<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 02 Jul 2026 23:16:00 +0530</lastBuildDate>
        <atom:link href="https://kannada.asianetnews.com/rss/uttara-kannada" rel="self" type="application/rss+xml"/>
        <item>
            <title><![CDATA[ಕರಾವಳಿ ರೈಲು: ಮಂಗಳೂರು-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಗಳೂರು-ಬಾಂದ್ರಾ ಟರ್ಮಿನಸ್ ಹೊಸ ರೈಲು ಸೇವೆ ಶೀಘ್ರ!]]></title>
            <link>https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g</link>
            <guid isPermaLink="true">https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g</guid>
            <pubDate>Sat, 27 Jun 2026 10:35:27 +0530</pubDate>
            <description><![CDATA[ಮಂಗಳೂರಿನಿಂದ ಬಾಂದ್ರಾ ಟರ್ಮಿನಸ್&zwnj;ಗೆ ಹೊಸ ರೈಲು ಸೇವೆ ಆರಂಭಿಸುವ ಪ್ರಸ್ತಾವನೆ ಸಕಾರಾತ್ಮಕ ಹಂತದಲ್ಲಿದೆ. ಪ್ರಸ್ತುತ ಮಂಗಳೂರಿನಲ್ಲಿ ಐದು ದಿನಗಳ ಕಾಲ ನಿಲ್ಲುವ ರಾಮೇಶ್ವರಂ ರೈಲಿನ ರೇಕ್ ಅನ್ನು ಈ ಸೇವೆಗೆ ಬಳಸಿಕೊಳ್ಳುವ ಯೋಜನೆ ಇದಾಗಿದ್ದು, ಕರಾವಳಿ ಭಾಗದ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpfrh03j5ft3q01br2z,imgname-konkan-railways--1--1781847817935.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮಂಗಳೂರಿನಿಂದ ವಸಾಯ್ ರೋಡ್ ಮೂಲಕವಾಗಿ ಬಾಂದ್ರಾ ಟರ್ಮಿನಸ್&zwnj;ಗೆ ನೇರ ರೈಲು ಸೇವೆ ಆರಂಭವಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿರುವುದಾಗಿ ವರದಿ ತಿಳಿಸಿದೆ. ಪ್ರಸ್ತುತ ಮಂಗಳೂರು ಸೆಂಟ್ರಲ್&zwnj;ನಿಂದ ರೈಲು ಸಂಖ್ಯೆ 16622 ಸಾಪ್ತಾಹಿಕವಾಗಿ ಪ್ರತಿ ಶನಿವಾರ ರಾಮೇಶ್ವರಂಗೆ ತೆರಳಿ, ಸೋಮವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮರಳುತ್ತದೆ. ಸೋಮವಾರದಿಂದ ಶನಿವಾರ ವರೆಗೆ ಸುಮಾರು ಐದು ದಿನಗಳ ಕಾಲ ಜರ್ಮನ್ ತಂತ್ರಜ್ಞಾನದ ಎಲ್&zwnj;ಎಚ್&zwnj;ಬಿ (LHB) ಬೋಗಿಗಳನ್ನು ಒಳಗೊಂಡ ಸಂಪೂರ್ಣ ರೇಕ್ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲೇ ಖಾಲಿಯಾಗಿ ನಿಲ್ಲುತ್ತದೆ. ಈ ರೇಕಲ್ಲಿ 4 ಸಾಮಾನ್ಯ ಬೋಗಿ, 2 ಹವಾನಿಯಂತ್ರಿತ ಟು ಟಯರ್, 6 ತ್ರೀ ಟಯರ್, 6 ಸ್ಲೀಪರ್ ಹಾಗೂ 2 ಎಕಾನಮಿ ಬೋಗಿಗಳು ಸೇರಿವೆ.&lt;/p&gt;&lt;p&gt;ಈ ರೇಕ್ ಅನ್ನು ಉಪಯೋಗಿಸಿ ಮಂಗಳೂರು ಸೆಂಟ್ರಲ್&zwnj;ನಿಂದ ಕೊಂಕಣ ರೈಲ್ವೆ ಮಾರ್ಗವಾಗಿ ವಸಾಯ್ ರೋಡ್ ಮೂಲಕ ಬಾಂದ್ರಾ ಟರ್ಮಿನಸ್ ತನಕ ರೈಲು ಸೇವೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೇ ರೇಕ್ ಬಾಂದ್ರಾ ಟರ್ಮಿನಸ್&zwnj;ನಿಂದ ವಾಪಸ್ ವಸಾಯ್ ರೋಡ್ ಮುಖಾಂತರ ಮಂಗಳೂರು ಸೆಂಟ್ರಲ್&zwnj;ಗೆ ಸಂಚರಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ ಎಂದು ವರದಿ ತಿಳಿಸಿವೆ.&lt;/p&gt;&lt;h2&gt;ನಾಲ್ಕು ದಿನಗಳ ರೈಲು ಮಾರ್ಗ ಲಭ್ಯ:&lt;/h2&gt;&lt;p&gt;ಮಂಗಳೂರು ಸೆಂಟ್ರಲ್ ಮತ್ತು ವಸಾಯ್ ರೋಡ್ ನಡುವಿನ ಈ ಹೊಸ ರೈಲು ಸೇವೆಗೆ ಅಗತ್ಯವಾದ ರೈಲು ಮಾರ್ಗ (ರಹದಾರಿ) ಲಭ್ಯವಿರುವುದು ಯೋಜನೆಗೆ ಮತ್ತಷ್ಟು ಬಲ ನೀಡಿದೆ. ಇತ್ತೀಚೆಗೆ ಸೂರತ್-ಮಂಗಳೂರು ಸಾಪ್ತಾಹಿಕ ರೈಲು ಸೇವೆ ಆರಂಭವಾದ ಬಳಿಕ ವಾರದಲ್ಲಿ 4 ದಿನಗಳ ಕಾಲ ಈ ರೈಲು ಮಾರ್ಗದಲ್ಲಿ ಅವಕಾಶವಿರುವುದಾಗಿ ಹೇಳಲಾಗಿದೆ.&lt;/p&gt;&lt;p&gt;ಈ ಲಭ್ಯವಿರುವ ಮಾರ್ಗವನ್ನು ಬಳಸಿಕೊಂಡು, ಪ್ರಸ್ತುತ ರಾಮೇಶ್ವರಂ-ಮಂಗಳೂರು ನಡುವೆ ಸಂಚರಿಸುತ್ತಿರುವ ರೈಲಿನ ರೇಕ್&zwnj;ನ್ನೇ ಮಂಗಳೂರು-ವಸಾಯ್ ರೋಡ್-ಬಾಂದ್ರಾ ಟರ್ಮಿನಸ್ ಸೇವೆಗೆ ಬಳಸಬಹುದಾಗಿದೆ ಎಂದು ಮುಂಬೈ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ ಸೋಜಾ ತಿಳಿಸಿದ್ದಾರೆ.&lt;/p&gt;&lt;h2&gt;ಸಂಸದರ ಮನವಿ, ಮುಂಬೈ ಭಾಗದಿಂದಲೂ ಒತ್ತಾಯ:&lt;/h2&gt;&lt;p&gt;ಈ ಕುರಿತು ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಕ್ಷೇತ್ರಗಳ ಸಂಸದರು ರೈಲ್ವೆ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಇದರ ಜೊತೆಗೆ ಮುಂಬೈ ಭಾಗದಿಂದಲೂ ಈ ಯೋಜನೆಗೆ ಬೆಂಬಲ ವ್ಯಕ್ತವಾಗಿದ್ದು, ಪಿಯೂಷ್ ಗೋಯಲ್ ಹಾಗೂ ಮಾಜಿ ಸಂಸದ ಗೋಪಾಲ ಶೆಟ್ಟಿ ಅವರು ವಿಶೇಷ ಮುತುವರ್ಜಿ ವಹಿಸಿ ರಾಮೇಶ್ವರಂ-ಮಂಗಳೂರು ರೈಲಿನ ರೇಕ್ ಅನ್ನು ಮಂಗಳೂರು ಸೆಂಟ್ರಲ್-ಬಾಂದ್ರಾ ಟರ್ಮಿನಸ್ ಸೇವೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಕರಾವಳಿ-ಮುಂಬೈ ಪ್ರಯಾಣಿಕರಿಗೆ ಅನುಕೂಲ&lt;/h2&gt;&lt;p&gt;ಈ ಯೋಜನೆ ಅನುಷ್ಠಾನಗೊಂಡರೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ಪ್ರಯಾಣಿಕರಿಗೆ ಮುಂಬೈ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣ ಸೌಲಭ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ರೈಲ್ವೆ ಸಚಿವಾಲಯ ಮತ್ತು ಸಂಬಂಧಿತ ಜನಪ್ರತಿನಿಧಿಗಳ ಮುಂದಿನ ಕ್ರಮಗಳತ್ತ ಪ್ರಯಾಣಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g"/>
        </item>
        <item>
            <title><![CDATA[ಮಧ್ಯರಾತ್ರಿ ಕಾಡಿನ ರಸ್ತೆಯಲ್ಲಿ ಕಂಡ ಕೆಂಪು ಬಟ್ಟೆಯ ವ್ಯಕ್ತಿ! ಪೊಲೀಸರ ಎಚ್ಚರಿಕೆ ಕೇಳಿ ಬೆಚ್ಚಿಬಿದ್ದ ಯುವಕ]]></title>
            <link>https://kannada.asianetnews.com/gallery/uttara-kannada/sirsi-yellapur-road-mystery-red-clothed-man-midnight-incident-kannada-suh-0nnmwy3</link>
            <guid isPermaLink="true">https://kannada.asianetnews.com/gallery/uttara-kannada/sirsi-yellapur-road-mystery-red-clothed-man-midnight-incident-kannada-suh-0nnmwy3</guid>
            <pubDate>Tue, 23 Jun 2026 16:12:52 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ-ಯಲ್ಲಾಪುರ ರಸ್ತೆಯಲ್ಲಿ ಯುವಕನೊಬ್ಬನಿಗೆ ಆದ ವಿಚಿತ್ರ ಅನುಭವ ಭಾರೀ ಚರ್ಚೆಗೆ ಕಾರಣವಾಗಿದೆ. ಫೋಟೋಗ್ರಾಫರ್ ಆಗಿರುವ ಪ್ರೀತಂ ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ರಾತ್ರಿ ವೇಳೆ ಬೈಕ್&zwnj;ನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ ಮೈಜುಮ್ಮೆನಿಸುವಂತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt10v2gep7t93mcz38yk4tc,imgname-sirsi-yellapur-road-mystery-red-clothed-man-1782211177552.jpeg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ-ಯಲ್ಲಾಪುರ ರಸ್ತೆಯಲ್ಲಿ ಯುವಕನೊಬ್ಬನಿಗೆ ಆದ ವಿಚಿತ್ರ ಅನುಭವ ಭಾರೀ ಚರ್ಚೆಗೆ ಕಾರಣವಾಗಿದೆ. ಫೋಟೋಗ್ರಾಫರ್ ಆಗಿರುವ ಪ್ರೀತಂ ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ರಾತ್ರಿ ವೇಳೆ ಬೈಕ್&zwnj;ನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ ಮೈಜುಮ್ಮೆನಿಸುವಂತಿದೆ.&lt;/p&gt;&lt;img&gt;&lt;p&gt;ಕಳೆದ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರಾತ್ರಿ ವೇಳೆ ಸಿರ್ಸಿಯಿಂದ ಯಲ್ಲಾಪುರಕ್ಕೆ ಬೈಕ್&zwnj;ನಲ್ಲಿ ತೆರಳುತ್ತಿದ್ದ ಪ್ರೀತಂ ಮತ್ತು ಆತನ ಸ್ನೇಹಿತ, ಕಾಡಿನ ರಸ್ತೆಯಲ್ಲಿರುವ ಸೇತುವೆ ಸಮೀಪ ಯಾರೋ ಕುಳಿತಿರುವುದನ್ನು ಗಮನಿಸಿದ್ದಾರೆ.&lt;/p&gt;&lt;p&gt;ಮೊದಲಿಗೆ ಅದು ಪ್ಲಾಸ್ಟಿಕ್ ಅಥವಾ ಯಾವುದೋ ವಸ್ತು ಇರಬಹುದು ಎಂದುಕೊಂಡ ಅವರು ಬೈಕ್&zwnj;ನ ಹೈಬೀಮ್-ಲೋಬೀಮ್ ಹಾಕಿ ನೋಡಿದ್ದಾರೆ. ಆದರೆ ಸ್ವಲ್ಪ ಹತ್ತಿರ ಹೋದಾಗ ಕೆಂಪು ಬಣ್ಣದ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬರು ಕುಳಿತಿರುವುದು ಕಂಡುಬಂದಿದೆಯಂತೆ.&lt;/p&gt;&lt;img&gt;&lt;p&gt;ಯುವಕನ ಹೇಳಿಕೆಯ ಪ್ರಕಾರ, ಆ ವ್ಯಕ್ತಿ ಏಕಾಏಕಿ ಮುಖ ತಿರುಗಿಸಿ ಅವರತ್ತ ನೋಡಿದ್ದಾನೆ. ಇದನ್ನು ಕಂಡು ಇಬ್ಬರೂ ಭಯಭೀತರಾಗಿ ಬೈಕ್ ವೇಗವನ್ನು ಹೆಚ್ಚಿಸಿ ನೇರವಾಗಿ ಯಲ್ಲಾಪುರ ತಲುಪಿದ್ದಾರೆ.&lt;/p&gt;&lt;img&gt;&lt;p&gt;ಯಲ್ಲಾಪುರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಈ ಘಟನೆ ಬಗ್ಗೆ ತಿಳಿಸಿದಾಗ, ಅವರು &quot;ರಾತ್ರಿ ಏಳು ಗಂಟೆಯ ನಂತರ ಈ ಪ್ರದೇಶದಲ್ಲಿ ಹೆಚ್ಚು ಹೊತ್ತು ನಿಲ್ಲಬೇಡಿ. ಇದು ಅಪಾಯಕಾರಿ ಪ್ರದೇಶ&quot; ಎಂದು ಎಚ್ಚರಿಕೆ ನೀಡಿದ್ದಾರಂತೆ.&lt;/p&gt;&lt;p&gt;ಇನ್ನೂ ಕೆಲವು ನಿಮಿಷ ಅಲ್ಲೇ ನಿಂತಿದ್ದರೂ ಆ ರಸ್ತೆಯಲ್ಲಿ ಬೇರೆ ಯಾವುದೇ ವಾಹನಗಳು ಕಾಣಿಸಿಲ್ಲ ಎನ್ನಲಾಗಿದೆ.&lt;/p&gt;&lt;p&gt;ಮರುದಿನ ವೈರಲ್ ಆದ ವಿಡಿಯೋ&lt;/p&gt;&lt;p&gt;ಮರುದಿನ ಸಾಮಾಜಿಕ ಜಾಲತಾಣಗಳಲ್ಲಿ ಅದೇ ಪ್ರದೇಶಕ್ಕೆ ಸಂಬಂಧಿಸಿದ ವಿಡಿಯೋವೊಂದು ಪ್ರೀತಂ ಅವರ ಗಮನಕ್ಕೆ ಬಂದಿದೆ. ವಿಡಿಯೋದಲ್ಲಿ, ಆ ಸೇತುವೆ ಸಮೀಪ ವರ್ಷಗಳ ಹಿಂದೆ ಬಸ್ ಅಪಘಾತ ಸಂಭವಿಸಿದ್ದು, ರಾತ್ರಿ ವೇಳೆ ಅಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ ಎಂದು ಕೆಲವರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ವಿಡಿಯೋದಲ್ಲಿ, &quot;ರಾತ್ರಿ ವೇಳೆ ವಾಹನ ನಿಂತರೆ ಹೊರಗೆ ಇಳಿಯಬೇಡಿ. ಸ್ವಲ್ಪ ಸಮಯದ ಬಳಿಕ ವಾಹನ ತಾನಾಗಿಯೇ ಸ್ಟಾರ್ಟ್ ಆಗುತ್ತದೆ&quot; ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.&lt;/p&gt;&lt;p&gt;ನಿಜವೇ? ಮೂಢನಂಬಿಕೆಯೇ?&lt;/p&gt;&lt;p&gt;ಈ ಘಟನೆಗೆ ಯಾವುದೇ ಅಧಿಕೃತ ಸಾಕ್ಷ್ಯಗಳು ಲಭ್ಯವಿಲ್ಲ. ಕೆಲವರು ಇದನ್ನು ಕಾಡಿನ ಕತ್ತಲೆ, ಭಯ ಮತ್ತು ಮಾನಸಿಕ ಒತ್ತಡದ ಪರಿಣಾಮ ಎಂದು ಹೇಳಿದರೆ, ಇನ್ನೂ ಕೆಲವರು ಇದು ಅತೀಂದ್ರಿಯ ಘಟನೆ ಎಂದು ನಂಬುತ್ತಾರೆ.&lt;/p&gt;&lt;p&gt;ಆದರೆ ಸಿರ್ಸಿ-ಯಲ್ಲಾಪುರ ರಸ್ತೆಯಲ್ಲಿ ನಡೆದ ಈ ಅನುಭವ ಮಾತ್ರ ಇಂದಿಗೂ ಸ್ಥಳೀಯರ ನಡುವೆ ಕುತೂಹಲ ಮತ್ತು ಭಯದ ವಿಷಯವಾಗಿಯೇ ಉಳಿದಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/uttara-kannada/sirsi-yellapur-road-mystery-red-clothed-man-midnight-incident-kannada-suh-0nnmwy3"/>
        </item>
        <item>
            <title><![CDATA[ಕರಾವಳಿ ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್: ದಕ್ಷಿಣ ಕನ್ನಡ, ಕಾರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!]]></title>
            <link>https://kannada.asianetnews.com/karnataka-districts/karnataka-rain-holiday-red-alert-dakshina-kannada-karwar-school-college-closed/articleshow-6bg1sn2</link>
            <guid isPermaLink="true">https://kannada.asianetnews.com/karnataka-districts/karnataka-rain-holiday-red-alert-dakshina-kannada-karwar-school-college-closed/articleshow-6bg1sn2</guid>
            <pubDate>Thu, 02 Jul 2026 22:05:47 +0530</pubDate>
            <description><![CDATA[ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿದೆ. ಈ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಎರಡೂ ಜಿಲ್ಲೆಗಳ ಹಲವು ಭಾಗಗಳಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwhtx0b9b28fp1qpf1mz563s,imgname-school-holiday-1783010066792.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ/ಉತ್ತರ ಕನ್ನಡ (ಜು.02): ಕ&lt;/strong&gt;ರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ (Heavy Rain) ಮುಂದುವರಿದಿದೆ. ಹವಾಮಾನ ಇಲಾಖೆಯು (IMD) ನಾಳೆ ಶುಕ್ರವಾರ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' (Red Alert) ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ಉತ್ತರ ಕನ್ನಡದ ಕಾರವಾರ ತಾಲೂಕಿನಲ್ಲಿ ಶಾಲೆ-ಕಾಲೇಜುಗಳಿಗೆ ರಜೆ (School College Holiday) ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಠಿಣ ಆದೇಶ&lt;/strong&gt;&lt;/h2&gt;&lt;p&gt;ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (Deputy Commissioner) ದರ್ಶನ್ ಅವರು ಇಂದು ಗುರುವಾರ ರಜೆ ನೀಡಿದ್ದರು. ಮಳೆ ಕಡಿಮೆಯಾಗದ ಕಾರಣ ಮತ್ತು ನಾಳೆ ರೆಡ್ ಅಲರ್ಟ್ ಮುನ್ಸೂಚನೆ ಇರುವುದರಿಂದ ನಾಳೆಯೂ ರಜೆಯನ್ನು ಮುಂದುವರಿಸಿದ್ದಾರೆ. ಜಿಲ್ಲೆಯ ಎಲ್ಲಾ ಅಂಗನವಾಡಿ (Anganwadi), ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ (Pre-University/PUC) ಕಾಲೇಜುಗಳಿಗೆ ನಾಳೆ ರಜೆ ಇರಲಿದೆ.&lt;/p&gt;&lt;h2&gt;&lt;strong&gt;ಖಾಸಗಿ ಸಂಸ್ಥೆಗಳಿಗೆ ಡಿಸಿ ವಾರ್ನಿಂಗ್:&lt;/strong&gt;&lt;/h2&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು (Private Educational Institutions) ಜಿಲ್ಲಾಡಳಿತದ ಆದೇಶವಿದ್ದರೂ ತರಗತಿಗಳನ್ನು ನಡೆಸುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, 'ಸರ್ಕಾರದ ಆದೇಶ ಮೀರಿ ತರಗತಿ ನಡೆಸಿದರೆ ವಿಪತ್ತು ನಿರ್ವಹಣಾ ಕಾಯ್ದೆ 2005ರ (Disaster Management Act 2005) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಕಾರವಾರದಲ್ಲೂ ಮಳೆ ಆರ್ಭಟ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿಯೂ ಭಾರಿ ಮಳೆಯಾಗುತ್ತಿದೆ (Monsoon Fury). ಈ ಹಿನ್ನೆಲೆಯಲ್ಲಿ ಕಾರವಾರ ತಹಶೀಲ್ದಾರ್ ನಿಚ್ಚಲ್ ನರೋನಾ (Nichal Narona) ಅವರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡದ ಕರಾವಳಿ ಭಾಗದಲ್ಲಿ ಸಮುದ್ರದ ಅಬ್ಬರವೂ ಹೆಚ್ಚಿದ್ದು, ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ಸೂಚನೆ:&lt;/strong&gt;&lt;/h3&gt;&lt;p&gt;ಭಾರೀ ಮಳೆಯ ಸಮಯದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ನದಿ ತೀರ, ಜಲಪಾತ ಹಾಗೂ ಸಮುದ್ರದ ಹತ್ತಿರ ಹೋಗಬಾರದು. ತುರ್ತು ಸಂದರ್ಭದಲ್ಲಿ ಸಹಾಯವಾಣಿಯನ್ನು ಸಂಪರ್ಕಿಸಲು ಜಿಲ್ಲಾಡಳಿತ ಕೋರಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-rain-holiday-red-alert-dakshina-kannada-karwar-school-college-closed/articleshow-6bg1sn2"/>
        </item>
        <item>
            <title><![CDATA[Coastal Karnataka Rain Crisis : ಮಕ್ಕಳಂತೆ ಬೆಳೆಸಿದ 800 ಅಡಿಕೆ ಮರಗಳನ್ನು ಜೆಸಿಬಿಯಿಂದ ನೆಲಸಮ ಮಾಡಿಸಿದ ರೈತ!]]></title>
            <link>https://kannada.asianetnews.com/gallery/karnataka-districts/coastal-karnataka-rain-crisis-sirsi-young-farmer-destroys-areca-nut-plantation-jcb-uttara-kannada-c30ob6q</link>
            <guid isPermaLink="true">https://kannada.asianetnews.com/gallery/karnataka-districts/coastal-karnataka-rain-crisis-sirsi-young-farmer-destroys-areca-nut-plantation-jcb-uttara-kannada-c30ob6q</guid>
            <pubDate>Sun, 21 Jun 2026 16:41:59 +0530</pubDate>
            <description><![CDATA[&lt;p&gt;ಕರಾವಳಿಯಲ್ಲಿ ಮಳೆ ಕೊರತೆ ಮತ್ತು ನೀರಿನ ತೀವ್ರ ಅಭಾವದಿಂದ ಹತಾಶರಾದ ರೈತರೊಬ್ಬರು, 4 ವರ್ಷಗಳಿಂದ ಬೆಳೆಸಿದ್ದ 2 ಎಕರೆ ಅಡಿಕೆ ತೋಟವನ್ನು ಜೆಸಿಬಿಯಿಂದ ನೆಲಸಮ ಮಾಡಿದ್ದಾರೆ. ಸುಮಾರು 10 ಲಕ್ಷ ಸಾಲ ಮಾಡಿ 6 ಬೋರ್&zwnj;ವೆಲ್&zwnj; ಕೊರೆಸಿದರೂ ನೀರು ಸಿಗದ ಕಾರಣ, ಬೆಳೆ ಒಣಗುವುದು ನೋಡಲಾರದೇ ನೆಲಸಮ ಮಾಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvmxkdn4gen1waw8k5qcj0x6,imgname-sirsi-young-farmer-destroys-areca-nut-plantation-1782039819940.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರಾವಳಿಯಲ್ಲಿ ಮಳೆ ಕೊರತೆ ಮತ್ತು ನೀರಿನ ತೀವ್ರ ಅಭಾವದಿಂದ ಹತಾಶರಾದ ರೈತರೊಬ್ಬರು, 4 ವರ್ಷಗಳಿಂದ ಬೆಳೆಸಿದ್ದ 2 ಎಕರೆ ಅಡಿಕೆ ತೋಟವನ್ನು ಜೆಸಿಬಿಯಿಂದ ನೆಲಸಮ ಮಾಡಿದ್ದಾರೆ. ಸುಮಾರು 10 ಲಕ್ಷ ಸಾಲ ಮಾಡಿ 6 ಬೋರ್&zwnj;ವೆಲ್&zwnj; ಕೊರೆಸಿದರೂ ನೀರು ಸಿಗದ ಕಾರಣ, ಬೆಳೆ ಒಣಗುವುದು ನೋಡಲಾರದೇ ನೆಲಸಮ ಮಾಡಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಜೂ.21): ವ&lt;/strong&gt;ರ್ಷಾನುಗಟ್ಟಲೆ ಬೆವರು ಸುರಿಸಿ, ಸಾಲ ಮಾಡಿ ಬೆಳೆಸಿದ ಬೆಳೆ ಕಣ್ಣೆದುರೇ ಒಣಗಿ ಹೋಗುತ್ತಿದ್ದರೆ ಆ ರೈತನ ನೋವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇಂತಹದ್ದೇ ಒಂದು ಕರುಣಾಜನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದನಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಳೆ ಕೊರತೆ ಮತ್ತು ನೀರಿನ ಅಭಾವದಿಂದ ಕಂಗಾಲಾದ ಯುವ ರೈತರೊಬ್ಬರು ತಾವು ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ತೋಟವನ್ನು ಜೆಸಿಬಿ ಬಳಸಿ ಕಿತ್ತುಹಾಕಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ದನಗನಹಳ್ಳಿಯ ನಿವಾಸಿ ರಾಕೇಶ್ ರಾಮಚಂದ್ರ ಅಗಸರ್ (22) ಎಂಬ ಯುವ ರೈತನೇ ಈ ಕಠಿಣ ನಿರ್ಧಾರ ತೆಗೆದುಕೊಂಡ ದುರ್ದೈವಿ. ರಾಕೇಶ್ ಕಳೆದ ನಾಲ್ಕು ವರ್ಷಗಳಿಂದ ತನ್ನ ಎರಡು ಎಕರೆ ಜಮೀನಿನಲ್ಲಿ ಅತೀ ಆಸೆಯಿಂದ 800 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಉತ್ತಮ ಫಸಲು ಬಂದು ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.&lt;/p&gt;&lt;img&gt;&lt;p&gt;&lt;strong&gt;10 ಲಕ್ಷ ಸಾಲ, 6 ಬೋರ್&zwnj;ವೆಲ್ ಆದರೂ ಸಿಗದ ನೀರು:&lt;/strong&gt;&lt;/p&gt;&lt;p&gt;ತೋಟವನ್ನು ಉಳಿಸಿಕೊಳ್ಳಲು ರಾಕೇಶ್ ಪಡಬಾರದ ಕಷ್ಟಪಟ್ಟಿದ್ದಾರೆ. ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಹಣ ವ್ಯಯಿಸಿ ಆರು ಬೋರ್&zwnj;ವೆಲ್&zwnj;ಗಳನ್ನು ಕೊರೆಸಿದರೂ ಹನಿ ನೀರು ಸಿಗಲಿಲ್ಲ. ಅತ್ತ ಮಳೆಯೂ ಇಲ್ಲ, ಇತ್ತ ಬೋರ್&zwnj;ವೆಲ್&zwnj;ನಲ್ಲೂ ನೀರಿಲ್ಲದೆ ತೋಟ ಸಂಪೂರ್ಣ ಒಣಗಲು ಆರಂಭಿಸಿತ್ತು. ಮೊದಲೇ ಬ್ಯಾಂಕ್ ಹಾಗೂ ಹೊರಗಡೆ ಸಾಲ ಮಾಡಿಕೊಂಡಿದ್ದ ರೈತ ನೀರಿನ ಸಮಸ್ಯೆಯಿಂದ ಹತಾಶರಾಗಿದ್ದರು. ಕಣ್ಣೆದುರೇ ಒಣಗುತ್ತಿದ್ದ ಗಿಡಗಳನ್ನು ನೋಡಲಾಗದೆ, ಅಂತಿಮವಾಗಿ ಜೆಸಿಬಿ ತರಿಸಿ ಇಡೀ ತೋಟವನ್ನು ನೆಲಸಮ ಮಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಜಿಲ್ಲೆಯಲ್ಲಿ ಮಳೆ ಕೊರತೆ ಆತಂಕ:&lt;/strong&gt;&lt;/p&gt;&lt;p&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಳೆ ತೀವ್ರ ಕೈಕೊಟ್ಟಿದೆ. ಜೂನ್ ಮೊದಲ ವಾರದಲ್ಲಿ ಶೇ. 32 ರಷ್ಟು ಮಳೆ ಕೊರತೆಯಾಗಿದ್ದರೆ, ಕಳೆದ ವಾರದಲ್ಲಿ ಶೇ. 24 ರಷ್ಟು ಮಳೆಯ ಅಭಾವ ಕಂಡುಬಂದಿದೆ. ಇದರಿಂದ ಕೇವಲ ಅಡಿಕೆ ಮಾತ್ರವಲ್ಲದೆ, ಭತ್ತ ಹಾಗೂ ಇತರ ಬೆಳೆಗಳಿಗೂ ತೀವ್ರ ಸಂಕಷ್ಟ ಎದುರಾಗಿದೆ.&lt;/p&gt;&lt;img&gt;&lt;p&gt;ಬಿಸಿಲಿನ ತಾಪಕ್ಕೆ ತೋಟಗಳು ಸುಟ್ಟು ಕರಕಲಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತನಗಾದ ನಷ್ಟಕ್ಕೆ ಪರಿಹಾರ ನೀಡಬೇಕು ಮತ್ತು ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ರಾಕೇಶ್ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/coastal-karnataka-rain-crisis-sirsi-young-farmer-destroys-areca-nut-plantation-jcb-uttara-kannada-c30ob6q"/>
        </item>
        <item>
            <title><![CDATA[ಕೈಗಾ ಹೋರಾಟಕ್ಕೆ ಜಯ: 7 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಎನ್‌ಪಿಸಿ ಅಧಿಕಾರಿಗಳ ಒಪ್ಪಿಗೆ]]></title>
            <link>https://kannada.asianetnews.com/karnataka-districts/uttara-kannada-kaiga-nuclear-power-plant-npc-officials-agree-to-fulfill-7-key-demands-mrq/articleshow-d5wx2vv</link>
            <guid isPermaLink="true">https://kannada.asianetnews.com/karnataka-districts/uttara-kannada-kaiga-nuclear-power-plant-npc-officials-agree-to-fulfill-7-key-demands-mrq/articleshow-d5wx2vv</guid>
            <pubDate>Wed, 24 Jun 2026 08:37:32 +0530</pubDate>
            <description><![CDATA[ಕೈಗಾ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಭೂಮಿ ನೀಡಿದ ನಿರಾಶ್ರಿತರ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಸ್ಥಳೀಯರಿಗೆ ಉದ್ಯೋಗ, ರಸ್ತೆ ನಿರ್ಮಾಣ, ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ 7 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಎನ್&zwnj;ಪಿಸಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvvsbz21evrmg43pzdd9qe1t,imgname-karwar-kaiga-1782270262337.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಕೈಗಾ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಭೂಮಿ ನೀಡಿ ನಿರಾಶ್ರಿತರಾದ ಸ್ಥಳೀಯರ ನ್ಯಾಯಯುತ ಬೇಡಿಕೆಗಳಿಗಾಗಿ ನಡೆದ ಹೋರಾಟಕ್ಕೆ ಕೊನೆಗೂ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು, ಸಂತ್ರಸ್ತರ 7 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;10 ಬೇಡಿಕೆಗಳ ಮನವಿ ಸಲ್ಲಿಕೆ&lt;/strong&gt;&lt;/h2&gt;&lt;p&gt;ಕಾರವಾರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ 56 ಕಿ.ಮೀ. ಸುದೀರ್ಘ ಪಾದಯಾತ್ರೆ ನಡೆಸಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಹಾಗೂ ನೇಮಕಾತಿ ಪರೀಕ್ಷಾ ಕೇಂದ್ರ ಕಾರವಾರದಲ್ಲಿಯೇ ಸ್ಥಾಪಿಸುವುದು ಸೇರಿದಂತೆ ಹತ್ತು ಪ್ರಮುಖ ಬೇಡಿಕೆಗಳನ್ನ ಇರಿಸಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಕೈಗಾ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದರು.&lt;/p&gt;&lt;h3&gt;&lt;strong&gt;ರಸ್ತೆಗಾಗಿ 25 ಕೋಟಿ ಹಣ ಬಿಡುಗಡೆ&lt;/strong&gt;&lt;/h3&gt;&lt;p&gt;ಈ ಹಿಂದೆ ಮಲ್ಲಾಪುರ-ಕೆರವಡಿ ರಸ್ತೆಯ ಅವ್ಯವಸ್ಥೆಯಿಂದಾಗಿ ಬಾಲಕಿಯೋರ್ವಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ರಸ್ತೆಯ ಪುನರ್ ನಿರ್ಮಾಣಕ್ಕಾಗಿ ಕೈಗಾ ಸಂಸ್ಥೆಯು ₹25 ಕೋಟಿ ಹಣ ಬಿಡುಗಡೆ ಮಾಡಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಮಳೆಗಾಲ ಮುಗಿಯುತ್ತಿದ್ದಂತೆಯೇ ಕಾಮಗಾರಿ ಆರಂಭವಾಗಲಿದೆ. ಇದಲ್ಲದೇ, ಕೈಗಾ ಭಾಗದ ಗರ್ಭಿಣಿಯರು ಹಾಗೂ ರೋಗಿಗಳ ಅನುಕೂಲಕ್ಕಾಗಿ ಕೈಗಾ ಆಸ್ಪತ್ರೆಗೆ ನೀಡಲು ಉದ್ದೇಶಿಸಿದ್ದ ಸಿಟಿ ಸ್ಕ್ಯಾನ್ ಯಂತ್ರವನ್ನು, ವೈದ್ಯರ ಕೊರತೆಯ ಕಾರಣದಿಂದ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ನೀಡಲು ಅಧಿಕಾರಿಗಳು ಒಪ್ಪಿದ್ದಾರೆ. ಜೊತೆಗೆ ಎರಡು ವೆಂಟಿಲೇಟರ್ ಅಳವಡಿತ ಆ್ಯಂಬುಲೆನ್ಸ್&zwnj;ಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ&lt;/strong&gt;&lt;/h3&gt;&lt;p&gt;ಕೈಗಾದಲ್ಲಿ ಖಾಲಿ ಇರುವ ಗ್ರೂಪ್ &lsquo;ಸಿ&rsquo; ಹುದ್ದೆಗಳಲ್ಲಿ ಸ್ಥಳೀಯರಿಗೇ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಆಗ್ರಹಕ್ಕೆ ಅಧಿಕಾರಿಗಳು ಸಮ್ಮತಿಸಿದ್ದಾರೆ. ಪ್ರಸ್ತುತ ಕೈಗಾದಲ್ಲಿ 40% ಹೊರರಾಜ್ಯದವರು ಕೆಲಸ ಮಾಡುತ್ತಿದ್ದು, ಇನ್ಮುಂದೆ 75% ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಪಟ್ಟನ್ನು ಹೋರಾಟಗಾರರು ಹಿಡಿದಿದ್ದಾರೆ. ಶೈಕ್ಷಣಿಕವಾಗಿ ಈ ವರ್ಷ ಸಿ.ಎಸ್.ಆರ್. ನಿಧಿಯಡಿ ₹9 ಕೋಟಿ ಅನುದಾನ ನೀಡಲಾಗುತ್ತಿದ್ದು, ಸ್ಥಳೀಯ ಶಾಲೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ಪೂರೈಕೆ ಜೊತೆಗೆ, ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ನೀಡಲು ತರಬೇತುದಾರರನ್ನು ಒದಗಿಸಲು ಕೈಗಾ ಆಡಳಿತ ಮಂಡಳಿ ಮುಂದಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;5 ವರ್ಷದಲ್ಲಿ ಶಿರಸಿ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ 10 ಕೋಟಿ ರೂಪಾಯಿ ಖರ್ಚು&lt;/strong&gt;&lt;/p&gt;&lt;p&gt;ಪ್ರಮುಖರಾದ ಎಚ್.ಎಫ್. ದೊಡ್ಡಣ್ಣನವರ್, ಶಂಕರ್ ಗುನಗಿ, ಉದಯ್ ನಾಯ್ಕ, ಕಾಶಿ ಭಂಟ್, ಸಂದೀಪ್ ನಾಯ್ಕ, ಗೌರೀಶ್ ನಾಯ್ಕ, ಚಂದ್ರಕಾಂತ್ ನಾಯ್ಕ, ರಾಜೇಶ ನಾಯ್ಕ, ರಮೇಶ ಗೌಡ, ರಮಾಕಾಂತ ಗುನಗಿ ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಂಗಳೂರಿಂದ ಹೊರಡುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಲವು ಟ್ರೈನ್ ಸಂಚಾರ ಭಾಗಶಃ ರದ್ದು, ಮರು ವೇಳಾಪಟ್ಟಿ ಪ್ರಕಟ!&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kannada-kaiga-nuclear-power-plant-npc-officials-agree-to-fulfill-7-key-demands-mrq/articleshow-d5wx2vv"/>
        </item>
        <item>
            <title><![CDATA[Haliyala: ರೌಡಿಯ ಮುಂದೆ ಕೈಕಟ್ಟಿ ನಿಂತ ಇನ್ಸ್‌ಪೆಕ್ಟರ್; ಕೆಲಸ ಮಾಡೋಕ್ ಲಾಯಕ್ಕಿಲ್ಲ ಎಂದು ಸಸ್ಪೆಂಡ್ ಮಾಡಿದ ಸರ್ಕಾರ!]]></title>
            <link>https://kannada.asianetnews.com/gallery/karnataka-districts/haliyal-sub-inspector-basavaraj-suspended-for-helplessness-against-rowdy-sheeter-mach-manja-gaf6yca</link>
            <guid isPermaLink="true">https://kannada.asianetnews.com/gallery/karnataka-districts/haliyal-sub-inspector-basavaraj-suspended-for-helplessness-against-rowdy-sheeter-mach-manja-gaf6yca</guid>
            <pubDate>Wed, 17 Jun 2026 21:13:19 +0530</pubDate>
            <description><![CDATA[&lt;p&gt;ಹಳಿಯಾಳದಲ್ಲಿ ರೌಡಿ ಶೀಟರ್ 'ಮಚ್ ಮಂಜಾ' ಪೊಲೀಸರ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಾಗ, ಸ್ಥಳದಲ್ಲಿದ್ದ ಎಸ್&zwnj;ಐ ಬಸವರಾಜ (SI Basavaraj Suspended) ಕ್ರಮ ಕೈಗೊಳ್ಳದೆ ಅಸಹಾಯಕರಾಗಿ ನಿಂತಿದ್ದರು. ಈ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆಕ್ರೋಶದ ನಂತರ ಎಸ್&zwnj;ಪಿ ಅಮಾನತುಗೊಳಿಸಿ ಆದೇಶಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvb3g8s5yvbwz94p3rt8xn79,imgname-uttara-kannada-si-basavaraj-suspended-1781710463781.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಳಿಯಾಳದಲ್ಲಿ ರೌಡಿ ಶೀಟರ್ 'ಮಚ್ ಮಂಜಾ' ಪೊಲೀಸರ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಾಗ, ಸ್ಥಳದಲ್ಲಿದ್ದ ಎಸ್&zwnj;ಐ ಬಸವರಾಜ (SI Basavaraj Suspended) ಕ್ರಮ ಕೈಗೊಳ್ಳದೆ ಅಸಹಾಯಕರಾಗಿ ನಿಂತಿದ್ದರು. ಈ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆಕ್ರೋಶದ ನಂತರ ಎಸ್&zwnj;ಪಿ ಅಮಾನತುಗೊಳಿಸಿ ಆದೇಶಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಜೂ.17): ರೌ&lt;/strong&gt;ಡಿ ಶೀಟರ್&zwnj; ಒಬ್ಬ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದರ್ಪ ಮೆರೆಯುತ್ತಿದ್ದರೂ, ಆತನನ್ನು ನಿಯಂತ್ರಿಸದೆ ಅಸಹಾಯಕರಾಗಿ ಕೈಕಟ್ಟಿ ನಿಂತಿದ್ದ ಹಳಿಯಾಳ ಪೊಲೀಸ್ ಸಬ್ ಇನ್ಸ್&zwnj;ಪೆಕ್ಟರ್ (SI) ಬಸವರಾಜ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ಕೆಲ ದಿನಗಳ ಹಿಂದೆ ಹಳಿಯಾಳದ ಮೌರ್ಯ ಹೋಟೆಲ್ ಬಳಿ ರೌಡಿ ಶೀಟರ್ 'ಮಚ್ ಮಂಜಾ' ಅಲಿಯಾಸ್ ಮಂಜುನಾಥ ಎಂಬಾತ ಪೊಲೀಸರ ಜೀಪ್ ತಡೆದು ರಂಪಾಟ ನಡೆಸಿದ್ದ. ಅಷ್ಟೇ ಅಲ್ಲದೆ, ಜೀಪ್&zwnj;ನಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ವೇಳೆ ಸ್ಥಳದಲ್ಲಿದ್ದ ಎಸ್&zwnj;ಐ ಬಸವರಾಜ ಅವರು ರೌಡಿಯ ಆರ್ಭಟವನ್ನು ತಡೆಯುವ ಬದಲು ಸುಮ್ಮನೆ ನಿಂತಿದ್ದರು. ಒಬ್ಬ ಪೊಲೀಸ್ ಅಧಿಕಾರಿಯ ಎದುರೇ ಕಾನೂನು ಕೈಗೆತ್ತಿಕೊಂಡ ರೌಡಿಯ ವರ್ತನೆ ಮತ್ತು ಪೊಲೀಸರ ಅಸಹಾಯಕತೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.&lt;/p&gt;&lt;img&gt;&lt;p&gt;&lt;strong&gt;ಸಾರ್ವಜನಿಕರ ಆಕ್ಷೇಪ ಮತ್ತು ಕ್ರಮ:&lt;/strong&gt;&lt;/p&gt;&lt;p&gt;ಪೊಲೀಸರ ಮೇಲೆಯೇ ಹಲ್ಲೆ ನಡೆದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು ಇಲಾಖೆಯ ಘನತೆಗೆ ಧಕ್ಕೆ ತಂದಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಘಟನೆಯ ವಿಡಿಯೋಗಳು ಮತ್ತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್&zwnj;ಪಿ ದೀಪನ್ ಎಂ.ಎನ್., ಅಧಿಕಾರಿಯ ಕರ್ತವ್ಯ ಲೋಪವನ್ನು ಮನಗಂಡು ತಕ್ಷಣವೇ ಅಮಾನತು ಆದೇಶ ನೀಡಿದ್ದಾರೆ.&lt;/p&gt;&lt;img&gt;&lt;p&gt;ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಸ್ಥಾನದಲ್ಲಿರುವ ಅಧಿಕಾರಿಗಳೇ ಹೀಗೆ ಅಸಹಾಯಕರಾದರೆ ಸಾರ್ವಜನಿಕರ ರಕ್ಷಣೆ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಈ ಅಮಾನತು ಆದೇಶದ ಮೂಲಕ ಜಿಲ್ಲಾ ಪೊಲೀಸ್ ಇಲಾಖೆಯು ಕರ್ತವ್ಯ ಲೋಪ ಎಸಗುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/haliyal-sub-inspector-basavaraj-suspended-for-helplessness-against-rowdy-sheeter-mach-manja-gaf6yca"/>
        </item>
        <item>
            <title><![CDATA[Tumkuru: ಶಿರಾ ಬಾಂಬ್ ಸ್ಫೋಟ: ಪಾಗಲ್ ಪ್ರೇಮಿಯ ಹಿಂದಿನ ಭಯಾನಕ ರಹಸ್ಯ ಬಯಲು!]]></title>
            <link>https://kannada.asianetnews.com/karnataka-districts/a-significant-turning-point-in-the-crazy-lover-case-important-information-revealed-at-the-sp-press-conference/articleshow-idk5tuk</link>
            <guid isPermaLink="true">https://kannada.asianetnews.com/karnataka-districts/a-significant-turning-point-in-the-crazy-lover-case-important-information-revealed-at-the-sp-press-conference/articleshow-idk5tuk</guid>
            <pubDate>Wed, 01 Jul 2026 12:53:28 +0530</pubDate>
            <description><![CDATA[&lt;p&gt;ತುಮಕೂರು ಜಿಲ್ಲೆಯ ಶಿರಾ ಬಳಿ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಮಹತ್ವದ ಮಾಹಿತಿಯೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಎಸ್ಪಿ ಸುದ್ದಿಗೋಷ್ಠಿ ನಡೆಸಿ &amp;nbsp;ಮಹತ್ವದ ಮಾಹಿತಿ ಬಹಿರಂಗಗೊಳಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw49drpb9rmqs4gbkt502r3p,imgname-tumkur-car-fire-incident-1782555534027.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿ ಹಳ್ಳಿ ಬಳಿ ಜೂನ್ ೨೭ರಂದು ಚಲಿಸುತ್ತಿದ್ದ ಕ್ಯಾಬ್&zwnj;ನಲ್ಲಿ ಪ್ರೇಯಸಿಗೆ ಚಾಕುವಿನಿಂದ ಇರಿದು ಕಾರಿನಲ್ಲೇ ಬಾಂಬ್&zwnj; ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮಹತ್ವದ ತಿರುವು ಪಡೆದಿದೆ. ಈ ಕುರಿತು ಕಲ್ಲಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಗಲ್ ಪ್ರೇಮಿಗೆ ಬಾಂಬ್ ಎಲ್ಲಿಂದ ಸಿಕ್ಕಿತು ಎಂಬುದರ ಎಂಬುದರ ಕುರಿತು ಇದೀಗ ಮಹತ್ವದ ಮಾಹಿತಿ ಹೊರಬಿದ್ದಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.&lt;/p&gt;&lt;h2&gt;&lt;strong&gt;ತುಮಕೂರು ಎಸ್&zwnj;ಪಿಯಿಂದ ಸುದ್ದಿಗೋಷ್ಠಿ!&lt;/strong&gt;&lt;/h2&gt;&lt;p&gt;ಕಾರಿನಲ್ಲಿ ಬಾಂಬ್ ಸ್ಪೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿಯೊಂದನ್ನು ತುಮಕೂರು ಎಸ್ಪಿ ಅಶೋಕ್ ಕೆ.ವಿ ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟಿದ್ದಾರೆ. ಸ್ಪೋಟಗೊಂಡಿರೋದು ಕಚ್ಚಾ ಬಾಂಬ್ ಎನ್ನುವುದು ಖಚಿತವಾಗಿದೆ. ಅಲ್ಲದೇ ಮೃತ ನಾಗೇಂದ್ರ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದಿಂದ ಕಚ್ಚಾ ಬಾಂಬ್ ತಂದಿರುವುದು ಪಕ್ಕಾ ಆಗಿದೆ. ಇದರೊಂದಿಗೆ ಬಾಂಬ್&zwnj; ಎಲ್ಲಿಂದ ದೊರೆತಿದೆ ಎನ್ನುವುದು ಇದೀಗ ಬೆಳಕಿಗೆ ಬಂದಿದೆ.&lt;/p&gt;&lt;h3&gt;&lt;strong&gt;ಬಾಂಬ್&zwnj; ತಂದಿದ್ದು ಎಲ್ಲಿಂದ?&lt;/strong&gt;&lt;/h3&gt;&lt;p&gt;ಬಾಂಬ್&zwnj; ತಂದ ಕಥೆ ಮಾತ್ರ ರೋಚಕವಾಗಿದೆ. ಮೃತ ನಾಗೇಂದ್ರ ಚಂದಾವರ ಗ್ರಾಮದ ಜಾರ್ಜ್ ನಿಕ್ಲೋವ್ ಫರ್ನಾಂಡೀಸ್ ನಿಂದ ಮೂರು ಕಚ್ಚಾ ಬಾಂಬ್ ಖರೀದಿ ಮಾಡಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಅದನ್ನು ಖರೀದಿಸಲು ಕಾರಣ ಬೇರೆಯದ್ದೇ ಆಗಿತ್ತು ಎನ್ನುವುದು ಈಗ ಬೆಳಕಿಗೆ ಬಂದಿದೆ. ಜಾರ್ಜ್ ನಿಕ್ಲೋವ್ ಫರ್ನಾಂಡೀಸ್ ಎಂಬಾತನು ಮೀನುಗಾರಿಕೆ ಉದ್ದೇಶಕ್ಕೆ ಕಚ್ಚಾ ಬಾಂಬ್ ತಯಾರು ಮಾಡಿ ಮಾರಾಟ ಮಾಡುತಿದ್ದ ಎನ್ನುವುದು ಬಯಲಾಗಿದೆ. ಇದಲ್ಲದೇ ನಿಕ್ಲೋವ್&zwnj; ನಾಗೇಂದ್ರನ ಜೊತೆಗೆ ಅವರ ಸಂಬಂಧಿ ಸಂದೀಪ್ ಗೌಡ, ನಾರಾಯಣ ಡೊಲ್ಲುಗೌಡ ಮತ್ತು ನಾಗರಾಜು ಡೊಲ್ಲುಗೌಡ ಗೂ ಬಾಂಬ್ ಕೊಟ್ಟಿದ್ದ ಎನ್ನುವುದು ಇದೀಗ ಕಂಡುಬಂದಿದೆ ಎನ್ನಲಾಗಿದೆ. ಈ ಮೂವರನ್ನು ಪೊಲೀಸರು ಈಗ ವಶಪಡಿಸಿಕೊಂಡಿದ್ದಾರೆ.&amp;nbsp;&lt;/p&gt;&lt;h3&gt;&lt;strong&gt;3 ಕಚ್ಚಾ ಬಾಂಬ್ ಬೆಂಗಳೂರಿಗೆ ತಂದಿದ್ದ ಪಾಗಲ್&zwnj; ಪ್ರೇಮಿ!&lt;/strong&gt;&lt;/h3&gt;&lt;p&gt;ಆ ಕಚ್ಚಾ ಬಾಂಬ್ ಸ್ಪೋಟಿಸಿಕೊಂಡು ನಾಗೇಂದ್ರ ಕಾರು ಸಮೇತ ಸಜೀವ ದಹನ ಆಗಿದ್ದಾನೆ ಎಂದು ಪೊಲೀಸ್&zwnj; ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಜಾರ್ಜ್ ನಿಕ್ಲೋವ್ ಫರ್ನಾಂಡೀಸ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಫರ್ನಾಂಡೀಸ್&zwnj;ಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಣವಾದ ಮೇಲೆ ಇನ್ನು ಕೆಲ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎನಲಾಗಿದೆ. ಆದ್ದರಿಂದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.&lt;/p&gt;&lt;h3&gt;&lt;strong&gt;ತನಿಖೆ ಮುಂದುವರೆಸಿದ ಪೊಲೀಸ್&zwnj;ರು!&lt;/strong&gt;&lt;/h3&gt;&lt;p&gt;ಇನ್ನು ಜಾರ್ಜ್ ನಿಕ್ಲೋವ್ ಫರ್ನಾಂಡೀಸ್ ಬಳಿ ಕಚ್ಚಾ ಬಾಂಬ್ ಖರೀದಿದ್ದ ನಾಗೇಂದ್ರ ಸಂಬಂಧಿಕರು ಮೀನುಗಾರಿಕೆ ಉದ್ದೇಶಕ್ಕೆ ಬಳಸಿದ್ದಾರೆ. ಸದ್ಯ ಈ ಘಟನೆ ಸಂಬಂಧ ಅಕೋಲಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಈ ನಿಟ್ಟಿನಲ್ಲಿ ಅಂಕೋಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೇಸ್&zwnj;ಗೆ ಪೊಲೀಸ್&zwnj; ವವಲಯ ಅಂತ್ಯ ಹಾಡಲಿದೆಯೇ ಎನ್ನುವುದನ್ನು ನೋಡಬೇಕಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/a-significant-turning-point-in-the-crazy-lover-case-important-information-revealed-at-the-sp-press-conference/articleshow-idk5tuk"/>
        </item>
        <item>
            <title><![CDATA[ಭಟ್ಕಳ: 'ನಿನ್ನ ಬಳಿ ಮಾತಾಡೋದಿದೆ ಬಾ..' ಯುವತಿಗೆ ನಂಬಿಸಿ ಕಾರಿನಲ್ಲಿ  ಕರೆದೊಯ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್!]]></title>
            <link>https://kannada.asianetnews.com/karnataka-districts/shahid-khan-arrested-for-attempting-to-kidnap-a-hindu-girl-in-bhatkal-uttara-kannada-rav/articleshow-ie08e4o</link>
            <guid isPermaLink="true">https://kannada.asianetnews.com/karnataka-districts/shahid-khan-arrested-for-attempting-to-kidnap-a-hindu-girl-in-bhatkal-uttara-kannada-rav/articleshow-ie08e4o</guid>
            <pubDate>Fri, 19 Jun 2026 10:32:17 +0530</pubDate>
            <description><![CDATA[&lt;p&gt;ಭಟ್ಕಳದ ಸೂಪರ್ ಮಾರ್ಕೆಟ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದೊಯ್ದ ಆರೋಪದ ಮೇಲೆ ಸಹೋದ್ಯೋಗಿ ಮುಸ್ಲಿಂ ಯುವಕ ಶಾಹೀದ್ ಖಾನ್&zwnj;ನನ್ನು ಯುವತಿಯ ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf3ym7v1vsmdvzsk2jvs93j,imgname----------------------14--1781845151995.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಟ್ಕಳ (ಜೂ.19&lt;/strong&gt;) ಪಟ್ಟಣದ ಸೂಪರ್ ಮಾರ್ಕೆಟೊಂದರಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿ(Hindu Girl)ಯನ್ನು ಕಾರಿನಲ್ಲಿ ಕರೆದೊಯ್ದ ಮುಸ್ಲಿಂ ಯುವಕ ಶಾಹೀದ್ ಖಾನ್(Shahid khan) ಎಂಬಾತನನ್ನು ಯುವತಿಯ ದೂರಿನ ಮೇರೆಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.&lt;/p&gt;&lt;h2&gt;ಪಟ್ಟಣದ ಸೂಪರ್ ಮಾರ್ಕೆಟೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ&lt;/h2&gt;&lt;p&gt;ಪಟ್ಟಣದ ಸೂಪರ್ ಮಾರ್ಕೆಟೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾರುಕೇರಿ ಭಾಗದ ಹಿಂದೂ ಯುವತಿಯನ್ನು ಅದೇ ಸೂಪರ್ ಮಾರ್ಕೆಟ್&zwnj;ನಲ್ಲಿ ಸೇಲ್ಸ್&zwnj;ಮನ್&zwnj; ಆಗಿರುವ ಕಾರಗದ್ದೆಯ ಶಾಹೀದ್ ಖಾನ್ ಎಂಬಾತ ಬುಧವಾರ ಬೆಳಗ್ಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ಆಗ ಸಾಗರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಪೊಲೀಸರು ಆರೋಪಿ ವಿರುದ್ದ ಪ್ರಕರಣ ದಾಖಲಿಸುವುದನ್ನು ಬಿಟ್ಟು ಯುವತಿಯನ್ನು ರಕ್ಷಿಸಿದ ಹಿಂದೂ ಕಾರ್ಯಕರ್ತರಿಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಬುಧವಾರ ರಾತ್ರಿ ನಗರ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದರು.&lt;/p&gt;&lt;h3&gt;ಶಾಹೀದ್ ಖಾನ್ ವಿರುದ್ದ ದೂರು&lt;/h3&gt;&lt;p&gt;ಈ ಮಧ್ಯೆ, ಹಿಂದೂ ಯುವತಿ ಠಾಣೆಯಲ್ಲಿ ಶಾಹೀದ್ ಖಾನ್ ವಿರುದ್ದ ದೂರು ನೀಡಿದ್ದು, ನಿನ್ನ ಬಳಿ ಮಾತನಾಡುವುದಿದೆ ಎಂದು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಹತ್ತಿಸಿಕೊಂಡು, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/shahid-khan-arrested-for-attempting-to-kidnap-a-hindu-girl-in-bhatkal-uttara-kannada-rav/articleshow-ie08e4o"/>
        </item>
        <item>
            <title><![CDATA[ಬೆಂಗಳೂರು-ಹೊನ್ನಾವರ ರಸ್ತೆಗಾಗಿ 30 ಎಕರೆ ಸ್ವಾಧೀನಕ್ಕೆ ಹೈಕೋರ್ಟ್‌ ಅಸ್ತು]]></title>
            <link>https://kannada.asianetnews.com/karnataka-districts/hc-approves-30-acre-land-acquisition-bengaluru-honnavar-road-development-san/articleshow-io6gdf2</link>
            <guid isPermaLink="true">https://kannada.asianetnews.com/karnataka-districts/hc-approves-30-acre-land-acquisition-bengaluru-honnavar-road-development-san/articleshow-io6gdf2</guid>
            <pubDate>Fri, 19 Jun 2026 10:33:31 +0530</pubDate>
            <description><![CDATA[&lt;p&gt;ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡಿದ್ದ 30 ಎಕರೆ ಭೂಮಿಗೆ ಸಂಬಂಧಿಸಿದಂತೆ 14 ವರ್ಷಗಳ ಹಿಂದೆ ಏಕಸದಸ್ಯ ಪೀಠ ನೀಡಿದ್ದ ರದ್ದತಿ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಇದೀಗ ವಜಾಗೊಳಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf3yxy3rqs4051m48twda16,imgname-banglore-honnavar-road-1781845161923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.19): &lt;/strong&gt;ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗಾಗಿ ಸ್ವಾಧೀನ ಮಾಡಿಕೊಂಡಿದ್ದ 30 ಎಕರೆ ಭೂ ಸ್ವಾಧೀನವನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಸುಮಾರು 14 ವರ್ಷಗಳ ಹಿಂದೆ ನೀಡಿದ್ದ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ಇದೀಗ ವಜಾ ಮಾಡಿದೆ. ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮತ್ತು ಶ್ರೀ ಪ್ರಸನ್ನ ಆಂಜನೇಯ ಟ್ರಸ್ಟ್&zwnj; ಸಲ್ಲಿಸಿದ ಮೇಲ್ಮನವಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್&zwnj; ಮತ್ತು ಎಸ್&zwnj;.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.&lt;/p&gt;&lt;p&gt;ಬೆಂಗಳೂರು-ಹೊನ್ನಾವರ ರಸ್ತೆ ಅಭಿವೃದ್ಧಿಗೆ 30 ಎಕರೆ ಭೂ ಸ್ವಾಧೀನ ಪ್ರಸ್ತಾವನೆಗೆ 1986ರ ಅ.9 ರಂದು ಅನುಮೋದಿಸಿ ಸರ್ಕಾರ ಆದೇಶ ಹೊರಡಿಸುವ ಮೊದಲು, ಭೂಮಾಲೀಕರು ಮಾರಾಟದ ಒಪ್ಪಂದಗಳನ್ನು ಕಾರ್ಯಗತಗೊಳಿಸಿದ್ದರು. ಸಂಪೂರ್ಣ ಮಾರಾಟದ ಮೊತ್ತ ಪಡೆದಿದ್ದರು. ಭೂಮಿ ಸ್ವಾಧೀನವನ್ನೂ ನೀಡಲಾಗಿತ್ತು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಹೇಳಿದೆ.&lt;/p&gt;&lt;p&gt;ಆದ್ದರಿಂದ ಭೂಮಾಲೀಕರು ಸ್ವಾಧೀನ ಪ್ರಕ್ರಿಯೆಗಳನ್ನು ಪ್ರಶ್ನಿಸದಂತೆ ತಡೆಯಲಾಗಿತ್ತು. ನಂತರ ಅದೂ ಅಂತಿಮ ಅಧಿಸೂಚನೆ ಹೊರಬಿದ್ದ ಸುಮಾರು ಎರಡು ದಶಕಗಳ ನಂತರ ಅದನ್ನು ಪ್ರಶ್ನಿಸಲಾಗಿತ್ತು. ಜಕ್ಕಸಂದ್ರ ಗ್ರಾಮದಲ್ಲಿರುವ ಭೂಮಿಯನ್ನು ಟ್ರಸ್ಟ್&zwnj; ಪರ ಸ್ವಾಧೀನಪಡಿಸಿಕೊಳ್ಳಲಾಯಿತು, ಅದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಣೆಗಾಗಿ 150 ನಿವೇಶನಗಳನ್ನು (30&times;40 ಚದರ ಅಡಿ) ಅಂದಿನ ನೆಲಮಂಗಲ ನಗರ ಪುರಸಭೆಗೆ ಉಚಿತವಾಗಿ ಹಸ್ತಾಂತರಿಸಲು ಒಪ್ಪಿಕೊಂಡಿತ್ತು. ಉಳಿದ ನಿವೇಶನಗಳನ್ನು ಟ್ರಸ್ಟ್&zwnj;ನ ಸದಸ್ಯರ ನಡುವೆ ವಿತರಿಸಬೇಕಾಗಿತ್ತು. ಅಂತಿಮ ಅಧಿಸೂಚನೆಯನ್ನು 1987ರಲ್ಲಿ ಹೊರಡಿಸಲಾಯಿತು ಎಂದು ಪೀಠ ಆದೇಶದಲ್ಲಿ ವಿವರಿಸಿದೆ.&lt;/p&gt;&lt;p&gt;&lt;strong&gt;ಪ್ರಕರಣದ ವಿವರ: &lt;/strong&gt;ಭೂ ಸ್ವಾಧೀನವನ್ನು 2006 ಮತ್ತು 2008ರ ನಡುವೆ&zwnj; ಕೆಲ ಭೂಮಾಲೀಕರು ಸ್ವಾಧೀನವನ್ನು ಪ್ರಶ್ನಿಸಿದರು. 2012ರಲ್ಲಿ, ಏಕಸದಸ್ಯಪೀಠ ಸ್ವಾಧೀನ ರದ್ದುಗೊಳಿಸಿ, ಭೂಮಿ ವಾಪಸ್&zwnj; ನೀಡಲು ಆದೇಶಿಸಿತು. ರಾಜ್ಯ ಸರ್ಕಾರ ಹಾಗೂ ಟ್ರಸ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯಲ್ಲಿ ಸಂಪೂರ್ಣ ಮೊತ್ತ ಪಾವತಿಸಿದ ಟ್ರಸ್ಟ್&zwnj; ಪರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ನಿವೇಶನಗಳ ಮಾಲೀಕರು ತಮ್ಮ ಕುಟುಂಬ ಸದಸ್ಯರೊಂದಿಗೆ ವಸತಿಗಳನ್ನು ನಿರ್ಮಿಸುವ ಮೂಲಕ ಭೂಮಿ ಅಭಿವೃದ್ಧಿಪಡಿಸಿ, ಹಲವು ದಶಕಗಳೇ ಕಳೆದಿವೆ. ನಂತರ ಏಕಸದಸ್ಯಪೀಠ ಭೂ ಸ್ವಾಧೀನ ರದ್ದುಗೊಳಿಸಿರುವುದು ಸರಿಯಲ್ಲ ಎಂದು ಹೇಳಲಾಗಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hc-approves-30-acre-land-acquisition-bengaluru-honnavar-road-development-san/articleshow-io6gdf2"/>
        </item>
        <item>
            <title><![CDATA[ಮಂಗಳೂರಿಂದ ಹೊರಡುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಲವು ಟ್ರೈನ್ ಸಂಚಾರ ಭಾಗಶಃ ರದ್ದು, ಮರು ವೇಳಾಪಟ್ಟಿ ಪ್ರಕಟ!]]></title>
            <link>https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk</link>
            <guid isPermaLink="true">https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk</guid>
            <pubDate>Tue, 23 Jun 2026 16:33:34 +0530</pubDate>
            <description><![CDATA[ಕೊಂಕಣ ರೈಲ್ವೆ ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಜೂನ್ 23 ರಿಂದ 28ರವರೆಗೆ ಹಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಮಯವನ್ನು ಮರುನಿಗದಿಪಡಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ವೇಳಾಪಟ್ಟಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpgk0wjxhndqarech1m,imgname-konkan-railways--4--1781847817936.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕೊಂಕಣ ರೈಲ್ವೆ ಮಾರ್ಗದಲ್ಲಿ ಅತ್ಯಗತ್ಯವಾಗಿ ನಡೆಯಬೇಕಿರುವ ಹಳಿ ನಿರ್ವಹಣಾ ಕಾಮಗಾರಿಗಳ (Track Maintenance) ಕಾರಣದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಿವಿಧ ರೈಲು ಸೇವೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜೂನ್ 23 ರಿಂದ ಜೂನ್ 28 ರವರೆಗಿನ ವಿವಿಧ ದಿನಾಂಕಗಳಲ್ಲಿ ಕೆಲವು ರೈಲುಗಳ ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದರೆ, ಇನ್ನು ಕೆಲವು ರೈಲುಗಳ ಸಂಚಾರದ ಸಮಯವನ್ನು ಮರುನಿಗದಿಪಡಿಸಲಾಗಿದೆ.&lt;/p&gt;&lt;h2&gt;ರೈಲುಗಳ ಭಾಗಶಃ ರದ್ದತಿ (Partial Cancellation)&lt;/h2&gt;&lt;p&gt;ಜೂನ್ 25, 2026 ರಂದು ಮಂಗಳೂರು ಸೆಂಟ್ರಲ್&zwnj;ನಿಂದ ಹೊರಡಬೇಕಿದ್ದ ರೈಲು ಸೇವೆಗಳಲ್ಲಿ ಭಾಗಶಃ ಕಡಿತ ಮಾಡಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56616 (ಮಂಗಳೂರು ಸೆಂಟ್ರಲ್ - ಮಡ್ಗಾಂವ್ ಜಂಕ್ಷನ್ ಪ್ಯಾಸೆಂಜರ್): &lt;/strong&gt;ಜೂನ್ 25 ರಂದು ಮಂಗಳೂರಿನಿಂದ ಹೊರಡುವ ಈ ರೈಲನ್ನು ಕಾರವಾರ ನಿಲ್ದಾಣದಲ್ಲೇ ಅಲ್ಪಾವಧಿಗೆ ಸ್ಥಗಿತಗೊಳಿಸಲಾಗುವುದು. ಹೀಗಾಗಿ, ಅಂದು ಕಾರವಾರ ಮತ್ತು ಮಡ್ಗಾಂವ್ ಜಂಕ್ಷನ್ ನಿಲ್ದಾಣಗಳ ನಡುವೆ ಈ ರೈಲಿನ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56615 (ಮಡ್ಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್):&lt;/strong&gt; ಜೂನ್ 25 ರಂದು ಮಧ್ಯಾಹ್ನ 2:15 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಬೇಕಿದ್ದ ಈ ರೈಲು, ಅಂದು ಮಡ್ಗಾಂವ್ ಬದಲಿಗೆ ಮಧ್ಯಾಹ್ನ 3:24 ಕ್ಕೆ ಕಾರವಾರ ನಿಲ್ದಾಣದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಪರಿಣಾಮವಾಗಿ, ಮಡ್ಗಾಂವ್ ಜಂಕ್ಷನ್ ಮತ್ತು ಕಾರವಾರ ನಡುವಿನ ರೈಲು ಸಂಚಾರ ರದ್ದಾಗಲಿದೆ.&lt;/p&gt;&lt;h2&gt;ಮರುನಿಗದಿತ ರೈಲು ಸೇವೆಗಳು (Rescheduled Services)&lt;/h2&gt;&lt;p&gt;ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ಕೆಳಗಿನ ಪ್ರಮುಖ ರೈಲುಗಳ ಸಮಯವನ್ನು ಬದಲಾಯಿಸಲಾಗಿದ್ದು, ಇವು ತಡವಾಗಿ ಸಂಚರಿಸಲಿವೆ:&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56615 (ಮಡ್ಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್): &lt;/strong&gt;* ಜೂನ್ 23 ರಂದು: ಈ ರೈಲು ಮಧ್ಯಾಹ್ನ 2:15 ರ ನಿಗದಿತ ಸಮಯದ ಬದಲಾಗಿ ಸಂಜೆ 4:55 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಲಿದ್ದು, ಒಟ್ಟು 2 ಗಂಟೆ 40 ನಿಮಿಷ ವಿಳಂಬವಾಗಲಿದೆ.&lt;/p&gt;&lt;p&gt;ಜೂನ್ 26 ಮತ್ತು ಜೂನ್ 28 ರಂದು: ಇದೇ ರೈಲು ಮಧ್ಯಾಹ್ನ 2:15 ರ ಬದಲಿಗೆ ಮಧ್ಯಾಹ್ನ 3:45 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಲಿದ್ದು, 1 ಗಂಟೆ 30 ನಿಮಿಷ ತಡವಾಗಿ ಸಂಚರಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 22149 (ಎರ್ನಾಕುಲಂ ಜಂಕ್ಷನ್ - ಪುಣೆ ದ್ವೈವಾರ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್):&lt;/strong&gt; ಜೂನ್ 26 ರಂದು ಮುಂಜಾನೆ 2:15 ಕ್ಕೆ ಎರ್ನಾಕುಲಂನಿಂದ ಹೊರಡಬೇಕಿದ್ದ ಈ ರೈಲು, ಒಂದು ಗಂಟೆ ತಡವಾಗಿ ಅಂದರೆ ಮುಂಜಾನೆ 3:15 ಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 11097 (ಪುಣೆ ಜಂಕ್ಷನ್ - ಎರ್ನಾಕುಲಂ ಜಂಕ್ಷನ್ ಪೂರ್ಣ ಎಕ್ಸ್&zwnj;ಪ್ರೆಸ್): &lt;/strong&gt;ಜೂನ್ 28 ರಂದು ರಾತ್ರಿ 10:50 ಕ್ಕೆ ಪುಣೆಯಿಂದ ಹೊರಡಬೇಕಿದ್ದ ಈ ರೈಲು, 1 ಗಂಟೆ ವಿಳಂಬವಾಗಿ ರಾತ್ರಿ 11:50 ಕ್ಕೆ ಜರ್ನಿ ಆರಂಭಿಸಲಿದೆ.&lt;/p&gt;&lt;h2&gt;ರೈಲು ಸಂಚಾರ ನಿಯಂತ್ರಣ (Regulation of Train)&lt;/h2&gt;&lt;p&gt;&lt;strong&gt;ರೈಲು ಸಂಖ್ಯೆ 09057 (ಸೂರತ್ - ಮಂಗಳೂರು ಜಂಕ್ಷನ್ ದ್ವೈವಾರ ವಿಶೇಷ ಎಕ್ಸ್&zwnj;ಪ್ರೆಸ್): &lt;/strong&gt;ಜೂನ್ 24 ರಂದು ಸೂರತ್&zwnj;ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುವ ಈ ವಿಶೇಷ ರೈಲನ್ನು, ಕೊಂಕಣ ಮಾರ್ಗದಲ್ಲಿ ನಡೆಯುವ ಕಾಮಗಾರಿಗಳ ಕಾರಣದಿಂದಾಗಿ ಮಾರ್ಗ ಮಧ್ಯೆ ಸುಮಾರು 25 ನಿಮಿಷಗಳ ಕಾಲ ನಿಯಂತ್ರಿಸಿ (ತಡೆಹಿಡಿದು) ಚಲಾಯಿಸಲು ತೀರ್ಮಾನಿಸಲಾಗಿದೆ.&lt;/p&gt;&lt;h2&gt;ರೈಲ್ವೆ ಇಲಾಖೆಯ ಪ್ರಮುಖ ಸೂಚನೆ&lt;/h2&gt;&lt;p&gt;ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸಲು ಯೋಜಿಸಿರುವ ಸಾರ್ವಜನಿಕರು ಮತ್ತು ಪ್ರಯಾಣಿಕರು ತಮ್ಮ ನಿಲ್ದಾಣಗಳಿಗೆ ಹೊರಡುವ ಮುನ್ನ ಅಧಿಕೃತ ವೆಬ್&zwnj;ಸೈಟ್ ಅಥವಾ ಸಹಾಯವಾಣಿ ಮೂಲಕ ಇತ್ತೀಚಿನ ರೈಲು ವೇಳಾಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಈ ತಾತ್ಕಾಲಿಕ ಬದಲಾವಣೆಗಳಿಗೆ ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಅಧಿಕಾರಿಗಳು ಕೋರಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk"/>
        </item>
        <item>
            <title><![CDATA[ಕೊನೆಗೂ ಕುಮಟಾದ ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಬಂತು ಬಸ್; ಅಧಿಕೃತವಾಗಿ ಪ್ರತಿನಿತ್ಯ ಸಂಚಾರ]]></title>
            <link>https://kannada.asianetnews.com/karnataka-districts/uttara-kannada-finally-the-bus-reached-yadtare-kabbargi-village-in-kumta-mrq/articleshow-o6e2ri8</link>
            <guid isPermaLink="true">https://kannada.asianetnews.com/karnataka-districts/uttara-kannada-finally-the-bus-reached-yadtare-kabbargi-village-in-kumta-mrq/articleshow-o6e2ri8</guid>
            <pubDate>Wed, 01 Jul 2026 07:58:17 +0530</pubDate>
            <description><![CDATA[ಶಾಸಕ ದಿನಕರ ಶೆಟ್ಟಿ ಅವರು ಕುಮಟಾದ ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಬಹುನಿರೀಕ್ಷಿತ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದ್ದು, ಈ ಭಾಗದ ರಸ್ತೆ, ಸೇತುವೆ, ನೀರಿನ ಯೋಜನೆಗಳಂತಹ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಶಾಸಕರು ಮಾಹಿತಿ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kwdqz2s87dcs3r60ed6anx1h,imgname-bus-1782872771368.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ&lt;/strong&gt;: ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಅಗತ್ಯವಾದ ಹಲವಾರು ಕಾರ್ಯಗಳನ್ನು ಈವರೆಗೆ ಮಾಡಿದ್ದೇನೆ. ಈ ಗ್ರಾಮಕ್ಕೆ ಬಸ್ ಸೌಕರ್ಯ ಇರಲಿಲ್ಲ. ಈಗ ಸಾರಿಗೆ ಬಸ್ ಸೌಕರ್ಯಕ್ಕೂ ಚಾಲನೆ ನೀಡಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.&lt;/p&gt;&lt;h2&gt;&lt;strong&gt;ಅಧಿಕೃತವಾಗಿ ಪ್ರತಿನಿತ್ಯ ಬಸ್ ಸಂಚಾರ&lt;/strong&gt;&lt;/h2&gt;&lt;p&gt;ಯಡ್ತಾರೆ-ಕಬ್ಬರ್ಗಿ ಗ್ರಾಮಕ್ಕೆ ಸಾರಿಗೆ ಬಸ್ ಸಂಚಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.ಊರಿಗೆ ಬಸ್ ಬೇಕು ಎಂದು ಇಲ್ಲಿನ ಗಜಾನನ ಪೈ, ದೇವು ಗೌಡ ಇನ್ನಿತರ ಸ್ಥಳೀಯರ ಆಸಕ್ತಿ ಹಾಗೂ ಸಹಕಾರ ಮಹತ್ವದ್ದು. ಗ್ರಾಮಸ್ಥರ ಬಸ್ ಬೇಡಿಕೆಯನ್ನು ಸಾರಿಗೆ ಇಲಾಖೆ ಮುಂದಿಟ್ಟಿದ್ದೆ. ಸಾರಿಗೆ ವ್ಯವಸ್ಥಾಪಕ ವಿನಾಯಕ ಭಂಡಾರಿ ಕೂಡಲೇ ಸ್ಪಂದಿಸಿ, ಸಾರಿಗೆ ಡಿಸಿಗೆ ತಿಳಿಸಿ ಮಂಜೂರಿ ಪಡೆದು ವಾರದ ಹಿಂದೆ ಮಾಸ್ತಿಹಳ್ಳ ಬಸ್&zwnj; ಅನ್ನು ಇಲ್ಲಿವರೆಗೆ ಬಿಟ್ಟು ಪರೀಕ್ಷಿಸಿದ್ದರು. ಈಗ ಅಧಿಕೃತವಾಗಿ ಪ್ರತಿನಿತ್ಯ ಬಸ್ ಸಂಚಾರ ಶುರುವಾಗಿದೆ. ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು. ಅಶೋಕೆಗೂ ಇದೇ ರೀತಿ ಬಸ್ ವ್ಯವಸ್ಥೆ ಮಾಡಿದ್ದೇನೆ. ವಿಶೇಷವಾಗಿ ಇಂದು ಊರಿಗೆ ಬಸ್ ಬಂದಿದೆ ಎಂದು ಎಲ್ಲರೂ ಪಕ್ಷಭೇದ ಮರೆತು ಖುಷಿಯಿಂದ ಬಂದಿದ್ದಾರೆ. ಇದು ಒಳ್ಳೆಯ ಗುಣ. ಯಾವುದೇ ಸಮಸ್ಯೆ ಇದ್ದರೆ ತಿಳಿಸಿ ಎಂದರು.&lt;/p&gt;&lt;p&gt;ಈ ಭಾಗಕ್ಕೆ ರಸ್ತೆ, ಸೇತುವೆ ಮುಂತಾದ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಇಲ್ಲಿನ ಹಾಲಕ್ಕಿ ಸಮಾಜದವರು ವಿಶೇಷ ಕಾಳಜಿಯಿಂದ ನಮ್ಮ ಮನೆಗೆ ಬಂದು ಇಲ್ಲಿನ ಶಾಲೆಗೆ ಶಿಕ್ಷಕರು ಬೇಕೆಂದು ಬೇಡಿಕೆ ಇಟ್ಟಿದ್ದರು. ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂಬುದು ಅವರ ಕಳಕಳಿ. ಇಲ್ಲಿನ ಶಾಲೆಗೆ ಅತಿಥಿ ಶಿಕ್ಷಕರ ನಿಯೋಜನೆಯಾಗಿದೆ.&lt;/p&gt;&lt;h3&gt;&lt;strong&gt;ಬ್ಯಾರೇಜ್ ಕಂ ಸೇತುವೆ ನಿರ್ಮಾಣ&lt;/strong&gt;&lt;/h3&gt;&lt;p&gt;ಉಳಿದಂತೆ ಜೆಜೆಎಂ ಯೋಜನೆ ಅಡಿಯಲ್ಲಿ ಟ್ಯಾಂಕ್, ಬೋರ್ ಮುಂತಾದವುಗಳನ್ನು ಕಾಲಕಾಲಕ್ಕೆ ನೀಡಲಾಗಿದೆ. ನೀರಿನ ಸಮಸ್ಯೆ ಶಾಶ್ವತ ನಿವಾರಣೆಗೆ ಸಾಂತೂರಿನಲ್ಲಿ ₹5.5 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ಕಂ ಸೇತುವೆ ನಿರ್ಮಾಣಕ್ಕೆ ಮಂಜೂರಿ ತಂದಿದ್ದೇನೆ. ಟೆಂಡರ್ ಬಳಿಕ ಕಾಮಗಾರಿ ನಡೆದು ಈ ಭಾಗದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.&lt;/p&gt;&lt;p&gt;ಜಿಪಂ ಮಾಜಿ ಸದಸ್ಯ ಗಜಾನನ ಪೈ, ಪಂಚಾಯಿತಿ ಮಾಜಿ ಅಧ್ಯಕ್ಷ ದೇವು ಗೌಡ, ಮಾಜಿ ಸದಸ್ಯರಾದ ರಾಜೀವ ಭಟ್ಟ, ಮಹೇಶ ದೇಶಭಂಡಾರಿ, ಶ್ರೀಧರ ಪೈ, ಸ್ಥಳೀಯರಾದ ಅಶೋಕ ಭಟ್, ಉದಯ ಜೈನ ಇತರರು ಇದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kannada-finally-the-bus-reached-yadtare-kabbargi-village-in-kumta-mrq/articleshow-o6e2ri8"/>
        </item>
        <item>
            <title><![CDATA[Kumta Incident: ಕುಮಟಾದಲ್ಲಿ ಅಮಾನವೀಯ ಕೃತ್ಯ: ಊಟ ಕೇಳಿದ್ದಕ್ಕೆ ಭಿಕ್ಷುಕ ದಂಪತಿಗಳ ಮೇಲೆ ಹೋಟೆಲ್ ಮಾಲೀಕ ಹಲ್ಲೆ!]]></title>
            <link>https://kannada.asianetnews.com/karnataka-districts/elderly-couple-attacked-by-kumta-govardhan-hotel-owner-at-uttara-kannada/articleshow-q43za7q</link>
            <guid isPermaLink="true">https://kannada.asianetnews.com/karnataka-districts/elderly-couple-attacked-by-kumta-govardhan-hotel-owner-at-uttara-kannada/articleshow-q43za7q</guid>
            <pubDate>Tue, 23 Jun 2026 08:51:34 +0530</pubDate>
            <description><![CDATA[&lt;p&gt;ಹಸಿವು ಆಗಿದೆ ಊಟ ಕೊಡಪ್ಪ ಎಂದ ವೃದ್ಧ ಭಿಕ್ಷುಕ ದಂಪತಿಗಳ ಮೇಲೆ ಕುಮಟಾದ ಗೋವರ್ಧನ್ ಹೋಟೆಲ್ ಮಾಲೀಕನೋರ್ವ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ದಂಪತಿಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs6zayarwebcvbbtynycbtd,imgname----------------------60--1782183865290.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ, ಉತ್ತರ ಕನ್ನಡ (ಜೂ.23):&lt;/strong&gt; ಊಟ ಕೇಳಿದರೆಂಬ ಕಾರಣಕ್ಕೆ ಭಿಕ್ಷುಕ ದಂಪತಿಗಳ ಹೋಟೆಲ್ ಮಾಲೀಕನೋರ್ವ ಮನ ಬಂದಂತೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋವರ್ಧನ ಹೋಟೆಲ್&zwnj;ನಲ್ಲಿ ನಡೆದಿದೆ.&lt;/p&gt;&lt;p&gt;ಈ ಘಟನೆ ಸಂಬಂಧ ವಾಚ್&zwnj;ಮನ್, ಹೋಟೆಲ್ ಮಾಲೀಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಹೋಟೆಲ್ ಮಾಲೀಕ ಗಣೇಶ ನಾಯ್ಕ್, ಸೆಕ್ಯೂರಿಟಿ ಗಣೇಶ ಬಂಧಿತ ಆರೋಪಿಗಳು. ರಮೇಶ ದ್ಯಾಮಣ್ಣ ಅಲೆಮಾರಿ ಹಾಗೂ ದ್ಯಾಮವ್ವ ರಮೇಶ ಅಲೆಮಾರಿ ಹಲ್ಲೆಗೊಳಗಾದ ದಂಪತಿಗಳು. ಹಲ್ಲೆಯಿಂದ ಅಸ್ವಸ್ಥಗೊಂಡಿದ್ದು ವೃದ್ಧ ದಂಪತಿಗಳನ್ನು ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;ಭಿಕ್ಷೆ ಬೇಡಪ್ಪ ಹಣ ಕೊಡ್ತಿವಿ ಅಂದ್ರೂ ಹಲ್ಲೆ:&lt;/h2&gt;&lt;p&gt;ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಿಂದ ಬಂದಿರುವ ವೃದ್ಧ ದಂಪತಿಗಳು. ಅಲೆಮಾರಿ ಸಮುದಾಯದ ದಂಪತಿಗಳಿಗೆ ಸ್ವಂತ ಆಶ್ರಯವಿಲ್ಲದೆ ಅಲೆದಾಡುತ್ತಿದ್ದಾರೆ. ನೋಡೋಕೆ ಭಿಕ್ಹುಕರಂತೆ ಕಾಣಿಸಿದರೂ, ಪರಿಸ್ಥಿತಿ ಭಿಕ್ಷುರಂತೆ ಮಾಡಿದೆ. ಹಸಿವು ತಾಳಲಾರದೆ ಹೋಟೆಲ್&zwnj;ಗೆ ಊಟಕ್ಕೆ ಹೋಗಿದ್ದಾರೆ. ಆದೆ ವೃದ್ಧ ದಂಪತಿಗಳ ಕೊಳಕಾದ ಬಟ್ಟೆ ಕಂಡು ಅವಾಚ್ಯವಾಗಿ ಬೈದು ಹೋಟೆಲ್ ಮಾಲೀಕ ಊಟ ಕೊಡಲು ನಿರಾಕರಿಸಿದ್ದಾರೆ. ಆದರೆ ಹಸಿವು ಕೇಳಬೇಕಲ್ಲ? ಮಾಲೀಕನ ಬೈಗುಳ ಕೇಳಿಯೂ ಊಟ ಕೊಡುವಂತೆ ವೃದ್ಧ ದಂಪತಿಗಳು ಅಂಗಲಾಚಿದ್ದಾರೆ. ಭಿಕ್ಷೆ ಬೇಡಪ್ಪ ಹಣ ಕೊಡುತ್ತೇವೆ ಹಸಿವು ಆಗಿದೆ ಊಟ ಕೊಡಿ ಎಂದಿದ್ದಾರೆ.&amp;nbsp;&lt;/p&gt;&lt;p&gt;ಆದರೆ ಹೋಟೆಲ್ ಮಾಲೀಕ ಅದೆಂತಹ ಅಮಾನವೀಯವಾಗಿ ವರ್ತಿಸಿದ್ದಾರೆಂದರೆ, ವೃದ್ಧ ದಂಪತಿಗಳು ಅಷ್ಟು ಬೇಡಿಕೊಂಡರೂ ಕನಿಷ್ಠ ಪಕ್ಷ ಬಾಳೆ ಎಲೆಯೋ, ಕಾಗದಲ್ಲಾದರೂ ಅನ್ನ ಹಾಕಿ ಕೊಡಬಹುದಿತ್ತು. ಆದರೆ ಭಿಕ್ಷುಕರೆಂಬ ಕಾರಣಕ್ಕೆ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ವಾಚ್&zwnj;ಮನ್ ಕರೆಸಿ ತಾನೂ ವೃದ್ಧ ದಂಪತಿಗಳ ಮೇಲೆ ಕ್ರೂರವಾಗಿ ಒದ್ದು ಹಲ್ಲೆ ನಡೆಸಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;&lt;h3&gt;ಮಾಲೀಕನ ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ&lt;/h3&gt;&lt;p&gt;ಹಸಿವು ಆಗಿದೆ ಅಂತಾ ಅನ್ನ ಕೇಳಿ ಬಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ ಮಾಡುವ ಹೋಟೆಲ್ ಮಾಲೀಕ ಅದೆಂತಹ ಕಲ್ಲು ಹೃದಯದವನು ಎಂದು ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಭಿಕ್ಷುಕರಾದರೆ ಊಟ ಕೊಡಬಾರದೆ? ಅವರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಸದ್ಯ ಘಟನೆ ಸಂಬಂಧ ಪೊಲೀಸರು ಹೋಟೆಲ್ ಮಾಲೀಕ ಗಣೇಶ್ ನಾಯ್ಕ್ ಹಾಗೂ ಸೆಕ್ಯೂರಿಟಿ ಗಾರ್ಡ್ ಗಣೇಶ್ ಎಂಬಾತನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/elderly-couple-attacked-by-kumta-govardhan-hotel-owner-at-uttara-kannada/articleshow-q43za7q"/>
        </item>
        <item>
            <title><![CDATA[Uttara kannada ಇತಿಹಾಸಕ್ಕೆ ಹೊಸ ತಿರುವು ನೀಡಿದ ಹೊನ್ನಾವರ ಕಡತೋಕೆ ಶಾಸನದ ಮರು ಸಂಶೋಧನೆ!]]></title>
            <link>https://kannada.asianetnews.com/karnataka-districts/uttara-kannada-kadatoke-inscription-re-study-rewrites-swarnavalli-mutth-seer-timeline-to-11th-century-gdp/articleshow-sgsbyo9</link>
            <guid isPermaLink="true">https://kannada.asianetnews.com/karnataka-districts/uttara-kannada-kadatoke-inscription-re-study-rewrites-swarnavalli-mutth-seer-timeline-to-11th-century-gdp/articleshow-sgsbyo9</guid>
            <pubDate>Sat, 27 Jun 2026 17:57:55 +0530</pubDate>
            <description><![CDATA[ಹೊನ್ನಾವರದ ಕಡತೋಕೆ ಶಿಲಾಶಾಸನದ ಮರು-ಅಧ್ಯಯನವು ಐತಿಹಾಸಿಕ ಸತ್ಯವನ್ನು ಬಹಿರಂಗಪಡಿಸಿದೆ. ಶಾಸನದಲ್ಲಿ ಉಲ್ಲೇಖಿಸಲಾದ 'ಕಡತೋಕೆಯ ದೇವರು' ದೇವಸ್ಥಾನದ ಮೂರ್ತಿಯಲ್ಲ, ಬದಲಿಗೆ ಸ್ವರ್ಣವಲ್ಲಿ ಮಠದ 26ನೇ ಯತಿಗಳಾದ ಶ್ರೀ ವಿಶ್ವವಂದ್ಯ ಸರಸ್ವತೀ ಸ್ವಾಮೀಜಿ ಎಂದು ಸಂಶೋಧಕ ಶ್ಯಾಮಸುಂದರ ಗೌಡರು ಸಾಬೀತುಪಡಿಸಿದ್ದಾರೆ. ಈ ಸಂಶೋಧನೆಯು ಶಾಸನದ ಕಾಲವನ್ನು ನಿಖರವಾಗಿ ನಿರ್ಣಯಿಸಿ, ಗುರು ಪರಂಪರೆಯ ಇತಿಹಾಸವನ್ನು ಪರಿಷ್ಕರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw4ghmwb5ja012ack8q94qfv,imgname-uttara-kannada-kadatoke-inscription-1782563001227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ : &lt;/strong&gt;ಉತ್ತರ ಕನ್ನಡ ಜಿಲ್ಲೆಯ ಇತಿಹಾಸದ ಪುಟಗಳಿಗೆ ಹೊಸದೊಂದು ಮೈಲಿಗಲ್ಲು ಸೇರ್ಪಡೆಯಾಗಿದೆ. ಹೊನ್ನಾವರ ತಾಲೂಕಿನ ಕಡತೋಕೆ ಗ್ರಾಮದ ಪ್ರಸಿದ್ಧ ಸ್ವಯಂಭೂದೇವ (ಸ್ವಯಂಭೇಶ್ವರ) ದೇಸ್ಥಾನದಲ್ಲಿರುವ ಪ್ರಾಚೀನ ಶಿಲಾಶಾಸನವನ್ನು ಮರು ಅಧ್ಯಯನಕ್ಕೊಳಪಡಿಸಿದಾಗ, ಜಿಲ್ಲೆಯ ಇತಿಹಾಸ ಸಂಶೋಧಕರಾದ ಶ್ಯಾಮಸುಂದರ ಗೌಡ ಅಂಕೋಲಾ ಅವರು ಚಾರಿತ್ರಿಕ ಪ್ರಾಮುಖ್ಯತೆಯುಳ್ಳ ಅತ್ಯಂತ ಮಹತ್ವದ ಸತ್ಯವೊಂದನ್ನು ಜಗತ್ತಿಗೆ ಪರಿಚಯಿಸಿದ್ದಾರೆ.&lt;/p&gt;&lt;p&gt;ಇದುವರೆಗೆ ಶಾಸನದಲ್ಲಿ ಉಲ್ಲೇಖಿತವಾಗಿದ್ದ &ldquo;ಕಡತೋಕೆಯ ದೇವರ್&zwnj;&rdquo; ಎಂದರೆ ದೇವಾಲಯದ ಆರಾಧ್ಯ ದೈವ ಸ್ವಯಂಭೂದೇವರು ಎಂದೇ ನಂಬಲಾಗಿತ್ತು. ಆದರೆ, ಇತ್ತೀಚಿನ ಆಳವಾದ ಸಂಶೋಧನೆಯ ಪ್ರಕಾರ, ಆ ಪದವು ದೇವಸ್ಥಾನದ ಮೂರ್ತಿಯನ್ನು ಉಲ್ಲೇಖಿಸದೆ, ಆ ಕಾಲದಲ್ಲಿ ಕಡತೋಕೆಯಲ್ಲಿದ್ದ ಪ್ರತಿಷ್ಠಿತ ಸ್ವರ್ಣವಲ್ಲಿ ಮಠದ ಗುರು ಪರಂಪರೆಯ 26ನೇ ಯತಿಗಳಾಗಿದ್ದ ಶ್ರೀ ವಿಶ್ವವಂದ್ಯ ಸರಸ್ವತೀ ಸ್ವಾಮೀಜಿ ಅವರನ್ನು ಸೂಚಿಸುತ್ತದೆ ಎಂಬುದು ಸಾಧಾರಣವಾಗಿ ಸಾಬೀತಾಗಿದೆ.&lt;/p&gt;&lt;h2&gt;ಲಿಪಿಕಾರನ ಮೂಲಕ ಶಾಸನದ ಕಾಲನಿರ್ಣಯಕ್ಕೆ ಹೊಸ ಭಾಷ್ಯ&lt;/h2&gt;&lt;p&gt;ಈ ಕಡತೋಕೆ ಶಾಸನದಲ್ಲಿ ಯಾವುದೇ ನಿರ್ದಿಷ್ಟ ವರ್ಷ ಅಥವಾ ಸ್ಪಷ್ಟ ಕಾಲದ ಉಲ್ಲೇಖಗಳಿರಲಿಲ್ಲ. ಈ ಕಾರಣದಿಂದಾಗಿ ಇತಿಹಾಸಕಾರರು ಇದನ್ನು 11ನೇ ಅಥವಾ 12ನೇ ಶತಮಾನದ ಶಾಸನವೆಂದು ಸ್ಥೂಲವಾಗಿ ಪರಿಗಣಿಸಿದ್ದರು. ಆದರೆ ಸಂಶೋಧಕ ಶ್ಯಾಮಸುಂದರ ಗೌಡ ಅವರು ಈ ಶಾಸನವನ್ನು ಸಮೀಪದ ಕೆಕ್ಕಾರ ಗ್ರಾಮದ ಶಾಸನದೊಂದಿಗೆ ಅಕ್ಷರಶಃ ಹೋಲಿಕೆ ಮಾಡಿ ತನಿಖೆ ನಡೆಸಿದ್ದಾರೆ.&lt;/p&gt;&lt;p&gt;ಈ ಸೂಕ್ಷ್ಮ ಅಧ್ಯಯನದಲ್ಲಿ ಒಂದು ರೋಚಕ ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, ಕಡತೋಕೆ ಮತ್ತು ಕೆಕ್ಕಾರ ಎರಡೂ ಶಾಸನಗಳನ್ನು &lsquo;ಚಂದ್ರನ ಕೇಶವ&rsquo; ಎಂಬ ಒಬ್ಬನೇ ಲಿಪಿಕಾರ (ಬರಹಗಾರ) ಕೆತ್ತಿದ್ದಾನೆ. ಕೆಕ್ಕಾರ ಶಾಸನವು ಶಕ ವರ್ಷ 1000 ಅಂದರೆ ಕ್ರಿ.ಶ. 1078 ಕ್ಕೆ ಸೇರಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಲಿಪಿಕಾರ ಚಂದ್ರನ ಕೇಶವನ ಸಕ್ರಿಯ ಕಾರ್ಯಾವಧಿಯನ್ನು ಆಧರಿಸಿ, ಕಡತೋಕೆ ಶಾಸನವು ಕ್ರಿ.ಶ. 1075 ರಿಂದ 1090 ರ ನಡುವಿನ ಅವಧಿಯಲ್ಲಿ ರಚನೆಯಾಗಿರಬಹುದು ಎಂಬ ನಿಖರ ಕಾಲನಿರ್ಣಯವನ್ನು ಪ್ರಸ್ತುತಪಡಿಸಲಾಗಿದೆ.&lt;/p&gt;&lt;h2&gt;'ಕಡತೋಕೆಯ ದೇವರ್' ಯತಿಗಳೇ ಹೊರತು ದೇವರಲ್ಲ!&lt;/h2&gt;&lt;p&gt;ಶಾಸನದ ಆರಂಭಿಕ ಭಾಗದಲ್ಲಿ ದಾನ ಸ್ವೀಕರಿಸಿದವರನ್ನು ಶ್ಲಾಘಿಸುವ ಸಾಲುಗಳಿವೆ. ಅದರಲ್ಲಿ, &ldquo;ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನಾನುಷ್ಠಾನ, ಜಪ, ಸಮಾಧಿ ಹಾಗೂ ಶೀಲ&rdquo; ಮೊದಲಾದ ಉನ್ನತ ಸದ್ಗುಣಗಳಿಂದ ಸಂಪನ್ನರಾದ 'ಶ್ರೀಮತ್ ಕಡತೋಕೆಯ ದೇವರು' ಎಂದು ಸಂಬೋಧಿಸಲಾಗಿದೆ.&lt;/p&gt;&lt;p&gt;ಈ ರೀತಿಯ ತಪೋನಿಷ್ಠೆಯ ವರ್ಣನೆಗಳು ಕಲ್ಲಿನ ಮೂರ್ತಿಗಾಗಲಿ ಅಥವಾ ದೇವಸ್ಥಾನದ ದೇವರಿಗಾಗಲಿ ಅನ್ವಯಿಸುವುದಿಲ್ಲ. ಇವು ಕಠಿಣ ಆಧ್ಯಾತ್ಮಿಕ ಸಾಧನೆ ಮಾಡುವ ಆಚಾರ್ಯರು, ಮಹಾ ಯತಿಗಳು ಅಥವಾ ಮಠಾಧೀಶರ ಗುಣಲಕ್ಷಣಗಳಾಗಿವೆ. ಇದರಿಂದಾಗಿ, ಅಂದಿನ ಅಧಿಕಾರಿಗಳಾಗಿದ್ದ ಭೋಗವರ್ಗ್ಗಡೆ ಮತ್ತು ಇಡುಕವರ್ಗ್ಗಡೆ ಅವರು ನೀಡಿದ ದಾನವು ದೇವಸ್ಥಾನಕ್ಕಲ್ಲ, ಬದಲಿಗೆ ಅಲ್ಲಿ ನೆಲೆಸಿದ್ದ ಶ್ರೇಷ್ಠ ಯತಿವರ್ಯರಿಗೆ ಸಂದಿದ್ದಾಗಿದೆ ಎಂಬುದು ನಿಚ್ಚಳವಾಗುತ್ತದೆ ಎಂದು ಸಂಶೋಧಕರು ವಿಶ್ಲೇಷಣೆ ನೀಡಿದ್ದಾರೆ.&lt;/p&gt;&lt;h2&gt;ಐತಿಹಾಸಿಕ ದಾನದ ವಿವರಗಳು&lt;/h2&gt;&lt;p&gt;ಅಂದಿನ ಧಾರ್ಮಿಕ ಸಂಸ್ಥೆಯ ಸುಸೂತ್ರ ನಿರ್ವಹಣೆ, ಅಲ್ಲಿಗೆ ಬರುವ ಯಾತ್ರಿಕರ ಆತಿಥ್ಯ ಹಾಗೂ ದೈನಂದಿನ ವ್ಯವಸ್ಥೆಗಳಿಗೆ ಶಾಶ್ವತವಾದ ಆರ್ಥಿಕ ಭದ್ರತೆ ಕಲ್ಪಿಸುವುದು ಈ ದಾನದ ಮುಖ್ಯ ಉದ್ದೇಶವಾಗಿತ್ತು. ಜಳಿವಳಿ ಪ್ರಾಂತ್ಯದ ಉನ್ನತಾಧಿಕಾರಿಗಳಾದ &lsquo;ಭೋಗವೆರ್ಗ್ಗಡೆ&rsquo; ಹಾಗೂ &lsquo;ಇಡುಕವೆರ್ಗ್ಗಡೆ&rsquo; ಎಂಬುವವರು ಭೂಮಿ, ಗದ್ಯಾಣ (ಅಂದಿನ ಚಿನ್ನದ ನಾಣ್ಯ), ಭತ್ತ ಹಾಗೂ ಇತರ ಆಸ್ತಿಪಾಸ್ತಿಗಳನ್ನು ದಾನವಾಗಿ ನೀಡಿರುವುದನ್ನು ಈ ಶಾಸನವು ಅತಿ ವಿವರವಾಗಿ ದಾಖಲಿಸಿದೆ.&lt;/p&gt;&lt;h2&gt;ಗುರು ಪರಂಪರೆಯ ಕಾಲಾವಧಿ ಪರಿಷ್ಕರಣೆ&lt;/h2&gt;&lt;p&gt;ಪ್ರಸಿದ್ಧ 'ಜ್ಞಾನದೀಪಿಕಾ' ಗ್ರಂಥದಲ್ಲಿ ಲಭ್ಯವಿರುವ ಮಠದ ಗುರು ಪರಂಪರೆಯ ಮಾಹಿತಿಯ ಪ್ರಕಾರ, ಈ ಶಾಸನ ರಚನೆಯಾಗುವ ಕಾಲಕ್ಕೆ ಕಡತೋಕೆಯಲ್ಲಿ ಮಠವು ಅತ್ಯಂತ ಸಕ್ರಿಯವಾಗಿ ಅಸ್ತಿತ್ವದಲ್ಲಿತ್ತು. ಆ ಸಂದರ್ಭದಲ್ಲಿ ಪೀಠಾಧೀಶರಾಗಿದ್ದವರು ಗುರು ಪರಂಪರೆಯ 26ನೆಯವರಾದ ಶ್ರೀ ವಿಶ್ವವಂದ್ಯ ಸರಸ್ವತೀಗಳು. ಆದ್ದರಿಂದ ಅಧಿಕಾರಿಗಳು ದಾನ ನೀಡಿದ್ದು ಇವರಿಗೇ ಎಂಬುದು ದೃಢಪಟ್ಟಿದೆ.&lt;/p&gt;&lt;p&gt;ಈ ಮಹತ್ವದ ಸಂಶೋಧನೆಯಿಂದಾಗಿ ಮತ್ತೊಂದು ಇತಿಹಾಸದ ತಿದ್ದುಪಡಿಯಾಗಿದೆ. ಇದುವರೆಗೆ ಇತಿಹಾಸದ ದಾಖಲೆಗಳಲ್ಲಿ ಶ್ರೀ ವಿಶ್ವವಂದ್ಯ ಸರಸ್ವತೀಗಳ ಕಾಲವನ್ನು 13ನೇ ಶತಮಾನದ ಮಧ್ಯಭಾಗವೆಂದು ಉಲ್ಲೇಖಿಸಲಾಗುತ್ತಿತ್ತು. ಆದರೆ, ಈಗ ಕಡತೋಕೆ ಶಾಸನದ ಹೊಸ ಆಯಾಮ ಹಾಗೂ ಮಠದಲ್ಲಿ ಲಭ್ಯವಿರುವ ಉಜ್ಜಯಿನಿಯ ವಿಕ್ರಮಾಂಕ ಮಹಿಪತಿಯ ದಾನ ಶಾಸನದ ಅಂಶಗಳನ್ನು ಸಮೀಕರಿಸಿ ನೋಡಿದಾಗ, ಶ್ರೀ ವಿಶ್ವವಂದ್ಯ ಸರಸ್ವತೀಗಳ ಕಾಲವನ್ನು 11ನೇ ಶತಮಾನದ ಕೊನೆಯ ದಶಕಗಳು ಮತ್ತು 12ನೇ ಶತಮಾನದ ಆರಂಭಿಕ ದಶಕಗಳು ಎಂದು ಪರಿಷ್ಕರಿಸಿಕೊಳ್ಳಬೇಕಾಗಿದೆ ಎಂದು ಸಂಶೋಧಕ ಶ್ಯಾಮಸುಂದರ ಗೌಡ ಅವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/uttara-kannada-kadatoke-inscription-re-study-rewrites-swarnavalli-mutth-seer-timeline-to-11th-century-gdp/articleshow-sgsbyo9"/>
        </item>
        <item>
            <title><![CDATA[5 ವರ್ಷದಲ್ಲಿ ಶಿರಸಿ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ 10 ಕೋಟಿ ರೂಪಾಯಿ ಖರ್ಚು]]></title>
            <link>https://kannada.asianetnews.com/karnataka-districts/uttara-kananda-10-crore-rupees-spent-on-renovation-of-sirsi-marikamba-temple-in-5-years-mrq/articleshow-t4u0axo</link>
            <guid isPermaLink="true">https://kannada.asianetnews.com/karnataka-districts/uttara-kananda-10-crore-rupees-spent-on-renovation-of-sirsi-marikamba-temple-in-5-years-mrq/articleshow-t4u0axo</guid>
            <pubDate>Thu, 18 Jun 2026 09:42:19 +0530</pubDate>
            <description><![CDATA[ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯು ಕಳೆದ ಐದು ವರ್ಷಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಭಕ್ತರ ಸೌಕರ್ಯಗಳು ಮತ್ತು ದೇವಾಲಯದ ಅಭಿವೃದ್ಧಿಗಾಗಿ ಗರ್ಭಗುಡಿಯ ಗ್ರಾನೈಟ್ ಅಳವಡಿಕೆ, ವಾಣಿಜ್ಯ ಮಳಿಗೆ, ಶೌಚಾಲಯ ಸೇರಿದಂತೆ ಒಟ್ಟು 28 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಆರ್.ಜಿ. ನಾಯ್ಕ ಮಾಹಿತಿ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgh93095ds4h90ep437tt6ah,imgname-sagara-marikamba-jatre-1770106487077.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ: &lt;/strong&gt;ಕಳೆದ 5 ವರ್ಷದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹10 ಕೋಟಿ ಖರ್ಚಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ ಹೇಳಿದರು.&lt;/p&gt;&lt;p&gt;ಮಂಗಳವಾರ ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಕಳೆದ ಐದು ವರ್ಷದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಭಕ್ತರ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತ ಕೆಲವು ಆಸ್ತಿಪಾಸ್ತಿಗಳನ್ನು ನ್ಯಾಯಾಲಯದ ಮೂಲಕ ವಶಪಡಿಸಿಕೊಳ್ಳಲಾಗಿದೆ ಎಂದರು.&lt;/p&gt;&lt;p&gt;ಸಭಾಮಂಟಪದ ಪೈಪ್&zwnj;ಲೈನ್ ಕಾಮಗಾರಿ, ನೀರಿನ ಶೇಖರಣೆಗೆ ಪಂಪ್ ನಿರ್ಮಾಣ, ಎಸ್ಎಸ್ ರೇಲಿಂಗ್ಸ್ ನಿರ್ಮಾಣ, ಬಪ್ಪೆ ಹಾಲ್ ಗೆಸ್ಲಿಂಗ್, ಅನ್ನ ಛತ್ರದ ಹತ್ತಿರ ಗ್ರಾನೈಟ್ ಅಳವಡಿಕೆ ಮತ್ತು ಶೆಡ್ ನಿರ್ಮಾಣ, ಚಂದ್ರ ಶಾಲೆಯ ಚಾವಣಿಗೆ ತಾಮ್ರದ ತಗಡಿನ ಹೊದಿಕೆ, ಗರ್ಭಗುಡಿಯ ನೆಲ ಮತ್ತು ಗೋಡೆಗೆ ಗ್ರಾನೈಟ್ ಅಳವಡಿಕೆ ಮಾಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಯಾವೆಲ್ಲಾ ಅಭಿವೃದ್ಧಿ?&lt;/strong&gt;&lt;/h2&gt;&lt;p&gt;ಅಲ್ಲದೆ ದೇವಸ್ಥಾನದ ಕಲ್ಯಾಣ ಮಂಟಪದ ಎದುರಿಗೆ ವಾಣಿಜ್ಯ ಮಳಿಗೆ ನಿರ್ಮಾಣ, ಭಕ್ತಾದಿಗಳಿಗೆ ಸ್ನಾನಗೃಹ, ಶೌಚಾಲಯ, ಅಡುಗೆ ಅಡುಗೆಮನೆ ಕಟ್ಟಡ ನಿರ್ಮಾಣ, ಉಗ್ರಾಣ ಕಟ್ಟಡ, ಬಾವಿ ನಿರ್ಮಾಣ ಪ್ರಸಾದ ತಯಾರಿಕೆಗೆ ಮೇಲ್ಚಾವಣಿ ಕೊಠಡಿ ನಿರ್ಮಾಣ, ಸಭಾ ಮಂಟಪಕ್ಕೆ ಗ್ರಾನೈಟ್ ಅಳವಡಿಕೆ, ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವಿಶಾಲವಾದ ರಸ್ತೆ ನಿರ್ಮಾಣ, ಸೇರಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಒಟ್ಟು 28 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಸಂಪೂರ್ಣವಾಗಿ ಯಾವುದೇ ಕೆಲಸ ಬಾಕಿ ಇಲ್ಲದೆ ನಮ್ಮ ಆಡಳಿತ ಅವಧಿಯಲ್ಲಿ ಮುಗಿಸಲಾಗಿದೆ. ಅದಕ್ಕೆ ಸುಮಾರು ₹10 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಈ ಸಂದರ್ಭ ದೇವಸ್ಥಾನದ ಉಪಾಧ್ಯಕ್ಷ ಸುದೇಶ್ ಜೋಗುಳೇಕರ್, ಧರ್ಮದರ್ಶಿಗಳಾದ ವತ್ಸಲಾ ಹೆಗಡೆ, ಶಿವಾನಂದ್ ಶೆಟ್ಟಿ, ಸುಧೀರ್ ಹಂದ್ರಾಳ್ ಇದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kananda-10-crore-rupees-spent-on-renovation-of-sirsi-marikamba-temple-in-5-years-mrq/articleshow-t4u0axo"/>
        </item>
        <item>
            <title><![CDATA[ಯಲ್ಲಾಪುರದಲ್ಲಿ H1N1 ಜ್ವರಕ್ಕೆ ವ್ಯಕ್ತಿ ಸಾವು: ಲಕ್ಷಣಗಳು ಮತ್ತು ಚಿಕಿತ್ಸೆಯ ಮಾಹಿತಿ]]></title>
            <link>https://kannada.asianetnews.com/karnataka-districts/uttara-kannada-person-dies-of-h1n1-flu-in-yellapur-symptoms-and-treatment-information-mrq/articleshow-tswlmyn</link>
            <guid isPermaLink="true">https://kannada.asianetnews.com/karnataka-districts/uttara-kannada-person-dies-of-h1n1-flu-in-yellapur-symptoms-and-treatment-information-mrq/articleshow-tswlmyn</guid>
            <pubDate>Mon, 22 Jun 2026 07:50:48 +0530</pubDate>
            <description><![CDATA[ಯಲ್ಲಾಪುರ ತಾಲೂಕಿನ ವ್ಯಕ್ತಿಯೊಬ್ಬರು ಇನಫ್ಲೂಯೆಂಜಾ ಎ (H1N1) ವೈರಲ್ ಜ್ವರದಿಂದ ಮೃತಪಟ್ಟಿದ್ದಾರೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವೈದ್ಯರು ಜ್ವರದ ತೀವ್ರ ಲಕ್ಷಣಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01dehmxscnhb2f6cn2mb76yytt,imgname-pjimage--2--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಲ್ಲಾಪುರ (ಉತ್ತರ ಕನ್ನಡ); &lt;/strong&gt;ಹಂದಿ ಅಥವಾ ಹಕ್ಕಿಯಿಂದ ಬರಬಹುದಾದ ಇನಫ್ಲೂಯೆಂಜಾ ಎ ವೈರಲ್ ಜ್ವರ, ಶೀತ ಜ್ವರ ಫ್ಲೂ (ಎಚ್1ಎನ್ 1, ಹಂದಿಜ್ವರ) ಎಂದು ಖಚಿತ ಪಟ್ಟು ಚಿಕಿತ್ಸೆ ಫಲಿಸದೆ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಯಲ್ಲಾಪುರ ತಾಲೂಕಿನ ಚವತ್ತಿ ಗ್ರಾಮದ ರಾಜು ಮಂಜಾ ಗೌಡ (41) ಮೃತರು.&lt;/p&gt;&lt;h2&gt;&lt;strong&gt;ಇನಫ್ಲೂಯೆಂಜಾ ಎ ವೈರಲ್ ಜ್ವರ ಸೋಂಕು ದೃಢ&lt;/strong&gt;&lt;/h2&gt;&lt;p&gt;ಜೂ.10ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆ ಉಮ್ಮಚಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಮತ್ತೆ ಜೂ.12ಕ್ಕೆ ಜ್ವರ ಕಾಣಿಸಿಕೊಂಡ ಕಾರಣ ಮಂಚಿಕೇರಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ಜೂ.16ರಂದು ಜ್ವರ ಸುಸ್ತು ಇತ್ಯಾದಿ ಲಕ್ಷಣಗಳು ಕಂಡು ಬಂದ ಕಾರಣ ಶಿರಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನಂತರ ವೈದ್ಯರ ಸಲಹೆ ಮೇರೆಗೆ ಜೂ.17ರಂದು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಇನಫ್ಲೂಯೆಂಜಾ ಎ ವೈರಲ್ ಜ್ವರ ಸೋಂಕು ದೃಢವಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೂ.21ರಂದು ಅವರು ಸಾವನ್ನಪ್ಪಿದ್ದಾರೆ.&lt;/p&gt;&lt;p&gt;ತೀವ್ರ ಉಸಿರಾಟದ ತೊಂದರೆ, ಎದೆನೋವು, ನಿರ್ಜಲೀಕರಣ, ಸುಸ್ತು, ಗೊಂದಲ ಕಂಡು ಬಂದಲ್ಲಿ ಹೆಚ್ಚಿನ ತುರ್ತು ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಇಂತಹ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆ/ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡಯಬೇಕೆಂದು ವೈದ್ಯರು ತಿಳಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kannada-person-dies-of-h1n1-flu-in-yellapur-symptoms-and-treatment-information-mrq/articleshow-tswlmyn"/>
        </item>
        <item>
            <title><![CDATA[Uttara Kannada Rain: ಶಿರೂರು ಗುಡ್ಡಕುಸಿತ ದುರಂತ ಮರೆತರಾ ಪ್ರವಾಸಿಗರು? ಅಪಾಯಕಾರಿ ಜಲಪಾತಗಳಡಿ ಮೋಜು-ಮಸ್ತಿ!]]></title>
            <link>https://kannada.asianetnews.com/gallery/karnataka-districts/uttara-kannada-rain-dangerous-waterfalls-nh66-shirur-landslide-warning-tourists-u14pwc7</link>
            <guid isPermaLink="true">https://kannada.asianetnews.com/gallery/karnataka-districts/uttara-kannada-rain-dangerous-waterfalls-nh66-shirur-landslide-warning-tourists-u14pwc7</guid>
            <pubDate>Thu, 02 Jul 2026 23:15:57 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ತಾತ್ಕಾಲಿಕ ಜಲಪಾತಗಳು ಸೃಷ್ಟಿಯಾಗಿವೆ. ಗುಡ್ಡಕುಸಿತದ ತೀವ್ರ ಅಪಾಯವಿದ್ದರೂ, ಪ್ರವಾಸಿಗರು ಜಿಲ್ಲಾಡಳಿತದ ಎಚ್ಚರಿಕೆ ನಿರ್ಲಕ್ಷಿಸಿ ಈ ಜಲಪಾತಗಳಲ್ಲಿ ನೀರಾಟವಾಡುತ್ತಿದ್ದು, ಇದು ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwhyqsx251gkh9wb1c50espq,imgname-uttara-kannada-rain-dangerous-waterfalls-1783014090658.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ತಾತ್ಕಾಲಿಕ ಜಲಪಾತಗಳು ಸೃಷ್ಟಿಯಾಗಿವೆ. ಗುಡ್ಡಕುಸಿತದ ತೀವ್ರ ಅಪಾಯವಿದ್ದರೂ, ಪ್ರವಾಸಿಗರು ಜಿಲ್ಲಾಡಳಿತದ ಎಚ್ಚರಿಕೆ ನಿರ್ಲಕ್ಷಿಸಿ ಈ ಜಲಪಾತಗಳಲ್ಲಿ ನೀರಾಟವಾಡುತ್ತಿದ್ದು, ಇದು ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವರುಣನ ಆರ್ಭಟ (Heavy Rain) ಜೋರಾಗಿದೆ. ಮಳೆಯ ಅಬ್ಬರಕ್ಕೆ ಮಲೆನಾಡು ಮತ್ತು ಕರಾವಳಿ ಭಾಗ ಹಸಿರು ಹೊದ್ದು ಕಂಗೊಳಿಸುತ್ತಿದ್ದರೆ, ಇನ್ನೊಂದೆಡೆ ನೂರಾರು ತಾತ್ಕಾಲಿಕ ಜಲಪಾತಗಳು (Waterfalls) ಸೃಷ್ಟಿಯಾಗಿವೆ. ಆದರೆ, ಈ ಸುಂದರ ಜಲಪಾತಗಳೇ ಈಗ ಪ್ರವಾಸಿಗರಿಗೆ ಮೃತ್ಯುಪಾಶವಾಗುವ ಆತಂಕ ಎದುರಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬಂಡೆ ಕೊರೆದ ಜಾಗದಲ್ಲೇ ಜಲಪಾತಗಳ ಉಗಮ!&lt;/strong&gt;&lt;/p&gt;&lt;p&gt;ರಾಷ್ಟ್ರೀಯ ಹೆದ್ದಾರಿ 66ರ (National Highway 66) ಚತುಷ್ಪಥ ರಸ್ತೆ ಕಾಮಗಾರಿಗಾಗಿ ಕಾರವಾರ ಮತ್ತು ಅಂಕೋಲಾ ಭಾಗದಲ್ಲಿ ಬೃಹತ್ ಬಂಡೆಗಳನ್ನು ಮತ್ತು ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕೊರೆಯಲಾಗಿದೆ. ಈಗ ಸುರಿಯುತ್ತಿರುವ ಮಳೆಗೆ ಈ ಕೊರೆದ ಬಂಡೆಗಳ ಮೇಲಿಂದ ನೀರು ಧುಮ್ಮಿಕ್ಕುತ್ತಿದ್ದು, ಜಲಪಾತದಂತೆ ಗೋಚರಿಸುತ್ತಿದೆ. ಇದನ್ನು ನೋಡಲು ಮುಗಿಬೀಳುತ್ತಿರುವ ಪ್ರವಾಸಿಗರು, ಹೆದ್ದಾರಿ ಪಕ್ಕದಲ್ಲೇ ವಾಹನ ನಿಲ್ಲಿಸಿ ನೀರಾಟ ಆಡುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;324 ಕಡೆ ಗುಡ್ಡಕುಸಿತದ ಭೀತಿ (Landslide Alert)&lt;/strong&gt;&lt;/p&gt;&lt;p&gt;ಭಾರತೀಯ ಭೂ ವಿಜ್ಞಾನ ಇಲಾಖೆ (Geological Survey of India) ಈಗಾಗಲೇ ಎಚ್ಚರಿಕೆ ನೀಡಿದ್ದು, ಉತ್ತರಕನ್ನಡ ಜಿಲ್ಲೆಯ ಸುಮಾರು 324 ಪ್ರದೇಶಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆಯಿದೆ ಎಂದು ವರದಿ ನೀಡಿದೆ. ವಿಶೇಷವಾಗಿ ಹೆದ್ದಾರಿ ಬದಿಯ ಕೊರೆದ ಗುಡ್ಡಗಳು ಯಾವಾಗ ಕುಸಿಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ.&lt;/p&gt;&lt;img&gt;&lt;p&gt;ಕಳೆದ ಎರಡು ವರ್ಷಗಳ ಹಿಂದೆ ಅಂಕೋಲಾದ ಶಿರೂರು (Shirur) ಬಳಿ ಸಂಭವಿಸಿದ ಗುಡ್ಡ ಕುಸಿತದ ಭೀಕರತೆ ಇಡೀ ದೇಶವನ್ನೇ ನಡುಗಿಸಿತ್ತು. ಆ ದುರಂತದಲ್ಲಿ 13 ಅಮಾಯಕರು ಮೃತಪಟ್ಟಿದ್ದರು. ಇಷ್ಟೆಲ್ಲಾ ಕಣ್ಣಮುಂದಿದ್ದರೂ ಪ್ರವಾಸಿಗರು ಮಾತ್ರ ಬುದ್ಧಿ ಕಲಿಯುತ್ತಿಲ್ಲ.&lt;/p&gt;&lt;img&gt;&lt;p&gt;&lt;strong&gt;ಜಿಲ್ಲಾಡಳಿತದ ಸೂಚನೆಗೆ ಬೆಲೆಯಿಲ್ಲ!&lt;/strong&gt;&lt;/p&gt;&lt;p&gt;ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಇಳಿಯಬಾರದು ಮತ್ತು ಜಲಪಾತಗಳಲ್ಲಿ ನೀರಾಟವಾಡಬಾರದು ಎಂದು ಜಿಲ್ಲಾಡಳಿತ (District Administration) ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಆದರೆ, ಪ್ರವಾಸಿಗರು ಮಾತ್ರ ಯಾವುದಕ್ಕೂ ಕೇರ್ ಮಾಡದೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಮತ್ತು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಸ್ಥಳೀಯರ ಆಕ್ರೋಶ:&lt;/strong&gt;&lt;/p&gt;&lt;p&gt;'ಒಂದು ಸಣ್ಣ ಗುಡ್ಡ ಕುಸಿತವಾದರೂ ದೊಡ್ಡ ಅನಾಹುತ ಸಂಭವಿಸಬಹುದು. ಪ್ರವಾಸಿಗರ ಈ ಹುಚ್ಚಾಟಕ್ಕೆ ಜಿಲ್ಲಾಡಳಿತ ಕೂಡಲೇ ಕಡಿವಾಣ ಹಾಕಬೇಕು. ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿ ದಂಡ ವಿಧಿಸಬೇಕು' ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಕೃತಿಯನ್ನು ಆಸ್ವಾದಿಸುವುದು ತಪ್ಪಲ್ಲ, ಆದರೆ ಅದು ಪ್ರಾಣಕ್ಕೆ ಕಂಟಕವಾಗಬಾರದು ಎಂಬುದು ಪರಿಸರ ಪ್ರೇಮಿಗಳ ಕಳಕಳಿಯಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/uttara-kannada-rain-dangerous-waterfalls-nh66-shirur-landslide-warning-tourists-u14pwc7"/>
        </item>
        <item>
            <title><![CDATA[ಹಳಿಯಾಳ ತಾಲೂಕಿನ ಗ್ರಾಮವನ್ನೇ ನಡುಗಿಸಿದ ಸ್ಪೋಟ: ಮನೆಯಲ್ಲಿ ನಾಡಬಾಂಬ್ ಬ್ಲಾಸ್ಟ್?]]></title>
            <link>https://kannada.asianetnews.com/gallery/karnataka-districts/a-massive-explosion-occurred-in-a-house-in-kalginakoppa-village-in-haliyal-taluk-of-uttara-kannada-district-mrq-u19agct</link>
            <guid isPermaLink="true">https://kannada.asianetnews.com/gallery/karnataka-districts/a-massive-explosion-occurred-in-a-house-in-kalginakoppa-village-in-haliyal-taluk-of-uttara-kannada-district-mrq-u19agct</guid>
            <pubDate>Mon, 22 Jun 2026 11:32:20 +0530</pubDate>
            <description><![CDATA[&lt;p&gt;ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಸ್ಫೋಟದ ತೀವ್ರತೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಕಾಡುಪ್ರಾಣಿಗಳ ಬೇಟೆಗಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಸ್ಫೋಟಗೊಂಡಿರಬಹುದೆಂದು ಶಂಕಿಸಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvpyed1ef6zqcwt58fxws8vh,imgname-haliyala--3--1782107812910.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಸ್ಫೋಟದ ತೀವ್ರತೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಕಾಡುಪ್ರಾಣಿಗಳ ಬೇಟೆಗಾಗಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಸ್ಫೋಟಗೊಂಡಿರಬಹುದೆಂದು ಶಂಕಿಸಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಮನೆಯೊಂದರಲ್ಲಿ ಇಟ್ಟಿದ್ದ ನಾಡಬಾಂಬ್ ಎನ್ನಲಾದ ಸ್ಪೋಟಕ ವಸ್ತುವೊಂದು ಭೀಕರವಾಗಿ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಕಾಳಗಿನಕೊಪ್ಪ ಗ್ರಾಮದ ನಿವಾಸಿ ವಾಸುದೇವ ಎಂಬುವವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ.&lt;/p&gt;&lt;img&gt;&lt;p&gt;ಸ್ಫೋಟದ ತೀವ್ರತೆಗೆ ವಾಸುದೇವ ಅವರ ಮನೆ ಮಾತ್ರವಲ್ಲದೆ, ಅಕ್ಕಪಕ್ಕದ ಸುಮಾರು ಎಂಟು ಮನೆಗಳಿಗೂ ಭಾಗಶಃ ಹಾನಿಯಾಗಿದೆ. ಏಕಾಏಕಿ ಸಂಭವಿಸಿದ ಈ ಭೀಕರ ಸ್ಫೋಟದ ಶಬ್ದಕ್ಕೆ ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಸದ್ಯ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.&lt;/p&gt;&lt;img&gt;&lt;p&gt;ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮನೆಯಲ್ಲಿ ನಾಡಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಮನೆ ಮಾಲೀಕ ವಾಸುದೇವ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾಡುಪ್ರಾಣಿಗಳ ಬೇಟೆಯಾಡುವ ಉದ್ದೇಶದಿಂದಲೇ ಮನೆಯಲ್ಲಿ ಈ ನಾಡಬಾಂಬ್&zwnj;ಗಳನ್ನು ಸಂಗ್ರಹಿಸಿಟ್ಟಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;img&gt;&lt;p&gt;ಪ್ರಸ್ತುತ ಘಟನಾ ಸ್ಥಳಕ್ಕೆ ಹಳಿಯಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಸ್ಪೋಟಗೊಂಡಿರೋದು ನಾಡಬಾಂಬ್ ಅಥವಾ ಜಿಲೆಟಿನ್ ಕಡ್ಡಿಗಳಾ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ&lt;/p&gt;]]></content:encoded>
            <category>uttara-kannada</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/a-massive-explosion-occurred-in-a-house-in-kalginakoppa-village-in-haliyal-taluk-of-uttara-kannada-district-mrq-u19agct"/>
        </item>
        <item>
            <title><![CDATA[ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ]]></title>
            <link>https://kannada.asianetnews.com/gallery/karnataka-districts/muradeshwar-kachigudu-train-to-be-extended-to-kumta-in-future-mp-vishweshwar-hegde-kageri-inaugurates-mrq-uuhdhpp</link>
            <guid isPermaLink="true">https://kannada.asianetnews.com/gallery/karnataka-districts/muradeshwar-kachigudu-train-to-be-extended-to-kumta-in-future-mp-vishweshwar-hegde-kageri-inaugurates-mrq-uuhdhpp</guid>
            <pubDate>Sat, 20 Jun 2026 17:23:33 +0530</pubDate>
            <description><![CDATA[&lt;p&gt;ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುರಡೇಶ್ವರ-ಕಾಚಿಗುಡ ರೈಲನ್ನು ಕುಮಟಾವರೆಗೆ ವಿಸ್ತರಿಸಿ, ಹಸಿರು ನಿಶಾನೆ ತೋರಿದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದ್ದು, ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvjdnfdhrn450qc4gcc8z23x,imgname-indian-railways--3--1781956001201.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುರಡೇಶ್ವರ-ಕಾಚಿಗುಡ ರೈಲನ್ನು ಕುಮಟಾವರೆಗೆ ವಿಸ್ತರಿಸಿ, ಹಸಿರು ನಿಶಾನೆ ತೋರಿದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದ್ದು, ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ.&amp;nbsp;&lt;/p&gt;&lt;img&gt;&lt;p&gt;ಇಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕುಮಟಾವರೆಗೂ ವಿಸ್ತರಣೆಯಾಗಿರುವ ಮುರಡೇಶ್ವರ-ಕಾಚಿಗುಡ ರೈಲಿಗೆ ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ರೈಲ್ವೇ ನಿಲ್ದಾಣದಲ್ಲಿ ರೈಲಿಗೆ ಚಾಲನೆ ನೀಡಲಾಯ್ತು.&lt;/p&gt;&lt;img&gt;&lt;p&gt;ಈ ಹಿಂದೆ ಕಾಚಿಗುಡ-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ಮುರುಡೇಶ್ವರವರೆಗೆ ಮಾತ್ರ ಸೀಮಿತವಾಗಿತ್ತು. ಇದೀಗ ಈ ರೈಲು ಕುಮಟಾ ನಿಲ್ದಾಣದವರೆಗೆ ವಿಸ್ತರಣೆಯಾಗಿರೋದಕ್ಕೆ ಸಂಸದರು ಚಾಲನೆ ನೀಡಿದ್ದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದೆ. ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ.&lt;/p&gt;&lt;img&gt;&lt;p&gt;ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ರೈಲು ಕುಮಟಾಗೆ ಬರಬೇಕು ಎಂಬ ಒತ್ತಾಯವವಿತ್ತು. ಶಾಸಕರು ಮತ್ತು ನಮ್ಮ ಪರಿಶ್ರಮದಿಂದ ಜನರ ಬೇಡಿಕೆ ಈಡೇರಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಗೋಕರ್ಣ ನಿಲ್ದಾಣದ ಪ್ಲಾಟ್&zwnj;ಫಾರಂ ಅಭಿವೃದ್ಧಿ ಮಾಡಲಾಗಿದೆ. ಈ ಹಿಂದೆ ಪ್ಲಾಟ್&zwnj;ಫಾರಂ ಚಿಕ್ಕದಾಗಿತ್ತು ಎಂದು ಹೇಳಿದರು.&lt;/p&gt;&lt;img&gt;&lt;p&gt;ಕುಮಟಾ, ಭಟ್ಕಳ ಮತ್ತು ಮುರಡೇಶ್ವರ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗಿದೆ. ಕೆಲವು ಕಡೆ ರೈಲಿನ ಉದ್ದದಷ್ಟು ಪ್ಲಾಟ್&zwnj;ಫಾರಂ ಇರಲಿಲ್ಲ. ಈಗ ಪ್ಲಾಟ್&zwnj;ಫಾರಂಗಳನ್ನು ವಿಸ್ತರಣೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ರೀತಿಯ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!&lt;/strong&gt;&lt;/p&gt;&lt;img&gt;&lt;p&gt;ಕಾಚಿಗುಡ-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ಬುಧವಾರ ಮತ್ತು ಶನಿವಾರ ಸಂಚರಿಸುತ್ತದೆ. ಈ ರೈಲು ಕರ್ನಾಟಕದಲ್ಲಿ ಕುಮಟಾ, ಮುರಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ, ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ, ಮಂಗಳೂರು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪುತ್ತೂರು-ಸುಬ್ರಹ್ಮಣ್ಯ 3 ಹೊಸ ರೈಲ್ವೆ ಓವರ್&zwnj;ಬ್ರಿಜ್ ಗೆ ₹18 ಕೋಟಿ, ದ.ಕನ್ನಡ ರಸ್ತೆ ಅಭಿವೃದ್ಧಿಗೆ 57 ಕೋಟಿ ಅನುದಾನ!&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/muradeshwar-kachigudu-train-to-be-extended-to-kumta-in-future-mp-vishweshwar-hegde-kageri-inaugurates-mrq-uuhdhpp"/>
        </item>
        <item>
            <title><![CDATA[ಮದುವೆಯಲ್ಲಿ ಇನ್ಮುಂದೆ ತಡರಾತ್ರಿವರೆಗೆ ಬ್ಯಾಂಡ್, ಬೆಂಜೊ ಸದ್ದಿಲ್ಲ; ಹೊಸ ನಿಯಮಗಳು]]></title>
            <link>https://kannada.asianetnews.com/karnataka-districts/uttara-kannada-karwar-decision-to-stop-playing-musical-instruments-until-late-at-night-at-wedding-ceremonies-mrq/articleshow-v7inmpa</link>
            <guid isPermaLink="true">https://kannada.asianetnews.com/karnataka-districts/uttara-kannada-karwar-decision-to-stop-playing-musical-instruments-until-late-at-night-at-wedding-ceremonies-mrq/articleshow-v7inmpa</guid>
            <pubDate>Thu, 18 Jun 2026 07:13:35 +0530</pubDate>
            <description><![CDATA[&lt;p&gt;ಮದುವೆ ಸಮಾರಂಭಗಳಲ್ಲಿ ತಡರಾತ್ರಿವರೆಗೆ ವಾದ್ಯ ನುಡಿಸುವುದನ್ನು ಮತ್ತು ಮದುವೆಗೆ ಒಂದು ದಿನ ಮುಂಚಿತವಾಗಿ ಸೇವೆ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದೆ. ಇನ್ನು ಮುಂದೆ, ಮದುವೆ ದಿನದಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಸೇವೆ ಲಭ್ಯವಿರಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvc69byqgprtbs7z9mptfa62,imgname-marriage--1--1781746937815.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ತಡರಾತ್ರಿವರೆಗೆ ಬ್ಯಾಂಡ್ ಹಾಗೂ ಬೆಂಜೊ ವಾದ್ಯಗಳನ್ನು ನುಡಿಸುವ ಪದ್ಧತಿಗೆ ಬ್ರೇಕ್ ಹಾಕಲು ''''ಕಾರವಾರ ತಾಲೂಕು ಬ್ಯಾಂಡ್ ಹಾಗೂ ಬೆಂಜೊ ಸಂಘ'''' ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಜೊತೆಗೆ ಮದುವೆಗೆ ಒಂದು ದಿನ ಮುಂಚಿತವಾಗಿ ತೆರಳಿ ಸೇವೆ ನೀಡುವ ಪದ್ಧತಿಯನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಂಘ ತೀರ್ಮಾನಿಸಿದೆ.&lt;/p&gt;&lt;p&gt;ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸಂದೀಪ ಬಾಡ್ಕರ್ ಈ ಹೊಸ ನಿಯಮಗಳ ಕುರಿತು ಅಧಿಕೃತ ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ಯಾಕೆ ಈ ನಿರ್ಧಾರ?&lt;/strong&gt;&lt;/h2&gt;&lt;p&gt;ಇದುವರೆಗೆ ಮದುವೆಯ ಹಿಂದಿನ ದಿನವೇ ಬ್ಯಾಂಡ್ ತಂಡಗಳು ಮದುವೆ ಮನೆಗಳಿಗೆ ತೆರಳಿ ತಡರಾತ್ರಿಯವರೆಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದವು. ಮದುವೆಯ ದಿನವೂ ಸಹ ಅನೇಕ ಬಾರಿ ತಡರಾತ್ರಿವರೆಗೆ ನಿರಂತರವಾಗಿ ವಾದ್ಯ ನುಡಿಸಬೇಕಾಗುತ್ತಿತ್ತು. ನಿದ್ದೆ, ವಿಶ್ರಾಂತಿ ಇಲ್ಲದೆ ದುಡಿಯುವುದರಿಂದ ಕಲಾವಿದರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಅಲ್ಲದೆ, ಒಂದೇ ದಿನ ಬೇರೆ ಬೇರೆ ಕಡೆ ಬುಕ್ಕಿಂಗ್ ಇದ್ದಾಗ, ಮುಂದಿನ ಕಾರ್ಯಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ತೀವ್ರ ತೊಂದರೆಯಾಗುತ್ತಿತ್ತು ಎಂದು ಅವರು ವಿವರಿಸಿದರು.&lt;/p&gt;&lt;p&gt;ಹಲವು ವಾದಕರು, ವಿಶೇಷವಾಗಿ ಕೀಬೋರ್ಡ್ ಸೇರಿದಂತೆ ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು ಒಂದಕ್ಕಿಂತ ಹೆಚ್ಚು ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ತಡರಾತ್ರಿವರೆಗೆ ಕಾರ್ಯಕ್ರಮ ನಡೆಯುವುದರಿಂದ ವೇಳಾಪಟ್ಟಿ ನಿರ್ವಹಣೆಯಲ್ಲಿ ಭಾರಿ ಸಮಸ್ಯೆಗಳು ಎದುರಾಗುತ್ತಿವೆ.&lt;/p&gt;&lt;h3&gt;&lt;strong&gt;ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬ್ಯಾಂಡ್&lt;/strong&gt;&lt;/h3&gt;&lt;p&gt;ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಹಿನ್ನೆಲೆ ಕಾರವಾರದ ಎಲ್ಲ ಬ್ಯಾಂಡ್ ತಂಡಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಸರ್ವಾನುಮತದ ತೀರ್ಮಾನದ ಪ್ರಕಾರ, ಇನ್ನು ಮುಂದೆ ಮದುವೆ ದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬ್ಯಾಂಡ್ ಹಾಗೂ ಬೆಂಜೊ ತಂಡಗಳು ಸೇವೆ ನೀಡಲಿವೆ. ಮದುವೆಗೆ ಒಂದು ದಿನ ಮುಂಚಿತವಾಗಿ ಮದುವೆ ಮನೆಗಳಿಗೆ ತೆರಳಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಕಾರವಾರ ತಾಲೂಕಿನಲ್ಲಿ ಒಟ್ಟು 17 ಬ್ಯಾಂಡ್ ಹಾಗೂ ಬೆಂಜೊ ತಂಡಗಳು ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ತಂಡದಲ್ಲಿ ಸರಾಸರಿ ಏಳು ಮಂದಿ ಸದಸ್ಯರಿದ್ದಾರೆ. ಎಲ್ಲ ತಂಡಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿಯೇ ಈ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿಜಯ್ ಕಾಂಬ್ಳೆ, ಪ್ರಮುಖರಾದ ಕುಶಾಲಿ ಗುನಗಿ, ವಿನೇಶ್ ಮುದ್ಗೇಕರ, ಪ್ರವೀಣ ಸಾರಂಗ, ನಾಗೇಶ ತದಡಿಕರ, ಸಾಗರ ಅಂಬಿಗ, ಸಂದೇಶ್ ಕಢೆಕರ, ಸಂತೋಷ ಪಡಲಕರ, ವಿನಾಯಕ ಮಾಜಾಳಿಕರ, ಸರ್ವೇಶ್ ಅಂಬಿಗ, ಜಗದೀಶ ಗಡಕರ, ಅನಿಲ್ ಬೋಳೆಕರ, ಆನಂದ ತದಡಿಕರ, ಮುಕುಲ್ ಸೇರಿದಂತೆ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇನ್ಮುಂದೆ ಮದುವೆ ದಿಬ್ಬಣಗಳ ಫೋಟೋ, ವಿಡಿಯೋ ಚಿತ್ರೀಕರಣ ಮಾಡಲ್ಲ: ಫೋಟೋಗ್ರಾಫರ್ಸ್ ನಿರ್ಧಾರ&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kannada-karwar-decision-to-stop-playing-musical-instruments-until-late-at-night-at-wedding-ceremonies-mrq/articleshow-v7inmpa"/>
        </item>
        <item>
            <title><![CDATA[ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕುಮಟಾದಿಂದಲೇ ಸಿಗಲಿದೆ ನೇರ ರೈಲು: ಜೂನ್ 20 ರಂದು ಕಾಚಿಗುಡ ಎಕ್ಸ್‌ಪ್ರೆಸ್‌ಗೆ ಅದ್ಧೂರಿ ಚಾಲನೆ!]]></title>
            <link>https://kannada.asianetnews.com/gallery/karnataka-districts/kumta-tirupati-kachiguda-train-service-inauguration-konkan-railway-updates-san-vf8t191</link>
            <guid isPermaLink="true">https://kannada.asianetnews.com/gallery/karnataka-districts/kumta-tirupati-kachiguda-train-service-inauguration-konkan-railway-updates-san-vf8t191</guid>
            <pubDate>Fri, 19 Jun 2026 11:29:22 +0530</pubDate>
            <description><![CDATA[&lt;p&gt;ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ ಜೂ. 20 ರಂದು ಉದ್ಘಾಟನೆಗೊಳ್ಳಲಿದೆ. ಈ ಹೊಸ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದ್ದು, ಕುಮಟಾ ರೈಲು ನಿಲ್ದಾಣದ 2ನೇ ಪ್ಲಾಟ್&zwnj;ಫಾರ್ಮ್&zwnj; ಹಾಗೂ ಇತರ ಪ್ರಯಾಣಿಕ ಸೌಲಭ್ಯಗಳೂ ಲೋಕಾರ್ಪಣೆಗೊಳ್ಳಲಿವೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvf6f3wpq4c0t3rm6xcmjp79,imgname-kumta-railway-station-1781847789462.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ ಜೂ. 20 ರಂದು ಉದ್ಘಾಟನೆಗೊಳ್ಳಲಿದೆ. ಈ ಹೊಸ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದ್ದು, ಕುಮಟಾ ರೈಲು ನಿಲ್ದಾಣದ 2ನೇ ಪ್ಲಾಟ್&zwnj;ಫಾರ್ಮ್&zwnj; ಹಾಗೂ ಇತರ ಪ್ರಯಾಣಿಕ ಸೌಲಭ್ಯಗಳೂ ಲೋಕಾರ್ಪಣೆಗೊಳ್ಳಲಿವೆ.&amp;nbsp;&lt;/p&gt;&lt;img&gt;&lt;p&gt;ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ, ಕುಮಟಾದಲ್ಲಿ 2ನೇ ಪ್ಲಾಟ್&zwnj;ಫಾರ್ಮ್&zwnj; ಹಾಗೂ ಗೋಕರ್ಣ, ಭಟ್ಕಳ ಹಾಗೂ ಮುರ್ಡೇಶ್ವರ ನಿಲ್ದಾಣಗಳಲ್ಲಿ ನಿರ್ಮಿಸಿದ ಪ್ರಯಾಣಿಕ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮ ಜೂ. 20ರಂದು ಮಧ್ಯಾಹ್ನ 2.30ಕ್ಕೆ ಕುಮಟಾ ಕೊಂಕಣ ರೈಲು ನಿಲ್ದಾಣದಲ್ಲಿ ನಡೆಯಲಿದೆ.&lt;/p&gt;&lt;img&gt;&lt;p&gt;ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಸಿಎಂಡಿ ಸಂತೋಷಕುಮಾರ ಝಾ ಹಾಗೂ ಇತರ ಅಧಿಕಾರಿಗಳ ಉಪಸ್ಥಿತರಿರುವರು.ಈ ಕಾರ್ಯಕ್ರಮ ಜನತೆಯ ಪಾಲಿಗೆ ಸಂತಸದ ಹಾಗೂ ಐತಿಹಾಸಿಕ ಕ್ಷಣ ಎಂದು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಬಣ್ಣಿಸಿದೆ.&lt;/p&gt;&lt;img&gt;&lt;p&gt;ಕುಮಟಾದಿಂದ ತಿರುಪತಿಗೆ ನೇರ ರೈಲು ಸಂಪರ್ಕ ಆಗಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರತಿ ಬುಧವಾರ ಮತ್ತು ಶನಿವಾರ ಕುಮಟಾದಿಂದ ಈ ರೈಲು ಸಂಚರಿಸಲಿದ್ದು, ತಿರುಪತಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ಈ ಮಹತ್ವದ ಯೋಜನೆಗೆ ಕಾರಣಕರ್ತರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಂಕಣ ರೈಲ್ವೆ ಸಲಹಾ ಸಮಿತಿಯ ಸದಸ್ಯ ಹಾಗೂ ಶಾಸಕ ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಹಾಗೂ ಅಧಿಕಾರಿಗಳು ಅಭಿನಂದನೀಯರು. ಕುಮಟಾ ರೈಲು ನಿಲ್ದಾಣದ ಎರಡನೇ ಪ್ಲಾಟ್&zwnj;ಫಾರ್ಮ್ ಉದ್ಘಾಟನೆಯಿಂದ ಕುಮಟಾ ನಿಲ್ದಾಣವು ಟರ್ಮಿನಲ್ ಸೌಲಭ್ಯ ಹೊಂದಿದ ಪ್ರಮುಖ ರೈಲು ನಿಲ್ದಾಣವಾಗಿ ಹೊರಹೊಮ್ಮಲಿದ್ದು, ಜಿಲ್ಲೆಯ ರೈಲು ಸಂಪರ್ಕಕ್ಕೆ ಹೊಸ ಆಯಾಮ ದೊರೆಯಲಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾಚಿಗುಡ ರೈಲು ಹೊಸ ಮೈಲಿಗಲ್ಲಾಗಲಿದೆ ಎಂದು ರೈಲ್ವೆ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್ ಗಾಂವ್ಕರ್ ಹೇಳಿದರು. ಕಾಚಿಗುಡ-ತಿರುಪತಿ-ಮಂಗಳೂರು ರೈಲನ್ನು ಮುರ್ಡೇಶ್ವರದ ವರೆಗೆ ವಿಸ್ತರಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಯೋಗ ಸ್ಮರಣೀಯ. ಅದಾದ ಬಳಿಕ ಮುರ್ಡೇಶ್ವರ-ತಿರುಪತಿ-ಕಾಚಿಗುಡ ರೈಲನ್ನು ಕುಮಟಾಕ್ಕೆ ವಿಸ್ತರಿಸುವ ಕನಸನ್ನು ಹೊತ್ತು, ಶಾಸಕ ದಿನಕರ ಶೆಟ್ಟಿ ಅವರು ಕೊಂಕಣ ರೈಲ್ವೆ ಅಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿ, ಅದನ್ನು ಕೇಂದ್ರ ರೈಲ್ವೆ ಇಲಾಖೆಗೆ ರವಾನಿಸಿದ್ದರು.&lt;/p&gt;&lt;img&gt;&lt;p&gt;ಈ ಪ್ರಯತ್ನಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಹಕಾರವೂ ದೊರೆತಿದ್ದರ ಫಲವಾಗಿ ಮುರ್ಡೇಶ್ವರ -ತಿರುಪತಿ ರೈಲು ಕುಮಟಾ ವರೆಗೂ ವಿಸ್ತರಣೆಯಾಗಿ ಉದ್ಘಾಟನೆಗೊಳ್ಳುತ್ತಿದೆ. ಈ ರೈಲು ಹೊನ್ನಾವರ ನಿಲ್ದಾಣದಲ್ಲಿಯೂ ನಿಲುಗಡೆ ಹೊಂದಲು ಶಾಸಕ ದಿನಕರ ಶೆಟ್ಟಿ ಬೇಡಿಕೆ ಇಟ್ಟಿದ್ದಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಿರುಪತಿಯಿಂದ ಹೊರಡುವ ಈ ರೈಲು, ಬುಧವಾರ ಮತ್ತು ಶನಿವಾರ ಕುಮಟಾದಿಂದ ತಿರುಪತಿಗೆ ಪ್ರಯಾಣ ಬೆಳೆಸಲಿದೆ. ಕರಾವಳಿ ಕರ್ನಾಟಕದ ರೈಲು ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ಈ ಯೋಜನೆ ಭವಿಷ್ಯದಲ್ಲಿ ಇನ್ನಷ್ಟು ರೈಲು ಸೇವೆಗಳ ವಿಸ್ತರಣೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 12789/12790 ಕಾಚಿಗುಡ&ndash;ಮುರ್ಡೇಶ್ವರ&ndash;ಕಾಚಿಗುಡ Bi-Weekly ಎಕ್ಸ್&zwnj;ಪ್ರೆಸ್ ರೈಲು ಸೇವೆ ಕುಮಟಾವರೆಗೆ ವಿಸ್ತರಿಸಲಾಗಿದೆ. ಈ ವಿಸ್ತರಿತ ಸೇವೆ ಜೂನ್ 19 ರಿಂದ ಕಾಚಿಗುಡದಿಂದ ಹಾಗೂ ಜೂನ್ 20 ರಿಂದ ಕುಮಟಾದಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.&lt;/p&gt;&lt;p&gt;ರೈಲು ಸಂಚಾರದ ಸಂಪೂರ್ಣ ವೇಳಾಪಟ್ಟಿ ಇಂತಿವೆ: ಕಾಚಿಗುಡದಿಂದ ಕುಮಟಾಕ್ಕೆ (ರೈಲು ಸಂಖ್ಯೆ: 12789) ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹೊರಡಲಿದೆ. ಬೆಳಗ್ಗೆ 6:05ಕ್ಕೆ ರೈಲು ಕಾಚಿಗುಡದಿಂದ ಹೊರಡಲಿದೆ. ಮರುದಿನ ಮಧ್ಯಾಹ್ನ 2:40 ಕ್ಕೆ ಕುಮಟಾ ನಿಲ್ದಾಣವನ್ನು ತಲುಪಲಿದೆ. ಈ ರೈಲು ಮುರ್ಡೇಶ್ವರ ನಿಲ್ದಾಣದಿಂದ ಮಧ್ಯಾಹ್ನ 1:48 ಕ್ಕೆ ಹೊರಟು ಕುಮಟಾ ಕಡೆಗೆ ಪ್ರಯಾಣ ಬೆಳೆಸಲಿದೆ.&lt;/p&gt;&lt;p&gt;ಕುಮಟಾದಿಂದ ಕಾಚಿಗುಡಕ್ಕೆ (ತಿರುಗಿ ಬರುವ ರೈಲು ಸಂಖ್ಯೆ: 12790) ಪ್ರತಿ ಬುಧವಾರ ಮತ್ತು ಶನಿವಾರ ಸಂಚರಿಸಲಿದೆ. ಮಧ್ಯಾಹ್ನ 3:25 ಕ್ಕೆ ಕುಮಟಾದಿಂದ ಈ ರೈಲು ಹೊರಡಲಿದೆ. ಮಾರ್ಗದಲ್ಲಿ ಮುರ್ಡೇಶ್ವರ (ಸಂಜೆ 4:04), ಭಟ್ಕಳ (ಸಂಜೆ 4:20), ಮೂಕಾಂಬಿಕಾ ರೋಡ್ ಬೈಂದೂರು (ಸಂಜೆ 4:37), ಕುಂದಾಪುರ (ಸಂಜೆ 5:04), ಬಾರ್ಕೂರು (ಸಂಜೆ 5:20), ಉಡುಪಿ (ಸಂಜೆ 5:37), ಮಂಗಳೂರು ಸೆಂಟ್ರಲ್ (ರಾತ್ರಿ 8:00) ನಿಲ್ದಾಣದಲ್ಲಿ ನಿಲ್ಲಲಿದ್ದು, ಮರುದಿನ ರಾತ್ರಿ 11:40 ಕ್ಕೆ ಕಾಚಿಗುಡ ನಿಲ್ದಾಣವನ್ನು ತಲುಪಲಿದೆ.&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/kumta-tirupati-kachiguda-train-service-inauguration-konkan-railway-updates-san-vf8t191"/>
        </item>
    </channel>
</rss>
