<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 11 Apr 2026 15:22:06 +0530</lastBuildDate>
        <atom:link href="https://kannada.asianetnews.com/rss/uttara-kannada" rel="self" type="application/rss+xml"/>
        <item>
            <title><![CDATA[Kali Tiger Reserve Eco-Sensitive Zone: ಕಾಳಿ ಹುಲಿ ಸಂರಕ್ಷಿತ ಪ್ರದೇಶ ಇನ್ನು ಪರಿಸರ ಸೂಕ್ಷ್ಮ ವಲಯ: ಕೇಂದ್ರ ಸರ್ಕಾರ ಮಹತ್ವದ ಘೋಷಣೆ]]></title>
            <link>https://kannada.asianetnews.com/karnataka-districts/the-kali-tiger-reserve-is-now-an-ecologically-sensitive-area-rav/articleshow-2c9gfyz</link>
            <guid isPermaLink="true">https://kannada.asianetnews.com/karnataka-districts/the-kali-tiger-reserve-is-now-an-ecologically-sensitive-area-rav/articleshow-2c9gfyz</guid>
            <pubDate>Wed, 08 Apr 2026 07:39:02 +0530</pubDate>
            <description><![CDATA[&lt;p&gt;ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ, 663 ಚದರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೂಕ್ಷ್ಮ ವಲಯವೆಂದು ಪರಿಗಣಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knncj7zcejvdyk8b1a3mycn5,imgname----------------------93--1775613059052.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.8) &lt;/strong&gt;ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಘೋಷಿಸಿದ್ದು, ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ.&lt;/p&gt;&lt;p&gt;663 ಚದರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೂಕ್ಷ್ಮ ವಲಯ, ಅರಣ್ಯದ ಅಂಚಿನಿಂದ 10 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರುವ 75 ಚ.ಕಿಲೋಮೀಟರ್ ಪ್ರದೇಶವನ್ನು ಕಂದಾಯ ಪ್ರದೇಶ ಎಂದು ಘೋಷಿಸಲಾಗಿದೆ. 84 ಚ.ಕಿಲೋಮೀಟರ್ ಪ್ರದೇಶವ್ಯಾಪ್ತಿಯ ಕಂದಾಯ ಗ್ರಾಮಗಳು, 503 ಕಿಲೋಮೀಟರ್ ಪ್ರದೇಶವ್ಯಾಪ್ತಿಯ ಅರಣ್ಯ ಇದರಲ್ಲಿ ಸೇರಿದೆ.&lt;/p&gt;&lt;p&gt;ಈ ಸಂಬಂಧ ಆಕ್ಷೇಪಣೆಗಳಿದ್ದರೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಅಲ್ಲದೆ, ಅಧಿಸೂಚನೆಯ ಬಳಿಕ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಈ ಸಂಬಂಧ ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸಬೇಕು. ಈ ಸಂಬಂಧ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ, ಯೋಜನೆ ರೂಪಿಸಬೇಕು ಎಂದು ತಿಳಿಸಲಾಗಿದೆ.&lt;/p&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಹಿಂದೆ ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಪ್ರದೇಶ) ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದಲ್ಲಿದ್ದು, ಹುಲಿಗಳು, ಆನೆಗಳು ಮತ್ತು ವೈವಿಧ್ಯಮಯ ವನ್ಯಜೀವಿಗಳಿಗೆ ನೆಲೆಯಾಗಿದೆ. ಇದು ಹಳಿಯಾಳ, ಕಾರವಾರ ಮತ್ತು ಜೋಯಿಡಾ ತಾಲೂಕುಗಳ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಕಾಳಿ ನದಿಯ ತೀರದಲ್ಲಿರುವ ಈ ಪ್ರದೇಶ, ಸಾಹಸ ಪ್ರವಾಸೋದ್ಯಮ ಮತ್ತು ವನ್ಯಜೀವಿ ವೀಕ್ಷಣೆಗೆ ಪ್ರಸಿದ್ಧವಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-kali-tiger-reserve-is-now-an-ecologically-sensitive-area-rav/articleshow-2c9gfyz"/>
        </item>
        <item>
            <title><![CDATA[ಕರಾವಳಿಯಲ್ಲಿ ನಾಳೆ 'ಈದುಲ್ ಫಿತ್ರ್' ಸಂಭ್ರಮ: ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ಈದ್ ಆಚರಣೆಗೆ ಖಾಝಿಗಳ ಘೋಷಣೆ]]></title>
            <link>https://kannada.asianetnews.com/karnataka-districts/eid-ul-fitr-celebration-coastal-karnataka-mangalore-udupi-kazis-announcement-san/articleshow-2fqo4q2</link>
            <guid isPermaLink="true">https://kannada.asianetnews.com/karnataka-districts/eid-ul-fitr-celebration-coastal-karnataka-mangalore-udupi-kazis-announcement-san/articleshow-2fqo4q2</guid>
            <pubDate>Thu, 19 Mar 2026 20:05:49 +0530</pubDate>
            <description><![CDATA[ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆ 'ಈದುಲ್ ಫಿತ್ರ್' ಹಬ್ಬವನ್ನು ಆಚರಿಸಲು ಜಿಲ್ಲಾ ಖಾಝಿಗಳು ಘೋಷಿಸಿದ್ದಾರೆ. ಒಂದು ತಿಂಗಳ ರಂಜಾನ್ ಉಪವಾಸದ ಬಳಿಕ ಕರಾವಳಿಯಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಸಿದ್ಧತೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km387bj25hsjq3sxe5x3f886,imgname-eid-ul-fitr-1773930786370.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಉಡುಪಿ (ಮಾ.19): &lt;/strong&gt;ಕರಾವಳಿಯಾದ್ಯಂತ ನಾಳೆ (ಶುಕ್ರವಾರ) ಸಡಗರದ 'ಈದುಲ್ ಫಿತ್ರ್' ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಮುಸ್ಸಂಜೆ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಬ್ಬ ಆಚರಿಸುವಂತೆ ಜಿಲ್ಲಾ ಖಾಝಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ನಾಯಿಬ್ ಖಾಝಿ ಉಸ್ತಾದ್ ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಮೂಳೂರು ಅವರು ಚಂದ್ರದರ್ಶನವನ್ನು ಖಚಿತಪಡಿಸಿದ್ದು, ನಾಳೆ ಈದ್ ಹಬ್ಬ ಆಚರಿಸಲು ಕರೆ ನೀಡಿದ್ದಾರೆ. ಈ ಕುರಿತು ಉಡುಪಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಕಳೆದ ಒಂದು ತಿಂಗಳಿನಿಂದ ರಂಜಾನ್ ಉಪವಾಸ ಆಚರಿಸಿದ್ದ ಮುಸ್ಲಿಮರಿಗೆ ಇಂದು ಚಂದ್ರದರ್ಶನವಾಗುವ ಮೂಲಕ ಉಪವಾಸ ಮುಕ್ತಾಯಗೊಂಡಿದೆ. ಒಂದು ತಿಂಗಳ ಕಠಿಣ ಉಪವಾಸ ನಂತರ ರಂಜಾನ್&zwnj; ಸಂಭ್ರಮ ಮನೆಮಾಡಿದೆ.&lt;/p&gt;&lt;h2&gt;&lt;strong&gt;ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ&lt;/strong&gt;&lt;/h2&gt;&lt;p&gt;ನಾಳೆ ಬೆಳಿಗ್ಗೆ ಕರಾವಳಿಯ ಎಲ್ಲಾ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಈದ್ ಉಲ್ ಫಿತ್ರ್ ನಿಮಿತ್ತ ವಿಶೇಷ ಪ್ರಾರ್ಥನೆ (ನಮಾಜ್) ನಡೆಯಲಿದೆ. ಸದ್ಯ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯಾದ್ಯಂತ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದ್ದು, ಈದ್ ಸಂಭ್ರಮ ಕಳೆಗಟ್ಟಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/eid-ul-fitr-celebration-coastal-karnataka-mangalore-udupi-kazis-announcement-san/articleshow-2fqo4q2"/>
        </item>
        <item>
            <title><![CDATA[ಮುಂಬೈನಿಂದ ಮಂಗಳೂರು ಕೊಂಕಣ ರೈಲು ಮಾರ್ಗದಲ್ಲಿ ಅಧಿಕಾರಿಗಳ ತಪಾಸಣೆ, ಕಾರಣವೇನು?]]></title>
            <link>https://kannada.asianetnews.com/karnataka-districts/konkan-railway-conducts-pre-monsoon-inspection-from-mumbai-to-thokur-near-mangaluru-gdp/articleshow-2gfx92i</link>
            <guid isPermaLink="true">https://kannada.asianetnews.com/karnataka-districts/konkan-railway-conducts-pre-monsoon-inspection-from-mumbai-to-thokur-near-mangaluru-gdp/articleshow-2gfx92i</guid>
            <pubDate>Wed, 18 Mar 2026 23:24:32 +0530</pubDate>
            <description><![CDATA[ಮುಂಬಯಿಯಿಂದ ಮಂಗಳೂರಿನ ತೋಕೂರುವರೆಗಿನ ಕೊಂಕಣ ರೈಲು ಮಾರ್ಗದಲ್ಲಿ ವಾರ್ಷಿಕ ಮಳೆಗಾಲ ಪೂರ್ವ ತಪಾಸಣೆ ಆರಂಭವಾಗಿದೆ. ರೈಲು ಹಳಿ, ಸುರಂಗ, ಭೂಕುಸಿತ ಸಾಧ್ಯತೆಯಿರುವ ಪ್ರದೇಶಗಳನ್ನು ಪರಿಶೀಲಿಸಿ, ಮಳೆಗಾಲದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ನಿರಂತರ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km112gf1dn2rj8n5dahs7r1g,imgname-konkan-railway-1773856178656.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮುಂಬಯಿಯಿಂದ ಮಂಗಳೂರು ಸಮೀಪದ ತೋಕೂರುವರೆಗೆ ವ್ಯಾಪಿಸಿರುವ ಕೊಂಕಣ ರೈಲು ಮಾರ್ಗದಲ್ಲಿ ವಾರ್ಷಿಕ ಮಳೆಗಾಲ ಪೂರ್ವ ತಪಾಸಣೆ ಪ್ರಕ್ರಿಯೆ ಆರಂಭವಾಗಿದೆ. ಪ್ರಾಕೃತಿಕ ಸೌಂದರ್ಯಕ್ಕಾಗಿ ಪ್ರಸಿದ್ಧವಾಗಿರುವ ಈ ಮಾರ್ಗ, ಮಳೆಗಾಲದಲ್ಲಿ ಭಾರೀ ಮಳೆ, ಭೂಕುಸಿತ ಮತ್ತು ನೀರು ನಿಲ್ಲುವ ಸಮಸ್ಯೆಗಳಂತಹ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ಮನಗಂಡು ಪ್ರತಿ ವರ್ಷ ಮುಂಗಾರು ಮಳೆ ಆರಂಭಕ್ಕೂ ಮುನ್ನ ಸಮಗ್ರ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿದೆ.&lt;/p&gt;&lt;h2&gt;ಮಾರ್ಗದ ವಿವಿಧ ಅಂಶ ಪರಿಶೀಲನೆ&lt;/h2&gt;&lt;p&gt;ಈ ಬಾರಿ ಮುಂಗಾರು ಪೂರ್ವ ತಪಾಸಣೆಯ ನೇತೃತ್ವವನ್ನು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ್ ಕುಮಾರ್ ಝಾ ವಹಿಸಿಕೊಂಡಿದ್ದರು. ನಿಗಮದ ವಿವಿಧ ತಾಂತ್ರಿಕ ಮತ್ತು ಕಾರ್ಯಾಚರಣಾ ವಿಭಾಗಗಳ ಹಿರಿಯ ಅಧಿಕಾರಿಗಳು ಈ ಪರಿವೀಕ್ಷಣೆಯಲ್ಲಿ ಪಾಲ್ಗೊಂಡು ಮಾರ್ಗದ ವಿವಿಧ ಅಂಶಗಳನ್ನು ಪರಿಶೀಲಿಸಿದರು.&lt;/p&gt;&lt;p&gt;ಮಳೆಗಾಲ ಪ್ರಾರಂಭವಾಗುವ ಮೊದಲು ರೈಲು ಮಾರ್ಗದ ಸುರಕ್ಷತೆ ಖಚಿತಪಡಿಸಿಕೊಳ್ಳುವುದು, ಮೂಲಭೂತ ಸೌಕರ್ಯಗಳಲ್ಲಿ ಇರುವ ಕೊರತೆಗಳನ್ನು ಗುರುತಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವುದು ಮತ್ತು ಪ್ರಯಾಣಿಕರಿಗೆ ನಿರಂತರ ಹಾಗೂ ಸುರಕ್ಷಿತ ಸಂಚಾರವನ್ನು ಒದಗಿಸುವುದು ಈ ತಪಾಸಣೆಯ ಮುಖ್ಯ ಉದ್ದೇಶವಾಗಿದೆ.&lt;/p&gt;&lt;h2&gt;ಸೂಕ್ಷ್ಮ ಅವಲೋಕನ&lt;/h2&gt;&lt;p&gt;ಪರಿಶೀಲನೆ ಪ್ರಕ್ರಿಯೆ ಮಡಗಾಂವ್&zwnj;ನಿಂದ ತೋಕೂರುವರೆಗಿನ ವಿಭಾಗದಿಂದ ಆರಂಭಗೊಂಡು, ಬಳಿಕ ಮರುದಿನ ಮಡಗಾಂವ್&zwnj;ನಿಂದ ರೋಹಾ ತನಕದ ಮಾರ್ಗವನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಈ ವೇಳೆ ರೈಲು ಹಳಿ, ಸೇತುವೆಗಳು, ಸುರಂಗ ಮಾರ್ಗಗಳು, ಇಳಿಜಾರು ಪ್ರದೇಶಗಳು ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಯಿತು.&lt;/p&gt;&lt;p&gt;ಇದರ ಜೊತೆಗೆ ಸಿಗ್ನಲ್ ವ್ಯವಸ್ಥೆಗಳ ಕಾರ್ಯಕ್ಷಮತೆ, ಮಳೆಗಾಲದಲ್ಲಿ ನೀರು ನಿಲ್ಲುವ ಪ್ರದೇಶಗಳ ನಿರ್ವಹಣೆ, ನಿಲ್ದಾಣಗಳ ಮೂಲಭೂತ ಸೌಲಭ್ಯಗಳು ಹಾಗೂ ಸೋಲಾರ್ ಲೈಟಿಂಗ್ ವ್ಯವಸ್ಥೆಗಳ ಅಳವಡಿಕೆ ಮತ್ತು ಕಾರ್ಯನಿರ್ವಹಣೆಯನ್ನು ಕೂಡ ಪರಿಶೀಲಿಸಲಾಯಿತು.&lt;/p&gt;&lt;p&gt;ಒಟ್ಟಾರೆ, ಕೊಂಕಣ ರೈಲು ಮಾರ್ಗದಲ್ಲಿ ನಡೆಸಲಾಗುತ್ತಿರುವ ಈ ಮುಂಗಾರು ಪೂರ್ವ ತಪಾಸಣೆ ಮಳೆಗಾಲದಲ್ಲಿ ಸಂಭವಿಸಬಹುದಾದ ಅಡಚಣೆಗಳನ್ನು ತಡೆಗಟ್ಟುವ ಮೂಲಕ ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಸಂಚಾರದ ನಿರಂತರತೆಯನ್ನು ಖಚಿತಪಡಿಸಲು ಮಹತ್ವದ ಪಾತ್ರವಹಿಸುತ್ತದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/konkan-railway-conducts-pre-monsoon-inspection-from-mumbai-to-thokur-near-mangaluru-gdp/articleshow-2gfx92i"/>
        </item>
        <item>
            <title><![CDATA['ಹಳ್ಳಿ ಹೈದ ಪ್ಯಾಟೆಗೆ ಬಂದ' ಖ್ಯಾತಿಯ ಬಾವತೀಶ್ ಇನ್ನಿಲ್ಲ;  ನಿಂತಿದ್ದ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ವಾಹನ!]]></title>
            <link>https://kannada.asianetnews.com/tv-talk/reality-show-star-bavathish-dies-in-bike-accident-yellapur-karwar-san/articleshow-32im1v5</link>
            <guid isPermaLink="true">https://kannada.asianetnews.com/tv-talk/reality-show-star-bavathish-dies-in-bike-accident-yellapur-karwar-san/articleshow-32im1v5</guid>
            <pubDate>Tue, 24 Mar 2026 23:12:20 +0530</pubDate>
            <description><![CDATA[&lt;p&gt;'ಹಳ್ಳಿ ಹೈದ ಪ್ಯಾಟೆಗೆ ಬಂದ' ರಿಯಾಲಿಟಿ ಶೋ ಖ್ಯಾತಿಯ ಸ್ಪರ್ಧಿ ಬಾವತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಚಲಾಯಿಸುತ್ತಿದ್ದ ಮೊಫೆಡ್, ರಸ್ತೆ ಬದಿ ನಿಂತಿದ್ದ ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmgevgayxgmqg9yc56w17rtb,imgname-reality-show-star-bhavathis-death-news-1774373945694.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ (ಮಾ.24): &lt;/strong&gt;ಖ್ಯಾತ ರಿಯಾಲಿಟಿ ಶೋ 'ಹಳ್ಳಿ ಹೈದ ಪ್ಯಾಟೆಗೆ ಬಂದ' ಸೀಸನ್-3ರ ಸ್ಪರ್ಧಿಯಾಗಿದ್ದ ಬಾವತೀಶ್ (28) ಅವರು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಸಮೀಪ ಈ ದುರ್ಘಟನೆ ಸಂಭವಿಸಿದೆ. ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ನಿವಾಸಿಯಾದ ಬಾವತೀಶ್ ಅವರು ತಮ್ಮ ಟಿವಿಎಸ್ ಮೊಫೆಡ್ ವಾಹನದಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎಸ್&zwnj;ಆರ್&zwnj;ಟಿಸಿ (KSRTC) ಬಸ್&zwnj;ಗೆ ಅತೀ ವೇಗವಾಗಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಅಪಘಾತವಾದ ತಕ್ಷಣ ಅವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾವತೀಶ್ ಅವರು ರಸ್ತೆಯಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ಬಾವತೀಶ್ ಅವರು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದರು. ಅವರ ಅನಿರೀಕ್ಷಿತ ಸಾವು ಕುಟುಂಬಸ್ಥರು ಹಾಗೂ ಅಭಿಮಾನಿ ವಲಯದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/reality-show-star-bavathish-dies-in-bike-accident-yellapur-karwar-san/articleshow-32im1v5"/>
        </item>
        <item>
            <title><![CDATA[ಗೃಹ ಸಚಿವರ ಆಪ್ತ, ಕೈ ಮುಖಂಡ ಗೋಪಾಲಕೃಷ್ಣಗೆ ಚಾಕು ಇರಿತ; ಗೋವಾ ನೋಂದಣಿ ಕಾರ್‌ನಲ್ಲಿ ದುಷ್ಕರ್ಮಿಗಳು ಎಸ್ಕೇಪ್!]]></title>
            <link>https://kannada.asianetnews.com/karnataka-districts/karwar-ankola-congress-leader-gopalakrishna-nayak-stabbed-home-minister-aide-sat/articleshow-6u4unog</link>
            <guid isPermaLink="true">https://kannada.asianetnews.com/karnataka-districts/karwar-ankola-congress-leader-gopalakrishna-nayak-stabbed-home-minister-aide-sat/articleshow-6u4unog</guid>
            <pubDate>Wed, 25 Mar 2026 17:02:03 +0530</pubDate>
            <description><![CDATA[&lt;p&gt;ಉತ್ತರ ಕನ್ನಡದ ಅಂಕೋಲಾದಲ್ಲಿ, ಗೃಹ ಸಚಿವರ ಆಪ್ತರೆನ್ನಲಾದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಮೇಲೆ ಆರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmjc5khgd5cd6taw15njn3ts,imgname-home-minister-paramesswar-clostest-gopalakrishna-1774438239791.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಗೃಹ ಸಚಿವರ ಆಪ್ತರೆಂದು ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಮೇಲೆ ಆರು ಮಂದಿ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿದ್ದಾರೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ನಾಯಕ ಅವರನ್ನು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಅಂಕೋಲಾ ಪಟ್ಟಣದ ಹೃದಯಭಾಗದಲ್ಲೇ ಈ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರು ಅಂಕೋಲಾದಲ್ಲಿ ತಮ್ಮ ಕೆಲಸದ ನಿಮಿತ್ತ ತೆರಳುತ್ತಿದ್ದಾಗ, ಗೋವಾ ನೋಂದಣಿ (Goa Registration) ಹೊಂದಿರುವ ಕಾರಿನಲ್ಲಿ ಬಂದ ಆರು ಮಂದಿ ಅಪರಿಚಿತರು ಹಠಾತ್ತನೆ ದಾಳಿ ಮಾಡಿದ್ದಾರೆ. ದುಷ್ಕರ್ಮಿಗಳು ಗೋಪಾಲಕೃಷ್ಣ ನಾಯಕ ಅವರ ಹೊಟ್ಟೆ ಮತ್ತು ತಲೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.&lt;/p&gt;&lt;p&gt;ಈ ಭೀಕರ ದಾಳಿಯ ಸಂದರ್ಭದಲ್ಲಿ ಗೋಪಾಲಕೃಷ್ಣ ನಾಯಕ ಅವರ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿಗೂ ದುಷ್ಕರ್ಮಿಗಳು ಚಾಕು ಇರಿದಿದ್ದು, ಅವರಿಗೂ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಅಂಕೋಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋಪಾಲಕೃಷ್ಣ ನಾಯಕ ಅವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಸ್ಥಳಕ್ಕೆ ಎಸ್&zwnj;ಪಿ ಭೇಟಿ, ತನಿಖೆ ಚುರುಕು:&lt;/strong&gt;&lt;/h3&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ನಡೆಸಿದವರು ಯಾರು? ದಾಳಿಗೆ ಹಳೇ ದ್ವೇಷ ಕಾರಣವೇ ಅಥವಾ ರಾಜಕೀಯ ಪ್ರೇರಿತವೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;&lt;strong&gt;ದುಷ್ಕರ್ಮಿಗಳಿಗಾಗಿ ಪೊಲೀಸರ ಬಲೆ:&lt;/strong&gt;&lt;/h2&gt;&lt;p&gt;ದಾಳಿ ನಡೆಸಿದ ಬಳಿಕ ಆರೋಪಿಗಳು ಅದೇ ಕಾರಿನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ. ಗೋವಾ ನೋಂದಣಿಯ ಕಾರು ಇದಾಗಿರುವುದರಿಂದ, ಜಿಲ್ಲೆಯಾದ್ಯಂತ ನಾಕಾಬಂದಿ ಹಾಕಲಾಗಿದ್ದು, ಗಡಿ ಭಾಗಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. &quot;ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಪತ್ತೆಹಚ್ಚಲಾಗುವುದು,&quot; ಎಂದು ಎಸ್&zwnj;ಪಿ ದೀಪನ್ ತಿಳಿಸಿದ್ದಾರೆ.&lt;/p&gt;&lt;p&gt;ಗೃಹ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕ ಅವರ ಮೇಲಿನ ಈ ದಾಳಿಯು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karwar-ankola-congress-leader-gopalakrishna-nayak-stabbed-home-minister-aide-sat/articleshow-6u4unog"/>
        </item>
        <item>
            <title><![CDATA[ಕಾರವಾರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಗೋವಾ ಆಕರ್ಷಣೆ, ಮೋಜು ಮಸ್ತಿಗೆ ರಸ್ತೆ ಮಧ್ಯೆಯೇ ಜೀವ ಬಿಡ್ತಿರೋ ಮಕ್ಕಳು!]]></title>
            <link>https://kannada.asianetnews.com/karnataka-districts/karwar-medical-students-under-scrutiny-as-goa-trips-lead-to-accidents-and-deaths-gdp/articleshow-77ttqzt</link>
            <guid isPermaLink="true">https://kannada.asianetnews.com/karnataka-districts/karwar-medical-students-under-scrutiny-as-goa-trips-lead-to-accidents-and-deaths-gdp/articleshow-77ttqzt</guid>
            <pubDate>Tue, 17 Mar 2026 19:30:28 +0530</pubDate>
            <description><![CDATA[ಗೋವಾ ರಾಜ್ಯದ ಸಾಮೀಪ್ಯದಿಂದಾಗಿ ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮೋಜು-ಮಸ್ತಿಯ ಜೀವನಶೈಲಿಗೆ ಆಕರ್ಷಿತರಾಗುತ್ತಿದ್ದಾರೆ. ಈ ಕಾರಣದಿಂದಾಗಿ ಕಳೆದ ಒಂದು ವರ್ಷದಲ್ಲಿ ಹಲವು ರಸ್ತೆ ಅಪಘಾತಗಳು ಸಂಭವಿಸಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗಳಿಂದ ಕಾಲೇಜು ಆಡಳಿತದ ಮೇಲ್ವಿಚಾರಣೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jdm4e3qvdxmd0gcjbkn1ms8q,imgname-Bihar-AYUSH-Doctors-Recruitment-2024-1732621307643.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಗೋವಾ ರಾಜ್ಯದ ಸಮೀಪದಲ್ಲಿರುವುದರಿಂದ ಮೋಜು-ಮಸ್ತಿಯ ಆಕರ್ಷಣೆಗೆ ಒಳಗಾಗಿ ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಅಪಾಯಕರ ಜೀವನ ಶೈಲಿಯತ್ತ ತಿರುಗುತ್ತಿರುವ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಸಾಮಾಜಿಕ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದು, ಕಾಲೇಜು ಆಡಳಿತದ ಮೇಲೂ ಪ್ರಶ್ನೆಗಳು ಎದ್ದಿವೆ.&lt;/p&gt;&lt;h2&gt;ಗೋವಾ ಸಮೀಪ, ವಿದ್ಯಾರ್ಥಿಗಳಿಗೆ ಆಕರ್ಷಣೆ&lt;/h2&gt;&lt;p&gt;ಕಾರವಾರ ತಾಲೂಕು ಗೋವಾ ರಾಜ್ಯದ ಗಡಿಯನ್ನು ಹಂಚಿಕೊಂಡಿದ್ದು, ನಗರದಿಂದ ಗೋವಾ ಗಡಿ ಕೇವಲ 11 ಕಿಲೋಮೀಟರ್ ದೂರದಲ್ಲಿದೆ. ತರಗತಿಗಳು ಮುಗಿದ ನಂತರ ಹಲವಾರು ವೈದ್ಯಕೀಯ ವಿದ್ಯಾರ್ಥಿಗಳು ನಿತ್ಯವೂ ಮನರಂಜನೆಗಾಗಿ ಗೋವಾಕ್ಕೆ ತೆರಳುತ್ತಿರುವುದಾಗಿ ತಿಳಿದುಬಂದಿದೆ. ಅಲ್ಲಿ ಮದ್ಯಪಾನ ಮಾಡಿ, ತಡರಾತ್ರಿ ವಾಹನ ಚಲಾಯಿಸಿಕೊಂಡು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್&zwnj;ಗೆ ಮರಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.&lt;/p&gt;&lt;h2&gt;ಅಪಘಾತಗಳಲ್ಲಿ ವಿದ್ಯಾರ್ಥಿಗಳ ಸಾವು&lt;/h2&gt;&lt;p&gt;ಈ ರೀತಿಯ ನಿರ್ಲಕ್ಷ್ಯದಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ದ್ವಿಚಕ್ರ ವಾಹನ ಅಪಘಾತಗಳಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ, ಮದ್ಯಪಾನದ ಮತ್ತಿನಲ್ಲಿ ವಾಹನ ಚಲಾಯಿಸಿದ ವಿದ್ಯಾರ್ಥಿಗಳಿಂದ ಇಬ್ಬರು ಸ್ಥಳೀಯರು ಜೀವ ಕಳೆದುಕೊಂಡ ಘಟನೆಗಳೂ ನಡೆದಿವೆ.&lt;/p&gt;&lt;p&gt;ಇತ್ತೀಚೆಗೆ ಗೋವಾದ ಪೊಳೆಲಂ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರವಾರದ ವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ, ಚಿತ್ರದುರ್ಗ ಮೂಲದ ಪ್ರೀತಮ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಗದಗ ಮೂಲದ ಬಸವರಾಜ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಗೋವಾದ ಬಾಂಬೋಲಿಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವರಾಜ ಪ್ರಸ್ತುತ ಜೀವ-ಮರಣ ಮಧ್ಯೆ ಹೋರಾಡುತ್ತಿದ್ದಾನೆ.&lt;/p&gt;&lt;h2&gt;ಹಿಂದಿನ ಘಟನೆಗಳು ಆತಂಕ ಹೆಚ್ಚಿಸಿತ್ತು&lt;/h2&gt;&lt;p&gt;2025ರ ಅಕ್ಟೋಬರ್ ತಿಂಗಳಲ್ಲಿ ಆದರ್ಶ ಪೂಜಾರಿ ಎಂಬ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರೆ, ನವೆಂಬರ್ 13ರಂದು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವೈದ್ಯಕೀಯ ವಿದ್ಯಾರ್ಥಿಗಳಿಂದ ಕಾರವಾರದ 15 ವರ್ಷದ ಬಾಲಕನೊಬ್ಬ ಬಲಿಯಾಗಿದ್ದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.&lt;/p&gt;&lt;h2&gt;ಆಡಳಿತದ ಮೇಲಿನ ಆರೋಪಗಳು&lt;/h2&gt;&lt;p&gt;ವೈದ್ಯಕೀಯ ಕಾಲೇಜಿನ ಆಡಳಿತ ಮತ್ತು ಹಾಸ್ಟೆಲ್ ವ್ಯವಸ್ಥೆಯ ಮೇಲೆ ಸ್ಥಳೀಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ಕಾಲೇಜು ಮುಖ್ಯಸ್ಥರ ಹಿಡಿತವಿಲ್ಲದಿರುವುದು ಹಾಗೂ ಹಾಸ್ಟೆಲ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿಲ್ಲವೆಂಬುದು ಪ್ರಮುಖ ಆರೋಪವಾಗಿದೆ. ತಡರಾತ್ರಿ ವೇಳೆಯಲ್ಲಿಯೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದ್ದು, ಹಾಸ್ಟೆಲ್ ವಾರ್ಡನ್&zwnj;ಗಳ ಮೇಲ್ವಿಚಾರಣೆ ಕೇವಲ ನಾಮಕಾವಸ್ಥೆಯಲ್ಲೇ ಉಳಿದಿದೆ ಎಂಬ ಟೀಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಸಾಮಾಜಿಕ ಹೋರಾಟಗಾರರ ಆತಂಕ&lt;/h2&gt;&lt;p&gt;ಸಾಮಾಜಿಕ ಹೋರಾಟಗಾರ ಮಾಧವ ನಾಯಕ ಈ ಬಗ್ಗೆ ಮಾತನಾಡಿ, ವೈದ್ಯಕೀಯ ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿಗಳು ಮೋಜುಮಸ್ತಿಯಲ್ಲಿ ತೊಡಗುತ್ತಿರುವುದು ದುರಂತ. ಪೋಷಕರು ಸಾಲ ಮಾಡಿ ಮಕ್ಕಳನ್ನು ಓದಲು ಕಳುಹಿಸುತ್ತಾರೆ. ಆದರೆ ಇಲ್ಲಿ ಅವರು ದಾರಿ ತಪ್ಪುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.&lt;/p&gt;&lt;h2&gt;ಕಠಿಣ ಕ್ರಮಕ್ಕೆ ಒತ್ತಾಯ&lt;/h2&gt;&lt;p&gt;ಕಾಲೇಜು ಹಾಗೂ ಹಾಸ್ಟೆಲ್ ಆಡಳಿತವು ವಿದ್ಯಾರ್ಥಿಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರದಿದ್ದರೆ ಇಂತಹ ಅಪಘಾತಗಳು ಮುಂದುವರಿಯುತ್ತವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಗಳು ವೈದ್ಯಕೀಯ ವಿದ್ಯಾರ್ಥಿಗಳ ಜವಾಬ್ದಾರಿತನ ಹಾಗೂ ಕಾಲೇಜು ಆಡಳಿತದ ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karwar-medical-students-under-scrutiny-as-goa-trips-lead-to-accidents-and-deaths-gdp/articleshow-77ttqzt"/>
        </item>
        <item>
            <title><![CDATA[ಗೋವಾ ರಸ್ತೆ ಅಪಘಾತದಲ್ಲಿ ಕಾರವಾರ ವೈದ್ಯಕೀಯ ವಿದ್ಯಾರ್ಥಿ ಪ್ರೀತಂ ಸಾವು; ಮತ್ತೋರ್ವ ಗಂಭೀರ]]></title>
            <link>https://kannada.asianetnews.com/gallery/karnataka-districts/karwar-medical-student-dies-in-goa-road-accident-another-critically-injured-mrq-8hu84l5</link>
            <guid isPermaLink="true">https://kannada.asianetnews.com/gallery/karnataka-districts/karwar-medical-student-dies-in-goa-road-accident-another-critically-injured-mrq-8hu84l5</guid>
            <pubDate>Tue, 17 Mar 2026 13:55:51 +0530</pubDate>
            <description><![CDATA[ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರವಾರದ ವೈದ್ಯಕೀಯ ವಿದ್ಯಾರ್ಥಿ ಪ್ರೀತಂ ಮೃತಪಟ್ಟಿದ್ದಾರೆ. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಲಾರಿ ಮತ್ತು ಹಾಲಿನ ಕ್ಯಾಂಟರ್ ನಡುವಿನ ಡಿಕ್ಕಿಯಲ್ಲಿ ಬೈಕ್ ಸವಾರ ಅಬ್ದುಲ್ ರೆಹಮಾನ್ ಸಾವನ್ನಪ್ಪಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkxe1b873tw779a5qm0827vv,imgname-bike-accident--2--1773735554311.jpg" type="image/jpeg" height="390" width="690"/>
            <content:encoded><![CDATA[ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರವಾರದ ವೈದ್ಯಕೀಯ ವಿದ್ಯಾರ್ಥಿ ಪ್ರೀತಂ ಮೃತಪಟ್ಟಿದ್ದಾರೆ. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಲಾರಿ ಮತ್ತು ಹಾಲಿನ ಕ್ಯಾಂಟರ್ ನಡುವಿನ ಡಿಕ್ಕಿಯಲ್ಲಿ ಬೈಕ್ ಸವಾರ ಅಬ್ದುಲ್ ರೆಹಮಾನ್ ಸಾವನ್ನಪ್ಪಿದ್ದಾರೆ.&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೆಡಿಕಲ್ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಅಪಘಾತದಲ್ಲಿ ಮೃತರಾಗಿದ್ದಾರೆ. ಪ್ರೀತಂ ಮೃತ ವಿದ್ಯಾರ್ಥಿಯಾಗಿದ್ದು, ತಡರಾತ್ರಿ ಗೋವಾದ ಪೋಳೆಂನಲ್ಲಿ ಅಪಘಾತ ಸಂಭವಿಸಿದೆ. ಚಿತ್ರದುರ್ಗ ಮೂಲದ ಪ್ರೀತಂ, ಕಾರವಾರದ ಕಾಲೇಜಿನಲ್ಲಿ ಓದುತ್ತಿದ್ದರು. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ಊಟಕ್ಕಾಗಿ ಗೆಳೆಯರೊಂದಿಗೆ ಗೋವಾದ ಪೋಳೆಂಗೆ ತೆರಳಿದ್ದರು. ಊಟ ಮಾಡಿ ಹಿಂದಿರುಗುವಾಗ ಗೋವಾ ಪೋಳೆಂನ ಕ್ಲೌಡ್ 9 ಹೊಟೇಲ್ ಬಳಿ ಅಪಘಾತ ಸಂಭವಿಸಿದೆ. ಪ್ರೀತಂ ಜೊತೆಯಲ್ಲಿದ್ದ ಮತ್ತೋರ್ವ ವಿದ್ಯಾರ್ಥಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಪ್ರೀತಂ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಲಾರಿ ಮತ್ತು ಹಾಲಿನ ಕ್ಯಾಂಟರ್ ನಡುವೆ ಡಿಕ್ಕಿಯಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಅಪಘಾತದ ವೇಳೆ ಪಕ್ಕದಲ್ಲಿಯೇ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದಿದೆ. ಅಪಘಾತದಲ್ಲಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.&lt;/p&gt;&lt;img&gt;&lt;p&gt;ಮೃತ ಬೈಕ್ ಸವಾರನನ್ನು 23 ವರ್ಷದ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಗೊಬ್ಬರದ ಲಾರಿ ಸಿಂಧನೂರಿನಿಂದ ಹಂಚಿನಾಳ ಮಾರ್ಗವಾಗಿ ಹೊರಟಿತ್ತು. ಹಾಲಿನ ಟ್ಯಾಂಕರ್ ಸಿಂಧನೂರು ಕಡೆ ತೆರಳುತ್ತಿತ್ತು. ಘಟನೆಯಲ್ಲಿ ಲಾರಿ ಹಾಗೂ ಕ್ಯಾಂಟರ್ ಚಾಲಕರಿಬ್ಬರೂ ಗಾಯಗೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಾತು ಮುಗಿಸುವ ಮುನ್ನವೇ ಕೊನೆಯುಸಿರೆಳೆದ ಮಹಿಳೆ: ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ದುರಂತ: ವೀಡಿಯೋ&lt;/strong&gt;&lt;/p&gt;&lt;img&gt;&lt;p&gt;ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ನಡೆದ ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆರ್&zwnj;ಎಸ್&zwnj;ಎಸ್&zwnj; ನಿಷೇಧಿಸಿ ಎಂದ ಅಮೆರಿಕ ಆಯೋಗದ ವರದಿ ತಿರಸ್ಕರಿಸಿ ಭಾರತದ ಖಡಕ್ ಉತ್ತರ&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/karwar-medical-student-dies-in-goa-road-accident-another-critically-injured-mrq-8hu84l5"/>
        </item>
        <item>
            <title><![CDATA[ಪ್ರವಾಸೋದ್ಯಮಕ್ಕೆ ಬಲ ತುಂಬಿದ ಉತ್ತರ ಕರ್ನಾಟಕ, ಕರಾವಳಿ: ಸಚಿವ ಎಚ್.ಕೆ.ಪಾಟೀಲ]]></title>
            <link>https://kannada.asianetnews.com/karnataka-districts/hk-patil-tourism-development-dandeli-syntheri-rocks-projects-gvd/articleshow-ap3qigl</link>
            <guid isPermaLink="true">https://kannada.asianetnews.com/karnataka-districts/hk-patil-tourism-development-dandeli-syntheri-rocks-projects-gvd/articleshow-ap3qigl</guid>
            <pubDate>Tue, 24 Mar 2026 19:06:57 +0530</pubDate>
            <description><![CDATA[&lt;p&gt;ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿ ಕೊಂಡಿದ್ದು, ಆಕರ್ಷಣಿಯ ಪ್ರವಾಸಿ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3aeksde1ab9d7jvrn671kr9,imgname-dvd-1755918755246.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಳಿಯಾಳ (ಮಾ.24): &lt;/strong&gt;ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತರ ಕರ್ನಾಟಕ ಭಾಗ ಹಾಗೂ ಕರಾವಳಿ ಜಿಲ್ಲೆಗಳು ಬಲವನ್ನು ತುಂಬಿವೆ. ರಾಜ್ಯದ ಪ್ರವಾಸಿ ತಾಣಗಳು ಇಂದು ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿ ಕೊಂಡಿದ್ದು, ಆಕರ್ಷಣಿಯ ಪ್ರವಾಸಿ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.&lt;/p&gt;&lt;p&gt;ಪಟ್ಟಣದಲ್ಲಿ ಪ್ರವಾಸೋದ್ಯಮ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಮಾದರಿಯ ಸುಸಜ್ಜಿತ ಸಮಾವೇಶ ಕೇಂದ್ರವನ್ನು ನಡೆದ ಅದ್ಧೂರಿ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.&lt;/p&gt;&lt;p&gt;ರಾಜ್ಯ ಸರ್ಕಾರವು ಪ್ರವಾಸೋದ್ಯಮದ ಮೂಲಕ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ, ಇತಿಹಾಸದ ಪರಿಚಯವನ್ನುಂಟು ಮಾಡುವಂತಹ ಯೋಜನೆ ರೂಪಿಸುತ್ತಿದೆ. ಅದಕ್ಕಾಗಿ ಈ ಬಾರಿ ಬಜೆಟನಲ್ಲಿ ರಾಜ್ಯದಲ್ಲಿನ ಧಾರ್ಮಿಕ ಪ್ರವಾಸಿ ತಾಣಗಳಲ್ಲಿ 100 ಸುಸಜ್ಜಿತವಾದ ಡ್ರಾಮೆಟರಿಗಳನ್ನು ನಿರ್ಮಿಸಲು ಅನುದಾನ ಮೀಸಲಾಗಿಡಲಾಗಿದೆ. ಹಳಿಯಾಳ ದಾಂಡೇಲಿ ತಾಲೂಕಿನಲ್ಲಿ ಉದ್ಯಾನಗಳ ಅಭಿವೃದ್ಧಿಗೆ ₹1ಕೋಟಿ, ಸಿಂಥೇರಿ ರಾಕ್ಸ್ ನಲ್ಲಿ ಹಾಗೂ ಕ್ಯಾಸಲ್&zwnj;ರಾಕ್&zwnj;ನಲ್ಲಿನ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ತಲಾ ₹50ಲಕ್ಷ ಮಂಜೂರು ಮಾಡುತ್ತಿರುವುದಾಗಿ ಘೋಷಿಸಿದರು.&lt;/p&gt;&lt;p&gt;ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಸರ್ಕಾರಕ್ಕೆ ಯಾವ ಕ್ಷೇತ್ರದಿಂದ ಆದಾಯ ಬರುತ್ತದೆಯೋ, ಆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಮೊದಲ ಪ್ರಾಶಸ್ತ್ಯ ನೀಡಬೇಕು. ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಗಳು ಉದ್ಯೋಗ ಸೃಷ್ಟಿಯ ಜೊತೆಯಲ್ಲಿ ಸರ್ಕಾರಕ್ಕೂ ಆದಾಯ ತರುತ್ತಿವೆ. ಈ ಕ್ಷೇತ್ರಗಳಿಗೆ ಉತ್ತೇಜನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ಹಳಿಯಾಳದಲ್ಲಿ ಆರಂಭಗೊಂಡಿರುವ ಸಮಾವೇಶ ಕೇಂದ್ರದಲ್ಲಿ ಕಲೆ, ಸಾಹಿತ್ಯ, ಚರ್ಚಾಗೋಷ್ಠಿಗಳು ನಡೆಯಬೇಕು, ಆದಷ್ಟು ಈ ಕೇಂದ್ರವನ್ನು ಶುಚಿಯಾಗಿಡಲು ಪ್ರಯತ್ನಿಸಬೇಕು ಎಂದರು.&lt;/p&gt;&lt;p&gt;ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಕೈಗೊಳ್ಳಲಾಗಿರುವ ಯೋಜನೆಗಳ ಮಾಹಿತಿ ನೀಡಿ, ಹಳಿಯಾಳದಲ್ಲಿ ಪ್ರಾರಂಭಗೊಂಡಿರುವ ಸಮಾವೇಶ ಕೇಂದ್ರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಶೈಕ್ಷಣಿಕ ಕಾರ್ಯಕ್ರಮ ನಡೆಯುವಂತಾಗಬೇಕು. ಈ ಕೇಂದ್ರದ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.&lt;/p&gt;&lt;p&gt;ವೇದಿಕೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾಗೌರಿ ಭಟ್, ಲೋಕೋಪಯೋಗಿ ಶಿರಸಿ ಉಪವಿಭಾಗದ ಇಇ ಎಸ್.ಎನ್. ಸಿದ್ಧಾಪೂರ, ಹಳಿಯಾಳ ವಿಭಾಗದ ಎ.ಇ. ಎಸ್.ವಿ. ಆಥಣಿ, ಸಂಜೀವ ನಾಯ್ಕ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹಾಗೂ ಬಾಷ್ ಇಂಡಿಯಾ ಫೌಂಡೇಶನ್ ಅಧಿಕಾರಿಗಳು ಇದ್ದರು. ಆಕಾಶವಾಣಿಯ ಉದ್ಘೋಷಕಿ ಮಾಯಾ ಚಿಕ್ಕೇರೂರ, ರಾಧಾ ದೇಶಬಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಬಾಷ್ ಇಂಡಿಯಾ ಫೌಂಡೇಶನ್ ವತಿಯಿಂದ ತಾಲೂಕಿನ ಐದು ಶಾಲೆಗಳಿಗೆ ಸ್ಮಾರ್ಟ್&zwnj; ರೂಮ್ ಹಸ್ತಾಂತರ ಮಾಡಲಾಯಿತು.&lt;/p&gt;&lt;h2&gt;&lt;strong&gt;ಮನರಂಜನೆ&lt;/strong&gt;&lt;/h2&gt;&lt;p&gt;ಕೇಂದ್ರ ಉದ್ಘಾಟನಾ ಸಮಾರಂಭದ ನಿಮಿತ್ತ ಹೊನ್ನಾವರದ ಮುಖ್ಯಪ್ರಾಣ ಚಂಡೆ ತಂಡ, ಶಾಂತಲಾ ನೃತ್ಯ ತಂಡ ಧಾರವಾಡ ಇವರಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಿತು. ಕುದ್ರೋಳ್ಳಿ ಗಣೇಶ ತಂಡದವರಿಂದ ಮ್ಯಾಜಿಕ್ ಮೈಂಡ್ ಮಿಸ್ಟರಿ ಪ್ರದರ್ಶನ ನಡೆಯಿತು.&lt;/p&gt;]]></content:encoded>
            <category>uttara-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/hk-patil-tourism-development-dandeli-syntheri-rocks-projects-gvd/articleshow-ap3qigl"/>
        </item>
        <item>
            <title><![CDATA[ನದಿ ಜೋಡಣೆ ಎಲ್ಲೂ ಸಂಪೂರ್ಣ ಯಶಸ್ವಿಯಾಗಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್]]></title>
            <link>https://kannada.asianetnews.com/karnataka-districts/bedti-aghanashini-project-dk-shivakumar-statement-river-linking-gvd/articleshow-mthbf7g</link>
            <guid isPermaLink="true">https://kannada.asianetnews.com/karnataka-districts/bedti-aghanashini-project-dk-shivakumar-statement-river-linking-gvd/articleshow-mthbf7g</guid>
            <pubDate>Wed, 18 Mar 2026 16:39:15 +0530</pubDate>
            <description><![CDATA[&lt;p&gt;ಮಲೆನಾಡಿನ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇದುವರೆಗೂ ನದಿ ಜೋಡಣೆ ಎಲ್ಲೂ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮನ್ನು ಭೇಟಿಯಾದ ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗಕ್ಕೆ ಭರವಸೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke4e92kg74w41s7hkcx6tsvt,imgname-----------------------2026-01-04t173327.258-1767528237680.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿರಸಿ (ಮಾ.18): &lt;/strong&gt;ಬೇಡ್ತಿ-ಅಘನಾಶಿನಿ ಯೋಜನೆ ಕುರಿತು ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ. ಮಲೆನಾಡಿನ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇದುವರೆಗೂ ನದಿ ಜೋಡಣೆ ಎಲ್ಲೂ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮನ್ನು ಭೇಟಿಯಾದ ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗಕ್ಕೆ ಭರವಸೆ ನೀಡಿದರು.&lt;/p&gt;&lt;p&gt;ಬೆಂಗಳೂರಿನಲ್ಲಿ ನೀರಾವರಿ ಸಚಿವರ ಕೊಠಡಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ತಜ್ಞರು ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗ ಡಿಸಿಎಂ ಅವರನ್ನು ಭೇಟಿ ಮಾಡಿ ಈ ಯೋಜನೆಯಿಂದ ಉಂಟಾಗಲಿರುವ ಸಮಸ್ಯೆಗಳ ಬಗ್ಗೆ ವಿವರಿಸಿ, ಯಾವುದೇ ಕಾರಣಕ್ಕೂ ಯೋಜನೆ ಜಾರಿಗೊಳಿಸಬಾರದು ಎಂದು ಆಗ್ರಹಿಸಿತು.&lt;/p&gt;&lt;p&gt;ಬೇಡ್ತಿ-ವರದಾ ಯೋಜನೆ ಬಗ್ಗೆ ಪುನರ್ ಪರಿಶೀಲನೆ ಅಗತ್ಯ. ಅಘನಾಶಿನಿ-ವೇದಾವತಿ ತಿರುವು ಬಗ್ಗೆ ಆರಂಭಿಕ ಪರಿಶೀಲನೆಯೇ ಆಗಿಲ್ಲ. ಸೋಂದಾ ಸ್ವರ್ಣವಲ್ಲೀ ಶ್ರೀಗಳು, ಜನಪ್ರತಿನಿಧಿಗಳು, ಜನತೆ ಬೃಹತ್ ಜನಾಂದೋಲನ ನಡೆಸಿರುವ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ವಿಧಾನಸಭಾ ಅಧಿವೇಶನದ ಒತ್ತಡದಲ್ಲೂ ಬೇಡ್ತಿ-ಅಘನಾಶಿನಿ ನಿಯೋಗದ ಜೊತೆ ಮಾತುಕತೆ ಏರ್ಪಡಿಸಿದ್ದೇವೆ. ಸ್ವರ್ಣವಲ್ಲೀ ಶ್ರೀಗಳ ಸೂಚನೆಯಂತೆ ಈ ಸಭೆ ಏರ್ಪಡಿಸಿದ್ದೇವೆ ಎಂದರು.&lt;/p&gt;&lt;h2&gt;&lt;strong&gt;ಯೋಜನೆಗಳಿಗೇ ನೀರಿಲ್ಲ&lt;/strong&gt;&lt;/h2&gt;&lt;p&gt;ಶಾಸಕ ಭೀಮಣ್ಣ ನಾಯ್ಕ ನೀರಿಲ್ಲದ ನದಿ ತಿರುವು ವ್ಯರ್ಥ ಎಂದು ಹೇಳಿದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಬೇಡ್ತಿಯಿಂದ ಕೆರೆ ತುಂಬಿಸುವ, ಕುಡಿಯುವ ನೀರಿನ 4 ಯೋಜನೆಗಳಿಗೇ ನೀರಿಲ್ಲ ಎಂದು ವಾಸ್ತವ ಚಿತ್ರಣ ನೀಡಿದರು. ಕುಮಟಾ ಶಾಸಕ ದಿನಕರ ಶೆಟ್ಟಿ, ಕರಾವಳಿ ಮೀನುಗಾರರು, ರೈತರು ಬೇಡ್ತಿ-ಗಂಗಾವಳಿ, ಅಘನಾಶಿನಿ ನದಿಗಳ ಸಿಹಿ ನೀರಿನ ಮೇಲೆ ಬದುಕು ಕಟ್ಟಿಕೊಂಡಿದ್ದಾರೆ ಎಂದರು. ವಿಧಾನಪರಿಷತ್ ಶಾಸಕ ಶಾಂತಾರಾಮ ಸಿದ್ಧಿ, ವನವಾಸಿಗಳ ಬದುಕು ನದಿ ತಿರುವಿನಿಂದ ಅತಂತ್ರವಾಗಲಿದೆ ಎಂದರು.&lt;/p&gt;&lt;p&gt;ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಭೂಕುಸಿತ ವರದಿ, ಧಾರಣಾ ಸಾಮರ್ಥ್ಯ ವರದಿ, ಬೇಡ್ತಿ-ಅಘನಾಶಿನಿ ಸಂರಕ್ಷಿತ ಪ್ರದೇಶ ಆದೇಶ ಇತ್ಯಾದಿ ತಜ್ಞರ ವರದಿ ನೀಡಿದರು. 3 ಲಕ್ಷ ಜನರ ಆತಂಕದ ಬೇಡ್ತಿ-ಅಘನಾಶಿನಿ ನದಿ ಉಳಿಸಿ ಎಂದು ಅಹವಾಲು ಸಲ್ಲಿಸಿದರು.&lt;/p&gt;&lt;p&gt;ಸ್ವರ್ಣವಲ್ಲೀ ಸಂಸ್ಥಾನದ ಅಧ್ಯಕ್ಷ ವಿಘ್ನೆಶ್ವರ ಹೆಗಡೆ ಬೊಮ್ಮನಳ್ಳಿ ಬೇಡ್ತಿ ಪ್ರದೇಶ, ಸೋಂದಾ ಸ್ವರ್ಣವಲ್ಲೀಗೆ ಭೇಟಿ ನೀಡಲು ಡಿ.ಕೆ. ಶಿವಕುಮಾರ ಅವರಿಗೆ ಆಹ್ವಾನ ನೀಡಿದರು. ಪರಿಸರ ತಜ್ಞ ಡಾ. ಬಾಲಚಂದ್ರ ಸಾಯಿಮನೆ ನೀರಿನ ಲಭ್ಯತೆಯ ನೈಜ ಚಿತ್ರಣ ಮುಂದಿಟ್ಟರು. ಗೋಪಾಲಕೃಷ್ಣ ತಂಗಾರ್ಮರನೆ, ವಿಶ್ವನಾಥ ಶೀಗೆಹಳ್ಳಿ ಅಶ್ವಿನಿ ಕುಮಾರ, ವಿವೇಕ್ ಗಡಿಹಿತ್ಲು, ರವಿ ಮತ್ತಿತರರು ಇದ್ದರು. ನಂತರ ಬೇಡ್ತಿ ಸಮಿತಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿತು. ರಾಜ್ಯದ ಮುಖ್ಯ ಕಾರ್ಯದರ್ಶಿ ಅವರ ಗಮನವನ್ನೂ ಸೆಳೆಯಿತು.&lt;/p&gt;]]></content:encoded>
            <category>uttara-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bedti-aghanashini-project-dk-shivakumar-statement-river-linking-gvd/articleshow-mthbf7g"/>
        </item>
        <item>
            <title><![CDATA['ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಕೇಸ್‌ನಿಂದ ಕೈಬಿಡಿ..' ಹೈಕೋರ್ಟ್‌ನಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನವಿ]]></title>
            <link>https://kannada.asianetnews.com/gallery/karnataka-districts/anantkumar-hegde-son-ashutosh-assault-case-hc-hearing-passport-issue-san-n0dycuw</link>
            <guid isPermaLink="true">https://kannada.asianetnews.com/gallery/karnataka-districts/anantkumar-hegde-son-ashutosh-assault-case-hc-hearing-passport-issue-san-n0dycuw</guid>
            <pubDate>Sat, 11 Apr 2026 15:20:45 +0530</pubDate>
            <description><![CDATA[&lt;p&gt;ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರು, ತಮ್ಮ ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಂಗ ಮಾಡಲು ಪಾಸ್&zwnj;ಪೋರ್ಟ್ ಸಮಸ್ಯೆ ಎದುರಿಸುತ್ತಿರುವ ಕಾರಣ, ದಾಬಸ್&zwnj;ಪೇಟೆ ಠಾಣೆಯಲ್ಲಿ ದಾಖಲಾಗಿರುವ ಹಲ್ಲೆ ಪ್ರಕರಣದಿಂದ ಅವರ ಹೆಸರನ್ನು ಕೈಬಿಡುವಂತೆ ಕೋರಿ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knxyxb3mej6nwfmq2yagkw68,imgname-karnataka-high-court-anant-kumar-hegde-1775900732532.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರು, ತಮ್ಮ ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಂಗ ಮಾಡಲು ಪಾಸ್&zwnj;ಪೋರ್ಟ್ ಸಮಸ್ಯೆ ಎದುರಿಸುತ್ತಿರುವ ಕಾರಣ, ದಾಬಸ್&zwnj;ಪೇಟೆ ಠಾಣೆಯಲ್ಲಿ ದಾಖಲಾಗಿರುವ ಹಲ್ಲೆ ಪ್ರಕರಣದಿಂದ ಅವರ ಹೆಸರನ್ನು ಕೈಬಿಡುವಂತೆ ಕೋರಿ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;&lt;img&gt;&lt;p&gt;ದಾಬಸ್&zwnj;ಪೇಟೆ ಠಾಣೆಯಲ್ಲಿ ದಾಖಲಾಗಿರುವ ಹಲ್ಲೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್&zwnj;ನಲ್ಲಿ ನಡೆಯಿತು. ಹೆಗಡೆ ಪರ ವಕೀಲರು, &quot;ಅನಂತಕುಮಾರ್ ಅವರ ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಗಲಾಟೆ ಪ್ರಕರಣದಿಂದಾಗಿ ಅವರಿಗೆ ಪಾಸ್&zwnj;ಪೋರ್ಟ್ ಪಡೆಯಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು&quot; ಎಂದು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಪೀಠಕ್ಕೆ ಮನವಿ ಮಾಡಿದರು.&lt;/p&gt;&lt;img&gt;&lt;p&gt;ವಿಚಾರಣೆ ವೇಳೆ ವಕೀಲ ಪವನ್&zwnj;ಚಂದ್ರ ಶೆಟ್ಟಿ ಅವರು, &quot;ಘಟನೆ ನಡೆದಾಗ ಅಶುತೋಷ್ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಆ ಕಾರಿನ ವಿನ್ಯಾಸದ ಪ್ರಕಾರ ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಹಿಂದಿನವರು ಇಳಿಯಲು ಸಾಧ್ಯ. ಅವರು ಘಟನಾ ಸ್ಥಳಕ್ಕೆ ಬಂದೇ ಇರಲಿಲ್ಲ. ಆದರೂ ತನಿಖಾಧಿಕಾರಿಯು ಅಶುತೋಷ್ ಅವರನ್ನು ಅನಾವಶ್ಯಕವಾಗಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇವರ ವಿರುದ್ಧ ಯಾವುದೇ ಎಫ್&zwnj;ಐಆರ್ ಅಥವಾ ಆರೋಪ ಪಟ್ಟಿಯಲ್ಲಿ ಉಲ್ಲೇಖವಿಲ್ಲ&quot; ಎಂದು ಆಕ್ಷೇಪ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ವಾದ ಮಂಡಿಸಿ, &quot;ಅನಂತಕುಮಾರ್ ಹೆಗಡೆ, ಅವರ ಅಂಗರಕ್ಷಕ ಮತ್ತು ಕಾರಿನ ಚಾಲಕ ದೂರುದಾರರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಲಭ್ಯವಿದೆ. ಸದ್ಯಕ್ಕೆ ನಮ್ಮ ಬಳಿ ಆರೋಪಪಟ್ಟಿಯ ಪ್ರತಿ ಇಲ್ಲದಿದ್ದರೂ, ಮುಂದಿನ ವಿಚಾರಣೆ ವೇಳೆಗೆ ನಾಲ್ಕನೇ ಆರೋಪಿ ಅಶುತೋಷ್&zwnj;ಗೆ ಸಂಬಂಧಿಸಿದಂತೆ ಸಂಪೂರ್ಣ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು&quot; ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಕಳೆದ ವರ್ಷದ ಜೂನ್&zwnj;ನಲ್ಲಿ ತುಮಕೂರಿನ ಹಳೇ ನಿಜಗಲ್&zwnj; ಬಳಿ ಕಾರು ಹಿಂದಿಕ್ಕುವ ವಿಚಾರದಲ್ಲಿ ಈ ಗಲಾಟೆ ನಡೆದಿತ್ತು. ದೂರುದಾರ ಸೈಫ್ ಖಾನ್ ಪ್ರಕಾರ, &quot;ಅನಂತಕುಮಾರ್ ಹೆಗಡೆ ಅವರ ಕಾರಿನಲ್ಲಿದ್ದವರು ನಮ್ಮ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಸಲ್ಮಾನ್ ಖಾನ್ ಎಂಬುವವರ ಮೂರು ಹಲ್ಲುಗಳು ಮುರಿದಿವೆ. ಅನಂತಕುಮಾರ್ ಹೆಗಡೆ ಅವರು ನಮ್ಮ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ಮತ್ತು ಅವರ ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ&quot; ಎಂದು ದೂರಿನಲ್ಲಿ ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಎಲ್ಲಾ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಅಶುತೋಷ್ ಹೆಗಡೆ ಅವರ ಹೆಸರನ್ನು ಪ್ರಕರಣದಿಂದ ಕೈಬಿಡುವ ಕುರಿತಾದ ಮನವಿಯನ್ನು ಏಪ್ರಿಲ್ 16 ರಂದು ನಡೆಯಲಿರುವ ಮುಂದಿನ ವಿಚಾರಣೆಯಲ್ಲಿ ಪರಿಗಣಿಸುವುದಾಗಿ ಹೇಳಿ, ವಿಚಾರಣೆಯನ್ನು ಮುಂದೂಡಿತು. ಸದ್ಯ ದಾಬಸ್&zwnj;ಪೇಟೆ ಪೊಲೀಸರು ಅನಂತಕುಮಾರ್ ಹೆಗಡೆ ಮತ್ತು ಅವರ ಸಿಬ್ಬಂದಿ ವಿರುದ್ಧ ಬಿಎನ್&zwnj;ಎಸ್&zwnj;ನ ವಿವಿಧ ಸೆಕ್ಷನ್&zwnj;ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/anantkumar-hegde-son-ashutosh-assault-case-hc-hearing-passport-issue-san-n0dycuw"/>
        </item>
        <item>
            <title><![CDATA[ತಾಮೀರ್ ಸೌಹಾರ್ದ ಸಹಕಾರಿ ಸಂಘದಲ್ಲಿ 5 ಕೋಟಿ ರೂ. ವಂಚನೆ; 9 ಮಂದಿ ಸಿಬ್ಬಂದಿ ವಿರುದ್ಧ ಎಫ್‌ಐಆರ್!]]></title>
            <link>https://kannada.asianetnews.com/karnataka-districts/uttara-kannada-dandeli-tameer-society-fraud-case-9-staff-booked-fake-gold-loan-sat/articleshow-ohvg5i5</link>
            <guid isPermaLink="true">https://kannada.asianetnews.com/karnataka-districts/uttara-kannada-dandeli-tameer-society-fraud-case-9-staff-booked-fake-gold-loan-sat/articleshow-ohvg5i5</guid>
            <pubDate>Thu, 02 Apr 2026 13:34:17 +0530</pubDate>
            <description><![CDATA[&lt;p&gt;ದಾಂಡೇಲಿಯ ತಾಮೀರ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ 5.09 ಕೋಟಿ ರೂಪಾಯಿಗಳ ಬೃಹತ್ ಹಗರಣ ಬೆಳಕಿಗೆ ಬಂದಿದೆ. ಸೊಸೈಟಿಯ ಸಿಬ್ಬಂದಿಗಳೇ ನಕಲಿ ಚಿನ್ನವನ್ನು ಅಡವಿಟ್ಟು, 208 ಖಾತೆಗಳ ಮೂಲಕ ಸಾಲ ಪಡೆದು ವಂಚಿಸಿದ್ದಾರೆ. 9 ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6key8xysw5t4e8hsjdg9vz,imgname-dandeli-tameer-bank-fraud-1775116974365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ (ಏ.02): ಜಿ&lt;/strong&gt;ಲ್ಲೆಯ ದಾಂಡೇಲಿಯ ತಾಮೀರ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ (Tameer Co-operative Credit Society) ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ನಕಲಿ ಚಿನ್ನದ ಮೇಲೆ ಸಾಲ ನೀಡುವ ಮೂಲಕ ಸೊಸೈಟಿಗೆ ಸುಮಾರು 5.09 ಕೋಟಿ ರೂಪಾಯಿಗಳ ಪಂಗನಾಮ ಹಾಕಿದ ಒಂಬತ್ತು ಮಂದಿ ಸಿಬ್ಬಂದಿಗಳ ವಿರುದ್ಧ ಈಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.&lt;/p&gt;&lt;h2&gt;&lt;strong&gt;ನಕಲಿ ಚಿನ್ನದ ಅಸಲಿ ಆಟ:&lt;/strong&gt;&lt;/h2&gt;&lt;p&gt;ದಾಂಡೇಲಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಸೇರಿಕೊಂಡು ಈ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಸಲಿ ಚಿನ್ನದ ಬದಲಾಗಿ ನಕಲಿ ಚಿನ್ನವನ್ನು ಅಡವಿಟ್ಟು, ಸುಮಾರು 208 ಬೇರೆ ಬೇರೆ ಖಾತೆಗಳ ಮೂಲಕ ಒಟ್ಟು 5,09,09,450 ರೂಪಾಯಿಗಳ ಬೃಹತ್ ಮೊತ್ತವನ್ನು ಸಾಲವಾಗಿ ಪಡೆದಿದ್ದಾರೆ. ಈ ಹಣವನ್ನು ಸೊಸೈಟಿಯ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿಕೊಂಡು ಸಂಸ್ಥೆಗೆ ದ್ರೋಹ ಬಗೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಕಟಕಟೆಯಲ್ಲಿರುವ ಸಿಬ್ಬಂದಿಗಳು:&lt;/strong&gt;&lt;/h3&gt;&lt;p&gt;ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಮೀರ್ ಸೊಸೈಟಿಯ ದಾಂಡೇಲಿ ಶಾಖಾ ವ್ಯವಸ್ಥಾಪಕ ಮೀರ್ ಕರೀಂ ಮೀರ್ ಇಸ್ಮಾಯಿಲ್ ಸೇರಿದಂತೆ ಒಂಬತ್ತು ಮಂದಿ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖವಾಗಿ ಖಲೀಮೂದ್ದೀನ್ ಖಾನ್ ಸರದಾರ್ ಖಾನ್, ಮಂಚಾಲಿ ಚೂಡಾಮಣಿ ನೇತ್ರೇಕರ್, ಹನೀಫದ ಖಾಸಿಂಸಾಬ್ ಮೋಮೀನ್ ಹಾಗೂ ಇಬ್ರಾಹಿಂ ಗುಲಾಮ್ ಮೊಹಿದ್ದೀನ್&zwnj; ಅವರ ಹೆಸರನ್ನು ಎಫ್&zwnj;ಐಆರ್&zwnj;ನಲ್ಲಿ (FIR) ದಾಖಲಿಸಲಾಗಿದೆ.&lt;/p&gt;&lt;h2&gt;&lt;strong&gt;ದೂರು ದಾಖಲಿಸಿದ ಪ್ರಧಾನ ವ್ಯವಸ್ಥಾಪಕರು:&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯಾದ್ಯಂತ ಒಟ್ಟು 12 ಶಾಖೆಗಳನ್ನು ಹೊಂದಿರುವ ತಾಮೀರ್ ಸಹಕಾರಿ ಸಂಘವು ತನ್ನದೇ ಆದ ವಿಶ್ವಾಸಾರ್ಹತೆ ಹೊಂದಿತ್ತು. ಆದರೆ ದಾಂಡೇಲಿ ಶಾಖೆಯಲ್ಲಿ ನಡೆದ ಈ ಅವ್ಯವಹಾರವು ಸಂಸ್ಥೆಯ ಆಡಳಿತ ಮಂಡಳಿಯನ್ನು ಬೆಚ್ಚಿಬೀಳಿಸಿದೆ. ಈ ಗಂಭೀರ ವಂಚನೆಯ ಕುರಿತು ತಾಮೀರ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಮೊಹ್ಮದ ಅಜೀಮ್ ರುಕ್ಸುದ್ದೀನ್ ಶೇಖ್ ಅವರು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.&lt;/p&gt;&lt;h3&gt;&lt;strong&gt;ತನಿಖೆ ಚುರುಕು:&lt;/strong&gt;&lt;/h3&gt;&lt;p&gt;ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಈ ಗಂಭೀರ ಪ್ರಕರಣವನ್ನು ದಾಂಡೇಲಿ ಪೊಲೀಸರು ಕೈಗೆತ್ತಿಕೊಂಡಿದ್ದು, ಈಗಾಗಲೇ ತನಿಖೆ ಆರಂಭಿಸಿದ್ದಾರೆ. ನಕಲಿ ಚಿನ್ನದ ಮೌಲ್ಯಮಾಪನ ಮಾಡಿದವರು ಯಾರು? ಈ ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಹಕಾರಿ ಸಂಘಗಳಲ್ಲಿ ಇಂತಹ ದೊಡ್ಡ ಮಟ್ಟದ ವಂಚನೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಮತ್ತು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/uttara-kannada-dandeli-tameer-society-fraud-case-9-staff-booked-fake-gold-loan-sat/articleshow-ohvg5i5"/>
        </item>
        <item>
            <title><![CDATA[ಆ ಒಂದು ನಿಯಮದಿಂದ SSLC ಪರೀಕ್ಷೆ ವಂಚಿತ, ಕಾರವಾರದ ಚಿಗಳ್ಳಿ ಸರ್ಕಾರಿ ಶಾಲೆಯ 23 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!]]></title>
            <link>https://kannada.asianetnews.com/education/karnataka-sslc-2026-no-hall-tickets-for-23-students-in-uttara-kannada-gdp/articleshow-osk40eg</link>
            <guid isPermaLink="true">https://kannada.asianetnews.com/education/karnataka-sslc-2026-no-hall-tickets-for-23-students-in-uttara-kannada-gdp/articleshow-osk40eg</guid>
            <pubDate>Mon, 23 Mar 2026 21:25:50 +0530</pubDate>
            <description><![CDATA[ಮುಂಡಗೋಡ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ, ಕನಿಷ್ಠ 75% ಹಾಜರಾತಿ ಇಲ್ಲದ ಕಾರಣ 23 ವಿದ್ಯಾರ್ಥಿಗಳಿಗೆ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯ ಹಾಲ್ ಟಿಕೆಟ್ ನಿರಾಕರಿಸಲಾಗಿದೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡಿದ್ದು, ಶಿಕ್ಷಣ ಇಲಾಖೆಯು ನಿಯಮ ಪಾಲನೆಯಲ್ಲಿ ಕಟ್ಟುನಿಟ್ಟಾಗಿದೆ. ಸೂಕ್ತ ದಾಖಲೆ ನೀಡಿದರೆ ಪೂರಕ ಪರೀಕ್ಷೆಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khfjfhd2d90hftg9dd30nk1r,imgname-sslc-exam-1771122967970.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ:&lt;/strong&gt; ಕೆಟ್ಟ ಮೇಲೆ ಬುದ್ದಿ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ 23 ವಿದ್ಯಾರ್ಥಿಗಳು SSLC ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ವಂಚಿತರಾಗಿರುವ ಘಟನೆ ಬೆಳಕಿಗೆ ಬಂದಿದೆ. ಹಾಲ್ ಟಿಕೆಟ್ ಸಿಗದೇ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಶಾಲೆಗೆ ಹೋಗುವ ಸಮಯದಲ್ಲಿ ನೆಟ್ಟಗೆ ಶಾಲೆಗೆ ಹೋಗಿಲ್ಲ. ಈಗ ಬುಡಕ್ಕೆ ಬೆಂಕಿ ಬಿದ್ದು ಭವಿಷ್ಯದ ಚಿಂತೆ ಕಾಡುತ್ತಿದೆ. ಪರೀಕ್ಷೆ ಆರಂಭವಾದ ಬಳಿಕ ಎಚ್ಚೆತ್ತುಕೊಂಡಿದ್ದಾರೆ.&lt;/p&gt;&lt;p&gt;ಈ ಶಾಲೆಯಲ್ಲಿ ಒಟ್ಟು 105 ವಿದ್ಯಾರ್ಥಿಗಳು SSLC ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಹಾಜರಾತಿ ಪ್ರಮಾಣ ಕಡಿಮೆಯಿರುವ ಕಾರಣದಿಂದ 23 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲು ಶಾಲಾ ಆಡಳಿತ ಮತ್ತು ಶಿಕ್ಷಣ ಇಲಾಖೆ ನಿರಾಕರಿಸಿದೆ. ಈ ಪೈಕಿ 14 ವಿದ್ಯಾರ್ಥಿಗಳು ಹಾಗೂ 9 ವಿದ್ಯಾರ್ಥಿನಿಯರು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.&lt;/p&gt;&lt;h2&gt;ಶಿಕ್ಷಣ ಇಲಾಖೆಯ ನಿಯಮವೇನು?&lt;/h2&gt;&lt;p&gt;ಶಿಕ್ಷಣ ಇಲಾಖೆಯ ನಿಯಮಾನುಸಾರ, SSLC ಪರೀಕ್ಷೆಗೆ ಹಾಜರಾಗಲು ಕನಿಷ್ಠ 75 ಶೇಕಡಾ ಹಾಜರಾತಿ ಕಡ್ಡಾಯವಾಗಿದೆ. ಆದರೆ ಚಿಗಳ್ಳಿ ಶಾಲೆಯ ಈ 23 ವಿದ್ಯಾರ್ಥಿಗಳ ಹಾಜರಾತಿ ಶೇಕಡಾ 8 ರಿಂದ 50 ರವರೆಗೆ ಮಾತ್ರ ಇರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ, ನಿಯಮಗಳನ್ನು ಉಲ್ಲಂಘಿಸಿ ಹಾಲ್ ಟಿಕೆಟ್ ನೀಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದ್ದು, ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಸ್ಥಿತಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಹಲವು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಹಾಗೂ ಕುಟುಂಬ ಸಂಬಂಧಿತ ಸಮಸ್ಯೆಗಳ ಕಾರಣದಿಂದ ನಿಯಮಿತವಾಗಿ ಶಾಲೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಹಾಗೊಂದು ವೇಳೆ ಇದ್ದರೆ ದಾಖಲೆಗಳನ್ನು ನೀಡಿ ಪರೀಕ್ಷೆಗೆ ಹಾಜರಾಗಬಹುದು.&lt;/p&gt;&lt;p&gt;ಪೋಷಕರು ಕೂಡ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಮಕ್ಕಳಿಗೆ ಒಂದು ಅವಕಾಶ ನೀಡುವಂತೆ ಶಿಕ್ಷಣ ಇಲಾಖೆಯನ್ನು ವಿನಂತಿಸಿದ್ದಾರೆ. &ldquo;ವರ್ಷಪೂರ್ತಿ ಓದಿದ ಮಕ್ಕಳನ್ನು ಒಂದೇ ನಿಯಮದ ಆಧಾರದಲ್ಲಿ ಪರೀಕ್ಷೆಯಿಂದ ವಂಚಿಸುವುದು ಅನ್ಯಾಯ&rdquo; ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಪೂರಕ ಪರೀಕ್ಷೆ ಬರೆಯೋ ಅವಕಾಶ ಸಿಗಬಹುದೇ?&lt;/h2&gt;&lt;p&gt;ಇನ್ನೊಂದೆಡೆ, ಶಿಕ್ಷಣ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಲುವಿನಲ್ಲಿ ಇದ್ದಾರೆ. ಹಾಜರಾತಿ ನಿಯಮವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅಗತ್ಯವಾಗಿದ್ದು, ಅದನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಘಟನೆ ಗ್ರಾಮದಲ್ಲಿಯೇ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆತಂಕ ಹೆಚ್ಚಿಸಿದೆ.&lt;/p&gt;&lt;p&gt;2026ನೇ ಸಾಲಿನ SSLC ಪರೀಕ್ಷೆ-1 ಅನ್ನು ಮಾರ್ಚ್ 18 ರಿಂದ ಏಪ್ರಿಲ್ 2, 2026 ರವರೆಗೆ ನಡೆಯಲಿದೆ. ಈಗಾಗಲೇ 2 ವಿಷಯದ ಪರೀಕ್ಷೆಗಳು ಮುಗಿದಿದೆ. ಇನ್ನು ಪರೀಕ್ಷೆ-2 (ಪೂರಕ ಪರೀಕ್ಷೆ) ಮೇ 18 ರಿಂದ ಮೇ 25, 2026 ರವರೆಗೆ ನಡೆಯಲಿದೆ. ಅದಕ್ಕಾದರೂ ಈ ವಿದ್ಯಾರ್ಥಿಗಳು ಸೂಕ್ತ ದಾಖಲೆ ನೀಡಿ ಹಾಜರಾಗಲು ಅವಕಾಶವಿದೆ,&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-sslc-2026-no-hall-tickets-for-23-students-in-uttara-kannada-gdp/articleshow-osk40eg"/>
        </item>
        <item>
            <title><![CDATA[ಶಿರಸಿ-ಕುಮಟಾ ರಸ್ತೆಯಲ್ಲಿ ಕೆಎಸ್ಆರ್‌ಟಿಸಿ-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ: 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ]]></title>
            <link>https://kannada.asianetnews.com/karnataka-districts/karwar-sirsi-kumta-road-bus-accident-ksrtc-private-bus-collision-40-plus-injured-sat/articleshow-pn6i6n2</link>
            <guid isPermaLink="true">https://kannada.asianetnews.com/karnataka-districts/karwar-sirsi-kumta-road-bus-accident-ksrtc-private-bus-collision-40-plus-injured-sat/articleshow-pn6i6n2</guid>
            <pubDate>Fri, 03 Apr 2026 19:34:23 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಆರ್&zwnj;ಟಿಸಿ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn9te80smbba9m8mzb094th4,imgname-sirsi-kumata-road-bus-accident-1775224954904.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ (ಏ.03): ಜಿ&lt;/strong&gt;ಲ್ಲೆಯ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್&zwnj;ಟಿಸಿ (KSRTC) ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಶಿರಸಿ-ಕುಮಟಾ ರಸ್ತೆಯ ಕೊಳಗಿಬೀಸ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಭಟ್ಕಳದಿಂದ ಬಾಗಲಕೋಟೆಗೆ ಹೊರಟಿದ್ದ ಕೆಎಸ್ಆರ್&zwnj;ಟಿಸಿ ಬಸ್ ಹಾಗೂ ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಎರಡೂ ಬಸ್&zwnj;ಗಳು ವೇಗವಾಗಿ ಚಲಿಸುತ್ತಿದ್ದ ಪರಿಣಾಮ, ಡಿಕ್ಕಿಯ ರಭಸಕ್ಕೆ ಬಸ್&zwnj;ಗಳ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿವೆ.&lt;/p&gt;&lt;h2&gt;&lt;strong&gt;40ಕ್ಕೂ ಹೆಚ್ಚು ಮಂದಿಗೆ ಗಾಯ:&lt;/strong&gt;&lt;/h2&gt;&lt;p&gt;ಈ ಭೀಕರ ಅಪಘಾತದಲ್ಲಿ ಎರಡೂ ಬಸ್&zwnj;ಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಹಾಗೂ ದಾರಿಹೋಕರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಐದಾರು ಪ್ರಯಾಣಿಕರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h3&gt;&lt;strong&gt;ಸಂಚಾರ ಅಸ್ತವ್ಯಸ್ತ:&lt;/strong&gt;&lt;/h3&gt;&lt;p&gt;ಹೆದ್ದಾರಿಯ ಮಧ್ಯದಲ್ಲೇ ಅಪಘಾತ ಸಂಭವಿಸಿದ್ದರಿಂದ ಶಿರಸಿ-ಕುಮಟಾ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಕಿಲೋಮೀಟರ್&zwnj;ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಧಾವಿಸಿದ ಶಿರಸಿ ಗ್ರಾಮೀಣ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡಿದ್ದಲ್ಲದೆ, ಕ್ರೇನ್ ಮೂಲಕ ಜಖಂಗೊಂಡ ಬಸ್&zwnj;ಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.&lt;/p&gt;&lt;p&gt;ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬಸ್ಸಿನ ಮುಂಭಾಗಗಳು ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವುದು ಪವಾಡವೇ ಸರಿ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕರ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karwar-sirsi-kumta-road-bus-accident-ksrtc-private-bus-collision-40-plus-injured-sat/articleshow-pn6i6n2"/>
        </item>
        <item>
            <title><![CDATA[ಗೃಹ ಸಚಿವ ಜಿ.ಪರಮೇಶ್ವರ ಆಪ್ತ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಹತ್ಯೆಗೆ ಯತ್ನಿಸಿದ 6 ಜನರಲ್ಲಿ 4 ಮಂದಿ ಅರೆಸ್ಟ್]]></title>
            <link>https://kannada.asianetnews.com/karnataka-districts/ankola-murder-attempt-congress-leader-gopalakrishna-nayak-attacked-4-accused-arrested-gdp/articleshow-qbow2v0</link>
            <guid isPermaLink="true">https://kannada.asianetnews.com/karnataka-districts/ankola-murder-attempt-congress-leader-gopalakrishna-nayak-attacked-4-accused-arrested-gdp/articleshow-qbow2v0</guid>
            <pubDate>Thu, 26 Mar 2026 13:34:41 +0530</pubDate>
            <description><![CDATA[ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಹಾಡಹಗಲೇ ಹತ್ಯೆ ಯತ್ನ ನಡೆದಿದೆ. ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmmjdapr5es2q33qezw6y4rn,imgname-congress-leader-gopalakrishna-nayak-1774511893208.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ:&lt;/strong&gt; ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತರಾಗಿರುವ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಅಂಕೋಲಾದಲ್ಲಿ ನಡೆದ ಹತ್ಯೆ ಯತ್ನ ಪ್ರಕರಣ ಜಿಲ್ಲೆಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಬುಧವಾರ ಬೆಳಗ್ಗೆ ಹಾಡಹಗಲೇ ನಡೆದ ಈ ದಾಳಿ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೀಗ ಪ್ರಕರಣ ಸಂಬಂಧ 6 ಜನ ಹಂತಕರಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;ಹಾಡಹಗಲೇ ದಾಳಿ&lt;/h2&gt;&lt;p&gt;ಅಂಕೋಲಾ ಪಟ್ಟಣದಲ್ಲಿ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಹೇರ್ ಕಟಿಂಗ್ ಸಲುವಾಗಿ ಒಬ್ಬರೇ ತೆರಳಿದ್ದ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಆರು ಮಂದಿ ದುಷ್ಕರ್ಮಿಗಳ ಗುಂಪು ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದೆ. ಇದನ್ನು ಹತ್ತಿರದಿಂದ ಕಂಡಿದ್ದ ಎದುರು ಮನೆಯ ಸುಜಾತಾ ಶ್ರೀನಿವಾಸ ನಾಯ್ಕ ದೊಡ್ಡದಾಗಿ ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭ ಗೋಪಾಲಕೃಷ್ಣ ಸಮಯಪ್ರಜ್ಞೆ ಮೆರೆದು ತಕ್ಷಣವೇ ಸಮೀಪದಲ್ಲಿದ್ದ ಬ್ಯಾಂಕ್&zwnj;ವೊಂದರೊಳಗೆ ಓಡಿಹೋಗಿ, ಒಳಗಿನಿಂದ ಬಾಗಿಲು ಹಾಕಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭೀಕರ ದಾಳಿಯಲ್ಲಿ ಅವರ ತಲೆ ಭಾಗದಲ್ಲಿ ಮೂರು ಕಡೆ ಹಾಗೂ ಎರಡು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಹಾಗೆ ಗೋಪಾಲ&zwnj;ಕೃಷ್ಣ ನಾಯಕ ಜೊತೆಗಿದ್ದ ಅವರ ಸ್ನೇಹಿತ ರಾಘವೇಂದ್ರ ನಾಯಕ ತಲೆಭಾಗಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.&lt;/p&gt;&lt;h2&gt;ಮೂರು ತಿಂಗಳಿನಿಂದ ಸ್ಕೆಚ್&lt;/h2&gt;&lt;p&gt;ಪ್ರಾಥಮಿಕ ತನಿಖೆಯಲ್ಲಿ, ಈ ದಾಳಿಗೆ ಸುಮಾರು ಮೂರು ತಿಂಗಳಿನಿಂದಲೇ ಸ್ಕೆಚ್ ಹಾಕಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಅಂಕೋಲಾದಲ್ಲೇ ಮನೆ ಮಾಡಿಕೊಂಡು, ಗೋಪಾಲಕೃಷ್ಣ ನಾಯಕ್ ಅವರ ದಿನಚರಿಯನ್ನು ಗಮನಿಸಿ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಸದಾ ಬೆಂಬಲಿಗರೊಂದಿಗೆ ಇರುವ ನಾಯಕ್ ಒಬ್ಬಂಟಿಯಾಗಿ ಇರುವ ಸಮಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.&lt;/p&gt;&lt;h2&gt;ಗೋವಾ ಮೂಲದ ಆರೋಪಿಗಳು, ನಾಲ್ವರು ಆರೋಪಿಗಳು ವಶಕ್ಕೆ&lt;/h2&gt;&lt;p&gt;ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಗೋವಾ ಮೂಲದವರಾಗಿರುವ ಮಾಹಿತಿ ದೊರೆತಿದೆ. ಗೋಪಾಲಕೃಷ್ಣ ನಾಯಕ್ ಅವರ ಫೋಟೋ ನೀಡಿ ಕೊಲೆಗಾಗಿ ಸುಪಾರಿ ನೀಡಲಾಗಿತ್ತು . ಸ್ಥಳೀಯರ ಕೈವಾಡವೂ ಇರಬಹುದು ಎಂಬ ಶಂಕೆ ಮೇಲೆ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ನಡೆಸಿದ ಬಳಿಕ ನಾಲ್ವರು ಆರೋಪಿಗಳು ಗೋವಾದತ್ತ ಪರಾರಿಯಾಗಲು ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಅಲರ್ಟ್ ಆಗಿ ಕಾರವಾರ-ಗೋವಾ ಗಡಿಯ ಮಾಜಾಳಿ ಚೆಕ್ ಪೋಸ್ಟ್&zwnj;ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದರು. ಈ ವೇಳೆ ಶಂಕಿತ ನಾಲ್ವರು ದುಷ್ಕರ್ಮಿಗಳನ್ನು ಚಿತ್ತಾಕುಲ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರಿದಿದೆ. ಗೋವಾಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ತನಿಖೆ ಚುರುಕು&lt;/h2&gt;&lt;p&gt;ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಪಶ್ಚಿಮ ವಲಯ ಐಜಿಪಿ ಕಾರವಾರದಲ್ಲಿಯೇ ತಂಗಿ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಹತ್ಯೆಯ ಪ್ರಯತ್ನಕ್ಕೆ ರಾಜಕೀಯ ಅಥವಾ ರಿಯಲ್&zwnj; ಎಸ್ಟೇಟ್&zwnj; ವ್ಯವಹಾರ ಕಾರಣವೇ ಎಂದು ತನಿಖೆ&zwnj; ನಡೆಸಲಾಗುತ್ತಿದೆ. ಗೋಪಾಲಕೃಷ್ಣ ನಾಯಕ್ ರಾಜಕೀಯವಾಗಿ ಬೆಳೆಯುತ್ತಿರುವ ಹಿನ್ನೆಲೆ, ಅವರ ಪ್ರಭಾವವನ್ನು ತಡೆಯುವ ಉದ್ದೇಶದಿಂದಲೇ ಈ ದಾಳಿ ನಡೆದಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.&lt;/p&gt;&lt;h2&gt;ಆತಂಕದಲ್ಲಿ ಅಂಕೋಲಾ ಜನತೆ&lt;/h2&gt;&lt;p&gt;2014ರಲ್ಲಿ ಅದಿರು ಉದ್ಯಮಿ ಆರ್.ಎನ್. ನಾಯಕ ಅವರನ್ನು ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿಯೇ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಈಗ ಮತ್ತೆ ಹಾಡುಹಗಲೇ ದುಷ್ಕರ್ಮಿಗಳ ತಂಡ ಅಟ್ಟಹಾಸ ಮೆರೆದಿರುವುದು ಜನತೆಯನ್ನು ಇನ್ನಷ್ಟು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನಾಗರಿಕರ ಆತಂಕವನ್ನು ದೂರ ಮಾಡಬೇಕಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಹಾಡಹಗಲೇ ನಡೆದ ಈ ಹತ್ಯೆ ಯತ್ನ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲೇ ಆತಂಕ ಮೂಡಿಸಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಪ್ರಕರಣದ ಸಂಪೂರ್ಣ ಸತ್ಯ ಹೊರಬರುವವರೆಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕುತೂಹಲ ಮುಂದುವರಿದಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/ankola-murder-attempt-congress-leader-gopalakrishna-nayak-attacked-4-accused-arrested-gdp/articleshow-qbow2v0"/>
        </item>
        <item>
            <title><![CDATA[20 ಕಡೆಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ: ಸಚಿವ  ರಾಮಲಿಂಗಾರೆಡ್ಡಿ]]></title>
            <link>https://kannada.asianetnews.com/karnataka-districts/dandeli-automated-driving-test-track-inauguration-ramalinga-reddy-gvd/articleshow-rme90gs</link>
            <guid isPermaLink="true">https://kannada.asianetnews.com/karnataka-districts/dandeli-automated-driving-test-track-inauguration-ramalinga-reddy-gvd/articleshow-rme90gs</guid>
            <pubDate>Sat, 21 Mar 2026 20:35:53 +0530</pubDate>
            <description><![CDATA[&lt;p&gt;ತಮ್ಮ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಜನಸೇವೆಯೇ ಮುಖ್ಯ ಗುರಿಯಾಗಿಟ್ಟುಕೊಂಡು ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ಭಾಗಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2r8h86wx9cj02k188dzrdaa,imgname-minister-ramalinga-reddy-on-dharmasthala-case-1755308400860.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾಂಡೇಲಿ (ಮಾ.21):&lt;/strong&gt; ಸಹಾಯಕ ಸಾರಿಗೆ ಕಚೇರಿ ಉದ್ಘಾಟನೆಗೊಂಡು ಇನ್ನು ಒಂದು ವರ್ಷವಾಗಿಲ್ಲ. ಆಗಲೆ ಇನ್ನೊಂದು ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದ ಉದ್ಘಾಟನೆಗೆ ಬಂದಿದ್ದೇನೆ ಎಂದರೆ ಇದಕ್ಕೆಲ್ಲ ಕಾರಣ ನಿಮ್ಮ ಈ ಭಾಗದ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ. ಅವರು 9 ಬಾರಿ ವಿಧಾನಸಭೆಗೆ ಆಯ್ಕೆಯಾದ ಹಿರಿಯ ರಾಜಕಾರಣಿಗಳಲ್ಲಿ ಎರಡನೆಯವರಾಗಿದ್ದಾರೆ. ತಮ್ಮ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಜನಸೇವೆಯೇ ಮುಖ್ಯ ಗುರಿಯಾಗಿಟ್ಟುಕೊಂಡು ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ಭಾಗಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.&lt;/p&gt;&lt;p&gt;ನಗರದ ಅಂಬೇವಾಡಿಯ ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಚೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ದೇಶಪಾಂಡೆಯವರು ಯಾವದಾದರೊಂದು ಕೆಲಸ ಕೈಗೆತ್ತಿಕೊಂಡರೆ ಅದು ಪೂರ್ಣಗೊಳಿಸುವವರೆಗೆ ನಿಲ್ಲುವುದಿಲ್ಲ ಎಂದರು. ರಾಜ್ಯದಲ್ಲಿ ಸುಮಾರು 20 ಕಡೆಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣಗೊಂಡಿವೆ. ಇನ್ನು ಬಾಕಿ ಉಳಿದಿರುವ ಸುಮಾರು 25 ಕಡೆಗಳಲ್ಲಿ ಆದಷ್ಟು ಬೇಗನೆ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ಕೆಲಸ ಮಾಡಿ ಮುಗಿಸುತ್ತೇವೆ. ಇದರಿಂದ ಮದ್ಯವರ್ತಿಗಳಾಗಲಿ, ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳಾಗಲಿ ಯಾರು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ಹಸ್ತಕ್ಷೇಪ ಇರುವುದಿಲ್ಲ&lt;/strong&gt;&lt;/h2&gt;&lt;p&gt;ಕಾರಣ ಇದು ಸೆನ್ಸಾರ್&zwnj;ಗಳ ಅಳವಡಿಕೆ ಹೊಂದಿದ್ದು, ಎಲ್ಲವನ್ನು ಸೆನ್ಸಾರ್&zwnj; ಮೂಲಕ ತೀರ್ಮಾನಗೊಳ್ಳುತ್ತದೆ. ಸರಿಯಾಗಿ ಚಾಲನೆಯನ್ನು ಕಲಿತ ಚಾಲಕರು ಮಾತ್ರ ಇಲ್ಲಿ ಉತ್ತೀರ್ಣರಾಗಲು ಸಾಧ್ಯ, ಚಾಲನೆಯಲ್ಲಿ ತಪ್ಪಿದಲ್ಲಿ ಮತ್ತೆ ತರಬೇತಿ ಪಡೆದು ಇಲ್ಲಿಗೆ ಬರಬೇಕಾಗುತ್ತದೆ. ಇದರಿಂದ ಇನ್ನು ಮುಂದಿನ ದಿನಗಳಲ್ಲಿ ಈ ಪರೀಕ್ಷೆಯಲ್ಲಿ ಕಚೇರಿಯ ಅಧಿಕಾರಿಗಳ ಹಸ್ತಕ್ಷೇಪ ಇರುವುದಿಲ್ಲ ಹಾಗೂ ಅವರು ಅನುಭವಿಸುತ್ತಿರುವ ಆಪಾದನೆಗಳು ಕೂಡ ತಪ್ಪುತ್ತವೆ ಎಂದರು. ನಗರದ ಬಸ್&zwnj; ನಿಲ್ದಾಣವನ್ನು ಹೈಟೆಕ್&zwnj; ಆಗಿ ಮಾಡುವುದು ಮತ್ತು ಬೆಂಗಳೂರು ದಾಂಡೇಲಿಗೆ ಪಲ್ಲಕ್ಕಿ ಬಸ್&zwnj; ಆರಂಭಿಸುವುದಕ್ಕೆ ಹಿರಿಯ ಶಾಸಕ ಆರ್&zwnj;.ವಿ. ದೇಶಪಾಂಡೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಅದರಂತೆ ಈ ಬಜಟ್&zwnj;ನಲ್ಲಿ ದಾಂಡೇಲಿ ಹೈಟೆಕ್&zwnj; ಬಸ್&zwnj;ನಿಲ್ದಾಣಕ್ಕೆ ಅನುಮತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಲ್ಲಕ್ಕಿ ಬಸ್&zwnj;ಗಳನ್ನು ಬೆಂಗಳೂರು-ದಾಂಡೇಲಿಗೆ ಪ್ರಾರಂಭಿಸುತ್ತೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆರ್.ವಿ. ದೇಶಪಾಂಡೆ, ದಾಂಡೇಲಿ ಪಟ್ಟಣ ಬೆಳೆಯುತ್ತಿದೆ ಎಷ್ಟೊಂದು ಮನೆಗಳು ನಿರ್ಮಾಣಗೊಂಡಿವೆ. ಹೊಸ ನಿವೇಶನಗಳು ಆಗುತ್ತಿವೆ ನೋಡಿದರೆ ಖುಷಿಯಾಗುತ್ತದೆ. ಈ ಹಿಂದೆ ಇಲ್ಲಿ ಮೂರು ಕಾರ್ಖಾನೆಗಳಿದ್ದವು ವೆಸ್ಟ್&zwnj;ಕೋಸ್ಟ್&zwnj; ಕಾಗದ ಕಾರ್ಖಾನೆ, ದಾಂಡೇಲಿ ಫೇರೋ ಅಲೈಯಿಸ್&zwnj;, ಇಂಡಿಯನ್ ಪ್ಲಾಯ್&zwnj;ವುಡ್&zwnj;. ಇವುಗಳಲ್ಲಿ ವೆಸ್ಟ್&zwnj;ಕೋಸ್ಟ್&zwnj; ಕಾಗದ ಕಾರ್ಖಾನೆ ಸಾಕಷ್ಟು ಪ್ರಯತ್ನದಿಂದ ಉಳಿದಿದೆ.&lt;/p&gt;&lt;p&gt;ಇಂದು ಸಾವಿರಾರು ಜನ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ದಾಂಡೇಲಿ-ಜೋಯಿಡಾ ಭಾಗ ಅಭಿವೃದ್ದಿ ಹೊಂದುತ್ತಿವೆ. ಇದರಿಂದ ಉದ್ಯೋಗ ಸಿಗುತ್ತಿದೆ. ಪ್ರವಾಸಿಗರು ದೇಶ, ವಿದೇಶಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಹಾಗಾಗಿ ದಾಂಡೇಲಿ ನಗರ ಎಲ್ಲ ರೀತಿಯಿಂದ ಅಭಿವೃದ್ದಿಯಾಗಬೇಕು ಎಂದರು. ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ, ಬೆಳಗಾವಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ಡಿಎಸ್&zwnj;ಪಿ ಶಿವಾನಂದ ಮದರಕಂಡಿ, ಎಆರ್&zwnj;ಟಿಓ ಅವಿನಾಶ ಕಾವೇರಿ, ಮೋಟಾರ ವಾಹನ ನಿರೀಕ್ಷಕ ಮಂಜುನಾಥ ಕಂಬಾರ, ಎಆರ್&zwnj;ಟಿಓ ಕಚೇರಿ ಖಜಾಂಚಿ ಎಸ್.ಎಂ. ಖಾಜಿ ಮುಂತಾದವರಿದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dandeli-automated-driving-test-track-inauguration-ramalinga-reddy-gvd/articleshow-rme90gs"/>
        </item>
        <item>
            <title><![CDATA[ಕೇರಳ ಚುನಾವಣೆ ಹಿನ್ನೆಲೆ ಹೆಚ್ಚಿದ ಅಕ್ರಮ, ಮಂಗಳಾ ಎಕ್ಸ್‌ಪ್ರೆಸ್‌ ನಲ್ಲಿದ್ದ ಬ್ಯಾಗ್ ತೆರೆದ ಕರ್ನಾಟಕ ಅಧಿಕಾರಿಗಳೇ ಶಾಕ್!]]></title>
            <link>https://kannada.asianetnews.com/karnataka-districts/excise-raid-on-mangaluru-lakshadweep-express-illegal-liquor-seized-ahead-of-kerala-elections-gdp/articleshow-si8murl</link>
            <guid isPermaLink="true">https://kannada.asianetnews.com/karnataka-districts/excise-raid-on-mangaluru-lakshadweep-express-illegal-liquor-seized-ahead-of-kerala-elections-gdp/articleshow-si8murl</guid>
            <pubDate>Fri, 03 Apr 2026 16:25:55 +0530</pubDate>
            <description><![CDATA[ಕೇರಳ ಚುನಾವಣೆಯ ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆಯು ಮಂಗಳಾ ಲಕ್ಷದ್ವೀಪ ಎಕ್ಸ್&zwnj;ಪ್ರೆಸ್ ರೈಲಿನಲ್ಲಿ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಜನರಲ್ ಬೋಗಿಯಲ್ಲಿದ್ದ ಅನುಮಾನಾಸ್ಪದ ಬ್ಯಾಗ್&zwnj;ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬಿಯರ್ ಕ್ಯಾನ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಅಕ್ರಮ ಮದ್ಯ ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn9f95gnpj3eqf87qf0nf0f6,imgname-excise-raid-on-mangaluru-lakshadweep-express-1775213254164.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆ ಅಕ್ರಮ ಮದ್ಯ ಸಾಗಾಟಕ್ಕೆ ತಡೆಹಿಡಿಯಲು ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿದೆ. ಇದರ ಭಾಗವಾಗಿ ಗೋವಾದ ಮಡಗಾಂವ್&zwnj;ನಿಂದ ಕಾರವಾರ ಮಾರ್ಗವಾಗಿ ಕೇರಳದತ್ತ ಸಾಗುತ್ತಿದ್ದ ಮಂಗಳಾ ಲಕ್ಷದ್ವೀಪ ಎಕ್ಸ್&zwnj;ಪ್ರೆಸ್ ರೈಲಿನ ಮೇಲೆ ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಚುನಾವಣಾ ಹಿನ್ನೆಲೆ ನೆರೆ ರಾಜ್ಯಗಳ ಗಡಿಭಾಗಗಳು ಹಾಗೂ ರೈಲು ಮಾರ್ಗಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಮಡಗಾಂವ್&zwnj;ನಿಂದ ಕುಮಟಾವರೆಗೆ ರೈಲಿನಲ್ಲಿ ಪ್ರಯಾಣಿಸಿ, ಬೋಗಿಗಳಲ್ಲಿ ಸುದೀರ್ಘ ತಪಾಸಣೆ ನಡೆಸಿತು.&lt;/p&gt;&lt;h2&gt;ಅನುಮಾನಾಸ್ಪದ ಬ್ಯಾಗ್&zwnj;ನಲ್ಲಿ ಮದ್ಯ ಪತ್ತೆ&lt;/h2&gt;&lt;p&gt;ರೈಲಿನ ಜನರಲ್ ಬೋಗಿಗಳ ಪರಿಶೀಲನೆಯ ವೇಳೆ, ಒಂದು ಬೋಗಿಯಲ್ಲಿ ಅನುಮಾನಾಸ್ಪದವಾಗಿ ಬಿಟ್ಟುಹೋಗಿದ್ದ ಬ್ಯಾಗ್&zwnj; ಪತ್ತೆಯಾಯಿತು. ಬ್ಯಾಗ್&zwnj; ತೆರೆಯುತ್ತಿದ್ದಂತೆ ಅದರೊಳಗೆ ತಲಾ 500 ಮಿಲಿ ಸಾಮರ್ಥ್ಯದ 24 ಕಿಂಗ್&zwnj;ಫಿಶರ್ ಪ್ರೀಮಿಯಂ ಬಿಯರ್ ಕ್ಯಾನ್&zwnj;ಗಳು ಅಡಗಿಸಿಟ್ಟಿರುವುದು ಕಂಡುಬಂದಿದೆ.&lt;/p&gt;&lt;h2&gt;ಆರೋಪಿಯ ಸುಳಿವು ಇಲ್ಲ&lt;/h2&gt;&lt;p&gt;ಬ್ಯಾಗ್&zwnj; ಯಾರದ್ದು ಎಂಬುದು ಪತ್ತೆಯಾಗದೆ, ಯಾವುದೇ ಪ್ರಯಾಣಿಕರು ಅದರ ಮಾಲೀಕತ್ವವನ್ನು ಒಪ್ಪಿಕೊಳ್ಳದ ಕಾರಣ, ಅಬಕಾರಿ ಅಧಿಕಾರಿಗಳು ಮದ್ಯವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h2&gt;ಜಂಟಿ ಕಾರ್ಯಾಚರಣೆ&lt;/h2&gt;&lt;p&gt;ಈ ಕಾರ್ಯಾಚರಣೆಯನ್ನು ಕಾರವಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ, ಅಂಕೋಲಾ ಮತ್ತು ಕಾರವಾರ ವಲಯದ ಅಬಕಾರಿ ನಿರೀಕ್ಷಕರು ಹಾಗೂ ಜಿಲ್ಲಾ ತಂಡದ ಸಿಬ್ಬಂದಿ ಸಂಯುಕ್ತವಾಗಿ ನಡೆಸಿದರು.&lt;/p&gt;&lt;h2&gt;ಕಟ್ಟೆಚ್ಚರ ಮುಂದುವರಿಕೆ&lt;/h2&gt;&lt;p&gt;ಕೇರಳ ಚುನಾವಣೆಯ ಹಿನ್ನೆಲೆ ಅಕ್ರಮ ಮದ್ಯ ಸಾಗಾಟವನ್ನು ತಡೆಗಟ್ಟಲು ಇಂತಹ ತಪಾಸಣೆಗಳನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಮಾರ್ಗಗಳಲ್ಲಿಯೂ ತೀವ್ರ ನಿಗಾವಹಿಸಲಾಗಿದ್ದು, ಸಂಶಯಾಸ್ಪದ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/excise-raid-on-mangaluru-lakshadweep-express-illegal-liquor-seized-ahead-of-kerala-elections-gdp/articleshow-si8murl"/>
        </item>
        <item>
            <title><![CDATA[ಭಟ್ಕಳ: ರಸ್ತೆಯಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸಿದ ಸಾವಿರಾರು ಮುಸ್ಲಿಮರು!]]></title>
            <link>https://kannada.asianetnews.com/karnataka-districts/bhatkal-ramzan-prayers-on-road-eidga-maidan-crowd-legal-rules-karnataka-san/articleshow-tdleuwz</link>
            <guid isPermaLink="true">https://kannada.asianetnews.com/karnataka-districts/bhatkal-ramzan-prayers-on-road-eidga-maidan-crowd-legal-rules-karnataka-san/articleshow-tdleuwz</guid>
            <pubDate>Fri, 20 Mar 2026 18:34:33 +0530</pubDate>
            <description><![CDATA[ರಂಜಾನ್ ಹಬ್ಬದ ಪ್ರಯುಕ್ತ ಭಟ್ಕಳದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದಿತ್ತು. ಮೈದಾನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ನೂರಾರು ಜನರು ಅನಿವಾರ್ಯವಾಗಿ ಮೈದಾನದ ಹೊರಗಿನ ರಸ್ತೆಯಲ್ಲೇ ಸಾಲಾಗಿ ನಿಂತು ನಮಾಜ್ ಮಾಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01km5ncfzrbs4254f3y44fshpb,imgname-bhatkal-ramdan-1774011695096.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಟ್ಕಳ (ಮಾ.20): &lt;/strong&gt;ರಂಜಾನ್ ಹಬ್ಬದ ಪ್ರಯುಕ್ತ ಇಂದು ದೇಶಾದ್ಯಂತ ಸಂಭ್ರಮ ಮನೆಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯನ್ನೂ ರಸ್ತೆಯಲ್ಲಿ ಮಾಡಲಾಗಿದೆ. ಇಲ್ಲಿನ ಪ್ರಖ್ಯಾತ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಆಗಮಿಸಿದ್ದರು. ಆದರೆ, ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದಿದ್ದರಿಂದ ಮೈದಾನದ ಒಳಭಾಗ ಸಂಪೂರ್ಣವಾಗಿ ಭರ್ತಿಯಾಗಿತ್ತು.&lt;/p&gt;&lt;p&gt;ಮೈದಾನದಲ್ಲಿ ಸ್ಥಳಾವಕಾಶದ ಕೊರತೆ ಉಂಟಾದ ಹಿನ್ನೆಲೆಯಲ್ಲಿ, ಪ್ರಾರ್ಥನೆಗೆ ಬಂದಿದ್ದ ನೂರಾರು ಜನರು ಅನಿವಾರ್ಯವಾಗಿ ಈದ್ಗಾ ಮೈದಾನದ ಹೊರಗಿನ ರಸ್ತೆಯ ಮೇಲೆಯೇ ಸಾಲಾಗಿ ನಿಂತು ನಮಾಜ್ ಮಾಡಿದರು. ಇಕ್ಕಟ್ಟಾದ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ತೊಂದರೆಯಾದ ಕಾರಣ, ರಸ್ತೆಯಲ್ಲೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.&lt;/p&gt;&lt;p&gt;ಪ್ರತಿ ವರ್ಷವೂ ಭಟ್ಕಳದ ಈದ್ಗಾ ಮೈದಾನಕ್ಕೆ ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಈ ಬಾರಿ ಜನಸಂಖ್ಯೆ ಮಿತಿ ಮೀರಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಪ್ರಾರ್ಥನೆ ಪೂರೈಸಲಾಯಿತು.&lt;/p&gt;&lt;p&gt;ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಮಾಜ್ ಮಾಡುವುದನ್ನು ಹೈಕೋರ್ಟ್ ಮತ್ತು ಆಡಳಿತಗಳು ಕಟ್ಟುನಿಟ್ಟಾಗಿ ಪರಿಗಣಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ನಮಾಜ್ ಮಾಡುವುದನ್ನು ಹೈಕೋರ್ಟ್&zwnj; ಕೆಲವು ಸಂದರ್ಭಗಳಲ್ಲಿ ಆಕ್ಷೇಪಿಸಿದೆ. ಕಳೆದ ವರ್ಷ ಇದೇ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್&zwnj; ಯತ್ನಾಳ್&zwnj; ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಬಳಿಕ ಪ್ರತಿಕ್ರಿಯಿಸಿದ್ದ ಸಚಿವ ಪ್ರಿಯಾಂಕ್&zwnj; ಖರ್ಗೆ, ರಸ್ತೆಯಲ್ಲಿ ನಮಾಜ್&zwnj; ಮಾಡುವುದಾದರೆ ಅದಕ್ಕೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/bhatkal-ramzan-prayers-on-road-eidga-maidan-crowd-legal-rules-karnataka-san/articleshow-tdleuwz"/>
        </item>
        <item>
            <title><![CDATA[ಶಿರಸಿಯಲ್ಲಿ ಬಾವಿಗೆ ಬಿದ್ದ 2 ವರ್ಷದ ಮಗು; ಪಂಪ್‌ಸೆಟ್‌ ಪೈಪು ಹಿಡಿದು ಕೂತಿದ್ದ ಬಾಲೆ; ಕಾಪಾಡಿದ ರಿಯಲ್‌ ಹೀರೋ]]></title>
            <link>https://kannada.asianetnews.com/karnataka-districts/uttara-kannada-sirsi-child-rescue-girl-fell-into-well/articleshow-unleuci</link>
            <guid isPermaLink="true">https://kannada.asianetnews.com/karnataka-districts/uttara-kannada-sirsi-child-rescue-girl-fell-into-well/articleshow-unleuci</guid>
            <pubDate>Mon, 16 Mar 2026 18:24:04 +0530</pubDate>
            <description><![CDATA[&lt;p&gt;Girl fell into well: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದಿದೆ. ಆ ಬಳಿಕ ಆ ಮಗುವನ್ನು ಮೇಲಕ್ಕೆತ್ತಿ ಬಚಾವ್&zwnj; ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkvb8hf1zf42w635a20qrbpe,imgname-new-project--8--1773665535457.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ: ಬಾವಿಗೆ ಬಿದ್ದ ಎರಡು ವರ್ಷದ ಮಗು ಬಚಾವ್&zwnj; ಆದ ಘಟನೆಯು ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಜೀವದ ಹಂಗನ್ನು ತೊರೆದು ಬಾವಿಗಿಳಿದು ಬಾಲೆಯನ್ನು ಮೇಲಕ್ಕೆತ್ತಿ ಬಚಾವ್&zwnj; ಮಾಡಿದ್ದಾರೆ.&lt;/p&gt;&lt;h2&gt;ಕಸ್ತೂರಬಾ ನಗರದಲ್ಲಿ ಘಟನೆ&lt;/h2&gt;&lt;p&gt;ಇಂದು ಮಾರ್ಚ್&zwnj; 16ರಂದು ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಕಸ್ತೂರಬಾ ನಗರದಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಕಾಪಾಡಿದ ವ್ಯಕ್ತಿಗೆ ನನ್ನ ಪಾಲಿನ ದೇವರೆಂದು ಆ ಬಾಲೆಯ ಅಜ್ಜಿ ಹೇಳಿದ್ದಾರೆ.&lt;/p&gt;&lt;p&gt;ಬಾಲಕಿಯನ್ನು ಕಾಪಾಡಿದವರು ಏನಂದ್ರು?&lt;/p&gt;&lt;p&gt;ಆ ಕ್ಷಣದಲ್ಲಿ ಯಾರೇ ಬಿದ್ದರೂ ಇದನ್ನೆ ಮಾಡುತ್ತಿದ್ದೆ ಎಂದು ಬಾಲೆಯನ್ನು ಕಾಪಾಡಿದ ಪಯಾಜ್ ಚೌಟಿ ಅವರು ಹೇಳಿದ್ದಾರೆ..&lt;/p&gt;&lt;h2&gt;ಏನಾಯ್ತು?&lt;/h2&gt;&lt;p&gt;ಮನೆಯಲ್ಲಿ ಮಗು ಭುವಿ (2) ಯನ್ನು ಊಟಕ್ಕಾಗಿ ಹುಡುಕುತ್ತಿದ್ದರು. ಎಷ್ಟು ಹುಡುಕಿದರೂ ಕೂಡ ಮಗು ಸಿಗಲಿಲ್ಲ. ಅಜ್ಜಿ ಸಂಶಯಗೊಂಡು ಮನೆಯ ಹಿಂದಿನ ಬಾವಿ ಹತ್ತಿರ ಹೋದಾಗ ಮಗು ಅಳುವಿನ ಶಬ್ದ ಕೇಳಿಸಿದೆ. ಬಾವಿ ಬಳಿ ಹೋಗಿ ನೋಡಿದಾಗ ಮಗು ಬಾವಿಯಲ್ಲಿ ಬಿದ್ದು ಪಂಪ್&zwnj;ಗೆ ಅವಡಿಸಲಾಗಿದ್ದ ಪೈಪ್ ಹಿಡಿದುಕೊಡು ಒಂದೇ ಸಮನೆ ಅಳುತ್ತಿದ್ದಳು. ಈ ಸುದ್ದಿ ತಕ್ಷಣಕ್ಕೆ ಅಕ್ಕಪಕ್ಕದಲ್ಲಿದ್ದವರಿಗೆ ಗೊತ್ತಾಗಿದೆ. ಆ ಮನೆಯ ಹತ್ತಿರದಲ್ಲಿದ್ದ ಸಾರಿಕಾ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಪಯ್ಯು ಚವಟಿಯವರ ಮನೆಗೂ ತಲುಪಿತು. ಇನ್ನೇನು ಬೆಂಗಳೂರಿಗೆ ಹೊರಡುವ ತಯಾರಿಯಲ್ಲಿದ್ದ ಪಯ್ಯುರವರು ಒಂದು ಕ್ಷಣವೂ ತಡಮಾಡದೇ ಬಾವಿ ಕಡೆಗೆ ಓಡಿಯೇ ಬಿಟ್ಟರು&lt;/p&gt;&lt;h2&gt;ಬದುಕುಳಿದ ಮಗು&lt;/h2&gt;&lt;p&gt;ಬಾಲೆಯ ಕುಟುಂಬದವರ ಕೂಗಾಟದ ನಡುವೆಯೇ ಪಯ್ಯುರವರು ಜನರ ಸಹಾಯದಿಂದ ಬಾವಿಗಿಳಿದು ಮಗುವನ್ನು ಜೀವಂತವಾಗಿ ಮೇಲಕ್ಕೆ ತರಲು ಯಶಸ್ವಿಯಾದರು.&lt;/p&gt;&lt;p&gt;ಆ ಮಗುವನ್ನು ಕಾಪಾಡಿದ್ದಕ್ಕಾಗಿ ಆ ವ್ಯಕ್ತಿಯೇ ನನ್ನ ದೇವರು ಎಂದು ಅಜ್ಜಿ ಹೇಳಿದ್ದಾರೆ. ಬಾಲಕಿಯನ್ನು ಕಾಪಾಡಿದ ವ್ಯಕ್ತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/uttara-kannada-sirsi-child-rescue-girl-fell-into-well/articleshow-unleuci"/>
        </item>
        <item>
            <title><![CDATA[ಉತ್ತರ ಕನ್ನಡದ ರೈತನ ತೋಟದ ವಿಸ್ಮಯ: ಒಂದೇ ಹಣ್ಣಿಗೆ 60 ಚಿಕ್ಕ ಚಿಕ್ಕ ಕಾಯಿಗಳು!]]></title>
            <link>https://kannada.asianetnews.com/karnataka-districts/rare-medusa-pineapple-spotted-in-uttara-kannada-farm-one-plant-grows-over-60-mini-fruits-gdp/articleshow-xn50kop</link>
            <guid isPermaLink="true">https://kannada.asianetnews.com/karnataka-districts/rare-medusa-pineapple-spotted-in-uttara-kannada-farm-one-plant-grows-over-60-mini-fruits-gdp/articleshow-xn50kop</guid>
            <pubDate>Thu, 02 Apr 2026 15:56:37 +0530</pubDate>
            <description><![CDATA[ಉತ್ತರ ಕನ್ನಡದ ಶೇವಾಳಿ ಗ್ರಾಮದ ರೈತರೊಬ್ಬರ ತೋಟದಲ್ಲಿ ಒಂದು ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಅನಾನಸ್&zwnj;ಗಳು ಬೆಳೆದು ಅಚ್ಚರಿ ಮೂಡಿಸಿವೆ. ಇದು ಥೈಲ್ಯಾಂಡ್ ಮೂಲದ ಅಪರೂಪದ 'ಮೆಡುಸಾ ಅನಾನಸ್' ತಳಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಇದನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಹೆಚ್ಚಾಗಿ ಬೆಳೆಯಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6tcf9kagfahndgnvyp9512,imgname-medusa-pineapple-1775124233523.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ: &lt;/strong&gt;ತಾಲೂಕಿನ ಶೇವಾಳಿ ಗ್ರಾಮದ ರೈತರ ತೋಟದಲ್ಲಿ ಬೆಳೆಯುತ್ತಿರುವ ಒಂದು ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಅನಾನಸ್ ಬೆಳದಿದ್ದು, ಆಶ್ಚರ್ಯ ತಂದಿದೆ.&lt;/p&gt;&lt;h2&gt;ಅನಾನಸ್ ನೋಡುವುದೇ ಒಂದು ಖುಷಿ&lt;/h2&gt;&lt;p&gt;ತಾಲೂಕಿನ ರೈತರಿಗೆ ಯಾವುದೇ ಬೆಳೆ ರಕ್ಷಿಸಿಕೊಳ್ಳುವುದೇ ಒಂದು ಸಾಹಸ. ಅದರಲ್ಲೂ ಅನಾನಸ್&zwnj;ಗಳಂತ ಬೆಳೆ ಗಳು ಚಿಕ್ಕದಾಗಿ ಮೂಡಿ ಬರುತ್ತಿದ್ದಂತೆ ಮಂಗಗಳು, ಕೆಂದಳಿಲು, ಹಂದಿಗಳು ಮತ್ತು ಹಾರುವ ಬೆಕ್ಕುಗಳು ಮುರಿದು ತಿನ್ನುತ್ತವೆ. ಆದರೂ ಎಲ್ಲ ಪ್ರಾಣಿಗಳ ಕಣ್ಣು ತಪ್ಪಿಸಿ ಉಳಿದ ಈ ಅನಾನಸ್&zwnj;ನಲ್ಲಿ ಆರಂಭದಲ್ಲಿ ಏನೂ ವಿಶೇಷತೆ ಕಂಡು ಬಂದಿರಲಿಲ್ಲ. ದಿನ ಕಳೆದಂತೆ ಏನೋ ಬದಲಾವಣೆ ಕಂಡು ಬರತೊಡಗಿ ಮತ್ತೆ ಚಿಕ್ಕ ಚಿಕ್ಕ ಅನಾನಸ್ ಬೆಳೆದಿವೆ. ಈ ಚಿಕ್ಕ ಚಿಕ್ಕ ಅನಾನಸ್ ತಿನ್ನಲು ಬರುವುದಿಲ್ಲ. ಚಿಕ್ಕ ಮಕ್ಕಳ ಆಟಿಗೆಯಂತೆ ಚಿಕ್ಕದಾಗಿವೆ. ಎಲ್ಲ ಅನಾನಸ್ ಹೊತ್ತ ದೊಡ್ಡ ಅನಾನಸ್&zwnj;ಗೆ ಸಿಹಿಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆಯೋ ಗೊತ್ತಿಲ್ಲ. ಒಟ್ಟಾರೆ ತುಂಬಾ ಸೌಂದರ್ಯ ಹೊತ್ತಂತಿರುವ ಅನಾನಸ್ ನೋಡುವುದೇ ಒಂದು ಖುಷಿಯಾಗಿದೆ.&lt;/p&gt;&lt;h2&gt;ಹೊರ ದೇಶದ ಅನಾನಸ್&lt;/h2&gt;&lt;p&gt;ಇದು ಥೈವಾನ್ ಅಥವಾ ಥೈಲ್ಯಾಂಡ್&zwnj;ನ ಅನಾನಸ್ ಇರಬಹುದು ಎನ್ನುತ್ತಾರೆ ರಾಮನಗರ ತೋಟಗಾರಿಕೆ ಅಧಿಕಾರಿ ಅಬ್ದುಲ್ಲ ದಳವಾಯಿ. ಸಿದ್ದಾಪುರದ ಜೋಶಿಯವರ ನರ್ಸರಿಯಿಂದ ತಂದಿರುವ ಅನಾನಸ್ ಗಿಡ ಇದಾಗಿದ್ದು, ಅವರು ಕೊಡುವಾಗ ಹೊರ ದೇಶದ ಅನಾನಸ್ ಎಂದು ಹೇಳಿದ್ದರು ಎನ್ನಲಾಗಿದೆ.&lt;/p&gt;&lt;h2&gt;ಗೂಗಲ್ ನಲ್ಲಿ ಏನಿದೆ?&lt;/h2&gt;&lt;p&gt;ಮೆಡುಸಾ ಅನಾನಸ್ ಒಂದು ಅಪರೂಪದ ಹಣ್ಣಾಗಿದ್ದು, ಇದು ಥೈಲ್ಯಾಂಡ್ ಬ್ರೊಮೆಲಿಯಾಡ್ ಕುಟುಂಬದ ಸದಸ್ಯ ಸಸ್ಯವಾಗಿದ್ದು, ಅಲಂಕಾರಿಕ ಬಳಕೆಗಾಗಿ ಮತ್ತು ಸಿಹಿ ಮತ್ತು ಹುಳಿ, ತಳದಲ್ಲಿ ಹೆಚ್ಚಿನ ಸಕ್ಕರೆ ಸಾಂದ್ರತೆಯೊಂದಿಗೆ ಇರುತ್ತದೆ. ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ, ಇದು ಮುಖ್ಯ ಹಣ್ಣಿಗೆ ಜೋಡಿಸಲಾದ ನೂರಾರು ಸಣ್ಣ ಅನಾನಸ್&zwnj;ಗಳನ್ನು ಹೊಂದಿರುತ್ತದೆ ಮತ್ತು ಈಗ ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಬೆಳೆಯುತ್ತದೆ ಮತ್ತು ಕೇರಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-medusa-pineapple-spotted-in-uttara-kannada-farm-one-plant-grows-over-60-mini-fruits-gdp/articleshow-xn50kop"/>
        </item>
        <item>
            <title><![CDATA[ರೀಲ್ಸ್ ಸ್ಟಾರ್ ಲಕ್ಷ್ಮೀ ಅಜ್ಜಿ ಇನ್ನಿಲ್ಲ; ಕಿವಿ ಕೇಳದಿದ್ದರೂ, ಕಣ್ಣು ಮಂಜಾಗಿದ್ದರೂ ನಟನೆ]]></title>
            <link>https://kannada.asianetnews.com/gallery/karnataka-districts/drama-junior-fame-actor-suraj-s-grand-mother-s-reels-ajji-lakshmi-naik-no-more-yellapur-uttar-kannada-mrq-zysc5k4</link>
            <guid isPermaLink="true">https://kannada.asianetnews.com/gallery/karnataka-districts/drama-junior-fame-actor-suraj-s-grand-mother-s-reels-ajji-lakshmi-naik-no-more-yellapur-uttar-kannada-mrq-zysc5k4</guid>
            <pubDate>Sun, 29 Mar 2026 09:56:31 +0530</pubDate>
            <description><![CDATA[ರೀಲ್ಸ್ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿದ್ದ ಯಲ್ಲಾಪುರದ ಲಕ್ಷ್ಮೀ ನಾಯ್ಕ್ ಅಜ್ಜಿ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಡ್ರಾಮಾ ಜೂನಿಯರ್ ಖ್ಯಾತಿಯ ಮೊಮ್ಮಗ ಸೂರಜ್ ಜೊತೆ ಸೇರಿ, ಉತ್ತರ ಕನ್ನಡದ ಸ್ಥಳೀಯ ಭಾಷೆಯಲ್ಲಿಯೇ ರೀಲ್ಸ್ ಮಾಡುತ್ತಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kmvx2mqjkjf4za52synmrwxb,imgname-reels-ajji--3--1774757958386.jpg" type="image/jpeg" height="390" width="690"/>
            <content:encoded><![CDATA[ರೀಲ್ಸ್ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿದ್ದ ಯಲ್ಲಾಪುರದ ಲಕ್ಷ್ಮೀ ನಾಯ್ಕ್ ಅಜ್ಜಿ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಡ್ರಾಮಾ ಜೂನಿಯರ್ ಖ್ಯಾತಿಯ ಮೊಮ್ಮಗ ಸೂರಜ್ ಜೊತೆ ಸೇರಿ, ಉತ್ತರ ಕನ್ನಡದ ಸ್ಥಳೀಯ ಭಾಷೆಯಲ್ಲಿಯೇ ರೀಲ್ಸ್ ಮಾಡುತ್ತಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.&lt;img&gt;&lt;p&gt;ರೀಲ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಯಲ್ಲಾಪುರದ ಲಕ್ಷ್ಮೀ ನಾಯ್ಕ್ ಅಜ್ಜಿ ನಿಧನರಾಗಿದ್ದಾರೆ. ಡ್ರಾಮಾ ಜೂನಿಯರ್ ಖ್ಯಾತಿಯ ಸೂರಜ್ ಜೊತೆಯಲ್ಲಿ ಲಕ್ಷ್ಮೀ ನಾಯ್ಕ್ ರೀಲ್ಸ್ ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಲಕ್ಷ್ಮೀ ನಾಯ್ಕ್ ಅಜ್ಜಿ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ನಿವಾಸಿಯಾಗಿದ್ದರು. ಕಳೆದ ಕೆಲವು ದಿನಗಳಿಂದ ಲಕ್ಷ್ಮೀ ನಾಯ್ಕ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಲಕ್ಷ್ಮೀ ನಾಯ್ಕ್ ಅವರಿಗೆ 93 ವಯಸ್ಸು ಆಗಿತ್ತು.&lt;/p&gt;&lt;img&gt;&lt;p&gt;ಮೊಮ್ಮಗ ಸೂರಜ್ ಹೇಳಿಕೊಟ್ಟಂತೆ ಲಕ್ಷ್ಮೀ ನಾಯ್ಕ್ ನಟನೆ ಮಾಡುತ್ತಿದ್ದರು. ಈ ಮೂಲಕ ರಾಜ್ಯಾದ್ಯಂತ ಲಕ್ಷ್ಮೀ ನಾಯ್ಕ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಲಕ್ಷ್ಮೀ ನಾಯ್ಕ್ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭಕ್ತರಿಗಾಗಿ ನಿದ್ದೆಯೂ ಮಾಡ್ತಿಲ್ಲ ಕೊಪ್ಪಳದ ವೆಂಕೊಬಾ ಕಾಕಾ; ಇವರೇ ಮಲ್ಲಯ್ಯ ಎಂದ ಜನ್ರು&lt;/strong&gt;&lt;/p&gt;&lt;img&gt;&lt;p&gt;ಕುಟುಂಬಸ್ಥರು, ಬಂಧುಬಳಗದಲ್ಲಿ ಸೂತಕದ ಛಾಯೆ ಆವರಿಸಿದೆ. ಉತ್ತರ ಕನ್ನಡದ ಯಲ್ಲಾಪುರದ ಸ್ಥಳೀಯ ಭಾಷೆಯಲ್ಲಿಯೇ ಸೂರಜ್ ಜೊತೆ ಲಕ್ಷ್ಮೀ ನಾಯ್ಕ್ ರೀಲ್ಸ್ ಮಾಡುತ್ತಿದ್ದರು. ಅಜ್ಜಿಯನ್ನು ಕಳೆದುಕೊಂಡು ಸೂರಜ್ ಆಘಾತಕ್ಕೊಳಗಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನಮ್ಮ ಮತ ಮಾರಾಟಕ್ಕಿಲ್ಲ: ಮನೆ ಮುಂದೆ ನಾಮಫಲಕ ಅಳವಡಿಸಿದ ಪಾಲಹಳ್ಳಿಯ ರುದ್ರಮ್ಮ ಅಜ್ಜಿ&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/drama-junior-fame-actor-suraj-s-grand-mother-s-reels-ajji-lakshmi-naik-no-more-yellapur-uttar-kannada-mrq-zysc5k4"/>
        </item>
    </channel>
</rss>
