<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 21 May 2026 22:24:03 +0530</lastBuildDate>
        <atom:link href="https://kannada.asianetnews.com/rss/uttara-kannada" rel="self" type="application/rss+xml"/>
        <item>
            <title><![CDATA[ಮನೆ ತಲುಪಲು 2 ಕಿ.ಮಿ ಬಾಕಿ ಇರುವಾಗಲೇ ಮದುವೆಗೆ ತೆರಳಿದ್ದ ಬಸ್ ಯಲ್ಲಾಪುರದ ಬಳಿ ಅಪಘಾತ]]></title>
            <link>https://kannada.asianetnews.com/gallery/state/wedding-bus-meets-with-accident-near-yellapur-just-2-km-before-reaching-home-03hoo1l</link>
            <guid isPermaLink="true">https://kannada.asianetnews.com/gallery/state/wedding-bus-meets-with-accident-near-yellapur-just-2-km-before-reaching-home-03hoo1l</guid>
            <pubDate>Sun, 10 May 2026 20:16:26 +0530</pubDate>
            <description><![CDATA[&lt;p&gt;ಮದುವೆ ಮುಗಿಸಿಕೊಂಡು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಮಿನಿ ಬಸ್ ಯಲ್ಲಾಪುರ ಸಮೀಪ ಅಪಘಾತಕ್ಕೀಡಾದ ಘಟನೆ ನಡೆದಿದೆ. ಇನ್ನೇನು ಮನೆ ತಲುಪಿತು ಅನ್ನೋವಷ್ಟರಲ್ಲೇ ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr95cj9ey0jtswsayae5vbff,imgname-yellapur-mini-bus-accident-1778424105261.png" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಮುಗಿಸಿಕೊಂಡು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಮಿನಿ ಬಸ್ ಯಲ್ಲಾಪುರ ಸಮೀಪ ಅಪಘಾತಕ್ಕೀಡಾದ ಘಟನೆ ನಡೆದಿದೆ. ಇನ್ನೇನು ಮನೆ ತಲುಪಿತು ಅನ್ನೋವಷ್ಟರಲ್ಲೇ ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.&lt;/p&gt;&lt;img&gt;&lt;p&gt;ಎಪ್ರಿಲ್ ಮೇ ತಿಂಗಳು ಸಹಜವಾಗಿ ಮದುವೆ ಸೀಸನ್. ಉರಿ ಬಿಸಿಲು ಜೋರಾಗಿದ್ದರೂ ಮದುವೆ ಸಂಭ್ರಮ ಕಳೆಗಟ್ಟಿರುತ್ತದೆ. ಹೀಗೆ ಕುಟುಂಬಸ್ಥರು ಮಿನಿ ಬಸ್ ಮೂಲಕ ಮದುವೆಗೆ ತೆರಳಿದ್ದಾರೆ. ಮದುವೆ ಮುಗಿಸಿಕೊಂಡು ಮರಳಿ ಬರುತ್ತಿದ್ದ ವೇಳೆ ಮಿನಿ ಬಸ್ ಅಪಘಾತಕ್ಕೀಡಾದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ನಡೆದಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಮಿನಿ ಬಸ್ ಅಪಘಾತವಾಗಿದೆ. ನಿಯಂತ್ರಣ ತಪ್ಪಿದ ಬಸ್ ಅಪಘಾತಕ್ಕೀಡಾಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಬೆನ್ನಲ್ಲೇ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಅಪಘಾತದ ಬೆನ್ನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ಕುಟುಂಬಸ್ಥರು ಮಿನಿ ಬಸ್ ಮೂಲಕ ಅರಬೈಲ್ ನಿಂದ ಬೆಳಗಾವಿಯಲ್ಲಿ ನಡೆದ ಮದುವೆಗೆ ತೆರಳಿದ್ದರು. ಮದುವೆ ಮುಗಿಸಿ ಕೊಂಡು ಮರಳಿ ಬರುತ್ತಿದ್ದಾಗ ಬಸ್ ಅಪಘಾತವಾಗಿದೆ. ಇನ್ನು ಕೇವಲ 2 ಕಿಲೋಮೀಟರ್ ಸಾಗಿದರೆ ಕುಟುಂಬಸ್ಥರು ಯಾವುದೇ ಅಪಾಯವಿಲ್ಲದೆ ಮನೆ ಸೇರಿಕೊಳ್ಳುತ್ತಿದ್ದರು.&lt;/p&gt;&lt;img&gt;&lt;p&gt;ಯಲ್ಲಾಪುರ ಭಾಗದಲ್ಲಿ ಮಳೆಯಾಗುತ್ತಿದ್ದ ಕಾರಣ ಬಸ್ ನಿಧಾನವಾಗಿ ಸಾಗುತ್ತಿತ್ತು. ಇದರ ನಡುವೆ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಗುದ್ದಿದೆ. ಮುಂಭಾಗದಲ್ಲಿ ಕುಳಿತಿದ್ದ ಹಲವರಿಗೆ ಗಾಯವಾಗಿದೆ. ಇನ್ನು ಮಕ್ಕಳು, ಹೆಣ್ಣುಮಕ್ಕಳೂ ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ರಾಷ್ಟ್ರೀಯ ಹೆದ್ದಾರಿ 52 ರ ಅರಬೈಲ್ ಘಟ್ಟದತಿರುವಿನಲ್ಲಿ ಅಪಘಾತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಯಾಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;&lt;h2&gt;ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ&lt;/h2&gt;]]></content:encoded>
            <category>uttara-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/wedding-bus-meets-with-accident-near-yellapur-just-2-km-before-reaching-home-03hoo1l"/>
        </item>
        <item>
            <title><![CDATA[Virat Kohli: ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ಮಾಡಿದ ಉತ್ತರ ಕನ್ನಡದ ಸಿದ್ದಾಪುರ ಹುಡುಗ; ವಿಶೇಷ ವಿಷಯ ಬಿಚ್ಚಿಟ್ರು!]]></title>
            <link>https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy</link>
            <guid isPermaLink="true">https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy</guid>
            <pubDate>Thu, 07 May 2026 12:05:13 +0530</pubDate>
            <description><![CDATA[&lt;p&gt;Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್&zwnj; ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0j2spk2xnxvgz6zakxcn6b,imgname-new-project---2026-05-07t115820.601-1778135426771.jpg" type="image/jpeg" height="390" width="690"/>
            <content:encoded><![CDATA[&lt;p&gt;Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್&zwnj; ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮೂಲತಃ ಸಿದ್ದಾಪುರ ತಾಲೂಕಿನ ಮಕ್ಕಿಗದ್ದೆಯವರು. ಸಿದ್ದಾಪುರ ವಿದ್ಯಾಗಿರಿಯಲ್ಲಿ ವಾಸಿಸುತ್ತಿರುವ ಶಿಕ್ಷಕ ಜಿ.ಜಿ ಹೆಗಡೆ ಮತ್ತು ರೂಪಾ ಹೆಬ್ಬಾರ ದಂಪತಿಯ ಮತ್ರ.&lt;/p&gt;&lt;img&gt;&lt;p&gt;ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಾಲ್ಯದಿಂದಲೆ ವಾಲಿಬಾಲ್, ಬ್ಯಾಡ್ಮಿಟನ್, ಕ್ರಿಕೆಟ್&zwnj;ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಾಗರಾಜ ಹೆಗಡೆ ನಾಲ್ಕು ಐದು ವರ್ಷಗಳಿಂದ ಶಿಕ್ಷಣದ ಜತೆ ಜತೆಗೆ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್&zwnj;ನಲ್ಲಿ ಕ್ರಿಕೆಟ್ ತರಬೇತಿ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಇವರು ಆಡುತ್ತಿರುವ ಕ್ಲಬ್&zwnj;ಗೆ ಜಾಹೀರಾತು ಆಫರ್ ಬಂದಿದ್ದು 30 ಜನರಲ್ಲಿ ಇವರು ಆಯ್ಕೆಯಾಗಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಇದು ನಿಜವೋ ಎಂಬಂತೆ ಇಂದಿಗೂ ಅನಿಸುತ್ತಿಲ್ಲ, ಆ ಕ್ಷಣದ ಕೆಲವು ನೆನಪುಗಳು ಇಲ್ಲಿವೆ.&lt;/p&gt;&lt;p&gt;ಅವರನ್ನು ನೋಡುತ್ತಾ ಬೆಳೆದ ನಾನು, ಇಂದು ವಿರಾಟ್ ಕೊಹ್ಲಿ ಅವರ ಜೊತೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ನೋಡಿದರೆ, ಜೀವನವು ನಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಅಚ್ಚರಿಗೊಳಿಸುತ್ತದೆ ಎಂದು ಅನಿಸುತ್ತದೆ.&lt;/p&gt;&lt;img&gt;&lt;p&gt;'Oakley Meta AI' ಗ್ಲಾಸಸ್&zwnj;ಗಳ ಈ ಚಿತ್ರೀಕರಣದ ಭಾಗವಾಗಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಯಾವಾಗಲೂ ಗೌರವದಿಂದ ಕಾಣುವ ವ್ಯಕ್ತಿಯೊಂದಿಗೆ ಮಾತುಕತೆ ಆಡಿದ್ದು, ಈ ಅನುಭವಕ್ಕೆ ನಾನು ಚಿರಋಣಿ.&lt;/p&gt;&lt;p&gt;ಈ ಕ್ಷಣದಲ್ಲಿ ನನಗೆ ವಿಶೇಷವಾಗಿ ಅನ್ನಿಸಿದ್ದು ಅವರ ಸಾಧನೆಯಲ್ಲ, ಬದಲಾಗಿ ಕ್ರಿಕೆಟ್ ಲೋಕದಲ್ಲಿ ಎಲ್ಲವನ್ನೂ ಸಾಧಿಸಿದ್ದರೂ ಅವರು ತೋರುವ ಆ ನಮ್ರತೆ ಮತ್ತು ಅವರ ವ್ಯಕ್ತಿತ್ವ.&lt;/p&gt;&lt;img&gt;&lt;p&gt;ಇದು ನಾನು ಯಾವಾಗಲೂ ಹತ್ತಿರವಾಗಿ ಇಟ್ಟುಕೊಳ್ಳುವ ನೆನಪುಗಳಲ್ಲಿ ಒಂದು. ಕೆಲವೊಮ್ಮೆ ಕೇವಲ ಮೆಚ್ಚುಗೆಯಾಗಿ ಆರಂಭವಾಗಿದ್ದು ಹೇಗೆ ವಾಸ್ತವವಾಗಿ ಬದಲಾಗಬಲ್ಲದು ಎಂಬುದಕ್ಕೆ ಇದೊಂದು ನೆನಪಿನ ಬುತ್ತಿ.&lt;/p&gt;&lt;img&gt;&lt;p&gt;ವಿರಾಟ್&zwnj; ಕೊಹ್ಲಿ ಅವರಿಂದ ಆಟೋಗ್ರಾಫ್&zwnj; ಕೂಡ ಪಡೆದಿದ್ದಾರೆ.&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy"/>
        </item>
        <item>
            <title><![CDATA[ಸಿದ್ದಾಪುರ To ಶಿರಸಿ: ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ]]></title>
            <link>https://kannada.asianetnews.com/gallery/karnataka-districts/siddapur-to-sirsi-nwkrtc-transport-agency-bus-schedule-changed-mrq-36pp5e6</link>
            <guid isPermaLink="true">https://kannada.asianetnews.com/gallery/karnataka-districts/siddapur-to-sirsi-nwkrtc-transport-agency-bus-schedule-changed-mrq-36pp5e6</guid>
            <pubDate>Thu, 14 May 2026 07:20:41 +0530</pubDate>
            <description><![CDATA[&lt;p&gt;ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ಸಾರಿಗೆ ಬಸ್&zwnj;ನ ಸಮಯವನ್ನು &amp;nbsp;ಬದಲಾಯಿಸಲಾಗಿದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಈ ಬದಲಾವಣೆ ಮಾಡಲಾಗಿದ್ದು, ಇದು ಪ್ರಯಾಣಿಕರ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krj2f3yftjryray8zxbepmqf,imgname-nwkrtc--1--1778723033039.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ಸಾರಿಗೆ ಬಸ್&zwnj;ನ ಸಮಯವನ್ನು &amp;nbsp;ಬದಲಾಯಿಸಲಾಗಿದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಈ ಬದಲಾವಣೆ ಮಾಡಲಾಗಿದ್ದು, ಇದು ಪ್ರಯಾಣಿಕರ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಿದೆ.&lt;/p&gt;&lt;img&gt;&lt;p&gt;ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆ 9.30ಕ್ಕೆ ಇದ್ದ ಸಮಯವನ್ನು 9 ಗಂಟೆಗೆ ಮಾರ್ಪಡಿಸಿ ಸಂಸ್ಥೆ ಅಧಿಕೃತ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ಕಳೆದ ಆರು ವರ್ಷಗಳಿಂದ ಪ್ರಯಾಣಿಕರು ಅನುಭವಿಸುತ್ತಿದ್ದ ತೊಂದರೆಗೆ ಕೊನೆಗೂ ಪರಿಹಾರ ಸಿಕ್ಕಂತಾಗಿದೆ.&lt;/p&gt;&lt;img&gt;&lt;p&gt;ಸುಮಾರು 20 ವರ್ಷಗಳಿಂದ ಈ ಬಸ್ ಬೆಳಗ್ಗೆ 8.45ಕ್ಕೆ ಸರಿಯಾಗಿ ಸಂಚರಿಸುತ್ತಿತ್ತು. ಆದರೆ, ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಜಾರಿಗೆ ತಂದ ಮಾರ್ಗ ಮತ್ತು ಸಮಯ ಬದಲಾವಣೆಯ ನಿಯಮಗಳಿಂದಾಗಿ, ಈ ಬಸ್ಸಿನ ಸಮಯವನ್ನು 9.30ಕ್ಕೆ ಮುಂದೂಡಲಾಗಿತ್ತು. ಈ ಬದಲಾವಣೆಯಿಂದ ಸಾರ್ವಜನಿಕರಿಗೆ ತೀವ್ರ ಅನನುಕೂಲವಾಗುತ್ತಿತ್ತು.&lt;/p&gt;&lt;img&gt;&lt;p&gt;ಅಂದು ಹಿರಿಯ ಅಧಿಕಾರಿಗಳು ಕೆಲವೇ ತಿಂಗಳಲ್ಲಿ ಸಮಯವನ್ನು ಸರಿಪಡಿಸುವ ಭರವಸೆ ನೀಡಿದ್ದರೂ, ಅದು ಜಾರಿಯಾಗಿರಲಿಲ್ಲ. ವರ್ಷಗಟ್ಟಲೆ ಕಳೆದರೂ ಯಾವುದೇ ಸ್ಪಂದನೆ ಸಿಗದ ಕಾರಣ ಸಾರ್ವಜನಿಕರು ಇದರ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ, ಸಾರ್ವಜನಿಕರ ನಿರಂತರ ಒತ್ತಡ ಮತ್ತು ಹೋರಾಟದ ಫಲವಾಗಿ ಸಾರಿಗೆ ಸಂಸ್ಥೆ ಈಗ ಎಚ್ಚೆತ್ತುಕೊಂಡು ಸಮಯ ಬದಲಾವಣೆ ಮಾಡಿದೆ.&lt;/p&gt;&lt;img&gt;&lt;p&gt;ಈ ವೇಳಾಪಟ್ಟಿ ಬದಲಾವಣೆಯು ಈ ಭಾಗದ ಪ್ರಯಾಣಿಕರಲ್ಲಿ ಹರ್ಷ ತಂದಿದೆ. ವಿಶೇಷವಾಗಿ ಸಿದ್ದಾಪುರದಿಂದ ಕೊಲಸಿರ್ಸಿ, ಬಿದ್ರಕಾನ್, ಮುತ್ತಿಗೆ, ಕವಲಕೊಪ್ಪ ಹಾಗೂ ಹಾರ್ಸಿಕಟ್ಟಾ ಕಡೆಗೆ ತೆರಳುವ ಶಿಕ್ಷಕರು ಈವರೆಗೆ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿತ್ತು. ಬಸ್ 9.30ಕ್ಕೆ ಬಿಡುತ್ತಿದ್ದರಿಂದ ವಾಜಗದ್ದೆ ಭಾಗದ ಜನರಿಗೆ ಶಿರಸಿ ಹಾಗೂ ಸಿದ್ದಾಪುರಕ್ಕೆ ತೆರಳಲು ವಿಳಂಬವಾಗುತ್ತಿತ್ತು. ಈಗ ಸಮಯ ಬದಲಾವಣೆಯಿಂದ ಶಾಲಾ ಮಕ್ಕಳು ಹಾಗೂ ನಾಣಿಕಟ್ಟಾ ಸರ್ಕಾರಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ವೇಳಾಪಟ್ಟಿ ಪರಿಷ್ಕರಿಸಿದ ಉತ್ತರ ಕನ್ನಡ ವಿಭಾಗದ ಸಾರಿಗೆ ಅಧಿಕಾರಿಗಳಿಗೆ ಬಿದ್ರಕಾನ್, ಮುತ್ತಿಗೆ, ಹಾರ್ಸಿಕಟ್ಟಾ ಹಾಗೂ ವಾಜಗದ್ದೆ ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/siddapur-to-sirsi-nwkrtc-transport-agency-bus-schedule-changed-mrq-36pp5e6"/>
        </item>
        <item>
            <title><![CDATA[Pre Monsson: 40-60 ಕಿಮೀ ವೇಗದಲ್ಲಿ ಬಿರುಗಾಳಿ; ಕರಾವಳಿಗೆ ಹವಾಮಾನ ಇಲಾಖೆ ಎಚ್ಚರಿಕೆ]]></title>
            <link>https://kannada.asianetnews.com/gallery/karnataka-districts/storm-with-speed-of-40-to-60-kmph-meteorological-department-warns-of-strong-winds-along-the-coast-mrq-41e6cd8</link>
            <guid isPermaLink="true">https://kannada.asianetnews.com/gallery/karnataka-districts/storm-with-speed-of-40-to-60-kmph-meteorological-department-warns-of-strong-winds-along-the-coast-mrq-41e6cd8</guid>
            <pubDate>Mon, 18 May 2026 09:02:40 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 18ರವರೆಗೆ ಭಾರಿ ಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ಮತ್ತು ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ತುರ್ತು ಸೇವೆಗಾಗಿ ಕಂಟ್ರೋಲ್ ರೂಮ್ ಸಂಖ್ಯೆಗಳನ್ನು ಒದಗಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kks257dxacra114eeb638mh5,imgname-cyclone-1773588880829.jpg" type="image/jpeg" height="390" width="690"/>
            <content:encoded><![CDATA[ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 18ರವರೆಗೆ ಭಾರಿ ಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ಮತ್ತು ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ತುರ್ತು ಸೇವೆಗಾಗಿ ಕಂಟ್ರೋಲ್ ರೂಮ್ ಸಂಖ್ಯೆಗಳನ್ನು ಒದಗಿಸಲಾಗಿದೆ.&lt;img&gt;&lt;p&gt;ಭಾರತೀಯ ಹವಾಮಾನ ಇಲಾಖೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೇ 18ರವರೆಗೆ ಭಾರಿ ಗಾಳಿ ಹಾಗೂ ಮಿಂಚು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಎಂದು ಮುನ್ಸೂಚನೆ ನೀಡಲಾಗಿರುವುದರಿಂದ ಈ ಕೆಳಗಿನಂತೆ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಮಿನುಗಾರರು ಮೇಲಿನ ದಿನದಂದು ಸಮುದ್ರದಲ್ಲಿ ಅಲೆಗಳು ತೀವ್ರತೆ ಇರುವುದರಿಂದ ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದೆ. ಪ್ರವಾಸಿಗರು, ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು.&lt;/p&gt;&lt;img&gt;&lt;p&gt;ಮಳೆಯ ಜೊತೆಗೆ ಗಾಳಿ ಕೂಡಾ 40-60 ಕಿಮೀ ವೇಗದಿಂದ ಬೀಸುವ ಸಾಧ್ಯತೆಯಿರುವುದರಿಂದ ಅಪಾಯಕಾರಿ ಮರಗಳ ಸಮೀಪದ ಮನೆಗಳಲ್ಲಿಯ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು ಮತ್ತು ಮರಗಳ ಕೆಳಗೆ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗೃತಿ ವಹಿಸಬೇಕು. ತುರ್ತು ಸೇವೆಗೆ 24x7 ಕಂಟ್ರೋಲ್ ರೂಮ್ ಸಂಖ್ಯೆ 08382-229857 ಮೊ. 9483511015 ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಹಾಗೂ ಅಲೆಗಳ ಅಬ್ಬರ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡುತ್ತಿದ್ದಂತೆ ಮೀನುಗಾರಿಕಾ ಬೋಟುಗಳು ಬೈತಖೋಲ ಬಂದರಿನಲ್ಲಿ ಲಂಗರು ಹಾಕಿವೆ. ಮುಂದಿನ 48 ಗಂಟೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಗಾಳಿ ಹಾಗೂ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಹಾಗೂ ಪ್ರವಾಸಿಗರಿಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧೆಡೆ ಬಿರುಗಾಳಿ, ಮಳೆ ಉಂಟಾಗುತ್ತಿದೆ. ಇದರಿಂದ ಈಗಾಗಲೇ ಮೀನುಗಾರಿಕಾ ಚಟುವಟಿಕೆಗೆ ಹಿನ್ನಡೆ ಉಂಟಾಗಿತ್ತು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/storm-with-speed-of-40-to-60-kmph-meteorological-department-warns-of-strong-winds-along-the-coast-mrq-41e6cd8"/>
        </item>
        <item>
            <title><![CDATA[ಗೋವುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಕಾಂಗ್ರೆಸ್ ಶಾಸಕ ಆರ್‌ವಿ ದೇಶಪಾಂಡೆ]]></title>
            <link>https://kannada.asianetnews.com/state/cow-protection-is-everyone-s-primary-duty-says-rv-deshpande-at-haliyal-rav/articleshow-4zi441l</link>
            <guid isPermaLink="true">https://kannada.asianetnews.com/state/cow-protection-is-everyone-s-primary-duty-says-rv-deshpande-at-haliyal-rav/articleshow-4zi441l</guid>
            <pubDate>Sun, 03 May 2026 09:59:12 +0530</pubDate>
            <description><![CDATA[&lt;p&gt;ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ಹಳಿಯಾಳದ ದುಸಗಿ ಗ್ರಾಮದ ಸರ್ಕಾರಿ ಗೋಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸೋಲಾರ್ ವಿದ್ಯುತ್ ಸೌಲಭ್ಯ, ₹75 ಲಕ್ಷ ವೆಚ್ಚದ ನೂತನ ಆಶ್ರಯ ತಾಣ ಶಿಲಾನ್ಯಾಸ ನೆರವೇರಿಸಿ, ಗೋವುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k40bbeft2g86zv991rbhg8bd,imgname-mhm-1756653533690.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಳಿಯಾಳ (ಮೇ.3)&lt;/strong&gt; ಗೋವುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.&lt;/p&gt;&lt;p&gt;ತಾಲೂಕಿನ ದುಸಗಿ ಗ್ರಾಮದಲ್ಲಿರುವ ಜಿಲ್ಲಾ ಸರ್ಕಾರಿ ಗೋಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ದೇಶದ ಪರಂಪರೆಯಲ್ಲಿ ಗೋವುಗಳನ್ನು ದೇವರಿಗೆ ಸಮಾನವಾಗಿ ಪೂಜಿಸಲಾಗುತ್ತದೆ. ಗೋವುಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಹೀಗಿರುವಾಗ ಗೋವುಗಳಿಗೆ ವಯಸ್ಸಾಯಿತೆಂದು ಅಮಾನವೀಯ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ ಎಂದರು. ಸರ್ಕಾರಿ ಗೋಶಾಲೆಯೆಂದು ಇದರ ನಿರ್ವಹಣೆಯನ್ನು ಸರ್ಕಾರದ ಮೇಲೆ ಹಾಕದೇ ನಾವು ಈ ಗೋಶಾಲೆಯ ನಿರ್ವಹಣೆಗೆ ಕೈಜೋಡಿಸಬೇಕು. ಸಾಧ್ಯವಾದಷ್ಟು ಆರ್ಥಿಕವಾಗಿ ಅಥವಾ ಸಾಮಗ್ರಿಗಳ ರೂಪದಲ್ಲಿ ನೆರವು ನೀಡಬೇಕು. ಜಾನುವಾರುಗಳ ಸೇವಿಸುವ ಮೇವನ್ನು ದಾನವಾಗಿ ನೀಡಬೇಕು ಎಂದರು.&lt;/p&gt;&lt;p&gt;\Bಅಭಿವೃದ್ಧಿಗೆ-ಚಾಲನೆ: \Bಕಾರ್ಯಕ್ರಮದಲ್ಲಿ ಶಾಸಕರು ತಮ್ಮ ಕಿರಿಯ ಪುತ್ರ ಪ್ರಶಾಂತ ಆರ್. ದೇಶಪಾಂಡೆ ಅವರು ₹10 ಲಕ್ಷ ವೆಚ್ಚದಲ್ಲಿ ಗೋ-ಶಾಲೆಗೆ ದಾನವಾಗಿ ನೀಡಿದ ಸೋಲಾರ್ ವಿದ್ಯುತ್ ಸೌಲಭ್ಯ, ಸರ್ಕಾರದ ಪಶು ಸಂಗೋಪನಾ ಇಲಾಖೆಯ ಯೋಜನೆಯಲ್ಲಿ 6 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರವನ್ನು ಶಾಸಕರು ವಿತರಿಸಿದರು. ರಾಜ್ಯ ಸರ್ಕಾರದಿಂದ ₹75 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜಾನುವಾರಗಳ ಆಶ್ರಯ ತಾಣ, ಮೇವು ಉಗ್ರಾಣ ಕೊಠಡಿ ಸೇರಿದಂತೆ ಸಿಬ್ಬಂದಿ ವಸತಿಗೃಹಗಳಿಗೆ ಶಿಲಾನ್ಯಾಸ ನೆರವೇರಿಸಿದರು. ರಾಷ್ಟ್ರೀಯ ಕಾಲು-ಬಾಯಿ ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.&lt;/p&gt;&lt;p&gt;\Bರಾಜ್ಯದಲ್ಲಿಯೇ ನಂಬರ್ ಒನ್ ಗೋಶಾಲೆ: \Bಪಶು ಸಂಗೋಪನಾ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಕೆ.ಎಂ. ನದಾಫ್&zwnj; ಹವಗಿ, ಗ್ರಾಮದಲ್ಲಿ ಜಿಲ್ಲಾ-ಗೋಶಾಲೆ ಆರಂಭವಾದ ನಂತರ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಶಾಸಕರು ವಿಶೇಷ ಆಸಕ್ತಿ ವಹಿಸಿ ತಂದ ಅನುದಾನ ಹಾಗೂ ಉದ್ಯಮಿಗಳ ಸಿಎಸ್&zwnj;ಆರ್&zwnj; ನಿಧಿಯಡಿ ಶಾಸಕರು ಗೋಶಾಲೆಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಿತ್ರಣ ನೀಡಿದರು. ರಾಜ್ಯದಲ್ಲಿಯೇ ಅತ್ಯುತ್ತಮವಾದ ಸರ್ಕಾರಿ ಗೋಶಾಲೆಯೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದ್ದು, ಸದ್ಯ 180ಕ್ಕೂ ಹೆಚ್ಚು ಜಾನುವಾರುಗಳು ಗೋಶಾಲೆಯಲ್ಲಿವೆ. ಗೋಶಾಲೆಯ ನಿರ್ವಹಣೆ ಹಾಗೂ ಇಲ್ಲಿನ ಅಚ್ಚುಕಟ್ಟುತನ ನೀಡಿ ಶಾಸಕರ ಮನವಿಗೆ ಸ್ಪಂದಿಸಿ, ರಾಜ್ಯ ಸರ್ಕಾರವು ₹75 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದರು.&lt;/p&gt;&lt;p&gt;ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಯುವ ಕಾಂಗ್ರೆಸ್ ಮುಖಂಡ ರವಿ ತೋರಣಗಟ್ಟಿ, ತಹಸೀಲ್ದಾರ್&zwnj; ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಕೆಎಚ್&zwnj;ಬಿ ಮಂಡಳಿ ಹಾವೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ ಡಿ., ಸೆಲ್ಕೊ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಡಿಜಿಎಂ ಪ್ರಸನ್ನ ಹೆಗಡೆ ಹಾಗೂ ತೇರಗಾಂವ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಇದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cow-protection-is-everyone-s-primary-duty-says-rv-deshpande-at-haliyal-rav/articleshow-4zi441l"/>
        </item>
        <item>
            <title><![CDATA[ಉತ್ತರ ಕನ್ನಡದ ಆಗಸದಲ್ಲಿ ನಿಗೂಢ ವಿಮಾನ ಹಾರಾಟ,  ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟನೆ]]></title>
            <link>https://kannada.asianetnews.com/karnataka-districts/geological-survey-aircraft-flying-low-in-uttara-kannada-no-need-for-concern-officials-gdp/articleshow-5kclx7e</link>
            <guid isPermaLink="true">https://kannada.asianetnews.com/karnataka-districts/geological-survey-aircraft-flying-low-in-uttara-kannada-no-need-for-concern-officials-gdp/articleshow-5kclx7e</guid>
            <pubDate>Sat, 09 May 2026 19:38:14 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಕಡಿಮೆ ಎತ್ತರದ ವಿಮಾನ ಹಾರಾಟವು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಇದು ಖನಿಜ ಅನ್ವೇಷಣೆಗಾಗಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ನಡೆಸುತ್ತಿರುವ ವೈಜ್ಞಾನಿಕ ಸಮೀಕ್ಷೆಯಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01eqdvy6w6b2edsznb2cz8mszz,imgname-thumb-6-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಳಹಂತದಲ್ಲಿ ವಿಮಾನ ಹಾರಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿರುವುದನ್ನು ಗಮನಿಸಿದ ಜಿಲ್ಲಾ ಆಡಳಿತ, ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.&lt;/p&gt;&lt;h2&gt;ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಸಮೀಕ್ಷೆ&lt;/h2&gt;&lt;p&gt;ಜಿಲ್ಲಾ ಆಡಳಿತ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಈ ವಿಮಾನ ಹಾರಾಟವು ಖನಿಜ ಅನ್ವೇಷಣೆಗೆ ಸಂಬಂಧಿಸಿದ ವೈಜ್ಞಾನಿಕ ಸಮೀಕ್ಷೆಯ ಭಾಗವಾಗಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (Geological Survey of India) ವತಿಯಿಂದ &lsquo;ನ್ಯಾಶನಲ್ ಏರೋ ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಂ&rsquo; ಅಡಿಯಲ್ಲಿ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಈ ಸಮೀಕ್ಷಾ ಕಾರ್ಯ ನಡೆಯುತ್ತಿದೆ.&lt;/p&gt;&lt;h2&gt;ವಿಶೇಷ ವೈಜ್ಞಾನಿಕ ಉಪಕರಣ ಅಳವಡಿಸಿಕೊಂಡ ವಿಮಾನ&lt;/h2&gt;&lt;p&gt;ಈ ಯೋಜನೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಶೇಷ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿಕೊಂಡ ವಿಮಾನಗಳು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿವೆ. ಭೂಗರ್ಭದಲ್ಲಿರುವ ಖನಿಜ ಸಂಪತ್ತಿನ ವಿವರಗಳನ್ನು ಸಂಗ್ರಹಿಸುವುದು ಈ ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ.&lt;/p&gt;&lt;p&gt;ಸಮೀಕ್ಷೆಯಿಂದ ಸಂಗ್ರಹಿಸಲ್ಪಡುವ ಮಾಹಿತಿಯನ್ನು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಖನಿಜ ಅನ್ವೇಷಣೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ, ಈ ಮಾಹಿತಿಯನ್ನು &lsquo;ನ್ಯಾಶನಲ್ ಜಿಯೋಸೈನ್ಸ್ ಡೇಟಾ ರೆಪೊಸಿಟರಿ&rsquo; ಮೂಲಕ ಸಾರ್ವಜನಿಕರಿಗೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.&lt;/p&gt;&lt;p&gt;ಹೀಗಾಗಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಕೆಳಹಂತದ ವಿಮಾನ ಹಾರಾಟವು ಸಂಪೂರ್ಣವಾಗಿ ವೈಜ್ಞಾನಿಕ ಸಮೀಕ್ಷೆಗೆ ಸಂಬಂಧಿಸಿದ್ದು, ಇದರಿಂದ ಯಾವುದೇ ಅಪಾಯ ಅಥವಾ ಆತಂಕಕ್ಕೆ ಕಾರಣವಿಲ್ಲ ಎಂದು ಜಿಲ್ಲಾ ಆಡಳಿತ ಸ್ಪಷ್ಟಪಡಿಸಿದೆ. ಸಾರ್ವಜನಿಕರು ಈ ಬಗ್ಗೆ ಅನಗತ್ಯ ಭಯಕ್ಕೆ ಒಳಗಾಗದೆ ಸಹಕರಿಸುವಂತೆ ಮನವಿ ಮಾಡಲಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/geological-survey-aircraft-flying-low-in-uttara-kannada-no-need-for-concern-officials-gdp/articleshow-5kclx7e"/>
        </item>
        <item>
            <title><![CDATA[ಮಾರುಕಟ್ಟೆಗೆ ಲಗ್ಗೆ ಇಟ್ಟ ಅಂಕೋಲಾದ ವಿಶೇಷ ಕರಿ ಇಶಾಡ್ ಮಾವು, ರುಚಿಗೆ ಸಾಟಿಯೇ ಇಲ್ಲ]]></title>
            <link>https://kannada.asianetnews.com/gallery/karnataka-districts/ankola-kari-ishad-mango-season-begins-fruit-gains-attention-for-rich-flavor-5n862y2</link>
            <guid isPermaLink="true">https://kannada.asianetnews.com/gallery/karnataka-districts/ankola-kari-ishad-mango-season-begins-fruit-gains-attention-for-rich-flavor-5n862y2</guid>
            <pubDate>Sat, 09 May 2026 19:38:58 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಬೆಳೆಯುವ ಕರಿ ಇಶಾಡ್ ವಿಶೇಷ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯಾವುದೇ ರಾಸಾಯನಿಕ ಬಳಸದ ಈ ಮಾವು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹೀಗಾಗಿ ಭಾರಿ ಬೇಡಿಕೆ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr6gt3eraj3ag3rqamfeqksy,imgname-ankola-kari-ishag-mango-1778335419864.png" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಬೆಳೆಯುವ ಕರಿ ಇಶಾಡ್ ವಿಶೇಷ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯಾವುದೇ ರಾಸಾಯನಿಕ ಬಳಸದ ಈ ಮಾವು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹೀಗಾಗಿ ಭಾರಿ ಬೇಡಿಕೆ ಇದೆ.&lt;/p&gt;&lt;img&gt;&lt;p&gt;ಸದ್ಯ ಹಣ್ಣುಗಳ ಮಾರುಕಟ್ಟೆಯಲ್ಲಿ ಮಾವಿನದ್ದೇ ಕಾರುಕಾರು. ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಾಡಿನ ಜೀರಿಗೆ ಮಾವಿನಿಂದ ಹಿಡಿದು ತೋತಾಪುರಿ, ಬಾದಾಮಿ, ಅಲ್ಫೋನ್ಸಾ ಸೇರಿದಂತೆ ಹಲವು ದುಬಾರಿ ಬೆಲೆಯ ಮಾವು ಲಭ್ಯವಿದೆ. ಇದೀಗ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಬೆಳೆಯುವ ಕರಿ ಇಶಾಡ್ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.&lt;/p&gt;&lt;img&gt;&lt;p&gt;ಅಂಕೋಲಾದ ಕರಿ ಇಶಾಡ್ ಮಾವಿನ ಹಣ್ಣು, ಮಾವಿನ ತಳಿಗಳಲ್ಲೇ ವಿಶೇಷವಾದ ತಳಿಯ ಮಾವಿನ ಹಣ್ಣಾಗಿದ್ದು ಈ ಮಾವು ಅಂಕೋಲಾ ತಾಲೂಕಿನ&zwnj; ಸುತ್ತಮುತ್ತ ಮಾತ್ರ ಬೆಳಯಲಾಗಿತ್ತದೆ. ಮಾರುಕಟ್ಟೆಗೆ ಈ ಹಣ್ಣು ಎಂಟ್ರಿಕೊಡುತ್ತಿದ್ದಂತೆ ಮಾವು ಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಈ ವಿಶೇಷ&zwnj; ಮಾವಿನ ತಳಿಗೆ ಜಾಗತಿಕ&zwnj; ಮಾನ್ಯತೆ ಇದ್ದು 2023 ರಲ್ಲಿ ಈ ಮಾವಿಗೆ ಜಿ.ಐ ಟ್ಯಾಗ್ ಮಾನ್ಯತೆ ಸಹಃ ದೊರಕಿದೆ. ಉತ್ತರಕನ್ನಡ ಜಿಲ್ಲೆ ಯಿಂದ ವಿದೇಶಕ್ಕೂ ರಪ್ತಾಗುವ ಈ ಕರಿ ಇಶಾಡ್ ಮಾವಿನ ಹಣ್ಣು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾತ್ರ ಲಬ್ಯವಿರುತ್ತದೆ.&lt;/p&gt;&lt;img&gt;&lt;p&gt;ಈ ಬಾರಿ ಅಂಕೋಲಾ ಭಾಗದಲ್ಲಿ ಮಾವಿನ ಇಳುವರಿ ಹೆಚ್ಚಿದೆ. ಅದರಲ್ಲೂ ಕರಿ ಇಶಾಡ್ ಮಾವಿನ ಹಣ್ಣು ಇಳುವರಿ ಹೆಚ್ಚಿದೆ. ಕರಿ ಇಶಾಡ್ ಮಾವು ಉತ್ತಮ ರುಚಿ ಹಾಗೂ ಸ್ವಾದ ಹೊಂದಿದೆ. ಜೊತೆಗೆ ಕೈಗೆಟುಕುವ ದರದಲ್ಲಿ ಈ ಮಾವು ಲಭ್ಯವಿದೆ.&lt;/p&gt;&lt;img&gt;&lt;p&gt;ಈ ಮಾವಿಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಕೇವಲ ಸಾವಯವ ಪದ್ದತಿಯಲ್ಲಿ ಬೆಳೆಯಲಾಗುತ್ತದೆ. ಜನರು ಆರ್ಗಾನಿಕ್ ಆಹಾರದ ಬಗ್ಗೆ ಕಾಳಜಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಕರಿ ಇಶಾಡ್ ಮಾವು ಭಾರಿ ಬೇಡಿಕೆ ಪಡೆದುಕೊಂಡಿದೆ.&lt;/p&gt;&lt;h2&gt;ರಾಸಾಯನಿಕ ಬಳದ ಸಾವಯವ ಮಾವು&lt;/h2&gt;]]></content:encoded>
            <category>uttara-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/karnataka-districts/ankola-kari-ishad-mango-season-begins-fruit-gains-attention-for-rich-flavor-5n862y2"/>
        </item>
        <item>
            <title><![CDATA[ಶಿವಮೊಗ್ಗ, ಮಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಅಬ್ಬರಿಸಿದ ಮಳೆರಾಯ: ವಿಮಾನ ಲ್ಯಾಂಡಿಂಗ್ ಸಮಸ್ಯೆ, ಮನೆಗಳು ವಿನಾಶ!]]></title>
            <link>https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn</link>
            <guid isPermaLink="true">https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn</guid>
            <pubDate>Thu, 14 May 2026 21:03:29 +0530</pubDate>
            <description><![CDATA[&lt;p&gt;ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krkhh7vdmgmzcqbvbwd34hj9,imgname-karnataka-rain-update-1778772385645.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು/ಮಂಗಳೂರು: &lt;/strong&gt;ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನಿಂದ ಬೆಂದು ಹೋಗಿದ್ದ ಕರ್ನಾಟಕದ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಆದರೆ, ರಾಜ್ಯದ ಹಲವೆಡೆ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಂದೆಡೆ ಮಳೆ ಖುಷಿ ನೀಡಿದರೆ, ಮತ್ತೊಂದೆಡೆ ಅಪಾರ ಹಾನಿ ಉಂಟುಮಾಡಿದೆ. ವಿಶೇಷವಾಗಿ ಮಂಗಳೂರು, ಯಾದಗಿರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ರೌದ್ರಾವತಾರ ಕಂಡುಬಂದಿದೆ.&lt;/p&gt;&lt;img&gt;&lt;p&gt;ಕರಾವಳಿ ನಗರಿ ಮಂಗಳೂರಿನಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ರನ್ ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಎರಡು ವಿಮಾನಗಳು ಇಳಿಯಲಾಗದೆ ವಿಟ್ಲ ಸಮೀಪದ ಆಕಾಶದಲ್ಲಿ ಸುದೀರ್ಘ ಕಾಲ ಸುತ್ತಾಡುತ್ತಿವೆ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆಯಾದ್ಯಂತ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ. ಯಾದಗಿರಿ ನಗರ, ಶಹಾಪುರ ಮತ್ತು ಸುರಪುರ ತಾಲೂಕುಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿಯ ತಗಡುಗಳು ನೂರಾರು ಅಡಿ ದೂರಕ್ಕೆ ಹಾರಿ ಹೋಗಿವೆ.&amp;nbsp;&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆಯಾದ್ಯಂತ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ಮಳೆ ತಂಪು ನೀಡಿದೆಯಾದರೂ, ಬಡ ಕುಟುಂಬಗಳ ಆಸ್ತಿಪಾಸ್ತಿಗೆ ಹಾನಿಯಾಗಿರುವುದು ನೋವು ತಂದಿದೆ.&lt;/p&gt;&lt;img&gt;&lt;p&gt;ಶಿವಮೊಗ್ಗದಲ್ಲಿ ಹಲವು ದಿನಗಳ ಸುದೀರ್ಘ ಕಾಯುವಿಕೆಯ ನಂತರ ಮಳೆರಾಯ ಧರೆಗಿಳಿದಿದ್ದಾನೆ. ಸಂಜೆ 6 ಗಂಟೆಯ ಸುಮಾರಿಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದೆ. ಆದರೆ, ದಿಢೀರ್ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಯಿತು.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಭಾರಿ ಮಳೆಯಾಗುತ್ತಿದೆ. ಸಂಜೆ 7 ಗಂಟೆಯಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿಯ ಜನರಿಗೆ ಸೆಕೆಯಿಂದ ಮುಕ್ತಿ ಸಿಕ್ಕಿದೆ. ಜಿಲ್ಲೆಯ ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲೂ ಮೋಡಕವಿದ ವಾತಾವರಣವಿದ್ದು, ರಾತ್ರಿಯ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಗುಡುಗು ಸಿಡಿಲಿನ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn"/>
        </item>
        <item>
            <title><![CDATA[Sirsi: ಯಕ್ಷಗಾನ ನಡೆಸುವ ಜಾಗದ ವಿಚಾರ; ಚಪ್ಪಲಿ, ಪೊರಕೆಯಲ್ಲಿ ಹೊಡೆದಾಡಿಕೊಂಡ ಶಿರಸಿಯ ದಾಯಾದಿಗಳು!]]></title>
            <link>https://kannada.asianetnews.com/karnataka-districts/uttara-kannada-sirsi-family-dispute-for-yakshagana-place/articleshow-cbmhgiw</link>
            <guid isPermaLink="true">https://kannada.asianetnews.com/karnataka-districts/uttara-kannada-sirsi-family-dispute-for-yakshagana-place/articleshow-cbmhgiw</guid>
            <pubDate>Sat, 09 May 2026 12:59:57 +0530</pubDate>
            <description><![CDATA[&lt;p&gt;Sirsi Family Dispute: ಖಾಸಗಿ ಜಮೀನಿನಲ್ಲಿ ಯಕ್ಷಗಾನ ಮಾಡುವ ಬಗ್ಗೆ ದಾಯಾದಿಗಳು ಜಗಳ ಆಡಿಕೊಂಡಿದ್ದಾರೆ. ಚಪ್ಪಲಿಯಲ್ಲಿ, ಕೋಲಿನಲ್ಲಿ ಹೊಡೆದುಕೊಳ್ಳುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್&zwnj; ಆಗ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5t8rgjv48v5x7fhvk9xb4m,imgname-new-project---2026-05-09t124250.864-1778311782930.jpg" type="image/jpeg" height="390" width="690"/>
            <content:encoded><![CDATA[&lt;p&gt;ಖಾಸಗಿ ಜಮೀನಿನಲ್ಲಿ ಯಕ್ಷಗಾನ ನಡೆಸುವ ವಿಚಾರವಾಗಿ ಘರ್ಷಣೆಯಾಗಿದ್ದು, ಈಗ ಆಸ್ಪತ್ರೆ ಸೇರುವ ಹಾಗೆ ಆಗಿದೆ. ಹೌದು, ದಾಯಾದಿಗಳಿಬ್ಬರು ಕಲಹ ಮಾಡಿಕೊಂಡಿದ್ದಾರೆ. ಪೊರಕೆ, ಚಪ್ಪಲಿಯಿಂದ, ಕೋಲಿನಿಂದ ಹಲ್ಲೆ ಮಾಡಿರುವ ವಿಡಿಯೋ ವೈರಲ್&zwnj; ಆಗ್ತಿದೆ.&lt;/p&gt;&lt;h2&gt;ಎಲ್ಲಿ? ಏನಾಯ್ತು?&lt;/h2&gt;&lt;p&gt;ಚಂದ್ರಶೇಖರ ಹಾಗೂ ನೇತ್ರವತಿ ಅವರು ಮಂಜುನಾಥ್ ಹಾಗೂ ಭಾರತಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಶಿರಸಿಯ ಕಲಗಾರ ಒಡ್ಡು ಬಳಿ ಈ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಘಟನೆ ನಡೆದಿದೆ.&lt;/p&gt;&lt;h2&gt;ಯಕ್ಷಗಾನ ಪ್ರಿಯರಿದ್ದಾರೆ&lt;/h2&gt;&lt;p&gt;ಉತ್ತರ ಕನ್ನಡ ಹಾಗೂ ಮಂಗಳೂರು ಬಳಿ ಯಕ್ಷಗಾನ ಪ್ರಿಯರು ಹೆಚ್ಚಿದ್ದಾರೆ. ಹಾಗೆಯೇ ಶಿರಸಿಯಲ್ಲಿಯೂ ಕೂಡ ಯಕ್ಷಗಾನ ಮಾಡಲು ಯೋಜನೆ ಹಾಕಲಾಗಿತ್ತು. ಈಗ ಜಾಗದ ವಿಚಾರವಾಗಿ ಜಗಳ ಆಗಿದೆ.&lt;/p&gt;&lt;p&gt;ಆಸ್ಪತ್ರೆ ದಾಖಲಾಗಿದ್ದಾರೆ&lt;/p&gt;&lt;p&gt;ಹಲ್ಲೆಗೊಳಗಾದ ಮಂಜುನಾಥ್ ಹಾಗೂ ಭಾರತಿ ಶಿರಸಿ ತಾಲೂಕು ಆಸ್ಪತ್ರೆಗೆ ದಾಖಲಾಗಿದೆ. ಈ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಕೇಸ್&zwnj; ದಾಖಲಾಗಿದೆಯಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/uttara-kannada-sirsi-family-dispute-for-yakshagana-place/articleshow-cbmhgiw"/>
        </item>
        <item>
            <title><![CDATA[ಶಿರಸಿ-ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳಿಗೆ ತಾತ್ಕಾಲಿಕ ನಿಷೇಧ; ಪರ್ಯಾಯ ಮಾರ್ಗ  ಸೂಚನೆ]]></title>
            <link>https://kannada.asianetnews.com/karnataka-districts/temporary-ban-on-heavy-vehicles-on-sirsi-bisilakoppa-route-alternative-route-advised-mrq/articleshow-d2q7zh1</link>
            <guid isPermaLink="true">https://kannada.asianetnews.com/karnataka-districts/temporary-ban-on-heavy-vehicles-on-sirsi-bisilakoppa-route-alternative-route-advised-mrq/articleshow-d2q7zh1</guid>
            <pubDate>Wed, 06 May 2026 05:45:03 +0530</pubDate>
            <description><![CDATA[ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಶಿರಸಿ-ಬಿಸಿಲಕೊಪ್ಪ ಮಾರ್ಗದಲ್ಲಿ ಮೇ 7ರ ವರೆಗೆ ಲಾರಿ, ಬಸ್, ಟೆಂಪೋ ಟ್ರಾವೆಲ್ಲರ್&zwnj;ಗಳಂತಹ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದು, ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kjc78av34m83gejttes4t6r6,imgname-uttara-kannada-sirsi-road-1772084276067.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿರಸಿ: &lt;/strong&gt;ಮೇ 7ರ ವರೆಗೆ ಶಿರಸಿ ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;ಮಂಗಳವಾರ ಸಾರ್ವಜನಿಕರು, ರೈತ ಸಂಘಟನೆಯವರು ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಸಾರ್ವಜನಿಕರ ಅಹವಾಲು ಕೇಳಿದ ಸಹಾಯಕ ಆಯುಕ್ತರು, ತಾಲೂಕು ದಂಡಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಮೇ 7ವರೆಗೆ ಸಂಪೂರ್ಣವಾಗಿ ನಿಷೇಧ&lt;/strong&gt;&lt;/h2&gt;&lt;p&gt;ಶಿರಸಿ-ಬಿಸಿಲುಕೊಪ್ಪ ಮಾರ್ಗದಲ್ಲಿ ಯಾವುದೇ ಭಾರಿ ಗಾತ್ರದ ವಾಹನಗಳಿಗೆ, ಲಾರಿ ಟಿಪ್ಪರ್&zwnj;ಗಳಿಗೆ ಸರ್ಕಾರಿ ಮತ್ತು ಖಾಸಗಿ ಬಸ್&zwnj;ಗಳಿಗೆ, ಪ್ರವಾಸಿಗರ ಟೆಂಪೋ ಟ್ರಾವೆಲ್ಲರ್&zwnj;ಗಳಿಗೆ ಸಂಚಾರವನ್ನು ಮೇ 7ವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.&lt;/p&gt;&lt;h3&gt;&lt;strong&gt;ಪರ್ಯಾಯ ಮಾರ್ಗ&lt;/strong&gt;&lt;/h3&gt;&lt;p&gt;ಕಾರಣ ಭಾರಿ ವಾಹನಗಳಾದ ಬಸ್, ಟಿಪ್ಪರ್, ಟೆಂಪೋ ಟ್ರಾವೆಲರ್, ಖಾಸಗಿ ವಾಹನಗಳಿಗೆ ಶಿರಸಿ-ಬಿಸಲ್ಕೊಪ್ಪ ಮಾರ್ಗ ಬಿಟ್ಟು ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳು ಮಳಗಿ-ದಾಸನಕೊಪ್ಪ-ಬನವಾಸಿ-ಶಿರಸಿ ಹಾಗೂ ಹಾವೇರಿ ಕಡೆಯಿಂದ ಬರುವ ವಾಹನಗಳು ದಾಸನಕೊಪ್ಪ-ಬನವಾಸಿ-ಶಿರಸಿ ಮಾರ್ಗದಲ್ಲಿ ಸಂಚರಿಸಬೇಕೆಂದು ತಿಳಿಸಲಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/temporary-ban-on-heavy-vehicles-on-sirsi-bisilakoppa-route-alternative-route-advised-mrq/articleshow-d2q7zh1"/>
        </item>
        <item>
            <title><![CDATA[ಸೋಮಾಲಿಯಾ ಜೆಟ್ ವೇವ್ಸ್ ಮೂಲಕ ಕರಾವಳಿಗೆ ಮುಂಗಾರು ಮಳೆ ಎಂಟ್ರಿ, ಸಮುದ್ರ ಅಬ್ಬರದ ಆತಂಕ ಜಲಕ್ರೀಡೆ ಸ್ಥಗಿತ!]]></title>
            <link>https://kannada.asianetnews.com/gallery/karnataka-districts/imd-cyclone-warning-forces-shutdown-of-tourist-boating-in-coastal-karnataka-gdp-e84qr22</link>
            <guid isPermaLink="true">https://kannada.asianetnews.com/gallery/karnataka-districts/imd-cyclone-warning-forces-shutdown-of-tourist-boating-in-coastal-karnataka-gdp-e84qr22</guid>
            <pubDate>Tue, 19 May 2026 16:24:22 +0530</pubDate>
            <description><![CDATA[&lt;p&gt;ಹವಾಮಾನ ಇಲಾಖೆಯ ಚಂಡಮಾರುತ ಹಾಗೂ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಲಸಾಹಸ ಕ್ರೀಡೆ ಮತ್ತು ಪ್ರವಾಸಿ ಬೋಟಿಂಗ್ ಅನ್ನು ನಿಷೇಧಿಸಲಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗೋಕರ್ಣ, ಮುರುಡೇಶ್ವರ, ಮತ್ತು ನೇತ್ರಾಣಿ ದ್ವೀಪದಂತಹ ಪ್ರಮುಖ ತಾಣಗಳಲ್ಲಿ ನಿರ್ಬಂಧ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzqn5nj8kc5r1ea9fgsg8bn5,imgname-scuba-diving-best-location-in-india-1752066872904.jpg" type="image/jpeg" height="390" width="690"/>
            <content:encoded><![CDATA[&lt;p&gt;ಹವಾಮಾನ ಇಲಾಖೆಯ ಚಂಡಮಾರುತ ಹಾಗೂ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಲಸಾಹಸ ಕ್ರೀಡೆ ಮತ್ತು ಪ್ರವಾಸಿ ಬೋಟಿಂಗ್ ಅನ್ನು ನಿಷೇಧಿಸಲಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗೋಕರ್ಣ, ಮುರುಡೇಶ್ವರ, ಮತ್ತು ನೇತ್ರಾಣಿ ದ್ವೀಪದಂತಹ ಪ್ರಮುಖ ತಾಣಗಳಲ್ಲಿ ನಿರ್ಬಂಧ.&lt;/p&gt;&lt;img&gt;&lt;p&gt;ಕಾರವಾರ: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದ ಪ್ರಭಾವ ತೀವ್ರವಾಗಿ ಕಾಣಿಸಿಕೊಳ್ಳುತ್ತಿದ್ದು, ಭಾರೀ ಮಳೆ ಹಾಗೂ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡದಾದ್ಯಂತ ಜಲಸಾಹಸ ಕ್ರೀಡೆ ಹಾಗೂ ಪ್ರವಾಸಿ ಬೋಟಿಂಗ್ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ಬ್ರೇಕ್ ಹಾಕಲಾಗಿದೆ. ಭಾರತೀಯ ಹವಾಮಾನ ಇಲಾಖೆಯು (IMD) ಚಂಡಮಾರುತದ ಮುನ್ನೆಚ್ಚರಿಕೆ ನೀಡಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿಗರ ಸುರಕ್ಷತೆಗಾಗಿ ಈ ಕಠಿಣ ಕ್ರಮಗಳನ್ನು ಕೈಗೊಂಡಿದೆ.&lt;/p&gt;&lt;img&gt;&lt;p&gt;ಜಿಲ್ಲಾಡಳಿತದ ಆದೇಶದನ್ವಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಗೋಕರ್ಣ, ಮುರುಡೇಶ್ವರ ಹಾಗೂ ಕಾರವಾರ ಬೀಚ್&zwnj;ಗಳಲ್ಲಿ ಸದ್ಯಕ್ಕೆ ಪ್ರವಾಸಿ ಬೋಟಿಂಗ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಗೋಕರ್ಣದ ಪ್ರಮುಖ ಕಡಲತೀರಗಳಾದ ಓಂ ಬೀಚ್, ಕೂಡ್ಲೆ, ಹಾಫ್&zwnj;ಮೂನ್ ಹಾಗೂ ಪ್ಯಾರಡೈಸ್ ಬೀಚ್&zwnj;ಗಳಲ್ಲಿ ನಡೆಯುತ್ತಿದ್ದ ಎಲ್ಲಾ ರೀತಿಯ ಜಲಸಾಹಸ (Water Sports) ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ.&lt;/p&gt;&lt;img&gt;&lt;p&gt;ಅಷ್ಟೇ ಅಲ್ಲದೆ, ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಸ್ಕೂಬಾ ಡೈವಿಂಗ್ (Scuba Diving) ಪ್ರಕ್ರಿಯೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಸಮುದ್ರದ ಅಲೆಗಳು ಮಾತ್ರವಲ್ಲದೆ ನದಿಗಳಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಶರಾವತಿ ಹಿನ್ನೀರು ಹಾಗೂ ಅಘನಾಶಿನಿ ನದಿಯಲ್ಲಿ ಕಾರ್ಯಾಚರಿಸುತ್ತಿದ್ದ ಪ್ರವಾಸಿ ಬೋಟಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ನೈಸರ್ಗಿಕ ಸೌಂದರ್ಯದ ತಾಣವಾದ ಹೊನ್ನಾವರದ ಅಪ್ಸರಕೊಂಡ ಬೀಚ್&zwnj;ನಲ್ಲಿ ಪ್ರೀವೆಡ್ಡಿಂಗ್ ಶೂಟಿಂಗ್ (Pre-wedding shoot) ಸೆಟ್&zwnj;ಗಳನ್ನು ಅಳವಡಿಸುವುದಕ್ಕೂ ಸಹ ನಿರ್ಬಂಧ ವಿಧಿಸಲಾಗಿದೆ. ಈ ಮೂಲಕ ಪ್ರವಾಸಿಗರು ಹಾಗೂ ಮೀನುಗಾರರು ಕಡಲತೀರ ಮತ್ತು ನದಿತೀರ ಪ್ರದೇಶಗಳಿಗೆ ತೆರಳದಂತೆ ಆಡಳಿತ ಮಂಡಳಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.&lt;/p&gt;&lt;img&gt;&lt;p&gt;ಮಂಗಳವಾರದ (ಇಂದು) ವೇಳೆಗೆ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡದ ಸಾಂದ್ರತೆ ಗಣನೀಯವಾಗಿ ಹೆಚ್ಚಾಗಲಿದೆ. ಆರಂಭದಲ್ಲಿ ಸಣ್ಣ ಹನಿಗಳ ಮಳೆಯಾಗಲಿದ್ದು, ಮಧ್ಯಾಹ್ನದ ನಂತರ, ಸಂಜೆ ಹಾಗೂ ರಾತ್ರಿಯ ಅವಧಿಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರಸ್ತುತ ಹವಾಮಾನ ವರದಿಯ ಪ್ರಕಾರ, ಮೇ 20ರಿಂದಲೂ ಕರಾವಳಿಯಾದ್ಯಂತ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಆದರೆ, ಮೇ 26ರ ನಂತರ ಕರಾವಳಿ ತೀರದಲ್ಲಿ ಮಳೆಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.&lt;/p&gt;&lt;img&gt;&lt;p&gt;ಹಿಂದೂ ಮಹಾಸಾಗರದ ಮೂಲಕ ಸಾಗಿ ಬರುವ ಮುಂಗಾರು ಮಾರುತಗಳು ಸದ್ಯಕ್ಕೆ ಕೆಲವೆಡೆ ದುರ್ಬಲಗೊಂಡಂತೆ ಕಂಡುಬರುತ್ತಿದ್ದರೂ, ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಹೊಸ ವಾಯು ಪರಿಚಲನೆಯು ಮುಂಗಾರಿಗೆ ಹೊಸ ಚೇತರಿಕೆ ನೀಡಲಿದೆ. ಪ್ರಮುಖವಾಗಿ &lsquo;ಸೋಮಾಲಿಯಾ ಜೆಟ್ ವೇವ್ಸ್&rsquo; (ಸೋಮಾಲಿ ಕಡಿಮೆ ಮಟ್ಟದ ಗಾಳಿಯ ಪ್ರವಾಹ) ಮೂಲಕ ಮೇ 26ರಿಂದ ಅರಬ್ಬಿ ಸಮುದ್ರದಲ್ಲಿ ತೇವಾಂಶಭರಿತ ಮಾರುತಗಳು ತೀವ್ರವಾಗಿ ಚುರುಕಾಗಲಿವೆ. ಈ ಪ್ರಬಲ ಗಾಳಿಯ ಪರಿಚಲನೆಯು ಸಮುದ್ರದ ಮೇಲ್ಮೈಯಲ್ಲಿ ಹೆಚ್ಚಿನ ಮೋಡಗಳು ಸೃಷ್ಟಿಯಾಗಲು ಕಾರಣವಾಗಲಿದ್ದು, ಇಡೀ ಕರಾವಳಿ ಭಾಗದಲ್ಲಿ ಮುಂಗಾರು ಸಕ್ರಿಯಗೊಳ್ಳಲು ಪೂರಕ ವಾತಾವರಣವನ್ನು ನಿರ್ಮಿಸಲಿದೆ.&lt;/p&gt;&lt;img&gt;&lt;p&gt;ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಪರಿಚಲನೆ ಹೆಚ್ಚಾಗುತ್ತಿರುವುದರಿಂದ ಸಮುದ್ರದ ಅಲೆಗಳ ತೀವ್ರತೆ ರೌದ್ರರೂಪ ಪಡೆಯುವ ಸಾಧ್ಯತೆಯಿದೆ. ಮೇ 26ರಿಂದ ಮಾರುತಗಳು ಭಾರೀ ಚುರುಕಾಗಲಿರುವುದರಿಂದ, ತೀರ ಪ್ರದೇಶಗಳಲ್ಲಿ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋಮೀಟರ್ ದಾಟುವ ನಿರೀಕ್ಷೆಯಿದೆ. ಈ ಆತಂಕಕಾರಿ ಹಿನ್ನೆಲೆಯಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ಹೆಚ್ಚಿನ ಜಾಗ್ರತೆ ವಹಿಸಬೇಕು ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಸಮುದ್ರದ ಹವಾಮಾನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿಕೊಂಡೇ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/imd-cyclone-warning-forces-shutdown-of-tourist-boating-in-coastal-karnataka-gdp-e84qr22"/>
        </item>
        <item>
            <title><![CDATA[Sirsi Haveri Road: ಸಾವಿಗೆ ದಾರಿಯಾದ ರಸ್ತೆ; ಹೇಳಿ ಹೇಳಿ ಸಾಕಾಗಿ, ತಕ್ಕ ಪಾಠ ಕಲಿಸಲು ರೆಡಿಯಾದ ಜನತೆ]]></title>
            <link>https://kannada.asianetnews.com/karnataka-districts/sirsi-haveri-national-highway-people-protest-in-bisalakoppa/articleshow-feqixgd</link>
            <guid isPermaLink="true">https://kannada.asianetnews.com/karnataka-districts/sirsi-haveri-national-highway-people-protest-in-bisalakoppa/articleshow-feqixgd</guid>
            <pubDate>Tue, 05 May 2026 13:22:42 +0530</pubDate>
            <description><![CDATA[&lt;p&gt;Sirsi Haveri Road: ಶಿರಸಿ ಹಾವೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಶುರುವಾಗಿ ಐದು ವರ್ಷಗಳ ಮೇಲಾಯ್ತು. ಹೀಗಾಗಿ ಈ ಭಾಗದ ಜನರು ಒಟ್ಟಿಗೆ ಸೇರಿ ರಸ್ತೆಗೋಸ್ಕರ ಪ್ರತಿಭಟನೆ ಮಾಡಿದ್ದಾರೆ. ಓಡಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆ ಇದ್ದರೂ ಕೂಡ ಜನಪ್ರತಿನಿಧಿಗಳು ಸುಮ್ಮನೆ ಇದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvhxkss9mgkmz5wb8154vxe,imgname-new-project---2026-05-05t131153.411-1777967484729.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ:&lt;/strong&gt; ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ( Sirsi Haveri Road ) ಪ್ರತಿ ವರ್ಷ ಹಾಳಾದ ರಸ್ತೆಗೆ ಅಲ್ಪ ಸ್ವಲ್ಪ ಡಾಂಬರು ಹಾಕಿ ಪ್ಯಾಚ್&zwnj; ವರ್ಕ್&zwnj; ಮಾಡಲಾಗ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ ಇದು ರಸ್ತೆಯಾಗಿ ಉಳಿದಿಲ್ಲ, ಬದಲಾಗಿ ಕೆಸರು ಗದ್ದೆಯಾಗಿದೆ. ಬೇಸಿಗೆ ಬಂದರೆ ಎಲ್ಲೆಲ್ಲೂ ಧೂಳು, ಮಳೆಗಾಲದಲ್ಲಿ ಕೆಸರು ಗದ್ದೆ. ಹೀಗಾಗಿ ಇಂದು ಬಿಸಲಕೊಪ್ಪದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ.,&lt;/p&gt;&lt;h2&gt;ಬಿಸಲಕೊಪ್ಪದಲ್ಲಿ ಪ್ರತಿಭಟನೆ&lt;/h2&gt;&lt;p&gt;ಪ್ರತಿ ವರ್ಷ ರಸ್ತೆ ಸರಿ ಇಲ್ಲ ಎಂದು ಶಾಪ ಹಾಕುತ್ತಲೇ ಸಾಗಬೇಕಾಗಿದೆ. ಹೀಗಾಗಿ ರಸ್ತೆ ಕೆಲಸ ವಿಳಂಬವಾಗಿದೆ. ಅಷ್ಟೇ ಅಲ್ಲದೆ ಅವೈಜ್ಞಾನಿಕ ಕಾಮಗಾರಿ ನಡೆಯುತತಿದೆ. ಹೀಗಾಗಿ ಇಲ್ಲಿನ ಜನತೆ ರೊಚ್ಚಿಗೆದ್ದಿದೆ. ಶಿರಸಿ ಹಾಗೂ ಹಾವೇರಿ ಮಧ್ಯೆ ಇರುವ ಬಿಸಲಕೊಪ್ಪ ಬಳಿ ವಾಹನ ತಡೆದು, ಹೆದ್ದಾರಿ ಬಂದ್ ಮಾಡಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಬದುಕಿಗಾಗಿ ಹೋರಾಟ' ಹೆಸರಿನಲ್ಲಿ ಬಿಸಲಕೊಪ್ಪ ಸರ್ಕಲ್&zwnj;ನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ.&lt;/p&gt;&lt;h2&gt;ಫುಲ್&zwnj; ಟ್ರಾಫಿಕ್&zwnj; ಜಾಮ್&lt;/h2&gt;&lt;p&gt;ಯಾವ ವಾಹನಗಳಿಗೂ ಹೆದ್ದಾರಿಯಲ್ಲಿ ತೆರಳಲು ಅವಕಾಶ ನೀಡದೇ ಪ್ರತಿಭಟನೆ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ರಸ್ತೆ ಅವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ತಕ್ಷಣ ಭೇಟಿ ಕೊಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.&lt;/p&gt;&lt;p&gt;ಜನಪ್ರತಿನಿಧಿಗಳ, ಅಧಿಕಾರಿಗಳ ಗುತ್ತಿಗೆದಾರರ ವಿರುದ್ಧ ಧಿಕ್ಕಾರ ಕೂಗಿ ರಣಾಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರನ ವಿರುದ್ಧ ಕೆಂಡ ಕಾರಿದ್ದಾರೆ. ಶಾಸಕರ, ಸಂಸದರ &amp;amp; ಅಧಿಕಾರಿಗಳ ಹೊಣೆಗೇಡಿತನಕ್ಕೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ಳಲಾಗಿದೆ. ಶಿರಸಿ ಹಾವೇರಿ ಹೈವೇ ಬೃಹತ್ ಹೋರಾಟಕ್ಕೆ ಪಕ್ಷಾತೀತವಾಗಿ ಜನರು ಬೆಂಬಲಿಸಿದ್ದಾರೆ. ಬಂದ್ ಹಿನ್ನೆಲೆ ಕಿಲೋಮೀಟರ್ ಗಟ್ಟಲೇ ವಾಹನಗಳ ಸಾಲು ಸಾಲಾಗಿ ನಿಂತಿವೆ. ಹೀಗಾಗಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.&lt;/p&gt;&lt;h2&gt;ಪ್ರತಿಭಟನಾಕಾರರು ಏನಂದ್ರು?&lt;/h2&gt;&lt;p&gt;&ldquo;ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ಇದು ಆರಂಭ ಅಷ್ಟೇ.. ಬಗ್ಗದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಜಿಲ್ಲಾಧಿಕಾರಿ ಬಂದು ಸಮಸ್ಯೆ ಆಲಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ&rdquo; ಎಂದು ಪ್ರತಿಭಟನಾನಿರತರು ಸಂದೇಶ ನೀಡಿದ್ದಾರೆ.&lt;/p&gt;&lt;p&gt;ಹೆದ್ದಾರಿ ಪ್ರಾಧಿಕಾರದ ಪೋಸ್ಟರ್&zwnj;ಗೆ ಶ್ರದ್ಧಾಂಜಲಿ ಅರ್ಪಿಸಿ ಜನ ಪ್ರತಿಭಟನೆ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ! ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.&lt;/p&gt;&lt;p&gt;ಪ್ರತಿಭಟನಾ ಸ್ಥಳಕ್ಕೆ AC ಚಂದ್ರಶೇಖರ್, ತಹಶೀಲ್ದಾರ್ ಪಟ್ಟರಾಜ ಗೌಡ ದೌಡಾಯಿಸಿದ್ದಾರೆ. ಇನ್ನು ಪ್ರತಿಭಟನಾಕಾರರ ಜೊತೆ ಅಧಿಕಾರಿಗಳುಮಾತುಕತೆ ಮಾಡಿದ್ದಾರೆ.&lt;/p&gt;&lt;p&gt;ಧರಣಿನಿರತರ ಮನವೊಲಿಸುವ ಪ್ರಯತ್ನ ಮಾಡಿದರೂ ಕೂಡ, ಡಿಸಿಯೇ ಬರಬೇಕೆಂದು ಬಿಗಿಪಟ್ಟು ಹಿಡಿಯಲಾಗಿತ್ತು. ಬಿರು ಬಿಸಿಲಿನ ಮಧ್ಯೆಯೂ ಧರಣಿ ನಡೆದಿತ್ತು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಪೋಲಿಸರ ಸರ್ಪಗಾವಲಿನ ನಡುವೆ ಹೋರಾಟ ತೀವ್ರಗೊಂಡಿತ್ತು. ಗುತ್ತಿಗೆದಾರರನ್ನು ಕರೆಸಿ ಮಾತನಾಡಲಾಗುವುದು ಎಂದು ಸಮಾಧಾನ ಮಾಡಲಾಗಿದೆ.&lt;/p&gt;&lt;h2&gt;ನಿಜಕ್ಕೂ ಏನಾಗಿದೆ?&lt;/h2&gt;&lt;p&gt;ಈ ಭಾಗದ ಶಾಸಕ ಭೀಮಣ್ಣ ನಾಯ್ಕ್&zwnj;, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, &ldquo;ಗುತ್ತಿಗೆದಾರರ ತಪ್ಪು&rdquo; ಎಂದು ಹೇಳಿದ್ದಾರೆ. ಆದರೆ ಯಾವುದೇ ರೀತಿಯಲ್ಲಿ ಕೂಡ ಕ್ರಮ ಕೈಗೊಂಡಿಲ್ಲ.&lt;/p&gt;&lt;p&gt;ಜನರು ಅವರ ಕಷ್ಟಗಳನ್ನು ಯಾರ ಬಳಿ ಹೇಳಬೇಕು? ಇನ್ನೇನು ಒಂದು ತಿಂಗಳಲ್ಲಿ ಮಳೆಗಾಲ ಶುರುವಾಗಲಿದೆ. ರಸ್ತೆ ಕಾಮಗಾರಿ ಮಾಡ್ತೀವಿ ಎಂದು ಇರೋ ರಸ್ತೆಯನ್ನು ಅಗೆದು ಇಟ್ಟಿದ್ದಾರೆ. ಹೀಗಾಗಿ ಇನ್ನಷ್ಟು ಧೂಳು ಆಗಿದೆ, ಮೊನ್ನೆ ಒಂದು ಮಳೆಗೆ ರಸ್ತೆಯಂತೂ ಕೆಸರುಗದ್ದೆಯಾಗಿದೆ. ಶಿರಸಿಯಿಂದ ದಾಸನಕೊಪ್ಪ, ನಾಗರಕತ್ರಿವರೆಗೆ ರಸ್ತೆ ಅಗೆಯಲಾಗಿದೆ, ಜಲ್ಲಿ ಕಲ್ಲು ಹಾಕಲಾಗಿದೆ. ಹೀಗಾದಾಗ ಬೈಕ್&zwnj;ನಲ್ಲಂತೂ ಹೋಗಲು ಆಗೋದಿಲ್ಲ, ಬೇರೆ ವಾಹನಗಳಲ್ಲಿ ಹೋದರೂ ಕೂಡ ಧೂಳಿಗೆ ರಸ್ತೆ ಕಾಣ್ತಿಲ್ಲ, ಇದರಿಂದ ಇತ್ತೀಚೆಗೆ ಇದೇ ರೋಡ್&zwnj;ನಲ್ಲಿ ಓಮಿನಿಯೊಂದು ಗಟಾರಕ್ಕೆ ಬಿದ್ದಿದೆ.&lt;/p&gt;&lt;p&gt;ಹಾವೇರಿ ಭಾಗದಿಂದಲೂ ಶಿರಸಿ ಶಾಲೆ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಾರೆ. ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಒಂದು ಸೆಕೆಂಡ್&zwnj; ಕೂಡ ಈ ರಸ್ತೆ ಖಾಲಿ ಇರೋದಿಲ್ಲ. ಹೀಗಿರುವಾಗ ಈ ರೀತಿ ರಸ್ತೆ ಇದ್ದರೆ ಏನು ಮಾಡಬೇಕು? ನಾಳೆ ಅಪಘಾತ ಆದರೆ, ಧೂಳಿನಿಂದ ಅನಾರೋಗ್ಯ ಆದರೆ ಅದಕ್ಕೆ ಯಾರು ಹೊಣೆ? ಆಮೇಲೆ ಶ್ರದ್ಧಾಂಜಲಿ ಹೇಳಿ ಹೋಗುತ್ತೀರಾ ಎಂದು ಇಲ್ಲಿನ ಜನರು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;&lt;img&gt;&lt;img&gt;&lt;/p&gt;]]></content:encoded>
            <category>uttara-kannada</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/sirsi-haveri-national-highway-people-protest-in-bisalakoppa/articleshow-feqixgd"/>
        </item>
        <item>
            <title><![CDATA[NWKRTC: ಹಳಿಯಾಳ-ಭಟ್ಕಳ ಬಸ್‌ಗೆ ಸಂಡೇ ಹಾಲಿಡೇ; ಸಾರಿಗೆ ಸಿಬ್ಬಂದಿಯಿಂದ ಅಸಂಬದ್ಧ ಸಬೂಬು]]></title>
            <link>https://kannada.asianetnews.com/karnataka-districts/sunday-is-a-holiday-for-the-haliyal-bhatkal-bus-service-which-was-started-on-public-demand-mrq/articleshow-gq01nuu</link>
            <guid isPermaLink="true">https://kannada.asianetnews.com/karnataka-districts/sunday-is-a-holiday-for-the-haliyal-bhatkal-bus-service-which-was-started-on-public-demand-mrq/articleshow-gq01nuu</guid>
            <pubDate>Thu, 21 May 2026 08:54:57 +0530</pubDate>
            <description><![CDATA[ಜನರ ಬೇಡಿಕೆಯಂತೆ ಆರಂಭವಾದ ಹಳಿಯಾಳ-ಭಟ್ಕಳ ಬಸ್ ಸೇವೆ ಕಳೆದ ಎರಡು ತಿಂಗಳಿಂದ ಅನಿಯಮಿತವಾಗಿದ್ದು, ವಿಶೇಷವಾಗಿ ಭಾನುವಾರದಂದು ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು, ನೌಕರರು ಮತ್ತು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಾರಿಗೆ ಇಲಾಖೆ ಶೀಘ್ರದಲ್ಲೇ ಸೇವೆ ಪುನರಾರಂಭಿಸುವುದಾಗಿ ಭರವಸೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks48zptyaby8nk8qdz63b5vx,imgname-haliyala-bus-1779333847902.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಕೆಳಗಿನ ತಾಲೂಕಿನ ಜನರ ಅಪಾರ ಬೇಡಿಕೆಯಂತೆ ಕಳೆದ ವರ್ಷವಷ್ಟೇ ಆರಂಭಗೊಂಡಿದ್ದ ಹಳಿಯಾಳ-ಭಟ್ಕಳ-ಹಳಿಯಾಳ ಬಸ್ ಕಳೆದೆರೆಡು ತಿಂಗಳಿಂದ ನಿಯಮಿತವಾಗಿ ಬಿಡದಿರುವುದರಿಂದ ಬಸ್ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.&lt;/p&gt;&lt;p&gt;ಇತ್ತೀಚಿನ ಕೆಲವು ದಿನಗಳಿಂದ ಈ ಬಸ್ ಭಾನುವಾರ ಸಂಚರಿಸುತ್ತಿಲ್ಲ. ಈ ಕುರಿತು ಸಾರಿಗೆ ಘಟಕದ ನಿರ್ವಾಹಕರಿಗೆ ವಿಚಾರಿಸಿದರೇ ಭಾನುವಾರ ರಜೆ ದಿನವಾಗಿ ಮಾರ್ಪಡಿಸಿದ್ದರಿಂದ ಹಳಿಯಾಳ-ಭಟ್ಕಳ್ಳ-ಹಳಿಯಾಳ ಸಂಚರಿಸುವುದಿಲ್ಲವೆಂದು ಹೇಳುತ್ತಾರೆ. ಒಮ್ಮೊಮ್ಮೆ ಬಸ್ ದುರಸ್ತಿ ಇದೇ, ಸಿಬ್ಬಂದಿ ಕೊರತೆ ಎಂದು ಅಸಂಬದ್ಧ ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆಂಬುದು ಪ್ರಯಾಣಿಕರು ಆರೋಪವಾಗಿದೆ.&lt;/p&gt;&lt;h2&gt;&lt;strong&gt;ಬಸ್ ವೇಳಾಪಟ್ಟಿ&lt;/strong&gt;&lt;/h2&gt;&lt;p&gt;ಬೆಳಗ್ಗೆ 8 ಗಂಟೆಗೆ ಹಳಿಯಾಳದಿಂದ ಹೊರಡುವ ಈ ಬಸ್ ಯಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ ಮಾರ್ಗವಾಗಿ ಭಟ್ಕಳಕ್ಕೆ ಮಧ್ಯಾಹ್ನ 1.30ಕ್ಕೆ ತಲುಪುತ್ತದೆ. ಮಧ್ಯಾಹ್ನ 2.30ಕ್ಕೆ ಭಟ್ಕಳದಿಂದ ಹೊರಡುವ ಬಸ್ ರಾತ್ರಿ 8ಗಂಟೆಗೆ ಹಳಿಯಾಳಕ್ಕೆ ತಲಪುತ್ತದೆ.&lt;/p&gt;&lt;p&gt;ವಾರಾಂತ್ಯದ ದಿನ ಘಟ್ಟದ ಕೆಳಗಿನ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಊರಿಗೆ ಹೋದರೇ ಸೋಮವಾರ ಹಿಂದಿರುಗಿ ಬರಲು ತಡವಾಗುತ್ತದೆ ಎಂಬ ಕಾರಣಕ್ಕೆ ಭಾಬಯವಾರ ಸಂಜೆಯೇ ಈ ಬಸ್ ಮೂಲಕ ಹಳಿಯಾಳಕ್ಕೆ ಬರುತ್ತಿದ್ದರು.&lt;/p&gt;&lt;h3&gt;&lt;strong&gt;ಸರ್ವರಿಗೂ ಅನುಕೂಲಕರವಾಗಿರುವ ಬಸ್&lt;/strong&gt;&lt;/h3&gt;&lt;p&gt;ಈ ಬಸ್ ಆರಂಭಗೊಂಡ ನಂತರ ಜಿಲ್ಲಾ ಕೇಂದ್ರ ಕಾರವಾರವಾಗಲಿ ಅಥವಾ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಭೇಟಿ ನೀಡಿ ಬರುವ ಪ್ರಯಾಣಿಕರಿಗೆ ಹಳಿಯಾಳಕ್ಕೆ ಮರಳಲು ಈ ಬಸ್ ಅನುಕೂಲಕರವಾಗಿತ್ತು. ಅದಲ್ಲದೇ ಯಲ್ಲಾಪುರದಿಂದ ಹಳಿಯಾಳಕ್ಕೆ ಬರಲು ಸಂಜೆ ಸಮಯದಲ್ಲಿ ಕೊನೆಯ ಬಸ್ ಇದಾಗಿರುವುದರಿಂದ ಸರ್ವರಿಗೂ ಈ ಬಸ್ ಬಾರಿ ಅನುಕೂಲಕರವಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಿದ್ದಾಪುರ To ಶಿರಸಿ: ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ&lt;/strong&gt;&lt;/p&gt;&lt;p&gt;ಕೆಲವು ಆಡಳಿತಾತ್ಮಕ ಕಾರಣಗಳಿಂದ ಭಾನುವಾರ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದಾಗಿ ಈ ರೂಟಿನ ಸಂಚರಿಸುವರಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಾರದಿಂದ ವಾರದ ಏಳು ದಿನವೂ ಬಸ್ ಸಂಚಾರ ಎಂದಿನಂತೆಯೇ ಆರಂಭಿಸಲಿದ್ದೇವೆ ಎಂದು ಹಳಿಯಾಳ ಸಾರಿಗೆ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Sirsi: ಯಕ್ಷಗಾನ ನಡೆಸುವ ಜಾಗದ ವಿಚಾರ; ಚಪ್ಪಲಿ, ಪೊರಕೆಯಲ್ಲಿ ಹೊಡೆದಾಡಿಕೊಂಡ ಶಿರಸಿಯ ದಾಯಾದಿಗಳು!&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/sunday-is-a-holiday-for-the-haliyal-bhatkal-bus-service-which-was-started-on-public-demand-mrq/articleshow-gq01nuu"/>
        </item>
        <item>
            <title><![CDATA[ಹುಲಿ ಗಣತಿಗೆ ಇರಿಸಲಾಗಿದ್ದ ಟ್ರ್ಯಾಪ್ ಕ್ಯಾಮೆರಾ ಕಳ್ಳತನ:  ಅರಣ್ಯ ಪ್ರದೇಶದಲ್ಲಿ ನಡೆದಿದ್ದೇನು?]]></title>
            <link>https://kannada.asianetnews.com/karnataka-districts/theft-of-a-trap-camera-placed-for-a-tiger-census-ankola-uttara-kannada-mrq/articleshow-gtos64o</link>
            <guid isPermaLink="true">https://kannada.asianetnews.com/karnataka-districts/theft-of-a-trap-camera-placed-for-a-tiger-census-ankola-uttara-kannada-mrq/articleshow-gtos64o</guid>
            <pubDate>Thu, 21 May 2026 09:34:00 +0530</pubDate>
            <description><![CDATA[ಅಂಕೋಲಾ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅಳವಡಿಸಲಾಗಿದ್ದ ಟ್ರ್ಯಾಪ್ ಕ್ಯಾಮೆರಾಗಳು ಕಳ್ಳತನವಾಗುತ್ತಿವೆ. ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳು ನಷ್ಟವಾಗುವುದರ ಜೊತೆಗೆ, ಸಂಗ್ರಹಿಸಲಾಗಿದ್ದ ವನ್ಯಜೀವಿಗಳ ಅಮೂಲ್ಯ ಮಾಹಿತಿಯೂ ಕಳೆದುಹೋಗಿ ಗಣತಿ ಕಾರ್ಯಕ್ಕೆ ಅಡ್ಡಿಯಾಗಿದೆ. ಅರಣ್ಯ ಇಲಾಖೆ ಮತ್ತು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks4b83w3mhvxh7t11t0fz02p,imgname-camera-installed-in-the-forest-to-detect-tigers-1779336220547.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಘು ಕಾಕರಮಠ&lt;/strong&gt;&lt;/p&gt;&lt;p&gt;&lt;strong&gt;ಅಂಕೋಲಾ: ಉ&lt;/strong&gt;ಕ ಜಿಲ್ಲೆಯ ಅಂಕೋಲಾ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಹುಲಿ ಗಣತಿ ಕಾರ್ಯಕ್ಕೆ ಇದೀಗ ಕ್ಯಾಮೆರಾ ಕಳ್ಳತನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅರಣ್ಯ ಇಲಾಖೆಯು ಹುಲಿಗಳ ಸಂಚಾರ, ಸಂಖ್ಯೆ ಹಾಗೂ ವಾಸಸ್ಥಾನದ ಅಧ್ಯಯನಕ್ಕಾಗಿ ಅರಣ್ಯದ ವಿವಿಧ ಭಾಗಗಳಲ್ಲಿ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮೆರಾಗಳು ಕಳ್ಳತನವಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಇದರಿಂದ ಗಣತಿ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.&lt;/p&gt;&lt;p&gt;ಹುಲಿ ಗಣತಿ ಕಾರ್ಯವು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅರಣ್ಯ ಸಂರಕ್ಷಣಾ ಯೋಜನೆಗಳ ಪ್ರಮುಖ ಭಾಗವಾಗಿದ್ದು, ಅರಣ್ಯದಲ್ಲಿ ಹುಲಿಗಳ ಅಸ್ತಿತ್ವ ಮತ್ತು ಚಲನವಲನಗಳನ್ನು ವೈಜ್ಞಾನಿಕವಾಗಿ ದಾಖಲಿಸಲು ಕ್ಯಾಮೆರಾ ಟ್ರ್ಯಾಪ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರಾಣಿಗಳ ಸಂಚರಣೆ ನಡೆಯುವ ದಾರಿಗಳು, ನೀರಿನ ಮೂಲಗಳು ಹಾಗೂ ದಟ್ಟ ಅರಣ್ಯ ಪ್ರದೇಶಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಆದರೆ ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಕ್ಯಾಮೆರಾಗಳು ನಾಪತ್ತೆಯಾಗಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;p&gt;ಅರಣ್ಯ ಸಿಬ್ಬಂದಿ ನೀಡಿದ ಮಾಹಿತಿಯಂತೆ, ಕೆಲವು ಕ್ಯಾಮೆರಾಗಳು ಅರಣ್ಯದ ಒಳಭಾಗದಲ್ಲೇ ಕಳ್ಳತನವಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳು ನಷ್ಟವಾಗುತ್ತಿರುವುದಲ್ಲದೆ, ಹಲವು ದಿನಗಳ ಕಾಲ ಸಂಗ್ರಹವಾಗಿದ್ದ ವನ್ಯಜೀವಿಗಳ ಮಾಹಿತಿಯೂ ಕಳೆದುಹೋಗುವಂತಾಗಿದೆ.&lt;/p&gt;&lt;h2&gt;&lt;strong&gt;ಹುಲಿ ಗಣತಿ ಸಾಮಾನ್ಯ ಸಮೀಕ್ಷೆಯಲ್ಲ&lt;/strong&gt;;&lt;strong&gt;&amp;nbsp;&lt;/strong&gt;&lt;/h2&gt;&lt;p&gt;ಇದು ಅರಣ್ಯ ಪರಿಸರದ ಆರೋಗ್ಯದ ಸೂಚಕವೂ ಆಗಿದೆ. ಹುಲಿಗಳ ಸಂಖ್ಯೆ ಮತ್ತು ಅವುಗಳ ಚಲನವಲನಗಳ ಆಧಾರದ ಮೇಲೆ ಅರಣ್ಯ ಸಂಪತ್ತಿನ ಸ್ಥಿತಿ ಅಂದಾಜಿಸಲಾಗುತ್ತದೆ. ಈ ಹಿನ್ನೆಲೆ ಕ್ಯಾಮೆರಾ ಕಳ್ಳತನದ ಘಟನೆಗಳು ಇಲಾಖೆಯ ಕಾರ್ಯಪದ್ಧತಿಗೆ ಧಕ್ಕೆ ತರುತ್ತಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಸ್ಥಳೀಯ ಅರಣ್ಯ ಅಧಿಕಾರಿಗಳು ಈಗ ಹೆಚ್ಚುವರಿ ನಿಗಾ ಕ್ರಮ ಕೈಗೊಂಡಿದ್ದು, ಅರಣ್ಯ ಸಿಬ್ಬಂದಿಯಿಂದ ನಿಯಮಿತ ಪೆಟ್ರೋಲಿಂಗ್ ನಡೆಸಲಾಗುತ್ತಿದೆ. ಜೊತೆಗೆ ಕ್ಯಾಮೆರಾ ಅಳವಡಿಸುವ ಸ್ಥಳಗಳ ಮಾಹಿತಿಯನ್ನು ಗೌಪ್ಯವಾಗಿಡಲು ಕ್ರಮ ಕೈಗೊಳ್ಳಲಾಗಿದೆ. ಕೆಲವು ಪ್ರದೇಶಗಳಲ್ಲಿ ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನೂ ಬಳಸುವ ಕುರಿತು ಚಿಂತನೆ ನಡೆದಿದೆ.&lt;/p&gt;&lt;p&gt;ಅರಣ್ಯ ಇಲಾಖೆ ಕ್ಯಾಮೆರಾ ಕಳ್ಳತನ ಪ್ರಕರಣಗಳ ಕುರಿತು ತನಿಖೆ ಆರಂಭಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದೆ. ಹಾಗೆ ಪೊಲೀಸ್ ಇಲಾಖೆಯು ಸಹ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕಳ್ಳರ ಪತ್ತೆಗೆ ಪಿಎಸ್&zwnj;ಐ ವಿಶ್ವನಾಥ ನಿಂಗೊಳ್ಳಿ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದೆ.&lt;/p&gt;&lt;p&gt;ಹುಲಿ ಗಣತಿಗಾಗಿ ಅಂಕೋಲಾ ಹಾಗೂ ಕಾರವಾರಕ್ಕೆ ಸೇರಿ ಒಟ್ಟು 250 ಕ್ಯಾಮೆರಾಗಳನ್ನು ಟೈಗರ್ ಮೊನಿಟರಿಂಗ್ ಸೆಲ್&zwnj;ನವರು ನೀಡಿದ್ದರು. ತಾಲೂಕಿನ ವಿವಿಧ ಭಾಗಗಳಲ್ಲಿ 25 ದಿನಗಳ ಅಧ್ಯಯನಕ್ಕಾಗಿ ಕ್ಯಾಮೆರಾ ಅಳವಡಿಸಲಾಗಿತ್ತು. ಮೇ 25ಕ್ಕೆ ಗಣತಿ ಕೊನೆಗೊಳ್ಳುವುದಿತ್ತು. ಹೀಗಿರುವಾಗ ಕ್ಯಾಮೆರಾ ಕಳ್ಳತನವಾಗಿರುವುದು ಕಂಡು ಬಂದಿದೆ ಎಂದು ಅಂಕೋಲಾದ ಎ.ಸಿ.ಎಫ್. ಜಯೇಶ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;2 ಕ್ಯಾಮೆರಾ ಕಳ್ಳತನ&lt;/strong&gt;&lt;/h3&gt;&lt;p&gt;ಹುಲಿ ಗಣತಿ ಕಾರ್ಯ ನಡೆಸಲು ಅಂಕೋಲಾದ ಹೊಸಕಂಬಿ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾದ 2 ಕ್ಯಾಮೆರಾ ಕಳ್ಳತನವಾಗಿದೆ ಎಂದು ಪೊಲೀಸ್ ದೂರು ದಾಖಲಾಗಿದೆ.&lt;/p&gt;&lt;p&gt;ಮೇ 1ರಿಂದ 25ರವರೆಗೆ ಆಲ್ ಇಂಡಿಯಾ ಟೈಗರ್ ಎಸ್ಟಿಮೇಶನ್ ಕಾರ್ಯಾಚರಣೆ ನಡೆಯುತ್ತಿದೆ. ಇದರ ಭಾಗವಾಗಿ ಹೊಸಕಂಬಿ ವಲಯದ ಮಾಣಿಕಾರ ತಿಂಗಳಬೈಲ್ ಅರಣ್ಯ ಪ್ರದೇಶದಲ್ಲಿ ಕಡಿಬ್ಯಾಕ್ ಕಂಪನಿಯ ಎರಡು ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪ್ರತಿ ಐದು ದಿನಗಳಿಗೊಮ್ಮೆ ಕ್ಯಾಮೆರಾದ ಮೆಮೊರಿ ಕಾರ್ಡ್ ಬದಲಾಯಿಸಿ, ಅದರಲ್ಲಿನ ಮಾಹಿತಿಯನ್ನು ರೇಂಜ್ ಫಾರೆಸ್ಟ್ ಕಚೇರಿಯ ಕಂಪ್ಯುಟರಿನಲ್ಲಿ ದಾಖಲು ಮಾಡಲಾಗುತ್ತಿತ್ತು. ಮೇ 11ರಂದು ಕೊನೆಯದಾಗಿ ಡೇಟಾ ಸಂಗ್ರಹಣೆ ನಡೆಸಲಾಗಿತ್ತು. ಮೇ 12ರಂದು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಕ್ಯಾಮೆರಾ ಅಲ್ಲಿಯೇ ಇತ್ತು.&lt;/p&gt;&lt;p&gt;ಆದರೆ, ಮೇ 13ರಂದು ಕರ್ತವ್ಯಕ್ಕೆ ಹೋದ ಸಿಬ್ಬಂದಿಗೆ ಕ್ಯಾಮೆರಾ ಕಾಣಿಸಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಕ್ಕಿಲ್ಲ. ಈ ಹಿನ್ನೆಲೆ ಸಿಬ್ಬಂದಿ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸುಮಾರು 1 ಲಕ್ಷ ಮೌಲ್ಯದ ಎರಡು ಕ್ಯಾಮೆರಾ ಕಾಣೆಯಾದ ಬಗ್ಗೆ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಗುರುರಾಜ ಜಿರಗಾಳೆ ದೂರು ನೀಡಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/theft-of-a-trap-camera-placed-for-a-tiger-census-ankola-uttara-kannada-mrq/articleshow-gtos64o"/>
        </item>
        <item>
            <title><![CDATA[Karwar: ತಲೆಮರೆಸಿಕೊಂಡಿದ್ದ ಆರೋಪಿಗೆ 33 ವರ್ಷಗಳ ಬಳಿಕ 5 ವರ್ಷ ಜೈಲು ಶಿಕ್ಷೆ, ದಂಡ]]></title>
            <link>https://kannada.asianetnews.com/karnataka-districts/accused-who-was-absconding-gets-5-years-in-prison-fine-after-33-years-mrq/articleshow-ks49yx6</link>
            <guid isPermaLink="true">https://kannada.asianetnews.com/karnataka-districts/accused-who-was-absconding-gets-5-years-in-prison-fine-after-33-years-mrq/articleshow-ks49yx6</guid>
            <pubDate>Tue, 05 May 2026 09:49:35 +0530</pubDate>
            <description><![CDATA[1993ರಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣದಲ್ಲಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು 2021ರಲ್ಲಿ ಬಂಧಿಸಲಾಗಿತ್ತು. ಇದೀಗ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01e3702p3pdfj177kvr9ktwmvg,imgname-judgement-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಹಳೆಯ ದ್ವೇಷದ ಹಿನ್ನೆಲೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ 1993ರ ಹಳೆಯ ಪ್ರಕರಣದ ಆರೋಪಿಗೆ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹7,000 ದಂಡ ವಿಧಿಸಿ ತೀರ್ಪು ನೀಡಿದೆ.&lt;/p&gt;&lt;h2&gt;&lt;strong&gt;ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ&lt;/strong&gt;&lt;/h2&gt;&lt;p&gt;ಹಳೆಯ ದ್ವೇಷದ ಹಿನ್ನೆಲೆ ಆರೋಪಿಗಳು ಗುಂಪುಗೂಡಿ ಪ್ರಶಾಂತ್ ಎಂಬ ವ್ಯಕ್ತಿಗೆ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕುರಿತು 1993ರಲ್ಲಿ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 147, 149, 504, 302 ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಕದ್ರಾ ವೃತ್ತದ ಸಿಪಿಐ ಆಗಿದ್ದ ಡಿ.ಕೆ. ನಿಕ್ಕಮ್ ಅವರು ಸಮಗ್ರ ತನಿಖೆ ನಡೆಸಿ, ಕಾರವಾರದ ಭಗತವಾಡಾ ಅಸ್ನೋಟಿ ನಿವಾಸಿ ದೀಲಿಪ ಶಾಂತಾ ತಳೇಕರ ಎಂಬಾತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.&lt;/p&gt;&lt;p&gt;ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಆರೋಪಿ ದೀಲಿಪ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ಪ್ರಕರಣವನ್ನು ಎಲ್.ಪಿ.ಸಿ ಎಂದು ಪರಿಗಣಿಸಲಾಗಿತ್ತು. ತರುವಾಯ, 16-04-2021 ರಂದು ಚಿತ್ತಾಕುಲ ಪಿಎಸ್&zwnj;ಐ ಪ್ರವೀಣ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.&lt;/p&gt;&lt;h3&gt;&lt;strong&gt;5 ವರ್ಷ ಜೈಲು ಶಿಕ್ಷೆ ಹಾಗೂ ₹7 ಸಾವಿರ ದಂಡ&lt;/strong&gt;&lt;/h3&gt;&lt;p&gt;ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ₹7 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುನೀತಾ ನಾಗೇಕರ ವಾದ ಮಂಡಿಸಿದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/accused-who-was-absconding-gets-5-years-in-prison-fine-after-33-years-mrq/articleshow-ks49yx6"/>
        </item>
        <item>
            <title><![CDATA[ಜನಗಣತಿ ಕರ್ತವ್ಯದಲ್ಲಿದ್ದ ಶಿಕ್ಷಕಿ ರಸ್ತೆ ಅಪಘಾತದಲ್ಲಿ ದುರ್ಮರಣ; ಟ್ರ್ಯಾಕ್ಟರ್‌ಗೆ ಬಲಿಯಾದ ಪೂರ್ಣಿಮಾ ಭಟ್]]></title>
            <link>https://kannada.asianetnews.com/karnataka-districts/siddapur-teacher-poornima-bhat-dies-in-road-accident-during-census-duty-sat/articleshow-ma3ek60</link>
            <guid isPermaLink="true">https://kannada.asianetnews.com/karnataka-districts/siddapur-teacher-poornima-bhat-dies-in-road-accident-during-census-duty-sat/articleshow-ma3ek60</guid>
            <pubDate>Fri, 15 May 2026 09:38:49 +0530</pubDate>
            <description><![CDATA[&lt;p&gt;ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಜನಗಣತಿ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿ ಪೂರ್ಣಿಮಾ ಭಟ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಳವತ್ತಿ ಬಳಿ ವೇಗವಾಗಿ ಬಂದ ಟ್ರ್ಯಾಕ್ಟರ್ ಅವರ ಬೈಕ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krmx544whsmcw00sa66t0p3e,imgname-siddapur-teacher-poornima-bhat-dies-1778818125980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರಕನ್ನಡ (ಮೇ 15): ದೇ&lt;/strong&gt;ಶದ ಜನಗಣತಿ ಕರ್ತವ್ಯದ ಮೇಲೆ ತೆರಳುತ್ತಿದ್ದ ಶಿಕ್ಷಕಿಯೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಳವತ್ತಿಯಲ್ಲಿ ನಡೆದಿದೆ. ಮೃತ ಶಿಕ್ಷಕಿಯನ್ನು ಪೂರ್ಣಿಮಾ ಭಟ್ (46) ಎಂದು ಗುರುತಿಸಲಾಗಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಸಿದ್ದಾಪುರ ತಾಲೂಕಿನ ಹೊಸುರು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪೂರ್ಣಿಮಾ ಭಟ್ ಅವರು, ಸದ್ಯ ಸರ್ಕಾರದ ಜನಗಣತಿ (Census Duty) ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಇಂದು ಬೆಳಿಗ್ಗೆ ಅವರು ಸಿದ್ದಾಪುರದಿಂದ ಮಳವತ್ತಿ ಗ್ರಾಮಕ್ಕೆ ಜನಗಣತಿ ಕಾರ್ಯಕ್ಕಾಗಿ ತಮ್ಮ ಬೈಕ್&zwnj;ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಳವತ್ತಿ ಬಳಿ ವೇಗವಾಗಿ ಬಂದ ಟ್ರ್ಯಾಕ್ಟರ್ ಇವರ ಬೈಕ್&zwnj;ಗೆ ಬಲವಾಗಿ ಡಿಕ್ಕಿ ಹೊಡೆದಿದೆ.&lt;/p&gt;&lt;h2&gt;&lt;strong&gt;ಸ್ಥಳದಲ್ಲೇ ಸಾವು:&lt;/strong&gt;&lt;/h2&gt;&lt;p&gt;ಡಿಕ್ಕಿಯ ರಭಸಕ್ಕೆ ಪೂರ್ಣಿಮಾ ಭಟ್ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ದುರದೃಷ್ಟವಶಾತ್, ತೀವ್ರ ರಕ್ತಸ್ರಾವವಾದ ಕಾರಣ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.&lt;/p&gt;&lt;h3&gt;&lt;strong&gt;ಕಂಬನಿ ಮಿಡಿದ ಶಿಕ್ಷಣ ಇಲಾಖೆ:&lt;/strong&gt;&lt;/h3&gt;&lt;p&gt;ಪೂರ್ಣಿಮಾ ಭಟ್ ಅವರು ಸಿದ್ದಾಪುರದ ಹೊಸುರು ಶಾಲೆಯಲ್ಲಿ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಹೋದ್ಯೋಗಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಜನಗಣತಿಯಂತಹ ಪ್ರಮುಖ ರಾಷ್ಟ್ರೀಯ ಕಾರ್ಯಕ್ಕೆ ತೆರಳುವಾಗ ಈ ಘಟನೆ ನಡೆದಿರುವುದು ತುಂಬಲಾರದ ನಷ್ಟವಾಗಿದೆ.&lt;/p&gt;&lt;p&gt;ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟ್ರ್ಯಾಕ್ಟರ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/siddapur-teacher-poornima-bhat-dies-in-road-accident-during-census-duty-sat/articleshow-ma3ek60"/>
        </item>
        <item>
            <title><![CDATA[ಉಪಚುನಾವಣೆಯಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಹಾವು ಕಡಿದು ಸಾವು, ಉತ್ತರ ಕನ್ನಡದಲ್ಲಿ ದುರಂತ ಘಟನೆ]]></title>
            <link>https://kannada.asianetnews.com/gallery/karnataka-districts/goa-congress-leader-ketan-bhatikar-dies-after-snake-bite-in-uttara-kannada-r8kqm44</link>
            <guid isPermaLink="true">https://kannada.asianetnews.com/gallery/karnataka-districts/goa-congress-leader-ketan-bhatikar-dies-after-snake-bite-in-uttara-kannada-r8kqm44</guid>
            <pubDate>Sat, 16 May 2026 09:20:36 +0530</pubDate>
            <description><![CDATA[&lt;p&gt;ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುಖಂಡ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಾಗರ ಹಾವು ಕಡಿದು ಮೃತಪಟ್ಟ ದುರಂತ ಘಟನೆ ನಡೆದಿದೆ.ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqe26eb4gqfybj4y0vq1qye,imgname-ketan-bhatikar-1778902964683.jpeg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುಖಂಡ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಾಗರ ಹಾವು ಕಡಿದು ಮೃತಪಟ್ಟ ದುರಂತ ಘಟನೆ ನಡೆದಿದೆ.ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.&lt;/p&gt;&lt;img&gt;&lt;p&gt;ಪಂಚ ರಾಜ್ಯಗಳ ಚುನಾವಣೆ ವೇಳೆ ಕರ್ನಾಟಕ, ಗೋವಾ ಸೇರಿದಂತೆ ಹಲವೆಡೆ ಉಪ ಚುನಾವಣೆಗಳು ನಡೆದಿತ್ತು. ಈ ಉಪಚುನಾವಣೆಯಲ್ಲಿ ಗೋವಾದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುಖಂಡ ಕೇತನ್ ಬಾಟಿಕರ್ ನಾಗರ ಹಾವು ಕಡಿದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಬಳಿ ನಡೆದಿದೆ.&lt;/p&gt;&lt;img&gt;&lt;p&gt;ಗೋವಾದ ಉಪ ಚುನಾವಣೆ ವೇಳೆ ಕಾಂಗ್ರೆಸ್&zwnj;ನಿಂದ ಸ್ಪರ್ಧಿಸಿದ್ದ ಕೇತನ್ ಬಾಟಿಕರ್ ಚುನಾವಣೆ ಒತ್ತಡ ಮುಗಿದ ಬೆನ್ನಲ್ಲೇ ಸ್ನೇಹಿತರ ಜೊತೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾಗೆ ಆಗಮಿಸಿದ್ದರು. ಕಾರಿನಲ್ಲಿ ಆಗಮಿಸುವಾಗ ಅನಮೋಡ್ ಘಟ್ಟ ಭಾಗದಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗಾಗಿ ಇಳಿದಿದ್ದಾರೆ. ಮೂತ್ರ ವಿಸರ್ಜನೆ ಮಾಡುವಾಗ ನಾಗರ ಹಾವು ಕಚ್ಚಿದೆ.&lt;/p&gt;&lt;img&gt;&lt;p&gt;ಮೂತ್ರ ವಿಸರ್ಜನೆ ಮಾಡುತ್ತಿದ್ದಂತೆ ನಾಗರ ಹಾವು ಏಕಾಏಕಿ ದಾಳಿ ಮಾಡಿ ಕಚ್ಚಿದೆ. ತಕ್ಷಣವೇ ಸ್ನೇಹಿತರು ಕೇತನ್ ಬಾಟಿಕರ್&zwnj;ನ್ನು ಗೋವಾದ ಜಿ.ಎಮ್ .ಸಿ ಮೆಡಿಕಲ್ ಕಾಲೇಜು ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಕೇತನ್ ಬಾಟಿಕರ್ ಚಿಕಿತ್ಸೆ ಫಲಿಸದ ಸಾವು ಕಂಡಿದ್ದಾರೆ.&lt;/p&gt;&lt;img&gt;&lt;p&gt;ಗೋವಾದ ಪೋಂಡಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೇತನ್ ಬಾಟಿಕರ್ ಭರ್ಜರಿ ಪ್ರಚಾರ ಮಾಡಿದ್ದರು. ಆದರೆ ಗೆಲುವು ಕಂಡಿರಲಿಲ್ಲ. ಕೇತನ್ ಬಾಟಿಕರ್ ಸಾಮಾಜಿಕವಾಗಿ ಸಕ್ರಿಯವಾಗಿದ್ದಾರೆ. ಹಲವು ಕಾರ್ಯಕ್ರಮಗಳು, ಜನಸಂಪರ್ಕದ ಮೂಲಕ ನಾಯಕನಾಗಿ ಬೆಳೆದಿದ್ದಾರೆ.&lt;/p&gt;&lt;img&gt;&lt;p&gt;ಗೋವಾದ ಕೃಷಿ ಸಚಿವ ರವಿ ನಾಯ್ಕ ಅಕಾಲಿಕ ನಿಧನದಿಂದ ತೆರವಾಗಿದ್ದ ಪೊಂಡಾ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಉಪಚುನಾವಣೆ ನಡೆದಿತ್ತು. ಉಪಚುನಾವಣೆಯಲ್ಲಿ ಕೇತನ್ ಬಾಟಿಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದೀಗ ಕೇತನ್ ಬಾಟಿಕರ್ ಸಾವು ಹಲವರಿಗೆ ಆಘಾತ ನೀಡಿದೆ. ಕೋಲಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/karnataka-districts/goa-congress-leader-ketan-bhatikar-dies-after-snake-bite-in-uttara-kannada-r8kqm44"/>
        </item>
        <item>
            <title><![CDATA[ಖಾನಾಪುರ–ತಾಳಗುಪ್ಪ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು-ಟ್ರಕ್ ನಡುವೆ ಡಿಕ್ಕಿ, ಐವರಿಗೆ ಗಂಭೀರ ಗಾಯ]]></title>
            <link>https://kannada.asianetnews.com/karnataka-districts/karwar-haliyal-road-accident-car-truck-collision-injured-updates-sat/articleshow-s3gcpro</link>
            <guid isPermaLink="true">https://kannada.asianetnews.com/karnataka-districts/karwar-haliyal-road-accident-car-truck-collision-injured-updates-sat/articleshow-s3gcpro</guid>
            <pubDate>Fri, 08 May 2026 13:08:29 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಕಾರು ಮತ್ತು ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಅತಿ ವೇಗದಿಂದ ಬಂದ ಕಾರು ಟ್ರಕ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr38b0xyb65jwf2zv7xnt4bd,imgname-uttara-kannada-accident-1778225873854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ (ಮೇ 08): ಜಿ&lt;/strong&gt;ಲ್ಲೆಯ ಹಳಿಯಾಳ ತಾಲೂಕಿನಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾನಾಪುರ&ndash;ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಕಾರು ಮತ್ತು ಟ್ರಕ್ ನಡುವೆ ನೇರ ಡಿಕ್ಕಿಯಾಗಿದ್ದು, ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;/p&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮದ ಸಮೀಪ ಈ ಅಪಘಾತ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಮುಖ್ಯ ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ಹತೋಟಿ ತಪ್ಪಿ, ಎದುರಿಗೆ ಬರುತ್ತಿದ್ದ ಟ್ರಕ್&zwnj;ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಮುಂಭಾಗದಿಂದ ಸಂಪೂರ್ಣವಾಗಿ ಜಖಂಗೊಂಡಿದ್ದು, ನೋಡುಗರ ಎದೆ ಝಲ್ಲೆನ್ನುವಂತಿತ್ತು.&lt;/p&gt;&lt;h2&gt;&lt;strong&gt;ಗಾಯಾಳುಗಳ ಸ್ಥಿತಿ:&lt;/strong&gt;&lt;/h2&gt;&lt;p&gt;ಅಪಘಾತದ ಸಮಯದಲ್ಲಿ ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಟ್ರಕ್&zwnj;ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಐವರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆಯಲು ನೆರವಾಗಿದ್ದಾರೆ. ಸದ್ಯ ಗಾಯಾಳುಗಳನ್ನು ತುರ್ತಾಗಿ ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಸಂಚಾರ ಅಸ್ತವ್ಯಸ್ತ:&lt;/strong&gt;&lt;/h3&gt;&lt;p&gt;ಈ ಅಪಘಾತವು ಹಳಿಯಾಳಕ್ಕೆ ಬರುತ್ತಿದ್ದ ಟ್ರಕ್ ಮತ್ತು ಅಳ್ನಾವರಕ್ಕೆ ತೆರಳುತ್ತಿದ್ದ ಕಾರಿನ ನಡುವೆ ನಡೆದಿದೆ. ರಾಜ್ಯ ಹೆದ್ದಾರಿಯ ಮಧ್ಯದಲ್ಲೇ ಅಪಘಾತ ಸಂಭವಿಸಿದ ಕಾರಣ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿಲೋಮೀಟರ್&zwnj;ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.&lt;/p&gt;&lt;h3&gt;&lt;strong&gt;ಪೊಲೀಸ್ ಭೇಟಿ:&lt;/strong&gt;&lt;/h3&gt;&lt;p&gt;ವಿಷಯ ತಿಳಿದ ಕೂಡಲೇ ಹಳಿಯಾಳ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಖಂಗೊಂಡ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅತಿ ವೇಗ ಮತ್ತು ಅಜಾಗರೂಕತೆಯೇ ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karwar-haliyal-road-accident-car-truck-collision-injured-updates-sat/articleshow-s3gcpro"/>
        </item>
        <item>
            <title><![CDATA[ಹಾವು ಹಿಡಿಯಲು ಬಂದ ಉರಗ ತಜ್ಞ ರಜಾಕ್ ಶಾ ಹೊಟ್ಟೆಗೆ ಕಚ್ಚಿದ 15 ಅಡಿ ಉದ್ದದ ಹೆಬ್ಬಾವು; ಮುಂದೇನಾಯ್ತು ನೋಡಿ!]]></title>
            <link>https://kannada.asianetnews.com/gallery/state/python-attacks-on-snake-expert-razak-shah-during-rescue-in-dandeli-15-foot-python-safely-released-sat-vysgzbi</link>
            <guid isPermaLink="true">https://kannada.asianetnews.com/gallery/state/python-attacks-on-snake-expert-razak-shah-during-rescue-in-dandeli-15-foot-python-safely-released-sat-vysgzbi</guid>
            <pubDate>Sun, 10 May 2026 18:49:29 +0530</pubDate>
            <description><![CDATA[ದಾಂಡೇಲಿಯಲ್ಲಿ 15 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ರಕ್ಷಿಸುವಾಗ ಉರಗ ತಜ್ಞ ರಾಜಾಕ್ ಶಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಬ್ಬಾವು ಕಚ್ಚಿದರೂ ಧೈರ್ಯಗೆಡದೆ, ಅದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುವ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8zkmppnzb1fww74hyafpz1,imgname-screenshot-2026-05-10-183014-1778418045654.png" type="image/jpeg" height="390" width="690"/>
            <content:encoded><![CDATA[ದಾಂಡೇಲಿಯಲ್ಲಿ 15 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ರಕ್ಷಿಸುವಾಗ ಉರಗ ತಜ್ಞ ರಾಜಾಕ್ ಶಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಬ್ಬಾವು ಕಚ್ಚಿದರೂ ಧೈರ್ಯಗೆಡದೆ, ಅದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡುವ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬೃಹತ್ ಹೆಬ್ಬಾವೊಂದನ್ನು ರಕ್ಷಿಸುವ ಕಾರ್ಯಾಚರಣೆ ವೇಳೆ ಉರಗ ತಜ್ಞರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೀವದ ಹಂಗು ತೊರೆದು 15 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿದ ಉರಗ ತಜ್ಞ ರಾಜಾಕ್ ಶಾ ಅವರ ಸಾಹಸಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;ದಾಂಡೇಲಿಯ ವಿಟಿಯು (VTU) ಕಾಲೇಜು ಮೈದಾನದ ಗಟಾರಿನಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಆತಂಕಗೊಂಡ ಕಾಲೇಜು ಶಿಕ್ಷಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯ ಸೂಚನೆಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಾಜಾಕ್ ಶಾ ಅವರು ಹಾವನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದರು.&lt;/p&gt;&lt;img&gt;&lt;p&gt;ಗಟಾರಿನಲ್ಲಿದ್ದ ಹಾವನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದಾಗ, ಹೆಬ್ಬಾವು ಹಠಾತ್ತನೆ ರಾಜಾಕ್ ಶಾ ಅವರ &lt;strong&gt;ಹೊಟ್ಟೆಯ ಭಾಗಕ್ಕೆ ಕಚ್ಚಿದೆ&lt;/strong&gt;. ಹಾವಿನ ವೇಗ ಮತ್ತು ಬಲಕ್ಕೆ ರಾಜಾಕ್ ಶಾ ಒಂದು ಕ್ಷಣ ತಬ್ಬಿಬ್ಬಾದರೂ, ಧೈರ್ಯಗೆಡದೆ ಹಾವನ್ನು ಸುರಕ್ಷಿತವಾಗಿ ಹಿಡಿದು ಬಳಿಕ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವಿನ ಕಡಿತದಿಂದ ರಾಜಾಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಹೆಬ್ಬಾವು ವಿಷಕಾರಿ ಅಲ್ಲ ಎಂಬ ನಂಬಿಕೆ ಇದೆ, ಇದು ನಿಜವೂ ಹೌದು. ಆದರೆ ಹೆಬ್ಬಾವು ಕಚ್ಚುವುದಿಲ್ಲ ಎಂಬುದು ತಪ್ಪು ಕಲ್ಪನೆ. ಉರಗ ತಜ್ಞರ ಪ್ರಕಾರ, ಹೆಬ್ಬಾವು ಎಲ್ಲ ಹಾವುಗಳಿಗಿಂತ ಅತ್ಯಂತ ಬಲವಾಗಿ ಕಚ್ಚುವ ಸಾಮರ್ಥ್ಯ ಹೊಂದಿದೆ.&lt;/p&gt;&lt;img&gt;&lt;p&gt;&lt;strong&gt;ಒಳಬಾಗಿರುವ ಹಲ್ಲುಗಳು: &lt;/strong&gt;ಹೆಬ್ಬಾವಿನ ಹಲ್ಲುಗಳು ಬಾಯಿಯ ಒಳಭಾಗಕ್ಕೆ ಬಾಗಿರುತ್ತವೆ. ಇದು ಬೇಟೆಯನ್ನು ಹಿಡಿದಾಗ ಅದು ತಪ್ಪಿಸಿಕೊಳ್ಳದಂತೆ ತಡೆಯಲು ಸಹಾಯ ಮಾಡುತ್ತದೆ. ಒಮ್ಮೆ ಹೆಬ್ಬಾವು ಕಚ್ಚಿದರೆ, ಅದು ಹಿಡಿದ ಮಾಂಸದ ಭಾಗವನ್ನೇ ಕಿತ್ತುಕೊಂಡು ಬರುವಷ್ಟು ಬಲವಾಗಿರುತ್ತದೆ.&lt;/p&gt;&lt;img&gt;&lt;p&gt;&lt;strong&gt;ನುಂಗುವ ತಂತ್ರ: &lt;/strong&gt;ಹೆಬ್ಬಾವು ತನ್ನ ಬೇಟೆಯನ್ನು ನುಂಗುವಾಗ ಅದು ವಾಪಸ್ ಹೊರಬರದಂತೆ ಈ ಒಳಬಾಗಿರುವ ಹಲ್ಲುಗಳು ಹೂಕ್&zwnj;ನಂತೆ ಕೆಲಸ ಮಾಡುತ್ತವೆ. ಹೀಗಾಗಿ ಇದರ ಬಾಯಿಗೆ ಸಿಲುಕಿದ ಪ್ರಾಣಿ ತಪ್ಪಿಸಿಕೊಳ್ಳುವುದು ಅಸಾಧ್ಯ.&lt;/p&gt;&lt;img&gt;&lt;p&gt;&lt;strong&gt;ಉಸಿರುಗಟ್ಟಿಸಿ ಕೊಲ್ಲುವ ಶಕ್ತಿ: &lt;/strong&gt;ಹೆಬ್ಬಾವು ವಿಷವನ್ನು ಬಿಡುವುದಿಲ್ಲ, ಬದಲಾಗಿ ತನ್ನ ಬೇಟೆಯನ್ನು ಗಟ್ಟಿಯಾಗಿ ಬಿಗಿದು ಸುತ್ತಿಕೊಂಡು ಉಸಿರುಗಟ್ಟಿಸುತ್ತದೆ. ರಕ್ತ ಸಂಚಾರ ನಿಲ್ಲುವಂತೆ ಮಾಡಿ ಪ್ರಾಣಿಯನ್ನು ಸಾಯಿಸಿದ ನಂತರವೇ ಅದು ನುಂಗುತ್ತದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ವಿಷವಿಲ್ಲದಿದ್ದರೂ ಹೆಬ್ಬಾವು ತನ್ನ ದೈಹಿಕ ಬಲ ಮತ್ತು ಬಲಿಷ್ಠ ಹಲ್ಲುಗಳಿಂದ ಪ್ರಾಣಾಪಾಯ ತಂದೊಡ್ಡಬಲ್ಲದು. ದಾಂಡೇಲಿಯಲ್ಲಿ ರಾಜಾಕ್ ಶಾ ಅವರು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಒಂದು ಬೃಹತ್ ಜೀವದ ರಕ್ಷಣೆಯಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/python-attacks-on-snake-expert-razak-shah-during-rescue-in-dandeli-15-foot-python-safely-released-sat-vysgzbi"/>
        </item>
        <item>
            <title><![CDATA[ಕಾರವಾರಕ್ಕೆ 200 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹100 ಕೋಟಿ ಕೊಟ್ಟ ಸರ್ಕಾರ!]]></title>
            <link>https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz</link>
            <guid isPermaLink="true">https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz</guid>
            <pubDate>Thu, 21 May 2026 22:23:56 +0530</pubDate>
            <description><![CDATA[&lt;p&gt;ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯು ಕಾರವಾರದಲ್ಲಿ 100 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದರೊಂದಿಗೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಯಿ-ಮಗು ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks5qaf6g5wrrt4vm22e5xhna,imgname-karnataka-cabinet-meeting-1779382435023.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 21): ಉ&lt;/strong&gt;ತ್ತರ ಕನ್ನಡ ಜಿಲ್ಲೆಯ ಜನರ ದಶಕಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (KIMS) ಆವರಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇನ್ನು ಜೈಲುಗಳ ಆವರಣದಲ್ಲಿ ಪೆಟ್ರೋಲ್ ಬಂಕ್ ಹಾಗೂ ವ್ಯಾಪಾರಿ ಮಳಿಗೆ ಆರಂಭಿಸಲೂ ಅನುಮೋದನೆ ನೀಡಿದೆ.&lt;/p&gt;&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು ಮತ್ತು ಕಾರಾಗೃಹ ಇಲಾಖೆಯ ಆದಾಯ ಹೆಚ್ಚಿಸಲು ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಕಾರವಾರಕ್ಕೆ ಬಂತು 'ಸೂಪರ್ ಸ್ಪೆಷಾಲಿಟಿ' ಬಲ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತುರ್ತು ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (KIMS) ಆವರಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಬೃಹತ್ ಕಟ್ಟಡ ನಿರ್ಮಾಣಕ್ಕೆ ಅಂದಾಜು 100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದರಿಂದ ಜಿಲ್ಲೆಯ ಜನರು ಇನ್ನು ಮುಂದೆ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಮಂಗಳೂರು ಅಥವಾ ಗೋವಾಕ್ಕೆ ಅಲೆಯುವುದು ತಪ್ಪಲಿದೆ.&lt;/p&gt;&lt;h3&gt;&lt;strong&gt;ಉತ್ತರ ಕರ್ನಾಟಕದಲ್ಲಿ ತಾಯಿ-ಮಗು ಆಸ್ಪತ್ರೆಗಳು&lt;/strong&gt;&lt;/h3&gt;&lt;p&gt;ಹೈದರಾಬಾದ್ ಕರ್ನಾಟಕ ಭಾಗದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಮುಂದಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ ಸಾಮರ್ಥ್ಯದ 'ತಾಯಿ ಮತ್ತು ಮಕ್ಕಳ ಆರೋಗ್ಯ' (MCH) ಆಸ್ಪತ್ರೆಗಳನ್ನು ನಿರ್ಮಿಸಲು ಒಟ್ಟು 38 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇದು ಗ್ರಾಮೀಣ ಭಾಗದ ಮಹಿಳೆಯರಿಗೆ ಮತ್ತು ನವಜಾತ ಶಿಶುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.&lt;/p&gt;&lt;h2&gt;&lt;strong&gt;ಡಿಜಿಟಲೀಕರಣ ಮತ್ತು ನಮ್ಮ ಕ್ಲಿನಿಕ್ ಬಲವರ್ಧನೆ&lt;/strong&gt;&lt;/h2&gt;&lt;p&gt;ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿನ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ABArK) ಕ್ಲೇಮ್ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು 17.85 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಇನ್ನು ರಾಜ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 'ನಮ್ಮ ಕ್ಲಿನಿಕ್'ಗಳಿಗೆ ಅಗತ್ಯವಿರುವ ಪ್ರಯೋಗಾಲಯ ಉಪಕರಣಗಳು ಮತ್ತು ಆರ್&zwnj;ಡಿ ಕಿಟ್ (RD KIT) ಖರೀದಿಸಲು 22 ಕೋಟಿ ರೂಪಾಯಿಗಳನ್ನು 15ನೇ ಹಣಕಾಸು ಆಯೋಗದ ಅನುದಾನದಡಿ ಬಳಸಲು ಅನುಮೋದನೆ ನೀಡಲಾಗಿದೆ.&lt;/p&gt;&lt;h3&gt;&lt;strong&gt;ಜೈಲಿನ ಆವರಣದಲ್ಲಿ ಪೆಟ್ರೋಲ್ ಬಂಕ್&zwnj;ಗಳು!&lt;/strong&gt;&lt;/h3&gt;&lt;p&gt;ಕಾರಾಗೃಹ ಇಲಾಖೆಯ ಜಮೀನನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ವಿನೂತನ ಯೋಜನೆ ರೂಪಿಸಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ) ಮತ್ತು ಧಾರವಾಡ ಕೇಂದ್ರ ಕಾರಾಗೃಹದ ಆವರಣದಲ್ಲಿ ಪೆಟ್ರೋಲ್ ಬಂಕ್ ಹಾಗೂ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಡೀಲರ್&zwnj;ಶಿಪ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಧಾರವಾಡದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ವತಿಯಿಂದ ಈ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಇದು ಸರ್ಕಾರದ ಆದಾಯ ಹೆಚ್ಚಿಸುವುದಲ್ಲದೆ, ಸುಧಾರಣಾ ಮಾರ್ಗದಲ್ಲಿರುವ ಕೈದಿಗಳಿಗೆ ಉದ್ಯೋಗಾವಕಾಶ ನೀಡುವ ಸಾಧ್ಯತೆಯೂ ಇದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz"/>
        </item>
    </channel>
</rss>
