<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 09 Aug 2026 15:44:58 +0530</lastBuildDate>
        <atom:link href="https://kannada.asianetnews.com/rss/women" rel="self" type="application/rss+xml"/>
        <item>
            <title><![CDATA[Floral Earrings: ಫ್ಲೋರಲ್ ಸ್ಟಡ್ ಕಿವಿಯೋಲೆಗಳ ಅಂದದ ಡಿಸೈನ್‌ಗಳು: ನೋಡಿದ್ರೆ ಖುಷಿಯಾಗೋದು ಗ್ಯಾರಂಟಿ!]]></title>
            <link>https://kannada.asianetnews.com/webstories/fashion/stunning-floral-stud-earring-designs-for-a-modern-look-gvd-2b542hh</link>
            <guid isPermaLink="true">https://kannada.asianetnews.com/webstories/fashion/stunning-floral-stud-earring-designs-for-a-modern-look-gvd-2b542hh</guid>
            <pubDate>Sun, 09 Aug 2026 00:29:24 +0530</pubDate>
            <description><![CDATA[ಫ್ಲೋರಲ್ ಸ್ಟಡ್ ಓಲೆಗಳ ಟ್ರೆಂಡಿ ಡಿಸೈನ್&zwnj;ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪರ್ಲ್ ಸ್ಟೋನ್&zwnj;ವರ್ಕ್, ರೋಸ್ ಪ್ಯಾಟರ್ನ್, ಜಿಯೋಮೆಟ್ರಿಕ್ ಪ್ಯಾಚ್&zwnj;ವರ್ಕ್ ಹಾಗೂ ಆರ್ಕಿಡ್ ಸ್ಟೈಲ್&zwnj;ನಂತಹ ಹಲವು ವಿನ್ಯಾಸಗಳು ನಿಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzgeygps0n9m6mrxy702yppg,imgname-sawan-jewellery-for-wife-1786185204441.jpg" type="image/jpeg" height="390" width="690"/>
            <category>women</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stunning-floral-stud-earring-designs-for-a-modern-look-gvd-2b542hh"/>
        </item>
        <item>
            <title><![CDATA[ವಾಷಿಂಗ್ ಮಷಿನ್‌ನಲ್ಲಿ ಪ್ಯಾರಸಿಟಮಾಲ್ ಮಾತ್ರೆ ಹಾಕಿದ್ರೆ ಸಾಕು, ಕೊಳೆಯೆಲ್ಲಾ ಹೋಗಿ ಬಟ್ಟೆ ಹೊಸದರಂತೆ ಹೊಳೆಯುತ್ತೆ!]]></title>
            <link>https://kannada.asianetnews.com/life/can-fever-tablets-really-clean-stains-inside-the-bizarre-viral-video/articleshow-5zqld23</link>
            <guid isPermaLink="true">https://kannada.asianetnews.com/life/can-fever-tablets-really-clean-stains-inside-the-bizarre-viral-video/articleshow-5zqld23</guid>
            <pubDate>Sat, 08 Aug 2026 15:30:26 +0530</pubDate>
            <description><![CDATA[&lt;p&gt;&lt;strong&gt;Paracetamol laundry hack:&lt;/strong&gt; ಜ್ವರಕ್ಕೆ ಬಳಸುವ ಪ್ಯಾರಸಿಟಮಾಲ್ ಮಾತ್ರೆ ವಾಷಿಂಗ್ ಮಷಿನ್&zwnj;ನಲ್ಲಿ ಹಾಕಿದ್ರೆ ಬಟ್ಟೆಗಳ ಮೇಲಿನ ಮೊಂಡು ಕಲೆ ಮಾಯವಾಗುತ್ತಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಚಿತ್ರ ಹ್ಯಾಕ್ ಮತ್ತು ಅದರ ಹಿಂದಿನ ಅಸಲಿ ಸತ್ಯ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgd08nrgjrs8szgprgr9zef,imgname-thumbnail---2026-08-08t152850.648-1786183164537.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ&lt;/strong&gt;ನೆಯಲ್ಲಿ ಬಟ್ಟೆಗಳನ್ನು ಅಥವಾ ವಸ್ತುಗಳನ್ನು ಶುಚಿಗೊಳಿಸಲು ನಾವು ಸಾಮಾನ್ಯವಾಗಿ ಬೇಕಿಂಗ್ ಸೋಡಾ, ನಿಂಬೆರಸ ಅಥವಾ ವಿನೆಗರ್ ಬಳಸುವುದನ್ನು ಕೇಳಿದ್ದೇವೆ. ಆದರೆ ಜ್ವರ ಮತ್ತು ಮೈಕೈ ನೋವಿಗೆ ಬಳಸುವ 'ಪ್ಯಾರಸಿಟಮಾಲ್' (Paracetamol) ಮಾತ್ರೆಗಳನ್ನು ಬಟ್ಟೆ ತೊಳೆಯಲು ಬಳಸಬಹುದು ಎಂದರೆ ನೀವು ನಂಬುತ್ತೀರಾ? ಹೌದು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಇಂತಹದ್ದೊಂದು ವಿಚಿತ್ರ ಪ್ರಯೋಗದ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋದಲ್ಲೇನಿದೆ?&lt;/strong&gt;&lt;/h2&gt;&lt;p&gt;ಇನ್&zwnj;ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ತನ್ನ ಮನೆಯ ವಾಷಿಂಗ್ ಮಷಿನ್&zwnj;ನಲ್ಲಿ ಕೊಳಕು ಬಟ್ಟೆಗಳ ಜೊತೆಗೆ ಕೆಲವು ಪ್ಯಾರಸಿಟಮಾಲ್ ಮಾತ್ರೆಗಳನ್ನು ಹಾಕಿ ಮಷಿನ್ ಆನ್ ಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಬಟ್ಟೆಗಳನ್ನು ಹೊರತೆಗೆದಾಗ, ಅವು ಯಾವುದೇ ಕಲೆಗಳಿಲ್ಲದೆ ಹೊಸದರಂತೆ ಮಿನುಗುತ್ತಿರುತ್ತವೆ.&lt;/p&gt;&lt;p&gt;ಅಷ್ಟೇ ಅಲ್ಲದೆ, ಕಾಲರ್ ಭಾಗದಲ್ಲಿ ಹಳದಿ ಬಣ್ಣದ ಮೊಂಡು ಕಲೆಗಳಿದ್ದ ಬಿಳಿ ಶರ್ಟ್ ಅನ್ನು ನೀರಿನ ಟಬ್&zwnj;ನಲ್ಲಿ ಹಾಕಿ, ಅದಕ್ಕೆ ಪ್ಯಾರಸಿಟಮಾಲ್ ಮಾತ್ರೆಗಳನ್ನು ಸೇರಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ ಆ ಶರ್ಟ್ ಅನ್ನು ನೋಡಿದಾಗ, ಕಾಲರ್ ಮೇಲಿದ್ದ ಹಳದಿ ಕಲೆಗಳು ಸಂಪೂರ್ಣವಾಗಿ ಮಾಯವಾಗಿ ಶರ್ಟ್ ಅಚ್ಚ ಬಿಳಿ ಬಣ್ಣಕ್ಕೆ ತಿರುಗಿರುತ್ತದೆ. ಈ ವಿಡಿಯೋ @acharyaveda_ ಎಂಬ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ.&lt;/p&gt;&lt;h2&gt;&lt;strong&gt;ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?&lt;/strong&gt;&lt;/h2&gt;&lt;p&gt;ಈ ವಿಡಿಯೋ ಕಂಡು ನೆಟ್ಟಿಗರು ಎರಡು ಗುಂಪುಗಳಾಗಿ ಚರ್ಚಿಸುತ್ತಿದ್ದಾರೆ. ಕೆಲವರು ಇದೊಂದು ಅದ್ಭುತ 'ಮ್ಯಾಜಿಕ್' ಮತ್ತು ಸ್ಮಾರ್ಟ್ ಟ್ರಿಕ್ ಎಂದು ಹೊಗಳುತ್ತಿದ್ದಾರೆ. &quot;ನಾನು ಇದನ್ನು ಪ್ರಯತ್ನಿಸಿದೆ, ಇದು ನಿಜಕ್ಕೂ ಕೆಲಸ ಮಾಡುತ್ತದೆ&quot; ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು &quot;ಇದು ನಿಜವೋ ಇಲ್ಲವೋ ಎಂದು ಯಾರಾದರೂ ಪ್ರಯತ್ನಿಸಿ ಹೇಳಿದರೆ ನಾನು ಕೂಡ ಮಾಡುತ್ತೇನೆ&quot; ಎಂದಿದ್ದಾರೆ.&lt;/p&gt;&lt;p&gt;ಆದರೆ, ಇನ್ನೊಂದು ವರ್ಗದ ಜನರು ಈ ಪ್ರಯೋಗವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. &quot;ಪ್ರಾಣ ಉಳಿಸುವ ಔಷಧಿಗಳನ್ನು ಹೀಗೆ ಬಟ್ಟೆ ತೊಳೆಯಲು ಬಳಸುವುದು ತಪ್ಪು. ಇದು ಮದ್ದಿನ ದುರ್ಬಳಕೆ&quot; ಎಂದು ಕಿಡಿಕಾರಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಡಿಟರ್ಜೆಂಟ್&zwnj;ಗಳು ಇರುವಾಗ ಇಂತಹ ಪ್ರಯೋಗಗಳ ಅವಶ್ಯಕತೆಯಿಲ್ಲ ಎಂಬುದು ಇವರ ವಾದ.&lt;/p&gt;&lt;h2&gt;&lt;strong&gt;ಮತ್ತೆ ಮುನ್ನೆಲೆಗೆ ಬಂದ ವಿಡಿಯೋ&lt;/strong&gt;&lt;/h2&gt;&lt;p&gt;ಈ ವಿಡಿಯೋ ಹಳೆಯದಾಗಿದ್ದರೂ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇಂತಹ ಹ್ಯಾಕ್&zwnj;ಗಳು ನೋಡಲು ಆಕರ್ಷಕವಾಗಿದ್ದರೂ, ಪ್ಯಾರಸಿಟಮಾಲ್&zwnj;ನಲ್ಲಿರುವ ರಾಸಾಯನಿಕಗಳು ಬಟ್ಟೆಯ ನೂಲು ಅಥವಾ ವಾಷಿಂಗ್ ಮಷಿನ್&zwnj;ನ ಆಂತರಿಕ ಭಾಗಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದು ಸ್ಪಷ್ಟವಿಲ್ಲ. ಆದ್ದರಿಂದ ಕಲೆಗಳನ್ನು ತೆಗೆಯಲು ಬಟ್ಟೆಗಳಿಗೆಂದೇ ತಯಾರಾದ ಸಾಬೂನು ಅಥವಾ ಪುಡಿಗಳನ್ನು ಬಳಸುವುದು ಹೆಚ್ಚು ಸುರಕ್ಷಿತ. ಔಷಧಗಳನ್ನು ಕೇವಲ ವೈದ್ಯಕೀಯ ಉದ್ದೇಶಗಳಿಗೆ ಮಾತ್ರ ಬಳಸುವುದು ಸೂಕ್ತ.&lt;/p&gt;&lt;h2&gt;&lt;strong&gt;ಇದು ಗಮನದಲ್ಲಿರಲಿ&lt;/strong&gt;&lt;/h2&gt;&lt;h3&gt;&lt;strong&gt;ವಾಷಿಂಗ್ ಮಷಿನ್ ಆರೋಗ್ಯ&lt;/strong&gt;&lt;/h3&gt;&lt;p&gt;ಮಾತ್ರೆಗಳು ನೀರಿನಲ್ಲಿ ಸರಿಯಾಗಿ ಕರಗದೆ ಮಷಿನ್&zwnj;ನ ಪೈಪ್&zwnj;ಗಳಲ್ಲಿ ಸಿಲುಕಿಕೊಳ್ಳಬಹುದು ಅಥವಾ ಮಷಿನ್&zwnj;ನ ಒಳಗಿನ ಲೋಹದ ಭಾಗಗಳ ಜೊತೆ ರಾಸಾಯನಿಕ ಕ್ರಿಯೆ ನಡೆಸಿ ಮಷಿನ್ ತುಕ್ಕು ಹಿಡಿಯಲು ಕಾರಣವಾಗಬಹುದು.&lt;/p&gt;&lt;h3&gt;&lt;strong&gt;ಚರ್ಮದ ಸಮಸ್ಯೆ&lt;/strong&gt;&lt;/h3&gt;&lt;p&gt;ಬಟ್ಟೆ ತೊಳೆದ ನಂತರವೂ ಮಾತ್ರೆಯ ರಾಸಾಯನಿಕ ಅಂಶಗಳು ಬಟ್ಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ಉಳಿದುಕೊಳ್ಳಬಹುದು. ಅಂತಹ ಬಟ್ಟೆಯನ್ನು ಧರಿಸಿದಾಗ ಚರ್ಮದ ಮೇಲೆ ಅಲರ್ಜಿ, ತುರಿಕೆ ಅಥವಾ ಕೆಂಪು ದದ್ದುಗಳು ಉಂಟಾಗಬಹುದು.&lt;/p&gt;&lt;h3&gt;&lt;strong&gt;ವೈಜ್ಞಾನಿಕ ಪರೀಕ್ಷೆ ನಡೆದಿಲ್ಲ&lt;/strong&gt;&lt;/h3&gt;&lt;p&gt;ಡಿಟರ್ಜೆಂಟ್ ಪುಡಿಗಳನ್ನು ಬಟ್ಟೆ ತೊಳೆಯಲೆಂದೇ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ ತಯಾರಿಸಲಾಗುತ್ತದೆ. ಆದರೆ ಮಾತ್ರೆಗಳು ಮನುಷ್ಯನ ರಕ್ತಗತವಾಗಲು ತಯಾರಿಸಲ್ಪಟ್ಟವುಗಳೇ ಹೊರತು, ಬಟ್ಟೆ ತೊಳೆಯಲು ಅಲ್ಲ. ಹಾಗಾಗಿ ಇದು ಬಟ್ಟೆಯ ಮೇಲೆ ಅಥವಾ ಮಷಿನ್ ಮೇಲೆ ಏನು ತೊಂದರೆ ಕೊಡುತ್ತದೆ ಎಂಬುದು ಇನ್ನೂ ಯಾರಿಗೂ ಗೊತ್ತಿಲ್ಲ.&lt;/p&gt;&lt;p&gt;सफ़ेद कपडे से मैल हटाने का सबसे आसान तरीका... pic.twitter.com/vQn2Ijhq4T&lt;/p&gt;&lt;p&gt;&mdash;  (@acharyaveda_) October 5, 2025&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/life/can-fever-tablets-really-clean-stains-inside-the-bizarre-viral-video/articleshow-5zqld23"/>
        </item>
        <item>
            <title><![CDATA[ಗೋಡೆ ಮೇಲೆ ಮಕ್ಕಳು ಗೀಚಿದ್ದಾರಾ? ಬಟ್ಟೆಗೆ ಚ್ಯೂಯಿಂಗ್​ ಗಮ್ ಅಂಟಿದ್ಯಾ? ಚಸ್ಮಕ್ಕೆ ಗೀರು ಬಿದ್ದಿದ್ಯಾ? ಚಿಂತೆ ಬಿಡಿ]]></title>
            <link>https://kannada.asianetnews.com/gallery/life/scratch-the-wall-spect-get-scratched-chewing-gum-stick-to-clothes-easy-tips-to-remove-it-suc-6gg48gv</link>
            <guid isPermaLink="true">https://kannada.asianetnews.com/gallery/life/scratch-the-wall-spect-get-scratched-chewing-gum-stick-to-clothes-easy-tips-to-remove-it-suc-6gg48gv</guid>
            <pubDate>Sat, 08 Aug 2026 18:42:13 +0530</pubDate>
            <description><![CDATA[&lt;p&gt;ಬಟ್ಟೆಗೆ ಅಂಟಿದ ಚ್ಯೂಯಿಂಗ್ ಗಮ್, ಗೋಡೆಯ ಮೇಲಿನ ಗೀಚು, ಕನ್ನಡಕದ ಗೀರು ಮತ್ತು ಬಾಟಲಿಯ ಕೆಟ್ಟ ವಾಸನೆಯಂತಹ ದಿನನಿತ್ಯದ ಸಮಸ್ಯೆಗಳಿಗೆ ಇಲ್ಲಿ ಸುಲಭವಾದ ಮನೆಮದ್ದುಗಳನ್ನು ನೀಡಲಾಗಿದೆ. ಐಸ್, ಕೊಬ್ಬರಿ ಎಣ್ಣೆ, ಆಲೂಗಡ್ಡೆ ರಸ ಮತ್ತು ಉಪ್ಪಿನಂತಹ ಸರಳ ವಸ್ತು ಬಳಸಿ ಹೇಗೆ ಪರಿಹರಿಸಬಹುದು ಎಂದು ವಿವರಿಸಲಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgqqr377yt6fceqryj2b243,imgname-tips-00-1786194419815.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಟ್ಟೆಗೆ ಅಂಟಿದ ಚ್ಯೂಯಿಂಗ್ ಗಮ್, ಗೋಡೆಯ ಮೇಲಿನ ಗೀಚು, ಕನ್ನಡಕದ ಗೀರು ಮತ್ತು ಬಾಟಲಿಯ ಕೆಟ್ಟ ವಾಸನೆಯಂತಹ ದಿನನಿತ್ಯದ ಸಮಸ್ಯೆಗಳಿಗೆ ಇಲ್ಲಿ ಸುಲಭವಾದ ಮನೆಮದ್ದುಗಳನ್ನು ನೀಡಲಾಗಿದೆ. ಐಸ್, ಕೊಬ್ಬರಿ ಎಣ್ಣೆ, ಆಲೂಗಡ್ಡೆ ರಸ ಮತ್ತು ಉಪ್ಪಿನಂತಹ ಸರಳ ವಸ್ತು ಬಳಸಿ ಹೇಗೆ ಪರಿಹರಿಸಬಹುದು ಎಂದು ವಿವರಿಸಲಾಗಿದೆ&lt;/p&gt;&lt;img&gt;&lt;p&gt;ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ ಎನ್ನುವ ಮಾತಿದೆ. ಅದೇ ರೀತಿ, ದಿನನಿತ್ಯ ಮನೆಯಲ್ಲಿ ಆಗುವ ಕೆಲವೊಂದು ಎಡವಟ್ಟುಗಳಿಗೂ ಏನಾದರೂ ಪರಿಹಾರ ಇದ್ದೇ ಇರುತ್ತದೆ. ಮನೆಯಲ್ಲಿ ಮಕ್ಕಳು ಇದ್ದರೆ ಗೋಡೆ ಮೇಲೆ ತಮ್ಮ ಕಲಾಕೃತಿಯನ್ನು ರಚಿಸುವುದು, ಮನಸ್ಸಿಗೆ ಬಂದದ್ದನ್ನೇ ಗೀಚೋದು ಇದ್ದೇ ಇರುತ್ತದೆ. ಇನ್ನು ಚಸ್ಮವನ್ನು ಎಲ್ಲೆಲ್ಲೋ ಇಡುವ ಕಾರಣ, ಗೀರು ಬೀಳುತ್ತದೆ. ಮನೆಯಲ್ಲಿ ಮಕ್ಕಳ ಕಿತಾಪತಿಯಿಂದಲೋ ಅಥವಾ ಶಾಲಾ, ಕಾಲೇಜು, ಕಚೇರಿಗಳಲ್ಲಿ ಸ್ನೇಹಿತರ ಕಿತಾಪತಿಯಿಂದಲೋ ಅಥವಾ ಆಕಸ್ಮಿಕವಾಗಿ ಬಟ್ಟೆಯ ಮೇಲೆ ಚ್ಯೂಯಿಂಗ್​ ಗಮ್​ ಅಂಟಿ ಬಿಟ್ಟರೆ ಸುಲಭದಲ್ಲಿ ಹೋಗುವುದೇ ಇಲ್ಲ. ಅವುಗಳೂ ಸೇರಿದಂತೆ ಕೆಲವೊಂದಕ್ಕೆ ಇಲ್ಲಿ ಸುಲಭದ ಪರಿಹಾರ ನೀಡಲಾಗಿದೆ.&lt;/p&gt;&lt;img&gt;&lt;p&gt;ಬಟ್ಟೆಯ ಮೇಲೆ ಯಾವುದಾದರೂ ಕಾರಣಕ್ಕೆ ಚ್ಯೂಯಿಂಗ್​ ಗಮ್​ ಅಂಟಿದ್ರೆ, ಅದನ್ನು ಕೀಳಲು ಸಾಧ್ಯವೇ ಇಲ್ಲ. ಎಳೆದಷ್ಟೂ ಎಳೆಯುತ್ತಲೇ ಹೋಗುತ್ತದೆ ಅದು. ಅಂಥ ಸಂದರ್ಭದಲ್ಲಿ, ಒಂದು ಐಸ್​ ತೆಗೆದುಕೊಂಡು ಚ್ಯೂಯಿಂಗ್​ ಗಮ್​ ಮೇಲೆ ಇಟ್ಟು ಉಜ್ಜಿ. ಚ್ಯೂಯಿಂಗ್​ ಗಮ್​ ಗಟ್ಟಿಯಾಗಿ ಮೇಲೆ ಸುಲಭದಲ್ಲಿ ಬರುತ್ತದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಮಕ್ಕಳು ಇರುವ ಮನೆಗಳಲ್ಲಿನ ಗೋಡೆಗಳು ಪೆನ್ನು, ಪೆನ್ಸಿಲ್​ಗಳ ತಾಣವಾಗಿರುತ್ತದೆ. ಬೇಡ ಬೇಡ ಎಂದರೂ ಮಕ್ಕಳು ಅದರ ಮೇಲೆ ಗೀಚುವುದು ಸರ್ವೇ ಸಾಮಾನ್ಯ. ಸುಂದರ ಗೋಡೆ ಕಂಡ ತಕ್ಷಣ ಅದರ ಮೇಲೆ ಗೀಚಿಬಿಡೋಣ ಎನ್ನುತ್ತದೆ ಮಕ್ಕಳ ಮನಸ್ಸು. ಇದಕ್ಕಾಗಿ ಪದೇ ಪದೇ ಪೇಂಟ್​ ಮಾಡಿಸುವುದು ಕಷ್ಟವೇ ಸರಿ. ಆದರೆ ಆ ಚಿಂತೆ ಬಿಡಿ. ಇದಕ್ಕೆ ಸುಲಭದ ಉಪಾಯ ಇದೆ. ಅದೇನೆಂದರೆ, ಕೊಬ್ಬರಿ ಎಣ್ಣೆಯನ್ನು ಒಂದು ಬಟ್ಟೆಯ ಮೇಲೆ ಹಾಕಿಕೊಂಡು ಅದನ್ನು ಗೋಡೆಗೆ ಉಜ್ಜಿ. ಇದರಿಂದ ಸುಲಭದಲ್ಲಿ ಎಲ್ಲಾ ಬಣ್ಣಬಣ್ಣದ ಗೀಟುಗಳು ಮಾಯವಾಗುತ್ತವೆ.&lt;/p&gt;&lt;img&gt;&lt;p&gt;ಇನ್ನು ಚಸ್ಮದ ವಿಷಯ. ಚಸ್ಮ ಇಲ್ಲದಿದ್ದರೆ ಎಷ್ಟೋ ಮಂದಿಯ ಪಾಡು ಆ ದೇವರೇ ಕಾಪಾಡಬೇಕು. ಆದರೆ ಎಷ್ಟೇ ಚೆನ್ನಾಗಿ ಇಟ್ಟುಕೊಂಡರೂ, ಇದರ ಮೇಲೆ ಗೀರು ಬೀಳುವುದು ಸಹಜ. ಯಾವ್ಯಾವುದೋ ವಸ್ತುಗಳಿಗೆ ತಾಗಿ ಗೀರು ಬಿದ್ದುಬಿಡುತ್ತದೆ. ಅದನ್ನು ಸರಿ ಮಾಡುವ ಉಪಾಯವು ತುಂಬಾ ಸುಲಭ. ಸ್ಪೆಕ್ಟ್​ನ ಗ್ಲಾಸ್​​ಗೆ ಸ್ವಲ್ಪ ಆಲೂಗಡ್ಡೆಯ ರಸವನ್ನು ಹಾಕಿ ಒಣ ಬಟ್ಟೆಯಿಂದ ಉಜ್ಜಿದರೆ ಫಳಫಳ ಹೊಳೆಯುತ್ತದೆ.&lt;/p&gt;&lt;img&gt;&lt;p&gt;ಪ್ಲಾಸ್ಟಿಕ್​ ಬಾಟಲಿಯಿಂದ ಕೆಟ್ಟ ವಾಸನೆ ಬರ್ತಿದ್ಯಾ? ಹಾಗಿದ್ದರೆ ಚಿಂತೆ ಬಿಡಿ. ನೀವು ಮಾಡಬೇಕಿರುವುದು ಇಷ್ಟೇ. ಬಾಟಲಿಗೆ ಸ್ವಲ್ಪ ಉಪ್ಪು ಹಾಕಿ, ಸ್ವಲ್ಪ ಬಿಸಿ ನೀರು ಹಾಕಿ ಅದನ್ನು ಚೆನ್ನಾಗಿ ಅಲ್ಲಾಡಿಸಿ ನೀರು ಎಸೆಯಿರಿ. ವಾಸನೆ ಗಾಯಬ್​.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/scratch-the-wall-spect-get-scratched-chewing-gum-stick-to-clothes-easy-tips-to-remove-it-suc-6gg48gv"/>
        </item>
        <item>
            <title><![CDATA[ಐದೇ ಐದು ಸಿಂಪಲ್ ಸ್ಟೆಪ್ಸ್.. ಧೂಳು ಮಾತ್ರವಲ್ಲ, ಡೋರ್‌ಮ್ಯಾಟ್‌ನಲ್ಲಿರುವ ಕೊಳೆ, ವಾಸನೆ ಎರಡೂ ನಿವಾರಣೆಯಾಗುತ್ತೆ]]></title>
            <link>https://kannada.asianetnews.com/gallery/life/5-simple-steps-to-get-rid-of-dust-and-odor-from-your-dirty-door-mats-6sxpoaq</link>
            <guid isPermaLink="true">https://kannada.asianetnews.com/gallery/life/5-simple-steps-to-get-rid-of-dust-and-odor-from-your-dirty-door-mats-6sxpoaq</guid>
            <pubDate>Thu, 06 Aug 2026 22:24:26 +0530</pubDate>
            <description><![CDATA[&lt;p&gt;Door mat cleaning tips: ಮನೆಯ ಪ್ರವೇಶ ದ್ವಾರದಲ್ಲಿರುವ ಡೋರ್ ಮ್ಯಾಟ್ ಕೇವಲ ಧೂಳನ್ನು ಮಾತ್ರವಲ್ಲ, ಬ್ಯಾಕ್ಟೀರಿಯಾಗಳನ್ನೂ ಆಕರ್ಷಿಸುತ್ತದೆ. ಬರೀ ಕೊಡವಿದರೆ ಧೂಳು ಹೋಗುವುದಿಲ್ಲ, ಅದರ ಆಳದಲ್ಲಿರುವ ಕೊಳೆಯನ್ನು ತೆಗೆದು ಹೊಸದರಂತೆ ಮಿನುಗಿಸಲು ಈ ಸರಳ ಕಿಚನ್ ಹ್ಯಾಕ್ಸ್ ಬಳಸಿ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbznrjnvh5rwcwfezq7pmwr,imgname-thumbnail---2026-08-06t220542.387-1786034971221.jpg" type="image/jpeg" height="390" width="690"/>
            <content:encoded><![CDATA[&lt;p&gt;Door mat cleaning tips: ಮನೆಯ ಪ್ರವೇಶ ದ್ವಾರದಲ್ಲಿರುವ ಡೋರ್ ಮ್ಯಾಟ್ ಕೇವಲ ಧೂಳನ್ನು ಮಾತ್ರವಲ್ಲ, ಬ್ಯಾಕ್ಟೀರಿಯಾಗಳನ್ನೂ ಆಕರ್ಷಿಸುತ್ತದೆ. ಬರೀ ಕೊಡವಿದರೆ ಧೂಳು ಹೋಗುವುದಿಲ್ಲ, ಅದರ ಆಳದಲ್ಲಿರುವ ಕೊಳೆಯನ್ನು ತೆಗೆದು ಹೊಸದರಂತೆ ಮಿನುಗಿಸಲು ಈ ಸರಳ ಕಿಚನ್ ಹ್ಯಾಕ್ಸ್ ಬಳಸಿ.&lt;/p&gt;&lt;p&gt;&lt;/p&gt;&lt;img&gt;&lt;p&gt;&lt;strong&gt;ಇಲ್ಲಿವೆ ಕೆಲವು ಸುಲಭ ಹಂತ&lt;/strong&gt;ಮನೆಯನ್ನು ನಾವು ಎಷ್ಟೇ ಶುಚಿಯಾಗಿ ಇಟ್ಟುಕೊಂಡರೂ, ಮನೆಯ ಹೊಸ್ತಿಲಲ್ಲಿರುವ ಡೋರ್ ಮ್ಯಾಟ್ ಕೊಳಕಾಗಿದ್ದರೆ ಇಡೀ ಮನೆಯ ಅಂದವೇ ಹಾಳಾಗುತ್ತದೆ. ಪ್ರತಿದಿನ ಚಪ್ಪಲಿಗಳ ಮೂಲಕ ಬರುವ ಧೂಳು, ಮಣ್ಣು ಮತ್ತು ಕಸ ಮೊದಲು ಸೇರುವುದೇ ಡೋರ್ ಮ್ಯಾಟ್&zwnj;ನಲ್ಲಿ. ಇದನ್ನು ಸರಿಯಾಗಿ ಕ್ಲೀನ್ ಮಾಡದಿದ್ದರೆ ಕೇವಲ ಧೂಳು ಮಾತ್ರವಲ್ಲದೆ, ಬ್ಯಾಕ್ಟೀರಿಯಾ ಮತ್ತು ಫಂಗಸ್&zwnj;ಗಳು ಬೆಳೆದು ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ. ಹೆಚ್ಚಿನವರು ಡೋರ್ ಮ್ಯಾಟ್ ಅನ್ನು ಕೇವಲ ಕೊಡವಿ ಹಾಕುತ್ತಾರೆ, ಆದರೆ ಅದರಿಂದ ಪೂರ್ತಿ ಕೊಳೆ ಹೋಗುವುದಿಲ್ಲ. ಡೋರ್ ಮ್ಯಾಟ್ ಅನ್ನು ಹೊಸದರಂತೆ ಮಿನುಗಿಸಲು ಇಲ್ಲಿವೆ ಕೆಲವು ಸುಲಭ ಹಂತಗಳು.&lt;/p&gt;&lt;img&gt;&lt;p&gt;&lt;strong&gt;ಧೂಳನ್ನು ಪೂರ್ತಿಯಾಗಿ ತೆಗೆಯಿರಿ&lt;/strong&gt;ಮೊದಲು ಡೋರ್ ಮ್ಯಾಟ್ ಅನ್ನು ಹೊರಗೆ ತೆಗೆದುಕೊಂಡು ಹೋಗಿ ಒಂದು ಕೋಲಿನಿಂದ ಚೆನ್ನಾಗಿ ತಟ್ಟಿ ಧೂಳು ಮತ್ತು ಮಣ್ಣನ್ನು ತೆಗೆಯಿರಿ. ಸಾಧ್ಯವಾದರೆ ವ್ಯಾಕ್ಯೂಮ್ ಕ್ಲೀನರ್ ಬಳಸಿ ಅದರ ಎಳೆಗಳ ನಡುವೆ ಸಿಲುಕಿರುವ ಸಣ್ಣ ಕಸವನ್ನು ಹೊರಹಾಕಿ.&lt;/p&gt;&lt;img&gt;&lt;p&gt;&lt;strong&gt;ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿಡಿ&lt;/strong&gt;ಒಂದು ಬಕೆಟ್&zwnj;ನಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಡಿಟರ್ಜೆಂಟ್ ಪುಡಿ ಅಥವಾ ಲಿಕ್ವಿಡ್ ಸೋಪ್ ಸೇರಿಸಿ. ಈ ನೀರಿನಲ್ಲಿ ಡೋರ್ ಮ್ಯಾಟ್ ಅನ್ನು ಕನಿಷ್ಠ 30 ರಿಂದ 60 ನಿಮಿಷಗಳ ಕಾಲ ನೆನೆಸಿಡಿ. ಇದರಿಂದ ಮ್ಯಾಟ್&zwnj;ಗೆ ಅಂಟಿಕೊಂಡಿರುವ ಕಠಿಣವಾದ ಕೊಳೆ ಸಡಿಲವಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಬ್ರಷ್&zwnj;ನಿಂದ ಉಜ್ಜಿ&lt;/strong&gt;ನೆನೆಸಿದ ನಂತರ ಒಂದು ಗಟ್ಟಿಯಾದ ಬ್ರಷ್ ತೆಗೆದುಕೊಂಡು ಮ್ಯಾಟ್&zwnj;ನ ಎರಡೂ ಬದಿಗಳಲ್ಲಿ ಚೆನ್ನಾಗಿ ಉಜ್ಜಿ. ಮ್ಯಾಟ್&zwnj;ನಲ್ಲಿ ಜಿಡ್ಡಿನ ಕಲೆಗಳಿದ್ದರೆ ಸ್ವಲ್ಪ ಬೇಕಿಂಗ್ ಸೋಡಾ ಅಥವಾ ವಿನೆಗರ್ ಬಳಸಿ ಉಜ್ಜುವುದರಿಂದ ಕಲೆಗಳು ಬೇಗನೆ ಮಾಯವಾಗುತ್ತವೆ ಮತ್ತು ದುರ್ವಾಸನೆ ಕೂಡ ನಿಲ್ಲುತ್ತದೆ.&lt;/p&gt;&lt;img&gt;&lt;p&gt;&lt;strong&gt;ಬಿಸಿಲಿನಲ್ಲಿ ಒಣಗಿಸಿ&lt;/strong&gt;ತೊಳೆದ ಮ್ಯಾಟ್ ಅನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸುವುದು ಅತಿ ಮುಖ್ಯ. ಮ್ಯಾಟ್&zwnj;ನಲ್ಲಿ ಸ್ವಲ್ಪ ತೇವಾಂಶ ಉಳಿದರೂ ಅದು ಮತ್ತೆ ಬ್ಯಾಕ್ಟೀರಿಯಾಗಳ ತಾಣವಾಗಿ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಸೂರ್ಯನ ಬೆಳಕು ನೈಸರ್ಗಿಕವಾಗಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.&lt;/p&gt;&lt;img&gt;&lt;p&gt;&lt;strong&gt;ಈ ತಪ್ಪುಗಳನ್ನು ಮಾಡಬೇಡಿ&lt;/strong&gt;*ರಬ್ಬರ್ ಅಡಿಭಾಗವಿರುವ ಮ್ಯಾಟ್&zwnj;ಗಳನ್ನು ತುಂಬಾ ಹೊತ್ತು ನೀರಿನಲ್ಲಿ ನೆನೆಸಬೇಡಿ, ಇದರಿಂದ ರಬ್ಬರ್ ಹಾಳಾಗಬಹುದು.*ವಾಷಿಂಗ್ ಮಷಿನ್&zwnj;ನಲ್ಲಿ ಹಾಕುವ ಮೊದಲು ಅದರ ಮೇಲಿರುವ ಸೂಚನೆಗಳನ್ನು (Labels) ಗಮನಿಸಿ.*ಸಂಪೂರ್ಣವಾಗಿ ಒಣಗದ ಹೊರತು ಮತ್ತೆ ಬಾಗಿಲ ಮುಂದೆ ಹಾಕಬೇಡಿ.*ನಿಮ್ಮ ಮನೆಯಲ್ಲಿ ಜನರ ಓಡಾಟ ಹೆಚ್ಚಿದ್ದರೆ ವಾರಕ್ಕೊಮ್ಮೆ ಅಥವಾ ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಡೋರ್ ಮ್ಯಾಟ್ ಅನ್ನು ಈ ರೀತಿ ಡೀಪ್ ಕ್ಲೀನ್ ಮಾಡುವುದು ಉತ್ತಮ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/5-simple-steps-to-get-rid-of-dust-and-odor-from-your-dirty-door-mats-6sxpoaq"/>
        </item>
        <item>
            <title><![CDATA[ನೇಣಿಗೆ ಕೊರಳೊಡ್ಡಿದ ಉಡುಪಿಯ ಖ್ಯಾತ ಮಾಡೆಲ್​: ಜೀವ ಕೊನೆಗಾಣಿಸಿದ್ಯಾಕೆ ಕೃತಿ ಬಂಗೇರಾ]]></title>
            <link>https://kannada.asianetnews.com/gallery/entertainment/famous-udupi-model-kruthi-bangera-hangs-herself-reason-unknown-suc-ecpkz9r</link>
            <guid isPermaLink="true">https://kannada.asianetnews.com/gallery/entertainment/famous-udupi-model-kruthi-bangera-hangs-herself-reason-unknown-suc-ecpkz9r</guid>
            <pubDate>Fri, 07 Aug 2026 19:03:42 +0530</pubDate>
            <description><![CDATA[ಉಡುಪಿಯ ಮಾಡೆಲ್ ಕೃತಿ ಬಂಗೇರಾ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kze6kvrf08x85n3pb2xaeb8r,imgname-kruthi-bangera-01-1786109357839.jpg" type="image/jpeg" height="390" width="690"/>
            <content:encoded><![CDATA[ಉಡುಪಿಯ ಮಾಡೆಲ್ ಕೃತಿ ಬಂಗೇರಾ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.&lt;img&gt;&lt;p&gt;ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಾಗೂ ಹೋಟೆಲ್​ ಒಂದರಲ್ಲಿ ಉದ್ಯೋಗಿಯಾಗಿದ್ದ ಉಡುಪಿಯ ಕಲ್ಮಾಡಿಯ ಕೃತಿ ಬಂಗೇರಾ ಇಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಾಕಿಂಗ್​ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;27 ವರ್ಷದ ಕೃತಿ ಅವರು ತಮ್ಮ ಬೆಡ್&zwnj;ರೂಮ್&zwnj;ನಲ್ಲಿ ಫ್ಯಾನ್&zwnj;ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದು ಬರದಿದ್ದರೂ, ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕೃತಿ ಬಂಗೇರಾ (Kurthi Bangera) ಅವರು, ಕಡಿಯಾಳಿಯಲ್ಲಿರುವ ಹೋಟೆಲೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ ಐದು ತಿಂಗಳುಗಳಿಂದ ಕೆಲಸಕ್ಕೆ ಅವರು ಹೋಗುತ್ತಿರಲಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಕೂಡ ಸರಿಯಾಗಿ ತಿಳಿದಿಲ್ಲ. ಮನೆಯಲ್ಲಿಯೇ ಇದ್ದ ಅವರು, ನಿನ್ನೆ ಅರ್ಥಾತ್​ ಆಗಸ್ಟ್​ 6ರಂದು ತಾಯಿ ಹೊರಗೆ ಹೋದ ಸಂದರ್ಭದಲ್ಲಿ ಸಾವಿಗೆ ಶರಣಾಗಿದ್ದಾರೆ.&lt;/p&gt;&lt;img&gt;&lt;p&gt;ಅಮ್ಮ ರತ್ನಾ ಅವರು ಮನೆಗೆ ಹಿಂತಿರುಗಿದಾಗ ವಿಷಯ ಬೆಳಕಿಗೆ ಬಂದಿದೆ. ಮಗಳ ಕೋಣೆಯಿಂದ ಎಷ್ಟು ಹೊತ್ತಾದರೂ ರೆಸ್​ಪಾನ್ಸ್​ ಬರದಾಗ ಗಾಬರಿಗೊಂಡಿರುವ ರತ್ನಾ ಅವರು, ತಕ್ಷಣವೇ ತಮ್ಮ ಸಹೋದರನಿಗೆ ಕಾಲ್​ ಮಾಡಿದ್ದಾರೆ. ಬಳಿಕ ಬಾಗಿಲನ್ನು ಒಡೆದು ಪ್ರವೇಶಿಸುವ ಹೊತ್ತಿನಲ್ಲಿಯೇ ಕೃತಿ ಕೊನೆಯುಸಿರು ಎಳೆದು ಆಗಿತ್ತು.&lt;/p&gt;&lt;img&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ಮುಂದುವರೆಸಿದ್ದಾರೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/famous-udupi-model-kruthi-bangera-hangs-herself-reason-unknown-suc-ecpkz9r"/>
        </item>
        <item>
            <title><![CDATA[ಕೇವಲ 10 ನಿಮಿಷದಲ್ಲಿ ಫೈವ್ ಸ್ಟಾರ್ ಹೋಟೆಲ್ ಸ್ಟೈಲ್ ಮಶ್ರೂಮ್ ಆನಿಯನ್ ಪಕೋಡ ಮಾಡಲು ಈ ಟ್ರಿಕ್ ಬಳಸಿ]]></title>
            <link>https://kannada.asianetnews.com/food/secret-double-fry-trick-for-extra-crunchy-mushroom-pakodas/articleshow-g6swa3h</link>
            <guid isPermaLink="true">https://kannada.asianetnews.com/food/secret-double-fry-trick-for-extra-crunchy-mushroom-pakodas/articleshow-g6swa3h</guid>
            <pubDate>Fri, 07 Aug 2026 12:29:24 +0530</pubDate>
            <description><![CDATA[&lt;p&gt;&lt;strong&gt;Mushroom onion pakoda recipe: &lt;/strong&gt;ಸಂಜೆ ಮಳೆಗೆ ಬಿಸಿ ಬಿಸಿ ಟೀ ಜೊತೆ ಏನಾದರೂ ಕುರುಕಲು ತಿಂಡಿ ತಿನ್ನಬೇಕೆನಿಸುತ್ತಿದೆಯೇ? ಹಾಗಾದರೆ ಕೇವಲ 10 ನಿಮಿಷದಲ್ಲಿ ಫೈವ್ ಸ್ಟಾರ್ ಹೋಟೆಲ್ ಶೈಲಿಯ ಮಶ್ರೂಮ್ ಆನಿಯನ್ ಪಕೋಡ ತಯಾರಿಸುವ ಗುಟ್ಟು ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzdg7krc6swmke6cfzqx41sv,imgname-thumbnail---2026-08-07t122232.014-1786085887741.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊ&lt;/strong&gt;ರಗೆ ಜಿಟಿಜಿಟಿ ಮಳೆ ಬೀಳುತ್ತಿದ್ದರೆ, ತಂಪಾದ ಗಾಳಿಗೆ ಬಿಸಿ ಬಿಸಿ ಫಿಲ್ಟರ್ ಕಾಫಿ ಅಥವಾ ಮಸಾಲಾ ಟೀ ಜೊತೆ ಏನಾದರೂ ಕ್ರಿಸ್ಪಿಯಾಗಿ ತಿನ್ನಬೇಕೆನಿಸುವುದು ಸಹಜ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ನಮಗೆ ನೆನಪಾಗುವುದು ಮಿರ್ಚಿ ಬಜ್ಜಿ ಅಥವಾ ಈರುಳ್ಳಿ ಪಕೋಡ. ಆದರೆ ಈ ಬಾರಿ ನಿಮ್ಮ ಅಡುಗೆ ಮನೆಯಲ್ಲಿ ಸ್ವಲ್ಪ ಹೊಸತನದ ಜೊತೆಗೆ ಹೆಚ್ಚು ರುಚಿಕರವಾದ ಮಶ್ರೂಮ್ ಆನಿಯನ್ ಪಕೋಡ ಟ್ರೈ ಮಾಡಿ.&lt;/p&gt;&lt;p&gt;ಹೋಟೆಲ್&zwnj;ಗಳಲ್ಲಿ ದುಬಾರಿ ಬೆಲೆಗೆ ಸಿಗುವ ಈ ಎಕ್ಸ್ಟ್ರಾ ಕ್ರಿಸ್ಪಿ ಸ್ನಾಕ್ಸ್ ಅನ್ನು ನೀವು ಮನೆಯಲ್ಲೇ ಅತ್ಯಂತ ಶುಚಿಯಾಗಿ ಮತ್ತು ಸುಲಭವಾಗಿ ತಯಾರಿಸಬಹುದು. ಅಣಬೆಯಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಸಮೃದ್ಧವಾಗಿರುವುದರಿಂದ ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮ.&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ತಾಜಾ ಅಣಬೆ (ಮಶ್ರೂಮ್) - 1 ಕಪ್ದೊಡ್ಡ ಈರುಳ್ಳಿ - 1 (ಉದ್ದಕ್ಕೆ ಹೆಚ್ಚಿದ್ದು)ಕಡಲೆಹಿಟ್ಟು - 4 ರಿಂದ 5 ಟೇಬಲ್ ಚಮಚಅಕ್ಕಿಹಿಟ್ಟು - 1 ಟೇಬಲ್ ಚಮಚಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚಹಸಿಮೆಣಸಿನಕಾಯಿ - 1 (ಸಣ್ಣಕ್ಕೆ ಹೆಚ್ಚಿದ್ದು)ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು - ಸ್ವಲ್ಪಅಚ್ಚಖಾರದ ಪುಡಿ - ಅರ್ಧ ಟೀಚಮಚಅರಿಶಿನ - ಚಿಟಿಕೆಉಪ್ಪು - ರುಚಿಗೆ ತಕ್ಕಷ್ಟುಎಣ್ಣೆ - ಕರಿಯಲು&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;ಮೊದಲು ಒಂದು ಅಗಲವಾದ ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಮಶ್ರೂಮ್ ತುಂಡುಗಳು, ಉದ್ದಕ್ಕೆ ಸೀಳಿದ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ.&lt;/p&gt;&lt;p&gt;ನಂತರ ಇದಕ್ಕೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರ, ಅರಿಶಿನ ಮತ್ತು ಉಪ್ಪನ್ನು ಸೇರಿಸಿ ಗಟ್ಟಿಯಾಗಿ ಕಲಸಿಕೊಳ್ಳಿ.&lt;/p&gt;&lt;h2&gt;&lt;strong&gt;ನೆನಪಿಡಿ&lt;/strong&gt;&lt;/h2&gt;&lt;p&gt;ಪಕೋಡ ಪರ್ಫೆಕ್ಟ್ ಆಗಿ ಬರಲು ಹಿಟ್ಟು ಕಡಿಮೆ ಇರಬೇಕು, ಈರುಳ್ಳಿ ಮತ್ತು ಮಶ್ರೂಮ್ ತುಂಡುಗಳು ಹೆಚ್ಚಾಗಿ ಕಾಣಿಸಬೇಕು. ಮಶ್ರೂಮ್ ಮತ್ತು ಈರುಳ್ಳಿಯಲ್ಲಿರುವ ತೇವಾಂಶವೇ ಕಲಸಲು ಸಾಕಾಗುತ್ತದೆ. ಒಂದು ವೇಳೆ ತುಂಬಾ ಒಣಗಿದಂತಿದ್ದರೆ ಸ್ವಲ್ಪವೇ ನೀರು ಚಿಮುಕಿಸಿ.&lt;/p&gt;&lt;p&gt;ಈಗ ಸ್ಟೌವ್ ಆನ್ ಮಾಡಿ, ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಚೆನ್ನಾಗಿ ಕಾದ ನಂತರ ಉರಿಯನ್ನು ಮಧ್ಯಮಕ್ಕಿಳಿಸಿ, ತಯಾರಿಸಿದ ಮಿಶ್ರಣವನ್ನು ಪಕೋಡಗಳಂತೆ ಎಣ್ಣೆಗೆ ಬಿಡಿ.&lt;/p&gt;&lt;h2&gt;&lt;strong&gt;ಆ ಹೋಟೆಲ್ ಸ್ಟೈಲ್ ಸೀಕ್ರೆಟ್ ಟ್ರಿಕ್ ಇಲ್ಲಿದೆ&lt;/strong&gt;&lt;/h2&gt;&lt;p&gt;ಪಕೋಡಗಳು ಅಚ್ಚ ಹೋಟೆಲ್&zwnj;ನಲ್ಲಿ ಸಿಗುವಂತೆ ಕುರುಕುಲಾಗಿ ಬರಬೇಕೆಂದರೆ ಅವುಗಳನ್ನು ಡಬಲ್ ಫ್ರೈ ಮಾಡಬೇಕು. ಅಂದರೆ, ಪಕೋಡಗಳು ಅರ್ಧ ಬೆಂದ ತಕ್ಷಣ ಎಣ್ಣೆಯಿಂದ ತೆಗೆದು ಒಂದು ಪ್ಲೇಟ್&zwnj;ನಲ್ಲಿ ಇಡಿ. ನಂತರ ಎಣ್ಣೆಯನ್ನು ಮತ್ತಷ್ಟು ಕಾಯಿಸಿ, ಈ ಅರ್ಧ ಬೆಂದ ಪಕೋಡಗಳನ್ನು ಪುನಃ ಎಣ್ಣೆಗೆ ಹಾಕಿ ಕೆಂಪಾಗುವವರೆಗೆ (ಗೋಲ್ಡನ್ ಬ್ರೌನ್) ಕರಿಯಿರಿ.&lt;/p&gt;&lt;p&gt;ಹೀಗೆ ಮಾಡುವುದರಿಂದ ಮಶ್ರೂಮ್ ಪಕೋಡ ದೀರ್ಘಕಾಲದವರೆಗೆ ಮೆತ್ತಗಾಗದೆ ಕುರುಕುಲಾಗಿರುತ್ತದೆ. ಈಗ ಬಿಸಿ ಬಿಸಿ ಮಶ್ರೂಮ್ ಆನಿಯನ್ ಪಕೋಡ ಸವಿಯಲು ಸಿದ್ಧ!&lt;/p&gt;&lt;h3&gt;&lt;strong&gt;ಮಶ್ರೂಮ್ ಕ್ಲೀನ್ ಮಾಡುವ ವಿಧಾನ&lt;/strong&gt;&lt;/h3&gt;&lt;p&gt;ಮಶ್ರೂಮ್&zwnj;ಗಳನ್ನು ನೀರಿನಲ್ಲಿ ಹಾಕಿ ತುಂಬಾ ಹೊತ್ತು ನೆನೆಸಬೇಡಿ. ಅವು ಸ್ಪಂಜಿನಂತೆ ನೀರನ್ನು ಹೀರಿಕೊಳ್ಳುತ್ತವೆ, ಇದರಿಂದ ಪಕೋಡ ಎಣ್ಣೆ ಜಾಸ್ತಿ ಕುಡಿಯುತ್ತದೆ. ಬದಲಾಗಿ, ಒದ್ದೆ ಬಟ್ಟೆಯಿಂದ ಒರೆಸಿ ಅಥವಾ ಸ್ವಲ್ಪ ಹಿಟ್ಟು ಹಾಕಿ ಉಜ್ಜಿ ತಕ್ಷಣ ತೊಳೆದು ನೀರು ಸೋಸಿ ಒಣಗಿಸಿ.&lt;/p&gt;&lt;h3&gt;&lt;strong&gt;ಬಿಸಿ ಎಣ್ಣೆ&lt;/strong&gt;&lt;/h3&gt;&lt;p&gt;ಹಿಟ್ಟು ಕಲಸುವಾಗ ಇದಕ್ಕೆ ಒಂದು ಚಮಚ ಕುದಿಯುವ ಬಿಸಿ ಎಣ್ಣೆಯನ್ನು ಹಾಕಿ ಬೆರೆಸಿ. ಹೀಗೆ ಮಾಡುವುದರಿಂದ ಪಕೋಡ ಒಳಗಿನಿಂದ ಮೃದುವಾಗಿ ಮತ್ತು ಹೊರಗಿನಿಂದ ದೀರ್ಘಕಾಲದವರೆಗೆ ಕುರುಕುಲಾಗಿ (Extra Crispy) ಇರುತ್ತದೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/food/secret-double-fry-trick-for-extra-crunchy-mushroom-pakodas/articleshow-g6swa3h"/>
        </item>
        <item>
            <title><![CDATA[ಮನುಷ್ಯಳೇ ಅಲ್ಲದ ಸುಂದರಿ ಜೊತೆ  ಮಾಡಬಾರದ್ದೆಲ್ಲಾ ಮಾಡಿ 2 ಲಕ್ಷ ಕಳಕೊಂಡ ಬೆಂಗಳೂರು ಯುವಕ]]></title>
            <link>https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9</link>
            <guid isPermaLink="true">https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9</guid>
            <pubDate>Fri, 07 Aug 2026 17:12:12 +0530</pubDate>
            <description><![CDATA[ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನು ಪ್ರೀತಿಸಿದ ಯುವಕನೊಬ್ಬ ಬ್ಲ್ಯಾಕ್&zwnj;ಮೇಲ್&zwnj;ಗೆ ಒಳಗಾಗಿದ್ದಾನೆ. ತನ್ನ ನಗ್ನ ವಿಡಿಯೋ ಕಳುಹಿಸಿದ ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಾಗ, ಆತ ಪೊಲೀಸರಿಗೆ ದೂರು ನೀಡಿದ್ದಾನೆ. ತನಿಖೆಯ ವೇಳೆ ಆ ಯುವತಿ ಮನುಷ್ಯಳಲ್ಲ, ಬದಲಿಗೆ ಸೈಬರ್ ವಂಚನೆಗೆ ಬಳಸಲಾದ ಕೃತಕ ಬುದ್ಧಿಮತ್ತೆಯ (AI) ಅವತಾರ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kze0dwcjcw4y1qvx28k344yc,imgname-dating-fraud-1786102870418.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತಿದೆ. ಅದರಲ್ಲಿಯೂ ಡೇಟಿಂಗ್​ ಆ್ಯಪ್​, ಸೈಬರ್​ ಕ್ರೈಮ್​ಗಳಲ್ಲಿ ಮೋಸ ಹೋಗುವವರು ಹೈಲಿ ಎಜುಕೇಟೆಡ್​ ಎನ್ನುವವರೇ ಎನ್ನುವುದು ಮಾತ್ರ ಸೋಜಿಗ. ಡೇಟಿಂಗ್​ ಆ್ಯಪ್​ಗಳಲ್ಲಂತೂ ಮೋಸ ಹೋದವರಿಗೆ ಲೆಕ್ಕವೇ ಇಲ್ಲ. ಹೀಗೆ ಮೋಸ ಹೋದವರು, ಮರ್ಯಾದೆಗೆ ಅಂಜಿ ಕಂಪ್ಲೇಂಟ್​ ಕೊಡಲ್ಲ ಎನ್ನುವುದು ತಿಳಿಯುವ ಕಾರಣದಿಂದಲೇ ಚಾಲಾಕಿಗಳು ಇಂಥವರನ್ನೇ ಗಾಳ ಹಾಕ್ತಾರೆ. ಅಂಥದ್ದೇ ಒಂದು ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.&lt;/p&gt;&lt;p&gt;ಆತನೋ 26 ವರ್ಷದ ಸುಂದರ. ಒಬ್ಬ ಸುಂದರಿಯ ಹುಡುಕಾಟದಲ್ಲಿದ್ದ. ಇದಕ್ಕಾಗಿ ಆತ ಡೇಟಿಂಗ್​ ಅಪ್ಲಿಕೇಷನ್​ ಮೊರೆ ಹೋದ. ಅಲ್ಲೊಬ್ಬಳು ಸುಂದರಿ ಕಂಡಳು. ಪರಿಚಯವಾಯ್ತು, ಅವಳೇ ಇಶಾನಿ. ಆ ಆ್ಯಪ್​ ಮೂಲಕವೇ ಮಾತು ಬೆಳೆದು ಲವ್ವೂ ಆಗೋಯ್ತು. ಇನ್ನೇನು, ಆ ಸುಂದರಿಯ ಬುಟ್ಟಿಗೆ ಈ ಯುವಕ ಬಿದ್ದಾಗಿತ್ತು. ತಾನು ಏನು ಹೇಳಿದ್ರೂ ಅವನು ಕೇಳ್ತಾನೆ ಎನ್ನುವ ಮಟ್ಟಿಗೆ ಇಶಾನಿ ಬಂದಳು. ಸಾಮಾನ್ಯವಾಗಿ, ಇಂಥ ಪ್ರಕರಣಗಳಲ್ಲಿ ಹೆಣ್ಣುಮಕ್ಕಳಿಗೆ ಐಷಾರಾಮಿ ಜೀವನದ ರುಚಿ ತೋರಿಸಿ, ಕೊನೆಗೆ, ನಿನ್ನ ನಗ್ನ ಫೋಟೋ ಕಳುಹಿಸು, ನಗ್ನ ದೇಹದ ವಿಡಿಯೋ ಮಾಡಿ ಕಳುಹಿಸು ಎಂದೆಲ್ಲಾ ಹೇಳುವುದು, ಐಷಾರಾಮಿ ಜೀವನದ ರುಚಿ ಕಂಡಾಕೆ ಹಾಗೆ ಮಾಡುವುದು, ಕೊನೆಗೆ ಆತ ಬ್ಲ್ಯಾಕ್​ಮೇಲ್​ ಮಾಡುವುದು... ಇವೆಲ್ಲಾ ಮಾಮೂಲು. ಆದರೆ ಈ ಸ್ಟೋರಿಯಲ್ಲಿ ಸ್ವಲ್ಪ ಟ್ವಿಸ್ಟ್​ ಇದೆ.&lt;/p&gt;&lt;h2&gt;&lt;strong&gt;ಬಟ್ಟೆ ಕಳಚಿದ ಸುಂದರಿ&lt;/strong&gt;&lt;/h2&gt;&lt;p&gt;ಅದೇನೆಂದರೆ, ಈ ಯುವಕನನ್ನು ಬುಟ್ಟಿಗೆ ಹಾಕಿಕೊಂಡ ಮೇಲೆ ಆ ಸುಂದರಿ ವಿಡಿಯೋ ಕಾಲ್​ ಮಾಡಿ ತನ್ನೆಲ್ಲಾ ಬಟ್ಟೆಗಳನ್ನು ಕಳಚಿ ತೋರಿಸಿದ್ದಾಳೆ. ಯುವಕನಿಗೆ ಈಗ ಸ್ವರ್ಗಕ್ಕೆ ಮೂರೇ ಗೇಣು. ನಂತರ ಆಕೆ, ನಿನ್ನ ನಗ್ನ ಫೋಟೋ, ವಿಡಿಯೋ ಕಳುಹಿಸುವಂತೆ ಕೇಳಿದ್ದಾಳೆ. ಯುವಕ ಹಿರಿಹಿರಿ ಹಿಗ್ಗಿದ್ದಾನೆ. ಇನ್ನೇನು ತನ್ನ ಆಸೆಯೆಲ್ಲವೂ ನೆರವೇರಿತು ಎಂದುಕೊಂಡಿದ್ದಾನೆ. ಮುಂದೆ ಏನೇನು ಆಗಬಹುದು ಎಂದು ಸುಂದರ ಕನಸು ಕಂಡು, ಕನಸಿನಲ್ಲಿಯೇ ತೇಲಾಡಿದ್ದಾನೆ. ಇಶಾನಿ ಹೇಳಿದಂತೆ ತನ್ನ ಫೋಟೋ, ವಿಡಿಯೋ ಎಲ್ಲಾ ವಿವಿಧ ಭಂಗಿಗಳಲ್ಲಿ ಕಳುಹಿಸಿದ್ದಾನೆ. ಆದರೆ, ಇಷ್ಟಾಗುತ್ತಿದ್ದಂತೆಯೇ, ಆ ಸುಂದರಿ ತನ್ನ ಆಟ ಶುರು ಮಾಡಿದ್ದಾಳೆ. ಈ ವಿಡಿಯೋ, ಫೋಟೋ ಹಿಡಿದುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ ಆಕೆ, 2 ಲಕ್ಷ ಕೊಡದಿದ್ದರೆ, ಇದನ್ನು ಲೀಕ್​ ಮಾಡೋದಾಗಿ ಹೇಳಿದ್ದಾಳೆ. ಆಗಲೇ ಯುವಕನಿಗೆ ತಾನು ಮೋಸ ಹೋಗಿದ್ದು ತಿಳಿದಿದೆ.&lt;/p&gt;&lt;p&gt;ವಿಧಿಯಿಲ್ಲದೇ ದುಡ್ಡನ್ನು ಕಳುಹಿಸಿದ್ದಾನೆ. ಬ್ಲ್ಯಾಕ್​ಮೇಲ್​ ಮಾಡುವವರು ಸುಮ್ಮನೇ ಇರ್ತಾರೆ. ಮತ್ತೊಂದಿಷ್ಟು ದುಡ್ಡು ಕೇಳಿದ್ದಾಳೆ ಸುಂದರಿ. ಆಗ ಎಚ್ಚೆತ್ತುಕೊಂಡ ಯುವಕ, ಆಗಿದ್ದು ಆಗಲಿ, ಮರ್ಯಾದೆ ಹೋದರೆ ಹೋಗಲಿ ಎಂದು ಆ ಸುಂದರಿ ವಿರುದ್ಧ ದೂರು ದಾಖಲಿಸಿದ್ದಾನೆ. ಹಣಕ್ಕಾಗಿ ಪದೇ ಪದೇ ಬೇಡಿಕೆ ಇಟ್ಟ ನಂತರ, ಯುವಕ ಬೆಂಗಳೂರಿನ ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಣ ನೀಡದಿದ್ದರೆ ತನ್ನ ನಗ್ನ ವೀಡಿಯೊವನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.&lt;/p&gt;&lt;h3&gt;&lt;strong&gt;ಬೆಚ್ಚಿಬಿದ್ದ ಪೊಲೀಸರು&lt;/strong&gt;&lt;/h3&gt;&lt;p&gt;ಕೊನೆಗೆ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬಿದ್ದರು. ಏಕೆಂದರೆ, ಇಶಾನಿ ಹೆಸರಿನ ಆಕೆ, ಸುಂದರಿಯೂ ಅಲ್ಲ, ಹೋಗ್ಲಿ ಎಂದರೆ ಮನುಷ್ಯಳೇ ಅಲ್ಲ ಎನ್ನೋದು ಗೊತ್ತಾಯ್ತು. ಅವಳು ಕೃತಕ ಬುದ್ಧಿಮತ್ತೆ (AI) ಹೆಣ್ಣು. ಅಪರಾಧ ಮಾಡಲು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಸ್ತ್ರೀ ಅವತಾರವನ್ನು ಬಳಸಕಾಗಿದೆ. ಇದು ದೊಡ್ಡ ಸೈಬರ್ ಸುಲಿಗೆ ಜಾಲದ ಭಾಗವಾಗಿದೆ ಎಂದು ಪೊಲೀಸರು ಕಂಡುಹೊಂದರು. ಸದ್ಯ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬ್ಯಾಂಕ್ ವಹಿವಾಟುಗಳು, UPI ಮತ್ತು ಡಿಜಿಟಲ್ ಹೆಜ್ಜೆಗುರುತುಗಳ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.&lt;/p&gt;&lt;h3&gt;&lt;strong&gt;ಅಪ್ಲಿಕೇಶನ್ ಬಳಕೆದಾರರಿಗೆ ಪೊಲೀಸ್ ಎಚ್ಚರಿಕೆ&lt;/strong&gt;&lt;/h3&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಅಪರಿಚಿತರೊಂದಿಗೆ ಸಂವಹನ ನಡೆಸುವಾಗ ಜಾಗರೂಕರಾಗಿರಲು ತನಿಖಾಧಿಕಾರಿಗಳು ಡೇಟಿಂಗ್ ಅಪ್ಲಿಕೇಶನ್ ಬಳಕೆದಾರರನ್ನು ಒತ್ತಾಯಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, &quot;ಅಪರಿಚಿತ ವ್ಯಕ್ತಿಗಳೊಂದಿಗೆ ನಿಕಟ ವಿಡಿಯೋ ಕರೆಗಳಲ್ಲಿ ತೊಡಗಬೇಡಿ ಮತ್ತು ಖಾಸಗಿ ವಿಷಯವನ್ನು ಎಂದಿಗೂ ಹಂಚಿಕೊಳ್ಳಬೇಡಿ. ಒಮ್ಮೆ ರೆಕಾರ್ಡ್ ಮಾಡಿದ ನಂತರ, ಅಂತಹ ವಿಷಯವು ಬ್ಲ್ಯಾಕ್&zwnj;ಮೇಲ್ ಮಾಡುವ ಸಾಧನವಾಗುತ್ತದೆ&quot; ಎಂದು ಹೇಳಿದರು. ಈ ಪ್ರಕರಣವು ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಸಂಖ್ಯೆಗೆ ಮತ್ತೊಂದು ಕೊಂಡಿಯಾಗಿ ಸೇರಿಸುತ್ತದೆ, ಅಲ್ಲಿ ಕೃತಕ ಬುದ್ಧಿಮತ್ತೆಯನ್ನು ವ್ಯಕ್ತಿಗಳಂತೆ ನಟಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಸಂತ್ರಸ್ತರಿಗೆ ತಿಳಿಯುವ ಹೊತ್ತಿಗೆ ವಿಳಂಬವಾಗಿ ವಂಚನೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ ಎಂದಿದ್ದಾರೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9"/>
        </item>
        <item>
            <title><![CDATA[ಮನೆಯ ಬಾಗಿಲಿಗೆ ಇದೊಂದು ಬೇರು ಕಟ್ಟಿದರೆ ಸಾಕು; ಮನೆಯೊಳಕ್ಕೆ ಹಾವು ಬರೋದಿಲ್ಲ! ಗೊತ್ತಾ ಈ ರಹಸ್ಯ?]]></title>
            <link>https://kannada.asianetnews.com/health-life/try-the-root-of-the-sarpagandha-plant-to-the-door-of-the-house-prevents-snakes-from-entering/articleshow-n1bddmy</link>
            <guid isPermaLink="true">https://kannada.asianetnews.com/health-life/try-the-root-of-the-sarpagandha-plant-to-the-door-of-the-house-prevents-snakes-from-entering/articleshow-n1bddmy</guid>
            <pubDate>Sun, 09 Aug 2026 15:44:52 +0530</pubDate>
            <description><![CDATA[&lt;p&gt;ಯಾವುದೇ ಹಾವನ್ನು ಕಂಡಾಗ ಗಾಬರಿಗೊಂಡು ಅದನ್ನು ಹೊಡೆಯಲು ಹೋಗಬೇಡಿ. ಪ್ರತಿಯೊಂದು ಜೀವಿಯೂ ಪ್ರಕೃತಿಯ ಸಮತೋಲನಕ್ಕೆ ಮುಖ್ಯ. ಹಾವಿನಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಮತ್ತು ತಕ್ಷಣ ತರಬೇತಿ ಪಡೆದ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ. ಈ ಬೇರು ಹಾವು ಬಾಗಿಲಿಗೆ ಕಟ್ಟಿದರೆ ಹಾವು ಮನೆಯೊಳಕ್ಕೆ ಬರೋದಿಲ್ಲ, ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjzckcfrs17cgzhejmtbgbv,imgname-snake-medicine-sarphagandha-1786269552014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Sarpagandha plant to the door of the house prevents snakes from entering: ಮನೆಯ ಬಾಗಿಲಿಗೆ ಸರ್ಪಗಂಧ ಗಿಡದ ಬೇರನ್ನು ಕಟ್ಟಿದರೆ ಹಾವುಗಳು ಮನೆಯ ಒಳಗೆ ಬರುವುದಿಲ್ಲ: ಆದರೆ ಹೇಗೆ ಬಳಸುವುದು?&lt;/strong&gt;&lt;/p&gt;&lt;p&gt;ಮಳೆಗಾಲದ ಸೌಂದರ್ಯವನ್ನು ಸವಿಯುವ ಹೊತ್ತಲ್ಲಿ, ನಮ್ಮ ಮನೆಯೊಳಗೆ ಅರಿಯದ ಅತಿಥಿಗಳಂತೆ ಹಾವುಗಳು ಬರುವ ಭೀತಿ ಎಲ್ಲರನ್ನೂ ಕಾಡುತ್ತದೆ. ಈ ಮಳೆಗಾಲದ ಲೈಫ್&zwnj;ಸ್ಟೈಲ್&zwnj;ಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಹಿರಿಯರ ಬಾಯಲ್ಲಿ ಕೇಳಿಬರುವ ಒಂದು ಕುತೂಹಲಕಾರಿ ವಿಷಯವೆಂದರೆ &quot;ಮನೆಯ ಬಾಗಿಲಿಗೆ ಒಂದು ಗಿಡದ ಬೇರು ಕಟ್ಟಿದರೆ ಹಾವುಗಳು ಹತ್ತಿರ ಸುಳಿಯುವುದಿಲ್ಲ&quot; ಎಂಬ ಮಾತು. ಇದು ಕೇವಲ ಮೂಢನಂಬಿಕೆಯೋ ಅಥವಾ ಇದರ ಹಿಂದೆ ಏನಾದರೂ ಮರ್ಮವಿದೆಯೇ? ಈ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.&lt;/p&gt;&lt;p&gt;ಸಂಪ್ರದಾಯ ಮತ್ತು ನಂಬಿಕೆಯ 'ಸರ್ಪಗಂಧ':&lt;/p&gt;&lt;p&gt;ಆಯುರ್ವೇದದಲ್ಲಿ ಹೆಸರುವಾಸಿಯಾದ 'ಸರ್ಪಗಂಧ' ಸಸ್ಯಕ್ಕೆ ಹಾವುಗಳನ್ನು ದೂರವಿಡುವ ಶಕ್ತಿಯಿದೆ ಎಂಬ ದಟ್ಟವಾದ ನಂಬಿಕೆ ನಮ್ಮ ಜನಪದದಲ್ಲಿದೆ. ಮಳೆಗಾಲ ಆರಂಭವಾದ ಕೂಡಲೇ ಹಳ್ಳಿಗಳಲ್ಲಿ ಮತ್ತು ಕೆಲವು ನಗರ ಪ್ರದೇಶಗಳಲ್ಲಿಯೂ ಸರ್ಪಗಂಧದ ಬೇರನ್ನು ಮನೆಯ ಹೊಸ್ತಿಲಿಗೆ ಅಥವಾ ಕಿಟಕಿಗಳಿಗೆ ಕಟ್ಟುತ್ತಾರೆ. ಈ ಬೇರಿನಿಂದ ಹೊರಬರುವ ವಿಶಿಷ್ಟವಾದ ವಾಸನೆ ಹಾವಿನ ಘ್ರಾಣಶಕ್ತಿಗೆ ಕಿರಿಕಿರಿ ಉಂಟುಮಾಡುತ್ತದೆ, ಹಾಗಾಗಿ ಹಾವುಗಳು ಆ ಕಡೆ ಬರುವುದಿಲ್ಲ ಎಂಬುದು ಅನೇಕರ ವಾದ. ಆದರೆ, ನೆನಪಿರಲಿ, ಇದಕ್ಕೆ ಯಾವುದೇ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಕೇವಲ ಮುನ್ನೆಚ್ಚರಿಕೆಯ ಒಂದು ಭಾಗವಷ್ಟೇ.&lt;/p&gt;&lt;h2&gt;ಪರಿಮಳಯುಕ್ತ ಅರೋಮಾ ಥೆರಪಿ ಹಾವುಗಳಿಗೂ ಅನ್ವಯವೇ?&lt;/h2&gt;&lt;p&gt;ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ಲವಂಗ ಮತ್ತು ದಾಲ್ಚಿನ್ನಿ ಎಣ್ಣೆಗಳು ಕೇವಲ ಅಡುಗೆಗೆ ಅಥವಾ ಆರೋಗ್ಯಕ್ಕೆ ಮಾತ್ರವಲ್ಲ, ಹಾವುಗಳನ್ನು ದೂರವಿಡಲು ಸಹಕಾರಿ ಎಂಬ ಮಾತು ಕೇಳಿಬರುತ್ತದೆ. ಲವಂಗದ ಎಣ್ಣೆಯ ತೀಕ್ಷ್ಣವಾದ ವಾಸನೆಯು ಹಾವುಗಳಿಗೆ ಇಷ್ಟವಾಗುವುದಿಲ್ಲವಂತೆ. ಇದನ್ನು ಮನೆಯ ಸುತ್ತಮುತ್ತ ಸಿಂಪಡಿಸುವುದರಿಂದ ಒಂದು ಮಟ್ಟದ ರಕ್ಷಣೆ ಸಿಗಬಹುದು ಎಂದು ನಂಬಲಾಗಿದೆ. ಹಾಗೆಯೇ, ತುಳಸಿ ಗಿಡದ ಒಣಗಿದ ಬೇರನ್ನು ಕಟ್ಟುವುದು ಕೂಡ ಇದೇ ಸಾಲಿಗೆ ಸೇರುತ್ತದೆ.&lt;/p&gt;&lt;p&gt;ಆಧುನಿಕ ಲೈಫ್&zwnj;ಸ್ಟೈಲ್ ಮತ್ತು ಮನೆ ಅಂಗಳದ ಸ್ವಚ್ಛತೆ:&lt;/p&gt;&lt;p&gt;ಹಾವುಗಳು ಮನೆಯೊಳಗೆ ಬಾರದಂತೆ ತಡೆಯಲು ಕೇವಲ ಬೇರುಗಳನ್ನು ನಂಬುವುದಕ್ಕಿಂತ, ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಹೆಚ್ಚು ಮುಖ್ಯ.&lt;/p&gt;&lt;p&gt;ಪೊದೆಗಳ ತೆರವು: ಮಳೆಗಾಲದಲ್ಲಿ ಮನೆಯ ಸುತ್ತ ಗಿಡಗಂಟಿಗಳು ಅತಿಯಾಗಿ ಬೆಳೆಯದಂತೆ ನೋಡಿಕೊಳ್ಳಿ. ಇದು ಹಾವುಗಳಿಗೆ ಅಡಗುತಾಣವಾಗುತ್ತದೆ.&lt;/p&gt;&lt;p&gt;ಕಸದ ರಾಶಿ ಬೇಡ: ಮನೆಯ ಹತ್ತಿರ ಹಳೆಯ ಕಟ್ಟಿಗೆ, ಕಲ್ಲು ಅಥವಾ ಪ್ಲಾಸ್ಟಿಕ್ ಸಾಮಗ್ರಿಗಳನ್ನು ರಾಶಿ ಹಾಕಬೇಡಿ. ಇವು ಹಾವುಗಳ ನೆಚ್ಚಿನ ವಿಶ್ರಾಂತಿ ತಾಣಗಳು.&lt;/p&gt;&lt;p&gt;ಇಲಿಗಳ ನಿಯಂತ್ರಣ: ಹಾವಿನ ಮುಖ್ಯ ಆಹಾರ ಇಲಿಗಳು. ನಿಮ್ಮ ಮನೆಯಲ್ಲಿ ಇಲಿಗಳ ಕಾಟ ಹೆಚ್ಚಿದ್ದರೆ, ಸಹಜವಾಗಿಯೇ ಹಾವುಗಳು ಅಲ್ಲಿಗೆ ಆಕರ್ಷಿತವಾಗುತ್ತವೆ. ಆದ್ದರಿಂದ ಇಲಿಗಳ ನಿಯಂತ್ರಣಕ್ಕೆ ಆದ್ಯತೆ ನೀಡಿ.&lt;/p&gt;&lt;p&gt;ಬಿರುಕುಗಳನ್ನು ಮುಚ್ಚಿ: ಬಾಗಿಲಿನ ಕೆಳಭಾಗದ ಸಣ್ಣ ಅಂತರ ಅಥವಾ ಗೋಡೆಯ ಬಿರುಕುಗಳನ್ನು ತಕ್ಷಣ ಸರಿಪಡಿಸಿ.&lt;/p&gt;&lt;h3&gt;ಒಂದು ವೇಳೆ ಹಾವು ಕಂಡರೆ ಏನು ಮಾಡಬೇಕು?&lt;/h3&gt;&lt;p&gt;ಯಾವುದೇ ಹಾವನ್ನು ಕಂಡಾಗ ಗಾಬರಿಗೊಂಡು ಅದನ್ನು ಹೊಡೆಯಲು ಹೋಗಬೇಡಿ. ಪ್ರತಿಯೊಂದು ಜೀವಿಯೂ ಪ್ರಕೃತಿಯ ಸಮತೋಲನಕ್ಕೆ ಮುಖ್ಯ. ಹಾವಿನಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಮತ್ತು ತಕ್ಷಣ ತರಬೇತಿ ಪಡೆದ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ.&lt;/p&gt;&lt;p&gt;ಅಂತಿಮ ಮಾತು:&lt;/p&gt;&lt;p&gt;ಮನೆಯ ಬಾಗಿಲಿಗೆ ಬೇರು ಕಟ್ಟುವುದು ಅಥವಾ ಎಣ್ಣೆ ಸಿಂಪಡಿಸುವುದು ಒಂದು ಸಾಂಪ್ರದಾಯಿಕ ಮುನ್ನೆಚ್ಚರಿಕೆಯಾಗಿ ಇರಲಿ. ಆದರೆ, ವೈಜ್ಞಾನಿಕವಾಗಿ ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಜಾಗರೂಕತೆಯೇ ನಮಗೆ ನಿಜವಾದ ರಕ್ಷಣೆ ನೀಡುತ್ತದೆ. ಈ ಮಳೆಗಾಲದಲ್ಲಿ ಸುರಕ್ಷಿತವಾಗಿರಿ ಮತ್ತು ಪ್ರಕೃತಿಯನ್ನು ಸಂಭ್ರಮಿಸಿ!&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/try-the-root-of-the-sarpagandha-plant-to-the-door-of-the-house-prevents-snakes-from-entering/articleshow-n1bddmy"/>
        </item>
        <item>
            <title><![CDATA[19ನೇ ವಯಸ್ಸಿನಲ್ಲಿ ಮಾರಕ ಕಾಯಿಲೆಗೆ ಎರಡೂ ಕಾಲು ಕಳೆದುಕೊಂಡರೂ ಬದುಕಿನ ಹೊಸ ಅಧ್ಯಾಯ ಬರೆದ ಆಮಿ ಸ್ಪೂರ್ತಿದಾಯಕ ಕಥೆ!]]></title>
            <link>https://kannada.asianetnews.com/viral/the-inspiring-story-of-amy-purdy-overcoming-double-amputation-to-become-a-paralympic-champion-gdp/articleshow-n53xex9</link>
            <guid isPermaLink="true">https://kannada.asianetnews.com/viral/the-inspiring-story-of-amy-purdy-overcoming-double-amputation-to-become-a-paralympic-champion-gdp/articleshow-n53xex9</guid>
            <pubDate>Fri, 07 Aug 2026 14:34:42 +0530</pubDate>
            <description><![CDATA[19ನೇ ವಯಸ್ಸಿನಲ್ಲಿ ಅಪರೂಪದ ಸೋಂಕಿನಿಂದ ಎರಡೂ ಕಾಲುಗಳನ್ನು ಕಳೆದುಕೊಂಡ ಆಮಿ ಪರ್ಡಿ, ನಂತರ ಮೂತ್ರಪಿಂಡ ವೈಫಲ್ಯವನ್ನೂ ಎದುರಿಸಿದರು. ಆದರೆ, ಈ ಎಲ್ಲಾ ಆಘಾತಗಳನ್ನು ಮೀರಿ, ಅವರು ಮೂರು ಬಾರಿಯ ಪ್ಯಾರಾಲಿಂಪಿಕ್ ಪದಕ ವಿಜೇತೆಯಾಗಿ, ತಮ್ಮ ಅಂಗವೈಕಲ್ಯವನ್ನೇ ಶಕ್ತಿಯಾಗಿಸಿಕೊಂಡು ಜಗತ್ತಿಗೆ ಸ್ಪೂರ್ತಿಯಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzdpzms4kbx64tkexsns7y3y,imgname-amy-purdy--1--1786092966692.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಮಿ ಪರ್ಡಿಗೆ 19 ವರ್ಷ ವಯಸ್ಸಾಗಿದ್ದಾಗ ಬದುಕು ಹಠಾತ್&zwnj; ಆಗಿ ಒಂದು ಭೀಕರ ತಿರುವು ಪಡೆಯಿತು. ವೃತ್ತಿಪರ ಸ್ನೋಬೋರ್ಡರ್ ಆಗಬೇಕೆಂಬ ಕನಸಿನೊಂದಿಗೆ, ತನ್ನ ಖರ್ಚಿಗಾಗಿ ಮಸಾಜ್ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಾ ಅವರು ಅಮೆರಿಕದ ಸಾಲ್ಟ್ ಲೇಕ್ ಸಿಟಿಯಲ್ಲಿದ್ದರು. ಎಲ್ಲವೂ ಸುಸೂತ್ರವಾಗಿ ಸಾಗುತ್ತಿದ್ದಾಗ, ಒಂದು ಸಂಜೆ ಸಾಧಾರಣ ಜ್ವರದ ಲಕ್ಷಣ ಆಕೆಯಲ್ಲಿ ಕಾಣಿಸಿತು.&lt;/p&gt;&lt;p&gt;ಆದರೆ, ಕೇವಲ 24 ಗಂಟೆಗಳಲ್ಲಿ ಆಕೆ ಜೀವರಕ್ಷಕ ಉಪಕರಣಗಳ (Ventilator) ಸಹಾಯದಿಂದ ಜೀವನ್ಮರಣ ಹೋರಾಟ ನಡೆಸುವ ಸ್ಥಿತಿ ತಲುಪಿದಳು. ವೈದ್ಯರ ಪ್ರಕಾರ ಆಮಿ ಬದುಕುಳಿಯುವ ಸಾಧ್ಯತೆ ಕೇವಲ 2% ಮಾತ್ರ ಇತ್ತು. ಅಪರೂಪದ 'ಮೆನಿಂಗೊಕೊಕಲ್ ಮೆನಿಂಜೈಟಿಸ್' ಎಂಬ ಬ್ಯಾಕ್ಟೀರಿಯಾದ ಸೋಂಕು ಅವರ ರಕ್ತವನ್ನು ಸೇರಿ ದೇಹವನ್ನು 'ಸೆಪ್ಟಿಕ್ ಶಾಕ್'ಗೆ ತಳ್ಳಿತ್ತು. ವೈದ್ಯರ ಹೋರಾಟದಿಂದ ಆಮಿ ಪ್ರಾಣಾಪಾಯದಿಂದ ಬದುಕಿದರಾದರೂ, ಸೋಂಕಿನ ತೀವ್ರತೆಯಿಂದಾಗಿ ಮೊಣಕಾಲಿನ ಕೆಳಭಾಗದಿಂದ ತಮ್ಮೆರಡೂ ಕಾಲುಗಳನ್ನು ಕಳೆದುಕೊಳ್ಳಬೇಕಾಯಿತು.&lt;/p&gt;&lt;p&gt;ಇಂದು ಆಮಿ ಪರ್ಡಿ ಮೂರು ಬಾರಿಯ ಪ್ಯಾರಾಲಿಂಪಿಕ್ ಪದಕ ವಿಜೇತೆ, ಅಂತರರಾಷ್ಟ್ರೀಯ ಲೇಖಕಿ ಮತ್ತು ಪ್ರಸಿದ್ಧ ಮೋಟಿವೇಷನ್ ಸ್ಪೀಕರ್. ಆದರೆ, ಅವರ ಕಥೆಯ ನಿಜವಾದ ಸೌಂದರ್ಯವಿರುವುದು ಅವರು ಗೆದ್ದ ಪದಕಗಳಲ್ಲ, ಬದಲಿಗೆ ಕಾಲುಗಳನ್ನೇ ಕಳೆದುಕೊಂಡ ನಂತರ ತಮ್ಮ ಆತ್ಮವಿಶ್ವಾಸವನ್ನು ಕಲ್ಲುಮಣ್ಣುಗಳಿಂದ ಪುನರ್ನಿರ್ಮಿಸಿಕೊಂಡ ವೈಖರಿಯಲ್ಲಿ!&lt;/p&gt;&lt;h2&gt;ಶಸ್ತ್ರಚಿಕಿತ್ಸೆಯ ನಂತರದ ಕಠಿಣ ಕ್ಷಣಗಳು&lt;/h2&gt;&lt;p&gt;ಶಸ್ತ್ರಚಿಕಿತ್ಸೆ ಮುಗಿದು ಕಣ್ಣುಬಿಟ್ಟ ಮೇಲಿನ ಕ್ಷಣಗಳು ಆಮಿಗೆ ಅತ್ಯಂತ ಭೀಕರವಾಗಿದ್ದವು. ಮೊದಲ ಬಾರಿಗೆ ತಮ್ಮ ಕೃತಕ ಕಾಲುಗಳನ್ನು (Prosthetics) ನೋಡಿದಾಗ, &quot;ಅವು ಹೋಮ್ ಡಿಪೋದಿಂದ ತಂದ ಹಾರ್ಡ್&zwnj;ವೇರ್ ಪೈಪ್&zwnj;ಗಳಂತೆ ಕಾಣುತ್ತಿದ್ದವು!&quot; ಎಂದು ಆಮಿ ನೆನಪಿಸಿಕೊಳ್ಳುತ್ತಾರೆ. ಅವು ಅತ್ಯಂತ ನೋವಿನಿಂದ ಕೂಡಿದ್ದವು. &quot;ನಾನು ಇವುಗಳನ್ನು ಇಟ್ಟುಕೊಂಡು ಪ್ರಪಂಚವನ್ನು ಹೇಗೆ ಸುತ್ತುವೆ? ಮುಖ್ಯವಾಗಿ ಸ್ನೋಬೋರ್ಡಿಂಗ್ ಹೇಗೆ ಮಾಡಲು ಸಾಧ್ಯ?&quot; ಎಂದು ಅವರು ಕಂಗಾಲಾಗಿದ್ದರು. ಸ್ವತಂತ್ರವಾಗಿ ಮೆರೆಯುತ್ತಿದ್ದ ಹದಿಹರೆಯದ ಹುಡುಗಿ, ರಾತ್ರೋರಾತ್ರಿ ಪ್ರತಿಯೊಂದಕ್ಕೂ ಯಂತ್ರಗಳು ಹಾಗೂ ಇತರರ ಮೇಲೆ ಅವಲಂಬಿತವಾಗಬೇಕಾಯಿತು.&lt;/p&gt;&lt;p&gt;ಆದರೆ, ಆ ನಿರಾಶೆಯ ಕತ್ತಲಲ್ಲಿ ಆಮಿ ಕುಂದಲಿಲ್ಲ &quot;ನನ್ನ ಜೀವನವೇ ಒಂದು ಪುಸ್ತಕವಾಗಿ, ನಾನೇ ಅದಕ್ಕೆ ಲೇಖಕಿಯಾಗಿದ್ದರೆ, ಈ ಕಥೆ ಮುಂದೆ ಹೇಗೆ ಸಾಗಬೇಕೆಂದು ನಾನು ಬಯಸುತ್ತೇನೆ?&quot; ತಮ್ಮ ಜೀವನಪರ್ಯಂತ &quot;ಕೃತಕ ಕಾಲುಗಳಿರುವ ಹುಡುಗಿ&quot; ಎಂದು ಜಗತ್ತು ಕರೆಯುವುದು ಅವರಿಗೆ ಇಷ್ಟವಿರಲಿಲ್ಲ. ಅವರು ಮತ್ತೆ ಸ್ನೋಬೋರ್ಡ್ ಹತ್ತಲೇಬೇಕೆಂಬ ಗಟ್ಟಿಯಾದ ತೀರ್ಮಾನಕ್ಕೆ ಬಂದರು. ಆ ನಿರ್ಧಾರವೇ ಅವರ ಪುನರ್ಜನ್ಮಕ್ಕೆ ನಾಂದಿ ಹಾಡಿತು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಮತ್ತೊಂದು ಆಘಾತ ಮತ್ತು ತಂದೆಯ ತ್ಯಾಗ&lt;/h2&gt;&lt;p&gt;ಕೃತಕ ಕಾಲುಗಳೊಂದಿಗೆ ನಡೆಯಲು ಅಭ್ಯಾಸ ಮಾಡುತ್ತಿದ್ದ ಆಮಿಗೆ ವೈದ್ಯರು ಮತ್ತೊಂದು ಆಘಾತಕಾರಿ ಸುದ್ದಿ ನೀಡಿದರು. ಸೋಂಕಿನ ಪರಿಣಾಮದಿಂದಾಗಿ ಅವರ ಎರಡೂ ಮೂತ್ರಪಿಂಡಗಳು (Kidneys) ವಿಫಲಗೊಂಡಿದ್ದು, ತಕ್ಷಣವೇ ಕಿಡ್ನಿ ಕಸಿ ಮಾಡಿಸಿಕೊಳ್ಳಬೇಕಿತ್ತು! 20 ವರ್ಷದ ಯುವತಿಗೆ ಇದು ಸಹಿಸಲಾರದ ದೈಹಿಕ ಮತ್ತು ಮಾನಸಿಕ ಶಿಕ್ಷೆಯಾಗಿತ್ತು. ತಮ್ಮ ಕೋಣೆಯ ನೆಲದ ಮೇಲೆಯೇ ಕುಸಿದುಬಿದ್ದು ಕಣ್ಣೀರು ಬತ್ತಿ ಹೋಗುವಂತೆ ಅತ್ತಿದ್ದನ್ನು ಆಮಿ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಆದರೆ, ವಿಧಿ ಅವರ ಬದುಕಿನಲ್ಲಿ ಮತ್ತೊಂದು ಪವಾಡ ಮಾಡಿತು! ಆಮಿಯ 21ನೇ ಹುಟ್ಟುಹಬ್ಬಕ್ಕೆ ಸರಿಯಾಗಿ ಒಂದು ವಾರ ಮುಂಚಿತವಾಗಿ, ಅವರ ತಂದೆ ತಮ್ಮ ಒಂದು ಮೂತ್ರಪಿಂಡವನ್ನು ಮಗಳಿಗೆ ದಾನ ಮಾಡಿದರು. ಕಸಿ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಯಿತು. ನನ್ನ ತಂದೆ ನನಗೆ ಅಕ್ಷರಶಃ ಎರಡನೇ ಬಾರಿ ಜನ್ಮ ನೀಡಿದರು. ಅವರ ಆ ಉಡುಗೊರೆ ನಾನು ಪೂರ್ಣ ಪ್ರಮಾಣದ ಜೀವನ ನಡೆಸಲು ಮಾತ್ರವಲ್ಲದೆ, ವೃತ್ತಿಪರ ಕ್ರೀಡಾಪಟುವಾಗಲು ಕಾರಣವಾಯಿತು ಎಂದು ಆಮಿ ಭಾವುಕರಾಗುತ್ತಾರೆ.&lt;/p&gt;&lt;h2&gt;ಡಕ್ಟ್ ಟೇಪ್ ಮತ್ತು ಬೋಲ್ಟ್&zwnj;ಗಳಿಂದ ನಿರ್ಮಾಣವಾಯಿತು 'ಸ್ನೋಬೋರ್ಡ್'!&lt;/h2&gt;&lt;p&gt;ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಾದ ಕೇವಲ ಮೂರೇ ತಿಂಗಳಲ್ಲಿ ಆಮಿ ಮತ್ತೆ ಸ್ನೋಬೋರ್ಡಿಂಗ್ ತರಬೇತಿಗೆ ಇಳಿದರು! ಆ ಸಮಯದಲ್ಲಿ ಸ್ನೋಬೋರ್ಡಿಂಗ್&zwnj;ಗಾಗಿ ಯಾವುದೇ ವಿಶೇಷ ಕೃತಕ ಪಾದಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಆಗ ಆಮಿ ಸ್ವತಃ ತಾವೇ ಡಕ್ಟ್ ಟೇಪ್ (Duct tape) ಮತ್ತು ಬೋಲ್ಟ್&zwnj;ಗಳನ್ನು ಬಳಸಿ ಕೃತಕ ಸ್ನೋಬೋರ್ಡ್ ಪಾದಗಳನ್ನು ಸಿದ್ಧಪಡಿಸಿಕೊಂಡರು!&lt;/p&gt;&lt;p&gt;ಅದೇ ಪಾದಗಳೊಂದಿಗೆ USASA ರಾಷ್ಟ್ರೀಯ ಸ್ನೋಬೋರ್ಡಿಂಗ್ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಸ್ಪರ್ಧಿಸಿ, ಮೂರು ವಿಭಾಗಗಳಲ್ಲಿ ಪದಕಗಳನ್ನು ಬಾಚಿಕೊಂಡರು! ನಂತರ, ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಸ್ನೋಬೋರ್ಡಿಂಗ್ ವಿಭಾಗವನ್ನು ಸೇರ್ಪಡೆಗೊಳಿಸಲು ಅವರು ಮತ್ತು ಅವರ ಪತಿ ಹೋರಾಡಿದರು. 2014ರ ಪ್ಯಾರಾಲಿಂಪಿಕ್ಸ್&zwnj;ನಲ್ಲಿ ಕಂಚು ಹಾಗೂ 2018ರ ಚಳಿಗಾಲದ ಪ್ಯಾರಾಲಿಂಪಿಕ್ಸ್&zwnj;ನಲ್ಲಿ ಬೆಳ್ಳಿ ಮತ್ತು ಮತ್ತೊಂದು ಕಂಚಿನ ಪದಕವನ್ನು ಗೆಲ್ಲುವ ಮೂಲಕ, ಟೀಮ್ USA ಯ ಅತ್ಯಂತ ಯಶಸ್ವಿ ಪ್ಯಾರಾಲಿಂಪಿಕ್ ಅಥ್ಲೀಟ್ ಆಗಿ ಹೊರಹೊಮ್ಮಿದರು.&lt;/p&gt;&lt;h2&gt;'ಡ್ಯಾನ್ಸಿಂಗ್ ವಿಥ್ ದಿ ಸ್ಟಾರ್ಸ್' ಅಖಾಡಕ್ಕೆ ರಂಗಪ್ರವೇಶ!&lt;/h2&gt;&lt;p&gt;ಪ್ಯಾರಾಲಿಂಪಿಕ್ ಯಶಸ್ಸಿನ ಬೆನ್ನಲ್ಲೇ ಆಮಿ ತಮ್ಮ ಗಡಿಯನ್ನು ಮತ್ತೆ ವಿಸ್ತರಿಸಿಕೊಂಡರು. ಯಾವುದೇ ಪೂರ್ವಾಪರ ಅನುಭವವಿಲ್ಲದಿದ್ದರೂ ಅಮೆರಿಕದ ಪ್ರಸಿದ್ಧ ರಿಯಾಲಿಟಿ ಶೋ 'ಡ್ಯಾನ್ಸಿಂಗ್ ವಿಥ್ ದಿ ಸ್ಟಾರ್ಸ್'ಗೆ ಪ್ರವೇಶಿಸಿದರು. ನೃತ್ಯ ಮಾಡುವಾಗ ಕಾಲ್ಬೆರಳುಗಳನ್ನು ಚಾಚಬೇಕಾದ (Point toes) ಕಷ್ಟಕರ ಭಂಗಿಗಳನ್ನು ತಮ್ಮ ಕೃತಕ ಕಾಲುಗಳಿಗೆ ತಕ್ಕಂತೆ ನೂತನವಾಗಿ ವಿನ್ಯಾಸಗೊಳಿಸಿಕೊಂಡರು. ಅಂತಿಮವಾಗಿ ಆ ಸ್ಪರ್ಧೆಯಲ್ಲಿ ರನ್ನರ್ ಅಪ್ (ದ್ವಿತೀಯ ಸ್ಥಾನ) ಪಡೆದು, ಜಗತ್ತಿನಾದ್ಯಂತ ಕೋಟ್ಯಂತರ ವೀಕ್ಷಕರಿಗೆ ಸ್ಪೂರ್ತಿಯಾದರು.&lt;/p&gt;&lt;h2&gt;ಮತ್ತೆ ಬಂದೊದಗಿದ ಆರೋಗ್ಯ ಬಿಕ್ಕಟ್ಟು&lt;/h2&gt;&lt;p&gt;2019ರಲ್ಲಿ, ಆಮಿಯ ಎಡಗಾಲಿಗೆ ತೀವ್ರ ಗಾಯವಾಗಿ ಬೃಹತ್ ರಕ್ತ ಹೆಪ್ಪುಗಟ್ಟುವಿಕೆ (Blood clot) ಉಂಟಾಯಿತು. ಕಾಲನ್ನು ಮತ್ತಷ್ಟು ಕಳೆದುಕೊಳ್ಳುವ ಭೀತಿಯಲ್ಲಿ, ಮುಂದಿನ ನಾಲ್ಕು ವರ್ಷಗಳಲ್ಲಿ ಅವರು ಎರಡು ಹೆಚ್ಚುವರಿ ಅಂಗಚ್ಛೇದನಗಳು ಸೇರಿದಂತೆ ಬರೋಬ್ಬರಿ 10 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಆದರೆ, ಆಮಿ ಧೃತಿಗೆಡಲಿಲ್ಲ! ಇದು ಮಾನವ ದೇಹದ ಅದ್ಭುತ ಸಾಮರ್ಥ್ಯ ಮತ್ತು ಸ್ಥಿತಿಸ್ಥಾಪಕತ್ವವನ್ನು ನನಗೆ ಮತ್ತೊಮ್ಮೆ ನೆನಪಿಸಿದ ಪ್ರಯಾಣ ಎಂದು ಅವರು ಸರಳವಾಗಿ ಹೇಳಿದರು.&lt;/p&gt;&lt;h2&gt;ನನ್ನ ಕಾಲುಗಳು ನನ್ನನ್ನು ಅಂಗವಿಕಲಗೊಳಿಸಿಲ್ಲ, ಸಕ್ರಿಯಗೊಳಿಸಿವೆ!&lt;/h2&gt;&lt;p&gt;ಇಂದು ಆಮಿ ಹೇಳುವ ಮಾತು ಪ್ರತಿಯೊಬ್ಬರ ಕಣ್ಣು ತೆರೆಸುವಂತಿದೆ. &quot;ನನ್ನ ಜೀವನದಲ್ಲಿ ನಡೆದಿರುವ ಯಾವುದನ್ನೂ ನಾನು ಬದಲಾಯಿಸಲು ಬಯಸುವುದಿಲ್ಲ. ಏಕೆಂದರೆ ನನ್ನ ಕಾಲುಗಳು ನನ್ನನ್ನು ಅಂಗವಿಕಲಗೊಳಿಸಿಲ್ಲ (Disabled), ಬದಲಿಗೆ ನನ್ನನ್ನು ಇನ್ನಷ್ಟು ಸಕ್ರಿಯಗೊಳಿಸಿವೆ (Enabled).&quot;&lt;/p&gt;&lt;p&gt;ಬದುಕಿನಲ್ಲಿ ಬದಲಾವಣೆ ಅಥವಾ ಹಿನ್ನಡೆಯಿಂದ ನಲುಗುತ್ತಿರುವವರಿಗೆ ಆಮಿಯ ಸಂದೇಶ ಸ್ಪಷ್ಟವಾಗಿದೆ. &quot;ನಾವು ನಮ್ಮನ್ನು ಇತರರೊಂದಿಗೆ ಅಥವಾ ನಮ್ಮ ಹಳೆಯ ಜೀವನದೊಂದಿಗೆ ಹೋಲಿಸಿಕೊಳ್ಳುವುದು ಅತ್ಯಂತ ಸ್ವಯಂ-ವಿನಾಶಕಾರಿ ಕೆಲಸ. ಜೀವನವನ್ನು ಪ್ರತಿದಿನವೂ 'ಒಂದೊಂದೇ ಪುಟ್ಟ ಹೆಜ್ಜೆಯಾಗಿ' ಸ್ವೀಕರಿಸಿ. ಪ್ರತಿಯೊಂದು ಹೊಸ ಮುಂಜಾನೆಯೂ ಕಥೆಯನ್ನು ಮತ್ತೆ ಆರಂಭಿಸಲು ಸಿಗುವ ಮತ್ತೊಂದು ಅವಕಾಶ!&quot;&lt;/p&gt;&lt;p&gt;ಆಮಿ ಪರ್ಡಿ ಎಂದರೆ ಕೇವಲ ದುರಂತವನ್ನು ಗೆದ್ದ ಮಹಿಳೆಯಲ್ಲ.ಬದುಕು ಪ್ರತಿ ಬಾರಿಯೂ ತನ್ನ ಯೋಜನೆಗಳನ್ನು ಬದಲಾಯಿಸಿದಾಗ, ಹೊಸ ಧೈರ್ಯದೊಂದಿಗೆ ಮುಂದಿನ ಅಧ್ಯಾಯವನ್ನು ಬರೆದ ಒಬ್ಬ ಅಪ್ರತಿಮ ಲೇಖಕಿ!&lt;/p&gt;]]></content:encoded>
            <category>women</category>
            <dc:creator>Gowthami K</dc:creator>
            <atom:link href="https://kannada.asianetnews.com/viral/the-inspiring-story-of-amy-purdy-overcoming-double-amputation-to-become-a-paralympic-champion-gdp/articleshow-n53xex9"/>
        </item>
        <item>
            <title><![CDATA[ಬೆಳಗಿನ ಜಾವ 3 ಗಂಟೆಗೆ ಆಟೋ ಓಡಿಸುವ ಮಹಿಳೆ.. ಕಾರಣ ಏನೆಂದು ಗೊತ್ತಾದ್ರೆ ಸಲಾಂ ಅಂತೀರಾ]]></title>
            <link>https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n</link>
            <guid isPermaLink="true">https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n</guid>
            <pubDate>Sat, 08 Aug 2026 18:31:57 +0530</pubDate>
            <description><![CDATA[&lt;p&gt;&lt;strong&gt;Woman auto driver: &lt;/strong&gt;ಮುಂಜಾನೆ 3 ಗಂಟೆಗೆ ಜನರು ನಿದ್ರಿಸುತ್ತಿದ್ದರೆ, ಈ ಮಹಿಳೆ ಆಟೋ ಓಡಿಸುತ್ತಾ ರಸ್ತೆಯಲ್ಲಿರುತ್ತಾರೆ. ಆದರೆ ಹಣಕ್ಕಾಗಿ ಅಲ್ಲ, ಅಂದಹಾಗೆ ವಡೋದರಾದ ಈ ಮಹಿಳೆಯ ಸ್ಫೂರ್ತಿದಾಯಕ ಕಥೆ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgq5chrqw2r598b0cknawcj,imgname-thumbnail---2026-08-08t182602.130-1786193818167.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಾ&lt;/strong&gt;ಮಾನ್ಯವಾಗಿ ಮುಂಜಾನೆ 3 ಗಂಟೆಯ ಸಮಯವೆಂದರೆ ಇಡೀ ದೇಶವೇ ಗಾಢ ನಿದ್ರೆಯಲ್ಲಿರುತ್ತದೆ. ರಸ್ತೆಗಳು ನಿರ್ಜನವಾಗಿರುತ್ತವೆ. ಅಂತಹ ಸಮಯದಲ್ಲಿ ಒರ್ವ ಮಹಿಳೆ ಆಟೋರಿಕ್ಷಾ ಓಡಿಸುತ್ತಿರುವುದು ಕಂಡರೆ ಎಂಥವರು ಕೂಡ ಒಂದು ಕ್ಷಣ ಅಚ್ಚರಿಯಿಂದ ನೋಡುವುದು ಸಹಜ. ಇದೀಗ ಇನ್&zwnj;ಸ್ಟಾಗ್ರಾಂ ಬಳಕೆದಾರರಾದ ಸನ್ಯಮ್ ಗಾರ್ಗ್ ಎಂಬುವವರಿಗೂ ಇತ್ತೀಚೆಗೆ ಇಂತಹದ್ದೇ ಒಂದು ಅನುಭವವಾಗಿದೆ. ಅವರು ಮುಂಜಾನೆ 3 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದಾಗ ಒರ್ವ ಮಹಿಳೆ ತನ್ನ ಪತಿಯೊಂದಿಗೆ ಆಟೋ ಓಡಿಸುತ್ತಿರುವುದು ಕಂಡುಬಂದಿದೆ. ಕುತೂಹಲದಿಂದ ಸನ್ಯಮ್ ಅವರು ಆಕೆಯನ್ನು ಮಾತನಾಡಿಸಿದಾಗ ತಿಳಿದ ವಿಷಯಗಳು ಆಕೆಗೆ ಎಂಥವರು ಒಮ್ಮೆ ಸಲಾಂ ಹೊಡೆಯುವಂತಿದೆ.&lt;/p&gt;&lt;h2&gt;&lt;strong&gt;ಹಣಕ್ಕಾಗಿ ಮಾತ್ರ ಆಟೋ ಓಡಿಸುತ್ತಿಲ್ಲ&lt;/strong&gt;&lt;/h2&gt;&lt;p&gt;ಗುಜರಾತ್&zwnj;ನ ವಡೋದರಾ ನಗರದ ಈ ಮಹಿಳೆ ಮಾನವೀಯತೆಯ ಪ್ರತಿರೂಪದಂತೆ ಇದ್ದಾರೆ. ಈಕೆಯ ಪತಿ ಕೂಡ ಒಬ್ಬ ಆಟೋ ಚಾಲಕ. ತನ್ನ ಪತ್ನಿ ಆರ್ಥಿಕವಾಗಿ ಯಾರ ಮೇಲೂ ಅವಲಂಬಿತಳಾಗಬಾರದು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಉದ್ದೇಶದಿಂದ ಪತಿಯೇ ಆಕೆಗೆ ಆಟೋ ಡ್ರೈವಿಂಗ್ ಕಲಿಸಿದ್ದಾರೆ. ಈಗ ಈ ದಂಪತಿ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಾ ತಮ್ಮ ಇಬ್ಬರು ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಆದರೆ, ಇವರು ಕೇವಲ ಹಣಕ್ಕಾಗಿ ಮಾತ್ರ ಆಟೋ ಓಡಿಸುತ್ತಿಲ್ಲ.&lt;/p&gt;&lt;h2&gt;&lt;strong&gt;ಗರ್ಭಿಣಿಯರು, ರೋಗಿಗಳು, ಒಬ್ಬಂಟಿ ಮಹಿಳೆಯರಿಂದ ದುಡ್ಡು ಕೇಳಲ್ಲ&lt;/strong&gt;&lt;/h2&gt;&lt;p&gt;ನಗರಗಳಲ್ಲಿ ಹಗಲಿನಲ್ಲಿ ವಾಹನಗಳು ಸುಲಭವಾಗಿ ಸಿಗುತ್ತವೆ. ಆದರೆ ಅರ್ಧರಾತ್ರಿಯ ಸಮಯದಲ್ಲಿ ಮಹಿಳೆಯರು, ಮಕ್ಕಳು ಅಥವಾ ವೃದ್ಧರಿಗೆ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಆಸ್ಪತ್ರೆಗೆ ಹೋಗಲು ವಾಹನ ಸಿಗದೆ ಪರದಾಡುತ್ತಾರೆ. ಈ ಕಷ್ಟವನ್ನು ಅರ್ಥಮಾಡಿಕೊಂಡಿರುವ ಈ ಮಹಿಳಾ ಆಟೋ ಚಾಲಕಿ, ರಾತ್ರಿ 3 ಗಂಟೆಯಾದರೂ ಸರಿ, ಯಾರಾದರೂ ಆಪತ್ತಿನಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕರೆ ತಕ್ಷಣ ಅಲ್ಲಿಗೆ ಧಾವಿಸುತ್ತಾರೆ. ವಿಶೇಷವೆಂದರೆ, ಆಸ್ಪತ್ರೆಗೆ ಹೋಗಬೇಕಾದ ಗರ್ಭಿಣಿಯರು, ರೋಗಿಗಳು ಅಥವಾ ಒಬ್ಬಂಟಿ ಮಹಿಳೆಯರಿಂದ ಈಕೆ ಒಂದು ರೂಪಾಯಿಯನ್ನೂ ಪಡೆಯದೆ ಉಚಿತವಾಗಿ ಸೇವೆಯನ್ನು ಒದಗಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹಣ ಪಡೆಯಲು ನಿರಾಕರಣೆ&lt;/strong&gt;&lt;/h2&gt;&lt;p&gt;&quot;ಕೇವಲ ಹಣ ಸಂಪಾದಿಸುವುದಷ್ಟೇ ನನ್ನ ಗುರಿಯಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಮಹಿಳೆಯರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವುದು ನನ್ನ ಜೀವನದ ಉದ್ದೇಶ&quot; ಎಂದು ಈ ಧೀರೆ ಹೆಮ್ಮೆಯಿಂದ ಹೇಳುತ್ತಾರೆ. ಎಷ್ಟೋ ಬಾರಿ ಪ್ರಯಾಣಿಕರು ಹಣ ಕೊಡಲು ಮುಂದಾದರೂ, ತುರ್ತು ಪರಿಸ್ಥಿತಿಯಲ್ಲಿದ್ದವರಿಂದ ಹಣ ಪಡೆಯಲು ಈಕೆ ನಿರಾಕರಿಸುತ್ತಾರೆ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆ&lt;/strong&gt;&lt;/h2&gt;&lt;p&gt;ಸನ್ಯಮ್ ಗಾರ್ಗ್ ಅವರು ಹಂಚಿಕೊಂಡ ಈ ವಿಡಿಯೋ ಇಂಟರ್ನೆಟ್&zwnj;ನಲ್ಲಿ ಸಖತ್ ವೈರಲ್ ಆಗಿದೆ. ಲಕ್ಷಾಂತರ ಜನರು ಈ ಮಹಿಳೆಯ ಸೇವಾ ಮನೋಭಾವಕ್ಕೆ ಮಾರುಹೋಗಿದ್ದಾರೆ. &quot;ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಇಂತಹವರು ದೇವರಿಗಿಂತ ಕಡಿಮೆ ಇಲ್ಲ&quot; ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ವಡೋದರಾದ ಈ ಮಹಿಳೆ ನೂರಾರು ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.&lt;/p&gt;&lt;p&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ&amp;nbsp;&lt;/strong&gt;&lt;/p&gt;View this post on Instagram&lt;p&gt;A post shared by Sanyam Garg | Online Coach (@sanyam_shiftstrong)&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/hats-off-to-the-brave-woman-driving-an-auto-at-3-am-for-a-heroic-reason/articleshow-n75wm0n"/>
        </item>
        <item>
            <title><![CDATA[ಕಲಸಿದ ಚಪಾತಿ ಹಿಟ್ಟು ಫ್ರಿಡ್ಜ್‌ನಲ್ಲಿ ಇಡುತ್ತಿದ್ದೀರಾ? ವಾಸ್ತು ಪ್ರಕಾರ ಇದು 'ಪಿಂಡ'ದುಂಡೆಗೆ ಸಮಾನವಂತೆ!]]></title>
            <link>https://kannada.asianetnews.com/vaastu/vastu-tips-never-store-kneaded-chapati-dough-in-fridge-health-hazards/articleshow-odgl8uv</link>
            <guid isPermaLink="true">https://kannada.asianetnews.com/vaastu/vastu-tips-never-store-kneaded-chapati-dough-in-fridge-health-hazards/articleshow-odgl8uv</guid>
            <pubDate>Fri, 07 Aug 2026 23:09:05 +0530</pubDate>
            <description><![CDATA[ಫ್ರಿಡ್ಜ್&zwnj;ನಲ್ಲಿ ಚಪಾತಿ ಹಿಟ್ಟನ್ನು ಇಡುವುದು ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಆರೋಗ್ಯಕ್ಕೆ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಅಭ್ಯಾಸವು ಮನೆಯಲ್ಲಿ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಗಳನ್ನು ತರಬಹುದು, ಆದ್ದರಿಂದ ಯಾವಾಗಲೂ ತಾಜಾ ಹಿಟ್ಟನ್ನು ಬಳಸುವುದು ಉತ್ತಮ.]]></description>
            <media:content url="https://static.asianetnews.com/images/w-1280,h-720,format-jpg,imgid-01kzemtv3hzn3gejp217zqbq3f,imgname-chapati-dough--1--1786124266609.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಗಡಿಬಿಡಿಯ ಜೀವನಶೈಲಿಯಲ್ಲಿ (Busy Lifestyle) ಸಮಯ ಉಳಿಸಲು ಅನೇಕ ಜನರು ಬೆಳಿಗ್ಗೆಯೇ ಚಪಾತಿ ಅಥವಾ ರೊಟ್ಟಿಯ ಹಿಟ್ಟನ್ನು (Chapati Dough / Wheat Dough) ಕಲಸಿ ಫ್ರಿಡ್ಜ್&zwnj;ನಲ್ಲಿ (Refrigerator) ಇಡುತ್ತಾರೆ. ಅಥವಾ ರಾತ್ರಿ ಉಳಿದ ಹಿಟ್ಟನ್ನು ಫ್ರಿಡ್ಜ್&zwnj;ನಲ್ಲಿಟ್ಟು ಮರುದಿನ ಬೆಳಿಗ್ಗೆ ಚಪಾತಿ ಮಾಡಲು ಬಳಸುತ್ತಾರೆ. ಆದರೆ, ಈ ಸಣ್ಣ ಅಭ್ಯಾಸವು ಮನೆಯ ವಾಸ್ತು ಶಾಸ್ತ್ರದ (Vastu Shastra) ದೃಷ್ಟಿಯಿಂದ ಹಾಗೂ ದೈಹಿಕ ಆರೋಗ್ಯದ (Physical Health) ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎಂಬುದು ನಿಮಗೊತ್ತೇ?&lt;/p&gt;&lt;p&gt;ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ, ಫ್ರಿಡ್ಜ್&zwnj;ನಲ್ಲಿ ಕಲಸಿದ ಹಿಟ್ಟನ್ನು ಇಡುವುದು ಮನೆಗೆ ದೊಡ್ಡ ನಕಾರಾತ್ಮಕ ಶಕ್ತಿಯನ್ನು (Negative Energy) ಆಹ್ವಾನಿಸಿದಂತೆ. ಇದರ ಹಿಂದಿರುವ ವಾಸ್ತು ದೋಷ ಮತ್ತು ಆರೋಗ್ಯದ ಅಪಾಯಗಳ ವಿವರ ಇಲ್ಲಿದೆ:&lt;/p&gt;&lt;h2&gt;&lt;strong&gt;1. 'ಪಿಂಡ'ಕ್ಕೆ ಸಮಾನ ಎಂದು ಪರಿಗಣನೆ:&lt;/strong&gt;&lt;/h2&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಹಿಟ್ಟನ್ನು ನೀರು ಹಾಕಿ ಉಂಡೆಯಾಗಿ ಕಲಸಿಟ್ಟಾಗ ಅದು ಪೂರ್ವಜರಿಗೆ ಇಡುವ 'ಪಿಂಡ'ದ (Pinda) ರೂಪವನ್ನು ಪಡೆಯುತ್ತದೆ. ಈ ರೀತಿ ಕಲಸಿಟ್ಟ ಹಿಟ್ಟನ್ನು ಮನೆಯಲ್ಲಿ ದೀರ್ಘಕಾಲ ಇಟ್ಟರೆ, ಅದು ನಕಾರಾತ್ಮಕ ಆತ್ಮಗಳು ಹಾಗೂ ರಾಹು-ಕೇತುಗಳ (Rahu-Ketu) ಪ್ರಭಾವವನ್ನು ಆಕರ್ಷಿಸುತ್ತದೆ. ಇದರಿಂದ ಮನೆಯಲ್ಲಿ ಸದಾ ಜಗಳ, ವಿನಾಕಾರಣ ಮನಸ್ತಾಪ ಹಾಗೂ ದುಃಖದ ವಾತಾವರಣ ನಿರ್ಮಾಣವಾಗುತ್ತದೆ.&lt;/p&gt;&lt;h2&gt;&lt;strong&gt;2. ನಕಾರಾತ್ಮಕ ಶಕ್ತಿ ಮತ್ತು ಲಕ್ಷ್ಮೀ ದೇವಿಯ ಕೋಪ:&lt;/strong&gt;&lt;/h2&gt;&lt;p&gt;ಅನ್ನ ಅಥವಾ ಆಹಾರವನ್ನು 'ಪರಬ್ರಹ್ಮ' ಎಂದು ಕರೆಯಲಾಗುತ್ತದೆ. ತಾಜಾ ಆಹಾರ ತಯಾರಿಸಿ ಸೇವಿಸುವುದು ಧನಾತ್ಮಕ ಶಕ್ತಿಯನ್ನು (Positive Energy) ಹೆಚ್ಚಿಸುತ್ತದೆ. ಆದರೆ, ಫ್ರಿಡ್ಜ್&zwnj;ನಲ್ಲಿ ಹಳೆಯ ಹಿಟ್ಟನ್ನು ಇಟ್ಟು ತಿನ್ನುವುದರಿಂದ ಲಕ್ಷ್ಮೀ ದೇವಿಯ (Goddess Lakshmi) ಕೃಪೆ ತಪ್ಪಿ, ಮನೆಯಲ್ಲಿ ಆರ್ಥಿಕ ಮುಗ್ಗಟ್ಟು (Financial Crisis) ಮತ್ತು ಬಡತನ ಎದುರಾಗುತ್ತದೆ.&lt;/p&gt;&lt;h2&gt;&lt;strong&gt;3. ಆರೋಗ್ಯದ ಮೇಲಾಗುವ ಭೀಕರ ಪರಿಣಾಮಗಳು:&lt;/strong&gt;&lt;/h2&gt;&lt;p&gt;ಫ್ರಿಡ್ಜ್&zwnj;ನ ತಣ್ಣನೆಯ ವಾತಾವರಣದಲ್ಲಿ ಹಿಟ್ಟನ್ನು ಇಟ್ಟಾಗ, ಅದರಲ್ಲಿ ಸೂಕ್ಷ್ಮ ಬ್ಯಾಕ್ಟೀರಿಯಾಗಳು (Bacteria Growth) ಬೆಳೆಯಲು ಪ್ರಾರಂಭಿಸುತ್ತವೆ.&lt;/p&gt;&lt;p&gt;&lt;strong&gt;ಫ್ರಿಡ್ಜ್&zwnj;ನಲ್ಲಿಟ್ಟ ಹಿಟ್ಟಿನಿಂದ ಮಾಡಿದ ಚಪಾತಿಯನ್ನು ತಿನ್ನುವುದರಿಂದ:&lt;/strong&gt;&lt;/p&gt;&lt;ul&gt; &lt;li&gt;ಹೊಟ್ಟೆಯುರಿ ಮತ್ತು ಗ್ಯಾಸ್ಟ್ರಿಕ್ (Gastric Issues) ತೊಂದರೆ ಉಂಟಾಗುತ್ತದೆ.&lt;/li&gt; &lt;li&gt;ಜೀರ್ಣಕ್ರಿಯೆ ವ್ಯವಸ್ಥೆ (Digestive System) ಹಾಳಾಗುತ್ತದೆ.&lt;/li&gt; &lt;li&gt;ಪೌಷ್ಟಿಕಾಂಶಗಳು ನಶಿಸಿ, ದೇಹದ ರೋಗನಿರೋಧಕ ಶಕ್ತಿ (Immunity) ಕಡಿಮೆಯಾಗುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;ಏನು ಮಾಡಬೇಕು?&lt;/strong&gt;&lt;/h2&gt;&lt;ul&gt; &lt;li&gt;ಯಾವಾಗಲೂ ಅಡುಗೆ ಮಾಡುವ ತಕ್ಷಣಕ್ಕಷ್ಟೇ ಅಗತ್ಯವಿರುವಷ್ಟು ಹಿಟ್ಟನ್ನು ಮಾತ್ರ ಕಲಸಿಕೊಳ್ಳಿ.&lt;/li&gt; &lt;li&gt;ಒಂದು ವೇಳೆ ಹಿಟ್ಟು ಉಳಿದರೆ, ಅದನ್ನು ಫ್ರಿಡ್ಜ್&zwnj;ನಲ್ಲಿಡುವ ಬದಲು ಹಸುಗಳಿಗೆ ಅಥವಾ ಪಕ್ಷಿಗಳಿಗೆ ನೀಡುವುದು ಶುಭ.&lt;/li&gt; &lt;li&gt;ಸದಾ ತಾಜಾ ಹಿಟ್ಟಿನಿಂದ (Fresh Dough) ಚಪಾತಿ ಮಾಡಿ ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುವುದಲ್ಲದೆ, ಮನೆಯಲ್ಲಿ ಧನಾತ್ಮಕ ಶಕ್ತಿಯೂ ಹೆಚ್ಚುತ್ತದೆ.&lt;/li&gt;&lt;/ul&gt;]]></content:encoded>
            <category>women</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/vaastu/vastu-tips-never-store-kneaded-chapati-dough-in-fridge-health-hazards/articleshow-odgl8uv"/>
        </item>
        <item>
            <title><![CDATA[ಬೈಕ್‌ನಲ್ಲಿ ಹೆರಿಗೆಯಾಯ್ತು ಸರಿ, ಆದರೆ ಮಗು ಎಲ್ಲಿ ಸಿಕ್ಕಿತು ಗೊತ್ತಾ? ನೆಟ್ಟಿಗರನ್ನೇ ಬೆರಗುಗೊಳಿಸಿದ ರಹಸ್ಯ!]]></title>
            <link>https://kannada.asianetnews.com/viral/pregnant-woman-gives-birth-on-motorcycle-moments-before-reaching-hospital/articleshow-pkv7ayo</link>
            <guid isPermaLink="true">https://kannada.asianetnews.com/viral/pregnant-woman-gives-birth-on-motorcycle-moments-before-reaching-hospital/articleshow-pkv7ayo</guid>
            <pubDate>Fri, 07 Aug 2026 16:30:22 +0530</pubDate>
            <description><![CDATA[&lt;p&gt;ವಿಯೆಟ್ನಾಂನಲ್ಲಿ 32 ವಾರಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ತಲುಪುವ ಮುನ್ನವೇ ಮೋಟಾರ್&zwnj;ಸೈಕಲ್&zwnj;ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ತಾಯಿ ಮತ್ತು ನವಜಾತ ಶಿಶುವಿಗೆ ಚಿಕಿತ್ಸೆ ನೀಡಿದ್ದಾರೆ. ಸುಮಾರು 2 ಕೆಜಿ ತೂಕದ ಅಕಾಲಿಕ ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದು, ವೈದ್ಯರ ತ್ವರಿತ ಸೇವೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzczxg71f25gt1jm8wdggnxz,imgname-premature-baby-born-on-motorcycle--doctors-swift-response-wins-praise--1--1786068779233.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಯೆಟ್ನಾಂನಲ್ಲಿ ನಡೆದ ಅಪರೂಪದ ಹೆರಿಗೆ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 32 ವಾರಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ತಲುಪುವ ಮುನ್ನವೇ ಮೋಟಾರ್&zwnj;ಸೈಕಲ್&zwnj;ನಲ್ಲೇ ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆ ಸಿಬ್ಬಂದಿಯ ತುರ್ತು ಸ್ಪಂದನೆಯಿಂದ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತರಾಗಿದ್ದಾರೆ.&lt;/p&gt;&lt;p&gt;&lt;strong&gt;ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದೌಡು!&lt;/strong&gt;&lt;/p&gt;&lt;p&gt;ಸ್ಥಳೀಯ ವರದಿಗಳ ಪ್ರಕಾರ, 25 ವರ್ಷದ ಮಹಿಳೆಗೆ ಆಗಸ್ಟ್ 3ರಂದು ಏಕಾಏಕಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಪತಿಯೊಂದಿಗೆ ಮೋಟಾರ್&zwnj;ಸೈಕಲ್&zwnj;ನಲ್ಲಿ ಥಾಯ್ ನ್ಗುಯೆನ್ ಪ್ರಾಂತ್ಯದ ಫು ಲುವಾಂಗ್ ಆಸ್ಪತ್ರೆಗೆ ತೆರಳಿದರು. ಮಹಿಳೆ ಗರ್ಭಧಾರಣೆಯ 32ನೇ ವಾರದಲ್ಲಿದ್ದು, ಇನ್ನೂ ಹೆರಿಗೆಗೆ ಸಮಯವಿದೆ ಎಂದು ಕುಟುಂಬ ಭಾವಿಸಿತ್ತು.&lt;/p&gt;&lt;p&gt;&lt;strong&gt;ಆಸ್ಪತ್ರೆ ಗೇಟ್ ಬಳಿ ಅಚ್ಚರಿಯ ಹೆರಿಗೆ..!&lt;/strong&gt;&lt;/p&gt;&lt;p&gt;ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಕಾಲಿಕ ಹೆರಿಗೆ ನೋವು ತೀವ್ರಗೊಂಡು, ಮಹಿಳೆ ಬೈಕ್ ಮೇಲೆಯೇ ಮಗುವಿಗೆ ಜನ್ಮ ನೀಡಿದರು. ವೈರಲ್ ವಿಡಿಯೋದಲ್ಲಿ ಆಸ್ಪತ್ರೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ತಾಯಿ ಮತ್ತು ನವಜಾತ ಶಿಶುವನ್ನು ಸುರಕ್ಷಿತವಾಗಿ ಒಳಗೆ ಕರೆದೊಯ್ಯುತ್ತಿರುವ ದೃಶ್ಯಗಳು ಕಂಡುಬರುತ್ತವೆ. ಮಗುವಿನ ಹೊಕ್ಕುಳಬಳ್ಳಿ ಇನ್ನೂ ತಾಯಿಯೊಂದಿಗೆ ಸಂಪರ್ಕದಲ್ಲಿದ್ದ ಕಾರಣ ವೈದ್ಯರು ಎಚ್ಚರಿಕೆಯಿಂದ ಚಿಕಿತ್ಸೆ ಆರಂಭಿಸಿದರು.&lt;/p&gt;&lt;p&gt;&lt;strong&gt;2 ಕೆಜಿ ತೂಕದ ಮಗು!&lt;/strong&gt;&lt;/p&gt;&lt;p&gt;ವೈದ್ಯರ ಮಾಹಿತಿ ಪ್ರಕಾರ, ಜನಿಸಿದ ಗಂಡು ಮಗು ಸುಮಾರು 2 ಕೆಜಿ ತೂಕ ಹೊಂದಿದ್ದು, ಅಕಾಲಿಕ ಹೆರಿಗೆಗೆ ಅನುಗುಣವಾದ ಆರೋಗ್ಯ ಸ್ಥಿತಿಯಲ್ಲಿತ್ತು. ಮಗುವಿಗೆ ಅಗತ್ಯ ವೈದ್ಯಕೀಯ ಆರೈಕೆ, ಹೆಪಟೈಟಿಸ್-ಬಿ ಲಸಿಕೆ ಸೇರಿದಂತೆ ಎಲ್ಲಾ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ವೈದ್ಯರ ತ್ವರಿತ ಸೇವೆಗೆ ಮೆಚ್ಚುಗೆ..!&lt;/strong&gt;&lt;/p&gt;&lt;p&gt;ಘಟನೆ ಬಳಿಕ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ, ವೈದ್ಯರು ಮತ್ತು ನರ್ಸ್&zwnj;ಗಳ ಸಮಯಪ್ರಜ್ಞೆ ಹಾಗೂ ತಕ್ಷಣದ ಸೇವೆಯನ್ನು ಸಾವಿರಾರು ನೆಟ್ಟಿಗರು ಶ್ಲಾಘಿಸಿದ್ದಾರೆ. ಕೆಲವರು ಹಾಸ್ಯವಾಗಿ ಮಗುವಿಗೆ &quot;ಯಮಹಾ&quot; ಎಂದು ಹೆಸರಿಡಿ ಎಂದರೆ, ಮತ್ತಷ್ಟು ಮಂದಿ &quot;ತಾಯಿ-ಮಗು ಸುರಕ್ಷಿತರಾಗಿರುವುದೇ ದೊಡ್ಡ ಸಂತೋಷ&quot; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;उम्मीद है मां और बच्चा दोनों स्वस्थ होंगे!वियतनाम pic.twitter.com/9jyRU0xnEw&lt;/p&gt;&lt;p&gt;&mdash; Surabhi (@surabhi_tiwari_) August 4, 2026&lt;/p&gt;&lt;p&gt;&lt;/p&gt;]]></content:encoded>
            <category>women</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/pregnant-woman-gives-birth-on-motorcycle-moments-before-reaching-hospital/articleshow-pkv7ayo"/>
        </item>
        <item>
            <title><![CDATA[ಈ ಪದಾರ್ಥ ಸೇರಿಸಿ ಒಗ್ಗರಣೆ ಹಾಕಿ.. ಮುಖ ಮಾತ್ರವಲ್ಲ ಗೋಡೆಗೂ ಎಣ್ಣೆ ಸಿಡಿಯಲ್ಲ]]></title>
            <link>https://kannada.asianetnews.com/webstories/food/a-pinch-of-salt-no-more-oil-splatter-in-your-kitchen-rkm18l0</link>
            <guid isPermaLink="true">https://kannada.asianetnews.com/webstories/food/a-pinch-of-salt-no-more-oil-splatter-in-your-kitchen-rkm18l0</guid>
            <pubDate>Sat, 08 Aug 2026 22:37:42 +0530</pubDate>
            <description><![CDATA[&lt;p&gt;Kitchen hacks: ಒಗ್ಗರಣೆ ಹಾಕುವಾಗ ಎಣ್ಣೆ ಸಿಡಿದು ಅಡುಗೆ ಮನೆಯ ಗೋಡೆಗಳೆಲ್ಲಾ ಗಲೀಜಾಗುವುದು ದೊಡ್ಡ ತಲೆನೋವು. ಆದರೆ ಇನ್ನು ಮುಂದೆ ಈ ಚಿಂತೆ ಬೇಡ!&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzh52kg775td4af79fxb4zk8,imgname-indian-kitchen-tips-1786208407047.jpg" type="image/jpeg" height="390" width="690"/>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/food/a-pinch-of-salt-no-more-oil-splatter-in-your-kitchen-rkm18l0"/>
        </item>
        <item>
            <title><![CDATA[10th ಬೇಸಿಗೆ ರಜಾದಲ್ಲಿ ಸುಮ್ನೆ ಮಜಾ ಮಾಡಲು ಬಂದು ಸೂಪರ್ ಸ್ಟಾರ್ ಆಗಿದ್ದು ಹೇಗೆ ಈ ಸುಂದರಿ!]]></title>
            <link>https://kannada.asianetnews.com/entertainment/trisha-krishnan-visited-a-film-set-and-acted-just-for-fun-during-her-10th-grade-holidays-now-became-superstar/articleshow-s2399bd</link>
            <guid isPermaLink="true">https://kannada.asianetnews.com/entertainment/trisha-krishnan-visited-a-film-set-and-acted-just-for-fun-during-her-10th-grade-holidays-now-became-superstar/articleshow-s2399bd</guid>
            <pubDate>Fri, 07 Aug 2026 12:58:47 +0530</pubDate>
            <description><![CDATA[&lt;p&gt;ಚಿರಂಜೀವಿ, ಕಮಲ್ ಹಾಸನ್, ವಿಜಯ್, ಪ್ರಭಾಸ್, ಮಹೇಶ್ ಬಾಬು, ಅಜಿತ್, ವಿಕ್ರಮ್ ಹೀಗೆ ಸೌತ್ ಇಂಡಸ್ಟ್ರಿಯ ಎಲ್ಲ ಘಟಾನುಘಟಿಗಳ ಜೊತೆ ಸ್ಕ್ರೀನ್ ಶೇರ್ ಮಾಡಿರುವ ತ್ರಿಶಾ, ಪ್ರತಿ ಸಿನಿಮಾದಲ್ಲೂ ಹೊಸತನ ಮೆರೆದಿದ್ದಾರೆ. ಆದರೆ, ತ್ರಿಷಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಹೇಗೆ? ಈ ಸ್ಟೋರಿ ನೋಡಿ, ಶಾಕ್ ಆಗ್ತೀರಾ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwv374fwg2efmn9vhrt2ycfy,imgname-trisha-krishnan-1783320777212.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Actress Trisha Krishnan from 10th Grade Story to South Indian Superstar Journey to know here: ಹತ್ತನೇ ಕ್ಲಾಸ್ ರಜೆಯಲ್ಲಿ ತಮಾಷೆಗಾಗಿ ಬಂದವಳು ಇಂದು ಕಾಲಿವುಡ್ ಮಹಾರಾಣಿ! ತ್ರಿಷಾ ಸಿನಿಮೀಯ ಪಯಣದ ರೋಚಕ ಕಥೆ!&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸುಮಾರು ಎರಡು ದಶಕಗಳಿಂದ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿ ಆಳುತ್ತಿರುವ ನಟಿ ಅಂದ್ರೆ ಅದು ತ್ರಿಷಾ ಕೃಷ್ಣನ್. ಇಂದಿಗೂ ಹೊಸ ನಾಯಕಿಯರಿಗೆ ಪೈಪೋಟಿ ನೀಡುವ ಅವರ ಸೌಂದರ್ಯ ಮತ್ತು ನಟನೆಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದರೆ, ಈ 'ದಕ್ಷಿಣದ ಸುಂದರಿ' ಬಣ್ಣದ ಲೋಕಕ್ಕೆ ಕಾಲಿಟ್ಟ ಕಥೆ ಇದೆಯಲ್ಲ, ಅದು ಯಾವುದೋ ಸಿನಿಮಾದ ಸ್ಕ್ರಿಪ್ಟ್&zwnj;ಗಿಂತ ಕಮ್ಮಿ ಏನಿಲ್ಲ!&lt;/p&gt;&lt;p&gt;&lt;img&gt;&lt;/p&gt;&lt;p&gt;ಬೇಸಿಗೆ ರಜೆಯ ಮೋಜು; ಸಿನಿಮಾದಲ್ಲಿ ಮಿನಿ ಪಾತ್ರ!&lt;/p&gt;&lt;p&gt;ಸಾಮಾನ್ಯವಾಗಿ ಹತ್ತನೇ ತರಗತಿ ಪರೀಕ್ಷೆ ಮುಗಿದ ನಂತರ ಮಕ್ಕಳು ಟೂರ್ ಹೋಗೋಣ ಅಂತ ಪ್ಲಾನ್ ಮಾಡ್ತಾರೆ. ಆದರೆ 1999ರಲ್ಲಿ ಚೆನ್ನೈನ ಚರ್ಚ್ ಪಾರ್ಕ್ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದ್ದ ಪುಟ್ಟ ಹುಡುಗಿ ತ್ರಿಷಾ ಮಾಡಿದ್ದೇ ಬೇರೆ. ಯಾವುದೋ ಒಂದು ಕುತೂಹಲಕ್ಕೆ, ತಮಾಷೆಗಾಗಿ ಶೂಟಿಂಗ್ ನೋಡಲು ಹೋದವಳು ಆಕಸ್ಮಿಕವಾಗಿ ಕ್ಯಾಮೆರಾ ಮುಂದೆ ನಿಂತುಬಿಟ್ಟಳು. ಅದು ಪ್ರಶಾಂತ್ ಮತ್ತು ಸಿಮ್ರಾನ್ ನಟನೆಯ 'ಜೋಡಿ' ಸಿನಿಮಾ. ಅಲ್ಲಿ ಸಿಮ್ರಾನ್ ಗೆಳತಿಯಾಗಿ ಕಾಣಿಸಿಕೊಂಡ ತ್ರಿಷಾ ಅವರಿಗೆ ಅಂದು ತಾನು ಮುಂದೊಂದು ದಿನ ಇಡೀ ಇಂಡಿಯಾವೇ ಮೆಚ್ಚುವ ನಟಿಯಾಗುತ್ತೇನೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲವಂತೆ!&lt;/p&gt;&lt;p&gt;&lt;img&gt;&lt;/p&gt;&lt;h2&gt;ನಿರ್ದೇಶಕರು ಅಂದೇ ಕಂಡಿದ್ದರು 'ಸ್ಟಾರ್' ಕಳೆ!&lt;/h2&gt;&lt;p&gt;'ಜೋಡಿ' ಚಿತ್ರದ ನಿರ್ದೇಶಕ ಪ್ರವೀಣ್ ಗಾಂಧಿ ಅವರು ತ್ರಿಷಾರನ್ನು ಮೊದಲ ಬಾರಿ ನೋಡಿದಾಗ ನಡೆದ ಘಟನೆಯನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. &quot;ನಾಯಕಿ ಜೊತೆ ಬರಲು ಕೆಲವು ಸುಂದರ ಹುಡುಗಿಯರು ಬೇಕೆಂದು ಕೇಳಿದಾಗ ತಾರಾ ಉಮೇಶ್ ಎಂಬುವವರು ತ್ರಿಷಾರನ್ನು ಕರೆತಂದಿದ್ದರು. ಆಗಷ್ಟೇ ಪರೀಕ್ಷೆ ಮುಗಿಸಿದ್ದ ತ್ರಿಷಾ, ಸಿನಿಮಾ ಅಂದ್ರೆ ಏನು? ಶೂಟಿಂಗ್ ಹೇಗಿರುತ್ತೆ? ಅಂತ ನೋಡಲು ಬಂದಿದ್ದಳು. ಅವಳ ಮುಖದಲ್ಲಿ ಒಂದು ವಿಶೇಷವಾದ ಕಳೆಯಿತ್ತು. ದೊಡ್ಡ ಪಾತ್ರ ಕೊಡುತ್ತೇನೆ ಎಂದರೂ ಅವಳು ಆಸಕ್ತಿ ತೋರಿಸಿರಲಿಲ್ಲ. ಕೇವಲ ತಮಾಷೆಗಾಗಿ ಬಂದ ಹುಡುಗಿ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಅಚ್ಚರಿ&quot; ಎನ್ನುತ್ತಾರೆ ಅವರು.&lt;/p&gt;&lt;p&gt;&lt;img&gt;&lt;/p&gt;&lt;p&gt;ಮಾಡೆಲಿಂಗ್&zwnj;ನಿಂದ 'ಮಿಸ್ ಚೆನ್ನೈ' ವರೆಗೆ...&lt;/p&gt;&lt;p&gt;'ಜೋಡಿ' ಚಿತ್ರದ ನಂತರ ತ್ರಿಷಾ ಮತ್ತೆ ಸಿನಿಮಾದತ್ತ ಮುಖ ಮಾಡಲಿಲ್ಲ. ಬದಲಾಗಿ ಮಾಡೆಲಿಂಗ್ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿ ತಮ್ಮ ಜಾದೂ ತೋರಿಸಿದ ತ್ರಿಷಾ 'ಮಿಸ್ ಚೆನ್ನೈ' ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಸುಂದರಿಯನ್ನ ಕಂಡ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರು 'ಲೇಸಾ ಲೇಸಾ' ಚಿತ್ರದ ಮೂಲಕ ತ್ರಿಷಾರನ್ನು ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ಶುರುವಾದ ತ್ರಿಷಾ ಹವಾ ಇಂದಿಗೂ ಕುಗ್ಗಿಲ್ಲ.&lt;/p&gt;&lt;p&gt;&lt;img&gt;&lt;/p&gt;&lt;p&gt;ಸ್ಟಾರ್&zwnj; ನಟರ ಲಕ್ಕಿ ಚಾರ್ಮ್:&lt;/p&gt;&lt;p&gt;ಚಿರಂಜೀವಿ, ಕಮಲ್ ಹಾಸನ್, ವಿಜಯ್, ಪ್ರಭಾಸ್, ಮಹೇಶ್ ಬಾಬು, ಅಜಿತ್, ವಿಕ್ರಮ್ ಹೀಗೆ ಸೌತ್ ಇಂಡಸ್ಟ್ರಿಯ ಎಲ್ಲ ಘಟಾನುಘಟಿಗಳ ಜೊತೆ ಸ್ಕ್ರೀನ್ ಶೇರ್ ಮಾಡಿರುವ ತ್ರಿಶಾ, ಪ್ರತಿ ಸಿನಿಮಾದಲ್ಲೂ ಹೊಸತನ ಮೆರೆದಿದ್ದಾರೆ. 'ನುವ್ವೊಸ್ತಾನಂತೆ ನೆನೊದ್ದಂಟಾನಾ'ದ ಸಿರಿ ಆಗಲಿ, 'ವಿನೈತಾಂಡಿ ವರುವಾಯ'ದ ಜೆಸ್ಸಿ ಆಗಲಿ ಅಥವಾ ಇತ್ತೀಚಿನ 'ಪೊನ್ನಿಯಿನ್ ಸೆಲ್ವನ್'ನ ಕುಂದವೈ ಆಗಲಿ, ತ್ರಿಷಾ ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಬಿಸಿ ಬಿಸಿ ಚರ್ಚೆಯಲ್ಲಿ 'ದಳಪತಿ' ಜೊತೆಗಿನ ನಂಟು!&lt;/h3&gt;&lt;p&gt;ಸಿನಿಮಾ ಹೊರತುಪಡಿಸಿ ತ್ರಿಷಾ ಈಗ ಸುದ್ದಿಯಲ್ಲಿರುವುದು ತಮ್ಮ ವೈಯಕ್ತಿಕ ವಿಚಾರಗಳಿಂದ. ತಮಿಳುನಾಡು ಮುಖ್ಯಮಂತ್ರಿ ಮತ್ತು ಟಿವಿಕೆ ನಾಯಕ ವಿಜಯ್ (ದಳಪತಿ ವಿಜಯ್) ಅವರ ಜೊತೆ ತ್ರಿಷಾ ಹೆಸರು ತಳುಕು ಹಾಕಿಕೊಂಡಿದೆ. ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನದ ಹೊಸ್ತಿಲಲ್ಲಿರುವ ಈ ಸಮಯದಲ್ಲಿ, ವಿಜಯ್ ಮತ್ತು ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಾಲಿವುಡ್ ಗಲ್ಲಿಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಇಬ್ಬರೂ ಮೌನವಾಗಿದ್ದರೂ, ಅಭಿಮಾನಿಗಳಲ್ಲಿ ಮಾತ್ರ ಈ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಅಂದು ತಮಾಷೆಗಾಗಿ ಬಂದ ಹದಿಹರೆಯದ ಹುಡುಗಿ ತ್ರಿಷಾ, ಇಂದು ನೂರಾರು ಕೋಟಿ ಬಜೆಟ್ ಸಿನಿಮಾಗಳ ತೂಕ ಹೆಚ್ಚಿಸುವ 'ಪವರ್ ಹೌಸ್' ಆಗಿ ಬೆಳೆದಿರುವುದು ಒಂದು ಅದ್ಭುತ ಪಯಣವೇ ಸರಿ! ಅದಕ್ಕೇ ಹೇಳೋದು, 'ಯಾವ ಹೂವು ಯಾರ ಮುಡಿಗೋ'.. ಅಂತ!&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/trisha-krishnan-visited-a-film-set-and-acted-just-for-fun-during-her-10th-grade-holidays-now-became-superstar/articleshow-s2399bd"/>
        </item>
        <item>
            <title><![CDATA[ಮನೆಯಲ್ಲೇ ಸೌತೆಕಾಯಿ ಬೆಳೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್]]></title>
            <link>https://kannada.asianetnews.com/webstories/life/5-simple-secrets-for-growing-perfect-cucumbers-at-home-s2rgapm</link>
            <guid isPermaLink="true">https://kannada.asianetnews.com/webstories/life/5-simple-secrets-for-growing-perfect-cucumbers-at-home-s2rgapm</guid>
            <pubDate>Sat, 08 Aug 2026 18:46:10 +0530</pubDate>
            <description><![CDATA[&lt;p&gt;Cucumber growing tips: ಮನೆಯಲ್ಲೇ ಸೌತೆಕಾಯಿ ಬೀಜ ನೆಟ್ಟು, ಅದರಿಂದ ಉತ್ತಮ ಇಳುವರಿ ಪಡೆಯಲು ಏನು ಮಾಡಬೇಕು ಅಂತ ಯೋಚಿಸ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಕೆಲವು ಸುಲಭ ಉಪಾಯಗಳು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgj14y8etdxp44ee3269j6p,imgname-new-project---2026-08-08t165635.520-1786188436424.jpg" type="image/jpeg" height="390" width="690"/>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/life/5-simple-secrets-for-growing-perfect-cucumbers-at-home-s2rgapm"/>
        </item>
        <item>
            <title><![CDATA[ಕರಿಬೇವು ಗಿಡ ಬೆಳೆಯುತ್ತಿಲ್ಲವೇ? ಮನೆಯಲ್ಲಿಯೇ ಸಿಗುವ ಒಂದೇ ಒಂದು ಪದಾರ್ಥ ಬಳಸಿ.. 15 ದಿನದಲ್ಲಿ ಮ್ಯಾಜಿಕ್ ನೋಡಿ]]></title>
            <link>https://kannada.asianetnews.com/gallery/life/how-to-make-your-curry-leaf-plant-grow-faster-with-this-simple-kitchen-hack-ug0mo3c</link>
            <guid isPermaLink="true">https://kannada.asianetnews.com/gallery/life/how-to-make-your-curry-leaf-plant-grow-faster-with-this-simple-kitchen-hack-ug0mo3c</guid>
            <pubDate>Sat, 08 Aug 2026 11:53:34 +0530</pubDate>
            <description><![CDATA[&lt;p&gt;Curry leaf plant growth tips: ಮನೆಯ ಕುಂಡದಲ್ಲಿರುವ ಕರಿಬೇವು ಗಿಡ ಸೊರಗುತ್ತಿದೆಯೇ? ಎಲೆಗಳು ಚಿಗುರುತ್ತಿಲ್ಲವೇ? ಚಿಂತಿಸಬೇಡಿ, ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಒಂದು ಪದಾರ್ಥ ಬಳಸಿ ಕೇವಲ 15 ದಿನದಲ್ಲಿ ಗಿಡವನ್ನು ಹಸಿರಾಗಿ ಮತ್ತು ದಟ್ಟವಾಗಿ ಬೆಳೆಸುವ ಸುಲಭ ವಿಧಾನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg0aryba7qm7beaxc0qkhtx,imgname-thumbnail---2026-08-08t114736.291-1786169877450.jpg" type="image/jpeg" height="390" width="690"/>
            <content:encoded><![CDATA[&lt;p&gt;Curry leaf plant growth tips: ಮನೆಯ ಕುಂಡದಲ್ಲಿರುವ ಕರಿಬೇವು ಗಿಡ ಸೊರಗುತ್ತಿದೆಯೇ? ಎಲೆಗಳು ಚಿಗುರುತ್ತಿಲ್ಲವೇ? ಚಿಂತಿಸಬೇಡಿ, ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಒಂದು ಪದಾರ್ಥ ಬಳಸಿ ಕೇವಲ 15 ದಿನದಲ್ಲಿ ಗಿಡವನ್ನು ಹಸಿರಾಗಿ ಮತ್ತು ದಟ್ಟವಾಗಿ ಬೆಳೆಸುವ ಸುಲಭ ವಿಧಾನ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಮನೆಯಲ್ಲಿಯೇ ಸಿಗುವ ಪದಾರ್ಥವಿದು&lt;/strong&gt;ಕರಿಬೇವು ಅಡುಗೆ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹೆಚ್ಚಿನವರು ಇದನ್ನು ಮನೆಯ ಬಾಲ್ಕನಿ ಅಥವಾ ಕೈತೋಟದಲ್ಲಿ ಬೆಳೆಸಲು ಇಷ್ಟಪಡುತ್ತಾರೆ. ಆದರೆ ಹಲವು ಬಾರಿ ಕರಿಬೇವು ಗಿಡ ಸರಿಯಾಗಿ ಬೆಳೆಯುವುದಿಲ್ಲ, ಎಲೆಗಳು ಹಳದಿಯಾಗಿ ಉದುರುತ್ತವೆ ಅಥವಾ ಗಿಡ ಸೊರಗಿದಂತೆ ಕಾಣುತ್ತದೆ. ಇಂತಹ ಸಮಯದಲ್ಲಿ ಮಾರುಕಟ್ಟೆಯಿಂದ ದುಬಾರಿ ಗೊಬ್ಬರ ತರುವ ಬದಲು, ಮನೆಯಲ್ಲಿಯೇ ಸಿಗುವ ಒಂದು ಪದಾರ್ಥ ಬಳಸಿದರೆ ಸಾಕು.&lt;/p&gt;&lt;img&gt;&lt;p&gt;&lt;strong&gt;ಆ ಮ್ಯಾಜಿಕ್ ಪದಾರ್ಥ ಯಾವುದು?&lt;/strong&gt;ಅದುವೇ 'ಹುಳಿ ಮಜ್ಜಿಗೆ'. ಹೌದು, ಮನೆಯಲ್ಲಿ ಉಳಿದು ಹುಳಿಯಾಗಿರುವ ಮಜ್ಜಿಗೆ ಅಥವಾ ಮೊಸರಿನ ನೀರು ಕರಿಬೇವು ಗಿಡಕ್ಕೆ ಅಮೃತವಿದ್ದಂತೆ. ಇದರಲ್ಲಿ ನೈಸರ್ಗಿಕ ಸಾರಜನಕ (Nitrogen) ಮತ್ತು ಉತ್ತಮ ಬ್ಯಾಕ್ಟೀರಿಯಾಗಳಿವೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಬೇರುಗಳು ಬಲಗೊಳ್ಳಲು ಮತ್ತು ಗಿಡ ಹಸಿರಾಗಿ ಬೆಳೆಯಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಬಳಸುವ ವಿಧಾನ&lt;/strong&gt;*2-3 ದಿನ ಹಳೆಯದಾದ ಚೆನ್ನಾಗಿ ಹುಳಿಯಾಗಿರುವ ಮಜ್ಜಿಗೆಯನ್ನು ತೆಗೆದುಕೊಳ್ಳಿ. ಎಷ್ಟು ಹುಳಿಯಾಗಿದ್ದರೆ ಅಷ್ಟು ಒಳ್ಳೆಯದು.&lt;/p&gt;&lt;p&gt;*ಒಂದು ಲೋಟ ಹುಳಿ ಮಜ್ಜಿಗೆಗೆ ಕನಿಷ್ಠ 8 ರಿಂದ 10 ಲೋಟ ಶುದ್ಧ ನೀರನ್ನು ಬೆರೆಸಿ ತೆಳ್ಳಗೆ ಮಾಡಿ.&lt;/p&gt;&lt;p&gt;*ಈ ಮಿಶ್ರಣವನ್ನು ಗಿಡದ ಬುಡದ ಮಣ್ಣಿಗೆ ಹಾಕಿ. ನೀವು ಈ ದ್ರಾವಣವನ್ನು ಕರಿಬೇವು ಎಲೆಗಳ ಮೇಲೆ ಲಘುವಾಗಿ ಸ್ಪ್ರೇ ಕೂಡ ಮಾಡಬಹುದು.&lt;/p&gt;&lt;p&gt;*ಇದನ್ನು ತಿಂಗಳಿಗೆ ಕೇವಲ 1 ಅಥವಾ 2 ಬಾರಿ ಮಾತ್ರ ಮಾಡಿ. ಪ್ರತಿದಿನ ಹಾಕುವ ಅವಶ್ಯಕತೆಯಿಲ್ಲ.&lt;/p&gt;&lt;img&gt;&lt;p&gt;&lt;strong&gt;ಗಿಡದ ಆರೈಕೆಗಾಗಿ ಇತರೆ ಟಿಪ್ಸ್&lt;/strong&gt;&lt;/p&gt;&lt;p&gt;&lt;strong&gt;ಬಿಸಿಲು&lt;/strong&gt;ಕರಿಬೇವು ಗಿಡಕ್ಕೆ ದಿನಕ್ಕೆ ಕನಿಷ್ಠ 5-6 ಗಂಟೆಗಳ ಕಾಲ ನೇರ ಬಿಸಿಲು ಬೇಕೇ ಬೇಕು. ಬಿಸಿಲು ಕಡಿಮೆಯಾದರೆ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.&lt;/p&gt;&lt;p&gt;&lt;strong&gt;ನೀರು&lt;/strong&gt;ಕುಂಡದ ಮಣ್ಣು ಮೇಲ್ಭಾಗದಲ್ಲಿ 1-2 ಇಂಚು ಒಣಗಿದಾಗ ಮಾತ್ರ ನೀರು ಹಾಕಿ. ಅತಿಯಾದ ನೀರು ಬೇರುಗಳು ಕೊಳೆಯಲು ಕಾರಣವಾಗಬಹುದು.&lt;/p&gt;&lt;img&gt;&lt;p&gt;ಕತ್ತರಿಸುವುದು (Pruning)ಗಿಡ ಗುಂಪುಗುಂಪಾಗಿ (Bushy) ಬೆಳೆಯಬೇಕೆಂದರೆ, ಮೇಲ್ಭಾಗದ ಉದ್ದನೆಯ ಟೊಂಗೆಗಳನ್ನು ಆಗಾಗ ಕತ್ತರಿಸುತ್ತಿರಿ. ಇದರಿಂದ ಹೊಸ ಚಿಗುರುಗಳು ಬಂದು ಗಿಡ ದಟ್ಟವಾಗಿ ಬೆಳೆಯುತ್ತದೆ.&lt;/p&gt;&lt;img&gt;&lt;p&gt;&lt;strong&gt;ದೊಡ್ಡ ಕುಂಡ&lt;/strong&gt;*ಗಿಡ ದೊಡ್ಡದಾಗುತ್ತಿದ್ದಂತೆ ಸಣ್ಣ ಕುಂಡದಿಂದ ದೊಡ್ಡ ಕುಂಡಕ್ಕೆ ಸ್ಥಳಾಂತರಿಸುವುದು (Repotting) ಉತ್ತಮ.&lt;/p&gt;&lt;p&gt;*ಈ ಮಜ್ಜಿಗೆಯ ಪ್ರಯೋಗ ಮಾಡಿದ 7-10 ದಿನಗಳಲ್ಲಿ ನೀವು ಹೊಸ ಚಿಗುರುಗಳನ್ನು ಗಮನಿಸಬಹುದು ಮತ್ತು 15-20 ದಿನಗಳಲ್ಲಿ ಗಿಡವು ಮೊದಲಿಗಿಂತ ಹೆಚ್ಚು ಹಸಿರಾಗಿ, ದಟ್ಟವಾಗಿ ಬೆಳೆಯುತ್ತದೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/how-to-make-your-curry-leaf-plant-grow-faster-with-this-simple-kitchen-hack-ug0mo3c"/>
        </item>
        <item>
            <title><![CDATA[ಚಿಕನ್ ರೆಸಿಪಿ ಮಾಡುವಾಗ ಮೊಸರು ಮಿಕ್ಸ್ ಮಾಡೋದು ಯಾಕೆ ಗೊತ್ತಾ?]]></title>
            <link>https://kannada.asianetnews.com/webstories/food/adding-curd-to-chicken-superfood-benefits-and-cooking-tips-uye3990</link>
            <guid isPermaLink="true">https://kannada.asianetnews.com/webstories/food/adding-curd-to-chicken-superfood-benefits-and-cooking-tips-uye3990</guid>
            <pubDate>Fri, 07 Aug 2026 08:42:44 +0530</pubDate>
            <description><![CDATA[&lt;p&gt;Adding curd to chicken: ಕೆಲವರು ಚಿಕನ್&zwnj; ರೆಸಿಪಿ ಮಾಡುವಾಗ ಮೊಸರು ಬೆರೆಸುತ್ತಾರೆ. ಮೂಲತಃ ಹೀಗೆ ಏಕೆ ಬೆರೆಸುತ್ತಾರೋ ಎಲ್ಲರಿಗೂ ತಿಳಿದಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwv35gxrsr542050nj3hc2wb,imgname-chicken-kulambu-1--1--1783320724408.jpg" type="image/jpeg" height="390" width="690"/>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/food/adding-curd-to-chicken-superfood-benefits-and-cooking-tips-uye3990"/>
        </item>
        <item>
            <title><![CDATA[ಎರಡು ಮದುವೆ, 40 ಲಕ್ಷ ಖಾತೆಯಲ್ಲಿದ್ರೂ ವೃದ್ದಾಶ್ರಮದಲ್ಲಿದ್ದಾಳೆ ಮಹಿಳೆ]]></title>
            <link>https://kannada.asianetnews.com/relationship/two-marriages-the-deaths-of-both-husbands-and-40-lakh-in-the-bank-account-the-story-of-a-destitute-woman/articleshow-v6qp58u</link>
            <guid isPermaLink="true">https://kannada.asianetnews.com/relationship/two-marriages-the-deaths-of-both-husbands-and-40-lakh-in-the-bank-account-the-story-of-a-destitute-woman/articleshow-v6qp58u</guid>
            <pubDate>Sat, 08 Aug 2026 11:57:06 +0530</pubDate>
            <description><![CDATA[&lt;p&gt;ವೃದ್ಧಾಪ್ಯದಲ್ಲಿ ಪ್ರತಿಯೊಬ್ಬರಿಗೂ ಹಣಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ಮನೆಯವರ ಪ್ರೀತಿ ಮತ್ತು ಅಮ್ಮ, ನೀವು ಚಿಂತೆ ಮಾಡಬೇಡಿ, ನಾವಿದ್ದೇವೆ ಎನ್ನುವ ಮಕ್ಕಳ ಸಾಂತ್ವಾನ. ಆದ್ರೆ ಸೋನಿಪತ್ನ ವೃದ್ಧಾಶ್ರಮವೊಂದರಲ್ಲಿ ಜೀವನ ಕಳೆಯುತ್ತಿರುವ ಈ ವೃದ್ಧೆ ಕಥೆ ಮಾತ್ರ ಭಿನ್ನವಾಗಿದೆ. ಎಲ್ಲರೂ ಇದ್ದು, ಎಲ್ಲವೂ ಇದ್ದು ಆಕೆ ಒಂಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg0v00qmb6mexnxrhtkbhmk,imgname-old-age-home-1786170408983.jpg" type="image/jpeg" height="390" width="690"/>
            <content:encoded><![CDATA[&lt;p&gt;ವೃದ್ಧಾಪ್ಯದಲ್ಲಿ ಸುಖ &ndash; ಶಾಂತ ಜೀವನ ನಡೆಸಲು ಜನರು ಬಯಸ್ತಾರೆ. ಖಾತೆಯಲ್ಲಿ ಹಣವಿದ್ರೆ ವೃದ್ಧಾಪ್ಯ ಸುಖಕರವಾಗಿ ಸಾಗುತ್ತೆ. ಆಸರೆ ನೀಡಲು ಯಾರಾದ್ರೂ ಸಿಕ್ತಾರೆ ಅಂತ ಒಂದು ನಂಬಿಕೆ ನಮ್ಮಲ್ಲಿದೆ. ಆದ್ರೆ ಇದು ಎಲ್ಲರ ಬಾಳಲ್ಲಿ ಸತ್ಯವಾಗೋದಿಲ್ಲ. ವೃದ್ಧೆಯೊಬ್ಬರ ಬಳಿ ಹಣವಿದೆ, ಮಗನಿದ್ದಾನೆ. ಆದ್ರೂ ಆಕೆ ವೃದ್ಧಾಶ್ರಮದಲ್ಲಿ ಜೀವನ ನಡೆಸ್ತಿದ್ದಾಳೆ.&lt;/p&gt;&lt;h2&gt;ಎಲ್ಲ ಇದ್ದೂ ಏನೂ ಇಲ್ಲದ ಜೀವನ&lt;/h2&gt;&lt;p&gt;ಸೋನಿಪತ್ನ ವೃದ್ಧಾಶ್ರಮದಲ್ಲಿರುವ ಮಹಿಳೆಯೊಬ್ಬರಿಗೆ ಎರಡು ಮದುವೆ ಆಗಿತ್ತು. ಇಬ್ಬರೂ ಪತಿಯರನ್ನು ಈಕೆ ಕಳೆದುಕೊಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ, 40 ಲಕ್ಷ ರೂಪಾಯಿಗಳಷ್ಟು ಹಣವನ್ನು ಕೂಡ ಉಳಿಸಿಕೊಂಡಿದ್ದಾರೆ. ಆದರೂ ಇಂದು ಸ್ವಂತ ಮನೆಯಲ್ಲಿರದೆ ವೃದ್ಧಾಶ್ರಮದಲ್ಲಿ ಜೀವನ ನಡೆಸುತ್ತಿದ್ದಾರೆ.&lt;/p&gt;&lt;p&gt;ಮಹಿಳೆಗೆ ಮೊದಲೊಂದು ಮದುವೆ ಆಗಿತ್ತು. ಪತಿ ಮರಣದ ನಂತ್ರ ಇನ್ನೊಂದು ಮದುವೆ ಆಗಿದ್ದರು. ಆದ್ರೆ ಎರಡನೇ ಪತಿ ನಿಧನದ ನಂತ್ರ ಆಕೆಗೆ ಯಾರೂ ಇರಲಿಲ್ಲ. ಮಗ ಆಕೆಯನ್ನು ಇಟ್ಟುಕೊಳ್ಳಲು ಇಷ್ಟಪಡಲಿಲ್ಲ. ಹಾಗಾಗಿ ಮಹಿಳೆ ಈಗ ವೃದ್ಧಾಶ್ರಮದಲ್ಲಿ ಜೀವನ ನಡೆಸುತ್ತಿದ್ದಾಳೆ.&lt;/p&gt;&lt;h3&gt;ತಾಯಿ ಕರುಳು&lt;/h3&gt;&lt;p&gt;ಮಗನಿಂದ ದೂರವಾಗಿ ವೃದ್ಧಾಶ್ರಮದಲ್ಲಿ ಒಂಟಿ ಜೀವನ ನಡೆಸುತ್ತಿದ್ದರೂ ಮಹಿಳೆಗೆ ಮಗನ ಮೇಲಿನ ಪ್ರೀತಿ ಕಡಿಮೆ ಆಗಲಿಲ್ಲ. ಮಗನ ಮೇಲೆ ಬೇಸರವಿದ್ರೂ ಮಗನಿಗೆ ಕೆಟ್ಟದನ್ನು ಬಯಸುತ್ತಿಲ್ಲ ಮಹಿಳೆ. ತನ್ನ ನಿಧನದ ನಂತ್ರ 40 ಲಕ್ಷ ಹಣವನ್ನು ಮಗನಿಗೆ ನೀಡಿ ಎಂದು ಮಹಿಳೆ ಹೇಳಿದ್ದಾಳೆ. ಹಣ, ಆಸ್ತಿ, ಮನೆ ಎಲ್ಲವೂ ಇದ್ದರೂ, ವೃದ್ಧಾಪ್ಯದಲ್ಲಿ ಒಂಟಿತನ ಕಾಡಿದರೆ ಆ ನೋವು ತುಂಬಾ ದೊಡ್ಡದು. ಜೀವನದ ಈ ಹಂತದಲ್ಲಿ ವೃದ್ಧರಿಗೆ ದೊಡ್ಡದಾದ ಮನೆಗಿಂತ, ತಮ್ಮವರ ಜೊತೆ ಕುಳಿತು ಮಾತನಾಡುವ ಅವಕಾಶ ಸಿಗ್ಬೇಕು. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿರುವ ಸದಸ್ಯರ ಸಂಖ್ಯೆ ಕಡಿಮೆ ಆಗ್ತಿದೆ, ವೃದ್ಧಾಶ್ರಮದ ದೊಡ್ಡದಾಗ್ತಿದೆ.&lt;/p&gt;]]></content:encoded>
            <category>women</category>
            <dc:creator>Roopa Hegde</dc:creator>
            <atom:link href="https://kannada.asianetnews.com/relationship/two-marriages-the-deaths-of-both-husbands-and-40-lakh-in-the-bank-account-the-story-of-a-destitute-woman/articleshow-v6qp58u"/>
        </item>
        <item>
            <title><![CDATA[Gold Tops: ಈ ಕಿವಿಯೋಲೆಗಳ ಡಿಸೈನ್ ತುಂಬಾ ಸ್ಪೆಷಲ್: ನೋಡಿದ್ರೆ ಮನಸೋಲ್ತೀರಾ!]]></title>
            <link>https://kannada.asianetnews.com/webstories/fashion/gold-tops-latest-gold-ear-stud-designs-for-women-gvd-vh3yi95</link>
            <guid isPermaLink="true">https://kannada.asianetnews.com/webstories/fashion/gold-tops-latest-gold-ear-stud-designs-for-women-gvd-vh3yi95</guid>
            <pubDate>Fri, 07 Aug 2026 00:29:39 +0530</pubDate>
            <description><![CDATA[ಈ ಲೇಖನದಲ್ಲಿ ಚಿನ್ನದ ಟಾಪ್ಸ್&zwnj;ನ ಹಲವು ಆಕರ್ಷಕ ಡಿಸೈನ್&zwnj;ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಲ್ಲಿ ಟ್ರಯಾಂಗಲ್ ಶೇಪ್, ಪಾನ್ ಶೇಪ್, ಸ್ಟಡ್ ಲಟ್ಕನ್, ಬ್ರಜ್&zwnj;ಬಾಲಾ ಮತ್ತು ಫ್ಲೋರಲ್ ಲಟ್ಕನ್&zwnj;ನಂತಹ ವಿಶಿಷ್ಟ ವಿನ್ಯಾಸಗಳಿವೆ. ಇವು ಹಬ್ಬಗಳಿಂದ ಹಿಡಿದು ದೈನಂದಿನ ಬಳಕೆಗೆ ಸೂಕ್ತವಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvj4se6chmhzrb75eb0q8dsp,imgname-gold-stud-ideass-1781946693835.jpg" type="image/jpeg" height="390" width="690"/>
            <category>women</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/gold-tops-latest-gold-ear-stud-designs-for-women-gvd-vh3yi95"/>
        </item>
        <item>
            <title><![CDATA[ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ಚಿಂತೆ ಬಿಡಿ; ಇಲ್ಲಿದೆ ನೋಡಿ 2 ರೂ. ನ್ಯೂಸ್ ಪೇಪರ್ ಟ್ರಿಕ್ಸ್!]]></title>
            <link>https://kannada.asianetnews.com/gallery/life/how-to-dry-clothes-fast-in-rainy-season-hacks-news-paper-tips-kannada-y0sxhvx</link>
            <guid isPermaLink="true">https://kannada.asianetnews.com/gallery/life/how-to-dry-clothes-fast-in-rainy-season-hacks-news-paper-tips-kannada-y0sxhvx</guid>
            <pubDate>Thu, 06 Aug 2026 22:40:23 +0530</pubDate>
            <description><![CDATA[&lt;p&gt;ಮಳೆಗಾಲದಲ್ಲಿ ಬಿಸಿಲು ಇಲ್ಲದ ಕಾರಣ ಬಟ್ಟೆಗಳು ಬೇಗ ಒಣಗುವುದಿಲ್ಲ, ಜೊತೆಗೆ ಒಂಥರಾ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಆದರೆ ಇನ್ನು ಮುಂದೆ ಟೆನ್ಶನ್ ಬೇಡ. ಸೂರ್ಯನ ಬಿಸಿಲೇ ಇಲ್ಲದೆ, ಈ 3 ಸುಲಭ ಟ್ರಿಕ್ಸ್ ಬಳಸಿ ನಿಮ್ಮ ಬಟ್ಟೆಗಳನ್ನು ಕೇವಲ 4 ಗಂಟೆಗಳಲ್ಲಿ ಗರಿಗರಿಯಾಗಿ ಒಣಗಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzc094yprvg4ky5246hngypf,imgname-cloth-dry-tips-on-rain-season-1786035606483.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲದಲ್ಲಿ ಬಿಸಿಲು ಇಲ್ಲದ ಕಾರಣ ಬಟ್ಟೆಗಳು ಬೇಗ ಒಣಗುವುದಿಲ್ಲ, ಜೊತೆಗೆ ಒಂಥರಾ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಆದರೆ ಇನ್ನು ಮುಂದೆ ಟೆನ್ಶನ್ ಬೇಡ. ಸೂರ್ಯನ ಬಿಸಿಲೇ ಇಲ್ಲದೆ, ಈ 3 ಸುಲಭ ಟ್ರಿಕ್ಸ್ ಬಳಸಿ ನಿಮ್ಮ ಬಟ್ಟೆಗಳನ್ನು ಕೇವಲ 4 ಗಂಟೆಗಳಲ್ಲಿ ಗರಿಗರಿಯಾಗಿ ಒಣಗಿಸಬಹುದು.&lt;/p&gt;&lt;img&gt;&lt;p&gt;1. ಫ್ಯಾನ್ ಮತ್ತು ನ್ಯೂಸ್&zwnj;ಪೇಪರ್ ಟ್ರಿಕ್&lt;/p&gt;&lt;p&gt;ಬಟ್ಟೆ ತೊಳೆದ ನಂತರ, ನೀರು ಪೂರ್ತಿ ಹೋಗುವ ಹಾಗೆ ಚೆನ್ನಾಗಿ ಹಿಂಡಿ. ನಂತರ, ಒಂದು ಹಗ್ಗ ಅಥವಾ ವೈರ್ ಮೇಲೆ ಬಟ್ಟೆಗಳನ್ನು ಹರಡಿ. ಅದರ ಕೆಳಗೆ ಒಂದು ಟೇಬಲ್ ಫ್ಯಾನ್ ಇಟ್ಟು ಫುಲ್ ಸ್ಪೀಡ್&zwnj;ನಲ್ಲಿ ಆನ್ ಮಾಡಿ. ಬಟ್ಟೆಗಳ ಪಾಕೆಟ್ ಒಳಗೆ ಮತ್ತು ಮಡಿಕೆಗಳ ಮಧ್ಯೆ ನ್ಯೂಸ್&zwnj;ಪೇಪರ್ ತುಂಡುಗಳನ್ನು ಇಡಿ. ನ್ಯೂಸ್&zwnj;ಪೇಪರ್ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಫ್ಯಾನ್ ಗಾಳಿಗೆ 4-5 ಗಂಟೆಗಳಲ್ಲಿ ಬಟ್ಟೆ ಒಣಗಿ ಹೋಗುತ್ತದೆ. ಎರಡು ಗಂಟೆಗಳ ನಂತರ ಪೇಪರ್&zwnj;ಗಳನ್ನು ಬದಲಾಯಿಸಿದರೆ ಇನ್ನೂ ಬೇಗ ಒಣಗುತ್ತದೆ.&lt;/p&gt;&lt;img&gt;&lt;p&gt;&lt;strong&gt;2. ಐರನ್ ಬಾಕ್ಸ್ ಮತ್ತು ಟವೆಲ್ ಜುಗಾಡ್&lt;/strong&gt;&lt;/p&gt;&lt;p&gt;ಬಟ್ಟೆಗಳು ಅರ್ಧ ಒಣಗಿದ ನಂತರ, ಒಂದು ದಪ್ಪ ಒಣ ಟವೆಲ್ ಮೇಲೆ ಆ ಬಟ್ಟೆಯನ್ನು ಹರಡಿ. ಈಗ ಅದರ ಮೇಲೆ ಬಿಸಿ ಐರನ್ ಬಾಕ್ಸ್&zwnj;ನಿಂದ ಪ್ರೆಸ್ ಮಾಡಿ. ಟವೆಲ್ ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಐರನ್ ಬಿಸಿಗೆ ಬಟ್ಟೆ ಬೇಗನೆ ಒಣಗುತ್ತದೆ. ಈ ಟ್ರಿಕ್ ಶಾಲಾ ಯೂನಿಫಾರ್ಮ್, ಜೀನ್ಸ್ ಅಥವಾ ದಪ್ಪ ಬಟ್ಟೆಗಳಿಗೆ एकदम ಪರ್ಫೆಕ್ಟ್. ಇದರಿಂದ ಕೆಟ್ಟ ವಾಸನೆಯೂ ಬರುವುದಿಲ್ಲ.&lt;/p&gt;&lt;img&gt;&lt;p&gt;&lt;strong&gt;3. ಬಾತ್&zwnj;ರೂಮ್&zwnj;ನಲ್ಲಿ ಹ್ಯಾಂಗರ್ ಮತ್ತು ಎಕ್ಸಾಸ್ಟ್ ಫ್ಯಾನ್&lt;/strong&gt;&lt;/p&gt;&lt;p&gt;ಮನೆಯಲ್ಲಿ ಜಾಗ ಕಡಿಮೆ ಇದ್ದರೆ, ಬಾತ್&zwnj;ರೂಮ್ ಬಳಸಬಹುದು. ಬಾತ್&zwnj;ರೂಮ್&zwnj;ನ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ. ಬಟ್ಟೆಗಳನ್ನು ಹ್ಯಾಂಗರ್&zwnj;ಗೆ ಹಾಕಿ ನೇತುಹಾಕಿ ಮತ್ತು ಎಕ್ಸಾಸ್ಟ್ ಫ್ಯಾನ್ ಆನ್ ಮಾಡಿ. ಜೊತೆಗೆ, ಒಂದು ಬಕೆಟ್ ಬಿಸಿ ನೀರನ್ನು ಬಾತ್&zwnj;ರೂಮ್&zwnj;ನಲ್ಲಿ ಇಡಿ. ಬಿಸಿ ನೀರಿನ ಹಬೆ ಮತ್ತು ಎಕ್ಸಾಸ್ಟ್ ಫ್ಯಾನ್&zwnj;ನ ಗಾಳಿ, ಬಟ್ಟೆಯಲ್ಲಿರುವ ತೇವಾಂಶವನ್ನು ಬೇಗನೆ ಹೊರಹಾಕುತ್ತದೆ. ರಾತ್ರಿಯಿಡೀ ಹೀಗೆ ಬಿಟ್ಟರೆ, ಬೆಳಿಗ್ಗೆ ಬಟ್ಟೆಗಳು ಒಣಗಿರುತ್ತವೆ.&lt;/p&gt;&lt;img&gt;&lt;p&gt;&lt;strong&gt;ಕೆಟ್ಟ ವಾಸನೆ ತಡೆಯಲು ಟಿಪ್ಸ್&lt;/strong&gt;&lt;/p&gt;&lt;p&gt;ಬಟ್ಟೆಗಳನ್ನು ಕೊನೆಯ ಬಾರಿ ನೀರಿನಲ್ಲಿ ಅದ್ದಿ ತೆಗೆಯುವಾಗ, ಸ್ವಲ್ಪ ಡೆಟಾಲ್ ಅಥವಾ ಬಿಳಿ ವಿನೆಗರ್ ಮಿಶ್ರಣ ಮಾಡಿ. ಇದು ಬ್ಯಾಕ್ಟೀರಿಯಾಗಳನ್ನು ಕೊಂದು ಕೆಟ್ಟ ವಾಸನೆ ಬರದಂತೆ ತಡೆಯುತ್ತದೆ. ಹಾಗೆಯೇ, ಬಟ್ಟೆಗಳನ್ನು ಒಂದರ ಮೇಲೊಂದು ಹಾಕದೆ, ಗಾಳಿಯಾಡುವಂತೆ ಜಾಗ ಬಿಟ್ಟು ಹರಡಿ. ಮಳೆಗಾಲದಲ್ಲಿ ಬಿಸಿಲಿಗಾಗಿ ಕಾಯುವುದರಲ್ಲಿ ಅರ್ಥವಿಲ್ಲ. ಈ ಸಣ್ಣಪುಟ್ಟ ಟ್ರಿಕ್ಸ್ ಪಾಲಿಸಿದರೆ ನಿಮ್ಮ ಬಟ್ಟೆಗಳು ಯಾವಾಗಲೂ ಒಣಗಿ ಫ್ರೆಶ್ ಆಗಿರುತ್ತವೆ.&lt;/p&gt;]]></content:encoded>
            <category>women</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/how-to-dry-clothes-fast-in-rainy-season-hacks-news-paper-tips-kannada-y0sxhvx"/>
        </item>
    </channel>
</rss>
