<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 02 May 2026 21:53:24 +0530</lastBuildDate>
        <atom:link href="https://kannada.asianetnews.com/rss/uttara-kannada" rel="self" type="application/rss+xml"/>
        <item>
            <title><![CDATA[ಧಾರವಾಡದಲ್ಲಿ ಟಿಬೆಟಿಯನ್ ವ್ಯಕ್ತಿಯ ಕಗ್ಗೊಲೆ! ಉತ್ತರ ಕನ್ನಡದ ಮುಂಡಗೋಡ ಮೂಲದ ತಾಶಿ ಧೋಂಡು ಹತ್ಯೆಗೆ ಕಾರಣವೇನು?]]></title>
            <link>https://kannada.asianetnews.com/karnataka-districts/uttara-kannada-mundgod-tibetan-man-found-dead-in-dharwad-gdp/articleshow-1f3k8n2</link>
            <guid isPermaLink="true">https://kannada.asianetnews.com/karnataka-districts/uttara-kannada-mundgod-tibetan-man-found-dead-in-dharwad-gdp/articleshow-1f3k8n2</guid>
            <pubDate>Thu, 30 Apr 2026 11:55:44 +0530</pubDate>
            <description><![CDATA[ಧಾರವಾಡದ ಹೊರವಲಯದಲ್ಲಿ ಮುಂಡಗೋಡ ಮೂಲದ ಟಿಬೆಟಿಯನ್ ವ್ಯಕ್ತಿ ತಾಶಿ ಧೋಂಡು ಅವರ ಶವ ಪತ್ತೆಯಾಗಿದೆ. ಆರಂಭದಲ್ಲಿ ರಸ್ತೆ ಅಪಘಾತವೆಂದು ಭಾವಿಸಲಾಗಿದ್ದರೂ, ವೈದ್ಯಕೀಯ ತಪಾಸಣೆ ಬಳಿಕ ಇದು ಕೊಲೆ ಎಂದು ದೃಢಪಟ್ಟಿದೆ. ಧಾರವಾಡ ಗ್ರಾಮೀಣ ಪೊಲೀಸರು ಹತ್ಯೆಯ ಹಿಂದಿನ ಕಾರಣ ಮತ್ತು ಆರೋಪಿಗಳಿಗಾಗಿ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqegyqqkfxpk0a252jegtwh7,imgname-tibetan-man-murdered-in-dharwad-1777530265331.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ&lt;/strong&gt; ಹೊರವಲಯದಲ್ಲಿ ಟಿಬೆಟಿಯನ್ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡದ ಹಳಿಯಾಳ ರಸ್ತೆಯ ಹೊರವಲಯದಲ್ಲಿ &amp;nbsp;ಏಪ್ರಿಲ್ 29ರ ಮಧ್ಯಾಹ್ನ ರಸ್ತೆ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮೂಲದ ತಾಶಿ ಧೋಂಡು (39) ಎಂದು ಗುರುತಿಸಲಾಗಿದೆ.&lt;/p&gt;&lt;h2&gt;ಕೊಲೆ ಬಳಿಕ ಬೇರೆಡೆ ತಂದು ಎಸೆದು ಹೋದ ಪಾತಕಿಗಳು!&lt;/h2&gt;&lt;p&gt;ಪ್ರಾಥಮಿಕ ಮಾಹಿತಿ ಪ್ರಕಾರ, ತಾಶಿ ಧೋಂಡು ಅವರನ್ನು ಕಳೆದ ರಾತ್ರಿ ಬೇರೆಡೆ ಕೊಲೆ ಮಾಡಿ, ಬಳಿಕ ಶವವನ್ನು ಧಾರವಾಡದ ಹಳಿಯಾಳ ರಸ್ತೆಗೆ ತಂದು ಎಸೆದು ಹೋಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಶವದ ಸ್ಥಿತಿ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ಅವಲೋಕಿಸಿದ ಬಳಿಕ ಈ ಅನುಮಾನಗಳು ಬಲವಾಗಿವೆ.&lt;/p&gt;&lt;h2&gt;ರಸ್ತೆ ಅಪಘಾತ ಎಂದು ಅನುಮಾನ ಆದರೆ ಕೊಲೆ ಎಂಬುದು ದೃಢ!&lt;/h2&gt;&lt;p&gt;ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ ಇದು ರಸ್ತೆ ಅಪಘಾತದಿಂದ ಸಂಭವಿಸಿದ ಸಾವು ಎಂದು ಪೊಲೀಸರು ಭಾವಿಸಿದ್ದರು. ಆದರೆ ಶವವನ್ನು ಆಸ್ಪತ್ರೆಗೆ ರವಾನಿಸಿ ತಪಾಸಣೆ ಹಾಗೂ ವೈದ್ಯಕೀಯ ಪರಿಶೀಲನೆಯ ನಂತರ ಇದು ಹತ್ಯೆ ಪ್ರಕರಣ ಎಂಬುದು ದೃಢಪಟ್ಟಿದೆ.&lt;/p&gt;&lt;p&gt;ಈ ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಹತ್ಯೆಗೆ ಕಾರಣವೇನು, ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸ್ಥಳೀಯರ ಮಾಹಿತಿಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಅಪರಾಧಿಗಳನ್ನು ಶೀಘ್ರ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/uttara-kannada-mundgod-tibetan-man-found-dead-in-dharwad-gdp/articleshow-1f3k8n2"/>
        </item>
        <item>
            <title><![CDATA[ಕೊನೆಗೂ ಅಂಧ ವಿದ್ಯಾರ್ಥಿನಿಗೆ ಅಂಕದ ಬೆಳಕು ನೀಡಿದ SSLC ಬೋರ್ಡ್! ಫೇಲಾದ ಹುಡಗಿಗೆ ಈಗ 603 ಅಂಕ!]]></title>
            <link>https://kannada.asianetnews.com/karnataka-districts/karwar-blind-student-lisa-khanam-sslc-result-corrected-603-marks-out-of-625-sat/articleshow-513glvo</link>
            <guid isPermaLink="true">https://kannada.asianetnews.com/karnataka-districts/karwar-blind-student-lisa-khanam-sslc-result-corrected-603-marks-out-of-625-sat/articleshow-513glvo</guid>
            <pubDate>Fri, 24 Apr 2026 16:46:10 +0530</pubDate>
            <description><![CDATA[&lt;p&gt;ಉತ್ತರ ಕನ್ನಡದ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್, ಪರೀಕ್ಷಾ ಮಂಡಳಿಯ ತಪ್ಪಿನಿಂದಾಗಿ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 'ಗೈರು' ಎಂದು ನಮೂದಿಸಿ ಫೇಲ್ ಆಗಿದ್ದರು. ಮಾಧ್ಯಮಗಳ ವರದಿ ನಂತರ, ಮಂಡಳಿಯು ತಪ್ಪನ್ನು ಸರಿಪಡಿಸಿ ಫಲಿತಾಂಶ ಪ್ರಕಟಿಸಿದ್ದು, ಲೀಸಾ 603 ಅಂಕಗಳನ್ನು ಗಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpzk6scp23c2smvy7hzwvca7,imgname-sirsi-blind-sslc-student-lisa-khanam-1777029309846.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ (ಏ.24): ಕ&lt;/strong&gt;ರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಡವಟ್ಟಿನಿಂದಾಗಿ ಕಣ್ಣೀರು ಹಾಕಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್&zwnj;ಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ಪರೀಕ್ಷೆಗೆ ಹಾಜರಾಗಿದ್ದರೂ 'ಗೈರು' ಎಂದು ನಮೂದಿಸಿ ವಿದ್ಯಾರ್ಥಿನಿಯನ್ನು ಫೇಲ್ ಮಾಡಿದ್ದ ಪರೀಕ್ಷಾ ಪ್ರಾಧಿಕಾರ, ಈಗ ತನ್ನ ತಪ್ಪನ್ನು ಸರಿಪಡಿಸಿಕೊಂಡು ಹೊಸ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಫಲಿತಾಂಶದ ಪ್ರಕಾರ ಲೀಸಾ ಖಾನಮ್ ಬರೋಬ್ಬರಿ 603 ಅಂಕಗಳನ್ನು ಗಳಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ: ಪರೀಕ್ಷಾ ಮಂಡಳಿಯ ಎಡವಟ್ಟು&lt;/strong&gt;&lt;/h3&gt;&lt;p&gt;ಶಿರಸಿಯ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಲೀಸಾ ಖಾನಮ್ ಜನ್ಮಜಾತ ಅಂಧತ್ವ ಹೊಂದಿದ್ದರೂ ಓದಿನಲ್ಲಿ ಅತ್ಯಂತ ಪ್ರತಿಭಾವಂತೆ. ಈ ಬಾರಿ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬರೆದಿದ್ದ ಲೀಸಾ, ಎಲ್ಲಾ ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಗುರುವಾರ ಫಲಿತಾಂಶ ಪ್ರಕಟವಾದಾಗ ಲೀಸಾ ಆಘಾತಕ್ಕೊಳಗಾಗಿದ್ದರು. ಸಮಾಜ ವಿಜ್ಞಾನ (Social Science) ಪರೀಕ್ಷೆಗೆ ಹಾಜರಾಗಿದ್ದರೂ, ಫಲಿತಾಂಶದಲ್ಲಿ 'ಗೈರು' (Absent) ಎಂದು ನಮೂದಿಸಿ ಅವರನ್ನು ಫೇಲ್ ಮಾಡಲಾಗಿತ್ತು.&lt;/p&gt;&lt;h3&gt;&lt;strong&gt;ಕಣ್ಣೀರು ಹಾಕಿದ್ದ ಲೀಸಾ; ಸಾಕ್ಷ್ಯ ನೀಡಿದ ಪ್ರವೇಶ ಪತ್ರ&lt;/strong&gt;&lt;/h3&gt;&lt;p&gt;ಪ್ರಾಧಿಕಾರದ ಈ ಎಡವಟ್ಟಿನಿಂದ ಲೀಸಾ ಮತ್ತು ಅವರ ಪೋಷಕರು ಕಂಗಾಲಾಗಿದ್ದರು. ಆದರೆ ಛಲ ಬಿಡದ ಲೀಸಾ, ತನ್ನ ಪರೀಕ್ಷಾ ಪ್ರವೇಶ ಪತ್ರದ (Hall Ticket) ಮೇಲೆ ಮೇಲ್ವಿಚಾರಕರು ಮಾಡಿದ್ದ ಸಹಿಯನ್ನು ತೋರಿಸಿ ತಾನು ಪರೀಕ್ಷೆಗೆ ಹಾಜರಾಗಿದ್ದನ್ನು ಸಾಬೀತುಪಡಿಸಿದ್ದರು. 84% ಕ್ಕೂ ಅಧಿಕ ಅಂಕ ಗಳಿಸಬೇಕಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಸಣ್ಣ ತಾಂತ್ರಿಕ ದೋಷದಿಂದ ಫೇಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾಧ್ಯಮಗಳಲ್ಲಿ ಈ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪರೀಕ್ಷಾ ಪ್ರಾಧಿಕಾರ ತಕ್ಷಣವೇ ಮೌಲ್ಯಮಾಪನದ ದಾಖಲೆಗಳನ್ನು ಪರಿಶೀಲಿಸಿತು.&lt;/p&gt;&lt;h2&gt;&lt;strong&gt;ಈಗ ಲೀಸಾ ಜಿಲ್ಲೆಗೆ ಟಾಪರ್!&lt;/strong&gt;&lt;/h2&gt;&lt;p&gt;ಪರೀಕ್ಷಾ ಪ್ರಾಧಿಕಾರವು ಈಗ ತನ್ನ ತಪ್ಪನ್ನು ಸರಿಪಡಿಸಿಕೊಂಡು ಲೀಸಾ ಖಾನಮ್ ಅವರ ಪರಿಷ್ಕೃತ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಫಲಿತಾಂಶದಲ್ಲಿ ಲೀಸಾ 625 ಕ್ಕೆ 603 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಅಂಧ ವಿದ್ಯಾರ್ಥಿಗಳ ಪೈಕಿ ಲೀಸಾ ಖಾನಮ್ ಇದೀಗ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಇನ್ನು ಫೇಲಾಗಿದ್ದ ವಿಷಯ ಸಮಾಜ ವಿಜ್ಞಾನ ವಿಷಯದಲ್ಲಿ ಅವರಿಗೆ 97 ಅಂಕಗಳು ಲಭಿಸಿವೆ.&lt;/p&gt;&lt;h3&gt;&lt;strong&gt;ಲೀಸಾ ಖಾನಮ್ ಅವರ ಅಂಕಗಳ ವಿವರ:&lt;/strong&gt;&lt;/h3&gt;&lt;ul&gt; &lt;li&gt;ಕನ್ನಡ: 100/100&lt;/li&gt; &lt;li&gt;ಉರ್ದು : 124&lt;/li&gt; &lt;li&gt;ಇಂಗ್ಲಿಷ್: 92&lt;/li&gt; &lt;li&gt;ಎಕನಾಮಿಕ್ಸ್: 98&lt;/li&gt; &lt;li&gt;ಪೊಲಿಟಿಕಲ್ ಸೈನ್ಸ್: 92&lt;/li&gt; &lt;li&gt;ಸಮಾಜ ವಿಜ್ಞಾನ: 97&lt;/li&gt; &lt;li&gt;&lt;strong&gt;ಒಟ್ಟು ಅಂಕಗಳು: 603 / 625&lt;/strong&gt;&lt;/li&gt;&lt;/ul&gt;&lt;p&gt;ತಾನು ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂದು ತಿಳಿದಾಗ ಮರುಗಿದ್ದ ಲೀಸಾ, ಈಗ 603 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದನ್ನು ಕಂಡು ಪೋಷಕರು ಮತ್ತು ಶಾಲೆಯ ಶಿಕ್ಷಕರು ಸಂಭ್ರಮಿಸಿದ್ದಾರೆ. ದೃಷ್ಟಿ ಇಲ್ಲದಿದ್ದರೂ ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು ಎಂಬುದನ್ನು ಲೀಸಾ ತೋರಿಸಿಕೊಟ್ಟಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಬೇಕಿದ್ದ ಪ್ರತಿಭೆಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karwar-blind-student-lisa-khanam-sslc-result-corrected-603-marks-out-of-625-sat/articleshow-513glvo"/>
        </item>
        <item>
            <title><![CDATA[ಯಮಲೋಕಕ್ಕೆ ರಹದಾರಿಯಾದ ಶಿರಸಿ-ಹಾವೇರಿ ರೋಡ್: ಗುತ್ತಿಗೆದಾರರೇ ಕಾರಣ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ]]></title>
            <link>https://kannada.asianetnews.com/karnataka-districts/sirsi-hubballi-highway-delay-vishweshwar-hegde-kageri-statement-bjp-gvd/articleshow-55m2uxe</link>
            <guid isPermaLink="true">https://kannada.asianetnews.com/karnataka-districts/sirsi-hubballi-highway-delay-vishweshwar-hegde-kageri-statement-bjp-gvd/articleshow-55m2uxe</guid>
            <pubDate>Wed, 22 Apr 2026 18:40:40 +0530</pubDate>
            <description><![CDATA[&lt;p&gt;ಅಧಿಕಾರಿಗಳ ಸಮರ್ಥ ನಿರ್ವಹಣೆ ಮಾಡುವಲ್ಲಿ ವಿಫಲರಾಗಿರುವುದರಿಂದ ಶಿರಸಿ-ಹುಬ್ಬಳ್ಳಿ ಮತ್ತು ಹಾವೇರಿ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ ಮಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h67y1r2t8h0g90djg405yrrn,imgname-kageri.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿರಸಿ (ಏ.22): &lt;/strong&gt;ಗುತ್ತಿಗೆದಾರರು, ಅಧಿಕಾರಿಗಳ ಸಮರ್ಥ ನಿರ್ವಹಣೆ ಮಾಡುವಲ್ಲಿ ವಿಫಲರಾಗಿರುವುದರಿಂದ ಶಿರಸಿ-ಹುಬ್ಬಳ್ಳಿ ಮತ್ತು ಹಾವೇರಿ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ ಮಾಡಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಕ್ಷೇತ್ರದ ಸಂಸದನಾಗಿ ಎಲ್ಲಾ ರೀತಿಯಿಂದಲೂ ಏನು ಮಾಡಬೇಕು ಅದನ್ನು ನಾನು ಮಾಡಿದ್ದೇನೆ. ಈ ವಿಷಯದ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆಯಲ್ಲಿ ಚರ್ಚಿಸಲಾಗಿದೆ.&lt;/p&gt;&lt;p&gt;ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೇವೆ. ಸುಮಾರು 8 ಈಗಾಗಲೇ ಕಿಲೋಮೀಟರ್ ಜಲ್ಲಿ ಕಲ್ಲು ಹಾಕಿ ನಿರ್ಮಾಣ ಮಾಡಿರುವ ರಸ್ತೆಗೆ ಮೇ ತಿಂಗಳ ಅಂತ್ಯದೊಳಗಾಗಿ ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸುಗಮವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕೆಂದು ಈಗಾಗಲೇ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಮಹಿಳೆಯರಿಗೆ ಅವಮಾನ&lt;/strong&gt;&lt;/h2&gt;&lt;p&gt;ಮಹಿಳೆಯರ ಮೀಸಲಾತಿ ಕಸಿದುಕೊಂಡ ಇಂಡಿಯಾ ತಂಡಕ್ಕೆ ಮಹಿಳೆಯರ ಬಗ್ಗೆ ಕಿಂಚಿತ್ತು ಗೌರವ ಇಲ್ಲ. ಒಂದು ಕಡೆ ಮಹಿಳೆಯರನ್ನು ಎತ್ತಿ ಕಟ್ಟುವುದು ಇನ್ನೊಂದು ಕಡೆ ಮಹಿಳೆಯರನ್ನು ಕಡೆಗಣಿಸುವುದು ಮೊದಲಿನಿಂದಲೂ ಅವರ ಖಯಾಲಿ ಆಗಿದೆ ಎಂದು ಹೇಳಿದರು.&lt;/p&gt;&lt;p&gt;ಕಾಂಗ್ರೆಸ್ ನೇತೃತ್ವದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮತ್ತು ಅವರ ಮಿತ್ರ ಪಕ್ಷಗಳ ತಂಡ ಬಿಲ್ ಪರವಾಗಿ ಮತ ಹಾಕದೆ ಮಹಿಳೆಯರಿಗೆ, ಸಂಸತ್ತಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನೆಲ್ಲ ಕಾಂಗ್ರೆಸ್ ಹಾಗೂ ಇಂಡಿಯಾ ತಂಡ ವಿರೋಧಿಸುತ್ತಾ ಬಂದಿದೆ ಎಂದರು.&lt;/p&gt;]]></content:encoded>
            <category>uttara-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sirsi-hubballi-highway-delay-vishweshwar-hegde-kageri-statement-bjp-gvd/articleshow-55m2uxe"/>
        </item>
        <item>
            <title><![CDATA[Karwar: ಪತ್ನಿ ಮದ್ಯ ತಂದುಕೊಡದ್ದಕ್ಕೆ ಮನನೊಂದು ಆಟೋ ಚಾಲಕ ನೇಣಿಗೆ ಶರಣು]]></title>
            <link>https://kannada.asianetnews.com/crime/karwar-man-su-icide-alcohol-addiction-wife-refusal-case-gvd/articleshow-7keekpl</link>
            <guid isPermaLink="true">https://kannada.asianetnews.com/crime/karwar-man-su-icide-alcohol-addiction-wife-refusal-case-gvd/articleshow-7keekpl</guid>
            <pubDate>Sat, 02 May 2026 21:53:18 +0530</pubDate>
            <description><![CDATA[&lt;p&gt;ಮದ್ಯಪಾನದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದ ನಡುವೆಯೂ ಪತ್ನಿ ಮದ್ಯ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಕದ್ರಾದಲ್ಲಿ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5p48hs215m8hwn7vvxgyt5p,imgname-fotojet---2025-09-21t180335.851-1758458038050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ (ಮೇ.02): &lt;/strong&gt;ಮದ್ಯಪಾನದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದ ನಡುವೆಯೂ ಪತ್ನಿ ಮದ್ಯ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಕದ್ರಾದಲ್ಲಿ ಸಂಭವಿಸಿದೆ. ಕದ್ರಾದ ಚರ್ಚ್&zwnj;ವಾಡ ನಿವಾಸಿ, ಆಟೋ ರಿಕ್ಷಾ ಚಾಲಕ ಡುಮಿಂಗ್ ಮನ್ವೇಲ್ ರೊಡ್ರಿಗಿಸ್ (49) ಮೃತಪಟ್ಟ ದುರ್ದೈವಿ.&lt;/p&gt;&lt;p&gt;ಮೃತ ಡುಮಿಂಗ್ ಅವರು ಕಳೆದ ದೀರ್ಘಕಾಲದಿಂದ ವಿಪರೀತ ಮದ್ಯಪಾನದ ಚಟ ಹೊಂದಿದ್ದರು. ಅತಿಯಾದ ಮದ್ಯಪಾನದಿಂದಾಗಿ ಅವರ ಲಿವರ್&zwnj;ಗೆ ಸೋಂಕು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕುರ್ನಿಪೇಟೆಯ ಆಯುರ್ವೇದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ಪರೀಕ್ಷಿಸಿ, ಮದ್ಯಪಾನ ಮುಂದುವರಿಸಿದರೆ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿ, ಕುಡಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.&lt;/p&gt;&lt;h2&gt;&lt;strong&gt;ಮನನೊಂದು ಜೀವತ್ಯಾಗ&lt;/strong&gt;&lt;/h2&gt;&lt;p&gt;ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಡುಮಿಂಗ್ ಅವರಿಗೆ ಮದ್ಯದ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಅವರು ತಮ್ಮ ಪತ್ನಿ ಅನಿತಾ ನಜರೇತ್ ಅವರಿಗೆ ತನಗೆ ಮದ್ಯ ತಂದುಕೊಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಪತಿಯ ಆರೋಗ್ಯ ಹದಗೆಡಬಾರದೆಂಬ ಕಳಕಳಿಯಿಂದ ಪತ್ನಿ ಮದ್ಯ ತಂದುಕೊಡಲು ನಿರಾಕರಿಸಿದ್ದರು. ಇದೇ ವಿಚಾರವಾಗಿ ಬೇಸರಗೊಂಡಿದ್ದ ಡುಮಿಂಗ್, ಶುಕ್ರವಾರ ಬೆಳಗಿನ ಜಾವ ಆಸ್ಪತ್ರೆಯಿಂದ ಯಾರಿಗೂ ತಿಳಿಸದೆ ಕದ್ರಾದಲ್ಲಿದ್ದ ತಮ್ಮ ಮನೆಗೆ ಬಂದಿದ್ದಾರೆ.&lt;/p&gt;&lt;p&gt;ಶುಕ್ರವಾರ ಬೆಳಗಿನ ಜಾವ 2ರಿಂದ 6.45ರ ಅವಧಿಯಲ್ಲಿ ಮನೆಗೆ ಬಂದ ಡುಮಿಂಗ್, ಮನೆಯ ಎದುರಿನ ಅಂಗಳದಲ್ಲಿ ಹಾಕಲಾಗಿದ್ದ ಶೆಡ್&zwnj;ನ ಜಂತಿಗೆ ಕೇಬಲ್ ವೈರ್&zwnj;ನಿಂದ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.&lt;/p&gt;]]></content:encoded>
            <category>uttara-kannada</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/karwar-man-su-icide-alcohol-addiction-wife-refusal-case-gvd/articleshow-7keekpl"/>
        </item>
        <item>
            <title><![CDATA[ಉತ್ತರ ಕನ್ನಡ: ಈ ಹಿಂದೆ ಕಿಡ್ನಾಪ್ ಆಗಿ ಬಚಾವ್ ಆಗಿದ್ದ ಪೈನಾನ್ಶಿಯರ್ ಹೊಟೇಲ್ ಅಡುಗೆ ಕೋಣೆಯಲ್ಲಿ ಭೀಕರ ಹತ್ಯೆ!]]></title>
            <link>https://kannada.asianetnews.com/karnataka-districts/uttara-kannada-news-brutal-murder-in-mundgod-finance-dealer-zamir-ahmed-dargawale-killed-in-hotel-attack-gdp/articleshow-8fzhs54</link>
            <guid isPermaLink="true">https://kannada.asianetnews.com/karnataka-districts/uttara-kannada-news-brutal-murder-in-mundgod-finance-dealer-zamir-ahmed-dargawale-killed-in-hotel-attack-gdp/articleshow-8fzhs54</guid>
            <pubDate>Sat, 25 Apr 2026 10:46:44 +0530</pubDate>
            <description><![CDATA[ಉತ್ತರ ಕನ್ನಡದ ಮುಂಡಗೋಡ ಪಟ್ಟಣದಲ್ಲಿ, ಪೈನಾನ್ಸ್ ವ್ಯವಹಾರಸ್ಥ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ಹೋಟೆಲ್&zwnj;ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಏಪ್ರಿಲ್ 24ರ ರಾತ್ರಿ ನಡೆದ ಈ ಘಟನೆಯಲ್ಲಿ, ದುಷ್ಕರ್ಮಿಗಳು ಖಾರದ ಪುಡಿ ಎರಚಿ, ಮಚ್ಚಿನಿಂದ ಇರಿದು ಕೊಲೆಗೈದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq1h0pzmf7m5g8bw07zrpaj6,imgname-mundgod-murder-case-1777094122484.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣವು ಭಯ ಹುಟ್ಟಿಸುವಂತಿದೆ. ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೋಟೆಲ್&zwnj;ನಲ್ಲಿ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆಗೈದಿದ್ದಾರೆ.&lt;/p&gt;&lt;h2&gt;ಸ್ನೇಹಿತನೊಂದಿಗೆ ಊಟಕ್ಕೆ ಬಂದಾಗ ಟಾರ್ಗೆಟ್&lt;/h2&gt;&lt;p&gt;ಏಪ್ರಿಲ್ 24ರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ, ಜಮೀರ್ ಅಹ್ಮದ್ ತಮ್ಮ ಸ್ನೇಹಿತನೊಂದಿಗೆ ಊಟಕ್ಕೆ ಹೋಟೆಲ್&zwnj;ಗೆ ಬಂದಿದ್ದರು. ಈ ವೇಳೆ ಸ್ನೇಹಿತನನ್ನು ಸಿಗರೇಟ್ ತರಲು ಹೊರಗೆ ಕಳುಹಿಸಿದ್ದಾಗ, ನಾಲ್ಕೈದು ಮಂದಿ ದುಷ್ಕರ್ಮಿಗಳು ಏಕಾಏಕಿ ಹೋಟೆಲ್&zwnj;ಗೆ ನುಗ್ಗಿದ್ದಾರೆ. ಮೊದಲು ಜಮೀರ್ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ನಂತರ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಜಮೀರ್ ಹೋಟೆಲ್&zwnj;ನ ಅಡುಗೆಮನೆಯ ಕಡೆಗೆ ಓಡಲು ಯತ್ನಿಸಿದರೂ, ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಹಿಡಿದುಕೊಂಡು, ಹರಿತವಾದ ಮಚ್ಚಿನಿಂದ ಕುತ್ತಿಗೆಗೆ ಗಂಭೀರವಾಗಿ ಇರಿದು ಕೊಲೆಗೈದಿದ್ದಾರೆ. ಇದಲ್ಲದೆ, ಗುಂಡು ಹಾರಿಸಿದ ಶಂಕೆಯೂ ವ್ಯಕ್ತವಾಗಿದೆ. ಘಟನೆ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.&lt;/p&gt;&lt;p&gt;ಈ ಭೀಕರ ದಾಳಿಯಿಂದ ಬೆಚ್ಚಿಬಿದ್ದ ಹೋಟೆಲ್ ಮಾಲೀಕರು ತಕ್ಷಣ ಸ್ಥಳದಿಂದ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;ಈ ಹಿಂದೆ ಹಣಕ್ಕಾಘಿ ಕಿಡ್ನಾಪ್&lt;/h2&gt;&lt;p&gt;ಪ್ರಾಥಮಿಕ ಮಾಹಿತಿಯ ಪ್ರಕಾರ, ಜಮೀರ್ ಅಹ್ಮದ್ ಪೈನಾನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು ಒಂದೂವರೆ ವರ್ಷಗಳ ಹಿಂದೆ ಅವರನ್ನು ಹಣಕ್ಕಾಗಿ ಅಪಹರಣ ಮಾಡಲಾಗಿತ್ತು. ಆಗ ಸುಮಾರು 30 ಲಕ್ಷ ರೂ. ಹಣಕ್ಕಾಗಿ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಆದರೆ, ಮುಂಡಗೋಡ ಪೊಲೀಸರು ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬಂಧಿಸಿ ಜಮೀರ್ ಅವರನ್ನು ರಕ್ಷಿಸಿದ್ದರು.&lt;/p&gt;&lt;p&gt;ಈ ಹಿಂದಿನ ಘಟನೆ ಮತ್ತು ಪ್ರಸ್ತುತ ಹತ್ಯೆ ನಡುವೆ ಯಾವುದೇ ಸಂಪರ್ಕವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಂತಕರ ಪತ್ತೆಗೆ ಈಗಾಗಲೇ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಕ್ರೂರ ಹತ್ಯೆ ಪ್ರಕರಣವು ಮುಂಡಗೋಡ ಪಟ್ಟಣದಲ್ಲಿ ಭೀತಿಯ ವಾತಾವರಣ ನಿರ್ಮಾಣ ಮಾಡಿದ್ದು, ಜನರಲ್ಲಿ ಭದ್ರತೆ ಕುರಿತು ಆತಂಕ ಹೆಚ್ಚಿಸಿದೆ. ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/uttara-kannada-news-brutal-murder-in-mundgod-finance-dealer-zamir-ahmed-dargawale-killed-in-hotel-attack-gdp/articleshow-8fzhs54"/>
        </item>
        <item>
            <title><![CDATA[Sirsi Haveri Road: ತೆರಿಗೆ ನಮ್ಮದು, ಗುಂಡಿ ನಿಮ್ಮದು; ಕೆಸರಲ್ಲಿ ಹೂತುಹೋದ ಆಳುವವರ ಮಾನ-ಮರ್ಯಾದೆ!]]></title>
            <link>https://kannada.asianetnews.com/karnataka-districts/sirsi-haveri-hubli-national-road-highway-update-2026-rain-turned-the-field-muddy/articleshow-8z9p8cp</link>
            <guid isPermaLink="true">https://kannada.asianetnews.com/karnataka-districts/sirsi-haveri-hubli-national-road-highway-update-2026-rain-turned-the-field-muddy/articleshow-8z9p8cp</guid>
            <pubDate>Sat, 25 Apr 2026 21:27:55 +0530</pubDate>
            <description><![CDATA[&lt;p&gt;Sirsi Haveri Road: ಶಿರಸಿ-ಹಾವೇರಿ ರಸ್ತೆಯನ್ನು ಮೇ 30 ರೊಳಗಡೆ ಮುಗಿಸಿಕೊಡೋದಾಗಿ ಹೇಳಿದ್ದಾರೆ, ಆದರೆ ಈಗ ಒಂದು ಮಳೆಗೆ ರಸ್ತೆ ಮಾತ್ರ ಕೆಸರುಗದ್ದೆಯಾಗಿದೆ. ಈ ಬಾರಿ ರಸ್ತೆ ಕಂಪ್ಲೀಟ್&zwnj; ಆಗಿಲ್ಲ ಅಂದ್ರೆ ಮಾತ್ರ ಜನರು ಸುಮ್ಮನೆ ಇರೋದಿಲ್ಲ. ಆದರೆ ಈಗ ಬಂದ ಒಂದು ಮಳೆಗೆ ರಸ್ತೆ ಮಾತ್ರ ಗದ್ದೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq2nffpcq5j3n2fx4bfxe0gz,imgname-new-project---2026-04-25t211733.827-1777132355276.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೆಲೋ.. ಇದು ಶಿರಸಿ ಹಾವೇರಿ ರಸ್ತೆ..ದಯವಿಟ್ಟು ಕೆಸರು ಗದ್ದೆ ಅಂತ ಮಾತ್ರ ತಪ್ಪು ತಿಳಿಬೇಡು. ಹೌದು, ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಯಲ್ಲೇ ರಸ್ತೆಯಿದೆಯೋ ತಿಳಿಯುತ್ತಿಲ್ಲ. ಇನ್ನೊಂದು ಕಡೆ ಕಂಬಳಕ್ಕೆ ರೆಡಿಯಾದ ಗದ್ದೆಯಾ ಅಂತಕೂ ಅನಿಸಿರಬಹುದು. ಹೌದು, ನಿಮಗೂ ಇದೇ ಡೌಟ್&zwnj; ಬಂದಿದೆ ಎಂದು ಅರ್ಥ ಆಗ್ತಿದೆ. ತೆರಿಗೆ ಕಟ್ಟುವ ಜನರಿಗೆ 'ಯಮಲೋಕದ ಟಿಕೆಟ್' ಕೊಡುವಂತೆ ಕಾಣ್ತಿದೆ.&lt;/p&gt;&lt;h2&gt;ಸಾರ್ವಜನಿಕರಿಗೆ ನಿತ್ಯ ನರಕ ದರ್ಶನ&lt;/h2&gt;&lt;p&gt;ನಿಜಕ್ಕೂ ಇದು ಶಿರಸಿ-ಹಾವೇರಿ ರಸ್ತೆಯಲ್ಲ, ಮೃತ್ಯುಕೂಪಕ್ಕೆ ತೆರೆದ ಹೆಬ್ಬಾಗಿಲು! ಐದು ವರ್ಷಗಳ ಆಮೆಗತಿಯ ಕಾಮಗಾರಿ ಈ ಹಂತದಲ್ಲಿದೆ. ಸರ್ಕಾರದ ಪಾಲಿಗೆ ಇದು ಕೇವಲ ರಸ್ತೆ ಕಾಮಗಾರಿ ಇರಬಹುದು, ಗುತ್ತಿಗೆದಾರರಿಗೆ ಇದು ಟೆಂಡರ್&zwnj; ಆಗಿರಬಹುದು. ಆದರೆ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ. ಇಲ್ಲಿಯ ಸಾರ್ವಜನಿಕರಿಗೆ ಇದು ನಿತ್ಯ ನರಕ ದರ್ಶನ. ಶಿರಸಿ ಹಾವೇರಿ ರಸ್ತೆ ಈಗ ಗದ್ದೆಯೂ ಹೌದು, ಯಮಲೋಕದ ಹಾದಿಯೂ ಹೌದು!&lt;/p&gt;&lt;h2&gt;ಧೂಳಿನಲ್ಲಿ ರಸ್ತೆ ಕಾಣಿಸೋದಿಲ್ಲ!&lt;/h2&gt;&lt;p&gt;ಮಳೆಗಾಲ ಹತ್ತಿರ ಬರುತ್ತಿದ್ದಂತೆ ರಸ್ತೆ ಅಗಲೀಕರಣ ಮಾಡಲಾಗಿದೆ, ಎಲ್ಲೆಲ್ಲೂ ಧೂಳು, ಜಲ್ಲಿಕಲ್ಲು. ನಿತ್ಯ ಇಲ್ಲಿ ಬಸ್&zwnj;ಗಳು, ಕಾರ್&zwnj;ಗಳು, ಲಾರಿ, ಟ್ರ್ಯಾಕ್ಟರ್&zwnj;ಗಳು ಓಡಾಡುತ್ತವೆ. ಚಳಿಗಾಲದಲ್ಲಿ ಇಬ್ಬನಿಯಿಂದ ರಸ್ತೆ ಕಾಣಿಸೋದಿಲ್ಲ, ಈಗ ಬೇಸಿಗೆಕಾಲದಲ್ಲಿ ಧೂಳಿನಿಂದ ರಸ್ತೆ ಕಾಣಿಸುತ್ತಿಲ್ಲ. ಶಿರಸಿ-ಹಾವೇರಿ ರಸ್ತೆಯ ಕಾಮಗಾರಿ ನಿಧಾನ ಆಗಲು ಗುತ್ತಿಗೆದಾರರು ಕಾರಣ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. ಆದರೆ ಇಷ್ಟುದಿನ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎನ್ನೋದು ಈಗ ಇರುವ ಪ್ರಶ್ನೆ.&lt;/p&gt;&lt;h2&gt;ಮಳೆಗಾಲ ಶುರು ಆದಾಗ ಕೆಲಸ ಮಾಡೋದು ಟ್ರಿಕ್&lt;/h2&gt;&lt;p&gt;ಮಳೆಗಾಲ ಹತ್ತಿರ ಇದೆ ಎಂದಾಗ ರಸ್ತೆ ಕೆಲಸ ಶುರು ಮಾಡೋದು, ಆಮೇಲೆ ಮಳೆಗಾಲ ಎಂದು ಕೆಲಸ ನಿಲ್ಲಿಸೋದು ರೂಢಿಯಾಗಿಬಿಟ್ಟಿದೆ. ಆದರೆ ಜನರು ಮಾತ್ರ ನಿತ್ಯ ಶಾಪ ಹಾಕುತ್ತಲೇ ದಿನ ಕಳೆಯುತ್ತಿದ್ದಾರೆ. ಇಲ್ಲಿ ಓಡಾಡುವ ವಾಹನಗಳು ವರ್ಷದಲ್ಲಿ ಆರು ತಿಂಗಳು ಗ್ಯಾರೇಜ್&zwnj;ನಲ್ಲಿ ಬಿದ್ದಿರುತ್ತವೆ. ಇನ್ನು ಇಲ್ಲಿನ ಜನರಂತೂ ತಿಂಗಳಲ್ಲಿ ಹತ್ತು ದಿನ ಆಸ್ಪತ್ರೆ ಮುಂದೆ ನಿಂತಿರುತ್ತಾರೆ.&lt;/p&gt;&lt;h2&gt;ಜನರ ಆಕ್ರೋಶ&lt;/h2&gt;&lt;p&gt;ಈ ಬಾರಿ ರಸ್ತೆ ಮಾಡಿಕೊಟ್ಟಿಲ್ಲ ಅಂದ್ರೆ ರಸ್ತೆಯನ್ನು ಬಂದ್&zwnj; ಮಾಡ್ತೀವಿ, ದೊಡ್ಡ ದೊಡ್ಡ ಹೊಂಡ ಹೊಡೆದು ಇಡ್ತೀವಿ, ಜೈಲಿಗೆ ಹೋದರೂ ಚಿಂತೆ ಇಲ್ಲ ಎಂದು ಜನರು ಹೇಳುತ್ತಿದ್ದಾರೆ ಎಂದರೆ ತಪ್ಪು, ಅಕ್ಷರಶಃ ರೊಚ್ಚಿಗೆದ್ದಿದ್ದಾರೆ. ಒಟ್ಟಿನಲ್ಲಿ ಜನರಿಗೂ ಈ ಸರ್ಕಾರದ ಭರವಸೆ ಮಾತು ಕೇಳಿ ಸಾಕಾಗಿದೆ.&lt;/p&gt;&lt;h2&gt;ಕುಂಟು ನೆಪಗಳು&lt;/h2&gt;&lt;p&gt;ಗುತ್ತಿಗೆದಾರರು ಸರಿ ಇಲ್ಲ, ಇವರಿಂದಲೇ ರಸ್ತೆ ಕಾಮಗಾರಿ ಆಗುತ್ತಿಲ್ಲ ಎಂದು ಸಂಸದರು ಕಾರಣ ಕೊಡ್ತಾರೆ, ಇನ್ನೊಂದು ಕಡೆ ಇರಾನ್&zwnj; ಇಸ್ರೇಲ್ ಯುದ್ಧದಿಂದ&zwnj; ಡಾಂಬರು ಇಲ್ಲ ಎನ್ನುತ್ತಾರೆ.&lt;/p&gt;&lt;p&gt;ಪಂಚವಾರ್ಷಿಕ ಯೋಜನೆಗಳು ಮುಗಿದರೂ ಕೂಡ ಈ ರಸ್ತೆ ಮುಗಿದಿಲ್ಲ. ಮಳೆಗೆ ಕೆಸರುಮಯವಾಗಿರುವ ಈ ಹಾದಿಯಲ್ಲಿ ಓಡಾಡುವುದು ಸಾಹಸವಲ್ಲ, ಸಾವಿನೊಂದಿಗೆ ಸರಸವಾಗಿದೆ. ಅಧಿಕಾರಿಗಳೇ ಕಣ್ಣು ಬಿಡಿ! ಮಳೆಯ ನೀರಲ್ಲಿ ರಸ್ತೆ ಮುಳುಗಿಲ್ಲ, ಜನರ ನಂಬಿಕೆ ಮುಳುಗಿದೆ. ಇನ್ನು ಜನರು ಮಾತ್ರ ಸುಮ್ಮನೆ ಇರೋದಿಲ್ಲ, ಇದು ಪ್ರಜಾಪ್ರಭುತ್ವದ ಪ್ರಭುಗಳ ವಿನಂತಿ ಅಲ್ಲ, ಆರ್ಡರ್.&zwnj;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/sirsi-haveri-hubli-national-road-highway-update-2026-rain-turned-the-field-muddy/articleshow-8z9p8cp"/>
        </item>
        <item>
            <title><![CDATA[ಕಾರವಾರ ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಕೊಲೆ ಕೇಸ್: ಐವರ ಬಂಧನ! ಸುಪಾರಿ ಕೊಟ್ಟಿದ್ದು ಹಳೆ ವೈರಿ 'ಮಂಜ್ಯಾ']]></title>
            <link>https://kannada.asianetnews.com/karnataka-districts/karwar-zameer-ahmed-murder-case-manjunath-arrested-supari-killing-sat/articleshow-9gyq8he</link>
            <guid isPermaLink="true">https://kannada.asianetnews.com/karnataka-districts/karwar-zameer-ahmed-murder-case-manjunath-arrested-supari-killing-sat/articleshow-9gyq8he</guid>
            <pubDate>Sun, 26 Apr 2026 20:21:58 +0530</pubDate>
            <description><![CDATA[ಉತ್ತರ ಕನ್ನಡದ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆಕೋರ ಜಮೀರ್ ಅಹ್ಮದ್&zwnj;ನನ್ನು ವೃತ್ತಿ ವೈಷಮ್ಯಕ್ಕಾಗಿ ಸುಪಾರಿ ಕೊಟ್ಟು ಕೊಲೆ ಮಾಡಲಾಗಿದೆ. ಈ ಪ್ರಕರಣದ ಮಾಸ್ಟರ್&zwnj;ಮೈಂಡ್ ಮಂಜುನಾಥ್&zwnj;ನ ಸಂಚಿನಂತೆ ಕೃತ್ಯ ಎಸಗಲಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬೆಂಗಳೂರಿನ ಬಳಿ ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq54bqk0c3b45xzw3nttxtta,imgname-karwar-zameer-durgawale-murder-1777215069792.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ (ಏ.26): ಉ&lt;/strong&gt;ತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣದ ಸುರುಳಿ ಈಗ ಬಿಚ್ಚಿಕೊಂಡಿದೆ. ಬಡ್ಡಿ ದಂಧೆಯ ವೃತ್ತಿ ವೈಷಮ್ಯಕ್ಕಾಗಿ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನ ನೆಲಮಂಗಲ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ:&lt;/strong&gt;&lt;/h3&gt;&lt;p&gt;ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಮೀಟರ್ ಬಡ್ಡಿ ದಂಧೆಕೋರ ಕಾಜಗಾರ ಮಂಜುನಾಥ್ ಅಲಿಯಾಸ್ ಮಂಜ್ಯಾ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮುಂಡಗೋಡಿನ ನಿವಾಸಿಯಾಗಿದ್ದ ಮಂಜುನಾಥ್, ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಹರ್ಷ ಎಂಬುವವರ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಮಂಜುನಾಥ್ ಕೂಡ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದನು. ಆದರೆ ಜಮೀರ್ ಅಹ್ಮದ್ ಬೆಳೆಯುತ್ತಿದ್ದ ರೀತಿ ಮತ್ತು ಆತನ ಹಾವಳಿ ಮಂಜುನಾಥ್&zwnj;ನ ದಂಧೆಗೆ ಅಡ್ಡಿಯಾಗಿತ್ತು.&lt;/p&gt;&lt;h3&gt;&lt;strong&gt;ಜಮೀರ್ ದರ್ಪಕ್ಕೆ ಮುಂಡಗೋಡ ಬಿಟ್ಟಿದ್ದ ಮಂಜ್ಯಾ:&lt;/strong&gt;&lt;/h3&gt;&lt;p&gt;ಜಮೀರ್ ಅಹ್ಮದ್ ದರ್ಗಾವಾಲೆ ಮುಂಡಗೋಡಿನಲ್ಲಿ ಅಕ್ಷರಶಃ ದರ್ಬಾರ್ ನಡೆಸುತ್ತಿದ್ದನು. ಮಂಜುನಾಥ್ ಜೊತೆ ಕೆಲಸ ಮಾಡುತ್ತಿದ್ದ ಹುಡುಗರನ್ನು ಜಮೀರ್ ತನ್ನತ್ತ ಸೆಳೆದುಕೊಂಡಿದ್ದನು. ಅಲ್ಲದೆ, ಮಂಜುನಾಥ್ ನಡೆಸುತ್ತಿದ್ದ ದಂಧೆಗಳಿಗೆ ಅಡ್ಡಗಾಲು ಹಾಕುತ್ತಿದ್ದನು. ಜಮೀರ್ ನೀಡುತ್ತಿದ್ದ ನಿರಂತರ ಕಿರುಕುಳ ತಾಳಲಾರದೆ ಮಂಜುನಾಥ್ ತನ್ನ ಊರಾದ ಮುಂಡಗೋಡನ್ನು ಬಿಟ್ಟು ಹುಬ್ಬಳ್ಳಿಗೆ ಶಿಫ್ಟ್ ಆಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಮಂಜುನಾಥ್ ಮನಸ್ಸಿನಲ್ಲಿ ಜಮೀರ್ ವಿರುದ್ಧ ತೀವ್ರ ದ್ವೇಷ ಹುಟ್ಟುಹಾಕಿತ್ತು.&lt;/p&gt;&lt;h2&gt;&lt;strong&gt;ಬಡ್ಡಿ ದಂಧೆಯ ಕರಾಳ ಮುಖ:&lt;/strong&gt;&lt;/h2&gt;&lt;p&gt;ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಂ. ನಾರಾಯಣ್ ಅವರು ವರ್ಗಾವಣೆಯಾದ ಬಳಿಕ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆಯ ಹಾವಳಿ ಮಿತಿಮೀರಿತ್ತು. ಜಮೀರ್ ಅಹ್ಮದ್ ಸುಮಾರು 300ಕ್ಕೂ ಹೆಚ್ಚು ಜನರ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಿಸಿ ಹಣ ವಸೂಲಿ ಮಾಡುತ್ತಿದ್ದನು. ಈ ದಂಧೆಯ ಮೂಲಕ ಜಮೀರ್ ಕೋಟ್ಯಂತರ ರೂಪಾಯಿ ಹಣ ಮಾಡುತ್ತಿರುವುದು ಹುಬ್ಬಳ್ಳಿಯಲ್ಲಿದ್ದ ಮಂಜುನಾಥ್ ಕಣ್ಣು ಕೆಂಪಾಗಿಸಿತ್ತು. ಹೇಗಾದರೂ ಮಾಡಿ ಜಮೀರ್&zwnj;ನನ್ನು ಮುಗಿಸಬೇಕೆಂದು ಸಂಚು ರೂಪಿಸಿದ ಮಂಜುನಾಥ್, ಹುಬ್ಬಳ್ಳಿ ಮೂಲದ ಹಂತಕರಿಗೆ ಸುಪಾರಿ ನೀಡಿ ಜಮೀರ್&zwnj;ನನ್ನು ಹತ್ಯೆ ಮಾಡಿಸಿದ್ದಾನೆ.&lt;/p&gt;&lt;h3&gt;&lt;strong&gt;ನೆಲಮಂಗಲ ಬಳಿ ಹಂತಕರ ಬಂಧನ:&lt;/strong&gt;&lt;/h3&gt;&lt;p&gt;ಜಮೀರ್ ಕೊಲೆ ಮಾಡಿದ ಬಳಿಕ ಹಂತಕರು ಪರಾರಿಯಾಗಿದ್ದರು. ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿ ಐವರು ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೀಟರ್ ಬಡ್ಡಿ ದಂಧೆಯ ಈ ರಕ್ತಸಿಕ್ತ ಕಥೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಪೊಲೀಸರು ಈ ದಂಧೆಯ ಬೆನ್ನತ್ತಲು ನಿರ್ಧರಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karwar-zameer-ahmed-murder-case-manjunath-arrested-supari-killing-sat/articleshow-9gyq8he"/>
        </item>
        <item>
            <title><![CDATA[₹64ರಿಂದ ಪೆಟ್ರೋಲ್‌ಗಿಂತ ಹೆಚ್ಚಾಗಿ ₹152ಕ್ಕೆ ತಲುಪಿದ ಸೀಮೆಎಣ್ಣೆ ಬೆಲೆ; ಸಮುದ್ರಕ್ಕಿಳಿಯದೇ ಲಂಗರು ಹಾಕಿದ ದೋಣಿಗಳು!]]></title>
            <link>https://kannada.asianetnews.com/karnataka-districts/karwar-kerosene-price-hike-impact-traditional-fishing-middle-east-war-sat/articleshow-bgu8mg6</link>
            <guid isPermaLink="true">https://kannada.asianetnews.com/karnataka-districts/karwar-kerosene-price-hike-impact-traditional-fishing-middle-east-war-sat/articleshow-bgu8mg6</guid>
            <pubDate>Wed, 22 Apr 2026 17:47:37 +0530</pubDate>
            <description><![CDATA[ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಸೀಮೆಎಣ್ಣೆ ದರ ಗಗನಕ್ಕೇರಿದ್ದು, ಕಾರವಾರದ ಸಾಂಪ್ರದಾಯಿಕ ಮೀನುಗಾರರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಪೆಟ್ರೋಲ್&zwnj;ಗಿಂತಲೂ ದುಬಾರಿಯಾದ ಇಂಧನ ದರದಿಂದಾಗಿ ಮೀನುಗಾರಿಕೆ ಸ್ಥಗಿತಗೊಳಿಸಿರುವ ಅವರು, ಸರ್ಕಾರದ ಸಬ್ಸಿಡಿ ಹೆಚ್ಚಳಕ್ಕಾಗಿ ಆಗ್ರಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpthz9gnx08z7n9w51jv2nfg,imgname-karwar-boting-1776860243476.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಯುದ್ಧದ ಪರಿಣಾಮಗಳು ಸಾಮಾನ್ಯ ಜನರ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ಕಾರವಾರದ ಮೀನುಗಾರರ ಸ್ಥಿತಿಯೇ ಸಾಕ್ಷಿ. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧವು ಈಗ ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಮೀನುಗಾರರ ಹೊಟ್ಟೆಯ ಮೇಲೆ ಹೊಡೆದಿದೆ. ಮೀನುಗಾರಿಕೆಗೆ ಅತಿ ಅಗತ್ಯವಾಗಿರುವ ಸೀಮೆಎಣ್ಣೆ ದರವು ಪೆಟ್ರೋಲ್&zwnj;ಗಿಂತಲೂ ದುಬಾರಿಯಾಗಿದ್ದು, ಮೀನುಗಾರರು ಅಕ್ಷರಶಃ ಕಂಗಾಲಾಗಿದ್ದಾರೆ.&lt;/p&gt;&lt;h3&gt;&lt;strong&gt;ಪೆಟ್ರೋಲ್&zwnj;ಗಿಂತ ಸೀಮೆಎಣ್ಣೆಯೇ ತುಟ್ಟಿ!&lt;/strong&gt;&lt;/h3&gt;&lt;p&gt;ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿಗಳ ಇಂಜಿನ್ ಓಡಿಸಲು ಸೀಮೆಎಣ್ಣೆಯನ್ನು ಅವಲಂಬಿಸಿದ್ದಾರೆ. ಯುದ್ಧ ಆರಂಭವಾಗುವ ಮೊದಲು ಪ್ರತಿ ಲೀಟರ್&zwnj;ಗೆ ಸುಮಾರು 64 ರೂಪಾಯಿ ಇದ್ದ ಸೀಮೆಎಣ್ಣೆ ದರವು ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಈಗ ಗಗನಕ್ಕೇರಿದೆ. ಸದ್ಯ ಮಾರುಕಟ್ಟೆಯಲ್ಲಿ ಸೀಮೆಎಣ್ಣೆಯ ಬೆಲೆ ಪ್ರತಿ ಲೀಟರ್&zwnj;ಗೆ ಬರೋಬ್ಬರಿ 152 ರೂಪಾಯಿ ತಲುಪಿದೆ. ಇದು ವಾಡಿಕೆಯ ಪೆಟ್ರೋಲ್ ದರಕ್ಕಿಂತಲೂ ಅಧಿಕವಾಗಿರುವುದು ಮೀನುಗಾರರ ನಿದ್ದೆಗೆಡಿಸಿದೆ.&lt;/p&gt;&lt;h3&gt;&lt;strong&gt;ಸಬ್ಸಿಡಿ ಇದ್ದರೂ ಆರ್ಥಿಕ ಹೊರೆ ತಪ್ಪಿಲ್ಲ:&lt;/strong&gt;&lt;/h3&gt;&lt;p&gt;ಮೀನುಗಾರರ ಸಂಕಷ್ಟವನ್ನು ಅರಿತ ಸರ್ಕಾರವು ಪ್ರತಿ ಲೀಟರ್&zwnj;ಗೆ 35 ರೂಪಾಯಿ ಸಬ್ಸಿಡಿ (ರಿಯಾಯಿತಿ) ನೀಡುತ್ತಿದೆ. ಈ ಸಬ್ಸಿಡಿ ಕಳೆದು ಮೀನುಗಾರರಿಗೆ ಸದ್ಯ ಒಂದು ಲೀಟರ್ ಸೀಮೆಎಣ್ಣೆ 117 ರೂಪಾಯಿಗೆ ಸಿಗುತ್ತಿದೆ. ಆದರೆ, ಈ ಹಿಂದೆ 60-70 ರೂಪಾಯಿಗೆ ಸಿಗುತ್ತಿದ್ದ ಇಂಧನಕ್ಕೆ ಈಗ 117 ರೂಪಾಯಿ ನೀಡುವುದು ಸಣ್ಣ ಪ್ರಮಾಣದ ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ. ಒಂದು ಬಾರಿ ಸಮುದ್ರಕ್ಕೆ ಹೋಗಿ ಬರಲು ಲೀಟರ್&zwnj;ಗಟ್ಟಲೆ ಇಂಧನ ಬೇಕಾಗುತ್ತದೆ, ಆದರೆ ಹಿಡಿದ ಮೀನುಗಳಿಂದ ಬರುವ ಆದಾಯವು ಇಂಧನದ ಖರ್ಚಿಗೂ ಸಾಲುತ್ತಿಲ್ಲ.&lt;/p&gt;&lt;h3&gt;&lt;strong&gt;ಸ್ಥಗಿತಗೊಂಡ ಮೀನುಗಾರಿಕೆ ಚಟುವಟಿಕೆ:&lt;/strong&gt;&lt;/h3&gt;&lt;p&gt;ಸೀಮೆಎಣ್ಣೆ ದರ ಏರಿಕೆಯ ಪರಿಣಾಮವಾಗಿ ಕಾರವಾರದ ಬಹುತೇಕ ಸಾಂಪ್ರದಾಯಿಕ ಮೀನುಗಾರರು ಅನಿವಾರ್ಯವಾಗಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ. ದೋಣಿಗಳನ್ನು ದಡಕ್ಕೆ ಎಳೆದು ಹಾಕಲಾಗಿದ್ದು, ನೂರಾರು ಕುಟುಂಬಗಳು ಜೀವನೋಪಾಯಕ್ಕಾಗಿ ಕಷ್ಟಪಡುತ್ತಿವೆ. &quot;ನಾವು ಸಾಲ ಮಾಡಿ ದೋಣಿ ನಡೆಸುತ್ತಿದ್ದೇವೆ. ಆದರೆ ಈಗಿನ ಸೀಮೆಎಣ್ಣೆ ದರ ನೋಡಿದರೆ ನಾವು ಸಮುದ್ರಕ್ಕೆ ಹೋಗುವುದಕ್ಕಿಂತ ಮನೆಯಲ್ಲಿರುವುದೇ ಲೇಸು ಎನ್ನುವಂತಾಗಿದೆ&quot; ಎಂದು ಮೀನುಗಾರ ಮುಖಂಡ ಚೇತನ್ ಹರಿಕಂತ್ರ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರದ ನೆರವಿಗೆ ಮೀನುಗಾರರ ಮೊರೆ:&lt;/strong&gt;&lt;/h2&gt;&lt;p&gt;ಇಂಧನ ದರ ಏರಿಕೆಯಿಂದ ಕಂಗೆಟ್ಟಿರುವ ಮೀನುಗಾರರು ಈಗ ಸರ್ಕಾರದ ಕಡೆಗೆ ಮುಖ ಮಾಡಿದ್ದಾರೆ. ಸರ್ಕಾರ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಬೇಕು ಎಂಬುದು ಅವರ ಪ್ರಬಲ ಬೇಡಿಕೆಯಾಗಿದೆ. ಸದ್ಯದ 35 ರೂಪಾಯಿ ಸಬ್ಸಿಡಿಯನ್ನು ಕನಿಷ್ಠ 50 ರಿಂದ 60 ರೂಪಾಯಿಗೆ ಏರಿಸಿದರೆ ಮಾತ್ರ ಮೀನುಗಾರಿಕೆ ಲಾಭದಾಯಕವಾಗಲು ಸಾಧ್ಯ ಎನ್ನುತ್ತಾರೆ ಸ್ಥಳೀಯ ಮೀನುಗಾರರು.&lt;/p&gt;&lt;h3&gt;&lt;strong&gt;ಅಧಿಕಾರಿಗಳ ಭರವಸೆ:&lt;/strong&gt;&lt;/h3&gt;&lt;p&gt;ಈ ಕುರಿತು ಪ್ರತಿಕ್ರಿಯಿಸಿರುವ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಅವರು, 'ಜಾಗತಿಕ ಮಾರುಕಟ್ಟೆಯಲ್ಲಿನ ತೈಲ ದರ ಏರಿಕೆಯಿಂದ ಈ ಸಮಸ್ಯೆ ಉಂಟಾಗಿದೆ. ಮೀನುಗಾರರ ಮನವಿಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸೀಮೆಎಣ್ಣೆ ಮೇಲಿನ ಸಬ್ಸಿಡಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು' ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಸಮುದ್ರವನ್ನೇ ನಂಬಿ ಬದುಕುವ ಈ ಕಾಯಕಯೋಗಿಗಳಿಗೆ ಇಂಧನ ದರದ ಬೆಲೆ ಏರಿಕೆ ಮರಣಶಾಸನವಾಗುತ್ತಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಬ್ಸಿಡಿ ಹೆಚ್ಚಳದ ನಿರ್ಧಾರ ಕೈಗೊಳ್ಳದಿದ್ದರೆ, ಸಾಂಪ್ರದಾಯಿಕ ಮೀನುಗಾರಿಕೆ ಇತಿಹಾಸದ ಪುಟ ಸೇರುವ ದಿನಗಳು ದೂರವಿಲ್ಲ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karwar-kerosene-price-hike-impact-traditional-fishing-middle-east-war-sat/articleshow-bgu8mg6"/>
        </item>
        <item>
            <title><![CDATA[Sirsi Marriage Dokha: ಮದುವೆ ದಿನವೇ ಓಡಿ ಹೋದ ಶಿರಸಿ ಮುಸ್ಲಿಂ ವಧು; 20 ಕುರಿ ಮಾಂಸ ವೇಸ್ಟ್; ವರ ಮಾಡಿದ್ದೇನು?]]></title>
            <link>https://kannada.asianetnews.com/karnataka-districts/uttara-kannada-sirsi-bride-ran-away-with-lover-on-the-wedding-day/articleshow-c74gw99</link>
            <guid isPermaLink="true">https://kannada.asianetnews.com/karnataka-districts/uttara-kannada-sirsi-bride-ran-away-with-lover-on-the-wedding-day/articleshow-c74gw99</guid>
            <pubDate>Sat, 25 Apr 2026 21:31:53 +0530</pubDate>
            <description><![CDATA[&lt;p&gt;The girl ran away on the wedding day: ಮೊದಲು ಪ್ರೀತಿ (Love) ವಿಷಯ ಹೇಳದೆ, ಮದುವೆ ದಿನವೇ ಕೆಲ ಹುಡುಗ, ಹುಡುಗಿಯರು ಓಡಿ ಹೋಗೋದು ಇತ್ತೀಚೆಗೆ ಹೆಚ್ಚಾಗ್ತಿದೆ. ಅದರಲ್ಲಿಯೂ ಹುಡುಗಿಯರು ಮಾತ್ರ ಹೆಚ್ಚು ಓಡಿ ಹೋಗ್ತಿದ್ದಾರೆ. ಶಿರಸಿಯ ಮುಸ್ಲಿಂ ಗಲ್ಲಿಯಲ್ಲಿ ಕೂಡ ಇದೇ ಘಟನೆ ನಡೆದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq2p09vr9t8d6hvfnd9ratya,imgname-new-project---2026-04-25t213112.949-1777132906360.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ: &lt;/strong&gt;ಶಿರಸಿಯ ಮುಸ್ಲಿಂ ಗಲ್ಲಿಯ ಯುವತಿಯೊರ್ವಳು ತಮ್ಮದೇ ಸಮಾಜದ ಎಂಬಿಬಿಎಸ್ ಕಲಿಯುತ್ತಿರುವ ಯುವಕನನ್ನು ಪ್ರೀತಿಸಿ ಮದುವೆಯಾಗಲು ರೆಡಿಯಾಗಿದ್ದಳು. ಆದರೆ ಈ ಪ್ರೀತಿ ವಿಷಯ ಯುವತಿಯ ಪಾಲಕರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವರು ಇಂದಿರಾ ನಗರದ ಯುವಕನೊಂದಿಗೆ ಇಂದು ಉಸುರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮಗಳ ಮದುವೆಯನ್ನು ನಿಗದಿ ಮಾಡಿದ್ದರು.&lt;/p&gt;&lt;h2&gt;ನಿಜಕ್ಕೂ ಏನಾಯ್ತು?&lt;/h2&gt;&lt;p&gt;ಮದುವೆ ಸಂಭ್ರಮದಲ್ಲಿದ್ದ ಯುವತಿ ಯುವಕನ ಕುಟುಂಬದವರಿಗೆ ಅಘಾತ ಕಾದಿತ್ತು.ಇನ್ನೇನು ಇಂದು ಬೆಳಗಿನ ಮುಹೂರ್ತದಲ್ಲಿ ಹಸೆಮಣೆ ಎರಬೇಕಾಗಿದ್ದ ಆ ಯುವತಿ ಬೆಳ್ಳಂಬೆಳಿಗ್ಗೆ ತಾನು ಪ್ರೀತಿಸುತ್ತಿದ್ದ ಎಂಬಿಬಿಎಸ್ ಕಲಿಯುತ್ತಿರುವ ರಾಮನಬೈಲ್ ಯುವಕನೊಂದಿಗೆ ಪರಾರಿಯಾಗಿ ಬಿಟ್ಟಿದ್ದಾಳೆ .ಇದರಿಂದ ಅಘಾತಕ್ಕೊಳಗಾದ ಯುವತಿಯ ಪಾಲಕರು ಮತ್ತು ಯುವಕನ ಪಾಲಕರು ಇಬ್ಬರೂ ಕೂಡಾ ಇದೀಗ ಪೋಲಿಸ್ ಮೆಟ್ಟಿಲು ಎರುವಂತಾಗಿದೆ.&lt;/p&gt;&lt;p&gt;ಈ ಹುಡುಗಿ ಮದುವೆಯಾಗಬೇಕಾಗಿದ್ದ ಹುಡುಗ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಆದರೆ ಆತನೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಮಾತ್ರ ಇಂದು ಪ್ರಿಯತಮನೊಂದಿಗೆ ( ಭಾವಿ ವೈದ್ಯ) ಜಾಗ ಖಾಲಿ ಮಾಡಿದ್ದಾಳೆ ಎನ್ನಲಾಗಿದೆ.&lt;/p&gt;&lt;p&gt;ಯುವತಿ ಮಾಡಿದ ತಪ್ಪಿಗೆ ನೆಟ್ಟರಿಷ್ಟರಿಗೆ ಮದುವೆ ಊಟಕ್ಕಾಗಿ ಮಾಡಿದ ಕ್ವಿಂಟಲ್ ಗಟ್ಟಲೆ ಮಟನ್,ಚಿಕನ್ ಎಲ್ಲವೂ ವೆಸ್ಟ,ವೆಸ್ಟ್ ಆಗಿದೆಯಂತೆ.ಮಟನ್ ಗಾಗಿ 20 ಕ್ಕೂ ಹೆಚ್ಚಿನ ಕುರಿ ಕಟ್ ಮಾಡಲಾಗಿತ್ತೆಂದು ಹೇಳಲಾಗುತ್ತಿದ್ದು ಇನ್ನು ಚಿಕನ್ ಎಷ್ಟಾಗಿರಬಹುದೆಂದು ಒಮ್ಮೆ ಉಹಿಸಿಕೊಳ್ಳಿ. ಅತ್ತ ಹುಡುಗನ ಕಡೆಯವರು ಮದುವೆಗೆ ಮಾಡಿದ ಖರ್ಚು ವಸೂಲಿ ಮಾಡುವ ಗಡಿಬಿಡಿಯಲ್ಲಿದ್ದಾರೆಂದು ಹೇಳಲಾಗಿದೆ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/uttara-kannada-sirsi-bride-ran-away-with-lover-on-the-wedding-day/articleshow-c74gw99"/>
        </item>
        <item>
            <title><![CDATA[ಕಾರವಾರ : ಉಳ್ಳಾಲಕ್ಕೆ ಹಿಂಸಾತ್ಮಕವಾಗಿ ಒಂಟೆಗಳ ಸಾಗಿಸುತ್ತಿದ್ದ ಮೂವರ ಬಂಧನ: 8 ಒಂಟೆಗಳ ರಕ್ಷಣೆ]]></title>
            <link>https://kannada.asianetnews.com/state/karwar-three-arrested-for-violently-transporting-camels-to-ullal-8-camels-rescued/articleshow-d9uoot6</link>
            <guid isPermaLink="true">https://kannada.asianetnews.com/state/karwar-three-arrested-for-violently-transporting-camels-to-ullal-8-camels-rescued/articleshow-d9uoot6</guid>
            <pubDate>Wed, 22 Apr 2026 17:43:03 +0530</pubDate>
            <description><![CDATA[ಭಟ್ಕಳದಲ್ಲಿ ಅಕ್ರಮವಾಗಿ ಒಂಟೆಗಳನ್ನು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾತ್ಮಕವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 8 ಒಂಟೆಗಳನ್ನು ರಕ್ಷಿಸಲಾಗಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpthj50yqejex4e28wcs6tr2,imgname-camel-1776859812894.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಅಕ್ರಮವಾಗಿ ಒಂಟೆ ಸಾಗಣೆ: ಮೂವರ ಬಂಧನ&lt;/strong&gt;&lt;/h2&gt;&lt;p&gt;ಕಾರವಾರ : ಅಕ್ರಮವಾಗಿ ಒಂಟೆಗಳ ಸಾಗಿಸುತ್ತಿದ್ದ ಮೂವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 8 ಒಂಟೆಗಳನ್ನು ಪೊಲೀಸರು ವಶಕ್ಕೆ ಪಡೆದು ರಕ್ಷಿಸಿದ್ದಾರೆ. ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ಲಾರಿಯಲ್ಲಿ ಒಂಟೆಗಳನ್ನು ಸಾಗಿಸಲಾಗುತ್ತಿತ್ತು. ಭಟ್ಕಳದ ಶಿರಾಲಿ ಯಿಂದ ಉಳ್ಳಾಲದತ್ತ ಈ ಒಂಟೆಗಳನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಬಂಧಿತರನ್ನು ಮಧ್ಯಪ್ರದೇಶ ಮೂಲದ ಕರಣ್ ಬಾಬರ್, ಮಹಾರಾಷ್ಟ್ರದ ಸುಹಾಸ್ ಸೂರ್ಯವಂಶಿ ಹಾಗೂ ಯಶ ಗೋಟಕಿಂಡೆ ಎಂದು ಗುರುತಿಸಲಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Anusha Kb</dc:creator>
            <atom:link href="https://kannada.asianetnews.com/state/karwar-three-arrested-for-violently-transporting-camels-to-ullal-8-camels-rescued/articleshow-d9uoot6"/>
        </item>
        <item>
            <title><![CDATA[ಫೆಮಿನಾ ಮಿಸ್ ಇಂಡಿಯಾ ಗೆದ್ದು ತವರಿಗೆ ಬಂದ ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿಗೆ ಗೋವಾದಲ್ಲಿ ಅದ್ದೂರಿ ಸ್ವಾಗತ]]></title>
            <link>https://kannada.asianetnews.com/karnataka-districts/femina-miss-india-2026-winner-sadhvi-sail-receives-grand-welcome-in-goa-gdp/articleshow-i1eq4s5</link>
            <guid isPermaLink="true">https://kannada.asianetnews.com/karnataka-districts/femina-miss-india-2026-winner-sadhvi-sail-receives-grand-welcome-in-goa-gdp/articleshow-i1eq4s5</guid>
            <pubDate>Thu, 30 Apr 2026 18:53:29 +0530</pubDate>
            <description><![CDATA[ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದ ಕನ್ನಡತಿ ಸಾಧ್ವಿ ಸೈಲ್ ತವರಿಗೆ ಮರಳಿದ್ದಾರೆ. ಗೋವಾ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಗೆದ್ದ ಕಾರವಾರದ ಶಾಸಕರ ಪುತ್ರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ದೊರೆಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kqf8pk6v4hvftd8ds0ky3nxt,imgname-femina-miss-india-2026-winner-sadhvi-sail-1777555164379.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಫೆಮಿನಾ ಮಿಸ್ ಇಂಡಿಯಾ 2026 ಕಿರೀಟವನ್ನು ಗೆದ್ದು ದೇಶದ ಮಟ್ಟದಲ್ಲಿ ಕೀರ್ತಿ ತಂದ ಕನ್ನಡತಿ ಸಾಧ್ವಿ ಸೈಲ್ ಅವರು ಇಂದು ತವರಿಗೆ ಮರಳುತ್ತಿದ್ದಂತೆ ಅದ್ದೂರಿ ಸ್ವಾಗತ ದೊರೆಯಿತು. ಗೋವಾದ ದಾಬೋಲಿಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು, ಸ್ನೇಹಿತರು ಮತ್ತು ಬಂಧುಗಳು ಸೇರಿ ಸಾಧ್ವಿ ಅವರಿಗೆ ಭರ್ಜರಿ ಬರಮಾಡಿಕೊಂಡರು.&lt;/p&gt;&lt;p&gt;ಸಾಧ್ವಿ ಸೈಲ್ ಅವರು ಕಾರವಾರ ಶಾಸಕ ಸತೀಶ್ ಸೈಲ್ ಅವರ ಪುತ್ರಿಯಾಗಿದ್ದು, ಮೂಲತಃ ಗೋವಾದಲ್ಲಿ ಜನಿಸಿದ ಹಿನ್ನೆಲೆ ಈ ಬಾರಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ಕನ್ನಡತಿ ಎಂಬ ಹೆಗ್ಗಳಿಕೆಯನ್ನು ಕೊಂಡೊಯ್ದ ಅವರು ರಾಷ್ಟ್ರಮಟ್ಟದ ವೇದಿಕೆಯಲ್ಲಿ ಕಿರೀಟ ಗೆದ್ದು ಗಮನ ಸೆಳೆದಿದ್ದಾರೆ.&lt;/p&gt;&lt;h2&gt;ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿ &amp;nbsp;ನಡೆದ ಸ್ಪರ್ಧೆ&lt;/h2&gt;&lt;p&gt;ಈ ವರ್ಷದ ಫೆಮಿನಾ ಮಿಸ್ ಇಂಡಿಯಾ 2026 ಸ್ಪರ್ಧೆ ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ಆವರಣದಲ್ಲಿ ನಡೆದಿತ್ತು. ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಸುಂದರಿಯರ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ ಸಾಧ್ವಿ ಸೈಲ್ ಅವರು ಮಿಸ್ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಂಡರು. ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ರಾಜನಂದಿನಿ ಪವಾರ್ ಪ್ರಥಮ ರನ್ನರ್-ಅಪ್ ಸ್ಥಾನವನ್ನು ಪಡೆದರು.&lt;/p&gt;&lt;p&gt;ಕಿರೀಟ ಗೆದ್ದ ನಂತರ ಮೊದಲ ಬಾರಿಗೆ ತವರಿಗೆ ಆಗಮಿಸಿದ ಸಾಧ್ವಿಗೆ ಅಭಿಮಾನಿಗಳಿಂದ ಭಾರೀ ಸ್ವಾಗತ ದೊರಕಿದ್ದು, ಹರ್ಷೋದ್ಗಾರಗಳು ಮೊಳಗಿದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಧ್ವಿ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;h2&gt;ಗೋವಾದಲ್ಲಿ ಸನ್ಮಾನ ಕಾರ್ಯಕ್ರಮ&lt;/h2&gt;&lt;p&gt;ಇನ್ನೊಂದೆಡೆ, ಮಿಸ್ ಇಂಡಿಯಾ ವಿಜೇತೆ ಸಾಧ್ವಿ ಸೈಲ್ ಅವರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ ಗೋವಾದ ತಾಜ್ ಹಾರಿಝಾನ್&zwnj;ನಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.&lt;/p&gt;&lt;p&gt;ಒಟ್ಟಾರೆ, ಕಾರವಾರದ ಹೆಮ್ಮೆಯ ಪುತ್ರಿ ಸಾಧ್ವಿ ಸೈಲ್ ಅವರ ಈ ಸಾಧನೆ ಕರ್ನಾಟಕಕ್ಕೂ ಹೆಮ್ಮೆ ತಂದುಕೊಟ್ಟಿದ್ದು, ಯುವತಿಯರಿಗೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/femina-miss-india-2026-winner-sadhvi-sail-receives-grand-welcome-in-goa-gdp/articleshow-i1eq4s5"/>
        </item>
        <item>
            <title><![CDATA[ಉತ್ತರ ಕನ್ನಡ: ನಿವೃತ್ತ ಎಲ್‌ಐಸಿ ಏಜೆಂಟ್‌ ಗೆ ಮುಂಬೈನಿಂದ ಡಿಜಿಟಲ್ ಅರೆಸ್ಟ್ ₹1.74 ಕೋಟಿ ಕಳೆದುಕೊಂಡ ವೃದ್ಧ!]]></title>
            <link>https://kannada.asianetnews.com/karnataka-districts/cyber-fraud-alert-fraudsters-pose-as-mumbai-police-cheat-karnataka-karwar-man-of-1-74-crore-gdp/articleshow-ldmac2t</link>
            <guid isPermaLink="true">https://kannada.asianetnews.com/karnataka-districts/cyber-fraud-alert-fraudsters-pose-as-mumbai-police-cheat-karnataka-karwar-man-of-1-74-crore-gdp/articleshow-ldmac2t</guid>
            <pubDate>Wed, 29 Apr 2026 12:19:34 +0530</pubDate>
            <description><![CDATA[ಯಲ್ಲಾಪುರದ ನಿವೃತ್ತ ಎಲ್&zwnj;ಐಸಿ ಏಜೆಂಟ್ ಶಿವಾನಂದ ಹೆಗಡೆ ಅವರು 'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ನಕಲಿ ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡ ವಂಚಕರು, ಉಗ್ರರೊಂದಿಗೆ ಸಂಪರ್ಕದ ಆರೋಪ ಹೊರಿಸಿ, ಅವರಿಂದ ಹಂತ ಹಂತವಾಗಿ ₹1.74 ಕೋಟಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಘಟನೆಯು ಸೈಬರ್ ವಂಚನೆಯ ಹೊಸ ಮುಖವನ್ನು ಅನಾವರಣಗೊಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmqd6a4bfbttmmkfy6dj1m9w,imgname-chikkamagaluru-cyber-fraud-1774607083659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ:&lt;/strong&gt; ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ನಿವೃತ್ತ ಎಲ್&zwnj;ಐಸಿ ಏಜೆಂಟ್ ಶಿವಾನಂದ ತಿಮ್ಮಪ್ಪ ಹೆಗಡೆ (69) ಅವರು &lsquo;ಡಿಜಿಟಲ್ ಅರೆಸ್ಟ್&rsquo; ಎಂಬ ಹೊಸ ರೀತಿಯ ಸೈಬರ್ ಮೋಸಕ್ಕೆ ಬಲಿಯಾಗಿ, ಸುಮಾರು ₹1.74 ಕೋಟಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಮಾಹಿತಿಯ ಪ್ರಕಾರ, ಶಿವಾನಂದ ಹೆಗಡೆ ಅವರಿಗೆ +91 7502502510 ಸಂಖ್ಯೆಯಿಂದ ಕರೆ ಬಂದಿದ್ದು, ತಮ್ಮನ್ನು ಮುಂಬೈ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತರು ಮಾತನಾಡಿದ್ದಾರೆ. ನಿಮ್ಮ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಯನ್ನು ಉಗ್ರಗಾಮಿಗಳು ಮನಿ ಲಾಂಡರಿಂಗ್&zwnj;ಗೆ ಬಳಸುತ್ತಿದ್ದಾರೆ. ಈ ಸಂಬಂಧ ಮುಂಬೈ ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನಕಲಿ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್&lt;/h2&gt;&lt;p&gt;ಇದರಿಂದ ಬೆಚ್ಚಿಬಿದ್ದ ಹೆಗಡೆ ಅವರಿಗೆ, ತನಿಖೆ ಪೂರ್ಣಗೊಳ್ಳುವವರೆಗೆ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ರಿಸರ್ವ್ ಬ್ಯಾಂಕ್&zwnj;ಗೆ ಜಮಾ ಮಾಡಬೇಕು. ಹಾಗೆಯೇ ಪ್ರತಿದಿನ ನಿಮ್ಮ ಲೈವ್ ಲೊಕೇಶನ್&zwnj;ನ್ನು ನಮ್ಮಿಗೆ ಕಳುಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ತಮ್ಮ ಮಾತು ನಂಬಿಸುವ ಸಲುವಾಗಿ, ನಕಲಿ ಪೊಲೀಸರು ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್ ಮಾಡಿದ್ದು, ತಾವು ಮುಂಬೈನ ಡಿ.ಐ.ಜಿ ಮಟ್ಟದ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಇದಲ್ಲದೆ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ತಕ್ಷಣ ಬಂಧಿಸುವುದಾಗಿ ಬೆದರಿಕೆ ಹಾಕಿ, ಹೆಗಡೆ ಅವರನ್ನು ಸಂಪೂರ್ಣವಾಗಿ ಮಾನಸಿಕ ಒತ್ತಡಕ್ಕೆ ಒಳಪಡಿಸಿದ್ದಾರೆ. ಈ ಬೆದರಿಕೆಗೆ ಹೆದರಿದ ಶಿವಾನಂದ ಹೆಗಡೆ, ಸೂಚನೆಯಂತೆ ಹಂತ ಹಂತವಾಗಿ ಒಟ್ಟು ₹1,74,50,000 ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.&lt;/p&gt;&lt;h2&gt;ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರವಿರಲಿ&lt;/h2&gt;&lt;p&gt;ಆದರೆ ಬಳಿಕ ಈ ಘಟನೆ ಮೋಸ ಎಂಬುದು ತಿಳಿದುಬಂದ ತಕ್ಷಣ, ಅವರು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.&lt;/p&gt;&lt;p&gt;ಈ ಘಟನೆ, &lsquo;ಡಿಜಿಟಲ್ ಅರೆಸ್ಟ್&rsquo; ಎಂಬ ಹೆಸರಿನಲ್ಲಿ ನಡೆಯುತ್ತಿರುವ ಹೊಸ ಮಾದರಿಯ ಸೈಬರ್ ಮೋಸಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕೆಂಬ ಅಗತ್ಯವನ್ನು ಮತ್ತೊಮ್ಮೆ ಪೊಲೀಸರು, ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಪೊಲೀಸ್ ಇಲಾಖೆ ಈ ರೀತಿಯಾಗಿ ಹಣ ವರ್ಗಾವಣೆ ಮಾಡುವಂತೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇಂತಹ ಕರೆಗಳು ಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/cyber-fraud-alert-fraudsters-pose-as-mumbai-police-cheat-karnataka-karwar-man-of-1-74-crore-gdp/articleshow-ldmac2t"/>
        </item>
        <item>
            <title><![CDATA[ಶೀರ್ಷಾಸನದಲ್ಲಿ ಶಿವತಾಂಡವ ಸ್ತೋತ್ರ: ಶಿರಸಿಯ 8 ವರ್ಷದ ಬಾಲಕನಿಗೆ ಒಲಿದ ಅಂತರಾಷ್ಟ್ರೀಯ ಪ್ರಶಸ್ತಿ]]></title>
            <link>https://kannada.asianetnews.com/education/sirsis-8-year-boy-shiva-tandava-stotram-in-sheershasana-got-international-award-suc/articleshow-nuo44cm</link>
            <guid isPermaLink="true">https://kannada.asianetnews.com/education/sirsis-8-year-boy-shiva-tandava-stotram-in-sheershasana-got-international-award-suc/articleshow-nuo44cm</guid>
            <pubDate>Sat, 02 May 2026 13:37:10 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್ನುವ ಬಾಲಕ, ಶೀರ್ಷಾಸನ ಭಂಗಿಯಲ್ಲಿ ಶಿವ ತಾಂಡವ ಸ್ತೋತ್ರವನ್ನು ಪಠಿಸಿ ಅಂತರಾಷ್ಟ್ರೀಯ ದಾಖಲೆ ಬರೆದಿದ್ದಾನೆ. ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಈ ಸ್ತೋತ್ರ ಪಠಿಸಿದ ಈತನ ಸಾಧನೆಗೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqkvc6ywnva222mp796dc6e4,imgname-om-n-1777708964828.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವರಿಗೆ ಹುಟ್ಟುತ್ತಲೇ ಯಾವುದೋ ಒಂದು ಕಲೆ ಒಲಿದಿರುತ್ತದೆ. ಅದು ಹೋದ ಜನ್ಮದ ಬಂಧವೇ ಇರಬೇಕು ಎಂದು ಹೇಳುವುದು ಉಂಟು. ಇನ್ನೂ ವರ್ಷ ತುಂಬುವ ಒಳಗೇ ಅದೆನೇನೋ ಸಾಧನೆ ಮಾಡಿರುವ ಮಕ್ಕಳಿದ್ದರೆ, 2-3 ವರ್ಷದಲ್ಲಿಯೇ ದಾಖಲೆ ಬರೆದು ಎಲ್ಲರ ಹುಬ್ಬೇರಿಸುವ ಮಕ್ಕಳೂ ಇರುತ್ತಾರೆ. ಕೆಲವೊಮ್ಮೆ ಮನೆಯ ಸಂಸ್ಕಾರ ಇದಕ್ಕೆ ಕಾರಣವಾದರೂ, ಮತ್ತೆ ಕೆಲವು ಪುಟಾಣಿಗಳಿಗೆ ಅದ್ಹೇಗೆ ಆ ಕಲೆ ಒಲಿಯುತ್ತದೆಯೋ ಆ ದೇವರೇ ಬಲ್ಲ ಎನ್ನುವ ಮಾತುಗಳು ಕೇಳಿಬರುವುದು ಉಂಟು.&lt;/p&gt;&lt;h2&gt;&lt;strong&gt;8 ವರ್ಷದ ಬಾಲಕನ ಸಾಧನೆ&lt;/strong&gt;&lt;/h2&gt;&lt;p&gt;ಅಂಥದ್ದೇ ಒಂದು ಪುಟಾಣಿ ಇದೀಗ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್. ಎನ್ನುವ ಬಾಲಕ ಶಿವ ತಾಂಡವ ಸ್ತೋತ್ರವನ್ನು 3 ನಿಮಿಷ 47 ಸೆಕೆಂಡುಗಳಲ್ಲಿ ಪಠಿಸುವ ಮೂಲಕ ಅಂತರಾಷ್ಟ್ರೀಯ ದಾಖಲೆ ಬರೆದಿದ್ದಾನೆ. ಅಷ್ಟಕ್ಕೂ ಇವನು ಹಾಗೆಯೇ ಇದನ್ನು ಪಠಿಸಿದ್ದಲ್ಲ. ಬದಲಿಗೆ ಶೀರ್ಷಾಸನ ಹಾಕುವ ಮೂಲಕ ಅಂದರೆ ತಲೆಕೆಳಗಾಗಿ ನಿಲ್ಲುವ ಮೂಲಕ, ಕೈಯನ್ನು ಮುಗಿದು ಈ ಸ್ತೋತ್ರ ಹೇಳಿದ್ದಾನೆ. ಬಾಲಕನ ಗಮನಾರ್ಹ ಪ್ರತಿಭೆ ಮತ್ತು ಸಮರ್ಪಣೆಗೆ ಅಂತರರಾಷ್ಟ್ರೀಯ ದಾಖಲೆ ಪುಸ್ತಕದಲ್ಲಿ ಪ್ರತಿಷ್ಠಿತ ವಿಶ್ವ ದಾಖಲೆಯನ್ನು ಗಳಿಸಿಕೊಟ್ಟಿದೆ.&lt;/p&gt;&lt;h3&gt;&lt;strong&gt;ಮೂರನೆಯ ಕ್ಲಾಸ್​ ವಿದ್ಯಾರ್ಥಿ&lt;/strong&gt;&lt;/h3&gt;&lt;p&gt;ಶಿರಸಿಯ ಇಸಳೂರಿನ ಶ್ರೀನಿಕೇತನ ಶಾಲೆಯ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ ಓಂ. ಮಹಾಶಿವರಾತ್ರಿಯ ಪ್ರಯುಕ್ತ ಓಂ ಶೀರ್ಷಾಸನ ಭಂಗಿಯಲ್ಲಿ ಕೇವಲ ಮೂರು ನಿಮಿಷ 47 ಸೆಕೆಂಡುಗಳಲ್ಲಿ ಶಿವತಾಂಡವ ಸ್ತೋತ್ರವನ್ನ ಪಠಿಸಿ ಎಲ್ಲರ ಗಮನ ಸೆಳೆದಿದ್ದ. ಇದೀಗ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಬಾಲಕನಿಗೆ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟಕ್ಕೂ ಈ ಬಾಲಕನ ಸಾಧನೆ ಇಲ್ಲಿಗೇ ಮುಗಿದಿಲ್ಲ. ಆರು ವರ್ಷದ ಪುಟಾಣಿ ಇರುವಾಗಲೇ ಒಂದು ನಿಮಿಷ 42 ಸೆಕೆಂಡುಗಳಲ್ಲಿ ಏಷ್ಯಾ ಖಂಡದ 48 ದೇಶಗಳ ಹೆಸರು ರಾಜಧಾನಿ ಮತ್ತು ಕರೆನ್ಸಿಗಳನ್ನು ನೋಡದೆ ಸರಾಗವಾಗಿ ಹೇಳಿ ದಾಖಲೆ ನಿರ್ಮಿಸಿದ್ದ.&lt;/p&gt;&lt;p&gt;ಶಿರಸಿಯ ನಿವೃತ್ತ ಸೈನ್ಯಾಧಿಕಾರಿ ಶ್ರೀನಿವಾಸ್ ನಾಯಕ್ ಹಾಗೂ ಉಪನ್ಯಾಸಕಿ ಡಾಕ್ಟರ್ ಅಪರ್ಣ ಕರ್ಕಿ ಅವರ ಪುತ್ರನಾಗಿರುವ ಓಂ ಪ್ರತಿಭೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Suchethana D</dc:creator>
            <atom:link href="https://kannada.asianetnews.com/education/sirsis-8-year-boy-shiva-tandava-stotram-in-sheershasana-got-international-award-suc/articleshow-nuo44cm"/>
        </item>
        <item>
            <title><![CDATA[ತವರೂರು ಕಾರವಾರಕ್ಕೆ ಆಗಮಿಸಿದ ಫೆಮಿನಾ ಮಿಸ್ ಇಂಡಿಯಾ  ಸಾಧ್ವಿ ಸೈಲ್; ಕಿರೀಟಕ್ಕೆ ಪೂಜೆ ಸಲ್ಲಿಕೆ]]></title>
            <link>https://kannada.asianetnews.com/gallery/karnataka-districts/sadhvi-sail-daughter-of-mla-satish-sail-crowned-femina-miss-india-2026-arrived-at-karwar-mrq-odeg85f</link>
            <guid isPermaLink="true">https://kannada.asianetnews.com/gallery/karnataka-districts/sadhvi-sail-daughter-of-mla-satish-sail-crowned-femina-miss-india-2026-arrived-at-karwar-mrq-odeg85f</guid>
            <pubDate>Sat, 02 May 2026 21:15:19 +0530</pubDate>
            <description><![CDATA[ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದ, ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಅವರು ತಮ್ಮ ತವರೂರು ಕಾರವಾರಕ್ಕೆ ಭೇಟಿ ನೀಡಿದರು. ಅವರಿಗೆ ಅದ್ದೂರಿ ಸ್ವಾಗತ ದೊರೆತಿದ್ದು, ಅವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqmnf7mn5em2z3159tamd9w1,imgname-sadhvi-sail--6--1777736326805.jpg" type="image/jpeg" height="390" width="690"/>
            <content:encoded><![CDATA[ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದ, ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಅವರು ತಮ್ಮ ತವರೂರು ಕಾರವಾರಕ್ಕೆ ಭೇಟಿ ನೀಡಿದರು. ಅವರಿಗೆ ಅದ್ದೂರಿ ಸ್ವಾಗತ ದೊರೆತಿದ್ದು, ಅವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.&lt;img&gt;&lt;p&gt;ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದ ಸಾಧ್ವಿ&zwnj; ಸೈಲ್ ಅವರು ಇಂದು ಕಾರವಾರಕ್ಕೆ ಆಗಮಿಸಿದ್ದು ನೂರಾರು ಅಭಿಮಾನಿಗಳು ಸಾಧ್ವಿ ಸೈಲ್ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಿದರು. ಗೋವಾದಿಂದ ಕಾರವಾರದ ಮಾಲಾದೇವಿ ಮೈದಾನದಕ್ಕೆ ಹೆಲಿಕಾಪ್ಟರ್ ಮೂಲಕ&zwnj; ಆಗಮಿಸಿದ ಸಾಧ್ವಿ ಅವರಿಗೆ ಅಭಿಮಾನಿಗಳು ಪುಷ್ಪ ಮಳೆಗರೆದರು.&lt;/p&gt;&lt;img&gt;&lt;p&gt;ತೆರೆದ ವಾಹನದಲ್ಲಿ ಮಿಸ್ ಇಂಡಿಯಾ ಸಾಧ್ವಿ ಅವರು ನಗರದ ಪ್ರಮುಖ ರಸ್ತೆ ಯಲ್ಲಿ ಸಂಚರಿಸಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು. ನಂತರ ಕಾರವಾರದ ಸುಭಾಷ್ ವೃತ್ತದಲ್ಲಿರುವ ಸಿದ್ದಿವಿನಾಯಕ&zwnj; ದೇವಸ್ಥಾನಕ್ಕೆ ತೆರಳಿ ಮಿಸ್ ಇಂಡಿಯಾ ಕಿರೀಟವನ್ನು ಗಣಪತಿಯ ಮುಂದೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು.&lt;/p&gt;&lt;img&gt;&lt;p&gt;ಸಾಧ್ವಿ ಸೈಲ್ ಅವರು ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರು ಪುತ್ರಿಯಾಗಿದ್ದು ಪೆಮಿನಾ ಮಿಸ್ ಇಂಡಿಯಾ 2026 ರಲ್ಲಿ ಗೋವಾ ರಾಜ್ಯ ಪ್ರತಿನಿಧಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಧ್ವಿ&zwnj; ಅವರು ಕಾರವಾರ ಹಾಗೂ ಗೋವಾದ ಜನರು ಭಾರತಾಂಬೆಯ ಮಕ್ಕಳು, ಭೇದಭಾವ ಮಾಡದೇ ಎಲ್ಲರೂ ಪ್ರೀತಿಸಿದ್ದಿರಿ. ಮುಂದೂ ಸಹಃ ನಿಮ್ಮ ಸಹಕಾರ ನನ್ನ ಮೇಲೆ ಇರಲಿ ಎಂದು ಹೇಳಿದರು.&lt;/p&gt;&lt;img&gt;&lt;p&gt;ನನ್ನ ಮಗಳು ನನಗೆ ಅಕ್ಷಯ ತೃತೀಯಾದಂದು ನೀಡಿದ ಗಿಫ್ಟ್ ಇದಾಗಿದೆ. ಸ್ವತಃ ನನ್ನ ಮಗಳು ಸಾದ್ವಿಯೇ, &lsquo;ನಾನು ಮಿಸ್ ಇಂಡಿಯಾ&rsquo; ಆಗಿದ್ದೇನೆ ಎಂದು ಹೇಳಿದರೂ ನನಗೆ ನಂಬಲೇ ಆಗಲಿಲ್ಲ. ಹತ್ತು ಬಾರಿ ಖಚಿತಪಡಿಸಿಕೊಂಡೆ. ಎಲ್ಲಿಲ್ಲದ ಖುಷಿಯಾಗಿದೆ. ದೇವರು, ಜನರ ಆಶೀರ್ವಾದದಿಂದ ಇದು ಸಾಧ್ಯ ಆಗಿದೆ. ಮೂರು ತಿಂಗಳಿನಿಂದ ಗಂಭೀರವಾಗಿ ಪ್ರಯತ್ನಿಸಿ ಅಂತಿಮವಾಗಿ ಯಶಸ್ವಿಯಾಗಿದ್ದಾಳೆ. ಅವಳು ಮಿಸ್ ವರ್ಲ್ಡ್ ಸ್ಪರ್ಧೆಗೆ ಹೋಗಲಿದ್ದು, ಅಲ್ಲೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಸತೀಶ್ ಸೈಲ್ ಹೇಳಿದ್ದರು.&lt;/p&gt;&lt;img&gt;&lt;p&gt;ಭುವನೇಶ್ವರದ ಕಳಿಂಗ ಇನ್&zwnj;ಸ್ಟಿಟ್ಯೂಟ್&zwnj; ಆಫ್&zwnj; ಇಂಡಸ್ಟ್ರಿಯಲ್&zwnj; ಟೆಕ್ನಾಲಜಿ(ಕೆಐಐಟಿ) ಕ್ಯಾಂಪಸ್&zwnj;ನಲ್ಲಿ ನಡೆದ 2026ನೇ ಸಾಲಿನ ಫೆಮಿನಾ ಮಿಸ್&zwnj; ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು 2027ರ ಮಿಸ್&zwnj; ವರ್ಲ್ಡ್&zwnj; ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.&lt;/p&gt;&lt;img&gt;&lt;p&gt;ಓಡಿಶಾದಲ್ಲಿ ನಡೆದ ಫೆಮಿನಾಸ್ ಇಂಡಿಯಾ 2026ರ ಕಿರೀಟ ಮುಡಿಗೇರಿಸಿಕೊಂಡ ಶಾಸಕ ಸತೀಶ ಸೈಲ್ ಪುತ್ರಿ ಸಾದ್ವಿ ಸೈಲ್ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದಿಸಿದ್ದರು. ಎಕ್ಸ್&zwnj;ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸಿಎಂ ಈ ಬಗ್ಗೆ ಸ್ವತಃ ಶಾಸಕರೇ ತಮ್ಮಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಿಸ್ ವರ್ಲ್ಡ್ ಸ್ಪರ್ಧೆಯಲ್ಲೂ ಗೆಲುವು ಸಾಧಿಸಲಿ ಎಂದು ಅವರು ಹಾರೈಸಿದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/sadhvi-sail-daughter-of-mla-satish-sail-crowned-femina-miss-india-2026-arrived-at-karwar-mrq-odeg85f"/>
        </item>
        <item>
            <title><![CDATA[ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!]]></title>
            <link>https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis</link>
            <guid isPermaLink="true">https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis</guid>
            <pubDate>Sat, 25 Apr 2026 16:57:58 +0530</pubDate>
            <description><![CDATA[ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಶೈಕ್ಷಣಿಕ-ಉದ್ಯೋಗ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಮೂಲಕ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ತರಬೇತಿ, ಇಂಟರ್ನ್&zwnj;ಶಿಪ್&zwnj; ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq25qzaeg80hnf34p78cg70h,imgname-proxin-tech-partners-with-gttc-dandeli-1777115856206.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ: ಪಟ್ಟಣ ಹಾಗೂ ಬೆಂಗಳೂರಿನಲ್ಲಿ ಐಟಿ ಕೇಂದ್ರಗಳನ್ನು ಹೊಂದಿರುವ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳಿಗಾಗಿ ಮಹತ್ವದ ಶೈಕ್ಷಣಿಕ&ndash;ಉದ್ಯೋಗ ಒಪ್ಪಂದ ಜರುಗಿದೆ.&lt;/p&gt;&lt;p&gt;ಪ್ರಾಕ್ಸಿನ್ ಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ನಾರಾಯಣ ಠೊಸುರ ಅವರು ಜಿ.ಟಿ.ಟಿ.ಸಿ. ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ, ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಈ ಒಪ್ಪಂದದ ಮೂಲಕ ವಿದ್ಯಾರ್ಥಿಗಳಿಗೆ ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ.&lt;/p&gt;&lt;h2&gt;ಕೈಗಾರಿಕಾ ಮಾರುಕಟ್ಟೆಗೆ ಹೊಂದುವ ತರಬೇತಿ&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ನಾರಾಯಣ ಠೊಸುರ ಅವರು, &ldquo;ನಮ್ಮ ಸಂಸ್ಥೆ ವಿದ್ಯಾರ್ಥಿಗಳಲ್ಲಿನ ಅಡಗಿದ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರಸ್ತುತ ಕೈಗಾರಿಕಾ ಮಾರುಕಟ್ಟೆಗೆ ಹೊಂದುವ ತರಬೇತಿಯನ್ನು ನೀಡಲಿದೆ. ಇಂದಿನ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ರೂಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಆಧುನಿಕ ತಾಂತ್ರಿಕ ಕೌಶಲ್ಯಗಳ ಜೊತೆಗೆ ಮಾನವೀಯ ಮೌಲ್ಯಗಳ ಬೆಳವಣಿಗೆಗೂ ನಾವು ಸಮಾನ ಆದ್ಯತೆ ನೀಡುತ್ತೇವೆ&rdquo; ಎಂದು ಹೇಳಿದರು.&lt;/p&gt;&lt;p&gt;ಅವರು ಮುಂದುವರಿದು, &ldquo;ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗೆ ಸೂಕ್ತ ಅವಕಾಶಗಳನ್ನು ಒದಗಿಸುವ ಜೊತೆಗೆ, ತಮ್ಮ ಕುಟುಂಬದೊಂದಿಗೆ ಇರುವ ಯುವಕರಿಗೆ ವಿಶೇಷ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಕೊರೋನಾ ಸಮಯದಲ್ಲಿ ರೂಪಿಸಿದ ನಮ್ಮ ಈ ಉದ್ಯೋಗ ನೀತಿಗೆ ರಾಷ್ಟ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರಶಂಸೆ ಲಭಿಸಿದೆ&rdquo; ಎಂದರು.&lt;/p&gt;&lt;h2&gt;ಪ್ರಾಕ್ಸಿನ್ ಟೆಕ್ ಕಂಪನಿಯಲ್ಲಿ ಇಂಟರ್ನ್&zwnj;ಶಿಪ್&zwnj; ಅವಕಾಶ&lt;/h2&gt;&lt;p&gt;ಈ ಒಪ್ಪಂದದ ಪ್ರಮುಖ ಅಂಶವಾಗಿ, ಜಿ.ಟಿ.ಟಿ.ಸಿ. ವಿದ್ಯಾರ್ಥಿಗಳಿಗೆ ಪ್ರಾಕ್ಸಿನ್ ಟೆಕ್ ಕಂಪನಿಯಲ್ಲಿ ಇಂಟರ್ನ್&zwnj;ಶಿಪ್&zwnj; ಅವಕಾಶ ಕಲ್ಪಿಸಲಾಗುತ್ತದೆ. ಇಂಟರ್ನ್&zwnj;ಶಿಪ್&zwnj; ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿಯೇ ಪೂರ್ಣಾವಧಿ ಉದ್ಯೋಗ ನೀಡುವ ವ್ಯವಸ್ಥೆಯೂ ಇದೆ. ಇದಲ್ಲದೆ, ಪ್ರಾಕ್ಸಿನ್ ಸಂಸ್ಥೆಯ ಉದ್ಯೋಗಿಗಳ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಜಿ.ಟಿ.ಟಿ.ಸಿ. ಅಧ್ಯಾಪಕರ ಸಹಕಾರ ಪಡೆಯಲಾಗುತ್ತದೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಜಿ.ಟಿ.ಟಿ.ಸಿ. ಸಂಸ್ಥೆಯ ಪ್ರಾಚಾರ್ಯ ದತ್ತಾತ್ರೇಯ, ಉದ್ಯೋಗಾಧಿಕಾರಿ ನಿಂಗಪ್ಪ ಸೇರಿದಂತೆ ಪ್ರಾಕ್ಸಿನ್ ಟೆಕ್ ಕಂಪನಿಯ ರಾಘವೇಂದ್ರ ಸಾಂಬ್ರೇಕರ, ನಯನಾ ಗೌಡಪ್ಪನವರ, ಮಣಿಕಂಠ ಸಾಂಬ್ರಾಣಿ, ಪ್ರಿಯಾ ಪಾಟೀಲ, ವಸುಂಧರಾ ನಾಯ್ಕ ಮತ್ತು ಕಲ್ಲಯ್ಯ ಪೂಜಾರಿ ಉಪಸ್ಥಿತರಿದ್ದರು.&lt;/p&gt;&lt;p&gt;ಒಟ್ಟಿನಲ್ಲಿ, ಈ ಒಪ್ಪಂದವು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಮಹತ್ವದ ಹೆಜ್ಜೆಯಾಗಿದ್ದು, ಕೈಗಾರಿಕೆ&ndash;ಶೈಕ್ಷಣಿಕ ಸಂಸ್ಥೆಗಳ ಸಹಕಾರದ ಉತ್ತಮ ಮಾದರಿಯಾಗಿ ಪರಿಣಮಿಸಲಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/proxin-tech-partners-with-gttc-dandeli-to-boost-skills-and-job-opportunities-for-students-gdp/articleshow-ouh9bis"/>
        </item>
        <item>
            <title><![CDATA[ಅಂಧ ವಿದ್ಯಾರ್ಥಿನಿ ಬಾಳಲ್ಲಿ ಆಟವಾಡಿದ SSLC ಬೋರ್ಡ್ ಎಡವಟ್ಟುರಾಯರು; 84% ಪರ್ಸೆಂಟೇಜ್ ಅಂಕ ಗಳಿಸಿದರೂ ಫೇಲ್!]]></title>
            <link>https://kannada.asianetnews.com/gallery/karnataka-districts/karnataka-sslc-result-error-blind-student-lieza-khanam-failed-despite-scoring-84-percent-sat-qzwr205</link>
            <guid isPermaLink="true">https://kannada.asianetnews.com/gallery/karnataka-districts/karnataka-sslc-result-error-blind-student-lieza-khanam-failed-despite-scoring-84-percent-sat-qzwr205</guid>
            <pubDate>Thu, 23 Apr 2026 18:10:01 +0530</pubDate>
            <description><![CDATA[ಶಿರಸಿಯ ಅಂಧ ವಿದ್ಯಾರ್ಥಿನಿ ಲೀಜಾ ಖಾನಮ್, ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 526 ಅಂಕಗಳನ್ನು ಗಳಿಸಿ ಶೇ. 84.16 ಫಲಿತಾಂಶ ಪಡೆದಿದ್ದಾಳೆ. ಆದರೆ, ಪರೀಕ್ಷಾ ಪ್ರಾಧಿಕಾರವು ಸಮಾಜ ವಿಜ್ಞಾನ ವಿಷಯಕ್ಕೆ ಗೈರುಹಾಜರಿ ಎಂದು ತಪ್ಪಾಗಿ ನಮೂದಿಸಿದ್ದರಿಂದ, ಆಕೆಯನ್ನು 'ಫೇಲ್' ಎಂದು ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpx4w1fws66knm7zccj68r63,imgname-uttara-kannada-sslc-blind-student-fail-1776947168764.jpg" type="image/jpeg" height="390" width="690"/>
            <content:encoded><![CDATA[ಶಿರಸಿಯ ಅಂಧ ವಿದ್ಯಾರ್ಥಿನಿ ಲೀಜಾ ಖಾನಮ್, ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ 526 ಅಂಕಗಳನ್ನು ಗಳಿಸಿ ಶೇ. 84.16 ಫಲಿತಾಂಶ ಪಡೆದಿದ್ದಾಳೆ. ಆದರೆ, ಪರೀಕ್ಷಾ ಪ್ರಾಧಿಕಾರವು ಸಮಾಜ ವಿಜ್ಞಾನ ವಿಷಯಕ್ಕೆ ಗೈರುಹಾಜರಿ ಎಂದು ತಪ್ಪಾಗಿ ನಮೂದಿಸಿದ್ದರಿಂದ, ಆಕೆಯನ್ನು 'ಫೇಲ್' ಎಂದು ಘೋಷಿಸಲಾಗಿದೆ.&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಏ.23): ಎ&lt;/strong&gt;ಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಮತ್ತು ಪರೀಕ್ಷಾ ಪ್ರಾಧಿಕಾರದ ಅಚಾತುರ್ಯವೊಂದು ಬೆಳಕಿಗೆ ಬಂದಿದೆ. ಹಗಲಿರುಳು ಶ್ರಮಪಟ್ಟು ಅಭ್ಯಾಸ ಮಾಡಿ, ಅತ್ಯುತ್ತಮ ಅಂಕ ಗಳಿಸಿದರೂ ಸಹ, ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದಾಗಿ ಅಂಧ ವಿದ್ಯಾರ್ಥಿನಿಯೊಬ್ಬಳನ್ನು 'ಫೇಲ್' ಎಂದು ಘೋಷಿಸಿರುವುದು ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಜಾ ಖಾನಮ್ ಈ ಅನ್ಯಾಯಕ್ಕೆ ಒಳಗಾದ ಪ್ರತಿಭೆ. ಲೀಜಾ ಹುಟ್ಟಿನಿಂದಲೇ ಅಂಧತ್ವ ಹೊಂದಿದ್ದರೂ, ತನ್ನ ದೈಹಿಕ ಮಿತಿಯನ್ನು ಮೀರಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದವಳು. ಇತ್ತೀಚೆಗೆ ನಡೆದ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಲೀಜಾ ಅತ್ಯಂತ ಅದ್ಭುತವಾಗಿ ಪ್ರದರ್ಶನ ನೀಡಿದ್ದಾಳೆ. ಆದರೆ ಫಲಿತಾಂಶ ಬಂದಾಗ ಆಕೆಗೆ ಹಾಗೂ ಆಕೆಯ ಪೋಷಕರಿಗೆ ಆಘಾತ ಕಾದಿತ್ತು.&lt;/p&gt;&lt;img&gt;&lt;p&gt;ಲೀಜಾ ಖಾನಮ್ ಪಡೆದ ಅಂಕಗಳು ಯಾವುದೇ ಸಾಮಾನ್ಯ ವಿದ್ಯಾರ್ಥಿಗೂ ಮಾದರಿಯಾಗುವಂತಿವೆ:&lt;/p&gt;&lt;ul&gt; &lt;li&gt;ಉರ್ದು: 124&lt;/li&gt; &lt;li&gt;ಕನ್ನಡ: 100&lt;/li&gt; &lt;li&gt;ಇಂಗ್ಲಿಷ್: 92&lt;/li&gt; &lt;li&gt;ಎಕನಾಮಿಕ್ಸ್: 98&lt;/li&gt; &lt;li&gt;ಪೊಲಿಟಿಕಲ್ ಸೈನ್ಸ್: 92&lt;/li&gt;&lt;/ul&gt;&lt;p&gt;ಒಟ್ಟು 625 ಅಂಕಗಳಿಗೆ ಲೀಜಾ ಬರೋಬ್ಬರಿ 526 ಅಂಕಗಳನ್ನು ಗಳಿಸಿದ್ದಾಳೆ. ಅಂದರೆ ಶೇಕಡಾ 84.16ರಷ್ಟು ಫಲಿತಾಂಶ ಆಕೆಯದ್ದಾಗಿದೆ. ಆದರೆ, ಫಲಿತಾಂಶದ ಪಟ್ಟಿಯಲ್ಲಿ ಆಕೆಯನ್ನು 'FAIL' (NC - Not Completed) ಎಂದು ನಮೂದಿಸಲಾಗಿದೆ.&lt;/p&gt;&lt;img&gt;&lt;p&gt;ಲೀಜಾ ಎಲ್ಲಾ ಪರೀಕ್ಷೆಗಳಿಗೂ ಹಾಜರಾಗಿದ್ದಾಳೆ. ಆದರೆ ಪರೀಕ್ಷಾ ಪ್ರಾಧಿಕಾರವು ಸೋಷಿಯಲ್ ಸೈನ್ಸ್ (ಸಮಾಜ ವಿಜ್ಞಾನ) ವಿಷಯಕ್ಕೆ ವಿದ್ಯಾರ್ಥಿನಿ ಗೈರು ಹಾಜರಾಗಿದ್ದಾಳೆ (NA - Not Available) ಎಂದು ನಮೂದಿಸಿದೆ. ಈ ಒಂದು ಸಣ್ಣ ಎಡವಟ್ಟಿನಿಂದಾಗಿ ಅಷ್ಟೊಂದು ಅಂಕ ಪಡೆದರೂ ಲೀಜಾ ಫಲಿತಾಂಶದಲ್ಲಿ ಫೇಲ್ ಎಂದು ಬಂದಿದೆ.&lt;/p&gt;&lt;p&gt;&lt;strong&gt;ದಾಖಲೆ ಇದ್ದರೂ ನಿರ್ಲಕ್ಷ್ಯ:&lt;/strong&gt;&lt;/p&gt;&lt;p&gt;ತಾನು ಪರೀಕ್ಷೆಗೆ ಹಾಜರಾಗಿರುವ ಬಗ್ಗೆ ಲೀಜಾ ಬಳಿ ಭದ್ರವಾದ ಪುರಾವೆಯಿದೆ. ಪರೀಕ್ಷಾ ಪ್ರವೇಶ ಪತ್ರದ (Hall Ticket) ಮೇಲೆ ಆಯಾ ದಿನದ ಪರೀಕ್ಷಾ ಮೇಲ್ವಿಚಾರಕರು ಸಹಿ ಮಾಡಿದ್ದಾರೆ. ಈ ಪ್ರವೇಶ ಪತ್ರವನ್ನು ಹಿಡಿದು ಲೀಜಾ ಮತ್ತು ಆಕೆಯ ಪೋಷಕರು ಇಂದು ಕಣ್ಣೀರು ಹಾಕುತ್ತಿದ್ದಾರೆ. &lsquo;ನಾನು ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದೇನೆ, ನನ್ನ ಬಳಿ ಸಹಿ ಇರುವ ಹಾಲ್ ಟಿಕೆಟ್ ಕೂಡ ಇದೆ. ಹೀಗಿದ್ದರೂ ನನ್ನನ್ನು ಫೇಲ್ ಮಾಡಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ&rsquo; ಎಂದು ಲೀಜಾ ಅಳಲು ತೋಡಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಒಬ್ಬ ಅಂಧ ವಿದ್ಯಾರ್ಥಿನಿ ಇಷ್ಟೊಂದು ಸಾಧನೆ ಮಾಡಿದಾಗ ಬೆನ್ನು ತಟ್ಟಬೇಕಾದ ಸರ್ಕಾರಿ ವ್ಯವಸ್ಥೆ, ಆಕೆಯ ಭವಿಷ್ಯದ ಜೊತೆ ಆಟವಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿರಸಿಯ ಯುನಿಯನ್ ಉರ್ದು ಶಾಲೆಯ ಶಿಕ್ಷಕರು ಮತ್ತು ಪೋಷಕರು ಕೂಡಲೇ ಈ ತಪ್ಪು ತಿದ್ದಿ ಲೀಜಾಗೆ ನ್ಯಾಯ ಒದಗಿಸಬೇಕೆಂದು ಪರೀಕ್ಷಾ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ತಾಂತ್ರಿಕ ದೋಷವನ್ನು ಸರಿಪಡಿಸಿ, ಲೀಜಾ ಖಾನಮ್ ಅವರ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಬೇಕಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/karnataka-sslc-result-error-blind-student-lieza-khanam-failed-despite-scoring-84-percent-sat-qzwr205"/>
        </item>
        <item>
            <title><![CDATA[ಶಿರಸಿಯಲ್ಲಿ ಎರಡನೇ ಮದುವೆಗೆ ತಯಾರಾಗಿದ್ದ ವೈದ್ಯನ ಭೀಕರ ಹತ್ಯೆ! ಆರೋಪಿಯ ಹೆಸರು ಬಹಿರಂಗಪಡಿಸದ ಪೊಲೀಸ್]]></title>
            <link>https://kannada.asianetnews.com/karnataka-districts/ayurvedic-doctor-killed-in-sirsi-uttara-kannada-before-wedding-friend-suspected-in-gold-theft-motive-gdp/articleshow-r99bbtq</link>
            <guid isPermaLink="true">https://kannada.asianetnews.com/karnataka-districts/ayurvedic-doctor-killed-in-sirsi-uttara-kannada-before-wedding-friend-suspected-in-gold-theft-motive-gdp/articleshow-r99bbtq</guid>
            <pubDate>Mon, 20 Apr 2026 17:10:44 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಎರಡನೇ ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಆಯುರ್ವೇದ ವೈದ್ಯ ಡಾ. ರಮೇಶ್ ಕಲ್ಗುಟ್ಕರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಮದುವೆಗೆಂದು ಖರೀದಿಸಿದ್ದ ಚಿನ್ನಾಭರಣಗಳ ಆಸೆಗಾಗಿ ಅವರ ಸ್ನೇಹಿತನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpnay1743kw8dcyq0xxnstn8,imgname-ayurvedic-doctor-killed-in-sirsi-1776685090020.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ&lt;/strong&gt; ಜಿಲ್ಲೆಯ ಶಿರಸಿ ನಗರದಲ್ಲಿ ಸಂಭವಿಸಿದ ಆಯುರ್ವೇದ ವೈದ್ಯರ ಹತ್ಯೆ ಪ್ರಕರಣವು ಭಾರೀ ಸಂಚಲನ ಮೂಡಿಸಿದೆ. ಕೆಎಚ್&zwnj;ಬಿ ಕಾಲೋನಿಯ ಹೊಸ ಬಡಾವಣೆಯಲ್ಲಿ ವಾಸವಿದ್ದ ಡಾ. ರಮೇಶ್ ಎಫ್. ಕಲ್ಗುಟ್ಕರ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ.&lt;/p&gt;&lt;p&gt;ಭಾನುವಾರ ಬೆಳಗ್ಗೆ ಸಂಬಂಧಿಕರು ಮನೆಗೆ ಭೇಟಿ ನೀಡಿದಾಗ, ವೈದ್ಯರು ತಮ್ಮ ನಿವಾಸದಲ್ಲೇ ಅವರ ಮೃತದೇಹ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಶಿರಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h2&gt;ಎರಡನೇ ಮದುವೆಗೆ ರೆಡಿಯಾಗಿದ್ದ ವೈದ್ಯ&lt;/h2&gt;&lt;p&gt;ಡಾ. ರಮೇಶ್ ಅವರು ಹುಬ್ಬಳ್ಳಿ ರಸ್ತೆಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದರು. ಐದು ತಿಂಗಳ ಹಿಂದೆ ಅವರ ಪತ್ನಿ ಹೃದಯಾಘಾತದಿಂದ ನಿಧನರಾಗಿದ್ದು, ನಂತರ ಅವರು ತಮ್ಮ ಪತ್ನಿಯ ತಂಗಿಯೊಂದಿಗೆ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಮಂಜಗುಣಿಯ ದೇವಸ್ಥಾನದಲ್ಲಿ ವಿವಾಹ ನಿಗದಿಯಾಗಿದ್ದು, ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಈ ದಾರುಣ ಘಟನೆ ನಡೆದಿದೆ.&lt;/p&gt;&lt;p&gt;ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತ್ವರಿತವಾಗಿ ತನಿಖೆ ಆರಂಭಿಸಿ, ಹತ್ಯೆಯ ರಹಸ್ಯವನ್ನು ಭೇದಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಡಾ. ರಮೇಶ್ ಅವರು ಮದುವೆಗೆಂದು ಚಿನ್ನಾಭರಣಗಳನ್ನು ಖರೀದಿ ಮಾಡಿದ್ದರು. ಈ ವಿಷಯ ತಿಳಿದಿದ್ದ ಅವರ ಸ್ನೇಹಿತನೇ ಹಣದ ಆಸೆಗಾಗಿ ಹತ್ಯೆ ನಡೆಸಿರುವುದು ಬಹಿರಂಗವಾಗಿದೆ. ಹತ್ಯೆ ಮಾಡಿದ ನಂತರ ಆರೋಪಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ವಿವಾಹಕ್ಕೆ ಒಂದು ದಿನ ಮುಂಚೆ ಕೊಲೆ&lt;/h2&gt;&lt;p&gt;ವಿವಾಹದ ಮೊದಲ ದಿನ ಮನೆಗೆ ಬಂದ ಸಂಬಂಧಿಕರಿಗೆ ವೈದ್ಯನ ಕೊಲೆಯಾಗಿರುವುದು ತಿಳಿದು ಬಂದಿದೆ. ಆರೋಪಿ ಹೆಸರು ಇನ್ನೂ ಅಧಿಕೃತವಾಗಿ ಪೊಲೀಸರು ಬಹಿರಂಗಪಡಿಸದಿದ್ದರೂ, ಪೊಲೀಸರು ಅವನನ್ನು ಬಂಧಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಶಿರಸಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಶಿರಸಿ ನಗರದಲ್ಲಿ ಭೀತಿ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಿದ್ದು, ಮದುವೆಗೆ ಮುನ್ನವೇ ಸಂಭವಿಸಿದ ಈ ಹತ್ಯೆ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/ayurvedic-doctor-killed-in-sirsi-uttara-kannada-before-wedding-friend-suspected-in-gold-theft-motive-gdp/articleshow-r99bbtq"/>
        </item>
        <item>
            <title><![CDATA[ಫಾರಿನ್‌ನಿಂದ ಬಂದ ತಕ್ಷಣ ದಾಂಡೇಲಿ ಯುವಕನ ಆತ್ಮ*ಹತ್ಯೆ: ಡೆತ್ ನೋಟ್‌ನಲ್ಲಿ ಪತ್ನಿ, ಅತ್ತೆ ಹೆಸರು ಉಲ್ಲೇಖ!]]></title>
            <link>https://kannada.asianetnews.com/karnataka-districts/uttara-kannada-dandeli-man-death-leaves-note-blaming-wife-and-mother-in-law-investigation-underway-gdp/articleshow-u6i8yb5</link>
            <guid isPermaLink="true">https://kannada.asianetnews.com/karnataka-districts/uttara-kannada-dandeli-man-death-leaves-note-blaming-wife-and-mother-in-law-investigation-underway-gdp/articleshow-u6i8yb5</guid>
            <pubDate>Sat, 02 May 2026 13:17:09 +0530</pubDate>
            <description><![CDATA[&lt;p&gt;ಉತ್ತರ ಕನ್ನಡದ ದಾಂಡೇಲಿಯಲ್ಲಿ, ಮಲೇಷ್ಯಾದಿಂದ ಹಿಂದಿರುಗಿದ್ದ ರಾಘವೇಂದ್ರ ವಾಡಕರ ಎಂಬ ಯುವಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ ಮತ್ತು ಅತ್ತೆಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ಈ ಘಟನೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqkt8t8jeq7dpng5xq67dvgg,imgname-dandeli-raghavendra-wadkar-1777707804946.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಬಾಂಬೆಚಾಳ ಪ್ರದೇಶದ ಮನೆಯಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಮೇ 1, 2026ರಂದು ಸಂಭವಿಸಿದ್ದು, ಮೃತರು ರಾಘವೇಂದ್ರ ದೇವೇಂದ್ರ ವಾಡಕರ (32) ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಮೂಲತಃ ದಾಂಡೇಲಿಯವರಾದ ರಾಘವೇಂದ್ರ ವಾಡಕರ ಅವರು ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದು, ಕೆಲವು ದಿನಗಳ ಹಿಂದೆ ತಮ್ಮ ಹುಟ್ಟೂರಿಗೆ ಆಗಮಿಸಿದ್ದರು. ಗುರುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರು ತನ್ನ ಕೈಯನ್ನು ಕೊಯ್ದುಕೊಂಡು ನೇಣಿಗೆ ಶರಣಾಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.&lt;/p&gt;&lt;h2&gt;ನನ್ನ ಸಾವಿಗೆ ಪತ್ನಿ ಹಾಗೂ ಅತ್ತೆ ಕಾರಣ ಎಂದ ಮೃತ&lt;/h2&gt;&lt;p&gt;ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್&zwnj;ನಲ್ಲಿ, ನನ್ನ ಸಾವಿಗೆ ಪತ್ನಿ ಮೇಘಾ ಹಾಗೂ ಅತ್ತೆಯೇ ಕಾರಣ&rdquo; ಎಂದು ರಾಘವೇಂದ್ರ ಆರೋಪಿಸಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಪತ್ನಿ ಮೇಘಾ ಮತ್ತು ಮಗು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ತಮ್ಮ ಮೇಲೆ ಕಿರುಕುಳ ನೀಡುತ್ತಿದ್ದಳು ಎಂದು ಡೆತ್ ನೋಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;&lt;p&gt;ಇದೇ ವೇಳೆ, ರಾಘವೇಂದ್ರ ಅವರ ಸಹೋದರಿ ನರ್ಮದಾ ಅವರು ಪತ್ನಿ ಮೇಘಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಅವಳಿಗೆ ಅನೈತಿಕ ಸಂಬಂಧವಿತ್ತು ಎಂದು ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಪ್ರಕರಣದ &amp;nbsp;ಸತ್ಯಾಸತ್ಯತೆ ತಿಳಿಯಲು ತನಿಖೆ ಆರಂಭಿಸಿದ್ದಾರೆ&lt;/p&gt;&lt;h2&gt;ಪತ್ನಿ ಮೇಘಾಳನ್ನು ವಶಕ್ಕೆ ಪಡೆದು ವಿಚಾರಣೆ&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿದುಕೊಂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸ್&zwnj;ಐ ಜಗದೀಶ ನಾಯ್ಕ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ರಾಘವೇಂದ್ರ ಅವರ ಪತ್ನಿ ಮೇಘಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.&lt;/p&gt;&lt;p&gt;ಈ ಘಟನೆ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಪೋಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮೃತ ರಾಘವೇಂದ್ರ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಭದ್ರತೆಯೊಂದಿಗೆ ನೆರವೇರಿಸಲಾಯ್ತು. ಒಟ್ಟಿನಲ್ಲಿ, ಡೆತ್ ನೋಟ್&zwnj;ನಲ್ಲಿರುವ ಆರೋಪಗಳು, ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಇತರೆ ಆರೋಪಗಳ ಹಿನ್ನೆಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ. ಇನ್ನು ಘಟನೆ ಬಳಿಕ ಮೇಘಾಳ ರೀಲ್ಸ್ ವಿಡಿಯೋಗಳು ವೈರಲ್ ಆಗುತ್ತಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/uttara-kannada-dandeli-man-death-leaves-note-blaming-wife-and-mother-in-law-investigation-underway-gdp/articleshow-u6i8yb5"/>
        </item>
        <item>
            <title><![CDATA[ಎಸ್ಸೆಸ್ಸೆಲ್ಸಿ ಫಲಿತಾಂಶ:  ಕರಾವಳಿ ಜಿಲ್ಲೆಗಳ ಕಮಾಲ್, ಕಲಬುರಗಿ ಕೊನೆ ಸ್ಥಾನ, ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs</link>
            <guid isPermaLink="true">https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs</guid>
            <pubDate>Thu, 23 Apr 2026 13:06:30 +0530</pubDate>
            <description><![CDATA[2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 94.1ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆಯು ಸತತವಾಗಿ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hxfab2pjfxnzca3pghha8m3x,imgname-tn-sslc-results.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 94.1 ಆಗಿದ್ದು, ಕಳೆದ ವರ್ಷಗಳಿಗಿಂತ ಉತ್ತಮ ಸಾಧನೆ ದಾಖಲಾಗಿದೆ. ವಿದ್ಯಾರ್ಥಿಗಳ ಸಾಧನೆ, ಜಿಲ್ಲಾವಾರು ಫಲಿತಾಂಶ ಮತ್ತು ಗ್ರಾಮೀಣ ಪ್ರದೇಶಗಳ ಮೇಲುಗೈ&mdash;allವು ಈ ಬಾರಿ ವಿಶೇಷ ಚರ್ಚೆಗೆ ಕಾರಣವಾಗಿವೆ.&lt;/p&gt;&lt;h2&gt;ಯಾರು ಲಾಸ್ಟ್? ಯಾರು ಫಸ್ಟ್?&lt;/h2&gt;&lt;p&gt;ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಮತ್ತೆ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 98.40 ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಕಳೆದ ಬಾರಿಯೂ ಕಲಬುರಗಿ ಕಲಬುರಗಿ ಕೊನೆಯ ಸ್ಥಾನ ಪಡೆದಿತ್ತು. 2025ರಲ್ಲಿ 56.89 ಬಂದಿತ್ತು. &amp;nbsp;ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಫಲಿತಾಂಶವನ್ನು ಉತ್ತಮಗೊಳಿಸುವ ಮಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಮಹತ್ವದ ಕಾರ್ಯಗಳನ್ನು ಮಾಡಿತ್ತು.&lt;/p&gt;&lt;h2&gt;ಇಳಿಕೆಯತ್ತಲೇ ಸಾಗಿದ ಕಲಬುರಗಿ, ಏರಿಕೆ ಯಾವಾಗ?&lt;/h2&gt;&lt;p&gt;ಕಳೆದ ಬಾರಿಗಿಂತ ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನದಲ್ಲಿ ಇರುವ ಕಲಬುರಗಿ 2023 ನೇ ಸಾಲಿನಿಂದಲೇ &amp;nbsp;ಇಳಿಕೆಯತ್ತ ಫಲಿತಾಂಶವನ್ನು ದಾಖಲಿಸುತ್ತಲೇ ಬಂದಿದೆ. &amp;nbsp;2023ರಲ್ಲಿ 29ನೇ ಸ್ಥಾನದಲ್ಲಿತ್ತು, 2024ರಲ್ಲಿ 34ನೇ ಸ್ಥಾನ ಗಳಿಸಿತ್ತು. 2025ರಲ್ಲಿ 35ನೇ ಸ್ಥಾನ &amp;nbsp;ಪಡೆದು ಕೊನೆಯ ಸ್ಥಾನ ಪಡೆದಿತ್ತು. ಇದೀಗ ಈ ಸಾಲಿನಲ್ಲೂ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.&lt;/p&gt;&lt;h2&gt;ಜಿಲ್ಲಾವಾರು ಫಲಿತಾಂಶ ಹೀಗಿದೆ&lt;/h2&gt;&lt;p&gt;ದಕ್ಷಿಣ ಕನ್ನಡ 98.40&lt;/p&gt;&lt;p&gt;ಉಡುಪಿ 98.18&lt;/p&gt;&lt;p&gt;ಉತ್ತರ ಕನ್ನಡ 98.09&lt;/p&gt;&lt;p&gt;ಹಾಸನ 97.51&lt;/p&gt;&lt;p&gt;ಮಂಡ್ಯ 97.45&lt;/p&gt;&lt;p&gt;ಸಿರ್ಸಿ 97.21&lt;/p&gt;&lt;p&gt;ಹಾವೇರಿ 96.87&lt;/p&gt;&lt;p&gt;ಕೊಡಗು 96.70&lt;/p&gt;&lt;p&gt;ಶಿವಮೊಗ್ಗ 96.56&lt;/p&gt;&lt;p&gt;ವಿಜಯನಗರ 96.39&lt;/p&gt;&lt;p&gt;ಬೆಂಗಳೂರು ಗ್ರಾಮಾಂತರ 95.84&lt;/p&gt;&lt;p&gt;ಧಾರವಾಡ 95.59&lt;/p&gt;&lt;p&gt;ಕೋಲಾರ 95.50&lt;/p&gt;&lt;p&gt;ಬಾಗಲಕೋಟೆ 95.42&lt;/p&gt;&lt;p&gt;ಬೆಂಗಳೂರು ಉತ್ತರ 95.34&lt;/p&gt;&lt;p&gt;ಗದಗ 95.24&lt;/p&gt;&lt;p&gt;ಚಿಕ್ಕಮಗಳೂರು 94.99&lt;/p&gt;&lt;p&gt;ಬೆಳಗಾವಿ 94.75&lt;/p&gt;&lt;p&gt;ದಾವಣಗೆರೆ 94.64&lt;/p&gt;&lt;p&gt;ಮೈಸೂರು 94.50&lt;/p&gt;&lt;p&gt;ರಾಯಚೂರು 94.41&lt;/p&gt;&lt;p&gt;ವಿಜಯಪುರ 94.17&lt;/p&gt;&lt;p&gt;ಚಿಕ್ಕೋಡಿ 94.09&lt;/p&gt;&lt;p&gt;ಬಳ್ಳಾರಿ 93.36&lt;/p&gt;&lt;p&gt;ಕೊಪ್ಪಳ 93.10&lt;/p&gt;&lt;p&gt;ರಾಮನಗರ 92.83&lt;/p&gt;&lt;p&gt;ಚಿತ್ರದುರ್ಗ 92.25&lt;/p&gt;&lt;p&gt;ಬೀದರ 92.18&lt;/p&gt;&lt;p&gt;ತುಮಕೂರು 92.04&lt;/p&gt;&lt;p&gt;ಚಾಮರಾಜನಗರ 91.89&lt;/p&gt;&lt;p&gt;ಯಾದಗಿರಿ 91.89&lt;/p&gt;&lt;p&gt;ಬೆಂಗಳೂರು ದಕ್ಷಿಣ 91.65&lt;/p&gt;&lt;p&gt;ಚಿಕ್ಕಬಳ್ಳಾಪುರ 90.88&lt;/p&gt;&lt;p&gt;ಮಧುಗಿರಿ 90.26&lt;/p&gt;&lt;p&gt;ಕಲಬುರಗಿ 85.06&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs"/>
        </item>
        <item>
            <title><![CDATA[ಎರಡು ಮರಗಳ ಮಧ್ಯೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾದ ಕಾರ್; ಇಬ್ಬರ ಸಾವು, ಓರ್ವ ಗಂಭೀರ]]></title>
            <link>https://kannada.asianetnews.com/gallery/karnataka-districts/two-people-died-on-the-spot-in-a-horrific-road-accident-near-dandeli-in-uttara-kannada-district-mrq-yvqgoua</link>
            <guid isPermaLink="true">https://kannada.asianetnews.com/gallery/karnataka-districts/two-people-died-on-the-spot-in-a-horrific-road-accident-near-dandeli-in-uttara-kannada-district-mrq-yvqgoua</guid>
            <pubDate>Tue, 21 Apr 2026 08:03:35 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರ್ ಎರಡು ಮರಗಳ ಮಧ್ಯೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kppxpq1tpdt08jxe0dhp28gb,imgname-car-accident-dandeli--3--1776738327610.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರ್ ಎರಡು ಮರಗಳ ಮಧ್ಯೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಕಾರವಾರ:ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕರ್ಕಾ ಕ್ರಾಸ್&ndash;ಅಜಗಾಂವ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ಮೃತರನ್ನು ಧಾರವಾಡದ ಫಾರೂಖ್ ಸಾಬ್ ಮತ್ತು ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಎಂದು ಗುರುತಿಸಲಾಗಿದೆ. ಇಬ್ಬರ ಮೃತದೇಹಗಳನ್ನು ಹಳಿಯಾಳದ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಡಿಕ್ಕಿಯ ರಭಸಕ್ಕೆ ಕಾರ್ ಎರಡು ಮರಗಳ ಮಧ್ಯೆ ಸಿಲುಕಿದೆ. ಅಪಘಾತದ ತೀವ್ರತೆಗೆ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೆತ್ತ ತಾಯಿಯ ಶವಕ್ಕೆ ಹೆಗಲು ಕೊಡದ ಮಕ್ಕಳು; ಸಮಾಜ ಸೇವಕರಿಂದ್ಲೇ ಅಂತ್ಯಕ್ರಿಯೆ!&lt;/strong&gt;&lt;/p&gt;&lt;img&gt;&lt;p&gt;ಚಾಲಕನ ಗುರುತು ಪತ್ತೆಯಾಗಿಲ್ಲ. ಕಾರ್&zwnj;ನಲ್ಲಿ ಚಾಲಕ ಸೇರಿದಂತೆ ಒಟ್ಟು ಮೂರು ಜನರು ಪ್ರಯಾಣಿಸುತ್ತಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Vijayapura: ಸಿಂದಗಿಯ ಮೌಲಾಲಿ ಕುಟುಂಬದಲ್ಲಿ ಸಂಭ್ರಮದಿಂದ ಬಸವ ಜಯಂತಿ ಆಚರಣೆ&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/two-people-died-on-the-spot-in-a-horrific-road-accident-near-dandeli-in-uttara-kannada-district-mrq-yvqgoua"/>
        </item>
    </channel>
</rss>
