<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 17 Aug 2026 21:41:14 +0530</lastBuildDate>
        <atom:link href="https://kannada.asianetnews.com/rss/world-news" rel="self" type="application/rss+xml"/>
        <item>
            <title><![CDATA[ಅಮೇರಿಕಾಗೆ ಹೋಗುವ ಟೆಕ್ಕಿಗಳಿಗೆ ಹೆಂಗ್ ಬೆಳೀಬೇಕು ಎನ್ನುವ ಟಿಪ್ಸ್ ಕೊಟ್ಟ ಹರಿಣಿ; ವಿಡಿಯೋ ವೈರಲ್]]></title>
            <link>https://kannada.asianetnews.com/viral/indian-techie-woman-in-united-states-harini-viral-video-workplace-confidence-american-colleagues/articleshow-04p6wq0</link>
            <guid isPermaLink="true">https://kannada.asianetnews.com/viral/indian-techie-woman-in-united-states-harini-viral-video-workplace-confidence-american-colleagues/articleshow-04p6wq0</guid>
            <pubDate>Mon, 17 Aug 2026 09:03:59 +0530</pubDate>
            <description><![CDATA[&lt;p&gt;ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯ ಯುವತಿ ಹರಿಣಿ, ಕೆಲಸದ ಸ್ಥಳದಲ್ಲಿನ ಹಿಂಜರಿಕೆಯನ್ನು ನಿವಾರಿಸುವ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಮೆರಿಕಾಗೆ ಹೋಗಲು ಹಿಂಜರಿಕೆ ಮನಸ್ಥಿತಿ ಇರುವ ವ್ಯಕ್ತಿಗಳಿಗೆ ಅಲ್ಲಿ ಕೆಲಸ ಮಾಡುವ ಯುವತಿ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಏನದು ಸಲಹೆ ಈ ಲೇಖನದಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m06wbvp3ttb2mpnyz5zqnhq8,imgname-indian-techie-harini-1786937470657.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಿಂದ ಅಮೇರಿಕಾಗೆ ಹೋಗಿ ಕೆಲಸ ಮಾಡುವಂತಹ ಟೆಕ್ಕಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಬಂದಿದೆ. ಅದರಲ್ಲಿಯೂ ಕೆಲವರಿಗೆ ಅಮೇರಿಕಾಗೆ ಹೋಗಿ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿದರೂ ಹಿಂಜರಿಯುತ್ತಾರೆ. ಅಂತಹ ಹಿಂಜರಿಕೆ ಮನಸ್ಥಿತಿ ಇರುವ ವ್ಯಕ್ತಿಗಳಿಗೆ ಅಥವಾ ನನಗೆ ಆ ಬಗ್ಗೆ ಜ್ಞಾನ ಇಲ್ಲವೆಂದು ಕೀಳಿರಿಮೆ ಹೊಂದಿದವರಿಗೆ ಅಲ್ಲಿ ಕೆಲಸ ಮಾಡುವ ಯುವತಿ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.&lt;/p&gt;&lt;p&gt;ಭಾರತದಲ್ಲಿ ಬೆಳೆದು ವಿದೇಶಗಳಲ್ಲಿ ಕೆಲಸ ಮಾಡುವ ಅನೇಕ ವೃತ್ತಿಪರರು ಎದುರಿಸುವ ಒಂದು ಸಾಮಾನ್ಯ ಸಮಸ್ಯೆ ಎಂದರೆ 'ಕೆಲಸದ ಸ್ಥಳದಲ್ಲಿ ಮುಕ್ತವಾಗಿ ಮಾತನಾಡುವ ಹಿಂಜರಿಕೆ'. ಈ ಕುರಿತು ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಭಾರತೀಯ ಮೂಲದ ಹರಿಣಿ ಎಂಬ ಯುವತಿ ಹಂಚಿಕೊಂಡಿರುವ ಅನುಭವದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಲಕ್ಷಾಂತರ ಉದ್ಯೋಗಿಗಳಲ್ಲಿ ಹೊಸ ಚಿಂತನೆ ಮೂಡಿಸಿದೆ.&lt;/p&gt;&lt;p&gt;ತಮ್ಮ ಇಡೀ ಆಫೀಸ್&zwnj;ನಲ್ಲಿ ಕೆಲಸ ಮಾಡುವ ಏಕೈಕ ಭಾರತೀಯ ಮಹಿಳೆ ತಾವೇ ಆಗಿದ್ದು, ಅಮೆರಿಕನ್ ಸಹೋದ್ಯೋಗಿಗಳನ್ನು ನೋಡಿ ತಾವು ಕಲಿತ 'ಆತ್ಮವಿಶ್ವಾಸದ ಸೂತ್ರ'ವನ್ನು ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;'ಅಮೆರಿಕನ್ನರಿಗೆ ನನಗಿಂತ ಹೆಚ್ಚು ತಿಳಿದಿದೆ ಅಂದುಕೊಂಡಿದ್ದೆ!':&lt;/strong&gt;&lt;/h2&gt;&lt;p&gt;ವಿಡಿಯೋದಲ್ಲಿ ಮಾತನಾಡಿರುವ ಹರಿಣಿ, 'ಆರಂಭದಲ್ಲಿ ನನ್ನ ಅಮೆರಿಕನ್ ಸಹೋದ್ಯೋಗಿಗಳು ಮೀಟಿಂಗ್&zwnj;ಗಳಲ್ಲಿ ನಿರರ್ಗಳವಾಗಿ ಮಾತನಾಡುವುದನ್ನು ನೋಡಿ, ನನಗಿಂತ ಹೆಚ್ಚು ಜ್ಞಾನ ಅವರಿಗೆ ಇದೆ ಎಂದು ನಾನು ಭಾವಿಸಿದ್ದೆ. ಆದರೆ ನಂತರ ನನಗೆ ಅರಿವಾಗಿದ್ದು ಏನೆಂದರೆ-ನನಗೂ ಎಲ್ಲವೂ ತಿಳಿದಿತ್ತು, ಆದರೆ ಅವರು ಎಲ್ಲ ಉತ್ತರಗಳು ಪೂರ್ಣವಾಗಿ ತಿಳಿಯುವ ಮೊದಲೇ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ಅದೇ ನನಗೂ ಅವರಿಗೂ ಇದ್ದ ಮುಖ್ಯ ವ್ಯತ್ಯಾಸ' ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಭಾರತೀಯ ಪಾಲನೆ ಮತ್ತು ಕಾರ್ಪೊರೇಟ್ ವಾಸ್ತವ:&lt;/strong&gt;&lt;/h2&gt;&lt;p&gt;ಭಾರತದಲ್ಲಿ ಬೆಳೆಯುವಾಗ ನಮಗೆ ಹೆಚ್ಚಾಗಿ 'ನೂರಕ್ಕೆ ನೂರು ಖಚಿತವಾಗುವವರೆಗೆ ಮಾತನಾಡಬೇಡ' ಅಥವಾ 'ಯೋಚಿಸಿ ಮಾತನಾಡು' ಎಂದು ಕಲಿಸಲಾಗುತ್ತದೆ.&lt;/p&gt;&lt;p&gt;ಶಾಲಾ-ಕಾಲೇಜುಗಳಲ್ಲಿ ಈ ಮನಸ್ಥಿತಿ ಸಹಾಯಕವಾಗಿದ್ದರೂ, ಪ್ರಾಯೋಗಿಕ ಕೆಲಸದ ಸ್ಥಳದಲ್ಲಿ (Workplace) ಇದು ನಮಗೆ ಹಿನ್ನಡೆ ಉಂಟುಮಾಡುತ್ತದೆ ಎಂದು ಹರಿಣಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಯಾವುದೇ ಒಂದು ಹೊಸ ಐಡಿಯಾವನ್ನು ನಾವು ಹಂಚಿಕೊಳ್ಳದಿದ್ದರೆ, ಅದು ಎಂದಿಗೂ ಬೆಳಕಿಗೆ ಬರುವುದಿಲ್ಲ.&lt;/p&gt;&lt;p&gt;ನಾವು 'ಪರಿಪೂರ್ಣ ಕ್ಷಣ' ಅಥವಾ 'ಸರಿಯಾದ ಪದ'ಗಳಿಗಾಗಿ ಕಾಯುತ್ತಾ ಕೂತರೆ, ಇನ್ನೊಬ್ಬರು ಆ ಅವಕಾಶವನ್ನು ಬಳಸಿಕೊಂಡು ಚರ್ಚೆಯನ್ನು ಮುನ್ನಡೆಸಿಕೊಂಡು ಹೋಗುತ್ತಾರೆ.&lt;/p&gt;&lt;h2&gt;&lt;strong&gt;ಹರಿಣಿ ಹೇಳಿದ ಪ್ರಮುಖ 3 ಪಾಠಗಳು:&lt;/strong&gt;&lt;/h2&gt;&lt;p&gt;&lt;strong&gt;ಪರಿಪೂರ್ಣತೆಯ ಭ್ರಮೆ ಬೇಡ:&lt;/strong&gt; ಇದರರ್ಥ ನಮಗೆ ಎಲ್ಲವೂ ತಿಳಿದಿದೆ ಎಂದು ಸುಳ್ಳು ಹೇಳುವುದಲ್ಲ; ಬದಲಾಗಿ ಸಂಪೂರ್ಣ ಉತ್ತರ ಸಿಗುವವರೆಗೂ ಕಾಯದೆ, ನಮ್ಮಲ್ಲಿದ್ದ ಚಿಂತನೆಯನ್ನು ಧೈರ್ಯವಾಗಿ ಹಂಚಿಕೊಳ್ಳುವುದು.&lt;/p&gt;&lt;p&gt;&lt;strong&gt;ಆತ್ಮವಿಶ್ವಾಸ ಜನ್ಮಜಾತವಲ್ಲ, ಅದೊಂದು ಕಲೆ: '&lt;/strong&gt;ಆತ್ಮವಿಶ್ವಾಸ ಎಂಬುದು ಹುಟ್ಟಿನಿಂದಲೇ ಬರುವ ಗುಣ ಎಂದು ನಾನು ಭಾವಿಸಿದ್ದೆ. ಆದರೆ ದಿನಕಳೆದಂತೆ ತಿಳಿಯಿತು, ಅದು ಅಭ್ಯಾಸದ ಮೂಲಕ ಬೆಳೆಸಿಕೊಳ್ಳಬಹುದಾದ ಕೌಶಲ್ಯ (Skill)' ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮೀಟಿಂಗ್&zwnj;ಗಳಲ್ಲಿ ಧ್ವನಿ ಎತ್ತಿ: &lt;/strong&gt;ಸಭೆಗಳಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ, ನಿಮ್ಮ ಅಭಿಪ್ರಾಯಗಳನ್ನು ಚರ್ಚೆಗೆ ತರುವುದು ವೃತ್ತಿ ಬೆಳವಣಿಗೆಗೆ ಅತ್ಯಂತ ಮುಖ್ಯ.&lt;/p&gt;&lt;h2&gt;&lt;strong&gt;ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ:&lt;/strong&gt;&lt;/h2&gt;&lt;p&gt;ಹರಿಣಿ ಅವರ ಈ ಪೋಸ್ಟ್&zwnj;ಗೆ ನೆಟ್ಟಿಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.&lt;/p&gt;&lt;p&gt;'ಇದು ಅಕ್ಷರಶಃ ಸತ್ಯ. ನಾವು ಖಚಿತವಾಗುವವರೆಗೂ ಕಾಯುತ್ತೇವೆ, ಆದರೆ ಅವರು ಧೈರ್ಯವಾಗಿ ಮಾತನಾಡುತ್ತಾರೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;'ಪ್ರತಿಯೊಬ್ಬ ಭಾರತೀಯ ಕಾರ್ಪೊರೇಟ್ ಉದ್ಯೋಗಿಯೂ ನೋಡಲೇಬೇಕಾದ ವಿಡಿಯೋ' ಎಂದು ಇನ್ನೊಬ್ಬ ಬಳಕೆದಾರರು ಶ್ಲಾಘಿಸಿದ್ದಾರೆ.&lt;/p&gt;View this post on Instagram&lt;p&gt;A post shared by   (@harini_nagireddi)&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/indian-techie-woman-in-united-states-harini-viral-video-workplace-confidence-american-colleagues/articleshow-04p6wq0"/>
        </item>
        <item>
            <title><![CDATA[ವಂದೇ ಮಾತರಂ, ಜನಗಣಮನ ಗೀತೆಯೊಂದಿಗೆ ಅಮೆರಿಕದಲ್ಲಿ ಕನ್ನಡಿಗರ ಗೃಹಪ್ರವೇಶ]]></title>
            <link>https://kannada.asianetnews.com/world-news/kannadigas-celebrate-house-warming-ceremony-in-us-with-vande-mataram-and-jana-gana-mana/articleshow-0wwg01f</link>
            <guid isPermaLink="true">https://kannada.asianetnews.com/world-news/kannadigas-celebrate-house-warming-ceremony-in-us-with-vande-mataram-and-jana-gana-mana/articleshow-0wwg01f</guid>
            <pubDate>Sun, 16 Aug 2026 14:43:47 +0530</pubDate>
            <description><![CDATA[&lt;p&gt;ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಗೃಹಪ್ರವೇಶ ವಂದೇ ಮಾತರಂ, ಜನಗಣಮನ ಗೀತೆಯೊಂದಿಗೆ ನಡೆದಿದೆ. ಭಾರತವನ್ನೇ ಒಗ್ಗೂಡಿಸಿದ ವಂದೇ ಮಾತರಂ ಇದೀಗ ದೂರದ ಅಮೆರಿಕದಲ್ಲೂ ಮೊಳಗಿದೆ. ವಿಶೇಷ ಗೃಹ ಪ್ರವೇಶ ವಿಡಿಯೋ ಇಲ್ಲಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m04xehcs2k90zv05j2529z0b,imgname-vande-mataram-at-us--house-warming-ceremony-1786871498137.jpeg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್&lt;/p&gt;&lt;p&gt;&lt;strong&gt;ನ್ಯೂಯಾರ್ಕ್ (ಆ.16&lt;/strong&gt;) ಭಾರತದಿಂದ ಎಷ್ಟೇ ದೂರವಿದ್ದರೂ ಮನಸ್ಸು ಭಾರತದಲ್ಲೇ ಇರುತ್ತೆ. ಇದೀಗ 1875ರಲ್ಲಿ ಭಾರತದಲ್ಲಿ ಮೊಳಗಿದ &lsquo;ವಂದೇ ಮಾತರಂ&rsquo; 150 ವರ್ಷಗಳ ನಂತರ, ಸಾವಿರಾರು ಮೈಲು ದೂರದ ಅಮೆರಿಕದ ಕನ್ನಡಿಗರ ಮನೆಯಲ್ಲೂ ಮೊಳಗಿದೆ. ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಕನ್ನಡಿಗರಾದ ಸುಚಿತ ಜಾಜು ಮತ್ತು ಅಮೋಲ್ ಜಾಜು ಅವರ ನೂತನ ಮನೆಯ ಗೃಹಪ್ರವೇಶ ಸಮಾರಂಭ ಸಂಭ್ರಮದಿಂದ ನಡೆಯಿತು.&lt;/p&gt;&lt;h2&gt;ವಂದೇ ಮಾತರಂ, ಜನಗಣಮನ ಗೀತೆ&lt;/h2&gt;&lt;p&gt;ಗೃಹಪ್ರವೇಶದ ಅಂಗವಾಗಿ ಹೋಮ, ಹವನ ಹಾಗೂ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜೆಯ ಕೊನೆಯಲ್ಲಿ ಮಂಗಳಾರತಿ ನಡೆಯುತ್ತಿದ್ದ ಸಂದರ್ಭದಲ್ಲಿ ಪುರೋಹಿತರಾದ ಶ್ರೀಧರ ಆಚಾರ್ಯ ಅವರು ಅಂದು ಆಗಸ್ಟ್ 15 ಎಂಬುದನ್ನು ನೆನಪಿಸಿ ಭಾರತದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸುವಂತೆ ಕರೆ ನೀಡಿದರು. ಅಲ್ಲಿ ನೆರೆದಿದ್ದ ಎಲ್ಲರೂ ಒಟ್ಟಾಗಿ &lsquo;ವಂದೇ ಮಾತರಂ&rsquo; ಮತ್ತು &lsquo;ಜನಗಣಮನ&rsquo; ಗೀತೆಗಳನ್ನು ಹಾಡಿದರು. ನಂತರ &lsquo;ಭಾರತ್ ಮಾತಾ ಕಿ ಜೈ&rsquo; ಎಂಬ ಘೋಷಣೆಗಳು ಮೊಳಗಿದವು. ಗೃಹಪ್ರವೇಶದ ಸಂಭ್ರಮ ಕ್ಷಣಾರ್ಧದಲ್ಲಿ ದೇಶಭಕ್ತಿಯ ಸಂಭ್ರಮವಾಗಿಯೂ ಮಾರ್ಪಟ್ಟಿತು.&lt;/p&gt;&lt;p&gt;ಬಂಕಿಮಚಂದ್ರ ಚಟ್ಟೋಪಾಧ್ಯಾಯರು 1875ರಲ್ಲಿ ರಚಿಸಿದ &lsquo;ವಂದೇ ಮಾತರಂ&rsquo;ಗೆ ಈಗ 150 ವರ್ಷಗಳ ಸಂಭ್ರಮ. ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2025ರ ನವೆಂಬರ್&zwnj;ನಿಂದ 2026ರ ನವೆಂಬರ್&zwnj;ವರೆಗೆ ದೇಶಾದ್ಯಂತ &lsquo;ವಂದೇ ಮಾತರಂ&rsquo; 150ನೇ ವರ್ಷಾಚರಣೆಯನ್ನು ಹಮ್ಮಿಕೊಂಡಿದೆ. ಅದೇ &lsquo;ವಂದೇ ಮಾತರಂ&rsquo; ಇಂದು ತಾಯ್ನಾಡಿನಿಂದ ಸಾವಿರಾರು ಮೈಲು ದೂರದ ಅಮೆರಿಕದ ಆಲ್ಬನಿಯ ಮನೆಯೊಂದರ ಗೃಹಪ್ರವೇಶದಲ್ಲೂ ಮೊಳಗಿರುವುದು ವಿಶೇಷ.&lt;/p&gt;&lt;h2&gt;ಮನೆ ಅಮೆರಿಕದಲ್ಲಿರಬಹುದು... ಆದರೆ ಮನಸ್ಸಿನಲ್ಲಿ ಭಾರತ!&lt;/h2&gt;&lt;p&gt;ತಾಯ್ನಾಡಿನಿಂದ ಸಾವಿರಾರು ಮೈಲು ದೂರದಲ್ಲಿ ನೆಲೆಸಿದ್ದರೂ ತಮ್ಮ ಮನೆಯ ಶುಭ ಸಮಾರಂಭದಲ್ಲಿಯೂ ಸ್ವಾತಂತ್ರ್ಯ ದಿನವನ್ನು ಮರೆಯದೆ ವಂದೇ ಮಾತರಂ ಮತ್ತು ಜನಗಣಮನ ಹಾಡಿ ದೇಶಪ್ರೇಮ ಮೆರೆದ ಈ ಕ್ಷಣ ನಿಜಕ್ಕೂ ಸ್ಫೂರ್ತಿದಾಯಕ. ದೇಶಪ್ರೇಮಕ್ಕೆ ಗಡಿಗಳಿಲ್ಲ, ದೂರವೂ ಅಡ್ಡಿಯಲ್ಲ. ತಾಯ್ನಾಡು ಸಾವಿರಾರು ಮೈಲು ದೂರವಿದ್ದರೂ ಭಾರತವನ್ನು ಹೃದಯದಲ್ಲಿ ಹೊತ್ತು ಬದುಕಬಹುದು ಎಂಬುದಕ್ಕೆ ಈ ಗೃಹಪ್ರವೇಶವೇ ಒಂದು ಸುಂದರ ಉದಾಹರಣೆ.&lt;/p&gt;&lt;h2&gt;ಈ ಅಪರೂಪದ ದೇಶಭಕ್ತಿಯ ಕ್ಷಣಗಳ ವಿಡಿಯೋ&lt;/h2&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/kannadigas-celebrate-house-warming-ceremony-in-us-with-vande-mataram-and-jana-gana-mana/articleshow-0wwg01f"/>
        </item>
        <item>
            <title><![CDATA[ಯಾರ‍್ಯಾರೋ ಮನೆ ಮುಂದೆ ಪಾರ್ಕ್​ ಮಾಡ್ತಾರಾ? ಚಿಂತೆ ಬಿಡಿ, ಸಿಕ್ಕಾಪಟ್ಟೆ ವೈರಲ್​ ಆಗಿರೋ ಈ ಉಪಾಯ ಮಾಡಿ]]></title>
            <link>https://kannada.asianetnews.com/viral/does-anyone-park-in-front-of-your-house-stop-worrying-try-this-idea-that-has-gone-viral-suc/articleshow-0ytaypg</link>
            <guid isPermaLink="true">https://kannada.asianetnews.com/viral/does-anyone-park-in-front-of-your-house-stop-worrying-try-this-idea-that-has-gone-viral-suc/articleshow-0ytaypg</guid>
            <pubDate>Fri, 14 Aug 2026 20:33:37 +0530</pubDate>
            <description><![CDATA[ಮಹಾನಗರಗಳಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಬೇಸತ್ತ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ, ತನ್ನ ಮನೆಯ ಗೇಟ್ ಮುಂದೆ ಅಪರಿಚಿತರು ವಾಹನ ನಿಲ್ಲಿಸುವುದನ್ನು ತಡೆಯಲು ವಿನೂತನ ಉಪಾಯ ಕಂಡುಕೊಂಡಿದ್ದಾನೆ. ಆತ ಅಳವಡಿಸಿದ ಸೆನ್ಸರ್ ಆಧಾರಿತ ಸ್ಪ್ರಿಂಕ್ಲರ್, ಪಾರ್ಕ್ ಮಾಡಲು ಬಂದವರನ್ನು ನೀರಿನಿಂದ ಒದ್ದೆ ಮಾಡಿ ಓಡಿಸುತ್ತಿದ್ದು, ಈ ವಿಡಿಯೋ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m00crz92bayrm4km41egvbnx,imgname-parking-problem-1786719796514.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಾರ್ಕಿಂಗ್​ ಸಮಸ್ಯೆ ಎನ್ನೋದು ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಎಲ್ಲೆಡೆಯ ಸಮಸ್ಯೆಯೇ. ಅದರಲ್ಲಿಯೂ ಮಹಾನಗರಗಳಲ್ಲಂತೂ ಪಾರ್ಕಿಂಗ್​ನಷ್ಟು ದೊಡ್ಡ ಸಮಸ್ಯೆ ಮತ್ತೊಂದಿಲ್ಲ. ಒಬ್ಬೊಬ್ಬರ ಮನೆಯಲ್ಲಿ 3-4 ಕಾರು, 3-4 ಬೈಕು ಇದ್ದರೆ ಪಾರ್ಕ್​ ಮಾಡೋದು ಎಲ್ಲಿ ಮತ್ತೆ? ಇದು ಒಂದಾದರೆ, ಎಷ್ಟೋ ಸಂದರ್ಭಗಳಲ್ಲಿ ಮನೆಯ ಎದುರು ಸ್ವಲ್ಪ ಜಾಗ ಸಿಕ್ತು ಎಂದರೆ ಸಾಕು, ವಾಹನ ಮಾಲೀಕರಿಗೆ ಖುಷಿಯೋ ಖುಷಿ. ಮನೆಯ ಗೇಟ್​ ಮೇಲೆ No Parking In front of gate ಎಂದು ಬರೆದಿದ್ದರೂ, ಅವರು ಬಂದ ಮೇಲೆ ನೋಡಿಕೊಂಡ್ರಾಯ್ತು ಎಂದು ಪಾರ್ಕ್​ ಮಾಡಿ ಹೋಗುವವರೇ ಎಲ್ಲಾ.&lt;/p&gt;&lt;p&gt;ಎಷ್ಟೋ ಸಂದರ್ಭಗಳಲ್ಲಿ, ಮನೆಯ ಎದುರು ಯಾರಾದರೂ ಪಾರ್ಕ್​ ಮಾಡಿದರೆ, ಆ ಮನೆಯಲ್ಲಿ ಇರುವವರಿಗೇ ಪಾರ್ಕಿಂಗ್​ ಜಾಗ ಸಿಗಲ್ಲ, ಇಲ್ಲದೇ ಹೋದರೆ, ಮನೆಯ ಒಳಗಿನಿಂದ ಅವರ ಕಾರನ್ನು ಹೊರಗೆ ತರಲು ಅಲ್ಲಿ ಜಾಗವೇ ಇರಲ್ಲ. ಆದ್ದರಿಂದ ಬೆಂಗಳೂರಿನಂಥ ಮಹಾನಗರಗಳಲ್ಲಿ ಪಾರ್ಕಿಂಗ್​ಗಾಗಿ ಆಗುವ ಗಲಾಟೆ, ಗುದ್ದಾಟ ಅಷ್ಟಿಷ್ಟಲ್ಲ. ಆದರೆ, ಇಲ್ಲೊಬ್ಬ ಪುಣ್ಯಾತ್ಮರು ಅದಕ್ಕೊಂದು ಸಕತ್​ ಐಡಿಯಾ ಕಂಡುಹಿಡಿದಿದ್ದು, ಇದೀಗ ಜಾಲತಾಣದ ಮೂಲಕ ಸಕತ್​ ಟ್ರೆಂಡ್​ ಆಗಿದೆ. ಹಳೆಯ ವಿಡಿಯೋ ಮತ್ತೆ ಮತ್ತೆ ವೈರಲ್​ ಆಗುತ್ತಿದೆ.&lt;/p&gt;&lt;h2&gt;&lt;strong&gt;ಈ ಪ್ಲ್ಯಾನ್​ ಸಕತ್​ ವೈರಲ್​&lt;/strong&gt;&lt;/h2&gt;&lt;p&gt;ಅಂದಹಾಗೆ, ಇದು ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಮಾಡಿರುವ ಪ್ಲ್ಯಾನ್​. ತಮ್ಮ ಮನೆ ಮುಂದೆ ವಾಹನವನ್ನು ಪಾರ್ಕಿಂಗ್ ಮಾಡುವುದನ್ನು ತಪ್ಪಿಸಲು ವಿನೂತನ ಐಡಿಯಾ ಮಾಡಿದ್ದು, ಈತನ ಕ್ರಿಯೇಟಿವಿಟಿಗೆ ಎಲ್ಲರೂ ತಲೆಬಾಗಿದ್ದಾರೆ. ತನ್ನ ಮನೆಯ ಗೇಟ್ ಮುಂದೆ ಅಪರಿಚಿತರು ವಾಹನ ಪಾರ್ಕಿಂಗ್ ಮಾಡುವುದನ್ನು ನೋಡಿ ನೋಡಿ ಬೇಸತ್ತ ಆತ ಇದನ್ನು ತಡೆಯಲು ಮನೆ ಮುಂದೆ ಮೋಷನ್-ಆಕ್ಟಿವೇಟೆಡ್ ಸ್ಪ್ರಿಂಕ್ಲರ್&zwnj;ಗಳನ್ನು ಅಳವಡಿಸಿದ್ದಾನೆ. ಅಪರಿಚಿತ ವಾಹನ ಚಾಲಕರು ವಾಹನವನ್ನು ಈ ವ್ಯಕ್ತಿಯ ಮನೆ ಗೇಟ್ ಮುಂದೆ ನಿಲ್ಲಿಸಿ ವಾಹನದಿಂದ ಇಳಿಯಲು ಮುಂದಾಗುತ್ತಿದ್ದಂತೆ ಸ್ಪಿಂಕ್ಲರ್ ಹಾರಲು ಶುರುವಾಗಿ ಅವರು ಒದ್ದೆಯಾಗುತ್ತಾರೆ. ಕೂಡಲೇ ವಾಹನ ಸವಾರರು ವಾಹನದಿಂದ ಇಳಿಯುವ ಬದಲು ಡೋರ್ ಹಾಕಿಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಮೈ ಮೇಲೇ ನೀರು ಹಾರುತ್ತಿದ್ದಂತೆ ಅವರು ಗಾಬರಿಗೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ವ್ಯಕ್ತಿಯ ಈ ಕ್ರಿಯೇಟಿವ್ ಐಡಿಯಾಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಸೆನ್ಸರ್ ಆಧರಿತ ಸ್ಪಿಂಕ್ಲರ್&lt;/strong&gt;&lt;/h3&gt;&lt;p&gt;ಮನೆಗೆ ಹೋಗುವ ಗೇಟ್&zwnj;ನಲ್ಲೇ ಯಾರೋ ಅಪರಿಚಿತರು ತಮ್ಮ ವಾಹನವನ್ನು ಪಾರ್ಕಿಂಗ್ ಮಾಡುತ್ತಿದ್ದಿದ್ದರಿಂದ ಮನೆ ಮಾಲೀಕನಿಗೆ ಬಹಳ ಕಿರಿಕಿರಿಯಾಗಿತ್ತು. ವಾಹನ ಸವಾರರಿಗೆ ಹೇಳಿ ಹೇಳಿ ಸುಸ್ತಾದ ಅವರು ಸೆನ್ಸರ್ ಆಧರಿತ ಸ್ಪಿಂಕ್ಲರ್ ಅಳವಡಿಸಿದ್ದರು. ಹೀಗಾಗಿ ಅಲ್ಲಿ ಅನಧಿಕೃತವಾದ ವಾಹನಗಳು ಬಂದು ಪಾರ್ಕಿಂಗ್ ಮಾಡಲು ಮುಂದಾದಗಲೆಲ್ಲಾ ವಾಹನ ಸವಾರರಿಗೆ ಹಠಾತ್ ಆಗಿ ನೀರಿನ ಸಿಂಚನವಾಗುತ್ತಿತ್ತು.ಇದರಿಂದ ಏನಾಗುತ್ತಿದೆ ಎಂಬುದನ್ನು ತಿಳಿಯದೇ ವಾಹನ ಸವಾರರು ಗಾಬರಿಯಾಗುತ್ತಿದ್ದರು. ಅವರು ಅಳವಡಿಸಿದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿದ್ದು ಅನೇಕರು ಮಾಲೀಕನ ಈ ಸೃಜನಶೀಲ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/viral/does-anyone-park-in-front-of-your-house-stop-worrying-try-this-idea-that-has-gone-viral-suc/articleshow-0ytaypg"/>
        </item>
        <item>
            <title><![CDATA[Vande mataram ಅಸಹನೆ ವಿವಾದದ ನಡುವೆ ಬುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ! ಮಿತ್ರ ಭಾರತಕ್ಕೆ UAE ವಿಶೇಷ ಶುಭಾಶಯ | ವಿಡಿಯೋ]]></title>
            <link>https://kannada.asianetnews.com/world-news/vande-mataram-row-tricolour-flies-over-burj-khalifa-as-uae-sends-special-wishes-to-india-video-rav/articleshow-3m85eym</link>
            <guid isPermaLink="true">https://kannada.asianetnews.com/world-news/vande-mataram-row-tricolour-flies-over-burj-khalifa-as-uae-sends-special-wishes-to-india-video-rav/articleshow-3m85eym</guid>
            <pubDate>Sun, 16 Aug 2026 10:45:34 +0530</pubDate>
            <description><![CDATA[ಭಾರತದ 80ನೇ ಸ್ವಾತಂತ್ರ್ಯ ದಿನವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ, ದುಬೈನ ಬುರ್ಜ್ ಖಲೀಫಾ ಕಟ್ಟಡವು ಭಾರತದ ತ್ರಿವರ್ಣ ಧ್ವಜದ ಬಣ್ಣಗಳಿಂದ ಝಗಮಗಿಸಿತು. ಇದು ಭಾರತ ಮತ್ತು ಯುಎಇ ನಡುವಿನ ಬಲವಾದ ಸ್ನೇಹ ಸಂಬಂಧವನ್ನು ಜಗತ್ತಿಗೆ ಸಾರಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m04fp4nvzt4y4eyznejhd5bx,imgname-----------------------2026-08-16t103007.852-1786857067195.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ 80 ನೇ ಸ್ವಾತಂತ್ರ್ಯ ದಿನವನ್ನು ದೇಶಾದ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ದೇಶವಷ್ಟೇ ಅಲ್ಲ ವಿದೇಶದಲ್ಲೂ ಭಾರತೀಯರು, ವಿದೇಶಿಗರು ಸಂಭ್ರಮಿಸಿ ಶುಭಾಶಯ ತಿಳಿಸಿದರು. ಅಫ್ಘಾನಿಸ್ತಾನದಂತಹ ಕಟ್ಟ ಮುಸ್ಲಿಂ ದೇಶಗಳ ಜನರು ಕೂಡ ಭಾರತದ ಧ್ವಜ ಎತ್ತಿ ಹಿಡಿದು ಶುಭಾಶಯ ತಿಳಿಸಿದರು ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅದವು. ಅಷ್ಟೇ ಅಲ್ಲ ಈಗ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ.ಶುಕ್ರವಾರ ರಾತ್ರಿ (ಆಗಸ್ಟ್ 15, 2026) ದುಬೈನ ಐಕಾನಿಕ್ ಬುರ್ಜ್ ಖಲೀಫಾ ಭಾರತೀಯ ಧ್ವಜದ ಬಣ್ಣಗಳಲ್ಲಿ ಝಗಮಿಸಿತು. ವಿಶ್ವದ ಅತಿ ಎತ್ತರದ ಕಟ್ಟಡವನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಬೆಳಗಿಸಲಾಯಿತು. ಈ ದೃಶ್ಯ ನೋಡುತ್ತಿದ್ದರೆ ಭಾರತದ ವಿಶ್ವರೂಪ ದರ್ಶನವಾದಂತಾಗುತ್ತೆ. ಸ್ವಾತಂತ್ರ್ಯ ಸಿಕ್ಕಿದ್ದು ಭಾರತಕ್ಕಾದರೂ, ಸಂಭ್ರಮಿಸಿದ್ದು ಹಲವು ದೇಶಗಳು!&lt;/p&gt;&lt;p&gt;ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಈ ವಿಶೇಷ ಸಂದರ್ಭದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್&zwnj;ನಲ್ಲಿ ಇದು ಭಾರತ ನಡೆದುಬಂದ ದಾರಿ, ಹೆಮ್ಮೆ ಮತ್ತು ವಿಶೇಷ ಗೌರವ ಭಾರತ ಮತ್ತು ಯುಎಇ ನಡುವಿನ ಬಲವಾದ ಸ್ನೇಹದ ಸಂಕೇತವಾಗಿದೆ ಎಂದು ಬರೆಯಲಾಗಿದೆ.&lt;/p&gt;&lt;h2&gt;ಭಾರತದ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಬೆಳಗಿದ ಬುರ್ಜ್ ಖಲೀಫಾ&lt;/h2&gt;&lt;p&gt;ಶುಕ್ರವಾರ ರಾತ್ರಿ ಬುರ್ಜ್ ಖಲೀಫಾವನ್ನು ಭಾರತದ ತ್ರಿವರ್ಣ ಧ್ವಜದ ಕೇಸರಿ ಬಿಳಿ ಹಸಿರು ಬಣ್ಣಗಳಲ್ಲಿ ಪ್ರದರ್ಶಿಸಿತು. ಇದಕ್ಕೂ ಮೊದಲು ಹಲವಾರು ಬಾರಿ ತ್ರಿವರ್ಣ ಬಣ್ಣಗಳಲ್ಲಿ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಲಾಗಿತ್ತು, ವಿಶೇಷವಾಗಿ ಭಾರತದ ಸ್ವಾತಂತ್ರ್ಯ ದಿನದಂದು.&lt;/p&gt;&lt;h3&gt;ಭಾರತ-ಯುಎಇ ಸಂಬಂಧ ಹೇಗಿದೆ?&lt;/h3&gt;&lt;p&gt;ಭಾರತ-ಯುಎಇ ಸಂಬಂಧ ಹೇಗಿದೆ ಅನ್ನೋದಕ್ಕೆ ಬುರ್ಜ್ ಖಲೀಫಾದಲ್ಲಿ ನಡೆದ ಈ ಪ್ರದರ್ಶನ ಸಾಕ್ಷಿ. ಇದು ಕೇವಲ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯಾಗಿರಲಿಲ್ಲ, ಬದಲಾಗಿ ಭಾರತ ಮತ್ತು ಯುಎಇ ನಡುವಿನ ಸಂಬಂಧವನ್ನು ಬಲಪಡಿಸುವ ಪ್ರತಿಬಿಂಬವೂ ಆಗಿತ್ತು. ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರವು ಸ್ಥಿರವಾಗಿ ಹೆಚ್ಚಾಗಿದೆ. ಯುಎಇ ದೊಡ್ಡ ಭಾರತೀಯ ವಲಸಿಗರಿಗೆ ನೆಲೆಯಾಗಿದೆ, ಇದು ಭಾರತೀಯ ರಾಷ್ಟ್ರೀಯ ಹಬ್ಬಗಳನ್ನು ಅಲ್ಲಿನ ಭಾರತೀಯ ಸಮುದಾಯಕ್ಕೆ ವಿಶೇಷವಾಗಿ ಮಹತ್ವದ್ದಾಗಿ ಮಾಡುತ್ತದೆ.&lt;/p&gt;&lt;p&gt;ಬುರ್ಜ್ ಖಲೀಫಾ ಎತ್ತರ ಎಷ್ಟಿದೆ?&lt;/p&gt;&lt;p&gt;ಬುರ್ಜ್ ಖಲೀಫಾ 828 ಮೀಟರ್ ಎತ್ತರದಲ್ಲಿದ್ದು ಇದು ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಪ್ರಸಿದ್ಧವಾಗಿದೆ. ದುಬೈನ ಹೆಗ್ಗುರುತಾಗಿರುವ ಇದು, ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಸಮಯದಲ್ಲಿ ವಿಶೇಷ ದೀಪಾಲಂಕಾರಗಳಿಗೆ ಫೇಮಸ್. ಭಾರತದ 80 ನೇ ಸ್ವಾತಂತ್ರ್ಯ ದಿನದಂದು, ಭಾರತೀಯ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಅದರ ದೀಪಾಲಂಕಾರವು ಮತ್ತೊಮ್ಮೆ ಭಾರತ ಮತ್ತು ಯುಎಇ ನಡುವಿನ ಸ್ನೇಹ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಪ್ರದರ್ಶಿಸಿತು.&lt;/p&gt;&lt;p&gt;ಭಾರತಕ್ಕೆ ವಿಶ್ವ ನಾಯಕರ ಅಭಿನಂದನೆಗಳು&lt;/p&gt;&lt;p&gt;ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಅನೇಕ ದೇಶಗಳ ನಾಯಕರು ಮತ್ತು ಸರ್ಕಾರಗಳು ಶುಭಾಶಯಗಳನ್ನು ಕೋರಿದರು. ಫ್ರೆಂಚ್ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಭಾರತದ 80 ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರಕ್ಕೆ ಶುಭಾಶಯ ಕೋರಿದರು. ಹೀಗಾಗಿ, ಭಾರತದ ಸ್ವಾತಂತ್ರ್ಯ ದಿನವನ್ನು ದೇಶದೊಳಗೆ ಮತ್ತು ಪ್ರಪಂಚದಾದ್ಯಂತ ಆಚರಿಸಲಾಯಿತು.&lt;/p&gt;&lt;p&gt;As India celebrates its 80th Independence Day, the magnificent Burj Khalifa lights up in the vibrant hues of the Tiranga&mdash;a spectacular tribute to India&rsquo;s journey, pride and spirit. A celebration of the enduring India&ndash;UAE friendship and the bonds that bring our two nations&hellip; pic.twitter.com/IBxW0htDwX&lt;/p&gt;&lt;p&gt;&mdash; India in Dubai (@cgidubai) August 15, 2026&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/world-news/vande-mataram-row-tricolour-flies-over-burj-khalifa-as-uae-sends-special-wishes-to-india-video-rav/articleshow-3m85eym"/>
        </item>
        <item>
            <title><![CDATA[17 ಬಾರಿ ಲೇಟ್ ಲಾಗಿನ್, ಇದೇ ಮೊದಲ ಬಾರಿ ಮಾನವ ಉದ್ಯೋಗಿಯನ್ನೇ ಕೆಲಸದಿಂದ ತೆಗೆದ ಎಐ ಬಾಸ್]]></title>
            <link>https://kannada.asianetnews.com/whats-new-technology/ai-luna-boss-fires-human-employee-for-the-first-time-after-17-late-logins-first-in-world/articleshow-4dvk5fy</link>
            <guid isPermaLink="true">https://kannada.asianetnews.com/whats-new-technology/ai-luna-boss-fires-human-employee-for-the-first-time-after-17-late-logins-first-in-world/articleshow-4dvk5fy</guid>
            <pubDate>Sun, 16 Aug 2026 20:30:46 +0530</pubDate>
            <description><![CDATA[&lt;p&gt;ಇಷ್ಟು ದಿನ ಕಂಪನಿಗಳು ಎಐ ಕಾರಣದಿಂದ ಉದ್ಯೋಗಿಗಳನ್ನು ವಜಾ ಮಾಡುತ್ತಿತ್ತು. ಇದೀಗ ಕಂಪನಿಯ ಎಐ ಟೆಕ್ ಬಾಸ್ ಮಾನವ ಉದ್ಯೋಗಿಯನ್ನೇ ಕೆಲಸದಿಂದ ತೆಗೆದುಹಾಕಿದ ವಿಚಿತ್ರ ಘಟನೆ ನಡೆದಿದೆ. ಕಾರಣ 23 ದಿನದಲ್ಲಿ 17 ಬಾರಿ ಲೇಟ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km276yxk0v0gsykycbsrjhx4,imgname-ai-jobs--1--1773896170419.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸ್ಯಾನ್ ಫ್ರಾನ್ಸಿಸ್ಕೋ (ಆ.16&lt;/strong&gt;) ಹಲವು ಕಂಪನಿಗಳು ಎಐ ತಂತ್ರಜ್ಞಾವನ್ನು ಅಳವಡಿಸಿಕೊಳ್ಳುತ್ತಿದೆ. ಎಲ್ಲೆಡೆ ಎಐ ಟೆಕ್ ಆವರಿಸಿಕೊಳ್ಳುತ್ತಿರುವ ಕಾರಣ ಉದ್ಯೋಗ ಕಡಿತಗಳು ನಡೆಯುತ್ತಿದೆ. ಹಲವರ ಕೆಲಸಗಳನ್ನು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸುಲಭವಾಗಿ ಮಾಡುತ್ತಿದೆ. ಇದೀಗ ಅಚ್ಚರಿ ಘಟನೆಯೊಂದು ನಡೆದಿದೆ. ಹೀಗೆ ಇಡೀ ವ್ಯವಹಾರ ನೋಡಿಕೊಳ್ಳಲು ಎಐ ಬಾಸ್ ಇನ್&zwnj;ಸ್ಟಾಲ್ ಮಾಡಲಾಗಿತ್ತು. ಓರ್ವ ಮಾನವ ಉದ್ಯೋಗಿ 17 ಬಾರಿ ತಡವಾಗಿ ಕೆಲಸಕ್ಕೆ ಹಾಜರಾದ ಕಾರಣ ಕೆಲದಿಂದ ಕಿತ್ತು ಹಾಕಿದ ಘಟನೆ ಅಮೆರಿಕ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ.&lt;/p&gt;&lt;h2&gt;ಸೂಪರ್ ಮಾರ್ಕೆಟ್&zwnj;ನಲ್ಲಿ ಎಐ ಟೆಕ್, ಅಚ್ಚರಿ ಫಲಿತಾಂಶ&lt;/h2&gt;&lt;p&gt;ಸ್ಯಾನ್ ಫ್ರಾನ್ಸಿಸ್ಕೋದ ಆ್ಯಂಡನ್ ಲ್ಯಾಬ್ಸ್ ಸ್ಥಾಪಿಸಿದ ಆ್ಯಂಡನ್ ಸೂಪರ್ ಮಾರ್ಕೆಟ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಕಾರಣ ಇಲ್ಲಿ ಜನರು ತಮಗೆ ಬೇಕಾದ ವಸ್ತುಗಳನ್ನು ಕಾರ್ಟ್ ಮೂಲಕ ತಂದು ಬಿಲ್ಲಿಂಗ್ ಕೌಂಟರ್ ಬಾಕ್ಸ್&zwnj;ನಲ್ಲಿ ಇಟ್ಟರೆ ಸಾಕು. ಎಐ ತಂತ್ರಜ್ಞಾನ ಎಲ್ಲಾ ವಸ್ತುಗಳ ಸ್ಕ್ಯಾನ್ ಮಾಡಿ ಬಿಲ್ ನೀಡಲಿದೆ. ನೀವು ಪಾವತಿಸಿದ ಬೆನ್ನಲ್ಲೇ ಕೆಲವೇ ಕ್ಷಣದಲ್ಲಿ ವಸ್ತುಗಳು ಪ್ಯಾಕ್ ಆಗಿ ಕೈಸೇರಲಿದೆ. ಸೂಪರ್ ಮಾರ್ಕೆಟ್ ಆಡಳಿತ, ಉತ್ಪನ್ನಗಳು, ಸ್ಟಾಕ್ಸ್, ಬೆಲೆ, ಸಿಬ್ಬಂದಿಗಳ ನೇಮಕಾತಿ, ವೇತನ, ಕಂಪನಿ ಲಾಭ ಸೇರಿದಂತೆ ಎಲ್ಲಾ ಲೆಕ್ಕಾಚಾರವನ್ನು ಲೂನಾ ಅನ್ನೋ ಎಐ ಎಜೆಂಟ್ ಮ್ಯಾನೇಜರ್&zwnj;ಗೆ ನೀಡಲಾಗಿತ್ತು. ಈ ಸೂಪರ್ ಮಾರ್ಕೆಟ್&zwnj;ಗಾಗಿ ಲೂನಾ ಎಐ ಎಜೆಂಟ್ ಕೋಡಿಂಗ್ ಮೂಲಕ ಅಭಿವೃದ್ಧಿಪಡಿಸಲಾಗಿತ್ತು. ಆ್ಯಂಥ್ರೋಪಿಕ್&zwnj;ನ ಕ್ಲಾಡ್ ಎಐ ಮಾದರಿ ಮೂಲಕ ಲೂನಾ ಎಐ ಅಭಿವೃದ್ಧಿಪಡಿಸಲಾಗಿತ್ತು.&lt;/p&gt;&lt;h2&gt;ಎಐ ಮ್ಯಾನೇಜರ್&zwnj;ನಿಂದ ಕ್ರಮ&lt;/h2&gt;&lt;p&gt;ಆ್ಯಂಡನ್ ಸೂಪರ್ ಮಾರ್ಕೆಟ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಮಾನವ ಉದ್ಯೋಗಿ ತನ್ನ ಶಿಫ್ಟ್&zwnj;ಗೆ ಹಲವು ಬಾರಿ ಲೇಟ್ ಆಗಿ ಆಗಮಿಸಿದ್ದಾನೆ. ಇದನ್ನು ಎಐ ಮ್ಯಾನೇಜರ್ ಲೂನಾಾ ಗಮನಿಸಿ ಇಮೇಲ್ ಮೂಲಕ ಸಂದೇಶ ನೀಡಿದೆ. 23 ದಿನಗಳ ಶಿಫ್ಟ್&zwnj;ನಲ್ಲಿ 17 ದಿನ ಲೇಟ್ ಆಗಿ ಆಗಮಿಸಿದ್ದಾನೆ. ಒಂದು ತಿಂಗಳು ನೋಡಿದ ಎಐ ಮ್ಯಾನೇಜರ್ ನೇರವಾಗಿ ಉದ್ಯೋಗಿಯನ್ನು ವಜಾ ಮಾಡಿದೆ. ಹಾಜರಾತಿ ಕುರಿತು ಮಾನವ ಆಡಳಿತ ಮೇಲ್ವಿಚಾರಕರು ಗಮನಹರಿಸುವಂತೆ ಲೂನಾ ಎಐ ಮ್ಯಾನೇಜರ್&zwnj;ಗೆ ಪ್ರಾಂಪ್ಟ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಸುದೀರ್ಘ ವರದಿ ನೀಡಿ ಉದ್ಯೋಗಿಯನ್ನು ಎಐ ಲೂನಾ ಬಾಸ್ ವಜಾ ಮಾಡಿದೆ.&lt;/p&gt;&lt;p&gt;ಉದ್ಯೋಗಿಯ ಪಂಚಿಂಗ್ ಸೇರಿದಂತೆ ಎಲ್ಲಾ ಇತರ ಸೌಲಭ್ಯಗಳನ್ನು ಲೂನಾ ಎಐ ಮ್ಯಾನೇಜರ್ ನಿರ್ಬಂಧಿಸಿದೆ. ಇದೇ ಮೊದಲ ಬಾರಿಗೆ ಎಐ ಒಂದು ಮಾನವನ್ನೇ ಉದ್ಯೋಗಿಂದ ವಜಾ ಮಾಡಿದೆ. ಹೀಗೇ ಹೋದರೆ ಕಂಪನಿ ಸಂಸ್ಥಾಪಕನನ್ನೇ ಹೊರಗೆ ಹಾಕಬಹುದು ಎಂದು ಹಲವರು ಟ್ರೋಲ್ ಮಾಡಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/whats-new-technology/ai-luna-boss-fires-human-employee-for-the-first-time-after-17-late-logins-first-in-world/articleshow-4dvk5fy"/>
        </item>
        <item>
            <title><![CDATA[ಮದುವೆಯಾಗಿ 35 ವರ್ಷವಾದ್ರೂ ಕಿಂಚಿತ್ತೂ ಪ್ರೀತಿ ಕಮ್ಮಿಯಾಗಿಲ್ಲ, ಪತ್ನಿ ಆಸೆ ಈಡೇರಿಸಲು ಮನೆ ಮಾರಿದ ಪತಿ]]></title>
            <link>https://kannada.asianetnews.com/relationship/the-husband-sold-the-house-for-the-hollyhock-plantation-his-wife-childhood-dream/articleshow-5bd23ze</link>
            <guid isPermaLink="true">https://kannada.asianetnews.com/relationship/the-husband-sold-the-house-for-the-hollyhock-plantation-his-wife-childhood-dream/articleshow-5bd23ze</guid>
            <pubDate>Mon, 17 Aug 2026 12:10:06 +0530</pubDate>
            <description><![CDATA[&lt;p&gt;ಇತ್ತೀಚಿಗೆ, ಮದುವೆಯಾದ ದಂಪತಿ ವರ್ಷ ಒಟ್ಟಿಗಿರೋದೇ ಕಷ್ಟ. ಆದ್ರೆ ಈ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮದುವೆಯಾಗಿ 35 ವರ್ಷವಾದ್ರೂ ಇಬ್ಬರ ಮಧ್ಯೆ ಪ್ರೀತಿ ಕಡಿಮೆಯಾಗಿಲ್ಲ. ಪತ್ನಿ ಆಸೆ ಈಡೇರಿಸಲು ಪತಿ ತನ್ನ ಮನೆಯನ್ನೇ ಮಾರಿದ್ದಾನೆ. ಅಷ್ಟಕ್ಕೂ ಪತ್ನಿಗಿದ್ದ ಆಸೆ ಏನು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07734kjebq7024rxqvwshpx,imgname-hollyhock-1786948719218.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರೀತಿ ನಿಜವಾಗಿದ್ದರೆ ಅಸಾಧ್ಯವೆನಿಸುವ ಕೆಲಸವನ್ನೂ ಸಾಧ್ಯವಾಗಿಸಬಹುದು ಎನ್ನುವುದಕ್ಕೆ ಚೀನಾದ ಈ ದಂಪತಿ ಉತ್ತಮ ಉದಾಹರಣೆ. ಚೀನಾದ ಸಿಚುವಾನ್ ಪ್ರಾಂತ್ಯದ ಝೋವ್ ಶಾವೋಲಿನ್ ಎಂಬ ವ್ಯಕ್ತಿ ತಮ್ಮ ಪತ್ನಿ ಯಿನ್ ಜೀ ಅವರ ಬಾಲ್ಯದ ಆಸೆಯನ್ನು ನನಸಾಗಿಸಲು ಬರೋಬ್ಬರಿ 80 ಹೆಕ್ಟೇರ್ ಬಂಜರು ಭೂಮಿಯನ್ನು ಸುಂದರ ಹೂವಿನ ತೋಟವನ್ನಾಗಿ ಪರಿವರ್ತಿಸಿದ್ದಾರೆ.&lt;/p&gt;&lt;h2&gt;ಪತ್ನಿ ಕನಸು ಈಡೇರಿಸಿದ ಪತಿ&lt;/h2&gt;&lt;p&gt;2013ರಲ್ಲಿ ಯಿನ್ ಜೀ ಅವರು ತಮ್ಮ ಬಾಲ್ಯದ ನೆಚ್ಚಿನ ಹಾಲಿಹಾಕ್ ಹೂಗಳ ಬಗ್ಗೆ ಪತಿಯ ಬಳಿ ಸಾಮಾನ್ಯವಾಗಿ ಮಾತನಾಡಿದ್ದರು. ಆದರೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಝೋವ್, ಒಂದು ದಿನ ಪತ್ನಿಗಾಗಿ ಸಂಪೂರ್ಣ ಹೂವಿನ ತೋಟ ನಿರ್ಮಿಸುವುದಾಗಿ ಭರವಸೆ ನೀಡಿದರು. ತೋಟಗಾರಿಕೆಯ ಯಾವುದೇ ಅನುಭವವಿಲ್ಲದಿದ್ದರೂ ಝೋವ್ ತಮ್ಮ ಮನೆಯನ್ನೇ ಮಾರಾಟ ಮಾಡಿ ಟ್ರುವಾನ್ಲಾಂಗ್ ಪಟ್ಟಣದಲ್ಲಿ ಭೂಮಿ ಖರೀದಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಕಷ್ಟಪಟ್ಟು ದುಡಿದು, ದೇಶ-ವಿದೇಶಗಳಿಂದ ವಿವಿಧ ಹೂಗಳ ಬೀಜಗಳನ್ನು ಸಂಗ್ರಹಿಸಿ, ಬಂಜರು ಕಣಿವೆಯನ್ನು ಅದ್ಭುತ ಹೂವಿನ ಲೋಕವನ್ನಾಗಿ ಮಾಡಿದರು.&lt;/p&gt;&lt;p&gt;ಇಂದು ಈ ತೋಟ ವಿಶ್ವದ ಅತಿ ದೊಡ್ಡ ಹಾಲಿಹಾಕ್ ತೋಟಗಳಲ್ಲಿ ಒಂದಾಗಿದೆ. ಇಲ್ಲಿ 700ಕ್ಕೂ ಹೆಚ್ಚು ಬಗೆಯ ಹಾಲಿಹಾಕ್ ಹೂಗಳು, ಸುಮಾರು 1.5 ಲಕ್ಷ ಲಿಲ್ಲಿ ಗಿಡಗಳು ಮತ್ತು ಒಂದು ಲಕ್ಷ ಹಿಬಿಸ್ಕಸ್ ಗಿಡಗಳಿವೆ. ಒಮ್ಮೆ ಬಂಜರಾಗಿದ್ದ ಈ ಪ್ರದೇಶ ಇಂದು ಬಣ್ಣಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ.&lt;/p&gt;&lt;h3&gt;ಗುಹೆಯಲ್ಲಿ ಕಳೆದಿದ್ದ ಜೋಡಿ&lt;/h3&gt;&lt;p&gt;ಈ ದಂಪತಿಯ ಪ್ರೀತಿಯ ಕಥೆ ಇನ್ನೂ ವಿಶೇಷವಾಗಿದೆ. 1985ರಲ್ಲಿ ಝೋವ್ ಟ್ರೇನಿ ಟೂರ್ ಗೈಡ್ ಆಗಿದ್ದಾಗ ಇಬ್ಬರೂ ಮೊದಲ ಬಾರಿ ಭೇಟಿಯಾದರು. ಐದು ವರ್ಷಗಳ ಕಾಲ ಪತ್ರಗಳ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಂಡ ನಂತರ ವಿವಾಹವಾದರು. ಒಮ್ಮೆ ಟಿಬೆಟ್ ಪ್ರವಾಸದ ವೇಳೆ ಭಾರೀ ಹಿಮಪಾತದಲ್ಲಿ ಸಿಲುಕಿದ್ದಾಗ, ಝೋವ್ ತಮ್ಮ ಪತ್ನಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಸುರಕ್ಷಿತವಾದ ಗುಹೆಯೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರು ಮೂರು ದಿನಗಳನ್ನು ಕಳೆದಿದ್ದರು.&lt;/p&gt;&lt;p&gt;ಮದುವೆಯಾಗಿ 35 ವರ್ಷಗಳಾದರೂ ಅವರ ಪ್ರೀತಿ ಇಂದಿಗೂ ಅದೇ ರೀತಿಯಲ್ಲಿದೆ. ಮಕ್ಕಳಿಲ್ಲದ ಈ ದಂಪತಿ ತಮ್ಮ ತೋಟದಲ್ಲಿ ಸಾಕು ನಾಯಿಗಳು ಮತ್ತು ಬೆಕ್ಕುಗಳೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಂದು ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂದು ಅವರು ಪರಸ್ಪರ ಕೈಬರಹದ ಪತ್ರಗಳನ್ನು ನೀಡುತ್ತಾರೆ.&lt;/p&gt;&lt;p&gt;ಚೀನಾದ CCTVಯಲ್ಲಿ ಇವರ ಕಥೆ ಪ್ರಸಾರವಾದ ನಂತರ ಈ ದಂಪತಿ ದೇಶಾದ್ಯಂತ &lsquo;ಡ್ರೀಮ್ ಕಪಲ್&rsquo; ಎಂದು ಪ್ರಸಿದ್ಧರಾದರು. ಪತ್ನಿಯ ಬಾಲ್ಯದ ಒಂದು ಸಣ್ಣ ಆಸೆಯನ್ನು ಜೀವನದ ದೊಡ್ಡ ಕನಸಾಗಿ ಪರಿವರ್ತಿಸಿದ ಝೋವ್ ಅವರ ಪ್ರೀತಿ ನಿಜಕ್ಕೂ ಅಪರೂಪದ್ದು.&lt;/p&gt;]]></content:encoded>
            <category>world-news</category>
            <dc:creator>Roopa Hegde</dc:creator>
            <atom:link href="https://kannada.asianetnews.com/relationship/the-husband-sold-the-house-for-the-hollyhock-plantation-his-wife-childhood-dream/articleshow-5bd23ze"/>
        </item>
        <item>
            <title><![CDATA[30 ವರ್ಷಗಳ ಗೆಳೆತನ, DNA ಟೆಸ್ಟ್ ಬಳಿಕ ಅಚ್ಚರಿಯ ಸತ್ಯ - ಇವರು ಕೇವಲ ಸ್ನೇಹಿತೆಯರಲ್ಲ, ಸ್ವಂತ ಅಕ್ಕ-ತಂಗಿ!]]></title>
            <link>https://kannada.asianetnews.com/viral/childhood-friends-adopted-from-india-learn-they-are-biological-sisters-via-dna-test-gkn/articleshow-8qnax5z</link>
            <guid isPermaLink="true">https://kannada.asianetnews.com/viral/childhood-friends-adopted-from-india-learn-they-are-biological-sisters-via-dna-test-gkn/articleshow-8qnax5z</guid>
            <pubDate>Fri, 14 Aug 2026 20:16:29 +0530</pubDate>
            <description><![CDATA[&lt;p&gt;ಭಾರತದ ಅನಾಥಾಶ್ರಮಗಳಿಂದ ದತ್ತು ಹೋಗಿ ನೆದರ್ಲ್ಯಾಂಡ್ಸ್&zwnj;ನಲ್ಲಿ ಬೆಳೆದ ಇಬ್ಬರು ಬಾಲ್ಯದ ಸ್ನೇಹಿತೆಯರು, 30 ವರ್ಷಗಳ ನಂತರ DNA ಪರೀಕ್ಷೆಯ ಮೂಲಕ ತಾವು ಸ್ವಂತ ಅಕ್ಕ-ತಂಗಿಯರು ಎಂಬ ಸತ್ಯವನ್ನು ಪತ್ತೆಹಚ್ಚಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m00bsmp48tkbzddmsm4yrewa,imgname-2-childhood-friends-discover-they-are-sisters-1786718769860.jpg" type="image/jpeg" height="390" width="690"/>
            <content:encoded><![CDATA[&lt;p&gt;ಬದುಕು ಒಮ್ಮೊಮ್ಮೆ ಸಿನಿಮಾಗಿಂತಲೂ ಅಚ್ಚರಿ ನೀಡುತ್ತದೆ ಎಂಬುದಕ್ಕೆ ನೆದರ್ಲ್ಯಾಂಡ್ಸ್&zwnj;ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕಳೆದ 30 ವರ್ಷಗಳಿಂದ ಪ್ರಾಣ ಸ್ನೇಹಿತೆಯರಾಗಿದ್ದ ಇಬ್ಬರು ಮಹಿಳೆಯರು ತಾವು ಕೇವಲ ಗೆಳತಿಯರಲ್ಲ, ಬದಲಿಗೆ ರಕ್ತಸಂಬಂಧಿ ಅಕ್ಕ-ತಂಗಿಯರು ಎಂಬ ಸತ್ಯವನ್ನು ಡಿಎನ್&zwnj;ಎ (DNA) ಪರೀಕ್ಷೆಯ ಮೂಲಕ ತಿಳಿದುಕೊಂಡಿದ್ದಾರೆ. ಈ ಅಪರೂಪದ ಕಥೆ ಈಗ ಸೋಶಿಯಲ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..&lt;/p&gt;&lt;h2&gt;&lt;strong&gt;ಭಾರತದ ಅನಾಥಾಶ್ರಮದಿಂದ ದತ್ತು ಹೋಗಿದ್ದ ಮಕ್ಕಳು&lt;/strong&gt;&lt;/h2&gt;&lt;p&gt;ಈ ಕಥೆಯ ನಾಯಕಿಯರಾದ ಮೀನಾ ಜೆಲ್ಟಿಂಕ್ (43) ಮತ್ತು ಮಿನಲ್ ಟಿಜ್ಸೆನ್ (44) ಮೂಲತಃ ಭಾರತದವರು. ಇವರಿಬ್ಬರು ಶಿಶುಗಳಾಗಿದ್ದಾಗ ಭಾರತದ ಬೇರೆ ಬೇರೆ ಅನಾಥಾಶ್ರಮಗಳಿಂದ ನೆದರ್ಲ್ಯಾಂಡ್ಸ್&zwnj;ನ ಎರಡು ಬೇರೆ ಬೇರೆ ಡಚ್ ಕುಟುಂಬಗಳಿಗೆ ದತ್ತು ಹೋಗಿದ್ದರು. ಇಬ್ಬರೂ ನೆದರ್ಲ್ಯಾಂಡ್ಸ್&zwnj;ನ ಹತ್ತಿರದ ಪ್ರದೇಶಗಳಲ್ಲೇ ಬೆಳೆದರೂ, ಒಬ್ಬರಿಗೊಬ್ಬರು ಸಂಬಂಧಿಕರು ಎಂಬ ವಿಷಯ ಅವರಿಗೆ ತಿಳಿದಿರಲಿಲ್ಲ.&lt;/p&gt;&lt;p&gt;ದತ್ತು ಪಡೆದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಸಮಾವೇಶವೊಂದರಲ್ಲಿ 1996ರಲ್ಲಿ ಇವರಿಬ್ಬರು ಮೊದಲ ಬಾರಿಗೆ ಭೇಟಿಯಾದರು. ನೋಡಲು ಅಚ್ಚರಿ ಎನ್ನುವಂತೆ ಒಂದೇ ತರಹ ಇದ್ದ ಇವರ ಮುಖಲಕ್ಷಣಗಳನ್ನು ಕಂಡು ಗೆಳೆಯರೆಲ್ಲರೂ ನೀವಿಬ್ಬರು ಅಕ್ಕ-ತಂಗಿಯರಂತೆ ಕಾಣುತ್ತೀರಿ ಎಂದು ತಮಾಷೆ ಮಾಡುತ್ತಿದ್ದರು. ಇದನ್ನು ಕೇಳಿ ಮೀನಾ ಮತ್ತು ಮಿನಲ್ ಕೂಡ ನಕ್ಕು ಸುಮ್ಮನಾಗುತ್ತಿದ್ದರು. ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆಯಿತು ಮತ್ತು ಒಬ್ಬರಿಗೊಬ್ಬರು ತಮಾಷೆಯಾಗಿ ಸಿಸ್ (Siss) ಎಂದು ಕರೆದುಕೊಳ್ಳುತ್ತಿದ್ದರು. ಆ ತಮಾಷೆ ಒಂದು ದಿನ ನಿಜವಾಗುತ್ತದೆ ಎಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ.&lt;/p&gt;&lt;h2&gt;&lt;strong&gt;DNA ಪರೀಕ್ಷೆ ಮತ್ತು ಬಯಲಾದ ರಹಸ್ಯ&lt;/strong&gt;&lt;/h2&gt;&lt;p&gt;ಸುಮಾರು 30 ವರ್ಷಗಳ ಸ್ನೇಹದ ನಂತರ 2026ರ ಏಪ್ರಿಲ್&zwnj;ನಲ್ಲಿ (ವರದಿಗಳ ಪ್ರಕಾರ) ಮಿನಲ್ ಟಿಜ್ಸೆನ್ ಅವರು ಕುತೂಹಲಕ್ಕಾಗಿ 'ಮೈ ಹೆರಿಟೇಜ್' (MyHeritage) ಎಂಬ ಡಿಎನ್&zwnj;ಎ ಪರೀಕ್ಷೆ ಮಾಡಿಸಿಕೊಂಡರು. ಪರೀಕ್ಷೆಯ ಫಲಿತಾಂಶ ಬಂದಾಗ ಅವರ ಮೊಬೈಲ್&zwnj;ಗೆ ಮೀನಾ - ನಿಮ್ಮ ಸಹೋದರಿ ಎಂಬ ನೋಟಿಫಿಕೇಶನ್ ಬಂದಿತು! ಮೊದಲು ಇದನ್ನು ನಂಬಲು ಮಿನಲ್ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಹಳೆಯ ಫೋಟೋಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ತಾವು ಚಿಕ್ಕಂದಿನಿಂದಲೂ ಜೊತೆಗಿದ್ದ ಗೆಳತಿ ಮೀನಾ ಬೇರೆ ಯಾರೂ ಅಲ್ಲ ತನ್ನ ಸ್ವಂತ ತಂಗಿ ಎಂಬುದು ಖಚಿತವಾಯಿತು.&lt;/p&gt;&lt;p&gt;ಈ ಸತ್ಯ ತಿಳಿದ ಮೇಲೆ 2026ರ ಆಗಸ್ಟ್ 11ರಂದು ಇಬ್ಬರೂ ಭೇಟಿಯಾದರು. ಈ ಬಾರಿ ಅವರು ಭೇಟಿಯಾದಾಗ ಗೆಳತಿಯರಾಗಿ ಅಲ್ಲ, ಅಕ್ಕ-ತಂಗಿಯರಾಗಿ ಪರಸ್ಪರ ಅಪ್ಪಿಕೊಂಡರು. ಈ ಬಗ್ಗೆ ಮಾತನಾಡಿದ ಮೀನಾ, ಇಷ್ಟು ವರ್ಷಗಳಿಂದ ನನ್ನ ಹೃದಯದಲ್ಲಿ ಏನೋ ಒಂದು ಖಾಲಿತನ ಕಾಡುತ್ತಿತ್ತು. ಈಗ ಜೀವನದ ಕಳೆದುಹೋಗಿದ್ದ ಪಜಲ್ ಪೂರ್ಣಗೊಂಡಂತಿದೆ ಎಂದು ಕಣ್ಣೀರಿಟ್ಟರು. ಮಿನಲ್ ಪ್ರತಿಕ್ರಿಯಿಸಿ, ನಾವು ಅಕ್ಕ-ತಂಗಿಯರು ಎಂದು ತಿಳಿಯುವ ಮೊದಲೇ ಸ್ನೇಹಿತೆಯಾಗಿದ್ದೆವು. ವಿಧಿ ನಮ್ಮನ್ನು ಮೊದಲೇ ಒಂದು ಮಾಡಿತ್ತು ಎಂದು ಸಂತಸ ಹಂಚಿಕೊಂಡರು.&lt;/p&gt;&lt;p&gt;ಪ್ರಸ್ತುತ ಮಿನಲ್ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಫ್ರಾನ್ಸ್&zwnj;ನಲ್ಲಿ ವಾಸಿಸುತ್ತಿದ್ದರೆ, ಮೀನಾ ನೆದರ್ಲ್ಯಾಂಡ್ಸ್&zwnj;ನಲ್ಲಿ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. 30 ವರ್ಷಗಳ ಕಾಲ ದೂರವಿದ್ದ ಆ ಕೊರಗನ್ನು ನೀಗಿಸಲು ಇಬ್ಬರೂ ಈಗ ಪ್ರತಿದಿನ ಗಂಟೆಗಟ್ಟಲೆ ಫೋನ್&zwnj;ನಲ್ಲಿ ಮಾತನಾಡುತ್ತಾರೆ, ಮೆಸೇಜ್ ಮಾಡುತ್ತಾ ತಮ್ಮ ಹೊಸ ಬದುಕನ್ನು ಸಂಭ್ರಮಿಸುತ್ತಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/childhood-friends-adopted-from-india-learn-they-are-biological-sisters-via-dna-test-gkn/articleshow-8qnax5z"/>
        </item>
        <item>
            <title><![CDATA[ಬಿಟ್‌ಕಾಯಿನ್ ದಿನಗಳು ಮುಗಿದೋಯ್ತಾ? ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಡುತ್ತಿದೆ ಈ ಹೊಸ ವಲಯ!]]></title>
            <link>https://kannada.asianetnews.com/business/is-bitcoin-losing-its-edge-how-the-ai-stock-boom-rivals-crypto-gdp/articleshow-buku8fg</link>
            <guid isPermaLink="true">https://kannada.asianetnews.com/business/is-bitcoin-losing-its-edge-how-the-ai-stock-boom-rivals-crypto-gdp/articleshow-buku8fg</guid>
            <pubDate>Sun, 16 Aug 2026 21:39:29 +0530</pubDate>
            <description><![CDATA[ಕಳೆದ ಐದು ವರ್ಷಗಳಲ್ಲಿ ಬಿಟ್&zwnj;ಕಾಯಿನ್ ಹೂಡಿಕೆಯು ಎಐ ಷೇರುಗಳಿಗೆ ಹೋಲಿಸಿದರೆ ಕಡಿಮೆ ಆದಾಯ ನೀಡಿದೆ. ಸೀಮಿತ ಪೂರೈಕೆ ಮತ್ತು ಸಾಂಸ್ಥಿಕ ಹೂಡಿಕೆಯಂತಹ ಸಕಾರಾತ್ಮಕ ಅಂಶಗಳಿದ್ದರೂ, ಎಐ ವಲಯದ ತೀವ್ರ ಬೆಳವಣಿಗೆಯು ಬಿಟ್&zwnj;ಕಾಯಿನ್&zwnj;ನ ಭವಿಷ್ಯದ ಲಾಭದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krq9mfq88q9ypgwp6k7h7sdw,imgname-----------------------2026-05-16t075441.455-1778898321128.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನ್ಯೂಯಾರ್ಕ್: &lt;/strong&gt;ಕಳೆದ ಐದು ವರ್ಷಗಳಲ್ಲಿ ಬಿಟ್&zwnj;ಕಾಯಿನ್ ಹೂಡಿಕೆದಾರರಿಗೆ ನಿರೀಕ್ಷಿತ ಮಟ್ಟದ ಆದಾಯ ನೀಡುವಲ್ಲಿ ವಿಫಲವಾಗಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವಲಯದ ಷೇರುಗಳು ನೀಡುತ್ತಿರುವ ಭಾರಿ ಲಾಭಕ್ಕೆ ಹೋಲಿಸಿದರೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮಂದಗತಿಯಲ್ಲಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಟ್&zwnj;ಕಾಯಿನ್ ಶೇ. 40 ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದ್ದರೆ, ಅದೇ ಅವಧಿಯಲ್ಲಿ S&amp;amp;P 500 ಸೂಚ್ಯಂಕವು ಶೇ. 74 ರಷ್ಟು ಜಿಗಿತ ಕಂಡಿದೆ. ಇದು ವಿಶಾಲವಾದ ಯುಎಸ್ ಷೇರು ಮಾರುಕಟ್ಟೆಯ ಜತೆ ಪೈಪೋಟಿ ನಡೆಸಲು ಬಿಟ್&zwnj;ಕಾಯಿನ್ ಹೆಣಗಾಡುತ್ತಿರುವುದನ್ನು ತೋರಿಸುತ್ತದೆ ಎಂದು 'ದಿ ಮೋಟ್ಲಿ ಫೂಲ್' ವರದಿ ಮಾಅಡಿದೆ. ಮುಂದಿನ ಐದು ವರ್ಷಗಳಲ್ಲಿ ಬಿಟ್&zwnj;ಕಾಯಿನ್ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದರೂ, ಹೂಡಿಕೆದಾರರು ಹೆಚ್ಚಿನ ಅನಿಶ್ಚಿತತೆ ಹಾಗೂ ದುರ್ಬಲ ಆದಾಯವನ್ನು ಎದುರಿಸಬೇಕಾಗಬಹುದು ಎಂದು ವಿಶ್ಲೇಷಿಸಲಾಗಿದೆ.&lt;/p&gt;&lt;h2&gt;ಆರ್ಥಿಕ ಹಿಂಜರಿತ ಮತ್ತು 'ಸುರಕ್ಷಿತ ಹೂಡಿಕೆ' ಕಲ್ಪನೆ&lt;/h2&gt;&lt;p&gt;ಮುಂದಿನ ದಿನಗಳಲ್ಲಿ ಯುಎಸ್ ಆರ್ಥಿಕತೆಯಲ್ಲಿ ಹಿಂಜರಿತ ಅಥವಾ ಆರ್ಥಿಕ ಅನಿಶ್ಚಿತತೆ ಎದುರಾದರೆ, ಅದು ಬಿಟ್&zwnj;ಕಾಯಿನ್&zwnj;ಗೆ ಪೂರಕವಾಗಬಹುದು. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಹೂಡಿಕೆದಾರರು ತಮ್ಮ ಬಂಡವಾಳ ರಕ್ಷಣೆಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಾರೆ.&lt;/p&gt;&lt;p&gt;ಇದಕ್ಕೆ ಸೂಕ್ತ ಉದಾಹರಣೆ ಎಂದರೆ 2023ರ ಪ್ರಾದೇಶಿಕ ಬ್ಯಾಂಕಿಂಗ್ ಬಿಕ್ಕಟ್ಟು. ನಾಲ್ಕು ಪ್ರಮುಖ ಬ್ಯಾಂಕುಗಳು ವಿಫಲವಾದಾಗ, ಸ್ಥಿರತೆ ಕಳೆದುಕೊಂಡಿದ್ದ ಬಿಟ್&zwnj;ಕಾಯಿನ್ ಮೌಲ್ಯವು ಹಠಾತ್ತನೆ ಏರಿಕೆ ಕಂಡಿತ್ತು. ಚಾರ್ಲ್ಸ್ ಶ್ವಾಬ್ ಸಂಸ್ಥೆಯ ಸಂಶೋಧನೆಯ ಪ್ರಕಾರ, ಸಾಂಪ್ರದಾಯಿಕ ಹಣಕಾಸು ವ್ಯವಸ್ಥೆಯಲ್ಲಿ ಕಳವಳ ಹೆಚ್ಚಾದಾಗ ಹೂಡಿಕೆದಾರರು ಬಿಟ್&zwnj;ಕಾಯಿನ್ ಅನ್ನು ಪರ್ಯಾಯ 'ಸುರಕ್ಷಿತ ಹೂಡಿಕೆ' (Safe Haven) ಎಂದು ಪರಿಗಣಿಸಿದ್ದರು. ಆದರೆ, ಪ್ರತಿಯೊಂದು ಆರ್ಥಿಕ ಹಿಂಜರಿತದಲ್ಲೂ ಬಿಟ್&zwnj;ಕಾಯಿನ್ ಇದೇ ರೀತಿ ವರ್ತಿಸುತ್ತದೆ ಎಂದು ಖಾತರಿಯಾಗಿ ಹೇಳಲು ಸಾಧ್ಯವಿಲ್ಲ.&lt;/p&gt;&lt;h2&gt;ಸೀಮಿತ ಪೂರೈಕೆ ಮತ್ತು ಸಾಂಸ್ಥಿಕ ಹೂಡಿಕೆಗಳ ಬಲ&lt;/h2&gt;&lt;p&gt;ಬಿಟ್&zwnj;ಕಾಯಿನ್ ಬೆಲೆ ಏರಿಕೆಗೆ ಬೆಂಬಲವಾಗಿರುವ ಮತ್ತೊಂದು ಅಂಶವೆಂದರೆ ಅದರ ಸೀಮಿತ ಪೂರೈಕೆ. ಜಗತ್ತಿನಲ್ಲಿ ಒಟ್ಟು 21 ಮಿಲಿಯನ್ ಬಿಟ್&zwnj;ಕಾಯಿನ್&zwnj;ಗಳಿಗೆ ಮಾತ್ರ ಅವಕಾಶವಿದ್ದು, ಈಗಾಗಲೇ ಸುಮಾರು 20 ಮಿಲಿಯನ್ ಬಿಟ್&zwnj;ಕಾಯಿನ್&zwnj;ಗಳು ಅಸ್ತಿತ್ವದಲ್ಲಿವೆ. ಸೀಮಿತ ಸರಬರಾಜು ಇರುವುದರಿಂದ ಅನೇಕರು ಇದನ್ನು 'ಡಿಜಿಟಲ್ ಚಿನ್ನ'ಕ್ಕೆ ಹೋಲಿಸುತ್ತಾರೆ.&lt;/p&gt;&lt;p&gt;ಜೊತೆಗೆ, ಸಾಂಸ್ಥಿಕ ಅಳವಡಿಕೆಯೂ (Institutional Adoption) ಹೆಚ್ಚುತ್ತಿದೆ. ಬ್ಯಾಂಕುಗಳು ಮತ್ತು ಬೃಹತ್ ಹಣಕಾಸು ಸಂಸ್ಥೆಗಳು ಕ್ರಿಪ್ಟೋ ಆಧಾರಿತ ಉತ್ಪನ್ನಗಳನ್ನು ಪರಿಚಯಿಸುತ್ತಿವೆ. ಮಾರ್ಗನ್ ಸ್ಟಾನ್ಲಿಯ ಡಿಜಿಟಲ್ ಆಸ್ತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಆಮಿ ಓಲ್ಡೆನ್&zwnj;ಬರ್ಗ್ ಪ್ರಕಾರ, ಬಿಟ್&zwnj;ಕಾಯಿನ್ ಸಾಂಸ್ಥಿಕ ಅಳವಡಿಕೆಯು ಇನ್ನೂ ಆರಂಭಿಕ ಹಂತದಲ್ಲಿದೆ. ಮಾರ್ಗನ್ ಸ್ಟಾನ್ಲಿ ಇತ್ತೀಚೆಗೆ ಪ್ರಾರಂಭಿಸಿದ ಬಿಟ್&zwnj;ಕಾಯಿನ್ ಇಟಿಎಫ್ ಕೇವಲ ನಾಲ್ಕು ತಿಂಗಳಲ್ಲಿ 400 ಮಿಲಿಯನ್ ಡಾಲರ್&zwnj;ಗೂ ಹೆಚ್ಚಿನ ಆಸ್ತಿಯನ್ನು ಆಕರ್ಷಿಸಿದೆ. ಇದು ಹೂಡಿಕೆದಾರರು ನೇರವಾಗಿ ಕ್ರಿಪ್ಟೋ ಖರೀದಿಸುವ ಬದಲು ಇಟಿಎಫ್&zwnj;ಗಳ ಮೂಲಕ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿರುವುದಕ್ಕೆ ನಿದರ್ಶನವಾಗಿದೆ.&lt;/p&gt;&lt;h2&gt;ಬಿಟ್&zwnj;ಕಾಯಿನ್&zwnj;ಗೆ ಅತಿದೊಡ್ಡ ಸವಾಲಾದ AI ಷೇರುಗಳು&lt;/h2&gt;&lt;p&gt;ಕೃತಕ ಬುದ್ಧಿಮತ್ತೆ (AI) ವಲಯದ ತೀವ್ರ ಬೆಳವಣಿಗೆಯು ಬಿಟ್&zwnj;ಕಾಯಿನ್&zwnj;ನ ಆಕರ್ಷಣೆಯನ್ನು ತಗ್ಗಿಸುತ್ತಿದೆ. ಹಿಂದೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಗಳಿಸಲು ಹೂಡಿಕೆದಾರರಿಗೆ ಕ್ರಿಪ್ಟೋ ಬಿಟ್ಟರೆ ಹೆಚ್ಚಿನ ಆಯ್ಕೆಗಳಿರಲಿಲ್ಲ. ಆದರೆ ಈಗ AI ಷೇರುಗಳು ಹೂಡಿಕೆದಾರರಿಗೆ ವೇಗವಾದ ಮತ್ತು ಭಾರಿ ಲಾಭದ ಮಾರ್ಗವನ್ನು ಸೃಷ್ಟಿಸಿವೆ.&lt;/p&gt;&lt;p&gt;ಉದಾಹರಣೆಗೆ, AI ಮೆಮೊರಿ-ಚಿಪ್ ತಯಾರಕ ಸಂಸ್ಥೆಯಾದ 'ಮೈಕ್ರಾನ್ ಟೆಕ್ನಾಲಜಿ' ಕಳೆದ ಮೂರು ವರ್ಷಗಳಲ್ಲಿ ಶೇ. 1,200 ಕ್ಕೂ ಹೆಚ್ಚು ಲಾಭ ನೀಡಿದೆ.&lt;/p&gt;&lt;h2&gt;AI ಕಂಪನಿಗಳು ಮತ್ತು ಬಿಟ್&zwnj;ಕಾಯಿನ್ ನಡುವಿನ ವ್ಯತ್ಯಾಸ:&lt;/h2&gt;&lt;p&gt;ಆದಾಯ ಮತ್ತು ಲಾಭ: AI ಕಂಪನಿಗಳು ನಿಜವಾದ ಉತ್ಪನ್ನ ಹಾಗೂ ಸೇವೆಗಳನ್ನು ಮಾರಾಟ ಮಾಡುವ ಮೂಲಕ ನೈಜ ಆದಾಯ ಮತ್ತು ಲಾಭ ಗಳಿಸುತ್ತವೆ.&lt;/p&gt;&lt;p&gt;ಮೌಲ್ಯ ಆಧಾರ: AI ಷೇರುಗಳ ಮೌಲ್ಯವು ಕಂಪನಿಯ ನೈಜ ಬಿಸಿನೆಸ್ ಬೆಳವಣಿಗೆಯನ್ನು ಆಧರಿಸಿದ್ದರೆ, ಬಿಟ್&zwnj;ಕಾಯಿನ್ ಮೌಲ್ಯವು ಸಂಪೂರ್ಣವಾಗಿ ಹೂಡಿಕೆದಾರರ ಬೇಡಿಕೆ ಮತ್ತು ಊಹಾಪೋಹಗಳನ್ನು (Speculation) ಆಧರಿಸಿದೆ.&lt;/p&gt;&lt;h2&gt;ಭವಿಷ್ಯದ ಹೂಡಿಕೆ ಮತ್ತು ದೀರ್ಘಕಾಲೀನ ಸಾಮರ್ಥ್ಯ&lt;/h2&gt;&lt;p&gt;ಮುಂದಿನ ದಿನಗಳಲ್ಲಿ ಬಿಟ್&zwnj;ಕಾಯಿನ್ ತನ್ನ ದೀರ್ಘಕಾಲೀನ ಚೇತರಿಕೆಯ ಗುಣದಿಂದಾಗಿ $1 ಮಿಲಿಯನ್ ಡಾಲರ್ ತಲುಪಬಹುದು ಎಂದು ಕೆಲವು ತಜ್ಞರು ಅಂದಾಜಿಸಿದ್ದಾರೆ. ಬಿಟ್&zwnj;ಕಾಯಿನ್ ತನ್ನ ಇತಿಹಾಸದಲ್ಲಿ ಹಲವು ಭಾರಿ ಬೆಲೆ ಕುಸಿತ ಕಂಡಿದ್ದರೂ, ಪ್ರತಿ ಬಾರಿಯೂ ಬಲವಾಗಿ ಚೇತರಿಸಿಕೊಂಡು ಹೊಸ ದಾಖಲೆ ಬರೆದಿದೆ.&lt;/p&gt;&lt;p&gt;ಆದಾಗ್ಯೂ, AI ಷೇರುಗಳು ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿರುವುದರಿಂದ, ಮುಂದಿನ ಐದು ವರ್ಷಗಳಲ್ಲಿ ಬಿಟ್&zwnj;ಕಾಯಿನ್ ಹಿಂದೆ ನೀಡುತ್ತಿದ್ದ ಮಾದರಿಯ ಅಸಾಧಾರಣ ಹಾಗೂ ಅತಿಯಾದ ಲಾಭವನ್ನು ಮರಳಿ ನೀಡುವುದು ಕಷ್ಟಕರವಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/business/is-bitcoin-losing-its-edge-how-the-ai-stock-boom-rivals-crypto-gdp/articleshow-buku8fg"/>
        </item>
        <item>
            <title><![CDATA[ಆರು ಮೂಸ್‌ಗಳು ಬದಲಿಸಿದ ದ್ವೀಪದ ಹಣೆಬರಹ, ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಬೋರಿಯಲ್ ಕಾಡುಗಳು ನಾಶದತ್ತ!]]></title>
            <link>https://kannada.asianetnews.com/viral/how-6-moose-changed-an-island-forever-newfoundlands-eco-crisis-gdp/articleshow-dqwg20a</link>
            <guid isPermaLink="true">https://kannada.asianetnews.com/viral/how-6-moose-changed-an-island-forever-newfoundlands-eco-crisis-gdp/articleshow-dqwg20a</guid>
            <pubDate>Sat, 15 Aug 2026 19:08:53 +0530</pubDate>
            <description><![CDATA[&lt;p&gt;ನ್ಯೂಫೌಂಡ್&zwnj;ಲ್ಯಾಂಡ್&zwnj;ಗೆ ಪರಿಚಯಿಸಲಾದ ಕೆಲವೇ ಮೂಸ್&zwnj;ಗಳು, ನೈಸರ್ಗಿಕ ಶತ್ರುಗಳ ಅನುಪಸ್ಥಿತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆದು ದ್ವೀಪದ ಅರಣ್ಯಗಳಿಗೆ ಕಂಟಕವಾದವು. ಈ ಪರಿಸರ ಅಸಮತೋಲನವನ್ನು ನಿಯಂತ್ರಿಸಲು ಮತ್ತು ಕಾಡುಗಳನ್ನು ರಕ್ಷಿಸಲು, ಇಂದು ಬೇಟೆಯನ್ನು ಒಂದು ಪ್ರಮುಖ ನಿರ್ವಹಣಾ ಸಾಧನವಾಗಿ ಬಳಸಲಾಗುತ್ತಿದೆ. ಪ್ರಸ್ತುತ, ಅರಣ್ಯ ರಕ್ಷಿಸಲು ಬೇಟೆ ಮೂಲಕ ಅವುಗಳ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktdqnz4egmbkh4gpxvywn51z,imgname-island-1780724989070.jpg" type="image/jpeg" height="390" width="690"/>
            <content:encoded><![CDATA[&lt;p&gt;ನ್ಯೂಫೌಂಡ್&zwnj;ಲ್ಯಾಂಡ್ ದ್ವೀಪದಲ್ಲಿ ಕೇವಲ ಆರೇ ಆರು ಮೂಸ್&zwnj;ಗಳು (ಒಂದು ಜಾತಿಯ ಬೃಹತ್ ಜಿಂಕೆ) ಕಾಲಿಟ್ಟಾಗ, ಅದು ಮುಂಬರುವ ದಿನಗಳಲ್ಲಿ ಇಡೀ ದ್ವೀಪದ ನೈಸರ್ಗಿಕ ಚಿತ್ರಣವನ್ನೇ ಬುಡಮೇಲು ಮಾಡುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. 1878 ರಲ್ಲಿ ಮೊದಲ ಬಾರಿಗೆ ಈ ಜಿಂಕೆಗಳನ್ನು ಇಲ್ಲಿಗೆ ಪರಿಚಯಿಸಲಾಯಿತು. ತದನಂತರ 1904 ರಲ್ಲಿ ಬೇಟೆಯಾಡಲು ಹಾಗೂ ತಾಜಾ ಮಾಂಸದ ಲಭ್ಯತೆಗಾಗಿ ಅಧಿಕಾರಿಗಳು ಇನ್ನೂ ನಾಲ್ಕು ಮೂಸ್&zwnj;ಗಳನ್ನು ತಂದು ದ್ವೀಪಕ್ಕೆ ಬಿಟ್ಟರು. ಆರಂಭದಲ್ಲಿ ಆಹಾರದ ಅತ್ಯುತ್ತಮ ಮೂಲವಾಗಿ ಕಂಡ ಈ ಸಣ್ಣ ಹೆಜ್ಜೆ, ಕಾಲಕ್ರಮೇಣ ದ್ವೀಪದ ಪರಿಸರ ವ್ಯವಸ್ಥೆಗೆ ಕಂಠಕವಾಗಿ ಪರಿಣಮಿಸಿತು.&lt;/p&gt;&lt;p&gt;ನ್ಯೂಫೌಂಡ್&zwnj;ಲ್ಯಾಂಡ್&zwnj;ನ ಮೂಲ ತಳಿಯಲ್ಲದ ಈ ಸಸ್ಯಹಾರಿ ಪ್ರಾಣಿಗಳಿಗೆ ದ್ವೀಪದಲ್ಲಿದ್ದ ವಾತಾವರಣವು ವರವಾಗಲ್ಪಟ್ಟಿತು. ಪ್ರಮುಖವಾಗಿ ಇವುಗಳನ್ನು ಬೇಟೆಯಾಡಿ ತಿನ್ನುತ್ತಿದ್ದ 'ನ್ಯೂಫೌಂಡ್&zwnj;ಲ್ಯಾಂಡ್ ತೋಳಗಳು' 1930 ರ ಸುಮಾರಿಗೆ ಸಂಪೂರ್ಣವಾಗಿ ಅಳಿದುಹೋದವು. ನೈಸರ್ಗಿಕ ಶತ್ರುಗಳೇ ಇಲ್ಲದಾಗಿದ್ದರಿಂದ ಮೂಸ್&zwnj;ಗಳಿಗೆ ದ್ವೀಪದಲ್ಲಿ ಸಂಪೂರ್ಣ ರಕ್ಷಣೆ ಸಿಕ್ಕಂತಾಯಿತು. ಇದೇ ಸಮಯದಲ್ಲಿ, ವಾಣಿಜ್ಯ ಮರ ಕಡಿತ ಮತ್ತು ನೈಸರ್ಗಿಕ ಬದಲಾವಣೆಗಳಿಂದಾಗಿ ದ್ವೀಪದಾದ್ಯಂತ ಎಳೆಯ ಕಾಡುಗಳು ಬೆಳೆಯತೊಡಗಿದವು. ಈ ಎಳೆಯ ಗಿಡ-ಮರಗಳ ಚಿಗುರೆಲೆಗಳು ಮೂಸ್&zwnj;ಗಳಿಗೆ ಅತ್ಯಂತ ನೆಚ್ಚಿನ ಆಹಾರವಾಗಿದ್ದವು. ಆಹಾರದ ಹೇರಳ ಲಭ್ಯತೆ ಮತ್ತು ನೈಸರ್ಗಿಕ ಬೆದರಿಕೆಗಳ ಅಭಾವದಿಂದಾಗಿ ಇವುಗಳ ಜನಸಂಖ್ಯೆ ದಿಢೀರ್ ಸ್ಫೋಟಗೊಂಡಿತು. 1950 ರ ಹೊತ್ತಿಗೆ ಇವುಗಳ ಸಂಖ್ಯೆ ಬೃಹತ್ ಮಟ್ಟಕ್ಕೇರಿ ಬರೋಬ್ಬರಿ 2,00,000 ಕ್ಕೆ ತಲುಪಿತು.&lt;/p&gt;&lt;h2&gt;ಸಸ್ಯರಾಶಿಯನ್ನು ಆಹುತಿ ತೆಗೆದುಕೊಳ್ಳುತ್ತಿರುವ ಅತಿಯಾದ ಹಸಿವು&lt;/h2&gt;&lt;p&gt;ಮೂಸ್&zwnj;ಗಳ ಅತಿಯಾದ ಹಸಿವೇ ದ್ವೀಪದ ಕಾಡುಗಳಿಗೆ ಮೃತ್ಯುಪಾಶವಾಗಿ ಪರಿಣಮಿಸಿತು. ವನ್ಯಜೀವಿ ಮಾಹಿತಿಯ ಪ್ರಕಾರ, ಒಂದು ಮೂಸ್ ಚಳಿಗಾಲದಲ್ಲಿ ದಿನಕ್ಕೆ 40 ರಿಂದ 50 ಪೌಂಡ್ ಹಾಗೂ ಬೇಸಿಗೆಯಲ್ಲಿ ದಿನಕ್ಕೆ 50 ರಿಂದ 60 ಪೌಂಡ್ ಸಸ್ಯವರ್ಗವನ್ನು ತಿಂದು ಮುಗಿಸುತ್ತದೆ. ಪ್ರಸ್ತುತ ದ್ವೀಪದಲ್ಲಿರುವ ಸುಮಾರು 1,10,000 ಮೂಸ್&zwnj;ಗಳ ಹಿಂಡು ವರ್ಷಕ್ಕೆ ಸರಿಸುಮಾರು 7.2 ಲಕ್ಷದಿಂದ 10 ಲಕ್ಷ ಮೆಟ್ರಿಕ್ ಟನ್ ಸಸ್ಯರಾಶಿಯನ್ನು ಆಹುತಿ ತೆಗೆದುಕೊಳ್ಳುತ್ತಿದೆ. ಬೋರಿಯಲ್ ಅರಣ್ಯಗಳು ಪುನರುಜ್ಜೀವನಗೊಳ್ಳಲು ಅಗತ್ಯವಿರುವ ಎಳೆಯ ಸಸಿಗಳನ್ನೇ ಇವು ಹೆಚ್ಚಾಗಿ ತಿನ್ನುವುದರಿಂದ, ಕಾಡಿನ ಮರುಜೀವಿಸುವ ಸಾಮರ್ಥ್ಯವೇ ಉರುಳುತ್ತಿದೆ. ಪರಿಣಾಮವಾಗಿ, ದಟ್ಟವಾದ ಅರಣ್ಯ ಪ್ರದೇಶಗಳು ನಿಧಾನವಾಗಿ ಬರಿ ಹುಲ್ಲು ಮತ್ತು ಜರೀಗಿಡಗಳಿಂದ ಕೂಡಿದ ಬಯಲು ಸೀಮೆಗಳಾಗಿ ಬದಲಾಗುತ್ತಿವೆ.&lt;/p&gt;&lt;h2&gt;ಜನಸಂಖ್ಯಾ ಏರಿಳಿತ ಮತ್ತು ಕೋಟಾ ವ್ಯವಸ್ಥೆಯ ಜಾರಿ&lt;/h2&gt;&lt;p&gt;1950 ರ ದಶಕದ ಅಂತ್ಯದ ವೇಳೆಗೆ ಆವಾಸಸ್ಥಾನಗಳ ಹಾನಿ ಮತ್ತು ಬೇಟೆಯಿಂದಾಗಿ ಮೂಸ್&zwnj;ಗಳ ಸಂಖ್ಯೆ ಇಳಿಕೆಯಾಗಿ, 1970 ರ ವೇಳೆಗೆ 50,000 ಕ್ಕಿಂತ ಕಡಿಮೆಯಾಯಿತು. ಇದನ್ನು ನಿಯಂತ್ರಿಸಲು ನ್ಯೂಫೌಂಡ್&zwnj;ಲ್ಯಾಂಡ್ ಆಡಳಿತವು 1973 ರಲ್ಲಿ &quot;ಪ್ರದೇಶ ಆಧಾರಿತ ಕೋಟಾ ವ್ಯವಸ್ಥೆ&quot; ಜಾರಿಗೆ ತಂದಿತು. ಜಿಂಕೆಗಳ ದಟ್ಟಣೆ ಹೆಚ್ಚಿದ್ದಲ್ಲಿ ಹೆಚ್ಚಿನ ಬೇಟೆಗೆ ಮತ್ತು ಕಡಿಮೆಯಿದ್ದಲ್ಲಿ ಬೇಟೆ ನಿಷೇಧಕ್ಕೆ ಅವಕಾಶ ನೀಡಲಾಯಿತು. ಈ ಯೋಜನೆಯಿಂದ 1990 ರ ಹೊತ್ತಿಗೆ ಇವುಗಳ ಸಂಖ್ಯೆ ಮತ್ತೆ 1,50,000 ದಾಟಿತು. ಆದರೆ 1990 ರ ಮಧ್ಯಭಾಗದಿಂದ 2012 ರ ವೇಳೆಗೆ ಸಂಖ್ಯೆ ಮತ್ತೆ ಶೇ. 25 ರಷ್ಟು ಕುಸಿತ ಕಂಡಾಗ, ವಿಜ್ಞಾನಿಗಳು ಇದು ಬೇಟೆಯಿಂದಲ್ಲ, ಬದಲಿಗೆ ಆಹಾರ ಮತ್ತು ಆವಾಸಸ್ಥಾನಗಳ ಕೊರತೆಯಿಂದಾದ ನೈಸರ್ಗಿಕ ಮಿತಿ ಎಂದು ಗುರುತಿಸಿದರು.&lt;/p&gt;&lt;h2&gt;ಗ್ರೋಸ್ ಮೋರ್ನೆ ರಾಷ್ಟ್ರೀಯ ಉದ್ಯಾನವನದ ಎಚ್ಚರಿಕೆ&lt;/h2&gt;&lt;p&gt;ಗ್ರೋಸ್ ಮೋರ್ನೆ ರಾಷ್ಟ್ರೀಯ ಉದ್ಯಾನವನದಲ್ಲಂತೂ ಪರಿಸ್ಥಿತಿ ತೀರಾ ಹಾಯ್ಕಿತ್ತು. 1998 ರ ವೇಳೆಗೆ ಪ್ರತಿ ಚದರ ಕಿಲೋಮೀಟರ್&zwnj;ಗೆ 4 ಕ್ಕೂ ಹೆಚ್ಚು ಮೂಸ್&zwnj;ಗಳಿದ್ದು, ಇಡೀ ಉದ್ಯಾನವನವು ಕೇವಲ ಹುಲ್ಲುಗಾವಲಾಗಿ ಮಾರ್ಪಟ್ಟಿತ್ತು. ಅಂತಿಮವಾಗಿ 'ಪಾರ್ಕ್ಸ್ ಕೆನಡಾ' ಸಂಸ್ಥೆಯು 2011 ರಲ್ಲಿ ವಿಶೇಷ ನಿಯಂತ್ರಣ ಕಾರ್ಯಕ್ರಮ ನಡೆಸಿ, ಮೂಸ್&zwnj;ಗಳ ಸಂಖ್ಯೆಯನ್ನು 2,00,000 ಕ್ಕೆ ಸೀಮಿತಗೊಳಿಸಿತು. ಇದರಿಂದ ಕಾಡುಗಳು ಮತ್ತೆ ಚಿಗುರಲು ಪ್ರಾರಂಭಿಸಿದರೂ, ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಇಂದಿಗೂ ಕೃತಕ ಗಿಡ ನೆಡುವ ಅಗತ್ಯವಿದೆ.&lt;/p&gt;&lt;h2&gt;ಅರಣ್ಯ ರಕ್ಷಣೆಗಾಗಿ ಬೇಟೆ ನಿರ್ವಹಣೆ&lt;/h2&gt;&lt;p&gt;ಇಂದು ನ್ಯೂಫೌಂಡ್&zwnj;ಲ್ಯಾಂಡ್&zwnj;ನಲ್ಲಿ ಮೂಸ್&zwnj;ಗಳನ್ನು ಬೇಟೆಯಾಡುವುದು ಕೇವಲ ವಿನೋದಕ್ಕಾಗಿ ಅಲ್ಲ, ಬದಲಾಗಿ ಅರಣ್ಯವನ್ನು ರಕ್ಷಿಸುವ ಅನಿವಾರ್ಯತೆಯಾಗಿದೆ. ನೈಸರ್ಗಿಕ ಪರಭಕ್ಷಕಗಳು ಇಲ್ಲದಿರುವುದರಿಂದ, ವಾಯುಪಡೆ ಸಮೀಕ್ಷೆಗಳು ಮತ್ತು ಪರಿಸರ ಅಧ್ಯಯನಗಳ ಆಧಾರದ ಮೇಲೆ ಬೇಟೆಯ ಕೋಟಾಗಳನ್ನು ನಿಗದಿಪಡಿಸಲಾಗುತ್ತಿದೆ. 2026-27 ರ ಬೇಟೆ ಮಾರ್ಗದರ್ಶಿಯ ಪ್ರಕಾರ ದ್ವೀಪದ ಬೇಟೆ ಕೋಟಾವನ್ನು 1,090 ಪರವಾನಗಿಗಳಿಂದ 28,705 ಕ್ಕೆ ಹೆಚ್ಚಿಸಲಾಗಿದೆ.&lt;/p&gt;&lt;p&gt;1878 ರಲ್ಲಿ ತೆಗೆದುಕೊಂಡ ಒಂದು ಸಣ್ಣ ನಿರ್ಧಾರವು ಶತಮಾನದ ನಂತರ ಇಡೀ ದ್ವೀಪದ ಪರಿಸರ ವ್ಯವಸ್ಥೆಯನ್ನೇ ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ನ್ಯೂಫೌಂಡ್&zwnj;ಲ್ಯಾಂಡ್&zwnj;ನ ಮೂಸ್&zwnj;ಗಳ ಕಥೆಯೇ ಅತ್ಯುತ್ತಮ ಉದಾಹರಣೆ. ವಿದೇಶಿ ತಳಿಯೊಂದನ್ನು ಸೂಕ್ತ ಯೋಜನೆಯಿಲ್ಲದೆ ಪರಿಚಯಿಸಿದರೆ ಉಂಟಾಗುವ ಧೀರ್ಘಾವಧಿಯ ಅಡ್ಡಪರಿಣಾಮಗಳನ್ನು ತಡೆಯಲು ನಿರಂತರ ಮೇಲ್ವಿಚಾರಣೆ ಎಷ್ಟು ಮುಖ್ಯ ಎಂಬುದನ್ನು ಇದು ನೆನಪಿಸುತ್ತದೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/viral/how-6-moose-changed-an-island-forever-newfoundlands-eco-crisis-gdp/articleshow-dqwg20a"/>
        </item>
        <item>
            <title><![CDATA[ಧರೆಯ ದೊರೆ ಯಶ್ ಹೇಳಲಿದ್ದಾರೆ 'ಅಜ್ಜಿಯ ಕಥೆ'.. ರಾಕಿಂಗ್ ಸ್ಟಾರ್ ಆ 'ಫೇರಿ ಟೇಲ್'ನಲ್ಲಿ ಏನೆಲ್ಲಾ ಇದೆ?]]></title>
            <link>https://kannada.asianetnews.com/entertainment/yash-clarifies-the-bold-scenes-in-his-song-during-an-appearance-on-aap-ki-adalat/articleshow-fkiygf2</link>
            <guid isPermaLink="true">https://kannada.asianetnews.com/entertainment/yash-clarifies-the-bold-scenes-in-his-song-during-an-appearance-on-aap-ki-adalat/articleshow-fkiygf2</guid>
            <pubDate>Sat, 15 Aug 2026 18:07:32 +0530</pubDate>
            <description><![CDATA[&lt;p&gt;'ಇರುವುದನ್ನೆಲ್ಲಾ ಅತ್ಯಂತ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ಒಂದು ಕಥೆ ಹೇಳುತ್ತದೆ. ಸಿನಿಮಾದ ಒಂದು ತುಣುಕನ್ನು ನೋಡಿ ಇಡೀ ಸಿನಿಮಾವನ್ನು ಜಡ್ಜ್ ಮಾಡುವುದು ತಪ್ಪು' ಎಂದಿದ್ದಾರೆ ಯಶ್. ಟಾಕ್ಸಿಕ್&zwnj;ನಲ್ಲಿ ಹೇಳಿರುವ ಅಜ್ಜಿಯ ಕಥೆ ಏನು ಹಾಗಿದ್ರೆ..?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgpj8mr1eh3f5qmy3p71bg6,imgname-whatsapp-image-2026-08-07-at-4.37.54-pm--1--1786193191576.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Rocking Star Yash talk on Toxic Bold Scences: ಟಾಕ್ಸಿಕ್ ಹಾಡುಗಳಲ್ಲಿ ಸಿಕ್ಕಾಪಟ್ಟೆ ಮಾದಕತೆ ಇದೆಯೇ? ಬೋಲ್ಡ್ ದೃಶ್ಯಗಳಿಗೆ 'ರಾಕಿ ಭಾಯ್' ಕೊಟ್ಟ ಉತ್ತರ ಕೇಳಿ ದಂಗಾದ ಟ್ರೋಲರ್ಸ್!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್ ಅವರ ಪ್ರತಿಯೊಂದು ನಡೆಯೂ ಈಗ ಇತಿಹಾಸ. ಸದ್ಯ ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಅದು &lsquo;ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್&rsquo;. ಈ ಚಿತ್ರದ ಟೈಟಲ್ ಎಷ್ಟು ವಿಭಿನ್ನವಾಗಿದೆಯೋ, ಅದರಲ್ಲಿನ &lsquo;ತಬಾಹಿ&rsquo; ಅನ್ನೋ ಹಾಡು ಸೃಷ್ಟಿಸಿದ ಸಂಚಲನ ಅಷ್ಟೇ ಭೀಕರವಾಗಿದೆ.&lt;/p&gt;&lt;p&gt;ಹಾಡು ಬಿಡುಗಡೆಯಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಯುದ್ಧವೇ ನಡೆದಿತ್ತು. ಕೆಲವರು ಯಶ್ ಮತ್ತು ಕಿಯಾರಾ ಅಡ್ವಾಣಿ ನಡುವಿನ &lsquo;ಬೋಲ್ಡ್ ಕೆಮಿಸ್ಟ್ರಿ&rsquo; ಕಂಡು ಫಿದಾ ಆಗಿದ್ದರೆ, ಇನ್ನು ಕೆಲವರು &quot;ಸಿನಿಮಾದಲ್ಲಿ ಅಶ್ಲೀಲತೆ ಹೆಚ್ಚಾಯ್ತು&quot; ಎಂದು ಮೂಗು ಮುರಿದಿದ್ದರು. ಈ ಎಲ್ಲಾ ಟೀಕೆಗಳಿಗೆ ಈಗ ಖುದ್ದು ಯಶ್ ಅವರೇ &lsquo;ಆಪ್ ಕಿ ಅದಾಲತ್&rsquo;ನಲ್ಲಿ ಉತ್ತರ ನೀಡುವ ಮೂಲಕ ಟ್ರೋಲರ್&zwnj;ಗಳ ಬಾಯಿ ಮುಚ್ಚಿಸಿದ್ದಾರೆ!&lt;/p&gt;&lt;h2&gt;ಶಾಂತವಾಗಿಯೇ ಬಾಂಬ್ ಸಿಡಿಸಿದ ಯಶ್!&lt;/h2&gt;&lt;p&gt;ರಜತ್ ಶರ್ಮಾ ಅವರ ಕಟುವಾದ ಪ್ರಶ್ನೆಗಳಿಗೆ ಉತ್ತರಿಸಿದ ಯಶ್, ಅತ್ಯಂತ ಶಾಂತವಾಗಿಯೇ ಬಾಂಬ್ ಸಿಡಿಸಿದ್ದಾರೆ. &quot;ನೋಡಿ, ಅಶ್ಲೀಲತೆ ಇರಬಾರದು ಅನ್ನೋದನ್ನ ನಾನು ಒಪ್ಪಿಕೊಳ್ಳುತ್ತೇನೆ. ಆದರೆ &lsquo;ತಬಾಹಿ&rsquo; ಹಾಡಿನಲ್ಲಿ ಅಶ್ಲೀಲತೆ ಎಲ್ಲಿದೆ? ನಾನು ಕಿಯಾರಾಗೆ ಕಿಸ್ ಕೂಡ ಮಾಡಿಲ್ಲ! ಅಲ್ಲಿ ಇರುವುದನ್ನೆಲ್ಲಾ ಅತ್ಯಂತ ಕಲಾತ್ಮಕವಾಗಿ (Artistically) ಚಿತ್ರೀಕರಿಸಲಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ಒಂದು ಕಥೆ ಹೇಳುತ್ತದೆ,&quot; ಎಂದು ಹೇಳುವ ಮೂಲಕ ಹಾಡಿನ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿದ್ದಾರೆ.&lt;/p&gt;&lt;p&gt;ಸೃಷ್ಟಿಕರ್ತನ ಧ್ವನಿ ಮತ್ತು ಕಲೆಯ ಗರಿಮೆ&lt;/p&gt;&lt;p&gt;ಯಶ್ ಅವರ ಪ್ರಕಾರ, ಸಿನಿಮಾದ ಒಂದು ತುಣುಕನ್ನು ನೋಡಿ ಇಡೀ ಸಿನಿಮಾವನ್ನು ಜಡ್ಜ್ ಮಾಡುವುದು ತಪ್ಪು. &quot;ಸಿನಿಮಾ ಅಂದ್ರೆ ಅದು ಒಬ್ಬ ಸೃಷ್ಟಿಕರ್ತನ ಧ್ವನಿ. ನಿರ್ದೇಶಕರು ಒಂದು ದೃಶ್ಯವನ್ನು ಇಟ್ಟಿದ್ದಾರೆ ಅಂದರೆ ಅದರ ಹಿಂದೆ ಒಂದು ಬಲವಾದ ಉದ್ದೇಶವಿರುತ್ತದೆ. ನೀವು ಇಡೀ ಸಿನಿಮಾವನ್ನು ನೋಡಿದಾಗ ಆ ದೃಶ್ಯದ ಹಿಂದಿನ ಭಾವನೆ ಮತ್ತು ಅನಿವಾರ್ಯತೆ ನಿಮಗೆ ಅರ್ಥವಾಗುತ್ತದೆ. ಅದನ್ನು ಕೇವಲ &lsquo;ಬೋಲ್ಡ್ ದೃಶ್ಯ&rsquo; ಎಂದು ಕರೆಯುವುದು ಕಲೆಗೆ ಮಾಡುವ ಅವಮಾನ,&quot; ಎಂದು ಯಶ್ ವಿವರಿಸಿದ್ದಾರೆ.&lt;/p&gt;&lt;h3&gt;ಜೆನ್-ಜಿ (Gen-Z) ಮತ್ತು ಸಮಾಜದ ನಿಯಮಗಳು&lt;/h3&gt;&lt;p&gt;&lsquo;ಟಾಕ್ಸಿಕ್&rsquo; ಕೇವಲ ಒಂದು ಆಕ್ಷನ್ ಸಿನಿಮಾವಲ್ಲ, ಇದು ಇಂದಿನ ಯುವಪೀಳಿಗೆಯ ಕನ್ನಡಿ ಎಂದು ಯಶ್ ಹೇಳಿದ್ದಾರೆ. &quot;ಈ ಸಿನಿಮಾ ಇಂದಿನ ಯುವಜನತೆ ಮತ್ತು ಸಮಾಜದ ಹಳೆಯ ನಿಯಮಗಳ ನಡುವಿನ ಸಂಘರ್ಷವನ್ನು ಪ್ರತಿನಿಧಿಸುತ್ತದೆ. ಯುವಕರು ತಮ್ಮ ಹಿರಿಯರೊಂದಿಗೆ ನಡೆಸುವ ಸಂಭಾಷಣೆ, ಅವರು ಕೇಳುವ ಪ್ರಶ್ನೆಗಳು ಮತ್ತು ಸಮಾಜದ ಕಟ್ಟುಪಾಡುಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ,&quot; ಎಂದಿದ್ದಾರೆ ಯಶ್. ಈ ಮೂಲಕ &lsquo;ಟಾಕ್ಸಿಕ್&rsquo; ಕೇವಲ ಮಾಸ್ ಸಿನಿಮಾ ಮಾತ್ರವಲ್ಲ, ಇದರಲ್ಲಿ ಗಂಭೀರವಾದ ಕಥಾವಸ್ತು ಇದೆ ಎಂಬ ಸುಳಿವು ನೀಡಿದ್ದಾರೆ.&lt;/p&gt;&lt;p&gt;ಕುತೂಹಲ ಕೆರಳಿಸಿದ ಯಶ್ ಸ್ಪಷ್ಟನೆ!&lt;/p&gt;&lt;p&gt;ಒಟ್ಟಿನಲ್ಲಿ, &lsquo;ತಬಾಹಿ&rsquo; ಹಾಡಿನ ಸುತ್ತ ಹಬ್ಬಿದ್ದ ಅಶ್ಲೀಲತೆಯ ವದಂತಿಗಳಿಗೆ ಯಶ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ತಮ್ಮ ಸಿನಿಮಾದಲ್ಲಿ ಪ್ರತಿ ದೃಶ್ಯಕ್ಕೂ ಅದರದ್ದೇ ಆದ ಗೌರವವಿದೆ ಎಂದು ಪ್ರತಿಪಾದಿಸಿರುವ ಯಶ್, ಪ್ರೇಕ್ಷಕರು ಸಿನಿಮಾವನ್ನು ಪೂರ್ತಿಯಾಗಿ ನೋಡಿ ನಿರ್ಧರಿಸಲಿ ಎಂದು ಸವಾಲು ಹಾಕಿದ್ದಾರೆ.&lt;/p&gt;&lt;p&gt;ರಾಕಿಂಗ್ ಸ್ಟಾರ್ ಈ ರೀತಿ ಪಬ್ಲಿಕ್ ಆಗಿ ಸ್ಪಷ್ಟನೆ ನೀಡಿದ ಮೇಲೆ, &lsquo;ಟಾಕ್ಸಿಕ್&rsquo; ಸಿನಿಮಾದ ಮೇಲಿನ ನಿರೀಕ್ಷೆ ಈಗ ಮುಗಿಲು ಮುಟ್ಟಿದೆ. ಬೋಲ್ಡ್ ದೃಶ್ಯಗಳ ನಡುವೆಯೂ ಯಶ್ ಅಡಗಿಸಿಟ್ಟಿರುವ ಆ &lsquo;ಫೇರಿಟೇಲ್&rsquo; ಸಮಾಜಕ್ಕೆ ಯಾವ ಸಂದೇಶ ನೀಡಲಿದೆ ಎಂಬುದು ಸಿನಿಮಾ ಬಿಡುಗಡೆಯಾದ ಮೇಲೆ ತಿಳಿಯಲಿದೆ!&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/yash-clarifies-the-bold-scenes-in-his-song-during-an-appearance-on-aap-ki-adalat/articleshow-fkiygf2"/>
        </item>
        <item>
            <title><![CDATA[ಪ್ರಸಿದ್ಧ ಟಿಕ್ ಟಾಕರ್ ಹತ್ಯೆ : 1.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಹುಡುಗಿ ಅಂತಿಮ ಸಂಸ್ಕಾರಕ್ಕೆ ಬಂದಿದ್ದೆಷ್ಟು ಜನ ?]]></title>
            <link>https://kannada.asianetnews.com/viral/who-was-ayesha-gilani-tiktoker-murdered-in-pakistan/articleshow-fo8n0lk</link>
            <guid isPermaLink="true">https://kannada.asianetnews.com/viral/who-was-ayesha-gilani-tiktoker-murdered-in-pakistan/articleshow-fo8n0lk</guid>
            <pubDate>Mon, 17 Aug 2026 11:33:29 +0530</pubDate>
            <description><![CDATA[&lt;p&gt;ಟಿಕ್ ಟಾಕರ್ ಆಯೇಷಾ ಗಿಲಾನಿ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿದ್ದ ಗಿಲಾನಿ ಅಂತ್ಯಸಂಸ್ಕಾರದ ವೇಳೆ ಉಪಸ್ಥಿತರಿದ್ದ ಜನರ ಸಂಖ್ಯೆ ಈಗ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m074yqeqamvs8qeyt2crpren,imgname-ayesha-gilani-1786946477527.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೋಶಿಯಲ್ ಮೀಡಿಯಾ ಬರೀ ಪ್ರಚಾರಕ್ಕೆ ಮಾತ್ರ., ಸೋಶಿಯಲ್ ಮೀಡಿಯಾ ಫಾಲೋವರ್ಸ್ ಹಾಗೂ ನಿಜವಾದ ಪ್ರೀತಿಪಾತ್ರರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಫಾಲೋಮಾಡೋರೆಲ್ಲ ನಿಮ್ಮ ಕಷ್ಟಕ್ಕೆ ಬರೋದಿಲ್ಲ. ಸತ್ರೂ ಅಂತ್ಯ ಸಂಸ್ಕಾರಕ್ಕೆ ಬರೋರ ಸಂಖ್ಯೆ ಕಡಿಮೆ. ಇದಕ್ಕೆ ಪಾಕಿಸ್ತಾನದ ಟಿಕ್ ಟಾಕರ್ ಆಯೇಷಾ ಗಿಲಾನಿ ಉತ್ತಮ ನಿದರ್ಶನ.&lt;/p&gt;&lt;h2&gt;ಅಂತ್ಯಸಂಸ್ಕಾರಕ್ಕೆ ಬೆರಳೆಣಿಕೆಯಷ್ಟು ಜನ&lt;/h2&gt;&lt;p&gt;ಪಾಕಿಸ್ತಾನದ ಜನಪ್ರಿಯ ಟಿಕ್ ಟಾಕರ್ ಆಯೇಷಾ ಗಿಲಾನಿ. ಸೋಶಿಯಲ್ ಮೀಡಿಯಾದಲ್ಲಿ 1.30 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 28 ವರ್ಷದ ಆಯೇಷಾ, ಸೋಶಿಯಲ್ ಮೀಡಿಯಾ ಮೂಲಕ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆದಿದ್ದರು. ಆದ್ರೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಅಂತಿಮ ದರ್ಶನಕ್ಕೆ ಅಥವಾ ಅಂತ್ಯ ಸಂಸ್ಕಾರದ ವೇಳೆ ಸಾವಿರಾರು ಜನ ಬರ್ತಾನೆ ಎನ್ನುವ ನಿರೀಕ್ಷೆ ಇತ್ತು. ಆದ್ರೆ ಬಂದಿದ್ದು ಬೆರಳೆಣಿಕೆಯಷ್ಟು ಜನ ಮಾತ್ರ. ಅತ್ಯಂತ ಕಡಿಮೆ ಜನರ ಉಪಸ್ಥಿತಿಯಲ್ಲಿ ಗಿಲಾನಿ ಅಂತ್ಯಸಂಸ್ಕಾರ ನಡೆದಿದೆ. ಇದು ಸೋಶಿಯಲ್ ಮೀಡಿಯಾ ಜನಪ್ರಿಯತೆ ಮತ್ತು ನಿಜವಾದ ಜನಸಂಪರ್ಕಗಳ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.&lt;/p&gt;&lt;h3&gt;ಆಯೇಷಾ ಗಿಲಾನಿ ಹತ್ಯೆ&lt;/h3&gt;&lt;p&gt;ಪೊಲೀಸರ ಪ್ರಕಾರ, ಆಗಸ್ಟ್ 14 ರಂದು, ಫೆಡರಲ್ ರಾಜಧಾನಿ ಬಳಿಯ ಟ್ಯಾಕ್ಸಿಲಾ ನಗರದಲ್ಲಿರುವ ಗಿಲಾನಿ ಮನೆಗೆ ಫೋನ್ ಬಂದಿತ್ತು. ನಂತ್ರ ಗಿಲಾನಿ ಮನೆಯಿಂದ ಹೊರಗೆ ಬಿದ್ದಿದ್ದರು. ಮೋಟಾರ್ ಸೈಕಲ್ನಲ್ಲಿ ಬಂದ ದುಷ್ಕರ್ಮಿಗಳು ಗಿಲಾನಿ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಆಯೇಷಾ ಸಾವನ್ನಪ್ಪಿದ್ರೆ ಅವರ 15 ವರ್ಷದ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಈಗ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಆಯೇಷಾ ಗಿಲಾನಿ ಯಾರು?&lt;/strong&gt;&lt;/p&gt;&lt;p&gt;ಆಯೇಷಾ ಗಿಲಾನಿ ಪಾಕಿಸ್ತಾನದ ಜನಪ್ರಿಯ ಟಿಕ್ಟೋಕರ್ ಆಗಿದ್ದರು. ನಿಜವಾದ ಹೆಸರು ಶಮ್ಸು ಬೀಬಿ. ಟಿಕ್ಟಾಕ್ನಲ್ಲಿ ಸುಮಾರು 1.3 ಮಿಲಿಯನ್ ಫಾಲೋವರ್ಸ್ ಇದ್ದರು. ಆಗಸ್ಟ್ 14 ರಂದು ಟ್ಯಾಕ್ಸಿಲಾದಲ್ಲಿ ಹತ್ಯೆ ಮಾಡಲಾಯಿತು. ಘಟನೆಯ ನಂತರ, ಕುಟುಂಬವು ಪೊಲೀಸರಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಆಯೇಷಾಗೆ ಕಾಶಿ ಎಂದೂ ಕರೆಯಲ್ಪಡುವ ಕಾಶಿಫ್ ಎಂಬ ವ್ಯಕ್ತಿಯಿಂದ ಕರೆ ಬಂದಿತು.&lt;/p&gt;&lt;p&gt;ದೂರಿನ ಪ್ರಕಾರ, ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪೆಟ್ರೋಲ್ ಪಂಪ್ ಬಳಿ ತಮ್ಮ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ನೈಮತುಲ್ಲಾ ಕುಟುಂಬಕ್ಕೆ ತಿಳಿಸಿದ್ದಾರೆ. ದಾಳಿಕೋರರು ಸುಮಾರು 30 ರಿಂದ 35 ವರ್ಷ ವಯಸ್ಸಿನವರು ಎಂದು ಅಂದಾಜಿಸಲಾಗಿದೆ. ಆಯೇಷಾ ಅವರ ಕುತ್ತಿಗೆಗೆ ಗುಂಡು ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಗುಂಡು ಹಾರಿಸಿದ ನಂತರ, ಗಿಲಾನಿ ಕಾರಿನ ನಿಯಂತ್ರಣ ಕಳೆದುಕೊಂಡು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ, ಅಪಘಾತದಲ್ಲಿ ಆಯೇಷಾ ಅವರ ತಂಗಿ ಅಸಿಮಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಘಟನೆಯ ನಂತರ ಇಬ್ಬರು ಶಂಕಿತರು ಮೋಟಾರ್ ಸೈಕಲ್ನಲ್ಲಿ ಪರಾರಿಯಾಗುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.&lt;/p&gt;]]></content:encoded>
            <category>world-news</category>
            <dc:creator>Roopa Hegde</dc:creator>
            <atom:link href="https://kannada.asianetnews.com/viral/who-was-ayesha-gilani-tiktoker-murdered-in-pakistan/articleshow-fo8n0lk"/>
        </item>
        <item>
            <title><![CDATA[ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಬೇಕಾ? ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಕೋರ್ಸ್ ಶುರು]]></title>
            <link>https://kannada.asianetnews.com/whats-new-technology/want-to-become-a-social-media-influencer-us-university-launches-new-degree-course/articleshow-gemrwvk</link>
            <guid isPermaLink="true">https://kannada.asianetnews.com/whats-new-technology/want-to-become-a-social-media-influencer-us-university-launches-new-degree-course/articleshow-gemrwvk</guid>
            <pubDate>Fri, 14 Aug 2026 22:58:03 +0530</pubDate>
            <description><![CDATA[&lt;p&gt;ನಿಮಗೆ ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಆಗಬೇಕಾ? ಇದೀಗ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಡಿಗ್ರಿ ಕೋರ್ಸ್ ಆರಂಭಗದೊಂಡಿದೆ. ಸೋಶಿಯಲ್ ಮೀಡಿಯಾ ಮೂಲಕ ಲಕ್ಷಾಂತರ ರೂಪಾಯಿ ಗಳಿಕೆ, ಯಶಸ್ವಿ ಇನ್&zwnj;ಫ್ಲುಯೆನ್ಸರ್ ಆಗೋ ಕಲೆ ಸೇರಿದಂತೆ ಎಲ್ಲವನ್ನೂ ಹೇಳಿಕೊಡಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1egyx9c7m2bftkkyanjszgc,imgname-influencer-1753907950892.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಲ್ಲರೂ ಈಗ ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್, ಎಲ್ಲರೂ ಈಗ ಯೂಟ್ಯೂಬರ್. ಈ ಮಾತನ್ನು ಹಲವು ಬಾರಿ ಕೇಳಿರುತ್ತಿರಿ. ಕಾರಣ ಎಲ್ಲರೂ ಇದೀಗ ಯೂಟ್ಯೂಬ್, ಫೇಸ್&zwnj;ಬುಕ್, ಇನ್&zwnj;ಸ್ಟಾಗ್ರಾಂ ಮೂಲಕ ಕಂಟೆಂಟ್ ಕ್ರಿಯೇಟ್ ಮಾಡುತ್ತಿದ್ದಾರೆ. ಕೆಲವರು ಆದಾಯಗಳಿಸುತ್ತಿದ್ದರೆ, ಮತ್ತೆ ಹಲವರು ಮಾನಿಟೈಸೇಶನ್&zwnj;ಗಾಗಿ ಸತತ ಪ್ರಯತ್ನ ಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಮಂದಿಯೂ ಇದ್ದಾರೆ. ತಮ್ಮಿಷ್ಟದಂತೆ ತಿರುಗಾಡುತ್ತಾ, ಆಹಾರ, ಖಾದ್ಯಗಳ ಮಾಡುತ್ತಾ ಹಲವು ರೀತಿಯಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಹಣಗಳಿಸುತ್ತಿದ್ದಾರೆ. ಇದನ್ನು ನೋಡಿ ಕಂಟೆಂಟ್ ಕ್ರಿಯೇಶನ್, ಸೋಶಿಯಲ್ ಇನ್&zwnj;ಫ್ಲುಯೆನ್ಸರ್ ಆಗಲು ಬಯಸಿದ್ದರೆ, ಇದೀಗ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಡಿಗ್ರಿ ಕೋರ್ಸ್ ಆರಂಭಗೊಂಡಿದೆ.&lt;/p&gt;&lt;h2&gt;ಜರ್ನಲಿಸಂ ಕೋರ್ಸ್ ಆರಂಭ&lt;/h2&gt;&lt;p&gt;ವಾಲ್ಟರ್ ಕ್ರೊನ್&zwnj;ಕೈಟ್ ಸ್ಕೂಲ್ ಆಫ್ ಜರ್ನಲಿಸಂ ಆ್ಯಂಡ್ ಮಾಸ್ ಕಮ್ಯೂನಿಕೇಶನ್ ಕಾಲೇಜು ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಡಿಗ್ರಿ ಕೋರ್ಸ್ ಆರಂಭಿಸಿದೆ. ಹೌದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಈ ಕಾಲೇಜಿನಲ್ಲಿ ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಕೋರ್ಸ್ ಆರಂಭಗೊಂಡಿದೆ. ಇದು ಭಾರತಕ್ಕೆ ಬರಲು ಹೆಚ್ಚಿನ ದಿನ ಬೇಕಿಲ್ಲ. ಈಗಾಗಲೇ ಭಾರತದ ಹಲವೆಡೆ ಡಿಪ್ಲೋಮಾ ಕೋರ್ಸ್ ಲಭ್ಯವಿದೆ. ಅಧಿಕೃತವಾಗಿ ವಿಶ್ವವಿದ್ಯಾಲಯದ ಕೋರ್ಸ್ ಆಗಿ ಸೇರಿಕೊಳ್ಳಲು ಕೆಲ ದಿನ ಮಾತ್ರ ಸಾಕು.&lt;/p&gt;&lt;h2&gt;ಸೋಶಿಯಲ್ ಮೀಡಿಯಾ ಆಲ್ಗಾರಿದಂ&lt;/h2&gt;&lt;p&gt;ಪತ್ರಿಕೋದಮ್ಯ ಹಾಗೂ ಸಮೂಹ ಸಂವಹನ ಕೋರ್ಸ್&zwnj;ಗಳಲ್ಲಿ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಡಿಜಿಟಲ್, ಜಾಹೀರಾತು, ಪಿಆರ್, ಮಾರ್ಕೆಟಿಂಗ್ ಸೇರಿದಂತೆ ಕೆಲ ವಿಷಯಗಳ ಕುರಿತು ಅಧ್ಯಯನ ಮಾಡಲಾಗುತ್ತಿತ್ತು. ಆಧರೆ ಇದೀಗ ಡಿಜಿಟಲ್ ಕಂಟೆಂಟ್ ಕ್ರಿಯೇಶನ್ ಸೋಶಿಯಲ್ ಮೀಡಿಯಾ ಆಲ್ಗಾರಿದಂ ಮುಖ್ಯ ವಿಷವನ್ನಾಗಿ ಮಾಡಿಕೊಂಡು ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕಂಟೆಂಟ್ ಕ್ರಿಯೇಶಿನ್, ಬ್ರ್ಯಾಂಡಿಂಗ್, ಸೋಶಿಯಲ್ ಮೀಡಿಯಾಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು, ಡಿಜಿಟಲ್ ಮಾರ್ಕೆಟಿಂಗ್ ಕುರಿತು ಹೇಳಿಕೊಡಲಾಗುತ್ತದೆ.&lt;/p&gt;&lt;p&gt;ಕ್ಯಾಮೆರಾ ಮುಂದೆ ಮಾತನಾಡುವುದು, ವಿಷಯವನ್ನು ಹೇಗೆ ಪ್ರಸ್ತಾಪಿಸಬೇಕು, ಕ್ಯಾಮೆರಾ ರೆಕಾರ್ಡಿಂಗ್, ವಿಡಿಯೋ ಎಡಿಟಿಂಗ್, ಬ್ರ್ಯಾಂಡ್ ಡೀಲ್, ಸೋಶಿಯಲ್ ಮೀಡಿಯಾಗಳಲ್ಲಿ ವೀಕ್ಷರ ಜೊತೆ ಕನೆಕ್ಟ್ ಆಗುವುದು, ಎಐ ಟೂಲ್ ಬಳಕೆ, ವಿಡಿಯೋ ವೈರಲ್ ಮಾಡುವುದು ಸೇರಿದಂತೆ ಹಲವು ಕಲೆಗಳನ್ನು ಕಲಿಸಿಕೊಡಲಾಗುತ್ತದೆ.&lt;/p&gt;&lt;h2&gt;ಹಣ ಗಳಿಸುವುದು ಹೇಗೆ?&lt;/h2&gt;&lt;p&gt;ಉಪನ್ಯಾಸ ನೀಡಲು ಯಶಸ್ವಿ ಕಂಟೆಂಟ್ ಕ್ರಿಯೇಟರ್ಸ್, ಮಾರ್ಕೆಟಿಂಗ್ ಎಕ್ಸ್&zwnj;ಪರ್ಟ್, ಸೋಶಿಯಲ್ ಮೀಡಿಯಾ ಎಕ್ಸ್&zwnj;ಪರ್ಟ್, ಜಾಗತಿಕ ಬ್ರ್ಯಾಂಡ್ ಪ್ರತಿನಿಧಿಗಳು ಸೇರಿದಂತೆ ಹಲವು ತಜ್ಞರು ಇರಲಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಶಾರ್ಟ್ಸ್, ಲಾಂಗ್ ಕಂಟೆಂಟ್&zwnj;ಗಳ ಸ್ಕ್ರಿಪ್ಟ್, ವಿಡಿಯೋಸ ಎಡಿಟಿಂಗ್, ಆಡಿಯೋ ಸೇರಿದಂತೆ ಎಲ್ಲಾ ರೀತಿಯ ಅಧ್ಯಯನ ಇರಲಿದೆ. ಇದೇ ವೇಳೆ ಆದಾಯ ಗಳಿಕೆ(ಮಾನಿಟೈಸೇಶನ್) ಸ್ಪಾನ್ಸರ್&zwnj;ಶಿಪ್, ಅಫಿಲಿಯೇಟ್ ಮಾರ್ಕೆಟಿಂಗ್ ಹಾಗೂ ಸ್ವಂತ ಬ್ರ್ಯಾಂಡ್ ಮೂಲಕ ಹಣ ಗಳಿಕೆ ಮಾರ್ಗಗಳನ್ನು ಹೇಳಿಕೊಡಲಾಗುತ್ತದೆ.&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/whats-new-technology/want-to-become-a-social-media-influencer-us-university-launches-new-degree-course/articleshow-gemrwvk"/>
        </item>
        <item>
            <title><![CDATA[ಅಡೆತಡೆ, ದ್ರೋಹ ಮೆಟ್ಟಿ ನಿಂತು ಅಮೆರಿಕನ್ ಪೌರತ್ವ ಪಡೆದ ಕನ್ನಡಿಗ: ಟೆಕ್ ಉದ್ಯಮಿ ಸೈಮನ್ ಶೆಟ್ಟಿ ಸ್ಪೂರ್ತಿದಾಯಕ ಕಥೆ]]></title>
            <link>https://kannada.asianetnews.com/viral/from-rural-karnataka-saiman-shetty-beats-visa-struggles-to-gain-us-citizenship-tech-entrepreneur-inspiring-story-gdp/articleshow-h9kmc8l</link>
            <guid isPermaLink="true">https://kannada.asianetnews.com/viral/from-rural-karnataka-saiman-shetty-beats-visa-struggles-to-gain-us-citizenship-tech-entrepreneur-inspiring-story-gdp/articleshow-h9kmc8l</guid>
            <pubDate>Sat, 15 Aug 2026 14:42:12 +0530</pubDate>
            <description><![CDATA[ಕರ್ನಾಟಕದ ಟೆಕ್ ಉದ್ಯಮಿ ಸೈಮನ್ ಶೆಟ್ಟಿ ಅವರು ಸಾಲ, ವೀಸಾ ಸಮಸ್ಯೆಗಳು ಮತ್ತು ವೈಯಕ್ತಿಕ ದ್ರೋಹದಂತಹ ಅನೇಕ ಅಡೆತಡೆಗಳನ್ನು ದಾಟಿ ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ. ತಮ್ಮ ಕಠಿಣ ಹೋರಾಟದ ಕಥೆಯನ್ನು ಹಂಚಿಕೊಂಡ ಅವರು, ಸಂಕಷ್ಟದಲ್ಲಿರುವ ಇತರ ವಲಸಿಗರಿಗೆ ಸ್ಫೂರ್ತಿ ತುಂಬಿ, ಅವರ ಪರವಾಗಿ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m02awzpqjeyeqwna0g6hve4c,imgname-saiman-shetty--1--1786784939734.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ವರ್ಷಗಳ ಕಾಲ ವ್ಯವಸ್ಥಿತ ವಲಸೆ ಅಡೆತಡೆಗಳು, ಸಾಲದ ಹೊರೆ ಹಾಗೂ ಆತ್ಮೀಯರೆನ್ನಿಸಿಕೊಂಡವರಿಂದಲೇ ಎದುರಾದ ವೈಯಕ್ತಿಕ ದ್ರೋಹಗಳನ್ನು ಮೆಟ್ಟಿ ನಿಂತ ಕರ್ನಾಟಕದ ಟೆಕ್ ಉದ್ಯಮಿಯೊಬ್ಬರು ಕೊನೆಗೂ ಅಮೆರಿಕದ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯ ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಅಮೆರಿಕಕ್ಕೆ ಕಾಲಿಟ್ಟ ಸೈಮನ್ ಶೆಟ್ಟಿ, ಶಿಕ್ಷಣಕ್ಕಾಗಿ ಮಾಡಿದ ಭಾರಿ ಪ್ರಮಾಣದ ಸಾಲ, ಉದ್ಯೋಗ ನಿರಾಕರಣೆಯ ಕಹಿ ಅನುಭವಗಳು, ಎಚ್-1ಬಿ (H1B) ವೀಸಾ ಲಾಟರಿ ಸೋಲುಗಳು ಮತ್ತು ಪರಿಚಿತರೇ ಫೆಡರಲ್ ವಲಸೆ ಅಧಿಕಾರಿಗಳಿಗೆ ನೀಡಿದ ದುರುದ್ದೇಶಪೂರಿತ ದೂರುಗಳನ್ನು ಎದುರಿಸಿ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಈ ಸುದೀರ್ಘ ಹಾಗೂ ಕಠಿಣ ಪಯಣವನ್ನು ಸ್ಮರಿಸಿಕೊಂಡಿರುವ ಅವರು, ಸಂಕೀರ್ಣ ವೀಸಾ ವ್ಯವಸ್ಥೆಯಲ್ಲಿ ಹೆಣಗಾಡುತ್ತಿರುವ ಸಹ-ವಲಸಿಗರ ಪರವಾಗಿ ಸದಾ ಧ್ವನಿಯೆತ್ತುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.&lt;/p&gt;&lt;h2&gt;&quot;ಕರ್ನಾಟಕದ ಸಣ್ಣ ಹಳ್ಳಿಯಿಂದ ಅರಿಜೋನಾದ ಬಿಸಿ ಮರುಭೂಮಿಯವರೆಗೆ&quot;&lt;/h2&gt;&lt;p&gt;ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಅಮೆರಿಕನ್ ಪೌರತ್ವ ಪಡೆದ ಸಂಭ್ರಮವನ್ನು ಹಂಚಿಕೊಂಡ ಸೈಮನ್ ಶೆಟ್ಟಿ, ನನ್ನ ಜೀವನದುದ್ದಕ್ಕೂ ಅನುಭವಿಸಿದ್ದ USCIS (ಯುನೈಟೆಡ್ ಸ್ಟೇಟ್ಸ್ ಸಿಟಿಜನ್&zwnj;ಶಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್) ಜೊತೆಗಿನ ಅಲೆದಾಟ ಅಧಿಕೃತವಾಗಿ ಮುಗಿದಿದೆ. ಇಂದಿನಿಂದ ನಾನು ಅಮೆರಿಕನ್ ಪೌರ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಮುಂದುವರಿದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಅವರು &quot;ನನ್ನ ಈ ಸುದೀರ್ಘ ಪಯಣ ಪ್ರಾರಂಭವಾಗಿದ್ದು ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ. ಗೂಗಲ್ ಮ್ಯಾಪ್&zwnj;ನಲ್ಲೂ ಸಿಗದಂತಹ ಕುಗ್ರಾಮದಿಂದ, ಕೈಯಲ್ಲಿ ಹಣವಿಲ್ಲದೆ, ಕೇವಲ ಒನ್&zwnj;ವೇ ಟಿಕೆಟ್&zwnj; ಹಿಡಿದು ಅಮೆರಿಕದ ಅರಿಜೋನಾದ ಉರಿಯುವ ಮರುಭೂಮಿಗೆ ಬಂದು ಇಳಿದಿದ್ದೆ. ಹೊಸ ದೇಶ, ಹೊಸ ಭಾಷೆ, ಎಲ್ಲವೂ ಸಂಪೂರ್ಣ ಹೊಸದಾಗಿತ್ತು. ನಮ್ಮ ಇಡೀ ಕುಟುಂಬದಲ್ಲೇ ಪ್ರಪಂಚದ ಈ ಭಾಗಕ್ಕೆ ಕಾಲಿಟ್ಟ ಮೊದಲ ವ್ಯಕ್ತಿ ನಾನು. ಜತೆಗೆ ಇರಲು ಸ್ನೇಹಿತರಿರಲಿಲ್ಲ, ಬೆಂಬಲಕ್ಕೆ ಸುರಕ್ಷತಾ ಜಾಲವಿರಲಿಲ್ಲ, ಯಾವುದೇ 'ಪ್ಲಾನ್ ಬಿ' ಕೂಡ ಇರಲಿಲ್ಲ.&quot;&lt;/p&gt;&lt;h2&gt;ಪ್ರತಿಯೊಂದು ತಿರುವಿನಲ್ಲೂ ಪರೀಕ್ಷೆ ಒಡ್ಡಿದ ಅಮೆರಿಕ&lt;/h2&gt;&lt;p&gt;ಅಮೆರಿಕದ ದಿನಗಳು ತನಗೆ ಸುಲಭವಾಗಿರಲಿಲ್ಲ ಎಂದಿರುವ ಶೆಟ್ಟಿ, &quot;ಅಮೆರಿಕ ನನಗಾಗಿ ರೆಡ್ ಕಾರ್ಪೆಟ್ ಹಾಸಿರಲಿಲ್ಲ. ಪ್ರತಿಯೊಂದು ತಿರುವಿನಲ್ಲೂ ನನ್ನನ್ನು ಪರೀಕ್ಷಿಸಿತು. ಹೇಗೆ ತೀರಿಸಬೇಕೆಂದು ತಿಳಿಯದ ಸಾಲದ ಹೊರೆ, ಸತತವಾಗಿ 'ನೋ' ಎಂದ ಕಂಪನಿಗಳು, ಕೈತಪ್ಪಿದ ಎಚ್-1ಬಿ (H1B) ವೀಸಾ ಲಾಟರಿಗಳು... ಕೊನೆಗೆ ಸ್ವಂತ ಉದ್ಯಮ ಕಟ್ಟಲು ಸಿಲಿಕಾನ್ ವ್ಯಾಲಿಯ ಆಕರ್ಷಕ ಸಂಬಳದ ಕೆಲಸವನ್ನೇ ತೊರೆದೆ. ಪ್ರತಿಯೊಂದು ಹೆಜ್ಜೆಯಲ್ಲೂ ನಾನು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿತ್ತು,&quot; ಎಂದು ಬರೆದಿದ್ದಾರೆ.&lt;/p&gt;&lt;h2&gt;ಅಸೂಯೆಯಿಂದ ನಕಲಿ ದೂರು ನೀಡಿದ್ದ ಪರಿಚಿತರು!&lt;/h2&gt;&lt;p&gt;ತಮ್ಮ ಯಶಸ್ಸನ್ನು ಸಹಿಸದ ಕೆಲವು ಪರಿಚಿತರೇ ತಮ್ಮ ವಿರುದ್ಧ ವಲಸೆ ಅಧಿಕಾರಿಗಳಿಗೆ (USCIS) ದೂರು ನೀಡಿದ್ದ ಘಟನೆಯನ್ನು ಸಂಸ್ಥಾಪಕ ಹಾಗೂ ಸಿಇಒ ಸೈಮನ್ ನೆನಪಿಸಿಕೊಂಡಿದ್ದಾರೆ. &quot;ಕೆಲವು ಅಸೂಯಾಪರ ವ್ಯಕ್ತಿಗಳು ನಾನು ವಂಚಕ ಎಂದು ಬಿಂಬಿಸಿ, ನನ್ನ ವಿರುದ್ಧ ಒಂದು ಬಲೆ ಹೆಣೆದರು. ಅದನ್ನು ಸುಂದರವಾಗಿ ಅಲಂಕರಿಸಿ USCIS ಗೆ ತಲುಪಿಸಿದರು. ಒಂದು ಕ್ಷಣ, ಪ್ರಪಂಚದ ಅತ್ಯಂತ ಶಕ್ತಿಶಾಲಿ ವಲಸೆ ವ್ಯವಸ್ಥೆಯು ಆ ಸುಳ್ಳು ದೂರಿಗೆ ಮರುಳಾಗುವ ಹಂತಕ್ಕೆ ತಲುಪಿತ್ತು. ಆದರೆ, ಈ ದೇಶವು ಕೊನೆಗೂ ನ್ಯಾಯಕ್ಕೆ ಹೆಸರುವಾಸಿ ಎಂಬುದನ್ನು ನಿರೂಪಿಸಿತು. ಅಂತಿಮವಾಗಿ ನನಗೆ ನ್ಯಾಯ ಸಿಕ್ಕಿತು.&quot;&lt;/p&gt;&lt;h2&gt;ಸಹ-ವಲಸಿಗರಿಗೆ ಮತ್ತು ಕನಸುಗಾರರಿಗೆ ನೀಡಿದ ಸಂದೇಶ&lt;/h2&gt;&lt;p&gt;ತಮ್ಮ ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಪ್ರಮುಖ ಕಾರಣವೇ ಇತರರಿಗೆ ಭರವಸೆ ತುಂಬುವುದು ಎಂದು ತಿಳಿಸಿರುವ ಅವರು, ಕಷ್ಟಪಡುತ್ತಿರುವ ವಲಸಿಗರಿಗೆ ಈ ಕೆಳಗಿನಂತೆ ಸಂದೇಶ ನೀಡಿದ್ದಾರೆ:&lt;/p&gt;&lt;p&gt;&quot;ನೀವು ಎಫ್-1 (F1) ವಿದ್ಯಾರ್ಥಿ ವೀಸಾದಲ್ಲಿದ್ದು, ಮನೆಯಿಂದ ಸಾವಿರಾರು ಮೈಲಿ ದೂರದಲ್ಲಿದ್ದು ಭಯದಲ್ಲಿದ್ದರೆ... ಈ ಯಶಸ್ಸು ನಿಮಗಾಗಿ.&quot;&lt;/p&gt;&lt;p&gt;&quot;ನೀವು H1B, O1, L1 ವೀಸಾದಲ್ಲಿದ್ದು, ಸಮಯದ ಗಡಿಯಾರ ನೋಡುತ್ತಾ ಲಾಟರಿ ಫಲಿತಾಂಶಕ್ಕೆ ಪ್ರಾರ್ಥಿಸುತ್ತಿದ್ದರೆ... ಇದು ನಿಮಗಾಗಿ.&quot;&lt;/p&gt;&lt;p&gt;&quot;ಎಂದಿಗೂ ಮುಗಿಯದ ಗ್ರೀನ್ ಕಾರ್ಡ್ (Green Card) ಕಾಯುವಿಕೆಯಲ್ಲಿ ಸಿಲುಕಿಕೊಂಡಿದ್ದರೆ... ಇದು ನಿಮಗಾಗಿ.&quot;&lt;/p&gt;&lt;p&gt;&quot;ನಿಮಗೆ ಸಿಕ್ಕ ಸಾಮಾನ್ಯ ಜೀವನಕ್ಕಿಂತ ದೊಡ್ಡದಾದ ಕನಸನ್ನು ಕಾಣುವ ಧೈರ್ಯ ನಿಮಗಿದ್ದರೆ... ಇದು ಖಂಡಿತ ನಿಮಗಾಗಿ.&quot;&lt;/p&gt;&lt;p&gt;ಮುಂದುವರಿದು, ನೀವು ಸಾಗುತ್ತಿರುವ ಅದೇ ಕಠಿಣ ಹಾದಿಯಲ್ಲಿ ನಾನೂ ನಡೆದು ಬಂದಿದ್ದೇನೆ. ಈ ಅನುಭವವು ವಲಸಿಗರ ಪರವಾಗಿ ನಿಲ್ಲುವ ನನ್ನ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ. ನನ್ನನ್ನು ಗಡೀಪಾರು ಮಾಡಬೇಕೆಂದು ಬಯಸಿದ್ದ ಟ್ರೋಲ್&zwnj;ಗಳ ಮಧ್ಯೆ, ನಾನು ಇವತ್ತು ಅಮೆರಿಕನ್ ಪೌರನಾಗಿದ್ದೇನೆ. ಆದರೆ ಮಾನಸಿಕವಾಗಿ ನಾನು ಇಂದಿಗೂ ವಲಸಿಗನೇ. ನಮಗಾಗಿ ನಾನು ಸದಾ ಹೋರಾಡುತ್ತೇನೆ. ಕಾನೂನನ್ನು ಗೌರವಿಸಿ, ಸರಿಯಾದ ಹಾದಿಯಲ್ಲಿ ಸಾಗಿ, ಕಷ್ಟಪಟ್ಟು ಕೆಲಸ ಮಾಡುತ್ತಿರಿ ಎಂದು ಕರೆ ನೀಡಿದ್ದಾರೆ.&lt;/p&gt;&lt;h2&gt;ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ&lt;/h2&gt;&lt;p&gt;ಸೈಮನ್ ಶೆಟ್ಟಿ ಅವರ ಈ ಪೋಸ್ಟ್&zwnj;ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;&quot;ಅಭಿನಂದನೆಗಳು ಸೈಮನ್! ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾದಾಗಿನಿಂದ ಇಲ್ಲಿಯವರೆಗೆ ನೀವು ಬೆಳೆದು ಬಂದ ಹಾದಿ ನೋಡಿ ಹೆಮ್ಮೆಯಾಗುತ್ತದೆ,&quot; ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, &quot;ನಿಮಗೆ ಅಮೆರಿಕನ್ ಪೌರತ್ವ ಸಿಗಲು ಒಟ್ಟು ಎಷ್ಟು ವರ್ಷಗಳು ಬೇಕಾದವು?&quot; ಎಂದು ಕುತೂಹಲದಿಂದ ಪ್ರಶ್ನಿಸಿದ್ದಾರೆ. ಇನ್ನು ಹಲವರು &quot;ಇದು ನಿಜಕ್ಕೂ ಸ್ಪೂರ್ತಿದಾಯಕ ಸಾಹಸ, ಹಾಗೂ ನಿಮ್ಮ ಸಾಧನೆಗೆ ಶುಭಾಶಯಗಳು ಸಹೋದರ,&quot; ಎಂದು ಅಭಿನಂದಿಸಿದ್ದಾರೆ.&lt;/p&gt;&lt;h2&gt;ಯಾರೀ ಸೈಮನ್ ಶೆಟ್ಟಿ?&lt;/h2&gt;&lt;p&gt;ಲಿಂಕ್ಡ್&zwnj;ಇನ್ (LinkedIn) ಪ್ರೊಫೈಲ್ ಪ್ರಕಾರ, ಸೈಮನ್ ಶೆಟ್ಟಿ ಅವರು ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (VTU) ಎಂಜಿನಿಯರಿಂಗ್ ಪದವಿ ಮುಗಿಸಿದ ನಂತರ, ಅಮೆರಿಕದ ಪ್ರತಿಷ್ಠಿತ ಅರಿಜೋನಾ ಸ್ಟೇಟ್ ವಿಶ್ವವಿದ್ಯಾಲಯದಿಂದ (Arizona State University) ಸ್ನಾತಕೋತ್ತರ ಪದವಿ (MS) ಪೂರೈಸಿದರು.&lt;/p&gt;&lt;p&gt;ತಮ್ಮ ವೃತ್ತಿಜೀವನವನ್ನು ಬಿಎಸ್ಎನ್ಎಲ್ (BSNL) ಸಂಸ್ಥೆಯಲ್ಲಿ ಇಂಟರ್ನ್ ಆಗಿ ಪ್ರಾರಂಭಿಸಿದ ಅವರು, ನಂತರ ಅಮೆರಿಕದ ದೈತ್ಯ ಕಂಪನಿಗಳಾದ ಟೆಸ್ಲಾ (Tesla) ಮತ್ತು ಲಿಫ್ಟ್ (Lyft) ನಂತಹ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಬಳಿಕ 2023 ರಲ್ಲಿ ತಮ್ಮದೇ ಆದ ಸ್ವಂತ ಟೆಕ್ ಕಂಪನಿಯನ್ನು ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/viral/from-rural-karnataka-saiman-shetty-beats-visa-struggles-to-gain-us-citizenship-tech-entrepreneur-inspiring-story-gdp/articleshow-h9kmc8l"/>
        </item>
        <item>
            <title><![CDATA[ಮನೆಯ ಗೋಡೆ ಕೊರೆಯುತ್ತಿದ್ದಾಗ ಸುರಿದ ಬಂಗಾರದ ನಾಣ್ಯಗಳು! ಕಾರ್ಮಿಕರಿಗೆ ಸಿಕ್ತು ಬರೋಬ್ಬರಿ ₹100 ಕೋಟಿ ಚಿನ್ನದ ನಿಧಿ!]]></title>
            <link>https://kannada.asianetnews.com/viral/belgium-gold-treasure-found-in-wall-workers-find-100-crore-gold-bars-coins/articleshow-hackhqw</link>
            <guid isPermaLink="true">https://kannada.asianetnews.com/viral/belgium-gold-treasure-found-in-wall-workers-find-100-crore-gold-bars-coins/articleshow-hackhqw</guid>
            <pubDate>Sat, 15 Aug 2026 13:35:09 +0530</pubDate>
            <description><![CDATA[&lt;p&gt;ಹಳೆಯ ಮನೆಯೊಂದರ ದುರಸ್ತಿ ವೇಳೆ ಕಾರ್ಮಿಕರಿಗೆ ಗೋಡೆಯೊಳಗೆ ₹100 ಕೋಟಿ ಮೌಲ್ಯದ ಚಿನ್ನದ ನಿಧಿ ಪತ್ತೆಯಾಗಿದೆ. ತಮ್ಮ ಪ್ರಾಮಾಣಿಕತೆಯನ್ನು ಮೆರೆದ ಕಾರ್ಮಿಕರು ಅದನ್ನು ಪೊಲೀಸರಿಗೆ ಒಪ್ಪಿಸಿದ್ದು, ಇದೀಗ ಕಾನೂನಿನ ಪ್ರಕಾರ ಅದರ ಮಾಲೀಕರಿಗಾಗಿ ಕಾಯಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0272esrxmbb0jhd2721mqmm,imgname-gold-treasure-an-old-house-1786780924728.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾಗಳಲ್ಲಿ ಹಳೆಯ ಕಟ್ಟಡ ಅಥವಾ ಕೋಟೆಗಳ ಗೋಡೆ ಒಡೆದಾಗ ಚಿನ್ನದ ನಿಧಿ ಸಿಗುವುದನ್ನು ನೋಡಿರುತ್ತೇವೆ. ಆದರೆ, ಇಂತಹದ್ದೇ ಒಂದು ನಂಬಲಸಾಧ್ಯ ಘಟನೆ ನಿಜ ಜೀವನದಲ್ಲೂ ನಡೆದಿದೆ! ಬೆಲ್ಜಿಯಂನ ಈಸ್ಟ್ ಫ್ಲಾಂಡರ್ಸ್&zwnj;ನಲ್ಲಿ ಹಳೆಯ ಮನೆಯೊಂದರ ರಿಪೇರಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಬರೋಬ್ಬರಿ ₹100 ಕೋಟಿ (ಅಂದಾಜು 9 ಮಿಲಿಯನ್ ಯುರೋ) ಮೌಲ್ಯದ ಬೃಹತ್ ಚಿನ್ನದ ನಿಧಿ ಸಿಕ್ಕಿದೆ!&lt;/p&gt;&lt;h2&gt;&lt;strong&gt;ಘಟನೆ ನಡೆದಿದ್ದು ಹೇಗೆ? ನಾಣ್ಯವೆಂದು ಭಾವಿಸಿದ್ದ ವಿದ್ಯಾರ್ಥಿ!&lt;/strong&gt;&lt;/h2&gt;&lt;p&gt;ಈಸ್ಟ್ ಫ್ಲಾಂಡರ್ಸ್&zwnj;ನ ಡೆಂಡರ್&zwnj;ಮೊಂಡೆ ಪ್ರದೇಶದಲ್ಲಿರುವ ಹಳೆಯ ಕಟ್ಟಡವೊಂದರಲ್ಲಿ ಒಳಚರಂಡಿ (Sewage) ಪೈಪ್ ಅಳವಡಿಸುವ ಕೆಲಸ ನಡೆಯುತ್ತಿತ್ತು. ಕಾರ್ಮಿಕರು ನೆಲಮಾಳಿಗೆಯ ಗೋಡೆಯನ್ನು ಡ್ರಿಲ್ಲಿಂಗ್ ಮೆಷಿನ್&zwnj;ನಿಂದ ಕೊರೆಯುತ್ತಿದ್ದಾಗ, ಒಳಗಿನಿಂದ ಬಂಗಾರದ ನಾಣ್ಯಗಳು ಉದುರಲು ಪ್ರಾರಂಭಿಸಿದವು.&lt;/p&gt;&lt;p&gt;ಈ ಕಾಮಗಾರಿಯಲ್ಲಿ ಸಮ್ಮರ್ ಜಾಬ್ (ರಜಾ ದಿನದ ಕೆಲಸ) ಮಾಡುತ್ತಿದ್ದ 18 ವರ್ಷದ ವಿದ್ಯಾರ್ಥಿ ಕೋಬೆ (Kobe) ಎಂಬಾತ ಮೊದಲಿಗೆ ಇವುಗಳನ್ನು ಸಾಮಾನ್ಯ 1 ಯುರೋ ನಾಣ್ಯಗಳು ಎಂದುಕೊಂಡಿದ್ದ. ಆದರೆ, ಡ್ರಿಲ್ಲಿಂಗ್ ಮುಂದುವರಿದಂತೆ ದೊಡ್ಡ ದೊಡ್ಡ ಚಿನ್ನದ ಗಟ್ಟಿಗಳು (Gold Bars) ಮತ್ತು ನಾಣ್ಯಗಳ ರಾಶಿಯೇ ಹೊರಬರಲಾರಂಭಿಸಿತು. ಆಗಲೇ ಕಾರ್ಮಿಕರಿಗೆ ತಾವು ನಿಂತಿರುವ ಜಾಗದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಿಧಿಯಿದೆ ಎಂಬ ಅರಿವಾಗಿದ್ದು!&lt;/p&gt;&lt;h2&gt;&lt;strong&gt;ತಟ್ಟೆ ತುಂಬಾ ಚಿನ್ನ: ಕಾರ್ಮಿಕರ ಅಪರೂಪದ ಪ್ರಾಮಾಣಿಕತೆ!&lt;/strong&gt;&lt;/h2&gt;&lt;p&gt;ಗೋಡೆಯ ಒಳಗಡೆಯಿಂದ ಪರಾತ್&zwnj;ಗಳ (ತಟ್ಟೆಗಳ) ತುಂಬ ಚಿನ್ನದ ನಾಣ್ಯಗಳು ಹಾಗೂ ಗಟ್ಟಿಗಳು ಪತ್ತೆಯಾಗಿವೆ. ಇಷ್ಟೊಂದು ಪ್ರಮಾಣದ ಚಿನ್ನವನ್ನು ಕಂಡು ಕಾರ್ಮಿಕರು ಕ್ಷಣಕಾಲ ಆಶ್ಚರ್ಯಚಕಿತರಾದರು.&lt;/p&gt;&lt;p&gt;ಆದರೆ, ಕಿಂಚಿತ್ತೂ ದುರಾಸೆಗೆ ಬೀಳದ ಸೈಟ್ ಮ್ಯಾನೇಜರ್ ಮಾರಿಯೋ ಹಾಗೂ ಅವರ ತಂಡ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತು. 'ಇಷ್ಟೊಂದು ಬೃಹತ್ ಪ್ರಮಾಣದ ಚಿನ್ನವನ್ನು ನಾವೇ ಇಟ್ಟುಕೊಳ್ಳುವುದು ಅಸಾಧ್ಯವಾಗಿತ್ತು. ಅಷ್ಟೇ ಅಲ್ಲದೆ ಅದು ಕಳ್ಳತನವಾಗುತ್ತಿತ್ತು. ಹಾಗಾಗಿ ತಕ್ಷಣ ಪೊಲೀಸರಿಗೆ ಒಪ್ಪಿಸಿದೆವು' ಎಂದು ಮ್ಯಾನೇಜರ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಈ ₹100 ಕೋಟಿ ಚಿನ್ನ ಯಾರಿಗೆ ಸೇರಿದ್ದು?&lt;/strong&gt;&lt;/h2&gt;&lt;p&gt;ಈ ಚಿನ್ನ ಪತ್ತೆಯಾದ ಆಸ್ತಿಯು &lsquo;CAW Oost-Vlaanderen&rsquo; ಎಂಬ ಸಮಾಜ ಸೇವಾ ಸಂಸ್ಥೆಗೆ ಸೇರಿದ್ದಾಗಿದೆ.&lt;/p&gt;&lt;p&gt;&lt;strong&gt;5 ವರ್ಷಗಳ ಗಡುವು: &lt;/strong&gt;ಬೆಲ್ಜಿಯಂ ಕಾನೂನಿನ ಪ್ರಕಾರ, ಈ ನಿಧಿಯ ಮೂಲ ಮಾಲೀಕರು ಯಾರೆಂದು ಪತ್ತೆಹಚ್ಚಲು ಮತ್ತು ಅವರು ಕ್ಲೈಮ್ ಮಾಡಲು 5 ವರ್ಷ (1,823 ದಿನಗಳು) ಕಾಲಾವಕಾಶ ನೀಡಲಾಗುತ್ತದೆ.&lt;/p&gt;&lt;p&gt;&lt;strong&gt;ಮಾಲೀಕರು ಬಾರದಿದ್ದರೆ ಪಾಲು: &lt;/strong&gt;ಒಂದು ವೇಳೆ 5 ವರ್ಷಗಳಲ್ಲಿ ಯಾರೂ ಸೂಕ್ತ ಪುರಾವೆಯೊಂದಿಗೆ ಹಕ್ಕು ಚಲಾಯಿಸದಿದ್ದರೆ ಮತ್ತು ಇದು ಯಾವುದೇ ಅಪರಾಧ ಕೃತ್ಯಕ್ಕೆ ಸಂಬಂಧಿಸಿಲ್ಲ ಎಂದು ಸಾಬೀತಾದರೆ, ಸಿವಿಲ್ ಕಾನೂನಿನ ಅನ್ವಯ ಈ ನಿಧಿಯನ್ನು ಆಸ್ತಿಯ ಮಾಲೀಕರು (ಸಂಸ್ಥೆ) ಮತ್ತು ನಿಧಿ ಪತ್ತೆಹಚ್ಚಿದ ಕಾರ್ಮಿಕರ ನಡುವೆ ಹಂಚಿಕೆ ಮಾಡಲಾಗುತ್ತದೆ.&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಸಾರ್ವಜನಿಕರ ದಂಡು: ಪೊಲೀಸರಿಂದ ಎಚ್ಚರಿಕೆ &amp;amp; ವೈರಲ್ ಡಿಪಿ!&lt;/strong&gt;&lt;/h2&gt;&lt;p&gt;ಮನೆಯ ಗೋಡೆಯಲ್ಲಿ ₹100 ಕೋಟಿ ನಿಧಿ ಸಿಕ್ಕ ಸುದ್ದಿ ಹರಡುತ್ತಿದ್ದಂತೆ, ಮತ್ತಷ್ಟು ಚಿನ್ನ ಹುಡುಕಲು ಜನರು ಸ್ಥಳಕ್ಕೆ ಧಾವಿಸಲು ಶುರುಮಾಡಿದರು. ತಕ್ಷಣ ಎಚ್ಚೆತ್ತ ಪೊಲೀಸರು, ಇಡೀ ಕಟ್ಟಡವನ್ನು ಸಂಪೂರ್ಣ ತಪಾಸಣೆ ಮಾಡಲಾಗಿದ್ದು, ಎಲ್ಲ ಚಿನ್ನವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸಾರ್ವಜನಿಕರು ಅಲ್ಲಿಗೆ ಬಂದು ಸಮಯ ಹಾಳುಮಾಡಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಕುತೂಹಲದ ಸಂಗತಿಯೆಂದರೆ, ಸ್ಥಳೀಯ ಪೊಲೀಸ್ ಠಾಣೆಯು ಈ ರೋಚಕ ಘಟನೆಯ ನೆನಪಿಗಾಗಿ ತಮ್ಮ ಅಧಿಕೃತ ಫೇಸ್&zwnj;ಬುಕ್ ಪ್ರೊಫೈಲ್ ಚಿತ್ರವನ್ನೇ ಚಿನ್ನದ ನಾಣ್ಯದ ಫೋಟೋಗೆ ಬದಲಾಯಿಸಿ ಸಂಭ್ರಮಿಸಿದೆ!&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/belgium-gold-treasure-found-in-wall-workers-find-100-crore-gold-bars-coins/articleshow-hackhqw"/>
        </item>
        <item>
            <title><![CDATA[ವ್ಯರ್ಥ ಆಹಾರದಿಂದ ಪರಿಸರ ಹಾನಿ ತಡೆಗೆ ಇರುವೆ ಬಳಕೆ: 18 ವರ್ಷದ ವಿದ್ಯಾರ್ಥಿನಿಯ ಅದ್ಭುತ ಸಂಶೋಧನೆ]]></title>
            <link>https://kannada.asianetnews.com/science/18-year-old-ananya-gulur-nagendra-builts-an-ant-powered-food-waste-digester-suc/articleshow-hepto79</link>
            <guid isPermaLink="true">https://kannada.asianetnews.com/science/18-year-old-ananya-gulur-nagendra-builts-an-ant-powered-food-waste-digester-suc/articleshow-hepto79</guid>
            <pubDate>Mon, 17 Aug 2026 21:41:07 +0530</pubDate>
            <description><![CDATA[ವಿಶ್ವಾದ್ಯಂತ ಆಹಾರ ತ್ಯಾಜ್ಯವು ಗಂಭೀರ ಸಮಸ್ಯೆಯಾಗಿದ್ದು, ಪರಿಸರ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು, ವಿದ್ಯಾರ್ಥಿನಿ ಅನನ್ಯಾ ಗುಲೂರ್ ನಾಗೇಂದ್ರ ಅವರು ಇರುವೆಗಳನ್ನು ಬಳಸಿ ಆಹಾರ ತ್ಯಾಜ್ಯವನ್ನು ಸಂಸ್ಕರಿಸುವ ವಿನೂತನ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಂಶೋಧನೆಯು ತ್ಯಾಜ್ಯ ನಿರ್ವಹಣೆಯಲ್ಲಿ ಇರುವೆಗಳ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m087thpw20kk4c9knzz9q3t5,imgname-ananya-gulur-nagendra-1786983040732.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವಾದ್ಯಂತ ಆಹಾರ ವ್ಯರ್ಥವು ಗರಿಷ್ಠ ಮಟ್ಟವನ್ನು ತಲುಪಿದೆ. UNEP ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2024 ರ ಪ್ರಕಾರ, ಜಾಗತಿಕ ಆರ್ಥಿಕತೆಗೆ ಆಹಾರ ನಷ್ಟ ಮತ್ತು ತ್ಯಾಜ್ಯದ ಒಟ್ಟು ವೆಚ್ಚವು ಸರಿಸುಮಾರು 1 ಟ್ರಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದೆ. ಮಾನವ ಬಳಕೆಗಾಗಿ ಉತ್ಪಾದಿಸುವ ಆಹಾರದ ಐದನೇ ಒಂದು ಭಾಗವು ಜಾಗತಿಕವಾಗಿ ಕಳೆದುಹೋಗುತ್ತದೆ ಅಥವಾ ವ್ಯರ್ಥವಾಗುತ್ತದೆ ಎಂದು ವರದಿ ಹೇಳುತ್ತದೆ. ಇದರ ಅರ್ಥ ಪ್ರತಿದಿನ ಸುಮಾರು ಒಂದು ಬಿಲಿಯನ್ ಊಟ ವ್ಯರ್ಥವಾಗುತ್ತಿದೆ. ಆರ್ಥಿಕ ಪರಿಣಾಮದ ಹೊರತಾಗಿ, ತಿರಸ್ಕರಿಸಿದ ಆಹಾರವು ಭೂಮಿಗೆ ಹೋಗುವುದರಿಂದ ಇದು ಪರಿಸರ ಸಮಸ್ಯೆಯನ್ನು ಉಂಟುಮಾಡುತ್ತದೆ, ಅಲ್ಲಿ ಅದು ಮಿಥೇನ್ ಹೊರಸೂಸುವಿಕೆಯಾಗಿ ಸಮಸ್ಯೆ ಉಂಟಾಗುತ್ತದೆ. ಸೊಸೈಟಿ ಫಾರ್ ಸೈನ್ಸ್ ಪ್ರಕಾರ, ಆಹಾರ ತ್ಯಾಜ್ಯವು ಭೂಕುಸಿತಗಳಿಂದ ಮಿಥೇನ್ ಹೊರಸೂಸುವಿಕೆಯ ಸುಮಾರು ಶೇಕಡಾ 58ರಷ್ಟಿದೆ.&lt;/p&gt;&lt;p&gt;ಈ ಸಮಸ್ಯೆಯನ್ನು ಪರಿಹರಿಸಲು, ಟೆಕ್ಸಾಸ್&zwnj;ನ ಪ್ಲಾನೋದ 18 ವರ್ಷದ ವಿದ್ಯಾರ್ಥಿನಿ ಅನನ್ಯಾ ಗುಲೂರ್ ನಾಗೇಂದ್ರ, ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಲು ಸಹಾಯವಾಗುವಂತೆ ಇರುವೆಗಳನ್ನು ಬಳಸುವ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದ್ದಾಳೆ! ಈ ವಿಧಾನವು 2026 ರ ರೆಜೆನೆರಾನ್ ಸೈನ್ಸ್ ಟ್ಯಾಲೆಂಟ್ ಸರ್ಚ್&zwnj;ನ ಅಂತಿಮ ಸ್ಪರ್ಧಿಗಳಲ್ಲಿ ಸ್ಥಾನ ಗಳಿಸಿದೆ. ಆಹಾರ ತ್ಯಾಜ್ಯವನ್ನು ಸಂಸ್ಕರಿಸಲು ಮತ್ತು ಭೂಮಿಯಿಂದ ಮಿಥೇನ್ ಹೊರಸೂಸುವಿಕೆಯನ್ನು ಸಂಭಾವ್ಯವಾಗಿ ಕಡಿಮೆ ಮಾಡಲು ಏರೋಬಿಕ್ ಡೈಜೆಸ್ಟರ್&zwnj;ನಲ್ಲಿ ಇರುವೆಗಳನ್ನು ಬಳಸಬಹುದೇ ಎನ್ನುವುದು ಈ ಸಂಶೋಧನೆಯ ವಿಷಯವಾಗಿದೆ.&lt;/p&gt;&lt;h2&gt;&lt;strong&gt;ಆಹಾರ ತ್ಯಾಜ್ಯವನ್ನು ನಿಭಾಯಿಸಲು ಇರುವೆಗಳು ಹೇಗೆ ಸಹಾಯ ಮಾಡಬಹುದು&lt;/strong&gt;&lt;/h2&gt;&lt;p&gt;ಪ್ರತಿ ಜಾತಿಯ ಇರುವೆ, ಪ್ರತಿದಿನ ಎಷ್ಟು ಆಹಾರ ತ್ಯಾಜ್ಯವನ್ನು ಸೇವಿಸಬಹುದು ಎಂಬುದನ್ನು ನಿರ್ಧರಿಸಲು ನಾಲ್ಕು ಇರುವೆ ಪ್ರಭೇದಗಳನ್ನು ಪರೀಕ್ಷಿಸುವ ಮೂಲಕ ಅನನ್ಯಾ ಸಂಶೋಧನೆ ಪ್ರಾರಂಭವಾಯಿತು. ಪರೀಕ್ಷಿಸಲ್ಪಟ್ಟ ಪ್ರಭೇದಗಳಲ್ಲಿ ಕ್ಯಾಂಪೊನೋಟಸ್ ಕ್ಯಾಸ್ಟಾನಿಯಸ್ ಅನ್ನು ಅತ್ಯಂತ ಪರಿಣಾಮಕಾರಿ ಪ್ರಭೇದವೆಂದು ಪ್ರಯೋಗಗಳು ಗುರುತಿಸಿವೆ. ಈ ಪ್ರಭೇದವು ಅತ್ಯಧಿಕ ಚಯಾಪಚಯ ದರವನ್ನು ಸಹ ದಾಖಲಿಸಿದೆ, ಇದು ಅನನ್ಯಾಳ ಪ್ರಸ್ತಾವಿತ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಗೆ ಪ್ರಬಲ ಅಭ್ಯರ್ಥಿಯಾಗಿದೆ.&lt;/p&gt;&lt;p&gt;ಆಹಾರ ತ್ಯಾಜ್ಯವನ್ನು ಇರುವೆ ಆಧರಿತ ವ್ಯವಸ್ಥೆಗೆ ತಿರುಗಿಸುವುದರಿಂದ ಮಿಥೇನ್ ಹೊರಸೂಸುವಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಂದಾಜು ಮಾಡಲು ಅನನ್ಯಾ, ನಂತರ ಒಂದು ಮಾದರಿಯನ್ನು ಅಭಿವೃದ್ಧಿಪಡಿಸಿದಳು. ಸಂಭಾವ್ಯ ಪರಿಸರ ಪ್ರಯೋಜನವನ್ನು ಅಂದಾಜು ಮಾಡಲು ಇರುವೆಗಳು ಸೇವಿಸುವ ತ್ಯಾಜ್ಯದ ಪ್ರಮಾಣವನ್ನು ಈಕೆ ಬಳಸಿದಳು. ಇದರ ತರುವಾಯ ಈಕೆ ಇರುವೆ ಆಧರಿತ ಏರೋಬಿಕ್ ಡೈಜೆಸ್ಟರ್ ಅನ್ನು ವಿನ್ಯಾಸಗೊಳಿಸಿದಳು. ಇದು ಆಮ್ಲಜನಕದ ಉಪಸ್ಥಿತಿಯಲ್ಲಿ ವಿಭಜನೆಯಾಗಲು ಅನುವು ಮಾಡಿಕೊಡುತ್ತದೆ.&lt;/p&gt;&lt;h3&gt;&lt;strong&gt;83% ರಷ್ಟು ದಕ್ಷತೆ ಸಾಧನೆ&lt;/strong&gt;&lt;/h3&gt;&lt;p&gt;ಸೊಸೈಟಿ ಫಾರ್ ಸೈನ್ಸ್ ಪ್ರಕಾರ, ಮೂಲಮಾದರಿಯ ಪರೀಕ್ಷೆಯು ಸರಿಸುಮಾರು 83% ರಷ್ಟು ದಕ್ಷತೆಯನ್ನು ಸಾಧಿಸಿತು. ವ್ಯವಸ್ಥೆಯ ದೊಡ್ಡ ಆವೃತ್ತಿಯನ್ನು $50,000 ಕ್ಕಿಂತ ಕಡಿಮೆ ಬೆಲೆಯಲ್ಲಿ ನಿರ್ಮಿಸಬಹುದೆಂದು ಅನನ್ಯಾ ಅಂದಾಜಿಸಿದ್ದಾಳೆ. ಆದಾಗ್ಯೂ, ಯೋಜನೆಯು ಆರಂಭಿಕ ಹಂತದ ವಿದ್ಯಾರ್ಥಿ ಸಂಶೋಧನಾ ಮೂಲಮಾದರಿಯಾಗಿ ಉಳಿದಿದೆ. ಇರುವೆ ಆಧರಿತ ಡೈಜೆಸ್ಟರ್&zwnj;ಗಳು ಅಸ್ತಿತ್ವದಲ್ಲಿರುವ ಭೂಕುಸಿತ ಅಥವಾ ವಾಣಿಜ್ಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಬದಲಾಯಿಸಲು ಸಿದ್ಧವಾಗಿವೆ ಎಂದು ಫಲಿತಾಂಶಗಳು ಸ್ಥಾಪಿಸುವುದಿಲ್ಲ.&lt;/p&gt;&lt;p&gt;ವಿವಿಧ ರೀತಿಯ ಮತ್ತು ಪ್ರಮಾಣದ ಆಹಾರ ತ್ಯಾಜ್ಯದೊಂದಿಗೆ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ, ಇರುವೆಗಳು ದೀರ್ಘಕಾಲದವರೆಗೆ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ವಿಧಾನವನ್ನು ಅಳೆಯಬಹುದೇ ಎಂದು ನಿರ್ಧರಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ವಿದ್ಯಾರ್ಥಿಗಳನ್ನು ಅವರ ಸಂಶೋಧನೆಯ ಸ್ವಂತಿಕೆ ಮತ್ತು ಸೃಜನಶೀಲತೆ ಹಾಗೂ ಅವರ ಸಾಧನೆಗಳು ಮತ್ತು ನಾಯಕತ್ವಕ್ಕಾಗಿ ಗುರುತಿಸುವ 2026 ರ ರೆಜೆನೆರಾನ್ ಸೈನ್ಸ್ ಟ್ಯಾಲೆಂಟ್ ಸರ್ಚ್&zwnj;ನಲ್ಲಿ ನಾಗೇಂದ್ರ ಅವರನ್ನು ಅಂತಿಮ ಸ್ಪರ್ಧಿಯಾಗಿ ಆಯ್ಕೆ ಮಾಡಲಾಗಿದೆ. 2026 ರ ಅಂತಿಮ ಸ್ಪರ್ಧಿ ಗುಂಪಿನಲ್ಲಿ 15 ರಾಜ್ಯಗಳಾದ್ಯಂತ 35 ಶಾಲೆಗಳ ವಿದ್ಯಾರ್ಥಿಗಳು ಸೇರಿದ್ದಾರೆ. ಅವರನ್ನು 300 ವಿದ್ವಾಂಸರು ಮತ್ತು 2,612 ಪ್ರವೇಶ ಪಡೆದವರಿಂದ ಆಯ್ಕೆ ಮಾಡಲಾಯಿತು, $250,000 ಉನ್ನತ ಬಹುಮಾನ ಸೇರಿದಂತೆ $1.8 ಮಿಲಿಯನ್&zwnj;ಗಿಂತಲೂ ಹೆಚ್ಚು ಬಹುಮಾನಗಳು ಲಭ್ಯವಿದೆ.&lt;/p&gt;&lt;p&gt;ಅನನ್ಯಾಳ ಯೋಜನೆಯು ಪರಿಚಿತ ಪರಿಸರ ಸಮಸ್ಯೆಗೆ ವಿಭಿನ್ನ ವಿಧಾನವನ್ನು ತೆಗೆದುಕೊಳ್ಳುತ್ತದೆ. ಇರುವೆಗಳನ್ನು ತಿರಸ್ಕರಿಸಿದ ಆಹಾರಕ್ಕೆ ಆಕರ್ಷಿತರಾಗಿ ಕಸ ಗುಡಿಸುವವರಂತೆ ಪರಿಗಣಿಸುವ ಬದಲು, ಅವುಗಳ ನೈಸರ್ಗಿಕ ಆಹಾರ ನಡವಳಿಕೆಯನ್ನು ನಿಯಂತ್ರಿತ ಜೈವಿಕ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯಲ್ಲಿ ಸೇರಿಸಬಹುದೇ ಎಂದು ಈಕೆಯ ಸಂಶೋಧನೆ ಪರಿಶೀಲಿಸುತ್ತದೆ. ಮೂಲಮಾದರಿಯಿಂದ ಸಾಧಿಸಲ್ಪಟ್ಟ 83% ದಕ್ಷತೆಯು ಆಹಾರ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಅರ್ಥವಲ್ಲ. ಆದಾಗ್ಯೂ, ತ್ಯಾಜ್ಯ ನಿರ್ವಹಣೆಗೆ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ನೈಸರ್ಗಿಕವಾಗಿ ಸಂಭವಿಸುವ ಜೈವಿಕ ಪ್ರಕ್ರಿಯೆಗಳನ್ನು ಸಂಭಾವ್ಯವಾಗಿ ಅನ್ವೇಷಿಸಬಹುದು ಎಂಬ ಆರಂಭಿಕ ಸೂಚನೆಯನ್ನು ಇದು ಒದಗಿಸುತ್ತದೆ.&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/science/18-year-old-ananya-gulur-nagendra-builts-an-ant-powered-food-waste-digester-suc/articleshow-hepto79"/>
        </item>
        <item>
            <title><![CDATA[ಯಶ್ ಹೇಳಿರೋ 'ಆ ಮಾತು' ಇಡೀ ಜಗತ್ತಿನ ಗಮನಕ್ಕೆ ಬಂದಿದೆ.. ರಾಕಿಂಗ್ ಸ್ಟಾರ್‌ಗೂ ಮೊದಲು ಯಾರಾದ್ರಾ ಹೀಗ್ ಹೇಳಿದ್ರಾ?]]></title>
            <link>https://kannada.asianetnews.com/entertainment/world-is-applauding-yash-for-his-remark-on-aap-ki-adalat-as-you-are-not-my-fans-if-you-do-not-respect-other-artists/articleshow-kecdtve</link>
            <guid isPermaLink="true">https://kannada.asianetnews.com/entertainment/world-is-applauding-yash-for-his-remark-on-aap-ki-adalat-as-you-are-not-my-fans-if-you-do-not-respect-other-artists/articleshow-kecdtve</guid>
            <pubDate>Mon, 17 Aug 2026 13:54:17 +0530</pubDate>
            <description><![CDATA[&lt;p&gt;ಈ ಮಾತನ್ನು ಇಡೀ ಜಗತ್ತಿಗೇ ಕೇಳುವಂತೆ ನಟ ಯಶ್ ಅವರು 'ಆಪ್&zwnj; ಕಿ ಅದಾಲತ್' ಶೋನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬಂದಿರೋದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಎಂಬುದು ನಿಜವಾದರೂ, 'ಒಂದು ಸ್ಪಷ್ಟ ಸಂದೇಶ ಕೂಡ ಯಶ್ ಅವರ ಮಾತಿನಲ್ಲಿದೆ. ಈ ಮಾತಿಗೆ ಶೋದಲ್ಲಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಏನದು ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m077zkqw7vcs23j2j6kjtv53,imgname-whatsapp-image-2026-08-07-at-4.37.54-pm--3--1786949652220.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash's response to Rashmika's question about 'showing off' actually a message for the whole world?ರಶ್ಮಿಕಾ 'ಶೋ ಆಫ್&zwnj;' ಪ್ರಶ್ನೆಗೆ ಯಶ್ ಕೊಟ್ಟ ಉತ್ತರ ಇಡೀ ಜಗತ್ತಿಗೇ ಕೊಟ್ಟ ಸಂದೇಶವೇ?&lt;/strong&gt;&lt;/p&gt;&lt;p&gt;ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಭಾರತದ ಖ್ಯಾತ ಶೋ 'ಆಪ್&zwnj; ಕಿ ಅದಾಲತ್&zwnj;'ನಲ್ಲಿ ಆಡಿರುವ ಒಂದೊಂದು ಮಾತೂ ಮುತ್ತು ಎನ್ನಿಸಿಕೊಂಡಿದೆ. ಆದರೆ, ಎಲ್ಲಕ್ಕಿಂತ ಹೆಚ್ಚು ಮಹತ್ವದ್ದು ಎನ್ನಬಹುದಾದ ಈ ಮಾತನ್ನು ಹಲವರು ಗಮನಿಸಿರಬಹುದು. ಎಲ್ಲ ಪ್ರಶ್ನೆಗಳಿಗೆ ಕೊಟ್ಟ ಉತ್ತರ ಕೂಡ ಮಾರ್ಮಿಕವೇ ಹೌದು. ಆದರೆ, ಮುಂದೆ ಹೇಳಲಿರುವ, ಯಶ್ ಆಡಿರುವ ಆ ಮಾತು ಸಾಕಷ್ಟು ಪ್ರಬುದ್ಧ ಉತ್ತರ ಎನ್ನಿಸಿದೆ. ಕಾರಣ, ಅದು ಸ್ಟಾರ್ ವಾರ್&zwnj;ಗೆ ಸಂಬಂಧಿಸಿದ್ದು, ಜೊತೆಗೆ ಭಾರತದಲ್ಲಿ ಪರಿಹಾರ ಕಾಣಲೇಬೇಕಾದ ಸಮಸ್ಯೆಗೆ ಸಂಬಂಧಿಸಿದ್ದು. ಅದೇನು ಅಂತ ನೋಡಿ..&lt;/p&gt;&lt;p&gt;&lt;img&gt;&lt;/p&gt;&lt;h2&gt;'ಆಪ್&zwnj; ಕಿ ಅದಾಲತ್&zwnj;' ಕೋರ್ಟ್&zwnj;&lt;/h2&gt;&lt;p&gt;ಹೌದು, 'ಆಪ್&zwnj; ಕಿ ಅದಾಲತ್&zwnj;' ಕೋರ್ಟ್&zwnj;ನಲ್ಲಿ ನಟ ಯಶ್ ಅವರಿಗೆ ಬಹಳಷ್ಟು ಪ್ರಶ್ನೆ ಕೇಳಲಾಗಿದೆ. ಅದರಲ್ಲಿ ಒಂದು- ಬರೋಬ್ಬರಿ 9 ವರ್ಷಗಳ ಹಿಂದೆ ನಟಿ ರಶ್ಮಿಕಾಗೆ ಸಂಬಂಧಿಸಿದ್ದು. ಕನ್ನಡದ ನಟಿ, 'ನ್ಯಾಷನಲ್ ಕ್ರಶ್&zwnj;' ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು, ನಟ ರಕ್ಷಿತ್&zwnj; ಶೆಟ್ಟಿ ಜೊತೆಗೆ ಭಾಗಿಯಾದ ಶೋ ಅದು. ಅಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ, ನಟಿ ರಶ್ಮಿಕಾ ಅವರು ಒತ್ತಡಕ್ಕೆ ಒಳಗಾಗಿ, 'ಗಿಫ್ಟ್&zwnj; ಹ್ಯಾಂಪರ್' ಗೆಲ್ಲುವ ಹಠಕ್ಕೆ ಬಿದ್ದು ಹೇಳಲು ಇಷ್ಟವಿಲ್ಲದಿದ್ದರೂ 'ಶೋ ಆಫ್&zwnj;' ಯಾರು ಎಂಬ ಪ್ರಶ್ನೆಗೆ ನಟ ಯಶ್ ಹೆಸರು ಹೇಳಿದ್ದಾರೆ. ಅದು ದೊಡ್ಡ ವಿವಾದವಾಗಿ, ನಟ ಯಶ್ ಅಭಿಮಾನಿಗಳು ಆಗಲೂ ಈಗಲೂ ರಶ್ಮಿಕಾರನ್ನು ದ್ವೇಷಿಸುವುದು ನಡೆಯುತ್ತಲೇ ಇತ್ತು.&lt;/p&gt;&lt;p&gt;&lt;img&gt;&lt;/p&gt;&lt;h3&gt;ಹೋಸ್ಟ್ ರಜತ್ ಶರ್ಮಾ ಕೇಳಿದ ಪ್ರಶ್ನೆಗೆ ನಟ ಯಶ್ ಅವರು ಹೀಗೆ ಉತ್ತರ ಕೊಟ್ಟಿದ್ದಾರೆ!&lt;/h3&gt;&lt;p&gt;'ಆಪ್&zwnj; ಕಿ ಅದಾಲತ್' ಶೋದಲ್ಲಿ, ಹೋಸ್ಟ್ ರಜತ್ ಶರ್ಮಾ ಕೇಳಿದ ಪ್ರಶ್ನೆಗೆ ನಟ ಯಶ್ ಅವರು ಹೀಗೆ ಉತ್ತರ ಕೊಟ್ಟಿದ್ದಾರೆ: ಕೆಲವೊಂದು ಬಕ್ವಾಸ್ ಶೋಗಳು ಇರುತ್ತವೆ. ಅಲ್ಲಿ ಎರಡೋ ನಾಲ್ಕೋ ಆಪ್ಶನ್ ಕೊಟ್ಟು, ಒಂದು ಹೆಸರು ಹೇಳಲೇಬೇಕು ಎಂಬ ಪ್ರೆಶರ್ ತರುತ್ತಾರೆ. ಆ ಸಮಯದಲ್ಲಿ ರಶ್ಮಿಕಾ ಕೊಟ್ಟ ಉತ್ತರ ಅದಾಗಿರಬಹುದು. ಅಷ್ಟಕ್ಕೂ ಅಂದು ರಶ್ಮಿಕಾ ಅವರು ಆಗತಾನೇ ಸಿನಿಮಾರಂಗಕ್ಕೆ ಬಂದ ಹೊಸದು. ಅವರಿಗೆ ಎಲ್ಲವೂ ಹೊಸತು. ಸಿನಿಮಾರಂಗದ ಬಗ್ಗೆ ಅಷ್ಟೇನೂ ಇರವಿಲ್ಲದ, ವೈಯಕ್ತಿಕವಾಗಿ ಪರಿಚಯವಿಲ್ಲದ ನನ್ನ ಬಗ್ಗೆ ಜಸ್ಟ್ ಒಂದು ಆಯ್ಕೆ ಎನ್ನುವಂತೆ ಅವರು ಅಂದು ಹೇಳಿರೋ ಆ ಮಾತನ್ನು ಅಷ್ಟೇನೂ ಸೀರಿಯಸ್ಸಾಗಿ ತೆಗೆದುಕೊಳ್ಳುವ ಅಗತ್ಯವೇ ಇಲ್ಲ. ಅಷ್ಟಕ್ಕೂ ನನ್ನ ವ್ಯಕ್ತಿತ್ವ ಬೇರೆಯವರ ಕಣ್ಣಿನ ದೃಷ್ಟಿಯ ಮೂಲಕ ನಿರ್ಧಾರ ಆಗೋದಿಲ್ಲ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹೀಗೆಂದು ಹೇಳಿದ ಯಶ್ ಕೊನೆಗೊಂದು ಮಾತು ಹೇಳಿದ್ದಾರೆ. ಅದನ್ನು ಇಡೀ ಜಗತ್ತು ಕೇಳಿಸಿಕೊಂಡಿದೆ. ಆ ಮಾತಲ್ಲಿ ಅದೆಷ್ಟು ಮೆಚ್ಯೂರಿಟಿ ಇದೆ, ಅದೆಂಥಾ ಪ್ರಬುದ್ಧತೆ ಮನೆಮಾಡಿದೆ ಎಂದರೆ, ಇಡೀ ಜಗತ್ತು ಯಶ್ ಮಾತನ್ನು ಮೆಚ್ಚಿಕೊಂಡಿದೆ. ಜಗತ್ತಿನಲ್ಲಿ ಎಲ್ಲೆಲ್ಲಿ ಸ್ಟಾರ್&zwnj;ವಾರ್ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಭಾರತದಲ್ಲಿ ಹಾಗೂ ನಮ್ಮ ಕನ್ನಡನಾಡಿನಲ್ಲಿ ಅದು ಚಿತ್ರರಂಗದ ಒಂದು ಭಾಗವೇ ಆಗಿ ಬೇರೂರಿಬಿಟ್ಟಿದೆ. ಯಶ್ ಹೇಳಿರೋ ಈ ಮಾತನ್ನು ಕೇಳಿ ನಟರ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ಸ್ಟಾರ್&zwnj;ನಟರುಗಳೂ ಕೂಡ ಅಚ್ಚರಿಗೆ ಒಳಗಾಗಿ ಮೆಚ್ಚುಗೆ ಸೂಚಿಸಲೇಬೇಕು. ಹೌದು ಯಶ್ ಹೇಳಿದ್ದಾರೆ- &quot;ಬೇರೆ ಕಲಾವಿದರನ್ನು ಗೌರವಿಸದಿದ್ದರೆ ನೀವು ನನ್ನ ಅಭಿಮಾನಿಗಳೇ ಅಲ್ಲ' ಎಂದಿದ್ದಾರೆ ಯಶ್.&lt;/p&gt;&lt;p&gt;&lt;img&gt;&lt;/p&gt;&lt;p&gt;ಈ ಮಾತನ್ನು ಇಡೀ ಜಗತ್ತಿಗೇ ಕೇಳುವಂತೆ ನಟ ಯಶ್ ಅವರು 'ಆಪ್&zwnj; ಕಿ ಅದಾಲತ್' ಶೋನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬಂದಿರೋದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಎಂಬುದು ನಿಜವಾದರೂ, ಇಂಥ ಪ್ರಶ್ನೆಯನ್ನು ಭವಿಷ್ಯದಲ್ಲಿ ನಟ ಯಶ್&zwnj; ಅವರಿಗೆ ಕೇಳವಂತೆ ಆಗಬಾರದು ಎಂಬ ಉದ್ದೇಶದ ಜೊತೆಗೆ, 'ಯಾರೋ ಒಬ್ಬರ ಬಗ್ಗೆ ಇನ್ಯಾರೋ ಒಬ್ಬರು ಅಭಿಪ್ರಾಯವನ್ನು ಇಟ್ಟುಕೊಂಡು ಅಭಿಮಾನಿಗಳು ಕಚ್ಚಾಡಬಾರದು, ಸೋಷಿಯಲ್ ಮೀಡಿಯಾಗಳಲ್ಲಿ ವಾದ-ವಿವಾದ ನಡೆಯಬಾರದು' ಎಂಬ ಸ್ಪಷ್ಟ ಸಂದೇಶ ಕೂಡ ಯಶ್ ಅವರ ಮಾತಿನಲ್ಲಿದೆ. ಈ ಮಾತಿಗೆ ಶೋದಲ್ಲಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಜೊತೆಗೆ, ಜಗತ್ತಿನಲ್ಲಿರುವ 'ಬುದ್ದಿವಂತರ ಸಮೂಹ'ದಿಂದ ಕೂಡ ಯಶ್ ಅವರಿಗೆ ಕೇಳಿಸದಂತೆ, ಜಗತ್ತಿನ ಅರಿವಿಗೆ ಬಾರದಂತೆ 'ಕ್ಲಾಪ್ಸ್&zwnj;' ಬೀಳುತ್ತಿದೆ. ಇದೇ ಅಲ್ಲವೇ ಮಾನವೀಯತೆ ಬೆರೆತ ಪ್ರಬುದ್ಧತೆ ಎಂದರೆ? ನೀವ್ ಏನಂತೀರಾ?&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/world-is-applauding-yash-for-his-remark-on-aap-ki-adalat-as-you-are-not-my-fans-if-you-do-not-respect-other-artists/articleshow-kecdtve"/>
        </item>
        <item>
            <title><![CDATA[1473 ರ ಕಾಲದ ವಿಶ್ವಪ್ರಸಿದ್ಧ ಚಿತ್ರಕಾರ ಆಂಟೊನೆಲ್ಲೊ ಅಪರೂಪದ 4 ವರ್ಣಚಿತ್ರ ಕಲಾಕೃತಿಗಳು ಕಳವು!]]></title>
            <link>https://kannada.asianetnews.com/world-news/thieves-bypass-alarms-at-mume-museum-to-steal-priceless-15th-century-art-gdp/articleshow-ou0pbb7</link>
            <guid isPermaLink="true">https://kannada.asianetnews.com/world-news/thieves-bypass-alarms-at-mume-museum-to-steal-priceless-15th-century-art-gdp/articleshow-ou0pbb7</guid>
            <pubDate>Sun, 16 Aug 2026 20:55:49 +0530</pubDate>
            <description><![CDATA[ಇಟಲಿಯ ಮೆಸ್ಸಿನಾ ಪ್ರಾದೇಶಿಕ ವಸ್ತುಸಂಗ್ರಹಾಲಯದಿಂದ ಖ್ಯಾತ ವರ್ಣಚಿತ್ರಕಾರ ಆಂಟೊನೆಲ್ಲೊ ಡ ಮೆಸ್ಸಿನಾ ಅವರ ನಾಲ್ಕು ಅಪರೂಪದ ಕಲಾಕೃತಿಗಳು ಕಳುವಾಗಿವೆ. ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಕಳ್ಳರು 'ಸ್ಯಾನ್ ಗ್ರೆಗೋರಿಯೊ ಪಾಲಿಪ್ಟಿಚ್' ಮತ್ತು 'ಪಿಯೆಟಾ' ದಂತಹ ಅಮೂಲ್ಯ ಕೃತಿಗಳನ್ನು ದೋಚಿದ್ದಾರೆ. ಈ ಘಟನೆಯು ಕಲಾ ಜಗತ್ತಿಗೆ ದೊಡ್ಡ ನಷ್ಟವೆಂದು ಪರಿಗಣಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m05j6dkmmr6qx5g4yj8j8gv2,imgname---1786893252212.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೆಸ್ಸಿನಾ (ಇಟಲಿ)&lt;/strong&gt;: ಇಟಲಿಯ ಪ್ರಸಿದ್ಧ 'ಫೆರಾಗೊಸ್ಟೊ' ರಜಾದಿನಗಳ ವೇಳೆಯಲ್ಲಿ ಮೆಸ್ಸಿನಾದ ಪ್ರಾದೇಶಿಕ ವಸ್ತುಸಂಗ್ರಹಾಲಯದಿಂದ ಸಿಸಿಲಿಯನ್ ನವೋದಯ ಯುಗದ ಖ್ಯಾತ ವರ್ಣಚಿತ್ರಕಾರ ಆಂಟೊನೆಲ್ಲೊ ಡ ಮೆಸ್ಸಿನಾ ಅವರ ನಾಲ್ಕು ಅಪರೂಪದ ಕಲಾಕೃತಿಗಳು ಕಳುವಾಗಿವೆ ಎಂದು ಇಟಾಲಿಯನ್ ಮಾಧ್ಯಮಗಳು ವರದಿ ಮಾಡಿವೆ. ಶನಿವಾರ ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ವಸ್ತುಸಂಗ್ರಹಾಲಯಕ್ಕೆ ನುಗ್ಗಿದ ಕಳ್ಳರು, ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಹಾಗೂ ಅಲಾರಂಗಳನ್ನು ಬೈಪಾಸ್ ಮಾಡಿ ಅಮೂಲ್ಯ ವರ್ಣಚಿತ್ರಗಳೊಂದಿಗೆ ಪರಾರಿಯಾಗಿದ್ದಾರೆ.&lt;/p&gt;&lt;h2&gt;ಕಳುವಾದ ಪ್ರಸಿದ್ಧ ವರ್ಣಚಿತ್ರಗಳು:&lt;/h2&gt;&lt;p&gt;ಕಳುವಾದ ಕಲಾಕೃತಿಗಳಲ್ಲಿ 1473 ರ ಕಾಲದ ವಿಶ್ವಪ್ರಸಿದ್ಧ 'ಸ್ಯಾನ್ ಗ್ರೆಗೋರಿಯೊ ಪಾಲಿಪ್ಟಿಚ್' ಕೃತಿಯ ಐದು ಫಲಕಗಳ ಪೈಕಿ ಮೂರು ಫಲಕಗಳು ಸೇರಿವೆ. ಜೊತೆಗೆ 'ಪಿಯೆಟಾ' ಕಲಾಕೃತಿಯಲ್ಲಿ ವರ್ಜಿನ್ ಮೇರಿ ಮತ್ತು ಸತ್ತ ಕ್ರಿಸ್ತನನ್ನು ಚಿತ್ರಿಸುವ ಎರಡು ಬದಿಯ ಫಲಕವೂ ದರೋಡೆಯಾಗಿದೆ. ಇಟಾಲಿಯನ್ ಸುದ್ದಿ ಸಂಸ್ಥೆ 'ಲಾಪ್ರೆಸ್' ಪ್ರಕಾರ, ಎರಡನೆಯ ಕಲಾಕೃತಿಯನ್ನು ಸಶಸ್ತ್ರ ಪ್ರದರ್ಶನ ಸಿಲಿಂಡರ್ ಪೆಟ್ಟಿಗೆಯಿಂದ ಬಲವಂತವಾಗಿ ತೆಗೆಯಲಾಗಿದೆ.&lt;/p&gt;&lt;p&gt;ಸಂಗ್ರಹಾಲಯದ ನಿರ್ದೇಶಕಿ ಮಾರಿಸಾ ಮರ್ಕ್ಯುರಿಯೊ ಕಳವಳ ವ್ಯಕ್ತಪಡಿಸಿ, ನಡೆದ ಘಟನೆಯಿಂದ ನಮಗೆ ತೀವ್ರ ಆಘಾತವಾಗಿದೆ. ಕಳುವಾದ ಕೃತಿಗಳು ಆಂಟೊನೆಲ್ಲೊ ಅವರ ಅತ್ಯಂತ ಪ್ರಮುಖ ಹಾಗೂ ಚಾರಿತ್ರಿಕ ಕಲಾಕೃತಿಗಳಾಗಿದ್ದವು. ಇದು ನಮ್ಮ ವಸ್ತುಸಂಗ್ರಹಾಲಯ, ನಗರ ಹಾಗೂ ಇಡೀ ಕಲಾ ಜಗತ್ತಿಗೆ ತುಂಬಲಾರದ ಅಪಾರ ನಷ್ಟ, ಎಂದು ವಿಷಾದಿಸಿದ್ದಾರೆ. ತನಿಖಾಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ವಸ್ತುಸಂಗ್ರಹಾಲಯವನ್ನು ಭಾನುವಾರ ಮುಚ್ಚಲಾಗಿತ್ತು.&lt;/p&gt;&lt;h2&gt;ಮಾರುಕಟ್ಟೆಯಲ್ಲಿ ಆಂಟೊನೆಲ್ಲೊ ಕಲಾಕೃತಿಗಳ ಬೇಡಿಕೆ:&lt;/h2&gt;&lt;p&gt;ಆಂಟೊನೆಲ್ಲೊ ಅವರ ವರ್ಣಚಿತ್ರಗಳಿಗೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ, ಇಟಲಿ ಸರ್ಕಾರವು ಅವರ 'ಎಸೆ ಹೋಮೋ' ಎಂಬ ಭಕ್ತಿಗೀತೆಯ ವರ್ಣಚಿತ್ರವನ್ನು ನ್ಯೂಯಾರ್ಕ್&zwnj;ನ ಸೋಥೆಬಿಸ್ ಹರಾಜು ಸಂಸ್ಥೆಯಿಂದ 14.9 ಮಿಲಿಯನ್ ಡಾಲರ್ ಕೊಟ್ಟು ಖರೀದಿಸಿತ್ತು.&lt;/p&gt;&lt;p&gt;ಕಲಾ-ಅಪರಾಧ ವಿಶ್ಲೇಷಕಿ ಲಿಂಡಾ ಆಲ್ಬರ್ಟ್ಸನ್ 'ಲಾ ರಿಪಬ್ಲಿಕಾ' ಪತ್ರಿಕೆಗೆ ಪ್ರತಿಕ್ರಿಯಿಸಿ, ಇಂತಹ ವಿಶ್ವಪ್ರಸಿದ್ಧ ಕಲಾಕೃತಿಗಳನ್ನು ಕದಿಯುವುದು ಸುಲಭವಾದರೂ, ಅವು ತಕ್ಷಣ ಗುರುತಿಸಲ್ಪಡುವುದರಿಂದ ಕಾನೂನುಬದ್ಧವಾಗಿ ಮಾರಾಟ ಮಾಡುವುದು ಅತ್ಯಂತ ಕಷ್ಟ. ಹೀಗಾಗಿ ಅಪರಾಧಿಗಳು ಇಂತಹ ಕಲಾಕೃತಿಗಳನ್ನು ಇತರ ಅಕ್ರಮ ಚಟುವಟಿಕೆಗಳಲ್ಲಿ ಜಾಮೀನಾಗಿ (Collateral) ಬಳಸುವ ಸಾಧ್ಯತೆಯಿರುತ್ತದೆ ಎಂದು ವಿಶ್ಲೇಷಿಸಿದ್ದಾರೆ.&lt;/p&gt;&lt;h2&gt;ಇಟಲಿಯಲ್ಲಿ ಹೆಚ್ಚಿದ ಕಲಾಕೃತಿಗಳ ಕಳ್ಳತನ:&lt;/h2&gt;&lt;p&gt;ರೆನೊಯಿರ್, ಪಾಲ್ ಸೆಜಾನ್ನೆ ಮತ್ತು ಹೆನ್ರಿ ಮ್ಯಾಟಿಸ್ಸೆ ಅವರ ಮಿಲಿಯನ್&zwnj;ಗಟ್ಟಲೆ ಯುರೋ ಮೌಲ್ಯದ ಮೂರು ಪ್ರಸಿದ್ಧ ಕಲಾಕೃತಿಗಳನ್ನು ಇಟಾಲಿಯನ್ ಅಧಿಕಾರಿಗಳು ಮರುಪಡೆಯಲಿದ್ದಾರೆ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಈ ದರೋಡೆ ಸಂಭವಿಸಿದೆ. ಮಾರ್ಚ್ ತಿಂಗಳಲ್ಲಿ ಪರ್ಮಾದ ಮ್ಯಾಗ್ನಾನಿ ರೊಕ್ಕಾ ಫೌಂಡೇಶನ್&zwnj;ನಿಂದ ಕಳುವಾಗಿದ್ದ ರೆನೊಯಿರ್ ಅವರ &quot;ಫಿಶ್&quot;, ಸೆಜಾನ್ನೆ ಅವರ ಸ್ಟಿಲ್ ಲೈಫ್ ವಿತ್ ಚೆರ್ರಿಸ್ ಮತ್ತು ಮ್ಯಾಟಿಸ್ಸೆ ಅವರ ಒಡಾಲಿಸ್ಕ್ ಆನ್ ದಿ ಟೆರೇಸ್ ಚಿತ್ರಗಳನ್ನು ಕ್ಯಾರಬಿನಿಯೇರಿ ಕಲಾ ಚೇತರಿಕೆ ತಂಡವು ಪತ್ತೆಹಚ್ಚಿದ್ದು, ಸದ್ಯ ಮೆಸ್ಸಿನಾ ಕಳವು ಪ್ರಕರಣದ ತನಿಖೆ ತೀವ್ರಗೊಂಡಿದೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/thieves-bypass-alarms-at-mume-museum-to-steal-priceless-15th-century-art-gdp/articleshow-ou0pbb7"/>
        </item>
        <item>
            <title><![CDATA[ಮಲಗಿದ್ದ ಹಿಮ ಕರಡಿಯನ್ನು ಹಾರ್ನ್ ಹಾಕಿ ಎಬ್ಬಿಸಿದ, ವನ್ಯಜೀವಿ ಶಾಪಕ್ಕೆ ಸಿಬ್ಬಂದಿಗೆ ನಿದ್ದೆ ಇಲ್ಲದಾಯಿತು]]></title>
            <link>https://kannada.asianetnews.com/world-news/norway-ship-crew-fined-rs-4-5-lakh-for-honking-to-wake-sleeping-polar-bear/articleshow-wlwbk6a</link>
            <guid isPermaLink="true">https://kannada.asianetnews.com/world-news/norway-ship-crew-fined-rs-4-5-lakh-for-honking-to-wake-sleeping-polar-bear/articleshow-wlwbk6a</guid>
            <pubDate>Sat, 15 Aug 2026 22:55:02 +0530</pubDate>
            <description><![CDATA[&lt;p&gt;ಹಿಮ ಕರಡಿ ತನ್ನ ಪಾಡಿಗೆ ಗಾಢ ನಿದ್ದೆಯಲ್ಲಿತ್ತು. ನಿದ್ದೆಯಲ್ಲಿದ್ದ ಹಿಮ ಕರಡಿಯನ್ನು ಉದ್ದೇಶಪೂರ್ವಕವಾಗಿ ಹಡಗಿನ ಹಾರ್ನ್ ಹಾಕಿ ಸಿಬ್ಬಂದಿ ಎಬ್ಬಿಸಿದ್ದ. ಆತಂಕದಿಂದಲೇ ಎದ್ದ ಹಿಮ ಕರಡಿ ನೀಡಿದ ಶಾಪ ಕ್ಯಾಪ್ಟನ್&zwnj;ಗೆ ತಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgcdthvjp58cn740ztawft3b,imgname-fotojet---2026-02-01t163106.117-1769943680882.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾರ್ವೆ (ಆ.16) &lt;/strong&gt;ವನ್ಯಜೀವಿಗಳ ಪೈಕಿ ಹೆಚ್ಚು ಮುದ ನೀಡುವ ಪ್ರಾಣಿಗಳಲ್ಲಿ ಹಿಮಕರಡಿ ಕೂಡ ಒಂದು. ಅದರಲ್ಲೂ ಮರಿ ಹಿಮಕರಡಿಗಳ ಆಟ ನೋಡುವುದೇ ಆನಂದ. ಆರ್ಕ್ಟಿಕ್ ವಲಯದಲ್ಲಿ ಹಡಗು ಸಂಚರಿಸುತ್ತಿದ್ದಂತೆ ಸಿಬ್ಬಂದಿ ದೂರದ ಹೆಪ್ಪುಗಟ್ಟಿದ ಹಿಮದಲ್ಲಿ ಮಲಗಿದ್ದ ಹಿಮಕರಡಿಯನ್ನು ಗಮನಿಸಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಹಿಮಕರಡಿಯನ್ನು ಎಬ್ಬಿಸಲು ಹಾರ್ನ್ ಬಳಕೆ ಮಾಡಿದ್ದಾನೆ. ಹಡಗಿನ ದೈತ್ಯ ಹಾರ್ನ್&zwnj;ನಿಂದ ಹಿಮಕರಡಿ ಆತಂಕದಿಂದಲೇ ಎದ್ದಿದೆ. ಎದ್ದು ಸುತ್ತಲು ನೋಡಿದಾಗ ಹಡಗು ಚಲಿಸುತ್ತಿರುವುದು ನೋಡಿ ಗಾಬರಿಯಾಗಿ ದೂರ ಸರಿದಿದೆ. ಆದರೆ ತನ್ನ ನಿದ್ದೆ ಹಾಳು ಮಾಡಿದ ಸಿಬ್ಬಂದಿಗೆ ಹಿಮಕರಡಿ ಶಾಪ ನೀಡಿದೆ. ವಿಶೇಷ ಅಂದರೆ ಇದೀಗ ಸಿಬ್ಬಂದಿ ನಿದ್ದೆ ಹಾಳಾಗಿದೆ.&lt;/p&gt;&lt;p&gt;ಈ ಘಟನೆ ನಾರ್ವೆಯ ಆರ್ಕ್ಟಿಕ್ ಪ್ರದೇಶದ ಸ್ವಾಲ್&zwnj;ಬಾರ್ಡ್ ದ್ವೀಪದಲ್ಲಿ ನಡೆದಿದೆ. ಪ್ರವಾಸಿ ಹಡಗಿನಲ್ಲಿದ್ದ ಸಿಬ್ಬಂದಿ ಹಿಮದ ಮೇಲೆ ನಿದ್ದೆ ಮಾಡುತ್ತಿದ್ದ ಹಿಮಕರಡಿಯನ್ನು ಗಮನಿಸಿದ್ದಾನೆ. ಕರಡಿಯನ್ನು ಹತ್ತಿರದಿಂದ ನೋಡಿ ಆನಂದಿಸಲು ಮುಂದಾಗಿದ್ದಾನೆ. ಮಲಗಿದ್ದ ಕಾರಣ ಹಿಮ ಕರಡಿಯನ್ನು ಎಬ್ಬಿಸಿದರೆ ಮತ್ತಷ್ಟು ಹಿತ ಎಂದುಕೊಂಡು ಹಡಗಿನ ದೈತ್ಯ ಹಾರ್ನ್ ಹಾಕಿದ್ದಾನೆ.&lt;/p&gt;&lt;p&gt;ಹಡಿನ ದೈತ್ಯ ಹಾರ್ನ್ ಶಬ್ದಕ್ಕೆ ಹಿಮಕರಡಿ ಆತಂಕದಿಂದ ಎದ್ದಿದೆ. ಬಳಿಕ ಗಾಬರಿಯಿಂದಲೇ ಓಡಿದೆ. ಸಿಬ್ಬಂದಿಯ ಪ್ರಯತ್ನವನ್ನು ಹಡಗಿನಲ್ಲಿದ್ದ ಹಲವು ಪ್ರವಾಸಿಗರು ವಿಡಿಯೋ ಮಾಡಿದ್ದಾರೆ. ಎಲ್ಲರೂ ವಾವ್ ಎಂದು ಉದ್ಗರಿಸಿದ್ದಾರೆ. ಹಿಮ ಕರಡಿ, ಅದರ ಓಟ ನೋಡಿದೆವು ಎಂದು ಖುಷಿ ಪಟ್ಟಿದ್ದಾರೆ. ಇತ್ತ ಸಿಬ್ಬಂದಿ ಕೂಡ ತನ್ನ ಬಯಕೆಯಂತೆ ಮಾಡಿದ್ದೇನೆ ಎಂದು ಹಿರಿ ಹಿರಿ ಹಿಗ್ಗಿದ್ದಾನೆ. ಆದರೆ ನಿದ್ದೆಯಿಂದ ಎದ್ದ ಕರಡಿಯ ಶಾಪ ಸಿಬ್ಬಂದಿಗೆ ತಟ್ಟಿದೆ.&lt;/p&gt;&lt;h2&gt;ಸಿಬ್ಬಂದಿಗೆ 4.5 ಲಕ್ಷ ರೂಪಾಯಿ ದಂಡ&lt;/h2&gt;&lt;p&gt;ಹಿಮ ಕರಡಿಯ ನಿದ್ದೆ ಹಾಳು ಮಾಡಿದ ಸಿಬ್ಬಂದಿಯ ನಿದ್ದೆ ಇದೀಗ ಹಾಳಾಗಿದೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ನಾರ್ವೆ ಸರ್ಕಾರ ಗರಂ ಆಗಿದೆ. ವನ್ಯಜೀವಿ ಮೇಲೆ ದೌರ್ಜನ್ಯ, ಶಬ್ದ ಮಾಲಿನ್ಯ ಹಾಗೂ ಗಾಬರಿ ಹುಟ್ಟಿಸಿದ ಸಿಬ್ಬಂದಿ ವಿರುದ್ದ ಕ್ರಮ ಕೈಗೊಂಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ವನ್ಯಜೀವಿಯನ್ನು ಅನಗತ್ಯವಾಗಿ ಬೆದರಿಸುವುದು ಹಿಂಬಾಲಿಸುವುದು, ನೈಸರ್ಗಿಕ ನಡವಳಿಕೆಗೆ ಅಡಚಣೆ ತರುವುದು ಅಪರಾಧವಾಗಿದೆ. ಹೀಗಾಗಿ ನಾರ್ವೆ ಸರ್ಕಾರ ಹಡಗಿನ ಸಿಬ್ಬಂದಿಗೆ 4.5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ದಂಡದ ಮೊತ್ತ ಕೇಳಿ ಸಿಬ್ಬಂದಿ ಕಂಗಾಲಾಗಿದ್ದಾನೆ.&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/norway-ship-crew-fined-rs-4-5-lakh-for-honking-to-wake-sleeping-polar-bear/articleshow-wlwbk6a"/>
        </item>
        <item>
            <title><![CDATA[ಬರ್ತ್‌ಡೇ ದಿನವೇ ಹೊರಬಿತ್ತು ನೋವಿನ ಸುದ್ದಿ, ಮಿಸ್ ಅರ್ಥ್ ಕಿರೀಟ ಗೆದ್ದ 26ರ ಹರೆಯದ ಸುಂದರಿ ಸಾವು]]></title>
            <link>https://kannada.asianetnews.com/fashion/indonesian-beauty-who-won-miss-earth-crown-dies-at-26-heartbreaking-news-on-birthday/articleshow-xkz01r9</link>
            <guid isPermaLink="true">https://kannada.asianetnews.com/fashion/indonesian-beauty-who-won-miss-earth-crown-dies-at-26-heartbreaking-news-on-birthday/articleshow-xkz01r9</guid>
            <pubDate>Sat, 15 Aug 2026 19:04:46 +0530</pubDate>
            <description><![CDATA[&lt;p&gt;ಹುಟ್ಟಹಬ್ಬದ ದಿನ ಅಭಿಮಾನಿಗಳು, ಆಪ್ತರು ಸಂದೇಶ ರವಾನಿಸಿದ್ದರು. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ಮಿಸ್ ಬ್ಯೂಟಿ ಆಯೋಜಕ ಸಂಸ್ಥೆ ಶಾಕಿಂಗ್ ನ್ಯೂಸ್ ಬಹಿರಂಗಪಡಿಸಿದೆ. ಎಲ್ಲರ ನೆಚ್ಚಿನ ಮಿಸ್ ಅರ್ಥ್ ವಿಜೇತ ನಿಧನರಾಗಿದ್ದಾರೆ ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02t3h1drrksztjb1p6c2t1z,imgname-indonesia-miss-earth-beauty-dies-at-26-1786800882733.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಂಡೋನೇಷಿಯಾ (ಆ.16)&lt;/strong&gt; ಮಿಸ್ ಅರ್ಥ ಕಿರೀಟ ಗೆದ್ದ ಸುಂದರಿ. 26ನೇ ವರ್ಷದ ಹುಟ್ಟಹಬ್ಬಕ್ಕೆ ರಾತ್ರಿಯಿಂದಲೇ ಶುಭಾಶಯಗಳು ಹರಿದು ಬರಲು ಆರಂಭಿಸಿದೆ. ಸೋಶಿಯಲ್ ಮೀಡಿಯಾ, ಫೋನ್ ಸೇರಿದಂತೆ ಎಲ್ಲೆಡೆಗಳಿಂದ ಸಂದೇಶಗಳು ಹರಿದು ಬಂದಿದೆ. ಆದರೆ ಪ್ರತಿಕ್ರಿಯೆ ಮಾತ್ರ ಇರಲಿಲ್ಲ. ಬೆಳಗಾಗುತ್ತಿದ್ದಂತೆ ಅಭಿಮಾನಿಗಳು, ಆಪ್ತರು, ಸೌಂದರ್ಯ ಲೋಕದ ಹಲವರು ಆಘಾತಗೊಂಡಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಅರ್ಥ್ ಕಿರೀಟ ಗೆಲ್ಲುವ ಮೂಲಕ ವಿಶ್ವದ ಗಮನಸೆಳೆದಿದ್ದ ಕೇವಲ 26 ಹರೆಯದ ಇಂಡೋನೇಷಿಯಾದ ಪುತ್ರಿ ಆ್ಯಂಡ್ರಿಯಾನ್ ಜುಫಿಚಾ ನಿಧನರಾಗಿದ್ದಾರೆ ಅನ್ನೋ ಸುದ್ದಿ ಬಹಿರಂಗವಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಹಲವರು ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;ಹುಟ್ಟುಹಬ್ಬ ದಿನವೇ ಸಾವಿನ ಸುದ್ದಿ&lt;/h2&gt;&lt;p&gt;ಪುತ್ರಿ ಆ್ಯಂಡ್ರಿಯಾನ್ ಜುಫಿಚಾ 26ನೇ ವರ್ಷದ ಹುಟ್ಟಹಬ್ಬದ ದಿನವೇ ಅವರ ಸಾವಿನ ಸುದ್ದಿ ಹೊರಬಂದಿದೆ. ಇಂಡೋನೇಷಿಯಾ ಅರ್ಥ್ ಬ್ಯೂಟಿ ಸಂಸ್ಥೆ ಹಾಗೂ ಜುಫಿಚಾ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಸಾವಿನ ಸುದ್ದಿಯನ್ನು ಖಚಿತಪಡಿಸಿದೆ. ಸಾವಿಗೆ ಕಾರಣ ಬಹಿರಂಗವಾಗಿಲ್ಲ. ಆ್ಯಂಡ್ರಿಯಾನ್ ಅಕಾಲಿಕ ಮರಣದ ಕುರಿತು ಭಾವುಕ ಪೋಸ್ಟ್ ಹಂಚಿಕೊಳ್ಳಲಾಗಿದೆ. ಹಠಾತ್ ಸಾವಿಗೆ ಕಾರಣ ಏನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆದರೆ ಸಂಸ್ಥೆ ಅಥವಾ ಕುಟುಂಬಸ್ಥರು ಸಾವಿನ ಕಾರಣ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.&lt;/p&gt;&lt;p&gt;ಆ್ಯಂಡ್ರಿಯಾನಿ ಜುಫಿಚಾ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಕಾನೂನು ವಿದ್ಯಾರ್ಥಿಯಾಗಿರುವ ಜುಫಿಚಾ, 2025ರಲ್ಲಿ ಮಿಸ್ ಇಂಡೋನೇಷಿಯಾ ಅರ್ಥ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇಂಡೋನೇಷಿಯಾದ ಹಲವು ಜಾಹೀರಾತು, ಪ್ರಮೋಶನ್ , ಬ್ರ್ಯಾಂಡ್&zwnj;ಗಳಲ್ಲಿ ಜುಫಿಚಾ ಕಾಣಿಸಿಕೊಂಡಿದ್ದಾರೆ. ಪರಿಸರ ಜಾಗೃತಿ ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳಲ್ಲೂ ಜುಫಿಚಾ ತೊಡಗಿಸಿಕೊಂಡಿದ್ದರು. ಹವಾಮಾನ ಬದಲಾವಣೆ ಹಾಗೂ ಕಾಡುಗಳ ರಕ್ಷಣೆ ವಿಚಾರದಲ್ಲ ಇಂಡೋನೇಷಿಯಾ ಸರ್ಕಾರ ಜೊತೆ ಕೈಜೋಡಿಸಿ ಅಭಿಯಾನ ನಡೆಸಿದ್ದರು.&lt;/p&gt;&lt;p&gt;ಪುತ್ರಿ ಆ್ಯಂಡ್ರಿಯಾನಿ ಜುಫಿಚಾ ನಿಧನ ಸುದ್ದಿ ಖಚಿತವಾಗುತ್ತಿದ್ದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಫ್ಯಾಷನ್ ಡಿಸೈನರ್, ಬ್ಯೂಟಿ ಸಂಸ್ಥೆಗಳು, ಇಂಡೋನೇಷಿಯಾ ಅರ್ಥ್ ಬ್ಯೂಟಿ ಸಂಸ್ಥೆ ಆಯೋಜಕರು ಭಾವುಕರಾಗಿದ್ದಾರೆ. ಕೇವಲ 26ನೇ ವಯಸ್ಸಿನಲ್ಲಿ ಅಕಾಲಿಕ ಮರಣಹೊಂದಿದ ಸುಂದರಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹಠಾತ್ ಸಾವಿಗೆ ಕಾರಣವೇನು ಅನ್ನೋ ಚರ್ಚೆಗಳು ಶುರುವಾಗಿದೆ. ಇದರ ನಡುವೆ ಕುಟುಂಬ ವಿಶೇಷ ಮನವಿ ಮಾಡಿಕೊಂಡಿದ್ದು, ನೋವಿನ ಸಂದರ್ಭದಲ್ಲಿ ಖಾಸಗಿತನ ಗೌರವಿಸುವಂತೆ ಮನವಿ ಮಾಡಿದೆ.&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/fashion/indonesian-beauty-who-won-miss-earth-crown-dies-at-26-heartbreaking-news-on-birthday/articleshow-xkz01r9"/>
        </item>
        <item>
            <title><![CDATA[ಜೇಫ್ರಿ ಎಪ್ಸ್ಟೀನ್ ಆಡಂಬರದ Pರ್ನ್‌ನಿಂದ AI ಸಾಮ್ರಾಜ್ಯ, ಆಂಥ್ರೊಪಿಕ್ ಸಿಇಒ ಪತ್ನಿ ಕ್ಯಾಮಿ ಕ್ಲಾರ್ಕ್ ರೋಚಕ ಪಯಣ!]]></title>
            <link>https://kannada.asianetnews.com/world-news/cami-clark-inside-the-epstein-links-and-untold-rise-of-anthropic-ceo-dario-amodei-wife-gdp/articleshow-yud9918</link>
            <guid isPermaLink="true">https://kannada.asianetnews.com/world-news/cami-clark-inside-the-epstein-links-and-untold-rise-of-anthropic-ceo-dario-amodei-wife-gdp/articleshow-yud9918</guid>
            <pubDate>Sun, 16 Aug 2026 12:06:08 +0530</pubDate>
            <description><![CDATA[ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡೆ ಅವರ ಪತ್ನಿ ಕ್ಯಾಮಿ ಕ್ಲಾರ್ಕ್, ವಿವಾದಾತ್ಮಕ ಆರಂಭದಿಂದ ಸಿಲಿಕಾನ್ ವ್ಯಾಲಿಯ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಜೇಫ್ರಿ ಎಪ್ಸ್ಟೀನ್ ಜೊತೆಗಿನ ಸಂಪರ್ಕದಿಂದ ಹಿಡಿದು, ಇಂದು ಜಾಗತಿಕ AI ತಂತ್ರಜ್ಞಾನ ಮತ್ತು ರಾಜಕೀಯದ ಮೇಲೆ ತೆರೆಮರೆಯಲ್ಲಿ ಪ್ರಭಾವ ಬೀರುವವರೆಗಿನ ಅವರ ಅಸಾಮಾನ್ಯ ಪಯಣವನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m04mby6fy22qmr0w292shsa3,imgname-jeffrey-epstein-cami-clark-1786861975758.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಮುಂಚೂಣಿ ಸಂಸ್ಥೆ 'ಆಂಥ್ರೊಪಿಕ್'ನ (Anthropic) ಸಿಇಒ ಡೇರಿಯೊ ಅಮೋಡೆ ಅವರ ಪತ್ನಿ ಕ್ಯಾಮಿ ಕ್ಲಾರ್ಕ್, ಇಂದು ಸಿಲಿಕಾನ್ ವ್ಯಾಲಿಯ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಆದರೆ, ಈ ಹಂತವನ್ನು ತಲುಪುವ ಹಲವು ವರ್ಷಗಳ ಮೊದಲೇ ಅವರ ಜೀವನ ಚರಿತ್ರೆಯು ಕುಖ್ಯಾತ ಜೇಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕಕ್ಕೆ ಬಂದಿತ್ತು.&lt;/p&gt;&lt;h2&gt;'ಐಷಾರಾಮಿ ಪೋರ್ನ್' ಮತ್ತು ಎಪ್ಸ್ಟೀನ್ ಸಂಪರ್ಕ&lt;/h2&gt;&lt;p&gt;'ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, 2011 ರಲ್ಲಿ ಕ್ಯಾಮಿ ಕ್ಲಾರ್ಕ್ ಮತ್ತು ಅವರ ಉದ್ಯಮ ಪಾಲುದಾರ ಮಿಚೆಲ್ ಕ್ಯಾಪೊಸೆಫಾಲೊ 'ಎಡ್ಡಿಸ್' (Eddis) ಎಂಬ ಸ್ಟಾರ್ಟ್&zwnj;ಅಪ್&zwnj;ಗಾಗಿ ಹೂಡಿಕೆದಾರರನ್ನು ಹುಡುಕುತ್ತಿದ್ದರು. ಅದನ್ನು ಅವರು ಕ್ರಾಂತಿಕಾರಿ ಹಾಗೂ ಮಹಿಳಾ-ಕೇಂದ್ರಿತ ಪೋರ್ನ್ ಕಂಪನಿ ಎಂದು ಕರೆದುಕೊಂಡಿದ್ದರು. ಸಾಹಿತ್ಯಿಕ ಏಜೆಂಟ್ ಜಾನ್ ಬ್ರಾಕ್&zwnj;ಮನ್, ಆಗಲೇ ಲೈಂಗಿಕ ಅಪರಾಧಿಯಾಗಿ ನೋಂದಾಯಿತನಾಗಿದ್ದ ಜೇಫ್ರಿ ಎಪ್ಸ್ಟೀನ್&zwnj;ಗೆ ಈ ಇಬ್ಬರು ಮಹಿಳೆಯರನ್ನು ಪರಿಚಯಿಸಿದರು.&lt;/p&gt;&lt;p&gt;ಬ್ರಾಕ್&zwnj;ಮನ್ ಎಪ್ಸ್ಟೀನ್&zwnj;ಗೆ ಬರೆದ ಪತ್ರದಲ್ಲಿ, ಕ್ಯಾಮಿ ಮತ್ತು ಮಿಚೆಲ್ ಲಾಸ್ ಏಂಜಲೀಸ್&zwnj;ನಲ್ಲಿ ಮಹಿಳಾ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಉಚಿತ ಐಷಾರಾಮಿ ಪೋರ್ನ್ ಚಿತ್ರ ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದಾರೆ. ನೀವು ಅವರೊಂದಿಗೆ ಭೋಜನಕ್ಕೆ ಸಂಪರ್ಕ ಸಾಧಿಸಬೇಕು ಎಂದು ತಿಳಿಸಿದ್ದರು.&lt;/p&gt;&lt;p&gt;ಕ್ಲಾರ್ಕ್ ಈ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಎಪ್ಸ್ಟೀನ್&zwnj;ಗೆ ಸಲಹೆ ನೀಡಿದರೂ, ಆತ ಅದನ್ನು ನಿರಾಕರಿಸಿದನು. ತರುವಾಯ, ಕ್ಲಾರ್ಕ್ ಫಿಟ್&zwnj;ನೆಸ್ ಟ್ರ್ಯಾಕರ್, ಪೋಷಣೆ, ಮುಟ್ಟಿನ ಚಕ್ರ ಹಾಗೂ ಮಾನಸಿಕ ಸ್ಥಿತಿಯ ಡೇಟಾವನ್ನು ಸಂಯೋಜಿಸುವ ಮಹಿಳಾ ಕೇಂದ್ರಿತ ಸಾಮಾಜಿಕ ಆಹಾರ ಪದ್ಧತಿ ಅಪ್ಲಿಕೇಶನ್ ಉದ್ಯಮದತ್ತ ಗಮನ ಹರಿಸಿದರು. ಸರ್ಕಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, ಕ್ಲಾರ್ಕ್ ಮತ್ತು ಎಪ್ಸ್ಟೀನ್ ನಡುವಿನ ಸಂವಹನವು ಸುಮಾರು ಎರಡು ವರ್ಷಗಳ ಕಾಲ ಮುಂದುವರಿಯಿತು. ಅವರು ಎಪ್ಸ್ಟೀನ್&zwnj;ನನ್ನು ಗೃಹಪ್ರವೇಶ ಪಾರ್ಟಿಗೆ ಆಹ್ವಾನಿಸಿದ್ದರು ಮತ್ತು ಲಿಂಕ್ಡ್&zwnj;ಇನ್&zwnj;ನಲ್ಲೂ ಸಂಪರ್ಕದಲ್ಲಿದ್ದರು.&lt;/p&gt;&lt;h2&gt;ವೈಯಕ್ತಿಕ ಜೀವನ ಮತ್ತು ಸಿಲಿಕಾನ್ ವ್ಯಾಲಿ ಪ್ರವೇಶ&lt;/h2&gt;&lt;p&gt;1979 ರಲ್ಲಿ ನೆವಾಡಾದ ರೆನೋದಲ್ಲಿ ಜನಿಸಿದ ಕ್ಲಾರ್ಕ್, ಕಾಲೇಜು ಪದವಿ ಪೂರೈಸಲಿಲ್ಲ. 20 ನೇ ವಯಸ್ಸಿನಲ್ಲಿ 64 ವರ್ಷದ ವಾಸ್ತುಶಿಲ್ಪಿ ವಾಲ್ಡೆಮರ್ ಎಕ್ಲೋಫ್ III ಅವರನ್ನು ವಿವಾಹವಾದ ಅವರು, ಮೂರು ವರ್ಷಗಳ ನಂತರ ವಿಚ್ಛೇದನ ಪಡೆದರು. ಆ ಬಳಿಕ ಸಾಲದ ಸುಳಿಗೆ ಸಿಲುಕಿ ದಿವಾಳಿತನಕ್ಕೂ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;2010 ರ ಸುಮಾರಿಗೆ 'ಎಡೈಸ್' ಮೂಲಕ ಸಾಂಪ್ರದಾಯಿಕ ಅಶ್ಲೀಲ ಉದ್ಯಮಕ್ಕೆ ಪರ್ಯಾಯವಾಗಿ &quot;ಬೌದ್ಧಿಕವಾಗಿ ಅಶ್ಲೀಲ&quot; ಎಂಬ ಟ್ಯಾಗ್&zwnj;ಲೈನ್&zwnj;ನೊಂದಿಗೆ ಕಾರ್ಯನಿರ್ವಹಿಸಲು ಯತ್ನಿಸಿದರು. ಆದರೆ, ಶೀಘ್ರದಲ್ಲೇ ಅವರ ಗಮನ ಸಿಲಿಕಾನ್ ವ್ಯಾಲಿಯ ಉನ್ನತ ನೆಟ್&zwnj;ವರ್ಕ್&zwnj;ಗಳತ್ತ ತಿರುಗಿತು. 2011 ರಿಂದ ಮೂರು ವರ್ಷಗಳ ಕಾಲ ಅವರು ಗೂಗಲ್&zwnj;ನ ಮಾಜಿ ಸಿಇಒ ಎರಿಕ್ ಸ್ಮಿತ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಸ್ಮಿತ್ ಮುಂದೆ ಕ್ಲಾರ್ಕ್ ಅವರ ಮಹಿಳಾ-ಆರೋಗ್ಯ ಉದ್ಯಮದಲ್ಲೂ ಹೂಡಿಕೆ ಮಾಡಿದ್ದರು.&lt;/p&gt;&lt;p&gt;2014 ರಲ್ಲಿ ಕ್ಲಾರ್ಕ್, ಸ್ಟ್ಯಾನ್&zwnj;ಫೋರ್ಡ್&zwnj;ನಲ್ಲಿ ಪೋಸ್ಟ್&zwnj;ಡಾಕ್ಟರಲ್ ಸಂಶೋಧಕರಾಗಿದ್ದ ಡೇರಿಯೊ ಅಮೋಡೆ ಅವರೊಂದಿಗೆ ಡೇಟಿಂಗ್ ಪ್ರಾರಂಭಿಸಿದರು. ಪ್ರಿನ್ಸ್&zwnj;ಟನ್&zwnj;ನಿಂದ ಕಂಪ್ಯೂಟೇಶನಲ್ ನ್ಯೂರೋಸೈನ್ಸ್&zwnj;ನಲ್ಲಿ ಪಿಎಚ್&zwnj;ಡಿ ಪಡೆದಿದ್ದ ಅಮೋಡೆ, ನಂತರ ಬೈದು (Baidu), ಗೂಗಲ್ ಮತ್ತು ಓಪನ್&zwnj;ಎಐ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ AI ಜಗತ್ತಿನಲ್ಲಿ ಎತ್ತರಕ್ಕೆ ಬೆಳೆದರು.&lt;/p&gt;&lt;p&gt;ಈ ಅವಧಿಯಲ್ಲಿ ಕ್ಲಾರ್ಕ್ ಅವರ ವೃತ್ತಿಪರ ನೆಟ್&zwnj;ವರ್ಕ್ ಕೂಡ ವಿಸ್ತರಿಸಿತು. ತಮ್ಮ ಆಪ್ತ ಸ್ನೇಹಿತೆ ಮೀರಾ ಮುರಾಟಿಯವರನ್ನು ಓಪನ್&zwnj;ಎಐ ಸಹ-ಸಂಸ್ಥಾಪಕ ಗ್ರೆಗ್ ಬ್ರಾಕ್&zwnj;ಮನ್&zwnj;ಗೆ ಪರಿಚಯಿಸಿದ್ದೇ ಕ್ಲಾರ್ಕ್. ಮುರಾಟಿ ನಂತರ ಓಪನ್&zwnj;ಎಐನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾದರು (CTO). ಇದಲ್ಲದೆ, 2018 ರಲ್ಲಿ ಅಮೋಡೆ ಮತ್ತು ಎರಿಕ್ ಸ್ಮಿತ್ ಅವರ ಭೇಟಿಗೂ ಕ್ಲಾರ್ಕ್ ಸೇತುವೆಯಾಗಿದ್ದರು.&lt;/p&gt;&lt;h2&gt;ಆಂಥ್ರೊಪಿಕ್ ಸ್ಥಾಪನೆ ಮತ್ತು ಹಿನ್ನೆಲೆ ಪ್ರಭಾವ&lt;/h2&gt;&lt;p&gt;ಡಿಸೆಂಬರ್ 2020 ರಲ್ಲಿ, ಡೇರಿಯೊ ಅಮೋಡೆ, ಅವರ ಸಹೋದರಿ ಡೇನಿಯಲಾ ಮತ್ತು ಇತರ ಸಹೋದ್ಯೋಗಿಗಳು ಓಪನ್&zwnj;ಎಐನಿಂದ ಹೊರಬಂದು 'ಆಂಥ್ರೊಪಿಕ್' ಸಂಸ್ಥೆಯನ್ನು ಸ್ಥಾಪಿಸಿದರು. ಮೇ 2021 ರಲ್ಲಿ ಆಂಥ್ರೊಪಿಕ್ $124 ಮಿಲಿಯನ್ ನಿಧಿ ಸಂಗ್ರಹಿಸಿದಾಗ, ಎರಿಕ್ ಸ್ಮಿತ್ ಪ್ರಮುಖ ಹೂಡಿಕೆದಾರರಲ್ಲಿ ಒಬ್ಬರಾಗಿದ್ದರು.&lt;/p&gt;&lt;p&gt;ಫೆಬ್ರವರಿ 2021 ರಲ್ಲಿ ಕ್ಲಾರ್ಕ್, ಎಜಿಐ ನಿಧಿಯ ತಾಯಿ (Mother of AGI Fund) ಎಂಬ 40 ಪುಟಗಳ ಪ್ರಸ್ತಾವನೆಯನ್ನು ಸ್ಮಿತ್&zwnj;ಗೆ ಸಲ್ಲಿಸಿ ಆಂಥ್ರೊಪಿಕ್&zwnj;ನಲ್ಲಿ ಔಪಚಾರಿಕ ಹೂಡಿಕೆ ನಿರ್ವಹಣಾ ಪಾತ್ರವನ್ನು ಬಯಸಿದ್ದರು. ಆದರೆ, ಕಂಪನಿಯ ಇತರರಿಂದ ಬೆಂಬಲ ಸಿಗದ ಕಾರಣ ಈ ಯೋಜನೆ ಮುಂದುವರಿಯಲಿಲ್ಲ. ತರುವಾಯ ಅಮೋಡೆ ಮತ್ತು ಕ್ಲಾರ್ಕ್ ಇಟಲಿಯಲ್ಲಿ ವಿವಾಹವಾದರು.&lt;/p&gt;&lt;p&gt;ಆಂಥ್ರೊಪಿಕ್&zwnj;ನಲ್ಲಿ ಕ್ಲಾರ್ಕ್ ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿಲ್ಲದಿದ್ದರೂ, ಅವರು ಅಮೋಡೆಗೆ ಪ್ರಮುಖ ಕಾರ್ಯತಂತ್ರದ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾವೋಸ್, ಸನ್ ವ್ಯಾಲಿ ಕಾನ್ಫರೆನ್ಸ್ ಹಾಗೂ ನವದೆಹಲಿಯಲ್ಲಿ ನಡೆದ ಪ್ರಮುಖ AI ಶೃಂಗಸಭೆಗಳಲ್ಲಿ ಅವರು ಅಮೋಡೆ ಅವರೊಂದಿಗೆ ಭಾಗವಹಿಸಿದ್ದಾರೆ.&lt;/p&gt;&lt;p&gt;ವಿಶೇಷವೆಂದರೆ, ಕ್ಲಾರ್ಕ್ ಅವರ ಕುರಿತಾದ ಮಾಹಿತಿಯು ಆನ್&zwnj;ಲೈನ್&zwnj;ನಲ್ಲಿ ಅತ್ಯಂತ ವಿರಳವಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಅಂತರ್ಜಾಲದಿಂದ ಅವರ ವಿವರಗಳನ್ನು ತೆಗೆದುಹಾಕಲು ಯತ್ನಿಸಲಾಗಿದೆ. ಅಮೋಡೆ ಅವರ ವಿಕಿಪೀಡಿಯಾ ಪುಟದಲ್ಲೂ ಇತ್ತೀಚಿನವರೆಗೂ ಅವರ ವಿವಾಹದ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿರಲಿಲ್ಲ.&lt;/p&gt;&lt;h2&gt;ರಾಜಕೀಯ ಮತ್ತು ಪ್ರಸ್ತುತ ಸ್ಥಿತಿ&lt;/h2&gt;&lt;p&gt;ಆಂಥ್ರೊಪಿಕ್ ಸಂಸ್ಥೆಯು ಅಮೆರಿಕದ ರಾಜಕೀಯ ಮತ್ತು ಸರ್ಕಾರದ ಮಟ್ಟದಲ್ಲಿ ಪ್ರಮುಖ ಸಾಲಿನಲ್ಲಿ ನಿಂತಂತೆ, ಕ್ಲಾರ್ಕ್ ಅವರ ಪಾತ್ರವೂ ಗಮನಾರ್ಹವಾಗಿದೆ. ಪೆಂಟಗನ್&zwnj;ಗೆ 'ಕ್ಲೌಡ್' (Claude AI) ಬಳಕೆಯ ಮೇಲಿನ ನಿರ್ಬಂಧ ಸಡಿಲಿಸಲು ಅಮೋಡೆ ನಿರಾಕರಿಸಿದಾಗ ಟ್ರಂಪ್ ಆಡಳಿತದೊಂದಿಗೆ ಸಂಘರ್ಷವೇರ್ಪಟ್ಟಿತ್ತು. ಆ ಸಂದರ್ಭದಲ್ಲಿ ಕ್ಲಾರ್ಕ್, ಆಂಥ್ರೊಪಿಕ್ ಸಂಸ್ಥೆಯು ಅಮೆರಿಕವನ್ನು ರಕ್ಷಿಸುವ ಧ್ಯೇಯವನ್ನು ಹೊಂದಿದೆ ಎಂದು ಪ್ರಭಾವಿ ರಾಜಕೀಯ ವರ್ತುಲಗಳಲ್ಲಿ ಸಮರ್ಥಿಸಿಕೊಂಡಿದ್ದರು.&lt;/p&gt;&lt;p&gt;ಜುಲೈನಲ್ಲಿ ನಡೆದ ಸನ್ ವ್ಯಾಲಿ ಸಮ್ಮೇಳನದಲ್ಲೂ ಅವರು ಇವಾಂಕಾ ಟ್ರಂಪ್ ಮತ್ತು ಜೇರೆಡ್ ಕುಶ್ನರ್ ಅವರಂತಹ ಪ್ರಭಾವಿ ವ್ಯಕ್ತಿಗಳೊಂದಿಗೆ ಚರ್ಚೆ ನಡೆಸುತ್ತಿರುವುದು ಕಂಡುಬಂದಿತ್ತು. ಆರಂಭದಲ್ಲಿ ವಯಸ್ಕರ ಮನರಂಜನಾ ಉದ್ಯಮದಿಂದ ಪ್ರಾರಂಭವಾದ ಕ್ಯಾಮಿ ಕ್ಲಾರ್ಕ್ ಅವರ ಪಯಣ, ಇಂದು ಜಾಗತಿಕ AI ತಂತ್ರಜ್ಞಾನ ಮತ್ತು ರಾಜಕೀಯದ ಅತ್ಯುನ್ನತ ಮಟ್ಟದ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಹಂತಕ್ಕೆ ಬಂದು ತಲುಪಿದೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/cami-clark-inside-the-epstein-links-and-untold-rise-of-anthropic-ceo-dario-amodei-wife-gdp/articleshow-yud9918"/>
        </item>
    </channel>
</rss>
