<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 24 Jun 2026 08:49:31 +0530</lastBuildDate>
        <atom:link href="https://kannada.asianetnews.com/rss/vijayapura" rel="self" type="application/rss+xml"/>
        <item>
            <title><![CDATA[ಬರ ಜಿಲ್ಲೆ ಹಣೆಪಟ್ಟಿ ಹೊಂದಿದ್ದ ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿ; ಕೋಟಿ ಸಸಿಗಳನ್ನು ನೆಟ್ಟ ಕನಸುಗಾರ]]></title>
            <link>https://kannada.asianetnews.com/karnataka-districts/irrigation-revolution-in-a-vijayapura-district-labeled-as-drought-prone-mrq/articleshow-45gqg6n</link>
            <guid isPermaLink="true">https://kannada.asianetnews.com/karnataka-districts/irrigation-revolution-in-a-vijayapura-district-labeled-as-drought-prone-mrq/articleshow-45gqg6n</guid>
            <pubDate>Sun, 07 Jun 2026 05:22:43 +0530</pubDate>
            <description><![CDATA[ಸಚಿವರಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಎಂ.ಬಿ. ಪಾಟೀಲರು, ತಾವು ಈ ಹಿಂದೆ ನೀರಾವರಿ ಸಚಿವರಾಗಿದ್ದಾಗ ಮಾಡಿದ ಕೆಲಸಗಳಿಂದ ಜಿಲ್ಲೆ ಹಸಿರಾಗಿದೆ ಎಂದು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಕೈಗಾರಿಕೆಗಳನ್ನು ತರುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01ktfnmrva9dzmea1qye7h2swd,imgname-mb-patil-1780789961578.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಸಿದ್ದರಾಮಯ್ಯನವರ ಅವಧಿಯಲ್ಲಿ ನೀರಾವರಿ ಸಚಿವನಾಗಿ ಸಾಕಷ್ಟು ಕೆಲಸ ಮಾಡಿ, ಜಿಲ್ಲೆಗೆ, ರೈತರಿಗೆ ನೀರು ಕೊಡುವ ಕೆಲಸ ಮಾಡಿದ್ದೇನೆ. ಹೀಗಾಗಿಯೇ ಇಂದು ವಿಜಯಪುರ ಜಿಲ್ಲೆ ಹಸಿರಿನಿಂದ ಕಂಗೊಳಿಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿದ್ದೇನೆ ಎಂದು ಬೃಹತ್&zwnj; ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.&lt;/p&gt;&lt;p&gt;ಡಿ.ಕೆ.ಶಿವಕುಮಾರ್&zwnj; ಸಂಪುಟದಲ್ಲಿ ಸಚಿವರಾಗಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಹಿನ್ನೆಲೆ ನಗರದ ಪಾಟೀಲ ಗಾರ್ಡೆನಿಯಾದಲ್ಲಿ ನಾನಾ ಸಂಸ್ಥೆಗಳು, ನಾಗರಿಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಭೂಮಿಗೆ ಒಂದು ಬೊಗಸೆ ನೀರು ಕೊಡಿ, ಇದು ಅಮೆರಿಕದ ಕ್ಯಾಲಿಫೋರ್ನಿಯಾ ಮೀರಿಸುತ್ತದೆ ಎಂದು ಸಿದ್ಧೇಶ್ವರ ಶ್ರೀಗಳು 30 ವರ್ಷಗಳ&zwnj; ಹಿಂದೆ ಕಾರ್ಯಕ್ರಮವೊಂದರಲ್ಲಿ ನನಗೆ ಹೇಳಿದ್ದರು. ಇಂದು ಕ್ಯಾಲಿಫೋರ್ನಿಯಾ ದ್ರಾಕ್ಷಿ ನಮ್ಮ&zwnj; ಜಿಲ್ಲೆಗೆ ಬಂದಿದ್ದು, ಸಿದ್ಧೇಶ್ವರ ಶ್ರೀಗಳ ಆಶಯ ಈಡೇರಿಸಿದಂತಾಗಿದ್ದು, ನನಗೆ ಸಂತಸವಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಪಂಚ ನದಿಗಳು ಹರಿದರೂ ಕುಡಿಯಲು ನೀರು ಇರಲಿಲ್ಲ&lt;/strong&gt;&lt;/h2&gt;&lt;p&gt;ಬರ ಜಿಲ್ಲೆ, ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಈ ಜಿಲ್ಲೆಗೆ ಬ್ರಿಟಿಷರ ಕಾಲದಲ್ಲಿಯೇ ರಾಜಸ್ಥಾನದ ಜೈಸಲ್ಮೇರ ಹಾಗೂ ಕರ್ನಾಟಕದಲ್ಲಿ ವಿಜಯಪುರ ತೀವ್ರವಾದ ಬರ ಪ್ರದೇಶ ಎಂದು ಘೋಷಣೆ ಮಾಡಿ, ಬರ ನಿವಾರಣೆ ಕೇಂದ್ರ ಸ್ಥಾಪಿಸಲಾಗಿತ್ತು. ಇಲ್ಲಿನ ಜನರು ಹೃದಯ ಶ್ರೀಮಂತಿಕೆಯ ಹೊಂದಿದ್ದು, ಇಂದಿರಾಗಾಂಧಿ, ನಿಜಲಿಂಗಪ್ಪ ಅವರನ್ನು ಬಂಗಾರದಲ್ಲಿ ತೂಗಿದವರು ನಮ್ಮ&zwnj; ಜಿಲ್ಲೆಯ ಜನರು. ಪಂಚ ನದಿಗಳು ಹರಿದರೂ ಕುಡಿಯಲು ನೀರು ಇರಲಿಲ್ಲ ಎಂದರು.&lt;/p&gt;&lt;p&gt;ಮೂರು ವರ್ಷಗಳ ಹಿಂದೆ ಕೈಗಾರಿಕೆ ಮಂತ್ರಿಯಾದ ಮೇಲೆ ಕೆ.ಎಸ್.ಡಿ.ಎಲ್ ಎರಡನೇ ಕಾರ್ಖಾನೆ ಇಟ್ಟಂಗಿಹಾಳದಲ್ಲಿ ತಂದಿದ್ದು, ಫುಡ್ ಪ್ರೊಸೆಸಿಂಗ್ ಕಾರ್ಖಾನೆ, ಕೊಕಾ ಕೋಲಾ ತಯಾರಿಕೆ ಯುನಿಟ್, ಸುಜಲಾನ್ ಕಂಪನಿಗಳು ಶೀಘ್ರ ಜಿಲ್ಲೆಗೆ ಬರಲಿವೆ. ಇದರ ಜೊತೆಗೆ ಹೈನುಗಾರಿಕೆಗೆ ಪ್ರೋತ್ಸಾಹ ಕೊಡುವ ಸಲುವಾಗಿ ಬಿಎಲ್&zwnj;ಡಿಇ ಸಂಸ್ಥೆಯಿಂದಲೇ ಪ್ರತಿ ವರ್ಷ 50 ಲಕ್ಷದಂತೆ ಅಕ್ಷಯಕಲ್ಪದವರೊಂದಿಗೆ ಸೇರಿ ಪೈಲಟ್ ಪ್ರೊಜೆಕ್ಟ್ ಯೋಜನೆ ಆರಂಭಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ನನಗೆ ಬೆಂಬಲಿಸಿದ ಎಐಸಿಸಿ, ಕೆಪಿಸಿಸಿ ನಾಯಕರಿಗೆಲ್ಲ ಧನ್ಯವಾದ ಅರ್ಪಿಸುತ್ತೇನೆ. ಎಲ್ಲ ಅಭಿಮಾನಿಗಳಿಗೂ, ಕಾರ್ಯಕರ್ತರಿಗೂ, ಮತದಾರರಿಗೂ ಹಾಗೂ ಹಿರಿಯರಿಗೂ, ತಮಗೆಲ್ಲರಿಗೂ ಅಭಿನಂದನೆ ಎಂದರು.&lt;/p&gt;&lt;h3&gt;&lt;strong&gt;ಕೋಟಿ ಸಸಿಗಳನ್ನು ನೆಟ್ಟ ಕನಸುಗಾರ&lt;/strong&gt;&lt;/h3&gt;&lt;p&gt;ಎಂ.ಬಿ. ಪಾಟೀಲರು ಅತ್ಯುತ್ತಮ ಕನಸುಗಾರರಾಗಿದ್ದು, ರಾಜಕೀಯದಲ್ಲಿ ತಮ್ಮನ್ನೇ ಸಮರ್ಪಣೆ ಮಾಡಿಕೊಂಡು, ಇಡಿ ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ.ಸತತ ಬರದ ನಾಡಾದ ನನ್ನ ಕ್ಷೇತ್ರದಲ್ಲಿ ನೀರಾವರಿ ಮಾಡಿ, ಜಿಲ್ಲೆಯನ್ನು ನಂದನವನವನ್ನಾಗಿ ಮಾಡುವ ಯೋಜನೆ ಹಾಕಿಕೊಂಡು ಎರಡು ಕೋಟಿ ಸಸಿಗಳನ್ನು ನೆಟ್ಟಿದ್ದಾರೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.&lt;/p&gt;&lt;p&gt;ಎಂ.ಬಿ. ಪಾಟೀಲರು ಇರದಿದ್ದರೆ ಈ ಜಿಲ್ಲೆಯ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ, ಅಷ್ಟು ಹದಗೆಡುತ್ತಿತ್ತು. ಹಾಗಾಗಿ ನನ್ನ ಸಂಪೂರ್ಣ ಸಹಕಾರ ಎಂ.ಬಿ. ಪಾಟೀಲರಿಗೆ ಇದ್ದು, ಅವರ ಹೆಗಲಿಗೆ ಹೆಗಲು ಕೊಟ್ಟು ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.&lt;/p&gt;&lt;p&gt;ಈ ವೇಳೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮಡಿವಾಳಪ್ಪ ಕರಡಿ, ಡಾ.ಗಂಗಾಧರ ಸಂಬಣ್ಣಿ, ಸಂಗು ಸಜ್ಜನ, ವಿ&zwnj;.ಎನ್. ಬಿರಾದಾರ, ವಿ.ಸಿ. ನಾಗಠಾಣ, ಡಾ.ಕಂಠೀರವ ಕುಲ್ಲೊಳ್ಳಿ, ಸಿದ್ರಾಮಪ್ಪ ಉಪ್ಪಿನ, ಬಸನಗೌಡ ಹರನಾಳ, ಡಾ.ಬಿ.ಎಸ್. ಪಾಟೀಲ, ಎಸ್.ವಿ. ಪಾಟೀಲ, ಶಂಕರಗೌಡ ಸವನಳ್ಳಿ, ಹಾಸಿಂಪೀರ ವಾಲಿಕಾರ ಇದ್ದರು.------&lt;/p&gt;&lt;h3&gt;&lt;strong&gt;ಇನ್ನೂ ಹೆಚ್ಚಿನ ಕೆಲಸ ಮಾಡುವೆ&lt;/strong&gt;&lt;/h3&gt;&lt;p&gt;ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ನನಗೆ ಕೈಗಾರಿಕೆ ಸಚಿವನಾಗಿ ಮುಂದುವರಿಯಲು ಅವಕಾಶ ಸಿಕ್ಕಿದೆ. ಈಗಾಗಲೇ ಕೈಗಾರಿಕೆ ಇಲಾಖೆಯಲ್ಲಿ ತಳಮಟ್ಟದಿಂದ ಕೆಲಸ ಮಾಡಲಾಗಿದೆ, ಇನ್ನೂ ಹೆಚ್ಚಿನ ಕೆಲಸ ಮಾಡುತ್ತೆನೆ. ಬೇರೆ ಇಲಾಖೆ ತೆಗೆದುಕೊಂಡಿದ್ದರೆ ಮತ್ತೆ ತಳಮಟ್ಟದಿಂದ ಕೆಲಸ ಆರಂಭಿಸಿಬೇಕಿತ್ತು. ನೀರಾವರಿ ಖಾತೆ&zwnj; ಸಿಕ್ಕಿದ್ದಕ್ಕೆ ಸಚಿವ ರಾಮಲಿಂಗ&zwnj; ರೆಡ್ಡಿ ಬೇಸರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರನ್ನು ನಾಯಕರಾದ ಸೋನಿಯಾ ಗಾಂಧಿ, ರಾಹುಲ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮನವೊಲಿಸುವ ಕೆಲಸ ಮಾಡುತ್ತಾರೆ ಎಂದರು.&lt;/p&gt;&lt;p&gt;------------&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/irrigation-revolution-in-a-vijayapura-district-labeled-as-drought-prone-mrq/articleshow-45gqg6n"/>
        </item>
        <item>
            <title><![CDATA[95 ಲಕ್ಷ ಅಭಿವೃದ್ಧಿಯ ಮೂರು ಸಮುದಾಯ ಭವನಗಳ ಕಾಮಗಾರಿಗಳಿಗೆ ಶಾಸಕ ಯತ್ನಾಳ ಭೂಮಿಪೂಜೆ]]></title>
            <link>https://kannada.asianetnews.com/karnataka-districts/vijayapura-mla-basanagouda-patil-performs-bhoomi-pooja-for-rs-95-lakh-development-works-mrq/articleshow-4g4gwaf</link>
            <guid isPermaLink="true">https://kannada.asianetnews.com/karnataka-districts/vijayapura-mla-basanagouda-patil-performs-bhoomi-pooja-for-rs-95-lakh-development-works-mrq/articleshow-4g4gwaf</guid>
            <pubDate>Mon, 25 May 2026 05:25:02 +0530</pubDate>
            <description><![CDATA[ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ₹95 ಲಕ್ಷ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಧಾರ್ಮಿಕ ದತ್ತಿ ಇಲಾಖೆ ಮತ್ತು ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಗರದ ಹಲವೆಡೆ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksddd5etvebmd7qa7cvzzh7t,imgname-cc-1779640473050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: ನ&lt;/strong&gt;ಗರದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ₹ 95 ಮೊತ್ತದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಭೂಮಿಪೂಜೆ ನೆರವೇರಿಸಿದರು.&lt;/p&gt;&lt;h2&gt;&lt;strong&gt;ಮೂರು ಸಮುದಾಯ ಭವನಗಳ ಕಾಮಗಾರಿ&lt;/strong&gt;&lt;/h2&gt;&lt;p&gt;ನಗರದ ವಾರ್ಡ್ ನಂ.2 ರಲ್ಲಿನ ಶಿವಬಸಪ್ಪ ಗದ್ದುಗೆ ದೇವಸ್ಥಾನದ ಹತ್ತಿರ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ₹ 10 ಲಕ್ಷ ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ, ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ₹ 15 ಲಕ್ಷ ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಹಾಗೂ ದರ್ಗಾದ ಕರಿಸಿದ್ದೇಶ್ವರ ದೇವಸ್ಥಾನ ಹತ್ತಿರ 2025-26ನೇ ಸಾಲಿನ&zwnj; ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ ₹ 70 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರತಿ ಭೂಮಿಪೂಜೆ ಬಳಿಕ ಸಾರ್ವಜನಿಕರ ಅಹವಾಲು ಆಲಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದಾಳಿಕೋರರ ಕೇಸ್&zwnj; ವಾಪಸ್ ಮೂಲಕ ಸರ್ಕಾರ ಯಾವ ಸಂದೇಶ ನೀಡುತ್ತಿದೆ: ಸಿ.ಟಿ.ರವಿ ಪ್ರಶ್ನೆ&lt;/strong&gt;&lt;/p&gt;&lt;p&gt;ಈ ವೇಳೆ ಪಾಲಿಕೆ ಮೇಯರ್&zwnj; ಎಂ.ಎಸ್.ಕರಡಿ, ಹಾಲುಮತ ಸಮಾಜದ ಅಧ್ಯಕ್ಷ ಮಲ್ಲು ಯಾದವಾಡ, ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ, ಮುಖಂಡರಾದ ಭೀಮನಗೌಡ ಪಾಟೀಲ, ಸಾಯಬಣ್ಣ ಭೋವಿ, ಶಂಕರ ಬಾಲದಂಡಿ, ಈರಣ್ಣ ವಾಡೆದ ಇತರರು ಉಪಸ್ಥಿತರಿದ್ದರು.&lt;/p&gt;&lt;p&gt;------------&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರಾಜ್ಯದಲ್ಲಿ 20 ಹೊಸ ಜಿಟಿಟಿಸಿ ಕೇಂದ್ರ ಸ್ಥಾಪನೆ: ಸಚಿವ ಶರಣ ಪ್ರಕಾಶ್&zwnj; ಪಾಟೀಲ್&zwnj; ಘೋಷಣೆ&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-mla-basanagouda-patil-performs-bhoomi-pooja-for-rs-95-lakh-development-works-mrq/articleshow-4g4gwaf"/>
        </item>
        <item>
            <title><![CDATA[ವಿಜಯಪುರ To ಬೇನಾಳ RS: ಕೊನೆಗೂ ಆರಂಭವಾದ ಬಹುನಿರೀಕ್ಷಿತ ಸೇವೆ, ಈಡೇರಿತು ಗ್ರಾಮಸ್ಥರ ಬೇಡಿಕೆ]]></title>
            <link>https://kannada.asianetnews.com/karnataka-districts/new-bus-service-from-vijayapura-to-benal-railway-station-begins-mrq/articleshow-4oezdvo</link>
            <guid isPermaLink="true">https://kannada.asianetnews.com/karnataka-districts/new-bus-service-from-vijayapura-to-benal-railway-station-begins-mrq/articleshow-4oezdvo</guid>
            <pubDate>Tue, 16 Jun 2026 06:56:53 +0530</pubDate>
            <description><![CDATA[&lt;p&gt;ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ ಸಂಚಾರ ಆರಂಭವಾಗಿದೆ. ಈ ಬಸ್ ಪ್ರತಿದಿನ ನಾಲ್ಕು ಟ್ರಿಪ್&zwnj;ಗಳ ಮೂಲಕ ಆಲಮಟ್ಟಿ ಉದ್ಯಾನದವರೆಗೆ ಸಂಚರಿಸಲಿದ್ದು, ವಿದ್ಯಾರ್ಥಿಗಳು, ರೈತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv70gre5mbk1ktcspt3caqya,imgname-bus-1781573116357.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ/ಆಲಮಟ್ಟಿ&lt;/strong&gt;: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ (ಸಂಚಾರ ) ಸೇವೆ ಸೋಮವಾರದಿಂದ ಆರಂಭವಾಗಿದೆ. ವರ್ಷದ ಹಿಂದೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಬೇನಾಳ ಆರ್. ಎಸ್. ಗ್ರಾಮಸ್ಥರು ಮನವಿ ಮಾಡಿದ್ದರು, ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬಸ್ ಸಂಚಾರ ಆರಂಭಿಸಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ಈ ನೂತನ ಬಸ್ಸು ಪ್ರತಿದಿನ ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 7.45ಕ್ಕೆ ಹೊರಟು 9.30ಕ್ಕೆ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ. 9:45ಕ್ಕೆ ಉದ್ಯಾನದಿಂದ ಹೊರಟು 11.30ಕ್ಕೆ ವಿಜಯಪುರ ತಲುಪುತ್ತದೆ. ಅದೇ ಬಸ್&zwnj; 11.45ಕ್ಕೆ ವಿಜಯಪುರವನ್ನು ಬಿಟ್ಟು 1.30ಕ್ಕೆ ಆಲಮಟ್ಟಿ ಉದ್ಯಾನಕ್ಕೆ ಬರುತ್ತದೆ. ನಂತರ ಮಧ್ಯಾಹ್ನ 2 ಗಂಟೆಗೆ ಉದ್ಯಾನ ಬಿಟ್ಟು 3.30ಕ್ಕೆ ವಿಜಯಪುರ ತಲುಪುತ್ತದೆ. ಹೀಗೆ ಪ್ರತಿದಿನ 4 ಟ್ರಿಪ್&zwnj; ಬಸ್&zwnj; ಸೇವೆ ಒದಗಿಸುತ್ತದೆ.&lt;/p&gt;&lt;p&gt;ನೂತನ ಬಸ್ ಸಂಚಾರದಿಂದ ಈ ಭಾಗದ ವಿದ್ಯಾರ್ಥಿಗಳಿಗೆ, ರೈತರಿಗೆ, ಕೂಲಿಕಾರ್ಮಿಕರಿಗೆ, ಮಹಿಳಾ ಉದ್ಯೋಗಿಗಳಿಗೆ ಬಹಳ ಸಹಾಯವಾಗಿದೆ.&lt;/p&gt;&lt;h3&gt;&lt;strong&gt;ಬಸ್ ಮಾರ್ಗ ಈ ರೀತಿಯಾಗಿದೆ&lt;/strong&gt;&lt;/h3&gt;&lt;p&gt;ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಹೊರಟ ಬಸ್ಸು ಜುಮನಾಳ ಕ್ರಾಸ್, ಹೊನಗನಹಳ್ಳಿ, ತೊನಶ್ಯಾಳ ಕ್ರಾಸ್, ಮುಳವಾಡ ಪ್ರವಾಸಿ ಮಂದಿರ, ಮುಳವಾಡ, ಕಲಗುರ್ಕಿ, ಕಲಗುರ್ಕಿ ರೈಲು ನಿಲ್ದಾಣ, ತಳೇವಾಡ ಕ್ರಾಸ್, ಕೂಡಗಿ ರೈಲು ನಿಲ್ದಾಣ, ಎನ್&zwnj;ಟಿಪಿಸಿ, ಅಂಗಡಗೇರಿ ರೈಲು ನಿಲ್ದಾಣ, ವಂದಾಲ ರೈಲು ನಿಲ್ದಾಣ, ಬೇನಾಳ ರೈಲು ನಿಲ್ದಾಣ, ಬೇನಾಳ ಕ್ರಾಸ್, ಆಲಮಟ್ಟಿ ಸರ್ಕಲ್ ಬಸ್ ನಿಲ್ದಾಣ, ಆಲಮಟ್ಟಿ ರೈಲು ನಿಲ್ದಾಣದ ಮುಖಾಂತರ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/new-bus-service-from-vijayapura-to-benal-railway-station-begins-mrq/articleshow-4oezdvo"/>
        </item>
        <item>
            <title><![CDATA[ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು! ತಕರಾರಿನಲ್ಲಿದ್ದ ಜಮೀನು ಖರೀದಿ, ಒಂದೇ ಕುಟುಂಬದ 6 ಜನರ ಕೊಲೆ!]]></title>
            <link>https://kannada.asianetnews.com/crime/six-shot-dead-near-chadchan-vijayapur-over-property-dispute-rav/articleshow-4ww3b4w</link>
            <guid isPermaLink="true">https://kannada.asianetnews.com/crime/six-shot-dead-near-chadchan-vijayapur-over-property-dispute-rav/articleshow-4ww3b4w</guid>
            <pubDate>Sat, 30 May 2026 08:22:21 +0530</pubDate>
            <description><![CDATA[ವಿಜಯಪುರದ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಆರು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 15 ವರ್ಷಗಳ ಹಿಂದಿನ ಹಗೆತನಕ್ಕೆ ಕಾರಣವಾಗಿದ್ದ ವಿವಾದಿತ ಜಮೀನನ್ನು ಖರೀದಿಸಿದ್ದೇ ಈ ಘಟನೆಗೆ ಕಾರಣವೆಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvcm37hay5bqc9nd0fvvmxd,imgname-----------------------2026-05-30t081437.836-1780109413617.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಶಿಕಾಂತ ಮೆಂಡೆಗಾರ&lt;/strong&gt;&lt;/p&gt;&lt;p&gt;&lt;strong&gt;ವಿಜಯಪುರ (ಮೇ.30):&lt;/strong&gt; ಹೆಣ್ಣು, ಹೊನ್ನು, ಮಣ್ಣಿಗಾಗಿ ಹಗೆತನಕ್ಕೆ ಬಿದ್ದ ಅದೆಷ್ಟೋ ಪ್ರತಿಷ್ಠಿತ ಮನೆತನಗಳೇ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಅದರಂತೆ ಜಮೀನಿನ ಬದುವೊಂದರ ವಿಚಾರವಾಗಿ ಕಳೆದ 4 ದಶಕಗಳ ಹಿಂದೆ ಭೀಮಾತೀರದಲ್ಲಿನ ಚಡಚಣದಲ್ಲಿ ಭೈರಗೊಂಡ-ಚಡಚಣ ಕುಟುಂಬಗಳ ಮದ್ಯೆ ಶುರುವಾಗಿದ್ದ ಹತ್ಯಾಕಾಂಡಗಳು ಸಾಲು, ಸಾಲು ಹೆಣಗಳು ಬಿದ್ದರೂ ಇನ್ನೂ ನಿಂತಿಲ್ಲ. ಈ ಎರಡು ಕುಟುಂಬಗಳ ಮಧ್ಯ ಶುರುವಾದ ವ್ಯಾಜ್ಯ ದಿನಗಳುರಿಳಿದಂತೆ ತಲೆಗಳುರುಳಿ ಅನೇಕ ಕುಟುಂಬಗಳ ಸಮಾಧಿಯನ್ನೇ ಕಟ್ಟಿವೆ. ಈ ಹಿಂದೆ ಅಲೋಕಕುಮಾರ ಅವರು ಉತ್ತರ ವಲಯ ಐಜಿಪಿ ಇದ್ದಾಗ ಇದೆಲ್ಲವೂ ಇಲ್ಲಿಗೆ ನಿಲ್ಲಬೇಕೆಂದು ಹಗೆತನದ ಕುಟುಂಬಳನ್ನೆಲ್ಲ ಒಂದುಗೂಡಿಸುವ ಪ್ರಯತ್ನ ಮಾಡಿದರೂ ಅಷ್ಟೆನೂ ಸಫಲತೆ ಕಂಡಿಲ್ಲ. ಆದರೆ, ಇಂದು ನಡೆದ ಭಯಾಕನ 6 ಜನರ ಹತ್ಯೆಯ ಘಟನೆ ಮತ್ತೆ ಭೀಮಾತೀರದ ಕ್ರೌರ್ಯ ಮೆರೆದಿದೆ.&lt;/p&gt;&lt;h2&gt;ಬೆಚ್ಚಿ ಬೀಳಿಸಿದ ಕೊಲೆ:&lt;/h2&gt;&lt;p&gt;ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಭೀಕರ ಕೊಲೆ ನಡೆದಿದ್ದು, ಆರು ಜನರು ಕೊಲೆಯಾಗಿದ್ದಾರೆ. ದುಂಡಪ್ಪ ನಿರಾಳೆ (65), ಸಹೋದರರಾದ ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ(55) ಶಿವಪುತ್ರನ ಮಕ್ಕಳಾದ ರಾಹುಲ ನಿರಾಳೆ(25), ಸಮರ್ಥ ನಿರಾಳೆ(23)ಶಿವರ ಸಹಚರ ಶಬ್ಬೀರ ಅತ್ತಾರ(45) ಕೊಲೆಯಾಗಿದ್ದಾರೆ. ಇವರ ಜೊತೆಯಲ್ಲಿದ್ದ ಅರವಿಂದ ಕಟಗೆ ಹಾಗೂ ಜೆಸಿಬಿ ಆಪರೇಟರ್ ಸಂದೀಪ ಮಾನೆ ಗಾಯಗೊಂಡಿದ್ದು, ವಿಜಯಪುರ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.&lt;/p&gt;&lt;h3&gt;ಚಡಚಣ ಜಮೀನು ವಿವಾದ, ಕೊಲೆ ಘಟನೆ ಹಿನ್ನೆಲೆ:&lt;/h3&gt;&lt;p&gt;ಈ ಹಿಂದೆ 2015ರಲ್ಲಿ ಚಡಚಣ ತಾಲೂಕಿನ ಗೋವಿಂದಪುರದ ನಿವಾಸಿ ಶಿವಾನಂದ ತಳವಾರ ಎಂಬಾತ ತೇಲಿ ಮನೆತನದ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದ. ಇದರಿಂದ ಕುಪಿತಗೊಂಡ ತೇಲಿ ಮನೆತನದ ಶಶಿಕಾಂತ ತೇಲಿ, ಪ್ರಶಾಂತ ತೇಲಿ, ಕಾಮನಿಂಗ ತೇಲಿ, ಮಹಾದೇವ ತೇಲಿ ಸೇರಿಕೊಂಡು ಶಿವಾನಂದ ತಳವಾರ ಎಂಬಾತನನ್ನು ಕೊಲೆ ಮಾಡಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈ ಸಮಯದಲ್ಲಿ ತೇಲಿ ಮನೆತನದವರು ಗೋವಿಂದಪೂರದಲ್ಲಿನ ಜಮೀನು ಬಿಟ್ಟು ಬೇರೆಡೆ ನೆಲೆಸಿದ್ದು, ಅಂದಿನಿಂದ ಈ ಜಮೀನು ಖಾಲಿ ಬಿದ್ದಿತ್ತು. ಸದರಿಯವರಿಗೆ ಸೇರಿದ ಜಮೀನು ಉಳಿಮೆ ಇಲ್ಲದೇ ಹಾಗೇ ಉಳಿದಿತ್ತು.&lt;/p&gt;&lt;p&gt;ಜಮೀನು ಖರೀದಿಸಿ ಕೊಲೆಯಾದರಾ?&lt;/p&gt;&lt;p&gt;ಕಳೆದ 15 ವರ್ಷಗಳ ಹಿಂದೆ ಹೆಣ್ಣೊಂದರ ವಿಚಾರದಲ್ಲಿ ತೇಲಿ ಹಾಗೂ ತಳವಾರ ಕುಟುಂಬಗಳ ಮಧ್ಯ ಮೂಡಿದ್ದ ವೈಷ್ಯಮ್ಯ ಇಂದು ಸ್ಫೋಟಗೊಂಡಿದೆ. ಜಮೀನಿನ ಕುರಿತು ತಕರಾರು ಇದೆಂದು ಹೇಳಿದ್ದರೂ ಅದೇ ಜಮೀನು ಖರೀದಿಸಿ ಉಳುಮೆಗೆ ಮುಂದಾಗಿದ್ದರಿಂದ ತಳವಾರ ಕುಟುಂಬದವರು ಕುಪಿತಗೊಂಡು ಅವರ ಕಡೆಯವರೇ ಕೊಲೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ. 15 ವರ್ಷಗಳ ಹಿಂದೆ ನಡೆದ ಘಟನೆಯಿಂದ ಬೀಳು ಬಿದ್ದಿದ್ದ ಜಮೀನು ಖರೀದಿಸಿದ ನಿರಾಳೆ ಕುಟುಂದವರು ಉಸಿರು ಚೆಲ್ಲಿದ್ದಾರೆ. ಸುಮಾರು 15 ವರ್ಷಗಳಿಂದ ಉಳುಮೆ ಮಾಡದೆ ತಕರಾರಿನಲ್ಲೇ ಇದ್ದ ಈ 15 ಎಕರೆ ಜಮೀನನ್ನು ನಿರಾಳೆ ಕುಟುಂಬಸ್ಥರು ಖರೀದಿ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಕರಾರು ತೆಗೆದಿದ್ದ ಕುಟುಂಬಸ್ಥರೇ ಹಗೆತನ ಸಾಧಿಸಿ ಈ ಆರು ಜನರನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳ ಬಂಧನವಾದ ಬಳಿಕಷ್ಟೆ ನಿಖರ ಮಾಹಿತಿ ದೊರೆಯಲಿದೆ.&lt;/p&gt;&lt;p&gt;ಪೊಲೀಸ್ ಬಂದೋಬಸ್ತ್: ಕೊಲೆಯಾದ ಘಟನಾ ಸ್ಥಳಕ್ಕೆ ಸೋಕೋ ತಂಡ, ಬೆರಳು ಮುದ್ರೆ ತಂಡ ಭೇಟಿ ನೀಡಿ, ಪರಿಶೀಲನೆ ಕೈಕೊಂಡಿದ್ಧಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಹಿರಿಯ ಅಧಿಕಾರಿಗಳು, ಚಡಚಣ ಠಾಣೆ ಪೊಲೀಸರು ಹಾಗೂ ಮೂರು ಡಿಎಆರ್&zwnj; ತಂಡಗಳು ಹಾಗೂ 4 ಕೆಎಸ್&zwnj;ಆರ್&zwnj;ಪಿ ತಂಡಗಳನ್ನು ನಿಯೋಜಿಸಲಾಗಿದೆ.&lt;/p&gt;&lt;p&gt;ಪ್ರಾಥಮಿಕ ಮಾಹಿತಿಯಂತೆ ಸದರಿ ಘಟನೆಯಲ್ಲಿ ಈ ಹಿಂದೆ ನಡೆದ ಚಡಚಣ ಠಾಣೆಯ ಕ್ರೈಂ ಸಂಖ್ಯೆ: 156/2015 ಯು/ಎಸ್&zwnj; 302 ಐಪಿಸಿ ಪ್ರಕರಣದಲ್ಲಿನ ಗೋವಿಂದಪುರ ನಿವಾಸಿ, ದೂರುದಾರ ಕಲ್ಲನಗೌಡ ತಂ.ಈಶ್ವರಗೌಡ ಪಾಟೀಲನ ಈತನ ಕಡೆಯವರು ಇರಬಹುದೆಂದು ಶಂಕಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರೆದಿದೆ.&lt;/p&gt;&lt;p&gt;-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/six-shot-dead-near-chadchan-vijayapur-over-property-dispute-rav/articleshow-4ww3b4w"/>
        </item>
        <item>
            <title><![CDATA[ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!]]></title>
            <link>https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</link>
            <guid isPermaLink="true">https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</guid>
            <pubDate>Fri, 05 Jun 2026 12:14:53 +0530</pubDate>
            <description><![CDATA[ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯಿಂದಾಗಿ ಕೇಂದ್ರ ರೈಲ್ವೆಯು ಜೂನ್ 5 ರಿಂದ 10 ರವರೆಗೆ ಹಲವು ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks4rgymmydvxhdywfct5zw88,imgname-indian-railways--2--1779350141588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ಮೇಲ್ದರ್ಜೆ ಕಾಮಗಾರಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಇಂಟರ್&zwnj;ಲಾಕಿಂಗ್&zwnj;ನ್ನು ನಿಯೋಜಿಸಲು ಪೂರ್ವ-ಇಂಟರ್&zwnj;ಲಾಕಿಂಗ್ ಅಲ್ಲದ ಮತ್ತು ಇಂಟರ್&zwnj;ಲಾಕಿಂಗ್ ಅಲ್ಲದ ಕೆಲಸದಿಂದಾಗಿ ಜೂನ್ 5ರಿಂದ 10ರವರೆಗೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಹಲವು ರೈಲುಗಳ ಮೇಲೆ ಸಂಚಾರ ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;ನಿಯಂತ್ರಣ ಯಾವ ರೈಲುಗಳ ಮೇಲೆ ?&lt;/h2&gt;&lt;p&gt;ಜೂನ್&zwnj; 5 ರಂದು ರೈಲು ಸಂಖ್ಯೆ 11311 ಸೋಲಾಪುರ-ಹಾಸನ ಎಕ್ಸ್&zwnj;ಪ್ರೆಸ್ ಹಾಗೂ ರೈಲು ಸಂಖ್ಯೆ 17308 ಬಾಗಲಕೋಟೆ- ಮೈಸೂರು ಬಸವಾ ಎಕ್ಸ್&zwnj;ಪ್ರೆಸ್ ಸಂಚಾರದ ಮೇಲೆ 45 ನಿಮಿಷಗಳ ನಿಯಂತ್ರಣವಿರಲಿದೆ. ಜೂ. 8 ರಂದು ರೈಲು ಸಂಖ್ಯೆ 18520 ಎಲ್&zwnj;ಟಿಟಿ ಮುಂಬೈ- ವಿಶಾಖಪಟ್ಟಣ ಎಕ್ಸ್&zwnj;ಪ್ರೆಸ್ಜೂ 2 ಗಂಟೆ, ರೈಲು ಸಂಖ್ಯೆ 01465 ಸೋಲಾಪುರ-ಕಲಬುರಗಿ ವಿಶೇಷ 1 ಗಂಟೆ 30 ನಿಮಿಷ, ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ 30 ನಿಮಿಷ, ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 30 ನಿಮಿಷ ನಿಯಂತ್ರಣದಲ್ಲಿರಲಿವೆ.&lt;/p&gt;&lt;p&gt;ಜೂನ್&zwnj; 9 ರಂದು ರೈಲು ಸಂಖ್ಯೆ 16382 ಕನ್ಯಾಕುಮಾರಿ-ಪುಣೆ ಎಕ್ಸ್&zwnj;ಪ್ರೆಸ್ 1 ಗಂಟೆ 15 ನಿಮಿಷ, ರೈಲು ಸಂಖ್ಯೆ 11020 ಭುವನೇಶ್ವರ- ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.&lt;/p&gt;&lt;h2&gt;ಕೆಲವು ರೈಲು ಮಾರ್ಗ ಬದಲಾವಣೆ:&lt;/h2&gt;&lt;p&gt;ರೈಲು ಸಂಖ್ಯೆ 57662 ವಿಜಯಪುರ-ರಾಯಚೂರು ಪ್ಯಾಸೆಂಜರ್ ಜೂ. 5 ರಿಂದ 10 ರ ವರೆಗೆ ವಿಜಯಪುರ-ಹೋಟ್ಗಿ-ವಾಡಿ ಮಾರ್ಗ, ರೈಲು ಸಂಖ್ಯೆ 57661 ರಾಯಚೂರು-ವಿಜಯಪುರ ಪ್ಯಾಸೆಂಜರ್ ವಾಡಿ-ಹೋಟ್ಗಿ-ವಿಜಯಪುರ ಮೂಲಕ ಮಾರ್ಗ ಬದಲಾವಣೆ ಮಾಡಲಾಗುತ್ತದೆ.&lt;/p&gt;&lt;p&gt;ಕೆಳಗಿನ ರೈಲುಗಳನ್ನು ನಿರ್ದಿಷ್ಟಪಡಿಸಿದಂತೆ ಮರುಹೊಂದಿಸಲಾಗುತ್ತದೆ. ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ ಜೂ. 10 ರಂದು 2 ಗಂಟೆ 20 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 2 ಗಂಟೆ 15 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ.&lt;/p&gt;&lt;p&gt;ರೈಲು ಸಂಖ್ಯೆ 01465 ಸೋಲಾಪುರ- ಕಲಬುರಗಿ ಮತ್ತು ರೈಲು ಸಂಖ್ಯೆ 01466 ಕಲಬುರಗಿ- ಸೋಲಾಪುರ ಈ ರೈಲು ಜೂ. 10 ರಂದು ರದ್ದು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>vijayapura</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep"/>
        </item>
        <item>
            <title><![CDATA[ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!]]></title>
            <link>https://kannada.asianetnews.com/karnataka-districts/bhima-river-sand-mining-nexus-the-real-reason-behind-vijayapura-nirale-family-massacre-gdp-videoshow-8znxize</link>
            <guid isPermaLink="true">https://kannada.asianetnews.com/karnataka-districts/bhima-river-sand-mining-nexus-the-real-reason-behind-vijayapura-nirale-family-massacre-gdp-videoshow-8znxize</guid>
            <pubDate>Wed, 03 Jun 2026 10:58:23 +0530</pubDate>
            <description><![CDATA[ವಿಜಯಪುರದ ಭೀಮಾತೀರದಲ್ಲಿ ನಡೆದ ನಿರಾಳೆ ಕುಟುಂಬದ ಆರು ಜನರ ಹತ್ಯಾಕಾಂಡಕ್ಕೆ ಜಮೀನು ವ್ಯಾಜ್ಯ ಕಾರಣವೆಂದು ಭಾವಿಸಲಾಗಿತ್ತು. ಆದರೆ, ಈ ಕೊಲೆಗಳ ಹಿಂದೆ ಭೀಮಾ ನದಿಯ ಮರಳು ದಂಧೆಯ ಹಿಡಿತ ಸಾಧಿಸುವ ಕೋಟಿ ಕೋಟಿ ಹಣದ ದುರಾಸೆ ಇದೆ ಎಂಬ ಹೊಸ ಸತ್ಯ ಇದೀಗ ಚರ್ಚೆಯಾಗುತ್ತಿದೆ.]]></description>
            <media:content url="https://geo.dailymotion.com/player/x1tbu.html?video=xacvo3u" medium="video" height="768" width="1024"/>
            <content:encoded><![CDATA[&lt;p&gt;ವಿಜಯಪುರ ಜಿಲ್ಲೆಯಲ್ಲಿ ಜಮೀನು ವ್ಯಾಜ್ಯಕ್ಕೆ ಬರೊಬ್ಬರಿ ಅರ್ಧ ಡಜನ್&zwnj; ಹೆಣಬಿದ್ದಿದ್ದ ಕಥೆಯನ್ನ ನಾವು ಈ ಹಿಂದೆ ಹೇಳಿದ್ವಿ.. ಭೀಮಾತೀರದಲ್ಲಿ ನಡೆದಿದ್ದ ಹತ್ಯಾಕಾಂಡವನ್ನ ಕಂಡು ಆವತ್ತು ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಚಡಚಣ ಪಟ್ಟಣದ ಪ್ರತಿಷ್ಟಿತ ನಿರಾಳೆ ಕುಟುಂಬದ ಸದಸ್ಯರನ್ನ ಅಟ್ಟಾಡಿಸಿ ಕೊಚ್ಚಿಹಾಕಿದ್ದ ಹಂತಕರು ಇವತ್ತು ಖಾಕಿ ಬಲೆಗೆ ಬಿದ್ದಿದ್ದಾರೆ. ಆದ್ರೆ 25 ಎಕರೆ ಜಮೀನಿಗೆ ಈ ಕೊಲೆಗಳು ನಡೆದಿದ್ವು ಅಂತ ಎಲ್ಲರೂ ಅಂದುಕೊಂಡಿದ್ರು.. ಆದ್ರೆ ಈಗ ಕೇಳಿ ಬರ್ತಿರೋ ಅದೊಂದು ಕಾರಣ ಮಾತ್ರ ಮತ್ತೆ ಭೀಮಾತೀರದ ಮಂದಿಯನ್ನ ಕಕ್ಕಾಬಿಕ್ಕಿಯಾಗೋ ಹಾಗೇ ಮಾಡಿದೆ. ಅಷ್ಟಕ್ಕೂ ಆ ಕಾರಣವೇನು..? ಭೀಮಾತೀರದ ಗ್ಯಾಂಗ್​ಸ್ಟರ್​​ಗಳ ಕಣ್ಣು ಕುಕ್ಕುತ್ತಿರುವ ಆ ಹೊಸ ದಂಧೆ ಯಾವುದು..? ನಿರಾಳೆ ಕುಟುಂಬದ ಸಾವುಗಳ ಹಿಂದಿನ ಅಸಲಿ ಕಥೆಯೇ ಇವತ್ತಿನ ಎಫ್​​.ಐ.ಆರ್&lt;/p&gt;&lt;p&gt;ಒಂದು ಜಮೀನಿಗಾಗಿ ಒಂದು ಇಡೀ ಕುಟುಂಬವನ್ನೆ ಮುಗಿಸಿದ್ರು ಅಂದ್ರೆ ಅದು ಸುಮ್ಮನೆನಾ? ಅಷ್ಟಕ್ಕು ೬ ಹೆಣಗಳನ್ನ ಕೆಡವುವಂತ ಕರಾಳತೆ ಆ ಜಮೀನಿನಲ್ಲಿ ಏನಿತ್ತು.? ಅನ್ನೋ ಪ್ರಶ್ನೆಗಳ ನಡುವೆಯೇ ಈಗ ಭೀಮಾತೀರದ ಜನ ಮರಳು ದಂಧೆಯ ವಾಸನೆ ಬರ್ತಿದೆ ಎನ್ತಿದ್ದಾರೆ. ಹಾಗಾದ್ರೆ ಏನದು ಮರಳು ದಂಧೆ..? ಒಂದು ಪ್ರತಿಷ್ಟಿತ ಮನೆತನದ ೬ ಜನರನ್ನ ಅನಾಯಾಸವಾಗಿ ಕೊಂದು ಹಾಕ್ತಾರೆ ಅಂದ್ರೆ ಇದರಲ್ಲೀ ಏನೋ ಮಸಲತ್ತಿದೆ ಅನ್ನೋದನ್ನ ಸಾಮಾನ್ಯರಿಗೂ ಅರ್ಥವಾಗುತ್ತೆ. ಭಯಾನಕ ಹತ್ಯೆಯ ಹಿಂದೆ ಹೆಣ್ಣು-ಮಣ್ಣು ಬಿಟ್ಟು ಮರಳು ದಂಧೆಯ ಒಡೆತನದ ಮಾತುಗಳು ಕೇಳಿ ಬರ್ತಿವೆ. ಹೌದು.. ಇದೇ ಭೀಮಾ ನದಿಯ ಮಹರಾಷ್ಟ್ರದ ಭಾಗದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ.. ಆದ್ರೆ ಕರ್ನಾಟಕ ಭಾಗದಲ್ಲಿ ಇನ್ನೂ ಸಹ ಸರ್ಕಾರ ಒಪ್ಪಿಗೆ ನೀಡಿಲ್ಲ.. ಆದ್ರೆ ಇಲ್ಲಿ ಒಂದಿಲ್ಲೊಂದು ದಿನ ಗಣಿಗಾರಿಕೆ ನಡೆಯುತ್ತೆ ಅನ್ನೋದು ಭೀಮಾತೀರದ ಗ್ಯಾಂಗ್​​ಸ್ಟರ್​ಗಳ ನಂಬಿಕೆ.. ಹೀಗಾಗೇ ಕೋಟಿ ಕೋಟಿ ಹಣದ ದುರಾಸೆಯೆ ಈ ದುರಂತಕ್ಕೆ ಕಾರಣ ಅಂತಾ ಭೀಮಾತೀರದ ಮಂದಿ ಮಾತನಾಡ್ತಿದ್ದಾರೆ&lt;/p&gt;]]></content:encoded>
            <category>vijayapura</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bhima-river-sand-mining-nexus-the-real-reason-behind-vijayapura-nirale-family-massacre-gdp-videoshow-8znxize"/>
        </item>
        <item>
            <title><![CDATA[ಶೀಘ್ರದಲ್ಲಿಯೇ ವಿಜಯಪುರ–ತಿರುಪತಿ ನಡುವೆ ನೇರ ರೈಲು ಸೇವೆ : ಟ್ರೈನ್ ರೂಟ್ ಯಾವುದು?]]></title>
            <link>https://kannada.asianetnews.com/gallery/karnataka-districts/indian-railways-direct-train-service-between-vijayapura-to-tirupati-soon-what-is-the-route-mrq-cd8miky</link>
            <guid isPermaLink="true">https://kannada.asianetnews.com/gallery/karnataka-districts/indian-railways-direct-train-service-between-vijayapura-to-tirupati-soon-what-is-the-route-mrq-cd8miky</guid>
            <pubDate>Sun, 21 Jun 2026 14:39:41 +0530</pubDate>
            <description><![CDATA[ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬಹುಕಾಲದ ಬೇಡಿಕೆಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಂಸದ ನಾರಾಯಣಸಾ ಕೆ. ಭಾಂಡೆಗೆ ಅವರ ಮನವಿಯನ್ನು ಮುಂದಿನ ಕ್ರಮಕ್ಕಾಗಿ ರವಾನಿಸಲಾಗಿದ್ದು, ಉತ್ತರ ಕರ್ನಾಟಕದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvmpkdabwjdrbj6x2yn916qt,imgname-vijayapura-to-tirupati-direct-indian-railways-1782032479563.jpg" type="image/jpeg" height="390" width="690"/>
            <content:encoded><![CDATA[ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬಹುಕಾಲದ ಬೇಡಿಕೆಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಂಸದ ನಾರಾಯಣಸಾ ಕೆ. ಭಾಂಡೆಗೆ ಅವರ ಮನವಿಯನ್ನು ಮುಂದಿನ ಕ್ರಮಕ್ಕಾಗಿ ರವಾನಿಸಲಾಗಿದ್ದು, ಉತ್ತರ ಕರ್ನಾಟಕದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.&lt;img&gt;&lt;p&gt;ವಿಜಯಪುರ ಮತ್ತು ತಿರುಪತಿ ನಡುವೆ ನೇರ ರೈಲು ಸಂಚಾರದ ಬೇಡಿಕೆಗೆ ಭಾರತೀಯ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಜ್ಯಸಭಾ ಸದಸ್ಯರಾಗಿರುವ ನಾರಾಯಣಸಾ ಕೆ. ಭಾಂಡೆಗೆ ಅವರ ಪತ್ರಕ್ಕೆ ಮಹತ್ವದ ಸ್ಪಂದನೆ ದೊರೆತಿದೆ. ಈ ಬಗ್ಗೆ ಸಂಸದರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯಪುರ&ndash;ತಿರುಪತಿ ನೇರ ರೈಲು ಸೇವೆ ಆರಂಭಿಸುವ ಕುರಿತು ನಾನು ರೈಲ್ವೆ ಇಲಾಖೆಗೆ ಸಲ್ಲಿಸಿದ್ದ ಮನವಿಗೆ ಮಹತ್ವದ ಸ್ಪಂದನೆ ದೊರೆತಿದೆ. ದಕ್ಷಿಣ ಮಧ್ಯ ರೈಲ್ವೆ (South Central Railway), ಸಿಕಂದರಾಬಾದ್ ಕಚೇರಿಯು ನನ್ನ ಮನವಿಯನ್ನು ಸಂಬಂಧಿತ ದಕ್ಷಿಣ ಕರಾವಳಿ ರೈಲ್ವೆ (South Coast Railway), ವಿಶಾಖಪಟ್ಟಣಂ ವಿಭಾಗಕ್ಕೆ ಮುಂದಿನ ಪರಿಶೀಲನೆ ಹಾಗೂ ಅಗತ್ಯ ಕ್ರಮಕ್ಕಾಗಿ ರವಾನಿಸಿದೆ ಎಂದು ಸಂಸದರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಭಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿರುವ ಈ ರೈಲು ಸೇವೆ ಸಾಕಾರಗೊಳ್ಳುವ ದಿಸೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ವಿಜಯಪುರ&ndash;ತಿರುಪತಿ ನೇರ ರೈಲು ಸೇವೆ ಮಂಜೂರಾಗುವವರೆಗೆ ನನ್ನ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ. ಈ ಸೇವೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂಬ ವಿಶ್ವಾಸವಿದೆ. ಜನರ ಆಶಯಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ ಎಂದು ನಾರಾಯಣಸಾ ಕೆ. ಭಾಂಡೆಗೆ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನೆಲಮಂಗಲ ಬಳಿ ಕೆಟ್ಟು ನಿಂತ ರೈಲಿನಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರದಾಟ&lt;/strong&gt;&lt;/p&gt;&lt;img&gt;&lt;p&gt;&lt;strong&gt;ಮಾರ್ಗ 1: &lt;/strong&gt;ವಿಜಯಪುರದಿಂದ ಆರಂಭವಾಗುವ ಈ ಪ್ರಯಾಣ ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆಆಲೂರು, ಗದಗ ಜಂಕ್ಷನ್, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್ ಮಾರ್ಗವಾಗಿ ತಿರುಪತಿ ತಲುಪಬಹುದಾಗಿದೆ.&lt;/p&gt;&lt;p&gt;&lt;strong&gt;ಮಾರ್ಗ 2: &lt;/strong&gt;ಒಂದು ವೇಳೆ ಕಲಬುರಗಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ವಿಜಯಪುರದಿಂದ ವಾಯ ಹುಟುಗಿ ಜಂಕ್ಷನ್&zwnj;ನಿಂದ ಕಲಬುರಗಿ, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ, ರಾಣಿಗುಂಟಾ ಜಂಕ್ಷನ್ ಮಾರ್ಗವಾಗಿ ತಿರುಪತಿ ತಲುಪಬಹುದಾಗಿದೆ. ಆದ್ರೆ ಭಾರತೀಯ ರೈಲ್ವೆ ಇಲಾಖೆ ಯಾವ ಮಾರ್ಗ ಮತ್ತು ಎಲ್ಲೆಲ್ಲಿ ನಿಲುಗಡೆಯನ್ನು ಹೊಂದಲಿದೆ ಎಂಬುದರ ಬಗ್ಗೆ ಅಧಿಕೃತವಾದ ಮಾಹಿತಿ ಹೊರ ಬಂದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/indian-railways-direct-train-service-between-vijayapura-to-tirupati-soon-what-is-the-route-mrq-cd8miky"/>
        </item>
        <item>
            <title><![CDATA[ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕೆಲಸ ಮಾಡುವೆ: ಸಚಿವ ಎಂ.ಬಿ.ಪಾಟೀಲ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/mb-patil-visits-siddheshwar-swamiji-ashram-vijayapura-gvd/articleshow-chx79ep</link>
            <guid isPermaLink="true">https://kannada.asianetnews.com/karnataka-districts/mb-patil-visits-siddheshwar-swamiji-ashram-vijayapura-gvd/articleshow-chx79ep</guid>
            <pubDate>Sun, 07 Jun 2026 00:27:36 +0530</pubDate>
            <description><![CDATA[&lt;p&gt;ನನ್ನ ಜೀವನವಿಡೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕೆಲಸ ಮಾಡುತ್ತೇನೆ. ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದದಿಂದ ಜನಸೇವೆ, ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ ಎಂದು ಬೃಹತ್&zwnj; ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktf0n3y3xhwft20p9a2d9gvd,imgname-hh-1780767952835.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಜೂ.07): &lt;/strong&gt;ನನ್ನ ಜೀವನವಿಡೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕೆಲಸ ಮಾಡುತ್ತೇನೆ. ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದದಿಂದ ಜನಸೇವೆ, ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಅವರ ಕಿವಿಮಾತು ಚಾಚೂ ತಪ್ಪದೆ ಪಾಲಿಸುತ್ತ ರಾಜ್ಯದ ಅಭಿವೃದ್ಧಿಗೆ ಸಮಯ ಮೀಸಲಿಟ್ಡಿದ್ದೇನೆ. ಶ್ರೀಗಳ ಆಶೀರ್ವಾದ ನನಗೆ ಕಾಯಕ ಮಾಡಲು ಸ್ಫೂರ್ತಿಯಾಗಿದ್ದು, ಈಗ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ನನಗೆ ಸಂತೃಪ್ತಿ ಇದೆ ಎಂದು ಬೃಹತ್&zwnj; ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.&lt;/p&gt;&lt;p&gt;ನೂತನ ಸಂಪುಟದಲ್ಲಿ ಸಚಿವರಾದ ನಂತರ ಇದೇ ಮೊದಲ&zwnj; ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ&zwnj;ರು ನೇರವಾಗಿ ನಗರದ ಸಿದ್ಧೇಶ್ವರ ಸ್ವಾಮೀಜಿಗಳ ಜ್ಞಾನಯೋಗಾಶ್ರಮಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು. ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಸಚಿವರನ್ನು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸಿದ್ಧೇಶ್ವರ ಸ್ವಾಮೀಜಿಯವರು ರಚಿಸಿದ ಮೊದಲ ಕೃತಿ&zwnj; ವಚನ ಚಿಂತನ ನೀಡಿ ಆಶೀರ್ವದಿಸಿದ ಬಸವಲಿಂಗ ಸ್ವಾಮೀಜಿ, 21 ವರ್ಷಗಳ ಹಿಂದೆ ಸಿದ್ಧೇಶ್ವರ ಸ್ವಾಮೀಜಿಗಳು ಇದೇ ದಿನದಂದು 9 ಜನರಿಗೆ ಸನ್ಯಾಸ ದೀಕ್ಷೆ ನೀಡಿದ್ದರು. ಇದೇ ದಿನ ಸಚಿವರು ಆಶ್ರಮಕ್ಕೆ ಭೇಟಿ ನೀಡಿದ ಯೋಗಾಯೋಗ ಬಂದಿದೆ.&lt;/p&gt;&lt;p&gt;ನನ್ನ ಜೀವಮಾನದಲ್ಲಿ ಬೇಸಿಗೆಯಲ್ಲೂ ಹಳ್ಳಗಳು ತುಂಬಿ ಹರಿಯುತ್ತಿರುವುದನ್ನು ಕಂಡು ಸಂತಸವಾಗಿದೆ. ಇದಕ್ಕೆ ಸಚಿವ ಎಂ.ಬಿ. ಪಾಟೀಲ ಅವರು ಕೈಗೊಂಡಿರುವ ನೀರಾವರಿ ಯೋಜನೆಗಳು ಕಾರಣವಾಗಿವೆ. ಸಚಿವರು ಸಿದ್ಧೇಶ್ವರ ಸ್ವಾಮೀಜಿಗಳ ಮಾತನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಅಪ್ಪಟ ಭಕ್ತರಾಗಿದ್ದಾರೆ. ಶ್ರೀಗಳು ಹೇಳಿದಂತೆ ಎಂ.ಬಿ. ಪಾಟೀಲರು ಜನಮನದಲ್ಲಿ ಯಾವಾಗಲೂ ಜಲಸಂಪನ್ಮೂಲ ಸಚಿವರಾಗಿ ಉಳಿದಿದ್ದಾರೆ. ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ವ್ಯಕ್ತಿತ್ವ ಅವರಾಗಿದ್ದು, ಇನ್ನೂ ಉನ್ನತ ಸ್ಥಾನಕ್ಕೇರಲಿ ಎಂದು ಹಾರೈಸಿದರು.&lt;/p&gt;&lt;p&gt;ಅಮೃತಾನಂದ ಸ್ವಾಮೀಜಿ ಬಾಲಗಾಂವ, ಹರ್ಷಾನಂದ ಸ್ವಾಮೀಜಿ, ಪ್ರಸಾದ ಸ್ವಾಮೀಜಿ, ಜಗನು ಮಹಾರಾಜ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡರಾದ ಸಂಗು ಸಜ್ಜನ, ವಿ.ಸಿ.ನಾಗಠಾಣ, ಮಲ್ಲಿಕಾರ್ಜುನ ಹಳ್ಳದ, ಪಿ.ಎಸ್. ಬಿರಾದಾರ, ಘನಶ್ಯಾಮ ತೋಶ್ನಿವಾಲ, ಶಿವಾನಂದ ಸಂಖ, ವಿಠ್ಠಲಗೌಡ ಬಿರಾದಾರ ಇತರರು ಉಪಸ್ಥಿತರಿದ್ದರು. ನಂತರ ಸಚಿವರು ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಆವರಣದಲ್ಲಿರುವ ಸಂಸ್ಥೆಯ ದಿ. ಶ್ರೀ ಬಿ. ಎಂ. ಪಾಟೀಲ, ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಸಮಾದಿ, ಬಂಥನಾಳ ಶಿವಯೋಗಿಗಳ ದೇವಸ್ಥಾನ ಹಾಗೂ 770 ಅಮರಗಣಂಗಳ ಲಿಂಗದ ಗುಡಿಗೆ ತೆರಳಿ ನಮನ ಸಲ್ಲಿಸಿದರು.&lt;/p&gt;&lt;h2&gt;&lt;strong&gt;ಆಶೀರ್ವಾದ ಪಡೆದು ಧನ್ಯನಾಗಿದ್ದೇನೆ&lt;/strong&gt;&lt;/h2&gt;&lt;p&gt;ಸಾರ್ವಜನಿಕ ಜೀವನದಲ್ಲಿ ಸದಾ ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತ, ಮಾರ್ಗದರ್ಶನ ನೀಡಿದ ಮಹಾನ್ ಸಂತ, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳು ನಡೆದಾಡಿದ ಪುಣ್ಯಭೂಮಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದ ಪಡೆದು ಧನ್ಯನಾಗಿದ್ದೇನೆ. ಬೆಂಗಳೂರಿನಿಂದ ಬಂದು ನೇರವಾಗಿ ಆಶ್ರಮಕ್ಕೆ ಮೊದಲ ಭೇಟಿ ನೀಡಿದ್ದೇನೆ. ಶ್ರೀಗಳು ಮತ್ತು ಬಸವಾದಿ ಶರಣರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಜೀವನಪೂರ್ತಿ ಶ್ರೀಗಳ ಆಶಯದಂತೆ ನಡೆಯುತ್ತೇನೆ.-ಎಂ.ಬಿ. ಪಾಟೀಲ ಬೃಹತ್&zwnj; ಮತ್ತು ಮಧ್ಯಮ ಕೈಗಾರಿಕೆ ಸಚಿವರು&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mb-patil-visits-siddheshwar-swamiji-ashram-vijayapura-gvd/articleshow-chx79ep"/>
        </item>
        <item>
            <title><![CDATA[ಸಿಂದಗಿ-ಇಂಡಿ-ಲಚ್ಯಾಣ-ಸೋಲಾಪುರಕ್ಕೆ ಕೊನೆಗೂ ಆರಂಭವಾದ ಬಸ್; ಯಶವಂತಗೌಡ ಪಾಟೀಲರು ಚಾಲನೆ]]></title>
            <link>https://kannada.asianetnews.com/karnataka-districts/sindagi-indi-lachyana-solapur-bus-service-finally-started-mla-yashwanth-gowda-patil-green-flag-mrq/articleshow-e2ii24d</link>
            <guid isPermaLink="true">https://kannada.asianetnews.com/karnataka-districts/sindagi-indi-lachyana-solapur-bus-service-finally-started-mla-yashwanth-gowda-patil-green-flag-mrq/articleshow-e2ii24d</guid>
            <pubDate>Sat, 23 May 2026 05:08:05 +0530</pubDate>
            <description><![CDATA[&lt;p&gt;ಇಂಡಿ ತಾಲೂಕಿನ ಲಚ್ಯಾಣ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸಿಂದಗಿ-ಇಂಡಿ-ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಹೊಸ ಬಸ್ ಸೇವೆಗೆ ಶಾಸಕ ಯಶವಂತಗೌಡ ಪಾಟೀಲರು ಚಾಲನೆ ನೀಡಿದರು. ಈ ಬಸ್ಸು ಸಿದ್ದಲಿಂಗೇಶ್ವರ ಭಕ್ತರಿಗೆ, ವ್ಯಾಪಾರಸ್ಥರಿಗೆ ಮತ್ತು ನೌಕರರಿಗೆ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks90kzg9qy27rw18j6s0nr2h,imgname-indi-solapur-bus-1779492847113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗೇಶ್ವರ ಭಕ್ತರ ವ್ಯಾಪಾರಸ್ಥರ ನೌಕರರ ಬಹುದಿನಗಳ ಬೇಡಿಕೆಗೆ ಶಾಸಕ ಯಶವಂತಗೌಡ ಪಾಟೀಲರು ಸ್ಪಂದಿಸಿ ಸಿಂದಗಿಯಿಂದ ಇಂಡಿ ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಬಸ್ಸಿಗೆ ಚಾಲನೆ ನೀಡಿದರು.&lt;/p&gt;&lt;h2&gt;&lt;strong&gt;ಬಸ್ ಸಮಯ&lt;/strong&gt;&lt;/h2&gt;&lt;p&gt;ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ಸೋಲಾಪುರ ಮತ್ತು ಮಹಾರಾಷ್ಟ್ರದ ವಿವಿಧ ಕಡೆಯಿಂದ ಬರುವ ಭಕ್ತರಿಗೆ ಈ ಬಸ್ಸು ಅನುಕೂಲವಾಗುತ್ತದೆ. ಸಿಂದಗಿಯಿಂದ ಮಧ್ಯಾಹ್ನ 2 ಗಂಟೆಗೆ ಬಿಟ್ಟು, ಇಂಡಿಯಿಂದ 3.45ಕ್ಕೆ ಬಿಡುವ ಬಸ್ಸು ಲಚ್ಯಾಣ 4 ಗಂಟೆಗೆ, ಅಹಿರಸಂಗ, ಭೈರುಣಗಿ, ಭತಗುಣಕಿ, ಹಲಸಂಗಿ, ಧೂಳಖೇಡ ಮಾರ್ಗವಾಗಿ ಸೋಲಾಪುರ ತಲುಪುವದು. ಸೋಲಾಪುರದಿಂದ ಸಂಜೆ 7 ಗಂಟೆಗೆ ಬಿಡುವ ಬಸ್ಸು ಇದೇ ಮಾರ್ಗದಲ್ಲಿ ಇಂಡಿಯಿಂದ ಸಿಂದಗಿ ಹೋಗಲಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ಮಹಾದೇವಪ್ಪ ಏವೂರ, ಘಟಕ ವ್ಯವಸ್ಥಾಪಕ ನಡುವಿನಮನಿ ಮತ್ತಿತರಿದ್ದರು.&lt;/p&gt;]]></content:encoded>
            <category>vijayapura</category>
            <dc:creator>Asianetnews Kannada Stories</dc:creator>
            <atom:link href="https://kannada.asianetnews.com/karnataka-districts/sindagi-indi-lachyana-solapur-bus-service-finally-started-mla-yashwanth-gowda-patil-green-flag-mrq/articleshow-e2ii24d"/>
        </item>
        <item>
            <title><![CDATA[Liquor Mafia: ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್]]></title>
            <link>https://kannada.asianetnews.com/gallery/karnataka-districts/goa-liquor-smuggling-busted-in-vijayapura-rs-1-65-crore-worth-liquor-hidden-under-vermicompost-seized-4-arrested-fqrvunu</link>
            <guid isPermaLink="true">https://kannada.asianetnews.com/gallery/karnataka-districts/goa-liquor-smuggling-busted-in-vijayapura-rs-1-65-crore-worth-liquor-hidden-under-vermicompost-seized-4-arrested-fqrvunu</guid>
            <pubDate>Wed, 24 Jun 2026 08:49:27 +0530</pubDate>
            <description><![CDATA[&lt;p&gt;ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ!&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvvs925qxmgkfhxrmsp5q00f,imgname-whatsapp-image-2026-06-24-at-8.26.20-am-1782270167223.jpeg" type="image/jpeg" height="390" width="690"/>
            <content:encoded><![CDATA[&lt;p&gt;ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ!&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ ಕೊನೆಗೂ ವಿಜಯಪುರದಲ್ಲಿ ಬಯಲಾಗಿದೆ.. ಬರೋಬ್ಬರಿ 1 ಕೋಟಿ 65 ಲಕ್ಷ ಮೌಲ್ಯದ ಮದ್ಯ ಹಾಗೂ ಟ್ರಕ್ ಈಗ ಖಾಕಿ ವಶದಲ್ಲಿದೆ.&lt;/p&gt;&lt;p&gt;ಪೊಲೀಸ್ ಠಾಣೆಯಲ್ಲಿ ನಿಂತಿರೋ ಟ್ರಕ್.. ಟ್ರಕ್ ಪಕ್ಕದಲ್ಲೆ ಕೋಟಿ ಮೌಲ್ಯದ ಗೋವಾ ಲಿಕ್ಕರ್... ಪಕ್ಕದಲ್ಲೆ ಎರೆಹುಳ ಗೊಬ್ಬರ.. ಇದೆ ಗೊಬ್ಬರದ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದು ಬರೋಬ್ಬರಿ ಕೋಟಿ ಕೋಟಿ ಮೌಲ್ಯದ ಗೋವಾ ಮದ್ಯ! ಹೌದು, ಗೋವಾದಿಂದ ಮಹಾರಾಷ್ಟ್ರಕ್ಕೆ ಲಿಕ್ಕರ್ ಸಪ್ಲೈ ಮಾಡಲು ಖದೀಮರು ಸಿನೆಮಾ ಸ್ಟೈಲ್&zwnj;ನಲ್ಲಿ ಸ್ಕೆಚ್ ಹಾಕಿದ್ರು. ಆದ್ರೆ ವಿಜಯಪುರ ಪೊಲೀಸರ ಹದ್ದಿನ ಕಣ್ಣಿಗೆ ಈ ಚಾಲಾಕಿ ಗ್ಯಾಂಗ್ ಕೊನೆಗೂ ಬಿದ್ದೇ ಬಿಟ್ಟಿದೆ.&lt;/p&gt;&lt;img&gt;&lt;p&gt;ವಿಜಯಪುರ ಜಿಲ್ಲೆಯ ಕೊಲ್ಹಾರ ಟೋಲ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮದ್ಯ ತುಂಬಿದ್ದ ಟ್ರಕ್ ಅನ್ನು ಅಡ್ಡಗಟ್ಟಿದ್ದಾರೆ. ಆರಂಭದಲ್ಲಿ ಡ್ರೈವರ್&zwnj;ಗಳು 'ಇದು ಎರೆಹುಳ ಗೊಬ್ಬರ ಸರ್, ಬೇಗ ಬಿಡಿ' ಅಂತ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ್ರು. ಆದ್ರೆ ಅನುಮಾನಗೊಂಡು ಪೊಲೀಸರು ಗೊಬ್ಬರದ ಚೀಲಗಳನ್ನು ಕೆಳಗೆ ಇಳಿಸಿ ನೋಡಿದಾಗ ಕಣ್ಣು ಕತ್ತಲೆ ಬರುವಂತಾಗಿತ್ತು. ಟ್ರಕ್&zwnj;ನ ಒಳಭಾಗದಲ್ಲಿ ಕೋಟಿ ಮೌಲ್ಯದ ಗೋವಾ ಮದ್ಯದ ಬಾಕ್ಸ್&zwnj;ಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಜೋಡಿಸಿಡಲಾಗಿತ್ತು.&lt;/p&gt;&lt;img&gt;&lt;p&gt;ಅಷ್ಟಕ್ಕೂ ಈ ಖದೀಮರು ಪೊಲೀಸರಿಗೆ ಸಿಕ್ಕಿಬೀಳಬಾರದು ಅಂತ ಜಿಪಿಎಸ್ ಆಧಾರಿತ ಹೈಟೆಕ್ ಐಡಿಯಾ ಬಳಸಿದ್ರು. ಮದ್ಯ ಸಾಗಾಟದ ರೂಟ್ ಮ್ಯಾಪ್ ಯಾರಿಗೂ ಲೀಕ್ ಆಗಬಾರದು ಅಂತ ಇಡೀ ದಾರಿಯುದ್ದಕ್ಕೂ ಹತ್ತಾರು ಡ್ರೈವರ್&zwnj;ಗಳನ್ನು ಬದಲಾಯಿಸಲಾಗಿತ್ತು! ಒಬ್ಬ ಡ್ರೈವರ್&zwnj;ಗೆ ಕೇವಲ ಒಂದು ನಿರ್ದಿಷ್ಟ ಜಿಪಿಎಸ್ ಲೊಕೇಶನ್ ತಲುಪಿಸೋ ಟಾರ್ಗೆಟ್ ಅಷ್ಟೇ ಇರ್ತಿತ್ತು. ಅಲ್ಲಿಗೆ ಹೋದ ತಕ್ಷಣ ಮತ್ತೊಬ್ಬ ಡ್ರೈವರ್ ಗಾಡಿ ಹತ್ತುತ್ತಿದ್ದ. ಈ ಪ್ಲಾನ್&zwnj;ನಿಂದಾಗಿ ಗೋವಾ ಮೂಲಕ ಬಂದಿದ್ದ ಟ್ರಕ್, ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸರಾಗವಾಗಿ ದಾಟಿ ಬಂದಿತ್ತು.&lt;/p&gt;&lt;img&gt;&lt;p&gt;ಆದ್ರೆ ವಿಜಯಪುರ ಜಿಲ್ಲೆಗೆ ಎಂಟ್ರಿ ಕೊಡ್ತಿದ್ದಂತೆ ಖದೀಮರ ಆಟ ಬಂದ್ ಆಗಿದೆ. ಸದ್ಯ ಪೊಲೀಸರು ಟ್ರಕ್&zwnj;ನಲ್ಲಿದ್ದ ಬರೋಬ್ಬರಿ 1.31 ಕೋಟಿ ಮೌಲ್ಯದ ಗೋವಾ ಮದ್ಯ ಹಾಗೂ ಟ್ರಕ್ ಸೇರಿ ಒಟ್ಟು 1 ಕೋಟಿ 65 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಅಂತರರಾಜ್ಯ ಮದ್ಯದ ದಂಧೆಯಲ್ಲಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಗದಗ ಮೂಲದ ಶ್ರೀನಿವಾಸ್, ವಿಜಯಪುರದ ಹುಸೇನ್&zwnj;ಸಾಬ ಮುಲ್ಲಾ, ಬಸವರಾಜ್ ಭಜಂತ್ರಿ ಹಾಗೂ ಮಹಾರಾಷ್ಟ್ರ ಸೊಲ್ಲಾಪುರದ ಸಿದ್ಧರಾಮ ಡಾಲೆ ಸದ್ಯ ಕಂಬಿ ಎಣಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಮೂರು ಜಿಲ್ಲೆಗಳ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಬಂದಿದ್ದ ಚಾಲಾಕಿ ಖದೀಮರನ್ನು ಹಿಡಿಯುವಲ್ಲಿ ವಿಜಯಪುರ ಖಾಕಿ ಪಡೆ ಯಶಸ್ವಿಯಾಗಿದೆ. ಈ ಹೈಟೆಕ್ ಲಿಕ್ಕರ್ ಮಾಫಿಯಾದ ಕಿಂಗ್&zwnj;ಪಿನ್ ಯಾರು? ಇದರ ಹಿಂದೆ ಬೇರೆ ಯಾರಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;p&gt;- &lt;strong&gt;ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ..&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/goa-liquor-smuggling-busted-in-vijayapura-rs-1-65-crore-worth-liquor-hidden-under-vermicompost-seized-4-arrested-fqrvunu"/>
        </item>
        <item>
            <title><![CDATA[ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್]]></title>
            <link>https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</link>
            <guid isPermaLink="true">https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</guid>
            <pubDate>Tue, 16 Jun 2026 18:20:31 +0530</pubDate>
            <description><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv87c751ar2rqkxkezbdekhr,imgname-tungabhadra-dam--2--1781613862049.jpg" type="image/jpeg" height="390" width="690"/>
            <content:encoded><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.&lt;img&gt;&lt;p&gt;ಕಳೆದ ವರ್ಷ ತಾಂತ್ರಿಕ ದೋಷದಿಂದಾಗಿ ದುರಂತಕ್ಕೀಡಾಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್&zwnj; ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಮುಂಗಾರು ಮಳೆಗಾಲ ಆರಂಭವಾಗುತ್ತಿರುವ ಬೆನ್ನಲ್ಲೇ ಜೂನ್ 25ರಂದು ಹೊಸ ಗೇಟ್&zwnj;ಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ದಿನಾಂಕ ನಿಗದಿಪಡಿಸಲಾಗಿದೆ. ಮುಂಗಾರು ಮುನ್ನವೇ ಡ್ಯಾಂ ಸಂಪೂರ್ಣ ಸಿದ್ಧವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.&lt;/p&gt;&lt;img&gt;&lt;p&gt;ತುಂಗಭದ್ರಾ ಜಲಾಶಯದ ನೀರು ಮೂರು ರಾಜ್ಯಗಳಿಗೆ ಹಂಚಿಕೆಯಾಗುವುದರಿಂದ, ಈ ಲೋಕಾರ್ಪಣೆ ಕಾರ್ಯಕ್ರಮ ಜಂಟಿ ಸಮಾರಂಭವಾಗಿ ಮೂಡಿಬರಲಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಮೂರೂ ರಾಜ್ಯಗಳ ಹಲವು ಗಣ್ಯರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸುತ್ತಿದೆ.&lt;/p&gt;&lt;img&gt;&lt;p&gt;1953ರಲ್ಲಿ ನಿರ್ಮಾಣವಾಗಿದ್ದ ತುಂಗಭದ್ರಾ ಅಣೆಕಟ್ಟಿನ ಮೂಲ ಗೇಟ್&zwnj;ಗಳ ಜೀವಿತಾವಧಿ ಕೇವಲ 50 ವರ್ಷಗಳೆಂದು ತಜ್ಞರು ಮೊದಲೇ ಎಚ್ಚರಿಸಿದ್ದರು. ಆದರೂ ಹಳೆಯ ಗೇಟ್&zwnj;ಗಳನ್ನೇ ಮುಂದುವರಿಸಲಾಗಿತ್ತು. ಪರಿಣಾಮವಾಗಿ, 2024ರ ಆಗಸ್ಟ್ 10ರಂದು ರಾತ್ರಿ ಸುಮಾರು 60 ಅಡಿ ಅಗಲ ಹಾಗೂ 20 ಅಡಿ ಎತ್ತರದ ಬೃಹತ್ ಗೇಟ್&zwnj;ವೊಂದು ಇದ್ದಕ್ಕಿದ್ದಂತೆ ಕಳಚಿ ಬಿದ್ದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ನೀರು ನದಿಗೆ ಪೋಲಾಗಿ, ಭಾರಿ ರಾಜಕೀಯ ವಾಕ್ಸಮರ ಹಾಗೂ ಆತಂಕ ಸೃಷ್ಟಿಯಾಗಿತ್ತು.&lt;/p&gt;&lt;img&gt;&lt;p&gt;ಈ ದುರಂತದ ನಂತರ ಎಚ್ಚೆತ್ತ ಸರ್ಕಾರ, ಕಳೆದ ಡಿಸೆಂಬರ್&zwnj;ನಲ್ಲಿ ಭಾರಿ ಬಜೆಟ್&zwnj;ನೊಂದಿಗೆ ಹೊಸ ಗೇಟ್&zwnj;ಗಳ ಅಳವಡಿಕೆಗೆ ಚಾಲನೆ ನೀಡಿತ್ತು. ದೇಶದ ಪ್ರಮುಖ ಡ್ಯಾಂಗಳಾದ ಕೆಆರ್&zwnj;ಎಸ್, ನಾರಾಯಣಪುರ ಹಾಗೂ ಪಶ್ಚಿಮ ಬಂಗಾಳದ ಫರಕ್ಕಾ ಬ್ಯಾರೇಜ್&zwnj;ಗಳಿಗೆ ಗೇಟ್ ಅಳವಡಿಸಿದ ಅನುಭವವಿರುವ ಗುಜರಾತ್ ಮೂಲದ 'ಹಾರ್ಡ್&zwnj;ವೇರ್ ಟೂಲ್ಸ್ ಮತ್ತು ಮೆಷಿನ್ ಪ್ರಾಜೆಕ್ಟ್ಸ್ ಲಿಮಿಟೆಡ್' ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿತ್ತು. ಒಟ್ಟು 51.81 ಕೋಟಿ ರೂಪಾಯಿ ವೆಚ್ಚದಲ್ಲಿ ಗದಗ ಸಮೀಪದ ಅಡವಿಸೋಮಾಪುರ ಹಾಗೂ ವಿಜಯನಗರದ ಟಿಬಿ ಬೋರ್ಡ್ ಯಾರ್ಡ್&zwnj;ಗಳಲ್ಲಿ ಈ ಗೇಟ್&zwnj;ಗಳನ್ನು ಅತ್ಯಂತ ವೇಗವಾಗಿ ಸಿದ್ಧಪಡಿಸಲಾಯಿತು.&lt;/p&gt;&lt;img&gt;&lt;p&gt;ಹೊಸ ಗೇಟ್ ಅಳವಡಿಸುವ ತಾಂತ್ರಿಕ ಅನಿವಾರ್ಯತೆಯಿಂದಾಗಿ, ಕಳೆದ ಡಿಸೆಂಬರ್ ತಿಂಗಳ ಎರಡನೇ ಬೆಳೆಗೆ ನೀರು ಬಿಡದಿರಲು ಸರ್ಕಾರ ನಿರ್ಧರಿಸಿತ್ತು. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಲಕ್ಷಾಂತರ ರೈತರು ತಮ್ಮ ಒಂದು ಇಡೀ ಬೆಳೆಯನ್ನು ತ್ಯಾಗ ಮಾಡಿದ್ದರು. ಮುಂಗಾರು ಮಳೆಗೂ ಮುನ್ನ ಕೆಲಸ ಮುಗಿಯುತ್ತಾ ಎಂಬ ಆತಂಕ ರೈತರನ್ನು ಕಾಡಿತ್ತಾದರೂ, ಗುತ್ತಿಗೆ ಕಂಪನಿಯು ಹಗಲಿರುಳು ಶ್ರಮಿಸಿ ಸಕಾಲಕ್ಕೆ ಕೆಲಸ ಮುಗಿಸುವ ಮೂಲಕ ರೈತರ ನಂಬಿಕೆಯನ್ನು ಉಳಿಸಿಕೊಂಡಿದೆ.&lt;/p&gt;&lt;img&gt;&lt;p&gt;ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (KSNDMC) ಇತ್ತೀಚಿನ ತಾಜಾ ಮಾಹಿತಿ ಪ್ರಕಾರ, ಜೂನ್ 16ರ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ ಸದ್ಯಕ್ಕೆ 9 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ (2025) ಇದೇ ಅವಧಿಯಲ್ಲಿ ಜಲಾಶಯದಲ್ಲಿ 28 ಟಿಎಂಸಿ ನೀರು ಲಭ್ಯವಿತ್ತು. ಸದ್ಯ ಮುಂಗಾರು ಮಳೆ ಆರಂಭವಾಗುತ್ತಿರುವುದರಿಂದ ಹೊಸ ಗೇಟ್&zwnj;ಗಳ ಬಲದೊಂದಿಗೆ ಡ್ಯಾಂನಲ್ಲಿ ನೀರಿನ ಸಂಗ್ರಹದ ಪ್ರಮಾಣ ವೇಗವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq"/>
        </item>
        <item>
            <title><![CDATA[BREAKING: ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಯಲ್ಲೋ ಅಲರ್ಟ್'; ಹಾಸನಕ್ಕೆ ಆರೆಂಜ್ ಅಲರ್ಟ್]]></title>
            <link>https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</link>
            <guid isPermaLink="true">https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</guid>
            <pubDate>Mon, 25 May 2026 18:03:58 +0530</pubDate>
            <description><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzxjj84544nkh17j6s99v9v,imgname-karnataka-rain-alert-1779187665156.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.&lt;img&gt;&lt;p&gt;ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಹತ್ವದ ಮುನ್ಸೂಚನೆಯೊಂದನ್ನು ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, 'ಯಲ್ಲೋ ಅಲರ್ಟ್' (Yellow Alert) ಘೋಷಿಸಲಾಗಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇವಲ ಸಾಧಾರಣ ಮಳೆಯಷ್ಟೇ ಅಲ್ಲದೆ, ಗಂಟೆಗೆ ಭಾರಿ ವೇಗದಲ್ಲಿ ಬೀಸಲಿರುವ ಸುಂಟರಗಾಳಿ ಹಾಗೂ ಗುಡುಗು-ಮಿಂಚಿನ ಸಹಿತ ವರುಣ ಆರ್ಭಟಿಸಲಿದ್ದಾನೆ. ಹೀಗಾಗಿ ಸಾರ್ವಜನಿಕರು ಮರಗಳ ಕೆಳಗೆ ಹಾಗೂ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಅತ್ಯಂತ ಹೆಚ್ಚಾಗಿರಲಿದ್ದು, ಹವಾಮಾನ ಇಲಾಖೆಯು ಹಾಸನಕ್ಕೆ ಕಟ್ಟುನಿಟ್ಟಿನ 'ಆರೆಂಜ್ ಅಲರ್ಟ್' (Orange Alert) ಜಾರಿಗೊಳಿಸಿದೆ. ಇಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ನಗರದ ಜೊತೆಗೆ ರಾಜ್ಯದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಯಾದಗಿರಿ, ರಾಮನಗರ, ಚಾಮರಾಜನಗರ ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಗಳಿಗೂ ಮುಂದಿನ 3 ಗಂಟೆಗಳ ಕಾಲ 'ಯಲ್ಲೋ ಅಲರ್ಟ್' ನಿಯೋಜಿಸಲಾಗಿದೆ. ಈ ಜಿಲ್ಲೆಗಳಲ್ಲೂ ದಿಢೀರ್ ಮಳೆ ಸುರಿಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಮುಂದಿನ 3 ಗಂಟೆಗಳ ಅವಧಿ ಅತ್ಯಂತ ನಿರ್ಣಾಯಕವಾಗಿದ್ದು, ಆಯಾ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಲರ್ಟ್ ಆಗಿವೆ. ತಗ್ಗು ಪ್ರದೇಶದ ಜನರಿಗೆ ಮತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಕೋರಿದೆ.&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4"/>
        </item>
        <item>
            <title><![CDATA[ಮಕ್ಕಳನ್ನು ಹೊರಗೆ ಹಾಕಿ ಉರ್ದು ಶಾಲೆಗೆ ಬೀಗ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ; ಮನವಿ ಸಲ್ಲಿಕೆ]]></title>
            <link>https://kannada.asianetnews.com/karnataka-districts/vijayapura-nagur-villagers-protest-by-locking-down-urdu-school-throwing-children-out-teacher-s-shortage-mrq/articleshow-m4gsaeg</link>
            <guid isPermaLink="true">https://kannada.asianetnews.com/karnataka-districts/vijayapura-nagur-villagers-protest-by-locking-down-urdu-school-throwing-children-out-teacher-s-shortage-mrq/articleshow-m4gsaeg</guid>
            <pubDate>Sat, 13 Jun 2026 09:14:54 +0530</pubDate>
            <description><![CDATA[&lt;p&gt;Urdu School: ವಿಜಯಪುರ ಜಿಲ್ಲೆಯ ನಾಗೂರ ಉರ್ದು ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದಾಗಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ. &amp;nbsp;ಇದು ಶಾಲೆಯನ್ನು ಮುಚ್ಚುವ ಹುನ್ನಾರ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktzgy11cxt49vq2mx2ahv1b5,imgname-urdu-school-1781321892908.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರು ಇಲ್ಲದಿರುವುದನ್ನು ಕಂಡು ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ತಾಲೂಕಿನ ನಾಗೂರ ಗ್ರಾಮದ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಇದರಲ್ಲಿ ಕನ್ನಡ ಬೋಧಿಸುವ ಶಿಕ್ಷಕರು ಆರು ತಿಂಗಳ ಹಿಂದೆ, ಮೇ 31ರಂದು ಉರ್ದು ಬೋಧಿಸುವ ಓರ್ವ ಶಿಕ್ಷಕರು ನಿವೃತ್ತರಾಗಿದ್ದಾರೆ. ಒಬ್ಬ ಶಿಕ್ಷಕರ ಮಗ ತೀರಿಕೊಂಡಿದ್ದ ಹಿನ್ನೆಲೆ ಮೂರು ತಿಂಗಳ ಕಾಲ ರಜೆ ಮೇಲೆ ಹೋಗಿದ್ದಾರೆ. ಶಾಲೆಯಲ್ಲಿ ಒಬ್ಬರೇ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಈ ಶಾಲೆ ಏಕೋಪಾಧ್ಯಾಯ ಶಾಲೆಯಾಗಿದೆ.&lt;/p&gt;&lt;h2&gt;&lt;strong&gt;ಬಿ.ಎಲ್.ಓ ಸೇವೆಯಿಂದ ಮುಕ್ತಗೊಳಿಸುವಂತೆ ಮನವಿ ಸಲ್ಲಿಕೆ&lt;/strong&gt;&lt;/h2&gt;&lt;p&gt;ಓರ್ವ ಶಿಕ್ಷಕಿಯನ್ನು ಬಿ.ಎಲ್.ಓ ಆಗಿ ನೇಮಕ ಮಾಡಲಾಗಿದೆ. ಇವರನ್ನು ಬಿ.ಎಲ್.ಓ ದಿಂದ ಮುಕ್ತಗೊಳಿಸಿ ಮಕ್ಕಳಿಗೆ ಪಾಠ ಹೇಳು ಬಿಡುವಂತೆ ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮಸ್ಥರು ಕ್ಷೇತ್ರಶಿಕ್ಷಣಾಧಿಕಾರಿ, ತಹಸೀಲ್ದಾರಗೆ ಮನವಿ ಸಲ್ಲಿಸಿದ್ದಾರೆ. ಇದರ ಕುರಿತು ಮತಕ್ಷೇತ್ರದ ಶಾಸಕರ ಗಮನಕ್ಕೂ ತರಲಾಗಿದೆ. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.&amp;nbsp;&lt;/p&gt;&lt;p&gt;ಶುಕ್ರವಾರ ಬಸವನಬಾಗೇವಾಡಿಯಲ್ಲಿ ಬಿ.ಎಲ್.ಓ ತರಬೇತಿ ಇದ್ದ ಹಿನ್ನೆಲೆಯಲ್ಲಿ ಶಿಕ್ಷಕಿ ತರಬೇತಿಗೆ ಹೋಗಿದ್ದರಿಂದ ಶಾಲೆಯಲ್ಲಿ ಒಬ್ಬರೂ ಶಿಕ್ಷಕರಿಲ್ಲದ್ದಕ್ಕೆ ಬೇಸರವಾಗಿ ಶಾಲಾ ಮಕ್ಕಳನ್ನು ಹೊರಗೆ ಹಾಕಿ ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೊದೀನಸಾಬ ಲೋದಿ ತಿಳಿಸಿದರು.&lt;/p&gt;&lt;h3&gt;&lt;strong&gt;16 ಮಕ್ಕಳಿರುವ ಶಾಲೆ&lt;/strong&gt;&lt;/h3&gt;&lt;p&gt;ಒಂದರಿಂದ ಆರನೇ ತರಗತಿಯವರೆಗೆ ಶಾಲೆಯಲ್ಲಿ 16 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಇಲ್ಲದ್ದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ. ಗ್ರಾಮದಲ್ಲಿ ಒಟ್ಟು ಆರು ಶಾಲೆಗಳಿದ್ದು, ಪುರುಷ ಶಿಕ್ಷಕರನ್ನು ಬಿ.ಎಲ್.ಓ. ಮಾಡದೇ ಇರುವ ಓರ್ವ ಶಿಕ್ಷಕಿಯನ್ನು ಈ ಕಾರ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಉರ್ದು ಶಾಲೆಯನ್ನು ಮುಚ್ಚುವ ಹುನ್ನಾರ ಕಂಡುಬರುತ್ತಿದೆ ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಂದೇನವಾಜ ವಾಲೀಕಾರ ಆಕ್ರೋಶ ಹೊರಹಾಕಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ರಾಜು ಮುಲ್ಲಾ, ನಬೀಸಾಬ ಕೊರಬು, ಬಂದೇನವಾಜ ರಗಟಿ, ರಾಜೇಸಾಬ ಚಪ್ಪರಬಂದ, ಹಾಜಿಮಲ್ಲಂಗ ಕವಲಗಿ, ರಾಜಬೀ ವಾಲೀಕಾರ, ದಾವಲಬಿ ಮುಜಾವರ, ಹಾಜಿಮಲ್ಲಂಗ ವಾಲೀಕಾರ, ರಾಜು ಮುಜಾವರ, ಅಮೋಘಿ ಪೂಜಾರಿ ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶಾಲಾ ಆರಂಭ 15 ನಿಮಿಷ ಮುಂದೂಡಿ, ಮುಕ್ತಾಯದ ಸಮಯದಲ್ಲಿ ಬದಲಾವಣೆ ಬೇಡ; ಶಿಕ್ಷಕರ ಮನವಿ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-nagur-villagers-protest-by-locking-down-urdu-school-throwing-children-out-teacher-s-shortage-mrq/articleshow-m4gsaeg"/>
        </item>
        <item>
            <title><![CDATA[ಭೀಮಾತೀರದಲ್ಲಿ ರಕ್ತದೋಕುಳಿ: ವಿಜಯಪುರದಲ್ಲಿ ಆಸ್ತಿ ವಿವಾದಕ್ಕೆ  6 ಜನರ ಭೀಕರ ಹ*ತ್ಯೆ!]]></title>
            <link>https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz</link>
            <guid isPermaLink="true">https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz</guid>
            <pubDate>Fri, 29 May 2026 19:19:34 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವ್ಯಾಜ್ಯವು ಭೀಕರ ಸ್ವರೂಪ ಪಡೆದಿದೆ. ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವಿನ ಆಸ್ತಿ ವಿವಾದವು ಗುಂಡಿನ ದಾಳಿ ಹಾಗೂ ಮಾರಕಾಸ್ತ್ರಗಳ ಬಳಕೆಗೆ ಕಾರಣವಾಗಿ, ಒಂದೇ ಕುಟುಂಬದ ಆರು ಮಂದಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksszffedx8mp0bxbdpqrmx48,imgname-vijayapura-bhima-teera-murders-1780062076365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.29): &lt;/strong&gt;ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ನರಮೇಧ ನಡೆದಿದ್ದು, ಇಡೀ ಭೀಮಾತೀರ ಮತ್ತೊಮ್ಮೆ ರಕ್ತಸಿಕ್ತವಾಗಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಎದುರಾಳಿಗಳು ನಡೆಸಿದ ದಿಢೀರ್ ಫೈರಿಂಗ್ ಹಾಗೂ ಮಾರಕಾಸ್ತ್ರಗಳ ದಾಳಿಗೆ ಬರೋಬ್ಬರಿ ಆರು ಜನ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಈ ಘಟನೆಯಿಂದಾಗಿ ಇಡೀ ಜಿಲ್ಲೆ ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವಿನ ಜಮೀನು ವ್ಯಾಜ್ಯ!&lt;/strong&gt;&lt;/h2&gt;&lt;p&gt;ಗೋವಿಂದಪುರ ಗ್ರಾಮದ ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಕಳೆದ ಕೆಲವು ಸಮಯದಿಂದ ಜಮೀನಿಗೆ ಸಂಬಂಧಿಸಿದಂತೆ ತೀವ್ರ ಆಸ್ತಿ ವಿವಾದ ನಡೆದುಕೊಂಡು ಬಂದಿತ್ತು. ಇಂದು ಈ ವಿವಾದ ವಿಕೋಪಕ್ಕೆ ತಿರುಗಿದ್ದು, ಗೊಳಗಿ ಕುಟುಂಬದ ಸದಸ್ಯರು ನಿರಾಳೆ ಕುಟುಂಬದವರ ಮೇಲೆ ಏಕಾಏಕಿ ಬಂದೂಕಿನಿಂದ ಗುಂಡಿನ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಗೊಳಗಿ ಕುಟುಂಬದವರ ಈ ಭೀಕರ ದಾಳಿಗೆ ನಿರಾಳೆ ಕುಟುಂಬದ ಪ್ರಮುಖರು ಹಾಗೂ ಅವರ ಬೆಂಬಲಿಗರು ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ, ಶಬ್ಬಿರ್ ನದಾಫ್ (ಇವರೊಂದಿಗೆ ಮತ್ತೊಬ್ಬರ ಹತ್ಯೆಯಾಗಿದ್ದು, ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ).&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ, ಗ್ರಾಮದಲ್ಲಿ ಬಿಗಿಬಂದೋಬಸ್ತ್!&lt;/strong&gt;&lt;/h2&gt;&lt;p&gt;ಒಂದೇ ಗ್ರಾಮದ ಆರು ಜನರ ಭೀಕರ ಹತ್ಯೆಯಿಂದಾಗಿ ಭೀಮಾತೀರದಾದ್ಯಂತ ಹಳೇ ಹಗೆತನದ ನೆರಳು ಮತ್ತೆ ಆವರಿಸಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ದಂಡು ಸಶಸ್ತ್ರ ಪಡೆಗಳೊಂದಿಗೆ ಗೋವಿಂದಪುರ ಗ್ರಾಮಕ್ಕೆ ಧಾವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಡೀ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಒಟ್ಟು 25 ಏಕರೆ ಜಮೀನಿನ ವಿವಾದ ಇದಾಗಿದ್ದು, ಪ್ರತಿ ಏಕರೆಗೆ 15 ಲಕ್ಷದಂತೆ ನಿರಾಳೆ ಕುಟುಂಬ ಖರೀದಿ ಮಾಡಿತ್ತು. ಪಕ್ಕಾ ಜಮೀನು ಮೌಲ್ಯ ಬಂದು 25 ಲಕ್ಷ ಇತ್ತು. ಆದರೆ, ನಿರಾಳೆ ಕುಟುಂಬ 15 ಲಕ್ಷಕ್ಕೆ ಖರೀದಿ ಮಾಡಿತ್ತು.ಈ ಜಮೀನು ಪಕ್ಕದಲ್ಲಿಯೇ ಅಪ್ಪುಗೌಡ ಗೊಳಗಿ ಜಮೀನು ಕೂಡ ಇತ್ತು. ನಿರಾಳೆ ಕುಟುಂಬ ಖರೀದಿಸಿದ ಜಮೀನು ಮೇಲೆ ಅಪ್ಪುಗೌಡ ಗೊಳಗಿ ಕಣ್ಣಿಟ್ಟಿದ್ದ. ಆ ಜಮೀನು ಖರೀದಿ ಮಾಡದಂತೆ ನಿರಾಳೆ ಕುಟುಂಬಕ್ಕೆ ಅಪ್ಪುಗೌಡ ಗೊಳಗಿ ಧಮ್ಕಿ ಹಾಕಿದ್ದ. ಇದನ್ನು ಮೀರಿ 25 ಏಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿ ಮಾಡಿತ್ತು. ಪಕ್ಕದ&zwnj; ಜಮೀನು ಹೋಯ್ತಲ್ಲ ಎಂದು ಇಡೀ ನಿರಾಳೆ ಕುಟುಂಬವನ್ನೆ ಗೊಳಗಿ ಕುಟುಂಬ ಸರ್ವನಾಶ ಮಾಡಿದೆ.&lt;/p&gt;&lt;p&gt;ನಿರಾಳೆ ಚಡಚಣ ಮೂಲದವರು, ಗೊಳಗಿ ಗೋವಿಂದಪುರ ಗ್ರಾಮದವರು. ಚಡಚಣ ಊರಲ್ಲಿ ನಿರಾಳೆ ಫ್ಯಾಮಿಲಿ ಕೂಡು ಕುಟುಂಬ ಹೊಂದಿತ್ತು. ಒಂದೆ ಮನೆಯಲ್ಲಿ 30ಕ್ಕೂ ಅಧಿಕ ಜನ ವಾಸವಿದ್ದರು. ಚಡಚಣದ ಶ್ರೀಮಂತ ಕುಟುಂಬ ಪೈಕಿ ಒಂದಾಗಿತ್ತು. ಹತ್ಯೆಯಾಗಿರುವ ಚಂದು ನಿರಾಳೆ ತಾಲೂಕು ಪಂಚಾಯಿಸಿ ಮಾಜಿ ಸದಸ್ಯ ಕೂಡ ಆಗಿದ್ದ.&lt;/p&gt;&lt;h2&gt;&lt;strong&gt;10ಕ್ಕೂ ಅಧಿಕ ಜನರಿಂದ ಕೃತ್ಯ&lt;/strong&gt;&lt;/h2&gt;&lt;p&gt;ಅಪ್ಪುಗೌಡ ಗೊಳಗಿ ಸೇರಿ 10ಕ್ಕಿಂತ ಅಧಿಕ ಜನರಿಂದ ನಿರಾಳೆ ಕುಟುಂಬಸ್ಥರನ್ನು ಹತ್ಎ ಮಾಡಲಾಗಿದೆ. ಕಬ್ಬು ಕತ್ತರಿಸುವ ಕತ್ತಿಯಿಂದ ಹತ್ಯೆ ಮಾಡಲಾಗಿದೆ. ತೇಲಿ ಕುಟುಂಬಕ್ಕೆ ಸೇರಿದ 25 ಏಕರೆ ಜಮೀನನ್ನು 1 ವರ್ಷದ ಹಿಂದೆಯೇ ಮಾರಾಟ ಮಾಡಲಾಗಿತ್ತು. 15 ವರ್ಷಗಳಿಂದ ತೇಲಿ ಕುಟುಂಬಕ್ಕೂ ಗೊಳಗಿ ಕುಟುಂಬಕ್ಕೂ ಈ ಕುರಿತಾಗಿ ವಿವಾದವಿತ್ತು. ತೇಲಿ ಕುಟುಂಬದಿಂದ ಕಡಿಮೆ ದರಕ್ಕೆ 25 ಏಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿ ಮಾಡಿತ್ತು. ನಿರಾಳೆ ಕುಟುಂಬ ಕಡಿಮೆ ದರಕ್ಕೆ ತೇಲಿ ಕುಟುಂಬದಿಂದ 25 ಏಕರೆ ಖರೀದಿ ಮಾಡಿದ್ದಕ್ಕೆ ಗೊಳಗಿ ಕುಟುಂಬಕ್ಕೆ ಸಿಟ್ಟಾಗಿತ್ತು. ಇದೇ ಕಾರಣಕ್ಕೆ ನಿರಾಳೆ ಕುಟುಂಬಸ್ಥರನ್ನ ಅಟ್ಟಾಡಿಸಿ ಹೊಡೆದು ಗೊಳಗಿ ಕುಟುಂಬ ಹತ್ಯೆ ಮಾಡಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz"/>
        </item>
        <item>
            <title><![CDATA[Ramesh Jigajinagi viral audio: ಆರೆಸ್ಸೆಸಿಗರು ಡೇಂಜರ್.. ದಲಿತ ವ್ಯಕ್ತಿಯೊಂದಿಗೆ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆಡಿದ ಮಾತು ವೈರಲ್!]]></title>
            <link>https://kannada.asianetnews.com/state/rss-danger-bjp-mp-ramesh-jigajinagi-s-phone-audio-goes-viral-rav/articleshow-mzns0d6</link>
            <guid isPermaLink="true">https://kannada.asianetnews.com/state/rss-danger-bjp-mp-ramesh-jigajinagi-s-phone-audio-goes-viral-rav/articleshow-mzns0d6</guid>
            <pubDate>Wed, 24 Jun 2026 05:27:20 +0530</pubDate>
            <description><![CDATA[&lt;p&gt;ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಆರ್&zwnj;ಎಸ್&zwnj;ಎಸ್&zwnj; ಅನ್ನು 'ಡೇಂಜರ್' ಎಂದು ಕರೆದಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಪ್ರಿಯಾಂಕ್ ಖರ್ಗೆ ಬೆಂಬಲಿಗನೊಂದಿಗೆ ಮಾತನಾಡುತ್ತಾ, ಆರ್&zwnj;ಎಸ್&zwnj;ಎಸ್&zwnj; ವಿರುದ್ಧ ಹೋದವರು ಉಳಿದಿಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k02j9za3md60e5gkvz2msb5y,imgname-dbdb-1752432966979.png" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;&amp;nbsp;ಖರ್ಗೆ ಬೆಂಬಲಿಗನ ಜತೆಗಿನ ಆಡಿಯೋ ವೈರಲ್&zwnj;--&lt;/li&gt; &lt;li&gt;ದಲಿತ ವ್ಯಕ್ತಿಗೆ ಆರ್&zwnj;ಎಸ್&zwnj;ಎಸ್ ಬಗ್ಗೆ ಕಾಳಜಿ ಏಕೆ?&lt;/li&gt; &lt;li&gt;ಆರ್&zwnj;ಎಸ್&zwnj;ಎಸ್&zwnj; ತಂಟೆಗೆ ಬಂದವರು ಉಳಿದಿಲ್ಲ&lt;/li&gt; &lt;li&gt;ಬಜಿಗಜಿಣಗಿಯದು ಎನ್ನಲಾದ ಆಡಿಯೋ ವೈರಲ್&zwnj;&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ವಿಜಯಪುರ (ಜೂ.24) &lt;/strong&gt;ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ಆರ್&zwnj;ಎಸ್&zwnj;ಎಸ್&zwnj; ಕುರಿತು ಆಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಯ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ(Priyank kharge)ಯವರ ಬೆಂಬಲಿಗನೊಬ್ಬನ ಜೊತೆ ಮಾತನಾಡಿದ ಸಂಸದರು, &lsquo;ಆರ್&zwnj;ಎಸ್ಎಸ್&zwnj;ನವರು ಭಾರಿ ಡೇಂಜರ್. ಆರ್&zwnj;ಎಸ್&zwnj;ಎಸ್(RSS) ವಿರುದ್ಧ ಹೋರಾಡಿದವರು ಬದುಕುಳಿದಿಲ್ಲ. ದಲಿತ ವ್ಯಕ್ತಿಗೆ ಆರ್&zwnj;ಎಸ್&zwnj;ಎಸ್&zwnj; ಬಗ್ಗೆ ಇಲ್ಲ ಸಲ್ಲದ ಕಾಳಜಿ ಏಕೆ?&rsquo; ಎಂದಿದ್ದು ಆಡಿಯೋದಲ್ಲಿ ದಾಖಲಾಗಿದೆ.&lt;/p&gt;&lt;h2&gt;ಹಿನ್ನೆಲೆ ಏನು? ಈಗ ಆಗಿದ್ದೇನು?:&lt;/h2&gt;&lt;p&gt;ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆಯವರು ಆರ್&zwnj;ಎಸ್&zwnj;ಎಸ್&zwnj; ನೋಂದಣಿ ಕುರಿತು ಸಂಘದ ಮುಖ್ಯಸ್ಥ ಮೋಹನ್ ಭಾಗವತ್&zwnj; ಅವರಿಗೆ ಪತ್ರ ಬರೆದ ವಿಚಾರವಾಗಿ ನಡೆದ ಸಂಭಾಷಣೆಯ ಆಡಿಯೋ ಇದಾಗಿದೆ.&lt;/p&gt;&lt;p&gt;ಮೊನ್ನೆಯಷ್ಟೆ ಈ ಸಂಬಂಧ ಪತ್ರಕರ್ತರ ಎದುರು ಪ್ರತಿಕ್ರಿಯಿಸಿದ್ದ ರಮೇಶ ಜಿಗಜಿಣಗಿ, &lsquo;ಆರ್&zwnj;ಎಸ್&zwnj;ಎಸ್&zwnj; ವಿಚಾರ ದಲಿತ ಮನುಷ್ಯನಿಗೆ ಯಾಕೆ ಬೇಕು?, ಅವನಿಗೆ ತಲೆಯಿಲ್ಲ&rsquo; ಎಂದು ಪ್ರಿಯಾಂಕ್&zwnj; ಖರ್ಗೆ ವಿರುದ್ಧ ಕಿಡಿಕಾರಿದ್ದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಪ್ರಿಯಾಂಕ್&zwnj; ಖರ್ಗೆಯವರ ಬೆಂಬಲಿಗನೊಬ್ಬ ಕರೆ ಮಾಡಿ &lsquo;ಕಾಕಾ (ಜಿಗಜಿಣಗಿ) ನೀವೂ ದಲಿತ ತಾನೆ?&rsquo; ಎಂದಿದ್ದಾನೆ. ಈ ವೇಳೆ, ಆಕ್ರೋಶಗೊಂಡ ಜಿಗಜಿಣಗಿ, &lsquo;ನಾನು ದಲಿತ ಇದ್ದೇನಿ, ಆದ್ರೇ, ಬಿಜೆಪಿ ಪಾರ್ಟಿ ಒಳಗ ಇದ್ದೇನಿ. ಆರ್&zwnj;ಎಸ್ಎಸ್&zwnj;ಗೆ ಬೈದರೆ ದೊಡ್ಡವರು ಆಗಿ ಬಿಡ್ತಾರಾ? ಆರ್&zwnj;ಎಸ್ಎಸ್&zwnj;ಗೆ ಬೈದರೆ ಮಣ್ಣಾಗಿ ಹೋಗ್ತೀರಿ, ಹುಚ್ಚರ.... ಆರ್&zwnj;ಎಸ್ಎಸ್&zwnj;ನವರು ಭಾರಿ ಡೇಂಜರ್. ಆರ್&zwnj;ಎಸ್&zwnj;ಎಸ್ ವಿರುದ್ಧ ಹೋರಾಡಿದವರು ಬದುಕುಳಿದಿಲ್ಲ. ದಲಿತ ವ್ಯಕ್ತಿಗೆ ಆರ್&zwnj;ಎಸ್&zwnj;ಎಸ್&zwnj; ಬಗ್ಗೆ ಇಲ್ಲ ಸಲ್ಲದ ಕಾಳಜಿ ಏಕೆ? ಆರ್&zwnj;ಎಸ್&zwnj;ಎಸ್ ನ್ನು ನೋಂದಾಯಿಸುವುದರಿಂದ ನೀವು ಏನು ಸಾಧಿಸುತ್ತೀರಿ? ಅದು ಗೃಹ ಸಚಿವರ ಕೆಲಸವಲ್ಲ&rsquo; ಎಂದು ಕಿಡಿ ಕಾರಿದ್ದಾರೆ.&lt;/p&gt;&lt;h3&gt;ಆಡಿಯೋ ಅಸಲಿಯೇ?:&lt;/h3&gt;&lt;p&gt;ಖರ್ಗೆ ಬೆಂಬಲಿಗನಿಗೆ ಸಂಸದರು ಬೈದಾಡಿದ್ದಾರೆ ಎನ್ನಲಾದ ಈ ಆಡಿಯೋ ವೈರಲ್&zwnj; ಆಗಿದೆ. ಆದರೆ, ಇದು ನಿಜವಾಗಿಯೂ ನಡೆದ ಫೋನ್ ಸಂಭಾಷಣೆಯೋ ಅಥವಾ ಎಐನಲ್ಲಿ ಕೃತಕವಾಗಿ ತಯಾರಿಸಿದ ಆಡಿಯೋನೋ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ. ಈ ಕುರಿತು ಸ್ಪಷ್ಟನೆಗೆ &lsquo;ಕನ್ನಡಪ್ರಭ&rsquo; ಸಂಪರ್ಕಿಸಿದರೂ ಸಂಸದ ರಮೇಶ ಜಿಗಜಿಣಗಿಯವರು ಕರೆ ಸ್ವೀಕರಿಸಿಲ್ಲ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rss-danger-bjp-mp-ramesh-jigajinagi-s-phone-audio-goes-viral-rav/articleshow-mzns0d6"/>
        </item>
        <item>
            <title><![CDATA[ಸಿದ್ದರಾಮಯ್ಯನವರದ್ದು ಅತಿಯಾಯ್ತು: ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಯತ್ನಾಳ ವಾಗ್ದಾಳಿ]]></title>
            <link>https://kannada.asianetnews.com/karnataka-districts/mla-basanagouda-patil-yatnal-on-siddaramaiah-at-vijayapura-gvd/articleshow-n2i1f8y</link>
            <guid isPermaLink="true">https://kannada.asianetnews.com/karnataka-districts/mla-basanagouda-patil-yatnal-on-siddaramaiah-at-vijayapura-gvd/articleshow-n2i1f8y</guid>
            <pubDate>Sat, 23 May 2026 18:57:15 +0530</pubDate>
            <description><![CDATA[&lt;p&gt;ಮುಸ್ಲಿಮರ ಮೇಲಿನ ಕೇಸ್&zwnj;ಗಳನ್ನು ವಾಪಸ್ ತೆಗೆದುಕೊಂಡಂತೆ ಹಿಂದೂಗಳ ಮೇಲಿನ ಕೇಸ್&zwnj;ಗಳನ್ನು ವಾಪಸ್ ತೆಗೆದುಕೊಳ್ಳಲಿ. ಈ ಮೂಲಕ ಜಾತ್ಯಾತೀತ ಎಂದು ಎಲ್ಲರನ್ನೂ ನೋಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbss6zvzn7qfx1dt5x2zk214,imgname-rgffgfgf-1765023121279.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.23):&lt;/strong&gt; ಸಿದ್ದರಾಮಯ್ಯನವರದ್ದು ಅತಿಯಾಯ್ತು. ಮುಸ್ಲಿಮರ ಮೇಲಿನ ಕೇಸ್&zwnj;ಗಳನ್ನು ವಾಪಸ್ ತೆಗೆದುಕೊಂಡಂತೆ ಹಿಂದೂಗಳ ಮೇಲಿನ ಕೇಸ್&zwnj;ಗಳನ್ನು ವಾಪಸ್ ತೆಗೆದುಕೊಳ್ಳಲಿ. ಈ ಮೂಲಕ ಜಾತ್ಯಾತೀತ ಎಂದು ಎಲ್ಲರನ್ನೂ ನೋಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಕಲಬುರಗಿ ಜಿಲ್ಲೆ ಆಳಂದದ ಲಾಡ್ಲೆ ಮಷಾಕ ದರ್ಗಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕೇ ವರ್ಷಕ್ಕೆ ಪ್ರಕರಣವನ್ನು ಹಿಂಪಡೆದ ಸರ್ಕಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8 ಪ್ರಕರಣಗಳನ್ನು ಕ್ಯಾಬಿನೆಟ್&zwnj;ನಲ್ಲಿ ಸರ್ಕಾರ ಹಿಂಪಡೆದಿದ್ದು, ಇದು ಸಿದ್ದರಾಮಯ್ಯರ ಅತಿರೇತಕದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಇಟಲಿ ಪ್ರಧಾನಿ ಮೆಲೋನಿಗೆ ಪ್ರಧಾನಿ ಮೋದಿ ಮೆಲೋಡಿ ಚಾಕೋಲೇಟ್ ನೀಡಿದ ವಿಚಾರವಾಗಿ ಕಾಂಗ್ರೆಸ್ ನಾಯಕರಿಂದ ವಿರೋಧ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಯತ್ನಾಳ ಟೀಕೆ ಮಾಡಿದರು. ರಾಹುಲ್ ಗಾಂಧಿ ಜೋಕರ್&zwnj;, ತಲೆನೂ ಇಲ್ಲಾ ಡಿಗ್ನಿಫೈ ಇಲ್ಲ. ಮೋದಿ ಅವರು ಪಾರ್ಲೆ ಕಂಪನಿ ಚಾಕೊಲೇಟ್ ಕೊಟ್ಟಿದ್ದು ತಪ್ಪಲ್ಲ. ರಾಜೀವ್ ಗಾಂಧಿಯಂತೆ ಇಂಡಿಯನ್ ನೇವಿ ಹಡಗಿನಲ್ಲಿ ದೇಶದ್ರೋಹಿಗಳ ಜೊತೆ ಪಾರ್ಟಿ ಮಾಡಿಲ್ಲ. ಗಾಂಧಿ ಹ*ತ್ಯೆಯಾದಾಗ ನೆಹರು ನಮ್ಮ ಮನೆಯಲ್ಲಿ ನನ್ನ ತಾಯಿ ಜೊತೆಗಿದ್ದ ಎಂದು ಮೌಂಟ್ ಬ್ಯಾಟನ್ ಮಗಳು ಬರೆದಿದ್ದಾಳೆ ಎಂದು ಟೀಕಿಸಿದರು.&lt;/p&gt;&lt;p&gt;ಸಂಸತ್ತಿಗೆ ಹೇಗೆ ಬರಬೇಕೆಂದು ರಾಹುಲ್ ಗಾಂಧಿಗೆ ಗೊತ್ತಿಲ್ಲ. ಎಂತೆಂಥ ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೆ. ಪಟೇಲ್ ಶಾಸ್ತ್ರಿಯವರಂತ ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೆ.ದೇಶದ ಪ್ರಾಡೆಕ್ಟ್ ಆಗಿರುವ ಪಾರ್ಲೆಯನ್ನು ಇಟಲಿ ಪ್ರಧಾನಿಗೆ ಕೊಟ್ಟಿದ್ದಾರೆ. ಇಟಲಿ ಪ್ರಧಾನಿಯೇ ಮೋದಿ ಪರಿಶ್ರಮಿ ಎಂದಿದ್ದಾರೆ. ಶರದ್ ಪವಾರ ಸಹ ಮೋದಿ ಪರ ಮಾತನಾಡಿದ್ದಾರೆ. ಪ್ರಧಾನಿ ಮೋದಿ ವಿದೇಶ ಪ್ರವಾಸ ಅಪಮಾನ ಮಾಡಬಾರದು ಎಂದಿದ್ದಾರೆ. ದೇಶಕ್ಕೆ ಅನಕೂಲವಾಗಲೆಂದು ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಚೋಳರ ಕಾಲದ ಕುರುಹು ಇಟಲಿಯಲ್ಲಿ ಪತ್ತೆ ಆಗಿದೆ, ಮೋದಿಗೆ ಚೋಳ ರಾಜನ ಇತಿಹಾಸ ಕುರಿತು ಮಾಹಿತಿ ನೀಡಿದ್ದಾರೆ. ಇಟಲಿಯಲ್ಲಿ ಚೋಳ ರಾಜ ಕಟ್ಟಿದ ದೇವಾಲಯವಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ದೇಶದ್ರೋಹದ ಪಕ್ಷ&lt;/strong&gt;&lt;/h2&gt;&lt;p&gt;ದೇಶದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಚಲನ ವಿಚಾರವಾಗಿ ಪ್ರತಿಕ್ರಿಯಿಸಿ, ತಾಂತ್ರಿಕವಾಗಿ ಏನನ್ನಾದರೂ ಮಾಡಬಹುದು. ಕಾಕ್ರೋಚ್&zwnj; ಪಾರ್ಟಿ ವ್ಯವಸ್ಥಿತವಾಗಿ ದೇಶವನ್ನು ಅತಂತ್ರ ಮಾಡಬೇಕೆಂಬುದಿದೆ. ಪ್ರಧಾನಿ ಮೋದಿಯವರನ್ನು ಕೆಳಗಿಳಿಸೋ ಉದ್ದೇಶವಾಗಿದೆ. ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗೋದನ್ನು ತಡೆಯಬೇಕೆಂಬ ಉದ್ದೇಶವಿದೆ. ರಾಹುಲ್ ಗಾಂಧಿ ಚೀನಾದ ಏಜೆಂಟ್ ರೀತಿ ಇದ್ದಾನೆ. ಪಾಕಿಸ್ತಾನ ಪರ ಮಾತನಾಡಿದ್ದಾನೆ. ಕಾಂಗ್ರೆಸ್ ದೇಶದ್ರೋಹದ ಪಕ್ಷವಾಗಿದೆ. ಎಡಪಂಥೀಯರು ಕಮ್ಯುನಿಷ್ಟರಿಗೆ ದೇಶದ ಬೆಳವಣಿಗೆ ನೋಡಲು ಆಗುತ್ತಿಲ್ಲ. ಕಾಕ್ರೋಚ್&zwnj; ಜನತಾ ಪಾರ್ಟಿಗೆ ಪಾಕಿಸ್ತಾನದವರು ಸದಸ್ಯರಾದರೆ ಭಾರತಕ್ಕೇನು ಸಂಬಂಧ?, ಪಾಕಿಸ್ತಾನದಲ್ಲೇ ತಿನ್ನೋಕೆ ಆಹಾರವಿಲ್ಲ. ಪಾಕಿಸ್ತಾನದಲ್ಲಿನ ಪ್ರದೇಶಗಳಿಗೆ ಹಿಂದೂಗಳ ಹೆಸರು ಇಡುತ್ತಿದ್ದಾರೆ. ವರ್ಡ್ ಹೆರಿಟೇಜ್ ನ ಹಣ ಹೊಡೆಯೋಕೆ ಪಾಕ್ ನಲ್ಲಿ ಹಿಂದೂ ಹೆಸರು ಇಡುತ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ರಾಜ್ಯ ಬಿಜೆಪಿ ಅಧ್ಯಕ್ಷ ಬದಲಾವಣೆ ವಿಚಾರವಾಗಿ ಮಾತನಾಡಿ, ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ಮಾಹಿತಿ ಕಲೆ ಹಾಕಲು ಕೇಂದ್ರ ಬಿಜೆಪಿ ಇಬ್ಬರು ವೀಕ್ಷಕರು ರಾಜ್ಯಕ್ಕೆ ಆಗಮನವಾಗಿದೆ. ರಾಜ್ಯಕ್ಕೆ ಆಗಮಿಸಿದ ವೀಕ್ಷಕರು 35 ಜನರ ಜೊತೆಗೆ ಮಾತನಾಡಿದ್ದಾರೆ, ಹಾಗೆ ಮಾಡಬಾರದು. ಹಾಲಿ ಶಾಸಕರು, ಸಂಸದರನ್ನು ಮಾತನಾಡಿಸಬೇಕು. ಎಲ್ಲರ ಅಭಿಪ್ರಾಯ ಪಡೆದು ಸರ್ವೇ ಮಾಡಬೇಕು ಎಂದರು.&lt;/p&gt;&lt;p&gt;ಪಶ್ಚಿಮ ಬಂಗಾಲದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ಸಿಎಂ ಆಗಿದ್ದರೆ ಬಾಂಗ್ಲಾದ ಭಾಗ ಆಗುತ್ತಿತ್ತು. ಮುಸ್ಲಿಂ ತುಷ್ಟೀಕರಣ ಪಶ್ಚಿಮ ಬಂಗಾಲದಲ್ಲಿ ಹೆಚ್ಚಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ, ಮಹಿಳೆಯರ ಮೇಲೆ ಅತ್ಯಾ*ಚಾರ ನಡೆಸಿದ್ದರು. ಅದೇ ರೀತಿ ಕರ್ನಾಟಕದಲ್ಲಿಯೂ ಆಗುತ್ತಿದೆ. ಇಲ್ಲಿ ಸಿದ್ದರಾಮಯ್ಯನವರದ್ದು ಅತೀಯಾಯ್ತು. ಕೇಂದ್ರ ಸಚಿವರ ಕಾರಿನ ಮೇಲೆ ಕಲ್ಲು ತೂರಿದವರನ್ನು, ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಾಟೆ ಮಾಡಿದವರ ಕೇಸ್ ವಾಪಸ್ ತೆಗೆದುಕೊಂಡರೆ ಹೇಗೆ?. ಇದರಿಂದ ರಾಜ್ಯದಲ್ಲಿ ಅರಾಜಕತೆ ಆಗುತ್ತದೆ. ಮುಂದಿನ 2028ರ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ನ್ನು ಬುಡಸಮೇತ ಕಿತ್ತೊಗೆಯುತ್ತಾರೆ.- ಬಸನಗೌಡ ಪಾಟೀಲ ಯತ್ನಾಳ, ಶಾಸಕ&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mla-basanagouda-patil-yatnal-on-siddaramaiah-at-vijayapura-gvd/articleshow-n2i1f8y"/>
        </item>
        <item>
            <title><![CDATA[Nidagundi tragedy: ವಿಜಯಪುರದಲ್ಲಿ ಬೆಚ್ಚಿಬೀಳಿಸುವ ದುರಂತ; ಮನೆಯ ಛಾವಣಿ ಕುಸಿದು ಮಹಿಳೆ ಜೀವಂತ ಸಮಾಧಿ!]]></title>
            <link>https://kannada.asianetnews.com/gallery/karnataka-districts/shocking-tragedy-in-vijayapura-roof-of-house-collapses-woman-buried-alive-navggd7</link>
            <guid isPermaLink="true">https://kannada.asianetnews.com/gallery/karnataka-districts/shocking-tragedy-in-vijayapura-roof-of-house-collapses-woman-buried-alive-navggd7</guid>
            <pubDate>Thu, 21 May 2026 11:53:41 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಮನಕಲುಕುವ ಘಟನೆ ನಡೆದಿದೆ. ಹಳೆಯ ಮಣ್ಣಿನ ಮನೆಯ ಮೇಲ್ಚಾವಣಿ ಕುಸಿದು 55 ವರ್ಷದ ಮಹಿಳೆ ಜೀವಂತ ಸಮಾಧಿಯಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks4k0czje22j0n7ng5bb79g0,imgname-----------------------2026-05-21t114857.310-1779344356338.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಮನಕಲುಕುವ ಘಟನೆ ನಡೆದಿದೆ. ಹಳೆಯ ಮಣ್ಣಿನ ಮನೆಯ ಮೇಲ್ಚಾವಣಿ ಕುಸಿದು 55 ವರ್ಷದ ಮಹಿಳೆ ಜೀವಂತ ಸಮಾಧಿಯಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪಟ್ಟಣದ ಗೌರೀಶ್ವರ ದೇವಸ್ಥಾನ ಸಮೀಪ ಈ ದುರ್ಘಟನೆ ನಸುಕಿನ ಜಾವ ಸಂಭವಿಸಿದೆ. ಮೃತರನ್ನು ಮಹಾದೇವಿ ವಾರದ ಎಂದು ಗುರುತಿಸಲಾಗಿದೆ. ಮೊನ್ನೆ ಸುರಿದ ಭಾರೀ ಮಳೆಯಿಂದ ಹಳೆಯ ಮನೆ ಸಂಪೂರ್ಣ ನೆನೆದು ದುರ್ಬಲಗೊಂಡಿತ್ತು ಎನ್ನಲಾಗಿದೆ.&amp;nbsp;&lt;/p&gt;&lt;img&gt;&lt;p&gt;ರಾತ್ರಿ ಮನೆಯಲ್ಲಿ ಮಲಗಿದ್ದ ಮಹಾದೇವಿ ಅವರಿಗೆ ಅಪಾಯ ಕಾದಿದೆ ಎನ್ನುವುದೇ ಗೊತ್ತಿರಲಿಲ್ಲ. ಆದರೆ ನಸುಕಿನ ಜಾವ ಏಕಾಏಕಿ ಮನೆಯ ಮೇಲ್ಚಾವಣಿ ಭಾರೀ ಸದ್ದಿನೊಂದಿಗೆ ಕುಸಿದಿದೆ. ಕ್ಷಣಾರ್ಧದಲ್ಲೇ ಮಹಾದೇವಿ ಅವಶೇಷಗಳಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ ಮನೆಯ ಹೊರಭಾಗದಲ್ಲಿ ಮಲಗಿದ್ದ ಪತಿ ಶಿವಾನಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಒಳಗಿನಿಂದ ಕೇಳಿಬಂದ ಭೀಕರ ಸದ್ದಿಗೆ ಓಡಿಬಂದಾಗ ಮನೆ ಮಣ್ಣಿನ ರಾಶಿಯಾಗಿದ್ದ ದೃಶ್ಯ ಕಂಡು ಪತಿ ಆಘಾತಕ್ಕೊಳಗಾಗಿದ್ದಾರೆ..&lt;/p&gt;&lt;img&gt;&lt;p&gt;ಇನ್ನೂ ರಾಜ್ಯದಲ್ಲಿ ಅದೆಷ್ಟೋ ಕುಟುಂಬಗಳು ಮೊದಲ ತಲೆಮಾರಿನ ಮಣ್ಣಿನ ಮಾಳಿಗೆಯ ಮನೆಗಳಲ್ಲಿ ಜೀವ ಭಯದ ನಡುವೆ ಬದುಕುತ್ತಿವೆ. ಮಳೆ ಬಂದರೆ ಗೋಡೆ ಕುಸಿಯುವ ಭೀತಿ, ಗಾಳಿ ಬೀಸಿದರೆ ಮೇಲ್ಚಾವಣಿ ಹಾರಿ ಹೋಗುವ ಆತಂಕ.&lt;/p&gt;&lt;img&gt;&lt;p&gt;ಸರ್ಕಾರ ಇಂತಹ ಬಡ ಕುಟುಂಬಗಳನ್ನು ಗುರುತಿಸಿ ವಸತಿ ಯೋಜನೆಯಡಿ ಸುರಕ್ಷಿತ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರೆ, ಮಹಾದೇವಿಯಂತಹ ಅಮಾಯಕ ಜೀವಗಳನ್ನು ಉಳಿಸಬಹುದಿರಲಿಲ್ಲವೇ?&lt;/p&gt;&lt;img&gt;&lt;p&gt;ಸದ್ಯಘಟನಾ ಸ್ಥಳಕ್ಕೆ ನಿಡಗುಂದಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾದೇವಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/shocking-tragedy-in-vijayapura-roof-of-house-collapses-woman-buried-alive-navggd7"/>
        </item>
        <item>
            <title><![CDATA[ಸಿದ್ದರಾಮಯ್ಯ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಯತೀಂದ್ರ ಭಾವನಾತ್ಮಕ ಹೇಳಿಕೆ]]></title>
            <link>https://kannada.asianetnews.com/karnataka-districts/yathindra-siddaramaiah-says-no-one-can-fill-siddaramaiah-place-vijayapura-gvd/articleshow-nmo26dp</link>
            <guid isPermaLink="true">https://kannada.asianetnews.com/karnataka-districts/yathindra-siddaramaiah-says-no-one-can-fill-siddaramaiah-place-vijayapura-gvd/articleshow-nmo26dp</guid>
            <pubDate>Mon, 08 Jun 2026 00:28:17 +0530</pubDate>
            <description><![CDATA[&lt;p&gt;ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಸಂವಿಧಾನದ ಆಶಯಗಳ ಕನಸುಗಾರ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb5brg7t1mngzy1n2w63mkte,imgname-----------------------2025-11-28t192152.441-1764337926394.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಜೂ.08):&lt;/strong&gt; ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ಶೋಷಿತ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ಸಂವಿಧಾನದ ಆಶಯಗಳ ಕನಸುಗಾರ. ಬೇರೆ ಯಾರೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ ಜಿಲ್ಲಾ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ಲೋಕಮಾತಾ ಅಹಲ್ಯಾಬಾಯಿ ಹೊಳ್ಕರ್&zwnj; 301ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಹಲ್ಯಾಬಾಯಿ ಹೊಳ್ಕರ್&zwnj; ಅವರನ್ನು ರಾಜಮಾತೆ ಎಂದು ಕರೆಯುತ್ತೇವೆ. ಅವರು ಸಾಮಾನ್ಯರಲ್ಲ ಅಪ್ರತಿಮ ಹೋರಾಟಗಾರ್ತಿ, ಶ್ರೇಷ್ಠ ಮಹಿಳೆ. ನಮ್ಮ ಸಮಾಜದ ಭವಿಷ್ಯ ಭದ್ರವಾಗಿರಬೇಕಾದರೆ, ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸಬೇಕು.&lt;/p&gt;&lt;p&gt;ಯಾವುದೇ ಸಮಾಜ ಬೆಳೆಯಬೇಕಾದರೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಮೂರನ್ನು ಅವಶ್ಯವಾಗಿ ಮಾಡಬೇಕು. ಕಷ್ಟವಾದರೂ ಪರವಾಗಿಲ್ಲ, ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಆ ಮಕ್ಕಳು ಉನ್ನತ ಹುದ್ದೆ ಪಡೆದು ತನ್ನ ಕುಟುಂಬ ಜೊತೆಗೆ ಇಡೀ ಸಮಾಜವನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.ಜಿಲ್ಲೆಯಲ್ಲಿ 2.5 ಲಕ್ಷ ಕುರುಬ ಸಮುದಾಯ ಇದ್ದರೂ ಒಬ್ಬರೇ ಒಬ್ಬರು ಶಾಸಕರಾಗದೆ ಇರುವುದು ದುರಂತ. ನಾವು ಜಾಗೃತರಗಿ, ಎಲ್ಲ ಕ್ಷೇತ್ರದಲ್ಲೂ ಬೆಳವಣಿಗೆ ಕಾಣಬೇಕು. ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.&lt;/p&gt;&lt;h2&gt;&lt;strong&gt;ಬೆಳೆದಾಗಲೇ ಸಾಧ್ಯ&lt;/strong&gt;&lt;/h2&gt;&lt;p&gt;ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮಾತನಾಡಿ, ಹೆಣ್ಣುಮಕ್ಕಳಿಗೆ ಬಹಳಷ್ಟು ಜವಾಬ್ದಾರಿ ಇರುತ್ತೆ. ಡಾ.ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರ ಪ್ರತಿಬಿಂಬವಾಗಿದ್ದೀರಿ. ಯಾವುದೇ ಸಮಾಜ ಮುಂದೆ ಸಾಗಬೇಕಾದರೆ ಆ ಸಮಾಜದ ಹೆಣ್ಮಕ್ಕಳು ಬೆಳೆದಾಗಲೇ ಸಾಧ್ಯ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಜಯಪುರದಲ್ಲಿ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ್&zwnj; ಅವರ ಪ್ರತಿಮೆ ನಿರ್ಮಿಸಿರುವುದು ಹೆಮ್ಮೆಯಾಗಿದೆ. ಯಾರಲ್ಲಿ ಮಾತೃ ಹೃದಯ ಇರುತ್ತದೆಯೋ ಅವರು ರಾಜಕೀಯದಲ್ಲಿ ಭವಿಷ್ಯ ಕಟ್ಟುಕೊಳ್ಳುತ್ತಾರೆ. ಡಾ.ಯತೀಂದ್ರ ಅವರಲ್ಲಿ ಆ ಗುಣ ಇದೆ ಎಂದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/yathindra-siddaramaiah-says-no-one-can-fill-siddaramaiah-place-vijayapura-gvd/articleshow-nmo26dp"/>
        </item>
        <item>
            <title><![CDATA[ಯಶವಂತಪುರ - ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಆರಂಭ: ಕೇವಲ 11 ಗಂಟೆಯಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ!]]></title>
            <link>https://kannada.asianetnews.com/state/indian-railways-yeshwantpur-vijayapura-special-express-train-timetable-north-karnataka/articleshow-o4xd18t</link>
            <guid isPermaLink="true">https://kannada.asianetnews.com/state/indian-railways-yeshwantpur-vijayapura-special-express-train-timetable-north-karnataka/articleshow-o4xd18t</guid>
            <pubDate>Wed, 10 Jun 2026 21:11:08 +0530</pubDate>
            <description><![CDATA[&lt;p&gt;ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸಂಚಾರವನ್ನು ಆರಂಭಿಸಿದೆ. ಈ ರೈಲು ಕೇವಲ 11 ಗಂಟೆಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಲಿದ್ದು, ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ವೇಗದ ಮತ್ತು ಅನುಕೂಲಕರ ಸಂಪರ್ಕವನ್ನು ಒದಗಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kts2w3yjy57pqp0nwbjhmatg,imgname-yesvantpur-vijayapura-special-express-train-1781105823698.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವೆ ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸಂಚಾರ ಆರಂಭವಾಗಿದ್ದು, ಇದು ಉತ್ತರ ಕರ್ನಾಟಕಕ್ಕೆ ಅತಿ ವೇಗದ ರೈಲು ಸಂಪರ್ಕವನ್ನು ಕಲ್ಪಿಸಲಿದೆ.&lt;/p&gt;&lt;h3&gt;&lt;strong&gt;ಕೇವಲ 11 ಗಂಟೆಯಲ್ಲಿ ನಿಮ್ಮ ಊರು ತಲುಪಿ!&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರಯಾಣಿಸುವುದು ದೀರ್ಘಾವಧಿಯ ಪಯಣವಾಗಿರುತ್ತದೆ. ಆದರೆ, ಈ ನೂತನ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಕೇವಲ 11 ಗಂಟೆಗಳಲ್ಲಿ ಬೆಂಗಳೂರಿನಿಂದ ವಿಜಯಪುರವನ್ನು ತಲುಪಲಿದೆ. ಇದು ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರ ಭಾಗದ ಪ್ರಯಾಣಿಕರಿಗೆ ವರದಾನವಾಗಲಿದೆ. ವಾರಾಂತ್ಯದ ರಜೆ ಅಥವಾ ತುರ್ತು ಕೆಲಸಗಳಿಗಾಗಿ ಸಂಚರಿಸುವವರಿಗೆ ಈ ರೈಲು ಅತ್ಯಂತ ಅನುಕೂಲಕರವಾಗಿದೆ.&lt;/p&gt;&lt;h2&gt;&lt;strong&gt;ರೈಲು ಸಂಚಾರದ ವೇಳಾಪಟ್ಟಿ ಇಂತಿದೆ:&lt;/strong&gt;&lt;/h2&gt;&lt;p&gt;&lt;strong&gt;1. ಯಶವಂತಪುರ (ಬೆಂಗಳೂರು) ಇಂದ ವಿಜಯಪುರಕ್ಕೆ:&lt;/strong&gt;&lt;/p&gt;&lt;ul&gt; &lt;li&gt;ಈ ರೈಲು ಯಶವಂತಪುರ ನಿಲ್ದಾಣದಿಂದ ಸಂಜೆ 06:15 ಕ್ಕೆ ಹೊರಡಲಿದೆ.&lt;/li&gt; &lt;li&gt;ತುಮಕೂರು: ಸಂಜೆ 07:00&lt;/li&gt; &lt;li&gt;ಅರಸೀಕೆರೆ: ರಾತ್ರಿ 08:10&lt;/li&gt; &lt;li&gt;ದಾವಣಗೆರೆ: ರಾತ್ರಿ 10:20&lt;/li&gt; &lt;li&gt;ಹಾವೇರಿ: ರಾತ್ರಿ 11:22&lt;/li&gt; &lt;li&gt;ಬದಾಮಿ: ಮುಂಜಾನೆ 02:30&lt;/li&gt; &lt;li&gt;ಬಾಗಲಕೋಟೆ: ಮುಂಜಾನೆ 03:10&lt;/li&gt; &lt;li&gt;ವಿಜಯಪುರ ತಲುಪುವ ಸಮಯ: ಮುಂಜಾನೆ 05:15&lt;/li&gt;&lt;/ul&gt;&lt;p&gt;&lt;strong&gt;2. ವಿಜಯಪುರದಿಂದ ಯಶವಂತಪುರಕ್ಕೆ (ಬೆಂಗಳೂರು):&lt;/strong&gt;&lt;/p&gt;&lt;ul&gt; &lt;li&gt;ವಿಜಯಪುರದಿಂದ ಸಂಜೆ 05:00 ಗಂಟೆಗೆ ಈ ರೈಲು ಹೊರಡಲಿದೆ.&lt;/li&gt; &lt;li&gt;ಬಾಗಲಕೋಟೆ: ಸಂಜೆ 06:23&lt;/li&gt; &lt;li&gt;ಹಾವೇರಿ: ರಾತ್ರಿ 09:33&lt;/li&gt; &lt;li&gt;ದಾವಣಗೆರೆ: ರಾತ್ರಿ 10:33&lt;/li&gt; &lt;li&gt;ಯಶವಂತಪುರ ತಲುಪುವ ಸಮಯ: ಮುಂಜಾನೆ 04:10&lt;/li&gt;&lt;/ul&gt;&lt;h2&gt;&lt;strong&gt;ಪ್ರಯಾಣಿಕರಿಗೆ ಆಗುವ ಲಾಭಗಳೇನು?&lt;/strong&gt;&lt;/h2&gt;&lt;p&gt;ಈ ರೈಲು ಸಂಜೆ ಹೊತ್ತು ಬೆಂಗಳೂರಿನಿಂದ ಹೊರಡುವುದರಿಂದ ಕಚೇರಿ ಕೆಲಸ ಮುಗಿಸಿ ಊರಿಗೆ ತೆರಳುವವರಿಗೆ ಬಹಳ ಅನುಕೂಲವಾಗುತ್ತದೆ. ಅಲ್ಲದೆ, ಮುಂಜಾನೆ 5:15 ಕ್ಕೆ ವಿಜಯಪುರ ತಲುಪುವುದರಿಂದ ಪೂರ್ಣ ದಿನದ ಕೆಲಸಗಳಿಗೆ ಸಮಯಾವಕಾಶ ಸಿಗುತ್ತದೆ. ಬದಾಮಿ ಮತ್ತು ಬಾಗಲಕೋಟೆಯಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಈ ರೈಲು ಸಮಯ ಉಳಿತಾಯ ಮಾಡಲಿದೆ.&lt;/p&gt;&lt;p&gt;ಉತ್ತರ ಕರ್ನಾಟಕದ ರೈಲ್ವೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಮೈಲುಗಲ್ಲಾಗಿದ್ದು, ಬಸ್ ಪ್ರಯಾಣದ ದಟ್ಟಣೆ ಮತ್ತು ದೀರ್ಘಾವಧಿಯ ಪ್ರಯಾಣದಿಂದ ಈ ರೈಲು ಮುಕ್ತಿ ನೀಡಲಿದೆ. ಪ್ರಯಾಣಿಕರು ಐಆರ್&zwnj;ಸಿಟಿಸಿ (IRCTC) ವೆಬ್&zwnj;ಸೈಟ್ ಅಥವಾ ರೈಲ್ವೆ ನಿಲ್ದಾಣದ ಕೌಂಟರ್&zwnj;ಗಳಲ್ಲಿ ಈ ರೈಲಿನ ಟಿಕೆಟ್ ಕಾಯ್ದಿರಿಸಬಹುದಾಗಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/indian-railways-yeshwantpur-vijayapura-special-express-train-timetable-north-karnataka/articleshow-o4xd18t"/>
        </item>
        <item>
            <title><![CDATA[ಜೂನ್ 1ರಿಂದ ಯಶವಂತಪುರ-ವಿಜಯಪುರ ನಡುವೆ ಹೊಸ ಎಕ್ಸ್‌ಪ್ರೆಸ್‌; ಗದಗ ಬೈಪಾಸ್ ಮೂಲಕ ನೇರ ಪ್ರಯಾಣ]]></title>
            <link>https://kannada.asianetnews.com/gallery/karnataka-districts/indian-railways-new-bi-weekly-express-train-service-between-yeshwanthpur-and-vijayapura-to-start-from-june-1-mrq-tmlg01x</link>
            <guid isPermaLink="true">https://kannada.asianetnews.com/gallery/karnataka-districts/indian-railways-new-bi-weekly-express-train-service-between-yeshwanthpur-and-vijayapura-to-start-from-june-1-mrq-tmlg01x</guid>
            <pubDate>Sat, 30 May 2026 08:21:50 +0530</pubDate>
            <description><![CDATA[&lt;p&gt;ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್&zwnj; ರೈಲು ಸಂಚಾರ ಜೂನ್ 1 ರಿಂದ ಆರಂಭವಾಗಿದೆ. ಗದಗ, ಬಾದಾಮಿ, ಬಾಗಲಕೋಟೆ ಮೂಲಕ ಸಂಚರಿಸುವ ಈ ರೈಲಿನ ಸಮಯ ಬದಲಾವಣೆಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksvc9j6ygjnf658hrwpack5n,imgname-indian-railways--1780109068510.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್&zwnj; ರೈಲು ಸಂಚಾರ ಜೂನ್ 1 ರಿಂದ ಆರಂಭವಾಗಿದೆ. ಗದಗ, ಬಾದಾಮಿ, ಬಾಗಲಕೋಟೆ ಮೂಲಕ ಸಂಚರಿಸುವ ಈ ರೈಲಿನ ಸಮಯ ಬದಲಾವಣೆಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್&zwnj; ರೈಲು ಪ್ರಾರಂಭಕ್ಕೆ ರೈಲ್ವೆ ಇಲಾಖೆ ನನ್ನ ಪ್ರಸ್ತಾವನೆ ಮೇರೆಗೆ ಅನುಮೋದಿಸಿ ಜೂ. 1ರಿಂದ ಆರಂಭಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಕುರಿತು ಪ್ರಕಟಣೆ ನೀಡಿರುವ, ವಿಜಯಪುರ ನಾಗರಿಕರ ಅತಿ ಬೇಡಿಕೆಯಾಗಿದ್ದ ಈ ವಿಶೇಷ ರೈಲು ಯಶವಂತಪುರ ಹಾಗೂ ವಿಜಯಪುರದ ಮಧ್ಯೆ ನೇರವಾಗಿ ಸಂಪರ್ಕಿಸಲಿದೆ. ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಬೈಪಾಸ್ ಮುಖಾಂತರ ಈ ರೈಲು ಸಂಚರಿಸಲಿದೆ. ಇದು ವಿಜಯಪುರ - ಬಾಗಲಕೋಟೆ ಜಿಲ್ಲೆಯ ಭಾಗದ ಜನರಿಗೆ ಸೂಪರ್ ಫಾಸ್ಟ್ ರೈಲಿನ ರೀತಿ ಕೆಲಸ ಮಾಡಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?&lt;/strong&gt;&lt;/p&gt;&lt;img&gt;&lt;p&gt;ಪ್ರತಿ ಶನಿವಾರ ಮತ್ತು ಸೋಮವಾರ ರೈಲು ಸಂಖ್ಯೆ 06577 ಯಶವಂತಪುರ-ವಿಜಯಪುರ ಹಾಗೂ ಪ್ರತಿ ಭಾನುವಾರ ಹಾಗೂ ಮಂಗಳವಾರ ರೈಲು ಸಂಖ್ಯೆ 06578 ವಿಜಯಪುರ-ಯಶವಂತಪುರ ನಡುವೆ ಈ ವಿಶೇಷ ರೈಲು ಸಂಚರಿಸಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೊಸಪೇಟೆ ಮಾರ್ಗವಾಗಿ ಚಲಿಸುವ ಯಶವಂತಪುರ-ವಿಜಯಪುರ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ&lt;/strong&gt;&lt;/p&gt;&lt;img&gt;&lt;p&gt;ಈ ರೈಲಿನ ಸ್ವಲ್ಪ ಸಮಯದ ಬದಲಾವಣೆ ಮಾಡಿ ಯಶವಂತಪುರಕ್ಕೆ ಬೆಳಗ್ಗೆ 5.30-6.30 ಗಂಟೆಯ ಮಧ್ಯೆ ತಲುಪುವ ರೀತಿ ಆದರೆ ಹಾಗೂ ಬಾಗಲಕೋಟೆಗೆ 5.00-5.30 ಗಂಟೆಗೆ ತಲುಪುವ ರೀತಿ ಆದರೆ ಈ ರೈಲಿಗೆ ಅತ್ಯಂತ ದೊಡ್ಡ ಯಶಸ್ಸು ದೊರೆಯುತ್ತದೆ ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ರೈಲು ಪ್ರಯಾಣ ಆರಂಭಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಬೆಂಗಳೂರಿನಿಂದ ಬೆಳಗಾವಿಗೆ ಟಿಕೆಟ್ ಸಿಗ್ತಿಲ್ಲವಾ? ಇಲ್ಲಿವೆ ಸ್ಪೆಷಲ್ ರೈಲುಗಳ ಡಿಟೈಲ್ಸ್&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/indian-railways-new-bi-weekly-express-train-service-between-yeshwanthpur-and-vijayapura-to-start-from-june-1-mrq-tmlg01x"/>
        </item>
    </channel>
</rss>
