<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 27 Aug 2026 14:57:18 +0530</lastBuildDate>
        <atom:link href="https://kannada.asianetnews.com/rss/vijayapura" rel="self" type="application/rss+xml"/>
        <item>
            <title><![CDATA[ರೈಲು ಬರುವ ವೇಳೆಯೇ ಕೆಟ್ಟು ನಿಂತ 25 ಮಕ್ಕಳಿದ್ದ ಶಾಲಾ ವಾಹನ.. ಸ್ಥಳೀಯರಿಂದ ತಪ್ಪಿದ ಭಾರೀ ಅನಾಹುತ]]></title>
            <link>https://kannada.asianetnews.com/vijayapura/school-van-carrying-25-children-stalls-on-railway-track-villagers-prevent-major-accident-gkn/articleshow-1w0al3b</link>
            <guid isPermaLink="true">https://kannada.asianetnews.com/vijayapura/school-van-carrying-25-children-stalls-on-railway-track-villagers-prevent-major-accident-gkn/articleshow-1w0al3b</guid>
            <pubDate>Thu, 06 Aug 2026 10:04:19 +0530</pubDate>
            <description><![CDATA[ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ, ರೈಲ್ವೆ ಹಳಿಯ ಮೇಲೆ ಕೆಟ್ಟು ನಿಂತಿದ್ದ 25ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ವಾಹನವನ್ನು ಸ್ಥಳೀಯರು ರಕ್ಷಿಸಿದ್ದಾರೆ. ರೈಲು ಬರುವ ಕೆಲವೇ ಕ್ಷಣಗಳ ಮೊದಲು, ಗ್ರಾಮಸ್ಥರು ತಮ್ಮ ಪ್ರಾಣದ ಹಂಗು ತೊರೆದು ವಾಹನವನ್ನು ಪಕ್ಕಕ್ಕೆ ತಳ್ಳಿ ಭಾರೀ ದುರಂತವನ್ನು ತಪ್ಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzanh46hvb4ef7t2gr09z90f,imgname-raichuru-train-van-1785990779089.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ರೈಲು ಬರುವ ಸಮಯದಲ್ಲೇ ರೈಲ್ವೆ ಹಳಿಯ ಮೇಲೆ ಕೆಟ್ಟು ನಿಂತಿದ್ದ 25ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ವಾಹನವನ್ನು ಗ್ರಾಮಸ್ಥರು ಪಕ್ಕಕ್ಕೆ ತಳ್ಳಿ ಮಕ್ಕಳ ಪ್ರಾಣ ಉಳಿಸಿರುವ ರೋಚಕ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಹಳಿಯ ಮಧ್ಯದಲ್ಲೇ ಕೈಕೊಟ್ಟ ಗೇರ್ ಬಾಕ್ಸ್&lt;/strong&gt;&lt;/h2&gt;&lt;p&gt;ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಈ ಆತಂಕಕಾರಿ ಘಟನೆ ನಡೆದಿದೆ. ಹಲಸಂಗಿಯಿಂದ ಲಚ್ಯಾಣ ಮಾರ್ಗವಾಗಿ ಶಿರಗೂರು ಗ್ರಾಮದ ಕಡೆಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನವು ರೈಲ್ವೆ ಹಳಿ ದಾಟುವಾಗ ದಿಢೀರ್ ಕೆಟ್ಟು ನಿಂತಿದೆ. ವಾಹನದ ಗೇರ್ ಬಾಕ್ಸ್ ಕೆಲಸ ಮಾಡದ ಕಾರಣ, ಚಾಲಕನಿಗೆ ವಾಹನವನ್ನು ಮುಂದೆ ಚಲಿಸಲು ಸಾಧ್ಯವಾಗದೆ ಹಳಿಯ ಮಧ್ಯದಲ್ಲೇ ನಿಂತುಬಿಟ್ಟಿದೆ.&lt;/p&gt;&lt;h2&gt;&lt;strong&gt;ದೇವದೂತರಂತೆ ಬಂದ ಗ್ರಾಮಸ್ಥರು&lt;/strong&gt;&lt;/h2&gt;&lt;p&gt;ವಾಹನ ಕೆಟ್ಟು ನಿಂತ ಕೆಲವೇ ಕ್ಷಣಗಳಲ್ಲಿ ಆ ಮಾರ್ಗವಾಗಿ ರೈಲು ಬರುವ ಸಮಯವಾಗಿತ್ತು. ವಾಹನದಲ್ಲಿ 25ಕ್ಕೂ ಹೆಚ್ಚು ಮುಗ್ಧ ಮಕ್ಕಳಿದ್ದ ಕಾರಣ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಾಯವನ್ನು ಅರಿತ ಸ್ಥಳೀಯ ಗ್ರಾಮಸ್ಥರು ಕ್ಷಣವೂ ಯೋಚಿಸದೆ ಹಳಿಯತ್ತ ಓಡಿಬಂದಿದ್ದಾರೆ. ತಮ್ಮ ಜೀವದ ಹಂಗು ತೊರೆದು, ಮಕ್ಕಳು ಒಳಗಿರುವಾಗಲೇ ವಾಹನವನ್ನು ಹಳಿಯಿಂದ ಪಕ್ಕಕ್ಕೆ ತಳ್ಳಿದ್ದಾರೆ.&lt;/p&gt;&lt;p&gt;ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ಚಾಕಚಕ್ಯತೆಯಿಂದಾಗಿ ನೂರಾರು ಕುಟುಂಬಗಳ ಕಣ್ಣೀರಿಗೆ ಕಾರಣವಾಗಬೇಕಿದ್ದ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಕಳೆದ ಮಂಗಳವಾರ ಸಂಜೆಯೇ ಈ ಘಟನೆ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಮಕ್ಕಳ ಪ್ರಾಣ ಉಳಿಸಿದ ಲಚ್ಯಾಣ ಗ್ರಾಮಸ್ಥರ ಕಾರ್ಯಕ್ಕೆ ಪೋಷಕರು ಹಾಗೂ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>vijayapura</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/vijayapura/school-van-carrying-25-children-stalls-on-railway-track-villagers-prevent-major-accident-gkn/articleshow-1w0al3b"/>
        </item>
        <item>
            <title><![CDATA[ಇಂಗ್ಲೆಂಡ್‌ನಲ್ಲಿ ಭಾರತ ದಿವ್ಯಾಂಗ ಕ್ರಿಕೆಟ್‌ ತಂಡದ ಪರ ಆಡಲಿದ್ದಾನೆ ವಿಜಯಪುರದ ಚಿಂದಿ ಆಯುವವನ ಪುತ್ರ]]></title>
            <link>https://kannada.asianetnews.com/karnataka-districts/vijayapura-rajesh-kannur-selected-for-england-pd-t20-cricket-tournament-san/articleshow-3f75dqw</link>
            <guid isPermaLink="true">https://kannada.asianetnews.com/karnataka-districts/vijayapura-rajesh-kannur-selected-for-england-pd-t20-cricket-tournament-san/articleshow-3f75dqw</guid>
            <pubDate>Fri, 31 Jul 2026 22:51:47 +0530</pubDate>
            <description><![CDATA[&lt;p&gt;ವಿಜಯಪುರದ ಕೊಳೆಗೇರಿಯ ಗುಡಿಸಲಿನಲ್ಲಿ ವಾಸಿಸುವ, ಚಿಂದಿ ಆಯುವ ದಂಪತಿಯ ಮಗನಾದ ವಿಕಲಚೇತನ ಕ್ರಿಕೆಟಿಗ ರಾಜೇಶ್ ಕಣ್ಣೂರ್, ಬಡತನದ ನಡುವೆಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kywk14pf92cqcdz1rkqazsw4,imgname-rajesh-kannur-cricketer-1785518396110.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಜು.31): &lt;/strong&gt;ಬಹುರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕಲಚೇತನ ಕ್ರಿಕೆಟಿಗ (Physical Disability Cricket) ಹಾಗೂ ಭಾರತೀಯ ಅಂಗವಿಕಲ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್&zwnj; ರಾಜೇಶ್ ಕಣ್ಣೂರ್ (27) ಮುಂಬರುವ ಆಗಸ್ಟ್&zwnj; 5 ರಿಂದ 19 ರವರೆಗೆ ಇಂಗ್ಲೆಂಡ್&zwnj;ನಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಜಯಪುರದ ಕೊಳೆಚೆ ಪ್ರದೇಶದಲ್ಲಿರುವ, ಇಂದಿಗೂ ವಿದ್ಯುತ್&zwnj; ಇಲ್ಲದ ಗುಡಿಸಲಿನಲ್ಲಿ ವಾಸಿಸುತ್ತಿರುವ ರಾಜೇಶ್, ಚಿಂದಿ ಆಯುವ ಕೆಲಸ ಮಾಡುವ ದಂಪತಿಯ ಮಗ. ಅಂಗವಿಕಲತೆಯ ಕಾರಣಕ್ಕೆ ಅವಕಾಶಗಳು ನಿರಾಕರಿಸಲ್ಪಟ್ಟಾಗ ಹುಬ್ಬಳ್ಳಿಗೆ ತೆರಳಿ ಕಠಿಣ ತರಬೇತಿ ಪಡೆದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.&lt;/p&gt;&lt;h2&gt;&lt;strong&gt;13 ಮಕ್ಕಳ ಬಡ ಕುಟುಂಬ, ಕಸ ಆಯುವ ಹೆತ್ತವರು&lt;/strong&gt;&lt;/h2&gt;&lt;p&gt;ರಾಜೇಶ್ ಕಣ್ಣೂರ್ ಅವರ ಕೌಟುಂಬಿಕ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ತಂದೆ ಚಿನ್ನಪ್ಪ (65) ಮತ್ತು ತಾಯಿ ಕಾಶಿಬಾಯಿ (50) ವಿಜಯಪುರದಲ್ಲಿ ಕಸ ಆಯುವ ಕೆಲಸ ಮಾಡುತ್ತಾರೆ. ನಾವು ಒಟ್ಟು 13 ಜನ ಮಕ್ಕಳು&mdash;ಏಳು ಗಂಡು ಮತ್ತು ಆರು ಹೆಣ್ಣುಮಕ್ಕಳು. ಬಡತನದ ಕಾರಣಕ್ಕೆ ನಾನು 10 ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿದೆ. ಆದರೆ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಭಾರಿ ಒಲವು. ಗಲ್ಲಿ ಕ್ರಿಕೆಟ್ ಆಡುತ್ತಿದ್ದ ನನ್ನನ್ನು ವಿಕಲಚೇತನ ಎಂಬ ಕಾರಣಕ್ಕೆ ಸಾಮಾನ್ಯ ಕ್ರಿಕೆಟ್ ಪಂದ್ಯಗಳಿಗೆ ಆಯ್ಕೆ ಮಾಡುತ್ತಿರಲಿಲ್ಲ. ಬಳಿಕ ಸ್ನೇಹಿತರ ಸಲಹೆಯಂತೆ 2018 ರಲ್ಲಿ ಹುಬ್ಬಳ್ಳಿಯ BDK ಮೈದಾನದಲ್ಲಿ ಕೋಚಿಂಗ್&zwnj;ಗೆ ಸೇರಿದೆ. 2-3 ವರ್ಷ ತರಬೇತಿ ಪಡೆದು ಕರ್ನಾಟಕ ವಿಕಲಚೇತನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು ನನ್ನ ಜೀವನದ ದೊಡ್ಡ ತಿರುವು ಎಂದು ರಾಜೇಶ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಶ್ರೀಲಂಕಾದಲ್ಲಿ ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ್ದ ರಾಜೇಶ್&lt;/strong&gt;&lt;/h2&gt;&lt;p&gt;2025 ರಲ್ಲಿ ಶ್ರೀಲಂಕಾದಲ್ಲಿ ನಡೆದ 'ವಿಕಲಚೇತನ ಚಾಂಪಿಯನ್ಸ್ ಟ್ರೋಫಿ'ಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಾಜೇಶ್ ಕಣ್ಣೂರ್ ಕೇವಲ 65 ಎಸೆತಗಳಲ್ಲಿ 119 ರನ್ ಬಾರಿಸಿ 'ಪಂದ್ಯಶ್ರೇಷ್ಠ' (Man of the Match) ಪ್ರಶಸ್ತಿ ಪಡೆದಿದ್ದರು. ಈ ಸರಣಿಯಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ 5 ಅರ್ಧಶತಕಗಳನ್ನು ಸಿಡಿಸಿದ್ದರು. ಬಹುರಾಷ್ಟ್ರೀಯ ಟೂರ್ನಿಯಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕಲಚೇತನ ಕ್ರಿಕೆಟಿಗ ಎಂದು ಭಾರತೀಯ ವಿಕಲಚೇತನ ಕ್ರಿಕೆಟ್ ಮಂಡಳಿ (DCCI) ಇವರನ್ನು ಗುರುತಿಸಿದೆ.&lt;/p&gt;&lt;h2&gt;&lt;strong&gt;ವಿದ್ಯುತ್ ಇಲ್ಲದ ಗುಡಿಸಲು, ಕ್ರಿಕೆಟ್ ಕಿಟ್&zwnj;ಗೂ ಪರದಾಟ!&lt;/strong&gt;&lt;/h2&gt;&lt;p&gt;ಡಿಸಿಸಿಐ (DCCI) ಸಂಸ್ಥೆಗೆ ಇನ್ನೂ ಬಿಸಿಸಿಐ (BCCI) ನಿಂದ ಅಧಿಕೃತ ಮಾನ್ಯತೆ ಸಿಗದ ಕಾರಣ, ಅದು ವಿಮಾನ ಪ್ರಯಾಣದ ವೆಚ್ಚವನ್ನು ಮಾತ್ರ ಭರಿಸುತ್ತದೆ. ಅಂತರರಾಷ್ಟ್ರೀಯ ಪಂದ್ಯಗಳಿಗಾಗಿ ಬೆಂಗಳೂರು ಮತ್ತು ದೆಹಲಿಗೆ ಪ್ರಯಾಣಿಸಲು ನಾನೇ ಹಣ ಹೊಂದಿಸಬೇಕು. ಸಾಮಾನ್ಯವಾಗಿ ರೈಲಿನಲ್ಲೇ ಪ್ರಯಾಣಿಸುತ್ತೇನೆ. ಇತ್ತೀಚೆಗೆ ಕುಟುಂಬದಲ್ಲಿದ್ದ ತುರ್ತು ಪರಿಸ್ಥಿತಿಯಿಂದಾಗಿ ದೆಹಲಿಯಿಂದ ವಿಮಾನದಲ್ಲಿ ಬರಬೇಕಾಯಿತು, ಅದಕ್ಕೆ ಸ್ನೇಹಿತ ವಿಶ್ವನಾಥ್ ರಾಥೋಡ್ ನೆರವಾದರು. ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವುದರಿಂದ ನನ್ನ ಬಳಿ ಸಾಕಷ್ಟು ಹಣವಿದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಒಂದು ಉತ್ತಮ ಕ್ರಿಕೆಟ್ ಕಿಟ್ ಖರೀದಿಸಲು ಸಹ ನಾನು ಹೆಣಗಾಡುತ್ತಿದ್ದೇನೆ. ಸರ್ಕಾರ ಮತ್ತು ಸಾರ್ವಜನಿಕರು ಅಂಗವಿಕಲರ ಕ್ರಿಕೆಟ್ ಅನ್ನು ಸಾಮಾನ್ಯ ಕ್ರಿಕೆಟ್&zwnj;ನಂತೆಯೇ ಸಮಾನವಾಗಿ ಕಾಣಬೇಕು ಎಂದು ರಾಜೇಶ್ ಮನವಿ ಮಾಡಿದ್ದಾರೆ.&lt;/p&gt;&lt;p&gt;ವಿಜಯಪುರದ ಸರ್ಕಾರಿ ಆಸ್ಪತ್ರೆಯ ಆವರಣದ ಖಾಲಿ ಜಾಗದಲ್ಲಿ ಅಭ್ಯಾಸ ಮಾಡುವ ರಾಜೇಶ್, ಸಮಯ ಸಿಕ್ಕಾಗ ಹೆತ್ತವರೊಂದಿಗೆ ಕಸ ಆಯುವ ಕೆಲಸಕ್ಕೂ ಹೋಗುತ್ತಾರೆ. ವಿದ್ಯುತ್ ಸಂಪರ್ಕವಿಲ್ಲದ ಇವರ ಗುಡಿಸಲಿನಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಇಡೀ ಕುಟುಂಬ ನಿದ್ರೆ ಮಾಡಲು ಹೆಣಗಾಡುತ್ತದೆ.&lt;/p&gt;&lt;p&gt;2018 ರಲ್ಲಿ ರಾಜೇಶ್&zwnj;ಗೆ ತರಬೇತಿ ನೀಡಿದ್ದ ಹುಬ್ಬಳ್ಳಿಯ ಹಿರಿಯ ಕ್ರಿಕೆಟಿಗ ಶಿವಾನಂದ ಗುಂಜಾಳ ಮಾತನಾಡಿ, ರಾಜೇಶ್ ಉತ್ತಮ ಕ್ರಿಕೆಟಿಗ. ಅಂಗವಿಕಲತೆ ಮತ್ತು ಬಡತನವನ್ನು ಸವಾಲಾಗಿ ಸ್ವೀಕರಿಸಿರುವ ಆತ ಕಠಿಣ ಪರಿಶ್ರಮ ಪಡುತ್ತಿದ್ದಾನೆ. ಸಮಾಜ ಆತನಿಗೆ ಪ್ರೋತ್ಸಾಹ ನೀಡಿದರೆ ಅಂತರರಾಷ್ಟ್ರೀಯ ವಿಕಲಚೇತನ ಕ್ರಿಕೆಟ್&zwnj;ನಲ್ಲಿ ಮತ್ತಷ್ಟು ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vijayapura-rajesh-kannur-selected-for-england-pd-t20-cricket-tournament-san/articleshow-3f75dqw"/>
        </item>
        <item>
            <title><![CDATA[ವಿಜಯಪುರದಲ್ಲಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ?; ಲಾಠಿ ಚಾರ್ಜ್ ಖಂಡಿಸಿದ ಬಿಜೆಪಿ ಮುಖಂಡ ವಿಜುಗೌಡ]]></title>
            <link>https://kannada.asianetnews.com/karnataka-districts/vijayapura-tikota-police-constable-exam-chaos-bjp-vijugouda-patil-alleges-congress-govt-failure/articleshow-43im2zl</link>
            <guid isPermaLink="true">https://kannada.asianetnews.com/karnataka-districts/vijayapura-tikota-police-constable-exam-chaos-bjp-vijugouda-patil-alleges-congress-govt-failure/articleshow-43im2zl</guid>
            <pubDate>Sun, 02 Aug 2026 20:21:24 +0530</pubDate>
            <description><![CDATA[&lt;p&gt;ವಿಜಯಪುರದ ತಿಕೋಟಾದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಗೊಂದಲವು ರಾಜಕೀಯ ತಿರುವು ಪಡೆದುಕೊಂಡಿದೆ. ಪರೀಕ್ಷಾ ವ್ಯವಸ್ಥೆಯ ವೈಫಲ್ಯ ಮತ್ತು ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಆರೋಪಿಸಿದ್ದು, ಸರ್ಕಾರದ ರಾಜೀನಾಮೆಗೆ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1a16w9p1ev9xjwr3t73jt4,imgname-vijayapura-police-constable-exam-vijugowda-1785676733321.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಆ.02): ವಿ&lt;/strong&gt;ಜಯಪುರ ಜಿಲ್ಲೆಯ ತಿಕೋಟಾ (Tikota) ಪರೀಕ್ಷಾ ಕೇಂದ್ರದಲ್ಲಿ (Exam Centre) ನಡೆದಿದ್ದ ಎನ್ನಲಾದ ಪರೀಕ್ಷಾ (Exam) ಗೊಂದಲ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಜಿಲ್ಲಾ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ (Press Conference) ನಡೆಸಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ (Vijugouda Patil), ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಪರೀಕ್ಷಾರ್ಥಿಗಳನ್ನು (Candidates) ಪೊಲೀಸರು ಬಲವಂತವಾಗಿ ಕರೆದೊಯ್ಯುತ್ತಿರುವ ವಿಡಿಯೋ (Video) ಪ್ರದರ್ಶಿಸಿದ ಅವರು, ಪರೀಕ್ಷೆ (Exam) ನಡೆಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ದೂರದ ಧಾರವಾಡ (Dharwad) ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳಿಗೆ (Candidates) ಸರಿಯಾದ ವ್ಯವಸ್ಥೆ (Arrangements) ಕಲ್ಪಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.&lt;/p&gt;&lt;h2&gt;&lt;strong&gt;11.15ರವರೆಗೆ ಪ್ರಶ್ನೆಪತ್ರಿಕೆ ಕೊಟ್ಟಿಲ್ಲ:&lt;/strong&gt;&lt;/h2&gt;&lt;p&gt;ವಿಜುಗೌಡ ಪಾಟೀಲ್ ಅವರ ಆರೋಪದ ಪ್ರಕಾರ, ಬೆಳಿಗ್ಗೆ ಸುಮಾರು 11.15 ಗಂಟೆಯವರೆಗೂ ಅನೇಕ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ (Question Paper) ಹಾಗೂ ಒಎಂಆರ್ ಶೀಟ್ (OMR Sheet) ವಿತರಣೆ ಮಾಡಲಾಗಿಲ್ಲ. ಕೆಲವು ಕಡೆ OMR ಶೀಟ್ ಸಂಖ್ಯೆ (OMR Number) ಮತ್ತು ಪ್ರಶ್ನೆಪತ್ರಿಕೆ ಸಂಖ್ಯೆ (Question Paper Number) ಹೊಂದಿಕೆಯಾಗದ ಕಾರಣ ಪರೀಕ್ಷಾರ್ಥಿಗಳು ಗೊಂದಲಕ್ಕೆ ಸಿಲುಕಿದರು ಎಂದು ಹೇಳಿದರು.&lt;/p&gt;&lt;p&gt;ಈ ಸಮಸ್ಯೆಯನ್ನು ಅಧಿಕಾರಿಗಳ (Officials) ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಪರೀಕ್ಷಾ ಕೇಂದ್ರದ (Exam Centre) ಹೊರಗಡೆಯೇ ಉಳಿಯುವಂತಾಯಿತು ಎಂದು ಅವರು ಆರೋಪಿಸಿದರು.&lt;/p&gt;&lt;p&gt;ಪರಿಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸುವ ಬದಲು ಪೊಲೀಸರು (Police) ಲಾಠಿಚಾರ್ಜ್ (Lathi Charge) ನಡೆಸಿ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ವಿಜುಗೌಡ ಪಾಟೀಲ್ ಗಂಭೀರ ಆರೋಪ ಮಾಡಿದರು. ಪರೀಕ್ಷೆಗೆ (Exam) ಬಂದ ಯುವಕರ ಮೇಲೆ ದೌರ್ಜನ್ಯ (Police Excess) ನಡೆದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ಘಟನೆಗೆ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವರು (Education Minister), ಉಸ್ತುವಾರಿ ಸಚಿವರು (District In-charge Minister) ಹಾಗೂ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು. 'ಇತರ ರಾಜ್ಯಗಳಲ್ಲಿ ಇಂತಹ ವೈಫಲ್ಯಗಳಿಗೆ ಸಚಿವರು ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಹಾಗಿದ್ದರೆ ಕರ್ನಾಟಕದಲ್ಲಿ (Karnataka) ಹೊಣೆಗಾರಿಕೆ ಯಾರು ಹೊರುತ್ತಾರೆ?' ಎಂದು ಪ್ರಶ್ನಿಸಿದರು.&lt;/p&gt;&lt;p&gt;ಅಧಿಕಾರಿಗಳ ನಿರ್ಲಕ್ಷ್ಯ (Negligence) ಹಾಗೂ ಪರೀಕ್ಷಾ ವ್ಯವಸ್ಥೆಯ (Examination System) ವೈಫಲ್ಯದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ (Students Future) ಧಕ್ಕೆಯಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by    (@kirik_nanmaklu_official)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-tikota-police-constable-exam-chaos-bjp-vijugouda-patil-alleges-congress-govt-failure/articleshow-43im2zl"/>
        </item>
        <item>
            <title><![CDATA[ಕೃಷ್ಣಾ ನದಿಗೆ ಕೊಲ್ಹಾಪುರ ಜಿಲ್ಲೆಯಲ್ಲಿ ಇನ್ನೊಂದು ಅಣೆಕಟ್ಟು, ಕನ್ನಡ ಸಂಘಸಂಸ್ಥೆಗಳ ವಿರೋಧ]]></title>
            <link>https://kannada.asianetnews.com/karnataka-districts/maharashtra-new-dam-krishna-river-radha-krishna-project-karnataka-protest-san/articleshow-79lg5yq</link>
            <guid isPermaLink="true">https://kannada.asianetnews.com/karnataka-districts/maharashtra-new-dam-krishna-river-radha-krishna-project-karnataka-protest-san/articleshow-79lg5yq</guid>
            <pubDate>Tue, 21 Jul 2026 22:24:34 +0530</pubDate>
            <description><![CDATA[&lt;p&gt;ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ 'ರಾಧಾಕೃಷ್ಣ ನೀರಾವರಿ ಯೋಜನೆ'ಯಡಿ ಹೊಸ ಜಲಾಶಯ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ಹರಿಯುವ ನೀರಿನ ಪ್ರಮಾಣ ಸುಮಾರು 4 ಟಿಎಂಸಿ ಯಷ್ಟು ಕಡಿಮೆಯಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky2sfr6aefp2r79pg3qp86m0,imgname-krishna-river-dam-in-kollapur-1784652751050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ/ಬೆಂಗಳೂರು (ಜು.21):&lt;/strong&gt; ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಹೊಸ ಜಲಾಶಯ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಇದರಿಂದ ಕರ್ನಾಟಕಕ್ಕೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಲಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯದ ಯೋಜನೆಯನ್ನು ತಕ್ಷಣವೇ ವಿರೋಧಿಸಿ ಕಾನೂನುಬದ್ಧ ಆಕ್ಷೇಪಣೆ ಸಲ್ಲಿಸುವಂತೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿವೆ.&lt;/p&gt;&lt;p&gt;&quot;ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇತ್ತೀಚೆಗೆ ಇಚಲಕರಂಜಿಯಲ್ಲಿ ನಡೆದ ಸಮಾರಂಭದಲ್ಲಿ 'ರಾಧಾಕೃಷ್ಣ ನೀರಾವರಿ ಯೋಜನೆ'ಯಡಿ ಹೊಸ ಆಣೆಕಟ್ಟು ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿರುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಿಂದ ಕೃಷ್ಣಾ ನದಿಯ ಸುಮಾರು 4 ಟಿಎಂಸಿ (tmcft) ನೀರನ್ನು ಮಹಾರಾಷ್ಟ್ರ ಬಳಸಿಕೊಳ್ಳಲಿದೆ. ಇದರಿಂದ ಕರ್ನಾಟಕಕ್ಕೆ ಹರಿಯುವ ನೀರಿನ ಪ್ರಮಾಣದಲ್ಲಿ ಅಷ್ಟೇ ಪ್ರಮಾಣದ ಕೊರತೆಯಾಗಲಿದ್ದು, ರಾಜ್ಯದ ಪ್ರಮುಖ ಹಿಪ್ಪರಗಿ ಬ್ಯಾರೇಜ್ ಹಾಗೂ ಆಲಮಟ್ಟಿ ಜಲಾಶಯಕ್ಕೆ ಬಂದು ಸೇರುವ ನೀರಿನ ಹರಿವು ತೀವ್ರವಾಗಿ ಕುಸಿಯಲಿದೆ. ಇದನ್ನು ಯಾವುದೇ ಕಾರಣಕ್ಕೂ ಅನುಮತಿಸದೆ ತಕ್ಷಣವೇ ತಡೆಯಬೇಕಾಗಿದೆ&quot; ಎಂದು ಕನ್ನಡ ಸಂಘಟನೆಗಳ ಕೇಂದ್ರ ಸಮಿತಿಯ ಸಂಚಾಲಕ ಅಶೋಕ್ ಚಂದರಗಿ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಡಿಕೆ ಶಿವಕುಮಾರ್ ಅವರಿಗೆ ಪತ್ರ&lt;/strong&gt;&lt;/h2&gt;&lt;p&gt;ಈ ವಿಷಯವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅಶೋಕ್ ಚಂದರಗಿ, &quot;ಅಂತರರಾಜ್ಯ ನದಿಗಳ ವಿಷಯದಲ್ಲಿ ಮೇಲ್ಭಾಗದ ರಾಜ್ಯಗಳು ಕೆಳಭಾಗದ ರಾಜ್ಯಗಳೊಂದಿಗೆ ಸಮಾಲೋಚಿಸದೆ ಯಾವುದೇ ಹೊಸ ಯೋಜನೆಗಳನ್ನು ಏಕಪಕ್ಷೀಯವಾಗಿ ಘೋಷಿಸುವಂತಿಲ್ಲ. ಮಹಾರಾಷ್ಟ್ರ ಸರ್ಕಾರದ ಈ ನಡೆ ಕೇವಲ ಅಂತರರಾಜ್ಯ ನದಿ ನೀರು ಹಂಚಿಕೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾತ್ರವಲ್ಲದೆ, ನೈಸರ್ಗಿಕ ನ್ಯಾಯದ ತತ್ವಗಳಿಗೂ ವಿರುದ್ಧವಾಗಿದೆ&quot; ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಅಗತ್ಯ ಅನುದಾನ ಘೋಷಣೆ ಮಾಡಿರುವ ಫಡ್ನವಿಸ್&zwnj;&lt;/strong&gt;&lt;/h2&gt;&lt;p&gt;ಕೊಲ್ಹಾಪುರದ ಇಚಲಕರಂಜಿ ನಗರಕ್ಕೆ ಶುದ್ಧ ಹಾಗೂ ಹೇರಳವಾದ ಕುಡಿಯುವ ನೀರು ಪೂರೈಸಲು ಶಿರೋಳ ತಾಲೂಕಿನ 'ಜೂನೆ ದಾನವಾಡ' ಬಳಿ ರಾಧಾಕೃಷ್ಣ ನೀರು ಪೂರೈಕೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಘೋಷಣೆ ಮಾಡಿದ್ದರು. ಕಳೆದ ಹಲವು ವರ್ಷಗಳಿಂದ ಇಚಲಕರಂಜಿ ನಗರಕ್ಕೆ ಶಾಶ್ವತ ನೀರು ಪೂರೈಕೆ ಯೋಜನೆ ಜಾರಿಗೆ ತರಲು ಹಲವು ತೊಡಕುಗಳು ಎದುರಾಗಿದ್ದವು. ಈ ಹಿಂದೆ ಕೆಲವು ಯೋಜನೆಗಳ ಮೂಲಕ ನೀರು ಪೂರೈಸಲು ಪ್ರಯತ್ನಿಸಲಾಗಿತ್ತಾದರೂ, ಅವುಗಳನ್ನು ರದ್ದುಗೊಳಿಸಬೇಕಾಯಿತು ಎಂದಿದ್ದರು.&lt;/p&gt;&lt;p&gt;ಪ್ರಸ್ತುತ ಇಚಲಕರಂಜಿ ನಗರಕ್ಕೆ ಕೃಷ್ಣಾ ಮತ್ತು ಪಂಚಗಂಗಾ ಯೋಜನೆಗಳ ಮೂಲಕ ನೀರು ಪೂರೈಸಲಾಗುತ್ತಿದೆಯಾದರೂ, ಪಂಪ್ ಮಾಡುವ ನೀರು ಮತ್ತು ತಲುಪುವ ನೀರಿನ ಪ್ರಮಾಣದಲ್ಲಿ ವ್ಯತ್ಯಾಸವಿರುವುದರಿಂದ ನಿತ್ಯ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ 2054ನೇ ಇಸವಿಯ ಇಚಲಕರಂಜಿ ನಗರದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ವಿರೋಧವಿಲ್ಲದ ಯೋಜನೆಯನ್ನು ರೂಪಿಸಲು ವರ್ಷದಿಂದ ಪ್ರಯತ್ನ ನಡೆಸಲಾಗಿತ್ತು. ಅದರ ಫಲವಾಗಿ ಕರ್ನಾಟಕದ ಗಡಿಭಾಗದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್&zwnj;ಗಿಂತ ಒಂದೂವರೆ ಕಿಲೋಮೀಟರ್ ಮುಂಚಿತವಾಗಿರುವ ಜೂನೆ ದಾನವಾಡ ಗ್ರಾಮದ ಗಡಿಯಲ್ಲಿರುವ ಪುರಾತನ ರಾಧಾಕೃಷ್ಣ ದೇವಾಲಯದ ಆವರಣದ ಸ್ಥಳವನ್ನು ಅಂತಿಮಗೊಳಿಸಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/maharashtra-new-dam-krishna-river-radha-krishna-project-karnataka-protest-san/articleshow-79lg5yq"/>
        </item>
        <item>
            <title><![CDATA[ವಿಜಯಪುರ: ನಿವೃತ್ತ ಶಿಕ್ಷಕರಿಗೆ ಪುಸ್ತಕಗಳಿಂದ ತುಲಾಭಾರ ಮಾಡಿದ ವಿದ್ಯಾರ್ಥಿಗಳು]]></title>
            <link>https://kannada.asianetnews.com/karnataka-districts/vijayapura-tikota-honawada-retired-teacher-yb-walikar-book-thulabhara-felicitation/articleshow-a5o0vdu</link>
            <guid isPermaLink="true">https://kannada.asianetnews.com/karnataka-districts/vijayapura-tikota-honawada-retired-teacher-yb-walikar-book-thulabhara-felicitation/articleshow-a5o0vdu</guid>
            <pubDate>Mon, 10 Aug 2026 11:36:28 +0530</pubDate>
            <description><![CDATA[ವಿಜಯಪುರ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ವೈ.ಬಿ. ವಾಲಿಕಾರ ಅವರಿಗೆ ಪುಸ್ತಕಗಳಿಂದ ತುಲಾಭಾರ ಮಾಡುವ ಮೂಲಕ ವಿಶಿಷ್ಟವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಾಲಿಕಾರ ಅವರ ಗುರುಗಳಾದ ಡಿ.ಬಿ. ಡೇಂಬ್ರೆ ಅವರು ಭಾಗವಹಿಸಿ, ಶಿಷ್ಯನ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಗುರು-ಶಿಷ್ಯರ ಪರಂಪರೆಯ ಮಹತ್ವವನ್ನು ಸಾರುವ ಈ ಸಮಾರಂಭದಲ್ಲಿ ಹಲವು ಗಣ್ಯರು ಗುರುವನ್ನು ಒಂದು ಶಕ್ತಿಯೆಂದು ಬಣ್ಣಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzn4ej1ckt018wp9y5cxntqc,imgname-teacher-yb-walikar-book-thulabhara-1786341967916.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಆ.10): ವಿ&lt;/strong&gt;ದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕಭಾವ ಮೂಡುತ್ತದೆ. ಅಂಥ ಉತ್ತಮರಲ್ಲಿ ಮಹತ್ತರ ಸಾಧನೆ ಮಾಡಿದವರಲ್ಲಿ ನನ್ನ ಶಿಷ್ಯರಲ್ಲಿ ವೈ.ಬಿ. ವಾಲಿಕಾರ ಒಬ್ಬರು ಎಂದು ಡಿ.ಬಿ. ಡೇಂಬ್ರೆ ಹೇಳಿದರು.&lt;/p&gt;&lt;p&gt;ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಮರಡಿ ಸಿದ್ದೇಶ್ವರ ದೇವಸ್ಥಾನದಲ್ಲಿ ಗುರುಗಳಿಗೆ ಪಾದಪೂಜೆ ಕಾರ್ಯಕ್ರಮ ಹಾಗೂ ನಿವೃತ್ತಗೊಂಡ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಿವೃತ್ತಿ ಹೊಂದಿದ ಶಿಕ್ಷಕ ವೈ.ಬಿ. ವಾಲಿಕಾರಗೆ ಪುಸ್ತಕಗಳಿಂದ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿದರು.&lt;/p&gt;&lt;p&gt;ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಎಂಬ ಶ್ಲೋಕದಂತೆ, ಗುರುಗಳು ನಮ್ಮ ಬದುಕಿನ ಸೃಷ್ಟಿಕರ್ತರು ಮತ್ತು ಮಾರ್ಗದರ್ಶಕರು ಎಂದು ಸಿದ್ದಣ್ಣ ಖಟೆ ಅನಿಸಿಕೆ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಗುರು ಎಂದರೆ ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿ&lt;/strong&gt;&lt;/h2&gt;&lt;p&gt;ಶಿಕ್ಷಣ ಸಂಯೋಜಕ ಎ.ಕೆ. ದಳವಾಯಿ ಮಾತನಾಡಿ, &lsquo;ಗುರು ಎಂದರೆ ಒಬ್ಬ ವ್ಯಕ್ತಿ ಅಲ್ಲ, ಗುರು ಎಂದರೆ ಒಂದು ಶಕ್ತಿ. ಒಬ್ಬ ಗುರು ಪ್ರಕೃತಿಯಲ್ಲಿರುವ ಮರ, ಗಾಳಿ, ನದಿಯಂತೆ ನಿಸ್ವಾರ್ಥಿಯಾಗಿರುತ್ತಾನೆ&rsquo; ಎಂದು ಹೇಳಿದರು. ನಂತರ ಬಾಬುರಾವ ಮಹಾರಾಜರು ಮಾತನಾಡಿದರು.&lt;/p&gt;&lt;p&gt;ವೇದಿಯ ಮೇಲೆ ಹಿರಿಯ ಶಿಕ್ಷಕರಾದ ರೇ.ಸಿ. ಪಾಟೀಲ, ಎ.ಬಿ. ಬಿರಾದಾರ, ವಿಜಯಪುರದ ಆರ್.ಕೆ.ಎಂ ಆಯುರ್ವೇದಿಕ್ ಕಾಲೇಜಿನ ಉಪಪ್ರಾಚಾರ್ಯ ಡಾ.ಸಿದ್ರಾಮಯ್ಯ ಹಿರೇಮಠ, ವೈ.ಬಿ. ವಾಲಿಕಾರ್ ದಂಪತಿ, ಕಾರ್ಯಕ್ರಮ ಆಯೋಜಕರಾಗಿ ದೀಪಕ್ ಅಥಣಿ ಇದ್ದರು. ಡಿ.ಟಿ. ಸಿದ್ನಾಥ, ಆರ್.ಎಂ. ಸಕ್ರಿ ನಿರೂಪಿಸಿದರು. ಎಚ್.ಎನ್. ಮೋಹಿತೆ ಸ್ವಾಗತಿಸಿದರು. ಎನ್.ಬಿ. ಕೋಟಿ ವಂದಿಸಿದರು.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-tikota-honawada-retired-teacher-yb-walikar-book-thulabhara-felicitation/articleshow-a5o0vdu"/>
        </item>
        <item>
            <title><![CDATA[ಕಾನ್ಸ್‌ಟೇಬಲ್ ಪರೀಕ್ಷೆ ವೇಳೆ ಹಲವು ಅನುಮಾನ - ವಿಜಯಪುರದಲ್ಲಿ ಭುಗಿಲೆದ್ದ ಪರೀಕ್ಷಾರ್ಥಿಗಳ ಆಕ್ರೋಶ]]></title>
            <link>https://kannada.asianetnews.com/vijayapura/massive-outrage-in-vijayapura-over-late-distribution-of-police-constable-exam-question-papers-gkn/articleshow-b44o1kd</link>
            <guid isPermaLink="true">https://kannada.asianetnews.com/vijayapura/massive-outrage-in-vijayapura-over-late-distribution-of-police-constable-exam-question-papers-gkn/articleshow-b44o1kd</guid>
            <pubDate>Sun, 02 Aug 2026 13:07:14 +0530</pubDate>
            <description><![CDATA[ವಿಜಯಪುರದಲ್ಲಿ ನಡೆದ ಪೊಲೀಸ್ ಕಾನ್ಸ್&zwnj;ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ವಿಳಂಬವಾದ ಕಾರಣ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಕಾಲೇಜಿನ ಗೇಟ್ ಮುರಿದು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz0pf5dpfn5h2q7vbzt79g74,imgname-police-constable-recruitment-1785656219062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಇಂದು ನಡೆಯುತ್ತಿದ್ದ ಪೊಲೀಸ್ ಕಾನ್ಸ್&zwnj;ಟೇಬಲ್ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಭಾರೀ ಗೊಂದಲ ಹಾಗೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ವಿತರಿಸಲು ವಿಳಂಬ ಮಾಡಿದ್ದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ್ದು, ಕಾಲೇಜಿನ ಗೇಟ್ ಮುರಿದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ವಿಜಯಪುರ ಜಿಲ್ಲೆಯ ತಿಕೋಟಾದ ಕೋಟ್ಯಾಳ್ ರಸ್ತೆಯಲ್ಲಿರುವ ಶಾರದಾಂಬಾ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ನಿಯಮದ ಪ್ರಕಾರ ಬೆಳಗ್ಗೆ 10:30ಕ್ಕೆ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಬೇಕಾಗಿತ್ತು. ಸುಮಾರು ಅರ್ಧ ಗಂಟೆ ತಡವಾಗಿ ಅಂದರೆ 11 ಗಂಟೆಗೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ ಎಂದು ಪರೀಕ್ಷಾರ್ಥಿಗಳು ಗಂಭೀರವಾಗಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಗೇಟ್ ಮುರಿದು ಪರೀಕ್ಷಾರ್ಥಿಗಳ ಆಕ್ರೋಶ&lt;/strong&gt;&lt;/h2&gt;&lt;p&gt;ಪ್ರಶ್ನೆ ಪತ್ರಿಕೆ ನೀಡಲು ವಿಳಂಬವಾಗುತ್ತಿದ್ದಂತೆ ಆತಂಕಕ್ಕೊಳಗಾದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೆ ಗದ್ದಲ ಆರಂಭಿಸಿದರು. ಸಮಯದ ಅಭಾವವಾಗುತ್ತದೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಆಕ್ರೋಶ ಎಷ್ಟಿತ್ತೆಂದರೆ, ಪರೀಕ್ಷಾರ್ಥಿಗಳು ಕಾಲೇಜಿನ ಮುಖ್ಯ ಗೇಟ್ ಅನ್ನು ಮುರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ&lt;/strong&gt;&lt;/h2&gt;&lt;p&gt;ಪರೀಕ್ಷಾ ಕೇಂದ್ರದಲ್ಲಿ ಗಲಾಟೆ ನಡೆಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಅವರು ಸ್ಥಳಕ್ಕೆ ಧಾವಿಸಿದರು. ಪರೀಕ್ಷಾರ್ಥಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಪರೀಕ್ಷಾ ಕೇಂದ್ರದ ಅಧಿಕಾರಿಗಳಿಂದ ವಿಳಂಬಕ್ಕೆ ಕಾರಣವೇನು ಎಂಬ ಬಗ್ಗೆ ವಿವರಣೆ ಕೇಳಿದರು. ಘಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದ ಡಿಸಿ ಅವರು, ಅಭ್ಯರ್ಥಿಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.&lt;/p&gt;&lt;h2&gt;&lt;strong&gt;ಅಭ್ಯರ್ಥಿಗಳ ಆತಂಕ&lt;/strong&gt;&lt;/h2&gt;&lt;p&gt;ನಾವು ತಿಂಗಳುಗಟ್ಟಲೆ ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸಿದ್ದೇವೆ. ಅರ್ಧ ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ನೀಡಿದರೆ ನಮಗೆ ಉತ್ತರಿಸಲು ಸಮಯ ಸಾಕಾಗುವುದಿಲ್ಲ. ಇಂತಹ ಬೇಜವಾಬ್ದಾರಿತನದಿಂದ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಪರೀಕ್ಷಾರ್ಥಿಗಳು ಕಿಡಿಕಾರಿದ್ದಾರೆ. ಸದ್ಯ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/vijayapura/massive-outrage-in-vijayapura-over-late-distribution-of-police-constable-exam-question-papers-gkn/articleshow-b44o1kd"/>
        </item>
        <item>
            <title><![CDATA[Alamatti Dam: ನೀರಾವರಿಗೆ ಹರಿಯುತ್ತಾ ಕೃಷ್ಣಾ ನೀರು? ರಾಮಲಿಂಗಾ ರೆಡ್ಡಿ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/alamatti-dam-will-krishna-water-flowing-for-irrigation-what-did-minister-ramalinga-reddy-say-mrq/articleshow-fnvzbas</link>
            <guid isPermaLink="true">https://kannada.asianetnews.com/karnataka-districts/alamatti-dam-will-krishna-water-flowing-for-irrigation-what-did-minister-ramalinga-reddy-say-mrq/articleshow-fnvzbas</guid>
            <pubDate>Wed, 22 Jul 2026 08:20:29 +0530</pubDate>
            <description><![CDATA[ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್&zwnj;ಗೆ ಹೆಚ್ಚಿಸಲು ಭೂಸ್ವಾಧೀನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು ₹80 ಸಾವಿರ ಕೋಟಿ ಅಗತ್ಯವಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇದಕ್ಕಾಗಿ 1.33 ಲಕ್ಷ ಎಕರೆ ಜಮೀನು ವಶಪಡಿಸಿಕೊಳ್ಳಬೇಕಿದ್ದು, ಮುಂದಿನ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky3v68tas23hz4p0e8r3s8hy,imgname-ramalinga-reddy-alamatti-1784688091978.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್&zwnj;ನಿಂದ 524.256 ಮೀಟರ್&zwnj; ಹೆಚ್ಚಿಸಲು ಭೂಸ್ವಾಧೀನ ಸೇರಿ ವಿವಿಧ ಕಾಮಗಾರಿಗಳಿಗೆ ಸುಮಾರು ₹80 ಸಾವಿರ ಕೋಟಿ ಅಗತ್ಯವಿದೆ. ಇದಕ್ಕಾಗಿ 1.33 ಲಕ್ಷ ಎಕರೆ ಜಮೀನು ವಶಪಡಿಸಿಕೊಳ್ಳಬೇಕಿದೆ. ಮುಂದಿನ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.&lt;/p&gt;&lt;p&gt;ಜಲಸಂಪನ್ಮೂಲ ಸಚಿವರಾದ ನಂತರ ಮಂಗಳವಾರ ಪ್ರಥಮ ಬಾರಿಗೆ ಆಲಮಟ್ಟಿಗೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವರ್ಷ ಸರ್ಕಾರ ₹3,000 ಕೋಟಿ ಅನುದಾನ ಒದಗಿಸಿದೆ. ಇದು ಸಾಂಕೇತಿಕ ಅನುದಾನವಾಗಿದೆ. ಪೂರಕ ಬಜೆಟ್&zwnj;ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ರಾಜ್ಯಗಳ ಸಭೆ ಕರೆಯಲಿ&lt;/strong&gt;&lt;/h2&gt;&lt;p&gt;ಕೃಷಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ನಡುವೆ ಇರುವ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಕೇಂದ್ರ ಜಲಶಕ್ತಿ ಸಚಿವರು ಸಂಬಂಧಪಟ್ಟ ರಾಜ್ಯಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಗೆಜೆಟ್ ಅಧಿಸೂಚನೆ ಶೀಘ್ರ ಹೊರಡಿಸಲು ಸುಪ್ರೀಂ ಕೋರ್ಟ್&zwnj;ನಲ್ಲಿ ಕಾನೂನು ಹೋರಾಟ ಮುಂದುವರಿದಿದೆ. ಮುಖ್ಯಮಂತ್ರಿಯವರೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಈ ಕುರಿತು ಮತ್ತೊಮ್ಮೆ ಮನವಿ ಮಾಡಲಾಗುವುದು. ಯುಕೆಪಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಯಲ್ಲಿ ವಿಳಂಬವಾಗಿದೆ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರ ಎರಡೂ ಕಾರಣವಾಗಿವೆ. ಗುತ್ತಿಗೆದಾರರ ಬಾಕಿ ಬಿಲ್&zwnj;ಗಳನ್ನು ಜ್ಯೇಷ್ಠತೆಯ ಆಧಾರದ ಮೇಲೆ ಪಾವತಿಸಲಾಗುವುದು. ಆಲಮಟ್ಟಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಹಲವು ಪ್ರಸ್ತಾವ ಬಂದಿದ್ದು, ಅದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಕೃಷಿಗೆ ಹರಿಯುತ್ತಾ ನೀರು?&lt;/strong&gt;&lt;/h3&gt;&lt;p&gt;ಯುಕೆಪಿ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿಗೆ ನೀರು ಹರಿಸಲು 60 ಟಿಎಂಸಿ ಅಡಿ ನೀರು ಅಗತ್ಯವಿದೆ. ಇನ್ನೂ 20 ಟಿಎಂಸಿ ನೀರು ಬಂದರೆ ಮುಂಗಾರು ಹಂಗಾಮಿನಲ್ಲಿ ನೀರಾವರಿಗೆ ನೀರು ಹರಿಸುವ ಬಗ್ಗೆ ಚಿಂತಿಸಲಾಗುವುದು. ಸದ್ಯಕ್ಕೆ ಕುಡಿಯುವ ನೀರಿಗಾಗಿ ಮಾತ್ರ ಕಾಲುವೆಗೆ ನೀರು ಬಿಡಲಾಗಿದೆ ಎಂದ ಅವರು, ಜುಲೈ 25ರೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದವರು ಹೇಳಿದರು.&lt;/p&gt;&lt;p&gt;&amp;nbsp;&lt;/p&gt;&lt;p&gt;ಉತ್ತರ ಕರ್ನಾಟಕ ಪ್ರವಾಸದ ಭಾಗವಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಮುಖ ಯೋಜನೆಗಳನ್ನು ವೀಕ್ಷಿಸಿ ಪರಿಶೀಲನೆಯನ್ನು ನಡೆಸಿದೆ.&amp;nbsp;ಆಲಮಟ್ಟಿ: ಜಲಾಶಯದ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.ನಾರಾಯಣಪುರ (ಯಾದಗಿರಿ ಜಿಲ್ಲೆ): ನಾರಾಯಣಪುರ ಅಣೆಕಟ್ಟೆಗೆ ಭೇಟಿ ನೀಡಿ, NLBC-SCADA ಗೇಟ್ ಹಾಗೂ SCADA ಕಂಟ್ರೋಲ್ ರೂಮ್&zwnj;ನ&hellip; pic.twitter.com/WVlIaF4hwx&lt;/p&gt;&lt;p&gt;&mdash; Ramalinga Reddy (@RLR_BTM) July 21, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜೆ.ಟಿ. ಪಾಟೀಲ, ಉಮೇಶ ಮೇಟಿ, ಸಿ.ಎಸ್. ನಾಡಗೌಡ, ಮುಖಂಡರಾದ ನಾಗರಾಜ ಹದ್ಲಿ, ಶ್ರೀಕರ ದೇಸಾಯಿ, ರಾಯಪ್ಪ ಮೇಟಿ ಇದ್ದರು.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/alamatti-dam-will-krishna-water-flowing-for-irrigation-what-did-minister-ramalinga-reddy-say-mrq/articleshow-fnvzbas"/>
        </item>
        <item>
            <title><![CDATA[Vijayapura: ಒಂದೇ ಕುಟುಂಬದ 6 ಮಂದಿ ಭೂತನಾಳ ಕೆರೆಗೆ ಹಾರಿದ ಕೇಸ್‌ಗೆ ಬಿಗ್‌ಟ್ವಿಸ್ಟ್; ಗಂಡನ ವಿಕೃತಿ ಬಯಲು?]]></title>
            <link>https://kannada.asianetnews.com/karnataka-districts/vijayapura-major-twist-in-the-case-of-six-family-members-jumping-into-bhutanal-lake-husband-s-depravity-exposed-sns/articleshow-gczxeen</link>
            <guid isPermaLink="true">https://kannada.asianetnews.com/karnataka-districts/vijayapura-major-twist-in-the-case-of-six-family-members-jumping-into-bhutanal-lake-husband-s-depravity-exposed-sns/articleshow-gczxeen</guid>
            <pubDate>Thu, 27 Aug 2026 14:57:11 +0530</pubDate>
            <description><![CDATA[ವಿಜಯಪುರದ ಭೂತನಾಳ ಕೆರೆಯಲ್ಲಿ ಐವರು ಮಕ್ಕಳೊಂದಿಗೆ ತಾಯಿ ಶೋಭಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಂಡ ಮಲಕಾರಿಯ ವಿಕೃತ ದೈಹಿಕ ಹಿಂಸೆ ಮತ್ತು ಆತನ ಅನೈತಿಕ ಸಂಬಂಧವೇ ಈ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಎಂದು ಮೃತ ಶೋಭಾಳ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0z2q6whfykt6nq46dtzz2w2,imgname-vijayapura-bhutanal-lake-deaths-1787749440400.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ವಿಜಯಪುರದ ಭೂತನಾಳ ಕೆರೆಗೆ ಹಾರಿ ಒಂದೇ ಕುಟುಂಬದ 6 ಜನರು ಸಾಮೂಹಿಕ ಆತ್ಮಹತ್ಯೆ ಶರಣಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿರುವ ಮೃತ ಶೋಭಾ ಸಹೋದರಿ ಅಶ್ವಿನಿ ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಶೋಭಾ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.&lt;/p&gt;&lt;h2&gt;ವಿಜಯಪುರ ದುರಂತ: ಗಂಡನ ವಿಕೃತಿಯ ಕರಾಳ ಸತ್ಯ ಬಯಲು?&lt;/h2&gt;&lt;p&gt;ವಿಜಯಪುರ ತಾಲೂಕಿನ ತೊರವಿ ಗ್ರಾಮದ ಶೋಭಾ ತನ್ನ 5 ಮಕ್ಕಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶ್ರಾವಣ ಸೋಮವಾರ ನೈವೇದ್ಯ ಅಡುಗೆ ಸಲುವಾಗಿ ಗಂಡ ಮಲಕಾರಿ ಜಾಲಗೇರಿ ಜೊತೆಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿತ್ತು. ಆದರೆ ಈಗ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ತಾಯಿ, ಮಕ್ಕಳ ಸಾಮೂಹಿಕ ಆತ್ಮಹತ್ಯೆಗೆ ಕಾರಣವೆ ಗಂಡನ ವಿಕೃತ ಟಾರ್ಚರ್ ಕಾರಣ ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;'ಶೋಭಾಗೆ ವಿಕೃತ ಟಾರ್ಚರ್'&lt;/h2&gt;&lt;p&gt;ಈ ಸಾಮೂಹಿಕ ಆತ್ಮಹತ್ಯೆ ಕಾರಣ ಮೃತ ಶೋಭಾ ಗಂಡ ಮಲಕಾರಿ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಗಂಡನ ವಿಕೃತ ಟಾರ್ಚರ್&zwnj;ಗೆ ಬೇಸತ್ತು ಶೋಭಾ ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ಗಂಡ ಮಲಕಾರಿಯಿಂದ ಪತ್ನಿ ಶೋಭಾಗೆ ವಿಕೃತ ಟಾರ್ಚರ್ ನೀಡುತ್ತಿದ್ದ. ಕುಡಿದು ಬಂದು ಶೋಭಾಗೆ ಹಲ್ಲಿನಿಂದ ಕಚ್ಚುತ್ತಿದ್ದ, ಆಕೆಯ ಮೈಗೆಲ್ಲ ಕಚ್ಚಿ ಗಾಯಗೊಳಿಸಿ ವಿಕೃತವಾಗಿ ಟಾರ್ಚರ್ ಮಾಡುತ್ತಿದ್ದ. ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದು ಹಿಂಸೆ ನೀಡುತ್ತಿದ್ದ ಎಂದು ಶೋಭಾ ಸಹೋದರಿ ಅಶ್ವಿನಿ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;'ಪತ್ನಿ ಪ್ರಶ್ನಿಸಿದಾಗಲೆಲ್ಲ ಹಲ್ಲೆ ಮಾಡಿ ಕಿರುಕುಳ!'&lt;/h2&gt;&lt;p&gt;ಇದೇ ವೇಳೆ ಮಲಕಾರಿಗೆ ಬೇರೆ ಮಹಿಳೆ ಜೊತೆಗೆ ಅನೈತಿಕ ಸಂಬಂಧ ಇತ್ತು ಎಂದು ಆರೋಪಿಸಿರುವ ಅವರು, ಇದೇ ಕಾರಣಕ್ಕೆ ಪತ್ನಿ ಶೋಭಾಗೆ ನಿತ್ಯ ಕಿರುಕುಳ ನೀಡುತ್ತಿದ್ದನಂತೆ. ಆತನ ಅನೈತಿಕ ಸಂಬಂಧ ಬಗ್ಗೆ ಪತ್ನಿ ಪ್ರಶ್ನಿಸಿದಾಗಲೆಲ್ಲ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದ. ಇದೇ ಕಿರುಕುಳ ಸಹಿಸಿಕೊಳ್ಳಲಾಗದೆ ಶೋಭಾ, ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;'ಪತ್ನಿ ವಾಪಸ್ ಬಂದರೆ ಅವಳ ಕಥೆಯೇ ಬೇರೆ ಆಗುತ್ತದೆ'&lt;/h2&gt;&lt;p&gt;ಇನ್ನು, ಪತ್ನಿ ಶೋಭಾ ಮಕ್ಕಳ ಜೊತೆ ನಾಪತ್ತೆಯಾದರೂ ಆತ ಹುಡುಕಾಟ ನಡೆಸಿರಲಿಲ್ಲ. ಪತ್ನಿ ವಾಪಸ್ ಬಂದರೆ ಅವಳ ಕಥೆಯೇ ಬೇರೆ ಆಗುತ್ತದೆ ಎಂದು ಶೋಭಾ ತವರು ಮನೆಯವರಿಗೆ ಆರೋಪಿ ಧಮ್ಕಿ ಹಾಕಿದ್ದನಂತೆ. ಕೊನೆಗೆ ಶೋಭಾ ತವರು ಮನೆಯವರ ಒತ್ತಾಯಕ್ಕೆ ಪೊಲೀಸ್ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲು ಮಾಡಿದ್ದನಂತೆ. ಸದ್ಯ ಮಗಳು ಹಾಗೂ ಆಕೆಯ ಐವರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಮಲಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/vijayapura-major-twist-in-the-case-of-six-family-members-jumping-into-bhutanal-lake-husband-s-depravity-exposed-sns/articleshow-gczxeen"/>
        </item>
        <item>
            <title><![CDATA[ಆಲಮಟ್ಟಿ ಡ್ಯಾಂ ತುಂಬಲು ಕೇವಲ 1 ಮೀಟರ್ ಬಾಕಿ: ಬರಗಾಲದಲ್ಲೂ ಭರ್ತಿಯಾಗುತ್ತಿದೆ ರಾಜ್ಯದ 2ನೇ ದೊಡ್ಡ ಜಲಾಶಯ!]]></title>
            <link>https://kannada.asianetnews.com/karnataka-districts/vijayapura-alamatti-dam-water-level-increases-reaches-near-full-capacity-due-to-maharashtra-rains/articleshow-grpt88t</link>
            <guid isPermaLink="true">https://kannada.asianetnews.com/karnataka-districts/vijayapura-alamatti-dam-water-level-increases-reaches-near-full-capacity-due-to-maharashtra-rains/articleshow-grpt88t</guid>
            <pubDate>Fri, 24 Jul 2026 09:58:40 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ತೀವ್ರ ಬರಗಾಲದ ಆತಂಕವಿದ್ದರೂ, ಮಹಾರಾಷ್ಟ್ರದ ಮಳೆಯಿಂದಾಗಿ ಕೃಷ್ಣಾ ನದಿಯ ಮೂಲಕ ಆಲಮಟ್ಟಿ ಜಲಾಶಯಕ್ಕೆ ಭಾರೀ ನೀರು ಹರಿದುಬರುತ್ತಿದೆ. ಜಲಾಶಯವು ಭರ್ತಿಯಾಗಲು ಕೇವಲ 1 ಮೀಟರ್ ಬಾಕಿಯಿದ್ದು, ಇದು ಉತ್ತರ ಕರ್ನಾಟಕದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಬರಗಾಲದಲ್ಲೂ ಭರ್ತಿಯಾಗುತ್ತಿರುವ 2ನೇ ಜಲಾಶಯವಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky95gc7tx00dphnz9rdk3z5k,imgname-almatti-dam-full-1784866681082.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಜು.24): ಒಂ&lt;/strong&gt;ದೆಡೆ ರಾಜ್ಯದಲ್ಲಿ ಮಳೆಯ ಅಭಾವದಿಂದ ಭೀಕರ ಬರಗಾಲದ (Drought) ಆತಂಕ ಆವರಿಸಿದ್ದರೆ, ಇನ್ನೊಂದೆಡೆ ಕೃಷ್ಣಾ ನದಿಯ ಪಾತ್ರದಲ್ಲಿ ಶುಭ ಸುದ್ದಿಯೊಂದು ಸಿಕ್ಕಿದೆ. ಉತ್ತರ ಕರ್ನಾಟಕದ ಜೀವನಾಡಿ ಹಾಗೂ ರಾಜ್ಯದ ಎರಡನೇ ಅತಿದೊಡ್ಡ ಜಲಾಶಯವಾಗಿರುವ ಆಲಮಟ್ಟಿ ಆಣೆಕಟ್ಟು (Alamatti Dam / Lal Bahadur Shastri Reservoir) ಭರ್ತಿಯಾಗಲು ಈಗ ಕೇವಲ 1 ಮೀಟರ್ ಮಾತ್ರ ಬಾಕಿಯಿದೆ!&lt;/p&gt;&lt;h2&gt;&lt;strong&gt;ಮಹಾರಾಷ್ಟ್ರ ಮಳೆ: ಆಲಮಟ್ಟಿಗೆ ವರದಾನ&lt;/strong&gt;&lt;/h2&gt;&lt;p&gt;ಈ ಬಾರಿಯ ಮುಂಗಾರು ಋತುವಿನಲ್ಲಿ ಕರ್ನಾಟಕದಲ್ಲಿ ಶೇ.60 ರಷ್ಟು ಮಳೆ ಕೊರತೆ (Rainfall Deficit) ಎದುರಾಗಿದೆ. ರಾಜ್ಯದ 175ಕ್ಕೂ ಅಧಿಕ ತಾಲೂಕುಗಳಲ್ಲಿ ತೀವ್ರ ಬರದ ಪರಿಸ್ಥಿತಿ (Drought Condition) ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಕೇಂದ್ರ ಸರ್ಕಾರಕ್ಕೆ ಬರ ಅಧ್ಯಯನ ಸಮಿತಿಯನ್ನು (Drought Assessment Team) ಕಳುಹಿಸುವಂತೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಆದರೆ, ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy Rains) ಅಲ್ಲಿನ ನದಿಗಳಿಂದ ಬರುವ ನೀರು ಆಲಮಟ್ಟಿ ಜಲಾಶಯಕ್ಕೆ ವರದಾನವಾಗಿ ಪರಿಣಮಿಸಿದೆ. ಗಡಿಭಾಗದಿಂದ ಹರಿದುಬರುತ್ತಿರುವ ಕೃಷ್ಣಾ ನದಿಯ ನೀರು ಜಲಾಶಯವನ್ನು ವೇಗವಾಗಿ ತುಂಬಿಸುತ್ತಿದೆ.&lt;/p&gt;&lt;h2&gt;&lt;strong&gt;ಇಂದಿನ ನೀರಿನ ಮಟ್ಟ ಮತ್ತು ಒಳಹರಿವಿನ ವಿವರ (Alamatti Dam Today's Water Level &amp;amp; Inflow):&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದಿಂದ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದ ಅಧಿಕಾರಿಗಳು ಹೊರಹರಿವನ್ನೂ (Outflow) ಹೆಚ್ಚಿಸಿದ್ದಾರೆ. ಇಂದಿನ ಅಧಿಕೃತ ಅಂಕಿ-ಅಂಶಗಳು ಹೀಗಿವೆ:&lt;/p&gt;&lt;ul&gt; &lt;li&gt;ಆಣೆಕಟ್ಟಿನ ಗರಿಷ್ಠ ಎತ್ತರ (Maximum Level): 519.60 ಮೀಟರ್ (Meters)&lt;/li&gt; &lt;li&gt;ಇಂದಿನ ನೀರಿನ ಮಟ್ಟ (Today's Water Level): 518.58 ಮೀಟರ್&lt;/li&gt; &lt;li&gt;ಒಳಹರಿವು (Inflow): 73,162 ಕ್ಯೂಸೆಕ್ (Cusecs)&lt;/li&gt; &lt;li&gt;ಹೊರಹರಿವು (Outflow): 43,567 ಕ್ಯೂಸೆಕ್&lt;/li&gt;&lt;/ul&gt;&lt;p&gt;ಗಮನಿಸಬೇಕಾದ ಅಂಶ: ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯ (Tunga Dam) ಭರ್ತಿಯಾಗಿತ್ತು. ಇದೀಗ ಅದರ ಬೆನ್ನಲ್ಲೇ ಆಲಮಟ್ಟಿ ಜಲಾಶಯವೂ ಭರ್ತಿಯಾಗುವ ಹಂತ ತಲುಪಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.&lt;/p&gt;&lt;h2&gt;&lt;strong&gt;ರೈತರಲ್ಲಿ ಹೊಸ ಭರವಸೆ (Hope for Farmers)&lt;/strong&gt;&lt;/h2&gt;&lt;p&gt;ಆಲಮಟ್ಟಿ ಜಲಾಶಯಕ್ಕೆ 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ನಿರಂತರವಾಗಿ ಹರಿದುಬರುತ್ತಿರುವುದರಿಂದ, ಇನ್ನೆರಡು ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವ (Full Reservoir Level) ಸಾಧ್ಯತೆಯಿದೆ. ಇದರಿಂದಾಗಿ ವಿಜಯಪುರ, ಬಾಗಲಕೋಟೆ, ರಾಯಚೂರು ಹಾಗೂ ಕಲ್ಬುರ್ಗಿ ಜಿಲ್ಲೆಗಳ ಕುಡಿಯುವ ನೀರು (Drinking Water) ಮತ್ತು ನೀರಾವರಿ (Irrigation) ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಕ್ಕಂತಾಗಿದೆ.&lt;/p&gt;&lt;p&gt;ಬರಗಾಲದ ಭೀತಿಯ ನಡುವೆಯೂ ಆಲಮಟ್ಟಿ ಜಲಾಶಯ ತುಂಬುತ್ತಿರುವುದು ಉತ್ತರ ಕರ್ನಾಟಕದ ಜನರಿಗೆ ಹಾಗೂ ರೈತರಿಗೆ ಬಹುದೊಡ್ಡ ಸಮಾಧಾನ ತಂದಿದೆ. ಅಧಿಕಾರಿಗಳು ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-alamatti-dam-water-level-increases-reaches-near-full-capacity-due-to-maharashtra-rains/articleshow-grpt88t"/>
        </item>
        <item>
            <title><![CDATA[ಭೀಮಾನದಿಗೆ ಹರಿದು ಬಂತು 1.43 ಲಕ್ಷ ಕ್ಯೂಸೆಕ್ ನೀರು: ವಿಜಯಪುರ ಜಿಲ್ಲಾಡಳಿತದಿಂದ ಭಾರೀ ಅಲರ್ಟ್‌!]]></title>
            <link>https://kannada.asianetnews.com/karnataka-districts/bhima-river-outflow-1-43-lakh-cusecs-vijayapura-alert-ujani-veer-dam-san/articleshow-k7rg72n</link>
            <guid isPermaLink="true">https://kannada.asianetnews.com/karnataka-districts/bhima-river-outflow-1-43-lakh-cusecs-vijayapura-alert-ujani-veer-dam-san/articleshow-k7rg72n</guid>
            <pubDate>Sat, 01 Aug 2026 11:54:45 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿನ ವ್ಯಾಪಕ ಮಳೆಯಿಂದಾಗಿ, ಉಜನಿ ಮತ್ತು ವೀರ್ ಜಲಾಶಯಗಳಿಂದ ಭೀಮಾ ನದಿಗೆ 1,43,000 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಇದರಿಂದ ವಿಜಯಪುರದ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಜಿಲ್ಲಾಡಳಿತವು ನದಿ ತೀರದ ಜನರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyxzt79br5wbfkr896ftqmjk,imgname-bhima-river-1785565355307.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಆ.1):&lt;/strong&gt; ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಭೀಮಾ ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಹಾರಾಷ್ಟ್ರದ ಪ್ರಮುಖ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು, ಉತ್ತರ ಕರ್ನಾಟಕದ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಆವರಿಸಿದೆ.&lt;/p&gt;&lt;p&gt;ಮಹಾರಾಷ್ಟ್ರದ ಕಡೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿರುವುದರಿಂದ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉಜನಿ ಜಲಾಶಯದಿಂದ 80,000 ಕ್ಯೂಸೆಕ್ ಹಾಗೂ ವೀರ್ ಜಲಾಶಯದಿಂದ 63,000 ಕ್ಯೂಸೆಕ್ ಸೇರಿದಂತೆ ಒಟ್ಟು 1,43,000 ಕ್ಯೂಸೆಕ್ నీರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ.&lt;/p&gt;&lt;h2&gt;&lt;strong&gt;24 ಗಂಟೆಗಳಲ್ಲಿ ಭೀಮಾ ನದಿ ಮಟ್ಟ ಏರಿಕೆ ಸಾಧ್ಯತೆ&lt;/strong&gt;&lt;/h2&gt;&lt;p&gt;ಬೃಹತ್ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿರುವ ಪರಿಣಾಮ, ಮುಂದಿನ 24 ಗಂಟೆಗಳಲ್ಲಿ ವಿಜಯಪುರ ಜಿಲ್ಲೆಯ ಚಡಚಣ, ಇಂಡಿ ಹಾಗೂ ಆಲಮೇಲ ತಾಲೂಕುಗಳ ಭೀಮಾ ನದಿ ಪಾತ್ರದಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಮಹಾರಾಷ್ಟ್ರದ ಮೇಲ್ಭಾಗದಲ್ಲಿ ಮಳೆ ಹೀಗೆಯೇ ಮುಂದುವರಿದರೆ, ಜಲಾಶಯಗಳಿಂದ ಹೊರಹರಿವಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ನದಿ ತೀರದ ಜನರಿಗೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಎಚ್ಚರಿಕೆ&lt;/strong&gt;&lt;/h2&gt;&lt;p&gt;ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ನದಿ ತೀರದ ಗ್ರಾಮಗಳ ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನದಿ ತೀರದ ಹಾಗೂ ತಗ್ಗು ಪ್ರದೇಶಗಳ ಜನರು ಸುರಕ್ಷಿತವಾಗಿರಬೇಕು ಮತ್ತು ನದಿ ದಂಡೆಗೆ ಅನಗತ್ಯವಾಗಿ ತೆರಳಬಾರದು. ಉಕ್ಕಿ ಹರಿಯುತ್ತಿರುವ ನದಿಯ ಬಳಿ ಸೆಲ್ಫಿ ತೆಗೆಯುವುದು, ಈಜಾಡುವುದು ಅಥವಾ ಯಾವುದೇ ರೀತಿಯ ಸಾಹಸ ಪ್ರದರ್ಶನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೈತರು ತಮ್ಮ ಜಾನುವಾರುಗಳನ್ನು ನದಿ ಪಾತ್ರಕ್ಕೆ ನೀರು ಕುಡಿಸಲು ಅಥವಾ ತೊಳೆಯಲು ಕರೆದೊಯ್ಯಬಾರದು ಎಂದು ಸೂಚಿಸಲಾಗಿದೆ.&lt;/p&gt;&lt;p&gt;ಸ್ಥಳೀಯ ತಾಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನದಿ ತೀರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/bhima-river-outflow-1-43-lakh-cusecs-vijayapura-alert-ujani-veer-dam-san/articleshow-k7rg72n"/>
        </item>
        <item>
            <title><![CDATA[ಮುದ್ದೇಬಿಹಾಳ, ತಾಳಿಕೋಟೆ ಮಾರ್ಗವಾಗಿ ಆಲಮಟ್ಟಿಯಿಂದ ಯಾದಗಿರಿಗೆ ಹೊಸ ರೈಲು ಮಾರ್ಗದ ಕೂಗು]]></title>
            <link>https://kannada.asianetnews.com/karnataka-districts/demand-for-the-start-of-a-new-railway-line-from-alamatti-to-yadgiri-via-muddebihal-and-talikote-mrq/articleshow-kmewry8</link>
            <guid isPermaLink="true">https://kannada.asianetnews.com/karnataka-districts/demand-for-the-start-of-a-new-railway-line-from-alamatti-to-yadgiri-via-muddebihal-and-talikote-mrq/articleshow-kmewry8</guid>
            <pubDate>Fri, 31 Jul 2026 14:47:35 +0530</pubDate>
            <description><![CDATA[ಬ್ರಿಟಿಷರ ಕಾಲದಲ್ಲಿಯೇ ರೂಪಿಸಲಾಗಿದ್ದ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮುದ್ದೇಬಿಹಾಳದಲ್ಲಿ ಹೋರಾಟ ಸಮಿತಿ ಸಭೆ ನಡೆಸಿದೆ. ಸರ್ಕಾರದ ಮೇಲೆ ಒತ್ತಡ ಹೇರಲು ಸಹಿ ಸಂಗ್ರಹ ಹಾಗೂ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvq8zrczaa3ntdr11cc4fv1,imgname-alamatti-yadagiri-1785489293068.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಯೋಜನೆಯನ್ನು ಬ್ರಿಟಿಷರ ಆಡಳಿತಾವಧಿಯಲ್ಲಿಯೇ ರೂಪಿಸಲಾಗಿತ್ತು. ಈ ಮಾರ್ಗದಿಂದಾಗುವ ಪ್ರಯೋಜನಗಳ ಬಗ್ಗೆ ಅಂದಿನ ಆಡಳಿತಗಾರರಿಗೆ ಅರಿವಿದ್ದರೂ, ಇಂದಿನ ಸರ್ಕಾರಕ್ಕೆ ಮಾತ್ರ ಇದರ ಮಹತ್ವದ ಅರಿವು ಮೂಡದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉದಯಸಿಂಗ್ ರಾಯಚೂರ ಹೇಳಿದರು.&lt;/p&gt;&lt;p&gt;ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ನಡೆದ ಆಲಮಟ್ಟಿ-ಯಾದಗಿರಿ ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ರೈಲ್ವೆಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಹಳೆಯ ಯೋಜನೆಯಾಗಿದ್ದರೂ ಇದುವರೆಗೆ ಅನುಷ್ಠಾನಗೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.&lt;/p&gt;&lt;h2&gt;&lt;strong&gt;ಸರ್ಕಾರ, ಜನರು, ಉದ್ಯಮಿಗಳಿಗೆ ಲಾಭ&lt;/strong&gt;&lt;/h2&gt;&lt;p&gt;ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಕಾರ್ಯರೂಪಕ್ಕೆ ಬಂದರೆ ಈ ಭಾಗದ ಜನರು, ಉದ್ಯಮಿಗಳು ಹಾಗೂ ಸರ್ಕಾರಕ್ಕೂ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳು ಹಾಗೂ ಇತರೆ ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಗಿಸಲು ಗೂಡ್ಸ್&zwnj; ರೈಲು ವ್ಯವಸ್ಥೆ ಸಹಕಾರಿಯಾಗಲಿದೆ. ಜೊತೆಗೆ ಸಾರ್ವಜನಿಕರ ಪ್ರಯಾಣಕ್ಕೂ ಅನುಕೂಲವಾಗಲಿದ್ದು, ವ್ಯಾಪಾರ ವಹಿವಾಟು ಹೆಚ್ಚುವುದರಿಂದ ಸರ್ಕಾರದ ಆದಾಯಕ್ಕೂ ಲಾಭವಾಗಲಿದೆ ಎಂದವರು ಹೇಳಿದರು.&lt;/p&gt;&lt;h3&gt;&lt;strong&gt;ಸಹಿ ಸಂಗ್ರಹ, ಜನಜಾಗೃತಿ ಅಭಿಯಾನಕ್ಕೆ ಚಾಲನೆ&lt;/strong&gt;&lt;/h3&gt;&lt;p&gt;ರೈಲ್ವೆ ಮಾರ್ಗವನ್ನು ಕಾರ್ಯರೂಪಕ್ಕೆ ತರಲು ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಹೋರಾಟ ಸಮಿತಿ ವತಿಯಿಂದ ಸಹಿ ಸಂಗ್ರಹ ಹಾಗೂ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.&lt;/p&gt;&lt;p&gt;ರೈಲ್ವೆ ಮಾರ್ಗದ ವ್ಯಾಪ್ತಿಗೆ ಬರುವ ಪ್ರತಿಯೊಂದು ಗ್ರಾಮದ ಮನೆ-ಮನೆಗೆ ತೆರಳಿ ಯೋಜನೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು, ಸಾರ್ವಜನಿಕರಿಂದ ಸಹಿ ಸಂಗ್ರಹಿಸುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯಾಪಕ ಪ್ರಚಾರ ನಡೆಸುವ ಮೂಲಕ ಹೋರಾಟ ಮತ್ತಷ್ಟು ಬಲಪಡಿಸುವುದಾಗಿ ಸಮಿತಿ ಸದಸ್ಯರು ತಿಳಿಸಿದರು.&lt;/p&gt;&lt;p&gt;ಸಭೆಯಲ್ಲಿ ಪಟ್ಟಣದ ಉದ್ಯಮಿ ಸತೀಶ ಓಸ್ವಾಲ್, ಬಸಯ್ಯ ನಂದಿಕೇಶ್ವರಮಠ, ಭೀಮಾಶಂಕರ ಪತ್ತಾರ, ಕಿರಣ ಪಾಟೀಲ ಮಾತನಾಡಿದರು.&lt;/p&gt;&lt;p&gt;ಸಂಗಮೇಶ ಬಿರಾದಾರ, ಬಿ.ಎಸ್. ಮೇಟಿ, ನಾಗಪ್ಪ ವಡ್ಡರ, ಅರವಿಂದ ಲದ್ದಿಮಠ, ವಿಜಯ ಬೆಲ್ಲದ, ರಾಜು ಬಾಗೇವಾಡಿ, ರಾಜು ಬೊಳ್ಳೊಳ್ಳಿ, ಎಂ.ಕೆ. ಒಣರೊಟ್ಟಿ, ಮುತ್ತುಕಡಿ, ಸುನೀಲ ಇಲ್ಲೂರ, ರಾಜುದೇಶ ಪಾಂಡೆ, ಪುನೀತ ಹಿಪ್ಪರಗಿ, ಸಂಗಣ್ಣಕಂಚಾಣಿ, ಎಚ್.ಬಿ. ಕೊಂಗನೂರ, ಬಿ.ಎಸ್. ಅಂಗಡಿ, ಸಿ.ವಿ. ಮುರಾಳ, ಮಂಜು ಸಜ್ಜನ, ಗೋವಿಂದ ಪಾಟೀಲ, ಗುಲಾಬಚಂದ್&zwnj; ಓಸ್ವಾಲ್, ಆರ್.ಎನ್. ಕುಂಟೋಜಿ, ಪರಶುರಾಮ ಹಳ್ಳೂರ, ಚನ್ನಪ್ಪ ಮಂಗ್ಯಾಳ, ಬಿ.ಪಿ. ಮುರಾಳ, ಶಿವಪ್ಪ ಮೇಟಿ, ಅಶೋಕ ರೇವಡಿ ಸೇರಿದಂತೆ ಹೋರಾಟ ಸಮಿತಿ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಲಮಟ್ಟಿ-ಇಳಕಲ್ಲ-ಕುಷ್ಟಗಿ ನೂತನ ರೈಲು ಮಾರ್ಗ ಮಂಜೂರಾತಿಗೆ ಸಚಿವ ವಿ ಸೋಮಣ್ಣ ಭರವಸೆ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಧಾರವಾಡ-ಬೆಳಗಾವಿ ರೈಲು ಮಾರ್ಗ ಭೂಸ್ವಾಧೀನ ಕ್ಷಿಪ್ರಗತಿಯಲ್ಲಿ ಮುಗಿಸಲು, ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/demand-for-the-start-of-a-new-railway-line-from-alamatti-to-yadgiri-via-muddebihal-and-talikote-mrq/articleshow-kmewry8"/>
        </item>
        <item>
            <title><![CDATA[ಮಂತ್ರಿಗಿರಿ ಸಿಗದ್ದಕ್ಕೆ ನೋವಿಲ್ಲ, ಹೀಗ್ಯಾಕೆ ಮಾಡಿದರೆಂಬ ಬೇಸರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ]]></title>
            <link>https://kannada.asianetnews.com/karnataka-districts/i-dont-feel-bad-about-not-getting-minister-berth-i-feel-sad-about-why-i-did-this-indi-mla-yashwant-rayagouda-patil-mrq/articleshow-nx23erg</link>
            <guid isPermaLink="true">https://kannada.asianetnews.com/karnataka-districts/i-dont-feel-bad-about-not-getting-minister-berth-i-feel-sad-about-why-i-did-this-indi-mla-yashwant-rayagouda-patil-mrq/articleshow-nx23erg</guid>
            <pubDate>Thu, 06 Aug 2026 05:39:45 +0530</pubDate>
            <description><![CDATA[ಸಚಿವ ಸ್ಥಾನದ ಭರವಸೆ ಹುಸಿಯಾದ ಕಾರಣ ರಾಜೀನಾಮೆ ನೀಡಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಪಕ್ಷದ ವರಿಷ್ಠರ ಮನವಿ ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ. ತಮಗೆ ಮಾತುಕೊಟ್ಟು ತಪ್ಪಿದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kza6ewdqtq36mtpvzezxfqjh,imgname-mla-yashwant-rayagouda-patil--1785974976951.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯುಪುರ:&lt;/strong&gt; &amp;nbsp;ನನಗೆ ಸಚಿವ ಸ್ಥಾನ ಕೊಡಲಿಲ್ಲವೆಂದು ನೋವಾಗಿಲ್ಲ. ಸಚಿವ ಸ್ಥಾನದ ಪಟ್ಟಿಯಲ್ಲಿ ಹೆಸರಿದ್ದು, ಕೊನೆಯ ಹಂತದಲ್ಲಿ ಹೆಸರು ಕೈಬಿಟ್ಟಿದ್ದಾರೆ. ಹೀಗೇಕೆ ಮಾಡಿದರು ಎಂಬ ನೋವಿದೆ. ಮಾತು ಕೊಟ್ಟಂತೆ ನಾಯಕರು ನಡೆದುಕೊಳ್ಳಲಿಲ್ಲ ಎಂಬ ಒಂದೇ ವಿಚಾರಕ್ಕೆ ರಾಜೀನಾಮೆ ನೀಡಿದ್ದೇನೆ. ನಿಮ್ಮೆಲ್ಲರ ಅಭಿಮಾನ, ಒತ್ತಾಯ, ವರಿಷ್ಠರ ಮನವಿಗೆ ಗೌರವಿಸಿ ರಾಜೀನಾಮೆಯನ್ನು ವಾಪಸ್ ಪಡೆಯುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.&lt;/p&gt;&lt;p&gt;ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದರು. ರಾಜೀನಾಮೆ ಕೊಟ್ಟು ಬಂದ ದಿನವೇ ಪಕ್ಷದ ರಾಜ್ಯದ ಉಸ್ತುವಾರಿ ಸುರ್ಜೆವಾಲಾ ಅವರು ಮನೆಗೆ ಬಂದು ನನ್ನ ಹಾಗೂ ಅವರ ರಾಜಕೀಯ ಹಿನ್ನೆಲೆಯನ್ನು ಸುದೀರ್ಘವಾಗಿ ಚರ್ಚಿಸಿದ್ದೇವೆ. ಹರಿಯಾಣದ ಚುನಾವಣೆಯಲ್ಲಿ ನನಗೆ ಟಿಕೇಟ್ ಸಿಗಲಿಲ್ಲ ಎಂದು ತಿಳಿಸಿದ ಅವರು, ಪಕ್ಷದಲ್ಲಿ ನಾವು, ನೀವು ಬೆಳೆದಿದ್ದೇವೆ. ನೋವುಗಳನ್ನು ಸಹಿಸಿಕೊಂಡು ಪಕ್ಷ ಗಟ್ಟಿ ಮಾಡಬೇಕಿದೆ ಎಂಬ ಕಳಕಳಿಯ ಮಾತುಗಳನ್ನು ಹೇಳಿದ್ದಾರೆ. ಸಚಿವ ಸ್ಥಾನ ನೀಡುವುದಾಗಿ ಹಿಂದೆ ಮಾತುಕೊಟ್ಟಿದ್ದೇವೆ. ಈಗ ರಾಜೀನಾಮೆ ವಾಪಸ್ ಪಡೆದುಕೊಳ್ಳಿ ಎಂದು ಹೇಳುವ ನೈತಿಕತೆ ನನಗಿಲ್ಲ. ನೀಡಿದ ರಾಜೀನಾಮೆಯನ್ನು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ ಎಂದು ಹೇಳಿ ಹೋಗಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರು ಮನೆಗೆ ಬಂದು ಮನವಿ ಮಾಡಿದ ಮೇಲೆ ಏನೇ ಇದ್ದರೂ ಸಹಕರಿಸಬೇಕಾಗಿರುವುದು ಮನುಷ್ಯ ಧರ್ಮ. ಹೀಗಾಗಿ, ನಾಲ್ಕುದಿನ ಕಾಲಾವಕಾಶ ಕೇಳಿ ನಿಮ್ಮ ಅಭಿಪ್ರಾಯ ಪಡೆಯಲು ಸಭೆ ಕರೆದಿರುವುದಾಗಿ ಹೇಳಿದರು.&lt;/p&gt;&lt;h2&gt;&lt;strong&gt;ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆಶಿ ಭರವಸೆ ನೀಡಿದ್ದರು&lt;/strong&gt;&lt;/h2&gt;&lt;p&gt;ವರಿಷ್ಠರು ಮಾತು ಕೊಟ್ಟಿದ್ದರು. ಪಕ್ಷದ ವರಿಷ್ಠರಾದ ರಣದೀಪ ಸಿಂಗ್ ಸುರ್ಜೇವಾಲಾ, ಮಾಜಿ ಸಿಎಂ ಸಿದ್ದರಾಮಯ್ಯನವರು ಹಾಗೂ ಸಿಎಂ ಡಿ.ಕೆ.ಶಿವಕುಮಾರ ಅವರು, 2023ರಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮೂವರಿಗೆ ಅಧಿಕಾರ ಶೇರ್ ಮಾಡುತ್ತೇವೆ ಎಂದು ಭರವಸೆಯ ಮಾತು ಕೊಟ್ಟಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಮೇಲೆ, ಲೋಕಭಾ ಚುನಾವಣೆ ಬಂದಿದೆ. ಈಗ ಇಬ್ಬರಿಗೆ ಅವಕಾಶ ನೀಡಲಾಗುತ್ತದೆ. ಎರಡೂವರೆ ವರ್ಷದ ಬಳಿಕ ನಿಮಗೂ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಸಿಎಂ ಬದಲಾವಣೆ ಬಳಿಕ ನನಗೆ ಮಾತುಕೊಟ್ಟಿದ್ದನ್ನು ವರಿಷ್ಠರಿಗೆ ನೆನಪಿಸಿದ್ದೇನೆ. ಸಿಎಂ ಡಿ.ಕೆ.ಶಿವಕುಮಾರ ಅವರು ನಿಮ್ಮ ಆಯ್ಕೆಯಲ್ಲಿ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ ಎಂದು ಹೇಳಿದರೆ, ಮಾಜಿ ಸಿಎಂ ಸಿದ್ದರಾಮಯ್ಯನವರು ನಿನ್ನ ಹೆಸರನ್ನು ಲಿಸ್ಟ್&zwnj;ನಲ್ಲಿ ಕಳಿಸಿದ್ದೇನೆ ಎಂದು ಹೇಳಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬದಲಾಗಿದೆ. ಏಕೆ ಆಯಿತು ಎಂದು ಬೇಸರದಿಂದ ರಾಜೀನಾಮೆ ನೀಡಿದ್ದಾಗಿ ಕ್ಷೇತ್ರದ ಜನರ ಮುಂದೆ ಮನದಾಳ ತೋಡಿಕೊಂಡರು.&lt;/p&gt;&lt;p&gt;ಡಿ.ಎ.ಮುಜಗೊಂಡ, ನೀಲಕಂಠ ರೂಗಿ, ಮುತ್ತಪ್ಪ ಪೊತೆ, ಹುಚ್ಚಪ್ಪ ತಳವಾರ, ಪ್ರಶಾಂತ ಕಾಳೆ, ಸತ್ತಾರ ಬಾಗವಾನ, ಪ್ರಭುಗೌಡ ಪಾಟೀಲ, ಶ್ರೀಕಾಂತ ಕುಡಿಗನೂರ, ಅಂಬಣ್ಣ ಸುಣಗಾರ, ಡಿ.ಆರ್.ಶಹಾ, ಜಾವೀದ ಮೋಮಿನ, ನಿರ್ಮಲಾ ತಳಕೇರಿ ಸೇರಿ ಹಲವರು ಮಾತನಾಡಿ, ರಾಜೀನಾಮೆ ವಾಪಸ್ ಪಡೆಯುವಂತೆ ಶಾಸಕರಿಗೆ ಮನವಿ ಮಾಡಿದರು.&lt;/p&gt;&lt;p&gt;ಗಣಪತಿ ಬಾಣಿಕೊಲ,ಎಐಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಶಿವಯೋಗೆಪ್ಪ ಚನಗೊಂಡ,ಶೈಲಶ್ರೀ ಜಾಧವ, ಸುನೀಲ ರಾಠೋಡ, ಸೋಮು ಮ್ಯಾಕೇರಿ, ಧರ್ಮು ವಾಲಿಕಾರ,ಅವಿನಾಶ ಬಗಲಿ,ಭೀಮಾಶಂಕರ ಮೂರಮನ, ಸಂತೋಷ ಪರಸೆನವರ,ಮೈಬೂಬ ಅರಬ, ಜೈನುದ್ದಿನ ಬಾಗವಾನ, ಧರ್ಮು ಸಾಲೋಟಗಿ, ಜಟ್ಟೆಪ್ಪ ಶಿವಪೂರ,ಚಂದು ಸೊನ್ನ,ಕಲ್ಲಪ್ಪ ಅಂಜುಟಗಿ,ಜಟ್ಟೆಪ್ಪ ರವಳಿ,ಜೀತಪ್ಪ ಕಲ್ಯಾಣಿ,ಇಮ್ರಾನ್ ಮಕಂದಾರ, ರವಿ ಹೊಸಮನಿ,ಸಂಕೇತ ಜೋಶಿ ಸೇರಿದಂತೆ ಐದು ನೂರಕ್ಕೂ ಹೆಚ್ಚು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಇಂಡಿಗೆ ಶಾಸಕರಾದವರಿಗೆ ಸಚಿವ ಸ್ಥಾನ ಒದಗುವ ಭಾಗ್ಯವಿಲ್ಲ ಎಂದು ಭಾವಿಸಿ ಇನ್ನು ಮುಂದೆ ಸಚಿವ ಸ್ಥಾನಕ್ಕಾಗಿ ಯಾರಲ್ಲಿಯೂ ಕೇಳುವುದಿಲ್ಲ, ಭಿಕ್ಷೆ ಬೇಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ರಾಜಕಾರಣದಲ್ಲಿ ಸಂತೋಷವನ್ನುವು ಕಂಡಿದ್ದೇನೆ. ನೋವನ್ನು ಕಂಡಿದ್ದೇನೆ. ಕುಚೇಷ್ಟೆ ಮಾಡುವವರಿಗೆ ಅವಕಾಶ ನೀಡಬಾರದು. ನನ್ನನ್ನು ಬೆಳೆಸಿದ ಮತದಾರರು, ಕಾರ್ಯಕರ್ತರ ಭಾವನೆಗಳಿಗೆ ನೋವು ನೀಡಬಾರದೆಂದು ರಾಜೀನಾಮೆ ವಾಪಸ್ ಪಡೆದಿದ್ದೇನೆ.&lt;/p&gt;&lt;p&gt;ನಾನು ರಾಜೀನಾಮೆ ಕೊಟ್ಟ ಮೇಲೆ ನಾಡಿನ ಮಠಾಧೀಶರು, ಸಚಿವರು, ಶಾಸಕ ಮಿತ್ರರು, ಕಾರ್ಯಕರ್ತರು ಮನೆಗೆ ಬಂದು ಆತ್ಮಸ್ಥೈರ್ಯ ತುಂಬಿ, ಪ್ರೀತಿ ತೋರಿಸಿದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ವಿರೋಧಿಗಳ ನಡೆಗೆ ಯಶವಂತರಾಯಗೌಡ ಬೇಸರ&lt;/strong&gt;&lt;/h3&gt;&lt;p&gt;ನನ್ನ ತಂದೆ ಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಕಟ್ಟುತ್ತ, ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಬೆಳೆಸಿಕೊಂಡಿದ್ದೇನೆ. ನಾನು ಎಲ್ಲಿಂದಲೋ ಬಂದವನಲ್ಲ. ಸೈದ್ದಾಂತಿಕ ರಾಜಕಾರಣ ಮಾಡುತ್ತಿದ್ದೇನೆ. ವೀರೇಂದ್ರ ಪಾಟೀಲರ ಸರ್ಕಾರ ಯಾರು ಕೆಡವಿದರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ನನ್ನ ಸುದೀರ್ಘ ರಾಜಕಾರಣದಲ್ಲಿ ಒಂದು ಒಳಗಿನವರ, ಇನ್ನೊಂದು ಹೊರಗಿನವರ ಎರಡು ಚುನಾವಣೆ ಎದುರಿಸಿದ್ದೇನೆ. ಇದೇನು ನನಗೆ ಹೊಸದಲ್ಲ. ದೇವರು, ಮತದಾರರು ನನಗೆ ಆ ಶಕ್ತಿ ನೀಡಿದ್ದಾರೆ. ನನಗೆ ರಾಜಕೀಯದಲ್ಲಿ ಸುದೀರ್ಘವಾಗಿ ಕಾಡಿದ ಅವರ ತಮ್ಮನಿಗೂ ಟಿಕೇಟ್ ಕೊಡಿಸಿ ಗೆಲ್ಲಿಸಿದ್ದೇನೆ ಎಂದು ಪರೋಕ್ಷವಾಗಿ ಸಚಿವ ಎಂ.ಬಿ.ಪಾಟೀಲ ವಿರುದ್ದ ಹರಿಹಾಯ್ದರು.&lt;/p&gt;&lt;p&gt;1996-97ರಲ್ಲಿ ಯಾರಿಗೆ ಸಂಸದರಾಗುವ ಕಾಲ ಬಂದಿತ್ತೋ ಆಗ ಸಂಸದರನ್ನಾಗಿ ಮಾಡಿದ್ದೇನೆ. 2018 ರಲ್ಲಿ ಇನ್ನೊಬ್ಬರಿಗೆ ಸಚಿವರಾಗುವ ಕಾಲ ಬಂದಾಗ ಗಟ್ಟಿತನದಿಂದ ಸಚಿವನಾಗಿ ಮಾಡಿದ್ದೇನೆ ಎಂದು ಶಿವಾನಂದ ಪಾಟೀಲರಿಗೆ ಕುಟುಕಿದರು. 2023ರಲ್ಲಿ ಇವರಿಗೆ ಟಿಕೇಟ್ ಸಿಗಲ್ಲ ಎನ್ನುವ ಸಂದರ್ಭದಲ್ಲಿ ಹಾಗಾದರೆ ನನಗೂ ಟಿಕೇಟ್ ಬೇಡ ಎಂದು ವರಿಷ್ಠರ ಮನವೊಲಿಸಿ ಟಿಕೇಟ್&zwnj; ಕೊಡಿಸಿದ್ದೇನೆ. ಅವರೇ ಇಂದು ನನಗೆ ತಿರುಗಿ ಬಿದ್ದಿದ್ದಾರೆ ಎಂದು ಶಾಸಕ ಮನಗೂಳಿ ನಡೆಗೆ ಬೇಸರ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/i-dont-feel-bad-about-not-getting-minister-berth-i-feel-sad-about-why-i-did-this-indi-mla-yashwant-rayagouda-patil-mrq/articleshow-nx23erg"/>
        </item>
        <item>
            <title><![CDATA[ಉತ್ತರಕನ್ನಡದಲ್ಲಿ ಉಲ್ಟಾ, ವಿಜಯಪುರದಲ್ಲಿ ಅರ್ಧಕ್ಕೆ ಹಾರಾಡಿದ ರಾಷ್ಟ್ರಧ್ವಜ!]]></title>
            <link>https://kannada.asianetnews.com/karnataka-districts/independence-day-highlights-insult-to-indian-national-flag-while-hoisting-in-vijayapur-and-uttarakannada-rav/articleshow-omqhhwv</link>
            <guid isPermaLink="true">https://kannada.asianetnews.com/karnataka-districts/independence-day-highlights-insult-to-indian-national-flag-while-hoisting-in-vijayapur-and-uttarakannada-rav/articleshow-omqhhwv</guid>
            <pubDate>Sun, 16 Aug 2026 06:28:18 +0530</pubDate>
            <description><![CDATA[ಸ್ವಾತಂತ್ರ್ಯೋತ್ಸವದ ಅಂಗವಾಗಿ ಉತ್ತರ ಕನ್ನಡದ ಮುಂಡಗೋಡದಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದೆ. ಮತ್ತೊಂದು ಘಟನೆಯಲ್ಲಿ, ವಿಜಯಪುರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಧ್ವಜವನ್ನು ಅರ್ಧಕ್ಕೆ ಹಾರಿಸಿ ಅಗೌರವ ತೋರಲಾಗಿದ್ದು, ಈ ಎರಡೂ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0416azx2t6g8te2yaz552ys,imgname-----------------------2026-08-16t062731.758-1786841869309.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಡಗೋಡ(ಉತ್ತರ ಕನ್ನಡ):&lt;/strong&gt; ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೊಸೈಟಿ ಗೋದಾಮು ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಇಂದೂರ ಸೊಸೈಟಿ ಆಡಳಿತದ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಕೇಸರಿ ಬಣ್ಣ ಕೆಳಭಾಗದಲ್ಲಿದ್ದು, ಹಸಿರು ಬಣ್ಣ ಮೇಲ್ಬಾಗದಲ್ಲಿ ಕಾಣಿಸಿಕೊಂಡಿದೆ. ಇದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ರಾಷ್ಟ್ರೀಯ ದಿನದಂದು ರಾಷ್ಟ್ರಧ್ವಜಕ್ಕೆ ಸೂಕ್ತ ಗೌರವ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಆದರೆ ಸೊಸೈಟಿ ಆಡಳಿತದ ನೇತೃತ್ವದಲ್ಲೇ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಸರಿಯಾದ ರೀತಿಯಲ್ಲಿ ಹಾರಿಸದೇ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.&lt;/p&gt;&lt;h2&gt;ವಿಜಯಪುರದಲ್ಲಿ ಅರ್ಧಕ್ಕೆ ಹಾರಿದ ರಾಷ್ಟ್ರಧ್ವಜ&lt;/h2&gt;&lt;p&gt;ವಿಜಯಪುರ:ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಧ್ವಜ ಅರ್ಧ ಹಾರಿ, ಅಪಮಾನವಾದ ಘಟನೆ ವಿಜಯಪುರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ನಡೆದಿದೆ. ಅಧಿಕಾರಿಗಳ ಯಡವಟ್ಟಿನಿಂದ ಈ ಅಚಾತುರ್ಯ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಜಯಪುರ ನಗರದ ಕನಕದಾಸ ಬಡಾವಣೆಯ ಕೃಷಿ&zwnj; ತಂತ್ರಜ್ಞರ ಕಚೇರಿಯಲ್ಲಿ ಅರ್ಧಕ್ಕೆ ಧ್ವಜ ಹಾರಿಸಲಾಗಿತ್ತು. ಅರ್ಧಮಟ್ಟಕ್ಕೆ ಧ್ವಜವನ್ನು ಅಧಿಕಾರಿಗಳು ಹಾರಿಸಿ ಹೋಗಿದ್ದಾರೆ. ಕೃಷಿ ತಂತ್ರಜ್ಞರ ಸಂಸ್ಥೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/independence-day-highlights-insult-to-indian-national-flag-while-hoisting-in-vijayapur-and-uttarakannada-rav/articleshow-omqhhwv"/>
        </item>
        <item>
            <title><![CDATA[ರಾಜೀನಾಮೆ ವಾಪಸ್ ಪಡೆದ ಶಾಸಕ ಯಶವಂತರಾಯಗೌಡ ಪಾಟೀಲ್; ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ!]]></title>
            <link>https://kannada.asianetnews.com/politics/indi-mla-yashavantarayagouda-patil-withdraws-resignation-post-pacification-by-congress-leaders-khs/articleshow-rgmk1gn</link>
            <guid isPermaLink="true">https://kannada.asianetnews.com/politics/indi-mla-yashavantarayagouda-patil-withdraws-resignation-post-pacification-by-congress-leaders-khs/articleshow-rgmk1gn</guid>
            <pubDate>Wed, 05 Aug 2026 16:18:41 +0530</pubDate>
            <description><![CDATA[ಸಚಿವ ಸ್ಥಾನ ಸಿಗದಿದ್ದಕ್ಕೆ ರಾಜೀನಾಮೆ ನೀಡಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹಿರಿಯ ನಾಯಕರ ಮನವೊಲಿಕೆ ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ, ಅವರು ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz3jzcs4s0n0m4348wxwxtg2,imgname-karnataka-cabinet-expansion-mlas-resignation-1785753219876.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಆ.05): ರಾ&lt;/strong&gt;ಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯಾದ ಬೆನ್ನಲ್ಲಿಯೇ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಎರಡು ದಿನಗಳಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಮನವೊಲಿಕೆ ಮಾಡಿದ್ದು, ಇದೀಗ ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆದಿದ್ದಾರೆ.&lt;/p&gt;&lt;p&gt;ಈ ಬಗ್ಗೆ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾರಣಾಂತರಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆದರೆ, ಇದೀಗ ರಾಜೀನಾಮೆ ವಾಪಸ್ ಪಡೆಯುತ್ತಿದ್ದೇನೆ. ಈ ಕುರಿತು ವಿಧಾನ ಸಭೆ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಇದೀಗ ರಾಜೀನಾಮೆ ವಾಪಸ್ ಪಡೆಯುತ್ತಿರುವ ಮಾಹಿತಿಯನ್ನು ನಿಮಗೆ ತಿಳಿಸುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದನ್ನು ಯಶವಂತರಾಯಗೌಡ ಪಾಟೀಲ್ ತಿಳಿಸಿದರು.&lt;/p&gt;&lt;p&gt;ಇಂಡಿಯಲ್ಲಿ ಹಿತೈಷಿಗಳು, ಕಾರ್ಯಕರ್ತ ಜೊತೆಗೆ ಸಭೆ ನಡೆಸಿದ್ದ ಶಾಸಕ ಯಶವಂತರಾಯಗೌಡ, ಇಂಡಿ ಪಟ್ಟಣಕ್ಕೆ ಭೇಟಿ ನೀಡಿದಾಗ ಶಾಸಕರನ್ನ ಭೇಟಿ ಮಾಡಿದ ಅನೇಕ ಮುಖಂಡರು, ಹಿತೈಷಿಗಳು ಕೂಡ ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆಯನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ಸಚಿವರ ಪ್ರಮಾಣವಚನಕ್ಕೂ ಮುನ್ನವೇ ರಾಜೀನಾಮೆ&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 2ನೇ ಬಾರಿ ಸಂಪುಟ ವಿಸ್ತರಣೆ ಪಟ್ಟಿ ಬರುತ್ತಿದ್ದಂತೆ, ಅದರಲ್ಲಿ ತಮ್ಮ ಹೆಸರಿಲ್ಲವೆಂದು ಸುಮಾರು ಐದಾರು ಶಾಸಕರು ರಾಜೀನಾಮೆ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲಿ ಯಶವಂತರಾಯಗೌಡ ಪಾಟೀಲ್ ಅವರು ಹೊಸ 19 ಸಚಿವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನವೇ ವಿಧಾನಸಭಾ ಉಪ ಸಭಾಪತಿಯಾಗಿದ್ದ ರುದ್ರಪ್ಪ ಲಮಾಣಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದರು. ಎಲ್ಲರಿಗಿಂತಲೂ ಮುಂಚಿತವಾಗಿ ರಾಜೀನಾಮೆ ನಿಡುವ ಮೂಲಕ ಸ್ವಪಕ್ಷದ ನಾಯಕರ ಮೇಲೆ ಆಕ್ರೋಶ ಹೊರಹಾಕಿದ್ದರು.&lt;/p&gt;&lt;h2&gt;&lt;strong&gt;ನಾಳೆ ರಾಜೀನಾಮೆ ಎಂದವರು ತಣ್ಣಗಾದರು:&lt;/strong&gt;&lt;/h2&gt;&lt;p&gt;ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್&zwnj;ನಿಂದ ಪಟ್ಟಿ ಬರುತ್ತಿದ್ದಂತೆ ಬೇಳೂರು ಗೋಪಾಲಕೃಷ್ಣ, ಎನ್.ವೈ. ಗೋಪಾಲಕೃಷ್ಣ, ಭದ್ರಾವತಿ ಶಾಸಕ ಸಂಗಮೇಶ್ ಅವರು ನಾಳೆ ಬೆಳಗ್ಗೆ ರಾಜೀನಾಮೆ ಕೊಡುತ್ತೇವೆ ಎಂದು ಹೈಕಮಾಂಡ್&zwnj;ಗ ಬೆದರಿಕೆ ಹಾಕಿದ್ದರು. ಇವರ ಜೊತೆಗೆ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಮೈಸೂರಿನ ತನ್ವೀರ್ ಸೇಠ್, ಬೆಂಗಳೂರಿನ ಅಪ್ಪ-ಮಗ ಶಾಸಕರಾದ ಎಂ.ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದರು. ಆದರೆ, ಹೈಕಮಾಂಡ್&zwnj;ನಿಂದ ರಾಜೀನಾಮೆ ಕೊಟ್ಟರೆ ಅಂಗೀಕಾರ ಮಾಡಿ ಎಂದು ಸೂಚನೆ ನೀಡಿತ್ತು. ಇದರ ಬೆನ್ನಲ್ಲಿಯೇ ಹೊಸ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಬೆನ್ನಲ್ಲಿಯೇ ಯಾರಾದರೂ ಶಾಸಕರು ರಾಜೀನಾಮೆ ನೀಡಿದರೆ ತತಕ್ಷಣ ಅಂಗೀಕಾರ ಮಾಡುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದರು. ಇದಾದ ನಂತರ ಕೆಲವರನ್ನು ಮನವೊಲಿಕೆ ಮಾಡಲಾಗಿದ್ದು, ಇನ್ನು ಕೆಲವರು ತಮ್ಮ ಕ್ಷೇತ್ರದ ಸಹ-ಮುಖಂಡರೊಂದಿಗೆ ಸಭೆ ಮಾಡಿ ರಾಜೀನಾಮೆ ನೀಡುವ ನಿರ್ಧಾರ ಹಿಂಪಡೆದಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್ ಹೈಕಮಾಂಡ್ ಸೂಚನೆ ಬರುವುದಕ್ಕೂ ಮುನ್ನವೇ ಆಕ್ರೋಶದಲ್ಲಿ ರಾಜೀನಾಮೆ ನೀಡಿದ್ದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಇಂದು ತಾವು ಸಲ್ಲಿಸಿದ್ದ ರಾಜೀನಾಮೆಯನ್ನು ವಾಪಸ್ ಪಡೆಯುತ್ತಿರುವುದಾಗಿ ವಿಧಾನಸಭಾ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/indi-mla-yashavantarayagouda-patil-withdraws-resignation-post-pacification-by-congress-leaders-khs/articleshow-rgmk1gn"/>
        </item>
        <item>
            <title><![CDATA[CM ಡಿಕೆ ಶಿವಕುಮಾರ್‌ಗೆ MB ಪಾಟೀಲರನ್ನು ಸಚಿವರಾಗಿಸೋ ಮನಸ್ಸಿರಲಿಲ್ಲ: ಶಾಸಕ ಯತ್ನಾಳ]]></title>
            <link>https://kannada.asianetnews.com/karnataka-districts/cm-dk-shivakumar-did-not-want-to-make-mb-patil-a-ministe-said-mla-basanagouda-patil-yatnal/articleshow-riay5gd</link>
            <guid isPermaLink="true">https://kannada.asianetnews.com/karnataka-districts/cm-dk-shivakumar-did-not-want-to-make-mb-patil-a-ministe-said-mla-basanagouda-patil-yatnal/articleshow-riay5gd</guid>
            <pubDate>Wed, 05 Aug 2026 07:33:10 +0530</pubDate>
            <description><![CDATA[ಡಿ.ಕೆ. ಶಿವಕುಮಾರ್&zwnj;ಗೆ ಎಂ.ಬಿ.ಪಾಟೀಲರನ್ನು ಸಚಿವರನ್ನಾಗಿಸುವ ಮನಸ್ಸಿರಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರ ನಡುವಿನ ಜಗಳ ತಾತ್ಕಾಲಿಕ ಎಂದಿರುವ ಅವರು, ಪೊಲೀಸ್ ಕಾನ್ಸ್&zwnj;ಟೇಬಲ್ ಪರೀಕ್ಷೆಯ ಗೊಂದಲಗಳ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kz7teawm55hymvyn8c48kb2w,imgname-br-patil-mb-patil-1785895267220.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ&lt;/strong&gt;: ಡಿ.ಕೆ. ಶಿವಕುಮಾರಗೆ ಎಂ.ಬಿ.ಪಾಟೀಲರನ್ನು ಸಚಿವರನ್ನಾಗಿ ಮಾಡುವ ಮನಸ್ಸಿರಲಿಲ್ಲ. ಎಂ.ಬಿ.ಪಾಟೀಲ ಪ್ರಭಾವಿ ಆಗಬಾರದೆಂದು ಈ ರೀತಿ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.&lt;/p&gt;&lt;p&gt;ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಂದಲೇ ನಮಗೆ ಸಚಿವ ಸ್ಥಾನ ತಪ್ಪಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಆರೋಪಿಸಿದ ವಿಚಾರವಾಗಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನೆಲ್ಲ ಸಿಎಂ ಡಿ.ಕೆ.ಶಿವಕುಮಾರ್&zwnj; ಅವರೇ ಹಚ್ಚಿರುತ್ತಾರೆ. ವಾಸ್ತವದಲ್ಲಿ ಯಾರಿಗೆ ಬೇಡ ಎಂದಿದ್ದಾರೆ?. ನಿನ್ನನ್ನು ನಾ ಸೋಲಿಸುವೆ, ನೋಡಿಕೊಳ್ಳುತ್ತೇನೆ ಎಂಬುದು ಶಾಸಕರ ಕೈಯಲ್ಲಿ ಇಲ್ಲ. ಸೋಲಿಸುವುದು, ಗೆಲ್ಲಿಸುವುದು ಜನರ ಕೈಯಲ್ಲಿದೆ. ಸೋಲಿಸುತ್ತೇನೆಂದು ಸವಾಲು ಹಾಕುವುದು ಜನರ ಕೈಯಲ್ಲಿದೆ ಎಂದರು.&lt;/p&gt;&lt;h2&gt;&lt;strong&gt;ಎಂ.ಬಿ. ಪಾಟೀಲ, ಗೌಡರು, ಪಾಟೀಲರು ನಗುನಗುತ್ತಾ ಜೊತೆಗಿರುತ್ತಾರೆ&lt;/strong&gt;&lt;/h2&gt;&lt;p&gt;ನಮ್ಮ ಮಧ್ಯೆ ವಾರ್&zwnj; ಡಿಕ್ಲೇರ್&zwnj; ಆಗಿದೆ ಎಂದು ಎಂ.ಬಿ.ಪಾಟೀಲ ವಿರುದ್ಧ ಸಿಡಿದಿರುವ ಕೈ ಶಾಸಕ ಯಶವಂತರಾಯಗೌಡ ಪಾಟೀಲರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ವಾರ್&zwnj; ಮಾಡೋಕೆ ಇದೇನು ಇಂಡಿಯಾ ಪಾಕಿಸ್ತಾನವಾ ಎಂದು ಪ್ರಶ್ನಿಸಿದರು. ಶಾಸಕರು ಶಾಸಕರ ಮೇಲೆ ವಾರ್&zwnj; ಮಾಡಲು ಆಗಲ್ಲ, ಎಂ.ಬಿ.ಪಾಟೀಲರು ಬಬಲೇಶ್ವರದಲ್ಲಿ, ಯಶವಂತರಾಯಗೌಡ ಇಂಡಿಯಲ್ಲಿ. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ ಹಾಗೂ ನಮ್ಮ ಪಕ್ಷದವರೇ ವಾರ್&zwnj; ಮಾಡಿದ್ದರು. ಆದರೂ ನಾನು ಆಯ್ಕೆಯಾಗಿ ಬಂದೆ. ಏನೇ ವಾರ್&zwnj; ಇದ್ದರೂ ಅದು ಜನರ ಕೈಯಲ್ಲಿರುತ್ತದೆ. ಸದ್ಯ ಇವೆಲ್ಲ ಕೇವಲ ಬೆದರಿಕೆ. ಕೆಲ ದಿನಗಳ ನಂತರ ಅದೇ ಎಂ.ಬಿ. ಪಾಟೀಲ, ಗೌಡರು, ಪಾಟೀಲರು ನಗುನಗುತ್ತಾ ಜೊತೆಗಿರುತ್ತಾರೆ ಎಂದು ಹೇಳಿದರು.&lt;/p&gt;&lt;p&gt;ಪೊಲೀಸ್ ಕಾನ್ಸಟೇಬಲ್&zwnj; ಪರೀಕ್ಷೆಯಲ್ಲಿ ನಡೆದ ಗೊಂದಲ ವಿಚಾರವಾಗಿ ಮಾತನಾಡಿ, ಕಾನ್ಸಟೇಬಲ್&zwnj; ಪರೀಕ್ಷೆಗಳನ್ನು ಗೊಂದಲ ಮಾಡಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆಯ ಕುರಿತು ಇದೇ ಪ್ರಿಯಾಂಕ ಖರ್ಗೆ ಮಾತನಾಡುತ್ತಿದ್ದರು. ಈಗ ಪಿಸಿ ಪರೀಕ್ಷೆ ಕುರಿತು ತನಿಖೆ ಮಾಡಿಸಲಿ ಎಂದು ಯತ್ನಾಳ ಸವಾಲು ಹಾಕಿದರು. ಪಿಎಸ್&zwnj;ಐ ಪರೀಕ್ಷೆಯ ಕುರಿತು ವಿಧಾನಸಭೆಯಲ್ಲಿ ಮಾತನಾಡಿದರು, ಈಗ ಈ ಕುರಿತು ಮಾತನಾಡಲಿ, ಪೊಲೀಸ್ ನೇಮಕಾತಿ ಪಾರದರ್ಶಕವಾಗಿ ನಡೆದು ಅರ್ಹರು ನೇಮಕವಾಗಬೇಕು ಎಂದು ಹೇಳಿದರು.ಪಿಸಿ ಪರೀಕ್ಷೆ ಗೊಂದಲ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೃಹಮಂತ್ರಿಗಳು ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದ್ದಾರೆ. ನೀಟ್ ಹೋರಾಟದಂತೆ ದೆಹಲಿಯ ಜಂತರ್&zwnj; ಮಂತರ್&zwnj;ನಲ್ಲಿ 25 ದಿನಗಳ ಕಾಲ ಪ್ರತಿಭಟಿಸಿ ಲಾಠಿ ಚಾರ್ಜ್ ಮಾಡುತ್ತೇವೆ. ನಂತರ ರಾಜೀನಾಮೆ ಎಂದು ಗೃಹ ಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕೂಡಿಸಿ ಲಾಠಿ ಚಾರ್ಜ್ ಮಾಡಿಸಿ, ಗೋಲಿಬಾರ್&zwnj; ಮಾಡಿಸಿ ಅವರ ಪ್ರಾಣ ತೆಗೆದುಕೊಳ್ಳುವ ಭಾವನೆ ಇರಬಾರದು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇರಬೇಕೆಂಬ ಭಾವನೆ ಇರಬೇಕು. ಅದನ್ನು ಬಿಟ್ಟು ಪ್ರಚೋದನೆ ಮಾಡುತ್ತಿದ್ದಾರೆ. ಇವರ ಮೇಲೆಯೇ ಮೊದಲ ಕೇಸ್ ದಾಖಲಾಗುತ್ತದೆ ಎಂದು ಯತ್ನಾಳ ಹೇಳಿದರು.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/cm-dk-shivakumar-did-not-want-to-make-mb-patil-a-ministe-said-mla-basanagouda-patil-yatnal/articleshow-riay5gd"/>
        </item>
        <item>
            <title><![CDATA[ವಿಜಯಪುರದ ದೇವರಹಿಪ್ಪರಗಿಯಲ್ಲಿ ₹453 ಕೋಟಿಯ ಎಥನಾಲ್ ಪ್ಲ್ಯಾಂಟ್‌ ನಿರ್ಮಾಣ ಯೋಜನೆಗೆ ಸರ್ಕಾರ ಒಪ್ಪಿಗೆ!]]></title>
            <link>https://kannada.asianetnews.com/karnataka-districts/karnataka-approves-453-crore-ethanol-project-vijayapura-mb-patil-san/articleshow-sxv2h1w</link>
            <guid isPermaLink="true">https://kannada.asianetnews.com/karnataka-districts/karnataka-approves-453-crore-ethanol-project-vijayapura-mb-patil-san/articleshow-sxv2h1w</guid>
            <pubDate>Thu, 13 Aug 2026 16:41:29 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ₹6,253 ಕೋಟಿ ಮೌಲ್ಯದ 83 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzxd007exnnznvptcwytrzkw,imgname-ethanol-project-vijayapura-1786619363566.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.13): &lt;/strong&gt;ರಾಜ್ಯದಲ್ಲಿ ಕೈಗಾರಿಕಾ ವಲಯಕ್ಕೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ವಿಜಯಪುರ ಜಿಲ್ಲೆಯಲ್ಲಿ ಬರೋಬ್ಬರಿ 453 ಕೋಟಿ ರೂಪಾಯಿ ವೆಚ್ಚದ ಸಕ್ಕರೆ ಹಾಗೂ ಎಥನಾಲ್ ಉತ್ಪಾದನಾ ಯೋಜನೆಗೆ ಅನುಮೋದನೆ ನೀಡಿದೆ. ಇದರೊಂದಿಗೆ ಒಟ್ಟು 6,253 ಕೋಟಿ ರೂಪಾಯಿ ಮೊತ್ತದ 83 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಬುಧವಾರ ಹಸಿರು ನಿಶಾನೆ ತೋರಿದೆ.&lt;/p&gt;&lt;p&gt;ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ 'ಶ್ರೀಶೈಲ ಮಲ್ಲಿಕಾರ್ಜುನ ಡಿಸ್ಟಿಲರಿ' (Shrishail Mallikarjun Distillery) ಸಂಸ್ಥೆಯು ಈ ಸಕ್ಕರೆ ಕಾರ್ಖಾನೆ ಹಾಗೂ ಎಥನಾಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮತಿ ಸಮಿತಿ (SLSWCC) ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;&lsquo;ಬಿಯಾಂಡ್ ಬೆಂಗಳೂರು&rsquo; ಚಾಲನೆಗೆ ಒತ್ತು&lt;/strong&gt;&lt;/h2&gt;&lt;p&gt;ಸಮಿತಿಯು ಅನುಮೋದನೆ ನೀಡಿರುವ ಒಟ್ಟು 83 ಯೋಜನೆಗಳ ಪೈಕಿ, 69 ಕೈಗಾರಿಕೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹೊರಗೆ ಸ್ಥಾಪನೆಯಾಗಲಿವೆ. ಇದು ಸಮಗ್ರ ಕರ್ನಾಟಕದಾದ್ಯಂತ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ 'ಬಿಯಾಂಡ್ ಬೆಂಗಳೂರು' (Beyond Bengaluru) ಯೋಜನೆಗೆ ಭಾರಿ ಬೆಂಬಲ ನೀಡಲಿದೆ.&lt;/p&gt;&lt;p&gt;ಈ ಯೋಜನೆಯಡಿ ₹50 ಕೋಟಿಗಿಂತ ಹೆಚ್ಚು ಬಂಡವಾಳ ಹೂಡಿಕೆಯ ದೊಡ್ಡ ಯೋಜನೆಗಳು ಒಟ್ಟು ₹4,703 ಕೋಟಿ ಪಾಲು ಹೊಂದಿವೆ. ₹15 ಕೋಟಿಯಿಂದ ₹50 ಕೋಟಿವರೆಗಿನ ಹೂಡಿಕೆಯ 57 ಯೋಜನೆಗಳು ಸುಮಾರು ₹1,292 ಕೋಟಿ ಮೊತ್ತವನ್ನು ಒಳಗೊಂಡಿವೆ. ಅನುಮೋದನೆ ಪಡೆದ ಈ ಯೋಜನೆಗಳು ಏರೋಸ್ಪೇಸ್ ಮತ್ತು ರಕ್ಷಣೆ, ಆಹಾರ ಸಂಸ್ಕರಣೆ, ಮಾಹಿತಿ ತಂತ್ರಜ್ಞಾನ (IT) ಸೇವೆಗಳು, ಸಂಯೋಜಿತ ಕೈಗಾರಿಕಾ ಪಾರ್ಕ್&zwnj;ಗಳು (Integrated Industrial Parks), ಸಕ್ಕರೆ ಮತ್ತು ಎಥನಾಲ್ ಹಾಗೂ ಪುನರುತ್ಪಾದಕ ಇಂಧನ (Renewable Energy) ಸೇರಿದಂತೆ ವಿವಿಧ ಪ್ರಮುಖ ವಲಯಗಳಲ್ಲಿ ವ್ಯಾಪಿಸಿವೆ.&lt;/p&gt;&lt;h2&gt;&lt;strong&gt;ಇತರ ಪ್ರಮುಖ ಬೃಹತ್ ಯೋಜನೆಗಳು&lt;/strong&gt;&lt;/h2&gt;&lt;p&gt;ಹೈದರಾಬಾದ್ ಮೂಲದ 'ಜಸ್ವಿನ್ ವೆಂಚರ್ಸ್' (Jaswin Ventures) ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಂಯೋಜಿತ ಕೈಗಾರಿಕಾ ಪಾರ್ಕ್ ಮತ್ತು ಮಿಶ್ರ-ಬಳಕೆಯ ಟೌನ್&zwnj;ಶಿಪ್ ಅಭಿವೃದ್ಧಿಪಡಿಸಲು ₹475 ಕೋಟಿ ಹೂಡಿಕೆ ಮಾಡಲಿದೆ. ಅದೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗೋದಾಮು (Warehousing), ಲಾಜಿಸ್ಟಿಕ್ಸ್, ವಸತಿ ಮತ್ತು ವಾಣಿಜ್ಯ ಸೌಲಭ್ಯಗಳನ್ನು ಒಳಗೊಂಡ ಸಂಯೋಜಿತ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲು 'ಜಂಪನ ಕನ್ಸ್ಟ್ರಕ್ಷನ್' (Jampana Construction) ಸಂಸ್ಥೆಯು ₹465 ಕೋಟಿ ಹೂಡಿಕೆ ಮಾಡಲಿದೆ.&lt;/p&gt;&lt;p&gt;ಈ ಹೊಸ ಹೂಡಿಕೆಗಳು ಮತ್ತು ಯೋಜನೆಗಳ ಅನುಮೋದನೆಯು ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದಲ್ಲದೆ, ಭಾರಿ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಜೊತೆಗೆ ಬೆಂಗಳೂರಿನ ಆಚೆಗೂ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುವ ಸರ್ಕಾರದ ಪ್ರಯತ್ನಕ್ಕೆ ದೊಡ್ಡ ಶಕ್ತಿ ತುಂಬಲಿದೆ.&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-approves-453-crore-ethanol-project-vijayapura-mb-patil-san/articleshow-sxv2h1w"/>
        </item>
        <item>
            <title><![CDATA[ಕಾನ್‌ಸ್ಟೇಬಲ್‌ ನೇಮಕಾತಿಗೆ ಮರುಪರೀಕ್ಷೆ..? ನಿನ್ನೆ ಪರೀಕ್ಷೆ ಬರೆದವರಿಗೆ ಶುರುವಾಯ್ತು ಗೊಂದಲ]]></title>
            <link>https://kannada.asianetnews.com/vijayapura/will-the-police-constable-re-exam-be-held-again-in-karnataka-protest-in-vijayapura-gkn/articleshow-v6wzdhg</link>
            <guid isPermaLink="true">https://kannada.asianetnews.com/vijayapura/will-the-police-constable-re-exam-be-held-again-in-karnataka-protest-in-vijayapura-gkn/articleshow-v6wzdhg</guid>
            <pubDate>Mon, 03 Aug 2026 12:53:59 +0530</pubDate>
            <description><![CDATA[ಸಿವಿಲ್ ಪೊಲೀಸ್ ಕಾನ್&zwnj;ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಒಎಂಆರ್ ಶೀಟ್ ಗೊಂದಲದ ವದಂತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಳ್ಳಿಹಾಕಿದ್ದು, ಅಭ್ಯರ್ಥಿಗಳಲ್ಲಿ ಮರುಪರೀಕ್ಷೆಯ ಬಗ್ಗೆ ಆತಂಕ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz382kddrfcjvphdfr00yhcd,imgname-vijayapura-abvp-protest-1785741790637.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ/ಬೆಂಗಳೂರು: &lt;/strong&gt;ನಿನ್ನೆಯಷ್ಟೇ ನಡೆದ ಸಿವಿಲ್ ಪೊಲೀಸ್ ಕಾನ್&zwnj;ಸ್ಟೇಬಲ್ (CPC) ನೇಮಕಾತಿ ಪರೀಕ್ಷೆಯ ಸುತ್ತ ಗೊಂದಲದ ಮೋಡಗಳು ಕವಿದಿವೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ವ್ಯಕ್ತವಾಗಿದ್ದರೆ, ಅತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದೆ. ಈ ನಡುವೆ ಅಭ್ಯರ್ಥಿಗಳಲ್ಲಿ ಮರುಪರೀಕ್ಷೆ ನಡೆಯುತ್ತಾ? ಎಂಬ ಆತಂಕ ಮನೆಮಾಡಿದೆ.&lt;/p&gt;&lt;h2&gt;&lt;strong&gt;ವಿಜಯಪುರದಲ್ಲಿ ಎಬಿವಿಪಿ ಕಿಚ್ಚು&lt;/strong&gt;&lt;/h2&gt;&lt;p&gt;ಪರೀಕ್ಷೆ ವೇಳೆ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಎಬಿವಿಪಿ (ABVP) ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ಚೌಕ್&zwnj;ನಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಕೂಡಲೇ ಮರುಪರೀಕ್ಷೆ ನಡೆಸಬೇಕು ಎಂದು ಪಟ್ಟು ಹಿಡಿದರು.&lt;/p&gt;&lt;p&gt;ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರೀ ವಾಗ್ವಾದ ಹಾಗೂ ಜಟಾಪಟಿ ನಡೆಯಿತು. ಸರ್ಕಾರದ ವಿರುದ್ಧ ಪೋಸ್ಟರ್ ಪ್ರದರ್ಶಿಸಲು ಮುಂದಾದ ಯುವಕರ ಕೈಯಲ್ಲಿದ್ದ ಪೋಸ್ಟರ್&zwnj;ಗಳನ್ನು ಪೊಲೀಸರು ಕಸಿದುಕೊಂಡರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು 10ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ವ್ಯಾನ್&zwnj;ಗೆ ಹತ್ತಿಸಲು ಹರಸಾಹಸ ಪಡಬೇಕಾಯಿತು.&lt;/p&gt;&lt;h2&gt;&lt;strong&gt;ಪ್ರಶ್ನೆ ಪತ್ರಿಕೆ ಲೀಕ್ ವದಂತಿಗೆ ಕೆಇಎ ಬ್ರೇಕ್&lt;/strong&gt;&lt;/h2&gt;&lt;p&gt;ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಒಎಂಆರ್ (OMR) ಶೀಟ್ ಗೊಂದಲಕ್ಕೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಯಲ್ಲಿ ಒಎಂಆರ್ ಶೀಟ್ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಇರಬೇಕು ಎಂಬ ನಿಯಮವಿಲ್ಲ. ಸೀರಿಯಲ್ ನಂಬರ್ ಬೇರೆ ಬೇರೆಯಾಗಿರಬಹುದು. ಆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆಯನ್ನು ಒಎಂಆರ್&zwnj;ನಲ್ಲಿ ಪ್ರತ್ಯೇಕವಾಗಿ ನಮೂದಿಸಲು ಅವಕಾಶವಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅಭ್ಯರ್ಥಿಗಳಲ್ಲಿ ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಮರುಪರೀಕ್ಷೆ ನಡೆಯುತ್ತಾ?&lt;/strong&gt;&lt;/h2&gt;&lt;p&gt;ಸದ್ಯದ ಪರಿಸ್ಥಿತಿಯಲ್ಲಿ ಕೆಇಎ ಪರೀಕ್ಷೆಯು ಪಾರದರ್ಶಕವಾಗಿ ನಡೆದಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ವಿಜಯಪುರ ಸೇರಿದಂತೆ ಕೆಲವು ಕೇಂದ್ರಗಳಲ್ಲಿ ನಡೆದಿದೆ ಎನ್ನಲಾದ ತಾಂತ್ರಿಕ ಗೊಂದಲ ಮತ್ತು ಗಲಾಟೆಗಳು ಅಭ್ಯರ್ಥಿಗಳಲ್ಲಿ ಸಂಶಯ ಹುಟ್ಟಿಸಿವೆ. ಪ್ರತಿಭಟನಾಕಾರರು ಮರುಪರೀಕ್ಷೆಗೆ ಪಟ್ಟು ಹಿಡಿದಿದ್ದರೂ, ಸರ್ಕಾರದ ಮಟ್ಟದಲ್ಲಿ ಅಥವಾ ಕೆಇಎ ವತಿಯಿಂದ ಮರುಪರೀಕ್ಷೆಯ ಬಗ್ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ಪರೀಕ್ಷಾ ಪ್ರಾಧಿಕಾರದ ಸ್ಪಷ್ಟನೆಯ ನಂತರವೂ ಅಭ್ಯರ್ಥಿಗಳ ಆಕ್ರೋಶ ತಣ್ಣಗಾಗದಿದ್ದರೆ ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.&lt;/p&gt;]]></content:encoded>
            <category>vijayapura</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/vijayapura/will-the-police-constable-re-exam-be-held-again-in-karnataka-protest-in-vijayapura-gkn/articleshow-v6wzdhg"/>
        </item>
        <item>
            <title><![CDATA[ಅಣ್ಣನ ನೋಡಲು ಓಡೋಡಿ ಬಂದ ತಂಗಿ.. ಸ್ಕೂಲ್‌ ಬಸ್ಸಿಗೆ ಸಿಲುಕಿ 3 ವರ್ಷದ ಕಂದಮ್ಮ ಸಾವು]]></title>
            <link>https://kannada.asianetnews.com/vijayapura/3-year-old-girl-dies-after-being-run-over-by-school-bus-in-vijayapura-padam-nagar-gkn/articleshow-vg0oyza</link>
            <guid isPermaLink="true">https://kannada.asianetnews.com/vijayapura/3-year-old-girl-dies-after-being-run-over-by-school-bus-in-vijayapura-padam-nagar-gkn/articleshow-vg0oyza</guid>
            <pubDate>Mon, 10 Aug 2026 18:05:00 +0530</pubDate>
            <description><![CDATA[&lt;p&gt;ನಗರದ ಕೈಗಾರಿಕಾ ಪ್ರದೇಶದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಅಣ್ಣನನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಮನೆಯಿಂದ ಹೊರಬಂದ 3 ವರ್ಷದ ಪುಟಾಣಿ ಬಾಲಕಿಯೊಬ್ಬಳು ಶಾಲಾ ಬಸ್&zwnj;ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzntpj8m2hbprqy2zaqqmca1,imgname-vijayapura-chlid-died-1786365298964.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ನಗರದ ಕೈಗಾರಿಕಾ ಪ್ರದೇಶದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಅಣ್ಣನನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಮನೆಯಿಂದ ಹೊರಬಂದ 3 ವರ್ಷದ ಪುಟಾಣಿ ಬಾಲಕಿಯೊಬ್ಬಳು ಶಾಲಾ ಬಸ್&zwnj;ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ವಿಜಯಪುರ ನಗರದ ಕೈಗಾರಿಕಾ ಪ್ರದೇಶದ ಪದಂ ನಗರದಲ್ಲಿ ದುರ್ಘಟನೆ ನಡೆದಿದೆ. ಮೃತ ಬಾಲಕಿಯನ್ನು 3 ವರ್ಷದ ಶೀರ್ಷಾ ಸುಹಾಸ ವಾಡಿ ಎಂದು ಗುರುತಿಸಲಾಗಿದೆ. ಬಾಲಕಿಯ ಅಣ್ಣ ಸಾಯಿ ಸುಹಾಸ ವಾಡಿ ಖಾಸಗಿ ಶಾಲಾ ಬಸ್ಸಿನಲ್ಲಿ ಶಾಲೆಯಿಂದ ಮನೆಗೆ ಮರಳಿದ್ದನು.&lt;/p&gt;&lt;p&gt;ಬಸ್ ಪದಂ ನಗರಕ್ಕೆ ಬಂದಾಗ ಅಣ್ಣ ಬಸ್ಸಿನಿಂದ ಕೆಳಗಡೆ ಇಳಿದಿದ್ದಾನೆ. ಇದನ್ನು ಕಂಡ ಪುಟ್ಟ ತಂಗಿ ಶೀರ್ಷಾ, ಅಣ್ಣನನ್ನು ನೋಡಲು ಸಂಭ್ರಮದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಈ ವೇಳೆ ದುರಾದೃಷ್ಟವಶಾತ್ ಬಾಲಕಿ ಬಸ್ಸಿನ ಮುಂಬದಿ ಚಕ್ರದ ಕೆಳಗೆ ಸಿಲುಕಿದ್ದಾಳೆ. ಬಸ್ ಚಲಿಸಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.&lt;/p&gt;&lt;p&gt;ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯತನದಿಂದ ಬಸ್ ಚಾಲನೆ ಮಾಡಿದ ಆರೋಪದ ಮೇಲೆ ಖಾಸಗಿ ಶಾಲಾ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುದ್ದಿನ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪದಂ ನಗರದಲ್ಲಿ ಶೋಕ ಮಡುಗಟ್ಟಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>vijayapura</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/vijayapura/3-year-old-girl-dies-after-being-run-over-by-school-bus-in-vijayapura-padam-nagar-gkn/articleshow-vg0oyza"/>
        </item>
        <item>
            <title><![CDATA[Yathindra Siddaramaiah:  ಕೋರ್ಟ್ ಷರತ್ತು ಮೀರಿ ನಾಗೇಂದ್ರ ದಿಲ್ಲಿ ಭೇಟಿ: 'ತಪ್ಪು' ಯತೀಂದ್ರ ಹೇಳಿಕೆ ರಾಜಕೀಯ ಸಂಚಲನ!]]></title>
            <link>https://kannada.asianetnews.com/politics/minister-yathindra-siddaramaiah-reacts-on-b-nagendra-s-visit-to-delhi-rav/articleshow-vipydi3</link>
            <guid isPermaLink="true">https://kannada.asianetnews.com/politics/minister-yathindra-siddaramaiah-reacts-on-b-nagendra-s-visit-to-delhi-rav/articleshow-vipydi3</guid>
            <pubDate>Mon, 10 Aug 2026 05:39:44 +0530</pubDate>
            <description><![CDATA[ಸಚಿವ ನಾಗೇಂದ್ರ ಅವರು ಅನುಮತಿ ಇಲ್ಲದೆ ದೆಹಲಿಗೆ ಹೋಗಿರುವುದು ತಪ್ಪು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ತಂದೆ ಸಿದ್ದರಾಮಯ್ಯನವರಿಗೆ ಸರ್ಕಾರದ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzmfsxh0h82xnj17hgw1e0wz,imgname-----------------------2026-08-10t052909.143-1786320320032.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಆ.10): &lt;/strong&gt;ಸಚಿವ ನಾಗೇಂದ್ರ ಅವರು ಅನುಮತಿ&zwnj; ಇಲ್ಲದೆ ದೆಹಲಿಗೆ ಹೋಗಿದ್ದರೆ ಅದು ತಪ್ಪು. ನನಗೆ ಅದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಇದರಿಂದ ಅವರ ಜಾಮೀನು ರದ್ದಾಗುತ್ತೆ ಅನ್ನೋದು ಗೊತ್ತಿಲ್ಲ. ಅದನ್ನು ಅವರ ವಕೀಲರು ನೋಡ್ತಾರೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;ಡಿಕೆ ಶಿವಕುಮಾರ್&zwnj; ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ಹೊಂದಿದ್ದಾರೆ ಎಂಬ ಆರೋಪ&zwnj; ವಿಚಾರವಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, &lsquo;ನಮ್ಮ ತಂದೆಗೆ ಸರ್ಕಾರದ &zwnj;ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಹೊಸ ಸಚಿವರ ಪ್ರಮಾಣ ವಚನ ದಿನ ಅವರ ಹುಟ್ಟುಹಬ್ಬದ ಕಾರಣ ಹೋಗಿಲ್ಲ. ಸಿದ್ದರಾಮಯ್ಯ ಅವರು ಖಾತೆ ಹಂಚಿಕೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದಿದ್ದಾರೆ&rsquo; ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಗಾಯತ್ರಿ ಶಾಂತೇಗೌಡ ಅವರ ವಿಷಯದಲ್ಲಿನ ಗೊಂದಲದ್ದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೌದು, ಈ ವಿಚಾರದಲ್ಲಿ ನಮಗೆ ಗೊಂದಲವಾಗಿದೆ. ನಮ್ಮ ಸರ್ಕಾರದ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಸಚಿವ ನಾಗೇಂದ್ರ ಕೋರ್ಟ್ ಆದೇಶ ಉಲ್ಲಂಘನೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ,&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/minister-yathindra-siddaramaiah-reacts-on-b-nagendra-s-visit-to-delhi-rav/articleshow-vipydi3"/>
        </item>
        <item>
            <title><![CDATA[Vijayapura: ಬೆಳ್ಳಂಬೆಳಗ್ಗೆ ಭೂತನಾಳ ಕೆರೆಯಲ್ಲಿ ತೇಲಿ ಬಂತು ಹೆಣಗಳ ರಾಶಿ; ಮಕ್ಕಳು ಸೇರಿ 6 ಮೃತದೇಹಗಳು ಪತ್ತೆ]]></title>
            <link>https://kannada.asianetnews.com/karnataka-districts/pile-of-bodies-found-floating-in-bhutanal-lake-6-bodies-including-those-of-children-found-in-vijayapura-sns/articleshow-w0rkolu</link>
            <guid isPermaLink="true">https://kannada.asianetnews.com/karnataka-districts/pile-of-bodies-found-floating-in-bhutanal-lake-6-bodies-including-those-of-children-found-in-vijayapura-sns/articleshow-w0rkolu</guid>
            <pubDate>Wed, 26 Aug 2026 10:59:06 +0530</pubDate>
            <description><![CDATA[&lt;p&gt;ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ತಾಯಿ ಮತ್ತು ಐವರು ಮಕ್ಕಳೂ ಸೇರಿದಂತೆ ಒಟ್ಟು ಆರು ಶವಗಳು ಪತ್ತೆಯಾಗಿವೆ. ಈ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0y6z8qny39shm6f5pw6rtxt,imgname-bhutanal-lake-1787720344309.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ವಿಜಯಪುರ ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ಹೆಣಗಳ ರಾಶಿ ತೇಲಿ ಬಂದಿದ್ದು, ಸ್ಥಳೀಯರಲ್ಲಿ ಆತಂ ಮೂಡಿಸಿದೆ. ಭೂತನಾಳ ಕೆರೆಯಲ್ಲಿ ಒಟ್ಟು 6 ಶವ ಪತ್ತೆಯಾಗಿದ್ದು, ಇದರಲ್ಲಿ ತಾಯಿ ಸೇರಿ ಮಕ್ಕಳು ಶವಗಳು ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಭೂತನಾಳ ಕೆರೆಯಲ್ಲಿ ತೇಲಿದ ಆರು ಶವಗಳ ರಹಸ್ಯ!&lt;/h2&gt;&lt;p&gt;ಇಬ್ಬರು ಗಂಡು ಮಕ್ಕಳು, ಮೂವರು ಬಾಲಕಿಯರು ಸೇರಿದಂತೆ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮೊದಲು ಕೆರೆ ನೋಡಲು ಬಂದ ಪ್ರವಾಸಿಗರು ಇರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸ ಮಾಡಿದ್ದಾರೆ.&lt;/p&gt;&lt;h2&gt;ಆತ್ಮಹತ್ಯೆಗೆ ಶರಣಾಗಿರುವ ನಿರೀಕ್ಷೆ!&lt;/h2&gt;&lt;p&gt;ಸ್ಥಳಕ್ಕೆ ಭೇಟಿ ನೀಡಿರುವ ಆದರ್ಶ ನಗರ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದ್ದು, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಮೃತ ಆರು ಮಂದಿಯಲ್ಲಿ ತಾಯಿ ಸೇರಿದಂತೆ ಐವರು ಮಕ್ಕಳು ಎಂದು ಪೊಲೀಸರು ಗುರುತಿಸಿದ್ದಾರೆ.&lt;/p&gt;&lt;h2&gt;ಆಗಸ್ಟ್ 24ರಂದು ನಾಪತ್ತೆ ಪ್ರಕರಣ ದಾಖಲು&lt;/h2&gt;&lt;p&gt;ಇಬ್ಬರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು, ಒಬ್ಬ ಮಹಿಳೆ (ತಾಯಿ) ಎಂದು ಗುರುತಿಸಿರುವ ಪೊಲೀಸರು, ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆಹಾಕಿದ್ದುರ. ಈ ವೇಳೆ ಮೃತರು ವಿಜಯಪುರ ತೊರವಿ ಮೂಲದವರು ಎಂದು ತಿಳಿದು ಬಂದಿದ್ದು, ತಾಯಿ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಾಗಿದ್ದು, ಆಗಸ್ಟ್ 24ರ ಸೋಮವಾರ ಆರು ಮಂದಿ ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;ಸ್ಥಳೀಯರು ಹೇಳಿದ್ದೇನು?&lt;/h2&gt;&lt;p&gt;ಈ ಬಗ್ಗೆ ಮಾತನಾಡಿರುವ ಸ್ಥಳೀಯರಾದ ಸಂತೋಷ ಎಂಬವರು, ಬೆಳಗ್ಗೆ 8 ಗಂಟೆಯ ಸಮಯದಲ್ಲಿ ವಾಕಿಂಗ್ ಮಾಡಲು ಬಂದಿದ್ದೇವು. ಈ ಸಂದರ್ಭದಲ್ಲಿ ಕೆರೆಯ ನೀರಿನಲ್ಲಿ ಹೆಣಗಳು ತೇಲಿ ಬಂದಿತ್ತು. ಆಗ ನಾವು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಒಂದೇ ಕಡೆ ಒಟ್ಟು ಆರು ಮಂದಿಯ ಮೃತ ದೇಹ ಕಾಣಿಸಿತ್ತು, ಅದರಲ್ಲಿ ಮಕ್ಕಳ ಮೃತದೇಹ ಇರೋದು ನೋಡಿದ್ದೇವು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮೃತದೇಹಗಳನ್ನು ಹೊರ ತೆಗೆಯುವ ಕೆಲಸ ಮಾಡಿದ್ದಾರೆ. ಮೃತರ ಬಗ್ಗೆ ನಮಗೆ ಇಲ್ಲ ಎಂದಿದ್ದಾರೆ.&lt;/p&gt;&lt;h2&gt;ಎಸ್&zwnj;ಪಿ ಹೇಳಿದ್ದೇನು?&lt;/h2&gt;&lt;p&gt;ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸ್ಪಿ ಲಕ್ಷ್ಮಣ ನಿಂಬರಗಿ, ನಮಗೆ ಇಂದು ಬೆಳಗ್ಗೆ 8:45ಕ್ಕೆ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೇವು. ಸೋಮವಾರ ನಾಪತ್ತೆ ಪ್ರಕರಣವನ್ನು ಮೃತ ಮಹಿಳೆಯ ಗಂಡ ದೂರು ನೀಡಿದ್ದರು. ಮನೆಯಲ್ಲಿದ್ದ ಐದು ಮಕ್ಕಳು ಹಾಗೂ ಶ್ರವಣ ದೋಷವಿರುವ ಮಗುವನ್ನು ಹಾಸ್ಟೆಲ್&zwnj;ನಲ್ಲಿ ಇಟ್ಟಿದ್ದರು. ಆ ಮಗುವನ್ನು ತಾಯಿ ಕರೆದುಕೊಂಡು ಬಂದಿದ್ದು ತಿಳಿದು ಬಂದಿದೆ. ತನಿಖೆ ಕೈಗೊಂಡ ಸಂದರ್ಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮನೆಲ್ಲಿಯೇ ಮೊಬೈಲ್ ಬಿಟ್ಟು ಬಂದಿದ್ದರು. ಗಂಡನ ಮನೆಯ್ಲಿ ಶ್ರವಣದ ಹಬ್ಬದ ಅಡುಗೆ ಮಾಡುವ ಸಂದರ್ಭದಲ್ಲಿ ಗಲಾಟೆ ಆಗಿತ್ತು ಎಂಬ ಮಾಹಿತಿ ಇದೆ. ಈಗ ಇದು ಆತ್ಮಹತ್ಯೆಯೇ ಅಥವಾ ಬೇರೆ ಸಂಶಯಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದು, ಎಫ್&zwnj;ಎಸ್&zwnj;ಎಲ್ ವರದಿಗೆ ಕಳುಹಿಸುತ್ತೇವೆ. ಕುಟುಂಬಸ್ಥರು, ಗಂಡನ ಬಳಿ ಈ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ನಡೆಯಲಿದೆ ಎಂದು ಹೇಳಿದರು.&lt;/p&gt;]]></content:encoded>
            <category>vijayapura</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/pile-of-bodies-found-floating-in-bhutanal-lake-6-bodies-including-those-of-children-found-in-vijayapura-sns/articleshow-w0rkolu"/>
        </item>
    </channel>
</rss>
