<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 09 Apr 2026 22:22:09 +0530</lastBuildDate>
        <atom:link href="https://kannada.asianetnews.com/rss/women" rel="self" type="application/rss+xml"/>
        <item>
            <title><![CDATA[ಅಡುಗೆ ಮಾಡುವಾಗ ಪರದಾಡಬೇಡಿ, ಮನೆ ಪಾಟ್‌ನಲ್ಲೇ ಸುಲಭವಾಗಿ ಬೆಳೆಯಿರಿ ತಾಜಾ ಶುಂಠಿ!]]></title>
            <link>https://kannada.asianetnews.com/webstories/kitchen/how-to-grow-ginger-at-home-in-pots-simple-gardening-tips-sat-slgtw6g</link>
            <guid isPermaLink="true">https://kannada.asianetnews.com/webstories/kitchen/how-to-grow-ginger-at-home-in-pots-simple-gardening-tips-sat-slgtw6g</guid>
            <pubDate>Thu, 09 Apr 2026 22:22:03 +0530</pubDate>
            <description><![CDATA[ಮಾರುಕಟ್ಟೆಯ ಶುಂಠಿಗಿಂತ ಮನೆಯಲ್ಲೇ ತಾಜಾ ಶುಂಠಿ ಬೆಳೆಯುವುದು ಸುಲಭ. ಮೊಳಕೆ ಇರುವ ಶುಂಠಿಯನ್ನು ಆರಿಸಿ, ಸಾವಯವ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಪಾಟ್&zwnj;ನಲ್ಲಿ ನಾಟಿ ಮಾಡಿ, ಸರಿಯಾದ ಆರೈಕೆಯೊಂದಿಗೆ 8-10 ತಿಂಗಳಲ್ಲಿ ತಾಜಾ ಶುಂಠಿಯನ್ನು ಕೊಯ್ಲು ಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kk0yadwr9mfdzx3p7tskw5rs,imgname-iran-israel-war--6--1772779550615.jpg" type="image/jpeg" height="390" width="690"/>
            <category>women</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/kitchen/how-to-grow-ginger-at-home-in-pots-simple-gardening-tips-sat-slgtw6g"/>
        </item>
        <item>
            <title><![CDATA[ನೇಹಾ ಕೊ*ಲೆ ಹಿಂದೆಯೂ ಇದೇ ಸಮೀರ್? ಅಪ್ಪನ ಶಾಕಿಂಗ್​ ಹೇಳಿಕೆ- ಜಿಮ್​ಗಳೇ Love Jihad ಸೆಂಟರ್​?]]></title>
            <link>https://kannada.asianetnews.com/karnataka-districts/same-sameer-mulla-behind-nehas-death-says-father-are-gyms-love-jihad-centers-suc/articleshow-l129xmd</link>
            <guid isPermaLink="true">https://kannada.asianetnews.com/karnataka-districts/same-sameer-mulla-behind-nehas-death-says-father-are-gyms-love-jihad-centers-suc/articleshow-l129xmd</guid>
            <pubDate>Thu, 09 Apr 2026 20:38:48 +0530</pubDate>
            <description><![CDATA[&lt;p&gt;ಹುಬ್ಬಳ್ಳಿ ನೇಹಾ ಹಿರೇಮಠ ಹ*ತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಜಿಮ್ ಟ್ರೈನರ್ ಸಮೀರ್ ಮುಲ್ಲಾನಿಗೂ ಈ ಹತ್ಯೆಗೂ ಸಂಬಂಧವಿದೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಆರೋಪಿಸಿದ್ದಾರೆ. ಹಂತಕ ಫಯಾಜ್ ಕೂಡ ಅದೇ ಜಿಮ್&zwnj;ನಲ್ಲಿದ್ದ ಮತ್ತು ತಮ್ಮನ್ನು ಬಲೆಗೆ ಬೀಳಿಸುವ ಸಂಚು ನಡೆದಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knscjq0m1pzp2z0fdc1atz1a,imgname-neha-hiremath-case-1775747292180.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಏಪ್ರಿಲ್ 2024ರಲ್ಲಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಆರೋಪಿ ಫಯಾಜ್&zwnj;ನಿಂದ ಹತ್ಯೆಗೀಡಾದ ನೇಹಾಳ ಪ್ರಕರಣವು ಲವ್ ಜಿಹಾದ್ ಶಂಕೆ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ನೇಹಾಳ ತಂದೆ ನಿರಂಜನ್ ಹಿರೇಮಠ ಲವ್ ಜಿಹಾದ್ ಆಯಾಮದಡಿ ತನಿಖೆಗೆ ಒತ್ತಾಯಿಸಿದ್ದರು. ಈ ಪ್ರಕರಣವು ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿತ್ತು, ಬಿಜೆಪಿ ನಾಯಕರು ತನಿಖೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ನೇಹಾಳ ಕುಟುಂಬದ ಅಳಲು ಮತ್ತು ಲವ್ ಜಿಹಾದ್ ಆರೋಪಗಳ ಕುರಿತಾಗಿ ಏಷ್ಯಾನೆಟ್​ ಸುವರ್ಣ ನ್ಯೂಸ್​ ನಿರಂತರ ಅಪ್​ಡೇಟ್​ ಒದಗಿಸಿದ್ದು ನೆನಪಿರಬಹುದು. ಇದೀಗ ಈ ಪ್ರಕರಣ ಮತ್ತಷ್ಟು ಮುನ್ನೆಲೆಗೆ ಬರಲು ಕಾರಣ, ಹುಬ್ಬಳ್ಳಿಯಲ್ಲಿ ಈಗ ಭಾರಿ ಸಂಚಲನ ಮೂಡಿಸಿರುವ ಜಿಮ್​ ಟ್ರೈನರ್​ಗಳಾದ ಸಮೀರ್​ ಮುಲ್ಲಾ ಮತ್ತು ಮುಫೀಸ್ ಮಿಯಾನ್ನಾವರ್​.&lt;/p&gt;&lt;h2&gt;&lt;strong&gt;ಜಿಮ್​ ಟ್ರೈನರ್ ​ಸಮೀರ್ ಮುಲ್ಲಾ&lt;/strong&gt;&lt;/h2&gt;&lt;p&gt;ಹುಬ್ಬಳ್ಳಿ ಜಿಮ್ ಟ್ರೈನರ್​ ಸಮೀರ್ ಮುಲ್ಲಾ, ಹಿಂದೂ ಯುವತಿಯರನ್ನು ಪ್ರೀತಿಯ ನಾಟಕವಾಡಿ ವಂಚಿಸುತ್ತಿದ್ದ ಪ್ರಕರಣ ಬಯಲಾಗಿದೆ. ಆತನ ಮೊಬೈಲ್​ನಲ್ಲಿ ಹಿಂದೂ ಯುವತಿಯರ ಫೋಟೋಗಳು ಪತ್ತೆಯಾಗಿದ್ದು, ಇದೇ ವೇಳೆ ಆತನ ಸಹಚರನ ಮೇಲೂ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಈ ಕೇಸ್​ ಇನ್ನೂ ನಡೆಯುತ್ತಿರುವಾಗಲೇ ಇನ್ನೊಂದು ಲವ್​ ಜಿಹಾದ್​ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮುಫೀಸ್ ಮಿಯಾನ್ನಾವರ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆತನ ಮೇಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಈತ ಕೂಡ ಇನ್ನೊಂದು ಜಿಮ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವತಿ ಹೇಳಿರುವ ಪ್ರಕಾರ, ಈತ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಆಮೇಲೆ ಅದು ನಾಟಕ ಎನ್ನುವುದು ಗೊತ್ತಾಯಿತು. ಈತ ಪ್ರೀತಿಸಿರುವುದಾಗಿ ನಂಬಿಕ ರೇ*ಪ್​ ಮಾಡಿದ್ದಾನೆ ಎಂದಿದ್ದಾಳೆ.&lt;/p&gt;&lt;h3&gt;&lt;strong&gt;ಯುವತಿಯರಿಂದಲೇ ಪರಿಚಯ&lt;/strong&gt;&lt;/h3&gt;&lt;p&gt;ಇಂಥ ಹಲವು ಲವ್​ ಜಿಹಾದ್ ಎನ್ನುವ ಪ್ರಕರಣಗಳಲ್ಲಿ ಒಂದೇ ಒಂದು ಸಾಮ್ಯತೆ ಇರುವುದು ಯಾವುದೋ ಒಬ್ಬಳು ಈ ಯುವಕರನ್ನು ಪರಿಚಯ ಮಾಡಿಸುವುದು! ನನ್ನ ಸ್ನೇಹಿತೆಯೊಬ್ಬಳು ಈತನನ್ನು ಪರಿಚಯ ಮಾಡಿಸಿದ್ಲು. ಅಲ್ಲಿಂದ ಲವ್​ ಶುರುವಾಯ್ತು. ಆಮೇಲೆ ಪ್ರೀತಿ ಮಾಡ್ತೇನೆ ಎಂದಿದ್ದ. ನಾನೂ ನಂಬಿದ್ದೆ ಎನ್ನುವುದು ಪ್ರತಿಯೊಂದು ಯುವತಿಯರ ಮಾತು. ಥಿಯೇಟ್​ ಈ ಎಲ್ಲಾ ಪ್ರಕರಣಗಳಲ್ಲಿ ಆಗಿರುವುದು ದಿ ಕೇರಳ ಸ್ಟೋರಿ ಮಾದರಿಯದ್ದೇ ಘಟನೆ. ಆದರೆ ಇದೀಗ ಇನ್ನೊಂದು ಶಾಕಿಂಗ್ ವಿಷಯ ಬಹಿರಂಗಗೊಂಡಿದೆ. ಅದೇನೆಂದರೆ, ತಮ್ಮ ಮಗಳನ್ನು ಲವ್​ ಜಿಹಾದ್​ ಎಂದು ಮೊದಲಿನಿಂದಲೂ ಹೇಳಿಕೊಂಡೇ ಬಂದಿರುವ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಇದೀಗ ತಮ್ಮ ಮಗಳ ಸಾವಿಗೂ ಸಮೀರ್ ಮುಲ್ಲಾಗೂ ಸಂಬಂಧಿ ಇದೆ ಎನ್ನುತ್ತಿದ್ದಾರೆ.&lt;/p&gt;&lt;h3&gt;&lt;strong&gt;ನೇಹಾ ಸಾಯಿಸಿದವನೂ ಇದೇ ಜಿಮ್​ ಟ್ರೈನರ್​&lt;/strong&gt;&lt;/h3&gt;&lt;p&gt;ತಮ್ಮ ಮಗಳನ್ನು ಸಾಯಿಸಿದವ ಒಂದು ಅದೇ ಜಿಮ್ ಟ್ರೈನರ್&zwnj; ಆಗಿದ್ದ. ಪ್ರಕರಣದಲ್ಲಿ ಈತನ ಕೈವಾಡ ಇದೆ. ನನ್ನ ಮಗಳು ನೇಹಾ ಹಿರೇಮಠ ಅನ್ನು ಸಾಯಿಸಿದ ಫಯಾಜ್ ಖೋಂಡುನಾಕ್ ಅಲ್ಲಿಯೇ ತರಬೇತಿದಾರನಾಗಿದ್ದ. ಘಟನೆ ಬಳಿಕ ನಮ್ಮನ್ನು ಟ್ರ್ಯಾಪ್ ಮಾಡುವ ಪ್ಲಾನ್ ನಡೆದಿತ್ತು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ನಾನು ಕಾರ್ಪೋರೇಟರ್&zwnj; ಇದ್ದ ಹಿನ್ನೆಲೆ ನನ್ನ ವಾರ್ಡ್&zwnj;ಗೆ ಸಮೀರ್ ಮುಲ್ಲಾ ಅವರ ತಂದೆ ಪದೇ ಪದೇ ಬಂದು ಬಾಡಿ ಬಿಲ್ಡಿಂಗ್ ಕಾಂಪಿಟೇಷನ್&zwnj; ಮಾಡಲು ಒತ್ತಡ ಹಾಕುತ್ತಿದ್ದರು. ಅವರಿಗೆ ಏನೆಲ್ಲಾ ಸಾಕ್ಷಿ ಬೇಕೋ ಅದನ್ನೆಲ್ಲಾ ರೆಡಿ ಮಾಡಿಕೊಳ್ಳುತ್ತಿದ್ದರು. ಹತ್ತೂ ಅಧಿಕ ಬಾರಿ ನನಗೆ ಕೇಳಿ ಒತ್ತಾಯ ಮಾಡಿದ್ದರು. ನಮ್ಮ ವಾರ್ಡ್&zwnj;ನಲ್ಲಿ ದೇವಸ್ಥಾನ, ಮಠಗಳೇ ಇವೆ ಇಂತಹ ಸ್ಪರ್ಧೆಗಳು ಬೇಡ ಎಂದು ಹೇಳಿದ್ದೆ. ನಮ್ಮನ್ನು ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯ ಇತ್ತು. ಹೀಗಾಗಿ ಹೋಗಿರಲಿಲ್ಲ ಎಂದಿದ್ದಾರೆ ನಿರಂಜನ್​.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/same-sameer-mulla-behind-nehas-death-says-father-are-gyms-love-jihad-centers-suc/articleshow-l129xmd"/>
        </item>
        <item>
            <title><![CDATA[ಅಪ್ಪು ಮೆಸೇಜ್‌ ತೋರಿಸಿ ಗಿಲ್ಲಿ ಸ್ಟೈಲ್‌ನಲ್ಲಿ ಟ್ರೋಲರ್ಸ್‌ಗೆ ಹೇಗೆ ತಿರುಗೇಟು ಕೊಟ್ರು ನೋಡಿ Anchor Anushree]]></title>
            <link>https://kannada.asianetnews.com/gallery/tv-talk/anchor-anushree-against-trollers-who-says-about-puneeth-rajkumar-and-her-relationship-suc-wkcbvr7</link>
            <guid isPermaLink="true">https://kannada.asianetnews.com/gallery/tv-talk/anchor-anushree-against-trollers-who-says-about-puneeth-rajkumar-and-her-relationship-suc-wkcbvr7</guid>
            <pubDate>Thu, 09 Apr 2026 19:46:57 +0530</pubDate>
            <description><![CDATA[ಖ್ಯಾತ ನಿರೂಪಕಿ ಅನುಶ್ರೀ, ತಮ್ಮ ಜರ್ನಿ ಹಾಗೂ ಪುನೀತ್ ರಾಜ್&zwnj;ಕುಮಾರ್ ಅವರ ಹೆಸರಿನಲ್ಲಿ ಟ್ರೋಲ್ ಮಾಡುವವರ ಬಗ್ಗೆ ಮಾತನಾಡಿದ್ದಾರೆ. ಅಪ್ಪು ತಮಗೆ ಕಳುಹಿಸಿದ್ದ ವೈಯಕ್ತಿಕ ಮೆಸೇಜ್ ತೋರಿಸುವ ಮೂಲಕ, ಟ್ರೋಲಿಗರಿಗೆ 'ಗಿಲ್ಲಿ' ಸ್ಟೈಲ್&zwnj;ನಲ್ಲಿ ಖಡಕ್ ಉತ್ತರ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kns9kayw34jqnqtty0a1gb5k,imgname-anchor-anushree-1775744166876.jpg" type="image/jpeg" height="390" width="690"/>
            <content:encoded><![CDATA[ಖ್ಯಾತ ನಿರೂಪಕಿ ಅನುಶ್ರೀ, ತಮ್ಮ ಜರ್ನಿ ಹಾಗೂ ಪುನೀತ್ ರಾಜ್&zwnj;ಕುಮಾರ್ ಅವರ ಹೆಸರಿನಲ್ಲಿ ಟ್ರೋಲ್ ಮಾಡುವವರ ಬಗ್ಗೆ ಮಾತನಾಡಿದ್ದಾರೆ. ಅಪ್ಪು ತಮಗೆ ಕಳುಹಿಸಿದ್ದ ವೈಯಕ್ತಿಕ ಮೆಸೇಜ್ ತೋರಿಸುವ ಮೂಲಕ, ಟ್ರೋಲಿಗರಿಗೆ 'ಗಿಲ್ಲಿ' ಸ್ಟೈಲ್&zwnj;ನಲ್ಲಿ ಖಡಕ್ ಉತ್ತರ ನೀಡಿದ್ದಾರೆ.&lt;img&gt;&lt;p&gt;ಅತ್ಯಂತ ಕಷ್ಟದಿಂದ ಮೇಲಕ್ಕೆ ಬಂದು, ಇಂದು ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು ಆ್ಯಂಕರ್ ಅನುಶ್ರೀ (Anchor Anushree). ಇವರು ನಿರೂಪಣೆಗೆ ನಿಂತರು ಎಂದರೆ ಅಲ್ಲಿ ಹಾಸ್ಯಗಳ ಸುರಿಮಳೆ ಇರುತ್ತದೆ, ಎಷ್ಟು ಮಾತನಾಡಿದರೂ ಮತ್ತಷ್ಟು ಮಾತು ಕೇಳಬೇಕು ಎನ್ನುವ ವಾತಾವರಣವೂ ನಿರ್ಮಾಣವಾಗಿರುತ್ತದೆ. ಇದೇ ಕಾರಣಕ್ಕೆ ಅನುಶ್ರೀ ಅವರಿಗೆ ಅಷ್ಟೊಂದು ಡಿಮಾಂಡ್&zwnj;.&lt;/p&gt;&lt;img&gt;&lt;p&gt;ಸದ್ಯ ಅನುಶ್ರೀ ಅವರು ರೋಷನ್&zwnj; ಜೊತೆ ದಾಂಪತ್ಯ ಜೀವನವನ್ನು ಎಂಜಾಯ್&zwnj; ಮಾಡುತ್ತಿದ್ದಾರೆ. ಆದರೆ ಇದೇ ವೇಳೆ ತಮ್ಮ ಸಂಪೂರ್ಣ ಜರ್ನಿ ಹಾಗೂ ಫೇಮಸ್&zwnj; ಆಗುತ್ತಿದ್ದಂತೆಯೇ ಟ್ರೋಲಿಗರಿಂದ ಆಗುತ್ತಿರುವ ಮಾನಸಿಕ ಹಿಂಸೆಗಳ ಬಗ್ಗೆಯೂ ಗೋಲ್ಡನ್ ಕ್ಲಾಸ್ ವಿತ್ ಮಯೂರ&rsquo; ಯೂಟ್ಯೂಬ್ ಚಾನೆಲ್​​ನಲ್ಲಿ ಮಾತನಾಡಿದ್ದಾರೆ ಅನುಶ್ರೀ.&lt;/p&gt;&lt;img&gt;&lt;p&gt;ಅನುಶ್ರೀ ಅವರನ್ನು ನೋಡಿರುವವರಿಗೆ ಇದಾಗಲೇ ಅವರು ಪುನೀತ್&zwnj; ರಾಜ್&zwnj;ಕುಮಾರ್&zwnj; ಅವರ ಅದೆಷ್ಟು ದೊಡ್ಡ ಅಭಿಮಾನಿ ಎನ್ನುವುದು ಗೊತ್ತಿದೆ. ಇದಾಗಲೇ ಹಲವಾರು ಬಾರಿ ಅವರು ತಮ್ಮ ಅಭಿಮಾನದ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಫೋಟೋ ಇಟ್ಟು ಪೂಜಿಸುತ್ತಾರೆ. ಅಪ್ಪು ನಿಧನದ ಬಳಿಕ ಅವರಿಗಾಗಿ ಕಣ್ಣೀರು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಪುನೀತ್&zwnj; ರಾಜ್&zwnj; ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅವರ ಹೆಸರು ಹೇಳಿಕೊಂಡು ದುಡ್ಡು ಮಾಡುತ್ತಾರೆ. ಅವರದ್ದು ಮೊಸಳೆ ಕಣ್ಣೀರು ಹೀಗೆ ಏನೇನೋ ಬಾಯಿಗೆ ಬಂದಂಥ ಕಮೆಂಟ್ಸ್&zwnj; ಮಾಡುತ್ತಲೇ ಇದ್ದಾರೆ. ಅದಕ್ಕೆ ಈಗ ಅನುಶ್ರೀ ಅವರು ಅಪ್ಪು ಅವರ ಮೆಸೇಜ್&zwnj; ತೋರಿಸುತ್ತಾ, ಗಿಲ್ಲಿ ಸ್ಟೈಲ್&zwnj;ನಲ್ಲಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.&lt;/p&gt;&lt;img&gt;&lt;p&gt;ಪುನೀತ್&zwnj; ರಾಜ್&zwnj; ಅನುಶ್ರೀ ಅವರಿಗೆ ಕಳಹಿಸಿದ್ದ ಮೆಸೇಜ್&zwnj;ನಲ್ಲಿ, &lsquo;ನೀವು ತುಂಬಾನೇ ಸ್ವೀಟ್. ನಿಮ್ಮಂಥ ಅಭಿಮಾನಿ ಹೊಂದಲು ನಿಜಕ್ಕೂ ಖುಷಿ ಆಗುತ್ತದೆ. ದೇವರು ಒಳ್ಳೆಯದು ಮಾಡಲಿ&rsquo; ಎಂದಿದ್ದಾರೆ.&lt;/p&gt;&lt;img&gt;&lt;p&gt;ಅದನ್ನು ತೋರಿಸಿದ ಅನುಶ್ರೀ, &lsquo;ನಾನು ಯಾವ ರೀತಿಯ ಫ್ಯಾನ್ ಎನ್ನೋದು ಅವರಿಗೆ ಗೊತ್ತಿತ್ತು. ಹೀಗಿರುವಾಗ ಇಂಥವರಿಗೆ ಯಾಕೆ ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ. ಬಳಿಕ ಗಿಲ್ಲಿ ಸ್ಟೈಲ್ ಅಲ್ಲಿ ಹೇಳ್ತೀನಿ, ಜಸ್ಟ್ ಲೀವ್ ಇಟ್&rsquo; ಎಂದು action ಮಾಡಿ ತೋರಿಸಿದ್ದಾರೆ ನಟಿ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/anchor-anushree-against-trollers-who-says-about-puneeth-rajkumar-and-her-relationship-suc-wkcbvr7"/>
        </item>
        <item>
            <title><![CDATA[ಜಿಡ್ಡು ಹಿಡಿದ ಗಾಜಿನ ಬಾಟಲಿ ಒಳಭಾಗ ಕ್ಲೀನ್ ಆಗ್ತಿಲ್ವಾ?, ಈ ಮ್ಯಾಜಿಕ್ ಟ್ರಿಕ್ ಬಳಸಿ ನೋಡಿ]]></title>
            <link>https://kannada.asianetnews.com/gallery/women/best-home-remedies-for-sparkling-glassware-aooi5f1</link>
            <guid isPermaLink="true">https://kannada.asianetnews.com/gallery/women/best-home-remedies-for-sparkling-glassware-aooi5f1</guid>
            <pubDate>Thu, 09 Apr 2026 19:35:13 +0530</pubDate>
            <description><![CDATA[&lt;p&gt;&lt;strong&gt;How to make glassware sparkle at home: &lt;/strong&gt;ನಿಮ್ಮ ಮನೆಯಲ್ಲಿ ಗಾಜಿನ ಸಾಮಾನುಗಳಿವೆಯೇ? ಅವು ಜಿಡ್ಡು ಹಿಡಿದು ಹಳೆಯದರಂತೆ ಕಾಣುತ್ತಿವೆಯೇ? ಎಷ್ಟೇ ಕ್ಲೀನ್ ಮಾಡಿದ್ರೂ ಜಿಡ್ಡು ಹೋಗುತ್ತಿಲ್ವಾ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಖಂಡಿತವಾಗಿಯೂ ನಿಮಗಾಗಿಯೇ ಇದೆ. &amp;nbsp; &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3vga22nnb0g2a7abxhnmndz,imgname-easy-tips-to-clean-stains-from-glass-utensils-without-scratches-1756490958933.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;How to make glassware sparkle at home: &lt;/strong&gt;ನಿಮ್ಮ ಮನೆಯಲ್ಲಿ ಗಾಜಿನ ಸಾಮಾನುಗಳಿವೆಯೇ? ಅವು ಜಿಡ್ಡು ಹಿಡಿದು ಹಳೆಯದರಂತೆ ಕಾಣುತ್ತಿವೆಯೇ? ಎಷ್ಟೇ ಕ್ಲೀನ್ ಮಾಡಿದ್ರೂ ಜಿಡ್ಡು ಹೋಗುತ್ತಿಲ್ವಾ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಖಂಡಿತವಾಗಿಯೂ ನಿಮಗಾಗಿಯೇ ಇದೆ. &amp;nbsp; &amp;nbsp;&amp;nbsp;&lt;/p&gt;&lt;img&gt;&lt;p&gt;ಪ್ರತಿಯೊಬ್ಬರ ಮನೆಯಲ್ಲೂ ಗಾಜಿನ ಬಾಟಲಿಗಳು ಇದ್ದೇ ಇರುತ್ತವೆ. ಕೆಲವರು ಮನೆಯ ಅಲಂಕಾರಕ್ಕಾಗಿಯೂ ಗಾಜಿನ ವಸ್ತುಗಳನ್ನು ಬಳಸುತ್ತಾರೆ. ಆದರೆ, ನಾವು ಬಳಸಿದರೂ, ಬಳಸದಿದ್ದರೂ ಅವುಗಳ ಮೇಲೆ ಕಲೆಗಳು ಉಂಟಾಗುತ್ತವೆ. ಜೊತೆಗೆ ಅವುಗಳ ಹೊಳಪು ಕೂಡ ಕಡಿಮೆಯಾಗುತ್ತದೆ. ಇದಕ್ಕೆ ಗಡಸು ನೀರು (ಹಾರ್ಡ್ ವಾಟರ್) ಒಂದು ಕಾರಣ. ಈ ನೀರಿನಿಂದ ಗಾಜಿನ ಪಾತ್ರೆಗಳನ್ನು ತೊಳೆದಾಗ, ಅದರಲ್ಲಿನ ಲವಣಾಂಶಗಳು ಶೇಖರವಾಗಿ ಕ್ರಮೇಣ ಹೊಳಪನ್ನು ಕಡಿಮೆ ಮಾಡುತ್ತವೆ. ಈ ಕಲೆಗಳನ್ನು ಸಾಮಾನ್ಯ ಸೋಪು ಮತ್ತು ನೀರಿನಿಂದ ತೆಗೆಯುವುದು ಕಷ್ಟ. ಇದರಿಂದ ಪಾತ್ರೆಗಳು ಕೊಳಕಾಗಿ, ಹಳೆಯದಾಗಿ ಕಾಣಿಸುತ್ತವೆ. ಆದರೆ, ಯಾವುದೇ ಖರ್ಚಿಲ್ಲದೆ ನಿಮ್ಮ ಗಾಜಿನ ಪಾತ್ರೆಗಳನ್ನು ಮತ್ತೆ ಹೊಸದರಂತೆ ಮಾಡಬಹುದು. ಅದು ಹೇಗೆಂದು ನೋಡೋಣ ಬನ್ನಿ. &amp;nbsp; &amp;nbsp;&amp;nbsp;&lt;/p&gt;&lt;img&gt;&lt;p&gt;ಗಾಜಿನ ಬಾಟಲಿಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು ನೀವು ವಿನೆಗರ್ ಬಳಸಬಹುದು. ಇದಕ್ಕಾಗಿ, ಅರ್ಧ ಕಪ್ ವೈಟ್ ವಿನೆಗರ್ ಅನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ, ಗಾಜಿನ ಪಾತ್ರೆಗಳನ್ನು ಅದರಲ್ಲಿ 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಬ್ರಷ್&zwnj;ನಿಂದ ನಿಧಾನವಾಗಿ ಉಜ್ಜಿ. ವಿನೆಗರ್&zwnj;ನಲ್ಲಿರುವ ಆಸಿಡ್, ಗಾಜಿನ ಪಾತ್ರೆಗಳ ಮೇಲಿನ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ.&amp;nbsp;&lt;strong&gt;2. ಅಡುಗೆ ಸೋಡಾ ಮತ್ತು ನಿಂಬೆ ರಸ:&lt;/strong&gt; ಕಲೆಗಳು ಹಳೆಯದಾಗಿದ್ದರೆ ಮತ್ತು ತುಂಬಾ ಜಿಡ್ಡಾಗಿದ್ದರೆ, ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಬಳಸಬಹುದು. ಇದಕ್ಕಾಗಿ, ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ಹತ್ತು ನಿಮಿಷಗಳ ನಂತರ, ಸ್ಪಾಂಜ್ ಅಥವಾ ಬ್ರಷ್&zwnj;ನಿಂದ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಜಿಡ್ಡು ಕಲೆಗಳು ಸುಲಭವಾಗಿ ಹೋಗುತ್ತವೆ. &amp;nbsp; &amp;nbsp;&lt;/p&gt;&lt;img&gt;&lt;p&gt;ಗಾಜಿನ ಪಾತ್ರೆಗಳ ಹೊರಭಾಗವನ್ನು ಸ್ವಚ್ಛಗೊಳಿಸುವುದು ಸುಲಭ. ಆದರೆ ಒಳಭಾಗವನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಯಾಕೆಂದರೆ, ಒಳಗೆ ಸ್ವಚ್ಛಗೊಳಿಸಲು ನಮ್ಮ ಕೈ ಹೋಗುವುದಿಲ್ಲ. ಅಂತಹ ಸಮಯದಲ್ಲಿ ಈ ಮ್ಯಾಜಿಕ್ ಟ್ರಿಕ್ ಬಳಸಿ. ಬಾಟಲಿಯೊಳಗೆ ಸ್ವಲ್ಪ ಅಕ್ಕಿ, ಉಪ್ಪು ಮತ್ತು ಕೆಲವು ಹನಿ ಡಿಶ್ ಸೋಪ್ ಹಾಕಿ. ನಂತರ, ಸ್ವಲ್ಪ ನೀರು ಹಾಕಿ ಬಾಟಲಿಯನ್ನು ಚೆನ್ನಾಗಿ ಅಲ್ಲಾಡಿಸಿ. ಅಕ್ಕಿ ಕಾಳುಗಳು ನೈಸರ್ಗಿಕ ಸ್ಕ್ರಬ್ಬರ್&zwnj;ನಂತೆ ಕೆಲಸ ಮಾಡಿ, ಯಾವುದೇ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತವೆ. ಇದರಿಂದ ಬಾಟಲಿಯ ಒಳಭಾಗವೂ ಸುಲಭವಾಗಿ ಸ್ವಚ್ಛವಾಗುತ್ತದೆ. &amp;nbsp;&amp;nbsp;&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/women/best-home-remedies-for-sparkling-glassware-aooi5f1"/>
        </item>
        <item>
            <title><![CDATA[Kitchen Sink: ಅಡುಗೆಮನೆ ಸಿಂಕ್‌ನ ಕಲೆ ತೆಗೆಯೋಕೆ ಇಲ್ಲಿದೆ ಸುಲಭ ಟಿಪ್ಸ್]]></title>
            <link>https://kannada.asianetnews.com/webstories/life/say-goodbye-to-kitchen-sink-stains-with-these-5-simple-tips-d9oz5uz</link>
            <guid isPermaLink="true">https://kannada.asianetnews.com/webstories/life/say-goodbye-to-kitchen-sink-stains-with-these-5-simple-tips-d9oz5uz</guid>
            <pubDate>Thu, 09 Apr 2026 18:24:06 +0530</pubDate>
            <description><![CDATA[&lt;p&gt;Kitchen sink cleaning: ಅಡುಗೆಮನೆಯ ಸಿಂಕ್&zwnj;ನಲ್ಲಿರುವ ಕಲೆಗಳನ್ನು ತೆಗೆಯುವುದು ದೊಡ್ಡ ತಲೆನೋವು. ಆದರೆ ಚಿಂತೆ ಬೇಡ, ಈ ಐದು ಸುಲಭ ವಿಧಾನಗಳನ್ನು ಬಳಸಿ ನಿಮ್ಮ ಸಿಂಕ್ ಅನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jxmmf1p3aa3vy6fsj0abej5t,imgname-sink-1749817984707.jpg" type="image/jpeg" height="390" width="690"/>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/life/say-goodbye-to-kitchen-sink-stains-with-these-5-simple-tips-d9oz5uz"/>
        </item>
        <item>
            <title><![CDATA[Dosa Tips: ದೋಸೆ ಹಿಟ್ಟಿಗೆ ಬೇಳೆ, ಅಕ್ಕಿ ಹೀಗೆ ರುಬ್ಬುತ್ತೀರಾ? ಹಾಗಿದ್ರೆ ನೀವು ಮಾಡೋ ದೊಡ್ಡ ತಪ್ಪೇ ಇದು]]></title>
            <link>https://kannada.asianetnews.com/gallery/food/avoid-these-5-common-dosa-mistakes-for-better-taste-and-health-vnpf6cb</link>
            <guid isPermaLink="true">https://kannada.asianetnews.com/gallery/food/avoid-these-5-common-dosa-mistakes-for-better-taste-and-health-vnpf6cb</guid>
            <pubDate>Thu, 09 Apr 2026 18:02:51 +0530</pubDate>
            <description><![CDATA[&lt;p&gt;Dosa Making Tips: ಮನೆಯಲ್ಲೇ ದೋಸೆ ಮಾಡುತ್ತೀರಾ?, ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದ ಆರೋಗ್ಯಕರ ಎಂದು ನೀವು ಭಾವಿಸುವ ದೋಸೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jewdzcph2qdy6hvkfr3v40ae,imgname-dosa-batter--1-.jpg" type="image/jpeg" height="390" width="690"/>
            <content:encoded><![CDATA[&lt;p&gt;Dosa Making Tips: ಮನೆಯಲ್ಲೇ ದೋಸೆ ಮಾಡುತ್ತೀರಾ?, ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದ ಆರೋಗ್ಯಕರ ಎಂದು ನೀವು ಭಾವಿಸುವ ದೋಸೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?.&lt;/p&gt;&lt;img&gt;&lt;p&gt;ಬೆಳಗಿನ ಉಪಾಹಾರಕ್ಕೆ ದೋಸೆ ಎಂದರೆ ಹೆಚ್ಚಿನವರಿಗೆ ಬಲು ಇಷ್ಟ. ಅಲ್ಲದೆ, ದೋಸೆ ಮಾಡುವುದು ತುಂಬಾ ಸುಲಭ ಎಂದು ಮನೆಯಲ್ಲೇ ತಯಾರಿಸುತ್ತಾರೆ. ಆದರೆ, ದೋಸೆ ಮಾಡುವಾಗ ಅನೇಕರು ಹಲವು ತಪ್ಪುಗಳನ್ನು ಮಾಡುತ್ತಾರೆ. ತಾವು ತಪ್ಪು ಮಾಡುತ್ತಿದ್ದೇವೆ ಎಂದು ತಿಳಿಯದೆಯೇ ಈ ತಪ್ಪುಗಳನ್ನು ಮಾಡುತ್ತಾರೆ. ಆದರೆ, ಈ ಕಾರಣಗಳಿಂದಾಗಿ ನೀವು ತಿನ್ನುವ ದೋಸೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?. ಹಾಗಾದರೆ, ಯಾವ ತಪ್ಪುಗಳನ್ನು ಮಾಡಬಾರದು ಎಂದು ಈಗ ತಿಳಿಯೋಣ.&lt;/p&gt;&lt;img&gt;&lt;p&gt;ದೋಸೆ ತಯಾರಿಸಲು, ಮೊದಲು ಬೇಳೆ ಮತ್ತು ಅಕ್ಕಿಯನ್ನು ರುಬ್ಬಿ ಹುದುಗಲು ಬಿಡಬೇಕು. ಹೆಚ್ಚಿನವರು ಈ ಪ್ರಕ್ರಿಯೆಯಲ್ಲಿಯೇ ತಪ್ಪು ಮಾಡುತ್ತಾರೆ. ಹಿಟ್ಟನ್ನು ರುಬ್ಬಿದ ನಂತರ, ಅದನ್ನು ಹೆಚ್ಚು ಹೊತ್ತು ಬೆಚ್ಚಗಿನ ಸ್ಥಳದಲ್ಲಿ ಅಥವಾ ಹೊರಗೆ ಇಡುವುದರಿಂದ ಅನಾರೋಗ್ಯಕರ ಬ್ಯಾಕ್ಟೀರಿಯಾಗಳು ಬೆಳೆದು ಕೆಟ್ಟ ವಾಸನೆ ಬರಲು ಕಾರಣವಾಗುತ್ತದೆ. ಬೇಸಿಗೆಯಲ್ಲಿ ಹಿಟ್ಟು ಬೇಗನೆ ಹುದುಗುತ್ತದೆ. ಚಳಿಗಾಲದಲ್ಲಿ, ಇದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ, ಋತುವಿಗೆ ಅನುಗುಣವಾಗಿ ಹಿಟ್ಟನ್ನು ಎಷ್ಟು ಹೊತ್ತು ಹುದುಗಲು ಬಿಡಬೇಕು ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. ಬೇಸಿಗೆಯಲ್ಲಿ ದೋಸೆ ಹಿಟ್ಟನ್ನು 6 ರಿಂದ 8 ಗಂಟೆಗಳಿಗಿಂತ ಹೆಚ್ಚು ಕಾಲ ಹೊರಗೆ ಇಡಬಾರದು. ಚಳಿಗಾಲದಲ್ಲಿ 12 ಗಂಟೆಗಳ ಕಾಲ ಇಟ್ಟರೂ ಪರವಾಗಿಲ್ಲ. ಈ ಸಣ್ಣ ವಿಷಯ ತಿಳಿಯದಿದ್ದರೆ ದೋಸೆ ರುಚಿಯಾಗಿ ಬರುವುದಿಲ್ಲ.&lt;/p&gt;&lt;img&gt;&lt;p&gt;ಮಸಾಲಾ ದೋಸೆಯಲ್ಲಿ ಆಲೂಗಡ್ಡೆ ಪಲ್ಯವನ್ನು ಹಾಕುತ್ತಾರೆ. ಆದರೆ ಅನೇಕರು ತಾವು ಯಾವ ರೀತಿಯ ಆಲೂಗಡ್ಡೆ ಬಳಸುತ್ತಿದ್ದೇವೆ ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ. ಮೊಳಕೆ ಬಂದ ಅಥವಾ ಅಲ್ಲಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯನ್ನು ಪಲ್ಯಕ್ಕೆ ಬಳಸಬಾರದು. ಅಂತಹ ಆಲೂಗಡ್ಡೆಗಳು ಆರೋಗ್ಯಕ್ಕೆ ಹಾನಿಕಾರಕ. ಹಾಗೆಯೇ, ಈ ಪಲ್ಯವನ್ನು ಹೆಚ್ಚು ಹೊತ್ತು ಕೋಣೆಯ ಉಷ್ಣಾಂಶದಲ್ಲಿ ಇಡಬಾರದು. ಏಕೆಂದರೆ, ಬೇಯಿಸಿದ ಆಲೂಗಡ್ಡೆ ಬೇಗನೆ ಹಾಳಾಗುತ್ತದೆ ಮತ್ತು ಫುಡ್ ಪಾಯಿಸನಿಂಗ್&zwnj;ಗೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;ದೋಸೆಗಾಗಿ ಅಕ್ಕಿ ಮತ್ತು ಬೇಳೆಗಳನ್ನು ಖರೀದಿಸುವಾಗ, ಅವು ತುಂಬಾ ಹಳೆಯದಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ, ತುಂಬಾ ಹಳೆಯದನ್ನು ಆರಿಸುವುದರಿಂದ ಅವುಗಳ ಮೇಲೆ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿದೆ. ಇದಲ್ಲದೆ, ಅನೇಕರು ಹೊರಗಿನಿಂದ ರೆಡಿಮೇಡ್ ದೋಸೆ ಹಿಟ್ಟನ್ನು ತಂದು ಮನೆಯಲ್ಲಿ ದೋಸೆ ಮಾಡುತ್ತಾರೆ. ಅದರಲ್ಲಿ ಅವರು ಗುಣಮಟ್ಟದ ಬೇಳೆ, ಅಕ್ಕಿ ಬಳಸದೇ ಇರಬಹುದು. ಆದ್ದರಿಂದ, ಮನೆಯಲ್ಲೇ ನೀವೇ ಹಿಟ್ಟು ಸಿದ್ಧಪಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ, ನೀವು ರುಬ್ಬಿದ ಹಿಟ್ಟು ಹುಳಿ ವಾಸನೆ ಬರುತ್ತಿದ್ದರೆ, ಅದನ್ನು ಎಸೆಯುವುದೇ ಒಳ್ಳೆಯದು.&lt;/p&gt;&lt;img&gt;&lt;p&gt;ನೀವು ದೋಸೆ ಮಾಡಲು ನಾನ್&zwnj;ಸ್ಟಿಕ್ ಪ್ಯಾನ್ ಬಳಸುತ್ತಿದ್ದರೆ, ಅದರ ಕೋಟಿಂಗ್ ಅನ್ನು ಖಂಡಿತವಾಗಿ ಪರಿಶೀಲಿಸಿ. ಟೆಫ್ಲಾನ್ ಕೋಟಿಂಗ್ ಕಿತ್ತು ಬರುತ್ತಿದ್ದರೆ, ಬಿಸಿ ಮಾಡಿದಾಗ ಅದು ನೀವು ಮಾಡುವ ದೋಸೆಯೊಳಗೆ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ, ಇದು ಆರೋಗ್ಯಕ್ಕೆ ಹಾನಿಕರ. ಆದ್ದರಿಂದ, ನಾನ್-ಸ್ಟಿಕ್ ಪ್ಯಾನ್&zwnj;ಗಿಂತ ಕಬ್ಬಿಣದ ತವಾ ಅಥವಾ ಸಂಪೂರ್ಣವಾಗಿ ಹಾಳಾಗದ ಕೋಟಿಂಗ್ ಇರುವ ನಾನ್&zwnj;ಸ್ಟಿಕ್ ಪ್ಯಾನ್ ಬಳಸಲು ಪ್ರಯತ್ನಿಸಿ.&lt;/p&gt;&lt;img&gt;&lt;p&gt;ದೋಸೆ ಹಿಟ್ಟಿನಲ್ಲಿ ಬೆರೆಸುವ ನೀರು ಮತ್ತು ದೋಸೆ ಮಾಡಲು ಬಳಸುವ ಎಣ್ಣೆ ಶುದ್ಧವಾಗಿರಬೇಕು. ದೋಸೆ ಹಿಟ್ಟನ್ನು ಯಾವಾಗಲೂ ಶುದ್ಧ ನೀರಿನಿಂದಲೇ ಕಲೆಸಿ. ಬಳಸುವ ಎಣ್ಣೆಯೂ ಉತ್ತಮ ಗುಣಮಟ್ಟದ್ದಾಗಿರಬೇಕು. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚು.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/avoid-these-5-common-dosa-mistakes-for-better-taste-and-health-vnpf6cb"/>
        </item>
        <item>
            <title><![CDATA['ಪುಟ್ನಂಜ'ನ ಸುಂದರಿ ಮೀನಾ ಮಾಡಿದ್ರು ರಿಯಲ್ ಎಸ್ಟೇಟ್‌ನಲ್ಲಿ ಸುನಾಮಿ; ನಟಿಯ ಬಂಗಲೆಗೆ ಭಾರೀ ರೇಟ್‌!]]></title>
            <link>https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k</link>
            <guid isPermaLink="true">https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k</guid>
            <pubDate>Thu, 09 Apr 2026 17:19:23 +0530</pubDate>
            <description><![CDATA[&lt;p&gt;ಬಂದ ಹಣವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಜಾಣ್ಮೆಗೆ &lsquo;ಜೈ&rsquo; ಅಂತಿದಾರೆ ಫ್ಯಾನ್ಸ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knryw8fyq2ncjsr1phpkemer,imgname-meena-1775732924926.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಂದ ಹಣವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಜಾಣ್ಮೆಗೆ &lsquo;ಜೈ&rsquo; ಅಂತಿದಾರೆ ಫ್ಯಾನ್ಸ್.&lt;/p&gt;&lt;img&gt;&lt;p&gt;ರಿಯಲ್ ಎಸ್ಟೇಟ್&zwnj;ನಲ್ಲಿ &lsquo;ಸಿಂಹಾದ್ರಿಯ ಸಿಂಹ&rsquo; ನಟಿ ಮೀನಾ ಮಾಸ್ಟರ್ ಸ್ಟ್ರೋಕ್!&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದ &lsquo;ಎವರ್&zwnj;ಗ್ರೀನ್&rsquo; ಸುಂದರಿ ಮೀನಾ (Meena) ಈಗ ಸಿನಿಮಾಗಿಂತ ಹೆಚ್ಚಾಗಿ ತಮ್ಮ ಒಂದು ಬೃಹತ್ ಆಸ್ತಿ ವ್ಯವಹಾರದ ಮೂಲಕ ಸುದ್ದಿಯಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ದಶಕಗಳ ಕಾಲ ಸ್ಟಾರ್ ನಟಿಯಾಗಿ ಮಿಂಚಿದ ಮೀನಾ, ಈಗ ರಿಯಲ್ ಎಸ್ಟೇಟ್ ಲೋಕದಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದ್ದಾರೆ.&lt;/p&gt;&lt;img&gt;&lt;p&gt;ಏನಿದು 100 ಕೋಟಿಯ ಡೀಲ್?&lt;/p&gt;&lt;p&gt;ವರದಿಗಳ ಪ್ರಕಾರ, ನಟಿ ಮೀನಾ ಅವರು ಚೆನ್ನೈನ ಪ್ರಮುಖ ಪ್ರದೇಶವೊಂದರಲ್ಲಿ ಭವ್ಯವಾದ ಬಂಗಲೆಯನ್ನು ಹೊಂದಿದ್ದರು. ಈ ಆಸ್ತಿಯನ್ನು ಅವರು ಬಹಳ ವರ್ಷಗಳ ಹಿಂದೆಯೇ ಖರೀದಿಸಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಆ ಪ್ರದೇಶದಲ್ಲಿ ಭೂಮಿಯ ಬೆಲೆ ಗಗನಕ್ಕೇರಿರುವ ಕಾರಣ, ಮೀನಾ ಅವರು ಈ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.&lt;/p&gt;&lt;img&gt;&lt;p&gt;ಒಬ್ಬ ದೊಡ್ಡ ಉದ್ಯಮಿಯೊಬ್ಬರು ಈ ಬಂಗಲೆಯನ್ನು ಬರೋಬ್ಬರಿ 100 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿಯಾಗಿ ಸಕ್ಸಸ್ ಕಂಡ ಮೀನಾ, ಈಗ ಆರ್ಥಿಕ ವ್ಯವಹಾರದಲ್ಲೂ &lsquo;ಮಾಸ್ಟರ್ ಸ್ಟ್ರೋಕ್&rsquo; ನೀಡಿದ್ದಾರೆ ಎಂದು ಸಿನಿರಂಗದಲ್ಲಿ ಚರ್ಚೆಯಾಗುತ್ತಿದೆ.&lt;/p&gt;&lt;img&gt;&lt;p&gt;ಕನ್ನಡಿಗರ ಪ್ರೀತಿಯ &lsquo;ಪುಟ್ನಂಜ&rsquo;ನ ಸುಂದರಿ!&lt;/p&gt;&lt;p&gt;ಕನ್ನಡ ಚಿತ್ರರಂಗದೊಂದಿಗೆ ಮೀನಾ ಅವರಿಗೆ ಅವಿನಾಭಾವ ಸಂಬಂಧವಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ &lsquo;ಪುಟ್ನಂಜ&rsquo;, ಸಾಹಸಸಿಂಹ ವಿಷ್ಣುವರ್ಧನ್ ಅವರ &lsquo;ಸಿಂಹಾದ್ರಿಯ ಸಿಂಹ&rsquo; ಮತ್ತು ಶಿವರಾಜ್&zwnj;ಕುಮಾರ್ ಅವರೊಂದಿಗೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನೆಮಾತಾಗಿದ್ದಾರೆ.&lt;/p&gt;&lt;img&gt;&lt;p&gt;ಪತಿ ವಿದ್ಯಾಸಾಗರ್ ಅವರ ನಿಧನದ ನಂತರ ಮೀನಾ ಅವರು ಸಣ್ಣ ಬ್ರೇಕ್ ತೆಗೆದುಕೊಂಡಿದ್ದರೂ, ಈಗ ಮತ್ತೆ ಸಿನಿಮಾಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದಾರೆ.&lt;/p&gt;&lt;img&gt;&lt;p&gt;ಮಗಳ ಭವಿಷ್ಯಕ್ಕಾಗಿ ದೊಡ್ಡ ಹೂಡಿಕೆ?&lt;/p&gt;&lt;p&gt;ಈ ಬೃಹತ್ ಮೊತ್ತವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಅವರ ಈ ಜಾಣ್ಮೆಯ ನಿರ್ಧಾರಕ್ಕೆ ಅಭಿಮಾನಿಗಳು &lsquo;ಫುಲ್ ಮಾರ್ಕ್ಸ್&rsquo; ನೀಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಬೆಳ್ಳಿತೆರೆಯ ಮೇಲೆ ರಾಣಿಯಂತೆ ಮಿಂಚಿದ ಮೀನಾ, ಈಗ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ &lsquo;ಧನಲಕ್ಷ್ಮಿ&rsquo;ಯನ್ನು ವರಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;100 ಕೋಟಿ ರೂಪಾಯಿಗಳ ಈ ಭಾರಿ ಡೀಲ್ ಸದ್ಯಕ್ಕೆ ಇಡೀ ಸೌತ್ ಸಿನಿ ಇಂಡಸ್ಟ್ರಿಯ ಹಾಟ್ ಟಾಪಿಕ್ ಆಗಿದೆ!&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k"/>
        </item>
        <item>
            <title><![CDATA[ಕಿಚನ್ ಸಿಂಕ್ ಕೆಳಗೆ ಕಸದ ರಾಶಿ, ಟೆನ್ಷನ್ ಬೇಡ ನಿಮಿಷದಲ್ಲಿ ಹೀಗೆ ಸೆಟ್ ಮಾಡಿ]]></title>
            <link>https://kannada.asianetnews.com/gallery/kitchen/kitchen-tips-sink-under-area-organization-ideas-easy-hacks-to-declutter-cabinet-zowfcmg</link>
            <guid isPermaLink="true">https://kannada.asianetnews.com/gallery/kitchen/kitchen-tips-sink-under-area-organization-ideas-easy-hacks-to-declutter-cabinet-zowfcmg</guid>
            <pubDate>Thu, 09 Apr 2026 15:56:20 +0530</pubDate>
            <description><![CDATA[&lt;p&gt;Kitchen Tips : ಕಿಚನ್ ಸಿಂಕ್ ಕೆಳಭಾಗ ತುಂಬಾ ಕೊಳಕಾಗಿದ್ಯಾ? ಆ ಡಬ್ಬ ಈ ಬಾಟಲ್ ತುಂಬಿ ಹೋಗಿದ್ಯಾ? ಹಾಕಿದ್ರೆ ಈ ಸೂಪರ್ ಹ್ಯಾಕ್ಸ್ ಟ್ರೈ ಮಾಡಿ ಸಿಂಕ್ ಕ್ಯಾಬಿನೆಟ್ ಗೆ ಸ್ಪೇಷಲ್ ಹೊಳಪು ನೀಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrvkteng4cvndh4gckzk1yn,imgname-kitchen-sink-cabinet-1775729502677.jpg" type="image/jpeg" height="390" width="690"/>
            <content:encoded><![CDATA[&lt;p&gt;Kitchen Tips : ಕಿಚನ್ ಸಿಂಕ್ ಕೆಳಭಾಗ ತುಂಬಾ ಕೊಳಕಾಗಿದ್ಯಾ? ಆ ಡಬ್ಬ ಈ ಬಾಟಲ್ ತುಂಬಿ ಹೋಗಿದ್ಯಾ? ಹಾಕಿದ್ರೆ ಈ ಸೂಪರ್ ಹ್ಯಾಕ್ಸ್ ಟ್ರೈ ಮಾಡಿ ಸಿಂಕ್ ಕ್ಯಾಬಿನೆಟ್ ಗೆ ಸ್ಪೇಷಲ್ ಹೊಳಪು ನೀಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮನೆ ಸುಂದರವಾಗಿ ಕಾಣ್ಬೇಕು ಅಂತ ಹಾಲ್, ಕಿಚನ್, ಬೆಡ್ ರೂಮ್ ಎಲ್ಲ ಕ್ಲೀನ್ ಮಾಡ್ತೇವೆ. ಆದ್ರೆ ಕಿಚನ್ ಸಿಂಕ್ ಕೆಳಗಿರುವ ಜಾಗ ಮರೆತು ಬಿಡ್ತೇವೆ. ಬಹುತೇಕರ ಮನೆಯಲ್ಲಿ ಸಿಂಕ್ ಕೆಳಗಿನ ಜಾಗ ಕಸದ ತೊಟ್ಟಿಯಾಗಿರುತ್ತೆ. ಅಲ್ಲಿ ಖಾಲಿಯಾದ ಅನೇಕ ಬಾಟಲಿ, ಬಾಕ್ಸ್ ಗಳ ರಾಶಿ ಇರುತ್ತೆ. ಸಿಂಕ್ ಅಡಿಯಲ್ಲಿರುವ ಕ್ಯಾಬಿನೆಟ್ ಜಂಕ್ಯಾರ್ಡ್ನಂತಾಗಿರುತ್ತೆ. ಅದನ್ನು ಸುಲಭವಾಗಿ ಕ್ಲೀನ್ ಮಾಡಿ, ಅದನ್ನು ಹೊಳೆಯುವಂತೆ ಮಾಡ್ಬಹುದು.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಕಿಚನ್ ಸಿಂಕ್ ಕೆಳಗೆ ಜಾಗ ಚಿಕ್ಕದಾಗಿರುತ್ತೆ. ನೀವು ವರ್ಟಿಕಲ್ ಜಾಗ ಬಳಸಿಕೊಳ್ಬೇಕು. ಒಂದರ ಮೇಲೆ ಒಂದು ಇಡಬಲ್ಲ ಡಬ್ಬವನ್ನು ನೀವು ಇಲ್ಲಿ ಇಡ್ಬಹುದು. ಮೊದಲು ಸಿಂಕ್ ಕೆಳ ಭಾಗದಲ್ಲಿರುವ ಎಲ್ಲ ಅನುಪಯುಕ್ತ ವಸ್ತುಗಳನ್ನು ಕಸಕ್ಕೆ ಎಸೆದು ಜಾಗ ಕ್ಲೀನ್ ಮಾಡಿ. ಆ ನಂತ್ರ ಡಬ್ಬವನ್ನು ಇಡಿ. ಅದ್ರೊಳಗೆ ನಿಮಗೆ ಉಪಯೋಗವಾಗುವ ವಸ್ತುಗಳನ್ನು ಇಡ್ಬಹುದು.&lt;/p&gt;&lt;img&gt;&lt;p&gt;ಸಿಂಕ್ ಕೆಳಗಿರುವ ಅಗತ್ಯ ವಸ್ತು ಹುಡುಕೋದು ಕಷ್ಟ. ಎಲ್ಲ ವಸ್ತು ತೆಗೆದು ನಂತ್ರ ನಿಮಗೆ ಬೇಕಾದ ವಸ್ತು ಹುಡುಕ್ಬೇಕು. ಆದ್ರೆ ಪುಲ್-ಔಟ್ ಸ್ಲೈಡಿಂಗ್ ಡ್ರಾಯರ್ ಬಳಕೆ ಬಹಳ ಬೆಸ್ಟ್. ನೀವು ಅವುಗಳನ್ನು ಸುಲಭವಾಗಿ ಹೊರತೆಗೆದು ಎಲ್ಲಾ ವಸ್ತುಗಳನ್ನು ತೆಗೆದುಹಾಕಬಹುದು.&lt;/p&gt;&lt;img&gt;&lt;p&gt;ಇದು ತುಂಬಾ ಅಗ್ಗದ ಮತ್ತು ಸ್ಮಾರ್ಟ್ ಹ್ಯಾಕ್. ಸಿಂಕ್ ಒಳಗೆ ರಾಡ್ ಅಳವಡಿಸಿ ಮತ್ತು ಅದರ ಮೇಲೆ ಸ್ಪ್ರೇ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ನೇತುಹಾಕಿ. ಇದು ಕೆಳಗೆ ಜಾಗವನ್ನು ಫ್ರೀಗೊಳಿಸುತ್ತೆ.&lt;/p&gt;&lt;img&gt;&lt;p&gt;ಕ್ಯಾಬಿನೆಟ್ ಎತ್ತರವಾಗಿದ್ರೆ, ಶೆಲ್ಫ್ ರೈಸರ್ಗಳನ್ನು ಬಳಸಬಹುದು. ಅವು ಮಿನಿ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತವೆ. ಒಂದೇ ಸ್ಥಳದಲ್ಲಿ ಎರಡು ಲೇಯರ್ ನಲ್ಲಿ ವಸ್ತುಗಳನ್ನು ಇಡ್ಬಹುದು.&lt;/p&gt;&lt;img&gt;&lt;p&gt;ಟ್ರಾರ್ನ್ಪರೆಂಟ್ ಪಾತ್ರೆಗಳನ್ನು ಬಳಸೋದ್ರಿಂದ ವಸ್ತು ಯಾವ ಪಾತ್ರೆಯಲ್ಲಿದೆ ಎಂಬುದನ್ನು ಆರಾಮವಾಗಿ ಪತ್ತೆ ಮಾಡ್ಬುಹುದು. ಇದು ಸಮಯ ಉಳಿಸುತ್ತೆ. ಪಾತ್ರೆಗಳನ್ನು ತೆಗೆಯುವ ಟೈಂ ಉಳಿಸುತ್ತೆ.&lt;/p&gt;&lt;img&gt;&lt;p&gt;ಸಿಂಕ್ ಅಡಿಯಲ್ಲಿರುವ ಕ್ಯಾಬಿನೆಟ್ ಬಾಗಿಲುಗಳ ಹಿಂಭಾಗಕ್ಕೆ ಸ್ಟ್ಯಾಂಡ್ ಹಾಕಿ. ಅದ್ರ ಮೇಲೆ ನಿಮಗೆ ಅಗತ್ಯವಿರುವ ವಸ್ತುಗಳನ್ನು ಇಡ್ಬಹುದು. ಧೂಳು ತೆಗೆಯುವ ಬಟ್ಟೆ, ಸ್ಕ್ರಬ್ ಪ್ಯಾಡ್ ಇಲ್ಲಿ ಹಾಕ್ಬಹುದು.&lt;/p&gt;&lt;img&gt;&lt;p&gt;ಪ್ರತಿ ಪಾತ್ರೆಗೆ ಸಣ್ಣ ಲೇಬಲ್ ಅಂಟಿಸಿ. ಇದು ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಪ್ರತಿ ವಸ್ತುವನ್ನು ಎಲ್ಲಿ ಇಡಬೇಕೆಂದು, ಎಲ್ಲಿದೆ ಎಂಬುದನ್ನು ತಿಳಿಸುತ್ತೆ.&lt;/p&gt;&lt;img&gt;&lt;p&gt;ಸಿಂಕ್ ಕೆಳಗಿನ ಕ್ಯಾಬಿನೆಟ್ ನಲ್ಲಿ ನೀರು ತೊಟ್ಟಿಕ್ಕುವ ಸಾಧ್ಯತೆ ಇರುತ್ತೆ. ಅದು ಸದಾ ಡ್ರೈ ಆಗಿರ್ಬೇಕು ಅಂದ್ರೆ ಕ್ಯಾಬಿನೆಸ್ ಕೆಳಗೆ ವಾಟರ್ ಪ್ರೂಫ್ ಮ್ಯಾಟ್ ಹಾಕಿ.&lt;/p&gt;&lt;img&gt;&lt;p&gt;ನೀವು ಪಾತ್ರೆಗಳನ್ನು ಸಿಂಕ್ ಕೆಳಗಿರುವ ಕ್ಯಾಬಿನೆಟ್ ನಲ್ಲಿಡಲು ಬಯಸಿದ್ರೆ ಅಗತ್ಯವಿರುವ ಪಾತ್ರೆಗಳನ್ನು ಮುಂದೆ ಇಟ್ಕೊಳ್ಳಿ. ಅತಿ ಕಡಿಮೆ ಬಳಸುವ ಪಾತ್ರೆಗಳನ್ನು ಹಿಂದಿಡಿ. ನಿತ್ಯ ಬಳಕೆ ಇದ್ರಿಂದ ಸುಲಭವಾಗುತ್ತದೆ. ಸಿಂಕ್ ಕೆಳಗಿನ ಜಾಗವನ್ನು ನೀವು ಸುಂದರ ಸ್ಟ್ಯಾಂಡ್, ವಸ್ತುಗಳಿಂದ ತುಂಬಿಸಿದ್ರೆ ಅದು ಜಂಕ್ ಬಾಕ್ಸ್ ಆಗೋದು ತಪ್ಪುತ್ತದೆ.&lt;/p&gt;]]></content:encoded>
            <category>women</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/kitchen/kitchen-tips-sink-under-area-organization-ideas-easy-hacks-to-declutter-cabinet-zowfcmg"/>
        </item>
        <item>
            <title><![CDATA[5 ರೂ.ಗೆ ಸಿಗುವ ಈ ವಸ್ತುವನ್ನ ಯಾವುದೇ ಗಿಡಕ್ಕೆ ಹಾಕಿದ್ರೂ  ರಾಶಿ ರಾಶಿ ಹೂವು, ಹಣ್ಣು ಬಿಡುತ್ತವೆ]]></title>
            <link>https://kannada.asianetnews.com/gallery/women/lime-for-plants-a-cheap-and-effective-way-to-boost-growth-and-yield-q4xpq2k</link>
            <guid isPermaLink="true">https://kannada.asianetnews.com/gallery/women/lime-for-plants-a-cheap-and-effective-way-to-boost-growth-and-yield-q4xpq2k</guid>
            <pubDate>Thu, 09 Apr 2026 14:26:18 +0530</pubDate>
            <description><![CDATA[&lt;p&gt;₹5 plant fertilizer hack: ಗಾರ್ಡನಿಂಗ್ ಮಾಡುವ ಪ್ರತಿಯೊಬ್ಬರಿಗೂ ಗಿಡಗಳಲ್ಲಿ ಹಣ್ಣು-ಹೂವುಗಳು ರಾಶಿ ರಾಶಿಯಾಗಿ ಬಿಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಪೋಷಕಾಂಶಗಳ ಕೊರತೆಯಿಂದ ಹೂವು ಬಿಡದೆ ಬಾಡಬಹುದು. ಇನ್ಮೇಲೆ ದುಬಾರಿ ಗೊಬ್ಬರ ಬಳಸುವ ಮೊದಲು ಕೇವಲ 5 ರೂ.ನ ಈ ಮ್ಯಾಜಿಕ್ ವಸ್ತು ಬಳಸಿ ನೋಡಿ&hellip;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk5tfgqhb69tyrh6nfw61wh5,imgname-summer-gardening-tips-2-1772943295217.jpg" type="image/jpeg" height="390" width="690"/>
            <content:encoded><![CDATA[&lt;p&gt;₹5 plant fertilizer hack: ಗಾರ್ಡನಿಂಗ್ ಮಾಡುವ ಪ್ರತಿಯೊಬ್ಬರಿಗೂ ಗಿಡಗಳಲ್ಲಿ ಹಣ್ಣು-ಹೂವುಗಳು ರಾಶಿ ರಾಶಿಯಾಗಿ ಬಿಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಪೋಷಕಾಂಶಗಳ ಕೊರತೆಯಿಂದ ಹೂವು ಬಿಡದೆ ಬಾಡಬಹುದು. ಇನ್ಮೇಲೆ ದುಬಾರಿ ಗೊಬ್ಬರ ಬಳಸುವ ಮೊದಲು ಕೇವಲ 5 ರೂ.ನ ಈ ಮ್ಯಾಜಿಕ್ ವಸ್ತು ಬಳಸಿ ನೋಡಿ&hellip;&amp;nbsp;&lt;/p&gt;&lt;img&gt;&lt;p&gt;ಅನೇಕ ಜನರು ತಮ್ಮ ಗಿಡಗಳಲ್ಲಿ ಹೂವು ಅಥವಾ ಹಣ್ಣುಗಳು ಬಿಡದಿದ್ದಾಗ ದುಬಾರಿ ಗೊಬ್ಬರ ಅಥವಾ ಔಷಧಿ ಬಳಸುತ್ತಾರೆ. ಆದರೆ ಅಂತಹ ಸಂದರ್ಭದಲ್ಲಿ ಕೇವಲ 5 ರೂಪಾಯಿಯ ಈ ಒಂದು ಪುಟ್ಟ ವಸ್ತು ನಿಮ್ಮ ಗಿಡದ ಲಕ್ ಬದಲಾಯಿಸಬಹುದು. ಅದು ಟೊಮೆಟೊ, ಮೆಣಸಿನಕಾಯಿ ಅಥವಾ ಗುಲಾಬಿ ಗಿಡವೇ ಆಗಿರಲಿ, ಈ ವಸ್ತುವನ್ನು ಹಾಕುವುದರಿಂದ ಗಿಡದಲ್ಲಿ ಭರಪೂರ ಇಳುವರಿ ಪಡೆಯಬಹುದು.&lt;/p&gt;&lt;img&gt;&lt;p&gt;ಈಗ ನಾವು ಹೇಳುತ್ತಿರುವ ಆ ವಸ್ತು'ಸುಣ್ಣ'. ಕೇವಲ 5 ರೂಪಾಯಿಗೆ ಸಿಗುವ ಈ ಸುಣ್ಣವು ಗಿಡಗಳಿಗೆ ಕೇವಲ ಗೊಬ್ಬರವಷ್ಟೇ ಅಲ್ಲ, ಒಂದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ.&lt;/p&gt;&lt;img&gt;&lt;p&gt;ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆಯಾದಾಗ ಗಿಡಗಳು ಬಾಡುತ್ತವೆ. ಸುಣ್ಣವು ಗಿಡಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ನೀಡುತ್ತದೆ.&lt;/p&gt;&lt;img&gt;&lt;p&gt;ಬಿಳಿ ಸುಣ್ಣವು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಮಣ್ಣಿಗೆ ಸುಣ್ಣ ಸೇರಿಸುವುದರಿಂದ ಶಿಲೀಂಧ್ರ ಮತ್ತು ಸಣ್ಣಪುಟ್ಟ ಕೀಟಗಳು ಸಾಯುತ್ತವೆ. ಮುಖ್ಯವಾಗಿ ಟೊಮೆಟೊ ಮತ್ತು ಮೆಣಸಿನಕಾಯಿ ಗಿಡದ ಕಾಯಿಗಳು ಕೆಳಗಿನಿಂದ ಕೊಳೆಯುವುದನ್ನು ಇದು ತಡೆಯುತ್ತದೆ.&lt;/p&gt;&lt;img&gt;&lt;p&gt;ತರಕಾರಿಗಳ ಪೈಕಿ ಟೊಮೆಟೊ, ಮೆಣಸು, ಬದನೆ ಮತ್ತು ನಿಂಬೆ ಗಿಡಗಳಿಗೆ ಇದು ಬಹಳ ಉಪಯುಕ್ತ. ಹೂವಿನ ಗಿಡಗಳಾದ ಗುಲಾಬಿ, ದಾಸವಾಳ ಮತ್ತು ಮಲ್ಲಿಗೆ ಗಿಡಗಳಿಗೆ ಹಾಕಿದರೆ ಹೂವುಗಳು ದೊಡ್ಡದಾಗಿ ಮತ್ತು ಹೊಳೆಯುವಂತೆ ಅರಳುತ್ತವೆ.&lt;/p&gt;&lt;img&gt;&lt;p&gt;ಸುಮಾರು 4 ಲೀಟರ್ ನೀರಿಗೆ ಒಂದು ಚಮಚ ಸುಣ್ಣ ಹಾಕಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಗಿಡದ ಬೇರುಗಳ ಭಾಗಕ್ಕೆ ಹಾಕಿ. ತಿಂಗಳಿಗೆ ಒಮ್ಮೆ ಅಥವಾ ಅಗತ್ಯವಿದ್ದಾಗ ಮಾತ್ರ ಇದನ್ನು ಬಳಸಿ.&lt;/p&gt;&lt;img&gt;&lt;p&gt;ಹಸಿ ಸುಣ್ಣವನ್ನು ನೇರವಾಗಿ ಗಿಡಕ್ಕೆ ಹಾಕಬೇಡಿ. ಅದು ಬೇರುಗಳನ್ನು ಸುಡಬಹುದು. ಅತಿಯಾದ ಪ್ರಮಾಣದಲ್ಲಿ ಬಳಸಬೇಡಿ. ವರ್ಷದಲ್ಲಿ 2-3 ಬಾರಿ ಈ ರೀತಿ ಮಾಡುವುದರಿಂದ ಗಿಡದ ಆರೋಗ್ಯ ಚೆನ್ನಾಗಿರುತ್ತದೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/women/lime-for-plants-a-cheap-and-effective-way-to-boost-growth-and-yield-q4xpq2k"/>
        </item>
        <item>
            <title><![CDATA[ಉಜ್ಜೋದು ಬೇಡ, ಇವೆರೆಡನ್ನು ಡಿಟರ್ಜೆಂಟ್ ಪೌಡರ್ ಜೊತೆ ಬೆರೆಸಿ ಹಿಂಡಿ ಹಠಮಾರಿ ಕೊಳೆ ಬಿಟ್ಟು ಹೋಗುತ್ತೆ!]]></title>
            <link>https://kannada.asianetnews.com/gallery/women/how-to-restore-your-white-clothes-grandmas-secret-cleaning-tips-io41d06</link>
            <guid isPermaLink="true">https://kannada.asianetnews.com/gallery/women/how-to-restore-your-white-clothes-grandmas-secret-cleaning-tips-io41d06</guid>
            <pubDate>Thu, 09 Apr 2026 12:51:24 +0530</pubDate>
            <description><![CDATA[&lt;p&gt;Laundry tips Kannada: ಕೇವಲ ಎರಡು ಬಾರಿ ಧರಿಸಿದರೂ ಸಾಕು, ಬೆಳ್ಳಗಿದ್ದ ಶರ್ಟ್ ಅಥವಾ ಕುರ್ತಾಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಿಮ್ಮ ಮನೆಯ ಕಿಚನ್&zwnj;ನಲ್ಲಿರುವ ಮೂರೇ ಪದಾರ್ಥಗಳನ್ನು ಬಳಸಿದರೆ ಸಾಕು, ಬಿಳಿ ಬಟ್ಟೆಗಳು ಮತ್ತೆ ಹೊಚ್ಚ ಹೊಸತರಂತೆ ಹೊಳೆಯುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k560wjg4qb9a95kyp598z3bx,imgname-gettyimages-918818642-1757917628932.jpg" type="image/jpeg" height="390" width="690"/>
            <content:encoded><![CDATA[&lt;p&gt;Laundry tips Kannada: ಕೇವಲ ಎರಡು ಬಾರಿ ಧರಿಸಿದರೂ ಸಾಕು, ಬೆಳ್ಳಗಿದ್ದ ಶರ್ಟ್ ಅಥವಾ ಕುರ್ತಾಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಿಮ್ಮ ಮನೆಯ ಕಿಚನ್&zwnj;ನಲ್ಲಿರುವ ಮೂರೇ ಪದಾರ್ಥಗಳನ್ನು ಬಳಸಿದರೆ ಸಾಕು, ಬಿಳಿ ಬಟ್ಟೆಗಳು ಮತ್ತೆ ಹೊಚ್ಚ ಹೊಸತರಂತೆ ಹೊಳೆಯುತ್ತವೆ.&lt;/p&gt;&lt;img&gt;&lt;p&gt;ನಮಗೆಲ್ಲರಿಗೂ ಬೆಳ್ಳಗೆ ಪಳಪಳ ಹೊಳೆಯುವ ಬಟ್ಟೆಗಳನ್ನು ಧರಿಸುವುದೆಂದರೆ ಇಷ್ಟ. ಆದರೆ ಕೆಲವೇ ದಿನಗಳಲ್ಲಿ ಬಿಳಿ ಶರ್ಟ್ ಅಥವಾ ಕುರ್ತಾಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇಂತಹ ಹಠಮಾರಿ ಹಳದಿ ಕಲೆಗಳನ್ನು ಮತ್ತು ಗುರುತುಗಳನ್ನು ಹೋಗಲಾಡಿಸಲು ಅಜ್ಜಿ ಕಾಲದ ಕೆಲವು ಅದ್ಭುತ ಮನೆಮದ್ದುಗಳು ಇಲ್ಲಿವೆ.&amp;nbsp;&lt;/p&gt;&lt;img&gt;&lt;p&gt;ಕೇವಲ ಡಿಟರ್ಜೆಂಟ್ ಪೌಡರ್&zwnj;ನಿಂದ ಬಿಳಿ ಬಟ್ಟೆಯ ಹಳದಿ ಬಣ್ಣ ಹೋಗುವುದಿಲ್ಲ. ಅದಕ್ಕಾಗಿ ಈ ಹ್ಯಾಕ್ ಬಳಸಿ..*ಒಂದು ಬಕೆಟ್&zwnj;ನಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ನಿಮ್ಮ ರೆಗ್ಯುಲರ್ ಡಿಟರ್ಜೆಂಟ್ ಪುಡಿ, ಒಂದು ಚಮಚ ಅಡುಗೆ ಸೋಡಾ ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಬೆರೆಸಿ.*ಈ ಮಿಶ್ರಣದಲ್ಲಿ ಬಟ್ಟೆಗಳನ್ನು 1-2 ಗಂಟೆ ಅಥವಾ ಇಡೀ ರಾತ್ರಿ ನೆನೆಸಿಡಿ. ನಂತರ ಮಾಮೂಲಿ ತೊಳೆಯಿರಿ. ಇದರಿಂದ ಬಟ್ಟೆಯ ಹಳದಿ ಬಣ್ಣ ಮಾಯವಾಗಿ, ಬಟ್ಟೆಗಳು ಮತ್ತೆ ಬೆಳ್ಳಗಾಗುತ್ತವೆ.&amp;nbsp;&lt;/p&gt;&lt;img&gt;&lt;p&gt;ಒಮ್ಮೊಮ್ಮೆ ಒಟ್ಟಿಗೆ ಬಟ್ಟೆ ಒಗೆಯುವಾಗ ಬೇರೆ ಬಣ್ಣದ ಬಟ್ಟೆಯ ಬಣ್ಣ ಬಿಳಿ ಬಟ್ಟೆಗೆ ಅಂಟಿಕೊಳ್ಳುತ್ತದೆ. ಇದನ್ನು ತೆಗೆಯುವುದು ಸಹ ಸುಲಭ..*ಉಗುರು ಬೆಚ್ಚಗಿನ ನೀರಿಗೆ ಒಂದು ಪ್ಯಾಕೆಟ್ ಈನೋ (Eno), ಒಂದು ನಿಂಬೆ ಹಣ್ಣಿನ ರಸ ಮತ್ತು ಸ್ವಲ್ಪ ಡಿಟರ್ಜೆಂಟ್ ಸೇರಿಸಿ.*ಇದರಲ್ಲಿ ಬಣ್ಣ ಅಂಟಿದ ಬಿಳಿ ಬಟ್ಟೆಯನ್ನು ಒಂದೂವರೆ ಗಂಟೆ ನೆನೆಸಿಡಿ. ನಂತರ ಕೈಯಿಂದ ಲಘುವಾಗಿ ಹಿಂಡಿದರೆ ಅಂಟಿಕೊಂಡ ಬಣ್ಣ ತಾನಾಗಿಯೇ ಹೊರಬರುತ್ತದೆ.&amp;nbsp;&lt;/p&gt;&lt;img&gt;&lt;p&gt;ಕಾಲರ್ ಅಥವಾ ತೋಳುಗಳ ಮೇಲೆ ಅಂಟಿಕೊಂಡಿರುವ ಜಿಡ್ಡು ಮತ್ತು ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಈ ಪೇಸ್ಟ್ ತಯಾರಿಸಿ..*ಒಂದು ಬಟ್ಟಲಿನಲ್ಲಿ ಸ್ವಲ್ಪ ಅಡುಗೆ ಸೋಡಾ, ನಿಂಬೆ ರಸ, ಬಿಳಿ ವಿನೆಗರ್ ಮತ್ತು ಸ್ವಲ್ಪ ಡಿಟರ್ಜೆಂಟ್ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. &amp;nbsp;*ಈ ಪೇಸ್ಟ್ ಅನ್ನು ಕಲೆ ಇರುವ ಜಾಗಕ್ಕೆ ಹಚ್ಚಿ 1-2 ಗಂಟೆ ಬಿಡಿ. ನಂತರ ಬ್ರಷ್&zwnj;ನಿಂದ ಲಘುವಾಗಿ ಉಜ್ಜಿದರೆ ಕಲೆಗಳು ಪೂರ್ತಿಯಾಗಿ ಮಾಯವಾಗುತ್ತವೆ. &amp;nbsp;&lt;/p&gt;&lt;img&gt;&lt;p&gt;ಬಿಳಿ ಬಟ್ಟೆಗಳನ್ನು ತೊಳೆದ ನಂತರ ನೇರ ಸೂರ್ಯನ ಬಿಸಿಲಿನಲ್ಲಿ ಒಣಗಿಸುವುದರಿಂದ ಅವುಗಳ ಬಿಳುಪು ಹಾಗೆಯೇ ಉಳಿಯುತ್ತದೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/women/how-to-restore-your-white-clothes-grandmas-secret-cleaning-tips-io41d06"/>
        </item>
        <item>
            <title><![CDATA[ಸಾವನ್ನು ಮಡಿಲಲ್ಲಿಟ್ಟು, ದೇಶಕ್ಕಾಗಿ ಪಾಕ್​ನ ಸೊಸೆಯಾದ ಭಾರತದ ರಾ ಏಜೆಂಟ್​ ಮೈನವಿರೇಳಿಸುವ ಸ್ಟೋರಿ]]></title>
            <link>https://kannada.asianetnews.com/india-news/a-woman-spy-who-helped-india-defeat-pakistan-in-1971-suc/articleshow-4v3r1n1</link>
            <guid isPermaLink="true">https://kannada.asianetnews.com/india-news/a-woman-spy-who-helped-india-defeat-pakistan-in-1971-suc/articleshow-4v3r1n1</guid>
            <pubDate>Wed, 08 Apr 2026 19:01:31 +0530</pubDate>
            <description><![CDATA[&lt;p&gt;1970ರ ದಶಕದಲ್ಲಿ, ಸೆಹ್ಮತ್ ಖಾನ್ ಎಂಬ ಭಾರತೀಯ ಯುವತಿ ದೇಶಕ್ಕಾಗಿ ತನ್ನೆಲ್ಲಾ ಕನಸುಗಳನ್ನು ತ್ಯಜಿಸಿ ಪಾಕಿಸ್ತಾನಿ ಸೇನಾಧಿಕಾರಿಯನ್ನು ವಿವಾಹವಾದರು. ಶತ್ರುದೇಶದಲ್ಲಿ ಪತ್ನಿಯಾಗಿ ನಟಿಸುತ್ತಾ, ಭಾರತಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ರವಾನಿಸಿದ , 1971ರ ಇಂಡೋ-ಪಾಕ್​ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಹಿಳಾ ಗೂಢಚಾರಿಯ ರೋಚಕ ಕಥೆಯಿದು. ಇವರ ಜೀವನಗಾಥೆಯೇ 'ರಾಝಿ' ಸಿನಿಮಾಗೆ ಸ್ಪೂರ್ತಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpmb5b025sm9759wtxq646b,imgname-sehamat-khan-1775654770016.jpg" type="image/jpeg" height="390" width="690"/>
            <content:encoded><![CDATA[&lt;p&gt;ದುರಂಧರ್ 1 ಮತ್ತು 2 ಚಿತ್ರ ನೋಡಿದವರಿಗೆ ಭಾರತದ ಗೂಢಾಚಾರರು ಅರ್ಥಾತ್​ ಸ್ಪೈ (Spy) ರಾ ಏಜೆಂಟ್ಸ್​ (RAW Agents) ಯಾವ ರೀತಿಯಲ್ಲಿ ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದರು. ಅವರಿಂದ ಹೇಗೆ ಭಾರತ ಬಚಾವ್​ ಆಯಿತು. ಯಾವ ರೀತಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟುಕೊಂಡು ಈ ಏಜೆಂಟ್​ಗಳು ಕೆಲಸ ಮಾಡುತ್ತಾರೆ, ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಪಾಕಿಸ್ತಾನದಂಥ ಪಾಪಿಯ ನೆಲೆಯಲ್ಲಿ ಅವರಿಗೆ ಆದ ಘನಘೋರ ಶಿಕ್ಷೆ, ಯಾರೂ ಊಹಿಸಲು ಸಾಧ್ಯವಿಲ್ಲದ ಕಠೋರ ಚಿತ್ರಹಿಂಸೆ ನೀಡುತ್ತಾರೆ ಎನ್ನುವುದು ತಿಳಿದಿದೆ. ಇದರ ಹೊರತಾಗಿಯೂ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಹಲವರು. ಹಾಗೆಂದು ರಾ ಏಜೆಂಟ್ಸ್​ ಎಂದ ಮಾತ್ರಕ್ಕೆ ಅವರು ಪುರುಷರೇ ಎಂದೇನಲ್ಲ. ಕೆಲವು ಸ್ತ್ರೀಯರು ಕೂಡ ದೇಶಕ್ಕಾಗಿ ಇದೇ ರೀತಿ ಹೋರಾಟ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಸೆಹ್ಮತ್ ಖಾನ್&zwnj; ರೋಚಕ ಸ್ಟೋರಿ&lt;/strong&gt;&lt;/h2&gt;&lt;p&gt;ಅವರಲ್ಲಿ ಒಬ್ಬರು ಸೆಹ್ಮತ್ ಖಾನ್&zwnj;. ಈಕೆಯ ಕಥೆಯೇ ಮೈ ನವಿರೇಳುವಂಥದ್ದಾಗಿದೆ. 1970ರ ದಶಕದ ಸ್ಟೋರಿ ಇದು. 1971ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಯುದ್ಧದಲ್ಲಿ ಭಾರತದ ಗೆಲುವಿನ ಹಿಂದೆ ಇವರದ್ದೇ ಕೈ ಇದೆ. ಅವರ ತಂದೆ ಕಾಶ್ಮೀರಿ ಮುಸ್ಲಿಂ ಮತ್ತು ಅವರ ತಾಯಿ ಪಂಜಾಬಿ ಹಿಂದೂ. ಭಾರತವು ಧರ್ಮ ಅಥವಾ ವೈಯಕ್ತಿಕ ಗುರುತಿಗಿಂತ ಮೊದಲು ಎಂದು ಅವರು ಕಲಿತು ಬೆಳೆದರು. ಈ ನಂಬಿಕೆಯು ನಂತರದ ಜೀವನದಲ್ಲಿ ಅವರ ಆಯ್ಕೆಗಳನ್ನು ರೂಪಿಸಿತು. ಪಾಕಿಸ್ತಾನಿ ಅಧಿಕಾರಿಯ ಪತ್ನಿಯ ವೇಷ ಧರಿಸಿ ಪಾಕಿಸ್ತಾನಕ್ಕೆ ಹೋಗಿ ಭಾರತಕ್ಕೆ ಸಹಾಯ ಮಾಡಿದ್ದ ಇವರ ಕಥೆ ರೋಚಕವಾಗಿದೆ. ಸೆಹ್ಮತ್ ದೆಹಲಿಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಆಕೆಯ ಜೀವನ ಶಾಶ್ವತವಾಗಿ ಬದಲಾಯಿತು. ಕ್ಯಾನ್ಸರ್ ನಿಂದ ಸಾಯುತ್ತಿದ್ದ ಆಕೆಯ ತಂದೆ ಭಾರತೀಯ ಗುಪ್ತಚರ ಇಲಾಖೆಯೊಂದಿಗಿನ ತಮ್ಮ ರಹಸ್ಯ ಸಂಪರ್ಕಗಳನ್ನು ಬಹಿರಂಗಪಡಿಸಿದರು. ಅಲ್ಲಿಯವರೆಗೆ ಅವರೊಬ್ಬ ಏಜೆಂಟ್​ ಎನ್ನುವುದು ಯಾರಿಗೂ ತಿಳಿದಿಲಿಲ್ಲ. ಅವರು ಸೆಹ್ಮತ್ ಗೆ ಅಪಾಯದ ಬಗ್ಗೆ ತಿಳಿಸಿದರು. ಕೊನೆಗೆ ಆಯ್ಕೆಯನ್ನು ಅವಳಿಗೇ ಬಿಟ್ಟರು.&lt;/p&gt;&lt;h3&gt;&lt;strong&gt;ಪ್ರೀತಿಯನ್ನೂ ತ್ಯಜಿಸಿ ಪಾಕಿಯನ್ನು ಮದ್ವೆಯಾದ್ರು&lt;/strong&gt;&lt;/h3&gt;&lt;p&gt;ಆದರೆ ದೇಶಪ್ರೇಮ ಎನ್ನುವುದು ರಕ್ತದಲ್ಲಿಯೇ ಇತ್ತ. ಅದಕ್ಕಾಗಿ ಅವರು ದೇಶ ಸೇವೆ ಮಾಡಲು ಮುನ್ನುಗ್ಗಿದರು. ತಮ್ಮ ಶಿಕ್ಷಣ, ಕನಸುಗಳನ್ನು ಬಿಟ್ಟರು. ಅವರು ಆಗ ಒಬ್ಬರನ್ನು ಪ್ರೀತಿಸುತ್ತಿದ್ದರು. ಆದರೆ ದೇಶಕ್ಕಾಗಿ ಪ್ರೇಮವನ್ನೂ ತ್ಯಾಗ ಮಾಡಿ, ಪಾಕಿಸ್ತಾನದ ಹಿರಿಯ ಸೇನಾ ಅಧಿಕಾರಿಯ ಮಗ ಇಕ್ಬಾಲ್ ಸೈಯದ್ ಅವರನ್ನು ಅವರು ವಿವಾಹವಾದರು. ಈ ಮದುವೆಯು ಆಕೆಗೆ ಪ್ರಮುಖ ಮಿಲಿಟರಿ ಮಾಹಿತಿಗೆ ಪ್ರವೇಶವನ್ನು ನೀಡಿತು. ಇದು ನಕಲಿ ಪಾತ್ರವಾಗಿರಲಿಲ್ಲ, ಇದು ನಿಜವಾದ ವಿವಾಹವಾಗಿತ್ತು. ಆದರೆ ಸ್ವಲ್ಪವೇ ಅನುಮಾನ ಬಂದರೂ ಆಕೆಯ ಮೃತ್ಯು ಮಾತ್ರ ಯಾರೂ ಊಹಿಸುವ ರೀತಿಯಲ್ಲಿ ಇರಲಿಲ್ಲ.&lt;/p&gt;&lt;h2&gt;&lt;strong&gt;ಸಾಕ್ಷಿ ಕಳುಹಿಸುತ್ತಿದ್ದ ಸೆಹ್ಮತ್​&lt;/strong&gt;&lt;/h2&gt;&lt;p&gt;ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾಗ, ಸೆಹ್ಮತ್ ರಹಸ್ಯವಾಗಿ ಮಾಹಿತಿಯನ್ನು ಸಂಗ್ರಹಿಸುತ್ತಾ ಪತ್ನಿ ಮತ್ತು ಸೊಸೆಯಾಗಿ ತನ್ನ ಪಾತ್ರವನ್ನು ಸಮತೋಲನಗೊಳಿಸಿಕೊಂಡರು. ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಯಾಹ್ಯಾ ಖಾನ್ ಅವರ ಮೊಮ್ಮಕ್ಕಳಿಗೂ ಅವರು ಪಾಠಗಳನ್ನು ಹೇಳುತ್ತಿದ್ದರು, ಇದು ಅವರನ್ನು ಪ್ರಬಲ ವಲಯಗಳಿಗೆ ಹತ್ತಿರವಾಗಿಸಿತು. ಅವರು ಭಾರತಕ್ಕೆ ಕಳುಹಿಸಿದ ಪ್ರತಿಯೊಂದು ಸಂದೇಶವೂ ನಿಖರವಾಗಿ ಸಾಬೀತಾಯಿತು. ಆಕೆಯನ್ನು ಮತ್ತು ಕುಟುಂಬವನ್ನು ರಕ್ಷಿಸಲು ಎಲ್ಲವೂ ರಹಸ್ಯವಾಗಿಡಲಾಗಿತ್ತು. ಸಾವಿನ ಭೀತಿ ಕ್ಷಣ ಕ್ಷಣಕ್ಕೆ ಇದ್ದರೂ, ಭಾರತದ ಪರವಾಗಿ ಆಕೆ ಎಲ್ಲವನ್ನೂ ಮಾಡಿದರು. ಅವರು ಹೋದ ಕೆಲಸ ಯಶಸ್ವಿಯಾಗಿತ್ತು. ಮಿಷನ್​ ಮುಗಿದ ಬಳಿಕ ಭಾರತಕ್ಕೆ ವಾಪಸಾದರು. ಅವರು ಪಾಕಿಸ್ತಾನದಿಂದ ಹಿಂದಿರುಗಿದ ನಂತರ ಜನಿಸಿದ ಮತ್ತು ಭಾರತೀಯ ಸೇನಾ ಅಧಿಕಾರಿಯಿಂದ ದತ್ತು ಪಡೆದ ಅವರ ಮಗ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಿನಿಮಾ ಆದ ಸ್ಟೋರಿ&lt;/strong&gt;&lt;/h3&gt;&lt;p&gt;2018 ರಲ್ಲಿ ಬಿಡುಗಡೆಯಾದ ರಾಝಿ ಚಲನಚಿತ್ರವು ಲೇಖಕ ಹರಿಂದರ್ ಸಿಕ್ಕಾ ಅವರ &quot;ಕಾಲಿಂಗ್ ಸೆಹ್ಮತ್&quot; ಕಾದಂಬರಿಯನ್ನು ಆಧರಿಸಿದೆ. ಹರಿಂದರ್ ಸಿಕ್ಕಾ ಅವರ ಪ್ರಕಾರ, ಇದು ಒಬ್ಬ ಮಹಿಳಾ ಗೂಢಚಾರರ ಕಥೆ, ಕಾಲ್ಪನಿಕವಲ್ಲ, ನಿಜವಾದ ಪಾತ್ರ. ಹರಿಂದರ್ ಸಿಕ್ಕಾ ಸ್ವತಃ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದರು ಮತ್ತು ಕಾರ್ಗಿಲ್ ಬಗ್ಗೆ ಸಂಶೋಧನೆ ನಡೆಸುವಾಗ ಸೆಹ್ಮತ್ ಖಾನ್ ಅವರ ಮಗನನ್ನು ಭೇಟಿಯಾದರು. ಮಹಿಳಾ ಗೂಢಚಾರರಾದ ಸೆಹ್ಮತ್ ಖಾನ್ ಅವರ ನಿಜವಾದ ಗುರುತನ್ನು ಪುಸ್ತಕದಲ್ಲಿ ಮರೆಮಾಡಲಾಗಿದೆ. ಈ ಸಿನಿಮಾದಲ್ಲಿ ಸೆಹ್ಮತ್​ ಅವರ ಪಾತ್ರವನ್ನು ಆಲಿಯಾ ಭಟ್​ ನಿರ್ವಹಿಸಿದ್ದಾರೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/a-woman-spy-who-helped-india-defeat-pakistan-in-1971-suc/articleshow-4v3r1n1"/>
        </item>
        <item>
            <title><![CDATA[ಪತಿ ನಾಪತ್ತೆ, ತಮ್ಮನ ಜೊತೆ ಪತ್ನಿ ಮದ್ವೆ: 25 ವರ್ಷಗಳ ಬಳಿಕ ವಾಪಸಾದ ಗಂಡ- ಮುಂದೇನಾಯ್ತು?]]></title>
            <link>https://kannada.asianetnews.com/india-news/missing-for-25-years-man-returns-home-wife-now-married-to-his-brother-family-in-shock-suc/articleshow-hzoe06q</link>
            <guid isPermaLink="true">https://kannada.asianetnews.com/india-news/missing-for-25-years-man-returns-home-wife-now-married-to-his-brother-family-in-shock-suc/articleshow-hzoe06q</guid>
            <pubDate>Wed, 08 Apr 2026 19:26:05 +0530</pubDate>
            <description><![CDATA[25 ವರ್ಷಗಳ ಹಿಂದೆ ಕಾಣೆಯಾಗಿದ್ದ ಪಂಜಾಬ್&zwnj;ನ ಹಂಸಾ ಸಿಂಗ್ ಎಂಬ ವ್ಯಕ್ತಿ ಈಗ ಜೀವಂತವಾಗಿ ಪತ್ತೆಯಾಗಿದ್ದಾರೆ. ಆತ ಸತ್ತಿದ್ದಾನೆಂದು ಭಾವಿಸಿ, ಕುಟುಂಬದವರು ಆತನ ಪತ್ನಿಯನ್ನು ಆತನ ತಮ್ಮನಿಗೆ ಕೊಟ್ಟು ಮದುವೆ ಮಾಡಿದ್ದರು. 25 ವರ್ಷಗಳ ನಂತರ ಹಂಸಾ ಸಿಂಗ್ ಮನೆಗೆ ಮರಳಿದ್ದು, ಇದು ಕುಟುಂಬದಲ್ಲಿ ಸಂತೋಷದ ಜೊತೆಗೆ ಪತ್ನಿ ಮತ್ತು ಕುಟುಂಬಕ್ಕೆ ದೊಡ್ಡ ಸಾಮಾಜಿಕ ಮತ್ತು ಭಾವನಾತ್ಮಕ ಸಂದಿಗ್ಧತೆಯನ್ನು ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knpp18fmbr80p5ayd0s2wge9,imgname-husband-returned-1775656542708.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಬಂಧಗಳು, ಸಂಪ್ರದಾಯಗಳು ಮತ್ತು ಕಾನೂನಿನ ವಿಷಯದಲ್ಲಿ ಸಂದಿಗ್ಧತೆಯನ್ನು ಸೃಷ್ಟಿಸುವ ಘಟನೆಯೊಂದು ಉತ್ತರ ಪ್ರದೇಶದ ಪಂಜಾಬ್&zwnj;ನ ಕಪುರ್ತಲಾದಲ್ಲಿ ನಡೆದಿದೆ. 25 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಜೀವಂತವಾಗಿ ಪತ್ತೆಯಾಗಿದ್ದಾನೆ. ಆತ ಮನೆಗೆ ಮರಳಿದ್ದಾನೆ. 25 ವರ್ಷಗಳ ಬಳಿಕ ಮನೆಗೆ ವ್ಯಕ್ತಿ ಬಂದಾಗ ಕುಟುಂಬದಲ್ಲಿ ಅದೆಷ್ಟು ಸಂತೋಷ ಆಗುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ಇಲ್ಲಿ ಆದದ್ದೇ ಬೇರೆ. ಸಂತೋಷ ಒಂದೆಡೆಯಾದರೆ, ಅದರ ಹಿಂದೆ ನೂರೆಂಟು ಸಮಸ್ಯೆಗಳು ಹುಟ್ಟುಕೊಂಡವು. ಅದಕ್ಕೆ ಕಾರಣ, ಆತ ಸತ್ತಿದ್ದಾನೆಂದು ಭಾವಿಸಿ ಆತನ ಪತ್ನಿಯನ್ನು ಅವನ ತಮ್ಮನಿಗೇ ಕೊಟ್ಟು ಮದುವೆ ಮಾಡಿದ್ದರು ಮನೆಯವರು!&lt;/p&gt;&lt;h2&gt;&lt;strong&gt;ಇದ್ದಕ್ಕಿದ್ದಂತೆಯೇ ಕಣ್ಮರೆ&lt;/strong&gt;&lt;/h2&gt;&lt;p&gt;ಪಂಜಾಬ್&zwnj;ನ ಕಪುರ್ತಲಾ ಜಿಲ್ಲೆಯ ನಿವಾಸಿ ಹಂಸಾ ಸಿಂಗ್ 25 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಕುಟುಂಬವು ಅವರನ್ನು ಎಲ್ಲೆಡೆ ಹುಡುಕಿದೆ. ಆದರೆ ಏನೂ ಪತ್ತೆಯಾಗಿಲ್ಲ. ಮೂರು ವರ್ಷಗಳ ಕಾಯುವಿಕೆಯ ನಂತರ, ಕುಟುಂಬವು ಅವರನ್ನು ಸತ್ತರೆಂದು ಪರಿಗಣಿಸಿತು. ಇದಾದ ನಂತರ, ಸಾಮಾಜಿಕ ಸಂಪ್ರದಾಯದ ಪ್ರಕಾರ, ಅವರ ಪತ್ನಿ ವಿಮಲಾ ದೇವಿ ಅವರು ಹಂಸಾ ಸಿಂಗ್ ಅವರ ತಮ್ಮ ಸುಖ ಸಿಂಗ್ ಅವರ ವಿವಾಹ ಮಾಡಲಾಯಿತು. ಮದುವೆಯಾಗಿ ಈಗ 22 ವರ್ಷಗಳಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಖುಷಿಯಿಂದ ಸಂಸಾರ ಸಾಗುತ್ತಿದ್ದಾಗಲೇ ಕುಟುಂಬಕ್ಕೆ ಆಘಾತ ಎದುರಾಗಿದ್ದು, ಕಾಣೆಯಾದ ಹಂಸಾ ಸಿಂಗ್​ 25 ವರ್ಷಗಳ ಬಳಿಕ ಮನೆಗೆ ಬಂದಾಗ!&lt;/p&gt;&lt;h3&gt;&lt;strong&gt;ಭಿಕ್ಷುಕನಾಗಿ ಅಲೆದಾಟ&lt;/strong&gt;&lt;/h3&gt;&lt;p&gt;ನಾಥೌರ್&zwnj;ನ ನಯಾ ಬಜಾರ್&zwnj;ನಲ್ಲಿ ಹರಿದ ಬಟ್ಟೆಗಳಲ್ಲಿ ಮತ್ತು ಉದ್ದನೆಯ ಗಡ್ಡದೊಂದಿಗೆ ಒಬ್ಬ ವ್ಯಕ್ತಿ ಅಲೆದಾಡುತ್ತಿರುವುದು ಕಂಡುಬಂದಿತು. ಅವನನ್ನು ನೋಡಿದ ನಂತರ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಪೊಲೀಸ್ ಠಾಣೆಯ ಉಸ್ತುವಾರಿ ರವೀಂದ್ರ ಪ್ರತಾಪ್ ಸಿಂಗ್ ಸ್ಥಳಕ್ಕೆ ಬಂದರು. ಅವರು ಆ ವ್ಯಕ್ತಿಯನ್ನು ಪ್ರಶ್ನಿಸಿದರು. ಆರಂಭದಲ್ಲಿ, ಅವರು ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಆದರೆ ಕ್ರಮೇಣ, ಅವರು ತಮ್ಮ ಹೆಸರನ್ನು ಹಂಸಾ ಸಿಂಗ್ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಪೊಲೀಸರಿಂದ ತನಿಖೆ&lt;/strong&gt;&lt;/h3&gt;&lt;p&gt;ಪೊಲೀಸರು ಗಂಭೀರ ತನಿಖೆಯನ್ನು ಪ್ರಾರಂಭಿಸಿದರು ಮತ್ತು ಸ್ಥಳೀಯರ ಸಹಾಯವನ್ನು ಪಡೆದರು. ಅವರನ್ನು ಗುರುತಿಸಲು ಪ್ರಯತ್ನಿಸಲಾಯಿತು. ಪಂಜಾಬ್ ಪೊಲೀಸರನ್ನು ಸಂಪರ್ಕಿಸಲಾಯಿತು. ಇದರ ನಂತರ, ಹಂಸಾ ಸಿಂಗ್ ಅವರ ಕುಟುಂಬ ಸದಸ್ಯರು ಮುಂದಿನ 72 ಗಂಟೆಗಳಲ್ಲಿ ನಾಥೌರ್ ತಲುಪಿದರು. ಆರಂಭದಲ್ಲಿ, ಗುರುತು ದೃಢೀಕರಿಸಲಾಗಿಲ್ಲ. ಏಕೆಂದರೆ ಅವರು 25 ವರ್ಷಗಳ ನಂತರ ಭೇಟಿಯಾಗಿದ್ದರು. ಹಂಸಾ ಸಿಂಗ್ ಸಂಪೂರ್ಣವಾಗಿ ಬದಲಾಗಿದ್ದರು. ಆದರೆ ಅವರ ಸಹೋದರರು ಮತ್ತು ಗ್ರಾಮದ ಸರಪಂಚರು ಬಾಲ್ಯದ ಘಟನೆಗಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ನೆನಪುಗಳ ಬಗ್ಗೆ ಹೇಳಿದಾಗ, ಅವರು ಭಾವುಕರಾದರು. ಅವರ ಕಣ್ಣಲ್ಲಿ ನೀರು ಬಂತು.&lt;/p&gt;&lt;p&gt;&lt;strong&gt;ಸಮಸ್ಯೆ ತಂದ ಘಟನೆ&lt;/strong&gt;&lt;/p&gt;&lt;p&gt;ಈ ಕ್ಷಣ ಕುಟುಂಬಕ್ಕೆ ತುಂಬಾ ಸಂತೋಷವಾಯಿತು. ಕುಟುಂಬ ಸದಸ್ಯರು 25 ವರ್ಷಗಳ ನಂತರ ಹಿಂತಿರುಗಿದ್ದರು. ಆದರೆ ಇದು ಒಂದು ಸಮಸ್ಯೆಯನ್ನು ಸೃಷ್ಟಿಸಿತು. ವಿಮಲಾ ದೇವಿ ಎದುರಿಸಿದ ದೊಡ್ಡ ಸಂದಿಗ್ಧತೆ. ಈಗ ಯಾರಿಗೆ ಆದ್ಯತೆ ನೀಡಬೇಕೆಂಬುದೇ ಪ್ರಶ್ನೆ. ಒಂದು ಕಡೆ ಅವರ ಪತಿ ಹಂಸ ಸಿಂಗ್. ಅವರು 25 ವರ್ಷಗಳ ನಂತರ ಹಿಂತಿರುಗಿದ್ದಾರೆ. ಮತ್ತೊಂದೆಡೆ ಸುಖ ಸಿಂಗ್. ಅವರು 22 ವರ್ಷಗಳಿಂದ ಅವರನ್ನು ಪತಿಯಾಗಿ ಬೆಂಬಲಿಸಿದ್ದಾರೆ. ಇಬ್ಬರಿಗೆ ಈಗ 3 ಮಕ್ಕಳಿದ್ದಾರೆ.&lt;/p&gt;&lt;p&gt;&lt;strong&gt;ಮಾನಸಿಕ ಸ್ಥಿತಿ ಅಲ್ಲೋಲ ಕಲ್ಲೋಲ&lt;/strong&gt;&lt;/p&gt;&lt;p&gt;ಈ ಘಟನೆಯು ಭಾವನಾತ್ಮಕತೆಯನ್ನು ಮಾತ್ರವಲ್ಲದೆ ಸಾಮಾಜಿಕ ಮತ್ತು ಕಾನೂನು ಸಂದಿಗ್ಧತೆಯನ್ನು ಸೃಷ್ಟಿಸಿದೆ. ಕುಟುಂಬವು ತುಂಬಾ ಕಠಿಣ ಪರಿಸ್ಥಿತಿಯಲ್ಲಿದೆ. ಈ ಎಲ್ಲದರಲ್ಲೂ ನಾಥೌರ್ ಪೊಲೀಸರ ಪಾತ್ರ ಶ್ಲಾಘನೀಯ. ಜನರು ಭಿಕ್ಷುಕ ಎಂದು ಭಾವಿಸಿದ ವ್ಯಕ್ತಿಯನ್ನು ಗುರುತಿಸುವಲ್ಲಿ ಪೊಲೀಸರು ಬಹಳ ಸೂಕ್ಷ್ಮವಾದ ಕೆಲಸವನ್ನು ಮಾಡಿದರು. ಪೊಲೀಸರು ಹಂಸ ಸಿಂಗ್ ಅವರನ್ನು ಗೌರವದಿಂದ ನಡೆಸಿಕೊಂಡರು. ಅವರು ಅವರಿಗೆ ಸ್ನಾನ ಮಾಡಿಸಿದ್ದರು, ಹೊಸ ಬಟ್ಟೆಗಳನ್ನು ನೀಡಿದರು. ಅವರು ಅವರೊಂದಿಗೆ ತಾಳ್ಮೆಯಿಂದ ಸಂವಹನ ನಡೆಸಿದರು. ಅವರು ಅವರ ಕುಟುಂಬವನ್ನು ಭೇಟಿ ಮಾಡುವಂತೆ ಮಾಡಿದರು. ಆದರೆ ಸದ್ಯ ಕುಟುಂಬದಲ್ಲಿ ಮಾತ್ರ ಅದರಲ್ಲಿಯೂ ಪತ್ನಿಯ ಮಾನಸಿಕ ಸ್ಥಿತಿ ಮಾತ್ರ ಅಲ್ಲೋಲ ಕಲ್ಲೋಲವಾಗಿದೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/missing-for-25-years-man-returns-home-wife-now-married-to-his-brother-family-in-shock-suc/articleshow-hzoe06q"/>
        </item>
        <item>
            <title><![CDATA[ಒಂದು ರಾತ್ರಿಗೆ 50 ಲಕ್ಷ; ಷರತ್ತು ನಿನ್ನದು, ಸ್ಥಳ ನನ್ನದು- Bigg Boss ಬೆಡಗಿ ಹೇಳಿಕೆಗೆ ಬಣ್ಣದ ಲೋಕ ಶೇಕ್​]]></title>
            <link>https://kannada.asianetnews.com/gallery/relationship/was-offered-rs-50-lakh-to-sleep-with-businessman-claims-bigg-boss-vada-pav-girl-chandrika-dixit-suc-6tm50tl</link>
            <guid isPermaLink="true">https://kannada.asianetnews.com/gallery/relationship/was-offered-rs-50-lakh-to-sleep-with-businessman-claims-bigg-boss-vada-pav-girl-chandrika-dixit-suc-6tm50tl</guid>
            <pubDate>Wed, 08 Apr 2026 19:44:12 +0530</pubDate>
            <description><![CDATA[&lt;p&gt;ಬಿಗ್​ಬಾಸ್​ ಖ್ಯಾತಿಯ 'ವಡಾ ಪಾವ್ ಗರ್ಲ್' ಚಂದ್ರಿಕಾ ದೀಕ್ಷಿತ್, ತಮಗೆ ಉದ್ಯಮಿಯೊಬ್ಬರು ಒಂದು ರಾತ್ರಿ ಕಳೆಯಲು 50 ಲಕ್ಷ ರೂಪಾಯಿ ಆಫರ್ ಮಾಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪತಿಯ ವಿವಾಹೇತರ ಸಂಬಂಧದ ಬಗ್ಗೆಯೂ ಆರೋಪ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knppxp9tsh8sk0xp54k6zjr6,imgname-chandrika-dixit-1775657474362.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ ಖ್ಯಾತಿಯ 'ವಡಾ ಪಾವ್ ಗರ್ಲ್' ಚಂದ್ರಿಕಾ ದೀಕ್ಷಿತ್, ತಮಗೆ ಉದ್ಯಮಿಯೊಬ್ಬರು ಒಂದು ರಾತ್ರಿ ಕಳೆಯಲು 50 ಲಕ್ಷ ರೂಪಾಯಿ ಆಫರ್ ಮಾಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪತಿಯ ವಿವಾಹೇತರ ಸಂಬಂಧದ ಬಗ್ಗೆಯೂ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;&quot;ವಡಾ ಪಾವ್ ಗರ್ಲ್&quot; ಎಂದು ಕರೆಯಲ್ಪಡುವ ಬಿಗ್​ಬಾಸ್​ ಖ್ಯಾತಿಯ ಚಂದ್ರಿಕಾ ದೀಕ್ಷಿತ್ (Chandrika Dixit) ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಪತಿ ಯುಗಮ್ ಗೆರಾ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಅವರು ಈ ಹಿಂದೆ ಬಹಿರಂಗಪಡಿಸಿದ್ದರು. &quot;ಅವನು ತನ್ನ ಕೆಲಸದ ಬಗ್ಗೆ ಗಮನ ಹರಿಸುವುದಿಲ್ಲ ಅಥವಾ ನನ್ನನ್ನು ನೋಡಿಕೊಳ್ಳುವುದಿಲ್ಲ&quot; ಎಂದಿದ್ದರು. ನಂತರ ನಾನು ಬೇರೆಯಾಗುತ್ತಿದ್ದೇನೆ ಎಂದರು. ಆ ಬಳಿಕ ಅವರು ನಿಗೂಢ ವ್ಯಕ್ತಿಯೊಂದಿಗೆ ಕಾಣಿಸಿಕೊಂಡರು. ಚಂದ್ರಿಕಾ ಮರುಮದುವೆಯಾದರು ಎಂಬ ವರದಿಗಳೂ ಇದ್ದವು.&lt;/p&gt;&lt;img&gt;&lt;p&gt;ಇದರ ನಡುವೆಯೇ, ಚಂದ್ರಿಕಾ ಇತ್ತೀಚೆಗೆ ಒಬ್ಬ ಉದ್ಯಮಿ ಅವನೊಂದಿಗೆ ಒಂದು ರಾತ್ರಿ ಮಲಗಲು 50 ಲಕ್ಷ ರೂಪಾಯಿಗಳ ಆಫರ್​ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರ ಪಾಡ್&zwnj;ಕ್ಯಾಸ್ಟ್&zwnj;ನಲ್ಲಿ ಚಂದ್ರಿಕಾ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಸಿದ್ಧಾರ್ಥ್ ಅವರಿಗೆ ನಿಜವಾಗಿಯೂ 50 ಲಕ್ಷ ರೂಪಾಯಿಗಳ ಆಫರ್ ನೀಡಲಾಗಿದೆಯೇ ಎಂದು ಕೇಳಿದರು. ಚಂದ್ರಿಕಾ, &quot;ಹೌದು, ಅವರು ಶ್ರೀಮಂತ ಉದ್ಯಮಿ. ನಾನು ನಿಮಗೆ ಇಮೇಲ್&zwnj;ನ ಸ್ಕ್ರೀನ್&zwnj;ಶಾಟ್ ಅನ್ನು ಸಹ ನೀಡಬಲ್ಲೆ. ಅವರು ರೆಸಾರ್ಟ್&zwnj;ಗೆ ಹೋಗುತ್ತಿದ್ದಾಗ, 'ಪರಿಸ್ಥಿತಿ ಮತ್ತು ಷರತ್ತು ನಿಮ್ಮದು, ಸ್ಥಳ ನನ್ನದು. ಚಂದ್ರಿಕಾ, ನಾನು ನಿಮಗೆ 50 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ. ಉಳಿದದ್ದನ್ನು ನೀವು ನನಗೆ ಹೇಳಿ' ಎಂದು ಆಫರ್​ ಮಾಡಿದ್ದರು ಎಂದಿದ್ದಾರೆ.&lt;/p&gt;&lt;img&gt;&lt;p&gt;ತನಗೆ ಇ-ಮೇಲ್ ಮೂಲಕ ಈ ಆಫರ್ ಬಂದಿದೆ. ಇಷ್ಟೇ ಅಲ್ಲದೇ, ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಸಹ ತನಗೆ ಕರೆ ಮಾಡಿ ಆಫರ್&zwnj;ಗಳನ್ನು ನೀಡಿದ್ದಾರೆ ಎಂದು ಚಂದ್ರಿಕಾ ಹೇಳಿದರು. ಒಬ್ಬರು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಬಯಸಿದರೆ, ಅವರು ರಾಜಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಚಂದ್ರಿಕಾ, &quot;ಇಂಡಸ್ಟ್ರಿ ಭ್ರಷ್ಟವಾಗಿದೆ&quot; ಎಂದು ಹೇಳಿದರು.&lt;/p&gt;&lt;img&gt;&lt;p&gt;ಚಂದ್ರಿಕಾ ಕೆಲವು ಸಮಯದಿಂದ ಸಾಮಾಜಿಕ ಮಾಧ್ಯಮದಲ್ಲಿ ನಿಗೂಢ ವ್ಯಕ್ತಿಯೊಂದಿಗೆ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ತಮ್ಮ ಇತ್ತೀಚಿನ ವೀಡಿಯೊದಲ್ಲಿ, ಅವರು ಸೈಫ್ ಅವರನ್ನು ಮದುವೆಯಾಗುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. &quot;ಸಾಕಿಬ್ ಮತ್ತು ಕನಿಕಾ ಮದುವೆಯಾಗಲು ಸಾಧ್ಯವಾದರೆ, ನಾವು ಯಾಕೆ ಮದುವೆಯಾಗಲು ಸಾಧ್ಯವಿಲ್ಲ?&quot; ನಂತರ ಸೈಫ್, &quot;ಅವಳು ನಾನಿಲ್ಲದೆ ಬದುಕಲು ಸಾಧ್ಯವಿಲ್ಲ, ಮತ್ತು ನಾನು ಅವಳಿಲ್ಲದೆ ಬದುಕಲು ಸಾಧ್ಯವಿಲ್ಲ. ಈ ಬಗ್ಗೆ ಜಗತ್ತು ಏನು ಹೇಳುತ್ತದೆ ಎಂಬುದು ನನಗೆ ಮುಖ್ಯವಲ್ಲ&quot; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಚಂದ್ರಿಕಾ ಸಂದರ್ಶನವೊಂದರಲ್ಲಿ ತನ್ನ ಅತ್ತೆ ತನ್ನ ಮತ್ತು ಯುಗಮ್ ಮದುವೆಯನ್ನು ಒಪ್ಪಲಿಲ್ಲ ಎಂದು ಬಹಿರಂಗಪಡಿಸಿದ್ದರು. &quot;ನಾನು ನನ್ನ 15 ದಿನಗಳ ಮಗುವನ್ನು ಶಿಶುವಿಹಾರದಲ್ಲಿ ಬಿಟ್ಟಿದ್ದೆ. ಆ ಸಮಯದಲ್ಲಿ, ನಾನು ಮದುವೆಯಾಗಿದ್ದರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ. ನನ್ನ ಅತ್ತೆ ಮೊದಲು ನನ್ನನ್ನು ನನ್ನ ಸ್ವಂತ ಕಾಲಿನ ಮೇಲೆ ತೋರಿಸಿಕೊಳ್ಳುವಂತೆ ಹೇಳಿದ್ದರು, ನಂತರ ನಾನು ನಿಮ್ಮನ್ನು ಒಪ್ಪಿಕೊಳ್ಳಬಹುದು. ನಾನು ಹಲ್ದಿರಾಮ್ಸ್&zwnj;ನಲ್ಲಿ ದಿನಕ್ಕೆ 12-13 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ಆಗ, ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಎಂದು ಯಾರೂ ಹೇಳುತ್ತಿರಲಿಲ್ಲ. ಇಂದು, ನನ್ನ ಕೆಲಸವನ್ನು ಪ್ರಶ್ನಿಸಲಾಗುತ್ತಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;&quot;ವಡಾ ಪಾವ್ ಗರ್ಲ್&quot; ಎಂದೂ ಕರೆಯಲ್ಪಡುವ ಚಂದ್ರಿಕಾ ದೀಕ್ಷಿತ್ ಸೋಷಿಯಲ್&zwnj; ಮೀಡಿಯಾ ಇನ್ಫ್ಲುಯೆನ್ಸರ್&zwnj;.ದೆಹಲಿಯಲ್ಲಿ ವಡಾ ಪಾವ್ ಸ್ಟಾಲ್ ತೆರೆದ ನಂತರ ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಖ್ಯಾತಿ ಗಳಿಸಿದರು. ನಂತರ ಆಕೆ &quot;ಬಿಗ್ ಬಾಸ್ OTT 3&quot; ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದರು. ಇತ್ತೀಚೆಗೆ ಈಕೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸೋಶಿಯಲ್&zwnj; ಮೀಡಿಯಾದಲ್ಲಿ ಆರೋಪ ಹೊರಿಸಿದ್ದರು. ಕೊನೆಗೆ ಮಕ್ಕಳಿಗಾಗಿ ನಾನು ಯಾರ ಜೊತೆ ಬೇಕಾದರೂ ಮಲಗಲು ರೆಡಿ ಎಂದೂ ಹೇಳಿದ್ದರು.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/was-offered-rs-50-lakh-to-sleep-with-businessman-claims-bigg-boss-vada-pav-girl-chandrika-dixit-suc-6tm50tl"/>
        </item>
        <item>
            <title><![CDATA[ಪಕೋಡ ಎಣ್ಣೆ ಹೀರದಂತೆ ಬಹಳ ಹೊತ್ತಿನವರೆಗೆ ಗರಿಗರಿಯಾಗಿರಬೇಕೆಂದರೆ ಕೊನೆಯಲ್ಲಿ ಇಷ್ಟು ಮಾಡಿ]]></title>
            <link>https://kannada.asianetnews.com/gallery/food/crunchy-pakoras-add-these-now-5442fey</link>
            <guid isPermaLink="true">https://kannada.asianetnews.com/gallery/food/crunchy-pakoras-add-these-now-5442fey</guid>
            <pubDate>Thu, 09 Apr 2026 11:53:14 +0530</pubDate>
            <description><![CDATA[&lt;p&gt;&lt;strong&gt;Crispy Pakora Secret: &lt;/strong&gt;ನೀವು ಪಕೋಡ ಮಾಡುತ್ತಿದ್ದರೆ ಇವುಗಳನ್ನು ಕಡಲೆ ಹಿಟ್ಟಿಗೆ ಸೇರಿಸಿ.. ಅವು 100% ಗರಿಗರಿಯಾಗಿರುತ್ತವೆ ಮತ್ತು ರುಚಿ ಸೂಪರ್ ಆಗಿರುತ್ತೆ. ಈ ಟಿಪ್ಸ್ ಬಳಸಿ ನೀವು ಆಲೂಗಡ್ಡೆ, ಈರುಳ್ಳಿ, ಕೋಸು ಅಥವಾ ಬಾಳೆಕಾಯಿ.. ಹೀಗೆ ಯಾವುದೇ ತರಕಾರಿಯ ಪಕೋಡ ಅದ್ಭುತವಾಗಿ ಮಾಡಬಹುದು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrdkth0k6txvbvp7fmsmdqs,imgname-thumbnail---2026-04-09t112847.756-1775714822687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Crispy Pakora Secret: &lt;/strong&gt;ನೀವು ಪಕೋಡ ಮಾಡುತ್ತಿದ್ದರೆ ಇವುಗಳನ್ನು ಕಡಲೆ ಹಿಟ್ಟಿಗೆ ಸೇರಿಸಿ.. ಅವು 100% ಗರಿಗರಿಯಾಗಿರುತ್ತವೆ ಮತ್ತು ರುಚಿ ಸೂಪರ್ ಆಗಿರುತ್ತೆ. ಈ ಟಿಪ್ಸ್ ಬಳಸಿ ನೀವು ಆಲೂಗಡ್ಡೆ, ಈರುಳ್ಳಿ, ಕೋಸು ಅಥವಾ ಬಾಳೆಕಾಯಿ.. ಹೀಗೆ ಯಾವುದೇ ತರಕಾರಿಯ ಪಕೋಡ ಅದ್ಭುತವಾಗಿ ಮಾಡಬಹುದು. &amp;nbsp;&lt;/p&gt;&lt;img&gt;&lt;p&gt;ಸಂಜೆ ಚಹಾದ ಜೊತೆಗೆ ಗರಂ ಗರಂ ಪಕೋಡ ತಿಂದ್ರೆ ಎಷ್ಟು ಮಜಾ ಇರುತ್ತೆ ಅಲ್ವಾ?, ಆದರೆ ಪಕೋಡ ಹೋಟೆಲ್&zwnj;ನಲ್ಲಿ ಸಿಗುವಂತೆ ಗರಿಗರಿಯಾಗಿ ಬರದಿದ್ದರೆ ತಿನ್ನಲು ಅಷ್ಟು ರುಚಿಸುವುದಿಲ್ಲ. ಫುಡ್ ಕ್ರಿಯೇಟರ್ ಶಿಲ್ಪಿ ಪಕೋಡ 100% ಗರಿಗರಿಯಾಗಿ ಬರಲು ಮತ್ತು ಟೇಸ್ಟಿಯಾಗಿ ಮಾಡಲು ಕೆಲವು ಅದ್ಭುತ ಹ್ಯಾಕ್ಸ್ ಹಂಚಿಕೊಂಡಿದ್ದು, ಅವು ಇಲ್ಲಿವೆ..&lt;/p&gt;&lt;img&gt;&lt;p&gt;ಬರಿ ಕಡಲೆ ಹಿಟ್ಟು ಮತ್ತು ನೀರು ಹಾಕಿದರೆ ಪಕೋಡ ಅಷ್ಟು ಗರಿಗರಿಯಾಗುವುದಿಲ್ಲ. ಕಡಲೆ ಹಿಟ್ಟಿನ ಜೊತೆಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸೇರಿಸಿ. 2 ಕಪ್ ಕಡಲೆ ಹಿಟ್ಟಿಗೆ 1/4 ಕಪ್ ಅಕ್ಕಿ ಹಿಟ್ಟು ಬಳಸಿ ಸಾಕು. ಇದು ತೇವಾಂಶವನ್ನು ಕಡಿಮೆ ಮಾಡಿ ಪಕೋಡಕ್ಕೆ ಹೆಚ್ಚಿನ ಗರಿಗರಿತನ ನೀಡುತ್ತದೆ.&lt;/p&gt;&lt;img&gt;&lt;p&gt;ಪಕೋಡ ರುಚಿ ಹೆಚ್ಚಿಸಲು ಹಿಟ್ಟಿನ ಮಿಶ್ರಣಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ (ಅಥವಾ ಚಿಲ್ಲಿ ಫ್ಲೇಕ್ಸ್), ಒಂದು ಚಿಟಿಕೆ ಇಂಗು, ಕೈಯಿಂದ ಸ್ವಲ್ಪ ಉಜ್ಜಿದ ಓಂ ಕಾಳು (ಅಜ್ವೈನ್) ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ಇಮ್ಮಡಿಯಾಗುತ್ತದೆ.&lt;/p&gt;&lt;img&gt;&lt;p&gt;ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಂಟಿಲ್ಲದಂತೆ ಕಲಸಿಕೊಳ್ಳಿ. ಮಿಶ್ರಣವು ಹೆಚ್ಚು ತೆಳ್ಳಗಿರಬಾರದು, ಸ್ವಲ್ಪ ಗಟ್ಟಿಯಾಗಿ ಮತ್ತು ನಯವಾಗಿರಲಿ. ಹಿಟ್ಟು ಕಲಸಿದ ತಕ್ಷಣ ಪಕೋಡ ಹಾಕಬೇಡಿ. ಅದನ್ನು ಮುಚ್ಚಿಟ್ಟು ಕನಿಷ್ಠ 10 ನಿಮಿಷ ಸೆಟ್ ಆಗಲು ಬಿಡಿ.&lt;/p&gt;&lt;img&gt;&lt;p&gt;ಆಲೂಗಡ್ಡೆ, ಈರುಳ್ಳಿ ಅಥವಾ ಯಾವುದೇ ತರಕಾರಿಗಳನ್ನು ತೊಳೆದ ತಕ್ಷಣ ಹಿಟ್ಟಿಗೆ ಹಾಕಬೇಡಿ. ತೊಳೆದ ನಂತರ ಒಂದು ಬಟ್ಟೆಯ ಮೇಲೆ ಹರಡಿ ಅವುಗಳ ಮೇಲಿರುವ ನೀರನ್ನು ಒಣಗಲು ಬಿಡಿ. ಇಲ್ಲದಿದ್ದರೆ ತರಕಾರಿಯಲ್ಲಿರುವ ನೀರು ಹಿಟ್ಟನ್ನು ತೆಳ್ಳಗೆ ಮಾಡಿಬಿಡುತ್ತದೆ.&lt;/p&gt;&lt;img&gt;&lt;p&gt;ಪಕೋಡ ಹಾಕುವ ಮುನ್ನ ಸಿದ್ಧಪಡಿಸಿದ ಹಿಟ್ಟಿನ ಮಿಶ್ರಣಕ್ಕೆ 2 ಚಮಚ ಕುದಿಯುವ ಬಿಸಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಪಕೋಡಗಳು ಎಣ್ಣೆ ಕುಡಿಯುವುದಿಲ್ಲ ಮತ್ತು ಬಹಳ ಹೊತ್ತಿನವರೆಗೆ ಗರಿಗರಿಯಾಗಿರುತ್ತವೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Shilpi Agarwal (@foodsandflavorsbyshilpi)&lt;/p&gt;&lt;p&gt;&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/crunchy-pakoras-add-these-now-5442fey"/>
        </item>
        <item>
            <title><![CDATA[ತಿಂಗಳಿಗೆ 5,000 ರೂ.ಉಳಿಸಬೇಕೇ? ಈ  2 ಆಪ್‌ಗಳಿಗೆ 30 ದಿನ ಬೈ-ಬೈ ಹೇಳಿ ನೋಡಿ]]></title>
            <link>https://kannada.asianetnews.com/life/stop-scrolling-start-saving-the-hidden-truth-of-your-daily-online-orders/articleshow-1rigxpt</link>
            <guid isPermaLink="true">https://kannada.asianetnews.com/life/stop-scrolling-start-saving-the-hidden-truth-of-your-daily-online-orders/articleshow-1rigxpt</guid>
            <pubDate>Wed, 08 Apr 2026 21:56:20 +0530</pubDate>
            <description><![CDATA[&lt;p&gt;&lt;strong&gt;How to stop impulse buying on apps: &lt;/strong&gt;ಫೋನ್&zwnj;ನಲ್ಲಿರೋ ಆ ಎರಡು ಆಪ್ ನಿಮ್ಮ ಜೇಬಿಗೆ ಕನ್ನ ಹಾಕುತ್ತಿದೆಯೇ? ದಿನಕ್ಕೆ ಕೇವಲ 100 ರೂಪಾಯಿ ಅಂತ ನಾವು ಮಾಡುವ ಸಣ್ಣ ಖರ್ಚು, ತಿಂಗಳ ಕೊನೆಯಲ್ಲಿ ಸಾವಿರಾರು ರೂಪಾಯಿಗಳ ನಷ್ಟಕ್ಕೆ ಕಾರಣವಾಗುತ್ತಿದೆ ಎಂದರೆ ನೀವು ನಂಬುತ್ತೀರಾ?.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jg8wn41wawbxkftyet0yrj99,imgname-moblie-watching.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ಇಂದಿನ ಡಿಜಿಟಲ್ ಯುಗದಲ್ಲಿ ಬ್ಲಿಂಕಿಟ್ (Blinkit) ಮತ್ತು ಇನ್&zwnj;ಸ್ಟಾಮಾರ್ಟ್ (Instamart) ನಂತಹ ಆಪ್&zwnj;ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಒಂದು ಕ್ಲಿಕ್ ಮಾಡಿದರೆ ಸಾಕು, ಹತ್ತೇ ನಿಮಿಷದಲ್ಲಿ ಸಾಮಾನುಗಳು ಮನೆ ಬಾಗಿಲಿಗೆ ಬರುತ್ತವೆ. ಈ 'ಅನುಕೂಲ' ನಮಗೆ ವರ ಎಂದುಕೊಂಡಿದ್ದೆ. ಆದರೆ, ಈ ಸೌಲಭ್ಯದ ಹಿಂದೆ ನಾವು ಎಷ್ಟು ಹಣ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ತಿಳಿಯಲು ನಾನು ಒಂದು ತಿಂಗಳು ಈ ಆಪ್&zwnj;ಗಳನ್ನು ಬಳಸುವುದನ್ನು ನಿಲ್ಲಿಸಿದೆ. ಈ 30 ದಿನಗಳ ಪ್ರಯೋಗ ನನ್ನ ಕಣ್ಣು ತೆರೆಸುವಂತಿತ್ತು&quot; ಎಂದು ಲೇಖಕರೊಬ್ಬರು ಬರೆದುಕೊಂಡಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಸದ್ದಿಲ್ಲದೆ ಹಣ ಸೋರುವ ಹಾದಿ&lt;/strong&gt;&lt;/h2&gt;&lt;p&gt;ಈ ಆಪ್&zwnj;ಗಳಲ್ಲಿರುವ ಅತಿ ದೊಡ್ಡ ಮೈನಸ್ ಪಾಯಿಂಟ್ ಎಂದರೆ 'ಮಿನಿಮಮ್ ಆರ್ಡರ್ ವ್ಯಾಲ್ಯೂ' (Minimum Order Value). ನನಗೆ ಕೇವಲ 70 ರೂಪಾಯಿಯ ಹಾಲಿನ ಪ್ಯಾಕೆಟ್ ಅಥವಾ ಮೊಸರು ಬೇಕಿದ್ದರೂ, ಡೆಲಿವರಿ ಚಾರ್ಜ್ ತಪ್ಪಿಸಲು ನಾನು ಸುಮ್ಮನೆ ಬೇಕಿಲ್ಲದ ಸ್ನ್ಯಾಕ್ಸ್, ಬಿಸ್ಕೆಟ್ ಅಥವಾ ಚಾಕಲೇಟ್ ಸೇರಿಸಿ ಬಿಲ್ ಅನ್ನು 200 ರೂಪಾಯಿಗೆ ಏರಿಸುತ್ತಿದ್ದೆ. ಹೀಗೆ ಪ್ರತಿ ಆರ್ಡರ್ ಮೇಲೆ ಅನಗತ್ಯವಾಗಿ ವ್ಯರ್ಥವಾಗುತ್ತಿದ್ದ 120-150 ರೂಪಾಯಿಗಳು ತಿಂಗಳ ಕೊನೆಯಲ್ಲಿ ಬರೋಬ್ಬರಿ 4,000 ದಿಂದ 5,500 ರೂಪಾಯಿಗಳ ದೊಡ್ಡ ಮೊತ್ತವಾಗುತ್ತಿತ್ತು! ನಾನು ಆಪ್ ಬಿಟ್ಟು ನೇರವಾಗಿ ಹತ್ತಿರದ ಅಂಗಡಿಗೆ ಹೋದಾಗ, ಬೇಕಾದ್ದನ್ನು ಮಾತ್ರ ಕೊಳ್ಳುವ ಶಿಸ್ತು ಮರಳಿ ಬಂತು. ಇದರಿಂದ ನನ್ನ ಜೇಬಿನಲ್ಲಿ ಹಣ ಉಳಿಯಲಾರಂಭಿಸಿತು.&lt;/p&gt;&lt;p&gt;&lt;strong&gt;ಆರೋಗ್ಯ ಮತ್ತು ನಡಿಗೆ&lt;/strong&gt;ಎಲ್ಲವೂ ಮನೆ ಬಾಗಿಲಿಗೆ ಬರುವಾಗ ನಮ್ಮ ದೈಹಿಕ ನಡಿಗೆ ಸಂಪೂರ್ಣವಾಗಿ ನಿಂತುಹೋಗಿತ್ತು. ಈಗ ಸಣ್ಣ ಪುಟ್ಟ ವಸ್ತುಗಳಿಗೂ ಗಲ್ಲಿಯ ಕೊನೆಯಲ್ಲಿರುವ ಅಂಗಡಿಗೆ ನಡೆದು ಹೋಗುವುದು ಅನಿವಾರ್ಯವಾಯಿತು. ಜಿಮ್ ಅಥವಾ ವರ್ಕ್&zwnj;ಔಟ್ ಹೊರತಾಗಿ ಈ ಸಣ್ಣ ನಡಿಗೆಯು ನನ್ನ ದೇಹಕ್ಕೆ ಅಗತ್ಯವಾದ ಚಟುವಟಿಕೆ ನೀಡಿತು. ಜೊತೆಗೆ, ಮಧ್ಯರಾತ್ರಿಯಲ್ಲಿ ಹಠಾತ್ತನೆ ಹಸಿವಾದಾಗ (Cravings) ತಕ್ಷಣ ಆಪ್ ಓಪನ್ ಮಾಡಿ ಐಸ್&zwnj;ಕ್ರೀಮ್ ಅಥವಾ ಜಂಕ್ ಫುಡ್ ಆರ್ಡರ್ ಮಾಡುವ ಅಭ್ಯಾಸ ತಪ್ಪಿತು. ಆಪ್ ಇಲ್ಲದಿದ್ದಾಗ ಮನಸ್ಸನ್ನು ನಿಯಂತ್ರಿಸುವುದು ಸುಲಭವಾಯಿತು, ಇದು ನನ್ನ ಉತ್ತಮ ಆರೋಗ್ಯಕ್ಕೆ ಹಾದಿ ಮಾಡಿಕೊಟ್ಟಿತು. ಅನಗತ್ಯ ಕ್ಯಾಲೋರಿ ಸೇವನೆಯಿಂದ ನಾನು ಪಾರಾದೆ.&lt;/p&gt;&lt;h3&gt;&lt;strong&gt;ಮರಳಿ ಬಂದ ಯೋಜನೆ ಮತ್ತು ತಾಜಾತನ&lt;/strong&gt;&lt;/h3&gt;&lt;p&gt;ಈ ಆಪ್&zwnj;ಗಳಿದ್ದಾಗ ಯಾವುದನ್ನೂ ಪ್ಲಾನ್ ಮಾಡದೆ ಬೇಕಾದಾಗ ಆರ್ಡರ್ ಮಾಡುತ್ತಿದ್ದೆ. ಆದರೆ ಆಪ್ ಬಿಟ್ಟ ಮೇಲೆ ವಾರಕ್ಕೆ ಬೇಕಾದ ಸಾಮಾನುಗಳ ಪಟ್ಟಿ ಮಾಡುವುದು ಮತ್ತು ಮಾರುಕಟ್ಟೆಗೆ ಹೋಗಿ ತಾಜಾ ತರಕಾರಿಗಳನ್ನು ಆರಿಸುವುದು ಮತ್ತೆ ರೂಢಿಯಾಯಿತು. ಮಾರುಕಟ್ಟೆಯಲ್ಲಿ ರೈತರಿಂದ ನೇರವಾಗಿ ತರಕಾರಿ ಕೊಳ್ಳುವುದು ಆಪ್&zwnj;ಗಿಂತ ಅಗ್ಗವಷ್ಟೇ ಅಲ್ಲ, ಹೆಚ್ಚು ತಾಜಾ ಕೂಡ ಆಗಿತ್ತು. ಚೌಕಾಸಿ ಮಾಡುವ ಆ ಹಳೆಯ ಭಾರತೀಯ ಅಭ್ಯಾಸ ಮತ್ತು ಸ್ಥಳೀಯ ಜನರೊಡನೆ ಬೆರೆಯುವುದು ನನಗೆ ಸಖತ್ ಖುಷಿ ನೀಡಿತು. ಇದು ಕೇವಲ ವ್ಯಾಪಾರವಲ್ಲ, ಒಂದು ಸಾಮಾಜಿಕ ಸಂಬಂಧದಂತೆಯೂ ಕೆಲಸ ಮಾಡಿತು.&lt;/p&gt;&lt;p&gt;&lt;strong&gt;ಕೊನೆಯ ಮಾತು..&lt;/strong&gt;ಈ ಆಪ್&zwnj;ಗಳು ನಮ್ಮ ಸಮಯ ಉಳಿಸುತ್ತವೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇವು ನಮ್ಮ ಅತಿಯಾದ ಸೋಮಾರಿತನಕ್ಕೆ ಮತ್ತು ಅನಗತ್ಯ ಖರ್ಚಿಗೆ ದಾರಿಯಾಗಬಾರದು. 30 ದಿನಗಳ ನಂತರ ನಾನು ಈಗ ಅನಿವಾರ್ಯವಿದ್ದಾಗ ಮಾತ್ರ ಈ ಆಪ್&zwnj;ಗಳನ್ನು ಬಳಸುತ್ತಿದ್ದೇನೆ. ಜೀವನ ಸೌಲಭ್ಯದಿಂದ ಮಾತ್ರವಲ್ಲ, ನಾವು ಮಾಡುವ ಸಣ್ಣ ಸಣ್ಣ ಶಿಸ್ತಿನ ನಿರ್ಧಾರಗಳಿಂದ ಸುಂದರವಾಗುತ್ತದೆ. ನಮ್ಮ ಜೇಬು ಮತ್ತು ಆರೋಗ್ಯ ಎರಡೂ ನಮ್ಮ ಕೈಯಲ್ಲೇ ಇದೆ!&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/life/stop-scrolling-start-saving-the-hidden-truth-of-your-daily-online-orders/articleshow-1rigxpt"/>
        </item>
        <item>
            <title><![CDATA[ಈ ಎಲೆಯಿಂದ ಒಂದೇ ರಾತ್ರಿಯಲ್ಲಿ ಬಿಳಿ ಕೂದಲು ಕಪ್ಪಾಗುವುದು ಗ್ಯಾರಂಟಿ!]]></title>
            <link>https://kannada.asianetnews.com/gallery/fashion/bhringraj-the-secret-to-naturally-black-hair-a1hzwgi</link>
            <guid isPermaLink="true">https://kannada.asianetnews.com/gallery/fashion/bhringraj-the-secret-to-naturally-black-hair-a1hzwgi</guid>
            <pubDate>Wed, 08 Apr 2026 18:11:00 +0530</pubDate>
            <description><![CDATA[&lt;p&gt;Bhringraj for grey hair: ಇಂತಹ ಸಮಯದಲ್ಲಿ ನಮ್ಮ ಪೂರ್ವಜರು ಬಳಸುತ್ತಿದ್ದ ಈ ಸೊಪ್ಪು ಪವಾಡದಂತೆ ಕೆಲಸ ಮಾಡುತ್ತದೆ. ಕೂದಲಿನ ನೈಸರ್ಗಿಕ ಬಣ್ಣವನ್ನು ಮರಳಿ ತರುವ ಈ ಅದ್ಭುತ ಮನೆಮದ್ದಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0c024k4mnxfskdr7kgrnpph,imgname-bhringraj-oil--1--1752749380196.jpg" type="image/jpeg" height="390" width="690"/>
            <content:encoded><![CDATA[&lt;p&gt;Bhringraj for grey hair: ಇಂತಹ ಸಮಯದಲ್ಲಿ ನಮ್ಮ ಪೂರ್ವಜರು ಬಳಸುತ್ತಿದ್ದ ಈ ಸೊಪ್ಪು ಪವಾಡದಂತೆ ಕೆಲಸ ಮಾಡುತ್ತದೆ. ಕೂದಲಿನ ನೈಸರ್ಗಿಕ ಬಣ್ಣವನ್ನು ಮರಳಿ ತರುವ ಈ ಅದ್ಭುತ ಮನೆಮದ್ದಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂದಿನ ವೇಗದ ಜೀವನದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ 'ಅಕಾಲಿಕ ನರೆ' (ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು). 25 ವರ್ಷ ತುಂಬುವ ಮೊದಲೇ ತಲೆ ಕೂದಲು ಬಿಳಿಯಾಗುತ್ತಿದ್ದರೆ, ಜನರು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪ್ರಾಡಕ್ಟ್&zwnj;ಗಳ ಮೊರೆ ಹೋಗುತ್ತಾರೆ. ಇವು ತಾತ್ಕಾಲಿಕವಾಗಿ ಬಣ್ಣ ನೀಡಿದರೂ, ಚರ್ಮದ ಅಲರ್ಜಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.&lt;/p&gt;&lt;img&gt;&lt;p&gt;ಈ ಹಿನ್ನೆಲೆಯಲ್ಲಿ, ನಮ್ಮ ಪೂರ್ವಜರು ಬಳಸುತ್ತಿದ್ದ ಹಳೆಯದಾದ ಒಂದು ಆಯುರ್ವೇದ ಚಿಕಿತ್ಸೆ ಈಗ ಮತ್ತೆ ಸಖತ್ ಟ್ರೆಂಡ್ ಆಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು, ಕೇವಲ ಒಂದು ಎಲೆಯಿಂದಲೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು.&lt;/p&gt;&lt;img&gt;&lt;p&gt;ಹೌದು. ಆಯುರ್ವೇದ ಶಾಸ್ತ್ರದಲ್ಲಿ 'ಭೃಂಗರಾಜ' ಎಂದು ಕರೆಯಲ್ಪಡುವ ಇದು ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಲ್ಲದು. ಇದರಲ್ಲಿರುವ ಅಂಶಗಳು ನೈಸರ್ಗಿಕವಾಗಿ ಕೂದಲಿಗೆ ಕಪ್ಪು ಬಣ್ಣ ನೀಡುವ 'ಮೆಲನಿನ್' ಉತ್ಪತ್ತಿಯನ್ನು ಹೆಚ್ಚಿಸುತ್ತವೆ. ಸಂಶೋಧನೆಗಳ ಪ್ರಕಾರ, ಈ ಗಿಡದ ಹಳದಿ ಹೂವುಗಳು ಕೂದಲಿನ ಸಂರಕ್ಷಣೆಯಲ್ಲಿ ತುಂಬಾ ಸಹಕಾರಿ.&lt;/p&gt;&lt;img&gt;&lt;p&gt;ಈ ಸೊಪ್ಪಿನ ಜೊತೆಗೆ ಸ್ವಲ್ಪ ಗೋರಂಟಿ ಮತ್ತು ಆಮ್ಲಾ ಪುಡಿಯನ್ನು ಸೇರಿಸಿ ಮೆತ್ತಗೆ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ದಿನ ಪೂರ್ತಿ ಹಾಗೆಯೇ ಬಿಡಿ. ಮರುದಿನ ಇದನ್ನು ತಲೆಗೆ ಹಚ್ಚಿ, ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ. ನೆನಪಿರಲಿ, ಇದನ್ನು ಕೇವಲ ಮೇಲೆ ಮೇಲೆ ಹಚ್ಚದೆ, ಕೂದಲಿನ ಬುಡಕ್ಕೆ ತಲುಪುವಂತೆ ಹಚ್ಚಬೇಕು. ಆಗಲೇ ಉತ್ತಮ ಬದಲಾವಣೆ ಕಾಣಲು ಸಾಧ್ಯ.&lt;/p&gt;&lt;img&gt;&lt;p&gt;&quot;ಇದು ನೈಸರ್ಗಿಕ ಮದ್ದಾದ್ದರಿಂದ ಉತ್ತಮ ಫಲಿತಾಂಶಕ್ಕೆ ಕೆಲವು ದಿನಗಳ ಕಾಲ ಬಳಸಬೇಕು&quot; &amp;nbsp;ಈ ಮಾಹಿತಿಯು ಕೇವಲ ಅರಿವಿಗಾಗಿ ಮಾತ್ರ. ತಜ್ಞರು ನೀಡಿದ ಮಾಹಿತಿಯ ಆಧಾರದ ಮೇಲೆ ಇದನ್ನು ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳಿದ್ದರೆ ನೇರವಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.&amp;nbsp;&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/fashion/bhringraj-the-secret-to-naturally-black-hair-a1hzwgi"/>
        </item>
        <item>
            <title><![CDATA[ಮಲೆನಾಡಿನ ಮಳೆ, ಮಣ್ಣಿನ ಘಮ ಹೊತ್ತ ಆ ಮುಳ್ಳು ಮುಳ್ಳಿನ 'ಮಡಹಾಗಲಕಾಯಿ' ಎಂಬ ಅದ್ಭುತ; ಚಟ್ನಿ ಹೀಗೆ ಮಾಡಿ!]]></title>
            <link>https://kannada.asianetnews.com/food/here-is-the-perfect-chutney-recipe-of-spiny-gourd-called-malnad-rainy-season-marvel-the-spiky-madahagalakayi/articleshow-i6qfg6l</link>
            <guid isPermaLink="true">https://kannada.asianetnews.com/food/here-is-the-perfect-chutney-recipe-of-spiny-gourd-called-malnad-rainy-season-marvel-the-spiky-madahagalakayi/articleshow-i6qfg6l</guid>
            <pubDate>Wed, 08 Apr 2026 17:22:05 +0530</pubDate>
            <description><![CDATA[&lt;p&gt;ನಿಸರ್ಗ ನಮಗೆ ಕಾಲಕಾಲಕ್ಕೆ ತಕ್ಕಂತೆ ಅಗೆಯದ ನಿಧಿಗಳನ್ನು ನೀಡುತ್ತಾ ಇರುತ್ತದೆ. ಮಡಹಾಗಲಕಾಯಿ ಕೇವಲ ಒಂದು ತರಕಾರಿಯಲ್ಲ, ಅದು ಮಲೆನಾಡಿನ ಸಂಸ್ಕೃತಿ ಮತ್ತು ಆರೋಗ್ಯಕರ ಜೀವನಶೈಲಿಯ ಒಂದು ಭಾಗ. ವರ್ಷ ಪೂರ್ತಿ ಸಿಗದ ಈ ಅಪರೂಪದ ತರಕಾರಿ ಮಾರುಕಟ್ಟೆಯಲ್ಲಿ ಕಂಡರೆ ಖಂಡಿತ ಬಿಡಬೇಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpexes0reetn11g6vyx4wnd,imgname-spiny-gourd-chutney-1775649078048.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಹಾಗಲಕಾಯಿ ಮ್ಯಾಜಿಕ್ ನೋಡಿ&lt;/strong&gt;&lt;/p&gt;&lt;p&gt;ಮಲೆನಾಡು ಅಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಜಿನುಗುವ ಮಳೆ, ಹಸಿರು ಹೊದ್ದ ಬೆಟ್ಟಗಳು ಮತ್ತು ಅಲ್ಲಿನ ವಿಶಿಷ್ಟ ಅಡುಗೆಗಳು. ಈ ಮಳೆಗಾಲದ ಸಮಯದಲ್ಲಿ ಮಲೆನಾಡಿನ ಮಾರುಕಟ್ಟೆಗಳಲ್ಲಿ ಅಥವಾ ಹಳ್ಳಿಗಳ ಬೇಲಿಯ ಬದಿಯಲ್ಲಿ ಒಂದು ವಿಚಿತ್ರವಾಗಿ ಕಾಣುವ ಪುಟ್ಟ ತರಕಾರಿ ಕಾಣಸಿಗುತ್ತದೆ. ಅದೇ ನಮ್ಮ ಇಂದಿನ ಕಥಾನಾಯಕ&mdash; 'ಮಡಹಾಗಲಕಾಯಿ' (Spiny Gourd).&lt;/p&gt;&lt;p&gt;ನೋಡಲು ಪುಟ್ಟ ಮುಳ್ಳುಹಂದಿಯಂತೆ ಕಾಣುವ ಈ ತರಕಾರಿ, ತನ್ನ ಮೈಮೇಲೆಲ್ಲಾ ಮೃದುವಾದ ಮುಳ್ಳುಗಳನ್ನು ಹೊದ್ದುಕೊಂಡಿರುತ್ತದೆ. ಮೊದಲ ಬಾರಿ ನೋಡುವವರಿಗೆ ಇದು 'ಹಾಗಲಕಾಯಿ'ಯ ಜಾತಿಗೆ ಸೇರಿರುವುದರಿಂದ &quot;ಅಬ್ಬಾ! ಇದು ಎಷ್ಟು ಕಹಿ ಇರಬಹುದು?&quot; ಎಂಬ ಭಯ ಕಾಡುವುದು ಸಹಜ. ಆದರೆ ಇಲ್ಲೇ ಇದೆ ಅಸಲಿ ಟ್ವಿಸ್ಟ್! ಹೆಸರಿನಲ್ಲಿ ಮಾತ್ರ 'ಹಾಗಲಕಾಯಿ' ಇದೆಯೇ ಹೊರತು, ರುಚಿಯಲ್ಲಿ ಇದು ಕಹಿಯೇ ಅಲ್ಲ. ಬದಲಿಗೆ ಒಂದು ರೀತಿಯ ಮಣ್ಣಿನ ಸೊಗಡಿನ, ಮೃದುವಾದ ಮತ್ತು ಅದ್ಭುತ ರುಚಿಯನ್ನು ಹೊಂದಿರುವ ತರಕಾರಿ ಇದು.&lt;/p&gt;&lt;h2&gt;ಆರೋಗ್ಯದ ಗಣಿ ಈ ಮಡಹಾಗಲಕಾಯಿ:&lt;/h2&gt;&lt;p&gt;ನಮ್ಮ ಇಂದಿನ ವೇಗದ ಜೀವನಶೈಲಿಯಲ್ಲಿ (Lifestyle) ನಮಗೆ ಬೇಕಾಗಿರುವುದು ಇಂತಹ ನೈಸರ್ಗಿಕ ಸೂಪರ್-ಫುಡ್&zwnj;ಗಳು. ಇದರಲ್ಲಿ ನಾರಿನಂಶ (Fiber) ಹೇರಳವಾಗಿದೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಆಂಟಿಆಕ್ಸಿಡೆಂಟ್&zwnj;ಗಳು ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ವಿಶೇಷವಾಗಿ ಮಧುಮೇಹ (Diabetes) ಇರುವವರಿಗೆ ಇದು ಪ್ರಕೃತಿ ನೀಡಿದ ವರದಾನವಿದ್ದಂತೆ. ಮಳೆಗಾಲದಲ್ಲಿ ಕಾಡುವ ಸಣ್ಣಪುಟ್ಟ ಕಾಯಿಲೆಗಳಿಗೆ ಈ ತರಕಾರಿ ಒಂದು ನೈಸರ್ಗಿಕ ಗುರಾಣಿಯಾಗಿ ಕೆಲಸ ಮಾಡುತ್ತದೆ.&lt;/p&gt;&lt;p&gt;ಅಡುಗೆ ಮನೆಯಲ್ಲಿ ಇದರ ಮ್ಯಾಜಿಕ್:&lt;/p&gt;&lt;p&gt;ಮಡಹಾಗಲಕಾಯಿಯಿಂದ ಮಾಡುವ ಪಲ್ಯ ಅದರ ಕ್ರಂಚಿ ಸ್ವಭಾವದಿಂದಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು ಬಿಸಿ ಬಿಸಿ ಅನ್ನಕ್ಕೆ ಈ ಕಾಯಿಯ ಸಾಂಬಾರ್ ಇದ್ದರೆ ಆ ಮಳೆಯ ಸಂಜೆ ಇನ್ನಷ್ಟು ಸುಂದರವಾಗುತ್ತದೆ. ಆದರೆ, ನಿಜವಾದ ಮಲೆನಾಡಿನ ರುಚಿಯನ್ನು ಸವಿಯಬೇಕೆಂದರೆ ನೀವು ಇದರ 'ಚಟ್ನಿ' ಮಾಡಲೇಬೇಕು.&lt;/p&gt;&lt;p&gt;ಇಲ್ಲಿ ನಿಮಗಾಗಿ ಒಂದು ಸಣ್ಣ 'ಸೀಕ್ರೆಟ್ ಟಿಪ್': ಮಡಹಾಗಲಕಾಯಿಯನ್ನು ಹುರಿದು ಚಟ್ನಿ ಮಾಡುವಾಗ, ಅದಕ್ಕೆ ಸ್ವಲ್ಪ ಬಿಳಿ ಎಳ್ಳು ಮತ್ತು ಜೀರಿಗೆಯನ್ನು ಸೇರಿಸಿ ನೋಡಿ. ಆ ಎಳ್ಳಿನ ನಟ್ಟಿ (Nutty) ರುಚಿ ಮತ್ತು ಜೀರಿಗೆಯ ಪರಿಮಳ ಚಟ್ನಿಯ ಸ್ವಾದವನ್ನು ಎಲ್ಲಿಗೋ ಕೊಂಡೊಯ್ಯುತ್ತದೆ. ಬಿಸಿ ಅನ್ನಕ್ಕೆ ಒಂದು ಚಮಚ ತುಪ್ಪ ಮತ್ತು ಈ ಚಟ್ನಿ ಸೇರಿಸಿ ತಿಂದರೆ, ಆ ಕ್ಷಣಕ್ಕೆ ನೀವು ಯಾವುದೇ ಪಂಚತಾರಾ ಹೋಟೆಲ್ ಅಡುಗೆಯನ್ನು ಮರೆತುಬಿಡುತ್ತೀರಿ!&lt;/p&gt;&lt;h3&gt;ಕೊನೆಯ ಮಾತು:&lt;/h3&gt;&lt;p&gt;ನಿಸರ್ಗ ನಮಗೆ ಕಾಲಕಾಲಕ್ಕೆ ತಕ್ಕಂತೆ ಅಗೆಯದ ನಿಧಿಗಳನ್ನು ನೀಡುತ್ತಾ ಇರುತ್ತದೆ. ಮಡಹಾಗಲಕಾಯಿ ಕೇವಲ ಒಂದು ತರಕಾರಿಯಲ್ಲ, ಅದು ಮಲೆನಾಡಿನ ಸಂಸ್ಕೃತಿ ಮತ್ತು ಆರೋಗ್ಯಕರ ಜೀವನಶೈಲಿಯ ಒಂದು ಭಾಗ. ವರ್ಷ ಪೂರ್ತಿ ಸಿಗದ ಈ ಅಪರೂಪದ ತರಕಾರಿ ಮಾರುಕಟ್ಟೆಯಲ್ಲಿ ಕಂಡರೆ ಖಂಡಿತ ಬಿಡಬೇಡಿ. ಅದನ್ನು ಮನೆಗೆ ತಂದು, ಪ್ರೀತಿಯಿಂದ ಅಡುಗೆ ಮಾಡಿ, ಆರೋಗ್ಯದ ಜೊತೆಗೆ ರುಚಿಯನ್ನೂ ಆಸ್ವಾದಿಸಿ.&lt;/p&gt;&lt;p&gt;ನೆನಪಿಡಿ, ಪ್ರಕೃತಿಯ ಜೊತೆಗಿನ ನಂಟು ನಮ್ಮನ್ನು ಸದಾ ಲವಲವಿಕೆಯಿಂದ ಇಟ್ಟಿರುತ್ತದೆ!&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/food/here-is-the-perfect-chutney-recipe-of-spiny-gourd-called-malnad-rainy-season-marvel-the-spiky-madahagalakayi/articleshow-i6qfg6l"/>
        </item>
        <item>
            <title><![CDATA[ಲಂಚ್ ಬ್ಯಾಗ್‌ನಲ್ಲಿರುವ ಜಿಡ್ಡು, ಕಲೆ, ವಾಸನೆ ಹೋಗಲಾಡಿಸಲು ಇಲ್ಲಿದೆ ಸ್ಮಾರ್ಟ್ ಐಡಿಯಾ]]></title>
            <link>https://kannada.asianetnews.com/gallery/women/6-easy-tips-to-deep-clean-your-lunch-bag-and-keep-it-fresh-6s8kga9</link>
            <guid isPermaLink="true">https://kannada.asianetnews.com/gallery/women/6-easy-tips-to-deep-clean-your-lunch-bag-and-keep-it-fresh-6s8kga9</guid>
            <pubDate>Wed, 08 Apr 2026 17:03:39 +0530</pubDate>
            <description><![CDATA[&lt;p&gt;Lunch bag cleaning: ಕೆಲಸಕ್ಕೆ, ಕಾಲೇಜಿಗೆ ಲಂಚ್ ಬ್ಯಾಗ್ ಒಯ್ಯುತ್ತೇವೆ. ಆದರೆ ಬ್ಯಾಗ್ ಒಳಗೆ ಆಗುವ ಸಣ್ಣ ಸಣ್ಣ ಸೋರಿಕೆಗಳು, ಜಿಡ್ಡು ಮತ್ತು ತೇವಾಂಶದಿಂದಾಗಿ ಬ್ಯಾಗ್ ಅಶುಚಿಯಾಗಿ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಅದು ಯಾವಾಗಲೂ ಫ್ರೆಶ್ ಆಗಿರುವಂತೆ ನೋಡಿಕೊಳ್ಳಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kexqg9fg2s046bz62bjhmexq,imgname-stainless-steal-lunch-box-1768376772080.jpg" type="image/jpeg" height="390" width="690"/>
            <content:encoded><![CDATA[&lt;p&gt;Lunch bag cleaning: ಕೆಲಸಕ್ಕೆ, ಕಾಲೇಜಿಗೆ ಲಂಚ್ ಬ್ಯಾಗ್ ಒಯ್ಯುತ್ತೇವೆ. ಆದರೆ ಬ್ಯಾಗ್ ಒಳಗೆ ಆಗುವ ಸಣ್ಣ ಸಣ್ಣ ಸೋರಿಕೆಗಳು, ಜಿಡ್ಡು ಮತ್ತು ತೇವಾಂಶದಿಂದಾಗಿ ಬ್ಯಾಗ್ ಅಶುಚಿಯಾಗಿ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಅದು ಯಾವಾಗಲೂ ಫ್ರೆಶ್ ಆಗಿರುವಂತೆ ನೋಡಿಕೊಳ್ಳಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್. &amp;nbsp;&lt;/p&gt;&lt;img&gt;&lt;p&gt;ನಾವು ಪ್ರತಿದಿನ ಕೆಲಸಕ್ಕೆ ಅಥವಾ ಕಾಲೇಜಿಗೆ ಲಂಚ್ ಬ್ಯಾಗ್ ತೆಗೆದುಕೊಂಡು ಹೋಗುತ್ತೇವೆ. ಊಟದ ಸಾರು ಅಥವಾ ಎಣ್ಣೆ ಸೋರಿ ಬ್ಯಾಗ್ ಒಳಗೆ ಕಲೆ ಮತ್ತು ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಬರೀ ಬಟ್ಟೆಯಿಂದ ಒರೆಸಿದರೆ ಈ ವಾಸನೆ ಹೋಗುವುದಿಲ್ಲ. ಹಾಗಾದರೆ ಬ್ಯಾಗ್ ಅನ್ನು ಡೀಪ್ ಆಗಿ ಸ್ವಚ್ಛಗೊಳಿಸುವುದು ಹೇಗೆ? ಈ ಸರಳ ಹಂತ ಅನುಸರಿಸಿ.&lt;/p&gt;&lt;img&gt;&lt;p&gt;ಬ್ಯಾಗ್&zwnj;ನ ಮೂಲೆಗಳಲ್ಲಿ ಮತ್ತು ಹೊಲಿಗೆಯ ಎಳೆಗಳ ಮಧ್ಯೆ ಸಣ್ಣದಾದ ಅನ್ನದ ಕಣಗಳು ಅಥವಾ ಸಾಂಬಾರ್ ಕಲೆಗಳು ಸಿಲುಕಿಕೊಂಡಿರುತ್ತವೆ. ಒಂದು ಹಳೆಯ ಟೂತ್&zwnj;ಬ್ರಷ್ ತೆಗೆದುಕೊಂಡು, ಸ್ವಲ್ಪ ಸೋಪ್ ನೀರಿನಲ್ಲಿ ಅದ್ದಿ ಆ ಮೂಲೆಗಳನ್ನು ಉಜ್ಜಿ ಸ್ವಚ್ಛಗೊಳಿಸಿ.&lt;/p&gt;&lt;img&gt;&lt;p&gt;ಒಂದು ವೇಳೆ ಬ್ಯಾಗ್&zwnj;ನಲ್ಲಿ ಹಾಲು ಅಥವಾ ಮಾಂಸದ ಸಾರಿನ ಕಲೆಗಳಿದ್ದರೆ, ಸಾಮಾನ್ಯ ಸೋಪಿಗಿಂತ ಎನ್&zwnj;ಜೈಮ್ ಕ್ಲೀನರ್ ಹೆಚ್ಚು ಪರಿಣಾಮಕಾರಿ. ಇದು ಕೆಟ್ಟ ವಾಸನೆಯನ್ನು ಹರಡದಂತೆ ತಡೆದು, ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.&lt;/p&gt;&lt;img&gt;&lt;p&gt;ಬ್ಯಾಗ್ ಅನ್ನು ನೀರಿನಲ್ಲಿ ನೆನೆಸಲು ಸಾಧ್ಯವಾಗದಿದ್ದರೆ, ಬಿಸಿ ನೀರಿನ ಆವಿಯನ್ನು ಬಳಸಿ. ಇದು ಬ್ಯಾಗ್&zwnj;ನ ಒಳಭಾಗದಲ್ಲಿ ಅಂಟಿಕೊಂಡಿರುವ ಜಿಡ್ಡನ್ನು ಸಡಿಲಗೊಳಿಸುತ್ತದೆ ಮತ್ತು ಕ್ರಿಮಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಬ್ಯಾಗ್ ಒಳಗೆ ವಾಸನೆ ಹೋಗದಿದ್ದರೆ, ಒಂದು ಸಣ್ಣ ಬಟ್ಟಲಿನಲ್ಲಿ ಅಡುಗೆ ಸೋಡಾ ಅಥವಾ ಇದ್ದಿಲಿನ ಚೂರನ್ನು ಇಟ್ಟು ಬ್ಯಾಗ್&zwnj;ನ ಜಿಪ್ ಹಾಕಿ ರಾತ್ರಿಯಿಡೀ ಇಡಿ. ಇದು ಬ್ಯಾಗ್&zwnj;ನಲ್ಲಿರುವ ಎಲ್ಲಾ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ.&lt;/p&gt;&lt;img&gt;&lt;p&gt;ಜಿಪ್&zwnj;ಗಳಲ್ಲಿ ಜಿಗುಟಾದ ಅಂಶವಿದ್ದರೆ ಅದು ಸರಿಯಾಗಿ ಕೆಲಸ ಮಾಡುವುದಿಲ್ಲ. ಇಯರ್ ಬಡ್ಸ್ ಬಳಸಿ ಜಿಪ್&zwnj;ನ ಹಲ್ಲುಗಳನ್ನು ಸ್ವಚ್ಛಗೊಳಿಸಿ. ನಂತರ ಸ್ವಲ್ಪ ವ್ಯಾಸಲಿನ್ ಅಥವಾ ಮೇಣವನ್ನು ಹಚ್ಚಿದರೆ ಜಿಪ್ ಸುಲಭವಾಗಿ ರನ್ ಆಗುತ್ತದೆ.&lt;/p&gt;&lt;img&gt;&lt;p&gt;ಬ್ಯಾಗ್ ತೊಳೆದ ನಂತರ ಅಥವಾ ಸ್ವಚ್ಛಗೊಳಿಸಿದ ನಂತರ ಅದನ್ನು ಉಲ್ಟಾ ಮಾಡಿ (ಒಳಗಿನ ಭಾಗ ಹೊರಗೆ ಬರುವಂತೆ) ಸ್ವಲ್ಪ ಸಮಯ ಬಿಸಿಲಿನಲ್ಲಿ ಮತ್ತು ಗಾಳಿಯಲ್ಲಿ ಇಡಿ. ಸೂರ್ಯನ ಕಿರಣಗಳು ನೈಸರ್ಗಿಕವಾಗಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/women/6-easy-tips-to-deep-clean-your-lunch-bag-and-keep-it-fresh-6s8kga9"/>
        </item>
        <item>
            <title><![CDATA[ಯಾವುದೇ ಗಿಡವಾಗಲಿ ರಾಕೆಟ್ ವೇಗದಲ್ಲಿ ಬೆಳೆಯಲು ಈ ಮಾತ್ರೆ ಬಳಸಿ]]></title>
            <link>https://kannada.asianetnews.com/webstories/women/boost-plant-growth-with-a-single-disprin-tablet-q5ye5ku</link>
            <guid isPermaLink="true">https://kannada.asianetnews.com/webstories/women/boost-plant-growth-with-a-single-disprin-tablet-q5ye5ku</guid>
            <pubDate>Wed, 08 Apr 2026 15:48:12 +0530</pubDate>
            <description><![CDATA[&lt;p&gt;Faster plant growth tips: ನಮ್ಮ ಮನೆಯ ಗಿಡಗಳು ಕೆಲವೊಮ್ಮೆ ಸರಿಯಾಗಿ ಬೆಳೆಯದೆ ಕುಂಠಿತವಾಗುತ್ತವೆ. ಎಷ್ಟೇ ಗೊಬ್ಬರ ಹಾಕಿದರೂ ಫಲಿತಾಂಶ ಸಿಗದಿದ್ದಾಗ, ಕೊನೆಗೆ ಮನೆಯಲ್ಲಿರುವ ಸಾಮಾನ್ಯ 'ಡಿಸ್ಪ್ರಿನ್' ಅಥವಾ 'ಆಸ್ಪಿರಿನ್' ಮಾತ್ರೆ ಗಿಡಗಳಿಗೆ ಮರುಜೀವ ನೀಡಬಲ್ಲದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01eyqvv2gs2s34hrqfn44p4hye,imgname-gettyimages-689227195-170667a-jpg.jpg" type="image/jpeg" height="390" width="690"/>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/women/boost-plant-growth-with-a-single-disprin-tablet-q5ye5ku"/>
        </item>
        <item>
            <title><![CDATA[ಈ ಪೌಡರ್ ತಗೊಳ್ತಾರಾ ನಟಿ ಸಂಜನಾ ಆನಂದ್? ಇಷ್ಟು ಕಾಲದ ಬಳಿಕ ಈಗ ಸತ್ಯ ಬಯಲಾಯ್ತು!]]></title>
            <link>https://kannada.asianetnews.com/sandalwood/actress-sanjana-anand-take-this-powder-or-not-the-truth-is-finally-revealed/articleshow-t0pgc45</link>
            <guid isPermaLink="true">https://kannada.asianetnews.com/sandalwood/actress-sanjana-anand-take-this-powder-or-not-the-truth-is-finally-revealed/articleshow-t0pgc45</guid>
            <pubDate>Wed, 08 Apr 2026 15:42:18 +0530</pubDate>
            <description><![CDATA[&lt;p&gt;ಇಂಜಿನಿಯರಿಂಗ್ ಪದವೀಧರೆಯಾದ ಸಂಜನಾ ಭರತನಾಟ್ಯ ಕಲಾವಿದೆಯೂ ಹೌದು. ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಲ್ಲೂ ನಟಿಸಿದ್ದಾರೆ. ಸದ್ಯಕ್ಕೆ ನಟಿ ಸಂಜನಾ ಆನಂದ್ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ. ಸದ್ಯಕ್ಕೆ ನಟಿ ಸಂಜನಾ ಆನಂದ್ ಈ ಸೀಕ್ರೆಟ್ ಹೊರಬಂದಿದ್ದು ಸಖತ್ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp8bsfgbn1rmednj7z9byef,imgname-sanjana-anand-1775642207728.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಜನಾ ಆನಂದ್ ಪ್ರೊಟೀನ್ ಪೌಡರ್ ತಗೋತಾರಾ?&lt;/strong&gt;&lt;/p&gt;&lt;p&gt;ನಟಿ ಸಂಜನಾ ಆನಂದ್ (Sanjana Anand) ಸಂದರ್ಶನವೊಂದು ವೈರಲ್ ಆಗಿದೆ. ಅದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಸಂಜನಾ 'ನನಗೆ ಯಾವುದೇ ಪಾತ್ರಕ್ಕೆ ಈಗಿರೋದಕ್ಕಿಂತ ಹೆಚ್ಚು ಸ್ಲಿಮ್ ಆಗೋದಕ್ಕೆ ಅಥವಾ ಹೆಚ್ಚು ಫ್ಯಾಟೋ ಆಗೋದಕ್ಕೆ ಯಾವುದೇ ಸಿನಿಮಾದ ನಿರ್ದೇಶಕರು ಹೇಳಿಲ್ಲ. ಸೋ, ನನಗೆ ಪಾತ್ರಕ್ಕೆ ತಕ್ಕಂತೆ ದೇಹವನ್ನು ಬದಲಾಯಿಸುವ ಅಗತ್ಯ ನನಗೆ ಇಲ್ಲಿಯವರೆಗೂ ಎದುರಾಗಿಲ್ಲ. ಆದರೆ, ನಾನು ಮೊದಲೆಲ್ಲಾ ವೇ-ಪ್ರೊಟೀನ್ ತಗೊಂಡು ಅದು ಸೆಟ್ ಆಗದೇ, ಬಳಿಕ ನ್ಯಾಚುರಲ್ ಪ್ರೊಟೀನ್&zwnj;ಗೆ ಶಿಫ್ಟ್ ಆಗಿದೀನಿ.&lt;/p&gt;&lt;h2&gt;ನನ್ ಡಯಟ್ ಅಭ್ಯಾಸ&lt;/h2&gt;&lt;p&gt;ನಾನು ನನ್ನ ಟ್ರೈನರ್ ಹೇಳಿದ್ದನ್ನು ಪಾಲಿಸಿ ನನ್ ಡಯಟ್ ಅಭ್ಯಾಸ ಮಾಡ್ಕೊಂಡಿದೀನಿ, ಅದು ನನ್ನ ದೇಹಕ್ಕೆ ಒಗ್ಗುತ್ತೆ, ಆದ್ರೆ ಬೇರೆಯವರ ಬಾಡಿ ನೇಚರ್ ಬೇರೇನೇ ಇರುತ್ತೆ.. ಸೋ, ಪ್ರತಿಯೊಬ್ರೂ ಕೂಡ ಅವರವರ ಡಯಟ್&zwnj; ಪ್ಲಾನ್&zwnj; ಅನ್ನು ಅವರವರೇ ತಮ್ಮತಮ್ಮ ಟ್ರೈನರ್ ಮೂಲಕ ಫಿಕ್ಸ್ ಮಾಡ್ಕೋಬೇಕು. ಕಾರಣ, ಪ್ರತಿಯೊಬ್ಬರ ದೇಹ ಬೇರೆಬೇರೆ ತರಹವೇ ವರ್ಕ್ ಆಗುತ್ತೆ..&lt;/p&gt;&lt;p&gt;ನಾನು ಯಾರಿಗೂ ಯಾವದೇ ಡಯಟ್ ಅಥವಾ ಪ್ರೊಟೀನ್ ಪೌಡರ್ ರೆಕಮಂಡ್ ಮಾಡೋದಿಲ್ಲ. ಕಾರಣ, ಅವರವರ ದೇಹದ ನೇಚರ್ ಅವರವರಿಗೇ ಗೊತ್ತಿರುತ್ತೆ, ಗೊತ್ತಾಗಬೇಕು. ಆದರೆ, ನಾನು ಮಾತ್ರ ನನ್ನ ಡಯಟ್ ಹಾಗೂ ವರ್ಕ್&zwnj;ಟ್&zwnj; ತಪ್ಪದೇ ರೆಗ್ಯೂಲರ್ ಆಗಿ ಪಾಲಿಸ್ತೀನಿ' ಎಂದಿದ್ದಾರೆ ಸಂಜನಾ ಆನಂದ್.&lt;/p&gt;&lt;h3&gt;ಕನ್ನಡ ಸಿನಿಮಾರಂಗದಲ್ಲಿ ಆಕ್ಟೀವ್&lt;/h3&gt;&lt;p&gt;ಅಂದಹಾಗೆ, ನಟಿ ಸಂಜನಾ ಆನಂದ್ ಇತ್ತೀಚೆಗೆ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಆಕ್ಟೀವ್ ಆಗಿರೋ ನಟಿ. ಚಂದನ್ ಶೆಟ್ಟಿಯವರ 'ಸೂತ್ರಧಾರಿ' ಸಿನಿಮಾಗೆ ಇದೇ ಸಂಜನಾ ಆನಂದ್ ನಾಯಕಿ. ಜೊತೆಗೆ, ಚಂದನ್ ಶೆಟ್ಟಿ ಆಲ್ಬಂ ಸಾಂಗ್&zwnj;ನಲ್ಲಿ ಕೂಡ ಸಂಜನಾ ಅವರ ಜೋಡಿಯಾಗಿ ಡ್ಯೂಯೆಟ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;ಕೆಮಿಸ್ಟ್ರಿ ಆಫ್ ಕರಿಯಪ್ಪ (2019): ನಾಯಕಿಯಾಗಿ ಮೊದಲ ಸಿನಿಮಾ.&lt;/p&gt;&lt;p&gt;ಸಲಗ (2021): ದುನಿಯಾ ವಿಜಯ್ ನಿರ್ದೇಶನದ ಚಿತ್ರ.&lt;/p&gt;&lt;p&gt;ಶೋಕಿವಾಲ (2022): ಅಜಯ್ ರಾವ್ ಜೊತೆ ನಟಿಸಿದ ಚಿತ್ರ.&lt;/p&gt;&lt;p&gt;ಕುಷ್ಕ (2021):&lt;/p&gt;&lt;p&gt;ವಿಂಡೋ ಸೀಟ್&lt;/p&gt;&lt;p&gt;ಕ್ಷತ್ರಿಯ&lt;/p&gt;&lt;p&gt;ಎಕ್ಕ (2025): ಯುವ ರಾಜ್&zwnj;ಕುಮಾರ್ ಜೊತೆ.&lt;/p&gt;&lt;p&gt;ರಾಯಲ್ (2025): ವಿರಾಟ್ ಜೊತೆ.&lt;/p&gt;&lt;p&gt;ಹಯಗ್ರೀವ: (ಮುಂದೆ ತೆರೆಗೆ ಬರಲಿರುವ ಸಿನಿಮಾ)&lt;/p&gt;&lt;p&gt;ಸೂತ್ರಧಾರಿ: (ಚಂದನ್ ಶೆಟ್ಟಿ ಜೊತೆ ನಟನೆ)&lt;/p&gt;&lt;p&gt;ಇಂಜಿನಿಯರಿಂಗ್ ಪದವೀಧರೆಯಾದ ಸಂಜನಾ ಭರತನಾಟ್ಯ ಕಲಾವಿದೆಯೂ ಹೌದು. ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಲ್ಲೂ ನಟಿಸಿದ್ದಾರೆ. ಸದ್ಯಕ್ಕೆ ನಟಿ ಸಂಜನಾ ಆನಂದ್ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/actress-sanjana-anand-take-this-powder-or-not-the-truth-is-finally-revealed/articleshow-t0pgc45"/>
        </item>
        <item>
            <title><![CDATA[ಹಾಲು ಕಡಿಮೆ ಇದ್ರೂ ಗಟ್ಟಿಯಾದ ರುಚಿಕರವಾದ ಟೀ ಮಾಡೋ ಸೀಕ್ರೆಟ್!]]></title>
            <link>https://kannada.asianetnews.com/webstories/food/how-to-make-thick-and-tasty-tea-with-less-milk-8n3s30g</link>
            <guid isPermaLink="true">https://kannada.asianetnews.com/webstories/food/how-to-make-thick-and-tasty-tea-with-less-milk-8n3s30g</guid>
            <pubDate>Wed, 08 Apr 2026 14:45:49 +0530</pubDate>
            <description><![CDATA[&lt;p&gt;Grandma's Secrets: ಕೆಲವೊಮ್ಮೆ ಮನೆಯಲ್ಲಿ ಹಾಲು ಕಡಿಮೆ ಇರುತ್ತದೆ ಅಥವಾ ತುಂಬಾ ತೆಳುವಾಗಿರುತ್ತದೆ. ಅಂತಹ ಸಮಯದಲ್ಲಿ ಅತಿಥಿಗಳು ಬಂದರೆ ಟೀ ರುಚಿಯಾಗಲ್ಲ ಅನ್ನೋದೆ ಚಿಂತೆ. ಆದರೆ ಗಟ್ಟಿಯಾದ ಟೀ ಮಾಡುವ ದಾದಿಯ ಸೀಕ್ರೆಟ್ ಟಿಪ್ ನಿಮಗಾಗಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp5cvtak5esev7gsmk066sp,imgname-untitled-design--77--1775639097162.jpg" type="image/jpeg" height="390" width="690"/>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/food/how-to-make-thick-and-tasty-tea-with-less-milk-8n3s30g"/>
        </item>
        <item>
            <title><![CDATA[ಲವ್​ ಜಿಹಾದ್​ಗೆ ಒಳಗಾಗಿದ್ದ Miss India Earth ನಾಪತ್ತೆ! ಹಿಂದೂ ಧರ್ಮಕ್ಕೆ ವಾಪಸಾದ ಬೆನ್ನಲ್ಲೇ ನಿಗೂಢ ಕಣ್ಮರೆ]]></title>
            <link>https://kannada.asianetnews.com/gallery/relationship/miss-india-earth-who-returned-to-hinduism-after-love-jihad-gone-missing-suc-nb853qa</link>
            <guid isPermaLink="true">https://kannada.asianetnews.com/gallery/relationship/miss-india-earth-who-returned-to-hinduism-after-love-jihad-gone-missing-suc-nb853qa</guid>
            <pubDate>Wed, 08 Apr 2026 13:35:39 +0530</pubDate>
            <description><![CDATA[&lt;p&gt;2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸೈಲಿ ಸುರ್ವೆ, &amp;nbsp;ನಾಲ್ಕು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. 'ಲವ್ ಜಿಹಾದ್' ಆರೋಪ ಮಾಡಿ, &amp;nbsp;ಹಿಂದೂ ಧರ್ಮಕ್ಕೆ ಮರಳಿದ್ದ ಅವರು, ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಾಗಿ ಹೇಳಿಕೊಂಡಿದ್ದರು. &amp;nbsp;ಪತಿಯ ಕುಟುಂಬವೇ &amp;nbsp;ಅಪಹರಿಸಿದೆ ಎಂದು ಪೋಷಕರು ದೂರು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp1q62g1m6j6ckzazqdj012,imgname-sayli-surve-06-1775635241040.jpg" type="image/jpeg" height="390" width="690"/>
            <content:encoded><![CDATA[&lt;p&gt;2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸೈಲಿ ಸುರ್ವೆ, &amp;nbsp;ನಾಲ್ಕು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. 'ಲವ್ ಜಿಹಾದ್' ಆರೋಪ ಮಾಡಿ, &amp;nbsp;ಹಿಂದೂ ಧರ್ಮಕ್ಕೆ ಮರಳಿದ್ದ ಅವರು, ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಾಗಿ ಹೇಳಿಕೊಂಡಿದ್ದರು. &amp;nbsp;ಪತಿಯ ಕುಟುಂಬವೇ &amp;nbsp;ಅಪಹರಿಸಿದೆ ಎಂದು ಪೋಷಕರು ದೂರು ನೀಡಿದ್ದಾರೆ.&lt;/p&gt;&lt;img&gt;&lt;p&gt;2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸೈಲಿ ಸುರ್ವೆ ಪುಣೆಯ ಪಿಂಪ್ರಿ-ಚಿಂಚ್&zwnj;ವಾಡ್&zwnj;ನಿಂದ ನಾಪತ್ತೆಯಾಗಿದ್ದಾರೆ. ಕುಟುಂಬದ ತೀವ್ರ ವಿರೋಧದ ಹೊರತಾಗಿಯೂ, ನನ್ನ ಅತಿಫ್​ ಎಲ್ಲರಂತಲ್ಲ ಎಂದು ಅಪ್ಪ-ಅಮ್ಮನನ್ನೇ ಧಿಕ್ಕರಿಸಿ ಭಯಂದರ್ ಮೂಲದ ಮುಸ್ಲಿಂ ಉದ್ಯಮಿ ಅತಿಫ್ ಟೇಸ್ ಅವರನ್ನು ಪ್ರೇಮ ವಿವಾಹ ಮಾಡಿಕೊಂಡಿದ್ದರು ಸೈಲಿ. ಆ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಅತೇಜಾ ಟೇಸ್ ಎಂಬ ಹೆಸರನ್ನು ಪಡೆದಿದ್ದರು. ಆದರೆ ಮದುವೆಯಾದ ಮೇಲೆ ಅಪ್ಪ-ಅಮ್ಮ ಹೇಳಿದ್ದೇ ಸರಿ ಎಂದು ತಿಳಿದು, ಸಾರ್ವಜನಿಕವಾಗಿ ಹಿಂದೂ ಧರ್ಮಕ್ಕೆ ಮರಳಿದ್ದರು. ತಮ್ಮ ಪತಿಯ ಮೇಲೆ ದೌರ್ಜನ್ಯ ಮತ್ತು 'ಲವ್ ಜಿಹಾದ್' ಆರೋಪ ಹೊರಿಸಿದ್ದರು.&lt;/p&gt;&lt;img&gt;&lt;p&gt;ವಾರಗಳ ಹಿಂದೆ, ಅವರು ತಮ್ಮನ್ನು ತಾವು ಆದ್ಯ ಸುರ್ವೆ ಎಂದು ಮರುನಾಮಕರಣ ಮಾಡಿಕೊಂಡಿದ್ದರು. ಹಿಂದೂ ಧರ್ಮಕ್ಕೆ ಸಾರ್ವಜನಿಕ ಮರಳಿ ಸದ್ದು ಮಾಡುತ್ತಿದ್ದರು. ತಮ್ಮ ಪತಿ ವರ್ಷಗಳ ಕಾಲ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮತ್ತು ಈಗ ಅವರು ತಮ್ಮ ನಾಲ್ಕು ಮಕ್ಕಳೊಂದಿಗೆ ಕಣ್ಮರೆಯಾಗಿದ್ದಾರೆ. ತಮ್ಮ ಪುತ್ರಿ ಮತ್ತು ನಾಲ್ವರು ಮಕ್ಕಳನ್ನು ಗಂಡನ ಮನೆಯವರು ಎಲ್ಲರನ್ನೂ ಅಪಹರಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ.&lt;/p&gt;&lt;img&gt;&lt;p&gt;ಕುಟುಂಬದ ತೀವ್ರ ವಿರೋಧದ ಹೊರತಾಗಿಯೂ, ಸೈಲಿ, ಅತಿಫ್ ಟೇಸ್ ನನ್ನು ಮದುವೆಯಾಗಿದ್ದರು. ನಾಲ್ಕು ಮಕ್ಕಳನ್ನು ಪಡೆದರು. ಮದುವೆಯಾದ ಮರುಕ್ಷಣದಿಂದಲೇ ತಾನು ಮಾಡಿದ್ದು ಜೀವನದ ಅತಿ ದೊಡ್ಡ ತಪ್ಪು ಎಂದು ತಿಳಿಯಿತು. ಆದರೆ, ಬೇರೆ ದಾರಿ ಇಲ್ಲದೇ ಇಷ್ಟು ವರ್ಷ ದೌರ್ಜನ್ಯ ಸಹಿಸಿಕೊಂಡಿದ್ದೆ. ನಾಲ್ಕು ಮಕ್ಕಳಾದವು. ಇನ್ನು ಇಲ್ಲಿ ಬದುಕುವುದು ಸಾಧ್ಯವಿಲ್ಲ ಎಂದು ಎನ್ನಿಸಿತು ಎಂದು ಸೈಲಿ ವಾಪಸದಾಗ ಬಳಿಕ ಹೇಳಿಕೊಂಡಿದ್ದರು.&lt;/p&gt;&lt;img&gt;&lt;p&gt;ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸೈಲಿ, ಮದುವೆಯಾಗುವಾಗ ಬಣ್ಣಬಣ್ಣದ ಮಾತುಗಳನ್ನಾಗಿ ಮರುಳು ಮಾಡಿದ್ದ ಆತ. ಆದರೆ ಕೊನೆಗೆ ಗೊತ್ತಾಗಿದ್ದು ಉದ್ದೇಶವೇ ಬೇರೆ ಎಂದು. 24 ಗಂಟೆ ನನಗೆ ಕಷ್ಟವೇ ಕಷ್ಟವಾಗಿತ್ತು. ಮಕ್ಕಳನ್ನು ಹೇರುವುದು ಕೆಲಸವಾಯ್ತು. ದಿನನಿತ್ಯವೂ ಶೋಷಣೆ, ದೌರ್ಜನ್ಯ ಸಹಿಸಿಕೊಳ್ಳಬೇಕಿತ್ತು. ನನ್ನ ತಪ್ಪು ಇಲ್ಲದಿದ್ದರೂ ಹೊಡೆತ ತಿನ್ನಬೇಕಿತ್ತು. ಇನ್ನು ಬದುಕಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಮನೆಯಿಂದ ಬಂದಿರುವುದಾಗಿ ಹೇಳಿದ್ದರು ಸೈಲಿ.&lt;/p&gt;&lt;img&gt;&lt;p&gt;ಮುಸ್ಲಿಂ ಧರ್ಮಕ್ಕೆ ಮತಾಂತರದ ಬಗ್ಗೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು. ಆಗಲೇ ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಆದರೆ ಏನೂ ಪ್ರಯೋಜನ ಆಗಲಿಲ್ಲ. ನಾನು ಆತನನ್ನು ಮದುವೆಯಾಗುವಾಗಲೇ ಅಪ್ಪ-ಅಮ್ಮ ಸೇರಿದಂತೆ ಹಲವರು ಬುದ್ಧಿ ಹೇಳಿದ್ದರು. ಆದರೆ ನಾನು ಪ್ರೇಮದಲ್ಲಿ ಸಿಲುಕಿ ಬಿಟ್ಟಿದ್ದೆ. ಅವರ ಮಾತುಗಳು ನನಗೆ ಕಹಿ ಎನ್ನಿಸಿದವು. ಆದರೆ ಸತ್ಯ ಮದುವೆಯಾದ ಮೇಲೆ ತಿಳಿಯಿತು ಎಂದು ಮಾಧ್ಯಮದವರ ಎದುರು ಹೇಳಿದ್ದರು ಸೈಲಿ.&lt;/p&gt;&lt;img&gt;&lt;p&gt;ಪಿಂಪ್ರಿ-ಚಿಂಚ್&zwnj;ವಾಡ್&zwnj;ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಅಲ್ಲಿ ಶುದ್ಧೀಕರಣ ಸಮಾರಂಭದ ಭಾಗವಾಗಿ ಆಚರಣೆಗಳನ್ನು ನಡೆಸಲಾಯಿತು. ಈ ಆಚರಣೆಯ ನಂತರ, ಅತಿಜಾ ಅವರ ಹೆಸರನ್ನು ಆದ್ಯಾ ಸುರ್ವೆ ಎಂದು ಬದಲಾಯಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸದೆ ಮೇಧಾ ಕುಲಕರ್ಣಿ, ಶಾಸಕಿ ಉಮಾ ಖಪ್ರೆ ಮತ್ತು ಬಜರಂಗ ದಳದ ಸದಸ್ಯರು ಭಾಗವಹಿಸಿದ್ದರು. ಅವರ ನಾಲ್ವರು ಮಕ್ಕಳಿಗೆ ಅವರ ಜೊತೆಗೆ ದೀಕ್ಷೆ ನೀಡಲಾಯಿತು ಮತ್ತು ಹೊಸ ಹೆಸರುಗಳನ್ನು ಸಹಿಸಲಾಯಿತು.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/miss-india-earth-who-returned-to-hinduism-after-love-jihad-gone-missing-suc-nb853qa"/>
        </item>
        <item>
            <title><![CDATA[ಗ್ಯಾಸ್ ಉಳಿಸೋಕೆ ಹೋಗಿ ಕರೆಂಟ್ ಬಿಲ್ ಹೆಚ್ಚಾಯ್ತು, ಇಂಡಕ್ಷನ್ ಬಳಕೆ ಮುನ್ನ ಇದು ತಿಳಿದುಕೊಳ್ಳಿ]]></title>
            <link>https://kannada.asianetnews.com/gallery/kitchen/induction-cooktop-increasing-your-bill-here-is-how-experts-cook-smarter-7358ht7</link>
            <guid isPermaLink="true">https://kannada.asianetnews.com/gallery/kitchen/induction-cooktop-increasing-your-bill-here-is-how-experts-cook-smarter-7358ht7</guid>
            <pubDate>Wed, 08 Apr 2026 13:40:03 +0530</pubDate>
            <description><![CDATA[&lt;p&gt;ಗ್ಯಾಸ್ ಸಿಗ್ತಿಲ್ಲ, ಜನ ಇಂಡಕ್ಷನ್ ಸ್ಟೌವ್ ಮೊರೆ ಹೋಗ್ತಿದ್ದಾರೆ. &amp;nbsp;ಪ್ರತಿ ದಿನ ಅನೇಕ ಸಮಯ ಇಂಡಕ್ಷನ್ ಸ್ವೌವ್ ಉರಿಸಿದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ. ಇಂಡಕ್ಷನ್ ಕುಕ್ಟಾಪ್ಗಳನ್ನು ಬುದ್ಧಿವಂತಿಕೆಯಿಂದ ಬಳಸುವುದರಿಂದ ಅಡುಗೆ ಸುಲಭವಾಗುವುದಲ್ಲದೆ ಕರೆಂಟ್ ಉಳಿಸ್ಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp1znya4wm857pzvttpjfn8,imgname-induction-cooktop--2--1775635519434.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ಯಾಸ್ ಸಿಗ್ತಿಲ್ಲ, ಜನ ಇಂಡಕ್ಷನ್ ಸ್ಟೌವ್ ಮೊರೆ ಹೋಗ್ತಿದ್ದಾರೆ. &amp;nbsp;ಪ್ರತಿ ದಿನ ಅನೇಕ ಸಮಯ ಇಂಡಕ್ಷನ್ ಸ್ವೌವ್ ಉರಿಸಿದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ. ಇಂಡಕ್ಷನ್ ಕುಕ್ಟಾಪ್ಗಳನ್ನು ಬುದ್ಧಿವಂತಿಕೆಯಿಂದ ಬಳಸುವುದರಿಂದ ಅಡುಗೆ ಸುಲಭವಾಗುವುದಲ್ಲದೆ ಕರೆಂಟ್ ಉಳಿಸ್ಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂಡಕ್ಷನ್ ಕುಕ್ಟಾಪ್ಗಳಲ್ಲಿ ಅಡುಗೆ ಮಾಡೋದು ಗ್ಯಾಸ್ ನಷ್ಟು ಸುಲಭವಲ್ಲ. ಆದ್ರೆ ಇಂಡಕ್ಷನ್ ಕುಕ್ ಟಾಪ್ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇದ್ರೆ ಅದನ್ನು ಬಳಸೋದು ಸುಲಭ. ಸರಿಯಾದ ವಿಧಾನ ಬಳಸಿದ್ರೆ ಕಡಿಮೆ ಸಮಯದಲ್ಲಿ ರುಚಿಕರವಾದ ಆಹಾರ ತಯಾರಿಸ್ಬಹುದು. ಇಂಡಕ್ಷನ್ ಕುಕ್ಟಾಪ್ಗಳಲ್ಲಿ ಕರೆಂಟ್ ಉಳಿಸಲು ಸುಲಭವಾದ ಮಾರ್ಗವೆಂದ್ರೆ ಮೊದಲೇ ತಯಾರಿ. ನೀವು ಇಂಡಕ್ಷನ್ ಕುಕ್ಟಾಪ್ ನಲ್ಲಿ ಪಾತ್ರೆ ಇಟ್ಮೇಲೆ ಪದಾರ್ಥಗಳನ್ನು ಹುಡುಕಬಾರದು. ತರಕಾರಿ ಕತ್ತರಿಸಿ, ಮಸಾಲೆ ಪದಾರ್ಥಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಆಗ ಒಲೆ ಮೇಲೆ ಪಾತ್ರೆಯನ್ನು ಖಾಲಿ ಬಿಡೋದು ತಪ್ಪುತ್ತದೆ. ಇದ್ರಿಂದ ಅಡುಗೆ ಬೇಗ ಮಾಡ್ಬಹುದು.&lt;/p&gt;&lt;img&gt;&lt;p&gt;ಇಷ್ಟೇ ಅಲ್ಲ ನೀವು ಇಂಡೆಕ್ಷನ್ ಕುಕ್ ಟಾಪ್ ನಲ್ಲಿ ಅಡುಗೆ ಮಾಡುವಾಗ ಆಹಾರವನ್ನು ಮುಚ್ಚಿಡಬೇಕು. ಇದು ಕರೆಂಟ್ ಉಳಿಸುತ್ತದೆ. ಆಹಾರ ಬೇಗ ಬೇಯುತ್ತದೆ. ಬಿಸಿ ನೀರನ್ನು ಅಡುಗೆಗೆ ಹಾಕೋದು ಕೂಡ ಬಹಳ ಮುಖ್ಯ.&lt;/p&gt;&lt;img&gt;&lt;p&gt;ಇಂಡಕ್ಷನ್ ನಲ್ಲಿ ಅಡುಗೆ ಮಾಡುವ ಮೊದಲು ಬೇಳೆ ಮತ್ತು ಅಕ್ಕಿಯನ್ನು ನೆನೆಸಿಡಬೇಕು. ಆಯುರ್ವೇದದ ಪ್ರಕಾರ, ಅಡುಗೆ ಮಾಡುವ ಮೊದಲು ಕೆಲವು ಗಂಟೆಗಳ ಕಾಲ ಬೇಳೆ ಮತ್ತು ಅಕ್ಕಿಯನ್ನು ನೆನೆಸುವುದು ಆರೋಗ್ಯಕ್ಕೆ ಒಳ್ಳೆಯದು. ಇಂಡಕ್ಷನ್ ಕುಕ್ಟಾಪ್ ವಿಷ್ಯಕ್ಕೆ ಬಂದಾಗ ನೀವು ಬೇಳೆ ನೆನೆಸಿಟ್ಟರೆ ಬೇಳೆ ಬೇಗ ಬೇಯುವುದಲ್ಲದೆ ಕರೆಂಟ್ ಉಳಿಯುತ್ತದೆ.&lt;/p&gt;&lt;img&gt;&lt;p&gt;ಇಂಡಕ್ಷನ್ ಅಡುಗೆಯಲ್ಲಿ ಯಾವಾಗಲೂ ಚಪ್ಪಟೆಯಾದ, ದಪ್ಪ ತಳವಿರುವ ಪಾತ್ರೆಗಳನ್ನು ಬಳಸಿ. ಸ್ಟೀಲ್ ಅಥವಾ ಇಂಡಕ್ಷನ್-ಸ್ನೇಹಿ ನಾನ್-ಸ್ಟಿಕ್ ಕುಕ್ವೇರ್ ಉತ್ತಮ. ತೆಳುವಾದ ಅಥವಾ ಕಾಂತೀಯವಲ್ಲದ ಕುಕ್ವೇರ್ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ಒದ್ದೆಯಾದ ಕೈಗಳಿಂದ ಅಥವಾ ಒದ್ದೆಯಾದ ಪಾತ್ರೆಗಳಿಂದ ಇಂಡಕ್ಷನ್ ಕುಕ್ಕರ್ ಆನ್ ಮಾಡಬೇಡಿ. ಖಾಲಿ ಪಾತ್ರೆ ಇಟ್ಟು ಇಂಡಕ್ಷನ್ ಕುಕ್ಕರ್ ಆನ್ ಮಾಡಬೇಡಿ. ಹೆಚ್ಚಿನ ತಾಪಮಾನದಲ್ಲಿ ನಿರಂತರವಾಗಿ ಬೇಯಿಸಬೇಡಿ. ಆಗಾಗ್ಗೆ ಒಲೆ ಆನ್ ಮತ್ತು ಆಫ್ ಮಾಡುವುದನ್ನು ತಪ್ಪಿಸಿ. ಇಂಡಕ್ಷನ್ ಕುಕ್ ಟಾಪ್ ಸ್ವಚ್ಛಗೊಳಿಸಲು ಹತ್ತಿ ಅಥವಾ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ.&lt;/p&gt;&lt;img&gt;&lt;p&gt;ಕಡಿಮೆ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. ಇಂಡಕ್ಷನ್ ಕುಕ್ಕರ್ಗಳು ಬೇರೆ ಬೇರೆ ಅಡುಗೆಗೆ ಬೇರೆ ಬೇರೆ ವಿಧಾನ ಹೊಂದಿವೆ. ಹಾಲು, ಇಡ್ಲಿ ಸೇರಿದಂತೆ ಬೇರೆ ಬೇರೆ ಅಡುಗೆಗೆ ಸೂಕ್ತವಾದ ವಿಧಾನ ಬಳಸಿ. ಎಲ್ಲವನ್ನೂ ಒಂದೇ ಬಾರಿಗೆ ಬೇಯಿಸುವ ಅಭ್ಯಾಸ ಸಮಯ ಮತ್ತು ವಿದ್ಯುತ್ ಎರಡನ್ನೂ ಉಳಿಸುತ್ತದೆ.&lt;/p&gt;]]></content:encoded>
            <category>women</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/kitchen/induction-cooktop-increasing-your-bill-here-is-how-experts-cook-smarter-7358ht7"/>
        </item>
        <item>
            <title><![CDATA[Bigg Boss ಬಳಿಕದ ಯಾತನೆ, 40 ಸಾವಿರ ಕಾಪಿರೈಟ್ಸ್, 850 ಲಿಂಕ್ಸ್​- ಅಶ್ವಿನಿ ಗೌಡ ಶಾಕಿಂಗ್​ ವಿಷ್ಯ ರಿವೀಲ್​]]></title>
            <link>https://kannada.asianetnews.com/gallery/tv-talk/ashwini-gowda-about-journey-after-bigg-boss-show-where-she-shocked-by-trolls-suc-5skolgf</link>
            <guid isPermaLink="true">https://kannada.asianetnews.com/gallery/tv-talk/ashwini-gowda-about-journey-after-bigg-boss-show-where-she-shocked-by-trolls-suc-5skolgf</guid>
            <pubDate>Wed, 08 Apr 2026 12:53:03 +0530</pubDate>
            <description><![CDATA[ಬಿಗ್​ಬಾಸ್​ 11ನೇ ಸೀಸನ್​ನ ಸ್ಪರ್ಧಿ ಅಶ್ವಿನಿ ಗೌಡ ಅವರು ಷೋ ನಂತರ ತಮಗಾದ ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಟ್ರೋಲ್&zwnj;ಗಳಿಂದಾಗಿ ತಮ್ಮ ಆರೋಗ್ಯ ಹದಗೆಟ್ಟು, 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಡ್ರಿಪ್ಸ್ ಹಾಕಿಸಿಕೊಂಡು ಚಿಕಿತ್ಸೆ ಪಡೆದ ಕರಾಳ ದಿನಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knnz5tbavjb7tdghnn4k4ck7,imgname-ashwini-gwoda-1775632574825.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ 11ನೇ ಸೀಸನ್​ನ ಸ್ಪರ್ಧಿ ಅಶ್ವಿನಿ ಗೌಡ ಅವರು ಷೋ ನಂತರ ತಮಗಾದ ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಟ್ರೋಲ್&zwnj;ಗಳಿಂದಾಗಿ ತಮ್ಮ ಆರೋಗ್ಯ ಹದಗೆಟ್ಟು, 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಡ್ರಿಪ್ಸ್ ಹಾಕಿಸಿಕೊಂಡು ಚಿಕಿತ್ಸೆ ಪಡೆದ ಕರಾಳ ದಿನಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.&lt;img&gt;&lt;p&gt;ಬಿಗ್​ಬಾಸ್​​ ಷೋಗೆ ಹೋಗಿ ಬಂದ ಮೇಲೆ ಅದೆಷ್ಟೋ ಜನರ ಲೈಫ್​ ಚೇಂಜ್​ ಆಗಿರುವುದು ಇದೆ. ಸಾಮಾನ್ಯ ಜನರೂ ಸೆಲೆಬ್ರಿಟಿಗಳಾಗುತ್ತಿದ್ದಾರೆ. ಈ ಒಂದು ಷೋಗೆ ಒಮ್ಮೆಯಾದರೂ ಹೋಗಿ ಬರಬೇಕು ಎನ್ನುವ ತವಕದಲ್ಲಿ ಇರುವವರು ಲಕ್ಷಾಂತರ ಮಂದಿ. ಆದರೆ ಕೆಲವೇ ಕೆಲವು ಜನರಿಗೆ ಅದರಲ್ಲಿಯೂ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಈ ಅವಕಾಶ ಸಿಗುತ್ತದೆ. ಅಂಥವರದಲ್ಲಿ 11ನೇ ಸೀಸನ್​ನಲ್ಲಿ ಒಬ್ಬರಾಗಿದ್ದವರು ಅಶ್ವಿನಿ ಗೌಡ. (Ashwini Gowda).&lt;/p&gt;&lt;img&gt;&lt;p&gt;ಬಿಗ್​ಬಾಸ್​ ಎನ್ನೋದು ಒಂದು ಷೋ. ಯಾವುದೇ ಸ್ಪರ್ಧೆ ಇದ್ದಾಗಲೂ ಅಲ್ಲಿ ತಾವೇ ಗೆಲ್ಲಬೇಕು ಎಂದು ಎಲ್ಲಾ ಸ್ಪರ್ಧಿಗಳೂ ಅಂದುಕೊಂಡಿರುತ್ತಾರೆ. ಅದಕ್ಕಾಗಿ ಆ ಸನ್ನಿವೇಶಕ್ಕೆ ತಕ್ಕಂತೆ ಅಲ್ಲಿ ವರ್ತಿಸುವುದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ಈ ಬಾರಿಯ ಷೋನಲ್ಲಿ ಅತಿ ಹೆಚ್ಚು ಜಗಳವಾಡಿದ್ದಾರೆ ಎಂದು ಟ್ರೋಲ್​ ಆದವರು ಅಶ್ವಿನಿ ಗೌಡ. ಆದರೆ ಹೊರಗಿನ ಪ್ರಪಂಚದಲ್ಲಿ ಒಳ್ಳೆಯ ಹೆಸರು ಮಾಡಿದ ವ್ಯಕ್ತಿಯೊಬ್ಬರಿಗೆ, ಒಂದು ಸ್ಪರ್ಧೆಯನ್ನು ಸ್ಪರ್ಧೆಯಾಗಿ ನೋಡದ ವೀಕ್ಷಕರಿಂದ ಯಾವ ರೀತಿಯಲ್ಲಿ ಮಾನಸಿಕ ಆಘಾತ ಉಂಟಾಗುತ್ತದೆ ಎನ್ನುವ ಬಗ್ಗೆ ನೋವಿನಿಂದ ನುಡಿದಿದ್ದಾರೆ ಅಶ್ವಿನಿ ಗೌಡ.&lt;/p&gt;&lt;img&gt;&lt;p&gt;ನ್ಯೂಸೋ ನ್ಯೂಸ್​ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅಶ್ವಿನಿ ಗೌಡ ಅವರು, ಷೋ ಬಳಿಕ ತಮಗಾಗಿರುವ ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಹೋರಾಟಗಾರ್ತಿಯಾಗಿ ಹೆಸರು ಮಾಡಿದ್ದ ತಮ್ಮನ್ನು, ಹತ್ತಿರದಿಂದ ಬಲ್ಲ ಕೆಲವರೂ ಸೇರಿದಂತೆ ಜನರು ಷೋ ಬಳಿಕ ನೋಡಿದ ಪರಿ, ಬಿಗ್​ಬಾಸ್​ನಲ್ಲಿ ಇರುವಾಗಿ ಬಂದಿರುವ ನೆಗೆಟಿವ್​ ಕಮೆಂಟ್ಸ್​ ಬಗ್ಗೆ ಅಶ್ವಿನಿ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಜನ ನನ್ನನ್ನು ನೋಡಿದ ರೀತಿ ಅಥವಾ ಈ ಟ್ರೋಲ್ಸ್ ಎಲ್ಲಾ ಆಕ್ಸೆಪ್ಟ್ ಮಾಡ್ಕೊಳ್ಳೋದಕ್ಕೆ ತುಂಬಾ ಕಷ್ಟ ಆಯ್ತು. ನನ್ನಂಥವಳಿಗೆ ಇದು ಈಸಿಯಾದ ಮಾತೇ ಅಲ್ಲ. ತುಂಬಾ ಹರ್ಟ್ ಆಯ್ತು. ನಾನು ಇವತ್ತಿಗೂ ಕೂಡ ನನ್ನ ಹೋರಾಟಗಳಿಂದ ಆಗಿರಬಹುದು, ನನ್ನ ವೈಯಕ್ತಿಕ ಬದುಕು ಆಗಿರಬಹುದು, ಯಾವುದಾದ್ರೂ ಒಂದು ಒಂದು ಸುಮ್ನೆ ಒಂದು ಫೋಟೋ ಹಾಕಬೇಕು ಎಂದರೂ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೂ ಒಂದು ಕೆಟ್ಟು ಕಮೆಂಟ್ ಬರಬಾರದು ಎಂದುಕೊಳ್ಳುವವಳು ನಾನು. ನಾನು ಹಾಕಿರೋ ಬಟ್ಟೆಯಿಂದ ಹಿಡಿದು ಹೇರ್ ಸ್ಟೈಲ್ ಇಂದ ಹಿಡಿದು ಅಷ್ಟು ಸೂಕ್ಷ್ಮವಾಗಿ ನಾನು ಗಮನಿಸಿ ಫೋಟೋ ಹಾಕುವ ನನ್ನಂಥವಳಿಗೆ ಈ ರೀತಿಯ ಟ್ರೋಲ್​ಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ ಎಂದಿದ್ದಾರೆ ಅಶ್ವಿನಿ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಮನೆ ಒಳಗಡೆ ನಾನು ಹೋಗಿ ಹೊರಗಡೆ ಬಂದಾಗ ಇಡೀ ಜಗತ್ತು ನನಗೆ ಹೇಗೆ ಅನಿಸಿಬಿಡ್ತು ಅಂತಂದ್ರೆ ಸಂಪೂರ್ಣ ಡಿಫರೆಂಟ್​ ಅನ್ನಿಸಿಹೋಯ್ತು. ನಾನು ಮನೆಗೆ ಬಂದಾಗ ಎರಡು ದಿನ ನನಗೆ ನಮ್ಮ ಮನೇಲಿ ಫೋನೇ ಕೊಡ್ಲಿಲ್ಲ, ನೀನು ನೋಡಬಾರದು ಎಂದರು. ಯಾಕೆ ಎಂದು ಹೇಳಲಿಲ್ಲ. ಆ ಬಳಿಕ ಫೋನ್​ ನೋಡಿದಾಗ ಶಾಕ್​ಗೆ ಒಳಗಾಗಿಬಿಟ್ಟೆ ಎನ್ನುತ್ತಲೇ, ಆ ಘಟನೆಯ ಬಳಿಕ ನಡೆದ ಕರಾಳ ದಿನಗಳನ್ನು ಅಶ್ವಿನಿ ರಿವೀಲ್​ ಮಾಡಿದ್ದಾರೆ. ನಾನು ಅಪ್​ಸೆಟ್​ ಆದೆ. ಹೆಲ್ತ್ ತುಂಬಾ ಹಾಳಾಯ್ತು. 15 ದಿನ ತುಂಬಾ ತೊಂದರೆ ಪಟ್ಟೆ. ಡ್ರಿಪ್ಸ್ ಎಲ್ಲ ಹಾಕಿಸ್ಕೊಂಡು ಮಲಗಿದೆ. ಲೋ ಬಿಪಿ ಆಯ್ತು, ಡೆಂಗ್ಯೂ ಬಂತು ಎಂದು ಆ ಭಯಾನಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನನ್ನ ಬಗ್ಗೆ ನೆಗೆಟಿವ್ ಹಾಕಿರುವಂತ ಲಿಂಕ್​ಗಳನ್ನು ನಾನು ಕಲೆಕ್ಟ್​ ಮಾಡಿದ್ದೇ 850 ಆಗಿದೆ. ಯಾವುದೋ ವಿಡಿಯೋ ತೆಗೆದು, ಇನ್ನೇನನ್ನೋ ಸೇರಿಸಿ ಶೇರ್​ ಮಾಡಿದ್ದಾರೆ. ಅಲ್ಲಿಗೆ ಕಾಪಿರೈಟ್ಸ್​ ಇಶ್ಯು ಬಂದಿರುವ 40 ಸಾವಿರ ಕಾಪಿರೈಟ್ ಸ್ಟ್ರೈಕ್ ನೋಡಿದ್ದೇನೆ. ನನ್ನ ಒಂದು ಇಂಟರ್ವ್ಯೂಗೆ ಅಂದ್ರೆ ನಾನ ಏನು ಹೇಳಿರ್ತೀನಿ ಅದನ್ನ ಕಟ್ ಮಾಡ್ತಾರೆ, ಅವರಿಗೆ ಏನು ಬೇಕೋ ಅದನ್ನ ಹಾಕೋತಾರೆ ಅಂಥವುಗಳು ಇದು ಎಂದು ಹೇಳಿದ್ದಾರೆ ಅಶ್ವಿನಿ.&lt;/p&gt;&lt;img&gt;&lt;p&gt;ನನ್ನ ಪರವಾಗಿ ಯಾರ್ಯಾರು ನಿಂತಿದ್ದಾರೋ ನಾನು ಸಾಯೋವರೆಗೂ ಅವರಿಗೆ ಯಾವತ್ತಿಗೂ ಚಿರಋಣಿ ಆಗಿದ್ದೇನೆ. ಇವತ್ತಿಗೂ ಒಂದೊಂದು ಮುಖನೂ ನನಗೆ ನೆನಪಿದೆ. ಯಾರ್ಯಾರು ನನ್ನ ಬಗ್ಗೆ ಟ್ರೋಲ್ ಮಾಡಿದ್ದಾರೆ, ಯಾರ್ಯಾರು ಕೆಟ್ಟದಾಗಿ ಮಾತಾಡಿದ್ದಾರೆ ಎನ್ನೋದು ಗೊತ್ತಿದೆ. ಕೈಯಲ್ಲಿ ಸೌಟ್ ಹಿಡ್ಕೊಂಡಿರೋರು, ಹೂವ ಕಟ್ತಾ ಇರೋರು, ಪೊರಕೆ ಹಿಡ್ಕೊಂಡು ಗುಡಿಸ್ತಾ ಇರುವವರು ಎಲ್ಲರೂ ಟ್ರೋಲ್​ ಮಾಡಿದ್ದಾರೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/ashwini-gowda-about-journey-after-bigg-boss-show-where-she-shocked-by-trolls-suc-5skolgf"/>
        </item>
        <item>
            <title><![CDATA[ಗ್ಯಾಸ್ ಸ್ಟೌವ್‌ನಲ್ಲಿ ಉರಿ ಕಡಿಮೆಯೇ? ಒಂದು ಸ್ಟೇಪ್ಲರ್ ಪಿನ್ ಬಳಸಿ ರಿಪೇರಿ ಮಾಡಿ!]]></title>
            <link>https://kannada.asianetnews.com/webstories/kitchen/fix-gas-stove-low-flame-with-a-stapler-pin-4oeatm1</link>
            <guid isPermaLink="true">https://kannada.asianetnews.com/webstories/kitchen/fix-gas-stove-low-flame-with-a-stapler-pin-4oeatm1</guid>
            <pubDate>Wed, 08 Apr 2026 13:06:42 +0530</pubDate>
            <description><![CDATA[&lt;p&gt;&lt;strong&gt;DIY gas stove maintenance: &lt;/strong&gt;ನಿಮ್ಮ ಮನೆಯ ಗ್ಯಾಸ್ ಸ್ಟೌವ್&zwnj;ನಲ್ಲಿ ಉರಿ ತುಂಬಾ ಕಡಿಮೆ ಬರುತ್ತಿದೆಯೇ? ಅಡುಗೆ ನಿಧಾನವಾಗುತ್ತಿದೆಯೇ? ಹಾಗಿದ್ದರೆ ಮೆಕಾನಿಕ್ ಕರೆಯುವ ಮೊದಲು ಈ ಸಿಂಪಲ್ ಕೆಲಸ ಮಾಡಿ ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjckmvf8dhhz8r9541j0vswy,imgname-gas-stove-burner-1772097269224.jpg" type="image/jpeg" height="390" width="690"/>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/kitchen/fix-gas-stove-low-flame-with-a-stapler-pin-4oeatm1"/>
        </item>
        <item>
            <title><![CDATA[ತ್ರಿಷಾ ಲೈಫ್ ಹಾಳು ಮಾಡಲು ಸ್ಕೆಚ್? ರಾಂಗ್ ಆಗಿರೋ ನಟಿ ಆಡಿರೋ ಮಾತು ಈಗ ಎಲ್ಲೆಡೆ ವೈರಲ್!]]></title>
            <link>https://kannada.asianetnews.com/entertainment/trisha-slams-viral-rumours-with-witty-instagram-post-questions-apparently-i-have-quit-films-and-raising-quadruplets/articleshow-bqaozmf</link>
            <guid isPermaLink="true">https://kannada.asianetnews.com/entertainment/trisha-slams-viral-rumours-with-witty-instagram-post-questions-apparently-i-have-quit-films-and-raising-quadruplets/articleshow-bqaozmf</guid>
            <pubDate>Wed, 08 Apr 2026 11:12:59 +0530</pubDate>
            <description><![CDATA[&lt;p&gt;ತಮ್ಮ ಬಗ್ಗೆ ಹಬ್ಬಿರುವ ಈ ಅಸಂಬದ್ಧ ಸುದ್ದಿಗಳ ಬಗ್ಗೆ ಅಂತಿಮವಾಗಿ ಮೌನ ಮುರಿದಿರುವ ತ್ರಿಶಾ, ಇನ್ಸ್ಟಾಗ್ರಾಮ್&zwnj;ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಮತ್ತು ಹಾಸ್ಯದ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಬರೆದುಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ. ಏನ್ ಹೇಳಿದ್ದಾರೆ ತ್ರಿಷಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngqscxppv5855da3msh2gq0,imgname-trisha-krishnan--2--1775457055670.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತ್ರಿಶಾ ಬಗ್ಗೆ ಹಬ್ಬಿದ್ದ ವದಂತಿಗಳೇನು?&lt;/strong&gt;&lt;/p&gt;&lt;p&gt;ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ತ್ರಿಶಾ ಕೃಷ್ಣನ್ (Trisha Krishnan) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಸುದ್ದಿಗಳು ಕೇಳಿಬರುತ್ತಿದ್ದವು. ತ್ರಿಶಾ ಚಿತ್ರರಂಗಕ್ಕೆ ಗುಡ್&zwnj;ಬೈ ಹೇಳಲಿದ್ದಾರೆ, ಅವರು ಶೀಘ್ರದಲ್ಲೇ ಒಬ್ಬ ದೊಡ್ಡ ಉದ್ಯಮಿಯನ್ನು ವಿವಾಹವಾಗಿ ಸೆಟ್ಲ್ ಆಗಲಿದ್ದಾರೆ ಎಂಬ ವದಂತಿಗಳು ಕಾಳ್ಗಿಚ್ಚಿನಂತೆ ಹಬ್ಬಿದ್ದವು. ತ್ರಿಶಾ ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ ಎಂಬ ಸುದ್ದಿ ಈ ವದಂತಿಗಳಿಗೆ ತುಪ್ಪ ಸುರಿದಂತಾಗಿತ್ತು. ಇದರಿಂದ ಅವರ ಕೋಟ್ಯಂತರ ಅಭಿಮಾನಿಗಳು ಆತಂಕಕ್ಕೀಡಾಗಿದ್ದರು.&lt;/p&gt;&lt;h2&gt;ಹಾಸ್ಯದ ಮೂಲಕವೇ ತಿರುಗೇಟು ನೀಡಿದ 'ಲಿಯೋ' ನಟಿ&lt;/h2&gt;&lt;p&gt;ತಮ್ಮ ಬಗ್ಗೆ ಹಬ್ಬಿರುವ ಈ ಅಸಂಬದ್ಧ ಸುದ್ದಿಗಳ ಬಗ್ಗೆ ಅಂತಿಮವಾಗಿ ಮೌನ ಮುರಿದಿರುವ ತ್ರಿಶಾ, ಇನ್ಸ್ಟಾಗ್ರಾಮ್&zwnj;ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಮತ್ತು ಹಾಸ್ಯದ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಬರೆದುಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ.&lt;/p&gt;&lt;p&gt;ತ್ರಿಶಾ ತಮ್ಮ ಪೋಸ್ಟ್&zwnj;ನಲ್ಲಿ ಹೀಗೆ ಬರೆದಿದ್ದಾರೆ: &quot;ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ, ನಾನು ಚಿತ್ರರಂಗವನ್ನು ಬಿಟ್ಟಿದ್ದೇನಂತೆ! ಒಬ್ಬ ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನಂತೆ! ಅಷ್ಟೇ ಅಲ್ಲ, ನನಗೆ ನಾಲ್ಕು ಜನ ಮಕ್ಕಳಿದ್ದು (Quadruplets), ಅವರಿಗೆ ನಿನ್ನೆಯಷ್ಟೇ ಎರಡು ವರ್ಷ ತುಂಬಿದೆಯಂತೆ! ಇನ್ನು ಏನಾದರೂ ಸೇರಿಸುವುದಿದೆಯೇ? ಅಥವಾ ಇಂದಿನ ಕಾಲ್ಪನಿಕ ಕಥೆಗಳು ಇಷ್ಟಕ್ಕೆ ಸಾಕಾ?&quot; ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ತಮ್ಮ ಮದುವೆ ಮತ್ತು ನಿವೃತ್ತಿಯ ಬಗ್ಗೆ ಹಬ್ಬಿದ ಸುದ್ದಿಗಳು ಕೇವಲ ಕಟ್ಟುಕಥೆ ಎಂಬುದನ್ನು ತ್ರಿಶಾ ಅತ್ಯಂತ ಲವಲವಿಕೆಯಿಂದ ಸ್ಪಷ್ಟಪಡಿಸಿದ್ದಾರೆ. ಅವರ ಈ ಹಾಸ್ಯ ಪ್ರಜ್ಞೆಗೆ ಅಭಿಮಾನಿಗಳು ಫಿದಾ ಆಗಿದ್ದು, &quot;ಇದು ತ್ರಿಶಾ ಅವರ ರಿಯಲ್ ಥಗ್ ಲೈಫ್&quot; ಎಂದು ಕಾಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;h3&gt;ವೃತ್ತಿಜೀವನದಲ್ಲಿ ತ್ರಿಶಾ ಇನ್ನೂ ಬ್ಯುಸಿ!&lt;/h3&gt;&lt;p&gt;ತ್ರಿಶಾ ಅವರು ಚಿತ್ರರಂಗಕ್ಕೆ ಬಂದು 20 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಇಂದಿಗೂ ಅವರು ಬೇಡಿಕೆಯ ನಟಿಯಾಗಿ ಮುಂದುವರಿಯುತ್ತಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್ ಜೊತೆ 'ಲಿಯೋ' ಸಿನಿಮಾದಲ್ಲಿ ಮಿಂಚಿದ್ದ ಅವರು, ಮುಂದಿನ ದಿನಗಳಲ್ಲಿ ಸಾಲು ಸಾಲು ದೊಡ್ಡ ಸಿನಿಮಾಗಳನ್ನು ಹೊಂದಿದ್ದಾರೆ.&lt;/p&gt;&lt;p&gt;ಥಗ್ ಲೈಫ್: ಮಣಿರತ್ನಂ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ತ್ರಿಶಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;p&gt;ವಿಶ್ವಂಭರ: ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗಿನ ಫ್ಯಾಂಟಸಿ ಸಿನಿಮಾದಲ್ಲಿ ತ್ರಿಶಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಸೂರ್ಯ 44: ನಟ ಸೂರ್ಯ ಅವರ 44ನೇ ಚಿತ್ರದಲ್ಲಿ ತ್ರಿಶಾ ನಟಿಸುತ್ತಿದ್ದು, ಇದರ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ.&lt;/p&gt;&lt;p&gt;ಒಟ್ಟಿನಲ್ಲಿ, ತ್ರಿಶಾ ಚಿತ್ರರಂಗ ಬಿಡುತ್ತಾರೆ ಎಂಬುದೆಲ್ಲಾ ಕೇವಲ ಗಾಳಿಸುದ್ದಿ ಎಂಬುದು ಈಗ ಖಚಿತವಾಗಿದೆ. ಅವರು ಇನ್ನೂ ಹಲವು ವರ್ಷಗಳ ಕಾಲ ಬೆಳ್ಳಿತೆರೆಯ ಮೇಲೆ ತಮ್ಮ ಅಧಿಪತ್ಯವನ್ನು ಮುಂದುವರಿಸಲಿದ್ದಾರೆ ಎಂಬುದು ಈ ಮೂಲಕ ಸಾಬೀತಾಗಿದೆ. ಗಾಸಿಪ್ ಹಬ್ಬಿಸುವವರಿಗೆ ತ್ರಿಶಾ ನೀಡಿರುವ ಈ 'ಖಡಕ್' ಉತ್ತರ ಈಗ ಇಂಟರ್ನೆಟ್&zwnj;ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/trisha-slams-viral-rumours-with-witty-instagram-post-questions-apparently-i-have-quit-films-and-raising-quadruplets/articleshow-bqaozmf"/>
        </item>
        <item>
            <title><![CDATA[ಲಟ್ಟಿಸುವಾಗ ಒಣ ಹಿಟ್ಟಲ್ಲ, ಈ ಪದಾರ್ಥ ಬಳಸಿ ಚಪಾತಿ ಹೂವಿನಂತೆ ಅರಳಿ 2-3 ದಿನದವರೆಗೆ ಮೃದುವಾಗಿರುತ್ತೆ]]></title>
            <link>https://kannada.asianetnews.com/gallery/food/stop-using-dry-flour-use-this-one-secret-tip-for-super-soft-rotis-8frotsi</link>
            <guid isPermaLink="true">https://kannada.asianetnews.com/gallery/food/stop-using-dry-flour-use-this-one-secret-tip-for-super-soft-rotis-8frotsi</guid>
            <pubDate>Wed, 08 Apr 2026 12:08:17 +0530</pubDate>
            <description><![CDATA[&lt;p&gt;Soft Roti Hacks: ಬೆಳಗಿನ ಉಪಹಾರವಿರಲಿ ಅಥವಾ ರಾತ್ರಿಯ ಊಟವಿರಲಿ, ಬಿಸಿಬಿಸಿ ಚಪಾತಿ ಇದ್ದರೆ ಆ ಮಜವೇ ಬೇರೆ. ಅಂದಹಾಗೆ ಚಪಾತಿ ತಯಾರಿಸುವುದು ಕೂಡ ಒಂದು ಕಲೆ. ಸರಿಯಾದ ಕ್ರಮ ಅನುಸರಿಸಿದರೆ ಮಾತ್ರ ಅದು ದೀರ್ಘಕಾಲದವರೆಗೆ ಮೃದುವಾಗಿರಲು ಸಾಧ್ಯ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knnwephd076axm4e72dqsh9n,imgname-thumbnail---2026-04-08t115814.083-1775629720109.jpg" type="image/jpeg" height="390" width="690"/>
            <content:encoded><![CDATA[&lt;p&gt;Soft Roti Hacks: ಬೆಳಗಿನ ಉಪಹಾರವಿರಲಿ ಅಥವಾ ರಾತ್ರಿಯ ಊಟವಿರಲಿ, ಬಿಸಿಬಿಸಿ ಚಪಾತಿ ಇದ್ದರೆ ಆ ಮಜವೇ ಬೇರೆ. ಅಂದಹಾಗೆ ಚಪಾತಿ ತಯಾರಿಸುವುದು ಕೂಡ ಒಂದು ಕಲೆ. ಸರಿಯಾದ ಕ್ರಮ ಅನುಸರಿಸಿದರೆ ಮಾತ್ರ ಅದು ದೀರ್ಘಕಾಲದವರೆಗೆ ಮೃದುವಾಗಿರಲು ಸಾಧ್ಯ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಎಲ್ಲರಿಗೂ ತಿಳಿದಿರುವಂತೆ ಚಪಾತಿ ಭಾರತೀಯ ಆಹಾರದ ಒಂದು ಪ್ರಮುಖ ಭಾಗ. ಎಲ್ಲರ ಕೈಗುಣ ಒಂದೇ ರೀತಿ ಇರುವುದಿಲ್ಲ. ಕೆಲವರು ಮಾಡಿದ ಚಪಾತಿ ತುಂಬಾ ಮೃದುವಾಗಿದ್ದರೆ, ಇನ್ನು ಕೆಲವರು ಮಾಡಿದ್ದು ಖಡಕ್ ಆಗಿರುತ್ತದೆ. ಆದರೆ ಕೆಲವು ಸಣ್ಣ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ನೀವೂ ಪರ್ಫೆಕ್ಟ್ ಚಪಾತಿ ಮಾಡಬಹುದು.&lt;/p&gt;&lt;img&gt;&lt;p&gt;ಹಿಟ್ಟು ಕಲಸುವಾಗ ಅನಗತ್ಯ ಪದಾರ್ಥಗಳನ್ನು ಸೇರಿಸುವ ಅಗತ್ಯವಿಲ್ಲ. ಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿದರೆ ಚಪಾತಿ ರುಚಿ ಹೆಚ್ಚುತ್ತದೆ. ನಂತರ ಸಾಮಾನ್ಯ ನೀರನ್ನು ಬಳಸಿ ಹದವಾಗಿ ಹಿಟ್ಟು ಕಲಸಿಕೊಳ್ಳಿ. ಹಿಟ್ಟು ಅತಿ ಗಟ್ಟಿಯಾಗಿಯೂ ಇರಬಾರದು ಅಥವಾ ಅತಿ ಮೆತ್ತಗೂ ಇರಬಾರದು.&lt;/p&gt;&lt;img&gt;&lt;p&gt;ಹಿಟ್ಟು ಕಲಸಿದ ತಕ್ಷಣ ಚಪಾತಿ ಮಾಡಲು ಹೋಗಬೇಡಿ. ಕನಿಷ್ಠ 20 ರಿಂದ 25 ನಿಮಿಷಗಳ ಕಾಲ ಹಿಟ್ಟನ್ನು ನೆನೆಯಲು ಬಿಡಿ. ಹೀಗೆ ಮಾಡುವುದರಿಂದ ಹಿಟ್ಟಿನಲ್ಲಿರುವ ಗ್ಲುಟನ್ ಅಂಶ ಸೆಟ್ ಆಗುತ್ತದೆ, ಇದರಿಂದ ಚಪಾತಿ ಲಟ್ಟಿಸಲು ಸುಲಭವಾಗುತ್ತದೆ ಮತ್ತು ಹೆಚ್ಚು ಮೃದುವಾಗಿ ಬರುತ್ತದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಚಪಾತಿ ಲಟ್ಟಿಸುವಾಗ ಹಿಟ್ಟು ಮಣೆ ಅಥವಾ ಲಟ್ಟಣಿಗೆಗೆ ಅಂಟಿಕೊಳ್ಳಬಾರದು ಎಂದು ಒಣ ಹಿಟ್ಟನ್ನು ಬಳಸುತ್ತೇವೆ. ಆದರೆ ಚಪಾತಿ ಮೃದುವಾಗಿ ಬರಬೇಕೆಂದರೆ ಒಣ ಹಿಟ್ಟಿನ ಬಳಕೆ ಕಡಿಮೆ ಮಾಡಿ, ಅದರ ಬದಲಿಗೆ ಒಂದು ಹನಿ ತುಪ್ಪವನ್ನು ಮಣೆಗೆ ಸವರಿ ಚಪಾತಿ ಲಟ್ಟಿಸಿ. ಈ ಸೀಕ್ರೆಟ್ ಟಿಪ್&zwnj;ನಿಂದ ಚಪಾತಿ ಪ್ರತಿ ಬಾರಿಯೂ ಮೃದುವಾಗಿ ಬರುತ್ತದೆ.&lt;/p&gt;&lt;img&gt;&lt;p&gt;ಹೆಚ್ಚಿನವರು ಚಪಾತಿಯನ್ನು ತವಾ ಮೇಲೆ ಹಾಕಿ ನಂತರ ನೇರವಾಗಿ ಗ್ಯಾಸ್ ಉರಿಯಲ್ಲಿ ಬೇಯಿಸುತ್ತಾರೆ. ಇದರಿಂದ ಚಪಾತಿ ಖಡಕ್ ಆಗುತ್ತದೆ ಅಥವಾ ಸುಟ್ಟು ಹೋಗುವ ಸಾಧ್ಯತೆ ಇರುತ್ತದೆ. ಅದರ ಬದಲಿಗೆ ಚಪಾತಿಯನ್ನು ತವಾ ಮೇಲೆಯೇ ಎರಡೂ ಕಡೆ ಬೇಯಿಸಿ. ನಂತರ ಒಂದು ಸ್ವಚ್ಛವಾದ ಬಟ್ಟೆಯಿಂದ ಲಘುವಾಗಿ ಒತ್ತುತ್ತಾ ಬೇಯಿಸಿ. ಹೀಗೆ ಮಾಡುವುದರಿಂದ ಚಪಾತಿ ಹೂವಿನಂತೆ ಅರಳುತ್ತದೆ ಮತ್ತು ಎರಡು-ಮೂರು ದಿನಗಳವರೆಗೆ ಮೃದುವಾಗಿಯೇ ಇರುತ್ತದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Janny Kitchen (@kitchenjanny)&lt;/p&gt;&lt;p&gt;&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/stop-using-dry-flour-use-this-one-secret-tip-for-super-soft-rotis-8frotsi"/>
        </item>
        <item>
            <title><![CDATA[ಡಿವೋರ್ಸ್‌ ಪಡೆದ ಮಗಳ ಅದ್ದೂರಿ ಸ್ವಾಗತದ ಹಿಂದೆ ಕರಾಳ ಮುಖ: ನಿವೃತ್ತ ಜಡ್ಜ್ ಪುತ್ರಿಯ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮಾವ]]></title>
            <link>https://kannada.asianetnews.com/relationship/big-twist-in-delhi-family-lavish-welcome-for-divorced-daughter-father-in-law-accused-of-false-case/articleshow-dpr1oar</link>
            <guid isPermaLink="true">https://kannada.asianetnews.com/relationship/big-twist-in-delhi-family-lavish-welcome-for-divorced-daughter-father-in-law-accused-of-false-case/articleshow-dpr1oar</guid>
            <pubDate>Wed, 08 Apr 2026 11:39:25 +0530</pubDate>
            <description><![CDATA[&lt;p&gt;ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದ ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶರ ಕಥೆ ವೈರಲ್ ಆಗಿತ್ತು. ಆದರೆ, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಯುವತಿಯ ಮಾಜಿ ಪತಿಯ ಕುಟುಂಬವು ತಮ್ಮ ಮೇಲಾದ ದೌರ್ಜನ್ಯ ಮತ್ತು ಸಾಮಾಜಿಕ ಅವಮಾನದ ಬಗ್ಗೆ ಮಾತನಾಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knekw0f2eqxd86hxqcbf95w9,imgname-untitled-design---2026-04-05t154737.278-1775385838050.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಡಿವೋರ್ಸ್&zwnj; ಪಡೆದ ಮಗಳ ಅದ್ದೂರಿ ಸ್ವಾಗತದ ಹಿಂದೆ ಕರಾಳ ಮುಖ&lt;/strong&gt;&lt;/h2&gt;&lt;p&gt;ನವದೆಹಲಿ: ಕೆಲ ದಿನಗಳ ಹಿಂದೆ ಕೌಟುಂಬಿಕ ಕಲಹದ ನಂತರ ತನ್ನ ಪುತ್ರಿಯನ್ನು ಮಾಜಿ ನ್ಯಾಯಾಧೀಶರೊಬ್ಬರು ಬಹಳ ಅದ್ಧೂರಿಯಾಗಿ ಮನೆಗೆ ಬರ ಮಾಡಿಕೊಂಡ ಘಟನೆ ನಡೆದಿತ್ತು. ಇದರ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಡಿವೋರ್ಸ್ ಎಂದರೆ ಸಮಾಜದಲ್ಲಿ ಕೆಡುಕು ಎಂಬ ಭಾವನೆ ಇದೆ. ಡಿವೋರ್ಸ್ ಆದ ಹೆಣ್ಣು ಮಕ್ಕಳನ್ನು ಆಕೆಯ ಪೋಷಕರು ಕೂಡ ಸ್ವೀಕರಿಸುವುದಿಲ್ಲ, ಹೀಗಾಗಿ ಹೆಣ್ಣು ಮಕ್ಕಳು ಬೇರೆ ದಾರಿ ಕಾಣದೇ ಸಾವಿನ ದಾರಿ ಹಿಡಿಯುತ್ತಿದ್ದರು.ಆದರೆ ಒಲ್ಲದ ಸಂಬಂಧದಲ್ಲಿ ಇದ್ದು ಸಾಯುವ ಬದಲು ಡಿವೋರ್ಸ್ ತುಂಬಾ ಒಳ್ಳೆಯದು. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಾಧೀಶರು ತಮ್ಮ ಪುತ್ರಿಯನ್ನು ಅದ್ದೂರಿಯಾಗಿ ಬರಮಾಡಿಕೊಂಡಿರುವುದು ಒಂದು ಒಳ್ಳೆಯ ಬೆಳವಣಿಗೆ ಎಂಬೆಲ್ಲಾ ಮಾತುಗಳು, ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಈ ಪ್ರಕರಣದ ಹಿಂದಿನ ಮತ್ತೊಂದು ಮುಖ ಈಗ ಬಯಲಾಗಿದೆ.&lt;/p&gt;&lt;h3&gt;&lt;strong&gt;ನಿವೃತ್ತ ಜಡ್ಜ್ ಪುತ್ರಿಯ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮಾವ&lt;/strong&gt;&lt;/h3&gt;&lt;p&gt;ಡಿವೋರ್ಸ್ ಪಡೆದ ಮಹಿಳೆಯ ಈ ಡಿವೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ತಿಳಿಸಿದ್ದು, ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. @DeepikaBhardwaj ಎಂಬುವವರು ಈ ಬಗ್ಗೆ ಪೋಸ್ಟ್ ಮಾಡಿದ್ದು, ಎಕ್ಸ್&zwnj;ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.&lt;/p&gt;&lt;p&gt;ನಾನು ನಿವೃತ್ತ ಸುಬೇದಾರ್ ಶ್ಯಾಮ್ ಕಿಶೋರ್ ಅಗ್ನಿಹೋತ್ರಿ ಅವರೊಂದಿಗೆ ಮಾತನಾಡಿದೆ. ಇವರು ಮೇಜರ್ ಗೌರವ್ ಅಗ್ನಿಹೋತ್ರಿ ಅವರ ತಂದೆ ಡಿವೋರ್ಸ್&zwnj; ಪಡೆದ ಪ್ರಣೀತಾ ಅವರ ಮಾಜಿ ಪತಿ, ಪ್ರಣೀತಾ ನಿವೃತ್ತ ನ್ಯಾಯಾಧೀಶ ಜ್ಞಾನೇಂದ್ರ ಶರ್ಮಾ ಅವರ ಮಗಳು, ಇವರು ವಿಚ್ಛೇದನದ ನಂತರ ತಮ್ಮ ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ಸುದ್ದಿಯಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಸುಳ್ಳು ಕೇಸ್, ವಂಚನೆಯ ಆರೋಪ ಹೊರಿಸಿದ ಮಾವ&lt;/strong&gt;&lt;/h3&gt;&lt;p&gt;ಮಾತುಕತೆ ವೇಳೆ ಶ್ಯಾಮ್ ಕಿಶೋರ್ ಜಿ ನನ್ನ ಜೊತೆ ಈ ವಿಚಾರದ ಬಗ್ಗೆ ಹಲವು ವಿಚಾರಗಳನ್ನು ಹೇಳಿದ್ದರು. ಪ್ರಣೀತಾ ಕುಟುಂಬದ ಈ ಸಾಮಾಜಿಕ ಮಾಧ್ಯಮ ಪ್ರದರ್ಶನದಿಂದ ನಮ್ಮ ಕುಟುಂಬವು ಅಪಾರ ಅಪಹಾಸ್ಯಕ್ಕೆ ಒಳಗಾಗಿದೆ. ನಮ್ಮ ವಿರುದ್ಧ ಹರಡುತ್ತಿರುವ ಸುಳ್ಳುಗಳನ್ನು ಕೇಳಿ ನಾವು ಕಣ್ಣೀರು ಹಾಕುತ್ತಿದ್ದೇವೆ. ಈ ಮದುವೆಯ ಉದ್ದಕ್ಕೂ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಿದ್ದು ಪ್ರಣೀತಾ ಮತ್ತು ಅವರ ಕುಟುಂಬ. ನಾವು ಅವಳನ್ನು ಮಗಳಂತೆ ನೋಡಿಕೊಂಡೆವು ಆದರೆ ಅವರಿಗೆ ಕೆಲವು ವಿಭಿನ್ನ ಯೋಜನೆಗಳಿದ್ದವು.&lt;/p&gt;&lt;p&gt;ಈ ಮದುವೆಯು ಸಂಪೂರ್ಣವಾಗಿ ವರದಕ್ಷಿಣೆ ಇಲ್ಲದೆ ನಡೆಯಿತು ಮತ್ತು ಭಿನ್ನಾಭಿಪ್ರಾಯಗಳು ಮದುವೆಯ ದಿನದಿಂದಲೇ ಪ್ರಾರಂಭವಾಯಿತು. ಅವರು ಎಲ್ಲವನ್ನೂ ತಮ್ಮ ಇಚ್ಛೆಯಂತೆ ಮಾಡಲು ಬಯಸಿದ್ದರು. ಮದುವೆಯಾದ ಒಂದು ವರ್ಷದೊಳಗೆ ಅವರು ನಮ್ಮೆಲ್ಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದರು ಮತ್ತು ಜ್ಞಾನೇಂದ್ರ ಶರ್ಮಾ ನಮ್ಮನ್ನು ಜೈಲಿಗೆ ಕಳುಹಿಸುವುದಾಗಿ ನಮ್ಮೆಲ್ಲರನ್ನೂ ಬೆದರಿಸುತ್ತಿದ್ದರು. ಅವರು 25000 ರೂಪಾಯಿ ನೀಡಿ ಆರೋಪಗಳಿಗೆ ತಕ್ಕನಾದ ನಕಲಿ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದರು.&lt;/p&gt;&lt;p&gt;ನಂತರ ನನ್ನ ಮಗ ಉತ್ತರಾಖಂಡದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದರು, ನಂತರ ತನಿಖೆ ಆರಂಭಿಸಲಾಯಿತು ಮತ್ತು ಶರ್ಮಾ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಂಡು ಬಂದಾಗ, ಅವರಿಗೆ ರಾಜೀನಾಮೆ ನೀಡಲು ಅಥವಾ ಈ ವಿಷಯವನ್ನು ಇತ್ಯರ್ಥಪಡಿಸಲು ಕೇಳಲಾಯಿತು. ಈ ಪ್ರಕರಣ ಅವರ ವಿರುದ್ಧ ತಿರುಗುತ್ತಿದೆ ಎಂದು ತಿಳಿದಾಗ ಪ್ರಣೀತಾ ಹಿಂತಿರುಗಿದಳು.&lt;/p&gt;&lt;p&gt;ನಾವು ನಮ್ಮ ಮಗನನ್ನು ಭೇಟಿ ಮಾಡಲು ಹೋದಾಗಲೆಲ್ಲಾ, ಅವಳು ನಮ್ಮೊಂದಿಗೆ ಜಗಳವಾಡುತ್ತಿದ್ದಳು ಮತ್ತು ನಮ್ಮನ್ನು ಅಲ್ಲಿರುವುದಕ್ಕೆ ಬಿಡುತ್ತಿರಲಿಲ್ಲ, ನನ್ನ ಮಗನ ಭವಿಷ್ಯದ ಬಗ್ಗೆ ಯೋಚಿಸುತ್ತಾ ನಾನು ಎಲ್ಲದಕ್ಕೂ ಹೊಂದಿಕೊಂಡೆ. ಇದೆಲ್ಲದರ ನಡುವೆ, ಪ್ರಣೀತಾಳ ಸಹೋದರ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದನು. ನನ್ನ ಮಗ ಅವನನ್ನು ನೋಡಿಕೊಳ್ಳಲು ದಿನಗಟ್ಟಲೆ ಆಸ್ಪತ್ರೆಯಲ್ಲಿದ್ದನು. ಆದರೆ ಆತನ ಸ್ವಂತ ಕುಟುಂಬದವರಿಗೆ ಆತನ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ, ಚಿಕಿತ್ಸೆ ಫಲಿಸದೇ ಆತ( ಪ್ರಣೀತಾಳ ಸಹೋದರ) ನಂತರ ನಿಧನನಾದನು.&lt;/p&gt;&lt;p&gt;ಇದೆಲ್ಲದರ ನಡುವೆ ಕಳೆದ ವರ್ಷ, ಪ್ರಣೀತಾ ಗಂಡು ಮಗುವಿಗೆ ಜನ್ಮ ನೀಡಿದಳು. ನಾವೆಲ್ಲರೂ ತುಂಬಾ ಸಂತೋಷವಾಗಿದ್ದೆವು. ಆದರೆ ನಮ್ಮ ಮೊಮ್ಮಗ ಜನಿಸಿದ ದಿನ, ಪ್ರಣೀತಾಳ ತಾಯಿ ತನ್ನ ಮಗ ಈ ಮೂಲಕ ಹಿಂತಿರುಗಿದ್ದಾನೆ ಎಂದು ಹೇಳಿಕೊಳ್ಳಲು ಪ್ರಾರಂಭಿಸಿದಳು. ನಾವು ನಮ್ಮ ಮೊಮ್ಮಗನೊಂದಿಗೆ ಇರಲು ಸಾಧ್ಯವಾಗಲಿಲ್ಲ. ನಂತರ ಒಂದು ದಿನ ಅವರು ಮಗುವಿನ ಮುಂಡನ ಕಾರ್ಯ ಮಾಡುವುದಾಗಿ ಘೋಷಿಸಿದರು. ಆದರೆ ಮಗುವಿನ ತಂದೆಯ ಕುಟುಂಬವಾಗಿ ಅದನ್ನು ಮಾಡುವುದು ನಮ್ಮ ಹಕ್ಕು ಎಂದು ನಾವು ಹೇಳಿದೆವು ಅವರು ಜಗಳವಾಡಲು ಪ್ರಾರಂಭಿಸಿದರು ಮತ್ತು ತಕ್ಷಣ ವಿಚ್ಛೇದನವನ್ನು ಕೇಳಿದರು. ಆದರೆ ನನ್ನ ಮಗನಿಗೆ ವಿಚ್ಛೇದನ ಬೇಕಾಗಿರಲಿಲ್ಲ ಆದರೆ ನಾವು ಸಹ ದಣಿದಿದ್ದೆವು. ಹಾಗಾಗಿ ನಾವು ಒಪ್ಪಿಕೊಂಡೆವು.&lt;/p&gt;&lt;p&gt;ಅವರು ಈ ಪ್ರಕರಣದಲ್ಲಿ ಜೀವನಾಂಶ ತೆಗೆದುಕೊಂಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ನಾನು ನನ್ನ ಸೊಸೆಯ ಹೆಸರಿಗೆ ನನ್ನ 3 ಬಿಘಾ ಭೂಮಿಯನ್ನು ವರ್ಗಾಯಿಸಿದ್ದೇನೆ. ಅವರು ನನ್ನ ಮಗನ ಕಾರನ್ನು ಇಟ್ಟುಕೊಂಡಿದ್ದಾರೆ. 55ರಿಂದ 60 ಲಕ್ಷ ಮೌಲ್ಯದ ನಮ್ಮ ಆಭರಣಗಳು ಅವಳ ಬಳಿ ಇವೆ. ಇದರ ಜೊತೆಗೆ ನಾವು ಎಂದಿಗೂ ಜೀವನಾಂಶ ನೀಡಲು ನಿರಾಕರಿಸಲಿಲ್ಲ. ನಮ್ಮ ಮೊಮ್ಮಗನ ಜೀವನದಲ್ಲಿ ನಮಗೆ ಯಾವುದೇ ಉಪಸ್ಥಿತಿ ಇರಬಾರದು ಎಂದು ಅವರು ವಿಚ್ಛೇದನ ಪಡೆದಿದ್ದಾರೆ. ಅವರು ನಮ್ಮಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳಿಸಿದ್ದಾರೆ. ಭೇಟಿಯ ಹಕ್ಕನ್ನು ಸಹ ಮರೆತು ನನ್ನ ಮಗನಿಗೆ ವಿಚ್ಛೇದನಕ್ಕೆ ಒಪ್ಪಿಕೊಳ್ಳಲು ಅವರು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇರಾನ್&zwnj;ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಕೋಮಾದಲ್ಲಿ: ಕೋಂ ನಗರದಲ್ಲಿ ಚಿಕಿತ್ಸೆ&lt;/strong&gt;&lt;/p&gt;&lt;p&gt;ಇದು ಶಾಂತಿಯನ್ನು ತರಬಹುದೇನೋ ಎಂದು ಯೋಚಿಸಿ ನಾವು ಅವರ ಬೇಡಿಕೆಗಳಿಗೆ ಒಪ್ಪಿಕೊಂಡೆವು. ಆದರೆ ನಾವು ಅವರನ್ನು ನಂಬಿದ್ದು ತಪ್ಪು. ಅವರು ಪರಸ್ಪರ ಒಪ್ಪಿಗೆಯ ವಿಚ್ಛೇದನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ನನ್ನ ಕುಟುಂಬವು ಈಗ ಭಾರತದಾದ್ಯಂತ ಅವಮಾನಿಸಲ್ಪಡುತ್ತಿದೆ. ಈ ಅವಮಾನದಿಂದಾಗಿ ನನ್ನ ಹೆಂಡತಿ ಅಳು ನಿಲ್ಲಿಸುತ್ತಿಲ್ಲ. ಇತ್ತ ನನ್ನ ಮಗನಿಗೆ ಆತನ ಫೋಟೋಗಳು ಮತ್ತು ಅವನ ಘಟಕದ ವಿವರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದನ್ನು ಹೇಗೆ ಎದುರಿಸಬೇಕೆಂದು ತಿಳಿದಿಲ್ಲ ಎಂದು ಪ್ರಣೀತಾ ಮಾವ ಕಣ್ಣೀರಿಟ್ಟಿದ್ದಾರೆ.&lt;/p&gt;&lt;p&gt;ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಜನ ಪ್ರಕರಣಕ್ಕಿರುವ ಮತ್ತೊಂದು ಮುಖದ ಬಗ್ಗೆ ತಿಳಿದು ಆಘಾತ ವ್ಯಕ್ತಪಡಿಸಿದ್ದಾರೆ. ಆಕೆಯ ತಂದೆ ನಿವೃತ್ತ ಜಡ್ಜ್ ಆಗಿದ್ದು, ಅವರು ಕಾನೂನನ್ನು ದುರುಪಯೋಗಪಡಿಸಿಕೊಂಡು 2 ಕುಟುಂಬವನ್ನು ಹಾಳು ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇಂದಿನ ಕಾಲದಲ್ಲಿ ಹುಡುಗರು ಬದುಕುವುದು ಕಷ್ಟ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೋರ್ಮುಜ್ ಜಲಸಂಧಿ ತೆರೆಯಬೇಕೆಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗೊತ್ತುವಳಿಗೆ ರಷ್ಯಾ, ಚೀನಾ ಬ್ರೇಕ್&lt;/strong&gt;&lt;/p&gt;]]></content:encoded>
            <category>women</category>
            <dc:creator>Anusha Kb</dc:creator>
            <atom:link href="https://kannada.asianetnews.com/relationship/big-twist-in-delhi-family-lavish-welcome-for-divorced-daughter-father-in-law-accused-of-false-case/articleshow-dpr1oar"/>
        </item>
    </channel>
</rss>
