಿಪ್ಟ್&zwnj;ನ ಬೈಜಾಂಟೈನ್ ಎಂದು ಗುರುತಿಸಲಾಗಿದೆ. ಇಲ್ಲಿಯ ಸಮಾಧಿಗಳಲ್ಲಿ ಚಿನ್ನದ ನಾಲಿಗೆ ಕಂಡು ಬಂದಿರೋದು ಈ ನಗರದ ಕುರಿತು ಕುತೂಹಲ ಮೂಡಿಸಿದೆ.&lt;/p&gt;&lt;img&gt;&lt;p&gt;ದಿ ಗಾರ್ಡಿಯನ್ ವರದಿ ಪ್ರಕಾರ, ದಖ್ಲಾ ಓಯಸಿಸ್&zwnj;ನಲ್ಲಿ ಬೈಜಾಂಟೈನ್ ನಗರವನ್ನು ಪತ್ತೆ ಮಾಡಲಾಗಿದೆ. ಇದೊಂದು ಸುಸಜ್ಜಿತ ಸಂಘಟಿತ ನಗರವಾಗಿತ್ತು ಎಂದು ತಜ್ಞರು ಉಲ್ಲೇಖಿಸಿದ್ದಾರೆ. ಸುಸಜ್ಜಿತ ಮನೆಗಳು, ವಸತಿ ಪ್ರದೇಶಗಳಲ್ಲಿ ಪ್ರಮುಖ ಬೀದಿಗಳು, ದೊಡ್ಡದಾದ ಚರ್ಚ್ ಸೇರಿದಂತೆ ಹಲವು ಅವಶೇಷಗಳು ಬೈಜಾಂಟನ್ ನಗರದ ಭವ್ಯತೆಯನ್ನು ಬಹಿರಂಗಪಡಿಸುತ್ತಿವೆ. ಈ ಪ್ರದೇಶದಲ್ಲಿ ನಾಲ್ಕನೇ ಶತಮಾನದಲ್ಲಿಯೇ ಸುಧಾರಿತ ಮಾದರಿಯಲ್ಲಿ ಗೋಡೆಗಳ ನಿರ್ಮಾಣ ಮತ್ತು ಗುಮ್ಮಟ ಆಕಾರ ಛಾವಣಿಗಳು ಆ ಯುಗದ ಎಂಜಿನಿಯರಿಂಗ್ ಕೌಶಲ್ಯವನ್ನು ಹೇಳುತ್ತಿವೆ.&lt;/p&gt;&lt;img&gt;&lt;p&gt;ಇಷ್ಟು ಮಾತ್ರವಲ್ಲ ಇಂದಿನ ಓವನ್ ಶೈಲಿಯ ಒಲೆಗಳು, ರುಬ್ಬುವ ಕಲ್ಲುಗಳನ್ನು ಸಹ ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಉತ್ಖನನದಲ್ಲಿ ಕ್ರಿ.ಶ. 337 ರಿಂದ 361 ರ ನಡುವೆ ಆಳ್ವಿಕೆ ನಡೆಸಿದ ರೋಮನ್ ಚಕ್ರವರ್ತಿ ಕಾನ್ಸ್ಟಾಂಟಿಯಸ್ II ರ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ವರದಿಯಾಗಿದೆ.ಆಸ್ಟ್ರಾಕಾ ಎಂದು ಕರೆಯಲ್ಪಡುವ ಸುಮಾರು 200 ಜೇಡಿಮಣ್ಣಿನ ತುಣುಕುಗಳು ಪತ್ತೆಯಾಗಿದ್ದು, ಇಲ್ಲಿ ಜನರು ತಮ್ಮ ವ್ಯವಹಾರದ ದಾಖಲೆಗಳನ್ನು ಇರಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ. ನಗರದ ಸುತ್ತಲೂ ಕಾವಲು ಗೋಪುರ, ಪ್ರವೇಶ ದ್ವಾರಗಳು ಅಂದಿನ ಜನರು ಸುರಕ್ಷತೆಗೆ ತೆಗೆದುಕೊಂಡ ಮುಂಜಾಗ್ರತ ಕ್ರಮಗಳನ್ನು ವಿವರಿಸುತ್ತದೆ.&lt;/p&gt;&lt;img&gt;&lt;p&gt;ಅಲೆಕ್ಸಾಂಡ್ರಿಯಾ ಬಳಿಯ ಮರೀನಾ ಎಲ್-ಅಲಮೈನ್&zwnj;ನಲ್ಲಿ ಹದಿನೆಂಟು ಹೊಸ ಸಮಾಧಿಗಳು ಪತ್ತೆಯಾಗಿದ್ದು, ಉತ್ಖನನದಲ್ಲಿ ಹೊಸ ತಿರುವು ನೀಡಿದೆ. ಈ ಪ್ರದೇಶದಲ್ಲಿ ಕಂಡು ಬಂದ ಅಸ್ಥಿಪಂಜರಗಳು ಬಾಯಿಯಲ್ಲಿ ಚಿನ್ನದ ನಾಲಿಗೆಗಳು ಪತ್ತೆಯಾಗಿವೆ. ಸಾವಿನ ನಂತರ ದೇವರುಗಳೊಂದಿಗೆ ಸಂವಹನ ನಡೆಸಲು ಚಿನ್ನದ ನಾಲಿಗೆಗಳನ್ನು ನೀಡಲಾಗಿತ್ತು ಎಂಬ ನಂಬಿಕೆ ಹಿನ್ನೆಲೆ ಈ ರೀತಿಯಾಗಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಆದ್ರೆ ಈ ಆಚರಣೆ ಕುರಿತು ಯಾವುದೇ ಸ್ಪಷ್ಟತೆಗಳಿಲ್ಲ. ಹಾಗೆಯೇ ಇಲ್ಲಿಯ ಸ್ಫಿಂಕ್ಸ್ ಪ್ರತಿಮೆ ಅನೇಕ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈಜಿಪ್ಟ್&zwnj;ನಲ್ಲಿನ ಈ ಆವಿಷ್ಕಾರವು ಕೇವಲ ಹಳೆಯ ಇಟ್ಟಿಗೆಗಳಲ್ಲ, ಬದಲಾಗಿ ಸಾವಿರಾರು ವರ್ಷಗಳ ಹಿಂದೆ ಮರುಭೂಮಿಯನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡ ಜನರ ಕಥೆಯಾಗಿದೆ. ಈ ಆವಿಷ್ಕಾರವು ಶತಮಾನಗಳಿಂದ ಹೂತುಹೋಗಿದ್ದ ಇತಿಹಾಸದ ಪುಟಗಳನ್ನು ಬಹಿರಂಗಗೊಳಿಸಿದೆ. ಇಂದಿಗೂ ಈ ಭಾಗದಲ್ಲಿ ಉತ್ಖನನ ಮುಂದುವರಿದಿದೆ.&lt;/p&gt;]]></content:encoded>
            <category>world-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/world-news/byzantine-city-found-in-egypt-dakhla-oasis-excavation-golden-tongue-mummies-found-mrq-kfivgmu"/>
        </item>
        <item>
            <title><![CDATA[Empire Proposal: 1500 ಅಡಿ ಎತ್ತರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ; ಈಗ ಶ್ರೀಕೃಷ್ಣನ ಜನ್ಮಸ್ಥಳದಲ್ಲಿದೆ!]]></title>
            <link>https://kannada.asianetnews.com/gallery/relationship/new-york-empire-state-building-couple-proposal-arrested-lz5qxt6</link>
            <guid isPermaLink="true">https://kannada.asianetnews.com/gallery/relationship/new-york-empire-state-building-couple-proposal-arrested-lz5qxt6</guid>
            <pubDate>Sat, 04 Jul 2026 12:52:36 +0530</pubDate>
            <description><![CDATA[&lt;p&gt;Empire State Building proposal: ಇತ್ತೀಚೆಗೆ ಪ್ರಪೋಸ್&zwnj; ಮಾಡೋದು ದೊಡ್ಡ ಟ್ರೆಂಡ್&zwnj; ಆಗಿದೆ. ಮೊದಲೇ ಲವ್&zwnj; ಮಾಡೋಣ ಎಂದು ಫಿಕ್ಸ್&zwnj; ಆಗಿ, ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ಪ್ರಪೋಸ್&zwnj; ಮಾಡುತ್ತಾರೆ. ಈಗ 1500 ಅಡಿ ಎತ್ತರದಲ್ಲಿ ಜೋಡಿಯೊಂದು ಪ್ರಪೋಸ್&zwnj; ಮಾಡಿಕೊಂಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwnyxqwy16wx5xtk0fwc9dw0,imgname-new-project---2026-07-04t123012.924-1783148502942.jpg" type="image/jpeg" height="390" width="690"/>
            <content:encoded><![CDATA[&lt;p&gt;Empire State Building proposal: ಇತ್ತೀಚೆಗೆ ಪ್ರಪೋಸ್&zwnj; ಮಾಡೋದು ದೊಡ್ಡ ಟ್ರೆಂಡ್&zwnj; ಆಗಿದೆ. ಮೊದಲೇ ಲವ್&zwnj; ಮಾಡೋಣ ಎಂದು ಫಿಕ್ಸ್&zwnj; ಆಗಿ, ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ಪ್ರಪೋಸ್&zwnj; ಮಾಡುತ್ತಾರೆ. ಈಗ 1500 ಅಡಿ ಎತ್ತರದಲ್ಲಿ ಜೋಡಿಯೊಂದು ಪ್ರಪೋಸ್&zwnj; ಮಾಡಿಕೊಂಡಿದೆ.&amp;nbsp;&lt;/p&gt;&lt;img&gt;&lt;p&gt;ಅತ್ಯಂತ ಎತ್ತರದ ಗೋಪುರ ನ್ಯೂಯಾರ್ಕ್&zwnj;ನ ಪ್ರಸಿದ್ಧ 'ಎಂಪೈರ್ ಸ್ಟೇಟ್ ಬಿಲ್ಡಿಂಗ್' ನ 103ನೇ ಮಹಡಿಯ ರಹಸ್ಯ ದಾರಿಯ ಮೂಲಕ ಹತ್ತಿದ ಜೋಡಿಯೊಂದು ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದೆ.&lt;/p&gt;&lt;img&gt;&lt;p&gt;ಇವಾನ್ ಕುಜ್ನೆಟ್ಸೊವ್ (32), ಏಂಜೆಲಿನಾ ನಿಕೋಲಾವ್ (33) ಅವರು ಯಾವುದೇ ಸುರಕ್ಷತಾ ಹಗ್ಗಗಳನ್ನು ಕೂಡ ಕಟ್ಟಿಕೊಳ್ಳದೆ, ಅತ್ತರದ ಬಿಲ್ಡಿಂಗ್&zwnj; ಹತ್ತೋದರಲ್ಲಿ ಈ ಜೋಡಿ ಫೇಮಸ್&zwnj; ಆಗಿದೆ. ಈ ಟವರ್&zwnj; ಮೇಲೆ ಹತ್ತಿ ಕಟ್ಟಡದ ತುದಿಯಲ್ಲಿ ನಿಂತು, &quot;ಯಾವಾಗ ಪ್ರೀತಿಯ ಶಕ್ತಿಯು ಅಧಿಕಾರದ ಮೇಲಿನ ಪ್ರೀತಿಯನ್ನು ಸೋಲಿಸುತ್ತದೆಯೋ, ಆಗ ಜಗತ್ತಿಗೆ ಶಾಂತಿ ಸಿಗುತ್ತದೆ&quot; ಎಂಬ ಜಿಮಿ ಹೆಂಡ್ರಿಕ್ಸ್ ಅವರ ಪ್ರಸಿದ್ಧ ಸಾಲುಗಳಿದ್ದ ಬ್ಯಾನರ್ ಪ್ರದರ್ಶನ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಕಟ್ಟಡ ಹತ್ತಿದವರಲ್ಲಿ ಒಬ್ಬರಾದ 33 ವರ್ಷದ ಏಂಜೆಲಾ ನಿಕೊಲೌ, ಈ ಸಾಹಸದ ಫೋಟೋಗಳನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ನಗರದ ಹಿನ್ನೆಲೆಯಲ್ಲಿ ತಮ್ಮ ಎಂಗೇಜ್ಮೆಂಟ್ ಉಂಗುರದ ಫೋಟೋವನ್ನು ಅವರು ಹೈಲೈಟ್ ಮಾಡಿದ್ದಾರೆ. ಅವರ ಪ್ರೊಫೈಲ್&zwnj;ನಲ್ಲಿ, ಅವರು ಮತ್ತು ಅವರ 32 ವರ್ಷದ ಕ್ಲೈಂಬಿಂಗ್ ಪಾರ್ಟ್ನರ್ ಇವಾನ್ ಕುಜ್ನೆತ್ಸೊವ್ (ಆನ್&zwnj;ಲೈನ್&zwnj;ನಲ್ಲಿ ಇವಾನ್ ಬೀರ್ಕಸ್ ಎಂದು ಫೇಮಸ್) ಹಲವು ಗಗನಚುಂಬಿ ಕಟ್ಟಡಗಳ ಮೇಲೆ ನಿಂತು ಪೋಸ್ ನೀಡಿರುವ ಫೋಟೋಗಳಿವೆ.&lt;/p&gt;&lt;img&gt;&lt;p&gt;ಅವರ ಪೇಜ್&zwnj;ನಲ್ಲಿರುವ ಒಂದು ಪಿನ್ ಮಾಡಿದ ಪೋಸ್ಟ್, 2024ರ ನೆಟ್&zwnj;ಫ್ಲಿಕ್ಸ್ ಡಾಕ್ಯುಮೆಂಟರಿ &quot;ಸ್ಕೈವಾಕರ್ಸ್: ಎ ಲವ್ ಸ್ಟೋರಿ&quot; ಬಗ್ಗೆ ಹೇಳುತ್ತದೆ. ಈ ಡಾಕ್ಯುಮೆಂಟರಿಯಲ್ಲಿ ನೆಟ್&zwnj;ಫ್ಲಿಕ್ಸ್ ಈ ಜೋಡಿಯನ್ನು &quot;ಡೇರ್&zwnj;ಡೆವಿಲ್ ಇನ್&zwnj;ಫ್ಲುಯೆನ್ಸರ್&zwnj;ಗಳು&quot; ಎಂದು ಬಣ್ಣಿಸಿದೆ. &quot;ಈ ಜೋಡಿ ತಮ್ಮ ಪ್ರೀತಿ, ಸ್ವಾತಂತ್ರ್ಯ ಮತ್ತು ಜೀವವನ್ನು ಪಣಕ್ಕಿಟ್ಟು ಬೃಹತ್ ಗಗನಚುಂಬಿ ಕಟ್ಟಡವನ್ನು ಹತ್ತುತ್ತಾರೆ&quot; ಎಂದು ವಿವರಿಸಿದೆ.&lt;/p&gt;&lt;p&gt;ಈ ಘಟನೆ ಬಗ್ಗೆ ಪ್ರತಿಕ್ರಿಯಿಸಲು ನೆಟ್&zwnj;ಫ್ಲಿಕ್ಸ್ ನಿರಾಕರಿಸಿದೆ ಎಂದು ಸಿಎನ್&zwnj;ಎನ್ ವರದಿ ಮಾಡಿದೆ.&lt;/p&gt;&lt;img&gt;&lt;p&gt;ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳಬಹುದಾದ, ಅಕ್ರಮವಾಗಿ ಕಟ್ಟಡ ಹತ್ತಿದ ಈ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಮೇಲೆ ಅತಿಕ್ರಮಣ, ಸಾರ್ವಜನಿಕ ಆಸ್ತಿಗೆ ಹಾನಿ, ಶಾಂತಿ ಭಂಗ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.&lt;/p&gt;&lt;p&gt;ಅಂದಹಾಗೆ ಬಿಹಾರದಲ್ಲಿ ಕೂಡ ಜೋಡಿಯೊಂದು ಟವರ್&zwnj; ಹತ್ತಿ ಪ್ರಪೋಸ್&zwnj; ಮಾಡಬೇಕು ಎಂದುಕೊಂಡಿತ್ತು. ಇನ್ನೇನು ಟವರ್&zwnj; ಹತ್ತಿ ಪ್ರಪೋಸ್&zwnj; ಮಾಡಬೇಕು ಎನ್ನುವಷ್ಟರಲ್ಲಿ ಪೊಲೀಸರು ಟವರ್&zwnj; ಹತ್ತಿ, ಅವರಿಬ್ಬರನ್ನು ಇಳಿಸಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/relationship/new-york-empire-state-building-couple-proposal-arrested-lz5qxt6"/>
        </item>
        <item>
            <title><![CDATA[ಕಳಚಿ ಬಿತ್ತು ಎಲಾನ್ ಮಸ್ಕ್ ಟ್ರಿಲಿಯನೆರ್ ಶ್ರೀಮಂತ ಪಟ್ಟ, ಒಂದು ತಪ್ಪಿನಿಂದ ಉದ್ಯಮಿಗೆ ಭಾರಿ ಹಿನ್ನಡೆ]]></title>
            <link>https://kannada.asianetnews.com/gallery/business/one-mistake-costs-elon-musk-dear-trillionaire-dream-takes-a-hit-fortune-suffers-su5pgfd</link>
            <guid isPermaLink="true">https://kannada.asianetnews.com/gallery/business/one-mistake-costs-elon-musk-dear-trillionaire-dream-takes-a-hit-fortune-suffers-su5pgfd</guid>
            <pubDate>Tue, 07 Jul 2026 12:29:55 +0530</pubDate>
            <description><![CDATA[&lt;p&gt;ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೆರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ಪಟ್ಟ ಹೆಚ್ಚು ದಿನ ಇರಲೇ ಇಲ್ಲ. ಎಲಾನ್ ಮಸ್ಕ್ ಟ್ರಿಲಿಯನೆರ್ ಪಟ್ಟ ಕಳಚಲು ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcxvdrj8wyw4hbgf8vhn8y9g,imgname-elon-musk-1766233399880.jpg" type="image/jpeg" height="390" width="690"/>
            <content:encoded><![CDATA[&lt;p&gt;ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೆರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ಪಟ್ಟ ಹೆಚ್ಚು ದಿನ ಇರಲೇ ಇಲ್ಲ. ಎಲಾನ್ ಮಸ್ಕ್ ಟ್ರಿಲಿಯನೆರ್ ಪಟ್ಟ ಕಳಚಲು ಕಾರಣವೇನು?&lt;/p&gt;&lt;img&gt;&lt;p&gt;ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇತ್ತೀಚೆಗಷ್ಟೇ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೆರ್ ಅಂದರೆ ಸರಿಸುಮಾರು 83 ಲಕ್ಷ ಕೋಟಿ ರೂಪಾಯಿ) ಸಂಪತ್ತಿನ ಮೂಲಕ ಹೊಸ ದಾಖಲೆ ಬರೆದಿದ್ದರು. ಮಸ್ಕ್ ಉದ್ಯಮ, ಆದಾಯ, ಆಸ್ತಿ ಸಂಪತ್ತು ಶ್ರೀಮಂತರನ್ನೇ ಚಕಿತಗೊಳಿಸಿತ್ತು. ಆದರೆ ಎಲಾನ್ ಮಸ್ಕ್ ಇದೀಗ ಟ್ರಿಲಿಯನೆರ್ ಶ್ರೀಮಂತಿಕೆ ಪಟ್ಟ ಕಳೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಜೂನ್ 12 ರಿಂದ ಎಸಕ್ ಮಾಲೀಕತ್ವದ ಸ್ಪೇಸ್ ಎಕ್ಸ್ ಸಂಸ್ಥೆ ಐಪಿಒ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆರಂಭದಲ್ಲಿ 135 ಡಾಲರ್&zwnj;ಗೆ ನಿಗದಿಯಾಗಿದ್ದ ಷೇರು ಕೆಲವೇ ದಿನಗಳಲ್ಲಿ 225 ಡಾಲರ್&zwnj;ಗೆ ಜಿಗಿತ ಕಂಡಿತ್ತು. ಈ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು.ಪರಿಣಾಮ ಮಸ್ಕ್ ಸಂಪತ್ತು 1.4 ಟ್ರಿಲಿಯನ್ ಡಾಲರ್ ದಾಟಿತ್ತು. ಈ ಮೂಲಕ ಮಸ್ಕ್ ಟ್ರಿಲಿಯನೇರ್ ದಾಟಿ ಮುಂದೆ ಸಾಗುವ ಸೂಚನೆ ನೀಡಿದ್ದರು. ಆದರೆ ಪರಿಸ್ಥಿತಿ ಹಾಗೇ ಉಳಿಯಲಿಲ್ಲ.&lt;/p&gt;&lt;img&gt;&lt;p&gt;ಸ್ಟಾಕ್ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ಷೇರುಗಳ ಸತತವಾಗಿ ಕುಸಿತ ಕಾಣುತ್ತಿರುವ ಪರಿಣಾಮ ಆಸ್ತಿ ಮೌಲ್ಯ ಟ್ರಿಲಿಯನೆರ್ ಡಾಲರ್&zwnj;ನಿಂದ ಕುಸಿತ ಕಂಡಿದೆ. ಜೂನ್ 16ರಂದು ಸ್ಪೇಸ್ ಎಕ್ಸ್ ತೆಗೆದುಕೊಂಡು ಒಂದು ನಿರ್ಧಾರ ಈ ಪತನಕ್ಕೆ ಕಾರಣಾಗಿದೆ ಜೂನ್ 16 ರಂದು ಸ್ಪೇಸ್ ಎಕ್ಸ್ ಸಂಸ್ಥೆ ಕೋಡಿಂಗ್ ಎಜೆಂಟ್ ಕರ್ಸರ್' (Cursor) ಕಂಪನಿಯನ್ನು 60 ಬಿಲಿಯನ್ ಡಾಲರ್&zwnj;ಗೆ ಖರೀದಿ ಮಾಡವುದಾಗಿ ಘೋಷಿಸಿತ್ತು. ಇದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಆತಂಕ ಸೃಷ್ಟಿಸಿ, ಪತನಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಬಾಹ್ಯಾಕಾಶದಲ್ಲಿ ಎಐ ಡೇಟಾ ಸ್ಥಾಪಿಸಲು ಎಲಾನ್ ಮಸ್ಕ್ ಮಹತ್ವದ ಯೋಜನೆ ರೂಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಕರ್ಸರ್ ಕಂಪನಿ ಖರೀದಿಗೆ ಮುಂದಾಗಿದ್ದರು. ಆದರೆ ಮಸ್ಕ್ ಮಹತ್ವದ ಯೋದನೆಗಳು ಇನ್ನು ಪ್ರಾಯೋಗಿಕವಾಗಿ ಜಾರಿಯಾಗಿಲ್ಲ. ಹೀಗಾಗಿ ಹೂಡಿಕೆದಾರರಲ್ಲಿ ಆತಂಕ ಸೃಷ್ಚಿಸಿತ್ತು. ಪರಿಣಾಮ ಷೇರು ಮೌಲ್ಯ ಕುಸಿತ ಕಂಡಿತ್ತು .ಎಐ ಮೇಲಿನ ಅತೀಯಾದ ಹೂಡಿಕೆ ಹಾಗೂ ಅವಲಂಬನೆ ಕುರಿತು ಅನುಮಾನಗಳು ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಸ್ಪೇಸ್ ಎಕ್ಸ್ ದಾಖಲೆಯತ್ತ ಸಾಗುತ್ತಿದ್ದಂತೆ ಎಲಾನ್ ಮಸ್ಕ್ ತೆಗೆದುಕೊಂಡ ಖರೀದಿ ನಿರ್ಧಾರದಿಂದ ಷೇರು ಮೌಲ್ಯ ಕುಸಿತ ಕಂಡಿತ್ತು. ಪರಿಣಾಮ ಶೇಕಡಾ 30ರಷ್ಟು ಕುಸಿತ ಕಂಡಿತ್ತು. ಇದೀಗ ಸ್ಪೇಸ್ ಎಕ್ಸ್ ಷೇರು ಮೌಲ್ಯ 152 ರಿಂದ 154 ಡಾಲರ್ ಮಟ್ಟಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ ಟೆಸ್ಲಾ ಷೇರುಗಳು ಶೇಕಡಾ 21ರಷ್ಟು ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ಎಲಾನ್ ಮಸ್ಕ್ ಬಿಲಿಯೇನರ್ ಪಟ್ಟ ಕೈತಪ್ಪಿದೆ. ಆದರೂ ಎಲಾನ್ ಮಸ್ಕ್ ವಿಶ್ವದ ಶ್ರೀಮಂತನಾಗಿ ಮುಂದುವರಿದಿದ್ದಾರೆ. ಸದ್ಯ ಮಸ್ತ್ ಆಸ್ತಿ ಮೌಲ್ಯ 957 ರಿಂದ 997 ಬಿಲಿಯನ್ ಡಾಲರ್&zwnj;ಗೆ ಕುಸಿತ ಕಂಡಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಗೂಗಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಆಸ್ತಿ ಮೌಲ್ಯ 284 ಬಿಲಿಯನ್ ಡಾಲರ್. ಮಸ್ಕ್ ಹಾಗೂ ಲ್ಯಾರಿ ಪೇಜ್ ನಡುವೆ ಅಜಗಜಾಂತರ ವ್ಯತ್ಯಸಾವಿದೆ.&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/one-mistake-costs-elon-musk-dear-trillionaire-dream-takes-a-hit-fortune-suffers-su5pgfd"/>
        </item>
        <item>
            <title><![CDATA[Monks demise: 11 ವರ್ಷದ ಹುಡುಗನ ಎಡವಟ್ಟು; ದೇವರ ಜಪ ಮಾಡುತ್ತಿದ್ದ ಬೌದ್ಧ ಬಿಕ್ಕುಗಳ ಮಾರಣ ಹೋಮ]]></title>
            <link>https://kannada.asianetnews.com/world-news/thailand-monks-demise-due-to-11-year-old-boy-pickup-truck-ride/articleshow-w5ayu4v</link>
            <guid isPermaLink="true">https://kannada.asianetnews.com/world-news/thailand-monks-demise-due-to-11-year-old-boy-pickup-truck-ride/articleshow-w5ayu4v</guid>
            <pubDate>Sat, 04 Jul 2026 16:32:22 +0530</pubDate>
            <description><![CDATA[&lt;p&gt;Pickup Truck Crashes Into Monks: 34 ಬೌದ್ಧ ಬಿಕ್ಕುಗಳು ಸರತಿ ಸಾಲಿನಲ್ಲಿ ಹೋಗುತ್ತಿದ್ದರು. ಅಲ್ಲಿಗೆ ಒಮ್ಮೆಲೆ ಬಂದ ಪಿಕಪ್&zwnj; ಟ್ರಕ್&zwnj; ಆ ಬಿಕ್ಕುಗಳ ಮೇಲೆ ಹರಿದಿದೆ. ಹೌದು ಈಶಾನ್ಯ ಥೈಲ್ಯಾಂಡ್&zwnj;ನಲ್ಲಿ ಈ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwpcmrmk14wk1sh0mv2qg306,imgname-new-project---2026-07-04t163031.248-1783162888851.jpg" type="image/jpeg" height="390" width="690"/>
            <content:encoded><![CDATA[&lt;p&gt;34 ಬೌದ್ಧ ಬಿಕ್ಕುಗಳು ಸರತಿ ಸಾಲಿನಲ್ಲಿ ರಸ್ತೆಯಲ್ಲಿ ತುದಿಯಲ್ಲಿ ನಡೆದುಕೊಂಡು ಹೋಗುವಾಗ ಪಿಕಪ್&zwnj; ವ್ಯಾನ್&zwnj; ಬಂದು ಹರಿದಿದ್ದು, ಮಾರಣ ಹೋಮ ( Pickup Truck Crashes Into Monks ) ನಡೆದಿದೆ. 11 ವರ್ಷದ ಬಾಲಕನೊಬ್ಬ ಪಿಕಪ್ ಟ್ರಕ್ ಚಲಾಯಿಸಿಕೊಂಡು ಬಂದಿದ್ದಾನೆ. ಆಗ ಅವನು ಕಂಟ್ರೋಲ್&zwnj; ತಪ್ಪಿ ಬೌದ್ಧ ಬಿಕ್ಕುಗಳ ಮೇಲೆ ಗಾಡಿ ಓಡಿಸಿದ್ದಾನೆ. ಇದರಿಂದ ಕೆಲವರು ಸತ್ತರೆ, ಇನ್ನೂ ಕೆಲವರು ಗಾಯಗೊಂಡಿದ್ದಾರೆ.&lt;/p&gt;&lt;h2&gt;ಸ್ಥಳದಲ್ಲೇ ಐದು ಸಾವು!&lt;/h2&gt;&lt;p&gt;ಮುಕ್ದಾಹನ್ ಪ್ರಾಂತ್ಯದ ರಸ್ತೆಯೊಂದರಲ್ಲಿ 35 ಸನ್ಯಾಸಿಗಳು, ಐದು ಮಂದಿ ಅನುಯಾಯಿಗಳ ನಡೆದುಕೊಂಡು ಹೋಗುತ್ತಿದ್ದರು. ಕೇಸರಿ ವಸ್ತ್ರಗಳನ್ನು ಧರಿಸಿ ಅವರೆಲ್ಲ ಹೋಗುತ್ತಿದ್ದರು, ಈಗ ಇಹಲೋಕ ತ್ಯಜಿಸಿದ್ದಾರೆ. ಪೊಲೀಸರು ಹೇಳುವಂತೆ, ಐದು ಮಂದಿ ಸನ್ಯಾಸಿಗಳು ಸ್ಥಳದಲ್ಲೇ ಅಸು ನೀಗಿದ್ದಾರೆ. ಇನ್ನು ನಾಲ್ವರು ಆಮೇಲೆ ಸಾವನ್ನಪ್ಪಿದ್ದಾರೆ.&lt;/p&gt;&lt;p&gt;ಯಾರ ಅನುಮತಿ ಪಡೆಯದೆ ಆ ಹುಡುಗ ಪಿಕಪ್ ಟ್ರಕ್ ತೆಗೆದುಕೊಂಡು ಹೋಗಿದ್ದಾನೆ. ಆಮೇಲೆ ಕಂಟ್ರೋಲ್&zwnj; ತಪ್ಪಿ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸ್ ಮೇಜರ್ ಜನರಲ್ ಪೈರೋಜ್ ಥೈಫುತ್ಸಾ ಅವರು ಈ ಬಗ್ಗೆ ಮಾತನಾಡಿದ್ದು, &ldquo;ಬಾಲಕನಿಗೆ ಕಾನೂನು ಪ್ರಕಾರ ಏನು ಮಾಡಲಾಗುವುದು ಎಂದು ಯೋಚಿಸಲಾಗುವುದು&rdquo; ಎಂದಿದ್ದಾರೆ.&lt;/p&gt;&lt;p&gt;ಬಾಲಕನಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಹುಡುಗ ವಿಶೇಷ ಚೇತನವುಳ್ಳ ಮಗು ಎಂದು ಕೂಡ ಹೇಳಲಾಗಿದೆ. ಉಳಿದ ಸನ್ಯಾಸಿಗಳಿಗೆ ಕೂಡ ಚಿಕಿತ್ಸೆ ನೀಡಲಾಗುತ್ತಿದೆಯಂತೆ.&lt;/p&gt;&lt;p&gt;ಅಲ್ಲಿದ್ದ ಸನ್ಯಾಸಿ ಫ್ರಾ ಸೋಂಪಾಂಗ್, &ldquo;ಅಪಘಾತ ಆಗುವ ಮುನ್ನ ಬುದ್ಧೋ, ಬುದ್ಧೋ&quot; ಎಂದು ಜಪ ಮಾಡುತ್ತಿದ್ದೆವು. ಬಾಲಕ ಡ್ರೈವ್&zwnj; ಮಾಡುತ್ತಿರೋದು ಗೊತ್ತಾಯಿತು, ಫಾಸ್ಟ್&zwnj; ಆಗಿ ಬಂದ ಟ್ರಕ್&zwnj; ನಮಗೆ ಡಿಕ್ಕಿ ಹೊಡೆದಿದೆ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ಥೈಲ್ಯಾಂಡ್&zwnj;ನಲ್ಲಿ ಮಾತ್ರ ಬೌದ್ಧ ಸನ್ಯಾಸಿಗಳಿಗೆ ಸಿಕ್ಕಾಪಟ್ಟೆ ಗೌರವವಿದೆ. ಅವರು ಬುದ್ಧನ ಬೋಧನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅಲ್ಲಿ ಅವರು ಮೆರವಣಿಗೆ ಹೋಗುವಾಗ ಜನರು ಆಹಾರ ಕೊಡೋದುಂಟು&lt;/p&gt;]]></content:encoded>
            <category>world-news</category>
            <dc:creator>Padmashree Bhat</dc:creator>
            <atom:link href="https://kannada.asianetnews.com/world-news/thailand-monks-demise-due-to-11-year-old-boy-pickup-truck-ride/articleshow-w5ayu4v"/>
        </item>
        <item>
            <title><![CDATA[ಇತಿಹಾಸದಲ್ಲೇ 5 ಅತ್ಯಂತ ದುಬಾರಿ ಅಂತ್ಯಕ್ರಿಯೆಗಳಿವು! ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ, ಅಲಿ ಖಮೇನಿ ಸ್ಥಾನ ಎಷ್ಟು?]]></title>
            <link>https://kannada.asianetnews.com/gallery/world-news/worlds-top-5-most-expensive-funerals-in-history-ali-khamenei-funeral-x37bq3t</link>
            <guid isPermaLink="true">https://kannada.asianetnews.com/gallery/world-news/worlds-top-5-most-expensive-funerals-in-history-ali-khamenei-funeral-x37bq3t</guid>
            <pubDate>Sun, 05 Jul 2026 13:35:18 +0530</pubDate>
            <description><![CDATA[&lt;p&gt;Ali Khamenei funeral: ಜಗತ್ತಿನಲ್ಲಿ ಅದ್ದೂರಿ ಮದುವೆಗಳು ನಡೆಯುತ್ತವೆ. ಜಗತ್ತಿನ ಅಗರ್ಭ ಶ್ರೀಮಂತರ ಮದುವೆಗಳು ತಿಂಗಳುಗಟ್ಟಲೆ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಡೆಯುತ್ತವೆ. ಆದರೆ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಾಡೋದನ್ನು ನೋಡಿದ್ದೀರಾ? ಕೇಳಿದ್ದಿರಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwrk5rz80n56m2xsbegtck1g,imgname-----------------------2026-07-05t130300.426-1783236846567.jpg" type="image/jpeg" height="390" width="690"/>
            <content:encoded><![CDATA[&lt;p&gt;Ali Khamenei funeral: ಜಗತ್ತಿನಲ್ಲಿ ಅದ್ದೂರಿ ಮದುವೆಗಳು ನಡೆಯುತ್ತವೆ. ಜಗತ್ತಿನ ಅಗರ್ಭ ಶ್ರೀಮಂತರ ಮದುವೆಗಳು ತಿಂಗಳುಗಟ್ಟಲೆ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಡೆಯುತ್ತವೆ. ಆದರೆ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಾಡೋದನ್ನು ನೋಡಿದ್ದೀರಾ? ಕೇಳಿದ್ದಿರಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಲಿ ಖಮೇನಿ ಅಂತ್ಯಕ್ರಿಯೆ: ಇರಾನ್&zwnj;ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah khomeini) ಅವರ ಅಂತ್ಯಕ್ರಿಯೆಗಾಗಿ ಲಕ್ಷಾಂತರ ಜನರು ಟೆಹ್ರಾನ್&zwnj;ನಲ್ಲಿ ಜಮಾಯಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇರಾನ್ ಮತ್ತು ಇರಾಕ್&zwnj;ನ ಐದು ಪ್ರಮುಖ ನಗರಳಾದ ಟೆಹ್ರಾನ್, ಕೋಮ್, ನಜಾಫ್, ಕರ್ಬಲಾ ಮತ್ತು ಮಷಾದ್&zwnj;ಗೆ ಸಾರ್ವಜನಿಕ ದರ್ಶನಕ್ಕೆ ಕೊಂಡೊಯ್ಯಲಾಗುತ್ತಿದೆ. . ವರದಿಗಳ ಪ್ರಕಾರ, ಇರಾನಿನ ಸರ್ಕಾರವು ಅಂತ್ಯಕ್ರಿಯೆಯ ವ್ಯವಸ್ಥೆಗಳಿಗಾಗಿ ಸುಮಾರು 25 ಮಿಲಿಯನ್ ಯುರೋಗಳನ್ನು ಖರ್ಚು ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ನಡುವೆ ಇತಿಹಾಸದಲ್ಲಿ ಐದು ಅತ್ಯಂತ ದುಬಾರಿ ಅಂತ್ಯಕ್ರಿಯೆಗಳ ಬಗ್ಗೆ ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;ಇರಾನಿನ ಅಧಿಕಾರಿಗಳು ಒಟ್ಟು ವೆಚ್ಚವನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, WELT ತನಿಖೆಯ ಪ್ರಕಾರ ಅಂತ್ಯಕ್ರಿಯೆಯ ಬಜೆಟ್ ಸುಮಾರು 25 ಮಿಲಿಯನ್ ಯುರೋಗಳಾಗಿರಬಹುದು. ಇದರಲ್ಲಿ ಸರಿಸುಮಾರು 15 ಮಿಲಿಯನ್ ಯುರೋಗಳನ್ನು ಟೆಹ್ರಾನ್&zwnj;ನಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಪವಿತ್ರ ಶಿಯಾ ನಗರಗಳಾದ ಕೋಮ್ ಮತ್ತು ಮಶಾದ್&zwnj;ನಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ 5 ಮಿಲಿಯನ್ ಯುರೋಗಳ ಪ್ರತ್ಯೇಕ ಬಜೆಟ್ ಅನ್ನು ಮೀಸಲಿಡಲಾಗಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಹೌದು ಅಂತ್ಯಕ್ರಿಯೆಯಲ್ಲೂ ಇತಿಹಾಸದಲ್ಲಿ ಯಾರೂ ಮಾಡದ ದುಬಾರಿ ಅಂತ್ಯಕ್ರಿಯೆಗಳು ನಡೆದಿವೆ. ಮೊದಲಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಅಂತೀವಲ್ಲ ಅವನ ಅಂತ್ಯಕ್ರಿಗೆ ಸುಮಾರು 600 ಮಿಲಿಯನ್ ಡಾಲರ್! ಅರ್ಥವಾಗಲಿಲ್ಲವೇ ಭಾರತೀಯ ರೂಪಾಯಿಗಳಲ್ಲಿ ಸುಮಾರು ₹5,713 ಕೋಟಿ! ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ಅಂತ್ಯಕ್ರಿಯೆಯಾಗಿದೆ. ಒಂದು ಅಂದಾಜಿ ಪ್ರಕಾರ, ಅಲೆಕ್ಸಾಂಡರ್ ಮೃತದೇಹದೊಡನೆ ಚಿನ್ನದ ಗಟ್ಟಿಗಳು ಶವಪೆಟ್ಟಿಗೆಯೊಳಗೆ ಇರಿಸಲಾಗಿತ್ತು. ಹನ್ನೆರಡು ಕುದುರೆಗಳು ಸೇರಿ ಎಳೆಯುವಷ್ಟು ಭವ್ಯವಾದ ಚಿನ್ನದ ರಥವನ್ನು ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು ಎಂದು ಹೇಳುತ್ತಾರೆ&lt;/p&gt;&lt;img&gt;&lt;p&gt;2004 ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಅಂತ್ಯಕ್ರಿಯೆ ನಡೆಯಿತು. ಅಮೆರಿಕ ಸರ್ಕಾರದಿಂದಲೇ ನಡೆದ ಈ ಹೇಗಿತ್ತೆಂದರೆ, ಇಷ್ಟು ದುಬಾರಿ ಅಂತ್ಯಕ್ರಿಯೆ ಆಧುನಿಕ ಇತಿಹಾಸದಲ್ಲೇ ಮೊದಲು. ಅವರ ಅಂತ್ಯಕ್ರಿಯೆಗೆ ಸುಮಾರು $400 ಮಿಲಿಯನ್ ವೆಚ್ಚವಾಗಿದೆ. ಅವರ ನಿಧನದಂದು. ಅಮೆರಿಕ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಆಚರಿಸಿತು. ಅಷ್ಟೇ ಅಲ್ಲ ವರ್ಲ್ಡ್ ಲೀಡರ್&zwnj;ಗಳು ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;2022 ರಲ್ಲಿ ನಡೆದ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆ ಅಷ್ಟೇ ದುಬಾರಿಯಾಗಿ ನಡೆಯಿತು. ಯುನೈಟೆಡ್ ಕಿಂಗ್&zwnj;ಡಮ್&zwnj;ನಲ್ಲಿ ನಡೆದ ಅಂತ್ಯಕ್ರಿಯೆಯು ಅತಿ ದೊಡ್ಡ ಕಾರ್ಯಕ್ರಮಗಳಲ್ಲೊಂದಾಗಿದೆ. ಈ ಕಾರ್ಯಕ್ರಮದ ವೆಚ್ಚವು &pound;160 ಮಿಲಿಯನ್ ಮೀರಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ವೆಚ್ಚವನ್ನು ಮಿಲಿಟರಿ ಮೆರವಣಿಗೆ, ರಾಷ್ಟ್ರವ್ಯಾಪಿ ಭದ್ರತೆ, ಪೊಲೀಸ್ ವ್ಯವಸ್ಥೆ ಮತ್ತು ಸಮಾರಂಭದಲ್ಲಿ ಭಾಗವಹಿಸುವ ವಿಶ್ವದ ಗಣ್ಯರ ವ್ಯವಸ್ಥೆಗಳಿಗಾಗಿ ಖರ್ಚು ಮಾಡಲಾಯ್ತು..&lt;/p&gt;&lt;img&gt;&lt;p&gt;2011 ರಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಇಲ್ ಅವರ ಅಂತ್ಯಕ್ರಿಯೆಯೂ ಅಷ್ಟೇ ದುಬಾರಿಯಾಗಿದೆ. ಅವರ ಅಂತ್ಯಕ್ರಿಯೆ ಸುಮಾರು $40 ಮಿಲಿಯನ್ ವೆಚ್ಚವಾಗಿದೆ ಎಂದು ವರದಿಯಾಗಿದೆ. ಬಜೆಟ್&zwnj;ನಲ್ಲಿ ಅವರ ದೇಹದ ಶಾಶ್ವತ ಎಂಬಾಮಿಂಗ್, ರಷ್ಯಾದ ತಜ್ಞರ ಭಾಗಿ, ದಿವಂಗತ ನಾಯಕನಿಗೆ ಮೀಸಲಾದ ದೊಡ್ಡ ಸ್ಮಾರಕಗಳು ಮತ್ತು ಪ್ರತಿಮೆಗಳ ನಿರ್ಮಾಣ ಖರ್ಚುಗಳಲ್ಲಿ ಸೇರಿವೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;1963 ರಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿಯವರ ಹತ್ಯೆಯ ನಂತರ, ಅಮೆರಿಕ ಸಂಯುಕ್ತ ಸಂಸ್ಥಾನವು ವಾಷಿಂಗ್ಟನ್ ಡಿ.ಸಿ.ಯಲ್ಲಿ ಬೃಹತ್ ಸರ್ಕಾರಿ ಅಂತ್ಯಕ್ರಿಯೆ ಕಾರ್ಯಕ್ರಮ ನಡೆಸಿತು. ಈ ಸಮಾರಂಭಕ್ಕೆ ಸುಮಾರು $15 ಮಿಲಿಯನ್ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.&lt;/p&gt;]]></content:encoded>
            <category>world-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/world-news/worlds-top-5-most-expensive-funerals-in-history-ali-khamenei-funeral-x37bq3t"/>
        </item>
        <item>
            <title><![CDATA[ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್]]></title>
            <link>https://kannada.asianetnews.com/gallery/world-news/artificial-intelligence-risks-after-ford-aussie-bank-regrets-firing-staff-for-trusting-ai-mrq-x8ouubb</link>
            <guid isPermaLink="true">https://kannada.asianetnews.com/gallery/world-news/artificial-intelligence-risks-after-ford-aussie-bank-regrets-firing-staff-for-trusting-ai-mrq-x8ouubb</guid>
            <pubDate>Sun, 05 Jul 2026 09:21:53 +0530</pubDate>
            <description><![CDATA[&lt;p&gt;ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್&zwnj;ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwr63wvq6vz6jt75hzbmh9f7,imgname-ai-1783223153527.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್&zwnj;ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .&lt;/p&gt;&lt;img&gt;&lt;p&gt;ವಾಷಿಂಗ್ಟನ್&zwnj;: ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಆಟೋ ಕಂಪನಿ ಫೋರ್ಡ್&zwnj; ಮೋಟಾರ್&zwnj; ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ಅತಿದೊಡ್ಡ ಬ್ಯಾಂಕ್&zwnj; ಆದ &lsquo;ಕಾಮನ್&zwnj; ವೆಲ್ತ್&zwnj; ಬ್ಯಾಂಕ್&zwnj; ಆಸ್ಟ್ರೇಲಿಯಾ (ಸಿಬಿಎ) ಕೂಡ ತನ್ನ ಹಳೆಯ ಸಿಬ್ಬಂದಿ ಕಡಿತ ಮಾಡಿ ಪಶ್ಚಾತ್ತಾಪ ಪಡುತ್ತಿದೆ!&lt;/p&gt;&lt;img&gt;&lt;p&gt;2025ರಲ್ಲಿ ಆಸ್ಟ್ರೇಲಿಯಾದ ಅತಿದೊಡ್ಡ ಬ್ಯಾಂಕ್&zwnj; ಆದ ಕಾಮನ್&zwnj;ವೆಲ್ತ್&zwnj; ಬ್ಯಾಂಕ್&zwnj; ಆಫ್&zwnj; ಆಸ್ಟ್ರೇಲಿಯಾ (ಸಿಬಿಎ) ತನ್ನ 45ಕ್ಕೂ ಹೆಚ್ಚು ಗ್ರಾಹಕ ಸೇವಾ ಸಿಬ್ಬಂದಿ ವಜಾ ಮಾಡಿ ಅವರ ಜಾಗಕ್ಕೆ &lsquo;ಎಐ ವಾಯ್ಸ್&zwnj; ಬಾಟ್&zwnj;&rsquo; ಅನ್ನು ನಿಯೋಜಿಸಿತ್ತು. ಆ ಸಂದರ್ಭದಲ್ಲಿ ಎಐ ಮೇಲಿನ ಹೂಡಿಕೆಯು ಗ್ರಾಹಕರಿಗೆ ಅದರಲ್ಲೂ ಮುಖ್ಯವಾಗಿ ಕಾಲ್&zwnj; ಸೆಂಟರ್&zwnj; ಮೂಲಕ ತಕ್ಷಣ ಸಹಾಯಹಸ್ತ ಚಾಚಲು ಹೆಚ್ಚಿನ ಅನುಕೂಲ ಒದಗಿಸಿದೆ ಎಂದು ಬ್ಯಾಂಕ್&zwnj; ಹೇಳಿಕೊಂಡಿತ್ತು.&lt;/p&gt;&lt;img&gt;&lt;p&gt;ಆದರೆ ನಂತರದ ದಿನಗಳಲ್ಲಿ ಗ್ರಾಹಕರ ಕರೆಯನ್ನು ಎಐ ಟೂಲ್ಸ್&zwnj;ಗಳು ಸರಿಯಾಗಿ ನಿರ್ವಹಿಸದ ಕಾರಣ ಬ್ಯಾಂಕ್&zwnj; ಸಮಸ್ಯೆ ಎದುರಿಸುತ್ತಿದ್ದು, ತಪ್ಪಿನ ಅರಿವಾಗುತ್ತಿದ್ದಂತೆ ವಜಾ ಮಾಡಿದ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಬ್ಯಾಂಕ್&zwnj; ಮುಂದಾಗಿದೆ.&lt;/p&gt;&lt;img&gt;&lt;p&gt;ಕೆಲ ದಿನಗಳ ಹಿಂದೆ ಅಮೆರಿಕದ ಫೋರ್ಡ್&zwnj; ಮೋಟಾರ್&zwnj; ಕಂಪನಿಯು, ಗುಣಮಟ್ಟ ಪರಿಶೀಲಿಸುವ ನೂರಾರು ಅನುಭವಿ ಎಂಜಿನಿಯರ್&zwnj;ಗಳನ್ನು ವಜಾ ಮಾಡಿ ಅವರ ಜಾಗಕ್ಕೆ ಎಐ ಟೂಲ್&zwnj;ಗಳನ್ನು ಅಳವಡಿಸಿಕೊಂಡಿತ್ತು. ಆ ಬಳಿಕ ಗುಣಮಟ್ಟದ ಕುರಿತು ವ್ಯಾಪಕ ಆರೋಪಗಳು ಕೇಳಿಬಂದಾಗ ಇದೀಗ ಮತ್ತೆ ನೂರಾರು ಎಂಜಿನಿಯರ್&zwnj;ಗಳನ್ನು ಮರು ನೇಮಕ ಮಾಡಿಕೊಳ್ಳಲು ಆರಂಭಿಸಿದೆ. ಇದೀಗ ಕಂಪನಿಯ ಉತ್ಪನ್ನಗಳ ಗುಣಮಟ್ಟ ಸುಧಾರಣೆಯಾಗಿದೆ ಎನ್ನಲಾಗಿದೆ.&lt;/p&gt;]]></content:encoded>
            <category>world-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/world-news/artificial-intelligence-risks-after-ford-aussie-bank-regrets-firing-staff-for-trusting-ai-mrq-x8ouubb"/>
        </item>
        <item>
            <title><![CDATA[Viral Kiss Video: ಮದುವೆಯಾಗದೇ ಚುಂಬಿಸಿದ್ದಕ್ಕಾಗಿ ಜೋಡಿಗೆ 21 ಛಡಿಯೇಟಿನ ಕ್ರೂರ ಶಿಕ್ಷೆ- ನಾಲ್ಕು ತಿಂಗಳು ಜೈಲು]]></title>
            <link>https://kannada.asianetnews.com/crime/indonesian-couple-publicly-caned-21-times-over-tiktok-kissing-video-suc/articleshow-xinrc1e</link>
            <guid isPermaLink="true">https://kannada.asianetnews.com/crime/indonesian-couple-publicly-caned-21-times-over-tiktok-kissing-video-suc/articleshow-xinrc1e</guid>
            <pubDate>Mon, 06 Jul 2026 12:37:46 +0530</pubDate>
            <description><![CDATA[ಇಂಡೋನೇಷ್ಯಾದಲ್ಲಿ, ಟಿಕ್​ಟಾಕ್​ ಲೈವ್ ವಿಡಿಯೋದಲ್ಲಿ ಚುಂಬಿಸಿದ್ದಕ್ಕಾಗಿ ಅವಿವಾಹಿತ ಜೋಡಿಯೊಂದಕ್ಕೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಇಸ್ಲಾಮಿಕ್ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಶರಿಯಾ ನ್ಯಾಯಾಲಯವು ಅವರಿಗೆ ತಲಾ 21 ಛಡಿಯೇಟಿನ ಶಿಕ್ಷೆ ವಿಧಿಸಿದ್ದು, ಈ ಘಟನೆ ಮಾನವ ಹಕ್ಕುಗಳ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwv41k0wy45pmr2qtc562xqk,imgname-crime-1783321644060.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವೊಂದು ದೇಶಗಳಲ್ಲಿ ಹಲವಾರು ರೀತಿಯ ಕಠಿಣ ಕಾನೂನುಗಳಿವೆ. ಅದರಲ್ಲಿಯೂ ಹೆಣ್ಣು-ಗಂಡಿನ ಸಂಬಂಧಗಳ ಮೇಲೆ ಕ್ರೂರವಾಗಿರುವ ಶಿಕ್ಷೆಯಿದ್ದರೆ, ಇನ್ನು ಕೆಲವು ದೇಶಗಳಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವೇ ಇರದ ಕಾರಣ, ಅವರಿಗೆ ಅತ್ಯಂತ ಕ್ರೂರ ಎನ್ನಿಸುವಂಥ ಶಿಕ್ಷೆಗಳನ್ನು ನೀಡಲಾಗುತ್ತಿದೆ. ಅದರಲ್ಲಿಯೂ ಇಂಥ ಕಠಿಣ ಹಾಗೂ ಬೇರೆಯವರಿಗೆ ಅತ್ಯಂತ ಕ್ರೂರ ಎನ್ನಿಸುವ ಶಿಕ್ಷೆಗಳ ವಿಷಯದಲ್ಲಿ ಹಲವಾರು ಮುಸ್ಲಿಂ ರಾಷ್ಟ್ರಗಳೇ ಮುಂದಿವೆ.&lt;/p&gt;&lt;p&gt;ಇದೀಗ ಅಂಥದ್ದೇ ಒಂದು ಘಟನೆ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ನಡೆದಿದೆ. ಟಿಕ್​ಟಾಕ್​ಗಾಗಿ ಪರಸ್ಪರ ಚುಂಬಿಸುತ್ತಿರುವ ಅವಿವಾಹಿತ ಜೋಡಿಯ ದೃಶ್ಯಗಳು ವೈರಲ್​ ಆಗುತ್ತಲೇ, ಇಬ್ಬರಿಗೂ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗಿದೆ. ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಶರಿಯಾ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ತಲಾ 21 ಛಡಿಯೇಟಿನ ಶಿಕ್ಷೆ ವಿಧಿಸಿದೆ. ನಾಲ್ಕು ತಿಂಗಳು ಜೈಲು ಶಿಕ್ಷೆಯಯ ಬಳಿಕ ದೊಡ್ಡ ಜನಸಮೂಹದ ಎದುರು ಛಡಿಯೇಟು ನೀಡಲಾಗಿದೆ.&lt;/p&gt;&lt;h2&gt;&lt;strong&gt;ಟಿಕ್​ಟಾಕ್​ ವಿಡಿಯೋ ತಂದ ಸಂಕಷ್ಟ&lt;/strong&gt;&lt;/h2&gt;&lt;p&gt;ವರದಿಗಳ ಪ್ರಕಾರ, ಫೆಬ್ರವರಿ 27 ರಂದು 22 ವರ್ಷದ ಯುವಕ ಮತ್ತು 25 ವರ್ಷದ ಯುವತಿ, ಕಾರಿನೊಳಗೆ ಟಿಕ್&zwnj;ಟಾಕ್ ವಿಡಿಯೋಗಳನ್ನು ನೇರ ಪ್ರಸಾರ ಮಾಡುತ್ತಿದ್ದರು. ಇಲ್ಲಿಯ ಕಾನೂನಿನ ಅರಿವಿದ್ದಾಗೂ ಇಂಥದ್ದೊಂದು ಸಾಹಸಕ್ಕೆ ಇವರು ಕೈಹಾಕಿದ್ದರೋ ಅಥವಾ ಹೀಗೆ ಮಾಡಿದ್ರೆ ಇಂಥದ್ದೊಂದು ಶಿಕ್ಷೆ ಸಿಗುತ್ತದೆ ಎನ್ನುವ ಅರಿವು ಇರಲಿಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ವಿಡಿಯೋದಲ್ಲಿ ಸಮಯದಲ್ಲಿ, ಅವರು ಪರಸ್ಪರ ಚುಂಬಿಸಿದರು. ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಸ್ಥಳೀಯ ನಿವಾಸಿಗಳು ಘಟನೆಯನ್ನು ಷರಿಯಾ ಅಧಿಕಾರಿಗಳಿಗೆ ವರದಿ ಮಾಡಲು ಪ್ರೇರೇಪಿಸಿತು.&lt;/p&gt;&lt;h3&gt;&lt;strong&gt;ನಾಲ್ಕು ತಿಂಗಳ ಶಿಕ್ಷೆ&lt;/strong&gt;&lt;/h3&gt;&lt;p&gt;ಬಳಿಕ ಏಪ್ರಿಲ್&zwnj;ನಲ್ಲಿ ಈ ಜೋಡಿಯನ್ನು ಬಂಧಿಸಲಾಯಿತು. ಇದರ ರೆಕಾರ್ಡಿಂಗ್​ ಮಾಡುತ್ತಿದ್ದ ನಾಲ್ವರನ್ನೂ ಅರೆಸ್ಟ್​ಮಾಡಲಾಯಿತು. ವಿಡಿಯೋ ಮಾಡುತ್ತಿದ್ದವರನ್ನು ಆನ್&zwnj;ಲೈನ್ ಜೂಜಾಟದ ಅಡಿ ಹಾಗೂ ಈ ಜೋಡಿಯನ್ನು ವಿವಾಹೇತರ ಸಂಬಂಧಗಳಿಗಾಗಿ ಸಾರ್ವಜನಿಕವಾಗಿ ಛಡಿಯೇಟಿಗೆ ಗುರಿಪಡಿಸಲಾಯಿತು. ಇದಕ್ಕೂ ಮುನ್ನ ಇವರನ್ನು ಜೈಲಿಗೆ ತಳ್ಳಲಾಯಿತು. ಬಂಧನದ ನಂತರ, ಇಬ್ಬರನ್ನೂ ಸುಮಾರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಯಿತು. ನಂತರದ ವಿಚಾರಣೆಯಲ್ಲಿ, ನ್ಯಾಯಾಲಯವು ಅವರಿಗೆ ತಲಾ ಛಡಿಯೇಟು ಶಿಕ್ಷೆ ವಿಧಿಸಿತು. ಸಾಕ್ಷಿಯಾಗಿ ಟಿಕ್&zwnj;ಟಾಕ್ ಲೈವ್ ರೆಕಾರ್ಡಿಂಗ್&zwnj;ಗಳನ್ನು ಹೊಂದಿರುವ ಮೊಬೈಲ್ ಫೋನ್ ಮತ್ತು ಯುಎಸ್&zwnj;ಬಿ ಡ್ರೈವ್ ಅನ್ನು ನಾಶಮಾಡಲು ನ್ಯಾಯಾಲಯ ಆದೇಶಿಸಿತು.&lt;/p&gt;&lt;p&gt;ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡೋನೇಷ್ಯಾ ಶಿಕ್ಷೆಯನ್ನು ತೀವ್ರವಾಗಿ ಟೀಕಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ನಡವಳಿಕೆಯನ್ನು ತಪ್ಪು ಎಂದು ಪರಿಗಣಿಸಬಹುದಾದರೂ, ಅದಕ್ಕೆ ಜೈಲು ಶಿಕ್ಷೆ ಅಥವಾ ಸಾರ್ವಜನಿಕವಾಗಿ ಚಾಟಿಯೇಟು ಹೊಡೆಯುವುದು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕ ಉಸ್ಮಾನ್ ಹಮೀದ್ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/indonesian-couple-publicly-caned-21-times-over-tiktok-kissing-video-suc/articleshow-xinrc1e"/>
        </item>
        <item>
            <title><![CDATA[100 ರೂನಲ್ಲಿ ದಿನದೂಡಿ 7 ಕೋಟಿ ರೂಪಾಯಿ ದಾನ, ಮಕ್ಕಳಿಲ್ಲದ ದಂಪತಿಯ ಮನಮಡಿಯುವ ಜೀವನ]]></title>
            <link>https://kannada.asianetnews.com/life/childless-chinese-couple-saves-every-penny-donates-rs-7-crore-to-save-455-childrens/articleshow-xk9x7ha</link>
            <guid isPermaLink="true">https://kannada.asianetnews.com/life/childless-chinese-couple-saves-every-penny-donates-rs-7-crore-to-save-455-childrens/articleshow-xk9x7ha</guid>
            <pubDate>Tue, 07 Jul 2026 13:11:38 +0530</pubDate>
            <description><![CDATA[&lt;p&gt;ಪ್ರತಿ ದಿನ 100 ರಿಂದ 200 ರೂಪಾಯಿ ಮಾತ್ರ ಖರ್ಚು. ತಮ್ಮ ದುಡಿದ ಆದಾಯವನ್ನೆಲ್ಲಾ ಉಳಿಸಿ ಇದೀಗ 455 ಮಕ್ಕಳ ಆರೋಗ್ಯ, ಚಿಕಿತ್ಸೆಗೆ ದಾನ ಮಾಡಿದ ಹಿರಿಯ ದಂಪತಿಗಳ ಮನಮಿಡಿಯುವ ಜೀವನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1qjqkha9gjf9sx0rg591gt0,imgname-baby-new-born-1754211798570.jpeg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆಯಾಗಿ ಮಕ್ಕಳಿಲ್ಲ ಎಂದು ಹಲವು ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಮಕ್ಕಳಾಗಲೇ ಇಲ್ಲ. ಇತ್ತ ವಯಸ್ಸು ಮಾಗುತ್ತಿತ್ತು. ಜೀವ ಹಿಂಡುತ್ತಿತ್ತು. ತಮಗೆ ಮಕ್ಕಳಾಗಲ್ಲ ಅನ್ನ ಸತ್ಯ ಅರಿವಾದಾಗ ಉಳಿತಾಯ ಮಾಡಲು ಆರಂಭಿಸಿದ್ದಾರೆ. ತಮ್ಮ ಐಷಾರಾಮಿ ಜೀವನಕ್ಕೆ ತೆರೆ ಎಳೆದಿದ್ದಾರೆ. ಪ್ರತಿ ದಿನ 100 ರಿಂದ 200 ರೂಪಾಯಿ ಮಾತ್ರ ಖರ್ಚು. ಇನ್ನುಳಿದ ಹಣವನ್ನು ಉಳಿತಾಯ ಮಾಡಿದ್ದಾರೆ. ಪತಿ ಟೀಚರ್ ಆಗಿ ನಿವೃತ್ತಿಯಾದರೆ, ಪತ್ನಿ ವೈದ್ಯೆಯಾಗಿ ನಿವೃತ್ತಿಯಾಗಿದ್ದರು. ತಮಗೆ ಮಕ್ಕಳಿಲ್ಲದ ಕಾರಣ ಇತರ ಮಕ್ಕಳನ್ನು ನೋಡುವಾಗ ಅಕ್ಕರೆಯಾಗುತ್ತಿತ್ತು. ಇದೇ ವೇಳೆ ಮಕ್ಕಳ ಆರೋಗ್ಯ ಸಮಸ್ಯೆ ಕೇಳಿದಾಗ ಈ ಹಿರಿ ದಂಪತಿಗಳಿಗೆ ಕರಳು ಕಿವುಚಿ ಬರುತ್ತಿತ್ತು. ಹೀಗಾಗಿ ತಾವು ಉಳಿತಾಯ ಮಾಡಿದ 7 ಕೋಟಿ ರೂಪಾಯಿ ಹಣವನ್ನು ಹೃದಯ ಸಂಬಂಧಿ ಸೇರಿದಂತೆ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸರ್ಜರಿಗೆ ವಿನಿಯೋಗಿಸಲು ದಾನ ಮಾಡಿದ್ದಾರೆ. ಹೀಗೆ ಈ ದಂಪತಿ ದಾನ ಮಾಡಿದ ಹಣದಿಂದ ಜೈಲು ತಿಂಗಳಿಗೆ 455 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊಸ ಬದುಕಿಗೆ ನೆರವಾದ ಸಾರ್ಥಕ ಜೀವನ ಪಯಣ ಇದು.&lt;/p&gt;&lt;h2&gt;ದಾನ ಮಾಡಿದ ಹಣದಲ್ಲಿ ಮಕ್ಕಳ ಬಾಳಿಗ ಬೆಳಕು&lt;/h2&gt;&lt;p&gt;ಚೀನಾದ ಮಕ್ಕಳಿಲ್ಲದ ದಂಪತಿ ಹೆಸರು ಡು ಯಿಂಗ್ರಾಂಗ್ ಹಾಗೂ ಲು ಸುಯಿಂಗ್. ಟೀಚರ್ ಆಗಿದ್ದ ಡು ಯಿಂಗ್ರಾಂಗ್ 2018ನೇ ವಯಸ್ಸಿನಲ್ಲಿ ತಮ್ಮ 81ನೇ ವಯಸ್ಸಿಗೆ ನಿಧನರಾದರೆ, ಪತ್ನಿ ಲು ಸುಯಿಂಗ್ ಕಳೆದ ವರ್ಷ ತಮ್ಮ 92ನೇ ವಯಸ್ಸಿಗೆ ನಿಧನರಾಗಿದ್ದಾರೆ. ಇವರು ದಾನ ಮಾಡಿದ ಹಣದಲ್ಲಿ ಈ ತಿಂಗಳಲ್ಲ 455ನೇ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ.&lt;/p&gt;&lt;h2&gt;ಆಸ್ಪತ್ರೆಗೆ ದಾನ ಮಾಡಿದ ಹಿರಿಯ ದಂಪತಿ&lt;/h2&gt;&lt;p&gt;2018ರಲ್ಲಿ ಚೀನಾದ ಶಾಂಘೈನಲ್ಲಿರುವ ಕಾರ್ಡಿಯಾಕ್ ಆಸ್ಪತ್ರೆಗೆ ಒಟ್ಟು 7 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ಹೃದಯ ಸಂಬಂಧಿ ಚಿಕಿತ್ಸೆಗೆ ದಾನ ಮಾಡಿ ಅನ್ನೋ ಜಾಹೀರಾತು ನೋಡಿದ್ದರು. ತಮಗೆ ಮಕ್ಕಳಿಲ್ಲದ ಕಾರಣ ಇತರ ಮಕ್ಕಳಿಗೆ ಬೆಳಕಾಗಲು ಈ ಹಿರಿ ಜೀವಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ತಾವು ಮಾಡಿದ ಉಳಿತಾಯ ಎಲ್ಲಾ ಹಣವನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಇದೀಗ ಇವರು ದಾನ ಮಾಡಿ 455 ಮಕ್ಕಳ ಬದುಕಿಗೆ ವಿನಿಯೋಗವಾಗಿದೆ.&lt;/p&gt;&lt;h2&gt;ಒಂದು ಊಟ ತಂದು ಇಬ್ಬರು ತಿನ್ನುತ್ತಿದ್ದರು&lt;/h2&gt;&lt;p&gt;ಈ ದಂಪತಿಗಳು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಖರೀದಿಸುತ್ತಿದ್ದ ಆಹಾರವನ್ನು ಇಬ್ಬರು ಹಂಚಿಕೊಂಡು ತಿನ್ನುತ್ತಿದ್ದರು. ತಮ್ಮ ಹಣವನ್ನು ಯಾವುದೇ ರೀತಿಯಲ್ಲಿ ಪೋಲಾಗಲು ಬಿಡುತ್ತಿರಲಿಲ್ಲ. ಹೆಚ್ಚಿನ ಖರ್ಚು ವೆಚ್ಚ ಮಾಡುತ್ತಿರಲಿಲ್ಲ. ಪ್ರಯಾಣ ಇಲ್ಲ, ಬಹುತೇಕ ಕಡೆ ನಡೆದುಕೊಂಡೇ ಹೋಗುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಹಣ ಉಳಿತಾಯ ಮಾಡಿದ್ದಾರೆ. ತಮ್ಮ ಬರುತ್ತಿದ್ದ ಪಿಂಚಣಿ, ತಮ್ಮ ಆಸ್ತಿ, ಆದಾಯ ಎಲ್ಲವನ್ನೂ ಒಟ್ಟೂಗೂಡಿಸಿ 7 ಕೋಟಿ ಮಾಡಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.&lt;/p&gt;&lt;p&gt;ಶಾಂಘೈ ಫೌಂಡೇಶನ್&zwnj;ನ ಸದಸ್ಯರಾಗಿ ಈ ದಂಪತಿಗಳನ್ನು ನೇಮಕ ಮಾಡಲಾಗಿತ್ತು. ಈ ವೇಳೆ ಹಲವು ಮೂಲಗಳಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/life/childless-chinese-couple-saves-every-penny-donates-rs-7-crore-to-save-455-childrens/articleshow-xk9x7ha"/>
        </item>
    </channel>
</rss>
