<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 28 Jun 2026 13:02:47 +0530</lastBuildDate>
        <atom:link href="https://kannada.asianetnews.com/rss/vijayanagara" rel="self" type="application/rss+xml"/>
        <item>
            <title><![CDATA[DK Shivakumar: ತಣ್ಣಗಾಯ್ತು ಮೈಲಾರ ಲಿಂಗೇಶ್ವರನ ಮುನಿಸು, ನನಸಾಯ್ತು ಡಿಕೆಶಿ ಸಿಎಂ ಕನಸು!]]></title>
            <link>https://kannada.asianetnews.com/politics/mylara-lingeshwara-s-wrath-over-dk-shivakumar-s-dream-of-becoming-karnataka-cm-comes-true-rav/articleshow-2vggfyi</link>
            <guid isPermaLink="true">https://kannada.asianetnews.com/politics/mylara-lingeshwara-s-wrath-over-dk-shivakumar-s-dream-of-becoming-karnataka-cm-comes-true-rav/articleshow-2vggfyi</guid>
            <pubDate>Tue, 02 Jun 2026 08:27:37 +0530</pubDate>
            <description><![CDATA[&lt;p&gt;2018ರಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಹೆಲಿಕಾಪ್ಟರ್ ಹಾರಿಸಿ ದೋಷಕ್ಕೆ ಒಳಗಾಗಿದ್ದ ಡಿ.ಕೆ. ಶಿವಕುಮಾರ್, ಬಳಿಕ ದೇವಸ್ಥಾನಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡಿದ್ದರು. ಈಗ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆ ಈ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt33yfgyzprdrwczy62rq5rc,imgname-----------------------2026-06-02t082206.456-1780368752158.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೂವಿನಹಡಗಲಿ (ಜೂ.2):&lt;/strong&gt; ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ(DK Shivakumar) ಅವರು 2018 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಮೈಲಾರದ ಮೈಲಾರಲಿಂಗೇಶ್ವರ(Mylaralingeshwar) ಸುಕ್ಷೇತ್ರಕ್ಕೆ ಹೆಲಿಕಾಪ್ಟರ್&zwnj;ನಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ದೇವಾಲಯದ ಗೋಪುರದ ಮೇಲೆ ಹಾಯ್ದು ಬಂದಿದ್ದರಿಂದ ದೋಷ ಉಂಟಾಗಿದೆ ಎಂದು ಹೇಳಿ ಬಳಿಕ ದೇವಾಲಯಕ್ಕೆ ಬೆಳ್ಳಿಯ ಹೆಲಿಕಾಪ್ಟರ್&zwnj; ಕಾಣಿಕೆಯಾಗಿ ನೀಡಿ ದೋಷ ಪರಿಹಾರ ಮಾಡಿಕೊಂಡಿದ್ದರು.&lt;/p&gt;&lt;h2&gt;ಮೈಲಾರ ಲಿಂಗೇಶ್ವರನ ಕೋಪಕ್ಕೆ ಗುರಿಯಾಗಿದ್ದ ಡಿಕೆ!&lt;/h2&gt;&lt;p&gt;ಇದೀಗ ಮುಖ್ಯಮಂತ್ರಿಯಾಗುತ್ತಿರುವ ಸಂದರ್ಭದಲ್ಲಿ ಈ ಹಿಂದೆ ಮೈಲಾರ ಲಿಂಗೇಶ್ವರನ ಕೋಪಕ್ಕೆ ಗುರಿಯಾಗಿದ್ದ ಡಿ.ಕೆ. ಶಿವಕುಮಾರ ಅವರು ದೋಷ ಪರಿಹಾರ ಮಾಡಿಕೊಂಡಿರುವ ಪ್ರಸಂಗ ಮುನ್ನೆಲೆಗೆ ಬಂದಿದೆ.&lt;/p&gt;&lt;p&gt;2018ರಲ್ಲಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಹೆಲಿಕಾಪ್ಟರ್&zwnj;ನಲ್ಲಿ ಮೈಲಾರಲಿಂಗೇಶ್ವರ ಮೈಲಾರ ಸುಕ್ಷೇತ್ರಕ್ಕೆ ಬಂದಿದ್ದರು. ಆ ಕಾಪ್ಟರ್&zwnj; ದೇವಸ್ಥಾನದ ಗೋಪುರದ ಮೇಲೆ ಹಾಯ್ದು ಬಂದಿದ್ದು, ಕಾರ್ಣಿಕ ಹೇಳುವ ಡೆಂಕಣ ಮರಡಿಯ ಪಕ್ಕದ ಜಮೀನು ಹಾಗೂ ದೇವಸ್ಥಾನದ ಗೋಪುರದ ಮೇಲೆ ಹೆಲಿಕಾಪ್ಟರ್&zwnj; ಹಾರಿ ಹೋಗಿತ್ತು. ಇದರಿಂದ ದೋಷ ಉಂಟಾಗಿದೆ. ಪರಿಹಾರಕ್ಕಾಗಿ ದೇವರಿಗೆ ಹರಕೆ ಹೊತ್ತು ಕನಸು ನನಸು ಮಾಡಿಕೊಳ್ಳಬೇಕೆಂದು ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆ ಮಾಡಲಾಯಿತು.&lt;/p&gt;&lt;p&gt;ಈ ದೋಷದಿಂದ ಡಿ.ಕೆ. ಶಿವಕುಮಾರ ಅವರು ಹಲವು ಕಷ್ಟ ನಷ್ಟ ಅನುಭವಿಸುವಂತೆ ಆಗಿತ್ತು. ತೊಂದರೆ, ಆತಂಕವೂ ಎದುರಾಗಿತ್ತು. ಜೈಲುವಾಸವನ್ನೂ ಅನುಭವಿಸಬೇಕಾಯಿತು. ಈ ಪ್ರಮಾದದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್, 2020ರ ಡಿಸೆಂಬರ್&zwnj; 18ರಂದು ಮತ್ತೆ ಮೈಲಾರಕ್ಕೆ ಭೇಟಿ ನೀಡಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್&zwnj;(Venkappaiah wadeyar) ಸಲಹೆಯಂತೆ ಪೂಜೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಒಂದು ಕೆಜಿ ತೂಕದ ಬೆಳ್ಳಿಯ ಹೆಲಿಕಾಪ್ಟರ್&zwnj;ನ್ನು ತಪ್ಪು ಕಾಣಿಕೆಯನ್ನಾಗಿ ದೇಣಿಗೆ ನೀಡಿದ್ದರು. ಸಂಕಷ್ಟ ಪರಿಹಾರಕ್ಕೆ ಬೆಳ್ಳಿಯ ಹೆಲಿಕಾಪ್ಟರನ್ನೇ ಕಾಣಿಕೆಯಾಗಿ ಅರ್ಪಿಸಿದ್ದರು. ಮೈಲಾರ ಲಿಂಗೇಶ್ವರನ ಆಶೀರ್ವಾದದಿಂದಲೇ ಡಿ.ಕೆ. ಶಿವಕುಮಾರಗೆ ಸಿಎಂ ಪಟ್ಟ ಪಾಪ್ತಿಯಾಗಿದೆ ಎಂದು ಭಕ್ತರು ಹೇಳಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ರೆಡ್ಡಿಗೂ ಸಂಕಷ್ಟ: ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಜನಾರ್ದನ ರೆಡ್ಡಿ ಕೂಡ ಮೈಲಾರ ಲಿಂಗೇಶ್ವರ ದೇವಸ್ಥಾನದ ಮೇಲೆ ಹೆಲಿಕಾಪ್ಟರ್&zwnj;ನಲ್ಲಿ ಬಂದಿದ್ದರು ಎಂಬ ಕಾರಣಕ್ಕೆ ಸಾಲು ಸಾಲು ಸಂಕಷ್ಟ ಅನುಭವಿಸಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/mylara-lingeshwara-s-wrath-over-dk-shivakumar-s-dream-of-becoming-karnataka-cm-comes-true-rav/articleshow-2vggfyi"/>
        </item>
        <item>
            <title><![CDATA[ವಿಜಯನಗರ: 565 ವಿದ್ಯಾರ್ಥಿನಿಯರು ಓದುವ ಈ ಸರ್ಕಾರಿ ಕಾಲೇಜಲ್ಲಿ ಶೌಚಕ್ಕೆ ಸರದಿ ಸಾಲು ನಿಲ್ಲಬೇಕು!]]></title>
            <link>https://kannada.asianetnews.com/education/565-female-students-in-skg-govt-pu-college-queue-for-toilets-rav/articleshow-7n4t1il</link>
            <guid isPermaLink="true">https://kannada.asianetnews.com/education/565-female-students-in-skg-govt-pu-college-queue-for-toilets-rav/articleshow-7n4t1il</guid>
            <pubDate>Sat, 13 Jun 2026 10:42:26 +0530</pubDate>
            <description><![CDATA[&lt;p&gt;ಹೂವಿನಹಡಗಲಿ: ಇಲ್ಲಿನ ಶ್ರೀಮತಿ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು(Soppina Kalamma Girls Government Pre-Graduate College) ಪ್ರವೇಶ ಪಡೆಯಲು ವಿದ್ಯಾರ್ಥಿನಿಯರು ದುಂಬಾಲು ಬಿದ್ದಿದ್ದಾರೆ. 565 ಬಾಲಕಿಯರು ದಾಖಲಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktznxa3yzp93vf7bxaxbedcs,imgname-----------------------2026-06-13t103437.232-1781327112318.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;ಹೂವಿನಹಡಗಲಿ: ಇಲ್ಲಿನ ಶ್ರೀಮತಿ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು(Soppina Kalamma Girls Government Pre-Graduate College) ಪ್ರವೇಶ ಪಡೆಯಲು ವಿದ್ಯಾರ್ಥಿನಿಯರು ದುಂಬಾಲು ಬಿದ್ದಿದ್ದಾರೆ. 565 ಬಾಲಕಿಯರು ದಾಖಲಾಗಿದ್ದಾರೆ.&lt;/p&gt;&lt;h2&gt;ಈಗ ಶೌಚಕ್ಕೆ ಸರದಿ ಸಾಲು ನಿಲ್ಲುವ ಸ್ಥಿತಿ, ಪಾಠಕ್ಕೆ ಕೇವಲ 6 ಕೊಠಡಿಗಳು.&lt;/h2&gt;&lt;p&gt;ಸರ್ಕಾರಿ ಕಾಲೇಜು ಎಂದು ಮೂಗು ಮುರಿಯುವ ಈ ವೇಳೆ ಕಳೆದ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ. 77ರಷ್ಟು ಫಲಿತಾಂಶ ಪಡೆದು, ಖಾಸಗಿ ಕಾಲೇಜುಗಳಿಗೆ ಸಡ್ಡು ಹೊಡೆದಿದೆ. ವಾಣಿಜ್ಯ ವಿಭಾಗ ಶೇ. 94, ವಿಜ್ಞಾನ ವಿಭಾಗ ಶೇ. 81.2, ಕಲಾ ವಿಭಾಗ ಶೇ. 67ರಷ್ಟು ಫಲಿತಾಂಶ ಪಡೆದು, 12 ವಿದ್ಯಾರ್ಥಿನಿಯರು ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಕಳೆದ 5 ವರ್ಷದಲ್ಲಿ ದಾಖಲಾತಿ ಸಂಖ್ಯೆ ಏರುತ್ತಲೇ ಇದೆ. ಇಂತಹ ಸರ್ಕಾರಿ ಕಾಲೇಜು ತಾಲೂಕು ಕೇಂದ್ರದಲ್ಲಿದೆ.&lt;/p&gt;&lt;h3&gt;ಪ್ರವೇಶಕ್ಕೆ ದುಂಬಾಲು:&lt;/h3&gt;&lt;p&gt;ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಗೆ 320, ದ್ವಿತೀಯ ಪಿಯುಗೆ 245 ಸೇರಿ ಒಟ್ಟು 565 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಈ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿಗೆ ಮೂಲಭೂತ ಸೌಲಭ್ಯಗಳ ಕೊರತೆ ಮಧ್ಯೆ ಉತ್ತಮ ಫಲಿತಾಂಶ ಬಂದ ಕಾರಣ ಕೊಪ್ಪಳ, ಮುಂಡರಗಿ, ಸಂಡೂರು, ರಾಣಿಬೆನ್ನೂರು, ಶಿರಹಟ್ಟಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲೂಕುಗಳಿಂದ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ದುಂಬಾಲು ಬಿದ್ದಿದ್ದಾರೆ.&lt;/p&gt;&lt;p&gt;ಕಾಲೇಜಿನ ಒಂದೇ ಕೋಣೆಯಲ್ಲಿರುವ 4 ಶೌಚಾಲಯ ಸಾಲುತ್ತಿಲ್ಲ. ವಿದ್ಯಾರ್ಥಿನಿಯರು ಸರದಿ ಸಾಲಿನಲ್ಲಿ ನಿಲುತ್ತಾರೆ. ಇನ್ನು ಉಪನ್ಯಾಸಕರು, ಉಪನ್ಯಾಸಕಿಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲ.&lt;/p&gt;&lt;p&gt;ಕಾಲೇಜಿನಲ್ಲಿ ಪಾಠ ಕೇಳಲು ಕೇವಲ 6 ಕೋಣೆಗಳಿವೆ. ವಿಭಾಗವಾರು ಪಾಠ ಮಾಡಲು ಕೋಣೆಗಳ ಕೊರತೆ ಕಾಡುತ್ತಿದೆ. ಒಂದು ಕೋಣೆಯಲ್ಲಿ 80 ವಿದ್ಯಾರ್ಥಿನಿಯರು ಮಾತ್ರ ಕುಳಿತುಕೊಳ್ಳಲು ಸಾಮರ್ಥ್ಯವಿರುವ ಸೂರಿನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಕ್ಕಟ್ಟಾಗಿ ಕುಳಿತು ಪಾಠ ಕೇಳುವ ಸ್ಥಿತಿ ಇದೆ.&lt;/p&gt;&lt;p&gt;16 ಜನ ಉಪನ್ಯಾಸಕರಲ್ಲಿ 6ಜನ ಅತಿಥಿ ಉಪನ್ಯಾಸಕರಿದ್ದಾರೆ. ಪ್ರಾಚಾರ್ಯರ ಹುದ್ದೆಯೇ ಖಾಲಿ. ಕಲಾ, ವಾಣಿಜ್ಯ, ವಿಜ್ಞಾನ, ಶಿಕ್ಷಣ ಮತ್ತು ಕಂಪ್ಯೂಟರ್&zwnj; ಸೈನ್ಸ್&zwnj; ವಿಭಾಗಗಳಿವೆ.&lt;/p&gt;&lt;p&gt;ಶಾಸಕ ಕೃಷ್ಣ ನಾಯ್ಕ ಈ ಸರ್ಕಾರಿ ಕಾಲೇಜು ಅಭಿವೃದ್ಧಿಗಾಗಿ, ವಿಶೇಷ ಕಾಳಜಿ ವಹಿಸಿ ತಮ್ಮ ಅನುದಾನದಲ್ಲಿ ಪೀಠೋಪಕರಣ, ಹವಾ ನಿಯಂತ್ರಿತ ಕಂಪ್ಯೂಟರ್&zwnj; ಲ್ಯಾಬ್&zwnj;, ವಿಜ್ಞಾನ ಪ್ರಯೋಗಾಲಯ, ಆಸನಗಳ ವ್ಯವಸ್ಥೆ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಆಟದ ಮೈದಾನ ಮಾತ್ರ ಅಭಿವೃದ್ಧಿ ಅರೆಬರೆಯಾಗಿದೆ.&lt;/strong&gt;&lt;/p&gt;&lt;p&gt;ತಾಲೂಕಿನಲ್ಲೇ ಏಕೈಕ ಸರ್ಕಾರಿ ಬಾಲಕಿಯರ ಕಾಲೇಜಿಗೆ ಇನ್ನು 6 ಕೊಠಡಿ, ಹೈಟೆಕ್&zwnj; ಶೌಚಾಲಯ, ಸಭಾಂಗಣ ವ್ಯವಸ್ಥೆ ಮಾಡಬೇಕಿದೆ. ಮಳೆ ಸುರಿದರೆ ಶಾಲಾ ಆವರಣದ ನೀರು ಹೊರಗೆ ಹೋಗಲು ಜಾಗವೇ ಇಲ್ಲ. ಹಾಗಾಗಿ ಆವರಣ ಕೆರೆಯಂತಾಗುತ್ತದೆ.&lt;/p&gt;&lt;p&gt;ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದರಿಂದ ವಿವಿಧ ತಾಲೂಕುಗಳ ವಿದ್ಯಾರ್ಥಿನಿಯರು ಪ್ರವೇಶಕ್ಕೆ ದುಂಬಾಲು ಬಿದ್ದಿದ್ದಾರೆ. ಪ್ರಥಮ, ದ್ವಿತೀಯ ಪಿಯುಸಿ ಸೇರಿ 565 ವಿದ್ಯಾರ್ಥಿನಿಯರು ಇದ್ದಾರೆ. ಕೋಣೆಗಳ ಕೊರತೆ ಹಾಗೂ ಶೌಚಾಲಯದ ಕೊರತೆ ಕಾಡುತ್ತಿದೆ. ಈ ಕುರಿತು ಶಾಸಕರ ಗಮನಕ್ಕೆ ತಂದಿದ್ದೇವೆ ಎನ್ನುತ್ತಾರೆ ಎಸ್&zwnj;ಕೆಜಿಜಿ ಕಾಲೇಜು ಪ್ರಭಾರ ಪ್ರಾಚಾರ್ಯ ಎ. ಕೊಟ್ರಗೌಡ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/565-female-students-in-skg-govt-pu-college-queue-for-toilets-rav/articleshow-7n4t1il"/>
        </item>
        <item>
            <title><![CDATA[ಹಂಪಿಯಲ್ಲಿ ಮತ್ತೆರಡು ಆಳ್ವರ್‌ ವಿಗ್ರಹ, 23 ಮೀಟರ್‌ ಉದ್ದದ ಕಲ್ಲಿನ ಕಾಲುವೆ ಪತ್ತೆ]]></title>
            <link>https://kannada.asianetnews.com/karnataka-districts/two-more-alvar-idols-23-meter-long-stone-canal-discovered-in-hampi-mrq/articleshow-8egnqek</link>
            <guid isPermaLink="true">https://kannada.asianetnews.com/karnataka-districts/two-more-alvar-idols-23-meter-long-stone-canal-discovered-in-hampi-mrq/articleshow-8egnqek</guid>
            <pubDate>Mon, 25 May 2026 07:44:30 +0530</pubDate>
            <description><![CDATA[ಹೊಸಪೇಟೆಯ ಹಂಪಿಯ ಹಜಾರರಾಮ ದೇವಸ್ಥಾನದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸುತ್ತಿರುವ ಉತ್ಖನನದಲ್ಲಿ, ಮತ್ತೆರಡು ಆಳ್ವರ್ ವಿಗ್ರಹಗಳು, ಬೃಹತ್ ಕಲ್ಲಿನ ಕಾಲುವೆ ಮತ್ತು ಪ್ರಾಣಿಗಳ ಕಲ್ಲಿನ ಚಿತ್ರಗಳು ಪತ್ತೆಯಾಗಿವೆ. ಈ ಹಿಂದೆ ಎರಡು ಆಳ್ವರ್ ವಿಗ್ರಹಗಳು ದೊರೆತಿದ್ದು, ಈ ಪ್ರದೇಶದಲ್ಲಿ ಮತ್ತಷ್ಟು ಐತಿಹಾಸಿಕ ಅವಶೇಷಗಳು ಸಿಗುವ ನಿರೀಕ್ಷೆಯಲ್ಲಿ ಉತ್ಖನನ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kseegf4ph4kcbtbrhnnc0njt,imgname-hampi-1779675184278.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ:&lt;/strong&gt; ಹಂಪಿಯ ಹಜಾರರಾಮ ದೇವಸ್ಥಾನದ ಸಮೀಪದಲ್ಲಿ ಕಳೆದ ಕೆಲವು ದಿನಗಳಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಉತ್ಖನನ ಕಾರ್ಯ ನಡೆಸುತ್ತಿದ್ದು, ಈಗ ಮತ್ತೆ ಹಂಪಿಯಲ್ಲಿ ಭಗ್ನಗೊಂಡಿರುವ ಪುರಾತನ ಕಾಲದ ಮತ್ತೆರಡು ಆಳ್ವರ್&zwnj; ವಿಗ್ರಹಗಳು ಮತ್ತು ಪುರಾತನ ಕಾಲದ ಐಹಿಹಾಸಿಕ ಬೃಹತ್&zwnj; ಕಲ್ಲಿನ ಕಾಲುವೆ, ದೇವಸ್ಥಾನದ ಮುಂದಿನ ಮೆಟ್ಟಿಲು ಬಳಿ ಎರಡು ಬದಿಯಲ್ಲಿರುವ ಪ್ರಾಣಿಯ ಕಲ್ಲಿನ ಚಿತ್ರ ಪತ್ತೆಯಾಗಿವೆ.&lt;/p&gt;&lt;h2&gt;&lt;strong&gt;ಮತ್ತಷ್ಟು ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗುವ ಸಾಧ್ಯತೆ&lt;/strong&gt;&lt;/h2&gt;&lt;p&gt;ಕಳೆದ ಮೂರು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಪುರಾತನ ಕಾಲದ ಎರಡು ಆಳ್ವರ್&zwnj; ವಿಗ್ರಹಗಳು, ಆನೆಯ ವಿಗ್ರಹಗಳು ದೊರೆತಿದ್ದವು. ಈಗ ಮತ್ತೆರಡು ಆಳ್ವರ್&zwnj; ವಿಗ್ರಹಗಳು, ಪುರಾತನ ಕಾಲದ ಕಲ್ಲಿನ ಕಾಲುವೆ, ದೇವಸ್ಥಾನದ ಮುಂದಿನ ಮೆಟ್ಟಿಲು ಅಕ್ಕಪಕ್ಕದಲ್ಲಿರುವ ಪ್ರಾಣಿಯ ಕಲ್ಲಿನ ಚಿತ್ರ ಪತ್ತೆಯಾಗಿರುವುದರಿಂದ ಈ ಪ್ರದೇಶದಲ್ಲಿ ಮತ್ತಷ್ಟು ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಬಹುದು ಎಂಬ ಕಾರಣಕ್ಕೆ ಉತ್ಖನನ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಮುಂದುವರಿಸಿದ್ದಾರೆ.&lt;/p&gt;&lt;p&gt;ತಮಿಳುನಾಡಿನ ಒಂದು ಭಕ್ತಿ ಪಂಥದವರಾಗಿರುವ 11 ಆಳ್ವರ್&zwnj; ಸಂತರು, ವೈಷ್ಣವ ಭಕ್ತಿ ಪರಂಪರೆಯ ಪ್ರಭಾವ ವಿಜಯನಗರ ಸಾಮ್ರಾಜ್ಯದಲ್ಲಿ ಬಹಳ ಗಾಢವಾಗಿತ್ತು. ಈಗ ಇದೇ ಪ್ರದೇಶದಲ್ಲಿ ಪುರಾತನ ಕಾಲದ ಒಟ್ಟು ನಾಲ್ಕು ಆಳ್ವರ್&zwnj; ವಿಗ್ರಹಗಳು ಪತ್ತೆಯಾಗಿವೆ. ಮತ್ತಷ್ಟು ವಿಗ್ರಹಗಳು ಇದೇ ಪ್ರದೇಶದಲ್ಲಿ ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.&lt;/p&gt;&lt;h3&gt;&lt;strong&gt;ಕಲ್ಲಿನ ಕಾಲುವೆಗಳು ಪತ್ತೆ&lt;/strong&gt;&lt;/h3&gt;&lt;p&gt;ವಿಜಯನಗರ ಅರಸರ ಕಾಲದ ಕಲ್ಲಿನ ಕಾಲುವೆಗಳು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಪತ್ತೆಯಾಗುತ್ತಿವೆ. ಈ ಕಲ್ಲಿನ ಕಾಲುವೆಗಳಿಂದ ಮಳೆಗಾಲದಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಮತ್ತು ದೇವಸ್ಥಾನದ ಗರ್ಭಗುಡಿಯಿಂದ ದೇವಸ್ಥಾನದ ಹೊರಭಾಗಕ್ಕೆ ದೇವರ ಮೂರ್ತಿಗಳ ಅಭಿಷೇಕದ ಪವಿತ್ರ ನೀರು ಹೊರಗಡೆ ಸಾಗಿಸಲು ಈ ಕಲ್ಲಿನ ಕಾಲುವೆ ಬಳಸುತ್ತಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;ಅನೇಕ ವರ್ಷಗಳಿಂದ ಮಣ್ಣಿನಲ್ಲಿ ಮತ್ತು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ ಈ ಅಪರೂಪದ ಸುಮಾರು 23 ಮೀಟರ್&zwnj; ಉದ್ದದ ಕಲ್ಲಿನ ಕಾಲುವೆ ಪತ್ತೆಯಾಗಿದ್ದು, ಇದೇ ರೀತಿಯಲ್ಲಿ ದೇವಸ್ಥಾನದ ಮುಂದಿನ ಮೆಟ್ಟಿಲು ಅಕ್ಕಪಕ್ಕದಲ್ಲಿರುವ ಕಲ್ಲಿನ ಪ್ರಾಣಿಯ ಚಿತ್ರವಿರುವ ಶಿಲೆಯೊಂದು ಸಹ ಪತ್ತೆಯಾಗಿವೆ.&lt;/p&gt;&lt;p&gt;ಹಜಾರ ರಾಮ ದೇವಸ್ಥಾನದ ಸಮೀಪದಲ್ಲಿ ನಿರಂತರವಾಗಿ ಉತ್ಖನನ ಕಾರ್ಯ ನಡೆಯುತ್ತಿರುವುದರಿಂದ ವಿಜಯನಗರ ಅರಸರ ಕಾಲದ ಭಗ್ನಗೊಂಡಿರುವ ಪುರಾತನ ಕಾಲದ ವಿಗ್ರಹಗಳು, ಕಲ್ಲಿನ ಕಾಲುವೆ, ಆಳ್ವರ್&zwnj; ವಿಗ್ರಗಳು ಇನ್ನಿತರ ವಸ್ತುಗಳು ಪತ್ತೆಯಾಗುತ್ತಿರುವುದರಿಂದ ಹಜಾರ ರಾಮ ದೇವಸ್ಥಾನದ ಬಳಿ ಇನ್ನಷ್ಟು ದಿನಗಳ ಕಾಲ ಉತ್ಖನನ ಕಾರ್ಯ ನಡೆಸಲಾಗುತ್ತದೆ. ಉತ್ಖನನದಲ್ಲಿ ಮತ್ತೇನಾದರೂ ಸಿಗಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಪುರಾತತ್ವ ಅಧೀಕ್ಷಕ ಕೆ. ರಾಮಕೃಷ್ಣ ರೆಡ್ಡಿ ತಿಳಿಸಿದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/two-more-alvar-idols-23-meter-long-stone-canal-discovered-in-hampi-mrq/articleshow-8egnqek"/>
        </item>
        <item>
            <title><![CDATA[ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ಜೀವಕಳೆ ತಂದ ಕೃತ್ತಿಕಾ ಮಳೆ; ಗರಿಗೆದರಿದ ಕೃಷಿ ಚಟುವಟಿಕೆಗಳು]]></title>
            <link>https://kannada.asianetnews.com/karnataka-districts/rain-brings-life-to-hagaribommanahalli-malavi-reservoir-agricultural-activities-starts-mrq/articleshow-a6v3u74</link>
            <guid isPermaLink="true">https://kannada.asianetnews.com/karnataka-districts/rain-brings-life-to-hagaribommanahalli-malavi-reservoir-agricultural-activities-starts-mrq/articleshow-a6v3u74</guid>
            <pubDate>Mon, 25 May 2026 10:37:56 +0530</pubDate>
            <description><![CDATA[ಶನಿವಾರ ರಾತ್ರಿ ಸುರಿದ ಧಾರಾಕಾರ ಕೃತ್ತಿಕಾ ಮಳೆಗೆ ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ನೀರು ಹರಿದು ಬಂದಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಈ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಸಜ್ಜೆ ಮತ್ತು ಜೋಳ ಬಿತ್ತನೆಗೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಜಲಾಶಯದ ಗೇಟ್ ಬಳಿ ಉಳಿದಿರುವ ಮಣ್ಣು ಆತಂಕಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kserbgnzzfazz8xetj78n3n5,imgname-dam-1779685507775.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ:&lt;/strong&gt; ಶನಿವಾರ ರಾತ್ರಿ ಧಾರಾಕಾರವಾಗಿ ಸುರಿದ ಸಿಡಿಲಬ್ಬರದ ಕೃತ್ತಿಕಾ ಮಳೆಗೆ ತಾಲೂಕಿನ ಹಗರಿಬೊಮ್ಮನಹಳ್ಳಿ ಜಲಾಶಯ ಜೀವಕಳೆ ಪಡೆದಿದೆ. ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವರ್ಷದ ಮೊದಲ ಮಳೆಗೆ ತಾಲೂಕಿನ ಬಹುತೇಕ ಹಳ್ಳ- ಕೊಳ್ಳಗಳು ತುಂಬಿ ಹರಿದಿವೆ. ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳಿಗೆ ರೆಕ್ಕೆಪುಕ್ಕ ಮೂಡಿವೆ. ಬಿಸಿಲಿನ ಬೇಗೆಗೆ ದಣಿದಿದ್ದ ಜನತೆಗೆ ತಂಪಿನ ಸಿಂಚನವಾಗಿದೆ.&lt;/p&gt;&lt;p&gt;ಇಟಗಿಯ ಕುಪ್ಪಿ ಹಳ್ಳ ಮತ್ತು ಮಾಲವಿ ಗ್ರಾಮದ ಬಳಿ ಇರುವ ರಾಮನಹಳ್ಳ ತುಂಬಿ ಹರಿದ ಪರಿಣಾಮವಾಗಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿದೆ. ಸೋಮವಾರದಿಂದ ಪ್ರಾರಂಭವಾಗುವ ರೋಹಿಣಿ ಮಳೆ ಹೀಗೆಯೇ ಸುರಿದರೆ ಜಲಾಶಯ ಯಾವುದೇ ಕ್ಷಣದಲ್ಲಾದರೂ ಭರ್ತಿಯಾಗುತ್ತದೆ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಅಭಿಪ್ರಾಯಪಡುತ್ತಾರೆ.&lt;/p&gt;&lt;h2&gt;&lt;strong&gt;ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ನೀರು&lt;/strong&gt;&lt;/h2&gt;&lt;p&gt;ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕಣ್ತುಂಬಿಕೊಳ್ಳಲು ಬರುತ್ತಿರುವ ಯುವಕರು ಸೆಲ್ಫಿಯೊಂದಿಗೆ ಸಂಭ್ರಮಿಸುತ್ತಿದ್ದಾರೆ. ಮಳೆಯಿಂದಾಗಿ ಸಜ್ಜೆ ಮತ್ತು ಜೋಳದ ಬಿತ್ತನೆಗೆ ಸಜ್ಜಾಗಿರುವ ರೈತರು ಭೂಮಿಯನ್ನು ಹದ ಮಾಡಿಕೊಳ್ಳುತ್ತಿರುವುದು ತಾಲೂಕಿನಾದ್ಯಂತ ಸಾಮಾನ್ಯವಾಗಿದೆ.&lt;/p&gt;&lt;p&gt;ಜಲಾಶಯದ ನೂತನ ಕ್ರಸ್ಟಗೇಟ್ ಅಳವಡಿಕೆ ಕಾಮಗಾರಿ ಇತ್ತೀಚಿಗೆ ಮುಗಿದಿದ್ದು, ಆದರೆ, ಕಾಮಗಾರಿ ವೇಳೆಯಲ್ಲಿ ಜಲಾಶಯದ ಗೇಟ್ ಅಳವಡಿಕೆ ಕಾಮಗಾರಿಗೆ ಪೂರಕವಾಗಿ ಗೇಟ್ ಬಳಿ ಹಾಕಲಾಗಿದ್ದ ಗರಸು ಮಣ್ಣನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಜಲಾಶಯದಲ್ಲಿ ಎರಡು ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಉಲವತ್ತಿಯ ಪ್ರಗತಿಪರ ಕೃಷಿಕ ಕರಡಿ ರಾಮಣ್ಣ ಆತಂಕ ವ್ಯಕ್ತಪಡಿಸುತ್ತಾರೆ.&lt;/p&gt;&lt;h3&gt;&lt;strong&gt;ಎಲ್ಲಿ, ಎಷ್ಟು ಮಳೆಯಾಗಿದೆ?&lt;/strong&gt;&lt;/h3&gt;&lt;p&gt;ಮಾಲವಿ ಮಳೆ ಮಾಪನ ಕೇಂದ್ರದಲ್ಲಿ ಗರಿಷ್ಠ 79.2ಮಿ.ಮೀ., ಹಗರಿಬೊಮ್ಮನಹಳ್ಳಿ ಕೇಂದ್ರದಲ್ಲಿ 76.6 ಮಿ.ಮೀ., ಹಂಪಸಾಗರ ಕೇಂದ್ರದಲ್ಲಿ 23.2 ಮಿ.ಮೀ., ತಂಬ್ರಹಳ್ಳಿ ಕೇಂದ್ರದಲ್ಲಿ ಕನಿಷ್ಠ 14.6 ಮಿ.ಮೀ. ಮಳೆ ದಾಖಲಾಗಿದೆ.&lt;/p&gt;&lt;p&gt;ಮಳೆಯಿಂದಾಗಿ ಚೀಲಗೋಡು ಗ್ರಾಮದಲ್ಲಿ ಉತ್ತಂಗಿ ಶಿವರಾಜ ಅವರಿಗೆ ಸೇರಿರುವ ಒಂದು ಆಕಳು ಸಿಡಿಲಿನಿಂದ ಮೃತ ಹೊಂದಿರುತ್ತದೆ ಮತ್ತು ಮಾಲವಿ ಗ್ರಾಮದಲ್ಲಿ ಕೆ. ಎಂ. ಈರಮ್ಮನವರಿಗೆ ಸೇರಿರುವ ಮನೆಗೆ ಭಾಗಶ ಹಾನಿಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rain-brings-life-to-hagaribommanahalli-malavi-reservoir-agricultural-activities-starts-mrq/articleshow-a6v3u74"/>
        </item>
        <item>
            <title><![CDATA[Gruhalakshmi Scheme: ಗೃಹಲಕ್ಷ್ಮೀಯ  ₹5 ಸಾವಿರ ಕೋಟಿ ಲೆಕ್ಕ ಕೊಡಿ: ಪ್ರಿಯಾಂಕ್ ಖರ್ಗೆಗೆ ಶ್ರೀರಾಮುಲು ಸವಾಲ್]]></title>
            <link>https://kannada.asianetnews.com/karnataka-districts/b-sriramulu-questions-priyank-kharge-over-gruhalakshmi-rs-5000-crore-gvd/articleshow-b1cuql8</link>
            <guid isPermaLink="true">https://kannada.asianetnews.com/karnataka-districts/b-sriramulu-questions-priyank-kharge-over-gruhalakshmi-rs-5000-crore-gvd/articleshow-b1cuql8</guid>
            <pubDate>Thu, 18 Jun 2026 00:28:39 +0530</pubDate>
            <description><![CDATA[&lt;p&gt;Gruhalakshmi Scheme: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸಲ್ಲಬೇಕಿದ್ದ ₹5 ಸಾವಿರ ಕೋಟಿ ಲೆಕ್ಕ ಕೊಟ್ಟು ನಂತರ ಪ್ರಿಯಾಂಕ್&zwnj; ಖರ್ಗೆ ಬೇರೆ ವಿಷಯಗಳ ಬಗ್ಗೆ ಮಾತಾಡಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvbcacjqth34cqp1nvabdphk,imgname-jvjv-1781719708247.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಟ್ಟೂರು (ಜೂ.18): &lt;/strong&gt;ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸಲ್ಲಬೇಕಿದ್ದ ₹5 ಸಾವಿರ ಕೋಟಿ ಲೆಕ್ಕ ಕೊಟ್ಟು ನಂತರ ಪ್ರಿಯಾಂಕ್&zwnj; ಖರ್ಗೆ ಬೇರೆ ವಿಷಯಗಳ ಬಗ್ಗೆ ಮಾತಾಡಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ತಾಲೂಕಿನ ಉಜ್ಜಿನಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್&zwnj; ಖರ್ಗೆ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.&lt;/p&gt;&lt;p&gt;ಆರ್.ಎಸ್.ಎಸ್. ನೋಂದಣಿ ಮತ್ತಿತರ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾ ಸರ್ಕಾರದ ಹೊಣೆಗಾರಿಕೆಯನ್ನು ಜನತೆಯಿಂದ ಮರೆಮಾಚಲು ಮುಂದಾಗಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ 12 ವರ್ಷಗಳ ದೀರ್ಘ ಅವಧಿಯಲ್ಲಿ ಸಮರ್ಥ ಅಧಿಕಾರ ನಡೆಸುತ್ತಾ ವಿಶ್ವದಲ್ಲಿಯೇ ಗಮನ ಸೆಳೆದಿದ್ದಾರೆ. ಅನೇಕ ಬಗೆಯ ಯೋಜನೆಗಳನ್ನು ಜನತೆಯ, ಅದರಲ್ಲೂ ಬಡವರ ಏಳಿಗೆಗಾಗಿ ರೂಪಿಸಿ ಸಮಾನತೆಯ ಬೆಳಕು ಪ್ರಜ್ವಲಿಸುವಂತೆ ಮಾಡುತ್ತಿದ್ದಾರೆ.&lt;/p&gt;&lt;p&gt;ವಿಶ್ವದಲ್ಲೇ ಶ್ರೇಷ್ಠ ನಾಯಕ ಎಂದು ನರೇಂದ್ರ ಮೋದಿ ಹೆಸರು ಗಳಿಸಿರುವುದು ಕಾಂಗ್ರೆಸ್ಸಿನ ಹೀನ ಮನಸ್ಸಿನ ನಾಯಕರಿಗೆ ಅರ್ಥವಾಗುತ್ತಿಲ್ಲ ಎಂದು ದೂರಿದರು. ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಇದನ್ನು ತೋರಿಸಿಕೊಳ್ಳಲು ಮುಂದಾಗದೇ ಅನೇಕ ಯೋಜನೆಗಳ ಜಾರಿಗೆ ಅನಗತ್ಯ ನಿಯಮಗಳನ್ನು ತರುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿಯು ರಾಜ್ಯದ ಪ್ರತಿಯೊಬ್ಬರ ಅಚ್ಚುಮೆಚ್ಚಿನ ಪಕ್ಷವಾಗಿ ಹೊರಹೊಮ್ಮಲಿದೆ ಎಂದರು.&lt;/p&gt;&lt;h2&gt;&lt;strong&gt;ಬಿಜೆಪಿ ರಾಜ್ಯಾಧ್ಯಕ್ಷರ ಬದಲಿಲ್ಲ&lt;/strong&gt;&lt;/h2&gt;&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೆಯೇಂದ್ರ ಪಕ್ಷವನ್ನು ಸದೃಢವಾಗಿ ಸಂಘಟಿಸುತ್ತಿದ್ದಾರೆ. ಇವರ ಈ ಪರಿಯ ಕಾರ್ಯ ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿದೆ. ವಿಜಯೇಂದ್ರ ಅವರನ್ನು ಬದಲಾಯಿಸುವ ಯಾವುದೇ ಕಾರ್ಯ ದೆಹಲಿಯ ವರಿಷ್ಠರ ಚಿಂತನೆಯಲ್ಲಿ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ದೆಹಲಿಯಲ್ಲಿ ಯಾವುದೇ ಬಗೆಯ ಲಾಬಿ ನಡೆಸಿಲ್ಲ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>vijayanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/b-sriramulu-questions-priyank-kharge-over-gruhalakshmi-rs-5000-crore-gvd/articleshow-b1cuql8"/>
        </item>
        <item>
            <title><![CDATA[ಅಬಕಾರಿ ಅಧಿಕಾರಿಯ ಅಕ್ರಮ ಸಾಮ್ರಾಜ್ಯಕ್ಕೆ ಇಡಿ ಶಾಕ್, ಜಾರಕಿಹೊಳಿ ಭಾವ ಮಂಜುನಾಥ್ ವಶಕ್ಕೆ, ಲೆಕ್ಕವಿಲ್ಲದ ಬೇನಾಮಿ ಬಾರ್ ಲೈಸೆನ್ಸ್!]]></title>
            <link>https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</link>
            <guid isPermaLink="true">https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</guid>
            <pubDate>Wed, 24 Jun 2026 14:44:49 +0530</pubDate>
            <description><![CDATA[ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ಅಕ್ರಮ ಆಸ್ತಿ ಮತ್ತು ಹವಾಲಾ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಶೋಧಕಾರ್ಯದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಪತ್ತೆಯಾಗಿದ್ದು, ಅಧಿಕಾರಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ರಾಜ್ಯ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣವನ್ನು ಬಯಲುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvwebjrzd71hqnf1qes1avxc,imgname-karnataka-excise-scam-y-manjunath-1782292269854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು / ಬೆಳಗಾವಿ: &lt;/strong&gt;ರಾಜ್ಯ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಹಗರಣವೊಂದು ಬೆಳಕಿಗೆ ಬಂದಿದ್ದು, ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ (Additional Commissioner) ವೈ. ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿ ಪತಿ ಹಾಗೂ ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್ ಅವರನ್ನು ಕೊನೆಗೂ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ವಿದೇಶಿ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ಲಿಂಕ್ ಹಾಗೂ ಅಕ್ರಮ ಆಸ್ತಿ ಸಂಪಾದನೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ. ಕರ್ನಾಟಕ, ಗೋವಾ ಮತ್ತು ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳ ಇಡಿ ಅಧಿಕಾರಿಗಳನ್ನೊಳಗೊಂಡ ಜಂಟಿ ಪಡೆಗಳು, 10ಕ್ಕೂ ಹೆಚ್ಚು ಅರೆಸೇನಾ ಪಡೆ (CRPF) ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಈ ದಾಳಿ ನಡೆಸಿವೆ.&lt;/p&gt;&lt;h2&gt;ರಾಜ್ಯದ 6 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ಇಡಿ ರೇಡ್!&lt;/h2&gt;&lt;p&gt;ಬೆಳ್ಳಂಬೆಳಗ್ಗೆ 5:30ರ ಸುಮಾರಿಗೆ ಇಡಿ ಅಧಿಕಾರಿಗಳು ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿ ವೈ. ಮಂಜುನಾಥ್ ಹಾಗೂ ಅವರ ಆಪ್ತ ಜಾಲವನ್ನು ಗುರಿಯಾಗಿಸಿಕೊಂಡು ಬೆಂಗಳೂರು, ಬೆಳಗಾವಿ, ಮೈಸೂರು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಮತ್ತು ಅಥಣಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt; ರೇಸ್&zwnj;ಕೋರ್ಸ್ ರಸ್ತೆಯ (ಸ್ಯಾಂಕಿ ರಸ್ತೆ) ಪ್ರತಿಷ್ಠಿತ 'ದಿ ಸಮ್ಮಿಟ್' ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಮಂಜುನಾಥ್ ಅವರ ಐಷಾರಾಮಿ ಫ್ಲಾಟ್ ಮೇಲೆ ಮಹಿಳಾ ಇಡಿ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಿಯೇ ಇದ್ದ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಯ ಬಳಿಕ ವಶಕ್ಕೆ ಪಡೆದಿದೆ.&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ಮಂಜುನಾಥ್ ಅವರ ಮುಖ್ಯ ನಿವಾಸದ ಮೇಲೆ ದಾಳಿ ನಡೆದಿದೆ. ಮಹತ್ವದ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಡಿವೈಎಸ್&zwnj;ಪಿ (DySP) ದರ್ಜೆಯ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ದೌಡಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಜಯನಗರ (ಅರಸೀಕೆರೆ):&lt;/strong&gt; ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಮಂಜುನಾಥ್ ಅವರಿಗೆ ಸೇರಿದ ಎರಡು ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.&lt;/p&gt;&lt;p&gt;&lt;strong&gt;ಮೈಸೂರು:&lt;/strong&gt; ದಟ್ಟಗಳ್ಳಿ 3ನೇ ಹಂತದ 5ನೇ ಕ್ರಾಸ್&zwnj;ನಲ್ಲಿರುವ #3638 'ಸ್ವಯಂಭು' ನಿವಾಸದ ಮೇಲೆ ದಾಳಿ ನಡೆದಿದೆ. ಇದು ಕೂಡ ಮಂಜುನಾಥ್ ಅವರ ಆಸ್ತಿಯಾಗಿದ್ದು, ಇಲ್ಲಿ ಅವರ ಆತ್ಮೀಯ ಸ್ನೇಹಿತೆ ಹಾಗೂ ಪ್ರಸ್ತುತ ಅಬಕಾರಿ ಇಲಾಖೆ ಇನ್ಸ್&zwnj;ಪೆಕ್ಟರ್ ಆಗಿರುವ ಯಮುನಾ ಮತ್ತು ಅವರ ತಾಯಿ ಸುಲೋಚನಾ ವಾಸವಾಗಿದ್ದರು. ಇಡಿ ಅಧಿಕಾರಿಗಳು ತೀವ್ರ ದಾಖಲೆ ಪರಿಶೀಲನೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ಯಮುನಾ ಅವರನ್ನು ಮುಖ ಮುಚ್ಚಿಕೊಂಡು ವಾಹನದಲ್ಲಿ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಮಂಜುನಾಥ್ ಆಪ್ತ ಅಧಿಕಾರಿಗಳಿಗೂ ಇಡಿ ಶಾಕ್!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮ ಜಾಲದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಅವರ ಆಪ್ತ ವಲಯದ ಇತರ ಅಧಿಕಾರಿಗಳ ಮೇಲೂ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ:&lt;/p&gt;&lt;p&gt;ಸತೀಶ್ ಶಿವಶಂಕರ ಕಾಗಲೆ (ಎಸ್ಪಿ, ತುಮಕೂರು ಅಬಕಾರಿ ಇಲಾಖೆ): ಮಂಜುನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಬೆಳಗಾವಿಯ ಶ್ರೀನಗರದಲ್ಲಿರುವ ಅಪಾರ್ಟ್&zwnj;ಮೆಂಟ್ ಹಾಗೂ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಐದಾರು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.&lt;/p&gt;&lt;p&gt;ವಿಶ್ವನಾಥ್ ಗಾಣಿಗೇರ (ಡಿವೈಎಸ್ಪಿ, ಚಿಕ್ಕೋಡಿ ಅಬಕಾರಿ ಇಲಾಖೆ): ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಇವರ ನಿವಾಸದ ಮೇಲೂ ದಾಳಿ ನಡೆದಿದ್ದು, ಇವರೂ ಸಹ ಅಕ್ರಮ ವ್ಯವಹಾರಕ್ಕೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;h2&gt;ದಾಳಿ ವೇಳೆ ಪತ್ತೆಯಾದವು ನೂರಾರು 'ಬೇನಾಮಿ ಬಾರ್ ಲೈಸೆನ್ಸ್'ಗಳು!&lt;/h2&gt;&lt;p&gt;ಇಡಿ ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ ಮಂಜುನಾಥ್ ಅವರ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ನಿವಾಸಗಳಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಹಾಗೂ ಅವುಗಳ ಅಗ್ರಿಮೆಂಟ್&zwnj; ಬಾಂಡ್&zwnj;ಗಳು ಪತ್ತೆಯಾಗಿವೆ.&lt;/p&gt;&lt;p&gt;ಅಕ್ರಮದ ನೆಟ್&zwnj;ವರ್ಕ್: ಮಂಜುನಾಥ್ ಅವರು ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಾರ್ ಮತ್ತು ರೆಸ್ಟೋರೆಂಟ್&zwnj;ಗಳನ್ನು ಸ್ಥಾಪಿಸಿದ್ದರು. ಈ ಬೇನಾಮಿ ಬಾರ್&zwnj;ಗಳಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಇವರು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ (ಹವಾಲಾ ದಂಧೆ) ಮಾಡಿ, ಅಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;2013ರ ಲೋಕಾಯುಕ್ತ ಕೇಸ್; ಪ್ರಭಾವ ಬಳಸಿ ಹುದ್ದೆ ಸೃಷ್ಟಿ!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮಗಳ ಇತಿಹಾಸ ಇಂದಿನದ್ದಲ್ಲ. ಈ ಹಿಂದೆ 2013ರಲ್ಲಿ ಮೈಸೂರು ಅಬಕಾರಿ ಡಿಸಿ (DC) ಆಗಿದ್ದಾಗ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಬಾರ್ ಲೈಸೆನ್ಸ್ ನವೀಕರಣದಲ್ಲಿ (Renewal) ಕೋಟ್ಯಂತರ ರೂಪಾಯಿ ಲಂಚ ಹಾಗೂ ಸಂಬಳಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ (Disproportionate Assets) ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಲಾಖಾ ತನಿಖೆ (DE) ನಡೆದು ಪ್ರಸ್ತುತ ಅದು ಮುಚ್ಚಲ್ಪಟ್ಟಿತ್ತಾದರೂ, ಲೋಕಾಯುಕ್ತದ ಅದೇ ಅಕ್ರಮ ಆಸ್ತಿ ಗಳಿಕೆಯ ಮೂಲ ಕೇಸ್ ಅನ್ನು ಆಧರಿಸಿ ಈಗ ಇಡಿ ಅಖಾಡಕ್ಕಿಳಿದಿದೆ.&lt;/p&gt;&lt;h2&gt;ರಾಜಕೀಯ ಪ್ರಭಾವದ ಆರೋಪ:&amp;nbsp;&lt;/h2&gt;&lt;p&gt;ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೇವಲ ಬೆಂಗಳೂರು ರೇಂಜ್ ಮಾತ್ರ ಇತ್ತು. ಆದರೆ ಮಂಜುನಾಥ್ ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ವಿಶೇಷವಾಗಿ 'ಬೆಳಗಾವಿ ಅಬಕಾರಿ ರೇಂಜ್' ಅನ್ನು ಸೃಷ್ಟಿಸಿಕೊಂಡಿದ್ದರು. ಇದರ ಮೂಲಕ ರಾಜ್ಯದ ಅರ್ಧದಷ್ಟು ಜಿಲ್ಲೆಗಳ ಅಬಕಾರಿ ನಿಯಂತ್ರಣದ ಸರ್ವಾಧಿಕಾರವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡು, ಕರಾವಳಿ ಮತ್ತು ಗಡಿ ಭಾಗದಲ್ಲಿ ವ್ಯಾಪಕ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಅಧಿಕಾರಿಗಳ ವಶದಲ್ಲಿರುವ ವೈ. ಮಂಜುನಾಥ್ ಹಾಗೂ ವಶಪಡಿಸಿಕೊಳ್ಳಲಾದ ಲೈಸೆನ್ಸ್ ದಾಖಲೆಗಳಿಂದ ಇಲಾಖೆಯ ಇನ್ನೂ ಹಲವು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt"/>
        </item>
        <item>
            <title><![CDATA[ಹೊಸಪೇಟೆಯ ಹೊಲದಲ್ಲಿ ಅಡಗಿದ್ದ ಹೊಯ್ಸಳರ ಕಾಲದ ರಹಸ್ಯ;  15 ಅಡಿ ಎತ್ತರದ ಶಾಸನ ಪತ್ತೆ]]></title>
            <link>https://kannada.asianetnews.com/karnataka-districts/donation-inscription-from-the-hoysala-period-has-been-discovered-in-gundlavaddigeri-village-in-hosapete-taluk-mrq/articleshow-d8kdghu</link>
            <guid isPermaLink="true">https://kannada.asianetnews.com/karnataka-districts/donation-inscription-from-the-hoysala-period-has-been-discovered-in-gundlavaddigeri-village-in-hosapete-taluk-mrq/articleshow-d8kdghu</guid>
            <pubDate>Sun, 07 Jun 2026 06:15:07 +0530</pubDate>
            <description><![CDATA[&lt;p&gt;ಹೊಸಪೇಟೆ ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದಲ್ಲಿ ಹೊಯ್ಸಳರ ಕಾಲದ ಅಪ್ರಕಟಿತ ದಾನ ಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ಹೊಯ್ಸಳ ನರಸಿಂಹ ಚಕ್ರವರ್ತಿಯ ಕಾಲದಲ್ಲಿ ಸ್ಥಳೀಯ ಆಡಳಿತಗಾರ ಕಾಸಿಗೌಡನು ಕೆರೆ ನಿರ್ಮಿಸಿ, ಬಡಗಿಯೊಬ್ಬನಿಗೆ ಭೂಮಿಯನ್ನು ದಾನ ನೀಡಿದ ವಿವರಗಳನ್ನು ಒಳಗೊಂಡಿದೆ. ಇದು ಜಿಲ್ಲೆಯಲ್ಲಿ ಹೊಯ್ಸಳರ ಆಳ್ವಿಕೆಯ ಕುರುಹುಗಳನ್ನು ದೃಢಪಡಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktfrcrhefjqkwejqxpbcxcs6,imgname-hampi-1780792844846.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ: &amp;nbsp;&lt;/strong&gt;ಹೊಸಪೇಟೆ ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಚಂದ್ರಯ್ಯ ಸ್ವಾಮಿ ಅವರ ಹೊಲವೊಂದರಲ್ಲಿದ್ದ ಹೊಯ್ಸಳ ಕಾಲದ ಅಪ್ರಕಟಿತ ದಾನ ಶಾಸನ ಪತ್ತೆಯಾಗಿದೆ.&lt;/p&gt;&lt;p&gt;ಈ ಶಾಸನವನ್ನು ತುಮಕೂರು ಶಶಿಕುಮಾರ ನಾಯಕ ಮಾರ್ಗದರ್ಶನದಲ್ಲಿ ಗುಂಡ್ಲವದ್ದಿಗೆರೆ ಗ್ರಾಮದ ಗೌರವ ಶಿಕ್ಷಕರಾದ ಮಂಕಾಳಪ್ಪ, ಮಲ್ಲನಗೌಡ, ಗಂಗಾಧರ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರಾದ ಡಾ.ಗೋವಿಂದ, ಪ್ರೊ.ತಿಪ್ಪೇಸ್ವಾಮಿ, ಡಾ.ಕೃಷ್ಣೇಗೌಡ, ಇಸ್ಮಾಯಿಲ್ ಸಿದ್ದಿಕ್, ಅಶೋಕ ತಲೇಖಾನ್ ಪತ್ತೆ ಹಚ್ಚಿದ್ದಾರೆ.&lt;/p&gt;&lt;h2&gt;&lt;strong&gt;15 ಸಾಲುಗಳುಳ್ಳ ಶಾಸನ ಎಂಟು ಅಡಿ ಎತ್ತರದ ಶಾಸನ&lt;/strong&gt;&lt;/h2&gt;&lt;p&gt;ಈ ಶಾಸನವು ಗ್ರಾನೈಟ್ ಕಲ್ಲಿನಲ್ಲಿ ಬರೆಯಲಾಗಿದೆ. 15 ಸಾಲುಗಳುಳ್ಳ ಶಾಸನ ಎಂಟು ಅಡಿ ಎತ್ತರವಾಗಿದ್ದು, ಒಂದೂವರೆ ಅಡಿ ಅಗಲವಾಗಿದೆ. ಮೊದಲ ಸಾಲಿನಲ್ಲೇ ರಾಜನ ಹೆಸರನ್ನು ನಮೂದಿಸಲಾಗಿದೆ. ಹೊಯ್ಸಳರ ನರಸಿಂಹ ಚಕ್ರವರ್ತಿಯ ಕಾಲಾವಧಿಯಲ್ಲಿ ಗುಂಡ್ಲವದ್ದಿಗೆರೆಯನ್ನು ಕಾಸಿಗೌಡನು ಆಳ್ವಿಕೆ ನಡೆಸುತ್ತಿದ್ದ. ಆತ ಒಂದು ಕೆರೆ ಕಟ್ಟಿಸಿದುದಲ್ಲದೇ ದೇಗುಲಕ್ಕೆ ಜಾಗಟೆ, ಕೊಳಗ ನೀಡಿರುವ ಕುರಿತಾಗಿದೆ. ಇದರಿಂದ ಜಿಲ್ಲೆಯಲ್ಲಿ ಹೊಯ್ಸಳ ಅರಸರ ಆಳ್ವಿಕೆ ಇತ್ತೆಂದು ತಿಳಿದುಬರುತ್ತದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಎಚ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.&lt;/p&gt;&lt;p&gt;ಈ ದಾನ ಶಾಸನದಲ್ಲಿ ವಿಶೇಷವಾಗಿ ಬಡಗೇರರ ವೃತ್ತಿ ಉಲ್ಲೇಖವಿದೆ. ಕಾಸಿಗೌಡನು ಸಂಣಯನ ಮಗನಾದ ಬಡಗಿ ನಾಗಭೋಜನಿಗೆ ಹೊಲವೊಂದನ್ನು ದಾನ ನೀಡಿರುವ ವಿವರವಿದೆ. ಶಾಸನದಲ್ಲಿ ಸರ್ವಮಾನ್ಯ ಹೊಲ ಎಂದಿರುವುದರಿಂದ ಯಾವುದೇ ರೀತಿಯ ತೆರಿಗೆ ಕಟ್ಟುವಂತಿರಲಿಲ್ಲ ಎಂದು ತಿಳಿಯುತ್ತದೆ.&lt;/p&gt;&lt;p&gt;ಜೊತೆಗೆ ಸೂರ್ಯ, ಚಂದ್ರ, ನಕ್ಷತ್ರ ಇರುವವರೆಗೂ ಶಾಸನ ಇರಲಿ ಎಂದು ಶಾಪಾಶಯವು, ಹಾಗೆ ದಾನ ನೀಡುವುದನ್ನು ತಪ್ಪಿಸಬಾರದೆಂಬ ಸಾಲುಗಳು ಶಾಸನದಲ್ಲಿ ಬರೆಸಲಾಗಿದೆ. ಇದೇ ರೀತಿ ಕಾಕುಬಾಳು ಕ್ರಾಸ್ ನ ಗುಂಡ್ಲವದ್ದಿಗೆರೆಯ ಚಂದ್ರಪ್ಪನವರ ಹೊಲವೊಂದರಲ್ಲಿ ಕುಂಬಾರ ಪೊನ್ನಿಮಯ್ಯನ ಮಗ ಯಂಕಬಿಯನ ಹೆಸರಲ್ಲಿ ಕಟ್ಟಿಸಿದ ಕೆರೆ ಎಂಬ ಅಪ್ರಕಟಿತ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡವು ಈ ಹಿಂದೆ ಪತ್ತೆ ಮಾಡಲಾಗಿತ್ತು. ಆ ಶಾಸನದಲ್ಲಿ ಕುಂಬಾರರ ವೃತ್ತಿ ಪ್ರಸ್ತಾಪಿಸಲಾಗಿದೆ.&lt;/p&gt;&lt;h3&gt;&lt;strong&gt;ಕೆರೆ, ದೇವಸ್ಥಾನದ ಮಾಹಿತಿ&lt;/strong&gt;&lt;/h3&gt;&lt;p&gt;ಈ ಶಾಸನದಲ್ಲಿ ಬಡಗೇರರ ವೃತ್ತಿಯನ್ನು ಉಲ್ಲೇಖಿಸಲಾಗಿದೆ. ಶಾಸನ ಇರುವ ಅನತಿ ದೂರದಲ್ಲಿಯೇ ಕೆರೆಯ ಕುರುಹು ಇದೆ. ಇದರಿಂದ ಆಗ ಮಳೆ ನೀರು ಪೋಲಾಗದಂತೆ ಕೆರೆಗಳನ್ನು ನಿರ್ಮಿಸಿರಬಹುದು. ಗ್ರಾಮದಲ್ಲಿ ಅತ್ಯಂತ ಸುಂದರವಾದ ಈಶ್ವರ ದೇಗುಲವೊಂದಿದೆ. ಬಹುಶಃ ಶಾಸನದಲ್ಲಿ ತಿಳಿಸಿದಂತೆ ಗಂಟೆ, ಜಾಗಟೆಯನ್ನು ಇದೇ ದೇವಾಲಯಕ್ಕೆ ದಾನ ನೀಡಿರಬೇಕು. ಇದರ ರಚನೆ ಗಮನಿಸಿದರೆ ಹೊಯ್ಸಳ ಕಾಲಾವಧಿಯ ಗುಡಿ ಇರಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ.ಗೋವಿಂದ ತಿಳಿಸಿದ್ದಾರೆ.&lt;/p&gt;&lt;p&gt;ಈ ಶಾಸನವು ಹೊಲವೊಂದರಲ್ಲಿ ಬಿಸಿಲು ಗಾಳಿ ಮಳೆಯಿಂದ ರಕ್ಷಣೆ ಇಲ್ಲದೇ ಇರುವುದರಿಂದ ಅಕ್ಷರಗಳು ಸವೆದು ಹೋಗಿವೆ. ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯು ಇಂತಹ ನಿರ್ಲಕ್ಷಿತ ಶಾಸನಗಳ ರಕ್ಷಣೆ ಮಾಡಬೇಕೆಂದು ಡಾ. ಕೃಷ್ಣೇಗೌಡ ತಿಳಿಸಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/donation-inscription-from-the-hoysala-period-has-been-discovered-in-gundlavaddigeri-village-in-hosapete-taluk-mrq/articleshow-d8kdghu"/>
        </item>
        <item>
            <title><![CDATA[ವಿಜಯನಗರ ಸಾಮ್ರಾಜ್ಯದ ಅಪರೂಪದ ತ್ರಿಭಾಷಾ ಶಾಸನ ಆಂಧ್ರದ ತಿರುಪತಿ ಕಾಡಲ್ಲಿ ಪತ್ತೆ! ಅಪರೂಪದ ದಾಖಲೆ ಉಲ್ಲೇಖ]]></title>
            <link>https://kannada.asianetnews.com/india-news/rare-16th-century-vijayanagara-empire-inscriptions-found-in-tirupati-seshachalam-forest-at-andhra-pradesh-gdp/articleshow-dwhc1w2</link>
            <guid isPermaLink="true">https://kannada.asianetnews.com/india-news/rare-16th-century-vijayanagara-empire-inscriptions-found-in-tirupati-seshachalam-forest-at-andhra-pradesh-gdp/articleshow-dwhc1w2</guid>
            <pubDate>Wed, 24 Jun 2026 16:24:12 +0530</pubDate>
            <description><![CDATA[ಆಂಧ್ರಪ್ರದೇಶದ ಶೇಷಾಚಲಂ ಅರಣ್ಯದಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಿಜಯನಗರ ಸಾಮ್ರಾಜ್ಯದ ಕಾಲದ ಅಪರೂಪದ ಶಾಸನಗಳನ್ನು ಪತ್ತೆಹಚ್ಚಿದೆ. 16ನೇ ಶತಮಾನದ ಸದಾಶಿವ ದೇವರಾಯನ ಆಳ್ವಿಕೆಗೆ ಸೇರಿದ ಈ ತ್ರಿಭಾಷಾ ಶಾಸನಗಳು, ದೇವಾಲಯಕ್ಕೆ ನೀಡಿದ ಭೂದಾನಗಳ ಬಗ್ಗೆ ಮಹತ್ವದ ಮಾಹಿತಿ ನೀಡುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvwkafvsregmjy4tq10hjpax,imgname-vijayanagara-empire-inscriptions-found-in-tirupati-1782297476984.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಇತಿಹಾಸ ಮತ್ತು ಪುರಾತತ್ವ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಪ್ರಸಿದ್ಧ ಶೇಷಾಚಲಂ ಮೀಸಲು ಅರಣ್ಯದ ಒಳಭಾಗದಲ್ಲಿನ ಬೆಟ್ಟದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ ಅತ್ಯಂತ ಅಪರೂಪದ ಐತಿಹಾಸಿಕ ಶಾಸನಗಳು ಮತ್ತು ಶಿಲ್ಪಕಲೆಗಳು ಪತ್ತೆಯಾಗಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ತಜ್ಞರ ತಂಡವು ನಡೆಸಿರುವ ಇತ್ತೀಚಿನ ವ್ಯವಸ್ಥಿತ ಸಮೀಕ್ಷೆಯಲ್ಲಿ ಈ ರಹಸ್ಯಗಳು ಬಯಲಿಗೆ ಬಂದಿದ್ದು, ಇತಿಹಾಸ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;h2&gt;ಸದಾಶಿವಕೋಣದಲ್ಲಿ 16ನೇ ಶತಮಾನದ ಮೂರು ಅಪರೂಪದ ಶಾಸನಗಳು&lt;/h2&gt;&lt;p&gt;ನಾಗಾರ್ಜುನಸಾಗರ್ ಶ್ರೀಶೈಲಂ ಹುಲಿ ಮೀಸಲು ಪ್ರದೇಶವನ್ನು (NSTR) ಒಳಗೊಂಡಿರುವ ನಲ್ಲಮಲ ಅರಣ್ಯದಲ್ಲಿ ಯಶಸ್ವಿ ಶಿಲಾಶಾಸನ ಸಮೀಕ್ಷೆಯನ್ನು ಮುಗಿಸಿದ ಪುರಾತತ್ವ ಇಲಾಖೆಯ ತಂಡವು, ಈ ಬಾರಿ ಶೇಷಾಚಲಂ ಶ್ರೇಣಿಯ ಕಡೆಗೆ ಗಮನ ಹರಿಸಿತ್ತು. ಇಲ್ಲಿನ ದಟ್ಟ ಹಾಗೂ ಇದುವರೆಗೆ ಅನ್ವೇಷಿಸದ ಸದಾಶಿವಕೋನ ಎಂಬ ಅರಣ್ಯ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದಾಗ 16 ನೇ ಶತಮಾನಕ್ಕೆ ಸೇರಿದ ಮೂರು ಅಪರೂಪದ ಶಾಸನಗಳು ಪತ್ತೆಯಾಗಿವೆ. ಈ ಶಾಸನಗಳು ವಿಜಯನಗರ (ಕರ್ನಾಟಕ) ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿಯಾದ ಸದಾಶಿವ ದೇವರಾಯನ ಆಳ್ವಿಕೆಯ ಕಾಲಕ್ಕೆ ಸೇರಿದವು ಎಂದು ತಜ್ಞರು ದೃಢಪಡಿಸಿದ್ದಾರೆ.&lt;/p&gt;&lt;h2&gt;ತ್ರಿಭಾಷಾ ಶಾಸನಗಳು ಮತ್ತು ಅವುಗಳ ವೈಶಿಷ್ಟ್ಯ&lt;/h2&gt;&lt;p&gt;ಪತ್ತೆಯಾಗಿರುವ ಈ ಶಿಲಾಶಾಸನಗಳು ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ. ಇವುಗಳನ್ನು ಆ ಕಾಲದ ಪ್ರಮುಖ ಭಾಷೆಗಳಾದ ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಕೆತ್ತಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಬಹುಭಾಷಾ ಸಂಸ್ಕೃತಿ ಮತ್ತು ದಕ್ಷಿಣ ಭಾರತದಾದ್ಯಂತ ವಿಜಯನಗರ ಸಾಮ್ರಾಜ್ಯದ ಆಡಳಿತಾತ್ಮಕ ಹಿಡಿತಕ್ಕೆ ಸಾಕ್ಷಿಯಾಗಿದೆ.&lt;/p&gt;&lt;h2&gt;ಐತಿಹಾಸಿಕ ದಾಖಲೆಗಳು ತಿಳಿಸುವ ಸತ್ಯ:&lt;/h2&gt;&lt;p&gt;ಈ ಶಾಸನಗಳ ಪ್ರಕಾರ, ಚಕ್ರವರ್ತಿ ಸದಾಶಿವ ದೇವರಾಯನ ಆಳ್ವಿಕೆಯಲ್ಲಿ ಯೆರ್ಪೇಡು ಮಂಡಲದ ಗುಡಿಮಲ್ಲಂ ಗ್ರಾಮದಲ್ಲಿರುವ ಐತಿಹಾಸಿಕ ಪರಶುರಾಮೇಶ್ವರ ದೇವಾಲಯಕ್ಕೆ ಭೂದಾನಗಳನ್ನು ನೀಡಲಾಗಿತ್ತು. ದೇವಾಲಯದಲ್ಲಿ ನಿತ್ಯ ಪೂಜೆಗಳು, ಧಾರ್ಮಿಕ ಆಚರಣೆಗಳು ಮತ್ತು ನೈವೇದ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಈ ಭೂಮಿಯನ್ನು ಮೀಸಲಿಡಲಾಗಿತ್ತು ಎಂಬ ವಿವರಗಳು ಉಲ್ಲೇಖಿತವಾಗಿದೆ.&lt;/p&gt;&lt;h2&gt;ಅನ್ವೇಷಣೆಯ ಮುಖ್ಯ ಉದ್ದೇಶಗಳು&amp;nbsp;&lt;/h2&gt;&lt;p&gt;ಈ ಆವಿಷ್ಕಾರವು ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿರದೆ, ಆ ಯುಗದ ಸಮಗ್ರ ಆಡಳಿತದ ಚಿತ್ರಣವನ್ನು ಒದಗಿಸುತ್ತದೆ.&lt;/p&gt;&lt;p&gt;&lt;strong&gt;ದೇವಾಲಯದ ಆಡಳಿತ: &lt;/strong&gt;ವಿಜಯನಗರ ಕಾಲದಲ್ಲಿ ದೇವಾಲಯಗಳನ್ನು ಹೇಗೆ ನಿರ್ವಹಿಸಲಾಗುತ್ತಿತ್ತು ಮತ್ತು ರಾಜರು ಅದಕ್ಕೆ ಹೇಗೆ ಪ್ರೋತ್ಸಾಹ ನೀಡುತ್ತಿದ್ದರು ಎಂಬುದನ್ನು ಇದು ವಿವರಿಸುತ್ತದೆ.&lt;/p&gt;&lt;p&gt;&lt;strong&gt;ಭೂದಾನ ಪದ್ಧತಿ: &lt;/strong&gt;ಸಾಮ್ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಭೂದಾನಗಳು ವಹಿಸುತ್ತಿದ್ದ ಪ್ರಮುಖ ಪಾತ್ರದ ಮೇಲೆ ಇದು ಬೆಳಕು ಚೆಲ್ಲುತ್ತದೆ.&lt;/p&gt;&lt;p&gt;&lt;strong&gt;ಸಾಮಾಜಿಕ-ಆರ್ಥಿಕ ಪರಿಸ್ಥಿತಿ: &lt;/strong&gt;16ನೇ ಶತಮಾನದ ಜನರ ಜೀವನಮಟ್ಟ, ಕಂದಾಯ ಪದ್ಧತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಅರ್ಥಮಾಡಿಕೊಳ್ಳಲು ಇವು ಪ್ರಮುಖ ಆಧಾರಗಳಾಗಿವೆ.&lt;/p&gt;&lt;h2&gt;ASI ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆ&lt;/h2&gt;&lt;p&gt;ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಸಂಪೂರ್ಣ ಸಹಯೋಗದೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಅಭಯಾರಣ್ಯಗಳ ಆಳದಲ್ಲಿ ಅಡಗಿರುವ ಇತಿಹಾಸದ ಕುರುಹುಗಳನ್ನು ಹುಡುಕುವ ಬೃಹತ್ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ನಲ್ಲಮಲ ಮತ್ತು ಲಂಕಮಲ ಕಾಡುಗಳಲ್ಲಿ ಯಶಸ್ವಿಯಾಗಿ ಸಮೀಕ್ಷೆ ಮುಗಿಸಿರುವ ತಂಡ, ಈಗ ಶೇಷಾಚಲಂ ಅರಣ್ಯ ವಲಯದಲ್ಲಿ ಕಾರ್ಯಪ್ರವೃತ್ತವಾಗಿದೆ.&lt;/p&gt;&lt;p&gt;ಈ ಹಿಂದೆ ನಲ್ಲಮಲದಲ್ಲಿ ನಡೆಸಿದ ಸಂಶೋಧನೆಗಳು ಮೊದಲ ಶತಮಾನಕ್ಕೂ ಮುಂಚಿನಿಂದಲೂ ಅಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯವಿತ್ತು ಎಂಬುದನ್ನು ಸಾಬೀತುಪಡಿಸಿವೆ. ಅಷ್ಟೇ ಅಲ್ಲದೆ, ವಿಜಯನಗರದ ಮಹಾನ್ ದೊರೆ ಶ್ರೀಕೃಷ್ಣದೇವರಾಯ ಮತ್ತು ಮರಾಠಾ ಸಾಮ್ರಾಜ್ಯದ ಹೆಮ್ಮೆಯ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಸೇರಿದಂತೆ ಅನೇಕ ಐತಿಹಾಸಿಕ ಪುರುಷರು ಶ್ರೀಶೈಲಕ್ಕೆ ಭೇಟಿ ನೀಡಿದ್ದ ದಾಖಲೆಗಳನ್ನು ಸಹ ಈ ಸಮೀಕ್ಷೆಗಳು ಪತ್ತೆಹಚ್ಚಿವೆ.&lt;/p&gt;&lt;h2&gt;ಐತಿಹಾಸಿಕ ಪರಂಪರೆಯ ಸಂರಕ್ಷಣೆ&lt;/h2&gt;&lt;p&gt;ಶೇಷಾಚಲಂ ಕಾಡಿನಲ್ಲಿ ಕೇವಲ ವಿಜಯನಗರದ ಕಾಲದ ಅವಶೇಷಗಳು ಮಾತ್ರವಲ್ಲದೆ, ಅದಕ್ಕೂ ಹಿಂದಿನ ಪಲ್ಲವರು ಮತ್ತು ಕಾಕತೀಯ ರಾಜರ ಕಾಲದ ಅಭಿವೃದ್ಧಿ ಕಾರ್ಯಗಳನ್ನು ಸಾರುವ ಹಲವಾರು ಶಿಲಾಶಾಸನಗಳನ್ನು ಸಹ ಗುರುತಿಸಲಾಗಿದೆ. ಪ್ರಸ್ತುತ, ASI ವಿಜ್ಞಾನಿಗಳು ಈ ಎಲ್ಲಾ ಶಿಲಾಶಾಸನಗಳ ಗಣಕೀಕರಣ ಮತ್ತು ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.&lt;/p&gt;&lt;p&gt;ಸದಾಶಿವ ಕೋನ ಪ್ರದೇಶದಲ್ಲಿ ಪತ್ತೆಯಾಗಿರುವ ಈ ಹೊಸ ಪುರಾವೆಗಳು ಆಂಧ್ರಪ್ರದೇಶ, ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಮತ್ತೊಮ್ಮೆ ಜಗತ್ತಿನೆದುರು ಸಾಬೀತುಪಡಿಸಿವೆ. ಪುರಾತತ್ತ್ವ ಶಾಸ್ತ್ರದ ಇತಿಹಾಸದಲ್ಲಿ ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/rare-16th-century-vijayanagara-empire-inscriptions-found-in-tirupati-seshachalam-forest-at-andhra-pradesh-gdp/articleshow-dwhc1w2"/>
        </item>
        <item>
            <title><![CDATA[ಮೀಸಲಾತಿ ವಿಚಾರದಲ್ಲಿ ಸರ್ಕಾರಗಳ ಬೇಜವಾಬ್ದಾರಿ ಸಲ್ಲದು: ವಿ.ಎಸ್.ಉಗ್ರಪ್ಪ ಅಸಮಾಧಾನ]]></title>
            <link>https://kannada.asianetnews.com/karnataka-districts/vs-ugrappa-slams-government-over-reservation-issue-gvd/articleshow-ezbth92</link>
            <guid isPermaLink="true">https://kannada.asianetnews.com/karnataka-districts/vs-ugrappa-slams-government-over-reservation-issue-gvd/articleshow-ezbth92</guid>
            <pubDate>Sun, 24 May 2026 18:53:39 +0530</pubDate>
            <description><![CDATA[&lt;p&gt;ಮೀಸಲಾತಿ ಸರಿಯಾಗಿ ಜಾರಿಯಾಗದಿದ್ದರಿಂದ ಶೋಷಿತ ವರ್ಗಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಸಮುದಾಯಗಳನ್ನು ಎಸ್&zwnj;ಸಿ, ಎಸ್&zwnj;ಟಿಗೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpr67ffh0z73tkgzy6p2nsh6,imgname-bll-1776780819953.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಮೇ.24):&lt;/strong&gt; ಮೀಸಲಾತಿ ಸರಿಯಾಗಿ ಜಾರಿಯಾಗದಿದ್ದರಿಂದ ಶೋಷಿತ ವರ್ಗಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಸಮುದಾಯಗಳನ್ನು ಎಸ್&zwnj;ಸಿ, ಎಸ್&zwnj;ಟಿಗೆ ಸೇರಿಸುವ ರಾಜಕೀಯ ಘೋಷಣೆಗಳನ್ನು ಹೇಳಲಾಗುತ್ತಿದೆ. ಎಸ್ಸಿ, ಎಸ್ಟಿ ಪಟ್ಟಿಗೆ ಹೊಸಬರನ್ನು ಸೇರ್ಪಡೆ ಮಾಡುವುದು ಯಾರಪ್ಪನ ಆಸ್ತಿಯಲ್ಲ. ಈಗಾಗಲೇ ಇರುವವರಿಗೇ ತಟ್ಟೆಯಲ್ಲಿ ಅನ್ನವಿಲ್ಲ.&lt;/p&gt;&lt;p&gt;ಇನ್ನು ಹೊಸಬರನ್ನು ಸೇರಿಸುವ ಮುನ್ನ ಆಯಾ ಸಮಾಜಗಳ ಕುಲಶಾಸ್ತ್ರ ಅಧ್ಯಯನ ನಡೆಯಬೇಕು. ಸರ್ಕಾರ ಎಲ್ಲರ ಸ್ಥಿತಿಗತಿಯನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಿ, ತಟ್ಟೆಗೆ ಅನ್ನ ಇಟ್ಟಂತೆ ಮಾಡಿದ್ದ ಸರ್ಕಾರಗಳು, ಈಗ ಅದಕ್ಕೆ ತಡೆಯಾಜ್ಞೆ ಬರುವಂತೆ ಮಾಡಿ ನಮ್ಮ ಬದುಕಿನ ಜೊತೆ ಆಟವಾಡುತ್ತಿರುವುದು ಸರಿಯಲ್ಲ ಎಂದರು.&lt;/p&gt;&lt;p&gt;ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ನಾಗಮೋಹನ್ ದಾಸ್ ಸಮಿತಿ ವರದಿ ಆಧರಿಸಿ ಮೀಸಲಾತಿ ಹೆಚ್ಚಿಸಲಾಯಿತು. ಇದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಮಾರ್ಚ್ 23ರಂದು 2023ರ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಇದುವರೆಗೆ ಕೇಂದ್ರದಿಂದ ಯಾವುದೇ ಉತ್ತರವಿಲ್ಲ. ಪ್ರಸ್ತುತ ಈ ಶೇ.56 ಮೀಸಲಾತಿಗೆ ಕೋರ್ಟ್ ಸ್ಟೇ ನೀಡಿದ್ದರೂ ಸರ್ಕಾರದ ಅಡ್ವೊಕೇಟ್ ಜನರಲ್ ಸರಿಯಾಗಿ ವಾದ ಮಂಡಿಸಿಲ್ಲ.&lt;/p&gt;&lt;h2&gt;&lt;strong&gt;ಬೇಜವಾಬ್ದಾರಿ ಮಾಡುತ್ತಿರುವುದು ಸರಿಯಲ್ಲ&lt;/strong&gt;&lt;/h2&gt;&lt;p&gt;ಪ್ರಸ್ತುತ 56 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದನ್ನು ಸರಿಯಾಗಿ ಜಾರಿ ಮಾಡಿದರೆ ಎಸ್&zwnj;ಸಿ, ಎಸ್&zwnj;ಟಿ, ಒಬಿಸಿ ಇವರಿಗೆಲ್ಲ ಉದ್ಯೋಗ ಸಿಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು. ಪ್ರಧಾನಿ, ಮುಖ್ಯಮಂತ್ರಿ ಕೇವಲ ಓಟಿಗಾಗಿ ಸಂವಿಧಾನ ರಕ್ಷಣೆಯ ಮಾತುಗಳನ್ನಾಡುತ್ತಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ನಮ್ಮ ಜೀವನದೊಂದಿಗೆ ಆಟವಾಡುವುದನ್ನು ನಿಲ್ಲಿಸಬೇಕು ಎಂದರು.&lt;/p&gt;&lt;p&gt;2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳು (ಶೇ.17.01) ಹಾಗೂ ತಳವಾರ, ಪರಿವಾರ ಸೇರಿದಂತೆ 51 ಪರಿಶಿಷ್ಟ ಪಂಗಡಗಳು (ಶೇ.7) ಇದ್ದು, ಒಬಿಸಿ ಶೇ.32 ಇದ್ದಾರೆ. ಎಸ್&zwnj;ಸಿ, ಎಸ್&zwnj;ಟಿ, ಒಬಿಸಿ ಸೇರಿ ಒಟ್ಟು ಶೋಷಿತ ವರ್ಗಗಳ ಜನಸಂಖ್ಯೆ 4 ಕೋಟಿಗಿಂತ ಹೆಚ್ಚಿದ್ದಾರೆ. ಆದರೆ, ರಾಜ್ಯದಲ್ಲಿ ಸದ್ಯ 3.5 ಲಕ್ಷಕ್ಕೂ ಹೆಚ್ಚು ಸುಳ್ಳು ಜಾತಿ ಪ್ರಮಾಣಪತ್ರಗಳು ಸೃಷ್ಟಿಯಾಗಿವೆ ಎಂದು ಕಾರ್ಯಾಂಗದ ವೈಫಲ್ಯದ ವಿರುದ್ಧ ಉಗ್ರಪ್ಪ ಸಿಡಿಮಿಡಿಗೊಂಡರು.&lt;/p&gt;]]></content:encoded>
            <category>vijayanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/vs-ugrappa-slams-government-over-reservation-issue-gvd/articleshow-ezbth92"/>
        </item>
        <item>
            <title><![CDATA[TB Dam ನೋಡೋಕೆ ಮುಗಿಬಿದ್ದ ಪ್ರವಾಸಿಗರು!; ಲೇಸರ್ ಲೈಟಿಂಗ್ ನೆರಳಿನಲ್ಲಿ ಚಿನ್ನದ ನದಿಯಂತಾದ ತುಂಗಭದ್ರಾ ಒಡಲು!]]></title>
            <link>https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</link>
            <guid isPermaLink="true">https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</guid>
            <pubDate>Wed, 24 Jun 2026 20:59:22 +0530</pubDate>
            <description><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvx3pn214ctd15f65z9mtdn3,imgname-tungabhadra-dam--2--1782314652737.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ನಾಳೆ (ಜೂನ್ 25) ಐತಿಹಾಸಿಕ ಕ್ಷಣವೊಂದು ದಾಖಲಾಗಲಿದೆ. ಜಲಾಶಯಕ್ಕೆ ಅಳವಡಿಸಲಾಗಿರುವ ನೂತನ ಕ್ರಸ್ಟ್ ಗೇಟ್&zwnj;ಗಳ ಅಧಿಕೃತ ಲೋಕಾರ್ಪಣೆ ಕಾರ್ಯಕ್ರಮ ನಾಳೆ ನೆರವೇರಲಿದ್ದು, ಈ ಸಂಭ್ರಮದ ಹಿನ್ನೆಲೆಯಲ್ಲಿ ಇಡೀ ಜಲಾಶಯವನ್ನು ವಿದ್ಯುತ್ ದೀಪಾಲಂಕಾರದಿಂದ ಅತ್ಯಂತ ಆಕರ್ಷಕವಾಗಿ ಶೃಂಗರಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್&zwnj;, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್&zwnj; ರೆಡ್ಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದರೊಂದಿಗೆ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿಆರ್&zwnj; ಪಾಟೀಲ್&zwnj; ಕೂಡ ಇರಲಿದ್ದಾರೆ.&lt;/p&gt;&lt;img&gt;&lt;p&gt;ಹೊಸ ಕ್ರಸ್ಟ್ ಗೇಟ್&zwnj;ಗಳ ಲೋಕಾರ್ಪಣೆಯ ಸಂಭ್ರಮಕ್ಕಾಗಿ ತುಂಗಭದ್ರಾ ಆಣೆಕಟ್ಟನ್ನು ವಧುವಿನಂತೆ ಸಜ್ಜುಗೊಳಿಸಲಾಗಿದೆ. ಇಡೀ ಜಲಾಶಯದ ಆಣೆಕಟ್ಟಿನ ಮೇಲೆ ಮೈಲಿಗಟ್ಟಲೆ ಸಾಲು ಸಾಲಾಗಿ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿಯ ವೇಳೆಗೆ ಜಲಾಶಯದ ನೀರು ಮತ್ತು ಗೋಡೆಗಳ ಮೇಲೆ ಪ್ರತಿಫಲಿಸುತ್ತಿರುವ ದೀಪಗಳ ಬೆಳಕು ನೋಡುಗರ ಕಣ್ಣು ಕೋರೈಸುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಕಳೆದ ಅವಧಿಯಲ್ಲಿ ಜಲಾಶಯದ ಪ್ರಮುಖ ಕ್ರಸ್ಟ್ ಗೇಟ್ (ಗೇಟ್ ನಂ. 19) ಕೊಚ್ಚಿ ಹೋಗಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ, ಯುದ್ಧೋಪಾದಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಸ್ಟಾಪ್ ಲಾಗ್ ಮತ್ತು ಕ್ರಸ್ಟ್ ಗೇಟ್&zwnj;ಗಳನ್ನು ಸಿದ್ಧಪಡಿಸಲಾಗಿತ್ತು. ಈ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಳೆ ಅಧಿಕೃತವಾಗಿ ಇವುಗಳನ್ನು ಸಾರ್ವಜನಿಕ ಸೇವೆಗೆ ಹಾಗೂ ರೈತರ ಹಿತದೃಷ್ಟಿಯಿಂದ ಲೋಕಾರ್ಪಣೆ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಹೊಸ ಗೇಟ್&zwnj;ಗಳ ಉದ್ಘಾಟನೆಗೆ ಸಾಕ್ಷಿಯಾಗಲಿರುವ ವಿಜಯನಗರದ ತುಂಗಭದ್ರಾ ಆಣೆಕಟ್ಟಿನ ಉದ್ದಕ್ಕೂ ಎಲ್ಇಡಿ (LED) ದೀಪಗಳ ಭವ್ಯ ಮಾಲೆಯನ್ನು ಹಾಕಲಾಗಿದೆ. ವಿವಿಧ ಬಣ್ಣಗಳ ಲೇಸರ್ ಮತ್ತು ಫ್ಲಡ್ ಲೈಟ್&zwnj;ಗಳ ನೆರಳಿನಾಟವು ಜಲಾಶಯಕ್ಕೆ ಹೊಸ ಕಳೆಯನ್ನು ತಂದಿದ್ದು, ಜಲಾಶಯದ ಹಿನ್ನೀರು ಚಿನ್ನದ ನದಿಯಂತೆ ಮಿನುಗುತ್ತಿದೆ.&lt;/p&gt;&lt;img&gt;&lt;p&gt;ಹಿಂದೆ ಗೇಟ್ ಮುರಿದು ಕೋಟ್ಯಂತರ ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗಿ, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭಾರಿ ಆತಂಕ ಮೂಡಿಸಿತ್ತು. ಆದರೆ ಈಗ ಇಂಜಿನಿಯರ್&zwnj;ಗಳು ಮತ್ತು ತಜ್ಞರ ಶ್ರಮದಿಂದ ಹೊಸ ಗೇಟ್&zwnj;ಗಳು ಯಶಸ್ವಿಯಾಗಿ ಅಳವಡಿಕೆಯಾಗಿ, ಡ್ಯಾಂ ಸಂಪೂರ್ಣ ಸುರಕ್ಷಿತವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯ ಕಾರ್ಯಕ್ರಮವು ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಜಲಾಶಯದ ಈ ಅಭೂತಪೂರ್ವ ದೀಪಾಲಂಕಾರದ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಇಂದಿನಿಂದಲೇ ಜಲಾಶಯದತ್ತ ಧಾವಿಸುತ್ತಿದ್ದಾರೆ. ಮುಸ್ಸಂಜೆಯ ವೇಳೆ ಇಡೀ ಆಣೆಕಟ್ಟು ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್&zwnj;ಗಳಲ್ಲಿ ಸೆರೆಹಿಡಿಯುತ್ತಿದ್ದು, ಪ್ರವಾಸಿ ತಾಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;img&gt;&lt;p&gt;ನಾಳೆ ನಡೆಯಲಿರುವ ಈ ಕ್ರಸ್ಟ್ ಗೇಟ್&zwnj;ಗಳ ಉದ್ಘಾಟನೆಯು ಕೇವಲ ಒಂದು ತಾಂತ್ರಿಕ ಕಾರ್ಯಕ್ರಮವಾಗಿರದೆ, ಕೋಟ್ಯಂತರ ಎಕರೆ ಕೃಷಿ ಭೂಮಿಯ ಜಲ ಭದ್ರತೆಯ ಸಂಕೇತವಾಗಿದೆ. ಯಾವುದೇ ತಾಂತ್ರಿಕ ದೋಷ ಬರದಂತೆ ಅತ್ಯಂತ ಭದ್ರವಾಗಿ ಈ ಗೇಟ್&zwnj;ಗಳನ್ನು ವಿನ್ಯಾಸಗೊಳಿಸಲಾಗಿದ್ದು, ನಾಳೆಯಿಂದ ಜಲಾಶಯವು ಸಂಪೂರ್ಣ ಸಾಮರ್ಥ್ಯದೊಂದಿಗೆ ನೀರನ್ನು ಸಂಗ್ರಹಿಸಲು ಸನ್ನದ್ಧವಾಗಲಿದೆ.&lt;/p&gt;]]></content:encoded>
            <category>vijayanagara</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo"/>
        </item>
        <item>
            <title><![CDATA[300 ಮಕ್ಕಳಿದ್ದಾರೆ ಶಿಕ್ಷಕರಿಲ್ಲ, ಒಂದೇ ಕೊಠಡಿ ಎರಡು ತರಗತಿಗಳಿಗೆ ಪಾಠ, ಇದು ಸರ್ಕಾರಿ ಶಾಲೆಯೋ, ಕುರಿದೊಡ್ಡಿಯೋ?]]></title>
            <link>https://kannada.asianetnews.com/karnataka-districts/huvanahadagali-govt-school-with-6-rooms-for-300-children-rav/articleshow-fggvq0t</link>
            <guid isPermaLink="true">https://kannada.asianetnews.com/karnataka-districts/huvanahadagali-govt-school-with-6-rooms-for-300-children-rav/articleshow-fggvq0t</guid>
            <pubDate>Fri, 12 Jun 2026 09:03:12 +0530</pubDate>
            <description><![CDATA[ಹೂವಿನಹಡಗಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದರೂ, ಇರುವುದು ಕೇವಲ 6 ಶಿಥಿಲಗೊಂಡ ಕೊಠಡಿಗಳು. ಕೊಠಡಿಗಳ ತೀವ್ರ ಕೊರತೆಯಿಂದಾಗಿ ಮಕ್ಕಳು ಮರದ ನೆರಳಿನಲ್ಲಿ ಮತ್ತು ಶಾಲಾ ಕಟ್ಟೆಯ ಮೇಲೆ ಕುಳಿತು ಪಾಠ ಕಲಿಯುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktwy0yv358q3kbj0d40xk52v,imgname-----------------------2026-06-12t085851.156-1781234957155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ (ಜೂ.12):&lt;/strong&gt; ಈ ಸರ್ಕಾರಿ ಶಾಲೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರಿಸುಮಾರು 300 ಮಕ್ಕಳು ದಾಖಲಾತಿ ಆಗಿದೆ. ಆದರೆ, ಇಲ್ಲಿರುವುದು ಕೇವಲ 6 ಕೊಠಡಿಗಳು. ಮಕ್ಕಳು ಕುಳಿತುಕೊಳ್ಳಲು ಕೋಣೆಗಳೇ ಇಲ್ಲದೆ ಈ ಶಾಲೆ ಅಕ್ಷರಶಃ ಕುರಿ ದೊಡ್ಡಿಯಾಗಿದೆ. ಮರದ ನೆರಳು, ಶಾಲೆಯ ಕಟ್ಟೆಯನ್ನು ಆಶ್ರಯಿಸಿ ಮಕ್ಕಳು ಓದುತ್ತಿವೆ.&lt;/p&gt;&lt;p&gt;ಹೌದು, ತಾಲೂಕು ಕೇಂದ್ರದಲ್ಲೇ ಮಿನಿ ವಿಧಾನಸೌಧ ಹೆಸರಿನಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು.&lt;/p&gt;&lt;h2&gt;ಕ್ಲಾಸ್ ಮಾಡಲು ಅಗತ್ಯ ಕೊಠಡಿಗಳೇ ಇಲ್ಲ!&lt;/h2&gt;&lt;p&gt;ಈ ಶಾಲೆಯಲ್ಲಿ ಎಲ್&zwnj;ಕೆಜಿ(LKG), ಯುಕೆಜಿ(UKG), 1 ರಿಂದ 7ನೇ ತರಗತಿವರೆಗೂ ತರಗತಿ ನಡೆಯುತ್ತಿವೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಈ ಶಾಲೆಗೆ ಅನುಮತಿ ಸಿಕ್ಕಿದೆ. ಪಟ್ಟಣದ ಮಕ್ಕಳು ಸೇರಿ ತಾಲೂಕಿನ ಅಕ್ಕಪಕ್ಕದ ಹಳ್ಳಿಗಳ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲು ದುಂಬಾಲು ಬಿದ್ದಿರುವ ಕಾರಣ ಆಂಗ್ಲ ಮಾಧ್ಯಮ ಶಾಲೆಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 7 ವರ್ಷಗಳ ಹಿಂದೆ ಆಂಗ್ಲ ಮಾಧ್ಯಮ ತರಗತಿಗಳು ಆರಂಭವಾಗಿದ್ದು, ಅಂದಿನಿಂದ ಈವರೆಗೂ ಆಂಗ್ಲ ಮಾಧ್ಯಮ ಶಾಲೆಗೆ, ಅಗತ್ಯವಿರುವ ತರಗತಿ ನಡೆಸಲು ಕೊಠಡಿಗಳೇ ಇಲ್ಲ.&lt;/p&gt;&lt;h3&gt;ಪೂರ್ಣಾವಧಿ ಶಿಕ್ಷರಿಲ್ಲ; ಅತಿಥಿ ಶಿಕ್ಷಕರುಗಳೇ ಗತಿ!&lt;/h3&gt;&lt;p&gt;ಇತ್ತ ಪೂರ್ಣಾವಧಿ ಶಿಕ್ಷಕರೂ ಇಲ್ಲದೇ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ.ಇಲ್ಲಿ 7 ಕೋಣೆಗಳಿವೆ. ಇದರಲ್ಲಿ 5 ಕೋಣೆಗಳು ಮಳೆಗೆ ಸೋರುತ್ತಿದ್ದವು. ಅಕ್ಷರ ಆವಿಷ್ಕಾರ ಯೋಜನೆಯಡಿ ಅವುಗಳ ಚಾವಣಿ ಮೇಲೆ ತಗಡಿನ ಸೀಟ್&zwnj; ಹಾಕಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಒಂದು ಕೊಠಡಿ ಮೀಸಲಿದೆ. ಉಳಿದಂತೆ 6 ಕೋಣೆಗಳು ಶಿಥಿಲವಾಗಿವೆ. ಚಾವಣಿಯ ಸಿಮೆಂಟ್&zwnj; ಉದುರುತ್ತಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗೆ ಸೇರಿದ ಮಕ್ಕಳು ಓದುವ ಪರಿಸ್ಥಿತಿ ಬಂದಿದೆ.&lt;/p&gt;&lt;p&gt;&lt;strong&gt;ಒಂದೇ ಕೋಣೆ, ಎರಡು ತರಗತಿ ಮಕ್ಕಳಿಗೆ ಪಾಠ!&lt;/strong&gt;&lt;/p&gt;&lt;p&gt;ಒಂದೇ ಕೋಣೆಯಲ್ಲಿ ಎರಡು ತರಗತಿಗಳ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಜತೆಗೆ ಉಳಿದ ತರಗತಿ ಮಕ್ಕಳನ್ನು ಕೋಣೆ ಮುಂದಿನ ಕಟ್ಟೆ ಹಾಗೂ ಮರದ ನೆರಳಿನಲ್ಲಿ ಪಾಠ ಮಾಡುತ್ತಿದ್ದಾರೆ. ಕೋಣೆಯ ಗೋಡೆಗೆ ಬ್ಲಾಕ್&zwnj; ಬೋರ್ಡ್&zwnj; ತೂಗುಹಾಕಿ ಮಕ್ಕಳಿಗೆ ಅಕ್ಷರಾಭ್ಯಾಸದ ಕಲಿಕೆ ನಡೆಯುತ್ತಿದೆ. ಹೊರಗಡೆಯೂ ಇಬ್ಬರು ಶಿಕ್ಷಕರು ಕುಳಿತು ಮಕ್ಕಳಿಗೆ ಪಾಠ ಓದಿಸುತ್ತಾರೆ. ಇನ್ನು ಕೆಲವು ಮಕ್ಕಳು ಮರದ ನೆರಳಿನಲ್ಲೇ ಅಭ್ಯಾಸ ಮಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಬಿಸಿಯೂಟದ ಕೋಣೆ ಕುಸಿದು ಬೀಳಲಿದೆ!&lt;/strong&gt;&lt;/p&gt;&lt;p&gt;ಈ ಶಾಲೆಯ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟದ, ಕೋಣೆ ಕುಸಿದು ಬೀಳಲು ದಿನ ಎಣಿಸುತ್ತಿದೆ. ಮಳೆ ಬಂದಾಗ ಸಂಪೂರ್ಣ ಸೋರುತ್ತಿದೆ. ಮಹಿಳೆಯರು ಅಪಾಯದಡಿ ಅನ್ನ ಬೇಯಿಸುತ್ತಿದ್ದಾರೆ. 30 ಮೀಟರ್&zwnj; ಉದ್ದ, 40 ಮೀಟರ್&zwnj; ಅಗಲ ಈ ಶಾಲೆ ನಿವೇಶನ ಹೊಂದಿದೆ. ಇಂತಹ ಕಿರಿದಾದ ಜಾಗದಲ್ಲಿ ಕೋಣೆಗಳು ಮಂಜೂರಾದರೂ ನಿರ್ಮಾಣಕ್ಕೆ ನಿವೇಶನವಿಲ್ಲ.&lt;/p&gt;&lt;p&gt;ಪಟ್ಟಣದ ಮಿನಿ ವಿಧಾನಸೌಧ ಶಾಲೆಯಲ್ಲಿ ತರಗತಿ ನಡೆಸಲು ಕೊಠಡಿಗಳ ಕೊರತೆ ಇದೆ. ಮಕ್ಕಳು ಹೊರಗಡೆ ಕುಳಿತು ಅಭ್ಯಾಸ ಮಾಡುತ್ತಿದ್ದಾರೆ. ಈ ಸಮಸ್ಯೆ ಕುರಿತು ಶಾಸಕರಿಗೆ ಪತ್ರ ಬರೆದು ಕೊಠಡಿ ನೀಡುವಂತೆ ಮನವಿ ಮಾಡಿದ್ದೇವೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ.&lt;/p&gt;&lt;p&gt;ಆಂಗ್ಲ ಮಾಧ್ಯಮ ಶಾಲೆ ಆಗಿರುವ ಕಾರಣ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಅಕ್ಕಪಕ್ಕದೂರಿನ ಮಕ್ಕಳು ಈ ಶಾಲೆಯ ಪ್ರವೇಶ ಪಡೆಯುತ್ತಿದ್ದಾರೆ. ತರಗತಿ ನಡೆಸಲು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಹೂವಿನಹಡಗಲಿ ಮಿನಿ ವಿಧಾನಸೌಧ ಶಾಲೆಯ ಮುಖ್ಯ ಶಿಕ್ಷಕಿ ಎಲ್&zwnj;.ಲಲಿತಾಬಾಯಿ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/huvanahadagali-govt-school-with-6-rooms-for-300-children-rav/articleshow-fggvq0t"/>
        </item>
        <item>
            <title><![CDATA[ವಿಜಯಪುರದಲ್ಲಿ ಖಗೋಳ ವಿಸ್ಮಯ; ಇದು ಬರಗಾಲ? ಮಳೆ ಸೂಚನೆನಾ? ಏನಿದು ಸನ್ ಹ್ಯಾಲೋ ಚಮತ್ಕಾರ?]]></title>
            <link>https://kannada.asianetnews.com/gallery/science/astronomical-wonder-in-vijayapura-is-this-a-drought-is-it-a-sign-of-rain-what-is-this-sun-halo-phenomenon-mrq-gd5z7np</link>
            <guid isPermaLink="true">https://kannada.asianetnews.com/gallery/science/astronomical-wonder-in-vijayapura-is-this-a-drought-is-it-a-sign-of-rain-what-is-this-sun-halo-phenomenon-mrq-gd5z7np</guid>
            <pubDate>Sun, 21 Jun 2026 11:48:49 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಘೋಣಸಗಿ ಗ್ರಾಮದಲ್ಲಿ ಸೂರ್ಯನ ಸುತ್ತ ಬಂಗಾರದ ಉಂಗುರಾಕಾರದ ವಿಸ್ಮಯ ಕಂಡುಬಂದಿದೆ. 'ಸನ್ ಹ್ಯಾಲೋ' ಎಂದು ಕರೆಯಲ್ಪಡುವ ಈ ಪ್ರಕೃತಿ ವಿಸ್ಮಯವು ವಾತಾವರಣದಲ್ಲಿನ ನೀರಿನ ಕಣಗಳಿಂದ ಉಂಟಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmcymyrken8fz7fn0dwsews,imgname-sun-halo--5--1782022362072.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ ಜಿಲ್ಲೆಯ ಘೋಣಸಗಿ ಗ್ರಾಮದಲ್ಲಿ ಸೂರ್ಯನ ಸುತ್ತ ಬಂಗಾರದ ಉಂಗುರಾಕಾರದ ವಿಸ್ಮಯ ಕಂಡುಬಂದಿದೆ. 'ಸನ್ ಹ್ಯಾಲೋ' ಎಂದು ಕರೆಯಲ್ಪಡುವ ಈ ಪ್ರಕೃತಿ ವಿಸ್ಮಯವು ವಾತಾವರಣದಲ್ಲಿನ ನೀರಿನ ಕಣಗಳಿಂದ ಉಂಟಾಗುತ್ತದೆ.&lt;/p&gt;&lt;img&gt;&lt;p&gt;ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಸೂರ್ಯನ ಸುತ್ತ ಬಂಗಾರದ ಬಣ್ಣದಲ್ಲಿ ಉಂಗುರಾಕಾರ ಕಂಡುಬಂದಿದ್ದು, ಈ ವಿಸ್ಮಯ ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಸೂರ್ಯನ ಸುತ್ತಲು ಉಂಗುರಾಕಾರ ಕಂಡು ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಸಂಭ್ರಮಿಸಿದರು. ಪ್ರಕೃತಿ ವಿಸ್ಮಯವನ್ನು ಮಕ್ಕಳಿಗೆ ತೋರಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳ ಅವರು ಈ ಕುರಿತು ಅಗತ್ಯ ಜ್ಞಾನ ನೀಡಿದರು.&lt;/p&gt;&lt;img&gt;&lt;p&gt;ವಾತಾವರಣದ ಮೇಲ್ಭಾಗದಲ್ಲಿರುವ ನೀರಿನ ಹನಿಗಳು ಮತ್ತು ಮಂಜಿನ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ ವಕ್ರೀಭವನಗೊಂಡು (Refraction) ಈ ರೀತಿಯ &lsquo;ಸನ್ ಹ್ಯಾಲೋ (Sun Halo) ಅಥವಾ ಸೂರ್ಯನ ಉಂಗುರ ಸೃಷ್ಟಿಯಾಗುತ್ತದೆ.&amp;nbsp;&lt;/p&gt;&lt;img&gt;&lt;p&gt;ಈ ಉಂಗುರದ ಒಳಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಹೊರಭಾಗವು ತಿಳಿ ನೀಲಿ ಬಣ್ಣವನ್ನು ಹೊಂದಿರುತ್ತದೆ. ಇದು ಸೂರ್ಯನ ಸುತ್ತ 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತದೆ ಎಂದು ಪರಮೇಶ್ವರ ಗುದ್ಯಾಳ ಅವರು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.&lt;/p&gt;&lt;img&gt;&lt;p&gt;ಹವಾಮಾನ ಮುನ್ಸೂಚನೆಯ ಪ್ರಕಾರ, ಇಂತಹ ಸೂರ್ಯನ ಉಂಗುರಗಳು ಕಾಣಿಸಿಕೊಂಡರೆ ಮುಂದಿನ ಕೆಲವೇ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುತ್ತದೆ. ಈ ಸೂರ್ಯನ ಸುತ್ತ ಕಾಣಿಸಿಕೊಂಡ ಉಂಗುರ ನೋಡಿ ಮಳೆಗಾಗಿ ಕಾಯುತ್ತಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/science/astronomical-wonder-in-vijayapura-is-this-a-drought-is-it-a-sign-of-rain-what-is-this-sun-halo-phenomenon-mrq-gd5z7np"/>
        </item>
        <item>
            <title><![CDATA[ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್]]></title>
            <link>https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</link>
            <guid isPermaLink="true">https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</guid>
            <pubDate>Tue, 16 Jun 2026 18:20:31 +0530</pubDate>
            <description><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv87c751ar2rqkxkezbdekhr,imgname-tungabhadra-dam--2--1781613862049.jpg" type="image/jpeg" height="390" width="690"/>
            <content:encoded><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.&lt;img&gt;&lt;p&gt;ಕಳೆದ ವರ್ಷ ತಾಂತ್ರಿಕ ದೋಷದಿಂದಾಗಿ ದುರಂತಕ್ಕೀಡಾಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್&zwnj; ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಮುಂಗಾರು ಮಳೆಗಾಲ ಆರಂಭವಾಗುತ್ತಿರುವ ಬೆನ್ನಲ್ಲೇ ಜೂನ್ 25ರಂದು ಹೊಸ ಗೇಟ್&zwnj;ಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ದಿನಾಂಕ ನಿಗದಿಪಡಿಸಲಾಗಿದೆ. ಮುಂಗಾರು ಮುನ್ನವೇ ಡ್ಯಾಂ ಸಂಪೂರ್ಣ ಸಿದ್ಧವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.&lt;/p&gt;&lt;img&gt;&lt;p&gt;ತುಂಗಭದ್ರಾ ಜಲಾಶಯದ ನೀರು ಮೂರು ರಾಜ್ಯಗಳಿಗೆ ಹಂಚಿಕೆಯಾಗುವುದರಿಂದ, ಈ ಲೋಕಾರ್ಪಣೆ ಕಾರ್ಯಕ್ರಮ ಜಂಟಿ ಸಮಾರಂಭವಾಗಿ ಮೂಡಿಬರಲಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಮೂರೂ ರಾಜ್ಯಗಳ ಹಲವು ಗಣ್ಯರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸುತ್ತಿದೆ.&lt;/p&gt;&lt;img&gt;&lt;p&gt;1953ರಲ್ಲಿ ನಿರ್ಮಾಣವಾಗಿದ್ದ ತುಂಗಭದ್ರಾ ಅಣೆಕಟ್ಟಿನ ಮೂಲ ಗೇಟ್&zwnj;ಗಳ ಜೀವಿತಾವಧಿ ಕೇವಲ 50 ವರ್ಷಗಳೆಂದು ತಜ್ಞರು ಮೊದಲೇ ಎಚ್ಚರಿಸಿದ್ದರು. ಆದರೂ ಹಳೆಯ ಗೇಟ್&zwnj;ಗಳನ್ನೇ ಮುಂದುವರಿಸಲಾಗಿತ್ತು. ಪರಿಣಾಮವಾಗಿ, 2024ರ ಆಗಸ್ಟ್ 10ರಂದು ರಾತ್ರಿ ಸುಮಾರು 60 ಅಡಿ ಅಗಲ ಹಾಗೂ 20 ಅಡಿ ಎತ್ತರದ ಬೃಹತ್ ಗೇಟ್&zwnj;ವೊಂದು ಇದ್ದಕ್ಕಿದ್ದಂತೆ ಕಳಚಿ ಬಿದ್ದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ನೀರು ನದಿಗೆ ಪೋಲಾಗಿ, ಭಾರಿ ರಾಜಕೀಯ ವಾಕ್ಸಮರ ಹಾಗೂ ಆತಂಕ ಸೃಷ್ಟಿಯಾಗಿತ್ತು.&lt;/p&gt;&lt;img&gt;&lt;p&gt;ಈ ದುರಂತದ ನಂತರ ಎಚ್ಚೆತ್ತ ಸರ್ಕಾರ, ಕಳೆದ ಡಿಸೆಂಬರ್&zwnj;ನಲ್ಲಿ ಭಾರಿ ಬಜೆಟ್&zwnj;ನೊಂದಿಗೆ ಹೊಸ ಗೇಟ್&zwnj;ಗಳ ಅಳವಡಿಕೆಗೆ ಚಾಲನೆ ನೀಡಿತ್ತು. ದೇಶದ ಪ್ರಮುಖ ಡ್ಯಾಂಗಳಾದ ಕೆಆರ್&zwnj;ಎಸ್, ನಾರಾಯಣಪುರ ಹಾಗೂ ಪಶ್ಚಿಮ ಬಂಗಾಳದ ಫರಕ್ಕಾ ಬ್ಯಾರೇಜ್&zwnj;ಗಳಿಗೆ ಗೇಟ್ ಅಳವಡಿಸಿದ ಅನುಭವವಿರುವ ಗುಜರಾತ್ ಮೂಲದ 'ಹಾರ್ಡ್&zwnj;ವೇರ್ ಟೂಲ್ಸ್ ಮತ್ತು ಮೆಷಿನ್ ಪ್ರಾಜೆಕ್ಟ್ಸ್ ಲಿಮಿಟೆಡ್' ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿತ್ತು. ಒಟ್ಟು 51.81 ಕೋಟಿ ರೂಪಾಯಿ ವೆಚ್ಚದಲ್ಲಿ ಗದಗ ಸಮೀಪದ ಅಡವಿಸೋಮಾಪುರ ಹಾಗೂ ವಿಜಯನಗರದ ಟಿಬಿ ಬೋರ್ಡ್ ಯಾರ್ಡ್&zwnj;ಗಳಲ್ಲಿ ಈ ಗೇಟ್&zwnj;ಗಳನ್ನು ಅತ್ಯಂತ ವೇಗವಾಗಿ ಸಿದ್ಧಪಡಿಸಲಾಯಿತು.&lt;/p&gt;&lt;img&gt;&lt;p&gt;ಹೊಸ ಗೇಟ್ ಅಳವಡಿಸುವ ತಾಂತ್ರಿಕ ಅನಿವಾರ್ಯತೆಯಿಂದಾಗಿ, ಕಳೆದ ಡಿಸೆಂಬರ್ ತಿಂಗಳ ಎರಡನೇ ಬೆಳೆಗೆ ನೀರು ಬಿಡದಿರಲು ಸರ್ಕಾರ ನಿರ್ಧರಿಸಿತ್ತು. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಲಕ್ಷಾಂತರ ರೈತರು ತಮ್ಮ ಒಂದು ಇಡೀ ಬೆಳೆಯನ್ನು ತ್ಯಾಗ ಮಾಡಿದ್ದರು. ಮುಂಗಾರು ಮಳೆಗೂ ಮುನ್ನ ಕೆಲಸ ಮುಗಿಯುತ್ತಾ ಎಂಬ ಆತಂಕ ರೈತರನ್ನು ಕಾಡಿತ್ತಾದರೂ, ಗುತ್ತಿಗೆ ಕಂಪನಿಯು ಹಗಲಿರುಳು ಶ್ರಮಿಸಿ ಸಕಾಲಕ್ಕೆ ಕೆಲಸ ಮುಗಿಸುವ ಮೂಲಕ ರೈತರ ನಂಬಿಕೆಯನ್ನು ಉಳಿಸಿಕೊಂಡಿದೆ.&lt;/p&gt;&lt;img&gt;&lt;p&gt;ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (KSNDMC) ಇತ್ತೀಚಿನ ತಾಜಾ ಮಾಹಿತಿ ಪ್ರಕಾರ, ಜೂನ್ 16ರ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ ಸದ್ಯಕ್ಕೆ 9 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ (2025) ಇದೇ ಅವಧಿಯಲ್ಲಿ ಜಲಾಶಯದಲ್ಲಿ 28 ಟಿಎಂಸಿ ನೀರು ಲಭ್ಯವಿತ್ತು. ಸದ್ಯ ಮುಂಗಾರು ಮಳೆ ಆರಂಭವಾಗುತ್ತಿರುವುದರಿಂದ ಹೊಸ ಗೇಟ್&zwnj;ಗಳ ಬಲದೊಂದಿಗೆ ಡ್ಯಾಂನಲ್ಲಿ ನೀರಿನ ಸಂಗ್ರಹದ ಪ್ರಮಾಣ ವೇಗವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>vijayanagara</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq"/>
        </item>
        <item>
            <title><![CDATA[Vijayanagara: ಧರ್ಮಸಾಗರದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಾಸನ ಪತ್ತೆ, ಆದಿಮಾನವರ ವಾಸಸ್ಥಾನದ ಕುರುಹು ಪತ್ತೆ!]]></title>
            <link>https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3</link>
            <guid isPermaLink="true">https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3</guid>
            <pubDate>Sat, 27 Jun 2026 17:32:56 +0530</pubDate>
            <description><![CDATA[ಹೊಸಪೇಟೆಯ ಧರ್ಮಸಾಗರ ಗ್ರಾಮದಲ್ಲಿ ಸಂಶೋಧನಾ ತಂಡವೊಂದು ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನ, ಆದಿಮಾನವರು ಬಳಸುತ್ತಿದ್ದ ಕಲ್ಲುಗೊಡಲಿಗಳು ಮತ್ತು 101 ಲಿಂಗಗಳಿರುವ ವಿಶಿಷ್ಟ ಗುಡಿಯನ್ನು ಪತ್ತೆಹಚ್ಚಿದೆ. ಈ ಅನ್ವೇಷಣೆಯು ವಿಜಯನಗರ ಕಾಲದ ಇತಿಹಾಸ ಮತ್ತು ಪ್ರಾಗೈತಿಹಾಸಿಕ ಕುರುಹುಗಳ ಮೇಲೆ ಹೊಸ ಬೆಳಕು ಚೆಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw4f9zpp7zkb7bhc4xxpg44s,imgname-vijayanagara-inscription-1782561701590.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ:&lt;/strong&gt; ಜಿಲ್ಲೆಯ ಐತಿಹಾಸಿಕ ಶ್ರೀಮಂತಿಕೆಗೆ ಮತ್ತೊಂದು ಗರಿ ಎಂಬಂತೆ, ಹೊಸಪೇಟೆಯಿಂದ ಬಳ್ಳಾರಿಗೆ ಹಾದು ಹೋಗುವ ಮಾರ್ಗದಲ್ಲಿರುವ ಧರ್ಮಸಾಗರ ಗ್ರಾಮದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನವೊಂದು ಪತ್ತೆಯಾಗಿದೆ. ಈ ಗ್ರಾಮವು ಕೇವಲ ಐತಿಹಾಸಿಕ ತಾಣವಷ್ಟೇ ಅಲ್ಲದೆ, ಆದಿಮಾನವನು ಇಲ್ಲಿ ವಾಸವಿದ್ದನು ಎನ್ನುವುದಕ್ಕೆ ಸ್ಪಷ್ಟ ಕುರುಹುಗಳನ್ನು ಒದಗಿಸುವ ಮೂಲಕ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;p&gt;ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ 'ವಿಜಯನಗರ ತಿರುಗಾಟ ಸಂಶೋಧನ ತಂಡ'ವು ಧರ್ಮಸಾಗರ ಗ್ರಾಮದ ನಿವಾಸಿ ಶಂಕರ ಅವರ ನೆರವಿನೊಂದಿಗೆ ನಡೆಸಿದ ಕ್ಷೇತ್ರಕಾರ್ಯದ ವೇಳೆ ಈ ಮಹತ್ವದ ಅನ್ವೇಷಣೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ವಿಜಯನಗರ ಕಾಲದ ಐತಿಹಾಸಿಕ ಹಿನ್ನೆಲೆ ಮತ್ತು ದಾನಶಾಸನಗಳು ಧರ್ಮಸಾಗರ ಗ್ರಾಮದ ಪಕ್ಕದಲ್ಲೇ ಇರುವ ಪಾಪಿನಾಯಕನಹಳ್ಳಿಯನ್ನು ವಿಜಯನಗರದ ಕಾಲಾವಧಿಯಲ್ಲಿ 'ಪಾಪನಾಯಕ' ಎಂಬ ಪಾಳೆಯಗಾರ ಆಳುತ್ತಿದ್ದನು ಎಂಬ ಮಾಹಿತಿ ಲಭ್ಯವಿದೆ. ಇದಕ್ಕೆ ಪೂರಕವಾಗಿ ಆ ಗ್ರಾಮದ ಚಾವಡಿಯ ಬಳಿ ಹಾಗೂ ಹೊರವಲಯದ ಅಂಕಾಲಮ್ಮ ದೇಗುಲದ ಕಂಬದ ಮೇಲಿರುವ ಶಿಲಾಶಾಸನಗಳು ಸಾಕ್ಷ್ಯ ನುಡಿಯುತ್ತವೆ.&lt;/p&gt;&lt;p&gt;ಇದರೊಂದಿಗೆ, ಸಮೀಪದ ಬೈಲುವದ್ದಿಗೆರೆ ಗ್ರಾಮದ ಆಂಜನೇಯ ದೇಗುಲದ ಬಳಿ ಪತ್ತೆಯಾಗಿರುವ ಗ್ರಾನೈಟ್ ಕಲ್ಲಿನ ಶಾಸನವು ವಿಜಯನಗರ ಸಾಮ್ರಾಜ್ಯದ ಇಮ್ಮಡಿ ದೇವರಾಯನ ಕಾಲದ್ದಾಗಿದೆ. ಇಮ್ಮಡಿ ದೇವರಾಯನ ಪತ್ನಿ ಅಟಣಲಾದೇವಿಯ ನೆನಪಿಗಾಗಿ 'ಅಂಣಲಾಪುರ' ಎಂಬ ಊರನ್ನು ಹಿತ್ತಿಲ ಬಾಗಿಲ ಮಲ್ಲದೇವರು ನಿರ್ಮಿಸಿ, ಆತನ ಹೆಸರಲ್ಲೇ ದಾನ ನೀಡಿದ ವಿವರಗಳು ಈ ಅಪ್ರಕಟಿತ ಶಾಸನದಲ್ಲಿವೆ.&lt;/p&gt;&lt;h2&gt;&lt;strong&gt;ಭಾಷಾ ಸಾಮರಸ್ಯಕ್ಕೆ ಸಾಕ್ಷಿ:&lt;/strong&gt;&lt;/h2&gt;&lt;p&gt;&lt;strong&gt;&amp;nbsp;&lt;/strong&gt;ಕೃಷ್ಣದೇವರಾಯನ ಕಾಲದ ಕೆರೆ ಶಾಸನ ಧರ್ಮಸಾಗರ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಹಾಸು ಬಂಡೆಕಲ್ಲಿನ ಮೇಲೆ ಕೃಷ್ಣದೇವರಾಯನ ಕಾಲದ ಮತ್ತೊಂದು ಪ್ರಕಟಿತ ಶಾಸನವಿದೆ. ಇದು ಕನ್ನಡ ಲಿಪಿಯಲ್ಲಿದ್ದರೂ, ತೆಲುಗು ಮಿಶ್ರಿತ ಭಾಷೆಯಲ್ಲಿದೆ. &quot;ಈ ದಾನಶಾಸನವು ವಿಜಯನಗರದ ಅರಸರು ಕೇವಲ ಒಂದು ಭಾಷೆಗೆ ಸೀಮಿತವಾಗಿರದೆ, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಿಗೆ ಸಮಾನ ಗೌರವ ನೀಡುತ್ತಿದ್ದರು ಎಂಬುದಕ್ಕೆ ಭದ್ರ ಪುರಾವೆಯಾಗಿದೆ&quot; ಎಂದು ಸಂಶೋಧನ ತಂಡದ ಪ್ರಮುಖರಾದ ಪ್ರೊ. ತಿಪ್ಪೇಸ್ವಾಮಿ ಎಚ್. ತಿಳಿಸಿದ್ದಾರೆ.&lt;/p&gt;&lt;p&gt;'ಕರೆಕಲ್ಲು ಮಾಗಣಿ' ಮತ್ತು ಆದಿಮಾನವರ ಕಾಲದ ಕಲ್ಲುಗೊಡಲಿಗಳು ಧರ್ಮಸಾಗರದಲ್ಲಿ ಆದಿಮಾನವನು ನೆಲೆಸಿದ್ದಕ್ಕೆ ಸಾಕ್ಷಿಯಾಗಿ ತಜ್ಞರು ಇಲ್ಲಿನ ಗುಡ್ಡದ ಮೆಟ್ಟಿಲು ಕಲ್ಲುಗಳ ರಚನೆಯನ್ನು ಗುರುತಿಸಿದ್ದಾರೆ. ಭೂವೈಜ್ಞಾನಿಕವಾಗಿ ಇವುಗಳನ್ನು 'ಡೊಲರೈಟ್ ಡೈಕ್' (ಕಪ್ಪು ಶಿಲೆ) ಮಾದರಿ ಎಂದು ಕರೆಯಲಾಗುತ್ತದೆ.&lt;/p&gt;&lt;p&gt;&lt;strong&gt;ಸ್ಥಳೀಯರ ನಂಬಿಕೆ: &lt;/strong&gt;ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯು ವನವಾಸದ ಸಂದರ್ಭದಲ್ಲಿ ಈ ಕಲ್ಲುಗುಡ್ಡದ ಮೇಲೆ ನಡೆದುಕೊಂಡು ಹೋಗಿದ್ದರಿಂದ ಇಲ್ಲಿನ ಕಲ್ಲುಗಳು ಕಪ್ಪಾಗಿವೆ ಎಂಬುದು ಗ್ರಾಮಸ್ಥರ ಗಾಢ ನಂಬಿಕೆಯಾಗಿದೆ. ಹೀಗಾಗಿಯೇ ಈ ಕಪ್ಪು ಗುಂಡುಕಲ್ಲುಗಳ ಸಮೂಹಕ್ಕೆ ಜನರು 'ಕರೆಕಲ್ಲು ಮಾಗಣಿ' ಎಂದು ಕರೆಯುತ್ತಾರೆ.&lt;/p&gt;&lt;p&gt;&lt;strong&gt;ಪುರಾತತ್ವ ಪುರಾವೆ:&lt;/strong&gt; ಕ್ಷೇತ್ರಕಾರ್ಯದ ವೇಳೆ ಇಲ್ಲಿ ಆದಿಮಾನವ ಬಳಸುತ್ತಿದ್ದ ಎನ್ನಲಾದ ಅತ್ಯಂತ ನುಣುಪಾದ ಕೆತ್ತನೆಯುಳ್ಳ ಕಲ್ಲುಗೊಡಲಿಗಳು (Stone Axes) ದೊರೆತಿವೆ.&lt;/p&gt;&lt;p&gt;ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಪ್ರಾಧ್ಯಾಪಕ ಡಾ. ಗೋವಿಂದ ಅವರ ಪ್ರಕಾರ, &quot;ಸ್ಥಳೀಯರ ಮಾಹಿತಿಯಂತೆ ಈ ಗುಡ್ಡದ ಇಳಿಜಾರಿನಲ್ಲಿ ಹಿಂದೆ 'ಹಳೆ ಊರು' ಇತ್ತು. ಅದಕ್ಕೆ ಪೂರಕವಾಗಿ ಅಲ್ಲಿ ವಾಸದ ಮನೆಗಳ ಹಳೆಯ ತಳಪಾಯದ ರಚನೆಗಳು, ಅನತಿ ದೂರದಲ್ಲೇ ಕೆರೆ ಹಾಗೂ ಕೆರೆಯ ತೂಬುಗಳು ಇಂದಿಗೂ ಕಾಣಸಿಗುತ್ತವೆ. ಆದರೆ, ಪ್ರಸ್ತುತ ಈ ಹಳೆಯ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ&quot; ಎಂದಿದ್ದಾರೆ.&lt;/p&gt;&lt;p&gt;ರಹಸ್ಯಮಯ 101 ಲಿಂಗಗಳ ಗುಡಿ ಗ್ರಾಮದ ಹೊರವಲಯದಲ್ಲಿ ಪೂರ್ವಭಿಮುಖವಾಗಿ ನಿರ್ಮಿಸಲಾದ ಒಂದು ಸಣ್ಣ ವಿಶಿಷ್ಟ ಗುಡಿಯಿದೆ. ಈ ಗರ್ಭಗುಡಿಯ ಗೋಡೆಗೆ ಶಿವಲಿಂಗದ ಆಕಾರ ಹೋಲುವ ಗುಂಡುಕಲ್ಲುಗಳಿವೆ. ಇದರ ಎಡ ಮತ್ತು ಬಲ ಬದಿಯಲ್ಲಿರುವ ಸಣ್ಣ ಹಾಗೂ ದೊಡ್ಡದಾದ ಒಟ್ಟು 101 ಗುಂಡುಕಲ್ಲುಗಳನ್ನೇ ಶಿವಲಿಂಗಗಳೆಂದು ಭಾವಿಸಿ ಇಲ್ಲಿನ ಭಕ್ತರು ಅನಾದಿ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದಾರೆ. ಪ್ರತಿವರ್ಷ ಮಹಾಶಿವರಾತ್ರಿಯ ಜಾಗರಣೆಯ ದಿನದಂದು ಈ ಗುಡಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.&lt;/p&gt;&lt;p&gt;&lt;strong&gt;ಸಂಶೋಧಕರ ಅಪೀಲು: &lt;/strong&gt;&quot;ಧರ್ಮಸಾಗರದಲ್ಲಿ ದೊರೆತಿರುವ ಈ ಅಪರೂಪದ ಶಾಸನಗಳು, ಕಲ್ಲುಗೊಡಲಿಗಳು ಹಾಗೂ 101 ಲಿಂಗಗಳ ಗುಡಿಯಂತಹ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಸ್ಮಾರಕಗಳನ್ನು ಸಂಬಂಧಪಟ್ಟ ಪುರಾತತ್ವ ಇಲಾಖೆಯು ತಕ್ಷಣವೇ ರಕ್ಷಿಸಬೇಕು. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು&quot; ಎಂದು ಸಂಶೋಧಕ ಡಾ. ಕೃಷ್ಣೇಗೌಡ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ಯಶಸ್ವಿ ಕ್ಷೇತ್ರಕಾರ್ಯದಲ್ಲಿ ಸಂಶೋಧನ ತಂಡದ ಸದಸ್ಯರಾದ ಪ್ರೊ. ತಿಪ್ಪೇಸ್ವಾಮಿ ಎಚ್, ಡಾ. ಗೋವಿಂದ, ಡಾ. ಕೃಷ್ಣೇಗೌಡ ಹಾಗೂ ಸಂಶೋಧಕರಾದ ಎಚ್. ರವಿ, ಅಶೋಕ್ ನಾಯಕ್ ದಿದ್ದಿಗಿ ಮತ್ತು ಇಸ್ಮಾಯಿಲ್ ಸಿದ್ದಿಕ್ ಪಾಲ್ಗೊಂಡಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3"/>
        </item>
        <item>
            <title><![CDATA[ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ; ಜೊತೆಯಾಗಿಯೇ ಇಬ್ಬರ ಅಂತ್ಯಕ್ರಿಯೆ]]></title>
            <link>https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er</link>
            <guid isPermaLink="true">https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er</guid>
            <pubDate>Tue, 02 Jun 2026 08:13:00 +0530</pubDate>
            <description><![CDATA[&lt;p&gt;ಗದಗ ಜಿಲ್ಲೆಯ ಬೂದಿಹಾಳ ಗ್ರಾಮದಲ್ಲಿ ನಡೆದ ದಾರುಣ ಘಟನೆಯಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ಅಕ್ಕನಿಗೆ ಚಿಕಿತ್ಸೆ ಕೊಡಿಸಿ ಮರಳುತ್ತಿದ್ದ ತಮ್ಮ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈ ಸುದ್ದಿ ಕೇಳಿದ ಆಘಾತಕ್ಕೆ ಅಕ್ಕ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt338n0exf5h3cdgm6q7gwnk,imgname-death-1780368036878.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ/ಗದಗ: &lt;/strong&gt;ಅನಾರೋಗ್ಯದಿಂದ ಬಳಲುತ್ತಿದ್ದ ತನಗೆ (ಸಹೋದರಿ) ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಮರಳಿ ತೆರಳುವಾಗ ಬೈಕ್&zwnj; ಅಪಘಾತದಲ್ಲಿ ಸಹೋದರ ಮೃತಪಟ್ಟ ಘಟನೆಯ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ.&lt;/p&gt;&lt;p&gt;ಹೂವಿನಹಡಗಲಿ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಮ್ಮ (48) ಮೃತ ಮಹಿಳೆ. ಇವರ ತಮ್ಮ ನಿಂಗಪ್ಪ ಇಲ್ಲಿನ ಜೆಸ್ಕಾಂ ಕಚೇರಿಯ ಲೈನ್&zwnj;ಮ್ಯಾನ್&zwnj; ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗದಗ: 101 ವರ್ಷ ಹಳೆಯ ಅಪರೂಪದ ಔಷಧಿ ಗುಣದ ಮಡ್ಡಿ ಮರ ಪತ್ತೆ; ಮಧುಮೇಹ ನಿಯಂತ್ರಣಕ್ಕೆ ರಾಮಬಾಣ&lt;/strong&gt;&lt;/p&gt;&lt;h2&gt;&lt;strong&gt;ಅಪಘಾತದಲ್ಲಿ ತಮ್ಮನ ಸಾವು&lt;/strong&gt;&lt;/h2&gt;&lt;p&gt;ಮಲ್ಲಮ್ಮ ಅನಾರೋಗ್ಯದಿಂದಾಗಿ ಕಳೆದೊಂದು ವಾರದಿಂದ ರಜೆ ಪಡೆದಿದ್ದರು. ಅವರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೂದಿಹಾಳದಲ್ಲಿ ಬಿಟ್ಟು ಬರುವಾಗ ತಾಲೂಕಿನ ಕಾಗನೂರು ಬಳಿ ನಿಂಗಪ್ಪನ ಬೈಕ್&zwnj;ಗೆ ನಾಯಿಯೊಂದು ಅಡ್ಡ ಬಂದು ಬೈಕ್ ಅಪಘಾತವಾಗಿ ಅಸುನೀಗಿದರು. ಸಹೋದರ ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಮಲ್ಲಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರ ಅಂತ್ಯಕ್ರಿಯೆ ಬೂದಿಹಾಳದಲ್ಲಿ ಭಾನುವಾರ ನಡೆಯಿತು.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Gadag: ಅಪಾಯದಂಚಿನ ಮಾರ್ಗ: ಜೀವ ಪಣಕ್ಕಿಟ್ಟು ಸಾಗುವ 1 ಕಿ.ಮೀ ರಸ್ತೆ ಪಯಣ, ಆಟೋಗಷ್ಟೇ ದಾರಿ&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagar-gadag-sister-also-has-heart-attack-after-hearing-news-of-her-brother-s-death-both-are-cremated-together-mrq/articleshow-lakd8er"/>
        </item>
        <item>
            <title><![CDATA[ಬೆಂಗಳೂರು–ವಿಜಯಪುರ ನೇರ ವಿಶೇಷ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಚಿವ MB ಪಾಟೀಲ್]]></title>
            <link>https://kannada.asianetnews.com/gallery/karnataka-districts/bengaluru-vijayapura-direct-special-train-service-extended-till-august-31-minister-mb-patil-information-mrq-mz4daxh</link>
            <guid isPermaLink="true">https://kannada.asianetnews.com/gallery/karnataka-districts/bengaluru-vijayapura-direct-special-train-service-extended-till-august-31-minister-mb-patil-information-mrq-mz4daxh</guid>
            <pubDate>Thu, 18 Jun 2026 12:23:11 +0530</pubDate>
            <description><![CDATA[&lt;p&gt;ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್&zwnj;ನ್ಯೂಸ್ ನೀಡಿದ್ದಾರೆ. ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲನ್ನು ಶಾಶ್ವತಗೊಳಿಸಬೇಕು ಮತ್ತು ಪ್ರಯಾಣದ ಸಮಯವನ್ನು ಬದಲಾಯಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcqjqajqe3cqrpdxgqn00h6,imgname-vijayapur-bengaluru-1781765070162.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್&zwnj;ನ್ಯೂಸ್ ನೀಡಿದ್ದಾರೆ. ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲನ್ನು ಶಾಶ್ವತಗೊಳಿಸಬೇಕು ಮತ್ತು ಪ್ರಯಾಣದ ಸಮಯವನ್ನು ಬದಲಾಯಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್&zwnj;ನ್ಯೂಸ್ ನೀಡಿದ್ದಾರೆ. ಉತ್ತರ ಕರ್ನಾಟಕದ ಪ್ರಯಾಣಿಕರ ಅಗತ್ಯ ಹಾಗೂ ಬೆಂಗಳೂರು&ndash;ವಿಜಯಪುರ ನಡುವಿನ ಹೆಚ್ಚುತ್ತಿರುವ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಯಶವಂತಪುರ&ndash;ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.&lt;/p&gt;&lt;img&gt;&lt;p&gt;ಈ ಹಿಂದೆ ಈ ರೈಲು ಸೇವೆಯನ್ನು ಕೇವಲ ಜೂನ್ 29ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಇದೇ ವರ್ಷದ ಆಗಸ್ಟ್ 31ರವರೆಗೆ ಸೇವೆಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಸತತ ಪ್ರಯತ್ನಗಳ ಫಲವಾಗಿ ವಾರಕ್ಕೊಮ್ಮೆ ಆರಂಭಗೊಂಡಿದ್ದ ಈ ರೈಲು ಸೇವೆಯನ್ನು ಇದೇ ಜೂನ್ 1ರಿಂದ ವಾರದಲ್ಲಿ ಎರಡು ದಿನಗಳ ಸೇವೆಯಾಗಿ ವಿಸ್ತರಿಸಲಾಗಿದೆ. ಇದು ಉತ್ತರ ಕರ್ನಾಟಕದ ಜನರ ಬಹುಕಾಲದ ಬೇಡಿಕೆಗೆ ದೊರೆತ ಮತ್ತೊಂದು ಸಕಾರಾತ್ಮಕ ಸ್ಪಂದನೆಯಾಗಿದೆ.&lt;/p&gt;&lt;img&gt;&lt;p&gt;ಮುಂದಿನ ದಿನಗಳಲ್ಲಿ ಈ ರೈಲು ಸೇವೆಯನ್ನು ಶಾಶ್ವತಗೊಳಿಸುವುದು, ಪ್ರತಿದಿನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಅಗತ್ಯ ಸುಧಾರಣೆಗಳನ್ನು ತರುವವರೆಗೆ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ.&lt;/p&gt;&lt;img&gt;&lt;p&gt;ಎಂ.ಬಿ.ಪಾಟೀಲ್ ಪೋಸ್ಟ್&zwnj;ಗೆ ಕಮೆಂಟ್ ಮಾಡಿರುವ ಜನರು, ದಯವಿಟ್ಟು ಈ ರೈಲ್ ಟೈಮ್ ಅನ್ನು ವಿಜಯಪುರ ಇಂದ ರಾತ್ರಿ 7.30ಕ್ಕೆ ಹೊರಟು ಯಶವಂತಪುರ್ ಬೆಳಗ್ಗೆ 5.30ಗೆ ಮುಟ್ಟುವ ಹಾಗೆ ಸಮಯ ಬದಲಾಯಿಸಿ. ಈಗ ಟ್ರೈನ್ 3:30 to 4am ಹಾಗೆ ಬಂದು ತಲುಪುವುದರಿಂದ ತುಂಬಾ ಪ್ರಯಾಣಿಕರು ಬಸ್ ಸೌಲಭ್ಯ ವಿಲ್ಲದೆ ಒದ್ದಾಡುತ್ತಾರೆ ಎಂದು ಮನವಿ ಮಾಡಿಕೊಂಡದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಘೋಷಣೆ, 5 ಜಿಲ್ಲೆಯ ಪ್ರವಾಸಿಗರಿಗೆ ಇದೊಂದು ಆಫರ್!&lt;/strong&gt;&lt;/p&gt;&lt;img&gt;&lt;p&gt;ಈ ರೈಲು ವಿಜಯಪುರದಿಂದ ಬೆಂಗಳೂರಿಗೆ ಹೋಗಲು ಬಹಳ ಉತ್ತಮವಾಗಿದೆ. ಇದನ್ನು ಶಾಶ್ವತ ಮಾಡುವುದು ಒಂದು ಭಾಗವಾದರೆ ಸಮಯ ಬದಲಾವಣೆ ಎರಡನೇ ಭಾಗವಾಗಬೇಕು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru K-Ride Suburban Rail: ಹೊಸೂರು-ದೇವನಹಳ್ಳಿ ಸೇರಿ ಕೆ-ರೈಡ್&zwnj;ನ 3 ರೈಲುಗಳ ಸೇವೆ ಶೀಘ್ರ ಆರಂಭ!&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bengaluru-vijayapura-direct-special-train-service-extended-till-august-31-minister-mb-patil-information-mrq-mz4daxh"/>
        </item>
        <item>
            <title><![CDATA[ಹಂಪಿ ದೇಗುಲದ ಲಕ್ಷ್ಮೀ ಆನೆ ಸ್ಥಳಾಂತರ ವಿರೋಧಿಸಿ ಭಕ್ತರಿಂದ ಪ್ರತಿಭಟನೆ]]></title>
            <link>https://kannada.asianetnews.com/karnataka-districts/vijayanagara-devotees-protest-against-relocation-of-lakshmi-elephant-at-hampi-virupaksheshwara-temple-mrq/articleshow-qcr7h6s</link>
            <guid isPermaLink="true">https://kannada.asianetnews.com/karnataka-districts/vijayanagara-devotees-protest-against-relocation-of-lakshmi-elephant-at-hampi-virupaksheshwara-temple-mrq/articleshow-qcr7h6s</guid>
            <pubDate>Wed, 27 May 2026 07:38:31 +0530</pubDate>
            <description><![CDATA[ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ 'ಲಕ್ಷ್ಮಿ' ಆನೆಯನ್ನು ಅನಾರೋಗ್ಯದ ಕಾರಣ ನೀಡಿ ಸ್ಥಳಾಂತರಿಸುವುದನ್ನು ವಿರೋಧಿಸಿ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಹೊಸ ಹಂಪಿಯ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kskjr2a6xperq3g4s7c8fz4k,imgname-hampi--1--1779847399750.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ:&lt;/strong&gt; ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸೇರಿದ ಸುಮಾರು 42 ವರ್ಷದ &lsquo;ಲಕ್ಷ್ಮಿ&rsquo; ಹೆಸರಿನ ಆನೆಯನ್ನು ಅನಾರೋಗ್ಯದ ನೆಪ ಹೇಳಿ ಕೋಲಾರಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ ಸ್ಥಳೀಯರು, ಭಕ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯವರು 3 ತಿಂಗಳ ಕಾಲ ಚಿಕಿತ್ಸೆಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದು ನೆಪಮಾತ್ರ. ಇಲ್ಲಿಂದ ಆನೆಯನ್ನು ಸ್ಥಳಾಂತರಿಸಿದರೆ ಅದು ವಾಪಸಾಗಲ್ಲ. ಯಾವುದೇ ಕಾರಣಕ್ಕೂ ಆನೆಯನ್ನು ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಹಂಪಿ, ಕಮಲಾಪುರ, ಕಡ್ಡಿರಾಂಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಒಂದು ವೇಳೆ ಆನೆಗೆ ಅನಾರೋಗ್ಯದವಿದ್ದರೆ ಹಂಪಿಯಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು. ಚಿಕಿತ್ಸೆ ಬಳಿಕ ಆನೆಯನ್ನು ವಾಪಸ್&zwnj; ಕರೆತರಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮರಳಿ ಹಂಪಿಗೆ&lt;/strong&gt;&lt;/h2&gt;&lt;p&gt;ಆನೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಸೂಕ್ತ ಚಿಕಿತ್ಸೆಗೆ ಕೋಲಾರದಲ್ಲಿರುವ ಆನೆ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಗುಣಮುಖವಾದ ನಂತರ ಪುನಃ ಹಂಪಿಗೆ ಕರೆ ತರಲಾಗವುದು. ಯಾರು ಕೂಡ ಈ ಬಗ್ಗೆ ಗಾಬರಿಯಾಗುವುದು ಬೇಡ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಹೊಸ ಹಂಪಿಯಲ್ಲಿ ಚಿರತೆ ಪ್ರತ್ಯಕ್ಷ&lt;/strong&gt;&lt;/h3&gt;&lt;p&gt;ವಿಶ್ವವಿಖ್ಯಾತ ಹಂಪಿಯ ಪ್ರದೇಶದ ಹೊಸ ಹಂಪಿಯ ಮನೆಗಳ ಮುಂದೆ ಚಿರತೆ ಪ್ರತ್ಯಕ್ಷವಾಗಿ ಓಡಾಟದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೋಮವಾರ ರಾತ್ರಿ 12 ಗಂಟೆಗೆ ಸೆರೆಯಾದ ಬಗ್ಗೆ ವರದಿಯಾಗಿದೆ.ಹಂಪಿಯ ಜನತಾ ಪ್ಲಾಟ್&zwnj;ನಲ್ಲಿ ಈ ಹಿಂದೆಯೂ ಚಿರತೆ ಕಾಣಿಸಿಕೊಂಡಿತ್ತು. ಕಳೆದ ಮೂರು ತಿಂಗಳ ಹಿಂದೆ ನಡೆದ ಹಂಪಿ ಉತ್ಸವದಲ್ಲೂ ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು.&lt;/p&gt;&lt;p&gt;&amp;nbsp;ಹಂಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಕಾಡು ಇಲ್ಲದ ಕಾರಣ ಮತ್ತು ಕೆಲವೊಂದು ಬೆಟ್ಟ ಗುಡ್ಡಗಳಲ್ಲಿ ಸಹ ಚಿರತೆ ಆಹಾರ ಹುಡುಕುಲು ಆಗದೇ ಸುತ್ತಮುತ್ತಲಿನ ಗ್ರಾಮಗಳತ್ತ ಆಹಾರಕ್ಕಾಗಿ ಬರುತ್ತವೆ. ಆದರೂ ಕಮಲಾಪುರ, ಹಂಪಿ ಪ್ರದೇಶದಲ್ಲಿ ಚಿರತೆಯನ್ನು ಬಂಧಿಸಿಲು ಬೋನುಗಳನ್ನು ಇಡಲಾಗಿದೆ ಎಂದು ಅರಣ್ಯಇಲಾಖೆಯ ಅಧಿಕಾರಿಗಳು ತಿಳಿಸಿದರು.&lt;/p&gt;&lt;p&gt;&amp;nbsp;&lt;/p&gt;&lt;p&gt;ಹಂಪಿ ಉತ್ಖನನ: ಪುರಾತನ ದೇವಾಲಯದ ಕಲ್ಲಿನ ಚಾವಣಿ, ಅಪರೂಪದ ಆನೆಯ ಕಲಾಕೃತಿಗಳು ಪತ್ತೆ#Hampihttps://t.co/NMtgnh2xyR pic.twitter.com/bx0SZCHJ0n&lt;/p&gt;&lt;p&gt;&mdash; Asianet Suvarna News (@AsianetNewsSN) May 20, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagara-devotees-protest-against-relocation-of-lakshmi-elephant-at-hampi-virupaksheshwara-temple-mrq/articleshow-qcr7h6s"/>
        </item>
        <item>
            <title><![CDATA[ಕಾರಹುಣ್ಣಿಮೆ ಸಂಭ್ರಮಕ್ಕೆ ಜೀವ ತುಂಬುತ್ತಿದ್ದ ಈ ಕಸುಬು ಕಣ್ಮರೆ! ಎತ್ತುಗಳ ಕೊಂಬಿಗೆ ಬಣ್ಣ ಹಚ್ಚಿದ ಕೈಗಳು ಈಗ ಖಾಲಿ!]]></title>
            <link>https://kannada.asianetnews.com/karnataka-districts/traditional-bull-horn-craft-in-karnataka-fades-away-74-year-old-artisan-noor-saheb-keeps-the-heritage-alive-rav/articleshow-tiem38h</link>
            <guid isPermaLink="true">https://kannada.asianetnews.com/karnataka-districts/traditional-bull-horn-craft-in-karnataka-fades-away-74-year-old-artisan-noor-saheb-keeps-the-heritage-alive-rav/articleshow-tiem38h</guid>
            <pubDate>Sun, 28 Jun 2026 13:02:42 +0530</pubDate>
            <description><![CDATA[&lt;p&gt;ಕೃಷಿಯಲ್ಲಿ ಯಾಂತ್ರೀಕರಣದಿಂದಾಗಿ ಎತ್ತುಗಳ ಬಳಕೆ ಕಡಿಮೆಯಾಗಿದ್ದು, ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಮಹತ್ವ ಪಡೆಯುವ ಎತ್ತುಗಳ ಕೊಂಬು ಕೆತ್ತುವ ದೇಶಿ ಕಸುಬು ನೇಪಥ್ಯಕ್ಕೆ ಸರಿಯುತ್ತಿದೆ. ಈ ಕಾಯಕವನ್ನೇ ನಂಬಿ ಬದುಕುತ್ತಿರುವ ವರದಾಪುರದ ನೂರ್&zwnj; ಸಾಹೇಬ್&zwnj;ರಂತಹ ಕೆಲವೇ ಕುಶಲಕರ್ಮಿಗಳು ಮಾತ್ರ ಉಳಿದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6j0fe6qxwykd5yw6nstrdy,imgname----------------------55--1782631644614.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿ.ಕೆ. ನಾಗರಾಜ&lt;/strong&gt;&lt;/p&gt;&lt;p&gt;ಹೊಸಪೇಟೆ: ಜೀವನಾಧಾರಿತ ದೇಶಿ ಕಸುಬುಗಳು ಇತ್ತೀಚಿನ ದಿನಗಳಲ್ಲಿ ನೇಪಥ್ಯಕ್ಕೆ ಸರಿಯುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎತ್ತುಗಳ ಕೊಂಬು (ಕೆತ್ತುವುದು) ಸ್ವಚ್ಛಗೊಳಿಸುವ ಕಸಬನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಇತ್ತೀಚೆಗೆ ತೆರೆಮರೆಗೆ ಸರಿಯುತ್ತಿದ್ದಾರೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಈಗಲೂ ಅಂತಹ ಕಸುಬು ಮಾಡುವವರು ಉಳಿದುಕೊಂಡಿದ್ದಾರೆ, ಹೀಗಾಗಿ ರೈತರಿಗೆ ಅನುಕೂಲವಾಗಿದೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಟ್ರ್ಯಾಕ್ಟರ್, ಟಿಲ್ಲರ್ ಬಳಕೆಯಿಂದ ಎತ್ತುಗಳ ಬಳಕೆ ಕಡಿಮೆಯಾಗುತ್ತಿದೆ. ಎತ್ತುಗಳ ಕೊಂಬುಗಳ ಸ್ವಚ್ಛಗೊಳಿಸುವವರು ಸಹ ಕಡಿಮೆಯಾಗುತ್ತಿದ್ದಾರೆ.&lt;/p&gt;&lt;p&gt;ಬೇಸಿಗೆ ಕಳೆದು ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆಯಲ್ಲಿ ರೈತರು ಮನೆಯಲ್ಲಿರುವ ರಾಸುಗಳಿಗೆ ರೋಗನಿರೋಧಕ ಔಷಧಿ ನೀಡಿ, ಎತ್ತುಗಳ ಕೊಂಬು ಸ್ವಚ್ಛಗೊಳಿಸುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡಿ ಕಾರಹುಣ್ಣಿಮೆಯಂದು ಎತ್ತುಗಳು ಮತ್ತು ಕರುಗಳನ್ನು ಓಡಿಸಿ ಖುಷಿ ಪಡುತ್ತಾರೆ.&lt;/p&gt;&lt;p&gt;ಸಾಮಾನ್ಯವಾಗಿ ಕಾರಹುಣ್ಣಿಮೆಗೂ ಮೊದಲು ಎತ್ತಿನ ಕೊಂಬುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಬಲು ಜೋರಾಗಿ ನಡೆಯುತ್ತದೆ. ಆದರೆ ಈಗ ಅನೇಕ ಊರುಗಳಲ್ಲಿ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕಾಯಕ ಮಾಡುವವರಿಲ್ಲ. ಕೆಲವು ಹಳ್ಳಿಗಳಲ್ಲಿ ಕೆಲವಷ್ಟೇ ಜನ ಈ ಕಸುಬು ಮಾಡುವವರು ಉಳಿದುಕೊಂಡಿದ್ದಾರೆ. ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ವರದಾಪುರದ ಸುಮಾರು 74 ವರ್ಷದ ನೂರ್&zwnj; ಸಾಹೇಬ್ ಅವರು ಈ ಕಸುಬು ಕಾಪಾಡಿಕೊಂಡು ಬಂದಿದ್ದಾರೆ. ಅದು ಅವರಿಗೆ ಅಪ್ಪನಿಂದ ಬಂದ ಬಳುವಳಿ.&lt;/p&gt;&lt;p&gt;ಕೃಷಿಕರು ಎತ್ತುಗಳನ್ನು ಮನೆ ಮಕ್ಕಳಂತೆ ಕಾಣುತ್ತಾರೆ. ಎತ್ತಿನ ಒರಟಾದ ಕೊಂಬುಗಳನ್ನು ತಿದ್ದಿ-ತೀಡಿ, ಕೊಂಬುಗಳ ತುದಿ ಕತ್ತರಿಸಿ, ಅವುಗಳಿಗೆ ಗೆಜ್ಜೆಗಳನ್ನು ಹಾಕಿ ಖುಷಿ ಪಡುತ್ತಾರೆ. ನೂರ್&zwnj; ಸಾಹೇಬ್ ಅವರು 15 ವರ್ಷ ಬಾಲಕನಾಗಿದ್ದಾಗಿನಿಂದ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಸುಮಾರು 60 ವರ್ಷಗಳಿಂದ ಈ ವೃತ್ತಿಯಲ್ಲಿ ಅವರು ಪರಿಣತರು. ರೈತರು ನೀಡುವ ಹಣದಿಂದ ಬದುಕಿನಬಂಡಿ ಸಾಗಿಸುತ್ತಾರೆ. ಊರೂರು ತಿರುಗುತ್ತಾರೆ.&lt;/p&gt;&lt;p&gt;ಎತ್ತುಗಳ ಕೊಂಬು ಸ್ವಚ್ಛಗೊಳಿಸುವುದು ಅಷ್ಟು ಸುಲಭವಲ್ಲ, ಸ್ವಲ್ಪ ಹೆಚ್ಚು ಕಡಿಮೆ ಆದರೂ ಎತ್ತಿನ ಕೊಂಬಿಗೆ ಗಾಯಗಳಾಗುವ ಸಂಭವ ಇರುತ್ತದೆ. ಸಾಕಷ್ಟು ಅನುಭವ ಬೇಕು. ಆದರೆ ಕೊಂಬು ಸ್ವಚ್ಛಗೊಳಿಸುವ ಕುಶಲಕರ್ಮಿಗೆ ಮಾನ್ಯತೆ ಇಲ್ಲ. ರೈತರು ನೀಡಿದಷ್ಟು ಹಣ ಪಡೆದುಕೊಂಡು ಈ ಕಾಯಕ ಮಾಡುವಂತಾಗಿದೆ ಎಂದು ನೂರ್&zwnj; ಸಾಹೇಬ್ ಹೇಳುತ್ತಾರೆ.&lt;/p&gt;&lt;p&gt;ಎತ್ತುಗಳ ಕೊಂಬು ಸ್ವಚ್ಛಗೊಳಿಸಲು ಒಂದು ಜತೆ ಎತ್ತಿಗೆ ₹400 ಪಡೆಯುತ್ತೇವೆ. ಇತ್ತೀಚಿಗೆ ಎತ್ತುಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಮುಂದಿನ ಪೀಳಿಗೆ ಈ ಕೆಲಸವನ್ನು ಇಷ್ಟಪಡುತ್ತಿಲ್ಲ. ಎಲ್ಲರೂ ವಿದ್ಯಾವಂತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕೆಲಸಗಾರರು ಸಿಗುವುದು ಕಷ್ಟ ಎಂದು ವರದಾಪುರ ಗ್ರಾಮ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕುಶಲಕರ್ಮಿ ನೂರ್&zwnj; ಸಾಹೇಬ್&zwnj; ಹೇಳುತ್ತಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/traditional-bull-horn-craft-in-karnataka-fades-away-74-year-old-artisan-noor-saheb-keeps-the-heritage-alive-rav/articleshow-tiem38h"/>
        </item>
        <item>
            <title><![CDATA[21 ಲಕ್ಷದ ಲಿಫ್ಟ್ ಇದ್ದೂ ಪ್ರಯೋಜನವಿಲ್ಲ: ವೃದ್ಧರನ್ನು ಹೆಗಲ ಮೇಲೆ ಹೊತ್ತು ಸಾಗುವ ದುಸ್ಥಿತಿ!]]></title>
            <link>https://kannada.asianetnews.com/karnataka-districts/lift-built-for-senior-citizens-at-the-huvinahadagali-sub-registration-office-but-it-is-not-yet-available-for-use-mrq/articleshow-toty1to</link>
            <guid isPermaLink="true">https://kannada.asianetnews.com/karnataka-districts/lift-built-for-senior-citizens-at-the-huvinahadagali-sub-registration-office-but-it-is-not-yet-available-for-use-mrq/articleshow-toty1to</guid>
            <pubDate>Sat, 30 May 2026 10:27:30 +0530</pubDate>
            <description><![CDATA[ಹೂವಿನಹಡಗಲಿಯ ಉಪ ನೋಂದಣಿ ಕಚೇರಿಯಲ್ಲಿ ಹಿರಿಯ ನಾಗರಿಕರ ಅನುಕೂಲಕ್ಕಾಗಿ ನಿರ್ಮಿಸಿದ ಲಿಫ್ಟ್ ಉದ್ಘಾಟನೆಯಾದರೂ ಬಳಕೆಗೆ ಲಭ್ಯವಾಗಿಲ್ಲ. ಗುತ್ತಿಗೆದಾರರು ಲಿಫ್ಟ್&zwnj;ನ ಕೀಲಿಯನ್ನು ಇನ್ನೂ ಹಸ್ತಾಂತರಿಸದ ಕಾರಣ, ವಯೋವೃದ್ಧರನ್ನು ಹೊತ್ತುಕೊಂಡು ಮೆಟ್ಟಿಲು ಹತ್ತುವ ಸಂಕಷ್ಟ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvkq2zwfyb2cvsbe831man1,imgname-hoovina-hadagali-1780116851708.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ: &lt;/strong&gt;ಹೂವಿನಹಡಗಲಿಯ ಕಂದಾಯ ಇಲಾಖೆಯ 2ನೇ ಮಹಡಿಯ ಉಪ ನೋಂದಣಿ ಕಚೇರಿಗೆ ನಿರ್ಮಿಸಿದ್ದ ಲಿಫ್ಟ್&zwnj;ನ ಕೀ ಇಲ್ಲದೇ ವಯಸ್ಸಾಗಿರುವ ವ್ಯಕ್ತಿಗಳನ್ನು ಹೊತ್ತುಕೊಂಡು ಹೋಗುವ ಸ್ಥಿತಿ ಇನ್ನು ಬದಲಾಗಿಲ್ಲ.&lt;/p&gt;&lt;h2&gt;&lt;strong&gt;ಲಿಫ್ಟ್&zwnj; ಕೀ ನೀಡದ ಗುತ್ತಿಗೆದಾರ!&lt;/strong&gt;&lt;/h2&gt;&lt;p&gt;ಹೌದು, ಉಪ ನೋಂದಣಾಧಿಕಾರಿ ಕಚೇರಿಗೆ ಹಿರಿಯ ನಾಗರಿಕರು, ಅಂಗವಿಕಲರು ಮೆಟ್ಟಲು ಹತ್ತಿಕೊಂಡು ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನರಿತ ಶಾಸಕ ಕೃಷ್ಣನಾಯ್ಕ ಪುರಸಭೆ ನಗರೋತ್ಥಾನ ಯೋಜನೆಯ ಉಳಿಕೆಯ ₹21 ಲಕ್ಷ ಅನುದಾನದಲ್ಲಿ ಹೊಸ ಲಿಫ್ಟ್&zwnj; ನಿರ್ಮಿಸಿ ಚಾಲನೆ ನೀಡಿದ್ದರು. ಆದರೆ ಲಿಫ್ಟ್&zwnj; ನಿರ್ಮಾಣ ಗುತ್ತಿಗೆ ಪಡೆದ ಗುತ್ತಿಗೆದಾರರ ಈವರೆಗೂ ಉಪ ನೋಂದಣಾಧಿಕಾರಿಗೆ ಕೀಲಿ ನೀಡಿಲ್ಲ.&lt;/p&gt;&lt;p&gt;ಲಿಫ್ಟ್ ಇಲ್ಲದ ಕಾರಣ ಸಾರ್ವಜನಿಕರು ವಯಸ್ಸಾಗಿರುವ ವ್ಯಕ್ತಿಯನ್ನು ಪಾಲಕರು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಚಾಲನೆ ನೀಡಿದ್ದರೂ ಇನ್ನು ಲಿಫ್ಟ್&zwnj; ಕೆಲಸ ಮಾಡುತ್ತಿಲ್ಲ. ಈ ಲಿಫ್ಟ್&zwnj;ನ ಕೀ ನಮಗೆ ನೀಡುವಂತೆ ಶಾಸಕರು ತಿಳಿಸಿದ್ದಾರೆ. ಆದರೆ ಗುತ್ತಿಗೆದಾರರು ನಮಗೆ ನೀಡಿಲ್ಲ ಎನ್ನುತ್ತಾರೆ ಉಪ ನೋಂದಣಾಧಿಕಾರಿ ನಾಗೇಂದ್ರಪ್ಪ.&lt;/p&gt;&lt;h3&gt;&lt;strong&gt;ಪುರಸಭೆ ಅಧಿಕಾರಿಗಳು ಏನ್ ಹೇಳ್ತಾರೆ?&lt;/strong&gt;&lt;/h3&gt;&lt;p&gt;ಲಿಫ್ಟ್&zwnj; ಕಾಮಗಾರಿ ಮಾಡಿರುವ ಗುತ್ತಿಗೆದಾರರು ಉಪ ನೋಂದಣಾಧಿಕಾರಿಗೆ ಪತ್ರ ಬರೆದು ನಂತರದಲ್ಲಿ ಅವರಿಗೆ ಹಸ್ತಾಂತರಿಸುವ ಕೆಲಸ ಬಾಕಿ ಇದೆ. ಕೀ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಹೇಳಿದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/lift-built-for-senior-citizens-at-the-huvinahadagali-sub-registration-office-but-it-is-not-yet-available-for-use-mrq/articleshow-toty1to"/>
        </item>
        <item>
            <title><![CDATA[4 ದಶಕಗಳ ಬಳಿಕ ಒಂದೆಡೆ ಸೇರಿದ 1983-84ನೇ ಸಾಲಿನ ವಿದ್ಯಾರ್ಥಿಗಳು; ಮೃತ ಗೆಳೆಯರಿಗೆ ಕಂಬನಿ]]></title>
            <link>https://kannada.asianetnews.com/karnataka-districts/students-of-the-class-of-1983-1984-reunited-after-4-decades-harapanahalli-vijayanagar-mrq/articleshow-zmzy1xu</link>
            <guid isPermaLink="true">https://kannada.asianetnews.com/karnataka-districts/students-of-the-class-of-1983-1984-reunited-after-4-decades-harapanahalli-vijayanagar-mrq/articleshow-zmzy1xu</guid>
            <pubDate>Tue, 16 Jun 2026 06:41:47 +0530</pubDate>
            <description><![CDATA[ಹರಪನಹಳ್ಳಿಯ ಎಚ್.ಎಂ. ಏಕೋರಾಮರಾಧ್ಯ ಪ್ರೌಢಶಾಲೆಯ 1983-84ನೇ ಸಾಲಿನ ವಿದ್ಯಾರ್ಥಿಗಳು 'ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ' ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಗುರುಗಳನ್ನು ಸನ್ಮಾನಿಸಿ, ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿದರು. ತೆಗ್ಗಿನಮಠದ ಶ್ರೀಗಳು ಗುರುವಿನ ಮಹತ್ವವನ್ನು ಸಾರಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kv6zcya0fh0fkeed2vr8kvf6,imgname-get-together-1781571942720.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ: &lt;/strong&gt;ಗುರು ಎಂದರೆ ಬೆಳಕು. ಜ್ಞಾನದ ಸ್ವರೂಪ. ಸೂರ್ಯ ಉದಯವಾದಾಗ ಕತ್ತಲೆ ಕರಗುವಂತೆ ಗುರುವಿನ ಜ್ಞಾನದ ಅನುಗ್ರಹದಿಂದ ಬೆಳಕು ಲಭಿಸಲಿದೆ ಎಂದು ತೆಗ್ಗಿನಮಠದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.&lt;/p&gt;&lt;p&gt;ಪಟ್ಟಣದ ಮೇಗಳಪೇಟೆಯ ಟಿಎಂಎಇ ಸಂಸ್ಥೆಯ ಎಚ್.ಎಂ. ಏಕೋರಾಮರಾಧ್ಯ ಪ್ರೌಢಶಾಲೆಯ 1983-84ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.&lt;/p&gt;&lt;h2&gt;&lt;strong&gt;1983-84ನೇ ಸಾಲಿನ ವಿದ್ಯಾರ್ಥಿಗಳು&lt;/strong&gt;&lt;/h2&gt;&lt;p&gt;ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ಬಾಲ್ಯದಲ್ಲಿ ಅವರಿಗೆ ವಿದ್ಯೆ ಕಲಿಸಿದ ಗುರು ಮತ್ತು ಶಾಲೆಯನ್ನು ಮರೆಯಬಾರದು. ತಾವು ಓದಿದ ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಶಾಲೆಯ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲಬೇಕು. ಟಿಎಂಎಇ ಶಿಕ್ಷಣ ಸಂಸ್ಥೆಯ ಮೂಲಕ 68ಕ್ಕೂ ಅಧಿಕ ವಿದ್ಯಾಕೇಂದ್ರಗಳನ್ನು ಹೊಂದಿರುವ ಕೀರ್ತಿ ನಮ್ಮ ಸಂಸ್ಥೆಗಿದೆ ಎಂದು ನುಡಿದರು.&lt;/p&gt;&lt;p&gt;ತೆಗ್ಗಿನಮಠ ಸಂಸ್ಥಾನದ ಆಡಳಿತಾಧಿಕಾರಿ ಡಾ.ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಶಾಲೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಗುರುಗಳನ್ನು ಅಭಿನಂಧಿಸುವ ಮೂಲಕ ಮೌಲ್ಯ, ಸಂಸ್ಕಾರವನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಭಾವನೆ ಸದಾ ನಮ್ಮೊಡನೆ ಇರುತ್ತದೆ. ಹಿರಿಯ ವಿದ್ಯಾರ್ಥಿಗಳು ಓದಿದ ಶಾಲೆಯ ಬೆಳವಣಿಗೆಗೆ ಪೂರಕವಾಗಿ ಸದಾ ನೆರವಾಗಬೇಕು ಎಂದರು.&lt;/p&gt;&lt;p&gt;ಹಳೆಯ ವಿದ್ಯಾರ್ಥಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸ್ನೇಹ ಸಮ್ಮಿಲನದ ಹೆಸರಿನಲ್ಲಿ ಗೆಳೆಯರೆಲ್ಲ ಒಂದೆಡೆ ಸೇರಿರುವುದು ಹಬ್ಬದ ಸಂಭ್ರಮದಂತೆ ಕಾಣುತ್ತಿದೆ. ಇತ್ತೀಚೆಗೆ ಸಂಸ್ಕಾರ ಕಡಿಮೆಯಗುತ್ತಿದ್ದು, ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣ ಅಗತ್ಯವಿದೆ ಎಂದರು.&lt;/p&gt;&lt;p&gt;ಎಂ.ವಿ. ಲಿಂಗನಗೌಡ,ಕೆ, ಶಂಭುಲಿಂಗಪ್ಪ, ಮಟ್ಟಿ ಚಂದ್ರಪ್ಪ, ಸಿ.ಎಂ.ಕೊಟ್ರಯ್ಯ ಅವರು ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶಿಕ್ಷಕರಿಗೆ ಪಟ್ಟಣದ ಈಶ್ವರ ದೇವಾಲಯದಿಂದ ಶಾಲಾ ಆವರಣದವರೆಗೆ ವಾದ್ಯಗಳ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.&lt;/p&gt;&lt;p&gt;ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ರಾಜೇಶ್, ಎಂಜಿನಿಯರ್ ಕಂಬಟ್ರಳ್ಳಿ ಸಣ್ಣ ಕೆಂಚಪ್ಪ, ಉಪನ್ಯಾಸಕ ಕೊಟ್ರೇಶ್, ಟಿ.ಎಂ. ವೀರಯ್ಯ, ಬಿ.ವೀರಣ್ಣ, ಕೆ.ದಯಾನಂದ, ಪಟ್ನಾಮದ ನಾಗರಾಜ್ ಮಾತನಾಡಿದರು. ಈ ವೇಳೆ 1983-84ನೇ ಸಾಲಿನಲ್ಲಿದ್ದ ಶಿಕ್ಷಕರು ಮತ್ತು ಸ್ನೇಹಿತರ ನಿಧನವನ್ನ ನೆನೆದು ಮೌನಾಚರಣೆ ಸಲ್ಲಿಸಲಾಯಿತು.&lt;/p&gt;&lt;p&gt;ಈ ಸಂದರ್ಭದಲ್ಲಿ ಕೆ.ಪುಷ್ಪಲತಾ, ಜೆ.ಸಿದ್ದೇಶ್, ಫಕೀರಯ್ಯ, ಮಂಜುನಾಥ್, ರವೀಂದ್ರ, ರೇಖಾಪ್ಪ ಸೇರಿದಂತೆ 1983-84ನೇ ಸಾಲಿನ ವಿದ್ಯಾರ್ಥಿಗಳು ಇದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/students-of-the-class-of-1983-1984-reunited-after-4-decades-harapanahalli-vijayanagar-mrq/articleshow-zmzy1xu"/>
        </item>
    </channel>
</rss>
