<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 31 Aug 2026 06:23:16 +0530</lastBuildDate>
        <atom:link href="https://kannada.asianetnews.com/rss/vijayanagara" rel="self" type="application/rss+xml"/>
        <item>
            <title><![CDATA[AISA Protest: ಜಾರ್ಖಂಡ್‌ನಲ್ಲಿ ಹೋರಾಟಗಾರ್ತಿ ನೇಹಾ ಬೋರಾ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ; ಆರೆಸ್ಸೆಸ್ ವಿರುದ್ಧ ಆಕ್ರೋಶ!]]></title>
            <link>https://kannada.asianetnews.com/karnataka-districts/vijayanagar-aisa-protest-condemning-the-attack-on-activist-neha-bora-in-jharkhand/articleshow-1c1cvko</link>
            <guid isPermaLink="true">https://kannada.asianetnews.com/karnataka-districts/vijayanagar-aisa-protest-condemning-the-attack-on-activist-neha-bora-in-jharkhand/articleshow-1c1cvko</guid>
            <pubDate>Mon, 10 Aug 2026 09:14:04 +0530</pubDate>
            <description><![CDATA[&lt;p&gt;ಜಾರ್ಖಂಡ್&zwnj;ನ ರಾಂಚಿಯಲ್ಲಿ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹರಪನಹಳ್ಳಿಯಲ್ಲಿ ಎಐಎಸ್ಎ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಕೃತ್ಯದ ಹಿಂದೆ ಆರೆಸ್ಸೆಸ್ ಸಂಘ ಪರಿವಾರದ ಕೈವಾಡವಿದೆ. ದಾಳಿಕೋರರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzmvzgmyf2vbw2zjkkdj4ky4,imgname-----------------------2026-08-10t090538.383-1786333086366.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹರಪನಹಳ್ಳಿ (ಆ.10)&lt;/strong&gt;: ಜಾರ್ಖಂಡ್&zwnj;(Jharkhand)ನ ರಾಂಚಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಎಐಎಸ್ಎ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಜಾರ್ಖಂಡ್&zwnj;ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟದಲ್ಲಿ ಯುವಜನತೆಯೊಂದಿಗೆ ಐಕ್ಯತೆ ವ್ಯಕ್ತಪಡಿಸಲು ಪಾಲ್ಗೊಂಡಿದ್ದ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಮೇಲೆ ನಡೆದ ದಾಳಿ ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;JPSC Exam: ಪರೀಕ್ಷೆ ರದ್ದತಿಗೆ ಜಾರ್ಖಂಡ್ ಸರ್ಕಾರ ಒಲವು, ಆದ್ರೆ CBI ತನಿಖೆಗೇ ವಿದ್ಯಾರ್ಥಿಗಳ ಪಟ್ಟು!&lt;/p&gt;&lt;h2&gt;ಆರೆಸ್ಸೆಸ್ ಸಂಘ ಪರಿವಾರದ ಕೃತ್ಯ&lt;/h2&gt;&lt;p&gt;ಬೆಂಗಳೂರಿನಿಂದ ದೆಹಲಿ-ಮುಂಬೈನಿಂದ ಪಾಟ್ನಾವರೆಗೆ ದೇಶವನ್ನೇ ವ್ಯಾಪಿಸಿದ ಇತ್ತೀಚಿನ ಯುವಜನರ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದು ಯುವತಿಯರು. ಇದನ್ನು ಸಹಿಸಿಕೊಳ್ಳದ ಆರ್ ಎಸ್ ಎಸ್ ಸಂಘ ಪರಿವಾರದವರು ಈ ರೀತಿಯ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;h3&gt;ಮಹಿಳೆಯರ ರಾಜಕೀಯ ನಾಯಕತ್ವದಿಂದ ಆರೆಸ್ಸೆಸ್&zwnj;ಗೆ ಅಸಹನೀಯ&lt;/h3&gt;&lt;p&gt;ಮಹಿಳೆಯರನ್ನು ಕೇವಲ ಸಂಸ್ಕೃತಿಯ ಸಂಕೇತಗಳಾಗಿ, ಕುಟುಂಬದ ಗೌರವದ ಹೊರೆ ಹೊರುವವರಾಗಿ, ಪುರುಷಾಧಿಪತ್ಯದ ಆದೇಶ ಪಾಲಿಸುವ ಕಾಲಾಳುಗಳಾಗಿ ಮಾತ್ರ ನೋಡಲು ಬಯಸುವ ಸಂಘ ಪರಿವಾರದ ಸೈದ್ಧಾಂತಿಕ ಯೋಜನೆಗೆ ಮಹಿಳೆಯರು ರಾಜಕೀಯ ನಾಯಕತ್ವವನ್ನು ವಹಿಸುವ ಈ ದೃಶ್ಯವೇ ಅವರಿಗೆ ಅಸಹನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ದೆಹಲಿ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ, ಜಾರ್ಖಂಡ್ ಹೋರಾಟಕ್ಕೆ ಮೌನವೇಕೆ? ಕಾಂಗ್ರೆಸ್&zwnj;ನ ಡಬಲ್ ಸ್ಟ್ಯಾಂಡರ್ಡ್&zwnj;ಗೆ ಬಿಜೆಪಿ ಕಿಡಿ&lt;/p&gt;&lt;p&gt;&lt;strong&gt;ನೇಹಾ ಮೇಲೆ ದಾಳಿ ನಡೆಸಿದವರನ್ನ ಬಂಧಿಸಿ&lt;/strong&gt;&lt;/p&gt;&lt;p&gt;ಜಾರ್ಖಂಡನಲ್ಲಿ ನೇಹಾ ಮತ್ತು ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆಸಿದ ದಾಳಿಕೊರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಗುಳ್ಳೆದಹಟ್ಟಿ ಸಂತೋಷ್, ಹುಲಿಕಟ್ಟಿ ಮೈಲಪ್ಪ, ಬಾಗಳಿ ರೇಣುಕಮ್ಮ ಮೊಮ್ಮದ್ ರಫೀಕ್, ನಾರಾಯಣಪುರ ಮಂಗಳಕ್ಕ, ರೂಪ, ವಿದ್ಯರ್ಥಿ ಸಂಘಟನೆ ಮುಖಂಡರಾದ ವಿನಯ್ ಕುಮಾರ್, ಮೋಹನ್, ಕಲೀಮ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagar-aisa-protest-condemning-the-attack-on-activist-neha-bora-in-jharkhand/articleshow-1c1cvko"/>
        </item>
        <item>
            <title><![CDATA[ಕೊಪ್ಪಳ ನೆಲದಲ್ಲಿ ಅಡಗಿದ್ದ ವಿಜಯನಗರ, ಕೆಳದಿ ಅರಸರ ಕಾಲದ ಅಪರೂಪದ ಲಿಂಗಮುದ್ರೆ ಕಲ್ಲು ಪತ್ತೆ, ಏನಿದರ ವಿಶೇಷತೆ?]]></title>
            <link>https://kannada.asianetnews.com/karnataka-districts/rare-vijayanagara-era-lingamudra-boundary-stone-discovered-in-kanakagiri-koppal-gdp/articleshow-24mk1yu</link>
            <guid isPermaLink="true">https://kannada.asianetnews.com/karnataka-districts/rare-vijayanagara-era-lingamudra-boundary-stone-discovered-in-kanakagiri-koppal-gdp/articleshow-24mk1yu</guid>
            <pubDate>Wed, 12 Aug 2026 10:48:40 +0530</pubDate>
            <description><![CDATA[ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ದೇವಲಾಪುರದಲ್ಲಿ, ವಿಜಯನಗರ ಮತ್ತು ಕೆಳದಿ ಅರಸರ ಕಾಲದ ಅಪರೂಪದ 'ಲಿಂಗಮುದ್ರೆ ಕಲ್ಲು' ಪತ್ತೆಯಾಗಿದೆ. ಭೂಮಿಯ ಗಡಿ ಗುರುತಿಸಲು ಬಳಸುತ್ತಿದ್ದ ಈ ಕಲ್ಲಿನ ಶೋಧನೆಯು, ಈ ಪ್ರದೇಶದಲ್ಲಿ ಮತ್ತಷ್ಟು ಐತಿಹಾಸಿಕ ಕುರುಹುಗಳು ಸಿಗುವ ಸಾಧ್ಯತೆಯನ್ನು ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzt6an9j9tqphknmb6vb191n,imgname-lingamudra-boundary-stone-in-koppal-1786511709489.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ:&lt;/strong&gt; ಕನಕಗಿರಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ವಿಜಯನಗರ ಹಾಗೂ ಕೆಳದಿ ಅರಸರ ಆಳ್ವಿಕೆಯ ಕಾಲಕ್ಕೆ ಸೇರಿದ, ಇದುವರೆಗೂ ಎಲ್ಲೂ ಅಪ್ರಕಟಿತವಾಗಿದ್ದ ಅಪರೂಪದ 'ಲಿಂಗಮುದ್ರೆ ಕಲ್ಲು' ಒಂದನ್ನು ಸಂಶೋಧಕ ಡಾ. ಯಮನೂರ ನಾಯಕ ವಡಕಿ ಪತ್ತೆ ಹಚ್ಚಿದ್ದಾರೆ.&lt;/p&gt;&lt;h2&gt;&lt;strong&gt;ಭೂಮಿಯ ಗಡಿ ಗುರುತಿನ ಲಿಂಗಮುದ್ರೆ&lt;/strong&gt;&lt;/h2&gt;&lt;p&gt;ದೇವಲಾಪುರ ಗ್ರಾಮದ ನಿವಾಸಿ ನಾಗಪ್ಪ ತಳವಾರ ಅವರ ಮನೆಯ ಮುಂಭಾಗದಲ್ಲಿರುವ ಗುಂಡು ಕಲ್ಲಿನ ಮೇಲೆ ಈ ಲಿಂಗಮುದ್ರೆ ಕೆತ್ತನೆಯಾಗಿದೆ. ಪುರಾತನ ಕಾಲದಲ್ಲಿ ದಾನವಾಗಿ ನೀಡಲಾಗುತ್ತಿದ್ದ ಜಮೀನಿನ ನಾಲ್ಕೂ ಮೂಲೆಗಳ ಗಡಿಯನ್ನು ಗುರುತಿಸಲು ಈ ರೀತಿಯ ಲಿಂಗಮುದ್ರೆ ಕಲ್ಲುಗಳನ್ನು ನೆಡುವುದು ವಿಜಯನಗರ ಮತ್ತು ಕೆಳದಿ ಅರಸರ ಕಾಲದ ಸಂಪ್ರದಾಯವಾಗಿತ್ತು.&lt;/p&gt;&lt;h2&gt;ಕಲ್ಲಿನಲ್ಲಿರುವ ಪ್ರಮುಖ ಚಿಹ್ನೆಗಳು:&lt;/h2&gt;&lt;p&gt;&lt;strong&gt;ಶಿವಲಿಂಗ:&lt;/strong&gt; ಧಾರ್ಮಿಕ ಹಾಗೂ ರಾಜಮುದ್ರೆಯ ಸಂಕೇತ.&lt;/p&gt;&lt;p&gt;&lt;strong&gt;ಸೂರ್ಯ ಮತ್ತು ಚಂದ್ರ:&lt;/strong&gt; 'ಸೂರ್ಯ-ಚಂದ್ರರು ಇರುವವರೆಗೆ ಈ ದಾನ ಚಿರಸ್ಥಾಯಿಯಾಗಿರಲಿ' ಎಂಬ ಆಶಯವನ್ನು ಸೂಚಿಸುವ ಸಾಂಪ್ರದಾಯಿಕ ಸಂಕೇತಗಳು ಈ ಶಾಸನದಲ್ಲಿ ಬರೆಯಲಾಗಿದೆ.&lt;/p&gt;&lt;h2&gt;ಮತ್ತಷ್ಟು ಸಂಶೋಧನೆಗೆ ಅವಕಾಶ&lt;/h2&gt;&lt;p&gt;ಸಾಮಾನ್ಯವಾಗಿ ದಾನ ನೀಡಿದ ಭೂಮಿಯ ನಾಲ್ಕೂ ದಿಕ್ಕುಗಳಲ್ಲಿ ಇಂತಹ ಕಲ್ಲುಗಳನ್ನು ಸ್ಥಾಪಿಸಲಾಗುತ್ತಿತ್ತು. ಇದೀಗ ದೇವಲಾಪುರದಲ್ಲಿ ಒಂದು ಕಲ್ಲು ಪತ್ತೆಯಾಗಿದ್ದು, ಉಳಿದ ಮೂರು ದಿಕ್ಕುಗಳಲ್ಲೂ ಇಂತಹ ಕಲ್ಲುಗಳು ಇರುವ ಸಾಧ್ಯತೆಯಿದೆ. ಇದುವರೆಗಿನ ಯಾವುದೇ ಇತಿಹಾಸ ಸಂಶೋಧನೆಗಳಲ್ಲೂ ಒಂದೇ ಸ್ಥಳದ ನಾಲ್ಕೂ ದಿಕ್ಕುಗಳ ಲಿಂಗಮುದ್ರೆ ಕಲ್ಲುಗಳು ಸಂಪೂರ್ಣವಾಗಿ ದೊರೆತಿಲ್ಲ. ಆದರೆ, ದೇವಲಾಪುರದಲ್ಲಿ ವ್ಯವಸ್ಥಿತ ಶೋಧ ನಡೆಸಿದರೆ ಕನಿಷ್ಠ ಒಂದೆರಡು ಕಲ್ಲುಗಳಾದರೂ ಸಿಗುವ ಸಾಧ್ಯತೆಯಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಕಲ್ಲಿನ ಮೇಲೆ ಸೂರ್ಯ ಹಾಗೂ ಚಂದ್ರನ ಕೆತ್ತನೆ ಇರುವುದರಿಂದ, ಈ ಪ್ರದೇಶದ ಸುತ್ತಮುತ್ತ ಇನ್ನಷ್ಟು ಪ್ರಾಚೀನ ಶಾಸನಗಳು ಹಾಗೂ ವೀರಗಲ್ಲುಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಡಾ. ಯಮನೂರಪ್ಪ ವಡಕಿ ತಿಳಿಸಿದ್ದಾರೆ.&lt;/p&gt;&lt;h2&gt;ಏನಿದು ಲಿಂಗಮುದ್ರೆ ಕಲ್ಲು:&lt;/h2&gt;&lt;p&gt;ಲಿಂಗಮುದ್ರೆ ಕಲ್ಲು ಎಂದರೆ ಪ್ರಾಚೀನ ಹಾಗೂ ಮಧ್ಯಕಾಲೀನ ಕರ್ನಾಟಕದಲ್ಲಿ ಭೂಮಿಯ ಗಡಿಗಳನ್ನು, ದಾನ-ಧರ್ಮಗಳನ್ನು ಅಥವಾ ಜಮೀನಿನ ಹದ್ದುಗಳನ್ನು ಗುರುತಿಸಲು ಬಳಸುತ್ತಿದ್ದ ವಿಶೇಷ ಕೆತ್ತನೆಯುಳ್ಳ ಕಲ್ಲು. ಇವುಗಳ ಮೇಲೆ ಸಾಮಾನ್ಯವಾಗಿ ಶಿವಲಿಂಗ ಅಥವಾ ನಂದಿಯ ಚಿತ್ರದೊಂದಿಗೆ ಕೆಲವು ಧರ್ಮದ ಚಿಹ್ನೆಗಳು ಅಥವಾ ಶಾಸನಗಳು ಇರುತ್ತವೆ.&lt;/p&gt;&lt;p&gt;ಕರ್ನಾಟಕದ ಕೊಪ್ಪಳ (ಕನಕಗಿರಿ), ಶಿವಮೊಗ್ಗ, ಉಡುಪಿ (ಬಸ್ರೂರು) ಮುಂತಾದ ಜಿಲ್ಲೆಗಳಲ್ಲಿ ವಿಜಯನಗರ ಹಾಗೂ ಕೆಳದಿ ಕಾಲದ ಹಲವು ಲಿಂಗಮುದ್ರೆ ಕಲ್ಲುಗಳು ಇತ್ತೀಚಿನ ದಿನಗಳಲ್ಲಿ ಸಂಶೋಧಕರಿಗೆ ಸಿಕ್ಕಿವೆ.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-vijayanagara-era-lingamudra-boundary-stone-discovered-in-kanakagiri-koppal-gdp/articleshow-24mk1yu"/>
        </item>
        <item>
            <title><![CDATA[ಹಂಪಿಯ ನಿಷೇಧಿತ, ಬಫರ್ ವಲಯದಲ್ಲಿ ಅಕ್ರಮ ಹೋಮ್‌ಸ್ಟೇ: 53ಕ್ಕೂ ಹೆಚ್ಚು ಅಧಿಕಾರಿಗಳಿಗೆ ಉಪಲೋಕಾಯುಕ್ತರ ಬಿಗ್ ಶಾಕ್!]]></title>
            <link>https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u</link>
            <guid isPermaLink="true">https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u</guid>
            <pubDate>Fri, 07 Aug 2026 10:07:42 +0530</pubDate>
            <description><![CDATA[&lt;p&gt;ಯುನೆಸ್ಕೋ ಪಾರಂಪರಿಕ ತಾಣವಾದ ಹಂಪಿಯ ಸಂರಕ್ಷಿತ ವಲಯಗಳಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು 250ಕ್ಕೂ ಹೆಚ್ಚು ಅನಧಿಕೃತ ಹೋಮ್&zwnj;ಸ್ಟೇಗಳ ವಿರುದ್ಧ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd81zbyhbw7g9mw5d1022jn,imgname-hampi-1786077314430.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಆ.7): &lt;/strong&gt;ಯುನೆಸ್ಕೋ (UNESCO) ಜಾಗತಿಕ ಪಾರಂಪರಿಕ ತಾಣವಾದ ವಿಜಯನಗರ ಜಿಲ್ಲೆಯ ಹಂಪಿಯ ಸಂರಕ್ಷಿತ, ಬಫರ್ ಹಾಗೂ ಪರಿಧಿ ವಲಯಗಳಲ್ಲಿ (Core, Buffer and Peripheral Zones) ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ 250ಕ್ಕೂ ಹೆಚ್ಚು ಅನಧಿಕೃತ ಹೋಮ್&zwnj;ಸ್ಟೇಗಳ ವಿರುದ್ಧ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ (HWHAMA) ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ನಿಷೇಧಿತ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಡೆಸಲು ಅನುಮತಿ ನೀಡಿರುವುದನ್ನು ಉಪಲೋಕಾಯುಕ್ತರು ತಮ್ಮ ದೂರಿನಲ್ಲಿ ಗಂಭೀರವಾಗಿ ಪರಿಗಣಿಸಿದ್ದಾರೆ.&lt;/p&gt;&lt;p&gt;ನಿಯಮ ಉಲ್ಲಂಘನೆ ಹಾಗೂ ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲವಾಗಿರುವ ಕಾರಣಕ್ಕಾಗಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಉಪಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ದು, ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.&lt;/p&gt;&lt;h2&gt;&lt;strong&gt;53ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ತನಿಖೆಯ ಬಿಸಿ&lt;/strong&gt;&lt;/h2&gt;&lt;p&gt;ಈ ಕುರಿತು ಮಾತನಾಡಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಗ್ರಾಮ ಪಂಚಾಯಿತಿ ಮಟ್ಟದ ಸಿಬ್ಬಂದಿಯಿಂದ ಹಿಡಿದು ಜೆಸ್ಕಾಂ (GESCOM), ಕಂದಾಯ, ಪ್ರವಾಸೋದ್ಯಮ ಮತ್ತು 'ಹವಾಮಾ' (HWHAMA) ಸೇರಿದಂತೆ ವಿವಿಧ ಇಲಾಖೆಗಳ 53ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳ ವಿರುದ್ಧ ಈ ದೂರು ಒಳಗೊಂಡಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&quot;ಹಂಪಿಯ ಅತ್ಯಂತ ಸಂರಕ್ಷಿತ (Core) ವಲಯದಲ್ಲಿ ಯಾವುದೇ ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟ ನಿರ್ದೇಶನ ನೀಡಿದೆ. ಆದರೂ, ನನ್ನ ಭೇಟಿಯ ಸಂದರ್ಭದಲ್ಲಿ ಇಂತಹ ಹಲವು ಅಕ್ರಮ ಕಟ್ಟಡಗಳು ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ,&quot; ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ನೀಡಲಾದ ಅನುಮತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹವಾಮಾ ವ್ಯಾಪ್ತಿಯಲ್ಲಿ ಬರೋಬ್ಬರಿ 500ಕ್ಕೂ ಹೆಚ್ಚು ಅಕ್ರಮ ಹೋಮ್&zwnj;ಸ್ಟೇಗಳು, ರೆಸಾರ್ಟ್&zwnj;ಗಳು, ಹೋಟೆಲ್&zwnj;ಗಳು, ಲಾಡ್ಜ್&zwnj;ಗಳು ಮತ್ತು ಅಂಗಡಿಗಳು ಕಾರ್ಯಾಚರಿಸುತ್ತಿರಬಹುದು ಎಂದು ಅವರು ಅಂದಾಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಯುನೆಸ್ಕೋ ಮಾರ್ಗಸೂಚಿಗಳ ಉಲ್ಲಂಘನೆ&lt;/strong&gt;&lt;/h2&gt;&lt;p&gt;ಹಂಪಿಯ ಸಾಂಸ್ಕೃತಿಕ ಮತ್ತು ಪುರಾತತ್ತ್ವ ಪ್ರಾಮುಖ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಅದರ ಸಂರಕ್ಷಿತ ಮತ್ತು ಬಫರ್ ವಲಯಗಳಲ್ಲಿ ಅನಧಿಕೃತ ವಾಣಿಜ್ಯ ನಿರ್ಮಾಣಗಳು, ರೆಸಾರ್ಟ್&zwnj;ಗಳು ಮತ್ತು ಹೋಮ್&zwnj;ಸ್ಟೇಗಳನ್ನು ಯುನೆಸ್ಕೋ ಮಾರ್ಗಸೂಚಿಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ಅಕ್ರಮಗಳನ್ನು ತಡೆಯಲು ವಿಫಲರಾಗಿದ್ದಷ್ಟೇ ಅಲ್ಲದೆ, ಕೆಲ ಪ್ರಕರಣಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅನುಮತಿಯನ್ನೂ ನೀಡಿದ್ದಾರೆ ಎಂದು ಉಪಲೋಕಾಯುಕ್ತರು ಚಾಟಿ ಬೀಸಿದ್ದಾರೆ.&lt;/p&gt;&lt;p&gt;ಹಂಪಿಯಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ ಅನಧಿಕೃತ ಪ್ರವಾಸೋದ್ಯಮ ಸಂಸ್ಥೆಗಳ ಕುರಿತು ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಜುಲೈ 25 ರಂದು ಹಂಪಿಗೆ ಅಧಿಕೃತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ರಕ್ಷಿತ ಪ್ರದೇಶದಲ್ಲಿ ಅಣಬೆಯಂತೆ ಬೆಳೆದು ನಿಂತಿರುವ ಅನಧಿಕೃತ ಹೋಮ್&zwnj;ಸ್ಟೇಗಳ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.&lt;/p&gt;&lt;p&gt;ಪರಿಶೀಲನೆಯ ವೇಳೆ, ಪಂಚಾಯತ್ ಅಥವಾ ಹವಾಮಾದಿಂದ ಕಡ್ಡಾಯ ಅನುಮೋದನೆ ಅಥವಾ ಪರವಾನಗಿ ಪಡೆಯದೆ ಕನಿಷ್ಠ 250 ಅಕ್ರಮ ಹೋಮ್&zwnj;ಸ್ಟೇಗಳು ಕಾರ್ಯಾಚರಿಸುತ್ತಿವೆ ಎಂದು ಅಧಿಕಾರಿಗಳು ಅವರ ಗಮನಕ್ಕೆ ತಂದಿದ್ದರು. ಇದರಿಂದ ಕೆರಳಿದ ಉಪಲೋಕಾಯುಕ್ತರು, ಶಾಸನಬದ್ಧ ಅನುಮತಿಗಳೇ ಇಲ್ಲದೆ ಇಷ್ಟೊಂದು ಬೃಹತ್ ಸಂಖ್ಯೆಯ ಉದ್ಯಮಗಳು ಕಾರ್ಯಾಚರಿಸಲು ಹೇಗೆ ಸಾಧ್ಯವಾಯಿತು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.&lt;/p&gt;&lt;h2&gt;&lt;strong&gt;ಗ್ರಾಮ ಪಂಚಾಯಿತಿಗಳ ವಿರುದ್ಧ ಆಕ್ರೋಶ&lt;/strong&gt;&lt;/h2&gt;&lt;p&gt;ಈ ವಿಚಾರವಾಗಿ ಪ್ರತಿಕ್ರಿಯಿಸಿದ 'ಹವಾಮಾ'ದ ಮಾಜಿ ಹಿರಿಯ ಅಧಿಕಾರಿಯೊಬ್ಬರು, &quot;ಹೋಮ್&zwnj;ಸ್ಟೇ ಅಥವಾ ಇತರ ವಾಣಿಜ್ಯ ಮಳಿಗೆಗಳಿಗೆ ಅನುಮೋದನೆ ನೀಡುವ ಯಾವುದೇ ಅಧಿಕಾರ ನಮಗಿಲ್ಲ. ವಿಜಯನಗರ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದಂತೆ ಹೋಮ್&zwnj;ಸ್ಟೇಗಳನ್ನು ಸ್ಥಾಪಿಸಲು ಅನುಮತಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿತ್ತು. ಈ ಅಕ್ರಮ ಹೋಮ್&zwnj;ಸ್ಟೇಗಳ ಹಾವಳಿ ವ್ಯಾಪಕವಾಗಿದ್ದು, ನಾವು ಈ ಹಿಂದೆ ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್&zwnj;ಗಳನ್ನು ನೀಡಿದ್ದೆವು,&quot; ಎಂದು ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u"/>
        </item>
        <item>
            <title><![CDATA[ಕನ್ಯಾಕುಮಾರಿ ಟು ಕಾಶ್ಮೀರ: ರಾಹುಲ್ ಗಾಂಧಿ ಪ್ರಧಾನಿ ಆಗಲೆಂದು ಆಂಧ್ರದ ವಕೀಲರ ಪಾದಯಾತ್ರೆ, ಕೂಡ್ಲಿಗಿಯಲ್ಲಿ ಶಾಸಕ ಶ್ರೀನಿವಾಸ ಸಾಥ್]]></title>
            <link>https://kannada.asianetnews.com/gallery/politics/ap-lawyer-on-kanyakumari-kashmir-padayatra-for-rahul-gandhi-next-pm-reaches-kudligi-at-vijayangar-rav-3flof93</link>
            <guid isPermaLink="true">https://kannada.asianetnews.com/gallery/politics/ap-lawyer-on-kanyakumari-kashmir-padayatra-for-rahul-gandhi-next-pm-reaches-kudligi-at-vijayangar-rav-3flof93</guid>
            <pubDate>Thu, 13 Aug 2026 11:38:03 +0530</pubDate>
            <description><![CDATA[&lt;p&gt;ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕೂಡ್ಲಿಗಿಗೆ ಆಗಮಿಸಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzwvb7e80jp44bpz8zve5dfa,imgname-----------------------2026-08-13t113039.580-1786600857032.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕೂಡ್ಲಿಗಿಗೆ ಆಗಮಿಸಿತು.&lt;/p&gt;&lt;img&gt;&lt;p&gt;ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕೂಡ್ಲಿಗಿಗೆ ಆಗಮಿಸಿದರು.&lt;/p&gt;&lt;img&gt;&lt;p&gt;ಕನ್ಯಾಕುಮಾರಿಯಿಂದ ಕಾಶ್ಮೀರ(Kanyakumari to kashmir padayatre)ದವರೆಗೆ ಪಾದಯಾತ್ರೆ ಸಂಕಲ್ಪ ಮಾಡಿರುವ ಕಾಟೂರಿ ವೆಂಕಟೇಶ್ವರಲು, 'ರಾಹುಲ್ ಗಾಂಧಿಗಾಗಿ ಭಾರತ ಒಂದಾಗಬೇಕು&rsquo; ಎಂಬ ಸಂದೇಶದೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮಕ್ಕೆ ಪಾದಯಾತ್ರಿಗಳ ತಂಡ ಆಗಮಿಸಿತು.&lt;/p&gt;&lt;img&gt;&lt;p&gt;ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ ಅವರು ಪಾದಯಾತ್ರಿಗಳ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು. ಈ ವೇಳೆ &lsquo;ದೇಶಕ್ಕಾಗಿ ರಾಹುಲ್ ಗಾಂಧಿ ಬೇಕು&rsquo; ಎಂದು ಘೋಷಣೆ ಕೂಗುತ್ತಾ ಪಾದಯಾತ್ರಿಕರೊಂದಿಗೆ ಹೆಜ್ಜೆ ಹಾಕುವ ಮೂಲಕ ಶಾಸಕರು ಬೆಂಬಲ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ದೇಶದ ಏಕತೆ, ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರುತ್ತಿರುವ ಈ ಬೃಹತ್ ಪಾದಯಾತ್ರೆಯಲ್ಲಿ ಶಾಸಕ ಎನ್.ಟಿ. ಶ್ರೀನಿವಾಸ ತಂಡವನ್ನು ಬರಮಾಡಿಕೊಂಡರಷ್ಟೇ ಅಲ್ಲದೆ ತಂಡದೊಂದಿಗೆ ಸುಮಾರು ಐದು ಕಿಮೀಟರ್ ವರೆಗೂ ಪಾದಯಾತ್ರಿಕರೊಂದಿಗೆ ನಡೆಯುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>vijayanagara</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/ap-lawyer-on-kanyakumari-kashmir-padayatra-for-rahul-gandhi-next-pm-reaches-kudligi-at-vijayangar-rav-3flof93"/>
        </item>
        <item>
            <title><![CDATA[Vijayanagara: ಗಂಡ-ಹೆಂಡತಿ ಕೇಸ್, ಹಗರಿಬೊಮ್ಮನಹಳ್ಳಿ ಲಾಕಪ್‌ ಡೆತ್ ಪ್ರಕರಣದಲ್ಲಿ ಇಬ್ಬರು ಪೊಲೀಸರು ಸಿಐಡಿ ವಶಕ್ಕೆ]]></title>
            <link>https://kannada.asianetnews.com/karnataka-districts/vijayanagara-two-police-personnel-taken-into-cid-custody-in-connection-with-hagaribommanahalli-lock-up-death-case-sns/articleshow-77fc52b</link>
            <guid isPermaLink="true">https://kannada.asianetnews.com/karnataka-districts/vijayanagara-two-police-personnel-taken-into-cid-custody-in-connection-with-hagaribommanahalli-lock-up-death-case-sns/articleshow-77fc52b</guid>
            <pubDate>Thu, 13 Aug 2026 12:15:59 +0530</pubDate>
            <description><![CDATA[&lt;p&gt;ಪೊಲೀಸರ ಹಲ್ಲೆಯಿಂದ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ತನ್ನ ಗಂಡನ ಸಾವಾಗಿದೆ ಎಂದು ಮೃತನ ಪತ್ನಿ ಹಾಗೂ ಕುಟುಂಸ್ಥರು ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಡ ಇದ್ದ ಹಿನ್ನೆಲೆ ಕಳೆದ ವಾರ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzwxr0xa7sayv2m1gs7b27qe,imgname-hagaribommanahalli-police-station-1786603373482.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ: &lt;/strong&gt;ಗಂಡ-ಹೆಂಡತಿ ಕೇಸ್, ಹಗರಿಬೊಮ್ಮನಹಳ್ಳಿ ಕಟ್ಟಡ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಿಐಡಿ ಎಂಟ್ರಿ ಕೊಟ್ಟಿದೆ. ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗಂಡ ಹೆಂಡತಿ ನಡುವಿನ ಜಗಳದ ವಿಚಾರದಲ್ಲಿ ಆರಂಭವಾದ ಪ್ರಕರಣ ಇದೀಗ ಪೊಲೀಸರಿಗೆ ಕಂಟಕವಾಗಿದೆ.&lt;/p&gt;&lt;p&gt;ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಕಟ್ಟಡ ಕಾರ್ಮಿಕನ ಸಾವನ್ನು ಲಾಕಪ್ ಡೆತ್ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಹಿನ್ನೆಲೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಇದೇ ತಿಂಗಳ ಆರಂಭದಲ್ಲಿ ಅಂದರೆ ಆಗಸ್ಟ್ ಒಂದರಂದು ಪತ್ನಿ ಕಟ್ಟಡ ಕಾರ್ಮಿಕನಾಗಿದ್ದ ಪತಿಯ ಮೇಲೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದರು. ಆದರೆ ಪೊಲೀಸ್ ಠಾಣೆಗೆ ಕರೆದುಕೊಂಡ ಬಳಿಕ 38 ವರ್ಷದ ಕಟ್ಟಡ ಕಾರ್ಮಿಕ ಖಲೀಲ್ ಸಾವನ್ನಪ್ಪಿದ್ದ. ಈ ವೇಳೆ ಪೊಲೀಸರು ಮಾತ್ರ, ಆತನಿಗೆ ಠಾಣೆಯಲ್ಲಿ ಫಿಟ್ಸ್ ಬಂದು ಸಾವನ್ನಪ್ಪಿದ್ದ ಎಂದು ವಾದ ಮಾಡಿದ್ದರು.&lt;/p&gt;&lt;p&gt;ಇದರ ಬೆನ್ನಲ್ಲೇ ಪೊಲೀಸರ ಹಲ್ಲೆಯಿಂದ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ತನ್ನ ಗಂಡನ ಸಾವಾಗಿದೆ ಎಂದು ಮೃತನ ಪತ್ನಿ ಹಾಗೂ ಕುಟುಂಸ್ಥರು ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಡ ಇದ್ದ ಹಿನ್ನೆಲೆ ಕಳೆದ ವಾರ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.&lt;/p&gt;&lt;p&gt;ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಮೃತ ಖಲೀಲ್ ಬೆನ್ನು ಹಾಗೂ ತಲೆಗೆ ಏಟುಗಳು ಬಿದ್ದಿರುವುದು ಗೊತ್ತಾಗಿತ್ತು. ಅಲ್ಲದೇ ಕಿವಿ ಹಾಗೂ ಮೂಗಿನಲ್ಲಿಯೂ ತೀವ್ರ ರಸ್ತಸ್ರಾವ ಹಿನ್ನೆಲೆ ಹಲ್ಲೆಯಾಗಿರೋದು ಮೇಲ್ನೋಟಕ್ಕೆ ಧೃಡವಾಗಿತ್ತು. ಇದರೊಂದಿಗೆ ಅಂದು ಫಿಟ್ಸ್ ಬಂದು ಸಾವಾಗಿದೆ ಎಂದಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ವೇಳೆ ಸತ್ಯ ಬಯಲಾಗಿತ್ತು. ಸದ್ಯ ಮೃತ ಖಲೀಲ್ ಪತ್ನಿ ಶೈನಾಜ್ ದೂರಿನ ಮೇಲೆ ಹೆಡ್ ಕಾನ್ಸ್&zwnj;ಟೇಬಲ್ ರಾಘವೇಂದ್ರ ಹಾಗೂ ಕಾನ್ಸ್&zwnj;ಟೇಬಲ್ ವೆಂಕಟೇಶ್ ಮೇಲೆ ಎಫ್ ಐಆರ್ ದಾಖಲಾಗಿದ್ದು, ಇದೀಗ ಸಿಐಡಿ ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಇಬ್ಬರು ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ತಮ್ಮ ಪತಿಯ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತನ ಪತ್ನಿ ಶೈನಾಜ್ ಮನವಿ ಮಾಡಿದ್ದು, ನಮ್ಮ ಮನೆಯವರು ಕುಡಿದು ಬಂದಿದ್ದರು. ಆದ್ದರಿಂದ ನ್ಯಾಯ ಕೊಡಿಸಿ ಎಂದು ಗಂಡನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದೆ. ಬೆಳಗ್ಗೆ ಕುಟುಂಬಸ್ಥರ ಕರೆದುಕೊಂಡು ಬಂದು ಮಾತುಕತೆ ಬಗೆಹರಿಸುಕೊಳ್ಳುವ ಬಗ್ಗೆ ಹೇಳಿದ್ದೆ. ಆದರೆ ಠಾಣೆಯಲ್ಲಿ ಇರಿಸಿಕೊಳ್ಳಲು ಆಗೋದಿಲ್ಲ ಎಂದು ಹೇಳಿದ್ದರು. ಆದರೆ ನಾನೇ ಅವರಿಗೆ ಮನವಿ ಮಾಡಿ ಬೆಳಗ್ಗೆವರೆಗೂ ಇರಿಸಿಕೊಳ್ಳಲು ಮನವಿ ಮಾಡಿದ್ದೆ. ಕೆಲ ಸಮಯದ ಬಳಿಕ ಗಂಡ ಕೂಗಿಕೊಳ್ಳುವ ಸದ್ದು ಕೇಳಿ ಹೋಗಿದ್ದೆ. ಆ ವೇಳೆಗಾಗಲೇ ಗಂಡ ಸಾವನ್ನಪ್ಪಿದ್ದ, ಮೂಗು-ಕಿವಿಯಲ್ಲಿ ರಕ್ತ ಬಂದಿತ್ತು. ಕೂಡಲೇ ಪೊಲೀಸರು ಟಾಟಾ ಏಸ್ ವಾಹನ ಮೂಲಕ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು, ಒಂದು ಅಂಬುಲೆನ್ಸ್ ಕೂಡ ಕರೆಸಲಿಲ್ಲ. ಕಷ್ಟ ಇದೇ ಅಂತ ಹೋದರೆ ಪೊಲೀಸರಿಗೆ ಹೀಗೆ ಮಾಡಿದ್ರು, ಆದ್ದರಿಂದ ನನ್ನ ಗಂಡನ ಸಾವಿಗೆ ನ್ಯಾಯ ಬೇಕಿದೆ ಎಂದು ಹೇಳಿದ್ದಾರೆ. (ವರದಿ: ನರಸಿಂಹಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯನಗರ)&lt;/p&gt;]]></content:encoded>
            <category>vijayanagara</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/vijayanagara-two-police-personnel-taken-into-cid-custody-in-connection-with-hagaribommanahalli-lock-up-death-case-sns/articleshow-77fc52b"/>
        </item>
        <item>
            <title><![CDATA[ಬರಗಾಲದಿಂದ ಬೆಳೆಯಿಲ್ಲದೆ ರೈತರಿಗೆ ಸಂಕಟ; ಊಟಕ್ಕೊಂದಿಷ್ಟು ಜೋಳ ಬೆಳೆದರೆ ಕಾಡುಹಂದಿಗಳ ಕಾಟ!]]></title>
            <link>https://kannada.asianetnews.com/gallery/karnataka-districts/vijayanagara-kudligi-wild-boar-attack-jowar-crop-destruction-farmer-drought-9bthn6u</link>
            <guid isPermaLink="true">https://kannada.asianetnews.com/gallery/karnataka-districts/vijayanagara-kudligi-wild-boar-attack-jowar-crop-destruction-farmer-drought-9bthn6u</guid>
            <pubDate>Mon, 10 Aug 2026 11:51:55 +0530</pubDate>
            <description><![CDATA[ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ, ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ರೈತನ ಜೋಳದ ಬೆಳೆಯನ್ನು ಕಾಡುಹಂದಿಗಳ ಹಿಂಡು ರಾತ್ರೋರಾತ್ರಿ ನಾಶಪಡಿಸಿದೆ. ಈ ಘಟನೆಯಿಂದಾಗಿ ರೈತ ವೀರೇಶ್&zwnj;ಗೆ ಅಪಾರ ನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzn4z739thpz3s25dwg42448,imgname-wild-boar-attack-jowar-crop-1786342513769.jpg" type="image/jpeg" height="390" width="690"/>
            <content:encoded><![CDATA[ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ, ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ರೈತನ ಜೋಳದ ಬೆಳೆಯನ್ನು ಕಾಡುಹಂದಿಗಳ ಹಿಂಡು ರಾತ್ರೋರಾತ್ರಿ ನಾಶಪಡಿಸಿದೆ. ಈ ಘಟನೆಯಿಂದಾಗಿ ರೈತ ವೀರೇಶ್&zwnj;ಗೆ ಅಪಾರ ನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.&lt;img&gt;&lt;p&gt;&lt;strong&gt;ವಿಜಯನಗರ (ಆ.10): ಈ&lt;/strong&gt;ಗಾಗಲೇ ಸಕಾಲಕ್ಕೆ ಮಳೆಯಾಗದೆ, ಭೀಕರ ಬರಗಾಲದಿಂದ ಕಂಗಾಲಾಗಿದ್ದ ವಿಜಯನಗರ ಜಿಲ್ಲೆಯ ರೈತರಿಗೆ ಇದೀಗ ಕಾಡು ಪ್ರಾಣಿಗಳ ಹಾವಳಿ ಗಾಯದ ಮೇಲೆ ಎಳೆ ಎಳೆದಂತಾಗಿದೆ. ಕೈಗೆ ಬಂದ ಪಸಲು ಮನೆಗೆ ತಲುಪುವಷ್ಟರಲ್ಲಿ ಕಾಡುಹಂದಿಗಳ ಹಿಂಡು ದಾಳಿ ನಡೆಸಿ ಬೆಳೆ ನಾಶಪಡಿಸುತ್ತಿದ್ದು, ರೈತರು ಕಣ್ಣೀರಿಡುವಂತಾಗಿದೆ.&lt;/p&gt;&lt;img&gt;&lt;p&gt;&lt;strong&gt;ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಾಡುಹಂದಿಗಳು:&lt;/strong&gt;&lt;/p&gt;&lt;p&gt;ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಿಂಬಳಗೇರಿ ಗ್ರಾಮದಲ್ಲಿ ಇಂತಹದೊಂದು ದಾರುಣ ಘಟನೆ ನಡೆದಿದೆ. ಗ್ರಾಮದ ರೈತ ವೀರೇಶ್ ಎಂಬುವವರು ತಮ್ಮ 2 ಎಕರೆ ಜಮೀನಿನಲ್ಲಿ ಸಾಲ-ಸೋಲ ಮಾಡಿ ಜೋಳದ ಬೆಳೆ ಬೆಳೆದಿದ್ದರು. ತೆನೆ ಬಿಟ್ಟು ಕೊಯ್ಲಿಗೆ ಬಂದಿದ್ದ ಬೆಳೆ ನೋಡಿ ರೈತ ಸಂತಸಗೊಂಡಿದ್ದ. ಆದರೆ, ಶನಿವಾರ ರಾತ್ರಿ ಹೊಲಕ್ಕೆ ನುಗ್ಗಿದ ಕಾಡುಹಂದಿಗಳ ಹಿಂಡು ಅರ್ಧ ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಜೋಳದ ಬೆಳೆಯನ್ನು ರಾತ್ರೋರಾತ್ರಿ ತಿಂದು ತುಳಿದು ಹಾಳುಮಾಡಿವೆ.&lt;/p&gt;&lt;img&gt;&lt;p&gt;&lt;strong&gt;ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ:&lt;/strong&gt;&lt;/p&gt;&lt;p&gt;ಮಳೆ ಇಲ್ಲದೆ ಕೊಳವೆ ಬಾವಿ ನೀರನ್ನು ನೆಚ್ಚಿಕೊಂಡು, ರಾತ್ರಿ-ಹಗಲೆನ್ನದೆ ಶ್ರಮಪಟ್ಟು ಬೆಳೆಸಿದ್ದ ಜೋಳದ ತೆನೆಗಳನ್ನು ಕಾಡುಹಂದಿಗಳು ನುಚ್ಚುನೂರು ಮಾಡಿವೆ. ಇದರಿಂದಾಗಿ ರೈತ ವೀರೇಶ್&zwnj;ಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. 'ಬರಗಾಲದಲ್ಲೂ ಕಷ್ಟಪಟ್ಟು ಬೆಳೆ ಬೆಳೆದಿದ್ದೆವು. ಇನ್ನೇನು ಬೆಳೆ ಮನೆಗೆ ಬರಬೇಕು ಅನ್ನುವಷ್ಟರಲ್ಲಿ ಕಾಡುಹಂದಿಗಳು ಎಲ್ಲವನ್ನೂ ನಾಶ ಮಾಡಿವೆ' ಎಂದು ಬಾಧಿತ ರೈತ ಕಣ್ಣೀರಿಟ್ಟಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅರಣ್ಯ ಇಲಾಖೆ ವಿರುದ್ಧ ಆಕ್ರೋಶ - ಪರಿಹಾರಕ್ಕೆ ಆಗ್ರಹ:&lt;/strong&gt;&lt;/p&gt;&lt;p&gt;ಕೂಡ್ಲಿಗಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಕಾಡುಹಂದಿ, ಕರಡಿ ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿಂಬಳಗೇರಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತ ವೀರೇಶ್&zwnj;ಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಮತ್ತು ರೈತ ಸಂಘಟನೆಗಳು ಆಗ್ರಹಿಸಿವೆ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/vijayanagara-kudligi-wild-boar-attack-jowar-crop-destruction-farmer-drought-9bthn6u"/>
        </item>
        <item>
            <title><![CDATA[ಸಿಂಗಟಾಲೂರು ಏತ ನೀರಾವರಿ: ಬರೋಬ್ಬರಿ 117 ಕೋಟಿ ವಿದ್ಯುತ್‌ ಬಿಲ್‌ ಬಾಕಿ!  ಜೆಸ್ಕಾಂ, ಹೆಸ್ಕಾಂನಿಂದ ಫೈನಲ್ ವಾರ್ನ್!]]></title>
            <link>https://kannada.asianetnews.com/karnataka-districts/singatalur-lift-irrigation-rs-117-crore-in-electricity-bills-outstanding-at-vijayanagar-rav/articleshow-bf99368</link>
            <guid isPermaLink="true">https://kannada.asianetnews.com/karnataka-districts/singatalur-lift-irrigation-rs-117-crore-in-electricity-bills-outstanding-at-vijayanagar-rav/articleshow-bf99368</guid>
            <pubDate>Wed, 05 Aug 2026 12:37:55 +0530</pubDate>
            <description><![CDATA[&lt;p&gt;ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯು ಬರೋಬರಿ ₹117 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಬಲದಂಡೆ ಭಾಗದಲ್ಲಿ ₹87 ಕೋಟಿ ಮತ್ತು ಎಡದಂಡೆ ಭಾಗದಲ್ಲಿ ₹29 ಕೋಟಿ ಬಾಕಿ ಇದ್ದು, ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಜೆಸ್ಕಾಂ ಮತ್ತು ಹೆಸ್ಕಾಂ ಅಂತಿಮ ಎಚ್ಚರಿಕೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz8bttyzx220a3at4s45t408,imgname-----------------------2026-08-05t123440.009-1785913502687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ಹೂವಿನಹಡಗಲಿ&lt;/strong&gt;: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ಮತ್ತು ಎಡದಂಡೆ ಭಾಗಗಳ ನೀರೆತ್ತುವ ಘಟಕಗಳಿಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಲಾಗಿದ್ದು, ಬರೋಬರಿ ₹117 ಕೋಟಿ ವಿದ್ಯುತ್&zwnj; ಬಿಲ್&zwnj; ಬಾಕಿ ಇದೆ.&lt;/p&gt;&lt;p&gt;ಬರದ ನಾಡಿನ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕೆರೆ ತುಂಬಿಸುವ ಯೋಜನೆ, ಮಾಲ್ವಿ ಜಲಾಶಯಕ್ಕೆ ನೀರೆತ್ತುವ ಘಟಕ, ಕೂಡ್ಲಿಗಿ ಕೆರೆ ತುಂಬಿಸುವ ಯೋಜನೆ, ಜತೆಗೆ ಎಡ ಮತ್ತು ಬಲ ದಂಡೆಯ ಭಾಗಗಳ ಕಾಲುವೆಗಳಿಗೆ ನೀರು ಹರಿಸುವ ಉದ್ದೇಶದಿಂದ ಎರಡೂ ಭಾಗಗಳ ಮೋಟಾರ್&zwnj; ಪಂಪ್&zwnj;ಸೆಟ್&zwnj;ಗಳಿಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಲಾಗಿದೆ. ಆಗಷ್ಟ್&zwnj;-2023ರಿಂದ ಏಪ್ರಿಲ್&zwnj;-2026ರ ವರೆಗೂ ವಿದ್ಯುತ್&zwnj; ಬಿಲ್&zwnj; ಬಾಕಿ ಇದೆ.&lt;/p&gt;&lt;p&gt;ಬಲದಂಡೆ ₹87 ಕೋಟಿ ಬಾಕಿ&lt;/p&gt;&lt;p&gt;ಯೋಜನೆಯ ಬಲದಂಡೆ ಭಾಗದಲ್ಲಿನ ಕಲಿಕೇರಿ ಘಟಕ ₹378407854, ತುರ್ಚಿಹಾಳು ಘಟಕ ₹127549932, ರಾಜವಾಳ ಘಟಕ ₹89425726, ಗೂಜನೂರು ಘಟಕ ₹70326328, ಶಾಕಾರ ಘಟಕ ₹14691067, ಮಾಗಳ ಘಟಕ ₹89640182, ಹುಗಲೂರು ಘಟಕ ₹8538984, ಮಾಲ್ವಿ ಘಟಕ ₹59356316, ಪಾಲಯ್ಯನಕೋಟೆ ಘಟಕ ₹11453052, ರಾಜವಾಳ ಘಟಕ ₹24935089 ಸೇರಿದಂತೆ ಒಟ್ಟು ₹874324530 ಬಾಕಿ ಇದೆ.&lt;/p&gt;&lt;p&gt;ಎಡದಂಡೆ ₹29 ಕೋಟಿ ಬಾಕಿ&lt;/p&gt;&lt;p&gt;ಯೋಜನೆಯ ಎಡದಂಡೆ ಭಾಗದಲ್ಲಿರುವ ಮುಂಡರಗಿ, ಗದಗ, ಕಲಿಕೇರಿ, ಹಿರೇವಡ್ಡಟ್ಟಿ, ವಿರೂಪಾಪುರ, ಮುಷ್ಠಿಕೊಪ್ಪ ಹಾಗೂ ಡಂಬಳ ನೀರೆತ್ತುವ ಘಟಕಗಳಿಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಿದ್ದು, ಒಟ್ಟು ₹296541277 ಕೋಟಿ ಸೇರಿದಂತೆ ಒಟ್ಟಾರೆ ₹1170865807 ವಿದ್ಯುತ್&zwnj; ಬಾಕಿ ಇದೆ. ಬಿಲ್&zwnj; ಪಾವತಿ ಮಾಡಲು ರಾಜ್ಯ ಸರ್ಕಾರ ಕರ್ನಾಟಕ ನೀರಾವರಿ ನಿಗಮ (ಕೆಎನ್&zwnj;ಎನ್&zwnj;ಎಲ್&zwnj;)ಕ್ಕೆ ಹಣ ಬಿಡುಗಡೆ ಮಾಡಬೇಕಿದೆ.&lt;/p&gt;&lt;p&gt;ಸಿಂಗಟಾಲೂರು ಏತ ನೀರಾವರಿ ಯೋಜನೆಯು 2012ರಲ್ಲೇ ಲೋಕಾರ್ಪಣೆಗೊಂಡಿದೆ. ಅಲ್ಲಿಂದ ಈ ವರೆಗೂ ಕಾಲುವೆ, ಕೆರೆಗಳಿಗೆ ನೀರು ಹರಿಸುತ್ತಿದ್ದಾರೆ, ಆದರೆ, ಸರ್ಕಾರ ಈ ವರೆಗೂ ಅಧಿಕೃತ ನೀರಾವರಿ ಪ್ರದೇಶವೆಂದು ಘೋಷಣೆ ಮಾಡಿಲ್ಲ. ನೀರು ಬಳಕೆದಾರರ ಸಂಘ ರಚನೆ ಇಲ್ಲ, ತೆರಿಗೆ ನಿಗಧಿ ಪಡಿಸಿಲ್ಲ. ಇದರಿಂದ ಕಾಲುವೆಗಳು, ಪೈಪ್&zwnj;ಲೈನ್&zwnj; ಹಾಗೂ ಇನ್ನಿತರ ಕಾಮಗಾರಿಗಳಿಗೆ ಸರ್ಕಾರ ಸಕಾಲದಲ್ಲಿ ಅನುದಾನ ನೀಡುತ್ತಿಲ್ಲ. ಇದೇ ರೀತಿಯಲ್ಲೆ ವಿದ್ಯುತ್&zwnj; ಬಿಲ್&zwnj; ಬಾಕಿ ಉಳಿದುಕೊಂಡಿದೆ.&lt;/p&gt;&lt;p&gt;ಈಗಾಗಲೇ ಜೆಸ್ಕಾಂ ಮತ್ತು ಹೆಸ್ಕಾಂ ಅಧಿಕಾರಿಗಳು, ಸಿಂಗಟಾಲೂರು ಏತ ನೀರಾವರಿ ಯೋಜನೆಯ, ಪೂರ್ಣ ವಿದ್ಯುತ್&zwnj; ಬಿಲ್&zwnj; ಪಾವತಿ ಮಾಡಲು ವಿಳಂಬ ಮಾಡಿದ, ಕಡ್ಡಾಯವಾಗಿ ವಿದ್ಯುತ್&zwnj; ಕಡಿತ ಮಾಡುತ್ತೇವೆ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ಯೋಜನೆಯ ಮೋಟಾರ್&zwnj;ಗಳಿಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಿದ್ದು, ಆಗಸ್ಟ್ 2023ರಿಂದ ಏಪ್ರಿಲ್&zwnj; 2026ರ ವರೆಗೂ ಬಲದಂಡೆ ಭಾಗದ ₹87 ಕೋಟಿ ಬಾಕಿ ಇದೆ. ಜೆಸ್ಕಾಂ ಮತ್ತು ಹೆಸ್ಕಾಂ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಇಇ ಶಿವಮೂರ್ತಿ ಹೇಳಿದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/singatalur-lift-irrigation-rs-117-crore-in-electricity-bills-outstanding-at-vijayanagar-rav/articleshow-bf99368"/>
        </item>
        <item>
            <title><![CDATA[ಈದ್ ಮಿಲಾದ್ ವೇಳೆ DJಗೆ ಅವಕಾಶವಿಲ್ಲ, ಸಾಂಪ್ರದಾಯಿಕ ವಾದ್ಯ ಬಳಸಿ: PSI ವಿಜಯ ಕೃಷ್ಣ]]></title>
            <link>https://kannada.asianetnews.com/karnataka-districts/vijayanagara-district-peace-meeting-on-the-occasion-of-eid-milad-at-araseekere-police-station-of-harpanahalli-taluk-mrq/articleshow-d74s5dp</link>
            <guid isPermaLink="true">https://kannada.asianetnews.com/karnataka-districts/vijayanagara-district-peace-meeting-on-the-occasion-of-eid-milad-at-araseekere-police-station-of-harpanahalli-taluk-mrq/articleshow-d74s5dp</guid>
            <pubDate>Sat, 22 Aug 2026 10:22:14 +0530</pubDate>
            <description><![CDATA[&lt;p&gt;ಪೊಲೀಸ್&zwnj; ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಪಿಎಸ್&zwnj;ಐ ವಿಜಯ ಕೃಷ್ಣ ಅವರು ಡಿಜೆಗೆ ಅವಕಾಶವಿಲ್ಲದೆ, ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಸೂಚಿಸಿದರು. ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j45nzey49jz1k23s4bqknw,imgname-arasikere-eid-milad-1787314755566.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ:&lt;/strong&gt; ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್&zwnj; ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು. ಪಿಎಸ್&zwnj;ಐ ವಿಜಯ ಕೃಷ್ಣ ಮಾತನಾಡಿ, ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು. ಡಿಜೆಗೆ ಅವಕಾಶ ಇರುವುದಿಲ್ಲ. ಸಾಂಪ್ರದಾಯಿಕ ವಾದ್ಯಗಳನ್ನು ಬಳಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ಅರಸೀಕೆರೆ ಪೊಲೀಸ್ ಠಾಣೆ ಜನಸ್ನೇಹಿ ಪೊಲೀಸ್ ಠಾಣೆಯಾಗಿದೆ. ಈದ್ ಮಿಲಾದ್ ಹಬ್ಬವನ್ನು ಎಲ್ಲ ಗ್ರಾಮಸ್ಥರು ಯಾವುದೇ ಅ ಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿ ಎಂದು ಹೇಳಿದರು. ಅರಸೀಕೆರೆ ಜಾಮಿಯಾ ಮಸೀದಿ ಅಧ್ಯಕ್ಷ ಹಬೀಬ್ ಸಾಬ್, ಕಾರ್ಯದರ್ಶಿ ಖಾಜ ಸಾಹೇಬ್, ಸಲಾಂ ಸಾಹೇಬ್, ಕೆ. ಮಹಾಂತೇಶ್, ಅಬ್ದುಲ್ ಸಾಹೇಬ್, ರಹಮತುಲ್ಲಾ ಸಾಹೇಬ್, ಫಯಾಜ್, ರಫೀಕ್ ಸಾಹೇಬ್, ಪೊಲೀಸ್ ಇಲಾಖೆಯ ಸಿಬ್ಬಂದಿ ಎಎಸ್&zwnj;ಐ ರೇಣುಕಮ್ಮ, ಮತ್ತಿಹಳ್ಳಿ ಕೊಟ್ರೇಶ್, ರವಿನಾಯ್ಕ್ ಹಾಗೂ ಉಚ್ಚಂಗಿದುರ್ಗ, ಅರಸೀಕೆರೆ, ಮಾದಿಹಳ್ಳಿ, ಹನುಮನಹಳ್ಳಿ ಗ್ರಾಮದ ಮುಸ್ಲಿಂ ಹಾಗೂ ಇತರ ಸಮಾಜದ ಮುಖಂಡರು ಶಾಂತಿಸಭೆಯಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;h2&gt;&lt;strong&gt;ಹುಬ್ಬಳ್ಳಿ-ಧಾರವಾಡ: ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬೇಡ&lt;/strong&gt;&lt;/h2&gt;&lt;p&gt;ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಆ. 26ರಂದು ನಡೆಯುವ ಈದ್&zwnj; ಮಿಲಾದ್&zwnj; ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆ ನಿಷೇಧಿಸಬೇಕೆಂದು ಹು-ಧಾ ಅಂಜುಮನ್ ಸಂಸ್ಥೆಗಳ ವತಿಯಿಂದ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.&lt;/p&gt;&lt;p&gt;ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಜು. 31ರಂದು ಸಭೆ ನಡೆಸಿ ಇಂತಹ ನಿರ್ಣಯ ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಡಿಜೆ ಹಚ್ಚುವುದರಿಂದ ರೋಗಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸೌಂಡ್&zwnj; ಸಿಸ್ಟಮ್&zwnj; ಬಳಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.ಈ ವೇಳೆ ಅಂಜುಮನ್-ಏ-ಇಸ್ಲಾಂ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ, ಗೌರವ ಕಾರ್ಯದರ್ಶಿ ಬಶೀರ್ ಅಹ್ಮದ್ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ್ ಬಂಕಾಪುರ, ಶಿಕ್ಷಣ ಮಂಡಳಿ ಸದಸ್ಯರಾದ ಇಲಿಯಾಸ್ ಮನಿಯಾರ್, ನವೀದ್ ಮುಲ್ಲಾ, ಬಶೀರ್ ಗುಡಮಾಲ್, ವಸೀಂ ಮೊಮಿನ್, ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ಮುದಸ್ಸರ್ ಖೋಜೆ, ಧಾರವಾಡ ಅಂಜುಮನ್ ಸಂಸ್ಥೆಯ ಬಶೀರ್ ಅಹ್ಮದ್ ಜಾಗಿರದಾರ, ಯಾಸೀನ್ ಹಾವೇರಪೇಟ, ರಫೀಕ್ ಶಿರಹಟ್ಟಿ, ಖೈರುದ್ದೀನ್ ಶೇಖ್, ಶಮಶುದ್ಧೀನ್ ಗಿಡದೂರ ಸೇರಿ ಹಲವರಿದ್ದರು.&lt;/p&gt;&lt;h3&gt;&lt;strong&gt;ಪಾವಗಡದಲ್ಲಿ ಈದ್&zwnj; ಮಿಲಾದ್&lt;/strong&gt;&lt;/h3&gt;&lt;p&gt;ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಮಿಲಾದ್-ಉನ್-ನಬಿ ಹಬ್ಬವನ್ನು ಈ ವರ್ಷವೂ ಸಂಭ್ರಮ, ಶಿಸ್ತು ಮತ್ತು ಸೌಹಾರ್ದತೆಯಿಂದ ಆಚರಿಸಲು ಪಾವಗಡ ಜಾಮಿಯಾ ಮಸೀದಿ ಕಮಿಟಿ ಹಾಗೂ ನೌಜವಾನ್ ಕಮೀಟಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದರು.&lt;/p&gt;&lt;p&gt;ಭಾನುವಾರ ಜಾಮಿಯಾ ಮಸೀದಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಎಂ.ಎ.ಜಿ. ಮಹಮ್ಮದ್ ಇಮ್ರಾನ್, ಆಗಸ್ಟ್ 26 ರಂದು ಬೆಳಿಗ್ಗೆ 9.30ಕ್ಕೆ ಜಾಮಿಯಾ ಮಸೀದಿಯಲ್ಲಿ ಎಲ್ಲರೂ ಸೇರಲಿದ್ದು, ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆ ಪೆನುಕೊಂಡ ಊರು ಬಾಗಿಲು, ರೊಪ್ಪ ಗ್ರಾಮದ ಮೂಲಕ ಸಾಗಿ, ಶನಿಮಹಾತ್ಮ ಸರ್ಕಲ್ ಹಾಗೂ ಸಿರಾ ರಸ್ತೆ ಮಾರ್ಗವಾಗಿ ಸಾಗಲಿದೆ. ಆ.15ರಿಂದ ಪ್ರವಾದಿ ಮಹಮ್ಮದ್ ಪೈಗಂಬರ್ಅ ವರ ಜೀವನ ಚರಿತ್ರ ಪ್ರವಚನ ಅರಂಭವಾಗಲಿದ್ದು ಜಾಮಿಯಾ ಮಸೀದಿಯಲ್ಲಿ 12 ದಿನಗಳು ನಡೆಯಲಿದ್ದು , ಆ. 27 ಸಂಜೆ 7 ಗಂಟೆಗೆ ಸಮಾರೋಪ ನಡೆಯಲಿದೆ. ಪ್ರವಾದಿ ಪೈಗಂಬರ್ ಅವರು ಬೋಧಿಸಿದ ಪ್ರೀತಿ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮುದಾಯದ ಮುಖಂಡರು ಕರೆ ನೀಡಿದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagara-district-peace-meeting-on-the-occasion-of-eid-milad-at-araseekere-police-station-of-harpanahalli-taluk-mrq/articleshow-d74s5dp"/>
        </item>
        <item>
            <title><![CDATA[ವಿಜಯನಗರ: ದೇವಾಲಯಗಳಲ್ಲಿ ಪ್ರತಿ ತಿಂಗಳು ಹುಂಡಿ ಎಣಿಕೆ ಕಡ್ಡಾಯ, ಚಿನ್ನ ಬೆಳ್ಳಿ  ಕಾಣಿಕೆ ಬಗ್ಗೆ ಡಿಸಿ ಸೂಚನೆ ಏನು?]]></title>
            <link>https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m</link>
            <guid isPermaLink="true">https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m</guid>
            <pubDate>Thu, 30 Jul 2026 12:56:59 +0530</pubDate>
            <description><![CDATA[ಹೊಸಪೇಟೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಪಾರದರ್ಶಕತೆ ತರಲು ಜಿಲ್ಲಾಧಿಕಾರಿಗಳು ಹೊಸ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹುಂಡಿ ಎಣಿಕೆಗೆ ಫೇಸ್ ರೆಕಗ್ನಿಷನ್, ಸಿಸಿಟಿವಿ ಕಣ್ಗಾವಲು ಹಾಗೂ ಭಕ್ತರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyryh9b2cf7x2vp367jm7hk8,imgname-----------------------2026-07-30t125336.708-1785396241762.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಜು.30):&lt;/strong&gt; ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ &rsquo;ಎ&rsquo; ಮತ್ತು &rsquo;ಬಿ&rsquo; ದರ್ಜೆಯ ಹಾಗೂ ಪ್ರಮುಖ ದೇವಾಲಯಗಳ ಆಡಳಿತ, ಹುಂಡಿ ಎಣಿಕೆ ಕಾರ್ಯವಿಧಾನ, ಆಸ್ತಿ ರಕ್ಷಣೆ ಹಾಗೂ ಭಕ್ತರ ಸೌಲಭ್ಯಗಳಲ್ಲಿ ಪಾರದರ್ಶಕತೆ ಕಾಪಾಡಲು ಹುಂಡಿ ಎಣಿಕೆಗೆ ಫೇಸ್ ರೆಕಗ್ನಿಷನ್, ಸಿಸಿಟಿವಿ, ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.&lt;/p&gt;&lt;p&gt;ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಬುಧವಾರ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.&lt;/p&gt;&lt;h2&gt;ಫೇಸ್ ರೆಕಗ್ನಿಷನ್ ಹಾಜರಾತಿ ಕಡ್ಡಾಯ&lt;/h2&gt;&lt;p&gt;ಹುಂಡಿ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಕಂದಾಯ, ಪೊಲೀಸ್ ಹಾಗೂ ದೇವಾಲಯದ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಫೇಸ್ ರೆಕಗ್ನಿಷನ್ ಯಂತ್ರದ ಮೂಲಕವೇ ಹಾಜರಾತಿ ನಮೂದಿಸಬೇಕು. ಈ ಯಂತ್ರವನ್ನು ದೇವಾಲಯದ ನಿಧಿಯಿಂದಲೇ ಖರೀದಿಸಲು ಸೂಚಿಸಿದರು.ಎಣಿಕೆ ಕೊಠಡಿಗೆ ಪ್ರವೇಶಿಸುವ ಪ್ರತಿ ಸಿಬ್ಬಂದಿ ತಮ್ಮ ಬಳಿ ಇರುವ ನಗದು ವಿವರವನ್ನು ಪ್ರವೇಶ ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.&lt;/p&gt;&lt;p&gt;ಜಿಲ್ಲೆಯ ಎ, ಬಿ ಹಾಗೂ ಅಗತ್ಯವಿರುವ &rsquo;ಸಿ&rsquo; ದರ್ಜೆಯ ದೇವಾಲಯಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ತಪ್ಪದೇ ಹುಂಡಿ ಎಣಿಕೆ ನಡೆಸಬೇಕು. ಈ ಎಣಿಕೆ ಪ್ರಕ್ರಿಯೆಯು ಸಹಾಯಕ ಆಯುಕ್ತರು, ಕಂದಾಯ ಇಲಾಖೆ, ಪೊಲೀಸ್, ತಹಶೀಲ್ದಾರ್, ಪಂಚಾಯತ್, ಬ್ಯಾಂಕ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳ ಜಂಟಿ ಉಸ್ತುವಾರಿಯಲ್ಲಿ ನಡೆಯಬೇಕು. ಎಣಿಕೆ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳ ನಿಯೋಜಿಸುವಂತಿಲ್ಲ. ಎಣಿಕೆ ಕಾರ್ಯದ ಸಂಪೂರ್ಣ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ ಮಾಡಬೇಕು ಎಂದು ತಿಳಿಸಿದರು.&lt;/p&gt;&lt;h3&gt;ಹುಂಡಿ ಎಣಿಕೆ ವೇಳೆ ದೊರೆತ ಚಿನ್ನ ಬೆಳ್ಳಿ &amp;nbsp;ಏನು ಮಾಡಬೇಕು?&lt;/h3&gt;&lt;p&gt;ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆಯುವ ಚಿನ್ನ, ಬೆಳ್ಳಿ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಎಣಿಕೆಯ ದಿನದಂದೇ ಪ್ರಮಾಣೀಕೃತ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಬೇಕು. ಹಣಕಾಸಿನ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ ಪೂರ್ಣಗೊಳಿಸಿ ವರದಿಯೊಂದಿಗೆ ಉಪ ಖಜಾನೆಗೆ ಜಮಾ ಮಾಡಬೇಕು ಎಂದರು.&lt;/p&gt;&lt;h3&gt;ಡಿಜಿಟಲ್ ಪಾವತಿ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆ:&lt;/h3&gt;&lt;p&gt;ಜೇಬುಗಳ್ಳತನ ಹಾಗೂ ನಗದು ದುರುಪಯೋಗ ತಡೆಯಲು ಭಕ್ತರಿಗೆ ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ದೇವಾಲಯಗಳಲ್ಲಿ ಅಧಿಕೃತ ಕ್ಯೂಆರ್ ಕೋಡ್ ಅಳವಡಿಸಬೇಕು. ಈ ಕ್ಯೂಆರ್ ಕೋಡ್&zwnj;ಗಳು ಹಾಳಾಗದಂತೆ ಹಾಗೂ ದುರುಪಯೋಗವಾಗದಂತೆ ಕಾಲಕಾಲಕ್ಕೆ ಪರಿಶೀಲಿಸಿ ರಕ್ಷಣೆ ಮಾಡಲು ಸೂಚಿಸಿದರು.&lt;/p&gt;&lt;h3&gt;ಅಗ್ನಿಶಾಮಕ ಉಪಕರಣ ಹಾಗೂ ಸಿಬ್ಬಂದಿಗೆ ತರಬೇತಿ:&lt;/h3&gt;&lt;p&gt;ಎ ಮತ್ತು ಬಿ ದರ್ಜೆಯ ದೇವಾಲಯಗಳ ಹುಂಡಿ ಎಣಿಕೆ ಕೊಠಡಿ ಹಾಗೂ ದೇವಾಲಯದ ಆವರಣದಲ್ಲಿ ಅಗ್ನಿ ಅವಘಡ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಹುಂಡಿ ಎಣಿಕೆ ಸಮಯದಲ್ಲಿ ಅಥವಾ ಸಾಮಾನ್ಯ ದಿನಗಳಲ್ಲಿ ಕಳವು ಪ್ರಕರಣಗಳು ಕಂಡುಬಂದಲ್ಲಿ, ಸಂಬಂಧಪಟ್ಟ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.&lt;/p&gt;&lt;p&gt;ಅಧಿಸೂಚಿತ ದೇವಾಲಯಗಳಿಗೆ ಸೇರಿದ ಜಮೀನು ಹಾಗೂ ಸ್ಥಿರಾಸ್ತಿಗಳ ಸರ್ವೇ ಅಳತೆ ಕಾರ್ಯವನ್ನು ಪೂರ್ಣಗೊಳಿಸಿ, ಎಲ್ಲಾ ಆಸ್ತಿ, ಜಮೀನುಗಳ ಖಾತೆಗಳನ್ನು ಕಡ್ಡಾಯವಾಗಿ ದೇವಸ್ಥಾನದ ಹೆಸರಿಗೆ ಇಂದೀಕರಣ ಮಾಡುವಂತೆ ತಾಕೀತು ಮಾಡಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ವರಷ್ಠಾಧಿಕಾರಿ ಮಂಜುನಾಥ್, ಸಹಾಯಕ ಆಯುಕ್ತ ಪಿ.ವಿವೇಲಕಾನಂದ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಮನೋಹರ್, ಹಿಂದೂ ಧಾರ್ಮಿಕ ಧತ್ತಿ ಇಲಾಖೆ ಸಹಾಯಕ ಆಯುಕ್ತರಾದ ಸವಿತಾ ಸೇರಿದಂತೆ ಮತ್ತಿತರರು ಇದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/monthly-temple-donation-counting-is-mandatory-vijayanagar-dc-kavita-s-mannikeri-instruction-rav/articleshow-dt8rz5m"/>
        </item>
        <item>
            <title><![CDATA[ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ ಹಾವಳಿ! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉಪಲೋಕಾಯುಕ್ತ ಗರಂ]]></title>
            <link>https://kannada.asianetnews.com/karnataka-districts/illegal-homestays-in-hampi-vijayanagar-justice-b-veerappa-instruction-to-official-for-action-rav/articleshow-f2o9iox</link>
            <guid isPermaLink="true">https://kannada.asianetnews.com/karnataka-districts/illegal-homestays-in-hampi-vijayanagar-justice-b-veerappa-instruction-to-official-for-action-rav/articleshow-f2o9iox</guid>
            <pubDate>Tue, 28 Jul 2026 12:19:53 +0530</pubDate>
            <description><![CDATA[&lt;p&gt;ವಿಶ್ವ ಪಾರಂಪರಿಕ ತಾಣ ಹಂಪಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಿದರು. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykqnmpq4v3rsftedpkdw2c5,imgname-----------------------2026-07-28t121733.623-1785221272279.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಜು.28): &lt;/strong&gt;ವಿಶ್ವ ಪಾರಂಪರಿಕ ತಾಣ ಹಂಪಿಗೆ ಶನಿವಾರ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ದಿಢೀರ್ ಭೇಟಿ ನೀಡಿ, ಹಂಪಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.&lt;/p&gt;&lt;h2&gt;ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ!&lt;/h2&gt;&lt;p&gt;ಪರಿಶೀಲನೆ ವೇಳೆ ಸ್ಥಳೀಯವಾಗಿ ಸುಮಾರು 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿರುವುದು ಉಪ ಲೋಕಾಯುಕ್ತರ ಗಮನಕ್ಕೆ ಬಂದಿದ್ದು, ಯಾವುದೇ ಸೂಕ್ತ ಅನುಮತಿ, ಪಂಚಾಯತ್ ಪ್ರಾಧಿಕಾರದ ಪರವಾನಗಿ ಇಲ್ಲದೇ ಇಷ್ಟೊಂದು ಸಂಖ್ಯೆಯ ಹೋಂ ಸ್ಟೇಗಳು ಹೇಗೆ ನಡೆಯುತ್ತಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.&lt;/p&gt;&lt;p&gt;ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಅನಧಿಕೃತ ವಹಿವಾಟು ನಡೆಸಲು ಹೇಗೆ ಅವಕಾಶ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಏಕೆ ವಿಫಲರಾಗಿದ್ದಾರೆ ಎಂದು ಕಠಿಣವಾಗಿ ಪ್ರಶ್ನಿಸಿದರು.&lt;/p&gt;&lt;p&gt;ಕೃಷಿ ಅಥವಾ ವಾಸಯೋಗ್ಯ ಭೂಮಿಯಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ ಉದ್ದೇಶದ ಹೋಂ ಸ್ಟೇಗಳನ್ನು ನಡೆಸುತ್ತಿರುವುದಕ್ಕೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಸೂಚಿಸಿದರು. ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆ ತಕ್ಷಣವೇ ಪರಿಶೀಲನೆ ನಡೆಸಿ, ಅನಧಿಕೃತವಾಗಿ ನಡೆಯುತ್ತಿರುವ ಎಲ್ಲಾ ಹೋಂ ಸ್ಟೇಗಳ ಮೇಲೆ ಕಾನೂನುಬದ್ಧ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ತೆರವುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಅನಧಿಕೃತ ಹೋಂ ಸ್ಟೇಗಳನ್ನು ನಡೆಸಲು ಅವಕಾಶ ನೀಡಿದ ಸಂಬಂಧಿಸಿದ ಪ್ರಾಧಿಕಾರಗಳ ಮೇಲೆ ಸುಮೋಟೊ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.&lt;/p&gt;&lt;h3&gt;ಅಧಿಕಾರಿಗಳಿಗೆ ಉಪಲೋಕಾಯುಕ್ತ ತರಾಟೆ&lt;/h3&gt;&lt;p&gt;ಈ ವೇಳೆ ಹಂಪಿ ಜನತಾ ಸ್ಟ್ರೀಟ್ ಸ್ಥಳಕ್ಕೆ ಭೇಟಿ ನೀಡಿದ ಅವರು, ವಿಶ್ವ ಪಾರಂಪರಿಕ ಸ್ಥಳದ ಸುತ್ತಮುತ್ತ ಕಾನೂನು ಬಾಹಿರವಾಗಿ 100ಮೀಟರ್ ಪ್ರದೇಶದಲ್ಲಿ ವಾಸಿಸುತ್ತಿರುವ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗುವ ಬಗ್ಗೆ ಕಂಡುಬಂದಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಲ್ಲಿನ ಜನರಿಗೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲು ಸೂಕ್ತ ಸ್ಥಳ ಗುರುತಿಸಿ ಇಲ್ಲಿನ ವ್ಯಾಪಾರಿಗಳಿಗೆ ಅವಕಾಶ ಕೊಟ್ಟು ಜನತಾ ಸ್ಟ್ರೀಟ್&zwnj;ನಲ್ಲಿ ಯಾವುದೇ ಕಾರಣಕ್ಕೂ ವ್ಯವಹಾರಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.&lt;/p&gt;&lt;p&gt;&lt;strong&gt;ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ&lt;/strong&gt;&lt;/p&gt;&lt;p&gt;ಹಂಪಿ ಶ್ರೀ ವಿರೂಪಾಕ್ಷೇಶ್ವರ ಗರ್ಭಗುಡಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಭಕ್ತರಿಗೆ ಅಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ವೀಕ್ಷಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ವಿರೂಪಾಕ್ಷೇಶ್ವರ ಗರ್ಭಗುಡಿಯಲ್ಲಿ ಗಾಳಿಯ ಚಲನೆ ಇಲ್ಲದ ಕಾರಣ ಎಸಿ ಅಳವಡಿಕೆಗೆ ಎಎಸ್&zwnj;ಐಯಿಂದ ಅನುಮತಿ ಪಡೆಯಲಾಗಿದ್ದು, ಕೆಲವೇ ದಿನಗಳಲ್ಲಿ ಎಸಿ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಲೋಕಾಯುಕ್ತ ಉಪನಿಬಂಧಕ ಅರವಿಂದ್, ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಎಸ್ಪಿ ಎಸ್.ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ವಿವೇಕಾನಂದ ಇದ್ದರು.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/illegal-homestays-in-hampi-vijayanagar-justice-b-veerappa-instruction-to-official-for-action-rav/articleshow-f2o9iox"/>
        </item>
        <item>
            <title><![CDATA[ರೈತರೇ ಹೊಡೀರಿ ಹಲಗಿ: ತುಂಗಭದ್ರಾ ಜಲಾಶಯಕ್ಕೆ ಪ್ರಥಮ ಬಾರಿ ಒಂದು ಲಕ್ಷ ಕ್ಯೂಸೆಕ್‌ ನೀರು!]]></title>
            <link>https://kannada.asianetnews.com/karnataka-districts/tungabhadra-dam-inflow-crosses-1-lakh-cusecs-today-karnataka-reservoir-water-levels-rav/articleshow-gbxg9h1</link>
            <guid isPermaLink="true">https://kannada.asianetnews.com/karnataka-districts/tungabhadra-dam-inflow-crosses-1-lakh-cusecs-today-karnataka-reservoir-water-levels-rav/articleshow-gbxg9h1</guid>
            <pubDate>Wed, 05 Aug 2026 08:52:40 +0530</pubDate>
            <description><![CDATA[ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಅಧಿಕ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಈ ವರ್ಷ ಮೊದಲ ಬಾರಿಗೆ 1,08,531 ಕ್ಯೂಸೆಕ್&zwnj; ನೀರು ಹರಿದುಬಂದಿದೆ. ಇದರಿಂದ ಜಲಾಶಯದಲ್ಲಿ 53.648 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದು ಹಲವು ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೆ ಆಶಾದಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz7y57kxy19jn1djgkbnrk4y,imgname-----------------------2026-08-05t082915.690-1785899163261.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಆ.5):&lt;/strong&gt; ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಸೇರಿದಂತೆ ಮೂರು ರಾಜ್ಯಗಳ 8 ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ 1,08531 ಕ್ಯೂಸೆಕ್&zwnj; ನೀರು ಹರಿದು ಬರುತ್ತಿದ್ದು, ಈ ವರ್ಷ ಇದೇ ಮೊದಲ ಬಾರಿ ಒಳಹರಿವಿನ ಪ್ರಮಾಣ ಲಕ್ಷ ಕ್ಯೂಸೆಕ್&zwnj; ದಾಟಿದೆ. ಜಲಾಶಯದಲ್ಲಿ 53.648 ಟಿಎಂಸಿ ನೀರು ಸಂಗ್ರವಾಗಿದೆ.&lt;/p&gt;&lt;h2&gt;ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಳ&lt;/h2&gt;&lt;p&gt;ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡು ಪ್ರದೇಶದಲ್ಲಿ ಅಧಿಕ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಲಕ್ಷ ಕ್ಯೂಸೆಕ್&zwnj;ಗೂ ಅಧಿಕ ನೀರು ಬರುತ್ತಿರುವುದರಿಂದ ಜಲಾಶಯದ ಒಳ ಹರಿವು ಗಣನೀಯವಾಗಿ ಏರಿಕೆ ಕಂಡು ಬರುತ್ತಿದೆ. ಜಲಾಶಯದಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾದಂತಾಗಿದೆ.&lt;/p&gt;&lt;p&gt;ಕಳೆದ 4-5 ದಿನಗಳಿಂದ ನಿತ್ಯವೂ ಜಲಾಶಯಕ್ಕೆ 1-2 ಟಿಎಂಸಿ ನೀರು ಹೆಚ್ಚಳವಾಗುತ್ತಾ ಬರುತ್ತಿರುದೆ. ಮಂಗಳವಾರ ಬೆಳಗ್ಗೆ 51 ಟಿಎಂಸಿ ಇದ್ದ ನೀರು, ಮಧ್ಯಾಹ್ನ 3ರ ವೇಳೆಗೆ ಸುಮಾರು 3 ಟಿಎಂಸಿ ನೀರು ಹೆಚ್ಚಳವಾಗಿರುವುದರಿಂದ ಈಗ ಜಲಾಶಯದಲ್ಲಿ 54 ಟಿಎಂಸಿ ನೀರು ಸಂಗ್ರಹವಾಗಿದೆ. 1556 ಕ್ಯೂಸೆಕ್&zwnj; ನೀರು ಜಲಾಶಯದಿಂದ ಕಾಲುವೆಗಳ ಮೂಲಕ ಹೊರ ಬಿಡಲಾಗುತ್ತಿದೆ.&lt;/p&gt;&lt;p&gt;ಈ ಅವಧಿಯಲ್ಲಿ ಜಲಾಶಯಕ್ಕೆ ಇಷ್ಟು ದೊಡ್ಡ ಮಟ್ಟದ ಒಳಹರಿವು ದಾಖಲಾಗಿದ್ದು ಅಪರೂಪವಾಗಿದೆ. ಇದೇ ರೀತಿಯಲ್ಲಿ ಒಂದು ವಾರ ನೀರು ಹರಿದು ಬಂದರೆ ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಆಂಧ್ರ ಪ್ರದೇಶದ ಅಚ್ಚುಕಟ್ಟು ಪ್ರದೇಶದ ಕೃಷಿ ಚಟುವಟಿಕೆಗೆ ಹೊಸ ಹುರುಪು ತರಲಿದೆ.&lt;/p&gt;&lt;h3&gt;ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/h3&gt;&lt;p&gt;ಕಬಿನಿ 96% 2284 2282.71&lt;/p&gt;&lt;p&gt;ಹೇಮಾವತಿ 77% 2922 2912.74&lt;/p&gt;&lt;p&gt;ತುಂಗಭದ್ರಾ 48% 1633 1613.13&lt;/p&gt;&lt;p&gt;ಸೂಪಾ(ಮೀ.) 46% 564 541.66&lt;/p&gt;&lt;p&gt;ಕೆಆರ್&zwnj;ಎಸ್ 52% 124.80 103.40&lt;/p&gt;&lt;p&gt;ಘಟಪ್ರಭಾ 79% 2175 2160.80&lt;/p&gt;&lt;p&gt;ಲಿಂಗನಮಕ್ಕಿ 43% 1819.12 1785.90&lt;/p&gt;&lt;p&gt;ಭದ್ರಾ 66% 2158 2136.75&lt;/p&gt;&lt;p&gt;ಹಾರಂಗಿ 93% 2859 2857.22&lt;/p&gt;&lt;p&gt;ಆಲಮಟ್ಟಿ(ಮೀ.) 90% 519.60 518.86&lt;/p&gt;&lt;p&gt;ನಾರಾಯಣಪುರ(ಮೀ.) 88% 492.25 491.35&lt;/p&gt;&lt;p&gt;ಮಲಪ್ರಭಾ 47% 2079.50 2061.20&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tungabhadra-dam-inflow-crosses-1-lakh-cusecs-today-karnataka-reservoir-water-levels-rav/articleshow-gbxg9h1"/>
        </item>
        <item>
            <title><![CDATA[ಬರಗಾಲದ ನಡುವೆಯೂ ಕೂಡ್ಲಿಗಿ ತಾಲೂಕಿನ 80 ಕೆರೆಗಳಿಗೆ ಹರಿದು ಬಂದಳು ಗಂಗೆ; ಶಾಸಕರ ಪ್ರಯತ್ನ]]></title>
            <link>https://kannada.asianetnews.com/karnataka-districts/despite-drought-the-project-to-fill-80-lakes-in-kudligi-taluk-with-water-is-a-success-efforts-of-mla-dr-nt-srinivas-mrq/articleshow-gzt8by2</link>
            <guid isPermaLink="true">https://kannada.asianetnews.com/karnataka-districts/despite-drought-the-project-to-fill-80-lakes-in-kudligi-taluk-with-water-is-a-success-efforts-of-mla-dr-nt-srinivas-mrq/articleshow-gzt8by2</guid>
            <pubDate>Sat, 08 Aug 2026 08:08:41 +0530</pubDate>
            <description><![CDATA[ಬರಗಾಲದ ನಡುವೆಯೂ, ಕೂಡ್ಲಿಗಿ ತಾಲೂಕಿನ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದೆ. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಪ್ರಯತ್ನದಿಂದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfkcmz30r62jrn0qtzrs6d0,imgname-kudlagi-1786156307427.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೀಮಣ್ಣ ಗಜಾಪುರ&lt;/strong&gt;&lt;/p&gt;&lt;p&gt;&lt;strong&gt;ವಿಜಯನಗರ: &lt;/strong&gt;ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕಿನಲ್ಲೊಂದಾದ ಕೂಡ್ಲಿಗಿಗೆ ಇಲ್ಲಿ ವರೆಗೂ ಗಂಗೆಯ ಶಾಪವಿತ್ತು. ಆದರೆ, ಈ ಬಾರಿಯ ಭೀಕರ ಬರದ ಮಧ್ಯೆಯೂ ಗಂಗೆ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ಹರಿದು ಬರುತ್ತಿದ್ದಾಳೆ. ನೂರಾರು ವರ್ಷಗಳ ಗಂಗೆಯ ಶಾಪದಿಂದ ಕೂಡ್ಲಿಗಿ ತಾಲೂಕು ಮುಕ್ತವಾಗುತ್ತಿದೆ ಎಂಬ ಆಶಾಭಾವ ಇಲ್ಲಿಯ ಜನತೆಗೆ ಭಾಸವಾಗುತ್ತಿದೆ. ಕೆರೆಗಳಿಗೆ ನೀರು ಬರುವುದನ್ನು ನೋಡುತ್ತಿರುವ ರೈತರು ಸಂತಸದ ನಗೆ ಬೀರುತ್ತಿದ್ದಾರೆ.&lt;/p&gt;&lt;h2&gt;&lt;strong&gt;₹640 ಕೋಟಿ ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ&lt;/strong&gt;&lt;/h2&gt;&lt;p&gt;ಕೂಡ್ಲಿಗಿಯ ಹಿಂದಿನ ಶಾಸಕರಾದ ಎನ್.ವೈ. ಗೋಪಾಲಕೖಷ್ಣ ಅವರು ₹640 ಕೋಟಿ ವೆಚ್ಚದಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದು ಕಾಮಗಾರಿ ಮಾಡಿಸಿದ್ದರು. ಉಳಿದ ಕಾಮಗಾರಿಯನ್ನು ಈಗಿನ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರು ಪೂರ್ಣಗೊಳಿಸಿ ತಮ್ಮ ಅವಧಿಯಲ್ಲಿಯೇ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೂಡ್ಲಿಗಿ ತಾಲೂಕಿನಲ್ಲಿ ಇತಿಹಾಸ ಬರೆದಿದ್ದಾರೆ. ಕೂಡ್ಲಿಗಿ ತಾಲೂಕಿನಲ್ಲಿ ಮಳೆಗಾಲದಲ್ಲಿಯೇ ಬಣಗುಡುತ್ತಿರುವ ಕೆರೆಗಳನ್ನು ನೋಡಿ ಪ್ರತಿವರ್ಷ ಹತಾಶರಾಗುತ್ತಿದ್ದ ಇಲ್ಲಿಯ ರೈತರು ಇದೀಗ ಕೆರೆಯಲ್ಲಿ ಗಂಗೆಯನ್ನು ನೋಡಿ ಸಂತಸದ ನಗೆ ಬೀರುತ್ತಿದ್ದಾರೆ.&lt;/p&gt;&lt;p&gt;ಕೆರೆಗೆ ನೀರು ತುಂಬಿಸುವ ಯೋಜನೆಗೆ ಕೊನೆಯ ಕ್ಷಣದಲ್ಲಿ ಬಹಳ ಎಡರು ತೊಡರುಗಳು ಎದುರಾಗಿದ್ದವು. ಅವುಗಳನ್ನು ಈಗಿನ ಕೂಡ್ಲಿಗಿ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಅವರು ನಿರಂತರ ಶ್ರಮ, ಕಾಳಜಿಯಿಂದ ಬಗೆಹರಿಸಿದ್ದಾರೆ. ಎಲ್ಲ ತೊಂದರೆಗಳು ಮುಗಿಯಿತು ಎಂದು ನೀರು ಸರಬರಾಜು ಮಾಡಲು ಮುಂದಾದಾಗ ಹರಪನಹಳ್ಳಿ ಸಮೀಪದ ಹಾಳು ತಿಮ್ಮಲಾಪುರದ ಹತ್ತಿರ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿತ್ತು. ಯುದ್ಧೋಪಾದಿಯಲ್ಲಿ ತಂತ್ರಜ್ಞರು ಪೈಪ್ ಲೀಕೇಜ್ ಮುಚ್ಚಲು ಹರಸಾಹಸಪಟ್ಟು ಸರಿಪಡಿಸಿದ್ದಾರೆ. ಹೀಗಾಗಿ, ಗುರುವಾರ ತಾಲೂಕಿನ ಕೆಲವು ಕೆರೆಗಳಿಗೆ ನೀರು ಹರಿದು ಬರಲು ಶುರುವಾಗಿದೆ. ಬರದಲ್ಲಿ ಬೆಂದ ರೈತರು ಕೆರೆಗಳಿಗೆ ನೀರು ಬರುತ್ತಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ನಿರಂತರ ತುಂಬಿಸಲು ಸಾಧ್ಯವೇ?&lt;/strong&gt;&lt;/h3&gt;&lt;p&gt;ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ಈ ಬಾರಿ ಹೊಸದಾಗಿ ನೀರು ತುಂಬಿಸಿದರಷ್ಟೇ ಸಾಲದು ಪ್ರತಿವರ್ಷ ನಿರಂತರವಾಗಿ ತುಂಗಾಭದ್ರಾ ನದಿಯಿಂದ ನೀರು ತುಂಬಿಸಿದರೆ ಮಾತ್ರ ಇಲ್ಲಿಯ ರೈತರ ಬದುಕು ಹಸನಾಗುತ್ತದೆ. ನೀರೆತ್ತುವ ದೈತ್ಯ ಗಾತ್ರದ ಮೋಟರ್&zwnj;ಗಳು, ಪೈಪ್ ಲೈನ್ ಹಾಳಾಗದಂತೆ ನಿರಂತರ ನಿರ್ವಹಣೆ ಮಾಡಬೇಕಾಗುತ್ತದೆ. ಈ ಕುರಿತು ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ನಿಗಾವಹಿದರೆ ಮಾತ್ರ ಕೂಡ್ಲಿಗಿ ತಾಲೂಕಿನ ರೈತರ ನಗೆ ಕೊನೆ ವರೆಗೂ ಇರಲು ಸಾಧ್ಯ.&lt;/p&gt;&lt;p&gt;ತಾಲೂಕಿನ ನೂರಾರು ವರ್ಷಗಳ ಕನಸು ನನಸಾಗಿದೆ. ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆಲ ತಾಂತ್ರಿಕ ದೋಷಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ನಿರಂತರ ಕೆರೆ ನೀರು ತುಂಬಿಸುವ ಯೋಜನೆಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ತುಂಗಾಭದ್ರಾ ನದಿಯಲ್ಲಿ ನೀರು ಹರಿಯುತ್ತಿದೆ. ಹೀಗಾಗಿ, ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಕಾರ್ಯಪ್ರವೖತ್ತರಾಗಿದ್ದಾರೆ. ಬರದಲ್ಲಿ ಕೆರೆಗಳಿಗೆ ನೀರು ಬರುತ್ತಿರುವುದರಿಂದ ಅಂತರ್ಜಲ ವೖದ್ಧಿಯಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್.&lt;/p&gt;&lt;p&gt;ಬಡೇಲಡಕು ಸಮೀಪದ ದೇವಲಾಪುರ ಕೆರೆಗೆ ನೀರು ಬರುತ್ತಿರುವುದನ್ನು ನೋಡಿ ನಮಗೆಲ್ಲಾ ಸಂತೋಷವಾಗುತ್ತಿದೆ, ಕೂಡ್ಲಿಗಿ ಶಾಸಕರ ಶ್ರಮ ಸಾರ್ಥಕವೆನಿಸಿದೆ. ರೈತರ, ಜನ ಜಾನುವಾರಿಗೆ ಕುಡಿಯುವ ನೀರಿನ ಮೂಲ ಹಾಗೂ ರೈತರ ಪಂಪ್ ಸೆಟ್ ಗಳಿಗೆ ನೀರು ಹೆಚ್ಚಾಗಿ ರೈತರ ಬದುಕು ಹಸನಾಗುತ್ತದೆ ಎಂದು ಕೂಡ್ಲಿಗಿ ತಾಲೂಕಿನ ಬಡೇಲಡಕು ರೈತ ಕೊಟ್ರೇಶ್.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/despite-drought-the-project-to-fill-80-lakes-in-kudligi-taluk-with-water-is-a-success-efforts-of-mla-dr-nt-srinivas-mrq/articleshow-gzt8by2"/>
        </item>
        <item>
            <title><![CDATA[ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಮೂವರು ನಾಪತ್ತೆ, ಓರ್ವನ ಶವ ಪತ್ತೆ, ಇಬ್ಬರಿಗಾಗಿ SDRF ಶೋಧ!]]></title>
            <link>https://kannada.asianetnews.com/karnataka-districts/vijayanagara-hagaribommanahalli-tungabhadra-backwaters-fishermen-drown-missing-sdrf-search/articleshow-lnuv2yk</link>
            <guid isPermaLink="true">https://kannada.asianetnews.com/karnataka-districts/vijayanagara-hagaribommanahalli-tungabhadra-backwaters-fishermen-drown-missing-sdrf-search/articleshow-lnuv2yk</guid>
            <pubDate>Wed, 19 Aug 2026 09:09:24 +0530</pubDate>
            <description><![CDATA[ವಿಜಯನಗರ ಜಿಲ್ಲೆಯ ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ಯುವಕರು ತೆಪ್ಪ ಸಮೇತ ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವ ಯುವಕನ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಉಳಿದಿಬ್ಬರಿಗಾಗಿ ಎಸ್&zwnj;ಡಿಆರ್&zwnj;ಎಫ್ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0c126c27qh7z4jntb0pc49w,imgname-vijayanagara-fishiermans-death-1787110168962.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ (ಆ.19): ತುಂ&lt;/strong&gt;ಗಭದ್ರಾ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ಯುವಕರು ತೆಪ್ಪ ಸಮೇತ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ. ಇವರಲ್ಲಿ ಓರ್ವ ಯುವಕನ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರಿಗಾಗಿ ಎಸ್&zwnj;ಡಿಆರ್&zwnj;ಎಫ್ (SDRF) ತಂಡ ಮತ್ತು ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.&lt;/p&gt;&lt;p&gt;ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ತುಂಗಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಕಾಣೆಯಾದ ದುರ್ದೈವಿಗಳು ಯಾರು?&lt;/strong&gt;&lt;/h2&gt;&lt;p&gt;ರಾಜ (22 ವರ್ಷ) &ndash; (ನಾಪತ್ತೆ)&lt;/p&gt;&lt;p&gt;ಯಮನೂರಪ್ಪ (20 ವರ್ಷ) &ndash; (ಮೃತದೇಹ ಪತ್ತೆ)&lt;/p&gt;&lt;p&gt;ಅಜ್ಜಪ್ಪ (26 ವರ್ಷ) &ndash; (ನಾಪತ್ತೆ)&lt;/p&gt;&lt;h2&gt;&lt;strong&gt;ಘಟನೆಯ ವಿವರ: ತೆಪ್ಪ ಸಮೇತ ನಾಪತ್ತೆ!&lt;/strong&gt;&lt;/h2&gt;&lt;p&gt;ತಂಬ್ರಳ್ಳಿ ಗ್ರಾಮದ ಈ ಮೂವರು ಯುವಕರು ನಿನ್ನೆ (ಮಂಗಳವಾರ) ಮಧ್ಯಾಹ್ನ ನದಿಯಲ್ಲಿ ಮೀನು ಹಿಡಿಯಲೆಂದು ತೆಪ್ಪದಲ್ಲಿ ತೆರಳಿದ್ದರು. ಆದರೆ, ಸಂಜೆಯಾದರೂ ಅವರು ಮನೆಗೆ ವಾಪಸ್ ಬಾರದ ಕಾರಣ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದಿದ್ದಾಗ ಗಾಬರಿಗೊಂಡು ತಂಬ್ರಳ್ಳಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು. ನದಿಯಲ್ಲಿ ಯುವಕರು ತೆರಳಿದ್ದ ತೆಪ್ಪ ಕೂಡ ಪತ್ತೆಯಾಗದ ಕಾರಣ, ಗಾಳಿ-ಮಳೆಯ ಅಲೆಗಳ ಹೊಡೆತಕ್ಕೆ ಸಿಲುಕಿ ತೆಪ್ಪ ಮಗುಚಿ ಮೂವರೂ ನೀರಿನಲ್ಲಿ ಮುಳುಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು.&lt;/p&gt;&lt;h3&gt;&lt;strong&gt;ಓರ್ವನ ಶವ ಪತ್ತೆ &ndash; ಮುಂದುವರಿದ ಎಸ್&zwnj;ಡಿಆರ್&zwnj;ಎಫ್ ಕಾರ್ಯಾಚರಣೆ:&lt;/strong&gt;&lt;/h3&gt;&lt;p&gt;ಸ್ಥಳೀಯರು ಮತ್ತು ಪೊಲೀಸರು ಇಂದು ಮುಂಜಾನೆಯಿಂದಲೇ ಜಂಟಿ ಶೋಧ ಕಾರ್ಯ ಆರಂಭಿಸಿದ್ದರು. ಕಾರ್ಯಾಚರಣೆ ವೇಳೆ ಯಮನೂರಪ್ಪ (20) ಎಂಬ ಯುವಕನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.&lt;/p&gt;&lt;p&gt;ಉಳಿದ ಇಬ್ಬರಾದ ರಾಜ ಹಾಗೂ ಅಜ್ಜಪ್ಪ ಅವರ ಸುಳಿವು ಇನ್ನೂ ಸಿಗದ ಕಾರಣ, ಹಗರಿಬೊಮ್ಮನಹಳ್ಳಿ ಪೊಲೀಸರು ತಕ್ಷಣವೇ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವನ್ನು ಸ್ಥಳಕ್ಕೆ ಕರೆಸಿದ್ದಾರೆ. ಸದ್ಯ ಹಗರಿಬೊಮ್ಮನಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಬೋಟ್&zwnj;ಗಳ ನೆರವಿನಿಂದ ಹಿನ್ನೀರಿನ ಆಳವಾದ ಪ್ರದೇಶದಲ್ಲಿ ಉಳಿದವರಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.&lt;/p&gt;&lt;p&gt;ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಂಬ್ರಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayanagara-hagaribommanahalli-tungabhadra-backwaters-fishermen-drown-missing-sdrf-search/articleshow-lnuv2yk"/>
        </item>
        <item>
            <title><![CDATA[ಹೊಸಪೇಟೆ-ಅರಸೀಕೆರೆ ನೂತನ ಡೆಮೋ ಟ್ರೈನ್ ಸಂಚಾರಕ್ಕೆ ಚಾಲನೆ; ರೈಲು ಸಮಯ, ಮಾರ್ಗ ಹೀಗಿದೆ]]></title>
            <link>https://kannada.asianetnews.com/karnataka-districts/train-number-07343-07344-new-demo-railway-service-from-hosapete-to-arasikere-to-start-from-august-28-mrq/articleshow-ns8obg3</link>
            <guid isPermaLink="true">https://kannada.asianetnews.com/karnataka-districts/train-number-07343-07344-new-demo-railway-service-from-hosapete-to-arasikere-to-start-from-august-28-mrq/articleshow-ns8obg3</guid>
            <pubDate>Thu, 27 Aug 2026 06:00:47 +0530</pubDate>
            <description><![CDATA[ಆಗಸ್ಟ್ 28 ರಿಂದ ಹೊಸಪೇಟೆ ಮತ್ತು ಅರಸಿಕೆರೆ ನಡುವೆ ಕೊಟ್ಟೂರು ಮಾರ್ಗವಾಗಿ ಹೊಸ ಡೆಮು ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ವಾರದ ದಿನಗಳಲ್ಲಿ ಸಂಚರಿಸಲಿದ್ದು, ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಿಂದ ದಾವಣಗೆರೆ ಕಡೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ವಿಜಯನಗರ ರೈಲ್ವೆ ಬಳಕೆದಾರರ ಸಂಘ ಈ ಬೆಳವಣಿಗೆಯನ್ನು ಸ್ವಾಗತಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0zbcwv7nm63kp0b74rjsjff,imgname-indian-railways-1787758539623.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ: &lt;/strong&gt;ಈ ಭಾಗದ ರೈಲ್ವೆ ಪ್ರಯಾಣಿಕರಿಗೆ ಆಶಾದಾಯಕ ಸುದ್ದಿಯನ್ನು ನೈಋತ್ಯ ರೈಲ್ವೆ ವಲಯ ಪ್ರಕಟಿಸಿದ್ದು, ಹೊಸಪೇಟೆ ಜಂಕ್ಷನ್&zwnj;ನಿಂದ ಅರಸಿಕೆರೆ ಜಂಕ್ಷನ್ ನಡುವೆ ಅನಿಮಿಯತ (ಆನ್ ರಿಸರ್ವಡ್) ಡೆಮು ವಿಶೇಷ ರೈಲು ಸಂಚಾರವನ್ನು ಆರಂಭಿಸಲು ನಿರ್ದೇಶಿಸಿ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ರೈಲು ಸಂಖ್ಯೆ 07343/07344&lt;/strong&gt;&lt;/h2&gt;&lt;p&gt;ಕೊಟ್ಟೂರು ಮಾರ್ಗವಾಗಿ ಈ ಡೆಮೊ ರೈಲು ಆ. 28ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ನ. 27ರ ವರೆಗೆ ಸಂಚರಿಸಲಿದೆ. ರೈಲು ಸಂಖ್ಯೆ 07343/07344 ಸಂಖ್ಯೆಯ ರೈಲು ಇದಾಗಿದ್ದು, ಹೊಸಪೇಟೆ ನಿಲ್ದಾಣದಿಂದ ಬೆಳಗ್ಗೆ 6.30ಕ್ಕೆ ಸಂಚಾರ ಆರಂಭಿಸಿ ತುಂಗಭದ್ರಾ ಡ್ಯಾಂ, ವ್ಯಾಸನಕೆರೆ, ವ್ಯಾಸಕಾಲನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಮಾಲ್ವಿ, ಕೊಟ್ಟೂರಿಗೆ 8.30ರ ಸುಮಾರಿಗೆ ಬರಲಿದೆ. ಆನಂತರ ಬೆಣ್ಣಿಹಳ್ಳಿ, ಹರಪನಹಳ್ಳ, ತೆಲಿಗಿ, ದಾವಣಗೆರೆ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಸದುರ್ಗ ರಸ್ತೆ, ಅಜ್ಜಾಂಪುರ, ಬೀರೂರು, ಕಡೂರು, ಬಾಣವರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.&lt;/p&gt;&lt;p&gt;ಅರಸಿಕೇರೆಯಿಂದ ಮಧ್ಯಾಹ್ನ 2.30ಕ್ಕೆ ಬಿಟ್ಟು ಇದೇ ಮಾರ್ಗದ ಮೂಲಕ ಹೊಸಪೇಟೆಗೆ ರಾತ್ರಿ 9.30ರ ಸುಮಾರಿಗೆ ತಲುಪಲಿದೆ. 8 ಬೋಗಿಗಳ ಡೆಮೊ ಸಂಯೋಜನೆಯೊಂದಿಗೆ ಸೇವೆ ಒದಗಿಸಲು ರೈಲ್ವೆ ವಲಯ ಯೋಜನೆ ರೂಪಿಸಿದ್ದು, ಈ ಭಾಗದ ಪ್ರಯಾಣಿಕರು ವಿಶೇಷ ರೈಲು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.&lt;/p&gt;&lt;p&gt;ಕೊಟ್ಟೂರು ಮಾರ್ಗದ ಈ ನೂತನ ರೈಲು ವರ್ಷದಲ್ಲಿ ಪ್ರತಿ ಮೂರು ತಿಂಗಳ ಕಾಲ ಸಂಚರಿಸಲಿದ್ದು, ಈ ಸಂಚಾರ ಯಶಸ್ವಿಯಾಗಿ ಮೂರು ವರ್ಷಗಳ ಕಾಲ ನಂತರ ನಿರಂತರ ಸಂಚಾರ ಸೇವೆ ಒದಗಿಸಲಿದೆ. ಈ ಭಾಗದಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾರ್ಯ ಮುಗಿದ ಆನಂತರ ವ್ಯಾಸ ಕಾಲನಿ ಮತ್ತು ಅಮರಾವತಿಯ ಮಾರ್ಗ ಮೈಸೂರು ವರೆಗೆ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಇದೊಂದು ಒಳ್ಳೆಯ ಬೆಳವಣಿಗೆ. ಶ್ರೀಧರ ಪತ್ತಿಕೊಂಡ ರೈಲ್ವೆ ಹೋರಾಟ ಸಮಿತಿ ಸಂಚಾಲಕ, ಕೊಟ್ಟೂರು&lt;/p&gt;&lt;h3&gt;&lt;strong&gt;ರೈಲು ಸಂಚಾರ: ಬಳಕೆದಾರರ ಸಂಘ ಹರ್ಷ&lt;/strong&gt;&lt;/h3&gt;&lt;p&gt;ಆ. 28ರಂದು ಹೊಸಪೇಟೆ-ಅರಸೀಕೆರೆ ನೂತನ ಡೆಮೋ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ನಂದಿಪುರ ಮಠದ ಮಹೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ನಿರಂತರವಾಗಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ರೈಲ್ವೆ ಸಮಿತಿಗಳು ನಡೆಸಿದ ಹೋರಾಟಕ್ಕೆ&lt;/p&gt;&lt;p&gt;ನೈಋತ್ಯ ರೈಲ್ವೆ ವಲಯ ಸ್ಪಂದಿಸಿದೆ. ಈ ರೈಲಿನಿಂದ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಿಂದ ದಾವಣಗೆರೆ ಕಡೆಗೆ ಸಂಚರಿಸುವ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಆಸ್ಪತ್ರೆಗಳಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಮತ್ತು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ ಕುಡುತಿನಿ ಅಭಿನಂದಿಸಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/train-number-07343-07344-new-demo-railway-service-from-hosapete-to-arasikere-to-start-from-august-28-mrq/articleshow-ns8obg3"/>
        </item>
        <item>
            <title><![CDATA[ವಿಜಯಪುರ ರೈತರಿಗೆ ಒಣದ್ರಾಕ್ಷಿ ಬಂಪರ್; ಆನ್‌ಲೈನ್ ಟ್ರೇಡಿಂಗ್ ಯಶಸ್ಸು ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!]]></title>
            <link>https://kannada.asianetnews.com/gallery/karnataka-districts/vijayapura-apmc-online-raisin-trade-surges-to-12-cr-as-yatnal-cracks-down-on-middlemen-cartels-o10b2a0</link>
            <guid isPermaLink="true">https://kannada.asianetnews.com/gallery/karnataka-districts/vijayapura-apmc-online-raisin-trade-surges-to-12-cr-as-yatnal-cracks-down-on-middlemen-cartels-o10b2a0</guid>
            <pubDate>Mon, 10 Aug 2026 08:33:48 +0530</pubDate>
            <description><![CDATA[&lt;p&gt;ವಿಜಯಪುರದಲ್ಲಿ ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿದ್ದ ಒಣದ್ರಾಕ್ಷಿ ವಹಿವಾಟಿನಿಂದ ರೈತರಿಗೆ ಆಗುತ್ತಿದ್ದ ವಂಚನೆಗೆ ಕಡಿವಾಣ ಹಾಕಲು ಆನ್&zwnj;ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ನೀಡಲಾಗಿದೆ. ಇದರಿಂದ ₹5 ಕೋಟಿಯಿಂದ ₹12 ಕೋಟಿಗೆ ವಹಿವಾಟು ಏರಿಕೆಯಾಗಿದ್ದು, ರೈತರಿಗೆ ಉತ್ತಮ ಬೆಲೆ ಲಭ್ಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzmsg8c8b070ap6p700j0y5c,imgname-vijayapura-grapes-online-trading-basanagouda-patil-yatnal-1786330489221.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರದಲ್ಲಿ ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿದ್ದ ಒಣದ್ರಾಕ್ಷಿ ವಹಿವಾಟಿನಿಂದ ರೈತರಿಗೆ ಆಗುತ್ತಿದ್ದ ವಂಚನೆಗೆ ಕಡಿವಾಣ ಹಾಕಲು ಆನ್&zwnj;ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ನೀಡಲಾಗಿದೆ. ಇದರಿಂದ ₹5 ಕೋಟಿಯಿಂದ ₹12 ಕೋಟಿಗೆ ವಹಿವಾಟು ಏರಿಕೆಯಾಗಿದ್ದು, ರೈತರಿಗೆ ಉತ್ತಮ ಬೆಲೆ ಲಭ್ಯವಾಗಿದೆ.&lt;/p&gt;&lt;img&gt;&lt;p&gt;ರೈತರ ಹಿತದೃಷ್ಟಿಯಿಂದ ಪಾರದರ್ಶಕ ವಹಿವಾಟಿಗಾಗಿ ಆರಂಭಿಸಲಾದ ಆನ್ ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಆದ್ಯತೆ ಕಲ್ಪಿಸಲು ಈಚೆಗೆ ಸಭೆ ನಡೆಸಿ, ಸೂಚನೆ ನೀಡಿದ ನಂತರ ನಡೆದ ಒಣದ್ರಾಕ್ಷಿ ವಹಿವಾಟಿನಲ್ಲಿ ಈವರೆಗೆ ನಡೆಯುತ್ತಿದ್ದ ಸರಾಸರಿ ₹5 ಕೋಟಿಯಿಂದ ₹12 ಕೋಟಿಗೆ ಏರಿಕೆ ಆಗಿರುವುದು ಒಳ್ಳೆಯ ಬೆಳವಣಿಗೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.&lt;/p&gt;&lt;img&gt;&lt;p&gt;ವಿಜಯಪುರ ನಗರದಲ್ಲಿ ಒಣದ್ರಾಕ್ಷಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆ ಆರಂಭಗೊಂಡರೂ, ಕೆಲ ವ್ಯಕ್ತಿಗಳು ಖಾಸಗಿ ಅಸೋಷಿಯನ್ ರಚಿಸಿ ಎಪಿಎಂಸಿಗೆ ಸಂಬಂಧವೇ ಇಲ್ಲದಂತೆ ತಮ್ಮದೆಯಾದ ನಿಯಮಾವಳಿ ಮಾಡಿಕೊಂಡು, ಕೆಲವೇ ವ್ಯಕ್ತಿಗಳು ಹರಾಜಿನಲ್ಲಿ ಭಾಗವಹಿಸಿ ಕಡಿಮೆ ದರದಲ್ಲಿ ಖರೀದಿ ಮಾಡಿ ರೈತರಿಗೆ ವಂಚನೆ ಮಾಡಲಾಗುತ್ತಿತ್ತು. ಅಲ್ಲದೇ, ತಮ್ಮ ಕೋಲ್ಡ್ ಸ್ಟೋರೇಜ್ ಗಳಲ್ಲಿ ರೈತರು ತಂದಿಡುವ ಉತ್ಪನ್ನಗಳಿಗೆ ಬಾಡಿಗೆ ಪಡೆದುಕೊಳ್ಳುವುದಲ್ಲದೆ, ಮಾರಾಟದ ಬಳಿಕ ಶೇ.2ರಷ್ಟು ಕಮಿಷನ್ ಸಹ ವಸೂಲಿ ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಇದರಿಂದ ರೈತರಿಗೆ ಸೂಕ್ತ ಬೆಲೆ ಮತ್ತು ವಿನಾಕಾರಣ ಕಮಿಷನ್ ನೀಡುತ್ತಿದ್ದರಿಂದ ನಷ್ಟ ಉಂಟಾಗುತ್ತಿತ್ತು. ತೂಕದಲ್ಲಿಯೂ ವ್ಯತ್ಯಾಸವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಈಚೆಗೆ (ಜುಲೈ 28) ಎಪಿಎಂಸಿ ಪ್ರಾಂಗಣದಲ್ಲಿ ದ್ರಾಕ್ಷಿ ಬೆಳೆಗಾರರು ಹಾಗೂ ಎಪಿಎಂಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಾರದಲ್ಲಿ ಎರಡು ಭಾರಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆಯಲ್ಲೇ ಒಣದ್ರಾಕ್ಷಿ ವಹಿವಾಟು ನಡೆಸಲು ಸರ್ವಾನುಮತದಿಂದ ತಿರ್ಮಾನಿಸಲಾಗಿತ್ತು.&lt;/p&gt;&lt;img&gt;&lt;p&gt;&lt;strong&gt;ಆಗಸ್ಟ್ 1ರ ವಹಿವಾಟಿನಲ್ಲಿ ಹೊಸ ದಾಖಲೆ:&lt;/strong&gt;&lt;/p&gt;&lt;p&gt;ಶಾಸಕರ ಕಟ್ಟುನಿಟ್ಟಿನ ಸೂಚನೆ ಫಲ ನೀಡಿದ್ದು, ಆಗಸ್ಟ್ 1ರ ಶನಿವಾರ ನಡೆದ ಆನ್&zwnj;ಲೈನ್ ಹರಾಜಿನಲ್ಲಿ ಬರೋಬ್ಬರಿ 4.59 ಲಕ್ಷ ಕೆ.ಜಿ ಒಣದ್ರಾಕ್ಷಿ ವಹಿವಾಟು ನಡೆದಿದೆ. ಈ ಹಿಂದೆ ಕೇವಲ 2.17 ಲಕ್ಷ ಕೆ.ಜಿ ಮಾತ್ರ ಮಾರಾಟವಾಗುತ್ತಿತ್ತು.&lt;/p&gt;&lt;p&gt;&lt;strong&gt;ಗರಿಷ್ಠ ದರ: &lt;/strong&gt;ಪ್ರತಿ ಕೆ.ಜಿ ಒಣದ್ರಾಕ್ಷಿಗೆ ಗರಿಷ್ಠ ₹390 ವರೆಗೆ ಬೆಲೆ ಸಿಕ್ಕಿದೆ.&lt;/p&gt;&lt;p&gt;&lt;strong&gt;ಖರೀದಿದಾರರ ಸಂಖ್ಯೆ:&lt;/strong&gt; ಹಿಂದೆ 14 ಇರುತ್ತಿದ್ದ ಖರೀದಿದಾರರ ಸಂಖ್ಯೆ ಈಗ 25ಕ್ಕೆ ಹೆಚ್ಚಿದೆ.&lt;/p&gt;&lt;p&gt;&lt;strong&gt;ದಲ್ಲಾಳಿಗಳ ಸಂಖ್ಯೆ: &lt;/strong&gt;5 ರಿಂದ 15ಕ್ಕೆ ಏರಿಕೆಯಾಗಿದೆ.&lt;/p&gt;&lt;img&gt;&lt;p&gt;ಈ ಬೆಳವಣಿಗೆಯಿಂದ ರೈತರಿಗೆ ಈವರೆಗೆ ಆಗುತ್ತಿದ್ದ ತೂಕದಲ್ಲಿ ಮೋಸ, ಬೆಲೆಯಲ್ಲಿ ವ್ಯತ್ಯಾಸ, ಆಕ್ಷನ್ ನೆಪದಲ್ಲಿ ತೂರಾಟ ನಡೆಸಿ ಅನಾವಶ್ಯಕವಾಗಿ ಉತ್ಪನ್ನ ಹಾಳಾಗುತ್ತಿರುವುದು ತಪ್ಪಿದಂತಾಗಿದೆ. ಖಾಸಗಿಯವರು ನಡೆಸುತ್ತಿದ್ದ ಬಹಿರಂಗ ಹರಾಜಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ಆಗುತ್ತಿರುವುದರಿಂದ ಯಾವುದೇ ನಿಖರವಾದ ಮಾಹಿತಿ ದೊರೆಯದೇ, ಸರ್ಕಾರಕ್ಕೆ ಸೆಸ್ ಮತ್ತು ಜಿಎಸ್.ಟಿ ಮೂಲಕ ಬರಬೇಕಿದ್ದ ಆದಾಯ ಸಹ ಕೈ ತಪ್ಪುತ್ತಿತ್ತು. ಈಗ ಆನ್ ಲೈನ್ ಮಾರುಕಟ್ಟೆಯಲ್ಲೇ ಹೆಚ್ಚಿನ ವಹಿವಾಟು ನಡೆಯುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹರಿದು ಬರಲಿದೆ.&lt;/p&gt;&lt;img&gt;&lt;p&gt;ಎಲ್ಲ ದ್ರಾಕ್ಷಿ ಬೆಳೆಯುವ ರೈತರು ಯಾರ ಲಾಭಿಗೂ ಮಣಿಯದೇ ನಿರಾಂತಕವಾಗಿ ದೊರೆತ ಇಂತಹ ಅವಕಾಶವನ್ನು ಹೆಚ್ಚು ಜನರಿಗೆ ಪ್ರಚುರಪಡಿಸಿ, ಆನ್&zwnj;ಲೈನ್ ಮಾರುಕಟ್ಟೆಯಲ್ಲಿ ಭಾಗವಹಿಸಲು ಪ್ರೇರೇಪಿಸಿದಲ್ಲಿ ಇಲಾಖೆಗೂ ಆದಾಯ ಮತ್ತು ರೈತರಿಗೂ ಅತೀ ಹೆಚ್ಚು ಲಾಭ ದೊರೆಯಲಿದೆ. ದೇಶದ ಯಾವುದೇ ರಾಜ್ಯದ ವರ್ತಕರು ಆನಲೈನ್ ಮತ್ತು ತಾತ್ಕಾಲಿಕವಾಗಿ ನಡೆಯುವ ಆಪ್ ಲೈನ್ ಮಾರುಕಟ್ಟೆ ವಹಿವಾಟಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/vijayapura-apmc-online-raisin-trade-surges-to-12-cr-as-yatnal-cracks-down-on-middlemen-cartels-o10b2a0"/>
        </item>
        <item>
            <title><![CDATA[ಬಳ್ಳಾರಿಯಲ್ಲಿ ಇಮ್ಮಡಿ ಹರಿಹರನ ಕಾಲದ 2 ಅಪರೂಪದ ಜಿನ ಶಾಸನಗಳು ಪತ್ತೆ! ವಿಜಯನಗರ ಕಾಲದ ಭೂಮಿ ದಾನ ಉಲ್ಲೇಖ]]></title>
            <link>https://kannada.asianetnews.com/karnataka-districts/two-inscriptions-of-harihara-ii-discovered-in-sandur-ballari-district-vijayanagara-empire-history-gdp/articleshow-p66p1qm</link>
            <guid isPermaLink="true">https://kannada.asianetnews.com/karnataka-districts/two-inscriptions-of-harihara-ii-discovered-in-sandur-ballari-district-vijayanagara-empire-history-gdp/articleshow-p66p1qm</guid>
            <pubDate>Fri, 28 Aug 2026 15:01:51 +0530</pubDate>
            <description><![CDATA[ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ, 'ವಿಜಯನಗರ ತಿರುಗಾಟ' ಸಂಶೋಧನಾ ತಂಡವು ಇಮ್ಮಡಿ ಹರಿಹರನ ಕಾಲದ ಎರಡು ಅಪರೂಪದ, ಅಪ್ರಕಟಿತ ಜಿನ ಶಾಸನಗಳನ್ನು ಪತ್ತೆ ಮಾಡಿದೆ. ರೈತರ ಕೃಷಿ ಜಮೀನಿನಲ್ಲಿ ದೊರೆತ ಈ ಶಾಸನಗಳು, ಶ್ರೀ ಕುಂಥು ತೀರ್ಥಂಕರರಿಗೆ ಭೂಮಿಯನ್ನು ದಾನವಾಗಿ ನೀಡಿದ ಐತಿಹಾಸಿಕ ವಿವರಗಳನ್ನು ಒಳಗೊಂಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13v4ncpnagsd91vf4c58wt3,imgname-sandur-jain-inscription-1787909264790.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಡೂರು : &lt;/strong&gt;ಬಳ್ಳಾರಿ-ವಿಜಯನಗರ ವಲಯದ ಸಾಂಸ್ಕೃತಿಕ ಇತಿಹಾಸ ಅಧ್ಯಯನದಲ್ಲಿ ತೊಡಗಿರುವ 'ವಿಜಯನಗರ ತಿರುಗಾಟ' ಸಂಶೋಧನಾ ತಂಡವು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ಇಮ್ಮಡಿ ಹರಿಹರನ ಕಾಲಕ್ಕೆ ಸೇರಿದ 2 ಅತ್ಯಂತ ಅಪರೂಪದ ಅಪ್ರಕಟಿತ ಜಿನ ಶಾಸನಗಳನ್ನು ಪತ್ತೆ ಮಾಡಿದೆ. ಗ್ರಾಮದ ರೈತರಾದ ಹರಿಜನ ಹುಲಿಗೆಮ್ಮ ಮತ್ತು ಹಟ್ಟಿ ರಮೇಶ ಎಂಬುವವರ ಕೃಷಿ ಜಮೀನಿನಲ್ಲಿ ಈ ಐತಿಹಾಸಿಕ ಸಾಕ್ಷ್ಯಗಳು ದೊರೆತಿವೆ.&lt;/p&gt;&lt;h2&gt;ಸಂಡೂರು ವಲಯದಲ್ಲಿ ಜೈನ ಧರ್ಮದ ಹೆಜ್ಜೆಗುರುತು&lt;/h2&gt;&lt;p&gt;ಕೆಲ ದಿನಗಳ ಹಿಂದೆಯಷ್ಟೇ ಸಂಶೋಧನಾ ತಂಡವು ಇದೇ ಗ್ರಾಮದಲ್ಲಿ ಜೈನ ಧರ್ಮದ 17ನೇ ತೀರ್ಥಂಕರರಾದ ಶ್ರೀ ಕುಂಥುನಾಥರ ಹೆಸರನ್ನು ಉಲ್ಲೇಖಿಸುವ ಪ್ರಮುಖ ದಾನ ಶಾಸನವೊಂದನ್ನು ಶೋಧಿಸಿತ್ತು. ಅದರ ಮುಂದುವರಿದ ಅಧ್ಯಯನದ ಭಾಗವಾಗಿ ಈಗ ಮತ್ತೂ ಎರಡು ಜಿನ ಶಾಸನಗಳು ಪತ್ತೆಯಾಗಿರುವುದು, ಸಂಡೂರು ಪ್ರದೇಶವು ಪ್ರಾಚೀನ ಕಾಲದಲ್ಲಿ ಜೈನ ಧರ್ಮದ ಪ್ರಮುಖ ಶ್ರದ್ಧಾಕೇಂದ್ರವಾಗಿತ್ತು ಎಂಬುದಕ್ಕೆ ಬಲವಾದ ಪುಷ್ಟಿ ನೀಡಿದೆ.&lt;/p&gt;&lt;h2&gt;ಶಾಸನಗಳ ದೃಶ್ಯ ಶೈಲಿ ಮತ್ತು ಕೆತ್ತನೆ ವಿವರ&lt;/h2&gt;&lt;p&gt;ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಅವರು ಶಾಸನಗಳ ರಚನಾ ಶೈಲಿಯ ಬಗ್ಗೆ ಮಾಹಿತಿ ನೀಡಿ, &quot;ಐದು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿರುವ ಈ ಶಾಸನಗಳನ್ನು ಗ್ರಾನೈಟ್ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ಪೂರ್ಣವಾಗಿ ಕನ್ನಡ ಭಾಷೆ ಮತ್ತು ಲಿಪಿಯಲ್ಲೇ ಇರುವ ಈ ಶಿಲಾಶಾಸನಗಳ ಮೇಲ್ಭಾಗದ ಬಲಬದಿಯಲ್ಲಿ ಸೂರ್ಯ, ಎಡಬದಿಯಲ್ಲಿ ಚಂದ್ರನ ಚಿತ್ರಗಳಿವೆ. ಪ್ರಭಾವಳಿಯ ಕೆಳಗೆ, ಮುಕ್ಕೊಡೆಯ ಅಡಿಯಲ್ಲಿ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಜಿನ ಮೂರ್ತಿಯ ಸುಂದರ ಕೆತ್ತನೆ ಇವುಗಳಲ್ಲಿದೆ,&quot; ಎಂದು ವಿವರಿಸಿದರು.&lt;/p&gt;&lt;h2&gt;ಶಾಸನದಲ್ಲಿ ಏನಿದೆ?&lt;/h2&gt;&lt;p&gt;ಹೊಸದಾಗಿ ಪತ್ತೆಯಾದ ಶಾಸನಗಳಲ್ಲಿ ಒಂದರಲ್ಲಿ 7 ಸಾಲು ಹಾಗೂ ಮತ್ತೊಂದರಲ್ಲಿ 8 ಸಾಲುಗಳ ಬರಹವಿದೆ. ವಿಜಯನಗರದ ದೊರೆ ಇಮ್ಮಡಿ ಹರಿಹರರಾಯರು ಶ್ರೀ ಕುಂಥು ತೀರ್ಥಂಕರರಿಗೆ ದೊಡ್ಡ ಅಂತಾಪುರದ ಗದ್ದೆಯ ಕೆಳಭಾಗದಲ್ಲಿ ಹನ್ನೆರಡು ಕೊಳಗದಷ್ಟು ಬೆಳೆಯಬಹುದಾದ 'ಜಿಜವರಿ' ಭೂಮಿಯನ್ನು ದಾನವಾಗಿ ನೀಡಿರುವುದನ್ನು ಈ ಎರಡೂ ಶಾಸನಗಳು ಸ್ಪಷ್ಟಪಡಿಸುತ್ತವೆ.&lt;/p&gt;&lt;p&gt;ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಎಚ್. ತಿಪ್ಪೇಸ್ವಾಮಿ ಮಾತನಾಡಿ, &quot;ಈ ಶಾಸನಗಳು ಕೇವಲ ಭೂದಾನದ ದಾಖಲೆಗಳಲ್ಲ. ವಿಜಯನಗರ ಕಾಲದಲ್ಲಿ ಧಾರ್ಮಿಕ ಸಂಸ್ಥೆಗಳು ಆರ್ಥಿಕವಾಗಿ ಹೇಗೆ ನಿರ್ವಹಿಸಲ್ಪಡುತ್ತಿದ್ದವು ಮತ್ತು ರಾಜಮನೆತನವು ಧಾರ್ಮಿಕ ಕೇಂದ್ರಗಳೊಂದಿಗೆ ಹೊಂದಿದ್ದ ಸಾಮರಸ್ಯ ಹಾಗೂ ಬಾಂಧವ್ಯ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಇವು ಅತ್ಯಂತ ಮಹತ್ವದ ಆಧಾರಗಳಾಗಿವೆ,&quot; ಎಂದರು.&lt;/p&gt;&lt;h2&gt;ಐತಿಹಾಸಿಕ ಮುಕ್ತಕಗಳ ರಕ್ಷಣೆಗೆ ಮನವಿ&lt;/h2&gt;&lt;p&gt;ನೂರಾರು ವರ್ಷಗಳ ಇತಿಹಾಸವಿರುವ ಈ ಅಪರೂಪದ ಅಪ್ರಕಟಿತ ಜಿನ ಶಾಸನಗಳನ್ನು ತಕ್ಷಣವೇ ಸಂರಕ್ಷಿಸುವ ಅಗತ್ಯವಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಡಾ. ಕೃಷ್ಣೇಗೌಡ ಒತ್ತಾಯಿಸಿದ್ದಾರೆ. ಸೂಕ್ತ ರಕ್ಷಣೆ ನೀಡುವುದರಿಂದ ಭವಿಷ್ಯದ ಸಂಶೋಧಕರಿಗೆ ಹಾಗೂ ಸ್ಥಳೀಯ ಇತಿಹಾಸ ಪ್ರೇಮಿಗಳಿಗೆ ಅಧ್ಯಯನ ಮಾಡಲು ಅನುಕೂಲವಾಗಲಿದೆ. ಸ್ಥಳೀಯ ನಿವಾಸಿಗಳಾದ ತಾಯಪ್ಪ, ರಾಗಿ ಶಿವರಾಮಪ್ಪ ಹಾಗೂ ಬಂಡ್ರಿ ಪಾಪಯ್ಯ ಅವರ ಸಹಕಾರದೊಂದಿಗೆ ಈ ಕ್ಷೇತ್ರಕಾರ್ಯ ಕೈಗೊಳ್ಳಲಾಗಿತ್ತು. ಈ ಸಂಶೋಧನಾ ತಂಡದಲ್ಲಿ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಎಚ್. ರವಿ, ಮಾರುತಿ, ಇಸ್ಮಾಯಿಲ್ ಸಿದ್ದಿಕಿ ಹಾಗೂ ಅಶೋಕ್ ನಾಯಕ್ ದಿದ್ದಿಗಿ ಈ ವೇಳೆ ಜೊತೆಗಿದ್ದರು.&lt;/p&gt;]]></content:encoded>
            <category>vijayanagara</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/two-inscriptions-of-harihara-ii-discovered-in-sandur-ballari-district-vijayanagara-empire-history-gdp/articleshow-p66p1qm"/>
        </item>
        <item>
            <title><![CDATA[ಮಳೆಗಾಗಿ ದೇವರನ್ನೇ ಬೈದು ಪೂಜೆ! ಕಾಟಮಯ್ಯ ದೇವಸ್ಥಾನದಲ್ಲಿ ವಿಶಿಷ್ಟ ಸಂಪ್ರದಾಯ,  ಪೂಜೆ]]></title>
            <link>https://kannada.asianetnews.com/karnataka-districts/vijayanagara-worshiping-god-for-rain-a-unique-celebration-at-the-katamayya-temple-in-hosapete-mrq/articleshow-pz49yri</link>
            <guid isPermaLink="true">https://kannada.asianetnews.com/karnataka-districts/vijayanagara-worshiping-god-for-rain-a-unique-celebration-at-the-katamayya-temple-in-hosapete-mrq/articleshow-pz49yri</guid>
            <pubDate>Mon, 31 Aug 2026 06:23:12 +0530</pubDate>
            <description><![CDATA[&lt;p&gt;&lt;strong&gt;Worshiping God for rain:&lt;/strong&gt; ಕಾಟಮಯ್ಯ ದೇವಸ್ಥಾನದಲ್ಲಿ ಮಳೆಗಾಗಿ ದೇವರನ್ನೇ ಬೈದು ಬೇಡಿಕೊಳ್ಳುವ ವಿಶಿಷ್ಟ ಸಂಪ್ರದಾಯವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m19v6efgx7dgk60zh1zx0f6y,imgname-hosapete-1788110649840.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ: &lt;/strong&gt;ಮಳೆಗಾಗಿ ದೇವರನ್ನೇ ಬೈದು ಬೇಡಿಕೊಳ್ಳುವ ವಿಶಿಷ್ಟ ಆಚರಣೆಯೊಂದು ಹೊಸಪೇಟೆಯಲ್ಲಿ ಶನಿವಾರ ನಡೆಯಿತು.&lt;/p&gt;&lt;p&gt;ಹೊಸಪೇಟೆಯ ಜಿಲ್ಲಾಸ್ಪತ್ರೆ ಬಳಿಯಿರುವ ಕಾಟಮಯ್ಯ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಹಾಗೂ ಗಂಗೆ ಪೂಜೆ ನೆರವೇರಿಸಲಾಯಿತು. ಮಳೆ ಬರಲಿ ಎಂಬ ಆಶಯದಿಂದ ಕಾಟಮಯ್ಯನನ್ನು ಬೈದು ದೇವರನ್ನು ಒಲಿಸಿಕೊಳ್ಳುವ ವಿಶಿಷ್ಟ ಸಂಪ್ರದಾಯವನ್ನು ಭಕ್ತರು ಆಚರಿಸಿದರು.&lt;/p&gt;&lt;p&gt;ಈ ವೇಳೆ ಕಾಟಮಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿ, ಹುಗ್ಗಿ, ಬದನೆಕಾಯಿ, ಅನ್ನ​ಸಾಂಬಾರ್ ಸೇರಿದಂತೆ ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು. ಪೂಜೆ ಬಳಿಕ ನೂರಾರು ಭಕ್ತರು ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಮಳೆ ಉತ್ತಮವಾಗಿ ಸುರಿದು ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ನಡೆದ ಈ ವಿಶಿಷ್ಟ ಆಚರಣೆ ಗಮನ ಸೆಳೆಯಿತು.&lt;/p&gt;&lt;h2&gt;&lt;strong&gt;ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ&lt;/strong&gt;&lt;/h2&gt;&lt;p&gt;ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೖತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಶ್ರೀ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.&lt;/p&gt;&lt;p&gt;ಡಾ. ಮಲ್ಲಿಕಾರ್ಜುನ ಮಾನ್ಪಡಿ ಅವರು ಶ್ರೀ ನುಲಿಯ ಚಂದಯ್ಯನವರ ಕುರಿತು ಮತ್ತು ಈ.ಅಶ್ವಿನಿ ಕೇಶವ ಅವರು ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಿಡಿಪಿಯು ನಾಗರಾಜ್ ಹವಲ್ದಾರ್ ಮಾತನಾಡಿದರು. ಕಾನೂನು ಸಲಹೆಗಾರ ಕೆ. ಬಸವರಾಜ್, ವಕೀಲರಾದ ಕೆ. ಕಮಲಾಪುರ ಹುಲ್ಲಗಪ್ಪ, ಕೊರಮ ಸಮಾಜದ ಜಿಲ್ಲಾಧ್ಯಕ್ಷ ಕೆ. ಜಗದೀಶ, ಖಜಾಂಚಿ ಚಿತವಾಡಗಿ ಹುಲುಗಪ್ಪ, ಕಾರ್ಯದರ್ಶಿ ನಾಗೇನಹಳ್ಳಿ ಹುಲುಗಪ್ಪ ಸೇರಿದಂತೆ ಸಮಾಜದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.&lt;/p&gt;&lt;h3&gt;&lt;strong&gt;ಮೊಬೈಲ್ ಕ್ಯಾಂಟಿನ್ ಅಭ್ಯರ್ಥಿ ಆಯ್ಕೆ ಪಟ್ಟಿ ಪ್ರಕಟ&lt;/strong&gt;&lt;/h3&gt;&lt;p&gt;ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಎಸ್.ಸಿ. ಎಸ್.ಪಿ, ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತೇಜಿಸಲು ಮೊಬೈಲ್ ಕ್ಯಾಂಟಿನ್ ನಡೆಸಲು ಸಹಾಯಧನ ನೀಡಲಾಗುತ್ತದೆ.&lt;/p&gt;&lt;p&gt;ಈ ಯೋಜನೆಯಡಿ ಪರಿಶಿಷ್ಟ ಜಾತಿಗೆ 6 ಹಾಗೂ ಪರಿಶಿಷ್ಟ ಪಂಗಡಕ್ಕೆ 4 ಸೇರಿ ಒಟ್ಟು 10 ಗುರಿಗಳಿಗೆ ಈಗಾಗಲೇ ಅಭ್ಯರ್ಥಿಗಳ ಅರ್ಹತಾ ಪಟ್ಟಿ, ಅನರ್ಹ ಪಟ್ಟಿ, ತಾತ್ಕಾಲಿಕ ಆಯ್ಕೆ ಪಟ್ಟಿ, ಕಾಯ್ದಿರಿಸಿದ ಪಟ್ಟಿ ಹಾಗೂ 2024-​25ನೇ ಸಾಲಿನಲ್ಲಿ ಬಾಕಿ ಉಳಿದ ಪರಿಶಿಷ್ಟ ಜಾತಿಯ 4 ಗುರಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಮಲಾಪುರದ ಲೋಟಸ್ ಮಹಲ್ ಹತ್ತಿರ ಇರುವ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರನ್ನು ಅಥವಾ ಕಮಲಾಪುರ ಕಚೇರಿಯ ದೂರವಾಣಿ ಸಂಖ್ಯೆ 08394​295640ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayanagara-worshiping-god-for-rain-a-unique-celebration-at-the-katamayya-temple-in-hosapete-mrq/articleshow-pz49yri"/>
        </item>
        <item>
            <title><![CDATA[ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ನಿಗೂಢ ಸಾವು -ಹಗರಿಬೊಮ್ಮನಹಳ್ಳಿಯಲ್ಲಿ ನಡೀತಾ ಲಾಕಪ್ ಡೆತ್?]]></title>
            <link>https://kannada.asianetnews.com/vijayanagara/alleged-custodial-death-at-hagaribommanahalli-police-station-in-vijayanagara-gkn/articleshow-unx52kc</link>
            <guid isPermaLink="true">https://kannada.asianetnews.com/vijayanagara/alleged-custodial-death-at-hagaribommanahalli-police-station-in-vijayanagara-gkn/articleshow-unx52kc</guid>
            <pubDate>Sun, 02 Aug 2026 11:53:00 +0530</pubDate>
            <description><![CDATA[&lt;p&gt;ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ಖಲೀಲ್ ಎಂಬ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರು ಫಿಟ್ಸ್&zwnj;ನಿಂದ ಸಾವು ಸಂಭವಿಸಿದೆ ಎಂದು ಹೇಳಿದರೆ, ಇದು 'ಲಾಕಪ್ ಡೆತ್' ಎಂದು ಆರೋಪಿಸಿ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz0j5nbs7qaspyp34d1807hg,imgname-hagaribommanahalli-police-station-lockup-death-1785651713401.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಗರಿಬೊಮ್ಮನಹಳ್ಳಿ (ವಿಜಯನಗರ):&lt;/strong&gt; ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ವ್ಯಕ್ತಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದು 'ಲಾಕಪ್ ಡೆತ್' ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಠಾಣೆಯ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ&lt;/strong&gt;&lt;/h2&gt;&lt;p&gt;ಮೃತಪಟ್ಟ ವ್ಯಕ್ತಿಯನ್ನು ಹರಪನಹಳ್ಳಿ ಮೂಲದ ಖಲೀಲ್ (38) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕಟ್ಟಡ ಕಾರ್ಮಿಕನಾಗಿದ್ದ ಖಲೀಲ್, ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರದ ಯುವತಿಯನ್ನು ವಿವಾಹವಾಗಿ ಪಟ್ಟಣದಲ್ಲೇ ವಾಸವಾಗಿದ್ದನು. ಕುಟುಂಬದಲ್ಲಿ ನಿತ್ಯ ಪತ್ನಿಯೊಂದಿಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಪತ್ನಿಯ ದೂರಿನ ಮೇರೆಗೆ ಅಥವಾ ವಿಚಾರಣೆ ನಡೆಸುವ ಸಲುವಾಗಿ ಪೊಲೀಸರು ನಿನ್ನೆ (ಗುರುವಾರ) ರಾತ್ರಿ ಖಲೀಲ್&zwnj;ನನ್ನು ಠಾಣೆಗೆ ಕರೆತಂದಿದ್ದರು.&lt;/p&gt;&lt;h2&gt;&lt;strong&gt;ಪೊಲೀಸರ ವಾದವೇನು?&lt;/strong&gt;&lt;/h2&gt;&lt;p&gt;ಪೊಲೀಸರ ಮಾಹಿತಿಯ ಪ್ರಕಾರ ವಿಚಾರಣೆಗಾಗಿ ಠಾಣೆಯಲ್ಲಿದ್ದ ಖಲೀಲ್&zwnj;ಗೆ ಇದ್ದಕ್ಕಿದ್ದಂತೆ ಫಿಟ್ಸ್ (ಸೆಳೆತ) ಬಂದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ.&lt;/p&gt;&lt;p&gt;ಖಲೀಲ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆತನ ಸಂಬಂಧಿಕರು ಹಾಗೂ ನೂರಾರು ಸಂಖ್ಯೆಯ ಜನರು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ. ಪೊಲೀಸರ ಕಿರುಕುಳದಿಂದಲೇ ಖಲೀಲ್ ಸಾವನ್ನಪ್ಪಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ. ಪರಿಸ್ಥಿತಿ ಕೈಮೀರದಂತೆ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಮತ್ತು ಠಾಣೆಯ ಸುತ್ತಮುತ್ತ ಮೀಸಲು ಪೊಲೀಸ್ ತುಕಡಿಯನ್ನು (KSRP) ನಿಯೋಜಿಸಲಾಗಿದೆ.&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಎಸ್&zwnj;ಪಿ ಭೇಟಿ&lt;/strong&gt;&lt;/h2&gt;&lt;p&gt;ಪ್ರಕರಣದ ಗಂಭೀರತೆ ಅರಿತ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್&zwnj;.ಜಾಹ್ನವಿ ಅವರು ಹಗರಿಬೊಮ್ಮನಹಳ್ಳಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹಗರಿಬೊಮ್ಮನಹಳ್ಳಿ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು ಉನ್ನತ ಮಟ್ಟದ ತನಿಖೆಗೆ ಆಗ್ರಹ ಕೇಳಿಬಂದಿದೆ.&lt;/p&gt;]]></content:encoded>
            <category>vijayanagara</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/vijayanagara/alleged-custodial-death-at-hagaribommanahalli-police-station-in-vijayanagara-gkn/articleshow-unx52kc"/>
        </item>
        <item>
            <title><![CDATA[ಪೊಲೀಸರೇ ಗಂಡನನ್ನು ಕೊಂದ್ರು, ಮಕ್ಕಳನ್ನ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ: ಶೈನಾಜ್ ಬೇಗಂ]]></title>
            <link>https://kannada.asianetnews.com/karnataka-districts/hagaribommanahalli-lockup-death-case-update-police-killed-my-husband-at-the-police-station-shainaaz-begum-alleges-mrq/articleshow-wfrntfg</link>
            <guid isPermaLink="true">https://kannada.asianetnews.com/karnataka-districts/hagaribommanahalli-lockup-death-case-update-police-killed-my-husband-at-the-police-station-shainaaz-begum-alleges-mrq/articleshow-wfrntfg</guid>
            <pubDate>Wed, 05 Aug 2026 07:55:48 +0530</pubDate>
            <description><![CDATA[ಕುಡಿದು ಗಲಾಟೆ ಮಾಡುತ್ತಿದ್ದ ಪತಿಗೆ ಬುದ್ಧಿ ಹೇಳಲು ಠಾಣೆಗೆ ಕರೆತಂದ ಪತ್ನಿ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪೊಲೀಸರ ಅಮಾನುಷ ಹಲ್ಲೆಯಿಂದಲೇ ತನ್ನ ಪತಿ ಖಲೀಲ್ ಸಾಬ್ ಸಾವನ್ನಪ್ಪಿದ್ದು, ಇದು ಲಾಕಪ್ ಸಾವು ಎಂದು ಪತ್ನಿ ಶೈನಾಜ್ ಬೇಗಂ ಆರೋಪಿಸಿದ್ದಾರೆ. ನ್ಯಾಯ ಸಿಗದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದು, ಪ್ರಕರಣಕ್ಕೆ ರಾಜಕೀಯ ಮುಖಂಡರು ಧ್ವನಿಗೂಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz7vesc2j3wbtt0awx2m7wx1,imgname-hagaribommanahalli-1785896330626.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ:&lt;/strong&gt; ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ, ಬುದ್ಧಿ ಹೇಳಿ ಎಂದು ನನ್ನ ಪತಿಯನ್ನು ಠಾಣೆಗೆ ಕರೆ ತಂದರೆ ನನ್ನ ಪತಿಯ ಮೇಲೆ ರಾಘವೇಂದ್ರ ಮತ್ತು ವೆಂಕಟೇಶ್ ಎಂಬ ಇಬ್ಬರು ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆಗೈದರು. ಪತಿಯನ್ನು ಹತ್ಯೆಗೈದಿರುವ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಲಾಕಪ್ ಸಾವಿಗೀಡಾದ ಖಲೀಲ್ ಸಾಬ್ ಪತ್ನಿ ಶೈನಾಜ್ ಬೇಗಂ ಆಗ್ರಹಿಸಿದರು.&lt;/p&gt;&lt;p&gt;ಕಟ್ಟಡ ಕಾರ್ಮಿಕ ಖಲೀಲ್ ಸಾಬ್ ಲಾಕಪ್ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಹರಪನಹಳ್ಳಿಯ ಅಂಜುಮನ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಎಂ. ನಬಿ ಅವರ ಪುತ್ರ ಎನ್.ಎಂ. ನೂರ್ ಅಹಮದ್ ಮಂಗಳವಾರ ಪಟ್ಟಣದ ಮೆಹಬೂಬ್ ನಗರದ ಅವರ ನಿವಾಸಕ್ಕೆ ಸಾಂತ್ವನ ಹೇಳಲೆಂದು ತೆರಳಿದ್ದಾಗ ಖಲೀಲಸಾಬ ಅವರ ಪತ್ನಿ ಅಕ್ಷರಶಃ ಪೊಲೀಸರ ವಿರುದ್ಧ ಕೆಂಡ ಕಾರಿದರು.&lt;/p&gt;&lt;h2&gt;&lt;strong&gt;ಮಕ್ಕಳಿಬ್ಬರನ್ನೂ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ&lt;/strong&gt;&lt;/h2&gt;&lt;p&gt;ಠಾಣೆಯಲ್ಲಿಯೇ ಸತ್ತಿದ್ದರೂ ಚಿಕಿತ್ಸೆ ಕೊಡಿಸಬೇಕು ಎಂದು ನನ್ನ ಪತಿಯನ್ನು ಸರಕು ಸಾಗಾಣಿಕೆ ವಾಹನದಲ್ಲಿ ನಾಯಿಯಂತೆ ಒಯ್ದರು. ಸತ್ತಿರುವ ನನ್ನ ಪತಿಯನ್ನು ಯಾವುದಾದರೂ ಕಾಲುವೆಯಲ್ಲಿ ಎಸೆಯುತ್ತಾರೆ ಎಂಬ ಆತಂಕದಲ್ಲಿಯೇ ನಾನು ನನ್ನ ಮಕ್ಕಳಿಬ್ಬರನ್ನೂ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ ಎಂದು ಗದ್ಗದಿತರಾದರು.&lt;/p&gt;&lt;p&gt;ಆಸ್ಪತ್ರೆಯಲ್ಲಿ ನನ್ನ ಪತಿಯ ಬಾಯಿಯಿಂದ ಮತ್ತು ಕಿವಿಯಿಂದ ರಕ್ತ ಬಂದಿದ್ದು ಗಮನಿಸಿದ್ದೇನೆ. ಪತಿಯ ಸಾವು ಠಾಣೆಯಲ್ಲಿ ಪೊಲೀಸರಿಂದಲೇ ಆಗಿದೆ. ನನಗೆ ನ್ಯಾಯ ಬೇಕು. ಅದನ್ನಷ್ಟೇ ಕೇಳೋದು. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುತ್ತೇನೆ, ನನಗೆ ಯಾವ ಪರಿಹಾರವೂ ಬೇಡ. ನನ್ನ ಪತಿಯನ್ನು ಕೊಂದ ಇಬ್ಬರೂ ಪೊಲೀಸರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.&lt;/p&gt;&lt;h3&gt;&lt;strong&gt;ಪೊಲೀಸರು ಹೇಳುತ್ತಿರುವುದು ಕಟ್ಟುಕತೆ&lt;/strong&gt;&lt;/h3&gt;&lt;p&gt;ನನ್ನ ಪತಿ ಕಟ್ಟಡ ಕಾರ್ಮಿಕರಾಗಿದ್ದರು. ಯಾವಾಗಲೂ ಆರೋಗ್ಯದಿಂದಿದ್ದರು. ಮೂತ್ರ ವಿಸರ್ಜನೆಗೆಂದು ಹೋದಾಗ ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಫಿಟ್ಸ್ ಬಂದು ತೀರಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿರುವುದು ಕಟ್ಟುಕತೆ. ನ್ಯಾಯ ಸಿಗದಿದ್ದರೆ ಠಾಣೆಯ ಮುಂದೆ ಧರಣಿ ನಡೆಸುವುದಾಗಿ ಎಂದು ಎಚ್ಚರಿಸಿದರು.&lt;/p&gt;&lt;p&gt;ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂರ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನೆ ನಡೆದು ನಾಲ್ಕು ದಿನವಾದರೂ ಮರಣೋತ್ತರ ಪರಿಕ್ಷಾ ವರದಿ ಮತ್ತು ಸಿಸಿ ಟಿವಿ ಫುಟೇಜ್&zwnj;ಗಳನ್ನು ಬಹಿರಂಗಪಡಿಸುತ್ತಿಲ್ಲ. ಪ್ರಕರಣ ಕುರಿತಂತೆ ಈ ವರೆಗೂ ಗಂಭೀರ ತನಿಖೆ ನಡೆದಿಲ್ಲ ಎಂದು ಆರೋಪಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇನ್ಮುಂದೆ ವಿಮೆ ಇಲ್ಲದಿದ್ರೆ ಪೆಟ್ರೋಲ್ ಸಿಗೋಲ್ಲ; ಪ್ರಾಯೋಗಿಕ ಜಾರಿಗೆ ಸುಪ್ರೀಂ ನಿರ್ದೇಶನ, ಹೊಸ ವಾಹನ ಖರೀದಿಸಿದವರು ಈ ವಿಷ್ಯ ತಿಳಿದಿರಲಿ!&lt;/strong&gt;&lt;/p&gt;&lt;h3&gt;&lt;strong&gt;ಖಲೀಲ್ ಸಾಬ ಕುಟುಂಬದವರ ಕಾನೂನು ಹೋರಾಟಕ್ಕೆ ಸಾಥ್&lt;/strong&gt;&lt;/h3&gt;&lt;p&gt;ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಲಾಕಪ್ ಸಾವಿಗೀಡಾಗಿರುವ ಖಲೀಲ್ ಸಾಬ ಕುಟುಂಬದವರ ಕಾನೂನು ಹೋರಾಟಕ್ಕೂ ಜೊತೆಯಾಗುತ್ತೇನೆ. ಎರಡು ದಿನಗಳಲ್ಲಿ ತನಿಖೆಯ ಕುರಿತು ಮಾಹಿತಿ ಒದಗಿಸದಿದ್ದರೆ ಕುಟುಂಬದವರ ಜೊತೆ ಗೃಹಮಂತ್ರಿ ಪ್ರಿಯಾಂಕ ಖರ್ಗೆ ಅವರ ಬಳಿ ತೆರಳಿ ಪಟ್ಟಣದ ಪೊಲೀಸ್ ವೈಫಲ್ಯ ಕುರಿತು ದೂರು ದಾಖಲಿಸುವುದಾಗಿ ಎಚ್ಚರಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ನೆಲ್ಲು ಇಸ್ಮಾಯಿಲ್, ನ್ಯಾಯಬೆಲೆ ಇಸ್ಮಾಯಿಲ್, ಮುಖಂಡರಾದ ಬಶೀರ್ ಅಹಮದ್, ಎಲ್ಲಪ್ಪ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಮುಸ್ಲೀಂ ಮುಖಂಡರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ : &lt;/strong&gt;&lt;strong&gt;ರಾಯಚೂರು: ಬುಲೆಟ್ ಮೇಲೆ ಹೊರಟಿದ್ದವನ ಮೇಲೆ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್! ನಡುರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ!&lt;/strong&gt;&lt;/p&gt;]]></content:encoded>
            <category>vijayanagara</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hagaribommanahalli-lockup-death-case-update-police-killed-my-husband-at-the-police-station-shainaaz-begum-alleges-mrq/articleshow-wfrntfg"/>
        </item>
        <item>
            <title><![CDATA[ಕಾಂಗ್ರೆಸ್ ಮಾಜಿ ಸಚಿವರಿಂದ ಶಿಷ್ಟಾಚಾರ ಉಲ್ಲಂಘಿಸಿ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ; ಹಾಲಿ ಶಾಸಕರಿಂದ ದೂರು]]></title>
            <link>https://kannada.asianetnews.com/karnataka-districts/hadagali-mla-krishna-naik-files-complaint-against-pt-parameshwar-naik-protocol-violation-vijayanagara/articleshow-xpgkd0o</link>
            <guid isPermaLink="true">https://kannada.asianetnews.com/karnataka-districts/hadagali-mla-krishna-naik-files-complaint-against-pt-parameshwar-naik-protocol-violation-vijayanagara/articleshow-xpgkd0o</guid>
            <pubDate>Fri, 21 Aug 2026 10:17:10 +0530</pubDate>
            <description><![CDATA[&lt;p&gt;ರಾಜ್ಯದ ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್&zwnj;ನ ಮಾಜಿ ಸಚಿವರೊಬ್ಬರು ಶಿಷ್ಟಾಚಾರ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಜೊತೆಗೆ, ಸರ್ಕಾರಿ ಬೆಂಗಾವಲು ಪಡೆಯನ್ನೂ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಹಾಲಿ ಶಾಸಕರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ha8dn46329swr5zjvb25gp,imgname-ex-minister-pt-parameshwar-naik-meeting-1787287582372.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ (ಆ.21): ರಾ&lt;/strong&gt;ಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ವಿರುದ್ಧ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣನಾಯಕ್ ಗಂಭೀರ ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಧಿಕಾರಿಗಳ ಸಭೆ ನಡೆಸಿರುವುದು ಹಾಗೂ ಸರ್ಕಾರಿ ಬೆಂಗಾವಲು ಪಡೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.&lt;/p&gt;&lt;h2&gt;&lt;strong&gt;ದೂರಿನಲ್ಲಿರುವ ಪ್ರಮುಖ ಆರೋಪಗಳೇನು?&lt;/strong&gt;&lt;/h2&gt;&lt;h3&gt;&lt;strong&gt;1. ವ್ಯಾಪ್ತಿ ಮೀರಿ ನೀರಾವರಿ ಇಲಾಖೆ ಸಭೆ:&lt;/strong&gt;&lt;/h3&gt;&lt;p&gt;ಪಿ.ಟಿ. ಪರಮೇಶ್ವರ್ ನಾಯ್ಕ್ ಅವರು ಕೇವಲ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸೀಮಿತವಾಗಿದ್ದರೂ, ನಿಯಮಬಾಹಿರವಾಗಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಹೂವಿನ ಹಡಗಲಿ ಕ್ಷೇತ್ರದ ಕೆರೆ ತುಂಬಿಸುವ ಯೋಜನೆ ಹಾಗೂ ಅನುದಾನ ಬಳಕೆ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕ್ಷೇತ್ರದ ಶಾಸಕರ ಗಮನಕ್ಕೆ ತರದೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿರುವುದು ಶಾಸನಸಭಾ ನಿಯಮಗಳ ಪ್ರಕಾರ ಶಾಸಕರ ಹಕ್ಕುಚ್ಯುತಿಗೆ ಕಾರಣವಾಗಿದೆ ಎಂದು ಕೃಷ್ಣನಾಯಕ್ ಆಕ್ಷೇಪಿಸಿದ್ದಾರೆ.&lt;/p&gt;&lt;h3&gt;&lt;strong&gt;2. ಎಕ್ಸಾರ್ಟ್ ವಾಹನ, ಶಿಷ್ಟಾಚಾರದ ದುರ್ಬಳಕೆ:&lt;/strong&gt;&lt;/h3&gt;&lt;p&gt;ಮಾಜಿ ಸಚಿವರು ತಮಗೆ ನೀಡಿರುವ ಶಿಷ್ಟಾಚಾರ ವ್ಯವಸ್ಥೆ ಮತ್ತು ಬೆಂಗಾವಲು (Escort) ವಾಹನಗಳನ್ನು ಅನಾವಶ್ಯಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಹಾಗೂ ಖಾಸಗಿ ಕಾರ್ಯಕ್ರಮಗಳಿಗೂ ಬೆಂಗಾವಲು ಪಡೆಯೊಂದಿಗೆ ತೆರಳಿ ಅಧಿಕಾರ ಪ್ರದರ್ಶನ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರ ರಸ್ತೆ ಸಂಚಾರ ಮತ್ತು ಆಂಬುಲೆನ್ಸ್&zwnj;ನಂತಹ ತುರ್ತು ಸೇವೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಾಸಕರ ಆಗ್ರಹ:&lt;/strong&gt;&lt;/h2&gt;&lt;p&gt;ಸರ್ಕಾರ ನಿಗದಿಪಡಿಸಿದ ಶಿಷ್ಟಾಚಾರದ ಚೌಕಟ್ಟು ಮೀರಿ ನಡೆದುಕೊಳ್ಳುತ್ತಿರುವ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಜೊತೆಗೆ ಶಾಸಕರ ಗಮನಕ್ಕೆ ತಾರದೆ ನಿಯಮಬಾಹಿರವಾಗಿ ಇಂತಹ ಸಭೆಗಳಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಜರುಗಿಸಬೇಕು ಎಂದು ಶಾಸಕ ಕೃಷ್ಣನಾಯಕ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>vijayanagara</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hadagali-mla-krishna-naik-files-complaint-against-pt-parameshwar-naik-protocol-violation-vijayanagara/articleshow-xpgkd0o"/>
        </item>
    </channel>
</rss>
