<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 20 Jul 2026 12:27:21 +0530</lastBuildDate>
        <atom:link href="https://kannada.asianetnews.com/rss/vijayanagara" rel="self" type="application/rss+xml"/>
        <item>
            <title><![CDATA[ವಿಜಯನಗರದಲ್ಲಿ ಬರ, ರೈತರ ಬದುಕು ದುರ್ಬರ: ತಾನೇ ಬಿತ್ತಿ-ಬೆಳೆದ ತೊಗರಿ, ಜೋಳವನ್ನ ಹರಗಿದ ಅನ್ನದಾತ!]]></title>
            <link>https://kannada.asianetnews.com/karnataka-districts/vijayanagara-distressed-farmers-destroy-maize-crops-due-to-monsoon-failure-demand-loan-waiver-sat/articleshow-01a1vum</link>
            <guid isPermaLink="true">https://kannada.asianetnews.com/karnataka-districts/vijayanagara-distressed-farmers-destroy-maize-crops-due-to-monsoon-failure-demand-loan-waiver-sat/articleshow-01a1vum</guid>
            <pubDate>Mon, 20 Jul 2026 12:27:16 +0530</pubDate>
            <description><![CDATA[ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತಮ್ಮ ಮೆಕ್ಕೆಜೋಳದ ಬೆಳೆಯನ್ನು ಕೈಯಾರೆ ನಾಶಪಡಿಸುತ್ತಿದ್ದಾರೆ. ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ಸರ್ಕಾರವು ಸಾಲ ಮನ್ನಾ ಮಾಡಿ, ಬರಪೀಡಿತ ಎಂದು ಘೋಷಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz4z87376p4zk15n2pk0zwg,imgname-screenshot-2026-07-20-122358-1784530575586.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ (ಜು.20): ಮ&lt;/strong&gt;ಳೆಯನ್ನೇ ನಂಬಿ ಜಮೀನಿನಲ್ಲಿ ಬಿತ್ತನೆ ಮಾಡಿದ ರೈತನಿಗೆ ಈ ಬಾರಿ ಮುಂಗಾರು ಮಳೆ (Monsoon) ಭಾರೀ ಕೈಕೊಟ್ಟಿದೆ. ಬಿತ್ತನೆ ಮಾಡಿ ಮಳೆರಾಯನ ಆಗಮನಕ್ಕಾಗಿ ಕಾದು ಕುಳಿತಿದ್ದ ರೈತರು, ಈಗ ವಿಧಿಯಿಲ್ಲದೆ ತಮ್ಮ ಕೈಯಾರೆ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿರುವ ಮನಕಲಕುವ ಘಟನೆ ವಿಜಯನಗರ (Vijayanagara) ಜಿಲ್ಲೆಯಲ್ಲಿ ಜರುಗಿದೆ.&lt;/p&gt;&lt;h2&gt;&lt;strong&gt;ಮೊಳಕೆಯೊಡೆಯದ ಮೆಕ್ಕೆಜೋಳ:&lt;/strong&gt;&lt;/h2&gt;&lt;p&gt;ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ (Huvina Hadagali Taluk Holagundi Village) ವ್ಯಾಪ್ತಿಯ ಇಟಗಿ, ಉತ್ತಂಗಿ ಹಾಗೂ ಸೋಗಿ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ರೈತರು ಹೆಚ್ಚಿನ ನಿರೀಕ್ಷೆಯೊಂದಿಗೆ ಮೆಕ್ಕೆಜೋಳ (Maize) ಬಿತ್ತನೆ ಮಾಡಿದ್ದರು. ಆದರೆ, ಬಿತ್ತನೆ ಮಾಡಿದ ನಂತರ ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಮೊಳಕೆಯೊಡೆಯಲೇ ಇಲ್ಲ. ಬೆಳೆದ ಒಂದಷ್ಟು ಬೆಳೆಯೂ ಕೂದ ಮಳೆಯಿಲ್ಲದೇ ಒಣಗಿ ಬೀಳುತ್ತಿದೆ. ತಾನೇ ಬಿತ್ತಿ ಬೆಳೆಸಿದ ಜೋಳ ಕಮರಿ ಹೋಗುವುದನ್ನು ನೋಡಲಾರದೆ ಕಂಗಾಲಾದ ರೈತ, ಈ ಬೆಳೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿ, ಎತ್ತುಗಳನ್ನು ಕಟ್ಟಿಕೊಂಡು ರಂಟೆಯಿಂದ ಹರಗುವ ಮೂಲಕ ತಮ್ಮ ಕೈಯಾರೆ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಸಾಲ ಮನ್ನಾಕ್ಕೆ ಹೆಚ್ಚಿದ ಒತ್ತಾಯ :&lt;/strong&gt;&lt;/h2&gt;&lt;p&gt;ಈ ಸಂಕಷ್ಟದ ಪರಿಸ್ಥಿತಿಯನ್ನು ಕಂಡು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್&zwnj; ಅವರು, 'ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬರಬೇಕಾದ ಬೆಳೆ ಕಣ್ಣೆದುರೇ ನಾಶವಾಗುತ್ತಿದೆ. ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ರೈತರ ಹಿತದೃಷ್ಟಿಯಿಂದ ಅವರ ಸಂಪೂರ್ಣ ಸಾಲವನ್ನು ಮನ್ನಾ (Complete Loan Waiver) ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h2&gt;&lt;strong&gt;ಬರಗಾಲದ ಆತಂಕ :&lt;/strong&gt;&lt;/h2&gt;&lt;p&gt;ಕೇವಲ ವಿಜಯನಗರ ಜಿಲ್ಲೆಯಲ್ಲದೆ ರಾಜ್ಯದಾದ್ಯಂತ ಹಲವು ಕಡೆ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ. ಬಿತ್ತನೆ ಮಾಡಿದ ಬೀಜಗಳು ಮಣ್ಣಿನಲ್ಲೇ ಒಣಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರವು ಕೂಡಲೇ ಜಿಲ್ಲೆಯನ್ನು ಬರಪೀಡಿತ (Drought Affected) ಎಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ (Compensation) ನೀಡಬೇಕು ಎಂಬುದು ಇಲ್ಲಿನ ಜನರ ಒಕ್ಕೊರಲ ಆಗ್ರಹವಾಗಿದೆ.&lt;/p&gt;&lt;p&gt;ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು, ಈಗ ಬೆಳೆಯೂ ಇಲ್ಲದೆ, ಸಾಲ ತೀರಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಈ ಪರಿಸ್ಥಿತಿ ರಾಜ್ಯದ ಕೃಷಿ ಕ್ಷೇತ್ರದ ದುಸ್ಥಿತಿಗೆ ಕೈಗನ್ನಡಿಯಾಗಿದೆ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayanagara-distressed-farmers-destroy-maize-crops-due-to-monsoon-failure-demand-loan-waiver-sat/articleshow-01a1vum"/>
        </item>
        <item>
            <title><![CDATA[ಖಾಸಗಿ ಶಾಲೆಗಳತ್ತ ಸರ್ಕಾರಿ ಶಾಲೆಯ 30 ಸಾವಿರ ಮಕ್ಕಳು! ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲ]]></title>
            <link>https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2</link>
            <guid isPermaLink="true">https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2</guid>
            <pubDate>Sun, 05 Jul 2026 08:36:32 +0530</pubDate>
            <description><![CDATA[ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪಾಸಾದ ಸುಮಾರು 30 ಸಾವಿರ ವಿದ್ಯಾರ್ಥಿಗಳು, 8ನೇ ತರಗತಿಗೆ ಸೂಕ್ತ ವ್ಯವಸ್ಥೆ, ಪಠ್ಯಪುಸ್ತಕಗಳು ಮತ್ತು ಶಿಕ್ಷಕರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣದಿಂದಾಗಿ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು, ಉಳಿದವರು ಕನ್ನಡ ಮಾಧ್ಯಮದಲ್ಲಿಯೇ ಮುಂದುವರಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr3e3tcb48vre8ew9vbkh31,imgname-govt-school-1783220342604.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ವಿಜಯನಗರ: &lt;/strong&gt;ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಪಾಸಾದ 30 ಸಾವಿರ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ್ದಕ್ಕೆ ಖಾಸಗೀ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಬಾಗಿಲು ತಟ್ಟುತ್ತಿದ್ದಾರೆ!&lt;/p&gt;&lt;p&gt;ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ಮಕ್ಕಳಿಗೆ ಪಠ್ಯ- ಪುಸ್ತಕಗಳು ಲಭಿಸಿಲ್ಲ, ಪಾಠ ಮಾಡಲು ಶಿಕ್ಷಕರೂ ಬಾರದೇ ಖಾಲಿ ಗೋಡೆ ನೋಡಿ ನೋಡಿ ಬಸವಳಿದ್ದು, ಪಾಲಕರು ಅನಿವಾರ್ಯವಾಗಿ ಸಾಲ ಸೋಲ ಮಾಡಿ ಖಾಸಗೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಿಗೆ ಸೇರಿಸುತ್ತಿದ್ದಾರೆ.&lt;/p&gt;&lt;p&gt;2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ 1001 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿದೆ. ಗ್ರಾಮೀಣ ಭಾಗದ ಬಡವರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕೆಂಬ ಉದ್ದೇಶ ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಆರಂಭವಾದ ಶಾಲೆಗಳಲ್ಲಿ 7ನೇ ತರಗತಿ ಪಾಸ್&zwnj; ಆಗಿರುವ 30 ಸಾವಿರ ವಿದ್ಯಾರ್ಥಿಗಳು ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಣ ಮಂತ್ರಿಯೇ ಇಲ್ಲ&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟದಲ್ಲಿ ಈ ವರೆಗೂ ಶಿಕ್ಷಣ ಸಚಿವರೇ ಇಲ್ಲ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದರಿಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.&lt;/p&gt;&lt;p&gt;ಈವರೆಗೂ ಸರ್ಕಾರ ಪ್ರತ್ಯೇಕವಾಗಿ ಆಂಗ್ಲ ಮಾಧ್ಯಮದ 8ನೇ ತರಗತಿ ಆರಂಭಿಸುವ ಆದೇಶವನ್ನು ಮಾಡಿಲ್ಲ. ಪಠ್ಯ-ಪುಸ್ತಕವಿಲ್ಲ, ಬೋಧಿಸುವ ಶಿಕ್ಷಕರೂ ಇಲ್ಲ. ಆಯಾ ಶಾಲೆಯ ಶಿಕ್ಷಕರೇ ತಮ್ಮ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಜತೆ ಕೂಡ್ರಿಸಿ ಕನ್ನಡದಲ್ಲಿ ಇವರಿಗೂ ಪಾಠ ಮಾಡುತ್ತಿದ್ದರಿಂದ ರಾಜ್ಯದ 30 ಸಾವಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಿಧಿ ಇಲ್ಲದೇ 8ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ರಾಜ್ಯದ ಕೆಲವೆಡೆ ಸರ್ಕಾರಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 8ನೇ ತರಗತಿ ಆರಂಭಿಸದ ಹಿನ್ನೆಲೆಯಲ್ಲಿ ಸ್ಥಿತಿವಂತ ಪಾಲಕರು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಕದ ತಟ್ಟುವಂತಾಗಿದೆ. ಉಳಿದಂತೆ ಬಡ ಮಕ್ಕಳು ಇದೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.&lt;/p&gt;&lt;p&gt;ನಮ್ಮ ಮಕ್ಕಳಿಗೆ ತಿಂಗಳೂ ಕಳೆದರೂ ಸರಿಯಾಗಿ ಪಾಠ ಪ್ರವಚನವಿಲ್ಲ. ಪಠ್ಯಪುಸ್ತಕಗಳಿಲ್ಲ. ವಿಧಿ ಇಲ್ಲದೇ ಕನ್ನಡ ಮಾಧ್ಯಮದ 8ನೇ ತರಗತಿ ಮಕ್ಕಳೊಂದಿಗೆ ಕನ್ನಡ ಪಾಠ ಕೇಳುತ್ತಿದ್ದಾರೆ. ಸರ್ಕಾರ ಈ ಕುರಿತು ಬೇಗನೆ ನಿರ್ಧಾರ ಪ್ರಕಟಿಸಲಿ ಎಂದು ಮಾಗಳ ಗ್ರಾಮದ ನಿವಾಸಿ ಈಟಿ ಕೋಟೆಪ್ಪ ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಸರ್ಕಾರದ ಆದೇಶ ಬಂದಿಲ್ಲ ಎಂದ ಅಧಿಕಾರಿ&lt;/strong&gt;&lt;/h3&gt;&lt;p&gt;7ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಪಾಸ್&zwnj; ಆಗಿರುವ ವಿದ್ಯಾರ್ಥಿಗಳಿಗೆ 8ನೇ ತರಗತಿ ಆರಂಭಿಸಲು ಸರ್ಕಾರದ ಆದೇಶ ಬಂದಿಲ್ಲ. ಸರ್ಕಾರದ ಆದೇಶ ಬರುವವರೆಗೂ ಆಯಾ ಗ್ರಾಮದ ಕನ್ನಡ ಮಾಧ್ಯಮದ ಪ್ರೌಢ ಶಾಲೆಗೆ ವಿದ್ಯಾರ್ಥಿಗಳು ಹೋಗುವಂತೆ ಸೂಚನೆ ನೀಡಲಾಗಿದೆ ಎಂದು ಹೂವಿನಹಡಗಲಿಯ &amp;nbsp;ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ಎ.ಕೋಟೆಪ್ಪ ಹೇಳುತ್ತಾರೆ. &amp;nbsp;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2"/>
        </item>
        <item>
            <title><![CDATA[ಎಲ್‌ ನಿನೋ ಎಫೆಕ್ಟ್, ತುಂಗಭದ್ರಾ ಜಲಾಶಯಕ್ಕೆ ಎಂಟು ದಿನಗಳಿಂದ ಶೂನ್ಯ ನೀರಿನ ಒಳಹರಿವು]]></title>
            <link>https://kannada.asianetnews.com/karnataka-districts/el-nino-effect-zero-water-inflow-into-tungabhadra-reservoir-for-eight-days-mrq/articleshow-34q7nxs</link>
            <guid isPermaLink="true">https://kannada.asianetnews.com/karnataka-districts/el-nino-effect-zero-water-inflow-into-tungabhadra-reservoir-for-eight-days-mrq/articleshow-34q7nxs</guid>
            <pubDate>Mon, 29 Jun 2026 08:30:50 +0530</pubDate>
            <description><![CDATA[ಎಲ್&zwnj; ನಿನೋ ಪರಿಣಾಮದಿಂದ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ತೀವ್ರವಾಗಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 52 ಟಿಎಂಸಿ ನೀರಿನ ಕೊರತೆಯಿದ್ದು, ಕಳೆದ 8 ದಿನಗಳಿಂದ ಒಳಹರಿವು ಶೂನ್ಯಕ್ಕೆ ತಲುಪಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮನೆಮಾಡಿದ್ದು, ಮುಂಗಾರು ಬೆಳೆಗೆ ನೀರು ಸಿಗುವುದು ಅನುಮಾನವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8n1kfx0q7c5z3r7g2vq3rb,imgname-tb-dam-backwater-1782701936125.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್. ನಾರಾಯಣ್ ಮುನಿರಾಬಾದ್&lt;/strong&gt;&lt;/p&gt;&lt;p&gt;ಎಲ್&zwnj; ನಿನೋ ತುಂಗಭದ್ರಾ ಜಲಾಶಯದ ಮೇಲೆ ಭಾರಿ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಜೂನ್&zwnj; ತಿಂಗಳಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಬರಬೇಕಾಗಿದ್ದು, ಎಲ್&zwnj; ನಿನೋ ಪರಿಣಾಮ ಪ್ರಸಕ್ತ ಸಾಲಿನ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕುಸಿತವಾಗಿದೆ.&lt;/p&gt;&lt;p&gt;ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 52 ಟಿಎಂಸಿಯಷ್ಟು ನೀರಿನ ಕೊರತೆ ಎದ್ದು ಕಾಣುತ್ತಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 62 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ನೀರಿನ ಒಳ ಹರಿವು 60,000 ಕ್ಯುಸೆಕ್&zwnj; ಇತ್ತು. ಆದರೆ ಈ ವರ್ಷ ಜಲಾಶಯದಲ್ಲಿ 9.5 ಟಿಎಂಸಿಯಷ್ಟು ನೀರು ಮಾತ್ರ ಇದೆ. ಜೂನ್&zwnj; ಮೊದಲ ವಾರವೂ ಇಷ್ಟೇ ನೀರಿತ್ತು. ಜಲಾಶಯದ ನೀರಿನ ಮಟ್ಟ 1688 ಅಡಿ ಇದ್ದು, ಜೂನ್&zwnj; ಕೊನೆಯ ವಾರದಲ್ಲಿ ಸಹ ನೀರಿನ ಮಟ್ಟ ಅಷ್ಟೇ ಇದೆ. 1 ಅಡಿಯೂ ಏರಿಕೆ ಆಗಿಲ್ಲ.&lt;/p&gt;&lt;h2&gt;&lt;strong&gt;ಶೂನ್ಯಕ್ಕೆ ತಲುಪಿದ ಒಳಹರಿವು&lt;/strong&gt;&lt;/h2&gt;&lt;p&gt;ಕಳೆದ 8 ದಿನಗಳಿಂದ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಅಂದರೆ ಜಲಾಶಯಕ್ಕೆ ಒಂದು ಹನಿ ನೀರು ಹರಿದು ಬರುತ್ತಿಲ್ಲ, ಇದು ಪರಿಸ್ಥಿತಿಯ ಭೀಕರತೆ ತೋರಿಸುತ್ತದೆ. ಈ ಬೆಳವಣಿಗೆ ರೈತರಲ್ಲಿ ಆತಂಕವನ್ನುಂಟು ಮಾಡಿದೆ.&lt;/p&gt;&lt;p&gt;ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗುತ್ತದೆ, ಆದರೆ ಪ್ರಸಕ್ತ ಜೂ. 1ರಿಂದ ಜೂ. 20ರ ವರೆಗೆ ಜಲಾಶಯಕ್ಕೆ ಪ್ರತಿನಿತ್ಯ 100ರಿಂದ 500 ಕ್ಯುಸೆಕ್&zwnj; ನೀರು ಮಾತ್ರ ಹರಿದು ಬಂದಿದೆ. ಇದು ಅತ್ಯಂತ ಅಲ್ಪ ಪ್ರಮಾಣದ ಒಳಹರಿವು ಎನ್ನಲಾಗುತ್ತಿದೆ.&lt;/p&gt;&lt;p&gt;ಜಲಾನಯನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆ ಆಗದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಬರುತ್ತಿಲ್ಲ. ಇದು ಅಚ್ಚುಕಟ್ಟು ಪ್ರದೇಶದ ಅನ್ನದಾತರ ಚಿಂತೆಗೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಜಲಾಶಯದಲ್ಲಿ ಕೇವಲ 9.5 ಟಿಎಂಸಿ ನೀರು&lt;/strong&gt;&lt;/h3&gt;&lt;p&gt;ಮುಂಗಾರು ಬೆಳೆಗೆ 120 ಟಿಎಂಸಿ ನೀರು ಬೇಕು. ಅಚ್ಚುಕಟ್ಟು ಪ್ರದೇಶಗಳಾದ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಅನಂತಪುರ ಕರ್ನೂಲ್, ಕಡಪ ಜಿಲ್ಲೆಗಳ ರೈತರ ಮುಂಗಾರು ಬೆಳೆಗಳಿಗೆ ಸುಮಾರು 120 ಟಿಎಂಸಿ ನೀರು ಅಗತ್ಯವಿರುತ್ತದೆ, ಆದರೆ ಜಲಾಶಯದಲ್ಲಿ ಕೇವಲ 9.5 ಟಿಎಂಸಿ ಇದೆ. ಈ ಬಾರಿ ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರ ಮುಂಗಾರು ಬೆಳೆಗೆ ನೀರು ದೊರೆಯುವುದೇ ಎನ್ನುವ ಪ್ರಶ್ನೆಗೆ ಮಳೆರಾಯನೇ ಉತ್ತರ ನೀಡಬೇಕಾಗಿದೆ.&lt;/p&gt;&lt;p&gt;ಪ್ರಸಕ್ತ ಸಾಲಿನ ತುಂಗಭದ್ರಾ ಜಲಾಶಯದ ಒಳಹರಿವು ಕ್ಷೀಣಿಸಿದ್ದು ಆತಂಕದ ವಿಷಯವಾಗಿದೆ. ಸದ್ಯ ತುಂಗಭದ್ರಾ ಜಲಾಶಯದ ನೀರನ್ನು ಕೇವಲ ಕುಡಿಯಲು ಮಾತ್ರ ಉಪಯೋಗಿಸಲಾಗುತ್ತಿದೆಯೇ ಹೊರತು ಕಾರ್ಖಾನೆ ಹಾಗೂ ಗದ್ದೆಗಳಿಗೆ ಹರಿಸಲಾಗುತ್ತಿಲ್ಲ. ಶಿವಮೊಗ್ಗದ ಭದ್ರಾ ಜಲಾಶಯದಲ್ಲೂ ನೀರಿನ ಒಳಹರಿವು ಕಡಿಮೆಯಾಗಿದೆ. ಅಲ್ಲಿಯು ಪರಿಸ್ಥಿತಿ ಗಂಭೀರವಾಗಿದೆ. ಜು. 2ನೇ ವಾರದಲ್ಲಿ ಮಳೆ ಆಗುವ ಸಂಭವವಿದೆ ಎಂದು ಮುಖ್ಯ ಅಭಿಯಂತರ ಶ್ರೀನಿವಾಸ್ ಮಲ್ಲಿಗವಾಡ ತಿಳಿಸಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/el-nino-effect-zero-water-inflow-into-tungabhadra-reservoir-for-eight-days-mrq/articleshow-34q7nxs"/>
        </item>
        <item>
            <title><![CDATA[Monsoon deficit: ಕೂಡ್ಲಿಗಿ ಆಯ್ತು, ಕೊಟ್ಟೂರಿಂದಲೂ ರಾತ್ರೋರಾತ್ರಿ 2000 ಜನ ಗುಳೆ!]]></title>
            <link>https://kannada.asianetnews.com/karnataka-districts/monsoon-deficit-in-north-karnataka-kottur-villagers-migrate-to-cities-rav/articleshow-443quwr</link>
            <guid isPermaLink="true">https://kannada.asianetnews.com/karnataka-districts/monsoon-deficit-in-north-karnataka-kottur-villagers-migrate-to-cities-rav/articleshow-443quwr</guid>
            <pubDate>Tue, 07 Jul 2026 06:26:44 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಸುರಿದ ಮಳೆ ನಂಬಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಜೂನ್&zwnj;ನಿಂದ ಜುಲೈ ತಿಂಗಳ ಇಲ್ಲಿವರೆಗೆ ಮಳೆ ಬರುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಹೀಗಾಗಿ, ಆತಂಕಗೊಂಡ ಇಲ್ಲಿನ ಜನ ಸುಮಾರು 2000ದಷ್ಟು ಸಂಖ್ಯೆಯಲ್ಲಿ ಗುಳೆ ಹೊರಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwx0ye8csg0qw2h0y3pp7b5c,imgname-----------------------2026-07-07t061807.189-1783385504011.jpg" type="image/jpeg" height="390" width="690"/>
            <content:encoded><![CDATA[&lt;p&gt;- ತಾಲೂಕಲ್ಲಿ ಭೀಕರ ಬರದ ಛಾಯೆ&lt;/p&gt;&lt;ul&gt; &lt;li&gt;--&amp;nbsp;ರಾಜ್ಯದ ಅನೇಕ ಭಾಗಗಳಂತೆ ವಿಜಯನಗರ ಜಿಲ್ಲೆಯಲ್ಲೂ ಬರ&lt;/li&gt; &lt;li&gt;&amp;nbsp;ಕೊಟ್ಟೂರಿನ 33000 ಹೆಕ್ಟೇರ್ ಪೈಕಿ 8000 ಹೆಕ್ಟೇರ್&zwnj; ಅಷ್ಟೇ ಬಿತ್ತನೆ&lt;/li&gt; &lt;li&gt;&amp;nbsp;ಭಣಗುಡುತ್ತಿವೆ ಕೆರೆ-ಕಟ್ಟೆಗಳು, ಜಮೀನುಗಳು ಬರಡೋ ಬರಡು&lt;/li&gt;&lt;/ul&gt;&lt;p&gt;&lt;strong&gt;ಜಿ.ಸೋಮಶೇಖರ&lt;/strong&gt;&lt;/p&gt;&lt;p&gt;&lt;strong&gt;&amp;nbsp;ಕೊಟ್ಟೂರು (ಜು.7): &lt;/strong&gt;ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಸುರಿದ ಮಳೆಯನ್ನು ನಂಬಿ ರೈತರು ಅಲ್ಪ ಸ್ವಲ್ಪ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ, ಜೂನ್&zwnj;ನಿಂದ ಜುಲೈ ತಿಂಗಳ ಇಲ್ಲಿವರೆಗೆ ಮಳೆ ಬರುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಹೀಗಾಗಿ, ಆತಂಕಗೊಂಡ ಇಲ್ಲಿನ ಜನ ಸುಮಾರು 2000ದಷ್ಟು ಸಂಖ್ಯೆಯಲ್ಲಿ ಗುಳೆ ಹೊರಟಿದ್ದಾರೆ.&lt;/p&gt;&lt;p&gt;ದೂಪದಹಳ್ಳಿ ಮತ್ತು ದೂಪದಹಳ್ಳಿ ತಾಂಡಾದ 500 ಜನ, ಮೋತಿಕಲ್&zwnj; ತಾಂಡಾ- 480, ತಿಮಲ್ಲಾಪುರ ದೊಡ್ಡ ತಾಂಡಾ- 450, ತಿಮಲ್ಲಾಪುರ ಸಣ್ಣ ತಾಂಡಾ- 300, ಅಕ್ಕಾಪುರ- 120, ಗಜಾಪುರ- 110, ಕಂದಗಲ್&zwnj; 50 ಮಂದಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು 2,000ಕ್ಕೂ ಅಧಿಕ ಮಂದಿ ಗುಳೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಗುಳೆ ಹೋಗುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.&lt;/p&gt;&lt;h2&gt;ರಾತ್ರೋರಾತ್ರಿ ಬಸ್ಸಲ್ಲಿ ಗುಳೆ:&lt;/h2&gt;&lt;p&gt;ತಾಲೂಕಿನ ರೈತ ಕುಟುಂಬಗಳು ಉದ್ಯೋಗ ಅರಸಿ ಬಹುತೇಕ ಮಂದಿ ಮೈಸೂರು ಸೀಮೆಯತ್ತ ಗುಳೆ ಹೋಗತೊಡಗಿದ್ದಾರೆ. ಇನ್ನುಳಿದವರು ಚಿಕ್ಕಮಗಳೂರಿನ ಕಾಫಿ ತೋಟಗಳತ್ತ ತೆರಳಿದ್ದಾರೆ. ಕೃಷಿಕರು ತಮ್ಮ ತುತ್ತಿನ ಚೀಲವನ್ನು ತುಂಬಿಕೊಳ್ಳಲು ಕುಟುಂಬ ಸಮೇತ ರಾತ್ರೋರಾತ್ರಿ ಬಸ್ಸಿನಲ್ಲಿ ತೆರಳುತ್ತಿದ್ದಾರೆ.&lt;/p&gt;&lt;p&gt;ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಿದರೆ ಕೈತುಂಬ ಕೂಲಿ ಸಿಗುವ ಆಶಯ ಹೊಂದಿ ರೈತರು ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದಾರೆ. ಮುಂದಿನ ವರ್ಷದವರೆಗೆ ಜೀವನ ಸಾಗಿಸಲು ಬೇಕಾದಷ್ಟು ದುಡ್ಡು ಮಾಡಿಕೊಂಡು ವಾಪಸ್ಸಾಗಲಿದ್ದಾರೆ. ಎರಡು-ಮೂರು ತಿಂಗಳ ನಂತರ ತಾಲೂಕಿನ ತಾಂಡಾಗಳಿಗೆ ಮರಳಲಿದ್ದಾರೆ.&lt;/p&gt;&lt;p&gt;ಮೇ ತಿಂಗಳಲ್ಲಿ ಅಲ್ಪ ಸ್ವಲ್ಪ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ, ಹೆಚ್ಚಿನ ಹಣ ವ್ಯಯಿಸಿ ಬಿತ್ತನೆ ಮಾಡಿದ್ದಾರೆ. ಈಗ ಮಳೆಯ ಅವಕೃಪೆಯಿಂದಾಗಿ ಸಾಲ ತೀರಿಸಲು ದಾರಿ ಕಾಣದೆ ಗುಳೆ ಹೋಗುತ್ತಿದ್ದಾರೆ.&lt;/p&gt;&lt;h3&gt;ಗಂಭೀರ ಬರದ ಸ್ಥಿತಿ:&lt;/h3&gt;&lt;p&gt;ತಾಲೂಕಿನಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶಗಳ ಕೃಷಿ ಭೂಮಿ ಪೈಕಿ ಕೇವಲ 8 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತಿರುವ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಗಳು ಮಳೆ ಕಾಣದೆ ಕಮರಿ ಹೋಗುತ್ತಿವೆ. ಕೊಟ್ಟೂರು ಕೆರೆಯಲ್ಲಿ ಮಾತ್ರ ಸ್ವಲ್ಪ ನೀರಿದೆ. ತಾಲೂಕಿನ ಇತರ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ತಾಲೂಕಿನಲ್ಲಿ ಜಲಸಂಕಷ್ಟ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದೆ.&lt;/p&gt;&lt;h3&gt;ಮೇ ಬಳಿಕ ದೊಡ್ಡ ಮಳೆ ಇಲ್ಲ&lt;/h3&gt;&lt;p&gt;ಕೊಟ್ಟೂರು ತಾಲೂಕಿನಲ್ಲಿ ಮೇ ತಿಂಗಳಲ್ಲಿ ಮಾತ್ರ ಒಂದು ದೊಡ್ಡ ಮಳೆ ಸುರಿಯಿತು. ಅದನ್ನು ಬಿಟ್ಟರೆ ಅಂತಹ ಮಳೆ ಬಂದಿಲ್ಲ. ರೈತರು ಬಿತ್ತಿರುವ ಅಲ್ಪ ಸ್ವಲ್ಪ ಬೆಳೆಗಳು ಬೆಳವಣಿಗೆ ಕಾಣದೆ ನೆಲಕಚ್ಚುತ್ತಿವೆ. ಮುಂಬರುವ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಹೊಂದಿ ರೈತರಿಗೆ ಬೇಕಾಗುವ ಎಲ್ಲ ಬಗೆಯ ಬೀಜಗಳನ್ನು ಇಲಾಖೆ ಸಾಕಷ್ಟು ದಾಸ್ತಾನು ಮಾಡಿಕೊಂಡಿದೆ.&lt;/p&gt;&lt;p&gt;&lt;strong&gt;- ಶ್ಯಾಮ್ ಸುಂದರ್, ಕೃಷಿ ಸಹಾಯಕ ಅಧಿಕಾರಿ ಕೊಟ್ಟೂರು.&lt;/strong&gt;&lt;/p&gt;&lt;p&gt;&lt;strong&gt;ಗುಳೆ ತಡೆಯಬೇಕು&lt;/strong&gt;&lt;/p&gt;&lt;p&gt;ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೊಟ್ಟೂರಿನ ಹಳ್ಳಿಗಳು, ಕೆಲ ತಾಂಡಾಗಳ ರೈತರು ಪ್ರತಿದಿನ ತಂಡೋಪತಂಡವಾಗಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಅಲ್ಲಿ ಸಿಗುವ ಹೆಚ್ಚಿನ ದುಡ್ಡು ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಬಯಕೆಯಿಂದ ವಿಧಿಯಿಲ್ಲದೆ ಗುಳೆ ಹೋಗುತ್ತಿದ್ದಾರೆ. ಸರ್ಕಾರದವರು ಗುಳೆ ಹೋಗುವುದನ್ನು ತಡೆಯಬೇಕು. ಅವರಿಗೆ ಇಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು.&lt;/p&gt;&lt;p&gt;&lt;strong&gt;- ವೆಂಕಟೇಶ ನಾಯ್ಕ, ದೂಪದಹಳ್ಳಿ ತಾಂಡಾ ರೈತ.&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/monsoon-deficit-in-north-karnataka-kottur-villagers-migrate-to-cities-rav/articleshow-443quwr"/>
        </item>
        <item>
            <title><![CDATA[Gruhalakshmi Scheme: ಗೃಹಲಕ್ಷ್ಮೀಯ  ₹5 ಸಾವಿರ ಕೋಟಿ ಲೆಕ್ಕ ಕೊಡಿ: ಪ್ರಿಯಾಂಕ್ ಖರ್ಗೆಗೆ ಶ್ರೀರಾಮುಲು ಸವಾಲ್]]></title>
            <link>https://kannada.asianetnews.com/karnataka-districts/b-sriramulu-questions-priyank-kharge-over-gruhalakshmi-rs-5000-crore-gvd/articleshow-b1cuql8</link>
            <guid isPermaLink="true">https://kannada.asianetnews.com/karnataka-districts/b-sriramulu-questions-priyank-kharge-over-gruhalakshmi-rs-5000-crore-gvd/articleshow-b1cuql8</guid>
            <pubDate>Thu, 18 Jun 2026 00:28:39 +0530</pubDate>
            <description><![CDATA[&lt;p&gt;Gruhalakshmi Scheme: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸಲ್ಲಬೇಕಿದ್ದ ₹5 ಸಾವಿರ ಕೋಟಿ ಲೆಕ್ಕ ಕೊಟ್ಟು ನಂತರ ಪ್ರಿಯಾಂಕ್&zwnj; ಖರ್ಗೆ ಬೇರೆ ವಿಷಯಗಳ ಬಗ್ಗೆ ಮಾತಾಡಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvbcacjqth34cqp1nvabdphk,imgname-jvjv-1781719708247.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಟ್ಟೂರು (ಜೂ.18): &lt;/strong&gt;ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸಲ್ಲಬೇಕಿದ್ದ ₹5 ಸಾವಿರ ಕೋಟಿ ಲೆಕ್ಕ ಕೊಟ್ಟು ನಂತರ ಪ್ರಿಯಾಂಕ್&zwnj; ಖರ್ಗೆ ಬೇರೆ ವಿಷಯಗಳ ಬಗ್ಗೆ ಮಾತಾಡಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ತಾಲೂಕಿನ ಉಜ್ಜಿನಿ ಗ್ರಾಮದಲ್ಲಿನ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್&zwnj; ಖರ್ಗೆ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.&lt;/p&gt;&lt;p&gt;ಆರ್.ಎಸ್.ಎಸ್. ನೋಂದಣಿ ಮತ್ತಿತರ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾ ಸರ್ಕಾರದ ಹೊಣೆಗಾರಿಕೆಯನ್ನು ಜನತೆಯಿಂದ ಮರೆಮಾಚಲು ಮುಂದಾಗಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ 12 ವರ್ಷಗಳ ದೀರ್ಘ ಅವಧಿಯಲ್ಲಿ ಸಮರ್ಥ ಅಧಿಕಾರ ನಡೆಸುತ್ತಾ ವಿಶ್ವದಲ್ಲಿಯೇ ಗಮನ ಸೆಳೆದಿದ್ದಾರೆ. ಅನೇಕ ಬಗೆಯ ಯೋಜನೆಗಳನ್ನು ಜನತೆಯ, ಅದರಲ್ಲೂ ಬಡವರ ಏಳಿಗೆಗಾಗಿ ರೂಪಿಸಿ ಸಮಾನತೆಯ ಬೆಳಕು ಪ್ರಜ್ವಲಿಸುವಂತೆ ಮಾಡುತ್ತಿದ್ದಾರೆ.&lt;/p&gt;&lt;p&gt;ವಿಶ್ವದಲ್ಲೇ ಶ್ರೇಷ್ಠ ನಾಯಕ ಎಂದು ನರೇಂದ್ರ ಮೋದಿ ಹೆಸರು ಗಳಿಸಿರುವುದು ಕಾಂಗ್ರೆಸ್ಸಿನ ಹೀನ ಮನಸ್ಸಿನ ನಾಯಕರಿಗೆ ಅರ್ಥವಾಗುತ್ತಿಲ್ಲ ಎಂದು ದೂರಿದರು. ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಇದನ್ನು ತೋರಿಸಿಕೊಳ್ಳಲು ಮುಂದಾಗದೇ ಅನೇಕ ಯೋಜನೆಗಳ ಜಾರಿಗೆ ಅನಗತ್ಯ ನಿಯಮಗಳನ್ನು ತರುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿಯು ರಾಜ್ಯದ ಪ್ರತಿಯೊಬ್ಬರ ಅಚ್ಚುಮೆಚ್ಚಿನ ಪಕ್ಷವಾಗಿ ಹೊರಹೊಮ್ಮಲಿದೆ ಎಂದರು.&lt;/p&gt;&lt;h2&gt;&lt;strong&gt;ಬಿಜೆಪಿ ರಾಜ್ಯಾಧ್ಯಕ್ಷರ ಬದಲಿಲ್ಲ&lt;/strong&gt;&lt;/h2&gt;&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೆಯೇಂದ್ರ ಪಕ್ಷವನ್ನು ಸದೃಢವಾಗಿ ಸಂಘಟಿಸುತ್ತಿದ್ದಾರೆ. ಇವರ ಈ ಪರಿಯ ಕಾರ್ಯ ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿದೆ. ವಿಜಯೇಂದ್ರ ಅವರನ್ನು ಬದಲಾಯಿಸುವ ಯಾವುದೇ ಕಾರ್ಯ ದೆಹಲಿಯ ವರಿಷ್ಠರ ಚಿಂತನೆಯಲ್ಲಿ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ದೆಹಲಿಯಲ್ಲಿ ಯಾವುದೇ ಬಗೆಯ ಲಾಬಿ ನಡೆಸಿಲ್ಲ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>vijayanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/b-sriramulu-questions-priyank-kharge-over-gruhalakshmi-rs-5000-crore-gvd/articleshow-b1cuql8"/>
        </item>
        <item>
            <title><![CDATA[ಅಬಕಾರಿ ಅಧಿಕಾರಿಯ ಅಕ್ರಮ ಸಾಮ್ರಾಜ್ಯಕ್ಕೆ ಇಡಿ ಶಾಕ್, ಜಾರಕಿಹೊಳಿ ಭಾವ ಮಂಜುನಾಥ್ ವಶಕ್ಕೆ, ಲೆಕ್ಕವಿಲ್ಲದ ಬೇನಾಮಿ ಬಾರ್ ಲೈಸೆನ್ಸ್!]]></title>
            <link>https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</link>
            <guid isPermaLink="true">https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</guid>
            <pubDate>Wed, 24 Jun 2026 14:44:49 +0530</pubDate>
            <description><![CDATA[ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ಅಕ್ರಮ ಆಸ್ತಿ ಮತ್ತು ಹವಾಲಾ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಶೋಧಕಾರ್ಯದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಪತ್ತೆಯಾಗಿದ್ದು, ಅಧಿಕಾರಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ರಾಜ್ಯ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣವನ್ನು ಬಯಲುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvwebjrzd71hqnf1qes1avxc,imgname-karnataka-excise-scam-y-manjunath-1782292269854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು / ಬೆಳಗಾವಿ: &lt;/strong&gt;ರಾಜ್ಯ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಹಗರಣವೊಂದು ಬೆಳಕಿಗೆ ಬಂದಿದ್ದು, ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ (Additional Commissioner) ವೈ. ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿ ಪತಿ ಹಾಗೂ ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್ ಅವರನ್ನು ಕೊನೆಗೂ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ವಿದೇಶಿ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ಲಿಂಕ್ ಹಾಗೂ ಅಕ್ರಮ ಆಸ್ತಿ ಸಂಪಾದನೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ. ಕರ್ನಾಟಕ, ಗೋವಾ ಮತ್ತು ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳ ಇಡಿ ಅಧಿಕಾರಿಗಳನ್ನೊಳಗೊಂಡ ಜಂಟಿ ಪಡೆಗಳು, 10ಕ್ಕೂ ಹೆಚ್ಚು ಅರೆಸೇನಾ ಪಡೆ (CRPF) ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಈ ದಾಳಿ ನಡೆಸಿವೆ.&lt;/p&gt;&lt;h2&gt;ರಾಜ್ಯದ 6 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ಇಡಿ ರೇಡ್!&lt;/h2&gt;&lt;p&gt;ಬೆಳ್ಳಂಬೆಳಗ್ಗೆ 5:30ರ ಸುಮಾರಿಗೆ ಇಡಿ ಅಧಿಕಾರಿಗಳು ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿ ವೈ. ಮಂಜುನಾಥ್ ಹಾಗೂ ಅವರ ಆಪ್ತ ಜಾಲವನ್ನು ಗುರಿಯಾಗಿಸಿಕೊಂಡು ಬೆಂಗಳೂರು, ಬೆಳಗಾವಿ, ಮೈಸೂರು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಮತ್ತು ಅಥಣಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt; ರೇಸ್&zwnj;ಕೋರ್ಸ್ ರಸ್ತೆಯ (ಸ್ಯಾಂಕಿ ರಸ್ತೆ) ಪ್ರತಿಷ್ಠಿತ 'ದಿ ಸಮ್ಮಿಟ್' ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಮಂಜುನಾಥ್ ಅವರ ಐಷಾರಾಮಿ ಫ್ಲಾಟ್ ಮೇಲೆ ಮಹಿಳಾ ಇಡಿ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಿಯೇ ಇದ್ದ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಯ ಬಳಿಕ ವಶಕ್ಕೆ ಪಡೆದಿದೆ.&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ಮಂಜುನಾಥ್ ಅವರ ಮುಖ್ಯ ನಿವಾಸದ ಮೇಲೆ ದಾಳಿ ನಡೆದಿದೆ. ಮಹತ್ವದ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಡಿವೈಎಸ್&zwnj;ಪಿ (DySP) ದರ್ಜೆಯ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ದೌಡಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಜಯನಗರ (ಅರಸೀಕೆರೆ):&lt;/strong&gt; ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಮಂಜುನಾಥ್ ಅವರಿಗೆ ಸೇರಿದ ಎರಡು ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.&lt;/p&gt;&lt;p&gt;&lt;strong&gt;ಮೈಸೂರು:&lt;/strong&gt; ದಟ್ಟಗಳ್ಳಿ 3ನೇ ಹಂತದ 5ನೇ ಕ್ರಾಸ್&zwnj;ನಲ್ಲಿರುವ #3638 'ಸ್ವಯಂಭು' ನಿವಾಸದ ಮೇಲೆ ದಾಳಿ ನಡೆದಿದೆ. ಇದು ಕೂಡ ಮಂಜುನಾಥ್ ಅವರ ಆಸ್ತಿಯಾಗಿದ್ದು, ಇಲ್ಲಿ ಅವರ ಆತ್ಮೀಯ ಸ್ನೇಹಿತೆ ಹಾಗೂ ಪ್ರಸ್ತುತ ಅಬಕಾರಿ ಇಲಾಖೆ ಇನ್ಸ್&zwnj;ಪೆಕ್ಟರ್ ಆಗಿರುವ ಯಮುನಾ ಮತ್ತು ಅವರ ತಾಯಿ ಸುಲೋಚನಾ ವಾಸವಾಗಿದ್ದರು. ಇಡಿ ಅಧಿಕಾರಿಗಳು ತೀವ್ರ ದಾಖಲೆ ಪರಿಶೀಲನೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ಯಮುನಾ ಅವರನ್ನು ಮುಖ ಮುಚ್ಚಿಕೊಂಡು ವಾಹನದಲ್ಲಿ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಮಂಜುನಾಥ್ ಆಪ್ತ ಅಧಿಕಾರಿಗಳಿಗೂ ಇಡಿ ಶಾಕ್!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮ ಜಾಲದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಅವರ ಆಪ್ತ ವಲಯದ ಇತರ ಅಧಿಕಾರಿಗಳ ಮೇಲೂ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ:&lt;/p&gt;&lt;p&gt;ಸತೀಶ್ ಶಿವಶಂಕರ ಕಾಗಲೆ (ಎಸ್ಪಿ, ತುಮಕೂರು ಅಬಕಾರಿ ಇಲಾಖೆ): ಮಂಜುನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಬೆಳಗಾವಿಯ ಶ್ರೀನಗರದಲ್ಲಿರುವ ಅಪಾರ್ಟ್&zwnj;ಮೆಂಟ್ ಹಾಗೂ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಐದಾರು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.&lt;/p&gt;&lt;p&gt;ವಿಶ್ವನಾಥ್ ಗಾಣಿಗೇರ (ಡಿವೈಎಸ್ಪಿ, ಚಿಕ್ಕೋಡಿ ಅಬಕಾರಿ ಇಲಾಖೆ): ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಇವರ ನಿವಾಸದ ಮೇಲೂ ದಾಳಿ ನಡೆದಿದ್ದು, ಇವರೂ ಸಹ ಅಕ್ರಮ ವ್ಯವಹಾರಕ್ಕೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;h2&gt;ದಾಳಿ ವೇಳೆ ಪತ್ತೆಯಾದವು ನೂರಾರು 'ಬೇನಾಮಿ ಬಾರ್ ಲೈಸೆನ್ಸ್'ಗಳು!&lt;/h2&gt;&lt;p&gt;ಇಡಿ ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ ಮಂಜುನಾಥ್ ಅವರ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ನಿವಾಸಗಳಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಹಾಗೂ ಅವುಗಳ ಅಗ್ರಿಮೆಂಟ್&zwnj; ಬಾಂಡ್&zwnj;ಗಳು ಪತ್ತೆಯಾಗಿವೆ.&lt;/p&gt;&lt;p&gt;ಅಕ್ರಮದ ನೆಟ್&zwnj;ವರ್ಕ್: ಮಂಜುನಾಥ್ ಅವರು ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಾರ್ ಮತ್ತು ರೆಸ್ಟೋರೆಂಟ್&zwnj;ಗಳನ್ನು ಸ್ಥಾಪಿಸಿದ್ದರು. ಈ ಬೇನಾಮಿ ಬಾರ್&zwnj;ಗಳಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಇವರು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ (ಹವಾಲಾ ದಂಧೆ) ಮಾಡಿ, ಅಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;2013ರ ಲೋಕಾಯುಕ್ತ ಕೇಸ್; ಪ್ರಭಾವ ಬಳಸಿ ಹುದ್ದೆ ಸೃಷ್ಟಿ!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮಗಳ ಇತಿಹಾಸ ಇಂದಿನದ್ದಲ್ಲ. ಈ ಹಿಂದೆ 2013ರಲ್ಲಿ ಮೈಸೂರು ಅಬಕಾರಿ ಡಿಸಿ (DC) ಆಗಿದ್ದಾಗ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಬಾರ್ ಲೈಸೆನ್ಸ್ ನವೀಕರಣದಲ್ಲಿ (Renewal) ಕೋಟ್ಯಂತರ ರೂಪಾಯಿ ಲಂಚ ಹಾಗೂ ಸಂಬಳಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ (Disproportionate Assets) ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಲಾಖಾ ತನಿಖೆ (DE) ನಡೆದು ಪ್ರಸ್ತುತ ಅದು ಮುಚ್ಚಲ್ಪಟ್ಟಿತ್ತಾದರೂ, ಲೋಕಾಯುಕ್ತದ ಅದೇ ಅಕ್ರಮ ಆಸ್ತಿ ಗಳಿಕೆಯ ಮೂಲ ಕೇಸ್ ಅನ್ನು ಆಧರಿಸಿ ಈಗ ಇಡಿ ಅಖಾಡಕ್ಕಿಳಿದಿದೆ.&lt;/p&gt;&lt;h2&gt;ರಾಜಕೀಯ ಪ್ರಭಾವದ ಆರೋಪ:&amp;nbsp;&lt;/h2&gt;&lt;p&gt;ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೇವಲ ಬೆಂಗಳೂರು ರೇಂಜ್ ಮಾತ್ರ ಇತ್ತು. ಆದರೆ ಮಂಜುನಾಥ್ ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ವಿಶೇಷವಾಗಿ 'ಬೆಳಗಾವಿ ಅಬಕಾರಿ ರೇಂಜ್' ಅನ್ನು ಸೃಷ್ಟಿಸಿಕೊಂಡಿದ್ದರು. ಇದರ ಮೂಲಕ ರಾಜ್ಯದ ಅರ್ಧದಷ್ಟು ಜಿಲ್ಲೆಗಳ ಅಬಕಾರಿ ನಿಯಂತ್ರಣದ ಸರ್ವಾಧಿಕಾರವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡು, ಕರಾವಳಿ ಮತ್ತು ಗಡಿ ಭಾಗದಲ್ಲಿ ವ್ಯಾಪಕ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಅಧಿಕಾರಿಗಳ ವಶದಲ್ಲಿರುವ ವೈ. ಮಂಜುನಾಥ್ ಹಾಗೂ ವಶಪಡಿಸಿಕೊಳ್ಳಲಾದ ಲೈಸೆನ್ಸ್ ದಾಖಲೆಗಳಿಂದ ಇಲಾಖೆಯ ಇನ್ನೂ ಹಲವು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt"/>
        </item>
        <item>
            <title><![CDATA[ವಿಜಯನಗರ ಸಾಮ್ರಾಜ್ಯದ ಅಪರೂಪದ ತ್ರಿಭಾಷಾ ಶಾಸನ ಆಂಧ್ರದ ತಿರುಪತಿ ಕಾಡಲ್ಲಿ ಪತ್ತೆ! ಅಪರೂಪದ ದಾಖಲೆ ಉಲ್ಲೇಖ]]></title>
            <link>https://kannada.asianetnews.com/india-news/rare-16th-century-vijayanagara-empire-inscriptions-found-in-tirupati-seshachalam-forest-at-andhra-pradesh-gdp/articleshow-dwhc1w2</link>
            <guid isPermaLink="true">https://kannada.asianetnews.com/india-news/rare-16th-century-vijayanagara-empire-inscriptions-found-in-tirupati-seshachalam-forest-at-andhra-pradesh-gdp/articleshow-dwhc1w2</guid>
            <pubDate>Wed, 24 Jun 2026 16:24:12 +0530</pubDate>
            <description><![CDATA[ಆಂಧ್ರಪ್ರದೇಶದ ಶೇಷಾಚಲಂ ಅರಣ್ಯದಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಿಜಯನಗರ ಸಾಮ್ರಾಜ್ಯದ ಕಾಲದ ಅಪರೂಪದ ಶಾಸನಗಳನ್ನು ಪತ್ತೆಹಚ್ಚಿದೆ. 16ನೇ ಶತಮಾನದ ಸದಾಶಿವ ದೇವರಾಯನ ಆಳ್ವಿಕೆಗೆ ಸೇರಿದ ಈ ತ್ರಿಭಾಷಾ ಶಾಸನಗಳು, ದೇವಾಲಯಕ್ಕೆ ನೀಡಿದ ಭೂದಾನಗಳ ಬಗ್ಗೆ ಮಹತ್ವದ ಮಾಹಿತಿ ನೀಡುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvwkafvsregmjy4tq10hjpax,imgname-vijayanagara-empire-inscriptions-found-in-tirupati-1782297476984.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಇತಿಹಾಸ ಮತ್ತು ಪುರಾತತ್ವ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಪ್ರಸಿದ್ಧ ಶೇಷಾಚಲಂ ಮೀಸಲು ಅರಣ್ಯದ ಒಳಭಾಗದಲ್ಲಿನ ಬೆಟ್ಟದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ ಅತ್ಯಂತ ಅಪರೂಪದ ಐತಿಹಾಸಿಕ ಶಾಸನಗಳು ಮತ್ತು ಶಿಲ್ಪಕಲೆಗಳು ಪತ್ತೆಯಾಗಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ತಜ್ಞರ ತಂಡವು ನಡೆಸಿರುವ ಇತ್ತೀಚಿನ ವ್ಯವಸ್ಥಿತ ಸಮೀಕ್ಷೆಯಲ್ಲಿ ಈ ರಹಸ್ಯಗಳು ಬಯಲಿಗೆ ಬಂದಿದ್ದು, ಇತಿಹಾಸ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;h2&gt;ಸದಾಶಿವಕೋಣದಲ್ಲಿ 16ನೇ ಶತಮಾನದ ಮೂರು ಅಪರೂಪದ ಶಾಸನಗಳು&lt;/h2&gt;&lt;p&gt;ನಾಗಾರ್ಜುನಸಾಗರ್ ಶ್ರೀಶೈಲಂ ಹುಲಿ ಮೀಸಲು ಪ್ರದೇಶವನ್ನು (NSTR) ಒಳಗೊಂಡಿರುವ ನಲ್ಲಮಲ ಅರಣ್ಯದಲ್ಲಿ ಯಶಸ್ವಿ ಶಿಲಾಶಾಸನ ಸಮೀಕ್ಷೆಯನ್ನು ಮುಗಿಸಿದ ಪುರಾತತ್ವ ಇಲಾಖೆಯ ತಂಡವು, ಈ ಬಾರಿ ಶೇಷಾಚಲಂ ಶ್ರೇಣಿಯ ಕಡೆಗೆ ಗಮನ ಹರಿಸಿತ್ತು. ಇಲ್ಲಿನ ದಟ್ಟ ಹಾಗೂ ಇದುವರೆಗೆ ಅನ್ವೇಷಿಸದ ಸದಾಶಿವಕೋನ ಎಂಬ ಅರಣ್ಯ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದಾಗ 16 ನೇ ಶತಮಾನಕ್ಕೆ ಸೇರಿದ ಮೂರು ಅಪರೂಪದ ಶಾಸನಗಳು ಪತ್ತೆಯಾಗಿವೆ. ಈ ಶಾಸನಗಳು ವಿಜಯನಗರ (ಕರ್ನಾಟಕ) ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿಯಾದ ಸದಾಶಿವ ದೇವರಾಯನ ಆಳ್ವಿಕೆಯ ಕಾಲಕ್ಕೆ ಸೇರಿದವು ಎಂದು ತಜ್ಞರು ದೃಢಪಡಿಸಿದ್ದಾರೆ.&lt;/p&gt;&lt;h2&gt;ತ್ರಿಭಾಷಾ ಶಾಸನಗಳು ಮತ್ತು ಅವುಗಳ ವೈಶಿಷ್ಟ್ಯ&lt;/h2&gt;&lt;p&gt;ಪತ್ತೆಯಾಗಿರುವ ಈ ಶಿಲಾಶಾಸನಗಳು ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ. ಇವುಗಳನ್ನು ಆ ಕಾಲದ ಪ್ರಮುಖ ಭಾಷೆಗಳಾದ ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಕೆತ್ತಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಬಹುಭಾಷಾ ಸಂಸ್ಕೃತಿ ಮತ್ತು ದಕ್ಷಿಣ ಭಾರತದಾದ್ಯಂತ ವಿಜಯನಗರ ಸಾಮ್ರಾಜ್ಯದ ಆಡಳಿತಾತ್ಮಕ ಹಿಡಿತಕ್ಕೆ ಸಾಕ್ಷಿಯಾಗಿದೆ.&lt;/p&gt;&lt;h2&gt;ಐತಿಹಾಸಿಕ ದಾಖಲೆಗಳು ತಿಳಿಸುವ ಸತ್ಯ:&lt;/h2&gt;&lt;p&gt;ಈ ಶಾಸನಗಳ ಪ್ರಕಾರ, ಚಕ್ರವರ್ತಿ ಸದಾಶಿವ ದೇವರಾಯನ ಆಳ್ವಿಕೆಯಲ್ಲಿ ಯೆರ್ಪೇಡು ಮಂಡಲದ ಗುಡಿಮಲ್ಲಂ ಗ್ರಾಮದಲ್ಲಿರುವ ಐತಿಹಾಸಿಕ ಪರಶುರಾಮೇಶ್ವರ ದೇವಾಲಯಕ್ಕೆ ಭೂದಾನಗಳನ್ನು ನೀಡಲಾಗಿತ್ತು. ದೇವಾಲಯದಲ್ಲಿ ನಿತ್ಯ ಪೂಜೆಗಳು, ಧಾರ್ಮಿಕ ಆಚರಣೆಗಳು ಮತ್ತು ನೈವೇದ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಈ ಭೂಮಿಯನ್ನು ಮೀಸಲಿಡಲಾಗಿತ್ತು ಎಂಬ ವಿವರಗಳು ಉಲ್ಲೇಖಿತವಾಗಿದೆ.&lt;/p&gt;&lt;h2&gt;ಅನ್ವೇಷಣೆಯ ಮುಖ್ಯ ಉದ್ದೇಶಗಳು&amp;nbsp;&lt;/h2&gt;&lt;p&gt;ಈ ಆವಿಷ್ಕಾರವು ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿರದೆ, ಆ ಯುಗದ ಸಮಗ್ರ ಆಡಳಿತದ ಚಿತ್ರಣವನ್ನು ಒದಗಿಸುತ್ತದೆ.&lt;/p&gt;&lt;p&gt;&lt;strong&gt;ದೇವಾಲಯದ ಆಡಳಿತ: &lt;/strong&gt;ವಿಜಯನಗರ ಕಾಲದಲ್ಲಿ ದೇವಾಲಯಗಳನ್ನು ಹೇಗೆ ನಿರ್ವಹಿಸಲಾಗುತ್ತಿತ್ತು ಮತ್ತು ರಾಜರು ಅದಕ್ಕೆ ಹೇಗೆ ಪ್ರೋತ್ಸಾಹ ನೀಡುತ್ತಿದ್ದರು ಎಂಬುದನ್ನು ಇದು ವಿವರಿಸುತ್ತದೆ.&lt;/p&gt;&lt;p&gt;&lt;strong&gt;ಭೂದಾನ ಪದ್ಧತಿ: &lt;/strong&gt;ಸಾಮ್ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಭೂದಾನಗಳು ವಹಿಸುತ್ತಿದ್ದ ಪ್ರಮುಖ ಪಾತ್ರದ ಮೇಲೆ ಇದು ಬೆಳಕು ಚೆಲ್ಲುತ್ತದೆ.&lt;/p&gt;&lt;p&gt;&lt;strong&gt;ಸಾಮಾಜಿಕ-ಆರ್ಥಿಕ ಪರಿಸ್ಥಿತಿ: &lt;/strong&gt;16ನೇ ಶತಮಾನದ ಜನರ ಜೀವನಮಟ್ಟ, ಕಂದಾಯ ಪದ್ಧತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಅರ್ಥಮಾಡಿಕೊಳ್ಳಲು ಇವು ಪ್ರಮುಖ ಆಧಾರಗಳಾಗಿವೆ.&lt;/p&gt;&lt;h2&gt;ASI ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆ&lt;/h2&gt;&lt;p&gt;ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಸಂಪೂರ್ಣ ಸಹಯೋಗದೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಅಭಯಾರಣ್ಯಗಳ ಆಳದಲ್ಲಿ ಅಡಗಿರುವ ಇತಿಹಾಸದ ಕುರುಹುಗಳನ್ನು ಹುಡುಕುವ ಬೃಹತ್ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ನಲ್ಲಮಲ ಮತ್ತು ಲಂಕಮಲ ಕಾಡುಗಳಲ್ಲಿ ಯಶಸ್ವಿಯಾಗಿ ಸಮೀಕ್ಷೆ ಮುಗಿಸಿರುವ ತಂಡ, ಈಗ ಶೇಷಾಚಲಂ ಅರಣ್ಯ ವಲಯದಲ್ಲಿ ಕಾರ್ಯಪ್ರವೃತ್ತವಾಗಿದೆ.&lt;/p&gt;&lt;p&gt;ಈ ಹಿಂದೆ ನಲ್ಲಮಲದಲ್ಲಿ ನಡೆಸಿದ ಸಂಶೋಧನೆಗಳು ಮೊದಲ ಶತಮಾನಕ್ಕೂ ಮುಂಚಿನಿಂದಲೂ ಅಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯವಿತ್ತು ಎಂಬುದನ್ನು ಸಾಬೀತುಪಡಿಸಿವೆ. ಅಷ್ಟೇ ಅಲ್ಲದೆ, ವಿಜಯನಗರದ ಮಹಾನ್ ದೊರೆ ಶ್ರೀಕೃಷ್ಣದೇವರಾಯ ಮತ್ತು ಮರಾಠಾ ಸಾಮ್ರಾಜ್ಯದ ಹೆಮ್ಮೆಯ ರಾಜ ಛತ್ರಪತಿ ಶಿವಾಜಿ ಮಹಾರಾಜ್ ಸೇರಿದಂತೆ ಅನೇಕ ಐತಿಹಾಸಿಕ ಪುರುಷರು ಶ್ರೀಶೈಲಕ್ಕೆ ಭೇಟಿ ನೀಡಿದ್ದ ದಾಖಲೆಗಳನ್ನು ಸಹ ಈ ಸಮೀಕ್ಷೆಗಳು ಪತ್ತೆಹಚ್ಚಿವೆ.&lt;/p&gt;&lt;h2&gt;ಐತಿಹಾಸಿಕ ಪರಂಪರೆಯ ಸಂರಕ್ಷಣೆ&lt;/h2&gt;&lt;p&gt;ಶೇಷಾಚಲಂ ಕಾಡಿನಲ್ಲಿ ಕೇವಲ ವಿಜಯನಗರದ ಕಾಲದ ಅವಶೇಷಗಳು ಮಾತ್ರವಲ್ಲದೆ, ಅದಕ್ಕೂ ಹಿಂದಿನ ಪಲ್ಲವರು ಮತ್ತು ಕಾಕತೀಯ ರಾಜರ ಕಾಲದ ಅಭಿವೃದ್ಧಿ ಕಾರ್ಯಗಳನ್ನು ಸಾರುವ ಹಲವಾರು ಶಿಲಾಶಾಸನಗಳನ್ನು ಸಹ ಗುರುತಿಸಲಾಗಿದೆ. ಪ್ರಸ್ತುತ, ASI ವಿಜ್ಞಾನಿಗಳು ಈ ಎಲ್ಲಾ ಶಿಲಾಶಾಸನಗಳ ಗಣಕೀಕರಣ ಮತ್ತು ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.&lt;/p&gt;&lt;p&gt;ಸದಾಶಿವ ಕೋನ ಪ್ರದೇಶದಲ್ಲಿ ಪತ್ತೆಯಾಗಿರುವ ಈ ಹೊಸ ಪುರಾವೆಗಳು ಆಂಧ್ರಪ್ರದೇಶ, ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಮತ್ತೊಮ್ಮೆ ಜಗತ್ತಿನೆದುರು ಸಾಬೀತುಪಡಿಸಿವೆ. ಪುರಾತತ್ತ್ವ ಶಾಸ್ತ್ರದ ಇತಿಹಾಸದಲ್ಲಿ ಇದೊಂದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/rare-16th-century-vijayanagara-empire-inscriptions-found-in-tirupati-seshachalam-forest-at-andhra-pradesh-gdp/articleshow-dwhc1w2"/>
        </item>
        <item>
            <title><![CDATA[TB Dam ನೋಡೋಕೆ ಮುಗಿಬಿದ್ದ ಪ್ರವಾಸಿಗರು!; ಲೇಸರ್ ಲೈಟಿಂಗ್ ನೆರಳಿನಲ್ಲಿ ಚಿನ್ನದ ನದಿಯಂತಾದ ತುಂಗಭದ್ರಾ ಒಡಲು!]]></title>
            <link>https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</link>
            <guid isPermaLink="true">https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo</guid>
            <pubDate>Wed, 24 Jun 2026 20:59:22 +0530</pubDate>
            <description><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvx3pn214ctd15f65z9mtdn3,imgname-tungabhadra-dam--2--1782314652737.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್&zwnj;ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ.&amp;nbsp;&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ನಾಳೆ (ಜೂನ್ 25) ಐತಿಹಾಸಿಕ ಕ್ಷಣವೊಂದು ದಾಖಲಾಗಲಿದೆ. ಜಲಾಶಯಕ್ಕೆ ಅಳವಡಿಸಲಾಗಿರುವ ನೂತನ ಕ್ರಸ್ಟ್ ಗೇಟ್&zwnj;ಗಳ ಅಧಿಕೃತ ಲೋಕಾರ್ಪಣೆ ಕಾರ್ಯಕ್ರಮ ನಾಳೆ ನೆರವೇರಲಿದ್ದು, ಈ ಸಂಭ್ರಮದ ಹಿನ್ನೆಲೆಯಲ್ಲಿ ಇಡೀ ಜಲಾಶಯವನ್ನು ವಿದ್ಯುತ್ ದೀಪಾಲಂಕಾರದಿಂದ ಅತ್ಯಂತ ಆಕರ್ಷಕವಾಗಿ ಶೃಂಗರಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್&zwnj;, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್&zwnj; ರೆಡ್ಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದರೊಂದಿಗೆ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿಆರ್&zwnj; ಪಾಟೀಲ್&zwnj; ಕೂಡ ಇರಲಿದ್ದಾರೆ.&lt;/p&gt;&lt;img&gt;&lt;p&gt;ಹೊಸ ಕ್ರಸ್ಟ್ ಗೇಟ್&zwnj;ಗಳ ಲೋಕಾರ್ಪಣೆಯ ಸಂಭ್ರಮಕ್ಕಾಗಿ ತುಂಗಭದ್ರಾ ಆಣೆಕಟ್ಟನ್ನು ವಧುವಿನಂತೆ ಸಜ್ಜುಗೊಳಿಸಲಾಗಿದೆ. ಇಡೀ ಜಲಾಶಯದ ಆಣೆಕಟ್ಟಿನ ಮೇಲೆ ಮೈಲಿಗಟ್ಟಲೆ ಸಾಲು ಸಾಲಾಗಿ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿಯ ವೇಳೆಗೆ ಜಲಾಶಯದ ನೀರು ಮತ್ತು ಗೋಡೆಗಳ ಮೇಲೆ ಪ್ರತಿಫಲಿಸುತ್ತಿರುವ ದೀಪಗಳ ಬೆಳಕು ನೋಡುಗರ ಕಣ್ಣು ಕೋರೈಸುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಕಳೆದ ಅವಧಿಯಲ್ಲಿ ಜಲಾಶಯದ ಪ್ರಮುಖ ಕ್ರಸ್ಟ್ ಗೇಟ್ (ಗೇಟ್ ನಂ. 19) ಕೊಚ್ಚಿ ಹೋಗಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ, ಯುದ್ಧೋಪಾದಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಸ್ಟಾಪ್ ಲಾಗ್ ಮತ್ತು ಕ್ರಸ್ಟ್ ಗೇಟ್&zwnj;ಗಳನ್ನು ಸಿದ್ಧಪಡಿಸಲಾಗಿತ್ತು. ಈ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಳೆ ಅಧಿಕೃತವಾಗಿ ಇವುಗಳನ್ನು ಸಾರ್ವಜನಿಕ ಸೇವೆಗೆ ಹಾಗೂ ರೈತರ ಹಿತದೃಷ್ಟಿಯಿಂದ ಲೋಕಾರ್ಪಣೆ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಹೊಸ ಗೇಟ್&zwnj;ಗಳ ಉದ್ಘಾಟನೆಗೆ ಸಾಕ್ಷಿಯಾಗಲಿರುವ ವಿಜಯನಗರದ ತುಂಗಭದ್ರಾ ಆಣೆಕಟ್ಟಿನ ಉದ್ದಕ್ಕೂ ಎಲ್ಇಡಿ (LED) ದೀಪಗಳ ಭವ್ಯ ಮಾಲೆಯನ್ನು ಹಾಕಲಾಗಿದೆ. ವಿವಿಧ ಬಣ್ಣಗಳ ಲೇಸರ್ ಮತ್ತು ಫ್ಲಡ್ ಲೈಟ್&zwnj;ಗಳ ನೆರಳಿನಾಟವು ಜಲಾಶಯಕ್ಕೆ ಹೊಸ ಕಳೆಯನ್ನು ತಂದಿದ್ದು, ಜಲಾಶಯದ ಹಿನ್ನೀರು ಚಿನ್ನದ ನದಿಯಂತೆ ಮಿನುಗುತ್ತಿದೆ.&lt;/p&gt;&lt;img&gt;&lt;p&gt;ಹಿಂದೆ ಗೇಟ್ ಮುರಿದು ಕೋಟ್ಯಂತರ ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗಿ, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭಾರಿ ಆತಂಕ ಮೂಡಿಸಿತ್ತು. ಆದರೆ ಈಗ ಇಂಜಿನಿಯರ್&zwnj;ಗಳು ಮತ್ತು ತಜ್ಞರ ಶ್ರಮದಿಂದ ಹೊಸ ಗೇಟ್&zwnj;ಗಳು ಯಶಸ್ವಿಯಾಗಿ ಅಳವಡಿಕೆಯಾಗಿ, ಡ್ಯಾಂ ಸಂಪೂರ್ಣ ಸುರಕ್ಷಿತವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯ ಕಾರ್ಯಕ್ರಮವು ವಿಜಯನಗರ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಜಲಾಶಯದ ಈ ಅಭೂತಪೂರ್ವ ದೀಪಾಲಂಕಾರದ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಪ್ರವಾಸಿಗರು ಇಂದಿನಿಂದಲೇ ಜಲಾಶಯದತ್ತ ಧಾವಿಸುತ್ತಿದ್ದಾರೆ. ಮುಸ್ಸಂಜೆಯ ವೇಳೆ ಇಡೀ ಆಣೆಕಟ್ಟು ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್&zwnj;ಗಳಲ್ಲಿ ಸೆರೆಹಿಡಿಯುತ್ತಿದ್ದು, ಪ್ರವಾಸಿ ತಾಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;img&gt;&lt;p&gt;ನಾಳೆ ನಡೆಯಲಿರುವ ಈ ಕ್ರಸ್ಟ್ ಗೇಟ್&zwnj;ಗಳ ಉದ್ಘಾಟನೆಯು ಕೇವಲ ಒಂದು ತಾಂತ್ರಿಕ ಕಾರ್ಯಕ್ರಮವಾಗಿರದೆ, ಕೋಟ್ಯಂತರ ಎಕರೆ ಕೃಷಿ ಭೂಮಿಯ ಜಲ ಭದ್ರತೆಯ ಸಂಕೇತವಾಗಿದೆ. ಯಾವುದೇ ತಾಂತ್ರಿಕ ದೋಷ ಬರದಂತೆ ಅತ್ಯಂತ ಭದ್ರವಾಗಿ ಈ ಗೇಟ್&zwnj;ಗಳನ್ನು ವಿನ್ಯಾಸಗೊಳಿಸಲಾಗಿದ್ದು, ನಾಳೆಯಿಂದ ಜಲಾಶಯವು ಸಂಪೂರ್ಣ ಸಾಮರ್ಥ್ಯದೊಂದಿಗೆ ನೀರನ್ನು ಸಂಗ್ರಹಿಸಲು ಸನ್ನದ್ಧವಾಗಲಿದೆ.&lt;/p&gt;]]></content:encoded>
            <category>vijayanagara</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/tungabhadra-dam-new-crust-gates-inauguration-tb-dam-lightning-hospete-san-f6drqqo"/>
        </item>
        <item>
            <title><![CDATA[ವಿಜಯಪುರದಲ್ಲಿ ಖಗೋಳ ವಿಸ್ಮಯ; ಇದು ಬರಗಾಲ? ಮಳೆ ಸೂಚನೆನಾ? ಏನಿದು ಸನ್ ಹ್ಯಾಲೋ ಚಮತ್ಕಾರ?]]></title>
            <link>https://kannada.asianetnews.com/gallery/science/astronomical-wonder-in-vijayapura-is-this-a-drought-is-it-a-sign-of-rain-what-is-this-sun-halo-phenomenon-mrq-gd5z7np</link>
            <guid isPermaLink="true">https://kannada.asianetnews.com/gallery/science/astronomical-wonder-in-vijayapura-is-this-a-drought-is-it-a-sign-of-rain-what-is-this-sun-halo-phenomenon-mrq-gd5z7np</guid>
            <pubDate>Sun, 21 Jun 2026 11:48:49 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಘೋಣಸಗಿ ಗ್ರಾಮದಲ್ಲಿ ಸೂರ್ಯನ ಸುತ್ತ ಬಂಗಾರದ ಉಂಗುರಾಕಾರದ ವಿಸ್ಮಯ ಕಂಡುಬಂದಿದೆ. 'ಸನ್ ಹ್ಯಾಲೋ' ಎಂದು ಕರೆಯಲ್ಪಡುವ ಈ ಪ್ರಕೃತಿ ವಿಸ್ಮಯವು ವಾತಾವರಣದಲ್ಲಿನ ನೀರಿನ ಕಣಗಳಿಂದ ಉಂಟಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmcymyrken8fz7fn0dwsews,imgname-sun-halo--5--1782022362072.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ ಜಿಲ್ಲೆಯ ಘೋಣಸಗಿ ಗ್ರಾಮದಲ್ಲಿ ಸೂರ್ಯನ ಸುತ್ತ ಬಂಗಾರದ ಉಂಗುರಾಕಾರದ ವಿಸ್ಮಯ ಕಂಡುಬಂದಿದೆ. 'ಸನ್ ಹ್ಯಾಲೋ' ಎಂದು ಕರೆಯಲ್ಪಡುವ ಈ ಪ್ರಕೃತಿ ವಿಸ್ಮಯವು ವಾತಾವರಣದಲ್ಲಿನ ನೀರಿನ ಕಣಗಳಿಂದ ಉಂಟಾಗುತ್ತದೆ.&lt;/p&gt;&lt;img&gt;&lt;p&gt;ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಸೂರ್ಯನ ಸುತ್ತ ಬಂಗಾರದ ಬಣ್ಣದಲ್ಲಿ ಉಂಗುರಾಕಾರ ಕಂಡುಬಂದಿದ್ದು, ಈ ವಿಸ್ಮಯ ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಸೂರ್ಯನ ಸುತ್ತಲು ಉಂಗುರಾಕಾರ ಕಂಡು ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಸಂಭ್ರಮಿಸಿದರು. ಪ್ರಕೃತಿ ವಿಸ್ಮಯವನ್ನು ಮಕ್ಕಳಿಗೆ ತೋರಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳ ಅವರು ಈ ಕುರಿತು ಅಗತ್ಯ ಜ್ಞಾನ ನೀಡಿದರು.&lt;/p&gt;&lt;img&gt;&lt;p&gt;ವಾತಾವರಣದ ಮೇಲ್ಭಾಗದಲ್ಲಿರುವ ನೀರಿನ ಹನಿಗಳು ಮತ್ತು ಮಂಜಿನ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ ವಕ್ರೀಭವನಗೊಂಡು (Refraction) ಈ ರೀತಿಯ &lsquo;ಸನ್ ಹ್ಯಾಲೋ (Sun Halo) ಅಥವಾ ಸೂರ್ಯನ ಉಂಗುರ ಸೃಷ್ಟಿಯಾಗುತ್ತದೆ.&amp;nbsp;&lt;/p&gt;&lt;img&gt;&lt;p&gt;ಈ ಉಂಗುರದ ಒಳಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಹೊರಭಾಗವು ತಿಳಿ ನೀಲಿ ಬಣ್ಣವನ್ನು ಹೊಂದಿರುತ್ತದೆ. ಇದು ಸೂರ್ಯನ ಸುತ್ತ 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತದೆ ಎಂದು ಪರಮೇಶ್ವರ ಗುದ್ಯಾಳ ಅವರು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.&lt;/p&gt;&lt;img&gt;&lt;p&gt;ಹವಾಮಾನ ಮುನ್ಸೂಚನೆಯ ಪ್ರಕಾರ, ಇಂತಹ ಸೂರ್ಯನ ಉಂಗುರಗಳು ಕಾಣಿಸಿಕೊಂಡರೆ ಮುಂದಿನ ಕೆಲವೇ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುತ್ತದೆ. ಈ ಸೂರ್ಯನ ಸುತ್ತ ಕಾಣಿಸಿಕೊಂಡ ಉಂಗುರ ನೋಡಿ ಮಳೆಗಾಗಿ ಕಾಯುತ್ತಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/science/astronomical-wonder-in-vijayapura-is-this-a-drought-is-it-a-sign-of-rain-what-is-this-sun-halo-phenomenon-mrq-gd5z7np"/>
        </item>
        <item>
            <title><![CDATA[ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್]]></title>
            <link>https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</link>
            <guid isPermaLink="true">https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq</guid>
            <pubDate>Tue, 16 Jun 2026 18:20:31 +0530</pubDate>
            <description><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv87c751ar2rqkxkezbdekhr,imgname-tungabhadra-dam--2--1781613862049.jpg" type="image/jpeg" height="390" width="690"/>
            <content:encoded><![CDATA[ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್&zwnj;ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.&lt;img&gt;&lt;p&gt;ಕಳೆದ ವರ್ಷ ತಾಂತ್ರಿಕ ದೋಷದಿಂದಾಗಿ ದುರಂತಕ್ಕೀಡಾಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್&zwnj; ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಮುಂಗಾರು ಮಳೆಗಾಲ ಆರಂಭವಾಗುತ್ತಿರುವ ಬೆನ್ನಲ್ಲೇ ಜೂನ್ 25ರಂದು ಹೊಸ ಗೇಟ್&zwnj;ಗಳನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲು ದಿನಾಂಕ ನಿಗದಿಪಡಿಸಲಾಗಿದೆ. ಮುಂಗಾರು ಮುನ್ನವೇ ಡ್ಯಾಂ ಸಂಪೂರ್ಣ ಸಿದ್ಧವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.&lt;/p&gt;&lt;img&gt;&lt;p&gt;ತುಂಗಭದ್ರಾ ಜಲಾಶಯದ ನೀರು ಮೂರು ರಾಜ್ಯಗಳಿಗೆ ಹಂಚಿಕೆಯಾಗುವುದರಿಂದ, ಈ ಲೋಕಾರ್ಪಣೆ ಕಾರ್ಯಕ್ರಮ ಜಂಟಿ ಸಮಾರಂಭವಾಗಿ ಮೂಡಿಬರಲಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಮೂರೂ ರಾಜ್ಯಗಳ ಹಲವು ಗಣ್ಯರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ. ಇದಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸುತ್ತಿದೆ.&lt;/p&gt;&lt;img&gt;&lt;p&gt;1953ರಲ್ಲಿ ನಿರ್ಮಾಣವಾಗಿದ್ದ ತುಂಗಭದ್ರಾ ಅಣೆಕಟ್ಟಿನ ಮೂಲ ಗೇಟ್&zwnj;ಗಳ ಜೀವಿತಾವಧಿ ಕೇವಲ 50 ವರ್ಷಗಳೆಂದು ತಜ್ಞರು ಮೊದಲೇ ಎಚ್ಚರಿಸಿದ್ದರು. ಆದರೂ ಹಳೆಯ ಗೇಟ್&zwnj;ಗಳನ್ನೇ ಮುಂದುವರಿಸಲಾಗಿತ್ತು. ಪರಿಣಾಮವಾಗಿ, 2024ರ ಆಗಸ್ಟ್ 10ರಂದು ರಾತ್ರಿ ಸುಮಾರು 60 ಅಡಿ ಅಗಲ ಹಾಗೂ 20 ಅಡಿ ಎತ್ತರದ ಬೃಹತ್ ಗೇಟ್&zwnj;ವೊಂದು ಇದ್ದಕ್ಕಿದ್ದಂತೆ ಕಳಚಿ ಬಿದ್ದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ನೀರು ನದಿಗೆ ಪೋಲಾಗಿ, ಭಾರಿ ರಾಜಕೀಯ ವಾಕ್ಸಮರ ಹಾಗೂ ಆತಂಕ ಸೃಷ್ಟಿಯಾಗಿತ್ತು.&lt;/p&gt;&lt;img&gt;&lt;p&gt;ಈ ದುರಂತದ ನಂತರ ಎಚ್ಚೆತ್ತ ಸರ್ಕಾರ, ಕಳೆದ ಡಿಸೆಂಬರ್&zwnj;ನಲ್ಲಿ ಭಾರಿ ಬಜೆಟ್&zwnj;ನೊಂದಿಗೆ ಹೊಸ ಗೇಟ್&zwnj;ಗಳ ಅಳವಡಿಕೆಗೆ ಚಾಲನೆ ನೀಡಿತ್ತು. ದೇಶದ ಪ್ರಮುಖ ಡ್ಯಾಂಗಳಾದ ಕೆಆರ್&zwnj;ಎಸ್, ನಾರಾಯಣಪುರ ಹಾಗೂ ಪಶ್ಚಿಮ ಬಂಗಾಳದ ಫರಕ್ಕಾ ಬ್ಯಾರೇಜ್&zwnj;ಗಳಿಗೆ ಗೇಟ್ ಅಳವಡಿಸಿದ ಅನುಭವವಿರುವ ಗುಜರಾತ್ ಮೂಲದ 'ಹಾರ್ಡ್&zwnj;ವೇರ್ ಟೂಲ್ಸ್ ಮತ್ತು ಮೆಷಿನ್ ಪ್ರಾಜೆಕ್ಟ್ಸ್ ಲಿಮಿಟೆಡ್' ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿತ್ತು. ಒಟ್ಟು 51.81 ಕೋಟಿ ರೂಪಾಯಿ ವೆಚ್ಚದಲ್ಲಿ ಗದಗ ಸಮೀಪದ ಅಡವಿಸೋಮಾಪುರ ಹಾಗೂ ವಿಜಯನಗರದ ಟಿಬಿ ಬೋರ್ಡ್ ಯಾರ್ಡ್&zwnj;ಗಳಲ್ಲಿ ಈ ಗೇಟ್&zwnj;ಗಳನ್ನು ಅತ್ಯಂತ ವೇಗವಾಗಿ ಸಿದ್ಧಪಡಿಸಲಾಯಿತು.&lt;/p&gt;&lt;img&gt;&lt;p&gt;ಹೊಸ ಗೇಟ್ ಅಳವಡಿಸುವ ತಾಂತ್ರಿಕ ಅನಿವಾರ್ಯತೆಯಿಂದಾಗಿ, ಕಳೆದ ಡಿಸೆಂಬರ್ ತಿಂಗಳ ಎರಡನೇ ಬೆಳೆಗೆ ನೀರು ಬಿಡದಿರಲು ಸರ್ಕಾರ ನಿರ್ಧರಿಸಿತ್ತು. ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಲಕ್ಷಾಂತರ ರೈತರು ತಮ್ಮ ಒಂದು ಇಡೀ ಬೆಳೆಯನ್ನು ತ್ಯಾಗ ಮಾಡಿದ್ದರು. ಮುಂಗಾರು ಮಳೆಗೂ ಮುನ್ನ ಕೆಲಸ ಮುಗಿಯುತ್ತಾ ಎಂಬ ಆತಂಕ ರೈತರನ್ನು ಕಾಡಿತ್ತಾದರೂ, ಗುತ್ತಿಗೆ ಕಂಪನಿಯು ಹಗಲಿರುಳು ಶ್ರಮಿಸಿ ಸಕಾಲಕ್ಕೆ ಕೆಲಸ ಮುಗಿಸುವ ಮೂಲಕ ರೈತರ ನಂಬಿಕೆಯನ್ನು ಉಳಿಸಿಕೊಂಡಿದೆ.&lt;/p&gt;&lt;img&gt;&lt;p&gt;ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (KSNDMC) ಇತ್ತೀಚಿನ ತಾಜಾ ಮಾಹಿತಿ ಪ್ರಕಾರ, ಜೂನ್ 16ರ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ ಸದ್ಯಕ್ಕೆ 9 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ (2025) ಇದೇ ಅವಧಿಯಲ್ಲಿ ಜಲಾಶಯದಲ್ಲಿ 28 ಟಿಎಂಸಿ ನೀರು ಲಭ್ಯವಿತ್ತು. ಸದ್ಯ ಮುಂಗಾರು ಮಳೆ ಆರಂಭವಾಗುತ್ತಿರುವುದರಿಂದ ಹೊಸ ಗೇಟ್&zwnj;ಗಳ ಬಲದೊಂದಿಗೆ ಡ್ಯಾಂನಲ್ಲಿ ನೀರಿನ ಸಂಗ್ರಹದ ಪ್ರಮಾಣ ವೇಗವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>vijayanagara</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/tungabhadra-dam-new-crest-gates-inauguration-june-25-three-cms-to-attend-san-gt9eknq"/>
        </item>
        <item>
            <title><![CDATA[Vijayanagara: ಧರ್ಮಸಾಗರದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಾಸನ ಪತ್ತೆ, ಆದಿಮಾನವರ ವಾಸಸ್ಥಾನದ ಕುರುಹು ಪತ್ತೆ!]]></title>
            <link>https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3</link>
            <guid isPermaLink="true">https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3</guid>
            <pubDate>Sat, 27 Jun 2026 17:32:56 +0530</pubDate>
            <description><![CDATA[ಹೊಸಪೇಟೆಯ ಧರ್ಮಸಾಗರ ಗ್ರಾಮದಲ್ಲಿ ಸಂಶೋಧನಾ ತಂಡವೊಂದು ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನ, ಆದಿಮಾನವರು ಬಳಸುತ್ತಿದ್ದ ಕಲ್ಲುಗೊಡಲಿಗಳು ಮತ್ತು 101 ಲಿಂಗಗಳಿರುವ ವಿಶಿಷ್ಟ ಗುಡಿಯನ್ನು ಪತ್ತೆಹಚ್ಚಿದೆ. ಈ ಅನ್ವೇಷಣೆಯು ವಿಜಯನಗರ ಕಾಲದ ಇತಿಹಾಸ ಮತ್ತು ಪ್ರಾಗೈತಿಹಾಸಿಕ ಕುರುಹುಗಳ ಮೇಲೆ ಹೊಸ ಬೆಳಕು ಚೆಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw4f9zpp7zkb7bhc4xxpg44s,imgname-vijayanagara-inscription-1782561701590.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ:&lt;/strong&gt; ಜಿಲ್ಲೆಯ ಐತಿಹಾಸಿಕ ಶ್ರೀಮಂತಿಕೆಗೆ ಮತ್ತೊಂದು ಗರಿ ಎಂಬಂತೆ, ಹೊಸಪೇಟೆಯಿಂದ ಬಳ್ಳಾರಿಗೆ ಹಾದು ಹೋಗುವ ಮಾರ್ಗದಲ್ಲಿರುವ ಧರ್ಮಸಾಗರ ಗ್ರಾಮದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನವೊಂದು ಪತ್ತೆಯಾಗಿದೆ. ಈ ಗ್ರಾಮವು ಕೇವಲ ಐತಿಹಾಸಿಕ ತಾಣವಷ್ಟೇ ಅಲ್ಲದೆ, ಆದಿಮಾನವನು ಇಲ್ಲಿ ವಾಸವಿದ್ದನು ಎನ್ನುವುದಕ್ಕೆ ಸ್ಪಷ್ಟ ಕುರುಹುಗಳನ್ನು ಒದಗಿಸುವ ಮೂಲಕ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;p&gt;ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ 'ವಿಜಯನಗರ ತಿರುಗಾಟ ಸಂಶೋಧನ ತಂಡ'ವು ಧರ್ಮಸಾಗರ ಗ್ರಾಮದ ನಿವಾಸಿ ಶಂಕರ ಅವರ ನೆರವಿನೊಂದಿಗೆ ನಡೆಸಿದ ಕ್ಷೇತ್ರಕಾರ್ಯದ ವೇಳೆ ಈ ಮಹತ್ವದ ಅನ್ವೇಷಣೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ವಿಜಯನಗರ ಕಾಲದ ಐತಿಹಾಸಿಕ ಹಿನ್ನೆಲೆ ಮತ್ತು ದಾನಶಾಸನಗಳು ಧರ್ಮಸಾಗರ ಗ್ರಾಮದ ಪಕ್ಕದಲ್ಲೇ ಇರುವ ಪಾಪಿನಾಯಕನಹಳ್ಳಿಯನ್ನು ವಿಜಯನಗರದ ಕಾಲಾವಧಿಯಲ್ಲಿ 'ಪಾಪನಾಯಕ' ಎಂಬ ಪಾಳೆಯಗಾರ ಆಳುತ್ತಿದ್ದನು ಎಂಬ ಮಾಹಿತಿ ಲಭ್ಯವಿದೆ. ಇದಕ್ಕೆ ಪೂರಕವಾಗಿ ಆ ಗ್ರಾಮದ ಚಾವಡಿಯ ಬಳಿ ಹಾಗೂ ಹೊರವಲಯದ ಅಂಕಾಲಮ್ಮ ದೇಗುಲದ ಕಂಬದ ಮೇಲಿರುವ ಶಿಲಾಶಾಸನಗಳು ಸಾಕ್ಷ್ಯ ನುಡಿಯುತ್ತವೆ.&lt;/p&gt;&lt;p&gt;ಇದರೊಂದಿಗೆ, ಸಮೀಪದ ಬೈಲುವದ್ದಿಗೆರೆ ಗ್ರಾಮದ ಆಂಜನೇಯ ದೇಗುಲದ ಬಳಿ ಪತ್ತೆಯಾಗಿರುವ ಗ್ರಾನೈಟ್ ಕಲ್ಲಿನ ಶಾಸನವು ವಿಜಯನಗರ ಸಾಮ್ರಾಜ್ಯದ ಇಮ್ಮಡಿ ದೇವರಾಯನ ಕಾಲದ್ದಾಗಿದೆ. ಇಮ್ಮಡಿ ದೇವರಾಯನ ಪತ್ನಿ ಅಟಣಲಾದೇವಿಯ ನೆನಪಿಗಾಗಿ 'ಅಂಣಲಾಪುರ' ಎಂಬ ಊರನ್ನು ಹಿತ್ತಿಲ ಬಾಗಿಲ ಮಲ್ಲದೇವರು ನಿರ್ಮಿಸಿ, ಆತನ ಹೆಸರಲ್ಲೇ ದಾನ ನೀಡಿದ ವಿವರಗಳು ಈ ಅಪ್ರಕಟಿತ ಶಾಸನದಲ್ಲಿವೆ.&lt;/p&gt;&lt;h2&gt;&lt;strong&gt;ಭಾಷಾ ಸಾಮರಸ್ಯಕ್ಕೆ ಸಾಕ್ಷಿ:&lt;/strong&gt;&lt;/h2&gt;&lt;p&gt;&lt;strong&gt;&amp;nbsp;&lt;/strong&gt;ಕೃಷ್ಣದೇವರಾಯನ ಕಾಲದ ಕೆರೆ ಶಾಸನ ಧರ್ಮಸಾಗರ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಹಾಸು ಬಂಡೆಕಲ್ಲಿನ ಮೇಲೆ ಕೃಷ್ಣದೇವರಾಯನ ಕಾಲದ ಮತ್ತೊಂದು ಪ್ರಕಟಿತ ಶಾಸನವಿದೆ. ಇದು ಕನ್ನಡ ಲಿಪಿಯಲ್ಲಿದ್ದರೂ, ತೆಲುಗು ಮಿಶ್ರಿತ ಭಾಷೆಯಲ್ಲಿದೆ. &quot;ಈ ದಾನಶಾಸನವು ವಿಜಯನಗರದ ಅರಸರು ಕೇವಲ ಒಂದು ಭಾಷೆಗೆ ಸೀಮಿತವಾಗಿರದೆ, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಿಗೆ ಸಮಾನ ಗೌರವ ನೀಡುತ್ತಿದ್ದರು ಎಂಬುದಕ್ಕೆ ಭದ್ರ ಪುರಾವೆಯಾಗಿದೆ&quot; ಎಂದು ಸಂಶೋಧನ ತಂಡದ ಪ್ರಮುಖರಾದ ಪ್ರೊ. ತಿಪ್ಪೇಸ್ವಾಮಿ ಎಚ್. ತಿಳಿಸಿದ್ದಾರೆ.&lt;/p&gt;&lt;p&gt;'ಕರೆಕಲ್ಲು ಮಾಗಣಿ' ಮತ್ತು ಆದಿಮಾನವರ ಕಾಲದ ಕಲ್ಲುಗೊಡಲಿಗಳು ಧರ್ಮಸಾಗರದಲ್ಲಿ ಆದಿಮಾನವನು ನೆಲೆಸಿದ್ದಕ್ಕೆ ಸಾಕ್ಷಿಯಾಗಿ ತಜ್ಞರು ಇಲ್ಲಿನ ಗುಡ್ಡದ ಮೆಟ್ಟಿಲು ಕಲ್ಲುಗಳ ರಚನೆಯನ್ನು ಗುರುತಿಸಿದ್ದಾರೆ. ಭೂವೈಜ್ಞಾನಿಕವಾಗಿ ಇವುಗಳನ್ನು 'ಡೊಲರೈಟ್ ಡೈಕ್' (ಕಪ್ಪು ಶಿಲೆ) ಮಾದರಿ ಎಂದು ಕರೆಯಲಾಗುತ್ತದೆ.&lt;/p&gt;&lt;p&gt;&lt;strong&gt;ಸ್ಥಳೀಯರ ನಂಬಿಕೆ: &lt;/strong&gt;ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯು ವನವಾಸದ ಸಂದರ್ಭದಲ್ಲಿ ಈ ಕಲ್ಲುಗುಡ್ಡದ ಮೇಲೆ ನಡೆದುಕೊಂಡು ಹೋಗಿದ್ದರಿಂದ ಇಲ್ಲಿನ ಕಲ್ಲುಗಳು ಕಪ್ಪಾಗಿವೆ ಎಂಬುದು ಗ್ರಾಮಸ್ಥರ ಗಾಢ ನಂಬಿಕೆಯಾಗಿದೆ. ಹೀಗಾಗಿಯೇ ಈ ಕಪ್ಪು ಗುಂಡುಕಲ್ಲುಗಳ ಸಮೂಹಕ್ಕೆ ಜನರು 'ಕರೆಕಲ್ಲು ಮಾಗಣಿ' ಎಂದು ಕರೆಯುತ್ತಾರೆ.&lt;/p&gt;&lt;p&gt;&lt;strong&gt;ಪುರಾತತ್ವ ಪುರಾವೆ:&lt;/strong&gt; ಕ್ಷೇತ್ರಕಾರ್ಯದ ವೇಳೆ ಇಲ್ಲಿ ಆದಿಮಾನವ ಬಳಸುತ್ತಿದ್ದ ಎನ್ನಲಾದ ಅತ್ಯಂತ ನುಣುಪಾದ ಕೆತ್ತನೆಯುಳ್ಳ ಕಲ್ಲುಗೊಡಲಿಗಳು (Stone Axes) ದೊರೆತಿವೆ.&lt;/p&gt;&lt;p&gt;ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಪ್ರಾಧ್ಯಾಪಕ ಡಾ. ಗೋವಿಂದ ಅವರ ಪ್ರಕಾರ, &quot;ಸ್ಥಳೀಯರ ಮಾಹಿತಿಯಂತೆ ಈ ಗುಡ್ಡದ ಇಳಿಜಾರಿನಲ್ಲಿ ಹಿಂದೆ 'ಹಳೆ ಊರು' ಇತ್ತು. ಅದಕ್ಕೆ ಪೂರಕವಾಗಿ ಅಲ್ಲಿ ವಾಸದ ಮನೆಗಳ ಹಳೆಯ ತಳಪಾಯದ ರಚನೆಗಳು, ಅನತಿ ದೂರದಲ್ಲೇ ಕೆರೆ ಹಾಗೂ ಕೆರೆಯ ತೂಬುಗಳು ಇಂದಿಗೂ ಕಾಣಸಿಗುತ್ತವೆ. ಆದರೆ, ಪ್ರಸ್ತುತ ಈ ಹಳೆಯ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ&quot; ಎಂದಿದ್ದಾರೆ.&lt;/p&gt;&lt;p&gt;ರಹಸ್ಯಮಯ 101 ಲಿಂಗಗಳ ಗುಡಿ ಗ್ರಾಮದ ಹೊರವಲಯದಲ್ಲಿ ಪೂರ್ವಭಿಮುಖವಾಗಿ ನಿರ್ಮಿಸಲಾದ ಒಂದು ಸಣ್ಣ ವಿಶಿಷ್ಟ ಗುಡಿಯಿದೆ. ಈ ಗರ್ಭಗುಡಿಯ ಗೋಡೆಗೆ ಶಿವಲಿಂಗದ ಆಕಾರ ಹೋಲುವ ಗುಂಡುಕಲ್ಲುಗಳಿವೆ. ಇದರ ಎಡ ಮತ್ತು ಬಲ ಬದಿಯಲ್ಲಿರುವ ಸಣ್ಣ ಹಾಗೂ ದೊಡ್ಡದಾದ ಒಟ್ಟು 101 ಗುಂಡುಕಲ್ಲುಗಳನ್ನೇ ಶಿವಲಿಂಗಗಳೆಂದು ಭಾವಿಸಿ ಇಲ್ಲಿನ ಭಕ್ತರು ಅನಾದಿ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದಾರೆ. ಪ್ರತಿವರ್ಷ ಮಹಾಶಿವರಾತ್ರಿಯ ಜಾಗರಣೆಯ ದಿನದಂದು ಈ ಗುಡಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.&lt;/p&gt;&lt;p&gt;&lt;strong&gt;ಸಂಶೋಧಕರ ಅಪೀಲು: &lt;/strong&gt;&quot;ಧರ್ಮಸಾಗರದಲ್ಲಿ ದೊರೆತಿರುವ ಈ ಅಪರೂಪದ ಶಾಸನಗಳು, ಕಲ್ಲುಗೊಡಲಿಗಳು ಹಾಗೂ 101 ಲಿಂಗಗಳ ಗುಡಿಯಂತಹ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಸ್ಮಾರಕಗಳನ್ನು ಸಂಬಂಧಪಟ್ಟ ಪುರಾತತ್ವ ಇಲಾಖೆಯು ತಕ್ಷಣವೇ ರಕ್ಷಿಸಬೇಕು. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು&quot; ಎಂದು ಸಂಶೋಧಕ ಡಾ. ಕೃಷ್ಣೇಗೌಡ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ಯಶಸ್ವಿ ಕ್ಷೇತ್ರಕಾರ್ಯದಲ್ಲಿ ಸಂಶೋಧನ ತಂಡದ ಸದಸ್ಯರಾದ ಪ್ರೊ. ತಿಪ್ಪೇಸ್ವಾಮಿ ಎಚ್, ಡಾ. ಗೋವಿಂದ, ಡಾ. ಕೃಷ್ಣೇಗೌಡ ಹಾಗೂ ಸಂಶೋಧಕರಾದ ಎಚ್. ರವಿ, ಅಶೋಕ್ ನಾಯಕ್ ದಿದ್ದಿಗಿ ಮತ್ತು ಇಸ್ಮಾಯಿಲ್ ಸಿದ್ದಿಕ್ ಪಾಲ್ಗೊಂಡಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3"/>
        </item>
        <item>
            <title><![CDATA[ಹೂವಿನಹಡಗಲಿ: 632 ಸರ್ಕಾರಿ ಶಾಲೆಗಳ ದುಸ್ಥಿತಿ, ಅಪಾಯದಲ್ಲಿ ಮಕ್ಕಳ ಅಕ್ಷರಾಭ್ಯಾಸ!]]></title>
            <link>https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9</link>
            <guid isPermaLink="true">https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9</guid>
            <pubDate>Sat, 18 Jul 2026 08:07:18 +0530</pubDate>
            <description><![CDATA[&lt;p&gt;ಹೂವಿನಹಡಗಲಿ ತಾಲೂಕಿನ ಸರ್ಕಾರಿ ಶಾಲೆಗಳ ಸುರಕ್ಷತೆಯ ಕುರಿತು ನಡೆಸಿದ ಪರಿಶೀಲನೆಯಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ತಾಲೂಕಿನ 166 ಶಾಲೆಗಳ ಪೈಕಿ 183 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಥಿತಿಯಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxsh4yx5w29zfc92caf9yekq,imgname-----------------------2026-07-18t080147.557-1784342018981.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ (ಜು.18):&lt;/strong&gt; ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಪ್ರತಿ ಸರ್ಕಾರಿ ಶಾಲೆ ಸುರಕ್ಷಿತ ಎಂಬ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದು ಸರ್ಕಾರಕ್ಕೆ ವರದಿ ನೀಡಬೇಕೆಂಬ ಸೂಚನೆ ನೀಡಿತ್ತು. ತಾಲೂಕಿನಲ್ಲಿ 166 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು, 1466 ಕೊಠಡಿಗಳಿವೆ. ಇದರಲ್ಲಿ 811 ಗುಣಮಟ್ಟದ ಕೊಠಡಿಗಳಿವೆ. ಉಳಿದಂತೆ 65 ಕೊಠಡಿಗಳು ದೊಡ್ಡ ಪ್ರಮಾಣದಲ್ಲಿ ದುರಸ್ತಿಯಾಗಬೇಕಿದೆ. 384 ಸಣ್ಣ ಪುಟ್ಟ ದುರಸ್ತಿ ಆಗಬೇಕಿದೆ. 183 ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಇಂತಹ ಅಪಾಯದಡಿ ಮಕ್ಕಳು ಅಕ್ಷರಾಭ್ಯಾಸ ಮಾಡುವ ಪರಿಸ್ಥಿತಿ ತಲೆದೋರಿದೆ.&lt;/p&gt;&lt;p&gt;ತಾಲೂಕಿನ 1466 ಶಾಲಾ ಕೊಠಡಿಗಳಲ್ಲಿ 1443 ಕೋಣೆಗಳಿಗೆ ಸುರಕ್ಷಿತ ಎಂಬ ಪ್ರಮಾಣಪತ್ರ ಸಿಕ್ಕಿದೆ. ಇನ್ನು ಹಿರೇಮಲ್ಲನಕೆರೆ ಕ್ಲಸ್ಟರ್&zwnj;ನ 23 ಕೋಣೆಗಳ ಸುರಕ್ಷಿತ ಪ್ರಮಾಣಪತ್ರ ಬರಬೇಕಿದೆ. ಈ ಸುರಕ್ಷಿತ ಪ್ರಮಾಣಪತ್ರಗಳನ್ನು ನೀಡಲು ಜಿಪಂ ಎಂಜಿನಿಯರಿಂಗ್&zwnj; ಇಲಾಖೆ, ಲೋಕೋಪಯೋಗಿ ಮತ್ತು ಕೆಆರ್&zwnj;ಐಡಿಎಲ್&zwnj;ಗೆ ನೀಡಲಾಗಿತ್ತು.&lt;/p&gt;&lt;p&gt;ಪಟ್ಟಣದ ಷಾ ಪೂಜಾಜಿ ವನೇಚಂದ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1ರಿಂದ 7ನೇ ತರಗತಿ ವರೆಗಿನ ಮೊದಲ ಸರ್ಕಾರಿ ಶಾಲೆಯಾಗಿತ್ತು. ಆರಂಭದಲ್ಲೇ ನೂರಾರು ವಿದ್ಯಾರ್ಥಿಗಳ ದಾಖಲಾತಿ ಹೊಂದಿತ್ತು. ಈಗ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮಕ್ಕಳಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಶಾಲೆಯಲ್ಲಿ ಕೇವಲ 19 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಜತೆಗೆ ಈ ಶಾಲೆಯಲ್ಲಿ 20ಕ್ಕೂ ಹೆಚ್ಚು ಕೋಣೆಗಳಿದ್ದರೂ ಯಾವ ಕೋಣೆಯೂ ಸುರಕ್ಷಿತವಾಗಿಲ್ಲ.&lt;/p&gt;&lt;p&gt;ಆರ್&zwnj;ಸಿಸಿಯ ಸಿಮೆಂಟ್&zwnj; ಚಕ್ಕೆಗಳು ಮಕ್ಕಳ ಮೇಲೆ ಕಳಚಿ ಬೀಳುತ್ತಿವೆ. ಸುರಕ್ಷಿತ ಪ್ರಮಾಣಪತ್ರದಲ್ಲಿ ಯಾವ ಕೋಣೆಯೂ ಸುರಕ್ಷಿತವಾಗಿಲ್ಲ ಎಂಬ ವರದಿ ಬಂದಿದೆ. ಈ ಶಾಲೆಯ ಮಕ್ಕಳನ್ನು ಪಟ್ಟಣದಲ್ಲಿರುವ ಸೊಪ್ಪಿನ ವೀರಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಸುವ ಚಿಂತನೆ ನಡೆದಿದೆ.&lt;/p&gt;&lt;p&gt;ತಾಲೂಕಿನ ಬೂದನೂರು, ಉತ್ತಂಗಿ ಸೇರಿದಂತೆ ಇತರೆ ಸರ್ಕಾರಿ ಪ್ರೌಢ ಶಾಲೆಗಳ ಕೋಣೆಗಳು ಸುರಕ್ಷಿತವಾಗಿಲ್ಲ. ಮಳೆ ಬಂದಾಗ ಸೋರುತ್ತಿವೆ. ಇದಕ್ಕೆ ಅಕ್ಷರ ಆವಿಷ್ಕಾರ ಯೋಜನೆಯಲ್ಲಿ ಚಾವಣಿಗೆ ತಗಡು ಹಾಕಿದ್ದಾರೆ. ಆದರೆ ಕೆಳಗಿನ ಸಿಮೆಂಟ್&zwnj; ತುಂಡುಗಳು ಮಕ್ಕಳ ಮೈ ಮೇಲೆ ಬೀಳುವ ಅಪಾಯ ಎದುರಾಗಿದೆ.&lt;/p&gt;&lt;p&gt;ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಗಣಿ ಬಾಧಿತ ಪ್ರದೇಶಕ್ಕೆ ಒಳ ಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ದುರಸ್ತಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಗ್ರಾಮೀಣ ಭಾಗದ ಬಡ ಮಕ್ಕಳ ಅಕ್ಷರ ಕಲಿಕೆಗೆ ಆಸರೆಯಾಗಬೇಕೆಂಬ ಆಶಯವನ್ನು ಶಿಕ್ಷಣ ಪ್ರೇಮಿಗಳ ಹೊಂದಿದ್ದಾರೆ.&lt;/p&gt;&lt;p&gt;ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕೊಠಡಿಗಳು ಸುರಕ್ಷಿತ ಪ್ರಮಾಣಪತ್ರ ಪಡೆಯಬೇಕೆಂಬ ಸೂಚನೆ ಮೇರೆಗೆ ಕೋಣೆಗಳ ಸುಸ್ಥಿತಿ ಕುರಿತು ವರದಿ ಕೇಳಿದಾಗ ಜಿಪಂ ಎಂಜಿನಿಯರಿಂಗ್&zwnj;, ಕೆಆರ್&zwnj;ಐಡಿಎಲ್&zwnj; ಹಾಗೂ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್&zwnj;ಗಳ ವರದಿ ಪ್ರಕಾರ 183 ಶಾಲೆ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಗಳಾ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9"/>
        </item>
        <item>
            <title><![CDATA[ಬೆಂಗಳೂರು–ವಿಜಯಪುರ ನೇರ ವಿಶೇಷ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಚಿವ MB ಪಾಟೀಲ್]]></title>
            <link>https://kannada.asianetnews.com/gallery/karnataka-districts/bengaluru-vijayapura-direct-special-train-service-extended-till-august-31-minister-mb-patil-information-mrq-mz4daxh</link>
            <guid isPermaLink="true">https://kannada.asianetnews.com/gallery/karnataka-districts/bengaluru-vijayapura-direct-special-train-service-extended-till-august-31-minister-mb-patil-information-mrq-mz4daxh</guid>
            <pubDate>Thu, 18 Jun 2026 12:23:11 +0530</pubDate>
            <description><![CDATA[&lt;p&gt;ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್&zwnj;ನ್ಯೂಸ್ ನೀಡಿದ್ದಾರೆ. ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲನ್ನು ಶಾಶ್ವತಗೊಳಿಸಬೇಕು ಮತ್ತು ಪ್ರಯಾಣದ ಸಮಯವನ್ನು ಬದಲಾಯಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcqjqajqe3cqrpdxgqn00h6,imgname-vijayapur-bengaluru-1781765070162.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್&zwnj;ನ್ಯೂಸ್ ನೀಡಿದ್ದಾರೆ. ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲನ್ನು ಶಾಶ್ವತಗೊಳಿಸಬೇಕು ಮತ್ತು ಪ್ರಯಾಣದ ಸಮಯವನ್ನು ಬದಲಾಯಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್&zwnj;ನ್ಯೂಸ್ ನೀಡಿದ್ದಾರೆ. ಉತ್ತರ ಕರ್ನಾಟಕದ ಪ್ರಯಾಣಿಕರ ಅಗತ್ಯ ಹಾಗೂ ಬೆಂಗಳೂರು&ndash;ವಿಜಯಪುರ ನಡುವಿನ ಹೆಚ್ಚುತ್ತಿರುವ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಯಶವಂತಪುರ&ndash;ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.&lt;/p&gt;&lt;img&gt;&lt;p&gt;ಈ ಹಿಂದೆ ಈ ರೈಲು ಸೇವೆಯನ್ನು ಕೇವಲ ಜೂನ್ 29ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಇದೇ ವರ್ಷದ ಆಗಸ್ಟ್ 31ರವರೆಗೆ ಸೇವೆಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಸತತ ಪ್ರಯತ್ನಗಳ ಫಲವಾಗಿ ವಾರಕ್ಕೊಮ್ಮೆ ಆರಂಭಗೊಂಡಿದ್ದ ಈ ರೈಲು ಸೇವೆಯನ್ನು ಇದೇ ಜೂನ್ 1ರಿಂದ ವಾರದಲ್ಲಿ ಎರಡು ದಿನಗಳ ಸೇವೆಯಾಗಿ ವಿಸ್ತರಿಸಲಾಗಿದೆ. ಇದು ಉತ್ತರ ಕರ್ನಾಟಕದ ಜನರ ಬಹುಕಾಲದ ಬೇಡಿಕೆಗೆ ದೊರೆತ ಮತ್ತೊಂದು ಸಕಾರಾತ್ಮಕ ಸ್ಪಂದನೆಯಾಗಿದೆ.&lt;/p&gt;&lt;img&gt;&lt;p&gt;ಮುಂದಿನ ದಿನಗಳಲ್ಲಿ ಈ ರೈಲು ಸೇವೆಯನ್ನು ಶಾಶ್ವತಗೊಳಿಸುವುದು, ಪ್ರತಿದಿನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಅಗತ್ಯ ಸುಧಾರಣೆಗಳನ್ನು ತರುವವರೆಗೆ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ.&lt;/p&gt;&lt;img&gt;&lt;p&gt;ಎಂ.ಬಿ.ಪಾಟೀಲ್ ಪೋಸ್ಟ್&zwnj;ಗೆ ಕಮೆಂಟ್ ಮಾಡಿರುವ ಜನರು, ದಯವಿಟ್ಟು ಈ ರೈಲ್ ಟೈಮ್ ಅನ್ನು ವಿಜಯಪುರ ಇಂದ ರಾತ್ರಿ 7.30ಕ್ಕೆ ಹೊರಟು ಯಶವಂತಪುರ್ ಬೆಳಗ್ಗೆ 5.30ಗೆ ಮುಟ್ಟುವ ಹಾಗೆ ಸಮಯ ಬದಲಾಯಿಸಿ. ಈಗ ಟ್ರೈನ್ 3:30 to 4am ಹಾಗೆ ಬಂದು ತಲುಪುವುದರಿಂದ ತುಂಬಾ ಪ್ರಯಾಣಿಕರು ಬಸ್ ಸೌಲಭ್ಯ ವಿಲ್ಲದೆ ಒದ್ದಾಡುತ್ತಾರೆ ಎಂದು ಮನವಿ ಮಾಡಿಕೊಂಡದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಘೋಷಣೆ, 5 ಜಿಲ್ಲೆಯ ಪ್ರವಾಸಿಗರಿಗೆ ಇದೊಂದು ಆಫರ್!&lt;/strong&gt;&lt;/p&gt;&lt;img&gt;&lt;p&gt;ಈ ರೈಲು ವಿಜಯಪುರದಿಂದ ಬೆಂಗಳೂರಿಗೆ ಹೋಗಲು ಬಹಳ ಉತ್ತಮವಾಗಿದೆ. ಇದನ್ನು ಶಾಶ್ವತ ಮಾಡುವುದು ಒಂದು ಭಾಗವಾದರೆ ಸಮಯ ಬದಲಾವಣೆ ಎರಡನೇ ಭಾಗವಾಗಬೇಕು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru K-Ride Suburban Rail: ಹೊಸೂರು-ದೇವನಹಳ್ಳಿ ಸೇರಿ ಕೆ-ರೈಡ್&zwnj;ನ 3 ರೈಲುಗಳ ಸೇವೆ ಶೀಘ್ರ ಆರಂಭ!&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bengaluru-vijayapura-direct-special-train-service-extended-till-august-31-minister-mb-patil-information-mrq-mz4daxh"/>
        </item>
        <item>
            <title><![CDATA[ಹಂಪಿಯಲ್ಲಿ ಬಿದ್ದಿರೋ ಖಾಲಿ ಪ್ಲಾಸ್ಟಿಕ್ ಬಾಟಲ್‌ಗೆ ದರ ನಿಗಿದಿ; ಪುರಾತತ್ವ ಇಲಾಖೆಯ ಯೋಜನೆ]]></title>
            <link>https://kannada.asianetnews.com/karnataka-districts/in-hamp-you-will-get-1-rupee-for-an-empty-plastic-bottle-archaeological-department-project-mrq/articleshow-ndpb2a2</link>
            <guid isPermaLink="true">https://kannada.asianetnews.com/karnataka-districts/in-hamp-you-will-get-1-rupee-for-an-empty-plastic-bottle-archaeological-department-project-mrq/articleshow-ndpb2a2</guid>
            <pubDate>Mon, 20 Jul 2026 12:02:07 +0530</pubDate>
            <description><![CDATA[&lt;p&gt;ವಿಶ್ವವಿಖ್ಯಾತ ಹಂಪಿಯನ್ನು ಪ್ಲಾಸ್ಟಿಕ್&zwnj; ಮುಕ್ತಗೊಳಿಸಲು, ಹಂಪಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದೆ. ಪ್ರವಾಸಿಗರು ಬಳಸಿದ ಖಾಲಿ ಪ್ಲಾಸ್ಟಿಕ್&zwnj; ಬಾಟಲಿಗಳನ್ನು ನಿಗದಿತ ಯಂತ್ರದಲ್ಲಿ ಹಾಕಿದರೆ, ಪ್ರತಿ ಬಾಟಲಿಗೆ ಹಣ ಪಡೆಯಬಹುದು. ಈ ಕ್ರಮವು ಹಂಪಿಯಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz36fe55gbv52rjgkf7g5fc,imgname-hampi-1784528715204.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿ.ಕೆ. ನಾಗರಾಜ&lt;/strong&gt;&lt;/p&gt;&lt;p&gt;&lt;strong&gt;ಹೊಸಪೇಟೆ: &lt;/strong&gt;ವಿಶ್ವವಿಖ್ಯಾತ ಹಂಪಿಯಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್&zwnj; ನೀರಿನ ಬಾಟಲಿಗಳು ಎಸೆಯುವಂತಿಲ್ಲ. ಹಂಪಿಯ ಪ್ರಮುಖ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್ (ಪುಡಿಗಟ್ಟುವ) ಯಂತ್ರಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್&zwnj;ಗಳನ್ನು ಈ ಯಂತ್ರದಲ್ಲಿ ಹಾಕಿದರೆ ಸಾಕು ತಕ್ಷಣವೇ ನೀವು ₹1 ಪಡೆಯಬಹುದು.&lt;/p&gt;&lt;p&gt;ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರದೊಳಗೆ ಒಂದು ಪ್ಲಾಸ್ಟಿಕ್&zwnj; ಬಾಟಲಿ ಹಾಕಿದರೆ ಸಾಕು, ನಿಮಗೆ ಒಂದು ರುಪಾಯಿ ನಾಣ್ಯ ನೀಡುತ್ತದೆ. ಇದು ಪ್ರವಾಸಿಗರಲ್ಲಿ ಪರಿಸರ ಕಾಳಜಿ ಉತ್ತೇಜಿಸುವ ಕ್ರಮವಾಗಿದೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಂತಹದೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.&lt;/p&gt;&lt;h2&gt;&lt;strong&gt;ಪ್ಲಾಸ್ಟಿಕ್&zwnj; ಮುಕ್ತ ಹಂಪಿ&lt;/strong&gt;&lt;/h2&gt;&lt;p&gt;ಹಂಪಿಗೆ ದೇಶ-ವಿದೇಶ ಪ್ರವಾಸಿಗರು, ಸಾವಿರಾರು ಭಕ್ತರು ನಿತ್ಯವೂ ಭೇಟಿ ನೀಡುತ್ತಾರೆ. ಬಹುತೇಕ ಪ್ರವಾಸಿಗರು ತಾವು ತಂದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡುತ್ತಾರೆ. ಇದರಿಂದ ಹಂಪಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬೀಳುತ್ತಿದೆ. ಸ್ವಚ್ಛತೆ ಕಾರ್ಯ ಕಾರ್ಮಿಕರಿಗೆ ಸವಾಲಿನ ಕೆಲಸವಾಗಿತ್ತು. ಅದರಿಂದ ಸ್ವಚ್ಛ ಹಂಪಿ-ಸುಂದರ ಹಂಪಿ ಎನ್ನುವ ಈ ಅಭಿಯಾನವನ್ನು ಎಎಸ್&zwnj;ಐ, ಹಂಪಿ ಪ್ರಾಧಿಕಾರ ಆರಂಭಿಸಿತು. ಪ್ಲಾಸ್ಟಿಕ್&zwnj; ಮುಕ್ತ ಹಂಪಿಯನ್ನಾಗಿ ರೂಪಿಸುವ ಕಾರ್ಯಕ್ಕೆ ಹೈಟೆಕ್&zwnj; ಸ್ಪರ್ಶ ನೀಡಲು ಮುಂದಾಗಿದೆ.&lt;/p&gt;&lt;h3&gt;&lt;strong&gt;ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರಗಳ ಅಳವಡಿಕೆ&lt;/strong&gt;&lt;/h3&gt;&lt;p&gt;ಪ್ರವಾಸಿಗರು ಹೆಚ್ಚು ಭೇಟಿ ನೀಡುವ ವಿರೂಪಾಕ್ಷೇಶ್ವರ ದೇವಸ್ಥಾನ, ಪಾರ್ಕಿಂಗ್&zwnj; ಪ್ರದೇಶ, ಗೆಜ್ಜಲ ಮಂಪಟ, ರಾಣಿಸ್ನಾನಗೃಹ, ಕಡಲೆಕಾಳು ಗಣೇಶ, ಮಹಾನವಮಿ ದಿಬ್ಬ ಸೇರಿದಂತೆ ಹಂಪಿಯ ಪ್ರಮುಖ 7​-8 ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಪ್ಲಾಸ್ಟಿಕ್ ರಿಸೈಕ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಂಪನಿಯೊಂದು ಈ ಯಂತ್ರಗಳನ್ನು ಅಳವಡಿಸಿದೆ.&lt;/p&gt;&lt;h3&gt;&lt;strong&gt;10-15 ದಿನಗಳಲ್ಲಿ ಅಧಿಕೃತವಾಗಿ ಕಾರ್ಯಾರಂಭ&lt;/strong&gt;&lt;/h3&gt;&lt;p&gt;ಹಂಪಿಯಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಪ್ರವಾಸಿಗರು ಬಳಸುವ ಪ್ಲಾಸ್ಟಿಕ್&zwnj; ನೀರಿನ ಬಾಟಲಿಗಳು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರಕ್ಕೆ ಮಾರಕವಾಗುತ್ತಿವೆ. ಇದನ್ನು ತಪ್ಪಿಸಲು ರಿವರ್ಸ್&zwnj; ವೆಂಡಿಂಗ್&zwnj; ಯಂತ್ರಗಳನ್ನು ಪಾರ್ಕಿಂಗ್&zwnj; ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ. ಇನ್ನು 10-15 ದಿನಗಳಲ್ಲಿ ಈ ಯೋಜನೆ ಅಧಿಕೃತವಾಗಿ ಕಾರ್ಯಾರಂಭವಾಗಲಿದೆ ಎನ್ನುತ್ತಾರೆ ಪುರಾತತ್ವ ಅಧೀಕ್ಷಕರು, ಎಎಸ್&zwnj;ಐ ಹಂಪಿ ವೃತ್ತ ಕೆ. ರಾಮಕೃಷ್ಣ ರೆಡ್ಡಿ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/in-hamp-you-will-get-1-rupee-for-an-empty-plastic-bottle-archaeological-department-project-mrq/articleshow-ndpb2a2"/>
        </item>
        <item>
            <title><![CDATA[ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಕರ್ನಾಟಕಕ್ಕೆ ಓಡಿ ಬಂದ Rahul Dravid; ಯಂತ್ರೋದ್ಧಾರಕ ಹನುಮನಿಗೆ ವಿಶೇಷ ಮೊರೆ!]]></title>
            <link>https://kannada.asianetnews.com/gallery/cricket-sports/rahul-dravid-visits-anjanadri-yantroddharaka-hanuman-temple-seeks-blessings-for-son-cricket-career-suh-p31ukat</link>
            <guid isPermaLink="true">https://kannada.asianetnews.com/gallery/cricket-sports/rahul-dravid-visits-anjanadri-yantroddharaka-hanuman-temple-seeks-blessings-for-son-cricket-career-suh-p31ukat</guid>
            <pubDate>Fri, 03 Jul 2026 13:08:48 +0530</pubDate>
            <description><![CDATA[&lt;p&gt;ಮಗನ ಕ್ರಿಕೆಟ್ ಭವಿಷ್ಯ ಉಜ್ವಲವಾಗಲಿ ಎಂಬ ಆಶಯದಿಂದ ರಾಹುಲ್ ದ್ರಾವಿಡ್ (Rahul Dravid) ಯಂತ್ರೋದ್ಧಾರಕ ಹನುಮ ಹಾಗೂ ಅಂಜನಾದ್ರಿ ಅಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇಲ್ಲಿದೆ ಯಂತ್ರೋದ್ಧಾರಕನ ಮಹಿಮೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwke4zzdsbx1mqns5qhzj62e,imgname-rahul-dravid-1783063805933.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಗನ ಕ್ರಿಕೆಟ್ ಭವಿಷ್ಯ ಉಜ್ವಲವಾಗಲಿ ಎಂಬ ಆಶಯದಿಂದ ರಾಹುಲ್ ದ್ರಾವಿಡ್ (Rahul Dravid) ಯಂತ್ರೋದ್ಧಾರಕ ಹನುಮ ಹಾಗೂ ಅಂಜನಾದ್ರಿ ಅಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇಲ್ಲಿದೆ ಯಂತ್ರೋದ್ಧಾರಕನ ಮಹಿಮೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್&zwnj; ಹಂಪಿಗೆ ಭೇಟಿ ನೀಡಿ ವಿರೂಪಾಕ್ಷ ದೇವಸ್ಥಾನ ದರ್ಶನ ಪಡೆದಿದ್ದು ಭಕ್ತರ ಗಮನ ಸೆಳೆದಿದೆ. ಹಂಪಿಗೆ ಭೇಟಿ ನೀಡುವ ಅನೇಕ ಭಕ್ತರು ವಿರೂಪಾಕ್ಷನ ದರ್ಶನದ ಜೊತೆಗೆ ತಪ್ಪದೇ ಭೇಟಿ ನೀಡುವ ಮತ್ತೊಂದು ಪವಿತ್ರ ಕ್ಷೇತ್ರವೇ ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ. ಈ ಕ್ಷೇತ್ರದ ಮಹಿಮೆ ಬಗ್ಗೆ ಅನೇಕ ಭಕ್ತರು ಅಪಾರ ನಂಬಿಕೆ ಹೊಂದಿದ್ದಾರೆ.&lt;/p&gt;&lt;p&gt;ತುಂಗಭದ್ರಾ ನದಿಯ ತಟದಲ್ಲಿರುವ ಈ ಪವಿತ್ರ ಕ್ಷೇತ್ರದಲ್ಲಿ ಶ್ರೀ ಹನುಮಂತನನ್ನು ಅಪರೂಪದ ಯಂತ್ರದ ಮಧ್ಯದಲ್ಲಿ ಆಸೀನನಾಗಿ ಪೂಜಿಸಲಾಗುತ್ತದೆ. ಸಂಪ್ರದಾಯದ ಪ್ರಕಾರ, ಮಹಾನ್ ದ್ವೈತ ತತ್ವಜ್ಞಾನಿ ವ್ಯಾಸತೀರ್ಥರು ಇಲ್ಲಿ ಹನುಮಂತನನ್ನು ಯಂತ್ರದೊಳಗೆ ಪ್ರತಿಷ್ಠಾಪನೆ ಮಾಡಿದರು ಎಂಬ ನಂಬಿಕೆ ಇದೆ.&lt;/p&gt;&lt;img&gt;&lt;p&gt;ಭಕ್ತರ ನಂಬಿಕೆಯಂತೆ, ಈ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಿದರೆ ಮನಸ್ಸಿಗೆ ಶಾಂತಿ, ಧೈರ್ಯ, ಏಕಾಗ್ರತೆ ಹಾಗೂ ಅಡೆತಡೆ ನಿವಾರಣೆ ಆಗುತ್ತದೆ ಎನ್ನಲಾಗುತ್ತದೆ. ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಮತ್ತು ಕ್ರೀಡಾಪಟುಗಳು ವಿಶೇಷವಾಗಿ ಈ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವುದು ಸಾಮಾನ್ಯ.&lt;/p&gt;&lt;p&gt;ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ತಲುಪಲು ಸ್ವಲ್ಪ ಮೆಟ್ಟಿಲುಗಳನ್ನು ಏರಬೇಕು. ಮೇಲಿನಿಂದ ಕಾಣುವ ಹಂಪಿಯ ಐತಿಹಾಸಿಕ ದೃಶ್ಯ ಮತ್ತು ತುಂಗಭದ್ರಾ ನದಿಯ ಸೌಂದರ್ಯ ಭಕ್ತರಿಗೆ ವಿಭಿನ್ನ ಅನುಭವ ನೀಡುತ್ತದೆ.&lt;/p&gt;&lt;img&gt;&lt;p&gt;ವಿಶ್ವವಿಖ್ಯಾತ ಐತಿಹಾಸಿಕ ತಾಣ ಹಂಪಿಯಲ್ಲಿರುವ ಈ ದೇವಾಲಯವು ಅತ್ಯಂತ ಜಾಗೃತ ಹಾಗೂ ಶಕ್ತಿಶಾಲಿ ಸನ್ನಿಧಿಯಾಗಿದೆ. ಇಲ್ಲಿ ಆಂಜನೇಯ ಸ್ವಾಮಿಯು ಯಂತ್ರದ ಮಧ್ಯದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವುದು ವಿಶೇಷ. ಈ ಜಾಗೃತ ಹನುಮಂತನ ದರ್ಶನ ಮಾಡುವುದರಿಂದ ಹಾಗೂ ಇಲ್ಲಿ ಕುಳಿತು ಹನುಮಾನ್ ಚಾಲೀಸಾ ಪಠಿಸುವುದರಿಂದ ಜಾತಕದಲ್ಲಿರುವ ಶನಿಯ ಅಶುಭ ಪ್ರಭಾವಗಳು, ಭಯ ಮತ್ತು ಆತಂಕಗಳು ಸಂಪೂರ್ಣವಾಗಿ ನಾಶವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ.&lt;/p&gt;&lt;img&gt;&lt;p&gt;ಹಂಪಿಯ ವಿರುಪಾಕ್ಷ ದೇವಾಲಯ ದರ್ಶನದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಪತ್ನಿಯೊಂದಿಗೆ ಅಂಜನಾದ್ರಿ ಬೆಟ್ಟಗೆ ಭೇಟಿ ನೀಡಿದರು. ಬಳಿಕ 575 ಮೆಟ್ಟಿಲುಗಳನ್ನು ಏರಿ, ಹನುಮ ಜನ್ಮಭೂಮಿ ಎಂದು ಪ್ರಸಿದ್ಧವಾಗಿರುವ ಅಂಜನಾದ್ರಿ ಬೆಟ್ಟದಲ್ಲಿರುವ ಅಂಜನಾದ್ರಿ ಹನುಮಾನ್ ದೇವಸ್ಥಾನದಲ್ಲಿ ವಿಶೇಷ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.&lt;/p&gt;]]></content:encoded>
            <category>vijayanagara</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/cricket-sports/rahul-dravid-visits-anjanadri-yantroddharaka-hanuman-temple-seeks-blessings-for-son-cricket-career-suh-p31ukat"/>
        </item>
        <item>
            <title><![CDATA[ಜೋಡಿ ನಾಗರಹಾವು ಕಚ್ಚಿ ಚೌಡಾಪುರ ಗ್ರಾಮದ ಓಬಮ್ಮ ಸಾವು; ಮೇವು ತೆಗೆಯುವಾಗ ನಡೆದ ಘಟನೆ]]></title>
            <link>https://kannada.asianetnews.com/karnataka-districts/vijayanagar-kudlagi-woman-dies-after-being-bitten-by-a-pair-of-cobras-mrq/articleshow-pxi8lyi</link>
            <guid isPermaLink="true">https://kannada.asianetnews.com/karnataka-districts/vijayanagar-kudlagi-woman-dies-after-being-bitten-by-a-pair-of-cobras-mrq/articleshow-pxi8lyi</guid>
            <pubDate>Sat, 11 Jul 2026 08:24:01 +0530</pubDate>
            <description><![CDATA[ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ, ಮೆಕ್ಕೆಜೋಳದ ಸೊಪ್ಪೆ ತರುವಾಗ ಜೋಡಿ ನಾಗರಹಾವು ಕಚ್ಚಿ ಕೆ.ಓಬಮ್ಮ (53) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಹಾವುಗಳನ್ನು ಹೊಡೆದು ಕೊಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx7ha63ryapme4yepn1rf97e,imgname-vijayangara-1783738210424.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ (ಕೂಡ್ಲಿಗಿ):&lt;/strong&gt; ಕಣದಲ್ಲಿರುವ ಜಾನುವಾರುಗಳಿಗೆ ಮೇವು ಹಾಕಲು, ಮೆಕ್ಕೆಜೋಳ ಸೊಪ್ಪಿ ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವು ಕಚ್ಚಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚೌಡಾಪುರ ಗ್ರಾಮದ ಕೆ.ಓಬಮ್ಮ (53) ಮೃತ ಮಹಿಳೆ.&lt;/p&gt;&lt;p&gt;ಸಿಟ್ಟಿಗೆದ್ದ ಜನತೆ ಮಹಿಳೆಯ ಸಾವಿಗೆ ಕಾರಣವಾದ ಜೋಡಿ ನಾಗರಹಾವುಗಳನ್ನು ಹೊಡೆದು ಕೊಂದಿದ್ದಾರೆ.&lt;/p&gt;&lt;p&gt;ಮೆಕ್ಕೆಜೋಳ ಬಣವಿಯಲ್ಲಿನ ಸೊಪ್ಪೆ ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವುಗಳು ಮಹಿಳೆಯ ಬಲಗೈನ ರಟ್ಟೆಗೆ ಒಂದರ ಹಿಂದೆ ಒಂದರಂತೆ ಕಚ್ಚಿದ್ದರಿಂದ ಅಸ್ವಸ್ಥಳಾಗಿದ್ದಾಳೆ. ತಕ್ಷಣ ಮಹಿಳೆಯನ್ನು ಬೈಕಿನಲ್ಲಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಂಡನಿಗೆ ಕಚ್ಚಿದ ಹಾವು; ಟಿವಿ ನೋಡಿ ಬಾಯಿಂದ ವಿಷ ಹೀರಿದ ಪತ್ನಿ! ಆಮೇಲಾಗಿದ್ದೇ ಬೇರೆ ಕಥೆ&lt;/strong&gt;&lt;/p&gt;&lt;h2&gt;&lt;strong&gt;ಶಾಸಕ ಡಾ.ಎನ್&zwnj;.ಟಿ. ಶ್ರೀನಿವಾಸ್ ಸಾಂತ್ವನ&lt;/strong&gt;&lt;/h2&gt;&lt;p&gt;ಹಾವು ಕಚ್ಚಿ ಮೃತಪಟ್ಟ ಮಹಿಳೆ ಕುಟುಂಬದವರನ್ನು ಶಾಸಕ ಡಾ.ಎನ್&zwnj;.ಟಿ. ಶ್ರೀನಿವಾಸ ಭೇಟಿ ಮಾಡಿ, ಸಾಂತ್ವನ ಹೇಳಿದರು. ಚೌಡಾಪುರ ಗ್ರಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಸೇರಿದಂತೆ ಗ್ರಾಮಸ್ಥರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಳೆಗಾಲದಲ್ಲಿ ಮನೆಯೊಳಗೆ ಹಾವು ಬರ್ಬಾರದು ಅಂದ್ರೆ ಈ ಸಿಂಪಲ್&zwnj; ಟಿಪ್ಸ್&zwnj; ಫಾಲೋ ಮಾಡಿ&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagar-kudlagi-woman-dies-after-being-bitten-by-a-pair-of-cobras-mrq/articleshow-pxi8lyi"/>
        </item>
        <item>
            <title><![CDATA[ಕಾರಹುಣ್ಣಿಮೆ ಸಂಭ್ರಮಕ್ಕೆ ಜೀವ ತುಂಬುತ್ತಿದ್ದ ಈ ಕಸುಬು ಕಣ್ಮರೆ! ಎತ್ತುಗಳ ಕೊಂಬಿಗೆ ಬಣ್ಣ ಹಚ್ಚಿದ ಕೈಗಳು ಈಗ ಖಾಲಿ!]]></title>
            <link>https://kannada.asianetnews.com/karnataka-districts/traditional-bull-horn-craft-in-karnataka-fades-away-74-year-old-artisan-noor-saheb-keeps-the-heritage-alive-rav/articleshow-tiem38h</link>
            <guid isPermaLink="true">https://kannada.asianetnews.com/karnataka-districts/traditional-bull-horn-craft-in-karnataka-fades-away-74-year-old-artisan-noor-saheb-keeps-the-heritage-alive-rav/articleshow-tiem38h</guid>
            <pubDate>Sun, 28 Jun 2026 13:02:42 +0530</pubDate>
            <description><![CDATA[&lt;p&gt;ಕೃಷಿಯಲ್ಲಿ ಯಾಂತ್ರೀಕರಣದಿಂದಾಗಿ ಎತ್ತುಗಳ ಬಳಕೆ ಕಡಿಮೆಯಾಗಿದ್ದು, ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಮಹತ್ವ ಪಡೆಯುವ ಎತ್ತುಗಳ ಕೊಂಬು ಕೆತ್ತುವ ದೇಶಿ ಕಸುಬು ನೇಪಥ್ಯಕ್ಕೆ ಸರಿಯುತ್ತಿದೆ. ಈ ಕಾಯಕವನ್ನೇ ನಂಬಿ ಬದುಕುತ್ತಿರುವ ವರದಾಪುರದ ನೂರ್&zwnj; ಸಾಹೇಬ್&zwnj;ರಂತಹ ಕೆಲವೇ ಕುಶಲಕರ್ಮಿಗಳು ಮಾತ್ರ ಉಳಿದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6j0fe6qxwykd5yw6nstrdy,imgname----------------------55--1782631644614.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿ.ಕೆ. ನಾಗರಾಜ&lt;/strong&gt;&lt;/p&gt;&lt;p&gt;ಹೊಸಪೇಟೆ: ಜೀವನಾಧಾರಿತ ದೇಶಿ ಕಸುಬುಗಳು ಇತ್ತೀಚಿನ ದಿನಗಳಲ್ಲಿ ನೇಪಥ್ಯಕ್ಕೆ ಸರಿಯುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎತ್ತುಗಳ ಕೊಂಬು (ಕೆತ್ತುವುದು) ಸ್ವಚ್ಛಗೊಳಿಸುವ ಕಸಬನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಇತ್ತೀಚೆಗೆ ತೆರೆಮರೆಗೆ ಸರಿಯುತ್ತಿದ್ದಾರೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಈಗಲೂ ಅಂತಹ ಕಸುಬು ಮಾಡುವವರು ಉಳಿದುಕೊಂಡಿದ್ದಾರೆ, ಹೀಗಾಗಿ ರೈತರಿಗೆ ಅನುಕೂಲವಾಗಿದೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಟ್ರ್ಯಾಕ್ಟರ್, ಟಿಲ್ಲರ್ ಬಳಕೆಯಿಂದ ಎತ್ತುಗಳ ಬಳಕೆ ಕಡಿಮೆಯಾಗುತ್ತಿದೆ. ಎತ್ತುಗಳ ಕೊಂಬುಗಳ ಸ್ವಚ್ಛಗೊಳಿಸುವವರು ಸಹ ಕಡಿಮೆಯಾಗುತ್ತಿದ್ದಾರೆ.&lt;/p&gt;&lt;p&gt;ಬೇಸಿಗೆ ಕಳೆದು ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆಯಲ್ಲಿ ರೈತರು ಮನೆಯಲ್ಲಿರುವ ರಾಸುಗಳಿಗೆ ರೋಗನಿರೋಧಕ ಔಷಧಿ ನೀಡಿ, ಎತ್ತುಗಳ ಕೊಂಬು ಸ್ವಚ್ಛಗೊಳಿಸುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡಿ ಕಾರಹುಣ್ಣಿಮೆಯಂದು ಎತ್ತುಗಳು ಮತ್ತು ಕರುಗಳನ್ನು ಓಡಿಸಿ ಖುಷಿ ಪಡುತ್ತಾರೆ.&lt;/p&gt;&lt;p&gt;ಸಾಮಾನ್ಯವಾಗಿ ಕಾರಹುಣ್ಣಿಮೆಗೂ ಮೊದಲು ಎತ್ತಿನ ಕೊಂಬುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಬಲು ಜೋರಾಗಿ ನಡೆಯುತ್ತದೆ. ಆದರೆ ಈಗ ಅನೇಕ ಊರುಗಳಲ್ಲಿ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕಾಯಕ ಮಾಡುವವರಿಲ್ಲ. ಕೆಲವು ಹಳ್ಳಿಗಳಲ್ಲಿ ಕೆಲವಷ್ಟೇ ಜನ ಈ ಕಸುಬು ಮಾಡುವವರು ಉಳಿದುಕೊಂಡಿದ್ದಾರೆ. ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ವರದಾಪುರದ ಸುಮಾರು 74 ವರ್ಷದ ನೂರ್&zwnj; ಸಾಹೇಬ್ ಅವರು ಈ ಕಸುಬು ಕಾಪಾಡಿಕೊಂಡು ಬಂದಿದ್ದಾರೆ. ಅದು ಅವರಿಗೆ ಅಪ್ಪನಿಂದ ಬಂದ ಬಳುವಳಿ.&lt;/p&gt;&lt;p&gt;ಕೃಷಿಕರು ಎತ್ತುಗಳನ್ನು ಮನೆ ಮಕ್ಕಳಂತೆ ಕಾಣುತ್ತಾರೆ. ಎತ್ತಿನ ಒರಟಾದ ಕೊಂಬುಗಳನ್ನು ತಿದ್ದಿ-ತೀಡಿ, ಕೊಂಬುಗಳ ತುದಿ ಕತ್ತರಿಸಿ, ಅವುಗಳಿಗೆ ಗೆಜ್ಜೆಗಳನ್ನು ಹಾಕಿ ಖುಷಿ ಪಡುತ್ತಾರೆ. ನೂರ್&zwnj; ಸಾಹೇಬ್ ಅವರು 15 ವರ್ಷ ಬಾಲಕನಾಗಿದ್ದಾಗಿನಿಂದ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಸುಮಾರು 60 ವರ್ಷಗಳಿಂದ ಈ ವೃತ್ತಿಯಲ್ಲಿ ಅವರು ಪರಿಣತರು. ರೈತರು ನೀಡುವ ಹಣದಿಂದ ಬದುಕಿನಬಂಡಿ ಸಾಗಿಸುತ್ತಾರೆ. ಊರೂರು ತಿರುಗುತ್ತಾರೆ.&lt;/p&gt;&lt;p&gt;ಎತ್ತುಗಳ ಕೊಂಬು ಸ್ವಚ್ಛಗೊಳಿಸುವುದು ಅಷ್ಟು ಸುಲಭವಲ್ಲ, ಸ್ವಲ್ಪ ಹೆಚ್ಚು ಕಡಿಮೆ ಆದರೂ ಎತ್ತಿನ ಕೊಂಬಿಗೆ ಗಾಯಗಳಾಗುವ ಸಂಭವ ಇರುತ್ತದೆ. ಸಾಕಷ್ಟು ಅನುಭವ ಬೇಕು. ಆದರೆ ಕೊಂಬು ಸ್ವಚ್ಛಗೊಳಿಸುವ ಕುಶಲಕರ್ಮಿಗೆ ಮಾನ್ಯತೆ ಇಲ್ಲ. ರೈತರು ನೀಡಿದಷ್ಟು ಹಣ ಪಡೆದುಕೊಂಡು ಈ ಕಾಯಕ ಮಾಡುವಂತಾಗಿದೆ ಎಂದು ನೂರ್&zwnj; ಸಾಹೇಬ್ ಹೇಳುತ್ತಾರೆ.&lt;/p&gt;&lt;p&gt;ಎತ್ತುಗಳ ಕೊಂಬು ಸ್ವಚ್ಛಗೊಳಿಸಲು ಒಂದು ಜತೆ ಎತ್ತಿಗೆ ₹400 ಪಡೆಯುತ್ತೇವೆ. ಇತ್ತೀಚಿಗೆ ಎತ್ತುಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಮುಂದಿನ ಪೀಳಿಗೆ ಈ ಕೆಲಸವನ್ನು ಇಷ್ಟಪಡುತ್ತಿಲ್ಲ. ಎಲ್ಲರೂ ವಿದ್ಯಾವಂತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕೆಲಸಗಾರರು ಸಿಗುವುದು ಕಷ್ಟ ಎಂದು ವರದಾಪುರ ಗ್ರಾಮ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕುಶಲಕರ್ಮಿ ನೂರ್&zwnj; ಸಾಹೇಬ್&zwnj; ಹೇಳುತ್ತಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/traditional-bull-horn-craft-in-karnataka-fades-away-74-year-old-artisan-noor-saheb-keeps-the-heritage-alive-rav/articleshow-tiem38h"/>
        </item>
        <item>
            <title><![CDATA[Borewell water: ಒಣ ಭೂಮಿಯಲ್ಲೂ ಮುಗಿಲೆತ್ತರ ಚಿಮ್ಮಿದ ನೀರು! ಬರಗಾಲದಲ್ಲಿ  ಗಂಗೆಯ ಪವಾಡಕ್ಕೆ ಮಾತು ಬಾರದೆ ನಿಂತ ರೈತ!]]></title>
            <link>https://kannada.asianetnews.com/karnataka-districts/water-gushes-sky-high-from-new-borewell-in-hagaribommanahalli-farm-vijayanagara-rav/articleshow-tzrg1wi</link>
            <guid isPermaLink="true">https://kannada.asianetnews.com/karnataka-districts/water-gushes-sky-high-from-new-borewell-in-hagaribommanahalli-farm-vijayanagara-rav/articleshow-tzrg1wi</guid>
            <pubDate>Wed, 15 Jul 2026 07:12:45 +0530</pubDate>
            <description><![CDATA[&lt;p&gt;ಮಳೆಯೇ ಇಲ್ಲದೇ ಅನ್ನದಾತನ ಅಂಗಳದಲ್ಲಿ ಚಿಂತೆಯ ಕಾರ್ಮೋಡಗಳೇ ಕವಿದಿರುವ ಸಂದರ್ಭದಲ್ಲಿ ಬರಡು ಜಮೀನಿನಲ್ಲಿ ಕೊರೆಯಲಾಗುತ್ತಿದ್ದ ಕೊಳವೆಬಾವಿಯ ಅಂತರ್ಜಲ ಮುಗಿಲೆತ್ತರಕ್ಕೆ ಚಿಮ್ಮಿರುವ ಘಟನೆಗೆ ತಾಲೂಕಿನ ಬನ್ನಿಕಲ್ಲು ಗ್ರಾಮ ಭಾನುವಾರ ರಾತ್ರಿ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxhpetc2vt6q3461vqcj9m0n,imgname-----------------------2026-07-15t065448.960-1784079149442.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಗರಿಬೊಮ್ಮನಹಳ್ಳಿ (ಜು.15) &lt;/strong&gt;ಮಳೆಯೇ ಇಲ್ಲದೇ ಅನ್ನದಾತನ ಅಂಗಳದಲ್ಲಿ ಚಿಂತೆಯ ಕಾರ್ಮೋಡಗಳೇ ಕವಿದಿರುವ ಸಂದರ್ಭದಲ್ಲಿ ಬರಡು ಜಮೀನಿನಲ್ಲಿ ಕೊರೆಯಲಾಗುತ್ತಿದ್ದ ಕೊಳವೆಬಾವಿಯ ಅಂತರ್ಜಲ ಮುಗಿಲೆತ್ತರಕ್ಕೆ ಚಿಮ್ಮಿರುವ ಘಟನೆಗೆ ತಾಲೂಕಿನ ಬನ್ನಿಕಲ್ಲು ಗ್ರಾಮ ಭಾನುವಾರ ರಾತ್ರಿ ಸಾಕ್ಷಿಯಾಗಿದೆ.&lt;/p&gt;&lt;h2&gt;ಜಲಾಶಯ ಇದ್ದರೂ ಕೃಷಿಗೆ ನೀರಿಲ್ಲ&lt;/h2&gt;&lt;p&gt;ತಾಲೂಕಿನ ಪಶ್ಚಿಮ ಗಡಿಯುದ್ದಕ್ಕೂ ವರ್ಷದ ಆರು ತಿಂಗಳುಗಳ ಕಾಲ ಹೊದ್ದು ನಿಲ್ಲುವ ತುಂಗಭದ್ರೆ, ಎರಡು ಟಿಎಂಸಿ ಸಾಮರ್ಥ್ಯದ ತಾಲೂಕಿನ ರೈತರ ಜೀವನಾಡಿ ಹಗರಿಬೊಮ್ಮನಹಳ್ಳಿ ಜಲಾಶಯ ಇದ್ದರೂ ತಾಲೂಕಿನ ರೈತರ ಕೊಳವೆಬಾವಿಗಳ ಅಂತರ್ಜಲದ ಮರುಪೂರಣ ಈಗಲೂ ಸವಾಲಿನ ವಿಷಯವಾಗಿದೆ.&lt;/p&gt;&lt;h3&gt;ಕೊಳವೆಬಾವಿಯಿಂದ ಮುಗಿಲೆತ್ತರ ಚಿಮ್ಮಿದ ನೀರು!&lt;/h3&gt;&lt;p&gt;ಆದರೆ, ಬನ್ನಿಕಲ್ಲು ಗ್ರಾಮದ ರೈತ ಸುನೀಲ್ ತಮ್ಮ ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆಯುಸುತ್ತಿದ್ದಾಗ ಅವಿರ್ಭವಿಸಿದ ರಭಸದ ಅಂತರ್ಜಲ ಗ್ರಾಮದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕೊಳವೆ ಬಾವಿಯಿಂದ ಮುಗಿಲೆತ್ತರಕ್ಕೆ ಚಿಮ್ಮಿದ ನೀರಿನ ರಭಸಕ್ಕೆ ಇಡೀ ಗ್ರಾಮದ ರೈತರು ಬೆಕ್ಕಸ ಬೆರಗಾಗಿದ್ದಾರೆ.&lt;/p&gt;&lt;p&gt;ಕೊಳವೆ ಬಾವಿಯಿಂದ ಇಡೀ ಜಮೀನಿಗೆ ಭೋರ್ಗರೆದ ನೀರು ರೈತ ಸುನೀಲ್ ಅವರ ಮೊಗದಲ್ಲಿ ಆನಂದಬಾಷ್ಪ ಮೂಡಿಸಿದೆ. ಉತ್ತಮ ಭರಪೂರ ನೀರಿನ ಲಭ್ಯತೆಯ ನಿರೀಕ್ಷೆ ಹುಸಿಯಾಗಲಿಲ್ಲ ಎನ್ನುವ ಸಂತಸವನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿರುವ ರೈತ, ತಮ್ಮ ಉತ್ತಮ ಕೃಷಿ ಚಟುವಟಿಕೆಗಳಿಗೆ ಗಂಗಾಮಾತೆ ಸಾಥ್ ನೀಡಿದ್ದಾಳೆ. ಭೀಕರ ಬರದ ಆತಂಕದಲ್ಲಿದ್ದ ನಮ್ಮ ಕುಟುಂಬಕ್ಕೆ ಹೊಸ ಚೈತನ್ಯ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/water-gushes-sky-high-from-new-borewell-in-hagaribommanahalli-farm-vijayanagara-rav/articleshow-tzrg1wi"/>
        </item>
        <item>
            <title><![CDATA[ಈ ಊರಲ್ಲಿ ಮಳೆಗಾಗಿ ರೈತರಿಂದ ನಿತ್ಯ ಭಜನೆ, ದೇವರ ಪೂಜೆ; ಕರುಣೆ ಬಾರದೆ ಮಳೆರಾಯ!]]></title>
            <link>https://kannada.asianetnews.com/karnataka-districts/baaro-maleraya-hospet-farmer-prays-for-rain-by-writing-message-on-his-bullock-rav/articleshow-uksudcr</link>
            <guid isPermaLink="true">https://kannada.asianetnews.com/karnataka-districts/baaro-maleraya-hospet-farmer-prays-for-rain-by-writing-message-on-his-bullock-rav/articleshow-uksudcr</guid>
            <pubDate>Thu, 02 Jul 2026 14:14:39 +0530</pubDate>
            <description><![CDATA[&lt;p&gt;Baaro Maleraya.: ರಾಜ್ಯಾದ್ಯಂತ ಮಳೆ ಕೊರತೆ ಹಿನ್ನೆಲೆ ಕೃಷಿ ಚಟುವಟಿಕೆಗಳು ನಿಂತುಹೋಗಿವೆ. ರೈತರು ಆತಂಕಗೊಂಡಿದ್ದಾರೆ. ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹೊಸಪೇಟೆಯ ಮರಿಯಮ್ಮನಹಳ್ಳಿ ರೈತರು ಏನೆಲ್ಲ ಮಾಡುತ್ತಿದ್ದಾರೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwgze7g96ytrj52ka2q3be3b,imgname-1-1782981271049.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿ.ಕೆ. ನಾಗರಾಜ&lt;/strong&gt;&lt;/p&gt;&lt;p&gt;ಹೊಸಪೇಟೆ: ಸಕಾಲಕ್ಕೆ ಮಳೆ ಬಾರದೆ, ಕೃಷಿ ಚಟುವಟಿಕೆ ಚುರುಕುಗೊಳ್ಳದೇ ರೈತರು ಕಂಗಾಲಾಗಿದ್ದಾರೆ. ಭೀಕರ ಬರದ ಛಾಯೆ ಕಾಣಿಸಿಕೊಳ್ಳುತ್ತಿರುವುದರಿಂದ, ಜನರಲ್ಲಿ ಆತಂಕ ಶುರುವಾಗಿದ್ದು, ಜನರು ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗುತ್ತಿದ್ದಾರೆ.&lt;/p&gt;&lt;p&gt;ಉತ್ತಮ ಮಳೆ ಹಾಗೂ ಬೆಳೆಯಾಗಲಿ ಎಂದು ತಮ್ಮೂರಿನ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಸೇರಿದಂತೆ ಭಜನೆ ಸೇರಿದಂತೆ ಅನೇಕ ರೀತಿಯಲ್ಲಿ ನಿತ್ಯವೂ ಪ್ರಾರ್ಥನೆ ಮಾಡಲಾಗುತ್ತಿದೆ. ಜೂನ್&zwnj; ಮುಗಿದು ಜುಲೈ ತಿಂಗಳು ಆರಂಭವಾಗಿದೆ. ಜೂನ್&zwnj;ನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಗ್ರಾಮೀಣ ಭಾಗದ ಜನರು ತಮ್ಮ ತಮ್ಮ ನಂಬಿಕಗಳಿಗನುಸಾರ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು. ಕತ್ತೆಗಳಿಗೆ, ಕಪ್ಪೆಗಳಿಗೆ ಮದುವೆ ಮಾಡಿಸುವುದು, ಅಮ್ಮನ ಮಾಡಿ ಕಳುಹಿಸುವುದು, ಭಜನೆ ಮೂಲಕ ಮಳೆರಾಯನಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ.&lt;/p&gt;&lt;p&gt;ಕಾರಹುಣ್ಣಿಮೆದಿನ ಕರಿ ಹರಿಸುವಾಗ ಮರಿಯಮ್ಮನಹಳ್ಳಿಯ 7ನೇ ವಾರ್ಡಿನ ರೈತ ಬಸವರಾಜ ಎನ್ನುವ ಯುವಕ ತನ್ನ ಎತ್ತುಗಳಿಗೆ ಬಾರೋ ಮಳೆರಾಯ ಎಂದು ಎತ್ತಿಗೆ ಬರೆದು, ಶೃಂಗಾರ ಮಾಡಿ ಕಾರಹುಣ್ಣಿಮೆದಿನ ಓಟಕ್ಕೆ ಬಿಟ್ಟಿದ್ದ. ಅಲ್ಲದೆ, ಎತ್ತು ದೇವಸ್ಥಾನಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದ. ಇನ್ನು ಮರಿಯಮ್ಮನಹಳ್ಳಿಯ ಮಾರಿಕಾಂಬ ದೇವಸ್ಥಾನದಲ್ಲಿ ಕಳೆದ 15 ದಿನಗಳಿಂದ ನಿತ್ಯವೂ ರೈತರು ಭಜನೆಯಲ್ಲಿ ತೊಡಗಿಕೊಂಡು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.ಆರಂಭದಲ್ಲಿ ಸಕಾಲಕ್ಕೆ ಮುಂಗಾರು ಮಳೆ ಆಗಿರುವುದರಿಂದ ರೈತರು ಸಂತಸ ವ್ಯಕ್ತಪಡಿಸಿ ಕೆಲವರು ಬಿತ್ತನೆ ಕಾರ್ಯಕ್ಕೂ ಮುಂದಾಗಿದ್ದರು. ಸರಿಯಾದ ವೇಳೆಗೆ ಮಳೆ ಸುರಿದು ಈಗಾಗಲೇ ಹಚ್ಚ ಹಸುರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಮಳೆ ಬಾರದ ಕಾರಣ ಬಿಸಿಲಿನ ಝಳಕ್ಕೆ ಬಾಡಲಾರಂಭಿಸಿವೆ. ನಾನಾ ಬೆಳೆಗಳು ಬಿಸಿಲಿನ ಜಳಕ್ಕೆ ಬಾಡುತ್ತಿವೆ. ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗುವ ಸಾಧ್ಯತೆ ಇದೆ. ಮಳೆ ಹಾಗೂ ಬೆಳೆ ಇಲ್ಲದೇ ಜಾನುವಾರುಗಳಿಗೂ ಮೇವಿನ ತೀವ್ರ ತೊಂದರೆಯಾಗಿರುವ ಜೊತೆಗೆ ಕೆರೆ ಮತ್ತು ಕುಂಟೆಗಳಲ್ಲಿ ನೀರು ಇಲ್ಲದೇ ಕುಡಿಯುವ ನೀರಿಗೂ ತೊಂದರೆಯಾಗುವ ಲಕ್ಷಣಗಳು ಕಾಣಿಸತೊಡಗಿದೆ.&lt;/p&gt;&lt;p&gt;ಬಿಸಿಲಿನ ನಡುವೆಯೂ ಈಗ ಕಳೆದ 2-3 ದಿನಗಳಿಂದ ಅಲ್ಲಲ್ಲಿ ಮೋಡ ಕವಿದ ವಾತಾವರಣ ಮಳೆಯಾಗುವ ನಿರೀಕ್ಷೆ ಮೂಡಿದೆ. ಆದರೆ, ಮೋಡ ಕವಿದರೂ ಮಳೆ ಸುರಿಸುತ್ತಿಲ್ಲ. ಇದು ರೈತರನ್ನು ಚಿಂತೆಗೀಡುಮಾಡಿದೆ.&lt;/p&gt;&lt;p&gt;ಈಗಾಗಲೇ ಬಿತ್ತನೆ ಮಾಡಲು ಸಾಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲಾಗಿದೆ. ಮಳೆ ಇಲ್ಲದ ಕಾರಣ ಬಿತ್ತನೆಗೆ ಮುಂದಾಗಿಲ್ಲ. ಮಳೆಗಾಗಿ ನಿತ್ಯವೂ ಮುಗಿಲು ನೋಡುವಂತಾಗಿದೆ. ಈಗಾಗಲೇ ಬಿತ್ತಿದ ರೈತರೂ ಬೀಜಕ್ಕೆ ಹಾಕಿದ ಬಂಡವಾಳ ಬರುತ್ತೋ ಇಲ್ಲವೋ ಎಂದು ಚಿಂತೆ ಮಾಡುವಂತಾಗಿದೆ ಎನ್ನುತ್ತಾರೆ ಮರಿಯಮ್ಮನಹಳ್ಳಿ ಗ್ರಾಮದ ರೈತ ಬಸವರಾಜ&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/baaro-maleraya-hospet-farmer-prays-for-rain-by-writing-message-on-his-bullock-rav/articleshow-uksudcr"/>
        </item>
        <item>
            <title><![CDATA[Rain Deficit : ಬಾರದ ಮಳೆ, ಕೂಡ್ಲಿಗಿ ತಾಲೂಕಿನ ಹಳ್ಳಿಹಳ್ಳಿಗಳಿಂದ ಜನರ ಗುಳೆ]]></title>
            <link>https://kannada.asianetnews.com/karnataka-districts/rain-deficit-forces-kudligi-farmers-to-migrate-to-cities-vijayanagar-rav/articleshow-uligb6u</link>
            <guid isPermaLink="true">https://kannada.asianetnews.com/karnataka-districts/rain-deficit-forces-kudligi-farmers-to-migrate-to-cities-vijayanagar-rav/articleshow-uligb6u</guid>
            <pubDate>Sun, 05 Jul 2026 05:48:19 +0530</pubDate>
            <description><![CDATA[&lt;p&gt;ಈ ಬಾರಿ ಮುಂಗಾರಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದಾಗಿ ಮಳೆಯನ್ನೇ ನಂಬಿ ಕೃಷಿ ಮಾಡುವ ಬರದ ನಾಡು ಕೂಡ್ಲಿಗಿ ತಾಲೂಕಿನ ರೈತರಿಗೆ ಬರೆ ಬಿದ್ದಿದ್ದರೆ, ತಾಲೂಕಿನ ಕೃಷಿ ಕೂಲಿಕಾರರು ಉದ್ಯೋಗ ಅರಸಿ ಬೇರೆ ಬೇರೆ ಕಡೆಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwqsres5q920rv2ar2hr0y44,imgname-----------------------2026-07-05t053723.282-1783210195749.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೀಮಣ್ಣ ಗಜಾಪುರ&lt;/strong&gt;&lt;/p&gt;&lt;p&gt;&lt;strong&gt;ಕೂಡ್ಲಿಗಿ (ವಿಜಯನಗರ):&lt;/strong&gt; ಈ ಬಾರಿ ಮುಂಗಾರಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದಾಗಿ ಮಳೆಯನ್ನೇ ನಂಬಿ ಕೃಷಿ ಮಾಡುವ ಬರದ ನಾಡು ಕೂಡ್ಲಿಗಿ ತಾಲೂಕಿನ ರೈತರಿಗೆ ಬರೆ ಬಿದ್ದಿದ್ದರೆ, ತಾಲೂಕಿನ ಕೃಷಿ ಕೂಲಿಕಾರರು ಉದ್ಯೋಗ ಅರಸಿ ಬೇರೆ ಬೇರೆ ಕಡೆಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ!&lt;/p&gt;&lt;p&gt;ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾ, ಗೋವಿಂದಗಿರಿ, ಬಂಡೆಬಸಾಪುರ ತಾಂಡಾ ಸೇರಿದಂತೆ ಅನೇಕ ಗ್ರಾಮಗಳ ಜನತೆ ಗುಳೆ ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾರೆ. 2 ದಿನಗಳ ಹಿಂದೆ ಶ್ರೀಕಂಠಾಪುರ ತಾಂಡಾದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಊರನ್ನು ಬಿಟ್ಟು ಗುಳೆ ಹೋಗಿದ್ದಾರೆ. ಸದಾ ಬರವನ್ನೇ ಹಾಸಿ ಹೊದ್ದು ಮಲಗುವ ಕೂಡ್ಲಿಗಿ ತಾಲೂಕಿನಲ್ಲಿ ಈಗ್ಗೆ 4-5 ವರ್ಷಗಳ ಕಾಲ ಉತ್ತಮ ಮಳೆಯಾಗಿತ್ತು. ಜನರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಆದರೆ ಈ ಬಾರಿ ಮುಂಗಾರು ಕೈ ಕೊಟ್ಟಿದ್ದರಿಂದ ಲಕ್ಷಗಟ್ಟಲೇ ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಸಸಿ ಇದ್ದಾಗಲೇ ಕಮರಿ ಹೋಗಿವೆ. ಬಿತ್ತನೆಗೆ ಮಾಡಿದ ಸಾಲ ತೀರಿಸಲು ಇಲ್ಲಿಯ ರೈತರಿಗೆ ಗುಳೆ ಅನಿವಾರ್ಯವಾಗಿದೆ.&lt;/p&gt;&lt;p&gt;ಕೆಲ ಕುಟುಂಬಗಳು ಬೆಂಗಳೂರು ಕಡೆಗೆ ಹೋಗಿ ಅಲ್ಲಿ ಗಾರೆ ಕೆಲಸ ಮಾಡಲು ಮುಂದಾಗಿದ್ದಾರೆ. ಕುಟುಂಬದ ಹೆಣ್ಣು ಮಕ್ಕಳು ಬೆಂಗಳೂರಿನ ಮನೆಗಳಲ್ಲಿ ಮನೆ ಕೆಲಸಕ್ಕೆ ಹೋಗುತ್ತಿದ್ದಾರೆ. ಬೆಂಗಳೂರಿಗೆ ಶೇ.30ರಷ್ಟು ಮಾತ್ರ ಹೋಗಿದ್ದಾರೆ. ಉಳಿದಂತೆ ಶೇ.70ರಷ್ಟು ಜನರು ಮೈಸೂರು, ಮಂಡ್ಯ, ಕಿಕ್ಕೇರಿ, ಚನ್ನರಾಯಪಟ್ಟಣ, ಮಂಗಳೂರು, ಚಿಕ್ಕಮಗಳೂರು ಕಡೆಗೆ ಕಬ್ಬು ಕಟಾವು, ಕಾಫಿ ಬೀಜ ಬಿಡಿಸುವ ಕಾರ್ಯಕ್ಕೆ ತೆರಳುತ್ತಿದ್ದಾರೆ.&lt;/p&gt;&lt;p&gt;ಉಳಿದಂತೆ ವಯಸ್ಸಾದವರು, ಶಾಲೆಗೆ ಹೋಗುವ ಮಕ್ಕಳು ಮಾತ್ರ ಗ್ರಾಮಗಳಲ್ಲಿ ಉಳಿದುಕೊಂಡಿದ್ದಾರೆ. ತಂದೆ- ತಾಯಿ ಇಲ್ಲದೆ ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿ ಮಾತ್ರ ಆ ದೇವರಿಗೆ ಪ್ರೀತಿ. ಆ ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಹೊರುವವರು ಯಾರು? ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದ್ದು, ಜೊತೆಗೆ ಕೆಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಉದಾಹರಣೆ ಕಣ್ಣ ಮುಂದೆ ಕಾಣಬಹುದಾಗಿದೆ.&lt;/p&gt;&lt;p&gt;2 ದಿನಗಳ ಹಿಂದೆ ರಾತ್ರೋರಾತ್ರಿ ತಾಲೂಕಿನ ಶ್ರೀಕಂಠಾಪುರ ತಾಂಡಾದಿಂದ ವೆಂಕಟೇಶನಾಯ್ಕ ಎನ್ನುವ ಮೇಸ್ತ್ರಿ ನೇತೃತ್ವದಲ್ಲಿ 3 ಲಾರಿಗಳಲ್ಲಿ ನಿತ್ಯದ ಬಳಕೆಯ ವಸ್ತುಗಳು, ಪಾತ್ರೆ, ಬಿಂದಿಗೆ ಸೇರಿದಂತೆ ಮಕ್ಕಳು ಮರಿಗಳನ್ನು ಹೊತ್ತುಕೊಂಡು ಸುಮಾರು 50 ಜನರು ತುತ್ತಿನ&zwnj; ಚೀಲ ತುಂಬಿಸಿಕೊಳ್ಳಲು ಹೊರಟಿದ್ದು ನೋಡುಗರ ಮನ ಕಲಕಿತು. ತಾಂಡಾಗಳ ಜನರು ಬಯಲು ಸೀಮೆಯಿಂದ ಕಾಫಿ ಸೀಮೆಯತ್ತ ಗುಳೆ ಹೊರಟಿದ್ದಾರೆ.&lt;/p&gt;&lt;p&gt;ತಾಲೂಕಿನ ತಾಂಡಾಗಳು ಸೇರಿದಂತೆ ಅನೇಕ ಗ್ರಾಮದ ಜನರು ಗುಳೆ ಹೋಗುತ್ತಿದ್ದಾರೆ. ಅದಕ್ಕೆ ಸರ್ಕಾರ ನರೇಗಾದಂತಹ ಯೋಜನೆ ಜಾರಿಗೊಳಿಸಿದೆ. ಆದರೆ ಅದು ಕೇವಲ 3 ತಿಂಗಳ ಕೆಲಸ ಮಾತ್ರ. ಮುಂದೇನು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಾವು ಮಲೆನಾಡು ಕಡೆ ಜೀವನ ಮಾಡಲು ಹೋಗುತ್ತಿದ್ದೇವೆ.&lt;/p&gt;&lt;p&gt;ಕುಬೇರನಾಯ್ಕ, ಶ್ರೀಕಂಠಾಪುರ ತಾಂಡಾದ ಕೂಲಿಕಾರ್ಮಿಕ&lt;/p&gt;&lt;p&gt;ಮುಂಗಾರು ಕೈಕೊಟ್ಟಿದ್ದರಿಂದ ಬರದ ನಾಡು ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾದ 50ಕ್ಕೂ ಹೆಚ್ಚು ಕುಟುಂಬಗಳು ಮಲೆನಾಡು, ಬೆಂಗಳೂರು ಕಡೆಗೆ ಲಾರಿಗಳಲ್ಲಿ ಗುಳೆ ಹೊರಟಿರುವುದು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rain-deficit-forces-kudligi-farmers-to-migrate-to-cities-vijayanagar-rav/articleshow-uligb6u"/>
        </item>
    </channel>
</rss>
