<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 17 Sep 2026 15:36:52 +0530</lastBuildDate>
        <atom:link href="https://kannada.asianetnews.com/rss/vijayapura" rel="self" type="application/rss+xml"/>
        <item>
            <title><![CDATA[ಮುಳ್ಳು ಚುಚ್ಚಿದ್ರೂ ಹೇಳುತ್ತಿದ್ದ ಮಗಳು, ಈಗ 3 ಅಡಿ ಕಿಟಕಿಯಲ್ಲಿ ಹೆಣವಾಗಿದ್ದಾಳೆ; ನ್ಯಾಯ ಕೇಳಿದ ಅಪ್ಪ!]]></title>
            <link>https://kannada.asianetnews.com/gallery/karnataka-districts/davanagere-team-academy-student-ranjitha-suspicious-death-hostel-sat-04d2s17</link>
            <guid isPermaLink="true">https://kannada.asianetnews.com/gallery/karnataka-districts/davanagere-team-academy-student-ranjitha-suspicious-death-hostel-sat-04d2s17</guid>
            <pubDate>Thu, 03 Sep 2026 13:24:34 +0530</pubDate>
            <description><![CDATA[ದಾವಣಗೆರೆಯ ಟೀಂ ಅಕಾಡೆಮಿ ಹಾಸ್ಟೆಲ್&zwnj;ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಂಜಿತಾ (17) ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಸಾವಿನ ಹಿಂದೆ ಕಾಲೇಜು ಆಡಳಿತ ಮಂಡಳಿಯ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1k3ez63njdbg767n13kjssc,imgname-davanagere-student-ranjitha-death-1788421307586.jpg" type="image/jpeg" height="390" width="690"/>
            <content:encoded><![CDATA[ದಾವಣಗೆರೆಯ ಟೀಂ ಅಕಾಡೆಮಿ ಹಾಸ್ಟೆಲ್&zwnj;ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಂಜಿತಾ (17) ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಸಾವಿನ ಹಿಂದೆ ಕಾಲೇಜು ಆಡಳಿತ ಮಂಡಳಿಯ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.&lt;img&gt;&lt;p&gt;ವಿದ್ಯಾಭ್ಯಾಸ ಮಾಡಿ ಉನ್ನತ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ 17 ವರ್ಷದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಗರದ ಆಂಜನೇಯ ಬಡಾವಣೆ ಸಮೀಪವಿರುವ 'ಟೀಂ ಅಕಾಡೆಮಿ'ಯ ಹಾಸ್ಟೆಲ್&zwnj;ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ (17) ಅವರ ಕೊನೆಯುಸಿರೆಳೆದ ದುರ್ದೈವಿ.&lt;/p&gt;&lt;p&gt;ಮಗಳ ಸಾವಿನ ಸುತ್ತ ತೀವ್ರ ಸಂಶಯ ವ್ಯಕ್ತಪಡಿಸಿರುವ ಪೋಷಕರು, 'ಕಾಲೇಜು ಆಡಳಿತ ಮಂಡಳಿಯೇ ನಮ್ಮ ಮಗಳನ್ನು ಹೊಡೆದು ಸಾಯಿಸಿದೆ' ಎಂದು ಗಂಭೀರ ಆರೋಪ ಮಾಡಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕಣ್ಣೀರ ಕೋಡಿ ಹರಿಸಿದ ತಂದೆ: &quot;ಮೂರು ಅಡಿ ಕಿಟಕಿಯಲ್ಲಿ ಸಾವು ಹೇಗೆ ಸಾಧ್ಯ?&quot;&lt;/strong&gt;&lt;/p&gt;&lt;p&gt;ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಮತ್ತು ರೂಪಾ ದಂಪತಿಯ ಪುತ್ರಿಯಾಗಿರುವ ರಂಜಿತಾ, ಮೊದಲ ವರ್ಷದ ಪಿಯುಸಿಯಿಂದಲೂ ಇದೇ ಟೀಂ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಮಗಳ ಪಾರ್ಥಿವ ಶರೀರವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿದ ತಂದೆ ನಿಂಗಪ್ಪ ಅವರ ಮಾತುಗಳು ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸಿದವು.&lt;/p&gt;&lt;img&gt;&lt;p&gt;'ನನ್ನ ಮಗಳಿಗೆ ಕಾಲಿಗೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ತಕ್ಷಣ ನನಗೆ ತಿಳಿಸುತ್ತಿದ್ದಳು. ಹಾಸ್ಟೆಲ್&zwnj;ಗೆ ಹೋದಾಗಲೆಲ್ಲಾ ಪ್ರೀತಿಯಿಂದ ಓಡಿ ಬಂದು ಅಪ್ಪಿಕೊಳ್ಳುತ್ತಿದ್ದಳು. ಘಟನೆ ನಡೆದ ದಿನ ಬೆಳಗ್ಗೆಯೂ ತಾಯಿಗೆ ಕರೆ ಮಾಡಿ ಮಾತನಾಡಿದ್ದಳು. ಅಂತಹ ಮುಗ್ಧ ಮಗಳು ಕೇವಲ ಮೂರು ಅಡಿ ಎತ್ತರದ ಕಿಟಕಿಗೆ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ? ಆಕೆಯ ಸಾವಿನ ಹಿಂದೆ ಕಾಲೇಜು ಆಡಳಿತ ಮಂಡಳಿಯ ಕೈವಾಡವಿದೆ. ನನ್ನ ಮಗಳಿಗೆ ಏನೋ ಅನ್ಯಾಯವಾಗಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ತಂದೆ ನಿಂಗಪ್ಪ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಪೋಷಕರ ಪ್ರತಿಭಟನೆಯ ಆತಂಕ: ಕಾಲೇಜಿಗೆ ಬೀಗ&lt;/strong&gt;&lt;/p&gt;&lt;p&gt;ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಕಾಲೇಜಿನ ಮುಂದೆ ಜಮಾಯಿಸುವ ಸಾಧ್ಯತೆ ಇತ್ತು. ಯಾವುದೇ ಅಹಿತಕರ ಘಟನೆಗಳು ಅಥವಾ ಪ್ರತಿಭಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಟೀಂ ಅಕಾಡೆಮಿ ಆಡಳಿತ ಮಂಡಳಿಯು ಕಾಲೇಜಿಗೆ ದಿಢೀರ್ ರಜೆ ಘೋಷಿಸಿ, ಗೇಟ್&zwnj;ಗಳಿಗೆ ಬೀಗ ಜಡಿದಿದೆ.&lt;/p&gt;&lt;p&gt;&lt;strong&gt;ಆಡಳಿತ ಮಂಡಳಿ ನೀಡಿದ ಸ್ಪಷ್ಟನೆ ಏನು?&lt;/strong&gt;&lt;/p&gt;&lt;p&gt;ಈ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಟೀಂ ಅಕಾಡೆಮಿ ಕಾಲೇಜಿನ ಅಧ್ಯಕ್ಷ ಕೆ.ಎಂ. ಮಂಜಪ್ಪ ಅವರು, &lsquo;ರಂಜಿತಾ ನಾಲ್ಕು ದಿನಗಳ ಹಿಂದೆಯಷ್ಟೇ ಊರಿಗೆ ಹೋಗಿ ವಾಪಸ್ ಬಂದಿದ್ದಳು. ಬಂದಾಗಿನಿಂದ ಕೊಂಚ ಮೌನವಾಗಿದ್ದಳು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಘಟನೆಯ ದಿನ ಸಂಜೆ 5:30ಕ್ಕೆ ಹಾಸ್ಟೆಲ್ ಕೊಠಡಿಗೆ ತೆರಳಿದ್ದಳು. ರಾತ್ರಿ 8:30ಕ್ಕೆ ಕೊಠಡಿಯಲ್ಲಿದ್ದ ಇತರ ವಿದ್ಯಾರ್ಥಿನಿಯರು ಬಂದು ನೋಡಿದಾಗ ಒಳಗಿನಿಂದ ಬಾಗಿಲು ತೆರೆದಿರಲಿಲ್ಲ&rsquo; ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಈ ಘಟನೆ ನಂತರ, ವಾರ್ಡನ್ ನಮಗೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿಯ ಪೋಷಕರು ದಾವಣಗೆರೆಯಲ್ಲಿರುವ ತಮ್ಮ ಸಂಬಂಧಿಕರನ್ನು ಕಳುಹಿಸಿಕೊಟ್ಟಿದ್ದರು. ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿಕರ ಸಮ್ಮುಖದಲ್ಲೇ ಬಾಗಿಲು ಒಡೆದು ನೋಡಿದಾಗ ದುರಂತ ಬೆಳಕಿಗೆ ಬಂದಿದೆ. ಕೊಠಡಿಯಲ್ಲಿ ಯಾವುದೇ ಡೆತ್&zwnj;ನೋಟ್ ಲಭ್ಯವಾಗಿಲ್ಲ. ಪೋಷಕರು ಅತೀವ ದುಃಖದಲ್ಲಿದ್ದು, ಭಾವೋದ್ವೇಗದಿಂದ ಆರೋಪ ಮಾಡುತ್ತಿದ್ದಾರೆ. ಸಮಗ್ರ ತನಿಖೆ ನಡೆಯಲಿ, ಸತ್ಯಾಂಶ ಹೊರಬರಲಿ&rsquo; ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಪೊಲೀಸ್ ತನಿಖೆ ಚುರುಕು&lt;/strong&gt;&lt;/p&gt;&lt;p&gt;ಸದ್ಯ ಮೃತ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನನ್ವಯ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಾಸ್ಟೆಲ್ ಕೊಠಡಿಯನ್ನು ಪರಿಶೀಲಿಸಿದ್ದು, ಸ್ಥಳದಲ್ಲಿದ್ದ ವಿದ್ಯಾರ್ಥಿನಿಯರು ಮತ್ತು ವಾರ್ಡನ್&zwnj;ಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Suvarna News</dc:creator>
            <atom:link href="https://kannada.asianetnews.com/gallery/karnataka-districts/davanagere-team-academy-student-ranjitha-suspicious-death-hostel-sat-04d2s17"/>
        </item>
        <item>
            <title><![CDATA[ಆಲಮಟ್ಟಿ-ಯಾದಗಿರಿ ನಡುವಿನ 162 km ರೈಲು ಮಾರ್ಗ: ಗರಿಗೆದರಿದ ನಿರೀಕ್ಷೆ; ಟೆಂಡರ್ ಆಹ್ವಾನ]]></title>
            <link>https://kannada.asianetnews.com/karnataka-districts/tender-invited-for-survey-work-of-162-km-new-railway-line-from-alamatti-to-yadagiri-mrq/articleshow-0a0gk3g</link>
            <guid isPermaLink="true">https://kannada.asianetnews.com/karnataka-districts/tender-invited-for-survey-work-of-162-km-new-railway-line-from-alamatti-to-yadagiri-mrq/articleshow-0a0gk3g</guid>
            <pubDate>Sat, 29 Aug 2026 10:22:54 +0530</pubDate>
            <description><![CDATA[ಆಲಮಟ್ಟಿಯಿಂದ ಯಾದಗಿರಿವರೆಗಿನ 162 ಕಿ.ಮೀ. ರೈಲ್ವೆ ಮಾರ್ಗದ ಸರ್ವೇ ಕಾರ್ಯಕ್ಕೆ ಟೆಂಡರ್ ಕರೆದಿರುವುದು ದಶಕಗಳ ಬೇಡಿಕೆಗೆ ಮರುಜೀವ ನೀಡಿದೆ. ಈ ಯೋಜನೆಯು ಕೇವಲ ಪ್ರಯಾಣವನ್ನು ಸುಲಭಗೊಳಿಸದೆ, ವಿಜಯಪುರ-ಯಾದಗಿರಿ ಭಾಗದ ಆರ್ಥಿಕ, ಸಾಮಾಜಿಕ, ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m15xmzk5h5szjyhayts3eket,imgname--almatti-yadagiri-1787979005541.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರವೀಣ್ ಘೋರ್ಪಡೆ&lt;/strong&gt;&lt;/p&gt;&lt;p&gt;&lt;strong&gt;ವಿಜಯಪುರ:&lt;/strong&gt; ಆಲಮಟ್ಟಿಯಿಂದ ಯಾದಗಿರಿವರೆಗೆ ಸುಮಾರು 162 ಕಿ.ಮೀ. ಉದ್ದದ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯಕ್ಕೆ ಟೆಂಡರ್ ಕರೆದಿರುವುದು ವಿಜಯಪುರ-ಯಾದಗಿರಿ ಭಾಗದ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.&lt;/p&gt;&lt;p&gt;ದಶಕಗಳಿಂದ ಈ ಭಾಗದ ಜನರ ಬೇಡಿಕೆಯಾಗಿದ್ದ ರೈಲ್ವೆ ಸಂಪರ್ಕದ ಬೇಡಿಕೆ ಸಾಕಾರಗೊಂಡರೆ, ಕೇವಲ ಪ್ರಯಾಣದ ಸೌಲಭ್ಯ ಹೆಚ್ಚುವುದಷ್ಟೇ ಅಲ್ಲದೆ, ಈ ಭಾಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಹೊಸ ವೇಗ ದೊರೆಯಲಿದೆ. ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಆಲಮಟ್ಟಿ, ನಿಡಗುಂದಿ, ಬ.ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ, ಸುರಪುರ, ಶಹಾಪುರ, ವಡಗೇರಾ, ಯಾದಗಿರಿಗೆ ಸಂಪರ್ಕ ಕಲ್ಪಿಸಲಿದ್ದು, ಇದರ ಮಧ್ಯೆ ಬರುವ ನೂರಾರು ಗ್ರಾಮಗಳ ಜನರಿಗೆ ಅನಕೂಲವಾಗಲಿದೆ, ವಿಜಯಪುರ, ಯಾದಗಿರಿ, ಕಲಬುರಗಿ, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಪ್ರಮುಖ ನಗರಗಳಿಗೆ ಪ್ರಯಾಣಿಸಲು ಸುಲಭವಾಗಲಿದೆ.&lt;/p&gt;&lt;h2&gt;&lt;strong&gt;ರೈತರ-ವ್ಯಾಪಾರ-ವಾಣಿಜ್ಯಕ್ಕೆ ಉತ್ತೇಜನ&lt;/strong&gt;&lt;/h2&gt;&lt;p&gt;ವಿಜಯಪುರ ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು, ವಿವಿಧ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಸಾಗಣೆ ವೆಚ್ಚ ನಿಯಂತ್ರಿಸಲು ಸಹಾಯವಾಗಲಿದೆ. ವ್ಯಾಪಾರ-ವಾಣಿಜ್ಯಕ್ಕೆ ಉತ್ತೇಜನ ಸಿಗಲಿದೆ ರೈಲು ಮಾರ್ಗ ನಿರ್ಮಾಣವಾದ ಬಳಿಕ ಮಾರ್ಗದ ಪಟ್ಟಣಗಳಲ್ಲಿ ವ್ಯಾಪಾರ ಚಟುವಟಿಕೆಗಳು ಮತ್ತು ವ್ಯಾಪಾರಿಗಳು ರಾಜ್ಯದ ವಿವಿಧ ಭಾಗಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ.&lt;/p&gt;&lt;p&gt;ಹೊಸ ಗೋದಾಮುಗಳು, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳು, ಸಣ್ಣ ಕೈಗಾರಿಕೆಗಳು ಹಾಗೂ ಇತರ ವ್ಯಾಪಾರಿಕ ಚಟುವಟಿಕೆಗಳು ಬೆಳೆಯಲು ರೈಲು ಸಂಪರ್ಕ ಪೂರಕ ವಾತಾವರಣ ಸೃಷ್ಟಿಸಲಿದೆ. ಜೊತೆಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವದರೊಂದಿಗೆ ಕಚ್ಚಾ ವಸ್ತುಗಳ ಸಾಗಣೆ ಮತ್ತು ತಯಾರಾದ ಉತ್ಪನ್ನಗಳ ವಿತರಣೆಗೆ ಅನುಕೂಲವಾಗಲಿದೆ. ಇದರಿಂದ ಭವಿಷ್ಯದಲ್ಲಿ ಕೈಗಾರಿಕೆಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸ್ಥಾಪನೆಗೊಳ್ಳಲಿವೆ. ಕೈಗಾರಿಕಾ ಚಟುವಟಿಕೆಗಳು ಹೆಚ್ಚಾದಂತೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ.&lt;/p&gt;&lt;h3&gt;&lt;strong&gt;ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳ ವಿಸ್ತರಣೆ&lt;/strong&gt;&lt;/h3&gt;&lt;p&gt;ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೈಸೂರ, ಬೆಂಗಳೂರು ಸೇರಿ ದೂರದ ನಗರಗಳಿಗೆ ತೆರಳುತ್ತಾರೆ. ರೈಲು ಸಂಪರ್ಕ ದೊರೆತರೆ ವಿದ್ಯಾರ್ಥಿಗಳ ಪ್ರಯಾಣ ಹೆಚ್ಚು ಸುಲಭವಾಗಲಿದೆ. ವಿಶ್ವವಿದ್ಯಾಲಯಗಳು, ವೃತ್ತಿಪರ ಕಾಲೇಜುಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳು ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.&lt;/p&gt;&lt;h3&gt;&lt;strong&gt;ಆರೋಗ್ಯ ಸೇವೆಗಳಿಗೂ ಅನುಕೂಲ&lt;/strong&gt;&lt;/h3&gt;&lt;p&gt;ಗ್ರಾಮೀಣ ಭಾಗದ ಜನರು ತುರ್ತು ಹಾಗೂ ವಿಶೇಷ ವೈದ್ಯಕೀಯ ಸೇವೆಗಳಿಗಾಗಿ ದೊಡ್ಡ ನಗರಗಳನ್ನು ಅವಲಂಬಿಸಬೇಕಾಗುತ್ತದೆ. ಉತ್ತಮ ರೈಲು ಸಂಪರ್ಕ ದೊರೆತರೆ ಪ್ರಮುಖ ನಗರಗಳ ಆಸ್ಪತ್ರೆಗಳಿಗೆ ತೆರಳುವುದು ಸುಲಭವಾಗಲಿದೆ ಅಲ್ಲದೇ ವಿಶೇಷವಾಗಿ ವಯೋವೃದ್ಧರು, ರೋಗಿಗಳು ಹಾಗೂ ಅವರ ಕುಟುಂಬದವರಿಗೆ ದೂರದ ಪ್ರಯಾಣದಲ್ಲಿ ರೈಲು ಸಾರಿಗೆ ನೆರವಾಗಲಿದೆ.&lt;/p&gt;&lt;h3&gt;&lt;strong&gt;ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಉತ್ತೇಜನ&lt;/strong&gt;&lt;/h3&gt;&lt;p&gt;ವಿಜಯಪುರ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಲು ರೈಲು ಸಂಪರ್ಕ ಸಹಕಾರಿಯಾಗಲಿದೆ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಹೋಟೆಲ್, ಸಾರಿಗೆ, ಸ್ಥಳೀಯ ವ್ಯಾಪಾರ ಹಾಗೂ ಪ್ರವಾಸೋದ್ಯಮ ಆಧಾರಿತ ಉದ್ಯೋಗಗಳಿಗೆ ಉತ್ತೇಜನ ದೊರೆಯಲಿದೆ.&lt;/p&gt;&lt;h3&gt;&lt;strong&gt;ಬೆಳವಣಿಗೆಗೆ ಹೊಸ ಅವಕಾಶ&lt;/strong&gt;&lt;/h3&gt;&lt;p&gt;ರೈಲು ನಿಲ್ದಾಣಗಳು ನಿರ್ಮಾಣವಾಗುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ವ್ಯಾಪಾರ, ವಸತಿ ಹಾಗೂ ಸೇವಾ ಕ್ಷೇತ್ರಗಳ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಮಾರ್ಗದ ಪ್ರಮುಖ ಪಟ್ಟಣಗಳು ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ಅವಕಾಶ ಸಿಗಲಿದೆ. ರೈಲು ಸಂಪರ್ಕವು ಕೇವಲ ಎರಡು ಸ್ಥಳಗಳನ್ನು ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯಲ್ಲ; ಅದು ಗ್ರಾಮೀಣ ಪ್ರದೇಶಗಳನ್ನು ದೊಡ್ಡ ಮಾರುಕಟ್ಟೆ, ಶಿಕ್ಷಣ ಕೇಂದ್ರಗಳು, ಉದ್ಯೋಗ ಕೇಂದ್ರಗಳು ಹಾಗೂ ಆರೋಗ್ಯ ಸೇವೆಗಳೊಂದಿಗೆ ಜೋಡಿಸುವ ಅಭಿವೃದ್ಧಿಯ ಕೊಂಡಿಯಾಗಲಿದೆ.&lt;/p&gt;&lt;h3&gt;&lt;strong&gt;ಪ್ರಾದೇಶಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆ:&lt;/strong&gt;&lt;/h3&gt;&lt;p&gt;ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಗೊಂಡರೆ ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ನಡುವೆ ಸಾರಿಗೆ ಸಂಪರ್ಕ ಬಲಪಡಿಸುವುದರ ಜೊತೆಗೆ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ದಶಕಗಳಿಂದ ಜನರ ಬೇಡಿಕೆಯಾಗಿದ್ದ ಈ ಯೋಜನೆಯ ಸರ್ವೇ ಕಾರ್ಯಕ್ಕೆ ೪.೫ ಕೋಟಿ ರೂ. ಟೆಂಡರ್ ಕರೆಯಲಾಗಿರುವುದು ಮೊದಲ ಹಂತದ ಮಹತ್ವದ ಬೆಳವಣಿಗೆಯಾಗಿದೆ. ಸರ್ವೇ, ಭೂಸ್ವಾಧೀನ ಸೇರಿದಂತೆ ಮುಂದಿನ ಪ್ರಕ್ರಿಯೆಗಳು ವೇಗವಾಗಿ ಪೂರ್ಣಗೊಂಡು ಯೋಜನೆ ಕಾಮಗಾರಿಗೆ ೪೫೦೦ ಕೋಟಿ ವೆಚ್ಚ ತಗುಲಿದೆ ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯ ರೈಲ್ವೆ ಮಂತ್ರಿಗಳೊಂದಿಗೆ ಸತತ ಸಂಪರ್ಕದೊಂದಿಗೆ ಮುನ್ನೇಜ್ಜೆ ಇಡಲಾಗಿದೆ ಎಂದು ಸಂಸದ ರಮೇಶ ಜಿಗಜಿನ್ನಿ ಅವರು ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡರು.&lt;/p&gt;&lt;p&gt;&lt;strong&gt;ಬ್ರೀಟಿಷರ ಕಾಲದಲ್ಲಿಯೇ ಪ್ರಯತ್ನ&lt;/strong&gt;&lt;/p&gt;&lt;p&gt;ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗದ ಯೋಜನೆಗೆ 1924ರಲ್ಲಿ ಬ್ರಿಟಿಷರ ಕಾಲದಲ್ಲೇ ಈ ಯೋಜನೆಗೆ ಚಾಲನೆ ಸಿಕ್ಕು ಪ್ರಾಥಮಿಕ ಪ್ರಯತ್ನಗಳು ನಡೆದಿರುವದು ಸಾಕಷ್ಟು ಕುರುಹುಗಳು ಲಭ್ಯವಿದ್ದು ನಂತರ ಕಾಮಗಾರಿಯು ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಪ್ರಸ್ತುತ ಪ್ರಸ್ತಾವಿತ ಸುಮಾರು 162 ಕಿ.ಮೀ. ಮಾರ್ಗವು ಆಲಮಟ್ಟಿ-ನಿಡಗುಂದಿ-ಬಸವನಬಾಗೇವಾಡಿ-ಮುದ್ದೇಬಿಹಾಳ- ತಾಳಿಕೋಟೆ-ಹುಣಸಗಿ-ಸುರಪೂರ-ಶಹಾಪುರ-ವಡಗೇರಾ-ಯಾದಗಿರಿಗೆ ನೇರ ಸಂಪರ್ಕ ಕಲ್ಪಿಸುವ ಯೋಜನೆಯಾಗಿದ್ದು, 2002ರ ಲೋಕಸಭೆಯ ಅಧಿಕೃತ ಉತ್ತರದಲ್ಲಿಯೂ ಹೊಸ ರೈಲು ಮಾರ್ಗದ ಯೋಜನೆ ಪಟ್ಟಿಯಲ್ಲಿ ದಾಖಲಾಗಿತ್ತು. ನಂತರ 2011-12ರಲ್ಲಿ 160 ಕಿ.ಮೀ. ಮಾರ್ಗದ ಸರ್ವೇ ಪೂರ್ಣಗೊಂಡಿರುವುದಾಗಿ ಭಾರತೀಯ ರೈಲ್ವೆಯ ದಾಖಲೆ ಹೇಳುತ್ತದೆ. ಆದರೆ ಅಂದಿನ ಈಗೀನ ಸರ್ವೆ ಕಾರ್ಯದಿಂದ ತಗಲುವ ವೆಚ್ಚದಲ್ಲಿ ಗಮನಾರ್ಹ ಬದಲಾವಣೆಗೊಳ್ಳಲಿರುವದರಿಂದ ಮರು ಡಿಪಿಆರ್ ತಯಾರಿಕೆಗೆ 4.5 ಕೋಟಿ ರೂ. ಟೆಂಡರ್ ಅಹ್ವಾನಿಸಲಾಗಿರುವದು ಈ ಯೋಜನೆಯ ಕನಸ್ಸಿನ ಹೊಸ್ತಿಲಲ್ಲಿದ್ದ ಜನರಿಗೆ ಮರು ಚೈತನ್ಯ ನೀಡಿದಂತಾಗಿದೆ.&lt;/p&gt;&lt;p&gt;ಆಲಮಟ್ಟಿ ಯಾದಗಿರಿ ರೈಲು ಮಾರ್ಗಕ್ಕಾಗಿ ತಾಳಿಕೋಟೆಯ ಆರ್.ಎಸ್.ಪಾಟೀಲ(ಕೂಚಬಾಳ) ಅವರು ನನ್ನನ್ನು ಬೆಂಬಿಡದೇ ಯೋಜನೆ ಸಾಕಾರವಾಗಬೇಕೆನ್ನುತ್ತಿದ್ದರು ಎಲ್ಲ ಜನರ ಅಪೇಕ್ಷೆಯಂತೆ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಹತ್ತಾರು ಭಾರಿ ಬೆಟ್ಟಿಯಾಗಿ ಒತ್ತಾಯ ಮಾಡಿದ್ದರಿಂದ 4.5 ಕೋಟಿ ರೂ. ಸರ್ವೇ ಕಾರ್ಯಕ್ಕೆ ಟೆಂಡರ್ ಕರೆಯಲಾಗಿದೆ. ಈ ಸರ್ವೇ ಕಾರ್ಯ ಬೇಗನೆ ಮುಗಿಸಿ ಕಾಮಗಾರಿ ಪ್ರಾರಂಭಕ್ಕೆ ಮುಂದಾಗಲಾಗುವುದು ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.&lt;/p&gt;&lt;p&gt;ಆಲಮಟ್ಟಿ-ಯಾದಗಿರಿ ರೈಲು ಯೋಜನೆ ನೂರ ವರ್ಷಗಳ ಕನಸ್ಸಾಗಿ ಉಳಿದಿತ್ತು ಸಂಸದ ರಮೇಶ ಜಿಗಜಿಣಗಿ ಅವರು, ರೈಲ್ವೇ ರಾಜ್ಯ ಸಚೀವ ವ್ಹಿ.ಸೋಮಣ್ಣ ಅವರಿಗೆ ಕೇಂದ್ರ ರೈಲ್ವೇ ಸಚೀವರ ಮೇಲೆ ಯೋಜನೆಯ ಕಾರ್ಯರೂಪಕ್ಕಾಗಿ ಒತ್ತಡ ಹಾಕಿದ್ದರ ಪರಿಣಾಮ ಸರ್ವೇ ಕಾರ್ಯಕ್ಕೆ 4.5 ಕೋಟಿ ರೂ. ಹಣಬಿಡುಗಡೆಗೊಳಿಸಿ ಟೆಂಡರ್ ಕರೆಯಲಾಗಿದೆ ಈ ಯೋಜನೆ ಕಾರ್ಯರೂಪಗೊಂಡರೆ ಎಲ್ಲ ಕ್ಷೇತ್ರಗಳು ಅಭಿವೃದ್ದಿ ಪಥದತ್ತ ಮುನ್ನಡೆಯಲಿವೆ. ದಶಕಗಳಿಂದ ಎಲ್ಲ ಜನರು ನಡೆಸಿದ ಹೋರಾಟಕ್ಕೆ ಜಯಸಿಕ್ಕಂತಾಗಿದೆ ಎಂದು ರೈಲ್ವೆ ಹೋರಾಟ ಸಮಿತಿಯ ಸಂಚಾಲಕರಾದ ಆರ್.ಎಸ್.ಪಾಟೀಲ ಹೇಳುತ್ತಾರೆ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tender-invited-for-survey-work-of-162-km-new-railway-line-from-alamatti-to-yadagiri-mrq/articleshow-0a0gk3g"/>
        </item>
        <item>
            <title><![CDATA[ಬರಗಾಲದ ಬಿಸಿ, ಗ್ರಾಹಕರಿಗೆ ನಿಂಬೆಹಣ್ಣಿನ ಬರೆ: ರಾಜ್ಯದಲ್ಲಿ ನಾಲ್ಕು ಪಟ್ಟು ಜಿಗಿತ ಕಂಡ ದರ, ಬೆಂಗಳೂರಿನಲ್ಲಿ ಕೆಜಿಗೆ ₹350!]]></title>
            <link>https://kannada.asianetnews.com/karnataka-districts/karnataka-drought-lemon-prices-soar-fourfold-bengaluru-news-san/articleshow-10493ge</link>
            <guid isPermaLink="true">https://kannada.asianetnews.com/karnataka-districts/karnataka-drought-lemon-prices-soar-fourfold-bengaluru-news-san/articleshow-10493ge</guid>
            <pubDate>Wed, 16 Sep 2026 19:16:44 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ತೀವ್ರ ಬರಗಾಲ ಮತ್ತು ಮಳೆಯ ಅಭಾವದಿಂದಾಗಿ ನಿಂಬೆಹಣ್ಣಿನ ಉತ್ಪಾದನೆ ಶೇ. 60ರಷ್ಟು ಕುಸಿದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿ, ಹಬ್ಬದ ಸೀಸನ್&zwnj;ನಲ್ಲಿ ನಿಂಬೆಹಣ್ಣಿನ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2n7dnd9kc2y0p18afv2me4w,imgname-lemon-price-1789566309801.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.16): &lt;/strong&gt;ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಬರಗಾಲದ ಪರಿಸ್ಥಿತಿಯು ಈಗ ಜನರ ಅಡುಗೆಮನೆಗೆ ನೇರ ಪೆಟ್ಟು ನೀಡಲಾರಂಭಿಸಿದೆ. ಸಾಲು ಸಾಲು ಹಬ್ಬಗಳ ಆಚರಣೆಗೆ ಅತ್ಯಗತ್ಯವಾಗಿ ಬೇಕಾಗುವ ನಿಂಬೆಹಣ್ಣಿನ ಪೂರೈಕೆ ಸಂಪೂರ್ಣ ಕ್ಷೀಣಿಸಿದ್ದು, ಕೇವಲ ಕೆಲವೇ ದಿನಗಳಲ್ಲಿ ಅದರ ಬೆಲೆಯು ಬರೋಬ್ಬರಿ ನಾಲ್ಕು ಪಟ್ಟು (Fourfold) ಹೆಚ್ಚಾಗಿದೆ. ಉದ್ಯಾನನಗರಿ ಬೆಂಗಳೂರಿನಲ್ಲಿ ಇತ್ತೀಚಿನವರೆಗೆ ಪ್ರತಿ ಕೆಜಿಗೆ ₹75 ರಿಂದ ₹90 ರಷ್ಟಿದ್ದ ನಿಂಬೆಹಣ್ಣಿನ ಚಿಲ್ಲರೆ ದರವು, ಕಳೆದ ವಾರಾಂತ್ಯದ ವೇಳೆಗೆ ದಿಢೀರನೆ ₹340 ರಿಂದ ₹350 ಕ್ಕೆ ಏರಿಕೆಯಾಗಿದೆ. &quot;ಈ ಬಾರಿಯ ಹಬ್ಬದ ಸೀಸನ್&zwnj;ನಲ್ಲಿ ನಿಂಬೆಹಣ್ಣಿನ ಬೆಲೆ ಆತಂಕಕಾರಿ ಮಟ್ಟದಲ್ಲಿ ಜಿಗಿದಿದ್ದು, ಸಾಮಾನ್ಯ ಗ್ರಾಹಕರ ಕೈಗೆ ಸಿಗದಂತಾಗಿದೆ&quot; ಎಂದು ಬೆಂಗಳೂರಿನ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಪ್ರದೇಶದ ಹಾಪ್&zwnj;ಕಾಮ್ಸ್ (Hopcoms) ಮಾರಾಟಗಾರರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಸಂಸ್ಥೆಯ ಮೂಲಗಳ ಪ್ರಕಾರ, ಪ್ರಸ್ತುತ ಸಾಗಟ ವೆಚ್ಚ ಹಾಗೂ ಮಾರಾಟಗಾರರ ಕಮಿಷನ್ ಸೇರಿ ಹೋಲ್&zwnj;ಸೇಲ್ ಮಾರುಕಟ್ಟೆಯಲ್ಲೇ ಉತ್ತಮ ಗಾತ್ರದ ಒಂದು ನಿಂಬೆಹಣ್ಣಿಗೆ ₹12 ರಿಂದ ₹15 ಹಾಗೂ ಸಣ್ಣ ಗಾತ್ರದ ಹಣ್ಣಿಗೆ ₹7 ರಿಂದ ₹8 ಬೆಲೆಯಿದೆ. ಚಿಲ್ಲರೆ ವ್ಯಾಪಾರಿಗಳು ಇದಕ್ಕೆ ಮತ್ತಷ್ಟು ₹3 ರಿಂದ ₹4 ಲಾಭ ಸೇರಿಸಿ ಮಾರಾಟ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಉತ್ಪಾದನೆ ಶೇ. 60 ರಷ್ಟು ಭಾರಿ ಕುಸಿತ!&lt;/strong&gt;&lt;/h2&gt;&lt;p&gt;ತೋಟಗಾರಿಕಾ ಉತ್ಪಾದಕರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸೊಸೈಟಿ (Hopcoms) ಹಾಗೂ 'ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ'ಯ (KSLDB) ಮಾಹಿತಿಯ ಪ್ರಕಾರ, ಮುಂಬರುವ ವಾರಗಳಲ್ಲಿ ನಿಂಬೆಹಣ್ಣಿನ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯದ ಪ್ರಮುಖ ನಿಂಬೆ ಬೆಳೆಯುವ ಭಾಗಗಳಾದ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ದೀರ್ಘಕಾಲದ ಒಣ ಹವಾಮಾನದಿಂದಾಗಿ ನಿಂಬೆ ಉತ್ಪಾದನೆಯು ಸುಮಾರು ಶೇ. 60 ರಷ್ಟು ಕಸಿದಿದೆ.&lt;/p&gt;&lt;p&gt;ಸಾಮಾನ್ಯವಾಗಿ ಭಾರತದಲ್ಲಿ ನಿಂಬೆ ಉತ್ಪಾದನೆಯಲ್ಲಿ ನಾಲ್ಕನೇ ದೊಡ್ಡ ರಾಜ್ಯವಾಗಿರುವ ಕರ್ನಾಟಕ, ವರ್ಷಕ್ಕೆ ಸರಾಸರಿ 3 ರಿಂದ 4 ಲಕ್ಷ ಟನ್ ನಿಂಬೆಹಣ್ಣು ಉತ್ಪಾದಿಸುತ್ತದೆ. ಆದರೆ ಈ ಬಾರಿ ತೀವ್ರ ಬರದಿಂದಾಗಿ ಉತ್ಪಾದನೆಯು ಕೇವಲ 1.5 ರಿಂದ 1.6 ಲಕ್ಷ ಟನ್&zwnj;ಗಳಿಗೆ ಪತನಗೊಂಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಭಾರಿ ಪೂರೈಕೆ ಅಭಾವ ಸೃಷ್ಟಿಯಾಗಿದೆ.&lt;/p&gt;&lt;p&gt;&quot;ಸಾಮಾನ್ಯವಾಗಿ 70 ಕೆಜಿಯ ನಿಂಬೆಹಣ್ಣಿನ ಚೀಲವೊಂದು ₹1,000 ರಿಂದ ₹1,500 ಕ್ಕೆ ಸಿಗುತ್ತಿತ್ತು. ಆದರೆ ಈಗ ಅದೇ ಚೀಲದ ಬೆಲೆ ₹4,000 ರಿಂದ ₹4,500 ಕ್ಕೆ ಏರಿಕೆಯಾಗಿದೆ&quot; ಎಂದು ವಿಜಯಪುರದ ಪ್ರಮುಖ ನಿಂಬೆ ವರ್ತಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ದೀರ್ಘಕಾಲದ ಒಣ ಹವಾಮಾನ ಮತ್ತು ಮಳೆಯ ಅಭಾವ&lt;/strong&gt;&lt;/h2&gt;&lt;p&gt;ವರ್ಷಪೂರ್ತಿ ಸೂಕ್ತ ನೀರಾವರಿ ಹಾಗೂ ಬೆಚ್ಚಗಿನ ಹವಾಮಾನವಿದ್ದರೆ ನಿಂಬೆ ಬೆಳೆಯ ಕೊಯ್ಲು ನಿರಂತರವಾಗಿ ನಡೆಯುತ್ತದೆ. ಆದರೆ ಈ ಬಾರಿ ಸುದೀರ್ಘ ಬೇಸಿಗೆ ಮತ್ತು ಮಳೆ ಅಭಾವ ಬೆಳೆಗಾರರನ್ನು ಹೈರಾಣು ಮಾಡಿದೆ.&lt;/p&gt;&lt;p&gt;ಈ ಕುರಿತು ವಿವರಣೆ ನೀಡಿರುವ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್&zwnj;ಕುಮಾರ್ ಭಾವಿಡೊಡ್ಡಿ, &quot;ರಾಜ್ಯದ ಒಟ್ಟು ನಿಂಬೆ ಉತ್ಪಾದನೆಯಲ್ಲಿ ಶೇ. 60 ರಿಂದ 70 ರಷ್ಟು ಪಾಲು ಹೊಂದಿರುವ ವಿಜಯಪುರ, ಬಾಗಲಕೋಟೆ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯನ್ನು ಹೊರತುಪಡಿಸಿ ಆನಂತರ ಸರಿಯಾದ ಮಳೆಯೇ ಆಗಿಲ್ಲ. ಗಿಡಗಳಿಗೆ ಸರಿಯಾಗಿ ನೀರುಣಿಸಿದರೆ ಹೊಸ ಚಿಗುರು ಬಂದು ಹೂವು ಬಿಡುತ್ತದೆ. ಹೂವು ಬಿಟ್ಟ ಎರಡು ತಿಂಗಳಿಗೆ ಕಾಯಿ ಸಿದ್ಧವಾಗುತ್ತದೆ. ಆದರೆ, ಈ ಬಾರಿ ಸುದೀರ್ಘ ಬೇಸಿಗೆಯಿಂದಾಗಿ ರೈತರಿಗೆ ತೋಟಗಳಿಗೆ ನೀರುಣಿಸಲು ಸಾಧ್ಯವಾಗಲಿಲ್ಲ. ನಂತರ ಬಂದ ದುರ್ಬಲ ಮುಂಗಾರು ಮಳೆಯು ಹೂವು ಮತ್ತು ಕಾಯಿ ಬಿಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಾಳುಮಾಡಿದೆ&quot; ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೂ ಹಾಗೂ ಅಡುಗೆಮನೆಗೂ ನಿಂಬೆಹಣ್ಣಿನ ಅಗತ್ಯತೆ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಆಕಾಶಮುಖಿಯಾಗಿರುವುದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ನಿಂಬೆ ಸಿಗುವುದು ಸದ್ಯಕ್ಕೆ ದುಸ್ಸಾಧ್ಯವಾಗಿದೆ.&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-drought-lemon-prices-soar-fourfold-bengaluru-news-san/articleshow-10493ge"/>
        </item>
        <item>
            <title><![CDATA[ವಿಜಯಪುರದಲ್ಲಿ ಮತ್ತೆ ಭೂಕಂಪ: ಎದ್ದು-ಬಿದ್ದು ಮನೆಯಿಂದ ಓಡಿಬಂದ ಮಂದಿ! ಕಾದಿದೆಯಾ ಗಂಡಾಂತರ?]]></title>
            <link>https://kannada.asianetnews.com/karnataka-districts/vijayapura-earthquake-tremors-felt-in-basavana-bagewadi-ingleshwar-village-people-fear-sat/articleshow-5gg7a1l</link>
            <guid isPermaLink="true">https://kannada.asianetnews.com/karnataka-districts/vijayapura-earthquake-tremors-felt-in-basavana-bagewadi-ingleshwar-village-people-fear-sat/articleshow-5gg7a1l</guid>
            <pubDate>Thu, 17 Sep 2026 15:36:46 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಸುತ್ತಮುತ್ತ ಮತ್ತೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದ್ದು, ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qd4kw6h094rc0gtkfk5qht,imgname-vijayapura-earthquake-1789639413637.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಸೆ.17): ಜಿ&lt;/strong&gt;ಲ್ಲೆಯಲ್ಲಿ ಭೂಮಿಯ ಕಂಪನ ಮುಂದುವರಿದಿದ್ದು, ಮತ್ತೊಮ್ಮೆ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದ್ದು, ಇದರಿಂದ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನತೆ ತೀವ್ರ ಆತಂಕಕ್ಕೀಳಗಾಗಿದ್ದಾರೆ.&lt;/p&gt;&lt;p&gt;ಭೂಕಂಪನ ಮಾಪನ ಕೇಂದ್ರದ ಮಾಹಿತಿ ಪ್ರಕಾರ, ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.6 ರಷ್ಟು ದಾಖಲಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಕೇಂದ್ರಬಿಂದುವಿನಿಂದ 2.4 ಕಿ.ಮೀ ಅಂತರದಲ್ಲಿ ಈ ಭೂಕಂಪನದ ಕೇಂದ್ರವಿತ್ತು ಎಂದು ತಿಳಿದುಬಂದಿದೆ. ಭೂಮಿಯ ಆಳದಲ್ಲಿ ಅಂದರೆ ಸುಮಾರು 10 ಕಿ.ಮೀ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಆತಂಕದಲ್ಲಿ ಗ್ರಾಮಸ್ಥರು:&lt;/strong&gt;&lt;/h2&gt;&lt;p&gt;ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲೆ ಭೂಮಿ ಕಂಪಿಸುತ್ತಿರುವುದು ಜನರಲ್ಲಿ ನಿದ್ದೆಗೆಡಿಸಿದೆ. ಸತತವಾಗಿ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ದೊಡ್ಡ ಅಪಘಾತ ಸಂಭವಿಸುತ್ತದೆಯೋ ಎಂಬ ಭೀತಿಯಲ್ಲಿ ಜನರು ಕಾಲ ಕಳೆಯುವಂತಾಗಿದೆ. ಮನೆಯಿಂದ ಹೊರಗೆ ಓಡಿಬಂದು ಆತಂಕ ವ್ಯಕ್ತಪಡಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಹಿರಿಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಈ ಪ್ರದೇಶದಲ್ಲಿ ನಿರಂತರ ಭೂಕಂಪನಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ, ಜನರಲ್ಲಿರುವ ಭಯವನ್ನು ದೂರ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;&lt;p&gt;Vijayapura #Earthquake Update | 17.09.2026A Magnitude 3.6 earthquake was recorded by the KSNDMC network at 05:34:35 AM, with the epicentre 2.4 km SE of Ingaleshwar GP, Basavana Bagewadi Taluk, at a depth of 10 km.The seismic intensity was low. Tremors may have been felt up to pic.twitter.com/xeWyt3BuG9&lt;/p&gt;&lt;p&gt;&mdash; Karnataka State Natural Disaster Monitoring Centre (@KarnatakaSNDMC) September 17, 2026&lt;/p&gt;&lt;p&gt;&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-earthquake-tremors-felt-in-basavana-bagewadi-ingleshwar-village-people-fear-sat/articleshow-5gg7a1l"/>
        </item>
        <item>
            <title><![CDATA[ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಕರಾವಳಿಗೆ ವಿಶೇಷ ರೈಲು ಸಂಚಾರ!]]></title>
            <link>https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux</link>
            <guid isPermaLink="true">https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux</guid>
            <pubDate>Thu, 10 Sep 2026 10:32:25 +0530</pubDate>
            <description><![CDATA[ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ, ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಹಾಗೂ ಕರಾವಳಿ-ಮಲೆನಾಡು ಭಾಗದ ಮಡಗಾಂವ್&zwnj;ಗೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಯಶವಂತಪುರ ಮತ್ತು ಎಸ್&zwnj;ಎಂವಿಟಿ ಬೆಂಗಳೂರು ನಿಲ್ದಾಣಗಳಿಂದ ಹೊರಡಲಿದ್ದು, ಅವುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24txkxevn7x4m86q3eyrgya,imgname-ganesh-chaturthi-special-train--1--1789016330158.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ ಹಾಗೂ ಬೆಳಗಾವಿ, ಕರಾವಳಿ ಮತ್ತು ಮಲೆನಾಡು ಭಾಗದ ನಗರಗಳಿಗೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳ ಸೇವೆಯನ್ನು ಘೋಷಿಸಿದೆ. ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ಬಂಟ್ವಾಳ ಹಾಗೂ ಉಡುಪಿ ಮಾರ್ಗವಾಗಿ ವಿಶೇಷ ರೈಲು ಸೇವೆ ಇರಲಿದೆ. ಇನ್ನು ವಿಜಯಪುರಕ್ಕೆ ತುಮಕೂರು ಮಾರ್ಗವಾಗಿ ಬಾಗಲಕೋಟೆ ಮೂಲಕ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಇನ್ನು ಬೆಳಗಾವಿಗೆ ತುಮಕೂರು ದಾವಣಗೆರೆ ಮಾರ್ಗವಾಗಿ ಹುಬ್ಬಳ್ಳಿ ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.&lt;/p&gt;&lt;h2&gt;ರೈಲು ಸಂಖ್ಯೆ 06591 ಯಶವಂತಪುರ - ಮಡಗಾಂವ್&zwnj;&lt;/h2&gt;&lt;p&gt;ಯಶವಂತಪುರದಿಂದ ಮಡಗಾಂವ್&zwnj;ಗೆ ಸಂಚರಿಸಲಿರುವ ರೈಲು ಸಂಖ್ಯೆ 06591 ವಿಶೇಷ ರೈಲು ಸೆಪ್ಟೆಂಬರ್ 11, 2026ರ ಶುಕ್ರವಾರ ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಡಲಿದೆ. ಈ ರೈಲು ಮಾರನೇ ದಿನ ಬೆಳಿಗ್ಗೆ 5:00 ಗಂಟೆಗೆ ಹಾಸನ, 5:55ಕ್ಕೆ ಸಕಲೇಶಪುರ, 8:50ಕ್ಕೆ ಸುಬ್ರಹ್ಮಣ್ಯ ರೋಡ್, 9:45ಕ್ಕೆ ಕಬಕ ಪುತ್ತೂರು, 10:15ಕ್ಕೆ ಬಂಟ್ವಾಳ, ಮಧ್ಯಾಹ್ನ 1:10ಕ್ಕೆ ಉಡುಪಿ, 1:40ಕ್ಕೆ ಕುಂದಾಪುರ, 2:08ಕ್ಕೆ ಬೈಂದೂರು, 2:38ಕ್ಕೆ ಭಟ್ಕಳ, 3:18ಕ್ಕೆ ಮುರ್ಡೇಶ್ವರ, ಸಂಜೆ 4:00 ಗಂಟೆಗೆ ಕುಮಟಾ, 4:20ಕ್ಕೆ ಗೋಕರ್ಣ ರೋಡ್, 4:32ಕ್ಕೆ ಅಂಕೋಲಾ, 4:50ಕ್ಕೆ ಕಾರವಾರ, 5:20ಕ್ಕೆ ಕಣಕೋಣ ತಲುಪಿ, ಸಂಜೆ 6:10ಕ್ಕೆ ಅಂತಿಮವಾಗಿ ಮಡಗಾಂವ್ ತಲುಪಲಿದೆ.&lt;/p&gt;&lt;h2&gt;ರೈಲು ಸಂಖ್ಯೆ 06592 ಮಡಗಾಂವ್-ಯಶವಂತಪುರ&lt;/h2&gt;&lt;p&gt;ಮರಳಿ ಪ್ರಯಾಣ ರೈಲು ಸಂಖ್ಯೆ 06592 ಮಡಗಾಂವ್-ಯಶವಂತಪುರ ವಿಶೇಷ ರೈಲು ಸೆಪ್ಟೆಂಬರ್ 14, 2026ರ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್&zwnj;ನಿಂದ ಹೊರಡಲಿದೆ. ಮಾರ್ಗಮಧ್ಯೆ ಈ ರೈಲು ಬೆಳಿಗ್ಗೆ 11:28ಕ್ಕೆ ಕಣಕೋಣ, 11:58ಕ್ಕೆ ಕಾರವಾರ, ಮಧ್ಯಾಹ್ನ 12:23ಕ್ಕೆ ಅಂಕೋಲಾ, 12:33ಕ್ಕೆ ಗೋಕರ್ಣ ರೋಡ್, 12:50ಕ್ಕೆ ಕುಮಟಾ, 1:03ಕ್ಕೆ ಹೊನ್ನಾವರ, 1:38ಕ್ಕೆ ಮುರ್ಡೇಶ್ವರ, 1:53ಕ್ಕೆ ಭಟ್ಕಳ, 2:12ಕ್ಕೆ ಬೈಂದೂರು, 2:40ಕ್ಕೆ ಕುಂದಾಪುರ, 2:55ಕ್ಕೆ ಬಾರ್ಕೂರು, 3:30ಕ್ಕೆ ಉಡುಪಿ, 3:58ಕ್ಕೆ ಮುಲ್ಕಿ, ಸಂಜೆ 4:12ಕ್ಕೆ ಸುರತ್ಕಲ್, 5:15ಕ್ಕೆ ತೋಕೂರು, 6:00 ಗಂಟೆಗೆ ಬಂಟ್ವಾಳ, 6:28ಕ್ಕೆ ಕಬಕ ಪುತ್ತೂರು, ರಾತ್ರಿ 7:45ಕ್ಕೆ ಸುಬ್ರಹ್ಮಣ್ಯ ರೋಡ್, 10:30ಕ್ಕೆ ಸಕಲೇಶಪುರ, 11:30ಕ್ಕೆ ಹಾಸನ ತಲುಪಿ, ಅಂತಿಮವಾಗಿ ಮರುದಿನ ಬೆಳಗಿನ ಜಾವ 3:00 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.&lt;/p&gt;&lt;h2&gt;1. ಯಶವಂತಪುರ &ndash; ವಿಜಯಪುರ &ndash; ಯಶವಂತಪುರ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 06561/06562)&lt;/h2&gt;&lt;p&gt;ಯಶವಂತಪುರ ಮತ್ತು ವಿಜಯಪುರ ನಡುವೆ ಓಡಾಡಲಿರುವ 'ರೈಲು ಸಂಖ್ಯೆ 06561' ವಿಶೇಷ ರೈಲು ಸೆಪ್ಟೆಂಬರ್ 11 ಮತ್ತು 13, 2026ರಂದು (ಶುಕ್ರವಾರ ಮತ್ತು ಭಾನುವಾರ) ಯಶವಂತಪುರದಿಂದ ಸಂಜೆ 6:15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:15ಕ್ಕೆ ವಿಜಯಪುರ ತಲುಪಲಿದೆ.&lt;/p&gt;&lt;p&gt;ಮರುಮಾರ್ಗದಲ್ಲಿ 'ರೈಲು ಸಂಖ್ಯೆ 06562' ವಿಶೇಷ ರೈಲು ಸೆಪ್ಟೆಂಬರ್ 12 ಮತ್ತು 14, 2026ರಂದು (ಶನಿವಾರ ಮತ್ತು ಸೋಮವಾರ) ವಿಜಯಪುರದಿಂದ ಸಂಜೆ 5:00 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 4:45ಕ್ಕೆ ಯಶವಂತಪುರವನ್ನು ತಲುಪಲಿದೆ.&lt;/p&gt;&lt;p&gt;&lt;strong&gt;ನಿಲುಗಡೆಗಳು: &lt;/strong&gt;ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ, ಗದಗ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.&lt;/p&gt;&lt;p&gt;&lt;strong&gt;ಬೋಗಿಗಳ ವಿವರ:&lt;/strong&gt; ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 1 ಎಸಿ 2-ಟೈರ್, 3 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ದಿವ್ಯಾಂಗಜನ್ ಅನುಕೂಲವುಳ್ಳ 2 ಎಸ್&zwnj;ಎಲ್&zwnj;ಆರ್&zwnj;ಡಿ ಬೋಗಿಗಳು ಸೇರಿವೆ.&lt;/p&gt;&lt;h2&gt;2. ಎಸ್&zwnj;ಎಂವಿಟಿ ಬೆಂಗಳೂರು &ndash; ಬೆಳಗಾವಿ &ndash; ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್ (ವಿಶೇಷ ರೈಲುಗಳು)&lt;/h2&gt;&lt;p&gt;ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಬೆಳಗಾವಿ ನಡುವೆ ಎರಡು ಪ್ರತ್ಯೇಕ ಟ್ರಿಪ್&zwnj;ಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.&lt;/p&gt;&lt;h3&gt;&lt;strong&gt;ಮೊದಲ ಟ್ರಿಪ್ (ರೈಲು ಸಂಖ್ಯೆ: 06563/06564):&lt;/strong&gt;&lt;/h3&gt;&lt;p&gt;'ರೈಲು ಸಂಖ್ಯೆ 06563' ಸೆಪ್ಟೆಂಬರ್ 11, 2026ರ ಶುಕ್ರವಾರ ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದ 'ರೈಲು ಸಂಖ್ಯೆ 06564' ಸೆಪ್ಟೆಂಬರ್ 12, 2026ರ ಶನಿವಾರ ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.&lt;/p&gt;&lt;h3&gt;&lt;strong&gt;ಎರಡನೇ ಟ್ರಿಪ್ (ರೈಲು ಸಂಖ್ಯೆ: 06583/06584):&lt;/strong&gt;&lt;/h3&gt;&lt;p&gt;'ರೈಲು ಸಂಖ್ಯೆ 06583' ಸೆಪ್ಟೆಂಬರ್ 13, 2026ರ ಭಾನುವಾರ ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದ 'ರೈಲು ಸಂಖ್ಯೆ 06584' ಸೆಪ್ಟೆಂಬರ್ 14, 2026ರ ಸೋಮವಾರ ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.&lt;/p&gt;&lt;p&gt;&lt;strong&gt;ನಿಲುಗಡೆಗಳು: &lt;/strong&gt;ಈ ರೈಲುಗಳು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್&zwnj;ಎಮ್&zwnj;ಎಮ್ ಹಾವೇರಿ, ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.&lt;/p&gt;&lt;p&gt;&lt;strong&gt;ಬೋಗಿಗಳ ವಿವರ:&lt;/strong&gt; ಈ ರೈಲುಗಳು 1 ಫಸ್ಟ್ ಕ್ಲಾಸ್ ಎಸಿ, 1 ಎಸಿ 2-ಟೈರ್, 3 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್&zwnj;ಎಲ್&zwnj;ಆರ್&zwnj;ಡಿ ಸೇರಿದಂತೆ ಒಟ್ಟು 20 ಕೋಚ್&zwnj;ಗಳನ್ನು ಒಳಗೊಂಡಿರುತ್ತವೆ.&lt;/p&gt;]]></content:encoded>
            <category>vijayapura</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux"/>
        </item>
        <item>
            <title><![CDATA[ಸರ್ಕಾರಿ ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಸಲು ಆಗ್ರಹ]]></title>
            <link>https://kannada.asianetnews.com/jobs/15000-teacher-recruitment-demand-for-5-year-age-relaxation-for-all-10-years-for-pwd-candidates-kvn/articleshow-8dhbqr4</link>
            <guid isPermaLink="true">https://kannada.asianetnews.com/jobs/15000-teacher-recruitment-demand-for-5-year-age-relaxation-for-all-10-years-for-pwd-candidates-kvn/articleshow-8dhbqr4</guid>
            <pubDate>Fri, 04 Sep 2026 10:32:16 +0530</pubDate>
            <description><![CDATA[ವಿಜಯಪುರದಲ್ಲಿ, 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ. ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟವು, ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1nch0btaf41s34c3nt2nqnd,imgname-untitled-design--35--1788497920378.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಕರೆದಿರುವ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.&lt;/p&gt;&lt;h2&gt;&lt;strong&gt;ವಯೋಮಿತಿ ಸಡಿಲಿಕೆಗೆ ಆಗ್ರಹ&lt;/strong&gt;&lt;/h2&gt;&lt;p&gt;ವಿಜಯಪುರ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ ಖೇಡ ಮಾತನಾಡಿ, ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪ್ರಾಥಮಿಕ, ಪದವಿಧರ ಪ್ರಾಥಮಿಕ ಶಿಕ್ಷಕರ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಸಹ ಶಿಕ್ಷಕರ 15,000 ನೇಮಕಾತಿಯಲ್ಲಿ ವಿಕಲಚೇತನ, ವಿಧವಾ, ಮಾಜಿ ಸೈನಿಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಬೇಕು. ಕೂಡಲೇ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ನೇಮಕಾತಿ ಭೂಮಾಪಕರ ನೇಮಕಾತಿ ಕರ್ನಾಟಕ ಲೋಕಸೇವಾ ಆಯೋಗದ ಗೆಜಿಟೆಡ್ ಪ್ರೊಬೆಷನರಿ ನೇಮಕಾತಿ ಮಾದರಿಯಲ್ಲಿ ವಿಕಲಚೇತನ ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷ, ಇತರೆ ಎಲ್ಲ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.&lt;/p&gt;&lt;p&gt;ಅಂಗವಿಕಲರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ, ಮುಖಂಡರಾದ ಅನೀಲ ಇಕ್ಕಡೆ, ಲಾಯಪ್ಪ ಇಂಗಳೆ, ಸಂತೋಷ ಕಲಗುಡಿ, ಅಂಬಣ್ಣ ಗುನ್ನಾಪುರ, ರಾಜು ಕುಮಟಗಿ, ಭೀಮಶಿ ಪೂಜಾರಿ, ಅಶೋಕ ವಾಲಿಕಾರ, ಶಿವಶಂಕರ ಹಿರೇಮಠ, ದಿನೇಶ ತೇಲಿ, ವಿರೇಶ ಗೊಬ್ಬೂರ ಉಪಸ್ಥಿತರಿದ್ದರು.&lt;/p&gt;]]></content:encoded>
            <category>vijayapura</category>
            <dc:creator>Naveen Kodase</dc:creator>
            <atom:link href="https://kannada.asianetnews.com/jobs/15000-teacher-recruitment-demand-for-5-year-age-relaxation-for-all-10-years-for-pwd-candidates-kvn/articleshow-8dhbqr4"/>
        </item>
        <item>
            <title><![CDATA[8 ತಿಂಗಳ ನಂತರವೂ ಕೊಳೆಯದ ಸ್ವಾಮೀಜಿ ಶವ! ದೈವವಾಣಿಯಂತೆ ಸಮಾಧಿ ಅಗೆದಾಗ ಕಾದಿತ್ತು ಮಹಾ ವಿಸ್ಮಯ]]></title>
            <link>https://kannada.asianetnews.com/gallery/karnataka-districts/vijayapura-unbelievable-miracle-in-managuli-saint-s-body-found-undecayed-even-after-8-months-in-tomb-mrq-ft537cs</link>
            <guid isPermaLink="true">https://kannada.asianetnews.com/gallery/karnataka-districts/vijayapura-unbelievable-miracle-in-managuli-saint-s-body-found-undecayed-even-after-8-months-in-tomb-mrq-ft537cs</guid>
            <pubDate>Thu, 03 Sep 2026 08:43:18 +0530</pubDate>
            <description><![CDATA[ವಿಜಯಪುರದ ಮನಗೂಳಿಯಲ್ಲಿ, ಲಿಂಗೈಕ್ಯರಾದ ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರವರು ಭಕ್ತೆಯೊಬ್ಬರ ಮೂಲಕ ದೈವವಾಣಿ ನೀಡಿದ್ದರು. ಅವರ ಸೂಚನೆಯಂತೆ 8 ತಿಂಗಳ ನಂತರ ಸಮಾಧಿ ಅಗೆದು ನೋಡಿದಾಗ, ದೇಹವು ಕೊಳೆಯದೆ ಹಾಗೆಯೇ ಇದ್ದು, ಭಕ್ತರು ಅದನ್ನು ಮೆರವಣಿಗೆಯ ಮೂಲಕ ಮರು ಅಂತ್ಯಸಂಸ್ಕಾರ ಮಾಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m1jkg52d71qbce2mht2xafe2,imgname-vijayapura--3--1788404569165.jpg" type="image/jpeg" height="390" width="690"/>
            <content:encoded><![CDATA[ವಿಜಯಪುರದ ಮನಗೂಳಿಯಲ್ಲಿ, ಲಿಂಗೈಕ್ಯರಾದ ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರವರು ಭಕ್ತೆಯೊಬ್ಬರ ಮೂಲಕ ದೈವವಾಣಿ ನೀಡಿದ್ದರು. ಅವರ ಸೂಚನೆಯಂತೆ 8 ತಿಂಗಳ ನಂತರ ಸಮಾಧಿ ಅಗೆದು ನೋಡಿದಾಗ, ದೇಹವು ಕೊಳೆಯದೆ ಹಾಗೆಯೇ ಇದ್ದು, ಭಕ್ತರು ಅದನ್ನು ಮೆರವಣಿಗೆಯ ಮೂಲಕ ಮರು ಅಂತ್ಯಸಂಸ್ಕಾರ ಮಾಡಿದರು.&lt;img&gt;&lt;p&gt;ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಇತ್ತೀಚೆಗೆ ಒಂದು ವಿಚಿತ್ರ ಹಾಗೂ ವಿಸ್ಮಯಕಾರಿ ಘಟನೆ ನಡೆದಿದೆ. ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರವರು ಅನಾರೋಗ್ಯದಿಂದ ಬಳಲುತ್ತಿದ್ದು, 2025ರ ಡಿಸೆಂಬರ್ 31 ರಂದು ಲಿಂಗೈಕ್ಯರಾಗಿದ್ದರು. ನಂತರ 2026ರ ಜನವರಿ 1 ರಂದು ಪಟ್ಟಣದ ಚೌಕಿಮಠದ ಬಳಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು.&lt;/p&gt;&lt;img&gt;&lt;p&gt;ಇತ್ತೀಚೆಗೆ ಭಕ್ತೆಯೊಬ್ಬರ ಮೈಮೇಲೆ ಬಂದಿದ್ದ ಮಲ್ಲಯ್ಯ ಸರೂರ ಮುತ್ಯಾರವರು, &quot;ಸಮಾಧಿಯಲ್ಲಿ ನನ್ನ ದೇಹ ಹಾಗೆಯೇ ಇದೆ. ಅದನ್ನು ಹೊರತೆಗೆದು ಶ್ರಾವಣ ಮಾಸದಲ್ಲಿ ಬೀರಲಿಂಗೇಶ್ವರ ದೇಗುಲದ ಗದ್ದುಗೆಯ ಪಕ್ಕದಲ್ಲಿ ಮರು ಅಂತ್ಯಕ್ರಿಯೆ ಮಾಡಿ&quot; ಎಂದು ದೈವವಾಣಿಯ ಮೂಲಕ ಸೂಚನೆ ನೀಡಿದ್ದರು.&lt;/p&gt;&lt;img&gt;&lt;p&gt;ಆ ದೈವವಾಣಿಯಂತೆ ಭಕ್ತರು ಸಮಾಧಿಯನ್ನು ಅಗೆದು ನೋಡಿದಾಗ, ಎಂಟು ತಿಂಗಳು ಕಳೆದಿದ್ದರೂ ಸಮಾಧಿಯಲ್ಲಿದ್ದ ದೇಹವು ಕೊಳೆಯದೆ ನಿಷ್ಕಳಂಕವಾಗಿರುವುದು ಕಂಡುಬಂತು. ಬಳಿಕ ಭಕ್ತರು ಸಮಾಧಿಯಿಂದ ದೇಹವನ್ನು ಹೊರತೆಗೆದು, ಪಟ್ಟಣದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಮರು ಅಂತ್ಯಸಂಸ್ಕಾರವನ್ನು ನೆರವೇರಿಸಿದರು.&lt;/p&gt;&lt;img&gt;&lt;p&gt;ತೇವಾಂಶವಿದ್ದು, ಆಮ್ಲಜನಕವಿಲ್ಲದ ವಾತಾವರಣದಲ್ಲಿ ಶವ ಹೂತಾಗ ದೇಹದಲ್ಲಿರುವ ಕೊಬ್ಬಿನಂಶವು ರಾಸಾಯನಿಕ ಬದಲಾವಣೆಗೆ ಒಳಗಾಗಿ ಅಡಿಪೋಸೈರ್ (Saponification) ಎಂಬ ಮೇಣದಂತಹ ವಸ್ತುವಾಗಿ ಬದಲಾಗುತ್ತದೆ. ಇದು ದೇಹದ ಜೀವಕೋಶಗಳನ್ನು ಪ್ಲಾಸ್ಟಿಕ್&zwnj;ನಂತೆ ಮುಚ್ಚಿ, ಬ್ಯಾಕ್ಟೀರಿಯಾಗಳು ದೇಹವನ್ನು ತಿನ್ನದಂತೆ ತಡೆಯುತ್ತದೆ.&lt;/p&gt;&lt;img&gt;&lt;p&gt;ಅತಿಯಾದ ಶುಷ್ಕ (ಒಣ) ವಾತಾವರಣ, ಸಮಾಧಿಯಲ್ಲಿ ಹವಾಮಾನದ ತಾಪಮಾನ ಮತ್ತು ತೇವಾಂಶ ತೀರ ಕಡಿಮೆಯಿದ್ದಾಗ ದೇಹದಲ್ಲಿರುವ ನೀರಿನಾಂಶ ಸಂಪೂರ್ಣವಾಗಿ ಒಣಗಿಹೋಗುತ್ತದೆ. ನೀರಿಲ್ಲದೆ ಬ್ಯಾಕ್ಟೀರಿಯಾಗಳು ಬದುಕಲು ಸಾಧ್ಯವಾಗದೆ ದೇಹವು 'ಮಮ್ಮಿ'ಯಂತೆ ನೈಸರ್ಗಿಕವಾಗಿ ಭದ್ರವಾಗಿ ಉಳಿಯುತ್ತದೆ.&lt;/p&gt;&lt;img&gt;&lt;p&gt;ಸಮಾಧಿ ಮಾಡಿದ ಜಾಗದ ಮಣ್ಣು ಅತಿಯಾದ ಆಮ್ಲೀಯತೆ (Acidic) ಅಥವಾ ಕ್ಷಾರೀಯತೆ (Alkaline) ಹೊಂದಿದ್ದರೆ, ಅಥವಾ ಮಣ್ಣಿನಲ್ಲಿ ಉಪ್ಪು ಮತ್ತು ಬೋರಾಕ್ಸ್&zwnj;ನಂತಹ ನೈಸರ್ಗಿಕ ಖನಿಜಗಳ ಪ್ರಮಾಣ ಹೆಚ್ಚಿದ್ದರೆ, ಅವು ವೈರಸ್-ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸಂಪೂರ್ಣವಾಗಿ ತಡೆಯುತ್ತವೆ. ಅಂತ್ಯಕ್ರಿಯೆಯ ಸಮಯದಲ್ಲಿ ದೇಹಕ್ಕೆ ಬಳಸುವ ಕರ್ಪೂರ, ಗಂಧದ ನೂಲು/ಹುಡಿ, ಕಲಿಯುಗ/ಸುಣ್ಣ, ಭಸ್ಮ, ಅರಿಶಿನ, ಉಪ್ಪು ಮತ್ತು ಕೆಲವು ಸಾಂಪ್ರದಾಯಿಕ ಗಿಡಮೂಲಿಕೆಗಳು ನೈಸರ್ಗಿಕ ಕ್ರಿಮಿನಾಶಕಗಳಾಗಿ (Antiseptics) ಕೆಲಸ ಮಾಡುತ್ತವೆ. ಇವು ಸೂಕ್ಷ್ಮಜೀವಿಗಳ ಆಕ್ರಮಣವನ್ನು ನಿಧಾನಗೊಳಿಸುತ್ತವೆ.&lt;/p&gt;]]></content:encoded>
            <category>vijayapura</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/vijayapura-unbelievable-miracle-in-managuli-saint-s-body-found-undecayed-even-after-8-months-in-tomb-mrq-ft537cs"/>
        </item>
        <item>
            <title><![CDATA[Vijayapura: ಒಂದೇ ಕುಟುಂಬದ 6 ಮಂದಿ ಭೂತನಾಳ ಕೆರೆಗೆ ಹಾರಿದ ಕೇಸ್‌ಗೆ ಬಿಗ್‌ಟ್ವಿಸ್ಟ್; ಗಂಡನ ವಿಕೃತಿ ಬಯಲು?]]></title>
            <link>https://kannada.asianetnews.com/karnataka-districts/vijayapura-major-twist-in-the-case-of-six-family-members-jumping-into-bhutanal-lake-husband-s-depravity-exposed-sns/articleshow-gczxeen</link>
            <guid isPermaLink="true">https://kannada.asianetnews.com/karnataka-districts/vijayapura-major-twist-in-the-case-of-six-family-members-jumping-into-bhutanal-lake-husband-s-depravity-exposed-sns/articleshow-gczxeen</guid>
            <pubDate>Thu, 27 Aug 2026 14:57:11 +0530</pubDate>
            <description><![CDATA[ವಿಜಯಪುರದ ಭೂತನಾಳ ಕೆರೆಯಲ್ಲಿ ಐವರು ಮಕ್ಕಳೊಂದಿಗೆ ತಾಯಿ ಶೋಭಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಂಡ ಮಲಕಾರಿಯ ವಿಕೃತ ದೈಹಿಕ ಹಿಂಸೆ ಮತ್ತು ಆತನ ಅನೈತಿಕ ಸಂಬಂಧವೇ ಈ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಎಂದು ಮೃತ ಶೋಭಾಳ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0z2q6whfykt6nq46dtzz2w2,imgname-vijayapura-bhutanal-lake-deaths-1787749440400.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ವಿಜಯಪುರದ ಭೂತನಾಳ ಕೆರೆಗೆ ಹಾರಿ ಒಂದೇ ಕುಟುಂಬದ 6 ಜನರು ಸಾಮೂಹಿಕ ಆತ್ಮಹತ್ಯೆ ಶರಣಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿರುವ ಮೃತ ಶೋಭಾ ಸಹೋದರಿ ಅಶ್ವಿನಿ ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಶೋಭಾ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.&lt;/p&gt;&lt;h2&gt;ವಿಜಯಪುರ ದುರಂತ: ಗಂಡನ ವಿಕೃತಿಯ ಕರಾಳ ಸತ್ಯ ಬಯಲು?&lt;/h2&gt;&lt;p&gt;ವಿಜಯಪುರ ತಾಲೂಕಿನ ತೊರವಿ ಗ್ರಾಮದ ಶೋಭಾ ತನ್ನ 5 ಮಕ್ಕಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶ್ರಾವಣ ಸೋಮವಾರ ನೈವೇದ್ಯ ಅಡುಗೆ ಸಲುವಾಗಿ ಗಂಡ ಮಲಕಾರಿ ಜಾಲಗೇರಿ ಜೊತೆಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿತ್ತು. ಆದರೆ ಈಗ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ತಾಯಿ, ಮಕ್ಕಳ ಸಾಮೂಹಿಕ ಆತ್ಮಹತ್ಯೆಗೆ ಕಾರಣವೆ ಗಂಡನ ವಿಕೃತ ಟಾರ್ಚರ್ ಕಾರಣ ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;'ಶೋಭಾಗೆ ವಿಕೃತ ಟಾರ್ಚರ್'&lt;/h2&gt;&lt;p&gt;ಈ ಸಾಮೂಹಿಕ ಆತ್ಮಹತ್ಯೆ ಕಾರಣ ಮೃತ ಶೋಭಾ ಗಂಡ ಮಲಕಾರಿ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಗಂಡನ ವಿಕೃತ ಟಾರ್ಚರ್&zwnj;ಗೆ ಬೇಸತ್ತು ಶೋಭಾ ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ಗಂಡ ಮಲಕಾರಿಯಿಂದ ಪತ್ನಿ ಶೋಭಾಗೆ ವಿಕೃತ ಟಾರ್ಚರ್ ನೀಡುತ್ತಿದ್ದ. ಕುಡಿದು ಬಂದು ಶೋಭಾಗೆ ಹಲ್ಲಿನಿಂದ ಕಚ್ಚುತ್ತಿದ್ದ, ಆಕೆಯ ಮೈಗೆಲ್ಲ ಕಚ್ಚಿ ಗಾಯಗೊಳಿಸಿ ವಿಕೃತವಾಗಿ ಟಾರ್ಚರ್ ಮಾಡುತ್ತಿದ್ದ. ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದು ಹಿಂಸೆ ನೀಡುತ್ತಿದ್ದ ಎಂದು ಶೋಭಾ ಸಹೋದರಿ ಅಶ್ವಿನಿ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;'ಪತ್ನಿ ಪ್ರಶ್ನಿಸಿದಾಗಲೆಲ್ಲ ಹಲ್ಲೆ ಮಾಡಿ ಕಿರುಕುಳ!'&lt;/h2&gt;&lt;p&gt;ಇದೇ ವೇಳೆ ಮಲಕಾರಿಗೆ ಬೇರೆ ಮಹಿಳೆ ಜೊತೆಗೆ ಅನೈತಿಕ ಸಂಬಂಧ ಇತ್ತು ಎಂದು ಆರೋಪಿಸಿರುವ ಅವರು, ಇದೇ ಕಾರಣಕ್ಕೆ ಪತ್ನಿ ಶೋಭಾಗೆ ನಿತ್ಯ ಕಿರುಕುಳ ನೀಡುತ್ತಿದ್ದನಂತೆ. ಆತನ ಅನೈತಿಕ ಸಂಬಂಧ ಬಗ್ಗೆ ಪತ್ನಿ ಪ್ರಶ್ನಿಸಿದಾಗಲೆಲ್ಲ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದ. ಇದೇ ಕಿರುಕುಳ ಸಹಿಸಿಕೊಳ್ಳಲಾಗದೆ ಶೋಭಾ, ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;'ಪತ್ನಿ ವಾಪಸ್ ಬಂದರೆ ಅವಳ ಕಥೆಯೇ ಬೇರೆ ಆಗುತ್ತದೆ'&lt;/h2&gt;&lt;p&gt;ಇನ್ನು, ಪತ್ನಿ ಶೋಭಾ ಮಕ್ಕಳ ಜೊತೆ ನಾಪತ್ತೆಯಾದರೂ ಆತ ಹುಡುಕಾಟ ನಡೆಸಿರಲಿಲ್ಲ. ಪತ್ನಿ ವಾಪಸ್ ಬಂದರೆ ಅವಳ ಕಥೆಯೇ ಬೇರೆ ಆಗುತ್ತದೆ ಎಂದು ಶೋಭಾ ತವರು ಮನೆಯವರಿಗೆ ಆರೋಪಿ ಧಮ್ಕಿ ಹಾಕಿದ್ದನಂತೆ. ಕೊನೆಗೆ ಶೋಭಾ ತವರು ಮನೆಯವರ ಒತ್ತಾಯಕ್ಕೆ ಪೊಲೀಸ್ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲು ಮಾಡಿದ್ದನಂತೆ. ಸದ್ಯ ಮಗಳು ಹಾಗೂ ಆಕೆಯ ಐವರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಮಲಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/vijayapura-major-twist-in-the-case-of-six-family-members-jumping-into-bhutanal-lake-husband-s-depravity-exposed-sns/articleshow-gczxeen"/>
        </item>
        <item>
            <title><![CDATA[ವಿಜಯನಗರ: ಮಳೆ ಕೊರತೆಯಿಂದ ತೀವ್ರ ಬರ; ಮಳೆಗಾಗಿ ಪ್ರಾರ್ಥಿಸಿ ಒಂಭತ್ತು ದಿನ ಭಜನಾ ವ್ರತ]]></title>
            <link>https://kannada.asianetnews.com/gallery/karnataka-districts/vijayanagara-rainfall-deficit-nine-days-bhajan-observance-held-in-ulavatti-village-to-pray-for-rain-i5i7drf</link>
            <guid isPermaLink="true">https://kannada.asianetnews.com/gallery/karnataka-districts/vijayanagara-rainfall-deficit-nine-days-bhajan-observance-held-in-ulavatti-village-to-pray-for-rain-i5i7drf</guid>
            <pubDate>Sun, 30 Aug 2026 12:52:22 +0530</pubDate>
            <description><![CDATA[&lt;p&gt;ವಿಜಯನಗರದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಕೃಷಿ ಚಟುವಟಿಕೆ ಇಲ್ಲದೆ ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಮಳೆಗಾಗಿ ಪ್ರಾರ್ಥಿಸಿ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m18r8ek1a2xvc0cyzb8e4ygp,imgname-----------------------2026-08-30t123216.945-1788074015329.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಕೃಷಿ ಚಟುವಟಿಕೆ ಇಲ್ಲದೆ ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಮಳೆಗಾಗಿ ಪ್ರಾರ್ಥಿಸಿ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕಡಿಮೆಯಾಗಿದೆ. ಆಗಸ್ಟ್ ಮುಗಿದರೂ ವಾಡಿಕೆಯಂತೆ ಮಳೆ ಸುರಿಯುತ್ತಿಲ್ಲ. ಸೆಪ್ಟಂಬರ್ ತಿಂಗಳಿನ ಮೇಲೆ ರೈತರ ಭರವಸೆ ಇಟ್ಟುಕೊಂಡಿದ್ದಾರೆ. ಮುಂದಿನ ತಿಂಗಳು ಮಳೆ ಕೈಕೊಟ್ಟರೆ ಬೆಳೆಯೂ ಇಲ್ಲ ಎಂಬ ಆತಂಕ ಅನ್ನದಾತರಿಗೆ ಎದುರಾಗಿದೆ.&lt;/p&gt;&lt;img&gt;&lt;p&gt;ಕೈಕೊಟ್ಟ ಮುಂಗಾರಿನಿಂದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಭೀಕರ ಬರದ ಪರಿಸ್ಥಿತಿಗೆ ಸಿಲುಕಿದೆ. ಮಳೆಯ ಕೊರತೆಯಿಂದ ರೈತರ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು, ಅನ್ನದಾತರ ಬದುಕು ಅಕ್ಷರಶಃ ಬಸವಳಿದು ಹೋಗಿದೆ.&lt;/p&gt;&lt;img&gt;&lt;p&gt;ಇಂತಹ ಸಂಕಷ್ಟದ ಸಂದರ್ಭದಲ್ಲಿ ವರುಣ ದೇವ ಕರುಣೆ ತೋರಿ ಮಳೆ ಸುರಿಸಲಿ, ಹಗರಿಬೊಮ್ಮನಹಳ್ಳಿ ತಾಲೂಕು ಬರದಿಂದ ಮುಕ್ತವಾಗಲಿ, ಮಾಲವಿ ಜಲಾಶಯ ಭರ್ತಿಯಾಗಿ ರೈತರ ಕೃಷಿಗೆ ವರದಾನವಾಗಲಿ ಎಂದು ಪ್ರಾರ್ಥಿಸಿ ತಾಲೂಕಿನ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.&lt;/p&gt;&lt;p&gt;ಗ್ರಾಮದ ಜನರು ಒಗ್ಗೂಡಿ ಭಜನೆ, ಪ್ರಾರ್ಥನೆ ನಡೆಸಿ ಉತ್ತಮ ಮಳೆಯಾಗುವಂತೆ ವರುಣ ದೇವನಲ್ಲಿ ಮೊರೆ ಇಟ್ಟಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/vijayanagara-rainfall-deficit-nine-days-bhajan-observance-held-in-ulavatti-village-to-pray-for-rain-i5i7drf"/>
        </item>
        <item>
            <title><![CDATA[ಗಣಪತಿ ಅಲ್ಲ ಸಾರ್, ಇಲಿಚಪ್ಪನೇ ನಮ್ಗೆ ದೊಡ್ಡ ದೇವ್ರು!  ಈ ಸಮುದಾಯದಲ್ಲಿ ಗಣೇಶನ ಬದಲು ಇಲಿರಾಯನಿಗೆ ಪೂಜೆ!]]></title>
            <link>https://kannada.asianetnews.com/festivals/why-weaver-community-in-vijayanagar-worship-mouse-instead-of-lord-ganesha-rav/articleshow-ksbykh7</link>
            <guid isPermaLink="true">https://kannada.asianetnews.com/festivals/why-weaver-community-in-vijayanagar-worship-mouse-instead-of-lord-ganesha-rav/articleshow-ksbykh7</guid>
            <pubDate>Wed, 16 Sep 2026 07:30:53 +0530</pubDate>
            <description><![CDATA[&lt;p&gt;ವಿಜಯನಗರ, ಬಳ್ಳಾರಿ ಸೇರಿದಂತೆ ವಿವಿಧೆಡೆ ವಾಸಿಸುವ ನೇಕಾರ ಸಮುದಾಯದವರು ಗಣೇಶ ಚತುರ್ಥಿಯಂದು ಗಣಪತಿಯ ಬದಲು ಇಲಿರಾಯನ (ಇಲಿಚಪ್ಪ) ಮೂರ್ತಿಯನ್ನು ಪೂಜಿಸುತ್ತಾರೆ. ತಮ್ಮ ಕುಲಕಸುಬಾದ ನೇಯ್ಗೆಯ ನೂಲನ್ನು ಇಲಿಗಳು ಕಡಿಯದಿರಲಿ ಎಂದು ಬೇಡಿಕೊಳ್ಳಲು ಮೂರು ದಿನಗಳ ಕಾಲ ಈ ವಿಶಿಷ್ಟ ಆಚರಣೆ ಮಾಡುತ್ತಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2kyhawhwr4yxyw02krm9mrv,imgname-ganesha-chaturthi-2026-1789523438481.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೀಮಣ್ಣ ಗಜಾಪುರ ಕೂಡ್ಲಿಗಿ&lt;/strong&gt;&lt;/p&gt;&lt;p&gt;ಎಲ್ಲಿ ನೋಡಿದರೂ ಗಣೇಶನ ಪೂಜೆ ಸಂಭ್ರಮವಾದರೆ ವಿಜಯನಗರ ಜಿಲ್ಲೆ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳು ಅಲ್ಲದೇ ಬಳ್ಳಾರಿ, ಚಿತ್ರದುರ್ಗ, ಹಾವೇರಿ ಹಾಗೂ ಆಂಧ್ರದ ಅನಂತಪುರ ಜಿಲ್ಲೆ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ವಾಸಿಸುವ ನೇಕಾರ ಸಮುದಾಯದವರು ಮಾತ್ರ ಗಣೇಶನ ಬದಲಿಗೆ ವಿಘ್ನನಿವಾರಕನ ವಾಹನವಾದ ಇಲಿರಾಯನ ಮಣ್ಣಿನ ಮೂರ್ತಿ ಮಾಡಿ 3 ದಿನಗಳ ಕಾಲ ವಿಶೇಷ ಪೂಜೆ ಮಾಡಿ ಗಣೇಶನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.&lt;/p&gt;&lt;h2&gt;ಇಲಿರಾಯನ ಮಣ್ಣಿನ ಮೂರ್ತಿ ಮಾಡಿ 3 ದಿನಗಳ ಕಾಲ ವಿಶೇಷ ಏಕೆ?&lt;/h2&gt;&lt;p&gt;ನೇಕಾರರು ತಮ್ಮ ಕುಲಕಸುಬಾದ ಬಟ್ಟೆ ನೇಯ್ಗೆಗೆ ತೊಂದರೆ ಬಾರದಿರಲಿ ಎಂದು ಬೇಡಿಕೊಳ್ಳುವ ಸಲುವಾಗಿ ಇಲ್ಲಿ ಗಣೇಶನ ಮೂರ್ತಿ ಬದಲು ಇಲಿರಾಯನ ಮೂರ್ತಿ ಕೂರಿಸುತ್ತಾರೆ. ನೇಕಾರರು ಬಟ್ಟೆ, ಸೀರೆ ಹೆಣೆಯಲು ದುಬಾರಿಯ ರೇಷ್ಮೆ ಇತರ ನೂಲು ತಂದು ತಮ್ಮ ಮನೆಗಳಲ್ಲಿ ಇಟ್ಟಿರುತ್ತಾರೆ. ಮನೆಯಲ್ಲಿನ ಇಲಿಗಳು ನೂಲು ಕಡಿದು ಬಿಟ್ಟರೆ ಸಹಸ್ರಾರು ರುಪಾಯಿ ನಷ್ಟವನ್ನು ನೇಕಾರರೇ ಹೊರಬೇಕಾಗುತ್ತಿದೆ. ನೂರು ಇನ್ನೂರು ಕೂಲಿಗಾಗಿ ಸಾವಿರಾರು ಮೌಲ್ಯದ ರೇಷ್ಮೆ ನೂಲನ್ನು ತಂದು ಬಟ್ಟೆಯ ನೇಯುವ ಕುಟುಂಬಗಳಿಗೆ ನೂಲನ್ನು ಇಲಿಗಳು ಕಡಿದುಬಿಟ್ಟರೆ ಅವರ ಬದುಕು ಮೂರಾಬಟ್ಟೆಯಾಗುತ್ತದೆ. ಹೀಗಾಗಿ ಇವರು ಇಲಿರಾಯನಿಗೆ ದೇವರ ಸ್ಥಾನಮಾನ ನೀಡುತ್ತಾರೆ. ಇಲಿರಾಯ ನಮ್ಮ ನೂಲು ಕಡಿಯದಿರಲಿ ಎಂದು ಪ್ರತಿ ವರ್ಷ ಗಣೇಶನ ಹಬ್ಬದ ಸಂದರ್ಭದಲ್ಲಿ 3 ದಿನಗಳ ಕಾಲ ಇಲಿರಾಯನ ಮೂರ್ತಿ ಕೂರಿಸಿ, ಪೂಜಿಸಿ, ಸಿಹಿ ಮಾಡಿ ನೇಕಾರ ಕುಟುಂಬದರವರೆಲ್ಲರೂ ಸಂಭ್ರಮಿಸುತ್ತಾರೆ.&lt;/p&gt;&lt;h3&gt;&lt;strong&gt;ಇಲಿರಾಯ ನಮ್ಮ ನೂಲು ಕಡಿಯದಿರಲಿ ಎಂಬ ನಂಬಿಕೆ&lt;/strong&gt;&lt;/h3&gt;&lt;p&gt;ನೂಲು ಮುಟ್ಟುವ ಹಾಗಿಲ್ಲ: ಗಣೇಶನಂತೆ ಮಣ್ಣಿನಿಂದ ಮಾಡಿದ ಇಲಿರಾಯನ ಮೂರ್ತಿಯನ್ನು 3 ದಿನಗಳ ಕಾಲ ಮನೆಯಲ್ಲಿ ಕೂರಿಸಿ ಪ್ರತಿದಿನ ಕುಟುಂಬದವರೆಲ್ಲರೂ ಭಕ್ತಿಯಿಂದ ಪೂಜೆ ಮಾಡಿ, 3 ದಿನಗಳ ನಂತರ ಇಲಿರಾಯನನ್ನು ನೀರಿಗೆ ಬಿಡುತ್ತಾರೆ. ನೀರಲ್ಲಿ ಬಿಡುವಾಗ ಕಡುಬನ್ನು ಜತೆಗೆ ಬಿಟ್ಟು ಬರುತ್ತಾರೆ. ಇಲಿ ಮೂರ್ತಿ ಜತೆಗೆ ತಮಗೆ ಅನ್ನ ನೀಡುವ ಕೈಮಗ್ಗಕ್ಕೂ ಗಣೇಶನ ಹಬ್ಬದ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಾರೆ. ಆದರೆ ಯಾರೂ 3 ದಿನಗಳ ಕಾಲ ನೇಯ್ಗೆ ಮಾಡುವುದಿಲ್ಲ. ಪೂರ್ವಜರ ಕಾಲದಿಂದಲೂ ಇಂತಹ ಆಚರಣೆ ಮಾಡುತ್ತಾ ಬಂದಿದ್ದಾರೆ. ನೂಲು ನೇಯ್ಗೆಯಿಂದ ಜೀವನ ಸಾಗಿಸುವ ನೇಕಾರ ಕುಟುಂಬಗಳಿಗೆ ನೂಲಿನ ದರ ಹೆಚ್ಚಳ ಆಗುತ್ತಿದ್ದು, ನೇಯುವ ಕೂಲಿ ದರ ಕಡಿಮೆಯಾಗುತ್ತಿದ್ದರಿಂದ ಬಹುತೇಕ ನೇಕಾರರು ಈಗ ತಮ್ಮ ಕುಲಕಸುಬು ಬಿಟ್ಟು ಬೇರೆ ಉದ್ಯೋಗ ಆರಂಭಿಸಿದ್ದಾರೆ.&lt;/p&gt;&lt;h3&gt;&lt;strong&gt;ನಾವ್ಯಾರೂ ಗಣೇಶನನ್ನ ಕೂರಿಸೋದಿಲ್ಲ ಸಾರ್..&lt;/strong&gt;&lt;/h3&gt;&lt;p&gt;ನಾವ್ಯಾರೂ ಗಣೇಶನನ್ನು ಕೂರಿಸೋದಿಲ್ಲ ಸಾರ್, ಇಲಿಚಪ್ಪನೇ ನಮ್ಗೆ ಶ್ರೇಷ್ಠ ದೇವ್ರು, ಗಣೇಶನ ಮೂರ್ತಿಯಂತೆ ಇಲಿಚಪ್ಪನ ಮೂರ್ತಿ ತಂದು 3 ದಿನ ಮನೆಯಲ್ಲಿ ಕೂಡ್ಸಿ ಕಡುಬು ಮಾಡಿ ಕಡುಬಿನ ಜತೆಗೇ ನೀರಲ್ಲಿ ಬಿಟ್ಟು ಬರ್ತೀವಿ. ಮೂರು ದಿನ ಯಾವ ನೇಕಾರರು ನೂಲು ಮುಟ್ಟೋದಿಲ್ಲ, ಕೈಮಗ್ಗದಲ್ಲಿ ಬಟ್ಟೆ ನೇಯೋದಿಲ್ಲ, ಒಂದು ವೇಳೆ ಬಟ್ಟೆ ನೇಯ್ದರೆ ಕೇಡು ಕಟ್ಟಿಟ್ಟ ಬುತ್ತಿ ಎಂದು ನೇಕಾರ ಸಮಾಜದ ಹಿರಿಯ ವೀರಣ್ಣ ತಿಳಿಸಿದ್ದಾರೆ.&lt;/p&gt;&lt;p&gt;ಕೂಡ್ಲಿಗಿ ತಾಲೂಕಿನ ಉಜ್ಜಿನಿ, ಬೆನಕನಹಳ್ಳಿ, ರಾಂಪುರ, ಹೊಸಹಳ್ಳಿ, ಹೂಡೇಂ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಾಗಿ ನಮ್ಮ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದು, ಪ್ರತಿವರ್ಷ ಗಣೇಶನ ಹಬ್ಬ ಬಂತೆಂದರೆ ನಾವು ಮಾತ್ರ ಅಂದು ಗಣೇಶನ ಕೂರಿಸುವ ದಿನವೇ ಗಣೇಶನ ಮೂರ್ತಿ ಬದಲಾಗಿ ಇಲಿಚಪ್ಪನ ಮೂರ್ತಿ ಎಲ್ಲರ ಮನೆಯಲ್ಲಿ ಮೂರು ದಿನ ಕೂರಿಸಿ ಅಡಿಮುಡಿಯಿಂದ ಪೂಜೆ ಸಲ್ಲಿಸಿ ಹಬ್ಬಆಚರಿಸುವುದು ಪರಂಪರೆಯಿಂದಲೂ ಬಂದಿದೆ ಎಂದು ಉಜ್ಜಿನಿಯ ನೇಕಾರ ಕುಟುಂಬದ ಯುವಕ ಅಣಜಿ ಭೀಮಣ್ಣ ತಿಳಿಸಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/festivals/why-weaver-community-in-vijayanagar-worship-mouse-instead-of-lord-ganesha-rav/articleshow-ksbykh7"/>
        </item>
        <item>
            <title><![CDATA[MB Patil: ವಿಜಯಪುರಕ್ಕೆ ವೇಗದ ಸ್ಪರ್ಶ: ಜಿಲ್ಲೆಯ ಹಲವು ರಸ್ತೆ ಕಾಮಗಾರಿಗಳಿಗೆ ಚಾಲನೆ]]></title>
            <link>https://kannada.asianetnews.com/karnataka-districts/minister-m-b-patil-launches-several-road-development-works-in-vijayapura-mrq/articleshow-lqqrdbw</link>
            <guid isPermaLink="true">https://kannada.asianetnews.com/karnataka-districts/minister-m-b-patil-launches-several-road-development-works-in-vijayapura-mrq/articleshow-lqqrdbw</guid>
            <pubDate>Wed, 02 Sep 2026 06:38:55 +0530</pubDate>
            <description><![CDATA[&lt;p&gt;ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ವಿಜಯಪುರದಲ್ಲಿ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ವಿಜಯಪುರದ ಸಮಗ್ರ ಅಭಿವೃದ್ಧಿಯ ಪಯಣ ನಿರಂತರವಾಗಿರಲಿದೆ ಎಂದರು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ftex6rp8kmyk0p8s47dwgb,imgname-mb-patil-1788311205080.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಉತ್ತಮ ರಸ್ತೆ ನಿರ್ಮಾಣದಿಂದ ನಗರದ ಅಭಿವೃದ್ಧಿಗೆ ವೇಗದ ಸ್ಪರ್ಷ ಸಿಗುವುದರ ಜೊತೆಗೆ ಜನರ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲು ಮಹತ್ವದ ಹೆಜ್ಜೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ರಹಮಾನಿಯ ವೃತ್ತದಿಂದ ಕನ್ನಾನ ಫಂಕ್ಷನ್ ಹಾಲ್, ಬಾರಾಕೊಟ್ರಿ ತಾಂಡಾ ಮೂಲಕ ಜುಮನಾಳ, ಖತಿಜಾಪುರ ಕೂಡು ರಸ್ತೆ ನಿರ್ಮಾಣಕ್ಕೆ ₹5 ಕೋಟಿ ವೆಚ್ಚದಲ್ಲಿ ಹಾಗೂ ಅಥಣಿ ಮುಖ್ಯ ರಸ್ತೆಯಿಂದ ರಾಜಕುಮಾರ ಲೇಔಟ್ ಕೂಡು ರಸ್ತೆ ₹1.50 ಕೋಟಿ ವೆಚ್ಚದಲ್ಲಿ ಕೈಗೊಳ್ಳುತ್ತಿರುವ ರಸ್ತೆ ಕಾಮಗಾರಿಗಳಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರೊಂದಿಗೆ ಜಂಟಿಯಾಗಿ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರದ ಸಮಗ್ರ ಅಭಿವೃದ್ಧಿಯ ಪಯಣ ನಿರಂತರವಾಗಿರಲಿದೆ ಎಂದರು.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ರಸ್ತೆ ಅಭಿವೃದ್ಧಿ?&lt;/strong&gt;&lt;/h2&gt;&lt;p&gt;ನಗರದ ರೆಹಮಾನಿಯಾ ವೃತ್ತದಿಂದ ಕನ್ನಾನ್&zwnj; ಫಂಕ್ಷನ್ ಹಾಲ್ ಹಾಗೂ ಬಾರಾಕೊಟ್ರಿ ತಾಂಡಾ ಮೂಲಕ ಜುಮನಾಳ ಹಾಗೂ ಖತಿಜಾಪುರ ಕೂಡು ರಸ್ತೆ ಸುಧಾರಣೆ ಅಂದಾಜು ₹5 ಕೋಟಿ ವೆಚ್ಚ ಮಾಡಲಾಗುತ್ತಿದೆ. 3 ಕಿಮೀ. ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈ ಕಾಮಗಾರಿಯಲ್ಲಿ ಎಂಬ್ಯಾಕ್&zwnj;ಮೆಟ್, ಸಬ್ ಗ್ರೇಡ್ (300 ಎಂಎ), ಜಿಎಸ್&zwnj;ಬಿ, ಡಬ್ಲ್ಯೂ ಎಂ.ಎಂ, ಡಾಂಬರೀಕರಣ (ಬಿಎಂ ಮತ್ತು ಎಸ್&zwnj;ಡಿಬಿಸಿ) ಮತ್ತು 8 ಸಿಡಿ ಕಾಮಗಾರಿಗಳು ಸೇರಿವೆ.&lt;/p&gt;&lt;p&gt;ಜಿಲ್ಲೆಯ ತಿಕೋಟಾ ತಾಲೂಕಿನ ನವಸರಪುರ, ತಾಜಪುರ ಕೂಡು ರಸ್ತೆ ಸುಧಾರಣೆಗೆ ₹150 ಲಕ್ಷ ಬಿಡುಗಡೆಯಾಗಿದೆ. ಈ ಅನುದಾನದಡಿ 700 ಮೀ. ರಸ್ತೆ ಡಾಂಬರೀಕರಣ ಹಾಗೂ 185 ಮೀಟರ್&zwnj; ಕಾಂಕ್ರೀಟ್ ರಸ್ತೆ ಮತ್ತು ಫೂಟ್ ಬ್ರಿಡ್ಜ್ ನಿರ್ಮಿಸಲಾಗುವುದು ಎಂದು ಹೇಳಿದರು.&lt;/p&gt;&lt;p&gt;ತೊರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ 548ಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ್&zwnj; ರಸ್ತೆ ಮೇಲ್ಮೈ ಹಾಳಾಗಿದ್ದು, 700ಮೀ. ಉದ್ದಕ್ಕೂ ಎಸ್&zwnj;ಡಿಬಿಸಿ ಹಾಗೂ 186 ಮೀ. ಉದ್ದದ ಆಂತರಿಕ ರಸ್ತೆಗೆ ಸಿಸಿ ರಸ್ತೆ ಸೇರಿಸಲಾಗುವುದು ಜೊತೆಗೆ ಮೈದಾನದಲ್ಲಿ ರಸ್ತೆ ಅಳವಡಿಸಲಾಗುವುದು ಎಂದರು.&lt;/p&gt;&lt;h3&gt;&lt;strong&gt;ತೊರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ&lt;/strong&gt;&lt;/h3&gt;&lt;p&gt;ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಮಾತನಾಡಿ, ತಿಕೋಟಾ ತಾಲೂಕಿನ ನವರಸಪುರ ತಾಜಪುರ ಜೋಡು ರಸ್ತೆಯ ಸುಧಾರಣೆ ಮಾಡಲಾಗುತ್ತಿದ್ದು, ವಿಜಯಪುರ ನಗರದ ತೊರವಿ ಅತಾಲಟ್ಟಿಯಿಂದ ವಿಜಯಪುರ-ಅಥಣಿ ರಾಷ್ಟ್ರೀಯ ಹೆದ್ದಾರಿ 548ಬಿ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಕಾಲುಸಂಕ (ಫೂಟ್ ಬ್ರಿಡ್ಜ್) ನಿರ್ಮಾಣ ಸೇರಿಸಲಾಗಿದೆ. ಅಥಣಿ ಮುಖ್ಯ ರಸ್ತೆಯಿಂದ ರಾಜಕುಮಾರ ಲೇಔಟ್ ಮುಖ್ಯ ರಸ್ತೆ, ಸುಪ್ರಿಂ ಮೆಡಿಕಲ್ ನಿಂದ ತೊರವಿ ಅತಾಲಟ್ಟಿ ಕೂಡು ರಸ್ತೆ ಹಾಗೂ ಆಂತರಿಕ ರಸ್ತೆ ಸುಧಾರಣೆಗೆ ₹150 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.&lt;/p&gt;&lt;p&gt;1.16 ಕಿ.ಮೀ. ರಸ್ತೆಯ ಉದ್ದದ ರಸ್ತೆಗೆ 340 ಮೀ. ಡಾಂಬರು ರಸ್ತೆ ಹಾಗೂ 820 ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಆಂತರಿಕ ರಸ್ತೆಗಳ ಡಾಂಬರೀಕರಣ ಮತ್ತು ಸಿಸಿ ರಸ್ತೆ ನಿರ್ಮಾಣದ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಗಳಿಂದ ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.&lt;/p&gt;&lt;p&gt;ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ಪವಾರ ಪಾಲ್ಗೊಂಡಿದ್ದರು.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/minister-m-b-patil-launches-several-road-development-works-in-vijayapura-mrq/articleshow-lqqrdbw"/>
        </item>
        <item>
            <title><![CDATA[90Km ವೇಗದಲ್ಲಿದ್ದಾಗ ಎದ್ದು ನಿಂತ ಚಾಲಕ! ಜಮೀನಿಗೆ ನುಗ್ಗಿ ನಿಂತ ಖಾಸಗಿ ಬಸ್! ಭಯಾನಕ ವಿಡಿಯೋ ವೈರಲ್!]]></title>
            <link>https://kannada.asianetnews.com/state/private-bus-terrible-accident-gulbarga-vijayapura-route-public-demand-investigation-rav/articleshow-nsh0wgy</link>
            <guid isPermaLink="true">https://kannada.asianetnews.com/state/private-bus-terrible-accident-gulbarga-vijayapura-route-public-demand-investigation-rav/articleshow-nsh0wgy</guid>
            <pubDate>Mon, 07 Sep 2026 08:44:02 +0530</pubDate>
            <description><![CDATA[&lt;p&gt;ಖಾಸಗಿ ಬಸ್ ಹೈವೇಯಲ್ಲಿ 90 ಕಿಮೀ ವೇಗದಲ್ಲಿದ್ದ ಚಲಿಸುತ್ತಿದ್ದಾಗಲೇ ಚಾಲಕ ಎದ್ದು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಭಯಾನಕ ಘಟನೆ ಕಲಬುರಗಿ-ವಿಜಯಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1wwsr70ww9kh4yvr2mh76mf,imgname-private-bus-terrible-accident-gulbarga-vijayapura-route-1788749865184.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.7):&lt;/strong&gt; ಖಾಸಗಿ ಬಸ್ ಹೈವೇಯಲ್ಲಿ 90 ಕಿಮೀ ವೇಗದಲ್ಲಿದ್ದ ಚಲಿಸುತ್ತಿದ್ದಾಗಲೇ ಚಾಲಕ ಎದ್ದು ನಿಂತಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಭಯಾನಕ ಘಟನೆ ಕಲಬುರಗಿ-ವಿಜಯಪುರ ಮಾರ್ಗದ ರಸ್ತೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.&lt;/p&gt;&lt;h3&gt;ಬಸ್ ವೇಗದಲ್ಲಿದ್ದಾಗ ಚಾಲಕ ಸೀಟಿನಿಂದ ಎದ್ದಿದ್ದೇಕೆ?&lt;/h3&gt;&lt;p&gt;ಈ ಆಘಾತಕಾರಿ ಘಟನೆಯ ದೃಶ್ಯ ಖಾಸಗಿ ಬಸ್&zwnj;ನಲ್ಲಿನಲ್ಲಿ ಅಳವಡಿಸಿದ್ದ ಸಿಸಿಟಿಯಲ್ಲಿ ದಾಖಲಾಗಿದೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 90 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬಸ್&zwnj;ನಿಂದ ಚಾಲಕ ಎದ್ದು ನಿಂತಿದ್ದೇಕೆ? ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರ ಪ್ರಾಣಕ್ಕೆ ಕುತ್ತು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ನೆಟಿಜನ್ ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ್ದಾರೆ.&lt;/p&gt;&lt;h2&gt;ಚಾಲಕನ ಕಿವಿಯಲ್ಲಿ ಬ್ಲೂಟೂತ್ ಹಿಯರ್ ಬಡ್&zwnj;!&lt;/h2&gt;&lt;p&gt;ಚಾಲನೆ ಮಾಡುವಾಗ ಮೊಬೈಲ್&zwnj;ನಲ್ಲಿ ಮಾತನಾಡುವುದು ಬ್ಲ್ಯೂಟೂತ್ ಹಿಯರ್ ಬಡ್ ಬಳಸುವಂತಿಲ್ಲ, ಆದರೆ ಪ್ರಯಾಣಿಕರ ಸುರಕ್ಷತೆ ಮರೆತು ಚಾಲಕ ಕಿವಿಯಲ್ಲಿ ಹಿಯರ್ ಬಡ್ ಹಾಕಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಹಾಡುಗಳನ್ನ ಕೇಳುತ್ತಾ ಮೈಮರೆತು ಸೀಟಿನಿಂದ ಎದ್ದಿರುವ ಸಾಧ್ಯತೆಯಿದೆ. ಚಾಲಕನನ್ನು ನಂಬಿ ಪ್ರಯಾಣಿಸುವ ಪ್ರಯಾಣಿಕರಿಗೆ ಅದೆಷ್ಟು ಅಪಾಯಕಾರಿ! ಬಸ್&zwnj;ನಲ್ಲಿ ಸುಮಾರು ನಲ್ವತ್ತು ಪ್ರಯಾಣಿಕರು ಚಾಲಕನ ನಂಬಿಕೆ ಇಟ್ಟು ಮಲಗಿರ್ತಾರೆ. ಆದರೆ ಬ್ಲ್ಯೂಟೂತ್&zwnj;ನಲ್ಲಿ ಹಾಡುವುದು ಕೇಳುವುದು, ಬಸ್ ವೇಗದಲ್ಲಿದ್ದಾಗಲೇ ಸೀಟಿನಿಂದ ಎದ್ದಿರುವುದು ಎಷ್ಟೊಂದು ನಿರ್ಲಕ್ಶ್ಯ! ಪ್ರಕರಣದ ಬಗ್ಗೆ ತನಿಖೆ ನಡೆಸಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;&lt;p&gt;Gulbarga - Vijayapura Route ⚠️&amp;nbsp;What&rsquo;s with VRL Bus Driver with bluetooth ear buds at 90kmph, hallucinating? &zwj;♂️Luckily, bus didn&rsquo;t topple or no headON anywhere&hellip;@DriveSmart_IN @dabir @anil_lulla @RCBengaluru @InfraEye pic.twitter.com/z1X16afJIg&lt;/p&gt;&lt;p&gt;&mdash; Dave (Road Safety: City &amp;amp; Highways) (@motordave2) September 6, 2026&lt;/p&gt;&lt;p&gt;&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/private-bus-terrible-accident-gulbarga-vijayapura-route-public-demand-investigation-rav/articleshow-nsh0wgy"/>
        </item>
        <item>
            <title><![CDATA[ಬರೋಬ್ಬರಿ 70 ಕಡೆ ರಂಧ್ರ ಕೊರೆದು ಕಾಲುವೆ ನೀರು ಕಳ್ಳತನ;  ಮುಳವಾಡ ಏತ ನೀರಾವರಿ ಯೋಜನೆ]]></title>
            <link>https://kannada.asianetnews.com/karnataka-districts/vijayapura-mulwad-lift-irrigation-project-more-than-70-cases-of-water-theft-by-drilling-holes-in-canals-detected-mrq/articleshow-pksz1lf</link>
            <guid isPermaLink="true">https://kannada.asianetnews.com/karnataka-districts/vijayapura-mulwad-lift-irrigation-project-more-than-70-cases-of-water-theft-by-drilling-holes-in-canals-detected-mrq/articleshow-pksz1lf</guid>
            <pubDate>Wed, 09 Sep 2026 09:43:30 +0530</pubDate>
            <description><![CDATA[ಬಬಲೇಶ್ವರ ತಾಲೂಕಿನ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ರಂಧ್ರ ಕೊರೆದು ನೀರು ಕದಿಯುತ್ತಿದ್ದ 70ಕ್ಕೂ ಹೆಚ್ಚು ಪ್ರಕರಣಗಳನ್ನು ಕೆಬಿಜೆಎನ್ಎಲ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ರೈತರ ಪ್ರತಿಭಟನೆ ಮತ್ತು ಸಚಿವರ ಸೂಚನೆಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ರಮ ಪೈಪ್&zwnj;ಗಳನ್ನು ಮುಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m225pcaym4ncmw4yejvahze1,imgname-canal-1788926964062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಬಬಲೇಶ್ವರ ತಾಲೂಕಿನಲ್ಲಿ ಮುಳವಾಡ ಏತ ನೀರಾವರಿ ಯೋಜನೆಯಡಿ ಬರುವ ಮಲಘಾಣ ಪಶ್ಚಿಮ ಕಾಲುವೆಯ 67 ಕಿ.ಮೀ. ಯಿಂದ 77 ಕಿ.ಮೀ. ವ್ಯಾಪ್ತಿಯಲ್ಲಿ ಕಾಲುವೆಯ ಕೆಳಭಾಗದಲ್ಲಿ ರಂಧ್ರ ಕೊರೆದು ನೀರು ಕಳ್ಳತನ ಮಾಡುತ್ತಿದ್ದ 70 ರಿಂದ 80 ಹೊಸ ಪ್ರಕರಣಗಳನ್ನು ಕಂಬಾಗಿ ಮತ್ತು ಸಂಗಾಪುರ ಎಸ್.ಎಚ್. ಗ್ರಾಮಗಳ ಮಧ್ಯೆ ಕೆಬಿಜೆಎನ್ಎಲ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.&lt;/p&gt;&lt;p&gt;ಈ ಮುಂಚೆ ಕಾಲುವೆಯ ಕೊನೆಯ ಭಾಗದವರೆಗೂ ನೀರು ಬರುತ್ತಿಲ್ಲ ಎಂದು ರೈತರು ಅರ್ಜುಣಗಿಯಲ್ಲಿ ಧರಣಿ ನಡೆಸಿದ್ದರು. ಅಲ್ಲದೆ, ರೈತರು ಕಾಲುವೆಯ ಡೆಡ್ ಎಂಡ್ ವರೆಗೆ ನೀರು ತಲುಪಿಸಲು ಕ್ರಮ ಕೈಗೊಳ್ಳುವಂತೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ&zwnj;ರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.&lt;/p&gt;&lt;h2&gt;&lt;strong&gt;ಅಕ್ರಮವಾಗಿ ನೀರು ಪಡೆಯುತ್ತಿರುವ ಜನರು&lt;/strong&gt;&lt;/h2&gt;&lt;p&gt;ಈ ಹಿನ್ನೆಲೆ ಕೆಬಿಜೆಎನ್ಎಲ್ ಅಧಿಕಾರಿಗಳು ಈ ಮುಂಚೆ ಇದೇ ತಾಲೂಕಿನ ತಾಲೂಕಿನ ಯಕ್ಕುಂಡಿ, ಹೊಕ್ಕುಂಡಿ, ಅರ್ಜುಣಗಿ, ಹೆಬ್ಬಳಟ್ಟಿ ವ್ಯಾಪ್ತಿಯಲ್ಲಿ ಸುಮಾರು 30 ಕಡೆಗಳಲ್ಲಿ ಕಾಲುವೆಯ ಬುಡದಲ್ಲಿ ಯಾರ ಕಣ್ಣಿಗೂ ಕಾಣದಂತೆ ರಂದ್ರ ಕೊರೆದು ಸುಮಾರು 4 ರಿಂದ 6 ಇಂಚುಗಳ ಪೈಪುಗಳನ್ನು ಅಳವಡಿಸಿ ಅಕ್ರಮವಾಗಿ ನೀರು ಪಡೆಯುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;265 ಎಕರೆ ಭೂಮಿ ಕೊಟ್ಟಿದ್ದೇವೆ, ನಮಗೇಕೆ ನೀರಿಲ್ಲ? ಕಾಲುವೆಗೆ ಇಳಿದು ಗ್ರಾಮಸ್ಥರ ಆಕ್ರೋಶ&lt;/strong&gt;&lt;/p&gt;&lt;h3&gt;&lt;strong&gt;ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ&lt;/strong&gt;&lt;/h3&gt;&lt;p&gt;ಈ ಬಾರಿ ಕೂಡ ನೀರು ಕಳ್ಳರು ಕಾಲುವೆಯ ಕೆಳಭಾಗದಲ್ಲಿ ರಂಧ್ರ ಕೊರೆದು 4 ರಿಂದ 6 ಇಂಚಿನ ಪೈಪು ಬಳಸಿ ನೀರು ಕದಿಯುತ್ತಿರುವುದು ಪತ್ತೆಯಾಗಿದೆ. ಈಗ ಕಂಬಾಗಿ ಮತ್ತು ಸಂಗಾಪುರ ಎಸ್.ಎಚ್. ಭಾಗದಲ್ಲಿ ರಂಧ್ರಗಳನ್ನು ಮುಚ್ಚಲಾಗಿದ್ದು, ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಬಬಲೇಶ್ವರ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್&zwnj; ರಾಜೇಂದ್ರ ರೂಡಗಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವಿಜಯಪುರ-ಯಶವಂತಪುರ ರೈಲಿನ ಇಂಜಿನ್ ವೈಫಲ್ಯ; ಬಸವ ಎಕ್ಸ್&zwnj;ಪ್ರೆಸ್ ತಡೆದು ಕಲ್ಲು ತೂರಾಟ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-mulwad-lift-irrigation-project-more-than-70-cases-of-water-theft-by-drilling-holes-in-canals-detected-mrq/articleshow-pksz1lf"/>
        </item>
        <item>
            <title><![CDATA[Vijayapura: 12 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಖೈದಿ ಅರೆಸ್ಟ್; ಕ್ರೈಂ ಥ್ರಿಲ್ಲರ್ ಮೂವಿ ಮೀರಿಸುವ ಕೇಸ್ ಇದು!]]></title>
            <link>https://kannada.asianetnews.com/karnataka-districts/crime-thriller-convict-sentenced-to-life-imprisonment-arrested-after-12-years-by-vijayapura-police-sns/articleshow-pql6egs</link>
            <guid isPermaLink="true">https://kannada.asianetnews.com/karnataka-districts/crime-thriller-convict-sentenced-to-life-imprisonment-arrested-after-12-years-by-vijayapura-police-sns/articleshow-pql6egs</guid>
            <pubDate>Thu, 10 Sep 2026 15:22:56 +0530</pubDate>
            <description><![CDATA[12 ವರ್ಷಗಳ ಹಿಂದೆ ವಿಜಯಪುರ ಜೈಲಿನಿಂದ ಪರಾರಿಯಾಗಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುತು ಬದಲಿಸಿಕೊಂಡು ವಾಸಿಸುತ್ತಿದ್ದ ಆರೋಪಿ ಬಸವರಾಜ್ ಪಾಟೀಲ್&zwnj;ನನ್ನು ಫಿಂಗರ್&zwnj;ಪ್ರಿಂಟ್ ಸಹಾಯದಿಂದ ಪತ್ತೆಹಚ್ಚಿ, ಸಿನಿಮೀಯ ರೀತಿಯಲ್ಲಿ ಸೆರೆಹಿಡಿಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m25bh9t82ddjn5kwka5zrh2k,imgname-vijayapura--1--1789033752392.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ಬರೋಬ್ಬರಿ 12 ವರ್ಷಗಳ ಹಿಂದೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಬಂಧಿಸಲು ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವರಾಜ್ ಪಾಟೀಲ್ ಬಂಧಿತ ಜೀವವಾಧಿ ಕೈದಿಯಾಗಿದ್ದು, ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದಾರೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾಗಿದ್ದ ಬಸವರಾಜ್ ಪಾಟೀಲ್ 2009ರಲ್ಲಿ ಬಾಗಲಕೋಟೆ ಕೃಷಿ ಅಧಿಕಾರಿ ಹನಿಟ್ರಾಪ್ ಮತ್ತು ಕೊಲೆ ಕೇಸಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ. 2014ರಲ್ಲಿ ವಿಜಯಪುರ ಕೇಂದ್ರ ಕಾರಾಗೃಹದಿಂದ ಆಸ್ಪತ್ರೆಗೆ ಎಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ.&lt;/p&gt;&lt;h2&gt;12 ವರ್ಷ ತಲೆಮರೆಸಿಕೊಂಡಿದ್ದ ಹಂತಕ: ರೋಚಕ ಬೇಟೆಯ ಕಥೆ&lt;/h2&gt;&lt;p&gt;ಬಳಿಕ 12 ವರ್ಷ ಎಲ್ಲಿ ಹೋದ? ಏನು ಮಾಡುತ್ತಿದ್ದ? ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಜೈಲಿಂದ ಪಾರಾರಿಯಾದ ಬಳಿಕ ಕುಟುಂಬದವರ ಸಂಪರ್ಕಕ್ಕೂ ಬಾರದೆ ಜೀವನ ಮಾಡುತ್ತಿದ್ದನಂತೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ವಿಜಯಪುರ ಪೊಲೀಸರಿಗೆ ಸಿಕ್ಕಿತ್ತು. ಕ್ರೈಂ ಥ್ರಿಲ್ಲರ್ ಮೂವಿ ರೀತಿಯಲ್ಲಿ ಜೈಲಿಂದ ಓಡಿ ಹೋದ ಹಂತಕನ ಬೆನ್ನಟ್ಟಿದ ಗಾಂಧಿ ಚೌಕ ಪೊಲೀಸರು ಕೊನೆಗೂ ಆತನನ್ನು ಬಂಧಿಸಿ ಕರೆತಂದಿದ್ದಾರೆ.&lt;/p&gt;&lt;p&gt;ಜೈಲಿಂದ ಪರಾರಿಯಾಗಿದ್ದ ಕೊಲೆ&zwnj;ಕೇಸ್ ಆರೋಪಿ ಸಿಕ್ಕಿದ್ದೆ ರೋಚಕ ಎಂದು ಹೇಳಬಹುದು. 12 ವರ್ಷಗಳ ಬಳಿಕ ಖತರ್ನಾಕ್ ಹಂತಕನನ್ನ ಹುಡುಕಿ ಬಂಧಿಸಿ ಗಾಂಧಿಚೌಕ ಇನ್ಸ್ಪೆಕ್ಟರ್ ಪ್ರದೀಪ್ ತಳಕೇರಿ ಕರೆತಂದಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ಆರೋಪ ಬಸವರಾಜ್, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿದ್ಧಸಮುದ್ರ ಗ್ರಾಮದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಂಡ ಬಳಿಕ ದಾಡಿ, ಕೂದಲು ಬಿಟ್ಟುಕೊಂಡು ಗುರುತೆ ಸಿಗದಂತೆ ಜಮೀನಿ ಒಂದನ್ನು ಲೀಜ್ ಹಾಕಿಕೊಂಡು ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನಂತೆ. ಅಲ್ಲದೇ ಅಲ್ಲಿಯೇ ಮಹಿಳೆಯೊಬ್ಬರ ಜೊತೆ ಸಂಬಂಧನವನ್ನು ಬೆಳೆಸಿದ್ದನಂತೆ.&lt;/p&gt;&lt;p&gt;ಹಳೆ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಸಿಪಿಐ ತಳಕೇರಿ ಅವರು, ಅಪರಾಧಿಯ ಮಾಹಿತಿ ಕಲೆ ಹಾಕಲು ಶುರು ಮಾಡಿದ್ದರು. ಈ ವೇಳೆ ಕಾಲ್&zwnj; ಡಿಟೈಲ್, ಲೋಕೇಶನ್ ಆಧರಿಸಿ ಸಿದ್ದಸಮುದ್ರಕ್ಕೆ ತೆರಳಿ ಅಪರಾಧಿಯನ್ನು ಗಾಂಧಿ ಚೌಕ ಪೊಲೀಸರು ಬಂಧಿಸಿದ್ದರು. ಆದರೆ ಪೊಲೀಸರಿಗೆ ಸಿಕ್ಕ ಬಳಿಕ ಬಸವರಾಜ್, ನಾನು ಅವನಲ್ಲ ಎಂದು ನಾಟಕ ಮಾಡಿದ್ದನಂತೆ. ಇದರೊಂದಿಗೆ ತಂತ್ರಜ್ಞಾನದ ನೆರವು ಪಡೆದುಕೊಂಡಿದ್ದ ಪೊಲೀಸರು, ಫಿಂಗರ್ ಪ್ರಿಂಟ್ ಮಾದರಿ ಬಳಸಿ ಕೊಲೆಗಾರನ ಗುರುತು ಪತ್ತೆ ಮಾಡಿದ್ದರು. ಕೊಲೆ&zwnj; ಮಾಡಿದ್ದ ವೇಳೆ ಪೊಲೀಸರು ಸಂಗ್ರಹಿಸಿಕೊಂಡಿದ್ದ ಕೊಲೆ ಆರೋಪಿಯ ಫಿಂಗರ್ ಜೊತೆಗೆ ಈಗ ಪಡೆದುಕೊಂಡಿದ್ದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿತ್ತು. ಇದರೊಂದಿಗೆ ಆತನನ್ನು ಬಂಧಿಸಿ ಕೋರ್ಟ ಎದುರು ಬಸವರಾಜ್ ಪಾಟೀಲ್&zwnj;ನನ್ನ ಹಾಜರು ಪಡೆಸಿದ್ದರು.&lt;/p&gt;]]></content:encoded>
            <category>vijayapura</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/crime-thriller-convict-sentenced-to-life-imprisonment-arrested-after-12-years-by-vijayapura-police-sns/articleshow-pql6egs"/>
        </item>
        <item>
            <title><![CDATA[Vijaypura: ಬೈಕ್‌ನಲ್ಲಿ ಬೆನ್ನಟ್ಟಿದ ಭಜರಂಗದಳ ಕಾರ್ಯಕರ್ತರು;  ಕೊನೆಗೆ ಸಿಕ್ಕಿಬಿತ್ತು 8 ಟನ್ ಗೋಮಾಂಸ ತುಂಬಿದ ಲಾರಿ!]]></title>
            <link>https://kannada.asianetnews.com/karnataka-districts/vijayapura-to-telangana-8-ton-beef-loaded-truck-seized-indi-bajrang-dal-police-case-bmk/articleshow-r1i3gm1</link>
            <guid isPermaLink="true">https://kannada.asianetnews.com/karnataka-districts/vijayapura-to-telangana-8-ton-beef-loaded-truck-seized-indi-bajrang-dal-police-case-bmk/articleshow-r1i3gm1</guid>
            <pubDate>Sun, 30 Aug 2026 19:52:09 +0530</pubDate>
            <description><![CDATA[ವಿಜಯಪುರ ಜಿಲ್ಲೆಯಲ್ಲಿ, ಭಜರಂಗದಳ ಕಾರ್ಯಕರ್ತರು ಬೈಕ್&zwnj;ನಲ್ಲಿ ಲಾರಿಯೊಂದನ್ನು ಬೆನ್ನಟ್ಟಿ ಅಕ್ರಮ ಗೋಮಾಂಸ ಸಾಗಾಟ ಜಾಲವನ್ನು ಬಯಲಿಗೆಳೆದಿದ್ದಾರೆ. ತೆಲಂಗಾಣಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 8 ಟನ್ ಗೋಮಾಂಸವನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m19gq6wbrav05n39cb1spm6m,imgname-photo-1788099664778.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಸಾಗಾಟ ಜಾಲವೊಂದನ್ನು ಭಜರಂಗದಳ ಕಾರ್ಯಕರ್ತರು ಬೈಕ್&zwnj;ನಲ್ಲಿ ಬೆನ್ನಟ್ಟಿ ಬಯಲಿಗೆಳೆದಿದ್ದಾರೆ. ವಿಜಯಪುರ ನಗರದಿಂದ ಇಂಡಿ ಮಾರ್ಗವಾಗಿ ನೆರೆ ರಾಜ್ಯ ತೆಲಂಗಾಣಕ್ಕೆ ಅಕ್ರಮವಾಗಿ ರವಾನೆಯಾಗುತ್ತಿದ್ದ ಭಾರಿ ಪ್ರಮಾಣದ ಗೋಮಾಂಸವನ್ನು ಭಜರಂಗದಳದ ಕಾರ್ಯಕರ್ತರು ಸಿನಿಮೀಯ ಶೈಲಿಯಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.&lt;/p&gt;&lt;h2&gt;&lt;strong&gt;ರಾಜಾರೋಷವಾಗಿ ಸಾಗಾಟ, ಸಿನಿಮೀಯ ಚೇಸ್!&lt;/strong&gt;&lt;/h2&gt;&lt;p&gt;ವಿಜಯಪುರ ನಗರದಿಂದ ಇಂಡಿ ತಾಲೂಕಿನ ಗಡಿ ಮಾರ್ಗವಾಗಿ ಲಾರಿಯೊಂದರಲ್ಲಿ ಅಪಾರ ಪ್ರಮಾಣದ ಗೋಮಾಂಸ ಸಾಗಣೆಯಾಗುತ್ತಿರುವ ಕುರಿತು ಭಜರಂಗದಳದ ಕಾರ್ಯಕರ್ತರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಲಾರಿಯನ್ನು ಬೆನ್ನಟ್ಟಿದ್ದಾರೆ. ಕಂಟೇನರ್ ಲಾರಿಯು ವೇಗವಾಗಿ ತೆರಳುತ್ತಿದ್ದರೂ ಲೆಕ್ಕಿಸದೆ ತಮ್ಮ ದ್ವಿಚಕ್ರ ವಾಹನಗಳಲ್ಲಿ (ಬೈಕ್) ಹಲವು ಕಿಲೋಮೀಟರ್&zwnj;ಗಳವರೆಗೆ ಚೇಸ್ ಮಾಡಿದ್ದಾರೆ. ಕೊನೆಗೆ ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಲಾರಿಯನ್ನು ತಡೆದು ನಿಲ್ಲಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಲಾರಿಯಲ್ಲಿ ಪತ್ತೆಯಾಯ್ತು ೮ ಟನ್ ಮಾಂಸ!&lt;/strong&gt;&lt;/h3&gt;&lt;p&gt;ಲಾರಿಯನ್ನು ತಡೆದು ಪರಿಶೀಲಿಸಿದಾಗ ಕಾರ್ಯಕರ್ತರಿಗೆ ಆಘಾತ ಕಾದಿತ್ತು. ಕಂಟೇನರ್ ಒಳಗೆ ಅಂದಾಜು ೮ ಟನ್&zwnj;ಗೂ ಹೆಚ್ಚು ಗೋಮಾಂಸವನ್ನು ಅತ್ಯಂತ ಗೋಪ್ಯವಾಗಿ ಹಾಗೂ ಅಕ್ರಮವಾಗಿ ತುಂಬಲಾಗಿತ್ತು. ತಕ್ಷಣವೇ ಕಾರ್ಯಕರ್ತರು ಸ್ಥಳೀಯ ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ವಿಜಯಪುರದಿಂದ ನಾಂಪಲ್ಲಿಗೆ ರಫ್ತು!&lt;/strong&gt;&lt;/h3&gt;&lt;p&gt;ಪ್ರಾಥಮಿಕ ತನಿಖೆ ಮತ್ತು ಲಾರಿ ಚಾಲಕನ ವಿಚಾರಣೆಯಿಂದ ಈ ಅಕ್ರಮ ದಂಧೆಯ ಜಾಲ ತೆರೆದುಕೊಂಡಿದೆ. ವಿಜಯಪುರ ನಗರದ ಜೈಲ್ ರಸ್ತೆಯ ನಿವಾಸಿ ಖಾಸಿಂಸಾಬ್ ಮುಲ್ಲಾ ಎಂಬಾತ ಈ ಗೋಮಾಂಸವನ್ನು ಸರಬರಾಜು ಮಾಡುತ್ತಿದ್ದ ಮುಖ್ಯ ರೂವಾರಿಯಾಗಿದ್ದಾನೆ. ಈತ ತೆಲಂಗಾಣ ರಾಜ್ಯದ ನಾಂಪಲ್ಲಿ ವ್ಯಾಪ್ತಿಯ ಮೆಹೆಬೂನ್ ನಗರದ ನಿವಾಸಿ ಇಮ್ರಾನ್ ಶೇಖ್ ಎಂಬಾತನಿಗೆ ಈ ಅಪಾರ ಪ್ರಮಾಣದ ಗೋಮಾಂಸವನ್ನು ಅಕ್ರಮವಾಗಿ ರಫ್ತು ಮಾಡುತ್ತಿದ್ದ ಎಂಬ ಸಂಗತಿ ಬಯಲಾಗಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ಕಸ್ಟಡಿಗೆ ಲಾರಿ, ತನಿಖೆ ಚುರುಕು!&lt;/strong&gt;&lt;/h3&gt;&lt;p&gt;ಸ್ಥಳಕ್ಕೆ ದೌಡಾಯಿಸಿದ ಇಂಡಿ ಗ್ರಾಮೀಣ ಠಾಣೆಯ ಪೊಲೀಸರು ಗೋಮಾಂಸ ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಂಸದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜೈಲ್ ರಸ್ತೆಯ ಖಾಸಿಂಸಾಬ್ ಮುಲ್ಲಾ ಹಾಗೂ ತೆಲಂಗಾಣದ ಇಮ್ರಾನ್ ಶೇಖ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಾಲ ಬೀಸಿದ್ದಾರೆ. ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೋಮಾಂಸ ಸರಬರಾಜಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅಕ್ರಮ ಕಸಾಯಿಖಾನೆಗಳು ಮತ್ತು ರಫ್ತು ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/vijayapura-to-telangana-8-ton-beef-loaded-truck-seized-indi-bajrang-dal-police-case-bmk/articleshow-r1i3gm1"/>
        </item>
        <item>
            <title><![CDATA[ವಿಜಯಪುರ-ಯಶವಂತಪುರ ರೈಲಿನ ಇಂಜಿನ್ ವೈಫಲ್ಯ; ಬಸವ ಎಕ್ಸ್‌ಪ್ರೆಸ್ ತಡೆದು ಕಲ್ಲು ತೂರಾಟ]]></title>
            <link>https://kannada.asianetnews.com/gallery/karnataka-districts/indian-railway-16548-engine-failure-on-vijayapura-to-yeshwanthpur-train-basava-express-stopped-and-stone-pelted-mrq-t84hvp7</link>
            <guid isPermaLink="true">https://kannada.asianetnews.com/gallery/karnataka-districts/indian-railway-16548-engine-failure-on-vijayapura-to-yeshwanthpur-train-basava-express-stopped-and-stone-pelted-mrq-t84hvp7</guid>
            <pubDate>Sat, 05 Sep 2026 19:11:46 +0530</pubDate>
            <description><![CDATA[ವಿಜಯಪುರದಿಂದ ಯಶವಂತಪುರಕ್ಕೆ ಹೊರಟಿದ್ದ ರೈಲು ತಾಂತ್ರಿಕ ದೋಷದಿಂದ ಸುಮಾರು 5 ಗಂಟೆಗಳ ಕಾಲ ನಿಂತಿತ್ತು. ಇದರಿಂದಾಗಿ, CAR/DAR ಪೊಲೀಸ್ ಪರೀಕ್ಷೆಗೆ ತೆರಳುತ್ತಿದ್ದ ನೂರಾರು ಅಭ್ಯರ್ಥಿಗಳು ಪರೀಕ್ಷೆ ತಪ್ಪುವ ಆತಂಕದಿಂದ ರೈಲ್ವೆ ಇಲಾಖೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m1rw603wm66b1gdrrtebj9zc,imgname-yeshwanthpur-vijayapura--2--1788615000188.jpg" type="image/jpeg" height="390" width="690"/>
            <content:encoded><![CDATA[ವಿಜಯಪುರದಿಂದ ಯಶವಂತಪುರಕ್ಕೆ ಹೊರಟಿದ್ದ ರೈಲು ತಾಂತ್ರಿಕ ದೋಷದಿಂದ ಸುಮಾರು 5 ಗಂಟೆಗಳ ಕಾಲ ನಿಂತಿತ್ತು. ಇದರಿಂದಾಗಿ, CAR/DAR ಪೊಲೀಸ್ ಪರೀಕ್ಷೆಗೆ ತೆರಳುತ್ತಿದ್ದ ನೂರಾರು ಅಭ್ಯರ್ಥಿಗಳು ಪರೀಕ್ಷೆ ತಪ್ಪುವ ಆತಂಕದಿಂದ ರೈಲ್ವೆ ಇಲಾಖೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು.&lt;img&gt;&lt;p&gt;ವಿಜಯಪುರದಿಂದ ಯಶವಂತಪುರಕ್ಕೆ ಹೊರಟಿದ್ದ ರೈಲು (ಸಂಖ್ಯೆ 16548) ವಿಜಯಪುರ ರೈಲು ನಿಲ್ದಾಣದಿಂದ ಮಧ್ಯಾಹ್ನ 2:50ಕ್ಕೆ ನಿರ್ಗಮಿಸಿ, ಸುಮಾರು 3-4 ಕಿಲೋಮೀಟರ್ ಚಲಿಸುತ್ತಿದ್ದಂತೆಯೇ ತಾಂತ್ರಿಕ ದೋಷದಿಂದ ಇಂಜಿನ್ ವೈಫಲ್ಯ ಕಂಡಿದೆ. ಮರುದಿನ ಬೆಳಗ್ಗೆ 5:00 ಗಂಟೆಗೆ ಯಶವಂತಪುರಕ್ಕೆ ತಲುಪಬೇಕಿದ್ದ ಈ ರೈಲು, ಇಂಜಿನ್ ಸಮಸ್ಯೆಯಿಂದಾಗಿ ಸತತ 5 ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ನಿಂತು ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟುಮಾಡಿತು.&lt;/p&gt;&lt;img&gt;&lt;p&gt;ಈ ರೈಲಿನಲ್ಲಿ ಮರುದಿನ ಬೆಳಗ್ಗೆ 10:00 ಗಂಟೆಗೆ ನಡೆಯಲಿದ್ದ ಸಿಟಿ ಆರ್ಮ್ಡ್ (CAR) ಹಾಗೂ ಡಿಸ್ಟ್ರಿಕ್ಟ್ ಆರ್ಮ್ಡ್ (DAR) ಮೀಸಲು ಪೊಲೀಸ್ ಪಡೆ ಹುದ್ದೆಗಳ ಪರೀಕ್ಷೆಗೆ ಹಾಜರಾಗಬೇಕಿದ್ದ ಸುಮಾರು 500 ರಿಂದ 1000 ಪರೀಕ್ಷಾರ್ಥಿಗಳು ಪ್ರಯಾಣಿಸುತ್ತಿದ್ದರು. ಪರೀಕ್ಷಾರ್ಥಿಗಳು ಬೆಳಿಗ್ಗೆ 9:30 ರೊಳಗೆ ಬೆಂಗಳೂರು ಹಾಗೂ ತುಮಕೂರಿನ ಪರೀಕ್ಷಾ ಕೇಂದ್ರ ತಲುಪುವುದು ಕಡ್ಡಾಯವಾಗಿದ್ದರಿಂದ, ರೈಲಿನ ವಿಳಂಬದಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಕೆಳಗಿಳಿದು ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು.&lt;/p&gt;&lt;img&gt;&lt;p&gt;ಈ ವೇಳೆ ಪಕ್ಕದ ಹಳಿಯಲ್ಲಿ ಬಾಗಲಕೋಟೆ, ಸೊಲ್ಲಾಪುರ ಹಾಗೂ ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬಸವ ಎಕ್ಸ್&zwnj;ಪ್ರೆಸ್ ರೈಲನ್ನು ತಡೆದು, ಕೆಲ ಯುವಕರು ಚಲಿಸುತ್ತಿದ್ದ ರೈಲಿನ ಮುಂದೆ ನಿಂತು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಯುವಕರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೇ ಸಮಯದಲ್ಲಿ ರೈಲ್ವೆ ಅಧಿಕಾರಿಗಳು ವಿಜಯಪುರ-ಬೆಂಗಳೂರು ರೈಲಿಗೆ ಹಿಂಬದಿಯಿಂದ ಮತ್ತೊಂದು ಇಂಜಿನ್ ಜೋಡಿಸಿ ರೈಲು ಚಲಿಸುವಂತೆ ವ್ಯವಸ್ಥೆ ಮಾಡಿದರು.&lt;/p&gt;&lt;img&gt;&lt;p&gt;ರೈಲು ಚಲಿಸಲು ಪ್ರಾರಂಭಿಸುತ್ತಿದ್ದಂತೆ ಪರೀಕ್ಷಾರ್ಥಿಗಳು ಮತ್ತೆ ಪ್ರಯಾಣಕ್ಕೆ ಅಣಿಯಾದರಾದರೂ, ಮರುದಿನದ ಪರೀಕ್ಷೆಗೆ ಒಂದು ವೇಳೆ ವಿಳಂಬವಾದರೆ ಅದಕ್ಕೆ ಸಂಪೂರ್ಣವಾಗಿ ರೈಲ್ವೆ ಇಲಾಖೆಯೇ ಹೊಣೆ ಎಂದು ಆರೋಪಿಸಿದರು. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ತೀವ್ರ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.&lt;/p&gt;]]></content:encoded>
            <category>vijayapura</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/indian-railway-16548-engine-failure-on-vijayapura-to-yeshwanthpur-train-basava-express-stopped-and-stone-pelted-mrq-t84hvp7"/>
        </item>
        <item>
            <title><![CDATA[Vijayapura: ಬೆಳ್ಳಂಬೆಳಗ್ಗೆ ಭೂತನಾಳ ಕೆರೆಯಲ್ಲಿ ತೇಲಿ ಬಂತು ಹೆಣಗಳ ರಾಶಿ; ಮಕ್ಕಳು ಸೇರಿ 6 ಮೃತದೇಹಗಳು ಪತ್ತೆ]]></title>
            <link>https://kannada.asianetnews.com/karnataka-districts/pile-of-bodies-found-floating-in-bhutanal-lake-6-bodies-including-those-of-children-found-in-vijayapura-sns/articleshow-w0rkolu</link>
            <guid isPermaLink="true">https://kannada.asianetnews.com/karnataka-districts/pile-of-bodies-found-floating-in-bhutanal-lake-6-bodies-including-those-of-children-found-in-vijayapura-sns/articleshow-w0rkolu</guid>
            <pubDate>Wed, 26 Aug 2026 10:59:06 +0530</pubDate>
            <description><![CDATA[&lt;p&gt;ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ತಾಯಿ ಮತ್ತು ಐವರು ಮಕ್ಕಳೂ ಸೇರಿದಂತೆ ಒಟ್ಟು ಆರು ಶವಗಳು ಪತ್ತೆಯಾಗಿವೆ. ಈ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0y6z8qny39shm6f5pw6rtxt,imgname-bhutanal-lake-1787720344309.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ವಿಜಯಪುರ ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ಹೆಣಗಳ ರಾಶಿ ತೇಲಿ ಬಂದಿದ್ದು, ಸ್ಥಳೀಯರಲ್ಲಿ ಆತಂ ಮೂಡಿಸಿದೆ. ಭೂತನಾಳ ಕೆರೆಯಲ್ಲಿ ಒಟ್ಟು 6 ಶವ ಪತ್ತೆಯಾಗಿದ್ದು, ಇದರಲ್ಲಿ ತಾಯಿ ಸೇರಿ ಮಕ್ಕಳು ಶವಗಳು ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಭೂತನಾಳ ಕೆರೆಯಲ್ಲಿ ತೇಲಿದ ಆರು ಶವಗಳ ರಹಸ್ಯ!&lt;/h2&gt;&lt;p&gt;ಇಬ್ಬರು ಗಂಡು ಮಕ್ಕಳು, ಮೂವರು ಬಾಲಕಿಯರು ಸೇರಿದಂತೆ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮೊದಲು ಕೆರೆ ನೋಡಲು ಬಂದ ಪ್ರವಾಸಿಗರು ಇರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸ ಮಾಡಿದ್ದಾರೆ.&lt;/p&gt;&lt;h2&gt;ಆತ್ಮಹತ್ಯೆಗೆ ಶರಣಾಗಿರುವ ನಿರೀಕ್ಷೆ!&lt;/h2&gt;&lt;p&gt;ಸ್ಥಳಕ್ಕೆ ಭೇಟಿ ನೀಡಿರುವ ಆದರ್ಶ ನಗರ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದ್ದು, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಮೃತ ಆರು ಮಂದಿಯಲ್ಲಿ ತಾಯಿ ಸೇರಿದಂತೆ ಐವರು ಮಕ್ಕಳು ಎಂದು ಪೊಲೀಸರು ಗುರುತಿಸಿದ್ದಾರೆ.&lt;/p&gt;&lt;h2&gt;ಆಗಸ್ಟ್ 24ರಂದು ನಾಪತ್ತೆ ಪ್ರಕರಣ ದಾಖಲು&lt;/h2&gt;&lt;p&gt;ಇಬ್ಬರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು, ಒಬ್ಬ ಮಹಿಳೆ (ತಾಯಿ) ಎಂದು ಗುರುತಿಸಿರುವ ಪೊಲೀಸರು, ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆಹಾಕಿದ್ದುರ. ಈ ವೇಳೆ ಮೃತರು ವಿಜಯಪುರ ತೊರವಿ ಮೂಲದವರು ಎಂದು ತಿಳಿದು ಬಂದಿದ್ದು, ತಾಯಿ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಾಗಿದ್ದು, ಆಗಸ್ಟ್ 24ರ ಸೋಮವಾರ ಆರು ಮಂದಿ ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;ಸ್ಥಳೀಯರು ಹೇಳಿದ್ದೇನು?&lt;/h2&gt;&lt;p&gt;ಈ ಬಗ್ಗೆ ಮಾತನಾಡಿರುವ ಸ್ಥಳೀಯರಾದ ಸಂತೋಷ ಎಂಬವರು, ಬೆಳಗ್ಗೆ 8 ಗಂಟೆಯ ಸಮಯದಲ್ಲಿ ವಾಕಿಂಗ್ ಮಾಡಲು ಬಂದಿದ್ದೇವು. ಈ ಸಂದರ್ಭದಲ್ಲಿ ಕೆರೆಯ ನೀರಿನಲ್ಲಿ ಹೆಣಗಳು ತೇಲಿ ಬಂದಿತ್ತು. ಆಗ ನಾವು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಒಂದೇ ಕಡೆ ಒಟ್ಟು ಆರು ಮಂದಿಯ ಮೃತ ದೇಹ ಕಾಣಿಸಿತ್ತು, ಅದರಲ್ಲಿ ಮಕ್ಕಳ ಮೃತದೇಹ ಇರೋದು ನೋಡಿದ್ದೇವು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮೃತದೇಹಗಳನ್ನು ಹೊರ ತೆಗೆಯುವ ಕೆಲಸ ಮಾಡಿದ್ದಾರೆ. ಮೃತರ ಬಗ್ಗೆ ನಮಗೆ ಇಲ್ಲ ಎಂದಿದ್ದಾರೆ.&lt;/p&gt;&lt;h2&gt;ಎಸ್&zwnj;ಪಿ ಹೇಳಿದ್ದೇನು?&lt;/h2&gt;&lt;p&gt;ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸ್ಪಿ ಲಕ್ಷ್ಮಣ ನಿಂಬರಗಿ, ನಮಗೆ ಇಂದು ಬೆಳಗ್ಗೆ 8:45ಕ್ಕೆ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೇವು. ಸೋಮವಾರ ನಾಪತ್ತೆ ಪ್ರಕರಣವನ್ನು ಮೃತ ಮಹಿಳೆಯ ಗಂಡ ದೂರು ನೀಡಿದ್ದರು. ಮನೆಯಲ್ಲಿದ್ದ ಐದು ಮಕ್ಕಳು ಹಾಗೂ ಶ್ರವಣ ದೋಷವಿರುವ ಮಗುವನ್ನು ಹಾಸ್ಟೆಲ್&zwnj;ನಲ್ಲಿ ಇಟ್ಟಿದ್ದರು. ಆ ಮಗುವನ್ನು ತಾಯಿ ಕರೆದುಕೊಂಡು ಬಂದಿದ್ದು ತಿಳಿದು ಬಂದಿದೆ. ತನಿಖೆ ಕೈಗೊಂಡ ಸಂದರ್ಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮನೆಲ್ಲಿಯೇ ಮೊಬೈಲ್ ಬಿಟ್ಟು ಬಂದಿದ್ದರು. ಗಂಡನ ಮನೆಯ್ಲಿ ಶ್ರವಣದ ಹಬ್ಬದ ಅಡುಗೆ ಮಾಡುವ ಸಂದರ್ಭದಲ್ಲಿ ಗಲಾಟೆ ಆಗಿತ್ತು ಎಂಬ ಮಾಹಿತಿ ಇದೆ. ಈಗ ಇದು ಆತ್ಮಹತ್ಯೆಯೇ ಅಥವಾ ಬೇರೆ ಸಂಶಯಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದು, ಎಫ್&zwnj;ಎಸ್&zwnj;ಎಲ್ ವರದಿಗೆ ಕಳುಹಿಸುತ್ತೇವೆ. ಕುಟುಂಬಸ್ಥರು, ಗಂಡನ ಬಳಿ ಈ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ನಡೆಯಲಿದೆ ಎಂದು ಹೇಳಿದರು.&lt;/p&gt;]]></content:encoded>
            <category>vijayapura</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/pile-of-bodies-found-floating-in-bhutanal-lake-6-bodies-including-those-of-children-found-in-vijayapura-sns/articleshow-w0rkolu"/>
        </item>
        <item>
            <title><![CDATA[ವಿಜಯಪುರ ಗಗನಕ್ಕೆ ಹೊಸ ರೆಕ್ಕೆ: ಮಹತ್ವದ ಹೆಜ್ಜೆಯ ಮಾಹಿತಿ ಹಂಚಿಕೊಂಡ ಸಚಿವ MB ಪಾಟೀಲ್]]></title>
            <link>https://kannada.asianetnews.com/karnataka-districts/carver-aviation-has-shown-interest-in-setting-up-a-flight-training-academy-at-vijayapura-airport-mrq/articleshow-yozhkir</link>
            <guid isPermaLink="true">https://kannada.asianetnews.com/karnataka-districts/carver-aviation-has-shown-interest-in-setting-up-a-flight-training-academy-at-vijayapura-airport-mrq/articleshow-yozhkir</guid>
            <pubDate>Thu, 03 Sep 2026 07:52:22 +0530</pubDate>
            <description><![CDATA[ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ಕಾರ್ವರ್&zwnj; ಏವಿಯೇಷನ್&zwnj; ಸಂಸ್ಥೆಯು ವಿಮಾನ ಚಾಲನಾ ತರಬೇತಿ ಅಕಾಡೆಮಿ ಸ್ಥಾಪಿಸಲು ಆಸಕ್ತಿ ತೋರಿದೆ. ಈ ಯೋಜನೆಯು ಪೈಲಟ್ ತರಬೇತಿ, ವಿಮಾನ ನಿರ್ವಹಣೆ ಮತ್ತು ದುರಸ್ತಿ ಸೇವೆಗಳನ್ನು ಒದಗಿಸಲಿದ್ದು, ಉತ್ತರ ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್&zwnj; ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1jh51843f56nhzp43yd33vj,imgname-vijayapura-airport-1788402107652.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ ವಿಮಾನನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಅಕಾಡೆಮಿ&lt;/p&gt;&lt;p&gt;&lt;strong&gt;ಬೆಂಗಳೂರು: &lt;/strong&gt;ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ಕಾರ್ವರ್&zwnj; ಏವಿಯೇಷನ್&zwnj; ಸಂಸ್ಥೆಯು ವಿಮಾನ ಚಾಲನಾ ತರಬೇತಿ ಅಕಾಡೆಮಿ ಸ್ಥಾಪಿಸಲು ಆಸಕ್ತಿ ತೋರಿದ್ದು, ಈ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್&zwnj; ತಿಳಿಸಿದರು.&lt;/p&gt;&lt;h2&gt;&lt;strong&gt;ವಿಮಾನ ಹಾರಾಟ ತರಬೇತಿ&lt;/strong&gt;&lt;/h2&gt;&lt;p&gt;ಖನಿಜ ಭವನದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಕಾರ್ವರ್&zwnj; ಏವಿಯೇಷನ್&zwnj; ಸಂಸ್ಥೆಯ ನಿರ್ದೇಶಕ ನೆವಿಲ್&zwnj; ಭರೂಚ ಮತ್ತು ವ್ಯವಸ್ಥಾಪಕ ಪರಮೇಶ್&zwnj; ಪಾರೀಖ್&zwnj; ಅವರೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಎಂ.ಬಿ.ಪಾಟೀಲ್&zwnj;, ಕಾರ್ವರ್&zwnj; ಏವಿಯೇಷನ್&zwnj; ಸಂಸ್ಥೆ ವಿಜಯಪುರದಲ್ಲಿ ತನ್ನ ಯೋಜನೆ ಅನುಷ್ಠಾನಗೊಳಿಸಲು ವಿಮಾನನಿಲ್ದಾಣದ ಆವರಣಕ್ಕೆ ಹೊಂದಿಕೊಂಡಿರುವ 2.5 ಎಕರೆ ಭೂಮಿ ಕೇಳಿದೆ. ಯೋಜನೆ ಜಾರಿಗೊಂಡರೆ ವಿಮಾನ ಹಾರಾಟ ತರಬೇತಿ, ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಪೂರಕ ಚಟುವಟಿಕೆಗಳು, ಗ್ರೌಂಡ್&zwnj; ಸಪೋರ್ಟ್&zwnj; ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.&lt;/p&gt;&lt;h3&gt;&lt;strong&gt;ಬಾರಾಮತಿಯಲ್ಲಿ ನೆಲೆಯೂರಿರುವ ಕಾರ್ವರ್ ಏವಿಯೇಷನ್ ಸಂಸ್ಥೆ&lt;/strong&gt;&lt;/h3&gt;&lt;p&gt;ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣವನ್ನು ಕೇವಲ ವೈಮಾನಿಕ ಸಂಪರ್ಕದ ಕೇಂದ್ರವನ್ನಾಗಿಸುವುದಷ್ಟೇ ಅಲ್ಲದೆ, ವೈಮಾನಿಕ ಶಿಕ್ಷಣ, ತರಬೇತಿ ಹಾಗೂ ಉದ್ಯೋಗದ ಹೊಸ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇರಿಸಿದ್ದೇವೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ನೆಲೆಯೂರಿರುವ ಕಾರ್ವರ್ ಏವಿಯೇಷನ್ ಸಂಸ್ಥೆಯು ವಿಜಯಪುರ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಫ್ಲೈಯಿಂಗ್ ಟ್ರೈನಿಂಗ್ ಅಕಾಡೆಮಿ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದೆ. ಈ ಕುರಿತು ಸಂಸ್ಥೆಯ ನಿರ್ದೇಶಕ ಶ್ರೀ ನೆವಿಲ್ ಭರೂಚ ಹಾಗೂ ವ್ಯವಸ್ಥಾಪಕ ಶ್ರೀ ಪರಮೇಶ್ ಪಾರೀಖ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಇಲ್ಲಿ ಪೈಲಟ್ ತರಬೇತಿಯ ಜೊತೆಗೆ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ನಿರ್ವಹಣಾ ಸೇವೆಗಳು (MRO), ಹ್ಯಾಂಗರ್&zwnj;ಗಳು ಹಾಗೂ ಗ್ರೌಂಡ್ ಸಪೋರ್ಟ್ ಸೌಲಭ್ಯಗಳು ಅಭಿವೃದ್ಧಿಯಾಗಲಿವೆ. ಇದರಿಂದ ಉತ್ತರ ಕರ್ನಾಟಕದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಹೊಸ ಅವಕಾಶಗಳು ತೆರೆದುಕೊಳ್ಳುವುದರ ಜೊತೆಗೆ, ಸ್ಥಳೀಯ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಪೈಲಟ್ ತರಬೇತಿ ಪಡೆಯಲು ಉತ್ತಮ ಅವಕಾಶಗಳು ಹಾಗೂ ನೂರಾರು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ, ಸ್ಥಳೀಯ ವಿದ್ಯಾರ್ಥಿಗಳಿಗೆ ತರಬೇತಿ ಶುಲ್ಕದಲ್ಲಿ ಆಕರ್ಷಕ ರಿಯಾಯಿತಿ ನೀಡುವುದಾಗಿ ಸಂಸ್ಥೆಯು ಭರವಸೆ ನೀಡಿರುವುದು ಸಂತಸದ ಸಂಗತಿ.&lt;/p&gt;&lt;p&gt;ಮುಂದಿನ ಹಂತದಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮತ್ತೊಂದು ಸಭೆ ನಡೆಸಿ, ಅಕಾಡೆಮಿಯ ರೂಪುರೇಷೆ, ಮೂಲಸೌಕರ್ಯ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಶೀಘ್ರದಲ್ಲಿಯೇ ವಿಮಾನ ನಿಲ್ದಾಣ ಲೋಕಾರ್ಪಣೆ&lt;/strong&gt;&lt;/h3&gt;&lt;p&gt;ವಿಜಯಪುರ ವಿಮಾನ ನಿಲ್ದಾಣಕ್ಕೆ ಎದುರಾಗಿದ್ದ ಪರಿಸರ ಅನುಮತಿಯ ಕಾನೂನು ತೊಡಕು ಸುಪ್ರೀಂಕೋರ್ಟ್ ತೀರ್ಪಿನಿಂದ ಸಂಪೂರ್ಣವಾಗಿ ನಿವಾರಣೆಯಾಗಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಯಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/carver-aviation-has-shown-interest-in-setting-up-a-flight-training-academy-at-vijayapura-airport-mrq/articleshow-yozhkir"/>
        </item>
        <item>
            <title><![CDATA[ಟ್ರ್ಯಾಕ್ಟರ್‌ಗೂ ಸವಾಲ್? 9 ಗಂಟೆಯಲ್ಲಿ 40 ಎಕರೆ ಎಡೆ ಹೊಡೆದ ವಿಜಯಪುರದ ಜೋಡೆತ್ತುಗಳು!]]></title>
            <link>https://kannada.asianetnews.com/karnataka-districts/vijayapura-bullock-pair-ploughs-40-acres-in-just-9-hours-amazes-locals-gvd/articleshow-ytneqqx</link>
            <guid isPermaLink="true">https://kannada.asianetnews.com/karnataka-districts/vijayapura-bullock-pair-ploughs-40-acres-in-just-9-hours-amazes-locals-gvd/articleshow-ytneqqx</guid>
            <pubDate>Sun, 30 Aug 2026 20:43:50 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು 18ರಿಂದ 20 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಜೋಡೆತ್ತುಗಳು ಕೇವಲ 9 ಗಂಟೆಗಳಲ್ಲಿ ಬರೋಬ್ಬರಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆದು ಗಮನ ಸೆಳೆದಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m19kpjqsr7he8rdh5wq82bsd,imgname-bjb-1788102789881.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಆ.30): &lt;/strong&gt;ಸಾಮಾನ್ಯವಾಗಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು 18ರಿಂದ 20 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಜೋಡೆತ್ತುಗಳು ಕೇವಲ 9 ಗಂಟೆಗಳಲ್ಲಿ ಬರೋಬ್ಬರಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆದು ಗಮನ ಸೆಳೆದಿವೆ. ರೈತ ಮಕ್ಬುಲ್ ನಾಗರಾಳ ಅವರಿಗೆ ಸೇರಿದ ಈ ಜೋಡೆತ್ತುಗಳ ಸಾಧನೆ ಇದೀಗ ಸ್ಥಳೀಯವಾಗಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p&gt;&lt;strong&gt;40 ಎಕರೆಯಲ್ಲಿ ಕೇವಲ 9 ಗಂಟೆ!&lt;/strong&gt;&lt;/p&gt;&lt;p&gt;ಗೊಳಸಂಗಿ ಗ್ರಾಮದ ರೈತ ಮಕ್ಬುಲ್ ನಾಗರಾಳ ಅವರು ತಮ್ಮ ಜೋಡೆತ್ತುಗಳನ್ನು ಬಳಸಿ ಜೋಡು ಕುಂಟೆಯ ಮೂಲಕ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಸಿದ್ದಾರೆ. ಸಾಮಾನ್ಯವಾಗಿ ಇಷ್ಟೊಂದು ದೊಡ್ಡ ಜಮೀನಿನಲ್ಲಿ ಈ ಕೆಲಸ ಪೂರ್ಣಗೊಳಿಸಲು 18ರಿಂದ 20 ಗಂಟೆಗಳ ಸಮಯ ಬೇಕಾಗುತ್ತದೆ. ಆದರೆ ಮಕ್ಬುಲ್ ಅವರ ಜೋಡೆತ್ತುಗಳು ನಿರಂತರವಾಗಿ ಶ್ರಮಿಸಿ ಕೇವಲ 9 ಗಂಟೆಗಳಲ್ಲೇ ಕೆಲಸ ಪೂರ್ಣಗೊಳಿಸಿರುವುದು ವಿಶೇಷ.&lt;/p&gt;&lt;p&gt;&lt;strong&gt;ಜೋಡೆತ್ತುಗಳ ವೇಗ ಕಂಡು ಅಚ್ಚರಿಪಟ್ಟ ಜನ!&lt;/strong&gt;&lt;/p&gt;&lt;p&gt;ಜಮೀನಿನಲ್ಲಿ ಜೋಡೆತ್ತುಗಳು ಎಡೆ ಹೊಡೆಯುತ್ತಿದ್ದ ದೃಶ್ಯ ಕಂಡು ಸಾರ್ವಜನಿಕರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ 40 ಎಕರೆ ಜಮೀನಿನ ಕೆಲಸ ಪೂರ್ಣಗೊಳಿಸಿದ ಎತ್ತುಗಳ ಸಾಮರ್ಥ್ಯಕ್ಕೆ ಗ್ರಾಮಸ್ಥರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಎತ್ತುಗಳ ಸಾಧನೆಯಲ್ಲ, ಅವುಗಳನ್ನು ಸಮರ್ಥವಾಗಿ ಸಾಕಿ, ತರಬೇತಿ ನೀಡಿ ಕೃಷಿ ಚಟುವಟಿಕೆಯಲ್ಲಿ ಬಳಸುತ್ತಿರುವ ರೈತ ಮಕ್ಬುಲ್ ನಾಗರಾಳ ಅವರ ಪರಿಶ್ರಮಕ್ಕೂ ಸಿಕ್ಕ ಗೌರವ ಎನ್ನಬಹುದು.&lt;/p&gt;&lt;p&gt;&lt;strong&gt;ಸಾಧನೆ ಬಳಿಕ ಬಸವೇಶ್ವರನಿಗೆ ವಿಶೇಷ ಪೂಜೆ&lt;/strong&gt;&lt;/p&gt;&lt;p&gt;ಜೋಡೆತ್ತುಗಳು 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯುವ ಕೆಲಸ ಪೂರ್ಣಗೊಳಿಸಿದ ಬಳಿಕ ಮಕ್ಬುಲ್ ನಾಗರಾಳ ಅವರು ಬಸವೇಶ್ವರ ದೇಗುಲಕ್ಕೆ ತೆರಳಿ ವಿಶೇಷವಾಗಿ ತೆಂಗಿನಕಾಯಿ ಒಡೆಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಬಸವನ ಬಾಗೇವಾಡಿಯ ಬಸವೇಶ್ವರ ದೇಗುಲದಲ್ಲಿ ತೆಂಗಿನಕಾಯಿ ಒಡೆಸಿ ತಮ್ಮ ಎತ್ತುಗಳ ಈ ವಿಶೇಷ ಸಾಧನೆಯನ್ನು ಸಂಭ್ರಮಿಸಿದ್ದಾರೆ.&lt;/p&gt;&lt;h2&gt;&lt;strong&gt;ಕೃಷಿಯಲ್ಲಿ ಇಂದಿಗೂ ಜೋಡೆತ್ತುಗಳ ಮಹತ್ವ&lt;/strong&gt;&lt;/h2&gt;&lt;p&gt;ಆಧುನಿಕ ಕೃಷಿಯಲ್ಲಿ ಟ್ರ್ಯಾಕ್ಟರ್ ಸೇರಿದಂತೆ ಹಲವು ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಜೋಡೆತ್ತುಗಳು ಇಂದಿಗೂ ಕೃಷಿಯ ಅವಿಭಾಜ್ಯ ಭಾಗವಾಗಿವೆ. ರೈತನೊಂದಿಗೆ ಹೆಜ್ಜೆ ಹಾಕುವ ಎತ್ತುಗಳ ಶ್ರಮ ಮತ್ತು ಸಾಮರ್ಥ್ಯಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.&lt;/p&gt;&lt;p&gt;40 ಎಕರೆ ಜಮೀನಿನ ಎಡೆ ಹೊಡೆಯುವ ಕೆಲಸವನ್ನು ಸಾಮಾನ್ಯ ಸಮಯದ ಅರ್ಧಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿರುವ ಮಕ್ಬುಲ್ ನಾಗರಾಳ ಅವರ ಜೋಡೆತ್ತುಗಳು ಇದೀಗ ಗೊಳಸಂಗಿ ಗ್ರಾಮದಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿವೆ. ಸದ್ಯ 9 ಗಂಟೆ... 40 ಎಕರೆ... ಜೋಡೆತ್ತುಗಳ ಈ ಸಾಧನೆ ನಿಜಕ್ಕೂ ಗಮನ ಸೆಳೆಯುವಂತಿದೆ!&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/vijayapura-bullock-pair-ploughs-40-acres-in-just-9-hours-amazes-locals-gvd/articleshow-ytneqqx"/>
        </item>
        <item>
            <title><![CDATA[ಮೊಟ್ಟೆಯಿಂದ ಚಿಟ್ಟೆಯವರೆಗೆ: ಶಿಕ್ಷಣದಲ್ಲಿ ವಿನೂತನ ಪ್ರಯೋಗಕ್ಕೆ ಹೆಸರಾದ ಶಿಕ್ಷಕಿ!]]></title>
            <link>https://kannada.asianetnews.com/education/vijayapura-basavarajeshwari-chimmalagi-brings-digital-innovation-to-rural-science-education-gvd/articleshow-zc89f8w</link>
            <guid isPermaLink="true">https://kannada.asianetnews.com/education/vijayapura-basavarajeshwari-chimmalagi-brings-digital-innovation-to-rural-science-education-gvd/articleshow-zc89f8w</guid>
            <pubDate>Sat, 05 Sep 2026 15:10:40 +0530</pubDate>
            <description><![CDATA[&lt;p&gt;ಬುದ್ನಿ ಸರ್ಕಾರಿ ಶಾಲೆಯ ಶಿಕ್ಷಕಿ ಬಸವರಾಜೇಶ್ವರಿ ಚಿಮ್ಮಲಗಿ ಅವರು AI, ಡಿಜಿಟಲ್ ತಂತ್ರಜ್ಞಾನ, ಅನುಭವಾತ್ಮಕ ಕಲಿಕೆ ಮತ್ತು ಪ್ರಕೃತಿ ಅಧ್ಯಯನದ ಮೂಲಕ ಗ್ರಾಮೀಣ ಮಕ್ಕಳಿಗೆ ವಿಜ್ಞಾನವನ್ನು ಆಸಕ್ತಿದಾಯಕವಾಗಿ ಕಲಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1rf1b2d1ct3j953a5yjqdx1,imgname-bkb-1788601216077.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಸವನಬಾಗೇವಾಡಿ (ಸೆ.05): &lt;/strong&gt;ಶಿಕ್ಷಣವೆಂದರೆ ಕೇವಲ ತರಗತಿಯ ನಾಲ್ಕು ಗೋಡೆಗಳ ನಡುವೆ ಪುಸ್ತಕದ ಪುಟಗಳನ್ನು ಓದುವುದಷ್ಟೇ ಅಲ್ಲ, ಅದು ಮಗುವಿನ ಕುತೂಹಲ ಕೆರಳಿಸಿ, ಪ್ರಕೃತಿಯೊಂದಿಗೆ ಬೆಸೆದು, ಅನುಭವ ಹಾಗೂ ತಂತ್ರಜ್ಞಾನ ಮೂಲಕ ಜ್ಞಾನ ಕಟ್ಟಿಕೊಡುವ ಒಂದು ಸುಂದರ ಪಯಣ. ಈ ತತ್ವ ಅಳವಡಿಸಿಕೊಂಡು ಬಸವನಬಾಗೇವಾಡಿ ಅಖಂಡ ತಾಲೂಕಿನ ಬುದ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಸವರಾಜೇಶ್ವರಿ ಎಸ್. ಚಿಮ್ಮಲಗಿ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ತೀವ್ರ ಆಸಕ್ತಿ ಮೂಡಿಸಲು, ಸಂತಸದ ಕಲಿಕೆ ಸಾಕಾರಗೊಳಿಸಲು ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಬಳಸಲು ಹಲವು ವಿನೂತನ ಪ್ರಯೋಗಗಳನ್ನು ಮಾಡಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿಗಳನ್ನು ಪರಿಸರದೊಂದಿಗೆ ನೇರವಾಗಿ ತೊಡಗಿಸಲು ಬುದ್ನಿಯ ಪ್ರಾಣಿ ವೈವಿಧ್ಯತೆಯ ಅಧ್ಯಯನ ಯೋಜನೆ ಕೈಗೊಳ್ಳಲಾಯಿತು. ಈ ಯೋಜನೆಯಲ್ಲಿ ವಿದ್ಯಾರ್ಥಿಗಳೇ ವಿಜ್ಞಾನಿಗಳಾಗಿ ಬದಲಾದರು. ಶಾಲೆಯ ಸುತ್ತಮುತ್ತಲಿನ ಹಾಗೂ ಗ್ರಾಮದ ವಿವಿಧ ಪ್ರಾಣಿ, ಕೀಟ ಹಾಗೂ ಪಕ್ಷಿಗಳ ಛಾಯಾಚಿತ್ರಗಳನ್ನು ಮಕ್ಕಳು ಸ್ವತಃ ತೆಗೆದು, ಅವುಗಳ ಗುರುತಿಸುವಿಕೆ ಮತ್ತು ದತ್ತಾಂಶ ಸಂಗ್ರಹ ಮಾಡಿದರು. ಈ ಎಲ್ಲಾ ಮಾಹಿತಿಯನ್ನು ಡಿಜಿಟಲ್ ಆ್ಯಪ್&zwnj;ನಲ್ಲಿ ಯಶಸ್ವಿಯಾಗಿ ದಾಖಲಿಸಿದ್ದಾರೆ.&lt;/p&gt;&lt;p&gt;ವಿಜ್ಞಾನವನ್ನು ಕೇವಲ ಚಿತ್ರಗಳಲ್ಲಿ ನೋಡುವುದಕ್ಕಿಂತ ಪ್ರತ್ಯಕ್ಷವಾಗಿ ನೋಡಿ ಕಲಿಯುವುದು ಹೆಚ್ಚು ಪರಿಣಾಮಕಾರಿ. ಶಾಲೆಯಲ್ಲಿ ಒಲಿಯಾಂಡರ್ ಹಾಕ್ ಪತಂಗದ ಸಂಪೂರ್ಣ ಜೀವನಚಕ್ರವನ್ನು ವಿದ್ಯಾರ್ಥಿಗಳೊಂದಿಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ. ಮೊಟ್ಟೆಯಿಂದ ಹಿಡಿದು ಕಂಬಳಿಹುಳು, ಕೋಶಾವಸ್ಥೆ ಹಾಗೂ ಚಿಟ್ಟೆಯಾಗಿ ಹೊರಬರುವವರೆಗಿನ ಪ್ರತಿಯೊಂದು ಹಂತವನ್ನು ಮಕ್ಕಳು ಕಣ್ಣಾರೆ ಕಂಡು, ಪ್ರಕೃತಿಯ ವಿಸ್ಮಯ ಅನುಭವಿಸಿ ತಿಳಿಯುವಂತೆ ಶಿಕ್ಷಕಿ ಬಸವರಾಜೇಶ್ವರಿ ಮಾಡಿದ್ದಾರೆ.&lt;/p&gt;&lt;p&gt;ವಿಜಯಪುರ ಜಿಲ್ಲೆಯ ಡಿ.ಎಸ್.ಇ.ಆರ್.ಟಿ ಉಸ್ತುವಾರಿಯಲ್ಲಿ ತರಗತಿ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ವಿಶೇಷ ಶೈಕ್ಷಣಿಕ ವಿಡಿಯೋಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಈ ವೀಡಿಯೊಗಳನ್ನು ರಾಜ್ಯಮಟ್ಟದ ಡಿಕ್ಷಾ ಪೋರ್ಟಲ್&zwnj;ನಲ್ಲಿ ಅಪ್&zwnj;ಲೋಡ್ ಮಾಡಲಾಗಿದೆ. ಇದು ಈ ಶಾಲೆಯ ಮಕ್ಕಳಿಗೆ ಮಾತ್ರವಲ್ಲದೆ ಇಡೀ ರಾಜ್ಯದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೀಕ್ಷಿಸಿ ಕಲಿಯಲು ಸಹಕಾರಿಯಾಗಿದೆ.&lt;/p&gt;&lt;h2&gt;&lt;strong&gt;ಸಂತಸದ ಕಲಿಕೆಗೆ ಆದ್ಯತೆ&lt;/strong&gt;&lt;/h2&gt;&lt;p&gt;ಇಲಾಖೆ ಕೈಗೊಂಡ ಅನುಭವಾತ್ಮಕ ವಿಜ್ಯಾನ ಕಲಿಕೆ , ಇ-ಕಂಟೆಂಟ್ ಸೃಜನೆ ಇತರ ತರಬೇತಿಗಳಲ್ಲಿ ಪರಿಚಯಿಸಿದ ನೂತನ ಬೋಧನಾ ಪದ್ಧತಿಗಳನ್ನು ಶಾಲೆಯಲ್ಲಿ ಸಕ್ರಿಯವಾಗಿ ಜಾರಿಗೆ ತಂದಿದ್ದಾರೆ. ಬೋಧನೆಯಲ್ಲಿ ನೀರಸತೆ ಹೋಗಲಾಡಿಸಿ, ಚಟುವಟಿಕೆ ಆಧಾರಿತ ಮತ್ತು ಸಂತಸದ ಕಲಿಕೆಗೆ ಆದ್ಯತೆ ನೀಡಿದ್ದಾರೆ. 21ನೇ ಶತಮಾನದ ಕೌಶಲ್ಯದಾರಿತ ಕಲಿಕೆ, ಕಲಾ ಸಮ್ಮಿಳಿತ ಕಲಿಕೆ, ಜೀವನ ಚಕ್ರಗಳ ವೀಕ್ಷಣೆ, ಮಾದರಿಗಳ ಸಂಗ್ರಹಣೆ, ಆನ್ಲೈನ್ ಕಾರ್ಯಗಾರ, ತಂತ್ರಜ್ಞಾನ ಆಧಾರಿತ ಕಲಿಕೆ , ದೀಕ್ಷಾ ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸೃಜಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಆಲೋಚನೆ, ಸೃಜನಶೀಲತೆ ಮತ್ತು ತಂಡಕಾರ್ಯದ ಸಾಮರ್ಥ್ಯ ಬೆಳೆಸುವಂತೆ ಮಾಡುತ್ತಿದ್ದಾರೆ.&lt;/p&gt;&lt;p&gt;ತರಬೇತಿಗಳಲ್ಲಿ ಕಲಿತ ನೂತನ ವಿಷಯಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳುತ್ತ, ತರಗತಿಯನ್ನು ಡಿಜಿಟಲ್ ಸ್ನೇಹಿಯಾಗಿಸಲಾಗಿದೆ. ಕಠಿಣವಾದ ವೈಜ್ಞಾನಿಕ ಪ್ರಯೋಗಗಳು ಮತ್ತು ಸಿದ್ಧಾಂತಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ವಿವಿಧ ಎಐ (AI) ಉಪಕರಣಗಳು ಹಾಗೂ ಸಿಮ್ಯುಲೇಶನ್&zwnj;ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಈ ಶಿಕ್ಷಕಿ.&lt;/p&gt;&lt;p&gt;ಬಸವರಾಜೇಶ್ವರಿ ಚಿಮ್ಮಲಗಿ ಶಿಕ್ಷಕಿ ಅವರು ಎಲ್ಲ ವಿಷಯದಲ್ಲಿ ಪರಿಣಿತರಿದ್ದಾರೆ. ಅವರು ಮಕ್ಕಳಿಗೆ ಪ್ರಾಯೋಗಿಕವಾಗಿ ಪಾಠ ಬೋಧನೆ ಮಾಡುತ್ತಾರೆ. ನಮ್ಮಲ್ಲಿ ಕೋಣೆಗಳ ಕೊರತೆ ಇದ್ದರೂ ಅದನ್ನು ಲೆಕ್ಕಿಸದೇ ಅವರು ಮಕ್ಕಳೊಂದಿಗೆ ಮಕ್ಕಳಾಗಿ ಆಕರ್ಷಕವಾಗಿ ತಮ್ಮ ಬೋಧನೆ ಮಾಡುತ್ತಾರೆ.&lt;strong&gt;-ಸಿ.ಆರ್.ಗಿರಗಾಂವಿ, ಮುಖ್ಯ ಗುರುಗಳು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುದ್ನಿ&lt;/strong&gt;&lt;/p&gt;&lt;p&gt;ನಾನು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್.ಐ.ಇ) ಅಧ್ಯಯನ ಮಾಡಿದ್ದೇನೆ. ಅಲ್ಲಿ ವಿವಿಧ ಮಾದರಿಗಳೊಂದಿಗೆ ಅತ್ಯುತ್ತಮವಾಗಿ ಅಲ್ಲಿನ ಶಿಕ್ಷಕ ಬಳಗ ಮಾಡುತ್ತಾರೆ. ಇದು ನನಗೆ ಪ್ರೇರಣೆ. ಶಿಕ್ಷಕ ವೃತ್ತಿ ಗೌರವ ವೃತ್ತಿ. ಮಕ್ಕಳಿಗೆ ಏನಾದರೂ ಹೊಸತನ ಕೊಡುವ ಆಶಯ ನಾನು ಹೊಂದಿದ್ದೇನೆ.ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬೋಧಿಸಬೇಕೆಂಬ ಉದ್ದೇಶ ನನ್ನದು.&lt;strong&gt;-ಬಸವರಾಜೇಶ್ವರಿ ಚಿಮ್ಮಲಗಿ. ಶಿಕ್ಷಕಿ&lt;/strong&gt;&lt;/p&gt;&lt;p&gt;ಶಿಕ್ಷಕಿ ಬಸವರಾಜೇಶ್ವರಿ ಚಿಮ್ಮಲಗಿ ಅವರು ಕ್ರಿಯಾಶೀಲರಾಗಿ ವಿಜ್ಞಾನ ವಿಷಯ ಮಕ್ಕಳಿಗೆ ಮನಮುಟ್ಟುವಂತೆ ಡಿಜಿಟಲ್ ತಂತ್ರಜ್ಞಾನ ಬಳಕೆ ಮಾಡಿ ಬೋಧನೆ ಮಾಡುತ್ತಾರೆ. ಈಗಾಗಲೇ ಇವರು ಮಾಡಿರುವ ವಿಡಿಯೋಗಳು ದೀಕ್ಷಾ ಆ್ಯಪ್ ನಲ್ಲಿ ಆಪಲೋಡ್ ಆಗಿವೆ. ಇಡೀ ಜಗತ್ತು ಇವುಗಳನ್ನು ನೋಡಬಹುದು. ಇತರೇ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.&lt;strong&gt;-ರೇಣುಕಾ ಕಲಬುರ್ಗಿ, ಕ್ಷೇತ್ರಶಿಕ್ಷಣಾಧಿಕಾರಿಗಳು, ಬಸವನಬಾಗೇವಾಡಿ.&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/education/vijayapura-basavarajeshwari-chimmalagi-brings-digital-innovation-to-rural-science-education-gvd/articleshow-zc89f8w"/>
        </item>
    </channel>
</rss>
