<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 09 Sep 2026 13:15:20 +0530</lastBuildDate>
        <atom:link href="https://kannada.asianetnews.com/rss/world-news" rel="self" type="application/rss+xml"/>
        <item>
            <title><![CDATA[ಮೊದಲು ಧ್ವನಿ ಕೇಳಿತು, ನಂತರ ಜೀವ ಸಿಕ್ಕಿತು! ನೇಪಾಳ ಪ್ರವಾಹದಲ್ಲಿ 9 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ!]]></title>
            <link>https://kannada.asianetnews.com/gallery/world-news/two-workers-pulled-alive-from-nepal-tunnel-nine-days-after-deadly-flash-flooding-1x9dqk2</link>
            <guid isPermaLink="true">https://kannada.asianetnews.com/gallery/world-news/two-workers-pulled-alive-from-nepal-tunnel-nine-days-after-deadly-flash-flooding-1x9dqk2</guid>
            <pubDate>Fri, 04 Sep 2026 13:34:07 +0530</pubDate>
            <description><![CDATA[&lt;p&gt;ನೇಪಾಳ: ನೇಪಾಳದಲ್ಲಿ ಕಂಡುಕೇಳರಿಯದ ಭೀಕರ ಪ್ರವಾಹ ಸಂಭವಿಸಿತು. ಪ್ರವಾಹದಲ್ಲಿ 9 ದಿನಗಳ ಕಾಲ ಕತ್ತಲ ಸುರಂಗದಲ್ಲಿ ಕಳೆದಿದ್ದ ಇಬ್ಬರು ಕಾರ್ಮಿಕರನ್ನ ಜೀವಂತವಾಗಿ ರಕ್ಷಿಸಿ ರಕ್ಷಣಾ ಸಿಬ್ಬಂದಿ ಹೊರತಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1npmqjaxcd0344ej96ejswz,imgname-nepala-sanjay-sah-1788508528202.jpg" type="image/jpeg" height="390" width="690"/>
            <content:encoded><![CDATA[&lt;p&gt;ನೇಪಾಳ: ನೇಪಾಳದಲ್ಲಿ ಕಂಡುಕೇಳರಿಯದ ಭೀಕರ ಪ್ರವಾಹ ಸಂಭವಿಸಿತು. ಪ್ರವಾಹದಲ್ಲಿ 9 ದಿನಗಳ ಕಾಲ ಕತ್ತಲ ಸುರಂಗದಲ್ಲಿ ಕಳೆದಿದ್ದ ಇಬ್ಬರು ಕಾರ್ಮಿಕರನ್ನ ಜೀವಂತವಾಗಿ ರಕ್ಷಿಸಿ ರಕ್ಷಣಾ ಸಿಬ್ಬಂದಿ ಹೊರತಂದಿದ್ದಾರೆ.&lt;/p&gt;&lt;img&gt;&lt;p&gt;ನೇಪಾಳ: ನೇಪಾಳದಲ್ಲಿ ಕಂಡುಕೇಳರಿಯದ ಭೀಕರ ಪ್ರವಾಹ ಸಂಭವಿಸಿತು. ಪ್ರವಾಹ ಬಳಿಕ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರು ಬದುಕಿರಬಹುದೆಂಬ ನಿರೀಕ್ಶೆಯೇ ಯಾರಿಗೂ ಇರಲಿ, ಪ್ರವಾಹ ಅಷ್ಟು ಭೀಕರವಾಗಿತ್ತು. ಪವಾಡವೊಂಡು ನಡೆದಿದೆ. 9 ದಿನಗಳ ಕಾಲ ಕತ್ತಲ ಸುರಂಗದಲ್ಲಿ ಕಳೆದಿದ್ದ ಇಬ್ಬರು ಕಾರ್ಮಿಕರನ್ನ ಜೀವಂತವಾಗಿ ರಕ್ಷಿಸಿ ರಕ್ಷಣಾ ಸಿಬ್ಬಂದಿ ಹೊರತಂದಿದ್ದಾರೆ.&lt;/p&gt;&lt;p&gt;&lt;strong&gt;9 ದಿನಗಳ ಬಳಿಕ ಮೊದಲ ಯಶಸ್ಸು&lt;/strong&gt;&lt;/p&gt;&lt;p&gt;ನೇಪಾಳದ ರಾಸುವಾ ಪ್ರದೇಶದಲ್ಲಿ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ತ್ರಿಶೂಲಿ-3 'ಎ' ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ಪ್ರವಾಹದ ನೀರು, ಕೆಸರು ನುಗ್ಗಿದ್ದವು. ಹಲವು ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು. ಅವರು ಜೀವಂತಾಗಿದ್ದಾರೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೂ ಸಣ್ಣ ಭರವಸೆಯೊಂದಿಗೆ ಕಾರ್ಯಚರಣೆ ನಡೆದಿತ್ತು. ಸುರಂಗದಲ್ಲಿ ಸಿಲುಕಿದವರ ರಕ್ಷಣೆಗೆ ನೇಪಾಳ ಸೇನೆಯ ಸಿಬ್ಬಂದಿ ಒಂದು ವಾರಕ್ಕೂ ಹೆಚ್ಚು ಕಾಲ ನಿರಂತರವಾಗಿ ಕಾರ್ಯಾಚರಣೆ ನಡೆಸಿದರು. ದಿನಗಳು ಕಳೆದಂತೆ ಕಾರ್ಮಿಕರು ಬದುಕಿರುವ ಸಾಧ್ಯತೆಯ ಬಗ್ಗೆ ಆತಂಕ ಹೆಚ್ಚಾಗಿತ್ತು. ಆದರೆ 9ನೇ ದಿನದ ಕಾರ್ಯಾಚರಣೆಯಲ್ಲಿ ಪವಾಡವೇ ನಡೆದಿದೆ. ಸುರಂಗದೊಳಗೆ ಆ ಧ್ವನಿ ಕೇಳಿ ರಕ್ಷಣಾ ಸಿಬ್ಬಂದಿಗೆ ಮಹತ್ವದ ಯಶಸ್ಸು ಸಿಕ್ಕಿದಂತಾಯ್ತು. ತಡಮಾಡದೇ. ಸುರಂಗದೊಳಗಿಂದ ಮೊದಲ ಕಾರ್ಮಿಕನನ್ನು ಹೆಗಲ ಮೇಲೆ ಹೊತ್ತು ಹೊರಗೆ ಕರೆತರಲಾಯಿತು.&lt;/p&gt;&lt;img&gt;&lt;p&gt;ಸುರಂಗದಲ್ಲಿ ಬರೋಬ್ಬರಿ ಒಂಭತ್ತು ದಿನಗಳ ಕಾಲ ಸಿಲುಕಿಕೊಂಡಿದ್ದ ಕಾರ್ಮಿಕರಲ್ಲಿ ಮೊದಲಿಗೆ ರಕ್ಷಿಸಿದ್ದು ಸಂಜಯ್ ಶಾ. 30 ವರ್ಷದ ಸಂಜಯ್ ಶಾ. ಅವರು ನೇಪಾಳ ವಿದ್ಯುತ್ ಪ್ರಾಧಿಕಾರದಲ್ಲಿ ಮೆಕ್ಯಾನಿಕಲ್ ಫೋರ್&zwnj;ಮನ್ ಆಗಿ ಕೆಲಸ ಮಾಡುತ್ತಿದ್ದರು. ಜೀವಂತ ರಕ್ಷಿಸಿದ ಬಳಿಕ ಸಂಜಯ್ ಅವರನ್ನು ತಕ್ಷಣವೇ ತ್ರಿಶೂಲಿ ಸೇನಾ ಬ್ಯಾರಕ್&zwnj;ಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಅದಾದ ಬಳಿಕ 45 ವರ್ಷದ ಕಬೀರ್ ಮಹರ್ಜನ್ ಅವರನ್ನೂ ಸುರಂಗದಿಂದ ಸುರಕ್ಷಿತವಾಗಿ ಹೊರತರಲಾಯಿತು. ಅವರು ತ್ರಿಶೂಲಿ-3 'ಎ' ಜಲವಿದ್ಯುತ್ ಯೋಜನೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;ಅಧಿಕಾರಿಗಳ ಪ್ರಕಾರ, ಇಬ್ಬರೂ ಸುರಂಗದ ಸುಮಾರು 170 ಮೀಟರ್ ಒಳಗೆ ಸಿಲುಕಿಕೊಂಡಿದ್ದರು ಎಂಬುದೇ ಅದೆಷ್ಟು ಭಯಾನಕ ಸೃಷ್ಟಿಯಾಗಿತ್ತು ಎಂಬುದು ಊಹಿಸಿ. ಭೀಕರ ಪ್ರವಾಹ, ಸುರಂಗದೊಳಗಿಂದ ಹೊರಬರಲಾಗದೆ ಮುಂದೇನು ಎಂಬ ಆತಂಕದ ನಡುವೆ ಒಂಭತ್ತು ದಿನಗಳ ಕಾಲ ಜೀವಂತವಾಗಿದ್ದರು.&lt;/p&gt;&lt;p&gt;&lt;strong&gt;ಈಗ ನನ್ನ ಹೃದಯ ಹಗುರವಾಗಿದೆ&lt;/strong&gt;&lt;/p&gt;&lt;p&gt;ಸುರಂಗದೊಳಗೆ ಕೆಟ್ಟ ಅನುಭವ ನೆನೆದು ಕಾರ್ಮಿಕ ಕಬೀರ್ ಮಹರ್ಜನ್ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು ಕಬೀರ್ ಮಹರ್ಜನ್ ರಕ್ಷಿಸಲ್ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿತು. 'ನನಗೆ ತುಂಬಾ ಸಂತೋಷವಾಗಿದೆ. ನನ್ನ ಹೃದಯ ಹಗುರವಾಗಿದೆ' ಎಂದು ಕಬೀರ್ ಅವರ ಸಹೋದರ ಅಮೀರ್ ಮಹರ್ಜನ್ ಭಾವುಕರಾದರು. ಕಬೀರ್ ಅವರ ಪತ್ನಿ ಕೂಡ ಪತಿಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು, ಸುರಂಗದಿಂದ ಹೊರತೆಗೆದಾಗ ಅವರು ಪ್ರಜ್ಞೆಯಲ್ಲಿದ್ದರು. ಅವರನ್ನು ಕಠ್ಮಂಡುವಿನ ಛೌನಿ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯ್ತು ಎಂದು ತಿಳಿಸಿದ್ದಾರೆ..&lt;/p&gt;&lt;p&gt;&lt;strong&gt;ಕೆಸರು ಮಣ್ಣಿನ ನಡುವೆ ಬದುಕುವ ಭರವಸೆ&lt;/strong&gt;&lt;/p&gt;&lt;p&gt;ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಮನಕಲಕುವಂತಿದ್ದವು. ನೇಪಾಳ ಸೇನೆಯ ಸಿಬ್ಬಂದಿ ಸುರಂಗದಿಂದ ಹೊರಬರುವಾಗ ಕಾರ್ಮಿಕರು ಕೆಸರು ಮತ್ತು ಮಣ್ಣಿನಿಂದ ಸಂಪೂರ್ಣ ಮುಚ್ಚಿಕೊಂಡಿದ್ದರು. ಒಬ್ಬ ಕಾರ್ಮಿಕನನ್ನು ಸಿಬ್ಬಂದಿ ಹೆಗಲ ಮೇಲೆ ಹೊತ್ತು ತಂದರೆ, ಮತ್ತೊಬ್ಬರನ್ನು ಸ್ಟ್ರೆಚರ್&zwnj;ನಲ್ಲಿ ಹೊರಗೆ ತರಲಾಯಿತು. ಈ ದೃಶ್ಯಗಳು ಸುರಂಗದ ಆಳಕ್ಕೆ ರಕ್ಷಣಾ ತಂಡ ತಲುಪಿರುವುದನ್ನು ಮಾತ್ರವಲ್ಲ, ಅದರೊಳಗೆ ಸಿಲುಕಿದ್ದವರು ಇನ್ನೂ ಬದುಕಿರುವ ಸಾಧ್ಯತೆಯನ್ನೂ ಹೆಚ್ಚಿಸಿವೆ.&lt;/p&gt;&lt;img&gt;&lt;p&gt;ಸುರಂಗ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರೂ ಸಂಜಯ್ ಮತ್ತು ಕಬೀರ್ 9 ದಿನಗಳ ಕಾಲ ಬದುಕಿರುವುದು ರಕ್ಷಣಾ ತಂಡದಲ್ಲಿ ಹೊಸ ಭರವಸೆ ಮೂಡಿಸಿದೆ. ಸುರಂಗದೊಳಗೆ ಅಲ್ಲಲ್ಲಿ ಗಾಳಿಯ ಜಾಗಗಳು (Air Pockets) ಇದ್ದಿರಬಹುದು. ಅವುಗಳ ಕಾರಣದಿಂದ ಕಾರ್ಮಿಕರಿಗೆ ಇಷ್ಟು ದಿನ ಬದುಕಲು ಸಾಧ್ಯವಾಗಿರಬಹುದು ಎಂದು ರಕ್ಷಣಾ ತಂಡ ಅಂದಾಜಿಸಿದೆ. ಹೀಗಾಗಿ ಸುರಂಗದ ಇತರ ಭಾಗಗಳಲ್ಲಿಯೂ ಇದೇ ರೀತಿಯ ಗಾಳಿಯ ಜಾಗಗಳಲ್ಲಿ ಮತ್ತಷ್ಟು ಕಾರ್ಮಿಕರು ಬದುಕಿರಬಹುದೆಂಬ ನಿರೀಕ್ಷೆ ಮೂಡಿದೆ.&lt;/p&gt;&lt;p&gt;&lt;strong&gt;ಅಂದು ನಡೆದಿದ್ದೇನು?&lt;/strong&gt;&lt;/p&gt;&lt;p&gt;ಆಗಸ್ಟ್ 26ರಂದು ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ಕಣಿವೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು, ಕೆಸರು ಮತ್ತು ಅವಶೇಷಗಳು ನುಗ್ಗಿದ್ದವು. ಇದರಿಂದ ನದಿಯುದ್ದಕ್ಕೂ ಇದ್ದ ಹಲವು ಜಲವಿದ್ಯುತ್ ಯೋಜನೆಗಳು ತೀವ್ರವಾಗಿ ಹಾನಿಗೊಳಗಾದವು ಅಥವಾ ಸಂಪೂರ್ಣವಾಗಿ ನಾಶವಾದವು. ನೇಪಾಳ ಮತ್ತು ಚೀನಾ ನಿಯಂತ್ರಿತ ಟಿಬೆಟ್ ನಡುವಿನ ಗಡಿಯಲ್ಲಿರುವ ಹಿಮನದಿ ಕರಗುವಿಕೆಯಿಂದ ಉಂಟಾದ ಘಟನೆಯೇ ಈ ಭೀಕರ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ.&lt;/p&gt;&lt;p&gt;ಪ್ರವಾಹದ ಬಳಿಕ ಮಣ್ಣು ಮತ್ತು ಅವಶೇಷಗಳಿಂದ ಮುಚ್ಚಿಹೋಗಿರುವ ಜಲವಿದ್ಯುತ್ ಯೋಜನೆಗಳ ಸುರಂಗಗಳತ್ತ ರಕ್ಷಣಾ ತಂಡದ ಗಮನ ಕೇಂದ್ರೀಕೃತವಾಗಿದೆ. ವಿಶೇಷ ಉಪಕರಣಗಳ ನೆರವಿನಿಂದ ನೇಪಾಳ ಸೇನೆಯ ನೇತೃತ್ವದ ತಂಡಗಳು ಸುರಂಗದೊಳಗೆ ಸಿಲುಕಿರುವವರಿಗಾಗಿ ಹುಡುಕಾಟ ಮುಂದುವರಿಸಿವೆ. ಈವರೆಗೆ 270ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.&lt;/p&gt;&lt;p&gt;&lt;strong&gt;ಮೊದಲು ಧ್ವನಿ ಕೇಳಿಸಿತು ನಂತರ ಸಿಕ್ಕಿತು ಜೀವ!&lt;/strong&gt;&lt;/p&gt;&lt;p&gt;ಇಬ್ಬರು ಕಾರ್ಮಿಕರನ್ನು ರಕ್ಷಿಸುವ ಮುನ್ನವೇ ರಕ್ಷಣಾ ತಂಡಕ್ಕೆ ಮತ್ತೊಂದು ಮಹತ್ವದ ಸುಳಿವು ಸಿಕ್ಕಿತ್ತು. ಸುರಂಗದೊಳಗಿಂದ ಕೆಲವರ ಧ್ವನಿ ಕೇಳಿಸಿತ್ತು. ಸುರಂಗದೊಳಗೆ ಸಿಲುಕಿರುವವರೊಂದಿಗೆ ಸಂಪರ್ಕ ಸಾಧಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದರು. ಈ ಮಾಹಿತಿ ಹೊರಬಂದ ಬಳಿಕ ನೇಪಾಳ ಸೇನೆ ಮತ್ತು ಸಶಸ್ತ್ರ ಪೊಲೀಸ್ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿತು. 9ನೇ ದಿನದವರೆಗೆ ನಿರಾಸೆಯಲ್ಲಿದ್ದ ರಕ್ಷಣಾ ಕಾರ್ಯಾಚರಣೆ, ಇಬ್ಬರು ಕಾರ್ಮಿಕರು ಜೀವಂತವಾಗಿ ಹೊರಬಂದ ಬಳಿಕ ಭರವಸೆಯ ಕಥೆಯಾಗಿ ಬದಲಾಗಿದೆ.&lt;/p&gt;]]></content:encoded>
            <category>world-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/world-news/two-workers-pulled-alive-from-nepal-tunnel-nine-days-after-deadly-flash-flooding-1x9dqk2"/>
        </item>
        <item>
            <title><![CDATA[ದಿಢೀರ್ 300 ವಿಮಾನ ಹಾರಾಟ ರದ್ದು, ಯುಕೆ ಏರ್ ಟ್ರಾಫಿಕ್ ಸಿಸ್ಟಮ್ ಸಮಸ್ಯೆಯಿಂದ ಕೋಲಾಹಲ]]></title>
            <link>https://kannada.asianetnews.com/world-news/300-flights-suddenly-cancelled-as-uk-air-traffic-system-faces-major-disruption/articleshow-2cxgry7</link>
            <guid isPermaLink="true">https://kannada.asianetnews.com/world-news/300-flights-suddenly-cancelled-as-uk-air-traffic-system-faces-major-disruption/articleshow-2cxgry7</guid>
            <pubDate>Tue, 08 Sep 2026 22:49:33 +0530</pubDate>
            <description><![CDATA[&lt;p&gt;ಬರೋಬ್ಬರಿ 300 ವಿಮಾನ ಹಾರಾಟ ರದ್ದಾಗಿದೆ. ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್&zwnj;ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಸಮಸ್ಯೆ ಎದುರಾಗಿದೆ. ಇದೇ ವೇಳೆ ಹಲವು ಅನುಮಾನಗಳಿಗೂ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20xdzbn73069zatpgpjzhj4,imgname-uk-flight-disruption-over-300-flights-cancelled-after-air-traffic-control-system-technical-issue-1788884745589.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್ (ಸೆ.08) &lt;/strong&gt;ಏರ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್&zwnj;ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಪರಿಣಾಮ ಯುಕೆಯಲ್ಲಿ ದಿಢೀರ್ 300 ವಿಮಾನ ಹಾರಾಟಗಳು ರದ್ದಾಗಿದೆ. ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ. ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಯುಕೆ ವಿಮಾನ ಪ್ರಯಾಣ ಅಸ್ತವ್ಯಸ್ತಗೊಂಡಿದೆ. ಆತಂಕ ತೀವ್ರಗೊಂಡಿದೆ. ಬ್ರಿಟನ್ ನ್ಯಾಷನ್ ಏರ್ ಟ್ರಾಫಿಕ್ ಕೇಂದ್ರ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಮಸ್ಯೆ ಪರಿಹರಿಸುತ್ತಿರುವುದಾಗಿ ಹೇಳಿದೆ.&lt;/p&gt;&lt;h2&gt;ಪ್ರಯಾಣಿಕರಿಂದ ತುಂಬಿ ತುಳುಕಿದ ವಿಮಾನ ನಿಲ್ದಾಣ&lt;/h2&gt;&lt;p&gt;ಯುಕೆಯಲ್ಲಿ ಎದುರಾಗಿರುವ ವಿಮಾನ ಹಾರಾಟ ರದ್ದು ಸಮಸ್ಯೆ ಕುರಿತು ಫ್ಲೈಟ್ ರೆಡಾರ್ 24 ವರದಿ ಮಾಡಿದೆ. ಹಲವು ಏರ್&zwnj;ಲೈನ್ ಸಂಸ್ಥಗಳ ವಿಮಾನ ಹಾರಾಟ ರದ್ದಾಗಿದ್ದು, ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಬ್ರಿಟಿಷ್ ಏರ್&zwnj;ವೇಸ್, ಈಸಿ ಜೆಟ್, ಕೆಎಲ್ಎಂ, ಲುಫ್ತಾನ್ಸ ಸೇರಿದಂತೆ ಹಲವು ಏರ್&zwnj;ಲೈನ್ಸ್ ವಿಮಾನ ಹಾರಾಟಗಳು ಸ್ಥಗಿತಗೊಂಡಿದೆ ಎಂದು ಫ್ಲೈಟ್ ರೇಡಾರ್ 24 ವರದಿ ಮಾಡಿದೆ. ಯುಕೆಯ ಪ್ರಮುಖ ವಿಮಾನ ನಿಲ್ದಾಣಗಳು ಇದೀಗ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಹಾರಾಟ ರದ್ದಾಗಿರುವ ಕಾರಣ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸಿಲುಕಿ ಕೊಂಡಿದ್ದಾರೆ.&lt;/p&gt;&lt;h2&gt;ಪ್ರಯಾಣಿಕರಲ್ಲಿ ಮನವಿ&lt;/h2&gt;&lt;p&gt;ಲಂಡನ್&zwnj;ನ ಹೀಥ್ರೋ, ಸ್ಟಾನ್&zwnj;ಸ್ಟೆಡ್, ಸಿಟಿ ವಿಮಾನ ನಿಲ್ದಾಣಗಳಲ್ಲಿ ಸಮಸ್ಯೆ ತೀವ್ರಗೊಂಡಿದೆ. ಇನ್ನು ಮ್ಯಾಂಚೆಸ್ಟರ್, ಬರ್ಮಿಂಗ್&zwnj;ಹ್ಯಾಮ್ ಸೇರಿದಂತೆ ಯುಕೆಯ ಬಹುತೇಕ ವಿಮಾನ ನಿಲ್ದಾಣಗಲ್ಲಿ ಸಮಸ್ಯೆ ತಲೆದೋರಿದೆ. ತಾಂತ್ರಿಕ ಅಡಚಣೆಯಿಂದ ಆಗಿದೆ ಎಂದು ಯುಕೆ ಅದಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಪ್ರಯಾಣಿಕರು ತಮ್ಮ ಫ್ಲೈಟ್ ಸ್ಟೇಟಸ್ ಪರಿಶೀಲಿಸಿ ಪ್ರಯಾಣ ಬೆಳೆಸಿ ಎಂದು ಸೂಚಿಸಿದೆ.&lt;/p&gt;&lt;p&gt;ಸಿಸ್ಟಮ್ ಫೈಲ್ಯೂರ್&zwnj;ನಿಂದ ವಿಮಾನ ಹಾರಾಟ ಸ್ಥಗಿತಗೊಂಡಿದೆ ಎಂದು ಹಲವು ಪ್ರಯಾಣಿಕರಿಗೆ ಏರ್&zwnj;ಲೈನ್ಸ್ ಸೂಚನೆ ನೀಡಿದೆ. ಆದರೆ ಹಲವು ಸಂಸ್ಥೆಗಳು ಯಾವುದೇ ಮಾಹಿತಿ ನೀಡಿಲ್ಲ, ಪರಿಣಾಮ ಪ್ರಯಾಣಿಕರು ಮಾಹಿತಿ ಸಿಗದೆ ಪರದಾಡುವಂತಾಗಿದೆ. ಟೆಕ್ನಿಕಲ್ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿದೆ. ದಿಢೀರ್ ಈ ರೀತಿಯ ತಾಂತ್ರಿಕ ಅಡಚಣೆ ಹಿಂದೆ ಬೇರೆ ಕಾರಣಗಳು ಇದೆಯಾ ಅನ್ನೋ ಅನುಮಾನಗಳು ತೀವ್ರಗೊಂಡಿದೆ. ವಿಮಾನ ಹಾರಾಟ ರದ್ದು ಕುರಿತು ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಅಧಿಕಾರಿಗಳು ಸಮಸ್ಯೆಗೆ ಮೂಲ ಕಾರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಉದ್ಭವಿಸಿರುವ ವಿಮಾನ ಹಾರಾಟ ರದ್ದು ಯುಕೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/300-flights-suddenly-cancelled-as-uk-air-traffic-system-faces-major-disruption/articleshow-2cxgry7"/>
        </item>
        <item>
            <title><![CDATA[ಶನಿಯ ದಕ್ಷಿಣ ಧ್ರುವದಲ್ಲಿ ಮತ್ತೊಂದು ವಿಸ್ಮಯ: ಷಡ್ಭುಜಾಕೃತಿಯ ನಂತರ ಪತ್ತೆಯಾಯ್ತು 10 ಬದಿಗಳ 'ದಶಭುಜಾಕೃತಿ'!]]></title>
            <link>https://kannada.asianetnews.com/science/beyond-the-hexagon-saturn-s-mysterious-decagon-hubble-telescope-spots-giant-10-sided-pattern-gdp/articleshow-4c437u6</link>
            <guid isPermaLink="true">https://kannada.asianetnews.com/science/beyond-the-hexagon-saturn-s-mysterious-decagon-hubble-telescope-spots-giant-10-sided-pattern-gdp/articleshow-4c437u6</guid>
            <pubDate>Sat, 05 Sep 2026 14:04:49 +0530</pubDate>
            <description><![CDATA[ಶನಿಯ ಉತ್ತರ ಧ್ರುವದಲ್ಲಿರುವ ಷಡ್ಭುಜಾಕೃತಿಯಂತೆ, ಇದೀಗ ದಕ್ಷಿಣ ಧ್ರುವದಲ್ಲಿ 10 ಬದಿಗಳ 'ದಶಭುಜಾಕೃತಿಯ' ಹೊಸ ವಾತಾವರಣದ ಮಾದರಿಯನ್ನು ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಹಬಲ್ ದೂರದರ್ಶಕದ ಚಿತ್ರಗಳಿಂದ ದೃಢಪಟ್ಟ ಈ ಆಕೃತಿಯು, ಅನಿಲ ಗ್ರಹಗಳಲ್ಲಿ ಇಂತಹ ನಿಯಮಿತ ರಚನೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಬಗ್ಗೆ ಹೊಸ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1pdb6a93jxrxg7gftcm3sv6,imgname-saturn--1--1788532332873.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೌರವ್ಯೂಹದ ಎರಡನೇ ಅತಿದೊಡ್ಡ ಗ್ರಹವಾದ ಶನಿಯ ಉತ್ತರ ಧ್ರುವದಲ್ಲಿ ಆರು ಬದಿಗಳ ಬೃಹತ್ 'ಷಡ್ಭುಜಾಕೃತಿಯ' (Hexagon) ವಾತಾವರಣದ ರಚನೆ ಇರುವುದು ವಿಜ್ಞಾನಿಗಳಿಗೆ ದಶಕಗಳಿಂದ ತಿಳಿದಿತ್ತು. ಆದರೆ ಈಗ, ಆ ಕೌತುಕಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಗ್ರಹದ ಸಂಪೂರ್ಣ ವಿರುದ್ಧ ಬದಿಯಲ್ಲಿ, ಅಂದರೆ ದಕ್ಷಿಣ ಧ್ರುವದಲ್ಲಿ, 10 ಬದಿಗಳನ್ನು ಹೊಂದಿರುವ ಬೃಹತ್ 'ದಶಭುಜಾಕೃತಿಯ' (Decagon) ಹೊಸ ನಿಗೂಢ ಮಾದರಿಯನ್ನು ಖಗೋಳಶಾಸ್ತ್ರಜ್ಞರು ಗುರುತಿಸಿದ್ದಾರೆ. ಶನಿಯ ದಕ್ಷಿಣ ಗೋಳಾರ್ಧದಲ್ಲಿ ಇಂತಹ ನಿಯಮಿತ ಬಹುಭುಜಾಕೃತಿಯ ಜೆಟ್ ಪ್ರವಾಹವನ್ನು ವೀಕ್ಷಿಸುತ್ತಿರುವುದು ಬಾಹ್ಯಾಕಾಶ ವಿಜ್ಞಾನದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.&lt;/p&gt;&lt;h2&gt;ಉಂಗುರಗಳ ಗ್ರಹ ಶನಿ ಮತ್ತು ಅದರ ವೈಶಿಷ್ಟ್ಯಗಳು&lt;/h2&gt;&lt;p&gt;ಸೂರ್ಯನಿಂದ ಆರನೇ ಗ್ರಹವಾದ ಶನಿಯು ಕಾಸ್ಮಿಕ್ ಧೂಳು, ಮಂಜುಗಡ್ಡೆ ಮತ್ತು ಬಂಡೆಗಳ ತುಣುಕುಗಳಿಂದ ಕೂಡಿದ ತನ್ನ ಸೌಂದರ್ಯಮಯ ಉಂಗುರಗಳಿಗೆ ಹೆಸರುವಾಸಿಯಾಗಿದೆ. 2004 ರಿಂದ 2017 ರವರೆಗೆ ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯು ಶನಿಯ ವಾತಾವರಣ, ಉಂಗುರಗಳು ಹಾಗೂ ಅದರ ಚಂದ್ರಗಳ ವ್ಯವಸ್ಥೆಯನ್ನು ಅಭೂತಪೂರ್ವವಾಗಿ ಅಧ್ಯಯನ ಮಾಡಿತು. ಶನಿಯು ನೂರಾರು ಚಂದ್ರಗಳನ್ನು ಹೊಂದಿದ್ದು, ಗ್ರಹದ ಗಾತ್ರದ ಟೈಟಾನ್&zwnj;ನಿಂದ ಹಿಡಿದು ಆಲೂಗಡ್ಡೆಯಂತೆ ಕಾಣುವ ಸಣ್ಣ ಕ್ಷುದ್ರ ಗ್ರಹಗಳ ವೈವಿಧ್ಯಮಯ ಜಗತ್ತನ್ನೇ ಹೊಂದಿದೆ. ಇವುಗಳಲ್ಲಿ ಮಿಮಾಸ್ ಮತ್ತು ಎನ್ಸೆಲಾಡಸ್ ಕ್ಷುದ್ರ ಗ್ರಹ ನೀರನ್ನು ಹೊಂದಿರುವ ಸಾಧ್ಯತೆಯಿಂದಾಗಿ ವಾಸಯೋಗ್ಯ ಪ್ರಪಂಚಗಳಾಗಿ ಸುದ್ದಿಯಲ್ಲಿದ್ದವು.&lt;/p&gt;&lt;h2&gt;ಹಬಲ್ ಕಣ್ಣಿಗೆ ಬಿದ್ದ ಹೊಸ ದಶಭುಜಾಕೃತಿ&lt;/h2&gt;&lt;p&gt;ಸ್ಪೇನ್&zwnj;ನ ಬಾಸ್ಕ್ ಕಂಟ್ರಿ ವಿಶ್ವವಿದ್ಯಾಲಯದ ಸಂಶೋಧಕ ಅಗಸ್ಟಿನ್ ಸ್ಯಾಂಚೆಜ್-ಲವೆಗಾ ನೇತೃತ್ವದ ತಂಡ ನಡೆಸಿದ ಈ ಅಧ್ಯಯನವು 'ಸೈನ್ಸ್ ಅಡ್ವಾನ್ಸಸ್' ಜರ್ನಲ್&zwnj;ನಲ್ಲಿ ಪ್ರಕಟವಾಗಿದೆ. ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು 2023 ರಲ್ಲಿ ತೆಗೆದ ಚಿತ್ರಗಳಲ್ಲಿ ಈ ಮಾದರಿಯ ಮೊದಲ ಸುಳಿವು ಸಿಕ್ಕಿತ್ತು. ಶನಿಯ ಓರೆಯಾದ ಭ್ರಮಣದಿಂದಾಗಿ ದಕ್ಷಿಣ ಗೋಳಾರ್ಧವು ಭೂಮಿಗೆ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆರಂಭದಲ್ಲಿ ಕೆಲವು ಹವ್ಯಾಸಿ ಖಗೋಳಶಾಸ್ತ್ರಜ್ಞರು ಇದನ್ನು ಗಮನಿಸಿದರು, ನಂತರ ಹಬಲ್ ದತ್ತಾಂಶದ ಮೂಲಕ ಶೋಧ ನಡೆಸಿದಾಗ 2025 ರ ವೇಳೆಗೆ ಇದರ 10 ಶೃಂಗಗಳು ಅತ್ಯಂತ ಸ್ಪಷ್ಟವಾಗಿ ದೃಢಪಟ್ಟವು. ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಸಹ-ಲೇಖಕಿ ಆಮಿ ಸೈಮನ್ ಪ್ರಕಾರ, ದಕ್ಷಿಣ ಗೋಳಾರ್ಧದಲ್ಲಿ ಇಂತಹ ವಿದ್ಯಮಾನವನ್ನು ವಿಜ್ಞಾನಿಗಳು ಹಿಂದೆಂದೂ ಕಂಡಿರಲಿಲ್ಲ.&lt;/p&gt;&lt;h2&gt;ದಶಭುಜದ ಗಾತ್ರ ಮತ್ತು ವಾತಾವರಣದ ಸ್ವರೂಪ&lt;/h2&gt;&lt;p&gt;ಈ ದಶಭುಜಾಕೃತಿಯು ಶನಿಯ ದಟ್ಟ ವಾತಾವರಣದಲ್ಲಿ ಹರಿಯುವ ಶಕ್ತಿಶಾಲಿ ಜೆಟ್ ಸ್ಟ್ರೀಮ್&zwnj;ಗಳಲ್ಲಿ ರೂಪುಗೊಂಡಿರುವ ಒಂದು ವಾತಾವರಣದ ಅಲೆಯಾಗಿದೆ. ಇದರ ಪ್ರತಿ ಬದಿಯು ಸರಿಸುಮಾರು 16,800 ಕಿಲೋಮೀಟರ್ (10,000 ಮೈಲಿಗೂ ಹೆಚ್ಚು) ಉದ್ದವಿದ್ದು, ನಮ್ಮ ಇಡೀ ಭೂಮಿಯ ವ್ಯಾಸಕ್ಕಿಂತಲೂ ದೊಡ್ಡದಾಗಿದೆ. ಈ ಪ್ರದೇಶದಲ್ಲಿ ಜೆಟ್ ಸ್ಟ್ರೀಮ್ ಗಾಳಿಯ ವೇಗವು ಗಂಟೆಗೆ ಸುಮಾರು 260 ಮೈಲಿಗಳನ್ನು ತಲುಪುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಭೀಕರ ವರ್ಗ-5 ಚಂಡಮಾರುತಕ್ಕಿಂತಲೂ ವೇಗವಾಗಿದೆ. ಆದರೆ, ಅತ್ಯಂತ ವೇಗದ ಗಾಳಿ ಇದ್ದರೂ ಈ 10-ಬದಿಯ ಮಾದರಿಯು ಗಂಟೆಗೆ 6 ಮೈಲಿಗಿಂತ ಕಡಿಮೆ ವೇಗದಲ್ಲಿ ಅತ್ಯಂತ ನಿಧಾನವಾಗಿ ಬದಲಾಗುತ್ತದೆ. ಶನಿಗೆ ಭೂಮಿಯಂತೆ ಘನ ಮೇಲ್ಮೈ ಇಲ್ಲದಿರುವುದರಿಂದ, ಇದು ಯಾವುದೇ ಕಲ್ಲು ಅಥವಾ ಗೋಡೆಯ ಆಕೃತಿಯಲ್ಲ, ಬದಲಾಗಿ ಮೋಡಗಳು ಮತ್ತು ಅನಿಲಗಳ ಚಲನೆಯಿಂದ ರೂಪುಗೊಂಡ ಅಸಾಮಾನ್ಯ ಮಾದರಿಯಾಗಿದೆ.&lt;/p&gt;&lt;h2&gt;ಉತ್ತರ ಧ್ರುವದ ಷಡ್ಭುಜಕ್ಕೆ ದಕ್ಷಿಣ ಧ್ರುವದ ಉತ್ತರ&lt;/h2&gt;&lt;p&gt;ಶನಿಯ ಉತ್ತರ ಧ್ರುವದಲ್ಲಿರುವ 20,000 ಮೈಲಿ ಅಗಲದ ಷಡ್ಭುಜಾಕೃತಿಯನ್ನು 1980 ರ ದಶಕದಲ್ಲಿ ನಾಸಾದ ವಾಯೇಜರ್ ನೌಕೆಗಳು ಮೊದಲು ಪತ್ತೆಹಚ್ಚಿದ್ದವು, ಮತ್ತು ಅದು ಕಳೆದ 44 ವರ್ಷಗಳಿಂದ ಸ್ಥಿರವಾಗಿ ಮುಂದುವರಿದಿದೆ. ಈಗ ಪತ್ತೆಯಾಗಿರುವ ದಕ್ಷಿಣ ಧ್ರುವದ ದಶಭುಜವು ಇತ್ತೀಚೆಗೆ ರೂಪುಗೊಳ್ಳುತ್ತಿರುವಂತೆ ಕಾಣುತ್ತಿದ್ದು, ಈ ಎರಡೂ ಮೇಲ್ಮೈ ಆಕಾರಗಳನ್ನು ಹೋಲಿಸಿ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಉತ್ತಮ ಅವಕಾಶ ಸಿಕ್ಕಿದೆ.&lt;/p&gt;&lt;h2&gt;ಖಗೋಳಶಾಸ್ತ್ರಜ್ಞರ ಸಿದ್ಧಾಂತ ಮತ್ತು ಮುಂದಿನ ಅಧ್ಯಯನ&lt;/h2&gt;&lt;p&gt;ಯಾವುದೇ ಘನ ಮೇಲ್ಮೈ ಇಲ್ಲದ ವಾತಾವರಣದಲ್ಲಿ ಇಂತಹ ನಿಯಮಿತ ಮೇಲ್ಮೈಗಳು ಆಕಾರಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದಕ್ಕೆ ವಿಜ್ಞಾನಿಗಳು ಸೂಕ್ತ ವಿವರಣೆ ಹುಡುಕುತ್ತಿದ್ದಾರೆ. ವಾತಾವರಣದ ಪ್ರಬಲ ಅನಿಲ ಅಲೆಗಳು ಜೆಟ್ ಸ್ಟ್ರೀಮ್&zwnj;ಗಳನ್ನು ಎದುರಿಸಿದಾಗ ಸಾಗರದ ಅಲೆಗಳಂತೆ ನಿಗದಿತ ಗಡಿಗೆ ಸೀಮಿತಗೊಳ್ಳುತ್ತವೆ. ಗ್ರಹದ ಕ್ಷಿಪ್ರ ತಿರುಗುವಿಕೆ ಮತ್ತು ಗಾಳಿಯ ಚಲನೆಗೆ ತಕ್ಕಂತೆ ಆಕಾರಗಳು ರೂಪುಗೊಳ್ಳುತ್ತವೆ. ಗಾಳಿಯ ಪ್ರವಾಹವು ಗ್ರಹವನ್ನು ಆರು ಬಾರಿ ಸುತ್ತುವಾಗ ಷಡ್ಭುಜಾಕೃತಿ ಸೃಷ್ಟಿಯಾದರೆ, 10 ಬಾರಿ ಸುತ್ತುವಾಗ ದಶಭುಜಾಕೃತಿ ರೂಪುಗೊಳ್ಳುತ್ತದೆ ಎಂಬುದು ಪ್ರಮುಖ ಊಹೆಯಾಗಿದೆ. ಮುಂದಿನ ದಿನಗಳಲ್ಲಿ ಹಬಲ್ ಮತ್ತು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕಗಳ (JWST) ಸಹಾಯದಿಂದ ಈ ದಶಭುಜಾಕೃತಿ ಎಷ್ಟು ಕಾಲ ಉಳಿಯುತ್ತದೆ, ಇದರ ಆಳ ಎಷ್ಟು ಮತ್ತು ಇದು ಶನಿಯ ಋತುಮಾನಗಳ ಬದಲಾವಣೆಗೆ ಸಂಬಂಧಿಸಿದೆಯೇ ಎಂಬುದನ್ನು ವಿಜ್ಞಾನಿಗಳು ಆಳವಾಗಿ ಅಧ್ಯಯನ ಮಾಡಲಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/science/beyond-the-hexagon-saturn-s-mysterious-decagon-hubble-telescope-spots-giant-10-sided-pattern-gdp/articleshow-4c437u6"/>
        </item>
        <item>
            <title><![CDATA[ಕೋರಿಯನ್ ಮದ್ವೆಯಲ್ಲಿ ಭಾರತೀಯ ಯುವತಿಗೆ ಊಟ ನೀಡದೇ ನಿಲ್ಲಿಸಿದ್ದರು; ಕಾರಣ ಕ್ಯೂಟ್ ಆಗಿದೆ]]></title>
            <link>https://kannada.asianetnews.com/viral/indian-woman-denied-lunch-at-korean-wedding-for-lacking-food-token-why-gkn/articleshow-5btq4iy</link>
            <guid isPermaLink="true">https://kannada.asianetnews.com/viral/indian-woman-denied-lunch-at-korean-wedding-for-lacking-food-token-why-gkn/articleshow-5btq4iy</guid>
            <pubDate>Tue, 08 Sep 2026 16:38:39 +0530</pubDate>
            <description><![CDATA[&lt;p&gt;ಮದುವೆ ಸಂಪ್ರದಾಯಗಳು ಒಂದೊಂದು ಕಡೆ ವಿಚಿತ್ರ ವಿಚಿತ್ರವಾಗಿರುತ್ತವೆ. ಅದರಂತೆ ಭಾರತೀಯ ಯುವತಿಯೊಬ್ಬಳು ಕೋರಿಯನ್ ಮದುವೆಗೆ ಹೋಗಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಆಕೆಗೆ ಊಟ ಮಾಡಲು ಬಿಡದೇ ತಡೆದು ನಿಲ್ಲಿಸಿದ ಪ್ರಸಂಗ ನಡೆಯಿತು. ಅಷ್ಟಕ್ಕೂ ಆಕೆ ಮಾಡಿದ ಯಡವಟ್ಟು ಏನು ಗೊಯತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20b90h04r2y4p5s8j3e9wts,imgname-korean-wedding-1788865708576.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿಯೋಲ್ (ದಕ್ಷಿಣ ಕೊರಿಯಾ): &lt;/strong&gt;ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿಭಿನ್ನ ಸಂಸ್ಕೃತಿ ಮತ್ತು ಆಚರಣೆಗಳಿರುತ್ತವೆ. ನಮ್ಮ ದೇಶದಲ್ಲಿ ಮದುವೆ ಎಂದರೆ ಅತಿಥಿಗಳಿಗೆ ಮೊದಲ ಆದ್ಯತೆ, ಊಟದ ವಿಚಾರದಲ್ಲಿ ಯಾರನ್ನೂ ಕೇಳುವವರಿರುವುದಿಲ್ಲ. ಆದರೆ ದಕ್ಷಿಣ ಕೊರಿಯಾದಲ್ಲಿ ನಡೆದ ಮದುವೆಯೊಂದಕ್ಕೆ ಹೋದ ಭಾರತೀಯ ಯುವತಿಗೆ ಅಲ್ಲಿನ ವಿಚಿತ್ರ ಪದ್ಧತಿಯಿಂದಾಗಿ ಮುಜುಗರ ಅನುಭವಿಸುವಂತಾದ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ದಕ್ಷಿಣ ಕೊರಿಯಾದ ಪ್ರಯೋಗಾಲಯವೊಂದರಲ್ಲಿ ಕೆಲಸ ಮಾಡುತ್ತಿರುವ ಜಿಜ್ಞಾಸ (Jigyasa) ಎಂಬ ಭಾರತೀಯ ಯುವತಿ, ತನ್ನ ಸಹೋದ್ಯೋಗಿಯ (Labmate) ಮದುವೆಗೆ ಭಾರತ ಮತ್ತು ಶ್ರೀಲಂಕಾದ ಇಬ್ಬರು ಹಿರಿಯ ಸಹೋದ್ಯೋಗಿಗಳೊಂದಿಗೆ ತೆರಳಿದ್ದರು. ಮದುವೆ ಸಮಾರಂಭವನ್ನು ಕುತೂಹಲದಿಂದ ವೀಕ್ಷಿಸಿದ ಈ ತಂಡ, ಸಮಾರಂಭ ಮುಗಿದ ನಂತರ ಊಟದ ಹಾಲ್&zwnj;ನತ್ತ ಹೆಜ್ಜೆ ಹಾಕಿತು.&lt;/p&gt;&lt;h2&gt;&lt;strong&gt;ಊಟಕ್ಕೆ ತಡೆದ ಭದ್ರತಾ ಸಿಬ್ಬಂದಿ&lt;/strong&gt;&lt;/h2&gt;&lt;p&gt;ಯುವತಿ ಮತ್ತು ಆಕೆಯ ತಂಡ ಊಟದ ಹಾಲ್ ಪ್ರವೇಶಿಸಲು ಮುಂದಾದಾಗ ಅಲ್ಲಿನ ಸೆಕ್ಯೂರಿಟಿ ಗಾರ್ಡ್&zwnj;ಗಳು ಇವರನ್ನು ತಡೆದಿದ್ದಾರೆ. ಭದ್ರತಾ ಸಿಬ್ಬಂದಿ 'ಟೋಕನ್' ತೋರಿಸುವಂತೆ ಕೇಳಿದ್ದಾರೆ. ಇವರಿಗೆ ಕೊರಿಯನ್ ಭಾಷೆ ಸರಿಯಾಗಿ ತಿಳಿಯದ ಕಾರಣ ಏನು ಮಾಡಬೇಕೆಂದು ತೋಚದೆ ಗಾಬರಿಯಾಗಿದ್ದಾರೆ. ಕೂಡಲೇ ತಮ್ಮ ಸಹೋದ್ಯೋಗಿಗೆ (ಮದುಮಗ) ಕರೆ ಮಾಡಿ ವಿಷಯ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಗಿಫ್ಟ್ ನೀಡಿದರೆ ಮಾತ್ರ ಊಟದ ಟೋಕನ್&lt;/strong&gt;&lt;/h2&gt;&lt;p&gt;ನಂತರ ತಿಳಿದ ವಿಷಯವೇನೆಂದರೆ..ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಮದುವೆ ಮಂಟಪ ಪ್ರವೇಶಿಸುವ ಮುನ್ನವೇ ಸ್ವಾಗತ ಕೌಂಟರ್&zwnj;ನಲ್ಲಿ (Reception counter) ಹಣದ ಲಕೋಟೆ ಅಥವಾ ಉಡುಗೊರೆಯನ್ನು ನೀಡಬೇಕು. ಅದರ ಬದಲಾಗಿ ಅಲ್ಲಿನ ಸಿಬ್ಬಂದಿ ಅತಿಥಿಗಳಿಗೆ ಒಂದು 'ಟೋಕನ್' ನೀಡುತ್ತಾರೆ. ಈ ಟೋಕನ್ ಇದ್ದರೆ ಮಾತ್ರ ಊಟದ ಹಾಲ್&zwnj;ಗೆ ಪ್ರವೇಶ ಸಿಗುತ್ತದೆ!&lt;/p&gt;&lt;p&gt;ಜಿಜ್ಞಾಸ ಮತ್ತು ಅವರ ತಂಡದ ಬಳಿ ಉಡುಗೊರೆಯ ಲಕೋಟೆ ಇತ್ತಾದರೂ, ಅವರು ಅದನ್ನು ನೇರವಾಗಿ ಮದುಮಕ್ಕಳಿಗೆ ನೀಡಲು ಇಟ್ಟುಕೊಂಡಿದ್ದರು. ಹೀಗಾಗಿ ಅವರ ಬಳಿ ಟೋಕನ್ ಇರಲಿಲ್ಲ. ವಿಷಯ ತಿಳಿದ ನಂತರ ಅವರು ಲಕೋಟೆಯನ್ನು ಕೌಂಟರ್&zwnj;ನಲ್ಲಿ ನೀಡಿ, ಟೋಕನ್ ಪಡೆದು ಊಟ ಸವಿದಿದ್ದಾರೆ.&lt;/p&gt;&lt;p&gt;ಈ ಅನುಭವವನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿರುವ ಜಿಜ್ಞಾಸ, ನಮ್ಮ ಭಾರತದಲ್ಲಿ ಮದುವೆಗೆ ಬಂದವರಿಗೆ ಪ್ರೀತಿಯಿಂದ ಊಟ ಬಡಿಸಲಾಗುತ್ತದೆ. ಉಡುಗೊರೆ ನೀಡುವುದು ಅಥವಾ ನೀಡದಿರುವುದು ಅತಿಥಿಗಳ ಇಚ್ಛೆ. ಆದರೆ ಇಲ್ಲಿ ಊಟಕ್ಕೂ ಟೋಕನ್ ಸಿಸ್ಟಮ್ ಇರುವುದು ನನಗೆ ತುಂಬಾ ವಿಚಿತ್ರ ಎನಿಸಿತು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ದೇಶಗಳ ಸಂಪ್ರದಾಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/indian-woman-denied-lunch-at-korean-wedding-for-lacking-food-token-why-gkn/articleshow-5btq4iy"/>
        </item>
        <item>
            <title><![CDATA[ಸೌದಿ ಯುವಕರು ಪಾಕ್ ಸೇರಿದಂತೆ  4 ದೇಶದವರನ್ನು ಮದುವೆಯಾಗುವಂತಿಲ್ಲ, ಇದು ಕಠಿಣ ನಿಯಮ!]]></title>
            <link>https://kannada.asianetnews.com/gallery/world-news/the-surprising-marriage-rules-you-need-to-know-saudi-arabian-men-can-t-marry-women-from-these-nations-mrq-e0i53qz</link>
            <guid isPermaLink="true">https://kannada.asianetnews.com/gallery/world-news/the-surprising-marriage-rules-you-need-to-know-saudi-arabian-men-can-t-marry-women-from-these-nations-mrq-e0i53qz</guid>
            <pubDate>Fri, 04 Sep 2026 09:30:42 +0530</pubDate>
            <description><![CDATA[&lt;p&gt;ಸೌದಿ ಅರೇಬಿಯಾ ಸರ್ಕಾರವು ತನ್ನ ದೇಶದ ಯುವಕರು ಮದುವೆಯಾಗಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ, 4 ದೇಶಗಳ ಯುವತಿಯರನ್ನು ವಿವಾಹವಾಗುವುದನ್ನು ನಿಷೇಧಿಸಲಾಗಿದೆ. ಬೇರೆ ದೇಶದವರನ್ನು ಮದುವೆಯಾಗುವುದಾದರೆ, ಸರ್ಕಾರದ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1kz0xgdg2j0w89jqg5wn0gn,imgname-saudi-arabia-couple--4--1788450207245.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೌದಿ ಅರೇಬಿಯಾ ಸರ್ಕಾರವು ತನ್ನ ದೇಶದ ಯುವಕರು ಮದುವೆಯಾಗಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ, 4 ದೇಶಗಳ ಯುವತಿಯರನ್ನು ವಿವಾಹವಾಗುವುದನ್ನು ನಿಷೇಧಿಸಲಾಗಿದೆ. ಬೇರೆ ದೇಶದವರನ್ನು ಮದುವೆಯಾಗುವುದಾದರೆ, ಸರ್ಕಾರದ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.&lt;/p&gt;&lt;img&gt;&lt;p&gt;ಪ್ರೀತಿಗೆ ಯಾವುದೇ ಗಡಿ ಅನ್ನೋದೇ ಇಲ್ಲ. ಇತ್ತೀಚೆಗೆ ಪ್ರವಾಸಕ್ಕೆ ತೆರಳಿದಾಗ ಭಾರತದ ಯುವಕನೋರ್ವ, ವಿದೇಶಿ ಮಹಿಳೆಯರನ್ನು ಪ್ರೀತಿಸಿ ಇಬ್ಬರು ಜೊತೆಯಾಗಿದ್ದರು. ಆದ್ರೆ ಸೌದಿ ಅರೇಬಿಯಾದ ಯುವಕರು ಯಾರನ್ನೂ ಬೇಕಾದ್ರೂ ಮದುವೆಯಾಗುವಂತಿಲ್ಲ. ಸೌದಿ ಅರೇಬಿಯಾ ಸರ್ಕಾರ ಮದುವೆ ಸಂಬಂಧ ಕೆಲವೊಂದು ಕಠಿಣ ನಿಯಮಗಳನ್ನು ಹಾಕಿದೆ. ಇಲ್ಲಿಯ ಯುವಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ.&lt;/p&gt;&lt;img&gt;&lt;p&gt;ಸೌದಿ ಅರೇಬಿಯಾ ಸರ್ಕಾರದ ನಿಯಮಗಳ ಪ್ರಕಾರ, ಇಲ್ಲಿಯ ಯುವಕರು ನಾಲ್ಕು ದೇಶದ ಯುವತಿಯರನ್ನು ಮದುವೆಯಾಗುವಂತಿಲ್ಲ. ಈ ನಿಯಮ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದು, ಇಲ್ಲಿಯ ಜನರು ಇದನ್ನು ಪಾಲನೆ ಮಾಡಿಕೊಂಡು ಬಂದಿದ್ದಾರೆ. ಸೌದಿ ಅರೇಬಿಯಾ ನಿಷೇಧಿಸಿದ ದೇಶಗಳ ಪೈಕಿ ಮೂರು ನಮ್ಮ ಭಾರತದ ಅಕ್ಕ-ಪಕ್ಕದಲ್ಲಿವೆ.&lt;/p&gt;&lt;img&gt;&lt;p&gt;ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್ ಮತ್ತು ಚಾಡ್ ಸೇರಿವೆ. ಪಾಕಿಸ್ತಾನ, ಬಾಂಗ್ಲಾದೇಶ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಗಾಗಿದ್ರೆ ಸೌದಿ ಅರೇಬಿಯಾ ಇವುಗಳ ಮೇಲೆ ನಿಷೇಧ ಹಾಕಿದೆ. ಸೌದಿ ಅರೇಬಿಯಾದ ಯುವಕರು ವಿದೇಶಿ ಮಹಿಳೆಯರನ್ನು ಮದುವೆಯಾಗೋದನ್ನು ತಡೆಯುವುದೇ ಈ ನಿಯಮದ ಉದ್ದೇಶ. ಒಂದು ವೇಳೆ ಸೌದಿ ಯುವಕರು, ವಿದೇಶಿಯರನ್ನು ಮದುವೆಯಾಗಬೇಕಾದ್ರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ವಿದೇಶಿ ಯುವತಿಯರನ್ನು ಮದುವೆಯಾಗುವ ಮುಂದೆ ಯುವಕರು ಸರ್ಕಾರಕ್ಕೆ ಸಂಬಂಧಿಸಿದ ಅಥವಾ ಸೂಚಿಸಿರುವ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಅನುಮತಿ ಸರ್ಕಾರದ ಅಧಿಕೃತ ಇಲಾಖೆಗಳಿಂದಲೇ ಪಡೆದುಕೊಳ್ಳಬೇಕಾಗುತ್ತದೆ. ನಿಯಮಗಳ ಉಲ್ಲಂಘನೆಗೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ಈಗಾಗಲೇ ಮದುವೆಯಾಗಿರುವ ಅಥವಾ ವಿಚ್ಚೇದಿತ ಯುವಕರು ವಿದೇಶಿಯರನ್ನು ಮದುವೆಯಾಗುತ್ತಿದ್ರೆ ಇನ್ನೂ ಅಧಿಕ ನಿಯಮ ಪಾಲಿಸಬೇಕಾಗುತ್ತದೆ. ಮದುವೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ ಆರು ತಿಂಗಳು ಕಾಯಬೇಕಾಗುತ್ತದೆ. ಆರು ತಿಂಗಳದ ನಂತ್ರವೇ ಸರ್ಕಾರ ಎಲ್ಲವನ್ನೂ ಪರಿಶೀಲಿಸಿ ಅನುಮತಿಯನ್ನು ನೀಡುತ್ತದೆ. ಈ ನಿಯಮದ ಮೂಲಕ ತನ್ನ ದೇಶದೊಳಗೆ ಬರೋ ಪ್ರತಿಯೊಬ್ಬರ ಮಾಹಿತಿಯನ್ನು ಸೌದಿ ಅರೇಬಿಯಾ ಸೂಕ್ಷ್ಮವಾಗಿ ಗಮನಿಸುತ್ತದೆ.&lt;/p&gt;]]></content:encoded>
            <category>world-news</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/world-news/the-surprising-marriage-rules-you-need-to-know-saudi-arabian-men-can-t-marry-women-from-these-nations-mrq-e0i53qz"/>
        </item>
        <item>
            <title><![CDATA[ವಿದೇಶದಲ್ಲಿ ಸೆಪ್ಟೆಂಬರ್‌ ಬರುತ್ತಿದ್ದಂತೆ ಕಿಟಕಿ ಮೇಲೆ ಉಪ್ಪಿನ ಬಟ್ಟಲು ಇಡಲು ಮನೆಮಂದಿಗೆ ಸೂಚನೆ ನೀಡೋದ್ಯಾಕೆ?]]></title>
            <link>https://kannada.asianetnews.com/life/why-people-put-salt-bowls-on-windows-in-autumn/articleshow-e3o2sww</link>
            <guid isPermaLink="true">https://kannada.asianetnews.com/life/why-people-put-salt-bowls-on-windows-in-autumn/articleshow-e3o2sww</guid>
            <pubDate>Tue, 08 Sep 2026 11:38:43 +0530</pubDate>
            <description><![CDATA[&lt;p&gt;&lt;strong&gt;Window condensation salt hack: &lt;/strong&gt;ಸೆಪ್ಟೆಂಬರ್ ತಿಂಗಳು ಬಂತೆಂದರೆ ಸಾಕು, ವಿದೇಶಗಳಲ್ಲಿ ಜನರು ತಮ್ಮ ಮನೆಯ ಕಿಟಕಿಗಳ ಮೇಲೆ ಒಂದು ಬಟ್ಟಲು ಉಪ್ಪನ್ನು ಇಡಲು ಶುರು ಮಾಡುತ್ತಾರೆ! ಇದೇನೋ ಮೂಢನಂಬಿಕೆ ಅಂದುಕೊಂಡರೆ ನಿಮ್ಮ ತಪ್ಪು. ಇದರ ಹಿಂದೆ ಒಂದು ದೊಡ್ಡ ವೈಜ್ಞಾನಿಕ ಕಾರಣ ಮತ್ತು ಆರೋಗ್ಯದ ಗುಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16s35zvezsd9pytgvykr4jg,imgname-salt-remedy--6--1788007782395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹ&lt;/strong&gt;ವಾಮಾನ ಇಲಾಖೆಯ ಪ್ರಕಾರ, ಯುರೋಪ್&zwnj;ನಲ್ಲಿ ಶರತ್ಕಾಲವು ಈಗ ಆರಂಭವಾಗಿದೆ. ಋತುಮಾನದ ಬದಲಾವಣೆಯೊಂದಿಗೆ ತಾಪಮಾನದಲ್ಲಿಯೂ ಗಣನೀಯ ಬದಲಾವಣೆಯಾಗಿದೆ. ಬೇಸಿಗೆಯ ತೀವ್ರ ಶಾಖದ ನಂತರ, ಸೆಪ್ಟೆಂಬರ್ ತಿಂಗಳು ತಂಪಾದ ವಾತಾವರಣದೊಂದಿಗೆ ಪ್ರಾರಂಭವಾಗಿದೆ. ಬಿಸಿಲು ಮತ್ತು ಮಳೆಯ ಸಂಯೋಜನೆಯೊಂದಿಗೆ ಹವಾಮಾನವು ಆಹ್ಲಾದಕರವಾಗಿದೆ. ಆದರೆ, ಮಳೆಯ ವಾತಾವರಣವು ನಿಧಾನವಾಗಿ ಹೆಚ್ಚಾಗುತ್ತಿದ್ದು, ಬ್ರಿಟನ್&zwnj;ನ ಹಲವು ಭಾಗಗಳಲ್ಲಿ ಮಳೆ ಮತ್ತು ಗಾಳಿಯ ಮುನ್ಸೂಚನೆ ನೀಡಲಾಗಿದೆ. ಈ ತಂಪಾದ ಮತ್ತು ಆರ್ದ್ರ ಹವಾಮಾನದ ಒಂದು ದೊಡ್ಡ ಅನಾನುಕೂಲವೆಂದರೆ ಕಿಟಕಿಗಳ ಮೇಲೆ ನೀರಿನ ಹನಿಗಳು (Condensation) ಸಂಗ್ರಹವಾಗುವುದು.&lt;/p&gt;&lt;h2&gt;&lt;strong&gt;ಏನಿದು ತೇವಾಂಶ ಅಥವಾ ಕಂಡೆನ್ಸೇಶನ್?&lt;/strong&gt;&lt;/h2&gt;&lt;p&gt;ಮನೆಯ ಒಳಗಿನ ಬೆಚ್ಚಗಿನ ಗಾಳಿಯು ತಣ್ಣಗಿರುವ ಕಿಟಕಿ ಗಾಜಿನ ಮೇಲ್ಮೈಯನ್ನು ತಾಕಿದಾಗ, ಅದು ವೇಗವಾಗಿ ತಣ್ಣಗಾಗಿ ನೀರಿನ ಹನಿಗಳಾಗಿ ರೂಪಾಂತರಗೊಳ್ಳುತ್ತದೆ. ಇದನ್ನು ಗಮನಿಸದೆ ಹಾಗೆಯೇ ಬಿಟ್ಟರೆ, ಕಿಟಕಿಗಳ ಸುತ್ತ ಕಪ್ಪು ಬೂಸ್ಟು (Black mould) ಬೆಳೆಯಬಹುದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅದೃಷ್ಟವಶಾತ್, ಈ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಅಡುಗೆಮನೆಯಲ್ಲಿರುವ ಅಗ್ಗದ ಪದಾರ್ಥ 'ಉಪ್ಪು' ಈ ಕೆಲಸವನ್ನು ಮಾಡಬಲ್ಲದು.&lt;/p&gt;&lt;h2&gt;&lt;strong&gt;ಉಪ್ಪು ಹೇಗೆ ಸಹಾಯ ಮಾಡುತ್ತೆ?&amp;nbsp;&lt;/strong&gt;&lt;/h2&gt;&lt;p&gt;ಉಪ್ಪು ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಳ್ಳುವ ಅತ್ಯುತ್ತಮ ಗುಣವನ್ನು ಹೊಂದಿದೆ. ಇದು ಗಾಳಿಯಲ್ಲಿರುವ ನೀರಿನ ಆವಿಯನ್ನು ಹೀರಿಕೊಳ್ಳುವ ಮೂಲಕ ಕಿಟಕಿಗಳ ಮೇಲೆ ನೀರಿನ ಹನಿಗಳು ಸಂಗ್ರಹವಾಗುವುದನ್ನು ತಡೆಯುತ್ತದೆ. ಮನೆಯ ಕಿಟಕಿಗಳ ಮೇಲೆ ಆಯಕಟ್ಟಿನ ಜಾಗದಲ್ಲಿ ಉಪ್ಪಿನ ಬಟ್ಟಲನ್ನು ಇರಿಸುವುದರಿಂದ ಕಿಟಕಿಯ ಸಮೀಪವಿರುವ ಗಾಳಿಯನ್ನು ಒಣದಾಗಿಸಲು ಸಾಧ್ಯವಾಗುತ್ತದೆ. ತಜ್ಞರ ಪ್ರಕಾರ, ಕಿಟಕಿಯ ಬಳಿ ಉಪ್ಪನ್ನು ಇಡುವುದು ಮನೆಯಲ್ಲಿ ಒದ್ದೆಯಾದ ವಾತಾವರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;h2&gt;&lt;strong&gt;ತೇವಾಂಶದ ವಿರುದ್ಧ ಹೋರಾಡಲು ಉತ್ತಮ ಮಾರ್ಗ&lt;/strong&gt;&lt;/h2&gt;&lt;p&gt;'ದಿ ಸ್ಪ್ರೂಸ್' (The Spruce) ಎಂಬ ಮನೆ ಸುಧಾರಣಾ ವೆಬ್&zwnj;ಸೈಟ್ ಹೀಗೆ ಹೇಳಿದೆ.. &quot;ಕಿಟಕಿಯ ಬಳಿ ಉಪ್ಪಿನ ಬಟ್ಟಲನ್ನು ಇರಿಸುವುದರಿಂದ ಗಾಳಿಯಲ್ಲಿನ ತೇವಾಂಶವು ಗಾಜಿನ ಮೇಲೆ ಸಂಗ್ರಹವಾಗುವ ಮೊದಲೇ ಅದನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ನೀವು ಎಷ್ಟು ಪ್ರಮಾಣದ ಉಪ್ಪನ್ನು ಇಡಬೇಕು ಮತ್ತು ಎಷ್ಟು ದಿನಕ್ಕೊಮ್ಮೆ ಅದನ್ನು ಬದಲಾಯಿಸಬೇಕು ಎಂಬುದು ನಿಮ್ಮ ಮನೆಯಲ್ಲಿರುವ ತೇವಾಂಶದ ಮಟ್ಟವನ್ನು ಅವಲಂಬಿಸಿರುತ್ತದೆ.&quot;&lt;/p&gt;&lt;p&gt;ಇದು ಅತ್ಯಂತ ಅಗ್ಗದ ಮತ್ತು ನೈಸರ್ಗಿಕ ವಿಧಾನವಾಗಿದೆ. ಮಾರುಕಟ್ಟೆಯಲ್ಲಿ ಉಪ್ಪು ಕಡಿಮೆ ಬೆಲೆಗೆ ದೊರೆಯುವುದರಿಂದ, ತಂಪಾದ ಹವಾಮಾನದಲ್ಲಿ ಕಿಟಕಿಯ ತೇವಾಂಶದ ವಿರುದ್ಧ ಹೋರಾಡಲು ಇದು ಉತ್ತಮ ಮಾರ್ಗವಾಗಿದೆ.&lt;/p&gt;&lt;h2&gt;&lt;strong&gt;ದೊಡ್ಡ ಮಟ್ಟದಲ್ಲಿ ಸಹಕಾರಿ&lt;/strong&gt;&lt;/h2&gt;&lt;p&gt;ಕಿಟಕಿಗಳಲ್ಲಿ ತೇವಾಂಶ ಹೆಚ್ಚಾದಂತೆ ಅದು ಗೋಡೆಗಳ ಮೇಲೆ ಕಲೆಗಳು, ಬೂಸ್ಟು ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಅಷ್ಟೇ ಅಲ್ಲದೆ, ಕಿಟಕಿಗಳಿಗೆ ಇದರಿಂದ ಉಂಟಾಗುವ ಹಾನಿಯನ್ನು ಸರಿಪಡಿಸಲು ಸಾವಿರಾರು ರೂಪಾಯಿಗಳ ಖರ್ಚಾಗಬಹುದು. ಆದ್ದರಿಂದ, ಉಪ್ಪು ಸಣ್ಣ ಪದಾರ್ಥವಾದರೂ ಚಳಿಗಾಲದಲ್ಲಿ ಮನೆಯನ್ನು ಒಣದಾಗಿ ಮತ್ತು ಸುರಕ್ಷಿತವಾಗಿಡಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.&lt;/p&gt;&lt;h2&gt;&lt;strong&gt;ಇದನ್ನು ಅನುಸರಿಸುವುದು ಹೇಗೆ?&lt;/strong&gt;&lt;/h2&gt;&lt;p&gt;ಈ ವಿಧಾನವು ತುಂಬಾ ಸರಳವಾಗಿದ್ದು, ಭಾರತೀಯರು ಸಹ ಅನುಸರಿಸಬಹುದು. ಒಂದು ಸಣ್ಣ ಬಟ್ಟಲು ಅಥವಾ ಜಾರ್&zwnj;ನಲ್ಲಿ ಪುಡಿ ಉಪ್ಪನ್ನು (Table salt) ತುಂಬಿಸಿ ಕಿಟಕಿಯ ಬಳಿ ಇಡಿ. ಉಪ್ಪು ಗಟ್ಟಿಯಾಗತೊಡಗಿದಾಗ (clumping), ಅದು ತೇವಾಂಶವನ್ನು ಪೂರ್ತಿಯಾಗಿ ಹೀರಿಕೊಂಡಿದೆ ಎಂದು ಅರ್ಥ. ಆಗ ಆ ಉಪ್ಪನ್ನು ತೆಗೆದು ಹೊಸ ಉಪ್ಪನ್ನು ಹಾಕುವ ಮೂಲಕ ಈ ಪ್ರಕ್ರಿಯೆಯನ್ನು ಮುಂದುವರಿಸಬಹುದು.&lt;/p&gt;]]></content:encoded>
            <category>world-news</category>
            <dc:creator>Ashwini HR</dc:creator>
            <atom:link href="https://kannada.asianetnews.com/life/why-people-put-salt-bowls-on-windows-in-autumn/articleshow-e3o2sww"/>
        </item>
        <item>
            <title><![CDATA[ಕೃಷ್ಣಂ ವಂದೇ ಜಗದ್ಗುರುಂ: ಪಾಕಿಸ್ತಾನದಲ್ಲಿ ಜನಸಾಗರ, ಈ ಸಂಭ್ರಮ ನೋಡಿದ್ರೆ ಶಾಕ್ ಆಗ್ತೀರಿ - VIDEO]]></title>
            <link>https://kannada.asianetnews.com/world-news/krishna-janmashtami-2026-pakistan-karachi-krishna-celebration-viral-video-gkn/articleshow-esfvi5u</link>
            <guid isPermaLink="true">https://kannada.asianetnews.com/world-news/krishna-janmashtami-2026-pakistan-karachi-krishna-celebration-viral-video-gkn/articleshow-esfvi5u</guid>
            <pubDate>Mon, 07 Sep 2026 21:33:23 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ಪಾಕಿಸ್ತಾನ ಅಂದ ತಕ್ಷಣ ನಮಗೆ ನೆನಪಾಗೋದು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಅಥವಾ ಮಂದಿರಗಳ ಮೇಲಿನ ದಾಳಿಯ ಸುದ್ದಿಗಳು. ಆದರೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಪಾಕಿಸ್ತಾನದಿಂದ ಬಂದಿರುವ ವಿಡಿಯೋ ಮತ್ತು ಫೋಟೋಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y9px1z9n1608f3wwpd0d7b,imgname-janmashtami-in-pakistan-1788796957759.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಪಾಕಿಸ್ತಾನ ಅಂದ ತಕ್ಷಣ ನಮಗೆ ನೆನಪಾಗೋದು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಅಥವಾ ಮಂದಿರಗಳ ಮೇಲಿನ ದಾಳಿಯ ಸುದ್ದಿಗಳು. ಆದರೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಪಾಕಿಸ್ತಾನದಿಂದ ಬಂದಿರುವ ವಿಡಿಯೋ ಮತ್ತು ಫೋಟೋಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ. ಅಲ್ಲಿ ಭಯದ ಬದಲು ಭಕ್ತಿಯ ಸಂಭ್ರಮ ಮನೆ ಮಾಡಿತ್ತು!&lt;/p&gt;&lt;h2&gt;&lt;strong&gt;ಕೃಷ್ಣಂ ವಂದೇ ಜಗದ್ಗುರುಂ&lt;/strong&gt;&lt;/h2&gt;&lt;p&gt;ಭಾರತದಂತೆಯೇ ಪಾಕಿಸ್ತಾನದಲ್ಲೂ ಈ ಬಾರಿ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು. ಕರಾಚಿಯ ಐತಿಹಾಸಿಕ ಮಂದಿರಗಳಲ್ಲಿ ಮಧ್ಯರಾತ್ರಿ ಗಂಟೆಗಳು ಮೊಳಗಿದವು, ಭಕ್ತರು ಕೃಷ್ಣನ ಭಜನೆಗೆ ಹೆಜ್ಜೆ ಹಾಕಿದರು. ಈ ಸಂಭ್ರಮ ಎಷ್ಟು ಜೋರಾಗಿತ್ತೆಂದರೆ, ಅಲ್ಲಿನ ಯೂಟ್ಯೂಬರ್&zwnj;ಗಳು ಈ ದೃಶ್ಯಗಳನ್ನು ಕಂಡು ಇದು ಪಾಕಿಸ್ತಾನವೋ ಅಥವಾ ವೃಂದಾವನವೋ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಕರಾಚಿಯ ಸ್ವಾಮಿನಾರಾಯಣ ಮಂದಿರದಲ್ಲಿ ದೀಪಾಲಂಕಾರ&lt;/strong&gt;&lt;/h2&gt;&lt;p&gt;ಕರಾಚಿಯ ಎಂ.ಎ.ಜಿನ್ನಾ ರಸ್ತೆಯಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರ ಹಬ್ಬದ ಕೇಂದ್ರಬಿಂದುವಾಗಿತ್ತು. ಇಡೀ ಮಂದಿರವನ್ನು ಹೂವು ಮತ್ತು ಬಣ್ಣ ಬಣ್ಣದ ಲೈಟುಗಳಿಂದ ಅಲಂಕರಿಸಲಾಗಿತ್ತು. ರಾತ್ರಿ 12 ಗಂಟೆಗೆ ಸರಿಯಾಗಿ ಕೃಷ್ಣನ ಜನ್ಮೋತ್ಸವ ಆಚರಿಸಿ, ಸಾವಿರಾರು ಜನರಿಗೆ ಭರ್ಜರಿ ಭೋಜನ (ಭಂಡಾರ) ಏರ್ಪಡಿಸಲಾಗಿತ್ತು. ಇದರ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.&lt;/p&gt;&lt;h2&gt;&lt;strong&gt;ಜನಸಾಗರ ಕಂಡು ವ್ಲಾಗರ್&zwnj;ಗಳೇ ಸುಸ್ತು&lt;/strong&gt;&lt;/h2&gt;&lt;p&gt;ಪಂಜಾಬ್ ಪ್ರಾಂತ್ಯದ ಫೈಸಲಾಬಾದ್&zwnj;ನಲ್ಲಿ ನಡೆದ ಕಾರ್ಯಕ್ರಮವಂತೂ ಮೈನವಿರೇಳಿಸುವಂತಿತ್ತು. ಒಂದು ದೊಡ್ಡ ಮೈದಾನದಲ್ಲಿ ನಡೆದ ಈ ಸಂಭ್ರಮದಲ್ಲಿ ಜನ ಎಷ್ಟು ಕಿಕ್ಕಿರಿದು ಸೇರಿದ್ದರೆಂದರೆ, ವಿಡಿಯೋ ಮಾಡುತ್ತಿದ್ದ ವ್ಲಾಗರ್&zwnj;ಗಳಿಗೆ ಮುಂದೆ ಹೋಗಲು ಜಾಗವೇ ಇರಲಿಲ್ಲವಂತೆ! ಇಡೀ ಪಾಕಿಸ್ತಾನವೇ ಇಲ್ಲಿಗೆ ಹರಿದು ಬಂದಿದೆ ಎಂದು ಅವರು ಅಲ್ಲಿನ ಪರಿಸ್ಥಿತಿಯನ್ನು ಬಣ್ಣಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಿಂಧ್ ಪ್ರಾಂತ್ಯದಲ್ಲಿ ಹಬ್ಬದ ಕಳೆ ಜೋರು&lt;/strong&gt;&lt;/h2&gt;&lt;p&gt;ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹಿಂದೂಗಳು ವಾಸಿಸುವುದು ಸಿಂಧ್ ಪ್ರಾಂತ್ಯದಲ್ಲಿ (ಸುಮಾರು 49 ಲಕ್ಷ). ಹೀಗಾಗಿ ಕರಾಚಿ ಮಾತ್ರವಲ್ಲದೆ ಹೈದರಾಬಾದ್, ಘೋಟ್ಕಿ, ಸಾಂಘರ್ ಮತ್ತು ಥರ್ಪಾರ್ಕರ್&zwnj;ನಂತಹ ಕಡೆಗಳಲ್ಲೂ ಜನ್ಮಾಷ್ಟಮಿಯ ಕಳೆ ಜೋರಾಗಿತ್ತು. ಘೋಟ್ಕಿಯ ಕೃಷ್ಣ ಮಂದಿರದಲ್ಲಿ ಭಕ್ತರು ಭಜನೆ ಮಾಡುತ್ತಾ ಕುಣಿದು ಕುಪ್ಪಳಿಸಿದರು.&lt;/p&gt;&lt;p&gt;ಒಟ್ಟಿನಲ್ಲಿ ಈ ಬಾರಿಯ ಜನ್ಮಾಷ್ಟಮಿ ಪಾಕಿಸ್ತಾನದ ಹಿಂದೂಗಳ ಪಾಲಿಗೆ ಹೊಸ ಭರವಸೆ ಮತ್ತು ಸಂಭ್ರಮವನ್ನು ಹೊತ್ತು ತಂದಿದೆ. ಅಲ್ಲಿನ ಯುವ ಸಮೂಹ ಮತ್ತು ಸೋಶಿಯಲ್ ಮೀಡಿಯಾ ಕ್ರಿಯೇಟರ್&zwnj;ಗಳು ಕೂಡ ಈ ಸಂಭ್ರಮವನ್ನು ಜಗತ್ತಿಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;View this post on Instagram&lt;p&gt;A post shared by Nicky Nick - ویکاش واڈا (@vikash_vada)&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/world-news/krishna-janmashtami-2026-pakistan-karachi-krishna-celebration-viral-video-gkn/articleshow-esfvi5u"/>
        </item>
        <item>
            <title><![CDATA[ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಗಿಫ್ಟ್​ ಕೊಟ್ಟ ಈ ಹಕ್ಕಿಯ ಬೆಲೆ 4 ಕೋಟಿ ರೂ! ಯಾವುದೀ ಪಕ್ಷಿ? ಏನಿದರ ವಿಶೇಷತೆ]]></title>
            <link>https://kannada.asianetnews.com/life/ultra-white-pure-gyr-garmousha-falcon-chick-sold-for-4-crore-rs-suc/articleshow-fd8qlet</link>
            <guid isPermaLink="true">https://kannada.asianetnews.com/life/ultra-white-pure-gyr-garmousha-falcon-chick-sold-for-4-crore-rs-suc/articleshow-fd8qlet</guid>
            <pubDate>Fri, 04 Sep 2026 22:44:21 +0530</pubDate>
            <description><![CDATA[ಅಬುಧಾಬಿಯಲ್ಲಿ ನಡೆದ ಅಂತರರಾಷ್ಟ್ರೀಯ ಬೇಟೆ ಮತ್ತು ಕುದುರೆ ಸವಾರಿ ಪ್ರದರ್ಶನದ ಹರಾಜಿನಲ್ಲಿ, &quot;ಅಲ್ಟ್ರಾ ವೈಟ್ ಪ್ಯೂರ್ ಗೈರ್ ಗರ್ಮೌಶಾ&quot; ಎಂಬ ಅಪರೂಪದ ಗಿಡುಗದ ಮರಿಯು ದಾಖಲೆಯ 1.5 ಮಿಲಿಯನ್ ದಿರ್ಹಮ್&zwnj;ಗೆ (ಸುಮಾರು 4 ಕೋಟಿ ರೂ.) ಮಾರಾಟವಾಗಿದೆ. ಅಬುಧಾಬಿಯ ಉದ್ಯಮಿಯೊಬ್ಬರು ತಮ್ಮ ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಇದನ್ನು ಖರೀದಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1ppkhtn43mk044t82gsqadm,imgname-white-falcon-1788542043989.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಬುಧಾಬಿ: ಅಬುಧಾಬಿ ಅಂತರರಾಷ್ಟ್ರೀಯ ಬೇಟೆ ಮತ್ತು ಕುದುರೆ ಸವಾರಿ ಪ್ರದರ್ಶನ (ADIHEX) 2026 ರಲ್ಲಿ ನಡೆದ ಐದನೇ ಸುತ್ತಿನ ಹರಾಜಿನಲ್ಲಿ ಇಂದು ದಾಖಲೆ ನಿರ್ಮಾಣವಾಯಿತು. ಇದಕ್ಕೆ ಕಾರಣ, &quot;ಅಲ್ಟ್ರಾ ವೈಟ್ ಪ್ಯೂರ್ ಗೈರ್ ಗರ್ಮೌಶಾ&quot; ಗಿಡುಗದ ಮರಿಯನ್ನು ದಿರ್ಹಮ್ 1.5 ಮಿಲಿಯನ್&zwnj;ಗೆ (ಸುಮಾರು ನಾಲ್ಕು ಕೋಟಿ ರೂಪಾಯಿ) ಮಾರಾಟ ಮಾಡಲಾಗಿದ್ದು, ಇದು ಪ್ರಸ್ತುತ ಆವೃತ್ತಿಯ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಗಿಡುಗ ಆಗಿದೆ. ಈ ಗಿಡುಗನನ್ನು ಅಬುಧಾಬಿಯ ಉದ್ಯಮಿ ಒಬ್ಬರು ಖರೀದಿ ಮಾಡಿದ್ದು, ಅದನ್ನು ಅವರು ತಮ್ಮ ಚಿಕ್ಕ ಮಗಳ ಹುಟ್ಟುಹಬ್ಬಕ್ಕೆ ಗಿಫ್ಟ್​ ಕೊಟ್ಟಿದ್ದಾರೆ. ಅದರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.&lt;/p&gt;&lt;h2&gt;&lt;strong&gt;ಒಂದು ಸಾವಿರ ಗ್ರಾಂ ತೂಕ&lt;/strong&gt;&lt;/h2&gt;&lt;p&gt;ಯುನೈಟೆಡ್ ಸ್ಟೇಟ್ಸ್&zwnj;ನ ಮಾರ್ಕ್ ಮೊಗ್ಲಿಚ್ ಫಾರ್ಮ್&zwnj;ನಿಂದ ಸಾಕಲ್ಪಟ್ಟ ಅಪರೂಪದ ಗಿಡುಗ 1,000 ಗ್ರಾಂ ತೂಗುತ್ತದೆ ಮತ್ತು 16.5 ಇಂಚು ಉದ್ದ ಮತ್ತು 16.5 ಇಂಚು ಅಗಲವನ್ನು ಹೊಂದಿದೆ, ಇದು ಅದರ ಶುದ್ಧ ಬಿಳಿ ಪುಕ್ಕಗಳು ಮತ್ತು ಅಸಾಧಾರಣ ಭೌತಿಕ ಗುಣಲಕ್ಷಣಗಳಿಂದ ಗುರುತಿಸಲ್ಪಟ್ಟಿದೆ. ADNEC ಗ್ರೂಪ್&zwnj;ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಹುಮೈದ್ ಮಾತರ್ ಅಲ್ ಧಹೇರಿ, ದಾಖಲೆಯ ಮಾರಾಟವು ADIHEX ಹರಾಜಿನ ಜಾಗತಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಮತ್ತು ಗಿಡುಗದ ರಾಜಧಾನಿಯಾಗಿ ಅಬುಧಾಬಿಯ ಪಾತ್ರವನ್ನು ಒತ್ತಿಹೇಳುತ್ತದೆ, ಭವಿಷ್ಯದ ಪೀಳಿಗೆಗೆ ಅಧಿಕೃತ ಎಮಿರಾಟಿ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಪ್ರತಿಷ್ಠೆಯ ಸಂಕೇತ&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಗಲ್ಫ್ ರಾಷ್ಟ್ರಗಳಲ್ಲಿ ಗಿಡುಗವನ್ನು ರಾಜಮನೆತನದ ಪರಂಪರೆ, ಪ್ರತಿಷ್ಠೆ ಮತ್ತು ಸಾಮಾಜಿಕ ಸ್ಥಾನಮಾನದೊಂದಿಗೆ ಬಿಗಿಯಾಗಿ ಹೆಣೆಯಲಾಗಿದೆ. ಅಲ್ಟ್ರಾ-ವೈಟ್ ಫಾಲ್ಕನ್ ಅನ್ನು ಹೊಂದುವುದು ಐಷಾರಾಮಿ ಮತ್ತು ಸಾಂಪ್ರದಾಯಿಕ ಹೆಮ್ಮೆಯ ಸಂಪೂರ್ಣ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದರ ಹರಾಜಿನ ಸಮಯದಲ್ಲಿ ಪ್ರತಿಷ್ಠೆಗಾಗಿ ಹಲವಾರು ಮಂದಿ ಮುಗಿ ಬೀಳುವುದು ಇದೆ. ಕೊನೆಗೆ ಅತ್ಯಧಿಕ ಬಿಡ್​ ಕೂಗಿದವರಿಗೆ ಈ ಗಿಡುಗ ದಕ್ಕುತ್ತದೆ.&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/life/ultra-white-pure-gyr-garmousha-falcon-chick-sold-for-4-crore-rs-suc/articleshow-fd8qlet"/>
        </item>
        <item>
            <title><![CDATA[Garbage Man Salary: ಯಬ್ಬಾ..ಅಮೆರಿಕದಲ್ಲಿ ಕಸ ಸಂಗ್ರಹಿಸುವವರ ಸ್ಯಾಲರಿ ಕೇಳಿದ್ರೆ ಹುಬ್ಬೇರಿಸ್ತೀರಾ!]]></title>
            <link>https://kannada.asianetnews.com/gallery/life/how-much-do-garbage-men-make-in-us-gubtdpb</link>
            <guid isPermaLink="true">https://kannada.asianetnews.com/gallery/life/how-much-do-garbage-men-make-in-us-gubtdpb</guid>
            <pubDate>Sun, 06 Sep 2026 11:59:45 +0530</pubDate>
            <description><![CDATA[&lt;p&gt;USA Garbage Collector Salary: ಅಮೆರಿಕದಲ್ಲಿ ಕೆಲಸ ಯಾವುದಾದರೂ ಸರಿ, ಅದಕ್ಕೆ ಸಿಗುವ ಗೌರವ ಮತ್ತು ಆದಾಯವೇ ಬೇರೆ. ಅದರಲ್ಲೂ ಅಲ್ಲಿನ ಕಸ ಸಂಗ್ರಹಿಸುವವರ (Garbage Collectors) ಒಂದು ತಿಂಗಳ ಸಂಬಳ ಕೇಳಿದರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಾ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tp31cjwcxatwqybc4gznm2,imgname-thumbnail--4--1788675720594.png" type="image/jpeg" height="390" width="690"/>
            <content:encoded><![CDATA[&lt;p&gt;USA Garbage Collector Salary: ಅಮೆರಿಕದಲ್ಲಿ ಕೆಲಸ ಯಾವುದಾದರೂ ಸರಿ, ಅದಕ್ಕೆ ಸಿಗುವ ಗೌರವ ಮತ್ತು ಆದಾಯವೇ ಬೇರೆ. ಅದರಲ್ಲೂ ಅಲ್ಲಿನ ಕಸ ಸಂಗ್ರಹಿಸುವವರ (Garbage Collectors) ಒಂದು ತಿಂಗಳ ಸಂಬಳ ಕೇಳಿದರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಾ!&lt;/p&gt;&lt;img&gt;&lt;p&gt;&lt;strong&gt;ಕಸ ಸಂಗ್ರಹಿಸುವವರ (Garbage Collectors) ಆದಾಯ&lt;/strong&gt;ಅಮೆರಿಕ ಎಂದರೆ ಕನಸುಗಳ ನಾಡು. ಅಲ್ಲಿನ ಜೀವನಶೈಲಿ ಮತ್ತು ಆದಾಯದ ಬಗ್ಗೆ ತಿಳಿದುಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ವಿಶೇಷವಾಗಿ ಅಲ್ಲಿನ ಸಾಮಾನ್ಯ ಕೆಲಸಗಾರರು ಎಷ್ಟು ಸಂಪಾದಿಸುತ್ತಾರೆ ಎಂಬ ಕುತೂಹಲ ಹಲವರಲ್ಲಿದೆ. ಇಂದು ನಾವು ಅಮೆರಿಕದಲ್ಲಿ ಕಸ ಸಂಗ್ರಹಿಸುವವರ (Garbage Collectors) ಆದಾಯ ಮತ್ತು ಅಲ್ಲಿನ ಕೆಲಸದ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;&lt;strong&gt;ಗಂಟೆಗೆ 1,700 ರೂಪಾಯಿ ಸಂಬಳ!&lt;/strong&gt;ಅಮೆರಿಕದಲ್ಲಿ ಸಂಬಳವನ್ನು ಗಂಟೆಗಳ ಆಧಾರದ ಮೇಲೆ ನೀಡಲಾಗುತ್ತದೆ. ಓರ್ವ ಇನ್&zwnj;ಸ್ಟಾಗ್ರಾಂ ಬಳಕೆದಾರರ ಪ್ರಕಾರ ಅವರ ಪ್ರದೇಶದಲ್ಲಿ ಕಸ ಸಂಗ್ರಹಿಸುವ ಕೆಲಸ ಮಾಡುವವರಿಗೆ ಒಂದು ಗಂಟೆಗೆ ಸರಾಸರಿ 18 ಡಾಲರ್ ನೀಡಲಾಗುತ್ತದೆ. ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸುಮಾರು 1,700 ರೂಪಾಯಿ ಆಗುತ್ತದೆ. ಅಂದರೆ, ಒಬ್ಬ ಕೆಲಸಗಾರ ತಿಂಗಳಿಗೆ ಸುಮಾರು 3,000 ಡಾಲರ್ ಸಂಪಾದಿಸುತ್ತಾನೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಬರೋಬ್ಬರಿ 2,85,000 ರೂಪಾಯಿಗಳು! ಅಂದಹಾಗೆ ಸ್ಥಳ, ಅನುಭವ ಆಧಾರದ ಮೇಲೆ ಸಂಬಳ ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಆಗಬಹುದು.&lt;/p&gt;&lt;img&gt;&lt;p&gt;&lt;strong&gt;ಕೆಲಸ ಯಾವುದಾದರೇನು?&lt;/strong&gt;ಅಮೆರಿಕದಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಲ್ಲಿನ 'ಕಾಯಕ ಸಂಸ್ಕೃತಿ'. ಅಲ್ಲಿ ಯಾವುದೇ ಕೆಲಸವನ್ನು ಕೀಳಾಗಿ ನೋಡುವುದಿಲ್ಲ. ಕಸ ಸಂಗ್ರಹಿಸುವವರಾಗಿರಲಿ, ಸ್ವಚ್ಛತಾ ಕಾರ್ಮಿಕರಾಗಿರಲಿ, ಕಟ್ಟಡ ಕಾರ್ಮಿಕರಾಗಿರಲಿ (Construction Worker) ಅಥವಾ ಸೂಪರ್ ಮಾರ್ಕೆಟ್&zwnj;ನ ಕ್ಯಾಶಿಯರ್ ಆಗಿರಲಿ &ndash; ಪ್ರತಿಯೊಂದು ಕೆಲಸವನ್ನೂ ಸಮಾಜದ ಅವಿಭಾಜ್ಯ ಅಂಗವೆಂದೇ ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಪ್ರಾಮಾಣಿಕತೆಯೇ ಶಕ್ತಿ&lt;/strong&gt;ಸಮಾಜದ ಸುಗಮ ನಿರ್ವಹಣೆಗೆ ಪ್ರತಿಯೊಬ್ಬ ಕೆಲಸಗಾರನೂ ಮುಖ್ಯ ಎಂಬ ಭಾವನೆ ಅಲ್ಲಿನ ಜನರಲ್ಲಿ ಬೆಳೆದು ಬಂದಿದೆ. ಅಮೆರಿಕನ್ನರು ವೃತ್ತಿಗಿಂತ ಹೆಚ್ಚಾಗಿ ವ್ಯಕ್ತಿಯ ಪ್ರಾಮಾಣಿಕತೆ ಮತ್ತು ಶ್ರಮಕ್ಕೆ ಗೌರವ ನೀಡುತ್ತಾರೆ. ಈ ಮನೋಭಾವವೇ ಅಲ್ಲಿನ ಯಶಸ್ಸಿನ ಗುಟ್ಟು ಎನ್ನಬಹುದು. ಒಟ್ಟಿನಲ್ಲಿ, ಕೆಲಸ ಯಾವುದಾದರೂ ಅದನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ಸಿಗುವ ಗೌರವ ಮತ್ತು ಆದಾಯ ಎರಡೂ ದೊಡ್ಡದು ಎಂಬುದಕ್ಕೆ ಅಮೆರಿಕಾದ ಈ ವ್ಯವಸ್ಥೆಯೇ ಸಾಕ್ಷಿ.&lt;/p&gt;]]></content:encoded>
            <category>world-news</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/how-much-do-garbage-men-make-in-us-gubtdpb"/>
        </item>
        <item>
            <title><![CDATA[ಇತ್ತ ಬಿಗ್ ಬಾಸ್ ಶೋ ಆರಂಭದ ಬೆನ್ನಲ್ಲೇ, ಅತ್ತ ರಿಯಾಲಿಟಿ ಶೋನಲ್ಲಿ ಕಾಲು ಮುರಿದುಕೊಂಡು ವಿಕಲಾಂಗನಾದ ಯುವಕ!]]></title>
            <link>https://kannada.asianetnews.com/viral/survivor-greece-contestant-stavros-floros-loses-leg-boat-accident-100-million-lawsuit-sat/articleshow-hakdcpq</link>
            <guid isPermaLink="true">https://kannada.asianetnews.com/viral/survivor-greece-contestant-stavros-floros-loses-leg-boat-accident-100-million-lawsuit-sat/articleshow-hakdcpq</guid>
            <pubDate>Mon, 07 Sep 2026 09:40:37 +0530</pubDate>
            <description><![CDATA[&lt;p&gt;ದೇಶದಾದ್ಯಂತ ಒಟ್ಟು 6 ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಸಿ ಶೋ ಆರಂಭವಾಗಿದೆ. ಆದರೆ, ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಹೋಗಿದ್ದ 22 ವರ್ಷದ ಯುವಕ ಕಾಲನ್ನೇ ಕಳೆದುಕೊಂಡು ಅಂಗವಿಕಲನಾಗಿದ್ದಾನೆ. ಈ ಕಾರ್ಯಕ್ರಮದಲ್ಲಿ ಸಂಭವಿಸಿದ ಭೀಕರ ದುರಂತದಿಂದ ಯುವಕ ಹೊರ ಬರಲಾಗದೇ ತನಗೆ 830 ಕೋಟಿ ರೂ. ಪರಿಹಾರ ಕೊಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x0t6wrqv7gf0xfh95mtc1a,imgname-reality-show-leg-loss-1788754074520.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಹಸ ಮತ್ತು ಜನಪ್ರಿಯತೆಯ ಆಸೆಯಿಂದ ರಿಯಾಲಿಟಿ ಶೋಗೆ ಹೆಜ್ಜೆ ಇಟ್ಟಿದ್ದ 22 ವರ್ಷದ ತರುಣನೊಬ್ಬ, ಚಿತ್ರೀಕರಣ ತಂಡದ ಬೇಜವಾಬ್ದಾರಿಯಿಂದಾಗಿ ತನ್ನ ಕಾಲನ್ನೇ ಕಳೆದುಕೊಂಡು ಬದುಕುಪೂರ್ತಿ ನರಳುವಂತಾಗಿದೆ. ಜನಪ್ರಿಯ &lsquo;ಸರ್ವೈವರ್ ಗ್ರೀಸ್&rsquo; (Survivor Greece) ಕಾರ್ಯಕ್ರಮದಲ್ಲಿ ಸಂಭವಿಸಿದ ಈ ಭೀಕರ ದುರಂತ ಇಡೀ ಜಾಗತಿಕ ಮನರಂಜನಾ ಲೋಕವನ್ನೇ ಬೆಚ್ಚಿಬೀಳಿಸಿದೆ. ಪ್ರಾಣಾಪಾಯದಿಂದ ಪಾರಾದರೂ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿರುವ ಯುವ ಸ್ಪರ್ಧಿ ಸ್ಟಾವ್ರೊಸ್ ಫ್ಲೋರೋಸ್ (Stavros Floros), ಈಗ ಶೋ ನಿರ್ಮಾಪಕರ ವಿರುದ್ಧ ಸುಮಾರು 100 ಮಿಲಿಯನ್ ಡಾಲರ್ (ಅಂದಾಜು ₹830 ಕೋಟಿ ರೂ.) ಬೃಹತ್ ಮೊತ್ತದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.&lt;/p&gt;&lt;h2&gt;&lt;strong&gt;ಸಮುದ್ರದಲ್ಲಿ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಡೊಮಿನಿಕನ್ ಕರಾವಳಿಯ ತೆರೆದ ಸಮುದ್ರದಲ್ಲಿ ಈ ರಿಯಾಲಿಟಿ ಶೋನ ಚಿತ್ರೀಕರಣ ನಡೆಯುತ್ತಿತ್ತು. ನಿಯಮದ ಪ್ರಕಾರ ಬದುಕುಳಿಯಲು ಬೇಕಾದ ಆಹಾರಕ್ಕಾಗಿ ಸ್ಪರ್ಧಿಗಳು ಸಮುದ್ರದಲ್ಲಿ ಈಜಿ ಮೀನು ಹಿಡಿಯಬೇಕಿತ್ತು. ಸ್ಪರ್ಧಿ ಸ್ಟಾವ್ರೊಸ್ ಫ್ಲೋರೋಸ್ ನೀರಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ, ವೇಗವಾಗಿ ಬಂದ ಪ್ರವಾಸಿ ದೋಣಿಯೊಂದು (Tourist Boat) ಅವರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ದೋಣಿಯ ಚಾಲಕನ ನಿಯಂತ್ರಣದಲ್ಲಿದ್ದ ಪ್ರೊಪೆಲ್ಲರ್ (ಫ್ಯಾನ್ ಬ್ಲೇಡ್) ನೇರವಾಗಿ ಅವರ ಕಾಲುಗಳಿಗೆ ತಗುಲಿದೆ. ಪರಿಣಾಮ, ಅವರ ಬಲಗಾಲು ಜಜ್ಜುಜಜ್ಜಾಗಿದ್ದು, ಎಡಗಾಲನ್ನು ಮೊಣಕಾಲಿನಿಂದ ಕೆಳಗೆ ತಕ್ಷಣವೇ ಕತ್ತರಿಸಬೇಕಾಗಿ ಬಂತು.&lt;/p&gt;&lt;p&gt;ಜೀವ ಉಳಿಸಿದ ಸಮಯಪ್ರಜ್ಞೆ, 61 ದಿನಗಳ ನರಕಯಾತನೆ!&lt;/p&gt;&lt;p&gt;ಅದೃಷ್ಟವಶಾತ್, ಆ ದೋಣಿಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ತಕ್ಷಣವೇ ರಕ್ತಸ್ರಾವ ತಡೆಯಲು ತುರ್ತು ಬ್ಯಾಂಡೇಜ್ (ಟೂರ್ನಿಕೆಟ್) ಕಟ್ಟಿ ರಕ್ತ ನಿಲ್ಲುವಂತೆ ಮಾಡಿದ್ದಾರೆ. ಇದರಿಂದಾಗಿ ತೀವ್ರ ರಕ್ತಸ್ರಾವದಿಂದ ಸಂಭವಿಸಬಹುದಾಗಿದ್ದ ಸಾವು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಕೂಡಲೇ ಅವರನ್ನು ಏರ್&zwnj;ಲಿಫ್ಟ್ ಮೂಲಕ ಅಮೆರಿಕದ ಫ್ಲೋರಿಡಾ ರಾಜ್ಯದ ಮಿಯಾಮಿ ಆಸ್ಪತ್ರೆಗೆ ದಾಖಲಿಸಲಾಯಿತು. ಬರೋಬ್ಬರಿ 61 ದಿನಗಳ ಕಾಲ ಐಸಿಯು ಮತ್ತು ಆಸ್ಪತ್ರೆಯಲ್ಲಿದ್ದ ಅವರಿಗೆ ಸಾಲು ಸಾಲು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು.&lt;/p&gt;&lt;h2&gt;&lt;strong&gt;ಭದ್ರತೆ ಇಲ್ಲ, ರಕ್ಷಣಾ ದೋಣಿಗಳಿಲ್ಲ: ನಿರ್ಮಾಪಕರ ವಿರುದ್ಧ ಕಿಡಿ&lt;/strong&gt;&lt;/h2&gt;&lt;p&gt;ಫ್ಲೋರಿಡಾ ನ್ಯಾಯಾಲಯದಲ್ಲಿ ಹೂಡಲಾದ ದೂರಿನಲ್ಲಿ, ಕಾರ್ಯಕ್ರಮ ನಿರ್ಮಾಣ ಸಂಸ್ಥೆಯಾದ ಟರ್ಕಿಯ &lsquo;ಅಕುನ್&zwnj;ಮೆಡಿಯಾ&rsquo; (Acun Medya) ಮತ್ತು ಗ್ರೀಕ್&zwnj;ನ &lsquo;ಸ್ಕೈ ಟಿವಿ&rsquo; (Skai TV) ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಆ ಸಮುದ್ರ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಬೋಟ್&zwnj;ಗಳ ಸಂಚಾರವಿರುತ್ತದೆ ಎಂದು ತಿಳಿದಿದ್ದರೂ ಯಾವುದೇ ಎಚ್ಚರಿಕಾ ಬ್ಯಾರಿಕೇಡ್&zwnj;ಗಳು ಅಥವಾ ಸಿಗ್ನಲ್&zwnj;ಗಳನ್ನು ಹಾಕಿರಲಿಲ್ಲ. ಸ್ಪರ್ಧಿಗಳು ಈಜುವಾಗ ಅವರ ರಕ್ಷಣೆಗೆ ಯಾವುದೇ ವಾಚ್&zwnj;ಮ್ಯಾನ್ (ಸ್ಪಾಟರ್) ಅಥವಾ ಮುನ್ನೆಚ್ಚರಿಕಾ ದೋಣಿಗಳನ್ನು ನಿಯೋಜಿಸಿರಲಿಲ್ಲ. ಟಿಆರ್&zwnj;ಪಿ (TRP) ಮತ್ತು ಶೋನ ರೋಮಾಂಚನ ಹೆಚ್ಚಿಸಲು ಸ್ಪರ್ಧಿಗಳನ್ನು ಯಾವುದೇ ಭದ್ರತೆ ಇಲ್ಲದೆ ಸಾವಿನ ದವಡೆಗೆ ತಳ್ಳಲಾಗಿತ್ತು ಎಂದು ದೂರಿನಲ್ಲಿ ವಾದಿಸಲಾಗಿದೆ.&lt;/p&gt;&lt;h2&gt;&lt;strong&gt;ನಾನು ಜೀವಂತವಾಗಿದ್ದರೂ ನಿಧಾನವಾಗಿ ಸಾಯುತ್ತಿದ್ದೇನೆ...&lt;/strong&gt;&lt;/h2&gt;&lt;p&gt;ದುರಂತದ ಕುರಿತು ಕಣ್ಣೀರಿಟ್ಟ ಸಂತ್ರಸ್ತ ಯುವಕ ಫ್ಲೋರೋಸ್, 'ನಾನು 22 ವರ್ಷದ ಸದೃಢ, ಆರೋಗ್ಯವಂತ ಯುವಕನಾಗಿ ಈ ಶೋಗೆ ಪ್ರವೇಶಿಸಿದ್ದೆ. ಆದರೆ ಕೇವಲ ನಿರ್ಮಾಪಕರ ಬೇಜವಾಬ್ದಾರಿಯಿಂದ ಕಾಲು ಕಳೆದುಕೊಂಡು ಅಂಗವಿಕಲನಾಗಿ ಹೊರಬಂದಿದ್ದೇನೆ. ದುರಂತ ನಡೆದ ಬಳಿಕ ಆ ತಂಡ ನನ್ನನ್ನು ಕಡೆಗಣಿಸಿತು. ದಿನ ಕಳೆದಂತೆ ನಾನು ಬದುಕಿದ್ದರೂ ನಿಧಾನವಾಗಿ ಸಾಯುತ್ತಿರುವಂತೆ ಭಾಸವಾಗುತ್ತಿದೆ. ನನಗೆ ಈ ಅನ್ಯಾಯಕ್ಕೆ ನ್ಯಾಯ ಬೇಕು' ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ರಿಯಾಲಿಟಿ ಶೋಗಳ ಹೆಸರಿನಲ್ಲಿ ಸ್ಪರ್ಧಿಗಳ ಜೀವದೊಂದಿಗೆ ಚೆಲ್ಲಾಟವಾಡುವ ನಿರ್ಮಾಣ ಸಂಸ್ಥೆಗಳ ಅಮಾನವೀಯ ಧೋರಣೆಗೆ ಈ ಪ್ರಕರಣ ಹಿಡಿದ ಕೈಗನ್ನಡಿಯಾಗಿದ್ದು, ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ.&lt;/p&gt;View this post on Instagram&lt;p&gt;A post shared by @stavrosflo&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/survivor-greece-contestant-stavros-floros-loses-leg-boat-accident-100-million-lawsuit-sat/articleshow-hakdcpq"/>
        </item>
        <item>
            <title><![CDATA[ಗವರ್ನರ್ ಚುನಾವಣೆಗೆ ನಿಂತ 15 ವರ್ಷದ ಹುಡುಗ‌ ಡೀನ್ ರಾಯ್.. ನಿಯಮ ಏನು ಹೇಳುತ್ತದೆ?]]></title>
            <link>https://kannada.asianetnews.com/politics/can-a-15-year-old-run-for-governor-how-this-us-teenager-dean-roy-made-it-to-the-ballot-gkn/articleshow-k19boxd</link>
            <guid isPermaLink="true">https://kannada.asianetnews.com/politics/can-a-15-year-old-run-for-governor-how-this-us-teenager-dean-roy-made-it-to-the-ballot-gkn/articleshow-k19boxd</guid>
            <pubDate>Fri, 04 Sep 2026 23:00:59 +0530</pubDate>
            <description><![CDATA[ಅಮೆರಿಕದ ವರ್ಮಾಂಟ್ ರಾಜ್ಯದಲ್ಲಿ, 15 ವರ್ಷದ ಡೀನ್ ರಾಯ್ ಎಂಬ ಹುಡುಗ ಗವರ್ನರ್ ಹುದ್ದೆಗೆ ಸ್ಪರ್ಧಿಸುತ್ತಿದ್ದಾನೆ. ರಾಜ್ಯದ ವಿಶಿಷ್ಟ ಸಂವಿಧಾನದ ನಿಯಮದಿಂದಾಗಿ ಇದು ಸಾಧ್ಯವಾಗಿದ್ದು, ತನಗೆ ಮತ ಹಾಕಲು ಅಧಿಕಾರವಿಲ್ಲದಿದ್ದರೂ ಯುವಜನರ ಧ್ವನಿಯನ್ನು ಪ್ರತಿನಿಧಿಸುವುದು ಅವರ ಮುಖ್ಯ ಗುರಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1pqewkcnps5ckw02q7e20je,imgname-dean-roy-1788542939756.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕದ ವರ್ಮಾಂಟ್ (Vermont) ರಾಜ್ಯದಲ್ಲಿ ರೋಚಕ ರಾಜಕೀಯ ವಿದ್ಯಮಾನ ನಡೆದಿದೆ. ಕೇವಲ 15 ವರ್ಷದ ಹದಿಹರೆಯದ ಹುಡುಗನಾದ ಡೀನ್ ರಾಯ್ (Dean Roy) ಇಲ್ಲಿನ ಗವರ್ನರ್ ಹುದ್ದೆಗೆ ಸ್ಪರ್ಧಿಸುತ್ತಿದ್ದಾನೆ. ಕಾನೂನಿನ ಪ್ರಕಾರ ಈತನಿಗೆ ಇನ್ನೂ ಕಾರು ಚಾಲನೆ ಮಾಡಲು ಪರವಾನಗಿ ಇಲ್ಲ, ಹಾಗೆಯೇ ತನಗೇ ಮತ ಹಾಕಿಕೊಳ್ಳುವ ಅಧಿಕಾರವೂ ಇಲ್ಲ (ಅಮೆರಿಕದಲ್ಲಿ ಮತದಾನದ ಕನಿಷ್ಠ ವಯಸ್ಸು 18 ವರ್ಷ). ಆದರೂ ವರ್ಮಾಂಟ್ ರಾಜ್ಯದ ವಿಶಿಷ್ಟ ಸಂವಿಧಾನದ ನಿಯಮಗಳಿಂದಾಗಿ ಈತ ಚುನಾವಣಾ ಕಣಕ್ಕಿಳಿಯಲು ಸಾಧ್ಯವಾಗಿದೆ. ದೇಶದ ಆಡಳಿತ ಮತ್ತು ರಾಜಕೀಯದಲ್ಲಿ ಯುವಜನರ ಧ್ವನಿಯನ್ನು ಎತ್ತಿಹಿಡಿಯುವುದು ಡೀನ್ ರಾಯ್ ಅವರ ಮುಖ್ಯ ಉದ್ದೇಶವಾಗಿದೆ.&lt;/p&gt;&lt;h2&gt;&lt;strong&gt;ವಿಶಿಷ್ಟ ಚುನಾವಣಾ ನಿಯಮ&lt;/strong&gt;&lt;/h2&gt;&lt;p&gt;ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಗವರ್ನರ್ ಅಥವಾ ದೇಶದ ಪ್ರಮುಖ ಉನ್ನತ ಹುದ್ದೆಗಳಿಗೆ ಸ್ಪರ್ಧಿಸಲು ಕನಿಷ್ಠ 25 ರಿಂದ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ ವರ್ಮಾಂಟ್ ರಾಜ್ಯದ ಸಂವಿಧಾನವು ಗವರ್ನರ್ ಹುದ್ದೆಯ ಅಭ್ಯರ್ಥಿಗೆ ಯಾವುದೇ ವಯೋಮಿತಿಯನ್ನು ನಿಗದಿಪಡಿಸಿಲ್ಲ. ನಿಯಮಗಳ ಪ್ರಕಾರ, ಅಭ್ಯರ್ಥಿಯು ಕಳೆದ ನಾಲ್ಕು ವರ್ಷಗಳಿಂದ ಆ ರಾಜ್ಯದ ನಿವಾಸಿಯಾಗಿದ್ದರೆ ಸಾಕು. 15 ವರ್ಷದ ಡೀನ್ ರಾಯ್ ಈ ನಿವಾಸದ ನಿಯಮವನ್ನು ಸಂಪೂರ್ಣವಾಗಿ ಪೂರೈಸುತ್ತಿರುವುದರಿಂದ ಚುನಾವಣಾ ಬ್ಯಾಲೆಟ್ ಪೇಪರ್&zwnj;ನಲ್ಲಿ ಅಧಿಕೃತ ಅಭ್ಯರ್ಥಿಯಾಗಲು ಅರ್ಹತೆ ಪಡೆದಿದ್ದಾರೆ.&lt;/p&gt;&lt;p&gt;ಅಮೆರಿಕದಲ್ಲಿ ಅಧಿಕೃತವಾಗಿ ಚುನಾವಣೆಗೆ ಸ್ಪರ್ಧಿಸಲು ಕೆಲವು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಡೀನ್ ರಾಯ್ ತಮ್ಮ ತಾಯಿಯ ನೆರವಿನೊಂದಿಗೆ ರಾಜ್ಯದ 500 ಮತದಾರರ ಬೆಂಬಲದ ಸಹಿಯನ್ನು ಯಶಸ್ವಿಯಾಗಿ ಸಂಗ್ರಹಿಸಿದ್ದಾರೆ. ಬ್ಯಾಲೆಟ್ ಪೇಪರ್&zwnj;ನಲ್ಲಿ ಹೆಸರು ಪಡೆಯಲು ಇದು ಅತ್ಯಗತ್ಯವಾಗಿತ್ತು. ಇದರ ನಂತರ ಅವರು 'ಫ್ರೀಡಂ ಆಂಡ್ ಯೂನಿಟಿ ಪಾರ್ಟಿ' (Freedom and Unity Party) ಎಂಬ ಹೆಸರಿನ ಸ್ವಂತ ರಾಜಕೀಯ ಪಕ್ಷವನ್ನು ನೋಂದಾಯಿಸಿಕೊಂಡಿದ್ದಾರೆ. ವರ್ಮಾಂಟ್ ಇತಿಹಾಸದಲ್ಲೇ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗನೊಬ್ಬ ಗವರ್ನರ್ ಹುದ್ದೆಗೆ ನೇರವಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕೃತವಾಗಿ ಕಣಕ್ಕಿಳಿದಿರುವುದು ಇದೇ ಮೊದಲು.&lt;/p&gt;&lt;h2&gt;&lt;strong&gt;ರಾಜಕೀಯ ಪ್ರವೇಶದ ಹಿಂದಿನ ಸ್ಫೂರ್ತಿ&lt;/strong&gt;&lt;/h2&gt;&lt;p&gt;ಡೀನ್ ರಾಯ್ ಅವರಿಗೆ ರಾಜಕೀಯ ಪ್ರವೇಶಿಸುವ ಆಲೋಚನೆ ಬಂದಿದ್ದು ಅವರು 8ನೇ ತರಗತಿಯಲ್ಲಿ ಓದುತ್ತಿದ್ದಾಗ. ಆ ಸಮಯದಲ್ಲಿ ಅವರು ವರ್ಮಾಂಟ್ ಸ್ಟೇಟ್&zwnj;ಹೌಸ್&zwnj;ನಲ್ಲಿ ಸುಮಾರು ಏಳು ವಾರಗಳ ಕಾಲ ಇಂಟರ್ನ್ (ಲೆಜಿಸ್ಲೇಟಿವ್ ಪೇಜ್) ಆಗಿ ಕೆಲಸ ಮಾಡಿದ್ದರು. ಅಲ್ಲಿನ ಶಾಸಕರೊಂದಿಗೆ ಕೆಲಸ ಮಾಡುವಾಗ ಅವರ ಶಿಕ್ಷಕರೊಬ್ಬರು ತಮಾಷೆಯಾಗಿ &quot;ನೀನು ಚುನಾವಣೆಗೆ ಸ್ಪರ್ಧಿಸಿದರೆ ನಾನು ನಿನ್ನ ಕ್ಯಾಂಪೇನ್ ಮ್ಯಾನೇಜರ್ ಆಗುತ್ತೇನೆ&quot; ಎಂದು ಹೇಳಿದ್ದರು. ಡೀನ್ ಇದನ್ನು ಗಂಭೀರವಾಗಿ ತೆಗೆದುಕೊಂಡು ಕಾನೂನು ನಿಯಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಚುನಾವಣಾ ರಣರಂಗಕ್ಕೆ ಧುಮುಕಿದ್ದಾರೆ.&lt;/p&gt;&lt;p&gt;ಈ ಇಡೀ ಪ್ರಕ್ರಿಯೆಯಲ್ಲಿ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ ಡೀನ್ ರಾಯ್ ಅವರೇ ಸ್ವತಃ ತಮಗೆ ಮತ ಹಾಕಿಕೊಳ್ಳಲು ಸಾಧ್ಯವಿಲ್ಲ. ಅಮೆರಿಕದ ಸಂವಿಧಾನದ ಪ್ರಕಾರ ಮತದಾನದ ವಯಸ್ಸು 18 ವರ್ಷಗಳಾಗಿವೆ. ಡೀನ್ ಇನ್ನೂ 15 ವರ್ಷದವರಾಗಿರುವುದರಿಂದ ಅವರಿಗೆ ಮತದಾನದ ಹಕ್ಕಿಲ್ಲ. ಅಂದರೆ ಅವರು ಗವರ್ನರ್ ಅಭ್ಯರ್ಥಿಯಾಗಿ ನಿಂತು ಜನರ ಬಳಿ ಮತ ಕೇಳಬಹುದು, ಆದರೆ ಮತದಾನದ ದಿನದಂದು ಸ್ವಂತ ಹೆಸರಿಗೆ ಮತ ಚಲಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ.&lt;/p&gt;&lt;p&gt;ಈ ಚುನಾವಣೆಯಲ್ಲಿ ಗೆಲ್ಲುವುದು ಸುಲಭದ ಮಾತಲ್ಲ ಎಂಬುದು ಡೀನ್ ರಾಯ್ ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಪ್ರಸ್ತುತ ರಾಜಕೀಯ ಧ್ರುವೀಕರಣದ ನಡುವೆ ಹೊಸ ತಲೆಮಾರಿನ ಧ್ವನಿಯನ್ನು ಅಲಕ್ಷಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ವ್ಯವಸ್ಥೆಗೆ ತಲುಪಿಸುವುದು ಅವರ ಮುಖ್ಯ ಉದ್ದೇಶವಾಗಿದೆ. ವರ್ಮಾಂಟ್ ರಾಜ್ಯದಲ್ಲಿ ಈ ರೀತಿಯಾಗಿ ಕಣಕ್ಕಿಳಿದ ಮೊದಲ ಯುವಕ ಡೀನ್ ರಾಯ್ ಒಬ್ಬರೇ ಅಲ್ಲ. ಇದಕ್ಕೂ ಮುನ್ನ 2018 ರಲ್ಲಿ 13 ವರ್ಷದ ಇಥಾನ್ ಸೋನೆಬೋರ್ನ್ (Ethan Sonneborn) ಎಂಬ ಹುಡುಗ ಡೆಮಾಕ್ರಟಿಕ್ ಪ್ರೈಮರಿಯಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದರು. ಹೊಸ ಪೀಳಿಗೆಯು ಈಗ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಬಯಸುತ್ತಿದೆ ಎಂಬುದಕ್ಕೆ ಇಂತಹ ಯುವಕರ ಧ್ವನಿ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/can-a-15-year-old-run-for-governor-how-this-us-teenager-dean-roy-made-it-to-the-ballot-gkn/articleshow-k19boxd"/>
        </item>
        <item>
            <title><![CDATA["ನಾವೆಲ್ಲರೂ ಒಂದೇ ಕುಟುಂಬ..." ನೂರು ವರ್ಷಗಳಿಂದ ಉದ್ಯೋಗಿಗಳನ್ನು ವಜಾಗೊಳಿಸದ ವಿಶಿಷ್ಟ ಕಂಪನಿ ಇದು!]]></title>
            <link>https://kannada.asianetnews.com/viral/we-have-never-laid-off-anyone-torani-ceos-unusual-business-philosophy/articleshow-kcd27vq</link>
            <guid isPermaLink="true">https://kannada.asianetnews.com/viral/we-have-never-laid-off-anyone-torani-ceos-unusual-business-philosophy/articleshow-kcd27vq</guid>
            <pubDate>Fri, 04 Sep 2026 07:40:37 +0530</pubDate>
            <description><![CDATA[&lt;p&gt;ಆರ್ಥಿಕ ಬಿಕ್ಕಟ್ಟು, ಕೋವಿಡ್ ಮತ್ತು AI ಅಡಚಣೆಗಳ ನಡುವೆಯೂ ಟೊರಾನಿ ಕಂಪನಿ 97 ವರ್ಷಗಳಲ್ಲಿ ಒಬ್ಬ ಉದ್ಯೋಗಿಯನ್ನೂ ವಜಾಗೊಳಿಸಿಲ್ಲ ಎಂದು ಸಿಇಒ ಮೆಲಾನಿ ಡಲ್ಬೆಕೊ ಹೇಳಿದ್ದಾರೆ. ಉದ್ಯೋಗಿಗಳನ್ನು ಉಳಿಸಿಕೊಳ್ಳುವಿಕೆ, ಅಗತ್ಯವಿದ್ದಾಗ ಮಾತ್ರ ನೇಮಕಾತಿ ಮತ್ತು ದೀರ್ಘಕಾಲೀನ ಬೆಳವಣಿಗೆಯೇ ಸಂಸ್ಥೆಯ ಯಶಸ್ಸಿನ ಸೂತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1n24whd09yhmjm2g871yhs2,imgname-torani-company-ceo-1788487037485.jpg" type="image/jpeg" height="390" width="690"/>
            <content:encoded><![CDATA[&lt;h2&gt;97 ವರ್ಷಗಳಲ್ಲಿ ಒಬ್ಬರನ್ನೂ ವಜಾಗೊಳಿಸಿಲ್ಲ! ಈ ಸಿಇಒ ಅವರ ಯಶಸ್ಸಿನ ಸೂತ್ರವೇನು?&lt;/h2&gt;&lt;p&gt;ಆರ್ಥಿಕ ಅನಿಶ್ಚಿತತೆ, ಉದ್ಯಮದ ಒತ್ತಡ ಮತ್ತು ಕೃತಕ ಬುದ್ಧಿಮತ್ತೆಯ (AI) ಪರಿಣಾಮದಿಂದಾಗಿ ಅನೇಕ ಕಂಪನಿಗಳು ಉದ್ಯೋಗ ಕಡಿತಕ್ಕೆ ಮೊರೆ ಹೋಗುತ್ತಿರುವ ಸಂದರ್ಭದಲ್ಲಿ, ಅಮೆರಿಕದ ಟೊರಾನಿ ಕಂಪನಿಯ ನೀತಿ ಗಮನ ಸೆಳೆಯುತ್ತಿದೆ. ಸುಮಾರು ಶತಮಾನದ ಇತಿಹಾಸ ಹೊಂದಿರುವ ಈ ಸಂಸ್ಥೆ, ತನ್ನ ಯಾವುದೇ ಉದ್ಯೋಗಿಯನ್ನು ವಜಾಗೊಳಿಸಿಲ್ಲ ಎಂದು ಸಿಇಒ ಮೆಲಾನಿ ಡಲ್ಬೆಕೊ ಹೇಳಿದ್ದಾರೆ.&lt;/p&gt;&lt;h3&gt;ಕೋವಿಡ್&zwnj;ನಲ್ಲೂ ಉದ್ಯೋಗಿಗಳಿಗೆ ಭದ್ರತೆ&lt;/h3&gt;&lt;p&gt;1925ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾದ ಟೊರಾನಿ, ಸುವಾಸನೆಯ ಸಿರಪ್&zwnj;ಗಳನ್ನು ತಯಾರಿಸುವ ಕಂಪನಿಯಾಗಿದೆ. ಮಹಾ ಆರ್ಥಿಕ ಹಿಂಜರಿತ, ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ಹಲವು ಬಿಕ್ಕಟ್ಟುಗಳನ್ನು ಎದುರಿಸಿದರೂ, ಉದ್ಯೋಗ ಕಡಿತ ಮಾಡದಿರುವುದು ಸಂಸ್ಥೆಯ ಪ್ರಮುಖ ಹೆಗ್ಗಳಿಕೆಯಾಗಿದೆ.&lt;/p&gt;&lt;p&gt;2022ರ ಕೋವಿಡ್ ಪ್ರತಿಕ್ರಿಯೆಯ ಕುರಿತ ಬರಹದಲ್ಲಿ ಡಲ್ಬೆಕೊ, &ldquo;ನಮ್ಮ 97 ವರ್ಷಗಳ ಇತಿಹಾಸದಲ್ಲಿ, ನಾವು ಎಂದಿಗೂ ವಜಾಗೊಳಿಸಿಲ್ಲ&rdquo; ಎಂದು ಉಲ್ಲೇಖಿಸಿದ್ದರು. ಸಂಕಷ್ಟದ ಸಮಯದಲ್ಲಿ ಉದ್ಯೋಗಿಗಳಿಗೆ ನೀಡಿದ ಸಂದೇಶವೂ ಸ್ಪಷ್ಟವಾಗಿತ್ತು: &ldquo;ನಾವೆಲ್ಲರೂ ಅದನ್ನು ನಿಭಾಯಿಸಲಿದ್ದೇವೆ.&rdquo;&lt;/p&gt;&lt;p&gt;&lt;strong&gt;ಉದ್ಯೋಗಿ ಉಳಿಸಿಕೊಳ್ಳುವಿಕೆಯೇ ಬೆಳವಣಿಗೆಯ ಆಧಾರ&lt;/strong&gt;&lt;/p&gt;&lt;p&gt;1991ರಲ್ಲಿ ಟೊರಾನಿಗೆ ಸೇರಿದ ಡಲ್ಬೆಕೊ, ಸಂಸ್ಥೆಯ ಮೊದಲ ಕುಟುಂಬೇತರ ಸಿಇಒ ಆಗಿದ್ದಾರೆ. ಅವರ ನಾಯಕತ್ವದಲ್ಲಿ ಕಂಪನಿಯು ಸರಾಸರಿ ವಾರ್ಷಿಕ ಶೇ.20ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿಯಾಗಿದೆ. 2025ರಲ್ಲಿ ಟೊರಾನಿಯ ಆದಾಯ 650 ಮಿಲಿಯನ್ ಡಾಲರ್ ತಲುಪಿದೆ ಎನ್ನಲಾಗಿದೆ.&lt;/p&gt;&lt;p&gt;ಉದ್ಯೋಗಿಗಳನ್ನು ಉಳಿಸಿಕೊಳ್ಳುವುದನ್ನು ವ್ಯವಹಾರದ ಹೃದಯಭಾಗದಲ್ಲಿ ಇರಿಸಿರುವ ಡಲ್ಬೆಕೊ, ಅಗತ್ಯವಿದ್ದಾಗ ಮಾತ್ರ ನೇಮಕ ಮಾಡಿಕೊಳ್ಳುವ ನೀತಿಯನ್ನು ಅನುಸರಿಸುತ್ತಾರೆ. &ldquo;ಬೆಳವಣಿಗೆ ಸಮರ್ಥಿಸಿದಾಗ ಮಾತ್ರ ನಾವು ನೇಮಕ ಮಾಡಿಕೊಳ್ಳುತ್ತೇವೆ&rdquo; ಎಂಬುದು ಅವರ ಮಾರ್ಗದರ್ಶಿ ತತ್ವಗಳಲ್ಲಿ ಒಂದಾಗಿದೆ.&lt;/p&gt;&lt;p&gt;&lt;strong&gt;&lsquo;ವಜಾಗೊಳಿಸುವಿಕೆ ಅನಿವಾರ್ಯವಲ್ಲ&rsquo;&lt;/strong&gt;&lt;/p&gt;&lt;p&gt;ಡಲ್ಬೆಕೊ ಅವರ ಪ್ರಕಾರ, ವಜಾಗೊಳಿಸುವಿಕೆಗಳು ಹಲವು ಬಾರಿ ತಡೆಯಬಹುದಾದವು. ಬಿಕ್ಕಟ್ಟು ಎದುರಾಗುವ ಮುನ್ನವೇ ಮಾಡಿದ ಅತಿಯಾದ ನೇಮಕಾತಿ ಅಥವಾ ತಪ್ಪಾದ ವ್ಯವಹಾರ ನಿರ್ಧಾರಗಳು ನಂತರ ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎಂದು ಅವರು ನಂಬುತ್ತಾರೆ.&lt;/p&gt;&lt;p&gt;ಟೊರಾನಿ ಉದ್ಯೋಗಿಗಳಲ್ಲಿ ಶೇ.90ಕ್ಕೂ ಹೆಚ್ಚಿನವರನ್ನು ಉಳಿಸಿಕೊಂಡಿದೆ ಎಂದು ವರದಿಯಾಗಿದೆ. ಸರಾಸರಿ ಆರು ವರ್ಷಗಳಿಗಿಂತ ಹೆಚ್ಚು ಸೇವಾವಧಿಯೂ ಸಂಸ್ಥೆಯ ಉದ್ಯೋಗಿ ಧಾರಣೆಗೆ ಸಾಕ್ಷಿಯಾಗಿದೆ.&lt;/p&gt;&lt;p&gt;&lt;strong&gt;AI ಯುಗಕ್ಕೆ ವಿಭಿನ್ನ ಸಂದೇಶ&lt;/strong&gt;&lt;/p&gt;&lt;p&gt;AI ಉದ್ಯೋಗಗಳ ಮೇಲೆ ಬೀರುವ ಪರಿಣಾಮದ ಕುರಿತು ಚರ್ಚೆ ಹೆಚ್ಚುತ್ತಿರುವಾಗ, ಡಲ್ಬೆಕೊ ಅವರ ನಿಲುವು ಸ್ಪಷ್ಟವಾಗಿದೆ. ಉದ್ಯೋಗಿಗಳನ್ನು ರಕ್ಷಿಸುವುದು ಮತ್ತು ಯಶಸ್ವಿ ವ್ಯವಹಾರ ನಿರ್ಮಿಸುವುದು ಪರಸ್ಪರ ವಿರುದ್ಧ ಗುರಿಗಳಾಗಬೇಕಿಲ್ಲ. ಟೊರಾನಿಯ ಕಥೆ, ದೀರ್ಘಕಾಲೀನ ಬೆಳವಣಿಗೆಗೆ ಉದ್ಯೋಗಿ ವಿಶ್ವಾಸವೂ ಪ್ರಮುಖ ಆಸ್ತಿಯಾಗಬಹುದು ಎಂಬುದನ್ನು ತೋರಿಸುತ್ತದೆ.&lt;/p&gt;]]></content:encoded>
            <category>world-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/we-have-never-laid-off-anyone-torani-ceos-unusual-business-philosophy/articleshow-kcd27vq"/>
        </item>
        <item>
            <title><![CDATA[ಉಕ್ರೇನ್‌ಗೆ ಹೀನಾಯ ಸ್ಥಿತಿ: ರಷ್ಯಾ ವಿರುದ್ಧದ ಯುದ್ಧಕ್ಕೆ ಹಣ ಹೊಂದಿಸಲು ಪೋರ್ನೋಗ್ರಫಿ ಉದ್ಯಮ ಸಕ್ರಮಕ್ಕೆ ಚಿಂತನೆ!]]></title>
            <link>https://kannada.asianetnews.com/world-news/ukraine-pornography-industry-legalisation-tax-30000-drones-war-funding-sat/articleshow-mh5let0</link>
            <guid isPermaLink="true">https://kannada.asianetnews.com/world-news/ukraine-pornography-industry-legalisation-tax-30000-drones-war-funding-sat/articleshow-mh5let0</guid>
            <pubDate>Tue, 08 Sep 2026 08:11:46 +0530</pubDate>
            <description><![CDATA[&lt;p&gt;ರಷ್ಯಾ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸಲು, ಉಕ್ರೇನ್ ಸರ್ಕಾರವು ಪೋರ್ನೋಗ್ರಫಿ ಉದ್ಯಮವನ್ನು ಕಾನೂನುಬದ್ಧಗೊಳಿಸಿ ತೆರಿಗೆ ವಿಧಿಸುವ ಬಗ್ಗೆ ಪರಿಶೀಲಿಸುತ್ತಿದೆ. ಈ ಕ್ರಮದಿಂದ ವಾರ್ಷಿಕ 236 ಕೋಟಿ ರೂ. ತೆರಿಗೆ ಸಂಗ್ರಹಿಸಿ, ಸುಮಾರು 30,000 ಡ್ರೋನ್&zwnj;ಗಳನ್ನು ಖರೀದಿಸಬಹುದು ಎಂದು ಸಂಸದರೊಬ್ಬರು ಪ್ರಸ್ತಾಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdqm5350sv4ycx348fvej6q,imgname-ukraine--1--1783946155104.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೀವ್: ರ&lt;/strong&gt;ಷ್ಯಾ ಜೊತೆಗಿನ ಯುದ್ಧಕ್ಕೆ ಬೇಕಿರುವ ಹಣ ಹೊಂದಿಸಲು ಉಕ್ರೇನ್&zwnj; ಸರ್ಕಾರ ಇದೀಗ ಪೋರ್ನೋಗ್ರಫಿ ಉದ್ಯಮವನ್ನು ಸಕ್ರಮಗೊಳಿಸಿ ಅದರ ಮೇಲೆ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸುತ್ತಿದೆ. ಈ ವಿಚಾರವು ಉಕ್ರೇನ್&zwnj;ಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಸಾಂಪ್ರದಾಯಿಕ ದೇಶಗಳು ಮರುಕ ವ್ಯಕ್ತಪಡಿಸಿವೆ.&lt;/p&gt;&lt;p&gt;ಪೋರ್ನೋಗ್ರಫಿ (ಅ*ಶ್ಲೀಲ ಚಿತ್ರಗಳು) ಮೂಲಕ ದೇಶಕ್ಕೆ ವಾರ್ಷಿಕ 236 ಕೋಟಿ ರು. ತೆರಿಗೆ ಸಂಗ್ರಹ ಆಗಲಿದೆ. ಇದರಿಂದ ರಷ್ಯಾ ಜತೆಗಿನ ಯುದ್ಧಕ್ಕೆ 30 ಸಾವಿರ ಡ್ರೋನ್&zwnj;ಗಳನ್ನು ಖರೀದಿಸಬಹುದು ಎಂಬ ಚಿಂತನೆ ಇದೆ. ಪೋರ್ನೋಗ್ರಫಿಗೆ ಸದ್ಯ ಉಕ್ರೇನ್&zwnj;ನಲ್ಲಿ ನಿಷೇಧ ಹೇರಲಾಗಿದೆ. ಬ್ಲೂಫಿಲಂ ನಿರ್ಮಾಣ, ಹಂಚಿಕೆ 7 ವರ್ಷಗಳ ವರೆಗೆ ಶಿಕ್ಷಾರ್ಹ ಅಪರಾಧ. ಆದರೆ ನಿರ್ಬಂಧದ ಹೊರತಾಗಿಯೂ ದೇಶದ ಪೋರ್ನೋಗ್ರಫಿ ಉದ್ಯಮ ಮಾತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಹೀಗಾಗಿ ಉಕ್ರೇನ್&zwnj; ಸರ್ಕಾರವು ಅದನ್ನು ಸಕ್ರಮಗೊಳಿಸಿ ಅಶ್ಲೀಲ ಕಂಟೆಂಟ್&zwnj; ಸೃಷ್ಟಿಸುವವರಿಂದ ತೆರಿಗೆ ಸಂಗ್ರಹಿಸಲು ಮುಂದಾಗಿದೆ.&lt;/p&gt;&lt;h2&gt;&lt;strong&gt;ಯಾರೊಬ್ಬರೂ ಘೋಷಣೆ ಮಾಡಿಕೊಳ್ಳುತ್ತಿಲ್ಲ&lt;/strong&gt;&lt;/h2&gt;&lt;p&gt;ಆದರೆ, ಸದ್ಯ ಯಾರೂ ತಾವು ಅಶ್ಲೀಲ ಕಂಟೆಂಟ್&zwnj;ಗಳಿಂದ ಆದಾಯಗಳಿಸುತ್ತಿದ್ದೇವೆ ಎಂದು ಘೋಷಿಸಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಕಾನೂನು ಪ್ರಕಾರ ಅಶ್ಲೀಲ ಕಂಟೆಂಟ್&zwnj; ಸೃಷ್ಟಿ ಶಿಕ್ಷಾರ್ಹ ಅಪರಾಧವಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಉಕ್ರೇನ್&zwnj; ಸಂಸದ ಯಾರೋಸ್ಲಾವ್ ಝೆಲೆಜ್ನ್ಯಾಕ್ ಅವರು ಪೋರ್ನೋಗ್ರಫಿಯನ್ನು ಕಾನೂನುಬದ್ಧಗೊಳಿಸಬೇಕು ಮತ್ತು ಉದ್ದಿಮೆಯನ್ನು ಸಾಮಾನ್ಯ ಆರ್ಥಿಕತೆ ಜತೆ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಇದರಿಂದ ವಾರ್ಷಿಕ 236 ಕೋಟಿ ರು. ತೆರಿಗೆ ಸಂಗ್ರಹ ಆಗಲಿದೆ. ಇಷ್ಟು ಹಣದಿಂದ 30 ಸಾವಿರ ಡ್ರೋನ್&zwnj;ಗಳನ್ನು ಖರೀದಿ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/ukraine-pornography-industry-legalisation-tax-30000-drones-war-funding-sat/articleshow-mh5let0"/>
        </item>
        <item>
            <title><![CDATA[9 ದಿನ ಬಳಿಕ ರಕ್ಷಿಸಿದ ನೇಪಾಳ ಕಾರ್ಮಿಕರ ಬದುಕಿಸಿದ ಶ್ರೀಕೃಷ್ಣ ಮಹಾಮಂತ್ರ, ಸಂಜಯ್ ಶಾ ಹೇಳಿದ್ದೇನು]]></title>
            <link>https://kannada.asianetnews.com/world-news/nepal-worker-survives-after-9-days-sanjay-shah-reveals-role-of-krishna-mahamantra/articleshow-n5mw17x</link>
            <guid isPermaLink="true">https://kannada.asianetnews.com/world-news/nepal-worker-survives-after-9-days-sanjay-shah-reveals-role-of-krishna-mahamantra/articleshow-n5mw17x</guid>
            <pubDate>Fri, 04 Sep 2026 23:01:29 +0530</pubDate>
            <description><![CDATA[&lt;p&gt;ನೇಪಾಳ ಪ್ರವಾಹ ರಕ್ಷಣಾ ಕಾರ್ಯದಲ್ಲಿ ಬರೋಬ್ಬರಿ 9 ದಿನ ಬಳಿಕ ಇಬ್ಬರು ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲಾಗಿದೆ. ಜಗತ್ತಿಗೆ ಅಚ್ಚರಿಯಾಗಿತ್ತು. ಆದರೆ ಇವರು ಇಷ್ಟು ದಿನ ಬದುಕುಳಿದ ಹಿಂದಿನ ಘಟನೆಯನ್ನು ಕಾರ್ಮಿಕರೇ ಬಹಿರಂಗಪಡಿಸಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1nn9meqdwwxes4bgj5bt069,imgname-nepala-sanjay-sah-1788507115990.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾಠ್ಮಂಡು (ಸೆ.04) &lt;/strong&gt;ನೇಪಾಳದ ಪ್ರವಾಹ ಭೀಕರತೆಗೆ ಜಗತ್ತೇ ಬೆಚ್ಚಿ ಬಿದ್ದಿದೆ. ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಇದರ ನಡುವೆ ಬರೋಬ್ಬರಿ 9 ದಿನದ ಬಳಿಕ ಇಬ್ಬರು ಸುರಂಗ ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಇದು ಪವಾಡವೇ ಸರಿ. ಇದುವರೆಗೂ 9 ದಿನ ಬಳಿಕ ರಕ್ಷಿಸಿದ ಉದಾಹರಣೆ ಇಲ್ಲ. ಆದರೆ ಈ ಇಬ್ಬರು ಕಾರ್ಮಿಕರನ್ನು 9 ದಿನ ಜೀವಂತವಾಗಿರಿಸಿದ್ದು ಹಾಗೂ ರಕ್ಷಣಾ ತಂಡ ಇಬ್ಬರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲು ಸಾಧ್ಯವಾಗಿದ್ದು ಶ್ರೀಕೃಷ್ಣ ಮಹಾಮಂತ್ರ ಎಂದು ಕಾರ್ಮಿಕ ಸಂಜಯ್ ಶಾ ಹೇಳಿದ್ದಾರೆ.&lt;/p&gt;&lt;h2&gt;ದೇವರ ಜಪಿಸುತ್ತಾ 9 ದಿನ&lt;/h2&gt;&lt;p&gt;ನೇಪಾಳದ ಪ್ರವಾಹದಲ್ಲಿ ಸಿಲುಕಿದ ಸುರಂಗ ಕಾರ್ಮಿಕರು ತಮ್ಮ ರಕ್ಷಣೆಗೆ ಶ್ರೀಕೃಷ್ಣ ಮಹಾಮಂತ್ರ ಜಪಿಸಿದ್ದಾರೆ. ನೆಪಾಳದ ಶಕ್ತಿ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಸಂಜಯ್ ಶಾ ಈ ಮಾತು ಹೇಳಿದ್ದಾರೆ. ನಮ್ಮ ಎಲ್ಲಾ ಬಾಗಿಲು ಮುಚ್ಚಿತ್ತು. ನೀರು, ಮಣ್ಣು ಸುರಂದೊಳಗೆ ಸೇರಿತ್ತು. ನಾವು ಹಲವರಿದ್ದೆವು. ದೇವರ ನಾಮ ಜಪಿಸುತ್ತಾ, ಮಹಾಮಂತ್ರಿ ಜಪಿಸುತ್ತಾ 9 ದಿನ ಕಳೆದೆವು. ಈ ಪ್ರಾರ್ಥನೆ ನಮ್ಮನ್ನು ಭರವಸೆ ಕಳೆದುಕೊಳ್ಳದಂತೆ ಮಾಡಿತು ಎಂದು ಸಂಜಯ್ ಶಾ ಹೇಳಿದ್ದಾರೆ.&lt;/p&gt;&lt;p&gt;ಅಪಾಯದ ಸೂಚನೆ ಸಿಕ್ಕ ತಕ್ಷಣ ಅಲರ್ಟ್ ನೀಡಲಾಯಿತು.ಆದರೆ ಪ್ರವಾಹದ ವೇಗದ ಮುಂದೆ ನಮಗೆ ಎಲ್ಲರನ್ನು ರಕ್ಷಿಸಿ ನಾವು ಹೊರಬರಲು ಸಾಧ್ಯವಾಗಲಿಲ್ಲ. ಇತರರ ಬಿಟ್ಟು ನಾನು ಸುರಕ್ಷಿತವಾಗಲು ಹೇಗೆ ಸಾಧ್ಯ. ಇತರರ ಉಳಿಸುವ ಪ್ರಯತ್ನದಲ್ಲಿ ನಮಗೆ ಸುರಕ್ಷಿತವಾಗುವ ಮಾರ್ಗಗಳು ಬಂದ್ ಆಯಿತು. ನೀರು, ಮಣ್ಣುು ನುಗ್ಗಿತ್ತು. ಎಲ್ಲಾ ಮಾರ್ಗ ಮುಚ್ಚಿ ಹೋಯಿತು. ನಾವು ಸುರಂಗದಲ್ಲಿ ಸಿಲುಕಿದೆವು. ಹೊರಬರಲು ಯಾವ ದಾರಿಯೂ ಇರಲಿಲ್ಲ ಎಂದು ಸಂಜಯ್ ಶಾ ಹೇಳಿದ್ದಾರೆ.&lt;/p&gt;&lt;h2&gt;ದೇವರು ಕಾಪಾಡುತ್ತಾನೆ ಅನ್ನೋ ನಂಬಿಕೆ ಇತ್ತು&lt;/h2&gt;&lt;p&gt;ಯಾರು ಎಲ್ಲಿದ್ದಾರೆ ಅನ್ನೋದು ತಿಳಿಯದಾಯಿತು. ನನ್ನ ಸುತ್ತಲೂ ಆರು ಮಂದಿ ಇದ್ದರು. ನಾವು ಧೈರ್ಯ ಕಳೆದುಕೊಳ್ಳಲಿಲ್ಲ. ದೇವರನ್ನು ಪ್ರಾರ್ಥಿಸಿದೆವು. ಶ್ರೀಕೃಷ್ಣ ಮಹಾಮಂತ್ರ ಪಠಿಸಿದೆವು. 9 ದಿನ ಆಹಾರ, ನೀರು ಇಲ್ಲದೆ ಮಾತ್ರವಲ್ಲ, ನಾವು ಬದುಕುತ್ತಿವೋ ಅನ್ನೋ ಯಾವ ಭರವಸೆ ಇಲ್ಲದೆ ಜೀವಂತವಾಗಿ ಉಳಿಯುವುದು ಸವಾಲಾಗಿತ್ತು. ಮಹಾಮಂತ್ರ ಪಠಿಸುತ್ತಾ ದೇವರ ಜಪ ಮಾಡುತ್ತಾ ಕಳೆದೆವು. ಹೇಗಾದರೂ ಭಗವಂತ ಕಾಪಾಡುತ್ತಾನೆ ಅನ್ನೋ ನಂಬಿಕೆ ಇತ್ತು. ಇದೀಗ ಹೊಸ ಜನ್ಮ ಸಿಕ್ಕಿದೆ ಎಂದು ಸಂಜಯ್ ಶಾ ಹೇಳಿದ್ದಾರೆ.&lt;/p&gt;&lt;p&gt;4.5 ಕಿಲೋಮೀಟರ್ ಉದ್ದದ ಸುರಂಗ, ಇದರ ನೀರು, ಮಣ್ಣು ಒಳಗೆ ಸೇರಿದರೂ ಉಸಿರಾಡಲು ಕೊಂಚ ಗಾಳಿಯ ಲಭ್ಯತೆ ಇತ್ತು. ಜೊತೆಗೆ ಸುರಂಗದ ಒಳಗೆ ಸೇರಿದ ಪ್ರವಾಹ ನೀರೆ ಕುಡಿದು ಜೀವ ಉಳಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ರಕ್ಷಣಾ ಪಡೆಗಳು ಇಬ್ಬರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದೆ.&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/nepal-worker-survives-after-9-days-sanjay-shah-reveals-role-of-krishna-mahamantra/articleshow-n5mw17x"/>
        </item>
        <item>
            <title><![CDATA[ಅಮೆರಿಕದಲ್ಲಿ ಮನೆ ಮುಂದೆ ಬಟ್ಟೆ ಹಾಕೋ ಹಾಗಿಲ್ಲ ಯಾಕೆ? ಹಾಗಾದ್ರೆ ಹೇಗೆ ಒಣಗಿಸುತ್ತಾರೆ?]]></title>
            <link>https://kannada.asianetnews.com/gallery/life/why-you-cant-dry-clothes-outside-in-america-og2s3hc</link>
            <guid isPermaLink="true">https://kannada.asianetnews.com/gallery/life/why-you-cant-dry-clothes-outside-in-america-og2s3hc</guid>
            <pubDate>Fri, 04 Sep 2026 14:26:49 +0530</pubDate>
            <description><![CDATA[&lt;p&gt;USA interesting facts: ಭಾರತದಲ್ಲಿ ಮನೆ ಮುಂದೆ ಬಟ್ಟೆ ಒಣಹಾಕುವುದು ಎಷ್ಟು ಸಾಮಾನ್ಯವೋ, ಅಮೆರಿಕದ ಕೆಲವು ಕಮ್ಯುನಿಟಿಗಳಲ್ಲಿ ಅದು ಅಷ್ಟೇ ಭಾರಿ ಅಪರಾಧ! ಒಂದು ವೇಳೆ ಮನೆ ಮುಂದೆ ಬಟ್ಟೆ ಹಾಕಿದರೆ ಏನಾಗುತ್ತೆ? ಇಲ್ಲಿದೆ ಆಸಕ್ತಿದಾಯಕ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzdz0g29zmng1pzw6k7jzv4e,imgname-2-1786101383241.jpg" type="image/jpeg" height="390" width="690"/>
            <content:encoded><![CDATA[&lt;p&gt;USA interesting facts: ಭಾರತದಲ್ಲಿ ಮನೆ ಮುಂದೆ ಬಟ್ಟೆ ಒಣಹಾಕುವುದು ಎಷ್ಟು ಸಾಮಾನ್ಯವೋ, ಅಮೆರಿಕದ ಕೆಲವು ಕಮ್ಯುನಿಟಿಗಳಲ್ಲಿ ಅದು ಅಷ್ಟೇ ಭಾರಿ ಅಪರಾಧ! ಒಂದು ವೇಳೆ ಮನೆ ಮುಂದೆ ಬಟ್ಟೆ ಹಾಕಿದರೆ ಏನಾಗುತ್ತೆ? ಇಲ್ಲಿದೆ ಆಸಕ್ತಿದಾಯಕ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಯಾಕೆ ಹೀಗೆ?&lt;/strong&gt;ಭಾರತದಲ್ಲಿ ಮನೆ ಮುಂದೆ ಅಥವಾ ಬಾಲ್ಕನಿಯಲ್ಲಿ ಸಾಲು ಸಾಲಾಗಿ ಬಟ್ಟೆ ಒಣಗಿಸುವುದು ಸಾಮಾನ್ಯ ದೃಶ್ಯ. ಆದರೆ ಅಮೆರಿಕಕ್ಕೆ ಹೋದರೆ ನೀವು ಈ ರೀತಿ ಮಾಡುವಂತಿಲ್ಲ! ಒಂದು ವೇಳೆ ಅಚಾನಕ್ಕಾಗಿ ಮನೆ ಮುಂದೆ ಬಟ್ಟೆ ಒಣಹಾಕಿದರೆ ನಿಮ್ಮ ಜೇಬಿಗೆ ಕನಿಷ್ಠ 10 ರಿಂದ 45 ಸಾವಿರ ರೂಪಾಯಿಗಳವರೆಗೆ ಕತ್ತರಿ ಬೀಳಬಹುದು. ಅಮೆರಿಕದ ಈ ಲಾಂಡ್ರಿ ರೂಲ್ ಮತ್ತು ಅದರ ಹಿಂದಿರುವ ಆಸಕ್ತಿದಾಯಕ ಕಾರಣಗಳೇನು ಎಂಬ ಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಬಟ್ಟೆ ಒಣಹಾಕಿದ್ರೆ ಸಾವಿರಾರು ರೂಪಾಯಿ ದಂಡ!&lt;/strong&gt;ಅಮೆರಿಕದ ಅನೇಕ ಕಮ್ಯುನಿಟಿಗಳಲ್ಲಿ, ವಿಶೇಷವಾಗಿ HOA (Homeowners Association) ವ್ಯಾಪ್ತಿಯಲ್ಲಿ ಬರುವ ಮನೆಗಳ ಮುಂದೆ ಬಟ್ಟೆ ಒಣಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಬಟ್ಟೆ ಹಾಕಿದರೆ 100 ರಿಂದ 500 ಡಾಲರ್&zwnj;ಗಳವರೆಗೆ ದಂಡ ವಿಧಿಸಲಾಗುತ್ತದೆ. ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸರಿಸುಮಾರು 10,000 ದಿಂದ 45,000 ರೂಪಾಯಿಗಳಾಗುತ್ತದೆ!&lt;/p&gt;&lt;img&gt;&lt;p&gt;&lt;strong&gt;ಈ ನಿಯಮವೇಕೆ?&lt;/strong&gt;ಅಮೆರಿಕದಲ್ಲಿ ಮನೆಗಳು ಸುಂದರವಾಗಿ, ವ್ಯವಸ್ಥಿತವಾಗಿ ಮತ್ತು ಏಕರೂಪವಾಗಿ (Uniformity) ಕಾಣಬೇಕು ಎಂಬುದು ಅಲ್ಲಿನ ಜನರ ಮತ್ತು ಅಸೋಸಿಯೇಷನ್&zwnj;ಗಳ ಉದ್ದೇಶ. ಮನೆ ಮುಂದೆ ಬಟ್ಟೆಗಳನ್ನು ತೂಗು ಹಾಕುವುದರಿಂದ ಆ ಪ್ರದೇಶದ ಸೌಂದರ್ಯ ಕೆಡುತ್ತದೆ ಮತ್ತು ಸುತ್ತಮುತ್ತಲಿನ ಜಾಗ ಅಶಿಸ್ತಿನಿಂದ ಕಾಣುತ್ತದೆ ಎಂಬುದು ಅಲ್ಲಿನ ನಂಬಿಕೆ. ಹೀಗಾಗಿ, ಇಡೀ ಕಮ್ಯುನಿಟಿ ನೀಟಾಗಿ ಕಾಣಲಿ ಎಂಬ ಕಾರಣಕ್ಕೆ ಈ ರೂಲ್ಸ್ ಮಾಡಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬಟ್ಟೆ ಒಣಗಿಸುವುದು ಹೇಗೆ?&lt;/strong&gt;ಹಾಗಾದರೆ ಅಮೆರಿಕದಲ್ಲಿ ಬಟ್ಟೆ ಒಣಗಿಸುವುದು ಹೇಗೆ? ಅಲ್ಲಿ ಬಿಸಿಲಿಗಿಂತ ಹೆಚ್ಚಾಗಿ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿದ್ದಾರೆ. ಅಮೆರಿಕದ ಪ್ರತಿಯೊಬ್ಬರ ಮನೆಯಲ್ಲೂ ಹೈಟೆಕ್ ವಾಷಿಂಗ್ ಮಷಿನ್ ಹಾಗೂ 'ಡ್ರೈಯರ್' (Dryer) ಇರುತ್ತದೆ. ಈ ಡ್ರೈಯರ್ ಕೇವಲ ಕೆಲವೇ ನಿಮಿಷಗಳಲ್ಲಿ ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸಿ ಕೊಡುತ್ತದೆ. ಮನೆ ಒಳಗಡೆಯೇ ಈ ವ್ಯವಸ್ಥೆ ಇರುವುದರಿಂದ ಬಟ್ಟೆಗಳನ್ನು ಹೊರಗೆ ತರುವ ಅವಶ್ಯಕತೆಯೇ ಇರುವುದಿಲ್ಲ.&lt;/p&gt;&lt;img&gt;&lt;p&gt;&lt;strong&gt;ಅಮೆರಿಕ ಬಂದ ಮೇಲೆ ಬದಲಾಗಬೇಕು ಹವ್ಯಾಸ&lt;/strong&gt;ಭಾರತದಿಂದ ಅಮೆರಿಕಕ್ಕೆ ಹೋದವರಿಗೆ ಆರಂಭದಲ್ಲಿ ಇದು ವಿಚಿತ್ರ ಎನ್ನಿಸಬಹುದು. ಆದರೆ ಅಲ್ಲಿನ ಕಮ್ಯುನಿಟಿ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಅಲ್ಲಿನ ಶಿಸ್ತು ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಜನರು ಈ ನಿಯಮಗಳನ್ನು ಸಂತೋಷದಿಂದಲೇ ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ನೀವು ಈ ರೂಲ್ಸ್ ಫಾಲೋ ಮಾಡದಿದ್ದರೆ ನೋಟಿಸ್ ಮತ್ತು ಫೈನ್ ಎರಡನ್ನೂ ಎದುರಿಸಬೇಕಾಗುತ್ತದೆ!&lt;/p&gt;]]></content:encoded>
            <category>world-news</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/why-you-cant-dry-clothes-outside-in-america-og2s3hc"/>
        </item>
        <item>
            <title><![CDATA[ವಿಶ್ವಸಂಸ್ಥೆಯಲ್ಲಿ ಹೊಸ ವಿಶ್ವ ಭೂಪಟಕ್ಕೆ ಅಂಗೀಕಾರ! ಮ್ಯಾಪ್‌ನಲ್ಲಿ ಹಿಂದಿಗಿಂತ ದೊಡ್ಡದಾಗಿ ಕಾಣಲಿದೆ ಭಾರತ!]]></title>
            <link>https://kannada.asianetnews.com/world-news/explained-un-adopts-new-world-map-india-africa-gets-bigger-north-america-smaller-rav/articleshow-rgymo3c</link>
            <guid isPermaLink="true">https://kannada.asianetnews.com/world-news/explained-un-adopts-new-world-map-india-africa-gets-bigger-north-america-smaller-rav/articleshow-rgymo3c</guid>
            <pubDate>Sat, 05 Sep 2026 15:07:44 +0530</pubDate>
            <description><![CDATA[&lt;p&gt;ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 'ಈಕ್ವಲ್ ಅರ್ಥ್' ಎಂಬ ಹೊಸ ವಿಶ್ವ ನಕ್ಷೆಯನ್ನು ಬಿಡುಗಡೆ ಮಾಡಿದೆ. ಈ ನಕ್ಷೆಯಲ್ಲಿ ಆಫ್ರಿಕಾ ಖಂಡವು ದೊಡ್ಡದಾಗಿ ಮತ್ತು ಉತ್ತರ ಅಮೆರಿಕ ಹಾಗೂ ಯುರೋಪ್ ಚಿಕ್ಕದಾಗಿ ಕಾಣಿಸಲಿದ್ದು, ಖಂಡಗಳ ನೈಜ ಗಾತ್ರವನ್ನು ನಿಖರವಾಗಿ ತೋರಿಸುವ ಗುರಿ ಹೊಂದಿದೆ. ಅಮೆರಿಕ ವಿರೋಧ ಏಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1repfxvfsj6x3wqbmqewtr0,imgname-correction-world-map-1788600860603.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೊಸ ವಿಶ್ವ ಭೂಪಟ ಅಂಗೀಕಾರ ಮಾಡಿದ್ದು. ಹೊಸ ವಿಶ್ವ ಭೂಪಟದಲ್ಲಿ ಭಾರತ ಸೇರಿದಂತೆ ಆಫ್ರಿಕಾ ಹಿಂದಿನ ನಕ್ಷೆಗಿಂತ ದೊಡ್ಡದಾಗಿ ಕಾಣಿಲಿದೆ. ಉತ್ತರ ಅಮೆರಿಕ, ಯುರೋಪ್ ಸಣ್ಣದಾಗಿ ಕಾಣಿಸಲಿದೆ.&lt;/p&gt;&lt;p&gt;ಶುಕ್ರವಾರ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ. ಆದರೆ ವಿಶ್ವಸಂಸ್ಥೆಯ ಈ ನಿರ್ಣಯಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ.&lt;/p&gt;&lt;p&gt;ವಿಶ್ವ ಸಂಸ್ಥೆಯ ಹೊಸ ವಿಶ್ವ ಭೂಪಟ ನಿರ್ಣಯಕ್ಕೆ 164 ದೇಶಗಳು ಬೆಂಬಲ ನೀಡಿವೆ. ಆದರೆ ಅಮೆರಿಕ ವಿಶ್ವಸಂಸ್ಥೆಯ ನಿರ್ಣಯಕ್ಕೆ ವಿರುದ್ಧವಾಗಿ ಮತ ಹಾಕಿದರೆ ಇನ್ನುಳಿದ ಆರು ದೇಶಗಳು ಮತದಾನದಿಂದ ದೂರ ಉಳಿದಿವೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.&lt;/p&gt;&lt;h2&gt;ಏನಿದು Equal Earth ವಿಶ್ವ ಭೂಪಟ?&lt;/h2&gt;&lt;p&gt;ಈ ಹೊಸ ನಕ್ಷೆಯನ್ನು &lsquo;ಈಕ್ವಲ್ ಅರ್ಥ್&rsquo; (Equal Earth) ಭೂಪಟ ಎಂದು ಕರೆಯಲಾಗುತ್ತದೆ. ವಿಶ್ವದ ನಕ್ಷೆಯಲ್ಲಿ ಖಂಡಗಳ ಗಾತ್ರವನ್ನು ಸಾಧ್ಯವಾದಷ್ಟು ನಿಖರವಾಗಿ ತೋರಿಸುವುದು ಇದರ ಉದ್ದೇಶವಾಗಿದೆ. ಸದ್ಯ ಹೆಚ್ಚು ಬಳಕೆಯಲ್ಲಿರುವ &lsquo;ಮರ್ಕೇಟರ್ ಪ್ರೊಜೆಕ್ಷನ್&rsquo; ಬದಲಿಗೆ ಈ ಹೊಸ ಭೂಪಟ ಬಳಸುವಂತೆ ವಿಶ್ವಸಂಸ್ಥೆಯ ನಿರ್ಣಯದಲ್ಲಿ ಸದಸ್ಯ ರಾಷ್ಟ್ರಗಳಿಗೆ ಸೂಚಿಸಲಾಗಿದೆ. ಮರ್ಕೇಟರ್ ಭೂಪಟ ಫ್ಲೆಮಿಷ್ ನಕ್ಷೆ ತಜ್ಞ ಗೆರಾರ್ಡಸ್ ಮರ್ಕೇಟರ್ 1569ರಲ್ಲಿ ಸಮುದ್ರಯಾನಕ್ಕೆ ಅನುಕೂಲವಾಗುವಂತೆ ರಚಿಸಿದ್ದರು. ಈ ನಿರ್ಣಯವನ್ನು ಪ್ರಸ್ತಾಪಿಸಿದ ಆಫ್ರಿಕಾದ ಟೋಗೋ ದೇಶ, ನಕ್ಷೆಗಳು ಜಗತ್ತಿನ ಬಗ್ಗೆ ಜನರ ಅರಿವಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟೋಗೋದ ವಿದೇಶಾಂಗ ಸಚಿವ ರಾಬರ್ಟ್ ಡಸ್ಸಿ ಮಾತನಾಡಿ, ನಕ್ಷೆಗಳು ಶಿಕ್ಷಣಕ್ಕೆ ಮಾರ್ಗದರ್ಶನ ನೀಡುತ್ತವೆ, ಕಲ್ಪನೆಗೆ ಆಹಾರ ನೀಡುತ್ತವೆ ಮತ್ತು ಜಗತ್ತಿನ ಬಗ್ಗೆ ಜನರ ಸಾಮೂಹಿಕ ಅಭಿಪ್ರಾಯವನ್ನು ರೂಪಿಸುತ್ತವೆ. ನಕ್ಷೆಯಲ್ಲಿ ಭೂಮಿಯ ಗಾತ್ರವನ್ನು ತಪ್ಪಾಗಿ ತೋರಿಸಿದರೆ, ಆ ತಪ್ಪು ಕಲ್ಪನೆ ಹಲವು ತಲೆಮಾರುಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h3&gt;ವಿಶ್ವಸಂಸ್ಥೆಯ ನಿರ್ಣಯಕ್ಕೆ ಅಮೆರಿಕ ವಿರೋಧ ಯಾಕೆ?&lt;/h3&gt;&lt;p&gt;ಹೊಸ ಭೂಪಟ ಅಂಗೀಕರಿಸುವ ವಿಶ್ವಸಂಸ್ಥೆಯ ನಿರ್ಧಾರವನ್ನು ಅಮೆರಿಕ ಟೀಕಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇನ್ನಷ್ಟು ಗಂಭೀರವಾದ, ತುರ್ತು ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಅಮೆರಿಕದ ಪ್ರತಿನಿಧಿ ಯರಿನಾ ಫೆರೆನ್ಸೆವಿಚ್ ಹೇಳಿದ್ದಾರೆ.&lt;/p&gt;&lt;p&gt;ನಿಜವಾದ ಸಮಸ್ಯೆಗಳತ್ತ ಗಮನ ಹರಿಸುವ ಬದಲು 16ನೇ ಶತಮಾನದ ಭೂಪಟ ಬಗ್ಗೆ ಚರ್ಚೆ ನಡೆಸುತ್ತಿರುವುದು ವಿಶ್ವಸಂಸ್ಥೆಯ ಮೇಲಿನ ನಂಬಿಕೆ ಕಡಿಮೆಯಾಗಲು ಕಾರಣವಾಗುತ್ತಿದೆ ಎಂದು ಅವರು ಮತದಾನದ ಮೊದಲು ಹೇಳಿದ್ದಾರೆ.&lt;/p&gt;&lt;h3&gt;ಮರ್ಕೇಟರ್ ಭೂಪಟ ಏಕೆ ಗಾತ್ರದ ವ್ಯತ್ಯಾಸ?&lt;/h3&gt;&lt;p&gt;ಮರ್ಕೇಟರ್ ಭೂಪಟ ಪ್ರಮುಖ ಉದ್ದೇಶ ಭೂಭಾಗಗಳ ಆಕಾರ ಮತ್ತು ಕೋನಗಳನ್ನು ಸರಿಯಾಗಿ ತೋರಿಸುವುದಾಗಿತ್ತು. ಆದರೆ ಇದರಲ್ಲಿ ಖಂಡಗಳ ನಿಜವಾದ ವಿಸ್ತೀರ್ಣವನ್ನು ಸರಿಯಾಗಿ ತೋರಿಸಲು ಸಾಧ್ಯವಾಗುವುದಿಲ್ಲ. ಭೂಮಿ ಗೋಳಾಕಾರದಲ್ಲಿದೆ. ಅದನ್ನು ಸಮತಟ್ಟಾದ ಕಾಗದದ ಮೇಲೆ ತೋರಿಸುವಾಗ ಗಾತ್ರದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಉತ್ತರ ಭಾಗದಲ್ಲಿರುವ ಪ್ರದೇಶಗಳು ನಿಜವಾದ ಗಾತ್ರಕ್ಕಿಂತ ದೊಡ್ಡದಾಗಿ ಕಾಣುತ್ತವೆ. ಸಮಭಾಜಕ ರೇಖೆಯ ಸಮೀಪದಲ್ಲಿರುವ ಪ್ರದೇಶಗಳು ಸಣ್ಣದಾಗಿ ಕಾಣುತ್ತವೆ. ಹೀಗಾಗಿ ಯುರೋಪ್ ಮತ್ತು ಉತ್ತರ ಅಮೆರಿಕ ದೊಡ್ಡದಾಗಿ ಕಂಡರೆ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ತಮ್ಮ ನಿಜವಾದ ಗಾತ್ರಕ್ಕಿಂತ ಸಣ್ಣದಾಗಿ ಕಾಣುತ್ತಿದ್ದವು.&lt;/p&gt;&lt;h3&gt;ಹೊಸ ಭೂಪಟದಲ್ಲಿ ಆಫ್ರೀಕಾ ದೊಡ್ಡದು&lt;/h3&gt;&lt;p&gt;ಈಕ್ವಲ್ ಅರ್ಥ್ ನಕ್ಷೆಯನ್ನು ನಕ್ಷೆ ತಜ್ಞರ ತಂಡ 2018ರಲ್ಲಿ ಅಭಿವೃದ್ಧಿಪಡಿಸಿತು. ಈ ನಕ್ಷೆಯಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶಗಳು ಹಿಂದಿನ ನಕ್ಷೆಗಿಂತ ಹೆಚ್ಚು ವಿಸ್ತಾರವಾಗಿ ಕಾಣಿಸಿವೆ. ಈಕ್ವಲ್ ಅರ್ಥ್ ಭೂಪಟದಲ್ಲಿ ವಿನ್ಯಾಸಕರಲ್ಲಿ ಒಬ್ಬರಾದ ಬೋಜನ್ ಸವ್ರಿಕ್, ಈ ನಕ್ಷೆ ಖಂಡಗಳ ನಿಜವಾದ ವಿಸ್ತೀರ್ಣದ ತೋರಿಸಿದೆ. ಸಾಧ್ಯವಾದಷ್ಟು ಅವುಗಳು ಭೂಗೋಳದ ಮೇಲೆ ಕಾಣುವ ರೀತಿಯಲ್ಲೇ ಇವೆ ಎಂದು 2025ರಲ್ಲಿ AFPಗೆ ತಿಳಿಸಿದ್ದರು.&lt;/p&gt;&lt;h3&gt;ಮರ್ಕೇಟರ್ ನಕ್ಷೆ ಕೈಬಿಡಲಿದೆ ಫ್ರಾನ್ಸ್&lt;/h3&gt;&lt;p&gt;ಈ ನಿರ್ಣಯಕ್ಕೆ ಸಹ-ಪ್ರಾಯೋಜಕವಾಗಿದ್ದ ಫ್ರಾನ್ಸ್ ಕೂಡ ಶುಕ್ರವಾರ ಮರ್ಕೇಟರ್ ನಕ್ಷೆಯನ್ನು ಕೈಬಿಡುವುದಾಗಿ ಘೋಷಿಸಿದೆ. ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೋಯೆಲ್ ಬರೋಟ್ ಮಾತನಾಡಿ, ಮರ್ಕೇಟರ್ ನಕ್ಷೆಯಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಆಗ್ನೇಯ ಏಷ್ಯಾಕ್ಕೆ ಹೋಲಿಸಿದರೆ ಹೆಚ್ಚು ದೊಡ್ಡದಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಗ್ರೀನ್&zwnj;ಲ್ಯಾಂಡ್ ಬಹುತೇಕ ಆಫ್ರಿಕಾದಷ್ಟು ದೊಡ್ಡದಾಗಿ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ನಕ್ಷೆಗಳನ್ನು ಬದಲಾಯಿಸುವುದರಿಂದ ಜಗತ್ತು ಬದಲಾಗುವುದಿಲ್ಲ. ಆದರೆ ತಪ್ಪಾದ ಚಿತ್ರಣವನ್ನು ಸರಿಪಡಿಸುವುದು ಸತ್ಯವನ್ನು ತೋರಿಸುವ ಒಂದು ಹೆಜ್ಜೆ ಎಂದು ಬರೋಟ್ ಹೇಳಿದ್ದಾರೆ. ಆಫ್ರಿಕಾದೊಂದಿಗೆ, ವಿಶೇಷವಾಗಿ ತನ್ನ ಹಿಂದಿನ ವಸಾಹತು ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಿಸಲು ಫ್ರಾನ್ಸ್ ಪ್ರಯತ್ನಿಸುತ್ತಿರುವ ಸಮಯದಲ್ಲೇ ಈ ನಿರ್ಧಾರ ಬಂದಿದೆ.&lt;/p&gt;]]></content:encoded>
            <category>world-news</category>
            <dc:creator>Ravi Janekal</dc:creator>
            <atom:link href="https://kannada.asianetnews.com/world-news/explained-un-adopts-new-world-map-india-africa-gets-bigger-north-america-smaller-rav/articleshow-rgymo3c"/>
        </item>
        <item>
            <title><![CDATA[ಕನ್ನಡದ ಕಂಪು ಹೊತ್ತ ಫಿಲಡೆಲ್ಫಿಯಾ ರಸ್ತೆ, ಅದ್ಧೂರಿಯಾಗಿ ಅಕ್ಕ ರಜತ ಮಹೋತ್ಸವಕ್ಕೆ ಚಾಲನೆ]]></title>
            <link>https://kannada.asianetnews.com/world-news/kannada-culture-celebrated-on-us-philadelphia-street-akka-sammelana-2026-begins-grandly/articleshow-tx6doxo</link>
            <guid isPermaLink="true">https://kannada.asianetnews.com/world-news/kannada-culture-celebrated-on-us-philadelphia-street-akka-sammelana-2026-begins-grandly/articleshow-tx6doxo</guid>
            <pubDate>Sat, 05 Sep 2026 19:34:57 +0530</pubDate>
            <description><![CDATA[&lt;p&gt;ಅಮೆರಿಕದಲ್ಲಿ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಈ ಬಾರಿ ಹಲುವ ವಿಶೇಷತೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ವೀರಗಾಸೆ ಸೇರಿದಂತೆ ಹಲವು ಕನ್ನಡದ ಕಲೆಗಗಳ ಮೂಲಕ ಅದ್ದೂರಿ ಮೆರವಣಿಗೆ ಸಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ry2t103tr1yatjamg2qr9e,imgname-akka-kannada-sammelana-philadelphia-us-1788616992800.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಫಿಲಡೆಲ್ಫಿಯಾ (ಫೆ.05):&lt;/strong&gt; ಅಮೆರಿಕದ ನೆಲದಲ್ಲಿ ಕನ್ನಡದ ಕಂಪು ಮತ್ತೊಮ್ಮೆ ಪಸರಿಸಿತು. ಕನ್ನಡಿಗರ ಬಹು ನಿರೀಕ್ಷಿತ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಫಿಲಡೆಲ್ಫಿಯಾದ ಪ್ರಮುಖ ರಸ್ತೆಗಳಲ್ಲಿ ನಡೆದ ಅದ್ದೂರಿ ಮೆರವಣಿಗೆಯೊಂದಿಗೆ ಅಕ್ಕ ಕನ್ನಡ ಸಮ್ಮೇಳನ ಆರಂಭಗೊಂಡಿತು. ಕನ್ನಡದ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಒಗ್ಗಟ್ಟನ್ನು ಬಿಂಬಿಸಿದ ಮೆರವಣಿಗೆ, ವಿದೇಶದ ನೆಲದಲ್ಲೂ ಕನ್ನಡದ ಜೀವಂತಿಕೆಯನ್ನು ಸಾರಿತು.&lt;/p&gt;&lt;h2&gt;ಹಲವು ಗಣ್ಯರು ಭಾಗಿ&lt;/h2&gt;&lt;p&gt;ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಕ್ಷೇತ್ರದ ಕೃಷ್ಣೇಗೌಡ, ಬಿ. ಸುರೇಶ, ಧರ್ಮೇಂದ್ರ, ಸಾಯಿ ಗೋಲ್ಡ್ ಪ್ಯಾಲೇಸ್ ಶರವಣ ಸೇರಿದಂತೆ ಹಲವು ಗಣ್ಯರು ಕನ್ನಡಿಗರ ಸಂಭ್ರಮಕ್ಕೆ ಸಾಥ್ ನೀಡಿದರು.&lt;/p&gt;&lt;p&gt;ಅಮೆರಿಕದ ವಿವಿಧ ರಾಜ್ಯಗಳು ಹಾಗೂ ನಗರಗಳ ಕನ್ನಡ ಕೂಟಗಳಿಗೆ ಸೇರಿದ ಮೂರು ಸಾವಿರಕ್ಕೂ ಹೆಚ್ಚು ಕನ್ನಡಿಗರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಕನ್ನಡ ಸಂಘಟನೆಗಳ ಪ್ರತಿನಿಧಿಗಳು, ಕುಟುಂಬ ಸಮೇತ ಆಗಮಿಸಿದ ಕನ್ನಡಿಗರು, ಮಕ್ಕಳು ಹಾಗೂ ಯುವಕರು ಮೆರವಣಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ಕನ್ನಡದ ಬಾವುಟಗಳು, ಘೋಷಣೆಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.&lt;/p&gt;&lt;p&gt;&lt;img&gt;&lt;/p&gt;&lt;h2&gt;ವೀರಗಾಸೆಯ ವೈಭವ&lt;/h2&gt;&lt;p&gt;ಮೆರವಣಿಗೆಯಲ್ಲಿ ವೀರಗಾಸೆ ಕಲಾವಿದರ ನರ್ತನ ವಿಶೇಷ ಆಕರ್ಷಣೆಯಾಗಿತ್ತು. ವೀರಗಾಸೆಯ ಸಾಂಪ್ರದಾಯಿಕ ವೇಷಭೂಷಣ, ಹೆಜ್ಜೆ ಹಾಗೂ ನೃತ್ಯದ ಮೂಲಕ ಕನ್ನಡದ ಜಾನಪದ ಸಂಸ್ಕೃತಿಯನ್ನು ಅಮೆರಿಕದ ನೆಲದಲ್ಲಿ ಅನಾವರಣಗೊಳಿಸಲಾಯಿತು. ಕಲಾವಿದರ ಪ್ರದರ್ಶನಕ್ಕೆ ಕನ್ನಡಿಗರು ಚಪ್ಪಾಳೆ, ಘೋಷಣೆಗಳ ಮೂಲಕ ಉತ್ತೇಜನ ನೀಡಿದರು.&lt;/p&gt;&lt;h2&gt;ರೇಷ್ಮೆ ಸೀರೆಯಲ್ಲಿ ಕನ್ನಡದ ಬಣ್ಣ&lt;/h2&gt;&lt;p&gt;ಮೆರವಣಿಗೆಯಲ್ಲಿ ಕನ್ನಡತಿಯರ ಉಪಸ್ಥಿತಿಯೂ ಗಮನ ಸೆಳೆಯಿತು. ವಿವಿಧ ಬಗೆಯ ರೇಷ್ಮೆ ಸೀರೆಗಳನ್ನುಟ್ಟು ಆಗಮಿಸಿದ್ದ ಮಹಿಳೆಯರು ಕನ್ನಡದ ಸಾಂಪ್ರದಾಯಿಕ ಸೊಬಗನ್ನು ಪ್ರದರ್ಶಿಸಿದರು. ಸಾಂಪ್ರದಾಯಿಕ ಉಡುಗೆ, ಕನ್ನಡದ ಬಾವುಟ ಹಾಗೂ ಆಭರಣಗಳೊಂದಿಗೆ ಪಾಲ್ಗೊಂಡ ಮಹಿಳೆಯರಿಂದ ಮೆರವಣಿಗೆಗೆ ಮತ್ತಷ್ಟು ಕಳೆ ಬಂದಿತ್ತು.&lt;/p&gt;&lt;p&gt;&lt;img&gt;&lt;/p&gt;&lt;p&gt;ವಿದೇಶದ ನೆಲದಲ್ಲಿ ನೆಲೆಸಿದ್ದರೂ ಭಾಷೆ ಮತ್ತು ಸಂಸ್ಕೃತಿಯ ನಂಟನ್ನು ಕಳೆದುಕೊಂಡಿಲ್ಲ ಎಂಬುದನ್ನು ಮೆರವಣಿಗೆ ಸಾರಿತು. ವಿವಿಧ ದೇಶ, ರಾಜ್ಯ ಹಾಗೂ ನಗರಗಳಿಂದ ಬಂದ ಕನ್ನಡಿಗರು ಒಂದೇ ವೇದಿಕೆಯಡಿ, ಒಂದೇ ಭಾಷೆಯ ಹೆಸರಿನಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದ್ದು ಅಕ್ಕ ರಜತ ಮಹೋತ್ಸವದ ವಿಶೇಷತೆಯಾಗಿ ಕಂಡುಬಂತು. ಕನ್ನಡ ಕೇವಲ ಭಾಷೆಯಲ್ಲ; ಅದು ಭಾವನೆ, ಬದುಕಿನ ಬಂಧ ಮತ್ತು ಸಂಸ್ಕೃತಿಯ ಗುರುತು ಎಂಬ ಸಂದೇಶವನ್ನು ಹೊತ್ತು ಸಾಗಿದ ಈ ಮೆರವಣಿಗೆ, ಅಕ್ಕ ಸಮ್ಮೇಳನದ ರಜತ ಮಹೋತ್ಸವಕ್ಕೆ ಅದ್ದೂರಿ ಮುನ್ನುಡಿಯಾಯಿತು.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/kannada-culture-celebrated-on-us-philadelphia-street-akka-sammelana-2026-begins-grandly/articleshow-tx6doxo"/>
        </item>
        <item>
            <title><![CDATA[​"ಇನ್ನು ಎರಡೇ ವರ್ಷ ಆಯಸ್ಸು ಎಂದಿದ್ದ ವೈದ್ಯರು! ಆದರೆ 8 ವರ್ಷಗಳ ನಂತರವೂ ಈ ಕ್ಯಾನ್ಸರ್ ರೋಗಿ ಬದುಕಿದ್ದು ಹೇಗೆ?"]]></title>
            <link>https://kannada.asianetnews.com/health-life/given-just-2-years-to-live-blood-cancer-patient-is-still-alive-8-years-later/articleshow-vvhgci6</link>
            <guid isPermaLink="true">https://kannada.asianetnews.com/health-life/given-just-2-years-to-live-blood-cancer-patient-is-still-alive-8-years-later/articleshow-vvhgci6</guid>
            <pubDate>Wed, 09 Sep 2026 13:15:11 +0530</pubDate>
            <description><![CDATA[&lt;p&gt;2018ರಲ್ಲಿ ಹೈ-ರಿಸ್ಕ್ ಮಲ್ಟಿಪಲ್ ಮೈಯೆಲೋಮಾ ಪತ್ತೆಯಾದ ಕೆನ್ ಥಿಯೋಬೋಲ್ಡ್ ಅವರಿಗೆ ಕೇವಲ 2 ವರ್ಷ ಬದುಕುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರು. ಆದರೆ ವೈಯಕ್ತಿಕ ಚಿಕಿತ್ಸೆಯ ಕ್ಲಿನಿಕಲ್ ಟ್ರಯಲ್&zwnj;ನಲ್ಲಿ ಭಾಗವಹಿಸಿದ ಅವರು 8 ವರ್ಷಗಳ ಬಳಿಕವೂ ಜೀವಂತವಾಗಿದ್ದಾರೆ. ಅಧ್ಯಯನದಲ್ಲಿ 6 ವರ್ಷಗಳ ಬಳಿಕ ಶೇ.70 ರೋಗಿಗಳು ಜೀವಂತವಾಗಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20nc58sgjrnj5b3k14gm6yz,imgname-76-year-old-blood-cancer-survivor-defies-odds-after-personalised-treatment-trial-1788876297497.jpg" type="image/jpeg" height="390" width="690"/>
            <content:encoded><![CDATA[&lt;h2&gt;ಕೇವಲ 2 ವರ್ಷ ಬದುಕಬಹುದು ಎಂದಿದ್ದರು; 8 ವರ್ಷಗಳ ಬಳಿಕವೂ ಜೀವಂತ!&lt;/h2&gt;&lt;p&gt;ಬ್ಲಡ್ ಕ್ಯಾನ್ಸರ್&zwnj; ಎಂಬ ಹೆಸರು ಕೇಳಿದರೆ ಭಯ ಸಹಜ. ಅದರಲ್ಲೂ ಅಪಾಯಕಾರಿ ಹಂತದಲ್ಲಿರುವ ಕ್ಯಾನ್ಸರ್&zwnj;ಗೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಭವಿಷ್ಯದ ಬಗ್ಗೆ ಆತಂಕ ಹೆಚ್ಚಿರುತ್ತದೆ. ಆದರೆ ಬ್ರಿಟನ್&zwnj;ನ 76 ವರ್ಷದ ಕೆನ್ ಥಿಯೋಬೋಲ್ಡ್ ಅವರ ಕಥೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ. ಅವರಿಗೆ 2018ರಲ್ಲಿ ಹೈ-ರಿಸ್ಕ್ ಮಲ್ಟಿಪಲ್ ಮೈಯೆಲೋಮಾ ಇರುವುದು ಪತ್ತೆಯಾಗಿತ್ತು. ವೈದ್ಯರು ಅವರಿಗೆ ಇನ್ನೂ ಎರಡು ವರ್ಷ ಮಾತ್ರ ಬದುಕುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಆದರೆ ಈಗ ಎಂಟು ವರ್ಷಗಳ ಬಳಿಕವೂ ಅವರು ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ.&lt;/p&gt;&lt;h3&gt;ವೈಯಕ್ತಿಕ ಚಿಕಿತ್ಸೆಯತ್ತ ಮಹತ್ವದ ಹೆಜ್ಜೆ!&lt;/h3&gt;&lt;p&gt;ಸಾಮಾನ್ಯ ರಕ್ತ ಪರೀಕ್ಷೆಯ ಬಳಿಕ ಥಿಯೋಬೋಲ್ಡ್ ಅವರಿಗೆ ಕ್ಯಾನ್ಸರ್ ಪತ್ತೆಯಾಗಿತ್ತು. ನಂತರ ಅವರು ಹೈ-ರಿಸ್ಕ್ ರೋಗಿಗಳಿಗಾಗಿ ನಡೆಸಲಾಗುತ್ತಿದ್ದ ವಿಶೇಷ ಕ್ಲಿನಿಕಲ್ ಟ್ರಯಲ್&zwnj;ನಲ್ಲಿ ಭಾಗವಹಿಸಲು ನಿರ್ಧರಿಸಿದರು.&lt;/p&gt;&lt;p&gt;ಲಂಡನ್&zwnj;ನ ಇನ್&zwnj;ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ರಿಸರ್ಚ್ ಸೇರಿದಂತೆ ಹಲವು ಸಂಸ್ಥೆಗಳ ತಜ್ಞರು ನಡೆಸಿದ ಈ ಅಧ್ಯಯನದಲ್ಲಿ 107 ಮಂದಿ ಹೊಸದಾಗಿ ಹೈ-ರಿಸ್ಕ್ ಮಲ್ಟಿಪಲ್ ಮೈಯೆಲೋಮಾ ಪತ್ತೆಯಾದ ರೋಗಿಗಳು ಭಾಗವಹಿಸಿದ್ದರು. ರೋಗದ ಆಣ್ವಿಕ ಗುಣಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ಹೊಂದಿಸುವುದು ಈ ಪ್ರಯೋಗದ ಪ್ರಮುಖ ಉದ್ದೇಶವಾಗಿತ್ತು.&lt;/p&gt;&lt;p&gt;&lt;strong&gt;ಆರಂಭದಲ್ಲಿ 5 ಔಷಧಿ, ಈಗ 2 ಮಾತ್ರ&lt;/strong&gt;&lt;/p&gt;&lt;p&gt;ಥಿಯೋಬೋಲ್ಡ್ ಅವರಿಗೆ ಆರಂಭದಲ್ಲಿ ಸ್ಟೆಮ್ ಸೆಲ್ ಟ್ರಾನ್ಸ್&zwnj;ಪ್ಲಾಂಟ್ ಜೊತೆಗೆ ಐದು ಔಷಧಿಗಳ ಸಂಯೋಜನೆಯಿಂದ ಚಿಕಿತ್ಸೆ ನೀಡಲಾಯಿತು. ಡಾರತುಮುಮ್ಯಾಬ್, ಸೈಕ್ಲೋಫಾಸ್ಫಮೈಡ್, ಬೊರ್ಟೆಝೊಮಿಬ್, ಲೆನಾಲಿಡೊಮೈಡ್ ಮತ್ತು ಡೆಕ್ಸಾಮೆಥಸೋನ್ ಸೇರಿದಂತೆ ಔಷಧಿಗಳನ್ನು ಬಳಸಲಾಗಿತ್ತು.&lt;/p&gt;&lt;p&gt;ಆರಂಭಿಕ ಹಂತದಲ್ಲಿ ಚಿಕಿತ್ಸೆ ತೀವ್ರವಾಗಿದ್ದರೂ, ನಂತರ ರೋಗ ನಿಯಂತ್ರಣದಲ್ಲಿದ್ದಂತೆ ಅವರು ನಿರ್ವಹಣಾ ಹಂತಕ್ಕೆ ತೆರಳಿದರು. ಈಗ ಅವರು ಕೇವಲ ಎರಡು ಔಷಧಿಗಳೊಂದಿಗೆ ಚಿಕಿತ್ಸೆಯನ್ನು ಮುಂದುವರಿಸುತ್ತಿದ್ದಾರೆ. ಪತ್ನಿ ಬ್ರೆಂಡಾ ಮತ್ತು ಐವರು ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವುದು, ಮೋಟರ್&zwnj;ಹೋಮ್&zwnj;ನಲ್ಲಿ ಪ್ರವಾಸ ಮಾಡುವುದು ಅವರ ಜೀವನದ ಪ್ರಮುಖ ಭಾಗವಾಗಿದೆ.&lt;/p&gt;&lt;p&gt;&lt;strong&gt;6 ವರ್ಷಗಳ ಬಳಿಕವೂ 70% ರೋಗಿಗಳು ಜೀವಂತ&lt;/strong&gt;&lt;/p&gt;&lt;p&gt;ಈ ಪ್ರಯೋಗದ ದೀರ್ಘಕಾಲದ ಫಲಿತಾಂಶಗಳು ಆಶಾದಾಯಕವಾಗಿವೆ. ಸುಮಾರು ಆರು ವರ್ಷಗಳ ಫಾಲೋ-ಅಪ್&zwnj;ನಲ್ಲಿ ವೈಯಕ್ತಿಕ ಚಿಕಿತ್ಸೆಯನ್ನು ಪಡೆದವರಲ್ಲಿ ಶೇ.70 ಮಂದಿ ಜೀವಂತವಾಗಿದ್ದರು. ಸಾಮಾನ್ಯ ಚಿಕಿತ್ಸೆಯನ್ನು ಪಡೆದವರಲ್ಲಿ ಈ ಪ್ರಮಾಣ ಸುಮಾರು ಶೇ.40ರಷ್ಟಿತ್ತು.&lt;/p&gt;&lt;p&gt;ಅಷ್ಟೇ ಅಲ್ಲ, ಆರು ವರ್ಷಗಳ ಬಳಿಕ ರೋಗದ ಪ್ರಗತಿ ಕಾಣಿಸದೆ ಇದ್ದವರ ಪ್ರಮಾಣವೂ ವೈಯಕ್ತಿಕ ಚಿಕಿತ್ಸಾ ಗುಂಪಿನಲ್ಲಿ ಶೇ.54ರಷ್ಟಿತ್ತು. ಸಾಮಾನ್ಯ ಚಿಕಿತ್ಸೆಯಲ್ಲಿ ಇದು ಕೇವಲ ಶೇ.18ರಷ್ಟಾಗಿತ್ತು.&lt;/p&gt;&lt;p&gt;&lt;strong&gt;ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಭರವಸೆ&lt;/strong&gt;&lt;/p&gt;&lt;p&gt;ಈ ಅಧ್ಯಯನವು ಪ್ರತಿಯೊಬ್ಬ ರೋಗಿಗೂ ಒಂದೇ ರೀತಿಯ ಚಿಕಿತ್ಸೆ ನೀಡುವುದಕ್ಕಿಂತ, ಅವರ ಕ್ಯಾನ್ಸರ್&zwnj;ನ ಆಣ್ವಿಕ ಗುಣಲಕ್ಷಣಗಳನ್ನು ಅರ್ಥಮಾಡಿಕೊಂಡು ಚಿಕಿತ್ಸೆಯನ್ನು ಹೊಂದಿಸುವುದರಿಂದ ಉತ್ತಮ ಫಲಿತಾಂಶ ಸಿಗಬಹುದು ಎಂಬುದನ್ನು ಸೂಚಿಸಿದೆ.&lt;/p&gt;&lt;p&gt;ರೋಗದ ಅಪಾಯವನ್ನು ಗುರುತಿಸಲು MMProfiler SKY92 ಎಂಬ ಜೀನ್-ಎಕ್ಸ್&zwnj;ಪ್ರೆಶನ್ ಪರೀಕ್ಷೆಯನ್ನೂ ಅಧ್ಯಯನದಲ್ಲಿ ಬಳಸಲಾಯಿತು. ಇಂತಹ ವೈಯಕ್ತಿಕ ವಿಧಾನದಿಂದ ಕೆಲವು ಹೈ-ರಿಸ್ಕ್ ರೋಗಿಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚಬಹುದು ಎಂದು ತಜ್ಞರು ಹೇಳಿದ್ದಾರೆ.&lt;/p&gt;&lt;p&gt;ಕೆನ್ ಥಿಯೋಬೋಲ್ಡ್ ಅವರ ಕಥೆ ವೈದ್ಯಕೀಯ ವಿಜ್ಞಾನದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಹೇಗೆ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿವೆ ಎಂಬುದಕ್ಕೆ ಒಂದು ಗಮನಾರ್ಹ ಉದಾಹರಣೆಯಾಗಿದೆ.&lt;/p&gt;]]></content:encoded>
            <category>world-news</category>
            <dc:creator>Chandrashekar GS</dc:creator>
            <atom:link href="https://kannada.asianetnews.com/health-life/given-just-2-years-to-live-blood-cancer-patient-is-still-alive-8-years-later/articleshow-vvhgci6"/>
        </item>
        <item>
            <title><![CDATA[ಸಂಸಾರ, ಉದ್ಯೋಗ ಸಾಕೆನಿಸಿತೇ? 47 ಕೋಟಿಯ ಐಸ್‌ಕ್ರೀಮ್ ಕಂಪನಿ ಮಾರಿ ಸನ್ಯಾಸತ್ವದ ಹಾದಿ ಹಿಡಿದ ಉದ್ಯಮಿ!]]></title>
            <link>https://kannada.asianetnews.com/life/47-crore-ice-cream-business-for-sale-as-founder-prepares-for-monastic-life-kvn/articleshow-vyon3um</link>
            <guid isPermaLink="true">https://kannada.asianetnews.com/life/47-crore-ice-cream-business-for-sale-as-founder-prepares-for-monastic-life-kvn/articleshow-vyon3um</guid>
            <pubDate>Fri, 04 Sep 2026 13:48:13 +0530</pubDate>
            <description><![CDATA[&lt;p&gt;ಥಾಯ್ ಉದ್ಯಮಿ ಸಿರಿಪಾಂಗ್ ಅಕ್ಕರಶ್ರೀಯುಕ್ ತಮ್ಮ ಹಾವೆಲ್ಸ್ ಐಸ್&zwnj;ಕ್ರೀಮ್ ಬ್ರ್ಯಾಂಡ್ ಅನ್ನು 165 ಮಿಲಿಯನ್ ಬಹ್ತ್&zwnj;ಗೆ ಮಾರಾಟಕ್ಕೆ ಇಟ್ಟಿದ್ದಾರೆ. ದಶಕಗಳ ಕಾಲ ಕಟ್ಟಿದ ಉದ್ಯಮವನ್ನು ತೊರೆದು, ಮುಂದಿನ ಎರಡು ವರ್ಷಗಳಲ್ಲಿ ಸನ್ಯಾಸತ್ವಕ್ಕೆ ಸಿದ್ಧರಾಗಲು ಮತ್ತು ಅರಣ್ಯ ಆಶ್ರಯ ಸ್ಥಾಪಿಸಿ ಧ್ಯಾನ ಮಾಡಲು ಅವರು ಯೋಜಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ks7dhkqte0n2zr46ezm8x2,imgname-thai-ice-cream-tycoon-puts-business-up-for-sale-to-become-a-monk--1--1788444128819.jpg" type="image/jpeg" height="390" width="690"/>
            <content:encoded><![CDATA[&lt;h2&gt;₹47 ಕೋಟಿ ಐಸ್&zwnj;ಕ್ರೀಮ್ ಉದ್ಯಮ ಮಾರಾಟಕ್ಕೆ! ಸನ್ಯಾಸಿಯಾಗಲು ಹೊರಟ ಥಾಯ್ ಉದ್ಯಮಿ&lt;/h2&gt;&lt;p&gt;ದಶಕಗಳ ಕಾಲ ಕಟ್ಟಿದ ವ್ಯವಹಾರವೊಂದನ್ನು ತೊರೆದು ಆಧ್ಯಾತ್ಮಿಕ ಜೀವನದತ್ತ ಹೆಜ್ಜೆ ಇಡಲು ಸಿದ್ಧರಾಗಿರುವ ಥಾಯ್ ಉದ್ಯಮಿಯ ನಿರ್ಧಾರ ಇದೀಗ ಗಮನ ಸೆಳೆದಿದೆ. ಹಾವೆಲ್ಸ್ ಐಸ್&zwnj;ಕ್ರೀಮ್ ಬ್ರ್ಯಾಂಡ್&zwnj;ನ ಅಧ್ಯಕ್ಷ ಸಿರಿಪಾಂಗ್ ಅಕ್ಕರಶ್ರೀಯುಕ್, ತಮ್ಮ ಕಂಪನಿಯನ್ನು 165 ಮಿಲಿಯನ್ ಬಹ್ತ್&zwnj;ಗೆ ಮಾರಾಟಕ್ಕೆ ಇಟ್ಟಿದ್ದಾರೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು ₹47.2 ಕೋಟಿ.&lt;/p&gt;&lt;h3&gt;ಉದ್ಯಮದ ಬಳಿಕ ಸನ್ಯಾಸತ್ವದ ಗುರಿ&lt;/h3&gt;&lt;p&gt;ಸಿರಿಪಾಂಗ್ ಅವರ ಮುಂದಿನ ಗುರಿ ಕೇವಲ ವ್ಯವಹಾರದಿಂದ ನಿವೃತ್ತಿಯಾಗುವುದಲ್ಲ. ಬೌದ್ಧ ಧರ್ಮದ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಂಡು ಅರಹಂತ್ ಪದವಿಯನ್ನು ಪಡೆಯುವುದು ತಮ್ಮ ಮುಖ್ಯ ಉದ್ದೇಶ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಮುಂದಿನ ಎರಡು ವರ್ಷಗಳನ್ನು ಸನ್ಯಾಸತ್ವಕ್ಕೆ ಸಿದ್ಧತೆ ಮಾಡಿಕೊಳ್ಳಲು, ಸೂಕ್ತವಾದ ಭೂಮಿಯನ್ನು ಹುಡುಕಲು ಮತ್ತು ಏಕಾಂತದಲ್ಲಿ ಧ್ಯಾನ ಮಾಡಬಹುದಾದ ಅರಣ್ಯ ಆಶ್ರಯವನ್ನು ಸ್ಥಾಪಿಸಲು ಅವರು ಯೋಜಿಸಿದ್ದಾರೆ.&lt;/p&gt;&lt;p&gt;&lt;strong&gt;15 ವರ್ಷಗಳಿಂದ ಮನಸ್ಸಿನಲ್ಲಿದ್ದ ನಿರ್ಧಾರ&lt;/strong&gt;&lt;/p&gt;&lt;p&gt;ಸಿರಿಪಾಂಗ್ ಅವರು ತಮ್ಮ ಜೀವನದ ಈ ಹೊಸ ಹಂತದ ಬಗ್ಗೆ ಸುಮಾರು 15 ವರ್ಷಗಳಿಂದ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ. ಬೌದ್ಧ ಧರ್ಮದ ಕುರಿತು ಸಾರ್ವಜನಿಕವಾಗಿ ಮಾತನಾಡಿರುವ ಅವರು, 2016ರಲ್ಲಿ &lsquo;Success Derived from the Buddha&rsquo; ಎಂಬ ಪುಸ್ತಕವನ್ನೂ ಬರೆದಿದ್ದಾರೆ.&lt;/p&gt;&lt;p&gt;ಸನ್ಯಾಸತ್ವಕ್ಕೆ ಪ್ರವೇಶಿಸಿದ ಬಳಿಕ, ತಮ್ಮೊಂದಿಗೆ ಇರುವ ಸನ್ಯಾಸಿ ಮತ್ತು ಆಹಾರ ತರುವ ಒಬ್ಬ ಶಿಷ್ಯನ ಹೊರತುಪಡಿಸಿ ಇತರರೊಂದಿಗೆ ಸಂಪರ್ಕವನ್ನು ಕಡಿಮೆ ಮಾಡಿಕೊಳ್ಳಲು ಉದ್ದೇಶಿಸಿದ್ದಾರೆ.&lt;/p&gt;&lt;p&gt;&lt;strong&gt;ವ್ಯವಹಾರ ಮಾರಾಟಕ್ಕೆ ಮತ್ತೊಂದು ಕಾರಣ&lt;/strong&gt;&lt;/p&gt;&lt;p&gt;ಆಧ್ಯಾತ್ಮಿಕ ನಿರ್ಧಾರದ ಜೊತೆಗೆ, ಹಾವೆಲ್ಸ್ ಬ್ರ್ಯಾಂಡ್ ಎದುರಿಸುತ್ತಿರುವ ವಿಸ್ತರಣೆಯ ಸವಾಲುಗಳೂ ಮಾರಾಟದ ನಿರ್ಧಾರದಲ್ಲಿ ಪಾತ್ರವಹಿಸಿವೆ. 1999ರಲ್ಲಿ ಆರಂಭವಾದ ಈ ಐಸ್&zwnj;ಕ್ರೀಮ್ ಕಂಪನಿ, ಮೂರು ವರ್ಷಗಳಲ್ಲಿ 22 ಶಾಖೆಗಳಿಗೆ ವಿಸ್ತರಿಸಿತ್ತು.&lt;/p&gt;&lt;p&gt;ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಪಿಂಗ್ ಮಾಲ್&zwnj;ಗಳಲ್ಲಿ ಹೊಸ ಮಳಿಗೆಗಳಿಗೆ ಸೂಕ್ತ ಸ್ಥಳ ಪಡೆಯುವುದು ಕಷ್ಟವಾಗಿದೆ ಎಂದು ಸಿರಿಪಾಂಗ್ ಹೇಳಿದ್ದಾರೆ. ಖಾಲಿ ಜಾಗಗಳಿದ್ದರೂ ಹಾವೆಲ್ಸ್&zwnj;ಗೆ ಸ್ಥಳ ನೀಡಲು ಮಾಲ್&zwnj;ಗಳು ನಿರಾಕರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಖರೀದಿದಾರರಿಗೆ ಸಿಗುವುದೇನು?&lt;/strong&gt;&lt;/p&gt;&lt;p&gt;165 ಮಿಲಿಯನ್ ಬಹ್ತ್&zwnj; ಒಪ್ಪಂದದಲ್ಲಿ 1.1 ಹೆಕ್ಟೇರ್ ಭೂಮಿ, ಕಚೇರಿ ಕಟ್ಟಡ, ಯಂತ್ರೋಪಕರಣಗಳು ಮತ್ತು ಪರವಾನಗಿಗಳಿರುವ ಕಾರ್ಖಾನೆ ಸೇರಿವೆ. ಹಾವೆಲ್ಸ್ ಐಸ್&zwnj;ಕ್ರೀಮ್ ಮತ್ತು ಫಾಸ್ಟ್&zwnj;ಫುಡ್ ಔಟ್&zwnj;ಲೆಟ್, ಟ್ರೇಡ್&zwnj;ಮಾರ್ಕ್ ಹಾಗೂ ಹಲವು ವರ್ಷಗಳಲ್ಲಿ ಸಂಗ್ರಹಿಸಿದ ಐಸ್&zwnj;ಕ್ರೀಮ್ ಪಾಕವಿಧಾನಗಳೂ ಪ್ಯಾಕೇಜ್&zwnj;ನ ಭಾಗವಾಗಿವೆ.&lt;/p&gt;&lt;p&gt;ವ್ಯವಹಾರವನ್ನು ಯಶಸ್ವಿಯಾಗಿ ಖರೀದಿದಾರರಿಗೆ ಪರಿಚಯಿಸುವವರಿಗೆ 5 ಮಿಲಿಯನ್ ಬಹ್ತ್ ಉಲ್ಲೇಖ ಶುಲ್ಕ ನೀಡುವುದಾಗಿಯೂ ಸಿರಿಪಾಂಗ್ ತಿಳಿಸಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Naveen Kodase</dc:creator>
            <atom:link href="https://kannada.asianetnews.com/life/47-crore-ice-cream-business-for-sale-as-founder-prepares-for-monastic-life-kvn/articleshow-vyon3um"/>
        </item>
    </channel>
</rss>
