<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 10 Aug 2026 09:14:09 +0530</lastBuildDate>
        <atom:link href="https://kannada.asianetnews.com/rss/vijayanagara" rel="self" type="application/rss+xml"/>
        <item>
            <title><![CDATA[ವಿಜಯನಗರದಲ್ಲಿ ಬರ, ರೈತರ ಬದುಕು ದುರ್ಬರ: ತಾನೇ ಬಿತ್ತಿ-ಬೆಳೆದ ತೊಗರಿ, ಜೋಳವನ್ನ ಹರಗಿದ ಅನ್ನದಾತ!]]></title>
            <link>https://kannada.asianetnews.com/karnataka-districts/vijayanagara-distressed-farmers-destroy-maize-crops-due-to-monsoon-failure-demand-loan-waiver-sat/articleshow-01a1vum</link>
            <guid isPermaLink="true">https://kannada.asianetnews.com/karnataka-districts/vijayanagara-distressed-farmers-destroy-maize-crops-due-to-monsoon-failure-demand-loan-waiver-sat/articleshow-01a1vum</guid>
            <pubDate>Mon, 20 Jul 2026 12:27:16 +0530</pubDate>
            <description><![CDATA[ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತಮ್ಮ ಮೆಕ್ಕೆಜೋಳದ ಬೆಳೆಯನ್ನು ಕೈಯಾರೆ ನಾಶಪಡಿಸುತ್ತಿದ್ದಾರೆ. ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ಸರ್ಕಾರವು ಸಾಲ ಮನ್ನಾ ಮಾಡಿ, ಬರಪೀಡಿತ ಎಂದು ಘೋಷಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz4z87376p4zk15n2pk0zwg,imgname-screenshot-2026-07-20-122358-1784530575586.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ (ಜು.20): ಮ&lt;/strong&gt;ಳೆಯನ್ನೇ ನಂಬಿ ಜಮೀನಿನಲ್ಲಿ ಬಿತ್ತನೆ ಮಾಡಿದ ರೈತನಿಗೆ ಈ ಬಾರಿ ಮುಂಗಾರು ಮಳೆ (Monsoon) ಭಾರೀ ಕೈಕೊಟ್ಟಿದೆ. ಬಿತ್ತನೆ ಮಾಡಿ ಮಳೆರಾಯನ ಆಗಮನಕ್ಕಾಗಿ ಕಾದು ಕುಳಿತಿದ್ದ ರೈತರು, ಈಗ ವಿಧಿಯಿಲ್ಲದೆ ತಮ್ಮ ಕೈಯಾರೆ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿರುವ ಮನಕಲಕುವ ಘಟನೆ ವಿಜಯನಗರ (Vijayanagara) ಜಿಲ್ಲೆಯಲ್ಲಿ ಜರುಗಿದೆ.&lt;/p&gt;&lt;h2&gt;&lt;strong&gt;ಮೊಳಕೆಯೊಡೆಯದ ಮೆಕ್ಕೆಜೋಳ:&lt;/strong&gt;&lt;/h2&gt;&lt;p&gt;ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ (Huvina Hadagali Taluk Holagundi Village) ವ್ಯಾಪ್ತಿಯ ಇಟಗಿ, ಉತ್ತಂಗಿ ಹಾಗೂ ಸೋಗಿ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ರೈತರು ಹೆಚ್ಚಿನ ನಿರೀಕ್ಷೆಯೊಂದಿಗೆ ಮೆಕ್ಕೆಜೋಳ (Maize) ಬಿತ್ತನೆ ಮಾಡಿದ್ದರು. ಆದರೆ, ಬಿತ್ತನೆ ಮಾಡಿದ ನಂತರ ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಮೊಳಕೆಯೊಡೆಯಲೇ ಇಲ್ಲ. ಬೆಳೆದ ಒಂದಷ್ಟು ಬೆಳೆಯೂ ಕೂದ ಮಳೆಯಿಲ್ಲದೇ ಒಣಗಿ ಬೀಳುತ್ತಿದೆ. ತಾನೇ ಬಿತ್ತಿ ಬೆಳೆಸಿದ ಜೋಳ ಕಮರಿ ಹೋಗುವುದನ್ನು ನೋಡಲಾರದೆ ಕಂಗಾಲಾದ ರೈತ, ಈ ಬೆಳೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿ, ಎತ್ತುಗಳನ್ನು ಕಟ್ಟಿಕೊಂಡು ರಂಟೆಯಿಂದ ಹರಗುವ ಮೂಲಕ ತಮ್ಮ ಕೈಯಾರೆ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಸಾಲ ಮನ್ನಾಕ್ಕೆ ಹೆಚ್ಚಿದ ಒತ್ತಾಯ :&lt;/strong&gt;&lt;/h2&gt;&lt;p&gt;ಈ ಸಂಕಷ್ಟದ ಪರಿಸ್ಥಿತಿಯನ್ನು ಕಂಡು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್&zwnj; ಅವರು, 'ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬರಬೇಕಾದ ಬೆಳೆ ಕಣ್ಣೆದುರೇ ನಾಶವಾಗುತ್ತಿದೆ. ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ರೈತರ ಹಿತದೃಷ್ಟಿಯಿಂದ ಅವರ ಸಂಪೂರ್ಣ ಸಾಲವನ್ನು ಮನ್ನಾ (Complete Loan Waiver) ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h2&gt;&lt;strong&gt;ಬರಗಾಲದ ಆತಂಕ :&lt;/strong&gt;&lt;/h2&gt;&lt;p&gt;ಕೇವಲ ವಿಜಯನಗರ ಜಿಲ್ಲೆಯಲ್ಲದೆ ರಾಜ್ಯದಾದ್ಯಂತ ಹಲವು ಕಡೆ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ. ಬಿತ್ತನೆ ಮಾಡಿದ ಬೀಜಗಳು ಮಣ್ಣಿನಲ್ಲೇ ಒಣಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರವು ಕೂಡಲೇ ಜಿಲ್ಲೆಯನ್ನು ಬರಪೀಡಿತ (Drought Affected) ಎಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ (Compensation) ನೀಡಬೇಕು ಎಂಬುದು ಇಲ್ಲಿನ ಜನರ ಒಕ್ಕೊರಲ ಆಗ್ರಹವಾಗಿದೆ.&lt;/p&gt;&lt;p&gt;ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು, ಈಗ ಬೆಳೆಯೂ ಇಲ್ಲದೆ, ಸಾಲ ತೀರಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಈ ಪರಿಸ್ಥಿತಿ ರಾಜ್ಯದ ಕೃಷಿ ಕ್ಷೇತ್ರದ ದುಸ್ಥಿತಿಗೆ ಕೈಗನ್ನಡಿಯಾಗಿದೆ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayanagara-distressed-farmers-destroy-maize-crops-due-to-monsoon-failure-demand-loan-waiver-sat/articleshow-01a1vum"/>
        </item>
        <item>
            <title><![CDATA[AISA Protest: ಜಾರ್ಖಂಡ್‌ನಲ್ಲಿ ಹೋರಾಟಗಾರ್ತಿ ನೇಹಾ ಬೋರಾ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ; ಆರೆಸ್ಸೆಸ್ ವಿರುದ್ಧ ಆಕ್ರೋಶ!]]></title>
            <link>https://kannada.asianetnews.com/karnataka-districts/vijayanagar-aisa-protest-condemning-the-attack-on-activist-neha-bora-in-jharkhand/articleshow-1c1cvko</link>
            <guid isPermaLink="true">https://kannada.asianetnews.com/karnataka-districts/vijayanagar-aisa-protest-condemning-the-attack-on-activist-neha-bora-in-jharkhand/articleshow-1c1cvko</guid>
            <pubDate>Mon, 10 Aug 2026 09:14:04 +0530</pubDate>
            <description><![CDATA[&lt;p&gt;ಜಾರ್ಖಂಡ್&zwnj;ನ ರಾಂಚಿಯಲ್ಲಿ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹರಪನಹಳ್ಳಿಯಲ್ಲಿ ಎಐಎಸ್ಎ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಕೃತ್ಯದ ಹಿಂದೆ ಆರೆಸ್ಸೆಸ್ ಸಂಘ ಪರಿವಾರದ ಕೈವಾಡವಿದೆ. ದಾಳಿಕೋರರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzmvzgmyf2vbw2zjkkdj4ky4,imgname-----------------------2026-08-10t090538.383-1786333086366.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹರಪನಹಳ್ಳಿ (ಆ.10)&lt;/strong&gt;: ಜಾರ್ಖಂಡ್&zwnj;(Jharkhand)ನ ರಾಂಚಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಎಐಎಸ್ಎ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಜಾರ್ಖಂಡ್&zwnj;ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟದಲ್ಲಿ ಯುವಜನತೆಯೊಂದಿಗೆ ಐಕ್ಯತೆ ವ್ಯಕ್ತಪಡಿಸಲು ಪಾಲ್ಗೊಂಡಿದ್ದ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಮೇಲೆ ನಡೆದ ದಾಳಿ ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;JPSC Exam: ಪರೀಕ್ಷೆ ರದ್ದತಿಗೆ ಜಾರ್ಖಂಡ್ ಸರ್ಕಾರ ಒಲವು, ಆದ್ರೆ CBI ತನಿಖೆಗೇ ವಿದ್ಯಾರ್ಥಿಗಳ ಪಟ್ಟು!&lt;/p&gt;&lt;h2&gt;ಆರೆಸ್ಸೆಸ್ ಸಂಘ ಪರಿವಾರದ ಕೃತ್ಯ&lt;/h2&gt;&lt;p&gt;ಬೆಂಗಳೂರಿನಿಂದ ದೆಹಲಿ-ಮುಂಬೈನಿಂದ ಪಾಟ್ನಾವರೆಗೆ ದೇಶವನ್ನೇ ವ್ಯಾಪಿಸಿದ ಇತ್ತೀಚಿನ ಯುವಜನರ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದು ಯುವತಿಯರು. ಇದನ್ನು ಸಹಿಸಿಕೊಳ್ಳದ ಆರ್ ಎಸ್ ಎಸ್ ಸಂಘ ಪರಿವಾರದವರು ಈ ರೀತಿಯ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;h3&gt;ಮಹಿಳೆಯರ ರಾಜಕೀಯ ನಾಯಕತ್ವದಿಂದ ಆರೆಸ್ಸೆಸ್&zwnj;ಗೆ ಅಸಹನೀಯ&lt;/h3&gt;&lt;p&gt;ಮಹಿಳೆಯರನ್ನು ಕೇವಲ ಸಂಸ್ಕೃತಿಯ ಸಂಕೇತಗಳಾಗಿ, ಕುಟುಂಬದ ಗೌರವದ ಹೊರೆ ಹೊರುವವರಾಗಿ, ಪುರುಷಾಧಿಪತ್ಯದ ಆದೇಶ ಪಾಲಿಸುವ ಕಾಲಾಳುಗಳಾಗಿ ಮಾತ್ರ ನೋಡಲು ಬಯಸುವ ಸಂಘ ಪರಿವಾರದ ಸೈದ್ಧಾಂತಿಕ ಯೋಜನೆಗೆ ಮಹಿಳೆಯರು ರಾಜಕೀಯ ನಾಯಕತ್ವವನ್ನು ವಹಿಸುವ ಈ ದೃಶ್ಯವೇ ಅವರಿಗೆ ಅಸಹನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ದೆಹಲಿ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ, ಜಾರ್ಖಂಡ್ ಹೋರಾಟಕ್ಕೆ ಮೌನವೇಕೆ? ಕಾಂಗ್ರೆಸ್&zwnj;ನ ಡಬಲ್ ಸ್ಟ್ಯಾಂಡರ್ಡ್&zwnj;ಗೆ ಬಿಜೆಪಿ ಕಿಡಿ&lt;/p&gt;&lt;p&gt;&lt;strong&gt;ನೇಹಾ ಮೇಲೆ ದಾಳಿ ನಡೆಸಿದವರನ್ನ ಬಂಧಿಸಿ&lt;/strong&gt;&lt;/p&gt;&lt;p&gt;ಜಾರ್ಖಂಡನಲ್ಲಿ ನೇಹಾ ಮತ್ತು ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆಸಿದ ದಾಳಿಕೊರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಗುಳ್ಳೆದಹಟ್ಟಿ ಸಂತೋಷ್, ಹುಲಿಕಟ್ಟಿ ಮೈಲಪ್ಪ, ಬಾಗಳಿ ರೇಣುಕಮ್ಮ ಮೊಮ್ಮದ್ ರಫೀಕ್, ನಾರಾಯಣಪುರ ಮಂಗಳಕ್ಕ, ರೂಪ, ವಿದ್ಯರ್ಥಿ ಸಂಘಟನೆ ಮುಖಂಡರಾದ ವಿನಯ್ ಕುಮಾರ್, ಮೋಹನ್, ಕಲೀಮ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagar-aisa-protest-condemning-the-attack-on-activist-neha-bora-in-jharkhand/articleshow-1c1cvko"/>
        </item>
        <item>
            <title><![CDATA[ಖಾಸಗಿ ಶಾಲೆಗಳತ್ತ ಸರ್ಕಾರಿ ಶಾಲೆಯ 30 ಸಾವಿರ ಮಕ್ಕಳು! ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲ]]></title>
            <link>https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2</link>
            <guid isPermaLink="true">https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2</guid>
            <pubDate>Sun, 05 Jul 2026 08:36:32 +0530</pubDate>
            <description><![CDATA[ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪಾಸಾದ ಸುಮಾರು 30 ಸಾವಿರ ವಿದ್ಯಾರ್ಥಿಗಳು, 8ನೇ ತರಗತಿಗೆ ಸೂಕ್ತ ವ್ಯವಸ್ಥೆ, ಪಠ್ಯಪುಸ್ತಕಗಳು ಮತ್ತು ಶಿಕ್ಷಕರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣದಿಂದಾಗಿ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು, ಉಳಿದವರು ಕನ್ನಡ ಮಾಧ್ಯಮದಲ್ಲಿಯೇ ಮುಂದುವರಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr3e3tcb48vre8ew9vbkh31,imgname-govt-school-1783220342604.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ವಿಜಯನಗರ: &lt;/strong&gt;ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಪಾಸಾದ 30 ಸಾವಿರ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ್ದಕ್ಕೆ ಖಾಸಗೀ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಬಾಗಿಲು ತಟ್ಟುತ್ತಿದ್ದಾರೆ!&lt;/p&gt;&lt;p&gt;ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ಮಕ್ಕಳಿಗೆ ಪಠ್ಯ- ಪುಸ್ತಕಗಳು ಲಭಿಸಿಲ್ಲ, ಪಾಠ ಮಾಡಲು ಶಿಕ್ಷಕರೂ ಬಾರದೇ ಖಾಲಿ ಗೋಡೆ ನೋಡಿ ನೋಡಿ ಬಸವಳಿದ್ದು, ಪಾಲಕರು ಅನಿವಾರ್ಯವಾಗಿ ಸಾಲ ಸೋಲ ಮಾಡಿ ಖಾಸಗೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಿಗೆ ಸೇರಿಸುತ್ತಿದ್ದಾರೆ.&lt;/p&gt;&lt;p&gt;2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ 1001 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿದೆ. ಗ್ರಾಮೀಣ ಭಾಗದ ಬಡವರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕೆಂಬ ಉದ್ದೇಶ ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಆರಂಭವಾದ ಶಾಲೆಗಳಲ್ಲಿ 7ನೇ ತರಗತಿ ಪಾಸ್&zwnj; ಆಗಿರುವ 30 ಸಾವಿರ ವಿದ್ಯಾರ್ಥಿಗಳು ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಣ ಮಂತ್ರಿಯೇ ಇಲ್ಲ&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟದಲ್ಲಿ ಈ ವರೆಗೂ ಶಿಕ್ಷಣ ಸಚಿವರೇ ಇಲ್ಲ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದರಿಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.&lt;/p&gt;&lt;p&gt;ಈವರೆಗೂ ಸರ್ಕಾರ ಪ್ರತ್ಯೇಕವಾಗಿ ಆಂಗ್ಲ ಮಾಧ್ಯಮದ 8ನೇ ತರಗತಿ ಆರಂಭಿಸುವ ಆದೇಶವನ್ನು ಮಾಡಿಲ್ಲ. ಪಠ್ಯ-ಪುಸ್ತಕವಿಲ್ಲ, ಬೋಧಿಸುವ ಶಿಕ್ಷಕರೂ ಇಲ್ಲ. ಆಯಾ ಶಾಲೆಯ ಶಿಕ್ಷಕರೇ ತಮ್ಮ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಜತೆ ಕೂಡ್ರಿಸಿ ಕನ್ನಡದಲ್ಲಿ ಇವರಿಗೂ ಪಾಠ ಮಾಡುತ್ತಿದ್ದರಿಂದ ರಾಜ್ಯದ 30 ಸಾವಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಿಧಿ ಇಲ್ಲದೇ 8ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ರಾಜ್ಯದ ಕೆಲವೆಡೆ ಸರ್ಕಾರಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 8ನೇ ತರಗತಿ ಆರಂಭಿಸದ ಹಿನ್ನೆಲೆಯಲ್ಲಿ ಸ್ಥಿತಿವಂತ ಪಾಲಕರು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಕದ ತಟ್ಟುವಂತಾಗಿದೆ. ಉಳಿದಂತೆ ಬಡ ಮಕ್ಕಳು ಇದೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.&lt;/p&gt;&lt;p&gt;ನಮ್ಮ ಮಕ್ಕಳಿಗೆ ತಿಂಗಳೂ ಕಳೆದರೂ ಸರಿಯಾಗಿ ಪಾಠ ಪ್ರವಚನವಿಲ್ಲ. ಪಠ್ಯಪುಸ್ತಕಗಳಿಲ್ಲ. ವಿಧಿ ಇಲ್ಲದೇ ಕನ್ನಡ ಮಾಧ್ಯಮದ 8ನೇ ತರಗತಿ ಮಕ್ಕಳೊಂದಿಗೆ ಕನ್ನಡ ಪಾಠ ಕೇಳುತ್ತಿದ್ದಾರೆ. ಸರ್ಕಾರ ಈ ಕುರಿತು ಬೇಗನೆ ನಿರ್ಧಾರ ಪ್ರಕಟಿಸಲಿ ಎಂದು ಮಾಗಳ ಗ್ರಾಮದ ನಿವಾಸಿ ಈಟಿ ಕೋಟೆಪ್ಪ ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಸರ್ಕಾರದ ಆದೇಶ ಬಂದಿಲ್ಲ ಎಂದ ಅಧಿಕಾರಿ&lt;/strong&gt;&lt;/h3&gt;&lt;p&gt;7ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಪಾಸ್&zwnj; ಆಗಿರುವ ವಿದ್ಯಾರ್ಥಿಗಳಿಗೆ 8ನೇ ತರಗತಿ ಆರಂಭಿಸಲು ಸರ್ಕಾರದ ಆದೇಶ ಬಂದಿಲ್ಲ. ಸರ್ಕಾರದ ಆದೇಶ ಬರುವವರೆಗೂ ಆಯಾ ಗ್ರಾಮದ ಕನ್ನಡ ಮಾಧ್ಯಮದ ಪ್ರೌಢ ಶಾಲೆಗೆ ವಿದ್ಯಾರ್ಥಿಗಳು ಹೋಗುವಂತೆ ಸೂಚನೆ ನೀಡಲಾಗಿದೆ ಎಂದು ಹೂವಿನಹಡಗಲಿಯ &amp;nbsp;ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ಎ.ಕೋಟೆಪ್ಪ ಹೇಳುತ್ತಾರೆ. &amp;nbsp;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2"/>
        </item>
        <item>
            <title><![CDATA[ಹಂಪಿಯ ನಿಷೇಧಿತ, ಬಫರ್ ವಲಯದಲ್ಲಿ ಅಕ್ರಮ ಹೋಮ್‌ಸ್ಟೇ: 53ಕ್ಕೂ ಹೆಚ್ಚು ಅಧಿಕಾರಿಗಳಿಗೆ ಉಪಲೋಕಾಯುಕ್ತರ ಬಿಗ್ ಶಾಕ್!]]></title>
            <link>https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u</link>
            <guid isPermaLink="true">https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u</guid>
            <pubDate>Fri, 07 Aug 2026 10:07:42 +0530</pubDate>
            <description><![CDATA[&lt;p&gt;ಯುನೆಸ್ಕೋ ಪಾರಂಪರಿಕ ತಾಣವಾದ ಹಂಪಿಯ ಸಂರಕ್ಷಿತ ವಲಯಗಳಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು 250ಕ್ಕೂ ಹೆಚ್ಚು ಅನಧಿಕೃತ ಹೋಮ್&zwnj;ಸ್ಟೇಗಳ ವಿರುದ್ಧ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd81zbyhbw7g9mw5d1022jn,imgname-hampi-1786077314430.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಆ.7): &lt;/strong&gt;ಯುನೆಸ್ಕೋ (UNESCO) ಜಾಗತಿಕ ಪಾರಂಪರಿಕ ತಾಣವಾದ ವಿಜಯನಗರ ಜಿಲ್ಲೆಯ ಹಂಪಿಯ ಸಂರಕ್ಷಿತ, ಬಫರ್ ಹಾಗೂ ಪರಿಧಿ ವಲಯಗಳಲ್ಲಿ (Core, Buffer and Peripheral Zones) ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ 250ಕ್ಕೂ ಹೆಚ್ಚು ಅನಧಿಕೃತ ಹೋಮ್&zwnj;ಸ್ಟೇಗಳ ವಿರುದ್ಧ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ (HWHAMA) ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ನಿಷೇಧಿತ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಡೆಸಲು ಅನುಮತಿ ನೀಡಿರುವುದನ್ನು ಉಪಲೋಕಾಯುಕ್ತರು ತಮ್ಮ ದೂರಿನಲ್ಲಿ ಗಂಭೀರವಾಗಿ ಪರಿಗಣಿಸಿದ್ದಾರೆ.&lt;/p&gt;&lt;p&gt;ನಿಯಮ ಉಲ್ಲಂಘನೆ ಹಾಗೂ ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲವಾಗಿರುವ ಕಾರಣಕ್ಕಾಗಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಉಪಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ದು, ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.&lt;/p&gt;&lt;h2&gt;&lt;strong&gt;53ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ತನಿಖೆಯ ಬಿಸಿ&lt;/strong&gt;&lt;/h2&gt;&lt;p&gt;ಈ ಕುರಿತು ಮಾತನಾಡಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಗ್ರಾಮ ಪಂಚಾಯಿತಿ ಮಟ್ಟದ ಸಿಬ್ಬಂದಿಯಿಂದ ಹಿಡಿದು ಜೆಸ್ಕಾಂ (GESCOM), ಕಂದಾಯ, ಪ್ರವಾಸೋದ್ಯಮ ಮತ್ತು 'ಹವಾಮಾ' (HWHAMA) ಸೇರಿದಂತೆ ವಿವಿಧ ಇಲಾಖೆಗಳ 53ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳ ವಿರುದ್ಧ ಈ ದೂರು ಒಳಗೊಂಡಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&quot;ಹಂಪಿಯ ಅತ್ಯಂತ ಸಂರಕ್ಷಿತ (Core) ವಲಯದಲ್ಲಿ ಯಾವುದೇ ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟ ನಿರ್ದೇಶನ ನೀಡಿದೆ. ಆದರೂ, ನನ್ನ ಭೇಟಿಯ ಸಂದರ್ಭದಲ್ಲಿ ಇಂತಹ ಹಲವು ಅಕ್ರಮ ಕಟ್ಟಡಗಳು ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ,&quot; ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ನೀಡಲಾದ ಅನುಮತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹವಾಮಾ ವ್ಯಾಪ್ತಿಯಲ್ಲಿ ಬರೋಬ್ಬರಿ 500ಕ್ಕೂ ಹೆಚ್ಚು ಅಕ್ರಮ ಹೋಮ್&zwnj;ಸ್ಟೇಗಳು, ರೆಸಾರ್ಟ್&zwnj;ಗಳು, ಹೋಟೆಲ್&zwnj;ಗಳು, ಲಾಡ್ಜ್&zwnj;ಗಳು ಮತ್ತು ಅಂಗಡಿಗಳು ಕಾರ್ಯಾಚರಿಸುತ್ತಿರಬಹುದು ಎಂದು ಅವರು ಅಂದಾಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಯುನೆಸ್ಕೋ ಮಾರ್ಗಸೂಚಿಗಳ ಉಲ್ಲಂಘನೆ&lt;/strong&gt;&lt;/h2&gt;&lt;p&gt;ಹಂಪಿಯ ಸಾಂಸ್ಕೃತಿಕ ಮತ್ತು ಪುರಾತತ್ತ್ವ ಪ್ರಾಮುಖ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಅದರ ಸಂರಕ್ಷಿತ ಮತ್ತು ಬಫರ್ ವಲಯಗಳಲ್ಲಿ ಅನಧಿಕೃತ ವಾಣಿಜ್ಯ ನಿರ್ಮಾಣಗಳು, ರೆಸಾರ್ಟ್&zwnj;ಗಳು ಮತ್ತು ಹೋಮ್&zwnj;ಸ್ಟೇಗಳನ್ನು ಯುನೆಸ್ಕೋ ಮಾರ್ಗಸೂಚಿಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ಅಕ್ರಮಗಳನ್ನು ತಡೆಯಲು ವಿಫಲರಾಗಿದ್ದಷ್ಟೇ ಅಲ್ಲದೆ, ಕೆಲ ಪ್ರಕರಣಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅನುಮತಿಯನ್ನೂ ನೀಡಿದ್ದಾರೆ ಎಂದು ಉಪಲೋಕಾಯುಕ್ತರು ಚಾಟಿ ಬೀಸಿದ್ದಾರೆ.&lt;/p&gt;&lt;p&gt;ಹಂಪಿಯಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ ಅನಧಿಕೃತ ಪ್ರವಾಸೋದ್ಯಮ ಸಂಸ್ಥೆಗಳ ಕುರಿತು ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಜುಲೈ 25 ರಂದು ಹಂಪಿಗೆ ಅಧಿಕೃತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ರಕ್ಷಿತ ಪ್ರದೇಶದಲ್ಲಿ ಅಣಬೆಯಂತೆ ಬೆಳೆದು ನಿಂತಿರುವ ಅನಧಿಕೃತ ಹೋಮ್&zwnj;ಸ್ಟೇಗಳ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.&lt;/p&gt;&lt;p&gt;ಪರಿಶೀಲನೆಯ ವೇಳೆ, ಪಂಚಾಯತ್ ಅಥವಾ ಹವಾಮಾದಿಂದ ಕಡ್ಡಾಯ ಅನುಮೋದನೆ ಅಥವಾ ಪರವಾನಗಿ ಪಡೆಯದೆ ಕನಿಷ್ಠ 250 ಅಕ್ರಮ ಹೋಮ್&zwnj;ಸ್ಟೇಗಳು ಕಾರ್ಯಾಚರಿಸುತ್ತಿವೆ ಎಂದು ಅಧಿಕಾರಿಗಳು ಅವರ ಗಮನಕ್ಕೆ ತಂದಿದ್ದರು. ಇದರಿಂದ ಕೆರಳಿದ ಉಪಲೋಕಾಯುಕ್ತರು, ಶಾಸನಬದ್ಧ ಅನುಮತಿಗಳೇ ಇಲ್ಲದೆ ಇಷ್ಟೊಂದು ಬೃಹತ್ ಸಂಖ್ಯೆಯ ಉದ್ಯಮಗಳು ಕಾರ್ಯಾಚರಿಸಲು ಹೇಗೆ ಸಾಧ್ಯವಾಯಿತು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.&lt;/p&gt;&lt;h2&gt;&lt;strong&gt;ಗ್ರಾಮ ಪಂಚಾಯಿತಿಗಳ ವಿರುದ್ಧ ಆಕ್ರೋಶ&lt;/strong&gt;&lt;/h2&gt;&lt;p&gt;ಈ ವಿಚಾರವಾಗಿ ಪ್ರತಿಕ್ರಿಯಿಸಿದ 'ಹವಾಮಾ'ದ ಮಾಜಿ ಹಿರಿಯ ಅಧಿಕಾರಿಯೊಬ್ಬರು, &quot;ಹೋಮ್&zwnj;ಸ್ಟೇ ಅಥವಾ ಇತರ ವಾಣಿಜ್ಯ ಮಳಿಗೆಗಳಿಗೆ ಅನುಮೋದನೆ ನೀಡುವ ಯಾವುದೇ ಅಧಿಕಾರ ನಮಗಿಲ್ಲ. ವಿಜಯನಗರ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದಂತೆ ಹೋಮ್&zwnj;ಸ್ಟೇಗಳನ್ನು ಸ್ಥಾಪಿಸಲು ಅನುಮತಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿತ್ತು. ಈ ಅಕ್ರಮ ಹೋಮ್&zwnj;ಸ್ಟೇಗಳ ಹಾವಳಿ ವ್ಯಾಪಕವಾಗಿದ್ದು, ನಾವು ಈ ಹಿಂದೆ ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್&zwnj;ಗಳನ್ನು ನೀಡಿದ್ದೆವು,&quot; ಎಂದು ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u"/>
        </item>
        <item>
            <title><![CDATA[Monsoon deficit: ಕೂಡ್ಲಿಗಿ ಆಯ್ತು, ಕೊಟ್ಟೂರಿಂದಲೂ ರಾತ್ರೋರಾತ್ರಿ 2000 ಜನ ಗುಳೆ!]]></title>
            <link>https://kannada.asianetnews.com/karnataka-districts/monsoon-deficit-in-north-karnataka-kottur-villagers-migrate-to-cities-rav/articleshow-443quwr</link>
            <guid isPermaLink="true">https://kannada.asianetnews.com/karnataka-districts/monsoon-deficit-in-north-karnataka-kottur-villagers-migrate-to-cities-rav/articleshow-443quwr</guid>
            <pubDate>Tue, 07 Jul 2026 06:26:44 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಸುರಿದ ಮಳೆ ನಂಬಿ ರೈತರು ಬಿತ್ತನೆ ಮಾಡಿದ್ದರು. ಆದರೆ, ಜೂನ್&zwnj;ನಿಂದ ಜುಲೈ ತಿಂಗಳ ಇಲ್ಲಿವರೆಗೆ ಮಳೆ ಬರುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಹೀಗಾಗಿ, ಆತಂಕಗೊಂಡ ಇಲ್ಲಿನ ಜನ ಸುಮಾರು 2000ದಷ್ಟು ಸಂಖ್ಯೆಯಲ್ಲಿ ಗುಳೆ ಹೊರಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwx0ye8csg0qw2h0y3pp7b5c,imgname-----------------------2026-07-07t061807.189-1783385504011.jpg" type="image/jpeg" height="390" width="690"/>
            <content:encoded><![CDATA[&lt;p&gt;- ತಾಲೂಕಲ್ಲಿ ಭೀಕರ ಬರದ ಛಾಯೆ&lt;/p&gt;&lt;ul&gt; &lt;li&gt;--&amp;nbsp;ರಾಜ್ಯದ ಅನೇಕ ಭಾಗಗಳಂತೆ ವಿಜಯನಗರ ಜಿಲ್ಲೆಯಲ್ಲೂ ಬರ&lt;/li&gt; &lt;li&gt;&amp;nbsp;ಕೊಟ್ಟೂರಿನ 33000 ಹೆಕ್ಟೇರ್ ಪೈಕಿ 8000 ಹೆಕ್ಟೇರ್&zwnj; ಅಷ್ಟೇ ಬಿತ್ತನೆ&lt;/li&gt; &lt;li&gt;&amp;nbsp;ಭಣಗುಡುತ್ತಿವೆ ಕೆರೆ-ಕಟ್ಟೆಗಳು, ಜಮೀನುಗಳು ಬರಡೋ ಬರಡು&lt;/li&gt;&lt;/ul&gt;&lt;p&gt;&lt;strong&gt;ಜಿ.ಸೋಮಶೇಖರ&lt;/strong&gt;&lt;/p&gt;&lt;p&gt;&lt;strong&gt;&amp;nbsp;ಕೊಟ್ಟೂರು (ಜು.7): &lt;/strong&gt;ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮೇ ಕೊನೆಯ ವಾರದಲ್ಲಿ ಸುರಿದ ಮಳೆಯನ್ನು ನಂಬಿ ರೈತರು ಅಲ್ಪ ಸ್ವಲ್ಪ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ, ಜೂನ್&zwnj;ನಿಂದ ಜುಲೈ ತಿಂಗಳ ಇಲ್ಲಿವರೆಗೆ ಮಳೆ ಬರುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಹೀಗಾಗಿ, ಆತಂಕಗೊಂಡ ಇಲ್ಲಿನ ಜನ ಸುಮಾರು 2000ದಷ್ಟು ಸಂಖ್ಯೆಯಲ್ಲಿ ಗುಳೆ ಹೊರಟಿದ್ದಾರೆ.&lt;/p&gt;&lt;p&gt;ದೂಪದಹಳ್ಳಿ ಮತ್ತು ದೂಪದಹಳ್ಳಿ ತಾಂಡಾದ 500 ಜನ, ಮೋತಿಕಲ್&zwnj; ತಾಂಡಾ- 480, ತಿಮಲ್ಲಾಪುರ ದೊಡ್ಡ ತಾಂಡಾ- 450, ತಿಮಲ್ಲಾಪುರ ಸಣ್ಣ ತಾಂಡಾ- 300, ಅಕ್ಕಾಪುರ- 120, ಗಜಾಪುರ- 110, ಕಂದಗಲ್&zwnj; 50 ಮಂದಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು 2,000ಕ್ಕೂ ಅಧಿಕ ಮಂದಿ ಗುಳೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಗುಳೆ ಹೋಗುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.&lt;/p&gt;&lt;h2&gt;ರಾತ್ರೋರಾತ್ರಿ ಬಸ್ಸಲ್ಲಿ ಗುಳೆ:&lt;/h2&gt;&lt;p&gt;ತಾಲೂಕಿನ ರೈತ ಕುಟುಂಬಗಳು ಉದ್ಯೋಗ ಅರಸಿ ಬಹುತೇಕ ಮಂದಿ ಮೈಸೂರು ಸೀಮೆಯತ್ತ ಗುಳೆ ಹೋಗತೊಡಗಿದ್ದಾರೆ. ಇನ್ನುಳಿದವರು ಚಿಕ್ಕಮಗಳೂರಿನ ಕಾಫಿ ತೋಟಗಳತ್ತ ತೆರಳಿದ್ದಾರೆ. ಕೃಷಿಕರು ತಮ್ಮ ತುತ್ತಿನ ಚೀಲವನ್ನು ತುಂಬಿಕೊಳ್ಳಲು ಕುಟುಂಬ ಸಮೇತ ರಾತ್ರೋರಾತ್ರಿ ಬಸ್ಸಿನಲ್ಲಿ ತೆರಳುತ್ತಿದ್ದಾರೆ.&lt;/p&gt;&lt;p&gt;ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಿದರೆ ಕೈತುಂಬ ಕೂಲಿ ಸಿಗುವ ಆಶಯ ಹೊಂದಿ ರೈತರು ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದಾರೆ. ಮುಂದಿನ ವರ್ಷದವರೆಗೆ ಜೀವನ ಸಾಗಿಸಲು ಬೇಕಾದಷ್ಟು ದುಡ್ಡು ಮಾಡಿಕೊಂಡು ವಾಪಸ್ಸಾಗಲಿದ್ದಾರೆ. ಎರಡು-ಮೂರು ತಿಂಗಳ ನಂತರ ತಾಲೂಕಿನ ತಾಂಡಾಗಳಿಗೆ ಮರಳಲಿದ್ದಾರೆ.&lt;/p&gt;&lt;p&gt;ಮೇ ತಿಂಗಳಲ್ಲಿ ಅಲ್ಪ ಸ್ವಲ್ಪ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ, ಹೆಚ್ಚಿನ ಹಣ ವ್ಯಯಿಸಿ ಬಿತ್ತನೆ ಮಾಡಿದ್ದಾರೆ. ಈಗ ಮಳೆಯ ಅವಕೃಪೆಯಿಂದಾಗಿ ಸಾಲ ತೀರಿಸಲು ದಾರಿ ಕಾಣದೆ ಗುಳೆ ಹೋಗುತ್ತಿದ್ದಾರೆ.&lt;/p&gt;&lt;h3&gt;ಗಂಭೀರ ಬರದ ಸ್ಥಿತಿ:&lt;/h3&gt;&lt;p&gt;ತಾಲೂಕಿನಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶಗಳ ಕೃಷಿ ಭೂಮಿ ಪೈಕಿ ಕೇವಲ 8 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತಿರುವ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಗಳು ಮಳೆ ಕಾಣದೆ ಕಮರಿ ಹೋಗುತ್ತಿವೆ. ಕೊಟ್ಟೂರು ಕೆರೆಯಲ್ಲಿ ಮಾತ್ರ ಸ್ವಲ್ಪ ನೀರಿದೆ. ತಾಲೂಕಿನ ಇತರ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ತಾಲೂಕಿನಲ್ಲಿ ಜಲಸಂಕಷ್ಟ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದೆ.&lt;/p&gt;&lt;h3&gt;ಮೇ ಬಳಿಕ ದೊಡ್ಡ ಮಳೆ ಇಲ್ಲ&lt;/h3&gt;&lt;p&gt;ಕೊಟ್ಟೂರು ತಾಲೂಕಿನಲ್ಲಿ ಮೇ ತಿಂಗಳಲ್ಲಿ ಮಾತ್ರ ಒಂದು ದೊಡ್ಡ ಮಳೆ ಸುರಿಯಿತು. ಅದನ್ನು ಬಿಟ್ಟರೆ ಅಂತಹ ಮಳೆ ಬಂದಿಲ್ಲ. ರೈತರು ಬಿತ್ತಿರುವ ಅಲ್ಪ ಸ್ವಲ್ಪ ಬೆಳೆಗಳು ಬೆಳವಣಿಗೆ ಕಾಣದೆ ನೆಲಕಚ್ಚುತ್ತಿವೆ. ಮುಂಬರುವ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಹೊಂದಿ ರೈತರಿಗೆ ಬೇಕಾಗುವ ಎಲ್ಲ ಬಗೆಯ ಬೀಜಗಳನ್ನು ಇಲಾಖೆ ಸಾಕಷ್ಟು ದಾಸ್ತಾನು ಮಾಡಿಕೊಂಡಿದೆ.&lt;/p&gt;&lt;p&gt;&lt;strong&gt;- ಶ್ಯಾಮ್ ಸುಂದರ್, ಕೃಷಿ ಸಹಾಯಕ ಅಧಿಕಾರಿ ಕೊಟ್ಟೂರು.&lt;/strong&gt;&lt;/p&gt;&lt;p&gt;&lt;strong&gt;ಗುಳೆ ತಡೆಯಬೇಕು&lt;/strong&gt;&lt;/p&gt;&lt;p&gt;ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೊಟ್ಟೂರಿನ ಹಳ್ಳಿಗಳು, ಕೆಲ ತಾಂಡಾಗಳ ರೈತರು ಪ್ರತಿದಿನ ತಂಡೋಪತಂಡವಾಗಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಅಲ್ಲಿ ಸಿಗುವ ಹೆಚ್ಚಿನ ದುಡ್ಡು ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಬಯಕೆಯಿಂದ ವಿಧಿಯಿಲ್ಲದೆ ಗುಳೆ ಹೋಗುತ್ತಿದ್ದಾರೆ. ಸರ್ಕಾರದವರು ಗುಳೆ ಹೋಗುವುದನ್ನು ತಡೆಯಬೇಕು. ಅವರಿಗೆ ಇಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು.&lt;/p&gt;&lt;p&gt;&lt;strong&gt;- ವೆಂಕಟೇಶ ನಾಯ್ಕ, ದೂಪದಹಳ್ಳಿ ತಾಂಡಾ ರೈತ.&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/monsoon-deficit-in-north-karnataka-kottur-villagers-migrate-to-cities-rav/articleshow-443quwr"/>
        </item>
        <item>
            <title><![CDATA[ಸಿಂಗಟಾಲೂರು ಏತ ನೀರಾವರಿ: ಬರೋಬ್ಬರಿ 117 ಕೋಟಿ ವಿದ್ಯುತ್‌ ಬಿಲ್‌ ಬಾಕಿ!  ಜೆಸ್ಕಾಂ, ಹೆಸ್ಕಾಂನಿಂದ ಫೈನಲ್ ವಾರ್ನ್!]]></title>
            <link>https://kannada.asianetnews.com/karnataka-districts/singatalur-lift-irrigation-rs-117-crore-in-electricity-bills-outstanding-at-vijayanagar-rav/articleshow-bf99368</link>
            <guid isPermaLink="true">https://kannada.asianetnews.com/karnataka-districts/singatalur-lift-irrigation-rs-117-crore-in-electricity-bills-outstanding-at-vijayanagar-rav/articleshow-bf99368</guid>
            <pubDate>Wed, 05 Aug 2026 12:37:55 +0530</pubDate>
            <description><![CDATA[&lt;p&gt;ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯು ಬರೋಬರಿ ₹117 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಬಲದಂಡೆ ಭಾಗದಲ್ಲಿ ₹87 ಕೋಟಿ ಮತ್ತು ಎಡದಂಡೆ ಭಾಗದಲ್ಲಿ ₹29 ಕೋಟಿ ಬಾಕಿ ಇದ್ದು, ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಜೆಸ್ಕಾಂ ಮತ್ತು ಹೆಸ್ಕಾಂ ಅಂತಿಮ ಎಚ್ಚರಿಕೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz8bttyzx220a3at4s45t408,imgname-----------------------2026-08-05t123440.009-1785913502687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ&lt;/strong&gt;: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ಮತ್ತು ಎಡದಂಡೆ ಭಾಗಗಳ ನೀರೆತ್ತುವ ಘಟಕಗಳಿಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಲಾಗಿದ್ದು, ಬರೋಬರಿ ₹117 ಕೋಟಿ ವಿದ್ಯುತ್&zwnj; ಬಿಲ್&zwnj; ಬಾಕಿ ಇದೆ.&lt;/p&gt;&lt;p&gt;ಬರದ ನಾಡಿನ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕೆರೆ ತುಂಬಿಸುವ ಯೋಜನೆ, ಮಾಲ್ವಿ ಜಲಾಶಯಕ್ಕೆ ನೀರೆತ್ತುವ ಘಟಕ, ಕೂಡ್ಲಿಗಿ ಕೆರೆ ತುಂಬಿಸುವ ಯೋಜನೆ, ಜತೆಗೆ ಎಡ ಮತ್ತು ಬಲ ದಂಡೆಯ ಭಾಗಗಳ ಕಾಲುವೆಗಳಿಗೆ ನೀರು ಹರಿಸುವ ಉದ್ದೇಶದಿಂದ ಎರಡೂ ಭಾಗಗಳ ಮೋಟಾರ್&zwnj; ಪಂಪ್&zwnj;ಸೆಟ್&zwnj;ಗಳಿಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಲಾಗಿದೆ. ಆಗಷ್ಟ್&zwnj;-2023ರಿಂದ ಏಪ್ರಿಲ್&zwnj;-2026ರ ವರೆಗೂ ವಿದ್ಯುತ್&zwnj; ಬಿಲ್&zwnj; ಬಾಕಿ ಇದೆ.&lt;/p&gt;&lt;p&gt;ಬಲದಂಡೆ ₹87 ಕೋಟಿ ಬಾಕಿ&lt;/p&gt;&lt;p&gt;ಯೋಜನೆಯ ಬಲದಂಡೆ ಭಾಗದಲ್ಲಿನ ಕಲಿಕೇರಿ ಘಟಕ ₹378407854, ತುರ್ಚಿಹಾಳು ಘಟಕ ₹127549932, ರಾಜವಾಳ ಘಟಕ ₹89425726, ಗೂಜನೂರು ಘಟಕ ₹70326328, ಶಾಕಾರ ಘಟಕ ₹14691067, ಮಾಗಳ ಘಟಕ ₹89640182, ಹುಗಲೂರು ಘಟಕ ₹8538984, ಮಾಲ್ವಿ ಘಟಕ ₹59356316, ಪಾಲಯ್ಯನಕೋಟೆ ಘಟಕ ₹11453052, ರಾಜವಾಳ ಘಟಕ ₹24935089 ಸೇರಿದಂತೆ ಒಟ್ಟು ₹874324530 ಬಾಕಿ ಇದೆ.&lt;/p&gt;&lt;p&gt;ಎಡದಂಡೆ ₹29 ಕೋಟಿ ಬಾಕಿ&lt;/p&gt;&lt;p&gt;ಯೋಜನೆಯ ಎಡದಂಡೆ ಭಾಗದಲ್ಲಿರುವ ಮುಂಡರಗಿ, ಗದಗ, ಕಲಿಕೇರಿ, ಹಿರೇವಡ್ಡಟ್ಟಿ, ವಿರೂಪಾಪುರ, ಮುಷ್ಠಿಕೊಪ್ಪ ಹಾಗೂ ಡಂಬಳ ನೀರೆತ್ತುವ ಘಟಕಗಳಿಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಿದ್ದು, ಒಟ್ಟು ₹296541277 ಕೋಟಿ ಸೇರಿದಂತೆ ಒಟ್ಟಾರೆ ₹1170865807 ವಿದ್ಯುತ್&zwnj; ಬಾಕಿ ಇದೆ. ಬಿಲ್&zwnj; ಪಾವತಿ ಮಾಡಲು ರಾಜ್ಯ ಸರ್ಕಾರ ಕರ್ನಾಟಕ ನೀರಾವರಿ ನಿಗಮ (ಕೆಎನ್&zwnj;ಎನ್&zwnj;ಎಲ್&zwnj;)ಕ್ಕೆ ಹಣ ಬಿಡುಗಡೆ ಮಾಡಬೇಕಿದೆ.&lt;/p&gt;&lt;p&gt;ಸಿಂಗಟಾಲೂರು ಏತ ನೀರಾವರಿ ಯೋಜನೆಯು 2012ರಲ್ಲೇ ಲೋಕಾರ್ಪಣೆಗೊಂಡಿದೆ. ಅಲ್ಲಿಂದ ಈ ವರೆಗೂ ಕಾಲುವೆ, ಕೆರೆಗಳಿಗೆ ನೀರು ಹರಿಸುತ್ತಿದ್ದಾರೆ, ಆದರೆ, ಸರ್ಕಾರ ಈ ವರೆಗೂ ಅಧಿಕೃತ ನೀರಾವರಿ ಪ್ರದೇಶವೆಂದು ಘೋಷಣೆ ಮಾಡಿಲ್ಲ. ನೀರು ಬಳಕೆದಾರರ ಸಂಘ ರಚನೆ ಇಲ್ಲ, ತೆರಿಗೆ ನಿಗಧಿ ಪಡಿಸಿಲ್ಲ. ಇದರಿಂದ ಕಾಲುವೆಗಳು, ಪೈಪ್&zwnj;ಲೈನ್&zwnj; ಹಾಗೂ ಇನ್ನಿತರ ಕಾಮಗಾರಿಗಳಿಗೆ ಸರ್ಕಾರ ಸಕಾಲದಲ್ಲಿ ಅನುದಾನ ನೀಡುತ್ತಿಲ್ಲ. ಇದೇ ರೀತಿಯಲ್ಲೆ ವಿದ್ಯುತ್&zwnj; ಬಿಲ್&zwnj; ಬಾಕಿ ಉಳಿದುಕೊಂಡಿದೆ.&lt;/p&gt;&lt;p&gt;ಈಗಾಗಲೇ ಜೆಸ್ಕಾಂ ಮತ್ತು ಹೆಸ್ಕಾಂ ಅಧಿಕಾರಿಗಳು, ಸಿಂಗಟಾಲೂರು ಏತ ನೀರಾವರಿ ಯೋಜನೆಯ, ಪೂರ್ಣ ವಿದ್ಯುತ್&zwnj; ಬಿಲ್&zwnj; ಪಾವತಿ ಮಾಡಲು ವಿಳಂಬ ಮಾಡಿದ, ಕಡ್ಡಾಯವಾಗಿ ವಿದ್ಯುತ್&zwnj; ಕಡಿತ ಮಾಡುತ್ತೇವೆ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ಯೋಜನೆಯ ಮೋಟಾರ್&zwnj;ಗಳಿಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಿದ್ದು, ಆಗಸ್ಟ್ 2023ರಿಂದ ಏಪ್ರಿಲ್&zwnj; 2026ರ ವರೆಗೂ ಬಲದಂಡೆ ಭಾಗದ ₹87 ಕೋಟಿ ಬಾಕಿ ಇದೆ. ಜೆಸ್ಕಾಂ ಮತ್ತು ಹೆಸ್ಕಾಂ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಇಇ ಶಿವಮೂರ್ತಿ ಹೇಳಿದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/singatalur-lift-irrigation-rs-117-crore-in-electricity-bills-outstanding-at-vijayanagar-rav/articleshow-bf99368"/>
        </item>
        <item>
            <title><![CDATA[ವಿಜಯನಗರ: ದೇವಾಲಯಗಳಲ್ಲಿ ಪ್ರತಿ ತಿಂಗಳು ಹುಂಡಿ ಎಣಿಕೆ ಕಡ್ಡಾಯ, ಚಿನ್ನ ಬೆಳ್ಳಿ  ಕಾಣಿಕೆ ಬಗ್ಗೆ ಡಿಸಿ ಸೂಚನೆ ಏನು?]]></title>
            <link>https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m</link>
            <guid isPermaLink="true">https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m</guid>
            <pubDate>Thu, 30 Jul 2026 12:56:59 +0530</pubDate>
            <description><![CDATA[ಹೊಸಪೇಟೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಪಾರದರ್ಶಕತೆ ತರಲು ಜಿಲ್ಲಾಧಿಕಾರಿಗಳು ಹೊಸ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹುಂಡಿ ಎಣಿಕೆಗೆ ಫೇಸ್ ರೆಕಗ್ನಿಷನ್, ಸಿಸಿಟಿವಿ ಕಣ್ಗಾವಲು ಹಾಗೂ ಭಕ್ತರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyryh9b2cf7x2vp367jm7hk8,imgname-----------------------2026-07-30t125336.708-1785396241762.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಜು.30):&lt;/strong&gt; ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ &rsquo;ಎ&rsquo; ಮತ್ತು &rsquo;ಬಿ&rsquo; ದರ್ಜೆಯ ಹಾಗೂ ಪ್ರಮುಖ ದೇವಾಲಯಗಳ ಆಡಳಿತ, ಹುಂಡಿ ಎಣಿಕೆ ಕಾರ್ಯವಿಧಾನ, ಆಸ್ತಿ ರಕ್ಷಣೆ ಹಾಗೂ ಭಕ್ತರ ಸೌಲಭ್ಯಗಳಲ್ಲಿ ಪಾರದರ್ಶಕತೆ ಕಾಪಾಡಲು ಹುಂಡಿ ಎಣಿಕೆಗೆ ಫೇಸ್ ರೆಕಗ್ನಿಷನ್, ಸಿಸಿಟಿವಿ, ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.&lt;/p&gt;&lt;p&gt;ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಬುಧವಾರ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.&lt;/p&gt;&lt;h2&gt;ಫೇಸ್ ರೆಕಗ್ನಿಷನ್ ಹಾಜರಾತಿ ಕಡ್ಡಾಯ&lt;/h2&gt;&lt;p&gt;ಹುಂಡಿ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಕಂದಾಯ, ಪೊಲೀಸ್ ಹಾಗೂ ದೇವಾಲಯದ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಫೇಸ್ ರೆಕಗ್ನಿಷನ್ ಯಂತ್ರದ ಮೂಲಕವೇ ಹಾಜರಾತಿ ನಮೂದಿಸಬೇಕು. ಈ ಯಂತ್ರವನ್ನು ದೇವಾಲಯದ ನಿಧಿಯಿಂದಲೇ ಖರೀದಿಸಲು ಸೂಚಿಸಿದರು.ಎಣಿಕೆ ಕೊಠಡಿಗೆ ಪ್ರವೇಶಿಸುವ ಪ್ರತಿ ಸಿಬ್ಬಂದಿ ತಮ್ಮ ಬಳಿ ಇರುವ ನಗದು ವಿವರವನ್ನು ಪ್ರವೇಶ ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.&lt;/p&gt;&lt;p&gt;ಜಿಲ್ಲೆಯ ಎ, ಬಿ ಹಾಗೂ ಅಗತ್ಯವಿರುವ &rsquo;ಸಿ&rsquo; ದರ್ಜೆಯ ದೇವಾಲಯಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ತಪ್ಪದೇ ಹುಂಡಿ ಎಣಿಕೆ ನಡೆಸಬೇಕು. ಈ ಎಣಿಕೆ ಪ್ರಕ್ರಿಯೆಯು ಸಹಾಯಕ ಆಯುಕ್ತರು, ಕಂದಾಯ ಇಲಾಖೆ, ಪೊಲೀಸ್, ತಹಶೀಲ್ದಾರ್, ಪಂಚಾಯತ್, ಬ್ಯಾಂಕ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳ ಜಂಟಿ ಉಸ್ತುವಾರಿಯಲ್ಲಿ ನಡೆಯಬೇಕು. ಎಣಿಕೆ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳ ನಿಯೋಜಿಸುವಂತಿಲ್ಲ. ಎಣಿಕೆ ಕಾರ್ಯದ ಸಂಪೂರ್ಣ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ ಮಾಡಬೇಕು ಎಂದು ತಿಳಿಸಿದರು.&lt;/p&gt;&lt;h3&gt;ಹುಂಡಿ ಎಣಿಕೆ ವೇಳೆ ದೊರೆತ ಚಿನ್ನ ಬೆಳ್ಳಿ &amp;nbsp;ಏನು ಮಾಡಬೇಕು?&lt;/h3&gt;&lt;p&gt;ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆಯುವ ಚಿನ್ನ, ಬೆಳ್ಳಿ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಎಣಿಕೆಯ ದಿನದಂದೇ ಪ್ರಮಾಣೀಕೃತ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಬೇಕು. ಹಣಕಾಸಿನ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ ಪೂರ್ಣಗೊಳಿಸಿ ವರದಿಯೊಂದಿಗೆ ಉಪ ಖಜಾನೆಗೆ ಜಮಾ ಮಾಡಬೇಕು ಎಂದರು.&lt;/p&gt;&lt;h3&gt;ಡಿಜಿಟಲ್ ಪಾವತಿ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ:&lt;/h3&gt;&lt;p&gt;ಜೇಬುಗಳ್ಳತನ ಹಾಗೂ ನಗದು ದುರುಪಯೋಗ ತಡೆಯಲು ಭಕ್ತರಿಗೆ ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ದೇವಾಲಯಗಳಲ್ಲಿ ಅಧಿಕೃತ ಕ್ಯೂಆರ್ ಕೋಡ್ ಅಳವಡಿಸಬೇಕು. ಈ ಕ್ಯೂಆರ್ ಕೋಡ್&zwnj;ಗಳು ಹಾಳಾಗದಂತೆ ಹಾಗೂ ದುರುಪಯೋಗವಾಗದಂತೆ ಕಾಲಕಾಲಕ್ಕೆ ಪರಿಶೀಲಿಸಿ ರಕ್ಷಣೆ ಮಾಡಲು ಸೂಚಿಸಿದರು.&lt;/p&gt;&lt;h3&gt;ಅಗ್ನಿಶಾಮಕ ಉಪಕರಣ ಹಾಗೂ ಸಿಬ್ಬಂದಿಗೆ ತರಬೇತಿ:&lt;/h3&gt;&lt;p&gt;ಎ ಮತ್ತು ಬಿ ದರ್ಜೆಯ ದೇವಾಲಯಗಳ ಹುಂಡಿ ಎಣಿಕೆ ಕೊಠಡಿ ಹಾಗೂ ದೇವಾಲಯದ ಆವರಣದಲ್ಲಿ ಅಗ್ನಿ ಅವಘಡ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಹುಂಡಿ ಎಣಿಕೆ ಸಮಯದಲ್ಲಿ ಅಥವಾ ಸಾಮಾನ್ಯ ದಿನಗಳಲ್ಲಿ ಕಳವು ಪ್ರಕರಣಗಳು ಕಂಡುಬಂದಲ್ಲಿ, ಸಂಬಂಧಪಟ್ಟ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.&lt;/p&gt;&lt;p&gt;ಅಧಿಸೂಚಿತ ದೇವಾಲಯಗಳಿಗೆ ಸೇರಿದ ಜಮೀನು ಹಾಗೂ ಸ್ಥಿರಾಸ್ತಿಗಳ ಸರ್ವೇ ಅಳತೆ ಕಾರ್ಯವನ್ನು ಪೂರ್ಣಗೊಳಿಸಿ, ಎಲ್ಲಾ ಆಸ್ತಿ, ಜಮೀನುಗಳ ಖಾತೆಗಳನ್ನು ಕಡ್ಡಾಯವಾಗಿ ದೇವಸ್ಥಾನದ ಹೆಸರಿಗೆ ಇಂದೀಕರಣ ಮಾಡುವಂತೆ ತಾಕೀತು ಮಾಡಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಷ್ಠಾಧಿಕಾರಿ ಮಂಜುನಾಥ್, ಸಹಾಯಕ ಆಯುಕ್ತ ಪಿ.ವಿವೇಲಕಾನಂದ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಮನೋಹರ್, ಹಿಂದೂ ಧಾರ್ಮಿಕ ಧತ್ತಿ ಇಲಾಖೆ ಸಹಾಯಕ ಆಯುಕ್ತರಾದ ಸವಿತಾ ಸೇರಿದಂತೆ ಮತ್ತಿತರರು ಇದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m"/>
        </item>
        <item>
            <title><![CDATA[ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ ಹಾವಳಿ! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉಪಲೋಕಾಯುಕ್ತ ಗರಂ]]></title>
            <link>https://kannada.asianetnews.com/karnataka-districts/illegal-homestays-in-hampi-vijayanagar-justice-b-veerappa-instruction-to-official-for-action-rav/articleshow-f2o9iox</link>
            <guid isPermaLink="true">https://kannada.asianetnews.com/karnataka-districts/illegal-homestays-in-hampi-vijayanagar-justice-b-veerappa-instruction-to-official-for-action-rav/articleshow-f2o9iox</guid>
            <pubDate>Tue, 28 Jul 2026 12:19:53 +0530</pubDate>
            <description><![CDATA[&lt;p&gt;ವಿಶ್ವ ಪಾರಂಪರಿಕ ತಾಣ ಹಂಪಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಿದರು. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykqnmpq4v3rsftedpkdw2c5,imgname-----------------------2026-07-28t121733.623-1785221272279.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಜು.28): &lt;/strong&gt;ವಿಶ್ವ ಪಾರಂಪರಿಕ ತಾಣ ಹಂಪಿಗೆ ಶನಿವಾರ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ ನೀಡಿ, ಹಂಪಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.&lt;/p&gt;&lt;h2&gt;ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ!&lt;/h2&gt;&lt;p&gt;ಪರಿಶೀಲನೆ ವೇಳೆ ಸ್ಥಳೀಯವಾಗಿ ಸುಮಾರು 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿರುವುದು ಉಪ ಲೋಕಾಯುಕ್ತರ ಗಮನಕ್ಕೆ ಬಂದಿದ್ದು, ಯಾವುದೇ ಸೂಕ್ತ ಅನುಮತಿ, ಪಂಚಾಯತ್ ಪ್ರಾಧಿಕಾರದ ಪರವಾನಗಿ ಇಲ್ಲದೇ ಇಷ್ಟೊಂದು ಸಂಖ್ಯೆಯ ಹೋಂ ಸ್ಟೇಗಳು ಹೇಗೆ ನಡೆಯುತ್ತಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.&lt;/p&gt;&lt;p&gt;ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಅನಧಿಕೃತ ವಹಿವಾಟು ನಡೆಸಲು ಹೇಗೆ ಅವಕಾಶ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಏಕೆ ವಿಫಲರಾಗಿದ್ದಾರೆ ಎಂದು ಕಠಿಣವಾಗಿ ಪ್ರಶ್ನಿಸಿದರು.&lt;/p&gt;&lt;p&gt;ಕೃಷಿ ಅಥವಾ ವಾಸಯೋಗ್ಯ ಭೂಮಿಯಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ ಉದ್ದೇಶದ ಹೋಂ ಸ್ಟೇಗಳನ್ನು ನಡೆಸುತ್ತಿರುವುದಕ್ಕೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಸೂಚಿಸಿದರು. ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆ ತಕ್ಷಣವೇ ಪರಿಶೀಲನೆ ನಡೆಸಿ, ಅನಧಿಕೃತವಾಗಿ ನಡೆಯುತ್ತಿರುವ ಎಲ್ಲಾ ಹೋಂ ಸ್ಟೇಗಳ ಮೇಲೆ ಕಾನೂನುಬದ್ಧ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ತೆರವುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಅನಧಿಕೃತ ಹೋಂ ಸ್ಟೇಗಳನ್ನು ನಡೆಸಲು ಅವಕಾಶ ನೀಡಿದ ಸಂಬಂಧಿಸಿದ ಪ್ರಾಧಿಕಾರಗಳ ಮೇಲೆ ಸುಮೋಟೊ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.&lt;/p&gt;&lt;h3&gt;ಅಧಿಕಾರಿಗಳಿಗೆ ಉಪಲೋಕಾಯುಕ್ತ ತರಾಟೆ&lt;/h3&gt;&lt;p&gt;ಈ ವೇಳೆ ಹಂಪಿ ಜನತಾ ಸ್ಟ್ರೀಟ್ ಸ್ಥಳಕ್ಕೆ ಭೇಟಿ ನೀಡಿದ ಅವರು, ವಿಶ್ವ ಪಾರಂಪರಿಕ ಸ್ಥಳದ ಸುತ್ತಮುತ್ತ ಕಾನೂನು ಬಾಹಿರವಾಗಿ 100ಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುವ ಬಗ್ಗೆ ಕಂಡುಬಂದಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಲ್ಲಿನ ಜನರಿಗೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲು ಸೂಕ್ತ ಸ್ಥಳ ಗುರುತಿಸಿ ಇಲ್ಲಿನ ವ್ಯಾಪಾರಿಗಳಿಗೆ ಅವಕಾಶ ಕೊಟ್ಟು ಜನತಾ ಸ್ಟ್ರೀಟ್&zwnj;ನಲ್ಲಿ ಯಾವುದೇ ಕಾರಣಕ್ಕೂ ವ್ಯವಹಾರಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.&lt;/p&gt;&lt;p&gt;&lt;strong&gt;ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ&lt;/strong&gt;&lt;/p&gt;&lt;p&gt;ಹಂಪಿ ಶ್ರೀ ವಿರೂಪಾಕ್ಷೇಶ್ವರ ಗರ್ಭಗುಡಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಭಕ್ತರಿಗೆ ಅಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ವೀಕ್ಷಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ವಿರೂಪಾಕ್ಷೇಶ್ವರ ಗರ್ಭಗುಡಿಯಲ್ಲಿ ಗಾಳಿಯ ಚಲನೆ ಇಲ್ಲದ ಕಾರಣ ಎಸಿ ಅಳವಡಿಕೆಗೆ ಎಎಸ್&zwnj;ಐಯಿಂದ ಅನುಮತಿ ಪಡೆಯಲಾಗಿದ್ದು, ಕೆಲವೇ ದಿನಗಳಲ್ಲಿ ಎಸಿ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಲೋಕಾಯುಕ್ತ ಉಪನಿಬಂಧಕ ಅರವಿಂದ್, ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಎಸ್ಪಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ವಿವೇಕಾನಂದ ಇದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/illegal-homestays-in-hampi-vijayanagar-justice-b-veerappa-instruction-to-official-for-action-rav/articleshow-f2o9iox"/>
        </item>
        <item>
            <title><![CDATA[ರೈತರೇ ಹೊಡೀರಿ ಹಲಗಿ: ತುಂಗಭದ್ರಾ ಜಲಾಶಯಕ್ಕೆ ಪ್ರಥಮ ಬಾರಿ ಒಂದು ಲಕ್ಷ ಕ್ಯೂಸೆಕ್‌ ನೀರು!]]></title>
            <link>https://kannada.asianetnews.com/karnataka-districts/tungabhadra-dam-inflow-crosses-1-lakh-cusecs-today-karnataka-reservoir-water-levels-rav/articleshow-gbxg9h1</link>
            <guid isPermaLink="true">https://kannada.asianetnews.com/karnataka-districts/tungabhadra-dam-inflow-crosses-1-lakh-cusecs-today-karnataka-reservoir-water-levels-rav/articleshow-gbxg9h1</guid>
            <pubDate>Wed, 05 Aug 2026 08:52:40 +0530</pubDate>
            <description><![CDATA[ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಅಧಿಕ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಈ ವರ್ಷ ಮೊದಲ ಬಾರಿಗೆ 1,08,531 ಕ್ಯೂಸೆಕ್&zwnj; ನೀರು ಹರಿದುಬಂದಿದೆ. ಇದರಿಂದ ಜಲಾಶಯದಲ್ಲಿ 53.648 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದು ಹಲವು ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೆ ಆಶಾದಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz7y57kxy19jn1djgkbnrk4y,imgname-----------------------2026-08-05t082915.690-1785899163261.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಆ.5):&lt;/strong&gt; ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಸೇರಿದಂತೆ ಮೂರು ರಾಜ್ಯಗಳ 8 ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ 1,08531 ಕ್ಯೂಸೆಕ್&zwnj; ನೀರು ಹರಿದು ಬರುತ್ತಿದ್ದು, ಈ ವರ್ಷ ಇದೇ ಮೊದಲ ಬಾರಿ ಒಳಹರಿವಿನ ಪ್ರಮಾಣ ಲಕ್ಷ ಕ್ಯೂಸೆಕ್&zwnj; ದಾಟಿದೆ. ಜಲಾಶಯದಲ್ಲಿ 53.648 ಟಿಎಂಸಿ ನೀರು ಸಂಗ್ರವಾಗಿದೆ.&lt;/p&gt;&lt;h2&gt;ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಳ&lt;/h2&gt;&lt;p&gt;ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡು ಪ್ರದೇಶದಲ್ಲಿ ಅಧಿಕ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಲಕ್ಷ ಕ್ಯೂಸೆಕ್&zwnj;ಗೂ ಅಧಿಕ ನೀರು ಬರುತ್ತಿರುವುದರಿಂದ ಜಲಾಶಯದ ಒಳ ಹರಿವು ಗಣನೀಯವಾಗಿ ಏರಿಕೆ ಕಂಡು ಬರುತ್ತಿದೆ. ಜಲಾಶಯದಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾದಂತಾಗಿದೆ.&lt;/p&gt;&lt;p&gt;ಕಳೆದ 4-5 ದಿನಗಳಿಂದ ನಿತ್ಯವೂ ಜಲಾಶಯಕ್ಕೆ 1-2 ಟಿಎಂಸಿ ನೀರು ಹೆಚ್ಚಳವಾಗುತ್ತಾ ಬರುತ್ತಿರುದೆ. ಮಂಗಳವಾರ ಬೆಳಗ್ಗೆ 51 ಟಿಎಂಸಿ ಇದ್ದ ನೀರು, ಮಧ್ಯಾಹ್ನ 3ರ ವೇಳೆಗೆ ಸುಮಾರು 3 ಟಿಎಂಸಿ ನೀರು ಹೆಚ್ಚಳವಾಗಿರುವುದರಿಂದ ಈಗ ಜಲಾಶಯದಲ್ಲಿ 54 ಟಿಎಂಸಿ ನೀರು ಸಂಗ್ರಹವಾಗಿದೆ. 1556 ಕ್ಯೂಸೆಕ್&zwnj; ನೀರು ಜಲಾಶಯದಿಂದ ಕಾಲುವೆಗಳ ಮೂಲಕ ಹೊರ ಬಿಡಲಾಗುತ್ತಿದೆ.&lt;/p&gt;&lt;p&gt;ಈ ಅವಧಿಯಲ್ಲಿ ಜಲಾಶಯಕ್ಕೆ ಇಷ್ಟು ದೊಡ್ಡ ಮಟ್ಟದ ಒಳಹರಿವು ದಾಖಲಾಗಿದ್ದು ಅಪರೂಪವಾಗಿದೆ. ಇದೇ ರೀತಿಯಲ್ಲಿ ಒಂದು ವಾರ ನೀರು ಹರಿದು ಬಂದರೆ ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಆಂಧ್ರ ಪ್ರದೇಶದ ಅಚ್ಚುಕಟ್ಟು ಪ್ರದೇಶದ ಕೃಷಿ ಚಟುವಟಿಕೆಗೆ ಹೊಸ ಹುರುಪು ತರಲಿದೆ.&lt;/p&gt;&lt;h3&gt;ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/h3&gt;&lt;p&gt;ಕಬಿನಿ 96% 2284 2282.71&lt;/p&gt;&lt;p&gt;ಹೇಮಾವತಿ 77% 2922 2912.74&lt;/p&gt;&lt;p&gt;ತುಂಗಭದ್ರಾ 48% 1633 1613.13&lt;/p&gt;&lt;p&gt;ಸೂಪಾ(ಮೀ.) 46% 564 541.66&lt;/p&gt;&lt;p&gt;ಕೆಆರ್&zwnj;ಎಸ್ 52% 124.80 103.40&lt;/p&gt;&lt;p&gt;ಘಟಪ್ರಭಾ 79% 2175 2160.80&lt;/p&gt;&lt;p&gt;ಲಿಂಗನಮಕ್ಕಿ 43% 1819.12 1785.90&lt;/p&gt;&lt;p&gt;ಭದ್ರಾ 66% 2158 2136.75&lt;/p&gt;&lt;p&gt;ಹಾರಂಗಿ 93% 2859 2857.22&lt;/p&gt;&lt;p&gt;ಆಲಮಟ್ಟಿ(ಮೀ.) 90% 519.60 518.86&lt;/p&gt;&lt;p&gt;ನಾರಾಯಣಪುರ(ಮೀ.) 88% 492.25 491.35&lt;/p&gt;&lt;p&gt;ಮಲಪ್ರಭಾ 47% 2079.50 2061.20&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tungabhadra-dam-inflow-crosses-1-lakh-cusecs-today-karnataka-reservoir-water-levels-rav/articleshow-gbxg9h1"/>
        </item>
        <item>
            <title><![CDATA[ಬರಗಾಲದ ನಡುವೆಯೂ ಕೂಡ್ಲಿಗಿ ತಾಲೂಕಿನ 80 ಕೆರೆಗಳಿಗೆ ಹರಿದು ಬಂದಳು ಗಂಗೆ; ಶಾಸಕರ ಪ್ರಯತ್ನ]]></title>
            <link>https://kannada.asianetnews.com/karnataka-districts/despite-drought-the-project-to-fill-80-lakes-in-kudligi-taluk-with-water-is-a-success-efforts-of-mla-dr-nt-srinivas-mrq/articleshow-gzt8by2</link>
            <guid isPermaLink="true">https://kannada.asianetnews.com/karnataka-districts/despite-drought-the-project-to-fill-80-lakes-in-kudligi-taluk-with-water-is-a-success-efforts-of-mla-dr-nt-srinivas-mrq/articleshow-gzt8by2</guid>
            <pubDate>Sat, 08 Aug 2026 08:08:41 +0530</pubDate>
            <description><![CDATA[ಬರಗಾಲದ ನಡುವೆಯೂ, ಕೂಡ್ಲಿಗಿ ತಾಲೂಕಿನ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದೆ. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಪ್ರಯತ್ನದಿಂದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfkcmz30r62jrn0qtzrs6d0,imgname-kudlagi-1786156307427.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೀಮಣ್ಣ ಗಜಾಪುರ&lt;/strong&gt;&lt;/p&gt;&lt;p&gt;&lt;strong&gt;ವಿಜಯನಗರ: &lt;/strong&gt;ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಿನಲ್ಲೊಂದಾದ ಕೂಡ್ಲಿಗಿಗೆ ಇಲ್ಲಿ ವರೆಗೂ ಗಂಗೆಯ ಶಾಪವಿತ್ತು. ಆದರೆ, ಈ ಬಾರಿಯ ಭೀಕರ ಬರದ ಮಧ್ಯೆಯೂ ಗಂಗೆ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ಹರಿದು ಬರುತ್ತಿದ್ದಾಳೆ. ನೂರಾರು ವರ್ಷಗಳ ಗಂಗೆಯ ಶಾಪದಿಂದ ಕೂಡ್ಲಿಗಿ ತಾಲೂಕು ಮುಕ್ತವಾಗುತ್ತಿದೆ ಎಂಬ ಆಶಾಭಾವ ಇಲ್ಲಿಯ ಜನತೆಗೆ ಭಾಸವಾಗುತ್ತಿದೆ. ಕೆರೆಗಳಿಗೆ ನೀರು ಬರುವುದನ್ನು ನೋಡುತ್ತಿರುವ ರೈತರು ಸಂತಸದ ನಗೆ ಬೀರುತ್ತಿದ್ದಾರೆ.&lt;/p&gt;&lt;h2&gt;&lt;strong&gt;₹640 ಕೋಟಿ ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ&lt;/strong&gt;&lt;/h2&gt;&lt;p&gt;ಕೂಡ್ಲಿಗಿಯ ಹಿಂದಿನ ಶಾಸಕರಾದ ಎನ್.ವೈ. ಗೋಪಾಲಕೖಷ್ಣ ಅವರು ₹640 ಕೋಟಿ ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದು ಕಾಮಗಾರಿ ಮಾಡಿಸಿದ್ದರು. ಉಳಿದ ಕಾಮಗಾರಿಯನ್ನು ಈಗಿನ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರು ಪೂರ್ಣಗೊಳಿಸಿ ತಮ್ಮ ಅವಧಿಯಲ್ಲಿಯೇ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೂಡ್ಲಿಗಿ ತಾಲೂಕಿನಲ್ಲಿ ಇತಿಹಾಸ ಬರೆದಿದ್ದಾರೆ. ಕೂಡ್ಲಿಗಿ ತಾಲೂಕಿನಲ್ಲಿ ಮಳೆಗಾಲದಲ್ಲಿಯೇ ಬಣಗುಡುತ್ತಿರುವ ಕೆರೆಗಳನ್ನು ನೋಡಿ ಪ್ರತಿವರ್ಷ ಹತಾಶರಾಗುತ್ತಿದ್ದ ಇಲ್ಲಿಯ ರೈತರು ಇದೀಗ ಕೆರೆಯಲ್ಲಿ ಗಂಗೆಯನ್ನು ನೋಡಿ ಸಂತಸದ ನಗೆ ಬೀರುತ್ತಿದ್ದಾರೆ.&lt;/p&gt;&lt;p&gt;ಕೆರೆಗೆ ನೀರು ತುಂಬಿಸುವ ಯೋಜನೆಗೆ ಕೊನೆಯ ಕ್ಷಣದಲ್ಲಿ ಬಹಳ ಎಡರು ತೊಡರುಗಳು ಎದುರಾಗಿದ್ದವು. ಅವುಗಳನ್ನು ಈಗಿನ ಕೂಡ್ಲಿಗಿ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರು ನಿರಂತರ ಶ್ರಮ, ಕಾಳಜಿಯಿಂದ ಬಗೆಹರಿಸಿದ್ದಾರೆ. ಎಲ್ಲ ತೊಂದರೆಗಳು ಮುಗಿಯಿತು ಎಂದು ನೀರು ಸರಬರಾಜು ಮಾಡಲು ಮುಂದಾದಾಗ ಹರಪನಹಳ್ಳಿ ಸಮೀಪದ ಹಾಳು ತಿಮ್ಮಲಾಪುರದ ಹತ್ತಿರ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿತ್ತು. ಯುದ್ಧೋಪಾದಿಯಲ್ಲಿ ತಂತ್ರಜ್ಞರು ಪೈಪ್ ಲೀಕೇಜ್ ಮುಚ್ಚಲು ಹರಸಾಹಸಪಟ್ಟು ಸರಿಪಡಿಸಿದ್ದಾರೆ. ಹೀಗಾಗಿ, ಗುರುವಾರ ತಾಲೂಕಿನ ಕೆಲವು ಕೆರೆಗಳಿಗೆ ನೀರು ಹರಿದು ಬರಲು ಶುರುವಾಗಿದೆ. ಬರದಲ್ಲಿ ಬೆಂದ ರೈತರು ಕೆರೆಗಳಿಗೆ ನೀರು ಬರುತ್ತಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ನಿರಂತರ ತುಂಬಿಸಲು ಸಾಧ್ಯವೇ?&lt;/strong&gt;&lt;/h3&gt;&lt;p&gt;ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ಈ ಬಾರಿ ಹೊಸದಾಗಿ ನೀರು ತುಂಬಿಸಿದರಷ್ಟೇ ಸಾಲದು ಪ್ರತಿವರ್ಷ ನಿರಂತರವಾಗಿ ತುಂಗಾಭದ್ರಾ ನದಿಯಿಂದ ನೀರು ತುಂಬಿಸಿದರೆ ಮಾತ್ರ ಇಲ್ಲಿಯ ರೈತರ ಬದುಕು ಹಸನಾಗುತ್ತದೆ. ನೀರೆತ್ತುವ ದೈತ್ಯ ಗಾತ್ರದ ಮೋಟರ್&zwnj;ಗಳು, ಪೈಪ್ ಲೈನ್ ಹಾಳಾಗದಂತೆ ನಿರಂತರ ನಿರ್ವಹಣೆ ಮಾಡಬೇಕಾಗುತ್ತದೆ. ಈ ಕುರಿತು ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ನಿಗಾವಹಿದರೆ ಮಾತ್ರ ಕೂಡ್ಲಿಗಿ ತಾಲೂಕಿನ ರೈತರ ನಗೆ ಕೊನೆ ವರೆಗೂ ಇರಲು ಸಾಧ್ಯ.&lt;/p&gt;&lt;p&gt;ತಾಲೂಕಿನ ನೂರಾರು ವರ್ಷಗಳ ಕನಸು ನನಸಾಗಿದೆ. ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆಲ ತಾಂತ್ರಿಕ ದೋಷಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ನಿರಂತರ ಕೆರೆ ನೀರು ತುಂಬಿಸುವ ಯೋಜನೆಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ತುಂಗಾಭದ್ರಾ ನದಿಯಲ್ಲಿ ನೀರು ಹರಿಯುತ್ತಿದೆ. ಹೀಗಾಗಿ, ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಕಾರ್ಯಪ್ರವೖತ್ತರಾಗಿದ್ದಾರೆ. ಬರದಲ್ಲಿ ಕೆರೆಗಳಿಗೆ ನೀರು ಬರುತ್ತಿರುವುದರಿಂದ ಅಂತರ್ಜಲ ವೖದ್ಧಿಯಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್.&lt;/p&gt;&lt;p&gt;ಬಡೇಲಡಕು ಸಮೀಪದ ದೇವಲಾಪುರ ಕೆರೆಗೆ ನೀರು ಬರುತ್ತಿರುವುದನ್ನು ನೋಡಿ ನಮಗೆಲ್ಲಾ ಸಂತೋಷವಾಗುತ್ತಿದೆ, ಕೂಡ್ಲಿಗಿ ಶಾಸಕರ ಶ್ರಮ ಸಾರ್ಥಕವೆನಿಸಿದೆ. ರೈತರ, ಜನ ಜಾನುವಾರಿಗೆ ಕುಡಿಯುವ ನೀರಿನ ಮೂಲ ಹಾಗೂ ರೈತರ ಪಂಪ್ ಸೆಟ್ ಗಳಿಗೆ ನೀರು ಹೆಚ್ಚಾಗಿ ರೈತರ ಬದುಕು ಹಸನಾಗುತ್ತದೆ ಎಂದು ಕೂಡ್ಲಿಗಿ ತಾಲೂಕಿನ ಬಡೇಲಡಕು ರೈತ ಕೊಟ್ರೇಶ್.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/despite-drought-the-project-to-fill-80-lakes-in-kudligi-taluk-with-water-is-a-success-efforts-of-mla-dr-nt-srinivas-mrq/articleshow-gzt8by2"/>
        </item>
        <item>
            <title><![CDATA[ಮೊರಾರ್ಜಿ ಶಾಲೆಯಲ್ಲಿ ನಾನ್‌ವೆಜ್‌ ಊಟಕ್ಕೆ ತಾರತಮ್ಯ: ಮಕ್ಕಳ ಕಾದಾಟ, ಕಿರಿಯರ ಮೇಲೆ ದೌರ್ಜನ್ಯ]]></title>
            <link>https://kannada.asianetnews.com/karnataka-districts/vijayanagara-fight-between-students-for-non-veg-at-morarji-desai-residential-school-in-huvanahadagali-mrq/articleshow-haieu67</link>
            <guid isPermaLink="true">https://kannada.asianetnews.com/karnataka-districts/vijayanagara-fight-between-students-for-non-veg-at-morarji-desai-residential-school-in-huvanahadagali-mrq/articleshow-haieu67</guid>
            <pubDate>Thu, 23 Jul 2026 06:30:40 +0530</pubDate>
            <description><![CDATA[&lt;p&gt;ಹೂವಿನಹಡಗಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಾನ್&zwnj;ವೆಜ್ ಊಟ ಬಡಿಸುವಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಡಿದಾಡಿಕೊಂಡಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಕಿರಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಈ ಘರ್ಷಣೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky67h5141b8h4q9m0kk8saw0,imgname-morarji-school-1784768140324.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ: &lt;/strong&gt;ನಾನ್&zwnj;ವೆಜ್&zwnj; (ಚಿಕನ್&zwnj;)ಗಾಗಿ ವಿದ್ಯಾರ್ಥಿಗಳು ಬಡಿದಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಗಿರಿಯಾಪುರ ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ನಡೆದಿದೆ. ವಸತಿ ಶಾಲೆ ನಿಯಮದ ಪ್ರಕಾರ ಪ್ರತಿವಾರ ಚಿಕನ್ ಬಡಿಸುವಲ್ಲಿ ತರಗತಿವಾರು ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ, ವಿದ್ಯಾರ್ಥಿಗಳು ಗಲಾಟೆ ಆರಂಭಿಸಿದ್ದಾರೆ. ಈ ವಿಚಾರವಾಗಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಶುರುವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದು ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.&amp;nbsp;&lt;/p&gt;&lt;h2&gt;&lt;strong&gt;ವಸತಿ ಶಾಲೆಗೆ ಪೊಲೀಸರ ಭೇಟಿ&lt;/strong&gt;&lt;/h2&gt;&lt;p&gt;ವಿದ್ಯಾರ್ಥಿಗಳಲ್ಲಿ ಘರ್ಷಣೆ ಹೆಚ್ಚಾಗುತ್ತಿದಂತೆಯೇ ಗ್ರಾಮಸ್ಥರು ಹೋಗಿ, ಮಕ್ಕಳಿಗೆ ಮತ್ತು ವಸತಿ ಶಾಲೆ ಪ್ರಾಚಾರ್ಯರು, ಸಿಬ್ಬಂದಿಗೆ ತಿಳಿವಳಿಕೆ ನೀಡಿದ್ದರೂ ಗಲಾಟೆ ನಿಯಂತ್ರಣವಾಗಿಲ್ಲ. ಕೆಲ ವಿದ್ಯಾರ್ಥಿಗಳು ಹಿರೇಹಡಗಲಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ವಸತಿ ಶಾಲೆಗೆ ಭೇಟಿ ನೀಡಿದ ಪೊಲೀಸರು ಗಲಾಟೆ ಮಾಡದಂತೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೂವಿನಹಡಗಲಿ: 632 ಸರ್ಕಾರಿ ಶಾಲೆಗಳ ದುಸ್ಥಿತಿ, ಅಪಾಯದಲ್ಲಿ ಮಕ್ಕಳ ಅಕ್ಷರಾಭ್ಯಾಸ! 166 ಶಾಲೆಗಳ ಪೈಕಿ 183 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ&lt;/strong&gt;&lt;/p&gt;&lt;h3&gt;&lt;strong&gt;ಊಟ, ಉಪಾಹಾರ ಹಂಚಿಕೆಯಲ್ಲಿ ತಾರತಮ್ಯದ ಆರೋಪ&lt;/strong&gt;&lt;/h3&gt;&lt;p&gt;ಎಸ್&zwnj;ಎಸ್&zwnj;ಎಲ್&zwnj;ಸಿ ವಿದ್ಯಾರ್ಥಿಗಳು ಕೆಳ ತರಗತಿ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ಬಹು ದಿನಗಳಿಂದಲೂ ಊಟ, ಉಪಾಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೋಗಿದ್ದಾರೆ. ವಸತಿ ಶಾಲೆ ಸಿಬ್ಬಂದಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯೇ ಇಷ್ಟಕ್ಕೆಲ್ಲ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಂಪಿಯಲ್ಲಿ ಬಿದ್ದಿರೋ ಖಾಲಿ ಪ್ಲಾಸ್ಟಿಕ್ ಬಾಟಲ್&zwnj;ಗೆ ದರ ನಿಗಿದಿ; ಪುರಾತತ್ವ ಇಲಾಖೆಯ ಯೋಜನೆ&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagara-fight-between-students-for-non-veg-at-morarji-desai-residential-school-in-huvanahadagali-mrq/articleshow-haieu67"/>
        </item>
        <item>
            <title><![CDATA[ಹೂವಿನಹಡಗಲಿ: 632 ಸರ್ಕಾರಿ ಶಾಲೆಗಳ ದುಸ್ಥಿತಿ, ಅಪಾಯದಲ್ಲಿ ಮಕ್ಕಳ ಅಕ್ಷರಾಭ್ಯಾಸ!]]></title>
            <link>https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9</link>
            <guid isPermaLink="true">https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9</guid>
            <pubDate>Sat, 18 Jul 2026 08:07:18 +0530</pubDate>
            <description><![CDATA[&lt;p&gt;ಹೂವಿನಹಡಗಲಿ ತಾಲೂಕಿನ ಸರ್ಕಾರಿ ಶಾಲೆಗಳ ಸುರಕ್ಷತೆಯ ಕುರಿತು ನಡೆಸಿದ ಪರಿಶೀಲನೆಯಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ತಾಲೂಕಿನ 166 ಶಾಲೆಗಳ ಪೈಕಿ 183 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಥಿತಿಯಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxsh4yx5w29zfc92caf9yekq,imgname-----------------------2026-07-18t080147.557-1784342018981.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ (ಜು.18):&lt;/strong&gt; ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಪ್ರತಿ ಸರ್ಕಾರಿ ಶಾಲೆ ಸುರಕ್ಷಿತ ಎಂಬ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದು ಸರ್ಕಾರಕ್ಕೆ ವರದಿ ನೀಡಬೇಕೆಂಬ ಸೂಚನೆ ನೀಡಿತ್ತು. ತಾಲೂಕಿನಲ್ಲಿ 166 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು, 1466 ಕೊಠಡಿಗಳಿವೆ. ಇದರಲ್ಲಿ 811 ಗುಣಮಟ್ಟದ ಕೊಠಡಿಗಳಿವೆ. ಉಳಿದಂತೆ 65 ಕೊಠಡಿಗಳು ದೊಡ್ಡ ಪ್ರಮಾಣದಲ್ಲಿ ದುರಸ್ತಿಯಾಗಬೇಕಿದೆ. 384 ಸಣ್ಣ ಪುಟ್ಟ ದುರಸ್ತಿ ಆಗಬೇಕಿದೆ. 183 ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಇಂತಹ ಅಪಾಯದಡಿ ಮಕ್ಕಳು ಅಕ್ಷರಾಭ್ಯಾಸ ಮಾಡುವ ಪರಿಸ್ಥಿತಿ ತಲೆದೋರಿದೆ.&lt;/p&gt;&lt;p&gt;ತಾಲೂಕಿನ 1466 ಶಾಲಾ ಕೊಠಡಿಗಳಲ್ಲಿ 1443 ಕೋಣೆಗಳಿಗೆ ಸುರಕ್ಷಿತ ಎಂಬ ಪ್ರಮಾಣಪತ್ರ ಸಿಕ್ಕಿದೆ. ಇನ್ನು ಹಿರೇಮಲ್ಲನಕೆರೆ ಕ್ಲಸ್ಟರ್&zwnj;ನ 23 ಕೋಣೆಗಳ ಸುರಕ್ಷಿತ ಪ್ರಮಾಣಪತ್ರ ಬರಬೇಕಿದೆ. ಈ ಸುರಕ್ಷಿತ ಪ್ರಮಾಣಪತ್ರಗಳನ್ನು ನೀಡಲು ಜಿಪಂ ಎಂಜಿನಿಯರಿಂಗ್&zwnj; ಇಲಾಖೆ, ಲೋಕೋಪಯೋಗಿ ಮತ್ತು ಕೆಆರ್&zwnj;ಐಡಿಎಲ್&zwnj;ಗೆ ನೀಡಲಾಗಿತ್ತು.&lt;/p&gt;&lt;p&gt;ಪಟ್ಟಣದ ಷಾ ಪೂಜಾಜಿ ವನೇಚಂದ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 1ರಿಂದ 7ನೇ ತರಗತಿ ವರೆಗಿನ ಮೊದಲ ಸರ್ಕಾರಿ ಶಾಲೆಯಾಗಿತ್ತು. ಆರಂಭದಲ್ಲೇ ನೂರಾರು ವಿದ್ಯಾರ್ಥಿಗಳ ದಾಖಲಾತಿ ಹೊಂದಿತ್ತು. ಈಗ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮಕ್ಕಳಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಶಾಲೆಯಲ್ಲಿ ಕೇವಲ 19 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಜತೆಗೆ ಈ ಶಾಲೆಯಲ್ಲಿ 20ಕ್ಕೂ ಹೆಚ್ಚು ಕೋಣೆಗಳಿದ್ದರೂ ಯಾವ ಕೋಣೆಯೂ ಸುರಕ್ಷಿತವಾಗಿಲ್ಲ.&lt;/p&gt;&lt;p&gt;ಆರ್&zwnj;ಸಿಸಿಯ ಸಿಮೆಂಟ್&zwnj; ಚಕ್ಕೆಗಳು ಮಕ್ಕಳ ಮೇಲೆ ಕಳಚಿ ಬೀಳುತ್ತಿವೆ. ಸುರಕ್ಷಿತ ಪ್ರಮಾಣಪತ್ರದಲ್ಲಿ ಯಾವ ಕೋಣೆಯೂ ಸುರಕ್ಷಿತವಾಗಿಲ್ಲ ಎಂಬ ವರದಿ ಬಂದಿದೆ. ಈ ಶಾಲೆಯ ಮಕ್ಕಳನ್ನು ಪಟ್ಟಣದಲ್ಲಿರುವ ಸೊಪ್ಪಿನ ವೀರಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಸುವ ಚಿಂತನೆ ನಡೆದಿದೆ.&lt;/p&gt;&lt;p&gt;ತಾಲೂಕಿನ ಬೂದನೂರು, ಉತ್ತಂಗಿ ಸೇರಿದಂತೆ ಇತರೆ ಸರ್ಕಾರಿ ಪ್ರೌಢ ಶಾಲೆಗಳ ಕೋಣೆಗಳು ಸುರಕ್ಷಿತವಾಗಿಲ್ಲ. ಮಳೆ ಬಂದಾಗ ಸೋರುತ್ತಿವೆ. ಇದಕ್ಕೆ ಅಕ್ಷರ ಆವಿಷ್ಕಾರ ಯೋಜನೆಯಲ್ಲಿ ಚಾವಣಿಗೆ ತಗಡು ಹಾಕಿದ್ದಾರೆ. ಆದರೆ ಕೆಳಗಿನ ಸಿಮೆಂಟ್&zwnj; ತುಂಡುಗಳು ಮಕ್ಕಳ ಮೈ ಮೇಲೆ ಬೀಳುವ ಅಪಾಯ ಎದುರಾಗಿದೆ.&lt;/p&gt;&lt;p&gt;ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಗಣಿ ಬಾಧಿತ ಪ್ರದೇಶಕ್ಕೆ ಒಳ ಪಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ದುರಸ್ತಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಗ್ರಾಮೀಣ ಭಾಗದ ಬಡ ಮಕ್ಕಳ ಅಕ್ಷರ ಕಲಿಕೆಗೆ ಆಸರೆಯಾಗಬೇಕೆಂಬ ಆಶಯವನ್ನು ಶಿಕ್ಷಣ ಪ್ರೇಮಿಗಳ ಹೊಂದಿದ್ದಾರೆ.&lt;/p&gt;&lt;p&gt;ಸರ್ಕಾರದ ನಿರ್ದೇಶನದಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕೊಠಡಿಗಳು ಸುರಕ್ಷಿತ ಪ್ರಮಾಣಪತ್ರ ಪಡೆಯಬೇಕೆಂಬ ಸೂಚನೆ ಮೇರೆಗೆ ಕೋಣೆಗಳ ಸುಸ್ಥಿತಿ ಕುರಿತು ವರದಿ ಕೇಳಿದಾಗ ಜಿಪಂ ಎಂಜಿನಿಯರಿಂಗ್&zwnj;, ಕೆಆರ್&zwnj;ಐಡಿಎಲ್&zwnj; ಹಾಗೂ ಲೋಕೋಪಯೋಗಿ ಇಲಾಖೆಗಳ ಎಂಜಿನಿಯರ್&zwnj;ಗಳ ವರದಿ ಪ್ರಕಾರ 183 ಶಾಲೆ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಗಳಾ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/huvinahadagali-classrooms-in-632-government-schools-dilapidated-students-education-at-risk/articleshow-kz77kz9"/>
        </item>
        <item>
            <title><![CDATA[ಹಂಪಿಯಲ್ಲಿ ಬಿದ್ದಿರೋ ಖಾಲಿ ಪ್ಲಾಸ್ಟಿಕ್ ಬಾಟಲ್‌ಗೆ ದರ ನಿಗಿದಿ; ಪುರಾತತ್ವ ಇಲಾಖೆಯ ಯೋಜನೆ]]></title>
            <link>https://kannada.asianetnews.com/karnataka-districts/in-hamp-you-will-get-1-rupee-for-an-empty-plastic-bottle-archaeological-department-project-mrq/articleshow-ndpb2a2</link>
            <guid isPermaLink="true">https://kannada.asianetnews.com/karnataka-districts/in-hamp-you-will-get-1-rupee-for-an-empty-plastic-bottle-archaeological-department-project-mrq/articleshow-ndpb2a2</guid>
            <pubDate>Mon, 20 Jul 2026 12:02:07 +0530</pubDate>
            <description><![CDATA[&lt;p&gt;ವಿಶ್ವವಿಖ್ಯಾತ ಹಂಪಿಯನ್ನು ಪ್ಲಾಸ್ಟಿಕ್&zwnj; ಮುಕ್ತಗೊಳಿಸಲು, ಹಂಪಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ಹೊಸ ಯೋಜನೆ ಜಾರಿಗೆ ತಂದಿದೆ. ಪ್ರವಾಸಿಗರು ಬಳಸಿದ ಖಾಲಿ ಪ್ಲಾಸ್ಟಿಕ್&zwnj; ಬಾಟಲಿಗಳನ್ನು ನಿಗದಿತ ಯಂತ್ರದಲ್ಲಿ ಹಾಕಿದರೆ, ಪ್ರತಿ ಬಾಟಲಿಗೆ ಹಣ ಪಡೆಯಬಹುದು. ಈ ಕ್ರಮವು ಹಂಪಿಯಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz36fe55gbv52rjgkf7g5fc,imgname-hampi-1784528715204.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿ.ಕೆ. ನಾಗರಾಜ&lt;/strong&gt;&lt;/p&gt;&lt;p&gt;&lt;strong&gt;ಹೊಸಪೇಟೆ: &lt;/strong&gt;ವಿಶ್ವವಿಖ್ಯಾತ ಹಂಪಿಯಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್&zwnj; ನೀರಿನ ಬಾಟಲಿಗಳು ಎಸೆಯುವಂತಿಲ್ಲ. ಹಂಪಿಯ ಪ್ರಮುಖ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್ (ಪುಡಿಗಟ್ಟುವ) ಯಂತ್ರಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್&zwnj;ಗಳನ್ನು ಈ ಯಂತ್ರದಲ್ಲಿ ಹಾಕಿದರೆ ಸಾಕು ತಕ್ಷಣವೇ ನೀವು ₹1 ಪಡೆಯಬಹುದು.&lt;/p&gt;&lt;p&gt;ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರದೊಳಗೆ ಒಂದು ಪ್ಲಾಸ್ಟಿಕ್&zwnj; ಬಾಟಲಿ ಹಾಕಿದರೆ ಸಾಕು, ನಿಮಗೆ ಒಂದು ರುಪಾಯಿ ನಾಣ್ಯ ನೀಡುತ್ತದೆ. ಇದು ಪ್ರವಾಸಿಗರಲ್ಲಿ ಪರಿಸರ ಕಾಳಜಿ ಉತ್ತೇಜಿಸುವ ಕ್ರಮವಾಗಿದೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಂತಹದೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.&lt;/p&gt;&lt;h2&gt;&lt;strong&gt;ಪ್ಲಾಸ್ಟಿಕ್&zwnj; ಮುಕ್ತ ಹಂಪಿ&lt;/strong&gt;&lt;/h2&gt;&lt;p&gt;ಹಂಪಿಗೆ ದೇಶ-ವಿದೇಶ ಪ್ರವಾಸಿಗರು, ಸಾವಿರಾರು ಭಕ್ತರು ನಿತ್ಯವೂ ಭೇಟಿ ನೀಡುತ್ತಾರೆ. ಬಹುತೇಕ ಪ್ರವಾಸಿಗರು ತಾವು ತಂದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡುತ್ತಾರೆ. ಇದರಿಂದ ಹಂಪಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬೀಳುತ್ತಿದೆ. ಸ್ವಚ್ಛತೆ ಕಾರ್ಯ ಕಾರ್ಮಿಕರಿಗೆ ಸವಾಲಿನ ಕೆಲಸವಾಗಿತ್ತು. ಅದರಿಂದ ಸ್ವಚ್ಛ ಹಂಪಿ-ಸುಂದರ ಹಂಪಿ ಎನ್ನುವ ಈ ಅಭಿಯಾನವನ್ನು ಎಎಸ್&zwnj;ಐ, ಹಂಪಿ ಪ್ರಾಧಿಕಾರ ಆರಂಭಿಸಿತು. ಪ್ಲಾಸ್ಟಿಕ್&zwnj; ಮುಕ್ತ ಹಂಪಿಯನ್ನಾಗಿ ರೂಪಿಸುವ ಕಾರ್ಯಕ್ಕೆ ಹೈಟೆಕ್&zwnj; ಸ್ಪರ್ಶ ನೀಡಲು ಮುಂದಾಗಿದೆ.&lt;/p&gt;&lt;h3&gt;&lt;strong&gt;ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರಗಳ ಅಳವಡಿಕೆ&lt;/strong&gt;&lt;/h3&gt;&lt;p&gt;ಪ್ರವಾಸಿಗರು ಹೆಚ್ಚು ಭೇಟಿ ನೀಡುವ ವಿರೂಪಾಕ್ಷೇಶ್ವರ ದೇವಸ್ಥಾನ, ಪಾರ್ಕಿಂಗ್&zwnj; ಪ್ರದೇಶ, ಗೆಜ್ಜಲ ಮಂಪಟ, ರಾಣಿಸ್ನಾನಗೃಹ, ಕಡಲೆಕಾಳು ಗಣೇಶ, ಮಹಾನವಮಿ ದಿಬ್ಬ ಸೇರಿದಂತೆ ಹಂಪಿಯ ಪ್ರಮುಖ 7​-8 ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಪ್ಲಾಸ್ಟಿಕ್ ರಿಸೈಕ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಂಪನಿಯೊಂದು ಈ ಯಂತ್ರಗಳನ್ನು ಅಳವಡಿಸಿದೆ.&lt;/p&gt;&lt;h3&gt;&lt;strong&gt;10-15 ದಿನಗಳಲ್ಲಿ ಅಧಿಕೃತವಾಗಿ ಕಾರ್ಯಾರಂಭ&lt;/strong&gt;&lt;/h3&gt;&lt;p&gt;ಹಂಪಿಯಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಪ್ರವಾಸಿಗರು ಬಳಸುವ ಪ್ಲಾಸ್ಟಿಕ್&zwnj; ನೀರಿನ ಬಾಟಲಿಗಳು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರಕ್ಕೆ ಮಾರಕವಾಗುತ್ತಿವೆ. ಇದನ್ನು ತಪ್ಪಿಸಲು ರಿವರ್ಸ್&zwnj; ವೆಂಡಿಂಗ್&zwnj; ಯಂತ್ರಗಳನ್ನು ಪಾರ್ಕಿಂಗ್&zwnj; ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ. ಇನ್ನು 10-15 ದಿನಗಳಲ್ಲಿ ಈ ಯೋಜನೆ ಅಧಿಕೃತವಾಗಿ ಕಾರ್ಯಾರಂಭವಾಗಲಿದೆ ಎನ್ನುತ್ತಾರೆ ಪುರಾತತ್ವ ಅಧೀಕ್ಷಕರು, ಎಎಸ್&zwnj;ಐ ಹಂಪಿ ವೃತ್ತ ಕೆ. ರಾಮಕೃಷ್ಣ ರೆಡ್ಡಿ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/in-hamp-you-will-get-1-rupee-for-an-empty-plastic-bottle-archaeological-department-project-mrq/articleshow-ndpb2a2"/>
        </item>
        <item>
            <title><![CDATA[ವಿಜಯಪುರ ರೈತರಿಗೆ ಒಣದ್ರಾಕ್ಷಿ ಬಂಪರ್; ಆನ್‌ಲೈನ್ ಟ್ರೇಡಿಂಗ್ ಯಶಸ್ಸು ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!]]></title>
            <link>https://kannada.asianetnews.com/gallery/karnataka-districts/vijayapura-apmc-online-raisin-trade-surges-to-12-cr-as-yatnal-cracks-down-on-middlemen-cartels-o10b2a0</link>
            <guid isPermaLink="true">https://kannada.asianetnews.com/gallery/karnataka-districts/vijayapura-apmc-online-raisin-trade-surges-to-12-cr-as-yatnal-cracks-down-on-middlemen-cartels-o10b2a0</guid>
            <pubDate>Mon, 10 Aug 2026 08:33:48 +0530</pubDate>
            <description><![CDATA[&lt;p&gt;ವಿಜಯಪುರದಲ್ಲಿ ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿದ್ದ ಒಣದ್ರಾಕ್ಷಿ ವಹಿವಾಟಿನಿಂದ ರೈತರಿಗೆ ಆಗುತ್ತಿದ್ದ ವಂಚನೆಗೆ ಕಡಿವಾಣ ಹಾಕಲು ಆನ್&zwnj;ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ನೀಡಲಾಗಿದೆ. ಇದರಿಂದ ₹5 ಕೋಟಿಯಿಂದ ₹12 ಕೋಟಿಗೆ ವಹಿವಾಟು ಏರಿಕೆಯಾಗಿದ್ದು, ರೈತರಿಗೆ ಉತ್ತಮ ಬೆಲೆ ಲಭ್ಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzmsg8c8b070ap6p700j0y5c,imgname-vijayapura-grapes-online-trading-basanagouda-patil-yatnal-1786330489221.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರದಲ್ಲಿ ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿದ್ದ ಒಣದ್ರಾಕ್ಷಿ ವಹಿವಾಟಿನಿಂದ ರೈತರಿಗೆ ಆಗುತ್ತಿದ್ದ ವಂಚನೆಗೆ ಕಡಿವಾಣ ಹಾಕಲು ಆನ್&zwnj;ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ನೀಡಲಾಗಿದೆ. ಇದರಿಂದ ₹5 ಕೋಟಿಯಿಂದ ₹12 ಕೋಟಿಗೆ ವಹಿವಾಟು ಏರಿಕೆಯಾಗಿದ್ದು, ರೈತರಿಗೆ ಉತ್ತಮ ಬೆಲೆ ಲಭ್ಯವಾಗಿದೆ.&lt;/p&gt;&lt;img&gt;&lt;p&gt;ರೈತರ ಹಿತದೃಷ್ಟಿಯಿಂದ ಪಾರದರ್ಶಕ ವಹಿವಾಟಿಗಾಗಿ ಆರಂಭಿಸಲಾದ ಆನ್ ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ಕಲ್ಪಿಸಲು ಈಚೆಗೆ ಸಭೆ ನಡೆಸಿ, ಸೂಚನೆ ನೀಡಿದ ನಂತರ ನಡೆದ ಒಣದ್ರಾಕ್ಷಿ ವಹಿವಾಟಿನಲ್ಲಿ ಈವರೆಗೆ ನಡೆಯುತ್ತಿದ್ದ ಸರಾಸರಿ ₹5 ಕೋಟಿಯಿಂದ ₹12 ಕೋಟಿಗೆ ಏರಿಕೆ ಆಗಿರುವುದು ಒಳ್ಳೆಯ ಬೆಳವಣಿಗೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.&lt;/p&gt;&lt;img&gt;&lt;p&gt;ವಿಜಯಪುರ ನಗರದಲ್ಲಿ ಒಣದ್ರಾಕ್ಷಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆ ಆರಂಭಗೊಂಡರೂ, ಕೆಲ ವ್ಯಕ್ತಿಗಳು ಖಾಸಗಿ ಅಸೋಷಿಯನ್ ರಚಿಸಿ ಎಪಿಎಂಸಿಗೆ ಸಂಬಂಧವೇ ಇಲ್ಲದಂತೆ ತಮ್ಮದೆಯಾದ ನಿಯಮಾವಳಿ ಮಾಡಿಕೊಂಡು, ಕೆಲವೇ ವ್ಯಕ್ತಿಗಳು ಹರಾಜಿನಲ್ಲಿ ಭಾಗವಹಿಸಿ ಕಡಿಮೆ ದರದಲ್ಲಿ ಖರೀದಿ ಮಾಡಿ ರೈತರಿಗೆ ವಂಚನೆ ಮಾಡಲಾಗುತ್ತಿತ್ತು. ಅಲ್ಲದೇ, ತಮ್ಮ ಕೋಲ್ಡ್ ಸ್ಟೋರೇಜ್ ಗಳಲ್ಲಿ ರೈತರು ತಂದಿಡುವ ಉತ್ಪನ್ನಗಳಿಗೆ ಬಾಡಿಗೆ ಪಡೆದುಕೊಳ್ಳುವುದಲ್ಲದೆ, ಮಾರಾಟದ ಬಳಿಕ ಶೇ.2ರಷ್ಟು ಕಮಿಷನ್ ಸಹ ವಸೂಲಿ ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಇದರಿಂದ ರೈತರಿಗೆ ಸೂಕ್ತ ಬೆಲೆ ಮತ್ತು ವಿನಾಕಾರಣ ಕಮಿಷನ್ ನೀಡುತ್ತಿದ್ದರಿಂದ ನಷ್ಟ ಉಂಟಾಗುತ್ತಿತ್ತು. ತೂಕದಲ್ಲಿಯೂ ವ್ಯತ್ಯಾಸವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಈಚೆಗೆ (ಜುಲೈ 28) ಎಪಿಎಂಸಿ ಪ್ರಾಂಗಣದಲ್ಲಿ ದ್ರಾಕ್ಷಿ ಬೆಳೆಗಾರರು ಹಾಗೂ ಎಪಿಎಂಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಾರದಲ್ಲಿ ಎರಡು ಭಾರಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆಯಲ್ಲೇ ಒಣದ್ರಾಕ್ಷಿ ವಹಿವಾಟು ನಡೆಸಲು ಸರ್ವಾನುಮತದಿಂದ ತಿರ್ಮಾನಿಸಲಾಗಿತ್ತು.&lt;/p&gt;&lt;img&gt;&lt;p&gt;&lt;strong&gt;ಆಗಸ್ಟ್ 1ರ ವಹಿವಾಟಿನಲ್ಲಿ ಹೊಸ ದಾಖಲೆ:&lt;/strong&gt;&lt;/p&gt;&lt;p&gt;ಶಾಸಕರ ಕಟ್ಟುನಿಟ್ಟಿನ ಸೂಚನೆ ಫಲ ನೀಡಿದ್ದು, ಆಗಸ್ಟ್ 1ರ ಶನಿವಾರ ನಡೆದ ಆನ್&zwnj;ಲೈನ್ ಹರಾಜಿನಲ್ಲಿ ಬರೋಬ್ಬರಿ 4.59 ಲಕ್ಷ ಕೆ.ಜಿ ಒಣದ್ರಾಕ್ಷಿ ವಹಿವಾಟು ನಡೆದಿದೆ. ಈ ಹಿಂದೆ ಕೇವಲ 2.17 ಲಕ್ಷ ಕೆ.ಜಿ ಮಾತ್ರ ಮಾರಾಟವಾಗುತ್ತಿತ್ತು.&lt;/p&gt;&lt;p&gt;&lt;strong&gt;ಗರಿಷ್ಠ ದರ: &lt;/strong&gt;ಪ್ರತಿ ಕೆ.ಜಿ ಒಣದ್ರಾಕ್ಷಿಗೆ ಗರಿಷ್ಠ ₹390 ವರೆಗೆ ಬೆಲೆ ಸಿಕ್ಕಿದೆ.&lt;/p&gt;&lt;p&gt;&lt;strong&gt;ಖರೀದಿದಾರರ ಸಂಖ್ಯೆ:&lt;/strong&gt; ಹಿಂದೆ 14 ಇರುತ್ತಿದ್ದ ಖರೀದಿದಾರರ ಸಂಖ್ಯೆ ಈಗ 25ಕ್ಕೆ ಹೆಚ್ಚಿದೆ.&lt;/p&gt;&lt;p&gt;&lt;strong&gt;ದಲ್ಲಾಳಿಗಳ ಸಂಖ್ಯೆ: &lt;/strong&gt;5 ರಿಂದ 15ಕ್ಕೆ ಏರಿಕೆಯಾಗಿದೆ.&lt;/p&gt;&lt;img&gt;&lt;p&gt;ಈ ಬೆಳವಣಿಗೆಯಿಂದ ರೈತರಿಗೆ ಈವರೆಗೆ ಆಗುತ್ತಿದ್ದ ತೂಕದಲ್ಲಿ ಮೋಸ, ಬೆಲೆಯಲ್ಲಿ ವ್ಯತ್ಯಾಸ, ಆಕ್ಷನ್ ನೆಪದಲ್ಲಿ ತೂರಾಟ ನಡೆಸಿ ಅನಾವಶ್ಯಕವಾಗಿ ಉತ್ಪನ್ನ ಹಾಳಾಗುತ್ತಿರುವುದು ತಪ್ಪಿದಂತಾಗಿದೆ. ಖಾಸಗಿಯವರು ನಡೆಸುತ್ತಿದ್ದ ಬಹಿರಂಗ ಹರಾಜಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ಆಗುತ್ತಿರುವುದರಿಂದ ಯಾವುದೇ ನಿಖರವಾದ ಮಾಹಿತಿ ದೊರೆಯದೇ, ಸರ್ಕಾರಕ್ಕೆ ಸೆಸ್ ಮತ್ತು ಜಿಎಸ್.ಟಿ ಮೂಲಕ ಬರಬೇಕಿದ್ದ ಆದಾಯ ಸಹ ಕೈ ತಪ್ಪುತ್ತಿತ್ತು. ಈಗ ಆನ್ ಲೈನ್ ಮಾರುಕಟ್ಟೆಯಲ್ಲೇ ಹೆಚ್ಚಿನ ವಹಿವಾಟು ನಡೆಯುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹರಿದು ಬರಲಿದೆ.&lt;/p&gt;&lt;img&gt;&lt;p&gt;ಎಲ್ಲ ದ್ರಾಕ್ಷಿ ಬೆಳೆಯುವ ರೈತರು ಯಾರ ಲಾಭಿಗೂ ಮಣಿಯದೇ ನಿರಾಂತಕವಾಗಿ ದೊರೆತ ಇಂತಹ ಅವಕಾಶವನ್ನು ಹೆಚ್ಚು ಜನರಿಗೆ ಪ್ರಚುರಪಡಿಸಿ, ಆನ್&zwnj;ಲೈನ್ ಮಾರುಕಟ್ಟೆಯಲ್ಲಿ ಭಾಗವಹಿಸಲು ಪ್ರೇರೇಪಿಸಿದಲ್ಲಿ ಇಲಾಖೆಗೂ ಆದಾಯ ಮತ್ತು ರೈತರಿಗೂ ಅತೀ ಹೆಚ್ಚು ಲಾಭ ದೊರೆಯಲಿದೆ. ದೇಶದ ಯಾವುದೇ ರಾಜ್ಯದ ವರ್ತಕರು ಆನಲೈನ್ ಮತ್ತು ತಾತ್ಕಾಲಿಕವಾಗಿ ನಡೆಯುವ ಆಪ್ ಲೈನ್ ಮಾರುಕಟ್ಟೆ ವಹಿವಾಟಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/vijayapura-apmc-online-raisin-trade-surges-to-12-cr-as-yatnal-cracks-down-on-middlemen-cartels-o10b2a0"/>
        </item>
        <item>
            <title><![CDATA[ಜೋಡಿ ನಾಗರಹಾವು ಕಚ್ಚಿ ಚೌಡಾಪುರ ಗ್ರಾಮದ ಓಬಮ್ಮ ಸಾವು; ಮೇವು ತೆಗೆಯುವಾಗ ನಡೆದ ಘಟನೆ]]></title>
            <link>https://kannada.asianetnews.com/karnataka-districts/vijayanagar-kudlagi-woman-dies-after-being-bitten-by-a-pair-of-cobras-mrq/articleshow-pxi8lyi</link>
            <guid isPermaLink="true">https://kannada.asianetnews.com/karnataka-districts/vijayanagar-kudlagi-woman-dies-after-being-bitten-by-a-pair-of-cobras-mrq/articleshow-pxi8lyi</guid>
            <pubDate>Sat, 11 Jul 2026 08:24:01 +0530</pubDate>
            <description><![CDATA[ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ, ಮೆಕ್ಕೆಜೋಳದ ಸೊಪ್ಪೆ ತರುವಾಗ ಜೋಡಿ ನಾಗರಹಾವು ಕಚ್ಚಿ ಕೆ.ಓಬಮ್ಮ (53) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಹಾವುಗಳನ್ನು ಹೊಡೆದು ಕೊಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx7ha63ryapme4yepn1rf97e,imgname-vijayangara-1783738210424.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ (ಕೂಡ್ಲಿಗಿ):&lt;/strong&gt; ಕಣದಲ್ಲಿರುವ ಜಾನುವಾರುಗಳಿಗೆ ಮೇವು ಹಾಕಲು, ಮೆಕ್ಕೆಜೋಳ ಸೊಪ್ಪಿ ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವು ಕಚ್ಚಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚೌಡಾಪುರ ಗ್ರಾಮದ ಕೆ.ಓಬಮ್ಮ (53) ಮೃತ ಮಹಿಳೆ.&lt;/p&gt;&lt;p&gt;ಸಿಟ್ಟಿಗೆದ್ದ ಜನತೆ ಮಹಿಳೆಯ ಸಾವಿಗೆ ಕಾರಣವಾದ ಜೋಡಿ ನಾಗರಹಾವುಗಳನ್ನು ಹೊಡೆದು ಕೊಂದಿದ್ದಾರೆ.&lt;/p&gt;&lt;p&gt;ಮೆಕ್ಕೆಜೋಳ ಬಣವಿಯಲ್ಲಿನ ಸೊಪ್ಪೆ ತೆಗೆಯುವಾಗ ಅದರಲ್ಲಿದ್ದ ಜೋಡಿ ನಾಗರಹಾವುಗಳು ಮಹಿಳೆಯ ಬಲಗೈನ ರಟ್ಟೆಗೆ ಒಂದರ ಹಿಂದೆ ಒಂದರಂತೆ ಕಚ್ಚಿದ್ದರಿಂದ ಅಸ್ವಸ್ಥಳಾಗಿದ್ದಾಳೆ. ತಕ್ಷಣ ಮಹಿಳೆಯನ್ನು ಬೈಕಿನಲ್ಲಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಂಡನಿಗೆ ಕಚ್ಚಿದ ಹಾವು; ಟಿವಿ ನೋಡಿ ಬಾಯಿಂದ ವಿಷ ಹೀರಿದ ಪತ್ನಿ! ಆಮೇಲಾಗಿದ್ದೇ ಬೇರೆ ಕಥೆ&lt;/strong&gt;&lt;/p&gt;&lt;h2&gt;&lt;strong&gt;ಶಾಸಕ ಡಾ.ಎನ್&zwnj;.ಟಿ. ಶ್ರೀನಿವಾಸ್ ಸಾಂತ್ವನ&lt;/strong&gt;&lt;/h2&gt;&lt;p&gt;ಹಾವು ಕಚ್ಚಿ ಮೃತಪಟ್ಟ ಮಹಿಳೆ ಕುಟುಂಬದವರನ್ನು ಶಾಸಕ ಡಾ.ಎನ್&zwnj;.ಟಿ. ಶ್ರೀನಿವಾಸ ಭೇಟಿ ಮಾಡಿ, ಸಾಂತ್ವನ ಹೇಳಿದರು. ಚೌಡಾಪುರ ಗ್ರಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಸೇರಿದಂತೆ ಗ್ರಾಮಸ್ಥರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಳೆಗಾಲದಲ್ಲಿ ಮನೆಯೊಳಗೆ ಹಾವು ಬರ್ಬಾರದು ಅಂದ್ರೆ ಈ ಸಿಂಪಲ್&zwnj; ಟಿಪ್ಸ್&zwnj; ಫಾಲೋ ಮಾಡಿ&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagar-kudlagi-woman-dies-after-being-bitten-by-a-pair-of-cobras-mrq/articleshow-pxi8lyi"/>
        </item>
        <item>
            <title><![CDATA[Borewell water: ಒಣ ಭೂಮಿಯಲ್ಲೂ ಮುಗಿಲೆತ್ತರ ಚಿಮ್ಮಿದ ನೀರು! ಬರಗಾಲದಲ್ಲಿ  ಗಂಗೆಯ ಪವಾಡಕ್ಕೆ ಮಾತು ಬಾರದೆ ನಿಂತ ರೈತ!]]></title>
            <link>https://kannada.asianetnews.com/karnataka-districts/water-gushes-sky-high-from-new-borewell-in-hagaribommanahalli-farm-vijayanagara-rav/articleshow-tzrg1wi</link>
            <guid isPermaLink="true">https://kannada.asianetnews.com/karnataka-districts/water-gushes-sky-high-from-new-borewell-in-hagaribommanahalli-farm-vijayanagara-rav/articleshow-tzrg1wi</guid>
            <pubDate>Wed, 15 Jul 2026 07:12:45 +0530</pubDate>
            <description><![CDATA[&lt;p&gt;ಮಳೆಯೇ ಇಲ್ಲದೇ ಅನ್ನದಾತನ ಅಂಗಳದಲ್ಲಿ ಚಿಂತೆಯ ಕಾರ್ಮೋಡಗಳೇ ಕವಿದಿರುವ ಸಂದರ್ಭದಲ್ಲಿ ಬರಡು ಜಮೀನಿನಲ್ಲಿ ಕೊರೆಯಲಾಗುತ್ತಿದ್ದ ಕೊಳವೆಬಾವಿಯ ಅಂತರ್ಜಲ ಮುಗಿಲೆತ್ತರಕ್ಕೆ ಚಿಮ್ಮಿರುವ ಘಟನೆಗೆ ತಾಲೂಕಿನ ಬನ್ನಿಕಲ್ಲು ಗ್ರಾಮ ಭಾನುವಾರ ರಾತ್ರಿ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxhpetc2vt6q3461vqcj9m0n,imgname-----------------------2026-07-15t065448.960-1784079149442.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಗರಿಬೊಮ್ಮನಹಳ್ಳಿ (ಜು.15) &lt;/strong&gt;ಮಳೆಯೇ ಇಲ್ಲದೇ ಅನ್ನದಾತನ ಅಂಗಳದಲ್ಲಿ ಚಿಂತೆಯ ಕಾರ್ಮೋಡಗಳೇ ಕವಿದಿರುವ ಸಂದರ್ಭದಲ್ಲಿ ಬರಡು ಜಮೀನಿನಲ್ಲಿ ಕೊರೆಯಲಾಗುತ್ತಿದ್ದ ಕೊಳವೆಬಾವಿಯ ಅಂತರ್ಜಲ ಮುಗಿಲೆತ್ತರಕ್ಕೆ ಚಿಮ್ಮಿರುವ ಘಟನೆಗೆ ತಾಲೂಕಿನ ಬನ್ನಿಕಲ್ಲು ಗ್ರಾಮ ಭಾನುವಾರ ರಾತ್ರಿ ಸಾಕ್ಷಿಯಾಗಿದೆ.&lt;/p&gt;&lt;h2&gt;ಜಲಾಶಯ ಇದ್ದರೂ ಕೃಷಿಗೆ ನೀರಿಲ್ಲ&lt;/h2&gt;&lt;p&gt;ತಾಲೂಕಿನ ಪಶ್ಚಿಮ ಗಡಿಯುದ್ದಕ್ಕೂ ವರ್ಷದ ಆರು ತಿಂಗಳುಗಳ ಕಾಲ ಹೊದ್ದು ನಿಲ್ಲುವ ತುಂಗಭದ್ರೆ, ಎರಡು ಟಿಎಂಸಿ ಸಾಮರ್ಥ್ಯದ ತಾಲೂಕಿನ ರೈತರ ಜೀವನಾಡಿ ಹಗರಿಬೊಮ್ಮನಹಳ್ಳಿ ಜಲಾಶಯ ಇದ್ದರೂ ತಾಲೂಕಿನ ರೈತರ ಕೊಳವೆಬಾವಿಗಳ ಅಂತರ್ಜಲದ ಮರುಪೂರಣ ಈಗಲೂ ಸವಾಲಿನ ವಿಷಯವಾಗಿದೆ.&lt;/p&gt;&lt;h3&gt;ಕೊಳವೆಬಾವಿಯಿಂದ ಮುಗಿಲೆತ್ತರ ಚಿಮ್ಮಿದ ನೀರು!&lt;/h3&gt;&lt;p&gt;ಆದರೆ, ಬನ್ನಿಕಲ್ಲು ಗ್ರಾಮದ ರೈತ ಸುನೀಲ್ ತಮ್ಮ ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆಯುಸುತ್ತಿದ್ದಾಗ ಅವಿರ್ಭವಿಸಿದ ರಭಸದ ಅಂತರ್ಜಲ ಗ್ರಾಮದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕೊಳವೆ ಬಾವಿಯಿಂದ ಮುಗಿಲೆತ್ತರಕ್ಕೆ ಚಿಮ್ಮಿದ ನೀರಿನ ರಭಸಕ್ಕೆ ಇಡೀ ಗ್ರಾಮದ ರೈತರು ಬೆಕ್ಕಸ ಬೆರಗಾಗಿದ್ದಾರೆ.&lt;/p&gt;&lt;p&gt;ಕೊಳವೆ ಬಾವಿಯಿಂದ ಇಡೀ ಜಮೀನಿಗೆ ಭೋರ್ಗರೆದ ನೀರು ರೈತ ಸುನೀಲ್ ಅವರ ಮೊಗದಲ್ಲಿ ಆನಂದಬಾಷ್ಪ ಮೂಡಿಸಿದೆ. ಉತ್ತಮ ಭರಪೂರ ನೀರಿನ ಲಭ್ಯತೆಯ ನಿರೀಕ್ಷೆ ಹುಸಿಯಾಗಲಿಲ್ಲ ಎನ್ನುವ ಸಂತಸವನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿರುವ ರೈತ, ತಮ್ಮ ಉತ್ತಮ ಕೃಷಿ ಚಟುವಟಿಕೆಗಳಿಗೆ ಗಂಗಾಮಾತೆ ಸಾಥ್ ನೀಡಿದ್ದಾಳೆ. ಭೀಕರ ಬರದ ಆತಂಕದಲ್ಲಿದ್ದ ನಮ್ಮ ಕುಟುಂಬಕ್ಕೆ ಹೊಸ ಚೈತನ್ಯ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/water-gushes-sky-high-from-new-borewell-in-hagaribommanahalli-farm-vijayanagara-rav/articleshow-tzrg1wi"/>
        </item>
        <item>
            <title><![CDATA[ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ನಿಗೂಢ ಸಾವು -ಹಗರಿಬೊಮ್ಮನಹಳ್ಳಿಯಲ್ಲಿ ನಡೀತಾ ಲಾಕಪ್ ಡೆತ್?]]></title>
            <link>https://kannada.asianetnews.com/vijayanagara/alleged-custodial-death-at-hagaribommanahalli-police-station-in-vijayanagara-gkn/articleshow-unx52kc</link>
            <guid isPermaLink="true">https://kannada.asianetnews.com/vijayanagara/alleged-custodial-death-at-hagaribommanahalli-police-station-in-vijayanagara-gkn/articleshow-unx52kc</guid>
            <pubDate>Sun, 02 Aug 2026 11:53:00 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ಖಲೀಲ್ ಎಂಬ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರು ಫಿಟ್ಸ್&zwnj;ನಿಂದ ಸಾವು ಸಂಭವಿಸಿದೆ ಎಂದು ಹೇಳಿದರೆ, ಇದು 'ಲಾಕಪ್ ಡೆತ್' ಎಂದು ಆರೋಪಿಸಿ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz0j5nbs7qaspyp34d1807hg,imgname-hagaribommanahalli-police-station-lockup-death-1785651713401.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಗರಿಬೊಮ್ಮನಹಳ್ಳಿ (ವಿಜಯನಗರ):&lt;/strong&gt; ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ವ್ಯಕ್ತಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದು 'ಲಾಕಪ್ ಡೆತ್' ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಠಾಣೆಯ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ&lt;/strong&gt;&lt;/h2&gt;&lt;p&gt;ಮೃತಪಟ್ಟ ವ್ಯಕ್ತಿಯನ್ನು ಹರಪನಹಳ್ಳಿ ಮೂಲದ ಖಲೀಲ್ (38) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕಟ್ಟಡ ಕಾರ್ಮಿಕನಾಗಿದ್ದ ಖಲೀಲ್, ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರದ ಯುವತಿಯನ್ನು ವಿವಾಹವಾಗಿ ಪಟ್ಟಣದಲ್ಲೇ ವಾಸವಾಗಿದ್ದನು. ಕುಟುಂಬದಲ್ಲಿ ನಿತ್ಯ ಪತ್ನಿಯೊಂದಿಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಪತ್ನಿಯ ದೂರಿನ ಮೇರೆಗೆ ಅಥವಾ ವಿಚಾರಣೆ ನಡೆಸುವ ಸಲುವಾಗಿ ಪೊಲೀಸರು ನಿನ್ನೆ (ಗುರುವಾರ) ರಾತ್ರಿ ಖಲೀಲ್&zwnj;ನನ್ನು ಠಾಣೆಗೆ ಕರೆತಂದಿದ್ದರು.&lt;/p&gt;&lt;h2&gt;&lt;strong&gt;ಪೊಲೀಸರ ವಾದವೇನು?&lt;/strong&gt;&lt;/h2&gt;&lt;p&gt;ಪೊಲೀಸರ ಮಾಹಿತಿಯ ಪ್ರಕಾರ ವಿಚಾರಣೆಗಾಗಿ ಠಾಣೆಯಲ್ಲಿದ್ದ ಖಲೀಲ್&zwnj;ಗೆ ಇದ್ದಕ್ಕಿದ್ದಂತೆ ಫಿಟ್ಸ್ (ಸೆಳೆತ) ಬಂದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ.&lt;/p&gt;&lt;p&gt;ಖಲೀಲ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆತನ ಸಂಬಂಧಿಕರು ಹಾಗೂ ನೂರಾರು ಸಂಖ್ಯೆಯ ಜನರು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ. ಪೊಲೀಸರ ಕಿರುಕುಳದಿಂದಲೇ ಖಲೀಲ್ ಸಾವನ್ನಪ್ಪಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ. ಪರಿಸ್ಥಿತಿ ಕೈಮೀರದಂತೆ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಮತ್ತು ಠಾಣೆಯ ಸುತ್ತಮುತ್ತ ಮೀಸಲು ಪೊಲೀಸ್ ತುಕಡಿಯನ್ನು (KSRP) ನಿಯೋಜಿಸಲಾಗಿದೆ.&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಎಸ್&zwnj;ಪಿ ಭೇಟಿ&lt;/strong&gt;&lt;/h2&gt;&lt;p&gt;ಪ್ರಕರಣದ ಗಂಭೀರತೆ ಅರಿತ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್&zwnj;.ಜಾಹ್ನವಿ ಅವರು ಹಗರಿಬೊಮ್ಮನಹಳ್ಳಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹಗರಿಬೊಮ್ಮನಹಳ್ಳಿ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು ಉನ್ನತ ಮಟ್ಟದ ತನಿಖೆಗೆ ಆಗ್ರಹ ಕೇಳಿಬಂದಿದೆ.&lt;/p&gt;]]></content:encoded>
            <category>vijayanagara</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/vijayanagara/alleged-custodial-death-at-hagaribommanahalli-police-station-in-vijayanagara-gkn/articleshow-unx52kc"/>
        </item>
        <item>
            <title><![CDATA[ಪೊಲೀಸರೇ ಗಂಡನನ್ನು ಕೊಂದ್ರು, ಮಕ್ಕಳನ್ನ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ: ಶೈನಾಜ್ ಬೇಗಂ]]></title>
            <link>https://kannada.asianetnews.com/karnataka-districts/hagaribommanahalli-lockup-death-case-update-police-killed-my-husband-at-the-police-station-shainaaz-begum-alleges-mrq/articleshow-wfrntfg</link>
            <guid isPermaLink="true">https://kannada.asianetnews.com/karnataka-districts/hagaribommanahalli-lockup-death-case-update-police-killed-my-husband-at-the-police-station-shainaaz-begum-alleges-mrq/articleshow-wfrntfg</guid>
            <pubDate>Wed, 05 Aug 2026 07:55:48 +0530</pubDate>
            <description><![CDATA[ಕುಡಿದು ಗಲಾಟೆ ಮಾಡುತ್ತಿದ್ದ ಪತಿಗೆ ಬುದ್ಧಿ ಹೇಳಲು ಠಾಣೆಗೆ ಕರೆತಂದ ಪತ್ನಿ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪೊಲೀಸರ ಅಮಾನುಷ ಹಲ್ಲೆಯಿಂದಲೇ ತನ್ನ ಪತಿ ಖಲೀಲ್ ಸಾಬ್ ಸಾವನ್ನಪ್ಪಿದ್ದು, ಇದು ಲಾಕಪ್ ಸಾವು ಎಂದು ಪತ್ನಿ ಶೈನಾಜ್ ಬೇಗಂ ಆರೋಪಿಸಿದ್ದಾರೆ. ನ್ಯಾಯ ಸಿಗದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದು, ಪ್ರಕರಣಕ್ಕೆ ರಾಜಕೀಯ ಮುಖಂಡರು ಧ್ವನಿಗೂಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz7vesc2j3wbtt0awx2m7wx1,imgname-hagaribommanahalli-1785896330626.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ:&lt;/strong&gt; ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ, ಬುದ್ಧಿ ಹೇಳಿ ಎಂದು ನನ್ನ ಪತಿಯನ್ನು ಠಾಣೆಗೆ ಕರೆ ತಂದರೆ ನನ್ನ ಪತಿಯ ಮೇಲೆ ರಾಘವೇಂದ್ರ ಮತ್ತು ವೆಂಕಟೇಶ್ ಎಂಬ ಇಬ್ಬರು ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆಗೈದರು. ಪತಿಯನ್ನು ಹತ್ಯೆಗೈದಿರುವ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಲಾಕಪ್ ಸಾವಿಗೀಡಾದ ಖಲೀಲ್ ಸಾಬ್ ಪತ್ನಿ ಶೈನಾಜ್ ಬೇಗಂ ಆಗ್ರಹಿಸಿದರು.&lt;/p&gt;&lt;p&gt;ಕಟ್ಟಡ ಕಾರ್ಮಿಕ ಖಲೀಲ್ ಸಾಬ್ ಲಾಕಪ್ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಹರಪನಹಳ್ಳಿಯ ಅಂಜುಮನ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಎಂ. ನಬಿ ಅವರ ಪುತ್ರ ಎನ್.ಎಂ. ನೂರ್ ಅಹಮದ್ ಮಂಗಳವಾರ ಪಟ್ಟಣದ ಮೆಹಬೂಬ್ ನಗರದ ಅವರ ನಿವಾಸಕ್ಕೆ ಸಾಂತ್ವನ ಹೇಳಲೆಂದು ತೆರಳಿದ್ದಾಗ ಖಲೀಲಸಾಬ ಅವರ ಪತ್ನಿ ಅಕ್ಷರಶಃ ಪೊಲೀಸರ ವಿರುದ್ಧ ಕೆಂಡ ಕಾರಿದರು.&lt;/p&gt;&lt;h2&gt;&lt;strong&gt;ಮಕ್ಕಳಿಬ್ಬರನ್ನೂ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ&lt;/strong&gt;&lt;/h2&gt;&lt;p&gt;ಠಾಣೆಯಲ್ಲಿಯೇ ಸತ್ತಿದ್ದರೂ ಚಿಕಿತ್ಸೆ ಕೊಡಿಸಬೇಕು ಎಂದು ನನ್ನ ಪತಿಯನ್ನು ಸರಕು ಸಾಗಾಣಿಕೆ ವಾಹನದಲ್ಲಿ ನಾಯಿಯಂತೆ ಒಯ್ದರು. ಸತ್ತಿರುವ ನನ್ನ ಪತಿಯನ್ನು ಯಾವುದಾದರೂ ಕಾಲುವೆಯಲ್ಲಿ ಎಸೆಯುತ್ತಾರೆ ಎಂಬ ಆತಂಕದಲ್ಲಿಯೇ ನಾನು ನನ್ನ ಮಕ್ಕಳಿಬ್ಬರನ್ನೂ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ ಎಂದು ಗದ್ಗದಿತರಾದರು.&lt;/p&gt;&lt;p&gt;ಆಸ್ಪತ್ರೆಯಲ್ಲಿ ನನ್ನ ಪತಿಯ ಬಾಯಿಯಿಂದ ಮತ್ತು ಕಿವಿಯಿಂದ ರಕ್ತ ಬಂದಿದ್ದು ಗಮನಿಸಿದ್ದೇನೆ. ಪತಿಯ ಸಾವು ಠಾಣೆಯಲ್ಲಿ ಪೊಲೀಸರಿಂದಲೇ ಆಗಿದೆ. ನನಗೆ ನ್ಯಾಯ ಬೇಕು. ಅದನ್ನಷ್ಟೇ ಕೇಳೋದು. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುತ್ತೇನೆ, ನನಗೆ ಯಾವ ಪರಿಹಾರವೂ ಬೇಡ. ನನ್ನ ಪತಿಯನ್ನು ಕೊಂದ ಇಬ್ಬರೂ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.&lt;/p&gt;&lt;h3&gt;&lt;strong&gt;ಪೊಲೀಸರು ಹೇಳುತ್ತಿರುವುದು ಕಟ್ಟುಕತೆ&lt;/strong&gt;&lt;/h3&gt;&lt;p&gt;ನನ್ನ ಪತಿ ಕಟ್ಟಡ ಕಾರ್ಮಿಕರಾಗಿದ್ದರು. ಯಾವಾಗಲೂ ಆರೋಗ್ಯದಿಂದಿದ್ದರು. ಮೂತ್ರ ವಿಸರ್ಜನೆಗೆಂದು ಹೋದಾಗ ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಫಿಟ್ಸ್ ಬಂದು ತೀರಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿರುವುದು ಕಟ್ಟುಕತೆ. ನ್ಯಾಯ ಸಿಗದಿದ್ದರೆ ಠಾಣೆಯ ಮುಂದೆ ಧರಣಿ ನಡೆಸುವುದಾಗಿ ಎಂದು ಎಚ್ಚರಿಸಿದರು.&lt;/p&gt;&lt;p&gt;ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂರ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನೆ ನಡೆದು ನಾಲ್ಕು ದಿನವಾದರೂ ಮರಣೋತ್ತರ ಪರಿಕ್ಷಾ ವರದಿ ಮತ್ತು ಸಿಸಿ ಟಿವಿ ಫುಟೇಜ್&zwnj;ಗಳನ್ನು ಬಹಿರಂಗಪಡಿಸುತ್ತಿಲ್ಲ. ಪ್ರಕರಣ ಕುರಿತಂತೆ ಈ ವರೆಗೂ ಗಂಭೀರ ತನಿಖೆ ನಡೆದಿಲ್ಲ ಎಂದು ಆರೋಪಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇನ್ಮುಂದೆ ವಿಮೆ ಇಲ್ಲದಿದ್ರೆ ಪೆಟ್ರೋಲ್ ಸಿಗೋಲ್ಲ; ಪ್ರಾಯೋಗಿಕ ಜಾರಿಗೆ ಸುಪ್ರೀಂ ನಿರ್ದೇಶನ, ಹೊಸ ವಾಹನ ಖರೀದಿಸಿದವರು ಈ ವಿಷ್ಯ ತಿಳಿದಿರಲಿ!&lt;/strong&gt;&lt;/p&gt;&lt;h3&gt;&lt;strong&gt;ಖಲೀಲ್ ಸಾಬ ಕುಟುಂಬದವರ ಕಾನೂನು ಹೋರಾಟಕ್ಕೆ ಸಾಥ್&lt;/strong&gt;&lt;/h3&gt;&lt;p&gt;ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಲಾಕಪ್ ಸಾವಿಗೀಡಾಗಿರುವ ಖಲೀಲ್ ಸಾಬ ಕುಟುಂಬದವರ ಕಾನೂನು ಹೋರಾಟಕ್ಕೂ ಜೊತೆಯಾಗುತ್ತೇನೆ. ಎರಡು ದಿನಗಳಲ್ಲಿ ತನಿಖೆಯ ಕುರಿತು ಮಾಹಿತಿ ಒದಗಿಸದಿದ್ದರೆ ಕುಟುಂಬದವರ ಜೊತೆ ಗೃಹಮಂತ್ರಿ ಪ್ರಿಯಾಂಕ ಖರ್ಗೆ ಅವರ ಬಳಿ ತೆರಳಿ ಪಟ್ಟಣದ ಪೊಲೀಸ್ ವೈಫಲ್ಯ ಕುರಿತು ದೂರು ದಾಖಲಿಸುವುದಾಗಿ ಎಚ್ಚರಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ನೆಲ್ಲು ಇಸ್ಮಾಯಿಲ್, ನ್ಯಾಯಬೆಲೆ ಇಸ್ಮಾಯಿಲ್, ಮುಖಂಡರಾದ ಬಶೀರ್ ಅಹಮದ್, ಎಲ್ಲಪ್ಪ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಮುಸ್ಲೀಂ ಮುಖಂಡರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ : &lt;/strong&gt;&lt;strong&gt;ರಾಯಚೂರು: ಬುಲೆಟ್ ಮೇಲೆ ಹೊರಟಿದ್ದವನ ಮೇಲೆ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್! ನಡುರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ!&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hagaribommanahalli-lockup-death-case-update-police-killed-my-husband-at-the-police-station-shainaaz-begum-alleges-mrq/articleshow-wfrntfg"/>
        </item>
        <item>
            <title><![CDATA[TB Dam: ತುಂಗಾಭದ್ರ ಜಲಾಶಯದಲ್ಲಿ ಕೇವಲ 29 ಟಿಎಂಸಿ ನೀರು! ಇಂದಿನ ಜಲಾಶಯಗಳ ನೀರಿನ ಪ್ರಮಾಣ ಎಷ್ಟು?]]></title>
            <link>https://kannada.asianetnews.com/karnataka-districts/almatti-dam-water-level-increase-but-tungabhadra-reservoir-drops-rav/articleshow-x7eqi73</link>
            <guid isPermaLink="true">https://kannada.asianetnews.com/karnataka-districts/almatti-dam-water-level-increase-but-tungabhadra-reservoir-drops-rav/articleshow-x7eqi73</guid>
            <pubDate>Sat, 25 Jul 2026 08:21:22 +0530</pubDate>
            <description><![CDATA[&lt;p&gt;ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 29 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯೇ ಇದಕ್ಕೆ ಕಾರಣವಾಗಿದ್ದು, ಸದ್ಯ, ಜಲಾಶಯದ ನೀರು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx7ff6fg53b8c5vv3jg0q3ph,imgname-----------------------2026-07-11t074734.340-1783736277488.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುನಿರಾಬಾದ್ (ಜು.25): &lt;/strong&gt;ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯ(TB Dam)ದಲ್ಲಿ ನೀರಿನ ಶೇಖರಣೆ ಕಡಿಮೆ ಇದೆ ಎಂದು ನೀರಾವರಿ ಇಲಾಖೆಯ ನೂತನ ಮುಖ್ಯ ಅಭಿಯಂತರ ಮನೋಜಕುಮಾರ ತಿಳಿಸಿದ್ದಾರೆ.&lt;/p&gt;&lt;h2&gt;ಟಿಬಿ ಡ್ಯಾಂನಲ್ಲಿ ಕೇವಲ 29 ಟಿಎಂಸಿ ನೀರು!&lt;/h2&gt;&lt;p&gt;ಪ್ರಸಕ್ತ ವರ್ಷ ಜಲಾಶಯದಲ್ಲಿ 29 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಕಳೆದ ವರ್ಷ ಇದೇ ದಿನದಂದು 78 ಟಿಎಂಸಿ ನೀರು ಶೇಖರಣೆಯಾಗಿತ್ತು. ಎಲ್ ನಿನೊ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಕುಗ್ಗಿದೆ. ಇದಕ್ಕೆ ಕಾರಣ ಜಲಾಶಯದ ಜಲಾನಯನ ಪ್ರದೇಶಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಕಡಿಮೆ ಮಳೆಯಾಗಿರುವುದು. ಜಲಾಶಯದ 75 ವರ್ಷದ ಇತಿಹಾಸದಲ್ಲಿ ಇಂತಹ ಭೀಕರ ಪರಿಸ್ಥಿತಿ ಬಂದಿದ್ದು ಇದೆ ಪ್ರಪ್ರಥಮ ಎಂದರು.&lt;/p&gt;&lt;h3&gt;ಆಲಮಟ್ಟಿ ಜಲಾಶಯ ಒಳಹರಿವು ಹೆಚ್ಚಳ&lt;/h3&gt;&lt;p&gt;ಆದರೆ ಕೃಷ್ಣನದಿ ಪಾತ್ರದ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಆದರೆ ತುಂಗಭದ್ರಾ ಜಲಾಶಯದ ವಿಷಯದಲ್ಲಿ ಇದು ವಿರುದ್ಧವಾಗಿದೆ ಎಂದರು.&lt;/p&gt;&lt;h3&gt;ತುಂಗಭದ್ರಾ ನೀರು ಕುಡಿಯಲು ಮಾತ್ರ&lt;/h3&gt;&lt;p&gt;ತುಂಗಭದ್ರಾ ಜಲಾಶಯದ ನೀರನ್ನು ಕುಡಿಯಲು ಮಾತ್ರ ಉಪಯೋಗಿಸಬೇಕೆಂದು ಕಲ್ಬುರ್ಗಿ ವಿಭಾಗೀಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಈ ಹಿನ್ನೆಲೆ ಜಲಾಶಯದ ನೀರನ್ನು ಕೊಪ್ಪಳಮ ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಜನರಿಗೆ ಕುಡಿಯಲು ಎಡದಂಡೆ ಮುಖ್ಯ ಕಾಲುವೆ ಹಾಗೂ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ನೀರನ್ನು ಹರಿಸಲಾಗುತ್ತಿದೆ ಎಂದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ನಾಗನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ಬಸಪ್ಪ ಜಾನ್ಕರ್, ಧರಮ್ ರಾಜ್ ಹಾಗೂ ಇತರರು ಉಪಸ್ಥಿತರಿದ್ದರು.&lt;/p&gt;&lt;p&gt;ಇದಕ್ಕೂ ಮುನ್ನ ಮುಖ್ಯ ಅಭಿಯಂತರರಾಗಿ ಅಧಿಕಾರ ವಹಿಸಿಕೊಂಡ ಮನೋಜ್ ಕುಮಾರ್ ಅವರಿಗೆ ಕಾರ್ಯಪಾಲಕ ಅಭಿಯಂತರ ನಾಗನಾಥ್ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.&lt;/p&gt;&lt;p&gt;&lt;strong&gt;ಜಲಾಶಯಗಳ ಇಂದಿನ ನೀರಿನ ಮಟ್ಟ (24-7-2026)&lt;/strong&gt;&lt;/p&gt;&lt;p&gt;ಕಬಿನಿ 69% 2284 2273.14&lt;/p&gt;&lt;p&gt;ಹೇಮಾವತಿ 61% 2922 2904.65&lt;/p&gt;&lt;p&gt;ತುಂಗಭದ್ರಾ 26% 1633 1604.25&lt;/p&gt;&lt;p&gt;ಸೂಪಾ(ಮೀ.) 32% 564 598.90&lt;/p&gt;&lt;p&gt;ಕೆಆರ್&zwnj;ಎಸ್ 35% 124.80 92.05&lt;/p&gt;&lt;p&gt;ಘಟಪ್ರಭಾ 51% 2175 2138.30&lt;/p&gt;&lt;p&gt;ಲಿಂಗನಮಕ್ಕಿ 24% 1819. 1768.20&lt;/p&gt;&lt;p&gt;ಭದ್ರಾ 49% 2158 2122.50&lt;/p&gt;&lt;p&gt;ಹಾರಂಗಿ 96% 2859 2858.10&lt;/p&gt;&lt;p&gt;ಆಲಮಟ್ಟಿ(ಮೀ.) 84% 519.60 518.50&lt;/p&gt;&lt;p&gt;ನಾರಾಯಣಪುರ(ಮೀ.) 72% 492.25 489.55&lt;/p&gt;&lt;p&gt;ಮಲಪ್ರಭಾ 36% 2079.50 2056.10&lt;/p&gt;&lt;p&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/almatti-dam-water-level-increase-but-tungabhadra-reservoir-drops-rav/articleshow-x7eqi73"/>
        </item>
        <item>
            <title><![CDATA[ಹೂವಿನಹಡಗಲಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ನಾಪತ್ತೆ,  ಸಾಮೂಹಿಕ ರಜೆ ಹಾಕಿ ಎಲ್ಲಿಗೆ ಹೋದ್ರು?]]></title>
            <link>https://kannada.asianetnews.com/karnataka-districts/hoovina-hadagali-tahsildar-office-staff-on-mass-leave-at-vijayanagar-district-rav/articleshow-ywc74g8</link>
            <guid isPermaLink="true">https://kannada.asianetnews.com/karnataka-districts/hoovina-hadagali-tahsildar-office-staff-on-mass-leave-at-vijayanagar-district-rav/articleshow-ywc74g8</guid>
            <pubDate>Sat, 25 Jul 2026 09:49:59 +0530</pubDate>
            <description><![CDATA[ಹೂವಿನಹಡಗಲಿ ತಹಸೀಲ್ದಾರ ಕಚೇರಿಯಲ್ಲಿ ತೀವ್ರ ಸಿಬ್ಬಂದಿ ಕೊರತೆಯಿಂದಾಗಿ ಕೆಲಸದ ಒತ್ತಡ ಹೆಚ್ಚಾಗಿದೆ. ಇದರಿಂದ ಬೇಸತ್ತ ಸಿಬ್ಬಂದಿ, ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಸಾಮೂಹಿಕ ರಜೆ ಹಾಕಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kybqrj4ajftry0d3bn6ynmxj,imgname-----------------------2026-07-25t094438.375-1784952932490.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೂವಿನಹಡಗಲಿ (ಜು.25): ಇಲ್ಲಿನ ತಹಸೀಲ್ದಾರ ಕಚೇರಿಯ ಬಹುತೇಕ ಹುದ್ದೆಗಳಲ್ಲಿ ಸಿಬ್ಬಂದಿ ಪ್ರಭಾರವಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು, ಒಳ ಆಡಳಿತವು ಸಿಬ್ಬಂದಿ ಕೊರತೆಯಿಂದ ಕೆಲಸ ಕಾರ್ಯಭಾರ ಒತ್ತಡ ಹೆಚ್ಚಿದ್ದು, ಸಿಬ್ಬಂದಿಗಳೆಲ್ಲ ಶುಕ್ರವಾರ ಸಾಮೂಹಿಕ ರಜೆ ಹಾಕಿ ಜಿಲ್ಲಾಧಿಕಾರಿ ಭೇಟಿಗೆ ಹೋಗಿದ್ದರು.&lt;/p&gt;&lt;h2&gt;54 ಹುದ್ದೆಗಳಲ್ಲಿ 17 ಹುದ್ದೆಗಳು ಖಾಲಿ&lt;/h2&gt;&lt;p&gt;ಇಲಾಖೆಯ 54 ಹುದ್ದೆಗಳಲ್ಲಿ 17 ಹುದ್ದೆಗಳು ಖಾಲಿ ಇವೆ. ಆದರೆ ಅನುಭವ, ನೈಪುಣ್ಯವೇ ಇಲ್ಲದ ಸಿಬ್ಬಂದಿಯಿಂದ ಹೇಗೆ ಕೆಲಸ ತೆಗೆದುಕೊ&zwj;ಳ್ಳುವುದು, 3 ರಿಂದ 4 ಶಾಖೆಗಳಲ್ಲಿ ಒಬ್ಬ ವ್ಯಕ್ತಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನ ಬೆಳಗಾಗುತ್ತಲೇ ಹತ್ತಾರು ಯೋಜನೆ, ಜಿಲ್ಲಾಧಿಕಾರಿ ಕಚೇರಿಗೆ ಕೇಳಿದ ಮಾಹಿತಿ ಸಂಗ್ರಹಿಸಿ ಕಳಿಸುವುದು, ಮೀಟಿಂಗ್&zwnj; ಸೇರಿದಂತೆ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮೂಹಿಕ ರಜೆ ಹಾಕಿ ಜಿಲ್ಲಾಧಿಕಾರಿ ಭೇಟಿ ಮಾಡಿ ಸಿಬ್ಬಂದಿ ಕೊರತೆ ನೀಗಿಸಿ, ಇಲ್ಲವೇ ನಾವೆಲ್ಲ ಆರೋಗ್ಯ ನೆಪವೊಡ್ಡಿ ಸಾಮೂಹಿಕ ರಜೆ ಹಾಕಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತು ಹೇಳಿದ್ದಾರೆ.&lt;/p&gt;&lt;p&gt;ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ ಗ್ರೇಡ್&zwnj;-2 ಹುದ್ದೆ ಖಾಲಿ ಸೇರಿದಂತೆ ಉಪ ತಹಸೀಲ್ದಾರ-2, ಪಹಣಿ ತಿದ್ದುಪಡಿ ಶಾಖೆ, ವಿವಿಧ ಯೋಜನೆಗಳ ಮಂಜೂರಾತಿ ಶಾಖೆ, ಹಿರೇಹಡಗಲಿ ಕಂದಾಯ ನಿರೀಕ್ಷಕ, ದ್ವಿತೀಯ ದರ್ಜೆ ಸಹಾಯಕರು 5, ಶಿರಸ್ತೇದಾರರು 2, ಪ್ರಥಮ ದರ್ಜೆ ಸಹಾಯಕರು 2, ಆಹಾರ ಇಲಾಖೆ ಶಿರಸ್ತೇದಾರ, ದ್ವಿತೀಯ ದರ್ಜೆ ಸಹಾಯಕ ಹೀಗೆ 17 ಹುದ್ದೆಗಳು ಖಾಲಿ ಇವೆ.&lt;/p&gt;&lt;p&gt;ಗ್ರೇಡ್&zwnj;-1 ಮತ್ತು ಗ್ರೇಡ್&zwnj;-2 ತಹಸೀಲ್ದಾರ್&zwnj; ಹುದ್ದೆ ಒಬ್ಬರೇ ನಿರ್ವಹಿಸುತ್ತಿದ್ದಾರೆ. 6ರಿಂದ 8 ತಾಸು 36 ಫಾರಂಗಳಿಗೆ ಆನ್&zwnj;ಲೈನ್&zwnj; ಮಂಜೂರಾತಿ ನೀಡಬೇಕಿದೆ. ಮುಂದೆ ಬೆಳೆ ಧೃಢೀಕರಣ, ಎಸ್&zwnj;ಐಆರ್&zwnj; ಸೇರಿದಂತೆ ಇನ್ನಿತರ ಕಚೇರಿ ಕೆಲಸ ಮಾಡಲು ಸಿಬ್ಬಂದಿ ಕೊರತೆ ಕಾಡುತ್ತಿದೆ.&lt;/p&gt;&lt;p&gt;ಕಂದಾಯ ಇಲಾಖೆ ಕಚೇರಿಯ ಎಸ್&zwnj;ಡಿಎ ಬಾಲಬಸವ, ರಾಜು ಇಬ್ಬರೂ ಕಳೆದ 7 ತಿಂಗಳಿಂದ ಅನಧಿಕೃತ ಗೈರಾಗಿದ್ದಾರೆ. ವರಕನಹಳ್ಳಿ, ಭೂಮಿ ಕೇಂದ್ರದ ಇಬ್ಬರೂ ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ನಿಯೋಜನೆಯಾಗಿದ್ದಾರೆ. ಕೆಲ ಮಹಿಳಾ ಸಿಬ್ಬಂದಿ ಹೆರಿಗೆ ರಜಾ, ಆರೋಗ್ಯ ರಜಾ ಪಡೆದಿದ್ದಾರೆ.&lt;/p&gt;&lt;h3&gt;ಸಿಬ್ಬಂದಿ ಕೊರತೆ ಕೆಲಸದ ಒತ್ತಡ ಹೆಚ್ಚಳ&lt;/h3&gt;&lt;p&gt;ಸಿಬ್ಬಂದಿ ಕೊರತೆ ಮಧ್ಯೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಇದರಿಂದ ನಮ್ಮ ಖಾಸಗಿ ಬದುಕನ್ನೇ ಮರೆತಿದ್ದೇವೆ. ಬಹುತೇಕ ಹುದ್ದೆಗಳು ಪ್ರಭಾರ ಇವೆ. ಕೌಶಲ್ಯ ಇಲ್ಲದಿದ್ದರೂ ಕೆಲಸ ಮಾಡುತ್ತಿದ್ದೇವೆ. ಕಾರ್ಯಭಾರ ಹೆಚ್ಚಾಗಿದೆ. ಪ್ರತಿ ಕಡತಗಳನ್ನು ಆನ್&zwnj;ಲೈನ್&zwnj;ನಲ್ಲಿ ದಾಖಲೀಕರಣ ಆಗಿರುವುದರಿಂದ ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಎಷ್ಟೇ ತೊಂದರೆ ಇದ್ದರೂ ರಾತ್ರಿವರೆಗೂ ಕಚೇರಿಯಲ್ಲಿ ಕೆಲಸ ಮಾಡುವ ಸ್ಥಿತಿ ಇದೆ. ನಮ್ಮ ಅಳಲು ತೋಡಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಭೇಟಿಗೆ ಹೋಗಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ.&lt;/p&gt;&lt;p&gt;ಕೆಲಸದ ಸಂದರ್ಭದಲ್ಲಿ ನಿತ್ಯ ರೈತರು, ಸಾರ್ವಜನಿಕರಿಂದ ಕಚೇರಿ ಗಿಜಿಗುಡುತ್ತಿತ್ತು. ಆದರೆ ಕಚೇರಿಯಲ್ಲಿ ಸಿಬ್ಬಂದಿ ಸಾಮೂಹಿಕ ರಜೆ ಹಾಕಿರುವ ಕಾರಣ ಜನರಿಲ್ಲದೇ ಭಣಗುಡುತ್ತಿತ್ತು.&lt;/p&gt;&lt;p&gt;ಕಚೇರಿಯ ಒಳ ಆಡಳಿತ ಸಿಬ್ಬಂದಿಯವರು ಸಾಮೂಹಿಕವಾಗಿ ಶುಕ್ರವಾರ ರಜೆ ಹಾಕಿದ್ದಾರೆ. ಕಚೇರಿಯಲ್ಲಿ ಯಾರೂ ಇಲ್ಲ. ಜಿಲ್ಲಾಧಿಕಾರಿ ಭೇಟಿಗೆ ಹೋಗಿದ್ದಾರೆ. ಇಲಾಖೆಯಲ್ಲಿನ 54 ಹುದ್ದೆಗಳ ಪೈಕಿ 17 ಹುದ್ದೆಗಳು ಖಾಲಿ ಇವೆ ಎನ್ನುತ್ತಾರೆ ತಹಸೀಲ್ದಾರ ಕೆ.ಎಂ. ಗುರುಬಸವರಾಜ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hoovina-hadagali-tahsildar-office-staff-on-mass-leave-at-vijayanagar-district-rav/articleshow-ywc74g8"/>
        </item>
    </channel>
</rss>
