<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 19 Sep 2026 12:18:08 +0530</lastBuildDate>
        <atom:link href="https://kannada.asianetnews.com/rss/women" rel="self" type="application/rss+xml"/>
        <item>
            <title><![CDATA[ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್​​ನ್ಯೂಸ್​: 33ನೇ ಕಂತಿನ ಹಣ ಬಿಡುಗಡೆ ಯಾವಾಗ? ಇಲ್ಲಿದೆ ವಿವರ]]></title>
            <link>https://kannada.asianetnews.com/karnataka-districts/good-news-for-gruhalakshmi-scheme-beneficiaries-33rd-installment-be-released-in-a-week-suc/articleshow-8qc1xq1</link>
            <guid isPermaLink="true">https://kannada.asianetnews.com/karnataka-districts/good-news-for-gruhalakshmi-scheme-beneficiaries-33rd-installment-be-released-in-a-week-suc/articleshow-8qc1xq1</guid>
            <pubDate>Sat, 19 Sep 2026 12:18:03 +0530</pubDate>
            <description><![CDATA[ಗೃಹಲಕ್ಷ್ಮಿ ಯೋಜನೆಯಡಿ ಹಣ ಸರಿಯಾಗಿ ಬರುತ್ತಿಲ್ಲ ಎಂಬ ಮಹಿಳೆಯರ ದೂರಿನ ನಡುವೆ ಸರ್ಕಾರ ಸಿಹಿಸುದ್ದಿ ನೀಡಿದೆ. ಇನ್ನೊಂದು ವಾರದಲ್ಲಿ 33ನೇ ಕಂತಿನ 2,000 ರೂ. ಹಣ ಫಲಾನುಭವಿಗಳ ಖಾತೆಗೆ ತಲುಪಲಿದೆ. ಇದರ ಜೊತೆಗೆ ರೇಷನ್ ಕಾರ್ಡ್ ಮತ್ತು ಇಂದಿರಾ ಕಿಟ್ ವಿತರಣೆ ಬಗ್ಗೆಯೂ ಮಹತ್ವದ ಮಾಹಿತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksmy83hhvn93ye2ghwb54zs7,imgname-gruhalakshmi-1779893014065.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಪ್ರತಿ ತಿಂಗಳೂ 2 ಸಾವಿರ ರೂಪಾಯಿಗಳ ಹಣ ಸರಿಯಾಗಿ ಬರುತ್ತಿಲ್ಲ ಎನ್ನುವ ದೊಡ್ಡ ಆರೋಪವಿದೆ. ಕೆಲವೊಮ್ಮೆ 3-4 ತಿಂಗಳ ಹಣ ಒಟ್ಟಿಗೇ ಹಾಕುತ್ತಾರೆ, ಅದರಲ್ಲಿ ನಡುನಡುವೆ ಕೆಲವೊಂದು ತಿಂಗಳು ಮಿಸ್​ ಆಗಿಬಿಡುತ್ತದೆ ಎಂದು ಕೆಲವರು, ಪ್ರತಿ ತಿಂಗಳು ಕೆಲವರಿಗೆ ಮಾತ್ರ ಹಣ ಬರುತ್ತೆ, ಪಕ್ಕದ ಮನೆಗೆ ಬಂದರೂ, ನಮಗೆ ಬಂದೇ ಇಲ್ಲ ಎಂದು ಮತ್ತೆ ಕೆಲವರು... ಹೀಗೆ ಮಹಿಳೆಯರ ಗೋಳೋಟ ನಡೆದೇ ಇದೆ.&lt;/p&gt;&lt;p&gt;ಅದರ ನಡುವೆಯೇ, ಇದೀಗ ಸರ್ಕಾರ ಗೃಹಲಕ್ಷ್ಮಿ (Gruhalakshmi Scheme) ಫಲಾನುಭವಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದೆ. 33ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, ಇನ್ನೊಂದು ವಾರದಲ್ಲಿ 33ನೇ ಕಂತಿನ 2000 ರೂ. ಹಣ ತಲುಪಲಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;1.24 ಕೋಟಿ ಮಹಿಳೆಯರಿಗೆ ಹಣ&lt;/strong&gt;&lt;/h2&gt;&lt;p&gt;ಗ್ಯಾರೆಂಟಿ ಯೋಜನೆ ಆರಂಭವಾದಾಗಿನಿಂದ ಅರ್ಥಾತ್​ ಕಳೆದ ಮೂರು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 1,48,454 ಕೋಟಿ ರೂ. ಹಣವನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಅಡಿ 1.24 ಕೋಟಿ ಮಹಿಳೆಯರಿಗೆ 76,951.13 ಕೋಟಿ ರೂ. ನೀಡಿದಂತಾಗಿದೆ. ಇದರ ಅರ್ಥ ಪ್ರತಿ ಮಹಿಳೆಗೆ 64 ಸಾವಿರ ಹಣ ತಲುಪಿದೆ. ಗೃಹಜ್ಯೋತಿ ಯೋಜನೆಯಲ್ಲಿ 1.67 ಕೋಟಿ&zwnj; ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿದ್ದು ಇದಕ್ಕಾಗಿ 28,759 ಕೋಟಿ ಹಣವನ್ನು ಸರ್ಕಾರ ವ್ಯಯಿಸಿದೆ. ಇನ್ನೊಂದು ವಾರದಲ್ಲಿ 33ನೇ ಕಂತಿನ 2000 ರೂ. ಹಣ ತಲುಪುವ ಮೂಲಕ 66 ಸಾವಿರ ಹಣ ತಲುಪಿದಂತಾಗಲಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;h3&gt;&lt;strong&gt;ರೇಷನ್​ ಕಾರ್ಡ್​ ಕುರಿತು ಮಾಹಿತಿ&lt;/strong&gt;&lt;/h3&gt;&lt;p&gt;ಇದೇ ವೇಳೆ ರೇಷನ್​ ಕಾರ್ಡ್​ ಕುರಿತ ಮಾಹಿತಿ ನೀಡಿದ ದಿನೇಶ್ ಗೂಳಿಗೌಡ ಅವರು, ರಾಜ್ಯದಲ್ಲಿ 1.48 ಕೋಟಿ ಲಕ್ಷ ರೇಷನ್​ ಕಾರ್ಡ್ ಫಲಾನುಭವಿಗಳು ಇದ್ದಾರೆ. ಇಲ್ಲಿಯವರೆಗೆ 4.5 ಕೋಟಿ ಸದಸ್ಯರಿಗೆ ಉಚಿತವಾಗಿ ಅಕ್ಕಿ ನೀಡಲಾಗಿದೆ. ಇದಕ್ಕಾಗಿ 19,845 ಕೋಟಿ ರೂ. ಹಣ ವೆಚ್ಚ ಮಾಡಲಾಗಿದೆ. ರಾಜ್ಯದ 24 ಸಾವಿರ ನ್ಯಾಯಬೆಲೆ ಅಂಗಡಿಗಳ ಮುಂದೆ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ&zwnj; ಜೊತೆಗೆ ಸಮಯ ಮತ್ತು ಸ್ಟಾಕ್ ಬೋರ್ಡ್ ಫಲಕ ಹಾಕಬೇಕು. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಬರಲಿದೆ. ಮುಂದಿನ ತಿಂಗಳ ವೇಳೆಗೆ ಇಂದಿರಾ ಕಿಟ್ ವಿತರಣೆ ಆಗಲಿದೆ ಎಂದು ಮಾಹಿತಿ ನೀಡಿದರು.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/good-news-for-gruhalakshmi-scheme-beneficiaries-33rd-installment-be-released-in-a-week-suc/articleshow-8qc1xq1"/>
        </item>
        <item>
            <title><![CDATA[Gold Bracelet: ಸಿಂಪಲ್ ಆದ್ರೂ ಸಖತ್ ಸ್ಟೈಲಿಶ್; ಈ ಗೋಲ್ಡ್ ಬ್ರೇಸ್‌ಲೆಟ್‌ಗಳು ಫ್ಯಾಷನ್ ಪ್ರಿಯರಿಗಾಗಿ!]]></title>
            <link>https://kannada.asianetnews.com/webstories/fashion/elegant-gold-bracelets-with-cute-designs-for-women-gvd-gdbpoka</link>
            <guid isPermaLink="true">https://kannada.asianetnews.com/webstories/fashion/elegant-gold-bracelets-with-cute-designs-for-women-gvd-gdbpoka</guid>
            <pubDate>Sat, 19 Sep 2026 09:15:08 +0530</pubDate>
            <description><![CDATA[&lt;p&gt;ಕೈಗಳಿಗೆ ಹೊಸ ಕಳೆ ನೀಡುವ ಕ್ಯೂಟ್ ಡಿಸೈನ್&zwnj;ನ ಗೋಲ್ಡ್ ಬ್ರೇಸ್&zwnj;ಲೆಟ್&zwnj;ಗಳು ಇಲ್ಲಿವೆ. ಕಾಲೇಜು ಹುಡುಗಿಯರಿಂದ ಹಿಡಿದು ವರ್ಕಿಂಗ್ ವುಮೆನ್&zwnj;ವರೆಗೆ ಯಾರು ಬೇಕಾದರೂ ಇವುಗಳನ್ನು ಧರಿಸಬಹುದು. ತಡವೇಕೆ, ಒಮ್ಮೆ ಕಣ್ಣಾಡಿಸಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3rr6z724wv9zf91sx7sg6q,imgname-trim-gold-bracelet-9kt-6-1778243083239.png" type="image/jpeg" height="390" width="690"/>
            <category>women</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/elegant-gold-bracelets-with-cute-designs-for-women-gvd-gdbpoka"/>
        </item>
        <item>
            <title><![CDATA[ಬೆಂಗಳೂರಿನ ಪ್ರಸಿದ್ಧ ಮಿಲಿಟರಿ ಹೋಟೆಲ್ ಶೈಲಿಯ ಮಶ್ರೂಮ್ ದೊನ್ನೆ ಬಿರಿಯಾನಿ ಈಗ ಮನೆಯಲ್ಲೇ ಮಾಡಿ]]></title>
            <link>https://kannada.asianetnews.com/food/military-hotel-style-mushroom-donne-biryani-recipe-easy-sunday-special-at-home/articleshow-qzfp1c6</link>
            <guid isPermaLink="true">https://kannada.asianetnews.com/food/military-hotel-style-mushroom-donne-biryani-recipe-easy-sunday-special-at-home/articleshow-qzfp1c6</guid>
            <pubDate>Fri, 18 Sep 2026 21:41:39 +0530</pubDate>
            <description><![CDATA[&lt;p&gt;&lt;strong&gt;Mushroom donne biryani recipe: &lt;/strong&gt;ಸದಾ ಅದೇ ಚಿಕನ್, ಮಟನ್ ಬಿರಿಯಾನಿ ತಿಂದು ಬೋರ್ ಆಗಿದ್ದರೆ, ಈ ಬಾರಿ ನಾನ್&zwnj;ವೆಜ್&zwnj; ಮೀರಿಸುವಂತಹ ಟೇಸ್ಟಿ 'ಮಶ್ರೂಮ್ ದೊನ್ನೆ ಬಿರಿಯಾನಿ' ಟ್ರೈ ಮಾಡಿ ನೋಡಿ. ಜೀರಿಗೆ ಸಾಂಬಾ ಅಕ್ಕಿಯ ಸುವಾಸನೆ ಮತ್ತು ಹಸಿರು ಮಸಾಲೆಯ ಘಮವಿರುವ ಈ ಬೆಂಗಳೂರು ಮಿಲಿಟರಿ ಹೋಟೆಲ್ ಶೈಲಿಯ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tmk128t1rwp1b9n0dkbz13,imgname-thumbnail--9--1789747889223.png" type="image/jpeg" height="390" width="690"/>
            <content:encoded><![CDATA[&lt;p&gt;ಬಿರಿಯಾನಿ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಚಿಕನ್ ಅಥವಾ ಮಟನ್ ಬಿರಿಯಾನಿ. ಆದರೆ ಸದಾ ಅದೇ ಮಾಂಸಾಹಾರಿ ಬಿರಿಯಾನಿ ತಿಂದು ಬೋರ್ ಆಗಿದ್ದರೆ ಅಥವಾ ಶುದ್ಧ ಸಸ್ಯಾಹಾರಿಗಳಿಗೆ ನಾನ್&zwnj;ವೆಜ್ ಬಿರಿಯಾನಿಯನ್ನೇ ಮೀರಿಸುವಂತಹ ಟೇಸ್ಟ್ ಬೇಕಿದ್ದರೆ ಈ ಬಾರಿ ಘಮಘಮಿಸುವ &lsquo;ಮಶ್ರೂಮ್ ದೊನ್ನೆ ಬಿರಿಯಾನಿ&rsquo; (Mushroom Donne Biryani) ಟ್ರೈ ಮಾಡಿ ನೋಡಿ.&lt;/p&gt;&lt;p&gt;ಬೆಂಗಳೂರಿನ ಪ್ರಸಿದ್ಧ ಮಿಲಿಟರಿ ಹೋಟೆಲ್ ಶೈಲಿಯಲ್ಲಿ, ಜೀರಿಗೆ ಸಾಂಬಾ ಅಕ್ಕಿ ಮತ್ತು ಅಣಬೆ (ಮಶ್ರೂಮ್) ಬಳಸಿ ಮಾಡುವ ಈ ಬಿರಿಯಾನಿ ರುಚಿಗೆ ಮಕ್ಕಳು ಮಾತ್ರವಲ್ಲ, ದೊಡ್ಡವರೂ ಫಿದಾ ಆಗುತ್ತಾರೆ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ..&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ಜೀರಿಗೆ ಸಾಂಬಾ ಅಕ್ಕಿ (Jeera Samba Rice) &ndash; 1 ಕಪ್ಅಣಬೆ (ಮಶ್ರೂಮ್) &ndash; 200 ಗ್ರಾಂಗಟ್ಟಿ ಮೊಸರು &ndash; ಕಾಲು ಕಪ್ಅಚ್ಚ ಖಾರದ ಪುಡಿ &ndash; ಅರ್ಧ ಚಮಚಅರಿಶಿನ ಪುಡಿ &ndash; ಕಾಲು ಚಮಚಧನಿಯಾ ಪುಡಿ &ndash; ಅರ್ಧ ಚಮಚಅಡುಗೆ ಎಣ್ಣೆ ಮತ್ತು ತುಪ್ಪ &ndash; ತಲಾ 2 ಚಮಚನೀರು &ndash; 2 ಕಪ್ಉಪ್ಪು &ndash; ರುಚಿಗೆ ತಕ್ಕಷ್ಟು&lt;/p&gt;&lt;h2&gt;&lt;strong&gt;ರುಬ್ಬಿಕೊಳ್ಳಲು ಹಸಿರು ಮಸಾಲೆಗೆ&lt;/strong&gt;&lt;/h2&gt;&lt;p&gt;ಲವಂಗ &ndash; 2ಚಕ್ಕೆ &ndash; 1 ಇಂಚುಕಾಳುಮೆಣಸು &ndash; ಕಾಲು ಚಮಚಹಸಿರು ಮೆಣಸಿನಕಾಯಿ &ndash; 2 ರಿಂದ 3ಹೆಚ್ಚಿದ ಈರುಳ್ಳಿ &ndash; ಅರ್ಧ ಕಪ್ಬೆಳ್ಳುಳ್ಳಿ ಎಸಳು &ndash; 5 ರಿಂದ 6ಶುಂಠಿ &ndash; ಸಣ್ಣ ತುಂಡುಕೊತ್ತಂಬರಿ ಸೊಪ್ಪು &ndash; 1 ಕಪ್ಪುದೀನಾ ಸೊಪ್ಪು &ndash; 1 ಕಪ್ಜೀರಿಗೆ &ndash; ಅರ್ಧ ಚಮಚ&lt;/p&gt;&lt;h2&gt;&lt;strong&gt;ಒಗ್ಗರಣೆಗೆ&lt;/strong&gt;&lt;/h2&gt;&lt;p&gt;ಏಲಕ್ಕಿ, ಮರಾಠಿ ಮೊಗ್ಗು, ಪಲಾವ್ ಎಲೆಉದ್ದಕ್ಕೆ ಹೆಚ್ಚಿದ ಈರುಳ್ಳಿ &ndash; ಅರ್ಧ ಕಪ್&lt;/p&gt;&lt;h2&gt;&lt;strong&gt;ಮಾಡುವ ಸರಳ ವಿಧಾನ&lt;/strong&gt;&lt;/h2&gt;&lt;p&gt;&lt;strong&gt;ನೆನೆಯಲು ಬಿಡಿ&lt;/strong&gt;&lt;/p&gt;&lt;p&gt;*ಜೀರಿಗೆ ಸಾಂಬಾ ಅಕ್ಕಿಯನ್ನು ಎರಡು ಬಾರಿ ತೊಳೆದು, ಕೇವಲ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.*ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿ.*ಒಂದು ಬಟ್ಟಲಿನಲ್ಲಿ ಮಶ್ರೂಮ್ ತುಂಡುಗಳು, ಮೊಸರು, ಅರಿಶಿನ, ಖಾರದ ಪುಡಿ ಮತ್ತು ಧನಿಯಾ ಪುಡಿ ಹಾಕಿ ಚೆನ್ನಾಗಿ ಬೆರೆಸಿ 10 ನಿಮಿಷಗಳ ಕಾಲ ಮ್ಯಾರಿನೇಟ್ (Marinate) ಆಗಲು ಬಿಡಿ.&lt;/p&gt;&lt;p&gt;&lt;strong&gt;ಹಸಿರು ಮಸಾಲೆ ಪೇಸ್ಟ್&lt;/strong&gt;*ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ ಲವಂಗ, ಚಕ್ಕೆ, ಕಾಳು ಮೆಣಸು, ಹಸಿಮೆಣಸು, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.*ನಂತರ ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಹಾಕಿ ಕೆಲವೇ ಸೆಕೆಂಡು ಬಾಡಿಸಿ ಗ್ಯಾಸ್ ಆಫ್ ಮಾಡಿ.*ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರ್&zwnj;ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.&lt;/p&gt;&lt;p&gt;&lt;strong&gt;ಈಗ ಬಿರಿಯಾನಿ ಮಾಡಲು ಶುರು ಮಾಡಿ&lt;/strong&gt;&lt;/p&gt;&lt;p&gt;*ದಪ್ಪ ತಳದ ಪಾತ್ರೆ ಅಥವಾ ಕುಕ್ಕರ್&zwnj;ನಲ್ಲಿ ಎಣ್ಣೆ ಮತ್ತು 1 ಚಮಚ ತುಪ್ಪ ಕಾಯಿಸಿ.*ಇದಕ್ಕೆ ಪಲಾವ್ ಎಲೆ, ಏಲಕ್ಕಿ, ಮರಾಠಿ ಮೊಗ್ಗು ಹಾಕಿ, ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.*ಈಗ ರುಬ್ಬಿದ ಹಸಿರು ಮಸಾಲೆ ಪೇಸ್ಟ್ ಮತ್ತು ಮ್ಯಾರಿನೇಟ್ ಮಾಡಿದ ಮಶ್ರೂಮ್ ಹಾಕಿ ಎಣ್ಣೆ ಬಿಡುವವರೆಗೆ 2-3 ನಿಮಿಷ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ.&lt;/p&gt;&lt;p&gt;&lt;strong&gt;ದಮ್ ಕಟ್ಟಿ&lt;/strong&gt;&lt;/p&gt;&lt;p&gt;*ಇದಕ್ಕೆ 2 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಿ.*ನೀರು ಕುದಿಯುತ್ತಿದ್ದಂತೆ, ನೆನೆಸಿದ ಜೀರಿಗೆ ಸಾಂಬಾ ಅಕ್ಕಿ ಹಾಕಿ ಲಘುವಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ.*ನಂತರ ಮುಚ್ಚಳ ತೆಗೆದು ಮೇಲೆ 1 ಚಮಚ ತುಪ್ಪ ಹಾಕಿ ಅಕ್ಕಿ ಮುರಿಯದಂತೆ ನಿಧಾನವಾಗಿ ಕಲಸಿ.*ಈಗ ಉರಿಯನ್ನು ಸಂಪೂರ್ಣ ಸಿಮ್ (ಲೋ ಫ್ಲೇಮ್) ಮಾಡಿ, ಮುಚ್ಚಳ ಮುಚ್ಚಿ ಅದರ ಮೇಲೆ ತೂಕವಾದ ವಸ್ತುವನ್ನಿಟ್ಟು (ಅಥವಾ ಭಾರವಾದ ನೀರಿನ ಪಾತ್ರೆ ಇಟ್ಟು) 15 ನಿಮಿಷಗಳ ಕಾಲ 'ದಮ್' (Dum) ಕಟ್ಟಿ.&lt;/p&gt;&lt;p&gt;15 ನಿಮಿಷದ ನಂತರ ಗ್ಯಾಸ್ ಆಫ್ ಮಾಡಿ, 10 ನಿಮಿಷ ಹಾಗೆಯೇ ಬಿಟ್ಟು ನಂತರ ತೆರೆಯಿರಿ.&lt;/p&gt;&lt;p&gt;ಘಮಘಮಿಸುವ ಮಿಲಿಟರಿ ಹೋಟೆಲ್ ಸ್ಟೈಲ್ ಮಶ್ರೂಮ್ ದೊನ್ನೆ ಬಿರಿಯಾನಿ ರೆಡಿ! ಇದನ್ನು ಈರುಳ್ಳಿ ರಾಯತಾದೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/food/military-hotel-style-mushroom-donne-biryani-recipe-easy-sunday-special-at-home/articleshow-qzfp1c6"/>
        </item>
        <item>
            <title><![CDATA['ಕುಷ್ಠರೋಗ'ವೇ ಈಕೆಗೆ ವರವಾಯ್ತು.. ಸ್ಟಾರ್ ನಟಿಯಾಗಿ ಮೆರೆದ ಈ ಸುಂದರಿ ಕನ್ನಡದಲ್ಲೂ ನಟಿಸಿದ್ದರು!]]></title>
            <link>https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477</link>
            <guid isPermaLink="true">https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477</guid>
            <pubDate>Fri, 18 Sep 2026 20:16:16 +0530</pubDate>
            <description><![CDATA[&lt;p&gt;ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಈ ನಟಿಯ ವೈಯಕ್ತಿಕ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಬಾಲಿವುಡ್ ಸೂಪರ್&zwnj;ಸ್ಟಾರ್ ಒಬ್ಬರೊಂದಿಗೆ ವಿವಾಹವಾದ ಅವರು, ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು. ಆದರೆ ಈಗ ಮತ್ತೆ ಸಿನಿಮಾಗೆ ಮರಳಿದ್ದಾರೆ. ಯಾರು ಈಕೆ ಗೊತ್ತಾಯ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tf5jzak8p2h66vqytvb8gd,imgname-dimple-kapadia-1789742205930.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;15ನೇ ವಯಸ್ಸಿನಲ್ಲೇ ಸ್ಟಾರ್ ಪಟ್ಟ: ಮದುವೆ ಬಳಿಕ ಸಿನಿಮಾ ನಟನೆ ಬಿಟ್ಟ ನಟಿ, ಮತ್ತೆ ಕಮ್&zwnj;ಬ್ಯಾಕ್!&lt;/strong&gt;&lt;/p&gt;&lt;p&gt;ಕೆಲವರ ಸಿನಿಮಾ ಪಯಣವೇ ಒಂದು ರೋಚಕ ಕಥೆಯಂತೆ ಇರುತ್ತದೆ. ಅದಕ್ಕೆ ಸೂಕ್ತ ಉದಾಹರಣೆ ಹಿರಿಯ ನಟಿ ಡಿಂಪಲ್ ಕಪಾಡಿಯಾ. ಕೇವಲ 15ನೇ ವಯಸ್ಸಿನಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾದಲ್ಲೇ ದೇಶಾದ್ಯಂತ ಸಂಚಲನ ಮೂಡಿಸಿದ ನಟಿ ಅವರು. ಈಕೆ ಕನ್ನಡದಲ್ಲಿ ನಟ ರವಿಚಂದ್ರನ್ ನಾಯಕತ್ವದ 'ಯುಗಪುರುಷ' ಚಿತ್ರದಲ್ಲೂ ನಟಿಸಿದ್ದಾರೆ.&lt;/p&gt;&lt;p&gt;1973ರಲ್ಲಿ ರಾಜ್ ಕಪೂರ್ ನಿರ್ದೇಶನದ &lsquo;ಬಾಬಿ&rsquo; ಸಿನಿಮಾ ಬಿಡುಗಡೆಯಾಯಿತು. ಈ ಚಿತ್ರದ ಮೂಲಕ ಡಿಂಪಲ್ ಕಪಾಡಿಯಾ (Dimple Kapadia) ಮತ್ತು ರಿಷಿ ಕಪೂರ್ ಹೊಸ ತಲೆಮಾರಿನ ಜನಪ್ರಿಯ ಜೋಡಿಯಾಗಿ ಪ್ರೇಕ್ಷಕರ ಮನ ಗೆದ್ದರು. ವಿಶೇಷವೆಂದರೆ, ಡಿಂಪಲ್ ಅವರಿಗೆ ಸ್ಕ್ರೀನ್ ಟೆಸ್ಟ್ ನೀಡುವಾಗ ಕೇವಲ 14 ವರ್ಷ. ಅವರ ಸೌಂದರ್ಯ, ಸಹಜ ಅಭಿನಯ ಮತ್ತು ವ್ಯಕ್ತಿತ್ವ ರಾಜ್ ಕಪೂರ್ ಅವರ ಗಮನ ಸೆಳೆದಿದ್ದು, ಅಂತಿಮವಾಗಿ &lsquo;ಬಾಬಿ&rsquo; ನಾಯಕಿಯಾಗಿ ಆಯ್ಕೆಯಾದರು.&lt;/p&gt;&lt;p&gt;&lsquo;ಬಾಬಿ&rsquo; ಬಾಕ್ಸ್ ಆಫೀಸ್&zwnj;ನಲ್ಲಿ ಯಶಸ್ಸು ಕಾಣುತ್ತಿದ್ದಂತೆ ಡಿಂಪಲ್ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಮೊದಲ ಸಿನಿಮಾದಲ್ಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಅವರು, ಬಾಲಿವುಡ್&zwnj;ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದರು.&lt;/p&gt;&lt;h2&gt;ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಡಿಂಪಲ್ ಮದುವೆ!&lt;/h2&gt;&lt;p&gt;ಆದರೆ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಡಿಂಪಲ್ ಅವರ ವೈಯಕ್ತಿಕ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಬಾಲಿವುಡ್ ಸೂಪರ್&zwnj;ಸ್ಟಾರ್ ರಾಜೇಶ್ ಖನ್ನಾ ಅವರೊಂದಿಗೆ ವಿವಾಹವಾದ ಅವರು, ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದರು. ದಂಪತಿಗೆ ಟ್ವಿಂಕಲ್ ಖನ್ನಾ ಮತ್ತು ರಿಂಕೆ ಖನ್ನಾ ಎಂಬ ಇಬ್ಬರು ಪುತ್ರಿಯರು ಜನಿಸಿದರು.&lt;/p&gt;&lt;p&gt;ಮದುವೆಯ ಬಳಿಕ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಗಳಿಗೆ ಆದ್ಯತೆ ನೀಡಿದ ಡಿಂಪಲ್, ಸಿನಿಮಾಗಳಿಂದ ದೂರವಿದ್ದರು. ಈ ನಡುವೆ ರಾಜೇಶ್ ಖನ್ನಾ ಅವರ ವೃತ್ತಿಜೀವನದಲ್ಲೂ ಏರಿಳಿತಗಳು ಕಾಣಿಸಿಕೊಂಡವು. ಕ್ರಮೇಣ ದಾಂಪತ್ಯದಲ್ಲಿ ಬಿರುಕು ಮೂಡಿ, ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು.&lt;/p&gt;&lt;p&gt;ನಂತರ ಡಿಂಪಲ್ ಮತ್ತೆ ಬೆಳ್ಳಿತೆರೆಗೆ ಮರಳಲು ನಿರ್ಧರಿಸಿದರು. ಸುಮಾರು 25ನೇ ವಯಸ್ಸಿನಲ್ಲಿ &lsquo;ಸಾಗರ್&rsquo; ಚಿತ್ರದ ಮೂಲಕ ನಾಯಕಿಯಾಗಿ ಕಮ್&zwnj;ಬ್ಯಾಕ್ ಮಾಡಿದರು. ಮತ್ತೊಂದು ವಿಶೇಷವೆಂದರೆ, ಈ ಸಿನಿಮಾದಲ್ಲಿ ತಮ್ಮ ಮೊದಲ ಚಿತ್ರದ ನಾಯಕ ರಿಷಿ ಕಪೂರ್ ಅವರೊಂದಿಗೇ ಮತ್ತೆ ತೆರೆ ಹಂಚಿಕೊಂಡರು.&lt;/p&gt;&lt;p&gt;ಹೀಗೆ ಬಾಲನಟಿಯಾಗಿ ಅಲ್ಲ, ಕೇವಲ 15ನೇ ವಯಸ್ಸಿನಲ್ಲಿ ನಾಯಕಿಯಾಗಿ ಬಂದ ಡಿಂಪಲ್ ಕಪಾಡಿಯಾ ಅವರ ಸಿನಿಮಾ ಪಯಣ, ಖ್ಯಾತಿ, ವೈಯಕ್ತಿಕ ನಿರ್ಧಾರಗಳು ಮತ್ತು ಕಮ್&zwnj;ಬ್ಯಾಕ್&zwnj;ನಿಂದ ಕೂಡಿದ ವಿಭಿನ್ನ ಕಥೆಯಾಗಿ ಉಳಿದಿದೆ.&lt;/p&gt;&lt;h3&gt;ಆದರೆ.. ಕುಷ್ಠರೋಗವೇ ಈಕೆಗೆ ವರವಾಗಿದ್ದು ಹೇಗೆ? ಈ ರೋಚಕ ಸ್ಟೋರಿ ನೊಡಿ..&lt;/h3&gt;&lt;p&gt;ಹೌದು, ಬಾಲಿವುಡ್&zwnj;ನ ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರು ಬಾಲ್ಯದಲ್ಲಿ ಕುಷ್ಠರೋಗದಿಂದ (Leprosy) ಬಳಲುತ್ತಿದ್ದರು.ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಅವರು, ತಮಗೆ 12 ವರ್ಷ ವಯಸ್ಸಾಗಿದ್ದಾಗ ಮೊಣಕೈ ಭಾಗದಲ್ಲಿ ಕುಷ್ಠರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ತಿಳಿಸಿದ್ದಾರೆ. ಆ ಸಮಯದಲ್ಲಿ ಅವರ ಕುಟುಂಬಕ್ಕೆ ಆಪ್ತರಾಗಿದ್ದ ಪ್ರಸಿದ್ಧ ನಿರ್ದೇಶಕರೊಬ್ಬರು, ಈ ಕಾಯಿಲೆಯ ಕಾರಣದಿಂದ ಅವರನ್ನು ಶಾಲೆಯಿಂದ ಬಹಿಷ್ಕರಿಸುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆ ವಯಸ್ಸಿನಲ್ಲಿ ತಮಗೆ ಆ ಪದದ ಅರ್ಥವಾಗಲಿ ಅಥವಾ ಅದರ ಹಿಂದಿರುವ ಸಾಮಾಜಿಕ ಅಪಪ್ರಚಾರದ (Stigma) ಬಗ್ಗೆಯಾಗಲಿ ಯಾವುದೇ ಅರಿವಿರಲಿಲ್ಲ ಎಂದು ಡಿಂಪಲ್ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಆದರೆ, ಈ ಕಾಯಿಲೆಯೇ ಅವರ ಸಿನಿಮಾ ರಂಗದ ಪ್ರವೇಶಕ್ಕೆ ಕಾರಣವಾಯಿತು ಎಂಬುದೂ ಅಷ್ಟೇ ಸತ್ಯ.. ಡಿಂಪಲ್ ಅವರ ತಂದೆ ಚುನ್ನಿಭಾಯ್ ಕಪಾಡಿಯಾ ಅವರು ಚಿತ್ರರಂಗದ ಪ್ರಮುಖರೊಂದಿಗೆ ಒಡನಾಟ ಹೊಂದಿದ್ದರು.&quot;ಒಬ್ಬ ಅತ್ಯಂತ ಸುಂದರ ಹುಡುಗಿ ಕುಷ್ಠರೋಗದಿಂದ ಬಳಲುತ್ತಿದ್ದಾಳೆ&quot; ಎಂಬ ವಿಷಯ ತಿಳಿದ ಖ್ಯಾತ ನಿರ್ದೇಶಕ ರಾಜ್ ಕಪೂರ್ ಅವರು ಡಿಂಪಲ್ ಅವರನ್ನು ಭೇಟಿಯಾಗಲು ಬಯಸಿದರು. ಈ ಭೇಟಿಯ ಬಳಿಕವೇ ರಾಜ್ ಕಪೂರ್ ಅವರು ಡಿಂಪಲ್ ಕಪಾಡಿಯಾ ಅವರನ್ನು ತಮ್ಮ ಐತಿಹಾಸಿಕ ಸೂಪರ್&zwnj;ಹಿಟ್ ಚಿತ್ರ 'ಬಾಬಿ' (1973) ಮೂಲಕ ಬಾಲಿವುಡ್&zwnj;ಗೆ ಪರಿಚಯಿಸಿದರು. ಅದೇ ಸಮಯದಲ್ಲಿ ನೀಡಿದ ಚಿಕಿತ್ಸೆಯ ನಂತರ ಅವರು ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾದರು.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/dimple-kapadia-from-battling-leprosy-during-her-childhood-to-becoming-a-bollywood-star-story-revealed-here/articleshow-zxmz477"/>
        </item>
        <item>
            <title><![CDATA[Tatto ಕಥೆ, ಸೌಂದರ್ಯ ಜೊತೆ: ಮೈಮೇಲಿನ ಒಂದೊಂದು ಹಚ್ಚೆಗೂ ಒಂದೊಂದು ಕಥೆ ಹೇಳಿದ Bigg Boss ಬೋಲ್ಡ್ ಬ್ಯೂಟಿ]]></title>
            <link>https://kannada.asianetnews.com/gallery/entertainment/bigg-boss-bold-beauty-soundarya-shetty-told-a-story-behind-each-tattoo-on-her-body-suc-ugqlkuf</link>
            <guid isPermaLink="true">https://kannada.asianetnews.com/gallery/entertainment/bigg-boss-bold-beauty-soundarya-shetty-told-a-story-behind-each-tattoo-on-her-body-suc-ugqlkuf</guid>
            <pubDate>Fri, 18 Sep 2026 19:07:29 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ ತಮ್ಮ ಮೈಮೇಲಿರುವ ಟ್ಯಾಟೂಗಳ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಉಸಿರಿನ ಸಂಕೇತ, ಬುದ್ಧ ಮತ್ತು ನೃತ್ಯದ ಶ್ರೇಷ್ಠತೆಯನ್ನು ಸಾರುವ ಸಂಸ್ಕೃತ ಶ್ಲೋಕದ ಟ್ಯಾಟೂಗಳ ಅರ್ಥವನ್ನು ಅವರು ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tbhrc82t4qn6s6pxpf7jjd,imgname-soundarya-shetty-1789738410376.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ ತಮ್ಮ ಮೈಮೇಲಿರುವ ಟ್ಯಾಟೂಗಳ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಉಸಿರಿನ ಸಂಕೇತ, ಬುದ್ಧ ಮತ್ತು ನೃತ್ಯದ ಶ್ರೇಷ್ಠತೆಯನ್ನು ಸಾರುವ ಸಂಸ್ಕೃತ ಶ್ಲೋಕದ ಟ್ಯಾಟೂಗಳ ಅರ್ಥವನ್ನು ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​ 13 (Bigg Boss 13)ರ ಪ್ರೊಮೋ ರಿಲೀಸ್​ ಆದಾಗ, ಟ್ಯಾಟೂ ಮೂಲಕವೇ ಇಂಟ್ರಡ್ಯೂಸ್​ ಮಾಡಿದ್ದ ಬ್ಯೂಟಿಯೇ ಮಂದಳೂರು ಮೂಲದ, ಸೌಂದರ್ಯ ಶೆಟ್ಟಿ. ಸಖತ್ ಬೋಲ್ಡ್ ಆಗಿರೋ ಸೌಂದರ್ಯ, ಫಿಟ್&zwnj;ನೆಸ್ ಪ್ರೇಮಿಯೂ ಹೌದು. ಈಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಇವರ ಮೈತುಂಬಾ ಇರುವ ಹಚ್ಚೆಯ ಗುಟ್ಟನ್ನು ಬಿಚ್ಚಿಡಲಾಗಿದೆ.&lt;/p&gt;&lt;img&gt;&lt;p&gt;Tatto ಕಥೆ, ಸೌಂದರ್ಯ ಜೊತೆ ಎನ್ನುವ ಕ್ಯಾಪ್ಷನ್​ ನೀಡಿ, ಸೌಂದರ್ಯ ಅವರ ಟ್ಯಾಟೂ ಕಥೆಯನ್ನು ತೋರಿಸಲಾಗಿದೆ. ಕೈತುಂಬಾ ಇರುವ ಟ್ಯಾಟೂಗಳಲ್ಲಿ ಕೆಲವೊಂದು ಟೈಮ್​ಪಾಸ್​ ಟ್ಯಾಟೂ ಅಂದಿದ್ದಾರೆ. ಬಲಗೈಯಲ್ಲಿ ಇರುವ ಟ್ಯಾಟೂ ಒಂದು ಉಸಿರಿನ ಸಂಕೇತ. ನಾವು ಎಂದಿಗೂ ಉಸಿರಿನ ಜೊತೆ ಇರುತ್ತೇವೆ ಎನ್ನುವುದರ ಸಂಕೇತ ಎಂದಿದ್ದಾರೆ.&lt;/p&gt;&lt;img&gt;&lt;p&gt;ಒಂದು ಬುದ್ಧನನ್ನು ಪ್ರತಿನಿಧಿಸುವ ಟ್ಯಾಟೂ ಎಂದಿದ್ದರೆ, ಸೊಂಟದ ಮೇಲಿನ ಟ್ಯಾಟೂ ಒಂದನ್ನು ತೋರಿಸಿ ಸಂಸ್ಕೃತ ಶ್ಲೋಕವನ್ನು ಹೇಳಿದ್ದಾರೆ. ಸೌಂದರ್ಯಂಗೆ ನೃತ್ಯವೇ ಸುಂದರ ಎನ್ನುವುದು ಇದರ ತಾತ್ಪರ್ಯ. ಆದ್ದರಿಂದ ಸೌಂದರ್ಯ ಹೆಸರಿನ ನನಗೆ ನೃತ್ಯವೇ ಶ್ರೇಷ್ಠ ಎನ್ನುವುದನ್ನು ಈ ಟ್ಯಾಟೂ ತೋರಿಸುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಸೌಂದರ್ಯ ಶೆಟ್ಟಿ (Bigg Boss Soundarya Shetty) ಕುರಿತು ಹೇಳುವುದಾದರೆ, ಅವರೇ ತಮ್ಮನ್ನು ಬಿಗ್​ಬಾಸ್​ನಲ್ಲಿ ಹೀಗೆ ಇಂಟ್ರಡ್ಯೂಸ್​ ಮಾಡಿಕೊಂಡಿದ್ದರು. ನಾನು ತುಂಬಾ ಕನ್ಫಿಡೆಂಟ್, ಸ್ಟೈಲಿಶ್ ಹುಡುಗಿ. ನಾನು ಹುಟ್ಟಿದ್ದು ಮಸ್ಕಟ್&zwnj;ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಸದ್ಯ ನಾನು ಇರೋದು ಮುಂಬೈನಲ್ಲಿ. ನಾನು ಕರ್ನಾಟಕದವಳು. ನನಗೆ ಕನ್ನಡಿಗರ ಸಪೋರ್ಟ್ ಬೇಕು. ಕನ್ನಡಿಗರ ಪ್ರೀತಿ ಬೇಕು. ನನ್ನನ್ನ ಕನ್ನಡಿಗರು ಇಷ್ಟ ಪಡ್ತಾರೆ ಅಂದುಕೊಳ್ತೀನಿ&rsquo;&rsquo; ಎಂದಿದ್ದರು.&lt;/p&gt;&lt;img&gt;&lt;p&gt;&lsquo;&rsquo;ನನಗೆ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್, ಸ್ಟೈಲಿಂಗ್ ಅಂದ್ರೆ ಇಷ್ಟ. ವೀಕೆಂಡ್&zwnj; ಬಂತೂಂದ್ರೆ ಪಾರ್ಟಿ, ನೈಟ್ ಲೈಫ್, ಮ್ಯೂಸಿಕ್, ಡ್ಯಾನ್ಸ್ ನನ್ನ ವೈಬ್&zwnj; ಎಂದಿದ್ದರು. ನನಗೆ ಟ್ರಾವೆಲ್ ಮಾಡೋದು ಇಷ್ಟ. ಎಲ್ಲೇ ಟ್ರಾವೆಲ್ ಮಾಡಿದರೂ, ಅಲ್ಲಿಂದ ಒಂದು ಮೆಮೊರಿ ತರ್ತೀನಿ. ನನ್ನ ಮೈಮೇಲೆ ಇರುವ ಒಂದೊಂದು ಟ್ಯಾಟೂಗೂ ಒಂದೊಂದು ಸ್ಟೋರಿ ಇದೆ&rsquo;&rsquo; ಎಂದಿದ್ದರು ಸೌಂದರ್ಯ ಶೆಟ್ಟಿ.&lt;/p&gt;&lt;img&gt;&lt;p&gt;&lsquo;&rsquo;ನಾನು ಅನಿಸಿದ್ದನ್ನ ನೇರವಾಗಿ ಹೇಳಿಬಿಡ್ತೀನಿ. ಮೈಂಡ್&zwnj;ನಿಂದ ಆಡೋಕೆ ಇಳಿದರೆ, ಎಲ್ಲರನ್ನ ಖಂಡಿತ ಮ್ಯೂನಿಪುಲೇಟ್ ಮಾಡ್ತೀನಿ. ನಾನು ಇದ್ದ &lsquo;ಸ್ಪ್ಲಿಟ್ಸ್ ವಿಲ್ಲಾ ಸೀಸನ್ 16&rsquo; ಬ್ಲಾಕ್ ಬಸ್ಟರ್ ಆಯ್ತು. ಈಗ ಕರ್ನಾಟಕದಲ್ಲೂ ನನಗೆ ಜನರ ಪ್ರೀತಿ ಬೇಕಿದೆ&rsquo;&rsquo; ಅಂತಂದಿದ್ದಾರೆ ಸೌಂದರ್ಯ ಶೆಟ್ಟಿ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bigg-boss-bold-beauty-soundarya-shetty-told-a-story-behind-each-tattoo-on-her-body-suc-ugqlkuf"/>
        </item>
        <item>
            <title><![CDATA[ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1</link>
            <guid isPermaLink="true">https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1</guid>
            <pubDate>Fri, 18 Sep 2026 18:57:19 +0530</pubDate>
            <description><![CDATA[&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2taa53rmf7spn2s2h0zsv7e,imgname-jacqueline-fernandez-1789737112696.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ಜಾಕ್ವೆಲಿನ್ ಫರ್ನಾಂಡಿಸ್: ಮನೆ, ಕಾರು ಅಲ್ಲ... ನಟಿಯ ಬಳಿ ಇದೆ ಒಂದು ಖಾಸಗಿ ದ್ವೀಪ!&lt;/p&gt;&lt;p&gt;ಸಿನಿಮಾ ತಾರೆಯರು ದುಬಾರಿ ಕಾರು, ಐಷಾರಾಮಿ ಮನೆ ಖರೀದಿಸುವುದು ಸಾಮಾನ್ಯ. ಆದರೆ ಬಾಲಿವುಡ್&zwnj;ನ ಈ ನಟಿ ಮಾತ್ರ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನಲಾಗುತ್ತದೆ. ಮನೆ, ಕಾರುಗಳ ಜೊತೆಗೆ ತಮ್ಮದೇ ಆದ ಖಾಸಗಿ ದ್ವೀಪವನ್ನೂ ಹೊಂದಿದ್ದಾರೆ ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ್ಗೆ ಸುದ್ದಿಯಾಗುತ್ತಾರೆ.&lt;/p&gt;&lt;img&gt;&lt;p&gt;ಶ್ರೀಲಂಕಾದ ಕೊಲಂಬೊದಲ್ಲಿ ಜನಿಸಿದ ಜಾಕ್ವೆಲಿನ್, ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿ ಬಳಿಕ ಬಾಲಿವುಡ್&zwnj;ನಲ್ಲಿ ಗುರುತಿಸಿಕೊಂಡರು. 2006ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟ ಗೆದ್ದ ಅವರು, 2009ರಲ್ಲಿ &lsquo;ಅಲ್ಲಾದೀನ್&rsquo; ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.&lt;/p&gt;&lt;img&gt;&lt;p&gt;ಆರಂಭದ ದಿನಗಳ ಬಳಿಕ &lsquo;ಮರ್ಡರ್ 2&rsquo;, &lsquo;ಹೌಸ್&zwnj;ಫುಲ್ 2&rsquo;, &lsquo;ರೇಸ್ 2&rsquo; ಮತ್ತು &lsquo;ಕಿಕ್&rsquo; ಸಿನಿಮಾಗಳ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ವಿಶೇಷವಾಗಿ ಗ್ಲಾಮರ್ ಮತ್ತು ಡ್ಯಾನ್ಸ್&zwnj; ಮೂಲಕ ಬಾಲಿವುಡ್&zwnj;ನಲ್ಲಿ ಜನಪ್ರಿಯತೆ ಪಡೆದರು. ಕನ್ನಡದಲ್ಲಿ ಸ್ಟಾರ್ ನಟ ಕಿಚ್ಚ ಸುದೀಪ್ ಎದುರು 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಟಿಸಿದ್ದಾರೆ. ಕಿಚ್ಚ-ಜಾಕ್ವೆಲಿನ್ ಜೋಡಿಯ 'ರಾ ರಾ ರುಕ್ಕಮ್ಮ..' ಹಾಡು ಸಖತ್ ಫೇಮಸ್ ಆಗಿದ್ದು, ಇಂದಿಗೂ ಆ ಹಾಡು ಜನಮೆಚ್ಚುಗೆ ಕಳೆದುಕೊಂಡಿಲ್ಲ.&lt;/p&gt;&lt;img&gt;&lt;p&gt;ಜಾಕ್ವೆಲಿನ್ ಅವರ ಆಸ್ತಿಗಳ ಪೈಕಿ ಅತ್ಯಂತ ಕುತೂಹಲ ಮೂಡಿಸುವುದು ಅವರ ಹೆಸರಿನೊಂದಿಗೆ ಕೇಳಿಬರುವ ಖಾಸಗಿ ದ್ವೀಪದ ಕಥೆ. 2012ರಲ್ಲಿ ಶ್ರೀಲಂಕಾ ಸಮೀಪ ಸುಮಾರು 5 ಎಕರೆ ವಿಸ್ತೀರ್ಣದ ದ್ವೀಪವನ್ನು ಖರೀದಿಸಿದ್ದಾರೆ ಎಂದು ಹಲವು ವರದಿಗಳು ಹೇಳುತ್ತವೆ. ಅದರ ಬೆಲೆ ಸುಮಾರು 3 ಕೋಟಿ ರೂಪಾಯಿ ಎಂದು ವರದಿಯಾಗಿತ್ತು. ಹಸಿರಿನಿಂದ ಆವೃತವಾಗಿರುವ ಈ ದ್ವೀಪವೇ ನಟಿಯ ಐಷಾರಾಮಿ ಜೀವನಶೈಲಿಯ ಮತ್ತೊಂದು ಉದಾಹರಣೆಯಾಗಿ ಚರ್ಚೆಯಾಗುತ್ತದೆ.&lt;/p&gt;&lt;img&gt;&lt;p&gt;ಕನ್ನಡ ಪ್ರೇಕ್ಷಕರಿಗೂ ಜಾಕ್ವೆಲಿನ್ ಪರಿಚಿತ ಮುಖ. ಕಿಚ್ಚ ಸುದೀಪ್ ಅಭಿನಯದ &lsquo;ವಿಕ್ರಾಂತ್ ರೋಣ&rsquo; ಸಿನಿಮಾದ &lsquo;ರಕ್ಕಮ್ಮ&rsquo; ಪಾತ್ರದ ಮೂಲಕ ಅವರು ಸ್ಯಾಂಡಲ್&zwnj;ವುಡ್&zwnj;ನಲ್ಲೂ ಗಮನ ಸೆಳೆದಿದ್ದರು.&lt;/p&gt;&lt;img&gt;&lt;p&gt;ಇಷ್ಟೇ ಅಲ್ಲ, ಮುಂಬೈನ ಪಾಲಿ ಹಿಲ್&zwnj;ನಲ್ಲಿ ಐಷಾರಾಮಿ 5 BHK ಅಪಾರ್ಟ್&zwnj;ಮೆಂಟ್, ಕೊಲಂಬೊದಲ್ಲಿ ರೆಸ್ಟೋರೆಂಟ್ ಹಾಗೂ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಹೊಂದಿದ್ದಾರೆ ಎಂಬ ವರದಿಗಳಿವೆ. ಸಿನಿಮಾಗಳ ಸಂಭಾವನೆ, ಜಾಹೀರಾತುಗಳು ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಂದಲೂ ಅವರು ಆದಾಯ ಗಳಿಸುತ್ತಾರೆ ಎನ್ನಲಾಗಿದೆ. ಒಂದು ವರ್ಷಕ್ಕೆ ಇವರ ಆದಾಯ 12 ಕೋಟಿಗೂ ಅಧಿಕ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಜಾಕ್ವೆಲಿನ್ ಫರ್ನಾಂಡಿಸ್ ಅವರ ಸಿನಿಮಾ ಜರ್ನಿಯಷ್ಟೇ ಅವರ ಐಷಾರಾಮಿ ಆಸ್ತಿ ಮತ್ತು ಉದ್ಯಮದ ಕುರಿತ ಸುದ್ದಿಗಳೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿವೆ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/news-entertainment/jacqueline-fernandez-who-acted-with-kiccha-sudeep-in-kannada-cinema-reportedly-owns-a-private-island-in-sri-lanka-mi7fck1"/>
        </item>
        <item>
            <title><![CDATA[ಅಮ್ಮನಾದ ಮೇಲೆ ದೇಹ ಬದಲಾವಣೆ: ಕತ್ರಿನಾ ಕೈಫ್​ ಬಾಡಿ ಷೇಮಿಂಗ್​ ಮಾಡ್ತಿರೋರ ಚಳಿ ಬಿಡಿಸಿದ ನಟಿ ರಮ್ಯಾ]]></title>
            <link>https://kannada.asianetnews.com/women/actress-katrina-kaif-body-shamed-by-netizens-actress-ramya-outraged-suc/articleshow-vf91c58</link>
            <guid isPermaLink="true">https://kannada.asianetnews.com/women/actress-katrina-kaif-body-shamed-by-netizens-actress-ramya-outraged-suc/articleshow-vf91c58</guid>
            <pubDate>Fri, 18 Sep 2026 18:44:18 +0530</pubDate>
            <description><![CDATA[ಗಣೇಶ ಚತುರ್ಥಿ ಆಚರಣೆಯಲ್ಲಿ ಕಾಣಿಸಿಕೊಂಡ ನಟಿ ಕತ್ರಿನಾ ಕೈಫ್ ಅವರ ತೂಕ ಹೆಚ್ಚಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬಾಡಿ ಷೇಮಿಂಗ್ ಮಾಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟಿ ರಮ್ಯಾ, ಮಹಿಳೆಯ ದೇಹದ ಬದಲಾವಣೆ ಸಹಜ ಪ್ರಕ್ರಿಯೆ ಎಂದು ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2tae832jhsnq86pje5jj840,imgname-katrina-kaif-and-ramya-1789737246818.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿಯರು ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಬಯಸುವವರೇ ಬಹುತೇಕ ಮಂದಿ. ಇದೇ ಕಾರಣಕ್ಕೆ ಹಲವಾರು ನಟಿಯರು ಬಾಡಿಷೇಮಿಂಗ್​ ಅನುಭವಿಸುವುದು ಇದೆ. ಓರ್ವ ಮಹಿಳೆ ಅಮ್ಮನಾದ ಮೇಲೆ ಸಹಜವಾಗಿ ತೂಕ ಹೆಚ್ಚಾಗುತ್ತದೆ. ಕಾಲ ಕ್ರಮೇಣ ಕೆಲವರು, ಯೋಗ, ಧ್ಯಾನ, ಡಯೆಟ್​ ಇತ್ಯಾದಿಗಳ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಇದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗದ ಮಾತು. ಆದರೆ ಓರ್ವ ಹೆಣ್ಣಿನ ದೇಹದ ಬಗ್ಗೆ ಅದರಲ್ಲಿಯೂ ಸೆಲೆಬ್ರಿಟಿಗಳ ಬಗ್ಗೆ ಟೀಕೆ ಮಾಡಿ ವಿಕೃತ ಸಂತೋಷ ಅನುಭವಿಸುವವರು ಕೆಲವರು. ಅದೇ ರೀತಿ ಇದೀಗ, ನಟಿ ಕತ್ರಿನಾ ಕೈಫ್​ಗೂ ಆಗಿದೆ.&lt;/p&gt;&lt;p&gt;ಇತ್ತೀಚೆಗೆ ನಡೆದ ಮುಕೇಶ್​ ಅಂಬಾನಿ ಕುಟುಂಬದ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಕೈಫ್ ಅವರು ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಭಾಗವಹಿಸಿದ್ದರು. 2025ರ ನವೆಂಬರ್​ನಲ್ಲಿ ಗಂಡು ಮಗು ವಿಹಾನ್​ಗೆ ಜನ್ಮ ನೀಡಿದ್ದ ಕತ್ರಿನಾ ಅವರ ತೂಕ ಸಹಜವಾಗಿ ಹೆಚ್ಚಾಗಿದೆ. ಮುಖದ ಬದಲಾವಣೆಯೂ ಆಗಿದೆ. ಇದರಿಂದಾಗಿ ಕೆಲವು ವಿಕೃತ ಮನಸ್ಸುಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಅವರ 'ಹಳೆಯ ಮತ್ತು ಇಂದಿನ' ಫೋಟೋಗಳನ್ನು ಹೋಲಿಸಿ ಅವಹೇಳನಕಾರಿ ಕಮೆಂಟ್&zwnj;ಗಳನ್ನು ಮಾಡುತ್ತಿದ್ದಾರೆ. ಬೇರೆಯವರನ್ನು ಟೀಕೆ ಮಾಡುತ್ತಲೇ, ಅವರ ಬಾಡಿ ಷೇಮಿಂಗ್​ ಮಾಡುತ್ತಲೇ ತಮ್ಮ ಕೆಟ್ಟ ಮನಸ್ಥಿತಿಯನ್ನು ತೋರುವ ಇಂಥವರಿಂದ ಅದೆಷ್ಟೋ ಮಂದಿ ನೋವು ಅನುಭವಿಸುವುದು ಇದೆ.&lt;/p&gt;&lt;h2&gt;&lt;strong&gt;ರಮ್ಯಾ ಕಿಡಿ&lt;/strong&gt;&lt;/h2&gt;&lt;p&gt;ಇದೀಗ, ಕತ್ರಿನಾ ಕೈಫ್​ ಅವರನ್ನು ಟ್ರೋಲ್​ ಮಾಡುತ್ತಿರುವವರ ಬಗ್ಗೆ ಇದಾಗಲೇ ವಿವಿಧ ಕ್ಷೇತ್ರಗಳ ದಿಗ್ಗಜರು ಛೀಮಾರಿ ಹಾಕಿದ್ದಾರೆ. ಇದೀಗ ನಟಿ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಟೀಕೆ ಮಾಡುತ್ತಿರುವವರ ಚಳಿ ಬಿಡಿಸಿದ್ದಾರೆ. ಕತ್ರಿನಾ ಕೈಫ್​ ಅವರ ಫೋಟೋ ಶೇರ್​ ಮಾಡಿದ್ದ ಹಲವರು ʻಪ್ರೈಮ್ ಹಂತʼ (ಅತ್ಯುತ್ತಮ ಹಂತ) ಮತ್ತು ʻಮುಕ್ತಾಯದ ಹಂತʼ ಎಂದು ವಿಂಗಡಿಸಿ ಪೋಸ್ಟ್ ಹಾಕಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯ ಮೂಲಕ ಆಕ್ರೋಶ ಹೊರಹಾಕಿರುವ ನಟಿ, ಮಹಿಳೆಯ ಅತ್ಯುತ್ತಮ ಹಂತ ಎನ್ನುವ ಮಾತು ಆಕೆಗೆ ಮುಕ್ತಾಯದ ದಿನ ಇದೆ ಎನ್ನುವಂತೆ ಬಿಂಬಿಸುತ್ತದೆ. ಅತ್ಯುತ್ತಮ ಹಂತವೆಂದರೆ ಕೇವಲ ಮ್ಯಾಗಜೀನ್ ಮುಖಪುಟದ ಮಾಡೆಲ್&zwnj;ನಂತೆ ಕಾಣುವ ಕೆಲವೇ ವರ್ಷಗಳು ಎಂದು ನಿರ್ಧರಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ವಿವಿಧ ಘಟ್ಟಗಳಲ್ಲಿ ದೇಹ ಬದಲಾವಣೆ&lt;/strong&gt;&lt;/h3&gt;&lt;p&gt;ಮಹಿಳೆಗೆ ಗರ್ಭಧಾರಣೆ, ಋತುಬಂಧದ ಪೂರ್ವದ ಹಂತ ಹಾಗೂ ಜೀವನದ ವಿವಿಧ ಘಟ್ಟಗಳಲ್ಲಿ ದೇಹ ಬದಲಾಗುತ್ತದೆ. ಅದು ಅವನತಿಯಲ್ಲ, ಬದಲಿಗೆ ಅದು ಬದುಕುವ ಕ್ರಮವಾಗಿದೆ. ʼಅತ್ಯುತ್ತಮ ಹಂತʼ ಎಂದರೆ ಕೇವಲ ಸಣ್ಣ ಸೊಂಟದ ಅಳತೆಯಲ್ಲ; ಅದು ಶಕ್ತಿ, ವಿವೇಕ, ಕೆಲಸ, ಸಂತೋಷ ಮತ್ತು ಆಕೆ ಕಟ್ಟಿಕೊಂಡಿರುವ ಎಲ್ಲವೂ ಆಗಿದೆ. ಕತ್ರಿನಾ ಸದ್ಯ ತಮ್ಮ ಅತ್ಯುತ್ತಮ ಹಂತದಲ್ಲಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಹುಟ್ಟಿದ ದಿನದಿಂದ ಹಿಡಿದು ಜೀವನದ ಕೊನೆಯ ದಿನದವರೆಗೂ ಅತ್ಯುತ್ತಮ ಹಂತದಲ್ಲಿಯೇ ಇರುತ್ತಾಳೆ ಎಂದಿದ್ದಾರೆ.&lt;/p&gt;&lt;p&gt;ಇನ್ನು, &quot;ಆಕೆಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ&quot; ಎಂದು ಹೇಳುವವರಿಗೆ ಕೇಳುತ್ತೇನೆ: ಹಾಗಾದರೆ ಕಡಿಮೆ ಹಣವಿರುವ ಮಹಿಳೆಯನ್ನು ದೇಹದ ಆಕಾರದ ಕಾರಣಕ್ಕೆ ಅವಮಾನಿಸಬಹುದೇ? ಅಥವಾ &quot;ಆಕೆಗೆ ಮಗುವಾಗಿದೆ, ಹಾಗಾಗಿ ಆ ತೂಕ ಸರಿ&quot; ಎನ್ನುವವರು, ಮಗುವಾಗದಿದ್ದರೆ ಆ ತೂಕ ಸರಿಯಲ್ಲ ಎಂದು ಭಾವಿಸುತ್ತಾರೆಯೇ? ಇದ್ಯಾವ ರೀತಿಯ ಅರ್ಥಹೀನ ಸಮರ್ಥನೆ? ಎಂದು ಕಿಡಿಕಾರಿದ್ದಾರೆ.&lt;/p&gt;&lt;p&gt;ಒಬ್ಬ ಮಹಿಳೆಯ ದೇಹವನ್ನು ಅವಮಾನಿಸಬಾರದು ಎನ್ನಲು ಬ್ಯಾಂಕ್ ಬ್ಯಾಲೆನ್ಸ್&zwnj;ನ ಅಗತ್ಯವಿಲ್ಲ ಅಥವಾ ಅದಕ್ಕೊಂದು ನಿರ್ದಿಷ್ಟ ಕಾರಣವೂ ಬೇಕಿಲ್ಲ. ಇದಕ್ಕೆ ಯಾವುದೇ ಷರತ್ತುಗಳಾಗಲಿ, ವಿನಾಯಿತಿಗಳಾಗಲಿ ಇಲ್ಲ. ದೇಹದ ಆಕಾರವನ್ನು ನೋಡಿ ಅವಮಾನಿಸುವುದು ತಪ್ಪು. ಅಷ್ಟೇ ಎಂದು ರಮ್ಯಾ ತಮ್ಮ ಪೋಸ್ಟ್ ನಲ್ಲಿ ಸ್ಪಷ್ಪಪಡಿಸಿದ್ದಾರೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/women/actress-katrina-kaif-body-shamed-by-netizens-actress-ramya-outraged-suc/articleshow-vf91c58"/>
        </item>
        <item>
            <title><![CDATA[ಏಲಕ್ಕಿಯನ್ನು ಕುಂಡದಲ್ಲೇ ಸುಲಭವಾಗಿ ಬೆಳೆಯೋದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ]]></title>
            <link>https://kannada.asianetnews.com/gallery/life/how-to-easily-grow-cardamom-in-a-pot-here-is-a-step-by-step-guide-suc-mhongpi</link>
            <guid isPermaLink="true">https://kannada.asianetnews.com/gallery/life/how-to-easily-grow-cardamom-in-a-pot-here-is-a-step-by-step-guide-suc-mhongpi</guid>
            <pubDate>Fri, 18 Sep 2026 18:01:17 +0530</pubDate>
            <description><![CDATA[ಭಾರತೀಯ ಅಡುಗೆಮನೆಯಲ್ಲಿ ದುಬಾರಿ ಏಲಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಸರಿಯಾದ ವಿಧಾನವನ್ನು ಅನುಸರಿಸಿದರೆ ಮನೆಯ ಕುಂಡದಲ್ಲಿಯೇ ಏಲಕ್ಕಿಯನ್ನು ಸುಲಭವಾಗಿ ಬೆಳೆಯಬಹುದು. ಪಕ್ವವಾದ ಬೀಜಗಳನ್ನು ಬಳಸಿ, ಮಣ್ಣು ಸಿದ್ಧಪಡಿಸಿ ಸಾಧಾರಣ ಬಿಸಿಲಿನಲ್ಲಿಟ್ಟರೆ ಗಿಡ ಬೆಳೆಯುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2t7pxmd9f0akfas8z21p3xz,imgname-cardomom-01-1789734385293.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ಅಡುಗೆಮನೆಯಲ್ಲಿ ದುಬಾರಿ ಏಲಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಸರಿಯಾದ ವಿಧಾನವನ್ನು ಅನುಸರಿಸಿದರೆ ಮನೆಯ ಕುಂಡದಲ್ಲಿಯೇ ಏಲಕ್ಕಿಯನ್ನು ಸುಲಭವಾಗಿ ಬೆಳೆಯಬಹುದು. ಪಕ್ವವಾದ ಬೀಜಗಳನ್ನು ಬಳಸಿ, ಮಣ್ಣು ಸಿದ್ಧಪಡಿಸಿ ಸಾಧಾರಣ ಬಿಸಿಲಿನಲ್ಲಿಟ್ಟರೆ ಗಿಡ ಬೆಳೆಯುತ್ತದೆ.&lt;img&gt;&lt;p&gt;ಭಾರತೀಯರ ಅಡುಗೆ ಮನೆಯಲ್ಲಿ ಏಲಕ್ಕಿಗೆ ಸಿಕ್ಕಾಪಟ್ಟೆ ಡಿಮಾಂಡ್​ ಇದೆ. ಇದೇ ಕಾರಣಕ್ಕೆ ಅಸಲಿ ಏಲಕ್ಕಿ ಸಕತ್​ ದುಬಾರಿಯೂ ಆಗಿದೆ. ಏಲಕ್ಕಿಯಲ್ಲಿ ಇರುವ ಆರೋಗ್ಯವರ್ಧಕ ಪ್ರಯೋಜನಗಳಿಂದಾಗಿ ಇದಕ್ಕೆ ಸದಾ ಬೇಡಿಕೆ ಇದ್ದೇ ಇರುತ್ತದೆ.&lt;/p&gt;&lt;img&gt;&lt;p&gt;ಏಲಕ್ಕಿಯನ್ನು ಮನೆಯಲ್ಲಿ ಅದರಲ್ಲಿಯೂ ಕುಂಡದಲ್ಲಿ ಸುಲಭದಲ್ಲಿ ಬೆಳೆಯಬಹುದಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದಕ್ಕೆ ಉತ್ತರ ಹೌದು. ಏಲಕ್ಕಿಯನ್ನು ಸರಿಯಾದ ರೀತಿಯಲ್ಲಿ ಬೆಳೆದರೆ, ಮನೆಯಲ್ಲಿ ಬೆಳೆಯಬಹುದು. ಮನೆಯ ಆವರಣದಲ್ಲಿ ಅರ್ಥಾತ್​ ನೇರವಾಗಿ ಭೂಮಿಯ ಮೇಲೆ ಬೆಳೆಯಲು ಜಾಗ ಇಲ್ಲದೇ ಹೋದರೆ, ಕುಂಡದಲ್ಲಿಯೂ ಬೆಳೆಯಬಹುದು.&lt;/p&gt;&lt;img&gt;&lt;p&gt;ಮೊದಲಿಗೆ ಏಲಕ್ಕಿಯಲ್ಲಿರುವ ಪಕ್ವವಾಗಿರುವ ಬೀಜಗಳನ್ನು ತೆಗೆಯಿರಿ. ಬಳಿಕ ಕುಂಡದಲ್ಲಿ ಮಣ್ಣನ್ನು, ನೈಸರ್ಗಿಕ ಗೊಬ್ಬರ ಸೇರಿಸಿ ಚೆನ್ನಾಗಿ ಹುಡಿಹುಡಿಯಾಗುವಂತೆ ಮಣ್ಣನ್ನು ಸಿದ್ಧಪಡಿಸಿಕೊಳ್ಳಬೇಕು.&lt;/p&gt;&lt;img&gt;&lt;p&gt;ಬಳಿಕ ಚೂರೇ ಚೂರು ಹೊಂಡ ಮಾಡಿ. ಬೆರಳಿನಿಂದ ಸ್ವಲ್ಪ ಕದಡಿದರೂ ಸಾಕು. ಅಲ್ಲಿ ಬೀಜವನ್ನು ಹಾಕಿ ಮಣ್ಣನ್ನು ಮುಚ್ಚಿ.&lt;/p&gt;&lt;img&gt;&lt;p&gt;ಬಳಿಕ ಸಾಧಾರಣ ಬಿಸಿಲು ಬೀಳುವಲ್ಲಿ ಆ ಕುಂಡವನ್ನು ಇಡಬೇಕು. ಬಿರುಬಿಸಿಲಾಗಲೀ, ತುಂಬಾ ತಂಪಾದ ಸ್ಥಳದಲ್ಲಿ ಇಡಬಾರದು. ಸಾಧಾರಣ ಬಿಸಿಲು ಬೀಳುವಲ್ಲಿ ಇಡಬೇಕು.&lt;/p&gt;&lt;img&gt;&lt;p&gt;ಇಷ್ಟಾದರೆ ಕ್ರಮೇಣ, ಅದರಲ್ಲಿ ಗಿಡ ಹುಟ್ಟಿ, ಏಲಕ್ಕಿ ಬೆಳೆಯಬಹುದಾಗಿದೆ. ಇಲ್ಲಿ ಮಹತ್ವದ ಅಂಶ ಎಂದರೆ, ಮಣ್ಣನ್ನು ಸಿದ್ಧಪಡಿಸುವುದು ಹಾಗೂ ಮೇಲ್ಭಾಗದಲ್ಲಿಯೇ ಏಲಕ್ಕಿ ಬೀಜವನ್ನು ಹಾಕುವುದು. ಇದು ಸರಿಯಾಗಿ ಮಾಡಿಲ್ಲವೆಂದರೆ ನೀವು ಏನು ಮಾಡಿದರೂ ವೇಸ್ಟ್​.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/how-to-easily-grow-cardamom-in-a-pot-here-is-a-step-by-step-guide-suc-mhongpi"/>
        </item>
        <item>
            <title><![CDATA[ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಹಾಕುವಾಗ ಇದೊಂದು ವಸ್ತುವನ್ನು ಹಾಕಿ ಸಾಕು.. ನಂತ್ರ ಮ್ಯಾಜಿಕ್ ನೋಡಿ]]></title>
            <link>https://kannada.asianetnews.com/gallery/life/tired-of-tangled-clothes-in-washing-machine-try-these-silicone-laundry-balls-c8oi4eu</link>
            <guid isPermaLink="true">https://kannada.asianetnews.com/gallery/life/tired-of-tangled-clothes-in-washing-machine-try-these-silicone-laundry-balls-c8oi4eu</guid>
            <pubDate>Fri, 18 Sep 2026 17:43:32 +0530</pubDate>
            <description><![CDATA[&lt;p&gt;Laundry tips kannada: ವಾಷಿಂಗ್ ಮಷಿನ್&zwnj;ನಲ್ಲಿ ಬಟ್ಟೆಗಳು ಜಡೆ ಕಟ್ಟಿದಂತೆ ಸಿಕ್ಕಿಹಾಕಿಕೊಂಡು ಬಟನ್&zwnj;ಗಳು ಕಿತ್ತುಬರುತ್ತಿವೆಯೇ? ಬಟ್ಟೆ ಸುಕ್ಕುಗಟ್ಟದೆ, ಗೋಜಲಾಗದೆ ಪ್ರತ್ಯೇಕವಾಗಿ ಹೊರಬರಲು ನೆರವಾಗುವ ಆ ಪುಟ್ಟ ಮ್ಯಾಜಿಕ್ ಏನು? ಪ್ರತಿಯೊಬ್ಬ ಗೃಹಿಣಿ ತಿಳಿದುಕೊಳ್ಳಬೇಕಾದ ಬೆಸ್ಟ್ ಟ್ರಿಕ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj7w9x9yw9e6x6cbzjbmjeqn,imgname-1-1771938575678.jpg" type="image/jpeg" height="390" width="690"/>
            <content:encoded><![CDATA[&lt;p&gt;Laundry tips kannada: ವಾಷಿಂಗ್ ಮಷಿನ್&zwnj;ನಲ್ಲಿ ಬಟ್ಟೆಗಳು ಜಡೆ ಕಟ್ಟಿದಂತೆ ಸಿಕ್ಕಿಹಾಕಿಕೊಂಡು ಬಟನ್&zwnj;ಗಳು ಕಿತ್ತುಬರುತ್ತಿವೆಯೇ? ಬಟ್ಟೆ ಸುಕ್ಕುಗಟ್ಟದೆ, ಗೋಜಲಾಗದೆ ಪ್ರತ್ಯೇಕವಾಗಿ ಹೊರಬರಲು ನೆರವಾಗುವ ಆ ಪುಟ್ಟ ಮ್ಯಾಜಿಕ್ ಏನು? ಪ್ರತಿಯೊಬ್ಬ ಗೃಹಿಣಿ ತಿಳಿದುಕೊಳ್ಳಬೇಕಾದ ಬೆಸ್ಟ್ ಟ್ರಿಕ್ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಬಟ್ಟೆ ಹರಿದುಹೋಗುತ್ತೆ, ಬಟನ್&zwnj;ಗಳು ಕಿತ್ತುಬರುತ್ತೆ&lt;/strong&gt;ವಾಷಿಂಗ್ ಮಷಿನ್&zwnj;ನಲ್ಲಿ ಬಟ್ಟೆ ಒಗೆಯುವುದು ಸುಲಭ ನಿಜ, ಆದರೆ ಒಗೆದ ನಂತರ ಬಟ್ಟೆಗಳನ್ನು ಹೊರತೆಗೆಯುವುದು ಮಾತ್ರ ದೊಡ್ಡ ಕಿರಿಕಿರಿ! ಶರ್ಟ್, ಪ್ಯಾಂಟ್, ಚೂಡಿದಾರ್ ವೇಲ್&zwnj;ಗಳು ಒಂದಕ್ಕೊಂದು ಜಡೆ ಕಟ್ಟಿದಂತೆ ಗೋಜಲಾಗಿ ಸಿಕ್ಕಿಹಾಕಿಕೊಂಡಿರುತ್ತವೆ. ಅವುಗಳನ್ನು ಎಳೆದು ಬಿಡಿಸುವಾಗ ಬಟ್ಟೆ ಹರಿದುಹೋಗುವುದು, ಬಟನ್&zwnj;ಗಳು ಕಿತ್ತುಬರುವುದು ಅಥವಾ ಅತಿಯಾಗಿ ಸುಕ್ಕುಗಟ್ಟುವುದು ಸಾಮಾನ್ಯ.&lt;/p&gt;&lt;img&gt;&lt;p&gt;&lt;strong&gt;ಸಮಸ್ಯೆಗೆ ಪರಿಹಾರ ಸುಲಭ&lt;/strong&gt;ಈ ಸಮಸ್ಯೆಗೂ ಸುಲಭ ಪರಿಹಾರವಿದೆ. ಅದೇ &lsquo;ಸಿಲಿಕಾನ್ ಲಾಂಡ್ರಿ ಬಾಲ್ಸ್&rsquo; (Silicone Laundry Balls). ಇವು ನಿಜಕ್ಕೂ ಕೆಲಸ ಮಾಡುತ್ತವೆಯೇ? ಇವುಗಳನ್ನು ಹೇಗೆ ಬಳಸಬೇಕು? ಎಲ್ಲಿ ಸಿಗುತ್ತದೆ? ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;img&gt;&lt;p&gt;&lt;strong&gt;ಸಿಲಿಕಾನ್ ಲಾಂಡ್ರಿ ಬಾಲ್ ಹೇಗೆ ಕೆಲಸ ಮಾಡುತ್ತದೆ?&lt;/strong&gt;ಇವು ಮೃದುವಾದ ಸಿಲಿಕಾನ್ ಅಥವಾ ರಬ್ಬರ್&zwnj;ನಿಂದ ಮಾಡಲ್ಪಟ್ಟ ಸಣ್ಣ ಬಾಲ್&zwnj;ಗಳಾಗಿರುತ್ತವೆ.ಬಟ್ಟೆಗಳನ್ನು ವಾಷಿಂಗ್ ಮಷಿನ್&zwnj;ಗೆ ಹಾಕುವಾಗ, ಆ ಬಟ್ಟೆಗಳ ಜೊತೆಗೆ 4 ರಿಂದ 6 ಸಿಲಿಕಾನ್ ಲಾಂಡ್ರಿ ಬಾಲ್&zwnj;ಗಳನ್ನು ಒಳಗೆ ಹಾಕಿ ಮಷಿನ್ ಆನ್ ಮಾಡಿ.ವಾಷಿಂಗ್ ಮಷಿನ್ ತಿರುಗುವಾಗ ಈ ಬಾಲ್&zwnj;ಗಳು ಬಟ್ಟೆಗಳ ನಡುವೆ ನಿರಂತರವಾಗಿ ಚಲಿಸುತ್ತವೆ.ಇದರಿಂದ ಬಟ್ಟೆಗಳು ಒಂದಕ್ಕೊಂದು ಹತ್ತಿರ ಬಂದು ಸುತ್ತಿಕೊಳ್ಳುವುದನ್ನು ಮತ್ತು ಗಂಟು ಬೀಳುವುದನ್ನು ಈ ಬಾಲ್&zwnj;ಗಳು ನೈಸರ್ಗಿಕವಾಗಿ ತಡೆಯುತ್ತವೆ.&lt;/p&gt;&lt;img&gt;&lt;p&gt;ಇದರ ಪ್ರಮುಖ ಪ್ರಯೋಜನಗಳು&lt;strong&gt;ಬಟ್ಟೆಗಳು ಸುಲಭವಾಗಿ ಪ್ರತ್ಯೇಕಗೊಳ್ಳುತ್ತವೆ: &lt;/strong&gt;ವಾಶ್ ಮುಗಿದ ನಂತರ ಬಟ್ಟೆಗಳನ್ನು ಹೊರತೆಗೆಯುವಾಗ ಒಂದೊಂದೇ ಬಟ್ಟೆ ತುಂಬಾ ಸುಲಭವಾಗಿ ಯಾವುದೇ ಗೋಜಲಿಲ್ಲದೆ ಹೊರಬರುತ್ತವೆ.&lt;/p&gt;&lt;p&gt;&lt;strong&gt;ಕಡಿಮೆ ಸುಕ್ಕು (Wrinkle-Free): &lt;/strong&gt;ಬಟ್ಟೆಗಳು ಒಂದಕ್ಕೊಂದು ಸುತ್ತಿಕೊಳ್ಳದ ಕಾರಣ, ಬಟ್ಟೆಯ ಮೇಲೆ ಹೆಚ್ಚು ಸುಕ್ಕುಗಳು ಬೀಳುವುದಿಲ್ಲ. ಇದರಿಂದ ಇಸ್ತ್ರಿ (Iron) ಮಾಡುವ ಕೆಲಸವೂ ಸುಲಭವಾಗುತ್ತದೆ.&lt;/p&gt;&lt;p&gt;&lt;strong&gt;ಉತ್ತಮ ಶುಚಿತ್ವ: &lt;/strong&gt;ಈ ಬಾಲ್&zwnj;ಗಳು ಬಟ್ಟೆಯ ಮೇಲೆ ಉಜ್ಜಿಕೊಳ್ಳುವುದರಿಂದ ಕೊಳೆ ಮತ್ತು ಕಲೆಗಳು ಬೇಗನೆ ಸ್ವಚ್ಛವಾಗಲು ಸಹಾಯವಾಗುತ್ತದೆ.&lt;/p&gt;&lt;p&gt;&lt;strong&gt;ಬಟ್ಟೆಯ ಹಾನಿ ತಪ್ಪುತ್ತದೆ: &lt;/strong&gt;ಬಟ್ಟೆಗಳನ್ನು ಬಲವಂತವಾಗಿ ಎಳೆದು ಬಿಡಿಸುವ ಪ್ರಮೇಯವೇ ಬರುವುದಿಲ್ಲವಾದ್ದರಿಂದ ಬಟ್ಟೆಯ ಬಾಳಿಕೆ ಹೆಚ್ಚುತ್ತದೆ.&lt;/p&gt;&lt;img&gt;&lt;p&gt;&lt;strong&gt;ಎಲ್ಲಿ ಸಿಗುತ್ತೆ?&lt;/strong&gt;&lt;strong&gt;1. ಆನ್&zwnj;ಲೈನ್&zwnj;ನಲ್ಲಿ (ಅತ್ಯಂತ ಸುಲಭವಾಗಿ ಸಿಗುತ್ತೆ)&lt;/strong&gt;&lt;strong&gt;Amazon (ಅಮೆಜಾನ್), Flipkart (ಫ್ಲಿಪ್&zwnj;ಕಾರ್ಟ್) ಮತ್ತು Meesho (ಮೀಶೋ):&lt;/strong&gt; ಇವುಗಳಲ್ಲಿ ನೀವು &quot;Silicone Laundry Balls&quot; ಅಥವಾ &quot;Washing Machine Cleaning Balls&quot; ಎಂದು ಸರ್ಚ್ ಮಾಡಿದರೆ ಸಾಕು, ತಕ್ಷಣ ಸಿಗುತ್ತವೆ.&lt;/p&gt;&lt;p&gt;&lt;strong&gt;Blinkit / Zepto / Instamart: &lt;/strong&gt;ಕೆಲವು ನಗರಗಳಲ್ಲಿ ಇಂತಹ ಕ್ವಿಕ್ ಕಾಮರ್ಸ್ ಆಪ್&zwnj;ಗಳ 'Home Needs' ವಿಭಾಗದಲ್ಲೂ ಇವು ಸಿಗುತ್ತವೆ.&lt;/p&gt;&lt;p&gt;&lt;strong&gt;2. ಆಫ್&zwnj;ಲೈನ್ ಅಂಗಡಿಗಳಲ್ಲಿ&lt;/strong&gt;ಡಿ-ಮಾರ್ಟ್ (D-Mart) ಅಥವಾ ರಿಲಯನ್ಸ್ ಸ್ಮಾರ್ಟ್ ಬಜಾರ್: ದೊಡ್ಡ ಸೂಪರ್&zwnj;ಮಾರ್ಕೆಟ್&zwnj;ಗಳ 'ಪ್ಲಾಸ್ಟಿಕ್ / ಕ್ಲೀನಿಂಗ್ ಐಟಮ್ಸ್' ಸೆಕ್ಷನ್&zwnj;ನಲ್ಲಿ ಸಿಗುತ್ತವೆ. ಸ್ಥಳೀಯ ಪ್ಲಾಸ್ಟಿಕ್ ಸಾಮಗ್ರಿಗಳ ಅಂಗಡಿಗಳು ಮತ್ತು ಹೋಮ್ ಯುಟಿಲಿಟಿ ಅಂಗಡಿಗಳಲ್ಲೂ ಸಿಗುತ್ತವೆ.&lt;/p&gt;&lt;img&gt;&lt;p&gt;&lt;strong&gt;ಬೆಲೆ ಎಷ್ಟು?&lt;/strong&gt;ಇದು ತುಂಬಾ ಅಗ್ಗವಾಗಿದ್ದು, ಸಾಮಾನ್ಯವಾಗಿ 4 ರಿಂದ 8 ಬಾಲ್&zwnj;ಗಳ ಒಂದು ಪ್ಯಾಕ್&zwnj;ಗೆ ₹99 ರಿಂದ ₹200 ರೂಪಾಯಿ ಇರುತ್ತದೆ. ಇವು ರಬ್ಬರ್/ಸಿಲಿಕಾನ್ ಆಗಿರುವುದರಿಂದ ದೀರ್ಘಕಾಲ (ವರ್ಷಗಟ್ಟಲೆ) ಮರುಬಳಕೆ ಮಾಡಬಹುದು.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/tired-of-tangled-clothes-in-washing-machine-try-these-silicone-laundry-balls-c8oi4eu"/>
        </item>
        <item>
            <title><![CDATA[ಲೇಟ್ ನೈಟ್ ಹೊಟ್ಟೆ ಬಿರಿಯುವಷ್ಟು ಊಟ ಮಾಡ್ತೀರಾ? ಹಾಗಿದ್ರೆ ನಿಮ್ಮನ್ನು ಆ ದೇವ್ರೇ ಕಾಪಾಡ್ಬೇಕು..!]]></title>
            <link>https://kannada.asianetnews.com/food/eating-dinner-late-at-night-or-overeating-until-your-stomach-feels-overly-full-is-not-good-for-your-health/articleshow-dgq6lf0</link>
            <guid isPermaLink="true">https://kannada.asianetnews.com/food/eating-dinner-late-at-night-or-overeating-until-your-stomach-feels-overly-full-is-not-good-for-your-health/articleshow-dgq6lf0</guid>
            <pubDate>Fri, 18 Sep 2026 17:18:49 +0530</pubDate>
            <description><![CDATA[&lt;p&gt;ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಗುಣಮಟ್ಟದಷ್ಟೇ ಅದರ ಸಮಯಕ್ಕೂ ಗಮನ ನೀಡುವುದು ಮುಖ್ಯ. ತಡರಾತ್ರಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುವವರು ತಮ್ಮ ದಿನಚರಿಯನ್ನು ಪರಿಶೀಲಿಸಿ, ಸಾಧ್ಯವಾದಷ್ಟು ನಿಯಮಿತ ಸಮಯದಲ್ಲಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.. ಇಲ್ಲದಿದ್ದರೆ ಅಪಾಯ ಎದುರಾಗಬಹುದು, ಎಚ್ಚರ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t51dpz012nmf7h409pm8sn,imgname-gemini-generated-image-kahem5kahem5kahe-1789731583711.png" type="image/jpeg" height="390" width="690"/>
            <content:encoded><![CDATA[&lt;p&gt;ಆರೋಗ್ಯಕರ ಜೀವನಶೈಲಿ ಎಂದರೆ ಕೇವಲ ಪೌಷ್ಟಿಕ ಆಹಾರ ಸೇವಿಸುವುದಷ್ಟೇ ಅಲ್ಲ. ಏನು ತಿನ್ನುತ್ತೇವೆ, ಎಷ್ಟು ತಿನ್ನುತ್ತೇವೆ ಮತ್ತು ಯಾವ ಸಮಯದಲ್ಲಿ ತಿನ್ನುತ್ತೇವೆ ಎಂಬ ಮೂರು ಅಂಶಗಳಿಗೂ ಸಮಾನ ಪ್ರಾಮುಖ್ಯತೆ ಇದೆ. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಊಟದ ಸಮಯವನ್ನು ನಿರ್ಲಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ. ಆಫೀಸ್ ಕೆಲಸ, ನೈಟ್ ಶಿಫ್ಟ್, ತಡವಾಗಿ ಮನೆಗೆ ಬರುವುದು ಅಥವಾ ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸದಿಂದಾಗಿ ಹಲವರು ರಾತ್ರಿ 10, 11 ಅಥವಾ ಕೆಲವೊಮ್ಮೆ 12 ಗಂಟೆಯ ನಂತರವೂ ಊಟ ಮಾಡುತ್ತಾರೆ.&lt;/p&gt;&lt;p&gt;ತಡರಾತ್ರಿ ಊಟ ಮಾಡಿದ ನಂತರ ಕೆಲವರು ತಕ್ಷಣವೇ ಮಲಗುವ ಅಭ್ಯಾಸವನ್ನೂ ಹೊಂದಿರುತ್ತಾರೆ. ಈ ರೀತಿಯ ದಿನಚರಿ ಪದೇಪದೇ ಮುಂದುವರಿದರೆ ದೇಹದ ನೈಸರ್ಗಿಕ ಲಯ ಮತ್ತು ಆಹಾರ ಸೇವನೆಗೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.&lt;/p&gt;&lt;h2&gt;ತಡರಾತ್ರಿ ಊಟ ಮಾಡಿದರೆ ಏನೆಲ್ಲಾ ಸಮಸ್ಯೆ ಆಗಬಹುದು?&lt;/h2&gt;&lt;p&gt;ನಮ್ಮ ದೇಹದಲ್ಲಿ ಹಸಿವು ಮತ್ತು ಹೊಟ್ಟೆ ತುಂಬಿದ ಅನುಭವವನ್ನು ನಿಯಂತ್ರಿಸುವಲ್ಲಿ ಲೆಪ್ಟಿನ್ ಮತ್ತು ಗ್ರೆಲಿನ್ ಸೇರಿದಂತೆ ಕೆಲವು ಹಾರ್ಮೋನ್&zwnj;ಗಳು ಪಾತ್ರವಹಿಸುತ್ತವೆ. ಆಹಾರ ಸೇವನೆಯ ಸಮಯ ಮತ್ತು ನಿದ್ರೆಯ ಸಮಯದಲ್ಲಿ ಆಗುವ ಬದಲಾವಣೆಗಳು ಈ ಹಾರ್ಮೋನ್&zwnj;ಗಳ ನಿಯಂತ್ರಣದ ಮೇಲೂ ಪರಿಣಾಮ ಬೀರಬಹುದು. ಅಷ್ಟೇ ಅಲ್ಲ, ತಡವಾಗಿ ಊಟ ಮಾಡುವ ಸಂದರ್ಭದಲ್ಲಿ ಹೊಟ್ಟೆ ತುಂಬಿದ ಅನುಭವಕ್ಕೆ ಸಂಬಂಧಿಸಿದ ಲೆಪ್ಟಿನ್ ಮಟ್ಟದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಇದರಿಂದ ಕೆಲವರಿಗೆ ಮತ್ತೆ ಹಸಿವಾಗುವ ಸಾಧ್ಯತೆ ಅಥವಾ ಹೆಚ್ಚು ತಿನ್ನುವ ಪ್ರವೃತ್ತಿ ಉಂಟಾಗಬಹುದು.&lt;/p&gt;&lt;p&gt;ಇದರಿಂದ ಒಂದು ಸಣ್ಣ ಅಭ್ಯಾಸ ಕ್ರಮೇಣ ಆಹಾರದ ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು. ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಹೆಚ್ಚಿನ ಕ್ಯಾಲೊರಿ, ಸಕ್ಕರೆ ಅಥವಾ ಕೊಬ್ಬು ಹೊಂದಿರುವ ಆಹಾರಗಳನ್ನು ಪದೇಪದೇ ಸೇವಿಸುವುದರಿಂದ ತೂಕ ನಿಯಂತ್ರಣ ಕಷ್ಟವಾಗಬಹುದು. ಜೊತೆಗೆ, ಬೊಜ್ಜು, ಮಧುಮೇಹ, ಮಧುಮೇಹದಿಂದ ಉಂಟಾಗುವ ಹೃದಯ ಸಮಸ್ಯೆಗಳು ಕಾಡಬಹುದು. ಜೊತೆಗೆ, ತಡರಾತ್ರಿ ಊಟ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಗ್ಯಾಸ್ ಹಾಗೂ ಆಮ್ಲೀಯತೆಯಂತಹ ಸಮಸ್ಯೆಗಳು ತಲೆದೋರಬಹುದು.&lt;/p&gt;&lt;p&gt;ಕ್ಯಾಲೊರಿ ಸುಡುವ ಪ್ರಕ್ರಿಯೆಯ ಮೇಲೂ ಪರಿಣಾಮ?&lt;/p&gt;&lt;p&gt;ತಡವಾಗಿ ಆಹಾರ ಸೇವಿಸುವುದು ದೇಹದ ಶಕ್ತಿಯ ಬಳಕೆ ಮತ್ತು ಚಯಾಪಚಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಬಹುದು ಎಂಬುದನ್ನು ಕೆಲವು ಸಂಶೋಧನೆಗಳು ಸೂಚಿಸಿವೆ. ದಿನದ ಆರಂಭದಲ್ಲಿ ಆಹಾರ ಸೇವಿಸುವುದಕ್ಕೆ ಹೋಲಿಸಿದರೆ, ದಿನದ ಕೊನೆಯಲ್ಲಿ ತಡವಾಗಿ ತಿನ್ನುವಾಗ ದೇಹದ ಶಕ್ತಿಯ ಬಳಕೆಯಲ್ಲಿ ವ್ಯತ್ಯಾಸ ಕಂಡುಬರಬಹುದು.&lt;/p&gt;&lt;p&gt;ಇದರ ಜೊತೆಗೆ ಕೊಬ್ಬಿನ ಅಂಗಾಂಶಗಳ ಕಾರ್ಯನಿರ್ವಹಣೆಯಲ್ಲೂ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರತಿದಿನ ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುವ ಅಭ್ಯಾಸವನ್ನು ಆರೋಗ್ಯಕರ ದಿನಚರಿ ಎಂದು ಪರಿಗಣಿಸಲಾಗುವುದಿಲ್ಲ.&lt;/p&gt;&lt;p&gt;ಆದರೆ ಇಲ್ಲಿ ಒಂದು ವಿಷಯ ಗಮನಿಸಬೇಕು. ತಡವಾಗಿ ಊಟ ಮಾಡಿದರೆ ಎಲ್ಲರಿಗೂ ತೂಕ ಹೆಚ್ಚಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟು ಕ್ಯಾಲೊರಿ ಸೇವನೆ, ಆಹಾರದ ಗುಣಮಟ್ಟ, ವ್ಯಾಯಾಮ, ನಿದ್ರೆ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿ ಸೇರಿದಂತೆ ಹಲವು ಅಂಶಗಳು ತೂಕದ ಮೇಲೆ ಪರಿಣಾಮ ಬೀರುತ್ತವೆ.&lt;/p&gt;&lt;h3&gt;ಜೀರ್ಣಕ್ರಿಯೆ ಮತ್ತು ನಿದ್ರೆಯ ಮೇಲೂ ಪರಿಣಾಮ&lt;/h3&gt;&lt;p&gt;ರಾತ್ರಿ ತುಂಬಾ ತಡವಾಗಿ ಊಟ ಮಾಡಿ ತಕ್ಷಣ ಮಲಗುವುದರಿಂದ ಕೆಲವರಿಗೆ ಅಜೀರ್ಣ, ಹೊಟ್ಟೆ ಭಾರವಾಗಿರುವ ಅನುಭವ ಅಥವಾ ಎದೆಯುರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಆಸಿಡ್ ರಿಫ್ಲಕ್ಸ್ ಸಮಸ್ಯೆ ಇರುವವರು ಮಲಗುವ ಸಮಯದ ಹತ್ತಿರದಲ್ಲಿ ದೊಡ್ಡ ಪ್ರಮಾಣದ ಊಟ ಮಾಡುವುದನ್ನು ತಪ್ಪಿಸುವುದು ಸಾಮಾನ್ಯವಾಗಿ ಸಹಾಯಕವಾಗುತ್ತದೆ.&lt;/p&gt;&lt;p&gt;ಹೊಟ್ಟೆ ತುಂಬಿರುವಾಗ ಮಲಗುವುದರಿಂದ ನಿದ್ರೆಯ ಗುಣಮಟ್ಟವೂ ಕೆಲವರಲ್ಲಿ ಹದಗೆಡಬಹುದು. ನಿದ್ರೆ ಸರಿಯಾಗಿ ಆಗದಿದ್ದರೆ ಮುಂದಿನ ದಿನ ಆಯಾಸ ಮತ್ತು ಹಸಿವಿನ ನಿಯಂತ್ರಣದಲ್ಲೂ ತೊಂದರೆ ಉಂಟಾಗಬಹುದು.&lt;/p&gt;&lt;p&gt;ಹಾಗಾದರೆ ಊಟದ ಸಮಯ ಹೇಗಿರಬೇಕು?&lt;/p&gt;&lt;p&gt;ಪ್ರತಿಯೊಬ್ಬರ ಜೀವನಶೈಲಿ ಮತ್ತು ಕೆಲಸದ ಸಮಯ ಒಂದೇ ರೀತಿಯಾಗಿರುವುದಿಲ್ಲ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ರಾತ್ರಿ 7 ಅಥವಾ 8 ಗಂಟೆಗೆ ಊಟ ಮಾಡಲೇಬೇಕು ಎಂಬ ಒಂದೇ ನಿಯಮವನ್ನು ಅನ್ವಯಿಸುವುದು ಸೂಕ್ತವಲ್ಲ. ಆದರೆ ಮಲಗುವ ಸಮಯಕ್ಕೆ ತುಂಬಾ ಹತ್ತಿರದಲ್ಲಿ ಭಾರವಾದ ಊಟ ಮಾಡದಿರುವುದು ಉತ್ತಮ ಅಭ್ಯಾಸ.&lt;/p&gt;&lt;p&gt;ಸಾಧ್ಯವಾದರೆ ರಾತ್ರಿ ಊಟವನ್ನು ನಿಯಮಿತ ಸಮಯದಲ್ಲಿ, ಮಿತವಾದ ಪ್ರಮಾಣದಲ್ಲಿ ಸೇವಿಸಿ. ಹೆಚ್ಚು ಎಣ್ಣೆ, ಸಕ್ಕರೆ ಮತ್ತು ಕ್ಯಾಲೊರಿ ಹೊಂದಿರುವ ಆಹಾರಕ್ಕಿಂತ ತರಕಾರಿಗಳು, ಸೂಕ್ತ ಪ್ರಮಾಣದ ಪ್ರೋಟೀನ್ ಮತ್ತು ಸಮತೋಲಿತ ಆಹಾರವನ್ನು ಆಯ್ಕೆ ಮಾಡಬಹುದು.&lt;/p&gt;&lt;p&gt;ಒಟ್ಟಿನಲ್ಲಿ, ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಗುಣಮಟ್ಟದಷ್ಟೇ ಅದರ ಸಮಯಕ್ಕೂ ಗಮನ ನೀಡುವುದು ಮುಖ್ಯ. ತಡರಾತ್ರಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುವವರು ತಮ್ಮ ದಿನಚರಿಯನ್ನು ಪರಿಶೀಲಿಸಿ, ಸಾಧ್ಯವಾದಷ್ಟು ನಿಯಮಿತ ಸಮಯದಲ್ಲಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬಹುದು. ಪದೇಪದೇ ಎದೆಯುರಿ, ಅಜೀರ್ಣ, ಹೊಟ್ಟೆನೋವು ಅಥವಾ ನಿದ್ರೆಯ ಸಮಸ್ಯೆಗಳು ಕಾಣಿಸಿಕೊಂಡರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/food/eating-dinner-late-at-night-or-overeating-until-your-stomach-feels-overly-full-is-not-good-for-your-health/articleshow-dgq6lf0"/>
        </item>
        <item>
            <title><![CDATA[ಈ ರೋಗಕ್ಕೆ ರಾಮಬಾಣ 'ಮಖಾನ'.. ಹೇಗೆ, ಎಷ್ಟು ತಿನ್ನಬೇಕು? ಎಷ್ಟೋ ಜನರಿಗೆ ಈ ಸೀಕ್ರೆಟ್ ಗೊತ್ತಿಲ್ಲ!]]></title>
            <link>https://kannada.asianetnews.com/health-life/consuming-makhana-every-day-is-considered-very-important-for-people-with-thyroid-problems/articleshow-ku8b8zs</link>
            <guid isPermaLink="true">https://kannada.asianetnews.com/health-life/consuming-makhana-every-day-is-considered-very-important-for-people-with-thyroid-problems/articleshow-ku8b8zs</guid>
            <pubDate>Fri, 18 Sep 2026 16:37:21 +0530</pubDate>
            <description><![CDATA[&lt;p&gt;ಮಾರುಕಟ್ಟೆಯಲ್ಲಿ ದೊರೆಯುವ ಫ್ಲೇವರ್ಡ್ ಮಖಾನ ಖರೀದಿಸುವಾಗ ಪ್ಯಾಕೆಟ್&zwnj;ನಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಪರಿಶೀಲಿಸಿ. ಹೆಚ್ಚು ಉಪ್ಪು, ಸಕ್ಕರೆ ಅಥವಾ ಅನಗತ್ಯ ಕೊಬ್ಬು ಹೊಂದಿರುವ ಉತ್ಪನ್ನಗಳ ಬದಲು ಸರಳವಾದ ಮಖಾನವನ್ನು ಆಯ್ಕೆ ಮಾಡಬಹುದು. ಇದು ಯಾವ ರೋಗಕ್ಕೆ ಪರಿಹಾರ ಅಂತ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2t2pxtmyesfvd2cnh3pr080,imgname-makhana-1789729142612.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಖಾನ ಯಾವ ರೋಗಕ್ಕೆ ಪರಿಹಾರ ನೀಡುತ್ತೆ? ಇಲ್ಲಿದೆ ನೋಡಿ ಮಖಾನದ ಆರೋಗ್ಯ ಪ್ರಯೋಜನಗಳು!&lt;/strong&gt;&lt;/p&gt;&lt;p&gt;ಥೈರಾಯ್ಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ದೇಹದಲ್ಲಿ ಥೈರಾಯ್ಡ್ ಹಾರ್ಮೋನ್&zwnj;ಗಳ ಪ್ರಮಾಣದಲ್ಲಿ ವ್ಯತ್ಯಾಸವಾದಾಗ ಆಯಾಸ, ತೂಕದಲ್ಲಿ ಬದಲಾವಣೆ, ಚಳಿಯನ್ನು ಹೆಚ್ಚು ಅನುಭವಿಸುವುದು, ಚರ್ಮ ಒಣಗುವುದು, ಮನಸ್ಥಿತಿಯಲ್ಲಿ ಬದಲಾವಣೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಔಷಧಿಗಳ ಜೊತೆಗೆ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಮೇಲೂ ಗಮನ ಹರಿಸುವುದು ಮುಖ್ಯವಾಗುತ್ತದೆ.&lt;/p&gt;&lt;p&gt;ಥೈರಾಯ್ಡ್ ಸಮಸ್ಯೆ ಇರುವವರು ತಮ್ಮ ದಿನನಿತ್ಯದ ಆಹಾರದಲ್ಲಿ ಯಾವ ತಿಂಡಿಗಳನ್ನು ಸೇರಿಸಿಕೊಳ್ಳಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಈ ಪಟ್ಟಿಯಲ್ಲಿ ಮಖಾನ ಅಥವಾ ಫಾಕ್ಸ್ ನಟ್ಸ್ ಕೂಡ ಒಂದು ಉತ್ತಮ ಆಯ್ಕೆಯಾಗಬಹುದು. ಹಗುರವಾಗಿ ಹುರಿದು ಸೇವಿಸಬಹುದಾದ ಮಖಾನದಲ್ಲಿ (Makhana) ಕೆಲವು ಪ್ರಮುಖ ಪೋಷಕಾಂಶಗಳು ಇರುವುದರಿಂದ, ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಇದು ಸಮತೋಲಿತ ಆಹಾರದ ಭಾಗವಾಗಬಹುದು.&lt;/p&gt;&lt;h2&gt;ಮಖಾನ ಮತ್ತು ಥೈರಾಯ್ಡ್ ಆರೋಗ್ಯ&lt;/h2&gt;&lt;p&gt;ಥೈರಾಯ್ಡ್ ಆರೋಗ್ಯದ ಬಗ್ಗೆ ಮಾತನಾಡುವಾಗ ಗಾಯ್ಟ್ರೋಜೆನ್ ಎಂಬ ಪದವನ್ನು ಹೆಚ್ಚಾಗಿ ಕೇಳುತ್ತೇವೆ. ಕೆಲವು ಆಹಾರಗಳಲ್ಲಿ ಕಂಡುಬರುವ ಈ ಸಂಯುಕ್ತಗಳು ಅಯೋಡಿನ್ ಬಳಕೆಯ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಥೈರಾಯ್ಡ್ ಕಾರ್ಯದಲ್ಲಿ ತೊಂದರೆ ಇರುವವರು ಇಂತಹ ಆಹಾರಗಳನ್ನು ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತಾರೆ ಎಂಬುದರ ಬಗ್ಗೆ ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆಯುವುದು ಸೂಕ್ತ.&lt;/p&gt;&lt;p&gt;ಮಖಾನವು ಸಾಮಾನ್ಯವಾಗಿ ಗಾಯ್ಟ್ರೋಜೆನ್&zwnj;ಗಳ ಪ್ರಮುಖ ಮೂಲವಾಗಿ ಪರಿಗಣಿಸಲ್ಪಡುವುದಿಲ್ಲ. ಹಾಗಾಗಿ ಇದನ್ನು ಪ್ರಮಾಣಬದ್ಧವಾಗಿ ಸೇವಿಸುವುದು ಹೆಚ್ಚಿನ ಜನರಿಗೆ ಆರೋಗ್ಯಕರ ತಿಂಡಿಯ ಆಯ್ಕೆಯಾಗಬಹುದು. ಆದರೆ ಮಖಾನ ತಿನ್ನುವುದರಿಂದ ಥೈರಾಯ್ಡ್ ಹಾರ್ಮೋನ್&zwnj;ಗಳು ನೇರವಾಗಿ ಸಮತೋಲನವಾಗುತ್ತವೆ ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಆಧಾರವಿಲ್ಲ.&lt;/p&gt;&lt;p&gt;ತೂಕ ನಿಯಂತ್ರಣಕ್ಕೆ ಸಹಾಯವಾಗಬಹುದೇ?&lt;/p&gt;&lt;p&gt;ಥೈರಾಯ್ಡ್ ಸಮಸ್ಯೆಯ ಕೆಲವು ರೂಪಗಳಲ್ಲಿ ತೂಕ ಹೆಚ್ಚಾಗುವ ಸಮಸ್ಯೆ ಎದುರಾಗಬಹುದು. ತೂಕ ನಿಯಂತ್ರಣದ ಸಂದರ್ಭದಲ್ಲಿ ಹೆಚ್ಚು ಸಕ್ಕರೆ, ಉಪ್ಪು ಮತ್ತು ಎಣ್ಣೆ ಹೊಂದಿರುವ ತಿಂಡಿಗಳ ಬದಲು ಪೌಷ್ಟಿಕಾಂಶವಿರುವ ಆಹಾರವನ್ನು ಆಯ್ಕೆ ಮಾಡುವುದು ಮುಖ್ಯ.&lt;/p&gt;&lt;p&gt;ಮಖಾನವನ್ನು ಹೆಚ್ಚು ಎಣ್ಣೆ ಬಳಸದೆ ಹುರಿದು ಸೇವಿಸಿದರೆ ಅದು ಕ್ರಿಸ್ಪಿ ಹಾಗೂ ರುಚಿಕರವಾದ ತಿಂಡಿಯಾಗುತ್ತದೆ. ಇದರಲ್ಲಿರುವ ಆಹಾರದ ನಾರಿನಂಶ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡಬಹುದು. ಇದರಿಂದ ಅನಗತ್ಯ ತಿಂಡಿಗಳನ್ನು ಕಡಿಮೆ ಮಾಡಲು ನೆರವಾಗಬಹುದು. ಆದರೆ ತೂಕ ಇಳಿಕೆಗೆ ಮಖಾನ ಮಾತ್ರವೇ ಪರಿಹಾರವಲ್ಲ. ಒಟ್ಟಾರೆ ಆಹಾರ ಕ್ರಮ, ದೈಹಿಕ ಚಟುವಟಿಕೆ ಮತ್ತು ನಿದ್ರೆಯೂ ಸಮಾನವಾಗಿ ಮುಖ್ಯ.&lt;/p&gt;&lt;p&gt;ಆಂಟಿಆಕ್ಸಿಡೆಂಟ್&zwnj;ಗಳೂ ಇವೆ&lt;/p&gt;&lt;p&gt;ಮಖಾನದಲ್ಲಿ ಕೆಲವು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಸಸ್ಯ ಸಂಯುಕ್ತಗಳು ಕಂಡುಬರುತ್ತವೆ. ಅವು ದೇಹದ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುವಲ್ಲಿ ಪಾತ್ರವಹಿಸಬಹುದು. ಈ ಕಾರಣದಿಂದ ಮಖಾನವನ್ನು ಆರೋಗ್ಯಕರ ಆಹಾರದ ಭಾಗವಾಗಿ ಸೇರಿಸಿಕೊಳ್ಳಬಹುದು.&lt;/p&gt;&lt;p&gt;ಆದರೆ &ldquo;ಮಖಾನ ದೇಹದಲ್ಲಿನ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ&rdquo; ಅಥವಾ &ldquo;ದೇಹದ ನೀರಿನ ಶೇಖರಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ&rdquo; ಎಂಬಂತಹ ಹೇಳಿಕೆಗಳನ್ನು ವೈದ್ಯಕೀಯ ಸತ್ಯವೆಂದು ಪರಿಗಣಿಸಬಾರದು. ಮುಖ ಅಥವಾ ದೇಹದಲ್ಲಿ ನಿರಂತರವಾಗಿ ಊತ ಕಾಣಿಸಿಕೊಂಡರೆ ಅದರ ಕಾರಣವನ್ನು ವೈದ್ಯರಿಂದ ಪರಿಶೀಲಿಸಿಕೊಳ್ಳುವುದು ಅಗತ್ಯ.&lt;/p&gt;&lt;h3&gt;ಮೂಳೆಗಳ ಆರೋಗ್ಯಕ್ಕೂ ಪೋಷಕಾಂಶ&lt;/h3&gt;&lt;p&gt;ಮಖಾನದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಸೇರಿದಂತೆ ಕೆಲವು ಖನಿಜಾಂಶಗಳಿವೆ. ಇವು ಮೂಳೆ ಮತ್ತು ದೇಹದ ಸಾಮಾನ್ಯ ಕಾರ್ಯಗಳಿಗೆ ಅಗತ್ಯವಾದ ಪೋಷಕಾಂಶಗಳಾಗಿವೆ. ಆದರೆ ರಕ್ತಹೀನತೆಯನ್ನು ತಡೆಯಲು ಮಖಾನವೇ ಸಾಕು ಎಂದು ಹೇಳಲು ಸಾಧ್ಯವಿಲ್ಲ.&lt;/p&gt;&lt;p&gt;ರಕ್ತಹೀನತೆ ಸಾಮಾನ್ಯವಾಗಿ ಕಬ್ಬಿಣ, ವಿಟಮಿನ್ B12 ಅಥವಾ ಫೋಲೇಟ್ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗಬಹುದು. ಹೀಗಾಗಿ ಹಿಮೋಗ್ಲೋಬಿನ್ ಕಡಿಮೆಯಿದ್ದರೆ ವೈದ್ಯರ ಸಲಹೆಯಂತೆ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಬೇಕು.&lt;/p&gt;&lt;p&gt;ಮಖಾನ ಸೇವಿಸುವ ಸರಿಯಾದ ವಿಧಾನ ಯಾವುದು?&lt;/p&gt;&lt;p&gt;ಮಖಾನವನ್ನು ಆರೋಗ್ಯಕರವಾಗಿ ಸೇವಿಸಲು ಮನೆಯಲ್ಲೇ ಸ್ವಲ್ಪ ತುಪ್ಪ ಅಥವಾ ಸೂಕ್ತ ಪ್ರಮಾಣದ ಎಣ್ಣೆಯಲ್ಲಿ ಹುರಿದುಕೊಳ್ಳಬಹುದು. ಹೆಚ್ಚು ಉಪ್ಪು, ಬೆಣ್ಣೆ ಅಥವಾ ಮಸಾಲೆ ಸೇರಿಸುವುದನ್ನು ತಪ್ಪಿಸುವುದು ಉತ್ತಮ.&lt;/p&gt;&lt;p&gt;ಮಾರುಕಟ್ಟೆಯಲ್ಲಿ ದೊರೆಯುವ ಫ್ಲೇವರ್ಡ್ ಮಖಾನ ಖರೀದಿಸುವಾಗ ಪ್ಯಾಕೆಟ್&zwnj;ನಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಪರಿಶೀಲಿಸಿ. ಹೆಚ್ಚು ಉಪ್ಪು, ಸಕ್ಕರೆ ಅಥವಾ ಅನಗತ್ಯ ಕೊಬ್ಬು ಹೊಂದಿರುವ ಉತ್ಪನ್ನಗಳ ಬದಲು ಸರಳವಾದ ಮಖಾನವನ್ನು ಆಯ್ಕೆ ಮಾಡಬಹುದು.&lt;/p&gt;&lt;p&gt;ಥೈರಾಯ್ಡ್ ಮಾತ್ರೆ ತೆಗೆದುಕೊಳ್ಳುವವರು ಗಮನಿಸಿ&lt;/p&gt;&lt;p&gt;ಥೈರಾಯ್ಡ್ ಔಷಧಿ ಸೇವಿಸುವವರು ಆಹಾರದ ಸಮಯದ ಬಗ್ಗೆ ವಿಶೇಷ ಗಮನ ನೀಡಬೇಕು. ಲೆವೊಥೈರಾಕ್ಸಿನ್&zwnj;ನಂತಹ ಔಷಧಿಗಳನ್ನು ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ ಮತ್ತು ನಂತರ ಆಹಾರ ಸೇವಿಸಲು ನಿರ್ದಿಷ್ಟ ಸಮಯದ ಅಂತರ ಇರಬಹುದು. ಆದ್ದರಿಂದ ಮಾತ್ರೆ ತೆಗೆದುಕೊಂಡ ತಕ್ಷಣ ಮಖಾನ ಸೇರಿದಂತೆ ಯಾವುದೇ ಆಹಾರ ಸೇವಿಸುವ ಮೊದಲು ವೈದ್ಯರು ಅಥವಾ ಔಷಧಿಯ ಸೂಚನೆಯಲ್ಲಿ ನೀಡಿರುವ ನಿಯಮವನ್ನು ಪಾಲಿಸಿ.&lt;/p&gt;&lt;p&gt;ಒಟ್ಟಿನಲ್ಲಿ, ಮಖಾನವನ್ನು ಥೈರಾಯ್ಡ್&zwnj;ಗೆ ಔಷಧಿ ಅಥವಾ ನೇರ ಚಿಕಿತ್ಸೆಯಂತೆ ನೋಡಬಾರದು. ಬದಲಾಗಿ, ಕಡಿಮೆ ಎಣ್ಣೆಯಲ್ಲಿ ತಯಾರಿಸಿದ ಮಖಾನವನ್ನು ಸಮತೋಲಿತ ಆಹಾರದ ಒಂದು ಭಾಗವಾಗಿ ಬಳಸಬಹುದು. ಥೈರಾಯ್ಡ್ ಸಮಸ್ಯೆ ಇರುವವರು ನಿಯಮಿತವಾಗಿ ವೈದ್ಯರ ಸಲಹೆ ಪಡೆಯುವುದರ ಜೊತೆಗೆ, ತಮ್ಮ ಆಹಾರ, ವ್ಯಾಯಾಮ ಮತ್ತು ಔಷಧಿ ಸೇವನೆಯ ಸಮಯದ ಬಗ್ಗೆ ಶಿಸ್ತನ್ನು ಪಾಲಿಸುವುದು ಆರೋಗ್ಯ ನಿರ್ವಹಣೆಗೆ ಹೆಚ್ಚು ಮುಖ್ಯವಾಗಿದೆ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/consuming-makhana-every-day-is-considered-very-important-for-people-with-thyroid-problems/articleshow-ku8b8zs"/>
        </item>
        <item>
            <title><![CDATA[ಕೇವಲ ಒಂದು ಹಾಗಲಕಾಯಿ ಸಾಕು.. ಇಲಿ, ಜಿರಳೆ, ಹಲ್ಲಿ, ಸೊಳ್ಳೆಗಳ ಕಾಟಕ್ಕೆ ಶಾಶ್ವತ ಪರಿಹಾರ ಸಿಗುತ್ತೆ]]></title>
            <link>https://kannada.asianetnews.com/life/how-to-get-rid-of-rats-cockroaches-and-lizards-using-bitter-gourd/articleshow-ksnlb45</link>
            <guid isPermaLink="true">https://kannada.asianetnews.com/life/how-to-get-rid-of-rats-cockroaches-and-lizards-using-bitter-gourd/articleshow-ksnlb45</guid>
            <pubDate>Fri, 18 Sep 2026 16:00:25 +0530</pubDate>
            <description><![CDATA[&lt;p&gt;&lt;strong&gt;Rat killer home remedy:&lt;/strong&gt; ಮನೆಯಲ್ಲಿ ಕಾಡುವ ಇಲಿ, ಜಿರಳೆ, ಹಲ್ಲಿ ಮತ್ತು ಸೊಳ್ಳೆಗಳನ್ನು ಕೊಲ್ಲಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪಾಯಕಾರಿ ವಿಷಕಾರಿ ಕೆಮಿಕಲ್&zwnj;ಗಳು ಬೇಕಿಲ್ಲ! ನಮ್ಮ ಅಡುಗೆಮನೆಯಲ್ಲಿರುವ ಸಾಮಾನ್ಯ ಹಾಗಲಕಾಯಿ ಸಾಕು. ಇದನ್ನು ಬಳಸಿ ಕೀಟಗಳನ್ನು ಮನೆಯಿಂದ ಶಾಶ್ವತವಾಗಿ ಓಡಿಸುವುದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jvc59s9yh9mxw38fzhf7ve4s,imgname-uses-of-bitter-gourd-peel-3-1747386164542.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ&lt;/strong&gt;ನೆಯಲ್ಲಿ ಇಲಿ, ಜಿರಳೆ, ಹಲ್ಲಿ ಮತ್ತು ಸೊಳ್ಳೆಗಳ ಕಾಟ ಶುರುವಾದರೆ ಸಾಕು, ಮನೆಯ ನೆಮ್ಮದಿಯೇ ಹಾಳಾಗುತ್ತದೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಿಂದ ತರುವ ವಿಷಕಾರಿ ಕೀಟನಾಶಕಗಳು ಆರೋಗ್ಯಕ್ಕೆ ಮತ್ತು ಮಕ್ಕಳಿಗೆ ಅತ್ಯಂತ ಅಪಾಯಕಾರಿ. ಆದರೆ, ನಮಗೆ ಕಹಿಯೆನಿಸುವ ಹಾಗಲಕಾಯಿ ಈ ಕೀಟಗಳಿಗೂ ಕಿಂಚಿತ್ತೂ ಇಷ್ಟವಾಗುವುದಿಲ್ಲ! ಹಾಗಲಕಾಯಿಯ ಕಹಿ ಗುಣವನ್ನು ಬಳಸಿಕೊಂಡು ಯಾವುದೇ ವಿಷವಿಲ್ಲದೆ ಇಡೀ ಮನೆಯನ್ನು ಕೀಟಮುಕ್ತ ಮಾಡುವ 2 ಸರಳ ವಿಧಾನಗಳು ಇಲ್ಲಿವೆ ನೋಡಿ..&lt;/p&gt;&lt;h2&gt;&lt;strong&gt;ಹಾಗಲಕಾಯಿ ತಂದ ತಕ್ಷಣ ಇಷ್ಟು ಮಾಡಿ..&lt;/strong&gt;&lt;/h2&gt;&lt;p&gt;*ಒಂದು ತಾಜಾ ಹಾಗಲಕಾಯಿಯನ್ನು ತೆಗೆದುಕೊಂಡು, ಅದರ ಒಳಗಿನ ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.*ನೀರು ಹಾಕದೆ ಮಿಕ್ಸಿ ಜಾರ್&zwnj;ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.*ನಂತರ ಒಂದು ಜರಡಿಯಿಂದ ಸೋಸಿ, ಹಾಗಲಕಾಯಿಯ ತಿರುಳು (Pulp) ಮತ್ತು ಹಾಗಲಕಾಯಿಯ ರಸವನ್ನು (Juice) ಪ್ರತ್ಯೇಕವಾಗಿ ಬೇರ್ಪಡಿಸಿಟ್ಟುಕೊಳ್ಳಿ.&lt;/p&gt;&lt;h2&gt;&lt;strong&gt;ಪರಿಹಾರ 1: ಇಲಿ ಮತ್ತು ಜಿರಳೆಗಳನ್ನು ಓಡಿಸಲು 'ಸ್ಪೆಷಲ್ ಉಂಡೆಗಳು' (Pulp Balls)&lt;/strong&gt;&lt;/h2&gt;&lt;p&gt;&lt;strong&gt;ಇದಕ್ಕೆ ಬೇಕಾಗಿರುವುದು&lt;/strong&gt;ಬೇರ್ಪಡಿಸಿದ ಹಾಗಲಕಾಯಿ ತಿರುಳುತುರಿದ ಸೋಪು (ಬಟ್ಟೆ ಅಥವಾ ಪಾತ್ರೆ ತೊಳೆಯುವ ಸೋಪು) - 2 ಚಮಚಅಚ್ಚ ಖಾರದ ಪುಡಿ - 1.5 ಚಮಚಗೋಧಿ ಹಿಟ್ಟು - 3 ಚಮಚ&lt;/p&gt;&lt;h3&gt;&lt;strong&gt;ಏನು ಮಾಡಬೇಕು?&lt;/strong&gt;&lt;/h3&gt;&lt;p&gt;*ಹಾಗಲಕಾಯಿ ತಿರುಳಿಗೆ ತುರಿದ ಸೋಪು ಮತ್ತು ಖಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇಡಿ.*ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟಿಗೆ ಸ್ವಲ್ಪ ನೀರು ಮತ್ತು ಎಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.*ಈ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಮಧ್ಯದಲ್ಲಿ ಗುಳಿ ಮಾಡಿ ನಾವು ತಯಾರಿಸಿದ ಹಾಗಲಕಾಯಿ-ಸೋಪು-ಖಾರದ ಮಿಶ್ರಣವನ್ನು ಒಳಗೆ ಇಟ್ಟು ಮುಚ್ಚಿ (ಕಡುಬಿನಂತೆ ಅಥವಾ ಉಂಡೆಯಂತೆ ಕಟ್ಟಿ).&lt;strong&gt;ಬಳಸುವ ವಿಧಾನ: &lt;/strong&gt;ಇಲಿ ಮತ್ತು ಜಿರಳೆಗಳು ಹೆಚ್ಚಾಗಿ ಓಡಾಡುವ ಕಿಚನ್ ಸಿಂಕ್ ಕೆಳಗೆ, ಗ್ಯಾಸ್ ಸ್ಟೌವ್ ಹತ್ತಿರ ಮತ್ತು ಮನೆಯ ಮೂಲೆ ಮೂಲೆಗಳಲ್ಲಿ ಈ ಉಂಡೆಗಳನ್ನು ಇಡಿ.&lt;/p&gt;&lt;h3&gt;&lt;strong&gt;ಹೇಗೆ ಕೆಲಸ ಮಾಡುತ್ತದೆ?&lt;/strong&gt;&lt;/h3&gt;&lt;p&gt;ಗೋಧಿ ಹಿಟ್ಟಿನ ವಾಸನೆಗೆ ಆಕರ್ಷಿತವಾಗಿ ಬರುವ ಇಲಿ-ಜಿರಳೆಗಳು ಇದನ್ನು ತಿಂದ ತಕ್ಷಣ, ಒಳಗಿರುವ ಹಾಗಲಕಾಯಿಯ ಕಹಿ, ಖಾರ ಮತ್ತು ಸೋಪಿನ ಅಂಶವು ಅವುಗಳ ಜೀರ್ಣಾಂಗಕ್ಕೆ ಹಾನಿ ಮಾಡುತ್ತದೆ. ಇದರಿಂದ ತೀವ್ರ ಉರಿಯುಂಟಾಗಿ ಮನೆಯಿಂದ ಹೊರಗೆ ಓಡಿಹೋಗುತ್ತವೆ!&lt;/p&gt;&lt;p&gt;&lt;strong&gt;(ಎಚ್ಚರಿಕೆ: ಮಕ್ಕಳ ಕೈಗೆ ಸಿಗದಂತೆ ಇಡಿ)&lt;/strong&gt;&lt;/p&gt;&lt;h2&gt;&lt;strong&gt;ಪರಿಹಾರ 2: ಹಲ್ಲಿ, ಸೊಳ್ಳೆ ಮತ್ತು ನೊಣಗಳನ್ನು ಓಡಿಸಲು 'ಮ್ಯಾಜಿಕ್ ಸ್ಪ್ರೇ' (Liquid Spray)&lt;/strong&gt;&lt;/h2&gt;&lt;p&gt;&lt;strong&gt;ಇದಕ್ಕೆ ಬೇಕಾಗಿರುವುದು&lt;/strong&gt;ಹಾಗಲಕಾಯಿ ರಸ (ಹಿಂದೆ ತೆಗೆದಿಟ್ಟಿದ್ದು)ಶುಂಠಿ ರಸ - 2 ಚಮಚನೀರು - 1 ಲೋಟಸ್ಪ್ರೇ ಬಾಟಲ್&lt;/p&gt;&lt;h3&gt;&lt;strong&gt;ಏನು ಮಾಡಬೇಕು?&lt;/strong&gt;&lt;/h3&gt;&lt;p&gt;*ಹಾಗಲಕಾಯಿ ರಸಕ್ಕೆ ತುರಿದ ಶುಂಠಿಯ ರಸವನ್ನು ಹಿಂಡಿ ಹಾಕಿ.*ಇದಕ್ಕೆ ಒಂದು ಲೋಟ ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಗೆ ತುಂಬಿಸಿ.&lt;/p&gt;&lt;h3&gt;&lt;strong&gt;ಬಳಸುವ ವಿಧಾನ&lt;/strong&gt;&lt;/h3&gt;&lt;p&gt;&lt;strong&gt;ಹಲ್ಲಿಗಳ ಕಾಟಕ್ಕೆ: &lt;/strong&gt;ಹಲ್ಲಿಗಳು ಓಡಾಡುವ ಗೋಡೆ, ಕಿಟಕಿ, ಬಲ್ಬ್&zwnj;ಗಳ ಬಳಿ ಈ ಲಿಕ್ವಿಡ್ ಅನ್ನು ಸ್ಪ್ರೇ ಮಾಡಿ. ಇದರ ಘಾಟು ಮತ್ತು ಕಹಿ ವಾಸನೆಗೆ ಹಲ್ಲಿಗಳು ಆ ಜಾಗಕ್ಕೆ ಮತ್ತೆ ಸುಳಿಯುವುದಿಲ್ಲ.&lt;strong&gt;ಸೊಳ್ಳೆ ಮತ್ತು ನೊಣಗಳಿಗೆ: &lt;/strong&gt;ಸಂಜೆಯ ಸಮಯದಲ್ಲಿ ಬಾಗಿಲು, ಕಿಟಕಿಗಳ ಪರದೆಗಳ ಮೇಲೆ ಸ್ಪ್ರೇ ಮಾಡಿದರೆ ಸೊಳ್ಳೆ ಮತ್ತು ನೊಣಗಳ ಕಾಟ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/life/how-to-get-rid-of-rats-cockroaches-and-lizards-using-bitter-gourd/articleshow-ksnlb45"/>
        </item>
        <item>
            <title><![CDATA[ಹಾವುಗಳಿಗೆ ಹೂವಿನ ಕುಂಡ ಅಂದ್ರೆ ಏಕಿಷ್ಟ? ಗಾರ್ಡನ್‌ನಲ್ಲೇ ಮನೆ ಮಾಡುವ 5 ಅಪಾಯಕಾರಿ ಹಾವುಗಳಿವು!]]></title>
            <link>https://kannada.asianetnews.com/life/found-a-snake-around-your-flower-pots-these-5-species-could-be-visiting-suh/articleshow-olub3pe</link>
            <guid isPermaLink="true">https://kannada.asianetnews.com/life/found-a-snake-around-your-flower-pots-these-5-species-could-be-visiting-suh/articleshow-olub3pe</guid>
            <pubDate>Fri, 18 Sep 2026 13:24:01 +0530</pubDate>
            <description><![CDATA[&lt;p&gt;ಮನೆ ಮುಂದೆ ಹೂವಿನ ಗಿಡಗಳು, ಹಸಿರು ಗಿಡಮರಗಳು, ಕುಂಡಿಗಳ ಸಾಲು... ಇಂತಹ ಸುಂದರ ವಾತಾವರಣದ ನಡುವೆ ಏಕಾಏಕಿ ಹಾವು ಕಾಣಿಸಿಕೊಂಡರೆ ಸಹಜವಾಗಿಯೇ ಭಯವಾಗುತ್ತದೆ. ಆದರೆ, ಹೂವಿನ ಕುಂಡಿಗಳ ಬಳಿ ಹಾವುಗಳು ಕಾಣಿಸಿಕೊಳ್ಳುವುದಕ್ಕೆ ಗಿಡಗಳೇ ನೇರ ಕಾರಣವಾಗಬೇಕೆಂದಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2sqx4jm5127ywkyw2q95qr5,imgname-found-a-snake-around-your-flower-pots-these-5-species-could-be-visiting-1789717811795.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆ ಮುಂದೆ ಹೂವಿನ ಗಿಡಗಳು, ಹಸಿರು ಗಿಡಮರಗಳು, ಕುಂಡಿಗಳ ಸಾಲು... ಇಂತಹ ಸುಂದರ ವಾತಾವರಣದ ನಡುವೆ ಏಕಾಏಕಿ ಹಾವು ಕಾಣಿಸಿಕೊಂಡರೆ ಸಹಜವಾಗಿಯೇ ಭಯವಾಗುತ್ತದೆ. ಆದರೆ, ಹೂವಿನ ಕುಂಡಿಗಳ ಬಳಿ ಹಾವುಗಳು ಕಾಣಿಸಿಕೊಳ್ಳುವುದಕ್ಕೆ ಗಿಡಗಳೇ ನೇರ ಕಾರಣವಾಗಬೇಕೆಂದಿಲ್ಲ. ಕುಂಡಿಯಲ್ಲಿರುವ ತೇವಾಂಶ, ತಂಪಾದ ಮಣ್ಣು, ನೆರಳು ಮತ್ತು ಅಲ್ಲಿ ಬೆಳೆಯುವ ಸಣ್ಣ ಕೀಟಗಳು ಹಾಗೂ ಸರೀಸೃಪಗಳು ಹಾವುಗಳನ್ನು ಆಕರ್ಷಿಸಬಹುದು. ವಿಶೇಷವಾಗಿ ಸಡಿಲವಾದ ಮಣ್ಣು, ನಿರಂತರ ತೇವಾಂಶ ಮತ್ತು ಸಣ್ಣ ಜೀವಿಗಳಿಗೆ ಸೂಕ್ತ ವಾತಾವರಣವಿರುವ ಹೂವಿನ ಕುಂಡಿಗಳು ಚಿಕ್ಕ ಹಾವುಗಳಿಗೆ ಸಣ್ಣ ಪರಿಸರ ವ್ಯವಸ್ಥೆಯಂತಾಗಬಹುದು. ಹಾಗಾಗಿ ನಿಮ್ಮ ಮನೆಯ ಗಾರ್ಡನ್&zwnj;ನಲ್ಲೂ ಹಾವು ಕಾಣಿಸಿಕೊಂಡರೆ ಗಾಬರಿಯಾಗುವ ಮೊದಲು ಅದು ಯಾವ ಜಾತಿಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.&lt;/p&gt;&lt;h2&gt;1. ಬ್ರಾಹ್ಮಿಣಿ ಬ್ಲೈಂಡ್ ಸ್ನೇಕ್&lt;/h2&gt;&lt;p&gt;ಹೂವಿನ ಕುಂಡಿಗಳಲ್ಲಿ ಕಾಣಿಸಿಕೊಳ್ಳುವ ಹಾವುಗಳ ಪೈಕಿ ಬ್ರಾಹ್ಮಿಣಿ ಬ್ಲೈಂಡ್ ಸ್ನೇಕ್ ಪ್ರಮುಖವಾದದ್ದು. ಇದನ್ನು ಕೆಲವೊಮ್ಮೆ &lsquo;ಫ್ಲವರ್&zwnj;ಪಾಟ್ ಸ್ನೇಕ್&rsquo; ಎಂದೂ ಕರೆಯಲಾಗುತ್ತದೆ. ಇದು ತುಂಬಾ ಸಣ್ಣದಾಗಿದ್ದು, ಸಾಮಾನ್ಯವಾಗಿ ಸುಮಾರು 15 ಸೆಂಟಿಮೀಟರ್&zwnj;ಗಿಂತ ಹೆಚ್ಚು ಬೆಳೆಯುವುದಿಲ್ಲ. ಕಪ್ಪು ಅಥವಾ ಹೊಳೆಯುವ ದೇಹವಿರುವುದರಿಂದ ಹಲವರು ಇದನ್ನು ಎರೆಹುಳವೆಂದು ತಪ್ಪಾಗಿ ಭಾವಿಸುತ್ತಾರೆ. ಸಡಿಲವಾದ ತೇವಾಂಶಭರಿತ ಮಣ್ಣಿನಲ್ಲಿ ಬಿಲ ಮಾಡಿಕೊಳ್ಳುವ ಈ ಹಾವು ಇರುವೆ ಮತ್ತು ಗೆದ್ದಲುಗಳ ಮೊಟ್ಟೆ ಹಾಗೂ ಲಾರ್ವಾಗಳನ್ನು ಆಹಾರವಾಗಿ ಸೇವಿಸುತ್ತದೆ. ಮುಖ್ಯವಾಗಿ ಇದು ವಿಷರಹಿತ ಹಾವು.&lt;/p&gt;&lt;h2&gt;2. ಕಾಮನ್ ವುಲ್ಫ್ ಸ್ನೇಕ್&lt;/h2&gt;&lt;p&gt;ಮನೆಗಳ ಗಾರ್ಡನ್&zwnj;ಗಳು ಹಾಗೂ ಹೂವಿನ ಕುಂಡಿಗಳ ಸುತ್ತ ಕಾಣಿಸಿಕೊಳ್ಳುವ ಮತ್ತೊಂದು ಹಾವು ಕಾಮನ್ ವುಲ್ಫ್ ಸ್ನೇಕ್. ಕಂದು ಅಥವಾ ಬೂದು ಬಣ್ಣದ ದೇಹದ ಮೇಲೆ ತಿಳಿ ಬಣ್ಣದ ಪಟ್ಟೆಗಳಿರುವ ಈ ಹಾವನ್ನು ಕೆಲವೊಮ್ಮೆ ಕಾಳಿಂಗ ಸರ್ಪದ ಮರಿಯೆಂದು ತಪ್ಪಾಗಿ ಗುರುತಿಸಲಾಗುತ್ತದೆ. ಇದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡುತ್ತದೆ. ಆದರೆ ಕಾಮನ್ ವುಲ್ಫ್ ಸ್ನೇಕ್ ವಿಷರಹಿತವಾಗಿದ್ದು, ಹಲ್ಲಿಗಳು, ಗೆಕ್ಕೊಗಳು ಸೇರಿದಂತೆ ಸಣ್ಣ ಸರೀಸೃಪಗಳನ್ನು ಬೇಟೆಯಾಡುತ್ತದೆ. ಹಗಲಿನಲ್ಲಿ ತಂಪಾದ, ನೆರಳಿನ ಸ್ಥಳಗಳಲ್ಲಿ, ವಿಶೇಷವಾಗಿ ಕುಂಡಿಗಳ ಕೆಳಗೆ ಅಥವಾ ದಟ್ಟವಾದ ಗಿಡಗಳ ನಡುವೆ ಅಡಗಿರುತ್ತದೆ.&lt;/p&gt;&lt;h2&gt;3. ಕಾಮನ್ ವೈನ್ ಸ್ನೇಕ್&lt;/h2&gt;&lt;p&gt;ಹಸಿರು ಬಣ್ಣದ ತೆಳ್ಳಗಿನ ದೇಹ ಹಾಗೂ ಚೂಪಾದ ಮೂಗಿನ ಕಾರಣಕ್ಕೆ ವೈನ್ ಸ್ನೇಕ್ ಅನ್ನು ಸುಲಭವಾಗಿ ಗುರುತಿಸಬಹುದು. ಹೆಚ್ಚಾಗಿ ಎತ್ತರಕ್ಕೆ ಬೆಳೆದಿರುವ ಗಿಡಗಳು ಅಥವಾ ಬಳ್ಳಿಗಳ ಮೇಲೆ ಇದು ಕಾಣಿಸಿಕೊಳ್ಳುತ್ತದೆ. ಗಿಡಗಳ ನಡುವೆ ತನ್ನ ಬಣ್ಣವನ್ನು ಮರೆಮಾಚಿಕೊಂಡು ಸಣ್ಣ ಹಲ್ಲಿಗಳು ಹಾಗೂ ಕಪ್ಪೆಗಳನ್ನು ಬೇಟೆಯಾಡುತ್ತದೆ. ಇದು ತಾಂತ್ರಿಕವಾಗಿ ಸ್ವಲ್ಪ ವಿಷ ಹೊಂದಿರುವ ಹಾವಾದರೂ, ಮನುಷ್ಯರಿಗೆ ಸಾಮಾನ್ಯವಾಗಿ ಕಡಿಮೆ ಅಪಾಯಕಾರಿಯಾಗಿದೆ ಎಂದು ವರದಿ ವಿವರಿಸುತ್ತದೆ. ಇದರ ಹಲ್ಲುಗಳು ಬಾಯಿಯ ಹಿಂಭಾಗದಲ್ಲಿರುವುದರಿಂದ ಮನುಷ್ಯನಿಗೆ ಪರಿಣಾಮಕಾರಿ ಕಚ್ಚು ನೀಡುವುದು ಕಷ್ಟ. ಆದರೂ ಯಾವುದೇ ಹಾವನ್ನೂ ಕೈಯಿಂದ ಹಿಡಿಯುವುದು ಸುರಕ್ಷಿತವಲ್ಲ.&lt;/p&gt;&lt;h2&gt;4. ಚೆಕ್ಕರ್ಡ್ ಕೀಲ್&zwnj;ಬ್ಯಾಕ್&lt;/h2&gt;&lt;p&gt;ನಿರಂತರವಾಗಿ ನೀರು ಹಾಕುವ ಹೂವಿನ ಕುಂಡಿಗಳು, ಹತ್ತಿರದ ಚರಂಡಿ ಅಥವಾ ಸಣ್ಣ ನೀರಿನ ಪ್ರದೇಶಗಳಿರುವ ಗಾರ್ಡನ್&zwnj;ಗಳಲ್ಲಿ ಚೆಕ್ಕರ್ಡ್ ಕೀಲ್&zwnj;ಬ್ಯಾಕ್ ಕಾಣಿಸಿಕೊಳ್ಳಬಹುದು. ದೇಹದ ಮೇಲಿನ ಚೆಕರ್&zwnj;ಬೋರ್ಡ್ ರೀತಿಯ ವಿನ್ಯಾಸದಿಂದ ಇದನ್ನು ಗುರುತಿಸಬಹುದು. ತೇವಾಂಶ ಇರುವ ಪ್ರದೇಶಗಳನ್ನು ಇಷ್ಟಪಡುವ ಈ ಹಾವು ಕಪ್ಪೆಗಳು, ಗೊದಮೊಟ್ಟೆಗಳು ಹಾಗೂ ಸಣ್ಣ ಮೀನುಗಳನ್ನು ಆಹಾರವಾಗಿ ಸೇವಿಸುತ್ತದೆ. ಇದು ವಿಷರಹಿತ ಹಾವಾಗಿದ್ದರೂ, ಹೆದರಿದಾಗ ಕುತ್ತಿಗೆಯನ್ನು ಅಗಲಿಸಿ ಜೋರಾಗಿ ಹಿಸ್ ಮಾಡುವುದರಿಂದ ನಾಗರಹಾವಿನಂತೆ ಕಾಣಿಸಿಕೊಳ್ಳಬಹುದು. ಇದರಿಂದ ಜನರು ತಪ್ಪಾಗಿ ಗುರುತಿಸುವ ಸಾಧ್ಯತೆಯಿದೆ.&lt;/p&gt;&lt;h2&gt;5. ಇಂಡಿಯನ್ ರ್ಯಾಟ್ ಸ್ನೇಕ್&lt;/h2&gt;&lt;p&gt;ದೊಡ್ಡ ಗಾರ್ಡನ್&zwnj;ಗಳು, ಖಾಲಿ ಜಾಗ ಅಥವಾ ಪೊದೆಗಳಿಂದ ಕೂಡಿದ ಪ್ರದೇಶಗಳ ಪಕ್ಕದಲ್ಲಿರುವ ಮನೆಗಳಲ್ಲಿ ಇಂಡಿಯನ್ ರ್ಯಾಟ್ ಸ್ನೇಕ್, ಅಂದರೆ ಧಾಮನ್, ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ಇತರ ಹಾವುಗಳಿಗಿಂತ ದೊಡ್ಡದಾಗಿದ್ದು ವೇಗವಾಗಿ ಚಲಿಸುತ್ತದೆ. ಸಾಮಾನ್ಯವಾಗಿ ಒಂದೇ ಹೂವಿನ ಕುಂಡಿಯ ಬಳಿ ಉಳಿಯುವುದಿಲ್ಲ. ಬದಲಾಗಿ ಇಲಿಗಳು, ಹಲ್ಲಿಗಳು ಮತ್ತು ಪಕ್ಷಿಗಳಂತಹ ಆಹಾರವನ್ನು ಹುಡುಕುತ್ತಾ ಆ ಪ್ರದೇಶದಲ್ಲಿ ಸಂಚರಿಸಬಹುದು. ಇಂಡಿಯನ್ ರ್ಯಾಟ್ ಸ್ನೇಕ್ ಕೂಡ ವಿಷರಹಿತ ಹಾವಾಗಿದೆ.&lt;/p&gt;&lt;h2&gt;ಗಾರ್ಡನ್&zwnj;ನಲ್ಲಿ ಹಾವು ಕಂಡರೆ ಏನು ಮಾಡಬೇಕು?&lt;/h2&gt;&lt;p&gt;ಹಾವು ಕಂಡ ತಕ್ಷಣ ಗಾಬರಿಯಿಂದ ಅದನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ. ಅದು ವಿಷರಹಿತ ಹಾವೆಂದು ನಿಮಗೆ ಖಚಿತವಾಗಿದ್ದರೂ ನೇರವಾಗಿ ಕೈ ಹಾಕುವುದು ಸುರಕ್ಷಿತವಲ್ಲ. ಹಾವಿಗೆ ಸ್ವಲ್ಪ ಜಾಗ ನೀಡಿ. ಗುರುತಿಸಲು ಸಾಧ್ಯವಾಗದಿದ್ದರೆ ಸ್ಥಳೀಯ ಸ್ನೇಕ್ ರೆಸ್ಕ್ಯೂ ತಂಡ ಅಥವಾ ವನ್ಯಜೀವಿ ಸಹಾಯವಾಣಿಯನ್ನು ಸಂಪರ್ಕಿಸುವುದು ಉತ್ತಮ. ಗಾರ್ಡನ್&zwnj;ನಲ್ಲಿ ಕೆಲಸ ಮಾಡುವಾಗ ಕೈಗವಸು ಧರಿಸುವುದು, ಹೂವಿನ ಕುಂಡಿಯನ್ನು ಎತ್ತುವ ಮೊದಲು ಅದರ ಕೆಳಭಾಗವನ್ನು ಪರಿಶೀಲಿಸುವುದು ಮತ್ತು ಗಿಡಗಳನ್ನು ಸ್ಥಳಾಂತರಿಸುವಾಗ ಎಚ್ಚರಿಕೆ ವಹಿಸುವುದು ಕೂಡ ಸಹಾಯ ಮಾಡುತ್ತದೆ.&lt;/p&gt;]]></content:encoded>
            <category>women</category>
            <dc:creator>Sushma Hegde</dc:creator>
            <atom:link href="https://kannada.asianetnews.com/life/found-a-snake-around-your-flower-pots-these-5-species-could-be-visiting-suh/articleshow-olub3pe"/>
        </item>
        <item>
            <title><![CDATA[Coin Earrings: ಉದ್ದ ಕೂದಲಿನ ಬ್ಯೂಟಿ ಮತ್ತಷ್ಟು ಹೆಚ್ಚಿಸೋ ಈ 6 ಕಾಯಿನ್ ಇಯರಿಂಗ್ಸ್ ನೋಡಿದ್ರಾ?]]></title>
            <link>https://kannada.asianetnews.com/webstories/fashion/best-coin-earrings-for-long-hair-professional-look-gvd-mmetczg</link>
            <guid isPermaLink="true">https://kannada.asianetnews.com/webstories/fashion/best-coin-earrings-for-long-hair-professional-look-gvd-mmetczg</guid>
            <pubDate>Fri, 18 Sep 2026 09:15:54 +0530</pubDate>
            <description><![CDATA[&lt;p&gt;ಉದ್ದನೆಯ ಕೂದಲಿಗೆ ಒಪ್ಪುವ ಗೋಲ್ಡ್ ಕಾಯಿನ್ ಟಾಸೆಲ್, ಪರ್ಲ್ ಕಾಯಿನ್ ಸ್ಟಡ್ ಹಾಗೂ ಫ್ಲೋರಲ್ ಡಿಸೈನ್ ಸಿಲ್ವರ್ ಇಯರಿಂಗ್ಸ್ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkp2z6n1z46p99e7m5gssrvv,imgname-latest-coin-earrings-designs-v-1773489068705.jpg" type="image/jpeg" height="390" width="690"/>
            <category>women</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/best-coin-earrings-for-long-hair-professional-look-gvd-mmetczg"/>
        </item>
        <item>
            <title><![CDATA[ಅರಿಶಿಣದ  ಸಂಪೂರ್ಣ ಲಾಭ ಪಡೆಯಬೇಕೆಂದ್ರೆ ಈ ತಪ್ಪು ಎಂದಿಗೂ ಮಾಡಬೇಡಿ: 90% ಜನರಿಗೆ ತಿಳಿಯದ ರಹಸ್ಯವಿದು]]></title>
            <link>https://kannada.asianetnews.com/gallery/health-life/turmeric-is-100-percent-beneficial-only-if-consumed-with-black-pepper-suc-a69kwrx</link>
            <guid isPermaLink="true">https://kannada.asianetnews.com/gallery/health-life/turmeric-is-100-percent-beneficial-only-if-consumed-with-black-pepper-suc-a69kwrx</guid>
            <pubDate>Thu, 17 Sep 2026 19:20:26 +0530</pubDate>
            <description><![CDATA[ಅರಿಶಿಣವು ಆರೋಗ್ಯ, ಸೌಂದರ್ಯ ಮತ್ತು ಕೀಟನಾಶಕವಾಗಿ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೇವಲ ಅರಿಶಿಣವನ್ನು ಮಾತ್ರ ಬಳಸಿದರೆ ಅದರ ಸಂಪೂರ್ಣ ಲಾಭ ದೇಹಕ್ಕೆ ಸಿಗುವುದಿಲ್ಲ. ತಜ್ಞರ ಪ್ರಕಾರ, ಇದರ 100% ಪ್ರಯೋಜನ ಪಡೆಯಲು ಕಾಳುಮೆಣಸಿನ ಪುಡಿಯೊಂದಿಗೆ ಬೆರೆಸಿ ಬಳಸಬೇಕು.]]></description>
            <media:content url="https://static.asianetnews.com/images/w-1280,h-720,format-jpg,imgid-01m2qsv6e3b6z22eymk4qk929b,imgname-turmeric-and-black-pepper-1789652736451.jpg" type="image/jpeg" height="390" width="690"/>
            <content:encoded><![CDATA[ಅರಿಶಿಣವು ಆರೋಗ್ಯ, ಸೌಂದರ್ಯ ಮತ್ತು ಕೀಟನಾಶಕವಾಗಿ ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೇವಲ ಅರಿಶಿಣವನ್ನು ಮಾತ್ರ ಬಳಸಿದರೆ ಅದರ ಸಂಪೂರ್ಣ ಲಾಭ ದೇಹಕ್ಕೆ ಸಿಗುವುದಿಲ್ಲ. ತಜ್ಞರ ಪ್ರಕಾರ, ಇದರ 100% ಪ್ರಯೋಜನ ಪಡೆಯಲು ಕಾಳುಮೆಣಸಿನ ಪುಡಿಯೊಂದಿಗೆ ಬೆರೆಸಿ ಬಳಸಬೇಕು.&lt;img&gt;&lt;p&gt;ಭಾರತೀಯ ಅಡುಗೆ ಮನೆಯಲ್ಲಿ ಅರಿಶಿಣ ಪುಡಿಗೆ ವಿಶೇಷ ಸ್ಥಾನ ಇದ್ದೇ ಇದೆ. ಅರಿಶಿಣ ಹಿಂದೂ ಸಂಪ್ರದಾಯಗಳಲ್ಲಿ ಪೂಜೆಗಳಲ್ಲಿಯೂ ಪ್ರಸಿದ್ಧ ಸ್ಥಾನ ಪಡೆದಿರುವುದಕ್ಕೆ ಕಾರಣ, ಅದರ ಆರೋಗ್ಯವರ್ಧಕ ಗುಣಗಳು. ಅರಿಶಿಣದ ಸೇವನೆಯಿಂದ ನೂರೆಂಟು ಪ್ರಯೋಜನಗಳು ಇರುವ ಕಾರಣದಿಂದಲೇ ಅದಕ್ಕೆ ಅಷ್ಟು ಮಹತ್ವ ಇದೆ.&lt;/p&gt;&lt;img&gt;&lt;p&gt;ಅರಿಶಿಣಕ್ಕೆ ವಿಶೇಷವಾಗಿ ನಂಜುನಿರೋಧಕ ಗುಣ ಇರುವ ಕಾರಣದಿಂದ ಇದು ಅಡುಗೆಗೆ ಆಗಲಿ, ಔಷಧಿಯ ಬಳಕೆಗೆ ಆಗಲಿ, ಸೌಂದರ್ಯ ವರ್ಧಕಕ್ಕೆ ಆಗಲಿ ಎಲ್ಲಾದಕ್ಕೂ ದಿವ್ಯ ಔಷಧಿಯಾಗಿ ಬಳಕೆಯಾಗುತ್ತಿದೆ. ಇದು ಆಹಾರಗಳಿಗೆ ಉತ್ತಮವಾದ ಬಣ್ಣವನ್ನು ನೀಡುವುದಲ್ಲದೇ, ಆರೋಗ್ಯವನ್ನೂ ಕಾಪಾಡುತ್ತದೆ.&lt;/p&gt;&lt;img&gt;&lt;p&gt;ಅರಿಶಿಣವು, ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಮುಖ್ಯವಾಗಿ ಅರಿಶಿಣವು ಜ್ವರ ಅಥವಾ ಶೀತ ಜ್ವರಕ್ಕೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಅರಿಶಿಣವನ್ನು ನಮ್ಮ ಹಿರಿಯರು ಗಾಯಗಳಿಂದ ಉಂಟಾಗುತ್ತಿದ್ದ, ರಕ್ತ ಸ್ರವಿಕೆಯನ್ನು ತಡೆಗಟ್ಟಲು ಹಾಗು ಸೋಂಕು ರಹಿತವಾಗಿಸಲು ಬಳಸುತ್ತಿದ್ದರು. ಅರಿಶಿಣವು ಅದರ ಗುಣಪಡಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ.&lt;/p&gt;&lt;img&gt;&lt;p&gt;ಇರುವೆ, ಜಿರಲೆ ಸೇರಿದಂತೆ ಹಲವು ಕೀಟಗಳ ಹಾವಳಿಯಿಂದ ರಕ್ಷಣೆಗೂ ಅರಿಶಿಣ ಪ್ರಯೋಜನಕಾರಿಯಾಗಿದೆ. ಸಣ್ಣದಾದ ಸ್ಪ್ರೇ ಬಾಟಲಿಯಲ್ಲಿ ಒಂದು ಚಮಚ ಅರಿಶಿಣ ಬೆರಸಿದ ನೀರನ್ನು ನೇರವಾಗಿ ಸಸ್ಯಗಳ ಮೇಲೆ ಸಿಂಪಡಿಸಿ. ಕೀಟಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಈ ಕಾರ್ಯವನ್ನು ಮೂರರಿಂದ ನಾಲ್ಕು ದಿನಗಳವರೆಗೆ ಪುನರಾವರ್ತಿಸಿದರೆ ಸಸ್ಯಗಳನ್ನು ಬಾಧಿಸುವ ಕೀಟಗಳು ನಾಶವಾಗುತ್ತವೆ.&lt;/p&gt;&lt;img&gt;&lt;p&gt;ಇವೆಲ್ಲಾ ಸರಿ. ಆದರೆ ನೀವು ಅರಿಶಿಣವನ್ನು ಪ್ರತಿನಿತ್ಯ ಸೇವಿಸುತ್ತಿದ್ದರೂ ಇದರ ಪ್ರಯೋಜನ ನಿಮಗೆ 100% ಸಿಕ್ತಿಲ್ಲ ಎನ್ನೋದು ಗೊತ್ತಿದ್ಯಾ? ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ಅರಿಶಿಣವನ್ನು ಬಹುತೇಕ ಮಂದಿ ಸರಿಯಾದ ಪ್ರಮಾಣದಲ್ಲಿ ಸೇವಿಸುತ್ತಲೇ ಇಲ್ಲ. ಆದ್ದರಿಂದ ಇದರ ಪ್ರಯೋಜನ ನಿಮಗೆ ಸಿಗುತ್ತಿಲ್ಲ.&lt;/p&gt;&lt;img&gt;&lt;p&gt;ಇದಕ್ಕೆ ಕಾರಣ, ಯಾವಾಗಲೂ ಅರಿಶಿಣದ ಪುಡಿ ಬಳಸುವಾಗ, ಅದೊಂದನ್ನೇ ಬಳಸಬಾರದು. ಹೀಗೆ ಒಂದನ್ನೇ ಬಳಸಿದರೆ, ಅದು ದೇಹದ ಮೇಲೆ ನಿಮಗೆ ಅಗತ್ಯ ಇರುವಷ್ಟು ಪರಿಣಾಮ ಬೀರುವುದೇ ಇಲ್ಲ ಎನ್ನುತ್ತಾರೆ ತಜ್ಞರು. ಆದ್ದರಿಂದ ನೀವು ಅರಿಶಿಣ ಬಳಸುವಾಗ ಅದರ ಜೊತೆಗೆ ಕಾಳುಮೆಣಸಿನ ಪುಡಿಯನ್ನು ಮಿಕ್ಸ್​ ಮಾಡಿಯೇ ಬಳಸಬೇಕು ಎನ್ನುವುದು ಅವರ ಮಾತು. ಹೀಗೆ ಅರಿಶಿಣದ ಪುಡಿ ಮತ್ತು ಕಾಳು ಮೆಣಸಿನ ಪೌಡರ್​ ಮಿಕ್ಸ್​ ಆದರೆ ಮಾತ್ರ ಅರಿಶಿಣದ ಪುಡಿಯ 100% ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/health-life/turmeric-is-100-percent-beneficial-only-if-consumed-with-black-pepper-suc-a69kwrx"/>
        </item>
        <item>
            <title><![CDATA[ಮ್ಯಾಚ್​ಬಾಕ್ಸ್​ಗೆ ನೀರು ತಗುಲಿ ಬೆಂಕಿ ಹತ್ತುತ್ತಿಲ್ವಾ? ಈ ಟಿಪ್ಸ್​ ​ ಫಾಲೋ ಮಾಡಿ 2 ನಿಮಿಷದಲ್ಲಿ ಮ್ಯಾಜಿಕ್​ ನೋಡಿ]]></title>
            <link>https://kannada.asianetnews.com/gallery/kitchen/can-a-matchbox-cannot-catch-fire-if-it-gets-wet-follow-this-easy-hacks-suc-9ykl8zc</link>
            <guid isPermaLink="true">https://kannada.asianetnews.com/gallery/kitchen/can-a-matchbox-cannot-catch-fire-if-it-gets-wet-follow-this-easy-hacks-suc-9ykl8zc</guid>
            <pubDate>Thu, 17 Sep 2026 19:01:56 +0530</pubDate>
            <description><![CDATA[ಮಳೆಗಾಲದಲ್ಲಿ ಅಥವಾ ನೀರು ತಾಗಿ ಬೆಂಕಿ ಪೊಟ್ಟಣ ತಂಪಾದಾಗ ಕಡ್ಡಿ ಗೀರಿದರೂ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಇಂತಹ ಸಮಯದಲ್ಲಿ ಬೆಂಕಿ ಪೊಟ್ಟಣದ ಎರಡೂ ಬದಿಗಳಿಗೆ ಪೌಡರ್ ಸವರಿದರೆ ಅದು ತೇವವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರಿಂದ ಸುಲಭವಾಗಿ ಬೆಂಕಿ ಕಡ್ಡಿ ಉರಿಯುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k47ss6gft1cp68kwwj3px6p7,imgname-girl-using-match-box-1756903545359.png" type="image/jpeg" height="390" width="690"/>
            <content:encoded><![CDATA[ಮಳೆಗಾಲದಲ್ಲಿ ಅಥವಾ ನೀರು ತಾಗಿ ಬೆಂಕಿ ಪೊಟ್ಟಣ ತಂಪಾದಾಗ ಕಡ್ಡಿ ಗೀರಿದರೂ ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಇಂತಹ ಸಮಯದಲ್ಲಿ ಬೆಂಕಿ ಪೊಟ್ಟಣದ ಎರಡೂ ಬದಿಗಳಿಗೆ ಪೌಡರ್ ಸವರಿದರೆ ಅದು ತೇವವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರಿಂದ ಸುಲಭವಾಗಿ ಬೆಂಕಿ ಕಡ್ಡಿ ಉರಿಯುತ್ತದೆ.&lt;img&gt;&lt;p&gt;ಮ್ಯಾಚ್​ಬಾಕ್ಸ್​ ಅಥವಾ ಬೆಂಕಿ ಪೊಟ್ಟಣ ಎಲ್ಲ ಮನೆಗಳಲ್ಲಿಯೂ ಬೇಕೇ ಬೇಕು. ಗ್ಯಾಸ್​​ ಇದ್ದ ಮನೆಗಳಲ್ಲಿ ಗ್ಯಾಸ್​ ಲೈಟರ್​ ಇದ್ದರೂ, ಮ್ಯಾಚ್​ಬಾಕ್ಸ್​ ಮಹತ್ವವೇನೂ ಕಡಿಮೆಯಾಗಿಲ್ಲ. ಗ್ಯಾಸ್​ ಹಚ್ಚಲು ಮಾತ್ರವಲ್ಲದೇ, ದೇವರ ಮನೆಯ ದೀಪ ಹಚ್ಚುವುದರಿಂದ ಹಿಡಿದು, ಕರೆಂಟ್​ ಹೋದಾಗ ಮೋಂಬತ್ತಿ ಹಚ್ಚುವವರೆಗೆ ಮ್ಯಾಚ್​ ಬಾಕ್ಸ್​ ಇರಲೇಬೇಕು.&lt;/p&gt;&lt;img&gt;&lt;p&gt;ಆದರೆ ಮಳೆಗಾಲದಲ್ಲಿ ಹೆಚ್ಚಾಗಿ ಮ್ಯಾಚ್​ಬಾಕ್ಸ್​ ತಂಪಾಗಿ ಕಡ್ಡಿ ಗೀರಿದಾಗ ಬೆಂಕಿ ಹೊತ್ತಿಕೊಳ್ಳುವುದೇ ಇಲ್ಲ. ಇದು ಮಳೆಗಾಲದ ಸಮಸ್ಯೆ ಅಲ್ಲ. ಕೆಲವೊಮ್ಮೆ ನೀರು ಚೆಲ್ಲಿಯೋ ಅಥವಾ ತಂಪಾದ ಪ್ರದೇಶದಲ್ಲಿ ಇಟ್ಟಾಗಲೋ ಬೆಂಕಿ ತಗಲುವುದೇ ಇಲ್ಲ.&lt;/p&gt;&lt;img&gt;&lt;p&gt;ಹೆಚ್ಚಾಗಿ ಮ್ಯಾಚ್​ಬಾಕ್ಸ್​ಗಳು ಒಂದೇ ಇರುವ ಕಾರಣದಿಂದ ಇಂಥ ಸಂದರ್ಭ ಬಂದಾಗ, ತುಂಬಾ ಸಮಸ್ಯೆಯಾಗುವುದು ಉಂಟು. ಬೆಂಕಿ ಪೊಟ್ಟಣದ ಎರಡೂ ಕಡೆಗಳನ್ನು ಉಜ್ಜಿ ಉಜ್ಜಿ ಕಡ್ಡಿ ಗೀರಿದರೂ ಬೆಂಕಿ ಬರದೇ ಎಷ್ಟೋ ಮಂದಿ ಪರದಾಡುವುದು ಇದೆ.&lt;/p&gt;&lt;img&gt;&lt;p&gt;ಇದಕ್ಕೆ ಸುಲಭದ ಉಪಾಯ ಒಂದಿದೆ. ಅದೇನೆಂದರೆ, ನೀರಿಗೆ ಬಿದ್ದ ಅಥವಾ ಇನ್ನಾವುದಾದರೂ ಕಾರಣಕ್ಕೆ ಬೆಂಕಿ ಪೊಟ್ಟಣವು ತಂಪಾಗಿದ್ದರೆ, ಎರಡೂ ಭಾಗಕ್ಕೆ ನೀವು ಬಳಸುವ ಯಾವುದಾದರೂ ಪೌಡರ್​ ಹಾಕಿ ಸವರಿ.&lt;/p&gt;&lt;img&gt;&lt;p&gt;ಹೀಗೆ ಸವರಿ ಕೆಲ ಹೊತ್ತು ಬಿಟ್ಟಾಗ ಪೌಡರ್​ ನೀರನ್ನು ಸಂಪೂರ್ಣವಾಗಿ ಹೀರಿಕೊಂಡಿರುತ್ತದೆ. ಆಗ ಸುಲಭದಲ್ಲಿ ಕಡ್ಡಿ ಗೀರಬಹುದು, ಆಗ ಸುಲಭದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/kitchen/can-a-matchbox-cannot-catch-fire-if-it-gets-wet-follow-this-easy-hacks-suc-9ykl8zc"/>
        </item>
        <item>
            <title><![CDATA[ಎರಡೇ ಎರಡು ಪದಾರ್ಥಗಳಿಂದ ಬಿಳಿಗೂದಲಿಗೆ ಶಾಶ್ವತ ಮುಕ್ತಿ: ಗುರೂಜಿ ಹೇಳಿಕೊಟ್ಟ ಟಿಪ್ಸ್​ ಕೇಳಿ]]></title>
            <link>https://kannada.asianetnews.com/life/get-rid-of-white-hairs-with-just-two-ingredients-what-are-the-tips-taught-by-guruji-suc/articleshow-u2g9fhb</link>
            <guid isPermaLink="true">https://kannada.asianetnews.com/life/get-rid-of-white-hairs-with-just-two-ingredients-what-are-the-tips-taught-by-guruji-suc/articleshow-u2g9fhb</guid>
            <pubDate>Thu, 17 Sep 2026 17:53:17 +0530</pubDate>
            <description><![CDATA[ರಾಸಾಯನಿಕ ಹೇರ್ ಡೈಗಳಿಂದ ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆದರೆ, ಸಂತ ಇಂದ್ರದೇವಜಿ ಮಹಾರಾಜ್ ಅವರು ಸೂಚಿಸಿರುವಂತೆ ಅಡುಗೆಮನೆಯಲ್ಲಿರುವ ಚಹಾ ಮತ್ತು ಕಾಫಿ ಪುಡಿಯನ್ನು ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಈ ವಿಧಾನದಿಂದ ಕನಿಷ್ಠ ಆರು ತಿಂಗಳವರೆಗೆ ಕೂದಲು ಬೆಳ್ಳಗಾಗುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qn2pt570ngaxhdear6jajq,imgname-white-hair-remedy-1789647739717.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಳಿಯ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಲಕ್ಷಾಂತರ ಮಂದಿ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿಕೂದಲು ಆಗುವುದು ಮಾಮೂಲು. ಅದಕ್ಕಾಗಿಯೇ ಹೇರ್&zwnj; ಡೈ ಎನ್ನುವುದು ಬಲು ದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿದೆ. ಹೇರ್​ ಕಲರ್​ನಿಂದ ಕ್ಯಾನ್ಸರ್​ ಬರುತ್ತಿವೆ. ಬ್ಲಡ್​ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ.&lt;/p&gt;&lt;h2&gt;&lt;strong&gt;ಫೇಕ್​ ವಿಡಿಯೋಸ್​&lt;/strong&gt;&lt;/h2&gt;&lt;p&gt;ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್​ಗಳು ಟಿಪ್ಸ್​ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್​ ಆಗಿರುತ್ತದೆ. ಒಂದಿಷ್ಟು ಲೈಕ್ಸ್​, ವ್ಯೂಸ್​​ಗೋಸ್ಕರ್​ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್​ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.&lt;/p&gt;&lt;p&gt;ಅದೇನೇ ಇದ್ದರೂ, ಬಿಳಿಗೂದಲು ಕಾಣಿಸುವುದು ಬಹುತೇಕ ಯಾರಿಗೂ ಇಷ್ಟವಾಗುವುದಿಲ್ಲ. ಇದು ಸಾಮಾನ್ಯ ಜನರ ಮಾತಾದರೆ, ಇನ್ನು ಸೆಲೆಬ್ರಿಟಿಗಳಿಗೆ ಅಂತೂ ಕಪ್ಪು ಕೂದಲು ಮಸ್ಟ್&zwnj;. ಒಂದೇ ಒಂದು ಬಿಳಿ ಕೂದಲು ಕಂಡರೂ, ಅವರ ಘನತೆಗೇ ಕುಂದು ಬರುತ್ತದೆ, ಬಣ್ಣದ ಲೋಕದಲ್ಲಿ ಬೇಡಿಕೆ ಕುಸಿಯುತ್ತದೆ ಎನ್ನುವ ಮಾತಿದೆ. ಇದೇ ಕಾರಣಕ್ಕೆ ಮುಖಕ್ಕೆ ಬಣ್ಣ ಬಳಿದುಕೊಳ್ಳಲು, ಮುಖವನ್ನು ಅಂದಗೊಳಿಸಲು ಹೇಗೆ ಕೆಜಿಗಟ್ಟಲೆ ಮೇಕಪ್&zwnj; ಮೊರೆ ಹೋಗುತ್ತಾರೆಯೋ, ಅದೇ ರೀತಿ ಕೂದಲನ್ನು ಸುಂದರಗೊಳಿಸಲೂ ಅಷ್ಟೇ ಸರ್ಕಸ್&zwnj; ಮಾಡುತ್ತಾರೆ.&lt;/p&gt;&lt;h3&gt;&lt;strong&gt;ನೀವು ಮಾಡಬೇಕಿರುವುದು ಇಷ್ಟು...&lt;/strong&gt;&lt;/h3&gt;&lt;p&gt;ಇದೀಗ ಅಡುಗೆ ಮನೆಯಲ್ಲಿಯೇ ಸಿಗುವ ಎರಡೇ ಎರಡು ಪದಾರ್ಥಗಳನ್ನು ಬಳಸಿ, ಕನಿಷ್ಠ ಆರು ತಿಂಗಳು ಕೂದಲು ಬೆಳ್ಳಗಾಗದೇ ಇರುವಂಥ ಟಿಪ್ಸ್​ ಒಂದನ್ನು ಸಂತ ಇಂದ್ರದೇವಜಿ ಮಹಾರಾಜ್​ ಅವರು ತಮ್ಮ santindradevjimaharaj ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ಅವರ ಪ್ರಕಾರ, ಕೆಫೆನ್​ ಅಂಶ ಹೆಚ್ಚಿಗೆ ಇದ್ದು ಕೂದಲನ್ನು ಬುಡಸಹಿತ ಸ್ಟ್ರಾಂಗ್​ ಮಾಡುವ ಚಹಾದ ಪುಡಿ ಹಾಗೂ ಕಾಫಿ ಪೌಡರ್​. ಎರಡೇ ಇದಕ್ಕೆ ಸಾಕು. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟು. ಎರಡು ಚಮಚ ಟೀ ಪೌಡರ್​ ತೆಗೆದುಕೊಂಡು ಅದನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ ಮಂದ ಉರಿಯಲ್ಲಿ ತುಂಬಾ ಹೊತ್ತು ಬೇಯಿಸಬೇಕು. ಅದು ಎಷ್ಟು ಎಂದರೆ, ನೀರು ಅರ್ಧಕ್ಕಿಂತ ಕಡಿಮೆ ಮಟ್ಟಕ್ಕೆ ಬರಬೇಕು. ಇದಾದ ಬಳಿಕ ಅದಕ್ಕೆ ಅರ್ಧ ಚಮಚ ಕಾಫಿ ಪೌಡರ್​ ಸೇರಿಸಬೇಕು. ಬಳಿಕ ಒಂದು ಹತ್ತಿಯ ಉಂಡೆಯ ಸಹಾಯದಿಂದ ಎಲ್ಲೆಲ್ಲಿ ಬಿಳಿಗೂದಲು ಇವೆಯೋ ಅಲ್ಲಿ ಹಚ್ಚಬೇಕು.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/life/get-rid-of-white-hairs-with-just-two-ingredients-what-are-the-tips-taught-by-guruji-suc/articleshow-u2g9fhb"/>
        </item>
        <item>
            <title><![CDATA[ಬೆಂಡೇಕಾಯಿ ಬೀಜದಿಂದ ಫಳಫಳ ಹೊಳೆದ ತ್ಚಚೆ: ಕೋರಿಯನ್​ ಬ್ಯೂಟಿಷಿಯನ್​ ಹೇಳಿಕೊಟ್ಟ ಟಿಪ್ಸ್​]]></title>
            <link>https://kannada.asianetnews.com/gallery/life/glowing-skin-with-okra-seeds-tips-from-a-korean-beautician-suc-g96x815</link>
            <guid isPermaLink="true">https://kannada.asianetnews.com/gallery/life/glowing-skin-with-okra-seeds-tips-from-a-korean-beautician-suc-g96x815</guid>
            <pubDate>Thu, 17 Sep 2026 17:32:03 +0530</pubDate>
            <description><![CDATA[ಬೆಂಡೇಕಾಯಿಯು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿಗೂ ಅತ್ಯಂತ ಉಪಯುಕ್ತವಾಗಿದೆ. ಕೊರಿಯನ್ ಬ್ಯೂಟಿಷಿಯನ್ ತಿಳಿಸಿರುವಂತೆ, ಬೆಂಡೇಕಾಯಿ ಬೀಜದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಇದು ರಕ್ತದ ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2qkrx996p2r0tpy2fvqandk,imgname-okra-beauty-01-1789646370089.jpg" type="image/jpeg" height="390" width="690"/>
            <content:encoded><![CDATA[ಬೆಂಡೇಕಾಯಿಯು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿಗೂ ಅತ್ಯಂತ ಉಪಯುಕ್ತವಾಗಿದೆ. ಕೊರಿಯನ್ ಬ್ಯೂಟಿಷಿಯನ್ ತಿಳಿಸಿರುವಂತೆ, ಬೆಂಡೇಕಾಯಿ ಬೀಜದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ಇದು ರಕ್ತದ ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.&lt;img&gt;&lt;p&gt;ಬೆಂಡೇಕಾಯಿಯಿಂದ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳು ಇವೆ. ಇವು ಲೋಳೆ ಲೋಳೆ ಎನ್ನಿಸಿದರೂ, ಇವುಗಳಿಂದ ಮಾಡುವ ಖಾದ್ಯಗಳು ಹಲವರಿಗೆ ಪ್ರಿಯವಾಗಿವೆ. ಬೆಂಡೇಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ1, ಮ್ಯಾಗ್ನೀಸಿಯಮ್, ಫೋಲೇಟ್ ಮತ್ತು ನಾರಿನಾಂಶ ಸಾಕಷ್ಟು ಪ್ರಮಾಣದಲ್ಲಿದೆ.&lt;/p&gt;&lt;img&gt;&lt;p&gt;ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.&lt;/p&gt;&lt;img&gt;&lt;p&gt;ಆದರೆ ಬೆಂಡೇಕಾಯಿಯಿಂದ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಬಹುದು ಎನ್ನೋದು ನಿಮಗೆ ಗೊತ್ತಾ? ಕೋರಿಯನ್​ ಯುವತಿಯರು ಫಳಫಳ ಹೊಳೆಯುವ ತ್ವಚೆಗೆ ಫೇಮಸ್​ ಆದವರು. ಇದೇ ಕಾರಣಕ್ಕೆ ಕೋರಿಯನ್​ ಬ್ಯೂಟಿ ಟಿಪ್ಸ್​ಗೆ ಅದರದ್ದೇ ಆದ ಮಹತ್ವವಿದೆ.&lt;/p&gt;&lt;img&gt;&lt;p&gt;ಇದೀಗ ಕೋರಿಯನ್​ ಬ್ಯೂಟಿಷಿಯನ್​ ಒಬ್ಬಾಕೆ ಬೆಂಡೇಕಾಯಿ ಬೀಜದಿಂದ ಬ್ಯೂಟಿ ಹೆಚ್ಚಿಸಿಕೊಳ್ಳುವ ಟಿಪ್ಸ್​ ಕೊಟ್ಟಿದ್ದಾಳೆ. ಮೊದಲಿಗೆ ಬೆಂಡೇಕಾಯಿಯನ್ನು ಸ್ಟೀಮ್​ನಲ್ಲಿ ಹಾಕಿ ಬೇಯಿಸಬೇಕು. ಬಳಿಕ ಅದರ ಎರಡೂ ತುದಿಗಳನ್ನು ಕತ್ತರಿಸಬೇಕು.&lt;/p&gt;&lt;img&gt;&lt;p&gt;ಇಷ್ಟಾದ ಬಳಿಕ ಮಧ್ಯೆ ಸೀಳಿದರೆ ಬೀಜ ಕಾಣಿಸುತ್ತದೆ. ಆ ಬೀಜವನ್ನು ತೆಗೆದು ಚಮಚದ ಸಹಾಯದಿಂದ ಸ್ಮ್ಯಾಷ್​ ಮಾಡಬೇಕು. ಕ್ವಾಲಿಟಿ ಹೆಚ್ಚಾಗಿದ್ದರೆ ಮಿಕ್ಸಿಯಲ್ಲಿ ಬೇಕಿದ್ದರೆ ರುಬ್ಬಿಕೊಳ್ಳಬಹುದು.&lt;/p&gt;&lt;img&gt;&lt;p&gt;ಬಳಿಕ ಈ ಪೇಸ್ಟ್​ ಅನ್ನು ಮುಖಕ್ಕೆ ಹಚ್ಚಬೇಕು. ಅದನ್ನು ಮುಖದ ಮೇಲೆ 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಪದೇ ಪದೇ ಮಾಡುತ್ತಿದ್ದರೆ ಮುಖದ ಕಾಂತಿ ಹೆಚ್ಚುತ್ತದೆ&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/glowing-skin-with-okra-seeds-tips-from-a-korean-beautician-suc-g96x815"/>
        </item>
        <item>
            <title><![CDATA[ಗ್ಯಾಸ್ ಮೇಲೆ ಕ್ಯಾಪ್ಸಿಕಂ ಸುಟ್ಟು ಮೊಸರು ಸೇರಿಸಿ ಮಾಡಿದ ಈ ಚಟ್ನಿ ರೊಟ್ಟಿ, ಚಪಾತಿ, ದೋಸೆ, ಇಡ್ಲಿಗೆ ಬೆಸ್ಟ್ ಕಾಂಬಿನೇಶನ್]]></title>
            <link>https://kannada.asianetnews.com/food/roasted-capsicum-curd-chutney-easy-creamy-and-smoky-chutney-recipe/articleshow-kob0oil</link>
            <guid isPermaLink="true">https://kannada.asianetnews.com/food/roasted-capsicum-curd-chutney-easy-creamy-and-smoky-chutney-recipe/articleshow-kob0oil</guid>
            <pubDate>Thu, 17 Sep 2026 17:28:51 +0530</pubDate>
            <description><![CDATA[&lt;p&gt;&lt;strong&gt;Easy chutney recipes kannada: &lt;/strong&gt;ದಿನನಿತ್ಯ ಮಾಡುವ ಚಟ್ನಿಗಳನ್ನು ತಿಂದು ಬೇಸರವಾಗಿದ್ದರೆ, ಹೋಟೆಲ್ ಶೈಲಿಯ ಡಿಫರೆಂಟ್ ರುಚಿ ನೀಡುವ 'ಕ್ಯಾಪ್ಸಿಕಂ ಮೊಸರು ಚಟ್ನಿ' ಒಮ್ಮೆ ಟ್ರೈ ಮಾಡಿ. ಗ್ಯಾಸ್ ಮೇಲೆ ಕ್ಯಾಪ್ಸಿಕಂ ಸುಟ್ಟು, ಮೊಸರಿನೊಂದಿಗೆ ಬೆರೆಸಿ ಮಾಡುವ ಈ ಕ್ರೀಮಿ ಚಟ್ನಿ ಚಪಾತಿ, ರೊಟ್ಟಿ ಮತ್ತು ಸ್ಯಾಂಡ್&zwnj;ವಿಚ್&zwnj;ಗೆ ಬೆಸ್ಟ್ ಕಾಂಬಿನೇಷನ್. ಮಾಡುವ ಸುಲಭ ವಿಧಾನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qkpdxjp14qv7fm9cz0z3y6,imgname-thumbnail---2026-09-17t171816.447-1789646288818.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಿನಾ&lt;/strong&gt; ಅದೇ ಟೊಮ್ಯಾಟೊ, ಕಾಯಿ ಚಟ್ನಿ ಅಥವಾ ಕಡಲೆಕಾಯಿ ಚಟ್ನಿ ತಿಂದು ಬೋರ್ ಆಗಿದ್ಯಾ? ಹಾಗಾದರೆ ಈ ಬಾರಿ ಕೊಂಚ ಡಿಫರೆಂಟ್ ಆಗಿ, ಅದ್ಭುತ ರುಚಿ ನೀಡುವ &lsquo;ಕ್ಯಾಪ್ಸಿಕಂ ಮೊಸರು ಚಟ್ನಿ&rsquo; (Roasted Capsicum Curd Chutney) ಟ್ರೈ ಮಾಡಿ ನೋಡಿ. ಅಡುಗೆ ಮಾಡಲು ಹೆಚ್ಚು ಸಮಯವಿಲ್ಲದಿದ್ದಾಗ ಕ್ಷಣಾರ್ಧದಲ್ಲಿ ಮಾಡಬಹುದಾದ ಅತ್ಯಂತ ರುಚಿಕರವಾದ ರೆಸಿಪಿ ಇದು.&lt;/p&gt;&lt;p&gt;ಕ್ಯಾಪ್ಸಿಕಂ ಅನ್ನು ನೇರವಾಗಿ ಬೆಂಕಿಯ ಮೇಲೆ ಸುಡುವುದರಿಂದ ಬರುವ ಘಮಘಮಿಸುವ ಸ್ಮೋಕಿ ಫ್ಲೇವರ್ (Smoky Flavor) ಮತ್ತು ಮೊಸರು ನೀಡುವ ಕ್ರೀಮಿ ಟೆಕ್ಸ್ಚರ್ ಈ ಚಟ್ನಿಯ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಈ ಚಟ್ನಿಯನ್ನು ಬಿಸಿ ಬಿಸಿ ರೊಟ್ಟಿ, ಚಪಾತಿ, ಪರೋಟ ಜೊತೆ ಸವಿಯಬಹುದು, ಬ್ರೆಡ್ ಸ್ಯಾಂಡ್&zwnj;ವಿಚ್&zwnj;ಗೆ ಸ್ಪ್ರೆಡ್ ಆಗಿ ಹಚ್ಚಬಹುದು ಅಥವಾ ಈವ್ನಿಂಗ್ ಸ್ನ್ಯಾಕ್ಸ್&zwnj;ಗೆ ಡಿಪ್ (Dip) ರೀತಿಯಲ್ಲೂ ಬಳಸಬಹುದು!&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) - 1 ಅಥವಾ 2ಎಣ್ಣೆ - 1 ಚಮಚಈರುಳ್ಳಿ - ಅರ್ಧ ಕಪ್ (ಕತ್ತರಿಸಿದ್ದು)ಬೆಳ್ಳುಳ್ಳಿ ಎಸಳು - 4 ರಿಂದ 5ಹಸಿರು ಮೆಣಸಿನಕಾಯಿ - 3 ರಿಂದ 4 (ಖಾರಕ್ಕೆ ತಕ್ಕಷ್ಟು)ಕಡಲೆಕಾಯಿ ಬೀಜ (ಶೇಂಗಾ) - 2 ಚಮಚಕೊತ್ತಂಬರಿ ಸೊಪ್ಪು - ಒಂದು ಹಿಡಿಗಟ್ಟಿ ಮೊಸರು (ಹುಳಿಯಿಲ್ಲದ ಕಮ್ಮನೆಯ ಮೊಸರು) - ಅರ್ಧ ಕಪ್ಕಾಳುಮೆಣಸು - 5 ರಿಂದ 6ಉಪ್ಪು - ರುಚಿಗೆ ತಕ್ಕಷ್ಟು&lt;/p&gt;&lt;h2&gt;&lt;strong&gt;ಮಾಡುವ ಸರಳ ವಿಧಾನ&lt;/strong&gt;&lt;/h2&gt;&lt;p&gt;&lt;strong&gt;ಕ್ಯಾಪ್ಸಿಕಂ ಸುಟ್ಟಿಕೊಳ್ಳಿ&lt;/strong&gt;ಮೊದಲಿಗೆ ಕ್ಯಾಪ್ಸಿಕಂ ಅನ್ನು ನೇರವಾಗಿ ಗ್ಯಾಸ್ ಸ್ಟೌವ್ ಉರಿಯ ಮೇಲೆ ಇಟ್ಟು ಎಲ್ಲಾ ಕಡೆ ತಿರುಗಿಸುತ್ತಾ ಸುಟ್ಟುಕೊಳ್ಳಿ. ಅದರ ಮೇಲ್ಮೈ ಕಪ್ಪಾಗುವವರೆಗೆ ಚೆನ್ನಾಗಿ ಸುಡಬೇಕು. (ಹೀಗೆ ಮಾಡುವುದರಿಂದ ಚಟ್ನಿಗೆ ಅದ್ಭುತವಾದ ಸ್ಮೋಕಿ ಫ್ಲೇವರ್ ಸಿಗುತ್ತದೆ). ನಂತರ ಅದನ್ನು ತೆಗೆದಿಟ್ಟು ಪೂರ್ತಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.&lt;/p&gt;&lt;p&gt;&lt;strong&gt;ಮಸಾಲೆ ಹುರಿಯಿರಿ&lt;/strong&gt;ಈಗ ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ 2-3 ನಿಮಿಷ ಹುರಿಯಿರಿ.&lt;/p&gt;&lt;p&gt;ನಂತರ ಅದಕ್ಕೆ ಕಡಲೆಕಾಯಿ ಬೀಜಗಳನ್ನು ಹಾಕಿ ಇನ್ನೆರಡು ನಿಮಿಷ ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಕೆಲವೇ ಸೆಕೆಂಡು ಬಾಡಿಸಿ ಗ್ಯಾಸ್ ಆಫ್ ಮಾಡಿ, ಮಿಶ್ರಣವನ್ನು ತಣ್ಣಗಾಗಲು ಬಿಡಿ.&lt;/p&gt;&lt;p&gt;&lt;strong&gt;ರುಬ್ಬುವ ವಿಧಾನ&lt;/strong&gt;ಮಿಕ್ಸಿ ಜಾರ್&zwnj;ಗೆ ಹುರಿದ ಈರುಳ್ಳಿ-ಶೇಂಗಾ ಮಿಶ್ರಣ, ಸುಟ್ಟು ಕತ್ತರಿಸಿದ ಕ್ಯಾಪ್ಸಿಕಂ ತುಂಡುಗಳು, ಮೊಸರು, ಕಾಳುಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಹಾಕದೆ ಎಲ್ಲವನ್ನೂ ನುಣ್ಣಗೆ ಬೆಣ್ಣೆಯಂತೆ ಕ್ರೀಮಿಯಾಗಿ ರುಬ್ಬಿಕೊಳ್ಳಿ.&lt;/p&gt;&lt;p&gt;ಅಷ್ಟೇ, ಬಾಯಲ್ಲಿ ನೀರೂರಿಸುವ ಘಮಘಮಿಸುವ ಕ್ಯಾಪ್ಸಿಕಂ ಮೊಸರು ಚಟ್ನಿ ಸವಿಯಲು ಸಿದ್ಧ!&lt;/p&gt;&lt;h2&gt;&lt;strong&gt;ಇದು ಗಮನದಲ್ಲಿರಲಿ&lt;/strong&gt;&lt;/h2&gt;&lt;p&gt;&lt;strong&gt;ಸುಟ್ಟ ಕ್ಯಾಪ್ಸಿಕಂ ನೀರಿನಲ್ಲಿ ತೊಳೆಯಬೇಡಿ&lt;/strong&gt;ಕ್ಯಾಪ್ಸಿಕಂ ಸುಟ್ಟ ನಂತರ ಅದರ ಕಪ್ಪು ಸಿಪ್ಪೆ ತೆಗೆಯಲು ನೀರಿನಲ್ಲಿ ತೊಳೆಯುವ ತಪ್ಪು ಮಾಡಬೇಡಿ. ನೀರಿನಲ್ಲಿ ತೊಳೆದರೆ ಅದರ ನೈಜ ಸ್ಮೋಕಿ ಫ್ಲೇವರ್ (ಹೊಗೆಯ ಘಮ) ಹೊರಟುಹೋಗುತ್ತದೆ. ಕೈಯಿಂದ ಅಥವಾ ಟಿಶ್ಯೂ ಪೇಪರ್&zwnj;ನಿಂದ ಸಿಪ್ಪೆ ಸುಲಿದುಕೊಳ್ಳಿ.&lt;/p&gt;&lt;p&gt;&lt;strong&gt;ಕ್ಯಾಪ್ಸಿಕಂಗೆ ಎಣ್ಣೆ ಸವರಿ ಸುಡಿ&lt;/strong&gt;ಗ್ಯಾಸ್ ಮೇಲೆ ಇಡುವ ಮುನ್ನ ಕ್ಯಾಪ್ಸಿಕಂಗೆ ಒಂದೆರಡು ಹನಿ ಎಣ್ಣೆ ಸವರಿ ನಂತರ ಸುಟ್ಟರೆ, ಸಿಪ್ಪೆ ತುಂಬಾ ಸುಲಭವಾಗಿ ಮತ್ತು ವೇಗವಾಗಿ ಸುಲಿದು ಬರುತ್ತದೆ.&lt;/p&gt;&lt;p&gt;&lt;strong&gt;ಹುಳಿ ಮೊಸರು ಬಳಸಬೇಡಿ&lt;/strong&gt;ಈ ಚಟ್ನಿಗೆ ಅತಿಯಾಗಿ ಹುಳಿಯಾದ ಮೊಸರು ಹಾಕಿದರೆ ಚಟ್ನಿ ರುಚಿ ಕೆಡುತ್ತದೆ. ಸದಾ ತಾಜಾ, ಗಟ್ಟಿಯಾದ ಮೊಸರನ್ನೇ ಬಳಸಿ. ಆಗಲೇ ಚಟ್ನಿ ಕ್ರೀಮಿಯಾಗಿ ಬರುತ್ತದೆ.&lt;/p&gt;&lt;p&gt;&lt;strong&gt;ಬಿಸಿ ಇರುವಾಗ ಮೊಸರು ಸೇರಿಸಬೇಡಿ&lt;/strong&gt;ಹುರಿದ ಈರುಳ್ಳಿ-ಶೇಂಗಾ ಮಿಶ್ರಣ ಮತ್ತು ಸುಟ್ಟ ಕ್ಯಾಪ್ಸಿಕಂ ಸಂಪೂರ್ಣವಾಗಿ ತಣ್ಣಗಾದ ಮೇಲೆಯೇ ಮೊಸರು ಹಾಕಿ ರುಬ್ಬಬೇಕು. ಸ್ವಲ್ಪ ಬಿಸಿ ಇದ್ದರೂ ಮೊಸರು ಒಡೆದು ಹೋಗಿ (Curdle ಆಗಿ) ಚಟ್ನಿ ನೀರಾಗುತ್ತದೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/food/roasted-capsicum-curd-chutney-easy-creamy-and-smoky-chutney-recipe/articleshow-kob0oil"/>
        </item>
        <item>
            <title><![CDATA[ಗಲೀಜಾಗಿರುವ ಮಿಕ್ಸರ್, ಸ್ವಿಚ್ ಬೋರ್ಡ್, ಸ್ಟೌವ್, ಫ್ರಿಡ್ಜ್ ಕ್ಲೀನಿಂಗ್‌ನಿಂದ ಹಿಡಿದು ಜಿರಳೆ ಕಾಟಕ್ಕೆ ಬ್ರೇಕ್ ಹಾಕಲು ವ್ಯಾಸಲೀನ್ ಸಾಕು]]></title>
            <link>https://kannada.asianetnews.com/gallery/kitchen/mix-vaseline-with-hot-water-the-ultimate-all-in-one-home-cleaning-hack-uk6nu84</link>
            <guid isPermaLink="true">https://kannada.asianetnews.com/gallery/kitchen/mix-vaseline-with-hot-water-the-ultimate-all-in-one-home-cleaning-hack-uk6nu84</guid>
            <pubDate>Thu, 17 Sep 2026 14:26:10 +0530</pubDate>
            <description><![CDATA[&lt;p&gt;Home cleaning tips using vaseline: ಕಳೆಗುಂದಿದ ಮರದ ಬಾಗಿಲುಗಳು, ಜಿಡ್ಡಾದ ಅಡುಗೆಮನೆಯ ಡ್ರಾಯರ್&zwnj;ಗಳು ಮತ್ತು ಹಳೆಯ ಸ್ವಿಚ್ ಬೋರ್ಡ್&zwnj;ಗಳು ಹೊಸದರಂತೆ ಹೊಳೆಯಲು ದುಬಾರಿ ಕೆಮಿಕಲ್ ಕ್ಲೀನರ್&zwnj;ಗಳು ಬೇಕಿಲ್ಲ! ಕೇವಲ ಬಿಸಿನೀರು ಮತ್ತು ವ್ಯಾಸಲೀನ್ ಸಾಕು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2q8xmcse0qmv7wbdgnd72p4,imgname-thumbnail---2026-09-17t141307.694-1789634990488.jpg" type="image/jpeg" height="390" width="690"/>
            <content:encoded><![CDATA[&lt;p&gt;Home cleaning tips using vaseline: ಕಳೆಗುಂದಿದ ಮರದ ಬಾಗಿಲುಗಳು, ಜಿಡ್ಡಾದ ಅಡುಗೆಮನೆಯ ಡ್ರಾಯರ್&zwnj;ಗಳು ಮತ್ತು ಹಳೆಯ ಸ್ವಿಚ್ ಬೋರ್ಡ್&zwnj;ಗಳು ಹೊಸದರಂತೆ ಹೊಳೆಯಲು ದುಬಾರಿ ಕೆಮಿಕಲ್ ಕ್ಲೀನರ್&zwnj;ಗಳು ಬೇಕಿಲ್ಲ! ಕೇವಲ ಬಿಸಿನೀರು ಮತ್ತು ವ್ಯಾಸಲೀನ್ ಸಾಕು.&lt;/p&gt;&lt;img&gt;&lt;p&gt;&lt;strong&gt;ಆಲ್-ಇನ್-ಒನ್ ಕ್ಲೀನಿಂಗ್ ಲಿಕ್ವಿಡ್&lt;/strong&gt;ಮನೆಯಲ್ಲಿರುವ ಹಳೆಯ ಮರದ ಬಾಗಿಲುಗಳು, ಜಿಡ್ಡಾದ ಕಿಚನ್ ಕ್ಯಾಬಿನೆಟ್&zwnj;ಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಲೆದರ್ ಬ್ಯಾಗ್&zwnj;ಗಳನ್ನು ಸ್ವಚ್ಛಗೊಳಿಸಲು ದುಬಾರಿ ಕೆಮಿಕಲ್ ಕ್ಲೀನರ್&zwnj;ಗಳನ್ನು ಖರೀದಿಸುವ ಅಗತ್ಯವೇ ಇಲ್ಲ. ಚಳಿಗಾಲದಲ್ಲಿ ತುಟಿಗೆ ಹಚ್ಚುವ ಸಾಮಾನ್ಯ &lsquo;ವ್ಯಾಸಲೀನ್&rsquo; (Vaseline) ಮತ್ತು ಬಿಸಿನೀರು ಬಳಸಿಕೊಂಡು ಮನೆಯಲ್ಲೇ ಒಂದು ಅದ್ಭುತ ಆಲ್-ಇನ್-ಒನ್ ಕ್ಲೀನಿಂಗ್ ಲಿಕ್ವಿಡ್ ತಯಾರಿಸಬಹುದು!&lt;/p&gt;&lt;img&gt;&lt;p&gt;&lt;strong&gt;ಮ್ಯಾಜಿಕ್ ಲಿಕ್ವಿಡ್ ತಯಾರಿಸುವ ವಿಧಾನ&lt;/strong&gt;ಒಂದು ಬೌಲ್&zwnj;ನಲ್ಲಿ ಚೆನ್ನಾಗಿ ಕಾದಿರುವ ಬಿಸಿನೀರನ್ನು ತೆಗೆದುಕೊಳ್ಳಿ.ಅದಕ್ಕೆ ಕೇವಲ ಕಾಲು ಚಮಚ (1/4 spoon) ವ್ಯಾಸಲೀನ್ ಹಾಕಿ ಚೆನ್ನಾಗಿ ಕರಗಿಸಿ.ನೀರು ತಣ್ಣಗಾಗಲು ಬಿಡಿ.ಈಗ ಒಂದು ಶುಭ್ರವಾದ ಹತ್ತಿ ಬಟ್ಟೆಯನ್ನು (Cotton cloth) ಈ ನೀರಿನಲ್ಲಿ ಅದ್ದಿ, ನೀರಿಲ್ಲದಂತೆ ಗಟ್ಟಿಯಾಗಿ ಹಿಂಡಿಕೊಳ್ಳಿ.&lt;/p&gt;&lt;img&gt;&lt;p&gt;&lt;strong&gt;ಈ ಲಿಕ್ವಿಡ್&zwnj;ನಿಂದ ಏನೆಲ್ಲಾ ಕ್ಲೀನ್ ಮಾಡಬಹುದು?&lt;/strong&gt;&lt;strong&gt;1. ಮರದ ಬಾಗಿಲುಗಳಿಗೆ ಹೊಸ ಪಾಲಿಶ್ ಹೊಳಪು&lt;/strong&gt;ಧೂಳು ಹಿಡಿದು ಕಳೆಗುಂದಿದ ಮರದ ಬಾಗಿಲುಗಳನ್ನು ಈ ಬಟ್ಟೆಯಿಂದ ಒರೆಸಿದರೆ ಸಾಕು, ತಕ್ಷಣವೇ ವಾರ್ನಿಷ್ ಅಥವಾ ಪಾಲಿಶ್ ಮಾಡಿದಂತೆ ಹೊಳೆಯುತ್ತವೆ.&lt;/p&gt;&lt;img&gt;&lt;p&gt;&lt;strong&gt;2. ಅಡುಗೆಮನೆಯ ಜಿಡ್ಡಾದ ಕ್ಯಾಬಿನೆಟ್&zwnj;ಗಳು&lt;/strong&gt;ಕಿಚನ್ ಕ್ಯಾಬಿನೆಟ್&zwnj;ಗಳ ಡೋರ್ ಮತ್ತು ಡ್ರಾಯರ್&zwnj;ಗಳ ಮೇಲಿರುವ ಅಡುಗೆಯ ಜಿಡ್ಡು, ಎಣ್ಣೆಯ ಕಲೆಗಳನ್ನು ಈ ಲಿಕ್ವಿಡ್ ಕ್ಷಣಾರ್ಧದಲ್ಲಿ ನಿವಾರಿಸಿ ಹೊಸ ಲುಕ್ ನೀಡುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಮಿಕ್ಸರ್, ಫ್ರಿಡ್ಜ್ ಮತ್ತು ಗೃಹೋಪಯೋಗಿ ವಸ್ತುಗಳು&lt;/strong&gt;ಫ್ರಿಡ್ಜ್, ಮಿಕ್ಸರ್ ಗ್ರೈಂಡರ್ ಅಥವಾ ಡಿಶ್&zwnj;ವಾಶರ್&zwnj;ಗಳನ್ನು ಒರೆಸಲು ದುಬಾರಿ ಕ್ಲೀನರ್ ಬೇಡ. ಈ ಬಟ್ಟೆಯಿಂದ ಒರೆಸಿದರೆ ಅವು ಹೊಳೆಯುತ್ತವೆ.&lt;/p&gt;&lt;img&gt;&lt;p&gt;&lt;strong&gt;4. ಲೆದರ್ ಬ್ಯಾಗ್&zwnj;ಗಳು ಮತ್ತು ಸೂಟ್&zwnj;ಕೇಸ್&zwnj;ಗಳು&lt;/strong&gt;ಧೂಳು ಹಿಡಿದ ಲೆದರ್ ಹ್ಯಾಂಡ್&zwnj;ಬ್ಯಾಗ್&zwnj;ಗಳು, ಸೂಟ್&zwnj;ಕೇಸ್ ಮತ್ತು ಟ್ರಾವೆಲ್ ಬ್ಯಾಗ್&zwnj;ಗಳನ್ನು ಒರೆಸಿದರೆ ಅವುಗಳ ಚರ್ಮ ಹಾಳಾಗದೆ, ಹೊಳಪು ಮರಳಿ ಬರುತ್ತದೆ.&lt;/p&gt;&lt;img&gt;&lt;p&gt;&lt;strong&gt;5. ಗ್ಯಾಸ್ ಸ್ಟೌವ್ ತುಕ್ಕು ಹಿಡಿಯಲ್ಲ&lt;/strong&gt;ಗ್ಯಾಸ್ ಒಲೆ ಮತ್ತು ಸ್ಟೌವ್ ರಿಂಗ್&zwnj;ಗಳನ್ನು ಇದರಿಂದ ಕ್ಲೀನ್ ಮಾಡಿದರೆ ಜಿಡ್ಡು ಹೋಗುವುದರ ಜೊತೆಗೆ ರಿಂಗ್&zwnj;ಗಳು ತುಕ್ಕು (Rust) ಹಿಡಿಯದಂತೆ ತಡೆಯುತ್ತದೆ.&lt;/p&gt;&lt;img&gt;&lt;p&gt;&lt;strong&gt;6. ಕಿಚನ್ ಕೌಂಟರ್&zwnj;ಟಾಪ್ &amp;amp; ಜಿರಳೆಗಳ ಕಾಟಕ್ಕೆ ಬ್ರೇಕ್&lt;/strong&gt;ಅಡುಗೆಮನೆಯ ಸ್ಲ್ಯಾಬ್ ಅನ್ನು ಇದರಿಂದ ಒರೆಸಿದರೆ ಕಲೆಗಳು ಮಾಯವಾಗುತ್ತವೆ. ಇದರ ಪರಿಮಳಕ್ಕೆ ಅಡುಗೆಮನೆಯಲ್ಲಿ ಜಿರಳೆಗಳು ಸುಳಿಯುವುದಿಲ್ಲ!&lt;/p&gt;&lt;img&gt;&lt;p&gt;&lt;strong&gt;7. ಕೊಳಕಾದ ಸ್ವಿಚ್ ಬೋರ್ಡ್&zwnj;ಗಳು&lt;/strong&gt;ಕೈಯ ಕಲೆಗಳಿಂದ ಕಪ್ಪಾಗಿರುವ ಸ್ವಿಚ್ ಬೋರ್ಡ್&zwnj;ಗಳನ್ನು ಈ ಬಟ್ಟೆಯಿಂದ ಲಘುವಾಗಿ ಒರೆಸಿದರೆ ಸಾಕು, ತಕ್ಷಣವೇ ಹೊಚ್ಚ ಹೊಸದರಂತೆ ಕ್ಲೀನ್ ಆಗುತ್ತವೆ. (ಎಚ್ಚರಿಕೆ: ಬಟ್ಟೆಯನ್ನು ಗಟ್ಟಿಯಾಗಿ ಹಿಂಡಿರಬೇಕು, ಒದ್ದೆ ನೀರು ಸ್ವಿಚ್ ಒಳಗೆ ಹೋಗಬಾರದು).&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/mix-vaseline-with-hot-water-the-ultimate-all-in-one-home-cleaning-hack-uk6nu84"/>
        </item>
        <item>
            <title><![CDATA[Chanakya Niti: ಮದುವೆ ಆಗುವ ಹುಡುಗ ಬಡವನಿದ್ರೂ ಸರಿ,  ಚಾಣಕ್ಯ ಹೇಳುವಂತೆ ಈ 5 ಗುಣಗಳಿರಲಿ!]]></title>
            <link>https://kannada.asianetnews.com/gallery/astrology/chanakya-niti-before-marriage-focus-on-these-5-things-not-the-boy-earnings-to-avoid-future-regret-rav-0g7awum</link>
            <guid isPermaLink="true">https://kannada.asianetnews.com/gallery/astrology/chanakya-niti-before-marriage-focus-on-these-5-things-not-the-boy-earnings-to-avoid-future-regret-rav-0g7awum</guid>
            <pubDate>Thu, 17 Sep 2026 13:54:29 +0530</pubDate>
            <description><![CDATA[&lt;p&gt;ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಅನ್ನೋದು ಪ್ರಮುಖ ಘಟ್ಟ. ಬಹುಮುಖ್ಯ ನಿರ್ಧಾರಗಳಲ್ಲಿ ಒಂದು. ಮೊದಲ ಭೇಟಿಯಲ್ಲಿ ಇಷ್ಟವಾದರೆಂದೋ ಮದುವೆ ಆದವರಿದ್ದಾರೆ. ಆಕರ್ಷಕ ವ್ಯಕ್ತಿತ್ವ, ಡ್ರೆಸ್, ಹೇರ್&zwnj; ಸ್ಟೈಲ್ಒ ಳ್ಳೆಯ ಕೆಲಸ ಸಂಬಳ ಇದೆಯೆಂದು ಸಂಗಾತಿಯ ಆಯ್ಕೆ ಮಾಡುವುದು ಸರಿಯಲ್ಲ. ಚಾಣಕ್ಯ ಹೇಳೋದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2q79k5e047gq2enanvvvfkk,imgname-chanakya-niti-1789633285294.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಅನ್ನೋದು ಪ್ರಮುಖ ಘಟ್ಟ. ಬಹುಮುಖ್ಯ ನಿರ್ಧಾರಗಳಲ್ಲಿ ಒಂದು. ಮೊದಲ ಭೇಟಿಯಲ್ಲಿ ಇಷ್ಟವಾದರೆಂದೋ ಮದುವೆ ಆದವರಿದ್ದಾರೆ. ಆಕರ್ಷಕ ವ್ಯಕ್ತಿತ್ವ, ಡ್ರೆಸ್, ಹೇರ್&zwnj; ಸ್ಟೈಲ್ಒ ಳ್ಳೆಯ ಕೆಲಸ ಸಂಬಳ ಇದೆಯೆಂದು ಸಂಗಾತಿಯ ಆಯ್ಕೆ ಮಾಡುವುದು ಸರಿಯಲ್ಲ. ಚಾಣಕ್ಯ ಹೇಳೋದೇನು?&lt;/p&gt;&lt;img&gt;&lt;p&gt;ಆದರೆ ಇಂದು ಮದುವೆಯಾಗಲು ಮುಖ್ಯವಾಗಿ ಸ್ಯಾಲರಿ, ಉದ್ಯೋಗ, ಶ್ರೀಮಂತಿಕೆ ನೋಡಿ ಕಣ್ಮುಚ್ಚಿ ಮದುಗೆಗೆ ಒಪ್ಪುವವರು ಇದ್ದಾರೆ. ಇದು ಸರಿಯಲ್ಲಿ ಏಕೆಂದರೆ ಒಬ್ಬ ವ್ಯಕ್ತಿಯ ಸ್ವಭಾವ, ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳಲು ಆತ ದಿನನಿತ್ಯದ ಜೀವನದಲ್ಲಿ ಹೇಗೆ ವರ್ತಿಸುತ್ತಾನೆ ಎನ್ನುವುದು ಮುಖ್ಯ. ವಿಶೇಷವಾಗಿ ಕೋಪ ಬಂದಾಗ ಹೇಗೆ ನಡೆದುಕೊಳ್ಳುತ್ತಾನೆ, ಇತರರನ್ನು ಹೇಗೆ ಗೌರವಿಸುತ್ತಾನೆ, ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದರಿಂದ ಆತನ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು. ಕೇವಲ ಹಣ, ಉದ್ಯೋಗ, ಅಂತಸ್ತು ನೋಡಿ ಆಕರ್ಷಿತರಾದರೆ ಈ ಆಕರ್ಷಣೆ ಸಂಬಂಧ ಬಹಳ ದಿನ ಉಳಿಲಾರದು!&lt;/p&gt;&lt;p&gt;&lt;strong&gt;ಚಾಣಕ್ಯ ಹೇಳಿದ ಆ ಐದು ಗುಣಗಳು ಯಾವವು?&lt;/strong&gt;&lt;/p&gt;&lt;p&gt;ಆಚಾರ್ಯ ಚಾಣಕ್ಯರೂ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ವ್ಯಕ್ತಿಯ ಗುಣ, ನಡತೆ ಮತ್ತು ಸ್ವಭಾವಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಆದರೆ ಇಂದಿನ ಸಂಬಂಧಗಳು, ಜೀವನಶೈಲಿ ಹಿಂದಿನ ಕಾಲದಂತಿಲ್ಲ. ಹೀಗಾಗಿ, ಚಾಣಕ್ಯನೀತಿಯ ಈ ವಿಚಾರಗಳನ್ನು ಇಂದಿಗೂ ಮಾರ್ಗದರ್ಶನ ನೀಡಲಿವೆ. ಮದುವೆಯ ನಿರ್ಧಾರವನ್ನು ಪರಸ್ಪರ ಅರ್ಥಮಾಡಿಕೊಳ್ಳುವಿಕೆ, ಮುಕ್ತವಾಗಿ ಮಾತನಾಡುವುದು, ಪರಸ್ಪರ ಗೌರವ ಕೊಡುವುದು ಮುಖ್ಯ. ಹೀಗಾಗಿ ಸಂಗಾತಿಯ ನಿಜವಾದ ನಡವಳಿಕೆಯನ್ನು ಗಮನಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.&lt;/p&gt;&lt;p&gt;ನೀವು ಯಾರನ್ನಾದರೂ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಈ ಐದು ಗುಣಗಳು ಅವನಲ್ಲಿವೆಯೋ ಇಲ್ಲವೋ ಎಂಬುದನ್ನ ಅರ್ಥ ಮಾಡಿಕೊಳ್ಳಿ. ನಂತರ ನಿಮ್ಮ ನಿರ್ಧಾರ ತಿಳಿಸಿ.&lt;/p&gt;&lt;img&gt;&lt;p&gt;ಒಬ್ಬ ವ್ಯಕ್ತಿ ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದನ್ನು ಮಾತ್ರ ನೋಡಿ ಆತನ ಸಂಪೂರ್ಣ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆತ ತನ್ನ ತಂದೆ-ತಾಯಿ, ಸ್ನೇಹಿತರು, ಸಹೋದ್ಯೋಗಿಗಳು, ಅಂಗಡಿ ಸಿಬ್ಬಂದಿ ಮತ್ತು ಇತರರೊಂದಿಗೆ ಹೇಗೆ ಮಾತನಾಡುತ್ತಾನೆ ಎಂಬುದನ್ನು ಗಮನಿಸಬೇಕು.&lt;/p&gt;&lt;p&gt;ಇತರರು ಮಾತನಾಡುವಾಗ ಆತ ಅವರ ಮಾತನ್ನು ಕೇಳುತ್ತಾನೆಯೇ? ಅವರ ಅಭಿಪ್ರಾಯ ಮತ್ತು ಗೌರವಕ್ಕೆ ಬೆಲೆ ಕೊಡುತ್ತಾನೆಯೇ? ಇತರರೊಂದಿಗೆ ಆತ ತೋರುವ ಸಾಮಾನ್ಯ ವರ್ತನೆ ಆತನ ವ್ಯಕ್ತಿತ್ವದ ಬಗ್ಗೆ ಹಲವು ಸುಳಿವುಗಳನ್ನು ನೀಡಬಹುದು.&lt;/p&gt;&lt;img&gt;&lt;p&gt;ಎಲ್ಲವೂ ಚೆನ್ನಾಗಿರುವಾಗ ಶಾಂತವಾಗಿರುವುದು ಸುಲಭ. ಜೀವನದ ಕಷ್ಟಕಾಲದಲ್ಲಿ ಒತ್ತಡ ಅಥವಾ ಕಷ್ಟದ ಪರಿಸ್ಥಿತಿ ಎದುರಾದಾಗ ವ್ಯಕ್ತಿಯ ನಿಜವಾದ ಸ್ವಭಾವ ಹೆಚ್ಚು ಸ್ಪಷ್ಟವಾಗುತ್ತದೆ. ಸಮಸ್ಯೆ ಎದುರಾದಾಗ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆಯೇ? ಅಥವಾ ತಕ್ಷಣ ಕೋಪಗೊಳ್ಳುತ್ತಾನೆಯೇ, ಇತರರನ್ನು ದೂಷಿಸುತ್ತಾನೆಯೇ ಅಥವಾ ಜಗಳಕ್ಕೆ ಮುಂದಾಗುತ್ತಾನೆಯೇ ಎಂಬುದನ್ನು ಗಮನಿಸಿ.&lt;/p&gt;&lt;p&gt;ಮದುವೆ ಜೀವನದಲ್ಲಿ ಹಲವು ಸವಾಲುಗಳು ಎದುರಾಗಬಹುದು. ಅವುಗಳನ್ನು ಇಬ್ಬರೂ ಸೇರಿ ಎದುರಿಸಬೇಕಾಗುತ್ತದೆ. ಹೀಗಾಗಿ ಪರಸ್ಪರ ಮಾತುಕತೆ ಮತ್ತು ತಾಳ್ಮೆ ಬಹಳ ಮುಖ್ಯ.&lt;/p&gt;&lt;img&gt;&lt;p&gt;ಹುಡುಗ ಎಷ್ಟು ಹಣ ಸಂಪಾದಿಸುತ್ತಾನೆ ಎಂಬುದನ್ನು ಮಾತ್ರ ಆಧರಿಸಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಸಾಕಾಗುವುದಿಲ್ಲ. ಆತ ತನ್ನ ಕೆಲಸ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ ಎಂಬುದನ್ನೂ ತಿಳಿದುಕೊಳ್ಳಬೇಕು.&lt;/p&gt;&lt;p&gt;ಭವಿಷ್ಯದ ಬಗ್ಗೆ ಆತ ಯೋಜನೆ ಮಾಡುತ್ತಾನೆಯೇ? ತನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಹಿಂದೇಟು ಹಾಕುತ್ತಾನೆಯೇ? ಎಂಬುದನ್ನು ಗಮನಿಸಿ. ಆರ್ಥಿಕ ಪರಿಸ್ಥಿತಿ ಕಾಲಕ್ರಮೇಣ ಬದಲಾಗಬಹುದು. ಆದರೆ ಜವಾಬ್ದಾರಿಗಳನ್ನು ನಿಭಾಯಿಸುವ ವ್ಯಕ್ತಿಯ ಮನೋಭಾವವು ದಾಂಪತ್ಯ ಜೀವನದ ಮೇಲೆ ದೀರ್ಘಕಾಲ ಪರಿಣಾಮ ಬೀರಬಹುದು.&lt;/p&gt;&lt;p&gt;&lt;strong&gt;4. ಮಹಿಳೆಯರ ಬಗ್ಗೆ ಆತನ ಮನೋಭಾವ ಹೇಗಿದೆ?&lt;/strong&gt;&lt;/p&gt;&lt;p&gt;ಮದುವೆಗೂ ಮುನ್ನ ಮಹಿಳೆಯರ ಅಭಿಪ್ರಾಯ ಮತ್ತು ಸ್ವಾತಂತ್ರ್ಯಕ್ಕೆ ಆತ ಎಷ್ಟು ಗೌರವ ನೀಡುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.&lt;/p&gt;&lt;p&gt;ತನ್ನ ಕುಟುಂಬದ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎಂಬುದನ್ನು ಗಮನಿಸುವುದರ ಜೊತೆಗೆ, ನಿಮ್ಮ ಆಯ್ಕೆಗಳು, ನಿರ್ಧಾರಗಳು, ಉದ್ಯೋಗ ಮತ್ತು ವೈಯಕ್ತಿಕ ವಿಚಾರಗಳನ್ನು ಆತ ಗೌರವಿಸುತ್ತಾನೆಯೇ ಎಂಬುದನ್ನೂ ನೋಡಿ. ಸಮಾನತೆ ಮತ್ತು ಪರಸ್ಪರ ಗೌರವ ಆರೋಗ್ಯಕರ ದಾಂಪತ್ಯ ಜೀವನದ ಪ್ರಮುಖ ಆಧಾರಗಳಾಗಿವೆ.&lt;/p&gt;&lt;p&gt;&lt;strong&gt;5. ಕೋಪ ಮತ್ತು ಕೆಟ್ಟ ಅಭ್ಯಾಸಗಳ ಮೇಲೆ ನಿಯಂತ್ರಣವಿದೆಯೇ?&lt;/strong&gt;&lt;/p&gt;&lt;p&gt;ಹುಡುಗನಿಗೆ ಕೆಟ್ಟ ಕೋಪ, ಸುಳ್ಳು ಹೇಳುವುದು, ಜೂಜಾಟ, ಅತಿಯಾದ ಮದ್ಯಪಾನ ಅಥವಾ ಇತರ ಹಾನಿಕಾರಕ ಅಭ್ಯಾಸಗಳು ಮುಂದೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಮದುವೆಗೂ ಮುನ್ನ ಈ ವಿಚಾರಗಳನ್ನು ನಿರ್ಲಕ್ಷಿಸಬಾರದು.&lt;/p&gt;&lt;p&gt;ಒಬ್ಬ ವ್ಯಕ್ತಿ ಪದೇಪದೇ ಅವಮಾನಿಸುವುದು, ಬೆದರಿಸುವುದು ಅಥವಾ ತನ್ನ ಆಕ್ರಮಣಕಾರಿ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಬೇಕು.&lt;/p&gt;&lt;p&gt;ಮದುವೆಯಾಗಿ ದಾಂಪತ್ಯ ಜೀವನ ಸಾಗಿಸಲು ಕೇವಲ ಹಣ ಅಥವಾ ಆಕರ್ಷಕ ವ್ಯಕ್ತಿತ್ವ ಮಾತ್ರ ಸಾಕಾಗುವುದಿಲ್ಲ. ವ್ಯಕ್ತಿಯ ಸ್ವಭಾವ, ಜವಾಬ್ದಾರಿಯ ಮನೋಭಾವ, ಕೋಪವನ್ನು ನಿಯಂತ್ರಿಸುವ ಸಾಮರ್ಥ್ಯ ಮತ್ತು ಸಂಗಾತಿಯ ಬಗ್ಗೆ ಹೊಂದಿರುವ ಗೌರವವೂ ಅಷ್ಟೇ ಮುಖ್ಯವಾಗುತ್ತೆ. ಇಂದಿನ ಬಹುತೇಕ ಸಂಬಂಧಗಳು ಪರಿಚಯ, ಪ್ರೀತಿ, ಮದುವೆ ನಂತರ ಕೆಲವು ವರ್ಷಗಳಲ್ಲಿ ದಾಂಪತ್ಯದಲ್ಲಿ ಕಲಹವಾಗಿ ಡೈವರ್ಸ್&zwnj; ನೊಂದಿಗೆ ಕೊನೆಗೊಳ್ಳುತ್ತದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಮದುವೆಗೆ ಮೊದಲು ಹುಡುಗ, ಹುಡುಗಿಯ ಬಾಹ್ಯ ಸೌಂದರ್ಯ, ಆಸ್ತಿ ಅಂತಸ್ತು, ಉದ್ಯೋಗಕ್ಕೆ ಆಕರ್ಷಿತರಾಗಿ ಸಂಗಾತಿಯನ್ನ ಆಯ್ಕೆ ಮಾಡಿಕೊಂಡಿರುವ ಪರಿಣಾಮ. ಹೀಗಾಗಿ ಆಚಾರ್ಯ ಚಾಣಕ್ಯ ಹೇಳುವಂತೆ ಮದುವೆಗೆ ಮೊದಲು ಮೇಲೆ ಹೇಳಿದ ಐದು ಗುಣಗಳನ್ನ ಅರ್ಥ ಮಾಡಿಕೊಂಡ ಬಳಿಕವೇ ಮದುವೆಗೆ ಮುಂದಾಗುವುದು ಒಳಿತು.&lt;/p&gt;]]></content:encoded>
            <category>women</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/astrology/chanakya-niti-before-marriage-focus-on-these-5-things-not-the-boy-earnings-to-avoid-future-regret-rav-0g7awum"/>
        </item>
    </channel>
</rss>
