<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 17 May 2026 07:52:57 +0530</lastBuildDate>
        <atom:link href="https://kannada.asianetnews.com/rss/vijayapura" rel="self" type="application/rss+xml"/>
        <item>
            <title><![CDATA[ಬೆಂಗಳೂರಿನಿಂದ ವಿಜಯಪುರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಯಾವಾಗ? ಸಂಸದರ ಉತ್ತರ ಏನು?]]></title>
            <link>https://kannada.asianetnews.com/karnataka-districts/when-will-the-vande-bharat-express-from-bengaluru-to-vijayapura-start-mp-s-answer-mrq/articleshow-2abr1zg</link>
            <guid isPermaLink="true">https://kannada.asianetnews.com/karnataka-districts/when-will-the-vande-bharat-express-from-bengaluru-to-vijayapura-start-mp-s-answer-mrq/articleshow-2abr1zg</guid>
            <pubDate>Thu, 07 May 2026 08:02:03 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ವಿಜಯಪುರಕ್ಕೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ಸಂಚಾರ ವಿಳಂಬವಾಗಲು ಕಾರಣವನ್ನು ಸಂಸದ ರಮೇಶ್ ಜಿಗಜಿಣಗಿ ವಿವರಿಸಿದ್ದಾರೆ. . ಯಾವುದೇ ರೀತಿಯ ತಪ್ಪು ಗ್ರಹಿಕೆಗೆ ಅಂಟಿಕೊಳ್ಳದೇ ರೈಲಿನ ಕುರಿತ ಅಪಪ್ರಚಾರ ಮಾಡಬಾರದು ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr048hqvdrmhr7bh8ts1708d,imgname-ramesh-jigajinagi-1778120935162.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ವಂದೇ ಭಾರತ ರೈಲು ಸಂಚಾರ ವಿಜಯಪುರದಲ್ಲಿ ಸಂಚರಿಸಲು ಜಿಲ್ಲೆಯ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದು, ಕಲಬುರಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸದ್ಯ ರೈಲು ಸಂಚರಿಸುತ್ತಿದೆ. ಆದರೆ, ವಸ್ತುಸ್ಥಿತಿ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮನವಿ ಮಾಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಇನ್ನು ಮುಗಿದಿಲ್ಲ ಕಾಮಗಾರಿ&lt;/strong&gt;&lt;/h2&gt;&lt;p&gt;ಸೊಲ್ಲಾಪುರ, ಬಿಜಾಪುರ, ಗದಗ, ಹುಬ್ಬಳ್ಳಿಯ ವರೆಗೆ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿಲ್ಲ. ಸದ್ಯ ಓಡುತ್ತಿರುವ ರೈಲಿನ ವೇಗವು 92 ರಿಂದ 100ರ ವರೆಗೆ ಇರುತ್ತದೆ. ಆದರೆ, ವಂದೇ ಭಾರತ ರೈಲಿನ ವೇಗ 110 ರಿಂದ 140ರ ವೇಗವಾಗಿದೆ. ಆದ ಕಾರಣ ರೈಲಿನ ಮಾರ್ಗ ಕಾಮಗಾರಿಯಲ್ಲಿದ್ದು, ಈ ರೈಲು ಚಾಲನೆಯಾದರೆ ಏನಾದರೂ ಸಮಸ್ಯೆ ಆಗಬಾರದೆಂಬ ಹಿನ್ನೆಲೆ ವಂದೇ ಭಾರತ ರೈಲು ಸಂಚಾರ ಮಾಡುವುದು ವಿಳಂಬವಾಗುತ್ತಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ತಪ್ಪು ಗ್ರಹಿಕೆ ಬೇಡ ಎಂದ ಸಂಸದರು&lt;/strong&gt;&lt;/h3&gt;&lt;p&gt;ರೈಲು ಮಾರ್ಗ 2-3 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿದ ನಂತರ ಈ ರೈಲು ಸಂಚರಿಸಲು ಚಾಲನೆಯಾಗುತ್ತದೆ. ವಿದ್ಯಾವಂತರು ಇದನ್ನು ಅರಿತುಕೊಳ್ಳಬೇಕು. ಯಾವುದೇ ರೀತಿಯ ತಪ್ಪು ಗ್ರಹಿಕೆಗೆ ಅಂಟಿಕೊಳ್ಳದೇ ರೈಲಿನ ಕುರಿತ ಅಪಪ್ರಚಾರ ಮಾಡಬಾರದು ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/when-will-the-vande-bharat-express-from-bengaluru-to-vijayapura-start-mp-s-answer-mrq/articleshow-2abr1zg"/>
        </item>
        <item>
            <title><![CDATA[ವಿಜಯಪುರ: ಮಗುವನ್ನು ಕಚ್ಚಿ 100 ಅಡಿ ದೂರ ಎಳೆದೊಯ್ದ ಬೀದಿ ನಾಯಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!]]></title>
            <link>https://kannada.asianetnews.com/karnataka-districts/vijayapura-stray-dog-attack-3-year-old-boy-dragged-100-feet-cctv-viral-sat/articleshow-3gvi1c9</link>
            <guid isPermaLink="true">https://kannada.asianetnews.com/karnataka-districts/vijayapura-stray-dog-attack-3-year-old-boy-dragged-100-feet-cctv-viral-sat/articleshow-3gvi1c9</guid>
            <pubDate>Tue, 05 May 2026 21:41:00 +0530</pubDate>
            <description><![CDATA[&lt;p&gt;ವಿಜಯಪುರ ನಗರದ ರಾಜಕುಮಾರ ಲೇಔಟ್&zwnj;ನಲ್ಲಿ, ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿ, ಸುಮಾರು 100 ಅಡಿಗಳಷ್ಟು ದೂರ ಎಳೆದೊಯ್ದಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಭೀಕರ ಘಟನೆಯಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqweeywf39sw29sjbsthp6q3,imgname-vijayapura-dog-attack-1777997413263.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ 05): ಜಿ&lt;/strong&gt;ಲ್ಲೆಯಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ಇಂದು ಸಂಜೆ ವಿಜಯಪುರ ನಗರದಲ್ಲಿ ಮೈ ಜುಂ ಎನ್ನಿಸುವಂತಹ ಘಟನೆಯೊಂದು ಸಂಭವಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಪುಟ್ಟ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದಲ್ಲದೆ, ಆತನನ್ನು ಬಾಯಿಯಲ್ಲಿ ಕಚ್ಚಿ ಸುಮಾರು 100 ಅಡಿ ದೂರದವರೆಗೆ ಎಳೆದೊಯ್ದ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ವಿಜಯಪುರ ನಗರದ ರಾಜಕುಮಾರ ಲೇಔಟ್&zwnj;ನಲ್ಲಿ ಈ ಭೀಕರ ಘಟನೆ ನಡೆದಿದೆ. ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ವಿರಾಜ್ ಸಂತೋಷ ಬಿರಾದಾರ (3) ಎಂಬ ಪುಟ್ಟ ಬಾಲಕ ತನ್ನ ಮನೆಯ ಮುಂದೆಯೇ ಆಟವಾಡುತ್ತಿದ್ದನು. ಈ ಸಂದರ್ಭದಲ್ಲಿ ಹಠಾತ್ತನೆ ಬಂದ ಬೀದಿ ನಾಯಿಯೊಂದು ಬಾಲಕನ ಮೇಲೆ ಎರಗಿದೆ. ನಾಯಿ ಬಾಲಕನ ಬೆನ್ನು ಮತ್ತು ತೊಡೆಯ ಭಾಗಕ್ಕೆ ಬಲವಾಗಿ ಕಚ್ಚಿ, ಆತನನ್ನು ಬಾಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಸುಮಾರು 100 ಅಡಿ ದೂರದವರೆಗೆ ಎಳೆದೊಯ್ದಿದೆ.&lt;/p&gt;&lt;h2&gt;&lt;strong&gt;ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ:&lt;/strong&gt;&lt;/h2&gt;&lt;p&gt;ನಾಯಿ ಮಗುವನ್ನು ಎಳೆದೊಯ್ಯುತ್ತಿದ್ದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗು ಕಿರುಚಾಡುತ್ತಿದ್ದರೂ ನಾಯಿ ಬಿಡದೆ ಎಳೆದೊಯ್ಯುತ್ತಿರುವುದನ್ನು ಕಂಡು ಸ್ಥಳೀಯರು ತಕ್ಷಣ ಧಾವಿಸಿ ಬಂದಿದ್ದಾರೆ. ಜನರ ಕೂಗಾಟ ಮತ್ತು ಕಲ್ಲು ಎಸೆತಕ್ಕೆ ಹೆದರಿದ ನಾಯಿ ಮಗುವನ್ನು ಬಿಟ್ಟು ಓಡಿ ಹೋಗಿದೆ. ಕೂಡಲೇ ಸ್ಥಳೀಯರು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಬಾಲಕನನ್ನು ರಕ್ಷಿಸಿದ್ದಾರೆ. ನಾಯಿ ದಾಳಿಯಿಂದ ಬಾಲಕನ ಬೆನ್ನು ಮತ್ತು ತೊಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಸ್ಥಿತಿಯನ್ನು ಕಂಡು ಪೋಷಕರು ಮತ್ತು ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.&lt;/p&gt;&lt;h3&gt;&lt;strong&gt;ಅಧಿಕಾರಿಗಳ ವಿರುದ್ಧ ಜನಾಕ್ರೋಶ:&lt;/strong&gt;&lt;/h3&gt;&lt;p&gt;ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. &quot;ಇಂದು ನಮ್ಮ ಮಗುವಿಗೆ ಈ ಸ್ಥಿತಿ ಬಂದಿದೆ, ನಾಳೆ ಇನ್ನೊಬ್ಬರ ಮಗುವಿಗೆ ಏನಾಗುತ್ತದೋ? ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಏಕೆ ಮುಂದಾಗುತ್ತಿಲ್ಲ?&quot; ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಹಿಡಿದು ನಗರವಾಸಿಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಯು ನಗರದ ಜನರಲ್ಲಿ ಭೀತಿ ಹುಟ್ಟಿಸಿದ್ದು, ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಹೆದರುತ್ತಿದ್ದಾರೆ.&lt;/p&gt;&lt;p&gt;ವಿಡಿಯೋ ನೋಡಲು ಈ &lt;strong&gt;ಲಿಂಕ್ ಕ್ಲಿಕ್ ಮಾಡಿ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-stray-dog-attack-3-year-old-boy-dragged-100-feet-cctv-viral-sat/articleshow-3gvi1c9"/>
        </item>
        <item>
            <title><![CDATA[Vijayapur Horrific Incident: ಬಾಲಕನ ಮೇಲಿನ ದಾಳಿಗೆ ಈಗ ಬೀದಿ ನಾಯಿಗಳಿಗೆ ವಿಷ? ವಿಜಯಪುರದಲ್ಲಿ ಬೆಚ್ಚಿಬೀಳಿಸುವ ಘಟನೆ!]]></title>
            <link>https://kannada.asianetnews.com/karnataka-districts/vijayapur-horrific-incident-stray-dogs-poisoned-following-shocking-attack-on-young-boy/articleshow-4rxmr78</link>
            <guid isPermaLink="true">https://kannada.asianetnews.com/karnataka-districts/vijayapur-horrific-incident-stray-dogs-poisoned-following-shocking-attack-on-young-boy/articleshow-4rxmr78</guid>
            <pubDate>Tue, 12 May 2026 13:12:05 +0530</pubDate>
            <description><![CDATA[&lt;p&gt;Vijayapur Horrific Incident ವಿಜಯಪುರದಲ್ಲಿ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆದ ಬೆನ್ನಲ್ಲೇ, ಕಿಡಿಗೇಡಿಗಳು ನಾಯಿಗಳಿಗೆ ವಿಷವಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಲ್ಲಿ ಒಂದು ನಾಯಿ ಸಾವನ್ನಪ್ಪಿದ್ದು, ಎರಡು ನಾಯಿಗಳು ಅಸ್ವಸ್ಥಗೊಂಡಿದ್ದು, ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krdhvmss98d44ptys3bvbc3e,imgname-----------------------2026-05-12t130628.914-1778571399993.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.12)&lt;/strong&gt;: ವಿಜಯಪುರ ಪಟ್ಟಣದಲ್ಲಿ ಬೀದಿ ನಾಯಿಗಳ ವಿಚಾರ ಇದೀಗ ಮತ್ತೊಂದು ಭಯಾನಕ ತಿರುವು ಪಡೆದಿದೆ. ಕೆಲ ದಿನಗಳ ಹಿಂದೆ ಬಾಲಕನ ಮೇಲೆ ನಡೆದಿದ್ದ ಬೀದಿ ನಾಯಿ ದಾಳಿ ಜನರಲ್ಲಿ ಆತಂಕ ಹುಟ್ಟಿಸಿತ್ತು. ಆದರೆ ಈಗ ಅದೇ ಕೋಪ ಇನ್ನೊಂದು ದುರ್ಘಟನೆಗೆ ಕಾರಣವಾಗಿದೆಯೇ ಎಂಬ ಅನುಮಾನ ಮೂಡಿದೆ.&lt;/p&gt;&lt;h2&gt;ಬೀದಿನಾಯಿಗಳಿಗೆ ವಿಷ ಹಾಕಿದ ಕಿಡಿಗೇಡಿಗಳು&lt;/h2&gt;&lt;p&gt;ನಗರದ ಶಾಸ್ತ್ರಿ ನಗರದ ಜನ್ನತ್ ಹಾಲ್ ಬಳಿ ಬೀದಿ ನಾಯಿಗಳಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಆಹಾರದಲ್ಲಿ ವಿಷ ಬೆರೆಸಿ ನಾಯಿಗಳಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಷಪೂರಿತ ಆ ಆಹಾರ ಸೇವಿಸಿದ ಮೂರು ನಾಯಿಗಳ ಪೈಕಿ ಒಂದು ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನೆರಡು ನಾಯಿಗಳು ಅಸ್ವಸ್ಥಗೊಂಡಿದ್ದು, ಪ್ರಾಣಿಪ್ರಿಯರು ಅವುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.&lt;/p&gt;&lt;p&gt;ಈ ಘಟನೆಗೆ ಮುನ್ನ ವಿಜಯಪುರದ ರಾಜಕುಮಾರ್ ಲೇಔಟ್&zwnj;ನಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಗಾಯಗೊಂಡ ಬಾಲಕನ ಘಟನೆ ನಗರಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕೂಡ ಬೀದಿ ನಾಯಿಗಳ ಸ್ಥಳಾಂತರ ಕಾರ್ಯಕ್ಕೆ ಮುಂದಾಗಿತ್ತು. ಆದರೆ ಇದೇ ವೇಳೆ ನಗರದಲ್ಲಿ ಕೆಲ ದುಷ್ಕರ್ಮಿಗಳು ನಾಯಿಗಳಿಗೆ ವಿಷ ಹಾಕುತ್ತಿರುವ ಆರೋಪ ಕೇಳಿಬಂದಿದೆ.&lt;/p&gt;&lt;h3&gt;ಪ್ರಾಣಿಪ್ರಿಯರ ಆಕ್ರೋಶ&lt;/h3&gt;&lt;p&gt;ಇದು ಕೇವಲ ಪ್ರಾಣಿಗಳ ಮೇಲಿನ ಕ್ರೌರ್ಯ ಅಲ್ಲ, ಕಾನೂನುಬಾಹಿರ ಕೃತ್ಯ ಎಂದು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರು ಈ ವಿಷ ಹಾಕಿದವರು? ನಾಯಿಗಳ ಮೇಲಿನ ಕೋಪ ಇಷ್ಟು ಕ್ರೂರಿಯಾಗಿ ತಿರುಗಿದೆಯಾ? ಅನ್ನೋ ಪ್ರಶ್ನೆಗಳು ಈಗ ವಿಜಯಪುರದಲ್ಲಿ ಚರ್ಚೆಯಾಗುತ್ತಿವೆ.&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/vijayapur-horrific-incident-stray-dogs-poisoned-following-shocking-attack-on-young-boy/articleshow-4rxmr78"/>
        </item>
        <item>
            <title><![CDATA[ಅಮೆರಿಕ ಒಪ್ಪಿಗೆ ಪಡೆದು ರಷ್ಯಾದಿಂದ ತೈಲ ಖರೀದಿ? ಮೋದಿ ವಿರುದ್ಧ ಎಂ.ಬಿ.ಪಾಟೀಲ ವಾಗ್ದಾಳಿ]]></title>
            <link>https://kannada.asianetnews.com/karnataka-districts/mb-patil-slams-modi-government-russia-oil-petrol-price-gvd/articleshow-546l174</link>
            <guid isPermaLink="true">https://kannada.asianetnews.com/karnataka-districts/mb-patil-slams-modi-government-russia-oil-petrol-price-gvd/articleshow-546l174</guid>
            <pubDate>Sun, 17 May 2026 00:27:59 +0530</pubDate>
            <description><![CDATA[&lt;p&gt;ಭಾರತ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಇದು ಸಂಕೇತವಾಗಿದೆ. ನಮ್ಮದು ಸ್ವತಂತ್ರ್ಯ ರಾಷ್ಟ್ರ. ಏನು ಮಾಡಬೇಕು ಎಲ್ಲಿ ಖರೀದಿ ಮಾಡಬೇಕು ಎಂಬುದನ್ನು ಅಮೆರಿಕ ಬಳಿ ಅಡವಿಟ್ಟಿದ್ದರೆ ಇದು ದೌರ್ಭಾಗ್ಯ ಎಂದು ಎಂ.ಬಿ.ಪಾಟೀಲ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgy42qmrkgmp4k79214j7f3e,imgname-----------------------2026-02-08t132518.821-1770537442968.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.17): &lt;/strong&gt;ಭಾರತ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಇದು ಸಂಕೇತವಾಗಿದೆ. ನಮ್ಮದು ಸ್ವತಂತ್ರ್ಯ ರಾಷ್ಟ್ರ. ಏನು ಮಾಡಬೇಕು ಎಲ್ಲಿ ಖರೀದಿ ಮಾಡಬೇಕು ಎಂಬುದನ್ನು ಅಮೆರಿಕ ಬಳಿ ಅಡವಿಟ್ಟಿದ್ದರೆ ಇದು ದೌರ್ಭಾಗ್ಯ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.&lt;/p&gt;&lt;p&gt;ರಷ್ಯಾದಿಂದ ತೈಲ ಖರೀದಿಗೆ ಅಮೆರಿಕಾದ ಒಪ್ಪಿಗೆ ಕೇಳುತ್ತಿರುವ ಪಿಎಂ ಮೋದಿ ಎಂಬ ಆರೋಪದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುರಿತು ಇದೇ ಮೋದಿ ಅವರು ಸಿಎಂ ಆಗಿದ್ದಾಗ ಟೀಕೆ ಮಾಡುತ್ತಿದ್ದರು. ನೆಹರು, ಇಂದಿರಾ, ನರಸಿಂಹರಾಯರು ಮನಮೋಹನಸಿಂಗ್ ಅವರು ಭಾರತಕ್ಕೆ ಉತ್ತಮ ಆರ್ಥಿಕ ವ್ಯವಸ್ಥೆ ಮಾಡಿದ್ದರು. ಕಚ್ಚಾ ತೈಲದ ದರ ಏರಿದಾಗ ತೈಲ ಬೆಲೆ ಏರಬೇಕು, ಕಡಿಮೆಯಾದಾಗ ದರ ಇಳಿಯಬೇಕು. ಆದರೆ, ಬಿಜೆಪಿ ಕಾಲದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಿದ್ದಾಗ ತೈಲ ಬೆಲೆ ಏರಿಕೆಯಾಗಿದ್ದು ಯಾಕೆ? ಇವರು ಹಿಂದು ಮುಸಲ್ಮಾನ ಎಂದು ಮಾತನಾಡಿ ಬಾರಾಖೂನ್ ಮಾಫ್ ಮಾಡಿಕೊಂಡು ಹೊರಟಿದ್ದಾರೆ ಎಂದು ದೂರಿದರು.&lt;/p&gt;&lt;p&gt;ತೈಲಗಳ ಟ್ಯಾಕ್ಸ್&zwnj; ಅನ್ನು ಕೇಂದ್ರ ಕಡಿಮೆ ಮಾಡಿದೆ. ರಾಜ್ಯ ಸರ್ಕಾರವೂ ಕಡಿಮೆ ಮಾಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಚ್ಚಾತೈಲ ಬೆಲೆ ಕಡಿಮೆಯಿದ್ದಾಗ ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆ ಮಾಡಿಲ್ಲ. ಲಕ್ಷಾಂತರ ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ₹56 ಲಕ್ಷ ಕೋಟಿ ಹಣ ದರ ಏರಿಕೆಯಿಂದ ಗಳಿಸಿದ್ದಾರೆಂದು ಸುರ್ಜೆವಾಲಾ ಹೇಳಿದ್ದಾರೆ. ಆ ಹಣ ಜನೋಪಯೋಗಿ ಕೆಲಸಕ್ಕೆ ಬಳಕೆ ಮಾಡಿದ್ದಾರಾ? ಪಾಕಿಸ್ತಾನ ಬಾಂಗ್ಲಾದೇಶ ಬರ್ಮಾದಲ್ಲಿ ತೈಲ ಬೆಲೆ ಕಡಿಮೆ ಇದ್ದಾಗ ನಮ್ಮಲ್ಲಿ ದರ ಹೆಚ್ಚಿತ್ತು. ಭಾರತದ ಜಿಡಿಪಿ ದರಕ್ಕಿಂತ ಬಾಂಗ್ಲಾದೇಶದ ಜಿಡಿಪಿ ದರ ಉತ್ತಮವಾಗಿದೆ. ನಾವೆಲ್ಲ ಅವರಿಗಿಂತ ಕಡೆಯಾಗಿದ್ದೇವೆ.&lt;/p&gt;&lt;p&gt;ಜನರನ್ನು ಮರಳು ಮಾಡುತ್ತಿದ್ದಾರೆ. ಕರೋನಾ ಬಂದಾಗ ತಮಟೆ ಬಡೆಯೋದಕ್ಕೆ ಹಚ್ಚಿದ್ದರು. ಮೇಲಾಗಿ ಮೋದಿ ಅವರು ವಿಶ್ವಗುರು ಎಂದು ಲೇವಡಿ ಮಾಡಿದರು. ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ, ಬೇರೆಯದ್ದೇ ಮಾಡುತ್ತಾರೆ. ಪಶ್ಚಿಮ ಬಂಗಾಳ, ಅಸ್ಸಾಂ ಸಿಎಂ ಬಗ್ಗೆ ಮೋದಿ ಹಿಂದೆ ಏನೆಲ್ಲಾ ಮಾತನಾಡಿದ್ದರು. ಅಶೊಕ ಚವ್ಹಾಣ, ಅಜೀತ್ ಪವಾರ ಬಗ್ಗೆ ಮೋದಿ ಏನೆಲ್ಲಾ ಮಾತನಾಡಿದ್ದರು. ಎಲ್ಲವನ್ನು ವಾಷಿಂಗ್ ಮಷೀನ್ ನಲ್ಲಿ ಹಾಕಿ ಶುಭ್ರ ಮಾಡುತ್ತಾರೆಂದು ಟಾಂಗ್ ಕೊಟ್ಟರು.&lt;/p&gt;&lt;h2&gt;&lt;strong&gt;ಇರಾನ್ ಜೊತೆಗೆ ನಮ್ಮ ಸಾಮ್ಯತೆಯಿತ್ತು&lt;/strong&gt;&lt;/h2&gt;&lt;p&gt;ಮನಮೋಹನಸಿಂಗ್ ಪ್ರಧಾನಿ ಇದ್ದಾಗ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ಪೆಟ್ರೋಲ್, ಡಿಸೇಲ್, ಅನಿಲ ಸಿಲೆಂಡರ್ ಹಾಗೂ ಅಡುಗೆ ಎಣ್ಣೆ ದರ ಕಡಿಮೆಯಿದ್ದವು. ಮೋದಿ ಅವರ ಅಧಿಕಾರದಲ್ಲಿ ಎಲ್ಲ ದರಗಳು ಏರಿಕೆಯಾಗಿವೆ. ಈಗ ಯುದ್ಧದ ನೆಪವಿದೆ, ಆದರೆ, ಯುದ್ದ ಆರಂಭವಾಗದ ಮುಂಚೆಯೇ ದರ ಏರಿಕೆಯಾಗಿದೆ. ವಿದೇಶಾಂಗ ನೀತಿ, ಮೋದಿ ಅವರ ವೈಯುಕ್ತಿಕ ನೀತಿಯಾಗಿದೆ. ನೆಹರು ಕಾಲದಿಂದ ವಾಜಪೇಯಿ ಅವರ ಕಾಲದ ವರೆಗೆ ಪ್ಯಾಲಿಸ್ತೇನ್, ಇರಾನ್ ಜೊತೆಗೆ ನಮ್ಮ ಸಾಮ್ಯತೆಯಿತ್ತು. ಪ್ರಧಾನಿ ಯಾವುದಾದರೂ ದೇಶಕ್ಕೆ ಹೋಗಿ ಏನೆನೋ ಮಾತನಾಡುತ್ತಾರೆ. ಮೋದಿ ಫಾದರ್ ಲ್ಯಾಂಡ್, ಮದರ್ ಲ್ಯಾಂಡ್ ಎಂದೆಲ್ಲ ಮಾತಾಡಿದರು. ಇರಾನ್ ಭಾರತ ಕುರಿತು ಗೌರವ ನೀಡಿದೆ. ಭಾರತದ ಬಗ್ಗೆ ಅಮೇರಿಕಾ ಮಾತನಾಡಿದಾಗ ಇರಾನ್ ಭಾರತದ ಪರ ಗೌರವದ ಮಾತನಾಡಿದೆ. ಇದೆಲ್ಲಾ ಮೋದಿ ಅವರಿಗೆ, ಅವರ ಅಂಧ ಭಕ್ತರಿಗೆ ಯಾವಾಗ ಗೊತ್ತಾಗುತ್ತದೆಯೋ ಎಂದು ಎಂ.ಬಿ.ಪಾಟೀಲ ಹೇಳಿದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mb-patil-slams-modi-government-russia-oil-petrol-price-gvd/articleshow-546l174"/>
        </item>
        <item>
            <title><![CDATA[ನನಗಂತೂ ಸಚಿವನಾಗೋ ಆಸಕ್ತಿ ಉಳಿದಿಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ ಸ್ಪಷ್ಟನೆ]]></title>
            <link>https://kannada.asianetnews.com/karnataka-districts/cabinet-expansion-not-compulsory-says-yashavant-rayagoud-patil-gvd/articleshow-563rq9g</link>
            <guid isPermaLink="true">https://kannada.asianetnews.com/karnataka-districts/cabinet-expansion-not-compulsory-says-yashavant-rayagoud-patil-gvd/articleshow-563rq9g</guid>
            <pubDate>Tue, 12 May 2026 23:16:40 +0530</pubDate>
            <description><![CDATA[&lt;p&gt;ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚಣೆ ಮಾಡಬೇಕೆಂಬ ನಿಯಮವಿಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kremr0mxq1ych3h7ef2gjq5z,imgname-klknkn-1778607981213.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.12):&lt;/strong&gt; ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚಣೆ ಮಾಡಬೇಕೆಂಬ ನಿಯಮವಿಲ್ಲ. ಕ್ಯಾಬಿನೆಟ್&zwnj;ನಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಯಾರನ್ನು ಬಿಡಬೇಕೆಂಬುದು ಮುಖ್ಯಮಂತ್ರಿ ಅವರ ಪರಮಾಧಿಕಾರ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ರಾಜ್ಯದಲ್ಲಿ ಸಿಎಂ, ಡಿಸಿಎಂ ಸ್ಥಾನ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.&lt;/p&gt;&lt;p&gt;ಹಿರಿಯ ಶಾಸಕರು ದೆಹಲಿಗೆ ಹೋಗಿ ವರಿಷ್ಠರ ಭೇಟಿಯಾಗಿದ್ದೇವೆ. ಸಚಿವ ಸಂಪುಟ ವಿಚಾರವಾಗಿ ಹೋಗಿಲ್ಲ. ಅಭಿವೃದ್ಧಿ ಕೆಲಸ ಕಾಮಗಾರಿಗಳಿಗಾಗಿ ಹೋಗಿದ್ದೇವೆ. ಕೆಲ ಹಿರಿಯ ಶಾಸಕರಿಗೆ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕೆಂಬ ಅಪೇಕ್ಷೆಯಿದೆ. ಸರ್ಕಾರಕ್ಕೆ ಎರಡು ವರ್ಷ ಮಾತ್ರ ಅವಧಿಯಿದೆ. ಅದರಲ್ಲಿ ಒಂದು ವರ್ಷ ಚುನಾವಣೆಗೆ ಹೋಗುತ್ತದೆ. ಇಷ್ಟು ಸಮಯದಲ್ಲಿ ಏನು ಮಾಡಲಾಗುತ್ತದೆ? ನನಗಂತೂ ಸಚಿವನಾಗೋ ಆಸಕ್ತಿ ಉಳಿದಿಲ್ಲ ಎಂದು ಹೇಳಿದರು.&lt;/p&gt;&lt;p&gt;ದೇಶದಲ್ಲಿ 22 ರಾಜ್ಯಗಳು ಅವರದ್ದೆ ಇವೆ. ದೇಶದಲ್ಲಿ ಅಘೋಷಿತ ಎಮರ್ಜೆನ್ಸಿ ನಿರ್ಮಾಣವಾಗಿದೆ. ಬಂಗಾಳ ಗೆದ್ದಿರೋದು ಹೇಗೆ ಎಂದು ಎಲ್ಲರಿಗೂ ಗೊತ್ತಿದೆ. ನೋಟ್ ಬಂದಿ ಬಗ್ಗೆಯೂ ಹೀಗೆ ಮಾತನಾಡಿದ್ದರು. ಪ್ರಧಾನ ಮಂತ್ರಿ ಎಲೆಕ್ಷನ್&zwnj;ಗಾಗಿ ಬಳಕೆ ಮಾಡಿಕೊಳ್ಳಬಾರದು. ಈ ದೇಶವನ್ನು ಆಳಲು ಬಾರದವರು ವಿಶ್ವಗುರು ಆಗಲು ಹೊರಟಿದ್ದಾರೆ. ಐಟಿ, ಇಡಿ, ಚುನಾವಣೆ ಆಯೋಗ ಸೇರಿದಂತೆ ಅನೇಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಜಿಲ್ಲೆಯಲ್ಲಿ ಬೇಸಿಗೆ ಭವಣೆ, ಭೀಮಾನದಿಯಲ್ಲಿ ನೀರಿನ ಸಮಸ್ಯೆಗಳ ಕುರಿತು ಮಾತನಾಡಿ, ಭೀಮಾನದಿ ಬತ್ತಿದ ಕಾರಣ ಇಂಡಿ ಪಟ್ಟಣ ಹಾಗೂ ನದಿಪಾತ್ರದ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿತ್ತು. ಆದರೆ, ಸಕಾಲಕ್ಕೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ನೀರು ಬಿಡುಗಡೆ ಮಾಡಲಾಗಿದೆ. ನನ್ನ, ನಮ್ಮ ಸರ್ಕಾರದ ಮನವಿಗೆ ಸ್ಪಂದಿಸಿರುವ ಮಹಾರಾಷ್ಟ್ರದ ಸರ್ಕಾರ ಬೇಸಿಗೆ ಅವಧಿಯಲ್ಲಿ ಭೀಮಾನದಿಗೆ ಉಜನಿ ಜಲಾಶಯದಿಂದ ನೀರು ಬಿಟ್ಟಿದೆ. ಸಕಾಲಕ್ಕೆ ನೀರು ಒದಗಿಸಿದ್ದರಿಂದ ಮಹಾರಾಷ್ಟ್ರದ ಕೊಲ್ಹಾಪೂರ ಶಾಸಕ ಹಾಗೂ ಸಂಸದರಿಗೆ ಮಹಾರಾಷ್ಟ್ರ ಸರ್ಕಾರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಕೃತಜ್ಞತೆ ಸಲ್ಲಿಸಿದರು.&lt;/p&gt;&lt;p&gt;ಈ ಬಾರಿ ಏಪ್ರಿಲ್ 24ರಿಂದ ರಿಂದ ಮೇ 10ರ ರವರೆಗೆ ನಿತ್ಯ 600 ಕ್ಯೂಸೆಕ್ ನೀರು ಹರಿಸಿದ್ದಾರೆ. ಇಂಡಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ನೀರು ಬಿಟ್ಟಿದ್ದು ಅನಕೂಲವಾಗಿದೆ. ನೀರು ಬಿಡದಿದ್ದರೆ ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆಗೆ ಒಳಗಾಗುತ್ತಿದ್ದೇವು. ಇನ್ನು ಮಹಾರಾಷ್ಟ್ರ ಸರ್ಕಾರವೂ ಕೆಲ ಬೇಡಿಕೆ ಇಟ್ಟಿದೆ. ಮಹಾರಾಷ್ಟ್ರದ ಜತ್ ಭಾಗಕ್ಕೆ ನೀರಿನ ಸಮಸ್ಯೆಯಿದೆ, ಕೃಷ್ಣಾ ನದಿಯಿಂದ ಜತ್ ಭಾಗಕ್ಕೆ ನೀರು ನೀಡಬೇಕೆಂದು ಮನವಿ ಮಾಡಿದ್ದಾರೆ. ಇವೆಲ್ಲದಕ್ಕೂ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮುಂದಾಗಲಿದೆ. ಸೋದರ ರಾಜ್ಯದ ಮನವಿಗೆ ಸ್ಪಂದಿಸುತ್ತೇವೆ, ಬೇಸಿಗೆ ಕಾಲದಲ್ಲಿ ಭೀಮಾನದಿಗೆ ನೀರು ಬಿಟ್ಟಿದ್ದಕ್ಕೆ ಮತ್ತೊಮ್ಮೆ ಅಭಿನಂದನೆಗಳು ಎಂದರು.&lt;/p&gt;&lt;h2&gt;&lt;strong&gt;ಶೀಘ್ರದಲ್ಲಿ ನಿಯೋಗ&lt;/strong&gt;&lt;/h2&gt;&lt;p&gt;ನಮ್ಮ&zwnj; ಪ್ರಯತ್ನ, ನಮ್ಮ ಸರ್ಕಾರದ ಪ್ರಯತ್ನ ಹಾಗೂ ಮಹಾರಾಷ್ಟ್ರದ ಪ್ರಾಂಜಲ ಮನಸಿನಿಂದ ಈಗಾಗಲೇ ಭೀಮಾ ನದಿಗೆ ಎರಡು ಬಾರಿ ನೀರು ಬಂದಿದೆ. ಆದರೆ ಭೀಮಾ ನದಿಯ ನೀರಿನ ಶಾಶ್ವತ ಪರಿಹಾರಕ್ಕಾಗಿ ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ನಿಯೋಗ ಹೋಗಲಿದ್ದೇವೆ. ಏಕೆಂದರೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಇದರಿಂದ ಅನುಕೂಲ ಆಗುವುದರಿಂದ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ತಾಲೂಕಿನಾದ್ಯಂತ ಕೆರೆ ತುಂಬುವ ಯೋಜನೆಯಲ್ಲಿ ಕೆರೆಗಳನ್ನು ತುಂಬಿಸಿದ್ದರಿಂದ ನೀರಿನ ಭವಣೆ ನೀಗಿದ್ದು, ಟ್ಯಾಂಕರ್&zwnj;ನಿಂದ ನೀರು ಹಾಕುವ ಸಮಸ್ಯೆ ತಪ್ಪಿದೆ. ಮುಖ್ಯಮಂತ್ರಿ ಅವರನ್ನು ಕರೆಸಿ ₹ 4 ಸಾವಿರ ಕೋಟಿ ನೀರಾವರಿ ಯೋಜನೆಗಳಿಗೆ ಚಾಲನೆ ಕೊಡಿಸಿದ್ದು, ಆ ಯೋಜನೆಗಳ ಕಾಮಗಾರಿಗಳು ಆರಂಭವಾಗಿವೆ. ವಿದ್ಯುತ್ ಸೌಲಭ್ಯಕ್ಕಾಗಿ ಇಂಡಿ ತಾಲೂಕಿನಲ್ಲಿ 13 ಪವರ್&zwnj; ಸ್ಟೇಷನ್&zwnj;ಗಳನ್ನು ನಿರ್ಮಿಸಲಾಗುತ್ತಿದೆ. ಶೈಕ್ಷಣಿಕ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ಹತ್ತಾರು ಪಿಯು ಕಾಲೇಜುಗಳನ್ನು ಮಾಡಲಾಗಿದೆ. ಈ ಬಾರಿ ಹಡಲಸಂಗ, ಶಿರಶ್ಯಾಡ, ಬಸನಾಳ ಗ್ರಾಮಗಳಲ್ಲಿ ಹೊಸದಾಗಿ ಮೂರು ಪಿಯು ಕಾಲೇಜುಗಳನ್ನು ಅನುಮೋದಿಸಲಾಗಿದೆ. ಅಭಿವೃದ್ಧಿಗೆ ಸಹಕರಿಸಿದ ಸಿಎಂ, ಡಿಸಿಎಂ ಹಾಗೂ ಶಿಕ್ಷಣ ಸಚಿವರು ಮತ್ತು ಸಹಕರಿಸಿದ ಎಲ್ಲ ಇಲಾಖೆಗಳ ಸಚಿವರಿಗೆ ಅಭಿನಂದಿಸುತ್ತೇನೆ ಎಂದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cabinet-expansion-not-compulsory-says-yashavant-rayagoud-patil-gvd/articleshow-563rq9g"/>
        </item>
        <item>
            <title><![CDATA[ಹೊಸಪೇಟೆ ಮಾರ್ಗವಾಗಿ ಚಲಿಸುವ ಯಶವಂತಪುರ-ವಿಜಯಪುರ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ]]></title>
            <link>https://kannada.asianetnews.com/gallery/travel/indian-railways-good-news-for-yeshwantpur-vijayapura-train-passengers-running-via-hosapete-mrq-9svk5px</link>
            <guid isPermaLink="true">https://kannada.asianetnews.com/gallery/travel/indian-railways-good-news-for-yeshwantpur-vijayapura-train-passengers-running-via-hosapete-mrq-9svk5px</guid>
            <pubDate>Thu, 07 May 2026 07:49:20 +0530</pubDate>
            <description><![CDATA[ಯಶವಂತಪುರ-ವಿಜಯಪುರ ಮತ್ತು ಯಶವಂತಪುರ-ಸಿಂಧನೂರು ಎಕ್ಸ್&zwnj;ಪ್ರೆಸ್ ರೈಲುಗಳಿಗೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹೆಚ್ಚುವರಿ ಕೋಚ್&zwnj;ಗಳನ್ನು ಅಳವಡಿಸಲಾಗುತ್ತಿದೆ. ಮೇ 8 ರಿಂದ ಜಾರಿಗೆ ಬರುವ ಈ ಸೌಲಭ್ಯದಲ್ಲಿ ಮೂರನೇ ದರ್ಜೆ ಎ.ಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಬೋಗಿಗಳು ಸೇರಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr0353655b27d9tpjxggjj4p,imgname-hospete-1778119773381.jpg" type="image/jpeg" height="390" width="690"/>
            <content:encoded><![CDATA[ಯಶವಂತಪುರ-ವಿಜಯಪುರ ಮತ್ತು ಯಶವಂತಪುರ-ಸಿಂಧನೂರು ಎಕ್ಸ್&zwnj;ಪ್ರೆಸ್ ರೈಲುಗಳಿಗೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹೆಚ್ಚುವರಿ ಕೋಚ್&zwnj;ಗಳನ್ನು ಅಳವಡಿಸಲಾಗುತ್ತಿದೆ. ಮೇ 8 ರಿಂದ ಜಾರಿಗೆ ಬರುವ ಈ ಸೌಲಭ್ಯದಲ್ಲಿ ಮೂರನೇ ದರ್ಜೆ ಎ.ಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಬೋಗಿಗಳು ಸೇರಲಿವೆ.&lt;img&gt;&lt;p&gt;ಹೊಸಪೇಟೆ ಮಾರ್ಗವಾಗಿ ವಿಜಯಪುರ ತಲುಪುವ ಎಕ್ಸ್&zwnj;ಪ್ರೆಸ್ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಬಂದಿದೆ. ಈ ರೈಲಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದು, ಮೇ 8ರಿಂದಲೇ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಹೊಸಪೇಟೆ ಮಾರ್ಗವಾಗಿ ಸಂಚರಿಸುವ ಯಶವಂತಪುರ- ವಿಜಯಪುರ (ಗಾಡಿ ಸಂಖ್ಯೆ :16547/48) ಹಾಗೂ ಯಶವಂತಪುರ- ಸಿಂಧನೂರು (ಗಾಡಿ ಸಂಖ್ಯೆ:16545/46) ಈ ರೈಲುಗಳಿಗೆ ಹೆಚ್ಚುವರಿಯಾಗಿ ಮೂರನೇ ದರ್ಜೆ ಎ.ಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಕೋಚ್&zwnj;ಗಳನ್ನು ಅಳವಡಿಸಲಾಗಿದೆ.&lt;/p&gt;&lt;img&gt;&lt;p&gt;ಎರಡು ರೈಲುಗಳಿಗೆ ಪ್ರತ್ಯೇಕವಾಗಿ ಒಂದು ಮೂರನೇ ದರ್ಜೆ ಎಸಿ, ಮೂರು ಸ್ಲೀಪರ್ ಬೋಗಿಗಳು ಹಾಗೂ ಒಂದು ಸಾಮಾನ್ಯ ದರ್ಜೆಯ ಬೋಗಿಗಳನ್ನು ಹೀಗೆ ಎರಡು ರೈಲುಗಳಿಗೆ ಒಟ್ಟು 10 ಬೋಗಿಗಳನ್ನು ಅಳವಡಿಸಲಾಗುತ್ತದೆ. ಈ ಸೌಲಭ್ಯದಿಂದ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವಿಕೆಯ ಪ್ರಮಾಣ ಕಡಿಮೆಯಾಗಿ ನಿಗಧಿತ ದಿನಾಂಕದೊಳಗೆ ಬೆಂಗಳೂರಿಗೆ ಹೋಗಲು ಅನುಕೂಲವಾಗುತ್ತದೆ.&lt;/p&gt;&lt;img&gt;&lt;p&gt;ಈ ಸೌಲಭ್ಯವು ಮೇ 8ರಿಂದ ಯಶವಂತಪುರದಿಂದ ಹೊರಡುವ ರೈಲುಗಳಿಂದ ಜಾರಿಗೆ ಬರಲಿದೆ. ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಕೋಚ್&zwnj;ಗಳ ಸೌಲಭ್ಯ ಒದಗಿಸಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಅಭಿನಂದನೆ ಸಲ್ಲಿಸಿರುವ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಲಾಲ್ ಜೈನ್&zwnj;ರವರು ಆದಷ್ಟು ಬೇಗನೆ ರೈಲುಗಳ ಹಳೇ ಕೋಚ್&zwnj;ಗಳನ್ನು ಬದಲಿಸಿ ಆಧುನಿಕ ಮೂಲಸೌಲಭ್ಯಗಳಿರುವ ಎಲ್.ಎಚ್.ಬಿ. ಕೋಚ್&zwnj;ಗಳಿಗೆ ಪರಿವರ್ತಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ವಿಜಯನಗರ ರೈಲ್ವೆ ಬಳಿಕೆದಾರರ ಸಲಹಾ ಸಮಿತಿ ಕಾರ್ಯದರ್ಶಿ ಮಹೇಶ್ ಕುಡುತಿನಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮೈಸೂರು, ಬೆಂಗಳೂರು, ಚಿತ್ರದುರ್ಗದಿಂದ ವಿಜಯಪುರಕ್ಕಿದೆ ನೇರ ರೈಲು; ಪ್ರಯಾಣಿಕರಿಗೆ ಉತ್ತಮ ಆಯ್ಕೆ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/travel/indian-railways-good-news-for-yeshwantpur-vijayapura-train-passengers-running-via-hosapete-mrq-9svk5px"/>
        </item>
        <item>
            <title><![CDATA[ವಿಜಯಪುರ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು 'ಜೀವಂತ ಸಮಾಧಿ'; ಮಳೆ ಅಬ್ಬರಕ್ಕೆ ನಲುಗಿದ ಆಲಮೇಲ!]]></title>
            <link>https://kannada.asianetnews.com/gallery/karnataka-districts/vijayapura-rain-tragedy-house-collapse-family-of-four-buried-alive-moratagi-village-sat-9wee55z</link>
            <guid isPermaLink="true">https://kannada.asianetnews.com/gallery/karnataka-districts/vijayapura-rain-tragedy-house-collapse-family-of-four-buried-alive-moratagi-village-sat-9wee55z</guid>
            <pubDate>Fri, 15 May 2026 09:21:46 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ, ಭಾರೀ ಮಳೆಗೆ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ತಮ್ಮ ಸ್ವಂತ ಮನೆಯ ದುರಸ್ತಿ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krmvpq7wpvspbgnjr0m23m72,imgname-vijayapura-home-collapse-4-death-1778816605436.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ, ಭಾರೀ ಮಳೆಗೆ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ತಮ್ಮ ಸ್ವಂತ ಮನೆಯ ದುರಸ್ತಿ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿದ್ದಾರೆ.&lt;/p&gt;&lt;img&gt;&lt;p&gt;ವಿಜಯಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಸಹಿತ ಮಳೆ ದೊಡ್ಡ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಸಂಭವಿಸಿದೆ.&lt;/p&gt;&lt;img&gt;&lt;p&gt;ಮೃತರನ್ನು ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರು (28) ಹಾಗೂ ಅವರ ಮಕ್ಕಳಾದ ಕಾಳಮ್ಮ ಬಡಿಗೇರ (13) ಮತ್ತು ಕೀರ್ತಿ ಬಡಿಗೇರ (9) ಎಂದು ಗುರುತಿಸಲಾಗಿದೆ.&lt;/p&gt;&lt;img&gt;&lt;p&gt;ಬಡಿಗೇರ ಕುಟುಂಬದವರು ಮೊರಟಗಿ ಗ್ರಾಮದ ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದರು. ತಮ್ಮ ಸ್ವಂತ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ, ತಾತ್ಕಾಲಿಕವಾಗಿ ಈ ಹಳೆಯ ಮನೆಗೆ ವಾಸ್ತವ್ಯ ಬದಲಿಸಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಜಿಲ್ಲೆಯಾದ್ಯಂತ ಭಾರೀ ಗಾಳಿ ಹಾಗೂ ಮಳೆ ಸುರಿದಿದೆ. ಈ ವೇಳೆ ಅವರು ವಾಸವಿದ್ದ ಹಳೆಯ ಮನೆಯ ಮೇಲ್ಚಾವಣಿ ದಿಢೀರ್ ಎಂದು ಕುಸಿದು ಬಿದ್ದಿದೆ.&lt;/p&gt;&lt;img&gt;&lt;p&gt;ಗಾಢ ನಿದ್ರೆಯಲ್ಲಿದ್ದ ಕುಟುಂಬದ ಸದಸ್ಯರಿಗೆ ತಪ್ಪಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಮೇಲ್ಚಾವಣಿಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ದಂಪತಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಒಂದೇ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.&lt;/p&gt;&lt;img&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಿಂದಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವ ನಾಲ್ವರ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸ್ವಂತ ಮನೆಯ ಕೆಲಸ ಮುಗಿಸಿ ಶೀಘ್ರದಲ್ಲೇ ಅಲ್ಲಿಗೆ ಹೋಗಬೇಕೆಂಬ ಕನಸು ಕಂಡಿದ್ದ ಕುಟುಂಬ ಈಗ ಅಕಾಲಿಕವಾಗಿ ಸಾವನ್ನಪ್ಪಿರುವುದು ಸ್ಥಳೀಯರ ಕಣ್ಣೀರಿಗೆ ಕಾರಣವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಳೆಯ ಮನೆಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/vijayapura-rain-tragedy-house-collapse-family-of-four-buried-alive-moratagi-village-sat-9wee55z"/>
        </item>
        <item>
            <title><![CDATA[ಯಶವಂತಪುರ -ವಿಜಯಪುರ-ಸಿಂಧನೂರು ​ರೈಲಿಗೆ ಜರ್ಮನ್ ತಂತ್ರಜ್ಞಾನ ; ಈಗ ಮತ್ತಷ್ಟು ಆರಾಮದಾಯಕ ಪ್ರಯಾಣ]]></title>
            <link>https://kannada.asianetnews.com/gallery/travel/indian-railways-german-technology-lhp-coaches-for-yeshwantpur-vijayapura-sindhanur-express-more-comfortable-journey-mrq-ai8glma</link>
            <guid isPermaLink="true">https://kannada.asianetnews.com/gallery/travel/indian-railways-german-technology-lhp-coaches-for-yeshwantpur-vijayapura-sindhanur-express-more-comfortable-journey-mrq-ai8glma</guid>
            <pubDate>Sun, 10 May 2026 08:12:31 +0530</pubDate>
            <description><![CDATA[&lt;p&gt;ಯಶ್ವಂತಪುರ ​ವಿಜಯಪುರ ​ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ​ಸಿಂಧನೂರು ​ಯಶ್ವಂತಪುರ (16 545/46) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಆಧುನಿಕ ಮೂಲ ಸೌಲಭ್ಯ ನೀಡುತ್ತಿರುವ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7vqdjdvnc1cy078ydnn1kj,imgname-idnian-railways--3--1778380420685.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಶ್ವಂತಪುರ ​ವಿಜಯಪುರ ​ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ​ಸಿಂಧನೂರು ​ಯಶ್ವಂತಪುರ (16 545/46) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಆಧುನಿಕ ಮೂಲ ಸೌಲಭ್ಯ ನೀಡುತ್ತಿರುವ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಯಶ್ವಂತಪುರ ​ವಿಜಯಪುರ, ​ಯಶ್ವಂತಪುರ ಹಾಗೂ ಯಶ್ವಂತಪುರ ಸಿಂಧನೂರು ​ಯಶ್ವಂತಪುರ ರೈಲಿಗೆ ರೈಲ್ವೆ ಇಲಾಖೆ (ನೈಋತ್ಯ ವಲಯ) ಆಧುನಿಕ ತಂತ್ರಜ್ಞಾನದ ಎಲ್&zwnj;ಎಚ್&zwnj;ಪಿ ಕೋಚ್&zwnj;ಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದೆ.&lt;/p&gt;&lt;img&gt;&lt;p&gt;ಯಶ್ವಂತಪುರ ​ವಿಜಯಪುರ ​ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ​ಸಿಂಧನೂರು ​ಯಶ್ವಂತಪುರ (16 545/46) ಈ ಎರಡು ರೈಲುಗಳ ಸಾಂಪ್ರದಾಯಿಕ ಐಸಿಎಫ್ ಬೋಗಿಗಳನ್ನು ಬದಲಿಸಿ, ಆಧುನಿಕ ತಂತ್ರಜ್ಞಾನದ ಎಲ್&zwnj;ಎಚ್&zwnj;ಪಿ ಕೋಚ್&zwnj;ಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸಿ ಮೇ 9ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಪ್ರತಿಯೊಂದು ರೈಲಿಗೆ ಎರಡು ಮೂರನೇ ದರ್ಜೆ ಎಸಿ ಏಳು ಸ್ಲೀಪರ್ ಬೋಗಿ ಹಾಗೂ ಒಂಬತ್ತು ಸಾಮಾನ್ಯ ದರ್ಜೆಯ ಬೋಗಿಗಳನ್ನು ಅಳವಡಿಸಲಾಗಿದೆ.&lt;/p&gt;&lt;img&gt;&lt;p&gt;ಜರ್ಮನ್&zwnj; ದೇಶದ ಯಂತ್ರಶಿಲ್ಪಿ ಲಿಂಕ್&zwnj;ಹೋಫ್&zwnj;ಮೆನ್ ಬೋಷ್ಚ್ ಅವರು ಸಂಶೋಧಿಸಿ ಅವಿಷ್ಕಾರಗೊಳಿಸಿದ ಅವರ ಹೆಸರಿನ ಎಲ್&zwnj;ಎಚ್&zwnj;ಪಿ ಕೋಚ್&zwnj;ಗಳು ಹೆಚ್ಚು ಸುರಕ್ಷತೆ, ಆರಾಮದಾಯಕ ಹಾಗೂ ವೇಗದ ಸಾಮರ್ಥ್ಯವನ್ನು ಹೊಂದಿವೆ. ಅಪಘಾತದ ವೇಳೆ ಒಂದು ಬೋಗಿಯು ಮತ್ತೊಂದು ಬೋಗಿಯ ಮೇಲೆ ಏರುವ ಅಥವಾ ಬೀಳುವ ಕಡಿಮೆ ಅಪಾಯವಿರುವುದರಿಂದ ಜೀವಹಾನಿಯ ಪ್ರಮಾಣವೂ ಕಡಿಮೆ ಇರುತ್ತದೆ.&lt;/p&gt;&lt;img&gt;&lt;p&gt;ಈ ಬೋಗಿಗಳು ಹೆಚ್ಚು ಆರಾಮದಾಯಕವಾಗಿದ್ದು, ಕಂಪನ ಮತ್ತು ಜರ್ಕ್ ಕಡಿಮೆಯಾಗಿರುವುದರಿಂದ ಮೃದುವಾದ ಪ್ರಯಾಣದ ಅನುಭವವಾಗುತ್ತದೆ. ಸಂಚಾರದ ವೇಳೆಯಲ್ಲಿ ಕಡಿಮೆ ಶಬ್ದ, ಬೋಗಿಯ ಒಳಗಡೆ ಉತ್ತಮ ಬೆಳಕು, ಒಳಾಂಗಣ ವಿನ್ಯಾಸ ಹೆಚ್ಚು ಸುಧಾರಿತವಾಗಿದೆ. ಈ ಕೋಚುಗಳು ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿನ ವೇಗ ಸಾಮರ್ಥ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ರೈಲಿನ ವೇಗ ನಿಯಂತ್ರಣ ವ್ಯವಸ್ಥೆ ಅತ್ಯುತ್ತಮವಾಗಿದೆ. ಬೋಗಿಗಳ ತೂಕ ಕಡಿಮೆ ಇರುವುದರಿಂದ ಎಂಜಿನ್ ಮೇಲಿನ ಒತ್ತಡ ಕಡಿಮೆಯಾಗಿ ಇಲಾಖೆಯ ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;1900 ಕಿಮೀ ಪ್ರಯಾಣ, ಜಸ್ಟ್ 6 ನಿಲುಗಡೆ; ಬೆಂಗಳೂರಿನಿಂದ ಎಲ್ಲಿಗೆ ಹೋಗುತ್ತೆ ಈ ಸೂಪರ್&zwnj;ಫಾಸ್ಟ್ ರೈಲು!&lt;/strong&gt;&lt;/p&gt;&lt;img&gt;&lt;p&gt;ಪ್ರಯಾಣಿಕರಿಗೆ ಆಧುನಿಕ ಮಾದರಿಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರುವ ರೈಲ್ವೆ ಇಲಾಖೆ ಕ್ರಮವನ್ನು ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಬಾಲ್ ಜೈನ್&zwnj;, ವಿಜಯನಗರ ರೈಲ್ವೆ ಬಳಿಕೆದಾರರ ಸಂಘದ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್&zwnj; ಕುಡುತಿನಿ ಸ್ವಾಗತಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ಬಸ್; ಒಂದು ದಿನದ ಟ್ರಿಪ್&zwnj;ಗೆ ಬೆಸ್ಟ್ ಆಯ್ಕೆ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/travel/indian-railways-german-technology-lhp-coaches-for-yeshwantpur-vijayapura-sindhanur-express-more-comfortable-journey-mrq-ai8glma"/>
        </item>
        <item>
            <title><![CDATA[ಕಾಂಗ್ರೆಸ್‌ನಲ್ಲಿ ಎಲ್ಲ ನಿರ್ಧಾರವೂ ಹೈಕಮಾಂಡ್‌ನದ್ದೇ: ಸಚಿವ ಎಂ.ಬಿ.ಪಾಟೀಲ ಸ್ಪಷ್ಟನೆ]]></title>
            <link>https://kannada.asianetnews.com/karnataka-districts/minister-mb-patil-congress-high-command-supreme-statement-gvd/articleshow-bpvd6mq</link>
            <guid isPermaLink="true">https://kannada.asianetnews.com/karnataka-districts/minister-mb-patil-congress-high-command-supreme-statement-gvd/articleshow-bpvd6mq</guid>
            <pubDate>Fri, 08 May 2026 22:27:00 +0530</pubDate>
            <description><![CDATA[&lt;p&gt;ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಕರ್ನಾಟಕದಲ್ಲೂ ಸುಪ್ರೀಂ, ತಮಿಳುನಾಡಿನಲ್ಲೂ ಸುಪ್ರೀಂ, ವೆಸ್ಟ್ ಬೆಂಗಾಲದಲ್ಲೂ ಸುಪ್ರೀಂ, ಎಲ್ಲ ಕಡೆ ಸುಪ್ರೀಂ. ಎಲ್ಲವನ್ನು ಹೈಕಮಾಂಡ್&zwnj;ದವರೇ ನಿರ್ಣಯ ಮಾಡುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7907669v3sy433fx9m4prw4,imgname-minister-mb-patil-1760165075145.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.08): &lt;/strong&gt;ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವನ್ನೆಲ್ಲ ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಳಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಕರ್ನಾಟಕದಲ್ಲೂ ಸುಪ್ರೀಂ, ತಮಿಳುನಾಡಿನಲ್ಲೂ ಸುಪ್ರೀಂ, ವೆಸ್ಟ್ ಬೆಂಗಾಲದಲ್ಲೂ ಸುಪ್ರೀಂ, ಎಲ್ಲ ಕಡೆ ಸುಪ್ರೀಂ. ಎಲ್ಲವನ್ನು ಹೈ ಕಮಾಂಡ್&zwnj;ದವರೇ ನಿರ್ಣಯ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.&lt;/p&gt;&lt;p&gt;ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಕರೆದರೆ ಹೋಗಲೇಬೇಕಾಗುತ್ತದೆ ಎಂದು ಸ್ವತಹ ಮುಖ್ಯಮಂತ್ರಿಗಳೇ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಎಲ್ಲದಕ್ಕೂ ಹೈಕಮಾಂಡ್ ಸುಪ್ರೀಂ. ಕೇರಳದಲ್ಲಿ ಸಿಎಂ ವೇಣುಗೋಪಾಲ ಆಗ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ವೇಣುಗೋಪಾಲ ಅವರು ಹೈ ಕಮಾಂಡ್&zwnj;ನ ಒಂದು ಭಾಗ. ಎಲ್ಲ ನಿರ್ಣಯವನ್ನು ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ ಎಂದರು.&lt;/p&gt;&lt;p&gt;ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಏನಾಗುತ್ತದೋ ಆಗುತ್ತದೆ ಅದನ್ನು ನೊಡೋಣ. ಅವರು ರಾಜೀನಾಮೆ ಕೊಡುವುದಿಲ್ಲ ಎಂಬುವು ಸಂವಿಧಾನದಲ್ಲಿ ಏನಿದೆಯೋ ಅದು ತೀರ್ಮಾನವಾಗಲಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಅವರಿಗೆ ಸಾಕಷ್ಟು ಅನ್ಯಾಯವಾಗಿರುವುದು ಸತ್ಯವಾಗಿದೆ. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಬಿಜೆಪಿಯವರು ಅಧಿಕಾರಿಗಳನ್ನಿಟ್ಟುಕೊಂಡು, ವಾಮ ಮಾರ್ಗಗಳಿಂದ ಜಯಗಳಿಸಿದ್ದಾರೆ ಎಂದರು.&lt;/p&gt;&lt;p&gt;ತಮಿಳುನಾಡಿಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ವಿಚಾರವಾಗಿ ಮಾತನಾಡಿ, ಕೆಲವು ಬಿಜೆಪಿಯಂತಹ ಕೋಮುವಾದಿ ಶಕ್ತಿಗಳನ್ನು ಅಲ್ಲಿನ ಜನರು ದೂರಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಪರ್ಯಾಯವಾಗಿ ಜ್ಯಾತ್ಯಾತೀತ ಹಿನ್ನೆಲೆಯಲ್ಲಿ ಬಂದಿರುವ ಟಿವಿಕೆಯ ಯುವಕ ವಿಜಯಗೆ ಜನ ಬಹುದೊಡ್ಡ ಮನ್ನಣೆ ಕೊಟ್ಟಿದ್ದಾರೆ. ಜನರ ತೀರ್ಪು ಹುಸಿಯಾಗಬಾರದು, ಜನರ ತೀರ್ಪಿಗೆ ನಾವು ತಲೆಬಾಗಬೇಕು ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ನಮ್ಮನ್ನು ಕ್ಷಮಿಸುವುದಿಲ್ಲ&lt;/strong&gt;&lt;/h2&gt;&lt;p&gt;ಕೋಮುವಾದಿ ಶಕ್ತಿಗಳಿಗೆ ವಿರುದ್ಧವಾಗಿ ಇಂದು ಟಿವಿಕೆನವರು ಗೆದ್ದಿದ್ದು, ಅವರನ್ನು ಬೆಂಬಲಿಸುವಲ್ಲಿ ನಾವು ವಿಫಲವಾದರೇ ಕೋಮುವಾದಿ ಶಕ್ತಿಗಳನ್ನು ಬೆಳೆಸಲು ಅವಕಾಶ ಕೊಟ್ಟಂತಾಗುತ್ತದೆ. ಹಾಗಾಗಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಸಿಕ್ಕಿದೆ. ಟಿವಿಕೆ ಸರ್ಕಾರ ರಚನೆ ಮಾಡುವಲ್ಲಿ ನಾವು ಬೆಂಬಲ ಕೊಟ್ಟಿದ್ದೇವೆ. ಟಿವಿಕೆಗೆ ಬಂಬಲ ಕೊಡದಿದ್ದರೇ ಜನರು ನಮ್ಮನ್ನು ಕ್ಷಮಿಸುವುದಿಲ್ಲ. ನಾವು ಕಾಂಗ್ರೆಸ್ ನವರು ಅವರಿಗೆ ಬೆಂಬಲಿಸದಿದ್ದರೆ ಜನರು ನಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡುತ್ತಾರೆ. ಜನರ ತೀರ್ಪಿಗೆ ವಿರೋಧವಾಗಿ ಹೋಗುವುದು ಆಗಬಾರದು ಎಂದು ನಾವು ಟಿವಿಕೆಗೆ ಬೆಂಬಲ ಕೊಡುತ್ತಿದ್ದೇವೆ. ಎಲ್ಲೊ ಒಂದುಕಡೆ ನಮ್ಮ ತತ್ವ ಸಿದ್ಧಾಂತಕ್ಕೆ ವಿರೋಧಿಸಿದಂತಾಗುತ್ತದೆ. ಅದರರ್ಥ ಡಿಎಂಕೆಗೆ ನಾವು ಬೆನ್ನಿಗೆ ಚೂರಿ ಹಾಕಿದೆವು ಅಂತಲ್ಲ. ಡಿಎಂಕೆ ಪಕ್ಷದ ಜೊತೆಗೂ ಮಾತನಾಡುತ್ತೇವೆ ಎಂದರು.&lt;/p&gt;&lt;p&gt;ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕಾಗುತ್ತದೆ. ಪ್ರತಿವರ್ಷ ನಾವು ಆಲಮಟ್ಟಿ ಡ್ಯಾಂ ನಲ್ಲಿ ಜೂನ್ 15ರವರೆಗೆ ಲೆಕ್ಕಾಚಾರ ಹಾಕಿ ನೀರು ಕೊಡುತ್ತಿದ್ದೇವು. ಇದೀಗ ಪರಿಸ್ಥಿತಿ ಬದಲಾಗಬಹುದು, ನಾರ್ಮಲ್&zwnj; ಆಗಿ ಮಳೆ ಬಂದರೆ ಜೂ.15ರವರೆಗೆ ಆಗುತ್ತದೆ. ಇಲ್ಲವಾದಲ್ಲಿ ಆ.15ರವರೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಕೃಷಿಗಿಂತ ಮೊದಲು ನಾವು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಾಗುತ್ತದೆ ಎಂದರು.&lt;/p&gt;&lt;p&gt;ಪುಣೆಯಲ್ಲಿರುವ ಅದಾನಿ ಕಂಪನಿಗೆ ಜಿಲ್ಲೆಯ ಎನ್&zwnj;ಟಿಪಿಸಿಯಿಂದ ವಿದ್ಯುತ್ ಲೈನ್ ಹೊರಟಿದ್ದು, ರೈತರಿಗೆ ಸಮಸ್ಯೆಯಾಗುತ್ತಿರುವ ವಿಚಾರವಾಗಿ ಮಾತನಾಡಿ, ಅದು ಕೇಂದ್ರ ಸರ್ಕಾರದ ಯೋಜನೆ, ಕೇಂದ್ರದ ಆಕ್ಟ್ ಪ್ರಕಾರ ಕೊಡುವ ಪರಿಹಾರವನ್ನು 95 ಪರ್ಸೆಂಟ್ ರೈತರು ಒಪ್ಪಿಕೊಂಡಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರವಾಗಿ ಮಾಹಿತಿ ಕೊಡುವಂತೆ ತಿಳಿಸಿದ್ದೇನೆ. ಕೆಲವರು ಬ್ಲಾಕಮೇಲ್ ಮಾಡುವ ತಂತ್ರ ಮಾಡುತ್ತಿದ್ದಾರೆ. ಈ ಬ್ಲಾಕಮೇಲ್ ಮಾಡುವ ತಂತ್ರ ನಿಲ್ಲಬೇಕು ಎಂದು ತಿಳಿಸಿದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/minister-mb-patil-congress-high-command-supreme-statement-gvd/articleshow-bpvd6mq"/>
        </item>
        <item>
            <title><![CDATA[ವಿಜಯಪುರ ಟಿಸಿ ರಿಪೇರಿಗೆ ಮೇಲೆ ಹತ್ತಿಸಿ, ಕರೆಂಟ್ ಚಾರ್ಜ್ ಮಾಡಿದ ಕೆಇಬಿ; ಕಂಬದಲ್ಲೇ ಪ್ರಾಣಬಿಟ್ಟ ಲೈನ್‌ಮ್ಯಾನ್!]]></title>
            <link>https://kannada.asianetnews.com/gallery/karnataka-districts/vijayapura-lineman-sridhar-lamani-electrocuted-to-death-ukkali-village-sat-bvp5cap</link>
            <guid isPermaLink="true">https://kannada.asianetnews.com/gallery/karnataka-districts/vijayapura-lineman-sridhar-lamani-electrocuted-to-death-ukkali-village-sat-bvp5cap</guid>
            <pubDate>Thu, 07 May 2026 20:34:33 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಉಕ್ಕಲಿ ಗ್ರಾಮದಲ್ಲಿ, ಟಿಸಿ ರಿಪೇರಿ ಮಾಡುತ್ತಿದ್ದ 21 ವರ್ಷದ ಲೈನ್&zwnj;ಮ್ಯಾನ್ ಶ್ರೀಧರ್ ಲಮಾಣಿ ವಿದ್ಯುತ್ ಶಾಕ್&zwnj;ನಿಂದ ಸಾವನ್ನಪ್ಪಿದ್ದಾರೆ. ಅಧಿಕೃತವಾಗಿ ಲೈನ್ ಕ್ಲಿಯರೆನ್ಸ್ (LC) ಪಡೆದಿದ್ದರೂ ವಿದ್ಯುತ್ ಪ್ರವಹಿಸಿದ್ದರಿಂದ ಈ ದುರಂತ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1f02n4m3ar1kqmw1cnrcrm,imgname-lineman-sridhar-lamani-1778165746339.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ ಜಿಲ್ಲೆಯ ಉಕ್ಕಲಿ ಗ್ರಾಮದಲ್ಲಿ, ಟಿಸಿ ರಿಪೇರಿ ಮಾಡುತ್ತಿದ್ದ 21 ವರ್ಷದ ಲೈನ್&zwnj;ಮ್ಯಾನ್ ಶ್ರೀಧರ್ ಲಮಾಣಿ ವಿದ್ಯುತ್ ಶಾಕ್&zwnj;ನಿಂದ ಸಾವನ್ನಪ್ಪಿದ್ದಾರೆ. ಅಧಿಕೃತವಾಗಿ ಲೈನ್ ಕ್ಲಿಯರೆನ್ಸ್ (LC) ಪಡೆದಿದ್ದರೂ ವಿದ್ಯುತ್ ಪ್ರವಹಿಸಿದ್ದರಿಂದ ಈ ದುರಂತ ಸಂಭವಿಸಿದೆ.&lt;/p&gt;&lt;img&gt;&lt;p&gt;ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಕ್ಕಲಿ ಗ್ರಾಮದಲ್ಲಿ ಶನಿವಾರ ಘೋರ ದುರಂತವೊಂದು ಸಂಭವಿಸಿದೆ. ವಿದ್ಯುತ್ ಪರಿವರ್ತಕ (TC) ರಿಪೇರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ, 21 ವರ್ಷದ ಯುವ ಲೈನ್ ಮನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯು ಕೆಇಬಿ (ಹೆಸ್ಕಾಂ) ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;&lt;img&gt;&lt;p&gt;ಮೃತ ಲೈನ್ ಮನ್ ಅನ್ನು ಶ್ರೀಧರ್ ಲಮಾಣಿ (21) ಎಂದು ಗುರುತಿಸಲಾಗಿದೆ. ಇವರು ವಿಜಯಪುರ ಜಿಲ್ಲೆಯ ಉಕ್ಕಲಿ ಸಬ್ ಸ್ಟೇಷನ್&zwnj;ನಲ್ಲಿ ಲೈನ್ ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಕ್ಕಲಿ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಪರಿವರ್ತಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಶ್ರೀಧರ್ ಅವರು ಸ್ಥಳಕ್ಕೆ ತೆರಳಿದ್ದರು.&lt;/p&gt;&lt;img&gt;&lt;p&gt;ಯಾವುದೇ ವಿದ್ಯುತ್ ಲೈನ್ ರಿಪೇರಿ ಮಾಡುವ ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸಲು 'ಲೈನ್ ಕ್ಲಿಯರೆನ್ಸ್' (LC) ಪಡೆಯುವುದು ಕಡ್ಡಾಯ. ಅದರಂತೆ ಶ್ರೀಧರ್ ಅವರು ಕೂಡ ಕೆಇಬಿ ಕಚೇರಿಯಿಂದ ಅಧಿಕೃತವಾಗಿ ಎಲ್ಸಿ ಪಡೆದೇ ಟಿಸಿ ಮೇಲೆ ಏರಿ ರಿಪೇರಿ ಕಾರ್ಯ ಆರಂಭಿಸಿದ್ದರು.&lt;/p&gt;&lt;p&gt;ಆದರೆ, ದುರಂತವೆಂದರೆ ಶ್ರೀಧರ್ ಅವರು ಕೆಲಸ ಮಾಡುತ್ತಿರುವಾಗಲೇ ಏಕಾಏಕಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಶ್ರೀಧರ್ ಅವರು ಕಂಬದ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಕೇವಲ 21 ವರ್ಷದ ಹರೆಯದಲ್ಲೇ ಶ್ರೀಧರ್ ಸಾವನ್ನಪ್ಪಿರುವುದು ಅವರ ಕುಟುಂಬಸ್ಥರಲ್ಲಿ ಮಡುಗಟ್ಟಿದ ಹತಾಶೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಬಡತನದ ಹಿನ್ನೆಲೆಯಲ್ಲಿ ಕೆಲಸಕ್ಕೆ ಸೇರಿದ್ದ ಮಗ, ಇಲಾಖೆಯ ನಿರ್ಲಕ್ಷ್ಯದಿಂದಾಗಿ ಹೆಣವಾಗಿ ಮನೆಗೆ ಮರಳಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. &lsquo;ಎಲ್ಸಿ ಪಡೆದ ಮೇಲೂ ವಿದ್ಯುತ್ ಸಂಪರ್ಕ ನೀಡಿದ್ದು ಯಾರು? ನನ್ನ ಮಗನ ಸಾವಿಗೆ ಯಾರು ಹೊಣೆ?&rsquo; ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;img&gt;&lt;p&gt;ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮನಗೂಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀಧರ್ ಅವರ ಮೃತದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂಬ ಬಗ್ಗೆ ತನಿಖೆ ಆರಂಭವಾಗಿದೆ.&lt;/p&gt;&lt;img&gt;&lt;p&gt;ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಆದರೆ, ಅತೀ ಸಣ್ಣ ನಿರ್ಲಕ್ಷ್ಯವೂ ಇಂತಹ ದೊಡ್ಡ ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/vijayapura-lineman-sridhar-lamani-electrocuted-to-death-ukkali-village-sat-bvp5cap"/>
        </item>
        <item>
            <title><![CDATA[Photos: ತುಂಗಭದ್ರಾ ಜಲಾಶಯಕ್ಕೆ ಡಿಸಿಎಂ ಡಿಕೆಶಿ ಭೇಟಿ: ಮುರಿದಿದ್ದ 19ನೇ ಗೇಟ್ ರಿಪೇರಿ ಬಳಿಕ ಮೊದಲ ಬಾರಿಗೆ ವೀಕ್ಷಣೆ]]></title>
            <link>https://kannada.asianetnews.com/gallery/state/vijayanagar-dcm-dk-shivakumar-visits-tungabhadra-reservoir-and-inspects-gate-rav-he7hb8f</link>
            <guid isPermaLink="true">https://kannada.asianetnews.com/gallery/state/vijayanagar-dcm-dk-shivakumar-visits-tungabhadra-reservoir-and-inspects-gate-rav-he7hb8f</guid>
            <pubDate>Sun, 03 May 2026 11:42:33 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೇಟಿ ನೀಡಿದ್ದಾರೆ. ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಹೊಸ ಗೇಟ್ ಅಳವಡಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಡ್ಯಾಂಗೆ ಆಗಮಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqp6rsjsnhabk8m8md3e7hy0,imgname-----------------------2026-05-03t112542.070-1777788020313.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೇಟಿ ನೀಡಿದ್ದಾರೆ. ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಹೊಸ ಗೇಟ್ ಅಳವಡಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಡ್ಯಾಂಗೆ ಆಗಮಿಸಿದ್ದಾರೆ.&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೇಟಿ ನೀಡಿದ್ದಾರೆ. ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಹೊಸ ಗೇಟ್ ಅಳವಡಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಡ್ಯಾಂಗೆ ಆಗಮಿಸಿದ್ದಾರೆ.&lt;/p&gt;&lt;img&gt;&lt;p&gt;ಜಲಾಶಯದ ಹೊಸ ಕ್ರಸ್ಟ್ ಗೇಟ್ ನಿರ್ಮಾಣ ಕಾಮಗಾರಿಯನ್ನು ಕೂಲಂಕಷವಾಗಿ ವೀಕ್ಷಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಟಿಬಿ ಡ್ಯಾಂ ಆಡಳಿತ ಮಂಡಳಿ ಅಧಿಕಾರಿಗಳು ಪ್ರಾಯೋಗಿಕ ಪರೀಕ್ಷೆಯನ್ನು ತೋರಿಸಿದರು.&lt;/p&gt;&lt;img&gt;&lt;p&gt;ಈ ವೇಳೆ 19ನೇ ಕ್ರಸ್ಟ್ ಗೇಟ್ ಅನ್ನು ಮೇಲಕ್ಕೆ ಎತ್ತುವ ಮೂಲಕ ಗೇಟ್ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು.&lt;/p&gt;&lt;p&gt;ಕಳೆದ 2024ರ ಆಗಸ್ಟ್ 10ರಂದು ಜಲಾಶಯದ 19ನೇ ನಂಬರಿನ ಕ್ರಸ್ಟ್ ಗೇಟ್ ಅನಿರೀಕ್ಷಿತವಾಗಿ ಕಿತ್ತು ಹೋಗಿತ್ತು. ಆ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ&lt;/p&gt;&lt;img&gt;&lt;p&gt;ಡಿ.ಕೆ. ಶಿವಕುಮಾರ್ ಅವರು ಯುದ್ಧೋಪಾದಿಯಲ್ಲಿ ಹೊಸ ಗೇಟ್ ಅಳವಡಿಸುವ ಭರವಸೆ ನೀಡಿದ್ದರು. ಎಂಜಿನಿಯರ್&zwnj;ಗಳ ನಿರಂತರ ಪರಿಶ್ರಮದಿಂದಾಗಿ ಈ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಿಗೆ ಸಚಿವರಾದ ಎನ್.ಎಸ್. ಬೋಸರಾಜು ಮತ್ತು ಶಿವರಾಜ್ ತಂಗಡಗಿ ಅವರು ಸಾಥ್ ನೀಡಿದರು.&lt;/p&gt;&lt;img&gt;&lt;p&gt;ಅಲ್ಲದೆ ಸಂಸದ ಇ. ತುಕಾರಾಂ, ಶಾಸಕರಾದ ಎಚ್.ಆರ್. ಗವಿಯಪ್ಪ, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವು ಪ್ರಮುಖ ನಾಯಕರು ಭೇಟಿಯ ವೇಳೆ ಉಪಸ್ಥಿತರಿದ್ದರು.&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/vijayanagar-dcm-dk-shivakumar-visits-tungabhadra-reservoir-and-inspects-gate-rav-he7hb8f"/>
        </item>
        <item>
            <title><![CDATA[ನನಗೆ ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ: ಶಾಸಕ ಸಿ.ಎಸ್.ನಾಡಗೌಡ ಸ್ಫೋಟಕ ಆರೋಪ]]></title>
            <link>https://kannada.asianetnews.com/politics/cs-nadagouda-cabinet-reshuffle-minister-post-congress-statement-gvd/articleshow-k94gx2s</link>
            <guid isPermaLink="true">https://kannada.asianetnews.com/politics/cs-nadagouda-cabinet-reshuffle-minister-post-congress-statement-gvd/articleshow-k94gx2s</guid>
            <pubDate>Sat, 16 May 2026 22:58:27 +0530</pubDate>
            <description><![CDATA[&lt;p&gt;ಸಂಪುಟ ಪುನರ್&zwnj;ರಚನೆ ಬಂದಾಗ ಉತ್ತರ ಕರ್ನಾಟಕದಲ್ಲಿ ಅಪ್ಪಾಜಿ ನಾಡಗೌಡ, ಎಚ್.ಕೆ.ಪಾಟೀಲ ಅವರ ಹೆಸರು ಮುನ್ನೆಲೆಗೆ ಬರುತ್ತದೆ. ಆದರೆ, ಇಲ್ಲಿವರೆಗೂ ನಮಗೆ ಸಿಗಬೇಕಾದ ಗೌರವ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7xhs6xx2x67qmnj7rtqt8x3,imgname-dvvd-1760854580157.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುದ್ದೇಬಿಹಾಳ (ಮೇ.16): &lt;/strong&gt;ಸಂಪುಟ ಪುನರ್&zwnj;ರಚನೆ ಬಂದಾಗ ಉತ್ತರ ಕರ್ನಾಟಕದಲ್ಲಿ ಅಪ್ಪಾಜಿ ನಾಡಗೌಡ, ಎಚ್.ಕೆ.ಪಾಟೀಲ ಅವರ ಹೆಸರು ಮುನ್ನೆಲೆಗೆ ಬರುತ್ತದೆ. ಆದರೆ, ಇಲ್ಲಿವರೆಗೂ ನಮಗೆ ಸಿಗಬೇಕಾದ ಗೌರವ ಸ್ಥಾನ ಸಿಕ್ಕಿಲ್ಲ. ಇದರಿಂದ ನೋವಾಗಿದೆ. ಈ ಬಾರಿ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಯಾವ ಕೋಟಾದಲ್ಲಿ ನಮಗೆ ಸಚಿವ ಸ್ಥಾನ ಸಿಗಬೇಕು ಅದು ಸಿಕ್ಕಿಲ್ಲ. ಇದು ಬೇಸರ ಸಂಗತಿ. ಕಳೆದ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠನಾಗಿ ಪಕ್ಷದ ಶಕ್ತಿಗೆ ಶ್ರಮಿಸಿದ್ದೇನೆ.&lt;/p&gt;&lt;p&gt;ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡಲಾಗುತ್ತಿದೆ. ಇವರು ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ತಿದ್ದಾರೆ ಎಂಬ ಮನೋಭಾವ ಮೂಡುತ್ತಿದೆ. ಕಾಂಗ್ರೆಸ್ ಪಕ್ಷದ ಕೇಂದ್ರದ ಎಲ್ಲ ವರಿಷ್ಠರ ಬಗ್ಗೆ ಅಪಾರಗೌರವ ಹೊಂದಿದ್ದೇನೆ. ಕಾಂಗ್ರೆಸ್&zwnj;ನಲ್ಲಿರುವ ಪ್ರಾಮಾಣಿಕರನ್ನು ಗೌರವಿಸುವ ಕೆಲಸವಾಗಬೇಕು. ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಹೌದು. ಹಿರಿಯ ಶಾಸಕರು ಇದ್ದರೂ ಗೌರವ ಸ್ಥಾನಮಾನ ಸಿಗುತ್ತಿಲ್ಲ. ಈ ಬಗ್ಗೆ ಮತಕ್ಷೇತ್ರದ ಕಾರ್ಯಕರ್ತರು ಹಾಗೂ ಜನರಲ್ಲೂ ನೋವಿದೆ ಎಂದರು.&lt;/p&gt;&lt;p&gt;ಹೈಕ್&zwnj;ಮಾಂಡ ಬಗೆಹರಿಸಲಿ:ಮುಖ್ಯಮಂತ್ರಿ ಬದಲಾವಣೆ ಗೊಂದಲವನ್ನು ಹೈಕಮಾಂಡ್ ನಿವಾರಿಸಬೇಕು. ಸಿದ್ದರಾಮಯ್ಯ ನಾಯಕತ್ವ ಒಪ್ಪಿದ್ದೇನೆ. ಶಾಸಕರಲ್ಲಿ ಇರುವ ವೈಮನಸು ನಿವಾರಿಸುವತ್ತ ಹೈಕಮಾಂಡ್ ಗಮನ ಹರಿಸಬೇಕು. ಡಿ.ಕೆ.ಶಿವಕುಮಾರ ನಾವು ಒಟ್ಟಿಗೆ ರಾಜಕಾರಣ ಆರಂಭಿಸಿದ್ದೇವೆ. ಡಿಕೆಶಿ ನಮಗೂ ಆಪ್ತರೆ, ಹೈಕಮಾಂಡ್ ವಿರುದ್ಧ ಯಾರೂ ಹೋಗುವುದಿಲ್ಲ ಎಂದರು.&lt;/p&gt;&lt;p&gt;ಕಾಂಗ್ರೆಸ್&zwnj;ಗೆ ತನ್ನದೆಯಾದ ಇತಿಹಾಸ ಇದೆ. ಆದರೆ, ಇದೀಗ ಕೆಲವರಿಗೆ ಸಚಿವ ಸ್ಥಾನ ನೀಡುತ್ತೀರಿ. ಅವರು ಹೇಳಿದವರಿಗೆ ಸ್ಥಾನ ನೀಡುತ್ತಿರಿ. ಹೀಗೆ ಮಾಡುವುದರಿಂದ ಪಕ್ಷಕ್ಕೆ ದಕ್ಕೆಉಂಟಾಗುತ್ತಿದೆ. ತಮ್ಮ ಹಿಂಬಾಲಕರಿಗೆ ಅಧಿಕಾರ ಕೊಡಿಸಲು ಷಡ್ಯಂತ್ರ ಮಾಡುತ್ತಾರೆ. ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್&zwnj;ಗೆ ದಕ್ಕೆಯಾಗುತ್ತಿದೆ. ಇದು ಆಂತರಿಕ ಬೇಗುದಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಪಕ್ಷ ಗಮನ ಹರಿಸಬೇಕು. ಮೂಲ ಕಾಂಗ್ರೆಸ್ಸಿಗರಿಗೆ ಗೌರವ ಕೊಡುವ ಕೆಲಸವಾಗಬೇಕು. ಹಿರಿತನಕ್ಕೆ ತಕ್ಕಂತೆ ಸ್ಥಾನಮಾನ ಸಿಗದಿರುವುದು ನೋವಿನ ಸಂಗತಿ ಎಂದರು.&lt;/p&gt;&lt;p&gt;ನಮ್ಮ ಕಾಂಗ್ರೆಸ್ಸಿನ ಕೆಲವರು ನನಗೆ ಸಚಿವ ಸ್ಥಾನ ದೊರಕಬಾರದು ಎಂಬುದರ ಬಗ್ಗೆ ಬಹುದೊಡ್ಡ ಲಾಭಿ ನಡೆಸಿ ನನಗೆ ಮಂತ್ರಿ ಸ್ಥಾನ ಸಿಗದಂತೆ ನೋಡಿಕೊಳ್ಳುವ ಮೂಲಕ ಬಹುದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಈಗಲೇ ನಿಲ್ಲಬೇ.ಕು ನಾನು ಕೂಡ ರಾಜಕೀಯದ ಎಲ್ಲ ತಿರುವುಗಳನ್ನು ಕಂಡಿದ್ದೇನೆ ಅನುಭವ ಹೊಂದಿದ್ದೇನೆ. ನಮಗೂ ರಾಜಕಾರಣ ಮಾಡಲು ಬರುತ್ತದೆ ಎಂಬುದು ತೋರಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.&lt;/p&gt;&lt;h2&gt;&lt;strong&gt;ಸಿದ್ರಾಮಯ್ಯನವರ ಕುರ್ಚಿ ಗಟ್ಟಿಯಾಗಿದೆ&lt;/strong&gt;&lt;/h2&gt;&lt;p&gt;ಸದ್ಯ ಮುಖ್ಯಮಂತ್ರಿ ಸಿದ್ರಾಮಯ್ಯನವರ ಕುರ್ಚಿ ಗಟ್ಟಿಯಾಗಿದೆ. ಆದರೆ, ಕೆಲವರಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಶಾಸಕಾಂಗ ಪಕ್ಷದಲ್ಲಿಯೂ ಈ ಬಗ್ಗೆ ಚರ್ಚೆಗೆ ಬಂದಿಲ್ಲ. ಹಾಗಾಗಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಸರಿ ಇದೆ. ನಾನು ನಾಯಕ ನಾಗಬೇಕು ಎಂಬುದು ಎಲ್ಲರ ಆಸೆ ಆಗಿರುತ್ತದೆ. ಅದು ತಪ್ಪಲ್ಲ. ಆದರೆ, ನಾಯಕತ್ವದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಿರ್ಮಾನಿಸುತ್ತದೆ.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/cs-nadagouda-cabinet-reshuffle-minister-post-congress-statement-gvd/articleshow-k94gx2s"/>
        </item>
        <item>
            <title><![CDATA[ವಿಜಯಪುರ: ತಿಕೋಟಾದಲ್ಲಿ ಕ್ಯಾಲಿಫೋರ್ನಿಯಾದ  ಪ್ರಸಿದ್ಧ ದ್ರಾಕ್ಷಿ ತಳಿ ಔರಾ-36 ಯಶಸ್ವಿ ಕೃಷಿ!]]></title>
            <link>https://kannada.asianetnews.com/gallery/karnataka-districts/karnataka-farmers-success-story-california-aura-36-grapes-now-grown-in-vijayapura-karnataka-farmers-see-high-profits-gdp-kbd86b5</link>
            <guid isPermaLink="true">https://kannada.asianetnews.com/gallery/karnataka-districts/karnataka-farmers-success-story-california-aura-36-grapes-now-grown-in-vijayapura-karnataka-farmers-see-high-profits-gdp-kbd86b5</guid>
            <pubDate>Mon, 11 May 2026 23:58:07 +0530</pubDate>
            <description><![CDATA[&lt;p&gt;ವರದಿ: ಶಶಿಕಾಂತ ಮೆಂಡೆಗಾರ&lt;/p&gt;&lt;p&gt;ವಿಜಯಪುರದ ತಿಕೋಟಾದಲ್ಲಿ ರೈತರು, ಕ್ಯಾಲಿಫೋರ್ನಿಯಾದ ಪ್ರಸಿದ್ಧ ಔರಾ-36 ದ್ರಾಕ್ಷಿ ತಳಿಯನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಕಡಿಮೆ ರಾಸಾಯನಿಕ ಬಳಸಿ ಅಧಿಕ ಇಳುವರಿ ಹಾಗೂ ಲಾಭ ನೀಡುವ ಈ ತಳಿಯು, ಸಿದ್ದೇಶ್ವರ ಶ್ರೀಗಳ ಆಶಯ ಮತ್ತು ಸಚಿವ ಎಂ.ಬಿ. ಪಾಟೀಲರ ಬೆಂಬಲದ ಫಲವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krc40acpd43r5676027z5jd8,imgname-california-grapes-in-karnataka-1778523318678.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಶಶಿಕಾಂತ ಮೆಂಡೆಗಾರ&lt;/p&gt;&lt;p&gt;ವಿಜಯಪುರದ ತಿಕೋಟಾದಲ್ಲಿ ರೈತರು, ಕ್ಯಾಲಿಫೋರ್ನಿಯಾದ ಪ್ರಸಿದ್ಧ ಔರಾ-36 ದ್ರಾಕ್ಷಿ ತಳಿಯನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಕಡಿಮೆ ರಾಸಾಯನಿಕ ಬಳಸಿ ಅಧಿಕ ಇಳುವರಿ ಹಾಗೂ ಲಾಭ ನೀಡುವ ಈ ತಳಿಯು, ಸಿದ್ದೇಶ್ವರ ಶ್ರೀಗಳ ಆಶಯ ಮತ್ತು ಸಚಿವ ಎಂ.ಬಿ. ಪಾಟೀಲರ ಬೆಂಬಲದ ಫಲವಾಗಿದೆ.&lt;/p&gt;&lt;img&gt;&lt;p&gt;ವಿಜಯಪುರ: ಈ ಭೂಮಿಗೆ ನೀವು ಬೊಗಸೆ ನೀರು ಕೊಟ್ಟರೆ ಸಾಕು, ಇದು ಅಮೆರಿಕದ ಕ್ಯಾಲಿಫೋರ್ನಿಯಾವನ್ನೇ ಮೀರಿಸುತ್ತದೆ ಎಂದು ನಡೆದಾಡುವ ದೇವರು, ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದ್ದ ಮಾತು ಇನ್ನೂ ಎಲ್ಲರ ಕಿವಿಯಲ್ಲಿ ಗುನುಗುತ್ತಿದೆ. ಶ್ರೀಗಳು ಹೇಳಿದ್ದ ಮಾತನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಎಂ.ಬಿ.ಪಾಟೀಲರು ಆ ಕಾಯಕಕ್ಕೆ ನೀರೆರೆದರು. ಈ ಹಿನ್ನೆಲೆ ಇದೀಗ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಬಹುಪ್ರಸಿದ್ಧ ಓರಾ-36 ತಳಿಯ ದ್ರಾಕ್ಷಿಯನ್ನೇ ವಿಜಯಪುರ ಜಿಲ್ಲೆಯಲ್ಲಿ ಬೆಳೆದು ರೈತರು ಸೈ ಎನಿಸಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಔರಾ-36 ತಳಿಯ ಕಂದು ಬಣ್ಣದ ದ್ರಾಕ್ಷಿ ರೈತರನ್ನು ಇಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ.&lt;/p&gt;&lt;img&gt;&lt;p&gt;ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅತಿಹೆಚ್ಚು ಬೆಳೆಯಲಾಗುವ ಈ ಔರಾ-36 ದ್ರಾಕ್ಷಿ ನೋಡಲು ಕಂದು ಬಣ್ಣದ್ದಾಗಿದೆ. ಹೆಚ್ಚು ರಾಸಾಯನಿಕ ಬಳಸದೆಯೇ ಅಧಿಕ ಇಳುವರಿ ಕೊಡುತ್ತದೆ. ನೋಡಲು ಆಕರ್ಷಕವಾಗಿರುವ ಈ ದ್ರಾಕ್ಷಿ ತಿನ್ನಲು ಸಹ ಅಷ್ಟೆ ರುಚಿಕರ. ಇದು ಕ್ಯಾಲಿಫೋರ್ನಿಯಾದ ಗ್ರಾಫಾ ಗ್ಲೋಬಲ್ ಕಂಪನಿಯ ಪೆಟೆಂಟ್&zwnj;ನ ವೆರೈಟಿಯಾಗಿದ್ದು, ಇದನ್ನು ನಾಸಿಕನ ಸಹ್ಯಾದ್ರಿ ಫಾರ್ಮ್ಸ್ (ಎಫ್&zwnj;ಪಿಒ) ನವರು ವಿಸ್ತರಣೆ ಮಾಡಲು ಅನುಮತಿ ಪಡೆದಿದ್ದಾರೆ. ಅಲ್ಲಿಂದ ತಿಕೋಟಾಗೆ ಕಾಲಿಟ್ಟಿರುವ ಈ ದ್ರಾಕ್ಷಿ ಇದೀಗ ಜಿಲ್ಲೆಯಲ್ಲಿ ತನ್ನದೆಯಾದ ಬೇಡಿಕೆ ಹೊಂದಿದೆ.&lt;/p&gt;&lt;img&gt;&lt;p&gt;ಮಹಾರಾಷ್ಟ್ರದ ನಾಸಿಕನ ಸಹ್ಯಾದ್ರಿ ಫಾರ್ಮ್ಸ್&zwnj;ನ ವಿಲಾಸರಾವ್&zwnj; ಶಿಂಧೆ ಅವರ ಸಹಯೋಗದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಔರಾ-36 ತಳಿಯ ದ್ರಾಕ್ಷಿಯನ್ನು ತಿಕೋಟಾದ ಕೃಷ್ಣವೇಣಿ ಎಫ್.ಬಿ.ಒ (ಫಾರ್ಮರ್ಸ್ ಪ್ರೊಡ್ಯೂಜರ್ಸ್ ಆರ್ಗಾನೈಜೇಶನ್) ಇಲ್ಲಿ ಪರಿಚಯಿಸಿದೆ. ಈ ಮೊದಲು ಇಲ್ಲಿ ಬೆಳೆಯಲಾಗುತ್ತಿದ್ದ ಮಾಣಿಕ ಚಮನ್, ಥಾಮ್ಸನ್ ಸೀಡ್&zwnj;ಲೆಸ್, ಸೋನಾಕಾ ಈ ದ್ರಾಕ್ಷಿ ತಳಿಗಳಿಗೆ ಹೂ ಬಿಡುವ ಸಮಯದಲ್ಲಿ, ಕಾಯಿ ಗೊಂಚಲು ಹಿಡಿಯುವಾಗ, ದ್ರಾಕ್ಷಿ ವಿಸ್ತಿರ್ಣ ಹಾಗೂ ಬಣ್ಣ ಬರಲೆಂದು ಹಲವು ರಾಸಾಯನಿಕಗಳನ್ನು ಬಳಸಬೇಕಾದ ಅನಿವಾರ್ಯತೆ ಇತ್ತು. ಆದರೆ, ಈ ಔರಾ-36 ತಳಿಗೆ ಇದ್ಯಾವುದರ ಗೊಡವೆಯೇ ಇಲ್ಲ. ಹಿಗಾಗಿಯೇ ಇದು ಕೇವಲ ಶೇ.20ರಷ್ಟು ನಿರ್ವಹಣಾ ಖರ್ಚು, ಶೇ.20 ಔಷಧಯಲ್ಲೇ ದ್ರಾಕ್ಷಿ ಕೈಗೆ ಸಿಗುತ್ತದೆ.&lt;/p&gt;&lt;img&gt;&lt;p&gt;ಕ್ಯಾಲಿಫೋರ್ನಿಯಾದಿಂದ ನಾಸಿಕ್&zwnj;ಗೆ ಬಂದ ಈ ದ್ರಾಕ್ಷಿಯನ್ನು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಿಕೋಟಾದ ರೈತರು ಪರಿಚಯಿಸಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾದ ರೈತರಾದ ಸಂದೀಪ ಪಾಟೀಲ 1.5 ಎಕರೆ, ಯಮನಪ್ಪ ಕೊಣ್ಣೂರ 1.5 ಎಕರೆ, ರಾಜೇಂದ್ರ ಕುಸೂರ 2 ಎಕರೆ, ಅತಾಲಟ್ಟಿ ಗ್ರಾಮದಲ್ಲಿ ಡಾ.ಸುಭಾಷ ಮುದನೂರ 8 ಎಕರೆ, ತಾಜಪೂರದ ರಾಜು ಹಾಲಳ್ಳಿ 2 ಎಕರೆ, ನಿಡೋಣಿಯ ರಾವುತ ದರ್ಗಾ 9 ಎಕರೆಯಲ್ಲಿ ದ್ರಾಕ್ಷಿ ನಾಟಿ ಮಾಡಿದ್ದಾರೆ. 2025 ಜನವರಿಯಲ್ಲಿ ನಾಟಿ ಮಾಡಿದ್ದು, ಸೆಪ್ಟೆಂಬರ್&zwnj; ತಿಂಗಳಿನಲ್ಲಿ ನಾಸಿಕನಿಂದ ಔರಾ-36 ತಳಿಯ ಕಡ್ಡಿಗಳನ್ನು ತಂದು ಕಸಿ ಮಾಡಲಾಗಿದೆ. ಈ ಫಸಲು 2027 ಫೆಬ್ರುವರಿಯಲ್ಲಿ ತಿಕೋಟಾದ ರೈತರು ಬೆಳೆದ ದ್ರಾಕ್ಷಿಯ ಮೊದಲ ಫಸಲು ಮಾರುಕಟ್ಟೆಗೆ ಬರಲಿದೆ.&lt;/p&gt;&lt;img&gt;&lt;p&gt;ಇದು ನೋಡಲು ಕಂದು ಬಣ್ಣದಿಂದ ಕೂಡಿದ್ದು ಆಕರ್ಷಕವಾಗಿದೆ. ಇದನ್ನು 48 ಡಿಗ್ರಿ ತಾಪಮಾನದಲ್ಲಿಯೂ ಬೆಳೆಯಬಹುದಾಗಿದೆ. ಯಾವುದೇ ತಾಪಮಾನದಲ್ಲೂ ಶೇ.100ರಷ್ಟು ಹೂ ಬಿಡಲಿದೆ. ಉತ್ತಮ ಸೈಜು ಸಿಗಲಿದ್ದು, ಉತ್ತಮ ಬಣ್ಣ ಹೊಂದಿದೆ. ಉತ್ಕೃಷ್ಠವಾಗಿದ್ದು, ಬಹಳ ರುಚಿಕರವಾಗಿದೆ. ಈ ಫಸಲು ಬಂದಾಗ ಮಳೆಯಾದರೆ ದ್ರಾಕ್ಷಿ ಹಣ್ಣು ಸೀಳುವುದಿಲ್ಲ, ಬೇರೆ ದ್ರಾಕ್ಷಿಗಳಿಗೆ ಕಾಯಿ ದಪ್ಪ ಮಾಡಲು ರಾಸಾಯನಿಕ ಬಳಸಲಾಗುತ್ತದೆ. ಇದಕ್ಕೆ ಯಾವುದೇ ರಾಸಾಯನಿಕದ ಅಗತ್ಯವಿಲ್ಲ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಎಲ್ಲ ದ್ರಾಕ್ಷಿಗಳು ಬೆಳೆಯಲು ಪ್ರತಿ ಎಕರೆಗೆ ಸಾಲಿನಿಂದ ಸಾಲಿಗೆ 10 ಅಡಿ, ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ನಾಟಿ ಮಾಡುವಂತೆ ಇದನ್ನು ಮಾಡಬಹುದು. ದ್ರಾಕ್ಷಿ ಬೆಲೆಯಲು ಪ್ರತಿ ಎಕರೆಗೆ ₹6-7 ಲಕ್ಷ ಖರ್ಚಾಗುತ್ತದೆ. ಈ ದ್ರಾಕ್ಷಿಗೆ 7-8 ಲಕ್ಷ ವೆಚ್ಚವಾಗುತ್ತದೆ. ಒಂದು ಎಕರೆಗೆ 12 ರಿಂದ 15 ಟನ್ ಇಳುವರಿ ಬರಲಿದ್ದು, ಇದು ಕೂಡ ಅಷ್ಟೆ ಇಳುವರಿ ಸಿಗಲಿದೆ. ಆದರೆ ಬೇರೆ ದ್ರಾಕ್ಷಿಗಳು ಪ್ರತಿ ಕೆಜಿಗೆ ₹ 40ರಿಂದ 60 ಮಾರಾಟವಾಗುತ್ತವೆ. ಔರಾ-36 ದ್ರಾಕ್ಷಿಯೂ ಈಗಾಗಲೇ ಪ್ರತಿ ಕೇಜಿಗೆ ₹150ರಿಂದ 160 ರಂತೆ ಸಾಂಗ್ಲಿ, ತಾಸಗಾಂವನಲ್ಲಿ ಮಾರಾಟವಾಗಿದ್ದು, ಅಲ್ಲಿಂದ ಯೂರೇಪಿಯನ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ.&lt;/p&gt;&lt;img&gt;&lt;p&gt;ಸಿದ್ದೇಶ್ವರ ಶ್ರೀಗಳ ಪರಮ ಭಕ್ತನಾಗಿರುವ ನಾನು ಅವರು ಹೇಳಿದಂತೆ ನೀರಾವರಿ ಮಂತ್ರಿಯಾಗಿ ಈ ನೆಲಕ್ಕೆ ಬೊಗಸೆ ನೀರು ಕೊಟ್ಟಿದ್ದೇನೆ. ನಮ್ಮ ರೈತರು ಅಮೆರಿಕದ ಕ್ಯಾಲಿಫೋರ್ನಿಯಾ ದ್ರಾಕ್ಷಿಯನ್ನೇ ಬೆಳೆದು ಕೊಟ್ಟಿದ್ದಾರೆ. ಇದನ್ನು ನಮ್ಮ ಆರಾಧ್ಯ ದೈವ ಸಿದ್ದೇಶ್ವರ ಸ್ವಾಮೀಜಿಗಳಿಗೆ ಅರ್ಪಿಸುತ್ತೇವೆ. ಎಲ್ಲ ರೈತರು ಇದನ್ನು ಹೆಚ್ಚಾಗಿ ಬೆಳೆದು ಲಾಭ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ರೈತರ ಅನುಕೂಲಕ್ಕಾಗಿ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡಲು ಬಿಎಲ್&zwnj;ಡಿಇ ಸಂಸ್ಥೆಯಿಂದಲೇ ಹಲವು ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.&lt;/p&gt;&lt;p&gt;ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವರು&lt;/p&gt;&lt;img&gt;&lt;p&gt;ನಾನು ಬಿಎಸ್&zwnj;ಸಿ ತೋಟಗಾರಿಕೆ ಪದವಿ ಮುಗಿಸಿದ ಬಳಿಕ ರೈತರಾದ ನಮ್ಮ ತಂದೆಯ ಜೊತೆಯಲ್ಲಿ ದ್ರಾಕ್ಷಿ ಬೆಳೆ ಬೆಳೆಯುತ್ತಿದ್ದೆ. ಆದರೆ ಸ್ಥಳೀಯ ದ್ರಾಕ್ಷಿ ಬೆಳೆಗಳಲ್ಲಿ ಪ್ರತಿಬಾರಿಯೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದ್ದವು. ಇದನ್ನು ತಪ್ಪಿಸಬೇಕು ಎಂದುಕೊಂಡು ನಾನು ಹೊಸ ಹೊಸ ವಿಚಾರ ಶೋಧಿಸಿದೆ. ಆಗ ನಾನು ನಾಸಿಕನಲ್ಲಿರುವ ಸಹ್ಯಾದ್ರೀ ಫಾರಂಗೆ ಭೇಟಿ ನೀಡಿದಾಗ ಅಲ್ಲಿ 2019ರಿಂದಲೇ ಪ್ರಾಯೋಗಿಕವಾಗಿ ಔರಾ-36 ಬೆಳೆಯಲಾಗುತ್ತಿತ್ತು. ನಂತರದಲ್ಲಿ 2024ರಲ್ಲಿ ರಾಜ್ಯದಲ್ಲಿ ಬೆಳೆಯಲು ಅನುಮತಿ ಸಿಕ್ಕ ಬಳಿಕ ನಾವು ತಂದಿದ್ದೇವೆ.&lt;/p&gt;&lt;p&gt;-ಸಂದೀಪ ಪಾಟೀಲ, ದ್ರಾಕ್ಷಿ ಬೆಳೆದ ರೈತ.&lt;/p&gt;]]></content:encoded>
            <category>vijayapura</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/karnataka-farmers-success-story-california-aura-36-grapes-now-grown-in-vijayapura-karnataka-farmers-see-high-profits-gdp-kbd86b5"/>
        </item>
        <item>
            <title><![CDATA[ಮಂತ್ರಿ ಇದ್ದಾಗ 2 ಬಾರಿ ಅಧ್ಯಕ್ಷಗಿರಿ ಆಫರ್‌ ಬಂದಿತ್ತು: ಸಚಿವ ಎಂ.ಬಿ.ಪಾಟೀಲ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/mb-patil-kpcc-president-statement-congress-highcommand-gvd/articleshow-n2wr9xq</link>
            <guid isPermaLink="true">https://kannada.asianetnews.com/karnataka-districts/mb-patil-kpcc-president-statement-congress-highcommand-gvd/articleshow-n2wr9xq</guid>
            <pubDate>Sun, 03 May 2026 18:53:51 +0530</pubDate>
            <description><![CDATA[&lt;p&gt;ಎರಡು ಬಾರಿ ನನಗೆ ಅವಕಾಶ ಕೊಟ್ಟಿದ್ದರೂ ನಾನು ನೀರಾವರಿ ಖಾತೆಯಲ್ಲೇ ಇರಬೇಕು ಎಂದುಕೊಂಡಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ಕೊಟ್ಟಿದೆ&zwnj; ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7907669v3sy433fx9m4prw4,imgname-minister-mb-patil-1760165075145.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.03): &lt;/strong&gt;ನನಗೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದ್ದು, ಕಾರಣಾಂತರಗಳಿಂದ ಆಗ ನಾನು ನೀರಾವರಿ ಮಂತ್ರಿ ಆಗಿದ್ದೆ&zwnj;. ಎರಡು ಬಾರಿ ನನಗೆ ಅವಕಾಶ ಕೊಟ್ಟಿದ್ದರೂ ನಾನು ನೀರಾವರಿ ಖಾತೆಯಲ್ಲೇ ಇರಬೇಕು ಎಂದುಕೊಂಡಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ಕೊಟ್ಟಿದೆ&zwnj; ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು.&lt;/p&gt;&lt;p&gt;ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕು ಅಂದರೆ ಅದನ್ನು ಎಲ್ಲಿ ಹೇಳಬೇಕು ಅಲ್ಲಿ ಹೋಗಿ ಹೇಳುವೆ. ಮಾಧ್ಯಮದ ಮುಂದೆ ಹೇಳುವುದಕ್ಕಿಂತ, ನಮ್ಮ ಹೈಕಮಾಂಡ್ ಮುಂದೆ ಹೇಳಬೇಕು, ಅಲ್ಲಿ ಹೇಳುವೆ. ಕಾಂಗ್ರೆಸ್ ಪಕ್ಷದ ಹಿರಿಯರು ಚರ್ಚೆ ಮಾಡುವಾಗ ನಮ್ಮ ಭಾವನೆ ವ್ಯಕ್ತಪಡಿಸುವೆ ಎಂದರು. ರಾಜ್ಯದಲಿ ಸಿಎಂ ಬದಲಾವಣೆ ಚರ್ಚೆ ಕುರಿತು ಸಿದ್ದರಾಮಯ್ಯನವರು ಮೌನ ವಹಿಸಿರುವ ವಿಚಾರದ ಬಗ್ಗೆ ಮಾತನಾಡಿ, ಅವರು ಒಂದೇ ಮಾತು ಹೇಳಿದ್ದಾರೆ, ಹೈ ಕಮಾಂಡ್ ನಿರ್ಣಯಕ್ಕೆ ಬದ್ದ ಎಂದು. ಡಿ.ಕೆ.ಶಿವಕುಮಾರ ಹೇಳಿದ್ದಾರೆ, ನಾನು ಕೂಡ ಹೇಳಿರುವೆ.&lt;/p&gt;&lt;p&gt;ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ&zwnj;. ಮೀಟಿಂಗ್ ಇನ್ನೂ ಫಿಕ್ಸ್ ಮಾಡಿಲ್ಲ ಎಂದಿದ್ದಾರೆ. ಮೀಟಿಂಗ್&zwnj;ನಲ್ಲಿ ಈ ವಿಚಾರವಾಗಿ ಚರ್ಚೆ ಆಗುತ್ತದೆ. ಸಿಎಂ, ಡಿಸಿಎಂ, ನಾವು ಕೂಡ ಹೇಳುವುದು ಅದನ್ನೇ. ಹೈಕಮಾಂಡ್ ನಿರ್ಣಯಕ್ಕೆ ಎಲ್ಲರೂ ಬದ್ದ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ನನ್ನ ನೇತೃತ್ವದಲ್ಲಿ ಶಾಸಕರು ಗೆದ್ದಿದ್ದಾರೆ ಎಂದು ಡಿ.ಕೆ.ಶಿವಕುಮಾರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷರು ಸುಪ್ರೀಂ. ಸರ್ಕಾರಕ್ಕೆ ಸಿಎಂ ಸುಪ್ರೀಂ ಆಗಿರುತ್ತಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷರಾಗಿ ನನ್ನ ನೇತೃತ್ವ ಎಂದು ಹೇಳಿದ್ದಾರೆ.&lt;/p&gt;&lt;p&gt;ಸಿಎಂ ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ ಅವರು, ಅನೇಕ ಮುಖಂಡರು, ಬೂತ್&zwnj;ಮಟ್ಟದ ಕಾರ್ಯಕರ್ತರು ಎಲ್ಲ ಕೂಡಿ ದುಡಿದಾಗ ಜನ ಆಶೀರ್ವಾದ ಮಾಡಿದ್ದಾರೆ. ಅವರು ಬೇರೆ ಅರ್ಥದಿಂದ ಹೇಳಿದ್ದಾರೆ. ಆದರೆ, ಆ ಅರ್ಥಕ್ಕೆ ಅನರ್ಥ ಮಾಡುವುದೇ ನಿಮ್ಮ ಕೆಲಸ ಎಂದು ಕಿಡಿಕಾರಿದರು. ಬಿ.ಕೆ.ಹರಿಪ್ರಸಾದ, ಜಮೀರ ಅಹ್ಮದ ಹಾಗೂ ಜಿ.ಪರಮೇಶ್ವರ ಅವರು ಸಭೆ ನಡೆಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅವರು ಪಕ್ಷದ ಮುಖಂಡರೊಟ್ಟಿಗೆ ಸಭೆ ನಡೆಸಿದರೆ ತಪ್ಪೇನು? ಅವರೇನು ಯಡಿಯೂರಪ್ಪನವರೊಟ್ಟಿಗೆ ಮೀಟಿಂಗ್ ಮಾಡಿದ್ದಾರಾ? ಅವರು ಪಕ್ಷದ ಮುಖಂಡರನ್ನು ಭೇಟಿಯಾದರೆ ತಪ್ಪೇನು ಎಂದು ಪ್ರಶ್ನಿಸಿದರು.&lt;/p&gt;&lt;h2&gt;&lt;strong&gt;ಯಾವುದು ಉಳಿದಿದೆ ಹೇಳಿ?&lt;/strong&gt;&lt;/h2&gt;&lt;p&gt;ವಾಣಿಜ್ಯ ಬಳಕೆ ಸಿಲಿಂಡರ್&zwnj; ಬೆಲೆ ದುಬಾರಿ ವಿಚಾರವಾಗಿ ಮಾತನಾಡಿ, ಚುನಾವಣೆ ಮುಗಿದ ಬಳಿಕ ಅಚ್ಚೇ ದಿನ ಬರುತ್ತೆ ಎಂಬುದು ನಮಗೆ ಗೊತ್ತಿತ್ತು. ಡಾಲರ್&zwnj; ರೇಟ್, ಗ್ಯಾಸ್ ಸಿಲಿಂಡರ್&zwnj; ರೇಟ್, ಪೆಟ್ರೋಲ್ ರೇಟ್ ಯಾವುದು ಉಳಿದಿದೆ ಹೇಳಿ? ಹಿಂದೆ ಯುಪಿಎ ಸರ್ಕಾರ ಇದ್ದಾಗ, ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ ರೇಟ್ ₹65 ಇತ್ತು. ಆಗ ಇವರು ಟೀಕೆ ಮಾಡುತ್ತಿದ್ದರು. ಈಗ ನೋಡಿದರೆ ₹105 ಆಗಿದೆ. ಈಗ ಡಿಸೇಲ್ ₹98 ಆಗಿದೆ, ಅಡುಗೆ ಎಣ್ಣೆ ಈಗ ₹150 ಆಗಿದೆ. ಈ ಕಡೆ ಟ್ರಂಪ್&zwnj;ನೂ ಇಲ್ಲ, ಇರಾನ್&zwnj;ನೂ ಇಲ್ಲ, ಇಸ್ರೇಲ್&zwnj;ಗೆ ಹೋದರು ಯುದ್ಧ ಪ್ರಾರಂಭವಾಯಿತು ಎಂದರು.&lt;/p&gt;&lt;p&gt;ಇಂದಿರಾಗಾಂಧಿ, ವಾಜಪೇಯಿ, ಜವಾಹರಲಾಲ್ ನೆಹರು ಎಲ್ಲರೂ ಇದ್ದಾಗಿನ ವಿದೇಶಾಂಗ ನೀತಿ ಈಗ ನರೇಂದ್ರ ಮೋದಿ ಅವರ ನೀತಿಯಾಗಿದೆ. ನಾವು ಯಾವಾಗಲೂ ಪ್ಯಾಲಿಸ್ತಾನ ಜೊತೆಗಿದ್ದೆವು. ವಿದೇಶಾಂಗ ನೀತಿಯನ್ನು ಮೋದಿ ನೀತಿಯನ್ನಾಗಿ ಮಾಡಿದರು. ಚೀನಾ ಪಾಕಿಸ್ತಾನ ಅತಿಕ್ರಮಣ ಮಾಡಿದರೆ ನಮಗೆ ಹೇಗೆ ಸಂಕಟ ಆಗುತ್ತೆ? ಪ್ಯಾಲಿಸ್ತಾನಿಗೆ ಇಸ್ರೇಲ್&zwnj;ನವರು ಬಂದು ಅವರನ್ನೇ ದಬ್ಬಿದರು. ಇರಾನ್ ಯಾವಾಗಲೂ ನಮ್ಮೊಟ್ಟಿಗೆ ಉತ್ತಮ ಸಂಬಂಧ ಹೊಂದಿತ್ತು. ಮೋದಿ ಇಸ್ರೇಲ್&zwnj;ಗೆ ಹೋಗಿ ಫಾದರ್&zwnj; ಲ್ಯಾಂಡ್, ಮದರ್&zwnj; ಲ್ಯಾಂಡ್ ಮಾಡಿ ಬಂದರು. ಅದನ್ನು ಇರಾನ್&zwnj;ನವರು ಹಿಡಿಯಲಿಲ್ಲ ಎಂದು ದೂರಿದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mb-patil-kpcc-president-statement-congress-highcommand-gvd/articleshow-n2wr9xq"/>
        </item>
        <item>
            <title><![CDATA[Miracle in Vijayapura: ಮರಿಯನ್ನೇ ಹಾಕದ 2 ತಿಂಗಳ ಮೇಕೆ ಮರಿ ಹಾಲು ಕೊಡ್ತಿದೆ!]]></title>
            <link>https://kannada.asianetnews.com/gallery/karnataka-districts/miracle-in-vijayapura-2-month-old-goat-kid-gives-milk-without-giving-birth-ptgixba</link>
            <guid isPermaLink="true">https://kannada.asianetnews.com/gallery/karnataka-districts/miracle-in-vijayapura-2-month-old-goat-kid-gives-milk-without-giving-birth-ptgixba</guid>
            <pubDate>Fri, 15 May 2026 12:17:21 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯಲ್ಲಿ ಪ್ರಕೃತಿಯ ವಿಸ್ಮಯವೊಂದು ನಡೆದಿದೆ. ಇನ್ನೂ ಮರಿಯನ್ನೇ ಹಾಕದ, ಕೇವಲ ಎರಡು ತಿಂಗಳ ಮೇಕೆ ಮರಿಯೊಂದು ಹಾಲು ನೀಡುವ ಮೂಲಕ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krn5hpsgasfapd0bsr70bvgv,imgname-----------------------2026-05-15t115027.099-1778826926895.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ ಜಿಲ್ಲೆಯಲ್ಲಿ ಪ್ರಕೃತಿಯ ವಿಸ್ಮಯವೊಂದು ನಡೆದಿದೆ. ಇನ್ನೂ ಮರಿಯನ್ನೇ ಹಾಕದ, ಕೇವಲ ಎರಡು ತಿಂಗಳ ಮೇಕೆ ಮರಿಯೊಂದು ಹಾಲು ನೀಡುವ ಮೂಲಕ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜಿಲ್ಲೆಯ ಚಡಚಣ ತಾಲೂಕಿನ ಜಿಗಜೇವಣಿ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ಶ್ರೀಮಂತ ಹೊನ್ನಮೊರೆ ಎಂಬುವರಿಗೆ ಸೇರಿದ ಮೇಕೆ ಮರಿ ಇದಾಗಿದ್ದು, ಸದ್ಯ ಇಡೀ ಜಿಲ್ಲೆಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಮೇಕೆಗಳು ಪ್ರಾಯಕ್ಕೆ ಬಂದು, ಮರಿ ಹಾಕಿದ ನಂತರವಷ್ಟೇ ಹಾಲು ನೀಡುತ್ತವೆ. ಆದರೆ, ಕೇವಲ ಎರಡು ತಿಂಗಳ ಈ ಪುಟ್ಟ ಮರಿ ಹಾಲು ನೀಡುತ್ತಿರುವುದು ಪಶು ವೈದ್ಯರು ಹಾಗೂ ವೈಜ್ಞಾನಿಕ ಲೋಕಕ್ಕೇ ದೊಡ್ಡ ಸವಾಲೊಡ್ಡಿದೆ&lt;/p&gt;&lt;img&gt;&lt;p&gt;ಈ ವಿಸ್ಮಯದ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಜನರು ಜಿಗಜೇವಣಿ ಗ್ರಾಮಕ್ಕೆ ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ. ಅಚ್ಚರಿಯಿಂದ ಮೇಕೆ ಮರಿಯನ್ನು ನೋಡಿ, ಹಾಲು ಹಿಂಡುವ ದೃಶ್ಯವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/miracle-in-vijayapura-2-month-old-goat-kid-gives-milk-without-giving-birth-ptgixba"/>
        </item>
        <item>
            <title><![CDATA[ಸೂರ್ಯಕಾಂತಿ ರೈತರಿಗೆ ಸಿಹಿಸುದ್ದಿ ನೀಡಿದ ಸರ್ಕಾರ; ಫಿಕ್ಸ್ ಆಯ್ತು ಪ್ರತಿ ಕ್ವಿಂಟಾಲ್‌ ದರ]]></title>
            <link>https://kannada.asianetnews.com/karnataka-districts/minister-shivanand-patil-order-to-purchase-sunflower-at-rs-7721-per-quintal-under-support-price-scheme-mrq/articleshow-tbfgwo0</link>
            <guid isPermaLink="true">https://kannada.asianetnews.com/karnataka-districts/minister-shivanand-patil-order-to-purchase-sunflower-at-rs-7721-per-quintal-under-support-price-scheme-mrq/articleshow-tbfgwo0</guid>
            <pubDate>Sat, 09 May 2026 07:57:27 +0530</pubDate>
            <description><![CDATA[ಸಚಿವ ಶಿವಾನಂದ ಪಾಟೀಲ ಅವರು 2025-26ನೇ ಸಾಲಿನ ಹಿಂಗಾರು ಹಂಗಾಮಿನ ಸೂರ್ಯಕಾಂತಿಯನ್ನು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್&zwnj;ಗೆ ₹7,721 ದರದಲ್ಲಿ ಖರೀದಿಸಲು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯದ 11 ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ನಿರ್ದೇಶನ ನೀಡಿದ್ದು, ನೋಂದಣಿ ಮತ್ತು ಖರೀದಿ ಪ್ರಕ್ರಿಯೆಗೆ ನಿರ್ದಿಷ್ಟ ಸಂಸ್ಥೆಗಳನ್ನು ನೇಮಕ ಮಾಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr587mpzdsxd53gtyc07aab1,imgname-sunflower-1778292871903.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 2025-26ನೇ ಸಾಲಿನ ಹಿಂಗಾರು ಹಂಗಾಮಿನ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಾಲ್&zwnj;ಗೆ ₹7,721 ದರದಲ್ಲಿ ಖರೀದಿಗೆ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಆದೇಶಿಸಿದ್ದಾರೆ.&lt;/p&gt;&lt;h2&gt;&lt;strong&gt;ಖರೀದಿ ಕೇಂದ್ರ ತೆರೆತಲಯ&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳ ಅನ್ವಯ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ವಿಜಯನಗರ, ರಾಯಚೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ನಿರ್ದೇಶನ ನೀಡಿದ್ದಾರೆ.&amp;nbsp;&lt;/p&gt;&lt;p&gt;ನಾಫೆಡ್&zwnj; ಮತ್ತು ಎನ್&zwnj;ಸಿಸಿಎಫ್&zwnj; ಸಂಸ್ಥೆಗಳನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಗಳನ್ನಾಗಿ ಹಾಗೂ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳವನ್ನು ರಾಜ್ಯ ಸರ್ಕಾರದ ಖರೀದಿ ಸಂಸ್ಥೆಗಳನ್ನಾಗಿ ನೇಮಕ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ನೋಂದಣಿ ಅವಧಿ 60 ದಿನಕ್ಕೆ ಹೆಚ್ಚಳ&lt;/strong&gt;&lt;/h3&gt;&lt;p&gt;ನೋಂದಣಿ ಅವಧಿಯನ್ನು 50 ದಿನ ಹಾಗೂ ಖರೀದಿ ಅವಧಿಯನ್ನು 60 ದಿನ ನಿಗದಿಪಡಿಸಲಾಗಿದೆ. ನೋಂದಣಿ ಜೊತೆಗೆ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾ ಟಾಸ್ಕ್&zwnj; ಫೋರ್ಸ್&zwnj; ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳನ್ನು ಹೊಂದಿರುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಖರೀದಿ ಕೇಂದ್ರಗಳನ್ನು ತೆರೆಯಬೇಕು. ನೋಂದಣಿ ಮತ್ತು ಖರೀದಿಯಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಸಿದ್ಧತೆ ಮಾಡಿಕೊಂಡು ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಿದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಾಂಗ್ರೆಸ್ಸಿಂದ ನಮ್ಮನ್ನು ದೂರ ಕೂರಿಸಿ; ಸ್ಪೀಕರ್&zwnj;ಗೆ ಡಿಎಂಕೆ ಮನವಿ, ಇಂಡಿ ಕೂಟಕ್ಕೂ ವಿದಾಯ ಸಂಭವ&lt;/strong&gt;&lt;/p&gt;&lt;p&gt;ರೈತರ ಹೆಸರಿನಲ್ಲಿ ವರ್ತಕರು ಮತ್ತು ಖರೀದಿ ಸಂಸ್ಥೆಗಳು ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು. ಖರೀದಿ ಪ್ರಗತಿ ವಿವರವನ್ನು ಪ್ರತಿ ದಿನ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಒದಗಿಸಬೇಕು ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಂಗಾಳಕ್ಕೆ ಸುವೇಂದು ಅಧಿಕಾರಿ ಮೊದಲ ಬಿಜೆಪಿ ಸಿಎಂ! ದೀದಿ ಆಳ್ವಿಕೆಗೆ ಅಂತ್ಯ, ದಾದಾ ಸಾಮ್ರಾಜ್ಯ ಆರಂಭ!&lt;/strong&gt;&lt;/p&gt;&lt;p&gt;------&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/minister-shivanand-patil-order-to-purchase-sunflower-at-rs-7721-per-quintal-under-support-price-scheme-mrq/articleshow-tbfgwo0"/>
        </item>
        <item>
            <title><![CDATA[ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?]]></title>
            <link>https://kannada.asianetnews.com/gallery/karnataka-districts/opposition-to-yeshwantpur-gadag-bypass-vijayapura-train-indian-railways-who-will-pay-500-rupees-sir-mrq-tsgz0sd</link>
            <guid isPermaLink="true">https://kannada.asianetnews.com/gallery/karnataka-districts/opposition-to-yeshwantpur-gadag-bypass-vijayapura-train-indian-railways-who-will-pay-500-rupees-sir-mrq-tsgz0sd</guid>
            <pubDate>Sat, 16 May 2026 14:16:26 +0530</pubDate>
            <description><![CDATA[&lt;p&gt;ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqz254sqjza3j6qkjn1em82,imgname-yeshwanthpur--1--1778920789145.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.&amp;nbsp;&lt;/p&gt;&lt;img&gt;&lt;p&gt;ಗುಮ್ಮಟ ನಗರಿ ವಿಜಯಪುರ ಜನತೆಯ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದೆ. ಇದೀಗ ಈ ರೈಲಿಗೆ ಗದಗ ಜನತೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಿಂದಲೂ ಬೈಪಾಸ್ ಮೂಲಕ ರೈಲು ಸಂಚಾರಕ್ಕೆ ಗದಗ ಜನತೆ ಬೇಸರ ವ್ಯಕ್ತಪಡಿಸಿಕೊಂಡು ಬರುತ್ತಿದ್ದಾರೆ. ಈ ಬೇಸರಕ್ಕೆ ಗದಗ ಜನತೆ ತಮ್ಮದೇ ಆದ ಕೆಲವು ಕಾರಣಗಳನ್ನು ನೀಡುತ್ತಾರೆ.&lt;/p&gt;&lt;img&gt;&lt;p&gt;ನಮ್ಮ ಗದಗ ಜನತೆ ಗದಗ ಬೈಪಾಸ್ ರೈಲು ನಿಲ್ದಾಣ ತಲುಪಲು 300 ರೂಪಾಯಿ ಅಟೋ ಚಾರ್ಜ್ ಭರಿಸಬೆಕು , ಗದಗ ಜನೆತೆಗೆ ಅವಕಾಶ ವಂಚನೆ ಮಾಡಿದ ನೈಋತ್ಯ ರೈಲ್ವೆಯ ಅಧಿಕಾರಿಗಳು , ಇದರ ಬಗ್ಗೆ ಶಾಸಕರು ಹಾಗೂ ಸಂಸದರು ಈಗಲಾದರೂ ಗದಗ್ ಜನತೆಯ ಬಗ್ಗೆ ಧ್ವನಿ ಎತ್ತಿ ಗದಗ ಜನತೆಯ ಋಣ ತೀರಿಸಿ ಎಂದು ಆಗ್ರಹಿಸಿದ್ದಾರೆ. ಈ ಟ್ವೀಟ್&zwnj;ನನ್ನು ಸಂಸದರಾ ಬಸವರಾಜ್ ಬೊಮ್ಮಾಯಿ ಮತ್ತು ಸಚಿವ ಹೆಚ್&zwnj;.ಕೆ.ಪಾಟೀಲ್&zwnj; ಅವರಿಗೆ ಟ್ಯಾಗ್ ಮಾಡಲಾಗಿದೆ.&lt;/p&gt;&lt;img&gt;&lt;p&gt;ವೈರಲ್ ಆಗಿರುವ ಪೋಸ್ಟ್&zwnj;ಗೆ ಪ್ರತಿಕ್ರಿಯಿಸಿರುವ ಅಶೋಕ್ ಹಳ್ಳೂರು ಎಂಬವರು, ಸಾಹುಕಾರ್, ಈ ಟ್ರೈನ್ ಗೆ ಬರಬೇಕು ಅಂತ ನಿಮಗ್ಯಾಕೆ ಹಠ? ಬೇರೆ ಟ್ರೈನ್ ಹತ್ತಿ ಬರ್ರೀ, ಹತ್ತು ಹನ್ನೆರಡು ಟ್ರೈನ್ ಇದ್ರೂ ವಿಜಾಪುರ ಗಾಡಿನೇ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಗದಗ ಕಣಗಿನಹಾಳು ನಡುವೆ ಒಂದು ಬೈಪಾಸ್ ರೈಲು ಹಳಿ ಹೊಂಬಾಳ ರೈಲು ನಿಲ್ದಾಣಕ್ಕೆ ಹೊಸದಾಗಿ ನಿರ್ಮಾಣ ಮಾಡಿದ್ರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಆದರೆ ಇವರುಗಳು ಅದನ್ನು ಕೇಳುವುದನ್ನು ಬಿಟ್ಟು ಪ್ರತಿ ಸಾರಿ ಏಕೆ ಗದಗ್ ಬೈಪಾಸ್ ಮೂಲಕ ಟ್ರೈನ್ ಗಳು ಹೋಗುತ್ತದೆ ಎಂದು ಬಡಿದಾಡುತ್ತಾರೆ ಎಂದು ಮತ್ತೋರ್ವ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು ಅಥವಾ ಯಶವಂತಪುರ ನಿಲ್ದಾಣದಿಂದ ವಿಜಯಪುರಕ್ಕೆ ಹೊರಡುವ ರೈಲುಗಳು ಗದಗ ಬೈಪಾಸ್ ಮೂಲಕ ಚಲಿಸಿದ್ರೆ ಐದು ಗಂಟೆ ಸಮಯ ಉಳಿತಾಯವಾಗುತ್ತದೆ. ಈ ಮಾರ್ಗದಿಂದ ಚಲಿಸಿದ್ರೆ ಹುಬ್ಬಳ್ಳಿ ಮತ್ತು ಗದಗ ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಿಸುವ ಸಮಯ ಉಳಿತಾಯವಾಗುತ್ತದೆ. ಅನತ್ಯವಾಗಿ ಹುಬ್ಬಳ್ಳಿಗೆ ಹೋಗುವುದು ಸಹ ತಪ್ಪಲಿದೆ.&lt;/p&gt;&lt;img&gt;&lt;p&gt;ಯಶವಂತಪುರ ಜಂಕ್ಷನ್, ತುಮಕೂರು, ಅರಸಿಕೆರೆ ಜಂಕ್ಷನ್, ದಾವಣಗೆರೆ, ಎಸ್&zwnj;ಎಂಎಂ ಹಾವೇರಿ, ಗದಗ ಬೈಪಾಸ್, ಬದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್ ಮೂಲಕ ವಿಜಯಪುರ ತಲುಪಲಿದೆ.&lt;/p&gt;&lt;p&gt;ನೂತನ ಬೈಪಾಸ್ ರೈಲಿಗೆ ಸಚಿವ ಎಂ.ಬಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದು, ಇದನ್ನು ಮುಂದಿನ ದಿನಗಳಲ್ಲಿ ಕಾಯಂಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಗುಳೇದಗುಡ್ಡ ರೋಡ್ ನಿಲ್ದಾಣದಲ್ಲಿಯೂ ನಿಲುಗಡೆ ಕಲ್ಪಿಸಬೇಕು ಎಂಬ ಒತ್ತಾಯವೂ ಸಹ ಕೇಳಿ ಬಂದಿದೆ.&lt;/p&gt;&lt;p&gt;ನಮ್ಮ ಗದಗ ಜನತೆ ಗದಗ ಬೈಪಾಸ್ ರೈಲು ನಿಲ್ದಾಣ ತಲುಪಲು 300 ರೂಪಾಯಿ ಅಟೋ ಚಾರ್ಜ್ ಭರಿಸಬೆಕು , ಗದಗ ಜನೆತೆಗೆ ಅವಕಾಶ ವಂಚನೆ ಮಾಡಿದ @SWRRLY ಅಧಿಕಾರಿಗಳು , ಇದರ ಬಗ್ಗೆ ಶಾಸಕರು ಹಾಗೂ ಸಂಸದರು ಈಗಲಾದರೂ ಗದಗ್ ಜನತೆಯ ಬಗ್ಗೆ ಧ್ವನಿ ಎತ್ತಿ ಗದಗ ಜನತೆಯ ಋಣ ತಿರಿಸಿ @HKPatilINC @BSBommai pic.twitter.com/vDesnjuKcg&lt;/p&gt;&lt;p&gt;&mdash; ಗದಗ ರೈಲು ಬಳಕೆದಾರರು Gadag Railway Users (@GadagRailUsers) May 16, 2026&lt;/p&gt;]]></content:encoded>
            <category>vijayapura</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/opposition-to-yeshwantpur-gadag-bypass-vijayapura-train-indian-railways-who-will-pay-500-rupees-sir-mrq-tsgz0sd"/>
        </item>
        <item>
            <title><![CDATA[ಭೀಕರ ಬರಗಾಲದಲ್ಲೂ ಕಾಂಗ್ರೆಸ್ಸಿಗರಂತೆ ಪ್ರಧಾನಿ ಮೋದಿ ಚಿನ್ನದ ತುಲಾಭಾರ ಮಾಡಿಸಿಕೊಂಡಿಲ್ಲ: ಸಂಸದ ರಮೇಶ್ ಜಿಗಜಿಣಗಿ ಸ್ಫೋಟಕ ಹೇಳಿಕೆ]]></title>
            <link>https://kannada.asianetnews.com/politics/pm-modi-did-not-get-gold-thulabhara-like-congressmen-mp-ramesh-jigajinagi-rav/articleshow-w3u2psd</link>
            <guid isPermaLink="true">https://kannada.asianetnews.com/politics/pm-modi-did-not-get-gold-thulabhara-like-congressmen-mp-ramesh-jigajinagi-rav/articleshow-w3u2psd</guid>
            <pubDate>Sun, 17 May 2026 07:52:51 +0530</pubDate>
            <description><![CDATA[&lt;p&gt;ಪ್ರಧಾನಿ ಮೋದಿ ಚಿನ್ನದ ಖರೀದಿ ಮಿತಿಗೊಳಿಸಲು ಕರೆ ನೀಡಿದ್ದನ್ನು ಸಂಸದ ರಮೇಶ ಜಿಗಜಿಣಗಿ ಸಮರ್ಥಿಸಿಕೊಂಡಿದ್ದಾರೆ. ದೇಶದ ಹೆಸರಲ್ಲಿ ಕಾಂಗ್ರೆಸ್ ನಾಯಕರು ಚಿನ್ನದ ತುಲಾಭಾರ ಮಾಡಿಸಿಕೊಂಡಿದ್ದನ್ನು ಸ್ಮರಿಸಿದ ಅವರು, ಕೋವಿಡ್&zwnj;ನಂತಹ ಸಂಕಷ್ಟವನ್ನು ಮೋದಿ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k02j9za3md60e5gkvz2msb5y,imgname-dbdb-1752432966979.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮಾ.17): &lt;/strong&gt;ದೇಶದ ಹೆಸರು ಹೇಳಿ ಕಾಂಗ್ರೆಸ್&zwnj;ನವರಂತೆ ಚಿನ್ನದ ತುಲಾಭಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿಸಿಕೊಂಡಿಲ್ಲ. ಬದಲಾಗಿ ಚಿನ್ನದ ಖರೀದಿಯನ್ನು ಮಿತ ಪ್ರಮಾಣಕ್ಕೆ ಸೀಮಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.&lt;/p&gt;&lt;p&gt;ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್&zwnj;ನಂತೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ದಮನಿಸುವ ಕೆಲಸ ಬಿಜೆಪಿ ಮಾಡಿಲ್ಲ. ಕೋವಿಡ್&zwnj;ನಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಏನಾದರೂ ಅಧಿಕಾರದಲ್ಲಿದ್ದರೆ ದೇಶದ ಪರಿಸ್ಥಿತಿ ಊಹಿಸಲು ಸಾಧ್ಯವಾಗಿರದಷ್ಟು ಕೆಟ್ಟಿರುತ್ತಿತ್ತು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.&lt;/p&gt;&lt;p&gt;ಅಂತಾರಾಷ್ಟ್ರೀಯ ಮಟ್ಟದ ವಿದ್ಯಮಾನಗಳು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ವೆಚ್ಚ ಕಡಿತದ ಜೊತೆಯಲ್ಲಿ ಪೆಟ್ರೋಲ್-ಡಿಸೇಲ್ ವಾಹನಗಳ ಬಳಕೆ ತಗ್ಗಿಸಲು ಮತ್ತು ಚಿನ್ನಾಭರಣ ಖರೀದಿ ಮಿತಗೊಳಿಸಲು ಕರೆ ನೀಡಿದ್ದಾರೆ ವಿನಃ ಕಾಂಗ್ರೆಸ್&zwnj;ನಂತೆ ದೇಶದ ಹೆಸರಲ್ಲಿ ಜನರ ಚಿನ್ನಾಭರಣ ಕಿತ್ತುಕೊಂಡಿಲ್ಲ ಎಂದರು. ದೇಶದ ಆರ್ಥಿಕತೆ ಕುಸಿದಿದೆ ಎಂದು ಕಾಂಗ್ರೆಸ್&zwnj;ನಂತೆ ಬಿಜೆಪಿ ಎಂದೂ ಕೈಚೆಲ್ಲಿ ಕುಳಿತಿಲ್ಲ. ತುರ್ತು ಪರಿಸ್ಥಿತಿ ಹೇರಿಲ್ಲ. ಭೀಕರ ಬರದಲ್ಲೂ ದೇಶದ ಹೆಸರಲ್ಲಿ ಚಿನ್ನದ ತುಲಾಭಾರ ಮಾಡಿಸಿಕೊಂಡಿಲ್ಲ. ದೇಣಿಗೆ ಕೇಳಿಲ್ಲ. ರಕ್ಷಣಾ ನಿಧಿ ಸಂಗ್ರಹಿಸಿಲ್ಲ. 1962ರಲ್ಲಿ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರ ವಿವೇಚನಾ ರಹಿತ ನಿರ್ಧಾರದಿಂದಾಗಿ ಭಾರತ ಸೋಲುಕಂಡಿತ್ತು. ಪರಿಣಾಮ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ನಿಧಿ ಸಂಗ್ರಹಿಸಲು ಮುಂದಾಗಿತ್ತು.&lt;/p&gt;&lt;p&gt;1963ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ರಾಜ್ಯಾದ್ಯಂತ ಸಂಚರಿಸಿ ರಕ್ಷಣಾ ನಿಧಿ ಸಂಗ್ರಹಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದರು. ಪರಿಣಾಮ ವಿಜಯಪುರದಲ್ಲಿ ಕೆ.ಬಿ.ಚೌಧರಿ ಸಂಸದರಾಗಿದ್ದಾಗ ವಿಜಯಪುರದಲ್ಲಿ ಜು.2ರಂದು ಇಂದಿರಾಗಾಂಧಿ ಹಾಗೂ ಎಸ್.ನಿಜಲಿಂಗಪ್ಪ ಅವರಿಗೆ ಜನ ಚಿನ್ನದಿಂದ ತುಲಾಭಾರ ನೆರವೇರಿಸಿದ್ದರು. ಆಗ ಜಿಲ್ಲೆಯಲ್ಲಿ ಭೀಕರ ಬರಗಾಲವಿತ್ತು. ಆದರೂ ನಮ್ಮ ಜನ ಉದಾರ ಮನೋಭಾವದವರು. ದೇಶಕ್ಕಾಗಿ ಮೈಮೇಲಿನ ಚಿನ್ನಾಭರಣವನ್ನೇ ರಕ್ಷಣಾ ನಿಧಿಗೆ ಅರ್ಪಿಸಿದ್ದರು. ಆದರೆ, ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಂದ ನಯಾಪೈಸೆ ನಿಧಿ ಸಂಗ್ರಹಿಸಿಲ್ಲ ಎಂದು ಅವರು ದೂರಿದರು.&lt;/p&gt;&lt;p&gt;ಪೆಟ್ರೋಲ್-ಡಿಸೇಲ್ ಕೊರತೆ ಉಂಟಾಗಿಲ್ಲ. ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಿಲ್ಲ. ಎಂಥದ್ದೇ ಬಿಕ್ಕಟ್ಟು ಎದುರಾದರೂ ದೇಶವನ್ನು ಪ್ರಧಾನಿ ಮೋದಿಜಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ವಿನಃ ಜನರಿಗೆ ತೊಂದರೆಯಾಗಲು ಬಿಟ್ಟಿಲ್ಲ. ಕೊರೋನಾ ಸಂದರ್ಭದಲ್ಲಿ ಮೋದಿ ಬದಲು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ದೇಶಕ್ಕೆ ದೊಡ್ಡ ತೊಂದರೆಯಾಗುತ್ತಿತ್ತು. ಆದರೆ, ಮೋದಿಜಿ ಅಂತಹ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಒದಗಿಸಿದರು, ಕೊರೊನಾ ವಿರುದ್ಧ ಜನತೆಯ ವಿಶ್ವಾಸದೊಂದಿಗೆ ಹೋರಾಡಿದರು ಎಂದು ಜಿಗಜಿಣಗಿ ಹೇಳಿದ್ದಾರೆ.&lt;/p&gt;&lt;p&gt;ಈಗ ಕೊಲ್ಲಿ ರಾಷ್ಟ್ರಗಳ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೆನ್ನಿಗೆ ದೇಶದ ಜನ ನಿಲುತ್ತಿರುವುದನ್ನು ಸಹಿಸಲಾಗದ ಕಾಂಗ್ರೆಸ್ಸಿಗರು ಹೊಟ್ಟೆಕಿಚ್ಚಿನಿಂದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮೋದಿ ಚಪ್ಪಾಳೆ ತಟ್ಟಿ, ಗಂಟೆ ಭಾರಿಸಿ ಎಂದಿದ್ದು ಕರೋನಾ ವಾರಿಯರ್ಸ್&zwnj;ರನ್ನು ಅಭಿನಂದಿಸುವುದಕ್ಕೋಸ್ಕರವೇ ವಿನಃ ಅಸಹಾಯಕತೆಯಿಂದಲ್ಲ. ಹಾಗೆ ಅಸಹಾಯಕತೆಯಿಂದ ಜನರಿಂದ ಚಿನ್ನದ ತುಲಾಭಾರ ನೆರವೇರಿಸಿಕೊಳ್ಳಲು. ರಕ್ಷಣಾ ನಿಧಿ ಸಂಗ್ರಹಿಸಲು ಇದು ಅಸಮರ್ಥ ಕಾಂಗ್ರೆಸ್ ಆಡಳಿತಾವಧಿಯಲ್ಲ. ಬದಲಾಗಿ ಸದೃಢ ಭಾರತದ ಸದೃಢ ನಾಯಕ ಮೋದಿ ಆಡಳಿತ ಎಂಬುದು ನೆನಪಿರಲಿ.&lt;/p&gt;&lt;p&gt;&lt;strong&gt;-ರಮೇಶ ಜಿಗಜಿಣಗಿ, ಸಂಸದ ವಿಜಯಪುರ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/pm-modi-did-not-get-gold-thulabhara-like-congressmen-mp-ramesh-jigajinagi-rav/articleshow-w3u2psd"/>
        </item>
        <item>
            <title><![CDATA[ಉತ್ತರ ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ, ವಿಜಯಪುರ ಜನರಿಗೆ ಈ ರೈಲಿನ ಟಿಕೆಟ್ ದರ ಇಳಿಕೆ!]]></title>
            <link>https://kannada.asianetnews.com/gallery/state/indian-railway-good-news-for-north-karnataka-hubballi-vijayapura-trains-become-regular-connectivity-to-rishikes-sat-ybhs036</link>
            <guid isPermaLink="true">https://kannada.asianetnews.com/gallery/state/indian-railway-good-news-for-north-karnataka-hubballi-vijayapura-trains-become-regular-connectivity-to-rishikes-sat-ybhs036</guid>
            <pubDate>Mon, 11 May 2026 19:53:18 +0530</pubDate>
            <description><![CDATA[&lt;p&gt;ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ಹುಬ್ಬಳ್ಳಿ-ವಿಜಯಪುರ ಮೆಮು ಮತ್ತು ಹುಬ್ಬಳ್ಳಿ-ಹೃಷಿಕೇಶ ಸೇರಿದಂತೆ ಹಲವು ವಿಶೇಷ ರೈಲುಗಳನ್ನು ನಿಯಮಿತ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಬದಲಾವಣೆಯಿಂದ ಟಿಕೆಟ್ ದರದಲ್ಲಿ ಶೇ. 30% ರಷ್ಟು ಕಡಿತವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbp7dt0zx3643fjbw2gffha,imgname-hubballi-to-rishikesh-train-1778508871487.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕರ್ನಾಟಕದ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ಹುಬ್ಬಳ್ಳಿ-ವಿಜಯಪುರ ಮೆಮು ಮತ್ತು ಹುಬ್ಬಳ್ಳಿ-ಹೃಷಿಕೇಶ ಸೇರಿದಂತೆ ಹಲವು ವಿಶೇಷ ರೈಲುಗಳನ್ನು ನಿಯಮಿತ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಬದಲಾವಣೆಯಿಂದ ಟಿಕೆಟ್ ದರದಲ್ಲಿ ಶೇ. 30% ರಷ್ಟು ಕಡಿತವಾಗಲಿದೆ.&lt;/p&gt;&lt;img&gt;&lt;p&gt;ಹುಬ್ಬಳ್ಳಿ/ಧಾರವಾಡ: ಉತ್ತರ ಕರ್ನಾಟಕದ ಜಿಲ್ಲೆಗಳ ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಈವರೆಗೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ ಪ್ರಮುಖ ರೈಲುಗಳನ್ನು ಇಂದಿನಿಂದ 'ನಿಯಮಿತ ಸೇವೆ'ಗಳನ್ನಾಗಿ (Regular Train Services) ಪರಿವರ್ತಿಸಲಾಗುತ್ತಿದೆ. ಈ ಮಹತ್ವದ ನಿರ್ಧಾರವು ಉತ್ತರ ಕರ್ನಾಟಕದ ಜಿಲ್ಲೆಗಳ ಸಂಪರ್ಕ ಕ್ರಾಂತಿಗೆ ಹೊಸ ವೇಗ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಹುಬ್ಬಳ್ಳಿ ಮತ್ತು ವಿಜಯಪುರ ನಡುವೆ ಸಂಚರಿಸುವ ರೈಲು ಸಂಖ್ಯೆ 56919/20 ಹಾಗೂ 66501/02 ರೈಲುಗಳು ಇನ್ನು ಮುಂದೆ ನಿಯಮಿತವಾಗಿ ಸಂಚರಿಸಲಿವೆ. ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹುಬ್ಬಳ್ಳಿ - ವಿಜಯಪುರ ನೂತನ ನಿಯಮಿತ ಮೆಮು (MEMU- Mainline Electric Multiple Unit) ರೈಲಿಗೆ (ರೈಲು ಸಂಖ್ಯೆ: 66501) ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.&amp;nbsp;&lt;/p&gt;&lt;p&gt;ಇದರಿಂದ ಹುಬ್ಬಳ್ಳಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ನಿತ್ಯ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮೆಮು ರೈಲು ಸಂಚಾರದಿಂದ ವೇಗದ ಮತ್ತು ಪರಿಸರ ಸ್ನೇಹಿ ಪ್ರಯಾಣ ಸಾಧ್ಯವಾಗಲಿದೆ.&lt;/p&gt;&lt;img&gt;&lt;p&gt;ಉತ್ತರ ಭಾರತಕ್ಕೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 17363/64 ಹುಬ್ಬಳ್ಳಿ - ಯೋಗ ನಗರಿ ಹೃಷಿಕೇಶ ವಾರಕ್ಕೊಮ್ಮೆ ಸಂಚರಿಸುವ ರೈಲನ್ನು ಈಗ ನಿಯಮಿತ ಸೇವೆಯನ್ನಾಗಿ ಮಾಡಲಾಗಿದೆ. ಇದರಿಂದ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ವರ್ಷಪೂರ್ತಿ ಸುಲಭ ಪ್ರಯಾಣ ಒದಗಿಸಿದಂತಾಗುತ್ತದೆ.&lt;/p&gt;&lt;img&gt;&lt;p&gt;ಈ ರೈಲುಗಳ ಸೇವೆಯು ನಿಯಮಿತವಾಗಿ ಬದಲಾದ ಕಾರಣ ಪ್ರಯಾಣಿಕರಿಗೆ ಆರ್ಥಿಕವಾಗಿ ದೊಡ್ಡ ಲಾಭ ಸಿಗಲಿದೆ.&lt;/p&gt;&lt;p&gt;ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಇನ್ನು ಮುಂದೆ ಸೂಪರ್&zwnj;ಫಾಸ್ಟ್ ಹೆಚ್ಚುವರಿ ಶುಲ್ಕವಿರುವುದಿಲ್ಲ.&lt;/p&gt;&lt;p&gt;ಮೀಸಲು ದರ್ಜೆಯ (Reserved Class) ಟಿಕೆಟ್ ದರದಲ್ಲಿ ಸುಮಾರು 30% ರಷ್ಟು ಕಡಿತವಾಗಲಿದ್ದು, ಪ್ರಯಾಣವು ಅತ್ಯಂತ ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಸಿಗಲಿದೆ.&lt;/p&gt;&lt;img&gt;&lt;p&gt;ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ವೇಗ ತುಂಬುತ್ತಿದೆ. ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಸಚಿವರು ಶ್ಲಾಘಿಸಿದರು.&amp;nbsp;&lt;/p&gt;&lt;p&gt;ಈ ಕಾರ್ಯಕ್ರಮದ ವೇಳೆ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ (SWR) ಜನರಲ್ ಮ್ಯಾನೇಜರ್ ಪಿ. ಅನಂತು ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಬದಲಾವಣೆಯು ಉತ್ತರ ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ವಲಯಕ್ಕೆ ಹೊಸ ಶಕ್ತಿ ತುಂಬಲಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-good-news-for-north-karnataka-hubballi-vijayapura-trains-become-regular-connectivity-to-rishikes-sat-ybhs036"/>
        </item>
        <item>
            <title><![CDATA[ಬೆಂಗಳೂರು-ವಿಜಯಪುರ ನಡುವೆ ಬೈಪಾಸ್ ರೈಲು ಸಂಚಾರ ಆರಂಭ: 5 ಗಂಟೆ ಸಮಯ ಉಳಿತಾಯಕ್ಕೆ ಸಚಿವ ಎಂ.ಬಿ. ಪಾಟೀಲ ಸಂತಸ!]]></title>
            <link>https://kannada.asianetnews.com/gallery/state/indian-railway-bengaluru-vijayapura-special-train-via-hubli-gadag-bypass-mb-patil-happy-sat-zh12z5q</link>
            <guid isPermaLink="true">https://kannada.asianetnews.com/gallery/state/indian-railway-bengaluru-vijayapura-special-train-via-hubli-gadag-bypass-mb-patil-happy-sat-zh12z5q</guid>
            <pubDate>Fri, 15 May 2026 19:41:15 +0530</pubDate>
            <description><![CDATA[ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ಪ್ರಯಾಣದ ಸಮಯವನ್ನು ಸುಮಾರು 5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಸಚಿವ ಎಂ.ಬಿ. ಪಾಟೀಲರ ಮನವಿಯ ಮೇರೆಗೆ ಆರಂಭವಾದ ಈ ಸೇವೆಯನ್ನು ಕಾಯಂಗೊಳಿಸಲು ಮತ್ತು ವೇಳಾಪಟ್ಟಿ ಬದಲಾವಣೆಗೆ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7vqdjdvnc1cy078ydnn1kj,imgname-idnian-railways--3--1778380420685.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ಪ್ರಯಾಣದ ಸಮಯವನ್ನು ಸುಮಾರು 5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಸಚಿವ ಎಂ.ಬಿ. ಪಾಟೀಲರ ಮನವಿಯ ಮೇರೆಗೆ ಆರಂಭವಾದ ಈ ಸೇವೆಯನ್ನು ಕಾಯಂಗೊಳಿಸಲು ಮತ್ತು ವೇಳಾಪಟ್ಟಿ ಬದಲಾವಣೆಗೆ ಆಗ್ರಹಿಸಲಾಗಿದೆ.&lt;img&gt;&lt;p&gt;ವಿಜಯಪುರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು-ವಿಜಯಪುರ ನಡುವಿನ ತ್ವರಿತ ರೈಲು ಸೇವೆಗೆ ಈಗ ಚಾಲನೆ ಸಿಕ್ಕಿದೆ. ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ವಿಶೇಷ ರೈಲು ಓಡಿಸುವ ಸಚಿವ ಎಂ.ಬಿ. ಪಾಟೀಲರ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬೆಳವಣಿಗೆಯ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಮನವಿಗೆ ಸ್ಪಂದಿಸಿ ವಿಶೇಷ ರೈಲು ಆರಂಭಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಎಂ.ಬಿ. ಪಾಟೀಲರು ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಅವರು ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದು, ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸುವುದರಿಂದ ಸಮಯ ಉಳಿತಾಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.&lt;/p&gt;&lt;img&gt;&lt;p&gt;ಸದ್ಯ ವಿಜಯಪುರ ಮತ್ತು ಬೆಂಗಳೂರು ನಡುವೆ ರೈಲು ಪ್ರಯಾಣಕ್ಕೆ ಸುಮಾರು 15 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ರೈಲುಗಳು ಹುಬ್ಬಳ್ಳಿ ನಗರದೊಳಗೆ ಹೋಗುವ ಬದಲು ಹುಬ್ಬಳ್ಳಿ ಬೈಪಾಸ್ ಮೂಲಕ ಸಂಚರಿಸಿದರೆ ಈ ಸಮಯವನ್ನು ಕೇವಲ 10 ಗಂಟೆಗಳಿಗೆ ಇಳಿಸಬಹುದು.&amp;nbsp;&lt;/p&gt;&lt;p&gt;ಇದರಿಂದ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ರಾಜಧಾನಿಗೆ ಬರಲು ಮತ್ತು ಹೋಗಲು ಲಭ್ಯವಿರುವ ಅತ್ಯಂತ ವೇಗದ ಸಾರಿಗೆ ಇದಾಗಲಿದೆ ಎಂದು ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ನೈರುತ್ಯ ರೈಲ್ವೆಯು ಈ ವಿಶೇಷ ರೈಲನ್ನು ಜೂನ್ 28ರವರೆಗೆ ಓಡಿಸಲು ನಿರ್ಧರಿಸಿದೆ.&lt;/p&gt;&lt;p&gt;&lt;strong&gt;ಯಶವಂತಪುರದಿಂದ: &lt;/strong&gt;ಪ್ರತೀ ಶನಿವಾರ ಬೆಂಗಳೂರಿನಿಂದ ಹೊರಡಲಿದೆ.&lt;/p&gt;&lt;p&gt;&lt;strong&gt;ವಿಜಯಪುರದಿಂದ:&lt;/strong&gt; ಪ್ರತೀ ಭಾನುವಾರ ಹಿಂತಿರುಗಲಿದೆ.&lt;/p&gt;&lt;p&gt;&lt;strong&gt;ಬೋಗಿಗಳು:&lt;/strong&gt; ಒಟ್ಟು 19 ಬೋಗಿಗಳನ್ನು ಈ ರೈಲು ಹೊಂದಿರಲಿದೆ.&lt;/p&gt;&lt;p&gt;&lt;strong&gt;ನಿಲುಗಡೆಗಳು:&lt;/strong&gt; ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ.&lt;/p&gt;&lt;img&gt;&lt;p&gt;ಈ ವಿಶೇಷ ರೈಲನ್ನು ಕೇವಲ ಒಂದು ತಿಂಗಳಿಗೆ ಸೀಮಿತಗೊಳಿಸದೆ, ತ್ವರಿತವಾಗಿ ಕಾಯಂ ರೈಲನ್ನಾಗಿ ಪರಿವರ್ತಿಸಬೇಕು ಎಂದು ಸಚಿವರು ಮತ್ತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಸೂಕ್ತ ಸಮಯ: &lt;/strong&gt;ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹೊರಟು ಬೆಳಿಗ್ಗೆ 6ಕ್ಕೆ ವಿಜಯಪುರ ತಲುಪುವಂತಿರಬೇಕು. ಅದೇ ರೀತಿ ವಿಜಯಪುರದಿಂದ ರಾತ್ರಿ 8ಕ್ಕೆ ಹೊರಟು ಬೆಳಿಗ್ಗೆ 6ಕ್ಕೆ ಬೆಂಗಳೂರಿಗೆ ತಲುಪುವಂತಿರಬೇಕು.&lt;/p&gt;&lt;p&gt;&lt;strong&gt;ಯಶವಂತಪುರ ತಲುಪುವ ಸಮಯ: &lt;/strong&gt;ಈಗಿನ ವಿಶೇಷ ರೈಲು ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪಲಿದೆ. ಇದು ಪ್ರಯಾಣಿಕರಿಗೆ ಮನೆಗಳಿಗೆ ಹೋಗಲು ಕಷ್ಟಕರವಾಗುವುದರಿಂದ, ಮುಂಜಾನೆ 5:30 ರಿಂದ 6 ಗಂಟೆಯ ಸುಮಾರಿಗೆ ತಲುಪುವಂತೆ ಮಾಡಬೇಕು ಎಂದು ಅವರು ಕೋರಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-bengaluru-vijayapura-special-train-via-hubli-gadag-bypass-mb-patil-happy-sat-zh12z5q"/>
        </item>
    </channel>
</rss>
