<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 07 Apr 2026 10:31:42 +0530</lastBuildDate>
        <atom:link href="https://kannada.asianetnews.com/rss/vijayanagara" rel="self" type="application/rss+xml"/>
        <item>
            <title><![CDATA[ಕೊಟ್ಟೂರಿನ 'ಕಂಪ್ಯೂಟರ್' ಮ್ಯಾನ್‌ ಲೆಕ್ಕದ ಮಾಯಾಜಾಲ;  ಗುಟ್ಟು ರಟ್ಟು ಮಾಡಿದ ಮಗ್ಗಿ ಅಜ್ಜಯ್ಯ]]></title>
            <link>https://kannada.asianetnews.com/gallery/karnataka-districts/computer-man-from-karnataka-kottur-how-does-maggi-ajjayya-kotrayya-calculate-easily-in-his-mind-video-viral-mrq-0pibpa8</link>
            <guid isPermaLink="true">https://kannada.asianetnews.com/gallery/karnataka-districts/computer-man-from-karnataka-kottur-how-does-maggi-ajjayya-kotrayya-calculate-easily-in-his-mind-video-viral-mrq-0pibpa8</guid>
            <pubDate>Tue, 10 Mar 2026 10:14:03 +0530</pubDate>
            <description><![CDATA[&lt;p&gt;ಕೊಟ್ಟೂರಿನ 'ಕಂಪ್ಯೂಟರ್ ಮ್ಯಾನ್' ಎಂದು ಖ್ಯಾತರಾದ ಮಗ್ಗಿ ಅಜ್ಜಯ್ಯ, ಅದ್ಭುತ ಗಣಿತ ಕೌಶಲ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಕೇವಲ 8ನೇ ತರಗತಿ ಓದಿ ಭಿಕ್ಷಾಟನೆ ಮಾಡುವ ಇವರ, ಸಂಖ್ಯೆಗಳೊಂದಿಗೆ ಆಟವಾಡುವ ಮತ್ತು ಕ್ಷಣಾರ್ಧದಲ್ಲಿ ಲೆಕ್ಕ ಮಾಡುವ ವಿಧಾನದ ರಹಸ್ಯವು ಇದೀಗ ಬಹಿರಂಗವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkb07g6s45njqaa92yk6s35s,imgname-maggi-ajjayya-1773117096153.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಟ್ಟೂರಿನ 'ಕಂಪ್ಯೂಟರ್ ಮ್ಯಾನ್' ಎಂದು ಖ್ಯಾತರಾದ ಮಗ್ಗಿ ಅಜ್ಜಯ್ಯ, ಅದ್ಭುತ ಗಣಿತ ಕೌಶಲ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಕೇವಲ 8ನೇ ತರಗತಿ ಓದಿ ಭಿಕ್ಷಾಟನೆ ಮಾಡುವ ಇವರ, ಸಂಖ್ಯೆಗಳೊಂದಿಗೆ ಆಟವಾಡುವ ಮತ್ತು ಕ್ಷಣಾರ್ಧದಲ್ಲಿ ಲೆಕ್ಕ ಮಾಡುವ ವಿಧಾನದ ರಹಸ್ಯವು ಇದೀಗ ಬಹಿರಂಗವಾಗಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ಕಂಪ್ಯೂಟರ್ ಮ್ಯಾನ್ ಕೊಟ್ಟೂರಿನ ಮಗ್ಗಿ ಅಜ್ಜಯ್ಯ ಕೊಟ್ರಯ್ಯ ಅವರ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಮಾಡಿರುವ ಕಂಟೆಂಟ್ ಕ್ರಿಯೇಟರ್, ಮಗ್ಗಿ ಅಜ್ಜಯ್ಯ ಹೇಗೆ ಸಂಖ್ಯೆಗಳೊಂದಿಗೆ ಆಟವಾಡುತ್ತಾರೆ ಎಂಬುದದನ್ನು ರಿವೀಲ್ ಮಾಡಿದ್ದಾರೆ. ಸ್ವತಃ ತಮ್ಮ ಲೆಕ್ಕಾಚಾರದ ವಿಧಾನವನ್ನು ಅಜ್ಜಯ್ಯ ಯಾವುದೇ ಹಿಂಜರಿಕೆಯಿಲ್ಲದೇ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ಅಜ್ಜಯ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಕೇವಲ 8ನೇ ತರಗತಿ ಓದಿರುವ ಅಜ್ಜ, ಗಣಿತದ ವಿದ್ಯಾರ್ಥಿಗಳು ನಾಚುವಂತೆ ಲೆಕ್ಕ ಮಾಡುತ್ತಾರೆ. ಅಜ್ಜಯ್ಯನವರ ಲೆಕ್ಕಕ್ಕೆ ಮೆಚ್ಚುಗೆ ಸೂಚಿಸಿ ಒಂದಿಷ್ಟು ಹಣವನ್ನು ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭೆಯೊಂದು ಭಿಕ್ಷೆ ಬೇಡುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ.&lt;/p&gt;&lt;img&gt;&lt;p&gt;ಕೊಟ್ರಯ್ಯ ಅಜ್ಜಯ್ಯನವರ ವಿಡಿಯೋವನ್ನು halekotturu ಹೆಸರಿನ ಇನ್&zwnj;ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಹಿಂದಿನ ವಿಡಿಯೋಗೆ ಇಲ್ಲಿವರೆಗೆ 21 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಎರಡನೇ ವಿಡಿಯೋದಲ್ಲಿ ಮಗ್ಗಿ ಅಜ್ಜಯ್ಯ ಹೇಗೆ ಲೆಕ್ಕ ಮಾಡ್ತಾರೆ ಎಂಬುದನ್ನು ಕಂಟೆಂಟ್ ಕ್ರಿಯೇಟರ್ ವಿಜಯ್ ಕುಮಾರ್ ತಮ್ಮ ಪೋಸ್ಟ್&zwnj;ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೂ ಅಜ್ಜನವರ Tricks ಗೊತ್ತಾಯಿತು. ಅವರು ಎರಡು ಅಂಕಿದು ಹೇಳಿದಾರೆ ನಾನು ಮೂರು ಅಂಕಿದು ತೊರಸ್ತಿನಿ ನೋಡಿ.&lt;/p&gt;&lt;p&gt;125x123 = 15375&lt;/p&gt;&lt;p&gt;ಮೊದಲು 125ನ್ನು 12 ಸಾರಿ ಕೂಡಿಸಿ ಅಥವಾ 125x 12 ಮಾಡಿ&lt;/p&gt;&lt;p&gt;ಆಗ ನಿಮಿಗೆ 1500 ಬರುತ್ತದೆ ಅದಕ್ಕೆ 0 ಸೇರಿಸಿ ಆಗ 15000 ಆಗುತ್ತದೆ.&lt;/p&gt;&lt;p&gt;15000 ಕ್ಕೆ ಮೂರು ಬಾರಿ 125 ಕುಡಿಸಿ ಅಂದರೆ 15000+125+125+125 = 15375 Final Result ಸಿಗುತ್ತದೆ. ಇದನ್ನ ಅವರು ಅಷ್ಟು ಬೇಗ ಹೇಳಲು ಕಾರಣ ಅವರು ಆ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ ಅಷ್ಟೇ ಅವರಿಗೆ ವಯಸ್ಸಾದ ಕಾರಣ ಕೆಲವೊಮ್ಮೆ ತಪ್ಪುತ್ತಾರೆ. ಈಗ ಅವರಿಗೆ ಸುಮಾರು 70 ವರ್ಷ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕನಸು ನನಸು ಆಯ್ತು ಅಂತ ನಿಟ್ಟುಸಿರುವ ಬಿಡುವಷ್ಟರಲ್ಲಿ ವರನಿಗೆ ಬಿಗ್ ಶಾಕ್ ನೀಡಿದ ವಧು&lt;/strong&gt;&lt;/p&gt;&lt;img&gt;&lt;p&gt;ಸದ್ಯ ಅಜ್ಜಯ್ಯನವರ ಎರಡನೇ ವಿಡಿಯೋ ಸಹ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಇವರು ನಿಜವಾಗ್ಲೂ ಸರಸ್ವತಿ ಪುತ್ರರು. ಒಂದೊಳ್ಳೆ ಅವಕಾಶ ಸಿಕಿದ್ರೆ ಇವರು ಉನ್ನತ ಸ್ಥಾನದಲ್ಲಿರುತ್ತಿದ್ದರು. ಈ ಅಜ್ಜ ಸೂಪರ್ ಮಾನವ ಕ್ಯಾಲ್ಯೋಲೇಟರ್. ಅಜ್ಜ ನಾನು ಕೊಟ್ಟೂರಿಗೆ ಬಂದಾಗ ನಿಮ್ಮನ್ನು ಭೇಟಿಯಾಗುತ್ತೇನೆ. ಹಿರಿ ಜೀವಕ್ಕೆ ಇವರ ಜ್ಞಾನಕ್ಕೆ ನಾನು ದೂರದದಿಂದಲೇ ನಮಸ್ಕರಿಸುವೆ ಎಂದು ನೂರಾರು ಕಮೆಂಟ್&zwnj;ಗಳು ಬಂದಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Shivamogga: ಬಾವಿ ಕಳೆದು ಹೋಗಿದೆ ಹುಡುಕಿ ಕೊಡಿ: ಕುಡುಮಲ್ಲಿಗೆ ಗ್ರಾಮಸ್ಥರ ಪ್ರತಿಭಟನೆ&lt;/strong&gt;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by HALEKOTTURU (Around Kotturu) (@halekotturu)&lt;/p&gt;&lt;p&gt;&lt;/p&gt;]]></content:encoded>
            <category>vijayanagara</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/computer-man-from-karnataka-kottur-how-does-maggi-ajjayya-kotrayya-calculate-easily-in-his-mind-video-viral-mrq-0pibpa8"/>
        </item>
        <item>
            <title><![CDATA[ಧಗ ಧಗನೆ ಹೊತ್ತಿ ಉರಿದ ಹೊಸಪೇಟೆಯ ತಾಲೂಕು ಪಂಚಾಯತಿ :  ಹಲವು ದಾಖಲೆಗಳು ಬೆಂಕಿಗಾಹುತಿ]]></title>
            <link>https://kannada.asianetnews.com/gallery/karnataka-districts/vijayanagara-news-fire-inside-hospet-taluk-office-many-documents-gutted-167h19o</link>
            <guid isPermaLink="true">https://kannada.asianetnews.com/gallery/karnataka-districts/vijayanagara-news-fire-inside-hospet-taluk-office-many-documents-gutted-167h19o</guid>
            <pubDate>Wed, 11 Mar 2026 09:41:58 +0530</pubDate>
            <description><![CDATA[ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಹಲವು ಹಳೆಯ ದಾಖಲೆಗಳು ಮತ್ತು ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಉದ್ದೇಶಪೂರ್ವಕ ಘಟನೆಯೇ ಎಂಬ ಕೋನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkdh8fg9d7fnfzf0762d6nag,imgname-hospete-taluk-office-fire--9--1773202062857.jpg" type="image/jpeg" height="390" width="690"/>
            <content:encoded><![CDATA[ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಹಲವು ಹಳೆಯ ದಾಖಲೆಗಳು ಮತ್ತು ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಉದ್ದೇಶಪೂರ್ವಕ ಘಟನೆಯೇ ಎಂಬ ಕೋನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;img&gt;&lt;p&gt;ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕು ಪಂಚಾಯಿತಿ ಕಚೇರಿಗೆ ತಡರಾತ್ರಿ ಬೆಂಕಿ ಬಿದ್ದಿದ್ದು, ತಾಲೂಕು ಪಂಚಾಯತಿ ಕಾರ್ಯಾಲಯ ಧಗ ಧಗನೆ ಹೊತ್ತಿ ಉರಿದಿದೆ.&lt;/p&gt;&lt;img&gt;&lt;p&gt;ಹೊಸಪೇಟೆಯ ಸಂಡೂರು ರಸ್ತೆಯಲ್ಲಿರೋ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಬೆಂಕಿ ಬಿದ್ದಿದ್ದರಿಂದ ಹಲವು ದಾಖಲೆಗಳು ಸುಟ್ಟು ಕರಕಲಾಗಿವೆ..&lt;/p&gt;&lt;img&gt;&lt;p&gt;ಕಾರ್ಯಾಲಯದ ಸಭಾಂಗಣ ಆವರಣ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಹೊಸಪೇಟೆ ತಹಸೀಲ್ದಾರ್ ಶೃತಿ ಹಾಗೂ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.&lt;/p&gt;&lt;img&gt;&lt;p&gt;ಇದು ಕಿಡಿಗೇಡಿಗಳ ಕೃತ್ಯನಾ ಅಥವಾ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆಯಾ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ತಾಲೂಕು ಕಚೇರಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಬಹುತೇಕ ಹಳೇಯ ಫೈಲ್&zwnj;ಗಳು ಮತ್ತು ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ರಿಲಯನ್ಸ್ ಇಂಡಸ್ಟ್ರೀಸ್&zwnj;ನಿಂದ ಅಮೆರಿಕಾದಲ್ಲಿ ಭಾರಿ ಹೂಡಿಕೆ: ಟೆಕ್ಸಾಸ್&zwnj;ನಲ್ಲಿ ತೈಲ ಸಂಸ್ಕರಣಾಗಾರ ಸ್ಥಾಪನೆಗೆ ಒಪ್ಪಂದ: ಟ್ರಂಪ್ ಶ್ಲಾಘನೆ&lt;/p&gt;]]></content:encoded>
            <category>vijayanagara</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/karnataka-districts/vijayanagara-news-fire-inside-hospet-taluk-office-many-documents-gutted-167h19o"/>
        </item>
        <item>
            <title><![CDATA[ಈದ್ಗಾ ಜಮೀನಲ್ಲಿ ಕಲ್ಲು ಬ್ಲಾಸ್ಟ್; ಇರಾನ್-ಇಸ್ರೇಲ್ ಯುದ್ಧದ ಬಾಂಬ್ ಬಿತ್ತೆಂದು ಮನೆಯಿಂದ ಓಡಿಬಂದ ಮಹಿಳೆಯರು!]]></title>
            <link>https://kannada.asianetnews.com/gallery/karnataka-districts/vijayanagara-breaking-harapanahalli-eidgah-land-stone-blasting-fir-registered-sat-1qygz2i</link>
            <guid isPermaLink="true">https://kannada.asianetnews.com/gallery/karnataka-districts/vijayanagara-breaking-harapanahalli-eidgah-land-stone-blasting-fir-registered-sat-1qygz2i</guid>
            <pubDate>Wed, 11 Mar 2026 22:00:12 +0530</pubDate>
            <description><![CDATA[&lt;p&gt;ಹರಪನಹಳ್ಳಿಯ ಜನವಸತಿ ಪ್ರದೇಶದಲ್ಲಿ ನಡೆದ ಅಕ್ರಮ ಕಲ್ಲು ಬ್ಲಾಸ್ಟಿಂಗ್&zwnj;ನಿಂದಾಗಿ ಭೀಕರ ಸ್ಫೋಟ ಸಂಭವಿಸಿದೆ. ಈ ಶಬ್ದದಿಂದ ಭಯಭೀತರಾದ ಜನರು, ಇರಾನ್-ಇಸ್ರೇಲ್ ಯುದ್ಧದ ಬಾಂಬ್ ಎಂದು ಭಾವಿಸಿ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಪೊಲೀಸರು ನಾಲ್ವರ ವಿರುದ್ಧ ಎಫ್&zwnj;ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkev2zc91e6trk17mtzy3kk6,imgname-harapanahalli-edga-ground-blast-1773245922696.jpg" type="image/jpeg" height="390" width="690"/>
            <content:encoded><![CDATA[&lt;p&gt;ಹರಪನಹಳ್ಳಿಯ ಜನವಸತಿ ಪ್ರದೇಶದಲ್ಲಿ ನಡೆದ ಅಕ್ರಮ ಕಲ್ಲು ಬ್ಲಾಸ್ಟಿಂಗ್&zwnj;ನಿಂದಾಗಿ ಭೀಕರ ಸ್ಫೋಟ ಸಂಭವಿಸಿದೆ. ಈ ಶಬ್ದದಿಂದ ಭಯಭೀತರಾದ ಜನರು, ಇರಾನ್-ಇಸ್ರೇಲ್ ಯುದ್ಧದ ಬಾಂಬ್ ಎಂದು ಭಾವಿಸಿ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಪೊಲೀಸರು ನಾಲ್ವರ ವಿರುದ್ಧ ಎಫ್&zwnj;ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ವಿಜಯನಗರ (ಮಾ.11): ಶಾಂತವಾಗಿದ್ದ ಹರಪನಹಳ್ಳಿ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಕೇಳಿಬಂದ ಭೀಕರ ಸ್ಫೋಟದ ಶಬ್ದ ಜನರನ್ನು ಬೆಚ್ಚಿಬೀಳಿಸಿದೆ. ಹರಪನಹಳ್ಳಿಯ ಹೊಸಪೇಟೆ ರಸ್ತೆಯ ವಾರ್ಡ್ ಸಂಖ್ಯೆ 1 ರಲ್ಲಿರುವ ಈದ್ಗಾ ಜಮೀನಿನಲ್ಲಿ ಹಾಡಹಗಲೇ ಯಾವುದೇ ಅನುಮತಿ ಪಡೆಯದೆ ಸ್ಪೋಟಕಗಳನ್ನು ಬಳಸಿ ಕಲ್ಲು ಬ್ಲಾಸ್ಟಿಂಗ್ ಮಾಡಲಾಗಿದ್ದು, ಸ್ಥಳೀಯರು ಇರಾನ್-ಇಸ್ರೇಲ್ ಯುದ್ಧದ ಬಾಂಬ್ ನಮ್ಮ ಮೇಲೆ ಬಿತ್ತೆಂದು ಭಯಭೀತರಾಗಿ ಎದ್ನೋ ಬಿದ್ನೋ ಅಂತಾ ರಸ್ತೆಗೆ ಓಡಿಬಂದ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಈದ್ಗಾ ಜಮೀನಿನಲ್ಲಿ ನಡೆದ ಕಲ್ಲು ಬ್ಲಾಸ್ಟಿಂಗ್ ಎಷ್ಟು ಭೀಕರವಾಗಿತ್ತೆಂದರೆ, ಅದರ ಶಬ್ದಕ್ಕೆ ಇಡೀ ವಾರ್ಡ್ ನಲುಗಿ ಹೋಗಿದೆ. ಸದ್ಯ ವಿಶ್ವಮಟ್ಟದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವುದರಿಂದ, ಜನರು ಆ ಯುದ್ಧದ ಬಾಂಬ್ ಏನಾದರೂ ಅಪ್ಪಿತಪ್ಪಿ ಭಾರತಕ್ಕೆ ಬಂದು ಬಿತ್ತಾ? ಎಂದು ಗಾಬರಿಗೊಂಡು ಮನೆಯಿಂದ ಹೊರಗೆ ಓಡೋಡಿ ಬಂದಿದ್ದಾರೆ. ಅಕ್ಕಪಕ್ಕದ ಮನೆಗಳ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿದೆ.&lt;/p&gt;&lt;img&gt;&lt;p&gt;ಜನವಸತಿ ಪ್ರದೇಶದ ನಡುವೆ ಯಾವುದೇ ಮುನ್ನೆಚ್ಚರಿಕೆ ಅಥವಾ ಮಾಹಿತಿ ನೀಡದೆ ಸ್ಪೋಟಕಗಳನ್ನು ಬಳಸಿರುವುದು ದೊಡ್ಡ ಅಪಾಯಕ್ಕೆ ನಾಂದಿ ಹಾಡಿತ್ತು. ಸ್ಫೋಟದ ತೀವ್ರತೆಗೆ ಸಮೀಪದ ಕೆಲ ಮನೆಗಳ ಕಾಂಪೌಂಡ್ ಗೋಡೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. 'ಒಮ್ಮೆಲೇ ದೊಡ್ಡ ಪ್ರಮಾಣದ ಶಬ್ದ ಕೇಳಿ ನಮಗೆ ಏನಾಗುತ್ತಿದೆ ಎಂದು ತಿಳಿಯಲೇ ಇಲ್ಲ, ಮಕ್ಕಳು-ವೃದ್ಧರು ಭಯದಿಂದ ನಡುಗುತ್ತಿದ್ದರು' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಘಟನೆಯ ಗಂಭೀರತೆಯನ್ನು ಅರಿತು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್. ಜಾಹ್ನವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮವಾಗಿ ಬ್ಲಾಸ್ಟಿಂಗ್ ನಡೆಸಿದ ಜಾಗವನ್ನು ಪರಿಶೀಲಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.&lt;/p&gt;&lt;img&gt;&lt;p&gt;ಹರಪನಹಳ್ಳಿ ತಾಲೂಕು ಕಂದಾಯ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಎಫ್&zwnj;ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಶಹಬಾಜ್ ಅಕ್ರಂ ಭಾಷಾ, ಶಮೀವುಲ್ಲಾ, ಗಂಗಾಧರ ಹಾಗೂ ನಾಗರಾಜ್ ಎಂಬುವವರ ಮೇಲೆ ಅಕ್ರಮವಾಗಿ ಸ್ಪೋಟಕ ಬಳಕೆ ಮತ್ತು ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ.&lt;/p&gt;&lt;img&gt;&lt;p&gt;ಕಾನೂನುಬಾಹಿರವಾಗಿ ಜನವಸತಿ ಪ್ರದೇಶದಲ್ಲಿ ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸದ್ಯ ಹರಪನಹಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಆ ಸ್ಫೋಟದ ಶಬ್ದದಿಂದ ಜನರಿಗಿನ್ನೂ ಆತಂಕ ದೂರವಾಗಿಲ್ಲ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/vijayanagara-breaking-harapanahalli-eidgah-land-stone-blasting-fir-registered-sat-1qygz2i"/>
        </item>
        <item>
            <title><![CDATA[ಬಳ್ಳಾರಿಯ ಕೆಲವು ಹಳ್ಳಿಗಳಲ್ಲಿ ಯುಗಾದಿ ಹಬ್ಬ ಏಕೆ ಆಚರಿಸುವುದಿಲ್ಲ? ವಿಚಿತ್ರ ಪರಂಪರೆಯ ಹಿಂದಿನ ಕಾರಣವೇನು?]]></title>
            <link>https://kannada.asianetnews.com/karnataka-districts/festive-spirit-across-karnataka-but-grief-shrouds-kudligi-after-tragic-incident-rav/articleshow-9qiupon</link>
            <guid isPermaLink="true">https://kannada.asianetnews.com/karnataka-districts/festive-spirit-across-karnataka-but-grief-shrouds-kudligi-after-tragic-incident-rav/articleshow-9qiupon</guid>
            <pubDate>Thu, 19 Mar 2026 08:37:27 +0530</pubDate>
            <description><![CDATA[&lt;p&gt;ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಹಲವು ಹಳ್ಳಿಗಳಲ್ಲಿ, ಕೆಲವು ಸಮುದಾಯಗಳು ತಲೆಮಾರುಗಳಿಂದ ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಹಬ್ಬ ಆಚರಿಸಿದರೆ ಕೇಡಾಗುತ್ತದೆ ಎಂದು ನಂಬುತ್ತಾರೆ. ಈ ವಿಚಿತ್ರ ಪರಂಪರೆಯ ಹಿಂದಿನ ನಿಖರ ಕಾರಣ ಯಾರಿಗೂ ತಿಳಿದಿಲ್ಲ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km20gr36xqfvcb50pmk9bshe,imgname-1-1773889151078.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೀಮಣ್ಣ ಗಜಾಪುರ&lt;/strong&gt;&lt;/p&gt;&lt;p&gt;ಕೂಡ್ಲಿಗಿ (ಮಾ.19): ಯುಗಾದಿ ಎಂದರೆ ಇಡೀ ನಾಡಿಗೆ ನಾಡೇ ಸಂಭ್ರಮಿಸುತ್ತಿದೆ. ಪ್ರಕೃತಿಯ ಬದಲಾವಣೆಯ ಹೊಸ ವರ್ಷವನ್ನು ಎಲ್ಲರೂ ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರೆ ಕೂಡ್ಲಿಗಿ ತಾಲೂಕು ಸೇರಿದಂತೆ ವಿಜಯನಗರ, ಬಳ್ಳಾರಿ ಜಿಲ್ಲೆಯ ಸಾವಿರಾರು ಹಳ್ಳಿಗಳ ಕೆಲವು ಕುಟುಂಬಗಳು ಯುಗಾದಿಯಂದು ಸಂಭ್ರಮಿಸುವ ಬದಲು ಸೂತಕದ ಛಾಯೆಯಲ್ಲಿಯೇ ಇರುತ್ತಾರೆ.&lt;/p&gt;&lt;p&gt;ಇಲ್ಲಿನವರು ಯುಗಾದಿಯಲ್ಲಿ ಬೇವು- ಬೆಲ್ಲ ತಿನ್ನುವುದಿಲ್ಲ. ಹಬ್ಬ ಮಾಡುವವರು ಬೇವು- ಬೆಲ್ಲ ನೀಡಿದರೆ ಮಾತ್ರ ತಿನ್ನುತ್ತಾರೆ. ಹಳ್ಳಿಗಳಲ್ಲಿ ಹಬ್ಬ ಆಚರಿಸದ ಕುಟುಂಬಗಳಿಗೆ ತಮ್ಮ ಸಂಬಂಧಿಕರು ಬೇವು- ಬೆಲ್ಲವನ್ನು ಮನೆ ಮನೆಗೆ ಹೋಗಿ ನೀಡುತ್ತಾರೆ. ಕೂಡ್ಲಿಗಿ, ಗಜಾಪುರ, ತಿಮ್ಮಲಾಪುರ, ಕಂದಗಲ್ಲು, ಕೊಟ್ಟೂರು, ಸಂಡೂರು ತಾಲೂಕಿನ ದೇವರ ಮಲ್ಲಾಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ನೂರಾರು ಕುಟುಂಬಗಳು ಹಬ್ಬ ಮಾಡುವುದಿಲ್ಲ. ಗಜಾಪುರದಲ್ಲಿ ಯುಗಾದಿ ಅಮಾವಾಸ್ಯೆ, ಯುಗಾದಿಯಂದು ಸ್ನಾನ ಮಾಡುವುದಿಲ್ಲ. ಯುಗಾದಿಯ ನಂತರದಲ್ಲಿ ಚಂದ್ರಮಾನ ಯುಗಾದಿಯಂದು ಸ್ನಾನ ಮಾಡಿ, ಸಿಹಿ ಮಾಡಿ ಊಟ ಮಾಡುತ್ತಾರೆ. ನಂತರ ಬರುವ ಹುಣ್ಣಿಮೆಯನ್ನು ಇಲ್ಲಿಯ ಜನತೆ ಹಂಪಿ ಹುಣ್ಣಿಮೆ ಎಂದು ಕರೆಯುತ್ತಾರೆ. ಅಂದು ಮನೆಗೆ ತೋರಣ ಕಟ್ಟಿ, ಸಿಹಿ ಊಟ ಮಾಡಿ ಪೂಜೆ ಮಾಡಿ ಯುಗಾದಿಯನ್ನು ಆಚರಣೆ ಮಾಡುತ್ತಾರೆ.&lt;/p&gt;&lt;p&gt;ಅಖಂಡ ಕೂಡ್ಲಿಗಿ ತಾಲೂಕಿನಲ್ಲಿ ಹಿಂದುಳಿದ ವರ್ಗಗಳಾದ ಬಾರಿಕರು, ಉಪ್ಪಾರರು, ವಾಲ್ಮೀಕಿ ಸಮುದಾಯದ ಕೆಲವು ಕುಟುಂಬಗಳು ಹತ್ತಾರು ತಲೆಮಾರುಗಳಿಂದಲೂ ಯುಗಾದಿ ಆಚರಣೆ ಮಾಡದೇ ಮೌನವಾಗಿ ಬಹಿಷ್ಕಾರ ಹಾಕುತ್ತಾ ಬಂದಿದ್ದಾರೆ. ಏಕೆ ಎಂದು ಕೇಳಿದರೆ ನಮ್ಮ ಅಜ್ಜ, ಮುತ್ತಜ್ಜರ ಕಾಲದಿಂದಲೂ ನಮ್ಮ ಕುಟುಂಬಗಳಲ್ಲಿ ಯುಗಾದಿ ಮಾಡಿಲ್ಲ. ಹೀಗಾಗಿ ನಾವೂ ಮಾಡುವುದಿಲ್ಲ. ಒಂದು ವೇಳೆ ಯುಗಾದಿ ಆಚರಿಸಿದರೆ ನಮಗೆ ಕೇಡಾಗುತ್ತದೆ ಎನ್ನುತ್ತಾರೆ ಯುಗಾದಿ ಆಚರಿಸದ ಕುಟುಂಬಗಳ ಯಜಮಾನರು. ಆದರೆ ನಿಖರವಾದ ಕಾರಣ, ಆಚರಿಸದಿರುವುದರ ಹಿನ್ನೆಲೆಯ ಬಗ್ಗೆ ಯಾರಿಗೂ ಅಷ್ಟೊಂದು ಅರಿವಿಲ್ಲ. ಇವರ ಪೂರ್ವಿಕರು, ಹಿಂದಿನವರು ಆಚರಿಸುತ್ತಿರಲಿಲ್ಲ, ಅದಕ್ಕೇ ನಾವೂ ಆಚರಿಸುತ್ತಿಲ್ಲ ಎನ್ನುತ್ತಾರೆ.&lt;/p&gt;&lt;p&gt;ಇದು ಮೂಢನಂಬಿಕೆಯ ಪರಮಾವಧಿಯೋ, ಪರಂಪರೆಯೋ? ಎನ್ನುವ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಆ ಕುಟುಂಬಗಳಲ್ಲಿರುವ ವಿದ್ಯಾವಂತರು, ಸರ್ಕಾರಿ ನೌಕರಿ ಪಡೆದವರು, ಪ್ರಜ್ಞಾವಂತ ಕುಟುಂಬದವರು ಸಹ ಯುಗಾದಿಯನ್ನು ಆಚರಿಸುವುದಿಲ್ಲ. ಸಮಾಜ ಇಷ್ಟೆಲ್ಲ ಮುಂದುವರೆದರೂ ನಮ್ಮ ಪೂರ್ವಜರು ಬಿಟ್ಟು ಹೋದ ಆಚರಣೆಗಳು, ಮೂಢನಂಬಿಕೆಗಳು ಎಐ ಯುಗದಲ್ಲಿಯೂ ಮುಂದುವರೆದುಕೊಂಡು ಬಂದಿರುವುದು ಮಾತ್ರ ಸೋಜಿಗದ ಸಂಗತಿಯಾಗಿದೆ.&lt;/p&gt;&lt;p&gt;ಯುಗಾದಿಯಂದು ಹಿಂದೆ ನಮ್ಮ ಹಿರಿಯರಿಗೆ ಕೇಡು ಆಗಿತ್ತಂತೆ. ಹೀಗಾಗಿ ನಾವು ಆಚರಿಸಲ್ಲ. ಅಂದು ನಾವು ಹೊಸಬಟ್ಟೆ, ಹೊಸ ವಸ್ತು ಖರೀದಿಸಲ್ಲ. ತಲೆಗೆ ಎಣ್ಣೆ ಹಚ್ಚಲ್ಲ. ಸಿಹಿ ಊಟ ಮನೆಯಲ್ಲಿ ಮಾಡಿ ಪೂಜೆ ಮಾಡಲ್ಲ. ಎರಡು- ಮೂರು ದಿನ ಸ್ನಾನ ಮಾಡಲ್ಲ. ಒಂದು ವೇಳೆ ಹಬ್ಬ ಮಾಡಲು ಮುಂದಾದರೆ ನಮಗೆ ಭಯ ಕಾಡುತ್ತೆ ಎನ್ನುತ್ತಾರೆ ಗಜಾಪುರ ನಿವಾಸಿ ಕೊಟ್ರಪ್ಪ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/festive-spirit-across-karnataka-but-grief-shrouds-kudligi-after-tragic-incident-rav/articleshow-9qiupon"/>
        </item>
        <item>
            <title><![CDATA[ಟೊಮೆಟೋ ಬೆಲೆ ಭಾರೀ ಕುಸಿತ, ಟ್ರ್ಯಾಕ್ಟರ್‌ನಲ್ಲಿ ತುಂಬಿ ಕುರಿ, ಮೇಕೆಗಳಿಗೆ ಸುರಿದ ರೈತರು!]]></title>
            <link>https://kannada.asianetnews.com/karnataka-districts/hospet-farmer-feed-tons-of-tomatoes-to-sheep-and-goats-at-reduced-prices/articleshow-ar9ptdi</link>
            <guid isPermaLink="true">https://kannada.asianetnews.com/karnataka-districts/hospet-farmer-feed-tons-of-tomatoes-to-sheep-and-goats-at-reduced-prices/articleshow-ar9ptdi</guid>
            <pubDate>Sun, 05 Apr 2026 07:28:30 +0530</pubDate>
            <description><![CDATA[&lt;p&gt;ಹೊಸಪೇಟೆ ಭಾಗದಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಫ್ತು ವ್ಯತ್ಯಯದಿಂದಾಗಿ ಬೇಡಿಕೆ ಕಡಿಮೆಯಾಗಿದ್ದು, ಸಾಗಾಣಿಕೆ ವೆಚ್ಚವೂ ಸಿಗದ ಕಾರಣ ರೈತರು ಟೊಮ್ಯಾಟೋವನ್ನು ರಸ್ತೆಗೆ ಸುರಿದು, ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kndnsqcnctsbcyxf57tsaqrd,imgname----------------------67--1775354305941.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಏ.5):&lt;/strong&gt; ದೇಶದ ಬೆನ್ನಲುಬಾದ ರೈತರ ಬದುಕು ಈಗ ಅಕ್ಷರಶಃ ಬೀದಿಗೆ ಬಂದಿದೆ. ಬೆಲೆ ಕುಸಿತದಿಂದದ ರೈತರು ಕಂಗಾಲಾಗಿದ್ದಾರೆ. ಹೊಸಪೇಟೆ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದ್ದು, ಬೆಳೆ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;h2&gt;ಇರಾನ್ ಯುದ್ಧ, ಗ್ಯಾಸ್ ಕೊರತೆ, ಹೋಟೆಲ್ ಬಂದ್, ತರಕಾರಿ ಕೇಳೋರಿಲ್ಲ&lt;/h2&gt;&lt;p&gt;ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸತತ ನಿರಂತರ ಯುದ್ಧದಿಂದಾಗಿ ಇದೀಗ ವಿಜಯನಗರ ಜಿಲ್ಲೆಯ ರೈತರ ಮೇಲೆ ನೇರ ಪರಿಣಾಮ ಬೀರಿದೆ. ರಫ್ತು ವಹಿವಾಟಿನಲ್ಲಿ ಉಂಟಾದ ವ್ಯತ್ಯಯ ಹಾಗೂ ಮಾರುಕಟ್ಟೆಯ ಏರುಪೇರಿನಿಂದಾಗಿ ಟೊಮ್ಯಾಟೋ ಬೇಡಿಕೆ ಕುಸಿದಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆ ತೀರಾ ಕೆಳಮಟ್ಟಕ್ಕೆ ಇಳಿದಿದೆ.&lt;/p&gt;&lt;h3&gt;ಟ್ರ್ಯಾಕ್ಟರ್&zwnj;ನಲ್ಲಿ ತುಂಬಿ ಕುರಿ ಮೇಕೆಗಳಿಗೆ ಟೊಮ್ಯಾಟೋ ಸುರಿದ ರೈತರು&lt;/h3&gt;&lt;p&gt;ಮಾರುಕಟ್ಟೆಗೆ ಟೊಮ್ಯಾಟೋ ತಂದರೆ ಸಾಗಾಣಿಕೆ ವೆಚ್ಚವೂ ಕೈಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಂಗಾಲಾದ ರೈತರು, ತಮ್ಮ ಹೊಲಗಳಲ್ಲಿ ಬೆಳೆದ ಟೊಮ್ಯಾಟೋಗಳನ್ನು ಟ್ರ್ಯಾಕ್ಟರ್&zwnj;ಗಳಲ್ಲಿ ಲೋಡ್ ಮಾಡಿಕೊಂಡು ಬಂದು ರಸ್ತೆ ಬದಿಗಳಲ್ಲಿ ಸುರಿಯುತ್ತಿದ್ದಾರೆ. ಮಾಡಿದ ಖರ್ಚೂ ಬರದ ಹಿನ್ನೆಲೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಲೆ ಇಲ್ಲದ ಕಾರಣ ಟೊಮ್ಯಾಟೋವನ್ನು ಎಸೆಯುವ ಬದಲು, ರೈತರು ಅನಿವಾರ್ಯವಾಗಿ ತಮ್ಮ ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ನೂರಾರು ಕೆಜಿ ಟೊಮ್ಯಾಟೋಗಳನ್ನು ಕುರಿ, ಮೇಕೆ ಹಾಗೂ ದನ-ಕರುಗಳಿಗೆ ಹಾಕುತ್ತಿರುವ ದೃಶ್ಯಗಳು ಎಂಥವರನ್ನೂ ಮರುಗಿಸುವಂತಿದೆ. ಕಷ್ಟಪಟ್ಟು ಬೆಳೆದ ಬೆಳೆ, ರೈತನ ಬೆವರಿಗೆ ಬೆಲೆಯೇ ಇಲ್ಲದಂತಾಗಿದೆ&lt;/p&gt;&lt;h3&gt;ರೈತರಿಗೆ ಸರ್ಕಾರ ಪರಿಹಾರ ನೀಡಲಿ&lt;/h3&gt;&lt;p&gt;ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದ ರೈತರು ಈಗ ಬೀದಿಗೆ ಬಿದ್ದಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಅಥವಾ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.&lt;/p&gt;]]></content:encoded>
            <category>vijayanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/hospet-farmer-feed-tons-of-tomatoes-to-sheep-and-goats-at-reduced-prices/articleshow-ar9ptdi"/>
        </item>
        <item>
            <title><![CDATA[ಕಲ್ಯಾಣ ಕರ್ನಾಟಕ ಹೆಬ್ಬಾಗಿಲಲ್ಲಿ ಹೊಸ ವಿಮಾನ ನಿಲ್ದಾಣ; ಬಳ್ಳಾರಿ, ಹಂಪಿ, ಹೊಸಪೇಟೆ, ಕೊಪ್ಪಳಕ್ಕೂ ಹತ್ತಿರ!]]></title>
            <link>https://kannada.asianetnews.com/state/kalyana-karnataka-new-location-for-ballari-airport-minister-mb-patil-announces-after-janardhana-reddy-ask-sat/articleshow-bhz1qlp</link>
            <guid isPermaLink="true">https://kannada.asianetnews.com/state/kalyana-karnataka-new-location-for-ballari-airport-minister-mb-patil-announces-after-janardhana-reddy-ask-sat/articleshow-bhz1qlp</guid>
            <pubDate>Fri, 13 Mar 2026 14:11:00 +0530</pubDate>
            <description><![CDATA[&lt;p&gt;ಬಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ಯೋಜನೆಗೆ ಹೊಸ ಚಾಲನೆ ಸಿಕ್ಕಿದೆ. ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗುವಂತೆ, ಹಂಪಿಯಂತಹ ಪ್ರವಾಸಿ ತಾಣಗಳಿಗೆ ಹತ್ತಿರವಿರುವ ಹೊಸ ಆಯಕಟ್ಟಿನ ಸ್ಥಳವನ್ನು ಸರ್ಕಾರ ಗುರುತಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkk5gccjcvqcd3hz280s659t,imgname-kalyana-karnataka-ballari-new-airport-1773391065490.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಬಳ್ಳಾರಿ (ಮಾ.13): ಬ&lt;/strong&gt;ಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾದ ವಿಮಾನ ನಿಲ್ದಾಣ ಯೋಜನೆಗೆ ಈಗ ಹೊಸ ಚಾಲನೆ ಸಿಕ್ಕಿದೆ. ಬಳ್ಳಾರಿ ನಗರ ಮಾತ್ರವಲ್ಲದೆ, ನೆರೆಯ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೂ ಅನುಕೂಲವಾಗುವಂತೆ ವಿಮಾನ ನಿಲ್ದಾಣವನ್ನು ಅತ್ಯಂತ ಆಯಕಟ್ಟಿನ ಜಾಗದಲ್ಲಿ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ವಿಧಾನಸಭೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಪ್ರಶ್ನೆಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಸುದೀರ್ಘವಾಗಿ ಉತ್ತರಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಳ್ಳಾರಿಯಿಂದ 19 ಕಿ.ಮೀ ದೂರದಲ್ಲಿ ಹೊಸ ತಾಣ!&lt;/strong&gt;&lt;/h2&gt;&lt;p&gt;ಸರಕಾರದ ಉದ್ದೇಶದಂತೆ ಬಳ್ಳಾರಿ, ಹೊಸಪೇಟೆ, ಯುನೆಸ್ಕೋ ಪರಂಪರೆಯ ತಾಣವಾದ ಹಂಪಿ, ಆನೆಗೊಂದಿ, ಸಂಡೂರು ಹಾಗೂ ಸಿರಗುಪ್ಪ ಭಾಗದ ಜನರಿಗೆ ವಿಮಾನಯಾನ ಸೌಲಭ್ಯ ಹತ್ತಿರವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ಸುಮಾರು 19 ಕಿ.ಮೀ ದೂರದಲ್ಲಿ ಹೊಸ ಜಾಗವನ್ನು ಗುರುತಿಸಲಾಗಿದೆ. ಕೆಐಎಡಿಬಿ (KIADB) ವತಿಯಿಂದ 800 ಮತ್ತು 1,200 ಎಕರೆ ಇರುವ ಎರಡು ಪ್ರತ್ಯೇಕ ತಾಣಗಳನ್ನು ಪರಿಶೀಲಿಸಲಾಗುತ್ತಿದೆ. ಈ ಜಾಗದ ಕಾರ್ಯಸಾಧ್ಯತೆಯ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸಚಿವರು ತಿಳಿಸಿದರು.&lt;/p&gt;&lt;h2&gt;&lt;strong&gt;ದೂರದೃಷ್ಟಿಯ ಕೊರತೆಯಿಂದ ಹಿಂದಿನ ತಪ್ಪುಗಳೇ ಪಾಠ:&lt;/strong&gt;&lt;/h2&gt;&lt;p&gt;ವಿಮಾನ ನಿಲ್ದಾಣಗಳನ್ನು ನಿರ್ಮಿಸುವಾಗ ದೂರದೃಷ್ಟಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಬೆಳಗಾವಿ, ಹುಬ್ಬಳ್ಳಿ ಮತ್ತು ವಿಜಯಪುರ ನಿಲ್ದಾಣಗಳನ್ನು ಎಂ ಬಿ ಪಾಟೀಲ ಉದಾಹರಣೆಯಾಗಿ ನೀಡಿದರು. &quot;ಬೆಳಗಾವಿ ಮತ್ತು ಹುಬ್ಬಳ್ಳಿ ಏರ್&zwnj;ಪೋರ್ಟ್&zwnj;ಗಳ ಮಧ್ಯೆ ಕೇವಲ 70 ಕಿ.ಮೀ ಅಂತರವಿದೆ. ಎರಡೂ ಜಿಲ್ಲೆಗಳ ಮಧ್ಯಭಾಗದಲ್ಲಿ ಒಂದು ದೊಡ್ಡ ನಿಲ್ದಾಣ ನಿರ್ಮಿಸಿದ್ದರೆ, ಇಂದು ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬೆಳೆಯುತ್ತಿತ್ತು,&quot; ಎಂದು ಅವರು ಅಭಿಪ್ರಾಯಪಟ್ಟರು. ಇದೇ ತಪ್ಪು ಬಳ್ಳಾರಿಯಲ್ಲಿ ಆಗಬಾರದು ಎಂಬುದು ಸರ್ಕಾರದ ಆಶಯವಾಗಿದೆ.&lt;/p&gt;&lt;h2&gt;&lt;strong&gt;ಯಾವ ನಗರಗಳಿಗೆ ಎಷ್ಟು ದೂರ?&lt;/strong&gt;&lt;/h2&gt;&lt;ul&gt; &lt;li&gt;ಈಗ ಗುರುತಿಸಿರುವ ಹೊಸ ಸ್ಥಳವು ಪ್ರಮುಖ ಪ್ರವಾಸಿ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಹತ್ತಿರವಾಗಿದೆ:&lt;/li&gt; &lt;li&gt;ಬಳ್ಳಾರಿ: 19 ಕಿ.ಮೀ&lt;/li&gt; &lt;li&gt;ಹೊಸಪೇಟೆ: 33 ಕಿ.ಮೀ&lt;/li&gt; &lt;li&gt;ಹಂಪಿ: 26 ಕಿ.ಮೀ&lt;/li&gt; &lt;li&gt;ಸಂಡೂರು: 33 ಕಿ.ಮೀ&lt;/li&gt; &lt;li&gt;ತೋರಣಗಲ್ಲು: 13 ಕಿ.ಮೀ&lt;/li&gt; &lt;li&gt;ಸಿರಗುಪ್ಪ: 43 ಕಿ.ಮೀ&lt;/li&gt; &lt;li&gt;ಕೊಪ್ಪಳ: 75 ಕಿ.ಮೀ&lt;/li&gt;&lt;/ul&gt;&lt;h2&gt;&lt;strong&gt;ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ:&lt;/strong&gt;&lt;/h2&gt;&lt;p&gt;ಈ ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಲು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ವಿಮಾನ ನಿಲ್ದಾಣದ ಅಂತಿಮ ತಾಣವನ್ನು ಫಿಕ್ಸ್ ಮಾಡಲಾಗುವುದು. ಹಿಂದೆ ಗುರುತಿಸಿದ್ದ ಸ್ಥಳದಲ್ಲಿ ಏರ್&zwnj;ಪೋರ್ಟ್ ಮಾಡಿದರೆ 8 ಪಥಗಳ ಹೆದ್ದಾರಿ ನಿರ್ಮಾಣ ಸೇರಿದಂತೆ ಭೂಸ್ವಾಧೀನಕ್ಕೆ ಭಾರಿ ಮೊತ್ತ ವ್ಯಯಿಸಬೇಕಾಗುತ್ತದೆ, ಇದು ಪ್ರಾಯೋಗಿಕವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;ಉಡಾನ್ ಯೋಜನೆ ವಿಸ್ತರಣೆಗೆ ಕೇಂದ್ರಕ್ಕೆ ಪ್ರಸ್ತಾಪ:&lt;/strong&gt;&lt;/h2&gt;&lt;p&gt;ಪ್ರಾದೇಶಿಕ ವಿಮಾನ ನಿಲ್ದಾಣಗಳ ಸುಸ್ಥಿರತೆಗಾಗಿ 'ಉಡಾನ್' ಯೋಜನೆಯನ್ನು 3 ರಿಂದ 5 ವರ್ಷಗಳಿಗೆ ವಿಸ್ತರಿಸಬೇಕು ಮತ್ತು ನಂತರದ ಐದು ವರ್ಷ ಕೇಂದ್ರ-ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ನಿರ್ವಹಿಸಬೇಕು ಎಂದು ಕೇಂದ್ರ ಸಚಿವರಿಗೆ ಪ್ರಸ್ತಾಪ ಇಟ್ಟಿರುವುದಾಗಿ ಪಾಟೀಲ ತಿಳಿಸಿದರು. ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳ ಸ್ಥಿತಿಗತಿಯನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಬಳ್ಳಾರಿ ವಿಮಾನ ನಿಲ್ದಾಣವು ಕೇವಲ ಒಂದು ಜಿಲ್ಲೆಗೆ ಸೀಮಿತವಾಗದೆ, ಇಡೀ ಕಲ್ಯಾಣ ಕರ್ನಾಟಕ ಮತ್ತು ಪ್ರವಾಸಿ ತಾಣಗಳಿಗೆ ಹೆಬ್ಬಾಗಿಲಾಗುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kalyana-karnataka-new-location-for-ballari-airport-minister-mb-patil-announces-after-janardhana-reddy-ask-sat/articleshow-bhz1qlp"/>
        </item>
        <item>
            <title><![CDATA[ಹೊಸಪೇಟೆಯಲ್ಲಿ ಎಟಿಎಂ ಕಾರ್ಡ್ ಬದಲಿಸಿ ಲಕ್ಷ ಲಕ್ಷ ಪಂಗನಾಮ, ಹಣ ವಿತ್‌ಡ್ರಾ ಮಾಡಲು ಅಪರಿಚಿತರಿಗೆ ಕಾರ್ಡ್ ಕೊಡುವ ಮುನ್ನ ಎಚ್ಚರ!]]></title>
            <link>https://kannada.asianetnews.com/karnataka-districts/hosapete-atm-fraud-thieves-swap-cards-to-loot-lakhs-police-launch-manhunt/articleshow-c072rdl</link>
            <guid isPermaLink="true">https://kannada.asianetnews.com/karnataka-districts/hosapete-atm-fraud-thieves-swap-cards-to-loot-lakhs-police-launch-manhunt/articleshow-c072rdl</guid>
            <pubDate>Wed, 25 Mar 2026 10:40:14 +0530</pubDate>
            <description><![CDATA[&lt;p&gt;ಹೊಸಪೇಟೆಯಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಲು ಅಪರಿಚಿತನ ಸಹಾಯ ಪಡೆದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಖದೀಮನು ಎಟಿಎಂ ಕಾರ್ಡ್ ಬದಲಾಯಿಸಿ, ಬೇರೆಡೆ ಹಂತ ಹಂತವಾಗಿ 1.27 ಲಕ್ಷ ರೂಪಾಯಿ ಡ್ರಾ ಮಾಡಿ ವಂಚಿಸಿದ್ದಾನೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmhnzr7w4f0bfhz2yrd9ve5g,imgname----------------------24--1774414979324.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ(ಮಾ.25): &lt;/strong&gt;ಮೊದಲ ಬಾರಿ ಎಟಿಎಂ ಬಳಸುವ ಯುವಕರು, ಎಟಿಎಂ ಬಳಕೆ ಗೊತ್ತಿಲ್ಲದ ಹಿರಿಯರು ಇನ್ಮುಂದೆ 'ಹಣ ಡ್ರಾ ಮಾಡ್ಕೊಡಪ್ಪ' ಅಂತಾ ಎಟಿಎಂನಲ್ಲಿ ಗೊತ್ತು ಗುರಿಯಿಲ್ಲದವರ ಬಳಿ ಸಹಾಯ ಕೇಳುವ ಮುನ್ನ ಎಚ್ಚರ. ಗೊತ್ತಿಲ್ಲದೇ ಅಪರಿಚಿತ ವ್ಯಕ್ತಿ ಕೈಗೆ ಎಟಿಎಂ ಕಾರ್ಡ್ ಕೊಟ್ಟರೇ ಮುಗಿತು ಕಥೆ.. ಯಾಕೆಂದರೆ ಇದನ್ನೇ ಬಂಡಾವಳ ಮಾಡಿಕೊಂಡಿರುವ ಖದೀಮರು ಎಟಿಎಂ ಸುತ್ತಮುತ್ತಲೇ ಬೀಡುಬಿಟ್ಟಿದ್ದಾರೆ.&lt;/p&gt;&lt;h2&gt;ಸಹಾಯ ಮಾಡುವವನಂತೆ ಬಂದ ಖದೀಮ!&lt;/h2&gt;&lt;p&gt;ಎಟಿಎಂಗೆ ಹಣ ಡ್ರಾ ಮಾಡಿಕೊಳ್ಳಲು ಬರುವ ಅನಕ್ಷರಸ್ಥರು, ಬ್ಯಾಂಕಿಂಗ್, ಎಟಿಎಂ ಬಳಕೆ ಬಗ್ಗೆ ಗೊತ್ತಿಲ್ಲದ ಜನರೇ ಈ ಖದೀಮರ ಟಾರ್ಗೆಟ್. ಎಟಿಎಂ ಆಗಲಿ, ಓಟಿಪಿ ಆಗಲಿ ಯಾರಿಗೂ ಕೊಡಬಾರದು, ಶೇರ್ ಮಾಡಿಕೊಳ್ಳಬಾರದು ಎಂದು ಬ್ಯಾಂಕ್&zwnj;ಗಳು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇದೀಗ ನೋಡಿ ಅಪರಿಚಿತನಿಗೆ ಎಟಿಎಂ ಕೊಟ್ಟು ಹಣ ಡ್ರಾ ಮಾಡಿಕೊಡಲು ಹೇಳಿ ಎಟಿಎಂ ಕಾರ್ಡ್ ಕೊಟ್ಟಿದ್ದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;h3&gt;ಕಾರ್ಡ್ ಕೊಡಿ ಹಣ ಡ್ರಾ ಮಾಡಿಕೊಡ್ತೇನೆ..!&lt;/h3&gt;&lt;p&gt;ಉಮೇಶ್ ಗೌಡ ಎಂಬುವವರು ಹಣ ವಿತ್&zwnj;ಡ್ರಾ ಮಾಡಿಕೊಳ್ಳಲು ಹೊಸಪೇಟೆ ಬಸ್&zwnj; ನಿಲ್ದಾಣದ ಮುಂದೆ ಇರೋ ಕೆನರಾ ಬ್ಯಾಂಕ್&zwnj; ಎಟಿಎಂಗೆ ಹೋಗಿದ್ದಾರೆ. ಮೊದಲಿಗೆ 9 ಸಾವಿರ ಹಣ ವಿತ್ ಡ್ರಾ ಮಾಡಿದ್ದಾರೆ. ಮತ್ತೊಮ್ಮೆ 9 ಸಾವಿರ ಮಾಡಲು ಹೋದಾಗ ಟೆಕ್ನಿಕಲ್ ಸಮಸ್ಯೆಯಿಂದ ಹಣ ಬಂದಿಲ್ಲ. ಇದೇ ವೇಳೆ ಅಪರಿಚಿತ ಯುವಕ ಹಿಂದೆ ಬಂದು ನಿಂತಿದ್ದಾನೆ. 'ಎಟಿಎಂ ಕಾರ್ಡ್ ಕೊಡಿ ಹಣ ಡ್ರಾ ಮಾಡಿಕೊಡ್ತೇನೆ' ಎಂದು ನಂಬಿಸಿದ್ದಾನೆ. ಇದನ್ನ ನಂಬಿದ ಉಮೇಶ್ ಗೌಡ, ಎಟಿಎಂ ಕಾರ್ಡ್ ಕೊಟ್ಟಿದ್ದಾನೆ.&lt;/p&gt;&lt;p&gt;ಎಟಿಎಂ ಕಾರ್ಡ್&zwnj; ಪಡೆದು ಅದನ್ನ ಮಷಿನ್ ಒಳಗೆ ಹಾಕಿದಂತೆ ನಟಿಸಿ ಹಣ ಬರುತ್ತಿಲ್ಲ ಎಂದು ಹೇಳಿದ್ದಾನೆ. ಆದರೆ ಖತರ್ನಾಕ್ ಖದೀಮ ಎಟಿಎಂ ಕಾರ್ಡ್ ವಾಪಸ್ ಕೊಡುವಾಗ ಬೇರೆ ಯಾವುದೋ ಕಾರ್ಡ್ ನೀಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಇದೇ ಎಟಿಎಂ ಮುಂದೆ ನಿಂತ ವೇಳೆಯೇ ಅಪರಿಚಿತ ಯುವಕ ಬೇರೆ ಕಡೆ ಎಟಿಎಂಗೆ ಹೋಗಿ ಹಂತ ಹಂತವಾಗಿ 1 ಲಕ್ಷದ 27 ಸಾವಿರ ರೂಪಾಯಿ ಹಣ ವಿತ್ ಡ್ರಾ ಮಾಡಿದ್ದಾನೆ. ಆದರೆ ಎಟಿಎಂ ಡ್ರಾ ಮಾಡಿದಾಗ ಬ್ಯಾಂಕ್&zwnj; ಅಕೌಂಟ್&zwnj;ಗೆ ಸೇರಿಸಿರುವ ಮೊಬೈಲ್ ನಂಬರ್&zwnj;ಗೆ ಹಂತ ಹಂತವಾಗಿ ಹಣ ಡ್ರಾ ಆಗಿರುವ ಬಗ್ಗೆ ಮಸೇಜ್&zwnj;ಗಳು ಬಂದಿವೆ. ಇದನ್ನ ನೋಡಿದ ಉಮೇಶ್ ಗೌಡ ಗಾಬರಿಯಾಗಿದ್ದಾನೆ. ತಕ್ಷಣ ಬ್ಯಾಂಕ್ ಗಮನಕ್ಕೆ ತಂದಿದ್ದಾನೆ. ಸದ್ಯ ಈ ಪ್ರಕರಣ ಬಗ್ಗೆ ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು. ಸಿಸಿ ಕ್ಯಾಮೆರಾಗಳ ಆಧರಿಸಿ ಆರೋಪಿಯನ್ನ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/hosapete-atm-fraud-thieves-swap-cards-to-loot-lakhs-police-launch-manhunt/articleshow-c072rdl"/>
        </item>
        <item>
            <title><![CDATA[ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!]]></title>
            <link>https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n</link>
            <guid isPermaLink="true">https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n</guid>
            <pubDate>Sat, 04 Apr 2026 13:52:04 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯಲ್ಲಿ ಜಿಮ್ ಓನರ್ ಸಮೀರ್ ಎಂಬಾತ ಹಿಂದೂ ಯುವತಿಯನ್ನು ಪ್ರೀತಿಯ ನಾಟಕವಾಡಿ ಮೋಸಗೊಳಿಸಿದ್ದಾನೆ. ಆಕೆಗೆ ಮತ್ತು ಬರುವ ಔಷಧಿ ನೀಡಿ, ದೌರ್ಜನ್ಯ ಎಸಗಿ, ಅದನ್ನು ಚಿತ್ರೀಕರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದನು. ಈ ವಿಷಯ ತಿಳಿದ ಹಿಂದೂ ಸಂಘಟನೆಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xa48z9a" medium="video" height="768" width="1024"/>
            <content:encoded><![CDATA[&lt;p&gt;ಚೋಟ ಮುಂಬೈ ಹುಬ್ಬಳ್ಳಿಯಲ್ಲಿ ಏನಾದ್ರೂ ಸುದ್ದಿಯಾಗುತ್ತೆ.. ಅದರಲ್ಲೂ ಕೋಮು ಸಂಘರ್ಷದ ವಿಷಯ ಬಂದ್ರೆ ಹೊತ್ತಿ ಉರಿಯೋದಕ್ಕೆ ಶುರುವಾಗಿಬಿಡುತ್ತೆ.. ಇವತ್ತು ಇದೇ ಹುಬ್ಬಳ್ಳಿ ಒಂದು ಲವ್​ ಜಿಹಾದ್​​ ಕೇಸ್​​​ನಲ್ಲಿ ಮತ್ತೆ ಸುದ್ದಿಯಾಗಿದೆ.. ಜಿಮ್​ಗೆ ಬಂದ ಹಿಂದೂ ಯುವತಿಯನ್ನ ಟಾರ್ಗೆಟ್​​ ಮಾಡಿಕೊಂಡ ಜಿಮ್​​​ ಓನರ್​​​ ಒಬ್ಬ ಆಕೆಯನ್ನ ಪ್ರೀತಿಯಂಬ ಖೆಡ್ಡಾಗೆ ಬೀಳಿಸಿಕೊಂಡು ನಂತರ ಆಕೆಯನ್ನ ಬ್ಲ್ಯಾಕ್​ಮೇಲ್​​​ ಮಾಡೋದಕ್ಕೆ ಹೊರಟಿದ್ದಾನೆ.. ಆದ್ರೆ ಇವತ್ತು ಹಿಂದೂ ಸಂಘಟನೆಗಳು ಅವನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಆದ್ರೆ ಇಷ್ಟಕ್ಕೆ ಎಲ್ಲಾ ಮುಗಿಯಲಿಲ್ಲ.. ಇಲ್ಲಿಂದಲೇ ಒಂದು ಹೈಡ್ರಾಮಾ ಶುರುವಾಗಿದ್ದು.. ಅಷ್ಟಕ್ಕೂ ಆ ಜಿಮ್​​​ ಓನರ್​​ ಯಾರು..? ಅವನಿಂದ ಮೋಸ ಹೋದ ಹುಡುಗಿ ಯಾರು..? ಹುಬ್ಬಳ್ಳಿ ಇವತ್ತು ಹೊತ್ತಿ ಉರಿದ್ದಿದ್ದೇಕೆ ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​.ಐ.ಆರ್..&amp;nbsp;&lt;/p&gt;&lt;p&gt;ಆಕೆ ತನ್ನ ಪಾಡಿಗೆ ಕಾಲೇಜು.. ಮನೆ ಅಂತ ಇದ್ದವಳು.. ಮೂರು ವರ್ಷದ ಹಿಂದೆ ಜಿಮ್​ಗೆ ಸೇರಬೇಕು ಅನ್ನೋ ಯೋಚನೆ ಮಾಡ್ತಾಳೆ.. ಆಗ ಈ ಸಮೀರ್​ನ ಅಕ್ಕ ತೈಸಿಮ್​​ನ ಪರಿಚಯವಾಗುತ್ತೆ.. ಅಕ್ಕ ಸಮೀರ್​​ನನ್ನ ಪರಿಚಯ ಮಾಡಿಸುತ್ತಾಳೆ.. ಇಬ್ಬರೂ ನಂತರ ಸ್ನೇಹಿತರಾಗ್ತಾರೆ.. ಸಮೀರ್​ ಆಕೆಯ ಜೊತೆ ಪ್ರೀತಿಯ ನಾಟಕವಾಡ್ತಾನೆ.. ನಂತರ ಒಂದು ದಿನ ಮನೆಗೆ ಕರೆಸಿಕೊಂಡು ಮತ್ತು ಬರೋ ಔಷಧಿ ಕೊಟ್ಟು ಮಾಡಬಾರದನ್ನ ಮಾಡಿಬಿಡ್ತಾನೆ.. ಅಷ್ಟೇ ಅಲ್ಲ ಅದನ್ನ ಚಿತ್ರಿಸಿಕೊಳ್ತಾನೆ ಕೂಡ.. ಆದ್ರೆ ಇದೆಲ್ಲಾ ಆಗಿ ಸ್ವಲ್ಪ ದಿನಕ್ಕೇ ಆ ನೀಚ ಖುಷಿಗೆ ಬ್ಲ್ಯಾಕ್​​​ಮೇಲ್​ ಮಾಡೋದಕ್ಕೆ ಶುರು ಮಾಡ್ತಾನೆ.. ಆತನಿಂದ ಆ ಹೆಣ್ಣುಮಗಳು ನರಕ ನೋಡ್ತಾಳೆ.. ಈ ವಿಷ್ಯಾ ಅದೇಗೋ ಹಿಂದೂ ಸಂಘಟನೆಯವರಿಗೆ ಗೊತ್ತಾಗಿ ಸೀದಾ ಸಮೀರ್​ ಮನೆಯ ಬಳಿ ಹೋಗ್ತಾರೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-gym-trainer-assaulted-over-alleged-love-jihad-gdp-videoshow-c1wai9n"/>
        </item>
        <item>
            <title><![CDATA[ಮೇ ಅಂತ್ಯಕ್ಕೆ ಎಲ್ಲ 33 ಕ್ರಸ್ಟ್‌ ಗೇಟ್‌ ಅಳವಡಿಕೆ ಪೂರ್ಣ: ಸಚಿವ ಎನ್.ಎಸ್.ಬೋಸರಾಜು]]></title>
            <link>https://kannada.asianetnews.com/karnataka-districts/tungabhadra-dam-crest-gate-installation-update-ns-boseraju-gvd/articleshow-fry75qg</link>
            <guid isPermaLink="true">https://kannada.asianetnews.com/karnataka-districts/tungabhadra-dam-crest-gate-installation-update-ns-boseraju-gvd/articleshow-fry75qg</guid>
            <pubDate>Sat, 21 Mar 2026 22:17:27 +0530</pubDate>
            <description><![CDATA[&lt;p&gt;33 ನೂತನ ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ&zwnj;. ಕಾಮಗಾರಿಯು ನಿರೀಕ್ಷಿತ ಸಮಯಕ್ಕಿಂತ ವೇಗವಾಗಿ ಸಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzwzmjac9ty1cs6za7jmmatc,imgname-bfb-1752245619020.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಮಾ.21): &lt;/strong&gt;ಮೇ ಅಂತ್ಯದೊಳಗೆ ತುಂಗಭದ್ರಾ ಜಲಾಶಯದ ಎಲ್ಲಾ 33 ನೂತನ ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ&zwnj;. ಕಾಮಗಾರಿಯು ನಿರೀಕ್ಷಿತ ಸಮಯಕ್ಕಿಂತ ವೇಗವಾಗಿ ಸಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು. ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಶುಕ್ರವಾರ ಭೇಟಿ ನೀಡಿ, ತಾಂತ್ರಿಕ ತಂಡವು ನಡೆಸುತ್ತಿರುವ ಜಲಾಶಯದ ಕ್ರೆಸ್ಟ್ ಗೇಟ್ ಅಳವಡಿಕೆ ಕಾರ್ಯಗಳನ್ನು ಖುದ್ದು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೂನ್&zwnj;ನಲ್ಲಿ ಆರಂಭವಾಗುವ ಮುಂಗಾರು ಮಳೆಗಾಲದ ವೇಳೆಗೆ ಜಲಾಶಯವು ಸಂಪೂರ್ಣ ಸಿದ್ಧವಾಗಲಿದೆ ಎಂದರು.&lt;/p&gt;&lt;p&gt;ಈಗಾಗಲೇ ತುಂಗಭದ್ರಾ ಜಲಾಶಯದ18 ನೂತನ ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, 5 ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಒಟ್ಟು 23 ಗೇಟ್&zwnj;ಗಳ ಕೆಲಸ ಮುಗಿಯುವ ನಿರೀಕ್ಷೆಯಿದೆ. ಎಕ್ಸ್&zwnj;ಪರ್ಟ್ ಟೀಮ್ ಮತ್ತು ಚೀಫ್ ಎಂಜಿನಿಯರ್&zwnj;ಗಳ ಪ್ರಕಾರ, ಗೇಟ್ ಬದಲಾವಣೆಯ ಸಮಯದಲ್ಲಿ ಹಳೆಯ ಅಣೆಕಟ್ಟಿನ ರಚನೆಗೆ ಯಾವುದೇ ತೊಂದರೆಯಾಗಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಉಳಿದ 10 ಗೇಟ್&zwnj;ಗಳನ್ನು ಅಳವಡಿಸಿ, ಮೇ ಅಂತ್ಯದೊಳಗೆ ಎಲ್ಲಾ 33 ನೂತನ ಕ್ರಸ್ಟ್ ಗೇಟ್&zwnj;ಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ಜಲಾಶಯದ ಗೇಟ್&zwnj;ಗಳಿಗೆ ನೂತನ ಚೈನ್&zwnj; ಅಳವಡಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಚೈನ್&zwnj;ಗಳಿಗಾಗಿ ₹5.6 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು. ಪ್ರತಿ ಗೇಟ್&zwnj;ಗೆ ಎರಡು ಚೈನಿನಂತೆ 33 ಗೇಟ್&zwnj;ಗಳಿಗೆ 66 ಚೈನ್&zwnj; ಅಳವಡಿಸಲಾಗುವುದು. ಜಲಾಶಯದ ಎಲ್ಲ 33 ನೂತನ ಗೇಟ್ ಅಳವಡಿಕೆ ನಂತರ ಜಲಾಶಯದ ಗೇಟ್&zwnj;ಗಳಿಗೆ ಚೈನ್&zwnj; ಅಳವಡಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು. ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆಗೆ ₹ 48 ಕೋಟಿ ಟೆಂಡರ್ ಕರೆಯಲಾಗಿದ್ದು, ಇದುವರೆಗೆ ₹35 ಕೋಟಿ ಹಣ ವೆಚ್ಚ ಮಾಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಪತ್ರ ವ್ಯವಹಾರ&lt;/strong&gt;&lt;/h2&gt;&lt;p&gt;ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನ ಸಮಸ್ಯೆಗೆ ಪರಿಹಾರವಾಗಿ &rsquo;ನವಲಿ&rsquo; ಯೋಜನೆಯ ಪ್ರಸ್ತಾವನೆಯನ್ನು ಮಂಡಳಿ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ. ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೂ ಸಹ ಪತ್ರ ವ್ಯವಹಾರ ನಡೆಸಲಾಗಿದೆ. ಸಂಬಂದಪಟ್ಟ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ತೆಲಂಗಾಣ ಸರ್ಕಾರದೊಂದಿಗೂ ಸಮನ್ವಯ ಸಾಧಿಸಲು ಪ್ರಯತ್ನಿಸಲಾಗುತ್ತಿದ್ದು, ವಿವಿಧ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಗಳು ಬಗೆಹರಿದ ನಂತರ ಪೂರ್ಣ ಸಹಕಾರ ಸಿಗುವ ನಿರೀಕ್ಷೆಯಿದೆ ಎಂದರು.&lt;/p&gt;&lt;p&gt;ಈ ಬಗ್ಗೆ ನಮ್ಮ ರಾಜ್ಯದ ವಿವಿಧ ಚುನಾಯಿತ ಪ್ರತಿನಿಧಿಗಳ ನಿಯೋಗವು ನವದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದ ಅಧಿಕಾರಿಗಳು ಮತ್ತು ವಿವಿಧ ರಾಜ್ಯಗಳ ಸಂಸದರೊಂದಿಗೆ ಮಹತ್ವದ ಚರ್ಚೆ ನಡೆಸಲಾಗಿದೆ. ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಚುನಾವಣಾ ನೀತಿ ಸಂಹಿತೆಯ ಪ್ರಕ್ರಿಯೆಗಳ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.&lt;/p&gt;&lt;p&gt;ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಕೊಪ್ಪಳ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಟಿಬಿ ಬೋರ್ಡ್ ಹಾಗೂ ಕೆ.ಎನ್.ಎನ್.ಎಲ್. ಅಧಿಕಾರಿಗಳಾದ ಮುಖ್ಯ ಇಂಜಿನಿಯರ್ ಶ್ರೀನಿವಾಸ ಮಲ್ಲಿಗಿವಾಡ, ಎಇಇ ಧರ್ಮರಾಜ್ ಹಾಗೂ ಜ್ಞಾನೇಶ್ವರ, ಸೆಕ್ಷನ್ ಅಧಿಕಾರಿಗಳಾದ ಜಿ. ಕಿರಣ, ಪಂಪಾಪತಿ ಡಿ.ಕೆ. ಮತ್ತು ಹುಲಿರಾಜ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/tungabhadra-dam-crest-gate-installation-update-ns-boseraju-gvd/articleshow-fry75qg"/>
        </item>
        <item>
            <title><![CDATA['ಓವರ್ ಸ್ಮಾರ್ಟ್ ನನ್ನ ಹತ್ರ ತೋರಿಸ್ಬೇಡ' ರೌಡಿಶೀಟರ್‌ಗಳ ಬೆವರಿಳಿಸಿದ ಎಸ್‌ಪಿ ಜಾಹ್ನವಿ]]></title>
            <link>https://kannada.asianetnews.com/state/vijayanagar-sp-jahnavi-cracks-down-on-criminals-no-over-smartness-tolerated-rav/articleshow-fug7lv9</link>
            <guid isPermaLink="true">https://kannada.asianetnews.com/state/vijayanagar-sp-jahnavi-cracks-down-on-criminals-no-over-smartness-tolerated-rav/articleshow-fug7lv9</guid>
            <pubDate>Sat, 21 Mar 2026 10:37:45 +0530</pubDate>
            <description><![CDATA[ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯು ಹೊಸಪೇಟೆಯಲ್ಲಿ 220 ರೌಡಿಶೀಟರ್&zwnj;ಗಳ ವಿಶೇಷ ಪರೇಡ್ ನಡೆಸಿತು. ಎಸ್&zwnj;ಪಿ ಎಸ್.ಜಾಹ್ನವಿ ಅವರು ಅಪರಾಧ ಚಟುವಟಿಕೆಗಳನ್ನು ನಿಲ್ಲಿಸಿ ಸುಧಾರಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದು, ಸಮಾಜದಲ್ಲಿ ಶಾಂತಿ ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km7ch2pp6db3xz061nhqcx1z,imgname----------------------6--1774069517014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಮಾ.21): &lt;/strong&gt;ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಎಸ್&zwnj;ಪಿ ಎಸ್.ಜಾಹ್ನವಿ ರೌಡಿಶೀಟರ್&zwnj;ಗಳಿಗೆ ಬೆವರಿಳಿಸುವಂತೆ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದರು.&lt;/p&gt;&lt;p&gt;ಹೊಸಪೇಟೆಯ ಡಿಆರ್&zwnj; ಮೈದಾನದಲ್ಲಿ ಬುಧವಾರ ನಡೆದ ಈ ವಿಶೇಷ ರೌಡಿ ಪರೇಡ್&zwnj;ನಲ್ಲಿ ಜಿಲ್ಲೆಯ 21 ಪೊಲೀಸ್ ಠಾಣೆಗಳ ವ್ಯಾಪ್ತಿಯ 220 ರೌಡಿ ಶೀಟರ್&zwnj;ಗಳು ಭಾಗವಹಿಸಿದರು.&lt;/p&gt;&lt;p&gt;ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೆ ಕಣ್ಣಿಟ್ಟಿರುವ ಪೊಲೀಸ್ ಇಲಾಖೆ, ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಪರೇಡ್ ವೇಳೆ ರೌಡಿ ಶೀಟರ್&zwnj;ಗಳನ್ನು ಸಾಲುಗಟ್ಟಿ ನಿಲ್ಲಿಸಿ, ಶಿಸ್ತು, ವರ್ತನೆ ಹಾಗೂ ಕಾನೂನು ಪಾಲನೆ ಕುರಿತು ಎಸ್&zwnj;ಪಿ ಜಾಹ್ನವಿ ಅವರು ರೌಡಿ ಶೀಟರ್&zwnj; ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.&lt;/p&gt;&lt;p&gt;ಅಪರಾಧ ಚಟುವಟಿಕೆಗಳಿಂದ ದೂರ ಇರಬೇಕು. ಸುಧಾರಣೆಗೆ ಪ್ರತಿದಿನವೂ ಅವಕಾಶ ಇದೆ. ಒಳ್ಳೆಯ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕುವಂತೆ ಎಂದು ಅವರು ಸಲಹೆ ನೀಡಿದರು.&lt;/p&gt;&lt;p&gt;ಇದೇ ವೇಳೆ 'ಒಮ್ಮೆ ಎಚ್ಚರಿಕೆ ನೀಡಿದ ಬಳಿಕವೂ ಚಟುವಟಿಕೆಗಳು ಮುಂದುವರಿದರೆ, ಇದಕ್ಕಿಂತಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸಂದೇಶ ನೀಡಿದರು.&lt;/p&gt;&lt;p&gt;ರೌಡಿಗಳಲ್ಲಿ ಕೆಲವರು ಪರೇಡ್ ವೇಳೆ ಸರಿಯಾಗಿ ನಿಲ್ಲದೇ ನಿರ್ಲಕ್ಷ್ಯ ತೋರಲು ಯತ್ನಿಸಿದಾಗ, 'ಮೊದಲು ಸರಿಯಾಗಿ ನಿಲ್ಲೋದು ಕಲಿಯಿರಿ. ಯಾವ ಸಣ್ಣ ಕೇಸ್&zwnj;ನಲ್ಲಿ ಇರುವವನು ನೀನು? ಓವರ್ ಸ್ಮಾರ್ಟ್ ಆಗಿ ಆಡಬೇಡಿ ಎಂದು ಎಸ್&zwnj;ಪಿ ಜಾಹ್ನವಿ ಅವರು ಗೌಡಿ ಶೀಟರ್&zwnj;ಗಳಿಗೆ ಬೆವರಿಳಿಸಿದರು.&lt;/p&gt;&lt;p&gt;ಇದೇ ವೇಳೆ 15 ರೌಡಿ ಶೀಟರ್&zwnj;ಗಳಿಗೆ ಗಡಿಪಾರು ಮಾಡಲು ಸೂಚನೆ ನೀಡಿದರು. ರೌಡಿಶೀಟರ್&zwnj;ಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದ್ದು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;ವಿಜಯನಗರ ಜಿಲ್ಲೆಯಾದ್ಯಂತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್&zwnj;ಪಿ ಜಾಹ್ನವಿ ಅವರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.&lt;/p&gt;&lt;p&gt;ಎಎಸ್&zwnj;ಪಿ ಮಂಜುನಾಥ, ಡಿವೈಎಸ್&zwnj;ಪಿ ಡಾ. ಟಿ. ಮಂಜುನಾಥ ಸೇರಿದಂತೆ 21 ಪೊಲೀಸ್ ಠಾಣೆಗಳ ಪೊಲೀಸ್&zwnj; ಅಧಿಕಾರಿಗಳು ಭಾಗವಹಿಸಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/vijayanagar-sp-jahnavi-cracks-down-on-criminals-no-over-smartness-tolerated-rav/articleshow-fug7lv9"/>
        </item>
        <item>
            <title><![CDATA[ಪ್ರಾಣಿ ಸತ್ತಂತೆ ವಾಸನೆ ಬರ್ತಿದೆ ಎಂದು ಹುಡುಕಿದಾಗ ಪೀಸ್ ಪೀಸ್ ಆಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮನೆ ಮಗನ ಶವ]]></title>
            <link>https://kannada.asianetnews.com/state/missing-youth-found-in-as-pieces-in-bag-in-huvinahadagali-beerabbi/articleshow-hv8ny29</link>
            <guid isPermaLink="true">https://kannada.asianetnews.com/state/missing-youth-found-in-as-pieces-in-bag-in-huvinahadagali-beerabbi/articleshow-hv8ny29</guid>
            <pubDate>Thu, 05 Mar 2026 14:07:21 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆಯ ಬೀರಬ್ಬಿಯಲ್ಲಿ 15 ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವ ಗೋಣಿ ಚೀಲದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಾಣಿ ಸತ್ತಂತೆ ವಾಸನೆ ಬರುತ್ತಿದೆ ಎಂದು ನೋಡಿದಾಗ ಮನೆಯವರಿಗೆ ತಮ್ಮದೇ ಮನೆ ಹಿಂದೆ ಮಗನ ಶವ ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjyhhyd046f83egzq2szb5zz,imgname-murder-in-huvina-hadagali-1772699056544.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬಳ್ಳಾರಿಯಲ್ಲಿ ಯುವಕನ ಭೀಕರ ಕೊಲೆ&lt;/strong&gt;&lt;/h2&gt;&lt;p&gt;ಬಳ್ಳಾರಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಬೀರಬ್ಬಿಯಲ್ಲಿ ಯುವಕನ ಭೀಕರ ಕೊಲೆ ನಡೆದಿದೆ. ಕೊಲೆ ಮಾಡಿದ ಆರೋಪಿಗಳು ಯುವಕನ ದೇಹ ಭಾಗವನ್ನು ಹಲವು ಭಾಗಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ದೂರ ಎಸೆದು ಪರಾರಿಯಾಗಿದ್ದಾರೆ. 25 ವರ್ಷದ ಬೀರೇಶ್ ಕೊಲೆಯಾದ ಯುವಕ. ಬೀರೇಶ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ. ಕಾಣೆಯಾಗಿದ್ದ ಬೀರೇಶ್&zwnj;ಗಾಗಿ ಆತನ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಸಂಜೆ ಆತನ ಶವ ಮನೆಯ ಹಿಂಭಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ಪ್ರಾಣಿ ಸತ್ತಂತೆ ವಾಸನೆ ಬರುತ್ತಿದೆ ಎಂದು ಕುಟುಂಬದವರು ಮನೆಯ ಹಿಂಭಾಗದಲ್ಲಿ ಪರಿಶೀಲಿಸಿದಾಗ ಬೀರೇಶ್&zwnj;ನ ಮೃತದೇಹ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಶವ ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಪ್ರಾಣಿ ಸತ್ತಂತೆ ವಾಸನೆ ಬರುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆವಿಜಯನಗರ ಎಸ್ಪಿ ಜಾಹ್ನವಿ ದೌಡಾಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ &amp;nbsp;ಓದಿ: &lt;/strong&gt;&lt;strong&gt;ಹಾಸನ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ಲೋಕಾ ಅಧಿಕಾರಿಗಳಿಗೆ ಮನೆ ಬಾಗಿಲು ತೆರೆಯದ ಇಂಜಿನಿಯರ್ ಸತ್ಯಾನಾರಾಯಣ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಇಷ್ಟೊಂದು ಕ್ರೂರವಾಗಿ ಹತ್ಯೆ ಮಾಡಿದ ಹಿಂದಿನ ಕಾರಣವೂ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳು, ಹಾಸ್ಟೆಲ್&zwnj;ಗಳಲ್ಲಿ ದಿಢೀರ್ ಡ್ರಗ್ ಡೆಸ್ಟ್: ಸಿಕ್ಕಿಬಿದ್ದ ವಿದ್ಯಾರ್ಥಿಗಳೆಷ್ಟು?&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Anusha Kb</dc:creator>
            <atom:link href="https://kannada.asianetnews.com/state/missing-youth-found-in-as-pieces-in-bag-in-huvinahadagali-beerabbi/articleshow-hv8ny29"/>
        </item>
        <item>
            <title><![CDATA[ಹುಬ್ಬಳ್ಳಿ ಲವ್‌ ಜಿಹಾದ್ ಪ್ರಕರಣ: ಸಮೀರ್‌ ಮೊಬೈಲ್ ನಲ್ಲಿ ಹಲವು ವಿಡಿಯೋ, ಹಿಂದೂ ಯುವತಿಯರ ಸಂಪರ್ಕಕ್ಕೆ ಅಕ್ಕನೇ ಸಾಥ್!]]></title>
            <link>https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3</link>
            <guid isPermaLink="true">https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3</guid>
            <pubDate>Sat, 04 Apr 2026 09:23:29 +0530</pubDate>
            <description><![CDATA[ಹುಬ್ಬಳ್ಳಿಯ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾ ವಿರುದ್ಧ ಲವ್&zwnj; ಜಿಹಾದ್&zwnj; ಆರೋಪ ಕೇಳಿಬಂದಿದ್ದು, ಆತ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಖುಷಿ ಎಂಬ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ, ಹಲವು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಆತನ ಮೊಬೈಲ್&zwnj;ನಲ್ಲಿದ್ದ ವಿಡಿಯೋಗಳು ಸಾಕ್ಷಿಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knb9xjmmm3810ys3g25brn5c,imgname-hubballi-love-jihad-case--1--1775274740372.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿಯಲ್ಲಿ ಮತ್ತೆ ಲವ್&zwnj; ಜಿಹಾದ್&zwnj; ಆರೋಪ ಸದ್ದು ಮಾಡಿದ್ದು, ವಿಜಯನಗರದ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾನ ಜಾತಕ ಒಂದೊಂದಾಗಿ ಹೊರಬರುತ್ತಿದೆ. ಹಿಂದೂ ಯುವತಿಯರನ್ನು ಪರಿಚಯ ಮಾಡಿಕೊಂಡು ಲವ್&zwnj; ಜಿಹಾದ್&zwnj;ಗೆ ಯತ್ನಿಸಿದ್ದಾನೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಹಲವು ವಿಡಿಯೋಗಳು ಆತನ ಮೊಬೈಲ್&zwnj;ನಲ್ಲಿ ಲಭ್ಯವಾಗಿದೆ. ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ, ದೌರ್ಜನ್ಯ ಮತ್ತು ಬಲವಂತದ ಗರ್ಭಪಾತಗಳ ಆರೋಪಗಳು ಆತನ ಮೇಲೆ ಕೇಳಿಬಂದಿದೆ.&lt;/p&gt;&lt;p&gt;ವಿಜಯನಗರದ ಜಿಮ್&zwnj; ಟ್ರೈನರ್&zwnj; ಸಮೀರ್&zwnj; ಮುಲ್ಲಾ ತನ್ನ ಸಂಪರ್ಕ ವಲಯದ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಲವ್&zwnj; ಜಿಹಾದ್ ನಡೆಸಿದ್ದು. ಅವನ ಮೊಬೈಲ್ ಫೋನ್&zwnj;ನಲ್ಲಿ ಹಲವು ಯುವತಿಯರೊಂದಿಗೆ ನಡೆದ ವಾಟ್ಸಪ್ ಚಾಟ್&zwnj;ಗಳು, ಫೋಟೋಗಳು ಮತ್ತು ಕೆಲವು ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;&lt;h2&gt;ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆ ನೀಡಿರುವ ಸಮೀರ್&lt;/h2&gt;&lt;p&gt;ಖುಷಿ ಕಲಬುರಗಿ ಎಂಬ ಯುವತಿಯೊಂದಿಗೆ ಸಮೀರ್ ಮುಲ್ಲಾ ಹೊಂದಿದ್ದ ಸಂಬಂಧವು ಈ ಪ್ರಕರಣದ ಕೇಂದ್ರಬಿಂದುವಾಗಿದೆ. ಖುಷಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಇದೆ. ಇದಲ್ಲದೆ, ಪ್ರತೀ ಬಾರಿ ದೌರ್ಜನ್ಯ ನಂತರ ಗರ್ಭಪಾತ ಮಾಡಲು ಬಲವಂತ ಮಾಡುತ್ತಿದ್ದನೆಂದು ಹೇಳಲಾಗಿದೆ. ಖುಷಿಗೆ 8 ರಿಂದ 10 ಬಾರಿ ಗರ್ಭಪಾತ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.&lt;/p&gt;&lt;p&gt;ಮಾತ್ರೆಗಳನ್ನು ಸೇವಿಸಲು ಖುಷಿ ನಿರಾಕರಿಸಿದಾಗ, ಸಮೀರ್ ಮುಲ್ಲಾ ಒತ್ತಡ ಹೇರುತ್ತಿದ್ದನು ಮತ್ತು ಬೆದರಿಕೆ ಹಾಕುತ್ತಿದ್ದನು ಎಂಬುದು ಆರೋಪದ ಭಾಗವಾಗಿದೆ. ಮಾತ್ರೆ ತೆಗೆದುಕೊಳ್ಳುವ ದೃಶ್ಯವನ್ನು ವಿಡಿಯೋ ರೂಪದಲ್ಲಿ ದಾಖಲಿಸಿ ತನಗೆ ಕಳುಹಿಸುವಂತೆ ಕೂಡ ಸೂಚಿಸುತ್ತಿದ್ದನೆಂದು ಹೇಳಲಾಗಿದೆ. ಈ ರೀತಿಯ ವಿಡಿಯೋಗಳು ಇದೀಗ ಬಹಿರಂಗಗೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ&lt;/p&gt;&lt;h2&gt;ತಂಗಿಯ ಸಾಥ್, &amp;nbsp;ಸಮೀರ್ ಗೆ ಹುಡುಗಿರ ಪರಿಚಯ&lt;/h2&gt;&lt;p&gt;ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಸಮೀರ್ ಮುಲ್ಲಾಗೆ ಯುವತಿಯರನ್ನು ಪರಿಚಯ ಮಾಡಿಸುತ್ತಿದ್ದವರಲ್ಲಿ ಅವನ ಸಹೋದರಿಯ ಪಾತ್ರವಿದೆ ಎಂಬ ಆರೋಪ. ತೈಸಿಮ್ ಮುಲ್ಲಾ ಎಂಬ ಸಮೀರ್&zwnj;ನ ಸಹೋದರಿ, ತನ್ನ ಪರಿಚಯದ ಯುವತಿಯರನ್ನು ಅವನಿಗೆ ಪರಿಚಯಿಸುತ್ತಿದ್ದಳು ಎನ್ನಲಾಗಿದೆ. ಖುಷಿ ಕಲಬುರಗಿಯನ್ನು ಸಹ ತೈಸಿಮ್ ಮುಲ್ಲಾ ಸಮೀರ್&zwnj;ಗೆ ಪರಿಚಯ ಮಾಡಿಕೊಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಆರಂಭದಲ್ಲಿ ಖುಷಿ ಏರೋಬಿಕ್ ಕ್ಲಾಸ್&zwnj;ಗೆ ಹಾಜರಾಗುತ್ತಿದ್ದಳು. ಇದೇ ಸಂದರ್ಭದಲ್ಲಿಯೇ ಪರಿಚಯ ಬೆಳೆಯಿತು. ಬಳಿಕ ಖುಷಿಯನ್ನು ಪಾರ್ಟಿಗಳು, ಹೋಟೆಲ್&zwnj;ಗಳಿಗೆ ಕರೆದುಕೊಂಡು ಹೋಗಿ, ಸಮೀರ್ ಜೊತೆ ಸಮಯ ಕಳೆಯುವಂತೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಮೂಲಕ ಇಬ್ಬರ ಮಧ್ಯೆ ಸಂಬಂಧ ಬೆಳೆಸಲು ತೈಸಿಮ್ ಮುಲ್ಲಾ ಸಹಕರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೈಸಿಮ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಖುಷಿ ಸೇರಿಕೊಂಡಿರುವ ವಿಡಿಯೋಗಳು ಕೂಡ ಇದೀಗ ಹೊರಬಂದಿವೆ. ಈ ಎಲ್ಲಾ ಬೆಳವಣಿಗೆಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಲವ್&zwnj; ಜಿಹಾದ್&zwnj;ಗೆ ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಅಮಾಯಕ ಹಿಂದೂ ಯುವತಿಯರನ್ನು ಮೋಸದ ಬಲೆಗೆ ಸಿಲುಕಿಸುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.&lt;/p&gt;&lt;p&gt;ಸಮೀರ್&zwnj;ನ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದರೆ, ನನ್ನ ಸಹೋದರನ ಮೇಲೆ ಸುಳ್ಳು ಆರೋಪ ಮಾಡಿ ಮನೆಗೆ ಬಂದು ಅವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಿಡ್ನ್ಯಾಪ್&zwnj; ಮಾಡಿದ್ದಾರೆ ಎಂದು ಸಮೀರ್&zwnj; ಸಹೋದರಿ ತೈಸಿಮ್&zwnj; ಅಶೋಕ ನಗರ ಪೊಲೀಸ್&zwnj; ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-love-jihad-case-gym-trainer-sameer-mulla-accused-of-exploitation-and-forced-abortions-gdp/articleshow-k987fr3"/>
        </item>
        <item>
            <title><![CDATA[ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ]]></title>
            <link>https://kannada.asianetnews.com/gallery/karnataka-districts/karnataka-s-human-calculator-maggi-ajjayya-kotrayya-video-viral-resident-of-gangammanahalli-of-kottooru-taluk-mrq-lfpaim1</link>
            <guid isPermaLink="true">https://kannada.asianetnews.com/gallery/karnataka-districts/karnataka-s-human-calculator-maggi-ajjayya-kotrayya-video-viral-resident-of-gangammanahalli-of-kottooru-taluk-mrq-lfpaim1</guid>
            <pubDate>Sun, 08 Mar 2026 13:29:08 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆಯ ಕೊಟ್ಟೂರಿನ ನಿವಾಸಿ ಕೊಟ್ರಯ್ಯ, 'ಮಗ್ಗಿ ಅಜ್ಜಯ್ಯ' ಎಂದೇ ಜನಪ್ರಿಯರಾಗಿದ್ದಾರೆ. ಕೇವಲ 8ನೇ ತರಗತಿ ಓದಿದ್ದರೂ, ಇವರು ಕಂಪ್ಯೂಟರ್&zwnj;ಗಿಂತ ವೇಗವಾಗಿ ಗಣಿತದ ಲೆಕ್ಕಗಳನ್ನು ಬಿಡಿಸುವ ಮೂಲಕ 'ಮಾನವ ಕಂಪ್ಯೂಟರ್' ಎನಿಸಿಕೊಂಡಿದ್ದಾರೆ. ಪ್ರತಿಭೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk66pg90spw96xt7srgphjsd,imgname-maggi-ajjayya--4--1772956107040.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯನಗರ ಜಿಲ್ಲೆಯ ಕೊಟ್ಟೂರಿನ ನಿವಾಸಿ ಕೊಟ್ರಯ್ಯ, 'ಮಗ್ಗಿ ಅಜ್ಜಯ್ಯ' ಎಂದೇ ಜನಪ್ರಿಯರಾಗಿದ್ದಾರೆ. ಕೇವಲ 8ನೇ ತರಗತಿ ಓದಿದ್ದರೂ, ಇವರು ಕಂಪ್ಯೂಟರ್&zwnj;ಗಿಂತ ವೇಗವಾಗಿ ಗಣಿತದ ಲೆಕ್ಕಗಳನ್ನು ಬಿಡಿಸುವ ಮೂಲಕ 'ಮಾನವ ಕಂಪ್ಯೂಟರ್' ಎನಿಸಿಕೊಂಡಿದ್ದಾರೆ. ಪ್ರತಿಭೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಗಣಿತ ಅಂದ್ರೆ ಕಬ್ಬಿಣದ ಕಡಲೆ ಎಂಬ ಮಾತಿದೆ. ಆದ್ರೆ ಈ ಕಡಲೆ ಬಿಡಿಸುವ ವಿಧಾನ ತಿಳಿದುಕೊಂಡ್ರೆ ಗಣಿತದಷ್ಟು ಸುಲಭದ ಮತ್ತೊಂದು ವಿಷಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಇನ್ನು ಗಣಿತ ಬಲ್ಲವ ಎಲ್ಲಾ ವಿಷಯಗಳಲ್ಲಿಯೂ ಜಾಣನಾಗಿರುತ್ತಾನೆ. ಆದರೂ ಇಂದು ಎಷ್ಟೋ ಜನರು ಗಣಿತ ಅಂದ್ರೆ ಹೆದರುತ್ತಾರೆ. ಭಾರತದ ಶಕುಂತಲಾ ದೇವಿ ಅವರನ್ನು ಮಾನವ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ. ಆದ್ರೆ ನಮ್ಮ ರಾಜ್ಯದಲ್ಲಿರುವ ಮಗ್ಗಿ ಕೊಟ್ರಯ್ಯ ಅಜ್ಜಯ್ಯನ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.&lt;/p&gt;&lt;img&gt;&lt;p&gt;ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಂಗಮ್ಮನಹಳ್ಳಿಯ ನಿವಾಸಿಯಾಗಿರುವ ಕೊಟ್ರಯ್ಯ ಅವರು ಈ ಭಾಗದಲ್ಲಿ ಮಗ್ಗಿ ಅಜ್ಜಯ್ಯ ಎಂದು ಜನಪ್ರಿಯರು. ಇವರ ಲೆಕ್ಕಗಳನ್ನು ಕೇಳಿದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಸಾಮಾನ್ಯರಲ್ಲಿ ಸಾಮನ್ಯರಂತೆ ಕಾಣುವ ಕೊಟ್ರಯ್ಯ, ಲೆಕ್ಕವನ್ನು ಕಂಪ್ಯೂಟರ್&zwnj;ಗಿಂತಲೂ ವೇಗವಾಗಿ ಪರಿಹರಿಸುತ್ತಾರೆ.&lt;/p&gt;&lt;img&gt;&lt;p&gt;ಕೊಟ್ರಯ್ಯ ಅಜ್ಜನವರು ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರು ನಮ್ಮ ಕೊಟ್ಟೂರು ಭಾಗದ ಮಾನವ ಕಂಪ್ಯೂಟರ್ &quot;ಮಗ್ಗಿ ಕೊಟ್ರಯ್ಯ&quot; ಅಜ್ಜ. ಲಕ್ಷ ಲಕ್ಷ ಕೊಟ್ಟು ಇಂಗ್ಲಿಷ್ ಮೀಡಿಯಂ ಓದಿದವರು, ನಿಮ್ಮ ಮುಂದೆ ಬಚ್ಚಾಗಳು ತಾತ. ಯಪ್ಪಾ ದೇವರೇ, ಎನ್ ಪಾ ಇವರ್ ಟ್ಯಾಲೆಂಟ್. ದೇವರು ನಿಮಗೆ ಒಳ್ಳೆ ಆರೋಗ್ಯ ಕೊಡಲಿ ತಾತ, ಸದಾ ಹಸನ್ಮುಖಿಯಾಗಿರಿ, ನಿಮಗಿರುವ ಟ್ಯಾಲೆಂಟ್&zwnj;ಗೆ ಎಷ್ಟು ದುಡ್ಡು ಕೊಟ್ಟರೂ ಸಾಲದು ಎಂದು ಕಮೆಂಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;halekotturu ಹೆಸರಿನ ಇನ್&zwnj;ಸ್ಟಾಗ್ರಾಂನಲ್ಲಿ ಕೊಟ್ರಯ್ಯ ಅಜ್ಜನವರ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬರು ಒಂದಿಷ್ಟು ಅಂಕೆಗಳ ಗುಣಕಾರದ ಪ್ರಶ್ನೆ ಮಾಡುತ್ತಾರೆ. ಅಜ್ಜಯ್ಯ ಒಂದು ಕ್ಷಣವೂ ಯೋಚಿಸದೇ ಉತ್ತರ ನೀಡುತ್ತಾರೆ. ಇದೆಲ್ಲಾ ಹೇಗೆ ಬರುತ್ತೆ ಅಂತ ಕೇಳಿದಾಗ, ಅಂದಾಜಿನಲ್ಲಿ ಹೇಳುತ್ತೇನೆ ಅಂತಾರೆ. ಈ ಕೊಟ್ರಯ್ಯ ಅಜ್ಜಯ್ಯ ಹೇಳುವ ಪ್ರಕಾರ, ಇವರು 8ನೇ ತರಗತಿವರೆಗೆ ಮಾತ್ರ ಓದಿದ್ದಾರೆ.&lt;/p&gt;&lt;img&gt;&lt;p&gt;ಇದೇ ವಿಡಿಯೋದಲ್ಲಿ ಜನರು, ತಮಗೆ ಒಂದಿಷ್ಟು ಹಣದ ಸಹಾಯ ಮಾಡುತ್ತಾರೆ ಅಂತಾನೂ ಹೇಳಿದ್ದಾರೆ. ಮಗ್ಗಿ ಅಜ್ಜಯ್ಯನವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೂ ಈ ವಿಡಿಯೋಗೆ 15 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್&zwnj;ಗಳು ಬಂದಿವೆ. ನಿಮಗೂ ಈ ಮಗ್ಗಿ ಅಜ್ಜಯ್ಯವರನ್ನು ನೋಡಿದ್ದೀರಾ? ಅವರೊಂದಿಗೆ ಮಾತನಾಡಿದ್ದೀರಾ? ಅಜ್ಜಯ್ಯ ಜೊತೆಗಿನ ನಿಮ್ಮ ಅನುಭವವನ್ನು ಕಮೆಂಟ್&zwnj;ನಲ್ಲಿ ಹಂಚಿಕೊಳ್ಳಿ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by HALEKOTTURU (Around Kotturu) (@halekotturu)&lt;/p&gt;&lt;p&gt;&lt;/p&gt;]]></content:encoded>
            <category>vijayanagara</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/karnataka-s-human-calculator-maggi-ajjayya-kotrayya-video-viral-resident-of-gangammanahalli-of-kottooru-taluk-mrq-lfpaim1"/>
        </item>
        <item>
            <title><![CDATA[ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ 62 ಜನರು ಪ್ರಯಾಣಿಸುತ್ತಿದ್ದ ಕೆಕೆಆರ್‌ಟಿಸಿ ಬಸ್]]></title>
            <link>https://kannada.asianetnews.com/gallery/karnataka-districts/kkrtc-bus-carrying-62-people-collided-into-roadside-tree-kudligi-vijayanagara-district-mrq-lyysc91</link>
            <guid isPermaLink="true">https://kannada.asianetnews.com/gallery/karnataka-districts/kkrtc-bus-carrying-62-people-collided-into-roadside-tree-kudligi-vijayanagara-district-mrq-lyysc91</guid>
            <pubDate>Tue, 10 Mar 2026 13:11:34 +0530</pubDate>
            <description><![CDATA[&lt;p&gt;ಕೂಡ್ಲಿಗಿ ಹೊರವಲಯದಲ್ಲಿ, ಬೈಕ್&zwnj;ಗೆ ದಾರಿ ಬಿಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕೆಕೆಆರ್&zwnj;ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಚಾಲಕ, ನಿರ್ವಾಹಕ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್&zwnj;ನಲ್ಲಿ ಒಟ್ಟು 62 ಮಂದಿ ಪ್ರಯಾಣಿಸುತ್ತಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkbahbv8pcspwmtrgy26athc,imgname-bus-accident--2--1773127905128.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೂಡ್ಲಿಗಿ ಹೊರವಲಯದಲ್ಲಿ, ಬೈಕ್&zwnj;ಗೆ ದಾರಿ ಬಿಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕೆಕೆಆರ್&zwnj;ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಚಾಲಕ, ನಿರ್ವಾಹಕ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್&zwnj;ನಲ್ಲಿ ಒಟ್ಟು 62 ಮಂದಿ ಪ್ರಯಾಣಿಸುತ್ತಿದ್ದರು.&lt;/p&gt;&lt;img&gt;&lt;p&gt;ಕೆಕೆಆರ್&zwnj;ಟಿಸಿ ಬಸ್ ಮರಕ್ಕೆ ಡಿಕ್ಕಿಯಾಗಿ ಚಾಲಕ, ನಿರ್ವಾಹಕ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ಅಪಘಾತಕ್ಕೊಳಗಾದ ಬಸ್&zwnj;ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 62 ಜನರು ಪ್ರಯಾಣಿಸುತ್ತಿದ್ದರು.&lt;/p&gt;&lt;img&gt;&lt;p&gt;ಕೂಡ್ಲಿಗಿ ಘಟಕಕ್ಕೆ ಸೇರಿದ ಬಸ್ ಇಂದು ಬೆಳಗ್ಗೆ ಕಸಾಪುರಕ್ಕೆ ಹೋಗಿ ಮರಳಿ ನಗರಕ್ಕೆ ಬರುತ್ತಿತ್ತು. ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿನ ಸಾಗರ ಡಾಬಾ ಬಳಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಎದುರಿಗೆ ಬರುತ್ತಿದ್ದ ಬೈಕ್&zwnj;ಗೆ ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಬಲ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.&lt;/p&gt;&lt;img&gt;&lt;p&gt;ಬಸ್ ಚಾಲಕ ಶಶಿಧರ್ ಅವರ ಬಲಗಾಲಿಗೆ ಗಾಯವಾಗಿದ್ದು, ಮೂಳೆ ಮುರಿತವಾಗಿರುವ ಸಾಧ್ಯತೆಗಳಿವೆ. ನಿರ್ವಾಹಕ ಪಾಟೀಲ್ ಅವರ ಮುಖಕ್ಕೆ ಪೆಟ್ಟು ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣ ಪ್ರಮಾಣದ ಗಾಯಳಾಗಿವೆ. ಗಾಯಾಳುಗಳನ್ನು ಕೂಡ್ಲಿಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳು ಸೇರಿದಂತೆ ಬಸ್ಸಿನಲ್ಲಿ 62 ಜನರಿದ್ದರು. ಬೆಳಗ್ಗೆಯ ಸಮಯವಾಗಿದ್ದರಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ವಿಷಯ ತಿಳಿದ ಕೂಡ್ಲಿಗಿ ಠಾಣೆಯ ಸಿಪಿಐ ಪ್ರಲ್ಹಾದ್ ಆರ್ ಚನ್ನಗಿರಿ, ಪಿಎಸೈ ಸಿ. ಪ್ರಕಾಶ ಸ್ಥಳಕ್ಕೆ ಭೇಟಿ ನೀಡಿ ಗಾಯಳಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಗಳ ಮದುವೆ ಮಾಡಿಸಲು ಸಾಧ್ಯವಾಗದೇ ತಂದೆ ಸಾವು, ಅಪ್ಪನ ಕಳ್ಕೊಂಡ ನೋವಿನಲ್ಲಿ ಪುತ್ರಿ ದುರಂತ ಅಂತ್ಯ&lt;/strong&gt;&lt;/p&gt;&lt;img&gt;&lt;p&gt;ಕಂಟೈನರನ್ನು ಚಾಲಕ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ 8 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಅರಗಾ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಕಾರಿನ ಚಾಲಕ ಸೇರಿ ನಾಲ್ವರು ಪ್ರಯಾಣಿಕರಿಗೆ ಗಾಯಗಳಾಗಿವೆ. ಕಂಟೈನರ್ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸಿದ ಕಂಟೈನರ್ ಚಾಲಕನನ್ನು ಪೊಲೀಸರು ವಶ ಪಡೆದಿದ್ದಾರೆ&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸರ್, ಪ್ಲೀಸ್ ನಮ್ಮಪ್ಪನ 7ನೇ ಮದುವೆ ನಿಲ್ಲಿಸಿ; ಪೊಲೀಸ್ ಠಾಣೆ ಮೆಟ್ಟಿಲೇರಿದ 3ನೇ ಹೆಂಡ್ತಿ ಮಗ&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/kkrtc-bus-carrying-62-people-collided-into-roadside-tree-kudligi-vijayanagara-district-mrq-lyysc91"/>
        </item>
        <item>
            <title><![CDATA[ಅಗಸ ನೀರಲ್ಲಿದ್ರೂ ಬಾಯಾರಿಕೆ ಆದಂತೆ ಕೊಟ್ಟೂರು ಜನ್ರ ಸ್ಥಿತಿ,  ನೀರಿದ್ರೂ ಬಳಕೆ ಬರ! ವಾರಕ್ಕೊಮ್ಮೆ ನೀರು!]]></title>
            <link>https://kannada.asianetnews.com/karnataka-districts/water-scarcity-in-vijayanagaras-kotturu-abundant-resources-zero-supply-rav/articleshow-r3xv9sv</link>
            <guid isPermaLink="true">https://kannada.asianetnews.com/karnataka-districts/water-scarcity-in-vijayanagaras-kotturu-abundant-resources-zero-supply-rav/articleshow-r3xv9sv</guid>
            <pubDate>Tue, 17 Mar 2026 12:05:48 +0530</pubDate>
            <description><![CDATA[&lt;p&gt;Kottur drinking water crisis ಬನ್ನಿಗೋಳ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ, ನಿರಂತರ ವಿದ್ಯುತ್ ಪೂರೈಕೆಯಾಗದ ಕಾರಣ ಕೊಟ್ಟೂರು ಪಟ್ಟಣಕ್ಕೆ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಈ ವಿದ್ಯುತ್ ಸಮಸ್ಯೆಯಿಂದಾಗಿ 40 ಸಾವಿರಕ್ಕೂ ಹೆಚ್ಚು ನಿವಾಸಿಗಳು ತೀವ್ರ ನೀರಿನ ಅಭಾವ ಎದುರಿಸುತ್ತಿದ್ದಾರೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkx7w5mw9r5bsynjn8sk5ddf,imgname-1-1773729093276.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಿ.ಸೋಮಶೇಖರ&lt;/strong&gt;&lt;/p&gt;&lt;p&gt;&lt;strong&gt;ಕೊಟ್ಟೂರು: &lt;/strong&gt;ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಹಗರಿಬೊಮ್ಮನಹಳ್ಳಿ ತಾಲೂಕು ಬನ್ನಿಗೋಳ ಜಲಾಶಯದಲ್ಲಿ ತಿಂಗಳು ಪೂರ್ತಿಯಾಗುವಷ್ಟು ನೀರಿದ್ದರೂ ಕೊಟ್ಟೂರು ಪಟ್ಟಣಕ್ಕೆ ಸಿಗುವುದೇ ವಾರಕ್ಕೆ ಒಂದು ಬಾರಿ. ಬಳಕೆಗೆ ತೀವ್ರ ಬರ ಉಂಟಾಗಿದೆ.&lt;/p&gt;&lt;p&gt;ಪಟ್ಟಣಕ್ಕೆ ನೀರು ಐದು ಅಥವಾ ಆರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿರುವುದಕ್ಕೆ ನೀರಿನ ಕೊರತೆ ಇಲ್ಲವೇ ಇಲ್ಲ. ವಿದ್ಯುತ್ ಪೂರೈಕೆ ಸಮಸ್ಯೆ ಕಾರಣಕ್ಕಾಗಿ ನಾಗರಿಕರು ನೀರಿನ ತೀವ್ರ ಬಗೆಯ ತೊಂದರೆ ಅನುಭವಿಸುವಂತಾಗಿದೆ.&lt;/p&gt;&lt;p&gt;ತಾಲೂಕಿನ 14 ಹಳ್ಳಿಗಳನ್ನು ಸಮಸ್ಯಾತ್ಮಾಕಗಳೆಂದು ತಾಲೂಕು ಆಡಳಿತ ಗುರುತಿಸಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರನ್ನು ಪಡೆಯಲು ಬೋರ್&zwnj;ವೆಲ್ ಕೊರೆಸುವುದು ಸೇರಿದಂತೆ ಇತರ ಯೋಜನೆಗಳನ್ನು ಕೈಗೊಳ್ಳಬಹುದು ಎಂದು ಟಾಸ್ಕ್ ಫೋರ್ಸ್ ಸಮಿತಿಗೆ ವರದಿ ಸಲ್ಲಿಕೆಯಾಗಿದೆ.&lt;/p&gt;&lt;p&gt;ಬನ್ನಿಗೋಳ ಬಳಿಯ ತುಂಗಭದ್ರಾ ನದಿ ಹಿನ್ನೀರು ಪ್ರದೇಶದ ಜಾಕ್&zwnj;ವೆಲ್&zwnj;ನಿಂದ ಕೊಟ್ಟೂರಿಗೆ ನೀರು ಸರಬರಾಜು ಆಗುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಸುಲಲಿತ ನೀರು ಪೂರೈಕೆಗೆ 18 ತಾಸುಗಳ ನಿರಂತರ ವಿದ್ಯುತ್ ಪೂರೈಕೆ ಅಗತ್ಯವಿದೆ. ಆದರೆ ಕಾರಣ ಕೇಳಿದರೆ ನೀರು ಪಂಪ್&zwnj; ಮಾಡಲು ವಿದ್ಯುತ್&zwnj; ತೊಂದರೆ ಇದೆ ಎಂದು ಪಪಂನವರು ಹೇಳುತ್ತಿದ್ದಾರೆ. ಇತ್ತ ಜೆಸ್ಕಾಂನವರು 15 ದಿನದಿಂದಲೂ ಲೋ ವೋಲ್ಟೇಜ್&zwnj; ಸಮಸ್ಯೆಯ ಕಾರಣ ತೋರಿಸಿ ಇಲ್ಲಿನ ಜನರಿಗೆ ಬಾಯಾರಿಕೆಯಾಗುವಂತೆ ಮಾಡಿದ್ದಾರೆ.&lt;/p&gt;&lt;p&gt;ಕುಡಿಯುವ ನೀರಿಗೆ ಸರಿಯಾದ ವಿದ್ಯುತ್ ಪೂರೈಕೆಯಾಗಬೇಕಿದೆ. ಈ ಬಗೆಯ ವಿದ್ಯುತ್&zwnj; ತೊಂದರೆ ಬಗ್ಗೆ ವಿಚಾರಿಸಲು ಸಂಬಂಧಪಟ್ಟ ವಿಭಾಗೀಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಮ್ಮದೇನೋ ಸಮಸ್ಯೆ ಇಲ್ಲವೇ ಇಲ್ಲ ಎಂದು ಹೇಳುತ್ತಾರೆ. ಇಷ್ಟರಲ್ಲೇ ಮತ್ತೊಂದು ಟ್ರಾನ್ಸ್&zwnj;ಫಾರ್ಮರ್&zwnj; ಅಳವಡಿಸಲು ಯೋಜನೆ ರೂಪಿಸಿದ್ದೇವೆ. ಅಲ್ಲಿವರೆಗೂ ಸ್ವಲ್ಪ ವ್ಯತ್ಯಾಸ ಆಗುತ್ತದೆ ಎನ್ನುವ ಸಮಜಾಯಿಸಿ ಉತ್ತರವನ್ನು ಜೆಸ್ಕಾಂ ನೀಡುವುದು ಗಮನಿಸಿದರೆ ಸುಮಾರು 10 ದಿನ ನೀರಿನ ತೊಂದರೆ ಅನುಭವಿಸಬೇಕಿರುವುದು ಅನಿವಾರ್ಯ ಎನ್ನುವಂತಿದೆ. ಕೊಟ್ಟೂರಿಗರಿಗೆ ಬನ್ನಿಗೋಳ ಜಲಾಶಯದಲ್ಲಿ ನೀರಿದ್ದರೂ ವಿದ್ಯುತ್ ಇಲಾಖೆಯ ಅವಕೃಪೆಯಿಂದ ಅಗತ್ಯ ನೀರು ಸಿಗದಂತಾಗಿರುವುದು ನಗ್ನ ಸತ್ಯ.&lt;/p&gt;&lt;p&gt;ಪಟ್ಟಣದ ಅಂದಾಜು 40 ಸಾವಿರಕ್ಕೂ ಅಧಿಕ ಜನರಿಗೆ ಕುಡಿಯುವ ನೀರು ಪೂರೈಸಲು ಪಪಂ ಆಡಳಿತ ಯೋಜನೆ ರೂಪಿಸಿ ಮೊದಲು 3 ದಿನಕ್ಕೊಮ್ಮೆ, ಬಳಿಕ 5 ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು. ಇದೀಗ ನೀರು ಯಾವಾಗ ಪೂರೈಕೆಯಾದೀತೋ ಎನ್ನುವ ಪ್ರಶ್ನೆಗೆ ಅವರೆಲ್ಲರೂ ವಿದ್ಯುತ್&zwnj; ಲೋವೋಲ್ಟೇಜ್&zwnj; ಕಾರಣ ತೋರಿಸುತ್ತಿರುವುದು ಜನತೆಯಲ್ಲಿ ನಿಜಕ್ಕೂ ಆತಂಕ ಸೃಷ್ಟಿಸಿದೆ. ಬೇಸಿಗೆ ಆರಂಭದಲ್ಲೇ ಈ ಪರಿ ನೀರಿನ ಪರಿತಾಪವಾದರೆ ಮುಂದಿನ ಮೇ ತಿಂಗಳಲ್ಲಿ ನೀರು ಪೂರೈಕೆ ಯಾವ ಹಂತಕ್ಕೆ ತಲುಪುವುದೋ ಎಂದು ಯೋಚಿಸುವಂತಾಗಿದೆ.&lt;/p&gt;&lt;p&gt;ಸಮಸ್ಯೆ ಕಾಣಿಸಬಹುದಾದ ಹಳ್ಳಿಗಳು: ಕೊಟ್ಟೂರು ತಾಲೂಕಿನ 14 ಗ್ರಾಪಂಯ 325 ಬೋರ್&zwnj;ವೆಲ್&zwnj;ಗಳಲ್ಲಿ 183 ಬೋರ್&zwnj;ವೆಲ್&zwnj;ಗಳು ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿವೆ. 42 ಬೋರ್&zwnj;ಗಳು ಸ್ಥಗಿತಗೊಂಡಿವೆ. ಚಿರಿಬಿ, ದೂಪದಹಳ್ಳಿ, ಕೋಗಳಿ, ಉಜ್ಜಯನಿ, ತಿಮ್ಮಲಾಪುರ, ತೂಲಾಹಳ್ಳಿ, ಹನುಮನಹಳ್ಳಿ, ನಿಂಬಳಗೇರಿ, ಗಾಣಗಟ್ಟೆ, ಹ್ಯಾಳ್ಯಾ, ಮಲ್ಲನಾಯಕನಹಳ್ಳಿ, ಮೋತಿಕಲ್ ತಾಂಡ, ಲೊಟ್ಟನಕೆರೆ, ಮೂರ್ತಿನಾಯಕನಹಳ್ಳಿ, ಹಾರಕನಾಳು.&lt;/p&gt;&lt;p&gt;ಕೊಟ್ಟೂರು ಪಟ್ಟಣದ ನೀರು ಸರಬರಾಜು ಆಗುವ ಬನ್ನಿಗೋಳ ಜಾಕ್&zwnj;ವೆಲ್, ಬೆಣಕಲ್ಲು ಪಂಪ್ ಭಾಗದಲ್ಲಿ ವಿದ್ಯುತ್ ತೊಂದರೆಯಾಗದಂತೆ ಜೆಸ್ಕಾಂ ಅಧಿಕಾರಿಗಳು ಗಮನ ಹರಿಸಿಬೇಕು. ನಿರಂತರ ವಿದ್ಯುತ್ ಪೂರೈಕೆಗೆ ಅಡಚಣೆ ಆಗುವ ಎಲ್ಲ ಬಗೆಯ ತೊಂದರೆಗಳನ್ನು ಅವರ ನಿವಾರಿಸಬೇಕು ಎನ್ನುತ್ತಾರೆ ಕೊಟ್ಟೂರು ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ.&lt;/p&gt;&lt;p&gt;ಕೊಟ್ಟೂರು ತಾಲೂಕಿನ ಗ್ರಾಮಗಳಲ್ಲಿ ಸದ್ಯಕ್ಕೆ ನೀರಿನ ತೊಂದರೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ತೊಂದರೆ ಮುನ್ನವೇ ಸಮಸ್ಯೆಯನ್ನು ನಿವಾರಿಸಲು ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎನ್ನುತ್ತಾರೆ ನಮ್ಮ ಕರವೇ ತಾಲೂಕು ಅಧ್ಯಕ್ಷ ಬಸವರಾಜ್ ರಾಂಪುರ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/water-scarcity-in-vijayanagaras-kotturu-abundant-resources-zero-supply-rav/articleshow-r3xv9sv"/>
        </item>
        <item>
            <title><![CDATA[Karnataka Water Crisis: ಬೇಸಿಗೆ ಶುರುವಿನಲ್ಲೇ ಬತ್ತಿದ ತುಂಗ, ಒಣಗಿದ ಕೆರೆಗಳು, ಕುಡಿಯುವ ನೀರಿಗೂ ಹಾಹಾಕಾರ!]]></title>
            <link>https://kannada.asianetnews.com/state/hoovina-hadagali-tungabhadra-dries-up-lakes-empty-at-the-start-of-summer-outcry-for-drinking-water-rav/articleshow-tac7h7v</link>
            <guid isPermaLink="true">https://kannada.asianetnews.com/state/hoovina-hadagali-tungabhadra-dries-up-lakes-empty-at-the-start-of-summer-outcry-for-drinking-water-rav/articleshow-tac7h7v</guid>
            <pubDate>Mon, 09 Mar 2026 08:47:17 +0530</pubDate>
            <description><![CDATA[&lt;p&gt;ಹೂವಿನಹಡಗಲಿ ತಾಲೂಕಿನಲ್ಲಿ ಬಿಸಿಲಿನ ತಾಪಮಾನ ಏರಿಕೆಯಿಂದ ತುಂಗಭದ್ರಾ ನದಿ ಬತ್ತುತ್ತಿದ್ದು, ಎರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿವೆ. ಇದರಿಂದ 36 ಹಳ್ಳಿಗಳು ಕೊಳವೆಬಾವಿಗಳನ್ನು ಅವಲಂಬಿಸಿದ್ದು, ಮುಂದಿನ ದಿನಗಳಲ್ಲಿ 34 ಹಳ್ಳಿಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆಯಿದೆ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk89f0t90twewsj973en3qzz,imgname-----------------------2026-03-09t084120.070-1773026116425.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;ಹೂವಿನಹಡಗಲಿ (ಮಾ.9): ಎಲ್ಲೆಡೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ದಾಹವೂ ಹೆಚ್ಚಾಗುತ್ತಿದೆ. ತುಂಗಭದ್ರಾ ನದಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರಿಂದ ಕೆಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದರೂ ಕೊಳವೆಬಾವಿಗಳ ನೀರೇ ಗತಿಯಾಗಿದೆ.&lt;/p&gt;&lt;p&gt;ಹೌದು, ತಾಲೂಕಿನಲ್ಲಿ 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ. ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್&zwnj;ನಿಂದ ಕೆಳಗಿನ ಪ್ರದೇಶದಲ್ಲಿನ ಹೊಳಗುಂದಿ ಇತರ 15 ಹಳ್ಳಿಗಳು, ಅಂಕ್ಲಿ-ಕೊಂಬಳಿ ಇತರ 21 ಹಳ್ಳಿಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಜಾಕ್&zwnj;ವೆಲ್&zwnj;ಗಳಿಗೆ ನೀರೇ ಇಲ್ಲದಂತಾಗಿದೆ. ಅಷ್ಟೊಂದು ಪ್ರಮಾಣದಲ್ಲಿ ತುಂಗಭದ್ರಾ ನದಿ ನೀರು ಬತ್ತಿ ಹೋಗಿದೆ.&lt;/p&gt;&lt;p&gt;ಈ ಎರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್&zwnj;ವೆಲ್&zwnj;ಗಳಿಗೆ ನೀರು ಇಲ್ಲದ ಕಾರಣ, 36 ಹಳ್ಳಿಗಳ ಜನ ಜಾನುವಾರುಗಳಿಗೆ ಕೊಳವೆಬಾವಿಗಳ ನೀರೇ ಗತಿಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಕುಡಿಯಲು ಬಳಸುತ್ತಿದ್ದಾರೆ.&lt;/p&gt;&lt;p&gt;&lt;strong&gt;34 ಸಮಸ್ಯಾತ್ಮಕ ಹಳ್ಳಿಗಳು:&lt;/strong&gt;&lt;/p&gt;&lt;p&gt;ತಾಲೂಕಿನ 26 ಗ್ರಾಪಂಗಳಲ್ಲಿ 14 ಗ್ರಾಪಂ ವ್ಯಾಪ್ತಿಯ 34 ಹಳ್ಳಿಗಳನ್ನು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಹುದು ಎಂದು ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಲಾಗಿದೆ.&lt;/p&gt;&lt;p&gt;ಹಿರೇಮಲ್ಲನಕೆರೆ ಗ್ರಾಪಂನ ದಾಸರಹಳ್ಳಿ ತಾಂಡಾ, ಬಸರಹಳ್ಳಿ ತಾಂಡಾ, ಹಿರೇಮಲ್ಲನಕೆರೆ, ಸೋಗಿ ಗ್ರಾಪಂ ವ್ಯಾಪ್ತಿಯ ವರಕನಹಳ್ಳಿ, ಗೋವಿಂದಪುರ ತಾಂಡಾ-1, ಗೋವಿಂದಪುರ ತಾಂಡಾ-2, ಕಾಲ್ವಿ ಗ್ರಾಪಂನ ಹಕ್ಕಂಡಿ, ದುಂಗಾವತಿ ತಾಂಡಾ, ಅಕ್ಲಿ, ಬಿತ್ಯಾನತಾಂಡಾ, ಬಾನ್ಯನ್&zwnj; ತಾಂಡಾ, ಕಾಲ್ವಿ ತಾಂಡಾ, ಮಹಾಜನದಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ತಳಕಲ್ಲು, ಮಹಾಜನದಹಳ್ಳಿ, ಕೆಂಚಮ್ಮನಹಳ್ಳಿ, ಎಂ. ಕಲ್ಲಹಳ್ಳಿ, ನಂದಿಹಳ್ಳಿ ಗ್ರಾಪಂನ ನಂದಿಹಳ್ಳಿ, ಕೊಂಬಳಿ ಗ್ರಾಪಂ ವ್ಯಾಪ್ತಿಯ ಪುರ, ಕೊಯಿಲಾರಗಟ್ಟಿ, ಕೊಯಿಲಾರಗಟ್ಟಿ ತಾಂಡಾ, ನವಲಿ ಗ್ರಾಪಂನಲ್ಲಿ ಹೊಸ ಅಲ್ಲಿಪುರ, ಕಾಗನೂರು, ಹಗರನೂರು ಗ್ರಾಪಂನ ವಡ್ಡನಹಳ್ಳಿ ತಾಂಡಾ, ಹಗರನೂರು, ಮಾನ್ಯರಮಸಲವಾಡ ಗ್ರಾಪಂನ ಕಗ್ಗಲಗಟ್ಟಿ ತಾಂಡಾ, ವ್ಯಾಸಮಲ್ಲಾಪುರ ತಾಂಡಾ, ಮಾನ್ಯರ ಮಸಲವಾಡ, ಸೋವೇನಹಳ್ಳಿ ಗ್ರಾಪಂನ ಸೋವೇನಹಳ್ಳಿ, ಇಟ್ಟಗಿ ಗ್ರಾಪಂನ ಇಟ್ಟಗಿ, ಬೀರಬ್ಬಿ ಗ್ರಾಪಂ ವ್ಯಾಪ್ತಿಯ ಅಂಗೂರು, ಅರಳಿಹಳ್ಳಿ ತಾಂಡಾ, ನಾಗತಿ ಬಸಾಪುರ ಗ್ರಾಪಂನ ನಾಗತಿಬಸಾಪುರ, ಹೊಳಗುಂದಿ ಗ್ರಾಪಂನ ಹೊಳಗುಂದಿ, ಬಾವಿಹಳ್ಳಿ ಸೇರಿದಂತೆ ಒಟ್ಟು 14 ಗ್ರಾಪಂ ವ್ಯಾಪ್ತಿಯ 34 ಹಳ್ಳಿಗಳನ್ನು ಸಮಸ್ಯಾತ್ಮಕ ಹಳ್ಳಿಗಳೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಗುರುತಿಸಲಾಗಿದೆ.&lt;/p&gt;&lt;p&gt;ತಾಲೂಕಿನ ಹಳ್ಳಿಗಳಲ್ಲಿ 493 ಕೊಳವೆಬಾವಿಗಳಿವೆ, ಇದರಲ್ಲಿ 382 ಕೊಳವೆಬಾವಿಗಳಿಂದ ಜನ ನೀರು ಬಳಕೆ ಮಾಡುತ್ತಿದ್ದಾರೆ. ಉಳಿದ 111 ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಆಧಾರದ ಮೇಲೆ ಅವುಗಳನ್ನು ಬಂದ್&zwnj; ಮಾಡಲಾಗಿದೆ.&lt;/p&gt;&lt;p&gt;ತಾಲೂಕಿನಲ್ಲಿ ಹೊಳಗುಂದಿ, ಅಂಕ್ಲಿ-ಕೊಂಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್&zwnj;ವೆಲ್&zwnj;ಗಳಿಗೆ ನೀರಿಲ್ಲದೇ ಬಂದ್&zwnj; ಆಗಿವೆ. ಆ ವ್ಯಾಪ್ತಿಯ ಜನ ಜಾನುವಾರುಗಳಿಗೆ ಕೊಳವೆಬಾವಿಗಳಿವೆ. ಉಳಿದಂತೆ 9 ಯೋಜನೆಗಳಿಗೆ ನದಿ ನೀರು ಪೂರೈಕೆಯಾಗುತ್ತಿದೆ. 34 ಸಮಸ್ಯಾತ್ಮಕ ಹಳ್ಳಿಗಳು ಎಂದು ಗುರುತಿಸಲಾಗಿದೆ ಎನ್ನುತ್ತಾರೆ ಹೂವಿನಹಡಗಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರದೀಪ್&zwnj;ಕುಮಾರ ಕಟಗಿ,&lt;/p&gt;&lt;p&gt;ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್&zwnj;ನಲ್ಲಿ ಸದ್ಯ 1.98 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಾಕಾಗಲಿದೆ ಎನ್ನುತ್ತಾರೆ ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ರಾಘವೇಂದ್ರ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/hoovina-hadagali-tungabhadra-dries-up-lakes-empty-at-the-start-of-summer-outcry-for-drinking-water-rav/articleshow-tac7h7v"/>
        </item>
        <item>
            <title><![CDATA[ವಿಜಯನಗರ: ಚೆನ್ನೈ ವ್ಯಕ್ತಿಗೆ ಕಡಿಮೆ ಬೆಲೆಗೆ ಚಿನ್ನದ ಆಮಿಷ; 30 ಲಕ್ಷ ರೂಪಾಯಿ ವಂಚಿಸಿದ್ದ ನಕಲಿ ಬಂಗಾರ ವಂಚಕರು ಅರೆಸ್ಟ್]]></title>
            <link>https://kannada.asianetnews.com/karnataka-districts/vijayanagara-fake-gold-scam-busted-gang-arrested-for-cheating-chennai-man-of-rs-30-lakh-rav/articleshow-x1dh3h6</link>
            <guid isPermaLink="true">https://kannada.asianetnews.com/karnataka-districts/vijayanagara-fake-gold-scam-busted-gang-arrested-for-cheating-chennai-man-of-rs-30-lakh-rav/articleshow-x1dh3h6</guid>
            <pubDate>Sun, 22 Mar 2026 12:13:55 +0530</pubDate>
            <description><![CDATA[&lt;p&gt;ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಚೆನ್ನೈ ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಕೂಡ್ಲಿಗಿ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್. ಘಟನೆ ನಡೆದ ಒಂದು ವಾರದಲ್ಲಿಯೇ ಆರೋಪಿಗಳನ್ನು ಬಂಧಿಸಿ, ಅವರಿಂದ 29.50 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳುವಲ್ಲಿ ಖಾನಾಹೊಸಳ್ಳಿ ಪೊಲೀಸರು ಯಶಸ್ವಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kma46z3aewccs89ctjg11bfb,imgname-whatsapp-image-2026-03-22-at-10.55.50-am-1774161460330.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ (ಮಾ.22): &lt;/strong&gt;ಕಡಿಮೆ ಬೆಲೆಗೆ ಬಂಗಾರ ನೀಡುತ್ತೇವೆ ಎಂದು ನಂಬಿಸಿ ಚೆನ್ನೈ ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಘಟನೆ ನಡೆದ ಒಂದೇ ವಾರದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;ಕೂಡ್ಲಿಗಿ ಮೂಲದ ಆರೋಪಿಗಳ ಬಂಧನ&lt;/h2&gt;&lt;p&gt;ಬಂಧಿತರನ್ನು ಕೂಡ್ಲಿಗಿ ತಾಲೂಕಿನ ಸುರೇಶ ಮತ್ತು ಸೋಮಣ್ಣ ಎಂದು ಗುರುತಿಸಲಾಗಿದೆ. ಈ ಖದೀಮರು ಎಷ್ಟು ಚಲಾಕಿಗಳೆಂದರೆ ಇಲ್ಲಿನ ಜನರಿಗೆ ವಂಚಿಸಿದರೆ ಸಮಸ್ಯೆ ಎಂದು ಹೊರರಾಜ್ಯದವರಿಗೆ ಟೋಪಿ ಹಾಕುವ ಮಸ್ತ್ ಪ್ಲಾನ್ ಮಾಡಿದ್ದಾರೆ ಅದರಂತೆ ತಮಿಳುನಾಡಿನ ಚೆನ್ನೈ ಮೂಲದ ಗುತ್ತಿಗೆದಾರ ಜಿ.ಕುಮಾರ ಎಂಬುವವರಿಗೆ ಗಾಳ ಹಾಕಿ ವಂಚನೆಯ ಜಾಲಕ್ಕೆ ಕೆಡವಿದ್ದರು. ಬಂಧಿತರಿಂದ ಪೊಲೀಸರು ಬರೋಬ್ಬರಿ 29.50 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h3&gt;ಬಂಗಾರದ ಆಸೆಗೆ ಚೆನ್ನೈನಿಂದ ಬಂದಿದ್ದ ವ್ಯಕ್ತಿಗೆ ಶಾಕ್&lt;/h3&gt;&lt;p&gt;ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ದರಕ್ಕೆ ಚಿನ್ನ ಕೊಡಿಸುವುದಾಗಿ ನಂಬಿಸಿದ್ದ ಆರೋಪಿಗಳು, ಕುಮಾರ ಅವರನ್ನು ಕೂಡ್ಲಿಗಿಯ ಕ್ಯಾಸನಕೆರೆ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ಚಿನ್ನದ ಆಸೆ ಲಕ್ಷ ಲಕ್ಷ ನಗದು ಸಮೇತ ಬಂದಿದ್ದ ಚೆನ್ನೈ ಮೂಲದ ಆಸಾಮಿ. ಪಬ್ಲಿಕ್&zwnj;ನಲ್ಲಿ ಕೊಟ್ಟರೆ ತೊಂದರೆಯಾಗುತ್ತೆ ನಿರ್ಜನ ಪ್ರದೇಶದಲ್ಲಿ ಚಿನ್ನ ನೀಡುತ್ತೇವೆ ಎಂದು ನಾಟಕವಾಡಿ, ಅವರಿಂದ 30 ಲಕ್ಷ ರೂಪಾಯಿ ನಗದು ಹಣ ಪಡೆದುಕೊಂಡು ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದರು.&lt;/p&gt;&lt;h3&gt;ಖದೀಮರನ್ನ ವಾರದಲ್ಲೇ ಬೇಟೆಯಾಡಿದ ಖಾನಾಹೊಸಳ್ಳಿ ಪೊಲೀಸರು&lt;/h3&gt;&lt;p&gt;ವಂಚನೆಗೆ ಒಳಗಾದ ಕುಮಾರ ಅವರು ನೀಡಿದ ದೂರಿನ ಮೇರೆಗೆ ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಕೇವಲ ಒಂದು ವಾರದಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/vijayanagara-fake-gold-scam-busted-gang-arrested-for-cheating-chennai-man-of-rs-30-lakh-rav/articleshow-x1dh3h6"/>
        </item>
        <item>
            <title><![CDATA[ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ: ರಸ್ತೆ ಅಪಘಾತವೆಂದು ಬಿಂಬಿಸಲೆತ್ನಿಸಿದ್ದ ಆರೋಪಿಗಳು]]></title>
            <link>https://kannada.asianetnews.com/crime/brother-kills-brother-for-property-accused-tried-to-make-it-look-like-a-road-accident-harapanahalli-vijayanagar-mrq/articleshow-x34h9k8</link>
            <guid isPermaLink="true">https://kannada.asianetnews.com/crime/brother-kills-brother-for-property-accused-tried-to-make-it-look-like-a-road-accident-harapanahalli-vijayanagar-mrq/articleshow-x34h9k8</guid>
            <pubDate>Mon, 16 Mar 2026 09:25:59 +0530</pubDate>
            <description><![CDATA[&lt;p&gt;ಹರಪನಹಳ್ಳಿಯಲ್ಲಿ ಆಸ್ತಿ ವಿಚಾರಕ್ಕಾಗಿ ತಮ್ಮನೇ ತನ್ನ ಸ್ನೇಹಿತನೊಂದಿಗೆ ಸೇರಿ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದರೂ, ಮೃತನ ತಾಯಿಯ ದೂರಿನ ಮೇರೆಗೆ ಪೊಲೀಸರು 24 ಗಂಟೆಯೊಳಗೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kktchh9cagv0cx70wwrd8nwg,imgname-harapanahalli-murder-1773633324332.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ:&amp;nbsp;&lt;/strong&gt; ಆಸ್ತಿ ಆಸೆಗಾಗಿ ಹೆತ್ತ ಅಣ್ಣನನ್ನೇ ತಮ್ಮ ಮತ್ತು ಆತನ ಸ್ನೇಹಿತ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.&lt;/p&gt;&lt;p&gt;ಕೊಲೆ ಮಾಡಿದ ಬಳಿಕ ಇದೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳ ಬಣ್ಣ ಬಯಲಾಗಿದೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಆರೋಪಿಗಳ ಬಂಧನ&lt;/strong&gt;&lt;/h2&gt;&lt;p&gt;ಕೊಲೆಗೀಡಾದ ಯುವಕನನ್ನು ಹರಪನಹಳ್ಳಿ ತಾಲೂಕಿನ ಹಗರಿ ಶಿರನಹಳ್ಳಿ ಗ್ರಾಮದ ಮರಳುಸಿದ್ದೇಶ (26) ಎಂದು ಗುರುತಿಸಲಾಗಿದೆ. ಈತನ ಸ್ವಂತ ತಮ್ಮ ಹಗರಿಶಿರನಹಳ್ಳಿಯ ಪತ್ರಿಗೌಡ (24) ಹಾಗೂ ಈತನ ಸ್ನೇಹಿತ ಕಡಬಗೆರೆ ಗ್ರಾಮದ ಉತ್ತಂಗಿ ನಾರಪ್ಪ (29) ಎಂಬವರನ್ನು ಬಂಧಿಸಲಾಗಿದೆ.&lt;/p&gt;&lt;p&gt;ಮೃತನ ತಾಯಿ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ನೀಡಿದ ದೂರಿನನ್ವಯ ಹಿರಿಯ ಮಗ ಮರಳು ಸಿದ್ದೇಶ ಮನೆಯ ಜವಾಬ್ದಾರಿ, ಜಮೀನು, ಟ್ರ್ಯಾಕ್ಟರ್ ನೋಡಿಕೊಳ್ಳುತ್ತಿದ್ದ. ಆದರೆ ಆಸ್ತಿಯಲ್ಲಿ ಪಾಲು ಬೇಕು, ಹಂಚಿ ಕೊಡಿ ಎಂದು ತಾಯಿ ಮತ್ತು ಅಣ್ಣನೊಂದಿಗೆ ಪತ್ರಿಗೌಡ ಜಗಳವಾಡಿದ್ದ.&lt;/p&gt;&lt;p&gt;ಮಾ.13ರಂದು ಮಧ್ಯಾಹ್ನ ಇದೇ ವಿಚಾರವಾಗಿ ಜಗಳ ತೆಗೆದಿದ್ದ ಆರೋಪಿ ಪತ್ರಿಗೌಡ, ಪಾಲು ಕೊಡದಿದ್ದರೆ ನಾನು ದುಡಿಯಲು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಮನೆ ಬಿಟ್ಟು ಹೋಗಿದ್ದ.&lt;/p&gt;&lt;p&gt;ಮೃತ ಮರಳುಸಿದ್ದೇಶನು ಉತ್ತಂಗಿ ನಾರಪ್ಪ ಎಂಬಾತನನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಮನೆ ಬಿಟ್ಟು ಹೋಗಿದ್ದ ಸಹೋದರ ಪತ್ರಿ ಗೌಡನನ್ನು ಹುಡುಕಲು ತೆರಳಿದ್ದ. ತಡರಾತ್ರಿ ಒಂದು ಗಂಟೆಗೆ ಹಿರೇಮೇಗಳಗೆರೆ ಸಮೀಪದ ಹೊಸಹಳ್ಳಿ ಕ್ರಾಸ್ ಬಳಿ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾರೆ ಎಂದು ದೂರದ ಸಂಬಂಧಿ ಜಯಪ್ಪ ಅವರು ಶಾಂತಮ್ಮ ಅವರಿಗೆ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಅನುಮಾನದಿಂದ ದೂರು ದಾಖಲಿಸಿದ್ದ ತಾಯಿ&lt;/strong&gt;&lt;/h3&gt;&lt;p&gt;ಶಾಂತಮ್ಮ ಅವರು ಕೂಡಲೇ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿದ್ದ ಶವ ನೋಡಿ ಮರುಳುಸಿದ್ದೇಶನ ತಲೆ, ಎದೆ, ಮುಖದ ಮೇಲೆ ಬಲವಾದ ಪೆಟ್ಟುಗಳಾಗಿದ್ದವು. ಆದರೆ ಇದು ವಾಹನ ಅಪಘಾತದಿಂದ ಆದ ಗಾಯಗಳಂತೆ ಇರಲಿಲ್ಲ. ಬೈಕ್ ನಲ್ಲಿದ್ದ ತಮ್ಮ ಮತ್ತು ಆತನ ಸ್ನೇಹಿತನಿಗೆ ಯಾವುದೇ ಸಣ್ಣ ಗಾಯವೂ ಆಗಿರಲಿಲ್ಲ. ಆಸ್ತಿ ವಿಚಾರದ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆಂದು ತಾಯಿ ಶಾಂತಮ್ಮ ಅರಸೀಕೆರೆ ಪೊಲೀಸರಿಗೆ ದೂರು ನೀಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ &amp;nbsp;ಓದಿ: &lt;/strong&gt;&lt;strong&gt;ಬೆಂಗಳೂರು ಬೆಚ್ಚಿದ ತ್ರಿವಳಿ ಕೊಲೆಗಾರರಿಗೆ ಜೀವಾವಧಿ: ಐಐಎಸ್&zwnj; ಪ್ರಾಧ್ಯಾಪಕ ಸೇರಿ ಇಡೀ ಕುಟುಂಬ ಕೊಂದ ಕೆಲಸದಾಳುಗಳು!&lt;/strong&gt;&lt;/p&gt;&lt;p&gt;ದೂರು ನೀಡಲು ಬಂದಾಗ ಇದು ಒಂದು ಕೊಲೆ ಇರಬಹುದು ಎಂದು ತಿಳಿದು ಅನುಮಾನಗೊಂಡ ಪೊಲೀಸರು ಘಟನೆ ನಡೆದು 24 ತಾಸುಗಳಲ್ಲೇ ಪ್ರಕರಣ ಭೇದಿಸಿದ್ದಾರೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಎಸ್ಪಿ ಎಸ್. ಜಾಹ್ನವಿ ಭೇಟಿ ನೀಡಿ ಡಿವೈಎಸ್ಪಿ ಸಂತೋಷ್ ಚೌಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್&zwnj;ಐಗಳಾದ ವಿಜಯ ಕೃಷ್ಣ, ನಾಗರತ್ನಾ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ರಾಜಧಾನಿಯಲ್ಲಿ ಸ್ವಯಂ ಸೇವಕರ ಸ್ವಚ್ಛತಾ ಅಭಿಯಾನ; ಕಸದ ರಾಶಿಯಲ್ಲಿ ಪತ್ತೆಯಾಯ್ತು ಮಾನವನ ಅಸ್ತಿಪಂಜರ!&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/brother-kills-brother-for-property-accused-tried-to-make-it-look-like-a-road-accident-harapanahalli-vijayanagar-mrq/articleshow-x34h9k8"/>
        </item>
        <item>
            <title><![CDATA[ತುಂಗಾಭದ್ರ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಇಳಿಕೆ: ಹಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ]]></title>
            <link>https://kannada.asianetnews.com/state/huge-drop-in-water-level-in-tungabhadra-reservoir-many-villages-feared-water-scarcity/articleshow-xar8xsq</link>
            <guid isPermaLink="true">https://kannada.asianetnews.com/state/huge-drop-in-water-level-in-tungabhadra-reservoir-many-villages-feared-water-scarcity/articleshow-xar8xsq</guid>
            <pubDate>Tue, 24 Mar 2026 12:54:39 +0530</pubDate>
            <description><![CDATA[ಬೇಸಿಗೆಯ ತಾಪಕ್ಕೆ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಕುಸಿದಿದ್ದು, ಕೇವಲ 20 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇದರಿಂದ ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದ್ದು, ನೀರನ್ನು ಕುಡಿಯಲು ಮಾತ್ರ ಮೀಸಲಿಡಬೇಕೆಂಬ ಒತ್ತಾಯ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01cj9w571hnxn5nr65tmpz7b8n,imgname-Ballari-Tunga-Bhadra-Dam.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ತುಂಗಾಭದ್ರ ಜಲಾಶಯಕ್ಕೂ ತಟ್ಟಿದ ಬಿಸಿ; ತಾಪ&lt;/strong&gt;&lt;/h2&gt;&lt;p&gt;ವಿಜಯನಗರ/ಬಳ್ಳಾರಿ: ಸೂರ್ಯನ ತಾಪ ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದ್ದು, ಸೆಖೆ ತಡೆದುಕೊಳ್ಳಲಾಗದೇ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇತ್ತ ಬಿರು ಬೇಸಿಗೆಯ ಬಿಸಿಲ ತಾಪ ತುಂಗಾಭದ್ರ ಜಲಾಶಯಕ್ಕೂ ತಟ್ಟಿದ್ದು, ಜಲಾಶಯದ ನೀರಿನ&zwnj; ಮಟ್ಟ ಕೂಡ ಕಡಿಮೆಯಾಗ್ತಿದೆ.&lt;/p&gt;&lt;p&gt;ವಿಜಯನಗರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಜೀವ ಜಲಕ್ಕಾಗಿ ಈಗಾಗಲೇ ಹಾಹಾಕಾರ ಶುರುವಾಗಿದೆ. 105. 788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತುಂಗಾಭದ್ರಾ ಜಲಾಶಯದಲ್ಲಿ ಕೇವಲ 20 ಟಿಎಂಸಿ ನೀರು ಮಾತ್ರ ಇದೆ. ಹೀಗಾಗಿ ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರನ್ನು ಕೇವಲ ಜನರಿಗೆ ಕುಡಿಯುವ ನೀರಿಗಾಗಿ ಮೀಸಲಿಡುವಂತೆ ಒತ್ತಾಯ ಕೇಳಿ ಬಂದಿದೆ.&lt;/p&gt;&lt;h3&gt;&lt;strong&gt;ಬೇಸಿಗೆಯ ದಿನಗಳನ್ನು ಎದುರಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆ&lt;/strong&gt;&lt;/h3&gt;&lt;p&gt;ಇರುವ 20 ಟಿಎಂಸಿ ನೀರಿನಲ್ಲಿ ಸುತ್ತಮುತ್ತಲಿನ ಕಾರ್ಖಾನೆಗಳು ನಡೆಯಬೇಕಿದೆ. ಇದರ ಜೊತೆಗೆ ಸುತ್ತಮುತ್ತಲ ಕೃಷಿ ಚಟುವಟಿಕೆಗಳಿಗೂ ನೀರಿನ ಅಗತ್ಯವಿದೆ. ಇದರೊಂದಿಗೆ ಕುಡಿಯುವ ನೀರಿಗೂ ಜಲಾಶಯದ ನೀರು ಬಳಕೆ ಮಾಡಬೇಕಿದೆ. ಹೀಗಾಗಿ ಮುಂದಿರುವ ಬೇಸಿಗೆಯ ದಿನಗಳನ್ನು ಎದುರಿಸಲು ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಲಾಶಯದ ನೀರನ್ನು ಮಿತವಾಗಿ ಬಳಸೋದಕ್ಕೆ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಕ್ಕಳಿಗೆ ದಾರಿ ತೋರಬೇಕಾದ ಶಿಕ್ಷಕಿಯೇ ದಾರಿ ತಪ್ಪಿದಳು: ಪ್ರಿಯಕರನೊಂದಿಗೆ ಸೇರಿ ಗಂಡನ ಮುಗಿಸಿದ ಸರ್ಕಾರಿ ಶಾಲೆ ಟೀಚರ್&lt;/strong&gt;&lt;/p&gt;&lt;p&gt;ಈ ಹಿನ್ನೆಲೆ ನೀರಾವರಿ ಇಲಾಖೆ ಮತ್ತು ಕಾರ್ಖಾನೆಗಳ ಮಾಲಿಕರ ಜೊತೆ ಜಿಲ್ಲಾಡಳಿತ ಸಭೆ ನಡೆಸುವುದಕ್ಕೆ ತೀರ್ಮಾನ ಮಾಡಿದೆ. ಈಗಾಗಲೇ ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ನೂರಾರು ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಹೀಗಾಗಿ ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಸಮರ್ಪಕವಾಗಿ ಕುಡಿಯುವ ನೀರಿಗೆ ಬಳಕೆ ಮಾಡಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹುಬ್ಬಳ್ಳಿ: ಯುವಕರ ಪಾಲಿಗೆ ಮೃತ್ಯಪಾಶವಾಯ್ತು ಕೇಬಲ್ ವೈರ್: ಇಬ್ಬರು ಬೈಕ್ ಸವಾರರು ಸಾವು&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vijayanagara</category>
            <dc:creator>Anusha Kb</dc:creator>
            <atom:link href="https://kannada.asianetnews.com/state/huge-drop-in-water-level-in-tungabhadra-reservoir-many-villages-feared-water-scarcity/articleshow-xar8xsq"/>
        </item>
        <item>
            <title><![CDATA[ಬೈಕ್‌ಗೆ ಗುದ್ದಿದ ಬುಲೇರೋ ಗೂಡ್ಸ್ ವಾಹನ : ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸಾವು]]></title>
            <link>https://kannada.asianetnews.com/state/two-forest-watcher-on-duty-killed-after-bolero-goods-vehicle-collide-their-bike/articleshow-y74l8kz</link>
            <guid isPermaLink="true">https://kannada.asianetnews.com/state/two-forest-watcher-on-duty-killed-after-bolero-goods-vehicle-collide-their-bike/articleshow-y74l8kz</guid>
            <pubDate>Mon, 06 Apr 2026 11:41:24 +0530</pubDate>
            <description><![CDATA[&lt;p&gt;&lt;strong&gt;Vijayanagara forest watchers death: &lt;/strong&gt;ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಬೊಲೆರೋ ವಾಹನ ಬೈಕ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ, ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಅರಣ್ಯ ಇಲಾಖೆ ವಾಚರ್&zwnj;ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಕೃಷ್ಣ ಮತ್ತು ಹನುಮಂತಪ್ಪ ಎಂದು ಗುರುತಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngns2wwxyn0mbphmfef0ga6,imgname-vijayanagara-accident-death-1775454948251.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬೈಕ್&zwnj;ಗೆ ಗುದ್ದಿದ್ದ ಬೊಲೆರೋ: ಬೈಕ್ ಸವಾರರ ದಾರುಣ ಸಾವು&lt;/strong&gt;&lt;/h2&gt;&lt;p&gt;ವಿಜಯನಗರ&zwnj;: ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬೈಕ್&zwnj;ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್&zwnj;ನಲ್ಲಿದ್ದ ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಕಮಲಾಪುರ ನಿವಾಸಿ 26ರ ಹರೆಯದ ಕೃಷ್ಣ ಹಾಗೂ ವೆಂಕಟಾಪುರದ 50 ವರ್ಷ ಪ್ರಾಯದ ಹನುಮಂತಪ್ಪ ಎಂದು ಗುರುತಿಸಲಾಗಿದೆ. ಇಬ್ಬರು ಅರಣ್ಯ ಇಲಾಖೆಯಲ್ಲಿ ವಾಚರ್&zwnj;ಗಳಾಗಿ ಕೆಲಸ ಮಾಡುತ್ತಿದ್ದರು.&lt;/p&gt;&lt;h3&gt;&lt;strong&gt;ಮೃತರು ಅರಣ್ಯ ಇಲಾಖೆಯಲ್ಲಿ ವಾಚರ್&zwnj;ಗಳಾಗಿ ಕೆಲಸ ಮಾಡುತ್ತಿದ್ದರು:&lt;/strong&gt;&lt;/h3&gt;&lt;p&gt;ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ&zwnj; ಮಾಡುತ್ತಿದ್ದು, ಬೈಕ್&zwnj;ನಲ್ಲಿ ತೆರಳುತ್ತಿದ್ದ ವೇಳೆ ಇವರ ಬೈಕ್&zwnj;ಗೆ ಬುಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಇಬ್ಬರು ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ವಾಚರ್&zwnj;ಗಳಾಗಿ ಕೆಲಸ ಮಾಡುತ್ತಿದ್ದರು. ಘಟನೆಯ ಬಳಿಕ ಬೊಲೆರೋ ವಾಹನ ಎಸ್ಕೇಪ್ ಆಗಿದ್ದು, ವಾಹನವನ್ನು ಹಿಡಿದು ಪೊಲೀಸರು ಪ್ರಕರ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಹಂಪಿ ಸಿಪಿಐ ರಾಜೇಶ್ ಭಟಗುರ್ಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&amp;nbsp;&lt;/strong&gt;ಕಲಬುರಗಿ: ನಡುರಸ್ತೆಯಲ್ಲೇ ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ&lt;/p&gt;]]></content:encoded>
            <category>vijayanagara</category>
            <dc:creator>Anusha Kb</dc:creator>
            <atom:link href="https://kannada.asianetnews.com/state/two-forest-watcher-on-duty-killed-after-bolero-goods-vehicle-collide-their-bike/articleshow-y74l8kz"/>
        </item>
    </channel>
</rss>
