<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 16 Jul 2026 18:45:19 +0530</lastBuildDate>
        <atom:link href="https://kannada.asianetnews.com/rss/vijayapura" rel="self" type="application/rss+xml"/>
        <item>
            <title><![CDATA[ವಿಜಯಪುರ To ಬೇನಾಳ RS: ಕೊನೆಗೂ ಆರಂಭವಾದ ಬಹುನಿರೀಕ್ಷಿತ ಸೇವೆ, ಈಡೇರಿತು ಗ್ರಾಮಸ್ಥರ ಬೇಡಿಕೆ]]></title>
            <link>https://kannada.asianetnews.com/karnataka-districts/new-bus-service-from-vijayapura-to-benal-railway-station-begins-mrq/articleshow-4oezdvo</link>
            <guid isPermaLink="true">https://kannada.asianetnews.com/karnataka-districts/new-bus-service-from-vijayapura-to-benal-railway-station-begins-mrq/articleshow-4oezdvo</guid>
            <pubDate>Tue, 16 Jun 2026 06:56:53 +0530</pubDate>
            <description><![CDATA[&lt;p&gt;ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ ಸಂಚಾರ ಆರಂಭವಾಗಿದೆ. ಈ ಬಸ್ ಪ್ರತಿದಿನ ನಾಲ್ಕು ಟ್ರಿಪ್&zwnj;ಗಳ ಮೂಲಕ ಆಲಮಟ್ಟಿ ಉದ್ಯಾನದವರೆಗೆ ಸಂಚರಿಸಲಿದ್ದು, ವಿದ್ಯಾರ್ಥಿಗಳು, ರೈತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv70gre5mbk1ktcspt3caqya,imgname-bus-1781573116357.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ/ಆಲಮಟ್ಟಿ&lt;/strong&gt;: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ (ಸಂಚಾರ ) ಸೇವೆ ಸೋಮವಾರದಿಂದ ಆರಂಭವಾಗಿದೆ. ವರ್ಷದ ಹಿಂದೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಬೇನಾಳ ಆರ್. ಎಸ್. ಗ್ರಾಮಸ್ಥರು ಮನವಿ ಮಾಡಿದ್ದರು, ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬಸ್ ಸಂಚಾರ ಆರಂಭಿಸಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ಈ ನೂತನ ಬಸ್ಸು ಪ್ರತಿದಿನ ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 7.45ಕ್ಕೆ ಹೊರಟು 9.30ಕ್ಕೆ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ. 9:45ಕ್ಕೆ ಉದ್ಯಾನದಿಂದ ಹೊರಟು 11.30ಕ್ಕೆ ವಿಜಯಪುರ ತಲುಪುತ್ತದೆ. ಅದೇ ಬಸ್&zwnj; 11.45ಕ್ಕೆ ವಿಜಯಪುರವನ್ನು ಬಿಟ್ಟು 1.30ಕ್ಕೆ ಆಲಮಟ್ಟಿ ಉದ್ಯಾನಕ್ಕೆ ಬರುತ್ತದೆ. ನಂತರ ಮಧ್ಯಾಹ್ನ 2 ಗಂಟೆಗೆ ಉದ್ಯಾನ ಬಿಟ್ಟು 3.30ಕ್ಕೆ ವಿಜಯಪುರ ತಲುಪುತ್ತದೆ. ಹೀಗೆ ಪ್ರತಿದಿನ 4 ಟ್ರಿಪ್&zwnj; ಬಸ್&zwnj; ಸೇವೆ ಒದಗಿಸುತ್ತದೆ.&lt;/p&gt;&lt;p&gt;ನೂತನ ಬಸ್ ಸಂಚಾರದಿಂದ ಈ ಭಾಗದ ವಿದ್ಯಾರ್ಥಿಗಳಿಗೆ, ರೈತರಿಗೆ, ಕೂಲಿಕಾರ್ಮಿಕರಿಗೆ, ಮಹಿಳಾ ಉದ್ಯೋಗಿಗಳಿಗೆ ಬಹಳ ಸಹಾಯವಾಗಿದೆ.&lt;/p&gt;&lt;h3&gt;&lt;strong&gt;ಬಸ್ ಮಾರ್ಗ ಈ ರೀತಿಯಾಗಿದೆ&lt;/strong&gt;&lt;/h3&gt;&lt;p&gt;ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಹೊರಟ ಬಸ್ಸು ಜುಮನಾಳ ಕ್ರಾಸ್, ಹೊನಗನಹಳ್ಳಿ, ತೊನಶ್ಯಾಳ ಕ್ರಾಸ್, ಮುಳವಾಡ ಪ್ರವಾಸಿ ಮಂದಿರ, ಮುಳವಾಡ, ಕಲಗುರ್ಕಿ, ಕಲಗುರ್ಕಿ ರೈಲು ನಿಲ್ದಾಣ, ತಳೇವಾಡ ಕ್ರಾಸ್, ಕೂಡಗಿ ರೈಲು ನಿಲ್ದಾಣ, ಎನ್&zwnj;ಟಿಪಿಸಿ, ಅಂಗಡಗೇರಿ ರೈಲು ನಿಲ್ದಾಣ, ವಂದಾಲ ರೈಲು ನಿಲ್ದಾಣ, ಬೇನಾಳ ರೈಲು ನಿಲ್ದಾಣ, ಬೇನಾಳ ಕ್ರಾಸ್, ಆಲಮಟ್ಟಿ ಸರ್ಕಲ್ ಬಸ್ ನಿಲ್ದಾಣ, ಆಲಮಟ್ಟಿ ರೈಲು ನಿಲ್ದಾಣದ ಮುಖಾಂತರ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/new-bus-service-from-vijayapura-to-benal-railway-station-begins-mrq/articleshow-4oezdvo"/>
        </item>
        <item>
            <title><![CDATA[ಮುದ್ದೇಬಿಹಾಳದಿಂದ ಮಂತ್ರಾಲಯಕ್ಕೆ ಬಸ್ ಆರಂಭ; ಈ ರೂಟ್‌ನಲ್ಲಿ ಸಂಚರಿಸಲಿದೆ ನೂತನ ಬಸ್]]></title>
            <link>https://kannada.asianetnews.com/karnataka-districts/kalyana-karnataka-sarige-bus-service-from-muddebihal-to-mantralaya-begins-new-bus-will-ply-on-this-route-mrq/articleshow-6glqvmy</link>
            <guid isPermaLink="true">https://kannada.asianetnews.com/karnataka-districts/kalyana-karnataka-sarige-bus-service-from-muddebihal-to-mantralaya-begins-new-bus-will-ply-on-this-route-mrq/articleshow-6glqvmy</guid>
            <pubDate>Sat, 04 Jul 2026 08:07:17 +0530</pubDate>
            <description><![CDATA[&lt;p&gt;ಕಕ್ಕೇರಾ ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮುದ್ದೇಬಿಹಾಳ&ndash;ರಾಯಚೂರು-ಮಂತ್ರಾಲಯ ನೂತನ ಬಸ್ ಸಂಚಾರ ಸೇವೆಗೆ ಚಾಲನೆ ದೊರೆತಿದೆ. ವಿದ್ಯಾರ್ಥಿಗಳು, ಕಾರ್ಮಿಕರು, ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwnfps5mz9z9esp0xzxzp7ap,imgname-muddebihala-1783132546228.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸುರಪುರ:&lt;/strong&gt; ಕಕ್ಕೇರಾ ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮುದ್ದೇಬಿಹಾಳ&ndash;ರಾಯಚೂರು-ಮಂತ್ರಾಲಯ ನೂತನ ಬಸ್ ಸಂಚಾರ ಸೇವೆಗೆ ಚಾಲನೆ ದೊರೆತಿದೆ. ಕಕ್ಕೇರಾ ಪಟ್ಟಣಕ್ಕೆ ಆಗಮಿಸಿದ ನೂತನ ಬಸ್&zwnj; ಚಾಲಕ ಹಾಗೂ ನಿರ್ವಾಹಕರನ್ನು ವಿವಿಧ ಸಾಮೂಹಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಿದರು.&lt;/p&gt;&lt;p&gt;ಈ ಬಸ್ ಮುದ್ದೇಬಿಹಾಳ, ತಾಳಿಕೋಟಿ, ಹುಣಸಗಿ, ಕಕ್ಕೇರಾ, ತಿಂಥಣಿ ಬ್ರಿಜ್, ಜಾಲಹಳ್ಳಿ ಹಾಗೂ ದೇವದುರ್ಗ ಮಾರ್ಗವಾಗಿ ರಾಯಚೂರು, ಮಂತ್ರಾಲಯಕ್ಕೆ ಸಂಚರಿಸಲಿದ್ದು, ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಮುದ್ದೇಬಿಹಾಳ&ndash;ರಾಯಚೂರು-ಮಂತ್ರಾಲಯ&lt;/strong&gt;&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮುದ್ದೇಬಿಹಾಳ&ndash;ರಾಯಚೂರು-ಮಂತ್ರಾಲಯ ನಡುವೆ ಸಂಚರಿಸುವ ವಿದ್ಯಾರ್ಥಿಗಳು, ಕಾರ್ಮಿಕರು, ವ್ಯಾಪಾರಿಗಳು, ಮಹಿಳಾ ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ಈ ಹೊಸ ಬಸ್ ಸೇವೆ ಹೆಚ್ಚಿನ ಅನುಕೂಲ ಕಲ್ಪಿಸಲಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ಜನಪರ ಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;p&gt;ನೂತನ ಬಸನ್ನು ಬೆಳಿಗ್ಗೆ 10.30ಕ್ಕೆ ಕಕ್ಕೇರಾ ಪಟ್ಟಣದಲ್ಲಿ ಸ್ವಾಗತಿಸಲಾಯಿತು. ಬಳಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖಂಡರು ಅಭಿನಂದನೆ ಸಲ್ಲಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಾರು ಚಲಾಯಿಸುವಾಗ ದಿಢೀರ್ ಉಸಿರಾಟ ಸಮಸ್ಯೆ, ಮಹಿಳೆಯ ಜೀವ ಉಳಿಸಿದ ಮಡಿವಾಳ ಸಂಚಾರಿ ಪೊಲೀಸ್ ಪೇದೆ&lt;/strong&gt;&lt;/p&gt;&lt;p&gt;ಕಾರ್ಯಕ್ರಮದಲ್ಲಿ ಅಹಿಂದ ಜಿಲ್ಲಾ ಗೌರವಾಧ್ಯಕ್ಷ ಸಂಗಣ್ಣ ಸುಬೇದಾರ, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪುರ, ಪುರಸಭೆ ಉಪಾಧ್ಯಕ್ಷ ಜಟ್ಟೆಪ್ಪ, ಕೆಪಿಸಿಸಿ ಪದವೀಧರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಸಮನಿ (ಕಕ್ಕೇರಾ), ಅಹಿಂದ ಅಧ್ಯಕ್ಷ ಅಯೂಬ್, ಉದ್ಯಮಿ ಸುನೀಲ ಶೆಟ್ಟಿ, ರೈತ ಮುಖಂಡ ಮುದ್ದಣ್ಣ ಅಮ್ಮಾಪುರ, ಬಸಣ್ಣ ದೇಸಾಯಿ, ಗೋವಿಂದ ಪತ್ತಾರ, ಅಂಬ್ರೇಶ ಭೊಯಿ, ವೆಂಕಟೇಶ ದೊರೆ, ಮೈಬೂಬ್ ಸಾಬ್ (ಸುರಪುರ), ಶ್ರೀನಿವಾಸ, ಬಂದಗಿಸಾಬ್ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ: ಜನರಿಗೆ ಕೈಗೆಟುಕುವ ಬೆಲೆಗೆ ನಿವೇಶನ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kalyana-karnataka-sarige-bus-service-from-muddebihal-to-mantralaya-begins-new-bus-will-ply-on-this-route-mrq/articleshow-6glqvmy"/>
        </item>
        <item>
            <title><![CDATA[ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್; ಗ್ರಾಮಸ್ಥರ ಕನಸು ನನಸಾಯ್ತು!]]></title>
            <link>https://kannada.asianetnews.com/karnataka-districts/new-bus-service-to-sindagi-town-via-kondagooli-begins-mrq/articleshow-8afdlxy</link>
            <guid isPermaLink="true">https://kannada.asianetnews.com/karnataka-districts/new-bus-service-to-sindagi-town-via-kondagooli-begins-mrq/articleshow-8afdlxy</guid>
            <pubDate>Mon, 29 Jun 2026 06:01:58 +0530</pubDate>
            <description><![CDATA[ಬಸವನಬಾಗೇವಾಡಿಯಿಂದ ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್ ಸಂಚಾರ ಆರಂಭವಾಗಿದ್ದು, ಇದು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿತ್ತು. ಗ್ರಾಮಸ್ಥರು ಹಾರ, ತುರಾಯಿ ಹಾಕಿ ಪೂಜೆ ಸಲ್ಲಿಸುವ ಮೂಲಕ ಬಸ್ಸನ್ನು ಸಂಭ್ರಮದಿಂದ ಸ್ವಾಗತಿಸಿ, ಶಾಸಕರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kw8cfa2gr7hytw111n0804mp,imgname-bus-1782692948048.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ಬಸವನಬಾಗೇವಾಡಿಯಿಂದ ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ಹೋಗುವ ನೂತನ ಬಸ್ ಗೆ ಗ್ರಾಮಸ್ಥರಿಂದ ಹಾರ, ತುರಾಯಿ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು.&lt;/p&gt;&lt;h2&gt;&lt;strong&gt;ಬಸ್ ಮಾರ್ಗ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ಬಹುದಿನಗಳ ಬೇಡಿಕೆಯಾದ ಕೊಂಡಗೂಳಿ ಮಾರ್ಗವಾಗಿ ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಕುದುರಿ ಸಾಲವಾಡಗಿ, ಯಾಳವಾರ , ಕೊಂಡಗೂಳಿ, ಕೋರವಾರ ಹಾಗೂ ಕೊಕಟನೂರ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್ ಸಂಚಾರಕ್ಕೆ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹಾಗೂ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಗ್ರಾಮಸ್ಥರು ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.&lt;/p&gt;&lt;p&gt;ಗ್ರಾಮದ ಮುಖಂಡರು ಮಾತನಾಡಿ, ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆಗೆ ಸಹಕರಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅಭಿನಂದಿಸಿದರು.&lt;/p&gt;&lt;p&gt;ಇದೇ ವೇಳೆ ಮುಖಂಡರಾದ ಶಿವು ಕೊಳ್ಳಾರಿ, ಬಾಬು ನದಾಫ್, ಉಮೇಶ ಹನ್ನಿ,ಕಾಸಿಲಿಂಗ ಸಿಂದಗೇರಿ,ಅಕ್ಷಯ ಗೊಬ್ಬರ, ಕಲ್ಲು ಅವರಾದಿ, ಶಿವಾನಂದ ಗೊಬ್ಬರ,ಮಹಿಬೂಬ ಖಾಜಿ, ಮುನೀರ್ ನದಾಫ್, ಬಸವಲಿಂಗಯ್ಯ ಹಿರೇಮಠ ಹಾಗೂ ಬಸವರಾಜ ಕುಲಕರ್ಣಿ ಸೇರಿ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಮಲಿನ ಅಂಶ ಪತ್ತೆ ಆದ್ರೆ ಪಾನ್&zwnj; ಮಸಾಲ, ಗುಟ್ಕಾ ನಿಷೇಧ: ಡಿಕೆ ಶಿವಕುಮಾರ್ ಎಚ್ಚರಿಕೆ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಶುರು; ನಾಳೆಯಿಂದ ಮನೆಮನೆಗೆ ಎಸ್&zwnj;ಐಆರ್&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/new-bus-service-to-sindagi-town-via-kondagooli-begins-mrq/articleshow-8afdlxy"/>
        </item>
        <item>
            <title><![CDATA[ಭೀಮಾ ತೀರದ ರೌಡಿಶೀಟರ್ ತುಳಸಿರಾಮ ಹರಿಜನಗೆ 'ಗೂಂಡಾ ಕಾಯ್ದೆ' ಬಿಸಿ: ಚಾಮರಾಜನಗರ ಜೈಲಿಗೆ ಶಿಫ್ಟ್ ಮಾಡಲು ಡಿಸಿ ಆದೇಶ!]]></title>
            <link>https://kannada.asianetnews.com/karnataka-districts/vijayapura-rowdy-sheeter-tulasiram-harijan-arrested-goonda-act-chamarajanagar-jail/articleshow-a8hc3hr</link>
            <guid isPermaLink="true">https://kannada.asianetnews.com/karnataka-districts/vijayapura-rowdy-sheeter-tulasiram-harijan-arrested-goonda-act-chamarajanagar-jail/articleshow-a8hc3hr</guid>
            <pubDate>Fri, 10 Jul 2026 23:11:28 +0530</pubDate>
            <description><![CDATA[ಭೀಮಾ ತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನನ ಶಿಷ್ಯ ರೌಡಿಶೀಟರ್ ತುಳಸಿರಾಮ ಹರಿಜನ ವಿರುದ್ಧ ವಿಜಯಪುರ ಜಿಲ್ಲಾಡಳಿತ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿದೆ. ಸಮಾಜ ವಿರೋಧಿ ಚಟುವಟಿಕೆ ಮತ್ತು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಸುದ್ದಿಯಾಗಿದ್ದ ಈತನನ್ನು ಚಾಮರಾಜನಗರ ಜೈಲಿಗೆ ಕಳುಹಿಸಲು ಆದೇಶಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx6hpc5kahpqwmsngmy2atse,imgname-tulsiram-harijana-1783705055409.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಜು.10): ಭೀ&lt;/strong&gt;ಮಾ ತೀರದ ಕುಖ್ಯಾತ ಹಂತಕ ಬಾಗಪ್ಪ ಹರಿಜನನ ಶಿಷ್ಯ ಹಾಗೂ ರೌಡಿಶೀಟರ್ ತುಳಸಿರಾಮ ಹರಿಜನ ಅಲಿಯಾಸ್ ಬನಸೋಡೆಗೆ ವಿಜಯಪುರ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ (Goonda Act) ಕ್ರಮ ಕೈಗೊಂಡಿರುವ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಕೆ., ಈತನನ್ನು ಚಾಮರಾಜನಗರ ಜಿಲ್ಲಾ ಜೈಲಿನಲ್ಲಿರಿಸಲು ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಮೂಲತಃ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾದ ತುಳಸಿರಾಮ ಹರಿಜನ, ಪ್ರಸ್ತುತ ವಿಜಯಪುರದ ಗಣೇಶ್ ನಗರದಲ್ಲಿ ವಾಸವಾಗಿದ್ದನು. ಈತ ವೃತ್ತಿಪರ ಅಪರಾಧಿಯಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರವಿ ಮೇಲಿನಕೇರಿ ಮತ್ತು ಸುಶೀಲ್ ಕಾಳೆ ಹತ್ಯೆ ಪ್ರಕರಣಗಳ ಕಿಂಗ್ ಪಿನ್ ಆಗಿದ್ದ ಈತನ ಮೇಲೆ ಭಾರತೀಯ ದಂಡ ಸಂಹಿತೆ (IPC) ಮತ್ತು ಭಾರತೀಯ ನ್ಯಾಯ ಸಂಹಿತೆ-2023ರ ಅಡಿಯಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ.&lt;/p&gt;&lt;h2&gt;&lt;strong&gt;ವೈರಲ್ ವಿಡಿಯೋ ಮತ್ತು ರಾಜಕೀಯ ನಂಟು:&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ತುಳಸಿರಾಮ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಸಕ್ರಿಯನಾಗಿದ್ದನು. ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಬಿಲ್ಡಪ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದನು. ಅಷ್ಟೇ ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿ ಶುಭ ಕೋರಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದನು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಹಾಗೂ ಟೀಕೆಗೆ ಕಾರಣವಾಗಿತ್ತು. ಅಪರಾಧ ಲೋಕದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗೆ ರಾಜಕೀಯ ನಾಯಕರು ಪ್ರೋತ್ಸಾಹ ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು.&lt;/p&gt;&lt;p&gt;ಈ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಈತನನ್ನು ವಿಜಯಪುರ ಜಿಲ್ಲೆಯಿಂದ ದೂರವಿಡಲು ನಿರ್ಧರಿಸಿದೆ. ಕರ್ನಾಟಕ ಅಕ್ರಮ ಕಳ್ಳಭಟ್ಟಿ ಸರಾಯಿ ವ್ಯವಹಾರ ಹಾಗೂ ಗೂಂಡಾ ಚಟುವಟಿಕೆಗಳ ತಡೆ ಕಾಯ್ದೆ 1985ರ ಅಡಿಯಲ್ಲಿ ಈತನನ್ನು ಬಂಧಿಸಿ ಚಾಮರಾಜನಗರ ಜೈಲಿಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-rowdy-sheeter-tulasiram-harijan-arrested-goonda-act-chamarajanagar-jail/articleshow-a8hc3hr"/>
        </item>
        <item>
            <title><![CDATA[ಕರ್ನಾಟಕದ ಜಲಾಶಯಗಳಿಗೆ ಹರಿದುಬಂದ ಜಲರಾಶಿ: ಒಂದೇ ದಿನದಲ್ಲಿ ಆಲಮಟ್ಟಿಗೆ 11 ಟಿಎಂಸಿ ನೀರು]]></title>
            <link>https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</link>
            <guid isPermaLink="true">https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</guid>
            <pubDate>Thu, 09 Jul 2026 18:00:43 +0530</pubDate>
            <description><![CDATA[&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳಲ್ಲಿ 20 ಟಿಎಂಸಿ ನೀರು ಹರಿದುಬಂದಿದೆ. ಕೃಷ್ಣಾ ಕೊಳ್ಳದ ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಗಣನೀಯ ಪ್ರಮಾಣದ ನೀರನ್ನು ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3d6vm0cz6ss4d6kpwsxq8q,imgname-almatti-reservoir-storage-1783599689344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜು.9): &lt;/strong&gt;ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮುಂಗಾರಿನ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಕುಡಿಯುವ ನೀರು ಮತ್ತು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುವ ಕರ್ನಾಟಕದ 10 ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 20 ಟಿಎಂಸಿ (TMC) ನೀರು ಹರಿದುಬಂದಿದೆ. ಇದರಲ್ಲಿ ಕೃಷ್ಣಾ ಕೊಳ್ಳದ ಆರು ಜಲಾಶಯಗಳಿಗೇ ದಾಖಲೆಯ 17.4 ಟಿಎಂಸಿ ನೀರು ಸೇರ್ಪಡೆಯಾಗಿದೆ.&lt;/p&gt;&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಆಲಮಟ್ಟಿ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಮತ್ತು ಭದ್ರಾ ಜಲಾಶಯಗಳಿಗೆ ನಿರಂತರ ನೀರಿನ ಆಸರೆಯಾಗುತ್ತಿದೆ. ವಿಶೇಷವೆಂದರೆ, ಜುಲೈ ತಿಂಗಳ ಆರಂಭದಲ್ಲಿ ಭದ್ರಾ ಜಲಾಶಯವನ್ನು ಹೊರತುಪಡಿಸಿ ಈ ಕೊಳ್ಳದ ಉಳಿದೆಲ್ಲಾ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಸಂಪೂರ್ಣ ಶೂನ್ಯವಾಗಿತ್ತು.&lt;/p&gt;&lt;h2&gt;&lt;strong&gt;ಆಲಮಟ್ಟಿಗೆ ಒಂದೇ ದಿನದಲ್ಲಿ 11 ಟಿಎಂಸಿ ನೀರು&lt;/strong&gt;&lt;/h2&gt;&lt;p&gt;ಜುಲೈ 8 ರಂದು ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯವಾದ ಆಲಮಟ್ಟಿಗೆ ಕೇವಲ 24 ಗಂಟೆಗಳಲ್ಲಿ 1.26 ಲಕ್ಷ ಕ್ಯೂಸೆಕ್ (ಅಂದರೆ ಸುಮಾರು 10.92 ಟಿಎಂಸಿ) ನಷ್ಟು ಭಾರಿ ಒಳಹರಿವು ದಾಖಲಾಗಿದೆ. ಜುಲೈ 7 ರಂದು ಆಲಮಟ್ಟಿ ಜಲಾಶಯದಲ್ಲಿ 22.46 ಟಿಎಂಸಿ ನೀರು ಸಂಗ್ರಹವಿತ್ತು ಮತ್ತು ಕೇವಲ 21,625 ಕ್ಯೂಸೆಕ್ ಒಳಹರಿವು ಇತ್ತು. ಆದರೆ, ಬುಧವಾರದ ವೇಳೆಗೆ ಜಲಾಶಯದ ಪ್ರಸ್ತುತ ನೀರಿನ ಸಂಗ್ರಹ 33.34 ಟಿಎಂಸಿಗೆ ಏರಿಕೆಯಾಗಿದ್ದು, ಒಳಹರಿವು ಕೂಡ 1,26,373 ಕ್ಯೂಸೆಕ್&zwnj;ಗೆ ತಲುಪಿದೆ.&lt;/p&gt;&lt;h2&gt;&lt;strong&gt;ಘಟಪ್ರಭಾ ಮತ್ತು ತುಂಗಭದ್ರಾ ಜಲಾಶಯಗಳ ಸ್ಥಿತಿ&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅತಿ ಹೆಚ್ಚು ಪ್ರಯೋಜನ ಪಡೆದ ಮತ್ತೊಂದು ಜಲಾಶಯವೆಂದರೆ ಘಟಪ್ರಭಾ. ಕೇವಲ 24 ಗಂಟೆಗಳ ಅವಧಿಯಲ್ಲಿ ಈ ಅಣೆಕಟ್ಟಿನ ನೀರಿನ ಮಟ್ಟ ಸುಮಾರು 4 ಟಿಎಂಸಿಯಷ್ಟು ಹೆಚ್ಚಾಗಿದೆ. ಇತ್ತ ತುಂಗಭದ್ರಾ ಜಲಾಶಯಕ್ಕೂ 24 ಗಂಟೆಗಳಲ್ಲಿ 17,507 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 2 ಟಿಎಂಸಿಯಷ್ಟು ನೀರು ಸಂಗ್ರಹಕ್ಕೆ ಸೇರ್ಪಡೆಯಾಗಿದೆ.&lt;/p&gt;&lt;h2&gt;&lt;strong&gt;ಮಲಪ್ರಭಾಗೆ ಮೂರು ಪಟ್ಟು ಹೆಚ್ಚಿದ ಒಳಹರಿವು&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಲಪ್ರಭಾ ಅಣೆಕಟ್ಟಿನ ಒಳಹರಿವು ಹಿಂದಿನ ದಿನಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಜಲಾಶಯಕ್ಕೆ 13,700 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇನ್ನು ಆಲಮಟ್ಟಿ ಜಲಾಶಯದ ಸಮತೋಲನ ಅಣೆಕಟ್ಟಾಗಿರುವ ನಾರಾಯಣಪುರ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಶೂನ್ಯವಾಗಿಯೇ ಮುಂದುವರಿದಿದೆ. ಪ್ರಸ್ತುತ ಈ ಅಣೆಕಟ್ಟು ತನ್ನ ಒಟ್ಟು 33 ಟಿಎಂಸಿ ಸಾಮರ್ಥ್ಯದ ಎದುರು 19.89 ಟಿಎಂಸಿ ನೀರನ್ನು ಹೊಂದಿದೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ಜಲಾಶಯ&lt;/td&gt;   &lt;td&gt;ಒಟ್ಟು ಸಾಮರ್ಥ್ಯ&lt;/td&gt;   &lt;td&gt;ಪ್ರಸ್ತುತ ಸಂಗ್ರಹಣೆ (In tmcft)&lt;/td&gt;   &lt;td&gt;ಒಳಹರಿವು (cusec)&lt;/td&gt;   &lt;td&gt;ಹೊರಹರಿವು (cusec)&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕೃಷ್ಣಾ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಆಲಮಟ್ಟಿ&lt;/td&gt;   &lt;td&gt;123.08&lt;/td&gt;   &lt;td&gt;33.34&lt;/td&gt;   &lt;td&gt;1,26,625&lt;/td&gt;   &lt;td&gt;100&lt;/td&gt;  &lt;/tr&gt;  &lt;tr&gt;   &lt;td&gt;ತುಂಗಭದ್ರಾ&lt;/td&gt;   &lt;td&gt;105.79&lt;/td&gt;   &lt;td&gt;11.22&lt;/td&gt;   &lt;td&gt;17,507&lt;/td&gt;   &lt;td&gt;170&lt;/td&gt;  &lt;/tr&gt;  &lt;tr&gt;   &lt;td&gt;ಭದ್ರಾ&lt;/td&gt;   &lt;td&gt;71.54&lt;/td&gt;   &lt;td&gt;28.75&lt;/td&gt;   &lt;td&gt;17,818&lt;/td&gt;   &lt;td&gt;214&lt;/td&gt;  &lt;/tr&gt;  &lt;tr&gt;   &lt;td&gt;ಹಿಡಕಲ್&lt;/td&gt;   &lt;td&gt;51&lt;/td&gt;   &lt;td&gt;13.18&lt;/td&gt;   &lt;td&gt;26,393&lt;/td&gt;   &lt;td&gt;110&lt;/td&gt;  &lt;/tr&gt;  &lt;tr&gt;   &lt;td&gt;ಮಲಪ್ರಭಾ&lt;/td&gt;   &lt;td&gt;37.73&lt;/td&gt;   &lt;td&gt;10.38&lt;/td&gt;   &lt;td&gt;13,700&lt;/td&gt;   &lt;td&gt;194&lt;/td&gt;  &lt;/tr&gt;  &lt;tr&gt;   &lt;td&gt;ನಾರಾಯಣಪುರ&lt;/td&gt;   &lt;td&gt;33.31&lt;/td&gt;   &lt;td&gt;19.82&lt;/td&gt;   &lt;td&gt;0&lt;/td&gt;   &lt;td&gt;767&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕಾವೇರಿ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಹಾರಂಗಿ&lt;/td&gt;   &lt;td&gt;8.5&lt;/td&gt;   &lt;td&gt;4.03&lt;/td&gt;   &lt;td&gt;2,090&lt;/td&gt;   &lt;td&gt;180&lt;/td&gt;  &lt;/tr&gt;  &lt;tr&gt;   &lt;td&gt;ಹೇಮಾವತಿ&lt;/td&gt;   &lt;td&gt;37.10&lt;/td&gt;   &lt;td&gt;18.78&lt;/td&gt;   &lt;td&gt;16,593&lt;/td&gt;   &lt;td&gt;300&lt;/td&gt;  &lt;/tr&gt;  &lt;tr&gt;   &lt;td&gt;ಕೆಆರ್&zwnj; ಸಾಗರ&lt;/td&gt;   &lt;td&gt;49.45&lt;/td&gt;   &lt;td&gt;12.49&lt;/td&gt;   &lt;td&gt;7,531&lt;/td&gt;   &lt;td&gt;790&lt;/td&gt;  &lt;/tr&gt;  &lt;tr&gt;   &lt;td&gt;ಕಬಿನಿ&lt;/td&gt;   &lt;td&gt;19.52&lt;/td&gt;   &lt;td&gt;7.96&lt;/td&gt;   &lt;td&gt;10,757&lt;/td&gt;   &lt;td&gt;500&lt;/td&gt;  &lt;/tr&gt;  &lt;tr&gt;   &lt;td&gt;ವಾಣಿವಿಲಾಸ ಸಾಗರ&lt;/td&gt;   &lt;td&gt;30.42&lt;/td&gt;   &lt;td&gt;23.76&lt;/td&gt;   &lt;td&gt;0&lt;/td&gt;   &lt;td&gt;0&lt;/td&gt;  &lt;/tr&gt; &lt;/tbody&gt;&lt;/table&gt;&lt;h2&gt;&lt;strong&gt;ಕಾವೇರಿ ಕೊಳ್ಳದ ಜಲಾಶಯಗಳಲ್ಲೂ ಸ್ಥಿರ ಪ್ರಗತಿ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ನಿಧಾನ ಹಾಗೂ ಸ್ಥಿರವಾಗಿ ಮುಂದುವರಿದಿದೆ. ಈ ನಾಲ್ಕು ಅಣೆಕಟ್ಟುಗಳ ಒಟ್ಟು ನೀರಿನ ಸಾಮರ್ಥ್ಯ 114.57 ಟಿಎಂಸಿ ಆಗಿದ್ದು, ಪ್ರಸ್ತುತ 43.25 ಟಿಎಂಸಿ (ಶೇ. 38 ರಷ್ಟು) ನೀರು ಸಂಗ್ರಹವಾಗಿದೆ. ಜುಲೈ 7 ರಂದು ಇವುಗಳಲ್ಲಿ 40.23 ಟಿಎಂಸಿ ನೀರಿತ್ತು.&lt;/p&gt;&lt;p&gt;ಕಾವೇರಿ ಕೊಳ್ಳದಲ್ಲಿ ಹಾರಂಗಿ ಜಲಾಶಯವು ಅತ್ಯಂತ ಕಡಿಮೆ ಎಂದರೆ 1,657 ಕ್ಯೂಸೆಕ್ ಒಳಹರಿವನ್ನು ಪಡೆದಿದೆ. ಆದರೆ ಹೇಮಾವತಿ ಜಲಾಶಯದ ಒಳಹರಿವು ಕಳೆದ 24 ಗಂಟೆಗಳಲ್ಲಿ ದುಪ್ಪಟ್ಟಾಗಿದ್ದು, 16,593 ಕ್ಯೂಸೆಕ್&zwnj;ಗೆ ತಲುಪಿದೆ. ಅದೇ ರೀತಿ ಕಬಿನಿ ಜಲಾಶಯದ ಒಳಹರಿವು ಕೂಡ ಒಂದೇ ದಿನದಲ್ಲಿ ದುಪ್ಪಟ್ಟಾಗಿದ್ದು, ಪ್ರಸ್ತುತ 10,757 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಒಟ್ಟಾರೆಯಾಗಿ ರಾಜ್ಯದ ಪ್ರಮುಖ ನದಿ ಕೊಳ್ಳಗಳಲ್ಲಿ ನೀರಿನ ಆಶಾಭಾವನೆ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx"/>
        </item>
        <item>
            <title><![CDATA[ಅಂತಾರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಾಲೆಯ ಕಟ್ಟಡ ಉದ್ಘಾಟನೆ; ₹3.25 ಕೋಟಿ ವೆಚ್ಚದಲ್ಲಿ ನಿರ್ಮಾಣ]]></title>
            <link>https://kannada.asianetnews.com/karnataka-districts/viajaypuara-inauguration-international-standard-government-school-building-construction-cost-rs-3-point-25-crore-mrq/articleshow-brc29ay</link>
            <guid isPermaLink="true">https://kannada.asianetnews.com/karnataka-districts/viajaypuara-inauguration-international-standard-government-school-building-construction-cost-rs-3-point-25-crore-mrq/articleshow-brc29ay</guid>
            <pubDate>Sat, 04 Jul 2026 06:42:55 +0530</pubDate>
            <description><![CDATA[ವಿಜಯಪುರದ ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಸಿ.ಎಸ್.ಆರ್ ಅನುದಾನದಡಿ ₹3.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡವನ್ನು ಸಚಿವ ಎಂ.ಬಿ. ಪಾಟೀಲರು ಲೋಕಾರ್ಪಣೆಗೊಳಿಸಿದರು. ಈ ಸುಸಜ್ಜಿತ ಶಾಲೆಯು ಗ್ರಾಮೀಣ ಪ್ರತಿಭೆಗಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವರದಾನವಾಗಲಿದೆ ಎಂದು ಅವರು ಹೇಳಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kwnan7zg5wdtcdfp2ywpx0mm,imgname-kotyal-school-1783127252976.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ: ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ಸಂಸ್ಥೆಗಳ ಸಿ.ಎಸ್.ಆರ್&zwnj; ಅನುದಾನದಡಿ ₹3.25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.&lt;/p&gt;&lt;p&gt;ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಿರ್ಮಿಸಿದ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ದೊಡ್ಡದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಆದಾಯದ ಮರುಹೂಡಿಕೆ ಮಾಡಿದ ಏಕೈಕ ವಿಮಾನ ನಿಲ್ದಾಣವಾಗಿದೆ. ಈ ಸಂಸ್ಥೆ, ಕೋಟ್ಯಾಳದಲ್ಲಿ ಗುಣಮಟ್ಟದ ಹಾಗೂ ಸುಂದರ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದೆ. ಗ್ರಾಮೀಣ ಪ್ರತಿಭೆಗಳಿಗೆ ಈ ಶಾಲಾ ಕಟ್ಟಡ ಅನುಕೂಲವಾಗಲಿದ್ದು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದರೆ, ಗ್ರಾಮೀಣ ಬಾಲಕಿಯರಿಗೆ ಈ ಶಾಲೆ ಭವಿಷ್ಯದ ದಿನಗಳಲ್ಲಿ ವರದಾನವಾಗಲಿದೆ. ಹೆಣ್ಣು ಮಕ್ಕಳನ್ನು ಪೋಷಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು.&lt;/p&gt;&lt;h2&gt;&lt;strong&gt;₹3.25 ಕೋಟಿ ವೆಚ್ಚದಲ್ಲಿ, 7,000 ಚದರ ಅಡಿ ವಿಸ್ತೀರ್ಣ&lt;/strong&gt;&lt;/h2&gt;&lt;p&gt;ಈ ಸುಸಜ್ಜಿತ ಶಾಲಾ ಕಟ್ಟಡವನ್ನು ₹3.25 ಕೋಟಿ ವೆಚ್ಚದಲ್ಲಿ, 7,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಿಸಲಾಗಿದೆ. ಇದರೊಂದಿಗೆ 800 ಚದರ ಅಡಿಯ ಹಳೆಯ ಕಟ್ಟಡದ ಪುನರುಜ್ಜೀವನ ಕಾರ್ಯವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಶಾಲೆಯಲ್ಲಿ 1 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಳು ಸುಸಜ್ಜಿತ ಕೊಠಡಿ ಸಿದ್ಧಪಡಿಸಿದ್ದು, ಸ್ಟೇಮ್&zwnj;ಲ್ಯಾಬ್ ಹಾಗೂ ನಲಿಕಲಿ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ. 135 ಹೊಸ ಪೀಠೋಪಕರಣ, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣ ನಿರ್ಮಿಸಲಾಗಿದೆ ಎಂದರು.&lt;/p&gt;&lt;p&gt;ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಹರಿ ಮರಾರ ಮಾತನಾಡಿ, ಈ ಸುಂದರ ಕಟ್ಟಡ ವಿದ್ಯಾರ್ಥಿಗಳ ಭವಿಷ್ಯ ಬೆಳಗುವ ಜ್ಞಾನ ದೇಗುಲವಾಗಿದೆ. ನೀರಾವರಿಯಿಂದ ಈ ಭಾಗದ ರೈತರ ಬಾಳು ಸಮೃದ್ಧಗೊಳಿಸಿದ ಡಾ.ಎಂ.ಬಿ. ಪಾಟೀಲರು ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಶ್ರಮದ ಫಲವಾಗಿ ಈ ಕಟ್ಟಡ ಮೈದಳೆದಿದೆ ಎಂದರು.&lt;/p&gt;&lt;p&gt;ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ, ಭೂಮಿ ದಾನ ಮಾಡಿದ ಕಮಲಾ ಮುರುಗೇಶ ನಿರಾಣಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿದರು. ಶಾಲಾ ಕಟ್ಟಡಕ್ಕೆ ಭೂಮಿ ದಾನ ನೀಡಿರುವ ಆನಂದರಾವ ಕುಲಕರ್ಣಿ, ಅನೀಲಕುಮಾರ ಪಾಟೀಲ, ವಿ.ಎಸ್. ಪಾಟೀಲ ಹಲವು ಗಣ್ಯರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.&lt;/p&gt;&lt;p&gt;ಹೊನವಾಡದಲ್ಲೂ ಹೈಸ್ಕೂಲ್ ಕಟ್ಟಡ ಕಟ್ಟಿಕೊಡುತ್ತಿದ್ದಾರೆ. ಸಿಎಸ್&zwnj;ಆರ್ ಅನುದಾನದಲ್ಲಿ ಶಾಲಾ ಕಾಲೇಜಿಗೂ ಜಿಲ್ಲಾದ್ಯಂತ ಶಾಲಾ ಕಟ್ಟಡ ಸ್ಮಾರ್ಟ್&zwnj; ಕ್ಲಾಸ್ ಕಟ್ಟಡ, ಪಾಠೋಪಕರಣ, ಮೈದಾನ, ಪೀಠೋಪಕರಣ ಒದಗಿಸಲಾಗುವುದು. ಅಂಗನವಾಡಿ ಕಟ್ಟಡಗಳು, ನೀರಾವರಿ, ಕೆರೆ ಅಭಿವೃದ್ಧಿ, ಹೈನುಗಾರಿಕೆಗೆ ಒತ್ತು ನೀಡಲಾಗಿದೆ.ಹೈನುಗಾರಿಕೆ ಇಡೀ ಜಿಲ್ಲೆಗೆ ವಿಸ್ತರಣೆ ಮಾಡಲಾಗುವುದು. ಬಾಬಾನಗರದಲ್ಲಿ ಡ್ಯಾಂ ನಿರ್ಮಾಣ ಮಾಡಿ, ಮಳೆಗಾಲದಲ್ಲಿ ತುಂಬಿಸಿ ಬೇಸಿಗೆ ಸಂದರ್ಭದಲ್ಲಿ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವಿಜಯಪುರ ಉಪ ನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ಯಾವುದೇ ದಾಖಲೆಗಳಿಲ್ಲದ ₹50,000 ನಗದು ಜಪ್ತಿ!&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/viajaypuara-inauguration-international-standard-government-school-building-construction-cost-rs-3-point-25-crore-mrq/articleshow-brc29ay"/>
        </item>
        <item>
            <title><![CDATA[ವಿಜಯಪುರ ಉಪ ನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ಯಾವುದೇ ದಾಖಲೆಗಳಿಲ್ಲದ ₹50,000 ನಗದು ಜಪ್ತಿ!]]></title>
            <link>https://kannada.asianetnews.com/gallery/karnataka-districts/lokayukta-raid-on-indi-sub-registrar-office-vijayapura-50000-cash-seized-brom59c</link>
            <guid isPermaLink="true">https://kannada.asianetnews.com/gallery/karnataka-districts/lokayukta-raid-on-indi-sub-registrar-office-vijayapura-50000-cash-seized-brom59c</guid>
            <pubDate>Wed, 01 Jul 2026 22:35:31 +0530</pubDate>
            <description><![CDATA[ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಉಪ ನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ದೂರಿನ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಲೆಕ್ಕವಿಲ್ಲದ ಸುಮಾರು 50,000 ರೂ. ನಗದು ವಶಪಡಿಸಿಕೊಳ್ಳಲಾಗಿದ್ದು, ಹಲವು ಖಾಸಗಿ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwf8pbqg3vadv5b430y7925m,imgname-vijayapura-lokayukta-raid-1782923865840.jpg" type="image/jpeg" height="390" width="690"/>
            <content:encoded><![CDATA[ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಉಪ ನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ದೂರಿನ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಲೆಕ್ಕವಿಲ್ಲದ ಸುಮಾರು 50,000 ರೂ. ನಗದು ವಶಪಡಿಸಿಕೊಳ್ಳಲಾಗಿದ್ದು, ಹಲವು ಖಾಸಗಿ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.&lt;img&gt;&lt;p&gt;ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಎನ್ನಲಾದ ಭ್ರಷ್ಟಾಚಾರದ ವಾಸನೆ ಹಿಡಿದ ಲೋಕಾಯುಕ್ತ ಪೊಲೀಸರು ಇಂದು ಮಿಂಚಿನ ದಾಳಿ ನಡೆಸಿದ್ದಾರೆ. ಇಂಡಿ ಉಪ ನೋಂದಣಿ ಕಚೇರಿ (Sub-Registrar Office) ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಸಿಬ್ಬಂದಿ ದಾಳಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;50 ಸಾವಿರ ನಗದು ವಶ:&lt;/strong&gt;&lt;/p&gt;&lt;p&gt;ವಿಜಯಪುರ ಜಿಲ್ಲಾ ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಾಳಿಯ ವೇಳೆ ಕಚೇರಿಯಲ್ಲಿ ಯಾವುದೇ ಸೂಕ್ತ ದಾಖಲೆಗಳಿಲ್ಲದ ಸುಮಾರು 50,000 ರೂಪಾಯಿ ನಗದು ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಣವು ಸಾರ್ವಜನಿಕರಿಂದ ಅಕ್ರಮವಾಗಿ ಪಡೆದ ಲಂಚದ ಹಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಖಾಸಗಿ ವ್ಯಕ್ತಿಗಳ ವಿಚಾರಣೆ:&lt;/strong&gt;&lt;/p&gt;&lt;p&gt;ಕಚೇರಿಯ ಒಳಗೆ ಅನಧಿಕೃತವಾಗಿ ಓಡಾಡಿಕೊಂಡಿದ್ದ ಕೆಲವು ಖಾಸಗಿ ವ್ಯಕ್ತಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸರ್ಕಾರಿ ಕೆಲಸಗಳಿಗಾಗಿ ಸಾರ್ವಜನಿಕರನ್ನು ಪೀಡಿಸುತ್ತಿದ್ದ ಮಧ್ಯವರ್ತಿಗಳ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಬಾಂಡ್ ರೈಟರ್&zwnj;ಗಳ (Bond Writers) ಬಳಿ ಇದ್ದ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ತಂಡದಲ್ಲಿ ಯಾರಿದ್ದರು?&lt;/strong&gt;&lt;/p&gt;&lt;p&gt;ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ತಂಡದಲ್ಲಿ ಸಿಪಿಐ ಆನಂದ ಟಕ್ಕನವರ, ಸಿಪಿಐ ಆನಂದ ಡೊಣ್ಣಿ ಹಾಗೂ ಲೋಕಾಯುಕ್ತದ ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕಚೇರಿಯ ಪ್ರತಿಯೊಂದು ವಿಭಾಗದ ದಾಖಲೆಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮುಂದುವರಿಯಲಿರುವ ಪರಿಶೀಲನೆ:&lt;/strong&gt;&lt;/p&gt;&lt;p&gt;ಮೂಲಗಳ ಪ್ರಕಾರ, ಕಚೇರಿಯಲ್ಲಿನ ದಾಖಲೆಗಳ ಪ್ರಮಾಣ ಹೆಚ್ಚಿರುವುದರಿಂದ ಈ ಪರಿಶೀಲನಾ ಕಾರ್ಯವು ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ. ದಾಳಿಯ ವೇಳೆ ಸಿಕ್ಕಿರುವ ನಗದು ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ವರದಿ ಸಿದ್ಧಪಡಿಸಿದ ನಂತರ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸ ನಡೆಯುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಲೋಕಾಯುಕ್ತರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಪರಿಶೀಲನೆಯ ನಂತರ ಮತ್ಯಾವ ದೊಡ್ಡ ತಿಮಿಂಗಿಲಗಳು ಬಲೆಗೆ ಬೀಳಲಿವೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/lokayukta-raid-on-indi-sub-registrar-office-vijayapura-50000-cash-seized-brom59c"/>
        </item>
        <item>
            <title><![CDATA[ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ : ಟ್ರೈನ್ ರೂಟ್ ಯಾವುದು?]]></title>
            <link>https://kannada.asianetnews.com/gallery/karnataka-districts/indian-railways-direct-train-service-between-vijayapura-to-tirupati-soon-what-is-the-route-mrq-cd8miky</link>
            <guid isPermaLink="true">https://kannada.asianetnews.com/gallery/karnataka-districts/indian-railways-direct-train-service-between-vijayapura-to-tirupati-soon-what-is-the-route-mrq-cd8miky</guid>
            <pubDate>Sun, 21 Jun 2026 14:39:41 +0530</pubDate>
            <description><![CDATA[ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬಹುಕಾಲದ ಬೇಡಿಕೆಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಂಸದ ನಾರಾಯಣಸಾ ಕೆ. ಭಾಂಡೆಗೆ ಅವರ ಮನವಿಯನ್ನು ಮುಂದಿನ ಕ್ರಮಕ್ಕಾಗಿ ರವಾನಿಸಲಾಗಿದ್ದು, ಉತ್ತರ ಕರ್ನಾಟಕದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvmpkdabwjdrbj6x2yn916qt,imgname-vijayapura-to-tirupati-direct-indian-railways-1782032479563.jpg" type="image/jpeg" height="390" width="690"/>
            <content:encoded><![CDATA[ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬಹುಕಾಲದ ಬೇಡಿಕೆಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಂಸದ ನಾರಾಯಣಸಾ ಕೆ. ಭಾಂಡೆಗೆ ಅವರ ಮನವಿಯನ್ನು ಮುಂದಿನ ಕ್ರಮಕ್ಕಾಗಿ ರವಾನಿಸಲಾಗಿದ್ದು, ಉತ್ತರ ಕರ್ನಾಟಕದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.&lt;img&gt;&lt;p&gt;ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬೇಡಿಕೆಗೆ ಭಾರತೀಯ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಜ್ಯಸಭಾ ಸದಸ್ಯರಾಗಿರುವ ನಾರಾಯಣಸಾ ಕೆ. ಭಾಂಡೆಗೆ ಅವರ ಪತ್ರಕ್ಕೆ ಮಹತ್ವದ ಸ್ಪಂದನೆ ದೊರೆತಿದೆ. ಈ ಬಗ್ಗೆ ಸಂಸದರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯಪುರ&ndash;ತಿರುಪತಿ ನೇರ ರೈಲು ಸೇವೆ ಆರಂಭಿಸುವ ಕುರಿತು ನಾನು ರೈಲ್ವೆ ಇಲಾಖೆಗೆ ಸಲ್ಲಿಸಿದ್ದ ಮನವಿಗೆ ಮಹತ್ವದ ಸ್ಪಂದನೆ ದೊರೆತಿದೆ. ದಕ್ಷಿಣ ಮಧ್ಯ ರೈಲ್ವೆ (South Central Railway), ಸಿಕಂದರಾಬಾದ್ ಕಚೇರಿಯು ನನ್ನ ಮನವಿಯನ್ನು ಸಂಬಂಧಿತ ದಕ್ಷಿಣ ಕರಾವಳಿ ರೈಲ್ವೆ (South Coast Railway), ವಿಶಾಖಪಟ್ಟಣಂ ವಿಭಾಗಕ್ಕೆ ಮುಂದಿನ ಪರಿಶೀಲನೆ ಹಾಗೂ ಅಗತ್ಯ ಕ್ರಮಕ್ಕಾಗಿ ರವಾನಿಸಿದೆ ಎಂದು ಸಂಸದರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಭಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿರುವ ಈ ರೈಲು ಸೇವೆ ಸಾಕಾರಗೊಳ್ಳುವ ದಿಸೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ವಿಜಯಪುರ&ndash;ತಿರುಪತಿ ನೇರ ರೈಲು ಸೇವೆ ಮಂಜೂರಾಗುವವರೆಗೆ ನನ್ನ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ. ಈ ಸೇವೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂಬ ವಿಶ್ವಾಸವಿದೆ. ಜನರ ಆಶಯಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ ಎಂದು ನಾರಾಯಣಸಾ ಕೆ. ಭಾಂಡೆಗೆ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನೆಲಮಂಗಲ ಬಳಿ ಕೆಟ್ಟು ನಿಂತ ರೈಲಿನಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರದಾಟ&lt;/strong&gt;&lt;/p&gt;&lt;img&gt;&lt;p&gt;&lt;strong&gt;ಮಾರ್ಗ 1: &lt;/strong&gt;ವಿಜಯಪುರದಿಂದ ಆರಂಭವಾಗುವ ಈ ಪ್ರಯಾಣ ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆಆಲೂರು, ಗದಗ ಜಂಕ್ಷನ್, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್ ಮಾರ್ಗವಾಗಿ ತಿರುಪತಿ ತಲುಪಬಹುದಾಗಿದೆ.&lt;/p&gt;&lt;p&gt;&lt;strong&gt;ಮಾರ್ಗ 2: &lt;/strong&gt;ಒಂದು ವೇಳೆ ಕಲಬುರಗಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ವಿಜಯಪುರದಿಂದ ವಾಯ ಹುಟುಗಿ ಜಂಕ್ಷನ್&zwnj;ನಿಂದ ಕಲಬುರಗಿ, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ರಾಣಿಗುಂಟಾ ಜಂಕ್ಷನ್ ಮಾರ್ಗವಾಗಿ ತಿರುಪತಿ ತಲುಪಬಹುದಾಗಿದೆ. ಆದ್ರೆ ಭಾರತೀಯ ರೈಲ್ವೆ ಇಲಾಖೆ ಯಾವ ಮಾರ್ಗ ಮತ್ತು ಎಲ್ಲೆಲ್ಲಿ ನಿಲುಗಡೆಯನ್ನು ಹೊಂದಲಿದೆ ಎಂಬುದರ ಬಗ್ಗೆ ಅಧಿಕೃತವಾದ ಮಾಹಿತಿ ಹೊರ ಬಂದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/indian-railways-direct-train-service-between-vijayapura-to-tirupati-soon-what-is-the-route-mrq-cd8miky"/>
        </item>
        <item>
            <title><![CDATA[ವಿಜಯಪುರ ರೈತರ ದಶಕದ ಸಂಕಷ್ಟಕ್ಕೆ ಮುಕ್ತಿ; ಮಮದಾಪುರ ಕೆರೆ ಮುಳುಗಡೆ ಪ್ರದೇಶಕ್ಕೆ ₹42 ಕೋಟಿ ಪರಿಹಾರ!]]></title>
            <link>https://kannada.asianetnews.com/karnataka-districts/mamadapura-lake-land-acquisition-karnataka-govt-to-acquire-178-acres-to-help-farmers-sat/articleshow-cqnuogg</link>
            <guid isPermaLink="true">https://kannada.asianetnews.com/karnataka-districts/mamadapura-lake-land-acquisition-karnataka-govt-to-acquire-178-acres-to-help-farmers-sat/articleshow-cqnuogg</guid>
            <pubDate>Thu, 16 Jul 2026 18:45:14 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಮಮದಾಪುರ ಕೆರೆಗೆ ನೀರು ತುಂಬಿದಾಗ ಮುಳುಗಡೆಯಾಗುವ 178 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಎಂ.ಬಿ. ಪಾಟೀಲರ ನೇತೃತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಇದರಿಂದ 42 ರೈತ ಕುಟುಂಬಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxngzmyxfa3ewm6xn054q2kz,imgname-vijayapura-mamadapura-lake-1784207627229.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.16): ವಿ&lt;/strong&gt;ಜಯಪುರ ಜಿಲ್ಲೆಯ ರೈತರ ದಶಕಗಳ ಕಾಲದ ಸಮಸ್ಯೆಯೊಂದಕ್ಕೆ ರಾಜ್ಯ ಸರ್ಕಾರ ಕೊನೆಗೂ ಪರಿಹಾರ ನೀಡಲು ಮುಂದಾಗಿದೆ. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮಮದಾಪುರ ಕೆರೆಯಲ್ಲಿ ನೀರು ತುಂಬಿದಾಗ ಮುಳುಗಡೆಯಾಗುವ 178 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಚಿವ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ರೈತರ ದೀರ್ಘಕಾಲದ ಬೇಡಿಕೆಗೆ ಸ್ಪಂದನೆ:&lt;/strong&gt;&lt;/h2&gt;&lt;p&gt;ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಮಮದಾಪುರ ಕೆರೆಯು ಅತ್ಯಂತ ಐತಿಹಾಸಿಕ ಹಿನ್ನೆಲೆ ಹೊಂದಿದೆ. 16ನೇ ಶತಮಾನದಲ್ಲಿ ಆದಿಲ್ ಶಾಹಿಗಳು ನಿರ್ಮಿಸಿದ ಈ ಕೆರೆಯು ಸುಮಾರು 1,200 ಎಕರೆ ವಿಸ್ತೀರ್ಣ ಹೊಂದಿದ್ದು, 15ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಹಾಗೂ ಜಾನುವಾರುಗಳಿಗೆ ಆಸರೆಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂಲಕ ಈ ಕೆರೆಗೆ ನೀರು ತುಂಬಿಸಿದಾಗ, ಕೆರೆಯ ಅಂಚಿನಲ್ಲಿರುವ ಸುಮಾರು 42 ರೈತರಿಗೆ ಸೇರಿದ 178 ಎಕರೆ ಜಮೀನು ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ಇದರಿಂದ ರೈತರು ಯಾವುದೇ ಬೆಳೆ ಬೆಳೆಯಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.&lt;/p&gt;&lt;h2&gt;&lt;strong&gt;₹42 ಕೋಟಿ ವೆಚ್ಚದ ಯೋಜನೆ:&lt;/strong&gt;&lt;/h2&gt;&lt;p&gt;ಸಭೆಯಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಅವರು, 'ಈ ಮುಳುಗಡೆ ಪ್ರದೇಶದ ರೈತರು ತಮ್ಮ ಜಮೀನನ್ನು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ (KBJNL) ಬಿಟ್ಟುಕೊಡಲು ಸಿದ್ಧರಿದ್ದಾರೆ. ಈ ಭೂಸ್ವಾಧೀನ ಪ್ರಕ್ರಿಯೆಗೆ ಸುಮಾರು 42 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಜಮೀನನ್ನು ಸರ್ಕಾರವೇ ಸ್ವಾಧೀನಪಡಿಸಿಕೊಂಡರೆ ರೈತರಿಗೆ ಪರಿಹಾರ ಸಿಕ್ಕಂತಾಗುತ್ತದೆ ಮತ್ತು ಕೆರೆಯ ನೀರಿನ ಸಂಗ್ರಹಕ್ಕೂ ಅನುಕೂಲವಾಗಲಿದೆ,' ಎಂದು ವಿವರಿಸಿದರು.&lt;/p&gt;&lt;h2&gt;&lt;strong&gt;ಸಂಪುಟ ಸಭೆಯ ಮುಂದೆ ಪ್ರಸ್ತಾವನೆ:&lt;/strong&gt;&lt;/h2&gt;&lt;p&gt;ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಈ ಬಗ್ಗೆ ಕೂಡಲೇ ವರದಿ ಸಿದ್ಧಪಡಿಸಲು ಸೂಚಿಸಿದರು. ಮುಳುಗಡೆ ಪ್ರದೇಶದ ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ಈ ವಿಷಯವನ್ನು ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ, ಅಗತ್ಯ ಹಣಕಾಸು ಬಿಡುಗಡೆಗೆ ಅನುಮೋದನೆ ಪಡೆಯಲಾಗುವುದು ಎಂದು ಅವರು ಭರವಸೆ ನೀಡಿದರು.&lt;/p&gt;&lt;p&gt;ಈ ಮಹತ್ವದ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಧಾನ ವ್ಯವಸ್ಥಾಪಕ ಬಿ.ಎಂ. ಕುಲಕರ್ಣಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಬಿ.ಕೆ. ಪವಿತ್ರಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸರ್ಕಾರದ ಈ ನಿರ್ಧಾರದಿಂದ ಮಮದಾಪುರ ಭಾಗದ 42 ರೈತ ಕುಟುಂಬಗಳಿಗೆ ನ್ಯಾಯ ಸಿಗುವ ನಿರೀಕ್ಷೆ ಮೂಡಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mamadapura-lake-land-acquisition-karnataka-govt-to-acquire-178-acres-to-help-farmers-sat/articleshow-cqnuogg"/>
        </item>
        <item>
            <title><![CDATA[Liquor Mafia: ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್]]></title>
            <link>https://kannada.asianetnews.com/gallery/karnataka-districts/goa-liquor-smuggling-busted-in-vijayapura-rs-1-65-crore-worth-liquor-hidden-under-vermicompost-seized-4-arrested-fqrvunu</link>
            <guid isPermaLink="true">https://kannada.asianetnews.com/gallery/karnataka-districts/goa-liquor-smuggling-busted-in-vijayapura-rs-1-65-crore-worth-liquor-hidden-under-vermicompost-seized-4-arrested-fqrvunu</guid>
            <pubDate>Wed, 24 Jun 2026 08:49:27 +0530</pubDate>
            <description><![CDATA[&lt;p&gt;ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ!&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvvs925qxmgkfhxrmsp5q00f,imgname-whatsapp-image-2026-06-24-at-8.26.20-am-1782270167223.jpeg" type="image/jpeg" height="390" width="690"/>
            <content:encoded><![CDATA[&lt;p&gt;ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ!&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ ಕೊನೆಗೂ ವಿಜಯಪುರದಲ್ಲಿ ಬಯಲಾಗಿದೆ.. ಬರೋಬ್ಬರಿ 1 ಕೋಟಿ 65 ಲಕ್ಷ ಮೌಲ್ಯದ ಮದ್ಯ ಹಾಗೂ ಟ್ರಕ್ ಈಗ ಖಾಕಿ ವಶದಲ್ಲಿದೆ.&lt;/p&gt;&lt;p&gt;ಪೊಲೀಸ್ ಠಾಣೆಯಲ್ಲಿ ನಿಂತಿರೋ ಟ್ರಕ್.. ಟ್ರಕ್ ಪಕ್ಕದಲ್ಲೆ ಕೋಟಿ ಮೌಲ್ಯದ ಗೋವಾ ಲಿಕ್ಕರ್... ಪಕ್ಕದಲ್ಲೆ ಎರೆಹುಳ ಗೊಬ್ಬರ.. ಇದೆ ಗೊಬ್ಬರದ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದು ಬರೋಬ್ಬರಿ ಕೋಟಿ ಕೋಟಿ ಮೌಲ್ಯದ ಗೋವಾ ಮದ್ಯ! ಹೌದು, ಗೋವಾದಿಂದ ಮಹಾರಾಷ್ಟ್ರಕ್ಕೆ ಲಿಕ್ಕರ್ ಸಪ್ಲೈ ಮಾಡಲು ಖದೀಮರು ಸಿನೆಮಾ ಸ್ಟೈಲ್&zwnj;ನಲ್ಲಿ ಸ್ಕೆಚ್ ಹಾಕಿದ್ರು. ಆದ್ರೆ ವಿಜಯಪುರ ಪೊಲೀಸರ ಹದ್ದಿನ ಕಣ್ಣಿಗೆ ಈ ಚಾಲಾಕಿ ಗ್ಯಾಂಗ್ ಕೊನೆಗೂ ಬಿದ್ದೇ ಬಿಟ್ಟಿದೆ.&lt;/p&gt;&lt;img&gt;&lt;p&gt;ವಿಜಯಪುರ ಜಿಲ್ಲೆಯ ಕೊಲ್ಹಾರ ಟೋಲ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮದ್ಯ ತುಂಬಿದ್ದ ಟ್ರಕ್ ಅನ್ನು ಅಡ್ಡಗಟ್ಟಿದ್ದಾರೆ. ಆರಂಭದಲ್ಲಿ ಡ್ರೈವರ್&zwnj;ಗಳು 'ಇದು ಎರೆಹುಳ ಗೊಬ್ಬರ ಸರ್, ಬೇಗ ಬಿಡಿ' ಅಂತ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ್ರು. ಆದ್ರೆ ಅನುಮಾನಗೊಂಡು ಪೊಲೀಸರು ಗೊಬ್ಬರದ ಚೀಲಗಳನ್ನು ಕೆಳಗೆ ಇಳಿಸಿ ನೋಡಿದಾಗ ಕಣ್ಣು ಕತ್ತಲೆ ಬರುವಂತಾಗಿತ್ತು. ಟ್ರಕ್&zwnj;ನ ಒಳಭಾಗದಲ್ಲಿ ಕೋಟಿ ಮೌಲ್ಯದ ಗೋವಾ ಮದ್ಯದ ಬಾಕ್ಸ್&zwnj;ಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಜೋಡಿಸಿಡಲಾಗಿತ್ತು.&lt;/p&gt;&lt;img&gt;&lt;p&gt;ಅಷ್ಟಕ್ಕೂ ಈ ಖದೀಮರು ಪೊಲೀಸರಿಗೆ ಸಿಕ್ಕಿಬೀಳಬಾರದು ಅಂತ ಜಿಪಿಎಸ್ ಆಧಾರಿತ ಹೈಟೆಕ್ ಐಡಿಯಾ ಬಳಸಿದ್ರು. ಮದ್ಯ ಸಾಗಾಟದ ರೂಟ್ ಮ್ಯಾಪ್ ಯಾರಿಗೂ ಲೀಕ್ ಆಗಬಾರದು ಅಂತ ಇಡೀ ದಾರಿಯುದ್ದಕ್ಕೂ ಹತ್ತಾರು ಡ್ರೈವರ್&zwnj;ಗಳನ್ನು ಬದಲಾಯಿಸಲಾಗಿತ್ತು! ಒಬ್ಬ ಡ್ರೈವರ್&zwnj;ಗೆ ಕೇವಲ ಒಂದು ನಿರ್ದಿಷ್ಟ ಜಿಪಿಎಸ್ ಲೊಕೇಶನ್ ತಲುಪಿಸೋ ಟಾರ್ಗೆಟ್ ಅಷ್ಟೇ ಇರ್ತಿತ್ತು. ಅಲ್ಲಿಗೆ ಹೋದ ತಕ್ಷಣ ಮತ್ತೊಬ್ಬ ಡ್ರೈವರ್ ಗಾಡಿ ಹತ್ತುತ್ತಿದ್ದ. ಈ ಪ್ಲಾನ್&zwnj;ನಿಂದಾಗಿ ಗೋವಾ ಮೂಲಕ ಬಂದಿದ್ದ ಟ್ರಕ್, ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸರಾಗವಾಗಿ ದಾಟಿ ಬಂದಿತ್ತು.&lt;/p&gt;&lt;img&gt;&lt;p&gt;ಆದ್ರೆ ವಿಜಯಪುರ ಜಿಲ್ಲೆಗೆ ಎಂಟ್ರಿ ಕೊಡ್ತಿದ್ದಂತೆ ಖದೀಮರ ಆಟ ಬಂದ್ ಆಗಿದೆ. ಸದ್ಯ ಪೊಲೀಸರು ಟ್ರಕ್&zwnj;ನಲ್ಲಿದ್ದ ಬರೋಬ್ಬರಿ 1.31 ಕೋಟಿ ಮೌಲ್ಯದ ಗೋವಾ ಮದ್ಯ ಹಾಗೂ ಟ್ರಕ್ ಸೇರಿ ಒಟ್ಟು 1 ಕೋಟಿ 65 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಅಂತರರಾಜ್ಯ ಮದ್ಯದ ದಂಧೆಯಲ್ಲಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಗದಗ ಮೂಲದ ಶ್ರೀನಿವಾಸ್, ವಿಜಯಪುರದ ಹುಸೇನ್&zwnj;ಸಾಬ ಮುಲ್ಲಾ, ಬಸವರಾಜ್ ಭಜಂತ್ರಿ ಹಾಗೂ ಮಹಾರಾಷ್ಟ್ರ ಸೊಲ್ಲಾಪುರದ ಸಿದ್ಧರಾಮ ಡಾಲೆ ಸದ್ಯ ಕಂಬಿ ಎಣಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಮೂರು ಜಿಲ್ಲೆಗಳ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಬಂದಿದ್ದ ಚಾಲಾಕಿ ಖದೀಮರನ್ನು ಹಿಡಿಯುವಲ್ಲಿ ವಿಜಯಪುರ ಖಾಕಿ ಪಡೆ ಯಶಸ್ವಿಯಾಗಿದೆ. ಈ ಹೈಟೆಕ್ ಲಿಕ್ಕರ್ ಮಾಫಿಯಾದ ಕಿಂಗ್&zwnj;ಪಿನ್ ಯಾರು? ಇದರ ಹಿಂದೆ ಬೇರೆ ಯಾರಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;p&gt;- &lt;strong&gt;ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ..&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/goa-liquor-smuggling-busted-in-vijayapura-rs-1-65-crore-worth-liquor-hidden-under-vermicompost-seized-4-arrested-fqrvunu"/>
        </item>
        <item>
            <title><![CDATA[ಬತ್ತಿದ ಕೃಷ್ಣೆಯ ಒಡಲಲ್ಲಿ ಮತ್ತೆ ಜಲಝೇಂಕಾರ! ರಾಜಾಪೂರ ಬ್ಯಾರೇಜ್‌ನಿಂದ ನೀರು ಬಿಡುಗಡೆ]]></title>
            <link>https://kannada.asianetnews.com/gallery/karnataka-districts/due-to-rains-in-the-krishna-basin-of-maharashtra-water-has-been-released-from-rajapura-barrage-to-river-mrq-goy8wb4</link>
            <guid isPermaLink="true">https://kannada.asianetnews.com/gallery/karnataka-districts/due-to-rains-in-the-krishna-basin-of-maharashtra-water-has-been-released-from-rajapura-barrage-to-river-mrq-goy8wb4</guid>
            <pubDate>Sat, 04 Jul 2026 14:51:34 +0530</pubDate>
            <description><![CDATA[ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಮಳೆಯಿಂದಾಗಿ, ರಾಜಾಪೂರ ಬ್ಯಾರೇಜ್&zwnj;ನಿಂದ ನೀರು ಬಿಡುಗಡೆಯಾಗಿದೆ. ಎರಡು ತಿಂಗಳಿಂದ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದ್ದು, ಬೆಳಗಾವಿ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwp6m98c0dd91w678shh9js1,imgname-krishna-river--4--1783156581644.jpg" type="image/jpeg" height="390" width="690"/>
            <content:encoded><![CDATA[ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಮಳೆಯಿಂದಾಗಿ, ರಾಜಾಪೂರ ಬ್ಯಾರೇಜ್&zwnj;ನಿಂದ ನೀರು ಬಿಡುಗಡೆಯಾಗಿದೆ. ಎರಡು ತಿಂಗಳಿಂದ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದ್ದು, ಬೆಳಗಾವಿ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.&lt;img&gt;&lt;p&gt;ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ಉಪನದಿಗಳು ತುಂಬುತ್ತಿರುವುದರಿಂದ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್&zwnj;ನಿಂದ ಅಂದಾಜು 3500 ಕ್ಯುಸೆಕ್&zwnj;ನಷ್ಟು ನೀರು ಬಿಡುಗಡೆಯಾಗಿದೆ.&lt;/p&gt;&lt;img&gt;&lt;p&gt;ಸದ್ಯ ಬಿಡುಗಡೆಗೊಂಡಿರುವ ನೀರು ಬೆಳಗಾವಿ ಜಿಲ್ಲೆಯ ನೀರಿನ ಬವಣೆಯನ್ನು ಕೊಂಚ ಮಟ್ಟಿಗೆ ತಗ್ಗಿಸಲು ನೆರವಾಗುವುದೇ ವಿನಃ ಬಾಗಲಕೋಟೆ ಜಿಲ್ಲೆಯವರೆಗೆ ತಲುಪುವುದು ಸಾಧ್ಯವಿಲ್ಲ ಎಂಬುವುದು ನೀರಾವರಿ ತಜ್ಞರೇ ಅಭಿಪ್ರಾಯ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಿದರೆ ಮಾತ್ರ ಕೃಷ್ಣೆ ಮೈದುಂಬಿಕೊಳ್ಳಲು ಸಾಧ್ಯ.&lt;/p&gt;&lt;img&gt;&lt;p&gt;ಮಹಿಷವಾಡಗಿ ಸೇತುವೆಗೆ ಸಂಬಂಧಿಸಿದ ಪಿಲ್ಲರ್ ನಂ.7 ಮತ್ತು 8ರ ನದಿಯೊಳಗಿನ ಕಾರ್ಯ ಪೂರ್ಣಗೊಂಡಿದೆ. ಇನ್ನೆರಡು ದಿನಗಳಲ್ಲಿ 10 ಅಡಿಯಷ್ಟು ಮತ್ತೆ ಎತ್ತರಕ್ಕೆ ಪಿಲ್ಲರ್&zwnj;ಗಳು ನಿರ್ಮಾಣವಾದಲ್ಲಿ ನದಿಯೊಳಗೆ ನೀರಿದ್ದರೂ ಮುಂದಿನ ದಿನಗಳಲ್ಲಿ ಸೇತುವೆ ಕಾಮಗಾರಿ ಸರಾಗವಾಗಿ ನಡೆಯಲಿದೆ ಎಂದು ಶಾಸಕ ಸಿದ್ದು ಸವದಿ ಸ್ಪಷ್ಟಪಡಿಸಿದರು.&lt;/p&gt;&lt;img&gt;&lt;p&gt;ಕಳೆದ ಎರಡು ತಿಂಗಳಿನಿಂದ ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರದ ಜೀವನದಿಯಾಗಿರುವ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿತ್ತು. ಖಾಲಿ ಖಾಲಿಯಾಗಿದ್ದ ಕೃಷ್ಣೆಗೆ ಒಮ್ಮೆಲೆ 7 ಸಾವಿರ ಕ್ಯೂಸೇಕ್ ನೀರು ಹರಿದು ಬಂದಿದ್ದು, ನದಿಗೆ ಮತ್ತೆ ಜೀವ ಕಳೆ ಬಂದಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ನೀರು ಹರಿದು ಬರುತ್ತಿದ್ದು, ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಬೃಹತ್ ನದಿ ಕೃಷ್ಣೆ ತನ್ನ ಹಳೆಯ ವೈಭವಕ್ಕೆ ಮರಳಿದೆ.&lt;/p&gt;&lt;img&gt;&lt;p&gt;ನದಿಗೆ ನೀರು ಬರುತ್ತಿರುವುದನ್ನು ಕಂಡು ರೈತರ ಮೊಗದಲ್ಲಿ ಹರ್ಷ ಮೂಡಿದ್ದು, ಇದು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರಿಗೆ ಅತೀ ದೊಡ್ಡ ಅನುಕೂಲ ಮಾಡಿಕೊಡಲಿದೆ. ಇನ್ನು ಒಂದು ವಾರಗಳ ಕಾಲ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.&lt;/p&gt;]]></content:encoded>
            <category>vijayapura</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/due-to-rains-in-the-krishna-basin-of-maharashtra-water-has-been-released-from-rajapura-barrage-to-river-mrq-goy8wb4"/>
        </item>
        <item>
            <title><![CDATA[ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್]]></title>
            <link>https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</link>
            <guid isPermaLink="true">https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</guid>
            <pubDate>Tue, 16 Jun 2026 18:20:31 +0530</pubDate>
            <description><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv87c751ar2rqkxkezbdekhr,imgname-tungabhadra-dam--2--1781613862049.jpg" type="image/jpeg" height="390" width="690"/>
            <content:encoded><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.&lt;img&gt;&lt;p&gt;ಕಳೆದ ವರ್ಷ ತಾಂತ್ರಿಕ ದೋಷದಿಂದಾಗಿ ದುರಂತಕ್ಕೀಡಾಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್&zwnj; ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಮುಂಗಾರು ಮಳೆಗಾಲ ಆರಂಭವಾಗುತ್ತಿರುವ ಬೆನ್ನಲ್ಲೇ ಜೂನ್ 25ರಂದು ಹೊಸ ಗೇಟ್&zwnj;ಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ದಿನಾಂಕ ನಿಗದಿಪಡಿಸಲಾಗಿದೆ. ಮುಂಗಾರು ಮುನ್ನವೇ ಡ್ಯಾಂ ಸಂಪೂರ್ಣ ಸಿದ್ಧವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.&lt;/p&gt;&lt;img&gt;&lt;p&gt;ತುಂಗಭದ್ರಾ ಜಲಾಶಯದ ನೀರು ಮೂರು ರಾಜ್ಯಗಳಿಗೆ ಹಂಚಿಕೆಯಾಗುವುದರಿಂದ, ಈ ಲೋಕಾರ್ಪಣೆ ಕಾರ್ಯಕ್ರಮ ಜಂಟಿ ಸಮಾರಂಭವಾಗಿ ಮೂಡಿಬರಲಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಮೂರೂ ರಾಜ್ಯಗಳ ಹಲವು ಗಣ್ಯರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸುತ್ತಿದೆ.&lt;/p&gt;&lt;img&gt;&lt;p&gt;1953ರಲ್ಲಿ ನಿರ್ಮಾಣವಾಗಿದ್ದ ತುಂಗಭದ್ರಾ ಅಣೆಕಟ್ಟಿನ ಮೂಲ ಗೇಟ್&zwnj;ಗಳ ಜೀವಿತಾವಧಿ ಕೇವಲ 50 ವರ್ಷಗಳೆಂದು ತಜ್ಞರು ಮೊದಲೇ ಎಚ್ಚರಿಸಿದ್ದರು. ಆದರೂ ಹಳೆಯ ಗೇಟ್&zwnj;ಗಳನ್ನೇ ಮುಂದುವರಿಸಲಾಗಿತ್ತು. ಪರಿಣಾಮವಾಗಿ, 2024ರ ಆಗಸ್ಟ್ 10ರಂದು ರಾತ್ರಿ ಸುಮಾರು 60 ಅಡಿ ಅಗಲ ಹಾಗೂ 20 ಅಡಿ ಎತ್ತರದ ಬೃಹತ್ ಗೇಟ್&zwnj;ವೊಂದು ಇದ್ದಕ್ಕಿದ್ದಂತೆ ಕಳಚಿ ಬಿದ್ದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ನೀರು ನದಿಗೆ ಪೋಲಾಗಿ, ಭಾರಿ ರಾಜಕೀಯ ವಾಕ್ಸಮರ ಹಾಗೂ ಆತಂಕ ಸೃಷ್ಟಿಯಾಗಿತ್ತು.&lt;/p&gt;&lt;img&gt;&lt;p&gt;ಈ ದುರಂತದ ನಂತರ ಎಚ್ಚೆತ್ತ ಸರ್ಕಾರ, ಕಳೆದ ಡಿಸೆಂಬರ್&zwnj;ನಲ್ಲಿ ಭಾರಿ ಬಜೆಟ್&zwnj;ನೊಂದಿಗೆ ಹೊಸ ಗೇಟ್&zwnj;ಗಳ ಅಳವಡಿಕೆಗೆ ಚಾಲನೆ ನೀಡಿತ್ತು. ದೇಶದ ಪ್ರಮುಖ ಡ್ಯಾಂಗಳಾದ ಕೆಆರ್&zwnj;ಎಸ್, ನಾರಾಯಣಪುರ ಹಾಗೂ ಪಶ್ಚಿಮ ಬಂಗಾಳದ ಫರಕ್ಕಾ ಬ್ಯಾರೇಜ್&zwnj;ಗಳಿಗೆ ಗೇಟ್ ಅಳವಡಿಸಿದ ಅನುಭವವಿರುವ ಗುಜರಾತ್ ಮೂಲದ 'ಹಾರ್ಡ್&zwnj;ವೇರ್ ಟೂಲ್ಸ್ ಮತ್ತು ಮೆಷಿನ್ ಪ್ರಾಜೆಕ್ಟ್ಸ್ ಲಿಮಿಟೆಡ್' ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿತ್ತು. ಒಟ್ಟು 51.81 ಕೋಟಿ ರೂಪಾಯಿ ವೆಚ್ಚದಲ್ಲಿ ಗದಗ ಸಮೀಪದ ಅಡವಿಸೋಮಾಪುರ ಹಾಗೂ ವಿಜಯನಗರದ ಟಿಬಿ ಬೋರ್ಡ್ ಯಾರ್ಡ್&zwnj;ಗಳಲ್ಲಿ ಈ ಗೇಟ್&zwnj;ಗಳನ್ನು ಅತ್ಯಂತ ವೇಗವಾಗಿ ಸಿದ್ಧಪಡಿಸಲಾಯಿತು.&lt;/p&gt;&lt;img&gt;&lt;p&gt;ಹೊಸ ಗೇಟ್ ಅಳವಡಿಸುವ ತಾಂತ್ರಿಕ ಅನಿವಾರ್ಯತೆಯಿಂದಾಗಿ, ಕಳೆದ ಡಿಸೆಂಬರ್ ತಿಂಗಳ ಎರಡನೇ ಬೆಳೆಗೆ ನೀರು ಬಿಡದಿರಲು ಸರ್ಕಾರ ನಿರ್ಧರಿಸಿತ್ತು. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಲಕ್ಷಾಂತರ ರೈತರು ತಮ್ಮ ಒಂದು ಇಡೀ ಬೆಳೆಯನ್ನು ತ್ಯಾಗ ಮಾಡಿದ್ದರು. ಮುಂಗಾರು ಮಳೆಗೂ ಮುನ್ನ ಕೆಲಸ ಮುಗಿಯುತ್ತಾ ಎಂಬ ಆತಂಕ ರೈತರನ್ನು ಕಾಡಿತ್ತಾದರೂ, ಗುತ್ತಿಗೆ ಕಂಪನಿಯು ಹಗಲಿರುಳು ಶ್ರಮಿಸಿ ಸಕಾಲಕ್ಕೆ ಕೆಲಸ ಮುಗಿಸುವ ಮೂಲಕ ರೈತರ ನಂಬಿಕೆಯನ್ನು ಉಳಿಸಿಕೊಂಡಿದೆ.&lt;/p&gt;&lt;img&gt;&lt;p&gt;ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (KSNDMC) ಇತ್ತೀಚಿನ ತಾಜಾ ಮಾಹಿತಿ ಪ್ರಕಾರ, ಜೂನ್ 16ರ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ ಸದ್ಯಕ್ಕೆ 9 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ (2025) ಇದೇ ಅವಧಿಯಲ್ಲಿ ಜಲಾಶಯದಲ್ಲಿ 28 ಟಿಎಂಸಿ ನೀರು ಲಭ್ಯವಿತ್ತು. ಸದ್ಯ ಮುಂಗಾರು ಮಳೆ ಆರಂಭವಾಗುತ್ತಿರುವುದರಿಂದ ಹೊಸ ಗೇಟ್&zwnj;ಗಳ ಬಲದೊಂದಿಗೆ ಡ್ಯಾಂನಲ್ಲಿ ನೀರಿನ ಸಂಗ್ರಹದ ಪ್ರಮಾಣ ವೇಗವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq"/>
        </item>
        <item>
            <title><![CDATA[Vijayapur: 'ನೋಣಗಳಲ್ಲಿ ಎರಡು ರೀತಿ..' RSS ಟೀಕಿಸಿದ ಖರ್ಗೆ, ಬಿಕೆ ಹರಿಪ್ರಸಾದ್ ವಿರುದ್ಧ ಕನ್ಹೇರಿ ಶ್ರೀ ಕಿಡಿ]]></title>
            <link>https://kannada.asianetnews.com/politics/kanheri-swamiji-slams-priyank-karge-and-bk-hariprasad-over-statement-s-on-rss/articleshow-hefdk8z</link>
            <guid isPermaLink="true">https://kannada.asianetnews.com/politics/kanheri-swamiji-slams-priyank-karge-and-bk-hariprasad-over-statement-s-on-rss/articleshow-hefdk8z</guid>
            <pubDate>Sun, 12 Jul 2026 14:51:17 +0530</pubDate>
            <description><![CDATA[&lt;p&gt;ಆರ್&zwnj;ಎಸ್&zwnj;ಎಸ್&zwnj; ಕುರಿತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಹೇಳಿಕೆಗಳಿಗೆ ಕನ್ಹೇರಿ ಶ್ರೀಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್&zwnj;ಎಸ್&zwnj;ಎಸ್&zwnj; ಒಂದು ರಾಷ್ಟ್ರಭಕ್ತಿ ಸಂಘಟನೆ, ಪ್ರಚಾರಕ್ಕಾಗಿ ಕೆಲವರು ಅದರ ವಿರುದ್ಧ ಮಾತನಾಡುತ್ತಾರೆ ಎಂದು ಕಿಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxaspxv570zszbscyvjrv3yw,imgname-----------------------2026-07-12t143551.251-1783847679845.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಜು.12)&lt;/strong&gt;: ಆರ್&zwnj;ಎಸ್&zwnj;ಎಸ್&zwnj; ಅದೊಂದು ದೇಶದಲ್ಲಿ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ಸಂಘಟನೆ, ಕೆಲವರು ಪ್ರಚಾರಕ್ಕಾಗಿ ಆರೆಸ್ಸೆಸ್ ವಿರುದ್ಧ ಮಾತನಾಡ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕನ್ಹೇರಿ ಶ್ರೀಗಳು ಕಿಡಿಕಾರಿದರು.&lt;/p&gt;&lt;h2&gt;ದೊಡ್ಡವರಿಗೆ ಬೈದ್ರೆ ಪುಕ್ಸಟ್ಟೆ ಪ್ರಚಾರ ಸಿಗುತ್ತೆ ಅನ್ನೋ ಟೆಕ್ನಿಕ್&lt;/h2&gt;&lt;p&gt;ಅರ್&zwnj;ಎಸ್&zwnj;ಎಸ್&zwnj; ಮೆರವಣಿಗೆಗೆ ಅನುಮತಿ ಪಡೆಯಬೇಕೆಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಪ್ರಿಯಾಂಕ್ ಖರ್ಗೆಯವರು ಮೇಲಿಂದ ಮೇಲೆ ಬರೀ ಆರೆಸ್ಸೆಸ್ ಬಿಟ್ರೆ ಬೇರೇನೂ ಮಾತಾಡ್ತಿಲ್ಲ. ಅದು ಏನಾಗುತ್ತೆ ಅಂದ್ರೆ ಕೆಲವರಿಗೆ ಪ್ರಚಾರ ಯಾವುದರಿಂದ ಸಿಗುತ್ತೆ ಅಂತ ಗೊತ್ತಾಗಿಬಿಟ್ಟಿದೆ. ಕೆಲವು ಜನರು ಏನು ಮಾಡ್ತಾರಂದ್ರೆ ದೊಡ್ಡವರಿಗೆ ಬೈದು ಬಿಟ್ರೆ ತಮಗೆ ಸುಲಭವಾಗಿ ಪ್ರಚಾರ ಸಿಗುತ್ತೆ ಅನ್ನೋ ಟೆಕ್ನಿಕ್ ಗೊತ್ತಾಗಿದೆ ಹೀಗಾಗಿ ಅವರು ಬೆಳಗಾದ್ರೆ ಮಾಡೋ ಕೆಲಸ ಬಿಟ್ಟು ಆರೆಸ್ಸೆಸ್ ಬಗ್ಗೆ ಮಾತನಾಡ್ತಾರೆ ಎಂದು ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ಆರ್&zwnj;ಎಸ್&zwnj;ಎಸ್&zwnj; ಬಗ್ಗೆ ಟೀಕಿಸೋದು ಒಂದು ರೀತಿ ಮಾನಸಿಕ ಕಾಯಿಲೆ&lt;/h3&gt;&lt;p&gt;ನನಗನಿಸುತ್ತೆ ಈ ರೀತಿ ಮಾಡ್ತಾ ಹೋದ್ರೆ ಅಂದ್ರೆ ತಮ್ಮ ಅವನತಿ ಬೇಗ ಕಂಡುಕೊಳ್ತಾರೆ ಅಂತ ಅನ್ಸುತ್ತೆ. ಅದೇನೋ ಒಂದೊಂದ್ಸಲ ಹುಚ್ಚರಂತೆ ಮಾತನಾಡೋದು ಕೆಲವರ ಸ್ವಭಾವ ಆಗಿಬಿಟ್ಟಿದೆ. ಈ ರೀತಿ ಒಂದು ಏನಾದರೂ ಕಾಯಿಲೆ ಇರಬಹುದು ಅಂತಾ ನನಗೆ ಅನ್ಸುತ್ತೆ. ಆರೆಸ್ಸೆಸ್ ಪರ್ಮಿಷನ್ ತಗೊಬೇಕು ಅಂತಾರೆ. ಅವರು ನಾಳೆ ಊಟ ಮಾಡಲಿಕ್ಕೂ ಪರ್ಮಿಷನ್ ತಗೊಬೇಕು ಅಂತಾರೆ. ಆರೆಸ್ಸೆಸ್&zwnj;ನವರು ಯಾರದೇ ಮನೆಯಲ್ಲಿ ಊಟಕ್ಕೆ ಹೋದ್ರೂ ಪರ್ಮಿಷನ್ ತಗೊಬೇಕು ಅಂತಾರೆ, ಈ ಊರಿನಿಂದ ಆ ಊರಿಗೆ ಎಲ್ಲಾದರೂ ಪ್ರವಾಸ ಮಾಡಬೇಕಾಗಿತ್ತು ಅಂದರೆ ಅದಕ್ಕೂ ಪರ್ಮಿಷನ್ ಕೇಳು ಅಂತ ಹೇಳ್ತಾರೆ ಆಗ ಏನು ಮಾಡೋದು? ಎಂದು ಪ್ರಶ್ನಿಸಿದರು.&lt;/p&gt;&lt;h3&gt;ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡಿದ್ರೆ ಸರ್ಕಾರ, ಪಕ್ಷಕ್ಕೆ ಡ್ಯಾಮೇಜ್?&lt;/h3&gt;&lt;p&gt;ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡೋದ್ರಿಂದ ಅದು ಸರ್ಕಾರ, ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಹಾ ಆಗುತ್ತೆ. ಅದು ಒಂದೊಂದಸಲ ದೇವರ ಈ ರೀತಿ ಮಾಡಿಸ್ತಾನೋ ಏನೋ.. ವಿನಾಶಕಾಲೇ ವಿಪರೀತಿ ಬುದ್ಧಿ ಅಂತಾರಲ್ಲ ಹಾಗೆ. ಅದು ಆ ಪುಣ್ಯಾತ್ಮರ ನೋಡಿನೇ ಹೇಳಿರಬೇಕು ಅನಿಸುತ್ತೆ. ಆರೆಸ್ಸೆಸ್ ಬಗ್ಗೆ ಮನ್ಸಿಗೆ ಬಂದಂಗ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರ ತಂದೆಯಾದ್ರೂ ಕರೆದು ಬುದ್ಧಿ ಹೇಳಬೇಕಿತ್ತು. ಹೀಗೆಲ್ಲ ಮಾಡಬಾರದು ಅಂತಾ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು, ಅನುಭವಸ್ಥರು ಇದ್ದಾರೆ. ಆದರೆ ಅವರೂ ಹೇಳ್ತಾ ಇಲ್ಲ ಯಾಕೋ ಏನೋ. ಅಥವಾ ತಂದೆ ಮಾತು ಕೇಳದಷ್ಟು ತಂದೆಗಿಂತ ಎರಡು ಹೆಜ್ಜೆ ಮುಂದೆ ಹೋಗ್ತಿದ್ದಾರೇನೋ ಗೊತ್ತಿಲ್ಲ, ಹಾಗೆ ಆಗುತ್ತಿರಬಹುದು ಅಂತಾ ನನಗನಿಸುತ್ತೆ ಎಂದರು.&lt;/p&gt;&lt;p&gt;ನೋಣಗಳಲ್ಲಿ ಎರಡು ರೀತಿ&hellip; ಬಿಕೆ ವಿರುದ್ಧ ಕನ್ಹೇರಿ ಶ್ರೀ ಕಿಡಿ&lt;/p&gt;&lt;p&gt;ಇನ್ನು ಆರ್&zwnj;ಎಸ್&zwnj; ಕುರಿತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ 'ಅರ್&zwnj;ಎಸ್&zwnj;ಎಸ್&zwnj; ಎಲ್ಲೆಲ್ಲೆ ಸಭೆ ಮಾಡುತ್ತೋ ಅಲ್ಲೆಲ್ಲ ಏನಾದರೂ ಒಂದು ಅನಾಹುತ ಆಗುತ್ತೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಶ್ರೀಗಳು, ​ಅದೇ ಕಾಮಾಲೆಯಾದವರಿಗೆಲ್ಲ ವಿಶ್ವನೇ ಹಳದಿ ಕಾಣಿಸ್ತೈತೆ ಅಂತಾರಲ್ಲ ಆ ರೀತಿ ಕಾಣುತ್ತಿರಬಹುದು. ಆರೆಸ್ಸೆಸ್ ಒಂದು ದೇಶಭಕ್ತರ ಸಂಘಟನೆ. ಅದನ್ನ ಅವರು ಯಾವ ದೃಷ್ಟಿಯಿಂದ ನೋಡ್ತಾರೋ ಹಾಗೆ ಕಾಣುತ್ತೆ. ಯಾರು ಯಾವ ಚಷ್ಮಾ ಹಾಕೊಂಡು ನೋಡ್ತಾರೋ ಅವರಿಗೆ ಹಂಗೆ ಕಾಣಿಸ್ತದೆ ಅದರಲ್ಲಿ ಏನಿದೆ. ಅನುಭವಸ್ಥರು ಹೇಳ್ತಿರ್ತಾರೆ ನೋಣಗಳಲ್ಲಿ ಎರಡು ರೀತಿ ನೋಣಗಳು ಇರ್ತಾವೆ. ಒಂದು ಹೊಲಸಿನ ಮೇಲೆ ಕೂಡೋ ನೋಣಗಳು, ಇನ್ನೊಂದು ಜೇನ್ನೋಣ. ಯಾವ್ಯಾವ ನೋಣ ಎಲ್ಲೆಲ್ಲಿ ಹಾರಾಡಬೇಕೋ, ಎಲ್ಲೆಲ್ಲಿ ಕೂಡಬೇಕು ಅಲ್ಲಲ್ಲಿ ಕೂಡುತವೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿಕೆಗೆ ತೀಕ್ಷ್ನವಾಗಿ ಪ್ರತಿಕ್ರಿಯಿಸಿದರು.&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/kanheri-swamiji-slams-priyank-karge-and-bk-hariprasad-over-statement-s-on-rss/articleshow-hefdk8z"/>
        </item>
        <item>
            <title><![CDATA[ಮಕ್ಕಳನ್ನು ಹೊರಗೆ ಹಾಕಿ ಉರ್ದು ಶಾಲೆಗೆ ಬೀಗ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ; ಮನವಿ ಸಲ್ಲಿಕೆ]]></title>
            <link>https://kannada.asianetnews.com/karnataka-districts/vijayapura-nagur-villagers-protest-by-locking-down-urdu-school-throwing-children-out-teacher-s-shortage-mrq/articleshow-m4gsaeg</link>
            <guid isPermaLink="true">https://kannada.asianetnews.com/karnataka-districts/vijayapura-nagur-villagers-protest-by-locking-down-urdu-school-throwing-children-out-teacher-s-shortage-mrq/articleshow-m4gsaeg</guid>
            <pubDate>Sat, 13 Jun 2026 09:14:54 +0530</pubDate>
            <description><![CDATA[&lt;p&gt;Urdu School: ವಿಜಯಪುರ ಜಿಲ್ಲೆಯ ನಾಗೂರ ಉರ್ದು ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದಾಗಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ. &amp;nbsp;ಇದು ಶಾಲೆಯನ್ನು ಮುಚ್ಚುವ ಹುನ್ನಾರ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktzgy11cxt49vq2mx2ahv1b5,imgname-urdu-school-1781321892908.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರು ಇಲ್ಲದಿರುವುದನ್ನು ಕಂಡು ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ತಾಲೂಕಿನ ನಾಗೂರ ಗ್ರಾಮದ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಇದರಲ್ಲಿ ಕನ್ನಡ ಬೋಧಿಸುವ ಶಿಕ್ಷಕರು ಆರು ತಿಂಗಳ ಹಿಂದೆ, ಮೇ 31ರಂದು ಉರ್ದು ಬೋಧಿಸುವ ಓರ್ವ ಶಿಕ್ಷಕರು ನಿವೃತ್ತರಾಗಿದ್ದಾರೆ. ಒಬ್ಬ ಶಿಕ್ಷಕರ ಮಗ ತೀರಿಕೊಂಡಿದ್ದ ಹಿನ್ನೆಲೆ ಮೂರು ತಿಂಗಳ ಕಾಲ ರಜೆ ಮೇಲೆ ಹೋಗಿದ್ದಾರೆ. ಶಾಲೆಯಲ್ಲಿ ಒಬ್ಬರೇ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಈ ಶಾಲೆ ಏಕೋಪಾಧ್ಯಾಯ ಶಾಲೆಯಾಗಿದೆ.&lt;/p&gt;&lt;h2&gt;&lt;strong&gt;ಬಿ.ಎಲ್.ಓ ಸೇವೆಯಿಂದ ಮುಕ್ತಗೊಳಿಸುವಂತೆ ಮನವಿ ಸಲ್ಲಿಕೆ&lt;/strong&gt;&lt;/h2&gt;&lt;p&gt;ಓರ್ವ ಶಿಕ್ಷಕಿಯನ್ನು ಬಿ.ಎಲ್.ಓ ಆಗಿ ನೇಮಕ ಮಾಡಲಾಗಿದೆ. ಇವರನ್ನು ಬಿ.ಎಲ್.ಓ ದಿಂದ ಮುಕ್ತಗೊಳಿಸಿ ಮಕ್ಕಳಿಗೆ ಪಾಠ ಹೇಳು ಬಿಡುವಂತೆ ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು ಕ್ಷೇತ್ರಶಿಕ್ಷಣಾಧಿಕಾರಿ, ತಹಸೀಲ್ದಾರಗೆ ಮನವಿ ಸಲ್ಲಿಸಿದ್ದಾರೆ. ಇದರ ಕುರಿತು ಮತಕ್ಷೇತ್ರದ ಶಾಸಕರ ಗಮನಕ್ಕೂ ತರಲಾಗಿದೆ. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.&amp;nbsp;&lt;/p&gt;&lt;p&gt;ಶುಕ್ರವಾರ ಬಸವನಬಾಗೇವಾಡಿಯಲ್ಲಿ ಬಿ.ಎಲ್.ಓ ತರಬೇತಿ ಇದ್ದ ಹಿನ್ನೆಲೆಯಲ್ಲಿ ಶಿಕ್ಷಕಿ ತರಬೇತಿಗೆ ಹೋಗಿದ್ದರಿಂದ ಶಾಲೆಯಲ್ಲಿ ಒಬ್ಬರೂ ಶಿಕ್ಷಕರಿಲ್ಲದ್ದಕ್ಕೆ ಬೇಸರವಾಗಿ ಶಾಲಾ ಮಕ್ಕಳನ್ನು ಹೊರಗೆ ಹಾಕಿ ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೊದೀನಸಾಬ ಲೋದಿ ತಿಳಿಸಿದರು.&lt;/p&gt;&lt;h3&gt;&lt;strong&gt;16 ಮಕ್ಕಳಿರುವ ಶಾಲೆ&lt;/strong&gt;&lt;/h3&gt;&lt;p&gt;ಒಂದರಿಂದ ಆರನೇ ತರಗತಿಯವರೆಗೆ ಶಾಲೆಯಲ್ಲಿ 16 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಇಲ್ಲದ್ದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ಗ್ರಾಮದಲ್ಲಿ ಒಟ್ಟು ಆರು ಶಾಲೆಗಳಿದ್ದು, ಪುರುಷ ಶಿಕ್ಷಕರನ್ನು ಬಿ.ಎಲ್.ಓ. ಮಾಡದೇ ಇರುವ ಓರ್ವ ಶಿಕ್ಷಕಿಯನ್ನು ಈ ಕಾರ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಉರ್ದು ಶಾಲೆಯನ್ನು ಮುಚ್ಚುವ ಹುನ್ನಾರ ಕಂಡುಬರುತ್ತಿದೆ ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಂದೇನವಾಜ ವಾಲೀಕಾರ ಆಕ್ರೋಶ ಹೊರಹಾಕಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ರಾಜು ಮುಲ್ಲಾ, ನಬೀಸಾಬ ಕೊರಬು, ಬಂದೇನವಾಜ ರಗಟಿ, ರಾಜೇಸಾಬ ಚಪ್ಪರಬಂದ, ಹಾಜಿಮಲ್ಲಂಗ ಕವಲಗಿ, ರಾಜಬೀ ವಾಲೀಕಾರ, ದಾವಲಬಿ ಮುಜಾವರ, ಹಾಜಿಮಲ್ಲಂಗ ವಾಲೀಕಾರ, ರಾಜು ಮುಜಾವರ, ಅಮೋಘಿ ಪೂಜಾರಿ ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶಾಲಾ ಆರಂಭ 15 ನಿಮಿಷ ಮುಂದೂಡಿ, ಮುಕ್ತಾಯದ ಸಮಯದಲ್ಲಿ ಬದಲಾವಣೆ ಬೇಡ; ಶಿಕ್ಷಕರ ಮನವಿ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-nagur-villagers-protest-by-locking-down-urdu-school-throwing-children-out-teacher-s-shortage-mrq/articleshow-m4gsaeg"/>
        </item>
        <item>
            <title><![CDATA[Ramesh Jigajinagi viral audio: ಆರೆಸ್ಸೆಸಿಗರು ಡೇಂಜರ್.. ದಲಿತ ವ್ಯಕ್ತಿಯೊಂದಿಗೆ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆಡಿದ ಮಾತು ವೈರಲ್!]]></title>
            <link>https://kannada.asianetnews.com/state/rss-danger-bjp-mp-ramesh-jigajinagi-s-phone-audio-goes-viral-rav/articleshow-mzns0d6</link>
            <guid isPermaLink="true">https://kannada.asianetnews.com/state/rss-danger-bjp-mp-ramesh-jigajinagi-s-phone-audio-goes-viral-rav/articleshow-mzns0d6</guid>
            <pubDate>Wed, 24 Jun 2026 05:27:20 +0530</pubDate>
            <description><![CDATA[&lt;p&gt;ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಆರ್&zwnj;ಎಸ್&zwnj;ಎಸ್&zwnj; ಅನ್ನು 'ಡೇಂಜರ್' ಎಂದು ಕರೆದಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಪ್ರಿಯಾಂಕ್ ಖರ್ಗೆ ಬೆಂಬಲಿಗನೊಂದಿಗೆ ಮಾತನಾಡುತ್ತಾ, ಆರ್&zwnj;ಎಸ್&zwnj;ಎಸ್&zwnj; ವಿರುದ್ಧ ಹೋದವರು ಉಳಿದಿಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k02j9za3md60e5gkvz2msb5y,imgname-dbdb-1752432966979.png" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;&amp;nbsp;ಖರ್ಗೆ ಬೆಂಬಲಿಗನ ಜತೆಗಿನ ಆಡಿಯೋ ವೈರಲ್&zwnj;--&lt;/li&gt; &lt;li&gt;ದಲಿತ ವ್ಯಕ್ತಿಗೆ ಆರ್&zwnj;ಎಸ್&zwnj;ಎಸ್ ಬಗ್ಗೆ ಕಾಳಜಿ ಏಕೆ?&lt;/li&gt; &lt;li&gt;ಆರ್&zwnj;ಎಸ್&zwnj;ಎಸ್&zwnj; ತಂಟೆಗೆ ಬಂದವರು ಉಳಿದಿಲ್ಲ&lt;/li&gt; &lt;li&gt;ಬಜಿಗಜಿಣಗಿಯದು ಎನ್ನಲಾದ ಆಡಿಯೋ ವೈರಲ್&zwnj;&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ವಿಜಯಪುರ (ಜೂ.24) &lt;/strong&gt;ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ಆರ್&zwnj;ಎಸ್&zwnj;ಎಸ್&zwnj; ಕುರಿತು ಆಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಯ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ(Priyank kharge)ಯವರ ಬೆಂಬಲಿಗನೊಬ್ಬನ ಜೊತೆ ಮಾತನಾಡಿದ ಸಂಸದರು, &lsquo;ಆರ್&zwnj;ಎಸ್ಎಸ್&zwnj;ನವರು ಭಾರಿ ಡೇಂಜರ್. ಆರ್&zwnj;ಎಸ್&zwnj;ಎಸ್(RSS) ವಿರುದ್ಧ ಹೋರಾಡಿದವರು ಬದುಕುಳಿದಿಲ್ಲ. ದಲಿತ ವ್ಯಕ್ತಿಗೆ ಆರ್&zwnj;ಎಸ್&zwnj;ಎಸ್&zwnj; ಬಗ್ಗೆ ಇಲ್ಲ ಸಲ್ಲದ ಕಾಳಜಿ ಏಕೆ?&rsquo; ಎಂದಿದ್ದು ಆಡಿಯೋದಲ್ಲಿ ದಾಖಲಾಗಿದೆ.&lt;/p&gt;&lt;h2&gt;ಹಿನ್ನೆಲೆ ಏನು? ಈಗ ಆಗಿದ್ದೇನು?:&lt;/h2&gt;&lt;p&gt;ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆಯವರು ಆರ್&zwnj;ಎಸ್&zwnj;ಎಸ್&zwnj; ನೋಂದಣಿ ಕುರಿತು ಸಂಘದ ಮುಖ್ಯಸ್ಥ ಮೋಹನ್ ಭಾಗವತ್&zwnj; ಅವರಿಗೆ ಪತ್ರ ಬರೆದ ವಿಚಾರವಾಗಿ ನಡೆದ ಸಂಭಾಷಣೆಯ ಆಡಿಯೋ ಇದಾಗಿದೆ.&lt;/p&gt;&lt;p&gt;ಮೊನ್ನೆಯಷ್ಟೆ ಈ ಸಂಬಂಧ ಪತ್ರಕರ್ತರ ಎದುರು ಪ್ರತಿಕ್ರಿಯಿಸಿದ್ದ ರಮೇಶ ಜಿಗಜಿಣಗಿ, &lsquo;ಆರ್&zwnj;ಎಸ್&zwnj;ಎಸ್&zwnj; ವಿಚಾರ ದಲಿತ ಮನುಷ್ಯನಿಗೆ ಯಾಕೆ ಬೇಕು?, ಅವನಿಗೆ ತಲೆಯಿಲ್ಲ&rsquo; ಎಂದು ಪ್ರಿಯಾಂಕ್&zwnj; ಖರ್ಗೆ ವಿರುದ್ಧ ಕಿಡಿಕಾರಿದ್ದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಪ್ರಿಯಾಂಕ್&zwnj; ಖರ್ಗೆಯವರ ಬೆಂಬಲಿಗನೊಬ್ಬ ಕರೆ ಮಾಡಿ &lsquo;ಕಾಕಾ (ಜಿಗಜಿಣಗಿ) ನೀವೂ ದಲಿತ ತಾನೆ?&rsquo; ಎಂದಿದ್ದಾನೆ. ಈ ವೇಳೆ, ಆಕ್ರೋಶಗೊಂಡ ಜಿಗಜಿಣಗಿ, &lsquo;ನಾನು ದಲಿತ ಇದ್ದೇನಿ, ಆದ್ರೇ, ಬಿಜೆಪಿ ಪಾರ್ಟಿ ಒಳಗ ಇದ್ದೇನಿ. ಆರ್&zwnj;ಎಸ್ಎಸ್&zwnj;ಗೆ ಬೈದರೆ ದೊಡ್ಡವರು ಆಗಿ ಬಿಡ್ತಾರಾ? ಆರ್&zwnj;ಎಸ್ಎಸ್&zwnj;ಗೆ ಬೈದರೆ ಮಣ್ಣಾಗಿ ಹೋಗ್ತೀರಿ, ಹುಚ್ಚರ.... ಆರ್&zwnj;ಎಸ್ಎಸ್&zwnj;ನವರು ಭಾರಿ ಡೇಂಜರ್. ಆರ್&zwnj;ಎಸ್&zwnj;ಎಸ್ ವಿರುದ್ಧ ಹೋರಾಡಿದವರು ಬದುಕುಳಿದಿಲ್ಲ. ದಲಿತ ವ್ಯಕ್ತಿಗೆ ಆರ್&zwnj;ಎಸ್&zwnj;ಎಸ್&zwnj; ಬಗ್ಗೆ ಇಲ್ಲ ಸಲ್ಲದ ಕಾಳಜಿ ಏಕೆ? ಆರ್&zwnj;ಎಸ್&zwnj;ಎಸ್ ನ್ನು ನೋಂದಾಯಿಸುವುದರಿಂದ ನೀವು ಏನು ಸಾಧಿಸುತ್ತೀರಿ? ಅದು ಗೃಹ ಸಚಿವರ ಕೆಲಸವಲ್ಲ&rsquo; ಎಂದು ಕಿಡಿ ಕಾರಿದ್ದಾರೆ.&lt;/p&gt;&lt;h3&gt;ಆಡಿಯೋ ಅಸಲಿಯೇ?:&lt;/h3&gt;&lt;p&gt;ಖರ್ಗೆ ಬೆಂಬಲಿಗನಿಗೆ ಸಂಸದರು ಬೈದಾಡಿದ್ದಾರೆ ಎನ್ನಲಾದ ಈ ಆಡಿಯೋ ವೈರಲ್&zwnj; ಆಗಿದೆ. ಆದರೆ, ಇದು ನಿಜವಾಗಿಯೂ ನಡೆದ ಫೋನ್ ಸಂಭಾಷಣೆಯೋ ಅಥವಾ ಎಐನಲ್ಲಿ ಕೃತಕವಾಗಿ ತಯಾರಿಸಿದ ಆಡಿಯೋನೋ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ. ಈ ಕುರಿತು ಸ್ಪಷ್ಟನೆಗೆ &lsquo;ಕನ್ನಡಪ್ರಭ&rsquo; ಸಂಪರ್ಕಿಸಿದರೂ ಸಂಸದ ರಮೇಶ ಜಿಗಜಿಣಗಿಯವರು ಕರೆ ಸ್ವೀಕರಿಸಿಲ್ಲ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rss-danger-bjp-mp-ramesh-jigajinagi-s-phone-audio-goes-viral-rav/articleshow-mzns0d6"/>
        </item>
        <item>
            <title><![CDATA[ಸಿದ್ದರಾಮಯ್ಯ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಯತೀಂದ್ರ ಭಾವನಾತ್ಮಕ ಹೇಳಿಕೆ]]></title>
            <link>https://kannada.asianetnews.com/karnataka-districts/yathindra-siddaramaiah-says-no-one-can-fill-siddaramaiah-place-vijayapura-gvd/articleshow-nmo26dp</link>
            <guid isPermaLink="true">https://kannada.asianetnews.com/karnataka-districts/yathindra-siddaramaiah-says-no-one-can-fill-siddaramaiah-place-vijayapura-gvd/articleshow-nmo26dp</guid>
            <pubDate>Mon, 08 Jun 2026 00:28:17 +0530</pubDate>
            <description><![CDATA[&lt;p&gt;ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಸಂವಿಧಾನದ ಆಶಯಗಳ ಕನಸುಗಾರ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb5brg7t1mngzy1n2w63mkte,imgname-----------------------2025-11-28t192152.441-1764337926394.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಜೂ.08):&lt;/strong&gt; ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಸಂವಿಧಾನದ ಆಶಯಗಳ ಕನಸುಗಾರ. ಬೇರೆ ಯಾರೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ ಜಿಲ್ಲಾ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಲೋಕಮಾತಾ ಅಹಲ್ಯಾಬಾಯಿ ಹೊಳ್ಕರ್&zwnj; 301ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಹಲ್ಯಾಬಾಯಿ ಹೊಳ್ಕರ್&zwnj; ಅವರನ್ನು ರಾಜಮಾತೆ ಎಂದು ಕರೆಯುತ್ತೇವೆ. ಅವರು ಸಾಮಾನ್ಯರಲ್ಲ ಅಪ್ರತಿಮ ಹೋರಾಟಗಾರ್ತಿ, ಶ್ರೇಷ್ಠ ಮಹಿಳೆ. ನಮ್ಮ ಸಮಾಜದ ಭವಿಷ್ಯ ಭದ್ರವಾಗಿರಬೇಕಾದರೆ, ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು.&lt;/p&gt;&lt;p&gt;ಯಾವುದೇ ಸಮಾಜ ಬೆಳೆಯಬೇಕಾದರೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಮೂರನ್ನು ಅವಶ್ಯವಾಗಿ ಮಾಡಬೇಕು. ಕಷ್ಟವಾದರೂ ಪರವಾಗಿಲ್ಲ, ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಆ ಮಕ್ಕಳು ಉನ್ನತ ಹುದ್ದೆ ಪಡೆದು ತನ್ನ ಕುಟುಂಬ ಜೊತೆಗೆ ಇಡೀ ಸಮಾಜವನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.ಜಿಲ್ಲೆಯಲ್ಲಿ 2.5 ಲಕ್ಷ ಕುರುಬ ಸಮುದಾಯ ಇದ್ದರೂ ಒಬ್ಬರೇ ಒಬ್ಬರು ಶಾಸಕರಾಗದೆ ಇರುವುದು ದುರಂತ. ನಾವು ಜಾಗೃತರಗಿ, ಎಲ್ಲ ಕ್ಷೇತ್ರದಲ್ಲೂ ಬೆಳವಣಿಗೆ ಕಾಣಬೇಕು. ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.&lt;/p&gt;&lt;h2&gt;&lt;strong&gt;ಬೆಳೆದಾಗಲೇ ಸಾಧ್ಯ&lt;/strong&gt;&lt;/h2&gt;&lt;p&gt;ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮಾತನಾಡಿ, ಹೆಣ್ಣುಮಕ್ಕಳಿಗೆ ಬಹಳಷ್ಟು ಜವಾಬ್ದಾರಿ ಇರುತ್ತೆ. ಡಾ.ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರ ಪ್ರತಿಬಿಂಬವಾಗಿದ್ದೀರಿ. ಯಾವುದೇ ಸಮಾಜ ಮುಂದೆ ಸಾಗಬೇಕಾದರೆ ಆ ಸಮಾಜದ ಹೆಣ್ಮಕ್ಕಳು ಬೆಳೆದಾಗಲೇ ಸಾಧ್ಯ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಜಯಪುರದಲ್ಲಿ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ್&zwnj; ಅವರ ಪ್ರತಿಮೆ ನಿರ್ಮಿಸಿರುವುದು ಹೆಮ್ಮೆಯಾಗಿದೆ. ಯಾರಲ್ಲಿ ಮಾತೃ ಹೃದಯ ಇರುತ್ತದೆಯೋ ಅವರು ರಾಜಕೀಯದಲ್ಲಿ ಭವಿಷ್ಯ ಕಟ್ಟುಕೊಳ್ಳುತ್ತಾರೆ. ಡಾ.ಯತೀಂದ್ರ ಅವರಲ್ಲಿ ಆ ಗುಣ ಇದೆ ಎಂದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/yathindra-siddaramaiah-says-no-one-can-fill-siddaramaiah-place-vijayapura-gvd/articleshow-nmo26dp"/>
        </item>
        <item>
            <title><![CDATA[ಯಶವಂತಪುರ - ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಆರಂಭ: ಕೇವಲ 11 ಗಂಟೆಯಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ!]]></title>
            <link>https://kannada.asianetnews.com/state/indian-railways-yeshwantpur-vijayapura-special-express-train-timetable-north-karnataka/articleshow-o4xd18t</link>
            <guid isPermaLink="true">https://kannada.asianetnews.com/state/indian-railways-yeshwantpur-vijayapura-special-express-train-timetable-north-karnataka/articleshow-o4xd18t</guid>
            <pubDate>Wed, 10 Jun 2026 21:11:08 +0530</pubDate>
            <description><![CDATA[&lt;p&gt;ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸಂಚಾರವನ್ನು ಆರಂಭಿಸಿದೆ. ಈ ರೈಲು ಕೇವಲ 11 ಗಂಟೆಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಲಿದ್ದು, ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ವೇಗದ ಮತ್ತು ಅನುಕೂಲಕರ ಸಂಪರ್ಕವನ್ನು ಒದಗಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kts2w3yjy57pqp0nwbjhmatg,imgname-yesvantpur-vijayapura-special-express-train-1781105823698.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವೆ ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸಂಚಾರ ಆರಂಭವಾಗಿದ್ದು, ಇದು ಉತ್ತರ ಕರ್ನಾಟಕಕ್ಕೆ ಅತಿ ವೇಗದ ರೈಲು ಸಂಪರ್ಕವನ್ನು ಕಲ್ಪಿಸಲಿದೆ.&lt;/p&gt;&lt;h3&gt;&lt;strong&gt;ಕೇವಲ 11 ಗಂಟೆಯಲ್ಲಿ ನಿಮ್ಮ ಊರು ತಲುಪಿ!&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರಯಾಣಿಸುವುದು ದೀರ್ಘಾವಧಿಯ ಪಯಣವಾಗಿರುತ್ತದೆ. ಆದರೆ, ಈ ನೂತನ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಕೇವಲ 11 ಗಂಟೆಗಳಲ್ಲಿ ಬೆಂಗಳೂರಿನಿಂದ ವಿಜಯಪುರವನ್ನು ತಲುಪಲಿದೆ. ಇದು ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರ ಭಾಗದ ಪ್ರಯಾಣಿಕರಿಗೆ ವರದಾನವಾಗಲಿದೆ. ವಾರಾಂತ್ಯದ ರಜೆ ಅಥವಾ ತುರ್ತು ಕೆಲಸಗಳಿಗಾಗಿ ಸಂಚರಿಸುವವರಿಗೆ ಈ ರೈಲು ಅತ್ಯಂತ ಅನುಕೂಲಕರವಾಗಿದೆ.&lt;/p&gt;&lt;h2&gt;&lt;strong&gt;ರೈಲು ಸಂಚಾರದ ವೇಳಾಪಟ್ಟಿ ಇಂತಿದೆ:&lt;/strong&gt;&lt;/h2&gt;&lt;p&gt;&lt;strong&gt;1. ಯಶವಂತಪುರ (ಬೆಂಗಳೂರು) ಇಂದ ವಿಜಯಪುರಕ್ಕೆ:&lt;/strong&gt;&lt;/p&gt;&lt;ul&gt; &lt;li&gt;ಈ ರೈಲು ಯಶವಂತಪುರ ನಿಲ್ದಾಣದಿಂದ ಸಂಜೆ 06:15 ಕ್ಕೆ ಹೊರಡಲಿದೆ.&lt;/li&gt; &lt;li&gt;ತುಮಕೂರು: ಸಂಜೆ 07:00&lt;/li&gt; &lt;li&gt;ಅರಸೀಕೆರೆ: ರಾತ್ರಿ 08:10&lt;/li&gt; &lt;li&gt;ದಾವಣಗೆರೆ: ರಾತ್ರಿ 10:20&lt;/li&gt; &lt;li&gt;ಹಾವೇರಿ: ರಾತ್ರಿ 11:22&lt;/li&gt; &lt;li&gt;ಬದಾಮಿ: ಮುಂಜಾನೆ 02:30&lt;/li&gt; &lt;li&gt;ಬಾಗಲಕೋಟೆ: ಮುಂಜಾನೆ 03:10&lt;/li&gt; &lt;li&gt;ವಿಜಯಪುರ ತಲುಪುವ ಸಮಯ: ಮುಂಜಾನೆ 05:15&lt;/li&gt;&lt;/ul&gt;&lt;p&gt;&lt;strong&gt;2. ವಿಜಯಪುರದಿಂದ ಯಶವಂತಪುರಕ್ಕೆ (ಬೆಂಗಳೂರು):&lt;/strong&gt;&lt;/p&gt;&lt;ul&gt; &lt;li&gt;ವಿಜಯಪುರದಿಂದ ಸಂಜೆ 05:00 ಗಂಟೆಗೆ ಈ ರೈಲು ಹೊರಡಲಿದೆ.&lt;/li&gt; &lt;li&gt;ಬಾಗಲಕೋಟೆ: ಸಂಜೆ 06:23&lt;/li&gt; &lt;li&gt;ಹಾವೇರಿ: ರಾತ್ರಿ 09:33&lt;/li&gt; &lt;li&gt;ದಾವಣಗೆರೆ: ರಾತ್ರಿ 10:33&lt;/li&gt; &lt;li&gt;ಯಶವಂತಪುರ ತಲುಪುವ ಸಮಯ: ಮುಂಜಾನೆ 04:10&lt;/li&gt;&lt;/ul&gt;&lt;h2&gt;&lt;strong&gt;ಪ್ರಯಾಣಿಕರಿಗೆ ಆಗುವ ಲಾಭಗಳೇನು?&lt;/strong&gt;&lt;/h2&gt;&lt;p&gt;ಈ ರೈಲು ಸಂಜೆ ಹೊತ್ತು ಬೆಂಗಳೂರಿನಿಂದ ಹೊರಡುವುದರಿಂದ ಕಚೇರಿ ಕೆಲಸ ಮುಗಿಸಿ ಊರಿಗೆ ತೆರಳುವವರಿಗೆ ಬಹಳ ಅನುಕೂಲವಾಗುತ್ತದೆ. ಅಲ್ಲದೆ, ಮುಂಜಾನೆ 5:15 ಕ್ಕೆ ವಿಜಯಪುರ ತಲುಪುವುದರಿಂದ ಪೂರ್ಣ ದಿನದ ಕೆಲಸಗಳಿಗೆ ಸಮಯಾವಕಾಶ ಸಿಗುತ್ತದೆ. ಬದಾಮಿ ಮತ್ತು ಬಾಗಲಕೋಟೆಯಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಈ ರೈಲು ಸಮಯ ಉಳಿತಾಯ ಮಾಡಲಿದೆ.&lt;/p&gt;&lt;p&gt;ಉತ್ತರ ಕರ್ನಾಟಕದ ರೈಲ್ವೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಮೈಲುಗಲ್ಲಾಗಿದ್ದು, ಬಸ್ ಪ್ರಯಾಣದ ದಟ್ಟಣೆ ಮತ್ತು ದೀರ್ಘಾವಧಿಯ ಪ್ರಯಾಣದಿಂದ ಈ ರೈಲು ಮುಕ್ತಿ ನೀಡಲಿದೆ. ಪ್ರಯಾಣಿಕರು ಐಆರ್&zwnj;ಸಿಟಿಸಿ (IRCTC) ವೆಬ್&zwnj;ಸೈಟ್ ಅಥವಾ ರೈಲ್ವೆ ನಿಲ್ದಾಣದ ಕೌಂಟರ್&zwnj;ಗಳಲ್ಲಿ ಈ ರೈಲಿನ ಟಿಕೆಟ್ ಕಾಯ್ದಿರಿಸಬಹುದಾಗಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/indian-railways-yeshwantpur-vijayapura-special-express-train-timetable-north-karnataka/articleshow-o4xd18t"/>
        </item>
        <item>
            <title><![CDATA[Kottur Bindu: ಉಗಾಂಡಾದಲ್ಲಿ ಕೊಟ್ಟೂರು ಮೂಲದ ಯುವತಿ ಸಾವು: ಪಾರ್ಥಿವ ಶರೀರ ತರಲು ನೆರವಾದ ತರಳಬಾಳು ಶ್ರೀಗಳು]]></title>
            <link>https://kannada.asianetnews.com/gallery/karnataka-districts/kottur-woman-bindu-death-in-uganda-mortal-remains-bringing-back-taralabalu-seer-help-v8wssrt</link>
            <guid isPermaLink="true">https://kannada.asianetnews.com/gallery/karnataka-districts/kottur-woman-bindu-death-in-uganda-mortal-remains-bringing-back-taralabalu-seer-help-v8wssrt</guid>
            <pubDate>Wed, 01 Jul 2026 19:46:32 +0530</pubDate>
            <description><![CDATA[&lt;p&gt;ಉಗಾಂಡಾದಲ್ಲಿ ನೆಲೆಸಿದ್ದ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿ ಗ್ರಾಮದ ಯುವತಿ ಬಿಂದು ಆತ್ಮ*ಹ*ತ್ಯೆಗೆ ಮಾಡಿಕೊಂಡಿದ್ದಾರೆ. ಆಕೆಯ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಕುಟುಂಬ ಸಂಕಷ್ಟದಲ್ಲಿದ್ದಾಗ, ಸಿರಿಗೆರೆಯ ತರಳಬಾಳು ಶ್ರೀಗಳು ಮಧ್ಯಪ್ರವೇಶಿಸಿ ಸಹಾಯ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwezthefpbq6p6pe0ht1y1rz,imgname-kottur-another-girl-death-1782914565583.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಗಾಂಡಾದಲ್ಲಿ ನೆಲೆಸಿದ್ದ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿ ಗ್ರಾಮದ ಯುವತಿ ಬಿಂದು ಆತ್ಮ*ಹ*ತ್ಯೆಗೆ ಮಾಡಿಕೊಂಡಿದ್ದಾರೆ. ಆಕೆಯ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಕುಟುಂಬ ಸಂಕಷ್ಟದಲ್ಲಿದ್ದಾಗ, ಸಿರಿಗೆರೆಯ ತರಳಬಾಳು ಶ್ರೀಗಳು ಮಧ್ಯಪ್ರವೇಶಿಸಿ ಸಹಾಯ ಮಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ವಿಜಯನಗರ: ವಿ&lt;/strong&gt;ದೇಶಕ್ಕೆ ಹೋಗಿ ಸುಂದರ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಜಿಲ್ಲೆಯ ಯುವತಿಯೊಬ್ಬಳು ಉಗಾಂಡಾದಲ್ಲಿ ದುರದೃಷ್ಟಕರವಾಗಿ ಜೀವನ ಅಂತ್ಯಗೊಳಿಸಿದ ಘಟನೆ ಸಂಭವಿಸಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿ ಗ್ರಾಮದ ಬಿಂದು (24) ನಿಧನರಾದ ದುರ್ದೈವಿ.&lt;/p&gt;&lt;img&gt;&lt;p&gt;ಕನ್ನನಾಯಕನ ಹಟ್ಟಿಯ ಬಿಂದು ಹಾಗೂ ಅವರ ಪತಿ ಚಂದ್ರಶೇಖರ್ ದಂಪತಿ ಕಳೆದ ಕೆಲವು ಕಾಲದಿಂದ ಪೂರ್ವ ಆಫ್ರಿಕಾದ ಉಗಾಂಡಾದಲ್ಲಿ ನೆಲೆಸಿದ್ದರು. ಆದರೆ, ಬಿಂದು ಅವರು ಆತುರದ ನಿರ್ಧಾರ ಕೈಗೊಂಡು ತಮ್ಮ ಜೀವ ಅಂತ್ಯಗೊಳಿಸಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಇತ್ತ &amp;nbsp;ಅಯ್ಯನಹಳ್ಳಿಯಲ್ಲಿರುವ ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಶ್ರೀಗಳ ಮಾನವೀಯ ಸ್ಪಂದನೆ:&lt;/strong&gt;&lt;/p&gt;&lt;p&gt;ವಿದೇಶದಲ್ಲಿ ನಿಧನರಾದ ಬಿಂದು ಅವರ ಪಾರ್ಥಿವ ಶರೀರವನ್ನು ಮರಳಿ ತಾಯ್ನಾಡಿಗೆ ತರುವುದು ಕುಟುಂಬಸ್ಥರಿಗೆ ದೊಡ್ಡ ಸವಾಲಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ಸಿರಿಗೆರೆಯ ತರಳಬಾಳು ಮಠದ ಶ್ರೀಗಳು ಸಹಾಯ ಹಸ್ತ ಚಾಚಿದ್ದಾರೆ. ಶ್ರೀಗಳು ಕೂಡಲೇ ವಿದೇಶಿ ರಾಯಭಾರಿ ಕಚೇರಿಗಳು ಮತ್ತು ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಕಾನೂನು ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರೈಸಲು ನೆರವಾಗಿದ್ದಾರೆ.&lt;/p&gt;&lt;img&gt;&lt;p&gt;ಶ್ರೀಗಳ ವಿಶೇಷ ಆಸಕ್ತಿಯಿಂದಾಗಿ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಮೃತ ಬಿಂದು ಅವರ ಪಾರ್ಥಿವ ಶರೀರವು ನಾಳೆ (ಗುರುವಾರ) ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ.&amp;nbsp;&lt;/p&gt;&lt;img&gt;&lt;p&gt;ನಾಳೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬಿಂದು ಪಾರ್ಥಿವ ಶರೀರವನ್ನು ವಿಜಯನಗರ ಜಿಲ್ಲೆಯ ಅವರ ಸ್ವಗ್ರಾಮ ಕೆ. ಕನ್ನನಾಯಕನ ಹಟ್ಟಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ಒಬ್ಬ ಪ್ರತಿಭಾವಂತ ಯುವತಿ ಹೀಗೆ ವಿದೇಶಿ ನೆಲದಲ್ಲಿ ಜೀವನ ಅಂತ್ಯಗೊಳಿಸಿದ್ದು ಗ್ರಾಮಸ್ಥರಲ್ಲಿ ತೀವ್ರ ನೋವುಂಟು ಮಾಡಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/kottur-woman-bindu-death-in-uganda-mortal-remains-bringing-back-taralabalu-seer-help-v8wssrt"/>
        </item>
        <item>
            <title><![CDATA[11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ; ಚಿಕ್ಕರೂಗಿ ರೈತನ ಬೆರಗುಗೊಳಿಸಿದ ಸಾಧನೆ!]]></title>
            <link>https://kannada.asianetnews.com/karnataka-districts/vijayapura-devara-hipparagi-sowing-18-acres-of-land-in-11-hours-amazing-achievement-of-a-chikkarugi-farmer-mrq/articleshow-vuypnkh</link>
            <guid isPermaLink="true">https://kannada.asianetnews.com/karnataka-districts/vijayapura-devara-hipparagi-sowing-18-acres-of-land-in-11-hours-amazing-achievement-of-a-chikkarugi-farmer-mrq/articleshow-vuypnkh</guid>
            <pubDate>Sun, 05 Jul 2026 07:35:28 +0530</pubDate>
            <description><![CDATA[&lt;p&gt;ರೈತ ಮಲ್ಲಪ್ಪ ರೊಟ್ಟಿ ಅವರು ಸತತ 11 ಗಂಟೆಗಳಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಗೌರವಿಸಿ, ಗ್ರಾಮಸ್ಥರು ರೈತ ದಂಪತಿಯನ್ನು ಚಕ್ಕಡಿಬಂಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಈ ಘಟನೆಯು ಕೃಷಿಯಿಂದ ವಿಮುಖರಾಗುತ್ತಿರುವ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದು ಪ್ರಗತಿಪರ ರೈತರು ಶ್ಲಾಘಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwr04jdj2e2v53ydqwa9yvrn,imgname-farmer-1783216884145.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ರೈತ ಮುಖಂಡರಾದ ಹಣಮಂತ್ರಾಯ ಮುಳಜಿ ಅವರ ಅಪೇಕ್ಷೆಯಂತೆ ಮತ್ತು ಅವರ ಆಸೆಯಂತೆ ಗ್ರಾಮದ ಅಶೋಕಗೌಡ ಪಾಟೀಲ ಅವರ ಜಮೀನಿನಲ್ಲಿ ರೈತ ಮಲ್ಲಪ್ಪ ರೊಟ್ಟಿ ಅವರು ಸತತ 11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡುವುದರ ಮೂಲಕ ಸಾಧನೆ ಮಾಡಿದ್ದಾರೆ. ರೈತನ ಸಾಧನೆಗೆ ಸಂತಸಗೊಂಡ ಊರಿನ ರೈತರು ರೈತ ದಂಪತಿಯನ್ನು ಚಕ್ಕಡಿಬಂಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.&lt;/p&gt;&lt;h2&gt;&lt;strong&gt;ರೈತರಲ್ಲಿ ಹೊಸ ಹುರುಪು&lt;/strong&gt;&lt;/h2&gt;&lt;p&gt;ಪ್ರಗತಿ ಪರ ರೈತ, ಪಿಕೆಪಿಎಸ್ ಅಧ್ಯಕ್ಷರಾದ ನಾಗಣ್ಣ ಮುಳಜಿ ಅವರು ರೈತ ದಂಪತಿಯನ್ನು ತಮ್ಮ ಮನೆಗೆ ಕರಿಸಿ ಬಟ್ಟೆ ಆಹೇರಿ ಮಾಡಿ ಸತ್ಕರಿಸಿದರು. ಈ ಬೇಳೆ ಮಾತನಾಡಿದ ಅವರು, ರೈತನ ಸಾಧನೆಯಿಂದ ರೈತರಲ್ಲಿ ಹೊಸ ಹುರುಪು ಮೂಡಿಸಿದೆ. ಒಕ್ಕಲುತನದಿಂದ ದೂರ ಉಳಿಯುತ್ತಿರುವ ಇಂದಿನ ದಿನದಲ್ಲಿ ಯುವ ಸಮುದಾಯಕ್ಕೆ ಇದೊಂದು ಪ್ರೆರಣೆಯಾಗಿದೆ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಡ ರೈತನ ಕೋಟ್ಯಧಿಪತಿ ಮಾಡುವ ಮೇಕೆ; ನಿತ್ಯ 5 ಲೀಟರ್ ಹಾಲು ಕೊಡುವ ಈ ವಿದೇಶಿ ತಳಿ ರೈತರ ಪಾಲಿಗೆ ಕಾಮಧೇನು!&lt;/strong&gt;&lt;/p&gt;&lt;p&gt;ಈ ವೇಳೆ ಊರಿನ ರೈತರಾದ ನಿಲಕಂಠ ಬೆನಕನಹಳ್ಳಿ, ಬಸವರಾಜ ಹೊಸಮನಿ, ಮಹಾಂತೇಶ ಉಡಗಿ, ಸಿಂಧೂರ ಪೂಜಾರಿ, ಲಗಮಣ್ಣ ಪೂಜಾರಿ, ಹಣಮಂತ ಕಂಬಾರ, ಭೀಮಾಶಂಕರ ಪ್ಯಾಟಿ, ದೇವಾನಂದ್ ಬಾಗಲಕೋಟ, ಗಂಗಪ್ಪ ಇಮ್ಮನ, ಮಹಾದೇವ ಕಡ್ಲೇವಾಡ, ಸಂತೋಷ ಹಾದಿಮನಿ, ಬಾಬು ಖೋಜೀಗಿರ, ಜಟ್ಟೇಪ್ಪ ಯಳಕೋಟಿ, ಸಿದ್ದು ಕಡ್ಲೇವಾಡ, ದಾನಪ್ಪಗೌಡ ಪಾಟೀಲ, ಮಂಜುನಾಥ ಬಾಗಲಕೋಟ, ಶಶಿಕಾಂತ ಚಕ್ಕಡಿ, ದೇವಾನಂದ ಉಡಗಿ, ಸಂತೋಷ ಸಿಂದಗಿ ಸೇರಿದಂತೆ ಹಲವರು ರೈತರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Haveri: ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-devara-hipparagi-sowing-18-acres-of-land-in-11-hours-amazing-achievement-of-a-chikkarugi-farmer-mrq/articleshow-vuypnkh"/>
        </item>
        <item>
            <title><![CDATA[ವಸತಿ ಉದ್ದೇಶಕ್ಕಾಗಿ ಮನೆ ಪರವಾನಗಿ ಪಡೆದು ಮಸೀದಿ ನಿರ್ಮಾಣದ ಆರೋಪ; ಸ್ಥಳೀಯರಿಂದ ದೂರು]]></title>
            <link>https://kannada.asianetnews.com/karnataka-districts/vijayapura-complaint-filed-for-construction-of-mosque-after-obtaining-house-permit-for-residential-purpose-mrq/articleshow-w0ca0ux</link>
            <guid isPermaLink="true">https://kannada.asianetnews.com/karnataka-districts/vijayapura-complaint-filed-for-construction-of-mosque-after-obtaining-house-permit-for-residential-purpose-mrq/articleshow-w0ca0ux</guid>
            <pubDate>Tue, 14 Jul 2026 07:11:48 +0530</pubDate>
            <description><![CDATA[&lt;p&gt;ವಸತಿ ಉದ್ದೇಶಕ್ಕಾಗಿ ಪಡೆದ ಪರವಾನಗಿಯಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪುರಸಭೆಗೆ ದೂರು ನೀಡಿದ್ದಾರೆ. ಈ ಅಕ್ರಮ ನಿರ್ಮಾಣದಿಂದಾಗಿ ಬಡಾವಣೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxf4addeptm0zme8w9a1qgfk,imgname-mosque-1783993021870.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ಬಸವನಬಾಗೇವಾಡಿ ಪಟ್ಟಣದ ವಜ್ರಹನುಮಾನ ನಗರದ ನಿವಾಸಿಗಳು ಸೋಮವಾರ ವಸತಿ ಉದ್ದೇಶಕ್ಕಾಗಿ ಮನೆ ಪರವಾನಗಿ ಪಡೆದುಕೊಂಡು ಮಸೀದಿ ನಿರ್ಮಾಣ ಮಾಡುತ್ತಿರುವ ಕುರಿತು ತಕರಾರು ಮನವಿಯನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದರು.&lt;/p&gt;&lt;p&gt;ವಜ್ರಹನುಮಾನ ನಗರದ (ಡಾ: ರಾಧಾಕೃಷ್ಣ ನಗರಕ್ಕೆ ಹೊಂದಿ) ಸಿಟಿ ಸರ್ವೆ ನಂ: 1878/K/158 ದಲ್ಲಿ ಮನೆ ನಿರ್ಮಾಣಕ್ಕೆ ಪುರಸಭೆಯಿಂದ ಪರವಾನಗಿ ಪಡೆದು ಅಲ್ಲಿ ಮಸೀದಿ ನಿರ್ಮಾಣ ಮಾಡುತ್ತಿದ್ದಾರೆ. ಲೇಔಟ್&zwnj; ಮಾಲೀಕರು ಮತ್ತು ಅಲ್ಲಿಯ ನಿವಾಸಿಗಳು ಹೋಗಿ ಪ್ರಶ್ನಿಸಿದರೆ ನಾವು ಮನೆಯನ್ನಾದರೂ ಮಾಡುತ್ತೇವೆ. ಮಸೀದಿಯನ್ನಾದರೂ ಮಾಡುತ್ತೇವೆ. ನೀವು ಮನೆ ಕಟ್ಟುವಾಗ ನಾವು ಬಂದು ಏನು ಕಟ್ಟುತ್ತಿದ್ದೀರಿ ಎಂದು ಕೇಳಿದ್ದೇವೆಯೇ ಎಂದು ತಿರುಗಿ ಪ್ರಶ್ನೆ ಮಾಡಿದ್ದಾರೆ. ಇಲ್ಲಿನ ಪುರಸಭೆಯ ಸಿಬ್ಬಂದಿ ಕರೆಯಿಸಿ ಅವರ ಸಮಕ್ಷಮವೇ ಕೇಳಿದರೂ ಕೂಡ ಸಮರ್ಪಕವಾಗಿ ಉತ್ತರಿಸದೇ ಜಾರಿಕೊಂಡಿದ್ದಾರೆ.ವಿಶ್ವಗುರು ಅಣ್ಣ ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯಲ್ಲಿ ಎಲ್ಲ ಸಮಾಜದವರೂ ಕೂಡಿ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ.&amp;nbsp;&lt;/p&gt;&lt;h2&gt;&lt;strong&gt;1 ಎಕರೆ 20 ಗುಂಟೆ ಜಾಗ&lt;/strong&gt;&lt;/h2&gt;&lt;p&gt;ಇಲ್ಲಿ ಯಾವುದೇ ಕೋಮು ಭಾವನೆ, ದ್ವೇಷ ಇಲ್ಲ. ನಿಮ್ಮ ಸಮಾಜದವರು ಬಂದು ವಿನಯಪೂರ್ವಕವಾಗಿ ಕೇಳಿದ್ದಕ್ಕೆ 1 ಎಕರೆ 20 ಗುಂಟೆ ಜಾಗ ಪುಕ್ಕಟೆಯಾಗಿ ಕೊಟ್ಟಿದ್ದೇವೆ. ನೀವು ಇಲ್ಲಿ ಮಸೀದಿ ನಿರ್ಮಾಣ ಮಾಡುವುದು ಸರಿಯಲ್ಲ ಅಂದರೂ ಕೂಡ ಕೇಳದೇ ನಾವು ಹಣ ಕೊಟ್ಟು ಪ್ಲಾಟ್&zwnj; ಖರೀದಿಸಿದ್ದೇವೆ ನಾವು ಏನಾದರೂ ಮಾಡಿಕೊಳ್ಳುತ್ತೇವೆ. ಅದನ್ನು ಕೇಳುವುದಕ್ಕೆ ನೀವ್ಯಾರು ಎಂದು ಹೇಳಿದ್ದಾರೆ ಎಂದು ಲೇಔಟ್&zwnj; ಮಾಲೀಕರು ಹೇಳುತ್ತಾರೆ. ಇವರ ವರ್ತನೆಯಿಂದ ವಜ್ರಹನುಮಾನ ನಗರ ಮತ್ತು ಅಕ್ಕಪಕ್ಕದ ಡಾ. ರಾಧಾಕೃಷ್ಣನಗರ, ಕೇಶವ ನಗರ, ಗಟ್ಟೂರ ಲೇಔಟ್&zwnj;, ಗಣೇಶ ನಗರ, ನಂದಿ ಲೇಔಟ್&zwnj;ದಲ್ಲಿನ ಸಾವಿರಾರು ನಿವಾಸಿಗಳಿಗೆ ಗಾಬರಿಯಾಗಿದೆ. ಮುಂದೆ ಏನಾಗುತ್ತದೋ ಎಂದು ಭಯದಲ್ಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಲೇಔಟ್&zwnj; ಮಾಲೀಕರು ಹೇಳುವ ಪ್ರಕಾರ ಈ ಪ್ಲಾಟ್&zwnj; ನಂ: 158ಕ್ಕೆ ಖರೀದಿ ವ್ಯವಹಾರ ಸಲುವಾಗಿ ಮಾಲೀಕರ ಹತ್ತಿರ ಬಂದು ಇಸಾರ್&zwnj; (ಅಡ್ವಾನ್ಸ ಕೊಟ್ಟ) ವ್ಯಕ್ತಿಯು, ತಾನು ಪ್ಲಾಟ್&zwnj; ಖರೀದಿಸದೇ ಅದನ್ನು ತಾಳಿಕೋಟಿ ಪಟ್ಟಣದ ಬೇರೊಬ್ಬರ ಹೆಸರಲ್ಲಿ ಖರೀದಿ ಮಾಡಿಸಿ ಈ ತರಹ ಮಸೀದಿ ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾಲೀಕರ ಮಗ ಖರೀದಿ ನಂತರ ಮಾಲೀಕರಿಗೆ ಈ ವಿಷಯ ಗೊತ್ತಾಗಿದೆ ಎಂದು ಹೇಳಿದ್ದಾರೆ. ಇದೊಂದು ವ್ಯವಸ್ಥಿತ ಸಂಚಾಗಿದೆ.&lt;/p&gt;&lt;p&gt;ಈ ಕಟ್ಟಡ ಕಟ್ಟುವ ಜಾಗದಲ್ಲಿ ಆ ಪ್ಲಾಟಿನ ಮಾಲೀಕರೇ ಇರುವುದಿಲ್ಲ. ಕೆಲವು ಮಾಹಿತಿಗಳ ಪ್ರಕಾರ ಇಲ್ಲಿ ಕಟ್ಟಡ ಕಟ್ಟಲು ಸಮಾಜದ ಕೆಲವು ಜನರು ಫಂಡ್&zwnj; ಕಲೆಕ್ಷನ್&zwnj; ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪರಿಶೀಲಿಸಿದಾಗ ನಾವು ಫಂಡ್&zwnj; ಕಲೆಕ್ಷನ್&zwnj; ಮಾಡಿದ್ದು ನಿಜ ಎಂದು ಅಲ್ಲಿರುವ ವ್ಯಕ್ತಿ ತಿಳಿಸಿದ್ದಾನೆ.&lt;/p&gt;&lt;h3&gt;&lt;strong&gt;ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಆಗ್ರಹ&lt;/strong&gt;&lt;/h3&gt;&lt;p&gt;ಪುರಸಭೆ ಮುಖ್ಯಾಧಿಕಾರಿಗಳು ಕೂಡಲೇ ಈ ಕಟ್ಟಡ ಕಾಮಗಾರಿ ಬಂದ್&zwnj; ಮಾಡಿಸಬೇಕು. ಈ ಪ್ಲಾಟಿನಲ್ಲಿ ಮನೆ ಎಂದು ಕಟ್ಟಡ ನಿರ್ಮಿಸಿದರೂ ಸಹ ಅಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಬಾರದು. ಇಲ್ಲಿ ಯಾವುದೇ ಕೋಮು ಭಾವನೆ ಕೆರಳಿಸುವ ಚಟುವಟಿಕೆ, ವರ್ತನೆ ಮಾಡಬಾರದು. ಒಂದು ವೇಳೆ ಭವಿಷ್ಯದಲ್ಲಿ ಅಂತಹ ಘಟನೆ ನಡೆದರೆ ಕೂಡಲೇ ಪುರಸಭೆ ವತಿಯಿಂದ ಆ ಕಟ್ಟಡ ಕೆಡವಲಾಗುವುದು ಎಂದು ಪ್ಲಾಟಿನ ಮಾಲೀಕರಿಗೆ ತಿಳಿಹೇಳಿ ಈ ಭಾಗದ ಜನರಿಗೆ ಶಾಂತಿಯುತ ಜೀವನ ನಡೆಸಲು ಪುರಸಭೆಯವರು ಕಾರ್ಯಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಕರವೇ ಮುಖಂಡ ಅಶೋಕ ಹಾರಿವಾಳ, ಪಾರೀಶ ಹೊಸಮನಿ, ಶಿವಾನಂದ ಸಜ್ಜನ, ಜಗದೀಶ ಬಾಗೇವಾಡಿ, ಎಸ್.ಬಿ.ಪಟ್ಟಣದ, ಎಂ.ಆರ್.ಹೊನವಾಡ, ಎಸ್.ಪಿ.ಅಗಸರ, ಆರ್.ಕೆ.ಖಮೀತ್ಕರ, ಸುರೇಶ ಸಜ್ಜನ, ಎಸ್.ಎಸ್.ಅಂಗಡಿ, ಸಂಗಪ್ಪ ಕಡ್ಲಿಮಟ್ಟಿ, ಕೆ.ಸಿ.ಅವಟಿ, ಕಿರಣ ದೇಸಾಯಿ, ಎಸ್.ಎಸ್.ಗೊಳಸಂಗಿ, ಶ್ರೀನಿವಾಸ ಜಾಲಗೇರಿ, ಸಚೀನ ಮೇಘರಾಜ, ಡಿ.ಎಸ್.ಅಂಗಡಿ ಸೇರಿದಂತೆ ಇತರರು ಇದ್ದರು.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-complaint-filed-for-construction-of-mosque-after-obtaining-house-permit-for-residential-purpose-mrq/articleshow-w0ca0ux"/>
        </item>
    </channel>
</rss>
