<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 22 May 2026 15:18:27 +0530</lastBuildDate>
        <atom:link href="https://kannada.asianetnews.com/rss/vaastu" rel="self" type="application/rss+xml"/>
        <item>
            <title><![CDATA[ಜೇಬಿನಲ್ಲಿ ಈ ಒಂದು ವಸ್ತು ಇದ್ರೆ ನೋ ಟೆನ್ಷನ್, ಆರ್ಥಿಕ ವೃದ್ಧಿಗೆ ಸಿಂಪಲ್ ಟಿಪ್ಸ್]]></title>
            <link>https://kannada.asianetnews.com/gallery/vaastu/salt-tips-to-reduce-negativity-and-increase-wealth-and-peace-at-home-0xv49q2</link>
            <guid isPermaLink="true">https://kannada.asianetnews.com/gallery/vaastu/salt-tips-to-reduce-negativity-and-increase-wealth-and-peace-at-home-0xv49q2</guid>
            <pubDate>Fri, 22 May 2026 09:32:06 +0530</pubDate>
            <description><![CDATA[&lt;p&gt;ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾದಾಗ ನಾನಾ ಸಮಸ್ಯೆ ಕಾಡಲು ಶುರುವಾಗುತ್ತೆ. ಅನಾರೋಗ್ಯ, ಆರ್ಥಿಕ ತೊಂದರೆ, ಸಂಬಂಧದಲ್ಲಿ ಬಿರುಕು ಕಾಡುತ್ತದೆ. ನಕಾರಾತ್ಮಕ ಶಕ್ತಿ ಓಡಿಸಿ, ಧನಾತ್ಮಕ ಶಕ್ತಿ ಹೆಚ್ಚಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿಲ್ಲ. &amp;nbsp;ಅತ್ಯಗತ್ಯವಾಗಿ ಅಡುಗೆಗೆ ಬಳಕೆ ಮಾಡುವ ಒಂದು ವಸ್ತು ಸಾಕು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks6wvps59nhyk0bpj9efr1yg,imgname-salt-1779421797157.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾದಾಗ ನಾನಾ ಸಮಸ್ಯೆ ಕಾಡಲು ಶುರುವಾಗುತ್ತೆ. ಅನಾರೋಗ್ಯ, ಆರ್ಥಿಕ ತೊಂದರೆ, ಸಂಬಂಧದಲ್ಲಿ ಬಿರುಕು ಕಾಡುತ್ತದೆ. ನಕಾರಾತ್ಮಕ ಶಕ್ತಿ ಓಡಿಸಿ, ಧನಾತ್ಮಕ ಶಕ್ತಿ ಹೆಚ್ಚಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿಲ್ಲ. &amp;nbsp;ಅತ್ಯಗತ್ಯವಾಗಿ ಅಡುಗೆಗೆ ಬಳಕೆ ಮಾಡುವ ಒಂದು ವಸ್ತು ಸಾಕು.&lt;/p&gt;&lt;img&gt;&lt;p&gt;ಉಪ್ಪುಗಿಂತ ರುಚಿ ಬೇರೆ ಇಲ್ಲ ಎನ್ನುವ ಮಾತಿದೆ. ಅಡುಗೆಗೆ ಉಪ್ಪಿಲ್ಲ ಅಂದ್ರೆ ಅಡುಗೆ ರುಚಿಸೋದಿಲ್ಲ. ಈ ಉಪ್ಪು ಬರೀ ಅಡುಗೆಗೆ ಸೀಮಿತವಾಗಿಲ್ಲ. ವಾಸ್ತು ಶಾಸ್ತ್ರದಲ್ಲೂ ಉಪ್ಪಿಗೆ ಸಾಕಷ್ಟು ಮಹತ್ವವಿದೆ. ಒಂದು ಹಿಡಿ ಉಪ್ಪು ನಾನಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಿ, ಶಾಂತಿ ನೆಲೆಸುವಂತೆ ಮಾಡಿ, ಆರ್ಥಿಕ ವೃದ್ಧಿಗೆ ಇದು ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ದುರಾದೃಷ್ಟ ಅದೃಷ್ಟವಾಗಿ ಬದಲಾಗ್ಬೇಕು, ಪಾಸಿಟಿವ್ ಎನರ್ಜಿ ಮನೆಯಲ್ಲಿ ಸದಾ ಇರ್ಬೇಕು ಅಂದ್ರೆ ಜೇಬಿನಲ್ಲಿ ಉಪ್ಪನ್ನು ಇಟ್ಟುಕೊಳ್ಳಿ. ಒಂದು ಕವರ್ ಅಥವಾ ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಅದನ್ನು ಜೇಬಿನಲ್ಲಿ ಇಟ್ಟುಕೊಂಡರೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಮಾಡಿದ ಕೆಲಸಗಳಲ್ಲಿ ಯಶಸ್ಸು ಕಾಣಬಹುದು.&lt;/p&gt;&lt;img&gt;&lt;p&gt;ಅನೇಕರ ಮನೆಯಲ್ಲಿ ಉಪ್ಪಿನ ಡಬ್ಬಿ ಖಾಲಿಯಾಗಿರುತ್ತದೆ. ಖಾಲಿಯಾಗಿರುವ ಉಪ್ಪಿನ ಡಬ್ಬ ಅಶುಭ. ಮನೆಯಲ್ಲಿರುವ ಉಪ್ಪಿನ ಡಬ್ಬ ತುಂಬಿರಬೇಕು. ನೀವು ಶುಕ್ರವಾರ ಉಪ್ಪಿನ ಡಬ್ಬವನ್ನು ತುಂಬಿಸಿ. ಶುಕ್ರವಾರ ಈ ಕೆಲಸ ಮಾಡಿದ್ರೆ ಸಂಪತ್ತು, ಸಮೃದ್ಧಿ ನಿಮ್ಮದಾಗುತ್ತದೆ.&lt;/p&gt;&lt;img&gt;&lt;p&gt;ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡ್ಬಾರದು ಅಂದ್ರೆ ಮನೆಯ ಮುಖ್ಯ ಬಾಗಿಲು ಮುಖ್ಯ. ಮನೆಯ ಮುಖ್ಯ ಬಾಗಿಲು ಶುದ್ಧವಾಗಿದ್ದರೆ ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ. ನೀವು ಪ್ರತಿ ಶನಿವಾರ ಮುಖ್ಯಬಾಗಿಲಿಗೆ ಸ್ವಲ್ಪ ಉಪ್ಪನ್ನು ಚೆಲ್ಲಬೇಕು. ಇದ್ರಿಂದ ನಕಾರಾತ್ಮ ಶಕ್ತಿ ದೂರವಾಗುತ್ತದೆ.&lt;/p&gt;&lt;img&gt;&lt;p&gt;ಸಂಬಳ ಬಂದ ದಿನ ಹಣ ತುಂಬಿದ ಪರ್ಸ್ ಬಳಿ ಅಥವಾ ಕಾರ್ಡ್ ಬಳಿ ನೀವು ಉಪ್ಪನ್ನು ಇಡಬೇಕು. ಇದು ಸಮೃದ್ಧಿಯ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಉಪ್ಪು, ಹಣವನ್ನು ಆಕರ್ಷಿಸುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಮನಸ್ಸಿನ ಶಾಂತಿಗೆ, ಕಷ್ಟಗಳನ್ನು ದೂರ ಮಾಡಲು ನೀವು ಉಪ್ಪು ನೀರಿನ ಉಪಾಯ ಮಾಡಬಹುದು. ಮೊದಲು ಕೈನಲ್ಲಿನ ಸ್ವಲ್ಪ ಉಪ್ಪನ್ನು ಹಿಡಿದುಕೊಳ್ಳಿ. ನಂತ್ರ ನಿಮ್ಮ ಮನಸ್ಸಿನ ನೋವು, ಸಮಸ್ಯೆಗಳನ್ನು ಹೇಳಿಕೊಳ್ಳಿ. ನಂತ್ರ ಶುದ್ಧ ನೀರಿನಿಂದ ಕೈತೊಳೆಯಿರಿ. ನನ್ನ ಮನಸ್ಸಿನ ಎಲ್ಲ ಭಾರವನ್ನು ಕಡಿಮೆ ಮಾಡಲಿ ಅಂತ ಮನಸ್ಸಿನಲ್ಲಿ ಹೇಳಿಕೊಂಡು ನೀವು ಕೈ ತೊಳೆಯುವುದ್ರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಕಿರಿಕಿರಿ ನೀಡುತ್ತಿದ್ದ ನಿಮ್ಮ ಸಮಸ್ಯೆ ದೂರವಾಗುತ್ತದೆ.&lt;/p&gt;&lt;img&gt;&lt;p&gt;ಒಂದು ಗಾಜಿನ ಬೌಲ್ ತೆಗೆದುಕೊಂಡು ಅದಕ್ಕೆ ಉಪ್ಪನ್ನು ಹಾಕಿ, ಅದನ್ನು ಮನೆಯ ಮೂಲೆಯಲ್ಲಿ ಇಡಿ. ಇದು ಮನೆಯ ಶಕ್ತಿಯನ್ನು ಶುದ್ಧಿಕರಿಸುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರ ಮಾಡಿ, ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ. ಆದ್ರೆ ಬೌಲ್ ನಲ್ಲಿರುವ ಉಪ್ಪನ್ನು ಆಗಾಗ ಬದಲಿಸುವುದು ಅಗತ್ಯ. ತಿಂಗಳವರೆಗೆ ಉಪ್ಪನ್ನು ಬದಲಿಸದಿದ್ದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ಅತೀ ಸರಳ ವಿಧಾನದ ಮೂಲಕ ನೀವು ಇಡೀ ಮನೆಯನ್ನು ನೆಗೆಟಿವ್ ಎನರ್ಜಿಯಿಂದ ಮುಕ್ತಗೊಳಿಸಬಹುದು. ಒಂದು ಬಕೆಟ್ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ, ಆ ನೀರಿನಲ್ಲಿ ಮನೆ ಕ್ಲೀನ್ ಮಾಡಿದ್ರೆ ಸಾಕು.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/vaastu/salt-tips-to-reduce-negativity-and-increase-wealth-and-peace-at-home-0xv49q2"/>
        </item>
        <item>
            <title><![CDATA[ಕಲಸಿದ ಹಿಟ್ಟಿನ ಮೇಲೆ ಬೆರಳುಗಳ ಗುರುತು ಏಕೆ ಮಾಡ್ತಾರೆ, ಪೂರ್ವಜರಿಗೂ ಇದಕ್ಕೂ ಉಂಟು ನೇರ ಸಂಬಂಧ!]]></title>
            <link>https://kannada.asianetnews.com/gallery/food/why-do-we-leave-fingerprints-on-kneaded-dough-the-deep-mystery-related-to-ancestors-3fn8cgz</link>
            <guid isPermaLink="true">https://kannada.asianetnews.com/gallery/food/why-do-we-leave-fingerprints-on-kneaded-dough-the-deep-mystery-related-to-ancestors-3fn8cgz</guid>
            <pubDate>Thu, 07 May 2026 18:41:29 +0530</pubDate>
            <description><![CDATA[&lt;p&gt;&lt;strong&gt;Fingerprints on dough&lt;/strong&gt;: ಕಲಸಿದ ಹಿಟ್ಟಿನ ಮೇಲೆ ಬೆರಳುಗಳ ಗುರುತುಗಳನ್ನು ಮಾಡುವ ಹಿಂದೆ ಪ್ರಾಚೀನ ನಂಬಿಕೆಗಳು ಮತ್ತು ಪಿತೃಗಳಿಗೆ ಸಂಬಂಧಿಸಿದ ಒಂದು ಆಳವಾದ ರಹಸ್ಯವಿದೆ. ಇದರ ಹಿಂದಿನ ಕಾರಣವೇನು ಎಂಬುದನ್ನು ಇಲ್ಲಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr18t7rrnw4d79nty6sacw6f,imgname-thumbnail---2026-05-07t183719.479-1778159263512.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Fingerprints on dough&lt;/strong&gt;: ಕಲಸಿದ ಹಿಟ್ಟಿನ ಮೇಲೆ ಬೆರಳುಗಳ ಗುರುತುಗಳನ್ನು ಮಾಡುವ ಹಿಂದೆ ಪ್ರಾಚೀನ ನಂಬಿಕೆಗಳು ಮತ್ತು ಪಿತೃಗಳಿಗೆ ಸಂಬಂಧಿಸಿದ ಒಂದು ಆಳವಾದ ರಹಸ್ಯವಿದೆ. ಇದರ ಹಿಂದಿನ ಕಾರಣವೇನು ಎಂಬುದನ್ನು ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ನಮ್ಮ ಹಿರಿಯರು ಯಾವಾಗಲೂ ತಿನ್ನುವ-ಕುಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಇವುಗಳನ್ನು ನಾವು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ, ಆದರೆ ಅವುಗಳ ಹಿಂದಿನ ಕಾರಣ ಮಾತ್ರ ನಮಗೆ ತಿಳಿದಿರುವುದಿಲ್ಲ. ಅಂತಹದ್ದೇ ಒಂದು ನಿಯಮ ಹಿಟ್ಟು ಕಲಸುವುದಕ್ಕೆ ಸಂಬಂಧಿಸಿದೆ. ರೊಟ್ಟಿ ಅಥವಾ ಚಪಾತಿ ಮಾಡಲು ಹಿಟ್ಟು ಕಲಸುವಾಗ ಅಮ್ಮ ಅಥವಾ ಅಜ್ಜಿ ಅದರ ಮೇಲೆ ಬೆರಳುಗಳಿಂದ ಒತ್ತಿ ಗುರುತು ಮಾಡುವುದನ್ನು ಅಥವಾ ಸಣ್ಣ ಗುಳಿಗಳನ್ನು ಮಾಡುವುದನ್ನು ನೀವು ಗಮನಿಸಿರಬಹುದು.ನಮ್ಮಲ್ಲಿ ಅನೇಕರು ಇದನ್ನು ನೋಡಿದ್ದರೂ ಸಹ, ಏಕೆ ಹೀಗೆ ಮಾಡುತ್ತಾರೆ ಎಂದು ತಿಳಿಯಲು ಎಂದೂ ಪ್ರಯತ್ನಿಸಿರುವುದಿಲ್ಲ. ಈ ಲೇಖನದಲ್ಲಿ ಹಿಟ್ಟು ಕಲಸಿದ ನಂತರ ಅದರ ಮೇಲೆ ಬೆರಳುಗಳ ಗುರುತುಗಳನ್ನು ಏಕೆ ಮಾಡಲಾಗುತ್ತದೆ ಎಂಬ ಆಸಕ್ತಿದಾಯಕ ವಿಷಯವನ್ನು ನಾವು ನಿಮಗೆ ತಿಳಿಸುತ್ತೇವೆ.&lt;/p&gt;&lt;img&gt;&lt;p&gt;ಇದು ಕೇವಲ ಸಾಮಾನ್ಯ ಅಭ್ಯಾಸ ಅಥವಾ ಕಾಕತಾಳೀಯವಲ್ಲ. ಬದಲಾಗಿ ಇದರ ಹಿಂದೆ ನಮ್ಮ ಶಾಸ್ತ್ರಗಳು ಮತ್ತು ಪ್ರಾಚೀನ ನಂಬಿಕೆಗಳಿಗೆ ಸಂಬಂಧಿಸಿದ ಒಂದು ಕುತೂಹಲಕಾರಿ ರಹಸ್ಯ ಅಡಗಿದೆ. ಶತಮಾನಗಳಿಂದಲೂ ಭಾರತೀಯ ಪರಂಪರೆಯಲ್ಲಿ ಅಡುಗೆಮನೆಯನ್ನು ಮನೆಯ ಅತ್ಯಂತ ಪವಿತ್ರ ಭಾಗವೆಂದು ಪರಿಗಣಿಸಲಾಗಿದೆ. ಇದು ಕೇವಲ ಅಡುಗೆ ಮಾಡುವ ಸ್ಥಳವಲ್ಲ, ಬದಲಾಗಿ ಇದು ಮನೆಯ ಸಮೃದ್ಧಿ, ನಮ್ಮ ಆರೋಗ್ಯ ಮತ್ತು ಅದೃಷ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ.&lt;/p&gt;&lt;img&gt;&lt;p&gt;ಹಿಂದೂ ಧರ್ಮದಲ್ಲಿ ಪೂರ್ವಜರಿಗೆ ಅಂದರೆ 'ಪಿತೃಗಳಿಗೆ' ಸಂಬಂಧಿಸಿದ 'ಪಿಂಡದಾನ' ಪ್ರಕ್ರಿಯೆಯನ್ನು ಅತ್ಯಂತ ಮುಖ್ಯವಾದುದೆಂದು ಪರಿಗಣಿಸಲಾಗಿದೆ. ಕುಟುಂಬದ ಸದಸ್ಯರು ನಿಧನರಾದಾಗ, ಅವರ ಆತ್ಮದ ಶಾಂತಿಗಾಗಿ ಮತ್ತು ಸದ್ಗತಿ ದೊರಕಿಸಲು ಪಿಂಡದಾನ ಮಾಡಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಪಿಂಡದಾನದ ಪ್ರಕ್ರಿಯೆಯಲ್ಲಿ ಬೇಯಿಸಿದ ಅನ್ನ ಅಥವಾ ಕಲಿಸಿದ ಹಿಟ್ಟಿನ ಗೋಲಾಕಾರದ ಪಿಂಡವನ್ನು ತಯಾರಿಸಲಾಗುತ್ತದೆ. ಇವುಗಳನ್ನು ನಮ್ಮ ಪಿತೃಗಳಿಗೆ ಆಹಾರದ ರೂಪದಲ್ಲಿ ಅರ್ಪಿಸಲಾಗುತ್ತದೆ. ಹಿಟ್ಟು ಕಲಸಿದ ನಂತರ ಬೆರಳುಗಳ ಗುರುತು ಮಾಡುವ ವಿಷಯವು ಇದರೊಂದಿಗೆ ನೇರ ಸಂಬಂಧ ಹೊಂದಿದೆ.&lt;/p&gt;&lt;img&gt;&lt;p&gt;ನಾವು ಅಡುಗೆಮನೆಯಲ್ಲಿ ಹಿಟ್ಟನ್ನು ಕಲಸಿ ಅದನ್ನು ಸಂಪೂರ್ಣವಾಗಿ ನುಣುಪಾಗಿ ಅಥವಾ ಗೋಲಾಕಾರದಲ್ಲಿಟ್ಟರೆ, ಅದು ನೋಡಲು ಪೂರ್ವಜರಿಗಾಗಿ ತಯಾರಿಸಿದ 'ಪಿಂಡ'ದಂತೆ ಕಾಣುತ್ತದೆ. ಶಾಸ್ತ್ರಗಳ ಪ್ರಕಾರ, ಪಿತೃಗಳ ಆಹಾರದಂತೆ ಕಾಣುವ ಅಂತಹ ಗೋಲಾಕಾರದ ಹಿಟ್ಟಿನಿಂದ ಮಾಡಿದ ಚಪಾತಿ ತಿನ್ನುವುದರಿಂದ ತಿಳಿಯದೆಯೂ ಪಾಪ ಅಂಟಿಕೊಳ್ಳಬಹುದು. ಏಕೆಂದರೆ ಯಾವುದೇ ಗುರುತುಗಳಿಲ್ಲದ ನುಣುಪಾದ ಹಿಟ್ಟಿನ ಉಂಡೆಯನ್ನು ಪೂರ್ವಜರ ಪಾಲಿನ ಪಿಂಡ ಎಂದು ನಂಬಲಾಗುತ್ತದೆ, ಇದನ್ನು ಜೀವಂತವಾಗಿರುವವರು ಸೇವಿಸಬಾರದು.&lt;/p&gt;&lt;img&gt;&lt;p&gt;ಇಂತಹ ಅಚಾತುರ್ಯದ ಪಾಪದಿಂದ ಪಾರಾಗಲು ಮಹಿಳೆಯರು ಹಿಟ್ಟು ಕಲಸಿದ ತಕ್ಷಣ ಅದರ ಮೇಲೆ ತಮ್ಮ ಬೆರಳುಗಳನ್ನು ಒತ್ತಿ ಗುರುತು ಮಾಡುತ್ತಾರೆ. ಬೆರಳುಗಳಿಂದ ಮಾಡಿದ ಈ ಗುರುತುಗಳು, ಈ ಹಿಟ್ಟು ಪೂರ್ವಜರಿಗೆ ಇಟ್ಟಿರುವ 'ಪಿಂಡ'ವಲ್ಲ, ಬದಲಾಗಿ ಮನೆಯ ಸದಸ್ಯರ ಹೊಟ್ಟೆ ತುಂಬಿಸಲು ಕಲಸಿದ ಹಿಟ್ಟು ಎಂಬುದಕ್ಕೆ ಸಾಕ್ಷಿಯಾಗಿರುತ್ತದೆ.&lt;/p&gt;&lt;p&gt;ಕೇವಲ ಹಿಟ್ಟು ಮಾತ್ರವಲ್ಲದೆ, ಮನೆಯಲ್ಲಿ ಯಾವುದೇ ಗೋಲಾಕಾರದ ಖಾದ್ಯಗಳನ್ನು ತಯಾರಿಸುವಾಗಲೂ ಅವುಗಳನ್ನು ಸಂಪೂರ್ಣವಾಗಿ ಗೋಲವಾಗಿ ಬಿಡುವುದಿಲ್ಲ. ಅವುಗಳನ್ನು ಕರಿಯುವ ಅಥವಾ ಬೇಯಿಸುವ ಮೊದಲು ಅವುಗಳ ಮಧ್ಯಭಾಗದಲ್ಲಿ ಬೆರಳು ಅಥವಾ ಹೆಬ್ಬೆರಳಿನಿಂದ ಸಣ್ಣದಾಗಿ ಗುಳಿ ಮಾಡಲಾಗುತ್ತದೆ. ಇವೆಲ್ಲವೂ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ನಂಬಿಕೆಗಳ ಭಾಗವಾಗಿವೆ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/why-do-we-leave-fingerprints-on-kneaded-dough-the-deep-mystery-related-to-ancestors-3fn8cgz"/>
        </item>
        <item>
            <title><![CDATA[ಮನೆಗೆ ಅದೃಷ್ಟ ತರುವ ಡೋರ್ ಮ್ಯಾಟ್: ಯಾವ ದಿಕ್ಕಿನ ಬಾಗಿಲಿಗೆ ಯಾವ ಬಣ್ಣ ಶ್ರೇಷ್ಠ?]]></title>
            <link>https://kannada.asianetnews.com/webstories/vaastu/vastu-tips-main-door-mat-colors-to-bring-good-luck-and-wealth-sat-5ecs9gf</link>
            <guid isPermaLink="true">https://kannada.asianetnews.com/webstories/vaastu/vastu-tips-main-door-mat-colors-to-bring-good-luck-and-wealth-sat-5ecs9gf</guid>
            <pubDate>Thu, 07 May 2026 13:32:22 +0530</pubDate>
            <description><![CDATA[ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ನಿಮ್ಮ ಮನೆಯ ಬಾಗಿಲಿನ ದಿಕ್ಕಿಗೆ ಅನುಗುಣವಾಗಿ ಸರಿಯಾದ ಬಣ್ಣದ ಕಾಲು ಒರೆಸುವ ಮ್ಯಾಟ್ ಬಳಸುವುದರಿಂದ ಅದೃಷ್ಟ, ಸುಖ-ಶಾಂತಿ ಮತ್ತು ಆರ್ಥಿಕ ಲಾಭವನ್ನು ಪಡೆಯಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01k06hxeq2cdka3dpf9dttg8qa,imgname-9e31f4d2-7d26-498d-a6cd-22ad7416a514-1752566774498.jpg" type="image/jpeg" height="390" width="690"/>
            <category>vaastu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/vaastu/vastu-tips-main-door-mat-colors-to-bring-good-luck-and-wealth-sat-5ecs9gf"/>
        </item>
        <item>
            <title><![CDATA[ಮಾವಿನ ಎಲೆಗಳಿಂದ ತೋರಣ ಕಟ್ಟೋದು ಓಕೆ, ಆದ್ರೆ ಮನೆ ಮುಂದೆ ಇದೇ ಮರ ಇರ್ಬಾದು ಅನ್ನೋದ್ಯಾಕೆ?]]></title>
            <link>https://kannada.asianetnews.com/gallery/life/is-it-good-to-have-a-mango-tree-in-front-of-the-house-vastu-tips-and-remedies-7guibnu</link>
            <guid isPermaLink="true">https://kannada.asianetnews.com/gallery/life/is-it-good-to-have-a-mango-tree-in-front-of-the-house-vastu-tips-and-remedies-7guibnu</guid>
            <pubDate>Sat, 02 May 2026 12:19:48 +0530</pubDate>
            <description><![CDATA[&lt;p&gt;&lt;strong&gt;Vastu Shastra for plants: &lt;/strong&gt;ಮನೆಯ ಆವರಣದಲ್ಲಿ ಮರಗಿಡಗಳನ್ನು ಬೆಳೆಸುವಾಗ ದಿಕ್ಕು ಮತ್ತು ಸ್ಥಾನಕ್ಕೆ ಹೆಚ್ಚಿನ ಮಹತ್ವವಿದೆ. ಮಾವಿನ ಎಲೆಗಳು ಮತ್ತು ಹಣ್ಣುಗಳು ನಮ್ಮ ಸಂಪ್ರದಾಯದಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲ್ಪಟ್ಟರೂ, ಮನೆಯ ಮುಂಭಾಗದಲ್ಲಿ ಮಾವಿನ ಮರ ಇರುವುದು ಕೆಲವು ಪರಿಣಾಮಗಳನ್ನು ಬೀರಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k153h3ysmwmwf85vf45ts763,imgname-bfn-1753591877593.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Vastu Shastra for plants: &lt;/strong&gt;ಮನೆಯ ಆವರಣದಲ್ಲಿ ಮರಗಿಡಗಳನ್ನು ಬೆಳೆಸುವಾಗ ದಿಕ್ಕು ಮತ್ತು ಸ್ಥಾನಕ್ಕೆ ಹೆಚ್ಚಿನ ಮಹತ್ವವಿದೆ. ಮಾವಿನ ಎಲೆಗಳು ಮತ್ತು ಹಣ್ಣುಗಳು ನಮ್ಮ ಸಂಪ್ರದಾಯದಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲ್ಪಟ್ಟರೂ, ಮನೆಯ ಮುಂಭಾಗದಲ್ಲಿ ಮಾವಿನ ಮರ ಇರುವುದು ಕೆಲವು ಪರಿಣಾಮಗಳನ್ನು ಬೀರಬಹುದು.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಮಹತ್ವದ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಪಂಡಿತರು ವಾಸ್ತುವಿನ ಬಗ್ಗೆ ಅನೇಕ ವಿಷಯಗಳನ್ನು ತಿಳಿಸುತ್ತಿರುತ್ತಾರೆ. ಯಾರು ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಾರೋ, ಅವರು ಯಾವುದೇ ಸಮಸ್ಯೆಗಳಿಲ್ಲದೆ ಆನಂದಮಯ ಜೀವನವನ್ನು ನಡೆಸುತ್ತಾರೆ. ಆದರೆ ವಾಸ್ತು ನಿಯಮಗಳನ್ನು ಉಲ್ಲಂಘಿಸುವವರು ಅನೇಕ ಇಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರವು ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಮುಖ್ಯವಾಗಿ ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಂದೆ ಕೆಲವು ರೀತಿಯ ಮರಗಳು ಇರುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ಪಂಡಿತರು ಹೇಳುತ್ತಾರೆ. ಅವು ಆ ಮನೆಯ ಕುಟುಂಬದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ. ಹಾಗಾದರೆ ವಾಸ್ತು ತಜ್ಞರ ಪ್ರಕಾರ ಮನೆಯ ಮುಂದೆ ಮಾವಿನ ಮರ ಇರುವುದು ಒಳ್ಳೆಯದೇ ಅಥವಾ ಅಲ್ಲವೇ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;ಅನೇಕ ಜನರು ತಮ್ಮ ಮನೆಯ ಆವರಣದಲ್ಲಿ ಮಾವಿನ ಮರವನ್ನು ಬೆಳೆಸುತ್ತಾರೆ. ಕೆಲವರು ಮನೆಯ ಮುಂಭಾಗದಲ್ಲಿ ಮಾವಿನ ಮರವನ್ನು ನೆಟ್ಟರೆ, ಇನ್ನು ಕೆಲವರು ಹಿತ್ತಲಿನಲ್ಲಿ ಬೆಳೆಸುತ್ತಾರೆ. ಮನೆಯ ಮುಂದೆ ಗಿಡಮರಗಳಿದ್ದರೆ ಶುದ್ಧ ಗಾಳಿ ಬರುತ್ತದೆ ಮತ್ತು ಹಣ್ಣಿನ ಮರಗಳಿರುವುದು ತುಂಬಾ ಒಳ್ಳೆಯದು ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಕೆಲವು ಮರಗಳು ಇರುವುದು ಅಶುಭ ಎನ್ನಲಾಗುತ್ತದೆ. ಹಾಗಾದರೆ ಮನೆಯ ಮುಂದೆ ಮಾವಿನ ಮರ ಇರಬಹುದೇ? ಇದು ಶುಭವೇ ಅಥವಾ ಅಶುಭವೇ?&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಮಾವಿನ ಮರ ಇರುವುದು ಅಷ್ಟೊಂದು ಒಳ್ಳೆಯದಲ್ಲ. ಇದು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಆದ್ದರಿಂದ ಮನೆಯಿಂದ ಸ್ವಲ್ಪ ದೂರದಲ್ಲಿ ಮಾವಿನ ಮರವನ್ನು ನೆಡುವುದು ಉತ್ತಮ. ವಾಸ್ತು ಪ್ರಕಾರ ಮನೆಯ ಮುಂದೆ ಮಾವಿನ ಮರ ಇರುವುದು ಮತ್ತು ಆ ಮರದ ನೆರಳು ಮನೆಯ ಮೇಲೆ ಬೀಳುವುದು ಅಶುಭಕರ. ಯಾವಾಗಲೂ ಮನೆಯ ಮೇಲೆ ಮಾವಿನ ಮರದ ನೆರಳು ಬೀಳದಂತಹ ಪ್ರದೇಶದಲ್ಲಿ ಮಾತ್ರ ಮಾವಿನ ಮರವನ್ನು ನೆಡಬೇಕು.&lt;/p&gt;&lt;img&gt;&lt;p&gt;ಮನೆಯ ಮುಂದೆ ಮಾವಿನ ಮರ ಇರುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ಅಷ್ಟೇ ಅಲ್ಲದೆ ಕುಟುಂಬದಲ್ಲಿಯೂ ಅನೇಕ ಕಲಹಗಳು ಅಥವಾ ಸಮಸ್ಯೆಗಳು ತಲೆದೋರುತ್ತವೆ. ಅಲ್ಲದೆ ಮನೆಯ ಮುಂದೆ ಮಾವಿನ ಮರವಿದ್ದರೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಕೂಡ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯ ಮುಂಭಾಗದಲ್ಲಿ ಮಾವಿನ ಮರವನ್ನು ನೆಡಬಾರದು ಎಂಬುದು ಪಂಡಿತರ ಅಭಿಪ್ರಾಯ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಮಾವಿನ ಮರವು ಅತ್ಯಂತ ಶುಭಪ್ರದವಾದುದು. ಇದರ ಎಲೆಗಳನ್ನು ಮನೆಯ ಮುಂದೆ ತೋರಣವಾಗಿ ಕಟ್ಟುತ್ತೇವೆ ಮತ್ತು ಹಣ್ಣುಗಳನ್ನು ದೇವರಿಗೆ ಅರ್ಪಿಸುತ್ತೇವೆ. ಈ ಕಾರಣದಿಂದ ಇದು ಮನೆಯ ಮುಂದೆ ಇರುವುದು ಒಳ್ಳೆಯದು ಎಂದು ಅನೇಕರು ನಂಬುತ್ತಾರೆ. ಆದರೆ ವಾಸ್ತುವಿನ ದೃಷ್ಟಿಯಿಂದ ಇದು ಮನೆಯ ಮುಂದೆ ಇರುವುದು ಸರಿಯಲ್ಲ. ಒಂದು ವೇಳೆ ನೀವು ಮನೆಯ ಆವರಣದಲ್ಲಿ ಮಾವಿನ ಮರವನ್ನು ನೆಡಲೇಬೇಕೆಂದಿದ್ದರೆ, ಅದನ್ನು ನೈರುತ್ಯ ದಿಕ್ಕಿನಲ್ಲಿ ನೆಡುವುದು ತುಂಬಾ ಶುಭಪ್ರದ ಎಂದು ಪಂಡಿತರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಮೇಲಿನ ಮಾಹಿತಿಯನ್ನು ಕೇವಲ ಪಂಡಿತರು ಮತ್ತು ತಜ್ಞರ ಅಭಿಪ್ರಾಯದ ಆಧಾರದ ಮೇಲೆ ನೀಡಲಾಗಿದೆ. ಇದನ್ನು ವೈಜ್ಞಾನಿಕವಾಗಿ ಧೃಡೀಕರಿಸಲಾಗಿಲ್ಲ ಎಂಬುದನ್ನು ಗಮನಿಸಬೇಕು.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/is-it-good-to-have-a-mango-tree-in-front-of-the-house-vastu-tips-and-remedies-7guibnu"/>
        </item>
        <item>
            <title><![CDATA[Vastu Tips: ಮುಖ್ಯದ್ವಾರದಲ್ಲಿ ಕಟ್ಟಿದ ತೋರಣ ನಿಮ್ಮ ಮನೆಯ ನೆಮ್ಮದಿಯನ್ನೆ ಮಾಡುತ್ತೆ ಹಾಳು!]]></title>
            <link>https://kannada.asianetnews.com/gallery/vaastu/vastu-tips-dry-thoran-bring-negative-energy-to-home-9g7wz09</link>
            <guid isPermaLink="true">https://kannada.asianetnews.com/gallery/vaastu/vastu-tips-dry-thoran-bring-negative-energy-to-home-9g7wz09</guid>
            <pubDate>Mon, 04 May 2026 22:34:12 +0530</pubDate>
            <description><![CDATA[&lt;p&gt;Vastu Tips: ನಿಮ್ಮ ಮನೆಯನ್ನು ಸಹ ತೋರಣದಿಂದ ಸಿಂಗರಿಸಿದ್ದೀರಾ? ಹಾಗಿದ್ರೆ ನೀವು ತಿಳಿದುಕೊಳ್ಳಬೇಕಾದ ವಿಷ್ಯ ಸಾಕಷ್ಟಿದೆ. ಯಾಕಂದ್ರೆ ನೀವು ಮನೆಯಲ್ಲಿ ಒಣಗಿದ ತೋರಣವನ್ನು ಹಾಗೇ ಬಿಟ್ಟರೆ ಅದರಿಂದ ನಿಮಗೆ ನಷ್ಟ ಆಗೋದು ಖಚಿತಾ. ಹಾಗಿದ್ರೆ ಆ ನಿಯಮಗಳ ಬಗ್ಗೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01d7rhy8sy8qgmwprqn9ycpevr,imgname-Thorana.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu Tips: ನಿಮ್ಮ ಮನೆಯನ್ನು ಸಹ ತೋರಣದಿಂದ ಸಿಂಗರಿಸಿದ್ದೀರಾ? ಹಾಗಿದ್ರೆ ನೀವು ತಿಳಿದುಕೊಳ್ಳಬೇಕಾದ ವಿಷ್ಯ ಸಾಕಷ್ಟಿದೆ. ಯಾಕಂದ್ರೆ ನೀವು ಮನೆಯಲ್ಲಿ ಒಣಗಿದ ತೋರಣವನ್ನು ಹಾಗೇ ಬಿಟ್ಟರೆ ಅದರಿಂದ ನಿಮಗೆ ನಷ್ಟ ಆಗೋದು ಖಚಿತಾ. ಹಾಗಿದ್ರೆ ಆ ನಿಯಮಗಳ ಬಗ್ಗೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಾವು ಮತ್ತು ಅಶೋಕ ಎಲೆಗಳಿಂದ ಮಾಡಿದ ತೋರಣ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಆದರೆ ಈ ತೋರಣದಿಂದ ಕಲಹ ಹೆಚ್ಚಾಗಬಹುದು, ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು ಮತ್ತು ಆರ್ಥಿಕ ಕೊರತೆಗೆ ಕಾರಣವಾಗಬಹುದು. ನೀವು ಸಹ ನಿಮ್ಮ ತೋರಣಕ್ಕೆ ಸಂಬಂಧಿಸಿದಂತೆ ಈ ತಪ್ಪನ್ನು ಮಾಡುತ್ತಿದ್ದೀರಾ?&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ತೋರಣ ನೇತುಹಾಕುವುದರಿಂದ ಮನೆಗೆ ಸಕಾರಾತ್ಮಕತೆ ಮತ್ತು ಶುದ್ಧತೆ ಎರಡನ್ನೂ ತರುತ್ತದೆ. ಇದು ಮನೆಯ ಸದಸ್ಯರು ಆರೋಗ್ಯವಾಗಿ ಮತ್ತು ಸಮೃದ್ಧವಾಗಿರಲು ಸಹಾಯ ಮಾಡುತ್ತದೆ. ಆದರೆ, ನೀವು ಮಾವು ಅಥವಾ ಅಶೋಕ ಎಲೆಗಳಿಂದ ಮಾಡಿದ ತೋರಣವನ್ನು ನೇತುಹಾಕಿದ್ದರೆ, ಅದು ದೀರ್ಘಕಾಲದವರೆಗೆ ಸ್ಥಳದಲ್ಲಿ ಉಳಿಯಲು ಬಿಡಬೇಡಿ. ಏಕೆಂದರೆ, ವಾಸ್ತು ಶಾಸ್ತ್ರದ ಪ್ರಕಾರ, ಈ ಎಲೆಗಳು ಒಣಗಿದ ಕ್ಷಣ, ನಮ್ಮ ಜೀವನದಲ್ಲೂ ಸಹ ತೊಂದರೆಗಳು ಬರೋದಕ್ಕೆ ಶುರುವಾಗುತ್ತೆ, ಇದು ಒತ್ತಡ ಮತ್ತು ತೊಂದರೆಗಳಿಗೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ಕೆಲವೊಮ್ಮೆ, ಎಲ್ಲವೂ ಸರಿಯಾಗಿದೆ ಎಂದು ತೋರುತ್ತಿದ್ದರೂ ಸಹ, ಕೆಲಸಗಳು ಸ್ಥಗಿತಗೊಳ್ಳುತ್ತಲೇ ಇರುತ್ತವೆ. ಹೊಸ ಯೋಜನೆಯನ್ನು ಪ್ರಾರಂಭಿಸುವಾಗ ಅಥವಾ ಶುಭ ಕಾರ್ಯಕ್ರಮವನ್ನು ಯೋಜಿಸುವಾಗ, ಸಣ್ಣಪುಟ್ಟ ಅಡೆತಡೆಗಳು ಯಾವಾಗಲೂ ಉದ್ಭವಿಸುತ್ತವೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಮನೆಯ ಹೊರಗೆ ಹಾಕಿದಂತಹ ತೋರಣ ಒಣಗಿದ್ದರೆ ಅವುಗಳನ್ನು ಶೀಘ್ರದಲ್ಲೇ ಹೊರ ಹಾಕಿ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದಲ್ಲಿ, ತೋರಣ ಬದಲಾಯಿಸಲು ನಿರ್ದಿಷ್ಟ ದಿನಗಳನ್ನು ಗೊತ್ತುಪಡಿಸಲಾಗಿದೆ. ಉದಾಹರಣೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರಗಳು ಅಥವಾ ಏಕಾದಶಿ ಮತ್ತು ಪೂರ್ಣಿಮೆಯ ಶುಭ ದಿನಗಳಲ್ಲಿ ಈ ಬದಲಾವಣೆಯನ್ನು ಮಾಡುವುದು ಅತ್ಯಂತ ಶುಭ ಮತ್ತು ಸಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ. ಆದರೆ, ಅದನ್ನು ಕಸದ ಬುಟ್ಟಿಗೆ ಎಸೆಯಬೇಡಿ; ಬದಲಾಗಿ, ಅದನ್ನು ಮಣ್ಣಿನಲ್ಲಿ ಹೂತುಹಾಕಿ ಅಥವಾ ಹರಿಯುವ ನೀರಿನಲ್ಲಿ ಮುಳುಗಿಸಿ.&lt;/p&gt;&lt;img&gt;&lt;p&gt;ಹೊಸ ತೋರಣ ನೇತು ಹಾಕಿದ ನಂತರ, ಅದನ್ನು 10 ರಿಂದ 15 ದಿನಗಳ ನಂತರ ಬದಲಾಯಿಸಬೇಕು; ಇದು ಮನೆಯ ಶಕ್ತಿಯ ಮೇಲೆ ಪರಿಣಾಮ ಬೀರದಂತೆ ಮತ್ತು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ, ಒಣಗಿದ ಎಲೆಗಳನ್ನು ನಿಶ್ಚಲತೆ, ನಕಾರಾತ್ಮಕತೆ ಮತ್ತು ದೌರ್ಬಲ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ನೀವು ಮನೆಯಲ್ಲಿ ಒಣಗಿದ ತೋರಣ ಇದ್ದರೆ ಕೂಡಲೇ ಅದನ್ನು ಬದಲಾಯಿಸಿ, ಇದರಿಂದ ಒತ್ತಡ, ಸಮಸ್ಯೆ, ಉಂಟಾಗುವ ಸಾಧ್ಯತೆ ಇದೆ ಎಚ್ಚರ ವಹಿಸಿ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/vastu-tips-dry-thoran-bring-negative-energy-to-home-9g7wz09"/>
        </item>
        <item>
            <title><![CDATA[ಹಣಕ್ಕಾಗಿ ಅಲ್ಲ; ಸುಖ, ಸಂತೋಷ, ನೆಮ್ಮದಿ, ನಿದ್ದೆಗಾಗಿ ಈ 6 ಗಿಡ ಮನೆಯೊಳಗೆ ಬೆಳೆಸಿ]]></title>
            <link>https://kannada.asianetnews.com/webstories/life/top-6-health-benefits-of-indoor-plants-you-should-know-home-gardening-sat-a9y9xwf</link>
            <guid isPermaLink="true">https://kannada.asianetnews.com/webstories/life/top-6-health-benefits-of-indoor-plants-you-should-know-home-gardening-sat-a9y9xwf</guid>
            <pubDate>Fri, 22 May 2026 15:18:20 +0530</pubDate>
            <description><![CDATA[&lt;p&gt;ಗಿಡಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಕೆಲವು ಗಿಡಗಳು ವಿಶೇಷ ಸುವಾಸನೆಯನ್ನು ಹೊಂದಿರುತ್ತವೆ. ಮನೆಯೊಳಗೆ ಗಿಡಗಳನ್ನು ಬೆಳೆಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ, ಇಂಡೋರ್ ಪ್ಲಾಂಟ್ಸ್ ಬೆಳೆಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj79czxmpzb33jyde25gf0nn,imgname-indoor-low-light-plants-1771918753716.jpg" type="image/jpeg" height="390" width="690"/>
            <category>vaastu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/life/top-6-health-benefits-of-indoor-plants-you-should-know-home-gardening-sat-a9y9xwf"/>
        </item>
        <item>
            <title><![CDATA[ನಿಮ್ಮನ್ನು ಕಾಡುವ ಮಾನಸಿಕ ಅಶಾಂತಿ, ಆರ್ಥಿಕ ಸಮಸ್ಯೆಗೆ ಒಂದೇ ಪರಿಹಾರ]]></title>
            <link>https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw</link>
            <guid isPermaLink="true">https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw</guid>
            <pubDate>Wed, 29 Apr 2026 11:35:36 +0530</pubDate>
            <description><![CDATA[&lt;p&gt;ಮನೆ ಮಂದಿಯೆಲ್ಲ ಆರೋಗ್ಯವಾಗಿದ್ರೂ, ಕೈತುಂಬ ಸಂಬಳ ಬರ್ತಿದ್ರೂ ಏನೋ ಕಿರಿಕಿರಿ ಮನೆಯಲ್ಲಿರುತ್ತೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣಿಸೋದಿಲ್ಲ. ಮನೆ ಮಂದಿ ಮನಸ್ಸು ಶಾಂತವಾಗಿರೋದಿಲ್ಲ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಇದಕ್ಕೆಲ್ಲ ಕಾರಣ. ಅದನ್ನು ಅತ್ಯಂತ ಸರಳ ಉಪಾಯದಿಂದ ಬಗೆ ಹರಿಸ್ಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbx3b8dvex68tbe9jxqykf5,imgname-clove-water-1777442336013.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆ ಮಂದಿಯೆಲ್ಲ ಆರೋಗ್ಯವಾಗಿದ್ರೂ, ಕೈತುಂಬ ಸಂಬಳ ಬರ್ತಿದ್ರೂ ಏನೋ ಕಿರಿಕಿರಿ ಮನೆಯಲ್ಲಿರುತ್ತೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣಿಸೋದಿಲ್ಲ. ಮನೆ ಮಂದಿ ಮನಸ್ಸು ಶಾಂತವಾಗಿರೋದಿಲ್ಲ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಇದಕ್ಕೆಲ್ಲ ಕಾರಣ. ಅದನ್ನು ಅತ್ಯಂತ ಸರಳ ಉಪಾಯದಿಂದ ಬಗೆ ಹರಿಸ್ಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮನೆಯಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಜನರು ಬದುಕ್ತಿದ್ದರೆ ಅದಕ್ಕೆ ಕಾರಣ ವಾಸ್ತು. ಎಷ್ಟೇ ಹಣ ಇರ್ಲಿ, ಎಷ್ಟೇ ಆರೋಗ್ಯ ಇರಲಿ ನೆಮ್ಮದಿ ಇಲ್ಲ, ಸಂತೋಷವಿಲ್ಲ ಅಂದ್ರೆ ಜೀವನ ಕಷ್ಟ. ಇದಕ್ಕೆ ನಿಮ್ಮ ಮನೆ ವಾಸ್ತು ಮುಖ್ಯ ಕಾರಣವಾಗಿರುತ್ತೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ನೀವು ಮನೆ ಬದಲಿಸಬೇಕಾಗಿಲ್ಲ. ಅತ್ಯಂತ ಸರಳ ವಿಧಾನವನ್ನು ಫಾಲೋ ಮಾಡುವ ಮೂಲಕ ನೀವು ನೆಮ್ಮದಿ ಕಂಡುಕೊಳ್ಳಬಹುದು.&lt;/p&gt;&lt;img&gt;&lt;p&gt;ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಇರುವ ವಸ್ತು ಇದು. ಇದನ್ನು ಮಸಾಲೆ ಪದಾರ್ಥವಾಗಿ ಬಳಕೆ ಮಾಡಲಾಗುತ್ತದೆ. ಆದ್ರೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗುತ್ತದೆ. ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ಕಿರಿಕಿರಿ ಏನೇ ಇರಲಿ ಈ ಲವಂಗದ ನೀರು ನಿಮ್ಮೆಲ್ಲ ಸಮಸ್ಯೆಗೆ ಪರಿಹಾರವಾಗಬಹುದು ಅಂತ ಜನರು ನಂಬಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಲವಂಗದ ನೀರು ಹೆಚ್ಚು ಚರ್ಚೆ ಆಗ್ತಿದೆ.&lt;/p&gt;&lt;img&gt;&lt;p&gt;ಲವಂಗದ ನೀರು ತಯಾರಿಸೋದು ಬಹಳ ಸುಲಭ. ಹೆಚ್ಚಿನ ಪದಾರ್ಥದ ಅಗತ್ಯವಿಲ್ಲ. ಲವಂಗ ಹಾಗೂ ನೀರನ್ನು ಬಳಸಿದ್ರೆ ಸಾಕು. ಮೊದಲು ಒಂದು ಗಾಜಿನ ಅಥವಾ ತಾಮ್ರದ ಪಾತ್ರೆಯನ್ನು ತೆಗೆದುಕೊಳ್ಳಿ. ಅದಕ್ಕೆ 5 -7 ಲವಂಗವನ್ನು ಹಾಕಿ. ನಂತ್ರ ನೀರನ್ನು ಹಾಕಿ. ಇದನ್ನು ಸುಮಾರು 2 ರಿಂದ 3 ಗಂಟೆ ನೆನೆಹಾಕಿ. ಇದನ್ನು ದೇವರ ಮುಂದಿಷ್ಟು ಪ್ರಾರ್ಥನೆ ಮಾಡಿ ಬಳಕೆ ಮಾಡ್ಬಹುದು. ಹಾಗೆ ಮಾಡಿದ್ರೆ ಸಕಾರಾತ್ಮಕ ಶಕ್ತಿ ದುಪ್ಪಟ್ಟಾಗುತ್ತೆ ಎನ್ನುವ ನಂಬಿಕೆ ಇದೆ.&lt;/p&gt;&lt;img&gt;&lt;p&gt;ಲವಂಗದ ನೀರನ್ನು ನೀವು ಶಕ್ತಿವಾತಾವರಣ ಬದಲಾಗುವ, ಶಕ್ತಿಯ ಹರಿವು ಭಿನ್ನವಾಗಿರುವ ಸಮಯದಲ್ಲಿ ಬಳಸಬೇಕು. ಅಂದ್ರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಈ ನೀರನ್ನು ನೀವು ಮನೆಗೆ ಸಿಂಪಡಿಸಬೇಕು. ಇದನ್ನು ಮನೆಯ ಮುಖ್ಯದ್ವಾರದಿಂದ ಸಿಂಪಡಿಸಬೇಕು. ಮುಖ್ಯದ್ವಾರದಿಂದ ಮನೆಯ ಎಲ್ಲ ಜಾಗಕ್ಕೆ ಇದನ್ನು ಸಿಂಪಡಿಸಬೇಕು. ಆದ್ರೆ ಯಾವುದೇ ಕಾರಣಕ್ಕೂ ಬಾತ್ ರೂಮ್, ಶೌಚಾಲಯ ಹಾಗೂ ಸಿಂಕ್ ಗೆ ಇದನ್ನು ಹಾಕಬೇಡಿ. ನೀವು ನಿಮ್ಮಿಷ್ಟದ ಮಂತ್ರವನ್ನು ಪಠಿಸಬಹುದು. ಇಲ್ಲವೆ ಸಕಾರಾತ್ಮಕ ಆಲೋಚನೆಯಲ್ಲಿ ಈ ನೀರನ್ನು ಸಿಂಪಡಿಸಿ.&lt;/p&gt;&lt;img&gt;&lt;p&gt;ಮನೆಗೆ ಲವಂಗದ ನೀರನ್ನು ಸಿಂಪಡಿಸುವುದ್ರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. ಲವಂಗದ ಸುವಾಸನೆ ಮನೆಯನ್ನು ತಾಜಾಗೊಳಿಸುತ್ತದೆ. ಆರ್ಥಿಕ ಚಿಂತೆ ಕಡಿಮೆಯಾಗುತ್ತದೆ. ಮನಸ್ಸು ಹಗುರವಾದ ಅನುಭವವಾಗುತ್ತದೆ. ಸಂಬಂಧಗಳಲ್ಲಿ ಕಾಣಿಸಿಕೊಂಡ ಉದ್ವಿಗ್ನತೆ ಕಡಿಮೆಯಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಶಾಂತವಾಗಿ ನೀವು ಜೀವನದ ನಿರ್ದಾರ ತೆಗೆದುಕೊಳ್ಳಲು ಇದು ಸಹಕಾರಿ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw"/>
        </item>
        <item>
            <title><![CDATA[ಧನ ಲಕ್ಷ್ಮಿ ನಿಮ್ಮನೇಲಿ ಕಾಲು ಮುರ್ಕೊಂಡು ಕೂರಬೇಕಾ? ಮನೆಯ ಈ ಮೂಲೆ ಎಂದಿಗೂ ಖಾಲಿ ಬಿಡ್ಬೇಡಿ!]]></title>
            <link>https://kannada.asianetnews.com/gallery/vaastu/vastu-shastra-tips-to-avoid-financial-loss-at-home-suh-k351erd</link>
            <guid isPermaLink="true">https://kannada.asianetnews.com/gallery/vaastu/vastu-shastra-tips-to-avoid-financial-loss-at-home-suh-k351erd</guid>
            <pubDate>Wed, 13 May 2026 17:31:12 +0530</pubDate>
            <description><![CDATA[Vastu Tips: ನಾವು ಮನೆಯಲ್ಲಿ ಇಡುವ ವಸ್ತುಗಳು ಸಹ ನಮ್ಮ ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಲಕ್ಷ್ಮಿದೇವಿಯ ಕೋಪಕ್ಕೆ ಕಾರಣವಾಗಬಹುದು. ಇದರಿಂದ ಲಕ್ಷ್ಮಿ ಮನೆಯಿಂದ ಹೊರಹೋಗುವ ಸನ್ನಿವೇಶ ಬರಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01krb56e0g5gqaxzed6s326dxs,imgname-chatgpt-image-may-11--2026--02-45-19-pm--1--1778491013136.png" type="image/jpeg" height="390" width="690"/>
            <content:encoded><![CDATA[Vastu Tips: ನಾವು ಮನೆಯಲ್ಲಿ ಇಡುವ ವಸ್ತುಗಳು ಸಹ ನಮ್ಮ ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಲಕ್ಷ್ಮಿದೇವಿಯ ಕೋಪಕ್ಕೆ ಕಾರಣವಾಗಬಹುದು. ಇದರಿಂದ ಲಕ್ಷ್ಮಿ ಮನೆಯಿಂದ ಹೊರಹೋಗುವ ಸನ್ನಿವೇಶ ಬರಬಹುದು.&lt;img&gt;ಮನೆ ಖರೀದಿಸುವಾಗ ಎಲ್ಲರೂ ವಾಸ್ತು ನೋಡುತ್ತಾರೆ. ವಾಸ್ತು ದೋಷಗಳಿಲ್ಲದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ ನಂತರ, ಮನೆಯಲ್ಲಿ ಇಡುವ ವಸ್ತುಗಳ ವಿಷಯದಲ್ಲಿ ಆ ಜಾಗ್ರತೆ ತೆಗೆದುಕೊಳ್ಳುವುದಿಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ವಸ್ತುಗಳನ್ನು ಮನೆಯಲ್ಲಿಡುವುದರಿಂದ ವಾಸ್ತು ಹಾಳಾಗಿ ಆರ್ಥಿಕವಾಗಿ ನಷ್ಟವಾಗುವ ಅಪಾಯವಿದೆ. ಅದರಲ್ಲೂ ಮನೆಯ ಕೆಲವು ಮೂಲೆಗಳನ್ನು ಖಾಲಿ ಬಿಡುವುದು ಒಳ್ಳೆಯದಲ್ಲ. ಹಾಗಾದರೆ ಯಾವ ಮೂಲೆಗಳನ್ನು ಖಾಲಿ ಬಿಡಬಾರದು? ವಾಸ್ತು ಪ್ರಕಾರ ಯಾವ ಬದಲಾವಣೆಗಳನ್ನು ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ಎಂಬುದನ್ನು ಈಗ ತಿಳಿಯೋಣ.&lt;img&gt;&lt;p&gt;1. ಈಶಾನ್ಯ ಮೂಲೆ: ಮನೆಯ ಈಶಾನ್ಯ ಮೂಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಲಕ್ಷ್ಮಿ ಮತ್ತು ಕುಬೇರ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹೆಚ್ಚಿನ ಮನೆಗಳಲ್ಲಿ ಈ ಮೂಲೆಯಲ್ಲೇ ಪೂಜಾ ಕೋಣೆ ಇರುತ್ತದೆ. ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಪೂಜಾ ಕೋಣೆ ಇಲ್ಲದಿದ್ದರೆ, ಆ ಮೂಲೆಯನ್ನು ಖಾಲಿ ಬಿಡಬೇಡಿ. ಆ ಸ್ಥಳದಲ್ಲಿ ನೀರಿನಿಂದ ತುಂಬಿದ ಪಾತ್ರೆಯನ್ನು ಇಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.&amp;nbsp;&lt;/p&gt;&lt;p&gt;2. ನೈಋತ್ಯ ಮೂಲೆ: ಮನೆಯ ನೈಋತ್ಯ ಮೂಲೆಯನ್ನೂ ಸಹ ತಪ್ಪಾಗಿಯೂ ಖಾಲಿ ಬಿಡಬಾರದು. ವಾಸ್ತು ತಜ್ಞರ ಪ್ರಕಾರ, ನೈಋತ್ಯ ಮೂಲೆಯಲ್ಲಿ ಅಲಂಕಾರಿಕ ವಸ್ತು ಅಥವಾ ಭಾರವಾದ ವಸ್ತುವನ್ನು ಇಡಬೇಕು. ಮುಖ್ಯವಾಗಿ, ಪೀಠೋಪಕರಣ, ವಾರ್ಡ್&zwnj;ರೋಬ್, ಸೋಫಾ ಅಥವಾ ದೊಡ್ಡ ಹೂವಿನ ಕುಂಡವನ್ನು ಇಡಬೇಕು.&amp;nbsp;&lt;/p&gt;&lt;p&gt;3. ಆಗ್ನೇಯ ಮೂಲೆ: ಮನೆಯ ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎನ್ನುತ್ತಾರೆ. ನಿಮ್ಮ ಮನೆಯಲ್ಲಿ ಆಗ್ನೇಯ ಮೂಲೆ ಖಾಲಿಯಿದ್ದರೆ ಅನೇಕ ಸಮಸ್ಯೆಗಳು ಬರುತ್ತವೆ. ಉತ್ಸಾಹ ಇರುವುದಿಲ್ಲ, ಆತ್ಮವಿಶ್ವಾಸ ಕಡಿಮೆಯಾಗುತ್ತದೆ. &amp;nbsp;ಈ ದಿಕ್ಕಿನಲ್ಲಿ ಅಡುಗೆಮನೆ ನಿರ್ಮಿಸುವುದರಿಂದ ಶುಭ ಫಲಿತಾಂಶಗಳು ಬರುತ್ತವೆ. ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುವುದು ಒಳ್ಳೆಯದು.&lt;/p&gt;&lt;img&gt;&lt;p&gt;4. ವಾಯುವ್ಯ ದಿಕ್ಕು: ಮನೆಯ ವಾಯುವ್ಯ ದಿಕ್ಕನ್ನು ಕೂಡ ತಪ್ಪಾಗಿಯೂ ಖಾಲಿ ಬಿಡಬಾರದು. ಈ ದಿಕ್ಕು ಖಾಲಿಯಿದ್ದರೆ ಮನೆಯಲ್ಲಿ ಜಗಳ, ಅಪಾರ್ಥ, ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿ ಜಗಳಗಳು ಇರಬಾರದು ಎಂದರೆ ಈ ದಿಕ್ಕು ಖಾಲಿ ಇರಬಾರದು.&amp;nbsp;&lt;/p&gt;&lt;p&gt;5. ಉತ್ತರ ದಿಕ್ಕು: ಉತ್ತರ ದಿಕ್ಕಿಗೆ ಸಂಪತ್ತು ಮತ್ತು ಸಮೃದ್ಧಿಯ ಅಧಿಪತಿಯಾದ ಕುಬೇರನು ಅಧಿಪತಿ. ಈ ದಿಕ್ಕನ್ನು ಖಾಲಿ ಬಿಡುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ, ಹಣಕಾಸಿನ ತೊಂದರೆಗಳಿಗೆ ದಾರಿಯಾಗುತ್ತದೆ ಎನ್ನಲಾಗುತ್ತದೆ. ಇಲ್ಲಿ ಲಕ್ಷ್ಮಿ ಅಥವಾ ಕುಬೇರನ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ, ಈ ದಿಕ್ಕಿನಲ್ಲಿ ಹಸಿರು ಸಸ್ಯಗಳನ್ನು ಇಡುವುದು ಕೂಡ ಪ್ರಯೋಜನಕಾರಿ.&lt;/p&gt;]]></content:encoded>
            <category>vaastu</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/vaastu/vastu-shastra-tips-to-avoid-financial-loss-at-home-suh-k351erd"/>
        </item>
        <item>
            <title><![CDATA[ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿದರೆ ಕೈಯಲ್ಲಿ ಕಾಸು ನಿಲ್ಲದು, ಅಶುಭ ಕಟ್ಟಿಟ್ಟ ಬುತ್ತಿ!]]></title>
            <link>https://kannada.asianetnews.com/gallery/vaastu/negative-energy-plants-to-avoid-at-home-as-per-vastu-suh-k8ggytx</link>
            <guid isPermaLink="true">https://kannada.asianetnews.com/gallery/vaastu/negative-energy-plants-to-avoid-at-home-as-per-vastu-suh-k8ggytx</guid>
            <pubDate>Fri, 15 May 2026 10:12:59 +0530</pubDate>
            <description><![CDATA[&lt;p&gt;Negative Energy Plants ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಸಮಸ್ಯೆಗಳಿಗೆ ಕಾರಣವಾಗುತ್ತವೆಯಂತೆ. ಹಾಗಿದ್ರೆ, ಮನೆಯಲ್ಲಿ ಯಾವ ಗಿಡಗಳನ್ನು ಅಪ್ಪಿತಪ್ಪಿಯೂ ಬೆಳೆಸಬಾರದು ಎಂದು ಇಲ್ಲಿ ವಿವರವಾಗಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfn4xs4d3514kdgdzcn2z90b,imgname-indoor-cactus-plants-1769162597517.jpg" type="image/jpeg" height="390" width="690"/>
            <content:encoded><![CDATA[&lt;p&gt;Negative Energy Plants ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಸಮಸ್ಯೆಗಳಿಗೆ ಕಾರಣವಾಗುತ್ತವೆಯಂತೆ. ಹಾಗಿದ್ರೆ, ಮನೆಯಲ್ಲಿ ಯಾವ ಗಿಡಗಳನ್ನು ಅಪ್ಪಿತಪ್ಪಿಯೂ ಬೆಳೆಸಬಾರದು ಎಂದು ಇಲ್ಲಿ ವಿವರವಾಗಿ ತಿಳಿಯೋಣ.&lt;/p&gt;&lt;img&gt;ನಮ್ಮ ಸಂಸ್ಕೃತಿಯಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತು... ಮನೆಯ ನಿರ್ಮಾಣ, ದಿಕ್ಕುಗಳು, ವಸ್ತುಗಳ ಜೋಡಣೆಯ ಜೊತೆಗೆ ಮನೆಯಲ್ಲಿರುವ ಗಿಡಗಳ ಮೇಲೂ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ತಜ್ಞರ ಪ್ರಕಾರ, ಕೆಲವು ಗಿಡಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ, ಇನ್ನು ಕೆಲವು ಗಿಡಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಆರ್ಥಿಕ, ಮಾನಸಿಕ ಮತ್ತು ಕೌಟುಂಬಿಕ ಶಾಂತಿಯ ಮೇಲೆ ಪರಿಣಾಮ ಬೀರುತ್ತವೆಯಂತೆ. ಹಾಗಾಗಿ ಮನೆಯಲ್ಲಿ ಯಾವ ಗಿಡಗಳನ್ನು ಬೆಳೆಸಬೇಕು ಎನ್ನುವುದು ಎಷ್ಟು ಮುಖ್ಯವೋ, ಯಾವ ಗಿಡಗಳನ್ನು ಬೆಳೆಸಬಾರದು ಎಂದು ತಿಳಿಯುವುದೂ ಅಷ್ಟೇ ಅವಶ್ಯಕ. ಹಾಗಾದರೆ ಮನೆಯಲ್ಲಿ ಯಾವ ಗಿಡಗಳನ್ನು ಬೆಳೆಸಬಾರದು ಎಂದು ತಿಳಿಯೋಣ ಬನ್ನಿ.&lt;img&gt;ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಪ್ಪಿತಪ್ಪಿಯೂ ಬೆಳೆಸಬಾರದ ಗಿಡಗಳಲ್ಲಿ ಮುಳ್ಳಿನ ಗಿಡಗಳು ಮೊದಲು ಬರುತ್ತವೆ. ಅದರಲ್ಲೂ ಕ್ಯಾಕ್ಟಸ್&zwnj;ನಂತಹ ಮುಳ್ಳಿನ ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಕುಟುಂಬ ಸದಸ್ಯರ ನಡುವೆ ಜಗಳಗಳು ಹೆಚ್ಚಾಗುತ್ತವೆ ಮತ್ತು ಮಾನಸಿಕ ಒತ್ತಡ ಉಂಟಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ಗಿಡಗಳಲ್ಲಿರುವ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಸೂಚಿಸುತ್ತವೆ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಇವುಗಳನ್ನು ಮನೆಯೊಳಗೆ ಇಡದೆ, ಹೊರಗೆ ತೋಟದಲ್ಲಿ ಬೆಳೆಸುವುದು ಉತ್ತಮ.&lt;img&gt;ಸಾಮಾನ್ಯವಾಗಿ ಕೆಲವು ಬಗೆಯ ಗಿಡ ಮತ್ತು ಬಳ್ಳಿಗಳ ಎಲೆ, ಹಣ್ಣುಗಳನ್ನು ಕಿತ್ತಾಗ ಅವುಗಳಿಂದ ಬಿಳಿ ದ್ರವ ಬರುತ್ತದೆ. ಅಂತಹ ಗಿಡಗಳು ಮನೆಯ ಶಾಂತಿಗೆ ಭಂಗ ತರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇವು ಮನೆಯ ವಾತಾವರಣದಲ್ಲಿ ಅಸ್ಥಿರತೆಯನ್ನು ಉಂಟುಮಾಡಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಇವುಗಳನ್ನು ಮನೆಯೊಳಗೆ ಇಡದೆ, ತೆರೆದ ಜಾಗದಲ್ಲಿ ಇಡುವುದು ಉತ್ತಮ.&lt;img&gt;ವಾಸ್ತು ಪ್ರಕಾರ, ಒಣಗಿದ ಗಿಡಗಳನ್ನು ಮನೆಯಲ್ಲಿ ಇಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಒಣಗಿದ ಗಿಡಗಳು ಜೀವನದಲ್ಲಿ ಸ್ಥಿರತೆ ಇಲ್ಲದಿರುವುದು, ಆರ್ಥಿಕ ಸಮಸ್ಯೆಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ಸೂಚಿಸುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅನೇಕರು ಅಲಂಕಾರಕ್ಕಾಗಿ ಅಥವಾ ನಿರ್ಲಕ್ಷ್ಯದಿಂದ ಅಂತಹ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಇದು ಮನೆಯ ಶುಭ ಶಕ್ತಿಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಕಾಲಕಾಲಕ್ಕೆ ಒಣಗಿದ ಗಿಡಗಳನ್ನು ತೆಗೆದುಹಾಕಿ, ಆರೋಗ್ಯಕರ ಗಿಡಗಳನ್ನು ಮಾತ್ರ ಇಡಬೇಕು.&lt;img&gt;ಬೋನ್ಸಾಯ್ ಗಿಡ ನೋಡಲು ಸುಂದರವಾಗಿದ್ದರೂ, ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಮನೆಯಲ್ಲಿ ಬೆಳೆಸುವುದು ಒಳ್ಳೆಯದಲ್ಲ ಎಂದು ಕೆಲವು ತಜ್ಞರು ಹೇಳುತ್ತಾರೆ. ಬೋನ್ಸಾಯ್ ಗಿಡಗಳನ್ನು ನೈಸರ್ಗಿಕವಾಗಿ ಬೆಳೆಯಲು ಬಿಡದೆ, ಕತ್ತರಿಸಿ ಚಿಕ್ಕದಾಗಿ ಇಡಲಾಗುತ್ತದೆ. ಇದು ಬೆಳವಣಿಗೆಯ ಕುಂಠಿತ ಮತ್ತು ಅವಕಾಶಗಳು ಕಡಿಮೆಯಾಗುವುದರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಇದನ್ನು ಮನೆಯೊಳಗೆ ಇಡುವ ಬದಲು, ಹೊರಗೆ ಅಥವಾ ಆಫೀಸ್ ಅಲಂಕಾರಕ್ಕಾಗಿ ಮಾತ್ರ ಬಳಸುವುದು ಉತ್ತಮ.&lt;img&gt;ಅಂತೆಯೇ, ದೊಡ್ಡದಾಗಿ ಹರಡುವ ಅಥವಾ ನಿಯಂತ್ರಣವಿಲ್ಲದೆ ಬೆಳೆಯುವ ಬಳ್ಳಿಗಳು ಕೂಡ ಮನೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇವು ಮನೆಯ ಶಕ್ತಿಯ ಹರಿವನ್ನು ತಡೆಯುತ್ತವೆ ಮತ್ತು ಗೊಂದಲವನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಮನೆಯೊಳಗಿನ ಗೋಡೆಗಳ ಮೇಲೆ ಹಬ್ಬುವ ಗಿಡಗಳು ಶುಭ ಶಕ್ತಿಯನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಇವುಗಳನ್ನು ಎಚ್ಚರಿಕೆಯಿಂದ, ಸರಿಯಾದ ಸ್ಥಳದಲ್ಲಿ ಮಾತ್ರ ಬೆಳೆಸಬೇಕು. ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿ ಬೆಳೆಸುವ ಗಿಡಗಳು ಯಾವಾಗಲೂ ಹಸಿರಾಗಿ, ಆರೋಗ್ಯವಾಗಿರಬೇಕು. ಹಾಗೆಯೇ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವ ಗಿಡಗಳನ್ನು ಇಡುವುದು ಒಳ್ಳೆಯದು.]]></content:encoded>
            <category>vaastu</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/vaastu/negative-energy-plants-to-avoid-at-home-as-per-vastu-suh-k8ggytx"/>
        </item>
        <item>
            <title><![CDATA[ಮನೆ ಕಟ್ಟಲು ಜಾಗ ಖರೀದಿ ಮಾಡುವ ಯೋಚನೆ ಇದೆಯೆ? ಈ ವಾಸ್ತು ಸಲಹೆ ನೆನಪಿರಲಿ]]></title>
            <link>https://kannada.asianetnews.com/vaastu/vastu-tips-to-know-before-buying-plot-for-new-home/articleshow-lat0i5w</link>
            <guid isPermaLink="true">https://kannada.asianetnews.com/vaastu/vastu-tips-to-know-before-buying-plot-for-new-home/articleshow-lat0i5w</guid>
            <pubDate>Fri, 22 May 2026 12:21:14 +0530</pubDate>
            <description><![CDATA[&lt;p&gt;Vastu Tips: ವಾಸ್ತು ಶಾಸ್ತ್ರದ ತಜ್ಞರು, ನಿವೇಶನವನ್ನು ಖರೀದಿಸುವಾಗ, ಭೌತಿಕ ಲಕ್ಷಣಗಳಿಗೆ ಮಾತ್ರವಲ್ಲದೆ ವಾಸ್ತು ತತ್ವಗಳಿಗೂ ವಿಶೇಷ ಗಮನ ನೀಡಬೇಕು ಎನ್ನುತ್ತಾರೆ. ನೀವು ಮನೆ ಕಟ್ಟಲು, ಜಾಗ ಖರೀದಿಸುವ ಯೋಚನೆಯಲ್ಲಿದ್ದರೆ, ದಯವಿಟ್ಟು, ಈ ವಾಸ್ತು ಸಲಹೆಗಳನ್ನು ನೆನಪಿನಲ್ಲಿಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ka4awapdbbvhat1q0gtkmvne,imgname-----------------------2025-11-15t233123.065-1763229706957.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮನೆ ಕಟ್ಟಲು ಜಾಗ ಖರೀದಿ ಮಾಡುವ ಯೋಚನೆ ಇದೆಯೆ?&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ, ಜನರು ಹೊಸ ಜಮೀನು ಖರೀದಿಸಲು ನಿರ್ಧರಿಸಿದಾಗ, ಅವರು ಮೊದಲು ಅದರ ಸ್ಥಳ, ಸುತ್ತಮುತ್ತಲಿನ ಸೌಲಭ್ಯಗಳು, ರಸ್ತೆಗಳು, ಮಾರುಕಟ್ಟೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳು ಎಲ್ಲವೂ ಇವೆಯೇ ಎಂದು ನೋಡಿಕೊಳ್ಳುತ್ತಾರೆ. ವಾಸ್ತು ಶಾಸ್ತ್ರಜ್ಞರು ನಿವೇಶನವನ್ನು ಖರೀದಿಸುವಾಗ, ಭೌತಿಕ ಸೌಕರ್ಯಗಳಿಗೆ ಮಾತ್ರವಲ್ಲದೆ ವಾಸ್ತು ತತ್ವಗಳಿಗೂ ವಿಶೇಷ ಗಮನ ಹರಿಸಬೇಕೆನ್ನುತ್ತಾರೆ. ವಾಸ್ತು ತತ್ವಗಳಿಗೆ ಅನುಗುಣವಾಗಿ ಭೂಮಿಯನ್ನು ಆಯ್ಕೆ ಮಾಡಿದರೆ, ಸಕಾರಾತ್ಮಕ ಶಕ್ತಿಯು ಮನೆಗೆ ಹರಿಯುತ್ತದೆ, ಕುಟುಂಬಕ್ಕೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ರೆ ನೀವು ನೀವೇಶನ ಖರೀದಿ ಮಾಡುವ ಮುನ್ನ ಯಾವೆಲ್ಲಾ ವಿಷ್ಯಗಳನ್ನು ನೋಡಬೇಕು ಅನ್ನೋದನ್ನು ತಿಳಿಯಿರಿ.&lt;/p&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ, ಪೂರ್ವ ಮತ್ತು ಈಶಾನ್ಯಕ್ಕೆ ಮುಖ ಮಾಡಿರುವ ಸ್ಥಳವು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿಕ್ಕುಗಳು ಸಂಪತ್ತು, ಜ್ಞಾನ ಮತ್ತು ಪ್ರಗತಿಯನ್ನು ಸಂಕೇತಿಸುತ್ತವೆ. ಅವರ ಪ್ರಕಾರ, ಅಂತಹ ಸ್ಥಳಗಳು ಜೀವನದಲ್ಲಿ ಪ್ರಗತಿ ಮತ್ತು ಆರ್ಥಿಕ ಸ್ಥಿರತೆಯನ್ನು ತರುವಲ್ಲಿ ಸಹಾಯಕವಾಗಿವೆ.&lt;/p&gt;&lt;p&gt;ವಾಸ್ತುವಿನಲ್ಲಿ ಆಕಾರವನ್ನು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ, ಚೌಕ ಮತ್ತು ಆಯತಾಕಾರದ ಪ್ಲಾಟ್&zwnj;ಗಳನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ಆಕಾರವು ಸಮತೋಲನ ಮತ್ತು ಸ್ಥಿರತೆಯನ್ನು ಸಂಕೇತಿಸುತ್ತದೆ, ಇದಕ್ಕೆ ವಿರುದ್ಧವಾಗಿ, ತ್ರಿಕೋನ, ಅಂಡಾಕಾರದ ಅಥವಾ ಕತ್ತರಿಸಿದ ಮೂಲೆಗಳನ್ನು ಹೊಂದಿರುವ ಪ್ಲಾಟ್&zwnj;ಗಳನ್ನು ವಾಸ್ತು ದೃಷ್ಟಿಕೋನದಿಂದ ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ.&lt;/p&gt;&lt;p&gt;ಇನ್ನು ವಾಸ್ತು ತಜ್ಞರು ಹೇಳುವಂತೆ ಈಶಾನ್ಯ ಮೂಲೆಯಲ್ಲಿ ಕತ್ತರಿಸಿದ ಮೂಲೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಭೂಮಿಯ ಇಳಿಜಾರಿಗೆ ವಿಶೇಷ ಗಮನ ನೀಡಬೇಕು. ಏಕೆಂದರೆ ಪ್ಲಾಟ್&zwnj;ನ ಇಳಿಜಾರು ಉತ್ತರ ಅಥವಾ ಪೂರ್ವದ ಕಡೆಗೆ ಇರಬೇಕು. ಹೆಚ್ಚಿನ ನೈಋತ್ಯ ಮೂಲೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದು ಸಕಾರಾತ್ಮಕ ಶಕ್ತಿಯ ಹರಿವನ್ನು ಸುಧಾರಿಸುತ್ತದೆ. ಇದಲ್ಲದೆ, ಕೆಂಪು, ಹಳದಿ ಅಥವಾ ಕಂದು ಬಣ್ಣದ ಫಲವತ್ತಾದ ಮತ್ತು ಸ್ವಲ್ಪ ತೇವಾಂಶವುಳ್ಳ ಮಣ್ಣನ್ನು ನಿರ್ಮಾಣಕ್ಕೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ, ಆದರೆ ಮರಳು ಅಥವಾ ಬಂಜರು ಭೂಮಿಯನ್ನು ಕಡಿಮೆ ಶುಭವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಒಂದು ನಿವೇಶನದ ಉತ್ತರ ಅಥವಾ ಪೂರ್ವ ಭಾಗದಲ್ಲಿ ರಸ್ತೆ ಇರುವುದು ಸಹ ಪ್ರಯೋಜನಕಾರಿ. ಇದು ವ್ಯವಹಾರ, ಖ್ಯಾತಿ ಮತ್ತು ಅದೃಷ್ಟಕ್ಕೆ ಒಳ್ಳೆಯ ಸಂಕೇತವಾಗಿದೆ. ಆದರೆ, ದೊಡ್ಡ ವಿದ್ಯುತ್ ಕಂಬ, ದೊಡ್ಡ ಅಶ್ವತ್ಥ ಅಥವಾ ಆಲದ ಮರ ಅಥವಾ ದೇವಸ್ಥಾನ ಅಥವಾ ಆಸ್ಪತ್ರೆಯ ನೆರಳು ನಿಮ್ಮ ಜಾಗದ ಮೇಲೆ ಬೀಳದಂತೆ ನೋಡಿಕೊಳ್ಳುವುದು ಸಹ ತುಂಬಾನೆ ಉತ್ತಮ. ಜಾಗ ಖರೀದಿಸುವಾಗ ಈ ವಿಷಯ ನೆನಪಿರಲಿ.&lt;/p&gt;&lt;h3&gt;&lt;strong&gt;ಟಿ-ಜಂಕ್ಷನ್&zwnj;ನಲ್ಲಿರುವ ಪ್ಲಾಟ್ ಅನ್ನು ವಾಸ್ತು ಪ್ರಕಾರ ಅಶುಭ&lt;/strong&gt;&lt;/h3&gt;&lt;p&gt;ಟಿ-ಜಂಕ್ಷನ್&zwnj;ನಲ್ಲಿರುವ ಪ್ಲಾಟ್ ಅನ್ನು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಸ್ಥಳಗಳಲ್ಲಿ, ರಸ್ತೆಯಿಂದ ಬರುವ ಶಕ್ತಿಯು ನೇರವಾಗಿ ಕಟ್ಟಡದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಇದೆ. ಇದು ಮಾನಸಿಕ ಒತ್ತಡ ಮತ್ತು ಅಸ್ಥಿರತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಸ್ಮಶಾನ ಅಥವಾ ಸ್ಮಶಾನದ ಬಳಿ ಇರುವ ಭೂಮಿಯಲ್ಲಿ ನಿರ್ಮಾಣವನ್ನು ತಪ್ಪಿಸಲು ವಾಸ್ತು ಸಲಹೆ ನೀಡುತ್ತದೆ. ಪ್ಲಾಟ್ ಖರೀದಿಸುವುದು ಜೀವನದಲ್ಲಿ ಒಂದು ಪ್ರಮುಖ ಹೂಡಿಕೆಯಾಗಿದೆ. ದಿಕ್ಕು, ಗಾತ್ರ, ಇಳಿಜಾರು ಮತ್ತು ಸುತ್ತಮುತ್ತಲಿನ ಪರಿಸರದಂತಹ ಅಂಶಗಳನ್ನು ಪರಿಗಣಿಸುವುದರಿಂದ ಹೆಚ್ಚು ಸಮತೋಲಿತ ಮತ್ತು ಬುದ್ಧಿವಂತ ನಿರ್ಧಾರಕ್ಕೆ ಕಾರಣವಾಗಬಹುದು. ಇದರಿಂದ ನಿಮ್ಮ ಮುಂಬರುವ ಜೀವನ ಕೂಡ ಉತ್ತಮವಾಗಬಹುದು ಎನ್ನುವುದು ನೆನಪಿರಲಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/vaastu/vastu-tips-to-know-before-buying-plot-for-new-home/articleshow-lat0i5w"/>
        </item>
        <item>
            <title><![CDATA[ಬಟ್ಟೆಯಲ್ಲೂ ಇದೆ ದೇವರು, ರಾಕ್ಷಸರ ಜಾಗ – ಯಾವ ಭಾಗದಲ್ಲಿ ಹರಿದ್ರೆ ಶುಭ?]]></title>
            <link>https://kannada.asianetnews.com/gallery/vaastu/is-the-cutting-tearing-or-burning-of-clothes-auspicious-or-inauspicious-ne2w6bh</link>
            <guid isPermaLink="true">https://kannada.asianetnews.com/gallery/vaastu/is-the-cutting-tearing-or-burning-of-clothes-auspicious-or-inauspicious-ne2w6bh</guid>
            <pubDate>Mon, 04 May 2026 12:59:20 +0530</pubDate>
            <description><![CDATA[&lt;p&gt;clothes vastu : ಇಷ್ಟಪಟ್ಟು ಹೊಸ ಬಟ್ಟೆ ಖರೀದಿ ಮಾಡಿರ್ತೇವೆ. ಆದ್ರೆ ಅಚಾನಕ್ ಆಗಿ ಬಟ್ಟೆ ಹರಿಯುತ್ತೆ ಇಲ್ಲ ಸುಟ್ಟು ಹೋಗುತ್ತೆ. ಇದ್ರಿಂದ ಸ್ವಲ್ಪ ಗೊಂದಲ ಕಾಡುತ್ತೆ. ಇದು ಶುಭವಾ ಇಲ್ಲ ಅಶುಭವಾ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಯಾವಾಗ ಬಟ್ಟೆ ಹರಿದ್ರೆ ಶುಭ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqrxzzm0jwhsmjpmcbhdpsn0,imgname-torn-clothes-1777879481984.jpg" type="image/jpeg" height="390" width="690"/>
            <content:encoded><![CDATA[&lt;p&gt;clothes vastu : ಇಷ್ಟಪಟ್ಟು ಹೊಸ ಬಟ್ಟೆ ಖರೀದಿ ಮಾಡಿರ್ತೇವೆ. ಆದ್ರೆ ಅಚಾನಕ್ ಆಗಿ ಬಟ್ಟೆ ಹರಿಯುತ್ತೆ ಇಲ್ಲ ಸುಟ್ಟು ಹೋಗುತ್ತೆ. ಇದ್ರಿಂದ ಸ್ವಲ್ಪ ಗೊಂದಲ ಕಾಡುತ್ತೆ. ಇದು ಶುಭವಾ ಇಲ್ಲ ಅಶುಭವಾ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಯಾವಾಗ ಬಟ್ಟೆ ಹರಿದ್ರೆ ಶುಭ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜ್ಯೋತಿಷ್ಯ ಶಾಸ್ತ್ರದಲ್ಲಿ ಬಟ್ಟೆಯ ಬಗ್ಗೆಯೂ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಹೊಸ ಬಟ್ಟೆಗಳನ್ನು ಧರಿಸಲು ಶುಭ ಸಮಯದಿಂದ ಹಿಡಿದು ಹೊಸ ಬಟ್ಟೆಗಳು ಸುಟ್ಟುಹೋಗುವುದು, ಹರಿದುಹೋಗುವುದ್ರಿಂದ ಆಗುವ ಶುಭ ಮತ್ತು ಅಶುಭ ಫಲಿತಾಂಶಗಳವರೆಗೆ ಎಲ್ಲವನ್ನೂ ಜ್ಯೋತಿಷ್ಯದಲ್ಲಿ ಹೇಳಲಾಗಿದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಶಾಸ್ತ್ರದಲ್ಲಿ ಬಟ್ಟೆಯ ಬಗ್ಗೆ ವಿವರವಾದ ಮಾಹಿತಿ ಇದೆ. ಬಟ್ಟೆಯನ್ನು ದೇವರ ಭಾಗ, ರಾಕ್ಷಸರ ಭಾಗ ಸೇರಿದಂತೆ ಬೇರೆ ಬೇರೆ ಭಾಗ ಮಾಡಲಾಗಿದೆ. ಮೊದಲು ಬಟ್ಟೆಯನ್ನು ಒಂಬತ್ತು ಭಾಗಗಳಾಗಿ ಮಡಿಸಿ. ಮೊದಲ ಭಾಗ ದೇವತೆಗಳು, ಎರಡನೆಯ ಭಾಗ ರಾಕ್ಷಸರು, ಮೂರನೆಯ ಭಾಗ ದೇವತೆಗಳು ಮತ್ತು ಲ್ಕನೇ ಭಾಗ ಮಾನವ. ಐದನೇ ಭಾಗ ರಾಕ್ಷಸನಾದ್ರೆ ಆರನೇ ಭಾಗ ಮಾನವ. ಏಳನ್ನು ದೇವರು, ಎಂಟನ್ನು ರಾಕ್ಷಸ ಹಾಗೂ ಒಂಭತ್ತನೇ ಭಾಗವನ್ನು ದೇವರ ಭಾಗವಾಗಿ ವಿಂಗಡಿಸಲಾಗಿದೆ.&lt;/p&gt;&lt;img&gt;&lt;p&gt;ನಿಮ್ಮ ಬಟ್ಟೆ ಹರಿದಾಗ ಅದನ್ನು 9 ಭಾಗವಾಗಿ ವಿಂಗಡಿಸಬೇಕು. ನಂತ್ರ ಅದರಲ್ಲಿ ಯಾವ ಭಾಗ ಹರಿದಿದೆ ಇಲ್ಲ ಸುಟ್ಟಿದೆ ಎಂಬುದನ್ನು ನೋಡಬೇಕು. ದೇವತೆಗಳು ಅಥವಾ ಮನುಷ್ಯರಿಗೆ ಸೇರಿದ ಭಾಗಗಳಲ್ಲಿ ಹೊಸ ಉಡುಪು ಸುಟ್ಟರೆ, ಕತ್ತರಿಸಿದ, ಹರಿದ ಅಥವಾ ಮಣ್ಣಿನಿಂದ ಮುಚ್ಚಿದ್ದರೆ, ಅದನ್ನು ಶುಭವೆಂದು ಪರಿಗಣಿಸಬೇಕು. ರಾಕ್ಷಸರಿಗೆ ಸೇರಿದ ಭಾಗಗಳಲ್ಲಿ ಉಡುಪು ಸುಟ್ಟರೆ, ಕತ್ತರಿಸಿದರೆ ಅಥವಾ ಮಣ್ಣಿನಿಂದ ಮುಚ್ಚಿದ್ದರೆ ಇದನ್ನು ಅಶುಭವೆಂದು ಪರಿಗಣಿಸಬೇಕು.&lt;/p&gt;&lt;img&gt;&lt;p&gt;ನಿಮ್ಮ ಬಟ್ಟೆ ರಾಕ್ಷಸ ಜಾಗದಲ್ಲಿ ಸುಟ್ಟಿದ್ದರೆ ಇಲ್ಲ ಹರಿದಿದ್ದರೆ ಅಶುಭ. ಇದು ಅಹಿತಕರ ಘಟನೆಯ ಮುನ್ಸೂಚನೆ ಆಗಿರಬಹುದು. ಹಾಗಾಗಿ ನೀವು ಸುಟ್ಟ ಹಾಗೂ ಹರಿದ ಬಟ್ಟೆಯನ್ನು ದಾನ ಮಾಡುವುದು ಉತ್ತಮ. ಇಲ್ಲವೇ ಆ ಬಟ್ಟೆಯನ್ನು ಬಳಸಬೇಡಿ. ಇದ್ರಿಂದ ಅಶುಭ ಫಲಿತಾಂಶ ಕಡಿಮೆ ಆಗುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ ಮನೆಯಿಂದ ಹೊರ ಹೋಗುವ ಮೊದಲು ಧರಿಸುವ ಬಟ್ಟೆ ಬಗ್ಗೆ ಗಮನ ಇರಲಿ. ಹರಿದ ಜೇಬಿರುವ ಯಾವುದೇ ಬಟ್ಟೆಯನ್ನು ನೀವು ಧರಿಸಬೇಡಿ. ಹರಿದ ಬಟ್ಟೆ ನಿಮ್ಮ ದೌರ್ಭಾಗ್ಯಕ್ಕೆ ದಾರಿಮಾಡಿ ಕೊಡುತ್ತದೆ. ಹೊಸ ಬಟ್ಟೆ ಹರಿದಾಗ ಅದನ್ನು ಎಸೆಯಲು ಅನೇಕರಿಗೆ ಮನಸ್ಸಾಗೋದಿಲ್ಲ. ಹಾಗಾಗಿ ಅದನ್ನು ಧರಿಸ್ತಾರೆ. ಆದ್ರೆ ಇದನ್ನು ಧರಿಸೋದ್ರಿಂದ ಸಮಸ್ಯೆ ಶುರುವಾಗುತ್ತದೆ. ನೀವು ಅದನ್ನು ಧರಿಸಲೇಬೇಕು ಅಂದ್ರೆ ಅದನ್ನು ಸ್ಟಿಚ್ ಮಾಡಿ ಹಾಕಿಕೊಳ್ಳಿ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/vaastu/is-the-cutting-tearing-or-burning-of-clothes-auspicious-or-inauspicious-ne2w6bh"/>
        </item>
        <item>
            <title><![CDATA[Astro Tips: ರಾತ್ರಿ ಹೀಗೆಲ್ಲಾ ಮಲಗಿದರೆ ನಿಮ್ಮ ಪರ್ಸ್ ಖಾಲಿ ಆಗೋದು ಗ್ಯಾರಂಟಿ]]></title>
            <link>https://kannada.asianetnews.com/gallery/vaastu/astro-tips-things-you-should-not-do-before-sleeping-at-night-ofgogu0</link>
            <guid isPermaLink="true">https://kannada.asianetnews.com/gallery/vaastu/astro-tips-things-you-should-not-do-before-sleeping-at-night-ofgogu0</guid>
            <pubDate>Mon, 18 May 2026 17:43:11 +0530</pubDate>
            <description><![CDATA[&lt;p&gt;Astro Tips: ರಾತ್ರಿ ಮಲಗುವ ಮುನ್ನ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಕೆಲವು ಅಭ್ಯಾಸಗಳು ಅಜಾಗರೂಕತೆಯಿಂದ ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ ಮತ್ತು ಸಂತೋಷ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0ycs726001g11dnw30g6ece,imgname-sleeping--1--1753366699078.jpg" type="image/jpeg" height="390" width="690"/>
            <content:encoded><![CDATA[&lt;p&gt;Astro Tips: ರಾತ್ರಿ ಮಲಗುವ ಮುನ್ನ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಕೆಲವು ಅಭ್ಯಾಸಗಳು ಅಜಾಗರೂಕತೆಯಿಂದ ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ ಮತ್ತು ಸಂತೋಷ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಾತ್ರಿಯ ಸಮಯವು ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವಂತಹ ಸಮಯ. ಧಾರ್ಮಿಕ ನಂಬಿಕೆಗಳು ಮತ್ತು ವಾಸ್ತು ಮಲಗುವ ಮೊದಲು ಕೆಲವು ನಿಯಮಗಳನ್ನು ಪಾಲಿಸಲು ಸಲಹೆ ನೀಡುತ್ತದೆ. ಈ ಸಮಯದಲ್ಲಿ ನೀವು ಮಾಡುವ ಸಣ್ಣ ತಪ್ಪುಗಳು ಸಹ ಮನೆಯ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ಉದಾಹರಣೆಗೆ, ಮಲಗುವ ಮೊದಲು ಪಾದಗಳನ್ನು ತೊಳೆಯುವುದು ಶುಭವೆಂದು ಪರಿಗಣಿಸಲಾಗುತ್ತದೆ, ಆದರೆ ಒದ್ದೆಯಾದ ಪಾದಗಳೊಂದಿಗೆ ಮಲಗುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳಬಹುದು ಮತ್ತು ಆರ್ಥಿಕ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ಹಾಗಿದ್ರೆ ಮಲಗುವ ಮುನ್ನ ಯಾವ ತಪ್ಪು ಮಾಡಬಾರದು ನೋಡೋಣ.&lt;/p&gt;&lt;img&gt;&lt;p&gt;ಅನೇಕ ಜನರು ಆಯಾಸದಿಂದಾಗಿ ರಾತ್ರಿಯಲ್ಲಿ ಪಾತ್ರೆಗಳನ್ನು ತೊಳೆಯದೆ ಬಿಡುತ್ತಾರೆ. ವಾಸ್ತು ನಂಬಿಕೆಗಳ ಪ್ರಕಾರ, ರಾತ್ರಿಯಿಡೀ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಮನೆಯ ಶಾಂತಿ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;ವಾಸ್ತು ಪ್ರಕಾರ, ಮಲಗುವ ಮುನ್ನ ಹಾಸಿಗೆ ಸ್ವಚ್ಛ ಮತ್ತು ಅಚ್ಚುಕಟ್ಟಾಗಿರಬೇಕು. ಕೊಳಕು ಅಥವಾ ಅವ್ಯಸ್ಥಿತವಾಗಿರುವ ಹಾಸಿಗೆಯ ಮೇಲೆ ಮಲಗುವುದರಿಂದ ಮಾನಸಿಕ ಒತ್ತಡ ಮತ್ತು ಆತಂಕ ಹೆಚ್ಚಾಗುತ್ತದೆ. ಅಲ್ಲದೆ, ತಲೆ ದಿಂಬಿನ ಬಳಿ ಕೊಳಕು ಬಟ್ಟೆ, ಸಾಕ್ಸ್ ಅಥವಾ ಬೂಟುಗಳನ್ನು ಇಡುವುದನ್ನು ತಪ್ಪಿಸಿ.&lt;/p&gt;&lt;img&gt;&lt;p&gt;ರಾತ್ರಿ ಮಲಗುವ ಮುನ್ನ ಹಣಕಾಸಿನ ಕೊರತೆ, ಸಾಲ ಅಥವಾ ನಷ್ಟಗಳಂತಹ ವಿಷಯಗಳನ್ನು ಚರ್ಚಿಸುವುದು ಸೂಕ್ತವಲ್ಲ. ಮಲಗುವ ಮುನ್ನ ಸಕಾರಾತ್ಮಕ ಆಲೋಚನೆಗಳು ಮನಸ್ಸನ್ನು ಶಾಂತಗೊಳಿಸಲು ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಮನೆಯ ಮುಖ್ಯ ದ್ವಾರವನ್ನು ಸಕಾರಾತ್ಮಕ ಶಕ್ತಿಯ ದ್ವಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಬಾಗಿಲಿನ ಬಳಿ ಶೂಗಳು ಮತ್ತು ಚಪ್ಪಲಿಗಳ ರಾಶಿಯನ್ನು ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ಧಾರ್ಮಿಕ ನಂಬಿಕೆಗಳ ಪ್ರಕಾರ ಮಲಗುವ ಮುನ್ನ ನಿಮ್ಮ ಪಾದಗಳನ್ನು ತೊಳೆಯುವುದು ಒಳ್ಳೆಯದು ಹೌದು, ಆದರೆ ನಿಮ್ಮ ಪಾದಗಳನ್ನು ತೊಳೆಯುವುದು ಸಾಕಾಗುವುದಿಲ್ಲ. ಒದ್ದೆಯಾದ ಪಾದಗಳೊಂದಿಗೆ ಮಲಗುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ನಿಮ್ಮ ಆರೋಗ್ಯ ಮತ್ತು ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಆರ್ಥಿಕ ನಷ್ಟ ಆಗುವ ಸಾಧ್ಯತೆ ಇದೆ. ಆದ್ದರಿಂದ, ಮಲಗುವ ಮೊದಲು ನಿಮ್ಮ ಪಾದಗಳನ್ನು ಚೆನ್ನಾಗಿ ಒಣಗಿಸುವುದು ಅಥವಾ ಒರೆಸುವುದು ಉತ್ತಮ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/astro-tips-things-you-should-not-do-before-sleeping-at-night-ofgogu0"/>
        </item>
        <item>
            <title><![CDATA[Astro Tips: ಆಹಾರದ ಮೇಲೆ ಉಪ್ಪು ಸುರಿಯೋ ಅಭ್ಯಾಸ ಇದೆಯೇ? ಆರೋಗ್ಯದ ಜೊತೆ, ಹಣವೂ ನಷ್ಟ]]></title>
            <link>https://kannada.asianetnews.com/gallery/vaastu/astro-tips-asking-salt-will-bring-negative-effect-in-your-life-rg8c0oy</link>
            <guid isPermaLink="true">https://kannada.asianetnews.com/gallery/vaastu/astro-tips-asking-salt-will-bring-negative-effect-in-your-life-rg8c0oy</guid>
            <pubDate>Wed, 06 May 2026 16:36:29 +0530</pubDate>
            <description><![CDATA[&lt;p&gt;Astro Tips: ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಊಟದ ಸಮಯದಲ್ಲಿ ಉಪ್ಪು ಕೇಳುವುದರಿಂದ ಮಾನಸಿಕ ಅಸ್ಥಿರತೆ, ಮನೆಯಲ್ಲಿ ಉದ್ವಿಗ್ನತೆ ಮತ್ತು ಆರ್ಥಿಕ ತೊಂದರೆಗಳು ಉಂಟಾಗುತ್ತವೆ. ಆದರೆ ಕೆಲವು ಸಮತೋಲಿತ ಅಭ್ಯಾಸಗಳು ಮತ್ತು ಕೃತಜ್ಞತೆಯು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh95c24dq9595hc88cdg5ffh,imgname-salt-1770907895949.jpg" type="image/jpeg" height="390" width="690"/>
            <content:encoded><![CDATA[&lt;p&gt;Astro Tips: ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಊಟದ ಸಮಯದಲ್ಲಿ ಉಪ್ಪು ಕೇಳುವುದರಿಂದ ಮಾನಸಿಕ ಅಸ್ಥಿರತೆ, ಮನೆಯಲ್ಲಿ ಉದ್ವಿಗ್ನತೆ ಮತ್ತು ಆರ್ಥಿಕ ತೊಂದರೆಗಳು ಉಂಟಾಗುತ್ತವೆ. ಆದರೆ ಕೆಲವು ಸಮತೋಲಿತ ಅಭ್ಯಾಸಗಳು ಮತ್ತು ಕೃತಜ್ಞತೆಯು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತರಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕೆಲವೊಮ್ಮೆ, ನಾವು ಮಾಡುವ ಸಣ್ಣ ನಡವಳಿಕೆಗಳು ಸಹ ದೊಡ್ಡ ಪರಿಣಾಮ ಬೀರಬಹುದು, ಆದರೆ ನಾವು ಅವುಗಳನ್ನು ನಿರ್ಲಕ್ಷಿಸುತ್ತೇವೆ. ಉದಾಹರಣೆಗೆ, ಊಟ ಮಾಡುವಾಗ ಉಪ್ಪನ್ನು ಕೇಳುವುದು - ಬಹುತೇಕ ಪ್ರತಿಯೊಂದು ಮನೆಯಲ್ಲೂ ಕಂಡುಬರುವ ಸಾಮಾನ್ಯ ಅಭ್ಯಾಸ. ಆದರೆ ಈ ಸಣ್ಣ ಅಭ್ಯಾಸವು ಜ್ಯೋತಿಷ್ಯ ದೃಷ್ಟಿಕೋನದಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?&lt;/p&gt;&lt;img&gt;&lt;p&gt;ಪ್ರಾಚೀನ ಕಾಲದಿಂದಲೂ, ಉಪ್ಪನ್ನು ಕೇವಲ ರುಚಿ ವರ್ಧಕವಲ್ಲ, ಬದಲಾಗಿ ಶಕ್ತಿ ಮತ್ತು ಗ್ರಹಗಳಿಗೆ ಸಂಬಂಧಿಸಿದ ಅಂಶವೆಂದು ಪರಿಗಣಿಸಲಾಗಿದೆ. ಇದು ಮನಸ್ಸು, ಸೌಕರ್ಯ ಮತ್ತು ಅದೃಷ್ಟಕ್ಕೂ ಸಂಬಂಧಿಸಿದೆ. ಆದ್ದರಿಂದ, ಯಾರಾದರೂ ಪದೇ ಪದೇ ಉಪ್ಪನ್ನು ಕೇಳಿದಾಗ, ಅದು ಕೇವಲ ರುಚಿಯ ಕೊರತೆಯಲ್ಲ, ಆದರೆ ಕೆಲವು ಆಳವಾದ ಮಹತ್ವದೊಂದಿಗೆ ಸಂಬಂಧ ಹೊಂದಿದೆ. ಇದರ ಹಿಂದಿನ ಜ್ಯೋತಿಷ್ಯ ನಂಬಿಕೆಗಳನ್ನು ಅರ್ಥಮಾಡಿಕೊಳ್ಳೋಣ.&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ, ಉಪ್ಪು ಚಂದ್ರ, ಶುಕ್ರ ಮತ್ತು ರಾಹುವಿಗೆ ನೇರವಾಗಿ ಸಂಬಂಧಿಸಿದೆ. ಚಂದ್ರನು ಮನಸ್ಸು ಮತ್ತು ಭಾವನೆಗಳನ್ನು ಆಳಿದರೆ, ಶುಕ್ರನು ಸಂತೋಷ, ಹಣ ಮತ್ತು ಜೀವನಶೈಲಿಯೊಂದಿಗೆ ಸಂಬಂಧ ಹೊಂದಿದ್ದಾನೆ. ಮತ್ತೊಂದೆಡೆ, ರಾಹುವನ್ನು ಗೊಂದಲ ಮತ್ತು ಅಸ್ಥಿರತೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಉಪ್ಪಿನ ಬಳಕೆಯು ಈ ಮೂರು ಗ್ರಹಗಳ ಪ್ರಭಾವಕ್ಕೆ ಸಂಬಂಧಿಸಿದೆ. ಉಪ್ಪನ್ನು ಸಮತೋಲಿತ ರೀತಿಯಲ್ಲಿ ಬಳಸದಿದ್ದರೆ, ಅದು ಮಾನಸಿಕ ಶಾಂತಿ ಮತ್ತು ಆರ್ಥಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಊಟ ಮಾಡುವಾಗ ಪದೇ ಪದೇ ಉಪ್ಪನ್ನು ಕೇಳುವ ಜನರು ಸಾಮಾನ್ಯವಾಗಿ ಅಸ್ಥಿರ ಮನಸ್ಸನ್ನು ಹೊಂದಿರುತ್ತಾರೆ. ಕೆಲವು ಜನರು ಉಪ್ಪು ಸೇರಿಸದೆ ತಮ್ಮ ಊಟವನ್ನು ಮುಗಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಇದು ಕೇವಲ ಅಭ್ಯಾಸವಲ್ಲ, ಆದರೆ ಆಂತರಿಕ ಅಶಾಂತಿ ಮತ್ತು ಅತೃಪ್ತಿಯ ಸಂಕೇತ. ನಿಜ ಜೀವನದಲ್ಲೂ ಸಹ, ಅಂತಹ ಜನರು ಸಣ್ಣ ವಿಷಯಗಳಿಗೂ ಅಸಮಾಧಾನಗೊಳ್ಳುತ್ತಾರೆ ಅಥವಾ ಸುಲಭವಾಗಿ ಕಿರಿಕಿರಿಗೊಳ್ಳುತ್ತಾರೆ. ಈ ಪರಿಸ್ಥಿತಿಯು ದುರ್ಬಲ ಚಂದ್ರನನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಪ್ರಾಚೀನ ಕಾಲದಲ್ಲಿ, ಹಿರಿಯರು ಯಾವಾಗಲೂ ಆಹಾರಕ್ಕೆ ಉಪ್ಪು ಸೇರಿಸದಂತೆ ಸಲಹೆ ನೀಡುತ್ತಿದ್ದರು. ಆಯುರ್ವೇದವು ಹಸಿ ಉಪ್ಪು ದೇಹದ ಸಮತೋಲನವನ್ನು ಅಡ್ಡಿಪಡಿಸುತ್ತದೆ ಎಂದು ಸಲಹೆ ನೀಡುತ್ತದೆ. ಇದು ಆರೋಗ್ಯದ ಮೇಲೆ ಮಾತ್ರವಲ್ಲದೆ ಶಕ್ತಿಯ ಮಟ್ಟಗಳ ಮೇಲೂ ಪರಿಣಾಮ ಬೀರುತ್ತದೆ. ಯೋಗ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಆಹಾರದ ಮೇಲೆ ಉಪ್ಪು ಹಾಕುವುದರಿಂದ ದೇಹದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮನಸ್ಸು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಮತ್ತು ಜ್ಯೋತಿಷ್ಯದಲ್ಲಿ, ಉಪ್ಪನ್ನು ಒಂದು ರೀತಿಯ &quot;ಶಕ್ತಿ ಶುದ್ಧೀಕರಣಕಾರಕ&quot; ಎಂದು ಪರಿಗಣಿಸಲಾಗುತ್ತದೆ. ಅನೇಕ ಜನರು ತಮ್ಮ ಮನೆಗಳಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಉಪ್ಪನ್ನು ಬಳಸುತ್ತಾರೆ. ಆದರೆ ಊಟದ ಸಮಯದಲ್ಲಿ ಅದೇ ಉಪ್ಪನ್ನು ಪದೇ ಪದೇ ಕೇಳಿದಾಗ, ಅದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತೆ. ಇದು ಕುಟುಂಬದಲ್ಲಿ ಉದ್ವಿಗ್ನತೆ, ವಾದಗಳು ಮತ್ತು ತಪ್ಪು ತಿಳುವಳಿಕೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಕೆಲವು ಮನೆಗಳಲ್ಲಿ, ಸಣ್ಣ ವಿಷಯಗಳಿಗೂ ವಿವಾದಗಳು ಉದ್ಭವಿಸುವುದನ್ನು ನೀವು ಗಮನಿಸಿರಬಹುದು. ಜ್ಯೋತಿಷ್ಯದ ಪ್ರಕಾರ, ಇದು ಶಕ್ತಿಯ ಅಸಮತೋಲನದ ಪರಿಣಾಮವೂ ಆಗಿರಬಹುದು.&lt;/p&gt;&lt;img&gt;&lt;p&gt;ನಂಬಿಕೆಗಳ ಪ್ರಕಾರ, ಉಪ್ಪು ಕೂಡ ಸಂಪತ್ತಿನೊಂದಿಗೆ ಸಂಬಂಧ ಹೊಂದಿದೆ. ಒಬ್ಬ ವ್ಯಕ್ತಿಯು ಪದೇ ಪದೇ ಉಪ್ಪನ್ನು ಕೇಳಿದರೆ, ಅದನ್ನು ಆರ್ಥಿಕ ಅಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಉದ್ಯೋಗ ಅಥವಾ ವ್ಯವಹಾರದಲ್ಲಿ ಅಡೆತಡೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ, ಕಠಿಣ ಪರಿಶ್ರಮದ ಹೊರತಾಗಿಯೂ, ಹಣವು ಬಾಳಿಕೆ ಬರುವುದಿಲ್ಲ, ಅಥವಾ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಇದು ರಾಹುವಿನ ಪ್ರಭಾವಕ್ಕೆ ಸಂಬಂಧಿಸಿದೆ, ಇದು ಹಠಾತ್ ಬದಲಾವಣೆಗಳು ಮತ್ತು ಗೊಂದಲಗಳಿಗೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ಹಿರಿಯರು ಸಾಮಾನ್ಯವಾಗಿ &quot;ಉಪ್ಪಿನ ಋಣವನ್ನು ತೀರಿಸಬೇಕು&quot; ಎಂದು ಹೇಳುತ್ತಾರೆ. ಇದು ಕೇವಲ ಒಂದು ಸಾಲಲ್ಲ, ಆಳವಾದ ಜೀವನ ಸಂದೇಶ. ಇದರರ್ಥ ನಾವು ಹೊಂದಿರುವ ಎಲ್ಲದಕ್ಕೂ ಕೃತಜ್ಞರಾಗಿರಬೇಕು. ಜ್ಯೋತಿಷ್ಯದಲ್ಲಿ, ಇದು ಸಮತೋಲನ ಮತ್ತು ಕೃತಜ್ಞತೆಗೆ ಸಂಬಂಧಿಸಿದೆ. ಒಬ್ಬ ವ್ಯಕ್ತಿಯು ಕೃತಜ್ಞತೆಯನ್ನು ಅನುಭವಿಸಿದಾಗ, ಅವರ ಶಕ್ತಿಯು ಸಕಾರಾತ್ಮಕವಾಗಿರುತ್ತದೆ ಮತ್ತು ಸ್ಥಿರತೆ ಅವರ ಜೀವನದಲ್ಲಿ ಬರುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/astro-tips-asking-salt-will-bring-negative-effect-in-your-life-rg8c0oy"/>
        </item>
        <item>
            <title><![CDATA[ವಾಟರ್ ಪ್ಲಾಂಟ್ ಮನೆಯಲ್ಲಿದ್ರೆ ಈ ತಪ್ಪು ಮಾಡ್ಬೇಡಿ, ಜೋರಾಗುತ್ತೆ ರಾಹು - ಕೇತು ಅಬ್ಬರ]]></title>
            <link>https://kannada.asianetnews.com/gallery/vaastu/water-plants-vastu-rahu-ketu-dosha-will-be-affected-by-this-mistake-in-water-plant-ur7lf5c</link>
            <guid isPermaLink="true">https://kannada.asianetnews.com/gallery/vaastu/water-plants-vastu-rahu-ketu-dosha-will-be-affected-by-this-mistake-in-water-plant-ur7lf5c</guid>
            <pubDate>Mon, 18 May 2026 16:42:12 +0530</pubDate>
            <description><![CDATA[&lt;p&gt;ನಿಮ್ಮ ಮನೆಯಲ್ಲೂ ವಾಟರ್ ಪ್ಲಾಂಟ್ ಇದ್ರೆ ಅದನ್ನು ನಿಮ್ಮಿಷ್ಟದಂತೆ ಬೆಳೆಸಬೇಡಿ. ನೀವು ಮಾಡುವ ಕೆಲ ತಪ್ಪುಗಳು ವಾಸ್ತುದೋಷಕ್ಕೆ ಕಾರಣವಾಗುತ್ತವೆ. ಇದ್ರಿಂದ ನಾನಾ ಸಮಸ್ಯೆ ಎದುರಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxcazzfw9zvhjvsxa263w8r,imgname-water-plants-1779102482415.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿಮ್ಮ ಮನೆಯಲ್ಲೂ ವಾಟರ್ ಪ್ಲಾಂಟ್ ಇದ್ರೆ ಅದನ್ನು ನಿಮ್ಮಿಷ್ಟದಂತೆ ಬೆಳೆಸಬೇಡಿ. ನೀವು ಮಾಡುವ ಕೆಲ ತಪ್ಪುಗಳು ವಾಸ್ತುದೋಷಕ್ಕೆ ಕಾರಣವಾಗುತ್ತವೆ. ಇದ್ರಿಂದ ನಾನಾ ಸಮಸ್ಯೆ ಎದುರಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ವಾಟರ್ ಪ್ಲಾಂಟ್ ಮನೆಯ ಸೌಂದರ್ಯ ಹೆಚ್ಚಿಸೋದಲ್ದೆ ಸಕಾರಾತ್ಮಕ ಶಕ್ತಿಗೆ ಕಾರಣವಾಗುತ್ವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಡಲಾಗ್ತಿದೆ. ಮನಿ ಪ್ಲಾಂಟ್ , ಬಿದಿರಿನಂತಹ ನೀರಿನ ಗಿಡಗಳನ್ನು ಗಾಜಿನ ಬಾಟಲಿಯಲ್ಲಿ ಬೆಳೆಸಲಾಗ್ತಿದೆ. ಈ ಗಿಡಗಳಿಗೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲ ವಿಷಯಗಳ ಬಗ್ಗೆ ಗಮನ ಹರಿಸದಿದ್ರೆ ರಾಹು &ndash; ಕೇತುವಿನ ಕಾಟ ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;ನೀರಿನ ಬಾಟಲಿಯಲ್ಲಿ ಬೆಳೆಯುವ ಈ ವಾಟರ್ ಪ್ಲಾಂಟ್ ಗಳನ್ನು ಬೆಳೆಸುವಾಗ ಇರುವ ಆಸಕ್ತಿ ನಂತ್ರ ಇರೋದಿಲ್ಲ. ಬಾಟಲಿಗೆ ಹಾಕಿದ ನೀರನ್ನು ಬಹುತೇಕರು ಬದಲಿಸೋದಿಲ್ಲ. ತಿಂಗಳವರೆಗೆ ಬಾಟಲಿ ನೀರು ಬದಲಾಗೋದಿಲ್ಲ. ಅನೇಕರು ಮಾಡುವ ಈ ತಪ್ಪು ದೋಷಕ್ಕೆ ಕಾರಣವಾಗುತ್ತದೆ. ಇದ್ರಿಂದ ರಾಹು ಕೋಪಗೊಳ್ತಾನೆ. ಕೊಳಕು ಹಾಗೂ ವಾಸನೆ ಬಡತನಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕೆಂದ್ರೆ ನೀವು ನಾಲ್ಕರಿಂದ ಐದು ದಿನಕ್ಕೊಮ್ಮೆ ನೀರು ಬದಲಿಸಿ.&lt;/p&gt;&lt;img&gt;&lt;p&gt;ವಾಟರ್ ಪ್ಲಾಂಟ್ ಎಲೆಗಳ ಬಗ್ಗೆಯೂ ಗಮನ ಹರಿಸಬೇಕು. ಎಲೆಗಳು ಹಳದಿಯಾದ್ರೆ, ಕೊಳೆತ್ರೆ ಜನರು ಅದನ್ನು ತೆಗೆಯೋದಿಲ್ಲ. ಕೊಳೆತ ಎಲೆ ಗಿಡದ ಮೇಲಿದ್ರೆ ಕೇತುವಿನ ಪ್ರಭಾವ ಹೆಚ್ಚಾಗುತ್ತದೆ. ಇದು ಕುಟುಂಬದಲ್ಲಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಎಲೆ ಹಳದಿ ಅಥವಾ ಒಣಗಿದಂತೆ ಕಂಡುಬಂದ ತಕ್ಷಣ ಅದನ್ನು ಕತ್ತರಿಸಿ.&lt;/p&gt;&lt;img&gt;&lt;p&gt;ಪ್ರತಿಯೊಂದು ಗಿಡಕ್ಕೂ ನೀರು ಹಾಗೂ ಸೂರ್ಯನ ಬೆಳಕು ಅಗತ್ಯವಿರುತ್ತದೆ. ಮನೆಯ ಮೂಲೆಯಲ್ಲಿ ಗಿಡವಿದ್ರೆ ಅದಕ್ಕೆ ಸೂರ್ಯನ ಬೆಳಕು ಸರಿಯಾಗಿ ಸಿಗೋದಿಲ್ಲ. ಸೂರ್ಯನ ಬೆಳಕಿನ ಕೊರತೆ ಸಸ್ಯಕ್ಕೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಇದರಿಂದ ಉದ್ವಿಗ್ನತೆ ಮತ್ತು ಸಂಘರ್ಷ ಹೆಚ್ಚಾಗುತ್ತದೆ. ತಾಜಾ ಬೆಳಕು ಸಿಗುವ ಹಾಗೂ ಸೂರ್ಯನ ಬೆಳಕಿರುವ ಜಾಗದಲ್ಲಿ ಗಿಡ ಬೆಳೆಸಿ.&lt;/p&gt;&lt;img&gt;&lt;p&gt;ವಾಟರ್ ಪ್ಲಾಂಟ್ ನೆಡಲು ಸರಿಯಾದ ವಿಧಾನವಿದೆ. ವರ್ಣರಂಜಿತ ಹಾಗೂ ಪ್ಲಾಸ್ಟಿಕ್ ಪಾಟ್ ನಲ್ಲಿ ವಾಟರ್ ಪ್ಲಾಂಟ್ ಬೆಳೆಸಬಾರದು. ಇದು ಗಂಭೀರ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ವಾಟರ್ ಪ್ಲಾಂಟ್ ಬೆಳೆಸಿದ್ರೆ ಅದು ಧನಾತ್ಮಕ ಶಕ್ತಿಯನ್ನು ತೆಗೆಯುತ್ತದೆ. ವಾಟರ್ ಪ್ಲಾಂಟನ್ನು ಯಾವಾಗಲೂ ಗಾಜಿನ ಅಥವಾ ಸೆರಾಮಿಕ್ ಮಡಕೆಗಳಲ್ಲಿ ಇಡಬೇಕು.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ವಾಟರ್ ಪ್ಲಾಂಟ್ ಗಳನ್ನು ಎಂದಿಗೂ ತಪ್ಪು ದಿಕ್ಕಿನಲ್ಲಿ ಇಡಬಾರದು. ವಿಶೇಷವಾಗಿ, ಅವುಗಳನ್ನು ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಇಡಬಾರದು. ತಪ್ಪು ದಿಕ್ಕಿನಲ್ಲಿ ಸಸ್ಯವನ್ನು ಬೆಳೆಸಿದ್ರೆ ಆರ್ಥಿಕ ತೊಂದರೆಗಳು ಉಂಟಾಗಬಹುದು. ವಾಸ್ತು ಪ್ರಕಾರ, ನೀರು ತುಂಬಿದ ಸಸ್ಯಗಳನ್ನು ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/vaastu/water-plants-vastu-rahu-ketu-dosha-will-be-affected-by-this-mistake-in-water-plant-ur7lf5c"/>
        </item>
        <item>
            <title><![CDATA[ಬೆಡ್‌ರೂಂನಲ್ಲಿ ಇದನ್ನ ಇಡಬೇಕಾ, ಬೇಡ್ವಾ? ತಿಳಿದುಕೊಳ್ಳಿ 5 ಪ್ರಮುಖ ವಿಚಾರ]]></title>
            <link>https://kannada.asianetnews.com/webstories/vaastu/bedroom-vastu-tips-essential-rules-for-bed-direction-and-tv-placement-vamngva</link>
            <guid isPermaLink="true">https://kannada.asianetnews.com/webstories/vaastu/bedroom-vastu-tips-essential-rules-for-bed-direction-and-tv-placement-vamngva</guid>
            <pubDate>Thu, 07 May 2026 20:53:22 +0530</pubDate>
            <description><![CDATA[&lt;p&gt;&lt;strong&gt;Bedroom Vastu tips: &lt;/strong&gt;ಬೆಡ್&zwnj;ರೂಂ ಯಾವ ದಿಕ್ಕಿನಲ್ಲಿರಬೇಕು, ಅಲ್ಲಿ ಏನೆಲ್ಲಾ ಇಡಬೇಕು, ಏನೆಲ್ಲಾ ಇಡಬಾರದು ಅಂತ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಬೆಡ್&zwnj;ರೂಂನಲ್ಲಿ ವಾಸ್ತು ದೋಷವಿದ್ದರೆ, ಅದು ನೇರವಾಗಿ ಲವ್ ಲೈಫ್ ಮೇಲೆ ಪರಿಣಾಮ ಬೀರುತ್ತೆ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqs6xy7pa43adrwymn2hz59d,imgname-bedroom-vastu-tips-2-1777888852214.jpg" type="image/jpeg" height="390" width="690"/>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/vaastu/bedroom-vastu-tips-essential-rules-for-bed-direction-and-tv-placement-vamngva"/>
        </item>
        <item>
            <title><![CDATA[Astro Tips: ಬಾಗಿಲಿನ ಹಿಂದೆ ಒದ್ದೆ ಟವೆಲ್ ಹಾಕ್ತೀರಾ? ರಾಹು ದೋಷ ಕಾಡದೆ ಬಿಡಲ್ಲ]]></title>
            <link>https://kannada.asianetnews.com/vaastu/astro-tips-says-do-not-put-wet-clothes-behind-the-door-here-is-the-reason/articleshow-w5gl3k5</link>
            <guid isPermaLink="true">https://kannada.asianetnews.com/vaastu/astro-tips-says-do-not-put-wet-clothes-behind-the-door-here-is-the-reason/articleshow-w5gl3k5</guid>
            <pubDate>Wed, 20 May 2026 17:52:24 +0530</pubDate>
            <description><![CDATA[&lt;p&gt;Astro Tips: ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಬಾಗಿಲಿನ ಹಿಂದೆ ಬಟ್ಟೆ, ಬೂಟುಗಳು, ಟವೆಲ್&zwnj;ಗಳು ಅಥವಾ ಔಷಧಿಗಳನ್ನು ನೇತುಹಾಕುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಈ ಪ್ರದೇಶವನ್ನು ಸ್ವಚ್ಛವಾಗಿ ಮತ್ತು ಖಾಲಿಯಾಗಿ ಇಡಬೇಕು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks2ncayq5jb6x1v1qftzz70v,imgname-astro-tips-1779279735766.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ನೀವು ಕೂಡ ಒದ್ದೆ ಬಟ್ಟೆಯಲ್ಲಿ ಬಾಗಿಲಿನ ಹಿಂದೆ ನೇತು ಹಾಕ್ತೀರ?&lt;/strong&gt;&lt;/h2&gt;&lt;p&gt;ಸ್ಥಳಾವಕಾಶ ಕಡಿಮೆ ಇದ್ದಾಗ, ಜನರು ಬಟ್ಟೆ, ಚೀಲಗಳು, ಟವೆಲ್&zwnj;ಗಳು ಮತ್ತು ಇತರ ವಸ್ತುಗಳನ್ನು ನೇತುಹಾಕಲು ಬಾಗಿಲಿನ ಹಿಂದೆ ಕೊಕ್ಕೆಗಳನ್ನು ಬಳಸುತ್ತಾರೆ. ಇದು ಬೆಸ್ಟ್ ವಿಧಾನ ಎಂದು ನಿಮಗೆ ಅನಿಸಿರಬಹುದು. ಆದರೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವು ಇದನ್ನು ಅಶುಭವೆಂದು ಪರಿಗಣಿಸುತ್ತದೆ. ಬಾಗಿಲಿನ ಹಿಂದೆ ಇರಿಸಲಾದ ಅಥವಾ ನೇತುಹಾಕಲಾದ ವಸ್ತುಗಳು ಮನೆಯ ಸಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ವಿಶೇಷವಾಗಿ ಒದ್ದೆಯಾದ ಬಟ್ಟೆಗಳು, ಬೂಟುಗಳು ಅಥವಾ ಔಷಧಿಗಳನ್ನು ಅಲ್ಲಿ ನೇತು ಹಾಕಿದರೆ, ಅದು ಮನೆಯ ವಾತಾವರಣ, ಮಾನಸಿಕ ಶಾಂತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಅಭ್ಯಾಸವು ರಾಹು ಮತ್ತು ಶನಿಗೆ ಸಂಬಂಧಿಸಿದ ದೋಷಗಳನ್ನು ಹೆಚ್ಚಿಸುತ್ತದೆ, ಇದು ಕೌಟುಂಬಿಕ ಒತ್ತಡ, ಅನಗತ್ಯ ಖರ್ಚುಗಳು ಮತ್ತು ಕೆಲಸದಲ್ಲಿ ಅಡೆತಡೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಬಾಗಿಲಿನ ಹಿಂದಿನ ಜಾಗವನ್ನು ಸ್ವಚ್ಛವಾಗಿ, ಮತ್ತು ವ್ಯವಸ್ಥಿತವಾಗಿಡಲು ವಾಸ್ತುಶಾಸ್ತ್ರ ತಿಳಿಸುತ್ತದೆ.&lt;/p&gt;&lt;h3&gt;&lt;strong&gt;ಬಾಗಿಲಿನ ಹಿಂದೆ ವಸ್ತುಗಳನ್ನು ಏಕೆ ನೇತು ಹಾಕಬಾರದು?&lt;/strong&gt;&lt;/h3&gt;&lt;p&gt;ವಾಸ್ತು ಶಾಸ್ತ್ರದಲ್ಲಿ, ಬಾಗಿಲನ್ನು ಕೇವಲ ಮಾರ್ಗವೆಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ ಶಕ್ತಿಯ ದ್ವಾರವೆಂದು ಪರಿಗಣಿಸಲಾಗುತ್ತದೆ. ಸಕಾರಾತ್ಮಕ ಶಕ್ತಿಯು ಮುಖ್ಯ ದ್ವಾರದ ಮೂಲಕ ಪ್ರವೇಶಿಸುತ್ತದೆ ಮತ್ತು ಬಾಗಿಲಿನ ಹಿಂದಿನ ಪ್ರದೇಶವು ಈ ಶಕ್ತಿಯ ಹರಿವಿನ ಮೇಲೆ ಪ್ರಭಾವ ಬೀರುತ್ತದೆ. ಅನಗತ್ಯ ವಸ್ತುಗಳು ಅಲ್ಲಿ ಅಸ್ತವ್ಯಸ್ತವಾಗಿದ್ದರೆ, ಶಕ್ತಿಯು ನಿಶ್ಚಲವಾಗಲು ಪ್ರಾರಂಭಿಸುತ್ತದೆ. ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಇದು ರಾಹುವಿನ ಪ್ರಭಾವವನ್ನು ಹೆಚ್ಚಿಸುತ್ತದೆ, ಗೊಂದಲ, ಒತ್ತಡ ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ.&lt;/p&gt;&lt;h3&gt;&lt;strong&gt;ಒದ್ದೆಯಾದ ಬಟ್ಟೆ ಮತ್ತು ಟವೆಲ್&zwnj;ಗಳಿಂದ ನಕಾರಾತ್ಮಕತೆ&lt;/strong&gt;&lt;/h3&gt;&lt;p&gt;ಅನೇಕ ಮನೆಗಳಲ್ಲಿ, ಜನರು ಸ್ನಾನದ ನಂತರ ಬಾಗಿಲಿನ ಹಿಂದೆ ಟವೆಲ್&zwnj;ಗಳನ್ನು ನೇತುಹಾಕುತ್ತಾರೆ. ವಾಸ್ತು ಪ್ರಕಾರ, ಈ ಅಭ್ಯಾಸವು ಸರಿಯಲ್ಲ. ಒದ್ದೆಯಾದ ಬಟ್ಟೆ ಮತ್ತು ಟವೆಲ್&zwnj;ಗಳು ತೇವಾಂಶವನ್ನು ಉಂಟುಮಾಡುತ್ತವೆ, ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕುಟುಂಬ ಸದಸ್ಯರಲ್ಲಿ ವಿವಾದ ಜಗಳ ಉಂಟಾಗಲು ಕಾರಣವಾಗುತ್ತದೆ.&lt;/p&gt;&lt;h3&gt;&lt;strong&gt;ಔಷಧಿ ಚೀಲವು ಅನಾರೋಗ್ಯದ ಸಂಕೇತ&lt;/strong&gt;&lt;/h3&gt;&lt;p&gt;ಕೆಲವರು ಸುಲಭವಾಗಿ ಸಿಗಲಿ ಎಂದು ಔಷಧಿ ಚೀಲಗಳನ್ನು ಬಾಗಿಲಿನ ಹಿಂದೆ ನೇತು ಹಾಕುತ್ತಾರೆ. ಜ್ಯೋತಿಷ್ಯದಲ್ಲಿ, ಇದು ರೋಗ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ಇದು ಮನೆಯಲ್ಲಿ ಅನಾರೋಗ್ಯದ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ವೈದ್ಯಕೀಯ ವೆಚ್ಚವನ್ನು ಹೆಚ್ಚಿಸುತ್ತದೆ. ಹಳೆಯ ಅಥವಾ ಅವಧಿ ಮೀರಿದ ಔಷಧಿಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು.&lt;/p&gt;&lt;h3&gt;&lt;strong&gt;ಶೂ ಮತ್ತು ಚಪ್ಪಲಿಗಳಿಂದ ಅಶಾಂತಿ&lt;/strong&gt;&lt;/h3&gt;&lt;p&gt;ಬಾಗಿಲಿನ ಹಿಂದೆ ಶೂ ಮತ್ತು ಚಪ್ಪಲಿಗಳನ್ನು ಇಡುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಇದು ಮನೆಯ ಸಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕುಟುಂಬದೊಳಗೆ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುತ್ತದೆ. ಅನೇಕ ಜನರು ಇದನ್ನು ಸಣ್ಣ ಸಮಸ್ಯೆ ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ, ಆದರೆ ಇದು ಕ್ರಮೇಣ ಮನೆಯ ಶಾಂತಿ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.&lt;/p&gt;&lt;p&gt;ನೀವು ಬಾಗಿಲಿನ ಹಿಂದೆ ವಸ್ತುಗಳನ್ನು ಸಂಗ್ರಹಿಸುವ ಅಭ್ಯಾಸವನ್ನು ಹೊಂದಿದ್ದರೆ, ಅದನ್ನು ಇವತ್ತೆ ಬದಲಾಯಿಸಲು ಪ್ರಯತ್ನಿಸಿ. ಆ ಪ್ರದೇಶವನ್ನು ಸ್ವಚ್ಛವಾಗಿ ಮತ್ತು ಖಾಲಿಯಾಗಿ ಇರಿಸಿ. ಸೌಮ್ಯವಾದ, ಪರಿಮಳಯುಕ್ತ ವಾತಾವರಣವನ್ನು ಕಾಪಾಡಿಕೊಳ್ಳುವುದು ಶುಭ. ಜ್ಯೋತಿಷಿಗಳು ಬಾಗಿಲಿನ ಹಿಂದೆ 'ಓಂ' ಅಥವಾ ಸ್ವಸ್ತಿಕ ಚಿಹ್ನೆಯನ್ನು ಇಡುವಂತೆ ಸಲಹೆ ನೀಡುತ್ತಾರೆ. ಇದು ರಾಹು ಮತ್ತು ಶನಿಗೆ ಸಂಬಂಧಿಸಿದ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ. .&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/vaastu/astro-tips-says-do-not-put-wet-clothes-behind-the-door-here-is-the-reason/articleshow-w5gl3k5"/>
        </item>
        <item>
            <title><![CDATA[ಮಧ್ಯಾಹ್ನದ ಸಮಯದಲ್ಲಿ ಮನೆಯ ಈ ಮೂಲೆಯಲ್ಲಿ ಇದನ್ನು ಇರಿಸಿ, ಹಣದ ಮಳೆ ಆರಂಭವಾಗುತ್ತೆ!]]></title>
            <link>https://kannada.asianetnews.com/gallery/vaastu/vastu-tips-place-these-auspicious-items-in-the-north-east-corner-for-financial-growth-wgu5pba</link>
            <guid isPermaLink="true">https://kannada.asianetnews.com/gallery/vaastu/vastu-tips-place-these-auspicious-items-in-the-north-east-corner-for-financial-growth-wgu5pba</guid>
            <pubDate>Fri, 01 May 2026 17:27:23 +0530</pubDate>
            <description><![CDATA[&lt;p&gt;Vastu Shastra Tips: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಿಶೇಷ ವಸ್ತುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಾಗುತ್ತದೆ. ಸಮೃದ್ಧಿ ನೆಲಸುತ್ತೆ ಎಂದು ಹೇಳಲಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqhp1frhn2v7apg67gq1k7zw,imgname-thumbnail---2026-05-01t170814.728-1777636261649.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu Shastra Tips: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಿಶೇಷ ವಸ್ತುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಾಗುತ್ತದೆ. ಸಮೃದ್ಧಿ ನೆಲಸುತ್ತೆ ಎಂದು ಹೇಳಲಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಒಂದು ವೇಳೆ ನಿಮ್ಮ ಜೀವನದಲ್ಲಿ ಸತತವಾಗಿ ಹಣದ ಮುಗ್ಗಟ್ಟು ಎದುರಾಗುತ್ತಿದ್ದರೆ ಮತ್ತು ಕಠಿಣ ಪರಿಶ್ರಮದ ಹೊರತಾಗಿಯೂ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದರೆ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾದ ಕೆಲವು ಸಣ್ಣಪುಟ್ಟ ಕ್ರಮಗಳು ನಿಮಗೆ ನೆಮ್ಮದಿ ನೀಡಬಹುದು. ಮನೆಯ ಪರಿಸರ ಮತ್ತು ಅಲ್ಲಿನ ಶಕ್ತಿಯು (Energy) ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ಸರಿಯಾದ ದಿಕ್ಕು ಮತ್ತು ಸರಿಯಾದ ಸಮಯದಲ್ಲಿ ಮಾಡುವ ಇಂತಹ ಕ್ರಮಗಳು ಧನಾತ್ಮಕ ಬದಲಾವಣೆಗಳನ್ನು ತರಬಲ್ಲವು.&lt;/p&gt;&lt;img&gt;&lt;p&gt;ಈ ನಂಬಿಕೆಗಳ ಪ್ರಕಾರ, ಮಧ್ಯಾಹ್ನದ ಸಮಯವು ವಿಶೇಷವಾಗಿ ಮಹತ್ವದ್ದಾಗಿದೆ, ಏಕೆಂದರೆ ಈ ಸಮಯದಲ್ಲಿ ಶಕ್ತಿಯ ಮಟ್ಟವು ಅತ್ಯಂತ ಸಕ್ರಿಯವಾಗಿರುತ್ತದೆ. ಈ ಸಮಯದಲ್ಲಿ ಮನೆಯ ಸರಿಯಾದ ಮೂಲೆಯಲ್ಲಿ ಕೆಲವು ಶುಭ ವಸ್ತುಗಳನ್ನು ಇರಿಸಿದರೆ, ಹಣಕಾಸಿಗೆ ಸಂಬಂಧಿಸಿದ ಅಡೆತಡೆಗಳು ಕಡಿಮೆಯಾಗಿ ಕ್ರಮೇಣ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಉತ್ತರ-ಪೂರ್ವ ದಿಕ್ಕನ್ನು 'ಈಶಾನ್ಯ ಕೋನ' ಎಂದು ಕರೆಯಲಾಗುತ್ತದೆ. ಇದನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಸ್ಥಳವೆಂದು ಪರಿಗಣಿಸಲಾಗುತ್ತದೆ. ಈ ಜಾಗದಲ್ಲಿ ಹಗುರವಾದ, ಸ್ವಚ್ಛವಾದ ಮತ್ತು ಶುಭ ವಸ್ತುಗಳನ್ನು ಇರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ.&amp;nbsp;ಮಧ್ಯಾಹ್ನದ ಸಮಯದಲ್ಲಿ ಈ ಮೂಲೆಯಲ್ಲಿ: ಶುದ್ಧ ನೀರಿನಿಂದ ತುಂಬಿದ ಪಾತ್ರೆಯನ್ನು ಇಡುವುದು ಶುಭ ಎಂದು ನಂಬಲಾಗಿದೆ.ಅರಿಶಿನ ಅಥವಾ ಕೇಸರಿಯ ಸಣ್ಣ ತುಂಡನ್ನು ಇಡುವ ಸಂಪ್ರದಾಯವೂ ಇದೆ.ಶಕ್ತಿಯ ಸಮತೋಲನಕ್ಕಾಗಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಡುವುದು ಕೂಡ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳು ಸಂಪತ್ತು ಮತ್ತು ಅದೃಷ್ಟಕ್ಕೆ ಸಂಬಂಧಿಸಿವೆ. ಇವುಗಳನ್ನು ಸರಿಯಾದ ಸಮಯದಲ್ಲಿ ಇರಿಸುವುದರಿಂದ ಧನಾತ್ಮಕ ಪ್ರಭಾವ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅವುಗಳೆಂದರೆ:ಕೆಂಪು ಬಟ್ಟೆಯಲ್ಲಿ ಕಟ್ಟಿದ ಅರಿಶಿನದ ಕೊಂಬು.ಸಣ್ಣ ಹಿತ್ತಾಳೆಯ ಗಂಟೆ ಅಥವಾ ದೀಪ.ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುವ ಕಮಲದ ಹೂವಿನ ಚಿತ್ರ ಅಥವಾ ಗುರುತು.ಅಕ್ಕಿ ಅಥವಾ ಧಾನ್ಯದ ಸಣ್ಣದಾದ ಸ್ವಚ್ಛ ಪಾತ್ರೆ.ಮಧ್ಯಾಹ್ನದ ಸಮಯದಲ್ಲಿ ಈ ವಸ್ತುಗಳನ್ನು ಮನೆಯ ಶಾಂತ ಮತ್ತು ಸ್ವಚ್ಛವಾದ ಮೂಲೆಯಲ್ಲಿ ಇರಿಸುವುದರಿಂದ ಸಮೃದ್ಧಿಯ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆಯಿದೆ.&amp;nbsp;&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಸೂರ್ಯನ ಶಕ್ತಿಯು ಉತ್ತುಂಗದಲ್ಲಿರುತ್ತದೆ. ಈ ಸಮಯವು ಮಾನಸಿಕ ಮತ್ತು ಭೌತಿಕ ಶಕ್ತಿ ಎರಡರ ಮೇಲೆಯೂ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ಮಾಡುವ ಸಣ್ಣಪುಟ್ಟ ಕ್ರಮಗಳು ಕೂಡ ದೀರ್ಘಕಾಲದವರೆಗೆ ಧನಾತ್ಮಕ ಪರಿಣಾಮ ಬೀರಬಲ್ಲವು. ಕೆಲವು ನಂಬಿಕೆಗಳು ಹೀಗಿವೆ:ಈ ಸಮಯದಲ್ಲಿ ಮನಸ್ಸು ಮತ್ತು ಪರಿಸರವು ಹೆಚ್ಚು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.ಶಕ್ತಿಯ ಹರಿವು ಸಮತೋಲನದಲ್ಲಿರುವುದರಿಂದ ಶುಭ ಪರಿಣಾಮಗಳು ಹೆಚ್ಚಾಗುತ್ತವೆ.ಧ್ಯಾನ ಮತ್ತು ಸಕಾರಾತ್ಮಕ ವಿಚಾರಗಳ ಪ್ರಭಾವವು ಗಾಢವಾಗಿರುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಮನೆಯ ನಿರ್ದಿಷ್ಟ ಮೂಲೆಗಳಲ್ಲಿ ಕೆಲವು ಶುಭ ವಸ್ತುಗಳನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿರತೆಯ ಅವಕಾಶಗಳು ಬಲಗೊಳ್ಳುತ್ತವೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಅನೇಕ ಜನರು ಇದನ್ನು ನಂಬಿಕೆ ಮತ್ತು ಮಾನಸಿಕ ಶಾಂತಿಗಾಗಿ ಅನುಸರಿಸುತ್ತಾರೆ. ಸರಿಯಾದ ಭಾವನೆ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ಮಾಡುವ ಸಣ್ಣ ಪ್ರಯತ್ನಗಳು ಜೀವನದಲ್ಲಿ ಉತ್ತಮ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತವೆ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/vastu-tips-place-these-auspicious-items-in-the-north-east-corner-for-financial-growth-wgu5pba"/>
        </item>
        <item>
            <title><![CDATA[ಬಾತ್‌ರೂಂನಲ್ಲಿ ಈ ಒಂದು ವಸ್ತು ಎಂದಿಗೂ ಇರಲು ಬಿಡಬೇಡಿ, ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾದೀತು!]]></title>
            <link>https://kannada.asianetnews.com/gallery/vaastu/why-an-empty-bucket-in-the-bathroom-is-considered-bad-luck-in-vastu-shastra-ybrsh0m</link>
            <guid isPermaLink="true">https://kannada.asianetnews.com/gallery/vaastu/why-an-empty-bucket-in-the-bathroom-is-considered-bad-luck-in-vastu-shastra-ybrsh0m</guid>
            <pubDate>Tue, 19 May 2026 21:45:28 +0530</pubDate>
            <description><![CDATA[&lt;p&gt;Bathroom Vastu: ಬಾತ್&zwnj;ರೂಂನಲ್ಲಿ ಇಟ್ಟಿರುವ ಈ ವಸ್ತು ನಿಮ್ಮ ಮನೆಗೆ ಬಡತನವನ್ನು ತರುತ್ತಿದೆಯೇ? ಜ್ಯೋತಿಷ್ಯ ಮತ್ತು ವಾಸ್ತುವಿನ ಪ್ರಕಾರ, ಈ ವಸ್ತುವಿಗೂ ನಿಮ್ಮ ಅಭಿವೃದ್ಧಿಗೂ ಗಾಢವಾದ ಸಂಬಂಧವಿದೆ. ಮನೆಯ ಸುಖ-ಶಾಂತಿಯನ್ನು ಕಾಪಾಡಿಕೊಳ್ಳಲು ಇಂದೇ ಈ 3 ಸುಲಭ ಬದಲಾವಣೆಗಳನ್ನು ಅಳವಡಿಸಿಕೊಳ್ಳಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knv1vrwrj9nwjx13084t35dp,imgname-bathroom-tiles-6-1775803163544.jpg" type="image/jpeg" height="390" width="690"/>
            <content:encoded><![CDATA[&lt;p&gt;Bathroom Vastu: ಬಾತ್&zwnj;ರೂಂನಲ್ಲಿ ಇಟ್ಟಿರುವ ಈ ವಸ್ತು ನಿಮ್ಮ ಮನೆಗೆ ಬಡತನವನ್ನು ತರುತ್ತಿದೆಯೇ? ಜ್ಯೋತಿಷ್ಯ ಮತ್ತು ವಾಸ್ತುವಿನ ಪ್ರಕಾರ, ಈ ವಸ್ತುವಿಗೂ ನಿಮ್ಮ ಅಭಿವೃದ್ಧಿಗೂ ಗಾಢವಾದ ಸಂಬಂಧವಿದೆ. ಮನೆಯ ಸುಖ-ಶಾಂತಿಯನ್ನು ಕಾಪಾಡಿಕೊಳ್ಳಲು ಇಂದೇ ಈ 3 ಸುಲಭ ಬದಲಾವಣೆಗಳನ್ನು ಅಳವಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ಅನೇಕ ಬಾರಿ ಮನೆಯ ಹಿರಿಯರು ಬಾತ್&zwnj;ರೂಂನಲ್ಲಿ ಬಕೆಟ್ ಅನ್ನು ಎಂದಿಗೂ ಖಾಲಿ ಬಿಡಬಾರದು ಎಂದು ನಮಗೆ ಎಚ್ಚರಿಸುತ್ತಿರುತ್ತಾರೆ. ಅನೇಕ ಜನರು ಇದನ್ನು ಹಳೆಯ ಕಾಲದ ಮಾತು ಅಥವಾ ಮೂಢನಂಬಿಕೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದಲ್ಲಿ ಇದರ ಹಿಂದೆ ಬಹಳ ಆಳವಾದ ಅರ್ಥವಿದೆ ಎಂಬುದು ನಿಮಗೆ ತಿಳಿದಿದೆಯೇ? ಖಾಲಿ ಬಕೆಟ್ ನಿಮ್ಮ ಜೀವನದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ತಿಳಿಯೋಣ.&lt;/p&gt;&lt;img&gt;&lt;p&gt;ವಾಸ್ತುವಿನ ಪ್ರಕಾರ, ನೀರಿನ ನೇರ ಸಂಬಂಧ ಧನ (ಹಣ) ದೊಂದಿಗೆ ಇರುತ್ತದೆ. ಹರಿಯುವ ನೀರು ಹೇಗೆ ನಿಲ್ಲುವುದಿಲ್ಲವೋ, ಹಾಗೆಯೇ ಖಾಲಿ ಬಕೆಟ್ ಅಭಾವ ಅಥವಾ ಕೊರತೆಯನ್ನು ತೋರಿಸುತ್ತದೆ. ಬಕೆಟ್ ಖಾಲಿಯಾಗಿದ್ದರೆ ಮನೆಯಲ್ಲಿ ಹಣ ನಿಲ್ಲುವುದಿಲ್ಲ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ ಎಂದು ನಂಬಲಾಗಿದೆ. ಅದೇ ರೀತಿ ತುಂಬಿದ ಬಕೆಟ್ ಮನೆಯಲ್ಲಿ ಸಮೃದ್ಧಿ ಮತ್ತು ಸುಖದ ಸಂಕೇತವಾಗಿದೆ.&lt;/p&gt;&lt;img&gt;&lt;p&gt;ಬಾತ್&zwnj;ರೂಂ ಎನ್ನುವುದು ಅತ್ಯಂತ ಹೆಚ್ಚು ನಕಾರಾತ್ಮಕ ಶಕ್ತಿ (Negative Energy) ಉತ್ಪತ್ತಿಯಾಗುವ ಸ್ಥಳವಾಗಿದೆ. ವಾಸ್ತು ತಜ್ಞರ ಪ್ರಕಾರ, ಖಾಲಿ ಬಕೆಟ್ ಈ ನಕಾರಾತ್ಮಕತೆಯನ್ನು ತನ್ನತ್ತ ಸೆಳೆಯುತ್ತದೆ. ಇದರಿಂದ ಮನೆಯ ಜನರ ಮನಸ್ಸಿನಲ್ಲಿ ಕಿರಿಕಿರಿ, ಒತ್ತಡ ಮತ್ತು ಪರಸ್ಪರ ಜಗಳಗಳು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ ನೀರಿನ ಸಂಬಂಧ ಚಂದ್ರನೊಂದಿಗೆ ಇದ್ದರೆ, ಸ್ವಚ್ಛತೆಯ ಸಂಬಂಧ ಶನಿ ದೇವನೊಂದಿಗೆ ಇರುತ್ತದೆ. ಬಕೆಟ್ ಗಲೀಜಾಗಿದ್ದರೆ ಅಥವಾ ಖಾಲಿ ಬಿದ್ದಿದ್ದರೆ, ಶನಿ ಮತ್ತು ಚಂದ್ರನ ಸಮತೋಲನ ತಪ್ಪುತ್ತದೆ. ಇದರಿಂದ ನಿಮ್ಮ ಕೈಗೂಡುವ ಕೆಲಸಗಳು ಹಾಳಾಗತೊಡಗುತ್ತವೆ ಮತ್ತು ಅದೃಷ್ಟ ಕೈಕೊಡುತ್ತದೆ.&lt;/p&gt;&lt;img&gt;&lt;p&gt;ನಾವು ವಿಜ್ಞಾನ ಅಥವಾ ಮನೋವಿಜ್ಞಾನದ ಬಗ್ಗೆ ಮಾತನಾಡಿದರೆ, ಸುಸಜ್ಜಿತ ಮತ್ತು ಸ್ವಚ್ಛವಾದ ಬಾತ್&zwnj;ರೂಂ ನಿಮ್ಮ ಮೆದುಳಿಗೆ ಶಾಂತಿ ನೀಡುತ್ತದೆ. ತುಂಬಿದ ಬಕೆಟ್ ನಿಮ್ಮ ಸಂಪನ್ಮೂಲಗಳ ಸರಿಯಾದ ನಿರ್ವಹಣೆಯನ್ನು ಪ್ರತಿನಿಧಿಸುತ್ತದೆ. ಅಸ್ತವ್ಯಸ್ತವಾಗಿರುವ ಬಾತ್&zwnj;ರೂಂ ಮತ್ತು ಖಾಲಿ ಬಕೆಟ್ ಸೋಂಬೇರಿತನ ಮತ್ತು ಶಿಸ್ತಿನ ಕೊರತೆಯನ್ನು ತೋರಿಸುತ್ತದೆ.&lt;/p&gt;&lt;img&gt;&lt;p&gt;ರಾತ್ರಿ ಬಕೆಟ್ ತುಂಬಿಸಿ ಮಲಗಿ: ರಾತ್ರಿ ಮಲಗುವ ಮುನ್ನ ಬಕೆಟ್ ಅನ್ನು ಸ್ವಚ್ಛ ನೀರಿನಿಂದ ತುಂಬಿಸಿಡಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಯುತ್ತದೆ.&lt;strong&gt;ನೀಲಿ ಬಣ್ಣದ ಬಕೆಟ್:&lt;/strong&gt; ವಾಸ್ತುವಿನಲ್ಲಿ ನೀಲಿ ಬಣ್ಣವನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಸಾಧ್ಯವಾದರೆ ಬಾತ್&zwnj;ರೂಂನಲ್ಲಿ ನೀಲಿ ಬಣ್ಣದ ಬಕೆಟ್ ಮತ್ತು ಟಬ್ ಬಳಸಿ, ಇದು ಹಣದ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.&lt;strong&gt;ಖಾಲಿ ಬಕೆಟ್ ಅನ್ನು ಉಲ್ಟಾ ಇಡಿ:&lt;/strong&gt; ಒಂದು ವೇಳೆ ನಿಮಗೆ ಬಕೆಟ್ ಅನ್ನು ಖಾಲಿ ಇಡಲೇಬೇಕಾದ ಅನಿವಾರ್ಯತೆ ಇದ್ದರೆ, ಅದನ್ನು ನೇರವಾಗಿ ಇಡಬೇಡಿ. ಯಾವಾಗಲೂ ತೊಳೆದು ಉಲ್ಟಾ ಮಾಡಿ (ಬೋರಲಾಗಿ) ಇಡಿ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/why-an-empty-bucket-in-the-bathroom-is-considered-bad-luck-in-vastu-shastra-ybrsh0m"/>
        </item>
        <item>
            <title><![CDATA[ದಕ್ಷಿಣ ದಿಕ್ಕಿನ ಕಿಟಕಿ ಅಶುಭ! ಸರಿಯಾದ ದಿಕ್ಕು ಮತ್ತು ಸಂಖ್ಯೆ ಯಾವುದು?]]></title>
            <link>https://kannada.asianetnews.com/webstories/vaastu/kannada-astrology-vastu-tips-for-windows-direction-number-and-placement-in-home-mrq-yihcgb1</link>
            <guid isPermaLink="true">https://kannada.asianetnews.com/webstories/vaastu/kannada-astrology-vastu-tips-for-windows-direction-number-and-placement-in-home-mrq-yihcgb1</guid>
            <pubDate>Thu, 07 May 2026 14:42:31 +0530</pubDate>
            <description><![CDATA[&lt;p&gt;Windows Vastu: ವಾಸ್ತು ಶಾಸ್ತ್ರವು ಮನೆಯ ಪ್ರತಿಯೊಂದು ಭಾಗದ ಬಗ್ಗೆಯೂ ವಿವರಿಸುತ್ತದೆ. ಇದರಲ್ಲಿ ಕಿಟಕಿಗಳೂ ಒಂದು. ಮನೆಯಲ್ಲಿ ಕಿಟಕಿಗಳ ಸಂಖ್ಯೆ ಎಷ್ಟಿರಬೇಕು, ಯಾವ ದಿಕ್ಕಿನಲ್ಲಿರಬೇಕು ಎಂಬಿತ್ಯಾದಿ ಮಾಹಿತಿಯನ್ನು ವಾಸ್ತು ಶಾಸ್ತ್ರದಲ್ಲಿ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0vaek025qdcee4wwq33kqw,imgname-gemini-generated-image-npxajenpxajenpxa-1778145114720.png" type="image/jpeg" height="390" width="690"/>
            <category>vaastu</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/vaastu/kannada-astrology-vastu-tips-for-windows-direction-number-and-placement-in-home-mrq-yihcgb1"/>
        </item>
        <item>
            <title><![CDATA[ಗುಡ್ ಲಕ್ ಹೆಚ್ಚಿಸುವ 'ಪಂಚ; ಗಿಡಗಳು, ಮನೆಯಲ್ಲಿಟ್ಟರೆ ನೆಗೆಟಿವ್ ಎನರ್ಜಿ ದೂರ, ಫುಲ್ ಪಾಸಿಟಿವಿಟಿ]]></title>
            <link>https://kannada.asianetnews.com/gallery/vaastu/5-vastu-approved-plants-to-attract-good-luck-wealth-positive-energy-mrq-yq12hxf</link>
            <guid isPermaLink="true">https://kannada.asianetnews.com/gallery/vaastu/5-vastu-approved-plants-to-attract-good-luck-wealth-positive-energy-mrq-yq12hxf</guid>
            <pubDate>Sat, 09 May 2026 14:38:06 +0530</pubDate>
            <description><![CDATA[&lt;p&gt;ತುಂಬಾ ಜನರಿಗೆ ಮನೆಯಲ್ಲಿ ಗಿಡಗಳನ್ನು ಬೆಳೆಸೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈ ಗಿಡಗಳು ನಮ್ಮ ಮನೆಗೆ ಬರೀ ಸೌಂದರ್ಯವನ್ನು ಮಾತ್ರ ನೀಡುವುದಿಲ್ಲ, ಬದಲಾಗಿ ಮನೆಯಲ್ಲಿರುವ ನೆಗೆಟಿವಿಟಿಯನ್ನು ಕೂಡ ಕಡಿಮೆ ಮಾಡುತ್ತವೆ. ಈ ಹಸಿರು ಗಿಡಗಳನ್ನು ನೋಡಿದಾಗ ನಮ್ಮ ಮನಸ್ಸಿಗೂ ಖುಷಿ ಸಿಗುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5zt4jp3dts2a2vws11yx9w,imgname-plants-1778317595221.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಂಬಾ ಜನರಿಗೆ ಮನೆಯಲ್ಲಿ ಗಿಡಗಳನ್ನು ಬೆಳೆಸೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈ ಗಿಡಗಳು ನಮ್ಮ ಮನೆಗೆ ಬರೀ ಸೌಂದರ್ಯವನ್ನು ಮಾತ್ರ ನೀಡುವುದಿಲ್ಲ, ಬದಲಾಗಿ ಮನೆಯಲ್ಲಿರುವ ನೆಗೆಟಿವಿಟಿಯನ್ನು ಕೂಡ ಕಡಿಮೆ ಮಾಡುತ್ತವೆ. ಈ ಹಸಿರು ಗಿಡಗಳನ್ನು ನೋಡಿದಾಗ ನಮ್ಮ ಮನಸ್ಸಿಗೂ ಖುಷಿ ಸಿಗುತ್ತದೆ.&amp;nbsp;&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಪ್ರಕಾರ ಬಿದಿರಿನ ಗಿಡವನ್ನು ಅದೃಷ್ಟ ತರುವ ಸಸ್ಯ ಎಂದು ಪರಿಗಣಿಸಲಾಗಿದೆ. ಬಿದಿರಿನ ಗಿಡಗಳ ಕಟ್ಟುಗಳನ್ನು ಕೆಂಪು ದಾರದಿಂದ ಕಟ್ಟಿ ಮನೆ ಅಥವಾ ಕಚೇರಿಯಲ್ಲಿ ಇಡುವುದು ತುಂಬಾ ಶುಭ. ಇದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ ಮತ್ತು ಮನೆಯ ಸದಸ್ಯರ ಆಯಸ್ಸನ್ನು ಹೆಚ್ಚಿಸುತ್ತದೆ. ಆದರೆ ಈ ಗಿಡವನ್ನು ಇಡುವ ಪಾತ್ರೆಯಲ್ಲಿ ನೀರು ಮತ್ತು ಕಲ್ಲುಗಳೆರಡೂ ಇರುವಂತೆ ನೋಡಿಕೊಳ್ಳಿ.&lt;/p&gt;&lt;img&gt;ದುಂಡಗಿನ ಎಲೆಗಳನ್ನು ಹೊಂದಿರುವ ಜೇಡ್ ಪ್ಲಾಂಟ್ ಅನ್ನು ಕೂಡಾ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಈ ಗಿಡವನ್ನು ಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ ಇಡಬೇಕು. ಅಲ್ಲದೆ, ಇದು ಒಂದು ಮೀಟರ್&zwnj;ಗಿಂತ ಹೆಚ್ಚು ಬೆಳೆಯದಂತೆ ನೋಡಿಕೊಳ್ಳಬೇಕು. ಜೇಡ್ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.&lt;img&gt;ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಕುಟುಂಬದಲ್ಲಿ ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ. ಮನಿ ಪ್ಲಾಂಟ್ ಎಷ್ಟು ಹಸಿರಾಗಿರುತ್ತದೆಯೋ, ನಿಮ್ಮ ಮನೆಯ ಆರ್ಥಿಕ ಸ್ಥಿತಿಯೂ ಅಷ್ಟೇ ಉತ್ತಮವಾಗಿರುತ್ತದೆ ಎಂದು ನಂಬಲಾಗಿದೆ. ಇದನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ನೆಡಬೇಕು. ಇದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.&lt;img&gt;ಶಮಿ ಗಿಡವು ಶನಿದೇವನಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಡಬೇಕು ಮತ್ತು ಪ್ರತಿದಿನ ಪೂಜಿಸಬೇಕು. ಶಮಿ ಗಿಡವನ್ನು ನೆಡುವುದರಿಂದ ಮನೆಯಿಂದ ರೋಗಗಳು ಅಥವಾ ಇತರ ತೊಂದರೆಗಳು ದೂರವಾಗುತ್ತವೆ ಮತ್ತು ಸಾಲದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.&lt;img&gt;ತುಳಸಿ ಗಿಡವನ್ನು ಶಾಸ್ತ್ರಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ ಎಂದು ನಂಬಲಾಗಿದೆ. ಇದರ ಎಲೆಗಳನ್ನು ಶೀತ-ಕೆಮ್ಮಿನಿಂದ ಹಿಡಿದು ಅನೇಕ ರೋಗಗಳ ನಿವಾರಣೆಗೆ ಬಳಸಲಾಗುತ್ತದೆ. ಆದರೆ ತುಳಸಿ ಗಿಡವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು.]]></content:encoded>
            <category>vaastu</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/vaastu/5-vastu-approved-plants-to-attract-good-luck-wealth-positive-energy-mrq-yq12hxf"/>
        </item>
    </channel>
</rss>
