<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 01 May 2026 17:27:25 +0530</lastBuildDate>
        <atom:link href="https://kannada.asianetnews.com/rss/vaastu" rel="self" type="application/rss+xml"/>
        <item>
            <title><![CDATA[Vastu Tips : ಬೆಳಿಗ್ಗೆ ನೀವು ಮಾಡೋ ಈ ಸಣ್ಣ ಕೆಲ್ಸ ಇಡೀ ದಿನ ಹಾಳ್ಮಾಡುತ್ತೆ]]></title>
            <link>https://kannada.asianetnews.com/gallery/festivals/vastu-tips-immediately-remove-these-5-things-from-your-morning-routine-and-your-luck-will-shine-bright-23tb4lp</link>
            <guid isPermaLink="true">https://kannada.asianetnews.com/gallery/festivals/vastu-tips-immediately-remove-these-5-things-from-your-morning-routine-and-your-luck-will-shine-bright-23tb4lp</guid>
            <pubDate>Mon, 20 Apr 2026 19:25:29 +0530</pubDate>
            <description><![CDATA[&lt;p&gt;Vastu Tips : ದಿನದ ಆರಂಭ ಯಾವ್ಲಾಗೂ ಚೆನ್ನಾಗಿರಬೇಕು. ಬೆಳಿಗ್ಗೆ ಖುಷಿಯಿಂದ ಎದ್ದರೆ ದಿನ ಕಳೆದದ್ದು ತಿಳಿಯೋದಿಲ್ಲ. ಆದ್ರೆ ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಸಣ್ಣ ತಪ್ಪುಗಳೇ ಇಡೀ ದಿನ ಹಾಳು ಮಾಡುತ್ವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpnhxqrssfawa5vzfcptqz4f,imgname-morning-routine-1776692420377.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu Tips : ದಿನದ ಆರಂಭ ಯಾವ್ಲಾಗೂ ಚೆನ್ನಾಗಿರಬೇಕು. ಬೆಳಿಗ್ಗೆ ಖುಷಿಯಿಂದ ಎದ್ದರೆ ದಿನ ಕಳೆದದ್ದು ತಿಳಿಯೋದಿಲ್ಲ. ಆದ್ರೆ ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಸಣ್ಣ ತಪ್ಪುಗಳೇ ಇಡೀ ದಿನ ಹಾಳು ಮಾಡುತ್ವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಒಳ್ಳೆ ಕೆಲ್ಸಗಳು ನಮ್ಮ ಅರ್ಧ ದಿನದ ಭಾರವನ್ನು ಕಡಿಮೆ ಮಾಡುತ್ತೆ. ಬೆಳಿಗ್ಗೆ ಮನಸ್ಸು ಬಿಳಿಹಾಳೆಯಂತಿರುತ್ತದೆ. ಅದಕ್ಕೆ ಎದ್ದ ತಕ್ಷಣ ನಾವು ಮಾಡುವ ಕೆಲ್ಸವೇ ಬಣ್ಣ ಬಳಿಯುವುದು. ಅನೇಕ ಬಾರಿ ನಮ್ಮ ಅರಿವಿಲ್ಲದೆ ಕೆಲ ತಪ್ಪುಗಳನ್ನು ನಾವು ಬೆಳಿಗ್ಗೆ ಮಾಡಿರ್ತೇವೆ. ಅದು ನಮ್ಮ ಇಡೀ ದಿನವನ್ನು ಹಾಳು ಮಾಡುತ್ತೆ. ಪ್ರತಿ ದಿನದ ಆರಂಭ ಹಾಗೂ ಅಂತ್ಯ ಎರಡೂ ಚೆನ್ನಾಗಿರ್ಬೇಕು ಅಂದ್ರೆ ಬೆಳಿಗ್ಗೆ ಎದ್ದ ತಕ್ಷಣ ಕೆಲ ಕೆಲ್ಸಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ.&lt;/p&gt;&lt;img&gt;&lt;p&gt;ಬಹುತೇಕರ ಹವ್ಯಾಸ ಇದು. ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಿಕೊಳ್ತಾರೆ. ವಾಸ್ತು ಪ್ರಕಾರ ನಿದ್ದೆ ಮಾಡುವಾಗ, ಕೆಲವು ನಕಾರಾತ್ಮಕ ಶಕ್ತಿಯನ್ನು ನಮ್ಮ ದೇಹ ಹೊಂದಿರುತ್ತದೆ. ಕನ್ನಡಿ ಅದನ್ನು ಮತ್ತಷ್ಟು ವರ್ಧಿಸಬಹುದು. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡ್ಬೇಡಿ. ನಿಮ್ಮ ಅಂಗೈ ನೋಡಿಕೊಂಡು ಕರಾಗ್ರೇ ವಸತಿ ಲಕ್ಷ್ಮಿ ಮಂತ್ರ ಅಥವಾ ಇಷ್ಟದೇವರ ಮಂತ್ರವನ್ನು ಜಪಿಸಿ.&lt;/p&gt;&lt;img&gt;&lt;p&gt;ಅನೇಕರಿಗೆ ರಾತ್ರಿ ಪಾತ್ರೆ ತೊಳೆಯಲು ಬೇಸರ. ಹಾಗಾಗಿ ಸಿಂಕ್ ನಲ್ಲಿ ಪಾತ್ರೆಯಿಟ್ಟು ಮಲಗ್ತಾರೆ. ಬೆಳಿಗ್ಗೆ ಆ ಪಾತ್ರೆಗಳನ್ನು ನೋಡೋದು ಒಳ್ಳೆಯದಲ್ಲ. ನೀವು ಎದ್ದ ತಕ್ಷಣ, ಸಿಂಕ್ ನಲ್ಲಿರುವ ಕೊಳಕು ಪಾತ್ರೆ ನೋಡೋದು ನಕಾರಾತ್ಮಕತೆ ಹೆಚ್ಚಿಸುತ್ತದೆ. ಆದಷ್ಟು ರಾತ್ರಿಯೇ ಕೆಲ್ಸ ಮುಗಿಸಿ. ಬೆಳಿಗ್ಗೆ ಸ್ವಚ್ಛವಾದ, ಸುಂದರವಾದ ಅಡುಗೆ ಮನೆ ನೋಡಿದ್ರೆ ಸಕಾರಾತ್ಮಕತೆ ಹೆಚ್ಚಾಗುತ್ತೆ. ಆಹ್ಲಾದಕರವಾಗಿ ದಿನ ಶುರುವಾಗುತ್ತೆ.&lt;/p&gt;&lt;img&gt;&lt;p&gt;ಬೆಳಿಗ್ಗೆ ಎದ್ದ ತಕ್ಷಣ ನಿಂತಿರುವ ಗಡಿಯಾರ ಅಥವಾ ಹಾಳಾದ ವಸ್ತುಗಳನ್ನು ನೋಡುವುದು ಕೂಡ ಒಳ್ಳೆಯದಲ್ಲ. ಆದಷ್ಟು ಕೆಲ್ಸ ಮಾಡದ ಗಡಿಯಾರ, ವಾಚ್ ಗಳನ್ನು ಕಸಕ್ಕೆ ಹಾಕಿ. ಇಲ್ಲ ರಾತ್ರಿಯೇ ಅದನ್ನು ಸರಿಪಡಿಸಿ ಮಲಗಿ. ಮಲಗುವ ಕೋಣೆಯಲ್ಲಿ ಅನಗತ್ಯ, ಹಾಳಾದ ವಸ್ತುಗಳನ್ನು ಇಡಬೇಡಿ. ಇವು ಬೆಳಿಗ್ಗೆ ನಿಮ್ಮ ಕಣ್ಣಿಗೆ ಬಿದ್ರೆ ಅಶುಭದ ಸಂಕೇತ. ನಿಂತಿರುವ ಗಡಿಯಾರ ನಿಮ್ಮ ಸಮಯ ಮತ್ತು ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಕಾಡು ಪ್ರಾಣಿಗಳ ಫೋಟೋ ಹಾಕಿಕೊಳ್ಳೋದು ಫ್ಯಾಷನ್ ಆಗಿದೆ. ಆದ್ರೆ ಬೆಳಿಗ್ಗೆ ಹಿಂಸಾತ್ಮಕ ಪ್ರಾಣಿ ಅಥವಾ ದುಃಖದ ಚಿತ್ರವನ್ನು ನೋಡಿದ ತಕ್ಷಣ ಕಿರಿಕಿರಿ ಉಂಟಾಗುತ್ತದೆ. ನೀವು ಕಾಡು ಪ್ರಾಣಿಗಳ ಬದಲು ಉದಯಿಸುತ್ತಿರುವ ಸೂರ್ಯ, ಹೂವು ಅಥವಾ ಶಾಂತ ಸ್ವಭಾವದ ಚಿತ್ರವನ್ನು ಹಾಕಿಕೊಳ್ಳಿ. ಆದಷ್ಟು ಇಂಥ ಚಿತ್ರಗಳನ್ನು ನೋಡಿ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಸ್ವಂತ ಅಥವಾ ಇತರರ ನೆರಳುಗಳನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ಭಯ ಮತ್ತು ಒತ್ತಡ ಹೆಚ್ಚಾಗುತ್ತದೆ. ನಿಮ್ಮ ದಿನವನ್ನು ಬೆಳಕು ಮತ್ತು ಸ್ಪಷ್ಟತೆಯೊಂದಿಗೆ ಪ್ರಾರಂಭಿಸಲು ಪ್ರಯತ್ನಿಸಿ. ಆದಷ್ಟು ನಿಮ್ಮ ಅಥವಾ ಪರರ ನೆರಳನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡ್ಬೇಡಿ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/festivals/vastu-tips-immediately-remove-these-5-things-from-your-morning-routine-and-your-luck-will-shine-bright-23tb4lp"/>
        </item>
        <item>
            <title><![CDATA[Kitchen Vastu: ಚಪ್ಪಲಿ ಧರಿಸಿ ಅಡುಗೆ ಮಾಡ್ತಿದ್ರೆ ಎಚ್ಚರ, ಜೇಬು ಖಾಲಿಯಾಗೋದಲ್ದೆ ಆಸ್ಪತ್ರೆ ಬೆಡ್ ಖಾಯಂ ಆಗ್ಬಹುದು]]></title>
            <link>https://kannada.asianetnews.com/gallery/vaastu/kitchen-vastu-tips-wearing-shoes-slippers-while-cooking-2h51t0a</link>
            <guid isPermaLink="true">https://kannada.asianetnews.com/gallery/vaastu/kitchen-vastu-tips-wearing-shoes-slippers-while-cooking-2h51t0a</guid>
            <pubDate>Tue, 17 Mar 2026 11:06:46 +0530</pubDate>
            <description><![CDATA[&lt;p&gt;ಭಾರತೀಯ ಸಂಸ್ಕೃತಿಯಲ್ಲಿ, ಅಡುಗೆಮನೆ, ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಹಿರಿಯರು ಅಡುಗೆ ಮನೆಗೆ ಚಪ್ಪಲಿ ಧರಿಸಿ ಹೋಗ್ತಿರಲಿಲ್ಲ. ಚಪ್ಪಲಿ ಧರಿಸಿ ಯಾಕೆ ಅಡುಗೆ ಮಾಡ್ಬಾರದು ಎಂಬುದಕ್ಕೆ ಕಾರಣ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkx4dn46pje1cj53z3cvqw3k,imgname-kitchen-slippers-1773725471878.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಸಂಸ್ಕೃತಿಯಲ್ಲಿ, ಅಡುಗೆಮನೆ, ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಹಿರಿಯರು ಅಡುಗೆ ಮನೆಗೆ ಚಪ್ಪಲಿ ಧರಿಸಿ ಹೋಗ್ತಿರಲಿಲ್ಲ. ಚಪ್ಪಲಿ ಧರಿಸಿ ಯಾಕೆ ಅಡುಗೆ ಮಾಡ್ಬಾರದು ಎಂಬುದಕ್ಕೆ ಕಾರಣ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಡುಗೆ ಮನೆ ಕೇವಲ ಅಡುಗೆ ಮಾಡುವ ಸ್ಥಳವಲ್ಲ. ಸಂಪತ್ತು ಮತ್ತು ಸಮೃದ್ಧಿಯ ದೇವತೆ ಅನ್ನಪೂರ್ಣ ವಾಸಸ್ಥಾನವೂ ಹೌದು. ಹೊರಗಿನಿಂದ ಕೊಳಕು ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಿ ಅಡುಗೆಮನೆಗೆ ಪ್ರವೇಶಿಸಿದಾಗ ಅನ್ನಪೂರ್ಣೆಗೆ ಅವಮಾನ ಮಾಡಿದಂತೆ. ಹಿಂದೂ ಧರ್ಮದ ಪ್ರಕಾರ, ದೇವರಿರುವ ಜಾಗಕ್ಕೆ ಚಪ್ಪಲಿ ಧರಿಸಿ ಬರಬಾರದು. ಅಡುಗೆ ಮನೆಗೆ ಚಪ್ಪಲಿ ಧರಿಸಿ ಬರೋದಲ್ದೆ ಅಡುಗೆಯನ್ನು ಚಪ್ಪಲಿ ಧರಿಸಿ ಮಾಡಿದ್ರೆ ತಾಯಿಗೆ ಅವಮಾನ ಮಾಡಿದಂತೆ. ಇದ್ರಿಂದ ತಾಯಿ ಕೋಪಗೊಳ್ಳುತ್ತಾಳೆ.&lt;/p&gt;&lt;img&gt;&lt;p&gt;ವಾಸ್ತು ರಾಜವಲ್ಲಭ ಮತ್ತು ಸಮರಂಗ ಸೂತ್ರಧಾರದಂತಹ ಪ್ರಾಚೀನ ವಾಸ್ತು ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ. ಮನೆಯ ಎರಡು ಜಾಗವನ್ನು ಸದಾ ಶುದ್ಧವಾಗಿಡಬೇಕೆಂದು ಈ ಎರಡೂ ಶಾಸ್ತ್ರಗಳಲ್ಲಿ ಹೇಳಲಾಗಿದೆ. ದೇವರ ಮನೆ ಮತ್ತು ಅಡುಗೆಮನೆಯಲ್ಲಿ ಸ್ವಚ್ಛತೆ, ಶುದ್ಧತೆ ಮುಖ್ಯ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುವಿನ ಪ್ರಭಾವ ಶೂಗಳು ಮತ್ತು ಚಪ್ಪಲಿಗಳೊಂದಿಗೆ ಸಂಬಂಧಿಸಿದೆ. ಈ ನಕಾರಾತ್ಮಕ ಶಕ್ತಿಯು ಅಡುಗೆಮನೆಯನ್ನು ತಲುಪಿದಾಗ, ಅದು ಆಹಾರದ ಮೂಲಕ ಇಡೀ ಕುಟುಂಬವನ್ನು ಪ್ರವೇಶಿಸುತ್ತದೆ. ಇದು ಹೆಚ್ಚಿದ ಅನಾರೋಗ್ಯ, ಅನಗತ್ಯ ಜಗಳಗಳು ಮತ್ತು ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರ ಮಾತ್ರವಲ್ಲ ಧಾರ್ಮಿಕ ದೃಷ್ಟಿಕೋನದಿಂದಲೂ, ಈ ಅಭ್ಯಾಸವು ತುಂಬಾ ಹಾನಿಕಾರಕವಾಗಿದೆ. ಹೊರಗೆ ಚಪ್ಪಲಿ ಧರಿಸಿ ಓಡಾಡುವ ನಾವು, ಹೊರಗಿನ ಕೊಳಕು, ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಮನೆಗೆ ತರ್ತೇವೆ. ಅದೇ ಚಪ್ಪಲಿಯನ್ನು ಅಡುಗೆ ಮನೆಯಲ್ಲಿ ಬಳಸಿದಾಗ ಕೊಳಕು ನಮ್ಮ ಆಹಾರವನ್ನು ಸೇರಬಹುದು. ಇದರಿಂದ ಕುಟುಂಬದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಕೆಲವೊಮ್ಮೆ, ಚಳಿಗಾಲದಲ್ಲಿ ನೆಲ ತುಂಬಾ ತಂಪಾಗಿರುತ್ತದೆ. ಇಂಥ ಸಂದರ್ಭದಲ್ಲಿ ಚಪ್ಪಲಿ ಧರಿಸುವುದು ಅನಿವಾರ್ಯವಾಗುತ್ತದೆ. ಕೀಲು ನೋವಿನಿಂದ ಬಳುವವರಿಗೆ ವೈದ್ಯರೇ ಚಪ್ಪಲಿ ಧರಿಸುವ ಸಲಹೆ ನೀಡ್ತಾರೆ. ಆಗ ಚಪ್ಪಲಿಯಿಂದ ದೂರ ಇರಲು ಸಾಧ್ಯವಿಲ್ಲ. ಚಪ್ಪಲಿ ಧರಿಸಿ ಅಡುಗೆ ಮಾಡುವುದು ಅನಿವಾರ್ಯವಾಗುತ್ತದೆ.&lt;/p&gt;&lt;img&gt;&lt;p&gt;ಚಪ್ಪಲಿ ಧರಿಸೋದು ಅನಿವಾರ್ಯ ಎನ್ನುವವರು ಸರಳ ವಾಸ್ತು ರೂಲ್ಸ್ ಫಾಲೋ ಮಾಡ್ಬಹುದು. ಮನೆ ಹೊರಗೆ ಧರಿಸುವ ಚಪ್ಪಲಿ, ಶೂ ಮನೆಯೊಳಗೆ ತರಬೇಡಿ. ಮನೆಯೊಳಗೆ ಅದ್ರಲ್ಲೂ ಅಡುಗೆಮನೆಗೆ ಪ್ರತ್ಯೇಕವಾದ, ಸ್ವಚ್ಛವಾದ ಬಟ್ಟೆ ಅಥವಾ ಉಣ್ಣೆಯ ಚಪ್ಪಲಿ ಬಳಸಿ. ಅದೇ ಚಪ್ಪಲಿ ಧರಿಸಿ ಎಂದಿಗೂ ಮನೆಯಿಂದ ಹೊರಗೆ ಅಥವಾ ಬಾತ್ ರೂಮಿಗೆ ಹೋಗ್ಬೇಡಿ. ಅಡುಗೆಮನೆಯು ಅನ್ನಪೂರ್ಣ ದೇವತೆ ಮತ್ತು ಅಗ್ನಿ ದೇವರ ನೆಲೆಯಾಗಿದೆ. ಅಶುದ್ಧ ಪಾದಗಳೊಂದಿಗೆ ಅಲ್ಲಿಗೆ ಪ್ರವೇಶಿಸುವುದು ಸೂಕ್ತವಲ್ಲ. ನೀವು ಕೊಳಕು ಚಪ್ಪಲಿಯನ್ನು ಅಡುಗೆ ಮನೆಗೆ ತಂದ್ರೆ ನಕಾರಾತ್ಮಕ ಶಕ್ತಿ ಪ್ರವೇಶ ಆಗೋದಲ್ದೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/vaastu/kitchen-vastu-tips-wearing-shoes-slippers-while-cooking-2h51t0a"/>
        </item>
        <item>
            <title><![CDATA[ಈ ಸಿಂಪಲ್ ಫೆಂಗ್ ಶುಯಿ ಟ್ರಿಕ್ಸ್ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುತ್ತೆ]]></title>
            <link>https://kannada.asianetnews.com/gallery/vaastu/feng-shui-tips-must-try-to-increase-bank-balance-2qfs4ul</link>
            <guid isPermaLink="true">https://kannada.asianetnews.com/gallery/vaastu/feng-shui-tips-must-try-to-increase-bank-balance-2qfs4ul</guid>
            <pubDate>Wed, 08 Apr 2026 15:04:27 +0530</pubDate>
            <description><![CDATA[&lt;p&gt;Feng Shui Tips: ನಿಮ್ಮ ಮನೆಯ ಒಂದು ಮೂಲೆಯು ನಿಮ್ಮ ಸಂಪತ್ತು ಅಥವಾ ಬಡತನವನ್ನು ನಿರ್ಧರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಫೆಂಗ್ ಶೂಯಿ ಪ್ರಕಾರ, ದಿಕ್ಕಿನಲ್ಲಿನ ಸಣ್ಣ ಬದಲಾವಣೆಯು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ. ಹಾಗಿದ್ರೆ ಆ ಫೆಂಗ್ ಶುಯಿ ಟ್ರಿಕ್ಸ್ ಯಾವುದು ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jvm4vgyxysy2t1pzzdv3j2v5,imgname-money-1747654132701.jpg" type="image/jpeg" height="390" width="690"/>
            <content:encoded><![CDATA[&lt;p&gt;Feng Shui Tips: ನಿಮ್ಮ ಮನೆಯ ಒಂದು ಮೂಲೆಯು ನಿಮ್ಮ ಸಂಪತ್ತು ಅಥವಾ ಬಡತನವನ್ನು ನಿರ್ಧರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಫೆಂಗ್ ಶೂಯಿ ಪ್ರಕಾರ, ದಿಕ್ಕಿನಲ್ಲಿನ ಸಣ್ಣ ಬದಲಾವಣೆಯು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ. ಹಾಗಿದ್ರೆ ಆ ಫೆಂಗ್ ಶುಯಿ ಟ್ರಿಕ್ಸ್ ಯಾವುದು ನೋಡೋಣ.&lt;/p&gt;&lt;img&gt;&lt;p&gt;ಕಠಿಣ ಪರಿಶ್ರಮದ ಹೊರತಾಗಿಯೂ, ಕೆಲವೊಮ್ಮೆ ಸಂಪತ್ತು, ಆಸ್ತಿ ಮಾಡಲು ಸಾಧ್ಯವಾಗೋದಿಲ್ಲ, ಅಥವಾ ವೆಚ್ಚಗಳು ಆದಾಯವನ್ನು ಮೀರಲು ಪ್ರಾರಂಭಿಸುತ್ತವೆ. ಫೆಂಗ್ ಶೂಯಿಯ ಚೀನೀ ವಾಸ್ತುಶಾಸ್ತ್ರದಲ್ಲಿ, ಈ ಸಮಸ್ಯೆಗಳಿಗೆ ಪರಿಹಾರವು ಶಕ್ತಿಯನ್ನು ಸಮತೋಲನಗೊಳಿಸುವುದರಲ್ಲಿದೆ ಎಂದು ತಿಳಿಸಿದೆ. ಫೆಂಗ್ ಶೂಯಿ ಪ್ರಕಾರ, ನಿಮ್ಮ ಮನೆ ಅಥವಾ ಕಚೇರಿಯ ಒಂದು ನಿರ್ದಿಷ್ಟ ಪ್ರದೇಶವು ನಿಮ್ಮ ಆರ್ಥಿಕ ಅದೃಷ್ಟವನ್ನು ನಿಯಂತ್ರಿಸುತ್ತದೆ. ಇದನ್ನು &quot;ಮನಿ ಕಾರ್ನರ್&quot; ಅಥವಾ &quot;ಸಂಪತ್ತಿನ ಪ್ರದೇಶ&quot; ಎಂದು ಕರೆಯಲಾಗುತ್ತದೆ. ಕೆಲವು ಸರಳ ಟ್ರಿಕ್ ಗಳ ಮೂಲಕ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ನೀವು ಈ ಮೂಲೆಯನ್ನು ಹೇಗೆ ಸಕ್ರಿಯಗೊಳಿಸಬಹುದು ನೋಡೋಣ.&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಪ್ರಕಾರ, ನಿಮ್ಮ ಮನೆ, ವಾಸದ ಕೋಣೆ ಅಥವಾ ಮಲಗುವ ಕೋಣೆಯ ಆಗ್ನೇಯ ಮೂಲೆಯು ಸಂಪತ್ತು ಮತ್ತು ಸಮೃದ್ಧಿಯ ಪ್ರದೇಶವಾಗಿದೆ. ಈ ಮೂಲೆಯು ನಿಮ್ಮ ಜೀವನದಲ್ಲಿ ಅವಕಾಶಗಳು ಮತ್ತು ಸಂಪತ್ತಿನ ಸಂಗ್ರಹಣೆಗೆ ನೇರವಾಗಿ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಶಕ್ತಿಯು ನಿರ್ಬಂಧಿಸಲ್ಪಟ್ಟರೆ, ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಮರ ಮತ್ತು ಹಸಿರು ಗಿಡ:&lt;/strong&gt;&lt;/p&gt;&lt;p&gt;ಫೆಂಗ್ ಶೂಯಿಯಲ್ಲಿ, ಆಗ್ನೇಯ ದಿಕ್ಕಲ್ಲಿ ಸಸ್ಯಗಳನ್ನು ಇಡುವುದು ಈ ಶಕ್ತಿಯನ್ನು ಹೆಚ್ಚಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಜೇಡ್ ಸಸ್ಯಗಳು, ಮನಿ ಪ್ಲ್ಯಾಂಟ್ ಅಥವಾ ಲಕ್ಕಿ ಬ್ಯಾಂಬೂ ಇಲ್ಲಿ ನೆಡಬಹುದು. ಸಸ್ಯಗಳು ಆರೋಗ್ಯಕರ ಮತ್ತು ಸೊಂಪಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಒಣಗುತ್ತಿರುವ ಸಸ್ಯಗಳು ಕ್ಷೀಣಿಸುತ್ತಿರುವ ಆರ್ಥಿಕತೆಯನ್ನು ಸೂಚಿಸುತ್ತವೆ, ಆದ್ದರಿಂದ ಅವುಗಳ ಆರೈಕೆ ಅತ್ಯಗತ್ಯ.&lt;/p&gt;&lt;img&gt;&lt;p&gt;ಫೆಂಗ್ ಶೂಯಿಯಲ್ಲಿ ನೀರನ್ನು ಶುದ್ಧ ಶಕ್ತಿ ಮತ್ತು ಸಂಪತ್ತಿನ ಹರಿವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಣದ ಮೂಲೆಯಲ್ಲಿ ಸಣ್ಣ ನೀರಿನ ಕಾರಂಜಿ ಇಡುವುದು ತುಂಬಾ ಶುಭ. ನೀರಿನ ಹರಿವು ಹೊರಕ್ಕೆ ಅಲ್ಲ, ಒಳಮುಖವಾಗಿರುವಂತೆ ನೋಡಿಕೊಳ್ಳಿ. ಹೊರಗೆ ಬೀಳುವ ನೀರು ಹೆಚ್ಚುತ್ತಿರುವ ವೆಚ್ಚವನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಬಣ್ಣಗಳು ನಮ್ಮ ಮಾನಸಿಕ ಮತ್ತು ಆರ್ಥಿಕ ಯೋಗಕ್ಷೇಮದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ನೇರಳೆ, ಕಡು ಹಸಿರು ಮತ್ತು ನೀಲಿ ಬಣ್ಣಗಳನ್ನು ಸಂಪತ್ತಿನ ಪ್ರದೇಶಕ್ಕೆ ಉತ್ತಮ ಬಣ್ಣಗಳೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶೂಯಿಯಲ್ಲಿ ನೇರಳೆ ಬಣ್ಣವನ್ನು ರಾಜಮನೆತನ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆ ದಿಕ್ಕಿನಲ್ಲಿ ಪೈಂಟ್ ಮಾಡಲು ಸಾಧ್ಯವಾಗದಿದ್ದರೆ, ನೀವು ಈ ಬಣ್ಣಗಳಲ್ಲಿ ಕುಶನ್&zwnj;ಗಳು, ಪರದೆಗಳು ಅಥವಾ ಕಲಾಕೃತಿಗಳನ್ನು ಸಹ ಇರಿಸಬಹುದು.&lt;/p&gt;&lt;img&gt;&lt;p&gt;ಸ್ಫಟಿಕಗಳು ಶಕ್ತಿಯನ್ನು ಸಂಗ್ರಹಿಸುತ್ತವೆ ಮತ್ತು ರವಾನಿಸುತ್ತವೆ. ಸಿಟ್ರಿನ್ ಅನ್ನು &quot;ಮರ್ಚಂಟ್ ಸ್ಟೋನ್&quot; ಎಂದು ಕರೆಯಲಾಗುತ್ತದೆ. ಇದನ್ನು ಮನಿ ಕಾರ್ನರ್ ನಲ್ಲಿ ಇಡುವುದರಿಂದ ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಹೆಚ್ಚು ಲಾಭವಾಗುತ್ತದೆ. ಅಲ್ಲದೆ, ಈ ಮೂಲೆಯನ್ನು ಚೆನ್ನಾಗಿ ಬೆಳಗಿಸಿ. ಕತ್ತಲೆಯಾದ ಮೂಲೆಯು ಆರ್ಥಿಕ ನಷ್ಟವನ್ನು ಆಹ್ವಾನಿಸುತ್ತದೆ, ಆದರೆ ಸುಂದರವಾದ ದೀಪದ ಬೆಳಕು ಯಶಸ್ಸಿನ ಹಾದಿಯನ್ನು ಬೆಳಗಿಸುತ್ತದೆ.&lt;/p&gt;&lt;img&gt;&lt;p&gt;ಫೆಂಗ್ ಶೂಯಿಯ ಅತ್ಯಂತ ಮೂಲಭೂತ ತತ್ವವೆಂದರೆ ಸ್ವಚ್ಛತೆ. ನಿಮ್ಮ ಹಣದ ಮೂಲೆಯು ಜಂಕ್, ಹಳೆಯ ಹರಿದ ಫೈಲ್&zwnj;ಗಳು ಅಥವಾ ಧೂಳಿನಿಂದ ತುಂಬಿದ್ದರೆ, ಧನಾತ್ಮಕ ಶಕ್ತಿಯ ಹರಿವು ನಿರ್ಬಂಧಿಸಲ್ಪಡುತ್ತದೆ. ಈ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿಡಿ ಮತ್ತು ಯಾವುದೇ ಮುರಿದ ವಸ್ತುಗಳು ಅಥವಾ ಕಸದ ಬುಟ್ಟಿಗಳನ್ನು ತಪ್ಪಿಯೂ ಆ ಜಾಗದಲ್ಲಿ ಇರಿಸಬೇಡಿ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/feng-shui-tips-must-try-to-increase-bank-balance-2qfs4ul"/>
        </item>
        <item>
            <title><![CDATA[ಈ ಗಿಡ ಮನೆಯಲ್ಲಿ ಬೆಳೆಸಿದ್ರೆ ನಿಮಗೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ!]]></title>
            <link>https://kannada.asianetnews.com/webstories/vaastu/avoid-these-plants-at-home-according-to-vastu-to-prevent-financial-loss-2z11vzx</link>
            <guid isPermaLink="true">https://kannada.asianetnews.com/webstories/vaastu/avoid-these-plants-at-home-according-to-vastu-to-prevent-financial-loss-2z11vzx</guid>
            <pubDate>Wed, 11 Mar 2026 19:18:24 +0530</pubDate>
            <description><![CDATA[&lt;p&gt;Vastu Tips for Plants: ಮನೆಯಲ್ಲಿ ಗಿಡಗಳನ್ನು ಬೆಳೆಸುವುದು ಮನಸ್ಸಿಗೆ ಶಾಂತಿ ನೀಡುತ್ತದೆ ನಿಜ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಗಿಡಗಳು ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಇವುಗಳನ್ನು ಮನೆಯಲ್ಲಿ ನೆಟ್ಟರೆ ಹಣದ ತೊಂದರೆ ಮತ್ತು ಕುಟುಂಬದಲ್ಲಿ ಕಲಹ ಉಂಟಾಗಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0y691q44x7mvwkbk3yg2xbf,imgname-fotojet--39--1753359877860.jpg" type="image/jpeg" height="390" width="690"/>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/vaastu/avoid-these-plants-at-home-according-to-vastu-to-prevent-financial-loss-2z11vzx"/>
        </item>
        <item>
            <title><![CDATA[ಎಷ್ಟೇ ಪೂಜೆ, ಪ್ರಾರ್ಥನೆ ಮಾಡಿದ್ರೂ ಹಣ ನಿಲ್ಲುತ್ತಿಲ್ವಾ? ದೇವರ ಕೋಣೆಯಲ್ಲಿ ಈ ಬದಲಾವಣೆ ಮಾಡಿದ್ರೆ ಮಾತ್ರ ಅದೃಷ್ಟ!]]></title>
            <link>https://kannada.asianetnews.com/gallery/astrology/vastu-tips-what-should-a-pooja-room-look-like-to-attract-good-luck-3hhycup</link>
            <guid isPermaLink="true">https://kannada.asianetnews.com/gallery/astrology/vastu-tips-what-should-a-pooja-room-look-like-to-attract-good-luck-3hhycup</guid>
            <pubDate>Wed, 22 Apr 2026 14:56:54 +0530</pubDate>
            <description><![CDATA[&lt;p&gt;Pooja Room Tips: ಎಷ್ಟೇ ಪೂಜೆ, ಪ್ರಾರ್ಥನೆ ಮಾಡಿದ್ರೂ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೇ? ಕೈಗೆ ಬಂದ ದುಡ್ಡು ಖರ್ಚಾಗಿ ಹೋಗುತ್ತಿದೆಯೇ? ಇದಕ್ಕೆಲ್ಲ ನಿಮ್ಮ ಪೂಜಾ ಕೋಣೆಯಲ್ಲಿ ನೀವು ತಿಳಿಯದೆ ಮಾಡುವ ಸಣ್ಣಪುಟ್ಟ ತಪ್ಪುಗಳೇ ಕಾರಣವಿರಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3t9ggntqztyx6bn96jd35td,imgname-pooja-room-1756450276026.jpg" type="image/jpeg" height="390" width="690"/>
            <content:encoded><![CDATA[&lt;p&gt;Pooja Room Tips: ಎಷ್ಟೇ ಪೂಜೆ, ಪ್ರಾರ್ಥನೆ ಮಾಡಿದ್ರೂ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೇ? ಕೈಗೆ ಬಂದ ದುಡ್ಡು ಖರ್ಚಾಗಿ ಹೋಗುತ್ತಿದೆಯೇ? ಇದಕ್ಕೆಲ್ಲ ನಿಮ್ಮ ಪೂಜಾ ಕೋಣೆಯಲ್ಲಿ ನೀವು ತಿಳಿಯದೆ ಮಾಡುವ ಸಣ್ಣಪುಟ್ಟ ತಪ್ಪುಗಳೇ ಕಾರಣವಿರಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮನೆಯಲ್ಲಿ ದುಡ್ಡುಕಾಸು ಚೆನ್ನಾಗಿರಬೇಕು, ಲಕ್ಷ್ಮಿ ಕೃಪೆ ಇರಬೇಕು ಅಂತ ನಾವೆಲ್ಲ ಮಹಾಲಕ್ಷ್ಮಿ, ಕುಬೇರನ ಪೂಜೆ ಮಾಡ್ತೀವಿ. ಆದ್ರೆ, ಎಷ್ಟೇ ದುಡಿದ್ರೂ ಕೆಲವರ ಮನೆಯಲ್ಲಿ ಹಣ ನಿಲ್ಲೋದೇ ಇಲ್ಲ. ಇದಕ್ಕೆ ಜಾತಕ ದೋಷ ಅಥವಾ ವಾಸ್ತು ದೋಷ ಮಾತ್ರ ಕಾರಣ ಅಲ್ಲ, ನಾವು ಪ್ರತಿದಿನ ದೀಪ ಹಚ್ಚುವ ಪೂಜಾ ಕೋಣೆಯಲ್ಲಿ ಮಾಡುವ ಸಣ್ಣ ತಪ್ಪು ಕೂಡ ನಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತೆ.&amp;nbsp;&lt;/p&gt;&lt;p&gt;ಮನೆಯಲ್ಲಿ ಅದೃಷ್ಟ ಮತ್ತು ಸಂಪತ್ತು ಹೆಚ್ಚಾಗಲು, ಲಕ್ಷ್ಮಿ ಕಟಾಕ್ಷ ಸದಾ ಇರಲು ನಮ್ಮ ಪೂಜಾ ಕೋಣೆಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿದರೆ ಸಾಕು. ನಿಮ್ಮ ಪೂಜಾ ಕೋಣೆಯಲ್ಲೂ ಈ ಬದಲಾವಣೆ ಮಾಡಿ ನೋಡಿ, ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಗಮನಿಸುವಿರಿ&lt;/p&gt;&lt;img&gt;&lt;p&gt;ಮಹಾಲಕ್ಷ್ಮಿಯ ಅಂಶ ತುಂಬಿರುವ ಒಂದು ವಸ್ತು ಅಂದ್ರೆ 'ಕಲ್ಲುಪ್ಪು'. ಒಂದು ಸಣ್ಣ ಗಾಜಿನ ಅಥವಾ ಪಿಂಗಾಣಿ ಬಟ್ಟಲಲ್ಲಿ ಕಲ್ಲುಪ್ಪನ್ನು ತುಂಬಿ, ಅದರ ಮಧ್ಯದಲ್ಲಿ ಒಂದು ನಿಂಬೆಹಣ್ಣನ್ನು ಇಡಬೇಕು. ವಾರಕ್ಕೊಮ್ಮೆ ಆ ಉಪ್ಪನ್ನು ಹರಿಯುವ ನೀರಿನಲ್ಲಿ ಕರಗಿಸಿ, ಹೊಸ ಉಪ್ಪನ್ನು ತುಂಬಿದರೆ, ಮನೆಯಲ್ಲಿ ಅನಾವಶ್ಯಕ ಜಗಳಗಳು ಕಡಿಮೆಯಾಗುತ್ತವೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಕಡಿಮೆಯಾಗಿ, ಅದೃಷ್ಟದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.&lt;/p&gt;&lt;img&gt;&lt;p&gt;ದೀಪದ ಬತ್ತಿಯಲ್ಲಿ ಅಡಗಿದೆ ಕೋಟ್ಯಧಿಪತಿ ಯೋಗ&lt;/p&gt;&lt;p&gt;ದೀಪ ಹಚ್ಚುವಾಗ ನಾವು ಬಳಸುವ ಬತ್ತಿಗೂ ಒಂದೊಂದು ಗುಣವಿದೆ.&lt;/p&gt;&lt;p&gt;- ತಾವರೆ ದಂಟಿನ ಬತ್ತಿ: ಹಿಂದಿನ ಜನ್ಮದ ಪಾಪಗಳನ್ನು ನಿವಾರಿಸಿ, ಕುಲದೇವರ ಅನುಗ್ರಹವನ್ನು ತಂದುಕೊಡುತ್ತದೆ.&lt;/p&gt;&lt;p&gt;- ಬಾಳೆ ನಾರಿನ ಬತ್ತಿ: ತಿಳಿಯದೆ ಮಾಡಿದ ತಪ್ಪು ಮತ್ತು ಶಾಪಗಳನ್ನು ನಿವಾರಿಸುತ್ತದೆ.&lt;/p&gt;&lt;p&gt;- ಅರಿಶಿನ ಹತ್ತಿ ಬತ್ತಿ: ಇದು ಸಂಪತ್ತು ಹೆಚ್ಚಾಗಲು ಬಹಳ ಮುಖ್ಯ. ಇದು ನಿಂತುಹೋದ ಕೆಲಸಗಳನ್ನು ಯಶಸ್ವಿಗೊಳಿಸುತ್ತದೆ.&lt;/p&gt;&lt;img&gt;&lt;p&gt;ಪೂಜಾ ಕೋಣೆಯಲ್ಲಿ ಹಚ್ಚುವ ದೀಪದ ನೆರಳು, ದೇವರ ವಿಗ್ರಹ ಅಥವಾ ಫೋಟೋದ ಮೇಲೆ ಬೀಳಬಾರದು. చాలామంది ದೀಪವನ್ನು ವಿಗ್ರಹಕ್ಕೆ ತೀರಾ ಹತ್ತಿರ ಇಡುತ್ತಾರೆ. ಹಾಗೆ ಇಟ್ಟಾಗ ವಿಗ್ರಹದ ಮುಖ ನೆರಳಿನಲ್ಲಿ ಮರೆಯಾಗುತ್ತದೆ. ಇದು ಆ ಮನೆಯಲ್ಲಿ 'ಅಜ್ಞಾನ' ಅಂದರೆ ಕತ್ತಲೆಯನ್ನು ಉಂಟುಮಾಡುತ್ತದೆ. ದೀಪವನ್ನು ಸ್ವಲ್ಪ ದೂರ ಇಟ್ಟು, ಅದರ ಬೆಳಕು ವಿಗ್ರಹದ ಮೇಲೆ ಹರಡುವಂತೆ ಇಡುವುದೇ ಸರಿಯಾದ ವಿಧಾನ.&lt;/p&gt;&lt;img&gt;&lt;p&gt;ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ 11 ಗೋಮತಿ ಚಕ್ರಗಳು ಮತ್ತು 11 ಬಿಳಿ ಬಣ್ಣದ ಕವಡೆಗಳನ್ನು ಒಂದು ಹಳದಿ ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಇದು ಕುಬೇರನ ಖಜಾಂಚಿಯಂತೆ ಕೆಲಸ ಮಾಡುತ್ತದೆ. &quot;ಹಣ ಬರುತ್ತದೆ ಆದರೆ ನಿಲ್ಲುವುದಿಲ್ಲ&quot; ಎನ್ನುವವರಿಗೆ ಇದು ಅದ್ಭುತವನ್ನು ಮಾಡುತ್ತದೆ.&lt;/p&gt;&lt;img&gt;&lt;p&gt;ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಯಾವಾಗಲೂ ಒಂದು ಹಿತ್ತಾಳೆ ಬಟ್ಟಲಲ್ಲಿ ಪಚ್ಚೆ ಕರ್ಪೂರ ಮತ್ತು ಏಲಕ್ಕಿಯೊಂದಿಗೆ 5 ಒಂದು ರೂಪಾಯಿ ನಾಣ್ಯಗಳನ್ನು ಇಡಿ. ಇದು 'ಧನಾಕರ್ಷಣ' ಶಕ್ತಿಯನ್ನು ಸೆಳೆಯುತ್ತದೆ. ಈ ನಾಣ್ಯಗಳನ್ನು ಎಂದಿಗೂ ಖರ್ಚು ಮಾಡಬಾರದು. ಇದು ನಿಮ್ಮ ಮನೆಯಲ್ಲಿ ಹಣದ ಹರಿವನ್ನು ಕಾಂತದಂತೆ ಆಕರ್ಷಿಸುತ್ತದೆ.&lt;/p&gt;&lt;img&gt;&lt;p&gt;ದೇವತೆಗಳಿಗೆ ಮತ್ತು ಸಕಾರಾತ್ಮಕ ಶಕ್ತಿಗಳಿಗೆ ಸುವಾಸನೆ ಇರುವ ಸ್ಥಳಗಳು ಇಷ್ಟ. ಪೂಜಾ ಕೋಣೆಯಲ್ಲಿ ಯಾವಾಗಲೂ 'ವೆಟ್ಟಿವೇರ್' (ಲಾವಂಚ) ಅಥವಾ 'ಗಂಧದ ಪುಡಿ' ಬೆರೆಸಿದ ನೀರನ್ನು ಒಂದು ಪಾತ್ರೆಯಲ್ಲಿ ಇಡಿ. ಇದು ಕೋಣೆಯ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ಪ್ರಾರ್ಥನೆಯಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.&lt;/p&gt;&lt;p&gt;&lt;strong&gt;ಹಳದಿ ಬಟ್ಟೆಯ ಮ್ಯಾಜಿಕ್:&lt;/strong&gt;&lt;/p&gt;&lt;p&gt;ಶುಕ್ರವಾರದಂದು ಪೂಜಾ ಕೋಣೆಯಲ್ಲಿ ಒಂದು ಸಣ್ಣ ಹಳದಿ ಬಟ್ಟೆಯಲ್ಲಿ ಒಂದು ತುಂಡು ವಸಂಬು (ಬಜೆ), ಮೂರು ಕಾಳುಮೆಣಸು ಮತ್ತು ಒಂದು ಸಣ್ಣ ಕಲ್ಲುಪ್ಪು ಇಟ್ಟು ಗಂಟು ಕಟ್ಟಿ, ಹೊಸ್ತಿಲಿನ ಒಳಭಾಗದಲ್ಲಿ ನೇತುಹಾಕಿ. ಇದು ಸಕಾರಾತ್ಮಕ ಶಕ್ತಿಯನ್ನು 10 ಪಟ್ಟು ಹೆಚ್ಚಿಸುತ್ತದೆ. ಮನೆಯಲ್ಲಿ ಗಂಟೆ ಬಾರಿಸಿ ದೇವರ ಪೂಜೆ ಮಾಡುವಾಗ ನಮ್ಮ ಮೆದುಳಿನ ಆಲ್ಫಾ ಅಲೆಗಳನ್ನು ಉತ್ತೇಜಿಸಿ, ನಾವು ಕೇಳುವ ಕೋರಿಕೆಯನ್ನು ಬ್ರಹ್ಮಾಂಡಕ್ಕೆ ಅತಿ ವೇಗವಾಗಿ ತಲುಪಿಸುತ್ತದೆ.&lt;/p&gt;&lt;img&gt;&lt;p&gt;ಪೂಜಾ ಕೋಣೆಯಲ್ಲಿ ಬಲ ಮೂಲೆಯಲ್ಲಿ ಗಣಪತಿ ಇರಬೇಕು. ಮಧ್ಯದಲ್ಲಿ ನಿಮ್ಮ ಇಷ್ಟ ದೇವತೆ ಇರಬೇಕು. ಮರಣ ಹೊಂದಿದ ಹಿರಿಯರ ಫೋಟೋಗಳನ್ನು ಎಂದಿಗೂ ದೇವರ ಫೋಟೋಗಳೊಂದಿಗೆ ಇಡಬಾರದು. ಅವರನ್ನು ಪ್ರತ್ಯೇಕವಾಗಿ ದಕ್ಷಿಣ ದಿಕ್ಕಿನಲ್ಲಿ ಇಡುವುದು ಶ್ರೇಷ್ಠ.&lt;/p&gt;&lt;img&gt;&lt;p&gt;ಬೆಳಗ್ಗೆ ಸ್ನಾನ ಮುಗಿಸಿದ ನಂತರ, ಪೂಜಾ ಕೋಣೆಯಲ್ಲಿ ಒಂದು ವೀಳ್ಯದೆಲೆಯ ಮೇಲೆ ಸ್ವಲ್ಪ ಪಚ್ಚೆ ಕರ್ಪೂರವನ್ನು ಇಟ್ಟು ಹಚ್ಚಿ, ಅದನ್ನು ಮನೆ முழுவதும் ತೋರಿಸಿ, ಆ ಬೂದಿಯನ್ನು ಹಣೆಗೆ ಇಟ್ಟುಕೊಳ್ಳಿ. ಇದು ನಿಮ್ಮ ಸುತ್ತಲಿನ 'ಆರಾ' (Aura) ವನ್ನು ಶುದ್ಧೀಕರಿಸಿ, ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರುವಂತೆ ಮಾಡುತ್ತದೆ. ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ 'ಕನ್ನಡಿ'ಯೊಂದನ್ನು ಪೂರ್ವಕ್ಕೆ ಮುಖ ಮಾಡಿ ಇಟ್ಟರೆ, ಅದು ಎಲ್ಲಾ ವಾಸ್ತು ದೋಷಗಳನ್ನು ಪ್ರತಿಫಲಿಸಿ ಹೊರಹಾಕುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/astrology/vastu-tips-what-should-a-pooja-room-look-like-to-attract-good-luck-3hhycup"/>
        </item>
        <item>
            <title><![CDATA[Vastu Tips: ಗ್ಯಾಸ್ ಸಿಲಿಂಡರ್‌ ಇಲ್ಲ ಅಂದ್ರೆ ಮಾತ್ರ ಅಲ್ಲ, ಸರಿಯಾದ ಜಾಗದಲ್ಲಿ ಇಟ್ಟಿಲ್ಲಾಂದ್ರು ಬರುತ್ತೆ ಸಮಸ್ಯೆ!]]></title>
            <link>https://kannada.asianetnews.com/gallery/vaastu/vastu-tips-what-is-the-right-direction-to-keep-the-lpg-cylinder-6sp6ced</link>
            <guid isPermaLink="true">https://kannada.asianetnews.com/gallery/vaastu/vastu-tips-what-is-the-right-direction-to-keep-the-lpg-cylinder-6sp6ced</guid>
            <pubDate>Tue, 17 Mar 2026 16:38:27 +0530</pubDate>
            <description><![CDATA[&lt;p&gt;Vastu Tips: ಈ ಯುದ್ಧದ ನಡುವೆ ಗ್ಯಾಸ್ ಸಿಲಿಂಡರ್ ಉಳಿಸೋದು ಹೇಗೆ ಅಂತ ಯೋಚನೆ ಮಾಡ್ತಿದ್ದೀರಾ? ವಾಸ್ತು ಶಾಸ್ತ್ರದ ಪ್ರಕಾರ, ಎಲ್&zwnj;ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸೋದು ಕೂಡ ಮುಖ್ಯ. ಇದರಿಂದ ಮನೆಯೊಳಗೆ ಸಕಾರಾತ್ಮಕ ಶಕ್ತಿ ಮತ್ತು ಸಂತೋಷ, ಸಮೃದ್ಧಿ ಉಳಿಯುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkbkhtpqf364t9mv9jgqb45d,imgname-lpg-gas-1773137357526.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu Tips: ಈ ಯುದ್ಧದ ನಡುವೆ ಗ್ಯಾಸ್ ಸಿಲಿಂಡರ್ ಉಳಿಸೋದು ಹೇಗೆ ಅಂತ ಯೋಚನೆ ಮಾಡ್ತಿದ್ದೀರಾ? ವಾಸ್ತು ಶಾಸ್ತ್ರದ ಪ್ರಕಾರ, ಎಲ್&zwnj;ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸೋದು ಕೂಡ ಮುಖ್ಯ. ಇದರಿಂದ ಮನೆಯೊಳಗೆ ಸಕಾರಾತ್ಮಕ ಶಕ್ತಿ ಮತ್ತು ಸಂತೋಷ, ಸಮೃದ್ಧಿ ಉಳಿಯುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಸ್ರೇಲ್, ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ, ಭಾರತದ ಅನೇಕ ನಗರಗಳಲ್ಲಿ LPG ಗ್ಯಾಸ್ ಸಿಲಿಂಡರ್&zwnj;ಗಳ ಕೊರತೆಯಿದೆ. ಕೆಲವು ಸ್ಥಳಗಳಲ್ಲಿ, ಸಿಲಿಂಡರ್&zwnj;ಗಳು ಲಭ್ಯವಿಲ್ಲ, ಆದರೆ ಇತರ ಸ್ಥಳಗಳಲ್ಲಿ, ಬೆಲೆಗಳು ತೀವ್ರವಾಗಿ ಏರಿದ್ದು, ತೊಂದರೆ ಉಂಟುಮಾಡಿದೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವು ನಮ್ಮ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. LPG ಗ್ಯಾಸ್ ಸಿಲಿಂಡರ್ ಅನ್ನು ಇರಿಸಲು ವಾಸ್ತು ಶಾಸ್ತ್ರವು ಸರಿಯಾದ ದಿಕ್ಕನ್ನು ಸಹ ನಿರ್ದಿಷ್ಟಪಡಿಸುತ್ತದೆ. ಸರಿಯಾದ ದಿಕ್ಕಿನಲ್ಲಿ ಇರಿಸಲಾದ ಗ್ಯಾಸ್ ಸ್ಟೌವ್ ಮತ್ತು ಗ್ಯಾಸ್ ಸಿಲಿಂಡರ್ ಮನೆಗೆ ಸಮೃದ್ಧಿಯನ್ನು ತರುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, LPG ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಅನ್ನು ಇರಿಸಲು ಅತ್ಯಂತ ಸೂಕ್ತವಾದ ಸ್ಥಳವೆಂದರೆ ಆಗ್ನೇಯ ದಿಕ್ಕು (ಅಗ್ನಿ ಕೋನ). ಇದನ್ನು ಬೆಂಕಿಯ ಅಂಶದ ದಿಕ್ಕು ಎಂದು ಪರಿಗಣಿಸಲಾಗುತ್ತದೆ ಮತ್ತು ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಅನ್ನು ಇಲ್ಲಿ ಇಡುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.&lt;/p&gt;&lt;img&gt;&lt;p&gt;ಆಗ್ನೇಯದಲ್ಲಿ (ಅಗ್ನಿ ಕೋನ) ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರ್ ಇಡಲು ಸಾಧ್ಯವಾಗದಿದ್ದರೆ, ನೈಋತ್ಯ ಅಥವಾ ಪೂರ್ವವನ್ನು ಸಹ ಉತ್ತಮ ದಿಕ್ಕುಗಳೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ಸಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಮತ್ತು ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಗ್ಯಾಸ್ ಸಿಲಿಂಡರ್ ಅಥವಾ ಸ್ಟೌವ್ ಅನ್ನು ಎಂದಿಗೂ ಇಡಬಾರದು. ಈ ದಿಕ್ಕು ನೀರಿನ ಅಂಶಕ್ಕೆ ಸಂಬಂಧಿಸಿದೆ ಮತ್ತು ಇದು ನೀರು ಮತ್ತು ಬೆಂಕಿಯ ಅಂಶಗಳ ನಡುವೆ ಸಂಘರ್ಷವನ್ನು ಉಂಟುಮಾಡುತ್ತದೆ. ಇದು ಮನೆಯಲ್ಲಿ ತೊಂದರೆ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/vastu-tips-what-is-the-right-direction-to-keep-the-lpg-cylinder-6sp6ced"/>
        </item>
        <item>
            <title><![CDATA[ಈ ದಿಕ್ಕಿನಲ್ಲಿರುವ ಮನಿ ಪ್ಲಾಂಟ್ ಭಿಕ್ಷುಕನನ್ನು ಸಹ ಶ್ರೀಮಂತನನ್ನಾಗಿ ಮಾಡಬಹುದು, ಆದ್ರೆ ಈ 4 ತಪ್ಪು ಮಾಡ್ಬೇಡಿ]]></title>
            <link>https://kannada.asianetnews.com/gallery/vaastu/vastu-tips-for-money-plant-best-direction-and-common-mistakes-to-avoid-9bbrv9x</link>
            <guid isPermaLink="true">https://kannada.asianetnews.com/gallery/vaastu/vastu-tips-for-money-plant-best-direction-and-common-mistakes-to-avoid-9bbrv9x</guid>
            <pubDate>Sat, 21 Mar 2026 13:18:20 +0530</pubDate>
            <description><![CDATA[&lt;p&gt;&lt;strong&gt;Money Plant Vastu Tips Kannada:&lt;/strong&gt; ಮನಿ ಪ್ಲಾಂಟ್ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿಯನ್ನೂ ಹೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಹಣದ ಹರಿವು ಹೆಚ್ಚುತ್ತದೆ ಮತ್ತು ಸುಖ-ಸಮೃದ್ಧಿ ನೆಲೆಸುತ್ತದೆ. ಆದರೆ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. &amp;nbsp; &amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km7nkn4vg3s1jjj1xs3h0ym4,imgname-thumbnail--3--1774079038618.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Money Plant Vastu Tips Kannada:&lt;/strong&gt; ಮನಿ ಪ್ಲಾಂಟ್ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿಯನ್ನೂ ಹೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಹಣದ ಹರಿವು ಹೆಚ್ಚುತ್ತದೆ ಮತ್ತು ಸುಖ-ಸಮೃದ್ಧಿ ನೆಲೆಸುತ್ತದೆ. ಆದರೆ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. &amp;nbsp; &amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮನಿ ಪ್ಲಾಂಟ್ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುತ್ತದೆ. ವಾಸ್ತು ಪ್ರಕಾರ ಈ ಗಿಡಕ್ಕೆ ವಿಶೇಷ ಸ್ಥಾನವಿದೆ. ಇದು ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಕೆಟ್ಟ ದೃಷ್ಟಿಯಿಂದ ಮನೆಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಆದರೆ ಇದನ್ನು ಸರಿಯಾದ ದಿಕ್ಕಿನಲ್ಲಿಡದಿರುವುದರಿಂದ ಆರ್ಥಿಕ ನಷ್ಟವೂ ಉಂಟಾಗಬಹುದು.&lt;/p&gt;&lt;img&gt;&lt;p&gt;&lt;strong&gt;ಈಶಾನ್ಯ ದಿಕ್ಕು (North-East)&lt;/strong&gt;ಮನೆಯ ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಎಂದಿಗೂ ಇಡಬೇಡಿ. ಈ ದಿಕ್ಕಿನ ಅಧಿಪತಿ ದೇವಗುರು ಬೃಹಸ್ಪತಿ. ಆದರೆ ಮನಿ ಪ್ಲಾಂಟ್ ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದು. ಜ್ಯೋತಿಷ್ಯದ ಪ್ರಕಾರ ಬೃಹಸ್ಪತಿ ಮತ್ತು ಶುಕ್ರ ಪರಸ್ಪರ ವಿರೋಧಿಗಳಾದ್ದರಿಂದ ಈ ದಿಕ್ಕಿನಲ್ಲಿ ಗಿಡವಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಸಂಕಷ್ಟಗಳು ಎದುರಾಗುತ್ತವೆ.&lt;/p&gt;&lt;img&gt;&lt;p&gt;ಈ ದಿಕ್ಕುಗಳಲ್ಲಿ ಮನಿ ಪ್ಲಾಂಟ್ ಇಡುವುದು ಕೂಡ ಅಶುಭ. ಇದು ಅನಗತ್ಯ ಖರ್ಚುಗಳನ್ನು ಹೆಚ್ಚಿಸುತ್ತದೆ, ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತದೆ ಮತ್ತು ಕುಟುಂಬದ ಸದಸ್ಯರ ನಡುವೆ ಮನಸ್ತಾಪಕ್ಕೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆಯ ಆಗ್ನೇಯ ದಿಕ್ಕಿನಲ್ಲಿ (South-East) ಇಡಬೇಕು. ಇದನ್ನು 'ಅಗ್ನಿ ಕೋನ' ಎಂದೂ ಕರೆಯುತ್ತಾರೆ. ಈ ದಿಕ್ಕಿನ ಅಧಿಪತಿ ಗಣೇಶ ಮತ್ತು ಗ್ರಹ ಶುಕ್ರ. ಈ ದಿಕ್ಕಿನಲ್ಲಿ ಗಿಡವಿದ್ದರೆ ಸುಖ-ಸಮೃದ್ಧಿ ಹೆಚ್ಚುವುದಲ್ಲದೆ ಆರ್ಥಿಕವಾಗಿ ಅದ್ಭುತ ಲಾಭಗಳು ಸಿಗುತ್ತವೆ.&lt;/p&gt;&lt;img&gt;&lt;p&gt;&lt;strong&gt;ಎಂದಿಗೂ ಒಣಗಬಾರದು: &lt;/strong&gt;ಒಂದು ವೇಳೆ ಎಲೆಗಳು ಒಣಗುತ್ತಿದ್ದರೆ ಅವುಗಳನ್ನು ತಕ್ಷಣವೇ ತೆಗೆದುಹಾಕಿ.ಸಮಯಕ್ಕೆ ಸರಿಯಾಗಿ ನೀರು: ಗಿಡ ಆರೋಗ್ಯವಾಗಿರಲು ಮತ್ತು ಹಸಿರಾಗಿರಲು ಕಾಲಕಾಲಕ್ಕೆ ನೀರು ಹಾಕುವುದು ಅವಶ್ಯಕ.&lt;strong&gt;ನೆಲಕ್ಕೆ ತಾಗಬಾರದು: &lt;/strong&gt;ಮನಿ ಪ್ಲಾಂಟ್ ವೇಗವಾಗಿ ಬೆಳೆಯುವ ಗಿಡ. ಇದರ ಬಳ್ಳಿಗಳು ಕೆಳಗೆ ನೆಲದ ಕಡೆಗೆ ಹರಡದಂತೆ ನೋಡಿಕೊಳ್ಳಿ.&lt;strong&gt;ಮೇಲ್ಮುಖ ಬೆಳವಣಿಗೆ:&lt;/strong&gt; ಗಿಡದ ಬಳ್ಳಿಗಳು ಮತ್ತು ಎಲೆಗಳು ಯಾವಾಗಲೂ ಮೇಲ್ಮುಖವಾಗಿ (ಮೇಲಕ್ಕೆ) ಬೆಳೆಯುತ್ತಿದ್ದರೆ ಅದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರವನ್ನು ಹೆಚ್ಚಿಸುತ್ತದೆ.&amp;nbsp;&lt;/p&gt;&lt;img&gt;&lt;p&gt;ಮನಿ ಪ್ಲಾಂಟ್ ಅನ್ನು ಸಾಧ್ಯವಾದಷ್ಟು 'ಮಣ್ಣಿನ ಕುಂಡ' ಅಥವಾ 'ನೀಲಿ ಬಣ್ಣದ ಗಾಜಿನ ಬಾಟಲಿ'ಯಲ್ಲಿ ಇರಿಸಿ. ಇದು ಅದರ ವಾಸ್ತು ಫಲಿತಾಂಶವನ್ನು ಇನ್ನು ಹೆಚ್ಚಿಸುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/vastu-tips-for-money-plant-best-direction-and-common-mistakes-to-avoid-9bbrv9x"/>
        </item>
        <item>
            <title><![CDATA[ಗಂಟೆ ತೋರಿಸೋ ಗಡಿಯಾರ ಜೀವನದ ದಿಕ್ಕು ಬದಲಿಸ್ಬಹುದು, ಗೋಡೆಗೆ ನೇತು ಹಾಕುವಾಗ ಎಚ್ಚರ]]></title>
            <link>https://kannada.asianetnews.com/gallery/astrology/feng-shui-tips-best-and-right-direction-of-wall-clock-for-good-luck-bad-luck-ab3svhe</link>
            <guid isPermaLink="true">https://kannada.asianetnews.com/gallery/astrology/feng-shui-tips-best-and-right-direction-of-wall-clock-for-good-luck-bad-luck-ab3svhe</guid>
            <pubDate>Thu, 09 Apr 2026 19:24:23 +0530</pubDate>
            <description><![CDATA[&lt;p&gt;ಗಡಿಯಾರ ಬರೀ ಗಂಟೆ ತೋರಿಸೋದಿಲ್ಲ. ಗೋಡೆ ಮೇಲಿರುವ ಗಡಿಯಾರ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸರಿಯಾದ ದಿಕ್ಕಿಗೆ ಗಡಿಯಾರ ಹಾಕ್ದೆ ಹೋದ್ರೆ ಸಮಸ್ಯೆ ಬೆನ್ನು ಹತ್ತೋದು ನಿಶ್ಚಿತ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kns81chsxm3cjg742kz64r87,imgname-clock-astrology-1775742530105.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಡಿಯಾರ ಬರೀ ಗಂಟೆ ತೋರಿಸೋದಿಲ್ಲ. ಗೋಡೆ ಮೇಲಿರುವ ಗಡಿಯಾರ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸರಿಯಾದ ದಿಕ್ಕಿಗೆ ಗಡಿಯಾರ ಹಾಕ್ದೆ ಹೋದ್ರೆ ಸಮಸ್ಯೆ ಬೆನ್ನು ಹತ್ತೋದು ನಿಶ್ಚಿತ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಗಡಿಯಾರ ಈಗ ಫ್ಯಾಷನ್ ಆಗಿದೆ. ಜನರು ಸಮಯ ನೋಡೋಕೆ ಮಾತ್ರವಲ್ಲ ಮನೆ ಸೌಂದರ್ಯ ಹೆಚ್ಚಿಸೋಕೆ ಇದನ್ನು ಗೋಡೆಗೆ ನೇತು ಹಾಕ್ತಾರೆ. ಇಂಟಿರಿಯರ್ ಡಿಸೈನ್ ಚೆನ್ನಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಸುಂದರವಾಗಿ ಕಾಣುವ ಜಾಗವನ್ನು ಗಡಿಯಾರ ಅಲಂಕರಿಸುತ್ತೇ ವಿನಃ ಸೂಕ್ತ ಜಾಗವನ್ನಲ್ಲ. ಗಡಿಯಾರ ಗಂಟೆ ತೋರಿಸುವ ಜೊತೆಗೆ ಜೀವನದ ದಾರಿ ತೋರಿಸುತ್ತೆ. ಯಾವ ದಿಕ್ಕಿನಲ್ಲಿ ಗಡಿಯಾರ ಇಟ್ರೆ ಸೂಕ್ತ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರಬೇಕು.&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಪ್ರಕಾರ ಗೋಡೆ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡೋದ್ರಿಂದ ಸಕಾರಾತ್ಮಕ ಪರಿಣಾಮಗಳನ್ನು ನೋಡಬಹುದು. ಜೀವನದಲ್ಲಿ ಯಶಸ್ಸನ್ನು ಕಾಣ್ಬಹುದು. ಕುಟುಂಬದಲ್ಲಿ ಶಾಂತಿ ನೆಲೆಸಲು, ಆರೋಗ್ಯ ವೃದ್ಧಿಗೆ ಗಡಿಯಾರದ ದಿಕ್ಕು ಮಹತ್ವದ ಪಾತ್ರವಹಿಸುತ್ತದೆ.&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಗಡಿಯಾರವನ್ನು ಇಡಬಹುದು. ಹಾಗೆ ಮಾಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶೂಯಿಯಲ್ಲಿ, ಈ ದಿಕ್ಕುಗಳು ಸಮೃದ್ಧಿ, ಬೆಳವಣಿಗೆ ಮತ್ತು ಸಕಾರಾತ್ಮಕ ಶಕ್ತಿ ಜೊತೆ ಸಂಬಂಧ ಹೊಂದಿವೆ. ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಯಶಸ್ಸಿಗೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಪ್ರಕಾರ, ಗಡಿಯಾರವನ್ನು ಎಂದಿಗೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಬಾರದು. ಈ ದಿಕ್ಕಿನಲ್ಲಿ ಗಡಿಯಾರ ಇಟ್ರೆ ನಿಮ್ಮ ಕೆಲ್ಸ ವಿಳಂಬವಾಗುತ್ತದೆ. ಪದೇ ಪದೇ ನಿಮ್ಮ ಕೆಲ್ಸದಲ್ಲಿ ಅಡೆತಡೆ ಬರಲು ಇದು ಕಾರಣವಾಗುತ್ತದೆ. ಇದು ಮನೆಯ ವಾತಾವರಣವನ್ನು ಹದಗೆಡಿಸುತ್ತದೆ. ಮನೆ, ಮನಸ್ಸು ಎರಡೂ ಭಾರವಾಗಿರುತ್ತದೆ. ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಗಡಿಯಾರ ಇಡಬೇಡಿ. ಈಗಾಗಲೇ ಈ ದಿಕ್ಕಿನಲ್ಲಿ ಗಡಿಯಾರ ಇದ್ದಲ್ಲಿ ಅದನ್ನು ಇಂದೇ ಬದಲಿಸಿ. ಗಡಿಯಾರವನ್ನು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಇಡುವುದು ಉತ್ತಮ.&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಪ್ರಕಾರ, ನೀವು ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಅಥವಾ ಬಿಳಿ ಗೋಲಾಕಾರದ ಗಡಿಯಾರವನ್ನು ಇಡಬೇಕು. ಪೂರ್ವ ದಿಕ್ಕಿನಲ್ಲಿ ರೌಂಡ್ ಗಡಿಯಾರ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಿರುತ್ತದೆ. ನೀವು ಮನೆಯಲ್ಲಿ ಅಷ್ಟಭುಜಾಕೃತಿಯ, ಅಂಡಾಕಾರದ ಅಥವಾ ಲೋಲಕದ ಗಡಿಯಾರವನ್ನು ಸಹ ಇಡಬಹುದು. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ.&lt;/p&gt;&lt;img&gt;&lt;p&gt;ಗಡಿಯಾರವನ್ನು ಮುಖ್ಯ ಬಾಗಿಲಿನ ಮೇಲೆ ಅಥವಾ ಯಾವುದೇ ರೂಮಿನ ಬಾಗಿಲಿಗೆ ಎಂದಿಗೂ ನೇತುಹಾಕಬಾರದು. ಗಡಿಯಾರವನ್ನು ನೇರವಾಗಿ ಹಾಸಿಗೆಯ ಮುಂದೆ ಅಥವಾ ಮೇಲೆ ಇಡುವುದನ್ನು ತಪ್ಪಿಸಿ. ಹಾಗೆ ಮಾಡುವುದರಿಂದ ಕುಟುಂಬ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.&lt;/p&gt;&lt;img&gt;&lt;p&gt;ಅನೇಕ ಬಾರಿ ಗಡಿಯಾರ ನಿಂತ್ರೂ ಅದು ಗೋಡೆ ಮೇಲೆ ನೇತಾಡುತ್ತಿರುತ್ತದೆ. ನಿಂತ ಗಡಿಯಾರವನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಇದು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಹಾಳಾದ, ನಿಂತ ಗಡಿಯಾರವಿದ್ರೆ ಮೊದಲು ಅದನ್ನು ದುರಸ್ತಿಗೊಳಿಸಿ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/astrology/feng-shui-tips-best-and-right-direction-of-wall-clock-for-good-luck-bad-luck-ab3svhe"/>
        </item>
        <item>
            <title><![CDATA[ಗುರುವಾರ ನೀವೂ ಕೂಡ ಈ ತಪ್ಪು ಮಾಡ್ತಿಲ್ಲ ತಾನೆ? ದೌರ್ಭಾಗ್ಯ ಬರುತ್ತೆ ಎಚ್ಚರ!]]></title>
            <link>https://kannada.asianetnews.com/gallery/vaastu/thursday-astrology-do-these-mistakes-on-thursday-d3iirch</link>
            <guid isPermaLink="true">https://kannada.asianetnews.com/gallery/vaastu/thursday-astrology-do-these-mistakes-on-thursday-d3iirch</guid>
            <pubDate>Thu, 23 Apr 2026 16:19:37 +0530</pubDate>
            <description><![CDATA[&lt;p&gt;Thursday astrology: ಗುರುವಾರ ಉಳಿದ ದಿನಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂತೆ ಗುರುವಾರ ನೀವು ಮಾಡುವಂತಹ ಕೆಲವೊಂದು ಕೆಲಸಗಳು, ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಹಾಗಿದ್ರೆ ಗುರುವಾರ ದಿನ ಏನು ಮಾಡಬೇಕು ಅನ್ನೋದನ್ನು ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk3w2wd3c3hkwgpdhg818pad,imgname-guru-peyarchi-2026-palangal--1--1772877869474.png" type="image/jpeg" height="390" width="690"/>
            <content:encoded><![CDATA[&lt;p&gt;Thursday astrology: ಗುರುವಾರ ಉಳಿದ ದಿನಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂತೆ ಗುರುವಾರ ನೀವು ಮಾಡುವಂತಹ ಕೆಲವೊಂದು ಕೆಲಸಗಳು, ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಹಾಗಿದ್ರೆ ಗುರುವಾರ ದಿನ ಏನು ಮಾಡಬೇಕು ಅನ್ನೋದನ್ನು ನೋಡೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಗುರುವಾರವು ಗುರು ಗ್ರಹಕ್ಕೆ ನೇರವಾಗಿ ಸಂಬಂಧಿಸಿದೆ. ಈ ಗ್ರಹವು ವ್ಯಕ್ತಿಯ ಜ್ಞಾನ, ವೃತ್ತಿ ಬೆಳವಣಿಗೆ, ಮದುವೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಪ್ರಭಾವ ಬೀರುತ್ತದೆ. ಜಾತಕದಲ್ಲಿ ಬಲವಾದ ಗುರು ಇರುವವರು ತಮ್ಮ ಜೀವನದಲ್ಲಿ ನಿರಂತರ ಸ್ಥಿರತೆ ಮತ್ತು ಗೌರವವನ್ನು ಅನುಭವಿಸುತ್ತಾರೆ. ಇದಕ್ಕೆ ವಿರುದ್ಧವಾಗಿ, ಸಣ್ಣದೊಂದು ನಿರ್ಲಕ್ಷ್ಯವೂ ಸಹ ಈ ಗ್ರಹವನ್ನು ದುರ್ಬಲಗೊಳಿಸಬಹುದು.&lt;/p&gt;&lt;img&gt;&lt;p&gt;ಗುರುವಾರದಂದು ಕೂದಲು ಅಥವಾ ಉಗುರುಗಳನ್ನು ಕತ್ತರಿಸಬಾರದು ಎಂದು ಮನೆಯಲ್ಲಿರುವ ಹಿರಿಯರು ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬಹುದು. ಜ್ಯೋತಿಷ್ಯ ದೃಷ್ಟಿಕೋನದಿಂದ, ಇದು ಗುರುಗ್ರಹದ ಶಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ ನಂತರ ಅನೇಕ ಜನರು ಆರ್ಥಿಕ ತೊಂದರೆಗಳನ್ನು ಅಥವಾ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಸ್ಥಿರತೆಯನ್ನು ಅನುಭವಿಸುತ್ತಾರೆ.&lt;/p&gt;&lt;img&gt;&lt;p&gt;ಗುರುವಾರದಂದು ಹಳದಿ ಬಟ್ಟೆಗಳನ್ನು ಒಗೆಯುವುದನ್ನು ನಿಷೇಧಿಸಲಾಗಿದೆ. ಹಳದಿ ಬಣ್ಣವು ಗುರು ಮತ್ತು ವಿಷ್ಣುವನ್ನು ಸಂಕೇತಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ದಿನದಂದು ಬಟ್ಟೆ ಒಗೆಯುವುದು ಮನೆಯ ಸಮೃದ್ಧಿಯನ್ನು ಸಹ ತೊಳೆದಂತೆ.&lt;/p&gt;&lt;img&gt;&lt;p&gt;ಪ್ರತಿದಿನ ಸ್ವಚ್ಛಗೊಳಿಸುವುದು ಒಳ್ಳೆಯ ಅಭ್ಯಾಸವಾಗಿದ್ದರೂ, ಗುರುವಾರದಂದು ನೆಲವನ್ನು ಒರೆಸದಿರುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯು ಕರಗುತ್ತದೆ. ಅನೇಕ ಕುಟುಂಬಗಳಲ್ಲಿ, ಈ ಸಂಪ್ರದಾಯವನ್ನು ಇಂದಿಗೂ ಬಹಳ ಗಂಭೀರವಾಗಿ ಆಚರಿಸಲಾಗುತ್ತದೆ.&lt;/p&gt;&lt;img&gt;&lt;p&gt;ನೀವು ಸೂಕ್ಷ್ಮವಾಗಿ ಗಮನಿಸಿದರೆ, ಅನುಭವಿ ವ್ಯಾಪಾರಿಗಳು ಸಹ ಗುರುವಾರದಂದು ಹಣವನ್ನು ಸಾಲವಾಗಿ ನೀಡುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಈ ದಿನದಂದು ನಡೆಸುವ ಹಣಕಾಸಿನ ವಹಿವಾಟುಗಳು ಹಣಕಾಸಿನ ನಷ್ಟ ಅಥವಾ ಸಾಲವನ್ನು ಹೆಚ್ಚಿಸುತ್ತದೆ. ಒಂದು ಸಣ್ಣ ಅಭ್ಯಾಸವು ದೀರ್ಘಾವಧಿಯಲ್ಲಿ ಒಬ್ಬರ ಆರ್ಥಿಕ ಸಮತೋಲನವನ್ನು ಅಡ್ಡಿಪಡಿಸಬಹುದು.&lt;/p&gt;&lt;img&gt;&lt;p&gt;ಕೂದಲು ಅಥವಾ ದೇಹಕ್ಕೆ ಎಣ್ಣೆ ಹಚ್ಚುವುದು ಸಾಮಾನ್ಯ ಅಭ್ಯಾಸವಾದರೂ, ಗುರುವಾರದಂದು ಹಾಗೆ ಮಾಡದಿರುವುದು ಸೂಕ್ತ. ಇದು ಗುರುಗ್ರಹದ ಶುಭ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ, ಇದು ಒಬ್ಬರ ವೃತ್ತಿ ಮತ್ತು ಸಾಮಾಜಿಕ ಸ್ಥಾನಮಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.&lt;/p&gt;&lt;img&gt;&lt;p&gt;ಇಂದಿನ ವೇಗದ ಜಗತ್ತಿನಲ್ಲಿ, ಈ ಸಂಪ್ರದಾಯಗಳಿಗೆ ಬದ್ಧವಾಗಿರಬೇಕೆ ಅಥವಾ ಬೇಡವೇ ಎಂಬುದು ವೈಯಕ್ತಿಕ ಆಯ್ಕೆಯ ವಿಷಯವಾಗಿರಬಹುದು. ಆದರೆ, ಕುತೂಹಲಕಾರಿ ಸಂಗತಿಯೆಂದರೆ, ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ಜನರು ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾರೆ. ನಂಬಿಕೆ ಅಥವಾ ಅನುಭವಕ್ಕೆ ಕಾರಣವಾಗಿದ್ದರೂ, ಈ ಗುರುವಾರದ ಪರಿಹಾರಗಳು ನಿಮಗೆ ಒಳ್ಳೆಯದನ್ನೆ ಮಾಡುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/thursday-astrology-do-these-mistakes-on-thursday-d3iirch"/>
        </item>
        <item>
            <title><![CDATA[ಪೂಜೆ-ಹೋಮ ಮಾಡಿಸಿದ್ರೂ ಮದ್ವೆ ಆಗ್ತಿಲ್ವಾ? ಮನೆಯಲ್ಲಿ ಈ ಚಿಕ್ಕ ತಪ್ಪು ಇದೆಯಾ ನೋಡಿಕೊಳ್ಳಿ]]></title>
            <link>https://kannada.asianetnews.com/gallery/vaastu/why-marriages-delay-though-homa-pooja-done-according-to-vastu-suc-eevxn4r</link>
            <guid isPermaLink="true">https://kannada.asianetnews.com/gallery/vaastu/why-marriages-delay-though-homa-pooja-done-according-to-vastu-suc-eevxn4r</guid>
            <pubDate>Thu, 12 Mar 2026 19:11:38 +0530</pubDate>
            <description><![CDATA[ಎಷ್ಟೇ ಪೂಜೆ, ಹರಕೆಗಳನ್ನು ಮಾಡಿದರೂ ಅನೇಕ ಯುವಕ-ಯುವತಿಯರಿಗೆ ಮದುವೆ ವಿಳಂಬವಾಗುತ್ತಿರುತ್ತದೆ. ಆದರೆ, ಇದಕ್ಕೆ ಜಾತಕ ದೋಷಕ್ಕಿಂತ ಮನೆಯಲ್ಲಿನ ವಾಸ್ತು ದೋಷವೇ ಮುಖ್ಯ ಕಾರಣವಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಅವಿವಾಹಿತರು ಮಲಗುವ ಕೋಣೆಯ ದಿಕ್ಕು ಅವರ ವಿವಾಹದ ಮೇಲೆ ನೇರ ಪರಿಣಾಮ ಬೀರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkh4d2rff7xnhzd6k5k3aee1,imgname-marriage-1773322799887.jpg" type="image/jpeg" height="390" width="690"/>
            <content:encoded><![CDATA[ಎಷ್ಟೇ ಪೂಜೆ, ಹರಕೆಗಳನ್ನು ಮಾಡಿದರೂ ಅನೇಕ ಯುವಕ-ಯುವತಿಯರಿಗೆ ಮದುವೆ ವಿಳಂಬವಾಗುತ್ತಿರುತ್ತದೆ. ಆದರೆ, ಇದಕ್ಕೆ ಜಾತಕ ದೋಷಕ್ಕಿಂತ ಮನೆಯಲ್ಲಿನ ವಾಸ್ತು ದೋಷವೇ ಮುಖ್ಯ ಕಾರಣವಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಅವಿವಾಹಿತರು ಮಲಗುವ ಕೋಣೆಯ ದಿಕ್ಕು ಅವರ ವಿವಾಹದ ಮೇಲೆ ನೇರ ಪರಿಣಾಮ ಬೀರುತ್ತದೆ.&lt;img&gt;&lt;p&gt;ಇಂದು ಮದುವೆ ಸಹವಾಸ ಸಾಕಪ್ಪಾ ಎನ್ನುವ ಒಂದಷ್ಟು ಯುವಕ-ಯುವತಿಯರು ಇದ್ದರೆ, ಮತ್ತೊಂದಿಷ್ಟು ಮಂದಿಗೆ ಎಷ್ಟೇ ಪ್ರಯತ್ನ ಪಟ್ಟರೂ ಮದುವೆಯೇ ಆಗುತ್ತಿರುವುದಿಲ್ಲ. ಯುವಕರು ಇದ್ದರೂ ಯುವತಿ ಸಿಗ್ತಿಲ್ಲ, ಯುವತಿಯರು ಇದ್ದರೂ ಯುವಕರು ಸಿಕ್ತಿಲ್ಲ ಎನ್ನುವ ಕೊರಗು ಇದ್ದೇ ಇದೆ. ವಯಸ್ಸಾಗುತ್ತಾ ಬಂದರೂ ಮದುವೆ ಆಗುವುದೇ ಇಲ್ಲ. ಇಂದಿನ ಯುವತಿಯರ ಡಿಮಾಂಡ್​ ಕೇಳಿದ್ರೆ ಮದುವೆನೇ ಬೇಡ ಎಂದು ಅದೆಷ್ಟೋ ಯುವಕರು ಹೇಳ್ತಿದ್ರೆ, ಹುಡುಗನಿಗೆ ಸಿಕ್ಕಾಪಟ್ಟೆ ಸಂಬಳ ಇದ್ದರೂ, ನನ್ನ ದುಡಿಮೆ ಕೇಳ್ತಾನೆ ಎನ್ನುವುದು ಬಹಳಷ್ಟು ಯುವತಿಯರ ಅಳಲು.&lt;/p&gt;&lt;img&gt;&lt;p&gt;ಮದುವೆಗಾಗಿ ಮನೆಯಲ್ಲಿ ಅಪ್ಪ-ಅಮ್ಮ ಪೂಜೆ, ಹೋಮ- ಹವನ ಮಾಡಿಸ್ತಾರೆ. ಕಂಡ ಕಂಡ ದೇವರ ಮೊರೆ ಹೋಗ್ತಾರೆ. ಜಾತಕದಲ್ಲಿ ದೋಷ ಇದೆ ಎಂದು ಪುರೋಹಿತರು, ಜ್ಯೋತಿಷಿಗಳು ಹೇಳಿದ ಮಾತಿನಂತೆ ಏನೇನೋ ಹರಕೆ ತೀರಿಸುತ್ತಾರೆ. ಮನೆ ದೇವರು, ಕುಲ ದೇವರು ಎಂದೆಲ್ಲಾ ಹರಕೆ ಹೊತ್ತುಕೊಳ್ಳುತ್ತಾರೆ, ಉರುಳು ಸೇವೆ ಮಾಡುತ್ತಾರೆ. ಹೂಂ, ಹೂಂ. ಏನು ಮಾಡಿದರೂ ಎಷ್ಟೋ ಸಂದರ್ಭದಲ್ಲಿ ಮದುವೆ ಆಗುವುದೇ ಇಲ್ಲ. ಅಷ್ಟಕ್ಕೂ ಕಂಕಣ ಭಾಗ್ಯ ಕೂಡಿ ಬಂದಾಗ ಅದನ್ನು ತಡೆಯಲು ಆಗುವುದಿಲ್ಲ. ಕಂಕಣ ಭಾಗ್ಯ ಬರುವವರೆಗೆ ಏನೇ ಪ್ರಯತ್ನ ಮಾಡಿದರೂ ಮದುವೆ ಆಗುವುದಿಲ್ಲ ಎನ್ನುವ ಮಾತು ಕೂಡ ಇದೆ.&lt;/p&gt;&lt;img&gt;&lt;p&gt;ಇವೆಲ್ಲವುಗಳ ಹೊರತಾಗಿ, ಮನೆಯಲ್ಲಿನ ಒಂದು ಚಿಕ್ಕ ದೋಷದಿಂದ ಮದುವೆಯಲ್ಲಿ ವಿಳಂಬ ಆಗುವ ಸಾಧ್ಯತೆ ಹೆಚ್ಚು ಎನ್ನುವುದು ವಾಸ್ತು ಶಾಸ್ತ್ರಜ್ಞರ ಮಾತು. ಮದುವೆಯ ವಿಷಯವನ್ನು ನೋಡುವುದಾದರೆ ಮನೆಯಲ್ಲಿನ ಸೌತ್​ ವೆಸ್ಟ್​ (South West) ಅಂದರೆ ನೈಋತ್ಯ ದಿಕ್ಕನ್ನು ನೋಡಲಾಗುತ್ತದೆ. ಅದೆಷ್ಟೋ ಮನೆಗಳಲ್ಲಿ ಈ ಮೂಲೆಯಲ್ಲಿ ಬೆಡ್​ರೂಮ್​ ಇದ್ದರೆ ಅಲ್ಲಿ ಮದುವೆಯಾಗದೇ ಇರುವವರು ಮಲಗಿದರೆ, ಅವರಿಗೆ ಮದುವೆಯಲ್ಲಿ ಸಿಕ್ಕಾಪಟ್ಟೆ ವಿಳಂಬವಾಗುತ್ತದೆ. ಏಕೆಂದರೆ, ಈ ಕೋಣೆ ಇರುವುದು ಮನೆಯ ಹಿರಿಯರು ಅರ್ಥಾತ್​ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ಎಲ್ಲಾ ಜವಾಬ್ದಾರಿ ವಹಿಸಿಕೊಳ್ಳುವವರು ಇಲ್ಲಿ ಮಲಗಬೇಕು.&lt;/p&gt;&lt;img&gt;&lt;p&gt;ಇನ್ನು, ಅವಿವಾಹಿತ ಹೆಣ್ಣುಮಕ್ಕಳಾಗಿದ್ದರಂತೂ ಈಶಾನ್ಯ ಮೂಲೆ ಅಂದರೆ North East ಬೆಡ್​ರೂಮ್​ನಲ್ಲಿ ಮಲಗಲೇಬಾರದು. ಹೀಗೆ ಮಲಗುವ ಹೆಣ್ಣುಮಕ್ಕಳಿಗೆ ಮದುವೆಯಾಗುವುದೇ ಕಷ್ಟ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಇಲ್ಲಿ ಚಿಕ್ಕ ಮಕ್ಕಳನ್ನು ಮಲಗಿಸಬಹುದು ಅಷ್ಟೇ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಅವಿವಾಹಿತ ಮಕ್ಕಳಿಗೆ ಸೂಕ್ತವಾದ, ಅತ್ಯಂತ ಸೂಕ್ತವಾದ ಮಲಗುವ ಕೋಣೆ ವಾಯವ್ಯ (North West) ಮೂಲೆಯಾಗಿದೆ, ಏಕೆಂದರೆ ಇದು ಉತ್ತಮ ಆರೋಗ್ಯ, ಶಿಕ್ಷಣ ಮತ್ತು ವಿವಾಹದ ನಿರೀಕ್ಷೆಗಳನ್ನು ಉತ್ತೇಜಿಸುತ್ತದೆ. ಪರ್ಯಾಯವಾಗಿ, ಪೂರ್ವ ಅಥವಾ ಪಶ್ಚಿಮದ ಕೊಠಡಿಗಳು ಚಿಕ್ಕ ಮಕ್ಕಳಿಗೆ ಸೂಕ್ತವಾಗಿವೆ. ಮಕ್ಕಳು ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಹಾಕಿ ಮಲಗುವಂತೆ ಹಾಸಿಗೆಯನ್ನು ಇಡಬೇಕು.&lt;/p&gt;]]></content:encoded>
            <category>vaastu</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/vaastu/why-marriages-delay-though-homa-pooja-done-according-to-vastu-suc-eevxn4r"/>
        </item>
        <item>
            <title><![CDATA[ಇವನ್ನ ತಕ್ಷಣವೇ ಮನೆಯಿಂದ ಹೊರಹಾಕಿ.. ಅದೃಷ್ಟ ರೈಲಿಗಿಂತ ವೇಗವಾಗಿ ಓಡಿ ಬರುತ್ತೆ]]></title>
            <link>https://kannada.asianetnews.com/webstories/vaastu/say-goodbye-to-bad-luck-with-these-vastu-tips-g5x95i6</link>
            <guid isPermaLink="true">https://kannada.asianetnews.com/webstories/vaastu/say-goodbye-to-bad-luck-with-these-vastu-tips-g5x95i6</guid>
            <pubDate>Fri, 24 Apr 2026 18:52:43 +0530</pubDate>
            <description><![CDATA[&lt;p&gt;Vastu Shastra tips for good luck in Kannada: ಪ್ರತಿಯೊಬ್ಬರೂ ಜೀವನದಲ್ಲಿ 'ಲಕ್' ಬರಲಿ ಎಂದು ಹಂಬಲಿಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಅದೃಷ್ಟ ನಿಮ್ಮದಾಗಬೇಕಾದರೆ, ನೀವು ಕೆಲವು ವಸ್ತುಗಳನ್ನು ತಪ್ಪದೇ ಮನೆಯಿಂದ ಹೊರಹಾಕಬೇಕು. ಹಾಗಾದರೆ, ಆ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdaf1vsrhptmm0sg00b6wn25,imgname-vastu-tips-for-good-luck-07-1766656634680.jpg" type="image/jpeg" height="390" width="690"/>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/vaastu/say-goodbye-to-bad-luck-with-these-vastu-tips-g5x95i6"/>
        </item>
        <item>
            <title><![CDATA[ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನಿಟ್ಟುಕೊಂಡ್ರೆ, ಪ್ರಮೋಷನ್ ಪಕ್ಕಾ!]]></title>
            <link>https://kannada.asianetnews.com/webstories/vaastu/kannada-vastu-tips-for-office-desk-to-get-job-promotion-career-growth-mrq-geg6zl8</link>
            <guid isPermaLink="true">https://kannada.asianetnews.com/webstories/vaastu/kannada-vastu-tips-for-office-desk-to-get-job-promotion-career-growth-mrq-geg6zl8</guid>
            <pubDate>Thu, 16 Apr 2026 14:30:33 +0530</pubDate>
            <description><![CDATA[&lt;p&gt;ಕೆಲಸದಲ್ಲಿ ಪ್ರಮೋಷನ್ ಸಿಗಬೇಕಾ? ವಾಸ್ತು ಶಾಸ್ತ್ರದಲ್ಲಿ ಕೆಲವು ಸುಲಭ ಟಿಪ್ಸ್ ಇವೆ. ಇವುಗಳನ್ನು ಪಾಲಿಸಿದರೆ, ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಟಿಪ್ಸ್ ತುಂಬಾ ಸರಳವಾಗಿದ್ದು, ಯಾರು ಬೇಕಾದರೂ ಇದನ್ನು ಮಾಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpajgkk15j4yvx3axs1jjh0p,imgname-good-luck-things-to-keep-on-office-table-1-1776323939937.jpg" type="image/jpeg" height="390" width="690"/>
            <category>vaastu</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/vaastu/kannada-vastu-tips-for-office-desk-to-get-job-promotion-career-growth-mrq-geg6zl8"/>
        </item>
        <item>
            <title><![CDATA[ನಿಮ್ಮನ್ನು ಕಾಡುವ ಮಾನಸಿಕ ಅಶಾಂತಿ, ಆರ್ಥಿಕ ಸಮಸ್ಯೆಗೆ ಒಂದೇ ಪರಿಹಾರ]]></title>
            <link>https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw</link>
            <guid isPermaLink="true">https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw</guid>
            <pubDate>Wed, 29 Apr 2026 11:35:36 +0530</pubDate>
            <description><![CDATA[&lt;p&gt;ಮನೆ ಮಂದಿಯೆಲ್ಲ ಆರೋಗ್ಯವಾಗಿದ್ರೂ, ಕೈತುಂಬ ಸಂಬಳ ಬರ್ತಿದ್ರೂ ಏನೋ ಕಿರಿಕಿರಿ ಮನೆಯಲ್ಲಿರುತ್ತೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣಿಸೋದಿಲ್ಲ. ಮನೆ ಮಂದಿ ಮನಸ್ಸು ಶಾಂತವಾಗಿರೋದಿಲ್ಲ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಇದಕ್ಕೆಲ್ಲ ಕಾರಣ. ಅದನ್ನು ಅತ್ಯಂತ ಸರಳ ಉಪಾಯದಿಂದ ಬಗೆ ಹರಿಸ್ಬಹುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbx3b8dvex68tbe9jxqykf5,imgname-clove-water-1777442336013.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆ ಮಂದಿಯೆಲ್ಲ ಆರೋಗ್ಯವಾಗಿದ್ರೂ, ಕೈತುಂಬ ಸಂಬಳ ಬರ್ತಿದ್ರೂ ಏನೋ ಕಿರಿಕಿರಿ ಮನೆಯಲ್ಲಿರುತ್ತೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣಿಸೋದಿಲ್ಲ. ಮನೆ ಮಂದಿ ಮನಸ್ಸು ಶಾಂತವಾಗಿರೋದಿಲ್ಲ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಇದಕ್ಕೆಲ್ಲ ಕಾರಣ. ಅದನ್ನು ಅತ್ಯಂತ ಸರಳ ಉಪಾಯದಿಂದ ಬಗೆ ಹರಿಸ್ಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮನೆಯಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಜನರು ಬದುಕ್ತಿದ್ದರೆ ಅದಕ್ಕೆ ಕಾರಣ ವಾಸ್ತು. ಎಷ್ಟೇ ಹಣ ಇರ್ಲಿ, ಎಷ್ಟೇ ಆರೋಗ್ಯ ಇರಲಿ ನೆಮ್ಮದಿ ಇಲ್ಲ, ಸಂತೋಷವಿಲ್ಲ ಅಂದ್ರೆ ಜೀವನ ಕಷ್ಟ. ಇದಕ್ಕೆ ನಿಮ್ಮ ಮನೆ ವಾಸ್ತು ಮುಖ್ಯ ಕಾರಣವಾಗಿರುತ್ತೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ನೀವು ಮನೆ ಬದಲಿಸಬೇಕಾಗಿಲ್ಲ. ಅತ್ಯಂತ ಸರಳ ವಿಧಾನವನ್ನು ಫಾಲೋ ಮಾಡುವ ಮೂಲಕ ನೀವು ನೆಮ್ಮದಿ ಕಂಡುಕೊಳ್ಳಬಹುದು.&lt;/p&gt;&lt;img&gt;&lt;p&gt;ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಇರುವ ವಸ್ತು ಇದು. ಇದನ್ನು ಮಸಾಲೆ ಪದಾರ್ಥವಾಗಿ ಬಳಕೆ ಮಾಡಲಾಗುತ್ತದೆ. ಆದ್ರೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗುತ್ತದೆ. ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ಕಿರಿಕಿರಿ ಏನೇ ಇರಲಿ ಈ ಲವಂಗದ ನೀರು ನಿಮ್ಮೆಲ್ಲ ಸಮಸ್ಯೆಗೆ ಪರಿಹಾರವಾಗಬಹುದು ಅಂತ ಜನರು ನಂಬಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಲವಂಗದ ನೀರು ಹೆಚ್ಚು ಚರ್ಚೆ ಆಗ್ತಿದೆ.&lt;/p&gt;&lt;img&gt;&lt;p&gt;ಲವಂಗದ ನೀರು ತಯಾರಿಸೋದು ಬಹಳ ಸುಲಭ. ಹೆಚ್ಚಿನ ಪದಾರ್ಥದ ಅಗತ್ಯವಿಲ್ಲ. ಲವಂಗ ಹಾಗೂ ನೀರನ್ನು ಬಳಸಿದ್ರೆ ಸಾಕು. ಮೊದಲು ಒಂದು ಗಾಜಿನ ಅಥವಾ ತಾಮ್ರದ ಪಾತ್ರೆಯನ್ನು ತೆಗೆದುಕೊಳ್ಳಿ. ಅದಕ್ಕೆ 5 -7 ಲವಂಗವನ್ನು ಹಾಕಿ. ನಂತ್ರ ನೀರನ್ನು ಹಾಕಿ. ಇದನ್ನು ಸುಮಾರು 2 ರಿಂದ 3 ಗಂಟೆ ನೆನೆಹಾಕಿ. ಇದನ್ನು ದೇವರ ಮುಂದಿಷ್ಟು ಪ್ರಾರ್ಥನೆ ಮಾಡಿ ಬಳಕೆ ಮಾಡ್ಬಹುದು. ಹಾಗೆ ಮಾಡಿದ್ರೆ ಸಕಾರಾತ್ಮಕ ಶಕ್ತಿ ದುಪ್ಪಟ್ಟಾಗುತ್ತೆ ಎನ್ನುವ ನಂಬಿಕೆ ಇದೆ.&lt;/p&gt;&lt;img&gt;&lt;p&gt;ಲವಂಗದ ನೀರನ್ನು ನೀವು ಶಕ್ತಿವಾತಾವರಣ ಬದಲಾಗುವ, ಶಕ್ತಿಯ ಹರಿವು ಭಿನ್ನವಾಗಿರುವ ಸಮಯದಲ್ಲಿ ಬಳಸಬೇಕು. ಅಂದ್ರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಈ ನೀರನ್ನು ನೀವು ಮನೆಗೆ ಸಿಂಪಡಿಸಬೇಕು. ಇದನ್ನು ಮನೆಯ ಮುಖ್ಯದ್ವಾರದಿಂದ ಸಿಂಪಡಿಸಬೇಕು. ಮುಖ್ಯದ್ವಾರದಿಂದ ಮನೆಯ ಎಲ್ಲ ಜಾಗಕ್ಕೆ ಇದನ್ನು ಸಿಂಪಡಿಸಬೇಕು. ಆದ್ರೆ ಯಾವುದೇ ಕಾರಣಕ್ಕೂ ಬಾತ್ ರೂಮ್, ಶೌಚಾಲಯ ಹಾಗೂ ಸಿಂಕ್ ಗೆ ಇದನ್ನು ಹಾಕಬೇಡಿ. ನೀವು ನಿಮ್ಮಿಷ್ಟದ ಮಂತ್ರವನ್ನು ಪಠಿಸಬಹುದು. ಇಲ್ಲವೆ ಸಕಾರಾತ್ಮಕ ಆಲೋಚನೆಯಲ್ಲಿ ಈ ನೀರನ್ನು ಸಿಂಪಡಿಸಿ.&lt;/p&gt;&lt;img&gt;&lt;p&gt;ಮನೆಗೆ ಲವಂಗದ ನೀರನ್ನು ಸಿಂಪಡಿಸುವುದ್ರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. ಲವಂಗದ ಸುವಾಸನೆ ಮನೆಯನ್ನು ತಾಜಾಗೊಳಿಸುತ್ತದೆ. ಆರ್ಥಿಕ ಚಿಂತೆ ಕಡಿಮೆಯಾಗುತ್ತದೆ. ಮನಸ್ಸು ಹಗುರವಾದ ಅನುಭವವಾಗುತ್ತದೆ. ಸಂಬಂಧಗಳಲ್ಲಿ ಕಾಣಿಸಿಕೊಂಡ ಉದ್ವಿಗ್ನತೆ ಕಡಿಮೆಯಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಶಾಂತವಾಗಿ ನೀವು ಜೀವನದ ನಿರ್ದಾರ ತೆಗೆದುಕೊಳ್ಳಲು ಇದು ಸಹಕಾರಿ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw"/>
        </item>
        <item>
            <title><![CDATA[Vastu Tips: ಮನೆ ಡಸ್ಟ್‌ಬಿನ್ ಎಲ್ಲಿಟ್ಟರೊಳಿತು? ಯಾವ ಬಣ್ಣದ್ದಾಗಿರಬೇಕು?]]></title>
            <link>https://kannada.asianetnews.com/webstories/vaastu/vastu-guide-for-dustbin-placement-direction-and-color-home-ldpenx2</link>
            <guid isPermaLink="true">https://kannada.asianetnews.com/webstories/vaastu/vastu-guide-for-dustbin-placement-direction-and-color-home-ldpenx2</guid>
            <pubDate>Sat, 04 Apr 2026 15:55:54 +0530</pubDate>
            <description><![CDATA[&lt;p&gt;ಡಸ್ಟ್&zwnj;ಬಿನ್ನ ಇಲ್ಲದ ಮನೆ ಇರುತ್ತಾ ಹೇಳಿ? ಹಾಗಂಥ ನೀವು ಯಾವುದ್ಯಾವುದೋ ಕಲರ್ ಡಸ್ಟ್&zwnj;ಬಿನ್ ತಗೊಂಡು, ಮನೆಯಲ್ಲಿಡಬಾರದ ಜಾಗದಲ್ಲಿ ಇಡಬಾರದು. ಇದರಿಂದ ಸಾಕಷ್ಟು ಕಷ್ಟ ಸಂಕಷ್ಟಗಳು ಬರೋ ಚಾನ್ಸ್ ಇರುತ್ತೆ. ಹಾಗಾಗಿ, ಮನೆಗೆ ಯಾವ ಕಲರ್ ಬಿನ್ ಡಸ್ಟ್ ಬಿನ್ ಸೂಕ್ತ, ಎಲ್ಲಿಡಬೇಕೆಂಬುವುದಕ್ಕೆ ಇಲ್ಲಿವೆ ಟಿಪ್ಸ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knbx9spjv3vjgf8rnvxny3aq,imgname-dustbin-vastu-tips-01-1775295063762.jpg" type="image/jpeg" height="390" width="690"/>
            <category>vaastu</category>
            <dc:creator>Suvarna News</dc:creator>
            <atom:link href="https://kannada.asianetnews.com/webstories/vaastu/vastu-guide-for-dustbin-placement-direction-and-color-home-ldpenx2"/>
        </item>
        <item>
            <title><![CDATA[ಈ ಸೀಕ್ರೆಟ್ ಗೊತ್ತಾ? ಮನಿ ಪ್ಲಾಂಟ್ ಜೊತೆ ಆ ಗಿಡವಿದ್ದರೆ ಮಾತ್ರ ಹಣದ ಹರಿವು ಫಿಕ್ಸ್!]]></title>
            <link>https://kannada.asianetnews.com/gallery/vaastu/boost-your-wealth-the-easy-vastu-trick-for-your-money-plant-nrk7ax4</link>
            <guid isPermaLink="true">https://kannada.asianetnews.com/gallery/vaastu/boost-your-wealth-the-easy-vastu-trick-for-your-money-plant-nrk7ax4</guid>
            <pubDate>Fri, 24 Apr 2026 12:44:32 +0530</pubDate>
            <description><![CDATA[&lt;p&gt;Wealth Attracting Plants: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ನೆಡುವುದು ಶುಭಕರ ಎಂದು ನಂಬಲಾಗಿದೆ. ಈ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಮನೆಯ ವಾಸ್ತು ದೋಷಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knxg5z1xmbtr1tnnw45v2h0k,imgname-money-plant-vastu-03-1775885286461.jpg" type="image/jpeg" height="390" width="690"/>
            <content:encoded><![CDATA[&lt;p&gt;Wealth Attracting Plants: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ನೆಡುವುದು ಶುಭಕರ ಎಂದು ನಂಬಲಾಗಿದೆ. ಈ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಮನೆಯ ವಾಸ್ತು ದೋಷಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮನಿ ಪ್ಲಾಂಟ್ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಆರ್ಥಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆಯಿದೆ. ಆದರೆ, ಇದರೊಂದಿಗೆ ಮತ್ತೊಂದು ಗಿಡವನ್ನೂ ನೆಟ್ಟರೆ ಹಣದ ಕೊರತೆಯೇ ಇರುವುದಿಲ್ಲ ಎಂದು ಜ್ಯೋತಿಷ್ಯ ಮತ್ತು ವಾಸ್ತು ತಜ್ಞರು ಸೂಚಿಸುತ್ತಾರೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರವು ಪ್ರಮುಖವಾಗಿ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಎಂಬ ಎರಡು ಅಂಶಗಳ ಮೇಲೆ ಆಧಾರಿತವಾಗಿದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾದರೆ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡದಂತಹ ತೊಂದರೆಗಳು ಎದುರಾಗುತ್ತವೆ. ಆದರೆ, ಧನಾತ್ಮಕ ಶಕ್ತಿ ಇದ್ದಾಗ ಅಭಿವೃದ್ಧಿಯ ಹಾದಿಗಳು ತೆರೆದುಕೊಂಡು ಸಂಪತ್ತು ಹೆಚ್ಚುತ್ತದೆ ಹಾಗೂ ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.&lt;/p&gt;&lt;img&gt;&lt;p&gt;ಜೇಡ್ ಪ್ಲಾಂಟ್ ಮೂಲತಃ ದಕ್ಷಿಣ ಆಫ್ರಿಕಾದ್ದಾಗಿದ್ದರೂ, ಈಗ ಭಾರತದಲ್ಲಿ ಸುಲಭವಾಗಿ ಲಭ್ಯವಿದೆ. ಇದನ್ನು &quot;ಲಕ್ಕಿ ಪ್ಲಾಂಟ್&quot; ಎಂದೂ ಕರೆಯುತ್ತಾರೆ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗಿ ಸಂಪತ್ತು ವೃದ್ಧಿಯಾಗಲಿ ಎಂದು ಬಯಸುವವರು, ಮನಿ ಪ್ಲಾಂಟ್ ಜೊತೆಗೆ ಜೇಡ್ ಗಿಡವನ್ನು ಮನೆಯಲ್ಲಿ ಬೆಳೆಸುವುದು ಉತ್ತಮ.&lt;/p&gt;&lt;img&gt;&lt;p&gt;ವಾಸ್ತು ಪ್ರಕಾರ ಆಗ್ನೇಯ ದಿಕ್ಕಿಗೂ ಲಕ್ಷ್ಮಿ ದೇವಿಯ ಸಂಕೇತಕ್ಕೂ ಸಂಬಂಧವಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಜೇಡ್ ಗಿಡವನ್ನು ಇಟ್ಟರೆ ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇದನ್ನು ಮನೆಯ ಮುಖ್ಯ ದ್ವಾರದ ಒಳಭಾಗದಲ್ಲೂ ಇರಿಸಬಹುದು.&lt;/p&gt;&lt;img&gt;&lt;p&gt;ಮನಿ ಪ್ಲಾಂಟ್ ಅನ್ನು ಪ್ಲಾಸ್ಟಿಕ್ ಬಾಟಲಿಗಳಿಗಿಂತ ಕುಂಡದಲ್ಲಿ ಬೆಳೆಸುವುದು ಒಳ್ಳೆಯದು. ಇದನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಪೂರ್ವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ.&lt;/p&gt;&lt;p&gt;&lt;strong&gt;ಗಮನಿಸಿ:&lt;/strong&gt; ಇಲ್ಲಿ ನೀಡಲಾದ ಮಾಹಿತಿಯು ವಾಸ್ತು, ಜ್ಯೋತಿಷ್ಯ ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಇದನ್ನು ವೈಜ್ಞಾನಿಕವಾಗಿ ಸಾಬೀತಾದ ಮಾಹಿತಿ ಎಂದು ಪರಿಗಣಿಸಬೇಡಿ. ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಬಂಧಿತ ತಜ್ಞರನ್ನು ಸಂಪರ್ಕಿಸುವುದು ಉತ್ತಮ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/boost-your-wealth-the-easy-vastu-trick-for-your-money-plant-nrk7ax4"/>
        </item>
        <item>
            <title><![CDATA[ಮನೇಲಿ ಓಡುವ ಕುದರೆ ಚಿತ್ರವಿದ್ದರೆ ಅದೃಷ್ಟ; ಈ ದಿಕ್ಕಲ್ಲಿಟ್ಟರೆ ದರಿದ್ರ ಗ್ಯಾರಂಟಿ]]></title>
            <link>https://kannada.asianetnews.com/webstories/vaastu/vastu-tips-7-white-running-horses-painting-direction-benefits-sat-qr4u7cy</link>
            <guid isPermaLink="true">https://kannada.asianetnews.com/webstories/vaastu/vastu-tips-7-white-running-horses-painting-direction-benefits-sat-qr4u7cy</guid>
            <pubDate>Wed, 22 Apr 2026 20:17:45 +0530</pubDate>
            <description><![CDATA[&lt;p&gt;ವಾಸ್ತು ಶಾಸ್ತ್ರದಲ್ಲಿ 7 ಕುದುರೆಗಳ ಚಿತ್ರಕ್ಕೆ ಮಹತ್ವವಿದೆ. ಮನೆಯಲ್ಲಿ 7 ಕುದುರೆಗಳ ಫೋಟೋ ಇಡುವುದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಅದರ ಶುಭ ಫಲ ಸಿಗಬೇಕಾದರೆ, ಅದನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಕುದುರೆ ಚಿತ್ರಕ್ಕೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳ ಬಗ್ಗೆ ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kptss3v2sqapwbez4b0gc2ya,imgname-horses-7-1721638745660-1776868429666.jpg" type="image/jpeg" height="390" width="690"/>
            <category>vaastu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/vaastu/vastu-tips-7-white-running-horses-painting-direction-benefits-sat-qr4u7cy"/>
        </item>
        <item>
            <title><![CDATA[ನಿಮ್ಮ ಮನೆಯಲ್ಲಿ ಮನಿಪ್ಲಾಂಟ್ ಈ ರೀತಿ ಬೆಳಿತಿದ್ಯಾ? ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುತ್ತೆ !]]></title>
            <link>https://kannada.asianetnews.com/gallery/vaastu/how-to-take-care-of-money-plant-at-home-rz5xgvt</link>
            <guid isPermaLink="true">https://kannada.asianetnews.com/gallery/vaastu/how-to-take-care-of-money-plant-at-home-rz5xgvt</guid>
            <pubDate>Sat, 11 Apr 2026 22:13:17 +0530</pubDate>
            <description><![CDATA[&lt;p&gt;Money Plant Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಸಂಪತ್ತು ಮಾತ್ರವಲ್ಲದೆ ಸಂತೋಷ ಮತ್ತು ಸಮೃದ್ಧಿಯೂ ಹೆಚ್ಚಾಗುತ್ತದೆ. ಆದರೆ, ಅದನ್ನು ಇಡುವ ನಿಯಮಗಳನ್ನು ನೀವು ತಿಳಿದಿದ್ದರೆ ಮಾತ್ರ ಅದು ಪ್ರಯೋಜನಕಾರಿಯಾಗಿದೆ. ಮನಿ ಪ್ಲಾಂಟ್ ಕುರಿತು ಮುಖ್ಯವಾದ ಮಾಹಿತಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrr52a93ws83y2g51q5h1jh,imgname-money-plant-1775725873481.jpg" type="image/jpeg" height="390" width="690"/>
            <content:encoded><![CDATA[&lt;p&gt;Money Plant Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಸಂಪತ್ತು ಮಾತ್ರವಲ್ಲದೆ ಸಂತೋಷ ಮತ್ತು ಸಮೃದ್ಧಿಯೂ ಹೆಚ್ಚಾಗುತ್ತದೆ. ಆದರೆ, ಅದನ್ನು ಇಡುವ ನಿಯಮಗಳನ್ನು ನೀವು ತಿಳಿದಿದ್ದರೆ ಮಾತ್ರ ಅದು ಪ್ರಯೋಜನಕಾರಿಯಾಗಿದೆ. ಮನಿ ಪ್ಲಾಂಟ್ ಕುರಿತು ಮುಖ್ಯವಾದ ಮಾಹಿತಿ ತಿಳಿಯೋಣ.&lt;/p&gt;&lt;img&gt;&lt;p&gt;ಮನಿ ಪ್ಲಾಂಟ್ ಅನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಮನಿ ಪ್ಲಾಂಟ್ ನೆಡುತ್ತಾರೆ. ಆದರೆ, ಮನಿ ಪ್ಲಾಂಟ್ ನೆಡಲು ಸರಿಯಾದ ವಿಧಾನ ಮತ್ತು ನಿಯಮಗಳನ್ನು ತಿಳಿದಿರುವವರು ಕಡಿಮೆ. ವಾಸ್ತು ಶಾಸ್ತ್ರದ ಪ್ರಕಾರ, ಸರಿಯಾಗಿ ನೆಟ್ಟ ಮನಿ ಪ್ಲಾಂಟ್ ಸಂಪತ್ತಿನ ಬಾಗಿಲು ತೆರೆಯುತ್ತದೆ. ಆದರೆ, ಮನಿ ಪ್ಲಾಂಟ್ ಇಡುವಾಗ ತಪ್ಪು ಮಾಡಿದರೆ, ಪ್ರಯೋಜನಗಳ ಬದಲಿಗೆ ನಷ್ಟವನ್ನು ಅನುಭವಿಸಬಹುದು. ವಿಶೇಷವಾಗಿ, ಮನಿ ಪ್ಲಾಂಟ್&zwnj;ನ ಬಳ್ಳಿ ಕೆಳಗೆ ನೇತಾಡಲು ಪ್ರಾರಂಭಿಸಿದಾಗ, ಅದನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಮನಿ ಪ್ಲಾಂಟ್&zwnj;ಗೆ ಸಂಬಂಧಿಸಿದ 5 ವಿಶೇಷ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಬೆಳೆಯುತ್ತಿರುವ ಮನಿ ಪ್ಲಾಂಟ್ ಬಳ್ಳಿ ಪ್ರಗತಿ, ಅಭಿವೃದ್ಧಿ, ಸಂತೋಷ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಆದರೆ, ಬಳ್ಳಿ ನೆಲದ ಕಡೆಗೆ ನೇತಾಡಲು ಪ್ರಾರಂಭಿಸಿದರೆ, ಅದನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ನೇತಾಡುವ ಬಳ್ಳಿ ಆರ್ಥಿಕ ನಷ್ಟವನ್ನು ಸೂಚಿಸುತ್ತದೆ ಮತ್ತು ಹಣದ ನಷ್ಟವನ್ನು ಸೂಚಿಸುತ್ತದೆ. ಆದ್ದರಿಂದ, ಬಳ್ಳಿಯು ಮೇಲಕ್ಕೆ ಬೆಳೆಯುವಂತೆ ನೋಡಿಕೊಳ್ಳಿ.&lt;/p&gt;&lt;img&gt;&lt;p&gt;ಮನಿ ಪ್ಲಾಂಟ್ ಸರಿಯಾದ ದಿಕ್ಕಿನಲ್ಲಿ ಇಟ್ಟಾಗ ಮಾತ್ರ ಪ್ರಯೋಜನಗಳನ್ನು ನೀಡುತ್ತದೆ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಆಗ್ನೇಯ ದಿಕ್ಕನ್ನು ಮನಿ ಪ್ಲಾಂಟ್ ಇಡಲು ಶುಭವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಮನಿ ಪ್ಲಾಂಟ್ ಅನ್ನು ಬೇರೆ ಯಾವುದೇ ದಿಕ್ಕಿನಲ್ಲಿ ಇಟ್ಟರೂ ಸಹ ಅದರ ಸಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ.&lt;/p&gt;&lt;img&gt;&lt;p&gt;ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ, ಅದನ್ನು ಚೆನ್ನಾಗಿ ನೋಡಿಕೊಳ್ಳಿ. ಒಣಗಿದ ಮತ್ತು ಹಳದಿ ಎಲೆಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಈ ಎಲೆಗಳು ಆರ್ಥಿಕ ನಷ್ಟವನ್ನು ಸಹ ಸೂಚಿಸುತ್ತವೆ. ಆದ್ದರಿಂದ, ಅವುಗಳನ್ನು ತಕ್ಷಣವೇ ತೆಗೆದುಹಾಕಬೇಕು.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್&zwnj;ನಲ್ಲಿರುವ ನೀರು ಕೊಳಕಾಗಿದ್ದರೆ, ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸೂಚಿಸುತ್ತದೆ. ಆದ್ದರಿಂದ, ಪ್ರತಿ ವಾರ ಮನಿ ಪ್ಲಾಂಟ್&zwnj;ನಲ್ಲಿರುವ ನೀರನ್ನು ಬದಲಾಯಿಸಬೇಕು.&lt;/p&gt;&lt;img&gt;&lt;p&gt;ಯಾರದ್ದೋ ಮನೆಯಿಂದ ಕದ್ದ ಅಥವಾ ಇನ್ನೊಬ್ಬರಿಂದ ಪಡೆದ ಮನಿ ಪ್ಲಾಂಟ್ ನೆಡುವುದರಿಂದ ಸಂಪತ್ತು ಬರುತ್ತದೆ ಎನ್ನುವ ನಂಬಿಕೆ ಇದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಕದಿಯುವುದು ಅಥವಾ ಇನ್ನೊಬ್ಬರಿಂದ ಪಡೆಯುವುದು ಶುಭವಲ್ಲ, ಬದಲಾಗಿ ಅಶುಭ. ಹಾಗೆ ಮಾಡುವುದರಿಂದ, ನೀವು ತಿಳಿಯದೆಯೇ ಇತರರ ನಕಾರಾತ್ಮಕತೆಯನ್ನು ನಿಮ್ಮ ಮನೆಗೆ ತರುತ್ತೀರಿ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/how-to-take-care-of-money-plant-at-home-rz5xgvt"/>
        </item>
        <item>
            <title><![CDATA[ಮಧ್ಯಾಹ್ನದ ಸಮಯದಲ್ಲಿ ಮನೆಯ ಈ ಮೂಲೆಯಲ್ಲಿ ಇದನ್ನು ಇರಿಸಿ, ಹಣದ ಮಳೆ ಆರಂಭವಾಗುತ್ತೆ!]]></title>
            <link>https://kannada.asianetnews.com/gallery/vaastu/vastu-tips-place-these-auspicious-items-in-the-north-east-corner-for-financial-growth-wgu5pba</link>
            <guid isPermaLink="true">https://kannada.asianetnews.com/gallery/vaastu/vastu-tips-place-these-auspicious-items-in-the-north-east-corner-for-financial-growth-wgu5pba</guid>
            <pubDate>Fri, 01 May 2026 17:27:23 +0530</pubDate>
            <description><![CDATA[&lt;p&gt;Vastu Shastra Tips: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಿಶೇಷ ವಸ್ತುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಾಗುತ್ತದೆ. ಸಮೃದ್ಧಿ ನೆಲಸುತ್ತೆ ಎಂದು ಹೇಳಲಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqhp1frhn2v7apg67gq1k7zw,imgname-thumbnail---2026-05-01t170814.728-1777636261649.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu Shastra Tips: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಿಶೇಷ ವಸ್ತುಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಾಗುತ್ತದೆ. ಸಮೃದ್ಧಿ ನೆಲಸುತ್ತೆ ಎಂದು ಹೇಳಲಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಒಂದು ವೇಳೆ ನಿಮ್ಮ ಜೀವನದಲ್ಲಿ ಸತತವಾಗಿ ಹಣದ ಮುಗ್ಗಟ್ಟು ಎದುರಾಗುತ್ತಿದ್ದರೆ ಮತ್ತು ಕಠಿಣ ಪರಿಶ್ರಮದ ಹೊರತಾಗಿಯೂ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದರೆ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾದ ಕೆಲವು ಸಣ್ಣಪುಟ್ಟ ಕ್ರಮಗಳು ನಿಮಗೆ ನೆಮ್ಮದಿ ನೀಡಬಹುದು. ಮನೆಯ ಪರಿಸರ ಮತ್ತು ಅಲ್ಲಿನ ಶಕ್ತಿಯು (Energy) ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ. ಸರಿಯಾದ ದಿಕ್ಕು ಮತ್ತು ಸರಿಯಾದ ಸಮಯದಲ್ಲಿ ಮಾಡುವ ಇಂತಹ ಕ್ರಮಗಳು ಧನಾತ್ಮಕ ಬದಲಾವಣೆಗಳನ್ನು ತರಬಲ್ಲವು.&lt;/p&gt;&lt;img&gt;&lt;p&gt;ಈ ನಂಬಿಕೆಗಳ ಪ್ರಕಾರ, ಮಧ್ಯಾಹ್ನದ ಸಮಯವು ವಿಶೇಷವಾಗಿ ಮಹತ್ವದ್ದಾಗಿದೆ, ಏಕೆಂದರೆ ಈ ಸಮಯದಲ್ಲಿ ಶಕ್ತಿಯ ಮಟ್ಟವು ಅತ್ಯಂತ ಸಕ್ರಿಯವಾಗಿರುತ್ತದೆ. ಈ ಸಮಯದಲ್ಲಿ ಮನೆಯ ಸರಿಯಾದ ಮೂಲೆಯಲ್ಲಿ ಕೆಲವು ಶುಭ ವಸ್ತುಗಳನ್ನು ಇರಿಸಿದರೆ, ಹಣಕಾಸಿಗೆ ಸಂಬಂಧಿಸಿದ ಅಡೆತಡೆಗಳು ಕಡಿಮೆಯಾಗಿ ಕ್ರಮೇಣ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಉತ್ತರ-ಪೂರ್ವ ದಿಕ್ಕನ್ನು 'ಈಶಾನ್ಯ ಕೋನ' ಎಂದು ಕರೆಯಲಾಗುತ್ತದೆ. ಇದನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಸ್ಥಳವೆಂದು ಪರಿಗಣಿಸಲಾಗುತ್ತದೆ. ಈ ಜಾಗದಲ್ಲಿ ಹಗುರವಾದ, ಸ್ವಚ್ಛವಾದ ಮತ್ತು ಶುಭ ವಸ್ತುಗಳನ್ನು ಇರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ.&amp;nbsp;ಮಧ್ಯಾಹ್ನದ ಸಮಯದಲ್ಲಿ ಈ ಮೂಲೆಯಲ್ಲಿ: ಶುದ್ಧ ನೀರಿನಿಂದ ತುಂಬಿದ ಪಾತ್ರೆಯನ್ನು ಇಡುವುದು ಶುಭ ಎಂದು ನಂಬಲಾಗಿದೆ.ಅರಿಶಿನ ಅಥವಾ ಕೇಸರಿಯ ಸಣ್ಣ ತುಂಡನ್ನು ಇಡುವ ಸಂಪ್ರದಾಯವೂ ಇದೆ.ಶಕ್ತಿಯ ಸಮತೋಲನಕ್ಕಾಗಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಡುವುದು ಕೂಡ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳು ಸಂಪತ್ತು ಮತ್ತು ಅದೃಷ್ಟಕ್ಕೆ ಸಂಬಂಧಿಸಿವೆ. ಇವುಗಳನ್ನು ಸರಿಯಾದ ಸಮಯದಲ್ಲಿ ಇರಿಸುವುದರಿಂದ ಧನಾತ್ಮಕ ಪ್ರಭಾವ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅವುಗಳೆಂದರೆ:ಕೆಂಪು ಬಟ್ಟೆಯಲ್ಲಿ ಕಟ್ಟಿದ ಅರಿಶಿನದ ಕೊಂಬು.ಸಣ್ಣ ಹಿತ್ತಾಳೆಯ ಗಂಟೆ ಅಥವಾ ದೀಪ.ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುವ ಕಮಲದ ಹೂವಿನ ಚಿತ್ರ ಅಥವಾ ಗುರುತು.ಅಕ್ಕಿ ಅಥವಾ ಧಾನ್ಯದ ಸಣ್ಣದಾದ ಸ್ವಚ್ಛ ಪಾತ್ರೆ.ಮಧ್ಯಾಹ್ನದ ಸಮಯದಲ್ಲಿ ಈ ವಸ್ತುಗಳನ್ನು ಮನೆಯ ಶಾಂತ ಮತ್ತು ಸ್ವಚ್ಛವಾದ ಮೂಲೆಯಲ್ಲಿ ಇರಿಸುವುದರಿಂದ ಸಮೃದ್ಧಿಯ ವಾತಾವರಣ ನಿರ್ಮಾಣವಾಗುತ್ತದೆ ಎಂಬ ನಂಬಿಕೆಯಿದೆ.&amp;nbsp;&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಸೂರ್ಯನ ಶಕ್ತಿಯು ಉತ್ತುಂಗದಲ್ಲಿರುತ್ತದೆ. ಈ ಸಮಯವು ಮಾನಸಿಕ ಮತ್ತು ಭೌತಿಕ ಶಕ್ತಿ ಎರಡರ ಮೇಲೆಯೂ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ಮಾಡುವ ಸಣ್ಣಪುಟ್ಟ ಕ್ರಮಗಳು ಕೂಡ ದೀರ್ಘಕಾಲದವರೆಗೆ ಧನಾತ್ಮಕ ಪರಿಣಾಮ ಬೀರಬಲ್ಲವು. ಕೆಲವು ನಂಬಿಕೆಗಳು ಹೀಗಿವೆ:ಈ ಸಮಯದಲ್ಲಿ ಮನಸ್ಸು ಮತ್ತು ಪರಿಸರವು ಹೆಚ್ಚು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.ಶಕ್ತಿಯ ಹರಿವು ಸಮತೋಲನದಲ್ಲಿರುವುದರಿಂದ ಶುಭ ಪರಿಣಾಮಗಳು ಹೆಚ್ಚಾಗುತ್ತವೆ.ಧ್ಯಾನ ಮತ್ತು ಸಕಾರಾತ್ಮಕ ವಿಚಾರಗಳ ಪ್ರಭಾವವು ಗಾಢವಾಗಿರುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಮನೆಯ ನಿರ್ದಿಷ್ಟ ಮೂಲೆಗಳಲ್ಲಿ ಕೆಲವು ಶುಭ ವಸ್ತುಗಳನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿರತೆಯ ಅವಕಾಶಗಳು ಬಲಗೊಳ್ಳುತ್ತವೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಅನೇಕ ಜನರು ಇದನ್ನು ನಂಬಿಕೆ ಮತ್ತು ಮಾನಸಿಕ ಶಾಂತಿಗಾಗಿ ಅನುಸರಿಸುತ್ತಾರೆ. ಸರಿಯಾದ ಭಾವನೆ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ಮಾಡುವ ಸಣ್ಣ ಪ್ರಯತ್ನಗಳು ಜೀವನದಲ್ಲಿ ಉತ್ತಮ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತವೆ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/vastu-tips-place-these-auspicious-items-in-the-north-east-corner-for-financial-growth-wgu5pba"/>
        </item>
        <item>
            <title><![CDATA[ಈ ಒಂದು ಸಣ್ಣ ಕೆಲ್ಸ ಮಾಡಿದ್ರೆ ಮಕ್ಕಳು ಮೊಬೈಲ್ ಮರೆತು ಬಿಡ್ತಾರೆ]]></title>
            <link>https://kannada.asianetnews.com/gallery/festivals/vastu-tips-for-children-watch-mobile-phone-bad-habit-too-much-screen-time-xwv1vs7</link>
            <guid isPermaLink="true">https://kannada.asianetnews.com/gallery/festivals/vastu-tips-for-children-watch-mobile-phone-bad-habit-too-much-screen-time-xwv1vs7</guid>
            <pubDate>Tue, 07 Apr 2026 15:15:43 +0530</pubDate>
            <description><![CDATA[&lt;p&gt;Vastu tips : ಮಕ್ಕಳು ಇಡೀ ದಿನ ಮೊಬೈಲ್ ನೋಡ್ತಾರೆ. ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಬೇಕು ಅಂದ್ರೆ ಹೆಚ್ಚು ಟೆನ್ಷನ್&zwnj; ಮಾಡ್ಕೊಳ್ಬೇಕಾಗಿಲ್ಲ. ವಾಸ್ತು ಪ್ರಕಾರ ಒಂದೇ ಒಂದು ದಿಕ್ಕು ನಿಮ್ಮ ಮಕ್ಕಳ ಮೊಬೈಲ್&zwnj; ಚಟಕ್ಕೆ ಮುಕ್ತಿ ನೀಡುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkmv3355hr77drjfbxvq82v,imgname-children-mobile-1775554628709.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu tips : ಮಕ್ಕಳು ಇಡೀ ದಿನ ಮೊಬೈಲ್ ನೋಡ್ತಾರೆ. ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಬೇಕು ಅಂದ್ರೆ ಹೆಚ್ಚು ಟೆನ್ಷನ್&zwnj; ಮಾಡ್ಕೊಳ್ಬೇಕಾಗಿಲ್ಲ. ವಾಸ್ತು ಪ್ರಕಾರ ಒಂದೇ ಒಂದು ದಿಕ್ಕು ನಿಮ್ಮ ಮಕ್ಕಳ ಮೊಬೈಲ್&zwnj; ಚಟಕ್ಕೆ ಮುಕ್ತಿ ನೀಡುತ್ತದೆ.&amp;nbsp;&lt;/p&gt;&lt;img&gt;&lt;p&gt;ಮಕ್ಕಳು ಮತ್ತೆ ಮೊಬೈಲ್ ಪೆವಿಕಾಲ್ ನಂತೆ ಅಂಟಿಕೊಳ್ಳುವ ವಸ್ತುವಾಗ್ಬಿಟ್ಟಿದೆ. ಅರ್ಧ ಗಂಟೆ ಮಕ್ಕಳು ಮೊಬೈಲ್ ನಿಂದ ದೂರ ಇರೋದಿಲ್ಲ. ಮೊಬೈಲ್, ರೀಲ್ಸ್, ಸೋಶಿಯಲ್ ಮೀಡಿಯಾ, ಟಿವಿ ಹೀಗೆ ಒಂದಾದ್ಮೇಲೆ ಒಂದು ಬೇಕು. ಮೊಬೈಲ್ ಇಲ್ದೆ ಮಕ್ಕಳ ಬಾಯಿಗೆ ಒಂದು ತುತ್ತು ಅನ್ನ ಹೋಗೋದಿಲ್ಲ. ಮಕ್ಕಳ ಈ ಚಟಕ್ಕೆ ಪಾಲಕರು ಬೇಸತ್ತಿದ್ದಾರೆ. ಮೊಬೈಲ್ ನಿಂದ ಮಕ್ಕಳನ್ನು ದೂರ ಇಡಲು ಅಲ್ಲಿ ಇಲ್ಲಿ ಅಂತ ಬೇರೆ ಬೇರೆ ಕ್ಲಾಸಿಗೆ ಮಕ್ಕಳನ್ನು ಹಾಕಿ ಬ್ಯುಸಿ ಮಾಡ್ತಿದ್ದಾರೆ. ಇಷ್ಟಾದ್ರೂ ಮಕ್ಕಳ ಚಟ ಬಿಡಿಸೋಕಾಗ್ತಿಲ್ಲ. ನೀವು ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಲು ವಾಸ್ತು ಟಿಪ್ಸ್ ಕೂಡ ಟ್ರೈ ಮಾಡ್ಬಹುದು.&lt;/p&gt;&lt;img&gt;&lt;p&gt;ವಾಸ್ತು ಪ್ರಕಾರ, ನಮ್ಮ ಮನೆ ದಿಕ್ಕು ಬಹಳ ಮುಖ್ಯ. ಮನೆಯ ಯಾವ ದಿಕ್ಕಿನಲ್ಲಿ ನಾವು ಯಾವ ವಸ್ತುಗಳನ್ನು ಇಡಬೇಕು ಎಂಬುದನ್ನು ತಿಳಿದಿರಬೇಕು. ದಿಕ್ಕು ಹಾಗೂ ಅಲ್ಲಿಡುವ ವಸ್ತು ನಮ್ಮ ಆರೋಗ್ಯ ಹಾಳು ಮಾಡುತ್ತದೆ. ಮಕ್ಕಳಿಂದ ಮೊಬೈಲ್ ದೂರ ಇಡಬೇಕು ಅಂದ್ರೆ ಮೊಬೈಲನ್ನು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿ ಇಡಿ. ಕ್ರಮೇಣ, ಮಗುವಿನ ಗಮನ ಸ್ವಯಂಚಾಲಿತವಾಗಿ ಮೊಬೈಲ್ ಫೋನ್ನಿಂದ ದೂರ ಸರಿಯೋಕೆ ಶುರುವಾಗುತ್ತೆ. ವಾಸ್ತು ಪ್ರಕಾರ, ನೈಋತ್ಯ ದಿಕ್ಕಿನಲ್ಲಿ ಇರಿಸಲಾದ ವಸ್ತುಗಳು ಕ್ರಮೇಣ ನಿಮ್ಮ ಜೀವನದಿಂದ ಕಣ್ಮರೆಯಾಗುತ್ತವೆ.&lt;/p&gt;&lt;img&gt;&lt;p&gt;ನಿಮ್ಮ ಕುಟುಂಬದಲ್ಲಿ ಯಾರಾದರೂ ಮದ್ಯ ಅಥವಾ ಯಾವುದೇ ವ್ಯಸನಕ್ಕೆ ಬಲಿಯಾಗಿದ್ದರೆ ನೀವು ನೈರುತ್ಯ ದಿಕ್ಕನ್ನು ಬಳಸಬಹುದು. ನೈಋತ್ಯ ದಿಕ್ಕಿನಲ್ಲಿ ಆ ವಸ್ತುಗಳನ್ನು ಇಡೋದ್ರಿಂದ ಅವರು ವ್ಯಸನದಿಂದ ದೂರ ಆಗ್ತಾರೆ. ಮನೆಯ ನೈರುತ್ಯ ದಿಕ್ಕಿನಲ್ಲಿ ಶೌಚಾಲಯ ಇರುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;ಈ ದಿಕ್ಕಿನಲ್ಲಿ ವಾಸ್ತು ದೋಷಗಳು ಅನಗತ್ಯ ಖರ್ಚುಗಳನ್ನು ಹೆಚ್ಚಿಸಬಹುದು. ವಿಶೇಷವಾಗಿ ಈ ದಿಕ್ಕಿನಲ್ಲಿ ಇರಿಸಲಾಗಿರುವ ವಸ್ತುಗಳ ಮೇಲೆ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ದಿಕ್ಕಿನಲ್ಲಿ ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ. ಜೀವನದಲ್ಲಿ ಸರಿ ಮತ್ತು ತಪ್ಪುಗಳ ನಡುವೆ ಆಯ್ಕೆ ಮಾಡಲು ಮೊದಲು ಈ ದಿಕ್ಕು ವಾಸ್ತು ದೋಷಗಳಿಂದ ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ನೈಋತ್ಯವನ್ನು ವಿಲೇವಾರಿ ದಿಕ್ಕು ಎಂದು ನಂಬಲಾಗಿದೆ. ಮಕ್ಕಳ ಪುಸ್ತಕಗಳು, ಕುಟುಂಬದ ಫೋಟೋಗಳು, ಲಾಕರ್ಗಳು ಇತ್ಯಾದಿ ಯಾವುದೇ ಅಮೂಲ್ಯ ವಸ್ತುಗಳನ್ನು ಇಲ್ಲಿ ಇಡಬೇಡಿ. ಕುಟುಂಬದ ಫೋಟೋಗಳನ್ನು ಇಲ್ಲಿ ಇಡುವುದರಿಂದ ಕುಟುಂಬದಲ್ಲಿ ಗಲಾಟೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಶಾಲಾ ಬ್ಯಾಗ್ಗಳು ಅಥವಾ ಪುಸ್ತಕಗಳನ್ನು ಇಟ್ಟುಕೊಳ್ಳುವುದರಿಂದ ಮಗು ನಿರುತ್ಸಾಹಗೊಳ್ಳಬಹುದು. ಓದಿನಲ್ಲಿ ಹಿಂದೆ ಬೀಳಬಹುದು. ನೈಋತ್ಯ ದಿಕ್ಕಿನಲ್ಲಿ ಯಾವುದೇ ವಸ್ತುಗಳನ್ನು ಇಡುವಾಗ ಮೊದಲು, ಅದರ ಅಗತ್ಯ ನಿಮಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಿಕೊಳ್ಳಿ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/festivals/vastu-tips-for-children-watch-mobile-phone-bad-habit-too-much-screen-time-xwv1vs7"/>
        </item>
        <item>
            <title><![CDATA[Vastu Tips: ಶ್ರೀಮಂತರ ಮನೆಯಲ್ಲೂ ಇದೆ ಈ ಮೂರ್ತಿ… ನಿಮ್ಮ ಮನೆಯಲ್ಲಿಟ್ಕೊಂಡ್ರೆ ನೀವೇ ಕೋಟ್ಯಾಧಿಪತಿ!]]></title>
            <link>https://kannada.asianetnews.com/gallery/vaastu/keeping-whiter-elephant-statue-make-you-rich-yp7wxev</link>
            <guid isPermaLink="true">https://kannada.asianetnews.com/gallery/vaastu/keeping-whiter-elephant-statue-make-you-rich-yp7wxev</guid>
            <pubDate>Fri, 06 Mar 2026 08:30:46 +0530</pubDate>
            <description><![CDATA[&lt;p&gt;Vastu Tips: ವಾಸ್ತು ಶಾಸ್ತ್ರದಲ್ಲಿ, ಬಿಳಿ ಆನೆಯನ್ನು ಶುಭ ಮತ್ತು ಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಇರಿಸಲಾದ ಬಿಳಿ ಆನೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jf27nnea2hnbh05tryemzf42,imgname-Vastu-for-happiness-and-wealth-in-the-new-year-1734168204746.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu Tips: ವಾಸ್ತು ಶಾಸ್ತ್ರದಲ್ಲಿ, ಬಿಳಿ ಆನೆಯನ್ನು ಶುಭ ಮತ್ತು ಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಇರಿಸಲಾದ ಬಿಳಿ ಆನೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.&lt;/p&gt;&lt;img&gt;&lt;p&gt;ಆನೆಯು ಅಡೆತಡೆಗಳನ್ನು ನಿವಾರಿಸುವವ ಎಂದು ಕರೆಯಲ್ಪಡುವ ಗಣೇಶನೊಂದಿಗೆ ಸಂಬಂಧ ಹೊಂದಿದೆ. ಆನೆಯ ಮುಖದ ರೂಪವು ಬುದ್ಧಿವಂತಿಕೆ, ಯಶಸ್ಸು ಮತ್ತು ಹೊಸ ಅವಕಾಶಗಳ ಸಂಕೇತವಾಗಿದೆ.&lt;/p&gt;&lt;img&gt;&lt;p&gt;ದೇವತೆಗಳ ರಾಜ ಇಂದ್ರನ ವಾಹನ ಬಿಳಿ ಆನೆ ಐರಾವತ. ಐರಾವತ ಎಲ್ಲೆಲ್ಲಿ ವಾಸಿಸುತ್ತಾನೋ ಅಲ್ಲಿ ಸಮೃದ್ಧಿ ಮತ್ತು ಶಕ್ತಿ ಇರುತ್ತದೆ. ಹಾಗಾಗಿ ಇದನ್ನು ಮನೆಯಲ್ಲಿ ಇಡೋದರಿಂದ ಸಂಪತು ಸಮೃದ್ಧಿ ನಿಮ್ಮದಾಗುತ್ತದೆ..&lt;/p&gt;&lt;img&gt;&lt;p&gt;ಮಲಗುವ ಕೋಣೆಯಲ್ಲಿ ಬಿಳಿ ಆನೆಯನ್ನು ಇಟ್ಟುಕೊಳ್ಳುವುದರಿಂದ ಸಂಬಂಧಗಳಲ್ಲಿ ನಂಬಿಕೆ ಮತ್ತು ಸಮತೋಲನ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿದೆ. ಇನ್ನು ಕಚೇರಿಯಲ್ಲಿ ಒಂದನ್ನು ಇಟ್ಟುಕೊಳ್ಳುವುದರಿಂದ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಬಲಗೊಳ್ಳುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಪ್ರಕಾರ, ಬಿಳಿ ಆನೆಯನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಮುಖ್ಯ ದ್ವಾರದಲ್ಲಿ ಒಳಮುಖವಾಗಿ ಒಂದು ಜೋಡಿ ಆನೆಗಳನ್ನು ಇಡುವುದು ರಕ್ಷಣೆ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ತಲೆಕೆಳಗಾದ ಸೊಂಡಿಲು ಯಶಸ್ಸು ಮತ್ತು ಪ್ರಗತಿಯನ್ನು ಸಂಕೇತಿಸುತ್ತದೆ, ಆದರೆ ತಲೆಕೆಳಗಾದ ಸೊಂಡಿಲು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ. ಸಮೃದ್ಧಿಗಾಗಿ, ತಲೆಕೆಳಗಾದ ಸೊಂಡಿಲು ಹೊಂದಿರುವ ಆನೆಯನ್ನು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;ಮುರಿದ ಅಥವಾ ಹಾನಿಗೊಳಗಾದ ವಿಗ್ರಹವನ್ನು ಇಟ್ಟುಕೊಳ್ಳುವುದನ್ನು ತಪ್ಪಿಸಿ. ಮಧ್ಯಮ ಗಾತ್ರದ ವಿಗ್ರಹಕ್ಕೆ ಆದ್ಯತೆ ನೀಡಿ. ವಿಗ್ರಹವನ್ನು ಸ್ವಚ್ಛವಾಗಿ ಮತ್ತು ಧೂಳಿನಿಂದ ಮುಕ್ತವಾಗಿಡಿ. ಗೌರವದಿಂದ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸಲಾದ ಬಿಳಿ ಆನೆಯು ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/keeping-whiter-elephant-statue-make-you-rich-yp7wxev"/>
        </item>
    </channel>
</rss>
