<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 02 Sep 2026 10:48:08 +0530</lastBuildDate>
        <atom:link href="https://kannada.asianetnews.com/rss/vaastu" rel="self" type="application/rss+xml"/>
        <item>
            <title><![CDATA[ಅಡುಗೆಗೆ ಸೀಮಿತವಲ್ಲ ಉಪ್ಪು ! ಆರೋಗ್ಯದ ಜೊತೆ ಶ್ರೀಮಂತಿಕೆ ಬೇಕೆಂದ್ರೆ ಹೀಗೆ ಬಳಸಿ]]></title>
            <link>https://kannada.asianetnews.com/gallery/astrology/salt-is-the-solution-to-all-your-household-problems-2x1qd96</link>
            <guid isPermaLink="true">https://kannada.asianetnews.com/gallery/astrology/salt-is-the-solution-to-all-your-household-problems-2x1qd96</guid>
            <pubDate>Sat, 29 Aug 2026 18:26:16 +0530</pubDate>
            <description><![CDATA[&lt;p&gt;ಉಪ್ಪು ಅಡುಗೆಮನೆಯಲ್ಲಿರುವ ಸಾಮಾನ್ಯ ಪದಾರ್ಥ ಅಲ್ವೇ ಅಲ್ಲ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಕೆಲ್ಸ ಮಾತ್ರ ಮಾಡೋದಿಲ್ಲ. ಉಪ್ಪು ನಮ್ಮ ಸಂಸ್ಕೃತಿಯಲ್ಲಿ ಬೆರೆತ ವಸ್ತು. ಉಪ್ಪನ್ನು ಶುದ್ಧೀಕರಣ, ರಕ್ಷಣೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿಯೂ ಬಳಸಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16rvq9xa0epjmgrb06nwn2t,imgname-salt-remedy-1788007537981.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಪ್ಪು ಅಡುಗೆಮನೆಯಲ್ಲಿರುವ ಸಾಮಾನ್ಯ ಪದಾರ್ಥ ಅಲ್ವೇ ಅಲ್ಲ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಕೆಲ್ಸ ಮಾತ್ರ ಮಾಡೋದಿಲ್ಲ. ಉಪ್ಪು ನಮ್ಮ ಸಂಸ್ಕೃತಿಯಲ್ಲಿ ಬೆರೆತ ವಸ್ತು. ಉಪ್ಪನ್ನು ಶುದ್ಧೀಕರಣ, ರಕ್ಷಣೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿಯೂ ಬಳಸಲಾಗುತ್ತದೆ.&lt;/p&gt;&lt;img&gt;&lt;p&gt;ಉಪ್ಪನ್ನು ನೀವು ಅನೇಕ ವಿಧಗಳಲ್ಲಿ ಬಳಸಿ ನಿಮ್ಮ ಸಂತೋಷ, ಸಮೃದ್ಧಿಯನ್ನು ಹೆಚ್ಚಿಸಿಕೊಳ್ಳಬಹುದು. ನೀವು ನಿಮ್ಮ ಆರೋಗ್ಯವೃದ್ಧಿಗೆ ಉಪ್ಪನ್ನು ಬಳಸಬಹುದು. ಸ್ವಲ್ಪ ಉಪ್ಪನ್ನು ಅಂಗೈಯಲ್ಲಿ ತೆಗೆದುಕೊಂಡು ಉಜ್ಜಬೇಕು. ಉಜ್ಜುವಾಗ, ಉಪ್ಪು ಮತ್ತು ನೀರಿನಿಂದ ನನ್ನ ಎಲ್ಲ ಸಮಸ್ಯೆ ದೂರವಾಗಿದೆ ಎನ್ನುತ್ತ ನೀವು ಕೈ ತೊಳೆಯಬೇಕು. ಇದರಿಂದ ನಕಾರಾತ್ಮಕತೆ ದೂರವಾಗಿ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಅದೃಷ್ಟ ಉಪ್ಪಿನಲ್ಲಿದೆ ಅಂದ್ರೆ ತಪ್ಪಾಗೋದಿಲ್ಲ. ಚಿಕ್ಕದೊಂದು ಬಟ್ಟೆಯ ಚೀಲದಲ್ಲಿ ಉಪ್ಪನ್ನು ಹಾಕಿ ಎಡ ಜೇಬಿನಲ್ಲಿ ಇಟ್ಟುಕೊಂಡರೆ ಅದೃಷ್ಟ ನಮ್ಮ ಜೊತೆ ಇರುತ್ತದೆ ಎಂಬ ನಂಬಿಕೆ ಬಲವಾಗಿದೆ.&lt;/p&gt;&lt;img&gt;&lt;p&gt;ಮನೆಯ ಉಪ್ಪಿನ ಡಬ್ಬವನ್ನು ತುಂಬಿಡಲು ಒಂದು ದಿನವಿದೆ. ನೀವು ಶುಕ್ರವಾರ ಉಪ್ಪಿನ ಡಬ್ಬಿಯನ್ನು ಸಂಪೂರ್ಣವಾಗಿ ತುಂಬಿ ಇಟ್ಟರೆ ಮನೆಯಲ್ಲಿ ಆರ್ಥಿಕ ಸಮೃದ್ಧಿ ಬರುತ್ತದೆ. ಅದೇ ರೀತಿ ಸಂಬಳ ಬಂದ ನಂತರ, ಹಣ ಅಥವಾ ಕಾರ್ಡ್ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿದರೆ ಹಣದ ಅದೃಷ್ಟ ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ.&lt;/p&gt;&lt;img&gt;&lt;p&gt;ಮನೆಯ ಬಾಗಿಲಿನ ಬಳಿ ಉಪ್ಪನ್ನು ಸಿಂಪಡಿಸಿದರೆ ಮನೆಯನ್ನು ನಕಾರಾತ್ಮಕತೆಯಿಂದ ರಕ್ಷಿಸಬಹುದು. ಈ ಕೆಲಸವನ್ನು ನೀವು ವರ್ಷಕ್ಕೆ ನಾಲ್ಕು ಬಾರಿ ಮಾಡಿದರೆ ಸಾಕು.&lt;/p&gt;&lt;img&gt;&lt;p&gt;ಬೆಳಗ್ಗೆ ಮನೆ ಸ್ವಚ್ಛ ಮಾಡುವ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಎನರ್ಜಿ ದೂರವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.&lt;/p&gt;&lt;img&gt;&lt;p&gt;ನೀವು ಒತ್ತಡದಿಂದ ಬಳಲುತ್ತಿದ್ದರೆ ಅಥವಾ ಕೆಟ್ಟ ಅನುಭವ ನಿಮಗೆ ಆಗಿದ್ದರೆ ಎಡ ಭುಜದ ಮೇಲಿಂದ ಒಂದು ಚಿಟಿಕೆ ಉಪ್ಪನ್ನು ಹಿಂದಕ್ಕೆ ಎಸೆದರೆ ಟೆನ್ಶನ್ ದೂರವಾಗುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/astrology/salt-is-the-solution-to-all-your-household-problems-2x1qd96"/>
        </item>
        <item>
            <title><![CDATA[ಇದು ಮನಿಪ್ಲಾಂಟ್ ಅಲ್ಲ, ಇಲ್ಲಿದೆ ನೋಡಿ ಕುಬೇರನಿಗೆ ಪ್ರಿಯವಾದ ಸಂಪತ್ತು ನೀಡೋ ಸಸ್ಯ]]></title>
            <link>https://kannada.asianetnews.com/gallery/vaastu/kannada-astrology-growing-jade-plant-beloved-by-lord-kubera-at-home-brings-financial-gains-and-economic-progress-mrq-3386dyd</link>
            <guid isPermaLink="true">https://kannada.asianetnews.com/gallery/vaastu/kannada-astrology-growing-jade-plant-beloved-by-lord-kubera-at-home-brings-financial-gains-and-economic-progress-mrq-3386dyd</guid>
            <pubDate>Wed, 02 Sep 2026 10:48:06 +0530</pubDate>
            <description><![CDATA[&lt;p&gt;ಕುಬೇರನಿಗೆ ಪ್ರಿಯವಾದ ಸಸ್ಯವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನ ವಿವರಿಸುತ್ತದೆ. ಈ ಸಸ್ಯವನ್ನು ಮನೆಯ ಯಾವ ದಿಕ್ಕಿನಲ್ಲಿಟ್ಟರೆ ಸಂಪತ್ತು, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೂ ಕುಟುಂಬದಲ್ಲಿ ಸಾಮರಸ್ಯ ನೆಲೆಸುತ್ತದೆ ಎಂಬುದನ್ನು ತಿಳಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1g88rkcndfcz5jrp0d8ee1x,imgname-jade-plant--2--1788325683820.jpg" type="image/jpeg" height="390" width="690"/>
            <content:encoded><![CDATA[&lt;p&gt;ಕುಬೇರನಿಗೆ ಪ್ರಿಯವಾದ ಸಸ್ಯವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನ ವಿವರಿಸುತ್ತದೆ. ಈ ಸಸ್ಯವನ್ನು ಮನೆಯ ಯಾವ ದಿಕ್ಕಿನಲ್ಲಿಟ್ಟರೆ ಸಂಪತ್ತು, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೂ ಕುಟುಂಬದಲ್ಲಿ ಸಾಮರಸ್ಯ ನೆಲೆಸುತ್ತದೆ ಎಂಬುದನ್ನು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಮನೆ ಆವರಣ ಅಥವಾ ಹೊರಾಂಗಣದಲ್ಲಿರುವ ಸಸ್ಯ/ಗಿಡಗಳು ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ. ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ಸಸ್ಯಕ್ಕೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಸಕಾರಾತ್ಮಕ ಅಂಶಕ್ಕಾಗಿ ವಾಸ್ತುಶಾಸ್ತ್ರದ ಪ್ರಕಾರ, ಸಸ್ಯಗಳನ್ನಡಬೇಕು. ಇಂದು ನಾವು ಹೇಳುತ್ತಿರುವ ಪ್ಲಾಂಟ್&zwnj; ಕುಬೇರದೇವನಿಗೆ ಅತ್ಯಂತ ಪ್ರಿಯವಾದದ್ದು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;img&gt;&lt;p&gt;ಕುಬೇರಾಕ್ಷಿ ಎಂದು ಕರೆಯಲ್ಪಡುವ ಈ ಸಸ್ಯ ಮನೆಯಲ್ಲಿದ್ರೆ ಸಂಪತ್ತು, ಸಮೃದ್ಧಿ ಜೊತೆ ಅದೃಷ್ಟವೂ ನಿಮ್ಮ ಜೊತೆಯಲ್ಲಿರುತ್ತದೆ. ಈ ಸಸ್ಯ ಮನಿ ಪ್ಲಾಂಟ್&zwnj;ನಂತೆ ಸಂಪತ್ತು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಇದನ್ನು ಅದೃಷ್ಟದ ಸಸ್ಯ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಯಾವುದು ಈ ಸಸ್ಯ ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ವಾಸ್ತು ಪ್ರಕಾರ, ಜೇಡ್ ಸಸ್ಯವನ್ನು ಮನೆಯ ಸೂಕ್ತ ಸ್ಥಳದಲ್ಲಿಟ್ರೆ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಜೇಡ್ ಸಸ್ಯ ಬೆಳೆಸೋದರಿಂದ ಮನೆಯಲ್ಲಿ ಶಾಂತಿ ಮತ್ತು ಆರ್ಥಿಕ ಸಮೃದ್ಧಿಯುಂಟಾಗುತ್ತದೆ. ಈ ಜೇಡ್ ಸಸ್ಯವನ್ನು ಮನೆಯ ಉತ್ತರ ದಿಕ್ಕಿನಲ್ಲಿಟ್ಟು ಬೆಳೆಸಬೇಕು. ಉತ್ತರ ದಿಕ್ಕು ಕುಬೇರನಿಗೆ ಸಂಬಂಧಿಸಿದ್ದಾಗಿದೆ. ಆದಷ್ಟು ಸೂರ್ಯನ ಬೆಳಕು ಬೀಳುವ ಜಾಗದಲ್ಲಿಡಲು ಪ್ರಯತ್ನಿಸಿ ಅಥವಾ ಬೆಳಗ್ಗೆ ಮನೆ ಹೊರಗೆ ಕೆಲ ಸಮಯ ಸೂರ್ಯನ ಬೆಳಕಿನಲ್ಲಿಡಿ. ಎಲೆಗಳ ಮೇಲೆ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಿ.&lt;/p&gt;&lt;img&gt;&lt;p&gt;ವೃತ್ತಿ, ವ್ಯವಹಾರದಲ್ಲಿ ಪ್ರಗತಿ ಕಾಣಲು ಮನೆಯಲ್ಲಿ ಜೇಡ್ ಸಸ್ಯ ಬೆಳೆಸಿ. ವಾಸ್ತು ತತ್ವಶಾಸ್ತ್ರದ ಪ್ರಕಾರ, ಉತ್ತರ ಮತ್ತು ಪೂರ್ವ ದಿಕ್ಕು ಜೇಡ್ ಬೆಳೆವಣಿಗೆಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಒಣಗದಂತೆ ನೋಡಿಕೊಳ್ಳೋದು ಸಹ ಅತ್ಯಂತ ಮುಖ್ಯವಾಗುತ್ತದೆ. ಕುಟುಂಬ ಸದಸ್ಯರು ಜೊತೆಯಾಗಿ ಹೆಚ್ಚು ಸಮಯ ಕಳೆಯುವ ಸ್ಥಳದಲ್ಲಿಯೂ ಜೇಡ್ ಪಾಟ್ ಇಟ್ಟುಕೊಳ್ಳಬಹುದಾಗಿದೆ. ಹೀಗೆ ಮಾಡೋದರಿಂದ ಕುಟುಂಬ ಸದಸ್ಯರ ನಡುವೆ ಪ್ರೀತಿ, ಸಾಮರಸ್ಯ ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;ಈ ಸಸ್ಯವನ್ನು ಮಲಗುವ ಕೋಣೆ, ಸ್ನಾನಗೃಹ, ಶೌಚಾಲಯ ಅಥವಾ ಅಡುಗೆಮನೆಯಲ್ಲಿಡಬಾರದು. ಈ ಸಸ್ಯವನ್ನು ಸಾಕಷ್ಟು ಗಾಳಿ ಮತ್ತು ಬೆಳಕನ್ನು ಪಡೆಯುವ ಮತ್ತು ನಿಯಮಿತವಾಗಿ ಆರೈಕೆ ಮಾಡಬಹುದಾದ ಸ್ಥಳದಲ್ಲಿ ಇಡುವುದು ಉತ್ತಮ. ಸಂಪತ್ತು ಮತ್ತು ಅದೃಷ್ಟದೊಂದಿಗೆ ಈ ಸಸ್ಯವನ್ನು ಹೋಲಿಕೆ ಮಾಡುವ ಕಾರಣ, ಇದನ್ನು ಶುಭಕರ ಎಂದು ಉಲ್ಲೇಖಿಸಲಾಗುತ್ತದೆ.&lt;/p&gt;&lt;p&gt;ಇದಕ್ಕೆ ಪದೇ ಪದೇ ನೀರು ಹಾಕುವ ಅಗತ್ಯವಿಲ್ಲ. ಮಣ್ಣು ಒಣಗಿದಾಗ ನೀರು ಹಾಕಬೇಕು.&lt;/p&gt;&lt;p&gt;&lt;strong&gt;Disclaimer:&lt;/strong&gt; ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.&lt;/p&gt;]]></content:encoded>
            <category>vaastu</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/vaastu/kannada-astrology-growing-jade-plant-beloved-by-lord-kubera-at-home-brings-financial-gains-and-economic-progress-mrq-3386dyd"/>
        </item>
        <item>
            <title><![CDATA[ಈ ಗಿಡಕ್ಕೆ ಪೂಜೆ ಮಾಡಿದ್ರೆ ಕೇವಲ 24 ಗಂಟೆಯಲ್ಲಿ ಅದೃಷ್ಟ ಬದಲಾಗೋದು ಗ್ಯಾರಂಟಿ!]]></title>
            <link>https://kannada.asianetnews.com/webstories/vaastu/magical-white-ekkada-plant-tips-3y6r6oo</link>
            <guid isPermaLink="true">https://kannada.asianetnews.com/webstories/vaastu/magical-white-ekkada-plant-tips-3y6r6oo</guid>
            <pubDate>Tue, 01 Sep 2026 23:15:44 +0530</pubDate>
            <description><![CDATA[&lt;p&gt;Spiritual Luck Hacks Kannada: ಒಂದೇ ದಿನದಲ್ಲಿ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರಬೇಕೇ? ಹಾಗಿದ್ದರೆ ಶಾಸ್ತ್ರೋಕ್ತವಾಗಿ ಬಿಳಿ ಎಕ್ಕದ ಗಿಡಕ್ಕೆ ಈ ಸರಳ ಪೂಜೆ ಮಾಡಿ ನೋಡಿ. ಇದರ ಪವಾಡ ಅಚ್ಚರಿ ಮೂಡಿಸುವಂತದ್ದು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1f0yw0sx129f0fnnpmrhvf1,imgname-white-aak-plant-1788284465175.jpg" type="image/jpeg" height="390" width="690"/>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/vaastu/magical-white-ekkada-plant-tips-3y6r6oo"/>
        </item>
        <item>
            <title><![CDATA[Puja Rituals: ಪೂಜೆ ವೇಳೆ ಎಷ್ಟು ಅಗರಬತ್ತಿ ಹಚ್ಚಬೇಕು? 1 ಅಥವಾ 2?  ಹೆಚ್ಚು ಹಚ್ಚಿದರೆ ಹೆಚ್ಚು ಪುಣ್ಯ ಸಿಗುತ್ತಾ?]]></title>
            <link>https://kannada.asianetnews.com/vaastu/should-you-light-1-or-2-incense-sticks-during-puja-know-the-religious-belief/articleshow-5x2rvyg</link>
            <guid isPermaLink="true">https://kannada.asianetnews.com/vaastu/should-you-light-1-or-2-incense-sticks-during-puja-know-the-religious-belief/articleshow-5x2rvyg</guid>
            <pubDate>Thu, 20 Aug 2026 15:51:45 +0530</pubDate>
            <description><![CDATA[&lt;p&gt;Vastu Tips: ಮನೆಯಲ್ಲಿ ಪೂಜೆಯ ವೇಳೆ ದೇವರ ಮುಂದೆ ಅಗರಬತ್ತಿ ಹಚ್ಚಿಡುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ದೇವರಿಗೆ ಎಷ್ಟು ಅಗರಬತ್ತಿ ಹಬ್ಬಬೇಕು? ಒಂದು ಅಗರಬತ್ತಿಯೇ ಎರಡು ಅಗರಬತ್ತಿಯೇ? ಅಥವಾ ಅದಕ್ಕೂ ಹೆಚ್ಚು ಅಗರಬತ್ತಿ ಹಚ್ಚಿದರೆ ಪುಣ್ಯ ಸಿಗುತ್ತಾ? ಇಲ್ಲಿದೆ ಪೂಜೆಯ ಸಮಯದಲ್ಲಿ ಅನುಸರಿಸಬೇಕಾದ ಸರಿಯಾದ ನಿಯಮಗಳು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh8g91hmksdr2cbrjs6nxpk3,imgname-scented-incense-stick-1770885776948.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪೂಜೆ ಮಾಡುವಾಗ ಎಷ್ಟು ಅಗರಬತ್ತಿ ಹಚ್ಚಬೇಕು?&lt;/strong&gt;&lt;/h2&gt;&lt;p&gt;ನಾವು ಸಾಮಾನ್ಯವಾಗಿ ಮನೆಯ ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ದೀಪ ಹಚ್ಚುವುದರ ಜೊತೆಗೆ ಅಗರಬತ್ತಿ ಹಚ್ಚುವುದು ಸಾಮಾನ್ಯ. ಅಗರಬತ್ತಿಯ ಪರಿಮಳದಿಂದ ಪೂಜಾ ಸ್ಥಳದಲ್ಲಿ ಶಾಂತ ಮತ್ತು ಸುಗಂಧಭರಿತ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಮನೆ ಮತ್ತು ಮನಸಲ್ಲಿ ಸಕಾರಾತ್ಮಕ ಅಲೆಗಳು ಮೂಡುತ್ತವೆ ಅನ್ನೋದು ನಮ್ಮ ನಂಬಿಕೆ. ಆದರೆ ಒಂದೇ ಸಮಯದಲ್ಲಿ ಎಷ್ಟು ಅಗರಬತ್ತಿ ಹಚ್ಚುವುದು ಸೂಕ್ತ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕೆಲವರಿಗೆ ಈ ಬಗ್ಗೆ ತುಂಬಾನೆ ಸಂಶಯ ಇದೆ. ಮುಖ್ಯವಾಗಿ ಹೇಳಬೇಕು ಅಂದ್ರೆ, ಪೂಜೆಯಲ್ಲಿ ಎಷ್ಟು ಅಗರಬತ್ತಿ ಹಚ್ಚುತ್ತೇವೆ ಎನ್ನುವುದಕ್ಕಿಂತ ನಮ್ಮ ಭಕ್ತಿ ಮತ್ತು ಮನಸ್ಸಿನ ಪರಿಶುದ್ಧತೆ ಹೆಚ್ಚು ಮುಖ್ಯವಾಗಿದೆ.&lt;/p&gt;&lt;h3&gt;&lt;strong&gt;ಒಂದು ಅಥವಾ ಎರಡು ಅಗರಬತ್ತಿ ಸಾಕೇ? ತಜ್ಞರು ಏನೆನ್ನುತ್ತಾರೆ?&lt;/strong&gt;&lt;/h3&gt;&lt;p&gt;ಮನೆಯ ದೇವರ ಕೋಣೆಯಲ್ಲಿ ನಾವು ಪ್ರತಿದಿನ ಪೂಜೆ ಮಾಡುವಾಗ ಒಂದು ಅಥವಾ ಎರಡು ಅಗರಬತ್ತಿ ಹಚ್ಚುವುದು ಸಾಕು. ದೇವರನ್ನು ಪ್ರಸನ್ನಗೊಳಿಸಲು ಹೆಚ್ಚು ಅಗರಬತ್ತಿಗಳನ್ನು ಹಚ್ಚುವ ಅಗತ್ಯವಿಲ್ಲ. ಪೂಜೆಯಲ್ಲಿ ಆಡಂಬರಕ್ಕಿಂತ ನಿಜವಾದ ಭಕ್ತಿ ಮತ್ತು ಶ್ರದ್ಧೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಿಮಗೆ ಒಂದು ಹಚ್ಚಬೇಕು ಅನಿಸಿದರೆ, ಒಂದು ಅಥವಾ ಎರಡು ಹಚ್ಚಬೇಕು ಅನಿಸಿದರೆ ಎರಡು ಹಚ್ಚಿ. ಎಷ್ಟು ಅಗರಬತ್ತಿ ಹಚ್ಚಿದರೂ ಮನಸ್ಸಿನಲ್ಲಿ ಭಕ್ತಿ ಮಾತ್ರ ಹೆಚ್ಚಿರಲಿ.&lt;/p&gt;&lt;p&gt;&lt;strong&gt;ಹೆಚ್ಚು ಅಗರಬತ್ತಿ ಹಚ್ಚುವುದು ಅಗತ್ಯವಿಲ್ಲ&lt;/strong&gt;&lt;/p&gt;&lt;p&gt;ಧಾರ್ಮಿಕ ನಂಬಿಕೆಗಳ ಪ್ರಕಾರ, ಹೆಚ್ಚು ಅಗರಬತ್ತಿ ಹಚ್ಚಿದರೆ ಹೆಚ್ಚು ಪುಣ್ಯ ಸಿಗುತ್ತದೆ ಎಂಬ ಯಾವುದೇ ನಿರ್ದಿಷ್ಟ ನಿಯಮವಿಲ್ಲ. ಅಗತ್ಯಕ್ಕಿಂತ ಹೆಚ್ಚು ಅಗರಬತ್ತಿ ಹಚ್ಚುವುದರಿಂದ ಹೊಗೆ ಹೆಚ್ಚಾಗಬಹುದು. ಇದರಿಂದ ಮನೆಯ ವಾತಾವರಣದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಪೂಜೆಯಲ್ಲಿ ಮಿತವಾಗಿ ಅಗರಬತ್ತಿ ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ.&lt;/p&gt;&lt;p&gt;&lt;strong&gt;ಅಗರಬತ್ತಿಗೆ ಧಾರ್ಮಿಕ ಮಹತ್ವವೇನು?&lt;/strong&gt;&lt;/p&gt;&lt;p&gt;ಆಚಾರ್ಯರ ಪ್ರಕಾರ, ಅಗರಬತ್ತಿಯ ಪರಿಮಳವು ಪೂಜೆಯ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಡಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ನಂಬಿಕೆಯಲ್ಲಿ ಅಗರಬತ್ತಿಯ ಸುಗಂಧವನ್ನು ವಾತಾವರಣದಲ್ಲಿನ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.&lt;/p&gt;&lt;p&gt;&lt;strong&gt;ಅಗರಬತ್ತಿ ಹಚ್ಚುವಾಗ ಈ ವಿಷಯಗಳನ್ನು ಗಮನದಲ್ಲಿಡಿ&lt;/strong&gt;&lt;/p&gt;&lt;ul&gt; &lt;li&gt;ಪೂಜೆ ಮಾಡುವ ಮೊದಲು ದೇವರ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಅಗರಬತ್ತಿಯನ್ನು ಸುರಕ್ಷಿತವಾದ ಸ್ಟ್ಯಾಂಡ್&zwnj;ನಲ್ಲಿ ಇಟ್ಟು ಹಚ್ಚಿ.&lt;/li&gt; &lt;li&gt;ಹಚ್ಚಿದ ಅಗರಬತ್ತಿಯನ್ನು ಯಾವತ್ತೂ ಹಾಗೆಯೇ ಬಿಡಬೇಡಿ. ಬೆಂಕಿ ಆರಿದೆ ಎಂದು ಗಮನಿಸಿ. ಹೆಚ್ಚು ಹೊಗೆ ಉಂಟುಮಾಡುವ ಅಗರಬತ್ತಿಗಳನ್ನು ಬಳಸುವುದನ್ನು ತಪ್ಪಿಸುವುದು ಕೂಡ ಉತ್ತಮ. ಇದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು.&lt;/li&gt; &lt;li&gt;ಪೂಜೆಯಲ್ಲಿ ದೀಪ ಮತ್ತು ಅಗರಬತ್ತಿಯನ್ನು ಒಟ್ಟಿಗೆ ಬಳಸುವುದು ಶುಭ. ಆದರೆ ಅಗರಬತ್ತಿ ಹಚ್ಚುವುದು ಕಡ್ಡಾಯವಲ್ಲ. ನೀವು ಹಚ್ಚದೇ ಇದ್ದರೂ ದೇವರು ಕೋಪ ಮಾಡುವುದಿಲ್ಲ.&lt;/li&gt; &lt;li&gt;ಪೂಜೆಯಲ್ಲಿನ ಅತ್ಯಂತ ಮುಖ್ಯವಾದ ಅಂಶವೆಂದರೆ ಶ್ರದ್ಧೆ, ಭಕ್ತಿ ಮತ್ತು ನಿಜವಾದ ಮನೋಭಾವ. ಇದು ಇದ್ದರೆ, ನೀವು ದೇವರಿಗೆ ಏನು ಕೊಡದೇ ಇದ್ದರೂ ಅವನು ನಿಮ್ಮನ್ನು ಕಾಪಾಡುತ್ತಾನೆ.&lt;/li&gt;&lt;/ul&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/vaastu/should-you-light-1-or-2-incense-sticks-during-puja-know-the-religious-belief/articleshow-5x2rvyg"/>
        </item>
        <item>
            <title><![CDATA[Vastu Tips: ಅದೃಷ್ಟ ಬರಬೇಕಾ? ಹಾಗಿದ್ರೆ ಮನೆಯ ಹೊರಗೆ ಈ ದಿಕ್ಕಿನಲ್ಲಿ ದೀಪ ಹಚ್ಚಿ!]]></title>
            <link>https://kannada.asianetnews.com/webstories/vaastu/vastu-tips-for-lighting-lamp-at-home-entrance-gvd-7brl8ub</link>
            <guid isPermaLink="true">https://kannada.asianetnews.com/webstories/vaastu/vastu-tips-for-lighting-lamp-at-home-entrance-gvd-7brl8ub</guid>
            <pubDate>Fri, 21 Aug 2026 18:28:51 +0530</pubDate>
            <description><![CDATA[ಮನೆಯ ಹೊರಗೆ ಯಾವ ದಿಕ್ಕಿನಲ್ಲಿ ದೀಪ ಹಚ್ಚಬೇಕು? ಯಾವ ದಿಕ್ಕಿನಲ್ಲಿ ದೀಪ ಹಚ್ಚಬಾರದು? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಈ ನಿಯಮಗಳನ್ನು ಪಾಲಿಸಿದರೆ ಅದೃಷ್ಟ ಖುಲಾಯಿಸುವುದು ಖಚಿತ.]]></description>
            <media:content url="https://static.asianetnews.com/images/w-1280,h-720,format-jpg,imgid-01j7b4p8gc5p7r6vxs5qv9awg2,imgname-Which-is-the-best-metal-for-diya-1725877133836.jpg" type="image/jpeg" height="390" width="690"/>
            <category>vaastu</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/vaastu/vastu-tips-for-lighting-lamp-at-home-entrance-gvd-7brl8ub"/>
        </item>
        <item>
            <title><![CDATA[ಅಡುಗೆ ಮನೆಯಲ್ಲಿ 3 ಬರ್ನರ್  ಗ್ಯಾಸ್ ಸ್ಟೌವ್ ಇದೆಯಾ? ವಾಸ್ತು ಶಾಸ್ತ್ರ ಏನ್ ಹೇಳುತ್ತೆ ಗೊತ್ತಾ?]]></title>
            <link>https://kannada.asianetnews.com/gallery/vaastu/does-a-3-burner-stove-cause-poverty-vastu-myths-vs-facts-8vug66n</link>
            <guid isPermaLink="true">https://kannada.asianetnews.com/gallery/vaastu/does-a-3-burner-stove-cause-poverty-vastu-myths-vs-facts-8vug66n</guid>
            <pubDate>Tue, 18 Aug 2026 11:49:11 +0530</pubDate>
            <description><![CDATA[&lt;p&gt;Kitchen Vastu Tips: ಅಡುಗೆ ಮನೆಯಲ್ಲಿ 3 ಬರ್ನರ್ ಗ್ಯಾಸ್ ಸ್ಟೌವ್ ಇದ್ದರೆ ಬಡತನ ಬರುತ್ತದೆ ಎಂಬ ಭಯ ನಿಮಗಿದೆಯೇ? ವಾಸ್ತು ಶಾಸ್ತ್ರವು ಈ ಬಗ್ಗೆ ಏನು ಹೇಳುತ್ತದೆ ಮತ್ತು ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಿಸಲು ಒಲೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k47maq4wwf3wtjethzxg1eg5,imgname-3-burner-steel-gas-stove-price-1-1756897827996.jpg" type="image/jpeg" height="390" width="690"/>
            <content:encoded><![CDATA[&lt;p&gt;Kitchen Vastu Tips: ಅಡುಗೆ ಮನೆಯಲ್ಲಿ 3 ಬರ್ನರ್ ಗ್ಯಾಸ್ ಸ್ಟೌವ್ ಇದ್ದರೆ ಬಡತನ ಬರುತ್ತದೆ ಎಂಬ ಭಯ ನಿಮಗಿದೆಯೇ? ವಾಸ್ತು ಶಾಸ್ತ್ರವು ಈ ಬಗ್ಗೆ ಏನು ಹೇಳುತ್ತದೆ ಮತ್ತು ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಿಸಲು ಒಲೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಹೆಚ್ಚಾಯ್ತು 3 ಅಥವಾ 4 ಬರ್ನರ್&zwnj; ಗ್ಯಾಸ್ ಸ್ಟೌವ್ ಬಳಸುವ ಸಂಸ್ಕೃತಿ&lt;/strong&gt;ಅಡುಗೆಮನೆಯು ಮನೆಯ ಕೇವಲ ಒಂದು ಭಾಗವಲ್ಲ, ಅದು ಮನೆಯ ಭಾಗ್ಯದ ಬಾಗಿಲು. ಇದನ್ನು ಅನ್ನಪೂರ್ಣೇಶ್ವರಿ ನೆಲೆಸಿರುವ ಪವಿತ್ರ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸಬೇಕೆಂದರೆ ಅಡುಗೆಮನೆಯ ಉಪಕರಣಗಳು ಮತ್ತು ಅವುಗಳ ದಿಕ್ಕಿನ ಬಗ್ಗೆ ಜ್ಞಾನವಿರುವುದು ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಕುಟುಂಬದ ಅಗತ್ಯಕ್ಕೆ ತಕ್ಕಂತೆ 3 ಅಥವಾ 4 ಬರ್ನರ್&zwnj;ಗಳ ಗ್ಯಾಸ್ ಸ್ಟೌವ್ ಬಳಸುವ ಸಂಸ್ಕೃತಿ ಹೆಚ್ಚಾಗಿದೆ. ಆದರೆ, ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆಯೇ ಎಂಬ ಗೊಂದಲ ಅನೇಕರಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;3 ಬರ್ನರ್ ಗ್ಯಾಸ್ ಸ್ಟೌವ್ ಅಶುಭವೇ?&lt;/strong&gt;ಸಾಮಾನ್ಯವಾಗಿ 'ಮೂರು' ಎಂಬ ಸಂಖ್ಯೆಯ ಬಗ್ಗೆ ಜನರಲ್ಲಿ ಒಂದು ರೀತಿಯ ಅಂಜಿಕೆ ಇರುತ್ತದೆ. 3 ಬರ್ನರ್ ಸ್ಟೌವ್ ಬಳಸಿದರೆ ಬಡತನ ಬರುತ್ತದೆ ಅಥವಾ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ ಎಂಬುದು ಕೇವಲ ಒಂದು ಭ್ರಮೆಯಷ್ಟೆ. ವಾಸ್ತು ಶಾಸ್ತ್ರದ ತಜ್ಞರ ಪ್ರಕಾರ, ಸ್ಟೌವ್&zwnj;ನಲ್ಲಿ ಎಷ್ಟು ಬರ್ನರ್&zwnj;ಗಳು ಇರಬೇಕು ಎಂಬುದರ ಬಗ್ಗೆ ಯಾವುದೇ ತೊಂದರೆಯಿಲ್ಲ. ಆಧುನಿಕ ಜೀವನಶೈಲಿಗೆ 3 ಅಥವಾ 4 ಬರ್ನರ್&zwnj;ಗಳ ಸ್ಟೌವ್ ಅತ್ಯಂತ ಉಪಯುಕ್ತ ಮತ್ತು ವಾಸ್ತು ಪ್ರಕಾರ ಇದು ಸಂಪೂರ್ಣ ಸುರಕ್ಷಿತ. ಆದ್ದರಿಂದ, ಬರ್ನರ್&zwnj;ಗಳ ಸಂಖ್ಯೆಗಿಂತ ಅದನ್ನು ಎಲ್ಲಿ ಮತ್ತು ಹೇಗೆ ಇಡುತ್ತೀರಿ ಎಂಬುದು ಮುಖ್ಯವಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಗಮನಿಸಬೇಕಾದ ಪ್ರಮುಖ ವಾಸ್ತು ನಿಯಮಗಳು&lt;/strong&gt;ನಿಮ್ಮ ಮನೆಯಲ್ಲಿ ಎಷ್ಟು ಬರ್ನರ್&zwnj;ನ ಒಲೆ ಇದ್ದರೂ, ಸಕಾರಾತ್ಮಕ ಫಲಿತಾಂಶಕ್ಕಾಗಿ ಈ ಕೆಳಗಿನ ವಾಸ್ತು ಸೂತ್ರಗಳನ್ನು ತಪ್ಪದೇ ಪಾಲಿಸಿ..&lt;/p&gt;&lt;p&gt;&lt;strong&gt;1. ಆಗ್ನೇಯ ದಿಕ್ಕಿನ ಮಹತ್ವ (Agneya Direction)&lt;/strong&gt;ಗ್ಯಾಸ್ ಸ್ಟೌವ್ ಅನ್ನು ಯಾವಾಗಲೂ ಅಡುಗೆಮನೆಯ ಆಗ್ನೇಯ (ದಕ್ಷಿಣ-ಪೂರ್ವ) ದಿಕ್ಕಿನಲ್ಲಿಯೇ ಇರಿಸಬೇಕು. ಈ ದಿಕ್ಕು ಅಗ್ನಿ ತತ್ವಕ್ಕೆ ಸಂಬಂಧಿಸಿದ್ದು, ಇಲ್ಲಿ ಒಲೆ ಇರಿಸುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.&lt;/p&gt;&lt;p&gt;&lt;strong&gt;2 ಅಡುಗೆ ಮಾಡುವಾಗ ಮುಖದ ದಿಕ್ಕು&lt;/strong&gt;ಒಲೆಯ ಮೇಲೆ ಅಡುಗೆ ಮಾಡುವಾಗ ಗೃಹಿಣಿಯ ಅಥವಾ ಅಡುಗೆ ಮಾಡುವ ವ್ಯಕ್ತಿಯ ಮುಖವು ಯಾವಾಗಲೂ ಪೂರ್ವ ದಿಕ್ಕಿನತ್ತ ಇರಬೇಕು. ಪೂರ್ವಕ್ಕೆ ಮುಖ ಮಾಡಿ ಅಡುಗೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;&lt;strong&gt;3. ಈಶಾನ್ಯ ದಿಕ್ಕಿನಲ್ಲಿ ಒಲೆ ಇಡಬೇಡಿ&lt;/strong&gt;ಅಡುಗೆಮನೆಯ ಈಶಾನ್ಯ (ಉತ್ತರ-ಪೂರ್ವ) ದಿಕ್ಕನ್ನು ಅತ್ಯಂತ ಪವಿತ್ರ ಮತ್ತು ಜಲ ತತ್ವದ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಈ ಜಾಗದಲ್ಲಿ ಅಗ್ನಿಯನ್ನು (ಗ್ಯಾಸ್ ಸ್ಟೌವ್) ಇರಿಸುವುದು ವಾಸ್ತು ಪ್ರಕಾರ ಅಶುಭ. ಇದು ಮನೆಯಲ್ಲಿ ಕಲಹ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.&lt;/p&gt;&lt;p&gt;&lt;strong&gt;4. ಜಲ ಮತ್ತು ಅಗ್ನಿಯ ಸಂಘರ್ಷ ತಡೆಯಿರಿ&lt;/strong&gt;ಅಡುಗೆಮನೆಯಲ್ಲಿ ನೀರಿನ ಸಿಂಕ್ (Sink) ಮತ್ತು ಗ್ಯಾಸ್ ಸ್ಟೌವ್ ಅಕ್ಕಪಕ್ಕದಲ್ಲಿ ಇರಬಾರದು. ನೀರು ಮತ್ತು ಬೆಂಕಿ ಪರಸ್ಪರ ವಿರುದ್ಧ ಸ್ವಭಾವದವು. ಇವುಗಳ ನಡುವೆ ಕನಿಷ್ಠ ಅಂತರವಿರಲಿ. ಒಂದು ವೇಳೆ ಇವು ಬಹಳ ಹತ್ತಿರದಲ್ಲಿದ್ದರೆ, ಅದು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;&lt;strong&gt;ಬರ್ನರ್&zwnj; ಸಂಖ್ಯೆಗಿಂತ ಇರಿಸುವ ದಿಕ್ಕು ಮುಖ್ಯ&lt;/strong&gt;ನಿಮ್ಮ ಮನೆಯಲ್ಲಿ 3 ಬರ್ನರ್ ಗ್ಯಾಸ್ ಸ್ಟೌವ್ ಇದ್ದರೆ ಆತಂಕ ಪಡುವ ಅಗತ್ಯವಿಲ್ಲ. ಒಲೆಯ ಬರ್ನರ್&zwnj;ಗಳ ಸಂಖ್ಯೆಗಿಂತ ಅದನ್ನು ಇರಿಸುವ ದಿಕ್ಕು ಮತ್ತು ಅಡುಗೆ ಮಾಡುವಾಗ ನೀವು ಅನುಸರಿಸುವ ಕ್ರಮಗಳು ನಿಮ್ಮ ಮನೆಯ ಸಮೃದ್ಧಿಯನ್ನು ನಿರ್ಧರಿಸುತ್ತವೆ. ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸಿ, ಮನೆಯಲ್ಲಿ ಸದಾ ಅನ್ನಪೂರ್ಣೇಶ್ವರಿಯ ಕೃಪೆ ಇರುವಂತೆ ನೋಡಿಕೊಳ್ಳಿ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/does-a-3-burner-stove-cause-poverty-vastu-myths-vs-facts-8vug66n"/>
        </item>
        <item>
            <title><![CDATA[ಮನೆಯ ಈ 3 ಜಾಗದಲ್ಲಿ ಪೂಜಾ ಕೋಣೆಯಿದ್ದರೆ ಸಂಕಷ್ಟ ಗ್ಯಾರಂಟಿ!]]></title>
            <link>https://kannada.asianetnews.com/webstories/vaastu/never-build-a-puja-room-in-these-3-places-vastu-shastra-warning-cxg58gs</link>
            <guid isPermaLink="true">https://kannada.asianetnews.com/webstories/vaastu/never-build-a-puja-room-in-these-3-places-vastu-shastra-warning-cxg58gs</guid>
            <pubDate>Sun, 30 Aug 2026 23:36:52 +0530</pubDate>
            <description><![CDATA[&lt;p&gt;Vastu Shastra puja room tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂಜಾ ಕೋಣೆ ಸುಖ-ಶಾಂತಿಯ ಮೂಲ. ಆದರೆ ಕೆಲವು ಜಾಗಗಳಲ್ಲಿ ಪೂಜಾ ಕೋಣೆ ನಿರ್ಮಿಸುವುದು ಅಶುಭ ಫಲಗಳನ್ನು ನೀಡುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jd9ehpx27de80wey2zfm49c1,imgname-Importance-of-asan-color-in-puja-rituals-1732262812578.jpg" type="image/jpeg" height="390" width="690"/>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/vaastu/never-build-a-puja-room-in-these-3-places-vastu-shastra-warning-cxg58gs"/>
        </item>
        <item>
            <title><![CDATA[ಮರೆತೂ ಈ ನಿರ್ದಿಷ್ಟ ವಸ್ತುವನ್ನ ಹಾಸಿಗೆಯ ಕೆಳಗೆ ಇಡಬೇಡಿ.. ಉದ್ಧಾರ ಆಗೋಕೆ ಚಾನ್ಸೇ ಇಲ್ಲ]]></title>
            <link>https://kannada.asianetnews.com/gallery/vaastu/5-things-you-should-never-keep-under-your-bed-as-per-vastu-g1l1p9s</link>
            <guid isPermaLink="true">https://kannada.asianetnews.com/gallery/vaastu/5-things-you-should-never-keep-under-your-bed-as-per-vastu-g1l1p9s</guid>
            <pubDate>Thu, 20 Aug 2026 13:41:49 +0530</pubDate>
            <description><![CDATA[&lt;p&gt;&lt;strong&gt;Vastu tips for bedroom: &lt;/strong&gt;ನಿಮ್ಮ ಹಾಸಿಗೆಯ ಅಡಿಯಲ್ಲಿ ನೀವು ಇಡುವ ಸಣ್ಣ ವಸ್ತುಗಳು ನಿಮ್ಮ ಜೀವನದ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು ಗೊತ್ತೇ? ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಮರೆತೂ ಇಡಬಾರದ ವಸ್ತು ಮತ್ತು ಅವುಗಳಿಂದಾಗುವ ತೊಂದರೆಗಳ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0f31vydbszbrkken12gks5e,imgname-vastu-tips-for-bedroom-1787212918733.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Vastu tips for bedroom: &lt;/strong&gt;ನಿಮ್ಮ ಹಾಸಿಗೆಯ ಅಡಿಯಲ್ಲಿ ನೀವು ಇಡುವ ಸಣ್ಣ ವಸ್ತುಗಳು ನಿಮ್ಮ ಜೀವನದ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು ಗೊತ್ತೇ? ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಮರೆತೂ ಇಡಬಾರದ ವಸ್ತು ಮತ್ತು ಅವುಗಳಿಂದಾಗುವ ತೊಂದರೆಗಳ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಈ ನಿರ್ದಿಷ್ಟ ವಸ್ತು ಇಡ್ಬಾರ್ದು&lt;/strong&gt;ವಾಸ್ತು ಶಾಸ್ತ್ರದ ಪ್ರಕಾರ, ನಾವು ಮಲಗುವ ಹಾಸಿಗೆ ಅಥವಾ ಬೆಡ್ ಕೇವಲ ವಿಶ್ರಾಂತಿ ಪಡೆಯುವ ಪೀಠೋಪಕರಣವಲ್ಲ; ಅದು ನಮ್ಮ ಜೀವನದ ಸಕಾರಾತ್ಮಕ ಶಕ್ತಿಯ ಕೇಂದ್ರವೂ ಹೌದು. ಹಾಸಿಗೆಯ ಸುತ್ತಮುತ್ತಲಿನ ವಾತಾವರಣವು ನಮ್ಮ ಮನಸ್ಸು, ಆರೋಗ್ಯ ಮತ್ತು ನಿದ್ರೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಅನೇಕ ಜನರು ಜಾಗದ ಅಭಾವದಿಂದ ಅಥವಾ ಅನುಕೂಲಕ್ಕಾಗಿ ಹಾಸಿಗೆಯ ಅಡಿಯಲ್ಲಿ ಹತ್ತಾರು ವಸ್ತುಗಳನ್ನು ಇಡುತ್ತಾರೆ. ಆದರೆ, ವಾಸ್ತು ಪ್ರಕಾರ ಹಾಸಿಗೆಯ ಅಡಿಯಲ್ಲಿ ಕೆಲವು ನಿರ್ದಿಷ್ಟ ವಸ್ತುಗಳನ್ನು ಇಡುವುದು ನಿಮ್ಮ ಜೀವನದ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರಬಹುದು.&lt;/p&gt;&lt;img&gt;&lt;p&gt;&lt;strong&gt;ನಿಮ್ಮ ಪ್ರಗತಿಗೆ ಅಡ್ಡಿಯಾಗುವ ಆ 5 ವಸ್ತು&lt;/strong&gt;&lt;strong&gt;ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ತಂತಿಗಳು&lt;/strong&gt;ಹಾಸಿಗೆಯ ಅಡಿಯಲ್ಲಿ ಎಂದಿಗೂ ಮೊಬೈಲ್ ಚಾರ್ಜರ್&zwnj;ಗಳು, ಎಲೆಕ್ಟ್ರಾನಿಕ್ ತಂತಿಗಳು ಅಥವಾ ಹಳೆಯ ಬ್ಯಾಟರಿಗಳನ್ನು ಇಡಬಾರದು. ವಾಸ್ತು ಪ್ರಕಾರ ಇವುಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಇವು ಮನಸ್ಸನ್ನು ಅಶಾಂತಗೊಳಿಸುವುದಲ್ಲದೆ, ನಿಮ್ಮ ನಿದ್ರೆಯ ಗುಣಮಟ್ಟ ಕೆಡಿಸಿ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;&lt;strong&gt;ಹಳೆಯ ಕಾಗದಗಳು ಮತ್ತು ರಸೀದಿಗಳು&lt;/strong&gt;ಬಹಳಷ್ಟು ಮಂದಿ ಹಳೆಯ ನ್ಯೂಸ್ ಪೇಪರ್, ಕೆಲಸಕ್ಕೆ ಬಾರದ ರಸೀದಿಗಳು ಅಥವಾ ಕಾಗದಗಳನ್ನು ಹಾಸಿಗೆಯ ಅಡಿಯಲ್ಲಿ ರಾಶಿ ಹಾಕುತ್ತಾರೆ. ಇವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ನಿಮ್ಮ ಹಾಸಿಗೆಯ ಅಡಿಯಲ್ಲಿ ಇಂತಹ ವಸ್ತುಗಳಿದ್ದರೆ ತಕ್ಷಣ ಅವುಗಳನ್ನು ವಿಲೇವಾರಿ ಮಾಡಿ. ಕೇವಲ ಉಪಯುಕ್ತ ದಾಖಲೆಗಳನ್ನು ಮಾತ್ರ ಅಚ್ಚುಕಟ್ಟಾಗಿ ಬೇರೆಡೆಯಿಡಿ.&lt;/p&gt;&lt;img&gt;&lt;p&gt;&lt;strong&gt;ಹಳೆಯ ಮತ್ತು ಹರಿದ ಬಟ್ಟೆಗಳು&lt;/strong&gt;ಹಾಸಿಗೆಯ ಅಡಿಯಲ್ಲಿ ಹಳೆಯ ಅಥವಾ ಹರಿದ ಬಟ್ಟೆಗಳನ್ನು ಬಚ್ಚಿಡುವ ಅಭ್ಯಾಸ ನಿಮಗಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ. ಹೀಗೆ ಮಾಡುವುದರಿಂದ ಮನೆಯ ವಾತಾವರಣವು 'ಭಾರ' ಎನಿಸುತ್ತದೆ ಮತ್ತು ನಿಮ್ಮ ಜೀವನದ ಪ್ರಗತಿಯ ಹಾದಿಯಲ್ಲಿ ಅನಗತ್ಯ ಅಡೆತಡೆಗಳು ಉಂಟಾಗುತ್ತವೆ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಚೂಪಾದ ವಸ್ತುಗಳು&lt;/strong&gt;ಕತ್ತರಿ, ಚಾಕು, ಸೂಜಿ ಅಥವಾ ಪಿನ್&zwnj;ನಂತಹ ಚೂಪಾದ ವಸ್ತುಗಳನ್ನು ಮರೆತೂ ಹಾಸಿಗೆಯ ಅಡಿಯಲ್ಲಿ ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ ಅತಿಯಾದ ಒತ್ತಡವನ್ನು ಸೃಷ್ಟಿಸುತ್ತದೆ ಮತ್ತು ಕುಟುಂಬದ ಸದಸ್ಯರ ನಡುವೆ ಸಣ್ಣಪುಟ್ಟ ವಿಷಯಗಳಿಗೂ ವಾಗ್ವಾದಗಳು ಅಥವಾ ಜಗಳಗಳು ಪ್ರಾರಂಭವಾಗಲು ಕಾರಣವಾಗಬಹುದು.&lt;/p&gt;&lt;img&gt;&lt;p&gt;&lt;strong&gt;ಔಷಧಿಗಳನ್ನು ಇಡಬೇಡಿ&lt;/strong&gt;ರಾತ್ರಿ ವೇಳೆ ಅಥವಾ ತುರ್ತು ಸಂದರ್ಭದಲ್ಲಿ ಸುಲಭವಾಗಿ ಸಿಗಲಿ ಎಂದು ಅನೇಕರು ಔಷಧಿಗಳನ್ನು ಹಾಸಿಗೆಯ ಅಡಿಯಲ್ಲಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಅತ್ಯಂತ ತಪ್ಪು ಕ್ರಮ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ದಾರಿಯಾಗಬಹುದು ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಅನಗತ್ಯ ವಸ್ತು ಬೇಡ&lt;/strong&gt;ನಿಮ್ಮ ಹಾಸಿಗೆಯ ಅಡಿಯಲ್ಲಿ ಯಾವುದೇ ಅನಗತ್ಯ ವಸ್ತುಗಳಿಲ್ಲದಂತೆ ನೋಡಿಕೊಳ್ಳಿ. ಹಾಸಿಗೆಯ ಅಡಿಯ ಜಾಗವು ಎಷ್ಟು ಖಾಲಿ ಮತ್ತು ಸ್ವಚ್ಛವಾಗಿರುತ್ತದೆಯೋ, ಅಷ್ಟು ಸುಲಭವಾಗಿ ಸಕಾರಾತ್ಮಕ ಶಕ್ತಿಯು ನಿಮ್ಮ ಸುತ್ತಲೂ ಸಂಚರಿಸುತ್ತದೆ. ಇದು ನಿಮಗೆ ಶಾಂತಿಯುತ ನಿದ್ರೆ ಮತ್ತು ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/5-things-you-should-never-keep-under-your-bed-as-per-vastu-g1l1p9s"/>
        </item>
        <item>
            <title><![CDATA[ಮನೆಯ ಮುಖ್ಯ ದ್ವಾರದಲ್ಲಿ ಮನಿ ಪ್ಲಾಂಟ್ ಇಡುವಾಗ ಅಪ್ಪಿ ತಪ್ಪಿ ಈ 4 ಸಣ್ಣ ತಪ್ಪು ಮಾಡದಿರಿ]]></title>
            <link>https://kannada.asianetnews.com/gallery/vaastu/vastu-guide-for-money-plant-right-direction-and-placement-tips-gyac71n</link>
            <guid isPermaLink="true">https://kannada.asianetnews.com/gallery/vaastu/vastu-guide-for-money-plant-right-direction-and-placement-tips-gyac71n</guid>
            <pubDate>Wed, 19 Aug 2026 11:58:41 +0530</pubDate>
            <description><![CDATA[&lt;p&gt;Money plant vastu tips: ಮನೆಯ ಮುಖ್ಯ ದ್ವಾರದಲ್ಲಿ ಮನಿ ಪ್ಲಾಂಟ್ ಇಡುವುದು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಗಿಡವನ್ನು ಇಡುವಾಗ ಮಾಡುವ 4 ಸಣ್ಣ ತಪ್ಪುಗಳು ನಿಮ್ಮ ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km8qnqfxmm9b0rabmxk539jc,imgname-plant-2--5--1774114758141.jpg" type="image/jpeg" height="390" width="690"/>
            <content:encoded><![CDATA[&lt;p&gt;Money plant vastu tips: ಮನೆಯ ಮುಖ್ಯ ದ್ವಾರದಲ್ಲಿ ಮನಿ ಪ್ಲಾಂಟ್ ಇಡುವುದು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ಗಿಡವನ್ನು ಇಡುವಾಗ ಮಾಡುವ 4 ಸಣ್ಣ ತಪ್ಪುಗಳು ನಿಮ್ಮ ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು!&lt;/p&gt;&lt;img&gt;&lt;p&gt;&lt;strong&gt;ಈ ತಪ್ಪುಗಳ ಬಗ್ಗೆ ಇರಲಿ ಎಚ್ಚರ&lt;/strong&gt;ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಕೇವಲ ಒಂದು ಅಲಂಕಾರಿಕ ಸಸ್ಯವಲ್ಲ, ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುವ ಮತ್ತು ಹಣದ ಹರಿವನ್ನು ಹೆಚ್ಚಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ಅನೇಕ ಜನರು ತಮ್ಮ ಮನೆಯ ಅಂದವನ್ನು ಹೆಚ್ಚಿಸಲು ಮತ್ತು ಅದೃಷ್ಟವನ್ನು ಆಕರ್ಷಿಸಲು ಮುಖ್ಯ ದ್ವಾರದಲ್ಲಿ ಮನಿ ಪ್ಲಾಂಟ್ ಅನ್ನು ಇರಿಸುತ್ತಾರೆ. ಆದರೆ, ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಈ ಗಿಡವು ಲಾಭದ ಬದಲು ನಷ್ಟವನ್ನೂ ಉಂಟುಮಾಡಬಹುದು. ನೀವು ಕೂಡ ಮುಖ್ಯ ದ್ವಾರದಲ್ಲಿ ಮನಿ ಪ್ಲಾಂಟ್ ಇಡಲು ಯೋಚಿಸುತ್ತಿದ್ದರೆ, ಈ ಕೆಳಗಿನ 4 ದೊಡ್ಡ ತಪ್ಪುಗಳ ಬಗ್ಗೆ ಎಚ್ಚರವಿರಲಿ.&lt;/p&gt;&lt;img&gt;&lt;p&gt;&lt;strong&gt;ಬಳ್ಳಿಯನ್ನು ಕೆಳಕ್ಕೆ ತೂಗಾಡಲು ಬಿಡಬೇಡಿ&lt;/strong&gt;ಮನಿ ಪ್ಲಾಂಟ್ ಬಳ್ಳಿಯು ಎಂದಿಗೂ ನೆಲವನ್ನು ಸ್ಪರ್ಶಿಸಬಾರದು ಅಥವಾ ಕೆಳಕ್ಕೆ ತೂಗಾಡಬಾರದು ಎಂಬುದು ವಾಸ್ತುವಿನ ಪ್ರಮುಖ ನಿಯಮ. ನೆಲಕ್ಕೆ ತಾಗುವ ಬಳ್ಳಿಗಳು ಮನೆಯ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಒಂದು ಕೋಲು ಅಥವಾ ಸ್ಟ್ಯಾಂಡ್ ಸಹಾಯದಿಂದ ಬಳ್ಳಿಯನ್ನು ಯಾವಾಗಲೂ ಮೇಲ್ಮುಖವಾಗಿ ಬೆಳೆಯುವಂತೆ ಮಾಡಿ. ಇದು ನಿಮ್ಮ ಜೀವನದಲ್ಲಿ ಪ್ರಗತಿಯ ಹಾದಿಯನ್ನು ಸುಗಮಗೊಳಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ದಿಕ್ಕಿನ ಆಯ್ಕೆಯಲ್ಲಿ ಜಾಗರೂಕತೆ ಇರಲಿ&lt;/strong&gt;ಮುಖ್ಯ ದ್ವಾರದಲ್ಲಿ ಗಿಡವನ್ನು ಇಡುವಾಗ ಅದು ಯಾವ ದಿಕ್ಕಿನಲ್ಲಿದೆ ಎಂಬುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಯಾವಾಗಲೂ ಆಗ್ನೇಯ (ದಕ್ಷಿಣ-ಪೂರ್ವ) ದಿಕ್ಕಿನಲ್ಲಿ ಇರಿಸುವುದು ಶ್ರೇಷ್ಠ. ಈ ದಿಕ್ಕಿನ ಅಧಿಪತಿ ಗಣಪತಿಯಾಗಿದ್ದು, ಇಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಸಮೃದ್ಧಿ ಮತ್ತು ಅದೃಷ್ಟ ಒಲಿಯುತ್ತದೆ. ಈಶಾನ್ಯ (ಉತ್ತರ-ಪೂರ್ವ) ದಿಕ್ಕಿನಲ್ಲಿ ಇದನ್ನು ಇಡುವುದನ್ನು ತಪ್ಪಿಸಿ.&lt;/p&gt;&lt;img&gt;&lt;p&gt;&lt;strong&gt;ಒಣಗಿದ ಮತ್ತು ಹಳದಿ ಎಲೆ ತಕ್ಷಣ ತೆಗೆಯಿರಿ&lt;/strong&gt;ಮನಿ ಪ್ಲಾಂಟ್ ಸದಾ ಹಸಿರಾಗಿರುವುದು ಪಾಸಿಟಿವ್ ಎನರ್ಜಿಯ ಸಂಕೇತ. ಒಂದು ವೇಳೆ ಗಿಡದ ಎಲೆಗಳು ಒಣಗಿದ್ದರೆ ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅವುಗಳನ್ನು ತಕ್ಷಣವೇ ಕತ್ತರಿಸಿ ತೆಗೆಯಿರಿ. ಒಣಗಿದ ಎಲೆಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಹಣದ ಮುಗ್ಗಟ್ಟನ್ನು ತಂದೊಡ್ಡಬಹುದು. ಸದಾ ಹಸಿರಾಗಿರುವ ಗಿಡವು ಕುಟುಂಬದಲ್ಲಿ ಸಂತೋಷ ಮತ್ತು ಶಕ್ತಿಯನ್ನು ತುಂಬುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸ್ವಚ್ಛತೆ ಮತ್ತು ನೀರಿನ ನಿರ್ವಹಣೆ&lt;/strong&gt;ಮನಿ ಪ್ಲಾಂಟ್&zwnj;ಗೆ ಸರಿಯಾದ ಸಮಯದಲ್ಲಿ ನೀರು ಹಾಕುವುದು ಬಹಳ ಮುಖ್ಯ. ಒಂದು ವೇಳೆ ನೀವು ಗಿಡವನ್ನು ಗಾಜಿನ ಬಾಟಲಿಯ ನೀರಿನಲ್ಲಿ ಬೆಳೆಸುತ್ತಿದ್ದರೆ, ವಾರಕ್ಕೊಮ್ಮೆಯಾದರೂ ಅದರ ನೀರನ್ನು ಬದಲಾಯಿಸುತ್ತಿರಿ. ಕೊಳಕು ನೀರು ವಾಸ್ತು ದೋಷಕ್ಕೆ ಕಾರಣವಾಗಬಹುದು. ಅಲ್ಲದೆ, ಗಿಡದ ಮೇಲೆ ಸೌಮ್ಯವಾದ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ, ಅತಿಯಾದ ಬಿಸಿಲು ಗಿಡವನ್ನು ಸುಡದಂತೆ ಎಚ್ಚರವಹಿಸಿ.&lt;/p&gt;&lt;img&gt;&lt;p&gt;&lt;strong&gt;ಮೇಲಿನ ನಿಯಮ ತಪ್ಪದೇ ಪಾಲಿಸಿ&lt;/strong&gt;ಮನೆಯ ಮುಖ್ಯ ದ್ವಾರದಲ್ಲಿ ಮನಿ ಪ್ಲಾಂಟ್ ಇಡುವುದು ಶುಭವೇ ಆದರೂ, ಮೇಲಿನ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಸರಿಯಾದ ದಿಕ್ಕು ಮತ್ತು ಕಾಳಜಿಯಿಂದ ಮಾತ್ರ ನೀವು ಈ ಗಿಡದ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯ.&lt;/p&gt;&lt;p&gt;&lt;strong&gt;Disclaimer: &lt;/strong&gt;ಈ ಲೇಖನದಲ್ಲಿ ನೀಡಲಾದ ಮಾಹಿತಿಯು ವಾಸ್ತು ಶಾಸ್ತ್ರದ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಹೆಚ್ಚಿನ ಮಾಹಿತಿ ಮತ್ತು ವೈಯಕ್ತಿಕ ಸಲಹೆಗಳಿಗಾಗಿ ಯಾವಾಗಲೂ ನುರಿತ ವಾಸ್ತು ತಜ್ಞರನ್ನು ಸಂಪರ್ಕಿಸುವುದು ಉತ್ತಮ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/vastu-guide-for-money-plant-right-direction-and-placement-tips-gyac71n"/>
        </item>
        <item>
            <title><![CDATA[Vastu Tips: ಬಿಸಿ ಪ್ಯಾನ್ ಮೇಲೆ ಹಾಲು ಚಿಮುಕಿಸುವುದೇಕೆ? ಇಲ್ಲಿದೆ ಈ ಪದ್ಧತಿಯ ಮಹತ್ವ]]></title>
            <link>https://kannada.asianetnews.com/vaastu/why-you-should-sprinkle-milk-on-a-hot-tawa/articleshow-ilmawa2</link>
            <guid isPermaLink="true">https://kannada.asianetnews.com/vaastu/why-you-should-sprinkle-milk-on-a-hot-tawa/articleshow-ilmawa2</guid>
            <pubDate>Thu, 27 Aug 2026 16:06:11 +0530</pubDate>
            <description><![CDATA[&lt;p&gt;&lt;strong&gt;Vastu tips for home peace: &lt;/strong&gt;ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯ ತವಾ ಮತ್ತು ಹಾಲಿನ ಹನಿಗಳ ನಡುವೆ ಒಂದು ಅದ್ಭುತ ಸಂಬಂಧವಿದ್ದು, ಇಲ್ಲಿ ಮನೆಯ ಅಶಾಂತಿ ದೂರ ಮಾಡಿ ಸುಖ-ಸಮೃದ್ಧಿ ತರುವ ಸರಳ ವಾಸ್ತು ಪರಿಹಾರಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11cdw33gajhz7yyxjgmy7wg,imgname-thumbnail---2026-08-27t160122.926-1787826729057.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ&lt;/strong&gt;ನೆಯಲ್ಲಿ ಸುಖ-ಶಾಂತಿ ನೆಲೆಸಬೇಕೆಂಬುದು ಪ್ರತಿಯೊಬ್ಬರ ಆಶಯ. ಆದರೆ ಕೆಲವು ಬಾರಿ ಕಾರಣವಿಲ್ಲದೆ ಮನೆಯಲ್ಲಿ ಜಗಳಗಳು, ಅಶಾಂತಿ ಅಥವಾ ನಕಾರಾತ್ಮಕತೆ ಎದುರಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ದೈನಂದಿನ ಜೀವನದ ಸಣ್ಣಪುಟ್ಟ ಅಭ್ಯಾಸಗಳು ಮನೆಯ ವಾತಾವರಣದ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ಮನೆಯಲ್ಲಿ ಸಮೃದ್ಧಿ ಹೆಚ್ಚಿಸಲು ಮತ್ತು ವಾದ-ವಿವಾದಗಳನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಕೆಲವು ವಿಶೇಷ ವಾಸ್ತು ಪರಿಹಾರಗಳು ಇಲ್ಲಿವೆ.&lt;/p&gt;&lt;h2&gt;&lt;strong&gt;ಬಿಸಿ ಹಂಚಿನ (ತವಾ) ಮೇಲೆ ಹಾಲಿನ ಹನಿಗಳನ್ನು ಏಕೆ ಚಿಮುಕಿಸಬೇಕು?&lt;/strong&gt;&lt;/h2&gt;&lt;p&gt;ಅಡುಗೆ ಮಾಡುವಾಗ ಹಂಚು (ತವಾ) ಕಾದ ನಂತರ ಅದರ ಮೇಲೆ ಹಾಲಿನ ಹನಿಗಳನ್ನು ಚಿಮುಕಿಸುವುದು ವಾಸ್ತುವಿನಲ್ಲಿ ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ.&lt;/p&gt;&lt;p&gt;&lt;strong&gt;ಕಾರಣ: &lt;/strong&gt;ವಾಸ್ತುವಿನ ಪ್ರಕಾರ, ಬಿಸಿ ಹಂಚು 'ಮಂಗಳ'ನ (ಶಕ್ತಿ) ಸಂಕೇತವಾದರೆ, ಹಾಲು 'ಚಂದ್ರ'ನ ಸಂಕೇತವಾಗಿದೆ. ಮಂಗಳನ ತೀವ್ರತೆಯನ್ನು (ಶಾಖ) ಚಂದ್ರನ ಹಾಲಿನ ಮೂಲಕ ಶಾಂತಗೊಳಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ದೂರವಾಗುತ್ತದೆ.&lt;/p&gt;&lt;p&gt;&lt;strong&gt;ಫಲಿತಾಂಶ: &lt;/strong&gt;ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಮತ್ತು ಸದಸ್ಯರ ನಡುವಿನ ಜಗಳಗಳು ಕಡಿಮೆಯಾಗುತ್ತವೆ.&lt;/p&gt;&lt;h2&gt;&lt;strong&gt;ಮುಖ್ಯ ದ್ವಾರದ ತೋರಣದ ಬಗ್ಗೆ ಎಚ್ಚರ&lt;/strong&gt;&lt;/h2&gt;&lt;p&gt;ಮನೆಯ ಮುಖ್ಯ ದ್ವಾರಕ್ಕೆ ಹಾಕುವ ತೋರಣವು ಸದಾ ಫ್ರೆಶ್ ಆಗಿರಬೇಕು. ಹಳೆಯದಾದ, ಧೂಳು ಹಿಡಿದ ಅಥವಾ ಒಣಗಿದ ಹೂವು-ಎಲೆಗಳ ತೋರಣವು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಆದ್ದರಿಂದ, ಹೂವಿನ ತೋರಣವನ್ನು ನಿಯಮಿತವಾಗಿ ಬದಲಾಯಿಸಿ ಅಥವಾ ತೋರಣವು ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.&lt;/p&gt;&lt;h2&gt;&lt;strong&gt;ಹಳೆಯ ಬಟ್ಟೆಗಳನ್ನು ಸ್ಟೋರ್ ರೂಮ್&zwnj;ನಿಂದ ಹೊರಹಾಕಿ&lt;/strong&gt;&lt;/h2&gt;&lt;p&gt;ಅನೇಕರು ತಮ್ಮ ಪೂರ್ವಜರ ಹಳೆಯ ಬಟ್ಟೆಗಳನ್ನು ಸ್ಟೋರ್ ರೂಮ್&zwnj;ನಲ್ಲಿ ಹಾಗೆಯೇ ಇಟ್ಟಿರುತ್ತಾರೆ. ವಾಸ್ತು ಪ್ರಕಾರ, ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ. ಇವುಗಳನ್ನು ಮನೆಯೊಳಗೆ ಇಟ್ಟುಕೊಳ್ಳುವ ಬದಲು ವಿಲೇವಾರಿ ಮಾಡುವುದು ಉತ್ತಮ.&lt;/p&gt;&lt;h2&gt;&lt;strong&gt;ಕುಟುಂಬದಲ್ಲಿ ಪ್ರೀತಿ ಹೆಚ್ಚಿಸಲು ಪರಿಹಾರಗಳು&lt;/strong&gt;&lt;/h2&gt;&lt;p&gt;&lt;strong&gt;ಫೋಟೋ ಫ್ರೇಮ್: &lt;/strong&gt;ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿರುವ ಫೋಟೋವನ್ನು ಮುತ್ತುಗಳಿಂದ ಅಲಂಕರಿಸಿದ ಫ್ರೇಮ್&zwnj;ನಲ್ಲಿ ಹಾಕಿ ಮನೆಯ ವಾಯುವ್ಯ (North-West) ಮೂಲೆಯಲ್ಲಿ ತೂಗು ಹಾಕಿ. ಇದು ಸದಸ್ಯರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ.&lt;/p&gt;&lt;p&gt;&lt;strong&gt;ಗಂಗಾಜಲ ಮತ್ತು ಅರಿಶಿನ:&lt;/strong&gt; ಮನೆಯಲ್ಲಿ ಸದಾ ಕಲಹಗಳಿದ್ದರೆ, ಸತತ 21 ದಿನಗಳ ಕಾಲ ಗಂಗಾಜಲಕ್ಕೆ ಸ್ವಲ್ಪ ಅರಿಶಿನ ಬೆರೆಸಿ ಮನೆಯ ಮೂಲೆ ಮೂಲೆಗಳಿಗೆ ಚಿಮುಕಿಸಿ.&lt;/p&gt;&lt;h2&gt;&lt;strong&gt;ಮನೆಯ ಸಮೃದ್ಧಿಗಾಗಿ ಇತರ ಸರಳ ಕ್ರಮಗಳು&lt;/strong&gt;&lt;/h2&gt;&lt;p&gt;&lt;strong&gt;ಬಿಳಿ ಎಕ್ಕದ ಹೂವು: &lt;/strong&gt;ಮನೆಯ ನಾಲ್ಕೂ ಮೂಲೆಗಳಲ್ಲಿ ಎಕ್ಕದ (ಆಂಕಡೆ) ಮೂರು ಬಿಳಿ ಹೂವುಗಳನ್ನು ಇಡಿ. ಮೂರು ದಿನಗಳ ನಂತರ ಅವುಗಳನ್ನು ತೆಗೆದು ಹೊರಗೆ ಎಸೆಯಿರಿ. ಇದು ಮನೆಯಲ್ಲಿ ಶಾಂತಿ ತರುತ್ತದೆ.&lt;/p&gt;&lt;p&gt;&lt;strong&gt;ಗೆಜ್ಜೆಗಳ ನಾದ: &lt;/strong&gt;ಮುಖ್ಯ ದ್ವಾರದ ಪರದೆಯ ಕೆಳಗೆ ಸಣ್ಣ ಗೆಜ್ಜೆಗಳನ್ನು ಕಟ್ಟಿ. ಯಾರೇ ಬಂದರೂ ಉಂಟಾಗುವ ಸಂಗೀತದ ನಾದವು ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಂತೋಷವನ್ನು ತರುತ್ತದೆ.&lt;/p&gt;&lt;p&gt;&lt;strong&gt;ಹಾಲಿನ ನೀರಿನ ಮಿಶ್ರಣ: &lt;/strong&gt;ಪ್ರತಿದಿನ ಬೆಳಗ್ಗೆ ಸ್ವಲ್ಪ ಹಾಲು ಮತ್ತು ನೀರನ್ನು ಬೆರೆಸಿ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ಹಾಕುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.&lt;/p&gt;&lt;p&gt;&lt;strong&gt;ತುಳಸಿ ಪೂಜೆ: &lt;/strong&gt;ಪ್ರತಿ ಗುರುವಾರ ತುಳಸಿ ಗಿಡಕ್ಕೆ ಸ್ವಲ್ಪ ಹಾಲು ಬೆರೆಸಿದ ನೀರನ್ನು ಅರ್ಪಿಸುವುದು ಬಹಳ ಶ್ರೇಯಸ್ಕರ.&lt;/p&gt;&lt;p&gt;&lt;strong&gt;ಕಲ್ಲು ಉಪ್ಪಿನ ಪವಾಡ&lt;/strong&gt;&lt;/p&gt;&lt;p&gt;ಯಾವುದೇ ಶುಭ ಮುಹೂರ್ತದಲ್ಲಿ 5 ಕೆಜಿ ಕಲ್ಲು ಉಪ್ಪನ್ನು ತಂದು ಮನೆಯ ಒಂದು ಸುರಕ್ಷಿತ ಮೂಲೆಯಲ್ಲಿ (ನೀರು ತಾಗದ ಜಾಗದಲ್ಲಿ) ಇಡಿ. ಇದು ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಪ್ರಭಾವಗಳನ್ನು ಹೀರಿಕೊಂಡು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಒಂದು ವೇಳೆ ಉಪ್ಪು ಒದ್ದೆಯಾದರೆ ಅದನ್ನು ಬದಲಾಯಿಸಿ ಹೊಸ ಉಪ್ಪನ್ನು ಇಡಿ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/vaastu/why-you-should-sprinkle-milk-on-a-hot-tawa/articleshow-ilmawa2"/>
        </item>
        <item>
            <title><![CDATA[ಮನೆಯಿಂದ ಹೊರಡುವಾಗ ಯಾರಾದರೂ ಹಿಂದೆ ಕರೆದರೆ ಅಶುಭವೇ? ಹೀಗಾದಾಗ ನೀರು ಕುಡಿರಿ ಅನ್ನೋದ್ಯಾಕೆ?]]></title>
            <link>https://kannada.asianetnews.com/gallery/vaastu/facing-obstacles-after-being-called-back-simple-remedies-to-stay-positive-knsf9qk</link>
            <guid isPermaLink="true">https://kannada.asianetnews.com/gallery/vaastu/facing-obstacles-after-being-called-back-simple-remedies-to-stay-positive-knsf9qk</guid>
            <pubDate>Sun, 23 Aug 2026 17:55:50 +0530</pubDate>
            <description><![CDATA[&lt;p&gt;Remedies for calling back bad luck: ಮನೆಯಿಂದ ಹೊರಡುವಾಗ ಯಾರಾದರೂ ಹಿಂದಿನಿಂದ ಕರೆದರೆ ಅಶುಭವೆಂದು ಹೇಳುವುದರ ಹಿಂದಿನ ರಹಸ್ಯವೇನು? ಇದು ಕೇವಲ ಮೂಢನಂಬಿಕೆಯೋ ಅಥವಾ ಇದರ ಹಿಂದೆ ವಿಜ್ಞಾನ ಅಡಗಿದೆಯೇ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0q92fkq80p17rn8k5r7x9qz,imgname-thumbnail---2026-08-23t174612.275-1787487665783.jpg" type="image/jpeg" height="390" width="690"/>
            <content:encoded><![CDATA[&lt;p&gt;Remedies for calling back bad luck: ಮನೆಯಿಂದ ಹೊರಡುವಾಗ ಯಾರಾದರೂ ಹಿಂದಿನಿಂದ ಕರೆದರೆ ಅಶುಭವೆಂದು ಹೇಳುವುದರ ಹಿಂದಿನ ರಹಸ್ಯವೇನು? ಇದು ಕೇವಲ ಮೂಢನಂಬಿಕೆಯೋ ಅಥವಾ ಇದರ ಹಿಂದೆ ವಿಜ್ಞಾನ ಅಡಗಿದೆಯೇ?&lt;/p&gt;&lt;img&gt;&lt;p&gt;&lt;strong&gt;ಮಾನಸಿಕ ಮತ್ತು ಜ್ಯೋತಿಷ್ಯ ಕಾರಣ&lt;/strong&gt;ಸಾಮಾನ್ಯವಾಗಿ ನಾವು ಯಾವುದಾದರೂ ಕೆಲಸದ ಮೇಲೆ ಮನೆಯಿಂದ ಹೊರಟಾಗ, ಹೊಸ್ತಿಲು ದಾಟುವ ಸಮಯಕ್ಕೆ ಸರಿಯಾಗಿ ಯಾರಾದರೂ ಹಿಂದಿನಿಂದ ಕರೆದರೆ ಹಿರಿಯರು ಗದರಿಸುತ್ತಾರೆ. &quot;ಹೋಗುವಾಗ ಹಿಂದೆ ಕರೆಯಬಾರದು, ಅದು ಅಪಶಕುನ&quot; ಎನ್ನುತ್ತಾರೆ. ಇಂದಿನ ಯುವ ಪೀಳಿಗೆ ಇದನ್ನು ಕೇವಲ ಮೂಢನಂಬಿಕೆ ಎಂದು ತಳ್ಳಿಹಾಕಬಹುದು, ಆದರೆ ಇದರ ಹಿಂದೆ ಬಲವಾದ ಮಾನಸಿಕ ಮತ್ತು ಜ್ಯೋತಿಷ್ಯ ಕಾರಣಗಳಿವೆ.&lt;/p&gt;&lt;img&gt;&lt;p&gt;&lt;strong&gt;1. ಏಕಾಗ್ರತೆ ಭಂಗ (Loss of Focus)&lt;/strong&gt;ಯಾವುದೇ ಒಂದು ಪ್ರಮುಖ ಕೆಲಸಕ್ಕೆ ಹೊರಟಾಗ ನಮ್ಮ ಮನಸ್ಸು ಆ ಕೆಲಸದ ಬಗ್ಗೆಯೇ ಆಲೋಚಿಸುತ್ತಿರುತ್ತದೆ. ಆ ಸಮಯದಲ್ಲಿ ದಿಢೀರ್ ಆಗಿ ಯಾರಾದರೂ ಹಿಂದಿನಿಂದ ಕರೆದಾಗ ನಮ್ಮ ಆಲೋಚನಾ ಪ್ರವಾಹಕ್ಕೆ ತಡೆ ಉಂಟಾಗುತ್ತದೆ. ಇದರಿಂದ ಮನಸ್ಸು ಗೊಂದಲಕ್ಕೀಡಾಗಿ, ಮಾಡುವ ಕೆಲಸದಲ್ಲಿ ಏಕಾಗ್ರತೆ ತಪ್ಪಿ ವೈಫಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ.&lt;/p&gt;&lt;img&gt;&lt;p&gt;&lt;strong&gt;2. ವಸ್ತುಗಳನ್ನು ಮರೆಯುವ ಭಯ&lt;/strong&gt;ಹಿಂದಿನಿಂದ ಯಾರೋ ಕರೆದಾಗ ನಾವು ಗಾಬರಿಯಿಂದ ಹಿಂದೆ ತಿರುಗಿ ನೋಡುತ್ತೇವೆ. ಆ ಅವಸರದಲ್ಲಿ ನಮಗೆ ಅತೀ ಮುಖ್ಯವಾದ ಪರ್ಸ್, ಕೀಲಿ ಕೈ, ಎಟಿಎಂ ಕಾರ್ಡ್ ಅಥವಾ ದಾಖಲೆಗಳನ್ನು ಮನೆಯಲ್ಲೇ ಮರೆತು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಪ್ರಾಯೋಗಿಕವಾಗಿ ನಮಗೆ ತೊಂದರೆ ಉಂಟುಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಜ್ಯೋತಿಷ್ಯದಲ್ಲಿ ರಾಹು ಪ್ರಭಾವ&lt;/strong&gt;ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಿಂದ ಹೊರಡುವಾಗ ಹಿಂದಿನಿಂದ ಕೇಳಿಬರುವ ಕರೆಯನ್ನು ರಾಹು ಗ್ರಹದ ಪ್ರಭಾವಕ್ಕೆ ಹೋಲಿಸಲಾಗುತ್ತದೆ. ರಾಹುವು ಆಕಸ್ಮಿಕ ಗೊಂದಲ ಮತ್ತು ಅಡೆತಡೆಗಳನ್ನು ತರುವ ಗ್ರಹ. ಹಠಾತ್ ಆಗಿ ಬರುವ ಈ ಅಡೆತಡೆಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ಕುಗ್ಗಿಸಿ ಮನಸ್ಸಿನಲ್ಲಿ ಅಶಾಂತಿ ಮೂಡಿಸುತ್ತವೆ ಎಂದು ಪಂಡಿತರು ಹೇಳುತ್ತಾರೆ.&lt;/p&gt;&lt;img&gt;&lt;p&gt;&lt;strong&gt;4. ಲಕ್ಷ್ಮಿ ದೇವಿಯ ಅಸಮಾಧಾನ&lt;/strong&gt;ಸನಾತನ ಸಂಪ್ರದಾಯದ ಪ್ರಕಾರ, ಹೊಸ್ತಿಲು ದಾಟುವಾಗ ಹಿಂದೆ ಕರೆಯುವುದನ್ನು ಅತ್ಯಂತ ಅಶುಭವೆಂದು ಭಾವಿಸಲಾಗುತ್ತದೆ. ಇದು ಐಶ್ವರ್ಯದ ದೇವತೆಯಾದ ಲಕ್ಷ್ಮಿ ದೇವಿಗೆ ಅಸಮಾಧಾನ ತರುತ್ತದೆ ಎಂಬ ಬಲವಾದ ನಂಬಿಕೆಯಿದೆ. ಇದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತು ಶ್ರೇಯಸ್ಸಿನ ಮೇಲೆ ಪರಿಣಾಮ ಬೀರಬಹುದು ಎಂದು ನಂಬಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಯಾರಾದರೂ ಕರೆದರೆ ಏನು ಮಾಡಬೇಕು?&lt;/strong&gt;ಒಂದು ವೇಳೆ ನೀವು ಹೊರಡುವಾಗ ಯಾರಾದರೂ ತಿಳಿಯದೆ ಹಿಂದಿನಿಂದ ಕರೆದರೆ ಗಾಬರಿಯಾಗಬೇಡಿ ಅಥವಾ ನೆಗೆಟಿವ್ ಆಗಿ ಯೋಚಿಸಬೇಡಿ. ಅಂತಹ ಸಂದರ್ಭದಲ್ಲಿ ನಿಮ್ಮ ಪ್ರಯಾಣವನ್ನು ಒಂದು ಕ್ಷಣ ನಿಲ್ಲಿಸಿ, ಮತ್ತೆ ಮನೆಗೆ ಹೋಗಿ ಒಂದು ನಿಮಿಷ ಪ್ರಶಾಂತವಾಗಿ ಕುಳಿತುಕೊಳ್ಳಿ. ಸ್ವಲ್ಪ ನೀರು ಕುಡಿದು, ನಿಮ್ಮ ಇಷ್ಟದೈವವನ್ನು ನೆನೆದು, ಸಕಾರಾತ್ಮಕವಾಗಿ ಮತ್ತೆ ನಿಮ್ಮ ಕೆಲಸಕ್ಕೆ ಹೊರಡಿ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/facing-obstacles-after-being-called-back-simple-remedies-to-stay-positive-knsf9qk"/>
        </item>
        <item>
            <title><![CDATA[ಈ ಸಮಯದಲ್ಲಿ ಒಗೆದ ಬಟ್ಟೆಗಳನ್ನ ಹೊರಗೆ ಹಾಕುತ್ತಿದ್ದೀರಾ? ವಾಸ್ತು ಮಾತ್ರವಲ್ಲ, ವಿಜ್ಞಾನವೂ ಹೇಳೋದು 'ಇದು ತಪ್ಪಂತೆ']]></title>
            <link>https://kannada.asianetnews.com/gallery/vaastu/why-you-should-never-dry-clothes-outside-at-night-kod3x9n</link>
            <guid isPermaLink="true">https://kannada.asianetnews.com/gallery/vaastu/why-you-should-never-dry-clothes-outside-at-night-kod3x9n</guid>
            <pubDate>Fri, 21 Aug 2026 14:33:48 +0530</pubDate>
            <description><![CDATA[&lt;p&gt;Vastu tips for laundry: ಸಮಯದ ಅಭಾವದಿಂದ ನೀವು ಈ ಸಮಯದಲ್ಲಿ ಬಟ್ಟೆಗಳನ್ನು ಹೊರಗೆ ಒಣಗಿಸುತ್ತಿದ್ದೀರಾ? ಹಾಗಿದ್ದರೆ ಎಚ್ಚರ! ಈ ಸಣ್ಣ ತಪ್ಪು ನಿಮ್ಮ ಮನೆಯ ಸಕಾರಾತ್ಮಕ ಶಕ್ತಿಯನ್ನು ಕುಂದಿಸಿ, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hrpcbq5gt77kvrhcs64mse,imgname-vastu-tips-for-laundry-1787302719863.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu tips for laundry: ಸಮಯದ ಅಭಾವದಿಂದ ನೀವು ಈ ಸಮಯದಲ್ಲಿ ಬಟ್ಟೆಗಳನ್ನು ಹೊರಗೆ ಒಣಗಿಸುತ್ತಿದ್ದೀರಾ? ಹಾಗಿದ್ದರೆ ಎಚ್ಚರ! ಈ ಸಣ್ಣ ತಪ್ಪು ನಿಮ್ಮ ಮನೆಯ ಸಕಾರಾತ್ಮಕ ಶಕ್ತಿಯನ್ನು ಕುಂದಿಸಿ, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.&lt;/p&gt;&lt;img&gt;&lt;p&gt;&lt;strong&gt;ವಾಸ್ತು ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ&lt;/strong&gt;ಇಂದಿನ ಒತ್ತಡದ ಜೀವನದಲ್ಲಿ ಅನೇಕರಿಗೆ ಮನೆಯ ಕೆಲಸಗಳನ್ನು ಮಾಡಲು ಸರಿಯಾದ ಸಮಯ ಸಿಗುವುದಿಲ್ಲ. ಹೀಗಾಗಿ, ತಮಗೆ ಬಿಡುವಾದ ಸಮಯದಲ್ಲಿ ಜನರು ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ. ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ಬೆಳಗ್ಗೆ ಸಮಯವಿಲ್ಲದ ಕಾರಣ ರಾತ್ರಿ ಬಟ್ಟೆಗಳನ್ನು ಒಗೆದು ಮನೆಯ ಹೊರಗೆ ಒಣಗಲು ಹಾಕುತ್ತಾರೆ. ಈ ಬಟ್ಟೆಗಳು ಇಡೀ ರಾತ್ರಿ ಹೊರಗೆ ತೂಗಾಡುತ್ತಿದ್ದು, ಮರುದಿನ ಬೆಳಗ್ಗೆ ಅಥವಾ ಮಧ್ಯಾಹ್ನ ಅವುಗಳನ್ನು ಒಳಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ವೇಳೆ ಬಟ್ಟೆಗಳನ್ನು ಹೊರಗೆ ಒಣಗಿಸುವುದು ಮನೆಗೆ ಒಳ್ಳೆಯದಲ್ಲ ಎಂದು ಪಂಡಿತರು ಎಚ್ಚರಿಸಿದ್ದಾರೆ. ಇದರ ಹಿಂದಿರುವ ವಾಸ್ತು ಮತ್ತು ವೈಜ್ಞಾನಿಕ ಕಾರಣಗಳು ಇಲ್ಲಿವೆ..&lt;/p&gt;&lt;img&gt;&lt;p&gt;&lt;strong&gt;ನಕಾರಾತ್ಮಕ ಶಕ್ತಿಯ ಪ್ರವೇಶ&lt;/strong&gt;ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ವೇಳೆ ಮನೆಯ ಹೊರಗೆ ಬಟ್ಟೆಗಳನ್ನು ಒಣಗಿಸುವುದು ಒಳ್ಳೆ ಅಭ್ಯಾಸವಲ್ಲ, ಇದು ಮನೆಯ ವಾತಾವರಣವನ್ನು ಹಾಳುಮಾಡುವುದಲ್ಲದೆ, ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯ (Positive Energy) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಗಲಿನ ವೇಳೆ ಬರುವ ಶಕ್ತಿಗೂ ಮತ್ತು ರಾತ್ರಿ ವೇಳೆ ಇರುವ ಶಕ್ತಿಗೂ ಬಹಳ ವ್ಯತ್ಯಾಸವಿರುತ್ತದೆ. ರಾತ್ರಿ ಹೊತ್ತು ಒದ್ದೆ ಬಟ್ಟೆಗಳನ್ನು ದೀರ್ಘಕಾಲದವರೆಗೆ ಹೊರಗೆ ಇಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ (Negative Energy) ಪ್ರವೇಶಿಸಲು ಅವಕಾಶವಾಗುತ್ತದೆ. ಇದು ಮನೆಯಲ್ಲಿ ಅಶಾಂತಿ, ಒತ್ತಡ ಮತ್ತು ಮನಸ್ಸಿನ ಭಾರಕ್ಕೆ ಕಾರಣವಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಆದ್ದರಿಂದ, ಸೂರ್ಯಾಸ್ತಕ್ಕೆ ಮುನ್ನವೇ ಬಟ್ಟೆಗಳನ್ನು ಒಳಗೆ ತರುವುದು ಶ್ರೇಯಸ್ಕರ.&lt;/p&gt;&lt;img&gt;&lt;p&gt;&lt;strong&gt;ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು (ವೈಜ್ಞಾನಿಕ ಕಾರಣ)&lt;/strong&gt;ವೈಜ್ಞಾನಿಕವಾಗಿ ನೋಡುವುದಾದರೆ, ರಾತ್ರಿಯಿಡೀ ಬಟ್ಟೆಗಳನ್ನು ಹೊರಗೆ ಒಣಗಲು ಬಿಡುವುದು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. ರಾತ್ರಿಯ ತಂಪಾದ ವಾತಾವರಣದಲ್ಲಿ ಬಟ್ಟೆಗಳು ದೀರ್ಘಕಾಲದವರೆಗೆ ತೇವಾಂಶವನ್ನು ಉಳಿಸಿಕೊಳ್ಳುತ್ತವೆ. ಇಂತಹ ತೇವಾಂಶಭರಿತ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ (ಶಿಲೀಂಧ್ರ) ಸುಲಭವಾಗಿ ವೃದ್ಧಿಯಾಗುತ್ತವೆ. ಅಂತಹ ಬಟ್ಟೆಗಳನ್ನು ಧರಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಅಥವಾ ಅಲರ್ಜಿಗಳು ಕಾಣಿಸಿಕೊಳ್ಳಬಹುದು.&lt;/p&gt;&lt;img&gt;&lt;p&gt;&lt;strong&gt;ಸೂರ್ಯನ ಬೆಳಕಿನ ಮಹತ್ವ&lt;/strong&gt;ಹಗಲಿನ ಹೊತ್ತು ಸೂರ್ಯನ ರಶ್ಮಿಗಳು ಬಟ್ಟೆಗಳ ಮೇಲೆ ಬಿದ್ದಾಗ, ಅವು ಬಟ್ಟೆಯಲ್ಲಿರುವ ಕ್ರಿಮಿಗಳನ್ನು ಕೊಲ್ಲುತ್ತವೆ ಮತ್ತು ಬಟ್ಟೆಗಳಿಗೆ ಸಕಾರಾತ್ಮಕ ಕಳೆಯನ್ನು ನೀಡುತ್ತವೆ. ಸೂರ್ಯನ ಬೆಳಕಿನಲ್ಲಿ ಒಣಗಿದ ಬಟ್ಟೆಗಳನ್ನು ಧರಿಸುವುದು ಆರೋಗ್ಯಕ್ಕೂ ಮತ್ತು ಮನಸ್ಸಿಗೂ ಹಿತಕರ. ಆದ್ದರಿಂದ, ಬಟ್ಟೆಗಳನ್ನು ಯಾವಾಗಲೂ ಸೂರ್ಯನ ಬೆಳಕು ತಗಲುವಂತೆ ಹೊರಗೆ ಒಣಗಿಸಿ ಮತ್ತು ಸೂರ್ಯಾಸ್ತದ ಮೊದಲು ಅವುಗಳನ್ನು ಒಳಗೆ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ಮನೆಯಲ್ಲಿ ಸಾತ್ವಿಕ ವಾತಾವರಣವನ್ನು ಕಾಪಾಡಲು ಸಹಾಯ ಮಾಡುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/why-you-should-never-dry-clothes-outside-at-night-kod3x9n"/>
        </item>
        <item>
            <title><![CDATA[ಈ ಜಾಗದಲ್ಲಿ ಉಪ್ಪು ಇಡ್ಬೇಡಿ.. ವಾಸ್ತು ಶಾಸ್ತ್ರ ಹೇಳೋದೇನು?]]></title>
            <link>https://kannada.asianetnews.com/webstories/vaastu/salt-is-lakshmi-use-with-care-lo59v2y</link>
            <guid isPermaLink="true">https://kannada.asianetnews.com/webstories/vaastu/salt-is-lakshmi-use-with-care-lo59v2y</guid>
            <pubDate>Wed, 26 Aug 2026 22:21:46 +0530</pubDate>
            <description><![CDATA[&lt;p&gt;Salt as Lakshmi: ಬಹಳಷ್ಟು ಜನರು ಮನೆಯಲ್ಲಿರುವ ಅಥವಾ ಬಾತ್&zwnj;ರೂಮ್&zwnj;ನಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಉಪ್ಪನ್ನು ಬಳಸುತ್ತಾರೆ. ಉಪ್ಪು ಕೆಟ್ಟ ದೃಷ್ಟಿ ಮತ್ತು ಋಣಾತ್ಮಕ ತರಂಗಗಳನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ ಎಂಬ ನಂಬಿಕೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksffhzne9bfj22h5grc7zx13,imgname-2-1779709836974.jpg" type="image/jpeg" height="390" width="690"/>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/vaastu/salt-is-lakshmi-use-with-care-lo59v2y"/>
        </item>
        <item>
            <title><![CDATA[Kitchen Vastu: ಆರ್ಥಿಕ ಲಾಭಕ್ಕಾಗಿ ರಾತ್ರಿ ಈ 3 ಕೆಲಸ ಮಾಡಿ!]]></title>
            <link>https://kannada.asianetnews.com/webstories/vaastu/attract-money-with-kitchen-vastu-n3pgcxw</link>
            <guid isPermaLink="true">https://kannada.asianetnews.com/webstories/vaastu/attract-money-with-kitchen-vastu-n3pgcxw</guid>
            <pubDate>Tue, 01 Sep 2026 19:43:57 +0530</pubDate>
            <description><![CDATA[&lt;p&gt;Vastu Tips for Kitchen: ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯು ಮನೆಯ ಶಕ್ತಿ ಕೇಂದ್ರ. ರಾತ್ರಿ ಮಲಗುವ ಮುನ್ನ ಅಡುಗೆ ಮನೆಯಲ್ಲಿ ಈ ಕೆಲವು ವಸ್ತುಗಳನ್ನು ಇಡುವುದರಿಂದ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಬಹುದು ಮತ್ತು ಸಾಲದ ಬಾಧೆ ಕಡಿಮೆಯಾಗಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyv1jtxmpk89k22nv7e4fq5z,imgname-fotojet---2026-07-31t082456.791-1785466547124.jpg" type="image/jpeg" height="390" width="690"/>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/vaastu/attract-money-with-kitchen-vastu-n3pgcxw"/>
        </item>
        <item>
            <title><![CDATA[ಮನೆಯಲ್ಲಿ 7 ಪವಿತ್ರ ವಸ್ತುಗಳಿದ್ದರೆ ಸಾಕು, ಲಕ್ಷ್ಮೀ ತಾನಾಗೇ ಒಲಿದು ಬರ್ತಾಳೆ!]]></title>
            <link>https://kannada.asianetnews.com/webstories/vaastu/kannada-vastu-tips-seven-sacred-objects-that-will-attract-goddess-lakshmi-devi-into-your-home-mrq-ow354pt</link>
            <guid isPermaLink="true">https://kannada.asianetnews.com/webstories/vaastu/kannada-vastu-tips-seven-sacred-objects-that-will-attract-goddess-lakshmi-devi-into-your-home-mrq-ow354pt</guid>
            <pubDate>Sun, 23 Aug 2026 10:55:44 +0530</pubDate>
            <description><![CDATA[&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಪವಿತ್ರ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಐಶ್ವರ್ಯ ಮತ್ತು ಅದೃಷ್ಟವನ್ನು ಆಕರ್ಷಿಸಬಹುದು. ಈ ಲೇಖನದಲ್ಲಿ ಏಳು ವಸ್ತುಗಳು ಮತ್ತು ಅವುಗಳ ಮಹತ್ವವನ್ನು ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0pgg0n5fymfvypzaetdvkdr,imgname-vastu--3--1787461894821.jpg" type="image/jpeg" height="390" width="690"/>
            <category>vaastu</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/vaastu/kannada-vastu-tips-seven-sacred-objects-that-will-attract-goddess-lakshmi-devi-into-your-home-mrq-ow354pt"/>
        </item>
        <item>
            <title><![CDATA[Rose Plant Vastu: ಮನೆಯಲ್ಲಿ ಗುಲಾಬಿ ಗಿಡ ಇದ್ಯಾ? ವಾಸ್ತು ಪ್ರಕಾರ ಈ ತಪ್ಪುಗಳನ್ನು ಮಾಡಲೇಬೇಡಿ]]></title>
            <link>https://kannada.asianetnews.com/webstories/vaastu/vastu-tips-for-rose-plant-placement-at-home-gvd-p81svmm</link>
            <guid isPermaLink="true">https://kannada.asianetnews.com/webstories/vaastu/vastu-tips-for-rose-plant-placement-at-home-gvd-p81svmm</guid>
            <pubDate>Fri, 21 Aug 2026 18:53:43 +0530</pubDate>
            <description><![CDATA[&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗುಲಾಬಿ ಗಿಡವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಓಡಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j2jwg8wxea2gz8qaasjn54my,imgname-6-1720768275357.jpg" type="image/jpeg" height="390" width="690"/>
            <category>vaastu</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/vaastu/vastu-tips-for-rose-plant-placement-at-home-gvd-p81svmm"/>
        </item>
        <item>
            <title><![CDATA[Vastu Tips for Kitchen: ಮರೆತೂ ಅಡುಗೆಮನೆಯಲ್ಲಿ ಈ 5 ವಸ್ತುಗಳನ್ನು ಇಡಬೇಡಿ!]]></title>
            <link>https://kannada.asianetnews.com/gallery/vaastu/5-things-you-should-never-keep-in-your-kitchen-qzhkupg</link>
            <guid isPermaLink="true">https://kannada.asianetnews.com/gallery/vaastu/5-things-you-should-never-keep-in-your-kitchen-qzhkupg</guid>
            <pubDate>Tue, 25 Aug 2026 14:22:21 +0530</pubDate>
            <description><![CDATA[&lt;p&gt;Vastu tips for kitchen: ನೀವು ಅರಿಯದೇ ಮಾಡುತ್ತಿರುವ ಇಂತಹ ಸಣ್ಣ ತಪ್ಪುಗಳು ಮನೆಯ ಸುಖ-ಶಾಂತಿಗೆ ಧಕ್ಕೆ ತರಬಹುದು. ಹಾಗಾದರೆ, ಅಡುಗೆಮನೆಯಲ್ಲಿ ಮರೆತೂ ಇಡಬಾರದ ಆ 5 ಪ್ರಮುಖ ವಸ್ತುಗಳು ಯಾವುವು? ಇಲ್ಲಿದೆ ಸಂಪೂರ್ಣ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0c8z19a8rt7k61ssjp7mrf4,imgname-sink-kitchen--1--1787118454058.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu tips for kitchen: ನೀವು ಅರಿಯದೇ ಮಾಡುತ್ತಿರುವ ಇಂತಹ ಸಣ್ಣ ತಪ್ಪುಗಳು ಮನೆಯ ಸುಖ-ಶಾಂತಿಗೆ ಧಕ್ಕೆ ತರಬಹುದು. ಹಾಗಾದರೆ, ಅಡುಗೆಮನೆಯಲ್ಲಿ ಮರೆತೂ ಇಡಬಾರದ ಆ 5 ಪ್ರಮುಖ ವಸ್ತುಗಳು ಯಾವುವು? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;img&gt;&lt;p&gt;&lt;strong&gt;ಇಂದೇ ಹೊರಹಾಕಿ..&lt;/strong&gt;ಭಾರತೀಯ ಸಂಸ್ಕೃತಿಯಲ್ಲಿ ಅಡುಗೆಮನೆಯನ್ನು ಕೇವಲ ಅಡುಗೆ ಮಾಡುವ ಜಾಗವೆಂದು ಪರಿಗಣಿಸದೆ, ಮನೆಯ ಅತ್ಯಂತ ಪವಿತ್ರ ಸ್ಥಳವೆಂದು ನಂಬಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿರುವ ವಸ್ತುಗಳು ಮತ್ತು ಅವುಗಳನ್ನು ಇಟ್ಟಿರುವ ರೀತಿ ಮನೆಯ ಸದಸ್ಯರ ಆರೋಗ್ಯ ಮತ್ತು ಸಂಪತ್ತಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾಗಿ ನಿಮ್ಮ ಅಡುಗೆಮನೆಯಲ್ಲಿ ಈ ಕೆಳಗಿನ ವಸ್ತುಗಳಿದ್ದರೆ ಇಂದೇ ಅವುಗಳನ್ನು ಹೊರಹಾಕಿ..&lt;/p&gt;&lt;img&gt;&lt;p&gt;&lt;strong&gt;ಅಡುಗೆಮನೆಯಲ್ಲಿ ಔಷಧಿ ಇಡಬೇಡಿ&lt;/strong&gt;ಅನೇಕರು ಸುಲಭವಾಗಿ ಸಿಗಲಿ ಎಂಬ ಕಾರಣಕ್ಕೆ ಔಷಧಿಗಳನ್ನು ಅಡುಗೆಮನೆಯಲ್ಲಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ, ಅಡುಗೆಮನೆಯು 'ಆಹಾರ ಮತ್ತು ಅಗ್ನಿ'ಗೆ ಸಂಬಂಧಿಸಿದ ಜಾಗ. ಅಲ್ಲಿ ರೋಗಕ್ಕೆ ಸಂಬಂಧಿಸಿದ ಔಷಧಿಗಳನ್ನು ಇಡುವುದು ಮನೆಯವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ. ಔಷಧಿಗಳನ್ನು ಯಾವಾಗಲೂ ಪ್ರತ್ಯೇಕ ಜಾಗದಲ್ಲಿ ಇಡುವುದು ಉತ್ತಮ.&lt;/p&gt;&lt;img&gt;&lt;p&gt;&lt;strong&gt;ಪೊರಕೆ ಮತ್ತು ಶುಚಿಗೊಳಿಸುವ ಸಾಮಗ್ರಿ&lt;/strong&gt;ಪೊರಕೆ (ಜಾಡೂ), ಮಾಪ್ ಅಥವಾ ಕಸ ಗುಡಿಸುವ ವಸ್ತುಗಳನ್ನು ಅಡುಗೆಮನೆಯೊಳಗೆ ಇಡಬಾರದು. ಆಹಾರ ತಯಾರಿಸುವ ಜಾಗದಲ್ಲಿ ಕೊಳೆಯನ್ನು ತೆಗೆಯುವ ವಸ್ತುಗಳನ್ನು ಇಡುವುದು ನೈರ್ಮಲ್ಯದ ದೃಷ್ಟಿಯಿಂದಲೂ ಸರಿಯಲ್ಲ ಮತ್ತು ಇದು ಮನೆಯ ಲಕ್ಷ್ಮಿ ಅಥವಾ ಅನ್ನಪೂರ್ಣೇಶ್ವರಿಯ ಕೃಪೆಗೆ ಅಡ್ಡಿಯಾಗುತ್ತದೆ ಎಂಬ ನಂಬಿಕೆಯಿದೆ.&lt;/p&gt;&lt;img&gt;&lt;p&gt;&lt;strong&gt;ಕಸದ ಬುಟ್ಟಿ (Dustbin) ಎಲ್ಲಿರಬೇಕು?&lt;/strong&gt;ಅಡುಗೆಮನೆಯಲ್ಲಿ ಡಸ್ಟ್&zwnj;ಬಿನ್ ಅನಿವಾರ್ಯ. ಆದರೆ ಅದನ್ನು ಗ್ಯಾಸ್ ಸ್ಟೌವ್ ಅಥವಾ ಆಹಾರ ತಯಾರಿಸುವ ಜಾಗದ ಪಕ್ಕದಲ್ಲೇ ಇಡಬೇಡಿ. ಇದರಿಂದ ಕ್ರಿಮಿಕೀಟಗಳು ಮತ್ತು ದುರ್ವಾಸನೆ ಹರಡಿ ಆಹಾರ ಕಲುಷಿತಗೊಳ್ಳಬಹುದು. ಕಸದ ಬುಟ್ಟಿಯನ್ನು ಅಡುಗೆಮನೆಯ ಒಂದು ಮೂಲೆಯಲ್ಲಿ, ಆಹಾರ ತಯಾರಿಸುವ ಜಾಗದಿಂದ ದೂರವಿಡಿ.&lt;/p&gt;&lt;img&gt;&lt;p&gt;&lt;strong&gt;ಪೂರ್ವಜರ ಫೋಟೋಗಳು&lt;/strong&gt;ಕೆಲವರು ಭಕ್ತಿಯಿಂದ ಅಡುಗೆಮನೆಯಲ್ಲಿ ಪೂರ್ವಜರ (ಹಿರಿಯರ) ಫೋಟೋಗಳನ್ನು ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಇಂತಹ ಫೋಟೋಗಳಿಗೆ ಸೂಕ್ತವಾದ ಜಾಗವಲ್ಲ. ಹಿರಿಯರ ಫೋಟೋಗಳನ್ನು ಇಡಲು ಮನೆಯಲ್ಲಿ ಪ್ರತ್ಯೇಕ ಮತ್ತು ಶಾಂತಿಯುತವಾದ ಜಾಗವನ್ನು ಆರಿಸಿಕೊಳ್ಳಿ.&lt;/p&gt;&lt;img&gt;&lt;p&gt;&lt;strong&gt;ಒಡೆದ ಅಥವಾ ಬಿರುಕು ಬಿಟ್ಟ ಪಾತ್ರೆಗಳು&lt;/strong&gt;ಅಡುಗೆಮನೆಯಲ್ಲಿ ಪ್ರತಿದಿನ ಪಾತ್ರೆಗಳನ್ನು ಬಳಸುತ್ತೇವೆ. ಒಂದು ವೇಳೆ ಯಾವುದಾದರೂ ತಟ್ಟೆ, ಕಪ್ ಅಥವಾ ಗ್ಲಾಸ್ ಒಡೆದಿದ್ದರೆ ಅಥವಾ ಬಿರುಕು ಬಿಟ್ಟಿದ್ದರೆ ಅದನ್ನು ಬಳಸಬೇಡಿ. ವಾಸ್ತು ಪ್ರಕಾರ, ಒಡೆದ ಪಾತ್ರೆಗಳು ಮನೆಯಲ್ಲಿ ನಕಾರಾತ್ಮಕತೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಅಲ್ಲದೆ, ಇಂತಹ ಪಾತ್ರೆಗಳಲ್ಲಿ ಆಹಾರ ಸೇವಿಸುವುದು ಅಶುಭ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು&lt;/strong&gt;ಅಡುಗೆಮನೆಯಲ್ಲಿ ಬಳಸುವ ಚಾಕು, ಕತ್ತರಿ ಅಥವಾ ಇನ್ಯಾವುದೇ ಕಬ್ಬಿಣದ ಪರಿಕರಗಳಿಗೆ ತುಕ್ಕು ಹಿಡಿದಿದ್ದರೆ ಅವುಗಳನ್ನು ತಕ್ಷಣ ಬದಲಿಸಿ. ತುಕ್ಕು ಹಿಡಿದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ವಾಸ್ತು ಹೇಳುತ್ತದೆ. ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಇವು ಅಪಾಯಕಾರಿ.&lt;/p&gt;&lt;img&gt;&lt;p&gt;&lt;strong&gt;ಸಕಾರಾತ್ಮಕತೆಗಾಗಿ ಈ ಸರಳ ಕ್ರಮ ಅನುಸರಿಸಿ..&lt;/strong&gt;ಅಡುಗೆಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಕ್ರಮಬದ್ಧವಾಗಿ ಇಡಿ.&lt;/p&gt;&lt;p&gt;ಹಳಸಿದ ಅಥವಾ ಎಕ್ಸ್&zwnj;ಪೈರಿ ಆದ ಆಹಾರ ಪದಾರ್ಥಗಳನ್ನು ತಕ್ಷಣ ವಿಲೇವಾರಿ ಮಾಡಿ.&lt;/p&gt;&lt;p&gt;ಗ್ಯಾಸ್ ಸ್ಟೌವ್ ಹತ್ತಿರ ಯಾವುದೇ ಸುಡುವ ವಸ್ತುಗಳು ಅಥವಾ ಅನಗತ್ಯ ಕಾಗದಗಳನ್ನು ಇಡಬೇಡಿ.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ವಾಸ್ತು ಎಂಬುದು ಪಾರಂಪರಿಕ ನಂಬಿಕೆಯಾಗಿದೆ. ಅಡುಗೆಮನೆಯನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸುವುದು ವಾಸ್ತುವಿನಷ್ಟೇ ಮುಖ್ಯವಾದ ವಿಷಯವಾಗಿದೆ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/5-things-you-should-never-keep-in-your-kitchen-qzhkupg"/>
        </item>
        <item>
            <title><![CDATA[Vastu Tips: ತುಳಸಿ ಗಿಡಕ್ಕೆ ಈ ದಿನಗಳಂದು ನೀರು ಹಾಕಿದ್ರೆ ದಟ್ಟ ದರಿದ್ರತನ ಬರುತ್ತೆ!]]></title>
            <link>https://kannada.asianetnews.com/gallery/vaastu/according-to-vastu-shastra-there-are-certain-rules-for-watering-the-tulsi-plant-in-the-house-mrq-rbznyqc</link>
            <guid isPermaLink="true">https://kannada.asianetnews.com/gallery/vaastu/according-to-vastu-shastra-there-are-certain-rules-for-watering-the-tulsi-plant-in-the-house-mrq-rbznyqc</guid>
            <pubDate>Thu, 20 Aug 2026 14:49:56 +0530</pubDate>
            <description><![CDATA[&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ತುಳಸಿ ಗಿಡಕ್ಕೆ ನೀರು ಹಾಕಲು ಕೆಲವು ನಿಯಮಗಳಿವೆ. ಈ ಸಮಯದಲ್ಲಿ ತುಳಸಿಗೆ ನೀರು ಹಾಕುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw46m2m31k2g7f30gvk3pnf2,imgname-tulsi-plant-vastu-dosha-1782552595075.jpg" type="image/jpeg" height="390" width="690"/>
            <content:encoded><![CDATA[&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ತುಳಸಿ ಗಿಡಕ್ಕೆ ನೀರು ಹಾಕಲು ಕೆಲವು ನಿಯಮಗಳಿವೆ. ಈ ಸಮಯದಲ್ಲಿ ತುಳಸಿಗೆ ನೀರು ಹಾಕುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು.&lt;/p&gt;&lt;img&gt;&lt;p&gt;ಬಹುತೇಕರ ಜನರ ಜೀವನದಲ್ಲಿ ವಾಸ್ತು ಶಾಸ್ತ್ರ ಪ್ರಮುಖ ಭಾಗವಾಗಿ ಬದಲಾಗಿದೆ. ಕೆಲವರು ಮನೆ ನಿರ್ಮಿಸುವಾಗ ಮಾತ್ರ ವಾಸ್ತುಶಾಸ್ತ್ರ ಪರಿಗಣಿಸುತ್ತಾರೆ. ಆದ್ರೆ ಜೀವನದ ಪ್ರತಿಯೊಂದು ಹಂತದಲ್ಲಿಯೂ ವಾಸ್ತುಶಾಸ್ತ್ರ ಪ್ರಾಮುಖ್ಯತೆಯನ್ನು ಹೊಂದಿದೆ.&lt;/p&gt;&lt;img&gt;&lt;p&gt;ಮನೆಯಂಗಳ ಅಥವಾ ಮನೆ ಮುಂದೆ ತುಳಸಿ ಗಿಡ ನಡೆಸಲಾಗುತ್ತದೆ. ಈ ತುಳಸಿ ಗಿಡದ ಪೂಜೆ ಸೇರಿದಂತೆ ನೀರು ಹಾಕೋದರ ಬಗ್ಗೆಯೂ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ. ಈ ನಿಯಮಗಳ ಪಾಲನೆಯಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ತುಳಸಿ ಗಿಡಕ್ಕೆ ಯಾವಾಗ ನೀರು ಹಾಕಬಾರದು ಎಂಬ ನಿಯಮವಿದೆ. ಈ ವಿಷಯ ತಿಳಿಯದೇ ಹಲವರು ನಿಯಮ ಪಾಲನೆ ಮಾಡಲ್ಲ. ಇದರಿಂದ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ವಾಸ್ತುಶಾಸ್ತ್ರಜ್ಞರ ಪ್ರಕಾರ, ಭಾನುವಾರವನ್ನು ವಿಷ್ಣುವಿಗೆ ಅರ್ಪಿಸಿದ ದಿನ ಎಂದು ಹೇಳುತ್ತಾರೆ. ಹಾಗೆಯೇ ಭಾನುವಾರ ತುಳಸಿಗೆ ವಿಶೇಷವಾದ ದಿನ. ಈ ದಿನ ತುಳಸಿ ನೀರು ಇಲ್ಲದೇ ಉಪವಾಸ ಆಚರಿಸುತ್ತಾಳೆ. ನಾವು ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕೋದರಿಂದ ಉಪವಾಸವನ್ನು ಕೊನೆ ಮಾಡಿದಂತಾಗುತ್ತದೆ. ಹಾಗಾಗಿ ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕೋದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;ಅದೇ ರೀತಿ ಏಕಾದಶಿಯಂದು ಸಹ ತುಳಸಿ ಗಿಡಕ್ಕೆ ನೀರು ಹಾಕಬಾರದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಏಕಾದಶಿಯ ದಿನದಂದು ತುಳಸಿಯು ವಿಷ್ಣುವಿಗೆ ಉಪವಾಸ ಆಚರಿಸುತ್ತಾಳೆ. ಉಪವಾಸದ ಸಂದರ್ಭದಲ್ಲಿ ನೀರು ಹಾಕಿದ್ರೆ ತುಳಸಿ ದೇವಿಯ ವ್ರತವನ್ನು ಮುರಿದಂತಾಗುತ್ತದೆ. ಈ ಕಾರಣದಿಂದ ಏಕಾದಶಿಯಂದು ನೀರು ಹಾಕಬಾರದು.&lt;/p&gt;&lt;img&gt;&lt;p&gt;ಭಾನುವಾರ, ಏಕಾದಶಿ ಜೊತೆ ಗ್ರಹಣದ ಸಂದರ್ಭದಲ್ಲಿಯೂ ತುಳಸಿಗೆ ನೀರು ಅರ್ಪಿಸಬಾರದು. ಗ್ರಹಣದ ಸಮಯದಲ್ಲಿ ಯಾವುದೇ ಶುಭ ಅಥವಾ ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಶುಭ ಫಲ ಸಿಗುವುದಿಲ್ಲ. ಆದ್ದರಿಂದ ತುಳಸಿಗೆ ನೀರು ಅರ್ಪಿಸಬಾರದು. ಗ್ರಹಣ ಮೋಕ್ಷದ ನಂತ್ರವೇ ನೀರು ಅರ್ಪಿಸಬೇಕು. ಕೆಲವರು ಗ್ರಹಣ ಸಮಯದಲ್ಲಿ ತುಳಸಿ ಗಿಡವನ್ನು ಸ್ಪರ್ಶಿಸಬಾರದು ಎಂದು ಸಲಹೆ ನೀಡುತ್ತಾರೆ.&lt;/p&gt;]]></content:encoded>
            <category>vaastu</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/vaastu/according-to-vastu-shastra-there-are-certain-rules-for-watering-the-tulsi-plant-in-the-house-mrq-rbznyqc"/>
        </item>
        <item>
            <title><![CDATA[ಸಿಂಕ್ ಪಕ್ಕದಲ್ಲಿಯೇ ಒಲೆಯನ್ನಿಟ್ಟಿದ್ದೀರಾ? ವಾಸ್ತು ಶಾಸ್ತ್ರದಲ್ಲಿದೆ ಅಚ್ಚರಿಯ ವಿಷಯ]]></title>
            <link>https://kannada.asianetnews.com/gallery/vaastu/according-to-vastu-shastra-what-happens-if-you-place-the-stove-and-sink-parallel-in-the-kitchen-mrq-s8wrbl0</link>
            <guid isPermaLink="true">https://kannada.asianetnews.com/gallery/vaastu/according-to-vastu-shastra-what-happens-if-you-place-the-stove-and-sink-parallel-in-the-kitchen-mrq-s8wrbl0</guid>
            <pubDate>Wed, 19 Aug 2026 11:24:41 +0530</pubDate>
            <description><![CDATA[&lt;p&gt;Water Vs Fire ವಾಸ್ತುಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಒಲೆ ಮತ್ತು ಸಿಂಕ್ ಅನ್ನು ಸಮಾನಂತರವಾಗಿ ಇರಿಸಿದ್ರೆ ಏನಾಗುತ್ತೆ? ಒಂದು ವೇಳೆ ಈ ರೀತಿಯಾಗಿ ಅಡುಗೆಮನೆ ವಿನ್ಯಾಸ ಮಾಡಿಕೊಂಡಿದ್ರೆ ವಾಸ್ತುಶಾಸ್ತ್ರದಲ್ಲಿ ಸರಳ ಪರಿಹಾರಗಳಿವೆ. ಈ ದೋಷಕ್ಕೆ ಸರಳ ಪರಿಹಾರಗಳನ್ನು ಲೇಖನದಲ್ಲಿ ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0c8z19b0warjwnnd45a5ysp,imgname-sink-kitchen--4--1787118454059.jpg" type="image/jpeg" height="390" width="690"/>
            <content:encoded><![CDATA[&lt;p&gt;Water Vs Fire ವಾಸ್ತುಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಒಲೆ ಮತ್ತು ಸಿಂಕ್ ಅನ್ನು ಸಮಾನಂತರವಾಗಿ ಇರಿಸಿದ್ರೆ ಏನಾಗುತ್ತೆ? ಒಂದು ವೇಳೆ ಈ ರೀತಿಯಾಗಿ ಅಡುಗೆಮನೆ ವಿನ್ಯಾಸ ಮಾಡಿಕೊಂಡಿದ್ರೆ ವಾಸ್ತುಶಾಸ್ತ್ರದಲ್ಲಿ ಸರಳ ಪರಿಹಾರಗಳಿವೆ. ಈ ದೋಷಕ್ಕೆ ಸರಳ ಪರಿಹಾರಗಳನ್ನು ಲೇಖನದಲ್ಲಿ ವಿವರಿಸಲಾಗಿದೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಮಾಡರ್ನ್ ಕಿಚನ್ ಹೆಸರಿನಲ್ಲಿ ಜನರು ವಾಸ್ತುಶಾಸ್ತ್ರಗಳನ್ನು ಮರೆಯುತ್ತಿದ್ದಾರೆ. ಇಂದು ಬಹುತೇಕರು ಸ್ಥಳವಾಕಾಶ ಮತ್ತು ಜ್ಞಾನದ ಕೊರತೆಯಿಂದ ಒಂದೇ ಸ್ಲ್ಯಾಬ್ ಅಥವಾ ಸಮಾನಂತರವಾಗಿಯೇ ಒಲೆ ಮತ್ತು ಸಿಂಕ್ ನಿರ್ಮಿಸುತ್ತಾರೆ. ಇದನ್ನು ಬಹುತೇಕರು ಸಾಮಾನ್ಯ ಎಂದು ಪರಿಗಣಿಸುತ್ತಾರೆ. ಆದ್ರೆ ವಾಸ್ತುಶಾಸ್ತ್ರದಲ್ಲಿ ಇದೊಂದು ಮನೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ. ತಪ್ಪಾದ ದಿಕ್ಕು ಮತ್ತು ವಿನ್ಯಾಸ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ಭೂಮಿ, ಆಕಾಶ, ನೀರು, ಗಾಳಿ ಮತ್ತು ಬೆಂಕಿ ಎಂಬ ಐದು ಅಂಶಗಳನ್ನು ವಾಸ್ತುಶಾಸ್ತ್ರ ಒಳಗೊಂಡಿದೆ. ಈ ಪಂಚಭೂತಗಳಲ್ಲಿ ಅಡುಗೆಮನೆ ನೀರು ಮತ್ತು ಬೆಂಕಿ ಎಂಬ ಅಂಶಗಳನ್ನು ಒಳಗೊಂಡಿರುತ್ತದೆ. ನಿಮ್ಮ ಅಡುಗೆಮನೆ ಬೆಂಕಿ ಮತ್ತು ನೀರಿನ ಸಮತೋಲನ ಹೊಂದಿರಬೇಕು. ಇದು ಮನೆಯಲ್ಲಿನ ನೆಮ್ಮದಿ ಮತ್ತು ಕುಟುಂಬ ಸದಸ್ಯರ ಆರೋಗ್ಯಕ್ಕೆ ಸಂಬಂಧಿಸಿರುತ್ತದೆ.&lt;/p&gt;&lt;img&gt;&lt;p&gt;ಅಡುಗೆಮನೆಯಲ್ಲಿನ ಗ್ಯಾಸ್&zwnj; ಸ್ಟೌವ್&zwnj;ನ್ನು ಬೆಂಕಿ ಎಂದು ಪರಿಗಣಿಸಲಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿರಿಸಲಾಗುವ ಗ್ಯಾಸ್ ಸ್ಟೌವ್ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಳ ಮಾಡುತ್ತದೆ. ಈ ಒಂದು ನಡೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಳ ಮಾಡುತ್ತೆ ಎಂದರ್ಥ. ಅಡುಗೆಮನೆ ಆಗ್ನೇಯ ಮಂಗಳಕರ ದಿಕ್ಕು.&lt;/p&gt;&lt;img&gt;&lt;p&gt;ಸಿಂಕ್ ಮತ್ತು ಸ್ಟೌವ್ ಅಕ್ಕ-ಪಕ್ಕ ಅಥವಾ ಸಮನಾಂತರವಾಗಿದ್ರೆ ನೀರು-ಬೆಂಕಿಯನ್ನು ಜೊತೆಯಲ್ಲಿರಿಸಿದಂತಾಗುತ್ತದೆ. ಈ ಎರಡು ಅಂಶಗಳ ನಡುವೆ ಸಂಘರ್ಷ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ರೀತಿಯ ರಚನೆ ಮಾನಸಿಕ ಒತ್ತಡ, ಸಂಗಾತಿ ನಡುವೆ ಮನಸ್ತಾಪ, ಆರ್ಥಿಕ ನಷ್ಟ ಮತ್ತು ಮನೆಯಲ್ಲಿರೋ ಜನರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳಿರುತ್ತೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.&lt;/p&gt;&lt;img&gt;&lt;ul&gt; &lt;li&gt;ಸಿಂಕ್&zwnj; ಪಕ್ಕವೇ ಗ್ಯಾಸ್ ಸ್ಟೌವ್ ಇರಿಸೋದನ್ನು ತಪ್ಪಿಸಿ. ಈ ಎರಡರ ನಡುವೆ ಅಂತರ ಕಾಯ್ದುಕೊಳ್ಳೋದನ್ನು ಉತ್ತಮ ಎಂದು ಉತ್ತಮ ಎಂದು ಪರಿಗಣಿಸಲಾಗುತ್ತದೆ.&lt;/li&gt; &lt;li&gt;ಸಮಾನಂತರವಾಗಿದ್ರೆ ಒಲೆ ಮತ್ತು ಸಿಂಕ್ ಮಧ್ಯೆ ಚಿಕ್ಕದಾದ ಗೋಡೆ ನಿರ್ಮಿಸಿಕೊಳ್ಳೋದು ಉತ್ತಮ.&lt;/li&gt; &lt;li&gt;ಸಿಂಕ್ ಮತ್ತು ಗ್ಯಾಸ್ ಸ್ಟೌವ್ ಮಧ್ಯೆ ಭಾರವಾದ ವಸ್ತುಗಳನ್ನು ಇರಿಸುವ ಮೂಲಕ ದೋಷ ಪರಿಹಾರ ಮಾಡಿಕೊಳ್ಳಬಹುದು&lt;/li&gt;&lt;/ul&gt;]]></content:encoded>
            <category>vaastu</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/vaastu/according-to-vastu-shastra-what-happens-if-you-place-the-stove-and-sink-parallel-in-the-kitchen-mrq-s8wrbl0"/>
        </item>
        <item>
            <title><![CDATA[Feng Shui: ಇವತ್ತೇ ಇದನ್ನ ಮನೆಯಿಂದ ದೂರ ಮಾಡಿ… ಹಣದ ಸುರಿಮಳೆಯಾಗೋದು ಖಚಿತ!]]></title>
            <link>https://kannada.asianetnews.com/gallery/vaastu/feng-shui-3-home-mistakes-that-may-block-wealth-and-prosperity-w50ygc6</link>
            <guid isPermaLink="true">https://kannada.asianetnews.com/gallery/vaastu/feng-shui-3-home-mistakes-that-may-block-wealth-and-prosperity-w50ygc6</guid>
            <pubDate>Wed, 19 Aug 2026 17:40:59 +0530</pubDate>
            <description><![CDATA[&lt;p&gt;Feng Shui : ನಿಮ್ಮ ಮನೆಯಲ್ಲಿ ಹಣ ಉಳಿಯದಿದ್ದರೆ, ಈ ಮೂರು ಫೆಂಗ್ ಶೂಯಿ ತಪ್ಪುಗಳಿಗೆ ಗಮನ ಕೊಡಿ. ಮುಖ್ಯ ಬಾಗಿಲು, ಸಂಪತ್ತಿನ ಮೂಲೆ ಮತ್ತು ಹಾಸಿಗೆಯ ಕೆಳಗಿರುವ ವಸ್ತುಗಳಿಗೆ ಸರಳವಾದ ಫೆಂಗ್ ಶೂಯಿ ಪರಿಹಾರಗಳನ್ನು ನೀವು ತಿಳಿದುಕೊಂಡ್ರೆ, ನಿಮ್ಮ ಮನೆಯಲ್ಲಿ ಹಣದ ಸುರಿಮಳೆಯಾಗೋದು ಖಚಿತಾ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cyk07rjyyjj427gcsswkh9,imgname-feng-shui-1787141128438.jpg" type="image/jpeg" height="390" width="690"/>
            <content:encoded><![CDATA[&lt;p&gt;Feng Shui : ನಿಮ್ಮ ಮನೆಯಲ್ಲಿ ಹಣ ಉಳಿಯದಿದ್ದರೆ, ಈ ಮೂರು ಫೆಂಗ್ ಶೂಯಿ ತಪ್ಪುಗಳಿಗೆ ಗಮನ ಕೊಡಿ. ಮುಖ್ಯ ಬಾಗಿಲು, ಸಂಪತ್ತಿನ ಮೂಲೆ ಮತ್ತು ಹಾಸಿಗೆಯ ಕೆಳಗಿರುವ ವಸ್ತುಗಳಿಗೆ ಸರಳವಾದ ಫೆಂಗ್ ಶೂಯಿ ಪರಿಹಾರಗಳನ್ನು ನೀವು ತಿಳಿದುಕೊಂಡ್ರೆ, ನಿಮ್ಮ ಮನೆಯಲ್ಲಿ ಹಣದ ಸುರಿಮಳೆಯಾಗೋದು ಖಚಿತಾ.&lt;/p&gt;&lt;img&gt;&lt;p&gt;ಫೆಂಗ್&zwnj;ಶುಯಿ ಒಂದು ಪ್ರಾಚೀನ ಚೀನೀ ವಿದ್ಯೆಯಾಗಿದ್ದು, ನಾವು ವಾಸಿಸುವ ಸ್ಥಳ ಮತ್ತು ಶಕ್ತಿಯ ಹರಿವನ್ನು ಸಮತೋಲನಗೊಳಿಸುತ್ತದೆ. ಫೆಂಗ್&zwnj;ಶುಯಿ ಪ್ರಕಾರ, ನಮ್ಮ ಮನೆಯ ವಾತಾವರಣವು ನಮ್ಮ ಸುಪ್ತ ಮನಸ್ಸು ಮತ್ತು ಆರ್ಥಿಕ ಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಸರಿಯಾಗಿಲ್ಲದಿದ್ದರೆ, ಎಷ್ಟೇ ಕಷ್ಟಪಟ್ಟರೂ ಹಣದ ಕೊರತೆ ಮುಂದುವರಿಯಬಹುದು. ಹಾಗಾದರೆ ಆ ಮೂರು ಪ್ರಮುಖ ತಪ್ಪುಗಳು ಯಾವುವು ಎಂಬುದನ್ನು ತಿಳಿಯೋಣ.&lt;/p&gt;&lt;img&gt;&lt;p&gt;ಫೆಂಗ್&zwnj;ಶುಯಿಯಲ್ಲಿ ಮನೆಯ ಮುಖ್ಯ ದ್ವಾರವನ್ನು ಶಕ್ತಿ ಪ್ರವೇಶಿಸುವ ದ್ವಾರವೆಂದು ಪರಿಗಣಿಸಲಾಗುತ್ತದೆ. ಮೊದಲನೆಯ ಮತ್ತು ಸಾಮಾನ್ಯ ತಪ್ಪೆಂದರೆ, ಜನರು ಮುಖ್ಯ ದ್ವಾರದ ಬಳಿ ಚಪ್ಪಲಿಗಳ ರಾಶಿ ಹಾಕುವುದು ಅಥವಾ ಕಸವನ್ನು ಸಂಗ್ರಹಿಸಿಡುವುದು. ಈ ಅವ್ಯವಸ್ಥೆ ಮತ್ತು ಕೊಳಕು ಮನೆಗೆ ಬರುವ ಸಕಾರಾತ್ಮಕ ಹಾಗೂ ಆರ್ಥಿಕ ಶಕ್ತಿಯ ದಾರಿಯನ್ನು ಸಂಪೂರ್ಣವಾಗಿ ತಡೆಯುತ್ತದೆ. ಅವಕಾಶಗಳು ನಿಮ್ಮ ಬಾಗಿಲಿನಿಂದಲೇ ಹಿಂದಿರುಗುತ್ತವೆ.&lt;/p&gt;&lt;img&gt;&lt;p&gt;ಈ ದೋಷವನ್ನು ನಿವಾರಿಸಲು ನಿಮ್ಮ ಮುಖ್ಯ ದ್ವಾರವನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇಟ್ಟುಕೊಳ್ಳಿ. ಬಾಗಿಲಿನ ಮುಂದೆ ಇರುವ ಚಪ್ಪಲಿಗಳ ರ್ಯಾಕ್ ಅನ್ನು ತೆಗೆದುಹಾಕಿ ಅಥವಾ ಅವುಗಳನ್ನು ಶೂ ರ್ಯಾಕ್ ನಲ್ಲಿಡಿ. ಪ್ರವೇಶ ದ್ವಾರದಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಿ. ಫೆಂಗ್&zwnj;ಶುಯಿ ಪ್ರಕಾರ, ಸ್ವಚ್ಛವಾಗಿ ಮತ್ತು ಸ್ವಾಗತಾರ್ಹವಾಗಿ ಕಾಣುವ ಮುಖ್ಯ ದ್ವಾರ ನಿಮ್ಮ ನರಮಂಡಲವನ್ನು ಸಮೃದ್ಧಿ ಮತ್ತು ಹೊಸ ಅವಕಾಶಗಳನ್ನು ಸ್ವೀಕರಿಸಲು ಸಿದ್ಧಗೊಳಿಸುತ್ತದೆ.&lt;/p&gt;&lt;img&gt;&lt;p&gt;ಮನೆ ಅಥವಾ ಕಚೇರಿಯ ಆಗ್ನೇಯ ಮೂಲೆಯನ್ನು ಫೆಂಗ್&zwnj;ಶುಯಿಯಲ್ಲಿ ಹಣ ಮತ್ತು ಸಮೃದ್ಧಿಯ ಪ್ರದೇಶ ಎನ್ನುತ್ತಾರೆ. ಎರಡನೇ ದೊಡ್ಡ ತಪ್ಪೆಂದರೆ ಈ ಮೂಲೆಯನ್ನು ನಿರ್ಲಕ್ಷಿಸುವುದು ಅಥವಾ ಇಲ್ಲಿ ಅನಗತ್ಯ ವಸ್ತುಗಳು ಮತ್ತು ಕಸವನ್ನು ತುಂಬಿಡುವುದು. ಈ ಪ್ರಮುಖ ಭಾಗದಲ್ಲಿ ಅಡ್ಡಿ ಉಂಟಾದಾಗ, ನಿಮ್ಮ ಆರ್ಥಿಕ ಬೆಳವಣಿಗೆ ಮತ್ತು ಆದಾಯದ ಮೂಲಗಳು ಸ್ಥಗಿತಗೊಳ್ಳುತ್ತವೆ. ಹಣದ ಆಗಮನವೂ ನಿಲ್ಲುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಮನೆಯ ಆಗ್ನೇಯ ಭಾಗದಲ್ಲಿರುವ ಹಳೆಯ ಕಾಗದಗಳು, ಕಸ ಅಥವಾ ತುಂಡಾದ ವಸ್ತುಗಳನ್ನು ತಕ್ಷಣ ತೆಗೆದುಹಾಕಿ. ಈ ಮೂಲೆಯನ್ನು ಸಕ್ರಿಯಗೊಳಿಸಲು ಇಲ್ಲಿ ಆರೋಗ್ಯಕರವಾದ ಹಸಿರು ಗಿಡ ಇಡಿ. ಫೆಂಗ್&zwnj;ಶುಯಿ ಪ್ರಕಾರ, ಈ ಸಾಂಕೇತಿಕ ಬದಲಾವಣೆಯು ನೀವು ಜೀವನದಲ್ಲಿ ಬೆಳವಣಿಗೆ ಮತ್ತು ಆರ್ಥಿಕ ಪ್ರಗತಿಗೆ ಸಂಪೂರ್ಣವಾಗಿ ಸಿದ್ಧರಾಗಿದ್ದೀರಿ ಎಂಬ ಸಂದೇಶವನ್ನು ನಿಮ್ಮ ಸುಪ್ತ ಮನಸ್ಸಿಗೆ ನೀಡುತ್ತದೆ.&lt;/p&gt;&lt;img&gt;&lt;p&gt;ಮೂರನೇ ದೊಡ್ಡ ತಪ್ಪೆಂದರೆ ಹಾಸಿಗೆಯ ಕೆಳಗೆ ಹಳೆಯ ಪೆಟ್ಟಿಗೆಗಳು, ಸೂಟ್&zwnj;ಕೇಸ್&zwnj;ಗಳು ಅಥವಾ ಒಡೆದ ವಸ್ತುಗಳನ್ನು ಸಂಗ್ರಹಿಸಿಡುವುದು. ಈ ಅಭ್ಯಾಸವು ಮನೆಯಲ್ಲಿ ಸ್ಥಗಿತಗೊಂಡ ಮತ್ತು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದು ನಿಮ್ಮ ಮಾನಸಿಕ ನೆಮ್ಮದಿ ಮತ್ತು ಆರ್ಥಿಕ ನಿರ್ಧಾರಗಳ ಮೇಲೂ ಪರಿಣಾಮ ಬೀರುತ್ತದೆ. ಹಾಸಿಗೆಯ ಕೆಳಗಿನ ಜಾಗವನ್ನು ಯಾವಾಗಲೂ ಖಾಲಿಯಾಗಿ ಇಡಿ. ಹಳೆಯದಾದ ಅಥವಾ ಒಡೆದಿರುವ ಪ್ರತಿಯೊಂದು ವಸ್ತುವನ್ನೂ ಮನೆಯಿಂದ ತೆಗೆದುಹಾಕಿ, ಇದರಿಂದ ಹೊಸ ಶಕ್ತಿಯ ಹರಿವು ಉಂಟಾಗಬಹುದು.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/feng-shui-3-home-mistakes-that-may-block-wealth-and-prosperity-w50ygc6"/>
        </item>
    </channel>
</rss>
