<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 24 Apr 2026 10:07:10 +0530</lastBuildDate>
        <atom:link href="https://kannada.asianetnews.com/rss/vijayapura" rel="self" type="application/rss+xml"/>
        <item>
            <title><![CDATA[ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!]]></title>
            <link>https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze</link>
            <guid isPermaLink="true">https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze</guid>
            <pubDate>Fri, 17 Apr 2026 23:07:15 +0530</pubDate>
            <description><![CDATA[ವಿಜಯಪುರ ಜಿಲ್ಲೆಯ ಕುಖ್ಯಾತ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ನಡುರಸ್ತೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ 6 ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.]]></description>
            <media:content url="https://geo.dailymotion.com/player/x1tbu.html?video=xa5ptqk" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.17): &lt;/strong&gt;ಭೀಮಾತೀರದ ಕುಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಬಂದೂಕಿನ ನಳಿಕೆಗಳು ಮತ್ತೆ ಬೆಂಕಿ ಉಗುಳಿವೆ! ಹೌದು, ಶಾಂತಿ ನೆಲೆಸಿತು ಎನ್ನುವಷ್ಟರಲ್ಲೇ ಗುಂಡಿನ ಸದ್ದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.&amp;nbsp;&lt;/p&gt;&lt;h3&gt;&lt;strong&gt;ವಿಜಯಪುರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ&lt;/strong&gt;&lt;/h3&gt;&lt;p&gt;ಕೆಲವೇ ದಿನಗಳ ಹಿಂದೆ ಜ್ಯುವೆಲರಿ ಶಾಪ್ ಮತ್ತು ಬ್ಯಾಂಕ್ ಲೂಟಿ ಮಾಡಿದ್ದ ಗ್ಯಾಂಗ್&zwnj;ಗಳ ಆರ್ಭಟ ತಣ್ಣಗಾಗುವ ಮೊದಲೇ, ಈಗ ನಡುರಸ್ತೆಯಲ್ಲೇ ನೆತ್ತರು ಹರಿದಿದೆ. ಥೇಟ್ ಯುಪಿ, ಬಿಹಾರ್ ಮಾದರಿಯಲ್ಲಿ 6 ರೌಂಡ್ ಫೈರಿಂಗ್ ನಡೆಸಿ ಮಾಜಿ ಗ್ರಾ.ಪಂ ಸದಸ್ಯನನ್ನ ಹತ್ಯೆ ಮಾಡಲಾಗಿದೆ.&amp;nbsp;ಈ ಭೀಕರ ಹತ್ಯಾಕಾಂಡ ಕಂಡ ಜನ ಮೌನಕ್ಕೆ ಶರಣಾಗಿದ್ದಾರೆ. ಹಾಗಾದ್ರೆ, ಭೀಮಾತೀರದಲ್ಲಿ ಮತ್ತೆ ಶತ್ರು ಸಂಹಾರಕ್ಕೆ ಸ್ಕೆಚ್ ಹಾಕಿದ್ದು ಯಾರು? ಯಾರ ಬಂದೂಕಿನಿಂದ ಸಿಡಿದ ಬುಲೆಟ್&zwnj;ಗಳು ರಾಜು ಎದೆಯನ್ನು ಸೀಳಿದವು?&amp;nbsp;&amp;nbsp;&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze"/>
        </item>
        <item>
            <title><![CDATA[ಮದುವೆ ಸಂಭ್ರಮದಲ್ಲಿದ್ದ ಮನೆಗೆ ಪ್ರಿಯಕರನೇ ಕಂಟಕ: ಖಾಸಗಿ ಫೋಟೋ ಲೀಕ್ ಬೆನ್ನಲ್ಲೇ ಬಾವಿಗೆ ಹಾರಿ ಯುವತಿ ಸಾವು!]]></title>
            <link>https://kannada.asianetnews.com/gallery/karnataka-districts/vijayapura-girl-ends-life-private-photos-leaked-by-ex-lover-marriage-cancelled-san-1aqiocc</link>
            <guid isPermaLink="true">https://kannada.asianetnews.com/gallery/karnataka-districts/vijayapura-girl-ends-life-private-photos-leaked-by-ex-lover-marriage-cancelled-san-1aqiocc</guid>
            <pubDate>Mon, 13 Apr 2026 12:18:39 +0530</pubDate>
            <description><![CDATA[ವಿಜಯಪುರ ಜಿಲ್ಲೆಯ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು, ಆದರೆ ಆಕೆಯ ಪ್ರಿಯಕರ ಖಾಸಗಿ ಫೋಟೋಗಳನ್ನು ವರನ ಮನೆಯವರಿಗೆ ಕಳುಹಿಸಿದ್ದರಿಂದ ಮದುವೆ ಮುರಿದುಬಿದ್ದಿದೆ. ಈ ಘಟನೆಯಿಂದ ತೀವ್ರವಾಗಿ ಮನನೊಂದ ಯುವತಿ, ಸಮಾಜದಲ್ಲಿ ಆದ ಅವಮಾನವನ್ನು ಸಹಿಸಲಾಗದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp2s1cv9vjw74tssvbsy430j,imgname-vijayapura-girl-case--1--1776062346089.jpg" type="image/jpeg" height="390" width="690"/>
            <content:encoded><![CDATA[ವಿಜಯಪುರ ಜಿಲ್ಲೆಯ ಯುವತಿಯೊಬ್ಬಳ ಮದುವೆ ನಿಶ್ಚಯವಾಗಿತ್ತು, ಆದರೆ ಆಕೆಯ ಪ್ರಿಯಕರ ಖಾಸಗಿ ಫೋಟೋಗಳನ್ನು ವರನ ಮನೆಯವರಿಗೆ ಕಳುಹಿಸಿದ್ದರಿಂದ ಮದುವೆ ಮುರಿದುಬಿದ್ದಿದೆ. ಈ ಘಟನೆಯಿಂದ ತೀವ್ರವಾಗಿ ಮನನೊಂದ ಯುವತಿ, ಸಮಾಜದಲ್ಲಿ ಆದ ಅವಮಾನವನ್ನು ಸಹಿಸಲಾಗದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.&lt;img&gt;&lt;p&gt;ನಿಶ್ಚಯವಾಗಿದ್ದ ಮದುವೆ ಪ್ರಿಯಕರನ ಯಡವಟ್ಟಿನಿಂದಾಗಿ ಮುರಿದುಬಿದ್ದ ಹಿನ್ನೆಲೆಯಲ್ಲಿ, ಮನನೊಂದ ಯುವತಿಯೊಬ್ಬಳು ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಬಂದಾಳ ಗ್ರಾಮದ ಜಯಶ್ರೀ ಬಿರಾದಾರ್ (22) ಆ*ತ್ಮಹ*ತ್ಯೆ ಮಾಡಿಕೊಂಡ ಯುವತಿ. ಇದೇ ಏಪ್ರಿಲ್ 27 ರಂದು ಜಯಶ್ರೀಗೆ ವಿವಾಹ ನಿಶ್ಚಯವಾಗಿತ್ತು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಶ್ರೀಶೈಲ್ ಬಡಾನೂರ್ ಎಂಬಾತ ಕಂಟಕನಾಗಿದ್ದಾನೆ.&lt;/p&gt;&lt;img&gt;&lt;p&gt;ಜಯಶ್ರೀ ಮತ್ತು ತಾನು ಜೊತೆಗಿದ್ದ ಕೆಲವು ಖಾಸಗಿ ಫೋಟೋಗಳನ್ನು ಶ್ರೀಶೈಲ್ ಮದುವೆ ನಿಶ್ಚಯವಾಗಿದ್ದ ವರನ ಮನೆಯವರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಯುವತಿ ಬೇರೊಬ್ಬನ ಜೊತೆಗಿರುವ ಫೋಟೋಗಳನ್ನು ಕಂಡ ವರನ ಕಡೆಯವರು ತಕ್ಷಣವೇ ಮದುವೆಯನ್ನು ರದ್ದುಗೊಳಿಸಿದ್ದಾರೆ.&lt;/p&gt;&lt;img&gt;&lt;p&gt;ಇದರಿಂದ ತನ್ನ ಪ್ರೇಮ ಪ್ರಕರಣ ಬಹಿರಂಗವಾಗಿ, ಸಮಾಜದಲ್ಲಿ ಮಾನ ಮರ್ಯಾದೆ ಹೋಯಿತಲ್ಲಾ ಎಂಬ ತೀವ್ರ ನೋವಿನಿಂದ ಜಯಶ್ರೀ ಗ್ರಾಮದ ಮದಿನಾ ಮಸೂತಿ ಪಕ್ಕದ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.&lt;/p&gt;&lt;img&gt;&lt;p&gt;ಮಗಳ ಸಾವಿನಿಂದ ಕಂಗಾಲಾಗಿರುವ ತಾಯಿ ಸಾವಿತ್ರಿ ಅವರು, &quot;ನನ್ನ ಮಗಳ ಬಲಿ ಪಡೆದ ಶ್ರೀಶೈಲ್&zwnj;ನನ್ನು ಕೂಡಲೇ ಬಂಧಿಸಬೇಕು. ಆತನ ಕಿಡಿಗೇಡಿತನವೇ ಮಗಳ ಆತ್ಮಹತ್ಯೆಗೆ ಕಾರಣ&quot; ಎಂದು ಕಣ್ಣೀರಿಡುತ್ತಾ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಬಾವಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/vijayapura-girl-ends-life-private-photos-leaked-by-ex-lover-marriage-cancelled-san-1aqiocc"/>
        </item>
        <item>
            <title><![CDATA[Karnataka By election 2026: ವಿಜಯೇಂದ್ರ, ಯತ್ನಾಳ ಮನೆಗೆ ಹೊಗೋದು ನಿಶ್ಚಿತ: ಸಚಿವ ಎಂಬಿಪಾ ಸ್ಪೋಟಕ ಹೇಳಿಕೆ]]></title>
            <link>https://kannada.asianetnews.com/politics/karnataka-by-election-2026-mb-patil-slams-by-vijayendra-and-basangowda-patil-yatnal-rav/articleshow-1kxpvvm</link>
            <guid isPermaLink="true">https://kannada.asianetnews.com/politics/karnataka-by-election-2026-mb-patil-slams-by-vijayendra-and-basangowda-patil-yatnal-rav/articleshow-1kxpvvm</guid>
            <pubDate>Thu, 09 Apr 2026 07:18:27 +0530</pubDate>
            <description><![CDATA[&lt;p&gt;ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದ ಸಚಿವ ಎಂ.ಬಿ.ಪಾಟೀಲ, ಚುನಾವಣೆ ಬಳಿಕ ವಿಜಯೇಂದ್ರರನ್ನು ಪಕ್ಷದಿಂದ ತೆಗೆದುಹಾಕುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ವಿಜಯೇಂದ್ರರ ಹಿಂದಿನ ಹಣಕಾಸು ವ್ಯವಹಾರಗಳನ್ನು ಕೆದಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jpyd7a850hpkd6dfs6mk86ej,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.9): &lt;/strong&gt;ಬಾಗಲಕೋಟೆ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಮ್ಮದೇ. ಈ ಉಪ ಚುನಾವಣೆಗಳ ಬಳಿಕ ವಿಜಯೇಂದ್ರನನ್ನು ಪಕ್ಷದಿಂದ ತೆಗೆದು ಹಾಕುತ್ತಾರೆ. ವಿಜಯೇಂದ್ರ ಮನೆಗೆ ಹೋಗೋದು ನಿಶ್ಚಿತ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.&lt;/p&gt;&lt;p&gt;ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಮಹಿಳೆಯರು ಮತ ಹಾಕಿದರೆ ಸಾಕು ನಾವು ಗೆಲ್ಲುತ್ತೇವೆ. ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ತಲಪಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರನಿಗೆ ಬೇಕಾದರೆ ಗ್ಯಾರಂಟಿ ಕೊಡುತ್ತೇವೆಂದು ಟಾಂಗ್ ನೀಡಿದರು. ಎಐ ತಂತ್ರಜ್ಞಾನ ಬಳಸಿಕೊಂಡು ಚುನಾವಣೆಗಾಗಿ ಹಣ ಹಂಚಿಕೆ ಆರೋಪದ ಕುರಿತಾಗಿ ಮಾತನಾಡಿದ ಸಚಿವ ಪಾಟೀಲ, ಅದು ವಿಜಯೇಂದ್ರಗೆ ರೂಢಿಯಿದೆ, ಯಡಿಯೂರಪ್ಪ ಇದ್ದಾಗ ವಿಜಯೇಂದ್ರ ಮಾಡೋ ಕೆಲಸ ಅದೇ ಇತ್ತು. ಕಲಕ್ಷನ್ ಹಾಗೂ ಡಿಸ್ಟ್ರಿಬ್ಯೂಶನ್ ಎಂದು ಟಾಂಗ್ ನೀಡಿದರು. ಯಡಿಯೂರಪ್ಪರ ಸಹಿಯನ್ನು ವಿಜಯೇಂದ್ರ ನಕಲಿ ಮಾಡುತ್ತಾರೆಂದು ಯತ್ನಾಳ ಆರೋಪ ಮಾಡಿದ್ದರು. ಮಾರಿಷಸ್ ಹಾಗೂ ಸಿಂಗಾಪೂರದಲ್ಲಿ 10 ಸಾವಿರ ಕೋಟಿ ಇಟ್ಟಿದ್ದಾರೆಂದು ಯತ್ನಾಳ ಆರೋಪಿದ್ದರು. ಈಗ ಯತ್ನಾಳ ಕರೆದುಕೊಂಡು ಪ್ರಚಾರಕ್ಕೆ ಹೋಗುವಂತಾಯಿತು. ವಿಜಯೇಂದ್ರ ಪವರ್&zwnj;ಫುಲ್ ಇದ್ದರೆ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ ಯಾಕೆ ಬೇಕಿತ್ತು?. ಬಾಗಲಕೋಟೆ ಪ್ರಚಾರಕ್ಕೆ ಉಚ್ಛಾಟಿತ ಯತ್ನಾಳ ಕರೆದುಕೊಂಡು ಹೋಗುವಂತಾಯ್ತು, ಯತ್ನಾಳ ಪ್ರಚಾರ ಮಾಡಿದರೂ ಸಹ ಬಾಗಲಕೋಟೆಯನ್ನು ಇವರು ಗೆಲ್ಲುವುದಿಲ್ಲ. ಉಪ ಚುನಾವಣೆಗಳ ಬಳಿಕ ವಿಜಯೇಂದ್ರ ಹಾಗೂ ಯತ್ನಾಳ ಇಬ್ಬರೂ ಮನೆಗೆ ಹೊಗೋದೆ ಎಂದರು.&lt;/p&gt;&lt;p&gt;*ಬಿಜೆಪಿ ಹಾಗೂ ಆರ್&zwnj;ಎಸ್&zwnj;ಎಸ್ ವಿಷಸರ್ಪ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಖರ್ಗೆ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ? ಗೊತ್ತಿಲ್ಲ. ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಇರುತ್ತವೆ. ಬೆಂಕಿ ಪೊಟ್ಟಣ ಇಟ್ಟುಕೊಂಡು ಬಿಜೆಪಿಯವರು ಓಡಾಡುತ್ತಾರೆ, ಬೆಂಕಿ ಹಚ್ಚೋ ಕೆಲಸ ಮಾಡುತ್ತಾರೆ. ಬಿಜೆಪಿಯವರು ದೇಶಕ್ಕಾಗಿ ಹೋರಾಡಿಲ್ಲ, ರಾಷ್ಟ್ರೀಯತೆ ಎಂದು ಹೇಳುತ್ತಾರೆ, ಇಂಡಿಯಾ ಗೇಟ್ ನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರುಗಳಿವೆ. ಅದರಲ್ಲಿ ನೂರಾರು ಮುಸ್ಲಿಮರ ಹೆಸರುಗಳಿವೆ, ಬಿಜೆಪಿಯವರ ಒಂದೇ ಒಂದು ಹೆಸರಿಲ್ಲ. ಬಿಜೆಪಿಗರು ಬ್ರಿಟಿಷರ ಏಜೆಂಟರಾಗಿದ್ದವರು, ಈಗ ರಾಷ್ಟ್ರೀಯತೆ ದೇಶಾಭಿಮಾನ ಎನ್ನುತ್ತಾರೆ. ವಿಷಕಾರಿ ಎಂಬರ್ಥದಲ್ಲಿ ಖರ್ಗೆ ಮಾತನಾಡಿದ್ದಾರೆ. ವಿಷಕಾರಿ ನಿರ್ಮೂಲನೆ ಮಾಡಿ ಎಂಬರ್ಥದಲ್ಲಿ ಖರ್ಗೆಯವರು ಮಾತನಾಡಿದ್ದಾರೆ. ಇವರನ್ನು ಹೊಡೆದು ಕೊಲ್ಲಿ ಎಂದಿಲ್ಲ.&lt;/p&gt;&lt;p&gt;&lt;strong&gt;।ಎಂ.ಬಿ.ಪಾಟೀಲ, ಕೈಗಾರಿಕಾ ಸಚಿವ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-by-election-2026-mb-patil-slams-by-vijayendra-and-basangowda-patil-yatnal-rav/articleshow-1kxpvvm"/>
        </item>
        <item>
            <title><![CDATA[Vijayapura: ಸಿಂದಗಿಯ ಮೌಲಾಲಿ ಕುಟುಂಬದಲ್ಲಿ ಸಂಭ್ರಮದಿಂದ ಬಸವ ಜಯಂತಿ ಆಚರಣೆ]]></title>
            <link>https://kannada.asianetnews.com/karnataka-districts/vijayapura-basava-jayanti-celebrated-with-enthusiasm-in-sindagi-s-maulali-family-mrq/articleshow-7tgz1ak</link>
            <guid isPermaLink="true">https://kannada.asianetnews.com/karnataka-districts/vijayapura-basava-jayanti-celebrated-with-enthusiasm-in-sindagi-s-maulali-family-mrq/articleshow-7tgz1ak</guid>
            <pubDate>Tue, 21 Apr 2026 07:39:17 +0530</pubDate>
            <description><![CDATA[&lt;p&gt;ಪೊಲೀಸ್&zwnj; ಪೇದೆ ಮೌಲಾಲಿ ಆಲಗೂರ ಅವರು ಮುಸ್ಲಿಂರಾಗಿದ್ದರೂ, ಕಳೆದ 4 ವರ್ಷಗಳಿಂದ ತಮ್ಮ ಮನೆಯಲ್ಲಿ ಬಸವ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಬಸವಣ್ಣನವರ ಸಮಸಮಾಜದ ಚಿಂತನೆಗಳನ್ನು ಗೌರವಿಸಿ, ತಮ್ಮ ಮಕ್ಕಳಿಗೂ ಆ ಮೌಲ್ಯಗಳನ್ನು ತಿಳಿಸುತ್ತಾ ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kppwm74ymz5caypgy1n681e5,imgname-basava-jayanti-1776737197214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಪೊಲೀಸ್&zwnj; ಪೇದೆ ಮೌಲಾಲಿ ಆಲಗೂರ ಅವರು ಧರ್ಮದಲ್ಲಿ ಮುಸ್ಲಿಂರಾದರೂ ಪ್ರತಿ ವರ್ಷ ಬಸವ ಜಯಂತಿ ದಿನದಂದು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವದಿಂದ ನಮಿಸಿ, ಸಕಲರ ಒಳಿತಿಗಾಗಿ ಪ್ರಾರ್ಥಿಸಿ, ತನ್ನ 3 ಮಕ್ಕಳಿಗೂ ಬಸವಣ್ಣನ ಸಮಸಮಾಜದ ಚಿಂತನೆ ಕುರಿತು ತಿಳಿಸುತ್ತಾರೆ.&amp;nbsp;&lt;/p&gt;&lt;p&gt;ಪ್ರಸ್ತುತ ಇವರು ಬೆಂಗಳೂರು ಆಡುಗೋಡಿ ಪೊಲೀಸ್ ಗೃಹದಲ್ಲಿರುವ ಆರಕ್ಷಕ ಮೌಲಾಲಿ ಶ್ವಾನದಳದಲ್ಲಿ ಹೆಡ್ ಕಾನ್ಸ್&zwnj;ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಬಸವ ಜಯಂತಿಯನ್ನು ತಮ್ಮ ಮನೆಯಲ್ಲಿಯೇ ಭಕ್ತಿ, ಭಾವ, ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾ ಬರುತ್ತಿದ್ದಾರೆ.&amp;nbsp;&lt;/p&gt;&lt;p&gt;12ನೇ ಶತಮಾನದಲ್ಲಿ ಆಳವಾಗಿ ಬೇರೂರಿದ ಜಾತಿ ವ್ಯವಸ್ಥೆ, ಶೋಷಣೆ, ಅಸಮಾನತೆ, ಅಸ್ಪೃಶ್ಯತೆ, ಅನಾಗರಿಕತೆ, ಲಿಂಗ ತಾರತಮ್ಯದ ವಿರುದ್ಧ ವಚನ ಕ್ರಾಂತಿ ಕೈಗೊಂಡ ಬಸವಣ್ಣನವರು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದ್ದಾರೆ. ಇಂತಹ ಶ್ರೇಷ್ಠ ದಾರ್ಶನಿಕ, ಮಹಾಪುರುಷ ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಕನ್ನಡ ನಾಡಿನಲ್ಲಿ ಜನ್ಮ ತಾಳಿರುವುದು ಹೆಮ್ಮೆಯ ವಿಷಯ ಎನ್ನುವುದು ಮೌಲಾಲಿ ಆಲಗೂರ ಅವರ ಅಭಿಮತವಾಗಿದೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೆಲ ಐಪಿಎಸ್&zwnj;ಗಳ ಕರ್ಮಕಾಂಡ ಬಯಲು ಮಾಡುತ್ತೇನೆ ಅನುಮತಿ ಕೊಡಿ: DCRE ಎಸ್ಪಿ ಕಾಶಿ DG&amp;amp;IGP ಗೆ ಪತ್ರ&lt;/strong&gt;&lt;/p&gt;&lt;p&gt;ಜಯಂತಿ ಆಚರಣೆಯಲ್ಲಿ ಮಹಮದ್ ಜುಬೇರ, ಮಹಮ್ಮದ್ ಜಯಾನ್, ಖತಾಲಸಾಬ್&zwnj;, ರೆಹಮಾನ್, ಜುನೇರಾ ಪಾಲ್ಗೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Hubballi: Fly91 ವಿಮಾನಕ್ಕೆ ಮಾತ್ರ ಹವಾಮಾನ ವೈಪರೀತ್ಯ ಹೇಗೆ ಸಾಧ್ಯ? ಸತ್ಯ ಮುಚ್ಚಿಟ್ಟರಾ?&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಇಳಕಲ್ ನಿವಾಸಿ ಭಕ್ತ ಮಹಮ್ಮದ್&zwnj; ಮನೆಗೆ ಭೇಟಿ ನೀಡಿದ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು#Koppal #GaviMutt #Devotees https://t.co/KGdfVkh8iA&lt;/p&gt;&lt;p&gt;&mdash; Asianet Suvarna News (@AsianetNewsSN) April 14, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-basava-jayanti-celebrated-with-enthusiasm-in-sindagi-s-maulali-family-mrq/articleshow-7tgz1ak"/>
        </item>
        <item>
            <title><![CDATA[ವಿಜಯಪುರ: ಸಂಬಂಧಿಕರಿಂದಲೇ ಗ್ರಾ.ಪಂ ಮಾಜಿ ಸದಸ್ಯನ ಭೀಕರ ಹತ್ಯೆ: ಆರು ಹಂತಕರ ಬಂಧನ]]></title>
            <link>https://kannada.asianetnews.com/state/vijayapura-gp-ex-member-raju-khare-murder-6-accused-arrested/articleshow-a6si1le</link>
            <guid isPermaLink="true">https://kannada.asianetnews.com/state/vijayapura-gp-ex-member-raju-khare-murder-6-accused-arrested/articleshow-a6si1le</guid>
            <pubDate>Fri, 24 Apr 2026 10:07:03 +0530</pubDate>
            <description><![CDATA[ವಿಜಯಪುರದಲ್ಲಿ ನಡೆದ ಗ್ರಾ.ಪಂ ಮಾಜಿ ಸದಸ್ಯ ರಾಜು ಖರೆ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpyvsyhvf93czdk22f99z51s,imgname-vijayapura-murder-arrest-1777004771899.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಟಿಪ್ಪರ್ ಡಿಕ್ಕಿ ಹೊಡೆದು ಫೈರಿಂಗ್ ಮಾಡಿ ಗ್ರಾ.ಪಂ ಮಾಜಿ ಸದಸ್ಯನ ಭೀಕರ ಹತ್ಯೆ ಪ್ರಕರಣ&lt;/strong&gt;&lt;/h2&gt;&lt;p&gt;ವಿಜಯಪುರ: ವಿಜಯಪುರದಲ್ಲಿ ಏಪ್ರಿಲ್ 14ರಂದು ನಡೆದಿದ್ದ ಗ್ರಾ.ಪಂ ಮಾಜಿ ಸದಸ್ಯನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರದ ಅಲಿಯಾಬಾದ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಏಪ್ರಿಲ್ 14ರಂದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜು ಖರೆ ಅವರ ಭೀಕರ ಹತ್ಯೆ ನಡೆದಿತ್ತು. ಹಂತಕರು ಟಿಪ್ಪರ್ ಡಿಕ್ಕಿ ಹೊಡೆದು, ಫೈರಿಂಗ್ ನಡೆಸಿ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ವಿಜಯಪುರ ಪೊಲೀಸರು ಆರು ಜನ ಹಂತಕರನ್ನು ಬಂಧಿಸಿದ್ದಾರೆ.&lt;/p&gt;&lt;h3&gt;&lt;strong&gt;ಆಸ್ತಿಗಾಗಿ ಸಂಬಂಧಿಕರಿಂದಲೇ ಭೀಕರ ಕೊಲೆ: ಆರು ಹಂತಕರ ಬಂಧನ&lt;/strong&gt;&lt;/h3&gt;&lt;p&gt;ಸಂಬಂಧಿಕರೇ ಈ ಕೃತ್ಯ ನಡೆಸಿದ್ದಾರೆ ಎಂಬುದು ಈಗ ತನಿಖೆಯಿಂದ ತಿಳಿದು ಬಂದಿದೆ. ಬಂಧಿತರನ್ನು ಅಬುಶ್ಯಾ ಕೊಡ್ಲೇಕರ್, ಅಬಾಶ್ಯಾ ಮಾನೆ, ವಾಗೀಶ್ ಪೋಳ್, ಜಾಲಿಂದರ್ ಮಲ್ಲಾರಿ, ಖಂಡೋಬಾ ತಾಂಬೆ, ಮುರುಗು ಹಕ್ಕೆ ಎಂದು ಗುರುತಿಸಲಾಗಿದೆ. ಮೊದಲೇ ಪ್ಲಾನ್ ಮಾಡಿ ಆರೋಪಿಗಳು ರಾಜು ಖರೆ ಅವರನ್ನು ಕೊಲೆ ಮಾಡಿದ್ದರು. ಮೊದಲು ಟಿಪ್ಪರ್ ಮೂಲಕ ಥಾರ್ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ರಾಜು ಮೇಲೆ 6 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.&lt;/p&gt;&lt;p&gt;ಬಂಧಿತರಿಂದ 2 ಕಂಟ್ರಿ ಪಿಸ್ತೂಲು, 7 ಮೊಬೈಲ್, ಕೃತ್ಯಕ್ಕೆ ಬಳಸಿದ್ದ 2 ಬೈಕ್, 1 ಟಿಪ್ಪರ್, 1 ಕಾರ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಎಸ್ಪಿ ಲಕ್ಷಣ ನಿಂಬರಗಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತಮಿಳುನಾಡಲ್ಲಿ ತ್ರಿಕೋನ ಸಮರ: ದಾಖಲೆಯ ಶೇ.85ರಷ್ಟು ಮತದಾನ&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Anusha Kb</dc:creator>
            <atom:link href="https://kannada.asianetnews.com/state/vijayapura-gp-ex-member-raju-khare-murder-6-accused-arrested/articleshow-a6si1le"/>
        </item>
        <item>
            <title><![CDATA[ವಿಜಯಪುರ ಪೊಲೀಸರಿಂದ ಸೂಪರ್ ಮೆಗಾ ಆಪರೇಷನ್: ಮೂರೂವರೆ ಕೋಟಿ ಮೌಲ್ಯದ ಮೊಬೈಲ್ ಪತ್ತೆ]]></title>
            <link>https://kannada.asianetnews.com/karnataka-districts/vijayapur-district-police-recover-340-mobile-phones-worth-rs-3-point-5-crore-mrq/articleshow-aw6x39a</link>
            <guid isPermaLink="true">https://kannada.asianetnews.com/karnataka-districts/vijayapur-district-police-recover-340-mobile-phones-worth-rs-3-point-5-crore-mrq/articleshow-aw6x39a</guid>
            <pubDate>Sat, 11 Apr 2026 14:35:53 +0530</pubDate>
            <description><![CDATA[ವಿಜಯಪುರ ಜಿಲ್ಲಾ ಪೊಲೀಸರು ಸಿಇಐಆರ್&zwnj; ಪೋರ್ಟಲ್&zwnj; ಬಳಸಿ, ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು ₹3.5 ಕೋಟಿ ಮೌಲ್ಯದ 340 ಮೊಬೈಲ್&zwnj;ಗಳನ್ನು ಪತ್ತೆಹಚ್ಚಿದ್ದಾರೆ. ಈ ಮೊಬೈಲ್&zwnj;ಗಳನ್ನು ವಾರಸುದಾರರಿಗೆ ಮರಳಿಸಲಾಗುತ್ತಿದ್ದು, ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಯ ಆರೋಪಿಯನ್ನೂ ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knxw9wkcygzrrs0mj7k2ynz7,imgname-vijayapur-police-1775897997932.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ಜಿಲ್ಲೆಯಲ್ಲಿ ವಿವಿಧ 26 ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು ಮೂರೂವರೆ ಕೋಟಿ ಮೌಲ್ಯದ ವಿವಿಧ ಕಂಪನಿಗಳ ಹಾಗೂ ವಿವಿಧ ಮಾಡೆಲ್&zwnj;ಗಳ 340 ಮೊಬೈಲ್&zwnj;ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ನೀಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಿಇಐಆರ್&zwnj; ಪೋರ್ಟಲ್&zwnj; ಮುಖಾಂತರ ಜಿಲ್ಲೆಯಲ್ಲಿ ಕಳೆದುಹೋಗಿದ್ದ ಮೊಬೈಲ್&zwnj;ಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸ್&zwnj;ಪಿ ಲಕ್ಷ್ಮಣ ನಿಂಬರಗಿ ಹೇಳಿದರು.&lt;/p&gt;&lt;h2&gt;&lt;strong&gt;₹3.5 ಕೋಟಿ ಮೌಲ್ಯದ ಒಟ್ಟು 340 ಮೊಬೈಲ್&zwnj;&lt;/strong&gt;&lt;/h2&gt;&lt;p&gt;ನಗರದ ಪೊಲೀಸ್ ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಪೊಲೀಸ್&zwnj; ಠಾಣೆಗಳಲ್ಲಿ ಸಿಇಐಆರ್&zwnj; ಪೋರ್ಟಲ್&zwnj; ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾರ್ವಜನಿಕರಿಂದ ಮೊಬೈಲ್ ಕಳೆದುಹೋದ/ ಕಳ್ಳತನವಾದ ಬಗ್ಗೆ ದಾಖಲಾದ ದೂರಗಳನ್ನು ಪರಿಶೀಲಿಸಿ, ಅವುಗಳ ಪತ್ತೆ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.ಜಿಲ್ಲೆಯ 26 ಪೊಲೀಸ್&zwnj; ಠಾಣೆಗಳನ್ನು ಒಳಗೊಂಡಂತೆ ಸಿಇಐಆರ್&zwnj; ಪೋರ್ಟಲ್&zwnj;ದಲ್ಲಿ ದಾಖಲಾದ ದೂರುಗಳನ್ನು ಪರಿಶೀಲಿಸಿ, ಪತ್ತೆಹಚ್ಚಿ ₹3.5 ಕೋಟಿ ಮೌಲ್ಯದ ಒಟ್ಟು 340 ಮೊಬೈಲ್&zwnj;ಗಳನ್ನು ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಪತ್ತೆ ಮಾಡಿ ಸಂಬಂಧಪಟ್ಟ ಸಾರ್ವಜನಿಕರಿಗೆ ಮರಳಿಸಲಾಗುತ್ತಿದೆ.&amp;nbsp;&lt;/p&gt;&lt;p&gt;ಇನ್ನು ಕೆಲವು ದೂರುಗಳ ಪತ್ತೆ ಕಾರ್ಯ ಮುಂದುವರೆದಿದೆ. ಸಿಇಐಆರ್&zwnj; ಪೋರ್ಟಲ್&zwnj; ಮೊಬೈಲ್ ಕಳುವಾದ / ಕಳ್ಳತನವಾದ ಬಗ್ಗೆ ಪತ್ತೆ ಮಾಡಲು ಅತ್ಯಂತ ಪರಿಣಾಮಕಾರಿಯಾದ ಆಪ್&zwnj; ಆಗಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಾಧನವು ಸಾರ್ವಜನಿಕರ ದಿನನಿತ್ಯದ ಮತ್ತು ಅತೀ ಅವಶ್ಯಕ ಬಳಕೆವುಳ್ಳ ಸಾಧನೆಗಳಲ್ಲೊಂದಾಗಿದೆ. ಈ ನಡುವೆ ಸಾರ್ವಜನಿಕರಿಂದ ದಿನಂಪ್ರತಿ ತಮ್ಮ ಮೊಬೈಲ್ ಕಳೆದುಹೋದ / ಕಳ್ಳತನವಾದ ಬಗ್ಗೆ ಪೊಲೀಸ್&zwnj; ಠಾಣೆಗಳಲ್ಲಿ ದೂರುಗಳು ಸ್ವೀಕೃತವಾಗುತ್ತಿವೆ. ಈ ರೀತಿ ಮೊಬೈಲ್ ಕಳುವಾದ / ಕಳ್ಳತನದ ದೂರುಗಳ ಬಗ್ಗೆ ಪೊಲೀಸ್&zwnj; ಇಲಾಖೆಯು ಕ್ರಮ ವಹಿಸಿ, ಸಿಇಐಆರ್&zwnj; ಪೋರ್ಟಲ್&zwnj; ಸಾಧನದ ಮೂಲಕ ಮೊಬೈಲ್&zwnj;ಗಳ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್&zwnj;ಪಿ ರಾಮನಗೌಡ ಹಟ್ಟಿ, ಡಿವೈಎಸ್&zwnj;ಪಿಗಳಾದ ಸದಾಶಿವ ಕಟ್ಟಿಮನಿ, ಬಲ್ಲಪ್ಪ ನಂದಗಾವಿ, ಸುನೀಲ ಕಾಂಬಳೆ, ತುಳಜಪ್ಪ ಸುಲ್ಫಿ, ಸಿಪಿಐಗಳಾದ ಮಲ್ಲಯ್ಯ ಮಠಪತಿ, ಪ್ರದೀಪ ತಳಕೇರಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು&lt;/strong&gt;&lt;/p&gt;&lt;h3&gt;&lt;strong&gt;ಆರೋಪಿ ಪತ್ತೆ ಪ್ರಕರಣ:&lt;/strong&gt;&lt;/h3&gt;&lt;p&gt;ಕೊಲೆ ಕೇಸಿನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆರೋಪಿ ಕಿರಣಕುಮಾರ ತಂ. ಆನಂದಯ್ಯ ಹಿರೇಮಠ 13 ದಿನಗಳ ಕಾಲ ಪೆರೋಲ್&zwnj; ರಜೆ ಪಡೆದುಕೊಂಡು 2023 ಆಗಸ್ಟ್ 11ರಂದು ವಿಜಯಪುರ ಕೇಂದ್ರ ಕಾರಾಗೃಹದಿಂದ ತೆರಳಿದ್ದನು. ಆದರೆ, ಆರೋಪಿ ಕಿರಣಕುಮಾರ ತಂ. ಆನಂದಯ್ಯ ಹಿರೇಮಠ ವಾಪಸ್ಸು ಬಾರದೆ ತಲೆ ಮರೆಸಿಕೊಂಡಿದ್ದ ಕುರಿತು ಆದರ್ಶನಗರ ಠಾಣೆಯಲ್ಲಿ 2023 ಆಗಸ್ಟ್ 23ರಂದು ಕೇಂದ್ರ ಕಾರಾಗೃಹದ ಉಪಅಧೀಕ್ಷಕ ಡಾ.ಮಂಜುನಾಥ.ಎಚ್.ಜಿ ದೂರು ನೀಡಿದ್ದರು. ಆರೋಪಿಯ ಪತ್ತೆಗೆ ಜಾಲ ಬೀಸಿದ ಆದರ್ಶನಗರ ಠಾಣೆ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ತಂಡ ಆರೋಪಿತನು ಮೈಸೂರಿನಲ್ಲಿ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದು 2026 ಏ.8ರಂದು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪಿಎಸ್&zwnj;ಐ ಹಾಗೂ ಸಿಬ್ಬಂದಿಯ ಕರ್ತವ್ಯವನ್ನು ಶ್ಲಾಘೀಸಲಾಗಿದೆ ಎಂದು ಎಸ್&zwnj;ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪ್ರೀತಿಸಿ ಮದುವೆಯಾದ ಅಂತರ್&zwnj;ಧರ್ಮೀಯ ಕೊಪ್ಪಳ ಜೋಡಿ, ತಸ್ಲೀಮಾ ಹಣೆಗೆ ಸಿಂಧೂರವಿಟ್ಟ ಕೇಶವ, ಠಾಣೆ ಮೆಟ್ಟಿಲೇರಿದ್ದೇಕೆ?&lt;/strong&gt;&lt;/p&gt;&lt;p&gt;----------&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapur-district-police-recover-340-mobile-phones-worth-rs-3-point-5-crore-mrq/articleshow-aw6x39a"/>
        </item>
        <item>
            <title><![CDATA[ವಿಜಯಪುರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ]]></title>
            <link>https://kannada.asianetnews.com/state/gunfire-again-in-vijayapura-gram-panchayat-member-brutally-murdered/articleshow-enqpnw4</link>
            <guid isPermaLink="true">https://kannada.asianetnews.com/state/gunfire-again-in-vijayapura-gram-panchayat-member-brutally-murdered/articleshow-enqpnw4</guid>
            <pubDate>Tue, 14 Apr 2026 17:24:50 +0530</pubDate>
            <description><![CDATA[&lt;p&gt;ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಗುಂಡು ಹಾರಿಸಿ ಗ್ರಾಮ ಪಂಚಾಯತ್ ಸದಸ್ಯನ ಕೊಲೆ ಮಾಡಲಾಗಿದೆ. ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5x405r9rcxpwrtzrqwxktb,imgname-vijayapura-gram-panchayath-member-murder-1776167289016.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು&lt;/strong&gt;&lt;/h2&gt;&lt;p&gt;ವಿಜಯಪುರ: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಗುಂಡು ಹಾರಿಸಿ ಗ್ರಾಮ ಪಂಚಾಯತ್ ಸದಸ್ಯನ ಕೊಲೆ ಮಾಡಲಾಗಿದೆ. ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿ ಘಟನೆ ನಡೆದಿದೆ.&lt;/p&gt;&lt;h3&gt;&lt;strong&gt;ಗುಂಡು ಹಾರಿಸಿ ಗ್ರಾ.ಪಂ. ಸದಸ್ಯನ ಹತ್ಯೆ&lt;/strong&gt;&lt;/h3&gt;&lt;p&gt;ಗ್ರಾ.ಪಂ ಸದಸ್ಯ ರಾಜು ಖರೆ ಅವರ ಮೇಲೆ ದುಷ್ಕರ್ಮಿಗಳು ಆರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಬಳಿಕ ಶವದ ಮೇಲೆ ಕಲ್ಲು ಎತ್ತಿ ಹಾಕಿ ಎಸ್ಕೇಪ್ ಆಗಿದ್ದಾರೆ. ಹತ್ಯೆಯಾದ ರಾಜು ಖರೆ ಅವರು ತಾಂಗರುನ ದೊಡ್ಡಿ ನಿವಾಸಿಯಾಗಿದ್ದಾರೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.&amp;nbsp;&lt;/p&gt;&lt;p&gt;ಗುಂಡಿನ ದಾಳಿ ನಡೆದ ಸ್ಥಳಕ್ಕೆ ಡಾಗ್ ಸ್ಕಾಡ್, SOCO ಟೀಂ ಭೇಟಿ ನೀಡಿ ಪರಿಶೀಲಿಸಿದೆ. ಹಾಗೆಯೇ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾಹಿತಿ ಕಲೆ ಹಾಕಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;&lt;strong&gt;2 ಸಾವಿರ ನೀಡಿ ಮ್ಯೂಸಿಕ್ ಫೆಸ್ಟ್&zwnj;ಗೆ ಹೋಗಿದ್ದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಡ್ರಗ್ಸ್ ಓವರ್&zwnj;ಡೋಸ್ ಆಗಿ ಸಾವು&lt;/strong&gt;&lt;/p&gt;]]></content:encoded>
            <category>vijayapura</category>
            <dc:creator>Anusha Kb</dc:creator>
            <atom:link href="https://kannada.asianetnews.com/state/gunfire-again-in-vijayapura-gram-panchayat-member-brutally-murdered/articleshow-enqpnw4"/>
        </item>
        <item>
            <title><![CDATA[ಗ್ಯಾರಂಟಿ ನಿಭಾಯಿಸಲಾಗದೇ ಕಾಂಗ್ರೆಸ್ ಹೆಣಗಾಟ: ಸಂಸದ ರಮೇಶ ಜಿಗಜಿಣಗಿ ಆರೋಪ]]></title>
            <link>https://kannada.asianetnews.com/karnataka-districts/ramesh-jigajinagi-criticizes-congress-guarantee-schemes-karnataka-gvd/articleshow-gnq2npa</link>
            <guid isPermaLink="true">https://kannada.asianetnews.com/karnataka-districts/ramesh-jigajinagi-criticizes-congress-guarantee-schemes-karnataka-gvd/articleshow-gnq2npa</guid>
            <pubDate>Tue, 14 Apr 2026 23:50:09 +0530</pubDate>
            <description><![CDATA[&lt;p&gt;ಕಾಂಗ್ರೆಸ್&zwnj;ನವರು ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಸಂಪೂರ್ಣ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಇದರಿಂದ ಏನು ಸಾಧನೆ ಮಾಡುತ್ತಾರೋ ಗೊತ್ತಿಲ್ಲ. ಗ್ಯಾರಂಟಿಗೆ ಅವರ ಪಕ್ಷದವರೇ ವಿರೋಧಿಸುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k02j9za3md60e5gkvz2msb5y,imgname-dbdb-1752432966979.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.14): &lt;/strong&gt;ಕಾಂಗ್ರೆಸ್&zwnj;ನವರು ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಸಂಪೂರ್ಣ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಇದರಿಂದ ಏನು ಸಾಧನೆ ಮಾಡುತ್ತಾರೋ ಗೊತ್ತಿಲ್ಲ. ಗ್ಯಾರಂಟಿಗೆ ಅವರ ಪಕ್ಷದವರೇ ವಿರೋಧಿಸುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಹೆಸರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಗ್ಯಾರಂಟಿಗಳನ್ನು ನಿಭಾಯಿಸಲಾಗದೇ ಹೆಣಗಾಡುತ್ತಿದೆ.&lt;/p&gt;&lt;p&gt;ಹೀಗಾಗಿ ಗ್ಯಾರಂಟಿಯೇತರ ಯೋಜನೆಗಳನ್ನು ಸ್ಥಗಿತಗೊಳಿಸಿದ್ಧಾರೆ. ವಿವಿಧ ನಿಗಮ ಮತ್ತು ಇಲಾಖೆಗಳಲ್ಲಿ ಅಕ್ರಮಗಳು ಬೆಳಕಿಗೆ ಬರುತ್ತಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅನುದಾನ ನುಂಗಿ ನೀರು ಕುಡಿದಿರುವ ಸರ್ಕಾರ, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಸಿತು. ಇದೀಗ ಶಿಕ್ಷಣ ಇಲಾಖೆಗೂ ಬಾಯಿ ಹಾಕಿದ್ದು, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.&lt;/p&gt;&lt;p&gt;2025-26ನೇ ಸಾಲಿಗೆ ರಾಜ್ಯದಲ್ಲಿ ಒಟ್ಟು 7,483 ಸಂಸ್ಥೆಗಳು ಶಾಲೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 1,310 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 448 ಸಂಸ್ಥೆಗಳು ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, 208 ಸಂಸ್ಥೆಗಳಿಗೆ ಮಾನ್ಯತೆ ನವೀಕರಿಸಲಾಗಿದೆ. ಆ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಮತ್ತು ಮಾನ್ಯತೆ ನವೀಕರಣಗೊಂಡ ಜಿಲ್ಲೆಗಳಲ್ಲಿ ವಿಜಯಪುರ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.&lt;/p&gt;&lt;p&gt;ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ ಅವರು ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಕುರಿತು ಅನುಮಾನ ವ್ಯಕ್ತಪಡಿಸಲಾಗಿ ಸಾಕಷ್ಟು ಅಕ್ರಮ ನಡೆದಿರುವುದು ಹಂತ ಹಂತವಾಗಿ ಬೆಳಕಿಗೆ ಬಂದಿದೆ. ಒಂದೊಂದು ಶಾಲೆ ನವೀಕರಣಕ್ಕೂ ಕನಿಷ್ಠ 7 ಲಕ್ಷ ರೂ. ಹಾಗೂ ಪ್ರಥಮ ಮಾನ್ಯತೆಗೆ ಅಂದಾಜು 10 ರಿಂದ 15 ಲಕ್ಷ ರೂ. ಲಂಚ ಪಡೆದಿರುವ ಆರೋಪಗಳಿವೆ. ಕೆಳ ಹಂತದಿಂದ ಮೇಲಿನ ಹಂತದವರೆಗಿನ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ ಎಂದು ಆರೋಪಿಸಿದರು.&lt;/p&gt;&lt;h2&gt;&lt;strong&gt;ವಿಜಯಪುರದಲ್ಲಿ ಏನೂ ಮಾಡಿಲ್ಲ: ಜಿಗಜಿಣಗಿ&lt;/strong&gt;&lt;/h2&gt;&lt;p&gt;ಹಿಂದೆ ವಿರೇಂದ್ರ ಪಾಟೀಲರನ್ನು ಏಕಾಏಕಿ ಸಿಎಂ ಸ್ಥಾನದಿಂದ ತೆಗೆದರು. ಆಗಿನಿಂದಲೇ ಅಧಿಕಾರಕ್ಕಾಗಿ ಕಾಂಗ್ರೆಸ್ ಪ್ರವೃತ್ತಿಯಾಗಿದೆ, ಈಗಲೂ ಅದೇ ಆಗುತ್ತಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ನಲ್ಲಿರೋವಷ್ಟು ಕಿತ್ತಾಟ ಎಲ್ಲೂ ಇಲ್ಲ. ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಪ್ರಯೋಜನ ಇಲ್ಲದ ಸರ್ಕಾರ. ಎಲ್ಲರಿಗೂ ಪುಸಗಟ್ಟೆ ಕೊಟ್ಟು ರಾಜ್ಯದ ಅಭಿವೃದ್ದಿ ಮರೆತಿದ್ದಾರೆ. ಈ ಸರ್ಕಾರ ಇರಬಾರದು ಜನರು ಜಾಣರಾಗಬೇಕು, ವಿಜಯಪುರದಲ್ಲಿ ಏನೂ ಮಾಡಿಲ್ಲ. ವಿಜಯಪುರದ ಡಿಡಿಪಿಐ ಕಚೇರಿಯಲ್ಲಿ ಕಾನೂನು ಬಾಹಿರ ಕಾರ್ಯಗಳಾಗಿವೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಡಿಡಿಪಿಐ ಕಚೇರಿಯಲ್ಲಿ ಸಮಸ್ಯೆಯಾಗಿದೆ ಎಂದಿದ್ದಾರೆ. ಸಿಎಂ ಸಹ ಸಮಸ್ಯೆ ಆಗಿದೆ ಎಂದಿದ್ದಾರೆ, ಆದರೆ, ಯಾರ ಮೇಲೂ ಕ್ರಮ ತೆಗೆದುಕೊಂಡಿಲ್ಲ. ನಿಮಗೆ ತಾತಕ್ ಇದ್ದರೆ ಕ್ರಮ ತೆಗೆದುಕೊಳ್ಳಿ.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ramesh-jigajinagi-criticizes-congress-guarantee-schemes-karnataka-gvd/articleshow-gnq2npa"/>
        </item>
        <item>
            <title><![CDATA[ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ]]></title>
            <link>https://kannada.asianetnews.com/politics/basanagouda-patil-yatnal-attack-congress-leaders-delhi-trip-gvd/articleshow-gswu1pw</link>
            <guid isPermaLink="true">https://kannada.asianetnews.com/politics/basanagouda-patil-yatnal-attack-congress-leaders-delhi-trip-gvd/articleshow-gswu1pw</guid>
            <pubDate>Mon, 13 Apr 2026 00:21:06 +0530</pubDate>
            <description><![CDATA[&lt;p&gt;ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸೋಲಿಸಬೇಕು ಅಂತಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್ ನಾಯಕರೇ ಮುಂದಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj4nkrdvr7qnva2vvbe0j7w9,imgname-br-patil-yatnal--2--1771830895035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.13):&lt;/strong&gt; ಬಾಗಲಕೋಟೆಯಲ್ಲಿ ಡಿ.ಕೆ.ಶಿವಕುಮಾರ ಸೋಲಿಸಬೇಕು ಅಂತಾರೆ, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸೋಲಿಸಬೇಕು ಅಂತಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾಂಗ್ರೆಸ್ ನಾಯಕರೇ ಮುಂದಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದ್ದಾರೆ. 20ಕ್ಕೂ ಅಧಿಕ ಕಾಂಗ್ರೆಸ್ ಶಾಸಕರ ದೆಹಲಿ ಪ್ರಯಾಣ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಯಾವಾಗ ಶುರುವಾಯಿತು ಆಗಿನಿಂದ ಸರ್ಕಾರದ ಯಾವುದೆ ಕೆಲಸ ಮಾಡುತ್ತಿಲ್ಲ,&lt;/p&gt;&lt;p&gt;ಸರಿಯಾಗಿ ಆಡಳಿತ ನಡೆಸುವ ಪರಸ್ಥಿತಿ ಉಳಿದಿಲ್ಲ, ಇದೆಲ್ಲದರ ಕಾರಣ ದೆಹಲಿ ಪ್ರಯಾಣ ನಡೆದಿದೆ. ಅರ್ಹತೆ ಇದ್ದವರನ್ನು ಮಾಡಲಿ, ಅದನ್ನೆಲ್ಲ ಬಿಟ್ಟು ಇವರು ಲಾಬಿ ಮಾಡೋದು ಸರಿಯಲ್ಲ. ನನ್ನ ಮಂತ್ರಿ ಮಾಡಿದ್ರೇ ಇಷ್ಟು ಕೋಟಿ ಕೊಡುವೆ, ಸೋನಿಯಾ ಗಾಂಧಿಗೆ ದೆಹಲಿಯಲ್ಲಿ ಒಂದು ಮನೆ ಕೊಡಿಸುವೆ ಎಂಬ ವ್ಯವಸ್ಥೆ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಇದೊಂದು ಕೆಟ್ಟ ಸ್ವಭಾವ ಬೆಳೆದು ಬಿಟ್ಟಿದೆ. ಯಾರು ರಾಜ್ಯಾಧ್ಯಕ್ಷರು ಆಗಿರ್ತಾರೆ ಅವರು ಮೇಲಿನವರನ್ನು ಮ್ಯಾನೇಜ್ ಮಾಡಿ ಬಿಟ್ಟಿರ್ತಾರೆ.&lt;/p&gt;&lt;p&gt;ಅವರು ಅಧ್ಯಕ್ಷರು ಸೂರ್ಯ, ಚಂದ್ರರು ಅಂತಾ ಹೇಳುತ್ತಾರೆ, ರಾಜಕಾರಣದಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ ಅನ್ನು ಪರಿಸ್ಥಿತಿ ಈಗ ಎದುರಾಗಿದೆ. *ವಿಜಯಪುರದಲ್ಲಿ ನಡೆಯುವ ನವರಸಪೂರ ಉತ್ಸವ ಕಾರ್ಯಕ್ರಮದ ಹೆಸರು ಬದಲಾವಣೆ ಮಾಡಲ್ಲ, ಉತ್ಸವಕ್ಕೆ ಯತ್ನಾಳ ಬರಲಿ ಬಿಡಲಿ ಎಂದ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ, ಎನ್ನಲಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ನವರಸಪೂರ ಹೆಸರು ಬದಲಾವಣೆ ಮಾಡಬೇಕೆಂದು ನಾನು ಹೇಳಿಲ್ಲ. ನಾನು ಬರಲಿ ಬಿಡಲಿ ಎಂದು ಅಧಿಕಾರ ಇರೋ ಎಂ.ಬಿ.ಪಾಟೀಲ ಮಾತನಾಡಬಾರದು.&lt;/p&gt;&lt;p&gt;ಎಂ.ಬಿ.ಪಾಟೀಲ ಯಾಕೆ ಹಚಡದ ರೀತಿ ಆಗುತ್ತಿದ್ದಾರೋ ಗೊತ್ತಿಲ್ಲ, ಹಾಗೆ ಆಗಬಾರದು. ಕೆಲವರು ಹಚಡದ ಎಂದಿರುತ್ತದೆ ಅದನ್ನು ಪಾಟೀಲ ಎಂದು ಮಾಡಿಕೊಂಡಿದ್ದಾರೆ. (ಪರೋಕ್ಷವಾಗಿ ಸಚಿವ ಶಿವಾನಂದ ಪಾಟೀಲಗೆ ಯತ್ನಾಳ ಟಾಂಗ್) ಎಂ.ಬಿ.ಪಾಟೀಲ ಹಾಗೆ ಮಾತನಾಡಬಾರದು. ನವರಸಪುರ ಹೆಸರಿನಲ್ಲಿ ಸಾಬರ ಹೆಸರು ಇಲ್ಲ, ನವರಸಪೂರ ಉತ್ಸವದಲ್ಲಿನ ಕಾರ್ಯಕ್ರಮಗಳು ಬದಲಾವಣೆ ಮಾಡಲಿ.&lt;/p&gt;&lt;p&gt;ಕೇವಲ ಗಜಲ್ ಶಾಹಿರಿ ಬೇಡ, ಇತರೇ ಕಾರ್ಯಕ್ರಮಗಳು ನಡೆಯಬೇಕು. ಆದಿಲ್ ಶಾಹಿ ರಾಜ ಹಿಂದೂ ದೇವರುಗಳ ಆರಾಧಕನಾಗಿದ್ದ, ನರಸಿಂಹ ದೇವರ ಕೃಪೆಯಿಂದ ಆದಿಲ್ ಶಾಹಿ ಮಗಳಿಗೆ ದೃಷ್ಟಿ ಬಂದಿತ್ತು, ಇದು ಇತಿಹಾಸದಲ್ಲೇ ದಾಖಲಾಗಿರೋ ವಿಚಾರ. ನವರಸಪೂರ ಎಂಬುದು ಸಕಲ ಕಲೆಗಳ ಸಾರವಾಗಿದೆ. ಎಂ.ಬಿ.ಪಾಟೀಲ ನನಗೆ ಹೇಳಿದ್ದಕ್ಕೆ ದುಃಖವಾಗಿದೆ ಆದರೆ ಕಣ್ಣೀರು ಹಾಕಲ್ಲ ಎಂದರು.&lt;/p&gt;&lt;p&gt;ನವಸರಪೂರ ಉತ್ಸವದಲ್ಲಿ ಆದಿಲ್ ಶಾಹಿ ಹಿಂದೂ ದೇವರ ಆರಾಧಕನಾಗಿದ್ದರ ಕುರಿತು ಮಾಹಿತಿ ನೀಡಲಿ. ಶಿವ ಲಕ್ಷ್ಮೀ ಸರಸ್ವತಿ ಗಣಪತಿ ದೇವರ ಆರಾಧಕನಾಗಿದ್ದ, ತಮ್ಮ ಜನರಿಗೆ ಗೊತ್ತಾಗಬಾರದೆಂದು ಆದಿಲ್ ಶಾ ರಾತ್ರಿವೇಳೆ ಗವಿಮಾರ್ಗದಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದ. ಆದಿಲ್ ಶಾಹಿ ಜ್ಯಾತ್ಯಾತೀತನಾಗಿದ್ದ, ಔರಂಗಜೇಬ್ ಅಕ್ಬರ್ ಹುಮಾಯುನ್ ಬಗ್ಗೆ ಮಾತ್ರ ಹೇಳುತ್ತಾರೆ. ಆದಿಲ್ ಶಾಹಿಗಳ ಕುರಿತು ಮಾತನಾಡಲಿ ಎಂದು ಯತ್ನಾಳ ಹೇಳಿದರು.&lt;/p&gt;&lt;h2&gt;&lt;strong&gt;ಕುದುರೆಗಳ ವ್ಯಾಪಾರ ಪ್ರಾರಂಭ&lt;/strong&gt;&lt;/h2&gt;&lt;p&gt;ಮೊದಲ ಮಹಾ ದೊಡ್ಡ ಕುದುರೆ ವ್ಯಾಪಾರ ಅಂದ್ರೆ ಸಿಎಂ ಕುರ್ಚಿಯದ್ದು, ಅದಕ್ಕೀಗ ಅಂತಿಮ ಕ್ಷಣದ ಕ್ಷಣಗಣನೆ ಶುರುವಾಗಿದೆ. ಎಷ್ಟು ರೇಟು ಏನು?, ಸಿದ್ದರಾಮಯ್ಯ ಎಷ್ಟು ಕೊಡುತ್ತಾರೆ?, ಡಿಕೆಶಿ ಎಷ್ಟು ಕೊಡುತ್ತಾರೆ ಅನ್ನೊದು ನಡೆದಿದೆ. ಈ ಮಾಹಾಕುದುರೆ ವ್ಯಾಪಾರ ಆದ ಮೇಲೆ ಈ ಸಣ್ಣ ಕುದುರೆಗಳ ವ್ಯಾಪಾರ ಪ್ರಾರಂಭವಾಗಲಿದೆ. ಕೆಲ ಜನರು ಮಿನಿಸ್ಟರ್&zwnj; ಆಗಲು ಕಣ್ಣಿರು ಹಾಕುತ್ತಾರೆ, ಕೈಕಾಲು ಹಿಡಿಯುತ್ತಾರೆ.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/basanagouda-patil-yatnal-attack-congress-leaders-delhi-trip-gvd/articleshow-gswu1pw"/>
        </item>
        <item>
            <title><![CDATA[ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಹೊಸ ಫುಡ್ ಪಾರ್ಕ್ ಭಾಗ್ಯ: ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಸಿಗಲಿದೆ ಬೂಸ್ಟ್!]]></title>
            <link>https://kannada.asianetnews.com/state/karnataka-new-food-parks-shivamogga-vijayapura-agri-processing-boost-san/articleshow-iug4fxm</link>
            <guid isPermaLink="true">https://kannada.asianetnews.com/state/karnataka-new-food-parks-shivamogga-vijayapura-agri-processing-boost-san/articleshow-iug4fxm</guid>
            <pubDate>Mon, 06 Apr 2026 16:50:22 +0530</pubDate>
            <description><![CDATA[&lt;p&gt;ಕರ್ನಾಟಕದ ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಎರಡು ಹೊಸ ಫುಡ್&zwnj; ಪಾರ್ಕ್&zwnj;ಗಳು ಶೀಘ್ರದಲ್ಲೇ ಸ್ಥಾಪನೆಯಾಗಲಿವೆ. ನಬಾರ್ಡ್ ನೆರವಿನೊಂದಿಗೆ, ಈ ಪಾರ್ಕ್&zwnj;ಗಳು ಸ್ಥಳೀಯ ಕೃಷಿ ಉತ್ಪನ್ನಗಳಾದ ಹಣ್ಣು, ತರಕಾರಿ, ಮತ್ತು ಹಾಲು ಸಂಸ್ಕರಣೆಗೆ ಆದ್ಯತೆ ನೀಡಲಿವೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knh83e445pjxj3vyqa8n4w1g,imgname-19bgfood-park-1775474161796.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.6): &lt;/strong&gt;ಕರ್ನಾಟಕದ ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಎರಡು ಹೊಸ ಫುಡ್&zwnj; ಪಾರ್ಕ್&zwnj; ಶೀಘ್ರದಲ್ಲೇ ತಲೆಯೆತ್ತಲಿವೆ. ಈ ಯೋಜನೆಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿಗಳು (DPR) ಮುಂದಿನ 10-15 ದಿನಗಳಲ್ಲಿ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು 'ಫುಡ್ ಕರ್ನಾಟಕ ಲಿಮಿಟೆಡ್' ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಶಿವಮೊಗ್ಗದಲ್ಲಿ ಪ್ರಸ್ತಾವಿತ ಫುಡ್ ಪಾರ್ಕ್ 87.6 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಇನ್ನು ವಿಜಯಪುರದಲ್ಲಿನ ಪಾರ್ಕ್ ಸುಮಾರು 75 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರಲಿದೆ. ಪ್ರಸ್ತುತ ಈ ಯೋಜನೆಗಳಿಗೆ ಆರ್ಥಿಕ ಅನುಮೋದನೆಗಾಗಿ ವರದಿ ಸಿದ್ಧಪಡಿಸಲಾಗುತ್ತಿದ್ದು, ನಬಾರ್ಡ್&zwnj;ನ (NABARD) ಆಹಾರ ಸಂಸ್ಕರಣಾ ನಿಧಿಯಡಿ ಧನಸಹಾಯ ಪಡೆಯಲು ಸರ್ಕಾರ ಉದ್ದೇಶಿಸಿದೆ.&lt;/p&gt;&lt;p&gt;ಪ್ರತಿ ಜಿಲ್ಲೆಯಲ್ಲೂ ಒಂದು ಫುಡ್ ಪಾರ್ಕ್ ಸ್ಥಾಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ 2022ರಲ್ಲೇ ಘೋಷಿಸಿತ್ತು. ಆದರೆ, ಕೆಐಎಡಿಬಿ (KIADB) ಮತ್ತು ಕೃಷಿ ಇಲಾಖೆಯಿಂದ ಭೂಮಿ ಹಂಚಿಕೆಯಲ್ಲಿ ಉಂಟಾದ ವಿಳಂಬದಿಂದಾಗಿ ಈ ಯೋಜನೆಗಳು ತಡವಾಗಿದ್ದವು. ಈ ಹಿಂದೆ ಬೆಂಗಳೂರಿನ ಸಮೀಪವೂ ಇಂತಹ ಯೋಜನೆ ಹಮ್ಮಿಕೊಳ್ಳಲಾಗಿತ್ತು, ಆದರೆ ಭೂಮಿ ಸಿಗದ ಕಾರಣ ಅದನ್ನು ಕೈಬಿಡಲಾಗಿತ್ತು.&lt;/p&gt;&lt;h2&gt;&lt;strong&gt;ಸ್ಥಳೀಯ ಬೇಡಿಕೆಗೆ ಆದ್ಯತೆ&lt;/strong&gt;&lt;/h2&gt;&lt;p&gt;ಫುಡ್ ಕರ್ನಾಟಕ ಲಿಮಿಟೆಡ್&zwnj;ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, &quot;ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳು ಮತ್ತು ಬೇಡಿಕೆಗೆ ಅನುಗುಣವಾಗಿ ಈ ಪಾರ್ಕ್&zwnj;ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಇಲ್ಲಿ ಹಣ್ಣು ಮತ್ತು ತರಕಾರಿಗಳಿಗಾಗಿ ಕೋಲ್ಡ್ ಸ್ಟೋರೇಜ್ (ಶೈತ್ಯಾಗಾರ), ಹಾಲು ಪ್ಯಾಕೇಜಿಂಗ್ ಘಟಕಗಳು, ಬೇಕರಿ ಘಟಕಗಳು ಮತ್ತು ವೈನ್ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ,&quot; ಎಂದು ತಿಳಿಸಿದರು. ಈ ಪ್ಲಾಟ್&zwnj;ಗಳನ್ನು ಕೇವಲ ಕೃಷಿ ಸಂಸ್ಕರಣಾ ಉದ್ದೇಶಗಳಿಗಾಗಿ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದೂ ಅವರು ಹೇಳಿದರು.&lt;/p&gt;&lt;h2&gt;&lt;strong&gt;ಕರ್ನಾಟಕದಲ್ಲಿ ಸದ್ಯದ ಸ್ಥಿತಿ&lt;/strong&gt;&lt;/h2&gt;&lt;p&gt;ಕರ್ನಾಟಕದಲ್ಲಿ ಪ್ರಸ್ತುತ ಎಂಟು ಫುಡ್&zwnj; ಪಾರ್ಕ್&zwnj; ಹೊಂದಿದ್ದು, ಅವುಗಳಲ್ಲಿ ಐದು ಕಾರ್ಯನಿರ್ವಹಿಸುತ್ತಿವೆ, 740 ಎಕರೆಗಳಲ್ಲಿ ಹರಡಿಕೊಂಡಿವೆ. ಮಾಲೂರಿನಲ್ಲಿ (87 ಎಕರೆ) 22 ಘಟಕಗಳನ್ನು ಹಂಚಿಕೆ ಮಾಡಲಾಗಿದೆ, ಆದರೆ ಕೇವಲ 14 ಚಾಲನೆಯಲ್ಲಿವೆ, ಬಾಗಲಕೋಟೆಯಲ್ಲಿ (100 ಎಕರೆ) 18 ಘಟಕಗಳಿವೆ, ಕೇವಲ ಆರು ಕಾರ್ಯನಿರ್ವಹಿಸುತ್ತಿವೆ, ಹಿರಿಯೂರಿನಲ್ಲಿ (106+ ಎಕರೆ) ಎಂಟು ಚಾಲನೆಯಲ್ಲಿರುವ ಘಟಕಗಳಿವೆ ಮತ್ತು ಜೇವರ್ಗಿಯಲ್ಲಿ (105 ಎಕರೆ) ಏಳು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮೆಗಾ ಫುಡ್&zwnj; ಪಾರ್ಕ್&zwnj; ಪೈಕಿ, ತುಮಕೂರಿನ ಇಂಡಿಯಾ ಫುಡ್ ಪಾರ್ಕ್ (110 ಎಕರೆ) ಗರಿಷ್ಠವಾಗಿ ಕಾರ್ಯನಿರ್ವಹಿಸುತ್ತಿದೆ, ಆದರೆ ಮಂಡ್ಯದಲ್ಲಿರುವ ಫೇವರಿಚ್ ಮೆಗಾ ಫುಡ್ ಪಾರ್ಕ್ (60 ಎಕರೆ) ಇನ್ನೂ ನಿರ್ಮಾಣ ಹಂತದಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayapura</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-new-food-parks-shivamogga-vijayapura-agri-processing-boost-san/articleshow-iug4fxm"/>
        </item>
        <item>
            <title><![CDATA[ಸ್ವಾರ್ಥಕ್ಕಾಗಿ ಟ್ರಸ್ಟ್‌ಗಳನ್ನು ಬಳಸಿದ್ರೆ ಸಮಾಜಕ್ಕೆ ಹೇಗೆ ಒಳ್ಳೆದಾಗುತ್ತೆ? ಶಾಸಕ ಬಸನಗೌಡ ಪಾಟೀಲ ಯತ್ನಾಳ]]></title>
            <link>https://kannada.asianetnews.com/karnataka-districts/basanagouda-patil-yatnal-slams-trusts-panchamasali-peetha-controversy-gvd/articleshow-n4p8ruo</link>
            <guid isPermaLink="true">https://kannada.asianetnews.com/karnataka-districts/basanagouda-patil-yatnal-slams-trusts-panchamasali-peetha-controversy-gvd/articleshow-n4p8ruo</guid>
            <pubDate>Wed, 15 Apr 2026 00:26:28 +0530</pubDate>
            <description><![CDATA[&lt;p&gt;ಸಮಾಜಕ್ಕೆ ಕೆಲಸ ಮಾಡುವವರು ಇಲ್ಲಿ ಯಾರು ಇಲ್ಲ. ಎಲ್ಲರೂ ತಮ್ಮ ತಮ್ಮ&zwnj; ಸ್ವಾರ್ಥಕ್ಕಾಗಿ ಈ ಟ್ರಸ್ಟ್&zwnj;ಗಳನ್ನು ಬಳಸಿದ್ದಾರೆ. ಎಷ್ಟೋ ಜನರು ಇದರಿಂದ ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2envnsn93ej4mncgm43djx3,imgname-fotojet--9--1754986829621.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.15):&lt;/strong&gt; ಸಮಾಜಕ್ಕೆ ಕೆಲಸ ಮಾಡುವವರು ಇಲ್ಲಿ ಯಾರು ಇಲ್ಲ. ಎಲ್ಲರೂ ತಮ್ಮ ತಮ್ಮ&zwnj; ಸ್ವಾರ್ಥಕ್ಕಾಗಿ ಈ ಟ್ರಸ್ಟ್&zwnj;ಗಳನ್ನು ಬಳಸಿದ್ದಾರೆ. ಎಷ್ಟೋ ಜನರು ಇದರಿಂದ ತಮ್ಮ ಆಸ್ತಿ ಮಾಡಿಕೊಂಡಿದ್ದಾರೆ. ಇದರಿಂದ ಸಮಾಜಕ್ಕೆ ಹೇಗೆ ಒಳ್ಳೆಯದಾಗುತ್ತೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ಶ್ರೀಗಳ ಉಚ್ಚಾಟನೆ ಕುರಿತು ಮಾತನಾಡಿ, ಉಚ್ಚಾಟನೆ ಮಾಡಿದವರು, ಮಾಡಿಸಿಕೊಂಡವರು ಇಬ್ಬರು ಅವರೇ ಇದ್ದಾರೆ.&lt;/p&gt;&lt;p&gt;ಸರ್ಕಾರವನ್ನು ಬ್ಲಾಕ್&zwnj;ಮೇಲ್ ಮಾಡಲು ಈ ಟ್ರಸ್ಟ್&zwnj;ಗಳು ಇದ್ದಾವೆ. ಹಿಂದೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ₹11 ಕೋಟಿ ಹಣ ಕೊಟ್ಟಿದ್ದಾರೆ. ಗ್ರಾಮ ಪಂಚಾಯತ್ ಪಿಡಿಒ ಸಹಿ ಕೂಡ ನಕಲಿ ಮಾಡಿದ್ದಾರೆ. ಹೀಗಿದ್ದಾಗ ಈ ಟ್ರಸ್ಟ್&zwnj; ಅನ್ನು ಹೇಗೆ ನಂಬುತ್ತಿರಿ? ಇವರು ಹೇಗೆ ಸಮಾಜಕ್ಕೆ ಒಳ್ಳೆಯದು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಈ ಕೂಡಲಸಂಗಮ ಟ್ರಸ್ಟ್ ಕೂಡ ಅದೆ ಇದೆ. ಅದು ಒಂದು ಖಾಸಗಿ ಆಸ್ತಿ ಆಗಿದೆ. ಈ ಎರಡೂ ಟ್ರಸ್ಟ್&zwnj;ಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ವಿಧಾನಸಭೆಯಲ್ಲಿ ಇದನ್ನು ಪ್ರಸ್ತಾಪ ಮಾಡಬೇಕು ಅಂದುಕೊಂಡೆ.&lt;/p&gt;&lt;p&gt;ಆದರೆ, ನಮ್ಮದೇ ಸರ್ಕಾರ ಇದ್ರೂ ಸ್ಪೀಕರ್&zwnj;ಗೆ ಹೇಳಿ ಇದು ಚರ್ಚೆಗೆ ಬಾರದಂತೆ ತಡೆದರು. ಈ ಟ್ರಸ್ಟ್&zwnj;ನವರು ಬ್ಲ್ಯಾಕ್&zwnj;ಮೇಲ್ ಮಾಡಿದ್ದಾರೆ. ನಮ್ಮ&zwnj; ಸಮಾಜದವರ 1 ಕೋಟಿ ಮತಗಳಿವೆ ಅಂತ ಹೇಳಿದ್ದಾರೆ ಎಂದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ದೂರು ವಿಚಾರವಾಗಿ ಮಾತನಾಡಿದ ಅವರು, ಸಂತ್ರಸ್ತೆಯ ವಿಡಿಯೋ ನಾನು ನೋಡಿದ್ದೇನೆ. ದೂರು ಕೊಟ್ಟಿಲ್ಲ ಅಂದ ಮೇಲೆ ತನಿಖೆ ಆಗಲಿ. ಅದು ಯಾರ ಸಹಿ ಇದೆ, ಡುಪ್ಲಿಕೇಟ್ ಇದೆಯೋ ಎಂಬುದು ತನಿಖೆ ಆಗಲಿ. ಅವರಿಗೆ ಶಿಕ್ಷೆ ಆಗಲಿ. ನಾವೇನು ಯಾರ ಪರವಾಗಿ ಮಾತನಾಡಲ್ಲ ಎಂದರು.&lt;/p&gt;&lt;h2&gt;&lt;strong&gt;ಎಫ್&zwnj;ಐಆರ್&zwnj; ಆಗಿದೆ&lt;/strong&gt;&lt;/h2&gt;&lt;p&gt;ಸ್ವಾಮೀಜಿಗಳ ಮೇಲೆ ಬಂದಿರುವ ಆಪಾದನೆಯಿಂದ ಅವರು ಮುಕ್ತ ಆಗಬೇಕು. ಅವರು ಏನು ಮಾಡಿಲ್ಲ ಅನ್ನೋದನ್ನ ಸಮಾಜಕ್ಕೆ ಹೇಳಬೇಕು. ಇದರಲ್ಲಿ ಏನಾಗಿದೆ ಡುಪ್ಲಿಕೇಟ್ ಸಹಿ ಆಗಿದೆ ಅಂತ ಸಂತ್ರಸ್ತೆ ಹೇಳಿದ್ದಾಳೆ. ಈಗಾಗಲೆ ಎಫ್&zwnj;ಐಆರ್&zwnj; ಆಗಿದೆ. ಪೊಲೀಸರು ಈಗ ತನಿಖೆ ನಡೆಸಿದ್ದಾರೆ. ಪೊಲೀಸರ ವರದಿ ಏನು ಬರುತ್ತೆ ನೋಡೋಣ. ಆದರೂ ಸ್ವಾಮೀಜಿಗಳಿಗೆ ಹೇಳಲು ಬಯಸುತ್ತೇನೆ, ಇದರಿಂದ ಮುಕ್ತ ಆಗಲು ಏನೇನು ಮಾಡಬೇಕು? ಸಮಾಜದಲ್ಲಿ ನಿಮ್ಮ ಬಗ್ಗೆ ಸಂಶಯ ಮೂಡಿದೆಯಲ್ಲ ಅದರಿಂದ ನೀವು ಹೊರಬರಲು ಪ್ರಯತ್ನ ಮಾಡಬೇಕು ಎಂದರು.&lt;/p&gt;&lt;p&gt;ಹರಿಹರ ಪಂಚನಸಾಲಿ ಪೀಠದ ಗಲಾಟೆ ವಿಚಾರಕ್ಕೆ ಪ್ರಕ್ರಿಯಿಸಿದ ಯತ್ನಾಳ, ಲಿಂಗಾಯತ ಪಂಚಮಸಾಲಿಯ ಎರಡು ಟ್ರಸ್ಟ್&zwnj;ನಲ್ಲಿ ನಡೆದಿದೆ. ನೋಡಿ ಎರಡು ಪೀಠದ ಟ್ರಸ್ಟ್&zwnj;ಗಳು ನಂಬಿಕೆ ಕಳೆದುಕೊಂಡಿವೆ. ಯಾರು ಹಣ ತಿಂದಿದ್ದಾರೆ ಅಂತಾ ನಡೆದಿದೆ. ಇದು ಎರಡು ಕಡೆ ಅದೆ ನಡೆದಿದೆ. ಇದನ್ನ ಖಾಸಗಿ ಆಸ್ತಿ ಮಾಡಿಕೊಂಡವರು ಇದ್ದಾರೆ. ಎರಡೂ ಟ್ರಸ್ಟ್&zwnj;ನವರು ಅವರೇ ಇದ್ದಾರೆ. ಇವರಿಂದ ಸಮಾಜಕ್ಕೆ ನ್ಯಾಯ ಸಿಗಲ್ಲ. ಯಾರು ಪ್ರಾಮಾಣಿಕರಿದ್ದಾರೆ ಎಂದು ಪ್ರಶ್ನೆ ಮಾಡಿದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basanagouda-patil-yatnal-slams-trusts-panchamasali-peetha-controversy-gvd/articleshow-n4p8ruo"/>
        </item>
        <item>
            <title><![CDATA[ನಾನು ಸಿಎಂ ಆದರೆ ಯೋಗಿ ಸ್ಟೈಲ್ ಆಡಳಿತ, ಮುಸ್ಲಿಮರ ಬಗ್ಗೆ ಯತ್ನಾಳ್ ಹೊಸ ರಾಜಕೀಯ ಬಾಂಬ್!]]></title>
            <link>https://kannada.asianetnews.com/politics/karnataka-politics-yatnal-says-i-will-govern-in-yogi-style-if-i-become-cm-rav/articleshow-opzgwev</link>
            <guid isPermaLink="true">https://kannada.asianetnews.com/politics/karnataka-politics-yatnal-says-i-will-govern-in-yogi-style-if-i-become-cm-rav/articleshow-opzgwev</guid>
            <pubDate>Thu, 02 Apr 2026 12:41:19 +0530</pubDate>
            <description><![CDATA[&lt;p&gt;ಸಚಿವ ಎಂ.ಬಿ. ಪಾಟೀಲ್ ಅವರ ಸವಾಲಿಗೆ ತಿರುಗೇಟು ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶದ ಯೋಗಿ ಮಾದರಿ ಆಡಳಿತ ನೀಡುವುದಾಗಿ ಹೇಳಿದ್ದಾರೆ. ತಮ್ಮ ಮೊದಲ ಸಂಪುಟ ಸಭೆಯಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ತೆಗೆದುಹಾಕುವುದಾಗಿ ಸ್ಫೋಟಕ ಹೇಳಿಕೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6gb15wm6kksfbhqgx43f0d,imgname----------------------42--1775113700539.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.2): &lt;/strong&gt;ದಾವಣಗೆರೆ-ಬಾಗಲಕೋಟೆ ಉಪಚುನಾವಣಾ ಕಣ ಕಾವೇರುತ್ತಿದೆ. ಈ ನಡುವೆ ಸಚಿವ ಎಂ.ಬಿ. ಪಾಟೀಲ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ಮುಂದುವರಿದಿದೆ.'ಯತ್ನಾಳ್&zwnj;ಗೆ ಸ್ವಾಭಿಮಾನವಿದ್ದರೆ ಬಿಜೆಪಿಯನ್ನು ಸೋಲಿಸಲಿ' ಎಂಬ ಸಚಿವರ ಸವಾಲಿಗೆ ಯತ್ನಾಳ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು.&lt;/p&gt;&lt;h2&gt;ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ: ಯತ್ನಾಳ್&lt;/h2&gt;&lt;p&gt;ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು, ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ನಾನು ಯಾರ ಮುಂದೆಯೂ ಹೋಗಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಬೇಡುವುದಿಲ್ಲ. ಹನುಮ ಜಯಂತಿಯ ಈ ಪವಿತ್ರ ದಿನದಂದು ಆಂಜನೇಯನ ಸಾಕ್ಷಿಯಾಗಿ ಹೇಳುತ್ತೇನೆ, ಒಂದು ದಿನ ಅವರೇ(ಬಿಜೆಪಿ) ಅಪ್ಪ-ಮಕ್ಕಳನ್ನು (ಯಡಿಯೂರಪ್ಪ ಕುಟುಂಬ) ಕೈಬಿಟ್ಟು ನನ್ನನ್ನು ಕರೆಯುತ್ತಾರೆ. ನಾನು ನಾಟಕವಾಡಿ ಪಕ್ಷದಲ್ಲಿ ಇರುವವನಲ್ಲ ಎಂದು ಗುಡುಗಿದರು.&lt;/p&gt;&lt;h3&gt;ನಾನು ಅಧಿಕಾರಕ್ಕೆ ಬಂದರೆ ಯೋಗಿ ಮಾದರಿ ಆಡಳಿತ ನಡೆಸ್ತೇನೆ&lt;/h3&gt;&lt;p&gt;ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಯತ್ನಾಳ್ ಅವರು, 'ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಮಾದರಿಯಲ್ಲೇ ಆಡಳಿತ ನಡೆಸುತ್ತೇನೆ. ನನ್ನ ಮೊದಲ ಸಂಪುಟ ಸಭೆಯಲ್ಲೇ ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ. ಅವರ ಬದಲಿಗೆ ನಿಜವಾದ ಅಲ್ಪಸಂಖ್ಯಾತರಾದ ಮರಾಠರು, ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಆ ಸ್ಥಾನಮಾನ ನೀಡುತ್ತೇನೆ' ಎಂದು ಸ್ಫೋಟಕ ಹೇಳಿಕೆ ನೀಡಿದರು.&lt;/p&gt;&lt;p&gt;&lt;strong&gt;ಎಂ.ಬಿ. ಪಾಟೀಲ್&zwnj;ಗೆ ಯತ್ನಾಳ್ ಸವಾಲ್&lt;/strong&gt;&lt;/p&gt;&lt;p&gt;ಸಚಿವ ಎಂ.ಬಿ. ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, 'ನನಗೆ ಸ್ವಾಭಿಮಾನದ ಪಾಠ ಮಾಡುವ ಎಂ.ಬಿ. ಪಾಟೀಲ್ ಮೊದಲು ಬಾಗೇವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದನ್ನು ನಿಲ್ಲಿಸಲಿ. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಯೇ ರಾತ್ರಿ ಹೊತ್ತು ಮುಸುಕು ಹಾಕಿಕೊಂಡು ಬಂದು ಪಾಟೀಲ್ ವಿರುದ್ಧ ಪ್ರಚಾರ ಮಾಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿರುವ ಪಾಟೀಲರಿಗೆ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ' ಎಂದು ವ್ಯಂಗ್ಯವಾಡಿದರು.&lt;/p&gt;&lt;p&gt;&lt;strong&gt;ಬಾಗಲಕೋಟೆಯಲ್ಲಿ ಚರಂತಿಮಠ ಪರ ಪ್ರಚಾರ&lt;/strong&gt;&lt;/p&gt;&lt;p&gt;ವೀರಣ್ಣ ಚರಂತಿಮಠ ಅವರು ನನ್ನ ಆತ್ಮೀಯ ಸ್ನೇಹಿತರು. ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರು ನನ್ನನ್ನು ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ಹಾಗಾಗಿ ನಾನು ಅವರ ಪರವಾಗಿ ಪ್ರಚಾರಕ್ಕೆ ತೆರಳುತ್ತಿದ್ದೇನೆ ಎಂದು ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayapura</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/karnataka-politics-yatnal-says-i-will-govern-in-yogi-style-if-i-become-cm-rav/articleshow-opzgwev"/>
        </item>
        <item>
            <title><![CDATA[ಜಯಮೃತ್ಯುಂಜಯ ಶ್ರೀ ವಿರುದ್ಧ ದೂರು ನೀಡಿದ್ದ ಮಹಿಳೆಗಾಗಿ ಹುಡುಕಾಟ; ಮೊಬೈಲ್ ನಾಟ್‌ ರೀಚಬಲ್‌]]></title>
            <link>https://kannada.asianetnews.com/karnataka-districts/police-searching-woman-who-filed-complaint-against-jayamruthyunjaya-seer-mobile-not-reachable-rav/articleshow-p1gekrd</link>
            <guid isPermaLink="true">https://kannada.asianetnews.com/karnataka-districts/police-searching-woman-who-filed-complaint-against-jayamruthyunjaya-seer-mobile-not-reachable-rav/articleshow-p1gekrd</guid>
            <pubDate>Thu, 09 Apr 2026 12:59:20 +0530</pubDate>
            <description><![CDATA[&lt;p&gt;ಕೂಡಲಸಂಗಮ ಪೀಠದ ಮಾಜಿ ಸ್ವಾಮೀಜಿ ಬಸವ ಜಯಮೃತ್ಯುಂಜಯ ಅವರು, ತಮ್ಮ ವಿರುದ್ಧ 3 ಕೋಟಿ ರು. ಹಣಕ್ಕಾಗಿ ಹನಿಟ್ರ್ಯಾಪ್ ಸಂಚು ರೂಪಿಸಿ ಹಲ್ಲೆ ನಡೆಸಲಾಗಿದೆ ಎಂದು ಮಹಿಳೆ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನನ್ವಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrhwrnjt20q0t76f84km0b9,imgname-----------------------2026-04-09t125119.322-1775719310002.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ವಿಜಯಪುರ: &lt;/strong&gt;3 ಕೋಟಿ ರು. ಹಣಕ್ಕಾಗಿ ಬೇಡಿಕೆ ಇಟ್ಟು, ತಮ್ಮ ವಿರುದ್ಧ ಹನಿಟ್ರ್ಯಾಪ್&zwnj;ಗೆ ಸಂಚು ನಡೆಸಿದ್ದಾಳೆ. ಅಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ದೂರಿ ಕೂಡಲಸಂಗಮ ಪೀಠದ ಮಾಜಿ ಸ್ವಾಮೀಜಿ ಬಸವ ಜಯಮೃತ್ಯುಂಜಯ ಅವರು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಏ.4ರಂದು ದಾಖಲಿಸಿದ ದೂರಿನನ್ವಯ ಮಹಿಳೆ ಸೇರಿ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.&lt;/p&gt;&lt;p&gt;3 ಕೋಟಿ ರು.ಗೆ ಬೇಡಿಕೆ ಇಟ್ಟು ತಮ್ಮ ವಿರುದ್ಧ ಹನಿಟ್ರ್ಯಾಪ್&zwnj;ಗೆ ಸಂಚು ರೂಪಿಸಿದ್ದಾಳೆ. ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಮಹಿಳೆ ಹಾಗೂ ಇತರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾಮೀಜಿ ದೂರಿನಲ್ಲಿ ಆರೋಪಿಸಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಮಹಿಳೆ ಕೂಡ ಸ್ವಾಮೀಜಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಹಿಳೆಯಿಂದ ಅಧಿಕೃತ ದೂರು ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆದರೆ, ಮಹಿಳೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಧಿಕೃತ ವಿಳಾಸದಲ್ಲೂ ಇಲ್ಲ, ಮೊಬೈಲ್&zwnj; ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ, ಮಹಿಳೆ ಹಾಗೂ ಖಾಸಗಿ ಚಾನಲ್ ಎಂಡಿ ಸೇರಿದಂತೆ ಆರೋಪಿಗಳಿಗಾಗಿ ಪೊಲೀಸರು ಬೆಂಗಳೂರು, ಮಂಡ್ಯ, ವಿಜಯಪುರ, ಪಕ್ಕದ ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/police-searching-woman-who-filed-complaint-against-jayamruthyunjaya-seer-mobile-not-reachable-rav/articleshow-p1gekrd"/>
        </item>
        <item>
            <title><![CDATA['ನಿನಗೆ ಹುಟ್ಟಿದ ಮಗ ನೋಡಲು ನಿನ್ನಂತೆ ಕಾಣುವುದಿಲ್ಲ' ಎಂದಿದ್ದಕ್ಕೆ ಮಗನನ್ನ ನದಿಗೆ ತಳ್ಳಿ ಹತ್ಯೆಗೈದ ಅಪ್ಪ!]]></title>
            <link>https://kannada.asianetnews.com/karnataka-districts/vijayapura-shocking-father-kills-son-over-resemblance-issue-mallikarjun-arekeri-sat/articleshow-p7ll1bg</link>
            <guid isPermaLink="true">https://kannada.asianetnews.com/karnataka-districts/vijayapura-shocking-father-kills-son-over-resemblance-issue-mallikarjun-arekeri-sat/articleshow-p7ll1bg</guid>
            <pubDate>Tue, 14 Apr 2026 15:16:30 +0530</pubDate>
            <description><![CDATA[&lt;p&gt;ವಿಜಯಪುರದಲ್ಲಿ, ತನ್ನ ಮಗ ತನ್ನಂತೆ ಕಾಣುವುದಿಲ್ಲ ಎಂಬ ಜನರ ಮಾತಿನಿಂದ ಅನುಮಾನಗೊಂಡ ತಂದೆ, 6 ವರ್ಷದ ಮಗನನ್ನು ಮಹಾರಾಷ್ಟ್ರದ ಕೃಷ್ಣಾ ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ. ಶಾಲೆಯಲ್ಲಿ ಸೇರಿಸುವುದಾಗಿ ನಂಬಿಸಿ ಕರೆದೊಯ್ದು ಈ ಕೃತ್ಯ ಎಸಗಿದ್ದು, ಪತ್ನಿಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5nrq6frga686abgnx0tvwa,imgname-vijayapura-mallikarjuna-son-death-1776159579341.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.14): &lsquo;ತ&lt;/strong&gt;ನಗೆ ಹುಟ್ಟಿದ ಮಗ ನೋಡಲು ನನ್ನಂತೆ ಇಲ್ಲ, ಅವನ ನಡವಳಿಗೆ ಮತ್ತು ಬುದ್ಧಿಯೂ ನನ್ನಂತೆ ಇಲ್ಲ&rsquo;ವೆಂದು ಸ್ವತಃ ಹೆತ್ತ ತಂದೆಯೇ 6 ವರ್ಷದ ಮಗನನ್ನು ನದಿಗೆ ತಳ್ಳಿ ಕೊಲೆ ಮಾಡಿರುವ ಅತೀ ಅಮಾನುಷ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತನೇ ಈ ಘೋರ ಕೃತ್ಯ ಎಸಗಿದ ಆರೋಪಿ. ಈತನ ಪುತ್ರ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6 ವರ್ಷ) ಕೊಲೆಯಾದ ದುರ್ದೈವಿ ಬಾಲಕ. ನಾಗಠಾಣ ಗ್ರಾಮದಲ್ಲಿ ವಾಸವಿದ್ದ ಮಲ್ಲಿಕಾರ್ಜುನನಿಗೆ ತನ್ನ ಮಗನ ಬಗ್ಗೆ ಗ್ರಾಮದ ಕೆಲವರು ಪದೇ ಪದೇ ಚೇಡಿಸುತ್ತಿದ್ದರು. 'ನಿನ್ನ ಮಗ ನೋಡಲು ನಿನ್ನಂತಿಲ್ಲ, ಅವನ ಹೋಲಿಕೆ ನಿನಗೆ ಮ್ಯಾಚ್ ಆಗಲ್ಲ' ಎಂದು ಗ್ರಾಮಸ್ಥರು ನೀಡುತ್ತಿದ್ದ ಚುಚ್ಚುಮಾತುಗಳು ಮಲ್ಲಿಕಾರ್ಜುನನ ಮನಸ್ಸಿನಲ್ಲಿ ಅನುಮಾನದ ಕಿಚ್ಚು ಹಚ್ಚಿದ್ದವು.&lt;/p&gt;&lt;h2&gt;&lt;strong&gt;ಮಗುವಿನ ಹತ್ಯೆಗೆ ಸಂಚು:&lt;/strong&gt;&lt;/h2&gt;&lt;p&gt;ದಿನನಿತ್ಯದ ಈ ಚೇಷ್ಟೆ ಮತ್ತು ಅಪಹಾಸ್ಯದಿಂದ ರೋಸಿಹೋದ ಮಲ್ಲಿಕಾರ್ಜುನ, ಮಗನನ್ನು ಹತ್ಯೆ ಮಾಡಲು ನಿರ್ಧರಿಸಿದನು. ಕಳೆದ ಮಾರ್ಚ್ 16 ರಂದು ಮಗ ಸಿದ್ದಾರ್ಥನನ್ನು ಶಾಲೆಗೆ ಸೇರಿಸುವುದಾಗಿ ನಂಬಿಸಿ ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ನೇರವಾಗಿ ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿಯ ಕೃಷ್ಣಾ ನದಿ ತೀರಕ್ಕೆ ಮಗುವನ್ನು ಕರೆದೊಯ್ದಿದ್ದಾನೆ. ಯಾರು ಇಲ್ಲದ ಸಮಯದಲ್ಲಿ, ತನ್ನ ಪುತ್ರನನ್ನು ನದಿಗೆ ತಳ್ಳಿದ್ದಾನೆ. ಮಗು ನೀರಿನಲ್ಲಿ ಮುಳುಗುವುದನ್ನು ನೋಡುತ್ತಾ ನಿಂತ ಈ ಪಾಪಿ ತಂದೆ, ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.&lt;/p&gt;&lt;h2&gt;&lt;strong&gt;ಸುಳ್ಳು ಹೇಳಿ ನಾಟಕವಾಡಿದ ಆರೋಪಿ:&lt;/strong&gt;&lt;/h2&gt;&lt;p&gt;ಹತ್ಯೆಯ ನಂತರ ಮನೆಗೆ ಮರಳಿದ ಮಲ್ಲಿಕಾರ್ಜುನ, ಮಗನನ್ನು ಸಿಂದಗಿ ಬಳಿಯ ಶಾಲೆಯೊಂದಕ್ಕೆ ಸೇರಿಸಿದ್ದು, ಅಲ್ಲಿನ ಹಾಸ್ಟೆಲ್&zwnj;ನಲ್ಲಿ ಉಳಿಸಿದ್ದಾಗಿ ತನ್ನ ಪತ್ನಿ ಭಾಗ್ಯಶ್ರೀ ಅವರಿಗೆ ಸುಳ್ಳು ಹೇಳಿ ನಂಬಿಸಿದ್ದಾನೆ. ಪತ್ನಿ ಮಗನ ಬಗ್ಗೆ ಕೇಳಿದಾಗಲೆಲ್ಲಾ ಒಂದಲ್ಲ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದನು. ಏಪ್ರಿಲ್ 1 ರಂದು ಬಾಲಕ ಸಿದ್ದಾರ್ಥನ ಹುಟ್ಟುಹಬ್ಬವಿತ್ತು. ಮಗನ ಜನ್ಮದಿನದ ಅಂಗವಾಗಿ ಅವನನ್ನು ಮನೆಗೆ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರೀ ಪಟ್ಟು ಹಿಡಿದರು. ಈ ವೇಳೆ ಗಾಬರಿಗೊಂಡ ಮಲ್ಲಿಕಾರ್ಜುನ ಮನೆಯಿಂದ ಓಡಿ ಹೋಗಿದ್ದಾನೆ. ಇದರಿಂದ ಪತ್ನಿಗೆ ತೀವ್ರ ಅನುಮಾನ ಮೂಡಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಲ್ಲಿಕಾರ್ಜುನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಮಗನನ್ನು ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.&lt;/p&gt;&lt;h3&gt;&lt;strong&gt;ಪೊಲೀಸ್ ತನಿಖೆ ಮತ್ತು ಶವ ಪತ್ತೆ:&lt;/strong&gt;&lt;/h3&gt;&lt;p&gt;ಈ ಕುರಿತು ಮಾಹಿತಿ ನೀಡಿದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, 'ಮಾರ್ಚ್ 16 ರಂದು ಮಹಾರಾಷ್ಟ್ರದ ಕರಾಡ್&zwnj;ನ ಮಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಬಾಲಕನ ಶವವೊಂದು ಪತ್ತೆಯಾಗಿತ್ತು. ಮಹಾರಾಷ್ಟ್ರ ಪೊಲೀಸರು ಹೊರಡಿಸಿದ್ದ ಪ್ರಕಟಣೆ ಮತ್ತು ಮಲ್ಲಿಕಾರ್ಜುನ ನೀಡಿದ ಹೇಳಿಕೆಗಳನ್ನು ತಾಳೆ ನೋಡಿದಾಗ, ಅದು ಸಿದ್ದಾರ್ಥನ ಶವ ಎಂದು ದೃಢಪಟ್ಟಿದೆ' ಎಂದು ತಿಳಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಲ್ಲಿಕಾರ್ಜುನ ಅರಕೇರಿಯನ್ನು ಬಂಧಿಸಲಾಗಿದೆ. ಜನರ ಚುಚ್ಚು ಮಾತಿನಿಂದ ಪ್ರೇರೇಪಿತಗೊಂಡು ಹೆತ್ತ ಮಗನನ್ನೇ ಬಲಿ ಪಡೆದ ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-shocking-father-kills-son-over-resemblance-issue-mallikarjun-arekeri-sat/articleshow-p7ll1bg"/>
        </item>
        <item>
            <title><![CDATA[ಮೀಸಲಾತಿ ಹೆಚ್ಚಿಸಲು ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲಿ:  ವಿ.ಎಸ್.ಉಗ್ರಪ್ಪ]]></title>
            <link>https://kannada.asianetnews.com/karnataka-districts/vs-ugrappa-sc-st-reservation-karnataka-fake-caste-certificate-gvd/articleshow-pxn9lg4</link>
            <guid isPermaLink="true">https://kannada.asianetnews.com/karnataka-districts/vs-ugrappa-sc-st-reservation-karnataka-fake-caste-certificate-gvd/articleshow-pxn9lg4</guid>
            <pubDate>Tue, 21 Apr 2026 19:43:56 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರ ಪ್ರಸ್ತುತ 56,437 ಹುದ್ದೆಗಳ ಭರ್ತಿಯಲ್ಲಿ ಶೇ.3 ರಷ್ಟು ಮಾತ್ರ ಮೀಸಲಾತಿ ಅನ್ವಯವಾಗುವಂತೆ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpr67ffh0z73tkgzy6p2nsh6,imgname-bll-1776780819953.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.21): &lt;/strong&gt;ರಾಜ್ಯ ಸರ್ಕಾರ ಪ್ರಸ್ತುತ 56,437 ಹುದ್ದೆಗಳ ಭರ್ತಿಯಲ್ಲಿ ಶೇ.3 ರಷ್ಟು ಮಾತ್ರ ಮೀಸಲಾತಿ ಅನ್ವಯವಾಗುವಂತೆ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಇದರಿಂದ ಪರಿಶಿಷ್ಟ ಪಂಗಡದ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಾಲ್ಮಿಕಿ ನಾಯಕ ವಿ.ಎಸ್.ಉಗ್ರಪ್ಪ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಸುಳ್ಳು ಜಾತಿ (ನಕಲಿ) ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ.&lt;/p&gt;&lt;p&gt;ಪರಿಶಿಷ್ಟ ಜಾತಿಗಳಿಗೆ ಶೇ.15 ರಿಂದ ಶೇ.17 ಪರಿಶಿಷ್ಟ ಪಂಗಡಗಳಿಗೆ ಶೇ.3 ರಿಂದ ಶೇ.7 ಹೆಚ್ಚಿಸಿ ಕಾಯ್ದೆಯನ್ನು ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲು ಸಂವಿಧಾನದ 9ನೇ ಪರಿಚ್ಚೇದಕ್ಕೆ ಸೇರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ವಹಿಸಬೇಕು. ಕರ್ನಾಟಕದ ಸಂಸದರು ಕೇಂದ್ರ ಸರ್ಕಾರಕ್ಕೆ ಮೀಸಲಾತಿ ಬಗ್ಗೆ ಒತ್ತಡ ತರಬೇಕು ಎಂದರು.ಸರ್ಕಾರ ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಬೇಕು. ಶೇ.56ರಷ್ಟು ಮೀಸಲಾತಿಯನ್ನು ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.&lt;/p&gt;&lt;p&gt;ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಮಾನ ಮನಸ್ಕರ ವೇದಿಕೆ ಬೆಂಗಳೂರು ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರದ ಚಿಂತನ ಮಂಥನ ಕಾರ್ಯಕ್ರಮವನ್ನು ಸಮಾಜದ ಬಂಧುಗಳ ಜತೆಗೆ ನಡೆಸಲಾಗುವುದು. ಶೇ.56 ಎಸ್ಸಿ, ಎಸ್ಟಿ ಒಬಿಸಿ ಮೀಸಲಾತಿಗೆ ನಡೆಯುತ್ತಿರುವ ಸಂಘರ್ಷ, ಅದಕ್ಕೆ ಆಗಿರುವ ಹಿನ್ನಡೆಗೆ ನಾನು ಆ ಜನಾಂಗದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಕುಲಶಾಸ್ತ್ರ ಅಧ್ಯಯನ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ 17 ಪರ್ಸೆಂಟ್ ಎಸ್ಸಿ, 6.95 ಪರ್ಸೆಂಟ್ ಎಸ್&zwnj;ಟಿಗಳು, 33 ಪರ್ಸೆಂಟ್ ಒಬಿಸಿಗಳು ಇದ್ದಾರೆ. ಆದರೆ, ಮೋದಿಯವರು, ಕೋಳಿ ಸಮಾಜ, ಕುರುಬರನ್ನು, ಗೊಲ್ಲರನ್ನು ಎಸ್ಟಿಗೆ ಸೇರಿಸುತ್ತೇವೆ ಎಂದು ಹೇಳುತ್ತಾರೆ. 341, 343 ಆರ್ಟಿಕಲ್ ಪ್ರಕಾರ ಮೂಲಕ ಅರ್ಹರಿದ್ದವರಿಗೆ ಎಸ್ಸಿ, ಎಸ್ಟಿ ಮಾಡಲು ಅವಕಾಶವಿದೆ. ಆದರೆ, ಯಾವುದೇ ಸಮಾಜವನ್ನು ಎಸ್ಸಿ, ಎಸ್ಟಿ ಮಾಡಬೇಕಾದರೆ ಕುಲಶಾಸ್ತ್ರ ಅಧ್ಯಯನ ಮಾಡಿಸಬೇಕು. ಸೇರಿಸಿದ ದಿನವೇ ಒಬಿಸಿನಲ್ಲಿ ಇರುವ ಪರ್ಸೆಂಟೇಜ್ ಇಲ್ಲಿಗೆ ತರಬೇಕು. ಕಾನೂನು ಬಾಹಿರವಾಗಿ ಸುಳ್ಳು ಪ್ರಮಾಣಪತ್ರ ತೆಗೆದುಕೊಳ್ಳುವುದು ಹಾಗೂ ಕೊಡಿಸೋದು ಮಾಡಿದರೆ ಅದು ತಪ್ಪು. 2000ನೇ ಇಸ್ವಿಯಿಂದ 2 ಲಕ್ಷ 39 ಸಾವಿರ ಜನರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ವಿವರಿಸಿದರು.&lt;/p&gt;&lt;p&gt;ವಿಜಯಪುರ ಜಿಲ್ಲೆಯೊಂದರಲ್ಲೇ 56 ಸಾವಿರ ಜನರು ಸುಳ್ಳು ಎಸ್ಟಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಕೆಲವು ರಾಜಕಾರಣಿಗಳು ಓಟ್ ಬ್ಯಾಂಕಿಗೋಸ್ಕರ ಸುಳ್ಳು ಸರ್ಟಿಫಿಕೇಟ್ ಕೊಡಿಸುವಲ್ಲಿ ಕಾಂಪಿಟೇಷನ್ ಮಾಡಬೇಡಿ. ಕಾನೂನಾತ್ಮಕವಾಗಿ ಅರ್ಹರಿದ್ದವರಿಗೆ ಕೊಡಿಸಿ. ಕಾನೂನಾತ್ಮಕವಾಗಿ ಮೊದಲು ಅವರನ್ನು ಎಸ್ಸಿ, ಎಸ್ಟಿಗೆ ಸೇರಿಸಿ ಪ್ರಮಾಣಪತ್ರ ಕೊಡಿಸಿ ಎಂದ ಅವರು, ಇನ್ನು ಸಿಎಂ, ಡಿಸಿಎಂ ಅವರು ಸೀನಿಯರ್&zwnj; ಕೌನ್ಸಿಲ್&zwnj;ರನ್ನು ನೇಮಿಸಿ ತಡೆಯಾಜ್ಞೆ ತೆರವುಗೊಳಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅನುಭವಿಸಬೇಕಾಗುತ್ತದೆ ಎಂದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/vs-ugrappa-sc-st-reservation-karnataka-fake-caste-certificate-gvd/articleshow-pxn9lg4"/>
        </item>
        <item>
            <title><![CDATA[ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬೆಂಗಳೂರು ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ, ಮಹಿಳಾ ಆಯೋಗಕ್ಕೆ ದೂರು]]></title>
            <link>https://kannada.asianetnews.com/state/basavajaya-mruthyunjaya-swamiji-sexual-harassment-allegations-counter-complaint-3-crore-rs-blackmail-claim-surfaces-gdp/articleshow-qlyxe11</link>
            <guid isPermaLink="true">https://kannada.asianetnews.com/state/basavajaya-mruthyunjaya-swamiji-sexual-harassment-allegations-counter-complaint-3-crore-rs-blackmail-claim-surfaces-gdp/articleshow-qlyxe11</guid>
            <pubDate>Tue, 07 Apr 2026 12:49:03 +0530</pubDate>
            <description><![CDATA[ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಸ್ವಾಮೀಜಿ ತಮ್ಮ ತೇಜೋವಧೆ ಮಾಡಲು 3 ಕೋಟಿ ರೂಪಾಯಿಗಾಗಿ ಮಹಿಳೆ ಬ್ಲಾಕ್&zwnj;ಮೇಲ್ ಮಾಡುತ್ತಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01gh9e470ee4sat6gzmbadpk5y,imgname-basavajaya-mruthyunjaya-swamiji.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪ್ರಮುಖ ನಾಯಕ, ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿರುವ ಪ್ರಕರಣ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಬೆಂಗಳೂರಿನ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ.&lt;/p&gt;&lt;p&gt;ಮಹಿಳೆ ನೀಡಿದ ದೂರಿನ ಪ್ರಕಾರ, ಸ್ವಾಮೀಜಿ ತಮ್ಮ ಮೇಲೆ ಅಸಭ್ಯ ವರ್ತನೆ ತೋರಿದ್ದು, ಬೆತ್ತಲೆ ವಿಡಿಯೋ ಕಾಲ್ ಮಾಡುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಆರೋಪಗಳು ಹೊರಬಿದ್ದ ತಕ್ಷಣವೇ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಸ್ವಾಮೀಜಿ ಕಡೆಯಿಂದಲೂ ಪ್ರತಿದೂರು ದಾಖಲಾಗಿರುವುದು ಗಮನಾರ್ಹ ಸಂಗತಿಯಾಗಿದೆ.&lt;/p&gt;&lt;h2&gt;ಸ್ವಾಮೀಜಿ ಪ್ರತಿದೂರು&lt;/h2&gt;&lt;p&gt;ಇನ್ನೊಂದೆಡೆ, ಜಯಮೃತ್ಯುಂಜಯ ಸ್ವಾಮೀಜಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್&zwnj;ಐಆರ್ ದಾಖಲಿಸಿಕೊಂಡಿದ್ದಾರೆ. ಸ್ವಾಮೀಜಿ ತಮ್ಮ ದೂರಿನಲ್ಲಿ, ಸಂಬಂಧಿತ ಮಹಿಳೆ ತಾನು ಅನಾಥಾಶ್ರಮ ನಡೆಸುತ್ತಿರುವುದಾಗಿ ಹೇಳಿ ಪರಿಚಯ ಮಾಡಿಕೊಂಡಿದ್ದಳು ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಪರಿಚಯವಾದ ನಂತರ ಆಕೆ ತನ್ನ ಬಳಿ ಹಣಕಾಸಿನ ನೆರವು ಕೇಳುತ್ತಾ ಬಂದಿದ್ದು, ಕ್ರಮೇಣ ಹಣಕ್ಕಾಗಿ ಒತ್ತಡ ಹೇರುತ್ತಿದ್ದಳು ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳು ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಿರುವ ಅವರು, ಕೆಲವು ರಾಜಕೀಯ ವ್ಯಕ್ತಿಗಳ ಪ್ರಚೋದನೆಯಿಂದ ತಮ್ಮ ತೇಜೋವಧೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.&lt;/p&gt;&lt;h2&gt;3 ಕೋಟಿಗೆ ಮಹಿಳೆ ಬೇಡಿಕೆ&lt;/h2&gt;&lt;p&gt;ಹಣ ನೀಡಲು ನಿರಾಕರಿಸಿದ ಬಳಿಕ, ಆ ಮಹಿಳೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬ್ಲಾಕ್&zwnj;ಮೇಲ್ ಮಾಡಲು ಯತ್ನಿಸಿದ್ದಾಳೆ ಎಂದು ಸ್ವಾಮೀಜಿ ಹೇಳಿದ್ದಾರೆ. ಅಲ್ಲದೆ, ತಾವು ಮಠಕ್ಕೆ ತೆರಳುತ್ತಿದ್ದ ವೇಳೆ ತಮ್ಮ ಕಾರನ್ನು ಅಡ್ಡಗಟ್ಟಿ ಹಣದ ಬೇಡಿಕೆ ಇಟ್ಟಿದ್ದಳು ಹಾಗೂ ಹಣ ನೀಡದಿದ್ದಕ್ಕೆ ಹಲ್ಲೆ ನಡೆಸಿದ್ದಾಳೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಮೂರು ಕೋಟಿ ರೂಪಾಯಿ ಹಣ ನೀಡದಿದ್ದರೆ ತಮ್ಮ ವಿರುದ್ಧ ಅಪಪ್ರಚಾರ ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ.&amp;nbsp;&lt;/p&gt;&lt;p&gt;ಮಹಿಳೆ ಬೆಂಗಳೂರು ಕಮಿಷನರ್ ಗೆ ಇ ಮೇಲ್ ಮೂಲಕ ದೂರು ನೀಡಿದ್ದಾರೆ. ಮಹಿಳಾ ಆಯೋಗಕ್ಕೆ ಒಬ್ಬ ವ್ಯಕ್ತಿ ಬಂದು ದೂರು ನೀಡಿದ್ದಾನೆ. ದೂರು ಸ್ವೀಕಾರ ಮಾಡಿದ ಮಹಿಳಾ ಆಯೋಗ ಬಳಿಕ ಮಹಿಳೆ ಹೆಸರು ,ದೂರವಾಣೆ ಸಂಖ್ಯೆ ಸರಿಯಾಗಿ ಕೊಡುವಂತೆ ವ್ಯಕ್ತಿಗೆ ಕೇಳಿದೆ. ನಂತರ ಆ ವ್ಯಕ್ತಿ ಬೇರೆ ದೂರವಾಣೆ ಸಂಖ್ಯೆ ನೀಡಿ ತೆರಳಿದ್ದಾರೆ. ಈ ಬಗ್ಗೆ ಸತ್ಯಾತ್ಯತೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಮಹಿಳಾ ಆಯೋಗದ ಉನ್ನತ ಮೂಲಗಳ ಮಾಹಿತಿ ನೀಡಿದೆ.&lt;/p&gt;&lt;h2&gt;ಮಹಿಳೆ ನೀಡಿರುವ ದೂರಿನಲ್ಲಿ ಏನಿದೆ?&lt;/h2&gt;&lt;p&gt;ನಾನು Basava Jaya Mrutyunjaya Swamiji ಅವರ ಭಕ್ತೆಯಾಗಿದ್ದೆ. ವರು ನನ್ನನ್ನು ಮಠಕ್ಕೆ ಕರೆಸಿ &ldquo;ಪ್ರಸಾದ ಕೊಡುತ್ತೇನೆ&rdquo; ಎಂದು ಹೇಳಿ ನನ್ನ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ನನ್ನೊಂದಿಗೆ ದೈಹಿಕವಾಗಿ ತಪ್ಪಾಗಿ ವರ್ತಿಸಿದರು. ಸಮಯದಲ್ಲಿ ನನ್ನ ತಿಳುವಳಿಕೆಯಿಲ್ಲದೆ ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋವನ್ನು ಬಳಸಿ ಅವರು ನನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದು, ಪ್ರತಿ ರಾತ್ರಿ ಫೋನ್ ಮಾಡಿ ಬೆತ್ತಲೆ ವಿಡಿಯೋ ಕಾಲ್ ಮಾಡು, ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಕಾರಣದಿಂದ ನನಗೆ ಭಯ, ಮಾನಸಿಕ ಒತ್ತಡ ಹಾಗೂ ಅವಮಾನ ಉಂಟಾಗಿದೆ.ಆದ್ದರಿಂದ, ಮೇಲ್ಕಂಡ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ FIR ದಾಖಲಿಸಿ ತನಿಖೆ ನಡೆಸುವಂತೆ ವಿನಂತಿಸುತ್ತೇನೆ. ಎಂದು ಬೆಂಗಳೂರಿನ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಪರಸ್ಪರ ವಿರುದ್ಧ ಆರೋಪ-ಪ್ರತ್ಯಾರೋಪಗಳಿಂದ ಈ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಸತ್ಯಾಸತ್ಯತೆ ತಿಳಿಯಲು ಸಮಗ್ರ ತನಿಖೆ ಅಗತ್ಯವಾಗಿದೆ.&lt;/p&gt;]]></content:encoded>
            <category>vijayapura</category>
            <dc:creator>Gowthami K</dc:creator>
            <atom:link href="https://kannada.asianetnews.com/state/basavajaya-mruthyunjaya-swamiji-sexual-harassment-allegations-counter-complaint-3-crore-rs-blackmail-claim-surfaces-gdp/articleshow-qlyxe11"/>
        </item>
        <item>
            <title><![CDATA[ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರವಿದೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ]]></title>
            <link>https://kannada.asianetnews.com/karnataka-districts/basanagouda-patil-yatnal-new-regional-party-karnataka-statement-gvd/articleshow-urr7b2p</link>
            <guid isPermaLink="true">https://kannada.asianetnews.com/karnataka-districts/basanagouda-patil-yatnal-new-regional-party-karnataka-statement-gvd/articleshow-urr7b2p</guid>
            <pubDate>Tue, 21 Apr 2026 17:29:00 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರ ಮಾಡುವೆ, ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಆರಂಭವಾಗಿದೆ. ಜಿಲ್ಲಾವಾರು ಎಲ್ಲಾ ಹಿಂದೂಗಳ ಸಭೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj4nkrdvr7qnva2vvbe0j7w9,imgname-br-patil-yatnal--2--1771830895035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.21):&lt;/strong&gt; ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರ ಮಾಡುವೆ, ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಆರಂಭವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ನಲ್ಲಿ ಒಳ್ಳೆಯ ದಿನದಂದು ಕೆಲಸ ಆರಂಭಿಸಿ, ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಭೇಟಿ ನೀಡುವೆ. ಹಿಂದೂಪರ ಸಂಘಟನೆಗಳ, ನಿರುದ್ಯೋಗಿ ಯುವಕರ ಭೇಟಿ ಮಾಡುವೆ. ಮರಳಿ ಬಿಜೆಪಿಗೆ ಹೋಗುವುದನ್ನ ನೋಡೋಣ ಎಂದು ಹೇಳಿದರು.&lt;/p&gt;&lt;p&gt;ಜಿಲ್ಲಾವಾರು ಎಲ್ಲಾ ಹಿಂದೂಗಳ ಸಭೆ ಮಾಡುತ್ತೇವೆ. ಕೋಲಾರ ಜಿಲ್ಲೆಯ ವಿಘ್ನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇನೆ. ಇಡೀ ರಾಜ್ಯದ ಪ್ರವಾಸ ಮಾಡುತ್ತೇನೆ. ಹಿಂದುತ್ವ, ಉದ್ಯೋಗ ಹಾಗೂ ಅಭಿವೃದ್ಧಿ ಮೂರು ಉದ್ದೇಶಗಳಿವೆ ಎಂದ ಅವರು, ಜೆಸಿಬಿ ಅಥವಾ ಬುಲ್ಡೋಜರ್&zwnj; ಚಿಹ್ನೆನಾ ಎಂಬ ಪ್ರಶ್ನೆಗೆ, ಚುಣಾವಣಾ ಆಯೋಗ ಏನು ನೀಡುತ್ತೋ ನೋಡೋಣ. ಇಡೀ ರಾಜ್ಯದಲ್ಲಿ ಮೊದಲು ಎಲ್ಲರ ಅಭಿಪ್ರಾಯ ಪಡೆಯುವೆ. ನಂತರ ಏನು ಮಾಡಬೇಕೆಂದು ತೀರ್ಮಾನ ಮಾಡುವೆ ಎಂದು ಯತ್ನಾಳ ಹೇಳಿದರು.&lt;/p&gt;&lt;h2&gt;&lt;strong&gt;ನೂರಕ್ಕೆ ನೂರು ಸತ್ಯ&lt;/strong&gt;&lt;/h2&gt;&lt;p&gt;ಕಾಂಗ್ರೆಸ್&zwnj; ಹೈಕಮಾಂಡ್&zwnj;ನಲ್ಲಿ ಟೆಂಡರ್ ನಡೆದಿದೆ. ಸಿದ್ದರಾಮಯ್ಯನವರು ಎಷ್ಟು ಕೊಡುತ್ತಾರೆ, ಡಿ.ಕೆ.ಶಿವಕುಮಾರ್ ಎಷ್ಟು ಕೊಡುತ್ತಾರೆ ಎಂದು ಟೆಂಡರ್ ನಡೆದಿದೆ. ಟೆಂಡರ್ ಬಿಡ್ ನಡೆದಿದೆ. ಇನ್ನೂ ಫೈನಲ್ ಆಗಿಲ್ಲ. ಫೈನಲ್ ಆದ ಮೇಲೆ ರಾಹುಲ್ ಗಾಂಧಿ ಅವರು ಪ್ರಕಟ ಮಾಡುತ್ತಾರೆ ಎಂದರು. ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಹೇಳಿರುವುದು ನೂರಕ್ಕೆ ನೂರು ಸತ್ಯ ಇದೆ.&lt;/p&gt;&lt;p&gt;ನನ್ನ ಹಾಗೆ ಕಾಂಗ್ರೆಸ್ ಪಕ್ಷದಲ್ಲಿ ರಾಜಣ್ಣ ಅವರು ನೇರವಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯನವರು ಮೊದಲಿನ&zwnj; ಸಿದ್ದರಾಮಯ್ಯ ಇಲ್ಲ, ತಮ್ಮ ಬೆಂಬಲಿಗರ ರಕ್ಷಣೆ ಮಾಡುತ್ತಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರವನ್ನು ಸಿದ್ದರಾಮಯ್ಯನರು ಕೊಡಲಿಲ್ಲ ಎಂದರು. ಬಾಗಲಕೋಟೆ ಹಾಗೂ ದಾವಣಗೆರೆ ಎರಡೂ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಶುಭ ಸೂಚನೆ ಇದೆ. ಅಲ್ಲಿ ಸಾಬರು ಕಾಂಗ್ರೆಸ್&zwnj;ಗೆ ಬುದ್ಧಿ ಕಲಿಸಬೇಕಿದೆ.&lt;/p&gt;&lt;p&gt;ಇದರ ಕ್ರೆಡಿಟ್ ಬಿಜೆಪಿಗೆ ಸಿಗುತ್ತದೆ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂಬುದು ಜಗತ್ತಿಗೆ ಗೊತ್ತಾಯಿತು. ಮುಂದಿನ&zwnj; ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸುತ್ತಾರೆ. ಮಹಿಳಾ ಮೀಸಲಾತಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಬಣ್ಣ ಬಯಲು ಮಾಡಿದ್ದಾರೆ ಎಂದು ಹೇಳಿದರು.&lt;/p&gt;]]></content:encoded>
            <category>vijayapura</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basanagouda-patil-yatnal-new-regional-party-karnataka-statement-gvd/articleshow-urr7b2p"/>
        </item>
        <item>
            <title><![CDATA[Vijayapur Horror:  'ನಿನ್ನ ಮಗ ನಿನ್ನ ಹೋಲಿಕೆ ಇಲ್ಲ' ಎಂದು ಸ್ನೇಹಿತರು ಛೇಡಿಸಿದ್ದಕ್ಕೆ ಪತ್ನಿ ಮೇಲೆ ಅನುಮಾನಗೊಂಡು ಮಗನನ್ನು ಕೊಂದೇ ಬಿಟ್ಟ!]]></title>
            <link>https://kannada.asianetnews.com/karnataka-districts/vijayapura-horror-man-murders-son-suspecting-wife-s-fidelity-after-friends-teasing-about-child-s-looks-rav/articleshow-w43t40u</link>
            <guid isPermaLink="true">https://kannada.asianetnews.com/karnataka-districts/vijayapura-horror-man-murders-son-suspecting-wife-s-fidelity-after-friends-teasing-about-child-s-looks-rav/articleshow-w43t40u</guid>
            <pubDate>Wed, 15 Apr 2026 10:14:59 +0530</pubDate>
            <description><![CDATA[ವಿಜಯಪುರ ತಾಲೂಕಿನ ನಾಗಠಾಣದಲ್ಲಿ, ತನ್ನಂತೆ ಹೋಲಿಕೆ ಇಲ್ಲ ಎಂಬ ಕಾರಣಕ್ಕೆ ತಂದೆಯೇ ತನ್ನ 6 ವರ್ಷದ ಮಗನನ್ನು ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಕೋಚಿಂಗ್&zwnj;ಗೆ ಸೇರಿಸುವುದಾಗಿ ನಂಬಿಸಿ ಕರೆದೊಯ್ದು ಈ ಕೃತ್ಯ ಎಸಗಿದ್ದು, ಪತ್ನಿ ನೀಡಿದ ದೂರಿನ ಮೇರೆಗೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp7pzah70zx6majhj52wpmnk,imgname-----------------------2026-04-15t100853.062-1776227953191.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.15): &lt;/strong&gt;ತನ್ನಂತೆ ಹೋಲಿಕೆಯಲ್ಲಿ ಇಲ್ಲ ಎಂದು ತಂದೆಯೇ ಮಗನನ್ನು ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ನಾಗಠಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಸಿದ್ಧಾರ್ಥ ಮಲ್ಲಿಕಾರ್ಜುನ ಅರಕೇರಿ (6) ಹತ್ಯೆಯಾದ ಬಾಲಕ. ಈತನ ತಂದೆ ಮಲ್ಲಿಕಾರ್ಜುನ ಅರಕೇರಿ ಈಗ ಪೊಲೀಸರ ಅತಿಥಿ ಆಗಿದ್ದಾನೆ. ಮಗನನ್ನು ಟ್ಯೂಶನ್&zwnj;ಗಾಗಿ (ಕೋಚಿಂಗ್) ಹಾಸ್ಟೆಲ್&zwnj;ಗೆ ಸೇರಿಸುವುದಾಗಿ ಕರೆದೊಯ್ದು ಕೃಷ್ಣಾನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ.&lt;/p&gt;&lt;p&gt;ತನ್ನ ಮಗ ತನ್ನಂತೆ ಹೋಲಿಕೆ ಇಲ್ಲವೆಂದು ಪತ್ನಿಯ ಮೇಲೆ ಅನುಮಾನಿಸಿ ಜಗಳವಾಡುತ್ತಿದ್ದ. ಇದೇ ವಿಚಾರಕ್ಕೆ ಗ್ರಾಮದ ಕೆಲ ಕಿಡಿಗೇಡಿಗಳು ಛೇಡಿಸಿದ್ದರು. ಇದರಿಂದ ರೋಸಿದ ಮಲ್ಲಿಕಾರ್ಜುನ ಮಾ.16ರಂದು ಸಿಂದಗಿ ಬಳಿ ವಸತಿ ಶಾಲೆಯಲ್ಲಿ ಕೋಚಿಂಗ್&zwnj;ಗೆ ಸೇರಿಸುವುದಾಗಿ ಹೆಂಡತಿಗೆ ಸುಳ್ಳು ಹೇಳಿ ಸಿದ್ಧಾರ್ಥನನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಮಹಾರಾಷ್ಟ್ರ ಗಡಿಯ ಕೃಷ್ಣಾನದಿ ಬಳಿ ಕರೆದೊಯ್ದು ನದಿಗೆ ತಳ್ಳಿ ಕೊಂದಿದ್ದಾನೆ.&amp;nbsp;&lt;/p&gt;&lt;h2&gt;ಹುಟ್ಟುಹಬ್ಬಕ್ಕೆ ಮಗನನ್ನ ಕರೆತರಲು ಹೇಳಿದಾಗ ಬಯಲು!&lt;/h2&gt;&lt;p&gt;ಏ.1ರಂದು ಮಗನ ಹುಟ್ಟುಹಬ್ಬಕ್ಕೆ ಆತನನ್ನು ಕರೆತರುವಂತೆ ಪತ್ನಿ ಪಟ್ಟು ಹಿಡಿದಾಗ ಮಲ್ಲಿಕಾರ್ಜುನ ಮನೆ ಬಿಟ್ಟು ಪರಾರಿಯಾಗಿದ್ದಾ&zwnj;ನೆ. ಅನುಮಾನಗೊಂಡ ಪತ್ನಿ ಭಾಗ್ಯಶ್ರೀ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಮಲ್ಲಿಕಾರ್ಜುನನನ್ನು ಹುಡುಕಿ ವಿಚಾರಿಸಿದಾಗ ಪ್ರಕರಣ ಬಯಲಾಗಿದೆ. ಮಹಾರಾಷ್ಟ್ರದಲ್ಲಿ ಬಾಲಕನ ಶವ ಪತ್ತೆಯಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-horror-man-murders-son-suspecting-wife-s-fidelity-after-friends-teasing-about-child-s-looks-rav/articleshow-w43t40u"/>
        </item>
        <item>
            <title><![CDATA[ವಿಜಯಪುರ: 10 ದಿನಗಳ ಪೆರೋಲ್ ರಜೆ ಪಡೆದು ಪರಾರಿಯಾಗಿದ್ದ ಆರೋಪಿ, 21 ವರ್ಷಗಳ ಬಳಿಕ ಸೆರೆ]]></title>
            <link>https://kannada.asianetnews.com/karnataka-districts/vijayapur-accused-who-escaped-after-getting-10-days-of-parole-arrested-after-21-years-mrq/articleshow-wk7ah4i</link>
            <guid isPermaLink="true">https://kannada.asianetnews.com/karnataka-districts/vijayapur-accused-who-escaped-after-getting-10-days-of-parole-arrested-after-21-years-mrq/articleshow-wk7ah4i</guid>
            <pubDate>Mon, 13 Apr 2026 14:27:43 +0530</pubDate>
            <description><![CDATA[2005ರಲ್ಲಿ ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಯ ಕೈದಿಯನ್ನು, 21 ವರ್ಷಗಳ ನಂತರ ವಿಜಯಪುರ ವಿಶೇಷ ಪೊಲೀಸ್ ತಂಡವು ಮಹಾರಾಷ್ಟ್ರದಲ್ಲಿ ಬಂಧಿಸಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಆರೋಪಿಯನ್ನು ಮರಳಿ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp30ygsq4qk92rcwj55dsnh8,imgname-vijayapur--1776070640439.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ:&lt;/strong&gt; ಇಲ್ಲಿನ ಕೇಂದ್ರ ಕಾರಾಗೃಹದಿಂದ 2005 ಮಾರ್ಚ್ 25ರಂದು 10 ದಿನಗಳ ಪೆರೋಲ್ ರಜೆ ಪಡೆದು, ತನ್ನ ಊರಿಗೆ ಹೋಗಿದ್ದು, ಪೆರೋಲ್ ರಜೆ ಅವಧಿ ಮುಗಿದ ಮೇಲೆ ಮರಳಿ ಹಾಜರಾಗದೇ, ತಲೆಮರೆಸಿಕೊಂಡಿದ್ದ ಆರೋಪಿಯನ್ನು 21 ವರ್ಷದ ಬಳಿಕ ಶನಿವಾರ ಬಂಧಿಸಲಾಗಿದೆ. ಸೋಲಾಪುರ ಮೂಲದ ಆರೋಪಿ ಆಜಾನ್ ಹುಸೇನ್ ಮುಜಾವರ ಉರ್ಫ್ ಶೇಖ ಬಂಧಿತ ಆರೋಪಿ. ಜಿಲ್ಲೆಯ ಆಲಮೇಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೊಲೆ ಪ್ರಕರಣದಲ್ಲಿ ಬಂಧಿಯಾಗಿ, ಪ್ರಧಾನ ಮತ್ತು ಸತ್ರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಈತ, ಸದ್ಯ ಪೊಲೀಸರ್ ಅತಿಥಿಯಾಗಿದ್ದಾನೆ. ಈ ಬಗ್ಗೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯ ಕಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;&lt;strong&gt;ಬಂಧನಕ್ಕೆ ವಿಶೇಷ ತಂಡ ರಚನೆ&lt;/strong&gt;&lt;/h2&gt;&lt;p&gt;ಕಳೆದ 21 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಶಿಕ್ಷಾಬಂಧಿ ಆರೋಪಿ ಆಜಾನ್ ಹುಸೇನ್ ಮುಜಾವರ ಉರ್ಫ್ ಶೇಖನ ಪತ್ತೆಗೆ ವಿಜಯಪುರ ಎಸ್&zwnj;ಪಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಎಸ್&zwnj;ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಐ ರವಿ ಯಡವನ್ನವರ, ಪಿಎಸ್&zwnj;ಐ ರಾಕೇಶ ಬಗಲಿ ಹಾಗೂ ಸಿಬ್ಬಂದಿ ಆಸೀಫ ಗುಡಗುಂಟಿ, ಎಂ.ಕೆ.ಹಾವಡಿ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೊಪ್ಪಳ: ಕುಕನೂರು ಬಳಿ ಕಾಲುವೆಯಲ್ಲಿ ಎರಡು ಸುಟ್ಟ ಮೃತದೇಹ ಪತ್ತೆ, ಹತ್ಯೆ ಮಾಡಿರುವ ಶಂಕೆ!&lt;/strong&gt;&lt;/p&gt;&lt;p&gt;ತಂಡವು ಖಚಿತ ಮಾಹಿತಿ ಮೇರೆಗೆ 2026 ಏ.11ರಂದು ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ಪಟ್ಟಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ಮರಳಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.&lt;/p&gt;&lt;p&gt;ಉತ್ತಮ ಕರ್ತವ್ಯ ನಿರ್ವಹಿಸಿದ ವಿಜಯಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯವನ್ನು ಶ್ಲಾಘಿಸಲಾಗಿದೆ ಎಂದು ಎಸ್&zwnj;ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಿಜೆಪಿಯವರು ಎಂದು ಕೂಡ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;28ರ ಜಿಮ್ ಟ್ರೈನರ್&zwnj;ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು#Bengaluru https://t.co/Rdk2MdjyRP&lt;/p&gt;&lt;p&gt;&mdash; Asianet Suvarna News (@AsianetNewsSN) April 12, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayapura</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapur-accused-who-escaped-after-getting-10-days-of-parole-arrested-after-21-years-mrq/articleshow-wk7ah4i"/>
        </item>
        <item>
            <title><![CDATA[ಕಣ್ಣೆದುರೇ ಮಗ ನೀರುಪಾಲು, ರಕ್ಷಿಸಲು ಹೋದವರೂ ಮರಳಲೇ ಇಲ್ಲ: ಭೂತನಾಳ ಕೆರೆಯಲ್ಲಿ ಬೆಂಗಳೂರು ಕುಟುಂಬದ ಮೂವರ ಜಲಸಮಾಧಿ!]]></title>
            <link>https://kannada.asianetnews.com/karnataka-districts/vijayapura-bhutnal-lake-drowning-three-member-same-family-bengaluru-tourists-dead-sat/articleshow-x5hthn7</link>
            <guid isPermaLink="true">https://kannada.asianetnews.com/karnataka-districts/vijayapura-bhutnal-lake-drowning-three-member-same-family-bengaluru-tourists-dead-sat/articleshow-x5hthn7</guid>
            <pubDate>Wed, 08 Apr 2026 21:09:31 +0530</pubDate>
            <description><![CDATA[ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬವೊಂದು ಐತಿಹಾಸಿಕ ಭೂತನಾಳ ಕೆರೆಯಲ್ಲಿ ದುರಂತಕ್ಕೆ ಈಡಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ಇಬ್ಬರು ಸೇರಿದಂತೆ ಒಟ್ಟು ಮೂವರು ಜಲಸಮಾಧಿಯಾಗಿದ್ದಾರೆ. ಈ ಘಟನೆಯು ಪ್ರವಾಸದ ಸಂತಸವನ್ನು ಶೋಕದಲ್ಲಿ ಮುಳುಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knpvvs9sjtsysmcegwwsv42p,imgname-bengaluru-family-trip-end-tragedy-1775662654777.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.08): ಐ&lt;/strong&gt;ತಿಹಾಸಿಕ ನಗರಿ ವಿಜಯಪುರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಕುಟುಂಬವೊಂದು ಜಲಸಮಾಧಿಯಾದ ದಾರುಣ ಘಟನೆ ಸಂಭವಿಸಿದೆ. ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆ ವೀಕ್ಷಿಸಲು ತೆರಳಿದ್ದ ವೇಳೆ, ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಇಬ್ಬರು ಪುರುಷರು ಸೇರಿದಂತೆ ಒಟ್ಟು ಮೂವರು ಜೀವ ಕಳೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಪ್ರವಾಸದ ಖುಷಿ ತಂದ ದುರಂತ:&lt;/strong&gt;&lt;/h3&gt;&lt;p&gt;ಮೃತಪಟ್ಟವರು ಬೆಂಗಳೂರಿನ ಆರ್.ಟಿ. ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ. ಮೊಹಮ್ಮದ್ ಹಯಾತ್ (12), ಹೈದರ್ ಪಾಶಾ (32) ಮತ್ತು ಅಬ್ದುಲ್ ಖುದ್ದುಸ್ (35) ಮೃತಪಟ್ಟ ದುರ್ದೈವಿಗಳು. ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಒಟ್ಟು 14 ಜನರ ತಂಡ ಪ್ರವಾಸಕ್ಕಾಗಿ ವಿಜಯಪುರಕ್ಕೆ ಆಗಮಿಸಿತ್ತು. ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಾ ಭೂತನಾಳ ಕೆರೆಯ ಬಳಿ ಬಂದಾಗ ಈ ಘೋರ ಅಚಾತುರ್ಯ ನಡೆದಿದೆ.&lt;/p&gt;&lt;h2&gt;&lt;strong&gt;ರಕ್ಷಣೆಗೆ ಹೋಗಿ ಪ್ರಾಣ ಕಳೆದುಕೊಂಡರು:&lt;/strong&gt;&lt;/h2&gt;&lt;p&gt;ಕೆರೆಯ ದಂಡೆಯ ಮೇಲೆ ಕುಟುಂಬಸ್ಥರೆಲ್ಲಾ ಸಂಭ್ರಮಿಸುತ್ತಿದ್ದಾಗ, 12 ವರ್ಷದ ಬಾಲಕ ಮೊಹಮ್ಮದ್ ಹಯಾತ್ ಆಟವಾಡುತ್ತಾ ಕೆರೆಯ ನೀರಿನಲ್ಲಿ ಇಳಿದಿದ್ದಾನೆ. ಆದರೆ ನೀರಿನ ಆಳ ತಿಳಿಯದ ಕಾರಣ ಆತ ಮುಳುಗಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಹೈದರ್ ಪಾಶಾ ಮತ್ತು ಅಬ್ದುಲ್ ಖುದ್ದುಸ್ ಬಾಲಕನನ್ನು ರಕ್ಷಿಸಲು ಕೆರೆಗೆ ಧುಮುಕಿದ್ದಾರೆ. ದುರದೃಷ್ಟವಶಾತ್, ನೀರಿನ ಸೆಳೆತಕ್ಕೆ ಸಿಲುಕಿ ಈ ಮೂವರೂ ಜಲಸಮಾಧಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಸ್ಥಳಕ್ಕೆ ಧಾವಿಸಿದ ಪೊಲೀಸ್ ಮತ್ತು ಅಗ್ನಿಶಾಮಕ ದಳ:&lt;/strong&gt;&lt;/h3&gt;&lt;p&gt;ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಕುಟುಂಬಸ್ಥರ ಆರ್ತನಾದ ಮುಗಿಲು ಮುಟ್ಟಿತ್ತು. ವಿಷಯ ತಿಳಿದ ಕೂಡಲೇ ಆದರ್ಶ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ನಂತರ ಮೂವರ ದೇಹಗಳನ್ನು ನೀರಿನಿಂದ ಹೊರತೆಗೆಯಲಾಯಿತು.&lt;/p&gt;&lt;h2&gt;&lt;strong&gt;ಮಾರ್ಗ ಮಧ್ಯೆ ಕೊನೆಯುಸಿರು:&lt;/strong&gt;&lt;/h2&gt;&lt;p&gt;ನೀರಿನಿಂದ ಹೊರತೆಗೆದಾಗ ಬಾಲಕ ಮೊಹಮ್ಮದ್ ಹಯಾತ್ ಹಾಗೂ ಹೈದರ್ ಪಾಶಾ ಈಗಾಗಲೇ ಮೃತಪಟ್ಟಿದ್ದರು. ಆದರೆ ಅಬ್ದುಲ್ ಖುದ್ದುಸ್ ಅವರಲ್ಲಿ ಸ್ವಲ್ಪ ಉಸಿರಾಟವಿದ್ದ ಕಾರಣ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತು. ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಸದ್ಯ ಮೂವರ ಮೃತದೇಹಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ತನಿಖೆ:&lt;/strong&gt;&lt;/h3&gt;&lt;p&gt;ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಣ್ಣೆದುರೇ ಕುಟುಂಬದ ಮೂವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ನೋಡಲು ಅಸಾಧ್ಯವಾಗಿತ್ತು. ಪ್ರವಾಸದ ಸವಿನೆನಪುಗಳು ಇಡೀ ಕುಟುಂಬಕ್ಕೆ ಮರೆಯಲಾಗದ ನೋವಾಗಿ ಉಳಿದಿವೆ.&lt;/p&gt;]]></content:encoded>
            <category>vijayapura</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-bhutnal-lake-drowning-three-member-same-family-bengaluru-tourists-dead-sat/articleshow-x5hthn7"/>
        </item>
    </channel>
</rss>
