<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 28 Jul 2026 17:41:11 +0530</lastBuildDate>
        <atom:link href="https://kannada.asianetnews.com/rss/world-news" rel="self" type="application/rss+xml"/>
        <item>
            <title><![CDATA['ಡ್ಯಾಡೀಸ್ ಹೋಮ್'.. ಯಶ್ ಹೋದಲ್ಲೆಲ್ಲಾ ಫಾಲೋ ಮಾಡ್ತಿದೆ ಈ ಡೈಲಾಗ್; ಅಷ್ಟಕ್ಕೂ ಇದರಲ್ಲಿರೋ ಸೀಕ್ರೆಟ್ ಏನು?]]></title>
            <link>https://kannada.asianetnews.com/cine-world/rocking-star-yash-viral-daddys-home-dialogue-from-toxic-teaser-becomes-a-worldwide-sensation-and-a-global-slogan-now/articleshow-05ox99n</link>
            <guid isPermaLink="true">https://kannada.asianetnews.com/cine-world/rocking-star-yash-viral-daddys-home-dialogue-from-toxic-teaser-becomes-a-worldwide-sensation-and-a-global-slogan-now/articleshow-05ox99n</guid>
            <pubDate>Fri, 24 Jul 2026 14:08:57 +0530</pubDate>
            <description><![CDATA[&lt;p&gt;ನಟ ಯಶ್ ಅವರು ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಟಾಕ್ಸಿಕ್ ಸಿನಿಮಾದ ಆ ಡೈಲಾಗ್ ಅವರನ್ನು ಬಿಟ್ಟೂಬಿಡದೇ ಹಿಂಬಾಲಿಸುತ್ತಿದೆ. ಸದ್ಯಕ್ಕೆ ಈ ಡೈಲಾಗ್ 'ಯುವಜನತೆಯ ಮಂತ್ರ' ಎನ್ನುವಂತಾಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಅದ್ಯಾವ ಡೈಲಾಗ್ ಯುಥ್&zwnj; ಸಮೂಹವನ್ನು ಸೆಳೆಯಲಿದೆಯೋ ಏನೋ!?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9mbhxbbwcvgjxy5wtyvdsz,imgname-yash-1784882251691.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಶ್&zwnj; ಹೇಳಿರೋ ಅದೊಂದು ಡೈಲಾಗ್ &lsquo;ಜಗತ್ತಿನ ಮಂತ್ರ&rsquo; ಆಗಿದೆ ಏಕೆ?&lt;/strong&gt;&lt;/p&gt;&lt;p&gt;ಕನ್ನಡದ ನಟ, ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ (Yash) ಅವರು ಈಗ ಜಗತ್ತೇ ಗುರುತಿಸುತ್ತಿರುವ ನಟ. ಕೆಜಿಎಫ್ (KGF) ಬಳಿಕ ನಟ ಯಶ್ ಅವರು ಪ್ಯಾನ್ ಇಂಡಿಯಾ ನಟರಾಗಿ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಆದರೆ, ಟಾಕ್ಸಿಕ್ (Toxic) ಸಿನಿಮಾದಲ್ಲಿ ನಟ ಯಶ್ ನಟಿಸುತ್ತಿರುವ ಹೊತ್ತಲ್ಲಿ, ನಟ ಯಶ್ ಅವರು ಪ್ಯಾನ್ ಇಂಡಿಯಾ ಪಟ್ಟದಿಂದ 'ಪ್ಯಾನ್ ವರ್ಲ್ಡ್' ಪಟ್ಟಕ್ಕೆ ಜಿಗಿದಿದ್ದಾರೆ. ಈಗ ಇಡೀ ಹಗತ್ತು ಕನ್ನಡದ ನಟ ಯಶ್ ಬಗ್ಗೆ ಮಾತನ್ನಾಡುತ್ತಿದೆ. ಅದರಲ್ಲೂ ನಟ ಯಶ್ ನಟನೆಯ ಟಾಕ್ಸಿಕ್ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಅದರಲ್ಲಿ ಹೇಳಿರುವ ಅದೊಂದು ಡೈಲಾಗ್ ಇಡೀ ಜಗತ್ತಿಗೇ 'ಮಂತ್ರ' ಎನ್ನುವಂತಾಗಿದೆ. ಹಾಗಿದ್ದರೆ ಅದೇನು?&lt;/p&gt;&lt;p&gt;ಹೌದು, ನಟ ಯಶ್ ನಟನೆಯ ಟಾಕ್ಸಿಕ್ ಟೀಸರ್&zwnj;ನಲ್ಲಿ ಆ ಒಂದು ಡೈಲಾಗ್ ಹದಿಹರೆಯದ ಹುಡುಗರ ಮಂತ್ರ ಎಂಬಂತಾಗಿಹೋಗಿದೆ. ಅದೇನು ಅಂತ ಹೊಸದಾಗಿ ಯಾರೂ ಹೇಳಬೇಕಾದ ಅಗತ್ಯವೇ ಇಲ್ಲ. ಹೌದು, ಅದು &quot;ಡ್ಯಾಡೀಸ್ ಹೋಮ್&quot; (Daddy's Home) ಎಂಬ ಡೈಲಾಗ್. ಆ ಡೈಲಾಗ್ ಈಗ ಅದೆಷ್ಟು ಫೇಮಸ್ ಆಗಿದೆ ಎಂದರೆ ನಟ ಯಶ್ ಅವರು ಎಲ್ಲೇ ಹೋದರೂ ಅದನ್ನು ಫ್ಯಾನ್ಸ್ ಜೋರಾಗಿ ಘೋಷಣೆ ಎಂಬಂತೆ ಹೇಳತೊಡಗಿದ್ದಾರೆ.&lt;/p&gt;&lt;h2&gt;ಆ ಡೈಲಾಗ್ ಈಗ ಘೋಷಣೆ ರೂಪದಲ್ಲಿ ಅಧಿಕೃತವಾಗಿ ಹೇಳಲಾಗುತ್ತಿದೆ!&lt;/h2&gt;&lt;p&gt;'ಡ್ಯಾಡೀಸ್ ಹೋಮ್' ಎಂಬ ಆ ಡೈಲಾಗ್ ಈಗ ಘೋಷಣೆ ರೂಪದಲ್ಲಿ ಅಧಿಕೃತವಾಗಿ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರನ್ನು ಎಲ್ಲೆಡೆ ಹಿಂಬಾಲಿಸುತ್ತಿವೆ. ದೆಹಲಿಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ 'ಕಾಮಿಕ್-ಕಾನ್'ವರೆಗೆ, ಯಶ್ ಎಲ್ಲೇ ಹೋದರೂ ಅವರ ಫ್ಯಾನ್ಸ್ ಆ ಡೈಲಾಗ್&zwnj;ಅನ್ನು ಬಿಟ್ಟೂಬಿಡದೇ ಹೇಳುತ್ತಿದ್ದಾರೆ. ಯಶ್ ಹಾಗೂ ಅವರ ನಟನೆಯಲ್ಲಿ ಮುಂಬರುವ 'ಟಾಕ್ಸಿಕ್' ಹಾಗು 'ರಾಮಾಯಣ' ಚಿತ್ರದ ಬಗ್ಗೆ ಅಭಿಮಾನಿಗಳ ಕ್ರೇಜ್ ಮಿತಿಮೀರಿದೆ. 26 ಆಗಸ್ಟ್ 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ 'ಟಾಕ್ಸಿಕ್' ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಮುಗಿಲು ಮುಟ್ಟಿವೆ.&lt;/p&gt;&lt;p&gt;ಜೊತೆಗೆ, ಈ ವರ್ಷದ ದೀಪಾವಳಿಗೆ ನಟ ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯ 'ರಾಮಾಯಣ' ಸಿನಿಮಾ ಬಿಡುಗಡೆ ಆಗಲಿದೆ. ರಾಮಾಯಣ ಚಿತ್ರದ ಭಾಗ ಒಂದು ದೀಪಾವಳಿಗೆ ಬಿಡುಗಡೆ ಆಗುತ್ತಿದ್ದರೆ, ರಾಮಾಯಣದ ಎರಡನೇ ಭಾಗ ಮುಂದಿನ ವರ್ಷ ಅಂದರೆ, 2027ರಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.&lt;/p&gt;&lt;h3&gt;ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಆ ಡೈಲಾಗ್!&lt;/h3&gt;&lt;p&gt;ಒಟ್ಟಿನಲ್ಲಿ, ನಟ ಯಶ್ ಅವರು ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಟಾಕ್ಸಿಕ್ ಸಿನಿಮಾದ ಆ ಡೈಲಾಗ್ ಅವರನ್ನು ಬಿಟ್ಟೂಬಿಡದೇ ಹಿಂಬಾಲಿಸುತ್ತಿದೆ. ಸದ್ಯಕ್ಕೆ 'ಡ್ಯಾಡೀಸ್ ಹೋಮ್' ಅನ್ನೋದು 'ಯುವಜನತೆಯ ಮಂತ್ರ' ಎನ್ನುವಂತಾಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಅದ್ಯಾವ ಡೈಲಾಗ್ ಯುಥ್&zwnj; ಸಮೂಹವನ್ನು ಸೆಳೆಯಲಿದೆಯೋ ಏನೋ!? ಜೊತೆಗೆ, ರಾಮಾಯಣ ಚಿತ್ರವು ತೆರೆಗೆ ಬಂದ ಬಳಿಕ ಆ ಚಿತ್ರದ ಯಾವುದಾದರೊಂದು ಡೈಲಾಗ್ 'ಡ್ಯಾಡೀಸ್ ಹೋಮ್&zwnj;' ಅಂತೆ ಅಥವಾ ಅದಕ್ಕಿಂತ ಹೆಚ್ಚು ಫೇಮಸ್ ಆದ್ರೂ ಅಚ್ಚರಿಯೇನಿಲ್ಲ!&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rocking-star-yash-viral-daddys-home-dialogue-from-toxic-teaser-becomes-a-worldwide-sensation-and-a-global-slogan-now/articleshow-05ox99n"/>
        </item>
        <item>
            <title><![CDATA[ಯಶ್ 'ರಾಮಾಯಣ' ಸಿನಿಮಾದ ಬಜೆಟ್ ಹಾಗಿರ್ಲಿ ಬಿಡಿ.. ಪ್ರಮೋಶನ್‌ ಮಾಡ್ತಿರೋ ಖರ್ಚು ಗೊತ್ತಾದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/cine-world/bollywood-movie-ramayana-a-whopping-rs-375-crore-is-being-spent-just-on-the-global-promotion-of-this-film/articleshow-14vklf9</link>
            <guid isPermaLink="true">https://kannada.asianetnews.com/cine-world/bollywood-movie-ramayana-a-whopping-rs-375-crore-is-being-spent-just-on-the-global-promotion-of-this-film/articleshow-14vklf9</guid>
            <pubDate>Sun, 26 Jul 2026 13:54:57 +0530</pubDate>
            <description><![CDATA[&lt;p&gt;ವಾಸ್ತವವಾಗಿ ಜುಲೈ 24ರಂದು ಈ ಸಿನಿಮಾದ ಟ್ರೇಲರ್ ಬರಬೇಕಿತ್ತು. ಆದರೆ ಅದರ ಹಿಂದೆ ಒಂದು ಬಲವಾದ ಕಾರಣವಿದೆ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಸೆಳೆಯಲು ಸೋನಿ ಪಿಕ್ಚರ್ಸ್ ಜೊತೆಗೂಡಿರುವ ಚಿತ್ರತಂಡ, ಹಾಲಿವುಡ್ ಸಿನಿಮಾಗಳ ರೇಂಜ್&zwnj;ನಲ್ಲಿ ಈ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಲು ಪ್ಲ್ಯಾನ್ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9f87pfshc1v3z84nnfrhvx,imgname-ramayana-movie-1784876900047.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬರೀ ಪ್ರಚಾರಕ್ಕೇ ಇಷ್ಟೊಂದು ಕೋಟಿ!? ಯಶ್ 'ರಾಮಾಯಣ' ತಂಡದಿಂದ ಭರ್ಜರಿ ಪ್ಲ್ಯಾನ್: ಭಾರತೀಯ ಸಿನಿಮಾದ ಇತಿಹಾಸದಲ್ಲೇ ಇದು ಮೊದಲು!&lt;/strong&gt;&lt;/p&gt;&lt;p&gt;ಈಗ ಕಾಲ ಬದಲಾಗಿದೆ. ಭಾರತೀಯ ಸಿನಿಮಾಗಳು ಕೇವಲ ಗಲ್ಲಿಯಿಂದ ದಿಲ್ಲಿಗೆ ಮಾತ್ರವಲ್ಲ, ದಿಲ್ಲಿಯಿಂದ ಲಾಸ್ ಏಂಜಲೀಸ್&zwnj;ವರೆಗೂ ಅಬ್ಬರಿಸುತ್ತಿವೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ನಿರ್ದೇಶಕ ನಿತೇಶ್ ತಿವಾರಿ ಕನಸಿನ ಕೂಸು 'ರಾಮಾಯಣ'. ಈ ಸಿನಿಮಾದ ಬಗ್ಗೆ ಕೇಳಿಬರುತ್ತಿರುವ ಒಂದೊಂದು ಸುದ್ದಿಯೂ ಚಿತ್ರಪ್ರೇಮಿಗಳ ಹುಬ್ಬೇರಿಸುವಂತೆ ಮಾಡುತ್ತಿದೆ. ಈಗಂತೂ ಈ ರಾಮಾಯಣ (Ramayana) ಸಿನಿಮಾ ಮಾಡಿರುವ 'ಪ್ರಚಾರದ ಬಜೆಟ್' ಪ್ಲ್ಯಾನ್ ಕೇಳಿದ್ರೆ ಯಾರಾದ್ರೂ ದಂಗಾಗೋದು ಗ್ಯಾರಂಟಿ!&lt;/p&gt;&lt;h2&gt;ಬಜೆಟ್ ಕೇಳಿದ್ರೆ ತಲೆ ಸುತ್ತೋದು ಪಕ್ಕಾ!&lt;/h2&gt;&lt;p&gt;ಸಾಮಾನ್ಯವಾಗಿ ಒಂದು ದೊಡ್ಡ ಮಟ್ಟದ ಸಿನಿಮಾದ ಒಟ್ಟು ಬಜೆಟ್ 100 ಅಥವಾ 200 ಕೋಟಿ ಇರುತ್ತದೆ. ಆದರೆ, ನಮ್ಮ 'ರಾಕಿಂಗ್ ಸ್ಟಾರ್' ಯಶ್ (Yash) ಮತ್ತು ನಮಿತ್ ಮಲ್ಹೋತ್ರಾ (Namith Malhotra) ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ 'ರಾಮಾಯಣ' ಸಿನಿಮಾದ ಕೇವಲ ಪ್ರಚಾರಕ್ಕಾಗಿ (Promotions) ಖರ್ಚು ಮಾಡುತ್ತಿರುವ ಹಣ ಎಷ್ಟು ಗೊತ್ತಾ? ಅಕ್ಷರಶಃ 375 ಕೋಟಿ ರೂಪಾಯಿಗಳು!&lt;/p&gt;&lt;p&gt;ಹೌದು, ಒಂದು ಬೃಹತ್ ಸಿನಿಮಾವನ್ನೇ ನಿರ್ಮಾಣ ಮಾಡಬಹುದಾದ ಮೊತ್ತವನ್ನು ಚಿತ್ರತಂಡ ಕೇವಲ ಜನರಿಗೆ ಸಿನಿಮಾ ತಲುಪಿಸಲು ಮೀಸಲಿಟ್ಟಿದೆ. ಇದರಲ್ಲಿ ಭಾರತೀಯ ಮಾರುಕಟ್ಟೆಗೆ 140 ಕೋಟಿ ಹಾಗೂ ವಿದೇಶಿ ಮಾರುಕಟ್ಟೆಗಾಗಿ ಸೋನಿ ಪಿಕ್ಚರ್ಸ್ ಸಹಯೋಗದೊಂದಿಗೆ 235 ಕೋಟಿ ರೂಪಾಯಿಗಳನ್ನು ಸುರಿಯಲಾಗುತ್ತಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ!&lt;/p&gt;&lt;p&gt;ಟ್ರೇಲರ್ ಮುಂದೂಡಿಕೆಯ ಹಿಂದಿದೆ ಅಂತರರಾಷ್ಟ್ರೀಯ 'ಗೇಮ್ ಪ್ಲ್ಯಾನ್'&lt;/p&gt;&lt;p&gt;ವಾಸ್ತವವಾಗಿ ಜುಲೈ 24ರಂದು ಈ ಸಿನಿಮಾದ ಟ್ರೇಲರ್ ಬರಬೇಕಿತ್ತು. ಆದರೆ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾದರೂ, ಅದರ ಹಿಂದೆ ಒಂದು ಬಲವಾದ ಕಾರಣವಿದೆ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಸೆಳೆಯಲು ಸೋನಿ ಪಿಕ್ಚರ್ಸ್ ಜೊತೆಗೂಡಿರುವ ಚಿತ್ರತಂಡ, ಹಾಲಿವುಡ್ ಸಿನಿಮಾಗಳ ರೇಂಜ್&zwnj;ನಲ್ಲಿ ಈ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಲು ಪ್ಲ್ಯಾನ್ ಮಾಡಿದೆ. ಹೀಗಾಗಿಯೇ ಟ್ರೇಲರ್ ಬಿಡುಗಡೆಯನ್ನು ಸ್ವಲ್ಪ ಮುಂದೂಡಿ, ಅದ್ದೂರಿ ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಆದರೆ, ಅದಕ್ಕೆ ಹೇಳಿರೋ ಕಾರಣ ಬೇರೆ!&lt;/p&gt;&lt;h3&gt;ಯಾರೆಲ್ಲಾ ಇದ್ದಾರೆ ಈ ಬಿಗ್ ಬಜೆಟ್ ಸಿನಿಮಾದಲ್ಲಿ?&lt;/h3&gt;&lt;p&gt;ಈ ಸಿನಿಮಾದ ಕಾಸ್ಟಿಂಗ್ ಕೇಳಿದ್ರೆ ಯಾರಿಗೆ ತಾನೇ ಕುತೂಹಲ ಬರಲ್ಲ ಹೇಳಿ? ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ಸೌಮ್ಯ ಸೀತೆಯಾಗಿ ಸಾಯಿ ಪಲ್ಲವಿ ಮಿಂಚಲಿದ್ದಾರೆ. ಇನ್ನು ಎಲ್ಲರಿಗಿಂತ ಹೆಚ್ಚಾಗಿ ನಮ್ಮ 'ಮಾನ್ಸ್ಟರ್' ಯಶ್ ಇಲ್ಲಿ ರಾವಣಾಸುರನಾಗಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಇವರ ಜೊತೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ. ಆರ್. ರೆಹಮಾನ್ ಅವರ ಜುಗಲ್ಬಂದಿ ಸಿನಿಮಾಗೆ ಮತ್ತಷ್ಟು ಮೆರುಗು ನೀಡಲಿದೆ.&lt;/p&gt;&lt;p&gt;ದೀಪಾವಳಿಗೆ ಬರ್ತಿದ್ದಾನೆ ಈ ದಶಕದ ಮಹಾ ನಾಯಕ!&lt;/p&gt;&lt;p&gt;ಇಡೀ ಸಿನಿಮಾವನ್ನು ಐಮ್ಯಾಕ್ಸ್ (IMAX) ಫಾರ್ಮ್ಯಾಟ್&zwnj;ನಲ್ಲಿ ಅತ್ಯಾಧುನಿಕ ವಿಎಫ್&zwnj;ಎಕ್ಸ್ ಬಳಸಿ ಚಿತ್ರೀಕರಿಸಲಾಗುತ್ತಿದೆ. ಈ ವರ್ಷದ ದೀಪಾವಳಿಗೆ ಚಿತ್ರದ ಮೊದಲ ಭಾಗ ಬಿಡುಗಡೆಯಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ 'ರಾಮಾಯಣ' ಬರೀ ಸಿನಿಮಾ ಆಗಿ ಉಳಿಯದೆ, ಭಾರತೀಯ ಚಿತ್ರರಂಗದ ಹೆಮ್ಮೆಯಾಗಿ ವಿಶ್ವದಾದ್ಯಂತ ಸದ್ದು ಮಾಡುವುದು ಖಚಿತವಾಗಿದೆ. 4 ಸಾವಿರ ಕೋಟಿ ಬಜೆಟ್, ಮುನ್ನೂರ ಎಪ್ಪತ್ತೈದು ಕೋಟಿ ಪ್ರಚಾರ.. ಅಬ್ಬಬ್ಬಾ! ಈ ರೇಂಜ್ ಅಬ್ಬರ ನೋಡಿದ್ರೆ ಬಾಕ್ಸ್ ಆಫೀಸ್ ಸುನಾಮಿ ಫಿಕ್ಸ್ ಅನ್ಸುತ್ತೆ ಅಲ್ವಾ? ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಬಿಡುಗಡೆಗೆ.. ಅಷ್ಟರಲ್ಲಿ ಸಿನಿಮಾ ಪ್ರಚಾರದ ಹವಾ ಅದೆಲ್ಲಿಗೆ ಮುಟ್ಟುತ್ತೋ ಏನೋ!&lt;/p&gt;]]></content:encoded>
            <category>world-news</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/bollywood-movie-ramayana-a-whopping-rs-375-crore-is-being-spent-just-on-the-global-promotion-of-this-film/articleshow-14vklf9"/>
        </item>
        <item>
            <title><![CDATA[ಸತ್ಯ ಹೇಳಿದ್ದೇ ಮುಳುವಾಯ್ತಾ, ಕೋಟಿ ಸಂಬಳದ ಉದ್ಯೋಗ ಕಳೆದುಕೊಂಡ ನೆಟ್‌ಫ್ಲಿಕ್ಸ್ ಎಕ್ಸಿಕ್ಯೂಟಿವ್!]]></title>
            <link>https://kannada.asianetnews.com/world-news/netflix-executive-lawsuit-kevin-baillie-fired-ketamine-treatment-netflix-lawsuit-eyeline-studios-vfx-head-fired-gdp/articleshow-19ys87b</link>
            <guid isPermaLink="true">https://kannada.asianetnews.com/world-news/netflix-executive-lawsuit-kevin-baillie-fired-ketamine-treatment-netflix-lawsuit-eyeline-studios-vfx-head-fired-gdp/articleshow-19ys87b</guid>
            <pubDate>Mon, 27 Jul 2026 14:14:11 +0530</pubDate>
            <description><![CDATA[ಕಂಪನಿಯ 'ವಿಶ್ವಾಸ ವೃದ್ಧಿ ವ್ಯಾಯಾಮ'ದ ವೇಳೆ ತಮ್ಮ ಖಿನ್ನತೆಯ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದ ನೆಟ್&zwnj;ಫ್ಲಿಕ್ಸ್&zwnj;ನ ಹಿರಿಯ ಅಧಿಕಾರಿಯೊಬ್ಬರನ್ನು ವಜಾಗೊಳಿಸಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ, ಅವರು ತಾರತಮ್ಯ ಮತ್ತು ಅನ್ಯಾಯದ ಆರೋಪದ ಮೇಲೆ ಈಗ ನೆಟ್&zwnj;ಫ್ಲಿಕ್ಸ್ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyh9j5x9qmdn6xzt8vepkzfy,imgname-kevin-baillie-was-fired-from-his-role-at-netflix-1785139369896.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕ್ಯಾಲಿಫೋರ್ನಿಯಾ: &lt;/strong&gt;ಕಂಪನಿಯ ಆಂತರಿಕ ತರಬೇತಿ ಶಿಬಿರದ (Retreat) &lsquo;ವಿಶ್ವಾಸ ವೃದ್ಧಿ ವ್ಯಾಯಾಮ&rsquo;ದ (Trust Exercise) ವೇಳೆ ತಾವು ಖಿನ್ನತೆಗಾಗಿ ವೈದ್ಯಕೀಯವಾಗಿ ಕೆಟಮೈನ್ (Ketamine) ಚಿಕಿತ್ಸೆ ಪಡೆದಿದ್ದಾಗಿ ಒಪ್ಪಿಕೊಂಡ ನೆಟ್&zwnj;ಫ್ಲಿಕ್ಸ್&zwnj;ನ ಹಿರಿಯ ಕಾರ್ಯನಿರ್ವಾಹಕರೊಬ್ಬರನ್ನು ಕಂಪನಿ ವಜಾಗೊಳಿಸಿದೆ. ಈ ಅನಿರೀಕ್ಷಿತ ಕ್ರಮದಿಂದ ಆಘಾತಕ್ಕೊಳಗಾಗಿರುವ ಅಧಿಕಾರಿ, ಈಗ ಜಾಗತಿಕ ಸ್ಟ್ರೀಮಿಂಗ್ ದೈತ್ಯ ನೆಟ್&zwnj;ಫ್ಲಿಕ್ಸ್ (Netflix) ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಆರಂಭಿಸಿದ್ದಾರೆ.&lt;/p&gt;&lt;p&gt;ನೆಟ್&zwnj;ಫ್ಲಿಕ್ಸ್&zwnj;ನ ಆಂತರಿಕ ಉತ್ಪಾದನಾ ತಂತ್ರಜ್ಞಾನ, ದೃಶ್ಯ ಪರಿಣಾಮಗಳು (VFX) ಮತ್ತು ವರ್ಚುವಲ್ ಉತ್ಪಾದನಾ ಸ್ಟುಡಿಯೋ ಆದ &lsquo;ಐಲೈನ್ ಸ್ಟುಡಿಯೋಸ್&rsquo;ನಲ್ಲಿ (Eyeline Studios) ಉಪಾಧ್ಯಕ್ಷ ಹಾಗೂ ಸೃಜನಶೀಲ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಕೆವಿನ್ ಬೈಲ್ಲಿ (Kevin Baillie) ಅವರೇ ಕಂಪನಿ ವಿರುದ್ಧ ಮೊಕದ್ದಮೆ ಹೂಡಿರುವ ಮಾಜಿ ಉದ್ಯೋಗಿ. ಏಪ್ರಿಲ್ 2026 ರಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.&lt;/p&gt;&lt;h2&gt;ಚಿಕಿತ್ಸೆಯ ಹಿನ್ನೆಲೆ ಮತ್ತು 'ವಿಶ್ವಾಸ ವ್ಯಾಯಾಮ'ದ ಎಡವಟ್ಟು&lt;/h2&gt;&lt;p&gt;&lsquo;ದಿ ನ್ಯೂಯಾರ್ಕ್ ಪೋಸ್ಟ್&rsquo; ಪ್ರಕಟಿಸಿರುವ ವರದಿಯ ಪ್ರಕಾರ, ಕೆವಿನ್ ಬೈಲ್ಲಿ ಸಲ್ಲಿಸಿರುವ ಮೊಕದ್ದಮೆಯ ಪ್ರತಿಯಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಬೈಲ್ಲಿ ಅವರು ತಮ್ಮ ತಾಯಿಯ ನಿಧನದ ನಂತರ ತೀವ್ರವಾದ ಕ್ಲಿನಿಕಲ್ ಖಿನ್ನತೆಗೆ (Clinical Depression) ಒಳಗಾಗಿದ್ದರು. ಇದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಭಾಗವಾಗಿ, ಅವರು 2022 ರ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಸಾಂಟಾ ಬಾರ್ಬರಾ ಚಿಕಿತ್ಸಾಲಯದಲ್ಲಿ ವೈದ್ಯರ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಕೆಟಮೈನ್ ಔಷಧಿಯನ್ನು ಪಡೆದುಕೊಂಡಿದ್ದರು.&lt;/p&gt;&lt;p&gt;ಆದರೆ, ಜನವರಿ 2026 ರಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಸೆಂಡೆರೊ ರಾಂಚ್&zwnj;ನಲ್ಲಿ ನೆಟ್&zwnj;ಫ್ಲಿಕ್ಸ್ ಆಯೋಜಿಸಿದ್ದ ಕಂಪನಿಯ ವಾರ್ಷಿಕ ರಿಟ್ರೀಟ್&zwnj;ನಲ್ಲಿ ಪರಿಸ್ಥಿತಿ ತಲೆಕೆಳಗಾಯಿತು. ಉದ್ಯೋಗಿಗಳಲ್ಲಿ ಪರಸ್ಪರ ನಂಬಿಕೆ ಹೆಚ್ಚಿಸಲು ಹಮ್ಮಿಕೊಳ್ಳಲಾಗಿದ್ದ &quot;ದುರ್ಬಲತೆ-ವಿಶ್ವಾಸ&quot; (Vulnerability-Trust) ವ್ಯಾಯಾಮದ ಸಂವಾದದ ಸಮಯದಲ್ಲಿ, ಬೈಲ್ಲಿ ಅವರು ಸಹೋದ್ಯೋಗಿಗಳ ಎದುರು ಮುಕ್ತವಾಗಿ ತಮ್ಮ ಖಿನ್ನತೆ ಮತ್ತು ಅದಕ್ಕಾಗಿ ತಾವು ಪಡೆದ ಕೆಟಮೈನ್ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಹಂಚಿಕೊಂಡಿದ್ದರು.&lt;/p&gt;&lt;h2&gt;ಸಂಶಯದ ಕಣ್ಣಿಂದ ನೋಡಿದ ನೆಟ್&zwnj;ಫ್ಲಿಕ್ಸ್ ತನಿಖಾಧಿಕಾರಿಗಳು&lt;/h2&gt;&lt;p&gt;ಬೈಲ್ಲಿ ಅವರು ಕೇವಲ ವೈದ್ಯಕೀಯ ಕಾರಣಗಳಿಗಾಗಿ ಆ ಔಷಧಿಯನ್ನು ತೆಗೆದುಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದರೂ, ನೆಟ್&zwnj;ಫ್ಲಿಕ್ಸ್ ಮ್ಯಾನೇಜ್&zwnj;ಮೆಂಟ್ ಈ ಮುಕ್ತ ಒಪ್ಪಿಗೆಯನ್ನು ಗಂಭೀರವಾಗಿ ಪರಿಗಣಿಸಿತು. ಮಾರ್ಚ್ 18, 2026 ರಂದು ಕಂಪನಿಯ ಆಂತರಿಕ ತನಿಖಾಧಿಕಾರಿಯೊಬ್ಬರು ಬೈಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದರು. &quot;ಅವರು ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದರೂ, ತನಿಖಾಧಿಕಾರಿಗಳು ಅದನ್ನು ಕೇವಲ ಮನರಂಜನಾ ಮಾದಕವಸ್ತು ಬಳಕೆ (Recreational Drug Use) ಎಂಬ ಸಂಶಯ ಬರುವ ರೀತಿಯಲ್ಲಿ ಪ್ರಶ್ನಿಸಿ ಮಾನಸಿಕ ಕಿರುಕುಳ ನೀಡಿದ್ದರು&quot; ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಅಸಭ್ಯ ವರ್ತನೆಯ ಆರೋಪ ಮತ್ತು ವಿಲಕ್ಷಣ ಘಟನೆ&lt;/h2&gt;&lt;p&gt;ಅಂತಿಮವಾಗಿ ಈ ವರ್ಷದ ಏಪ್ರಿಲ್&zwnj;ನಲ್ಲಿ ನೆಟ್&zwnj;ಫ್ಲಿಕ್ಸ್ ಕೆವಿನ್ ಬೈಲ್ಲಿ ಅವರನ್ನು ಅಧಿಕೃತವಾಗಿ ಕೆಲಸದಿಂದ ವಜಾಗೊಳಿಸಿತು. ಕಂಪನಿಯ ವಕೀಲರು ಸಹ &quot;ಕೆಟಮೈನ್ ಚಿಕಿತ್ಸೆಯ ಕುರಿತಾದ ವಿಚಾರವೇ ಅವರ ವಜಾಕ್ಕೆ ಮುಖ್ಯ ಕಾರಣ&quot; ಎಂಬುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ನಿಯಮಾವಳಿಗಳ ಪ್ರಕಾರ ಬೈಲ್ಲಿಗೆ ಸಿಗಬೇಕಾಗಿದ್ದ ಒಂದು ವರ್ಷದ ಬೇರ್ಪಡಿಕೆ ವೇತನವನ್ನು (Severance Pay) ನೀಡಲು ಸಹ ಕಂಪನಿ ನಿರಾಕರಿಸಿದೆ.&lt;/p&gt;&lt;p&gt;ಆದರೆ, ಕಂಪನಿಯು ತನ್ನ ತನಿಖಾ ವರದಿಯಲ್ಲಿ ಬೈಲ್ಲಿ ಅವರ ಮೇಲಿನ ಅಶ್ಲೀಲತೆ ಮತ್ತು ಮದ್ಯಪಾನದ ಆರೋಪಗಳನ್ನು ಮುನ್ನೆಲೆಗೆ ತಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೈಲ್ಲಿ, &quot;ಹಿಂದಿನ ಕಾರ್ಯಕ್ಷಮತೆಯ ವಿಮರ್ಶೆಯ (Performance Review) ಸಮಯದಲ್ಲಿ ಪ್ರೀತಿಯಿಂದ ಒಂದು ಅಥವಾ ಎರಡು ಬಾರಿ ಆಡುಭಾಷೆಯ ಕೆಟ್ಟ ಪದಗಳನ್ನು (F-bombs) ಬಳಸಬಹುದೇ ವಿನಃ ವೃತ್ತಿಪರತೆಯನ್ನು ಸಂಪೂರ್ಣವಾಗಿ ಬಿಡಬಾರದು ಎಂದು ನನಗೆ ಹಿರಿಯರೇ ಸಲಹೆ ನೀಡಿದ್ದರು&quot; ಎಂದು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಅದೇ ರಿಟ್ರೀಟ್&zwnj;ನಲ್ಲಿ ನಡೆದ ಮತ್ತೊಂದು ವಿಲಕ್ಷಣ ಘಟನೆಯನ್ನೂ ಮೊಕದ್ದಮೆಯಲ್ಲಿ ವಿವರಿಸಲಾಗಿದೆ. ವಿಶ್ವಾಸ ವ್ಯಾಯಾಮದ ಮುಕ್ತ ಸಂಭಾಷಣೆಯ ವೇಳೆ, ತಾವು ತಲೆಯ ಮೇಲೆ ನಿಂತು (Headstand) ಗಿನ್ನೆಸ್ ಬಿಯರ್ ಕುಡಿಯುವ ವಿಶಿಷ್ಟ ಕಲೆಯನ್ನು ತಮ್ಮ ಮಾಜಿ ಮಾವನಿಂದ ಕಲಿತಿರುವುದಾಗಿ ಬೈಲ್ಲಿ ಹಂಚಿಕೊಂಡಿದ್ದರು. ಇದನ್ನು ಕೇಳಿದ ಸಹೋದ್ಯೋಗಿಯೊಬ್ಬರು ತಕ್ಷಣವೇ ಅದನ್ನು ಪ್ರದರ್ಶಿಸುವಂತೆ ಕೇಳಿಕೊಂಡಾಗ, ಶಿಬಿರದ ನಿಯಮದಂತೆ ಮುಕ್ತತೆಯನ್ನು ಗೌರವಿಸಿ ಬೈಲ್ಲಿ ಆ ಟ್ರಿಕ್ ಅನ್ನು ಪ್ರದರ್ಶಿಸಿದ್ದರು. ಕಂಪನಿ ಈಗ ಇದನ್ನು ಅಶಿಸ್ತು ಎಂದು ಬಿಂಬಿಸುತ್ತಿದೆ ಎಂಬುದು ಅವರ ವಾದ.&lt;/p&gt;&lt;h2&gt;ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಉಪಾಧ್ಯಕ್ಷ&lt;/h2&gt;&lt;p&gt;ತಮ್ಮ ಖಿನ್ನತೆಯ ವೈದ್ಯಕೀಯ ಚಿಕಿತ್ಸೆಯನ್ನೇ ಅಸ್ತ್ರವಾಗಿ ಬಳಸಿ, ಕಂಪನಿಯು ತಾರತಮ್ಯ ಎಸಗಿದೆ ಮತ್ತು ಅನ್ಯಾಯವಾಗಿ ತಮ್ಮನ್ನು ವಜಾಗೊಳಿಸಿದೆ ಎಂದು ಕೆವಿನ್ ಬೈಲ್ಲಿ ಆರೋಪಿಸಿದ್ದಾರೆ. ಸದ್ಯ ನೆಟ್&zwnj;ಫ್ಲಿಕ್ಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿರುವ ಅವರು, ತೀರ್ಪುಗಾರರ ಸಮ್ಮುಖದಲ್ಲಿ ವಿಚಾರಣೆ (Jury Trial), ಸೂಕ್ತ ಪರಿಹಾರ, ಕಳೆದುಹೋದ ವೇತನದ ಮರುಪಾವತಿ, ಮಾನಸಿಕ ಯಾತನೆಗೆ ಪರಿಹಾರ ಹಾಗೂ ಕಂಪನಿಯ ಬೇಜವಾಬ್ದಾರಿತನಕ್ಕೆ ದಂಡನಾತ್ಮಕ ಹಾನಿಗಳನ್ನು (Punitive Damages) ನೀಡುವಂತೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/netflix-executive-lawsuit-kevin-baillie-fired-ketamine-treatment-netflix-lawsuit-eyeline-studios-vfx-head-fired-gdp/articleshow-19ys87b"/>
        </item>
        <item>
            <title><![CDATA['ಗಡಿ ಆತಿಕ್ರಮಣ ಮಾಡಿದ್ದು ನೀವು, ಪ್ರಶ್ನಿಸುತ್ತಿರುವುದು ನಾವು'  ಚೀನಾ ಉದ್ಧಟತನಕ್ಕೆ ಭಾರತದ ಖಡಕ್ ತಿರುಗೇಟು]]></title>
            <link>https://kannada.asianetnews.com/india-news/india-slams-china-over-border-violations-ministry-of-external-affairs-counters-beijing-false-claims-on-sovereignty-gdp/articleshow-442uw9d</link>
            <guid isPermaLink="true">https://kannada.asianetnews.com/india-news/india-slams-china-over-border-violations-ministry-of-external-affairs-counters-beijing-false-claims-on-sovereignty-gdp/articleshow-442uw9d</guid>
            <pubDate>Sat, 25 Jul 2026 14:38:54 +0530</pubDate>
            <description><![CDATA[ಚೀನಾದ ಏಕಪಕ್ಷೀಯ ವರದಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಜಮ್ಮು-ಕಾಶ್ಮೀರ ಮತ್ತು ಲಡಾಖ್&zwnj;ನಲ್ಲಿ ಚೀನಾವೇ ಭಾರತೀಯ ಭೂಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದೆ. ದ್ವಿಪಕ್ಷೀಯ ಸಂಬಂಧಗಳು ಸಹಜ ಸ್ಥಿತಿಗೆ ಮರಳಲು ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವುದು ಅನಿವಾರ್ಯ ಎಂದು ಭಾರತ ಪುನರುಚ್ಚರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-ani20250722182806,imgname-image-1216b603-be94-419b-95fa-7aa55174848e.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಭಾರತವು ಚೀನಾದ ಸಾರ್ವಭೌಮತ್ವವನ್ನು ಎಂದಿಗೂ ಉಲ್ಲಂಘಿಸಿಲ್ಲ, ಆದರೆ ಚೀನಾ ಮಾತ್ರ ಜಮ್ಮು-ಕಾಶ್ಮೀರ ಮತ್ತು ಲಡಾಖ್&zwnj;ನ ಭಾರತೀಯ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಭಾರತ ಸರ್ಕಾರ ಶುಕ್ರವಾರ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವೆ ಮನಿಲಾದಲ್ಲಿ ನಡೆದ ದ್ವಿಪಕ್ಷೀಯ ಸಭೆಯ ಕುರಿತು ಚೀನಾ ಬಿಡುಗಡೆ ಮಾಡಿದ ಏಕಪಕ್ಷೀಯ ವರದಿಗೆ (Official Readout) ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಮೂಲಕ ದಿಟ್ಟ ತಿರುಗೇಟು ನೀಡಿದೆ.&lt;/p&gt;&lt;p&gt;ಆಸಿಯಾನ್ (ASEAN) ಸಮ್ಮೇಳನದ ಸಂದರ್ಭದಲ್ಲಿ ಮನಿಲಾದಲ್ಲಿ ಉಭಯ ನಾಯಕರ ಸಭೆ ನಡೆದಿತ್ತು. ಈ ಸಭೆಯ ನಂತರ ಚೀನಾ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ತೈವಾನ್ ಮತ್ತು ಟಿಬೆಟ್ (ಕ್ಸಿಜಾಂಗ್) ವಿಷಯಗಳಲ್ಲಿ ಭಾರತದ ನಿಲುವು ಬದಲಾಗಿಲ್ಲ ಹಾಗೂ ಭಾರತವು ಚೀನಾದ ಸಾರ್ವಭೌಮತ್ವವನ್ನು ಗೌರವಿಸುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು.&lt;/p&gt;&lt;p&gt;ಇದಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ನಡೆದ ನಿಯಮಿತ ಮಾಧ್ಯಮ ಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟನೆ ನೀಡಿದರು. ಸಾರ್ವಭೌಮತ್ವದ ವಿಷಯಕ್ಕೆ ಬಂದರೆ, ವಾಸ್ತವವಾಗಿ ಭಾರತವೇ ಈ ಪ್ರಶ್ನೆಗಳನ್ನು ಎತ್ತಬೇಕಾದ ಸ್ಥಿತಿಯಲ್ಲಿದೆ ಮತ್ತು ನಾವು ಅದನ್ನು ನಿರಂತರವಾಗಿ ಮಾಡುತ್ತಿದ್ದೇವೆ ಎಂದು ವಿದೇಶಾಂಗ ಸಚಿವರು ಚೀನಾಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತವು ಚೀನಾದ ಸಾರ್ವಭೌಮತ್ವವನ್ನು ಗೌರವಿಸುವ ತನ್ನ ನಿಲುವಿಗೆ ಬದ್ಧವಾಗಿದೆ. ಆದರೆ, ಚೀನಾ ಮಾತ್ರ 1963 ರಿಂದಲೂ ಜಮ್ಮು-ಕಾಶ್ಮೀರ ಹಾಗೂ ಲಡಾಖ್&zwnj;ನಲ್ಲಿ ಭಾರತೀಯ ಭೂಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಇಲ್ಲಿ ಭಾರತಕ್ಕಿರುವ ಸಾರ್ವಭೌಮ ಹಕ್ಕನ್ನು ಚೀನಾ ಕೂಡ ಅಧಿಕೃತವಾಗಿ ಒಪ್ಪಿಕೊಂಡಿದೆ ಎಂದು ಅವರು ನೆನಪಿಸಿದರು.&lt;/p&gt;&lt;h2&gt;ಸಿಪಿಇಸಿ (CPEC) ಯೋಜನೆಗೆ ಭಾರತದ ಬಲವಾದ ಆಕ್ಷೇಪ&lt;/h2&gt;&lt;p&gt;ಮುಂದುವರಿದು ಮಾತನಾಡಿದ ಜೈಸ್ವಾಲ್, ಜಮ್ಮು ಮತ್ತು ಕಾಶ್ಮೀರದ ಭಾರತಕ್ಕೆ ಸೇರಿದ ಆಕ್ರಮಿತ ಪ್ರದೇಶಗಳಲ್ಲಿ ಚೀನಾ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಯೋಜನೆಗಳನ್ನು ನಾವು ಬಲವಾಗಿ ಆಕ್ಷೇಪಿಸುತ್ತೇವೆ ಎಂದು ಹೇಳಿದರು. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯ ಪ್ರಮುಖ ಭಾಗವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಆಕ್ರಮಿತ ಶಕ್ಸ್&zwnj;ಗಮ್ ಕಣಿವೆಯ ಮೂಲಕ ಹಾದುಹೋಗುವುದರಿಂದ ಭಾರತ ಮೊದಲಿನಿಂದಲೂ ಇದನ್ನು ವಿರೋಧಿಸುತ್ತಾ ಬಂದಿದೆ.&lt;/p&gt;&lt;p&gt;ಅಕ್ಸಾಯ್ ಚಿನ್ ಮತ್ತು ಶಕ್ಸ್&zwnj;ಗಮ್ ಕಣಿವೆ ಸೇರಿದಂತೆ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸುಮಾರು 43,000 ಚದರ ಕಿಲೋಮೀಟರ್&zwnj;ಗಿಂತಲೂ ಹೆಚ್ಚು ಭಾರತೀಯ ಪ್ರದೇಶವನ್ನು ಚೀನಾ ಅಕ್ರಮವಾಗಿ ತನ್ನ ವಶದಲ್ಲಿಟ್ಟುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಶಕ್ಸ್&zwnj;ಗಮ್ ಕಣಿವೆಯಲ್ಲಿ ಚೀನಾ ದೊಡ್ಡ ಮಟ್ಟದ ಮಿಲಿಟರಿ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ವರದಿಗಳು ಭಾರತದ ಕಳವಳವನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;&lt;h2&gt;ಚೀನಾದ ಸುಳ್ಳು ಪ್ರಚಾರಕ್ಕೆ ಸೂತ್ರಧಾರರ ಆಕ್ರೋಶ&lt;/h2&gt;&lt;p&gt;ಮನಿಲಾ ಸಭೆಯ ನಂತರ ಚೀನಾ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಜೈಶಂಕರ್ ಅವರು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಚೀನಾಗೆ ಸಂಪೂರ್ಣ ಭರವಸೆ ನೀಡಿದ್ದಾರೆ ಎಂಬಂತೆ ಚಿತ್ರಿಸಲಾಗಿತ್ತು. ಆದರೆ, ಈ ವಿದ್ಯಮಾನಗಳ ಕುರಿತು ಹತ್ತಿರದಿಂದ ತಿಳಿದಿರುವ ರಾಜತಾಂತ್ರಿಕ ಮೂಲಗಳು, &quot;ವಿದೇಶಾಂಗ ಸಚಿವರು ಸಭೆಯಲ್ಲಿ ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ&quot; ಎಂದು ಸ್ಪಷ್ಟಪಡಿಸಿವೆ.&lt;/p&gt;&lt;p&gt;ಇತ್ತೀಚಿನ ತಿಂಗಳುಗಳಲ್ಲಿ ಚೀನಾದ ವಿದೇಶಾಂಗ ಸಚಿವಾಲಯವು ಭಾರತೀಯ ನಾಯಕರ ಹೇಳಿಕೆಗಳನ್ನು ತಿರುಚಿ, ತನ್ನದೇ ಆದ ರೀತಿಯಲ್ಲಿ ಅಧಿಕೃತ ವರದಿಗಳನ್ನು ಬಿಡುಗಡೆ ಮಾಡುತ್ತಿರುವುದು ಇದು ಮೂರನೇ ನಿದರ್ಶನವಾಗಿದೆ. ಇತ್ತೀಚೆಗೆ ಜೂನ್ 22 ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಮತ್ತು ವಾಂಗ್ ಯಿ ನಡುವೆ ನಡೆದ ಸಭೆಯ ಕುರಿತೂ ಚೀನಾ ಇಂತಹುದೇ ತಪ್ಪು ವರದಿ ನೀಡಿತ್ತು. ಆಗಲೂ ಭಾರತದ ವಿದೇಶಾಂಗ ಸಚಿವಾಲಯವು ಚೀನಾದ ಹೇಳಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿತ್ತು. &quot;ಪರಸ್ಪರರ ಪ್ರಮುಖ ಕಾಳಜಿಯ ವಿಷಯಗಳಿಗೆ ಸೂಕ್ಷ್ಮತೆಯನ್ನು ಪ್ರದರ್ಶಿಸುವುದು ಅತ್ಯಗತ್ಯ ಎಂದು ಎನ್&zwnj;ಎಸ್&zwnj;ಎ ಒತ್ತು ನೀಡಿದ್ದಾರೆ. ಇದು ಪರಸ್ಪರ ಗೌರವ ಮತ್ತು ಹಿತಾಸಕ್ತಿಗಳನ್ನೊಳಗೊಂಡ ಭಾರತದ ಒಟ್ಟಾರೆ ರಾಜತಾಂತ್ರಿಕ ನೀತಿಗೆ ಅನುಗುಣವಾಗಿದೆ&quot; ಎಂದು ಸ್ಪಷ್ಟೀಕರಣ ನೀಡಿತ್ತು.&lt;/p&gt;&lt;h2&gt;ದ್ವಿಪಕ್ಷೀಯ ಸಂಬಂಧ ಸಹಜ ಸ್ಥಿತಿಗೆ ಬರಲು ಗಡಿ ಶಾಂತಿ ಅನಿವಾರ್ಯ&lt;/h2&gt;&lt;p&gt;ಮನಿಲಾ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚೀನಾದ ಮಾರುಕಟ್ಟೆಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ನ್ಯಾಯಯುತ ಪ್ರವೇಶ, ಉಭಯ ದೇಶಗಳ ನಡುವಿನ ವ್ಯಾಪಾರ ಅಸಮತೋಲನವನ್ನು ಸರಿಪಡಿಸುವುದು ಮತ್ತು ನಂಬಿಕಸ್ಥ ಪೂರೈಕೆ ಸರಪಳಿಗಳನ್ನು (Supply Chains) ಹೊಂದುವ ಅಗತ್ಯತೆಯ ಬಗ್ಗೆ ಭಾರತದ ಕಳವಳಗಳನ್ನು ಬಲವಾಗಿ ಮಂಡಿಸಿದರು.&lt;/p&gt;&lt;p&gt;ಎಲ್ಲಕ್ಕಿಂತ ಮುಖ್ಯವಾಗಿ, ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತೆ ಸಹಜ ಸ್ಥಿತಿಗೆ ಮರಳಬೇಕಾದರೆ ಗಡಿ ಪ್ರದೇಶಗಳಲ್ಲಿ ಸಂಪೂರ್ಣ ಶಾಂತಿ ಮತ್ತು ನೆಮ್ಮದಿ ನೆಲೆಸುವುದು ಅತ್ಯಂತ ಮೊದಲ ಆದ್ಯತೆಯಾಗಿದೆ (Prerequisite) ಎಂದು ಜೈಶಂಕರ್ ಚೀನಾ ವಿದೇಶಾಂಗ ಸಚಿವರಿಗೆ ಖಡಕ್ ಆಗಿ ತಿಳಿಸಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/india-slams-china-over-border-violations-ministry-of-external-affairs-counters-beijing-false-claims-on-sovereignty-gdp/articleshow-442uw9d"/>
        </item>
        <item>
            <title><![CDATA[ಇನ್ಫೋಸಿಸ್‌ಗೆ ಸಂಕಷ್ಟ ತಂದ ಕೆಲಸದ ಸಮಯ, ಲೋಪ ಪತ್ತೆಯಾಗುತ್ತಿದ್ದಂತೆ 2 ಕೋಟಿ ರೂಪಾಯಿ ದಂಡ]]></title>
            <link>https://kannada.asianetnews.com/world-news/infosys-faces-rs-2-crore-fine-in-france-over-employee-time-tracking-compliance-issue/articleshow-7gwgut8</link>
            <guid isPermaLink="true">https://kannada.asianetnews.com/world-news/infosys-faces-rs-2-crore-fine-in-france-over-employee-time-tracking-compliance-issue/articleshow-7gwgut8</guid>
            <pubDate>Mon, 27 Jul 2026 15:40:53 +0530</pubDate>
            <description><![CDATA[&lt;p&gt;ಇನ್ಫೋಸಿಸ್ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಭಾರಿ ವಿವಾದ ಸೃಷ್ಟಿಸಿದ ಬಳಿಕ ಇದೀಗ ಕೆಲಸದ ಸಮಯದಲ್ಲಿ ಲೋಪ ಮಾಡಿದ ಪರಿಣಾಮ ಇದೀಗ 2 ಕೋಟಿ ರೂಪಾಯಿ ದಂಡಕ್ಕೆ ಗುರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdarbceny3hxajgneqkk3vz5,imgname-infosys-1766666383829.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ಯಾರಿಸ್ (ಜು.27)&lt;/strong&gt; ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ನೀಡಿದ 70 ಗಂಟೆ ಕೆಲಸ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಈ ಹೇಳಿಕೆಯಿಂದ ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ಕಳೆದ ವರ್ಷ ಭಾರಿ ಚರ್ಚಯಾಗಿತ್ತು. ಇದೀಗ ಈ ಚರ್ಚೆ ತಣ್ಣಾಗದ ಬೆನ್ನಲ್ಲೇ ಇನ್ಫೋಸಿಸ್&zwnj;ಗೆ ಆಘಾತ ಎದುರಾಗಿದೆ. ಉದ್ಯೋಗಿಗಳ ಕೆಲಸ ಸಮಯದ ವಿಚಾರದಲ್ಲಿ ಲೋಪ ಪತ್ತೆಯಾಗಿದ್ದು, ಬರೋಬ್ಬರಿ 2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. 70 ಗಂಟೆ ಅಲ್ಲ ವಾರದಲ್ಲಿ 35 ಗಂಟೆ ಮೀರುವಂತಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ.&lt;/p&gt;&lt;p&gt;ಫ್ರಾನ್ಸ್&zwnj;ನಲ್ಲಿರುವ ಇನ್ಫೋಸಿಸ್ ಕಚೇರಿಗೆ 2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಉದ್ಯೋಗಿಗಳ ಕೆಲಸದ ಸಮಯ, ಓವರ್ ಟೈಮ್ ಡ್ಯೂಟಿ ಸೇರಿದಂತೆ ಕಂಪನಿಯ ಎಂಪ್ಲಾಯ್ ಟೈಮ್ ಟ್ರಾಕಿಂಗ್&zwnj;ನಲ್ಲಿ ಗಂಭೀರ ಲೋಪಗಳನ್ನು ಪ್ಯಾರಿಸ್ ಸರ್ಕಾರ ಪತ್ತೆ ಹಚ್ಚಿದೆ. ಈ ಲೋಪ ಪತ್ತೆ ಹಚ್ಚಿದ ಫ್ರಾನ್ಸ್ ಕಾರ್ಮಿಕ ಇಲಾಖೆ 1,75,000 ಯುರೋ ( 2 ಕೋಟಿ ರೂಪಾಯಿ) ದಂಡ ವಿಧಿಸಿದೆ.&lt;/p&gt;&lt;h2&gt;ವರದಿ ನೀಡಿದ ಇನ್ಫೋಸಿಸ್&lt;/h2&gt;&lt;p&gt;ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳ ಪ್ರತಿ ದಿನ, ವಾರದ ಒಟ್ಟು ಗಂಟೆ ಕೆಲಸ ಮಾಡಿದ ಸಮಯ ಲೆಕ್ಕ ಹಾಕುವ ಟ್ರಾಕಿಂಗ್&zwnj;ನಲ್ಲಿ ಹಲವು ಲೋಪಗಳಿವೆ. ಉದ್ಯೋಗಿಗಳು ಎಷ್ಟು ಗಂಟೆ ಕೆಲಸ ಮಾಡಿದ್ದಾರೆ ಅನ್ನೋದರ ಕುರಿತು ಸ್ಪಷ್ಟತೆ ಇಲ್ಲ. ಉದ್ಯೋಗಿಗಳು ಹೆಚ್ಚುವರಿ ಸಮಯ ದುಡಿಸಿಕೊಳ್ಳಲಾಗುತ್ತಿದೆ ಅನ್ನೋ ಆರೋಪಗಳು ಇವೆ. ಇದಕ್ಕೆ ಪೂರಕವಾಗಿ ಟೈಮ್ ಟ್ರಾಕಿಂಗ್ ಲೋಪ ಪತ್ತೆಯಾಗಿದೆ. ಇನ್ಫೋಸಿಸ್ ಬಳಸುವ ಟೈಮ್ ಟ್ರಾಕಿಂಗ್ ಫ್ರಾನ್ಸ್ ಕಾನೂನಿಗೆ ಅನುಗುಣವಾಗಿಲ್ಲ ಎಂದು ಫ್ರಾನ್ಸ್ ಕಾರ್ಮಿಕ ಇಲಾಖೆ ದಂಡ ವಿಧಿಸಿದೆ. ತನಗೆ ವಿಧಿಸಿರುವ ಗಂಡ ಕುರಿತು ಇನ್ಫೋಸಿಸ್ ಇದೀಗ ಬಾಂಬೇ ಷೇರು ಮಾರುಕಟ್ಟೆ (BSE &amp;amp; NSE)ನಲ್ಲಿ ಉಲ್ಲೇಖಿಸಿದೆ.&lt;/p&gt;&lt;h2&gt;ವಾರಕ್ಕೆ 35 ಗಂಟೆ ಮಾತ್ರ ಕೆಲಸ&lt;/h2&gt;&lt;p&gt;ಫ್ರಾನ್ಸ್&zwnj;ನಲ್ಲಿ ಕಾರ್ಮಿಕ ನಿಯಮಗಳು ಕಠಿಣವಾಗಿದೆ. ಕಾರ್ಮಿಕರನ್ನು ಬೇಕಾಬಿಟ್ಟ ದುಡಿಸಿಕೊಳ್ಳುವಂತಿಲ್ಲ. ಟಾರ್ಗೆಟ್ ಸೇರಿದಂತೆ ಏನೇ ಇದ್ದರೂ ಹೆಚ್ಚಿಗೆ ದುಡಿಸಿಕೊಳ್ಳುವಂತಿಲ್ಲ. ಇನ್ನು ಓವರ್ ಟೈಮ್ ಮಾಡಿದರೂ ನಿರ್ದಿಷ್ಟ ಸಮಯ ಮೀರುವಂತಿಲ್ಲ. ಫ್ರಾನ್ಸ್&zwnj;ನಲ್ಲಿ ವಾರಕ್ಕೆ 35 ಗಂಟೆ ಕೆಲಸ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ. ಇನ್ಫೋಸಿಸ್ ಉದ್ಯೋಗಿಗಳ ಟ್ರಾಕಿಂಗ್&zwnj;ನಲ್ಲಿ ಪಾರದರ್ಶಕತೆ ಇಲ್ಲ ಎಂದು ದಂಡದ ನೋಟಿಸ್&zwnj;ನಲ್ಲಿ ಹೇಳಿದೆ.&lt;/p&gt;&lt;p&gt;ಫ್ರಾನ್ಸ್ ದಂಡದ ಕುರಿತು ಕಾನೂನು ರೀತಿಯಲ್ಲಿ ಪರಿಶೀಲಿಸಲಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ. ಇದರಿಂದ ಕಂಪನಿಯ ಕಾರ್ಯಚಟುವಟಿಕೆಗೆ ಯಾವುದೇ ಸಮಸ್ಯೆ ಇಲ್ಲ. ಲೋಪದ ಕುರಿತು ಪರಿಶೀಲಿಸಲಾಗುತ್ತದೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದೆ. ಫ್ರಾನ್ಸ್&zwnj;ನಲ್ಲಿ ಇನ್ಫೋಸಿಸ್ ಆಫೀಸ್ ಹಾಜರಾಜಿ ಕಡ್ಡಾಯ ಮಾಡಿದೆ. ಹೈಬ್ರಿಡ್ ಮಾಡೆಲ್ ದೂರ ಸರಿಸಿ ಸಂಪೂರ್ಣ ಆಫೀಸ್ ಹಾಜರಾತಿಗೆ ಮುಂದಾಗಿದೆ. ಈ ಪ್ರಯತ್ನಗಳ ನಡುವೆ ಉದ್ಯೋಗಿಗಳ ಸಮಯದ ಕುರಿತು ದಂಡ ಎದುರಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/infosys-faces-rs-2-crore-fine-in-france-over-employee-time-tracking-compliance-issue/articleshow-7gwgut8"/>
        </item>
        <item>
            <title><![CDATA[ಮಾನವನ ಬೇಜವಾಬ್ದಾರಿಗೆ ಬಲಿಯಾದ ಮೂಕಪ್ರಾಣಿ: ನ್ಯೂ ಮೆಕ್ಸಿಕೋದಲ್ಲಿ ವಿದ್ಯುತ್ ಕಂಬ ಏರಿ ಪ್ರಾಣಬಿಟ್ಟ ಕಪ್ಪು ಕರಡಿ!]]></title>
            <link>https://kannada.asianetnews.com/viral/viral-video-black-bear-trapped-on-an-electricity-poleon-22-foot-power-pole-in-new-mexico-gdp/articleshow-8c7xahp</link>
            <guid isPermaLink="true">https://kannada.asianetnews.com/viral/viral-video-black-bear-trapped-on-an-electricity-poleon-22-foot-power-pole-in-new-mexico-gdp/articleshow-8c7xahp</guid>
            <pubDate>Sat, 25 Jul 2026 13:49:40 +0530</pubDate>
            <description><![CDATA[ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ವಿದ್ಯುತ್ ಕಂಬವೇರಿದ ಕಪ್ಪು ಕರಡಿಯೊಂದು ವಿದ್ಯುತ್ ಸ್ಪರ್ಶಿಸಿ ಧಾರುಣವಾಗಿ ಸಾವನ್ನಪ್ಪಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸ್ಥಳದಲ್ಲಿ ಜಮಾಯಿಸಿದ ಜನರ ಗದ್ದಲದಿಂದಾಗಿ ಭಯಭೀತಗೊಂಡ ಕರಡಿ, ಕೆಳಗೆ ಇಳಿಯಲಾಗದೆ ಪ್ರಾಣ ಕಳೆದುಕೊಂಡಿದ್ದು, ಈ ಘಟನೆ ಮಾನವ-ವನ್ಯಜೀವಿ ಸಂಘರ್ಷದ ಕರಾಳ ಮುಖವನ್ನು ತೆರೆದಿಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyc3d6hg95rm8k5zbrjnp0xg,imgname-bear-trapped-on-an-electricity-pole-1784965143088.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕಬೇಕಾದ ವನ್ಯಜೀವಿಗಳು, ಮಾನವನ ನಗರೀಕರಣ ಮತ್ತು ಬೇಜವಾಬ್ದಾರಿತನದಿಂದಾಗಿ ಹೇಗೆ ಪ್ರಾಣ ಕಳೆದುಕೊಳ್ಳುತ್ತಿವೆ ಎಂಬುದಕ್ಕೆ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ಜುಲೈ 20 ರಂದು ನ್ಯೂ ಮೆಕ್ಸಿಕೋದ ಗ್ರಾಮೀಣ ಪ್ರದೇಶದ ಹೆದ್ದಾರಿಯೊಂದರಲ್ಲಿ ವಿದ್ಯುತ್ ಕಂಬದ ಮೇಲೆ ಸಿಲುಕಿಕೊಂಡ ಕಪ್ಪು ಕರಡಿಯೊಂದು, ಕೊನೆಗೆ ವಿದ್ಯುತ್ ಸ್ಪರ್ಶಿಸಿ ಅತ್ಯಂತ ಧಾರುಣವಾಗಿ ಸಾವನ್ನಪ್ಪಿದೆ. ಕರಡಿಯು ಸಾವಿನ ದವಡೆಯಲ್ಲಿ ಒದ್ದಾಡುತ್ತಿರುವ ವೀಡಿಯೊ ದೃಶ್ಯಾವಳಿಗಳು ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವನ್ಯಜೀವಿ ಪ್ರೇಮಿಗಳ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.&lt;/p&gt;&lt;h2&gt;22 ಅಡಿ ಎತ್ತರದಲ್ಲಿ ಸಾವಿನೊಂದಿಗೆ ಹೋರಾಟ&lt;/h2&gt;&lt;p&gt;ವರದಿಗಳ ಪ್ರಕಾರ, ಈ ಕಪ್ಪು ಕರಡಿಯು ನೆಲದಿಂದ ಸುಮಾರು 22 ಅಡಿ ಎತ್ತರದ ವಿದ್ಯುತ್ ಕಂಬದ ತುತ್ತತುದಿಗೆ ಏರಿ ಸಿಲುಕಿಕೊಂಡಿತ್ತು. ಆ ಕಂಬದಲ್ಲಿ ಬರೋಬ್ಬರಿ 7,200 ವೋಲ್ಟ್&zwnj;ಗಳ ಹೈ-ವೋಲ್ಟೇಜ್ ವಿದ್ಯುತ್ ಹರಿಯುವ ತಂತಿಗಳಿದ್ದವು. ಆ ನಿರ್ಜನ ಹೆದ್ದಾರಿಯಲ್ಲಿ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದ ಶಾನನ್ ಮುಲ್ಲೆನ್ಸ್ ಎಂಬುವವರು ಈ ಕರಡಿಯನ್ನು ಮೊದಲು ಗಮನಿಸಿದರು. ತಕ್ಷಣವೇ ತುರ್ತು ಸೇವೆಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು.&lt;/p&gt;&lt;p&gt;ಅದೇ ರಸ್ತೆಯಲ್ಲಿ ಸಾಗುತ್ತಿದ್ದ ರಾಬಿನ್ ಡಾಸನ್ ಎಂಬ ಮತ್ತೊಬ್ಬ ದಾರಿಹೋಕರು ಕೂಡ ಈ ದೃಶ್ಯವನ್ನು ಕಂಡು ತಲ್ಲಣಗೊಂಡರು. ಘಟನೆಯ ತೀವ್ರತೆಯನ್ನು ವಿವರಿಸಿದ ಡಾಸನ್, &quot;ಕರಡಿಯು ಹೈ-ವೋಲ್ಟೇಜ್ ವಿದ್ಯುತ್ ಕಂಬದ ಮೇಲ್ಭಾಗದಲ್ಲಿ ತೀವ್ರ ಸಂಕಷ್ಟದಲ್ಲಿತ್ತು. ಅದು ಬದುಕಲು ನಡೆಸುತ್ತಿದ್ದ ಹೋರಾಟ ಮತ್ತು ಉಸಿರುಗಟ್ಟಿಸುತ್ತಿದ್ದ ಭೀಕರ ಶಬ್ದ ರಸ್ತೆಯ ಆಚೆಗಿದ್ದ ನಮಗೂ ಸ್ಪಷ್ಟವಾಗಿ ಕೇಳಿಸುತ್ತಿತ್ತು ಎಂದು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಾರ್ವಜನಿಕರ ಆಕ್ರೋಶ&lt;/h2&gt;&lt;p&gt;ದುರಂತವೆಂದರೆ, ಅಧಿಕಾರಿಗಳ ಬೇಜವಾಬ್ದಾರಿತನ ಈ ಮೂಕಪ್ರಾಣಿಯ ಸಾವಿಗೆ ನೇರ ಕಾರಣವಾಯಿತು. ಡಾಸನ್ ಅವರು ಮೊದಲ ಬಾರಿ ಕರೆ ಮಾಡಿದ ನಂತರ ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಸ್ಥಳದಲ್ಲೇ ಕಾಯ್ದರೂ ಯಾವುದೇ ರಕ್ಷಣಾ ಸಿಬ್ಬಂದಿ ಬರಲಿಲ್ಲ. ಅವರು ಮತ್ತೊಮ್ಮೆ ತುರ್ತು ಸಂಖ್ಯೆ 911 ಗೆ ಕರೆ ಮಾಡಿದಾಗ, ಅಲ್ಲಿನ ಸಿಬ್ಬಂದಿ &quot;ಯಾರೂ ಬರುವುದಿಲ್ಲ, ಕರಡಿಗೆ ಸಿದ್ಧವಾದಾಗ ಅದೇ ಕೆಳಗೆ ಇಳಿಯುತ್ತದೆ&quot; ಎಂದು ಉಡಾಫೆಯ ಉತ್ತರ ನೀಡಿದರು.&lt;/p&gt;&lt;p&gt;ಇನ್ನೊಂದೆಡೆ, ವನ್ಯಜೀವಿ ಇಲಾಖೆಯು ಸ್ಥಳೀಯ ರವಾನೆದಾರರ ಮೂಲಕ ಸಾರ್ವಜನಿಕರಿಗೆ ಕರಡಿಯನ್ನು ಒಂಟಿಯಾಗಿ ಬಿಡುವಂತೆ ಸೂಚಿಸಿತ್ತು. ಕರಡಿಯು ಭಯಮುಕ್ತವಾದರೆ ತಾನಾಗಿಯೇ ಕೆಳಗೆ ಇಳಿಯುತ್ತದೆ ಎಂಬುದು ಇಲಾಖೆಯ ಆಲೋಚನೆಯಾಗಿತ್ತು. ಆದರೆ, ಹೆದ್ದಾರಿಯಲ್ಲಿ ಸಾಗುತ್ತಿದ್ದ ಜನರು ವಾಹನಗಳನ್ನು ನಿಲ್ಲಿಸಿ, ಮೊಬೈಲ್&zwnj;ಗಳಲ್ಲಿ ಕರಡಿಯ ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊ ಚಿತ್ರೀಕರಣ ಮಾಡಲು ವಿದ್ಯುತ್ ಕಂಬದ ಸುತ್ತಲೂ ಜಮಾಯಿಸಿದರು. ಸಾರ್ವಜನಿಕರ ಈ ಗದ್ದಲದಿಂದಾಗಿ ತೀವ್ರ ಭಯಭೀತಗೊಂಡ ಕರಡಿ, ಕೆಳಗೆ ಇಳಿಯಲಾಗದೆ ಕಂಬದ ಮೇಲೆಯೇ ಉಳಿಯುವಂತಾಯಿತು.&lt;/p&gt;&lt;h2&gt;ಕೊನೆಗೂ ಸಂಭವಿಸಿದ ದುರಂತ&lt;/h2&gt;&lt;p&gt;ಕೊನೆಗೆ ಜಿಲ್ಲಾಧಿಕಾರಿ ಮತ್ತು ವಿದ್ಯುತ್ ಸರಬರಾಜು ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ಹೊತ್ತಿಗೆ ತಡವಾಗಿತ್ತು. ಜನಸಂದಣಿಯ ಭಯದಿಂದ ಕಂಬದ ತುದಿಯಲ್ಲೇ ಕದಲದೆ ಕುಳಿತಿದ್ದ ಕರಡಿಗೆ ಹೈ-ವೋಲ್ಟೇಜ್ ತಂತಿ ತಗುಲಿ, ವಿದ್ಯುತ್ ಸ್ಪರ್ಶಿಸಿತ್ತು. ಯೂನಿಯನ್ ಕೌಂಟಿಯ ಶೆರಿಫ್ ಕರ್ಟಿಸ್ ಸ್ಕಾಗ್ಸ್ ಅವರು ಕರಡಿಯು ವಿದ್ಯುತ್ ಆಘಾತದಿಂದ ಮೃತಪಟ್ಟು ನೆಲಕ್ಕೆ ಬಿದ್ದಿರುವುದನ್ನು ದೃಢಪಡಿಸಿದರು.&lt;/p&gt;&lt;h2&gt;ವಾಸಸ್ಥಾನ ಕಳೆದುಕೊಳ್ಳುತ್ತಿರುವ ಕಪ್ಪು ಕರಡಿಗಳು&lt;/h2&gt;&lt;p&gt;ನ್ಯೂ ಮೆಕ್ಸಿಕೋದ ದಟ್ಟವಾದ ಅರಣ್ಯ ಮತ್ತು ಪರ್ವತ ಪ್ರದೇಶಗಳಲ್ಲಿ ವಾಸಿಸುವ ಈ ಕಪ್ಪು ಕರಡಿಗಳು ಕಪ್ಪು, ಕಂದು ಬಣ್ಣದಿಂದ ಹಿಡಿದು ಕೆಂಪು ಮತ್ತು ಹೊಂಬಣ್ಣದವರೆಗೂ ವಿಭಿನ್ನ ಬಣ್ಣಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ದಾಲ್ಚಿನ್ನಿ (Cinnamon) ಬಣ್ಣದ ಕರಡಿಗಳು ಹೆಚ್ಚು ಸಾಮಾನ್ಯ.&lt;/p&gt;&lt;p&gt;ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ಹೊಸ ಪ್ರದೇಶಗಳ ಹುಡುಕಾಟದಲ್ಲಿರುವ ಕಿರಿಯ ವಯಸ್ಸಿನ ಕರಡಿಗಳು ತಮ್ಮ ಸಾಂಪ್ರದಾಯಿಕ ಪರ್ವತ ಆವಾಸಸ್ಥಾನಗಳಿಂದ ದಾರಿ ತಪ್ಪಿ ಮಾನವ ವಸತಿ ಪ್ರದೇಶಗಳು ಹಾಗೂ ಹೆದ್ದಾರಿಗಳ ಕಡೆಗೆ ಅಲೆಯುತ್ತಿವೆ. ಈ ಸ್ಥಳಾಂತರವೇ ಕೊನೆಗೆ ಅವುಗಳ ಜೀವಕ್ಕೆ ಸಂಚಕಾರ ತರುತ್ತಿದೆ. ಕಡಬದ ಘಟನೆಯಂತೆ ಸಾರ್ವಜನಿಕರ ಅತಿಯಾದ ಕುತೂಹಲ ಮತ್ತು ಅಧಿಕಾರಿಗಳ ವಿಳಂಬ ಧೋರಣೆ ಸೇರಿ ನ್ಯೂ ಮೆಕ್ಸಿಕೋದಲ್ಲಿ ಒಂದು ಸುಂದರ ವನ್ಯಜೀವಿಯನ್ನು ಬಲಿಪಡೆದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/viral/viral-video-black-bear-trapped-on-an-electricity-poleon-22-foot-power-pole-in-new-mexico-gdp/articleshow-8c7xahp"/>
        </item>
        <item>
            <title><![CDATA[CJP ಪ್ರತಿಭಟನೆಯಲ್ಲಿ ಪಾಕಿಗಳ ಕುತಂತ್ರ: ಆಪರೇಷನ್​ ಸಿಂದೂರಕ್ಕೂ ಲಿಂಕ್​- ಶಾಕಿಂಗ್​ ಮಾಹಿತಿ ಕೊಟ್ಟ ಪೊಲೀಸ್​]]></title>
            <link>https://kannada.asianetnews.com/crime/pak-based-handles-active-during-op-sindoor-spread-rumours-amid-protests-says-cops-suc/articleshow-cao91v7</link>
            <guid isPermaLink="true">https://kannada.asianetnews.com/crime/pak-based-handles-active-during-op-sindoor-spread-rumours-amid-protests-says-cops-suc/articleshow-cao91v7</guid>
            <pubDate>Fri, 24 Jul 2026 19:52:57 +0530</pubDate>
            <description><![CDATA[ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯ ವೇಳೆ ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆಗಳು ತಪ್ಪು ಮಾಹಿತಿ ಹರಡುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 'ಆಪರೇಷನ್ ಸಿಂದೂರ'ದ ಸಮಯದಲ್ಲಿ ಸಕ್ರಿಯವಾಗಿದ್ದ ಇದೇ ಖಾತೆಗಳು, ನಕಲಿ ಪೋಸ್ಟ್&zwnj; ಮತ್ತು ಎಡಿಟೆಡ್ ವಿಡಿಯೋಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರಚೋದಿಸುವ ಗುರಿ ಹೊಂದಿವೆ ಎಂದು ವರದಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kya83maqb6gznbs8jztz3zcw,imgname-cjp-1784902963543.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ಜಂತರ್ ಮಂತರ್&zwnj;ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಸೋಷಿಯಲ್​ ಮೀಡಿಯಾಗಳು ಸಕತ್​ ಆಪರೇಟಿವ್​ ಆಗಿರುವುದು ಬೆಳಕಿಗೆ ಬಂದಿದೆ. ಆಪರೇಷನ್ ಸಿಂದೂರದ ಸಮಯದಲ್ಲಿ ಸಕ್ರಿಯವಾಗಿದ್ದ ಖಾತೆಗಳೇ ಈಗ ಮತ್ತೆ ಆ್ಯಕ್ಟೀವ್​ ಆಗಿರುವ ಶಾಕಿಂಗ್​ ವರದಿಯನ್ನು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಈ ಪಾಕಿಸ್ತಾನದ ಸೋಷಿಯಲ್​ ಮೀಡಿಯಾಗಳು ತಪ್ಪು ಮಾಹಿತಿ ಹರಡುವಲ್ಲಿ ಭಾಗಿಯಾಗಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಇದಾಗಲೇ 480 ಕ್ಕೂ ಹೆಚ್ಚು ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆಪರೇಷನ್ ಸಿಂದೂರದ ಸಮಯದಲ್ಲಿ ಅದೇ ಖಾತೆಗಳು ಸಕ್ರಿಯವಾಗಿದ್ದವು ಎಂದು ಹೇಳಿದ್ದಾರೆ.&lt;/p&gt;&lt;p&gt;ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್&zwnj;ನಲ್ಲಿ, ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಖಾತೆಗಳು ಜನರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಪ್ರಚೋದಿಸುವ ಉದ್ದೇಶದಿಂದ ವದಂತಿಗಳು, ನಕಲಿ ಪೋಸ್ಟ್&zwnj;ಗಳು ಮತ್ತು ಸಂಪಾದಿತ ವಿಡಿಯೋಗಳನ್ನು ಪ್ರಸಾರ ಮಾಡಲು ಚಾಲ್ತಿಯಲ್ಲಿರುವ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ. &quot;ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇಲ್ಲಿಯವರೆಗೆ, ವದಂತಿಗಳನ್ನು ಹರಡಲು ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿರುವ 480 ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಾವು ಗುರುತಿಸಿದ್ದೇವೆ. ನಾವು ಈ ಖಾತೆಗಳನ್ನು ನಿರ್ಬಂಧಿಸುತ್ತಿದ್ದೇವೆ. ಆಪರೇಷನ್ ಸಿಂದೂರದ ಸಮಯದಲ್ಲಿ ಸಕ್ರಿಯವಾಗಿದ್ದ ಅದೇ ಖಾತೆಗಳು ಇವು&quot; ಎಂದು ಅಧಿಕಾರಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಏನಿವರ ಉದ್ದೇಶ?&lt;/strong&gt;&lt;/h2&gt;&lt;p&gt;ಈ ಖಾತೆಗಳ ಪ್ರಾಥಮಿಕ ಉದ್ದೇಶವು ತಪ್ಪು ಮಾಹಿತಿಯನ್ನು ಹರಡುವುದು ಮತ್ತು ಪರಿಶೀಲಿಸದ ಮತ್ತು ದಾರಿತಪ್ಪಿಸುವ ವಿಷಯವನ್ನು ಆನ್&zwnj;ಲೈನ್&zwnj;ನಲ್ಲಿ ಪ್ರಸಾರ ಮಾಡುವ ಮೂಲಕ ಜನರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಪ್ರಚೋದಿಸುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಇಂತಹ ವಿಷಯಗಳಿಗೆ ಬಲಿಯಾಗದಂತೆ ಮನವಿ ಮಾಡಿದ ಅಧಿಕಾರಿ, ನಕಲಿ ಪೋಸ್ಟ್&zwnj;ಗಳು, ಸಂಪಾದಿತ ವೀಡಿಯೊಗಳು ಮತ್ತು ಅನಾಮಧೇಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್&zwnj;ಗಳ ಮೂಲಕ ಹಂಚಿಕೊಳ್ಳಲಾದ ಮಾಹಿತಿಯನ್ನು ತಪ್ಪು ಮಾಹಿತಿಯನ್ನು ಹರಡಲು ಬಳಸಲಾಗುತ್ತಿದೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಪೊಲೀಸರ ಮನವಿ&lt;/strong&gt;&lt;/h3&gt;&lt;p&gt;&quot;ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ, ನಕಲಿ ಪೋಸ್ಟ್&zwnj;ಗಳು, ಸಂಪಾದಿತ ವೀಡಿಯೊಗಳು ಅಥವಾ ಅನಾಮಧೇಯ ಹ್ಯಾಂಡಲ್&zwnj;ಗಳಿಂದ ಬರುವ ಮಾಹಿತಿಯಿಂದ ಪ್ರಚೋದಿಸಲ್ಪಡಬೇಡಿ ಎಂದು ನಾವು ಅವರಿಗೆ ಮನವಿ ಮಾಡುತ್ತೇವೆ&quot; ಎಂದು ಅಧಿಕಾರಿ ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವಿಷಯವನ್ನು ಫಾರ್ವರ್ಡ್ ಮಾಡುವ ಅಥವಾ ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಪರಿಶೀಲಿಸಬೇಕು ಮತ್ತು ವದಂತಿಗಳನ್ನು ಹರಡುವುದನ್ನು ತಡೆಯಬೇಕು ಎಂದು ಅಧಿಕಾರಿ ಜನರನ್ನು ಒತ್ತಾಯಿಸಿದ್ದಾರೆ. &quot;ಯಾವುದೇ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೊದಲು, ದಯವಿಟ್ಟು ಸತ್ಯಗಳನ್ನು ಪರಿಶೀಲಿಸಿ. ವದಂತಿಗಳನ್ನು ಹರಡಬೇಡಿ ಮತ್ತು ಸಮಾಜವಿರೋಧಿ ಅಂಶಗಳು ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಬಿಡಬೇಡಿ.&quot; ದೆಹಲಿ ಪೊಲೀಸರು ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವ ನಾಗರಿಕರ ಹಕ್ಕನ್ನು ಗೌರವಿಸುತ್ತಾರೆ ಎಂದು ಅಧಿಕಾರಿ ಪ್ರತಿಪಾದಿಸಿದರು. &quot;ಶಾಂತಿಯುತ ಪ್ರತಿಭಟನೆ ನಿಮ್ಮ ಹಕ್ಕು ಮತ್ತು ದೆಹಲಿ ಪೊಲೀಸರು ಈ ಹಕ್ಕನ್ನು ಗೌರವಿಸುತ್ತಾರೆ&quot; ಎಂದು ಅವರು ಹೇಳಿದರು, ಜನರು ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸಲು ಒತ್ತಾಯಿಸಿದರು.&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/crime/pak-based-handles-active-during-op-sindoor-spread-rumours-amid-protests-says-cops-suc/articleshow-cao91v7"/>
        </item>
        <item>
            <title><![CDATA[850 ವರ್ಷಗಳ ಬಳಿಕ ಅಪರೂಪದ ಘಟನೆ, ಖಗೋಳ ಕೌತುಕ ನೋಡಲು 2 ವರ್ಷ ಮುನ್ನವೇ ಈ  ನಗರದಲ್ಲಿ ಹೋಟೆಲ್‌ಗಳು ಸೋಲ್ಡ್ ಔಟ್!]]></title>
            <link>https://kannada.asianetnews.com/science/day-turns-to-night-new-zealand-prepares-for-first-total-solar-eclipse-since-1965-as-global-tourists-pack-hotels-gdp/articleshow-icievgb</link>
            <guid isPermaLink="true">https://kannada.asianetnews.com/science/day-turns-to-night-new-zealand-prepares-for-first-total-solar-eclipse-since-1965-as-global-tourists-pack-hotels-gdp/articleshow-icievgb</guid>
            <pubDate>Sat, 25 Jul 2026 17:56:07 +0530</pubDate>
            <description><![CDATA[2028ರ ಜುಲೈ 22 ರಂದು ನ್ಯೂಜಿಲೆಂಡ್&zwnj;ನಲ್ಲಿ ಶತಮಾನಗಳಲ್ಲೇ ಅಪರೂಪದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಈ ಐತಿಹಾಸಿಕ ಖಗೋಳ ವಿಸ್ಮಯವನ್ನು ವೀಕ್ಷಿಸಲು ಡ್ಯುನೆಡಿನ್ ನಗರಕ್ಕೆ ಪ್ರವಾಸಿಗರು ದೌಡಾಯಿಸುತ್ತಿದ್ದು, ಎರಡು ವರ್ಷಗಳ ಮುಂಚಿತವಾಗಿಯೇ ಹೋಟೆಲ್&zwnj;ಗಳು ಭರ್ತಿಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knm3yt4zhmp139x0fq1bvcbh,imgname-lunar-solar-eclipse-1775570479263.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೆಲ್ಲಿಂಗ್ಟನ್: &lt;/strong&gt;ಶತಮಾನಗಳಿಗೊಮ್ಮೆ ಸಂಭವಿಸುವ ಪ್ರಕೃತಿಯ ಮಹಾ ವಿಸ್ಮಯವೊಂದನ್ನು ಕಣ್ಣಾರೆ ವೀಕ್ಷಿಸಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ನ್ಯೂಜಿಲೆಂಡ್&zwnj;ನಲ್ಲಿ ಸುಮಾರು ಎರಡು ವರ್ಷಗಳ &amp;nbsp;ನಂತರ &amp;nbsp;(ಜುಲೈ 22, 2028) ಸಂಭವಿಸಲಿರುವ ಅಪರೂಪದ ಸಂಪೂರ್ಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಜಗತ್ತಿನ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸೂರ್ಯಗ್ರಹಣದ ಪಥದಲ್ಲಿರುವ ನ್ಯೂಜಿಲೆಂಡ್&zwnj;ನ ಪ್ರಮುಖ ನಗರವಾದ ಡ್ಯುನೆಡಿನ್&zwnj;ನ (Dunedin) ಹೋಟೆಲ್&zwnj;ಗಳು 2 ವರ್ಷ ಮುಂಚಿತವಾಗಿಯೇ ಸಂಪೂರ್ಣವಾಗಿ ಬುಕ್ ಆಗುವ ಮೂಲಕ ಜಾಗತಿಕ ಮಟ್ಟದಲ್ಲಿ ದಾಖಲೆ ಬರೆದಿವೆ.&lt;/p&gt;&lt;h2&gt;2028 ಜುಲೈ 22 ರಂದು ಸೃಷ್ಟಿಯಾಗಲಿದೆ ಹಗಲಲ್ಲೇ ಕತ್ತಲೆ!&lt;/h2&gt;&lt;p&gt;ಬ್ರಿಟನ್&zwnj;ನ 'ಗಾರ್ಡಿಯನ್' ಪತ್ರಿಕೆಯ ವರದಿಯ ಪ್ರಕಾರ, ಜುಲೈ 22, 2028 ರಂದು ಸಂಜೆ 4:17 ಕ್ಕೆ ಈ ಖಗೋಳ ವಿಸ್ಮಯ ಜರುಗಲಿದೆ. ಚಂದ್ರನು ಸೂರ್ಯನಿಗೆ ಸಂಪೂರ್ಣವಾಗಿ ಅಡ್ಡಲಾಗಿ ಚಲಿಸುವುದರಿಂದ ದಕ್ಷಿಣ ನ್ಯೂಜಿಲೆಂಡ್&zwnj;ನ ಕೆಲವು ಭಾಗಗಳಲ್ಲಿ ಸುಮಾರು 100 ಕಿಲೋಮೀಟರ್ ಅಗಲದ ಬೃಹತ್ ನೆರಳು ಸೃಷ್ಟಿಯಾಗಲಿದೆ. ಈ ಪಥದ ವ್ಯಾಪ್ತಿಯಲ್ಲಿ ಬರುವ ವಿಶ್ವವಿಖ್ಯಾತ ಪ್ರವಾಸಿ ತಾಣ ಕ್ವೀನ್ಸ್&zwnj;ಟೌನ್ ಹಾಗೂ ಡ್ಯುನೆಡಿನ್ ನಗರಗಳು ಹಗಲಿನ ಮಧ್ಯದಲ್ಲೇ ಸರಿಸುಮಾರು 2 ನಿಮಿಷ 51 ಸೆಕೆಂಡುಗಳ ಕಾಲ ಸಂಪೂರ್ಣ ಕತ್ತಲೆಯಲ್ಲಿ ಮುಳುಗಲಿವೆ. ಸೂರ್ಯಾಸ್ತದ ಕೆಲವೇ ಕ್ಷಣಗಳ ಮೊದಲು ಸಂಭವಿಸುವ ಈ ಗ್ರಹಣವನ್ನು ವೀಕ್ಷಿಸಲು ಡ್ಯುನೆಡಿನ್ ಅತ್ಯುತ್ತಮ ತಾಣವೆಂದು ಗುರುತಿಸಲ್ಪಟ್ಟಿದೆ. ಖಗೋಳ ವಿಜ್ಞಾನಿಗಳ ಪ್ರಕಾರ, ಈ ಗ್ರಹಣದ ಪಥವು ಹಿಂದೂ ಮಹಾಸಾಗರದಲ್ಲಿ ಆರಂಭವಾಗಿ, ಮಧ್ಯ ಆಸ್ಟ್ರೇಲಿಯಾದ ಆಲಿಸ್ ಸ್ಪ್ರಿಂಗ್ಸ್ ಹಾಗೂ ಸಿಡ್ನಿ ಮೂಲಕ ಹಾದುಹೋಗಿ, ನಂತರ ನ್ಯೂಜಿಲೆಂಡ್&zwnj;ನ ಮಿಲ್&zwnj;ಫೋರ್ಡ್ ಸೌಂಡ್, ಕ್ವೀನ್ಸ್&zwnj;ಟೌನ್ ಮತ್ತು ಸೆಂಟ್ರಲ್ ಒಟಾಗೋ ಮೂಲಕ ಡ್ಯುನೆಡಿನ್ ತಲುಪಲಿದೆ.&lt;/p&gt;&lt;h2&gt;865 ವರ್ಷಗಳ ಐತಿಹಾಸಿಕ ಹಿನ್ನೆಲೆ ಮತ್ತು ಕ್ಷಣಗಣನೆ&lt;/h2&gt;&lt;p&gt;ತುಹುರಾ ಒಟಾಗೊ ವಸ್ತುಸಂಗ್ರಹಾಲಯದ ನಿರ್ದೇಶಕ ಹಾಗೂ ಪ್ರಸಿದ್ಧ ಖಗೋಳಶಾಸ್ತ್ರಜ್ಞ ಡಾ. ಇಯಾನ್ ಗ್ರಿಫಿನ್ ಮಾತನಾಡಿ, &quot;ಈ ಘಟನೆಯು ಡ್ಯುನೆಡಿನ್ ಇತಿಹಾಸದಲ್ಲೇ ಅತ್ಯಂತ ಅಪರೂಪದ್ದಾಗಿದೆ. ಈ ಪ್ರದೇಶದಲ್ಲಿ ಕೊನೆಯ ಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಕಂಡಿದ್ದು ಕ್ರಿ.ಶ. 1163 ರಲ್ಲಿ! ಅಂದರೆ, ಮಾನವರು ನ್ಯೂಜಿಲೆಂಡ್ ದ್ವೀಪವನ್ನು ತಲುಪುವ ಮುನ್ನವೇ ಇದು ಸಂಭವಿಸಿತ್ತು. ಹೀಗಾಗಿ, ಡ್ಯುನೆಡಿನ್ ನೆಲದಿಂದ ಈ ಭಾಗದ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸುವ ಮೊದಲ ಮಾನವರು ನಾವಾಗಲಿದ್ದೇವೆ,&quot; ಎಂದು ರೋಮಾಂಚನ ವ್ಯಕ್ತಪಡಿಸಿದ್ದಾರೆ. 1965 ರ ನಂತರ ನ್ಯೂಜಿಲೆಂಡ್&zwnj;ನಲ್ಲಿ ಗೋಚರಿಸುತ್ತಿರುವ ಮೊದಲ ಸಂಪೂರ್ಣ ಸೂರ್ಯಗ್ರಹಣ ಇದಾಗಿದೆ.&lt;/p&gt;&lt;p&gt;ಈ ಐತಿಹಾಸಿಕ ಕ್ಷಣಕ್ಕಾಗಿ ಡಾ. ಗ್ರಿಫಿನ್ ಕಳೆದ ಒಂದು ದಶಕದಿಂದ ಸಿದ್ಧತೆ ನಡೆಸುತ್ತಿದ್ದಾರೆ. ಗ್ರಹಣದ ಪಥವು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಅವರು 2013 ರಲ್ಲೇ ಈ ಭಾಗದಲ್ಲಿ ತಮ್ಮ ಮನೆಯನ್ನು ಖರೀದಿಸಿದ್ದರು ಎಂದರೆ ಇದರ ಮಹತ್ವ ಏನೆಂಬುದು ತಿಳಿಯುತ್ತದೆ. ಸದ್ಯ ಒಟಾಗೊ ವಸ್ತುಸಂಗ್ರಹಾಲಯದಲ್ಲಿ ಈ ಗ್ರಹಣದ ಎರಡು ವರ್ಷಗಳ ಅಧಿಕೃತ ಕ್ಷಣಗಣನೆ (Countdown) ಗಡಿಯಾರಕ್ಕೆ ಚಾಲನೆ ನೀಡಲಾಗಿದೆ.&lt;/p&gt;&lt;h2&gt;&amp;nbsp;ಮುಂಚಿತವಾಗಿಯೇ ಮಾರಾಟವಾದ 'ಎಕ್ಸ್&zwnj;ಕ್ಲೂಸಿವ್ ಪ್ಯಾಕೇಜ್'&lt;/h2&gt;&lt;p&gt;ಕೇವಲ 1,30,000 ಜನಸಂಖ್ಯೆ ಹೊಂದಿರುವ ಪುಟ್ಟ ನಗರ ಡ್ಯುನೆಡಿನ್&zwnj;ಗೆ ಈ ಗ್ರಹಣ ವೀಕ್ಷಿಸಲು ಸುಮಾರು 35,000 ದಿಂದ 50,000 ಜಾಗತಿಕ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಗ್ರಹಣಕ್ಕೆ ಇನ್ನೂ ಎರಡು ವರ್ಷಗಳ ಕಾಲಾವಕಾಶ ಬಾಕಿ ಇರುವಾಗಲೇ ಇಲ್ಲಿನ ಹೋಟೆಲ್&zwnj;ಗಳಿಗೆ ಬುಕಿಂಗ್ ವಿನಂತಿಗಳ ಮಹಾಪೂರವೇ ಹರಿದುಬಂದಿದೆ. ಉದಾಹರಣೆಗೆ, ಪ್ರಸಿದ್ಧ 'ಡ್ಯುನೆಡಿನ್ ಲೀಷರ್ ಲಾಡ್ಜ್' ಅತಿಥಿಗಳಿಗೆ ಉಚಿತ ಗ್ರಹಣ ವೀಕ್ಷಣಾ ಕನ್ನಡಕಗಳನ್ನು ಒಳಗೊಂಡಂತೆ ವಿನ್ಯಾಸಗೊಳಿಸಿದ್ದ ವಿಶೇಷ &quot;ಸೂರ್ಯಗ್ರಹಣ ಪ್ಯಾಕೇಜ್&quot; ಈಗಾಗಲೇ ಸಂಪೂರ್ಣವಾಗಿ ಸೋಲ್ಡ್ ಔಟ್ (ಖಾಲಿ) ಆಗಿದೆ ಎಂದು ಪ್ರಕಟಿಸಿದೆ.&lt;/p&gt;&lt;h2&gt;ಮಾವೋರಿ ಸಂಸ್ಕೃತಿ ಮತ್ತು 'ರಾತ್ರಿ ಆಕಾಶ ಉತ್ಸವ'ದ ಜುಗಲ್ಬಂದಿ&lt;/h2&gt;&lt;p&gt;ಈ ಬಾರಿಯ ಸೂರ್ಯಗ್ರಹಣವು ನ್ಯೂಜಿಲೆಂಡ್&zwnj;ನ ಸಾಂಪ್ರದಾಯಿಕ ಮಾವೋರಿ ಸಮುದಾಯದ ಹೊಸ ವರ್ಷವಾದ 'ಮಟಾರಿಕಿ' (Matariki) ಆಚರಣೆಯ ಬೆನ್ನಲ್ಲೇ ಚಳಿಗಾಲದ ಮಧ್ಯಭಾಗದಲ್ಲಿ ಸಂಭವಿಸುತ್ತಿರುವುದು ಮತ್ತೊಂದು ವಿಶೇಷ. ಜಾಗತಿಕವಾಗಿ 'ಪ್ಲೇಕಿಡ್ಸ್' (Pleiades) ಎಂದು ಕರೆಯಲಾಗುವ ನಕ್ಷತ್ರಗಳ ಸಮೂಹವು ಚಳಿಗಾಲದ ಅಯನ ಸಂಕ್ರಾಂತಿಯ ನಂತರ ಮರುಕಳಿಸುವುದನ್ನು ಮಾವೋರಿಗಳು ಮಟಾರಿಕಿ ಹೊಸ ವರ್ಷವಾಗಿ ಆಚರಿಸುತ್ತಾರೆ.&lt;/p&gt;&lt;p&gt;ಮಟಾರಿಕಿ ಹಬ್ಬ ಮುಗಿದ ಕೇವಲ ಎಂಟು ದಿನಗಳಲ್ಲೇ ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ, ಡ್ಯುನೆಡಿನ್ ನಗರವು ಸ್ಥಳೀಯ ಸಾಂಸ್ಕೃತಿಕ ಜ್ಞಾನ ಮತ್ತು ಸಮಕಾಲೀನ ವಿಜ್ಞಾನ ಎರಡನ್ನೂ ಒಟ್ಟುಗೂಡಿಸಿ ಜಾಗತಿಕ ಮಟ್ಟದ ವಿಶಿಷ್ಟ &quot;ರಾತ್ರಿ ಆಕಾಶ ಉತ್ಸವ&quot;ವನ್ನು (Night-Sky Festival) ಆಯೋಜಿಸುತ್ತಿದೆ. ಈ ಕುರಿತು ಮಾತನಾಡಿದ ನಗರದ ಮೇಯರ್ ಸೋಫಿ ಬಾರ್ಕರ್, &quot;ಈ ಅದ್ಭುತ ಮತ್ತು ಐತಿಹಾಸಿಕ ಕ್ಷಣ ನಮ್ಮ ದಿಗಂತದಲ್ಲಿದೆ. ಇಡೀ ನಗರವು ಸದ್ಯ ಹಬ್ಬದ ಉತ್ಸಾಹದಲ್ಲಿ ಮುಳುಗಿದೆ,&quot; ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/science/day-turns-to-night-new-zealand-prepares-for-first-total-solar-eclipse-since-1965-as-global-tourists-pack-hotels-gdp/articleshow-icievgb"/>
        </item>
        <item>
            <title><![CDATA[ಸಾವನ್ನು ಗೆಲ್ಲಲು ಹೊಸ ಮಾರ್ಗ.. ಪ್ರಯೋಗಾಲಯದಲ್ಲಿ ತನ್ನ ಪ್ರತಿರೂಪ ಸೃಷ್ಟಿಸಿದ ಟೆಕ್ ಬಿಲಿಯನೇರ್ Brian Johnson]]></title>
            <link>https://kannada.asianetnews.com/world-news/billionaire-bryan-johnson-claims-to-create-lab-grown-baby-clone-in-quest-for-immortality/articleshow-kkipsi5</link>
            <guid isPermaLink="true">https://kannada.asianetnews.com/world-news/billionaire-bryan-johnson-claims-to-create-lab-grown-baby-clone-in-quest-for-immortality/articleshow-kkipsi5</guid>
            <pubDate>Sat, 25 Jul 2026 12:26:49 +0530</pubDate>
            <description><![CDATA[&lt;p&gt;&lt;strong&gt;Bryan Johnson: &lt;/strong&gt;ಸಾವನ್ನು ಗೆದ್ದು ಅಮರತ್ವ ಸಾಧಿಸುವ ಹಠಕ್ಕೆ ಬಿದ್ದಿರುವ ಅಮೆರಿಕದ ಬಿಲಿಯನೇರ್ ಬ್ರಯಾನ್ ಜಾನ್ಸನ್, ಈಗ ಪ್ರಯೋಗಾಲಯದಲ್ಲಿ ತಮ್ಮದೇ ಆದ 'ಬೇಬಿ ಕ್ಲೋನ್' ಸೃಷ್ಟಿಸಿರುವುದಾಗಿ ಘೋಷಿಸಿ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ವೃದ್ಧಾಪ್ಯವನ್ನು ಹಿಮ್ಮೆಟ್ಟಿಸಲು ಅವರು ಇಟ್ಟಿರುವ ಈ ವಿವಾದಾತ್ಮಕ ಹೆಜ್ಜೆಯ ಹಿಂದಿನ ಅಸಲಿ ಉದ್ದೇಶವೇನು ಎಂಬುದರ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyc0y61e74ek1n5snmtden73,imgname-thumbnail---2026-07-25t121439.881-1784962553901.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೃ&lt;/strong&gt;ದ್ಧಾಪ್ಯವನ್ನು ಗೆದ್ದು ಚಿರಂಜೀವಿಯಾಗಿ ಇರಬೇಕೆಂಬ ಹಠಕ್ಕೆ ಬಿದ್ದಿರುವ ಅಮೆರಿಕದ ಟೆಕ್ ಬಿಲಿಯನೇರ್ ಬ್ರಯಾನ್ ಜಾನ್ಸನ್ (Brian Johnson) (48), ಈಗ ಮತ್ತೊಂದು ವಿವಾದಾತ್ಮಕ ಹೆಜ್ಜೆ ಇಟ್ಟಿದ್ದಾರೆ. ಪ್ರಯೋಗಾಲಯದಲ್ಲಿ ತಮ್ಮದೇ ಆದ 'ಬೇಬಿ ಕ್ಲೋನ್' (Baby Clone) ಸೃಷ್ಟಿಸಿರುವುದಾಗಿ ಅವರು ಘೋಷಿಸಿದ್ದು, ವಿಜ್ಞಾನ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.&lt;/p&gt;&lt;p&gt;ರಿವರ್ಸ್ ಏಜಿಂಗ್ ಅಥವಾ ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸುವ ವಿಶಿಷ್ಟ ಹವ್ಯಾಸ ಹೊಂದಿರುವ ಬ್ರಯಾನ್ ಜಾನ್ಸನ್, ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಬೇಬಿ ಬ್ರಯಾನ್(Baby Bryan) ಎಂದು ಕರೆಯಲ್ಪಡುವ ಈ ಪುಟ್ಟ ಕ್ಲೋನ್ (ತದ್ರೂಪಿ ಪ್ರತಿರೂಪ) ಪ್ರಸ್ತುತ ಪೆಟ್ರಿ ಡಿಶ್&zwnj;ನಲ್ಲಿ ಬೆಳೆಯುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸದಾ ಯುವಕನಂತೆ ಇರಲು&lt;/strong&gt;&lt;/h2&gt;&lt;p&gt;ಜಾನ್ಸನ್ ವಿವರಿಸುವಂತೆ, ಅವರು ತಮ್ಮದೇ ದೇಹದ ರಕ್ತದ ಕಣಗಳನ್ನು ಸಂಗ್ರಹಿಸಿ, ಅತ್ಯಾಧುನಿಕ ವೈದ್ಯಕೀಯ ಪದ್ಧತಿಗಳ ಮೂಲಕ ಅವುಗಳನ್ನು ಭ್ರೂಣದ ಹಂತಕ್ಕೆ ಪರಿವರ್ತಿಸಿದ್ದಾರೆ. ಈ ಕ್ಲೋನ್ ಸೃಷ್ಟಿಯ ಹಿಂದೆ ದೊಡ್ಡ ಯೋಜನೆಯೇ ಇದೆ. ಈ ಕ್ಲೋನ್ ಮೂಲಕ ಭವಿಷ್ಯದಲ್ಲಿ ತಮಗೆ ಬೇಕಾದ ಹೊಸ ಅಂಗಾಂಗಗಳನ್ನು ಬೆಳೆಸಿಕೊಳ್ಳುವುದು, ಹೊಸ ಔಷಧಿಗಳನ್ನು ಅದರ ಮೇಲೆ ಪರೀಕ್ಷಿಸುವುದು ಮತ್ತು ಆ ಕ್ಲೋನ್&zwnj;ನಿಂದ ಯೌವನದ ಕಣಗಳನ್ನು ತಮ್ಮ ದೇಹಕ್ಕೆ ಸೇರಿಸಿಕೊಳ್ಳುವುದು ಇವರ ಮುಖ್ಯ ಉದ್ದೇಶ. ಸರಳವಾಗಿ ಹೇಳುವುದಾದರೆ, ತಮ್ಮನ್ನು ತಾವು ಸದಾ ಯುವಕನಂತೆ ಇರಿಸಿಕೊಳ್ಳಲು ಈ ಕ್ಲೋನ್ ಅನ್ನು ಬಳಸಿಕೊಳ್ಳಲು ಅವರು ಬಯಸಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಬ್ರಯಾನ್ ಅವರಿಗೆ 'ಆಟೋ ಇಮ್ಯೂನ್ ಗ್ಯಾಸ್ಟ್ರೈಟಿಸ್' (AIG) ಎಂಬ ಅಪರೂಪದ ಹೊಟ್ಟೆಯ ಕಾಯಿಲೆ ಇರುವುದು ಪತ್ತೆಯಾಗಿದೆ. ಇದಕ್ಕೆ ಪ್ರಸ್ತುತ ಯಾವುದೇ ಖಚಿತ ಚಿಕಿತ್ಸೆ ಇಲ್ಲ. ಹಾಗಾಗಿ, ಕ್ಲೋನ್&zwnj;ನಿಂದ ಪಡೆದ ಯುವ ಕಣಗಳ ಮೂಲಕ ಈ ಕಾಯಿಲೆಯನ್ನು ಗುಣಪಡಿಸಿಕೊಳ್ಳುವ ಜೊತೆಗೆ ವೃದ್ಧಾಪ್ಯವನ್ನೂ ತಡೆಯಬಹುದು ಎಂಬುದು ಅವರ ನಂಬಿಕೆ. ಯೌವನವನ್ನು ಕಾಪಾಡಿಕೊಳ್ಳಲು ಜಾನ್ಸನ್ ವರ್ಷಕ್ಕೆ ಸುಮಾರು 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.&lt;/p&gt;&lt;h2&gt;&lt;strong&gt;ವಿಜ್ಞಾನ ಲೋಕದಲ್ಲಿದೆ ಭಿನ್ನಾಭಿಪ್ರಾಯ&lt;/strong&gt;&lt;/h2&gt;&lt;p&gt;ಜಾನ್ಸನ್ ಅವರ ಈ ಹಕ್ಕುಗಳ ಬಗ್ಗೆ ವಿಜ್ಞಾನ ಲೋಕದಲ್ಲಿ ಭಿನ್ನಾಭಿಪ್ರಾಯಗಳಿವೆ. ಬೆಂಬಲಿಗರು ಇದನ್ನು ವೈದ್ಯಕೀಯ ಕ್ರಾಂತಿ ಎನ್ನುತ್ತಿದ್ದರೆ, ವಿಮರ್ಶಕರು ಇದೊಂದು ಪ್ರಚಾರದ ತಂತ್ರ (Publicity Stunt) ಎಂದು ತಳ್ಳಿಹಾಕುತ್ತಿದ್ದಾರೆ. ಚಾರಿತ್ರಿಕವಾಗಿ ನೋಡಿದರೆ, 2002ರಲ್ಲಿ ಬ್ರಿಜಿಟ್ಟೆ ಬೊಯ್ಸೆಲಿಯರ್ ಎಂಬ ವಿಜ್ಞಾನಿ 'ಈವ್' ಎಂಬ ಹೆಸರಿನ ಕ್ಲೋನ್ ಮಗುವನ್ನು ಸೃಷ್ಟಿಸಿದ್ದಾಗಿ ಹೇಳಿಕೊಂಡಿದ್ದರು, ಆದರೆ ಅದು ಸುಳ್ಳೆಂದು ಸಾಬೀತಾಗಿತ್ತು. ತೈವಾನ್ ವಿಜ್ಞಾನಿಗಳ ಹಕ್ಕುಗಳೂ ಸಹ ವಿಫಲವಾಗಿದ್ದವು. ವಾಸ್ತವವಾಗಿ, ಇದುವರೆಗೆ ಜಗತ್ತಿನಲ್ಲಿ ಯಾವುದೇ ಮಾನವ ಕ್ಲೋನಿಂಗ್ ಯಶಸ್ವಿಯಾಗಿ ನಡೆದ ಅಧಿಕೃತ ದಾಖಲೆಗಳಿಲ್ಲ.&lt;/p&gt;&lt;h3&gt;&lt;strong&gt;ಕಾನೂನುಬಾಹಿರ ಮತ್ತು ತಾಂತ್ರಿಕವಾಗಿ ಅಸಾಧ್ಯ&lt;/strong&gt;&lt;/h3&gt;&lt;p&gt;ಮಾನವ ಕ್ಲೋನಿಂಗ್ ಮೇಲೆ ವಿಶ್ವದಾದ್ಯಂತ ಕಠಿಣ ಕಾನೂನುಗಳಿವೆ. ಮನುಷ್ಯನ ಪ್ರತಿರೂಪ ಸೃಷ್ಟಿಸುವುದು ನೈತಿಕವಾಗಿ ತಪ್ಪು ಮತ್ತು ಮಾನವ ಘನತೆಗೆ ಧಕ್ಕೆ ಎಂದು ಪರಿಗಣಿಸಲಾಗುತ್ತದೆ. ಫ್ರಾನ್ಸ್, ಜರ್ಮನಿ, ರಷ್ಯಾ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯುಕೆ ಮತ್ತು ಜಪಾನ್&zwnj;ನಲ್ಲಿ ಕೇವಲ ಚಿಕಿತ್ಸಕ ಉದ್ದೇಶದ (Therapeutic Cloning) ಸಂಶೋಧನೆಗೆ ಮಾತ್ರ ಕಟ್ಟುನಿಟ್ಟಿನ ಅನುಮತಿ ಇದೆ. ಅಮೆರಿಕದಲ್ಲೂ ಪೂರ್ಣ ಪ್ರಮಾಣದ ಮಾನವ ಕ್ಲೋನ್ ಸೃಷ್ಟಿಸುವುದು ಕಾನೂನುಬಾಹಿರ ಮತ್ತು ಪ್ರಸ್ತುತ ತಾಂತ್ರಿಕವಾಗಿ ಅಸಾಧ್ಯ ಎನ್ನಲಾಗುತ್ತಿದೆ. ಹೀಗಿರುವಾಗ ಬ್ರಯಾನ್ ಜಾನ್ಸನ್ ಅವರ ಈ 'ಬೇಬಿ ಕ್ಲೋನ್' ವಾದ ಎಷ್ಟು ಸತ್ಯ ಎಂಬುದು ಕಾಲವೇ ನಿರ್ಧರಿಸಬೇಕು.&lt;/p&gt;&lt;p&gt;I just cloned myself...as a newbornWith this clone, I can:+ become my own blood boy+ test therapies on the clone+ grow organs for transplantation+ develop new treatments+ inject young cellsThis baby-bryan lives in a petri dish for now.This may be scary to some&hellip; pic.twitter.com/Ved8ij9Col&lt;/p&gt;&lt;p&gt;&mdash; Bryan Johnson (@bryan_johnson) July 21, 2026&lt;/p&gt;]]></content:encoded>
            <category>world-news</category>
            <dc:creator>Ashwini HR</dc:creator>
            <atom:link href="https://kannada.asianetnews.com/world-news/billionaire-bryan-johnson-claims-to-create-lab-grown-baby-clone-in-quest-for-immortality/articleshow-kkipsi5"/>
        </item>
        <item>
            <title><![CDATA[ಮ್ಯಾರಥಾನ್​ ವೇಳೆ ಮುಟ್ಟಿನ ರಕ್ತಸ್ರಾವವಾದ್ರೂ ಡೋಂಟ್​ ಕೇರ್​: ಗುರಿ ತಲುಪಿದ ಛಲಗಾತಿ- ವಿಡಿಯೋ ವೈರಲ್​]]></title>
            <link>https://kannada.asianetnews.com/life/chinese-marathoner-li-meizhen-kept-running-after-getting-her-period-with-about-8-km-left-suc/articleshow-kxtzndy</link>
            <guid isPermaLink="true">https://kannada.asianetnews.com/life/chinese-marathoner-li-meizhen-kept-running-after-getting-her-period-with-about-8-km-left-suc/articleshow-kxtzndy</guid>
            <pubDate>Fri, 24 Jul 2026 13:09:24 +0530</pubDate>
            <description><![CDATA[ಚೀನಾದ ಮ್ಯಾರಥಾನ್ ಓಟಗಾರ್ತಿ ಲಿ ಮೀಜೆನ್, ಮ್ಯಾರಥಾನ್​ ಓಟದ ಮಧ್ಯದಲ್ಲಿ ಋತುಸ್ರಾವವಾದರೂ ಓಟ ನಿಲ್ಲಿಸದೆ ಗುರಿ ಸಾಧಿಸಿದರು. ಕ್ರೀಡೆಯಲ್ಲಿ ಮಹಿಳೆಯರು ಎದುರಿಸುವ ಸವಾಲು ಮತ್ತು ಮುಟ್ಟಿನ ಬಗೆಗಿನ ಕಳಂಕದ ಚರ್ಚೆಯನ್ನು ಹುಟ್ಟುಹಾಕಿದ ಅವರ ದೃಢಸಂಕಲ್ಪವು ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky9h0sz1yrsc1ck91rch59nt,imgname-li-meizhen-1784878753761.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಧಿಸುವ ಛಲವೊಂದಿದ್ದರೆ, ಏನು ಬೇಕಾದರೂ ಸಾಧಿಸಬಹುದು. ಸಾಧನೆಗೆ ಯಾವುದೂ ಅಡ್ಡ ಬರುವುದಿಲ್ಲ. ಅಡ್ಡ ಬಂದರೂ ಅದನ್ನು ಬದಿಗೊತ್ತಿ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿರುವ ಹಲವಾರು ಮಂದಿ ಇದ್ದಾರೆ. ಕೈಕಾಲೆಲ್ಲಾ ಸರಿಯಿದ್ದರೂ, ಉದ್ಯೋಗ ಸಿಕ್ಕಿಲ್ಲ, ಅದು ಇಲ್ಲ, ಇದು ಇಲ್ಲ ಎಂದು ಹೇಡಿಗಳಂತೆ ಬದುಕುವವರ ನಡುವೆಯೇ, ಅಂಗವೈಕಲ್ಯವಿದ್ದರೂ ಅದೆಷ್ಟೋ ದೊಡ್ಡ ದೊಡ್ಡ ಸಾಧನೆ ಮಾಡಿರುವ ಹಲವಾರು ಮಂದಿ ನಮ್ಮ ಕಣ್ಣಮುಂದೆಯೇ ಇದ್ದಾರೆ. ಗುರಿಯೊಂದು ನಿಖರವಾಗಿದ್ದರೆ, ಯಾವ ವೈಕಲ್ಯವೂ ಅದಕ್ಕೆ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಇನ್ನೊಂದು ವೈರಲ್​ ವಿಡಿಯೋ.&lt;/p&gt;&lt;p&gt;ಋತುಸ್ರಾವದ ವೇಳೆಯೂ ಯಾವುದಕ್ಕೂ ಜಗ್ಗದೇ ಕುಗ್ಗದೇ ಸಾಧನೆ ಮಾಡಿರುವ ಹಲವು ಮಹಿಳೆಯರು ಇದ್ದಾರೆ. ಪಿರಿಯಡ್ಸ್​ ಎನ್ನೋದು ಅದೆಷ್ಟೋ ಬಾರಿ ಗೊತ್ತಿಲ್ಲದೇ ಆಗಿಬಿಡುವುದು ಉಂಟು. ದೇಹದಲ್ಲಿ ಹಾರ್ಮೋನ್​ ಬದಲಾವಣೆಯಾದಾಗ, ಅವಧಿಗೂ ಮುನ್ನವೇ ಆಗಿಬಿಡುತ್ತದೆ. ಅಂಥ ಸಂದರ್ಭದಲ್ಲಿ ಯಾವುದೇ ತಯಾರಿ ಇಲ್ಲದೇ ಇರುವ ಮಹಿಳೆಯರು ಪಡುವ ಮುಜುಗರ ಅಷ್ಟಿಷ್ಟಲ್ಲ. ಅಂಥದ್ದೇ ಒಂದು ಮುಜುಗರ ಅನುಭವಿಸಿದವರು ಚೀನಾದ ಮ್ಯಾರಥಾನ್​ ಓಟಗಾರ್ತಿ ಲಿ ಮೀಜೆನ್.&lt;/p&gt;&lt;h2&gt;&lt;strong&gt;ಕೊನೆಯ ಎಂಟು ನಿಮಿಷಗಳ ಹೋರಾಟ&lt;/strong&gt;&lt;/h2&gt;&lt;p&gt;ಹೆಂಗ್&zwnj;ಶುಯಿ ಲೇಕ್ ಮ್ಯಾರಥಾನ್&zwnj;ನಲ್ಲಿ ಈಕೆ ಭಾಗವಹಿಸಿದ್ದಾಗ ಅವಧಿಗೂ ಮುನ್ನವೇ ಋತುಸ್ರಾವ ಆಗಿಬಿಟ್ಟಿದೆ. ಇನ್ನೇನು ಕೊನೆಯ ಸುಮಾರು 8 ಕಿ.ಮೀ. ದೂರ ಉಳಿದಿರುವಾಗ, ರಕ್ತಸ್ರಾವ ಹೆಚ್ಚಾಗಿ ಕಾಲಮೇಲೆಲ್ಲಾ ರಕ್ತಸೋರಿದೆ. ರಕ್ತಸ್ರಾವ ಆಗುತ್ತಿದೆ ಎಂದು ತಿಳಿದರೂ ಲಿ ಮೀಜೆನ್ ಅಲ್ಲಿಗೇ ನಿಲ್ಲಲಿಲ್ಲ. ಏಕೆಂದರೆ ಗುರಿಸಾಧನೆ ಆಕೆಗೆ ಮುಖ್ಯವಾಗಿತ್ತು. 2 ಗಂಟೆ 35 ನಿಮಿಷಗಳ ಸತತ ಓಟದ ಬಳಿಕ ಕೊನೆ ಎಂಟು ನಿಮಿಷ ಆಕೆಗೆ ತುಂಬಾ ನಿರ್ಣಾಯಕವಾಗಿತ್ತು. ಗುರಿ ಆಕೆಯ ಮುಂದಿತ್ತು. ಅಲ್ಲಿಯ ಜನರು ರಕ್ತಸ್ರಾವ ಆಗುತ್ತಿರುವ ಬಗ್ಗೆ ಕೂಗಿ ಕೂಗಿ ಹೇಳುತ್ತಿದ್ದರೂ, ರಕ್ತ ಸೋರುತ್ತಿದ್ದರೂ ಲಿ ಮೀಜೆನ್ ಓಟವನ್ನು ನಿಲ್ಲಿಸದೇ ಗುರಿಯನ್ನು ಸಾಧಿಸಿದಳು.&lt;/p&gt;&lt;p&gt;ಕೊನೆಗೆ ಆಕೆಗೆ ಈ ಬಗ್ಗೆ ಪ್ರಶ್ನಿಸಿದಾಗ, ನಾನು ಇದನ್ನು ಸಾಧಿಸಲೇಬೇಕಿತ್ತು. ಮುಂದಿನ ಪಂದ್ಯದಲ್ಲಿ ವಿಜೇತ ಆಗಲು, ಅದಕ್ಕೆ ಅರ್ಹತೆ ಪಡೆಯಲು ಇಷ್ಟು ವರ್ಷಗಳ ಪರಿಶ್ರಮವನ್ನುಬಿಟ್ಟುಕೊಡಲು ನಾನು ರೆಡಿ ಇರಲಿಲ್ಲ. ಆರಂಭದಲ್ಲಿ ಋತುಸ್ರಾವವಾಗಿ ಕಾಲ ಮೇಲೆ ರಕ್ತ ಚೆಲ್ಲುತ್ತಿದ್ದಾಗ ಭಯ ಆಯ್ತು, ಜೊತೆಗೆ ಮುಜುಗರವೂ ಆಯ್ತು. ಆದರೆ ಆ ಕ್ಷಣದಲ್ಲಿಯೇ ಅದ್ಯಾವುದೂ ನನಗೆ ದೊಡ್ಡದು ಅನ್ನಿಸಲೇ ಇಲ್ಲ. ಗುರಿ ನನ್ನ ಕಣ್ಣಮುಂದೆ ಸ್ಪಷ್ಟವಾಗಿತ್ತು. ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿದೆ ಎಂದಿದ್ದಾರೆ ಲಿ ಮೀಜೆನ್ .&lt;/p&gt;&lt;h3&gt;&lt;strong&gt;ಮಾದರಿಯಾದ ಲಿ ಮೀಜೆನ್&lt;/strong&gt;&lt;/h3&gt;&lt;p&gt;ಕ್ರೀಡೆಗಳಲ್ಲಿ ಋತುಚಕ್ರದ ಕಳಂಕ ಮತ್ತು ಸ್ಪರ್ಧಿಸುವಾಗ ಅನೇಕ ಮಹಿಳಾ ಕ್ರೀಡಾಪಟುಗಳು ಎದುರಿಸುವ ಕಾಣದ ಸವಾಲುಗಳ ಬಗ್ಗೆ ಲಿ ಮೀಜೆನ್ ದೃಢಸಂಕಲ್ಪವು ಚರ್ಚೆಯನ್ನು ಹುಟ್ಟುಹಾಕಿದೆ. ಮುಟ್ಟು ಜೀವನದ ನೈಸರ್ಗಿಕ ಭಾಗವಾಗಿದೆ, ಆದರೂ ಅದರ ಬಗ್ಗೆ ಮಾತನಾಡಲು ಮುಜುಗರ ಪಡುವ ಮಂದಿ ಹಲವರು ಇದ್ದಾರೆ. ಇದನ್ನು ಅಸಹ್ಯ ಎನ್ನುವವರೂಇದ್ದಾರೆ, ಜೊತೆಗೆ ಹಲವಾರು ರೀತಿಯ ಕಟ್ಟುಪಾಡುಗಳನ್ನು ಮಹಿಳೆ ಇಂದಿಗೂ ಎದುರಿಸಬೇಕಾದ ಅನಿವಾರ್ಯತೆ ಇದೆ. ಅದರ ನಡುವೆಯೂ, ಲಿ ಮೀಜೆನ್ ದೃಢಸಂಕಲ್ಪ ಅದೆಷ್ಟೋ ಕ್ರೀಡಾಪಟುಗಳಿಗೆ ಮಾತ್ರವಲ್ಲದೇ ಪ್ರತಿ ಮಹಿಳೆಗೂ ಮಾದರಿಯಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Suchethana D</dc:creator>
            <atom:link href="https://kannada.asianetnews.com/life/chinese-marathoner-li-meizhen-kept-running-after-getting-her-period-with-about-8-km-left-suc/articleshow-kxtzndy"/>
        </item>
        <item>
            <title><![CDATA[ಏಷ್ಯಾದ ಅತಿ ಕ್ರೂರ ಭಯಾನಕ ರಹಸ್ಯವಿರುವ ಮ್ಯಾನ್ಮಾರ್‌ನ ಈ ಜಾಗ, ಚೀನಾದ ಬೆಂಬಲ ಮಾನವರ ಮಾರಣ ಹೋಮ!]]></title>
            <link>https://kannada.asianetnews.com/world-news/inside-kk-park-dw-investigation-exposes-myanmar-brutal-cyber-slavery-compound-gdp/articleshow-l08yrst</link>
            <guid isPermaLink="true">https://kannada.asianetnews.com/world-news/inside-kk-park-dw-investigation-exposes-myanmar-brutal-cyber-slavery-compound-gdp/articleshow-l08yrst</guid>
            <pubDate>Tue, 28 Jul 2026 17:41:05 +0530</pubDate>
            <description><![CDATA[ಮ್ಯಾನ್ಮಾರ್-ಥಾಯ್ ಗಡಿಯಲ್ಲಿರುವ 'ಕೆಕೆ ಪಾರ್ಕ್' ಎಂಬುದು ಉದ್ಯೋಗದ ಆಮಿಷವೊಡ್ಡಿ ಜನರನ್ನು ಅಪಹರಿಸಿ, ಆನ್&zwnj;ಲೈನ್ ವಂಚನೆಗೆ ಬಲವಂತಪಡಿಸುವ ಕ್ರೂರ ಕೇಂದ್ರವಾಗಿದೆ. ಈ ಕೃತ್ಯವನ್ನು ನಿರಾಕರಿಸಿದವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತದೆ, ಮತ್ತು ಈ ಬೃಹತ್ ಅಂತರರಾಷ್ಟ್ರೀಯ ಅಪರಾಧ ಜಾಲದ ಹಿಂದೆ ಚೀನೀ ಮಾಫಿಯಾದ ಕೈವಾಡವಿರುವುದು ತನಿಖೆಯಿಂದ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kym9qtzq30bv9ad1zzf0nt03,imgname-nandita-sinhakk-park-1785240218614.jpg" type="image/jpeg" height="390" width="690"/>
            <content:encoded><![CDATA[&lt;p&gt;ಮ್ಯಾನ್ಮಾರ್-ಥಾಯ್ ಗಡಿಯಲ್ಲಿರುವ ಕುಖ್ಯಾತ 'ಕೆಕೆ ಪಾರ್ಕ್' (KK Park) ಏಷ್ಯಾದ ಅತ್ಯಂತ ಕ್ರೂರ &amp;nbsp;ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಆನ್&zwnj;ಲೈನ್ ವಂಚನೆ ಮಾಡಲು ನಿರಾಕರಿಸುವವರ ಮೇಲೆ ಅಮಾನವೀಯ ಚಿತ್ರಹಿಂಸೆ ನೀಡಿ, ಊಟ ನೀಡದೆ ಹಸಿವಿನಿಂದ ಬಳಲಿಸಲಾಗುತ್ತದೆ ಮತ್ತು Koಲೆ ಮಾಡಲಾಗುತ್ತದೆ ಎಂಬ ಆಘಾತಕಾರಿ ಸಂಗತಿಯನ್ನು ಜರ್ಮನಿಯ ಪ್ರಮುಖ ಮಾಧ್ಯಮ ಸಂಸ್ಥೆಯಾದ 'ಡಿಡಬ್ಲ್ಯೂ' (DW) ನಡೆಸಿದ ತನಿಖೆಯು ಹೊರಹಾಕಿದೆ.&lt;/p&gt;&lt;h2&gt;ಕನಸಿನ ಉದ್ಯೋಗದ ಆಮಿಷ ಮತ್ತು ಕರಾಳ ಅಪಹರಣ&lt;/h2&gt;&lt;p&gt;ದಕ್ಷಿಣ ಆಫ್ರಿಕಾದಲ್ಲಿ ಕತ್ತಲೆಯಾದ ಭವಿಷ್ಯವನ್ನು ಎದುರಿಸುತ್ತಿದ್ದ ಆರನ್ ಎಂಬ ಯುವಕನಿಗೆ, ಥೈಲ್ಯಾಂಡ್&zwnj;ನ ಉದಯೋನ್ಮುಖ ತಂತ್ರಜ್ಞಾನ ಕಂಪನಿಯೊಂದು ಅತ್ಯಧಿಕ ಸಂಬಳ ಮತ್ತು ಆಕರ್ಷಕ ಸವಲತ್ತುಗಳಿರುವ 'ಕನಸಿನ ಕೆಲಸ'ದ ಆಮಿಷವೊಡ್ಡಿತ್ತು. ಬ್ಯಾಂಕಾಕ್&zwnj;ಗೆ ಬಂದಿಳಿದ ಆರನ್&zwnj;ಗೆ ಆತ್ಮೀಯ ಸ್ವಾಗತ ನೀಡಿ ಕಾರಿನಲ್ಲಿ ಕರೆದೊಯ್ಯಲಾಯಿತು. ವಿಮಾನ ನಿಲ್ದಾಣದ ಹತ್ತಿರದ ಹೋಟೆಲ್&zwnj;ಗೆ ಹೋಗಬೇಕಿದ್ದ ಕಾರು ಬೇರೆ ದಿಕ್ಕಿಗೆ ಸಾಗಿತು.&lt;/p&gt;&lt;p&gt;ಸುಮಾರು ಎಂಟು ಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ಚಾಲಕ ಅವರನ್ನು ಥಾಯ್ ಗಡಿ ನಗರವಾದ ಮೇ ಸೋಟ್&zwnj;ಗೆ ತಲುಪಿಸಿದನು. ಅಲ್ಲಿಂದ ಅವರನ್ನು ಮೋಯಿ ನದಿಯ ಮೂಲಕ ದೋಣಿಯಲ್ಲಿ ಮ್ಯಾನ್ಮಾರ್&zwnj;ನ ಯುದ್ಧಪೀಡಿತ ಭಾಗಕ್ಕೆ ಬಂದೂಕುಧಾರಿಗಳ ಕಾವಲಿನಲ್ಲಿ ಕಳ್ಳಸಾಗಣೆ ಮಾಡಲಾಯಿತು.&lt;/p&gt;&lt;h2&gt;ಕೆಕೆ ಪಾರ್ಕ್: ಸೈಬರ್ ಜೈಲು ಮತ್ತು ದಾಸ್ಯದ ಬದುಕು&lt;/h2&gt;&lt;p&gt;ಆರನ್ ಮತ್ತು ಇತರ ಯುವಕರನ್ನು 'ಕೆಕೆ ಪಾರ್ಕ್' ಎಂಬ ಜೈಲಿನಂತಹ ನಿರ್ಬಂಧಿತ ಕಾಂಪೌಂಡ್&zwnj;ಗೆ ತರಲಾಯಿತು. ಯುನೈಟೆಡ್ ಸ್ಟೇಟ್ಸ್, ಯುರೋಪ್ ಮತ್ತು ಚೀನಾದ ಅಮಾಯಕರನ್ನು ವಂಚಿಸುವ ಸೈಬರ್ ಅಪರಾಧ ಕೃತ್ಯಗಳಿಗೆ ಸಾವಿರಾರು ಜನರನ್ನು ಇಲ್ಲಿ ಬಲವಂತವಾಗಿ ಬಳಸಿಕೊಳ್ಳಲಾಗುತ್ತದೆ. ಮ್ಯಾನ್ಮಾರ್&zwnj;ನಲ್ಲಿ ಇಂತಹ ಹಗರಣ ಕೇಂದ್ರಗಳಲ್ಲಿ 100,000ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಕೆಲಸ ಮಾಡಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆ (UN) ಅಂದಾಜಿಸಿದೆ.&lt;/p&gt;&lt;h2&gt;ದಿನಕ್ಕೆ 17 ಗಂಟೆಗಳ ನರಕಯಾಚನೆ&lt;/h2&gt;&lt;p&gt;&amp;nbsp;&quot;ನಾವು ಯಾವುದೇ ರಜೆಯಿಲ್ಲದೆ, ವಿಶ್ರಾಂತಿಯಿಲ್ಲದೆ ದಿನಕ್ಕೆ 17 ಗಂಟೆಗಳ ಕಾಲ ಕೆಲಸ ಮಾಡಿದ್ದೇವೆ. ನಾವು ಇಲ್ಲಿಂದ ಹೊರಡಲು ಬಯಸುತ್ತೇವೆ ಎಂದಾದರೆ, ಅವರು ನಮ್ಮನ್ನು ಬೇರೆಯವರಿಗೆ ಮಾರಾಟ ಮಾಡುತ್ತಾರೆ ಅಥವಾ ಕೊಲ್ಲುತ್ತಾರೆ ಎಂದು ಪಶ್ಚಿಮ ಆಫ್ರಿಕಾದಿಂದ ಬದುಕುಳಿದು ಬಂದ ಲ್ಯೂಕಸ್ ತಮ್ಮ ನರಕಯಾಚನೆಯನ್ನು ಸ್ಮರಿಸಿಕೊಂಡಿದ್ದಾರೆ.&lt;/p&gt;&lt;h2&gt;ಈ ಕ್ರೂರ ಜಾಲದ ಹಿಂದೆ ಯಾರಿದ್ದಾರೆ?&lt;/h2&gt;&lt;p&gt;ಈ ಕಾಂಪೌಂಡ್&zwnj;ನ ಒಳಗಿನಿಂದ ತೆಗೆದ ವಿಶೇಷ ಚಿತ್ರಗಳು ಮತ್ತು ಬದುಕುಳಿದವರ ಸಾಕ್ಷ್ಯಗಳ ಆಧಾರದ ಮೇಲೆ ಕಾವಲುಗಾರರ ಸಮವಸ್ತ್ರದ ಬ್ಯಾಡ್ಜ್&zwnj;ಗಳನ್ನು ಗುರುತಿಸಲಾಗಿದೆ.&lt;/p&gt;&lt;p&gt;ಮ್ಯಾನ್ಮಾರ್ ಜುಂಟಾ ವಿರುದ್ಧ ಹೋರಾಡುವುದನ್ನು ನಿಲ್ಲಿಸಿ, ತಮ್ಮ ಪ್ರದೇಶಗಳ ಮೇಲೆ ಮುಕ್ತ ಆಳ್ವಿಕೆ ಪಡೆದಿರುವ ಮಾಜಿ ಬಂಡುಕೋರರ ಗುಂಪಿನ (ಅಧಿಕೃತ ಗಡಿ ಕಾವಲು ಪಡೆ) ಸೈನಿಕರೇ ಇಲ್ಲಿ ಕಾವಲು ಕಾಯುತ್ತಿದ್ದಾರೆ. ಆದರೆ ಈ ಸಂಪೂರ್ಣ ಕಾರ್ಯಾಚರಣೆಯ ಸೂತ್ರಧಾರಿಗಳು ಚೀನಿಯರು ಎಂಬುದು ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;h2&gt;ಕ್ರಿಪ್ಟೋಕರೆನ್ಸಿ ಮತ್ತು ಚೀನೀ ಮಾಫಿಯಾ ನಂಟು&lt;/h2&gt;&lt;p&gt;ಹಿಂಸೆಗೆ ಸಿಲುಕಿದವರಿಂದ ಲೂಟಿ ಮಾಡಿದ ಹಣದ ಹಾದಿಯನ್ನು ಪತ್ತೆಹಚ್ಚುತ್ತಾ ಹೋದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೆಕೆ ಪಾರ್ಕ್ ಬಳಸುತ್ತಿದ್ದ ಕ್ರಿಪ್ಟೋಕರೆನ್ಸಿ ವ್ಯಾಲೆಟ್&zwnj;ಗಳಿಂದ ಹತ್ತಾರು ಮಿಲಿಯನ್ ಡಾಲರ್ ಹಣವನ್ನು ಥೈಲ್ಯಾಂಡ್&zwnj;ನಲ್ಲಿ ನೆಲೆಸಿರುವ ಚೀನಾದ ಉದ್ಯಮಿ ವಾಂಗ್ ಯಿ ಚೆಂಗ್ ಅವರ ಖಾತೆಗಳಿಗೆ ವರ್ಗಾಯಿಸಲಾಗಿದೆ. ವಾಂಗ್ ಅವರು ಥಾಯ್-ಏಷ್ಯಾ ಆರ್ಥಿಕ ವಿನಿಮಯ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈ ಸಂಸ್ಥೆಯು ಚೀನೀ ಸಂಘಟಿತ ಅಪರಾಧದ ಮುಂಚೂಣಿಯಲ್ಲಿರುವ ಹಾಂಗ್&zwnj;ಮೆನ್ ಕೇಂದ್ರಗಳೊಂದಿಗೆ ನಂಟು ಹೊಂದಿದೆ.&lt;/p&gt;&lt;p&gt;ಈ ಜಾಲವು ಕುಖ್ಯಾತ ಚೀನೀ ಮಾಫಿಯಾ ಮುಖ್ಯಸ್ಥ ವಾನ್ ಕುವೋಕ್ ಕೋಯಿ (ಬ್ರೋಕನ್ ಟೂತ್) ಅವರೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಈ ಸಂಘಟನೆಯು ಚೀನಾದ ಮಹತ್ವಾಕಾಂಕ್ಷೆಯ 'ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್' (BRI) ಯೋಜನೆಗೆ ಬೆಂಬಲವಾಗಿ ಕಾರ್ಯಾಚರಿಸುತ್ತಿದೆ.&lt;/p&gt;&lt;h2&gt;ಕಾನೂನು ಜಾರಿ ಸಂಸ್ಥೆಗಳಿಗೆ ಸವಾಲು&lt;/h2&gt;&lt;p&gt;ಕೆಕೆ ಪಾರ್ಕ್ ಕೇವಲ ಒಂದು ವಂಚನೆ ಕೇಂದ್ರವಲ್ಲ, ಇದು ಆಗ್ನೇಯ ಏಷ್ಯಾದಿಂದ ಆಫ್ರಿಕಾ, ಯುರೋಪ್ ಮತ್ತು ಉತ್ತರ ಅಮೆರಿಕಾಕ್ಕೆ ವಿಸ್ತರಿಸಿಕೊಂಡಿರುವ ದೈತ್ಯ ಅಂತರರಾಷ್ಟ್ರೀಯ ಅಪರಾಧ ಜಾಲವಾಗಿದೆ. ಈ ಕ್ರಿಮಿನಲ್ ಜಾಲಗಳು ಜಗತ್ತಿನಾದ್ಯಂತ ಹೆಚ್ಚು ಹೆಚ್ಚು ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾಗುತ್ತಿವೆ. ಕಾನೂನು ಜಾರಿ ಸಂಸ್ಥೆಗಳ ಪ್ರಸ್ತುತ ಪ್ರಯತ್ನಗಳು ಈ ದೈತ್ಯ ಸಮಸ್ಯೆಯ ಮಂಜುಗಡ್ಡೆಯ ತುದಿಯನ್ನು ಮಾತ್ರ ಮುಟ್ಟುತ್ತಿವೆ ಎಂದು ಯುಎಸ್ ಇನ್&zwnj;ಸ್ಟಿಟ್ಯೂಟ್ ಫಾರ್ ಪೀಸ್&zwnj;ನ ತಜ್ಞ ಜೇಸನ್ ಟವರ್ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/inside-kk-park-dw-investigation-exposes-myanmar-brutal-cyber-slavery-compound-gdp/articleshow-l08yrst"/>
        </item>
        <item>
            <title><![CDATA[ವಿಜ್ಞಾನ ಜಗತ್ತಿನಲ್ಲಿ ಹೊಸ ಸಂಚಲನ: ಅತಿಯಾದ ಮೀನುಗಾರಿಕೆ ಪರಿಣಾಮ ಹೆಣ್ಣಾಗಿ ಜನಿಸಿದ ಮೀನು ಗಂಡಾಗಿ ಪರಿವರ್ತನೆ!]]></title>
            <link>https://kannada.asianetnews.com/science/overfishing-alters-fish-biology-at-a-molecular-level-these-fish-are-born-female-and-later-become-male-new-study-gdp/articleshow-ng4ru6n</link>
            <guid isPermaLink="true">https://kannada.asianetnews.com/science/overfishing-alters-fish-biology-at-a-molecular-level-these-fish-are-born-female-and-later-become-male-new-study-gdp/articleshow-ng4ru6n</guid>
            <pubDate>Mon, 27 Jul 2026 15:34:15 +0530</pubDate>
            <description><![CDATA[ಅತಿಯಾದ ಮೀನುಗಾರಿಕೆಯು ಮೀನುಗಳ ಸಂಖ್ಯೆಯನ್ನು ಕಡಿಮೆ ಮಾಡುವುದಲ್ಲದೆ, ಅವುಗಳ ಜೀನ್&zwnj;ಗಳು ಕಾರ್ಯನಿರ್ವಹಿಸುವ ವಿಧಾನವನ್ನೇ ಬದಲಾಯಿಸುತ್ತಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಸಂರಕ್ಷಿತ ಮತ್ತು ಮೀನುಗಾರಿಕೆ ವಲಯದ 'ಮುತ್ತಿನ ರೇಜರ್&zwnj;ಫಿಶ್'ಗಳ ಮೇಲೆ ನಡೆಸಿದ ಸಂಶೋಧನೆಯು, ಮೀನುಗಾರಿಕೆಯ ಒತ್ತಡವು ಮೀನುಗಳಲ್ಲಿ 'ಎಪಿಜೆನೆಟಿಕ್' ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂಬುದಕ್ಕೆ ಬಲವಾದ ಪುರಾವೆ ಒದಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvj86ez7pbdz9vzbj37xa7qg,imgname-thumbnail---2026-06-20t154026.778-1781950266343.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾನವನ ಅತಿಯಾದ ಮೀನುಗಾರಿಕೆ ಚಟುವಟಿಕೆಗಳು ಕೇವಲ ಮೀನಿನ ಸಂಖ್ಯೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಪ್ರಕೃತಿಯಲ್ಲಿ ಲಭ್ಯವಿರುವ ಮೀನುಗಳ ಗಾತ್ರ ಮತ್ತು ಆಯುಷ್ಯವನ್ನೇ ಬದಲಾಯಿಸುತ್ತವೆ ಎಂಬುದು ಜಗತ್ತಿಗೆ ತಿಳಿದಿರುವ ವಿಚಾರ. ಆದರೆ, ಇತ್ತೀಚಿನ ಹೊಸ ಜಾಗತಿಕ ಅಧ್ಯಯನವೊಂದು ಇದಕ್ಕಿಂತಲೂ ಆಘಾತಕಾರಿ ಮತ್ತು ಆಳವಾದ ಸತ್ಯವೊಂದನ್ನು ಹೊರಹಾಕಿದೆ. ತೀವ್ರವಾದ ಮೀನುಗಾರಿಕೆ ಒತ್ತಡವು ಕಡಲ ಜೀವಿಗಳ ಆಣ್ವಿಕ (Molecular) ಮಟ್ಟದಲ್ಲಿ ದೈಹಿಕ ಬದಲಾವಣೆಗಳನ್ನು ತರುತ್ತಿದ್ದು, ಅವುಗಳ ಜೀನ್&zwnj;ಗಳು (Genes) ಕಾರ್ಯನಿರ್ವಹಿಸುವ ವಿಧಾನದ ಮೇಲೆಯೇ ಪ್ರಭಾವ ಬೀರುತ್ತಿದೆ. ಮೀನುಗಳು ಹೆಣ್ಣಾಗಿ ಜನಿಸಿ ನಂತರ ಗಂಡು ಮೀನುಗಳಾಗುತ್ತವೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.&lt;/p&gt;&lt;p&gt;ಖ್ಯಾತ ವಿಜ್ಞಾನ ಪತ್ರಿಕೆ &lsquo;ಫಿಲಾಸಫಿಕಲ್ ಟ್ರಾನ್ಸಾಕ್ಷನ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ&rsquo; (Philosophical Transactions of the Royal Society B) ಜರ್ನಲ್&zwnj;ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದ್ದು, ಮೀನುಗಾರಿಕೆಯು ಜೀವಿಗಳಲ್ಲಿ &lsquo;ಎಪಿಜೆನೆಟಿಕ್&rsquo; (Epigenetic) ಬದಲಾವಣೆಗಳನ್ನು ಉಂಟುಮಾಡಬಲ್ಲದು ಎಂಬುದಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಲವಾದ ಪುರಾವೆಗಳು ಲಭ್ಯವಾಗಿವೆ ಎಂದು &lsquo;ಸೈನ್ಸ್ ಎಕ್ಸ್&rsquo; ವರದಿ ಮಾಡಿದೆ.&lt;/p&gt;&lt;h2&gt;ಏನಿದು ಮುತ್ತಿನ ರೇಜರ್&zwnj;ಫಿಶ್?&lt;/h2&gt;&lt;p&gt;ವಿಜ್ಞಾನಿಗಳು ಈ ಸಂಶೋಧನೆಗಾಗಿ ಆಯ್ದುಕೊಂಡಿದ್ದು &lsquo;ಮುತ್ತಿನ ರೇಜರ್&zwnj;ಫಿಶ್&rsquo; (Pearl Razorfish - ವೈಜ್ಞಾನಿಕ ಹೆಸರು: Xyrichtys novacula) ಎಂಬ ಸಣ್ಣ ಸಮುದ್ರ ಮೀನನ್ನು. ಮರಳಿನಿಂದ ಕೂಡಿದ ಕರಾವಳಿ ತೀರದ ಆಳವಿಲ್ಲದ ನೀರಿನಲ್ಲಿ ವಾಸಿಸುವ ಈ ಮೀನುಗಳು, ಸಮುದ್ರದ ತಳದಲ್ಲಿ ಸಿಗುವ ಸೀಗಡಿ ಹಾಗೂ ಇನ್ನಿತರ ಸಣ್ಣ ಜೀವಿಗಳನ್ನು ತಿಂದು ಬದುಕುತ್ತವೆ.&lt;/p&gt;&lt;p&gt;ನ್ಯಾಷನಲ್ ಜಿಯಾಗ್ರಫಿಕ್ ವರದಿಯ ಪ್ರಕಾರ, ಈ ಮೀನುಗಳ ಜೈವಿಕ ರಚನೆ ಅತ್ಯಂತ ವಿಶಿಷ್ಟವಾದದ್ದು. ಪ್ರತಿಯೊಂದು ಮುತ್ತಿನ ರೇಜರ್&zwnj;ಫಿಶ್ ಹುಟ್ಟುವಾಗ ಹೆಣ್ಣಾಗಿಯೇ ಜನಿಸುತ್ತದೆ. ಆದರೆ ಅವು ಬೆಳೆಯುತ್ತಾ ಹೋದಂತೆ, ಪ್ರಕೃತಿಯ ನಿಯಮದಂತೆ ಕೆಲವು ಮೀನುಗಳು ಸ್ವಾಭಾವಿಕವಾಗಿ ಗಂಡು ಮೀನುಗಳಾಗಿ ರೂಪಾಂತರಗೊಳ್ಳುತ್ತವೆ. ಈ ಗುಂಪಿನಲ್ಲಿರುವ ಅತ್ಯಂತ ಬಲಶಾಲಿ ಗಂಡು ಮೀನು, ಹಲವು ಹೆಣ್ಣು ಮೀನುಗಳಿರುವ ತನ್ನದೇ ಆದ ಪ್ರತ್ಯೇಕ ಸಾಮ್ರಾಜ್ಯವನ್ನು ರಕ್ಷಿಸುತ್ತದೆ. ಇದು ಇಡೀ ಗುಂಪಿನಲ್ಲಿ ಶಿಸ್ತನ್ನು ಕಾಪಾಡುವುದಲ್ಲದೆ, ಕಿರಿಯ ಹೆಣ್ಣು ಮೀನುಗಳು ಅವಧಿಗೂ ಮುನ್ನವೇ ಲೈಂಗಿಕ ಬದಲಾವಣೆ ಹೊಂದದಂತೆ ತಡೆಯುತ್ತದೆ.&lt;/p&gt;&lt;p&gt;ಸ್ಪೇನ್ ದೇಶದ ಪ್ರಸಿದ್ಧ &lsquo;ಬಾಲೆರಿಕ್ ದ್ವೀಪ&rsquo;ಗಳಲ್ಲಿ (Balearic Islands) ಈ ಮೀನನ್ನು ಸ್ಥಳೀಯವಾಗಿ &lsquo;ರಾರ್&rsquo; (Ror) ಎಂದು ಕರೆಯಲಾಗುತ್ತದೆ. ಅಲ್ಲಿ ಇದು ಅತ್ಯಂತ ಜನಪ್ರಿಯ ಸಮುದ್ರಾಹಾರವಾಗಿರುವುದರಿಂದ, ಪ್ರತಿ ವರ್ಷ ಮೀನುಗಾರಿಕೆ ಋತುವಿನಲ್ಲಿ ಸಾವಿರಾರು ಸ್ಥಳೀಯ ಮೀನುಗಾರರು ಮತ್ತು ಅವರ ಕುಟುಂಬಗಳು ಇದನ್ನು ಹಿಡಿಯಲು ಮುಗಿಬೀಳುತ್ತವೆ. ಈ ಭಾರಿ ಬೇಡಿಕೆಯಿಂದಾಗಿ, ಈ ಮೀನುಗಳು ತೀವ್ರವಾದ ಮೀನುಗಾರಿಕೆ ಒತ್ತಡವನ್ನು ಎದುರಿಸುತ್ತಿವೆ.&lt;/p&gt;&lt;h2&gt;ಸಂರಕ್ಷಿತ ವಲಯ vs ಮುಕ್ತ ಮೀನುಗಾರಿಕೆ ವಲಯ: ಒಂದು ತೌಲನಿಕ ಅಧ್ಯಯನ&lt;/h2&gt;&lt;p&gt;ಅತಿಯಾದ ಮೀನುಗಾರಿಕೆಯು ಮೀನಿನ ಜೀವರಾಶಿಯ ಮೇಲೆ ಯಾವ ರೀತಿಯ ಆಳವಾದ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ವಿಜ್ಞಾನಿಗಳು ಬಾಲೆರಿಕ್ ದ್ವೀಪಗಳ ಮೂರು ವಿಭಿನ್ನ ವಲಯಗಳಿಂದ ಸುಮಾರು 120 ಮುತ್ತಿನ ರೇಜರ್&zwnj;ಫಿಶ್&zwnj;ಗಳನ್ನು ಸಂಗ್ರಹಿಸಿದರು. ಪ್ರತಿ ವಲಯದಲ್ಲೂ ಎರಡು ವಿಭಿನ್ನ ಪರಿಸರ ವ್ಯವಸ್ಥೆಗಳಿದ್ದವು:&lt;/p&gt;&lt;p&gt;&lt;strong&gt;ಮುಕ್ತ ಮೀನುಗಾರಿಕೆ ಪ್ರದೇಶ:&lt;/strong&gt; ಇಲ್ಲಿ ಯಾವುದೇ ನಿರ್ಬಂಧವಿಲ್ಲದೆ ನಿಯಮಿತವಾಗಿ ಮೀನುಗಳನ್ನು ಹಿಡಿಯಲಾಗುತ್ತಿತ್ತು.&lt;/p&gt;&lt;p&gt;&lt;strong&gt;ಸಂರಕ್ಷಿತ ಸಮುದ್ರ ಮೀಸಲು ಪ್ರದೇಶ (Marine Reserve): &lt;/strong&gt;ಇಲ್ಲಿ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು ಅಥವಾ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿತ್ತು.&lt;/p&gt;&lt;p&gt;ಸಂಶೋಧಕರು ಈ ಎರಡೂ ಪ್ರದೇಶಗಳ ಮೀನುಗಳಿಂದ ಸಣ್ಣ ರೆಕ್ಕೆಗಳ (Fins) ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಅವುಗಳ ಡಿಎನ್&zwnj;ಎ (DNA) ಮತ್ತು ಎಪಿಜೆನೆಟಿಕ್ಸ್ ಪರೀಕ್ಷೆ ನಡೆಸಿದರು.&lt;/p&gt;&lt;h2&gt;ಡಿಎನ್&zwnj;ಎ ಮತ್ತು ಎಪಿಜೆನೆಟಿಕ್ಸ್ ನಡುವಿನ ವ್ಯತ್ಯಾಸವೇನು?&lt;/h2&gt;&lt;p&gt;ನಮಗೆಲ್ಲ ತಿಳಿದಿರುವಂತೆ, ಡಿಎನ್&zwnj;ಎ (DNA) ಎಂಬುದು ಒಂದು ತರಹದ ಜೈವಿಕ ಮಾಹಿತಿ ಕೋಶವಾಗಿದ್ದು, ಇದು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಆನುವಂಶಿಕ ಗುಣಲಕ್ಷಣಗಳನ್ನು ವರ್ಗಾಯಿಸುತ್ತದೆ. ಆದರೆ &lsquo;ಎಪಿಜೆನೆಟಿಕ್ಸ್&rsquo; (Epigenetics) ಎಂಬುದು ಡಿಎನ್&zwnj;ಎ ಮೇಲಿರುವ ಸಣ್ಣ ರಾಸಾಯನಿಕ ಗುರುತುಗಳಾಗಿದ್ದು, ಇವು ಯಾವ ಜೀನ್&zwnj;ಗಳು ಎಷ್ಟು ಸಕ್ರಿಯವಾಗಿರಬೇಕು ಎಂಬುದನ್ನು ನಿರ್ಧರಿಸುತ್ತವೆ. ಸರಳವಾಗಿ ಹೇಳುವುದಾದರೆ, ಇವು ಜೀನ್&zwnj;ಗಳನ್ನು ಆನ್ ಅಥವಾ ಆಫ್ ಮಾಡುವ ಅಥವಾ ಅವುಗಳ ಶಕ್ತಿಯನ್ನು ನಿಯಂತ್ರಿಸುವ &lsquo;ಸ್ವಿಚ್&zwnj;ಗಳ&rsquo;ಂತೆ ಕೆಲಸ ಮಾಡುತ್ತವೆ.&lt;/p&gt;&lt;p&gt;ಎಪಿಜೆನೆಟಿಕ್ ಬದಲಾವಣೆಯ ಅತ್ಯಂತ ಪ್ರಮುಖ ಪ್ರಕ್ರಿಯೆಯೆಂದರೆ &lsquo;ಡಿಎನ್&zwnj;ಎ ಮೆತಿಲೀಕರಣ&rsquo; (DNA Methylation). ಮೀಥೈಲ್ ಗ್ರೂಪ್ ಎಂದು ಕರೆಯಲಾಗುವ ಸಣ್ಣ ರಾಸಾಯನಿಕ ಗುಂಪು ಡಿಎನ್&zwnj;ಎಗೆ ಅಂಟಿಕೊಂಡಾಗ ಈ ಬದಲಾವಣೆ ಸಂಭವಿಸುತ್ತದೆ. ಇದು ಜೀನ್&zwnj;ಗಳ ಮೂಲ ರಚನೆಯನ್ನು ಬದಲಾಯಿಸದೆ, ಅವು ಪರಿಸರಕ್ಕೆ ತಕ್ಕಂತೆ ಹೇಗೆ ಸ್ಪಂದಿಸಬೇಕು ಎಂಬುದನ್ನು ನಿಯಂತ್ರಿಸುತ್ತದೆ.&lt;/p&gt;&lt;h2&gt;ಸಂಶೋಧನೆಯಲ್ಲಿ ಕಂಡುಬಂದ ಮಹತ್ವದ ವ್ಯತ್ಯಾಸಗಳು&lt;/h2&gt;&lt;p&gt;ವಿಜ್ಞಾನಿಗಳು ಸಂರಕ್ಷಿತ ಪ್ರದೇಶದ ಮೀನುಗಳನ್ನು ಮತ್ತು ಅತಿಯಾಗಿ ಮೀನುಗಾರಿಕೆ ನಡೆಯುವ ಪ್ರದೇಶದ ಮೀನುಗಳನ್ನು ಸೂಕ್ಷ್ಮವಾಗಿ ಹೋಲಿಸಿದಾಗ ಆಶ್ಚರ್ಯಕರ ಸಂಗತಿಗಳು ಬೆಳಕಿಗೆ ಬಂದವು:&lt;/p&gt;&lt;p&gt;&lt;strong&gt;ಡಿಎನ್&zwnj;ಎ ಅನುಕ್ರಮ ಬದಲಾಗಿಲ್ಲ:&lt;/strong&gt; ಭಾರೀ ಮೀನುಗಾರಿಕೆಯು ಮೀನಿನ ಮೂಲ ಡಿಎನ್&zwnj;ಎ ಅನುಕ್ರಮವನ್ನೇನೂ (DNA Sequence) ಬದಲಾಯಿಸಿಲ್ಲ. ಅಂದರೆ ಎರಡು ಗುಂಪಿನ ಮೀನುಗಳು ತಳೀಯವಾಗಿ ಒಂದೇ ಆಗಿದ್ದವು.&lt;/p&gt;&lt;p&gt;&lt;strong&gt;ಕಡಿಮೆ ಆನುವಂಶಿಕ ವೈವಿಧ್ಯತೆ:&lt;/strong&gt; ಮುಕ್ತವಾಗಿ ಮೀನುಗಾರಿಕೆ ನಡೆಯುವ ಪ್ರದೇಶದ ಮೀನುಗಳಲ್ಲಿ ಆನುವಂಶಿಕ ವೈವಿಧ್ಯತೆ (Genetic Diversity) ತುಂಬಾ ಕಡಿಮೆಯಿರುವುದು ಕಂಡುಬಂದಿದೆ. ಅಲ್ಲದೆ, ಸಂರಕ್ಷಿತ ಪ್ರದೇಶದ ಮೀನುಗಳಿಗೆ ಹೋಲಿಸಿದರೆ ಇವು ಗಾತ್ರದಲ್ಲಿ ಸಣ್ಣದಾಗಿದ್ದವು ಮತ್ತು ಇವುಗಳ ಆಯುಷ್ಯವೂ ಕಡಿಮೆಯಾಗಿತ್ತು.&lt;/p&gt;&lt;p&gt;&lt;strong&gt;ಮೆತಿಲೀಕರಣದಲ್ಲಿ ಭಾರಿ ವ್ಯತ್ಯಾಸ:&lt;/strong&gt; ಮೂಲ ಡಿಎನ್&zwnj;ಎ ಒಂದೇ ಆಗಿದ್ದರೂ, ಡಿಎನ್&zwnj;ಎ ಮೆತಿಲೀಕರಣ ಪ್ರಕ್ರಿಯೆಯಲ್ಲಿ ವಿಜ್ಞಾನಿಗಳು ಬರೋಬ್ಬರಿ 291 ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿದ್ದಾರೆ. ಈ ರಾಸಾಯನಿಕ ಟ್ಯಾಗ್&zwnj;ಗಳು ಸಂರಕ್ಷಿತ ವಲಯದ ಮೀನುಗಳಿಗಿಂತ, ಮೀನುಗಾರಿಕೆ ವಲಯದ ಮೀನುಗಳಲ್ಲಿ ಸಂಪೂರ್ಣವಾಗಿ ಭಿನ್ನವಾಗಿದ್ದವು. ಜೀನ್&zwnj;ಗಳು ಬದಲಾಗದಿದ್ದರೂ, ಅವುಗಳನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಮಾನವನ ಚಟುವಟಿಕೆಗಳು ಬದಲಾಯಿಸುತ್ತಿವೆ ಎಂಬುದಕ್ಕೆ ಇದು ಜಗತ್ತಿನ ಮೊದಲ ಪುರಾವೆಯಾಗಿದೆ.&lt;/p&gt;&lt;h2&gt;ಮೀನುಗಾರಿಕೆ ಒಂದೇ ಕಾರಣವಲ್ಲ, ಇತರ ಅಂಶಗಳೂ ಇರಬಹುದು!&lt;/h2&gt;&lt;p&gt;ಮೀನುಗಾರಿಕೆ ಒತ್ತಡ ಮತ್ತು ಡಿಎನ್&zwnj;ಎ ಮೀಥೈಲೇಷನ್ ನಡುವೆ ಬಲವಾದ ಸಂಬಂಧವಿರುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರಾದರೂ, ಇದಕ್ಕೆ ಕೇವಲ ಮಾನವನ ಮೀನುಗಾರಿಕೆಯಷ್ಟೇ ನೇರ ಕಾರಣ ಎಂದು ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಅತಿಯಾದ ಮೀನುಗಾರಿಕೆ ನಡೆಯುವ ಜಾಗಗಳಲ್ಲಿ ಮೀನುಗಳ ಸಾಂದ್ರತೆ ಕಡಿಮೆಯಿರುತ್ತದೆ. ಇದರಿಂದ ಅಲ್ಲಿನ ಆಹಾರದ ಲಭ್ಯತೆ, ಪರಿಸರ ವ್ಯವಸ್ಥೆ ಹಾಗೂ ಪರಭಕ್ಷಕ ಜೀವಿಗಳ (Predators) ಸಂಖ್ಯೆಯಲ್ಲಿ ಏರುಪೇರಾಗುತ್ತದೆ. ಈ ಬಾಹ್ಯ ಪರಿಸರ ಬದಲಾವಣೆಗಳೂ ಸಹ ಮೀನುಗಳ ಎಪಿಜೆನೆಟಿಕ್ ಬದಲಾವಣೆಯ ಮೇಲೆ ಪ್ರಭಾವ ಬೀರಿರಬಹುದು ಎಂದು ಸಂಶೋಧಕರು ಶಂಕಿಸಿದ್ದಾರೆ.&lt;/p&gt;&lt;p&gt;ಆದಾಗ್ಯೂ, ಈ ಅಧ್ಯಯನವು ಕಡಲ ಜೀವಿಗಳ ಸಂರಕ್ಷಣೆಯ ಕುರಿತು ಜಾಗತಿಕ ಮಟ್ಟದಲ್ಲಿ ಹೊಸ ದೃಷ್ಟಿಕೋನವನ್ನು ನೀಡಿದೆ. ಸಮುದ್ರದ ಸಂಪನ್ಮೂಲಗಳನ್ನು ಅತಿಯಾಗಿ ಲೂಟಿ ಮಾಡುವುದರಿಂದ ಜೀವಿಗಳು ತಮ್ಮ ಆಂತರಿಕ ಜೈವಿಕ ನಿಯಂತ್ರಣ ವ್ಯವಸ್ಥೆಯನ್ನೇ ಕಳೆದುಕೊಳ್ಳಬಹುದು ಎಂಬ ಎಚ್ಚರಿಕೆಯನ್ನು ಈ ಸಂಶೋಧನೆ ನೀಡಿದೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/science/overfishing-alters-fish-biology-at-a-molecular-level-these-fish-are-born-female-and-later-become-male-new-study-gdp/articleshow-ng4ru6n"/>
        </item>
        <item>
            <title><![CDATA[ಅಶೋಕನಗರದ ಪುಟ್ಟ ಮನೆಯಿಂದ ಕ್ಯಾಲಿಫೋರ್ನಿಯಾದ ₹383 ಕೋಟಿ ಬಂಗಲೆ, ಭಾರತೀಯನ ಸಾಧನೆ]]></title>
            <link>https://kannada.asianetnews.com/world-news/ashok-nagar-small-home-to-a-rs-383-crore-california-mansion-sundar-pichai-inspiring-journey/articleshow-palx618</link>
            <guid isPermaLink="true">https://kannada.asianetnews.com/world-news/ashok-nagar-small-home-to-a-rs-383-crore-california-mansion-sundar-pichai-inspiring-journey/articleshow-palx618</guid>
            <pubDate>Tue, 28 Jul 2026 14:41:37 +0530</pubDate>
            <description><![CDATA[&lt;p&gt;ಅಶೋಕನಗರದ ಕಾಲೋನಿಯಲ್ಲಿ 2 ಬೆಡ್ ರೂಂನ ಸಣ್ಣ ಮನೆ. ಮಧ್ಯಮ ಕುಟುಂಬದ ಇಕ್ಕಟ್ಟಿನ ಮನೆ. ಇಲ್ಲಿಂದ ಆರಂಭಗೊಂಡ ಪಯಣ ಇದೀಗ ಕ್ಯಾಲಿಫೋರ್ನಿಯಾದಲ್ಲಿ ಬರೋಬ್ಬರಿ 31 ಎಕರೆ ಪ್ರದೇಶದಲ್ಲಿ ಅತೀ ದೊಡ್ಡ ಬಂಗಲೆ ಮನೆಯ ವರೆಗೆ ಭಾರತೀಯನ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykzvrephc53pvard2t8fzbt,imgname-sundar-pichai-journey-1785229861333.png" type="image/jpeg" height="390" width="690"/>
            <content:encoded><![CDATA[&lt;p&gt;ಹಲವು ಭಾರತೀಯರು ಕಡು ಬಡತನದ ಮೂಲಕ ಬೆಳೆದು ಬಂದು ವಿದೇಶಗಳಲ್ಲಿ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ, ಪ್ರತಿಷ್ಠಿತ ಕಂಪನಿಗಳ ಸಿಇಒಗಳಾದಿ ವಿಶ್ವದ ಗಮನಸೆಳೆದಿದ್ದಾರೆ. ಹೀಗೆ ಭಾರತದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, 2 ಬೆಡ್ ರೂಂ ಸಣ್ಣ ಮನೆಯಲ್ಲಿ ಬೆಳೆದು ನೇರವಾಗಿ ಅಮೆರಿಕದಲ್ಲಿ ಉದ್ಯೋಗ ಗಿಟಿಸಿಕೊಂಡು ಇದೀಗ ವಿಶ್ವವನ್ನೇ ತನ್ನ ಕೈಯಲ್ಲಿಟ್ಟುಕೊಂಡಿರುವ ಭಾರತದ ಹೆಮ್ಮೆಯ ಸಾಧಕ, ಗೂಗಲ್ ಸಿಇಒ ಸುಂದರ್ ಪಿಚೈ ಮನೆಯ ರೋಚಕ ಕತೆ ಇಲ್ಲಿದೆ.&lt;/p&gt;&lt;h2&gt;ಅಶೋಕನಗರದ ಸಣ್ಣ ಮನೆಯಿಂದ ಪಯಣ ಆರಂಭ&lt;/h2&gt;&lt;p&gt;ಗೂಗಲ್ ಸಿಇಒ ಸುಂದರ್ ಪಿಚೈ, ಹುಟ್ಟಿ ಬೆಳೆದಿದ್ದು ಚೆನ್ನೈನ ಅಶೋಕನಗರದಲ್ಲಿ. ಸಣ್ಣ 2 ಬೆಡ್ ರೂಂ ಮನೆಯಲ್ಲಿ ಹುಟ್ಟಿದ ಬೆಳೆದ ಸುಂದರ್ ಪಿಚೈ ಜರ್ನಿ ಕುರಿತು ಹಲವು ವರದಿಗಳಿವೆ. ಹಲವು ಬಾರಿ ಸೋಶಿಯಲ್ ಮೀಡಿಯಾಗಳಲ್ಲೂ ಸದ್ದು ಮಾಡಿದೆ. ಸಣ್ಣ ಮನೆಯಿಂದ ಅಮೆರಿಕದ ಪ್ರತಿಷ್ಠಿತ ಏರಿಯಾದಲ್ಲಿ ಬರೋಬ್ಬರಿ 31 ಎಕರೆಯಲ್ಲಿ ಹರಡಿಕೊಂಡಿರುವ ಭವ್ಯ ಬಂಗಲೆಯಲ್ಲಿರುವ ಪಿಚೈ ಬದುಕು ಎಲ್ಲರಿಗೂ ಸ್ಪೂರ್ತಿಯಾಗಿದೆ.&lt;/p&gt;&lt;h2&gt;10 ಸಾವಿರ ಚದರ ಅಡಿ ವಿಸ್ತೀರ್ಣದ ಮನೆ&lt;/h2&gt;&lt;p&gt;ಕ್ಯಾಲಿಫೋರ್ನಿಯಾದ ಲಾಸ್ ಅಲ್ಟೋಸ್ ಹಿಲ್ಸ್&zwnj;ನಲ್ಲಿ ಸುಂದರ್ ಪಿಚೈ ಮನೆಯಿದೆ. ಇದು ಅತ್ಯಂತ ದುಬಾರಿ ಹಾಗೂ ಐಷಾರಾಮಿ ಮನೆ ಮಾತ್ರವಲ್ಲ, ಏರಿಯಾ ಕೂಡ ಅತ್ಯಂತ ದುಬಾರಿ ಹಾಗೂ ರೆಸಿಡೆನ್ಶಿಯಲ್. ಅತೀ ದೊಡ್ಡ ಬಂಗಲೆ ರೀತಿಯಲ್ಲಿರುವವ ಈ ಮನೆ 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಮರದ ಕೆತ್ತನೆ, ಸೀಲಿಂಗ್, ಗ್ಲಾಸ್ ಸೇರಿದಂತೆ ಹಲವು ರೀತಿಯಲ್ಲಿ ಸುಂದರ್ ಪಿಚೈ ಮನೆ ಅತ್ಯಂತ ಆಕರ್ಷಕವಾಗಿದೆ.&lt;/p&gt;&lt;h2&gt;ಬೆಟ್ಟದ ತುದಿಯಲ್ಲಿದೆ ಪಿಚೈ ಮನೆ&lt;/h2&gt;&lt;p&gt;ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಅನ್ನೋ ಬೆಟ್ಟದ ತುದಿಯಲ್ಲಿ ಸುಂದರ್ ಪಿಚೈ ಮನೆ ಇದೆ. ಒಟ್ಟು 31 ಎಕರೆ ಎಸ್ಟೇಟ್&zwnj;ನಲ್ಲಿ ಪಿಚೈ ಮನೆ ಕಟ್ಟಿಕೊಂಡಿದ್ದಾರೆ. ಸ್ವಾಟ್ ಮೈಯರ್ಸ್ ಆರ್ಕಿಟೆಕ್ಟ್ಸ್ ಸಂಸ್ಥೆ ಈ ಮನೆ ನಿರ್ಮಿಸಿದೆ. ವಿಶೇಷ ಅಂದರೆ ಸುಂದರ್ ಪಿಚೈ ಮನೆ ಹಲವು ಅತ್ಯಾಧುನಿಕ ತಂತ್ರಜ್ಞಾನ, ಹಲವು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ.&lt;/p&gt;&lt;p&gt;ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್, ಸ್ಪಾ, ಜಿಮ್ ಹಾಗೂ ಅಪರೂಪದ ವೈನ್&zwnj;ಗಳನ್ನು ಸಂಗ್ರಹಿಸಿಡುವ ವೈನ್ ಸೆಲ್ಲರ್, ಟೆನ್ನಿಸ್ ಕೋರ್ಟ್, ಮಿನಿಯೇಚರ್ ಗಾಲ್ಫ್ ಕೋರ್ಸ್ ಸೇರಿದಂತೆ ಸುಂದರ ಗಾರ್ಡನ್, ಕೊಳಗಳು, ಹೂವಿನ ತೋಟಗಳಿಂದ ಮನೆ ಕಂಗೊಳಿಸುತ್ತಿದೆ. ಅಂಡರ್ ಗ್ರೌಂಡ್ ವ್ಯವಸ್ಥೆಯೂ ಹೊಂದಿದೆ. ಇದೇ ವೇಳೆ, ಕೆಲಸಗಾರರು, ಕೇರ್ ಟೇಕರ್ ಸೇರಿದಂತೆ ಸಿಬ್ಬಂದಿಗಳಿಗೆ ಕೊಠಡಿಗಳ ವ್ಯವಸ್ಥೆಗಳನ್ನು ಮಾಡಲಾಗಿದೆ. ಮನೆ ಸಂಪೂರ್ಣ ಸೋಲಾರ್ ವ್ಯವಸ್ಥೆಯನ್ನೂ ಹೊಂದಿದೆ.&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/ashok-nagar-small-home-to-a-rs-383-crore-california-mansion-sundar-pichai-inspiring-journey/articleshow-palx618"/>
        </item>
        <item>
            <title><![CDATA[ಸೌರವ್ಯೂಹದ ನಿಗೂಢತೆ ಭೇದಿಸಲು ಹೊರಟ ನಾಸಾ, ಶನಿಯ ಉಂಗುರದ ಹತ್ತಿರಕ್ಕೆ ಹೋಗಿ ಸ್ಪರ್ಶಿಸಿ ರಹಸ್ಯ ಹುಡುಕಲು ಸಿದ್ಧತೆ!]]></title>
            <link>https://kannada.asianetnews.com/science/nasa-saturn-rings-mission-the-radical-plans-to-touch-the-solar-system-most-dangerous-environment-gdp/articleshow-qsuxqq3</link>
            <guid isPermaLink="true">https://kannada.asianetnews.com/science/nasa-saturn-rings-mission-the-radical-plans-to-touch-the-solar-system-most-dangerous-environment-gdp/articleshow-qsuxqq3</guid>
            <pubDate>Sun, 26 Jul 2026 12:35:41 +0530</pubDate>
            <description><![CDATA[ನಾಸಾ ಬೆಂಬಲಿತ ಎರಡು ಹೊಸ ಯೋಜನೆಗಳು ಶನಿಯ ಹಿಮಾವೃತ ಉಂಗುರಗಳನ್ನು ನೇರವಾಗಿ ಸ್ಪರ್ಶಿಸಲು ಸಜ್ಜಾಗುತ್ತಿವೆ. 'ಪ್ರಾಕ್ಸಿಸ್' ಎಂಬ ಯೋಜನೆಯು &quot;ಸ್ಪರ್ಶಿಸಿ ಮರಳುವ&quot; ತಂತ್ರದ ಮೂಲಕ ಮಾದರಿ ಸಂಗ್ರಹಿಸಿದರೆ, ಮತ್ತೊಂದು ಯೋಜನೆಯು ಸಾವಿರಾರು ಮೈಕ್ರೋ ರೋಬೋಟ್&zwnj;ಗಳನ್ನು ಬಳಸಿ ಉಂಗುರಗಳ ತ್ರಿಆಯಾಮದ ನಕ್ಷೆಯನ್ನು ಸಿದ್ಧಪಡಿಸಲಿದೆ. ಈ ಕಾರ್ಯಾಚರಣೆಗಳು ಶನಿಯ ಉಂಗುರಗಳ ಉಗಮದ ರಹಸ್ಯವನ್ನು ಭೇದಿಸುವ ಗುರಿ ಹೊಂದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jy0d71k28bqctw5d8ec9n7b1,imgname-saturn--1750213035617.jpg" type="image/jpeg" height="390" width="690"/>
            <content:encoded><![CDATA[&lt;p&gt;ಶತಮಾನಗಳಿಂದಲೂ ಬಾಹ್ಯಾಕಾಶವು ಮನುಷ್ಯನನ್ನು ತನಗಿಂತ ಹೆಚ್ಚಾಗಿ ಆಕರ್ಷಿಸಿದೆ. ಸೂರ್ಯನ ಪ್ರಖರ ಜ್ವಾಲೆಗಳು, ಚಂದ್ರನ ನಿಗೂಢ ಮೇಲ್ಮೈ ಮತ್ತು ಶನಿ ಗ್ರಹದ ಸುತ್ತ ಮಿನುಗುವ ಉಂಗುರಗಳು ನಮ್ಮಲ್ಲಿ ಸದಾ ಕುತೂಹಲವನ್ನು ಕೆರಳಿಸುತ್ತಲೇ ಇವೆ. ಈ ರಹಸ್ಯಗಳನ್ನು ಕೇವಲ ದೂರದಿಂದ ನೋಡುವುದಷ್ಟೇ ಅಲ್ಲದೆ, ಹತ್ತಿರಕ್ಕೆ ಹೋಗಿ ಸ್ಪರ್ಶಿಸಬೇಕು ಎಂಬುದು ವಿಜ್ಞಾನಿಗಳ ದಶಕಗಳ ಕನಸು. ಈಗ ಆ ಕನಸು ನನಸಾಗುವ ಸಮಯ ಹತ್ತಿರಬಂದಿದೆ. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ 'ನಾಸಾ' (NASA) ಬೆಂಬಲಿತ ಎರಡು ಬೃಹತ್ ಯೋಜನೆಗಳು ಸೌರವ್ಯೂಹದ ಅತ್ಯಂತ ಅಪಾಯಕಾರಿ ವಲಯ ಎಂದೇ ಕರೆಯಲ್ಪಡುವ ಶನಿಯ (Saturn) ಹಿಮಾವೃತ ಉಂಗುರಗಳನ್ನು ನೇರವಾಗಿ ಸ್ಪರ್ಶಿಸಲು ಸಜ್ಜಾಗುತ್ತಿವೆ!&lt;/p&gt;&lt;p&gt;ನಾಸಾದ &lsquo;ಇನ್ನೋವೇಟಿವ್ ಅಡ್ವಾನ್ಸ್ಡ್ ಕಾನ್ಸೆಪ್ಟ್ಸ್&rsquo; (NIAC) ಕಾರ್ಯಕ್ರಮದಡಿ ಆಯ್ಕೆಯಾಗಿರುವ ಈ ಹೊಸ ಪ್ರಸ್ತಾಪಗಳು, ಶನಿಯ ಉಂಗುರಗಳ ಮಾದರಿಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿವೆ. 2017ರಲ್ಲಿ ನಾಸಾದ 'ಕ್ಯಾಸಿನಿ' (Cassini) ಮಿಷನ್ ಮುಕ್ತಾಯಗೊಂಡ ನಂತರ ವಿಜ್ಞಾನಿಗಳನ್ನು ಕಾಡುತ್ತಿರುವ ಹಲವು ರಹಸ್ಯಗಳನ್ನು ಭೇದಿಸಲು ಈ ರೋಬೋಟಿಕ್ ಪರಿಶೋಧಕರು ನೆರವಾಗಲಿದ್ದಾರೆ.&lt;/p&gt;&lt;h2&gt;ಮೊದಲ ಯೋಜನೆ: 'ಪ್ರಾಕ್ಸಿಸ್' (PRAXIS) - ಟಚ್ ಅಂಡ್ ಗೋ ಮಿಷನ್&lt;/h2&gt;&lt;p&gt;ಮೊದಲ ಪರಿಕಲ್ಪನೆಯನ್ನು PRAXIS (Planetary Rings Autonomous Exploration with In-situ Sampling) ಎಂದು ಹೆಸರಿಸಲಾಗಿದೆ. ಇದು ಶನಿಯ ಉಂಗುರಗಳಿಗೆ ಭಾರತೀಯ ಕಾಲಮಾನದ ಪ್ರಕಾರ ಮೊದಲ ಬಾರಿಗೆ &quot;ಸ್ಪರ್ಶಿಸಿ ಮರಳುವ&quot; (Touch and Go) ಕಾರ್ಯಾಚರಣೆಯಾಗಿದೆ. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ (JPL) ರೊಬೊಟಿಕ್ಸ್ ಮಾಡೆಲಿಂಗ್ ಮತ್ತು ಸಿಮ್ಯುಲೇಶನ್ ಗ್ರೂಪ್&zwnj;ನ ಪ್ರಮುಖರಾದ ಡಾ. ಬಿ. ಮಾರ್ಕೊ ಕ್ವಾಡ್ರೆಲ್ಲಿ ಈ ಯೋಜನೆಯ ನೇತೃತ್ವ ವಹಿಸಲಿದ್ದಾರೆ.&lt;/p&gt;&lt;h2&gt;ಏನಿದರ ವಿಶೇಷತೆ?&lt;/h2&gt;&lt;p&gt;ಹಿಂದಿನ 'ಕ್ಯಾಸಿನಿ' ನೌಕೆಯು ಶನಿ ಗ್ರಹದ ಬಗ್ಗೆ ನಮಗೆ ಕ್ರಾಂತಿಕಾರಿ ಮಾಹಿತಿ ನೀಡಿದ್ದರೂ, ಈ ಉಂಗುರಗಳು ಹೇಗೆ ರೂಪುಗೊಂಡವು? ಅವುಗಳ ವಯಸ್ಸೆಷ್ಟು? ಮತ್ತು ಅಲ್ಲಿರುವ ಲೆಕ್ಕವಿಲ್ಲದಷ್ಟು ಮಂಜುಗಡ್ಡೆಯ ಕಣಗಳು ಹೇಗೆ ನಿರಂತರವಾಗಿ ಡಿಕ್ಕಿ ಹೊಡೆಯುತ್ತಾ, ಒಂದಾಗುತ್ತಾ ಅಥವಾ ಒಡೆಯುತ್ತಾ ಸಾಗುತ್ತವೆ ಎಂಬ ಪ್ರಶ್ನೆಗಳಿಗೆ ಇಂದಿಗೂ ನಿಖರ ಉತ್ತರವಿಲ್ಲ. ಈ ಉಂಗುರಗಳಲ್ಲಿ ಧೂಳಿನ ಕಣಗಳಿಂದ ಹಿಡಿದು ದೊಡ್ಡ ಮನೆಗಳ ಗಾತ್ರದ ಮಂಜುಗಡ್ಡೆ ಮತ್ತು ಕಲ್ಲಿನ ಮಿಶ್ರಿತ ಕಣಗಳಿವೆ. ಕ್ಯಾಸಿನಿ ಇವುಗಳನ್ನು ದೂರದಿಂದ ಚಿತ್ರೀಕರಿಸಿದ್ದರೂ, ಎಂದಿಗೂ ಒಂದು ಕಣವನ್ನೂ ನೇರವಾಗಿ ಮುಟ್ಟಿ ಪರಿಶೀಲಿಸಿರಲಿಲ್ಲ.&lt;/p&gt;&lt;p&gt;PRAXIS ಈ ಕೊರತೆಯನ್ನು ನೀಗಿಸಲಿದೆ. ಬಾಹ್ಯಾಕಾಶ ನೌಕೆಯು ಅತ್ಯಂತ ದಟ್ಟವಾದ ಉಂಗುರಗಳ ಒಳಗೆ ನೇರವಾಗಿ ಹಾರುವ ಬದಲು, ಅವುಗಳ ಮೇಲ್ಭಾಗದಲ್ಲಿ ಸುರಕ್ಷಿತವಾಗಿ ಸುಳಿದಾಡುತ್ತದೆ (Hover). ನಂತರ, ಗಾಳಹಾಕಿ ಮೀನು ಹಿಡಿಯುವ ತಂತ್ರಜ್ಞಾನದಿಂದ ಪ್ರೇರಿತವಾದ ಸುದೀರ್ಘ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿರುವ ದಂಡವನ್ನು (Boom) ಕೆಳಕ್ಕೆ ಚಾಚುತ್ತದೆ. ಕೃತಕ ಬುದ್ಧಿಮತ್ತೆ (AI) ಆಧಾರಿತವಾಗಿ ಕಾರ್ಯನಿರ್ವಹಿಸುವ ಈ ದಂಡವು ಚಲಿಸುತ್ತಿರುವ ಉಂಗುರದ ಮೇಲ್ಮೈಯನ್ನು ಕ್ಷಣಕಾಲ ಸ್ಪರ್ಶಿಸಿ, ಅಲ್ಲಿನ ವಸ್ತುಗಳನ್ನು ಸಂಗ್ರಹಿಸಿ ತಕ್ಷಣವೇ ಮೇಲಕ್ಕೆ ಮುದುಡಿಕೊಳ್ಳುತ್ತದೆ. ನೌಕೆಯು ಉಂಗುರಗಳ ವಿವಿಧ ಭಾಗಗಳಲ್ಲಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ ಮಾದರಿಗಳನ್ನು ಹೋಲಿಕೆ ಮಾಡಲಿದೆ. ಆನ್&zwnj;ಬೋರ್ಡ್&zwnj;ನಲ್ಲಿರುವ ಅತ್ಯಾಧುನಿಕ ಉಪಕರಣಗಳು ಈ ವಸ್ತುಗಳ ಗಾತ್ರ, ಸಾಂದ್ರತೆ ಮತ್ತು ಆಂತರಿಕ ರಚನೆಯನ್ನು ತಕ್ಷಣವೇ ವಿಶ್ಲೇಷಿಸಲಿವೆ. ಇದು ಶನಿಯ ಉಂಗುರಗಳು ಪುಡಿಯಾದ ಚಂದ್ರನ ಅವಶೇಷಗಳೇ ಅಥವಾ ಗ್ರಹ ರಚನೆಯ ಸಮಯದಲ್ಲಿ ಉಳಿದುಕೊಂಡ ಮೂಲವಸ್ತುಗಳೇ ಎಂಬುದನ್ನು ಪತ್ತೆಹಚ್ಚಲು ನೆರವಾಗಲಿದೆ.&lt;/p&gt;&lt;h2&gt;ಎರಡನೇ ಯೋಜನೆ: 10,000 ಮೈಕ್ರೋ ರೋಬೋಟ್&zwnj;ಗಳ ದಾಳಿ!&lt;/h2&gt;&lt;p&gt;ನಾರ್ತ್&zwnj;ವೆಸ್ಟರ್ನ್ ವಿಶ್ವವಿದ್ಯಾಲಯದ ಮೈಕೆಲ್ ರುಬೆನ್&zwnj;ಸ್ಟೈನ್ ನೇತೃತ್ವದ ಎರಡನೇ ಪ್ರಸ್ತಾಪವು ಮತ್ತಷ್ಟು ರೋಮಾಂಚನಕಾರಿಯಾಗಿದೆ. ಈ ಯೋಜನೆಯಡಿ ಸುಮಾರು 10,000 ಸಕ್ರಿಯ ಫೆಮ್ಟೋಸ್ಯಾಟಲೈಟ್&zwnj;ಗಳನ್ನು (Femtosatellites) ನಿಯೋಜಿಸಲು ಉದ್ದೇಶಿಸಲಾಗಿದೆ. ಇವು ಕೇವಲ ಕೆಲವು ಸೆಂಟಿಮೀಟರ್ ವ್ಯಾಸವನ್ನು ಹೊಂದಿರುವ ಪುಟ್ಟ ಬಾಹ್ಯಾಕಾಶ ನೌಕೆಗಳಾಗಿವೆ. ಇವುಗಳನ್ನು ಶನಿಯ ಉಂಗುರಗಳು, ಅದರ ವಾತಾವರಣ ಮತ್ತು ಕಾಂತೀಯ ಕ್ಷೇತ್ರದೊಳಗೆ ನೇರವಾಗಿ ಬಿಡಲಾಗುತ್ತದೆ.&lt;/p&gt;&lt;h2&gt;ಅಪಾಯವನ್ನೇ ಬಂಡವಾಳವಾಗಿಸಿಕೊಂಡ ತಂತ್ರಜ್ಞಾನ:&lt;/h2&gt;&lt;p&gt;ಹಿಂದಿನ ಕ್ಯಾಸಿನಿಯಂತಹ ಶತಕೋಟಿ ಡಾಲರ್ ವೆಚ್ಚದ ದೊಡ್ಡ ಬಾಹ್ಯಾಕಾಶ ನೌಕೆಗಳು ಉಂಗುರಗಳ ಕಣಗಳಿಗೆ ಡಿಕ್ಕಿ ಹೊಡೆದು ನಾಶವಾಗುವ ಭಯದಿಂದ ದಟ್ಟವಾದ ಪ್ರದೇಶಗಳಿಂದ ದೂರವಿರುತ್ತಿದ್ದವು. ಆದರೆ, ಈ ಫೆಮ್ಟೋಸ್ಯಾಟ್ ಸಮೂಹವು (Swarm) ಆ ಅಪಾಯವನ್ನೇ ತನ್ನ ಶಕ್ತಿಯಾಗಿಸಿಕೊಳ್ಳುತ್ತದೆ. ಸಾವಿರಾರು ಪುಟ್ಟ ನೌಕೆಗಳು ತೀವ್ರ ವೇಗದ ಘರ್ಷಣೆಯಿಂದ ನಾಶವಾದರೂ, ಉಳಿದ ನೌಕೆಗಳು ದತ್ತಾಂಶವನ್ನು ಸಂಗ್ರಹಿಸುವುದನ್ನು ಮುಂದುವರಿಸುತ್ತವೆ. ಇವೆಲ್ಲವೂ ಒಟ್ಟಾಗಿ ಶನಿಯ ಉಂಗುರದ ರಚನೆ, ವಾತಾವರಣದ ಸಾಂದ್ರತೆ ಮತ್ತು ಕಾಂತೀಯ ವಲಯದ ಅಭೂತಪೂರ್ವ ತ್ರಿಆಯಾಮದ (3D) ನಕ್ಷೆಯನ್ನು ಸಿದ್ಧಪಡಿಸಲಿವೆ.&lt;/p&gt;&lt;p&gt;ಈ ತಂತ್ರಜ್ಞಾನದ ದೊಡ್ಡ ಎಂಜಿನಿಯರಿಂಗ್ ಪ್ರಯೋಜನವೆಂದರೆ ವೆಚ್ಚದ ಅಪಾಯ ನಿರ್ವಹಣೆ. ಒಂದೇ ಒಂದು ದೊಡ್ಡ ನೌಕೆಯನ್ನು ಅಪಾಯಕ್ಕೆ ಒಡ್ಡುವ ಬದಲು, ಸಾವಿರಾರು ಅಗ್ಗದ ಮೈಕ್ರೋ ಶೋಧಕಗಳ ಮೇಲೆ ಅಪಾಯವನ್ನು ಹಂಚಲಾಗುತ್ತದೆ. ಇದು ಈವರೆಗೆ ಅಸಾಧ್ಯವೆಂದು ಭಾವಿಸಲಾಗಿದ್ದ ಪರಿಸರದಿಂದಲೂ ಅತ್ಯಂತ ನಿಖರವಾದ ವೈಜ್ಞಾನಿಕ ದತ್ತಾಂಶವನ್ನು ಪಡೆಯುವ ಸಾಧ್ಯತೆಯನ್ನು ನೂರರಷ್ಟು ಹೆಚ್ಚಿಸುತ್ತದೆ.&lt;/p&gt;&lt;h2&gt;ಭವಿಷ್ಯದ ಮೈಲಿಗಲ್ಲು&lt;/h2&gt;&lt;p&gt;ಪ್ರಸ್ತುತ ಈ ಎರಡೂ ಕಾರ್ಯಾಚರಣೆಗಳು ಆರಂಭಿಕ ಪರಿಕಲ್ಪನೆಯ (Concept) ಹಂತದಲ್ಲಿದ್ದರೂ, ನಾಸಾ ಇದಕ್ಕೆ ನೀಡುತ್ತಿರುವ ಬೆಂಬಲವು ಇವುಗಳ ವಿಶ್ವಾಸಾರ್ಹತೆಯನ್ನು ದೃಢಪಡಿಸುತ್ತದೆ. ಕ್ಯಾಸಿನಿ ಮಿಷನ್ ನಂತರ ಶನಿ ಗ್ರಹದ ಕಡೆಗೆ ಜಾಗತಿಕ ವಿಜ್ಞಾನ ಲೋಕದ ಆಸಕ್ತಿ ಎಷ್ಟು ಹೆಚ್ಚಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಯೋಜನೆಗಳು ಭವಿಷ್ಯದಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದರೆ, ಮಾನವಕುಲವು ಶನಿಯ ಉಂಗುರಗಳನ್ನು ಮುಟ್ಟಿ ಇತಿಹಾಸ ಬರೆಯುವುದು ಮಾತ್ರವಲ್ಲದೆ, ಇಡೀ ಸೌರವ್ಯೂಹದ ಉಗಮದ ರಹಸ್ಯವನ್ನು ಅನಾವರಣಗೊಳಿಸಲಿದೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/science/nasa-saturn-rings-mission-the-radical-plans-to-touch-the-solar-system-most-dangerous-environment-gdp/articleshow-qsuxqq3"/>
        </item>
        <item>
            <title><![CDATA[ಕೆನಡಾದಲ್ಲಿ ಮತ್ತೊಬ್ಬ ಭಾರತದ ವಿದ್ಯಾರ್ಥಿನಿಯ ಬರ್ಬರ ಕೊಲೆ.. ಓರ್ವ ಅರೆಸ್ಟ್, ಆಗಿದ್ದೇನು?]]></title>
            <link>https://kannada.asianetnews.com/india-news/another-indian-female-student-brutally-mur-dered-in-canada-gkn/articleshow-s2zrw7d</link>
            <guid isPermaLink="true">https://kannada.asianetnews.com/india-news/another-indian-female-student-brutally-mur-dered-in-canada-gkn/articleshow-s2zrw7d</guid>
            <pubDate>Sat, 25 Jul 2026 10:59:07 +0530</pubDate>
            <description><![CDATA[ಕೆನಡಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಪಂಜಾಬ್ ಮೂಲದ 23 ವರ್ಷದ ದಮನ್&zwnj;ಪ್ರೀತ್ ಕೌರ್ ಅವರನ್ನು ಅವರ ಲಿವ್-ಇನ್ ಪಾರ್ಟ್&zwnj;ನರ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಮಗಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ್ದ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ಆರ್ಥಿಕ ನೆರವು ಸಂಗ್ರಹಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kybvtmx83vvhbymnkx56nfq7,imgname-samrala-damanpreet-kaur-1784957195176.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ವಿದೇಶಕ್ಕೆ ಹೋಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಕೆನಡಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಪಂಜಾಬ್&zwnj;ನ ಲುಧಿಯಾನ ಮೂಲದ 23 ವರ್ಷದ ದಮನ್&zwnj;ಪ್ರೀತ್ ಕೌರ್ ಅವರನ್ನು ಅವರ ಲಿವ್-ಇನ್ ಪಾರ್ಟ್&zwnj;ನರ್ (ಪ್ರಿಯಕರ) ಕತ್ತು ಹಿಸುಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಎಡ್ಮಂಟನ್&zwnj;ನಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ದಮನ್&zwnj;ಪ್ರೀತ್ ಕೌರ್ ಪಂಜಾಬ್&zwnj;ನ ಸಮ್ರಾಲಾ ನಿವಾಸಿಯಾಗಿದ್ದು, ಸುಮಾರು ಐದು ವರ್ಷಗಳ ಹಿಂದೆ ಸ್ಟೂಡೆಂಟ್ ವೀಸಾದ ಮೇಲೆ ಕೆನಡಾಕ್ಕೆ ತೆರಳಿದ್ದರು. ಜುಲೈ 9 ರಂದು ಎಡ್ಮಂಟನ್&zwnj;ನ ಸಿಲ್ವರ್&zwnj;ಬೆರಿ ಬಡಾವಣೆಯ ಮನೆಯೊಂದರಲ್ಲಿ ದಮನ್&zwnj;ಪ್ರೀತ್ ಅವರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಜುಲೈ 12 ರಂದು ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಿಯಕರನ ಬಂಧನ&lt;/strong&gt;&lt;/h2&gt;&lt;p&gt;ಜುಲೈ 14 ರಂದು ನಡೆದ ಮರಣೋತ್ತರ ಪರೀಕ್ಷೆಯಲ್ಲಿ ದಮನ್&zwnj;ಪ್ರೀತ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. ಈ ಸಂಬಂಧ ಕೆನಡಾ ಪೊಲೀಸರು ಅವರೊಂದಿಗೆ ವಾಸವಿದ್ದ 22 ವರ್ಷದ ರಿತೇಶ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯ ಮೇಲೆ ಎರಡನೇ ಹಂತದ ಕೊಲೆ (Second-degree murder) ಪ್ರಕರಣ ದಾಖಲಿಸಲಾಗಿದೆ. ಇದೊಂದು 'ಇಂಟಿಮೇಟ್ ಪಾರ್ಟ್ನರ್ ಹೋಮಿಸೈಡ್' ಅಂದರೆ ಸಂಗಾತಿಯಿಂದ ನಡೆದ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಾಲ ಮಾಡಿ ಮಗಳನ್ನು ಓದಿಸಿದ್ದ ಪೋಷಕರು&lt;/strong&gt;&lt;/h2&gt;&lt;p&gt;ದಮನ್&zwnj;ಪ್ರೀತ್ ಅವರ ಪೋಷಕರು ತಮ್ಮ ಮಗಳ ವಿದ್ಯಾಭ್ಯಾಸ ಮತ್ತು ವಿದೇಶಿ ಭವಿಷ್ಯಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಸಾಲ ತೀರಿಸಿ ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗಳು ಈಗ ಹೆಣವಾಗಿ ಬರುತ್ತಿರುವುದು ಪೋಷಕರನ್ನು ಆಘಾತಕ್ಕೆ ದೂಡಿದೆ. ದಮನ್&zwnj;ಪ್ರೀತ್ ಅವರ ಮೃತದೇಹವನ್ನು ಭಾರತಕ್ಕೆ ತರಲು 'ಗೋ ಫಂಡ್ ಮಿ' (GoFundMe) ಮೂಲಕ ಆರ್ಥಿಕ ನೆರವು ಸಂಗ್ರಹಿಸಲಾಗುತ್ತಿದೆ.&lt;/p&gt;&lt;p&gt;20,000 ಕೆನಡಿಯನ್ ಡಾಲರ್ ಅಂದರೆ ಸುಮಾರು ₹12.23 ಲಕ್ಷ ರೂಪಾಯಿಗಳು ಗುರಿ ಇಟ್ಟುಕೊಳ್ಳಲಾಗಿದೆ. ಇಲ್ಲಿಯವರೆಗೆ 18,000 ಡಾಲರ್&zwnj;ಗಿಂತ ಹೆಚ್ಚು ಅಂದರೆ ಸುಮಾರು ₹11 ಲಕ್ಷ ರೂಪಾಯಿಗಳಿಗೂ ಅಧಿಕ ಹಣ ಈಗಾಗಲೇ ಸಂಗ್ರಹವಾಗಿದೆ. ಕೆನಡಾದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿ ಮತ್ತು ಇಂತಹ ಅಹಿತಕರ ಘಟನೆಗಳು ಅನಿವಾಸಿ ಭಾರತೀಯರಲ್ಲಿ ಆತಂಕ ಮೂಡಿಸಿವೆ.&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/another-indian-female-student-brutally-mur-dered-in-canada-gkn/articleshow-s2zrw7d"/>
        </item>
        <item>
            <title><![CDATA[ಲಂಡನ್ ಹೊಟೆಲ್‌ನಲ್ಲಿ ಸೌದಿ ರಾಜಕುಮಾರನ ಮೃತದೇಹ ಪತ್ತೆ ಕೇಸ್, ನಿಗೂಢ ಸಾವಿನ ಸ್ಫೋಟಕ ಮಾಹಿತಿ]]></title>
            <link>https://kannada.asianetnews.com/world-news/saudi-prince-found-dead-in-london-hotel-case-explosive-details-emerge-in-mystery-death/articleshow-sylgi9g</link>
            <guid isPermaLink="true">https://kannada.asianetnews.com/world-news/saudi-prince-found-dead-in-london-hotel-case-explosive-details-emerge-in-mystery-death/articleshow-sylgi9g</guid>
            <pubDate>Fri, 24 Jul 2026 15:37:20 +0530</pubDate>
            <description><![CDATA[&lt;p&gt;ಲಂಡನ್ ಐಷಾರಾಮಿ ಹೊಟೆಲ್&zwnj;ನಲ್ಲಿ ಸೌದಿ ರಾಜಕುಮಾರ ಅಬ್ದುಲ್ಲಾ ಬಿನ್ ಫಹಾದ್ ನಿಗೂಢ ಸಾವಿನ ಕೆಲ ಸ್ಫೋಟಕ ಮಾಹಿತಿ ಹೊರಬಂದಿದೆ. ಯುವ ರಾಜಕುಮಾರನ ಸಾವಿಗೆ ಕಾರಣವೇನು ಹಲವು ಪ್ರಶ್ನೆಗಳಿಗೆ ಈ ತನಿಖೆ ಉತ್ತರ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9setcc6d9djynts3w5hht1,imgname-prince-abdullah-bin-fahad-bin-abdullah-death-1784887601548.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್ (ಜು.24)&lt;/strong&gt; ಸೌದಿ ಪ್ರಿನ್ಸ್ ಅಬ್ದುಲ್ಲಾ ಬಿನ್ ಫಹಾದ್ ಬಿನ್ ಅಬ್ದುಲ್ಹಾ ಬಿನ್ ಅಬ್ದುಲ್ಹಾಜಿಜ್ ಬಿನ್ ಜಲ್ವೈ ಅಲ್ ಸೌದ್ ನಿಗೂಢ ಸಾವಿನ ಹಲವು ಸ್ಫೋಟಕ ಮಾಹಿತಿ ಹೊರಬಂದಿದೆ. ಯುವ ರಾಜಕುಮಾರ್ ಲಂಡನ್ ಐಷಾರಾಮಿ ಹೊಟೆಲ್&zwnj;ನಲ್ಲಿ ತಂಗಿದ್ದ ವೇಳೆ ಈ ಘಟನೆ ನಡೆದಿತ್ತು. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಯುವ ರಾಜಕುಮಾರ್ ಅಬ್ದುಲ್ಹಾ ಬಿನ್ ಫಹಾದ್ ಸಾವಿನ ಕುರಿತು ಸುದೀರ್ಘ ತನಿಖೆ ಇದೀಗ ಕಾರಣಗಳನ್ನು ಬಹಿರಂಗಪಡಿಸಿದೆ. ಕಳೆದ ವರ್ಷ ನಡೆದ ಸೌದಿ ಪ್ರಿನ್ಸ್ ಸಾವಿನ ಕುರಿತು ಯುಕೆ ತನಿಖಾ ಸಂಸ್ಥೆ ವರದಿ ನೀಡಿದೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ಕೇವಲ 29 ವರ್ಷದ ಸೌದಿ ಪ್ರಿನ್ಸ್ ಕಳೆದ ವರ್ಷ ನವೆಂಬರ್ 25 ರಂದು ಲಂಡನ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಲಂಡನ್&zwnj;ನ ಐಷಾರಾಮಿ ಹೊಟೆಲ್&zwnj;ನಲ್ಲಿ ತಂಗಿದ್ದರು. ತಡ ರಾತ್ರಿ ವರೆಗೂ ಹಲವು ಆರ್ಡರ್ ಮಾಡಿದ್ದ ಸೌದಿ ಪ್ರಿನ್ಸ್ ಮರುದಿನ ಬೆಳಗ್ಗೆ ನಿಗೂಢವಾಗಿ ಮೃತಪಟ್ಟಿದ್ದರು. ಎಷ್ಟು ಹೊತ್ತಾದರೂ ಕೋಣೆಯಿಂದ ಹೊರಬರದ ಕಾರಣ ಸಿಬ್ಬಂದಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿಗಳು ಬಾಗಿಲು ಓಡೆದು ಒಳಗೆ ಪ್ರವೇಶಿಸಿದಾಗ ನಿರ್ಜೀವಾಗಿ ಸೌದಿ ಪ್ರಿನ್ಸ್ ಮಲಗಿದ್ದರು. ತಕ್ಷಣವೇ ಆಸ್ಪತ್ರೆಯ ವೈದ್ಯರಿಂದ ನರೆವು ನೀಡಿದರೂ ಯಾವುದೇ ಸ್ಪಂದನೆ ಇರಲಿಲ್ಲ. ಆಸ್ಪತ್ರೆ ದಾಖಲಿಸಿದಾಗ ವೈದ್ಯರ ಪರಿಶೀಲಿಸಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.&lt;/p&gt;&lt;h2&gt;ಸೌದಿ ಪ್ರಿನ್ಸ್ ಸಾವಿಗೆ ಕಾರಣವೇನು?&lt;/h2&gt;&lt;p&gt;ಲಂಡನ್ ಮ್ಯಾರಿಯೆಟ್ ಹೊಟೆಲ್&zwnj;ನಲ್ಲಿ ತಂಗಿದ್ದ ಸೌದಿ ಪ್ರಿನ್ಸ್ ತಡ ರಾತ್ರಿವರೆಗೂ ವಿಪರೀತ ಮದ್ಯ ಸೇವಿಸಿದ್ದರು. ಜೊತೆಗೆ ಹಲವು ಡ್ರಗ್ಸ್ ತೆಗೆದುಕೊಂಡಿದ್ದರು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮುಂಜಾನೆ ವೇಳೆಗೆ ಸೌದಿ ಪ್ರಿನ್ಸ್ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂಬದು ತನಿಖೆಯಿಂದ ಬಹಿರಂಗವಾಗಿದೆ. ಸೌದಿ ದೇಹದ ಮೆಡಿಲಕ್ ಟೆಸ್ಟ್, ಡ್ರಗ್ಸ್ ಸ್ಯಾಂಪಲ್ಸ್ ಎಲ್ಲವೂ ಸಾಬೀತಾಗಿದೆ.&lt;/p&gt;&lt;p&gt;ಸೌದಿ ಪ್ರಿನ್ಸ್ ಸ್ವಯಂ ಪ್ರೇರಿತವಾಗಿ ಅಥವಾ ಮೂರನೇ ವ್ಯಕ್ತಿಯಿಂದ ದಾಳಿಯಾಗಲಿ ನಡೆದಿಲ್ಲ. ತಮ್ಮ ಆರೋಗ್ಯ, ಜೀವನದ ಜೊತೆ ಚೆಲ್ಲಾಟವಾಡಿದ ಪ್ರಿನ್ಸ್, ವಿಪರೀತ ಮದ್ಯ ಹಾಗೂ ಡ್ರಗ್ಸ್&zwnj;ನಿಂದ ಮೃತಪಟ್ಟಿದ್ದಾರೆ ಎಂಬುದ ವೈದ್ಯಕೀಯ ಪರೀಕ್ಷೆಗಳಿಂದ ಸಾಬೀತಾಗಿದೆ.&lt;/p&gt;&lt;h2&gt;ಟಾಕ್ಸಿಕಾಲ್ ವರದಿ, ಜಿಬಿಹೆಚ್ ಸೇರಿದಂತೆ ಹಲವು ಡ್ರಗ್ಸ್&lt;/h2&gt;&lt;p&gt;ಪ್ರಿನ್ಸ್ ಅಬ್ದುಲ್ಹಾ ಬಿನ್ ವೈದ್ಯಕೀಯ ವರದಿ ಅದರಲ್ಲೂ ಪ್ರಮುಖವಾಗಿ ಟಾಕ್ಸಿಕಾಲಜಿ ವರದಿಯಲ್ಲಿ ವಿಪರೀತ ಮದ್ಯ ಸೇವನೆ ಸಾಬೀತಾಗಿದೆ. ಇನ್ನು ಜಿಬಿಹೆಚ್ ಸೇರಿದಂತೆ ಹಲವು ಡ್ರಗ್ಸ್ ದೇಹದಲ್ಲಿ ಪತ್ತೆಯಾಗಿತ್ತು. ಇನ್ನು ಸಿಸಿಟಿವಿ ಸೇರಿದಂತೆ ಹಲವು ದಾಖಳೆಗಳನ್ನು ವಿಚಾರಣೆ ವೇಳೆ ಸಲ್ಲಿಕೆ ಮಾಡಲಾಗಿತ್ತು. ಸಂಪೂರ್ಣ ತನಿಖೆ ಹಾಗೂ ವಿಚಾರಣೆಯಲ್ಲಿ ಪ್ರಿನ್ಸ್ ಅಬ್ದುಲ್ಹಾ ಸಾವಿನ ರಹಸ್ಯ ಕೊನೆಗೂ ಬಹಿರಂಗವಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>world-news</category>
            <dc:creator>Chethan Kumar</dc:creator>
            <atom:link href="https://kannada.asianetnews.com/world-news/saudi-prince-found-dead-in-london-hotel-case-explosive-details-emerge-in-mystery-death/articleshow-sylgi9g"/>
        </item>
        <item>
            <title><![CDATA[ಚೀನಾದಿಂದ ಮತ್ತೊಂದು ಆಘಾತಕಾರಿ ಆರೋಗ್ಯ ಸಮಸ್ಯೆ.. ಪ್ರಾಣಕ್ಕೆ ಸಂಚಕಾರ ತರುತ್ತಿದೆ ಈ ಹೊಸ ಟ್ರೆಂಡ್..!]]></title>
            <link>https://kannada.asianetnews.com/gallery/health-life/in-china-viral-weight-loss-drink-and-doctors-warned-gkn-tqvhqay</link>
            <guid isPermaLink="true">https://kannada.asianetnews.com/gallery/health-life/in-china-viral-weight-loss-drink-and-doctors-warned-gkn-tqvhqay</guid>
            <pubDate>Sat, 25 Jul 2026 09:43:16 +0530</pubDate>
            <description><![CDATA[&lt;p&gt;ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಪ್ರತಿಯೊಂದು ವಿಷಯವನ್ನೂ ಕಣ್ಣು ಮುಚ್ಚಿ ನಂಬಿದರೆ ಏನಾಗುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆಯುತ್ತಿರುವ ಈ ಘಟನೆಗಳೇ ಸಾಕ್ಷಿ. ಕೇವಲ ಎರಡೇ ದಿನಗಳಲ್ಲಿ 4 ಕೆಜಿ ತೂಕ ಇಳಿಸಬಹುದು ಎಂಬ ಸುಳ್ಳು ಭರವಸೆಗೆ ಮರುಳಾಗಿ ಜನರು ಈಗ ಆಸ್ಪತ್ರೆ ಪಾಲಾಗುತ್ತಿದ್ದಾರೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kybq8ccpvw9hsgg865xxwzm4,imgname-toilet-trips-for-weight-loss--4--1784952402326.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಪ್ರತಿಯೊಂದು ವಿಷಯವನ್ನೂ ಕಣ್ಣು ಮುಚ್ಚಿ ನಂಬಿದರೆ ಏನಾಗುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆಯುತ್ತಿರುವ ಈ ಘಟನೆಗಳೇ ಸಾಕ್ಷಿ. ಕೇವಲ ಎರಡೇ ದಿನಗಳಲ್ಲಿ 4 ಕೆಜಿ ತೂಕ ಇಳಿಸಬಹುದು ಎಂಬ ಸುಳ್ಳು ಭರವಸೆಗೆ ಮರುಳಾಗಿ ಜನರು ಈಗ ಆಸ್ಪತ್ರೆ ಪಾಲಾಗುತ್ತಿದ್ದಾರೆ!&lt;/p&gt;&lt;img&gt;&lt;p&gt;ಕೊರೊನಾ ಎಂಬ ಮಹಾಮಾರಿಯನ್ನು ಹಬ್ಬಿಸಿ ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ದೂಡಿದ್ದ ಅದೇ ಚೀನಾದಿಂದ ಈಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದೆ. ಯಾವುದೋ ವೈರಸ್ ರೂಪದಲ್ಲಲ್ಲ, ಬದಲಾಗಿ ವಿಚಿತ್ರ ಮತ್ತು ಪ್ರಾಣಾಪಾಯಕಾರಿ 'ಡಯಟ್' ಟ್ರೆಂಡ್ ಮೂಲಕ ಚೀನಿಯರು ಈಗ ಸುದ್ದಿಯಲ್ಲಿದ್ದಾರೆ. ತೂಕ ಇಳಿಸಿಕೊಳ್ಳುವ ಭರದಲ್ಲಿ ಅಲ್ಲಿನ ಜನರು ಮಾಡುತ್ತಿರುವ ಈ ಕೆಲಸ ಕೇಳಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!&lt;/p&gt;&lt;p&gt;&lt;strong&gt;ಏನಿದು ಆಘಾತಕಾರಿ ಟ್ರೆಂಡ್?&lt;/strong&gt;&lt;/p&gt;&lt;p&gt;ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು ವಿಲಕ್ಷಣ ಟ್ರೆಂಡ್ ವೈರಲ್ ಆಗಿದೆ. ಕೇವಲ ಎರಡೇ ದಿನಗಳಲ್ಲಿ 4 ಕೆಜಿ ತೂಕ ಇಳಿಸಬಹುದು ಎಂಬ ಆಸೆಗೆ ಬಿದ್ದು ಜನರು ಶುಗರ್-ಫ್ರೀ ಟೀ ಮತ್ತು ಗ್ಲಿಸರಿನ್ ಎನಿಮಾ (Glycerin Enema) ದ್ರವವನ್ನು ಮಿಶ್ರಣ ಮಾಡಿ ಕುಡಿಯುತ್ತಿದ್ದಾರೆ. ಹೌದು, ಮಲಬದ್ಧತೆ ಸಮಸ್ಯೆಗೆ ಕೇವಲ ಶೌಚದ ದ್ವಾರದ ಮೂಲಕ ಬಾಹ್ಯವಾಗಿ ಬಳಸಬೇಕಾದ 'ಎನಿಮಾ' ಔಷಧವನ್ನು ಜನರು ಚಹಾದಲ್ಲಿ ಬೆರೆಸಿ ಕುಡಿಯುತ್ತಿದ್ದಾರೆ!&lt;/p&gt;&lt;img&gt;&lt;p&gt;ಚೀನಾದ ಇನ್ಫ್ಲುಯೆನ್ಸರ್&zwnj;ಗಳು ಗ್ಲಿಸರಿನ್ ಎನಿಮಾ ಬಾಟಲಿಯನ್ನು ಟೀ ಒಳಗೆ ಸುರಿದು ಕುಡಿಯುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಕುಡಿದರೆ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ, ಇದರಿಂದ ದೇಹದ ತೂಕ ತಕ್ಷಣ ಇಳಿಯುತ್ತದೆ ಎಂಬುದು ಇವರ ವಾದ. ಈ ಹುಚ್ಚಾಟ ಈಗ ಅನೇಕರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕ (ICU) ತಲುಪುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡಿಯಾ ನೋಡಿ ಈ ಪ್ರಯೋಗ ಮಾಡಿದ 'ಮಾ' ಎಂಬ ಮಹಿಳೆಯ ಕಥೆ ಈಗ ಭೀತಿ ಹುಟ್ಟಿಸಿದೆ. ಇದನ್ನು ಕುಡಿದ 30 ನಿಮಿಷದಲ್ಲೇ ನನ್ನ ಸ್ಥಿತಿ ಹದಗೆಟ್ಟಿತು. ವಾಂತಿ ಮತ್ತು ಭೇದಿ ಶುರುವಾಯಿತು. ರಾತ್ರಿಯಿಡೀ ಪ್ರತಿ ಗಂಟೆಗೊಮ್ಮೆ ಶೌಚಾಲಯಕ್ಕೆ ಓಡಬೇಕಾಯಿತು. ಸ್ವಲ್ಪವೂ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇಂತಹ ಹತ್ತಾರು ಪ್ರಕರಣಗಳು ಚೀನಾದ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿವೆ.&lt;/p&gt;&lt;img&gt;&lt;p&gt;ಈ ವಿಲಕ್ಷಣ ಟ್ರೆಂಡ್&zwnj;ನಿಂದಾಗಿ ಚೀನಾದ ಹೆನಾನ್ ಪ್ರಾಂತ್ಯದ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ವೈದ್ಯರ ಪ್ರಕಾರ ಈ ಕೆಳಗಿನ ಅಪಾಯಗಳು ಸಂಭವಿಸಬಹುದು.&lt;/p&gt;&lt;ul&gt; &lt;li&gt;&lt;strong&gt;ನಿರ್ಜಲೀಕರಣ (Dehydration): &lt;/strong&gt;ಇದು ದೇಹದ ಕೊಬ್ಬನ್ನು ಕರಗಿಸುವುದಿಲ್ಲ, ಬದಲಾಗಿ ದೇಹದಲ್ಲಿರುವ ನೀರನ್ನು ಹೊರಹಾಕುತ್ತದೆ. ಇದರಿಂದ ತೂಕ ಇಳಿದಂತೆ ಭಾಸವಾದರೂ, ನೀರು ಕುಡಿದ ತಕ್ಷಣ ತೂಕ ಮತ್ತೆ ಮೊದಲಿನಂತಾಗುತ್ತದೆ.&lt;/li&gt; &lt;li&gt;&lt;strong&gt;ಜೀರ್ಣಾಂಗಕ್ಕೆ ಹಾನಿ: &lt;/strong&gt;ಗ್ಲಿಸರಿನ್ ಎನಿಮಾವನ್ನು ಕುಡಿಯುವುದರಿಂದ ಕರುಳಿನ ಪದರಕ್ಕೆ ಹಾನಿಯಾಗುತ್ತದೆ ಮತ್ತು ಎಲೆಕ್ಟ್ರೋಲೈಟ್ ಸಮತೋಲನ ತಪ್ಪುತ್ತದೆ.&lt;/li&gt; &lt;li&gt;&lt;strong&gt;ತೀವ್ರ ಅಡ್ಡಪರಿಣಾಮ: &lt;/strong&gt;ಸಕ್ಕರೆ ರಹಿತ ಚಹಾದಲ್ಲಿರುವ 'ಥಿಯೋಫಿಲಿನ್' ಮತ್ತು 'ಟ್ಯಾನಿಕ್ ಆಸಿಡ್' ಜೊತೆಗೆ ಎನಿಮಾ ಸೇರಿದಾಗ ಜೀರ್ಣಾಂಗ ವ್ಯವಸ್ಥೆಯ ಮೇಲೆ ವಿಪರೀತ ಒತ್ತಡ ಬೀಳುತ್ತದೆ.&lt;/li&gt;&lt;/ul&gt;&lt;img&gt;&lt;p&gt;ಚೀನಾದಲ್ಲಿ ಇಂತಹ ವಿಚಿತ್ರ ಡಯಟ್ ಟ್ರೆಂಡ್ ಹೊಸದೇನಲ್ಲ. ಈ ಹಿಂದೆ 25 ವರ್ಷದ ಯುವತಿಯೊಬ್ಬಳು ವಾರಕ್ಕೆ ಒಂದು ದಿನ ಬೇಕಾಬಿಟ್ಟಿ ತಿಂದು, ಉಳಿದ 6 ದಿನ ಉಪವಾಸ ಮಾಡುವ 'ಡಯಟ್' ಪಾಲಿಸಿ ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್ (Pancreatitis) ಎಂಬ ಗಂಭೀರ ಕಾಯಿಲೆಗೆ ತುತ್ತಾಗಿದ್ದಳು.&lt;/p&gt;&lt;p&gt;ವಿಶ್ವಕ್ಕೆ ಮಾರಕ ವೈರಸ್&zwnj;ಗಳನ್ನು ನೀಡಿದ ಇತಿಹಾಸವಿರುವ ಚೀನಾದಲ್ಲಿ ಈಗ ಇಂತಹ ಹುಚ್ಚು ಸಾಹಸಗಳು ಸಂಚಲನ ಮೂಡಿಸುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಶಾರ್ಟ್&zwnj;ಕಟ್ ವಿಧಾನಗಳನ್ನು ನಂಬಿ ನಿಮ್ಮ ಪ್ರಾಣವನ್ನು ನೀವೇ ಸಂಕಷ್ಟಕ್ಕೆ ದೂಡಬೇಡಿ. ತೂಕ ಇಳಿಸಲು ವೈದ್ಯರ ಸಲಹೆ ಮತ್ತು ಆರೋಗ್ಯಕರ ಜೀವನಶೈಲಿ ಮಾತ್ರ ಏಕೈಕ ದಾರಿ.&lt;/p&gt;]]></content:encoded>
            <category>world-news</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/health-life/in-china-viral-weight-loss-drink-and-doctors-warned-gkn-tqvhqay"/>
        </item>
        <item>
            <title><![CDATA[ಟೆಕ್ಸಾಸ್ ವಿವಿ ವಿರುದ್ಧ ಭಾರತೀಯ ವಿದ್ಯಾರ್ಥಿ ವೈಭವ್ ದುಗ್ಗಲ್ ಪೋಷಕರ ಕಾನೂನು  ಸಮರ: 30 ಮಿಲಿಯನ್ ಡಾಲರ್ ಬೇಡಿಕೆ]]></title>
            <link>https://kannada.asianetnews.com/india-news/vaibhav-duggal-lawsuit-parents-seek-30m-doller-from-texas-tech-after-medical-student-tragic-death-gdp/articleshow-tt0z96z</link>
            <guid isPermaLink="true">https://kannada.asianetnews.com/india-news/vaibhav-duggal-lawsuit-parents-seek-30m-doller-from-texas-tech-after-medical-student-tragic-death-gdp/articleshow-tt0z96z</guid>
            <pubDate>Tue, 28 Jul 2026 15:29:50 +0530</pubDate>
            <description><![CDATA[ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ವೈಭವ್ ದುಗ್ಗಲ್ ಅವರ ಪೋಷಕರು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ವಿಶ್ವವಿದ್ಯಾಲಯದ ದೋಷಪೂರಿತ ತನಿಖಾ ಪ್ರಕ್ರಿಯೆ ಮತ್ತು ಮಾನಸಿಕ ಬೆಂಬಲದ ಕೊರತೆಯೇ ಮಗನ ಸಾವಿಗೆ ಕಾರಣವೆಂದು ಆರೋಪಿಸಿ, ಕುಟುಂಬವು $30 ಮಿಲಿಯನ್ ಪರಿಹಾರ ಮತ್ತು ನೀತಿ ಸುಧಾರಣೆಗೆ ಆಗ್ರಹಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kym2c864j7ja48kxsjcj47ba,imgname-vaibhav-duggal-1785232498884.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕದ ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದಲ್ಲಿ ಶಿಸ್ತು ಕ್ರಮವನ್ನು ಎದುರಿಸಿ ದುರಂತವಾಗಿ ಆತ್ಮHತ್ಯೆ ಮಾಡಿಕೊಂಡ ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿ ವೈಭವ್ ದುಗ್ಗಲ್ ಅವರ ಪೋಷಕರು ನ್ಯಾಯಕ್ಕಾಗಿ ದೊಡ್ಡ ಮಟ್ಟದ ಹೋರಾಟವನ್ನು ಆರಂಭಿಸಿದ್ದಾರೆ. ವಿಶ್ವವಿದ್ಯಾಲಯದ ದೋಷಪೂರಿತ ಶಿಸ್ತು ಪ್ರಕ್ರಿಯೆ ಮತ್ತು ಮಾನಸಿಕ ಬೆಂಬಲದ ವೈಫಲ್ಯವೇ ತಮ್ಮ ಮಗನ ಸಾವಿಗೆ ಕಾರಣ ಎಂದು ಆರೋಪಿಸಿರುವ ಕುಟುಂಬವು, ಸಂಸ್ಥೆಯಿಂದ 30 ಮಿಲಿಯನ್ ಡಾಲರ್ ಪರಿಹಾರದ ಜೊತೆಗೆ ವಿಶ್ವವಿದ್ಯಾಲಯದ ನೀತಿಗಳಲ್ಲಿ ಮಹತ್ವದ ಸುಧಾರಣೆಗಳನ್ನು ಕೋರಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ&lt;/h2&gt;&lt;p&gt;ಎಲ್ ಪಾಸೊದಲ್ಲಿರುವ ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಕೇಂದ್ರದಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ 24 ವರ್ಷದ ವೈಭವ್ ದುಗ್ಗಲ್, ಜುಲೈ 2025 ರಲ್ಲಿ ಆತ್ಮHತ್ಯೆ ಮಾಡಿಕೊಂಡಿದ್ದರು. ಮಗನನ್ನು ಕಳೆದುಕೊಂಡು ಒಂದು ವರ್ಷ ಕಳೆದ ನಂತರವೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಟುಂಬವು, ವಿಶ್ವವಿದ್ಯಾಲಯದ ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಲಿಲ್ಲ ಮತ್ತು ಸರಿಯಾದ ಕಾನೂನು ಪ್ರಕ್ರಿಯೆಯನ್ನು (Due Process) ನಿರಾಕರಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.&lt;/p&gt;&lt;h2&gt;ಅಸಮರ್ಪಕ ತನಿಖೆ ಮತ್ತು ಘಟನೆಯ ವಿವರಗಳು&lt;/h2&gt;&lt;p&gt;ಒಬ್/ಜಿವೈಎನ್ (OB/GYN) ಚಿಕಿತ್ಸಾಲಯದಲ್ಲಿ ಕ್ಲಿನಿಕಲ್ ತರಬೇತಿಯಲ್ಲಿದ್ದಾಗ ವೈಭವ್ ದುಗ್ಗಲ್ ವಿರುದ್ಧ ಶಿಸ್ತು ಕ್ರಮ ಆರಂಭವಾಗಿತ್ತು. ಎಸ್&zwnj;ಟಿಡಿ (STD) ಪರೀಕ್ಷೆಗಾಗಿ ಚಿಕಿತ್ಸಾಲಯಕ್ಕೆ ಬಂದಿದ್ದ ಮಹಿಳಾ ರೋಗಿಯೊಬ್ಬರು ವೈದ್ಯಕೀಯ ಇತಿಹಾಸದ ಸಂದರ್ಭದಲ್ಲಿ ತನ್ನ ಸಂಬಂಧದ ಬಗ್ಗೆ ದುಗ್ಗಲ್ ಬಳಿ ಮಾತನಾಡಿದ್ದರು. ವೈದ್ಯಕೀಯ ತರಬೇತಿಯ ಭಾಗವಾಗಿ ಮತ್ತು ರೋಗಿಯ ಒಪ್ಪಿಗೆಯ ಮೇರೆಗೆ ದುಗ್ಗಲ್ ಪರೀಕ್ಷಾ ಕೋಠಡಿಯಲ್ಲಿದ್ದರು. ಇಬ್ಬರೂ ವೃತ್ತಿಪರರಾಗಿದ್ದರಿಂದ ಸ್ವಯಂಪ್ರೇರಣೆಯಿಂದ ಇನ್&zwnj;ಸ್ಟಾಗ್ರಾಮ್ ಖಾತೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ಆದರೆ ಇದು ವೃತ್ತಿಪರ ಮಿತಿಗಳನ್ನು ಮೀರುವ ಸಾಧ್ಯತೆಯಿದೆ ಎಂದು ಅರಿತ ಕೂಡಲೇ ದುಗ್ಗಲ್ ಆ ರೋಗಿಯನ್ನು ಅನ್&zwnj;ಫಾಲೋ ಮಾಡಿ ಬ್ಲಾಕ್ ಮಾಡಿದ್ದರು. ಅಪಾಯಿಂಟ್ಮೆಂಟ್ ಮುಗಿದ 4 ಗಂಟೆಗಳ ನಂತರ ರೋಗಿಯು ತನಗೆ ಅನಾನುಕೂಲವಾಯಿತು ಎಂದು ದೂರು ನೀಡಿದರು. ಕೆಲವೇ ದಿನಗಳಲ್ಲಿ ದುಗ್ಗಲ್ ಅವರನ್ನು ಚಿಕಿತ್ಸಾಲಯದಿಂದ ಹೊರಹಾಕಿ ಕಠಿಣ ತನಿಖೆಗೆ ಒಳಪಡಿಸಲಾಯಿತು.&lt;/p&gt;&lt;h2&gt;ಮಾನಸಿಕ ಯಾತನೆ ಮತ್ತು ದುರಂತ ಅಂತ್ಯ&lt;/h2&gt;&lt;p&gt;ವಿಶ್ವವಿದ್ಯಾಲಯದ ತನಿಖೆ ತೀವ್ರಗೊಂಡಂತೆ ವೈಭವ್ ತೀವ್ರ ಮಾನಸಿಕ ಒತ್ತಡಕ್ಕೊಳಗಾದರು. ವೈದ್ಯಕೀಯ ಶಾಲೆಯಿಂದ ತಮ್ಮನ್ನು ವಜಾಗೊಳಿಸಲಾಗುತ್ತದೆ ಎಂಬ ಭೀತಿ ಮತ್ತು ಅಪಮಾನವನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಆತ್ಮHತ್ಯೆ ಪತ್ರದಲ್ಲಿ, ನಾನು ಒಳ್ಳೆಯ ಮಗನಾಗುವಲ್ಲಿ ವಿಫಲನಾಗಿದ್ದೇನೆ. ವೃತ್ತಿಪರತೆಯ ಕೊರತೆಯಿಂದ ಶಾಲೆಯಿಂದ ವಜಾಗೊಳ್ಳುವ ಭೀತಿಯಲ್ಲಿದ್ದೇನೆ ಎಂದು ಅವರು ನೋವು ತೋಡಿಕೊಂಡಿದ್ದರು. ವಿಶ್ವವಿದ್ಯಾಲಯದ ಮೂಲಕ ಮಾನಸಿಕ ಆರೋಗ್ಯ ಸೇವೆಗಳನ್ನು ಪಡೆಯಲು ಪ್ರಯತ್ನಿಸಿದರೂ ಅವರಿಗೆ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಒತ್ತಡವನ್ನು ತಡೆಯಲಾರದೆ ಅವರು ಬಂದೂಕನ್ನು ಖರೀದಿಸಿ ಅಸುನೀಗಿದರು.&lt;/p&gt;&lt;h2&gt;ಕುಟುಂಬ ಮತ್ತು ಗೆಳತಿಯಿಂದ ಮೊಕದ್ದಮೆ&lt;/h2&gt;&lt;p&gt;ವೈಭವ್ ದುಗ್ಗಲ್ ಸಂಸ್ಥೆಯ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು, $60,000 ವಿದ್ಯಾರ್ಥಿವೇತನವನ್ನು ಪಡೆದಿದ್ದರು. ವಿಶ್ವವಿದ್ಯಾಲಯವು ಅವರನ್ನು ತೀವ್ರ ಸಂಕಷ್ಟಕ್ಕೆ ತಳ್ಳುವ ವಾತಾವರಣವನ್ನು ಸೃಷ್ಟಿಸಿದೆ ಎಂದು ಪೋಷಕರು ದಾಖಲಿಸಿರುವ ಮೊಕದ್ದಮೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ವೈಭವ್ ಅವರ ಗೆಳತಿ ಕೂಡ ವಿಶ್ವವಿದ್ಯಾಲಯದ ವಿರುದ್ಧ ಪ್ರತ್ಯೇಕ ಮೊಕದ್ದಮೆ ಹೂಡಿದ್ದಾರೆ. ರೋಗಿಯನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅನುಸರಿಸಿರುವುದರ ಬಗ್ಗೆ ವೈಭವ್ ಮೊದಲೇ ತಮಗೆ ತಿಳಿಸಿದ್ದಾಗಿ ಮತ್ತು ಅದನ್ನು ತಕ್ಷಣವೇ ಬ್ಲಾಕ್ ಮಾಡಲು ತಾವೇ ಸಲಹೆ ನೀಡಿರುವುದಾಗಿ ಅವರು ನ್ಯಾಯಾಲಯದ ದಾಖಲೆಗಳಲ್ಲಿ ತಿಳಿಸಿದ್ದಾರೆ. ವೈಭವ್ ನಿಗದಿತ ಕ್ಲಿನಿಕ್ ಅಪಾಯಿಂಟ್ಮೆಂಟ್&zwnj;ಗೆ ಬಾರದೆ ಇದ್ದಾಗ ಉಂಟಾದ ಆತಂಕದ ಬಳಿಕ ಈ ದುರ್ಘಟನೆ ಬೆಳಕಿಗೆ ಬಂದಿತು.&lt;/p&gt;&lt;h2&gt;ಹೊಣೆಗಾರಿಕೆ ಮತ್ತು ಸುಧಾರಣೆಗೆ ಆಗ್ರಹ&lt;/h2&gt;&lt;p&gt;&quot;ಬೇರೆ ಯಾವುದೇ ವಿದ್ಯಾರ್ಥಿಗೆ ಇಂತಹ ಪರಿಸ್ಥಿತಿ ಬರಬಾರದು. ವಿಶ್ವವಿದ್ಯಾಲಯವು ತಕ್ಕ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಮತ್ತು ಸ್ವತಂತ್ರ ಪರಿಶೀಲನೆ ಹಾಗೂ ಉತ್ತಮ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಯನ್ನು ಜಾರಿಗೆ ತರಬೇಕು&quot; ಎಂದು ದುಗ್ಗಲ್ ಅವರ ಪೋಷಕರು ಆರಂಭಿಸಿರುವ ವಕಾಲತ್ತು ಅಭಿಯಾನವು ಬಲವಾಗಿ ಆಗ್ರಹಿಸಿದೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/vaibhav-duggal-lawsuit-parents-seek-30m-doller-from-texas-tech-after-medical-student-tragic-death-gdp/articleshow-tt0z96z"/>
        </item>
        <item>
            <title><![CDATA[ಮರದ ಕೊಂಬೆಯಂತೆ ನಟಿಸುವ ಅಪರೂಪದ ಗೂಬೆ ಪತ್ತೆ; ಒಂದು ಜಾಗಕ್ಕೆ 2 ಬಾರಿ ಭೇಟಿ ನೀಡುವ ನಿಶಾಚರಿ!]]></title>
            <link>https://kannada.asianetnews.com/viral/rare-endangered-eurasian-owl-with-unique-camouflage-spotted-in-kuwait/articleshow-wadiatw</link>
            <guid isPermaLink="true">https://kannada.asianetnews.com/viral/rare-endangered-eurasian-owl-with-unique-camouflage-spotted-in-kuwait/articleshow-wadiatw</guid>
            <pubDate>Sun, 26 Jul 2026 18:00:20 +0530</pubDate>
            <description><![CDATA[&lt;p&gt;ವಿಶ್ವದಲ್ಲಿ ಅತ್ಯಪರೂಪದ ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡುವ ಮಾನವನ ಖಯಾಲಿಗೆ ಈ ಅಪರೂಪದ ಗೂಬೆ ಕೂಡ ಅಳಿವಿನಂಚಿಗೆ ಸೇರಿದೆ. ಹಲವು ವರ್ಷದ ಬಳಿಕ ಇದೀಗ ಬಲು ಅಪರೂಪದ ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಮರದ ಕೊಂಬೆಗಳಂತೆ ವೇಷ ಮರೆಸಿಕೊಳ್ಳುವ ಗೂಬೆಯೊಂದು ಪತ್ತೆಯಾಗಿದೆ. ಏನಿದರ ವಿಶೇಷತೆ ಇಲ್ಲಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyf2xgsv9wzdfjv6j4q04s7r,imgname-owl-1785065292603.jpg" type="image/jpeg" height="390" width="690"/>
            <content:encoded><![CDATA[&lt;p&gt;ಮರುಭೂಮಿಗಳ ನಾಡು ಕುವೈತ್&zwnj;ನಲ್ಲಿ ಇದೀಗ ಅತ್ಯಂತ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ (Endangered species) ವಿಶಿಷ್ಟ ಪಕ್ಷಿಯೊಂದು ಪ್ರತ್ಯಕ್ಷವಾಗಿದೆ. ನೋಡುವುದಕ್ಕೆ ಅಚ್ಚರಿ ಮೂಡಿಸುವ, ಮರದ ಕೊಂಬೆಯಂತೆಯೇ ವೇಷ ಬದಲಾಯಿಸುವ (Camouflage) ಕಲೆ ಕರಗತ ಮಾಡಿಕೊಂಡಿರುವ 'ಯೂರೇಷಿಯನ್ ಟ್ರೀ ಔಲ್' (Eurasian Tree Owl) ಎಂಬ ಗೂಬೆ ಪ್ರಭೇದವೊಂದು ಕುವೈತ್&zwnj;ನಲ್ಲಿ ಕಾಣಿಸಿಕೊಂಡಿದೆ. ಈ ಬಗ್ಗೆ ಕುವೈತ್&zwnj;ನ ಪರಿಸರ ಸಾರ್ವಜನಿಕ ಪ್ರಾಧಿಕಾರ (Environmental Public Authority - EPA) ಅಧಿಕೃತ ಮಾಹಿತಿ ನೀಡಿದ್ದು, ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ರವಾನಿಸಿದೆ.&lt;/p&gt;&lt;h2&gt;&lt;strong&gt;ವಲಸೆ ಬರುವ ಅತಿಥಿಗಳು&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಈ ಅಪರೂಪದ ಗೂಬೆಗಳು ವರ್ಷಕ್ಕೆ ಎರಡು ಬಾರಿ ಮಾತ್ರ ಕುವೈತ್&zwnj;ಗೆ ಭೇಟಿ ನೀಡುತ್ತವೆ. ವಲಸೆ (Migration) ಹೋಗುವ ಮಾರ್ಗಮಧ್ಯೆ ವಿಶ್ರಾಂತಿ ಪಡೆಯಲು ಇವು ಇಲ್ಲಿಗೆ ಬರುತ್ತವೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಒಮ್ಮೆ ಕಾಣಿಸಿಕೊಂಡರೆ, ಆ ಬಳಿಕ ಮಾರ್ಚ್-ಏಪ್ರಿಲ್ (March-April) ತಿಂಗಳಲ್ಲಿ ಮತ್ತೆ ಇಲ್ಲಿಗೆ ವಾಪಸ್ ಬರುತ್ತವೆ. ಈ ಹಕ್ಕಿಗಳು ಹೆಚ್ಚಾಗಿ ಕೆಳಮಟ್ಟದಲ್ಲಿ ಹಾರಾಡುವುದರಿಂದ, ಸಾರ್ವಜನಿಕ ಉದ್ಯಾನವನಗಳಲ್ಲಿ (Parks), ವಸತಿ ಪ್ರದೇಶಗಳಲ್ಲಿ (Residential areas) ಮತ್ತು ಮನೆಗಳ ಸಮೀಪವಿರುವ ಮರಗಳ ಮೇಲೆ ಸಾಮಾನ್ಯವಾಗಿ ಕಾಣಸಿಗುತ್ತವೆ.&lt;/p&gt;&lt;h2&gt;&lt;strong&gt;ಶತ್ರುಗಳನ್ನು ಯಾಮಾರಿಸುವ ಅದ್ಭುತ ತಂತ್ರ!&lt;/strong&gt;&lt;/h2&gt;&lt;p&gt;ಈ ಗೂಬೆಯ ಅತಿದೊಡ್ಡ ವಿಶೇಷತೆ ಎಂದರೆ, ಶತ್ರುಗಳಿಂದ ತಪ್ಪಿಸಿಕೊಳ್ಳಲು ಇದು ಬಳಸುವ ಮಾಂತ್ರಿಕ ತಂತ್ರ. ಇದು ಮರದ ಕೊಂಬೆಯನ್ನೇ ಹೋಲುವಂತೆ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತದೆ (Optical illusion). ಇದರ ರೆಕ್ಕೆಗಳು ಮರದ ತೊಗಟೆಯ (Tree bark) ಹಾಗೆ ಬೂದು ಮತ್ತು ಕಂದು ಬಣ್ಣದ ವಿನ್ಯಾಸವನ್ನು ಹೊಂದಿವೆ. ಹದ್ದುಗಳು, ಶತ್ರುಗಳು ಅಥವಾ ಬೇರೆ ಪ್ರಾಣಿಗಳು ಹತ್ತಿರ ಬಂದಾಗ, ಇದು ತನ್ನ ದೇಹವನ್ನು ಸಂಪೂರ್ಣವಾಗಿ ನೇರ ಮಾಡಿಕೊಂಡು, ಒಣಗಿದ ಮರದ ಕೊಂಬೆಯಂತೆ (Dry tree branch) ನಿಧಾನವಾಗಿ ಅಲುಗಾಡುತ್ತಾ ಮರದಲ್ಲಿ ಒಂದಾಗಿಬಿಡುತ್ತದೆ. ಇದರ ಈ ಅದ್ಭುತ ರಕ್ಷಣಾ ತಂತ್ರದಿಂದಾಗಿ (Defense mechanism) ಇದು ಶತ್ರುಗಳ ಕಣ್ಣಿಗೆ ಬೀಳದೆ ಸುಲಭವಾಗಿ ಪಾರಾಗುತ್ತದೆ. ಹತ್ತಿರದಿಂದ ನೋಡಿದರೂ ಇದು ಪಕ್ಷಿಯೋ ಅಥವಾ ಮರದ ಕೊಂಬೆಯೋ ಎಂದು ಮನುಷ್ಯರಿಗೂ ಕನ್ಫ್ಯೂಸ್ ಆಗುವುದು ಖಂಡಿತ!&lt;/p&gt;&lt;h2&gt;&lt;strong&gt;ತೊಂದರೆ ಕೊಟ್ಟರೆ ಜೈಲುಪಾಲು!&lt;/strong&gt;&lt;/h2&gt;&lt;p&gt;ಈ ಗೂಬೆಗಳು ವಲಸೆ ಬಂದು ವಿಶ್ರಾಂತಿ ಪಡೆಯುವುದರಿಂದ, ಇವುಗಳಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬೇಡಿ ಅಥವಾ ಹಿಡಿಯಲು (Hunting) ಪ್ರಯತ್ನಿಸಬೇಡಿ ಎಂದು ಪ್ರಾಧಿಕಾರವು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ (Strict warning) ನೀಡಿದೆ. ಕುವೈತ್&zwnj;ನ ಪರಿಸರ ಸಂರಕ್ಷಣಾ ಕಾನೂನಿನ ಪ್ರಕಾರ (Environmental protection laws), ವನ್ಯಜೀವಿಗಳು ಮತ್ತು ಪಕ್ಷಿಗಳನ್ನು ಬೇಟೆಯಾಡುವುದು ಅಥವಾ ಅವುಗಳಿಗೆ ಕಿರುಕುಳ ನೀಡುವುದು ಗಂಭೀರ ಅಪರಾಧವಾಗಿದೆ. ಒಂದು ವೇಳೆ ಗಾಯಗೊಂಡ ವನ್ಯಜೀವಿಗಳು ಎಲ್ಲಾದರೂ ಕಂಡರೆ, ತಕ್ಷಣ 157 ಹಾಟ್&zwnj;ಲೈನ್&zwnj; ಸಂಖ್ಯೆಗೆ (Hotline number 157) ಕರೆ ಮಾಡಿ ಅಥವಾ ಪ್ರಾಧಿಕಾರದ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ನೀಡಿ ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>world-news</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/rare-endangered-eurasian-owl-with-unique-camouflage-spotted-in-kuwait/articleshow-wadiatw"/>
        </item>
        <item>
            <title><![CDATA[ಜಾಗತಿಕ ಮಟ್ಟದಲ್ಲಿ ChatGPT ಸ್ಥಗಿತ, ಪರದಾಡಿದ ಕೋಟ್ಯಂತರ ಬಳಕೆದಾರರು, ಸಮಸ್ಯೆ ಒಪ್ಪಿಕೊಂಡ ಕಂಪೆನಿ!]]></title>
            <link>https://kannada.asianetnews.com/whats-new-technology/chatgpt-down-openai-hits-global-outage-as-users-face-login-errors-and-too-many-requests-gdp/articleshow-xlln4gs</link>
            <guid isPermaLink="true">https://kannada.asianetnews.com/whats-new-technology/chatgpt-down-openai-hits-global-outage-as-users-face-login-errors-and-too-many-requests-gdp/articleshow-xlln4gs</guid>
            <pubDate>Sat, 25 Jul 2026 16:10:19 +0530</pubDate>
            <description><![CDATA[ಜುಲೈ 25, 2026 ರಂದು ಚಾಟ್&zwnj;ಜಿಪಿಟಿ ಜಾಗತಿಕ ಮಟ್ಟದಲ್ಲಿ ದೊಡ್ಡ ತಾಂತ್ರಿಕ ಅಡಚಣೆಯನ್ನು ಎದುರಿಸಿತು, ಇದರಿಂದಾಗಿ ವಿಶ್ವದಾದ್ಯಂತ ಬಳಕೆದಾರರು ಲಾಗಿನ್ ಮಾಡಲು ಮತ್ತು ಸಂದೇಶ ಕಳುಹಿಸಲು ವಿಫಲರಾದರು. ಓಪನ್&zwnj;ಎಐ ಈ ಸಮಸ್ಯೆಯನ್ನು &quot;ಹೆಚ್ಚಿದ ದೋಷದ ಪ್ರಮಾಣ&quot; ಎಂದು ದೃಢಪಡಿಸಿ, ತಾಂತ್ರಿಕ ದೋಷವನ್ನು ಸರಿಪಡಿಸಲು ತನ್ನ ಇಂಜಿನಿಯರ್&zwnj;ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kmq39mmm2fnzf9sdzw6936b4,imgname-chatgpt-1774596706964.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಪ್ರಪಂಚದಾದ್ಯಂತ ಕೋಟ್ಯಂತರ ಜನರು ಬಳಸುವ ಓಪನ್&zwnj;ಎಐ (OpenAI) ಸಂಸ್ಥೆಯ ಅತ್ಯಂತ ಜನಪ್ರಿಯ ತಂತ್ರಜ್ಞಾನವಾದ 'ಚಾಟ್&zwnj;ಜಿಪಿಟಿ' (ChatGPT), ಜುಲೈ 25, 2026 ರಂದು ಜಾಗತಿಕ ಮಟ್ಟದಲ್ಲಿ ದೊಡ್ಡ ತಾಂತ್ರಿಕ ಅಡಚಣೆಯನ್ನು ಎದುರಿಸಿತು. ಇದರಿಂದಾಗಿ ವಿಶ್ವದಾದ್ಯಂತ ಇರುವ ಬಳಕೆದಾರರು ಏಕಕಾಲದಲ್ಲಿ ಲಾಗಿನ್ ಮಾಡಲು ಹಾಗೂ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದೆ ಪರದಾಡುವಂತಾಯಿತು.&lt;/p&gt;&lt;p&gt;ವೆಬ್&zwnj;ಸೈಟ್&zwnj;ಗಳ ಏರಿಳಿತಗಳನ್ನು ಪತ್ತೆಹಚ್ಚುವ ಜಾಗತಿಕ ಪ್ಲಾಟ್&zwnj;ಫಾರ್ಮ್ ಆದ 'ಡೌನ್&zwnj;ಡೆಕ್ಟರ್' (Downdetector), ಭಾರತೀಯ ಕಾಲಮಾನ ಮಧ್ಯಾಹ್ನ ಸುಮಾರು 2:54 ರ ಸುಮಾರಿಗೆ ಬಳಕೆದಾರರ ದೂರುಗಳಲ್ಲಿ ಹಠಾತ್ ಏರಿಕೆಯನ್ನು ದಾಖಲಿಸಿದೆ. ಸಾಮಾನ್ಯವಾಗಿ ಕೇವಲ ಎರಡರಷ್ಟಿರುತ್ತಿದ್ದ ದೂರುಗಳ ಸಂಖ್ಯೆ, ಅತ್ಯಲ್ಪ ಅವಧಿಯಲ್ಲಿ 1,560 ಕ್ಕೂ ಹೆಚ್ಚು ತಲುಪಿತು. ಈ ದೂರುಗಳ ತೀವ್ರತೆಯನ್ನು ಗಮನಿಸಿದರೆ, ಈ ಸ್ಥಗಿತವು ಯಾವುದೇ ನಿರ್ದಿಷ್ಟ ನಗರ ಅಥವಾ ಪ್ರದೇಶಕ್ಕೆ ಸೀಮಿತವಾಗಿರದೆ ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹರಡಿತ್ತು ಎಂಬುದು ಸ್ಪಷ್ಟವಾಗುತ್ತದೆ. ವೆಬ್&zwnj;ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡರ ಮೇಲೂ ಈ ಸಮಸ್ಯೆ ಏಕಕಾಲದಲ್ಲಿ ಪರಿಣಾಮ ಬೀರಿದೆ.&lt;/p&gt;&lt;h2&gt;ತಾಂತ್ರಿಕ ಸ್ಥಗಿತದ ಪ್ರಮಾಣ ಎಷ್ಟಿತ್ತು?&lt;/h2&gt;&lt;p&gt;ವರದಿಯ ಪ್ರಕಾರ, ದಾಖಲಾದ ಒಟ್ಟು ಸಮಸ್ಯೆಗಳಲ್ಲಿ ಶೇಕಡಾ 80 ರಷ್ಟು ತೊಂದರೆಗಳು ನೇರವಾಗಿ ಚಾಟ್&zwnj;ಜಿಪಿಟಿ ಬಳಕೆಗೆ ಸಂಬಂಧಿಸಿದ್ದಾಗಿದ್ದವು. ಇನ್ನುಳಿದಂತೆ ಶೇಕಡಾ 8 ರಷ್ಟು ಅಪ್ಲಿಕೇಶನ್ ಆಧಾರಿತ ಸಮಸ್ಯೆಗಳಾಗಿದ್ದರೆ, ಶೇಕಡಾ 6 ರಷ್ಟು ಎಪಿಐ (API) ಬಳಕೆಗೆ ಸಂಬಂಧಿಸಿದ ತೊಂದರೆಗಳಾಗಿದ್ದವು.&lt;/p&gt;&lt;p&gt;ಬಳಕೆದಾರರು ಕೇವಲ ಲಾಗಿನ್ ಮಾಡಲು ಮಾತ್ರವಲ್ಲದೆ, ಓಪನ್&zwnj;ಎಐ ಸಂಸ್ಥೆಯ ಪ್ರಮುಖ ಉತ್ಪನ್ನಗಳಾದ ಡಾಲ್-ಇ (DALL-E), ಸೋರಾ (Sora), ಕೋಡೆಕ್ಸ್ (Codex) ಮತ್ತು ವೆಬ್ ಬ್ರೌಸರ್ ಪ್ರವೇಶದ ಸಂದರ್ಭದಲ್ಲೂ ದೋಷಗಳನ್ನು ಎದುರಿಸಿದ್ದಾರೆ. ಇದು ಕೇವಲ ಚಾಟ್&zwnj;ಬಾಟ್&zwnj;ಗೆ ಸೀಮಿತವಾದ ಸಮಸ್ಯೆಯಾಗಿರದೆ, ಓಪನ್&zwnj;ಎಐನ ಇಡೀ ಉತ್ಪನ್ನಗಳ ಸರಣಿಯ ಮೇಲೆ ಪರಿಣಾಮ ಬೀರಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ. ತೊಂದರೆಗೆ ಒಳಗಾದ ಬಳಕೆದಾರರಿಗೆ ಚಾಟ್&zwnj;ಜಿಪಿಟಿಯ ಹಳೆಯ ಸಂಭಾಷಣೆಗಳ ಇತಿಹಾಸ (Chat History) ಲೋಡ್ ಆಗುತ್ತಿರಲಿಲ್ಲ ಮತ್ತು ಸಂದೇಶ ಕಳುಹಿಸಲು ಹೋದಾಗ &quot;Too many concurrent requests&quot; (ಏಕಕಾಲದಲ್ಲಿ ಅತಿ ಹೆಚ್ಚು ವಿನಂತಿಗಳು ಬಂದಿವೆ) ಎಂಬ ದೋಷದ ಸಂದೇಶಗಳು ಕಾಣಿಸಿಕೊಳ್ಳುತ್ತಿದ್ದವು.&lt;/p&gt;&lt;h2&gt;ಓಪನ್&zwnj;ಎಐ ಸಂಸ್ಥೆಯ ಅಧಿಕೃತ ಪ್ರತಿಕ್ರಿಯೆ&lt;/h2&gt;&lt;p&gt;ಈ ಜಾಗತಿಕ ಅಡಚಣೆಯ ಕುರಿತು ತಕ್ಷಣವೇ ಪ್ರತಿಕ್ರಿಯಿಸಿದ ಓಪನ್&zwnj;ಎಐ, ತನ್ನ ಅಧಿಕೃತ ಸಿಸ್ಟಮ್ ಸ್ಥಿತಿ ಪುಟದಲ್ಲಿ (Status Page) &quot;ಎಲಿವೇಟೆಡ್ ಎರರ್ ರೇಟ್ಸ್&quot; (ಹೆಚ್ಚಿದ ದೋಷದ ಪ್ರಮಾಣಗಳು) ಎಂಬ ಸೂಚನೆಯನ್ನು ಪ್ರಕಟಿಸಿತು. ಅಮೆರಿಕದ ಕಾಲಮಾನ (ET) ಮುಂಜಾನೆ 5:30 ರ ಸುಮಾರಿಗೆ ನವೀಕರಣ ನೀಡಿದ ಕಂಪನಿಯು, &quot;ನಮ್ಮ ಪಟ್ಟಿಯಲ್ಲಿರುವ ಸೇವೆಗಳ ಮೇಲೆ ಪರಿಣಾಮ ಬೀರುತ್ತಿರುವ ತಾಂತ್ರಿಕ ಸಮಸ್ಯೆಯ ಕುರಿತು ನಮ್ಮ ತಜ್ಞರ ತಂಡವು ತನಿಖೆ ನಡೆಸುತ್ತಿದೆ&quot; ಎಂದು ತಿಳಿಸಿತು.&lt;/p&gt;&lt;p&gt;ಓಪನ್&zwnj;ಎಐನ ವಿಶಾಲವಾದ ಸಿಸ್ಟಮ್ ಡ್ಯಾಶ್&zwnj;ಬೋರ್ಡ್ ಪ್ರಕಾರ, ಸಾಮಾನ್ಯವಾಗಿ ಚಾಟ್&zwnj;ಜಿಪಿಟಿಯ ದಕ್ಷತೆಯು ಶೇಕಡಾ 99.66 ರಷ್ಟಿರುತ್ತದೆ. ಹಾಗೆಯೇ ಎಪಿಐ ಶೇಕಡಾ 99.93 ಮತ್ತು ಕೋಡೆಕ್ಸ್ ಶೇಕಡಾ 99.98 ರಷ್ಟು ನಿರಂತರ ಕಾರ್ಯಕ್ಷಮತೆ (Uptime) ಹೊಂದಿರುತ್ತವೆ. ಹೀಗಾಗಿ, ಇಂತಹ ಬೃಹತ್ ಮಟ್ಟದ ಸ್ಥಗಿತವು ಸಂಸ್ಥೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯಾಗಿದೆ. ಇದೇ ಸಮ್ಮುಖದಲ್ಲಿ, ಸಂಸ್ಥೆಯ ಇತರ ಸೇವೆಗಳಾದ FedRAMP ಮತ್ತು ಅಡ್ವರ್ಟೈಸಿಂಗ್ ಪ್ಲಾಟ್&zwnj;ಫಾರ್ಮ್&zwnj;ಗಳು ಯಾವುದೇ ಅಡಚಣೆಯಿಲ್ಲದೆ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಕಂಪನಿ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಪರಿಹಾರದ ಪ್ರಯತ್ನ ಮತ್ತು ಸದ್ಯದ ಸ್ಥಿತಿ&lt;/h2&gt;&lt;p&gt;ಅಮೆರಿಕ ಮತ್ತು ಯುರೋಪ್ ಸೇರಿದಂತೆ ಜಗತ್ತಿನಾದ್ಯಂತ ಈ ಕಡಿತವು ತಲ್ಲಣ ಮೂಡಿಸಿದ ಬೆನ್ನಲ್ಲೇ, ಓಪನ್&zwnj;ಎಐನ ಇಂಜಿನಿಯರ್&zwnj;ಗಳು ತಾಂತ್ರಿಕ ದೋಷಕ್ಕೆ ತಾತ್ಕಾಲಿಕ ಪರಿಹಾರವನ್ನು (Fix) ಅನ್ವಯಿಸಿದ್ದಾರೆ. ಆದಾಗ್ಯೂ, ಆರಂಭಿಕ ಹಂತದಲ್ಲಿ ಸಿಸ್ಟಮ್ ಅನ್ನು ಸಂಪೂರ್ಣವಾಗಿ ಸಹಜ ಸ್ಥಿತಿಗೆ ತರಲು ತಜ್ಞರು ಹರಸಾಹಸ ಪಡಬೇಕಾಯಿತು.&lt;/p&gt;&lt;p&gt;ಈ ಸ್ಥಗಿತವು ಓಪನ್&zwnj;ಎಐ ಎಪಿಐ (OpenAI API) ಮೇಲೂ ತೀವ್ರ ಪರಿಣಾಮ ಬೀರಿದ್ದು, ಕಂಪನಿಯ ಸುಮಾರು 12 ಎಪಿಐ ಎಂಡ್&zwnj;ಪಾಯಿಂಟ್&zwnj;ಗಳು ದೋಷಪೂರಿತವಾಗಿವೆ ಎಂದು ಪಟ್ಟಿ ಮಾಡಲಾಗಿತ್ತು. ಸದ್ಯ ಕಂಪನಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇಡೀ ಸರ್ವರ್ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕೆಲಸದಲ್ಲಿ ನಿರತವಾಗಿದೆ.&lt;/p&gt;]]></content:encoded>
            <category>world-news</category>
            <dc:creator>Gowthami K</dc:creator>
            <atom:link href="https://kannada.asianetnews.com/whats-new-technology/chatgpt-down-openai-hits-global-outage-as-users-face-login-errors-and-too-many-requests-gdp/articleshow-xlln4gs"/>
        </item>
    </channel>
</rss>
