<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 26 Apr 2026 10:52:28 +0530</lastBuildDate>
        <atom:link href="https://kannada.asianetnews.com/rss/vijayanagara" rel="self" type="application/rss+xml"/>
        <item>
            <title><![CDATA[ಪಿಯುಸಿಯಲ್ಲಿ ಇಂದೂ ಕಾಲೇಜಿನ ರೈತನ ಮಗಳ ಸಾಧನೆಗೆ ರಾಜ್ಯವೇ ಬೆರಗು! ಅವಳಿ ಜವಳಿ ತಮ್ಮನಿಗೂ ಶೇ. 94 ಅಂಕ!]]></title>
            <link>https://kannada.asianetnews.com/education/twin-success-story-karnataka-puc-2026-farmer-daughter-sangeeta-topper-in-puc-arts-brother-scored-ninety-plus-gdp/articleshow-1nnaitb</link>
            <guid isPermaLink="true">https://kannada.asianetnews.com/education/twin-success-story-karnataka-puc-2026-farmer-daughter-sangeeta-topper-in-puc-arts-brother-scored-ninety-plus-gdp/articleshow-1nnaitb</guid>
            <pubDate>Thu, 09 Apr 2026 18:06:51 +0530</pubDate>
            <description><![CDATA[ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ರೈತನ ಮಗಳು ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್, 2026ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 99.66% ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರ ಅವಳಿ ಸಹೋದರ ಕೂಡ 94% ಅಂಕ ಗಳಿಸಿದ್ದು, ಮುಂದೆ ಎಲ್&zwnj;ಎಲ್&zwnj;ಬಿ ಓದುವ ಕನಸು ಕಂಡಿರುವ ಸಂಗೀತಾ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kns3pkwdthw05kwdvxge6vt6,imgname-sangeeta-topper-in-puc-arts-1775737982861.jpg" type="image/jpeg" height="390" width="690"/>
            <content:encoded><![CDATA[&lt;p&gt;ಕುಕನೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಸಂಗೀತಾ ಶೇಖರಗೌಡ ಪೊಲೀಸ್ ಪಾಟೀಲ್ ಅವರು ಅಪೂರ್ವ ಸಾಧನೆ ಮಾಡಿದ್ದಾರೆ. 99.66 ಶೇಕಡಾ ಅಂಕಗಳನ್ನು ಗಳಿಸಿರುವ ಸಂಗೀತಾ ರಾಜ್ಯದ ಗಮನ ಸೆಳೆದಿದ್ದಾರೆ.&lt;/p&gt;&lt;h2&gt;ರೈತನ ಮಗಳ ಸಾಧನೆ&lt;/h2&gt;&lt;p&gt;ಸಂಗೀತಾ ಅವರು ಕೊಟ್ಟೂರಿನ ಇಂದೂ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ತಮ್ಮ ಪರಿಶ್ರಮ, ಶಿಸ್ತು ಮತ್ತು ದೃಢನಿಶ್ಚಯದ ಮೂಲಕ ಈ ಸಾಧನೆ ಸಾಧಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಅವರು ರಾಜ್ಯ ಮಟ್ಟದಲ್ಲಿ ಮೆರೆಯುವ ಮೂಲಕ ತಮ್ಮ ಊರು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.&lt;/p&gt;&lt;p&gt;ಸಂಗೀತಾ ಅವರು ರೈತ ಶೇಖರಗೌಡ ಪೊಲೀಸ್ ಪಾಟೀಲ್ ಹಾಗೂ ಅಂಗನವಾಡಿ ಶಿಕ್ಷಕಿ ಶ್ವೇತಾ ಪೊಲೀಸ್ ಪಾಟೀಲ್ ಅವರ ಪುತ್ರಿಯಾಗಿದ್ದು, ತಂದೆ-ತಾಯಿಗೆ ಮೂರನೇ ಮಗಳು. ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹವೇ ತನ್ನ ಯಶಸ್ಸಿನ ಹಿಂದೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಅವಳಿ-ಜವಳಿ, ತಮ್ಮನಿಗೂ ಶೇ. 94 ಅಂಕ&lt;/h2&gt;&lt;p&gt;ವಿಶೇಷವೆಂದರೆ, ಸಂಗೀತಾ ಅವರ ಜೊತೆಗೆ ಅವರ ತಮ್ಮ ಕೂಡ 94 ಶೇಕಡಾ ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ. ಇವರಿಬ್ಬರು ಅವಳಿ ಜವಳಿಯಾಗಿದ್ದು, ತಮ್ಮ ಸಹ ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಇಬ್ಬರು ಮಕ್ಕಳ ಸಾಧನೆಯಿಂದ ಕುಟುಂಬದಲ್ಲಿ ಹರ್ಷದ ವಾತಾವರಣ ಮನೆಮಾಡಿದೆ.&lt;/p&gt;&lt;p&gt;ಮುಂದೆ ಕಾನೂನು ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಂಗೀತಾ ಅವರು ಎಲ್&zwnj;ಎಲ್&zwnj;ಬಿ ಓದುವ ಕನಸು ಕಂಡಿದ್ದಾರೆ. ಅವರ ಕನಸಿಗೆ ತಂದೆ ಶೇಖರಗೌಡ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, &ldquo;ಮಗಳ ಓದಿಗಾಗಿ ಬೇಕಾದರೆ ನನ್ನ ಐದು ಎಕರೆ ಜಮೀನನ್ನೂ ಮಾರಲು ಸಿದ್ಧ&rdquo; ಎಂದು ಹೇಳಿರುವುದು ಅವರ ಶಿಕ್ಷಣದ ಮೇಲಿನ ಬದ್ಧತೆಯನ್ನು ತೋರಿಸುತ್ತದೆ.&lt;/p&gt;&lt;p&gt;ಒಟ್ಟಿನಲ್ಲಿ, ಗ್ರಾಮೀಣ ಪರಿಸರದಲ್ಲಿ ಬೆಳೆದ ಸಂಗೀತಾ ತಮ್ಮ ಸಂಕಲ್ಪ, ಪರಿಶ್ರಮ ಮತ್ತು ಕುಟುಂಬದ ಬೆಂಬಲದೊಂದಿಗೆ ರಾಜ್ಯ ಮಟ್ಟದಲ್ಲಿ ಟಾಪರ್ ಆಗಿ ಹೊರಹೊಮ್ಮಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಅವರ ಭವಿಷ್ಯ ಉಜ್ವಲವಾಗಲಿ ಎಂಬ ಆಶಯ ವ್ಯಕ್ತವಾಗಿದೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/education/twin-success-story-karnataka-puc-2026-farmer-daughter-sangeeta-topper-in-puc-arts-brother-scored-ninety-plus-gdp/articleshow-1nnaitb"/>
        </item>
        <item>
            <title><![CDATA[ಬಳ್ಳಾರಿಯ ಕೆಲವು ಹಳ್ಳಿಗಳಲ್ಲಿ ಯುಗಾದಿ ಹಬ್ಬ ಏಕೆ ಆಚರಿಸುವುದಿಲ್ಲ? ವಿಚಿತ್ರ ಪರಂಪರೆಯ ಹಿಂದಿನ ಕಾರಣವೇನು?]]></title>
            <link>https://kannada.asianetnews.com/karnataka-districts/festive-spirit-across-karnataka-but-grief-shrouds-kudligi-after-tragic-incident-rav/articleshow-9qiupon</link>
            <guid isPermaLink="true">https://kannada.asianetnews.com/karnataka-districts/festive-spirit-across-karnataka-but-grief-shrouds-kudligi-after-tragic-incident-rav/articleshow-9qiupon</guid>
            <pubDate>Thu, 19 Mar 2026 08:37:27 +0530</pubDate>
            <description><![CDATA[&lt;p&gt;ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಹಲವು ಹಳ್ಳಿಗಳಲ್ಲಿ, ಕೆಲವು ಸಮುದಾಯಗಳು ತಲೆಮಾರುಗಳಿಂದ ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಹಬ್ಬ ಆಚರಿಸಿದರೆ ಕೇಡಾಗುತ್ತದೆ ಎಂದು ನಂಬುತ್ತಾರೆ. ಈ ವಿಚಿತ್ರ ಪರಂಪರೆಯ ಹಿಂದಿನ ನಿಖರ ಕಾರಣ ಯಾರಿಗೂ ತಿಳಿದಿಲ್ಲ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km20gr36xqfvcb50pmk9bshe,imgname-1-1773889151078.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೀಮಣ್ಣ ಗಜಾಪುರ&lt;/strong&gt;&lt;/p&gt;&lt;p&gt;ಕೂಡ್ಲಿಗಿ (ಮಾ.19): ಯುಗಾದಿ ಎಂದರೆ ಇಡೀ ನಾಡಿಗೆ ನಾಡೇ ಸಂಭ್ರಮಿಸುತ್ತಿದೆ. ಪ್ರಕೃತಿಯ ಬದಲಾವಣೆಯ ಹೊಸ ವರ್ಷವನ್ನು ಎಲ್ಲರೂ ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರೆ ಕೂಡ್ಲಿಗಿ ತಾಲೂಕು ಸೇರಿದಂತೆ ವಿಜಯನಗರ, ಬಳ್ಳಾರಿ ಜಿಲ್ಲೆಯ ಸಾವಿರಾರು ಹಳ್ಳಿಗಳ ಕೆಲವು ಕುಟುಂಬಗಳು ಯುಗಾದಿಯಂದು ಸಂಭ್ರಮಿಸುವ ಬದಲು ಸೂತಕದ ಛಾಯೆಯಲ್ಲಿಯೇ ಇರುತ್ತಾರೆ.&lt;/p&gt;&lt;p&gt;ಇಲ್ಲಿನವರು ಯುಗಾದಿಯಲ್ಲಿ ಬೇವು- ಬೆಲ್ಲ ತಿನ್ನುವುದಿಲ್ಲ. ಹಬ್ಬ ಮಾಡುವವರು ಬೇವು- ಬೆಲ್ಲ ನೀಡಿದರೆ ಮಾತ್ರ ತಿನ್ನುತ್ತಾರೆ. ಹಳ್ಳಿಗಳಲ್ಲಿ ಹಬ್ಬ ಆಚರಿಸದ ಕುಟುಂಬಗಳಿಗೆ ತಮ್ಮ ಸಂಬಂಧಿಕರು ಬೇವು- ಬೆಲ್ಲವನ್ನು ಮನೆ ಮನೆಗೆ ಹೋಗಿ ನೀಡುತ್ತಾರೆ. ಕೂಡ್ಲಿಗಿ, ಗಜಾಪುರ, ತಿಮ್ಮಲಾಪುರ, ಕಂದಗಲ್ಲು, ಕೊಟ್ಟೂರು, ಸಂಡೂರು ತಾಲೂಕಿನ ದೇವರ ಮಲ್ಲಾಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ನೂರಾರು ಕುಟುಂಬಗಳು ಹಬ್ಬ ಮಾಡುವುದಿಲ್ಲ. ಗಜಾಪುರದಲ್ಲಿ ಯುಗಾದಿ ಅಮಾವಾಸ್ಯೆ, ಯುಗಾದಿಯಂದು ಸ್ನಾನ ಮಾಡುವುದಿಲ್ಲ. ಯುಗಾದಿಯ ನಂತರದಲ್ಲಿ ಚಂದ್ರಮಾನ ಯುಗಾದಿಯಂದು ಸ್ನಾನ ಮಾಡಿ, ಸಿಹಿ ಮಾಡಿ ಊಟ ಮಾಡುತ್ತಾರೆ. ನಂತರ ಬರುವ ಹುಣ್ಣಿಮೆಯನ್ನು ಇಲ್ಲಿಯ ಜನತೆ ಹಂಪಿ ಹುಣ್ಣಿಮೆ ಎಂದು ಕರೆಯುತ್ತಾರೆ. ಅಂದು ಮನೆಗೆ ತೋರಣ ಕಟ್ಟಿ, ಸಿಹಿ ಊಟ ಮಾಡಿ ಪೂಜೆ ಮಾಡಿ ಯುಗಾದಿಯನ್ನು ಆಚರಣೆ ಮಾಡುತ್ತಾರೆ.&lt;/p&gt;&lt;p&gt;ಅಖಂಡ ಕೂಡ್ಲಿಗಿ ತಾಲೂಕಿನಲ್ಲಿ ಹಿಂದುಳಿದ ವರ್ಗಗಳಾದ ಬಾರಿಕರು, ಉಪ್ಪಾರರು, ವಾಲ್ಮೀಕಿ ಸಮುದಾಯದ ಕೆಲವು ಕುಟುಂಬಗಳು ಹತ್ತಾರು ತಲೆಮಾರುಗಳಿಂದಲೂ ಯುಗಾದಿ ಆಚರಣೆ ಮಾಡದೇ ಮೌನವಾಗಿ ಬಹಿಷ್ಕಾರ ಹಾಕುತ್ತಾ ಬಂದಿದ್ದಾರೆ. ಏಕೆ ಎಂದು ಕೇಳಿದರೆ ನಮ್ಮ ಅಜ್ಜ, ಮುತ್ತಜ್ಜರ ಕಾಲದಿಂದಲೂ ನಮ್ಮ ಕುಟುಂಬಗಳಲ್ಲಿ ಯುಗಾದಿ ಮಾಡಿಲ್ಲ. ಹೀಗಾಗಿ ನಾವೂ ಮಾಡುವುದಿಲ್ಲ. ಒಂದು ವೇಳೆ ಯುಗಾದಿ ಆಚರಿಸಿದರೆ ನಮಗೆ ಕೇಡಾಗುತ್ತದೆ ಎನ್ನುತ್ತಾರೆ ಯುಗಾದಿ ಆಚರಿಸದ ಕುಟುಂಬಗಳ ಯಜಮಾನರು. ಆದರೆ ನಿಖರವಾದ ಕಾರಣ, ಆಚರಿಸದಿರುವುದರ ಹಿನ್ನೆಲೆಯ ಬಗ್ಗೆ ಯಾರಿಗೂ ಅಷ್ಟೊಂದು ಅರಿವಿಲ್ಲ. ಇವರ ಪೂರ್ವಿಕರು, ಹಿಂದಿನವರು ಆಚರಿಸುತ್ತಿರಲಿಲ್ಲ, ಅದಕ್ಕೇ ನಾವೂ ಆಚರಿಸುತ್ತಿಲ್ಲ ಎನ್ನುತ್ತಾರೆ.&lt;/p&gt;&lt;p&gt;ಇದು ಮೂಢನಂಬಿಕೆಯ ಪರಮಾವಧಿಯೋ, ಪರಂಪರೆಯೋ? ಎನ್ನುವ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಆ ಕುಟುಂಬಗಳಲ್ಲಿರುವ ವಿದ್ಯಾವಂತರು, ಸರ್ಕಾರಿ ನೌಕರಿ ಪಡೆದವರು, ಪ್ರಜ್ಞಾವಂತ ಕುಟುಂಬದವರು ಸಹ ಯುಗಾದಿಯನ್ನು ಆಚರಿಸುವುದಿಲ್ಲ. ಸಮಾಜ ಇಷ್ಟೆಲ್ಲ ಮುಂದುವರೆದರೂ ನಮ್ಮ ಪೂರ್ವಜರು ಬಿಟ್ಟು ಹೋದ ಆಚರಣೆಗಳು, ಮೂಢನಂಬಿಕೆಗಳು ಎಐ ಯುಗದಲ್ಲಿಯೂ ಮುಂದುವರೆದುಕೊಂಡು ಬಂದಿರುವುದು ಮಾತ್ರ ಸೋಜಿಗದ ಸಂಗತಿಯಾಗಿದೆ.&lt;/p&gt;&lt;p&gt;ಯುಗಾದಿಯಂದು ಹಿಂದೆ ನಮ್ಮ ಹಿರಿಯರಿಗೆ ಕೇಡು ಆಗಿತ್ತಂತೆ. ಹೀಗಾಗಿ ನಾವು ಆಚರಿಸಲ್ಲ. ಅಂದು ನಾವು ಹೊಸಬಟ್ಟೆ, ಹೊಸ ವಸ್ತು ಖರೀದಿಸಲ್ಲ. ತಲೆಗೆ ಎಣ್ಣೆ ಹಚ್ಚಲ್ಲ. ಸಿಹಿ ಊಟ ಮನೆಯಲ್ಲಿ ಮಾಡಿ ಪೂಜೆ ಮಾಡಲ್ಲ. ಎರಡು- ಮೂರು ದಿನ ಸ್ನಾನ ಮಾಡಲ್ಲ. ಒಂದು ವೇಳೆ ಹಬ್ಬ ಮಾಡಲು ಮುಂದಾದರೆ ನಮಗೆ ಭಯ ಕಾಡುತ್ತೆ ಎನ್ನುತ್ತಾರೆ ಗಜಾಪುರ ನಿವಾಸಿ ಕೊಟ್ರಪ್ಪ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/festive-spirit-across-karnataka-but-grief-shrouds-kudligi-after-tragic-incident-rav/articleshow-9qiupon"/>
        </item>
        <item>
            <title><![CDATA[ವಿಜಯನಗರ: ಹೊಲಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ, ಕೈ, ಕಾಲು ಭಾಗಕ್ಕೆ ಪರಚಿ ತೀವ್ರ ಗಾಯ]]></title>
            <link>https://kannada.asianetnews.com/karnataka-districts/vijayanagar-farmer-brutally-attack-by-wild-bear-while-working-in-field-rav/articleshow-a66dh82</link>
            <guid isPermaLink="true">https://kannada.asianetnews.com/karnataka-districts/vijayanagar-farmer-brutally-attack-by-wild-bear-while-working-in-field-rav/articleshow-a66dh82</guid>
            <pubDate>Thu, 16 Apr 2026 11:24:33 +0530</pubDate>
            <description><![CDATA[ಹೊಸಪೇಟೆ ತಾಲೂಕಿನ ಬುಕ್ಕಸಾಗರದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು, ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಭಾಗದಲ್ಲಿ ನಿರಂತರ ಕರಡಿ ಹಾವಳಿಯಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕ್ರಮಕ್ಕೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpadc0x6ccdzrqvazv6tmxq0,imgname-----------------------2026-04-16t105705.116-1776318546854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಹೊಸಪೇಟೆ (ಏ.16): &lt;/strong&gt;ಹೊಲದಲ್ಲಿ ಕೆಲಸ ಮಾಡುವಾಗ ಏಕಾಏಕಿಯಾಗಿ ಕರಡಿ ರೈತನ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.ಬುಕ್ಕಸಾಗರದ ಗ್ರಾಮದ ನಿವಾಸಿ ರಾಜಶೇಖರ್ ಗೌಡ (45) ಎಂಬ ರೈತ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ. ಗಾಯಗೊಂಡಿರುವ ವ್ಯಕ್ತಿಯು ಹೊಸಪೇಟೆ 100 ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಲದಲ್ಲಿ ಬೆಳೆಗೆ ನೀರು ಕಟ್ಟುವಾಗ ಏಕಾಏಕಿ ಕರಡಿ ರೈತನ ಮೇಲೆ ದಾಳಿ ನಡೆಸಿದ್ದು, ರಾಜಶೇಖರ್ ನ ಬಲ ಗೈ ಹಾಗೂ ಕಾಲಿಗೆ ಪರಚಿ ಗಾಯಗೊಳಿಸಿದೆ. ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಮಾಹಿತಿ ನೀಡಿದರು.&lt;/p&gt;&lt;p&gt;ಇತ್ತೀಚಿಗೆ ತಾಲೂಕಿನ ಮಲಪನಗುಡಿ ಹಾಗೂ ಕೊಂಡನಾಯಕನಹಳ್ಳಿ ಪ್ರದೇಶದಲ್ಲಿ ಕೆಲ ದಿನಗಳಿಂದ ನಿರಂತವಾಗಿ ಕರಡಿ ಕಾಣಿಸಿಕೊಳ್ಳುತ್ತಿತ್ತು. ಈ ನಡುವೆ ಬುಕ್ಕಸಾಗರದಲ್ಲಿ ಕರಡಿ ದಾಳಿ ನಡೆಸಿದ್ದರಿಂದ ಈ ಭಾಗದ ರೈತರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ.&lt;/p&gt;&lt;p&gt;ಇತ್ತೀಚಿಗೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಬೆಳಿಗಿನ&zwnj;ಜಾವ ವಾಯುವಿಹಾರಕ್ಕೆ ತೆರಳಿಸ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ&zwnj; ನಡೆಸಿ, ತೀವ್ರ ಸ್ವರೂಪದ ಗಾಯಗಳಾಗಿ ಆ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಸಹ ನಡೆದಿದೆ. ಇನ್ನೂ ಚಿಕಿತ್ಸೆ ನಡೆಯುತ್ತಿರುವಾಗ ಈಗ ಮತ್ತೊಂದು ಘಟನೆ ರೈತನ ಮೇಲೆ ಕರಡಿ ದಾಳಿ&zwnj;ನಡೆಸಿರುವು ತಾಲೂಕಿನ&zwnj; ಜನರು ಭಯಭೀತರಾಗಿದ್ದಾರೆ. ತಕ್ಷಣವೇ ಕರಡಿಗಳನ್ಮು ಬಂದಿಸಿ, ಜನರನ್ನು ರಕ್ಷಿಸಿ ಎಂದು ಸಾರ್ವಸನಿಕರು ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿಕಡಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagar-farmer-brutally-attack-by-wild-bear-while-working-in-field-rav/articleshow-a66dh82"/>
        </item>
        <item>
            <title><![CDATA[ಟೊಮೆಟೋ ಬೆಲೆ ಭಾರೀ ಕುಸಿತ, ಟ್ರ್ಯಾಕ್ಟರ್‌ನಲ್ಲಿ ತುಂಬಿ ಕುರಿ, ಮೇಕೆಗಳಿಗೆ ಸುರಿದ ರೈತರು!]]></title>
            <link>https://kannada.asianetnews.com/karnataka-districts/hospet-farmer-feed-tons-of-tomatoes-to-sheep-and-goats-at-reduced-prices/articleshow-ar9ptdi</link>
            <guid isPermaLink="true">https://kannada.asianetnews.com/karnataka-districts/hospet-farmer-feed-tons-of-tomatoes-to-sheep-and-goats-at-reduced-prices/articleshow-ar9ptdi</guid>
            <pubDate>Sun, 05 Apr 2026 07:28:30 +0530</pubDate>
            <description><![CDATA[&lt;p&gt;ಹೊಸಪೇಟೆ ಭಾಗದಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಫ್ತು ವ್ಯತ್ಯಯದಿಂದಾಗಿ ಬೇಡಿಕೆ ಕಡಿಮೆಯಾಗಿದ್ದು, ಸಾಗಾಣಿಕೆ ವೆಚ್ಚವೂ ಸಿಗದ ಕಾರಣ ರೈತರು ಟೊಮ್ಯಾಟೋವನ್ನು ರಸ್ತೆಗೆ ಸುರಿದು, ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kndnsqcnctsbcyxf57tsaqrd,imgname----------------------67--1775354305941.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಏ.5):&lt;/strong&gt; ದೇಶದ ಬೆನ್ನಲುಬಾದ ರೈತರ ಬದುಕು ಈಗ ಅಕ್ಷರಶಃ ಬೀದಿಗೆ ಬಂದಿದೆ. ಬೆಲೆ ಕುಸಿತದಿಂದದ ರೈತರು ಕಂಗಾಲಾಗಿದ್ದಾರೆ. ಹೊಸಪೇಟೆ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದ್ದು, ಬೆಳೆ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;h2&gt;ಇರಾನ್ ಯುದ್ಧ, ಗ್ಯಾಸ್ ಕೊರತೆ, ಹೋಟೆಲ್ ಬಂದ್, ತರಕಾರಿ ಕೇಳೋರಿಲ್ಲ&lt;/h2&gt;&lt;p&gt;ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸತತ ನಿರಂತರ ಯುದ್ಧದಿಂದಾಗಿ ಇದೀಗ ವಿಜಯನಗರ ಜಿಲ್ಲೆಯ ರೈತರ ಮೇಲೆ ನೇರ ಪರಿಣಾಮ ಬೀರಿದೆ. ರಫ್ತು ವಹಿವಾಟಿನಲ್ಲಿ ಉಂಟಾದ ವ್ಯತ್ಯಯ ಹಾಗೂ ಮಾರುಕಟ್ಟೆಯ ಏರುಪೇರಿನಿಂದಾಗಿ ಟೊಮ್ಯಾಟೋ ಬೇಡಿಕೆ ಕುಸಿದಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆ ತೀರಾ ಕೆಳಮಟ್ಟಕ್ಕೆ ಇಳಿದಿದೆ.&lt;/p&gt;&lt;h3&gt;ಟ್ರ್ಯಾಕ್ಟರ್&zwnj;ನಲ್ಲಿ ತುಂಬಿ ಕುರಿ ಮೇಕೆಗಳಿಗೆ ಟೊಮ್ಯಾಟೋ ಸುರಿದ ರೈತರು&lt;/h3&gt;&lt;p&gt;ಮಾರುಕಟ್ಟೆಗೆ ಟೊಮ್ಯಾಟೋ ತಂದರೆ ಸಾಗಾಣಿಕೆ ವೆಚ್ಚವೂ ಕೈಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಂಗಾಲಾದ ರೈತರು, ತಮ್ಮ ಹೊಲಗಳಲ್ಲಿ ಬೆಳೆದ ಟೊಮ್ಯಾಟೋಗಳನ್ನು ಟ್ರ್ಯಾಕ್ಟರ್&zwnj;ಗಳಲ್ಲಿ ಲೋಡ್ ಮಾಡಿಕೊಂಡು ಬಂದು ರಸ್ತೆ ಬದಿಗಳಲ್ಲಿ ಸುರಿಯುತ್ತಿದ್ದಾರೆ. ಮಾಡಿದ ಖರ್ಚೂ ಬರದ ಹಿನ್ನೆಲೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಲೆ ಇಲ್ಲದ ಕಾರಣ ಟೊಮ್ಯಾಟೋವನ್ನು ಎಸೆಯುವ ಬದಲು, ರೈತರು ಅನಿವಾರ್ಯವಾಗಿ ತಮ್ಮ ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ನೂರಾರು ಕೆಜಿ ಟೊಮ್ಯಾಟೋಗಳನ್ನು ಕುರಿ, ಮೇಕೆ ಹಾಗೂ ದನ-ಕರುಗಳಿಗೆ ಹಾಕುತ್ತಿರುವ ದೃಶ್ಯಗಳು ಎಂಥವರನ್ನೂ ಮರುಗಿಸುವಂತಿದೆ. ಕಷ್ಟಪಟ್ಟು ಬೆಳೆದ ಬೆಳೆ, ರೈತನ ಬೆವರಿಗೆ ಬೆಲೆಯೇ ಇಲ್ಲದಂತಾಗಿದೆ&lt;/p&gt;&lt;h3&gt;ರೈತರಿಗೆ ಸರ್ಕಾರ ಪರಿಹಾರ ನೀಡಲಿ&lt;/h3&gt;&lt;p&gt;ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದ ರೈತರು ಈಗ ಬೀದಿಗೆ ಬಿದ್ದಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಅಥವಾ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.&lt;/p&gt;]]></content:encoded>
            <category>vijayanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/hospet-farmer-feed-tons-of-tomatoes-to-sheep-and-goats-at-reduced-prices/articleshow-ar9ptdi"/>
        </item>
        <item>
            <title><![CDATA[ವಿದ್ಯಾರ್ಥಿಗಳಿಗಾಗಿ ಕೇವಲ 10 ರೂ.ಯಲ್ಲಿ ತಿಂಡಿ ನೀಡುವ ತಿಪ್ಪಣ್ಣ ಹೋಟೆಲ್‌; ಪ್ರೇಮಾ ಅಜ್ಜಿ ಅಂದ್ರೆ ಫೇಮಸ್]]></title>
            <link>https://kannada.asianetnews.com/gallery/karnataka-districts/thippanna-hotel-in-kotturu-is-offering-idly-ricebath-paddu-puri-breakfast-to-students-for-just-rs-10-vijayanagara-mrq-b1giy9c</link>
            <guid isPermaLink="true">https://kannada.asianetnews.com/gallery/karnataka-districts/thippanna-hotel-in-kotturu-is-offering-idly-ricebath-paddu-puri-breakfast-to-students-for-just-rs-10-vijayanagara-mrq-b1giy9c</guid>
            <pubDate>Tue, 14 Apr 2026 15:56:19 +0530</pubDate>
            <description><![CDATA[ಕೊಟ್ಟೂರಿನಲ್ಲಿರುವ ತಿಪ್ಪಣ್ಣ ಹೋಟೆಲ್ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕೇವಲ 10 ರೂಪಾಯಿಗೆ ಉಪಹಾರ ನೀಡುತ್ತಿದೆ. ತಾವು ಓದಲಿಲ್ಲವಾದರೂ, ಓದುವ ಮಕ್ಕಳಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ಹೋಟೆಲ್ ಮಾಲೀಕರು ಈ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp5qsye8dm9nfa65bycs95ec,imgname-tippannna-hotel--2--1776161716680.jpg" type="image/jpeg" height="390" width="690"/>
            <content:encoded><![CDATA[ಕೊಟ್ಟೂರಿನಲ್ಲಿರುವ ತಿಪ್ಪಣ್ಣ ಹೋಟೆಲ್ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕೇವಲ 10 ರೂಪಾಯಿಗೆ ಉಪಹಾರ ನೀಡುತ್ತಿದೆ. ತಾವು ಓದಲಿಲ್ಲವಾದರೂ, ಓದುವ ಮಕ್ಕಳಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ಹೋಟೆಲ್ ಮಾಲೀಕರು ಈ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.&lt;img&gt;&lt;p&gt;ಎಷ್ಟೋ ಜನರು ತಾವು ಮಾಡಿರುವ ಒಳ್ಳೆಯ ಕೆಲಸಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅಂತಹ ಜನರಗಳಲ್ಲಿ ಕಂಡು ಬರುವವರೇ ಕೊಟ್ಟೂರಿನ ತಿಪ್ಪಣ್ಣ ಹೋಟೆಲ್ ಮಾಲೀಕರು. ಕೊಟ್ಟೂರು ಪಟ್ಟಣಕ್ಕೆ ಓದಲು ಬರುವ ಪ್ರತಿ ವಿದ್ಯಾರ್ಥಿಗಳಿಗೂ ತಿಪ್ಪಣ್ಣ ಹೋಟೆಲ್ ಅಂದ್ರೆ ಅಚ್ಚುಮೆಚ್ಚು.&lt;/p&gt;&lt;img&gt;&lt;p&gt;ಇಂದು ಹೋಟೆಲ್ ನಡೆಸೋದು ಸವಾಲಿನ ಕೆಲಸ. ಮಧ್ಯಪ್ರಾಚ್ಯ ಯುದ್ಧದ ಬಿಕ್ಕಟ್ಟಿನಿಂದ ಹೋಟೆಲ್&zwnj;ಗಳಿಗೆ ಪೂರೈಕೆಯಾಗುವ ಎಲ್&zwnj;ಪಿಜಿ ಸಿಲಿಂಡರ್&zwnj;ನಲ್ಲಿ ಕೊರತೆಯುಂಟಾಗಿದೆ. ಹಾಗಾಗಿ ಬಹುತೇಕ ಹೋಟೆಲ್&zwnj;ಗಳು ಬೆಲೆ ಹೆಚ್ಚಳ ಮಾಡಿಕೊಂಡಿವೆ. ಆದ್ರೆ ಕೊಟ್ಟೂರಿನ ತಿಪ್ಪಣ ಹೋಟೆಲ್ ಮಾತ್ರ ವಿದ್ಯಾರ್ಥಿಗಳಿಗೆ ಕೇವಲ 10 ರೂಪಾಯಿಯಲ್ಲಿ ತಿಂಡಿ ನೀಡುತ್ತಿದೆ. ನಾವಂತೂ ಓದಲಿಲ್ಲ, ಓದುವ ಮಕ್ಕಳಿಗೆ ಈ ರೀತಿಯಾದ್ರೂ ಸಹಾಯ ಆಗಲಿ ಎಂದು ಹೋಟೆಲ್&zwnj;ನವರು ಹೇಳುತ್ತಾರೆ.&lt;/p&gt;&lt;img&gt;&lt;p&gt;ಕಳೆದ 27-28 ವರ್ಷಗಳಿಂದ ಕೊಟ್ಟೂರಿನಲ್ಲಿ ಈ ಹೋಟೆಲ್ ನಡೆಸಿಕೊಂಡು ಬರಲಾಗುತ್ತಿದೆ. ಹೆಸರೇ ಇಲ್ಲದೇ ಈ ಪುಟಾಣಿ ಆಹಾರ ಬಂಡಿಗೆ ತಿಪ್ಪಣ್ಣ ಹೋಟೆಲ್&zwnj;, ಪ್ರೇಮಾ ಅಜ್ಜಿ ಹೋಟೆಲ್ ಅಂತ ಇಲ್ಲಿನ ಜನರು ಕರೆಯುತ್ತಾರೆ. ಈ ಹೋಟೆಲ್&zwnj;ನಲ್ಲಿ ನಿಮಗೆ ಇಡ್ಲಿ, ರೈಸ್&zwnj;ಬಾತ್, ಪಡ್ಡು, ದೋಸೆ ಸೇರಿದಂತೆ ಬಗೆ ಬಗೆಯ ತಿಂಡಿ ಸಿಗುತ್ತದೆ. ವಿದ್ಯಾರ್ಥಿಗಳು ಯಾವುದಾರು ಒಂದು ತಿಂಡಿಯನ್ನು 10 ರೂಪಾಯಿಗೆ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಗ್ರಾಹಕರಿಗೆ ಇತರೆ ಹೋಟೆಲ್&zwnj;ಗಳಂತೆ ಸಾಮಾನ್ಯ ದರ ಪಡೆದುಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;halekotturu ಹೆಸರಿನ ಇನ್&zwnj;ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ 10 ರೂ.ಗೆ ತಿಂಡಿ ನೀಡುತ್ತಿದ್ದೇವೆ. ನಮಗೆ ಓದಿಸೋರು ಯಾರು ಇರಲಿಲ್ಲ. ಈಗ ಓದುವ ಮಕ್ಕಳಿಗೆ ಒಳ್ಳೆಯದಾಗ್ಲಿ ಎಂಬ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ತಿಂಡಿ ನೀಡುತ್ತಿದ್ದೇವೆ. ಈ ಕೆಲಸ ಮಾಡ್ತಿರೋದರಿಂದ ನಮಗೂ ಸಹ ಒಳ್ಳೆಯದಾಗುತ್ತಿದೆ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕನ್ನಡ ಗೊತ್ತಿಲ್ಲದ ಜನರೊಂದಿಗೆ ಸೂಪರ್ ಟೆಕ್ನಿಕ್ ಬಳಸಿ ವ್ಯಾಪಾರ: ಅಜ್ಜಿ ಜಾಣ್ಮೆಗೆ 20 ಲಕ್ಷ ವ್ಯೂವ್&lt;/strong&gt;&lt;/p&gt;&lt;img&gt;&lt;p&gt;ಈ ವಿಡಿಯೋ ನೋಡಿದ ನೆಟ್ಟಿಗರು, ಅಜ್ಜಿ ಹೋಟೆಲ್ ನಲ್ಲಿ ರೈಸ್ ಬಾತ್ ಸೂಪರ್. ನಾವು ನಮ್ಮ ಜೀವನದಲ್ಲಿ ಮರೆಯಲಾಗದಂತ ಹೋಟೆಲ್. ನಾನು ಕೊಟ್ಟೂರುನಲ್ಲಿ ಓದುತ್ತಿರುವಾಗ ನಾವು ದಿನನಿತ್ಯ ಬೆಳಗಿನ ಉಪಹಾರಕ್ಕೆ ಗೆಳಯರ ಜೊತೆಗೆ ಹೋಗುತ್ತಿದೆವು. ಎಂದಿಗೂ ಎಂದೆಂದಿಗೂ ಮರೆಯಲಾಗದ ಸ್ಥಳ. ನಾನು ಕೂಡ ಕಾಲೇಜ್ ಗೆ ಹೋಗುವಾಗ ಇಲ್ಲೇ ಟಿಫನ್ ಮಾಡ್ತಿದ್ದೆ, ತುಂಬಾ &amp;nbsp;ಚೆನ್ನಾಗಿರುತ್ತೆ ಇಲ್ಲಿ ಟಿಫನ್. ಪ್ರೇಮಾ ಅಜ್ಜಿ ಹೋಟೆಲ್ ಎಂದು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶ್ರೀಶೈಲ ಭಕ್ತರಿಗಾಗಿ ನಿದ್ದೆಯೂ ಮಾಡ್ತಿಲ್ಲ ಕೊಪ್ಪಳದ ವೆಂಕೊಬಾ ಕಾಕಾ; ಇವರೇ ಮಲ್ಲಯ್ಯ ಎಂದ ಜನ್ರು&lt;/strong&gt;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by HALEKOTTURU (Around Karnataka) (@halekotturu)&lt;/p&gt;&lt;p&gt;&lt;/p&gt;]]></content:encoded>
            <category>vijayanagara</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/thippanna-hotel-in-kotturu-is-offering-idly-ricebath-paddu-puri-breakfast-to-students-for-just-rs-10-vijayanagara-mrq-b1giy9c"/>
        </item>
        <item>
            <title><![CDATA[ಕಲ್ಯಾಣ ಕರ್ನಾಟಕ ಹೆಬ್ಬಾಗಿಲಲ್ಲಿ ಹೊಸ ವಿಮಾನ ನಿಲ್ದಾಣ; ಬಳ್ಳಾರಿ, ಹಂಪಿ, ಹೊಸಪೇಟೆ, ಕೊಪ್ಪಳಕ್ಕೂ ಹತ್ತಿರ!]]></title>
            <link>https://kannada.asianetnews.com/state/kalyana-karnataka-new-location-for-ballari-airport-minister-mb-patil-announces-after-janardhana-reddy-ask-sat/articleshow-bhz1qlp</link>
            <guid isPermaLink="true">https://kannada.asianetnews.com/state/kalyana-karnataka-new-location-for-ballari-airport-minister-mb-patil-announces-after-janardhana-reddy-ask-sat/articleshow-bhz1qlp</guid>
            <pubDate>Fri, 13 Mar 2026 14:11:00 +0530</pubDate>
            <description><![CDATA[&lt;p&gt;ಬಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ಯೋಜನೆಗೆ ಹೊಸ ಚಾಲನೆ ಸಿಕ್ಕಿದೆ. ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗುವಂತೆ, ಹಂಪಿಯಂತಹ ಪ್ರವಾಸಿ ತಾಣಗಳಿಗೆ ಹತ್ತಿರವಿರುವ ಹೊಸ ಆಯಕಟ್ಟಿನ ಸ್ಥಳವನ್ನು ಸರ್ಕಾರ ಗುರುತಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkk5gccjcvqcd3hz280s659t,imgname-kalyana-karnataka-ballari-new-airport-1773391065490.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಬಳ್ಳಾರಿ (ಮಾ.13): ಬ&lt;/strong&gt;ಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ಯೋಜನೆಗೆ ಈಗ ಹೊಸ ಚಾಲನೆ ಸಿಕ್ಕಿದೆ. ಬಳ್ಳಾರಿ ನಗರ ಮಾತ್ರವಲ್ಲದೆ, ನೆರೆಯ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೂ ಅನುಕೂಲವಾಗುವಂತೆ ವಿಮಾನ ನಿಲ್ದಾಣವನ್ನು ಅತ್ಯಂತ ಆಯಕಟ್ಟಿನ ಜಾಗದಲ್ಲಿ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ವಿಧಾನಸಭೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಪ್ರಶ್ನೆಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಸುದೀರ್ಘವಾಗಿ ಉತ್ತರಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಳ್ಳಾರಿಯಿಂದ 19 ಕಿ.ಮೀ ದೂರದಲ್ಲಿ ಹೊಸ ತಾಣ!&lt;/strong&gt;&lt;/h2&gt;&lt;p&gt;ಸರಕಾರದ ಉದ್ದೇಶದಂತೆ ಬಳ್ಳಾರಿ, ಹೊಸಪೇಟೆ, ಯುನೆಸ್ಕೋ ಪರಂಪರೆಯ ತಾಣವಾದ ಹಂಪಿ, ಆನೆಗೊಂದಿ, ಸಂಡೂರು ಹಾಗೂ ಸಿರಗುಪ್ಪ ಭಾಗದ ಜನರಿಗೆ ವಿಮಾನಯಾನ ಸೌಲಭ್ಯ ಹತ್ತಿರವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ಸುಮಾರು 19 ಕಿ.ಮೀ ದೂರದಲ್ಲಿ ಹೊಸ ಜಾಗವನ್ನು ಗುರುತಿಸಲಾಗಿದೆ. ಕೆಐಎಡಿಬಿ (KIADB) ವತಿಯಿಂದ 800 ಮತ್ತು 1,200 ಎಕರೆ ಇರುವ ಎರಡು ಪ್ರತ್ಯೇಕ ತಾಣಗಳನ್ನು ಪರಿಶೀಲಿಸಲಾಗುತ್ತಿದೆ. ಈ ಜಾಗದ ಕಾರ್ಯಸಾಧ್ಯತೆಯ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸಚಿವರು ತಿಳಿಸಿದರು.&lt;/p&gt;&lt;h2&gt;&lt;strong&gt;ದೂರದೃಷ್ಟಿಯ ಕೊರತೆಯಿಂದ ಹಿಂದಿನ ತಪ್ಪುಗಳೇ ಪಾಠ:&lt;/strong&gt;&lt;/h2&gt;&lt;p&gt;ವಿಮಾನ ನಿಲ್ದಾಣಗಳನ್ನು ನಿರ್ಮಿಸುವಾಗ ದೂರದೃಷ್ಟಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಬೆಳಗಾವಿ, ಹುಬ್ಬಳ್ಳಿ ಮತ್ತು ವಿಜಯಪುರ ನಿಲ್ದಾಣಗಳನ್ನು ಎಂ ಬಿ ಪಾಟೀಲ ಉದಾಹರಣೆಯಾಗಿ ನೀಡಿದರು. &quot;ಬೆಳಗಾವಿ ಮತ್ತು ಹುಬ್ಬಳ್ಳಿ ಏರ್&zwnj;ಪೋರ್ಟ್&zwnj;ಗಳ ಮಧ್ಯೆ ಕೇವಲ 70 ಕಿ.ಮೀ ಅಂತರವಿದೆ. ಎರಡೂ ಜಿಲ್ಲೆಗಳ ಮಧ್ಯಭಾಗದಲ್ಲಿ ಒಂದು ದೊಡ್ಡ ನಿಲ್ದಾಣ ನಿರ್ಮಿಸಿದ್ದರೆ, ಇಂದು ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬೆಳೆಯುತ್ತಿತ್ತು,&quot; ಎಂದು ಅವರು ಅಭಿಪ್ರಾಯಪಟ್ಟರು. ಇದೇ ತಪ್ಪು ಬಳ್ಳಾರಿಯಲ್ಲಿ ಆಗಬಾರದು ಎಂಬುದು ಸರ್ಕಾರದ ಆಶಯವಾಗಿದೆ.&lt;/p&gt;&lt;h2&gt;&lt;strong&gt;ಯಾವ ನಗರಗಳಿಗೆ ಎಷ್ಟು ದೂರ?&lt;/strong&gt;&lt;/h2&gt;&lt;ul&gt; &lt;li&gt;ಈಗ ಗುರುತಿಸಿರುವ ಹೊಸ ಸ್ಥಳವು ಪ್ರಮುಖ ಪ್ರವಾಸಿ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಹತ್ತಿರವಾಗಿದೆ:&lt;/li&gt; &lt;li&gt;ಬಳ್ಳಾರಿ: 19 ಕಿ.ಮೀ&lt;/li&gt; &lt;li&gt;ಹೊಸಪೇಟೆ: 33 ಕಿ.ಮೀ&lt;/li&gt; &lt;li&gt;ಹಂಪಿ: 26 ಕಿ.ಮೀ&lt;/li&gt; &lt;li&gt;ಸಂಡೂರು: 33 ಕಿ.ಮೀ&lt;/li&gt; &lt;li&gt;ತೋರಣಗಲ್ಲು: 13 ಕಿ.ಮೀ&lt;/li&gt; &lt;li&gt;ಸಿರಗುಪ್ಪ: 43 ಕಿ.ಮೀ&lt;/li&gt; &lt;li&gt;ಕೊಪ್ಪಳ: 75 ಕಿ.ಮೀ&lt;/li&gt;&lt;/ul&gt;&lt;h2&gt;&lt;strong&gt;ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ:&lt;/strong&gt;&lt;/h2&gt;&lt;p&gt;ಈ ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಲು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ವಿಮಾನ ನಿಲ್ದಾಣದ ಅಂತಿಮ ತಾಣವನ್ನು ಫಿಕ್ಸ್ ಮಾಡಲಾಗುವುದು. ಹಿಂದೆ ಗುರುತಿಸಿದ್ದ ಸ್ಥಳದಲ್ಲಿ ಏರ್&zwnj;ಪೋರ್ಟ್ ಮಾಡಿದರೆ 8 ಪಥಗಳ ಹೆದ್ದಾರಿ ನಿರ್ಮಾಣ ಸೇರಿದಂತೆ ಭೂಸ್ವಾಧೀನಕ್ಕೆ ಭಾರಿ ಮೊತ್ತ ವ್ಯಯಿಸಬೇಕಾಗುತ್ತದೆ, ಇದು ಪ್ರಾಯೋಗಿಕವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;ಉಡಾನ್ ಯೋಜನೆ ವಿಸ್ತರಣೆಗೆ ಕೇಂದ್ರಕ್ಕೆ ಪ್ರಸ್ತಾಪ:&lt;/strong&gt;&lt;/h2&gt;&lt;p&gt;ಪ್ರಾದೇಶಿಕ ವಿಮಾನ ನಿಲ್ದಾಣಗಳ ಸುಸ್ಥಿರತೆಗಾಗಿ 'ಉಡಾನ್' ಯೋಜನೆಯನ್ನು 3 ರಿಂದ 5 ವರ್ಷಗಳಿಗೆ ವಿಸ್ತರಿಸಬೇಕು ಮತ್ತು ನಂತರದ ಐದು ವರ್ಷ ಕೇಂದ್ರ-ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ನಿರ್ವಹಿಸಬೇಕು ಎಂದು ಕೇಂದ್ರ ಸಚಿವರಿಗೆ ಪ್ರಸ್ತಾಪ ಇಟ್ಟಿರುವುದಾಗಿ ಪಾಟೀಲ ತಿಳಿಸಿದರು. ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳ ಸ್ಥಿತಿಗತಿಯನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಬಳ್ಳಾರಿ ವಿಮಾನ ನಿಲ್ದಾಣವು ಕೇವಲ ಒಂದು ಜಿಲ್ಲೆಗೆ ಸೀಮಿತವಾಗದೆ, ಇಡೀ ಕಲ್ಯಾಣ ಕರ್ನಾಟಕ ಮತ್ತು ಪ್ರವಾಸಿ ತಾಣಗಳಿಗೆ ಹೆಬ್ಬಾಗಿಲಾಗುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kalyana-karnataka-new-location-for-ballari-airport-minister-mb-patil-announces-after-janardhana-reddy-ask-sat/articleshow-bhz1qlp"/>
        </item>
        <item>
            <title><![CDATA[ಹೊಸಪೇಟೆಯಲ್ಲಿ ಎಟಿಎಂ ಕಾರ್ಡ್ ಬದಲಿಸಿ ಲಕ್ಷ ಲಕ್ಷ ಪಂಗನಾಮ, ಹಣ ವಿತ್‌ಡ್ರಾ ಮಾಡಲು ಅಪರಿಚಿತರಿಗೆ ಕಾರ್ಡ್ ಕೊಡುವ ಮುನ್ನ ಎಚ್ಚರ!]]></title>
            <link>https://kannada.asianetnews.com/karnataka-districts/hosapete-atm-fraud-thieves-swap-cards-to-loot-lakhs-police-launch-manhunt/articleshow-c072rdl</link>
            <guid isPermaLink="true">https://kannada.asianetnews.com/karnataka-districts/hosapete-atm-fraud-thieves-swap-cards-to-loot-lakhs-police-launch-manhunt/articleshow-c072rdl</guid>
            <pubDate>Wed, 25 Mar 2026 10:40:14 +0530</pubDate>
            <description><![CDATA[&lt;p&gt;ಹೊಸಪೇಟೆಯಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಲು ಅಪರಿಚಿತನ ಸಹಾಯ ಪಡೆದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಖದೀಮನು ಎಟಿಎಂ ಕಾರ್ಡ್ ಬದಲಾಯಿಸಿ, ಬೇರೆಡೆ ಹಂತ ಹಂತವಾಗಿ 1.27 ಲಕ್ಷ ರೂಪಾಯಿ ಡ್ರಾ ಮಾಡಿ ವಂಚಿಸಿದ್ದಾನೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmhnzr7w4f0bfhz2yrd9ve5g,imgname----------------------24--1774414979324.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ(ಮಾ.25): &lt;/strong&gt;ಮೊದಲ ಬಾರಿ ಎಟಿಎಂ ಬಳಸುವ ಯುವಕರು, ಎಟಿಎಂ ಬಳಕೆ ಗೊತ್ತಿಲ್ಲದ ಹಿರಿಯರು ಇನ್ಮುಂದೆ 'ಹಣ ಡ್ರಾ ಮಾಡ್ಕೊಡಪ್ಪ' ಅಂತಾ ಎಟಿಎಂನಲ್ಲಿ ಗೊತ್ತು ಗುರಿಯಿಲ್ಲದವರ ಬಳಿ ಸಹಾಯ ಕೇಳುವ ಮುನ್ನ ಎಚ್ಚರ. ಗೊತ್ತಿಲ್ಲದೇ ಅಪರಿಚಿತ ವ್ಯಕ್ತಿ ಕೈಗೆ ಎಟಿಎಂ ಕಾರ್ಡ್ ಕೊಟ್ಟರೇ ಮುಗಿತು ಕಥೆ.. ಯಾಕೆಂದರೆ ಇದನ್ನೇ ಬಂಡಾವಳ ಮಾಡಿಕೊಂಡಿರುವ ಖದೀಮರು ಎಟಿಎಂ ಸುತ್ತಮುತ್ತಲೇ ಬೀಡುಬಿಟ್ಟಿದ್ದಾರೆ.&lt;/p&gt;&lt;h2&gt;ಸಹಾಯ ಮಾಡುವವನಂತೆ ಬಂದ ಖದೀಮ!&lt;/h2&gt;&lt;p&gt;ಎಟಿಎಂಗೆ ಹಣ ಡ್ರಾ ಮಾಡಿಕೊಳ್ಳಲು ಬರುವ ಅನಕ್ಷರಸ್ಥರು, ಬ್ಯಾಂಕಿಂಗ್, ಎಟಿಎಂ ಬಳಕೆ ಬಗ್ಗೆ ಗೊತ್ತಿಲ್ಲದ ಜನರೇ ಈ ಖದೀಮರ ಟಾರ್ಗೆಟ್. ಎಟಿಎಂ ಆಗಲಿ, ಓಟಿಪಿ ಆಗಲಿ ಯಾರಿಗೂ ಕೊಡಬಾರದು, ಶೇರ್ ಮಾಡಿಕೊಳ್ಳಬಾರದು ಎಂದು ಬ್ಯಾಂಕ್&zwnj;ಗಳು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇದೀಗ ನೋಡಿ ಅಪರಿಚಿತನಿಗೆ ಎಟಿಎಂ ಕೊಟ್ಟು ಹಣ ಡ್ರಾ ಮಾಡಿಕೊಡಲು ಹೇಳಿ ಎಟಿಎಂ ಕಾರ್ಡ್ ಕೊಟ್ಟಿದ್ದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;h3&gt;ಕಾರ್ಡ್ ಕೊಡಿ ಹಣ ಡ್ರಾ ಮಾಡಿಕೊಡ್ತೇನೆ..!&lt;/h3&gt;&lt;p&gt;ಉಮೇಶ್ ಗೌಡ ಎಂಬುವವರು ಹಣ ವಿತ್&zwnj;ಡ್ರಾ ಮಾಡಿಕೊಳ್ಳಲು ಹೊಸಪೇಟೆ ಬಸ್&zwnj; ನಿಲ್ದಾಣದ ಮುಂದೆ ಇರೋ ಕೆನರಾ ಬ್ಯಾಂಕ್&zwnj; ಎಟಿಎಂಗೆ ಹೋಗಿದ್ದಾರೆ. ಮೊದಲಿಗೆ 9 ಸಾವಿರ ಹಣ ವಿತ್ ಡ್ರಾ ಮಾಡಿದ್ದಾರೆ. ಮತ್ತೊಮ್ಮೆ 9 ಸಾವಿರ ಮಾಡಲು ಹೋದಾಗ ಟೆಕ್ನಿಕಲ್ ಸಮಸ್ಯೆಯಿಂದ ಹಣ ಬಂದಿಲ್ಲ. ಇದೇ ವೇಳೆ ಅಪರಿಚಿತ ಯುವಕ ಹಿಂದೆ ಬಂದು ನಿಂತಿದ್ದಾನೆ. 'ಎಟಿಎಂ ಕಾರ್ಡ್ ಕೊಡಿ ಹಣ ಡ್ರಾ ಮಾಡಿಕೊಡ್ತೇನೆ' ಎಂದು ನಂಬಿಸಿದ್ದಾನೆ. ಇದನ್ನ ನಂಬಿದ ಉಮೇಶ್ ಗೌಡ, ಎಟಿಎಂ ಕಾರ್ಡ್ ಕೊಟ್ಟಿದ್ದಾನೆ.&lt;/p&gt;&lt;p&gt;ಎಟಿಎಂ ಕಾರ್ಡ್&zwnj; ಪಡೆದು ಅದನ್ನ ಮಷಿನ್ ಒಳಗೆ ಹಾಕಿದಂತೆ ನಟಿಸಿ ಹಣ ಬರುತ್ತಿಲ್ಲ ಎಂದು ಹೇಳಿದ್ದಾನೆ. ಆದರೆ ಖತರ್ನಾಕ್ ಖದೀಮ ಎಟಿಎಂ ಕಾರ್ಡ್ ವಾಪಸ್ ಕೊಡುವಾಗ ಬೇರೆ ಯಾವುದೋ ಕಾರ್ಡ್ ನೀಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಇದೇ ಎಟಿಎಂ ಮುಂದೆ ನಿಂತ ವೇಳೆಯೇ ಅಪರಿಚಿತ ಯುವಕ ಬೇರೆ ಕಡೆ ಎಟಿಎಂಗೆ ಹೋಗಿ ಹಂತ ಹಂತವಾಗಿ 1 ಲಕ್ಷದ 27 ಸಾವಿರ ರೂಪಾಯಿ ಹಣ ವಿತ್ ಡ್ರಾ ಮಾಡಿದ್ದಾನೆ. ಆದರೆ ಎಟಿಎಂ ಡ್ರಾ ಮಾಡಿದಾಗ ಬ್ಯಾಂಕ್&zwnj; ಅಕೌಂಟ್&zwnj;ಗೆ ಸೇರಿಸಿರುವ ಮೊಬೈಲ್ ನಂಬರ್&zwnj;ಗೆ ಹಂತ ಹಂತವಾಗಿ ಹಣ ಡ್ರಾ ಆಗಿರುವ ಬಗ್ಗೆ ಮಸೇಜ್&zwnj;ಗಳು ಬಂದಿವೆ. ಇದನ್ನ ನೋಡಿದ ಉಮೇಶ್ ಗೌಡ ಗಾಬರಿಯಾಗಿದ್ದಾನೆ. ತಕ್ಷಣ ಬ್ಯಾಂಕ್ ಗಮನಕ್ಕೆ ತಂದಿದ್ದಾನೆ. ಸದ್ಯ ಈ ಪ್ರಕರಣ ಬಗ್ಗೆ ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು. ಸಿಸಿ ಕ್ಯಾಮೆರಾಗಳ ಆಧರಿಸಿ ಆರೋಪಿಯನ್ನ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/hosapete-atm-fraud-thieves-swap-cards-to-loot-lakhs-police-launch-manhunt/articleshow-c072rdl"/>
        </item>
        <item>
            <title><![CDATA[ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!]]></title>
            <link>https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n</link>
            <guid isPermaLink="true">https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n</guid>
            <pubDate>Sat, 04 Apr 2026 13:52:04 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯಲ್ಲಿ ಜಿಮ್ ಓನರ್ ಸಮೀರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಯ ನಾಟಕವಾಡಿ ಮೋಸಗೊಳಿಸಿದ್ದಾನೆ. ಆಕೆಗೆ ಮತ್ತು ಬರುವ ಔಷಧಿ ನೀಡಿ, ದೌರ್ಜನ್ಯ ಎಸಗಿ, ಅದನ್ನು ಚಿತ್ರೀಕರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದನು. ಈ ವಿಷಯ ತಿಳಿದ ಹಿಂದೂ ಸಂಘಟನೆಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xa48z9a" medium="video" height="768" width="1024"/>
            <content:encoded><![CDATA[&lt;p&gt;ಚೋಟ ಮುಂಬೈ ಹುಬ್ಬಳ್ಳಿಯಲ್ಲಿ ಏನಾದ್ರೂ ಸುದ್ದಿಯಾಗುತ್ತೆ.. ಅದರಲ್ಲೂ ಕೋಮು ಸಂಘರ್ಷದ ವಿಷಯ ಬಂದ್ರೆ ಹೊತ್ತಿ ಉರಿಯೋದಕ್ಕೆ ಶುರುವಾಗಿಬಿಡುತ್ತೆ.. ಇವತ್ತು ಇದೇ ಹುಬ್ಬಳ್ಳಿ ಒಂದು ಲವ್​ ಜಿಹಾದ್​​ ಕೇಸ್​​​ನಲ್ಲಿ ಮತ್ತೆ ಸುದ್ದಿಯಾಗಿದೆ.. ಜಿಮ್​ಗೆ ಬಂದ ಹಿಂದೂ ಯುವತಿಯನ್ನ ಟಾರ್ಗೆಟ್​​ ಮಾಡಿಕೊಂಡ ಜಿಮ್​​​ ಓನರ್​​​ ಒಬ್ಬ ಆಕೆಯನ್ನ ಪ್ರೀತಿಯಂಬ ಖೆಡ್ಡಾಗೆ ಬೀಳಿಸಿಕೊಂಡು ನಂತರ ಆಕೆಯನ್ನ ಬ್ಲ್ಯಾಕ್​ಮೇಲ್​​​ ಮಾಡೋದಕ್ಕೆ ಹೊರಟಿದ್ದಾನೆ.. ಆದ್ರೆ ಇವತ್ತು ಹಿಂದೂ ಸಂಘಟನೆಗಳು ಅವನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಆದ್ರೆ ಇಷ್ಟಕ್ಕೆ ಎಲ್ಲಾ ಮುಗಿಯಲಿಲ್ಲ.. ಇಲ್ಲಿಂದಲೇ ಒಂದು ಹೈಡ್ರಾಮಾ ಶುರುವಾಗಿದ್ದು.. ಅಷ್ಟಕ್ಕೂ ಆ ಜಿಮ್​​​ ಓನರ್​​ ಯಾರು..? ಅವನಿಂದ ಮೋಸ ಹೋದ ಹುಡುಗಿ ಯಾರು..? ಹುಬ್ಬಳ್ಳಿ ಇವತ್ತು ಹೊತ್ತಿ ಉರಿದ್ದಿದ್ದೇಕೆ ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​.ಐ.ಆರ್..&amp;nbsp;&lt;/p&gt;&lt;p&gt;ಆಕೆ ತನ್ನ ಪಾಡಿಗೆ ಕಾಲೇಜು.. ಮನೆ ಅಂತ ಇದ್ದವಳು.. ಮೂರು ವರ್ಷದ ಹಿಂದೆ ಜಿಮ್​ಗೆ ಸೇರಬೇಕು ಅನ್ನೋ ಯೋಚನೆ ಮಾಡ್ತಾಳೆ.. ಆಗ ಈ ಸಮೀರ್​ನ ಅಕ್ಕ ತೈಸಿಮ್​​ನ ಪರಿಚಯವಾಗುತ್ತೆ.. ಅಕ್ಕ ಸಮೀರ್​​ನನ್ನ ಪರಿಚಯ ಮಾಡಿಸುತ್ತಾಳೆ.. ಇಬ್ಬರೂ ನಂತರ ಸ್ನೇಹಿತರಾಗ್ತಾರೆ.. ಸಮೀರ್​ ಆಕೆಯ ಜೊತೆ ಪ್ರೀತಿಯ ನಾಟಕವಾಡ್ತಾನೆ.. ನಂತರ ಒಂದು ದಿನ ಮನೆಗೆ ಕರೆಸಿಕೊಂಡು ಮತ್ತು ಬರೋ ಔಷಧಿ ಕೊಟ್ಟು ಮಾಡಬಾರದನ್ನ ಮಾಡಿಬಿಡ್ತಾನೆ.. ಅಷ್ಟೇ ಅಲ್ಲ ಅದನ್ನ ಚಿತ್ರಿಸಿಕೊಳ್ತಾನೆ ಕೂಡ.. ಆದ್ರೆ ಇದೆಲ್ಲಾ ಆಗಿ ಸ್ವಲ್ಪ ದಿನಕ್ಕೇ ಆ ನೀಚ ಖುಷಿಗೆ ಬ್ಲ್ಯಾಕ್​​​ಮೇಲ್​ ಮಾಡೋದಕ್ಕೆ ಶುರು ಮಾಡ್ತಾನೆ.. ಆತನಿಂದ ಆ ಹೆಣ್ಣುಮಗಳು ನರಕ ನೋಡ್ತಾಳೆ.. ಈ ವಿಷ್ಯಾ ಅದೇಗೋ ಹಿಂದೂ ಸಂಘಟನೆಯವರಿಗೆ ಗೊತ್ತಾಗಿ ಸೀದಾ ಸಮೀರ್​ ಮನೆಯ ಬಳಿ ಹೋಗ್ತಾರೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n"/>
        </item>
        <item>
            <title><![CDATA[ಮೇ ಅಂತ್ಯಕ್ಕೆ ಎಲ್ಲ 33 ಕ್ರಸ್ಟ್‌ ಗೇಟ್‌ ಅಳವಡಿಕೆ ಪೂರ್ಣ: ಸಚಿವ ಎನ್.ಎಸ್.ಬೋಸರಾಜು]]></title>
            <link>https://kannada.asianetnews.com/karnataka-districts/tungabhadra-dam-crest-gate-installation-update-ns-boseraju-gvd/articleshow-fry75qg</link>
            <guid isPermaLink="true">https://kannada.asianetnews.com/karnataka-districts/tungabhadra-dam-crest-gate-installation-update-ns-boseraju-gvd/articleshow-fry75qg</guid>
            <pubDate>Sat, 21 Mar 2026 22:17:27 +0530</pubDate>
            <description><![CDATA[&lt;p&gt;33 ನೂತನ ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ&zwnj;. ಕಾಮಗಾರಿಯು ನಿರೀಕ್ಷಿತ ಸಮಯಕ್ಕಿಂತ ವೇಗವಾಗಿ ಸಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzwzmjac9ty1cs6za7jmmatc,imgname-bfb-1752245619020.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಮಾ.21): &lt;/strong&gt;ಮೇ ಅಂತ್ಯದೊಳಗೆ ತುಂಗಭದ್ರಾ ಜಲಾಶಯದ ಎಲ್ಲಾ 33 ನೂತನ ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ&zwnj;. ಕಾಮಗಾರಿಯು ನಿರೀಕ್ಷಿತ ಸಮಯಕ್ಕಿಂತ ವೇಗವಾಗಿ ಸಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಶುಕ್ರವಾರ ಭೇಟಿ ನೀಡಿ, ತಾಂತ್ರಿಕ ತಂಡವು ನಡೆಸುತ್ತಿರುವ ಜಲಾಶಯದ ಕ್ರೆಸ್ಟ್ ಗೇಟ್ ಅಳವಡಿಕೆ ಕಾರ್ಯಗಳನ್ನು ಖುದ್ದು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೂನ್&zwnj;ನಲ್ಲಿ ಆರಂಭವಾಗುವ ಮುಂಗಾರು ಮಳೆಗಾಲದ ವೇಳೆಗೆ ಜಲಾಶಯವು ಸಂಪೂರ್ಣ ಸಿದ್ಧವಾಗಲಿದೆ ಎಂದರು.&lt;/p&gt;&lt;p&gt;ಈಗಾಗಲೇ ತುಂಗಭದ್ರಾ ಜಲಾಶಯದ18 ನೂತನ ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 5 ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಒಟ್ಟು 23 ಗೇಟ್&zwnj;ಗಳ ಕೆಲಸ ಮುಗಿಯುವ ನಿರೀಕ್ಷೆಯಿದೆ. ಎಕ್ಸ್&zwnj;ಪರ್ಟ್ ಟೀಮ್ ಮತ್ತು ಚೀಫ್ ಎಂಜಿನಿಯರ್&zwnj;ಗಳ ಪ್ರಕಾರ, ಗೇಟ್ ಬದಲಾವಣೆಯ ಸಮಯದಲ್ಲಿ ಹಳೆಯ ಅಣೆಕಟ್ಟಿನ ರಚನೆಗೆ ಯಾವುದೇ ತೊಂದರೆಯಾಗಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಉಳಿದ 10 ಗೇಟ್&zwnj;ಗಳನ್ನು ಅಳವಡಿಸಿ, ಮೇ ಅಂತ್ಯದೊಳಗೆ ಎಲ್ಲಾ 33 ನೂತನ ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ಜಲಾಶಯದ ಗೇಟ್&zwnj;ಗಳಿಗೆ ನೂತನ ಚೈನ್&zwnj; ಅಳವಡಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಚೈನ್&zwnj;ಗಳಿಗಾಗಿ ₹5.6 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು. ಪ್ರತಿ ಗೇಟ್&zwnj;ಗೆ ಎರಡು ಚೈನಿನಂತೆ 33 ಗೇಟ್&zwnj;ಗಳಿಗೆ 66 ಚೈನ್&zwnj; ಅಳವಡಿಸಲಾಗುವುದು. ಜಲಾಶಯದ ಎಲ್ಲ 33 ನೂತನ ಗೇಟ್ ಅಳವಡಿಕೆ ನಂತರ ಜಲಾಶಯದ ಗೇಟ್&zwnj;ಗಳಿಗೆ ಚೈನ್&zwnj; ಅಳವಡಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು. ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆಗೆ ₹ 48 ಕೋಟಿ ಟೆಂಡರ್ ಕರೆಯಲಾಗಿದ್ದು, ಇದುವರೆಗೆ ₹35 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಪತ್ರ ವ್ಯವಹಾರ&lt;/strong&gt;&lt;/h2&gt;&lt;p&gt;ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನ ಸಮಸ್ಯೆಗೆ ಪರಿಹಾರವಾಗಿ &rsquo;ನವಲಿ&rsquo; ಯೋಜನೆಯ ಪ್ರಸ್ತಾವನೆಯನ್ನು ಮಂಡಳಿ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ. ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೂ ಸಹ ಪತ್ರ ವ್ಯವಹಾರ ನಡೆಸಲಾಗಿದೆ. ಸಂಬಂದಪಟ್ಟ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ತೆಲಂಗಾಣ ಸರ್ಕಾರದೊಂದಿಗೂ ಸಮನ್ವಯ ಸಾಧಿಸಲು ಪ್ರಯತ್ನಿಸಲಾಗುತ್ತಿದ್ದು, ವಿವಿಧ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಗಳು ಬಗೆಹರಿದ ನಂತರ ಪೂರ್ಣ ಸಹಕಾರ ಸಿಗುವ ನಿರೀಕ್ಷೆಯಿದೆ ಎಂದರು.&lt;/p&gt;&lt;p&gt;ಈ ಬಗ್ಗೆ ನಮ್ಮ ರಾಜ್ಯದ ವಿವಿಧ ಚುನಾಯಿತ ಪ್ರತಿನಿಧಿಗಳ ನಿಯೋಗವು ನವದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದ ಅಧಿಕಾರಿಗಳು ಮತ್ತು ವಿವಿಧ ರಾಜ್ಯಗಳ ಸಂಸದರೊಂದಿಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚುನಾವಣಾ ನೀತಿ ಸಂಹಿತೆಯ ಪ್ರಕ್ರಿಯೆಗಳ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.&lt;/p&gt;&lt;p&gt;ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಕೊಪ್ಪಳ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಟಿಬಿ ಬೋರ್ಡ್ ಹಾಗೂ ಕೆ.ಎನ್.ಎನ್.ಎಲ್. ಅಧಿಕಾರಿಗಳಾದ ಮುಖ್ಯ ಇಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಇಇ ಧರ್ಮರಾಜ್ ಹಾಗೂ ಜ್ಞಾನೇಶ್ವರ, ಸೆಕ್ಷನ್ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಮತ್ತು ಹುಲಿರಾಜ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/tungabhadra-dam-crest-gate-installation-update-ns-boseraju-gvd/articleshow-fry75qg"/>
        </item>
        <item>
            <title><![CDATA['ಓವರ್ ಸ್ಮಾರ್ಟ್ ನನ್ನ ಹತ್ರ ತೋರಿಸ್ಬೇಡ' ರೌಡಿಶೀಟರ್‌ಗಳ ಬೆವರಿಳಿಸಿದ ಎಸ್‌ಪಿ ಜಾಹ್ನವಿ]]></title>
            <link>https://kannada.asianetnews.com/state/vijayanagar-sp-jahnavi-cracks-down-on-criminals-no-over-smartness-tolerated-rav/articleshow-fug7lv9</link>
            <guid isPermaLink="true">https://kannada.asianetnews.com/state/vijayanagar-sp-jahnavi-cracks-down-on-criminals-no-over-smartness-tolerated-rav/articleshow-fug7lv9</guid>
            <pubDate>Sat, 21 Mar 2026 10:37:45 +0530</pubDate>
            <description><![CDATA[ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯು ಹೊಸಪೇಟೆಯಲ್ಲಿ 220 ರೌಡಿಶೀಟರ್&zwnj;ಗಳ ವಿಶೇಷ ಪರೇಡ್ ನಡೆಸಿತು. ಎಸ್&zwnj;ಪಿ ಎಸ್.ಜಾಹ್ನವಿ ಅವರು ಅಪರಾಧ ಚಟುವಟಿಕೆಗಳನ್ನು ನಿಲ್ಲಿಸಿ ಸುಧಾರಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದು, ಸಮಾಜದಲ್ಲಿ ಶಾಂತಿ ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km7ch2pp6db3xz061nhqcx1z,imgname----------------------6--1774069517014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಮಾ.21): &lt;/strong&gt;ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಎಸ್&zwnj;ಪಿ ಎಸ್.ಜಾಹ್ನವಿ ರೌಡಿಶೀಟರ್&zwnj;ಗಳಿಗೆ ಬೆವರಿಳಿಸುವಂತೆ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದರು.&lt;/p&gt;&lt;p&gt;ಹೊಸಪೇಟೆಯ ಡಿಆರ್&zwnj; ಮೈದಾನದಲ್ಲಿ ಬುಧವಾರ ನಡೆದ ಈ ವಿಶೇಷ ರೌಡಿ ಪರೇಡ್&zwnj;ನಲ್ಲಿ ಜಿಲ್ಲೆಯ 21 ಪೊಲೀಸ್ ಠಾಣೆಗಳ ವ್ಯಾಪ್ತಿಯ 220 ರೌಡಿ ಶೀಟರ್&zwnj;ಗಳು ಭಾಗವಹಿಸಿದರು.&lt;/p&gt;&lt;p&gt;ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಕಣ್ಣಿಟ್ಟಿರುವ ಪೊಲೀಸ್ ಇಲಾಖೆ, ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಪರೇಡ್ ವೇಳೆ ರೌಡಿ ಶೀಟರ್&zwnj;ಗಳನ್ನು ಸಾಲುಗಟ್ಟಿ ನಿಲ್ಲಿಸಿ, ಶಿಸ್ತು, ವರ್ತನೆ ಹಾಗೂ ಕಾನೂನು ಪಾಲನೆ ಕುರಿತು ಎಸ್&zwnj;ಪಿ ಜಾಹ್ನವಿ ಅವರು ರೌಡಿ ಶೀಟರ್&zwnj; ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.&lt;/p&gt;&lt;p&gt;ಅಪರಾಧ ಚಟುವಟಿಕೆಗಳಿಂದ ದೂರ ಇರಬೇಕು. ಸುಧಾರಣೆಗೆ ಪ್ರತಿದಿನವೂ ಅವಕಾಶ ಇದೆ. ಒಳ್ಳೆಯ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕುವಂತೆ ಎಂದು ಅವರು ಸಲಹೆ ನೀಡಿದರು.&lt;/p&gt;&lt;p&gt;ಇದೇ ವೇಳೆ 'ಒಮ್ಮೆ ಎಚ್ಚರಿಕೆ ನೀಡಿದ ಬಳಿಕವೂ ಚಟುವಟಿಕೆಗಳು ಮುಂದುವರಿದರೆ, ಇದಕ್ಕಿಂತಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸಂದೇಶ ನೀಡಿದರು.&lt;/p&gt;&lt;p&gt;ರೌಡಿಗಳಲ್ಲಿ ಕೆಲವರು ಪರೇಡ್ ವೇಳೆ ಸರಿಯಾಗಿ ನಿಲ್ಲದೇ ನಿರ್ಲಕ್ಷ್ಯ ತೋರಲು ಯತ್ನಿಸಿದಾಗ, 'ಮೊದಲು ಸರಿಯಾಗಿ ನಿಲ್ಲೋದು ಕಲಿಯಿರಿ. ಯಾವ ಸಣ್ಣ ಕೇಸ್&zwnj;ನಲ್ಲಿ ಇರುವವನು ನೀನು? ಓವರ್ ಸ್ಮಾರ್ಟ್ ಆಗಿ ಆಡಬೇಡಿ ಎಂದು ಎಸ್&zwnj;ಪಿ ಜಾಹ್ನವಿ ಅವರು ಗೌಡಿ ಶೀಟರ್&zwnj;ಗಳಿಗೆ ಬೆವರಿಳಿಸಿದರು.&lt;/p&gt;&lt;p&gt;ಇದೇ ವೇಳೆ 15 ರೌಡಿ ಶೀಟರ್&zwnj;ಗಳಿಗೆ ಗಡಿಪಾರು ಮಾಡಲು ಸೂಚನೆ ನೀಡಿದರು. ರೌಡಿಶೀಟರ್&zwnj;ಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದ್ದು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;ವಿಜಯನಗರ ಜಿಲ್ಲೆಯಾದ್ಯಂತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್&zwnj;ಪಿ ಜಾಹ್ನವಿ ಅವರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.&lt;/p&gt;&lt;p&gt;ಎಎಸ್&zwnj;ಪಿ ಮಂಜುನಾಥ, ಡಿವೈಎಸ್&zwnj;ಪಿ ಡಾ. ಟಿ. ಮಂಜುನಾಥ ಸೇರಿದಂತೆ 21 ಪೊಲೀಸ್ ಠಾಣೆಗಳ ಪೊಲೀಸ್&zwnj; ಅಧಿಕಾರಿಗಳು ಭಾಗವಹಿಸಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/vijayanagar-sp-jahnavi-cracks-down-on-criminals-no-over-smartness-tolerated-rav/articleshow-fug7lv9"/>
        </item>
        <item>
            <title><![CDATA[ಇನ್ಮುಂದೆ ವಿಜಯಪುರದಿಂದ ಆಲಮಟ್ಟಿ ರಾಕ್ ಗಾರ್ಡನ್, ವಾಟರ್‌ ಪಾರ್ಕ್‌ಗೆ  ನೇರ ಬಸ್; ಸಮಯ ಹೀಗಿದೆ]]></title>
            <link>https://kannada.asianetnews.com/gallery/karnataka-districts/direct-bus-from-vijayapura-city-to-almatti-rock-garden-water-park-timings-are-as-follows-mrq-ig362nr</link>
            <guid isPermaLink="true">https://kannada.asianetnews.com/gallery/karnataka-districts/direct-bus-from-vijayapura-city-to-almatti-rock-garden-water-park-timings-are-as-follows-mrq-ig362nr</guid>
            <pubDate>Wed, 22 Apr 2026 09:44:45 +0530</pubDate>
            <description><![CDATA[ವಿಜಯಪುರದಿಂದ ಪ್ರೇಕ್ಷಣೀಯ ಸ್ಥಳವಾದ ಆಲಮಟ್ಟಿ ಉದ್ಯಾನವನಕ್ಕೆ ನೂತನ ಬಸ್ ಸಾರಿಗೆಯನ್ನು ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಈ ಸೇವೆಗೆ ಚಾಲನೆ ನೀಡಿದ್ದು, ಈ ಬಸ್ ಪ್ರತಿದಿನ ಆರು ಬಾರಿ ವಿಜಯಪುರ ಮತ್ತು ಆಲಮಟ್ಟಿ ನಡುವೆ ಸಂಚರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpsnvwe3qbf1md20br08dbea,imgname-alamatti--2--1776830771651.jpg" type="image/jpeg" height="390" width="690"/>
            <content:encoded><![CDATA[ವಿಜಯಪುರದಿಂದ ಪ್ರೇಕ್ಷಣೀಯ ಸ್ಥಳವಾದ ಆಲಮಟ್ಟಿ ಉದ್ಯಾನವನಕ್ಕೆ ನೂತನ ಬಸ್ ಸಾರಿಗೆಯನ್ನು ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಈ ಸೇವೆಗೆ ಚಾಲನೆ ನೀಡಿದ್ದು, ಈ ಬಸ್ ಪ್ರತಿದಿನ ಆರು ಬಾರಿ ವಿಜಯಪುರ ಮತ್ತು ಆಲಮಟ್ಟಿ ನಡುವೆ ಸಂಚರಿಸಲಿದೆ.&lt;img&gt;&lt;p&gt;ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೊಸದಾಗಿ ಆರಂಭಗೊಂಡ ನೂತನ ಸಾರಿಗೆ ಬಸ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಇವರ ಸೂಚನೆಯಂತೆ ವಿಜಯಪುರದಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳ ಆಲಮಟ್ಟಿ ಉದ್ಯಾನವನಕ್ಕೆ ನೂತನ ಸಾರಿಗೆಯನ್ನು ಆರಂಭಗೊಳಿಸಲಾಗಿದೆ.&lt;/p&gt;&lt;img&gt;&lt;p&gt;ಈ ಸಾರಿಗೆಯು ಪ್ರತಿದಿನ ಆರು ಸರತಿಯಲ್ಲಿ ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೋಗಿ ಬರಲಿದೆ. ಮೊದಲನೇ ಪಾಳಿ ಬೆಳಗ್ಗೆ 10 ಗಂಟೆಗೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಕೇಂದ್ರ ಬಸ್ ನಿಲ್ದಾಣದಿಂದ ಆರಂಭಗೊಳ್ಳಲಿದೆ. ಆಲಮಟ್ಟಿಯ ಉದ್ಯಾನವನದಿಂದ ಕೊನೆಯ ಬಸ್ ರಾತ್ರಿ 8.20ಕ್ಕೆ ಮರಳಿ ವಿಜಯಪುರಕ್ಕೆ ಬಸ್ ಆಗಮಿಸಲಿದೆ.&lt;/p&gt;&lt;img&gt;&lt;p&gt;ಬಸ್&zwnj;ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರಾದ ಎಂಬಿ ಪಾಟೀಲ್, ಪ್ರೇಕ್ಷಣೀಯ ಸ್ಥಳಗಳಿಗೆ ಹೊಸದಾಗಿ ತನ್ನ ಸಂಚಾರ ಆರಂಭಿಸಲಿರುವ ಈ ಬಸ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಲಮಟ್ಟಿ ಡ್ಯಾಂ ಬಗ್ಗೆ ಮಹಾರಾಷ್ಟ್ರದ ವಾದಕ್ಕೆ ಅರ್ಥವಿಲ್ಲ: ಸಚಿವ ಎಂ.ಬಿ.ಪಾಟೀಲ್&zwnj;&lt;/strong&gt;&lt;/p&gt;&lt;img&gt;&lt;p&gt;ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಕೆಕೆಆರ್&zwnj;ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ವಿಜಯಪುರ ಮೂರನೇ ಘಟಕದ ವ್ಯವಸ್ಥಾಪಕ ಎಸ್.ಎಂ.ವಾಲೀಕಾರ, ಸಹಾಯಕ ಸಂಚಾರ ವ್ಯವಸ್ಥಾಪಕ ಜಾನಪ್ಪ ಹುಗ್ಗೆಣ್ಣನವರ, ಪ್ರವಾಸೋದ್ಯಮ ಇಲಾಖೆ ಅನೀಲಕುಮಾರ ಬಣಜಿಗೇರ, ಮುಖಂಡೆ ಮಹಾದೇವಿ ಗೋಕಾಕ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೃಷ್ಣಾ ಯೋಜನೆ-3: ಆಲಮಟ್ಟಿ ಡ್ಯಾಂ 524 ಮೀ.ಗೆ ಎತ್ತರಿಸಲು ಸರ್ಕಾರ ನಿರ್ಧಾರ, ಎಕರೆಗೆ ₹40 ಲಕ್ಷ ಪರಿಹಾರ!&lt;/strong&gt;&lt;/p&gt;&lt;p&gt;ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ನೂತನ ಬಸ್ ಸೇವೆ ಆರಂಭಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಆವರಣದಲ್ಲಿನ ಉದ್ಯಾನವನ, ಹಾಗೂ ಈಚೆಗಷ್ಟೇ ಲೋಕಾರ್ಪಣೆಗೊಳಿಸಿರುವ ಜಲಉದ್ಯಾನವನ (ವಾಟರ್ ಪಾರ್ಕ್)ಕ್ಕೆ ತೆರಳಲು ವಿಜಯಪುರದಿಂದ ಬಸ್ ಸೇವೆಗಳನ್ನು ಆರಂಭಿಸಲಾಗಿದೆ.ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ವಿಜಯಪುರ ನಗರದ ಕಿತ್ತೂರ&hellip; pic.twitter.com/lH4wpxEV6J&lt;/p&gt;&lt;p&gt;&mdash; M B Patil (@MBPatil) April 21, 2026&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/direct-bus-from-vijayapura-city-to-almatti-rock-garden-water-park-timings-are-as-follows-mrq-ig362nr"/>
        </item>
        <item>
            <title><![CDATA[ಹುಬ್ಬಳ್ಳಿ ಲವ್‌ ಜಿಹಾದ್ ಪ್ರಕರಣ: ಸಮೀರ್‌ ಮೊಬೈಲ್ ನಲ್ಲಿ ಹಲವು ವಿಡಿಯೋ, ಹಿಂದೂ ಯುವತಿಯರ ಸಂಪರ್ಕಕ್ಕೆ ಅಕ್ಕನೇ ಸಾಥ್!]]></title>
            <link>https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3</link>
            <guid isPermaLink="true">https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3</guid>
            <pubDate>Sat, 04 Apr 2026 09:23:29 +0530</pubDate>
            <description><![CDATA[ಹುಬ್ಬಳ್ಳಿಯ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾ ವಿರುದ್ಧ ಲವ್&zwnj; ಜಿಹಾದ್&zwnj; ಆರೋಪ ಕೇಳಿಬಂದಿದ್ದು, ಆತ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಖುಷಿ ಎಂಬ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ, ಹಲವು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಆತನ ಮೊಬೈಲ್&zwnj;ನಲ್ಲಿದ್ದ ವಿಡಿಯೋಗಳು ಸಾಕ್ಷಿಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knb9xjmmm3810ys3g25brn5c,imgname-hubballi-love-jihad-case--1--1775274740372.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿಯಲ್ಲಿ ಮತ್ತೆ ಲವ್&zwnj; ಜಿಹಾದ್&zwnj; ಆರೋಪ ಸದ್ದು ಮಾಡಿದ್ದು, ವಿಜಯನಗರದ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾನ ಜಾತಕ ಒಂದೊಂದಾಗಿ ಹೊರಬರುತ್ತಿದೆ. ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್&zwnj; ಜಿಹಾದ್&zwnj;ಗೆ ಯತ್ನಿಸಿದ್ದಾನೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಹಲವು ವಿಡಿಯೋಗಳು ಆತನ ಮೊಬೈಲ್&zwnj;ನಲ್ಲಿ ಲಭ್ಯವಾಗಿದೆ. ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ, ದೌರ್ಜನ್ಯ ಮತ್ತು ಬಲವಂತದ ಗರ್ಭಪಾತಗಳ ಆರೋಪಗಳು ಆತನ ಮೇಲೆ ಕೇಳಿಬಂದಿದೆ.&lt;/p&gt;&lt;p&gt;ವಿಜಯನಗರದ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾ ತನ್ನ ಸಂಪರ್ಕ ವಲಯದ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್&zwnj; ಜಿಹಾದ್ ನಡೆಸಿದ್ದು. ಅವನ ಮೊಬೈಲ್ ಫೋನ್&zwnj;ನಲ್ಲಿ ಹಲವು ಯುವತಿಯರೊಂದಿಗೆ ನಡೆದ ವಾಟ್ಸಪ್ ಚಾಟ್&zwnj;ಗಳು, ಫೋಟೋಗಳು ಮತ್ತು ಕೆಲವು ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;&lt;h2&gt;ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆ ನೀಡಿರುವ ಸಮೀರ್&lt;/h2&gt;&lt;p&gt;ಖುಷಿ ಕಲಬುರಗಿ ಎಂಬ ಯುವತಿಯೊಂದಿಗೆ ಸಮೀರ್ ಮುಲ್ಲಾ ಹೊಂದಿದ್ದ ಸಂಬಂಧವು ಈ ಪ್ರಕರಣದ ಕೇಂದ್ರಬಿಂದುವಾಗಿದೆ. ಖುಷಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಇದೆ. ಇದಲ್ಲದೆ, ಪ್ರತೀ ಬಾರಿ ದೌರ್ಜನ್ಯ ನಂತರ ಗರ್ಭಪಾತ ಮಾಡಲು ಬಲವಂತ ಮಾಡುತ್ತಿದ್ದನೆಂದು ಹೇಳಲಾಗಿದೆ. ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.&lt;/p&gt;&lt;p&gt;ಮಾತ್ರೆಗಳನ್ನು ಸೇವಿಸಲು ಖುಷಿ ನಿರಾಕರಿಸಿದಾಗ, ಸಮೀರ್ ಮುಲ್ಲಾ ಒತ್ತಡ ಹೇರುತ್ತಿದ್ದನು ಮತ್ತು ಬೆದರಿಕೆ ಹಾಕುತ್ತಿದ್ದನು ಎಂಬುದು ಆರೋಪದ ಭಾಗವಾಗಿದೆ. ಮಾತ್ರೆ ತೆಗೆದುಕೊಳ್ಳುವ ದೃಶ್ಯವನ್ನು ವಿಡಿಯೋ ರೂಪದಲ್ಲಿ ದಾಖಲಿಸಿ ತನಗೆ ಕಳುಹಿಸುವಂತೆ ಕೂಡ ಸೂಚಿಸುತ್ತಿದ್ದನೆಂದು ಹೇಳಲಾಗಿದೆ. ಈ ರೀತಿಯ ವಿಡಿಯೋಗಳು ಇದೀಗ ಬಹಿರಂಗಗೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ&lt;/p&gt;&lt;h2&gt;ತಂಗಿಯ ಸಾಥ್, &amp;nbsp;ಸಮೀರ್ ಗೆ ಹುಡುಗಿರ ಪರಿಚಯ&lt;/h2&gt;&lt;p&gt;ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಸಮೀರ್ ಮುಲ್ಲಾಗೆ ಯುವತಿಯರನ್ನು ಪರಿಚಯ ಮಾಡಿಸುತ್ತಿದ್ದವರಲ್ಲಿ ಅವನ ಸಹೋದರಿಯ ಪಾತ್ರವಿದೆ ಎಂಬ ಆರೋಪ. ತೈಸಿಮ್ ಮುಲ್ಲಾ ಎಂಬ ಸಮೀರ್&zwnj;ನ ಸಹೋದರಿ, ತನ್ನ ಪರಿಚಯದ ಯುವತಿಯರನ್ನು ಅವನಿಗೆ ಪರಿಚಯಿಸುತ್ತಿದ್ದಳು ಎನ್ನಲಾಗಿದೆ. ಖುಷಿ ಕಲಬುರಗಿಯನ್ನು ಸಹ ತೈಸಿಮ್ ಮುಲ್ಲಾ ಸಮೀರ್&zwnj;ಗೆ ಪರಿಚಯ ಮಾಡಿಕೊಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಆರಂಭದಲ್ಲಿ ಖುಷಿ ಏರೋಬಿಕ್ ಕ್ಲಾಸ್&zwnj;ಗೆ ಹಾಜರಾಗುತ್ತಿದ್ದಳು. ಇದೇ ಸಂದರ್ಭದಲ್ಲಿಯೇ ಪರಿಚಯ ಬೆಳೆಯಿತು. ಬಳಿಕ ಖುಷಿಯನ್ನು ಪಾರ್ಟಿಗಳು, ಹೋಟೆಲ್&zwnj;ಗಳಿಗೆ ಕರೆದುಕೊಂಡು ಹೋಗಿ, ಸಮೀರ್ ಜೊತೆ ಸಮಯ ಕಳೆಯುವಂತೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಮೂಲಕ ಇಬ್ಬರ ಮಧ್ಯೆ ಸಂಬಂಧ ಬೆಳೆಸಲು ತೈಸಿಮ್ ಮುಲ್ಲಾ ಸಹಕರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೈಸಿಮ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಖುಷಿ ಸೇರಿಕೊಂಡಿರುವ ವಿಡಿಯೋಗಳು ಕೂಡ ಇದೀಗ ಹೊರಬಂದಿವೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಲವ್&zwnj; ಜಿಹಾದ್&zwnj;ಗೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಅಮಾಯಕ ಹಿಂದೂ ಯುವತಿಯರನ್ನು ಮೋಸದ ಬಲೆಗೆ ಸಿಲುಕಿಸುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.&lt;/p&gt;&lt;p&gt;ಸಮೀರ್&zwnj;ನ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದರೆ, ನನ್ನ ಸಹೋದರನ ಮೇಲೆ ಸುಳ್ಳು ಆರೋಪ ಮಾಡಿ ಮನೆಗೆ ಬಂದು ಅವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಿಡ್ನ್ಯಾಪ್&zwnj; ಮಾಡಿದ್ದಾರೆ ಎಂದು ಸಮೀರ್&zwnj; ಸಹೋದರಿ ತೈಸಿಮ್&zwnj; ಅಶೋಕ ನಗರ ಪೊಲೀಸ್&zwnj; ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3"/>
        </item>
        <item>
            <title><![CDATA[ಅಗಸ ನೀರಲ್ಲಿದ್ರೂ ಬಾಯಾರಿಕೆ ಆದಂತೆ ಕೊಟ್ಟೂರು ಜನ್ರ ಸ್ಥಿತಿ,  ನೀರಿದ್ರೂ ಬಳಕೆ ಬರ! ವಾರಕ್ಕೊಮ್ಮೆ ನೀರು!]]></title>
            <link>https://kannada.asianetnews.com/karnataka-districts/water-scarcity-in-vijayanagaras-kotturu-abundant-resources-zero-supply-rav/articleshow-r3xv9sv</link>
            <guid isPermaLink="true">https://kannada.asianetnews.com/karnataka-districts/water-scarcity-in-vijayanagaras-kotturu-abundant-resources-zero-supply-rav/articleshow-r3xv9sv</guid>
            <pubDate>Tue, 17 Mar 2026 12:05:48 +0530</pubDate>
            <description><![CDATA[&lt;p&gt;Kottur drinking water crisis ಬನ್ನಿಗೋಳ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ, ನಿರಂತರ ವಿದ್ಯುತ್ ಪೂರೈಕೆಯಾಗದ ಕಾರಣ ಕೊಟ್ಟೂರು ಪಟ್ಟಣಕ್ಕೆ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಈ ವಿದ್ಯುತ್ ಸಮಸ್ಯೆಯಿಂದಾಗಿ 40 ಸಾವಿರಕ್ಕೂ ಹೆಚ್ಚು ನಿವಾಸಿಗಳು ತೀವ್ರ ನೀರಿನ ಅಭಾವ ಎದುರಿಸುತ್ತಿದ್ದಾರೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkx7w5mw9r5bsynjn8sk5ddf,imgname-1-1773729093276.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಿ.ಸೋಮಶೇಖರ&lt;/strong&gt;&lt;/p&gt;&lt;p&gt;&lt;strong&gt;ಕೊಟ್ಟೂರು: &lt;/strong&gt;ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಹಗರಿಬೊಮ್ಮನಹಳ್ಳಿ ತಾಲೂಕು ಬನ್ನಿಗೋಳ ಜಲಾಶಯದಲ್ಲಿ ತಿಂಗಳು ಪೂರ್ತಿಯಾಗುವಷ್ಟು ನೀರಿದ್ದರೂ ಕೊಟ್ಟೂರು ಪಟ್ಟಣಕ್ಕೆ ಸಿಗುವುದೇ ವಾರಕ್ಕೆ ಒಂದು ಬಾರಿ. ಬಳಕೆಗೆ ತೀವ್ರ ಬರ ಉಂಟಾಗಿದೆ.&lt;/p&gt;&lt;p&gt;ಪಟ್ಟಣಕ್ಕೆ ನೀರು ಐದು ಅಥವಾ ಆರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿರುವುದಕ್ಕೆ ನೀರಿನ ಕೊರತೆ ಇಲ್ಲವೇ ಇಲ್ಲ. ವಿದ್ಯುತ್ ಪೂರೈಕೆ ಸಮಸ್ಯೆ ಕಾರಣಕ್ಕಾಗಿ ನಾಗರಿಕರು ನೀರಿನ ತೀವ್ರ ಬಗೆಯ ತೊಂದರೆ ಅನುಭವಿಸುವಂತಾಗಿದೆ.&lt;/p&gt;&lt;p&gt;ತಾಲೂಕಿನ 14 ಹಳ್ಳಿಗಳನ್ನು ಸಮಸ್ಯಾತ್ಮಾಕಗಳೆಂದು ತಾಲೂಕು ಆಡಳಿತ ಗುರುತಿಸಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರನ್ನು ಪಡೆಯಲು ಬೋರ್&zwnj;ವೆಲ್ ಕೊರೆಸುವುದು ಸೇರಿದಂತೆ ಇತರ ಯೋಜನೆಗಳನ್ನು ಕೈಗೊಳ್ಳಬಹುದು ಎಂದು ಟಾಸ್ಕ್ ಫೋರ್ಸ್ ಸಮಿತಿಗೆ ವರದಿ ಸಲ್ಲಿಕೆಯಾಗಿದೆ.&lt;/p&gt;&lt;p&gt;ಬನ್ನಿಗೋಳ ಬಳಿಯ ತುಂಗಭದ್ರಾ ನದಿ ಹಿನ್ನೀರು ಪ್ರದೇಶದ ಜಾಕ್&zwnj;ವೆಲ್&zwnj;ನಿಂದ ಕೊಟ್ಟೂರಿಗೆ ನೀರು ಸರಬರಾಜು ಆಗುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಸುಲಲಿತ ನೀರು ಪೂರೈಕೆಗೆ 18 ತಾಸುಗಳ ನಿರಂತರ ವಿದ್ಯುತ್ ಪೂರೈಕೆ ಅಗತ್ಯವಿದೆ. ಆದರೆ ಕಾರಣ ಕೇಳಿದರೆ ನೀರು ಪಂಪ್&zwnj; ಮಾಡಲು ವಿದ್ಯುತ್&zwnj; ತೊಂದರೆ ಇದೆ ಎಂದು ಪಪಂನವರು ಹೇಳುತ್ತಿದ್ದಾರೆ. ಇತ್ತ ಜೆಸ್ಕಾಂನವರು 15 ದಿನದಿಂದಲೂ ಲೋ ವೋಲ್ಟೇಜ್&zwnj; ಸಮಸ್ಯೆಯ ಕಾರಣ ತೋರಿಸಿ ಇಲ್ಲಿನ ಜನರಿಗೆ ಬಾಯಾರಿಕೆಯಾಗುವಂತೆ ಮಾಡಿದ್ದಾರೆ.&lt;/p&gt;&lt;p&gt;ಕುಡಿಯುವ ನೀರಿಗೆ ಸರಿಯಾದ ವಿದ್ಯುತ್ ಪೂರೈಕೆಯಾಗಬೇಕಿದೆ. ಈ ಬಗೆಯ ವಿದ್ಯುತ್&zwnj; ತೊಂದರೆ ಬಗ್ಗೆ ವಿಚಾರಿಸಲು ಸಂಬಂಧಪಟ್ಟ ವಿಭಾಗೀಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಮ್ಮದೇನೋ ಸಮಸ್ಯೆ ಇಲ್ಲವೇ ಇಲ್ಲ ಎಂದು ಹೇಳುತ್ತಾರೆ. ಇಷ್ಟರಲ್ಲೇ ಮತ್ತೊಂದು ಟ್ರಾನ್ಸ್&zwnj;ಫಾರ್ಮರ್&zwnj; ಅಳವಡಿಸಲು ಯೋಜನೆ ರೂಪಿಸಿದ್ದೇವೆ. ಅಲ್ಲಿವರೆಗೂ ಸ್ವಲ್ಪ ವ್ಯತ್ಯಾಸ ಆಗುತ್ತದೆ ಎನ್ನುವ ಸಮಜಾಯಿಸಿ ಉತ್ತರವನ್ನು ಜೆಸ್ಕಾಂ ನೀಡುವುದು ಗಮನಿಸಿದರೆ ಸುಮಾರು 10 ದಿನ ನೀರಿನ ತೊಂದರೆ ಅನುಭವಿಸಬೇಕಿರುವುದು ಅನಿವಾರ್ಯ ಎನ್ನುವಂತಿದೆ. ಕೊಟ್ಟೂರಿಗರಿಗೆ ಬನ್ನಿಗೋಳ ಜಲಾಶಯದಲ್ಲಿ ನೀರಿದ್ದರೂ ವಿದ್ಯುತ್ ಇಲಾಖೆಯ ಅವಕೃಪೆಯಿಂದ ಅಗತ್ಯ ನೀರು ಸಿಗದಂತಾಗಿರುವುದು ನಗ್ನ ಸತ್ಯ.&lt;/p&gt;&lt;p&gt;ಪಟ್ಟಣದ ಅಂದಾಜು 40 ಸಾವಿರಕ್ಕೂ ಅಧಿಕ ಜನರಿಗೆ ಕುಡಿಯುವ ನೀರು ಪೂರೈಸಲು ಪಪಂ ಆಡಳಿತ ಯೋಜನೆ ರೂಪಿಸಿ ಮೊದಲು 3 ದಿನಕ್ಕೊಮ್ಮೆ, ಬಳಿಕ 5 ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು. ಇದೀಗ ನೀರು ಯಾವಾಗ ಪೂರೈಕೆಯಾದೀತೋ ಎನ್ನುವ ಪ್ರಶ್ನೆಗೆ ಅವರೆಲ್ಲರೂ ವಿದ್ಯುತ್&zwnj; ಲೋವೋಲ್ಟೇಜ್&zwnj; ಕಾರಣ ತೋರಿಸುತ್ತಿರುವುದು ಜನತೆಯಲ್ಲಿ ನಿಜಕ್ಕೂ ಆತಂಕ ಸೃಷ್ಟಿಸಿದೆ. ಬೇಸಿಗೆ ಆರಂಭದಲ್ಲೇ ಈ ಪರಿ ನೀರಿನ ಪರಿತಾಪವಾದರೆ ಮುಂದಿನ ಮೇ ತಿಂಗಳಲ್ಲಿ ನೀರು ಪೂರೈಕೆ ಯಾವ ಹಂತಕ್ಕೆ ತಲುಪುವುದೋ ಎಂದು ಯೋಚಿಸುವಂತಾಗಿದೆ.&lt;/p&gt;&lt;p&gt;ಸಮಸ್ಯೆ ಕಾಣಿಸಬಹುದಾದ ಹಳ್ಳಿಗಳು: ಕೊಟ್ಟೂರು ತಾಲೂಕಿನ 14 ಗ್ರಾಪಂಯ 325 ಬೋರ್&zwnj;ವೆಲ್&zwnj;ಗಳಲ್ಲಿ 183 ಬೋರ್&zwnj;ವೆಲ್&zwnj;ಗಳು ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿವೆ. 42 ಬೋರ್&zwnj;ಗಳು ಸ್ಥಗಿತಗೊಂಡಿವೆ. ಚಿರಿಬಿ, ದೂಪದಹಳ್ಳಿ, ಕೋಗಳಿ, ಉಜ್ಜಯನಿ, ತಿಮ್ಮಲಾಪುರ, ತೂಲಾಹಳ್ಳಿ, ಹನುಮನಹಳ್ಳಿ, ನಿಂಬಳಗೇರಿ, ಗಾಣಗಟ್ಟೆ, ಹ್ಯಾಳ್ಯಾ, ಮಲ್ಲನಾಯಕನಹಳ್ಳಿ, ಮೋತಿಕಲ್ ತಾಂಡ, ಲೊಟ್ಟನಕೆರೆ, ಮೂರ್ತಿನಾಯಕನಹಳ್ಳಿ, ಹಾರಕನಾಳು.&lt;/p&gt;&lt;p&gt;ಕೊಟ್ಟೂರು ಪಟ್ಟಣದ ನೀರು ಸರಬರಾಜು ಆಗುವ ಬನ್ನಿಗೋಳ ಜಾಕ್&zwnj;ವೆಲ್, ಬೆಣಕಲ್ಲು ಪಂಪ್ ಭಾಗದಲ್ಲಿ ವಿದ್ಯುತ್ ತೊಂದರೆಯಾಗದಂತೆ ಜೆಸ್ಕಾಂ ಅಧಿಕಾರಿಗಳು ಗಮನ ಹರಿಸಿಬೇಕು. ನಿರಂತರ ವಿದ್ಯುತ್ ಪೂರೈಕೆಗೆ ಅಡಚಣೆ ಆಗುವ ಎಲ್ಲ ಬಗೆಯ ತೊಂದರೆಗಳನ್ನು ಅವರ ನಿವಾರಿಸಬೇಕು ಎನ್ನುತ್ತಾರೆ ಕೊಟ್ಟೂರು ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ.&lt;/p&gt;&lt;p&gt;ಕೊಟ್ಟೂರು ತಾಲೂಕಿನ ಗ್ರಾಮಗಳಲ್ಲಿ ಸದ್ಯಕ್ಕೆ ನೀರಿನ ತೊಂದರೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ತೊಂದರೆ ಮುನ್ನವೇ ಸಮಸ್ಯೆಯನ್ನು ನಿವಾರಿಸಲು ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎನ್ನುತ್ತಾರೆ ನಮ್ಮ ಕರವೇ ತಾಲೂಕು ಅಧ್ಯಕ್ಷ ಬಸವರಾಜ್ ರಾಂಪುರ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/water-scarcity-in-vijayanagaras-kotturu-abundant-resources-zero-supply-rav/articleshow-r3xv9sv"/>
        </item>
        <item>
            <title><![CDATA[ಕಾರ್‌, ಸರ್ಕಾರಿ ಬಸ್, ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ: ರಸ್ತೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿ]]></title>
            <link>https://kannada.asianetnews.com/gallery/karnataka-districts/vijayanagar-hosapete-horrific-tragedy-near-hospet-fatal-series-of-accidents-four-dead-25-injured-mrq-sqb69id</link>
            <guid isPermaLink="true">https://kannada.asianetnews.com/gallery/karnataka-districts/vijayanagar-hosapete-horrific-tragedy-near-hospet-fatal-series-of-accidents-four-dead-25-injured-mrq-sqb69id</guid>
            <pubDate>Sun, 19 Apr 2026 11:28:28 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರ್, ಸರ್ಕಾರಿ ಬಸ್ ಹಾಗೂ ಮೂರು ಬೈಕ್&zwnj;ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpj4q99trssgpp6beahxp58p,imgname-hosapete-accident--2--1776577914170.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರ್, ಸರ್ಕಾರಿ ಬಸ್ ಹಾಗೂ ಮೂರು ಬೈಕ್&zwnj;ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಲಾರಿಯೊಂದು ಕಾರ್, ಸರ್ಕಾರಿ ಬಸ್ ಮತ್ತು ಮೂರು ಬೈಕ್&zwnj;ಗಳಿಗೆ ಡಿಕ್ಕಿ ಹೊಡೆದಿದೆ.&lt;/p&gt;&lt;img&gt;&lt;p&gt;ಬೆಳ್ಳುಳ್ಳಿ ತುಂಬಿಕೊಂಡು ಹರಿಯಾಣದಿಂದ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಮೊದಲಿಗೆ ಕಾರ್&zwnj;ಗೆ ಡಿಕ್ಕಿ ಹೊಡೆದಿದೆ. ನಂತ್ರ ಸರ್ಕಾರಿ ಬಸ್ ಹಾಗೂ ಮೂರು ಬೈಕ್&zwnj;ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಹೊಸಪೇಟೆಯಿಂದ ಚಿತ್ರದುರ್ಗದತ್ತ ತೆರಳುತ್ತಿದ್ದ ಸರ್ಕಾರಿ ಬಸ್&zwnj;ಗೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್&zwnj;ನಲ್ಲಿದ್ದ ಸುಮಾರು 25 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;img&gt;&lt;p&gt;ಈ ಅಪಘಾತ ಸಂಭವಿಸಿದ ಸ್ಥಳದಲ್ಲಿ ಹೆದ್ದಾರಿ ದುರಸ್ತಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೇ ಕಾರಣದಿಂದ ಅಪಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Mysuru: ಅವನನ್ನ ಕೊಂದು ಬಿಡು, ಇಬ್ಬರು ಚೆನ್ನಾಗಿರೋಣ; ಗಂಡನ ಉಸಿರು ನಿಲ್ಲಿಸಿ ಜೈಲು ಸೇರಿದ ಪತ್ನಿ&lt;/strong&gt;&lt;/p&gt;&lt;img&gt;&lt;p&gt;ಅಪಘಾತದ ಪರಿಣಾಮವಾಗಿ ಹೆದ್ದಾರಿಯಲ್ಲಿ ಎರಡೂ ಬದಿಗಳಲ್ಲಿ ಸುಮಾರು ಮೂರು ಕಿಲೋ ಮೀಟರ್&zwnj;ವರೆಗೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.&lt;/p&gt;&lt;p&gt;ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಟ್ರಾಫಿಕ್ ತಿಳಿಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: 50 ಮಹಿಳೆಯರೊಂದಿಗೆ ದೈಹಿಕ ಸಂಪರ್ಕ? ಉದ್ಯಮಿ ಕೃಪಲಾನಿ ಕರಾಳ ಮುಖ ಬಯಲು!&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/vijayanagar-hosapete-horrific-tragedy-near-hospet-fatal-series-of-accidents-four-dead-25-injured-mrq-sqb69id"/>
        </item>
        <item>
            <title><![CDATA[ಮಳೆಗಾಲಕ್ಕೂ ಮುನ್ನ ತುಂಗಭದ್ರಾ ಜಲಾಶಯ ಸೇಫ್; ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಯಶಸ್ವಿ]]></title>
            <link>https://kannada.asianetnews.com/gallery/state/vijayanagara-tungabhadra-dam-safety-ensured-all-33-new-crest-gates-successfully-installed-sat-tlb93us</link>
            <guid isPermaLink="true">https://kannada.asianetnews.com/gallery/state/vijayanagara-tungabhadra-dam-safety-ensured-all-33-new-crest-gates-successfully-installed-sat-tlb93us</guid>
            <pubDate>Sun, 26 Apr 2026 10:52:23 +0530</pubDate>
            <description><![CDATA[&lt;p&gt;ಆಗಸ್ಟ್ 2024ರಲ್ಲಿ ಗೇಟ್ ಕಿತ್ತುಹೋಗಿ ನೀರು ಸೋರಿಕೆಯಾದ ನಂತರ, ತುಂಗಭದ್ರಾ ಜಲಾಶಯದ ಎಲ್ಲಾ 33 ಶಿಥಿಲಗೊಂಡಿದ್ದ ಗೇಟ್&zwnj;ಗಳನ್ನು ಬದಲಾಯಿಸಲು ನಿರ್ಧರಿಸಲಾಯಿತು. ₹52 ಕೋಟಿ ವೆಚ್ಚದ ಈ ಬೃಹತ್ ಯೋಜನೆಯಡಿ, ನೂತನ ಗೇಟ್&zwnj;ಗಳ ಅಳವಡಿಕೆ ಕಾರ್ಯವು ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq438tjnbj4d47gvzxsfh5kf,imgname-tungabhadra-reservoir-1777180371541.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಗಸ್ಟ್ 2024ರಲ್ಲಿ ಗೇಟ್ ಕಿತ್ತುಹೋಗಿ ನೀರು ಸೋರಿಕೆಯಾದ ನಂತರ, ತುಂಗಭದ್ರಾ ಜಲಾಶಯದ ಎಲ್ಲಾ 33 ಶಿಥಿಲಗೊಂಡಿದ್ದ ಗೇಟ್&zwnj;ಗಳನ್ನು ಬದಲಾಯಿಸಲು ನಿರ್ಧರಿಸಲಾಯಿತು. ₹52 ಕೋಟಿ ವೆಚ್ಚದ ಈ ಬೃಹತ್ ಯೋಜನೆಯಡಿ, ನೂತನ ಗೇಟ್&zwnj;ಗಳ ಅಳವಡಿಕೆ ಕಾರ್ಯವು ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ.&lt;/p&gt;&lt;img&gt;&lt;p&gt;&lt;strong&gt;ವಿಜಯನಗರ (ಏ.26): ತುಂ&lt;/strong&gt;ಗಭದ್ರಾ ಜಲಾಶಯದ 33 ನೂತನ ಗೇಟ್&zwnj; ಅಳವಡಿಕೆ ಕಾರ್ಯ ಶನಿವಾರ ಸಂಪೂರ್ಣಗೊಂಡಿದೆ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಕುರಿತು ಮಾತನಾಡಿದ ಅವರು, ನೂತನ ಗೇಟ್&zwnj; ಅಳವಡಿಕೆ ಕಾರ್ಯ ಡಿ.24, 2025 ರಿಂದ ಪ್ರಾರಂಭವಾಗಿದ್ದು, ಏ.25ಕ್ಕೆ ಸಂಪನ್ನಗೊಂಡಿದೆ. ಇನ್ನೂ ಸಣ್ಣಪುಟ್ಟ ಕೆಲಸಗಳಿದ್ದು, ಮೇ ಅಂತ್ಯದವರೆಗೆ ಪೂರ್ಣಗೊಳ್ಳಲಿದೆ ಎಂದರು.ಆಗಸ್ಟ್ 2024ರ ಮಧ್ಯರಾತ್ರಿ ತುಂಗಭದ್ರಾ ಜಲಾಶಯದ ಗೇಟ್ ನಂ.19 ನೀರಿನ ರಭಸಕ್ಕೆ ಕಿತ್ತು ಹೋದ ಪರಿಣಾಮ 45,000 ಕ್ಯೂಸಕ್&zwnj; ನೀರು ಸೋರಿಕೆ ಆಗಿತ್ತು.&lt;/p&gt;&lt;img&gt;&lt;p&gt;ತಕ್ಷಣ ಎಚ್ಚೆತ್ತ ತುಂಗಭದ್ರಾ ಮಂಡಳಿ ಅಧಿಕಾರಿಗಳು ಜಲಾಶಯ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರನ್ನು ಕರೆಸಿ ಗೇಟ್ ನಂ.19ಕ್ಕೆ ಸ್ಟಾಪ್ ಲಾಕ್ ಅಳವಡಿಸಿ ಪೋಲಾಗುತ್ತಿದ್ದ ನೀರನ್ನು ತಡೆಯುವಲ್ಲಿ ಯಶಸ್ವಿಯಾದರು.&lt;/p&gt;&lt;img&gt;&lt;p&gt;ತಜ್ಞ ಕನ್ನಯ್ಯ ನಾಯ್ಡು ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್&zwnj; ಪರಿಶೀಲಿಸಿ ಜಲಾಶಯದ ಗೇಟ್&zwnj;ಗಳು ಶಿಥಿಲಗೊಂಡಿದ್ದು, ಜಲಾಶಯದ ನೀರನ್ನು ತಡೆಯುವ ಸಾಮರ್ಥ್ಯ ಗೇಟ್&zwnj;ಗಳು ಕಳೆದುಕೊಂಡಿವೆ ತಕ್ಷಣವೇ ಬದಲಿಸಬೇಕು ಎಂದು ಕರ್ನಾಟಕ ಹಾಗೂ ಆಂಧ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು.&lt;/p&gt;&lt;img&gt;&lt;p&gt;ಕನ್ನಯ್ಯ ನಾಯ್ಡು ಸಲಹೆ ಗಂಭೀರವಾಗಿ ಪರಿಗಣಿಸಿದ ತುಂಗಭದ್ರಾ ಮಂಡಳಿಯು ಮೇ. 2025ರಲ್ಲಿ ತುಂಗಭದ್ರಾ ಜಲಾಶಯದ ನೂತನ ಗೇಟ್&zwnj; ಅಳವಡಿಸುವ ನಿಟ್ಟಿನಲ್ಲಿ ₹52 ಕೋಟಿ ಟೆಂಡರ್ ಕರೆದು ಗುಜರಾತ್ ಮೂಲದ ಕಂಪನಿಗೆ ಗೇಟ್ ಅಳವಡಿಸುವ ಟೆಂಡರ್ ನೀಡಿದ್ದರು.&lt;/p&gt;&lt;img&gt;&lt;p&gt;ಜೂನ್ 2025ರಲ್ಲಿ ಗೇಟ್ ಬದಲಿಸುವ ನಿಟ್ಟಿನಲ್ಲಿ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಒಂದುವರೆ ವರ್ಷ ಅವಧಿ ನೀಡಲಾಯಿತು, ಅಂದರೆ, ಜೂನ್ 2025 ರಿಂದ ಡಿಸೆಂಬರ್ 2026ರವರೆಗೆ ಗೇಟ್&zwnj; ಅಳವಡಿಕೆ ಕಾರ್ಯ ಮುಗಿಸಬೇಕು ಎಂದು ಗುತ್ತಿಗೆದಾರನೊಂದಿಗೆ ಒಪ್ಪಂದ ಮಾಡಲಾಯಿತು.&lt;/p&gt;&lt;img&gt;&lt;p&gt;ಜನವರಿ ತಿಂಗಳಲ್ಲಿ ಒಂದು ಗೇಟ್&zwnj; ಸಹ ಅಳವಡಿಕೆ ಮಾಡದ ಕಾರಣ ಕನ್ನಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಗೇಟ್ ಅಳವಡಿಕೆ ಕಾರ್ಯಕ್ಕೆ ಮೂರು ಪ್ರತ್ಯೇಕ ತಂಡ ರಚಿಸಿ ಒಂದು ತಂಡದಿಂದ ಗೇಟ್ ನಿರ್ಮಾಣ, ಇನ್ನೊಂದು ತಂಡ ಹಳೇ ಗೇಟ್&zwnj; ತೆರವು ಕಾರ್ಯಾಚರಣೆ, ಮೂರನೇ ತಂಡದಿಂದ ನೂತನ ಗೇಟ್&zwnj; ಅಳವಡಿಕೆ ಕಾರ್ಯ ಮಾಡಲಾಯಿತು.&lt;/p&gt;&lt;img&gt;&lt;p&gt;ಈ ಮೂರು ತಂಡದಲ್ಲಿ ಒಟ್ಟು 120 ಜನರು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದರು. ಇದಲ್ಲದೆ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ, ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ತುಂಗಭದ್ರಾ ಮಂಡಳಿ ಇಂಜಿನಿಯರ್ ಈ ಕಾರ್ಯದಲ್ಲಿ ಭಾಗಿಯಾಗಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/vijayanagara-tungabhadra-dam-safety-ensured-all-33-new-crest-gates-successfully-installed-sat-tlb93us"/>
        </item>
        <item>
            <title><![CDATA[ವಿಜಯನಗರ: ಚೆನ್ನೈ ವ್ಯಕ್ತಿಗೆ ಕಡಿಮೆ ಬೆಲೆಗೆ ಚಿನ್ನದ ಆಮಿಷ; 30 ಲಕ್ಷ ರೂಪಾಯಿ ವಂಚಿಸಿದ್ದ ನಕಲಿ ಬಂಗಾರ ವಂಚಕರು ಅರೆಸ್ಟ್]]></title>
            <link>https://kannada.asianetnews.com/karnataka-districts/vijayanagara-fake-gold-scam-busted-gang-arrested-for-cheating-chennai-man-of-rs-30-lakh-rav/articleshow-x1dh3h6</link>
            <guid isPermaLink="true">https://kannada.asianetnews.com/karnataka-districts/vijayanagara-fake-gold-scam-busted-gang-arrested-for-cheating-chennai-man-of-rs-30-lakh-rav/articleshow-x1dh3h6</guid>
            <pubDate>Sun, 22 Mar 2026 12:13:55 +0530</pubDate>
            <description><![CDATA[&lt;p&gt;ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಚೆನ್ನೈ ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಕೂಡ್ಲಿಗಿ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್. ಘಟನೆ ನಡೆದ ಒಂದು ವಾರದಲ್ಲಿಯೇ ಆರೋಪಿಗಳನ್ನು ಬಂಧಿಸಿ, ಅವರಿಂದ 29.50 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳುವಲ್ಲಿ ಖಾನಾಹೊಸಳ್ಳಿ ಪೊಲೀಸರು ಯಶಸ್ವಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kma46z3aewccs89ctjg11bfb,imgname-whatsapp-image-2026-03-22-at-10.55.50-am-1774161460330.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ (ಮಾ.22): &lt;/strong&gt;ಕಡಿಮೆ ಬೆಲೆಗೆ ಬಂಗಾರ ನೀಡುತ್ತೇವೆ ಎಂದು ನಂಬಿಸಿ ಚೆನ್ನೈ ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಘಟನೆ ನಡೆದ ಒಂದೇ ವಾರದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;ಕೂಡ್ಲಿಗಿ ಮೂಲದ ಆರೋಪಿಗಳ ಬಂಧನ&lt;/h2&gt;&lt;p&gt;ಬಂಧಿತರನ್ನು ಕೂಡ್ಲಿಗಿ ತಾಲೂಕಿನ ಸುರೇಶ ಮತ್ತು ಸೋಮಣ್ಣ ಎಂದು ಗುರುತಿಸಲಾಗಿದೆ. ಈ ಖದೀಮರು ಎಷ್ಟು ಚಲಾಕಿಗಳೆಂದರೆ ಇಲ್ಲಿನ ಜನರಿಗೆ ವಂಚಿಸಿದರೆ ಸಮಸ್ಯೆ ಎಂದು ಹೊರರಾಜ್ಯದವರಿಗೆ ಟೋಪಿ ಹಾಕುವ ಮಸ್ತ್ ಪ್ಲಾನ್ ಮಾಡಿದ್ದಾರೆ ಅದರಂತೆ ತಮಿಳುನಾಡಿನ ಚೆನ್ನೈ ಮೂಲದ ಗುತ್ತಿಗೆದಾರ ಜಿ.ಕುಮಾರ ಎಂಬುವವರಿಗೆ ಗಾಳ ಹಾಕಿ ವಂಚನೆಯ ಜಾಲಕ್ಕೆ ಕೆಡವಿದ್ದರು. ಬಂಧಿತರಿಂದ ಪೊಲೀಸರು ಬರೋಬ್ಬರಿ 29.50 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h3&gt;ಬಂಗಾರದ ಆಸೆಗೆ ಚೆನ್ನೈನಿಂದ ಬಂದಿದ್ದ ವ್ಯಕ್ತಿಗೆ ಶಾಕ್&lt;/h3&gt;&lt;p&gt;ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ದರಕ್ಕೆ ಚಿನ್ನ ಕೊಡಿಸುವುದಾಗಿ ನಂಬಿಸಿದ್ದ ಆರೋಪಿಗಳು, ಕುಮಾರ ಅವರನ್ನು ಕೂಡ್ಲಿಗಿಯ ಕ್ಯಾಸನಕೆರೆ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ಚಿನ್ನದ ಆಸೆ ಲಕ್ಷ ಲಕ್ಷ ನಗದು ಸಮೇತ ಬಂದಿದ್ದ ಚೆನ್ನೈ ಮೂಲದ ಆಸಾಮಿ. ಪಬ್ಲಿಕ್&zwnj;ನಲ್ಲಿ ಕೊಟ್ಟರೆ ತೊಂದರೆಯಾಗುತ್ತೆ ನಿರ್ಜನ ಪ್ರದೇಶದಲ್ಲಿ ಚಿನ್ನ ನೀಡುತ್ತೇವೆ ಎಂದು ನಾಟಕವಾಡಿ, ಅವರಿಂದ 30 ಲಕ್ಷ ರೂಪಾಯಿ ನಗದು ಹಣ ಪಡೆದುಕೊಂಡು ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದರು.&lt;/p&gt;&lt;h3&gt;ಖದೀಮರನ್ನ ವಾರದಲ್ಲೇ ಬೇಟೆಯಾಡಿದ ಖಾನಾಹೊಸಳ್ಳಿ ಪೊಲೀಸರು&lt;/h3&gt;&lt;p&gt;ವಂಚನೆಗೆ ಒಳಗಾದ ಕುಮಾರ ಅವರು ನೀಡಿದ ದೂರಿನ ಮೇರೆಗೆ ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಕೇವಲ ಒಂದು ವಾರದಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/vijayanagara-fake-gold-scam-busted-gang-arrested-for-cheating-chennai-man-of-rs-30-lakh-rav/articleshow-x1dh3h6"/>
        </item>
        <item>
            <title><![CDATA[ಮತ್ತೊಂದು ಭೀಕರ ರಸ್ತೆ ಅಪಘಾತಕ್ಕೆ ಪೊಲೀಸ್ ಅಧಿಕಾರಿ ಬಲಿ: ಮರಕ್ಕೆ ಡಿಕ್ಕಿ ಹೊಡೆದ ಕಾರು, ಸಿಪಿಐ ರಘುನಾಥ್ ಸಾವು!]]></title>
            <link>https://kannada.asianetnews.com/gallery/state/vijayanagara-cpi-raghunath-dcre-koppal-dies-in-car-accident-musturu-davanagere-border-sat-x1stp5u</link>
            <guid isPermaLink="true">https://kannada.asianetnews.com/gallery/state/vijayanagara-cpi-raghunath-dcre-koppal-dies-in-car-accident-musturu-davanagere-border-sat-x1stp5u</guid>
            <pubDate>Wed, 15 Apr 2026 19:03:43 +0530</pubDate>
            <description><![CDATA[ವಿಜಯನಗರ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ DCRE ಸಿಪಿಐ ರಘುನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆಗೊಂಡ ಕೇವಲ ಎರಡು ದಿನಗಳಲ್ಲಿ, ಹೊಸ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp8mt9frrnbjm9dk83grq8cz,imgname-dcre-cpi-raghunath-passed-away-1776259245560.jpg" type="image/jpeg" height="390" width="690"/>
            <content:encoded><![CDATA[ವಿಜಯನಗರ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ DCRE ಸಿಪಿಐ ರಘುನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆಗೊಂಡ ಕೇವಲ ಎರಡು ದಿನಗಳಲ್ಲಿ, ಹೊಸ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ.&lt;img&gt;&lt;p&gt;&lt;strong&gt;ವಿಜಯನಗರ (ಏ.15): ವಿ&lt;/strong&gt;ಜಯನಗರ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಯೊಬ್ಬರನ್ನು ಬಲಿಪಡೆದಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಸಿಪಿಐ ರಘುನಾಥ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.&lt;/p&gt;&lt;img&gt;&lt;p&gt;ಈ ದುರ್ಘಟನೆಯು ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಯ ಗಡಿ ಭಾಗದಲ್ಲಿರುವ ಮುಸ್ಟೂರು ಮತ್ತು ಕಡಬನಕಟ್ಟೆ ಗ್ರಾಮಗಳ ಮಧ್ಯೆ ಸಂಭವಿಸಿದೆ. ಸಿಪಿಐ ರಘುನಾಥ್ ಅವರು ಚಿತ್ರದುರ್ಗ ಜಿಲ್ಲೆಯಿಂದ ಹೊಸಪೇಟೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಹಠಾತ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಬೇವಿನ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಘುನಾಥ್ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;img&gt;&lt;p&gt;ಮೃತ ರಘುನಾಥ್ ಅವರು ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಡಿಸಿಆರ್&zwnj;ಇ (DCRE) ಘಟಕದ ಸಿಪಿಐ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಶೇಷವೆಂದರೆ, ಕೇವಲ ಮೊನ್ನೆಯಷ್ಟೇ ಅವರು ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆಯಾಗಿದ್ದರು. ಬೆಂಗಳೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಿದ್ಧತೆ ನಡೆಸುತ್ತಿದ್ದ ಅವರು, ಇನ್ನೂ ಅಧಿಕೃತವಾಗಿ ವರದಿ ಮಾಡಿಕೊಂಡಿರಲಿಲ್ಲ. ಆದರೆ, ಬೆಂಗಳೂರಿಗೆ ತೆರಳುವ ಮೊದಲೇ ವಿಧಿಯಾಟ ಬೇರೆಯೇ ಆಗಿತ್ತು. ವರ್ಗಾವಣೆ ಆದೇಶ ಬಂದ ಎರಡೇ ದಿನಗಳಲ್ಲಿ ಈ ದುರ್ಘಟನೆ ನಡೆದಿರುವುದು ಅವರ ಕುಟುಂಬಸ್ಥರು ಮತ್ತು ಪೊಲೀಸ್ ಇಲಾಖೆಯ ಸಹೋದ್ಯೋಗಿಗಳಲ್ಲಿ ತೀವ್ರ ನೋವುಂಟು ಮಾಡಿದೆ.&lt;/p&gt;&lt;img&gt;&lt;p&gt;ರಘುನಾಥ್ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರಿನ ತಾಂತ್ರಿಕ ದೋಷ ಅಥವಾ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಚಿತ್ರದುರ್ಗ ಜಿಲ್ಲೆಯ ಮೂಲದವರಾದ ರಘುನಾಥ್ ಅವರು ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ನಿಧನದಿಂದ ಚಿತ್ರದುರ್ಗದಲ್ಲಿರುವ ಅವರ ಮನೆಯಲ್ಲಿ ಶೋಕ ಸಾಗರವೇ ಆವರಿಸಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಿರಿಯ ಅಧಿಕಾರಿಗಳ ಪ್ರಾಣವನ್ನೂ ಉಳಿಸುತ್ತಿಲ್ಲ ಎಂಬುದು ದುರದೃಷ್ಟಕರ ಸಂಗತಿಯಾಗಿದೆ. ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಬೇಕಿದ್ದ ಅಧಿಕಾರಿಯೊಬ್ಬರು ಹೀಗೆ ಅರ್ಧದಲ್ಲೇ ಬದುಕು ಮುಗಿಸಿರುವುದು ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/vijayanagara-cpi-raghunath-dcre-koppal-dies-in-car-accident-musturu-davanagere-border-sat-x1stp5u"/>
        </item>
        <item>
            <title><![CDATA[ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ: ರಸ್ತೆ ಅಪಘಾತವೆಂದು ಬಿಂಬಿಸಲೆತ್ನಿಸಿದ್ದ ಆರೋಪಿಗಳು]]></title>
            <link>https://kannada.asianetnews.com/crime/brother-kills-brother-for-property-accused-tried-to-make-it-look-like-a-road-accident-harapanahalli-vijayanagar-mrq/articleshow-x34h9k8</link>
            <guid isPermaLink="true">https://kannada.asianetnews.com/crime/brother-kills-brother-for-property-accused-tried-to-make-it-look-like-a-road-accident-harapanahalli-vijayanagar-mrq/articleshow-x34h9k8</guid>
            <pubDate>Mon, 16 Mar 2026 09:25:59 +0530</pubDate>
            <description><![CDATA[&lt;p&gt;ಹರಪನಹಳ್ಳಿಯಲ್ಲಿ ಆಸ್ತಿ ವಿಚಾರಕ್ಕಾಗಿ ತಮ್ಮನೇ ತನ್ನ ಸ್ನೇಹಿತನೊಂದಿಗೆ ಸೇರಿ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದರೂ, ಮೃತನ ತಾಯಿಯ ದೂರಿನ ಮೇರೆಗೆ ಪೊಲೀಸರು 24 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kktchh9cagv0cx70wwrd8nwg,imgname-harapanahalli-murder-1773633324332.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ:&amp;nbsp;&lt;/strong&gt; ಆಸ್ತಿ ಆಸೆಗಾಗಿ ಹೆತ್ತ ಅಣ್ಣನನ್ನೇ ತಮ್ಮ ಮತ್ತು ಆತನ ಸ್ನೇಹಿತ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.&lt;/p&gt;&lt;p&gt;ಕೊಲೆ ಮಾಡಿದ ಬಳಿಕ ಇದೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳ ಬಣ್ಣ ಬಯಲಾಗಿದೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಆರೋಪಿಗಳ ಬಂಧನ&lt;/strong&gt;&lt;/h2&gt;&lt;p&gt;ಕೊಲೆಗೀಡಾದ ಯುವಕನನ್ನು ಹರಪನಹಳ್ಳಿ ತಾಲೂಕಿನ ಹಗರಿ ಶಿರನಹಳ್ಳಿ ಗ್ರಾಮದ ಮರಳುಸಿದ್ದೇಶ (26) ಎಂದು ಗುರುತಿಸಲಾಗಿದೆ. ಈತನ ಸ್ವಂತ ತಮ್ಮ ಹಗರಿಶಿರನಹಳ್ಳಿಯ ಪತ್ರಿಗೌಡ (24) ಹಾಗೂ ಈತನ ಸ್ನೇಹಿತ ಕಡಬಗೆರೆ ಗ್ರಾಮದ ಉತ್ತಂಗಿ ನಾರಪ್ಪ (29) ಎಂಬವರನ್ನು ಬಂಧಿಸಲಾಗಿದೆ.&lt;/p&gt;&lt;p&gt;ಮೃತನ ತಾಯಿ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ನೀಡಿದ ದೂರಿನನ್ವಯ ಹಿರಿಯ ಮಗ ಮರಳು ಸಿದ್ದೇಶ ಮನೆಯ ಜವಾಬ್ದಾರಿ, ಜಮೀನು, ಟ್ರ್ಯಾಕ್ಟರ್ ನೋಡಿಕೊಳ್ಳುತ್ತಿದ್ದ. ಆದರೆ ಆಸ್ತಿಯಲ್ಲಿ ಪಾಲು ಬೇಕು, ಹಂಚಿ ಕೊಡಿ ಎಂದು ತಾಯಿ ಮತ್ತು ಅಣ್ಣನೊಂದಿಗೆ ಪತ್ರಿಗೌಡ ಜಗಳವಾಡಿದ್ದ.&lt;/p&gt;&lt;p&gt;ಮಾ.13ರಂದು ಮಧ್ಯಾಹ್ನ ಇದೇ ವಿಚಾರವಾಗಿ ಜಗಳ ತೆಗೆದಿದ್ದ ಆರೋಪಿ ಪತ್ರಿಗೌಡ, ಪಾಲು ಕೊಡದಿದ್ದರೆ ನಾನು ದುಡಿಯಲು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಮನೆ ಬಿಟ್ಟು ಹೋಗಿದ್ದ.&lt;/p&gt;&lt;p&gt;ಮೃತ ಮರಳುಸಿದ್ದೇಶನು ಉತ್ತಂಗಿ ನಾರಪ್ಪ ಎಂಬಾತನನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಮನೆ ಬಿಟ್ಟು ಹೋಗಿದ್ದ ಸಹೋದರ ಪತ್ರಿ ಗೌಡನನ್ನು ಹುಡುಕಲು ತೆರಳಿದ್ದ. ತಡರಾತ್ರಿ ಒಂದು ಗಂಟೆಗೆ ಹಿರೇಮೇಗಳಗೆರೆ ಸಮೀಪದ ಹೊಸಹಳ್ಳಿ ಕ್ರಾಸ್ ಬಳಿ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾರೆ ಎಂದು ದೂರದ ಸಂಬಂಧಿ ಜಯಪ್ಪ ಅವರು ಶಾಂತಮ್ಮ ಅವರಿಗೆ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಅನುಮಾನದಿಂದ ದೂರು ದಾಖಲಿಸಿದ್ದ ತಾಯಿ&lt;/strong&gt;&lt;/h3&gt;&lt;p&gt;ಶಾಂತಮ್ಮ ಅವರು ಕೂಡಲೇ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿದ್ದ ಶವ ನೋಡಿ ಮರುಳುಸಿದ್ದೇಶನ ತಲೆ, ಎದೆ, ಮುಖದ ಮೇಲೆ ಬಲವಾದ ಪೆಟ್ಟುಗಳಾಗಿದ್ದವು. ಆದರೆ ಇದು ವಾಹನ ಅಪಘಾತದಿಂದ ಆದ ಗಾಯಗಳಂತೆ ಇರಲಿಲ್ಲ. ಬೈಕ್ ನಲ್ಲಿದ್ದ ತಮ್ಮ ಮತ್ತು ಆತನ ಸ್ನೇಹಿತನಿಗೆ ಯಾವುದೇ ಸಣ್ಣ ಗಾಯವೂ ಆಗಿರಲಿಲ್ಲ. ಆಸ್ತಿ ವಿಚಾರದ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆಂದು ತಾಯಿ ಶಾಂತಮ್ಮ ಅರಸೀಕೆರೆ ಪೊಲೀಸರಿಗೆ ದೂರು ನೀಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ &amp;nbsp;ಓದಿ: &lt;/strong&gt;&lt;strong&gt;ಬೆಂಗಳೂರು ಬೆಚ್ಚಿದ ತ್ರಿವಳಿ ಕೊಲೆಗಾರರಿಗೆ ಜೀವಾವಧಿ: ಐಐಎಸ್&zwnj; ಪ್ರಾಧ್ಯಾಪಕ ಸೇರಿ ಇಡೀ ಕುಟುಂಬ ಕೊಂದ ಕೆಲಸದಾಳುಗಳು!&lt;/strong&gt;&lt;/p&gt;&lt;p&gt;ದೂರು ನೀಡಲು ಬಂದಾಗ ಇದು ಒಂದು ಕೊಲೆ ಇರಬಹುದು ಎಂದು ತಿಳಿದು ಅನುಮಾನಗೊಂಡ ಪೊಲೀಸರು ಘಟನೆ ನಡೆದು 24 ತಾಸುಗಳಲ್ಲೇ ಪ್ರಕರಣ ಭೇದಿಸಿದ್ದಾರೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಎಸ್ಪಿ ಎಸ್. ಜಾಹ್ನವಿ ಭೇಟಿ ನೀಡಿ ಡಿವೈಎಸ್ಪಿ ಸಂತೋಷ್ ಚೌಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್&zwnj;ಐಗಳಾದ ವಿಜಯ ಕೃಷ್ಣ, ನಾಗರತ್ನಾ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ರಾಜಧಾನಿಯಲ್ಲಿ ಸ್ವಯಂ ಸೇವಕರ ಸ್ವಚ್ಛತಾ ಅಭಿಯಾನ; ಕಸದ ರಾಶಿಯಲ್ಲಿ ಪತ್ತೆಯಾಯ್ತು ಮಾನವನ ಅಸ್ತಿಪಂಜರ!&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/brother-kills-brother-for-property-accused-tried-to-make-it-look-like-a-road-accident-harapanahalli-vijayanagar-mrq/articleshow-x34h9k8"/>
        </item>
        <item>
            <title><![CDATA[ತುಂಗಾಭದ್ರ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಇಳಿಕೆ: ಹಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ]]></title>
            <link>https://kannada.asianetnews.com/state/huge-drop-in-water-level-in-tungabhadra-reservoir-many-villages-feared-water-scarcity/articleshow-xar8xsq</link>
            <guid isPermaLink="true">https://kannada.asianetnews.com/state/huge-drop-in-water-level-in-tungabhadra-reservoir-many-villages-feared-water-scarcity/articleshow-xar8xsq</guid>
            <pubDate>Tue, 24 Mar 2026 12:54:39 +0530</pubDate>
            <description><![CDATA[ಬೇಸಿಗೆಯ ತಾಪಕ್ಕೆ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಕುಸಿದಿದ್ದು, ಕೇವಲ 20 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದರಿಂದ ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದ್ದು, ನೀರನ್ನು ಕುಡಿಯಲು ಮಾತ್ರ ಮೀಸಲಿಡಬೇಕೆಂಬ ಒತ್ತಾಯ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01cj9w571hnxn5nr65tmpz7b8n,imgname-Ballari-Tunga-Bhadra-Dam.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ತುಂಗಾಭದ್ರ ಜಲಾಶಯಕ್ಕೂ ತಟ್ಟಿದ ಬಿಸಿ; ತಾಪ&lt;/strong&gt;&lt;/h2&gt;&lt;p&gt;ವಿಜಯನಗರ/ಬಳ್ಳಾರಿ: ಸೂರ್ಯನ ತಾಪ ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದ್ದು, ಸೆಖೆ ತಡೆದುಕೊಳ್ಳಲಾಗದೇ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇತ್ತ ಬಿರು ಬೇಸಿಗೆಯ ಬಿಸಿಲ ತಾಪ ತುಂಗಾಭದ್ರ ಜಲಾಶಯಕ್ಕೂ ತಟ್ಟಿದ್ದು, ಜಲಾಶಯದ ನೀರಿನ&zwnj; ಮಟ್ಟ ಕೂಡ ಕಡಿಮೆಯಾಗ್ತಿದೆ.&lt;/p&gt;&lt;p&gt;ವಿಜಯನಗರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಜೀವ ಜಲಕ್ಕಾಗಿ ಈಗಾಗಲೇ ಹಾಹಾಕಾರ ಶುರುವಾಗಿದೆ. 105. 788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತುಂಗಾಭದ್ರಾ ಜಲಾಶಯದಲ್ಲಿ ಕೇವಲ 20 ಟಿಎಂಸಿ ನೀರು ಮಾತ್ರ ಇದೆ. ಹೀಗಾಗಿ ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರನ್ನು ಕೇವಲ ಜನರಿಗೆ ಕುಡಿಯುವ ನೀರಿಗಾಗಿ ಮೀಸಲಿಡುವಂತೆ ಒತ್ತಾಯ ಕೇಳಿ ಬಂದಿದೆ.&lt;/p&gt;&lt;h3&gt;&lt;strong&gt;ಬೇಸಿಗೆಯ ದಿನಗಳನ್ನು ಎದುರಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆ&lt;/strong&gt;&lt;/h3&gt;&lt;p&gt;ಇರುವ 20 ಟಿಎಂಸಿ ನೀರಿನಲ್ಲಿ ಸುತ್ತಮುತ್ತಲಿನ ಕಾರ್ಖಾನೆಗಳು ನಡೆಯಬೇಕಿದೆ. ಇದರ ಜೊತೆಗೆ ಸುತ್ತಮುತ್ತಲ ಕೃಷಿ ಚಟುವಟಿಕೆಗಳಿಗೂ ನೀರಿನ ಅಗತ್ಯವಿದೆ. ಇದರೊಂದಿಗೆ ಕುಡಿಯುವ ನೀರಿಗೂ ಜಲಾಶಯದ ನೀರು ಬಳಕೆ ಮಾಡಬೇಕಿದೆ. ಹೀಗಾಗಿ ಮುಂದಿರುವ ಬೇಸಿಗೆಯ ದಿನಗಳನ್ನು ಎದುರಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಲಾಶಯದ ನೀರನ್ನು ಮಿತವಾಗಿ ಬಳಸೋದಕ್ಕೆ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಕ್ಕಳಿಗೆ ದಾರಿ ತೋರಬೇಕಾದ ಶಿಕ್ಷಕಿಯೇ ದಾರಿ ತಪ್ಪಿದಳು: ಪ್ರಿಯಕರನೊಂದಿಗೆ ಸೇರಿ ಗಂಡನ ಮುಗಿಸಿದ ಸರ್ಕಾರಿ ಶಾಲೆ ಟೀಚರ್&lt;/strong&gt;&lt;/p&gt;&lt;p&gt;ಈ ಹಿನ್ನೆಲೆ ನೀರಾವರಿ ಇಲಾಖೆ ಮತ್ತು ಕಾರ್ಖಾನೆಗಳ ಮಾಲಿಕರ ಜೊತೆ ಜಿಲ್ಲಾಡಳಿತ ಸಭೆ ನಡೆಸುವುದಕ್ಕೆ ತೀರ್ಮಾನ ಮಾಡಿದೆ. ಈಗಾಗಲೇ ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ನೂರಾರು ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಹೀಗಾಗಿ ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಸಮರ್ಪಕವಾಗಿ ಕುಡಿಯುವ ನೀರಿಗೆ ಬಳಕೆ ಮಾಡಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹುಬ್ಬಳ್ಳಿ: ಯುವಕರ ಪಾಲಿಗೆ ಮೃತ್ಯಪಾಶವಾಯ್ತು ಕೇಬಲ್ ವೈರ್: ಇಬ್ಬರು ಬೈಕ್ ಸವಾರರು ಸಾವು&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayanagara</category>
            <dc:creator>Anusha Kb</dc:creator>
            <atom:link href="https://kannada.asianetnews.com/state/huge-drop-in-water-level-in-tungabhadra-reservoir-many-villages-feared-water-scarcity/articleshow-xar8xsq"/>
        </item>
        <item>
            <title><![CDATA[ಬೈಕ್‌ಗೆ ಗುದ್ದಿದ ಬುಲೇರೋ ಗೂಡ್ಸ್ ವಾಹನ : ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸಾವು]]></title>
            <link>https://kannada.asianetnews.com/state/two-forest-watcher-on-duty-killed-after-bolero-goods-vehicle-collide-their-bike/articleshow-y74l8kz</link>
            <guid isPermaLink="true">https://kannada.asianetnews.com/state/two-forest-watcher-on-duty-killed-after-bolero-goods-vehicle-collide-their-bike/articleshow-y74l8kz</guid>
            <pubDate>Mon, 06 Apr 2026 11:41:24 +0530</pubDate>
            <description><![CDATA[&lt;p&gt;&lt;strong&gt;Vijayanagara forest watchers death: &lt;/strong&gt;ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಬೊಲೆರೋ ವಾಹನ ಬೈಕ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ, ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಅರಣ್ಯ ಇಲಾಖೆ ವಾಚರ್&zwnj;ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಕೃಷ್ಣ ಮತ್ತು ಹನುಮಂತಪ್ಪ ಎಂದು ಗುರುತಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngns2wwxyn0mbphmfef0ga6,imgname-vijayanagara-accident-death-1775454948251.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬೈಕ್&zwnj;ಗೆ ಗುದ್ದಿದ್ದ ಬೊಲೆರೋ: ಬೈಕ್ ಸವಾರರ ದಾರುಣ ಸಾವು&lt;/strong&gt;&lt;/h2&gt;&lt;p&gt;ವಿಜಯನಗರ&zwnj;: ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬೈಕ್&zwnj;ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್&zwnj;ನಲ್ಲಿದ್ದ ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಕಮಲಾಪುರ ನಿವಾಸಿ 26ರ ಹರೆಯದ ಕೃಷ್ಣ ಹಾಗೂ ವೆಂಕಟಾಪುರದ 50 ವರ್ಷ ಪ್ರಾಯದ ಹನುಮಂತಪ್ಪ ಎಂದು ಗುರುತಿಸಲಾಗಿದೆ. ಇಬ್ಬರು ಅರಣ್ಯ ಇಲಾಖೆಯಲ್ಲಿ ವಾಚರ್&zwnj;ಗಳಾಗಿ ಕೆಲಸ ಮಾಡುತ್ತಿದ್ದರು.&lt;/p&gt;&lt;h3&gt;&lt;strong&gt;ಮೃತರು ಅರಣ್ಯ ಇಲಾಖೆಯಲ್ಲಿ ವಾಚರ್&zwnj;ಗಳಾಗಿ ಕೆಲಸ ಮಾಡುತ್ತಿದ್ದರು:&lt;/strong&gt;&lt;/h3&gt;&lt;p&gt;ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ&zwnj; ಮಾಡುತ್ತಿದ್ದು, ಬೈಕ್&zwnj;ನಲ್ಲಿ ತೆರಳುತ್ತಿದ್ದ ವೇಳೆ ಇವರ ಬೈಕ್&zwnj;ಗೆ ಬುಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಇಬ್ಬರು ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ವಾಚರ್&zwnj;ಗಳಾಗಿ ಕೆಲಸ ಮಾಡುತ್ತಿದ್ದರು. ಘಟನೆಯ ಬಳಿಕ ಬೊಲೆರೋ ವಾಹನ ಎಸ್ಕೇಪ್ ಆಗಿದ್ದು, ವಾಹನವನ್ನು ಹಿಡಿದು ಪೊಲೀಸರು ಪ್ರಕರ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಹಂಪಿ ಸಿಪಿಐ ರಾಜೇಶ್ ಭಟಗುರ್ಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&amp;nbsp;&lt;/strong&gt;ಕಲಬುರಗಿ: ನಡುರಸ್ತೆಯಲ್ಲೇ ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ&lt;/p&gt;]]></content:encoded>
            <category>vijayanagara</category>
            <dc:creator>Anusha Kb</dc:creator>
            <atom:link href="https://kannada.asianetnews.com/state/two-forest-watcher-on-duty-killed-after-bolero-goods-vehicle-collide-their-bike/articleshow-y74l8kz"/>
        </item>
    </channel>
</rss>
