<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Apr 2026 17:01:35 +0530</lastBuildDate>
        <atom:link href="https://kannada.asianetnews.com/rss/world-news" rel="self" type="application/rss+xml"/>
        <item>
            <title><![CDATA[ಕೋರ್ಟ್ ಕೇಸಲ್ಲಿ ಕೋಟಿ ಕೋಟಿ ಕಳೆದುಕೊಂಡ ಆಸ್ಟ್ರೇಲಿಯಾ ಶ್ರೀಮಂತ ಮಹಿಳೆ; ಸಂಪತ್ತನ್ನೆಲ್ಲಾ ಹಂಚುವಂತೆ ಆದೇಶ!]]></title>
            <link>https://kannada.asianetnews.com/world-news/australian-billionaire-gina-rinehart-ordered-to-share-mining-fortune-after-13-year-legal-battle-sat/articleshow-0dzwzyb</link>
            <guid isPermaLink="true">https://kannada.asianetnews.com/world-news/australian-billionaire-gina-rinehart-ordered-to-share-mining-fortune-after-13-year-legal-battle-sat/articleshow-0dzwzyb</guid>
            <pubDate>Wed, 15 Apr 2026 21:46:52 +0530</pubDate>
            <description><![CDATA[&lt;p&gt;ಆಸ್ಟ್ರೇಲಿಯಾದ ಶ್ರೀಮಂತೆ ಗೀನಾ ರೈನ್&zwnj;ಹಾರ್ಟ್ ವಿರುದ್ಧ ಅವರ ಇಬ್ಬರು ಮಕ್ಕಳು ಹಾಗೂ ತಂದೆಯ ಬ್ಯುಸಿನೆಸ್ ಪಾರ್ಟ್ನರ್&zwnj;ಗಳ ಮಕ್ಕಳು 13 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದರು. ಇದೀಗ ಕೋರ್ಟ್ ತೀರ್ಪು ನೀಡಿದ್ದು, ಗೀನಾ ತಮ್ಮ ಸಂಪತ್ತಿನ ಪಾಲನ್ನು ಹಂಚಿಕೊಳ್ಳಬೇಕಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8q02fxk17f939bd0t5qbsj,imgname-gina-rinehart-1776261532156.jpg" type="image/jpeg" height="390" width="690"/>
            <content:encoded><![CDATA[&lt;p&gt;ದಶಕಗಳ ಕಾಲ ನಡೆದ ಕಾನೂನು ಸಮರದ ನಂತರ, ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ಮಹಿಳೆ ಗೀನಾ ರೈನ್&zwnj;ಹಾರ್ಟ್ ತಮ್ಮ ಸಂಪತ್ತಿನ ಲಾಭಾಂಶವನ್ನು ಇತರ ಕುಟುಂಬ ಸದಸ್ಯರಿಗೆ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿದೆ.&amp;nbsp;&lt;/p&gt;&lt;p&gt;ಆಸ್ಟ್ರೇಲಿಯಾದ ನಂಬರ್ 1 ಶ್ರೀಮಂತೆ ಗೀನಾ, ತಮ್ಮ ಗಣಿಗಾರಿಕೆ ಸಾಮ್ರಾಜ್ಯದಿಂದ ಬರುವ ಲಾಭವನ್ನು ಬೇರೆ ಎರಡು ಕುಟುಂಬಗಳೊಂದಿಗೆ ಹಂಚಿಕೊಳ್ಳಬೇಕಾಗಿದೆ. 1992ರಲ್ಲಿ ಗೀನಾ ತಮ್ಮ ತಂದೆಯ ಗಣಿಗಳನ್ನು ವಹಿಸಿಕೊಂಡಿದ್ದರು. ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬಾರಾದಲ್ಲಿ ಈ ಗಣಿಗಳಿವೆ. ಗೀನಾ ಅವರ ಇಬ್ಬರು ಮಕ್ಕಳು ಮತ್ತು ಅವರ ತಂದೆಯ ಬ್ಯುಸಿನೆಸ್ ಪಾರ್ಟ್ನರ್&zwnj;ಗಳ ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿ 13 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.&amp;nbsp;&lt;/p&gt;&lt;p&gt;ಆಸ್ಟ್ರೇಲಿಯಾದ ಅತಿದೊಡ್ಡ ಕಬ್ಬಿಣದ ಅದಿರು ಗಣಿಗಳಿಂದ ಬರುವ ಲಾಭದ ಪಾಲನ್ನು ಗೀನಾ ಈಗ ಹಂಚಿಕೊಳ್ಳಬೇಕಾಗಿದೆ. ಪಿಲ್ಬರಾ ಪ್ರದೇಶದಲ್ಲಿರುವ ಅತ್ಯಂತ ಲಾಭದಾಯಕ ಕಬ್ಬಿಣದ ಅದಿರು ಗಣಿಗಳಿಂದ ಬರುವ ರಾಯಧನದ ಬಗ್ಗೆ ಈ ವಿವಾದವಿತ್ತು. ಆದರೆ, ಗಣಿಗಾರಿಕೆಯ ಹಕ್ಕು ರೈನ್&zwnj;ಹಾರ್ಟ್ ಅವರ ಬಳಿಯೇ ಇರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಅಮ್ಮನ ವಿರುದ್ಧವೇ ಮಕ್ಕಳಿಂದ ಆರೋಪ&lt;/strong&gt;&lt;/h2&gt;&lt;p&gt;ಆಸ್ಟ್ರೇಲಿಯಾದ ಅತಿದೊಡ್ಡ ಕಬ್ಬಿಣದ ಅದಿರು ಯೋಜನೆಗಳಲ್ಲಿ ಒಂದಾದ 'ಹೋಪ್ ಡೌನ್ಸ್' ಅನ್ನು ಕೇಂದ್ರವಾಗಿಟ್ಟುಕೊಂಡು ಈ ಕಾನೂನು ಸಮರ ನಡೆದಿತ್ತು. ಲಾಭದಾಯಕ ಗಣಿಗಾರಿಕೆ ಹಕ್ಕುಗಳನ್ನು ತಮಗೆ ಸಿಗದಂತೆ ಮಾಡಲು, ತಮ್ಮ ತಾಯಿ ಅವುಗಳನ್ನು ಫ್ಯಾಮಿಲಿ ಟ್ರಸ್ಟ್&zwnj;ನಿಂದ ವ್ಯವಹಾರದ ಇನ್ನೊಂದು ವಿಭಾಗಕ್ಕೆ ವರ್ಗಾಯಿಸಿದ್ದಾರೆ ಎಂದು ಗೀನಾ ರೈನ್&zwnj;ಹಾರ್ಟ್ ಅವರ ಮಕ್ಕಳು ಆರೋಪಿಸಿದ್ದರು. ದಶಕಗಳ ಹಿಂದೆ ಈ ಗಣಿಗಾರಿಕೆ ಪ್ರದೇಶಗಳನ್ನು ಪತ್ತೆಹಚ್ಚುವಲ್ಲಿ ಪಾಲುದಾರರ ಕುಟುಂಬಗಳು ವಹಿಸಿದ ಪಾತ್ರವು ಈ ತೀರ್ಪಿನಲ್ಲಿ ನಿರ್ಣಾಯಕವಾಯಿತು. ರೈನ್&zwnj;ಹಾರ್ಟ್ ಅವರ ಕಂಪನಿ 'ಹ್ಯಾನ್&zwnj;ಕಾಕ್ ಪ್ರಾಸ್ಪೆಕ್ಟಿಂಗ್' ಈ ಆಸ್ತಿಗಳ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರೂ, ಪಾಲುದಾರರ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಳೆದ ವರ್ಷವೊಂದರಲ್ಲೇ ರೈನ್&zwnj;ಹಾರ್ಟ್ ಕಂಪನಿಗೆ 832 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಲಾಭ ಬಂದಿತ್ತು.&lt;/p&gt;&lt;p&gt;ಈ ತೀರ್ಪು ಗೀನಾ ರೈನ್&zwnj;ಹಾರ್ಟ್ ಅವರ ಕಂಪನಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ಅವರು ಈಗ ಕೋಟ್ಯಂತರ ಡಾಲರ್&zwnj;ಗಳನ್ನು ರಾಯಧನದ ರೂಪದಲ್ಲಿ ಈ ಕುಟುಂಬಗಳಿಗೆ ನೀಡಬೇಕಾಗುತ್ತದೆ. ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಗೀನಾ ರೈನ್&zwnj;ಹಾರ್ಟ್&zwnj;ಗೆ ಇದು ದೊಡ್ಡ ಕಾನೂನು ಹಿನ್ನಡೆಯಾಗಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಗೀನಾ ಸಿದ್ಧತೆ ನಡೆಸಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/australian-billionaire-gina-rinehart-ordered-to-share-mining-fortune-after-13-year-legal-battle-sat/articleshow-0dzwzyb"/>
        </item>
        <item>
            <title><![CDATA[34 ವರ್ಷಗಳ ನಂತರ ಇಸ್ರೇಲ್-ಲೆಬನಾನ್ ಮಾತುಕತೆ: 10 ದಿನಗಳ ಕದನ ವಿರಾಮ ಘೋಷಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!]]></title>
            <link>https://kannada.asianetnews.com/world-news/trump-announces-israel-lebanon-ceasefire-10-day-peace-deal-white-house-talks-san/articleshow-1yh1iys</link>
            <guid isPermaLink="true">https://kannada.asianetnews.com/world-news/trump-announces-israel-lebanon-ceasefire-10-day-peace-deal-white-house-talks-san/articleshow-1yh1iys</guid>
            <pubDate>Thu, 16 Apr 2026 22:17:09 +0530</pubDate>
            <description><![CDATA[&lt;p&gt;ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ, ದಶಕಗಳಿಂದ ಸಂಘರ್ಷದಲ್ಲಿರುವ ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. 34 ವರ್ಷಗಳ ಈ ಎರಡೂ ದೇಶಗಳು ಮಾತುಕತೆಯ ಟೇಬಲ್&zwnj;ಗೆ ಬಂದಿದ್ದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7m91zcdq7c6vascnwa05wz,imgname-us-iran-talks-restart-conditions-trump-hormuz-strait-irgc-approval-islamabad-negotiations-middle-east-crisis-1-1776225126380.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್/ಬೈರೂತ್ (ಏ.16):&lt;/strong&gt; ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ದಶಕಗಳ ನಂತರದ ಅತಿದೊಡ್ಡ ಬೆಳವಣಿಗೆಯೊಂದು ನಡೆದಿದೆ. ಸತತ ಸಂಘರ್ಷದಲ್ಲಿ ತೊಡಗಿದ್ದ ಇಸ್ರೇಲ್ ಮತ್ತು ಲೆಬನಾನ್ ದೇಶಗಳು 10 ದಿನಗಳ ಕಾಲ 'ಕದನ ವಿರಾಮ'ಕ್ಕೆ (Ceasefire) ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು ತಮ್ಮ 'ಟ್ರೂತ್ ಸೋಶಿಯಲ್' (Truth Social) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ 34 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಸ್ರೇಲ್ ಮತ್ತು ಲೆಬನಾನ್ ಪ್ರತಿನಿಧಿಗಳು ಈ ವಾರದ ಆರಂಭದಲ್ಲಿ ವಾಷಿಂಗ್ಟನ್&zwnj;ನಲ್ಲಿ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಸಮ್ಮುಖದಲ್ಲಿ ಈ ಮಾತುಕತೆ ನಡೆದಿದೆ.&lt;/p&gt;&lt;h2&gt;&lt;strong&gt;ಟ್ರಂಪ್ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಈ ತಾತ್ಕಾಲಿಕ ಕದನ ವಿರಾಮವು ಇಂದೇ (ಗುರುವಾರ) ಸಂಜೆ 5 ಗಂಟೆಯಿಂದ (ಭಾರತೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 3:30) ಆರಂಭವಾಗಲಿದೆ. ಇದರೊಂದಿಗೆ 1983ರ ನಂತರ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಮೊದಲ ಅರ್ಥಪೂರ್ಣ ಮಾತುಕತೆ ಇದಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರನ್ನು ಮುಂದಿನ ಮಾತುಕತೆಗಾಗಿ ಶ್ವೇತಭವನಕ್ಕೆ (White House) ಆಹ್ವಾನಿಸುವುದಾಗಿ ಟ್ರಂಪ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&quot;ಇದು ನನ್ನ 10ನೇ ಸಾಧನೆ&quot;: ಟ್ರಂಪ್&lt;/strong&gt;&lt;/h2&gt;&lt;p&gt;ಈ ಒಪ್ಪಂದದ ಬಗ್ಗೆ ಸಂತಸ ಹಂಚಿಕೊಂಡಿರುವ ಟ್ರಂಪ್, &quot;ವಿಶ್ವದಾದ್ಯಂತ 9 ಯುದ್ಧಗಳನ್ನು ಪರಿಹರಿಸಿದ ಗೌರವ ನನಗಿದೆ, ಇದು ನನ್ನ 10ನೇ ಸಾಧನೆಯಾಗಲಿದೆ. ಬನ್ನಿ, ಇದನ್ನು ಪೂರ್ಣಗೊಳಿಸೋಣ!&quot; ಎಂದು ಬರೆದುಕೊಂಡಿದ್ದಾರೆ. ಈ ಶಾಂತಿ ಪ್ರಕ್ರಿಯೆಯನ್ನು ಮುಂದುವರಿಸಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಕಾರ್ಯದರ್ಶಿ ರೂಬಿಯೊ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಡ್ಯಾನ್ ಕೈನ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.&lt;/p&gt;&lt;h2&gt;&lt;strong&gt;ಸಂಘರ್ಷದ ಹಿನ್ನೆಲೆ&lt;/strong&gt;&lt;/h2&gt;&lt;p&gt;ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯು ಮಾರ್ಚ್ 2 ರಂದು ಉತ್ತರ ಇಸ್ರೇಲ್&zwnj;ನ ಹೈಫಾ ಬಳಿಯ ಕ್ಷಿಪಣಿ ರಕ್ಷಣಾ ನೆಲೆಯ ಮೇಲೆ ಡ್ರೋನ್ ಮತ್ತು ರಾಕೆಟ್ ದಾಳಿ ನಡೆಸಿದ ನಂತರ ಸಂಘರ್ಷ ತೀವ್ರಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಬೈರೂತ್ ಮತ್ತು ದಕ್ಷಿಣ ಲೆಬನಾನ್ ಮೇಲೆ ಭಾರಿ ದಾಳಿ ನಡೆಸಿತ್ತು. ಸದ್ಯದ ಈ 10 ದಿನಗಳ ಕಾಲಾವಕಾಶವು ಎರಡೂ ದೇಶಗಳ ನಡುವೆ ಶಾಂತಿ ಮರುಸ್ಥಾಪಿಸಲು ಪರೀಕ್ಷಾರ್ಥ ಅವಧಿಯಾಗಿರಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Santosh Naik</dc:creator>
            <atom:link href="https://kannada.asianetnews.com/world-news/trump-announces-israel-lebanon-ceasefire-10-day-peace-deal-white-house-talks-san/articleshow-1yh1iys"/>
        </item>
        <item>
            <title><![CDATA[25 ಸಾವಿರ ಕೋಟಿ ಸಾಲದ ಭರವಸೆ ಬೆನ್ನಲ್ಲೇ ಮತ್ತೆ ಭಿಕ್ಷೆ ಪಾತ್ರೆ ಹಿಡಿದು ಸೌದಿ ಮುಂದೆ ನಿಂತ ಪಾಕಿಸ್ತಾನ]]></title>
            <link>https://kannada.asianetnews.com/world-news/amid-mounting-debt-crisis-pakistan-seeks-fresh-financial-lifeline-from-saudi-arabia/articleshow-3lo6u3k</link>
            <guid isPermaLink="true">https://kannada.asianetnews.com/world-news/amid-mounting-debt-crisis-pakistan-seeks-fresh-financial-lifeline-from-saudi-arabia/articleshow-3lo6u3k</guid>
            <pubDate>Wed, 15 Apr 2026 18:07:55 +0530</pubDate>
            <description><![CDATA[&lt;p&gt;25 ಸಾವಿರ ಕೋಟಿ ಸಾಲದ ಭರವಸೆ ಬೆನ್ನಲ್ಲೇ ಮತ್ತೆ ಭಿಕ್ಷೆ ಪಾತ್ರೆ ಹಿಡಿದು ಸೌದಿ ಮುಂದೆ ನಿಂತ ಪಾಕಿಸ್ತಾನ, ಯಎಇಗೆ 3.5 ಬಿಲಿಯನ್ ಡಾಲರ್ ಸಾರ ಮರುಪಾವತಿ ಸಂಕಷ್ಟದಲ್ಲಿರುವ ಪಾಕಿಸ್ತಾನದ ಪರಿಸ್ಥಿತಿ ಶೋಚನೀಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp2hwvdv7qremcjr952m3sh,imgname-us-iran-ceasefire-china-role-pakistan-mediation-trump-threat-hormuz-strait-oil-crisis-global-diplomacy-analysis-0008-1775636116333.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಸ್ಲಾಮಾಬಾದ್ (ಏ.15) &lt;/strong&gt;ಅಮೆರಿಕ ಹಾಗೂ ಇರಾನ್ ನಡುವೆ ಸಂಧಾನ ಮಧ್ಯಸ್ಥಿತಿಕೆ ವಹಿಸಿರುವ ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ತನ್ನ ಆಪ್ತ ದೇಶಗಳಿಂದ ಸಾಲ ಪಡೆದು ಮುಗಿಸಿರುವ ಪಾಕಿಸ್ತಾನ ಇದೀಗ ಸಾಲ ಮರುಪಾವತಿಸಲು ದುಡ್ಡಿಲ್ಲ. ಸಾಲ ಮನ್ನ ಆಗಲಿದೆ ಎಂದು ಆಸೆಗಣ್ಣಿನಿಂದ ಪಾಕ್ ಎದುರುನೋಡುತ್ತಿದೆ. ಇದರ ನಡುವೆ ಸೌದಿ ಅರೇಬಿಯಾ 3 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಸಾಲ ನೀಡಿ ಪಾಕಿಸ್ತಾನದ ನೆರವಿಗೆ ಬಂದಿದೆ. ಇದರ ಜೊತೆಗೆ ಸಾಲದ ವಿಸ್ತರಣೆ ಸೌಲಭ್ಯ ನೀಡಿದೆ. ಇದರಿಂದ ಯುಎಇಗೆ ಮರುಪಾವತಿ ಮಾಡಬೇಕಿದ್ದ 3.5 ಮಿಲಿಯನ್ ಡಾಲರ್ ಮೊತ್ತದ ಸಂಕಷ್ಟ ಸದ್ಯಕ್ಕೆ ದೂರವಾಗಿದೆ.&lt;/p&gt;&lt;h2&gt;ಸೌದಿ ಕಾಲಿಗೆ ಬಿದ್ದ ಪಾಕಿಸ್ತಾನ&lt;/h2&gt;&lt;p&gt;ಸೌದಿ ಅರೆಬಿಯಾ ಬಳಿ 3 ಬಿಲಿಯನ್ ಡಾಲರ್ ಮೊತ್ತ ಸಾಲದ ಭರವಸೆ ಸಿಕ್ಕ ಬಳಿಕ ಮತ್ತೆ ಭಿಕ್ಷೆ ಪಾತ್ರ ಹಿಡಿದು ಪಾಕಿಸ್ತಾನ ಕುಳಿತಿತ್ತು. ಇದರ ಪರಿಣಾಮ ಸೌದಿ ಅರೆಬಿಯಾ 5 ಬಿಲಿಯನ್ ಅಮೆರಿಕನ್ ಡಾಲರ್ ಸೌಲ ಮೊತ್ತದ ಅವದಿಯನ್ನು ವಿಸ್ತರಣೆ ಮಾಡಿದೆ. ಪ್ರತಿ ವರ್ಷ ಸೌದಿ ಅರೆಬಿಯಾ ಪಾಕಿಸ್ತಾನದ ಬ್ಯಾಂಕ್&zwnj;ನಲ್ಲಿ 500 ಕೋಟಿ ಡಾಲರ್ ಮೊತ್ತವನ್ನು ಸಾಲದ ರೂಪದಲ್ಲಿ ಇಡುತ್ತದೆ. ಇದನ್ನು ಪಾಕಿಸ್ತಾನ ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬಹುದು. ಆದರೆ ಕಂಡೀಷನ್ ಪ್ರಕಾರ ಪ್ರತಿ ವರ್ಷ 500 ಕೋಟಿ ಡಾಲರ್ ಮೊತ್ತವನ್ನು ನವೀಕರಣ ಮಾಡಬೇಕು. ಅಂದರೆ 500 ಕೋಟಿ ರೂಪಾಯಿ ಬಳಸಿಕೊಂಡರೆ ಮತ್ತೆ 500 ಕೋಟಿ ರೂಪಾಯಿ ಬ್ಯಾಂಕ್&zwnj;ಗೆ ಜಮೆ ಮಾಡಿ ನವೀಕರಣ ಮಾಡಿಕೊಳ್ಳಬೇಕು. ಇದಕ್ಕೂ ದುಡ್ಡಿಲ್ಲದ ಕಾರಣ ಇದೀಗ ಒಂದು ವರ್ಷದ ನವೀಕರಣ ಒಪ್ಪಂದವನ್ನು ಇದೀಗ 5 ವರ್ಷಕ್ಕೆ ಮುಂದೂಡಿದೆ. ಹೀಗಾಗಿ ಪಾಕಿಸ್ತಾನ ಪ್ರತಿ ವರ್ಷ ಸೌದಿ ಅರೆಬಿಯಾದಿಂದ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ.&lt;/p&gt;&lt;p&gt;ಯುನೈಟೆಡ್ ಅರಬ್ ಎಮಿರೈಟ್ಸ್ ನೀಡಿದ್ದ ಸಾಲದ ಮರುಪಾವತಿ ಅವಧಿ ಸಮೀಪಿಸುತ್ತಿದ್ದಂತೆ ಯುದ್ಧ ತೀವ್ರಗೊಂಡು ಇರುವ ಆರ್ಥಿಕತೆಯೂ ಕುಸಿದು ಬಿದ್ದಿತ್ತು. ಇಂಧನ ಬೆಲೆ ಗಗನಕ್ಕೇರಿತ್ತು, ಗ್ಯಾಸ್ ಪೂರೈಕೆ ಸ್ಥಗಿತಗೊಂಡಿತ್ತು. ಅಗತ್ಯ ವಸ್ತುಗಳ ಬೆಲೆ ಮೊದಲೇ ಗಗನಕ್ಕೇರಿತ್ತು. ಹೀಗಾಗಿ ಈ ತಿಂಗಳು ಯುಎಇಗೆ 3.5 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ತೀರಿಸಲು ಹೆಣಗಾಡುತ್ತಿದ್ದ ಪಾಕಿಸ್ತಾನಕ್ಕೆ ಇದೀಗ ಸೌದಿ ಅರೆಬಿಯಾ ಸಾಲ ನೆರವಾಗಿದೆ.&lt;/p&gt;&lt;p&gt;ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದಲೂ ಸಾಲ ಪಡೆದಿರುವ ಪಾಕಿಸ್ತಾನ ಮರುಪಾವತಿಸಲು ಪರದಾಡುತ್ತಿದೆ. ಪಾಕಿಸ್ತಾನಕ್ಕೆ ಈಗಾಗಲೇ ಹಲವು ಸಾಲ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ನಿರ್ಬಂಧಿಸಿದೆ. ಇತ್ತ ಆರ್ಥಿಕತೆ ಸುಧಾರಿಸಲು ಸೌದಿ ಅರೆಬಿಯಾ ಖಡಕ್ ಎಚ್ಚರಿಕೆಯನ್ನೂ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/amid-mounting-debt-crisis-pakistan-seeks-fresh-financial-lifeline-from-saudi-arabia/articleshow-3lo6u3k"/>
        </item>
        <item>
            <title><![CDATA[ಅಮೆರಿಕದ ದಾಳಿ ಬೆದರಿಕೆ: ಫ್ಲೈಟ್ ಹತ್ತಿ ಬಂದಿದ್ದ ಇರಾನ್ ನಿಯೋಗ ಬಸ್‌ನಲ್ಲಿ ವಾಪಸ್!]]></title>
            <link>https://kannada.asianetnews.com/world-news/iran-claims-flight-threat-as-us-talks-stall-in-islamabad-rav/articleshow-3uil7d3</link>
            <guid isPermaLink="true">https://kannada.asianetnews.com/world-news/iran-claims-flight-threat-as-us-talks-stall-in-islamabad-rav/articleshow-3uil7d3</guid>
            <pubDate>Thu, 16 Apr 2026 08:26:38 +0530</pubDate>
            <description><![CDATA[&lt;p&gt;ಪಾಕಿಸ್ತಾನದಲ್ಲಿ ಅಮೆರಿಕದೊಂದಿಗಿನ ಮಾತುಕತೆ ವಿಫಲವಾದ ನಂತರ, ಇರಾನ್&zwnj; ನಿಯೋಗವು ಕ್ಷಿಪಣಿ ದಾಳಿಯ ಬೆದರಿಕೆಯಿಂದಾಗಿ ತಮ್ಮ ಪ್ರಯಾಣದ ಮಾರ್ಗವನ್ನು ಬದಲಿಸಿತು. ಟೆಹ್ರಾನ್&zwnj;ಗೆ ಸುರಕ್ಷಿತವಾಗಿ ಮರಳಲು ಅವರು ವಿಮಾನ, ರೈಲು ಮತ್ತು ಬಸ್&zwnj;ಗಳನ್ನು ಬಳಸಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpa3178ppe6tvmpqzdzjntcv,imgname-----------------------2026-04-16t081753.929-1776307707158.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆದರಿಕೆ ಇದ್ದ ಕಾರಣ ಮಾರ್ಗವೇ ಬದಲು । ವಂಚಕ ಅಮೆರಿಕದ ಮೇಲೆ ನಂಬಿಕೆ ಇಲ್ಲ&lt;/p&gt;&lt;p&gt;&lt;strong&gt;ಟೆಹ್ರಾನ್&zwnj;: &lt;/strong&gt;ಪಾಕಿಸ್ತಾನದ ರಾಜಧಾನಿಯಲ್ಲಿ ಅಮೆರಿಕ ಜತೆಗಿನ ಸಂಧಾನ ಮಾತುಕತೆ ವಿಫಲವಾದ ಬಳಿಕ ಇರಾನ್&zwnj;ಗೆ ಮರಳಲಿದ್ದ ನಿಯೋಗಕ್ಕೆ ಬೆದರಿಕೆ ಇದ್ದ ಕಾರಣ ಅದು ನಡುನಡುವೆ ವಿಮಾನ ಬದಲಿಸಿ, ರೈಲು, ಬಸ್&zwnj; ಪ್ರಯಾಣ ಮಾಡಿ ಸ್ವದೇಶಕ್ಕೆ ತಲುಪಿತ್ತು ಎಂದು ತಿಳಿದುಬಂದಿದೆ. ಈ ವಿಷಯವನ್ನು ನಿಯೋಗದೊಂದಿಗೆ ಬಂದಿದ್ದ ಇರಾನಿನ ರಾಜಕೀಯ ವಿಶ್ಲೇಷಕ ಮೊಹಮ್ಮದ್ ಮರಾಂಡಿ ಬಾಯ್ಬಿಟ್ಟಿದ್ದಾರೆ.&lt;/p&gt;&lt;p&gt;ಈ ಕುರಿತು ಪ್ರತಿಕ್ರಿಯೆ ನೀಡಿರುವ ಮರಾಂಡಿ, &lsquo;ವಿದೇಶಾಂಗ ಸಚಿವ ಅಬ್ಬಾಸ್&zwnj; ಅರಾಗ್ಚಿ, ಸಂಸತ್&zwnj; ಸ್ಪೀಕರ್&zwnj; ಘಾಲಿಬಾಫ್&zwnj; ಜತೆ ಮಾತುಕತೆಗೆಂದು ಇಸ್ಲಾಮಾಬಾದ್&zwnj;ಗೆ ಹೊರಟಿದ್ದಾಗಲೇ ನಾವಿದ್ದ ವಿಮಾನದ ಮೇಲೆ ದಾಳಿಯ ಬೆದರಿಕೆ ಬಂದಿದ್ದವು. ಆದ್ದರಿಂದ ಮರಳುವಾಗ ವಿಮಾನದ ಮೇಲೆ ಕ್ಷಿಪಣಿ ದಾಳಿ ಭೀತಿಯಿಂದ ನಾವು ಒಂದೇ ವಿಮಾನದಲ್ಲಿ ಟೆಹ್ರಾನ್&zwnj;ಗೆ ಪ್ರಯಾಣಿಸಲಿಲ್ಲ. ಬೇರೊಂದು ವಿಮಾನ ಹತ್ತಿ ಮಶಾದ್&zwnj;ಗೆ ಹೋದೆವು. ಅಲ್ಲಿಂದ ಟ್ರೈನ್&zwnj;, ಕಾರ್&zwnj;, ಬಸ್&zwnj;ನಲ್ಲಿ ಟೆಹ್ರಾನ್&zwnj; ತಲುಪಿದೆವು&rsquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಜತೆಗೆ ಅಮೆರಿಕವನ್ನು &lsquo;ವಂಚಕ&rsquo; ಎಂದು ಕರೆದ ಮರಾಂಡಿ, &lsquo;ನಾವು ಮತುಕತೆಯಲ್ಲಿ ತೊಡಗಿದ್ದ ವೇಳೆಯೂ ಅಲ್ಲ ನಮ್ಮ ಸೇನೆ ದಾಳಿಗೆ ತಯಾರಿ ನಡೆಸುತ್ತಲೇ ಇತ್ತು&rsquo; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/iran-claims-flight-threat-as-us-talks-stall-in-islamabad-rav/articleshow-3uil7d3"/>
        </item>
        <item>
            <title><![CDATA[ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ]]></title>
            <link>https://kannada.asianetnews.com/world-news/stunning-viral-video-showcases-world-biggest-beer-museum-in-china/articleshow-56ffvgo</link>
            <guid isPermaLink="true">https://kannada.asianetnews.com/world-news/stunning-viral-video-showcases-world-biggest-beer-museum-in-china/articleshow-56ffvgo</guid>
            <pubDate>Tue, 14 Apr 2026 20:41:19 +0530</pubDate>
            <description><![CDATA[&lt;p&gt;ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ, ಇಲ್ಲಿಗೆ ಒಮ್ಮೆ ಭೇಟಿ ನೀಡಿದರೂ ಕಳೆದು ಹೋಗುವುದು ಖಚಿತ, ಬಿಯರ್ ಜೋಡಿಸಿದ ರೀತಿ ಅದ್ಭುತ. ಎಲ್ಲಾ ಬ್ರ್ಯಾಂಡ್ ಬಿಯರ್ ಇಲ್ಲಿ ಲಭ್ಯವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp68c21q840fk0htp233bszm,imgname-biggest-beer-museum-1776179087415.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಂಜಿಂಗ್ (ಏ.14)&lt;/strong&gt; ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಬಿಯರ್&zwnj;ಗೆ ಬೇಡಿಕೆ ಹೆಚ್ಚಾಗುತ್ತದೆ. ಮದ್ಯ ಪ್ರಿಯರಲ್ಲಿ ಹಲವರು ಚಿಲ್ಡ್ ಬಿಯರ್ ಹೆಚ್ಚು ಇಷ್ಟಪಡುತ್ತಾರೆ. ಹೀಗೆ ಬಿಯರ್ ಪ್ರಿಯರನ್ನೇ ಚಕಿತಗೊಳಿಸುವ ಬಿಯರ್ ಮ್ಯೂಸಿಯಂ ಒಂದಿದೆ. ಇಲ್ಲಿ ವಿಶ್ವದ ಎಲ್ಲಾ ಪ್ರತಿಷ್ಠಿತ ಬ್ರ್ಯಾಂಡ್ ಬಿಯರ್ ಇದೆ. ಇಷ್ಟೇ ಅಲ್ಲ ಈ ಮ್ಯೂಸಿಯಂ ಇತರ ಮ್ಯೂಸಿಯಂ ರೀತಿ ಇಲ್ಲ. ಇದರ ವಿನ್ಯಾಸ, ಜೋಡಣೆ, ಲೈಟಿಂಗ್ಸ್ ಎಲ್ಲವೂ ಅದ್ಭುತ. ವಿಶೇಷ ಅಂದರೆ ಈ ಮ್ಯೂಸಿಯಂಗೆ ಎಲ್ಲರಿಗೂ ಉಚಿತ ಪ್ರವೇಶ.&lt;/p&gt;&lt;p&gt;ಈ ಬಿಯರ್ ಮ್ಯೂಸಿಯಂ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಈ ಅದ್ಭುತ ಮ್ಯೂಸಿಯಂ ವಿಡಿಯೋ ನೋಡಿ ಹಲವರು ಇಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಈ ವಿಶ್ವದ ಅತೀ ದೊಡ್ಡ ಬಿಯರ್ ಮ್ಯೂಸಿಯಂ ಇರುವುದು ಚೀನಾದ ನಂಜಿಂಗ್&zwnj;ನಲ್ಲಿ. ಈ ಬಿಯರ್ ಮ್ಯೂಸಿಯಂಗೆ ಒಮ್ಮೆ ಕಾಲಿಟ್ಟರೆ ಸಾಕು ಅದ್ಭುತ ಲೋಕದಲ್ಲಿ ವಿಹರಿಸುವ ಅನುಭವ ನಿಮ್ಮದಾಗಲಿದೆ.&lt;/p&gt;&lt;h2&gt;ನಂಜಿಂಗ್ ವರ್ಲ್ಡ್ ಕ್ರಾಫ್ಟ್ ಬಿಯರ್ ಮ್ಯೂಸಿಯಂ&lt;/h2&gt;&lt;p&gt;ನಂಜಿಂಗ್ ವರ್ಲ್ಡ್ ಕ್ರಾಫ್ಟ್ ಬಿಯರ್ ಮ್ಯೂಸಿಯಂ ಎಂದೇ ಗುರುತಿಸಿಕೊಂಡಿರುವ ಈ ಅದ್ಭುತ ತಾಣಕ್ಕೆ ಪ್ರತಿ ದಿನ ಸಾವಿರಾರು ಮಂದಿ ಬೇಟಿ ನೀಡುತ್ತಿದ್ದಾರೆ. ಈ ಮ್ಯೂಸಿಯಂಗೆ ಭೇಟಿ ನೀಡಲು ನೀವು ಬಿಯರ್ ಕುಡಿಯಬೇಕು ಎಂದಿಲ್ಲ. ಈ ಅದ್ಭುತ ನೋಡಿಕೊಂಡು ಬರಬಬಹುದು. ಹಂತ ಹಂತದಲ್ಲಿ ಬಿಯರ್ ಜೋಡಣೆ ಮಾಡಿ ಇಡಲಾಗಿದೆ. ಯಾವ ಬ್ರ್ಯಾಂಡ್ ಬಿಯರ್ ಬೇಕಾದರೂ ಇಲ್ಲಿ ನೋಡಲು ಲಭ್ಯವಿದೆ.&lt;/p&gt;&lt;p&gt;ಬಿಯರ್ ಟೆಂಪಲ್&zwnj;ಗೆ ಪ್ರವೇಶ ಮಾಡಿದ ಅನುಭವ ನಿಮ್ಮದಾಗಲಿದೆ. ಸಿಂಗಾಪುರ ಮೂಲದ ಕ್ರಿಯೇಟರ್ ಯಿಂಗ್ ಸಿನ್ ಈ ಬಿಯರ್ ಮ್ಯೂಸಿಯಂಗೆ ತೆರಳಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಿಯರ್ ಮ್ಯೂಸಿಯಂ ನೋಡಿದ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೊಸ ಲೋಕದಲ್ಲಿ ವಿಹರಿಸಿದ ಅನುಭವ ನೀಡುತ್ತಿದೆ ಎಂದಿದ್ದಾರೆ. ಇಂತಹ ಅದ್ಭುತವನ್ನು ಬಿಯರ್ ಪ್ರಿಯರು ನೋಡಲೇ ಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Ying Sin |  (@insynced)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/stunning-viral-video-showcases-world-biggest-beer-museum-in-china/articleshow-56ffvgo"/>
        </item>
        <item>
            <title><![CDATA[ಇರಾನ್‌ ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ:  ಟ್ರಂಪ್]]></title>
            <link>https://kannada.asianetnews.com/world-news/iran-agreed-to-provide-enriched-uranium-says-trump-rav/articleshow-5mlte21</link>
            <guid isPermaLink="true">https://kannada.asianetnews.com/world-news/iran-agreed-to-provide-enriched-uranium-says-trump-rav/articleshow-5mlte21</guid>
            <pubDate>Fri, 17 Apr 2026 09:32:50 +0530</pubDate>
            <description><![CDATA[&lt;p&gt;ಇಸ್ರೇಲ್&zwnj;- ಲೆಬನಾನ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಇರಾನ್&zwnj; ಸಂಘರ್ಷದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. &lsquo;ಇರಾನ್&zwnj; ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ&rsquo; ಎಂದಿದ್ದು ಕುತೂಹಲಕ್ಕೆ ಕಾರಣವಾಗಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpcjbf87ejcqmm73a1svjchm,imgname-trump-iran-nuclear-deal-enriched-uranium-nuclear-dust-hormuz-crisis-us-iran-talks-2026-peace-agreement-update-0000-1776390880519.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;:&lt;/strong&gt; ಇಸ್ರೇಲ್&zwnj;- ಲೆಬನಾನ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಇರಾನ್&zwnj; ಸಂಘರ್ಷದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. &lsquo;ಇರಾನ್&zwnj; ಸಂಸ್ಕರಿತ ಯುರೇನಿಯಂ ನೀಡಲು ಒಪ್ಪಿದೆ&rsquo; ಎಂದಿದ್ದು ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;ಶ್ವೇತ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್&zwnj;, &lsquo;ಇರಾನ್&zwnj; ನಮಗೆ ಸಂಸ್ಕರಿಸಿದ ಯುರೇನಿಯಂ ನೀಡಲು ಒಪ್ಪಿದೆ. ಹೀಗಾಗಿ ನಾವು ಒಪ್ಪಂದ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ&rsquo; ಎಂದರು. ಕಳೆದ ವಾರ ಇಸ್ಲಾಮಾಬಾದ್&zwnj; ಮಾತುಕತೆ ವೇಳೆ ಅಮೆರಿಕ ಇರಾನ್&zwnj; ಬಳಿ 20 ವರ್ಷ ಯುರೇನಿಯಂ ಸ್ಥಗಿತಕ್ಕೆ ಬೇಡಿಕೆಯಿಟ್ಟಿತ್ತು. ಆದರೆ ಇರಾನ್&zwnj; 5 ವರ್ಷಕಷ್ಟೇ ಸಮ್ಮತಿಸಿತ್ತು. ಇದೇ ಕಾರಣಕ್ಕೆ ಸಂಧಾನ ಮಾತುಕತೆ ಮುರಿದು ಬಿದ್ದಿತ್ತು ಎಂದು ವರದಿಯಾಗಿತ್ತು.&lt;/p&gt;&lt;h2&gt;ಇರಾನ್&zwnj;ನಿಂದ ಯುರೇನಿಯಂ?&lt;/h2&gt;&lt;p&gt;ರಷ್ಯಾ, ಇರಾನ್&zwnj; ತೈಲ ನಿರ್ಬಂಧದ ವಿನಾಯಿತಿ ವಿಸ್ತರಣೆ ಇಲ್ಲ: ಅಮೆರಿಕ ಕಳೆದ ತಿಂಗಳು ನೀಡಲಾಗಿದ್ದ ರಷ್ಯಾ ಮತ್ತು ಇರಾನ್ ತೈಲದ ಮೇಲಿನ ನಿರ್ಬಂಧಗಳ ವಿನಾಯಿತಿ ವಿಸ್ತರಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಹೋರ್ಮುಜ್&zwnj; ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದು, ಇದು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅಮೆರಿಕದ ವಿತ್ತ ಸಚಿವ ಸ್ಕಾಟ್ ಬೆಸೆಂಟ್, &lsquo;ರಷ್ಯಾ ಮತ್ತು ಇರಾನ್&zwnj; ತೈಲದ ಮೇಲಿನ ಸಾಮಾನ್ಯ ಪರವಾನಗಿ ನವೀಕರಿಸುವುದಿಲ್ಲ. ಮಾರ್ಚ್&zwnj;ನಲ್ಲಿ ತಾತ್ಕಾಲಿಕವಾಗಿ ನೀಡಲಾದ ವಿನಾಯಿತಿಗಳು ಯುದ್ಧದಿಂದ ಉಂಟಾದ ತೈಲ ಸರಬರಾಜು ಸಮಸ್ಯೆಯನ್ನು ಸರಿಪಡಿಸುವ ಉದ್ದೇಶ ಹೊಂದಿದ್ದವು. ಇರಾನ್ ತೈಲಕ್ಕೆ ನೀಡಲಾದ ವಿನಾಯಿತಿ ಈ ವಾರ ಮುಗಿಯುತ್ತಿದೆ. ರಷ್ಯಾದ್ದು ಕಳೆದ ವಾರಾಂತ್ಯವೇ ಅಂತ್ಯಗೊಂಡಿದೆ. ಇವನ್ನು ಮತ್ತೆ ವಿಸ್ತರಿಸುವುದಿಲ್ಲ&rsquo; ಎಂದು ಘೋಷಿಸಿದ್ದಾರೆ. ಭಾರತವನ್ನು &lsquo;ಅತ್ಯಂತ ಮುಖ್ಯ ಪಾಲುದಾರ&rsquo; ಎಂದು ಕರೆದಿರುವ ಅವರು, ಅಮೆರಿಕದ ತೈಲವನ್ನು ಹೆಚ್ಚು ಖರೀದಿಸುವಂತೆ ಸಲಹೆ ನೀಡಿದ್ದಾರೆ&lt;/p&gt;&lt;p&gt;ಮಾ.12ರಂದು ಅಮೆರಿಕ ಭಾರತಕ್ಕೆ ರಷ್ಯಾ ತೈಲ ಖರೀದಿಸಲು ವಿಶೇಷ 30 ದಿನಗಳ ವಿನಾಯಿತಿ ನೀಡಿತ್ತು. ಇರಾನ್ ತೈಲಕ್ಕೆ ನೀಡಲಾದ ವಿನಾಯಿತಿ ಸುಮಾರು 14 ಕೋಟಿ ಬ್ಯಾರೆಲ್ ತೈಲವನ್ನು ಒಳಗೊಂಡಿತ್ತು. ಭಾರತ ಈ ವಿನಾಯಿತಿಯಿಂದ ಗಣನೀಯ ಲಾಭ ಪಡೆದಿದ್ದು, ಸುಮಾರು 3 ಕೋಟಿ ಬ್ಯಾರೆಲ್ ರಷ್ಯಾ ತೈಲವನ್ನು ಆರ್ಡರ್ ಮಾಡಿತ್ತು. ಆದರೆ ಈಗ ಈ ಕ್ರಮವನ್ನು ಮುಂದುವರಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಈ ನಿರ್ಧಾರದಿಂದ ಭಾರತಕ್ಕೆ ರಿಯಾಯಿತಿಯಲ್ಲಿ ತೈಲ ಸಿಗುವುದು ಕಷ್ಟವಾಗಬಹುದು ಮತ್ತು ಜಾಗತಿಕ ತೈಲ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/iran-agreed-to-provide-enriched-uranium-says-trump-rav/articleshow-5mlte21"/>
        </item>
        <item>
            <title><![CDATA[ಅಮೆರಿಕ- ಇಸ್ರೇಲ್‌ ದಾಳಿಯಿಂದ ₹25 ಲಕ್ಷ ಕೋಟಿ ನಷ್ಟ; ಕೊಲ್ಲಿ ದೇಶಗಳಿಂದ ಪರಿಹಾರ ಕೇಳಿದ ಇರಾನ್‌]]></title>
            <link>https://kannada.asianetnews.com/world-news/us-israel-strikes-cause-rs-25-lakh-crore-loss-iran-demands-compensation-from-gulf-nations-rav/articleshow-5wb1gey</link>
            <guid isPermaLink="true">https://kannada.asianetnews.com/world-news/us-israel-strikes-cause-rs-25-lakh-crore-loss-iran-demands-compensation-from-gulf-nations-rav/articleshow-5wb1gey</guid>
            <pubDate>Wed, 15 Apr 2026 06:05:47 +0530</pubDate>
            <description><![CDATA[ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಇರಾನ್&zwnj;ಗೆ 25 ಲಕ್ಷ ಕೋಟಿ ರು. ಹಾನಿಯಾಗಿದೆ ಎಂದು ಇರಾನ್ ಸರ್ಕಾರ ಹೇಳಿಕೊಂಡಿದೆ. ಈ ದಾಳಿಗೆ ತಮ್ಮ ನೆಲವನ್ನು ಬಳಸಲು ಅನುಮತಿ ನೀಡಿದ 5 ಅರಬ್ ರಾಷ್ಟ್ರಗಳಿಂದ ಪರಿಹಾರ ನೀಡಬೇಕೆಂದು ವಿಶ್ವಸಂಸ್ಥೆಗೆ ಪತ್ರ ಬರೆದು ಒತ್ತಾಯಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp5y0pmdjk5s67tnhkhcpq77,imgname-china--5--1776168229517.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೆಹ್ರಾನ್&zwnj; (ಏ.15):&lt;/strong&gt; ಫೆ.28ರಿಂದ ಅಮೆರಿಕ ಮತ್ತು ಇಸ್ರೇಲ್&zwnj; , ಇರಾನ್&zwnj; ಮೇಲೆ ನಡೆಸಿದ ಜಂಟಿ ದಾಳಿಯಿಂದ ಇದುವರೆಗೆ 25 ಲಕ್ಷ ಕೋಟಿ ರು. ಹಾನಿಯಾಗಿದೆ ಎಂದು ಇರಾನ್&zwnj; ಹೇಳಿಕೊಂಡಿದೆ. ಇರಾನ್&zwnj; ಸರ್ಕಾರದ ವಕ್ತಾರ ಫಾತಿಮೆಹ್ ಮೊಹಜೆರಾನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಉಭಯ ದೇಶಗಳು ನಮ್ಮ ಕೈಗಾರಿಕೆಗಳು, ಸೇನಾ ನೆಲೆಗಳು, ಮೂಲಸೌಕರ್ಯಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಆದರೆ ಅದರೆ ಅಂತಿಮ ಅಂಕಿ ಅಂಶಗಳಲ್ಲ. ಪೂರ್ಣ ಅಧ್ಯಯನದ ಬಳಿಕ ಈ ಮೊತ್ತ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದಾರೆ.&lt;/p&gt;&lt;h2&gt;ಪರಿಹಾರ ಕೋರಿಕೆ:&lt;/h2&gt;&lt;p&gt;ಈ ನಡುವೆ ಅಮೆರಿಕ ಮತ್ತು ಇಸ್ರೇಲ್&zwnj; ಜಂಟಿಯಾಗಿ ಇರಾನ್&zwnj; ಮೇಲೆ ಆರಂಭಿಸಿದ ಯುದ್ಧದಲ್ಲಿ ನೆರವಾಗಿದ್ದಕ್ಕೆ 5 ಅರಬ್&zwnj; ರಾಷ್ಟ್ರಗಳಿಂದ ಪರಿಹಾರಕ್ಕೆ ಒತ್ತಾಯಿಸಿ ವಿಶ್ವಸಂಸ್ಥೆಗೆ ಇರಾನ್&zwnj; ಪತ್ರ ಬರೆದಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್&zwnj; ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷ ಜಮಾಲ್ ಫೇರ್ಸ್ ಅಲ್ರೋವೈ ಅವರಿಗೆ ಬರೆದ ಪತ್ರದಲ್ಲಿ ಇರಾನ್&zwnj; ರಾಯಭಾರಿ ಅಮೀರ್ ಸಯೀದ್ ಇರಾವನಿ, &lsquo;ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಇರಾನ್&zwnj; ಮೇಲೆ ಅಮೆರಿಕ ಮತ್ತು ಇಸ್ರೇಲ್&zwnj; ದಾಳಿ ನಡೆಸಲು 5 ದೇಶಗಳು ತಮ್ಮ ನೆಲವನ್ನು ಒದಗಿಸಿವೆ. ಹೀಗಾಗಿ ಇರಾನ್&zwnj;ಗೆ ಆಗಿರುವ ಆಸ್ತಿ ಮತ್ತು ನೈತಿಕ ನಷ್ಟವನ್ನು ಬಹರೈನ್&zwnj;, ಸೌದಿ ಅರೇಬಿಯಾ, ಕತಾರ್&zwnj;, ಯುಎಇ ಮತ್ತು ಜೋರ್ಡಾನ್&zwnj; ದೇಶಗಳು ತುಂಬಿಕೊಡಬೇಕು&rsquo; ಎಂದು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/us-israel-strikes-cause-rs-25-lakh-crore-loss-iran-demands-compensation-from-gulf-nations-rav/articleshow-5wb1gey"/>
        </item>
        <item>
            <title><![CDATA[ಇರುವೆಗಳನ್ನು ಕದ್ದು ಸಿಕ್ಕಿಬಿದ್ದ ಕಳ್ಳ; ಪ್ರತಿ ಇರುವೆಗೆ ₹290ರಂತೆ ₹6.4 ಲಕ್ಷ ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್]]></title>
            <link>https://kannada.asianetnews.com/world-news/chinese-man-arrested-nairobi-airport-2200-ant-smuggling-sentence-kenya-sat/articleshow-6w7r0ak</link>
            <guid isPermaLink="true">https://kannada.asianetnews.com/world-news/chinese-man-arrested-nairobi-airport-2200-ant-smuggling-sentence-kenya-sat/articleshow-6w7r0ak</guid>
            <pubDate>Thu, 16 Apr 2026 21:02:15 +0530</pubDate>
            <description><![CDATA[&lt;p&gt;ಆನೆ ಕದ್ದರೂ ಕಳ್ಳ, ಇರುವೆ ಕದ್ದರೂ ಕಳ್ಳ ಎಂದು ನಾವು ಆಡುಮಾತಿನಲ್ಲಿ ಹೇಳುತ್ತೇವೆ. ಆದರೆ, ಇಲ್ಲೊಬ್ಬ ಚೀನಾದ ವ್ಯಕ್ತಿ 2,200 ಜೀವಂತ ಇರುವೆಗಳನ್ನು ಕದ್ದುಕೊಂಡು ಹೋಗಲು ಪ್ರಯತ್ನಿಸಿ ಸಿಕ್ಕಿಬಿದ್ದು, ಜೈಲು ಸೇರಿದ್ದಾನೆ. ಆತನಿಗೆ ಪ್ರತಿ ಇರುವೆಗೆ ₹290 ರಂತೆ 6.40 ಲಕ್ಷ ರೂ. ದಂಡ ಹಾಕಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb3g729dsqz80bbmr7ndcyy,imgname-gettyimages-2266528408-594x594-1776341752905.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳ್ಳಸಾಗಣೆದಾರರು ಆನೆ ದಂತ, ಚಿನ್ನ ಅಥವಾ ಅಮೂಲ್ಯ ರತ್ನಗಳನ್ನು ಸಾಗಿಸುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಜೀವಂತ ಇರುವೆಗಳನ್ನು ಲಗೇಜ್&zwnj;ನಲ್ಲಿ ಬಚ್ಚಿಟ್ಟು ಸಾಗಿಸಲು ಹೋಗಿ ಕೀನ್ಯಾ ಪೊಲೀಸರ ಅತಿಥಿಯಾಗಿದ್ದಾನೆ. ಬರೋಬ್ಬರಿ 2,200ಕ್ಕೂ ಅಧಿಕ ಗಾರ್ಡನ್ ಇರುವೆಗಳನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಚೀನಾ ಪ್ರಜೆಗೆ ಕೀನ್ಯಾ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.&lt;/p&gt;&lt;h2&gt;&lt;strong&gt;ವಿಮಾನ ನಿಲ್ದಾಣದಲ್ಲಿ ಬಯಲಾದ ಕಳ್ಳಸಾಗಣೆ:&lt;/strong&gt;&lt;/h2&gt;&lt;p&gt;ಕಳೆದ ತಿಂಗಳು ಕೀನ್ಯಾದ ನೈರೋಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಲಗೇಜ್ ತಪಾಸಣೆ ನಡೆಸುತ್ತಿದ್ದಾಗ ಝಾಂಗ್ ಕೆಕುನ್ ಎಂಬ ಚೀನೀ ಪ್ರಜೆಯ ಬ್ಯಾಗ್&zwnj;ನಲ್ಲಿ ಅನುಮಾನಾಸ್ಪದ ಡಬ್ಬಿಗಳು ಪತ್ತೆಯಾಗಿವೆ. ಅವುಗಳನ್ನು ತೆರೆದು ನೋಡಿದ ಅಧಿಕಾರಿಗಳು ದಂಗಾಗಿದ್ದಾರೆ. ಸಣ್ಣ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಬರೋಬ್ಬರಿ 2,200 ಜೀವಂತ ಗಾರ್ಡನ್ ಇರುವೆಗಳನ್ನು ತುಂಬಿ ಸಾಗಿಸಲಾಗುತ್ತಿತ್ತು. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ:&lt;/strong&gt;&lt;/h2&gt;&lt;p&gt;ಈ ಪ್ರಕರಣದ ವಿಚಾರಣೆ ನಡೆಸಿದ ಕೀನ್ಯಾ ನ್ಯಾಯಾಲಯವು ಆರೋಪಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 7,746 ಡಾಲರ್ (ಅಂದಾಜು ₹6.4 ಲಕ್ಷ) ದಂಡ ವಿಧಿಸಿ ಆದೇಶಿಸಿದೆ. ಮೊದಲು ತಾನು ನಿರಪರಾಧಿ ಎಂದು ವಾದಿಸಿದ್ದ ಝಾಂಗ್ ಕೆಕುನ್, ನಂತರ ಸಾಕ್ಷ್ಯಗಳು ಸಿಕ್ಕ ಮೇಲೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈತನಿಗೆ ಇರುವೆಗಳನ್ನು ಪೂರೈಸಿದ್ದ ಕೀನ್ಯಾದ ಪ್ರಜೆಯೊಬ್ಬನ ವಿರುದ್ಧವೂ ಪ್ರಕರಣ ದಾಖಲಾಗಿದೆ.&lt;/p&gt;&lt;h3&gt;&lt;strong&gt;ಚೀನಾದಲ್ಲಿ ಇರುವೆಗಳಿಗೆ ಏಕೆ ಅಷ್ಟು ಡಿಮ್ಯಾಂಡ್?&lt;/strong&gt;&lt;/h3&gt;&lt;p&gt;ಚೀನಾದಲ್ಲಿ ಗಾರ್ಡನ್ ಇರುವೆಗಳನ್ನು ಸಾಕುವುದು ಮತ್ತು ಮಾರಾಟ ಮಾಡುವುದು ಈಗ ದೊಡ್ಡ ಹವ್ಯಾಸವಾಗಿ ಬೆಳೆದಿದೆ. ಅಲ್ಲಿ 'ಫಾರ್ಮಿಕೇರಿಯಂ' (Formicarium) ಎಂಬ ಗಾಜಿನ ಪಾತ್ರೆಗಳಲ್ಲಿ ಇರುವೆಗಳ ಕಾಲನಿಯನ್ನು ಸಾಕುವ ಹವ್ಯಾಸ ಹಲವರಿಗಿದೆ. ಈ ಇರುವೆಗಳಿಗೆ ಚೀನಾದ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇದೆ. ಇದೇ ಕಾರಣಕ್ಕೆ ಕಳ್ಳಸಾಗಣೆದಾರರು ಈಗ ಕೀನ್ಯಾದಂತಹ ದೇಶಗಳಿಂದ ಇರುವೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಆನೆ ದಂತ ಬಿಟ್ಟು ಇರುವೆಗಳತ್ತ ಸಾಗಿದ ಕಳ್ಳರು!&lt;/strong&gt;&lt;/h2&gt;&lt;p&gt;ಹಿಂದೆ ಕೀನ್ಯಾದಿಂದ ಆನೆ ದಂತ, ಚಿರತೆ ಚರ್ಮದಂತಹ ವಸ್ತುಗಳ ಕಳ್ಳಸಾಗಣೆ ಹೆಚ್ಚಾಗಿತ್ತು. ಆದರೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಣ್ಗಾವಲು ಹೆಚ್ಚಾಗಿರುವುದರಿಂದ ಕಳ್ಳಸಾಗಣೆದಾರರು ಇರುವೆ, ಜೇಡ ಮತ್ತು ಸಣ್ಣಪುಟ್ಟ ಕೀಟಗಳ ಮೇಲೆ ಕಣ್ಣು ಹಾಕಿದ್ದಾರೆ. ಇವುಗಳನ್ನು ಪತ್ತೆ ಮಾಡುವುದು ಕಷ್ಟ ಎಂಬುದು ಅವರ ಆಲೋಚನೆ. ಆದರೆ, ಕೀನ್ಯಾ ನ್ಯಾಯಾಲಯವು ಈ ಪ್ರಕರಣದ ಮೂಲಕ ಅಕ್ರಮವಾಗಿ ಸಣ್ಣ ಜೀವಿಗಳನ್ನೂ ಸಾಗಿಸುವುದು ಅಪರಾಧ ಎಂಬ ಕಠಿಣ ಸಂದೇಶವನ್ನು ನೀಡಿದೆ.&lt;/p&gt;&lt;p&gt;ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಆರೋಪಿ ಪರ ವಕೀಲರು ತಿಳಿಸಿದ್ದಾರೆ. ಆದರೆ, ವನ್ಯಜೀವಿ ರಕ್ಷಣೆಯ ದೃಷ್ಟಿಯಿಂದ ಕೀನ್ಯಾ ಅಧಿಕಾರಿಗಳು ಇಂತಹ ಸಣ್ಣಪುಟ್ಟ ಜೀವಿಗಳ ಕಳ್ಳಸಾಗಣೆ ವಿರುದ್ಧವೂ ಈಗ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/chinese-man-arrested-nairobi-airport-2200-ant-smuggling-sentence-kenya-sat/articleshow-6w7r0ak"/>
        </item>
        <item>
            <title><![CDATA[ಬೆಂಗಳೂರಿನ IISC ದಾಳಿಕೋರ ಉಗ್ರನ ಹಮ್ಜಾ ಮೇಲೆ ದಾಳಿ ನಡೆಸಿದ ಅನಾಮಿಕ ಯಾರು?]]></title>
            <link>https://kannada.asianetnews.com/world-news/second-attempt-on-life-iisc-bengaluru-blast-accused-amir-hamza-shot-at-in-lahore/articleshow-89w6m8u</link>
            <guid isPermaLink="true">https://kannada.asianetnews.com/world-news/second-attempt-on-life-iisc-bengaluru-blast-accused-amir-hamza-shot-at-in-lahore/articleshow-89w6m8u</guid>
            <pubDate>Fri, 17 Apr 2026 08:15:54 +0530</pubDate>
            <description><![CDATA[&lt;p&gt;ಬೆಂಗಳೂರಿನ IISC ದಾಳಿಕೋರ ಉಗ್ರನ ಹಮ್ಜಾ ಮೇಲೆ ದಾಳಿ ನಡೆಸಿದ ಅನಾಮಿಕ ಯಾರು? ದಾಳಿಯಲ್ಲಿ ಹಮ್ಜಾ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpamcya2r762ysnpgdqgkhej,imgname-lashkar-e-taiba-co-founderaamir-hamza-lahore-shooting-attack-injured-terror-update-pakistan-leadership-2-1776325916994.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಸ್ಲಾಮಾಬಾದ್&zwnj; (ಏ.17):&lt;/strong&gt; ಲಷ್ಕರ್&zwnj; ಎ ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕರ ಪೈಕಿ ಒಬ್ಬನಾದ ಅಮೀರ್&zwnj; ಹಮ್ಜಾ (66) ಮೇಲೆ ಅನಾಮಿಕ ವ್ಯಕ್ತಿಗಳು ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್&zwnj;ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಮ್ಜಾ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ಕಳೆದ ವರ್ಷ ಬುದುಕುಳಿದಿದ್ದ ಹಮ್ಜಾ&lt;/h2&gt;&lt;p&gt;ಲಾಹೋರ್&zwnj;ನ ಟೀವಿ ವಾಹಿನಿಯೊಂದರ ಕಚೇರಿ ಮೇಲೆ ಅನಾಮಿಕ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಳೆದ ವರ್ಷ ಕೂಡಾ ಹಮ್ಜಾನ ಮೇಲೆ ಗುಂಡಿನ ದಾಳಿ ನಡೆದಿತ್ತಾದರೂ ಆತ ಬದುಕುಳಿಗಿದ್ದ. ಬಳಿಕ ಆತನ ಭದ್ರತೆಯನ್ನು ಹೆಚ್ಚಿಸಲಾಗಿತ್ತು.&lt;/p&gt;&lt;h2&gt;ಬೆಂಗಳೂರಿನ ಐಐಎಸ್&zwnj;ಸಿ ಮೇಲೆ ದಾಳಿ&lt;/h2&gt;&lt;p&gt;ಈಗ ಪಂಜಾಬ್&zwnj; ಪ್ರಾಂತ್ಯದ ಗುಜ್ರನ್ವಾಲಾ ಮೂಲದ ವ್ಯಕ್ತಿಯಾಗಿದ್ದು 1985ರಲ್ಲಿ ಹಫೀಜ್&zwnj; ಸಯೀದ್&zwnj; ಜೊತೆಗೂಡಿ ಲಷ್ಕರ್&zwnj; ಸಂಘಟನೆ ಸ್ಥಾಪಿಸಿದ್ದ. ಈತ 2005ರಲ್ಲಿ ಬೆಂಗಳೂರಿನ ಐಐಎಸ್&zwnj;ಸಿ ಮೇಲಿನ ದಾಳಿ ಸೇರಿದಂತೆ ಭಾರತದಾದ್ಯಂತ ನಡೆದ ಹಲವು ಉಗ್ರ ದಾಳಿಗಳ ಹಿಂದೆ ಹಮ್ಜಾನ ಕೈವಾಡವಿತ್ತು. ಸಂಘಟನೆಯಲ್ಲಿ ಸಯೀದ್&zwnj; ನಂತರದ ಸ್ಥಾನ ಹೊಂದಿರುವ ಹಮ್ಜಾ ಕಾಲದಿಂದ ಕಾಲಕ್ಕೆ ಸಂಘಟನೆಗೆ ಹೊಸ ದಿಕ್ಕು ತೋರಿಸುತ್ತಾ, ಉಗ್ರ ಸಿದ್ದಾಂತವನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.&lt;/p&gt;&lt;p&gt;ಪ್ರಖರ ಭಾಷಣಕಾರನಾಗಿ, ಲೇಖಕನಾಗಿ, ಲಷ್ಕರ್&zwnj; ಸಂಘಟನೆಯ ಮುಖವಾಣಿ ಪತ್ರಿಕೆಯ ಸಂಪಾದಕನಾಗಿಯೂ ಹಮ್ಜಾ ಗುರುತಿಸಿಕೊಂಡಿದ್ದಾನೆ. ಬೆಂಗಳೂರಿನ ಇಂಡಿಯನ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಮೇಲೆ ದಾಳಿ ನಡೆಸಿದ ಮಾಸ್ಟರ್ ಮೈಂಡ್ ಈತ. ಭಾರತದ ಮೇಲೆ ದಾಳಿ ನಡೆಸಿ ಪಾಕಿಸ್ತಾನದಲ್ಲಿ ಭಾರಿ ಭದ್ರತೆಯಲ್ಲಿ ಕಳೆಯುತ್ತಿರುವ ಹಲವು ಉಗ್ರರಿಗೆ ಅನಾಮಿಕ ಸಿಂಹಸ್ವಪ್ನವಾಗಿ ಪರಿಣಿಮಿಸಿದ್ದಾನೆ.&lt;/p&gt;&lt;p&gt;ಭಾರತದ ಮೇಲೆ ಉಗ್ರ ದಾಳಿ ನಡೆಸುತ್ತಿರುವ ಉಗ್ರರು ಇದೀಗ ಭಾರಿ ಭದ್ರತೆ ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಅರ್ಜಿಗಳು ಹೆಚ್ಚಾಗುತ್ತಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ, ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಇತ್ತ ಕೆಲ ಉಗ್ರರಿಗೆ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಾಗದೇ ಪರದಾಡುವ ಸ್ಥಿತಿ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/second-attempt-on-life-iisc-bengaluru-blast-accused-amir-hamza-shot-at-in-lahore/articleshow-89w6m8u"/>
        </item>
        <item>
            <title><![CDATA['ಆಂಟಿ' ಎಂದು ಕರೆವ ಮುನ್ನ ಎಚ್ಚರ! 2 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್​ ಆದೇಶ-  ಏನಿದು ಕೇಸ್​?]]></title>
            <link>https://kannada.asianetnews.com/relationship/called-auntie-by-colleague-indian-origin-woman-wins-harassment-claim-suc/articleshow-8lrxk9w</link>
            <guid isPermaLink="true">https://kannada.asianetnews.com/relationship/called-auntie-by-colleague-indian-origin-woman-wins-harassment-claim-suc/articleshow-8lrxk9w</guid>
            <pubDate>Wed, 15 Apr 2026 20:18:16 +0530</pubDate>
            <description><![CDATA[&lt;p&gt;&amp;nbsp;ಭಾರತೀಯ ಮೂಲದ ಮಹಿಳೆಯೊಬ್ಬರು, ಸಹೋದ್ಯೋಗಿ 'ಆಂಟಿ' ಎಂದು ಕರೆದಿದ್ದಕ್ಕೆ ಕಿರುಕುಳದ ಕೇಸ್ ದಾಖಲಿಸಿದ್ದರು. ನ್ಯಾಯಾಲಯವು ಇದನ್ನು ವಯಸ್ಸು ಮತ್ತು ಲಿಂಗದ ಆಧಾರದ ಕಿರುಕುಳವೆಂದು ಪರಿಗಣಿಸಿ, ಮಹಿಳೆಗೆ ಸುಮಾರು ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8sssg2znvsnr88y5g1fgy3,imgname-court-1776264472066.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವರಿಗೆ ಒಂದು ಚಾಳಿ ಇರುತ್ತದೆ. ಅದರಲ್ಲಿಯೂ ಬೆಂಗಳೂರಿನಂಥ ನಗರಗಳಲ್ಲಿ ಇದು ಮಾಮೂಲು. ತಮಗಿಂತ ವಯಸ್ಸಿನಲ್ಲಿ ಹಿರಿಯರಾಗಿರಲಿ, ಕಿರಿಯರಾಗಿರಲಿ, ಹೆಂಗಸರನ್ನು ಕಂಡ ತಕ್ಷಣ ಆಂಟಿ ಎಂದು ಕರೆಯುವುದು. ಇದು ಗೌರವಸೂಚಕ ಎಂದುಕೊಂಡು ಕರೆಯುವವರೂ ಕೆಲವರಿದ್ದರೆ, ತಮ್ಮ ವಯಸ್ಸು ಚಿಕ್ಕದು ಎಂದು ತೋರಿಸುವುದಕ್ಕಾಗಿ ಕರೆಯುವವರು ಇನ್ನು ಕೆಲವರು. ಗಂಡಸರನ್ನು ಅಂಕಲ್​ ಎನ್ನದಿದ್ದರೂ ಹೆಂಗಸರನ್ನು ಕಂಡಾಕ್ಷಣ ಆಂಟಿ ಎನ್ನುವುದಕ್ಕೆ ಇದಾಗಲೇ ಹಲವಾರು ಮಂದಿ ಕೆಂಗಣ್ಣು ಬೀರುವುದು ಇದು. ಸೋಷಿಯಲ್​ ಮೀಡಿಯಾಗಳಲ್ಲಿ ಈ ಬಗ್ಗೆ ಆಗಾಗ್ಗೆ ಸಾಕಷ್ಟು ಚರ್ಚೆಯೂ ಆಗಿರುತ್ತದೆ. ಚಿಕ್ಕವರು ಆಂಟಿ ಎಂದರೇನೇ ಸಹಿಸದವರೂ ಇದ್ದಾರೆ, ಅದರಲ್ಲಿ ಅಪ್ಪ, ಅಜ್ಜನ ವಯಸ್ಸಿನವರೂ ಆಂಟಿ ಎಂದಾಗ ಹಲವರಿಗೆ ನಖಶಿಖಾಂತ ಉರಿ ಹತ್ತುವುದು ಇದೆ.&lt;/p&gt;&lt;h2&gt;&lt;strong&gt;ಎರಡು ಲಕ್ಷ ರೂ. ಪರಿಹಾರ&lt;/strong&gt;&lt;/h2&gt;&lt;p&gt;ಇದೀಗ ಹೀಗೆಯೇ ಆಂಟಿ ಎಂದು ಕರೆದುದಕ್ಕಾಗಿ ಆಸಾಮಿಯೊಬ್ಬ ಮಹಿಳೆಗೆ ಸುಮಾರು ಎರಡು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕಾಗಿ ಬಂದಿದೆ. ಹೀಗೆ ಕಂಡಕಂಡವರನ್ನು ಆಂಟಿ ಎಂದು ಕರೆಯುವುದು ಕಿರುಕುಳಕ್ಕೆ ಸಮಾನ ಎಂದಿದೆ ಕೋರ್ಟ್​. ಆದ್ದರಿಂದ ಆಂಟಿ ಎಂದು ಕಂಡಕಂಡವರನ್ನು ಕರೆಯುವ ಮುನ್ನ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು. ಹಾಗೆಂದು ಈ ಕೇಸ್​ ನಡೆದಿರುವುದು ಭಾರತದಲ್ಲಿ ಅಲ್ಲ ಬಿಡಿ, ಅಷ್ಟರಮಟ್ಟಿಗೆ 'ಆಂಟಿ' ಪ್ರಿಯರು ಸಮಾಧಾನ ಮಾಡಿಕೊಳ್ಳಬಹುದು. ಆದರೆ ಹಾಗೆಂದು ಖುಷಿಪಡಬೇಡಿ. ಏಕೆಂದರೆ ಈ ಕೇಸ್​ನಲ್ಲಿ ಪರಿಹಾರ ಪಡೆದುಕೊಂಡಿರುವವಳು ಭಾರತದವಳು! ತನ್ನನ್ನು ಆಂಟಿ ಎಂದು ಕರೆಯಬೇಡ ಎಂದು ಈ ಹಿಂದೆ ಹೇಳಿದ್ದರೂ ಆತ ಅದೇ ಶಬ್ದ ಹೇಳುತ್ತಿದ್ದುದರಿಂದ ಕೇಸ್​ ದಾಖಲಿಸಿದ್ದಳು 61ರ ಹರೆಯದ ಮಹಿಳೆ.&lt;/p&gt;&lt;h3&gt;&lt;strong&gt;ನಡೆದದ್ದೆಲ್ಲಿ?&lt;/strong&gt;&lt;/h3&gt;&lt;p&gt;ಇದು ನಡೆದಿರುವುದು ಲಂಡನ್​ನಲ್ಲಿ. ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (NHS) ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಆರೋಗ್ಯ ಸಹಾಯಕಿಯೊಬ್ಬಳು, ನರ್ಸ್​ ಒಬ್ಬ ತನ್ನನ್ನು ಆಂಟಿ ಎಂದು ಕರೆದುದ್ದಕ್ಕೆ ಅಲ್ಲಿಯ ಕೋರ್ಟ್​ನಲ್ಲಿ ಕಿರುಕುಳದ ಕೇಸ್​ ದಾಖಲಿಸಿ ಗೆದ್ದಿದ್ದಾಳೆ. ವ್ಯಾಟ್&zwnj;ಫೋರ್ಡ್ ಉದ್ಯೋಗ ನ್ಯಾಯಮಂಡಳಿ ನ್ಯಾಯಾಧೀಶ ಜಾರ್ಜ್ ಅಲಿಯಟ್ ಅವರು, ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಕಿರುಕುಳಕ್ಕೊಳಗಾಗಿದ್ದಾರೆ ಎಂದು ತೀರ್ಪು ನೀಡಿದ್ದಾರೆ. &quot;ಭಾವನೆಗಳಿಗೆ ಘಾಸಿ&quot; ಮಾಡಿದ್ದಕ್ಕಾಗಿ ಒಟ್ಟು 1,425.15 ಪೌಂಡ್&zwnj;ಗಳ ಪರಿಹಾರವನ್ನು ಪಾವತಿಸಲು ವೆಸ್ಟ್ ಲಂಡನ್ NHS ಟ್ರಸ್ಟ್&zwnj;ಗೆ ನಿರ್ದೇಶಿಸಿದ್ದಾರೆ. ಈ ಪರಿಹಾರವನ್ನು ಆಂಟಿ ಎಂದು ಕರೆದ ನರ್ಸ್​ ಮೂಲಕ ವಸೂಲಿ ಮಾಡುವುದು ಸದ್ಯ ಟ್ರಸ್ಟ್​ಗೆ ಇರುವ ಕೆಲಸ.&lt;/p&gt;&lt;h3&gt;&lt;strong&gt;ಕಿರುಕುಳಕ್ಕೆ ಸಮ&lt;/strong&gt;&lt;/h3&gt;&lt;p&gt;ಕಳೆದ ವರ್ಷ ಈ ಕೇಸ್​ ದಾಖಲಾಗಿತ್ತು. ಅಷ್ಟಕ್ಕೂ ಕೇಸ್​ ದಾಖಲು ಮಾಡಿರುವುದು 61 ವರ್ಷದ ಮಹಿಳೆ ಎಸ್ಟೀವ್ಸ್. ಇದರ ಸತ್ಯಾಸತ್ಯತೆ ಪರಿಶೀಲಿಸಲು ಮೂವರು ನ್ಯಾಯಾಧೀಶರ ಸಮಿತಿ ನೇಮಕ ಮಾಡಲಾಗಿತ್ತು. &quot;ಆಂಟಿ&quot; ಎಂಬುದು ಘಾನಾದ ಸಂಸ್ಕೃತಿಯಲ್ಲಿ ವಯಸ್ಸಾದವರಿಗೆ ಗೌರವದ ಪದವಾಗಿದೆ ಎಂದು ಸಮಿತಿ ಒಪ್ಪಿಕೊಂಡಿದೆ. ಆದಾಗ್ಯೂ, ಸ್ಟಾಫ್ ನರ್ಸ್ ವಾರ್ಡ್&zwnj;ನಲ್ಲಿ ತಂಡಗಳನ್ನು ಮುನ್ನಡೆಸುವ ಜವಾಬ್ದಾರರಾಗಿದ್ದಾರೆ. ಆದ್ದರಿಂದ ಅವರು ಇಂಥ ಹೇಳಿಕೆಗಳನ್ನು ನೀಡಿರುವುದು ತಪ್ಪು ಎನ್ನುವುದಾಗಿ ತೀರ್ಪು ನೀಡಲಾಗಿದೆ. &quot;ಚಾರ್ಲ್ಸ್ ಒಪ್ಪೋಂಗ್ ಅವರ ಉದ್ದೇಶವು ಬಹುಶಃ ಹಾಸ್ಯದ ಆಕ್ರಮಣಕಾರಿ ಪ್ರಯತ್ನವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ&quot; ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/called-auntie-by-colleague-indian-origin-woman-wins-harassment-claim-suc/articleshow-8lrxk9w"/>
        </item>
        <item>
            <title><![CDATA['ಸೀಕ್ರೆಟ್ ಪ್ರಿವ್ಯೂ' ಮೂಲಕ ಟಾಕ್ಸಿಕ್‌ ಗುಟ್ಟು ರಟ್ಟು; ಯಶ್ 'ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ' ಏನಿದೆ ಗೊತ್ತಾ?]]></title>
            <link>https://kannada.asianetnews.com/cine-world/rocking-star-yash-dominates-the-international-stage-by-his-toxic-magic-hidden-in-that-secret-9-minute-preview/articleshow-bo9wq33</link>
            <guid isPermaLink="true">https://kannada.asianetnews.com/cine-world/rocking-star-yash-dominates-the-international-stage-by-his-toxic-magic-hidden-in-that-secret-9-minute-preview/articleshow-bo9wq33</guid>
            <pubDate>Fri, 17 Apr 2026 17:01:27 +0530</pubDate>
            <description><![CDATA[&lt;p&gt;ಸದ್ಯಕ್ಕೆ ಚಿತ್ರತಂಡ ಈ 9 ನಿಮಿಷದ ಪ್ರಿವ್ಯೂ ಅನ್ನು ಗೌಪ್ಯವಾಗಿಟ್ಟಿದ್ದರೂ, ಮುಂದಿನ ದಿನಗಳಲ್ಲಿ ಇದರ ಸಣ್ಣ ತುಣುಕನ್ನಾದರೂ ಅಭಿಮಾನಿಗಳಿಗಾಗಿ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ, ಬರುವ ಜೂನ್ 4 ರಂದು 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳೇ, ನೀವು ಈ &quot;ದೊಡ್ಡವರ ಕಾಲ್ಪನಿಕ ಕಥೆ&quot; ನೋಡಲು ರೆಡಿಯಿದ್ದೀರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kegs00mdqwmz405zqzaynkah,imgname-rocking-star-yash-geetu-mohandas--1--1767942128269.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟಾಕ್ಸಿಕ್ ಗುಟ್ಟು ರಟ್ಟು?&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ನಮ್ಮ ಹೆಮ್ಮೆಯ 'ರಾಕಿಂಗ್ ಸ್ಟಾರ್' ಯಶ್ (Rocking Star Yash) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 'ಕೆಜಿಎಫ್' ಸರಣಿಯ ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ 'ಟಾಕ್ಸಿಕ್' (Toxic) ಉತ್ತರವಾಗಿತ್ತು. ಈಗ ಈ ಚಿತ್ರದ ಬಗ್ಗೆ ಹೊರಬಿದ್ದಿರುವ ಒಂದು ಎಕ್ಸ್&zwnj;ಕ್ಲೂಸಿವ್ ಸುದ್ದಿ ಇಡೀ ಭಾರತೀಯ ಚಿತ್ರರಂಗವನ್ನೇ ಬೆರಗುಗೊಳಿಸಿದೆ. ಅದೇನು ಅಂದುಕೊಂಡಿದ್ದೀರಾ? ಅದುವೇ ಇತ್ತೀಚೆಗೆ ನಡೆದ 'ಸಿನಿಮಾಕಾನ್ 2026' (CinemaCon 2026) ಕಾರ್ಯಕ್ರಮದ ಹವಾ!&lt;/p&gt;&lt;p&gt;ಸಿನಿಮಾಕಾನ್&zwnj;ನಲ್ಲಿ ನಡೆದಿದ್ದೇನು?&lt;/p&gt;&lt;p&gt;ಹೌದು, ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ 'ಸಿನಿಮಾಕಾನ್' ವೇದಿಕೆಯಲ್ಲಿ ಟಾಕ್ಸಿಕ್ ಚಿತ್ರತಂಡ ಒಂದು ಮಾಸ್ಟರ್ ಪ್ಲಾನ್ ಮಾಡಿತ್ತು. ಈ ಹಿಂದೆ ಬಿಡುಗಡೆಯಾದ ಟೀಸರ್ ಕೇವಲ ಒಂದು ಝಲಕ್ ಆಗಿದ್ದರೆ, ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ 9 ನಿಮಿಷಗಳ ಸುದೀರ್ಘ ಪ್ರಿವ್ಯೂ ಅಕ್ಷರಶಃ ಅಲ್ಲಿ ನೆರೆದಿದ್ದವರ ಕಣ್ಣು ಕುಕ್ಕುವಂತೆ ಮಾಡಿದೆ. ಅಂದಹಾಗೆ, ಈ ಸ್ಪೆಷಲ್ ವಿಡಿಯೋ ಸಾರ್ವಜನಿಕರಿಗೆ ಲಭ್ಯವಿಲ್ಲ. ಇದು ಕೇವಲ ಚಿತ್ರರಂಗದ ದಿಗ್ಗಜರು ಮತ್ತು ವಿತರಕರಿಗಾಗಿ ನಡೆದ ಖಾಸಗಿ ಪ್ರದರ್ಶನವಾಗಿತ್ತು.&lt;/p&gt;&lt;h2&gt;ಆ 9 ನಿಮಿಷಗಳಲ್ಲಿ ಏನಿತ್ತು?&lt;/h2&gt;&lt;p&gt;ಈ ಪ್ರಿವ್ಯೂ ನೋಡಿದ ಅದೃಷ್ಟವಂತರು ಹೇಳುವ ಪ್ರಕಾರ, ಇದು ಕೇವಲ ಒಂದು ಆಕ್ಷನ್ ಸಿನಿಮಾವಲ್ಲ, ಇದೊಂದು ಅದ್ಭುತ ಲೋಕ! ಚಿತ್ರದ ಮೇಕಿಂಗ್ ಕ್ವಾಲಿಟಿ ಹಾಲಿವುಡ್ ಮಟ್ಟದಲ್ಲಿದೆಯಂತೆ. 1940 ರಿಂದ 1970 ರ ಕಾಲಘಟ್ಟವನ್ನು ಅತ್ಯಂತ ಅದ್ಭುತವಾಗಿ ಮರುಸೃಷ್ಟಿಸಲಾಗಿದೆ. ಯಶ್ ಅವರ ಮ್ಯಾಸ್ ಲುಕ್, ಗೀತು ಮೋಹನ್ ದಾಸ್ ಅವರ ಸ್ಟೈಲಿಶ್ ಮೇಕಿಂಗ್ ಮತ್ತು ರವಿ ಬಸ್ರೂರು ಅವರ ಕಿವಿಗೊಡುವಂತ ಹಿನ್ನೆಲೆ ಸಂಗೀತ ಈ 9 ನಿಮಿಷಗಳ ಪ್ರಿವ್ಯೂನಲ್ಲಿ ಅಡಗಿತ್ತು. ಈ ಸಿನಿಮಾವನ್ನು &quot;ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ&quot; (Fairy tale for grown-ups) ಎಂದು ವಿವರಿಸಲಾಗಿದ್ದು, ಈ ಸಾಲನ್ನ ಕೇಳಿಯೇ ಸಿನಿಪ್ರಿಯರ ಎದೆಯಲ್ಲಿ ನಡುಕ ಶುರುವಾಗಿದೆ!&lt;/p&gt;&lt;p&gt;ತಾರಾಗಣದ ದಂಡೇ ಇಲ್ಲಿದೆ!&lt;/p&gt;&lt;p&gt;'ಟಾಕ್ಸಿಕ್' ಸಿನಿಮಾ ಕೇವಲ ಯಶ್ ಒಬ್ಬರ ಶೋ ಅಲ್ಲ, ಇಲ್ಲಿ ಸ್ಟಾರ್&zwnj;ಗಳ ದಂಡೇ ಇದೆ. ಸೌತ್ ಲೇಡಿ ಸೂಪರ್&zwnj;ಸ್ಟಾರ್ ನಯನತಾರಾ, ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ನಮ್ಮ ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ ಈ ಚಿತ್ರದ ಪ್ರಮುಖ ಆಕರ್ಷಣೆ. ಇಷ್ಟು ದೊಡ್ಡ ತಾರಾಗಣವನ್ನು ಒಂದೇ ಪರದೆಯ ಮೇಲೆ ನೋಡುವುದು ಅಂದ್ರೆ ಅದು ಹಬ್ಬವೇ ಸರಿ.&lt;/p&gt;&lt;h3&gt;ಜೂನ್ 4ಕ್ಕೆ ವಿಶ್ವದಾದ್ಯಂತ ಬಿಡುಗಡೆ&lt;/h3&gt;&lt;p&gt;ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಯಶ್ ಅವರೇ ಸಹ-ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಪ್ರತಿ ಹೆಜ್ಜೆಯಲ್ಲೂ ಯಶ್ ಅವರ ಶ್ರಮ ಎದ್ದುಕಾಣುತ್ತಿದೆ. ಈ ಸುದೀರ್ಘ ಪ್ರಿವ್ಯೂ ಈಗ ಅಂತರಾಷ್ಟ್ರೀಯ ವಿತರಕರಲ್ಲಿ ಭಾರೀ ಡಿಮ್ಯಾಂಡ್ ಸೃಷ್ಟಿಸಿದೆ.&lt;/p&gt;&lt;p&gt;ಸದ್ಯಕ್ಕೆ ಚಿತ್ರತಂಡ ಈ 9 ನಿಮಿಷದ ಪ್ರಿವ್ಯೂ ಅನ್ನು ಗೌಪ್ಯವಾಗಿಟ್ಟಿದ್ದರೂ, ಮುಂದಿನ ದಿನಗಳಲ್ಲಿ ಇದರ ಸಣ್ಣ ತುಣುಕನ್ನಾದರೂ ಅಭಿಮಾನಿಗಳಿಗಾಗಿ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ, ಬರುವ ಜೂನ್ 4 ರಂದು 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳೇ, ನೀವು ಈ &quot;ದೊಡ್ಡವರ ಕಾಲ್ಪನಿಕ ಕಥೆ&quot; ನೋಡಲು ರೆಡಿಯಿದ್ದೀರಾ?&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rocking-star-yash-dominates-the-international-stage-by-his-toxic-magic-hidden-in-that-secret-9-minute-preview/articleshow-bo9wq33"/>
        </item>
        <item>
            <title><![CDATA[ಒಂದೇ ಸೂಜಿ, ಎಲ್ಲರಿಗೂ ಬಳಕೆ, ಪಾಕಿಸ್ತಾನ ಸರ್ಕಾರಿ ಆಸ್ಪತ್ರೆ ನಿರ್ಲಕ್ಶ್ಯಕ್ಕೆ 300ಕ್ಕೂ ಹೆಚ್ಚು ಮಕ್ಕಳಿಗೆ HIV]]></title>
            <link>https://kannada.asianetnews.com/world-news/pakistan-child-hiv-outbreak-bbc-undercover-exposes-needle-reuse-at-taunsa-hospital/articleshow-ehdau1z</link>
            <guid isPermaLink="true">https://kannada.asianetnews.com/world-news/pakistan-child-hiv-outbreak-bbc-undercover-exposes-needle-reuse-at-taunsa-hospital/articleshow-ehdau1z</guid>
            <pubDate>Wed, 15 Apr 2026 12:24:11 +0530</pubDate>
            <description><![CDATA[&lt;p&gt;ಪಾಕಿಸ್ತಾನದ ಟೌನ್ಸಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ ನೂರಾರು ಮಕ್ಕಳಿಗೆ ಎಚ್&zwnj;ಐವಿ ಸೋಂಕು ತಗುಲಿದೆ. ಬಿಬಿಸಿ ನಡೆಸಿದ ರಹಸ್ಯ ತನಿಖೆಯಲ್ಲಿ, ಕಲುಷಿತ ಸೂಜಿಗಳ ಮರುಬಳಕೆಯಿಂದ ಈ ದುರಂತ ಸಂಭವಿಸಿರುವುದು ಬಯಲಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ, ಪಾಕಿಸ್ತಾನ ಸರ್ಕಾರವೇ ಮೌನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7yjky4byb6thacjnyznyyx,imgname-----------------------2026-04-15t122147.429-1776235925444.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಾಕಿಸ್ತಾನದ ಟೌನ್ಸಾದ ಸರ್ಕಾರಿ ಆಸ್ಪತ್ರೆಯೊಂದು ರೋಗಿಗಳ ಪಾಲಿಗೆ ದೇಗುಲವಾಗುವ ಬದಲು ಸಾವಿನ ಮನೆಯಾಗಿ ಬದಲಾಗಿದೆ. ರೋಗ ಗುಣಪಡಿಸಬೇಕಾದ ಆಸ್ಪತ್ರೆಯೇ ನೂರಾರು ಅಮಾಯಕ ಮಕ್ಕಳಿಗೆ ಜೀವಹಾನಿಕಾರಕ ಎಚ್&zwnj;ಐವಿ (HIV) ಸೋಂಕು ಹರಡಲು ಕಾರಣವಾಗಿದೆ. ಈ ಆಘಾತಕಾರಿ ಸತ್ಯ ಬಿಬಿಸಿ ನಡೆಸಿದ ರಹಸ್ಯ ತನಿಖೆಯಿಂದ ಬಯಲಾಗಿದೆ. ಅಧಿಕಾರಿಗಳು ಕ್ರಮದ ಭರವಸೆ ನೀಡಿದ ಮೇಲೂ ಇಲ್ಲಿನ ಅಸುರಕ್ಷಿತ ವೈದ್ಯಕೀಯ ಪದ್ಧತಿಗಳು ಮಾತ್ರ ಇನ್ನೂ ನಿಂತಿಲ್ಲ!&lt;/p&gt;&lt;h2&gt;ಒಂದು ಕುಟುಂಬದ ಕಣ್ಣೀರಿನ ಕಥೆ ಕೇಳಿ!&lt;/h2&gt;&lt;p&gt;ಎಂಟು ವರ್ಷದ ಬಾಲಕ ಮೊಹಮ್ಮದ್ ಅಮೀನ್, ಎಚ್&zwnj;ಐವಿ ಪಾಸಿಟಿವ್ ಬಂದ ಕೆಲವೇ ದಿನಗಳಲ್ಲಿ ತೀವ್ರ ಜ್ವರ, ನೋವಿನಿಂದ ಬಳಲಿ ಅನ್ಯಾಯವಾಗಿ ನರಳಿ ಸಾವನ್ನಪ್ಪಿದ. ಆ ಬಾಲಕನ ಸಾವು ಕುಟುಂಬವನ್ನು ಕಂಗಾಲಾಗಿಸಿತು. ಇದರ ಬೆನ್ನಲ್ಲೇ, ಅವನ ಸಹೋದರಿ ಅಸ್ಮಾ ಕೂಡ ಎಚ್&zwnj;ಐವಿ ಪೀಡಿತಳೆಂದು ಗೊತ್ತಾಗಿ ಕುಟುಂಬಕ್ಕೆ ಆಕಾಶ ಕಳಚಿಬಿದ್ದಂತಾಯ್ತು. ಈ ಇಬ್ಬರೂ ಮಕ್ಕಳಿಗೆ ಆಸ್ಪತ್ರೆಯಲ್ಲಿ ದಿನನಿತ್ಯದ ಚಿಕಿತ್ಸೆ ನೀಡುವಾಗ ಬಳಸಿದ ಕಲುಷಿತ ಸೂಜಿಗಳೇ ಈ ಮಾರಕ ರೋಗಕ್ಕೆ ಕಾರಣವೆಂದು ಕುಟುಂಬದವರು ಆರೋಪಿಸಿದ್ದಾರೆ. ಮಕ್ಕಳಿಗೆ ಹೆಚ್&zwnj;ಐವಿ ತಗಲುಬೇಕೆಂದರೆ ತಾಯಿಗೂ ಹೆಚ್&zwnj;ಐವಿ ಇರಬೇಕು. ಆದರೆ ತಾಯಿ ಆರೋಗ್ಯವಾಗಿದ್ದಾರೆ, ಹೆಚ್&zwnj;ಐವಿ ಇಲ್ಲ. ತಾಯಿಗೆ ಸೋಂಕಿಲ್ಲದಿದ್ದರೂ ಮಕ್ಕಳಿಗೆ ಸೋಂಕು ತಗುಲಿರುವುದು ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.&lt;/p&gt;&lt;h3&gt;ಒಂದೇ ವರ್ಷದಲ್ಲಿ 331 ಮಕ್ಕಳು ಎಚ್&zwnj;ಐವಿ ಪಾಸಿಟಿವ್&lt;/h3&gt;&lt;p&gt;ನವೆಂಬರ್ 2024 ರಿಂದ ಅಕ್ಟೋಬರ್ 2025 ರ ನಡುವೆ ಟೌನ್ಸಾದಲ್ಲಿ ಬರೋಬ್ಬರಿ 331 ಮಕ್ಕಳು ಎಚ್&zwnj;ಐವಿ ಪಾಸಿಟಿವ್ ಎಂದು ಪತ್ತೆಯಾಗಿದ್ದಾರೆ. ಹೆಚ್&zwnj;ಐವಿ ಪೀಡಿತ 97 ಕುಟುಂಬಗಳನ್ನು ಪರೀಕ್ಷಿಸಿದಾಗ ಕೇವಲ ನಾಲ್ಕು ತಾಯಂದಿರಲ್ಲಿ ಮಾತ್ರ ಸೋಂಕು ಕಂಡುಬಂದಿದೆ. ಅಂದರೆ, ಉಳಿದ ಮಕ್ಕಳಿಗೆ ಸೋಂಕು ಹರಡಿದ್ದು ತಾಯಿಯಿಂದಲ್ಲ, ಬದಲಾಗಿ ಆಸ್ಪತ್ರೆಯ ಕಲುಷಿತ ಸೂಜಿಗಳಿಂದ! ಹೆಚ್&zwnj;ಐವಿ ಪೀಡಿತರಿಗೆ ಮಾಡಿದ ಇಂಜೆಕ್ಷನ್ ಸಿರೀಂಜ್&zwnj;ಗಳಿಂದಲೇ ಮಕ್ಕಳಿಗೂ ಇಂಜೆಕ್ಷನ್! ಸೂಜಿ ಬದಲಿಸದೇ ಎಲ್ಲರಿಗೂ ಒಂದೇ ಸೂಜಿ ಬಳಸಿದ ಪರಿಣಾಮ ಹೆಚ್&zwnj;ಐವಿ ಹರಡಲು ಕಾರಣ. ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಸೋಂಕು ಹರಡಲು ಅಸುರಕ್ಷಿತ ವೈದ್ಯಕೀಯ ಪದ್ಧತಿಗಳೇ ಕಾರಣವೆಂದು ಪ್ರಾಂತೀಯ ಸ್ಕ್ರೀನಿಂಗ್ ಕಾರ್ಯಕ್ರಮವೇ ಪಟ್ಟಿ ಮಾಡಿದೆ.&lt;/p&gt;&lt;h3&gt;ಬಿಬಿಸಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ನಿರ್ಲಕ್ಷ್ಯ!&lt;/h3&gt;&lt;p&gt;ಬಿಬಿಸಿ ಪತ್ರಕರ್ತರು 32 ಗಂಟೆಗಳ ಕಾಲ ನಡೆಸಿದ ರಹಸ್ಯ ಚಿತ್ರೀಕರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದೆ. ಒಂದೇ ಔಷಧಿಯ ಬಾಟಲಿಗೆ ಹತ್ತಾರು ಬಾರಿ ವಿವಿಧ ಸಿರಿಂಜ್&zwnj;ಗಳನ್ನು ಚುಚ್ಚುವುದು, ಒಬ್ಬ ಮಗುವಿಗೆ ಬಳಸಿದ ಬಾಟಲಿಯನ್ನೇ ಮತ್ತೊಬ್ಬ ಮಗುವಿಗೆ ಬಳಸುವುದು ಇಲ್ಲಿ ಸಾಮಾನ್ಯವಾಗಿದೆ. ವೈದ್ಯಕೀಯ ತಜ್ಞರ ಪ್ರಕಾರ, ಸೂಜಿಯನ್ನು ಬದಲಿಸಿದರೂ ಸಿರಿಂಜ್&zwnj; ಕಲುಷಿತವಾಗಿದ್ದರೆ ವೈರಸ್ ಹರಡುವುದು ಗ್ಯಾರಂಟಿ. ಕೈಗವಸುಗಳಿಲ್ಲದೆ ಇಂಜೆಕ್ಷನ್ ನೀಡುವುದು ಮತ್ತು ವೈದ್ಯಕೀಯ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದು ಇಲ್ಲಿನ ದೈನಂದಿನ ದೃಶ್ಯಗಳಾಗಿವೆ.&lt;/p&gt;&lt;h3&gt;ಪಾಕಿಸ್ತಾನ ಸರ್ಕಾರದ ಮೌನ&lt;/h3&gt;&lt;p&gt;2025 ರ ಆರಂಭದಲ್ಲಿ ಈ ಪ್ರಕರಣ ಸುದ್ದಿಯಾದಾಗ ಅಂದಿನ ವೈದ್ಯಕೀಯ ಮುಖ್ಯಸ್ಥರನ್ನು ಅಮಾನತು ಮಾಡಲಾಗಿತ್ತು. ಆದರೆ, ಈಗಿನ ಅಧೀಕ್ಷಕರು ತಪ್ಪು ಒಪ್ಪಿಕೊಳ್ಳುವ ಬದಲು ವೀಡಿಯೊ ದೃಶ್ಯಗಳನ್ನೇ ಪ್ರಶ್ನಿಸುತ್ತಿದ್ದಾರೆ. ಪಾಕಿಸ್ತಾನದ ಆರೋಗ್ಯ ವ್ಯವಸ್ಥೆಯಲ್ಲಿ ಇಂಜೆಕ್ಷನ್&zwnj;ಗಳ ಅತಿಯಾದ ಬಳಕೆ ಮತ್ತು ತರಬೇತಿಯ ಕೊರತೆ ಈ ಈ ಪರಿಸ್ಥಿತಿಗೆ ಕಾರಣ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನಿಸೆಫ್ ಕೂಡ ಈ ಆಸ್ಪತ್ರೆಯ ಕಳಪೆ ನೈರ್ಮಲ್ಯ ಮತ್ತು ವೈದ್ಯಕೀಯ ಉಪಕರಣಗಳ ಮರುಬಳಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.&lt;/p&gt;&lt;h3&gt;ಇದೇ ಮೊದಲಲ್ಲ ಹಿಂದೆಯೂ ನೂರಾರು ಮಕ್ಕಳು ಬಲಿ&lt;/h3&gt;&lt;p&gt;ಇದು ಮೊದಲೇನಲ್ಲ; 2019 ರಲ್ಲಿ ಸಿಂಧ್ ಪ್ರಾಂತ್ಯದ ರಾಟೊಡೆರೊದಲ್ಲಿ ಇದೇ ರೀತಿ ನೂರಾರು ಮಕ್ಕಳು ಎಚ್&zwnj;ಐವಿಗೆ ಬಲಿಯಾಗಿದ್ದರು. ಇಂದು ಅಸ್ಮಾಳಂತಹ ಮಕ್ಕಳು ಕೇವಲ ರೋಗದೊಂದಿಗೆ ಮಾತ್ರವಲ್ಲದೆ, ಸಮಾಜದ ಕಳಂಕದೊಂದಿಗೂ ಹೋರಾಡುತ್ತಿದ್ದಾರೆ. ಅಸ್ಮಾಳನ್ನು ನೋಡಿದ ಕೂಡಲೇ ನೆರೆಹೊರೆಯವರು ತಮ್ಮ ಮಕ್ಕಳನ್ನು ದೂರ ಕರೆಯುತ್ತಾರೆ. ಆಸ್ಪತ್ರೆಯ ಒಂದೇ ಒಂದು ನಿರ್ಲಕ್ಷ್ಯ, ಒಂದು ಇಡೀ ತಲೆಮಾರಿನ ಬಾಲ್ಯವನ್ನು ಮತ್ತು ಭವಿಷ್ಯವನ್ನು ಕಸಿದುಕೊಂಡಿದೆ.&lt;/p&gt;]]></content:encoded>
            <category>world-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/world-news/pakistan-child-hiv-outbreak-bbc-undercover-exposes-needle-reuse-at-taunsa-hospital/articleshow-ehdau1z"/>
        </item>
        <item>
            <title><![CDATA[ದುಬೈನ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ 25 ವರ್ಷಗಳ ಬಳಿಕ ಕ್ಲೋಸ್, ಕಾರಣವೇನು?]]></title>
            <link>https://kannada.asianetnews.com/gallery/world-news/dubai-iconic-building-burj-al-arab-sail-shape-hotel-closing-after-25-years-f202r9n</link>
            <guid isPermaLink="true">https://kannada.asianetnews.com/gallery/world-news/dubai-iconic-building-burj-al-arab-sail-shape-hotel-closing-after-25-years-f202r9n</guid>
            <pubDate>Wed, 15 Apr 2026 14:50:02 +0530</pubDate>
            <description><![CDATA[&lt;p&gt;ದುಬೈನ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ 25 ವರ್ಷಗಳ ಬಳಿಕ ಕ್ಲೋಸ್, ಕಾರಣವೇನು?, ದುಬೈ ಎಂದಾಗ ತಕ್ಷಣ ನೆನಪಿಗೆ ಬರುವ ಕಟ್ಟಡಗಳ ಪೈಕಿ ಬುರ್ಜ್ ಅಲ್ ಅರಬ್. ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್ ಇರುವ ಈ ಕಟ್ಟದ ಬಂದ್ ಆಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp86hbphqv5cg9fynbtmmm4s,imgname-burj-al-arab-1776244272849.png" type="image/jpeg" height="390" width="690"/>
            <content:encoded><![CDATA[&lt;p&gt;ದುಬೈನ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ 25 ವರ್ಷಗಳ ಬಳಿಕ ಕ್ಲೋಸ್, ಕಾರಣವೇನು?, ದುಬೈ ಎಂದಾಗ ತಕ್ಷಣ ನೆನಪಿಗೆ ಬರುವ ಕಟ್ಟಡಗಳ ಪೈಕಿ ಬುರ್ಜ್ ಅಲ್ ಅರಬ್. ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್ ಇರುವ ಈ ಕಟ್ಟದ ಬಂದ್ ಆಗುತ್ತಿದೆ.&lt;/p&gt;&lt;img&gt;&lt;p&gt;ದುಬೈನಲ್ಲಿ ಗಗನ ಚುಂಬಿ ಕಟ್ಟಗಳೇ ರಾರಾಜಿಸುತ್ತದೆ. ದುಬೈ ಕುರಿತು ಹೇಳುವಾಗ, ನೆನಪಿಸಿಕೊಳ್ಳುವಾಗ ಹಲವು ಐಕಾನಿಕ್ ಕಟ್ಟಡಗಳು ಕಣ್ಣಮುಂದೆ ಬರುತ್ತದೆ. ವಿಶ್ವದ ಅತೀ ಎತ್ತರದ ಬುರ್ಜ್ ಖಲೀಫಾ, ಬುರ್ಜ್ ಅಲ್ ಅರಬ್ ಸೇರಿದಂತೆ ಹಲವು ವಿಶೇಷ ವಿನ್ಯಾಸದ ಕಟ್ಟಡಗಳು ಗಮನ ಸೆಳೆಯುತ್ತದೆ. ಈ ಪೈಕಿ 7 ಸ್ಟಾರ್ ಹೊಟೆಲ್ ಇರುವ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ ಇದೀಗ ಬಂದ್ ಆಗುತ್ತಿದೆ.&lt;/p&gt;&lt;img&gt;&lt;p&gt;ಬುರ್ಜ್ ಅಲ್ ಅರಬ್ ಕಟ್ಟಡ ದುಬೈನ ಅತ್ಯಂತ ಆಕರ್ಷಕ ಕಟ್ಟಡ. ಬೋಟ್ ರೀತಿಯಲ್ಲಿರುವ ಈ ಕಟ್ಟಡ ಪ್ರವಾಸಿಗರ ಕಣ್ಮನ ಸೆಳೆಯುವ ಕಟ್ಟಡ. ಕಳೆದ 25 ವರ್ಷಗಳಿಂದ ಈ ಐಕಾನಿಕ್ ಕಟ್ಟಡ ದುಬೈನಲ್ಲಿ ತಲೆ ಎತ್ತಿ ನಿಂತಿದೆ. ಆದರೆ ಇದೀಗ ಈ ಕಟ್ಟಡವನ್ನು ಮುಚ್ಚಲಾಗುತ್ತಿದೆ.&lt;/p&gt;&lt;img&gt;&lt;p&gt;ಐಕಾನಿಕ್ ಕಟ್ಟಡ ಮುಚ್ಚಲು ಪ್ರಮುಖ ಕಾರಣ ನವೀಕರಣ. ಬರೋಬ್ಬರಿ 18 ತಿಂಗಳ ಕಾಲ ಈ ಕಟ್ಟಡ ಮುಚ್ಚಲಾಗುತ್ತಿದೆ. ಕಟ್ಟಡ ಇಂಟಿರೀಯರ್ ಸೇರಿದಂತೆ ಹಲವು ಕಾಮಗಾರಿಗಳು ನಡೆಸಲು ಒಂದೂವರೆ ವರ್ಷಗಳ ಕಾಲ ಕಟ್ಟಡ ಮುಚ್ಚಲಾಗುತ್ತಿದೆ. ಇದು ಹಲವರ ಬೇಸರಕ್ಕೂ ಕಾರಣವಾಗಿದೆ.&lt;/p&gt;&lt;img&gt;&lt;p&gt;ಬುರ್ಜ್ ಅಲ್ ಅರಬ್ ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್. ಅತ್ಯಂತ ಐಷಾರಾಮಿ ಹೊಟೆಲ್ ಇದಾಗಿದೆ. ಈ ಹೊಟೆಲ್&zwnj;ನಲ್ಲಿ ಒಂದು ದಿನ ತಂಗಲು ಆರಂಭಿಕ ಬೆಲೆ 1600 ಯುಎಸ್ ಡಾಲರ್. ಅಂದರೆ 1.35 ಲಕ್ಷ ರೂನಿಂದ 1.40 ಲಕ್ಷ ರೂಪಾಯಿ. ಇನ್ನು ಹೈ ಸ್ಯೂಟ್ ಕೊಠಡಿ ಬೆಲೆ 3000 ಯುಎಸ್ ಡಾಲರ್&zwnj;ನಿಂದ 5000 ಯುಎಸ್ ಡಾಲರ್ ವರೆಗಿದೆ.&lt;/p&gt;&lt;img&gt;&lt;p&gt;1900ರಲ್ಲಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಟೊಮ್ ಸೂಚನೆಯಂತೆ ಬುರ್ಜ್ ಅಲ್ ಅರಬ್ ಕಟ್ಟಡ ನಿರ್ಮಾಣ ತಯಾರಿ ಆರಂಭಗೊಂಡಿತ್ತು. ಐಫೆಲ್ ಟವರ್, ಒಪೆರಾ ಹೌಸ್ ರೀತಿ ವಿಶ್ವವನ್ನೇ ಸೆಳೆಯುವ ಕಟ್ಟಡವಾಗಬೇಕು ಅನ್ನೋ ನಿರ್ದೇಶನ ನೀಡಿದ್ದರು. ಇದರಂತೆ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು 1999ರಲ್ಲಿ ಉದ್ಘಾಟನೆಗೊಂಡಿತ್ತು.&lt;/p&gt;&lt;h2&gt;1999ರಲ್ಲಿ ಉದ್ಘಾಟನೆಗೊಂಡ ಬುರ್ಜ್ ಅಲ್ ಅರಬ್&lt;/h2&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/world-news/dubai-iconic-building-burj-al-arab-sail-shape-hotel-closing-after-25-years-f202r9n"/>
        </item>
        <item>
            <title><![CDATA[ಅಮೆರಿಕಾ ಸಂದರ್ಶನದಲ್ಲಿ ನಟ ಯಶ್ ಭಾಗಿ; 'ರಾಮಾಯಣ'ದ ಸಾಕಷ್ಟು ಸೀಕ್ರೆಟ್ ಬಿಚ್ಚಿಟ್ಟ ರಾಕಿಂಗ್ ಸ್ಟಾರ್!]]></title>
            <link>https://kannada.asianetnews.com/sandalwood/yash-talks-on-his-upcoming-film-ramayana-and-toxic-in-an-interview-at-america/articleshow-g1xq18r</link>
            <guid isPermaLink="true">https://kannada.asianetnews.com/sandalwood/yash-talks-on-his-upcoming-film-ramayana-and-toxic-in-an-interview-at-america/articleshow-g1xq18r</guid>
            <pubDate>Wed, 15 Apr 2026 15:13:23 +0530</pubDate>
            <description><![CDATA[&lt;p&gt;&lsquo;ರಣವೀರ್ ಸಿಂಗ್ ಒಬ್ಬ ಅದ್ಭುತ ನಟ. ರಾಮನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಿರುವ ಕಲಾವಿದ. ನಾವೆಲ್ಲರೂ ಒಂದು ಮಹಾನ್ ಕಾರ್ಯಕ್ಕಾಗಿ ಒಂದಾಗಿದ್ದೇವೆ. ಇಲ್ಲಿ ನಮ್ಮ ಕೆಮೆಸ್ಟ್ರಿಗಿಂತ ಹೆಚ್ಚಾಗಿ ನಾವೆಲ್ಲ ಒಂದು ಅತ್ಯಮೂಲ್ಯ ಕೊಡುಗೆಯನ್ನು ಜಗತ್ತಿಗೆ ನೀಡಲು ಸಜ್ಜಾಗುತ್ತಿದ್ದೇವೆ&rsquo;. ಇನ್ನೂ ಏನಂದ್ರು ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn7g407zxhrxqxn8xks83h7a,imgname-ramayana-ravan-yash-1775147024639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಮೆರಿಕಾದ ಸಂದರ್ಶನದಲ್ಲಿ ನಟ ಯಶ್ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಕೆಜಿಎಫ್ ಸರಣಿ ಸಿನಿಮಾ ಮೂಲಕ ಜಗತ್ತಿನ ಗಮನ ಸೆಳೆದಿರುವ ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಇತ್ತೀಚೆಗೆ ಅಮೆರಿಕಾದಲ್ಲಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಯಶ್ ನಟನೆಯ ರಾಮಾಯಣ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ನಮಿತ್ ಮಲ್ಹೋತ್ರಾ ಹಾಗೂ ಯಶ್ ಇಬ್ಬರೂ ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾದ ಬಗ್ಗೆ ಮಾತನ್ನಾಡಿದ್ದಾರೆ.&lt;/p&gt;&lt;h2&gt;ರಾಮಾಯಣದ ಬಗ್ಗೆ ಹೇಳಿದ್ದೇನು?&lt;/h2&gt;&lt;p&gt;'ರಾಮಾಯಣ ಅನ್ನೋದು ನಮ್ಮನ್ನು ಜಗತ್ತಿನೊಂದಿಗೆ ಚಿಕ್ಕಂದಿನಿಂದಲೂ ಬೆಸೆದಿರುವ ಸಿನಿಮಾ. ರಾಮಾಯಣದ ಮೂಲಕ ನಾವು ಜೀವನದ ಹಲವು ಮೌಲ್ಯಗಳನ್ನು ಕಂಡುಕೊಂಡಿದ್ದೇವೆ, ಅದರ ಬೆಲೆ ಅರಿತಿದ್ದೇವೆ. ಬಹಳಷ್ಟು ವರ್ಷಗಳ ಹಿಂದೆಯೇ ರಾಮಾಯಣ ಆಗಿಹೋಗಿದ್ದರೂ ಕೂಡ, ಈ ಕಥೆ, ಈ ಮಹಾನ್ ಗ್ರಂಥ, ಈ ಅತ್ಯಮೂಲ್ಯ ಇತಿಹಾಸ ನಮ್ಮ ಜೀವನವನ್ನು ಯೋಗ್ಯವಾಹಿಸಿದೆ, ಶ್ರೀಮಂತವಾಗಿಸಿದೆ. ಜೊತೆಗೆ, ನಾವು ರಾಮಾಯಣದ ಮೌಲ್ಯಗಳು ಈಗಲೂ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ನೋಡುತ್ತಿದ್ದೇವೆ. ಇದೇ ಕಾರಣಕ್ಕೆ ನಮ್ಮ ಸಿನಿಮಾದ ಮೂಲಕ 'ರಾಮಾಯಣ'ವನ್ನು ಜಗತ್ತಿಗೆ ತೆರೆಯ ಮೂಲಕ ತೋರಸಲಿದ್ದೇವೆ.&lt;/p&gt;&lt;h3&gt;ಇಬ್ಬರೂ ತೆರೆಯ ಮೇಲೆ ಒಟ್ಟಿಗೇ ಬರೋದಿಲ್ಲ.&lt;/h3&gt;&lt;p&gt;ಸಿನಿಮಾದಲ್ಲಿ ನಾನು ಅಂದರೆ ರಾಮ ಹಾಗೂ ರಣಬೀರ್ ಕಪೂರ್ ಅಂದರೆ ರಾವಣ ಇಬ್ಬರೂ ತೆರೆಯ ಮೇಲೆ ಒಟ್ಟಿಗೇ ಬರೋದಿಲ್ಲ. ಕಾರಣ, ರಾಮಾಯಣ 2 ಭಾಗಗಳಲ್ಲಿ ಬರುತ್ತಿದೆ ಎಂಬುದು ನಿಮಗೆ ಗೊತ್ತಿದೆ. ಈಗ ಬರುತ್ತಿರುವ ರಾಮಾಯಣ ಪಾರ್ಟ್-1ರಲ್ಲಿ ನಾನು (ರಾವಣ) ನನ್ನದೇ ಆದ ರಾಜ್ಯವನ್ನು ಆಳುತ್ತಿರುತ್ತೇನೆ. ಹಾಗೇ, ರಣಬೀರ್ ಕಪೂರ್ (ರಾಮ) ಅವರದೇ ರಾಜ್ಯ ಆಳುತ್ತಿರುತ್ತಾರೆ. ನಾವಿಬ್ಬರೂ ಈ ಸಿನಿಮಾದಲ್ಲಿ (ಪಾರ್ಟ್ 1) ತೆರೆಯ ಮೇಲೆ ಒಟ್ಟಿಗೇ ಬರೋದಿಲ್ಲ, ಒಂದೇ ಸ್ಕ್ರೀನ್&zwnj;ನಲ್ಲಿ ಮುಖಾಮುಖಿ ಆಗೋದಿಲ್ಲ. ಅದೇನಿದ್ದರೂ 'ಪಾರ್ಟ್ 2'ನಲ್ಲಿ ಸಂಭವಿಸಲಿದೆ. ಆದರೆ, ನಾವಿಬ್ಬರೂ ಕೆಲವೊಮ್ಮೆ ಶೂಟಿಂಗ್&zwnj; ಜಾಗದಲ್ಲಿ ಭೇಟಿ ಆಗಿದ್ದೇವೆ.&lt;/p&gt;&lt;p&gt;ರಣವೀರ್ ಸಿಂಗ್ ಜೊತೆ ಯಶ್ ಕೆಮೆಸ್ಟ್ರಿ ಬಗ್ಗೆ ಕೇಳಲಾದ ಪ್ರಶ್ನೆಗೆ ಯಶ್ 'ರಣವೀರ್ ಸಿಂಗ್ ಒಬ್ಬ ಅದ್ಭುತ ನಟ. ರಾಮನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಿರುವ ಕಲಾವಿದ. ನಾವೆಲ್ಲರೂ ಒಂದು ಮಹಾನ್ ಕಾರ್ಯಕ್ಕಾಗಿ ಒಂದಾಗಿದ್ದೇವೆ. ಇಲ್ಲಿ ನಮ್ಮ ಕೆಮೆಸ್ಟ್ರಿಗಿಂತ ಹೆಚ್ಚಾಗಿ ನಾವೆಲ್ಲ ಒಂದು ಅತ್ಯಮೂಲ್ಯ ಕೊಡುಗೆಯನ್ನು ಜಗತ್ತಿಗೆ ನೀಡಲು ಸಜ್ಜಾಗುತ್ತಿದ್ದೇವೆ. ಈ ಕಾರಣಕ್ಕೆ ನಮ್ಮ ಇಡೀ ತಾರಾಗಣ ಹಾಗೂ ಚಿತ್ರತಂಡ ಇಂದೇ ಗುರಿಗಾಗಿ ಕೆಲಸ ಮಾಡುತ್ತಿದೆ. ಈ ಕಾರಣಕ್ಕೆ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದ್ದು ಅದನ್ನು ಇಡೀ ಜಗತ್ತು ತೆರೆಯ ಮೇಲೆ ನೋಡಬಹುದು' ಎಂದಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/yash-talks-on-his-upcoming-film-ramayana-and-toxic-in-an-interview-at-america/articleshow-g1xq18r"/>
        </item>
        <item>
            <title><![CDATA[ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ]]></title>
            <link>https://kannada.asianetnews.com/world-news/diplomatic-financial-woes-pakistan-faces-payment-hurdles-for-us-iran-2nd-round-talks/articleshow-gd37h07</link>
            <guid isPermaLink="true">https://kannada.asianetnews.com/world-news/diplomatic-financial-woes-pakistan-faces-payment-hurdles-for-us-iran-2nd-round-talks/articleshow-gd37h07</guid>
            <pubDate>Tue, 14 Apr 2026 18:22:24 +0530</pubDate>
            <description><![CDATA[&lt;p&gt;ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ, ಈ ಬಾರಿಯ ಮಾತುಕತೆ ಪಾಕಿಸ್ತಾನ ಆಸಕ್ತಿ ತೋರಿದರೂ ಆತಿಥ್ಯ ನೀಡಲು ಹಣವೇ ಇಲ್ಲದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kntpjvx789cf1vgpb933d2k7,imgname-pakistan-israel-conflict-khawaja-asif-netanyahu-lebanon-strikes-iran-ceasefire-middle-east-tension-2026-7-1775791337383.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಸ್ಲಾಮಾಬಾದ್ (ಏ.14)&lt;/strong&gt; ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಸಂಘರ್ಷ ಮೋಡ ಕವಿದ ವಾತವರಣದಂತಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿ ಸಂಧಾನ ನಡೆಸಲು ಪಾಕಿಸ್ತಾನ ಅತೀವ ಉತ್ಸಾಹದಲ್ಲಿ ಕಳೆದ ಬಾರಿ ವೇದಿಕೆ ಒದಗಿಸಿತ್ತು. ಆದರೆ ಮಾತುಕತೆ ಫಲಪ್ರದವಾಗಲಿಲ್ಲ. ಸಂಧಾನ ನಡೆಯಲಿಲ್ಲ. ಇದೀಗ ಎರಡನೇ ಸುತ್ತಿನ ಮಾತುಕತಗೆ ಪಾಕಿಸ್ತಾನ ವೇದಿಕೆ ಸಿದ್ಧಪಡಿಸುತ್ತಿದೆ. ಇತ್ತ ಅಮೆರಿಕ ಹಾಗೂ ಇರಾನ್&zwnj;ಗೆ ಅನಿವಾರ್ಯವಾಗಿದೆ. ಜೊತೆಗೆ ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಂತಾಗಿದೆ. ಆದರೆ ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನದಲ್ಲಿ ಉತ್ಸಾಹ ಇದ್ದರೂ ಅದಕ್ಕೆ ತಕ್ಕಂತ ಹಣ ಪಾಕಿಸ್ತಾನದಲ್ಲಿಲ್ಲ. ಕಳೆದ ಬಾರಿ ಮಾತುಕತೆ ನಡೆದ ಖಾಸಗಿ ಹೊಟೆಲ್ ಬಿಲ್ ಇನ್ನೂ ಪಾವತಿಯಾಗಿಲ್ಲ. ಹೀಗಾಗಿ ಈ ಬಾರಿಯ ಮಾತುಕತೆಗೆ ವೇದಿಕೆ ಒದಗಿಸಲು ಖಾಸಗಿ ಹೊಟೆಲ್ ಬಾಕಿ ಬಿಲ್ ಪಾವತಿಸಲು ಸೂಚಿಸಿದೆ. ಹೀಗಾಗಿ 2ನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನದ ಪ್ರತಿಷ್ಠಿತ ಖಾಸಗಿ ಹೊಟೆಲ್ ಹಿಂದೇಟು ಹಾಕಿರುವುದು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ತಲೆನೋವಾಗಿದೆ.&lt;/p&gt;&lt;h2&gt;ಇದೇ ವಾರದಲ್ಲಿ ಸಂಧಾನ ಮಾತುಕತೆ&lt;/h2&gt;&lt;p&gt;ಅಮೆರಿಕ ಹಾಗೂ ಇರಾನ್ ಸರ್ಕಾರದ ಪ್ರತಿನಿಧಿಗಳು ಇದೇ ವಾರ ಪಾಕಿಸ್ತಾನದ ಇಸ್ಲಾಮಾಬಾದ್&zwnj;ನಲ್ಲಿ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ. ಇರಾನ್ ಹಾಗೂ ಅಮೆರಿಕ 2ನೇ ಸುತ್ತಿನ ಮಾತುಕತೆಗೆ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ಬಾರಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಇರಾನ್ ಸರ್ಕಾರದ ಜನಪ್ರತಿನಿಧಿಗಳ ಜೊತೆಗೆ ಮಾತಕತೆ ನಡೆಸಿದ್ದರು. ಆದರೆ ಸಂಧಾನ ಮಾತುಕತೆ ವಿಫಲಗೊಂಡು ಹಿಂದಿರುಗಬೇಕಾಯಿತು.&lt;/p&gt;&lt;h2&gt;ಸೆರೆನಾ ಹೊಟೆಲ್ ಬಿಲ್ ಬಾಕಿ&lt;/h2&gt;&lt;p&gt;ಇಸ್ಲಾಮಾಬಾದ್&zwnj;ನಲ್ಲಿರುವ ಸೆರೆನಾ ಹೊಟೆಲ್&zwnj;ನಲ್ಲಿ ಸಂಧಾನ ಮಾತುಕತೆ ನಡೆದಿತ್ತು. ಅಘಾ ಖಾನ್ ನೆಟ್&zwnj;ವರ್ಕ್ ಮಾಲೀಕತ್ವದ 5 ಸ್ಟಾರ್ ಹೊಟೆಲ್&zwnj;ನಲ್ಲಿ ಸಂಧಾನ ಮಾತುಕತೆ, ಆತಿಥಿಗಳ ಆತಿಥ್ಯಕ್ಕೆ ಖರ್ಚಾಗಿರುವ ಹೊಟೆಲ್ ಬಿಲ್&zwnj;ನ್ನು ಪಾಕಿಸ್ತಾನ ಸರ್ಕಾರ ಇನ್ನೂ ಪಾವತಿಸಿಲ್ಲ. ಹೀಗಾಗಿ ಸೆರೆನಾ ಹೊಟೆಲ್ ಬಾಕಿ ಬಿಲ್ ಪಾವತಿಸಲು ಸೂಚಿಸಿದೆ. ಪಾಕಿಸ್ತಾನ ಸರ್ಕಾರದ ಬಳಿ ಬಾಕಿ ಬಿಲ್ ಪಾವತಿಸಲು ಸೂಚಿಸಿದೆ.ಇತ್ತ ಪಾಕಿಸ್ತಾನ ಸರ್ಕಾರದಲ್ಲಿ ಸರ್ಕಾರಿ ವಾಹನಗಳಿಗೆ ಡೀಸೆಲ್ ಹಾಕಲು ಹಣ ಇಲ್ಲದಾಗಿದೆ.&lt;/p&gt;&lt;h2&gt;2ನೇ ಸುತ್ತಿನ ಮಾತುಕತೆಗೆ ಬೇರೆ ಹೊಟೆಲ್&lt;/h2&gt;&lt;p&gt;ಅಮೆರಿಕ ಹಾಗೂ ಇರಾನ್ ನಡುವಿನ 2ನೇ ಸುತ್ತಿನ ಸಂಧಾನ ಮಾತುಕತೆಗೆ ಬೇರೆ ಹೊಟೆಲ್&zwnj;ನಲ್ಲಿ ಆಯೋಜನೆ ಮಾಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇರಾನ್ ಹಾಗೂ ಅಮೆರಿಕ ನಡುವಿನ ಸಂಧಾನ ಮಾತುಕತೆ ಯಶಸ್ವಿಯಾದರೆ ಕೆಲ ಪ್ರಯೋಜನಗಳನ್ನು ಪಾಕಿಸ್ತಾನ ಪಡೆದುಕೊಳ್ಳಲಿದೆ. ಇದೇ ಕಾರಣದಿಂದ ಇದೀಗ 2ನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನ ಉತ್ಸುಕವಾಗಿದೆ. ಆದರೆ ಪಾಕಿಸ್ತಾನದ ಪ್ರತಿಷ್ಠಿತ ಖಾಸಗಿ ಹೊಟೆಲ್&zwnj;ಗಳು ವೇದಿಕೆ ನೀಡಲು ಹಿಂದೇಟು ಹಾಕುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/diplomatic-financial-woes-pakistan-faces-payment-hurdles-for-us-iran-2nd-round-talks/articleshow-gd37h07"/>
        </item>
        <item>
            <title><![CDATA[ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ: ಒಂದೇ ದಿನ ಮೂವರು ರೇ*ಪಿಸ್ಟ್‌ಗಳಿಗೆ ಮರಣದಂಡನೆ]]></title>
            <link>https://kannada.asianetnews.com/world-news/china-executes-three-pedophiles-in-same-day/articleshow-o93unpk</link>
            <guid isPermaLink="true">https://kannada.asianetnews.com/world-news/china-executes-three-pedophiles-in-same-day/articleshow-o93unpk</guid>
            <pubDate>Fri, 17 Apr 2026 13:21:58 +0530</pubDate>
            <description><![CDATA[ಚೀನಾದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮಕ್ಕಳ ಮೇಲೆ ಘೋರ ಲೈಂಗಿಕ ದೌರ್ಜನ್ಯ ಎಸಗಿದ್ದ ಮೂವರು ಶಿಶು ಕಾಮಿಗಳನ್ನು ಒಂದೇ ದಿನ ಗಲ್ಲಿಗೇರಿಸಲಾಗಿದೆ. ಮಕ್ಕಳ ಮೇಲಿನ ಅಪರಾಧಗಳಿಗೆ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುವ ಚೀನಾ, ಈ ಮೂಲಕ ಕಠಿಣ ಸಂದೇಶವನ್ನು ರವಾನಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd69k00kqwyahcmrfqga0jy,imgname-china-hangs-3-child-rapesit-on-same-day-1776411790336.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಶಿಶುಕಾಮಿಗಳ ಉಸಿರು ನಿಲ್ಲಿಸಿದ ಚೀನಾ&lt;/strong&gt;&lt;/h2&gt;&lt;p&gt;ಭಾರತದಲ್ಲಿ ಶಿಶು ಹಾಗೂ ಮಕ್ಕಳ ಕಾಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಅಮರಾವತಿಯಲ್ಲಿ 180ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾಜ್ ಎಂಬಾತನನ್ನು ಬಂಧಿಸಲಾಗಿತ್ತು. ಇನ್ನು ಕಾನೂನಿನ ವ್ಯಾಪ್ತಿಗೆ ಬಾರದ ಹಲವು ಪ್ರಕರಣಗಳು ದೇಶದಲ್ಲಿ ಪ್ರತಿದಿನವೂ ನಡೆಯುತ್ತಲೇ ಇದೆ. ಆದರೆ ಭಾರತದ ಕಾನೂನು ವ್ಯವಸ್ಥೆಯ ವಿಳಂಬ ಗತಿಯ ತನಿಖೆಯಿಂದಾಗಿ ಯಾವುದೇ ಆರೋಪಿಗಳಿಗೆ ದೊಡ್ಡ ಮಟ್ಟದ ಶಿಕ್ಷೆ ಆಗುವುದೇ ಇಲ್ಲ, ಹಲವು ಪ್ರಕರಣಗಳಲ್ಲಿ ಆರೋಪಿಗಳು ರಾಜರೋಷವಾಗಿ ತಿರುಗಾಡುತ್ತಿರುತ್ತಾರೆ. ಭಾರಿ ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಆರೋಪಿಗಳು ಅಥವಾ ತಪ್ಪಿತಸಸ್ಥರಿಗೆ ಕಾನೂನಿನ ಭಯವೆಂಬುದೇ ಇಲ್ಲವಾಗಿದೆ. ಅಮೆರಿಕಾದಲ್ಲಿ ಮಕ್ಕಳ ಅತ್ಯಾ*ಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಚರ್ಚೆ ನಡೆಯುತ್ತಿದೆಯೇ ಹೊರತು ಕಾನೂನು ಜಾರಿಗೆ ಬಂದಿಲ್ಲ. ಆದರೆ ಕಮ್ಯುನಿಷ್ಟ್ ರಾಷ್ಟ್ರ ಚೀನಾದಲ್ಲಿ ಮಾತ್ರ ಒಂದೇ ದಿನ ಒಟ್ಟು ಮೂವರು ಶಿಶು ಕಾಮಿಗಳನ್ನು ಗಲ್ಲಿಗೇರಿಸಲಾಗಿದೆ.&lt;/p&gt;&lt;h3&gt;&lt;strong&gt;ಒಂದೇ ದಿನ 3 ರೇ*ಪಿಸ್ಟ್&zwnj;ಗಳ ಗಲ್ಲಿಗೇರಿಸಿ ಸ್ಪಷ್ಟ ಸಂದೇಶ&lt;/strong&gt;&lt;/h3&gt;&lt;p&gt;ಆರೋಪಿಗಳು ಮಕ್ಕಳ ಮೇಲೆ ಎಸಗಿದ್ದ ಲೈಂಗಿಕ ದೌರ್ಜನ್ಯ ಅತ್ಯಂತ ಘೋರವಾದುದು ಎಂದು ತೀರ್ಪು ನೀಡಿದ ಚೀನಾದ ಸರ್ವೋಚ್ಚ ನ್ಯಾಯಾಲಯವು ಮೂವರು ಮಕ್ಕಳ ಕಾಮಿಗಳಿಗೆ ಅತ್ಯಧಿಕ ಶಿಕ್ಷೆಯಾದ ಗಲ್ಲು ಶಿಕ್ಷೆ ನೀಡುವಂತೆ ಆದೇಶಿಸಿತ್ತು. ಅದಂತೆ ಚೀನಾದಲ್ಲಿ ಒಂದೇ ದಿನ ಮೂವರು ಶಿಶು ಕಾಮಿಗಳನ್ನು ಗಲ್ಲಿಗೇರಿಸಲಾಗಿದೆ. ಚೀನಾದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಯಾವುದೇ ಕ್ಷಮೆ ಇಲ್ಲ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶೂನ್ಯ ಸಹಿಷ್ಣುತೆಯನ್ನು ಪಾಲಿಸುತ್ತಾ ಬಂದಿರುವ ಚೀನಾ ಇಂತಹ ಪ್ರತಿಯೊಂದು ಪ್ರಕರಣವನ್ನು ಸಾರ್ವಜನಿಕಗೊಳಿಸುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ&lt;/strong&gt;&lt;/p&gt;&lt;p&gt;ಚೀನಾದ ನ್ಯಾಯಾಲಯದಿಂದ ಗಲ್ಲಿಗೇರಿಸಲ್ಪಟ್ಟ ತಪ್ಪಿತಸ್ಥರಲ್ಲಿ ಓರ್ವ ಅಕ್ರಮವಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದ ಹಾಗೂ ಅಲ್ಲಿ ಡಜನ್&zwnj;ಗೂ ಹೆಚ್ಚು ಮಕ್ಕಳನ್ನು ಬಂಧನದಲ್ಲಿ ಇರಿಸಿದ್ದ. ಅದರಲ್ಲಿ 14ರೊಳಗಿನ ಕನಿಷ್ಠ 8 ಮಕ್ಕಳ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಹಾಗೆಯೇ ಗಲ್ಲಿಗೇರಿಸಲ್ಪಟ್ಟ ತಪ್ಪಿತಸ್ಥರಲ್ಲಿ 2ನೇಯ ಆರೋಪಿಯೂ ಆನ್&zwnj;ಲೈನ್&zwnj;ನಲ್ಲಿ ಪ್ರತೀಭಾ ಶೋಧನೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಹಾಗೂ ಅದರ ಮೂಲಕ ಸಂಪರ್ಕಕ್ಕೆ ಬಂದ 9 ಮಕ್ಕಳನ್ನು ಭೇಟಿಯಾಗುವ ನೆಪ ಮಾಡಿ ಅವರ ಮೇಲೆ ದೌರ್ಜನ್ಯವೆಸಗಿದ್ದ, ಈತ ಲೈಂಗಿಕ ದೌರ್ಜನ್ಯವೆಸಗಿದ್ದ ಮಕ್ಕಳಲ್ಲಿ ವಿಶೇಷ ಚೇತನ ಮಗುವೂ ಸೇರಿತ್ತು. ಹಾಗೆಯೇ ಗಲ್ಲು ಶಿಕ್ಷೆಗೊಳಗಾದ ಮತ್ತೊಬ್ಬ ಆರೋಪಿಯೂ ಅಪರಾದವನ್ನು ಮತ್ತೆ ಮತ್ತೆ ಮಾಡಿದ ಆರೋಪಿಯಾಗಿದ್ದಾನೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆತನಿಗೆ ಈಗಾಗಲೇ ಶಿಕ್ಷೆಯಾಗಿ ಆತ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಾಗಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ನಾನು ಗರ್ಭಿಣಿ ನನಗೆ ರಿಲೀಫ್ ಬೇಕು: ನಾಸಿಕ್ ಟಿಸಿಎಸ್ ಮತಾಂತರ ಕೇಸ್ ಆರೋಪಿ ನಿದಾ ಖಾನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ!&lt;/p&gt;&lt;p&gt;ಮೊದಲ ಬಾರಿಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಪೂರೈಸಿ ಜೈಲಿನಿಂದ ಬಿಡುಗಡೆಯಾಗಿದ್ದ ಆತ ಶಾಲೆಯೊಂದರ ಚಾಟ್&zwnj;ಗ್ರೂಪ್ ಒಳನುಸುಳಿ ಅಲ್ಲಿ 14ರ ಪ್ರಾಯದೊಳಗಿನ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೇ ಆತ ಈ ಲೈಂಗಿಕ ದೌರ್ಜನ್ಯದ ದೃಶ್ಯವನ್ನು ಚಿತ್ರೀಕರಿಸಿಕೊಂಡು ಆ ಮಕ್ಕಳಿಗೆ ಬ್ಲಾಕ್&zwnj;ಮೇಲ್ ಮಾಡುತ್ತಿದ್ದ ಎಂದು ನ್ಯಾಯಾಲಯ ಹೇಳಿದೆ. ಈ ಮರಣದಂಡನೆ ಶಿಕ್ಷೆಯೂ ಮಕ್ಕಳ ಮೇಲಿನ ಅಪರಾಧಕ್ಕೆ ಯಾವುದೇ ಕ್ಷಮೆ ಇಲ್ಲ ಹಾಗೂ ಅದನ್ನು ದೇಶವೂ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂಬುದರ ಸ್ಪಷ್ಟ ಚಿತ್ರಣವಾಗಿದೆ.&lt;/p&gt;]]></content:encoded>
            <category>world-news</category>
            <dc:creator>Anusha Kb</dc:creator>
            <atom:link href="https://kannada.asianetnews.com/world-news/china-executes-three-pedophiles-in-same-day/articleshow-o93unpk"/>
        </item>
        <item>
            <title><![CDATA[ಟೋಕಿಯೋದಲ್ಲಿ ತಿಂಗಳಿಗೆ ₹2.9 ಲಕ್ಷ ಖರ್ಚು? ಭಾರತೀಯ ಮಹಿಳೆಯ ವಿಡಿಯೋ ವೈರಲ್, ನೆಟ್ಟಿಗರ ಜಟಾಪಟಿ!]]></title>
            <link>https://kannada.asianetnews.com/world-news/indian-womans-tokyo-expense-video-sparks-online-debate-sat/articleshow-snfxsv9</link>
            <guid isPermaLink="true">https://kannada.asianetnews.com/world-news/indian-womans-tokyo-expense-video-sparks-online-debate-sat/articleshow-snfxsv9</guid>
            <pubDate>Wed, 15 Apr 2026 14:35:55 +0530</pubDate>
            <description><![CDATA[&lt;p&gt;ಟೋಕಿಯೋದಲ್ಲಿ ವಾಸಿಸುವ ಭಾರತೀಯ ಮಹಿಳೆ ಸುನಕ್ಷಿ ಶರ್ಮಾ, ತಮ್ಮ ಮೂರು ಜನರ ಕುಟುಂಬದ ತಿಂಗಳ ಖರ್ಚು ಸುಮಾರು 2.9 ಲಕ್ಷ ರೂ. ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಮನೆ ಬಾಡಿಗೆ, ಡೇ ಕೇರ್, ದಿನಸಿ ಒಳಗೊಂಡ ಜಪಾನ್&zwnj;ನ ಜೀವನ ವೆಚ್ಚದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp864fn825nxwtr7sx5yzmgr,imgname-tokiyo-lifestyle-1776243850920.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಾಸಿಸುವ ಭಾರತೀಯ ಮಹಿಳೆಯೊಬ್ಬರು ತಮ್ಮ ಕುಟುಂಬದ ತಿಂಗಳ ಖರ್ಚಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುನಕ್ಷಿ ಶರ್ಮಾ ಎಂಬ ಈ ಮಹಿಳೆ, ತಮ್ಮ ಮೂರು ಜನರ ಕುಟುಂಬಕ್ಕೆ ಟೋಕಿಯೋದಲ್ಲಿ ಜೀವನ ಮಾಡಲು ತಿಂಗಳಿಗೆ ಸುಮಾರು 2.9 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಬಾಡಿಗೆ, ಡೇ ಕೇರ್, ದಿನಸಿ, ಸಾರಿಗೆ ಅಂತ ಅವರು ಕೊಟ್ಟಿರುವ ಖರ್ಚಿನ ಪಟ್ಟಿ, ಭಾರತದ ಮೆಟ್ರೋ ನಗರಗಳ ಜೀವನ ವೆಚ್ಚದ ಜೊತೆ ಹೋಲಿಕೆ ಮಾಡಿ ಚರ್ಚೆ ಹುಟ್ಟುಹಾಕಿದೆ.&lt;/p&gt;&lt;h3&gt;&lt;strong&gt;ಜಪಾನ್&zwnj;ನಲ್ಲಿ ಬದುಕು ದುಬಾರಿ ಎಂದ ವಿಡಿಯೋ&lt;/strong&gt;&lt;/h3&gt;&lt;p&gt;ಸುನಕ್ಷಿ ಅವರ ಕುಟುಂಬದ ಅತಿ ದೊಡ್ಡ ಖರ್ಚು ಮನೆ ಬಾಡಿಗೆಯದ್ದಾಗಿದೆ. ಇದಕ್ಕೆ ಸುಮಾರು 2,00,000 ಯೆನ್ (ಅಂದಾಜು 1.16 ಲಕ್ಷ ರೂ.) ಆಗುತ್ತದೆ. ಇನ್ನು ಮಗನ ಡೇ ಕೇರ್&zwnj;ಗೆ ಸುಮಾರು 1,00,000 ಯೆನ್ (ಅಂದಾಜು 58,000 ರೂ.) ಖರ್ಚಾಗುತ್ತದೆ. ಜಪಾನ್&zwnj;ನಲ್ಲಿ ಭಾರತೀಯ ದಿನಸಿ ಸಾಮಾನುಗಳು ಸುಲಭವಾಗಿ ಸಿಗದ ಕಾರಣ, ಅದಕ್ಕಾಗಿ ತಿಂಗಳಿಗೆ 1,00,000 ದಿಂದ 1,50,000 ಯೆನ್ (ಸುಮಾರು 58,000 ದಿಂದ 87,000 ರೂ.) ಖರ್ಚು ಮಾಡುತ್ತಾರೆ. ಕಾರ್ ನಿರ್ವಹಣೆ, ಇಂಧನ, ಟೋಲ್ ಮತ್ತು ಪಾರ್ಕಿಂಗ್&zwnj;ಗೆ 50,000 ದಿಂದ 1,00,000 ಯೆನ್ (ಸುಮಾರು 29,000 ದಿಂದ 58,000 ರೂ.) ಬೇಕಾಗುತ್ತದೆ. 'ಭಾರತದ ಮೆಟ್ರೋ ನಗರಗಳಿಗೆ ಹೋಲಿಸಿದರೆ ಇದು ದುಬಾರಿನಾ?' ಎಂಬ ಪ್ರಶ್ನೆಯೊಂದಿಗೆ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Sunakshi Sharma (@desigirlinjapan)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;h2&gt;&lt;strong&gt;ಖರ್ಚಿನ ಲೆಕ್ಕಕ್ಕೆ ನೆಟ್ಟಿಗರ ಜಟಾಪಟಿ&lt;/strong&gt;&lt;/h2&gt;&lt;p&gt;ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಪಾನ್&zwnj;ನಲ್ಲಿ ಜೀವನ ವೆಚ್ಚದ ಬಗ್ಗೆ ತಿಳಿದಿರುವ ಕೆಲವರು, ವಿದೇಶಿಯರಾದ ಕಾರಣ ಖರ್ಚು ಹೆಚ್ಚಿರುವುದು ಸಹಜ ಎಂದಿದ್ದಾರೆ. ಒಂದು ಯೂನಿಫಾರ್ಮ್ ಶರ್ಟ್&zwnj;ಗೆ ಸುಮಾರು 5,000 ಯೆನ್ (ಅಂದಾಜು 2,900 ರೂ.) ಆಗುತ್ತದೆ ಎಂದು ಕೆಲವರು ಉದಾಹರಣೆ ಕೊಟ್ಟಿದ್ದಾರೆ. ಆದರೆ, ಹಲವರು ಈ ಲೆಕ್ಕವನ್ನು ನಂಬಲು ಸಿದ್ಧರಿಲ್ಲ. ಅದರಲ್ಲೂ ಊಟ ಮತ್ತು ಇಂಧನಕ್ಕೆ ನೀಡಿರುವ ಲೆಕ್ಕಾಚಾರದಲ್ಲಿ ಅತಿಶಯೋಕ್ತಿ ಇದೆ ಎಂದು ಒಂದು ವರ್ಗ ವಾದಿಸುತ್ತಿದೆ.&lt;/p&gt;&lt;p&gt;'ಜಪಾನ್&zwnj;ನಲ್ಲಿ ಇಂಧನ ಅಷ್ಟು ದುಬಾರಿಯಿಲ್ಲ, ಇಷ್ಟೊಂದು ಹಣ ಯಾಕೆ ಬೇಕು?' ಎಂದು ಕೆಲವರು ಪ್ರಶ್ನಿಸಿದ್ದಾರೆ. ಜಪಾನ್&zwnj;ನಲ್ಲಿ ವಾಸಿಸುವ ಮತ್ತೊಬ್ಬರು ಈ ಲೆಕ್ಕಾಚಾರ ತಪ್ಪು ಎಂದು ವಾದಿಸಿದ್ದಾರೆ. ತಮಗೆ ಭಾರತೀಯ ದಿನಸಿಗಾಗಿ ತಿಂಗಳಿಗೆ ಕೇವಲ 20,000 ಯೆನ್ ಖರ್ಚಾಗುತ್ತದೆ, ಒಂದು ಲಕ್ಷ ಯೆನ್ ಕಾರ್&zwnj;ಗೆ ಖರ್ಚಾಗುವುದು ನಂಬಲು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಟೋಕಿಯೋನಂತಹ ದುಬಾರಿ ನಗರಗಳಲ್ಲಿ ವಾಸಿಸುವವರ ಆರ್ಥಿಕ ಬಜೆಟ್ ಬಗ್ಗೆ ಈ ವಿಡಿಯೋ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/indian-womans-tokyo-expense-video-sparks-online-debate-sat/articleshow-snfxsv9"/>
        </item>
        <item>
            <title><![CDATA[ಅಮೆರಿಕಾದಲ್ಲಿ ಭಾರತದ 'ರಾಮಾಯಣ'ದ ಸೀಕ್ರೆಟ್ ಬಿಚ್ಚಿಟ್ಟ ನಿರ್ಮಾಪಕ; 'ರಾವಣ' ಯಶ್ ಬಗ್ಗೆ ಏನ್ ಹೇಳಿದ್ರು?]]></title>
            <link>https://kannada.asianetnews.com/cine-world/producer-namit-malhotra-talks-in-us-cinemacon-on-upcoming-ramayana-movie-and-rocking-star-yash/articleshow-umslng8</link>
            <guid isPermaLink="true">https://kannada.asianetnews.com/cine-world/producer-namit-malhotra-talks-in-us-cinemacon-on-upcoming-ramayana-movie-and-rocking-star-yash/articleshow-umslng8</guid>
            <pubDate>Wed, 15 Apr 2026 17:59:55 +0530</pubDate>
            <description><![CDATA[&lt;p&gt;ನಾನು ಸಿನಿಮಾವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್&zwnj;ನಲ್ಲಿ ನೋಡುತ್ತೇನೆ. ಅಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ ವಡಾಪಾವ್ ಮೆಲ್ಲುತ್ತ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇನೆ. ಅದರೆ, ಸಿನಿಮಾಗಳ ಜೊತೆಗೆ, ನಮ್ಮತನದ, ನಮ್ಮ ಸಾಂಸ್ಕೃತಿಕ ಪರಂಪರೆಯ ಜ್ಞಾನವನ್ನು ಕೂಡ ಪಡೆಯುತ್ತೇನೆ. ಮತ್ತೇನು ಹೇಳಿದ್ರು ನೋಡಿ&hellip;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8hczghpcz8zqn93mjtana6,imgname-namit-malhotra-1776255663633.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಗತ್ತಿನ ಮೊಟ್ಟಮೊದಲ ಐತಿಹಾಸಿಕ ಮಹಾನ್ ಕಥೆಯನ್ನು ಜಗತ್ತಿಗೆ ಪ್ರದರ್ಶಿಸಲಿದ್ದೇವೆ: ನಮಿತ್ ಮಲ್ಹೋತ್ರಾ&lt;/strong&gt;&lt;/p&gt;&lt;p&gt;ಧುರಂಧರ್ ಸಿನಿಮಾ ಬಳಿಕ ಭಾರತ ಸೇರಿದಂತೆ ಜಗತ್ತು ನಿರೀಕ್ಷಿಸುತ್ತಿರುವ ಸಿನಿಮಾಳೆಂದರೆ ಅವು ಟಾಕ್ಸಿಕ್ ಹಾಗೂ ರಾಮಾಯಣ. ಕೋ ಇನ್ಸಿಡೆಂಟ್ ಎಂಬಂತೆ, ಈ ಎರಡೂ ಸಿನಿಮಾಗಳಲ್ಲಿ ಯಶ್ ನಟಿಸಿದ್ದಾರೆ. ಕನ್ನಡ, ಹಾಲಿವುಡ್ ಸೇರಿದಂತೆ ಬಹುಭಾಷಾ ಚಿತ್ರವಾದ ಟಾಕ್ಸಿಕ್ ಸಿನಿಮಾದಲ್ಲಿ ನಟ ಯಶ್ ಅವರೇ ನಾಯಕರಾಗಿದ್ದಾರೆ. ಆದರೆ, ಬಾಲಿವುಡ್ ಮೂಲದ ರಾಮಾಯಣ ಸಿನಿಮಾದಲ್ಲಿ ನಟ ರಣಬೀರ್ ಕಪೂರ್ ನಾಯಕ ರಾಮನ ಪತ್ರದಲ್ಲಿ ನಟಿಸಿದ್ದು, ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.&lt;/p&gt;&lt;p&gt;ಮತ್ತೂ ಒಂದು ವಿಶೇಷ ಎಂದರೆ, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರಕ್ಕೆ ನಟ ಯಶ್ ಅವರು ನಮಿತ್ ಮಲ್ಹೋತ್ರಾ ಅವರ ಜೊತೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಕನ್ನಡದ ಹೆಮ್ಮೆಯ ನಟ ಯಶ್ ಅವರು ನಟನ ಜೊತೆಗೆ ನಿರ್ಮಾಪಕ ಎಂಬ ಪಟ್ಟವನ್ನೂ ಗಿಟ್ಟಿಸಿಕೊಂಡಿಒದ್ದಾರೆ. ಇನ್ನು, ರಾಮಾಯಣದ ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಟ ಯಶ್ ಅವರಿಬ್ಬರೂ ಇತ್ತೀಚೆಗೆ ಅಮೆರಿಕಾದಲ್ಲಿ 'ಸಿನಿಮಾಕಾನ್' ಸಂದರ್ಶನದಲ್ಲಿ ಭಾಗಿಯಾಗಿ ರಾಮಾಯನದ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ದರೆ ಅದೇನು ಹೇಳಿದ್ದಾರೆ ನೋಡಿ..&lt;/p&gt;&lt;h2&gt;ರಾಮಾಯಣ ಅನ್ನೋದು ಐತಿಹಾಸಿಕ ಮಹಾಕಾವ್ಯ ಮಾತ್ರವಲ್ಲ&lt;/h2&gt;&lt;p&gt;ನಮಿತ್ ಮಲ್ಹೋತ್ರಾ ಹೇಳಿರೋ ಮಾತು ಇದು.. 'ರಾಮಾಯಣ ಅನ್ನೋದು ಐತಿಹಾಸಿಕ ಮಹಾಕಾವ್ಯ ಮಾತ್ರವಲ್ಲ, ಇದು ಭಾರತದಲ್ಲಿ ಜನರೇಶನ್&zwnj; ಟು ಜನರೇಶನ್&zwnj; ಹರಿದುಬಂದಿರುವ, ಆರಾಧಿಸಲ್ಪಡುವ ಮಹಾನ್ ಕಥನ. ಇದು ಭಾರತೀಯ ಧಾರ್ಮಿಕ ಪರಂಪರೆಯ ಮಹಾ ಕೊಂಡಿ ಮಾತ್ರವಲ್ಲ, ಇಂದಿಗೂ ಜನರು ಪೂಜಿಸಿ ಆರಾಧಿಸುವ ವ್ಯಕ್ತಿಯೊಬ್ಬನ ಸಾಂಸ್ಕೃತಿಕ ಪರಂಪರೆಯೂ ಹೌದು.&lt;/p&gt;&lt;p&gt;ನಾವು ಜಗತ್ತು ಇನ್ನೂ ಸರಿಯಾಗಿ ಅರ್ಥೈಸಿಕೊಂಡಿರದ ಜಗತ್ತಿನ ಮೊಟ್ಟಮೊದಲ ಮಹಾನ್ ಸ್ಟೋರಿಯನ್ನು ಜಗತ್ತಿನ ಮುಂದೆ ಹೊಸ ಶೈಲಿಯ ಮೂಲಕ ತೆರೆಯ ಮೇಲೆ ತೋರಿಸಲಿದ್ದೇವೆ.&lt;/p&gt;&lt;p&gt;ಜೊತೆಗೆ, ಇಂದಿನ ಜಗತ್ತಿಗೆ ಈಗ ನಾವು ತರಲಿರುವ ರಾಮಯಣದ ಕಥೆ ನಿಜವಾಗಿಯೂ ಕನೆಕ್ಟ್ ಆಗಲಿದೆ. ಕಾರಣ, ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ, ಹೊಡೆದಾಟ, ಯುದ್ಧದ ಮಾನಸಿಕ ಹಾಗೂ ಕಾರ್ಯರೂಪದ ಪರಿಸ್ಥಿತಿಯಲ್ಲಿ, ಇಂತಹ ಒಂದು ಸ್ಟೋರಿ ಜಗತ್ತಿಗೆ ಹೊಸ ದಾರಿಯನ್ನು, ಹೊಸ ಮೌಲ್ಯವನ್ನು ತಿಳಿಸಲು ಸಹಕಾರಿ ಆಗಲಿದೆ.&lt;/p&gt;&lt;p&gt;ನಾನು ಸಿನಿಮಾವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್&zwnj;ನಲ್ಲಿ ನೋಡುತ್ತೇನೆ. ಅಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ ವಡಾಪಾವ್ ಮೆಲ್ಲುತ್ತ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇನೆ. ಅದರೆ, ಸಿನಿಮಾಗಳ ಜೊತೆಗೆ, ನಮ್ಮತನದ, ನಮ್ಮ ಸಾಂಸ್ಕೃತಿಕ ಪರಂಪರೆಯ ಜ್ಞಾನವನ್ನು ಕೂಡ ಪಡೆಯುತ್ತೇನೆ. ಕಾರಣ, ನಮ್ಮ ಬಹಳಷ್ಟು ಸಿನಿಮಾಗಳು 5000 ವರ್ಷಗಳ ಹಿಂದಿನ ಕಥೆ, ಪರಂಪರೆಯನ್ನು ಸಿನಿಮಾ ಮೂಲಕ ತಿಳಿಸಲು ಶಕ್ತವಾಗಿರುತ್ತವೆ..&lt;/p&gt;&lt;h3&gt;ಮಲ್ಟಿ ಟ್ಯಾಲೆಂಟೆಡ್ ಹಾಗೂ ಎನರ್ಜಿಟಿಕ್ ಹೀರೋ ಅಗತ್ಯವಿತ್ತು&lt;/h3&gt;&lt;p&gt;ಜೊತೆಗೆ, ರಾಮಾಯಣ ಚಿತ್ರಕ್ಕೆ ಯಶ್ ಅವರಂತಹ ಮಲ್ಟಿ ಟ್ಯಾಲೆಂಟೆಡ್ ಹಾಗೂ ಎನರ್ಜಿಟಿಕ್ ಹೀರೋ ಅಗತ್ಯವಿತ್ತು. ರಾಮಾಯಣದ ರಾವಣನ ಪಾತ್ರಕ್ಕೆ ಯಶ್ ಅವರಿಗಿಂತ ಸರಿಯಾದ ಆಯ್ಕೆ ಮತ್ತೊಬ್ಬರಿಲ್ಲ. ಈ ಪಾತ್ರದಲ್ಲಿ ಯಶ್ ಅವರು ಪರಕಾಯ ಪ್ರವೇಶ ಮಾಡಿದ್ದು ಮಾತ್ರವಲ್ಲ, ಈ ಸಿನಿಮಾದ ಪ್ರಚಾರಕಾರ್ಯದಲ್ಲೂ ಮುಖ್ಯ ಪಾತ್ರ ವಹಿಸಲಿದ್ದಾರೆ' ಎಂದಿದ್ದಾರೆ ರಾಮಾಯಣ ಚಿತ್ರದ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ.&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/producer-namit-malhotra-talks-in-us-cinemacon-on-upcoming-ramayana-movie-and-rocking-star-yash/articleshow-umslng8"/>
        </item>
        <item>
            <title><![CDATA[ಭಾರತದ ಮೋಸ್ಟ್ ವಾಂಟೆಡ್ ಉಗ್ರನಿಗೆ ಪಾಕ್‌ನಲ್ಲೇ ನರಕ! ಲಷ್ಕರ್ ಸ್ಥಾಪಕ ಅಮೀರ್ ಹಮ್ಜಾಗೆ ಗುಂಡೇಟು, ಸ್ಥಿತಿ ಗಂಭೀರ!]]></title>
            <link>https://kannada.asianetnews.com/world-news/let-co-founder-and-us-designated-terrorist-amir-hamza-shot-in-lahore-pakistan-condition-critical-sat/articleshow-vhdbra4</link>
            <guid isPermaLink="true">https://kannada.asianetnews.com/world-news/let-co-founder-and-us-designated-terrorist-amir-hamza-shot-in-lahore-pakistan-condition-critical-sat/articleshow-vhdbra4</guid>
            <pubDate>Thu, 16 Apr 2026 14:38:49 +0530</pubDate>
            <description><![CDATA[&lt;p&gt;ಪಾಕಿಸ್ತಾನದ ಲಹೋರ್&zwnj;ನಲ್ಲಿ, ಲಷ್ಕರ್-ಎ-ತೈಬಾ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆದಿದೆ. ತೀವ್ರ ಗಾಯಗೊಂಡಿರುವ ಈ ಜಾಗತಿಕ ಭಯೋತ್ಪಾದಕ, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪಾಕಿಸ್ತಾನದಲ್ಲಿ ಆಶ್ರಯ ಪಡೆದ ಉಗ್ರರಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpard88nxeqnrwfcwa0kbv0k,imgname-let-founder-terrorist-amir-hamza-shot-in-lahore-1776330121493.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಹೋರ್: ಭಾ&lt;/strong&gt;ರತದ ವಿರುದ್ಧ ನಿರಂತರವಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಲಷ್ಕರ್-ಎ-ತೈಬಾ (LeT) ಉಗ್ರಗಾಮಿ ಸಂಘಟನೆಯ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಪಾಕಿಸ್ತಾನದ ಲಹೋರ್&zwnj;ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಹಮ್ಜಾ ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ವರದಿಯಾಗಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಲಹೋರ್&zwnj;ನ ಹಮ್ದರ್ದ್ ಚೌಕ್&zwnj;ನಲ್ಲಿರುವ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ಈ ಘಟನೆ ನಡೆದಿದೆ. ಹಮ್ಜಾ ಚಲಿಸುತ್ತಿದ್ದ ವಾಹನದ ಮೇಲೆ ಅಪರಿಚಿತ ಗನ್&zwnj;ಮ್ಯಾನ್&zwnj;ಗಳು ಮನಬಂದಂತೆ ಗುಂಡಿನ ಮಳೆಗರೆದಿದ್ದಾರೆ. ದಾಳಿಯ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದ ಹಮ್ಜಾನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಹೋರ್ ಪೊಲೀಸರು ಈ ಬಗ್ಗೆ ಹೇಳಿಕೆ ನೀಡಿದ್ದು, ದಾಳಿ ನಡೆದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾರಿದು ಅಮೀರ್ ಹಮ್ಜಾ?&lt;/strong&gt;&lt;/h2&gt;&lt;p&gt;ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯೀದ್ ಜೊತೆಗೂಡಿ ಲಷ್ಕರ್-ಎ-ತೈಬಾ ಸಂಘಟನೆಯನ್ನು ಕಟ್ಟಿದವರಲ್ಲಿ ಅಮೀರ್ ಹಮ್ಜಾ ಕೂಡ ಒಬ್ಬ. ಈತನನ್ನು ಅಮೆರಿಕದ ಟ್ರೆಜರಿ ಇಲಾಖೆಯು 'ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಿ ನಿರ್ಬಂಧಗಳನ್ನು ಹೇರಿತ್ತು. ಅಫಘಾನ್ ಮುಜಾಹಿದ್ದೀನ್&zwnj;ಗಳ ಕಾಲದಿಂದಲೂ ಸಕ್ರಿಯನಾಗಿದ್ದ ಹಮ್ಜಾ, ಲಷ್ಕರ್ ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯನಾಗಿದ್ದ. ಹಮ್ಜಾ ಕೇವಲ ಶಸ್ತ್ರಾಸ್ತ್ರ ಹಿಡಿದ ಉಗ್ರನಲ್ಲದೆ, ಲಷ್ಕರ್&zwnj;ನ ಬೌದ್ಧಿಕ ಮತ್ತು ಹಣಕಾಸು ವಿಭಾಗದ ಪ್ರಮುಖನಾಗಿದ್ದ. ಸಂಘಟನೆಯ ಮುಖವಾಣಿ 'ಮಜಲ್ಲಾ ಅಲ್-ದವಾ'ದ ಸ್ಥಾಪಕ ಸಂಪಾದಕನಾಗಿದ್ದ ಈತ, ತನ್ನ ಲೇಖನಗಳು ಮತ್ತು ಉದ್ರೇಕಕಾರಿ ಭಾಷಣಗಳ ಮೂಲಕ ಯುವಕರನ್ನು ಉಗ್ರಗಾಮಿ ಜಾಲಕ್ಕೆ ಸೆಳೆಯುತ್ತಿದ್ದ. 2002 ರಲ್ಲಿ ಈತ ಬರೆದ 'ಖಾಫಿಲಾ ದಾವತ್ ಔರ್ ಶಹಾದತ್' ಎಂಬ ಪುಸ್ತಕವು ತೀವ್ರಗಾಮಿ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಬಳಸಲಾಗುತ್ತಿತ್ತು.&lt;/p&gt;&lt;h2&gt;&lt;strong&gt;ಭಾರತದ ವಿರುದ್ಧದ ಸಂಚು:&lt;/strong&gt;&lt;/h2&gt;&lt;p&gt;ಪಾಕಿಸ್ತಾನದ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಾದಾಗ, ಹಮ್ಜಾ ತನ್ನ ಲಷ್ಕರ್ ಸಂಬಂಧವನ್ನು ಮರೆಮಾಚಲು 'ಜೈಶ್-ಎ-ಮಂಕಾಫಾ' ಎಂಬ ಹೊಸ ಬಣವನ್ನು ರಚಿಸಿಕೊಂಡಿದ್ದ. ಈ ಬಣವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಭಾರತೀಯ ಗುಪ್ತಚರ ಇಲಾಖೆಯ ವರದಿಗಳು ತಿಳಿಸಿವೆ. ನಿಧಿ ಸಂಗ್ರಹಣೆ, ನೇಮಕಾತಿ ಮತ್ತು ಜೈಲಿನಲ್ಲಿರುವ ಉಗ್ರರ ಬಿಡುಗಡೆಗಾಗಿ ಸಂಧಾನ ನಡೆಸುವಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಿದ್ದನು.&lt;/p&gt;&lt;h2&gt;&lt;strong&gt;ಅಪರಿಚಿತ ದುಷ್ಕರ್ಮಿಗಳ ಭಯ:&lt;/strong&gt;&lt;/h2&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾಗಿರುವ ಉಗ್ರರು ಒಬ್ಬೊಬ್ಬರಾಗಿಯೇ ಸಾಯುತ್ತಿದ್ದಾರೆ. 'ಅಪರಿಚಿತ ದುಷ್ಕರ್ಮಿಗಳ' ದಾಳಿಗೆ ಸಿಲುಕಿ ಲಷ್ಕರ್ ಮತ್ತು ಜೈಶ್-ಎ-ಮೊಹಮ್ಮದ್&zwnj;ನ ಹಲವು ಪ್ರಮುಖ ಕಮಾಂಡರ್&zwnj;ಗಳು ಹತರಾಗಿದ್ದಾರೆ. ಈಗ ಅಮೀರ್ ಹಮ್ಜಾ ಮೇಲೆ ನಡೆದಿರುವ ದಾಳಿಯು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರಲ್ಲಿ ತಲ್ಲಣ ಮೂಡಿಸಿದೆ. ಇನ್ನು ಹಮ್ಜಾ ಮೇಲೆ ಕಳೆದ ವರ್ಷವೂ ಗುಂಡಿನ ದಾಳಿ ನಡೆದಿತ್ತು. ಆಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದನು. ಇದೀಗ ಅಪರಿಚಿತರ ಗುಂಡಿನ ದಾಳಿ ಯಶಸ್ವಿಯಾಗಿದ್ದು, ಗುಂಡಿನ ಪೆಟ್ಟು ತಿಂದಿರುವ ಹಮ್ಜಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/let-co-founder-and-us-designated-terrorist-amir-hamza-shot-in-lahore-pakistan-condition-critical-sat/articleshow-vhdbra4"/>
        </item>
        <item>
            <title><![CDATA[ಕಾಡು ಹಂದಿಗಳನ್ನು ಕಾಡಿಗಟ್ಟಿ ಇಂಟರ್ನೆಟ್ ಸ್ಟಾರ್ ಆದ ರೋಬೋಟ್: ವೀಡಿಯೋ ಭಾರಿ ವೈರಲ್]]></title>
            <link>https://kannada.asianetnews.com/world-news/humanoid-robot-edward-warchoki-becomes-internet-star-after-chasing-wild-boars/articleshow-xlbzoqa</link>
            <guid isPermaLink="true">https://kannada.asianetnews.com/world-news/humanoid-robot-edward-warchoki-becomes-internet-star-after-chasing-wild-boars/articleshow-xlbzoqa</guid>
            <pubDate>Thu, 16 Apr 2026 14:49:57 +0530</pubDate>
            <description><![CDATA[&lt;p&gt;ಪೋಲೆಂಡ್&zwnj;ನ ವಾರ್ಸಾದಲ್ಲಿ, ಎಡ್ವರ್ಡ್ ವಾರ್ಚೋಕಿ ಎಂಬ ಮಾನವ ರೂಪದ ರೋಬೋಟ್ ನಗರಕ್ಕೆ ಬಂದ ಕಾಡು ಹಂದಿಗಳನ್ನು ಓಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಘಟನೆಯು ಕೃಷಿ ಕ್ಷೇತ್ರದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಹೊಸ ಭರವಸೆಯನ್ನು ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kparkamcfdmekztfct5rjzf5,imgname-robot-chase-wild-boars-1776330320524.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕಾಡು ಹಂದಿಗಳ ಬೆವರಿಳಿಸಿದ ಹ್ಯೂಮನಾಯ್ಡ್ ರೋಬೋಟ್&lt;/strong&gt;&lt;/h2&gt;&lt;p&gt;ಇತ್ತೀಚೆಗೆಲ್ಲಾ ರೋಬೋಟ್&zwnj;ಗಳದ್ದೇ ದರ್ಬಾರ್, ಹಲವು ಸ್ಥಳಗಳಲ್ಲಿ ರೋಬೋಟ್&zwnj;ಗಳು ಕಾರ್ಯನಿರ್ವಹಿಸುತ್ತಿವೆ. ಮನೆ ಕೆಲಸಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಹೊಟೇಲ್&zwnj;ಗಳಲ್ಲಿ ರೋಬೋಟ್&zwnj;ಗಳು ಇರುವುದನ್ನು ನೀವು ನೋಡಬಹುದಾಗಿದೆ. ಅವುಗಳು ನಿಮ್ಮ ಜೊತೆ ಮಾತನಾಡುವ ಓಡಾಡುವ ನಡೆದಾಡುವ ಜೊತೆಗೆ ಮಾನವರಂತೆ ಕೆಲಸ ಮಾಡುತ್ತವೆ. ಆದರೆ ಇಲ್ಲೊಂದು ಕಡೆ ಮಾನವ ರೂಪದ ರೋಬೋಟ್ ಒಂದು ಕಾಡು ಹಂದಿಗಳನ್ನು ಓಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಕೃಷಿ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ನೀಡಿದೆ.&lt;/p&gt;&lt;h3&gt;&lt;strong&gt;ಕೃಷಿ ಲೋಕಕ್ಕೆ ವರದಾನವಾಗುತ್ತಾನಾ ಈ 'ಎಡ್ವರ್ಡ್&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ವಿಜ್ಞಾನ ಕಾದಂಬರಿ ಆಧರಿತ ಸಿರೀಸ್ ಸಿನಿಮಾಗಳಲ್ಲಿ ಈ ದೃಶ್ಯವನ್ನು ನೋಡಬಹುದಾಗಿದೆ. ಆದರೆ ಪೋಲೆಂಡ್&zwnj;ನಲ್ಲಿ ಈ ಘಟನೆ ನಿಜವಾಗಿದೆ. ಮಾನವನನ್ನು ಹೋಲುವ ರೋಬೋಟ್&zwnj;ನನ್ನು ನೋಡಿ ಹಂದಿಗಳು ಓಡಿ ಹೋಗುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಪೋಲೆಂಡ್&zwnj;ನ ರಾಜಧಾನಿ ವಾರ್ಸಾದಲ್ಲಿ ಈ ಘಟನೆ ನಡೆದಿದ್ದು, ನಗರಕ್ಕೆ ದಾಂಗುಡಿ ಇಟ್ಟ ಕಾಡು ಹಂದಿಗಳನ್ನು ರೋಬೋಟ್ ಓಡಿಸುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು.&amp;nbsp;&lt;/p&gt;&lt;h3&gt;&lt;strong&gt;ಇಂಟರ್ನೆಟ್ ಸ್ಟಾರ್ ಆದ 'ಎಡ್ವರ್ಡ್ ವಾರ್ಚೋಕಿ'.&lt;/strong&gt;&lt;/h3&gt;&lt;p&gt;ಪೋಲೆಂಡ್&zwnj;ನ ರಾಜಧಾನಿ ವಾರ್ಸಾದಲ್ಲಿ ಈ ಘಟನೆ ನಡೆದಿದ್ದು, ನಗರದಿಂದ ಕಾಡು ಹಂದಿಗಳನ್ನು ಕಾಡಿಗಟ್ಟಿದ ರೋಬೋಟ್ ಹೆಸರು ಎಡ್ವರ್ಡ್ ವಾರ್ಚೋಕಿ. ಇದರ ಹೆಸರಲ್ಲಿ ಇನ್ಸ್ಟಾಗ್ರಾಮ್ ಖಾತೆಯೂ ಕೂಡ ಇದ್ದು, ಕಾಡುಹಂದಿಯನ್ನು ಅದು ಓಡಿಸುತ್ತಿರುವ ವೀಡಿಯೋ ವೈರಲ್ ಆಗ್ತಿದ್ದಂತೆ ಪೋಲೆಂಡ್ ದೇಶಾದ್ಯಂತ ಈ ರೋಬೋಟ್&zwnj; ಇಂಟರ್&zwnj;ನೆಟ್ ಸ್ಟಾರ್ ಎನಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯ ದರ್ಬಾರ್: ಟೀಚರ್&zwnj;ಗೆ ಗಾಳಿ ಬೀಸಿ ಬೀಸಿ ಸುಸ್ತಾದ ಬಾಲಕ: ವೀಡಿಯೋ ವೈರಲ್&lt;/p&gt;&lt;p&gt;ಈ ಎಡ್ವರ್ಡ್ ವಾರ್ಚೋಕಿ ಹೆಸರಿನ ಈ ಟೋಬೋಟ್ ಹೋದಲೆಲ್ಲಾ ಜನರ ನಗಿಸುತ್ತದೆ. ಬ್ಯುಸಿಯಾದ ರಸ್ತೆಗಳಲ್ಲಿ ಓಡಾಡುವ ಇದು ಜನರ ಜೊತೆ ಮಾತು ಕೂಡ ಆಡುತ್ತದೆ. ಈ ರೋಬೋಟ್&zwnj;ನ ಸಹ ರಚನೆಕಾರ ಆಗಿರುವ ರಾಡೋಸ್ಲಾ ಗ್ರ್ಜೆಲಾಕ್ಸಿಕ್ ಈ ಬಗ್ಗೆ ಟಿವಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇದು ಹಂದಿಗಳನ್ನು ಓಡಿಸೊದ್ರಲ್ಲಿ ನಂಗೇನು ಅಚ್ಚರಿ ಕಾಣಿಸ್ತಿಲ್ಲ ಎಂದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಲಾಲಿ ಹಾಡಿ ಮಲಗಿಸಿದವಳ ಚಿರನಿದ್ರೆಗೆ ಜಾರಿಸಿದ ಮಗ: 4ನೇ ಮಹಡಿಯಿಂದ ಕೆಳಗೆಸೆದು ಮಗನಿಂದಲೇ ಅಮ್ಮನ ಹತ್ಯೆ&lt;/strong&gt;&lt;/p&gt;&lt;p&gt;ಈ ವೀಡಿಯೋ ಇಂಟರ್&zwnj;ನೆಟ್&zwnj;ನಲ್ಲಿ ವೈರಲ್ ಆಗ್ತಿದ್ದು, ಜನ ಸಿಕ್ಕಾಪಟ್ಟೆ ಕಾಮೆಂಟ್ ಮಾಡ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳು ಮಾತ್ರವಲ್ಲದೇ ಅನೇಕ ಕಾಡು ಪ್ರಾಣಿಗಳು ರೈತರ ಬೆಳಗಳನ್ನು ಹಾಳು ಮಾಡುತ್ತವೆ. ಆದರೆ ಕಡಿಮೆ ಮೌಲ್ಯದಲ್ಲಿ ಇಂತಹದೊಂದು ರೋಬೋಟ್ ರೈತರಿಗೆ ಸಿಗುವಂತಾದರೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗೆ ಸ್ವಲ್ಪ ನಿರಾಳತೆ ಉಂಟಾಗಬಹುದು. ಕೆಲವೇ ದಿನಗಳಲ್ಲಿ ಇವು ಮನುಷ್ಯರನ್ನು ಬೆನ್ನಟ್ಟಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Edward Warchocki (@edwardwarchocki)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Anusha Kb</dc:creator>
            <atom:link href="https://kannada.asianetnews.com/world-news/humanoid-robot-edward-warchoki-becomes-internet-star-after-chasing-wild-boars/articleshow-xlbzoqa"/>
        </item>
    </channel>
</rss>
