<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 23 Jul 2026 13:10:01 +0530</lastBuildDate>
        <atom:link href="https://kannada.asianetnews.com/rss/uttara-kannada" rel="self" type="application/rss+xml"/>
        <item>
            <title><![CDATA[Karwar: 8 ಶತಮಾನಗಳ ಲಿಪಿಪರಂಪರೆಯ ರೂಪಗಳನ್ನು ಹೊಂದಿರೋ ಕನ್ನಡದ ಒಂದೇ ಶಾಸನ ಪತ್ತೆ]]></title>
            <link>https://kannada.asianetnews.com/karnataka-districts/uttara-kannada-kumata-maruru-kannada-inscription-containing-8-centuries-of-scriptural-heritage-has-been-discovered-mrq/articleshow-2fswn7b</link>
            <guid isPermaLink="true">https://kannada.asianetnews.com/karnataka-districts/uttara-kannada-kumata-maruru-kannada-inscription-containing-8-centuries-of-scriptural-heritage-has-been-discovered-mrq/articleshow-2fswn7b</guid>
            <pubDate>Sun, 19 Jul 2026 14:54:34 +0530</pubDate>
            <description><![CDATA[&lt;p&gt;ಕ್ರಿ.ಶ. 750ರ ಕಾಲದ, ಅಪರೂಪದ ಮಿಶ್ರಲಿಪಿ ಕನ್ನಡ ಶಾಸನವೊಂದು ಪತ್ತೆಯಾಗಿದೆ. 8 ಶತಮಾನಗಳ ಲಿಪಿ ವೈವಿಧ್ಯತೆಯನ್ನು ಹೊಂದಿರುವ ಈ ಶಾಸನವು, ಅಂದಿನ ಕೃಷಿ, ನೀರಾವರಿ ಮತ್ತು ಗ್ರಾಮೀಣ ಆಡಳಿತದ ಬಗ್ಗೆ ಮಹತ್ವದ ಮಾಹಿತಿ ನೀಡುತ್ತದೆ. ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು ಈ ಶಾಸನದ ಅಧ್ಯಯನ ನಡೆಸಿ, ಇಂದಿನ ಗ್ರಾಮದ ಹೆಸರುಗಳೊಂದಿಗೆ ಇರುವ ಐತಿಹಾಸಿಕ ಸಂಬಂಧವನ್ನು ಗುರುತಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwtxfpryz7rb92ttj8yaer0,imgname--kannada-inscription-1784452923096.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಕುಮಟಾ ತಾಲೂಕಿನ ಮೂರೂರು ಗ್ರಾಮದ ಮೇಲಿನದೇವಲಿ ಎಂಬಲ್ಲಿರುವ ಮಹಾವಿಷ್ಣು ದೇವಸ್ಥಾನದ ಪಕ್ಕದಲ್ಲಿರುವ ಪ್ರಾಚೀನ ಶಾಸನವೊಂದು ಕನ್ನಡ ಭಾಷೆ, ಲಿಪಿ, ಕೃಷಿ, ನೀರಾವರಿ ಮತ್ತು ಗ್ರಾಮೀಣ ಆಡಳಿತದ ಇತಿಹಾಸದ ದೃಷ್ಟಿಯಿಂದ ಅತ್ಯಂತ ಅಪರೂಪದ ಹಾಗೂ ಅಷ್ಟೇ ಮಹತ್ವದ ಶಾಸನವೆಂದು ಗುರುತಿಸಲಾಗಿದೆ.&lt;/p&gt;&lt;p&gt;ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಈ ಬಗ್ಗೆ ಆಧ್ಯಯನ ನಡೆಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಈ ಶಾಸನದ ಮೊದಲ ಮತ್ತು ಅತ್ಯಂತ ಮಹತ್ವದ ವೈಶಿಷ್ಟ್ಯ ಅದರ ಲಿಪಿ ಸ್ವರೂಪದಲ್ಲಿದೆ. ಒಂದೇ ಕಾಲಘಟ್ಟಕ್ಕೆ ಸೇರಿದ ಏಕರೂಪದ ಅಕ್ಷರಗಳನ್ನು ಬಳಸದೆ, 8 ಶತಮಾನಗಳ ಲಿಪಿಪರಂಪರೆಯ ರೂಪಗಳನ್ನು ಒಂದೇ ಶಾಸನದಲ್ಲಿ ಬಳಸಿರುವುದು ಇದರ ಅನನ್ಯತೆ.&lt;/p&gt;&lt;h2&gt;&lt;strong&gt;ಶಾಸನದಲ್ಲಿರುವ ಮಾಹಿತಿ ಏನು?&lt;/strong&gt;&lt;/h2&gt;&lt;p&gt;ಈ ಶಾಸನದ ಕಾಲವನ್ನು ಕ್ರಿಶ ಸುಮಾರು 750ರ ಆಸುಪಾಸು ಎಂದು ನಿರ್ಧರಿಸಲಾಗಿದೆ. ಇದರ ಮತ್ತೊಂದು ವಿಶಿಷ್ಟತೆ ಅದರ ಸುತ್ತೋಲೆ ಮಾದರಿಯ ಒಕ್ಕಣೆ. ಈ ಶಾಸನವು ಒಂದು ನಿರ್ದಿಷ್ಟ ಕೃಷಿಭೂಮಿಯ ನೀರಾವರಿ ಬಳಕೆ, ಧಾನ್ಯೋತ್ಪಾದನೆ, ತೆರಿಗೆ ಹಂಚಿಕೆ, ಅಳತೆ&ndash;ಮಾಪನ, ಭೂಮಿಯ ಗಡಿ ಮತ್ತು ಕರ ಸಲ್ಲಿಸಿದ ಬಳಿಕ ಅನುಭವಿಸಬಹುದಾದ ಭೋಗಾಧಿಕಾರಗಳನ್ನು ನಿಗದಿಪಡಿಸಿದ ವ್ಯವಹಾರಿಕ ಕಟ್ಟಳೆ ಶಾಸನವಾಗಿದೆ.&lt;/p&gt;&lt;h3&gt;&lt;strong&gt;ಸ್ಥಳನಾಮ ಹೊಂದಾಣಿಕೆ&lt;/strong&gt;&lt;/h3&gt;&lt;p&gt;ಇಂದಿನ ಮೂರೂರು ಗ್ರಾಮವು ನೀಲ್ಮನೆ, ಹಳವಳ್ಳಿ ಮತ್ತು ಕೋಣಾರೆ ಎಂಬ 3 ಪ್ರಮುಖ ಗ್ರಾಮವಿಭಾಗಗಳನ್ನು ಒಳಗೊಂಡಿದೆ. ಈ ಹೆಸರುಗಳು ಶಾಸನದಲ್ಲಿನ ಕೆಲವು ಪ್ರಾಚೀನ ಹೆಸರುಗಳೊಂದಿಗೆ ಸಂಬಂಧ ಹೊಂದಿರಬಹುದೆಂಬ ಮಹತ್ವದ ಸ್ಥಳನಾಮಿಕ ಸಾಧ್ಯತೆ ವ್ಯಕ್ತವಾಗಿದೆ. ನೀಲ್ಮನೆ ಎಂಬುದು ಹಿಂದಿನ ನೀರ್ಮನೆ ಎಂಬ ಹೆಸರಿನ ಅಪಭ್ರಂಶವಾಗಿರಬಹುದು. ನೀರ್ಮನೆ ಎಂಬ ಜಲಸಂಬಂಧಿತ ಹೆಸರು ಶಾಸನೋಕ್ತ &ldquo;ಕಿಱುನೀರು&rdquo; ಎಂಬ ನೀರಾವರಿ ವಲಯದೊಂದಿಗೆ ಅರ್ಥಸಂಬಂಧ ಹೊಂದಿದೆ. ಹಳವಳ್ಳಿಯ ಹಳ ಎಂಬದು ಹಳೆಯ ಪಳ ಎನ್ನುವುದರ ರೂಪ. ಇದು ಶಾಸನದಲ್ಲಿನ &ldquo;ಪೞಚ&rdquo; ಎಂಬ ರೂಪದೊಂದಿಗೆ ಧ್ವನಿಸಂಬಂಧ ಹೊಂದಿರಬಹುದಾಗಿದೆ. ಹೀಗಾಗಿ ಇಂದಿನ ಹಳವಳ್ಳಿ ಶಾಸನೋಕ್ತ ಪೞಚಕೊಳಿ ಪ್ರದೇಶದ ರೂಪಾಂತರಿತ ಹೆಸರಾಗಿರುವ ಸಾಧ್ಯತೆ ಇದೆ. ಇಂದಿನ ಕೋಣರೆ ಎಂಬ ಹೆಸರು ಶಾಸನದ ಕೊನೆಯ ಭಾಗದಲ್ಲಿ ಕಂಡುಬರುವ &ldquo;ಕೊಹೋಳೆ&rdquo; ಅಥವಾ &ldquo;ಕೊಹೋಳಯಣ್ಪು&rdquo; ಎಂಬ ರೂಪದೊಂದಿಗೆ ಸಂಬಂಧ ಹೊಂದಿರಬಹುದಾಗಿದೆ. ಈ ಸಂಬಂಧಗಳು ಇನ್ನೂ ಕ್ಷೇತ್ರಾಧ್ಯಯನ ಮತ್ತು ಹಳೆಯ ದಾಖಲೆಗಳ ಪರಿಶೀಲನೆಗೆ ಒಳಪಡಬೇಕಾದರೂ, ಇಂದಿನ ಮೂರೂರು ಗ್ರಾಮದ ಮೂರು ಒಳವಿಭಾಗಗಳಿಗೂ ಶಾಸನೋಕ್ತ ಹೆಸರುಗಳೊಂದಿಗೆ ಧ್ವನಿ ಅಥವಾ ಅರ್ಥಸಂಬಂಧ ದೊರೆಯುತ್ತಿರುವುದು ಗಮನಾರ್ಹವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉಡುಪಿಯ 9 ಗ್ರಾಮ ಪಂಚಾಯ್ತಿಗಳಲ್ಲಿ ಭಾರತ್ ಪಂಪ್, ಭಾರತ್ ಕೆಫೆ, ಇವಿ ಸ್ಟೇಷನ್ ಆರಂಭ&lt;/strong&gt;&lt;/p&gt;&lt;p&gt;ಶಾಸನ ದೊರೆತ ಮಹಾವಿಷ್ಣು ದೇವಸ್ಥಾನದ ಹಿಂಭಾಗದಲ್ಲಿ ಸುಮಾರು ಐವತ್ತು&ndash;ಅರವತ್ತು ವರ್ಷಗಳ ಹಿಂದಿನವರೆಗೂ ಕಲ್ಲಿನಿಂದ ಕಟ್ಟಿದ ಒಂದು ಕೆರೆಯಿತ್ತು ಎಂದು ಊರಿನ ಹಿರಿಯರು ಮಾಹಿತಿ ನೀಡುತ್ತಾರೆ. ಹಾಗೆಯೇ ಗ್ರಾಮದ ಮತ್ತೊಂದು ಭಾಗದಲ್ಲಿ &ldquo;ತೊಂಡೆಕೆರೆ&rdquo; ಎಂಬ ಹೆಸರಿನ ಇನ್ನೊಂದು ಪುರಾತನ ಕೆರೆಯೂ ಇದೆ. ಇಂದು ಊರಿನಲ್ಲಿರುವ ಈ ಕೆರೆಗಳು ಶಾಸನದಲ್ಲಿ ವಿವರಿಸಲಾದ ಕಿಱುನೀರು, ಪೞಚಕೊಳಿ, ಸೂರಲು ಮತ್ತು ಕಡಪುಗಳ ನೀರಾವರಿ ವ್ಯವಸ್ಥೆಯ ಯಾವುದೋ ಒಂದು ಭಾಗವಾಗಿರಬಹುದೆಂಬ ಸಾಧ್ಯತೆ ಇದೆ.&lt;/p&gt;&lt;p&gt;ಓದಲು ಅತ್ಯಂತ ಕಠಿಣ ಹಾಗೂ ಸವಾಲಿನದಾದ ಈ ಶಾಸನದ ಪಾಠವನ್ನು ಅಂತಿಮಗೊಳಿಸುವಲ್ಲಿ ಡಾ. ದೇವರಕೊಂಡಾರೆಡ್ಡಿ ಹಾಗೂ ಪ್ರೊ. ದೇವರಾಜಸ್ವಾಮಿ ಅವರ ಲಿಪಿಶಾಸ್ತ್ರೀಯ ಮಾರ್ಗದರ್ಶನ ಮಹತ್ವದ್ದಾಗಿತ್ತು ಎಂದು ಶ್ಯಾಮಸುಂದರ ಗೌಡ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಭಿವೃದ್ಧಿಯ ಗಂಧಗಾಳಿಯೇ ಗೊತ್ತಿಲ್ಲದ ಅಧಿಕಾರಿಗಳು ಕಟ್ಟಿದ ಹೈಟೆಕ್&zwnj; ಸ್ಮಶಾನ, 'ಬೆಂಗಳೂರಿನ ಅಂಡರ್&zwnj;ಗ್ರೌಂಡ್ ಎಸಿ ಮಾರ್ಕೆಟ್&zwnj;'!&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kannada-kumata-maruru-kannada-inscription-containing-8-centuries-of-scriptural-heritage-has-been-discovered-mrq/articleshow-2fswn7b"/>
        </item>
        <item>
            <title><![CDATA[ಕಾರವಾರ ಕರಾವಳಿಯಲ್ಲಿ ಸಾಂಪ್ರದಾಯಿಕ ಬೇಟೆಗೆ ಬಿದ್ದ ಬಂಗಾರ! ರಾಶಿ ರಾಶಿ ಮೀನು ನೋಡಿ ಮೀನುಗಾರರು ಫುಲ್ ಖುಷ್!]]></title>
            <link>https://kannada.asianetnews.com/gallery/karnataka-districts/uttara-kannada-news-karwar-fishermen-hit-jackpot-with-massive-yendi-net-catch-in-arabian-sea-gdp-2y76d26</link>
            <guid isPermaLink="true">https://kannada.asianetnews.com/gallery/karnataka-districts/uttara-kannada-news-karwar-fishermen-hit-jackpot-with-massive-yendi-net-catch-in-arabian-sea-gdp-2y76d26</guid>
            <pubDate>Wed, 15 Jul 2026 13:11:32 +0530</pubDate>
            <description><![CDATA[&lt;p&gt;ಕಾರವಾರದ ಕರಾವಳಿಯಲ್ಲಿ ಹೊಸ ಮೀನುಗಾರಿಕಾ ಹಂಗಾಮಿನ ಆರಂಭದಲ್ಲೇ ಸಾಂಪ್ರದಾಯಿಕ ಮೀನುಗಾರರಿಗೆ ಬಂಪರ್ ಮೀನು ಬೇಟೆಯಾಗಿದೆ. ಏಂಡಿ ಬಲೆಗೆ ಟನ್&zwnj;ಗಟ್ಟಲೆ ಮೀನುಗಳು ಬಿದ್ದಿದ್ದು, ಇದು ಹಿಂದಿನ ನಷ್ಟದಿಂದ ಕಂಗೆಟ್ಟಿದ್ದ ಮೀನುಗಾರರಲ್ಲಿ ಆರ್ಥಿಕ ಚೇತರಿಕೆಯ ಹೊಸ ಭರವಸೆ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjb0dzc10eqwsfxjywcpf2m,imgname-traditional-fishermen-in-karwar-1784100698092.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರವಾರದ ಕರಾವಳಿಯಲ್ಲಿ ಹೊಸ ಮೀನುಗಾರಿಕಾ ಹಂಗಾಮಿನ ಆರಂಭದಲ್ಲೇ ಸಾಂಪ್ರದಾಯಿಕ ಮೀನುಗಾರರಿಗೆ ಬಂಪರ್ ಮೀನು ಬೇಟೆಯಾಗಿದೆ. ಏಂಡಿ ಬಲೆಗೆ ಟನ್&zwnj;ಗಟ್ಟಲೆ ಮೀನುಗಳು ಬಿದ್ದಿದ್ದು, ಇದು ಹಿಂದಿನ ನಷ್ಟದಿಂದ ಕಂಗೆಟ್ಟಿದ್ದ ಮೀನುಗಾರರಲ್ಲಿ ಆರ್ಥಿಕ ಚೇತರಿಕೆಯ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಸಾಂಪ್ರದಾಯಿಕ ಮೀನುಗಾರರ ಬದುಕಿನಲ್ಲಿ ಹೊಸ ಆಶಾಭಾವನೆ ಮೂಡಿದೆ. ನೂತನ ಮೀನುಗಾರಿಕಾ ಹಂಗಾಮಿನ ಆರಂಭದಲ್ಲೇ ಕಾರವಾರದ ಅರಬ್ಬೀ ಸಮುದ್ರದಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಭರ್ಜರಿ ಮತ್ಸ್ಯ ಬೇಟೆಯಾಗಿದ್ದು, ಮೀನುಗಾರರ ಮುಖದಲ್ಲಿ ಸಂತಸ ಮೂಡಿದೆ. ಸಮುದ್ರದಲ್ಲಿ ಬೀಸಿದ ಏಂಡಿ ಬಲೆಗೆ (Yendi Net) ರಾಶಿ ರಾಶಿ ಮೀನುಗಳು ಬಿದ್ದಿದೆ.&lt;/p&gt;&lt;img&gt;&lt;p&gt;ಕಳೆದ ಕೆಲವು ದಿನಗಳಿಂದ ಕಾರವಾರ ಭಾಗದಲ್ಲಿ ಮೀನುಗಾರಿಕೆಗೆ ಅತ್ಯಂತ ಅನುಕೂಲಕರವಾದ ಹವಾಮಾನ ಇರುವುದರಿಂದ ಸಮುದ್ರದಲ್ಲಿ ಮೀನಿನ ಸಂತತಿ ಹೆಚ್ಚಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ಸಮುದ್ರಕ್ಕೆ ಇಳಿಸಿದ ಬಲೆಗೆ ಬಂಪರ್ ಇಳುವರಿ ಸಿಕ್ಕಿದೆ. ಟನ್&zwnj;ಗಟ್ಟಲೆ ತೂಕದ ವಿವಿಧ ಜಾತಿಯ ಮೀನುಗಳು ಒಂದೇ ಬಾರಿಗೆ ಬಲೆಗೆ ಬಿದ್ದಿದ್ದು, ಕರಾವಳಿಯ ತೀರಕ್ಕೆ ಮೀನುಗಳನ್ನು ತರುತ್ತಿದ್ದಂತೆ ನೂರಾರು ಜನ ಈ ದೃಶ್ಯವನ್ನು ನೋಡಲು ಮುಗಿಬಿದ್ದಿದ್ದರು.&lt;/p&gt;&lt;img&gt;&lt;p&gt;ಕಳೆದ ಕೆಲವು ಸೀಸನ್&zwnj;ಗಳಲ್ಲಿ ಸರಣಿ ಹವಾಮಾನ ಏರುಪೇರು ಹಾಗೂ ಚಂಡಮಾರುತದ ಭೀತಿಯಿಂದಾಗಿ ಮೀನುಗಾರಿಕೆ ಸಂಪೂರ್ಣ ಕುಂಠಿತವಾಗಿತ್ತು. ಸಾಲ ಸೂಲ ಮಾಡಿ ಬದುಕು ಸಾಗಿಸುತ್ತಿದ್ದ ಸಾಂಪ್ರದಾಯಿಕ ಮೀನುಗಾರರಿಗೆ ಈ ಬಾರಿಯ ಆರಂಭಿಕ ಬಂಪರ್ ಬೇಟೆ ಆರ್ಥಿಕ ಚೇತರಿಕೆಯ ಭರವಸೆ ನೀಡಿದೆ. ಮೀನಿನ ಉತ್ತಮ ಇಳುವರಿಯಿಂದಾಗಿ ಈ ಬಾರಿ ಭರ್ಜರಿ ಆದಾಯ ಗಳಿಸಬಹುದು ಎನ್ನುವ ಆಶಾಭಾವನೆಯಲ್ಲಿ ಮೀನುಗಾರರ ಕುಟುಂಬಗಳು ಇವೆ.&lt;/p&gt;&lt;img&gt;&lt;p&gt;ಕಾರವಾರ ಸಮುದ್ರ ತೀರಕ್ಕೆ ಬಂದಿಳಿದ ಮೀನುಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ. ಕರಾವಳಿ ತೀರದಲ್ಲೇ ವ್ಯಾಪಾರಿಗಳು ಮುಗಿಬಿದ್ದು ಮೀನುಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ಖರೀದಿಸುತ್ತಿದ್ದಾರೆ. ಸ್ಥಳೀಯ ಕಾರವಾರ ಮತ್ತು ಉತ್ತರ ಕನ್ನಡ ಜಿಲ್ಲೆಯ ಮಾರುಕಟ್ಟೆಗಳಷ್ಟೇ ಅಲ್ಲದೆ, ನೆರೆಯ ಧಾರವಾಡ, ಬೆಳಗಾವಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಗೂ ಇಲ್ಲಿನ ಮೀನುಗಳನ್ನು ಐಸ್ ಬಾಕ್ಸ್&zwnj;ಗಳ ಮೂಲಕ ರವಾನಿಸಲಾಗುತ್ತಿದೆ. ಇದರ ಜೊತೆಗೆ ಗೋವಾ ಹಾಗೂ ಮಹಾರಾಷ್ಟ್ರದ ಗಡಿ ಭಾಗಗಳಿಗೂ ಇಲ್ಲಿನ ತಾಜಾ ಮೀನುಗಳಿಗೆ ಭಾರಿ ಬೇಡಿಕೆ ಇರುವುದರಿಂದ ಲಾರಿಗಳ ಮೂಲಕ ಸಪ್ಲೈ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ತಾಂತ್ರಿಕ ಬೋಟ್&zwnj;ಗಳ ಅಬ್ಬರದ ನಡುವೆಯೂ ಕರಾವಳಿಯ ಸಾಂಪ್ರದಾಯಿಕ ಆಚರಣೆ ಹಾಗೂ ಜೀವನಾಧಾರವಾಗಿರುವ ಸಾಂಪ್ರದಾಯಿಕ ಮೀನುಗಾರಿಕೆಗೆ (Traditional Fishing) ಪ್ರಕೃತಿ ಕೃಪೆ ತೋರಿದೆ. ಹವಾಮಾನ ಹೀಗೆಯೇ ಮುಂದುವರಿದರೆ ಈ ಸೀಸನ್ ಮೀನುಗಾರರ ಪಾಲಿಗೆ ಸುವರ್ಣ ಯುಗವಾಗಲಿದೆ ಎಂದು ಕರಾವಳಿ ತೀರದ ಹಿರಿಯ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/uttara-kannada-news-karwar-fishermen-hit-jackpot-with-massive-yendi-net-catch-in-arabian-sea-gdp-2y76d26"/>
        </item>
        <item>
            <title><![CDATA[ದಾಂಡೇಲಿ ಜಿಪ್‌ ಲೈನ್ ಅಪಘಾತ: 40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು? ಈಗ ಯುವಕನ ಸ್ಥಿತಿ ಏನಾಗಿದೆ?]]></title>
            <link>https://kannada.asianetnews.com/uttara-kannada/dandeli-zip-line-accident-what-happened-when-he-fell-from-40-feet-gkn/articleshow-34amv44</link>
            <guid isPermaLink="true">https://kannada.asianetnews.com/uttara-kannada/dandeli-zip-line-accident-what-happened-when-he-fell-from-40-feet-gkn/articleshow-34amv44</guid>
            <pubDate>Mon, 20 Jul 2026 10:43:36 +0530</pubDate>
            <description><![CDATA[&lt;p&gt;ದಾಂಡೇಲಿಯಲ್ಲಿ ಜಿಪ್ ಲೈನ್ ಆಡುವಾಗ ತಾಂತ್ರಿಕ ದೋಷದಿಂದ 40 ಅಡಿ ಎತ್ತರದಿಂದ ಬಿದ್ದು ವಿಜಯಪುರದ ಯುವಕ ಕುಬೇರ ಸುರಪುರ ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡೂ ಕೈ-ಕಾಲುಗಳ ಮೂಳೆಗಳು ಮುರಿದು ಹಾಸಿಗೆ ಹಿಡಿದಿರುವ ಅವರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್, ಇದೀಗ ಸ್ಪಂದಿಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxyz09vwr1kfq7xnm9pwa3a0,imgname-dandeli-zipline-snaps-1784524318588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ:&lt;/strong&gt; ಸುಂದರ ಪ್ರಕೃತಿಯ ನಡುವೆ ಎಂಜಾಯ್ ಮಾಡೋಣ ಎಂದು ದಾಂಡೇಲಿ ಪ್ರವಾಸ ಹೋಗಿದ್ದ ಆ ಯುವಕನ ಬದುಕು ಈಗ ನರಕ ಸದೃಶವಾಗಿದೆ. ಸಾಹಸ ಕ್ರೀಡೆ 'ಜಿಪ್ ಲೈನ್' ಆಡುವಾಗ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ 40 ಅಡಿ ಎತ್ತರದಿಂದ ಬಿದ್ದ ವಿಜಯಪುರದ ಯುವಕ ಕುಬೇರ ಸುರಪುರ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆ ಭೀಕರ ಅಪಘಾತದ ನಂತರ ಆತನ ಪರಿಸ್ಥಿತಿ ಹೇಗಿದೆ? ರೆಸಾರ್ಟ್ ಸಿಬ್ಬಂದಿ ಮಾಡಿದ್ದೇನು? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;h2&gt;&lt;strong&gt;40 ಅಡಿ ಎತ್ತರದಿಂದ ಬಿದ್ದಾಗ ಏನಾಯಿತು?&lt;/strong&gt;&lt;/h2&gt;&lt;p&gt;ಕಳೆದ ಜುಲೈ 3ರಂದು ವಿಜಯಪುರ ನಗರದ ನಿವಾಸಿ ಕುಬೇರ ಸುರಪುರ ತನ್ನ ಸಹೋದರ ಪ್ರಶಾಂತನ ಜೊತೆ ದಾಂಡೇಲಿಯ 'ಸ್ಟರ್ಲಿಂಗ್ ರಿವರ್ ರೆಸಾರ್ಟ್'ಗೆ ತೆರಳಿದ್ದರು. ಅಲ್ಲಿ ಜಿಪ್ ಲೈನ್ ಆಡುವಾಗ ಅರ್ಧ ದಾರಿಯಲ್ಲಿ ಜಿಪ್ ಲೈನ್&zwnj;ನ ಲಾಕ್ ಇದ್ದಕ್ಕಿದ್ದಂತೆ ಕಟ್ ಆಗಿದೆ. ಪರಿಣಾಮವಾಗಿ ಕುಬೇರ ಸುಮಾರು 30 ರಿಂದ 40 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಅಪ್ಪಳಿಸಿದ್ದಾರೆ. ಈ ಭೀಕರ ದೃಶ್ಯವನ್ನು ಆತನ ಸಹೋದರ ಮೊಬೈಲ್&zwnj;ನಲ್ಲಿ ಸೆರೆಹಿಡಿಯುತ್ತಿದ್ದರು. ಕಣ್ಣೆದುರೇ ಅಣ್ಣ ಎತ್ತರದಿಂದ ಬಿದ್ದು ಕಿರುಚಾಡುತ್ತಿದ್ದನ್ನು ಕಂಡು ಸಹೋದರ ಹೌಹಾರಿ ಹೋಗಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಈಗ ಕುಬೇರನ ಸ್ಥಿತಿ ಹೇಗಿದೆ?&lt;/strong&gt;&lt;/h2&gt;&lt;p&gt;40 ಅಡಿ ಎತ್ತರದಿಂದ ಬಿದ್ದ ರಭಸಕ್ಕೆ ಕುಬೇರನ ದೇಹ ಅಕ್ಷರಶಃ ಜರ್ಜರಿತವಾಗಿದೆ. ಬಿದ್ದ ರಭಸಕ್ಕೆ ಕುಬೇರನ ಎರಡೂ ಕೈಗಳು ಮತ್ತು ಎರಡೂ ಕಾಲುಗಳ ಎಲುಬುಗಳು ಮುರಿದು ಪುಡಿಯಾಗಿವೆ. ಕಾಲು ಮತ್ತು ಕೈಗಳ ನರಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದ್ದು, ದೇಹದ ಕೆಳಭಾಗ ಸಂವೇದನೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಅಂದು ಉತ್ಸಾಹದಿಂದ ಓಡಾಡುತ್ತಿದ್ದ 24 ವರ್ಷದ ಯುವಕ ಇಂದು ಏಳಲಾರದ ಸ್ಥಿತಿಯಲ್ಲಿ ಹಾಸಿಗೆ ಹಿಡಿದಿದ್ದಾರೆ. ದಿನನಿತ್ಯದ ಕೆಲಸಗಳಿಗೂ ಪರಾವಲಂಬಿಯಾಗುವಂತಾಗಿದೆ. ಈಗಾಗಲೇ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಯಲ್ಲಿ ಕೆಲವು ಶಸ್ತ್ರಚಿಕಿತ್ಸೆಗಳು ನಡೆದಿವೆ. ಸಂಪೂರ್ಣ ಗುಣಮುಖರಾಗಲು ಇನ್ನೂ ಹಲವಾರು ಶಸ್ತ್ರಚಿಕಿತ್ಸೆಗಳು ಬೇಕಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರೆಸಾರ್ಟ್&zwnj;ನಿಂದ ನಂಬಿಕೆ ದ್ರೋಹ&lt;/strong&gt;&lt;/h2&gt;&lt;p&gt;ಅಪಘಾತ ಸಂಭವಿಸಿದ ಕೂಡಲೇ ರೆಸಾರ್ಟ್ ಆಡಳಿತ ಮಂಡಳಿಯು ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿತ್ತು. ಈಗ ಚಿಕಿತ್ಸಾ ವೆಚ್ಚ ಲಕ್ಷಾಂತರ ರೂಪಾಯಿ ದಾಟುತ್ತಿದ್ದಂತೆ ರೆಸಾರ್ಟ್ ಮ್ಯಾನೇಜ್&zwnj;ಮೆಂಟ್ ಸ್ಪಂದಿಸುತ್ತಿಲ್ಲ ಎಂದು ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ಸರಿಯಾದ ಸುರಕ್ಷತಾ ಕ್ರಮಗಳಿಲ್ಲದ ಕಾರಣ ನನ್ನ ಮಗನ ಬದುಕು ಹಾಳಾಗಿದೆ, ಈಗ ರೆಸಾರ್ಟ್&zwnj;ನವರು ಸಹಾಯಕ್ಕೂ ಬರುತ್ತಿಲ್ಲ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ರೆಸಾರ್ಟ್ ಮ್ಯಾನೇಜರ್ ಹೇಳುವುದೇನು?&lt;/strong&gt;&lt;/h2&gt;&lt;p&gt;ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಸಾರ್ಟ್ ಮ್ಯಾನೇಜರ್, ಇದು ನಮ್ಮ ನಿರ್ಲಕ್ಷ್ಯವಲ್ಲ, ಬದಲಿಗೆ ಆಕಸ್ಮಿಕವಾಗಿ ನಡೆದ ಘಟನೆ. ನಾವು ಶೀಘ್ರದಲ್ಲೇ ವಿಜಯಪುರಕ್ಕೆ ತೆರಳಿ ಕುಟುಂಬದವರ ಜೊತೆ ಮಾತುಕತೆ ನಡೆಸಿ, ಚಿಕಿತ್ಸೆಗೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ. ದಾಂಡೇಲಿಯಂತಹ ಪ್ರವಾಸಿ ತಾಣಗಳಲ್ಲಿ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮುನ್ನ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರವಿರಲಿ. ರೆಸಾರ್ಟ್&zwnj;ಗಳ ನಿರ್ಲಕ್ಷ್ಯಕ್ಕೆ ಅಮಾಯಕ ಪ್ರವಾಸಿಗರ ಬದುಕು ಮೂರಾಬಟ್ಟೆಯಾಗುತ್ತಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಕುಬೇರ ಮತ್ತೆ ಮೊದಲಿನಂತೆ ಓಡಾಡುವಂತಾಗಲಿ ಎಂಬುದೇ ಎಲ್ಲರ ಆಶಯ.&lt;/p&gt;]]></content:encoded>
            <category>uttara-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/uttara-kannada/dandeli-zip-line-accident-what-happened-when-he-fell-from-40-feet-gkn/articleshow-34amv44"/>
        </item>
        <item>
            <title><![CDATA[ಕದಂಬ ನೌಕಾನೆಲೆಗೆ 'ಐಎನ್‌ಎಸ್ ಮಾಲ್ವಾಣ್' ಸೇರ್ಪಡೆ; ಸಮುದ್ರದಾಳದ ಶತ್ರುಗಳಿಗೆ ಸಿಂಹಸ್ವಪ್ನ ಈ ಸ್ವದೇಶಿ ಯುದ್ಧನೌಕೆ!]]></title>
            <link>https://kannada.asianetnews.com/gallery/karnataka-districts/indian-navy-karwar-kadamba-naval-base-ins-malvan-warship-commissioned-here-best-specialities-sat-4o3p4nf</link>
            <guid isPermaLink="true">https://kannada.asianetnews.com/gallery/karnataka-districts/indian-navy-karwar-kadamba-naval-base-ins-malvan-warship-commissioned-here-best-specialities-sat-4o3p4nf</guid>
            <pubDate>Wed, 22 Jul 2026 10:03:38 +0530</pubDate>
            <description><![CDATA[&lt;p&gt;ಕಾರವಾರದ ಐಎನ್&zwnj;ಎಸ್ ಕದಂಬ ನೌಕಾನೆಲೆಯಲ್ಲಿ ಸ್ವದೇಶಿ ನಿರ್ಮಿತ 'ಐಎನ್&zwnj;ಎಸ್ ಮಾಲ್ವಾಣ್' (INS Malvan) ಯುದ್ಧನೌಕೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ನಿರ್ಮಿಸಲಾದ ಈ ನೌಕೆಯು, ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky40ymy67fzx3j1yj6xv1atg,imgname-ins-malvan-warship-commissioned-1784694133702.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರವಾರದ ಐಎನ್&zwnj;ಎಸ್ ಕದಂಬ ನೌಕಾನೆಲೆಯಲ್ಲಿ ಸ್ವದೇಶಿ ನಿರ್ಮಿತ 'ಐಎನ್&zwnj;ಎಸ್ ಮಾಲ್ವಾಣ್' (INS Malvan) ಯುದ್ಧನೌಕೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ನಿರ್ಮಿಸಲಾದ ಈ ನೌಕೆಯು, ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.&lt;/p&gt;&lt;img&gt;&lt;p&gt;ಉತ್ತರ ಕನ್ನಡ/ಕಾರವಾರ (ಜು.22): ಭಾರತೀಯ ನೌಕಾಪಡೆಯ (Indian Navy) ಶಕ್ತಿಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಏಷ್ಯಾದ ಅತಿದೊಡ್ಡ ನೌಕಾನೆಲೆ ಎಂಬ ಖ್ಯಾತಿಯ ಕಾರವಾರದ ಐಎನ್&zwnj;ಎಸ್ ಕದಂಬ ನೌಕಾನೆಲೆಯಲ್ಲಿ (INS Kadamba Naval Base) ಸ್ವದೇಶಿ ನಿರ್ಮಿತ 'ಐಎನ್&zwnj;ಎಸ್ ಮಾಲ್ವಾಣ್' (INS Malvan) ಯುದ್ಧನೌಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.&lt;/p&gt;&lt;img&gt;&lt;p&gt;&lt;strong&gt;ಆತ್ಮನಿರ್ಭರ ಭಾರತದ ಶಕ್ತಿ (Strength of Atmanirbhar Bharat):&lt;/strong&gt;&lt;/p&gt;&lt;p&gt;ಈ ಯುದ್ಧನೌಕೆಯು ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' (Make in India) ಅಭಿಯಾನದಡಿ ಕೇರಳದ ಕೊಚ್ಚಿ ಶಿಪ್ ಯಾರ್ಡ್&zwnj;ನಲ್ಲಿ (Kochi Shipyard) ನಿರ್ಮಾಣವಾಗಿದೆ. ವಿಶೇಷವೆಂದರೆ, ಈ ನೌಕೆಯಲ್ಲಿ ಶೇಕಡಾ 80 ರಷ್ಟು ಸ್ವದೇಶಿ ತಂತ್ರಜ್ಞಾನವನ್ನು (Indigenous Technology) ಬಳಸಲಾಗಿದ್ದು, ಇದು ಭಾರತದ ರಕ್ಷಣಾ ವಲಯದ ಸ್ವಾವಲಂಬನೆಗೆ ಸಾಕ್ಷಿಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ತಾಂತ್ರಿಕ ವಿಶೇಷತೆಗಳು (Technical Specifications):&lt;/strong&gt;&lt;/p&gt;&lt;p&gt;'ಐಎನ್&zwnj;ಎಸ್ ಮಾಲ್ವಾಣ್' ಕೇವಲ ಗಾತ್ರದಲ್ಲಿ ಮಾತ್ರವಲ್ಲ, ವೇಗ ಮತ್ತು ದಾಳಿಯ ಸಾಮರ್ಥ್ಯದಲ್ಲೂ ಅತ್ಯಂತ ಬಲಿಷ್ಠವಾಗಿದೆ.&lt;/p&gt;&lt;p&gt;&lt;strong&gt;ಅಳತೆ: &lt;/strong&gt;ಈ ನೌಕೆಯು 78 ಮೀಟರ್ ಉದ್ದ (Length), 11.26 ಮೀಟರ್ ಅಗಲ ಹಾಗೂ 2.7 ಮೀಟರ್ ಆಳವನ್ನು ಹೊಂದಿದೆ.&lt;/p&gt;&lt;p&gt;&lt;strong&gt;ವೇಗ:&lt;/strong&gt; ಸಮುದ್ರದಲ್ಲಿ ಗಂಟೆಗೆ 25 ನಾಟಿಕಲ್ ಮೈಲ್ (Nautical Miles) ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಹಡಗಿಗಿದೆ.&lt;/p&gt;&lt;img&gt;&lt;p&gt;ಈ ಯುದ್ಧನೌಕೆಯಲ್ಲಿ 7 ಅಧಿಕಾರಿಗಳು ಸೇರಿದಂತೆ ಒಟ್ಟು 57 ಸೇಲರ್ಸ್&zwnj;ಗಳು (Sailors) ಏಕಕಾಲಕ್ಕೆ ಕಾರ್ಯನಿರ್ವಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಮಲ್ವಾನ್ ಯುದ್ಧ ನೌಕೆಯ ವೇಳೆ ನೌಕಾಪಡೆಯ ವಿವಿಧ ಗಣ್ಯರು ಹಾಗೂ ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.&lt;/p&gt;&lt;img&gt;&lt;p&gt;&lt;strong&gt;ಜಲಾಂತರ್ಗಾಮಿಗಳ ಬೇಟೆಗಾರ (The Submarine Hunter):&lt;/strong&gt;&lt;/p&gt;&lt;p&gt;ಈ ನೌಕೆಯ ಪ್ರಮುಖ ಉದ್ದೇಶ ಸಮುದ್ರದ ಆಳದಲ್ಲಿ ಅವಿತಿರುವ ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಗಳನ್ನು (Submarines) ಪತ್ತೆ ಹಚ್ಚಿ ಹೊಡೆದುರುಳಿಸುವುದಾಗಿದೆ. ಇದಕ್ಕಾಗಿ ಹಡಗಿನ ತಳಭಾಗದಲ್ಲಿ ಅತ್ಯಾಧುನಿಕ 'ಅಭಯ್ ಸೋನಾರ್' (Abhay Sonar) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಸಮುದ್ರದಲ್ಲಿ ಧ್ವನಿ ತರಂಗಗಳನ್ನು (Sound Waves) ಬಿಡುವ ಮೂಲಕ ಶತ್ರುಗಳ ಜಲಾಂತರ್ಗಾಮಿ ಇರುವಿಕೆಯನ್ನು ನಿಖರವಾಗಿ ಗುರುತಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ಆತ್ಮರಕ್ಷಣೆ ಮತ್ತು ದಾಳಿ (Defense and Attack):&lt;/strong&gt;&lt;/p&gt;&lt;p&gt;ಸಮುದ್ರದ ಮೇಲ್ಮೈನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ಆತ್ಮರಕ್ಷಣೆಗಾಗಿ ಈ ನೌಕೆಯಲ್ಲಿ 30 ಮಿ.ಮೀ ನೇವಲ್ ಸರ್ಫೇಸ್ ಗನ್ (Naval Surface Gun) ಅಳವಡಿಸಲಾಗಿದೆ. ಜಲಾಂತರ್ಗಾಮಿ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಉಪಕರಣಗಳನ್ನು ಹೊಂದಿರುವ ಈ ನೌಕೆಯು ಭಾರತದ ಕರಾವಳಿ ಭದ್ರತೆಗೆ (Coastal Security) ದೊಡ್ಡ ಬಲ ತುಂಬಲಿದೆ.&lt;/p&gt;&lt;p&gt;ಕಾರವಾರದ ನೌಕಾನೆಲೆಗೆ ಈ ಯುದ್ಧನೌಕೆಯ ಸೇರ್ಪಡೆಯಿಂದಾಗಿ ಹಿಂದೂ ಮಹಾಸಾಗರ ವಲಯದಲ್ಲಿ (Indian Ocean Region) ಭಾರತದ ಕಣ್ಗಾವಲು ಮತ್ತು ರಕ್ಷಣಾ ವ್ಯವಸ್ಥೆ ಇನ್ನಷ್ಟು ಹರಿತವಾಗಲಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/indian-navy-karwar-kadamba-naval-base-ins-malvan-warship-commissioned-here-best-specialities-sat-4o3p4nf"/>
        </item>
        <item>
            <title><![CDATA[ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರಿಗೆ ಬಿಗ್ ಶಾಕ್: ಇನ್ಮುಂದೆ ಗಣೇಶನ ಮೂರ್ತಿ ಮುಟ್ಟಿ ಪೂಜೆ ಮಾಡುವಂತಿಲ್ಲ!]]></title>
            <link>https://kannada.asianetnews.com/karnataka-districts/gokarna-mahaganapati-temple-bans-sparsha-darshana-to-protect-ancient-idol-sat/articleshow-4pegg6c</link>
            <guid isPermaLink="true">https://kannada.asianetnews.com/karnataka-districts/gokarna-mahaganapati-temple-bans-sparsha-darshana-to-protect-ancient-idol-sat/articleshow-4pegg6c</guid>
            <pubDate>Thu, 23 Jul 2026 13:09:55 +0530</pubDate>
            <description><![CDATA[ಗೋಕರ್ಣದ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ, ಪ್ರಾಚೀನ ಶಿಲಾ ಮೂರ್ತಿಯ ಸವೆತವನ್ನು ತಡೆಯಲು ಮುಜರಾಯಿ ಇಲಾಖೆಯು ಸ್ಪರ್ಶ ದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ಹೊಸ ನಿಯಮದ ಅಡಿಯಲ್ಲಿ, ಭಕ್ತರು ಇನ್ನು ಮುಂದೆ ಗಣಪತಿ ಮೂರ್ತಿಯನ್ನು ಮುಟ್ಟಿ ಪೂಜೆ ಸಲ್ಲಿಸುವಂತಿಲ್ಲ ಮತ್ತು 'ಕೊಟ್ಟೆ ಕಣಜ'ದಂತಹ ವಿಶೇಷ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky6yn9dptk2tyqnjsc4k7vhf,imgname-gokarna-ganesh-temple--1--1784792393142.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ (ಜು.23): ಉ&lt;/strong&gt;ತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಪುರಾಣ ಪ್ರಸಿದ್ಧ ಗೋಕರ್ಣದ ಮಹಾಗಣಪತಿ ದೇವಸ್ಥಾನಕ್ಕೆ (Gokarna Mahaganapati Temple) ಭೇಟಿ ನೀಡುವ ಭಕ್ತರಿಗೆ ಮುಜರಾಯಿ ಇಲಾಖೆಯು (Muzrai Department) ಪ್ರಮುಖ ಮಾಹಿತಿಯೊಂದನ್ನು ನೀಡಿದೆ. ದೇವಸ್ಥಾನದಲ್ಲಿರುವ ಪ್ರಾಚೀನ ಶಿಲಾ ಮೂರ್ತಿ (Ancient Stone Idol) ಸವಕಳಿಯಾಗುತ್ತಿರುವ ಹಿನ್ನೆಲೆಯಲ್ಲಿ, ಇನ್ಮುಂದೆ ಗಣಪತಿ ಮೂರ್ತಿಯನ್ನು ಮುಟ್ಟಿ ಪೂಜೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಭಕ್ತರಿಗೆ ಗಣೇಶನ ಸ್ಪರ್ಶ ದರ್ಶನವನ್ನು (Sparsha Darshana) ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.&lt;/p&gt;&lt;h2&gt;&lt;strong&gt;ಮೂರ್ತಿಗೆ ಹಾನಿಯಾಗುತ್ತಿರುವುದೇಕೆ?&lt;/strong&gt;&lt;/h2&gt;&lt;p&gt;ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ (Mahabaleshwara Temple) 'ಆತ್ಮಲಿಂಗ' ದರ್ಶನ ಪಡೆಯುವ ಮುನ್ನ, ಭಕ್ತರು ಮೊದಲು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಈ ಐತಿಹಾಸಿಕ ದ್ವಿಭುಜ ಗಣಪತಿಗೆ (Two-armed Ganesha) ಪೂಜೆ ಸಲ್ಲಿಸುವುದು ಅನಾದಿ ಕಾಲದ ವಾಡಿಕೆ. ಆದರೆ, ಪ್ರತಿನಿತ್ಯ ಸಾವಿರಾರು ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ಮಾಡುತ್ತಿದ್ದರಿಂದ, ಗಣಪತಿಯ ಶಿಲಾ ಮೂರ್ತಿಯ ಕೈ, ಭುಜ ಹಾಗೂ ಎದೆ ಭಾಗವು (Chest and Shoulder parts) ತೀವ್ರವಾಗಿ ಸವಕಳಿಯಾಗುತ್ತಿದೆ (Erosion).&lt;/p&gt;&lt;h2&gt;&lt;strong&gt;ದತ್ತಿ ಇಲಾಖೆಯ ಕಟ್ಟುನಿಟ್ಟಿನ ಕ್ರಮ:&lt;/strong&gt;&lt;/h2&gt;&lt;p&gt;ಈ ಪುರಾತನ ಮೂರ್ತಿಯ ಸಂರಕ್ಷಣೆ (Idol Protection) ಅತ್ಯಗತ್ಯವಾಗಿರುವುದರಿಂದ, ನಿನ್ನೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ (Assistant Commissioner) ಸುಧಾ ತಳವಾರ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ಕಠಿಣ ನಿರ್ಣಯ ಕೈಗೊಳ್ಳಲಾಗಿದೆ. ಈ ಹೊಸ ನಿಯಮದ ಪ್ರಕಾರ, ಭಕ್ತರಿಗೆ ಸ್ಪರ್ಶ ದರ್ಶನ ಹಾಗೂ ಮೂರ್ತಿಯನ್ನು ಮುಟ್ಟಿ ಮಾಡುವ ವಿಶೇಷ ಪೂಜಾ ಸೇವೆಗಳನ್ನು (Pooja Sevas) ತಕ್ಷಣದಿಂದಲೇ ಜಾರಿಗೆ ಬರುವಂತೆ ಬಂದ್ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ವಿಶೇಷ ಸೇವೆಗಳೂ ಸ್ಥಗಿತ :&lt;/strong&gt;&lt;/h2&gt;&lt;p&gt;ಕೇವಲ ಸಾಮಾನ್ಯ ದಿನಗಳಲ್ಲಷ್ಟೇ ಅಲ್ಲದೆ, ಮುಂಬರುವ ಸಂಕಷ್ಟಿ (Sankashti) ಹಾಗೂ ಗಣೇಶ ಚತುರ್ಥಿ (Ganesh Chaturthi) ಹಬ್ಬದ ಸಂದರ್ಭದಲ್ಲೂ ಇದೇ ಕಟ್ಟುನಿಟ್ಟಿನ ನಿಯಮ ಮುಂದುವರಿಯಲಿದೆ. ಭಕ್ತರು ದೂರದಿಂದಲೇ ದೇವರ ದರ್ಶನ ಪಡೆಯಬೇಕು. ಇದಲ್ಲದೇ, ಮಹಾಗಣಪತಿಗೆ ಅತ್ಯಂತ ವಿಶೇಷವಾಗಿ ನಡೆಯುತ್ತಿದ್ದ ಪ್ರಸಿದ್ಧ 'ಕೊಟ್ಟೆ ಕಣಜ' (Kotte Kanaja) ಹಾಗೂ 'ಸಕ್ಕರೆ ಕಣಜ' (Sakkare Kanaja) ಸೇವೆಗಳನ್ನು ಸಹ ಮೂರ್ತಿಯ ರಕ್ಷಣೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ (Suspended) ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/gokarna-mahaganapati-temple-bans-sparsha-darshana-to-protect-ancient-idol-sat/articleshow-4pegg6c"/>
        </item>
        <item>
            <title><![CDATA[ಉತ್ತರ ಕನ್ನಡದಲ್ಲಿ ಮತ್ತೆ ನೆನಪಿಸಿದ ಶಿರೂರು ದುರಂತ.. ನೂರಾರು ವಿದ್ಯಾರ್ಥಿಗಳು ಜಸ್ಟ್ ಮಿಸ್]]></title>
            <link>https://kannada.asianetnews.com/uttara-kannada/landslides-have-started-again-in-uttara-kannada-district-and-people-are-worried-gkn/articleshow-51bf922</link>
            <guid isPermaLink="true">https://kannada.asianetnews.com/uttara-kannada/landslides-have-started-again-in-uttara-kannada-district-and-people-are-worried-gkn/articleshow-51bf922</guid>
            <pubDate>Fri, 17 Jul 2026 14:45:51 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಣಿ ಗುಡ್ಡ ಕುಸಿತಗಳು ಆತಂಕ ಸೃಷ್ಟಿಸಿವೆ. ಕುಮಟಾದ ಶಾಲೆಯೊಂದರ ಬಳಿ ಗುಡ್ಡ ಕುಸಿದರೂ, ಸಮಯಪ್ರಜ್ಞೆಯಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರಾಗಿದ್ದಾರೆ. ಇನ್ನೊಂದೆಡೆ, ಗೋಕರ್ಣ-ತದಡಿ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿದ್ದು, ಈ ಘಟನೆಗಳು ಶಿರೂರು ದುರಂತದ ಕಹಿ ನೆನಪನ್ನು ಮರುಕಳಿಸುವಂತೆ ಮಾಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqnr657wmg0na70pkdk7wpm,imgname-uttar-kannada-lanslide-123-1784279734439.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ/ಕುಮಟಾ: &lt;/strong&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಣಿ ಗುಡ್ಡ ಕುಸಿತದ ಘಟನೆಗಳು ಜನರನ್ನು ಆತಂಕಕ್ಕೆ ತಳ್ಳಿವೆ. ಶಿರೂರು ದುರಂತದ ಕಹಿ ನೆನಪುಗಳು ಹಸಿಯಾಗಿರುವಾಗಲೇ, ಈಗ ಕುಮಟಾ ಮತ್ತು ಗೋಕರ್ಣ ಭಾಗದಲ್ಲಿ ನಡೆದ ಘಟನೆಗಳು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿವೆ.&lt;/p&gt;&lt;h2&gt;&lt;strong&gt;1000ಕ್ಕೂ ಹೆಚ್ಚು ಜೀವಗಳು ಸೇಫ್&lt;/strong&gt;&lt;/h2&gt;&lt;p&gt;ಕುಮಟಾ ಪಟ್ಟಣದ 'ಕರ್ನಾಟಕ ಪಬ್ಲಿಕ್ ಸ್ಕೂಲ್'ನಲ್ಲಿ ಇಂದು ಪವಾಡವೊಂದು ನಡೆದಿದೆ. ಶಾಲೆಯ ಪಕ್ಕದಲ್ಲೇ ಇದ್ದ ಗುಡ್ಡ ಕುಸಿದು ಬೃಹತ್ ಕಲ್ಲುಬಂಡೆಗಳು ಶಾಲಾ ಕಟ್ಟಡದ ಮೇಲೆ ಅಪ್ಪಳಿಸಿವೆ. ಕಳೆದ ವರ್ಷವೂ ಇದೇ ಭಾಗದಲ್ಲಿ ಗುಡ್ಡ ಕುಸಿದಿದ್ದರಿಂದ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತ್ತು. ಇಂದು ಬೆಳಿಗ್ಗೆಯಿಂದಲೇ ಮಳೆ ಅಬ್ಬರಿಸುತ್ತಿದ್ದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯದ ಅಂಚಿನಲ್ಲಿದ್ದ ಕೊಠಡಿಗಳಿಂದ ಮಕ್ಕಳನ್ನು ತಕ್ಷಣವೇ ಬೇರೆಡೆ ಸ್ಥಳಾಂತರಿಸಲಾಗಿತ್ತು.&lt;/p&gt;&lt;p&gt;&lt;img&gt;&lt;/p&gt;&lt;p&gt;ಮಕ್ಕಳನ್ನು ಸ್ಥಳಾಂತರಿಸಿದ ಕೆಲವೇ ಕ್ಷಣಗಳಲ್ಲಿ ಗುಡ್ಡದ ಮೇಲಿಂದ ಭಾರಿ ಗಾತ್ರದ ಬಂಡೆಗಳು ಶಾಲೆಯ ಕಟ್ಟಡಕ್ಕೆ ಅಪ್ಪಳಿಸಿದವು. ಶಾಲೆಯಲ್ಲಿ ಎಲ್&zwnj;ಕೆಜಿಯಿಂದ ಪಿಯುಸಿವರೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಶಿಕ್ಷಕರ ಸಮಯಪ್ರಜ್ಞೆಯಿಂದಾಗಿ ಭೀಕರ ದುರಂತವೊಂದು ತಪ್ಪಿದಂತಾಗಿದೆ.&lt;/p&gt;&lt;h2&gt;&lt;strong&gt;ಗೋಕರ್ಣ-ತದಡಿ ರಸ್ತೆ ಸಂಪರ್ಕ ಕಡಿತ&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಕುಮಟಾ ತಾಲೂಕಿನ ಗೋಕರ್ಣ-ತದಡಿ ರಸ್ತೆಯಲ್ಲೂ ಭಾರಿ ಗುಡ್ಡ ಕುಸಿತ ಸಂಭವಿಸಿದೆ. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮಣ್ಣು ಕುಸಿದು ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ರಸ್ತೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಶಿರೂರು ದುರಂತದ ಭೀತಿ ಇನ್ನೂ ಮಾಸಿಲ್ಲ&lt;/strong&gt;&lt;/h2&gt;&lt;p&gt;ಪ್ರಸ್ತುತ ನಡೆಯುತ್ತಿರುವ ಈ ಗುಡ್ಡ ಕುಸಿತದ ಘಟನೆಗಳು 2024ರ ಜುಲೈ 16ರಂದು ಅಂಕೋಲಾದ ಶಿರೂರಿನಲ್ಲಿ ನಡೆದ ಭೀಕರ ದುರಂತವನ್ನು ನೆನಪಿಸುತ್ತಿವೆ. ಅಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದ್ದ ಗುಡ್ಡ ಕುಸಿದು ಕೇರಳದ ಲಾರಿ ಚಾಲಕ ಅರ್ಜುನ್ ಸೇರಿದಂತೆ 11 ಮಂದಿ ಬಲಿಯಾಗಿದ್ದರು. ಐಆರ್&zwnj;ಬಿ (IRB) ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಈ ದುರಂತಕ್ಕೆ ಕಾರಣ ಎಂಬ ಆಕ್ರೋಶ ಇಂದಿಗೂ ಜಿಲ್ಲೆಯ ಜನರಲ್ಲಿದೆ. ಈಗ ಮತ್ತೆ ಜಿಲ್ಲೆಯಲ್ಲಿ ಸರಣಿ ಗುಡ್ಡ ಕುಸಿತವಾಗುತ್ತಿರುವುದು ಹೆದ್ದಾರಿ ಬಳಕೆದಾರರಲ್ಲಿ ಮತ್ತು ಗುಡ್ಡದ ತಪ್ಪಲಿನಲ್ಲಿ ವಾಸಿಸುವ ಜನರಲ್ಲಿ ನಡುಕ ಹುಟ್ಟಿಸಿದೆ. ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುತ್ತಿರೋದ್ರಿಂದ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.&lt;/p&gt;]]></content:encoded>
            <category>uttara-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/uttara-kannada/landslides-have-started-again-in-uttara-kannada-district-and-people-are-worried-gkn/articleshow-51bf922"/>
        </item>
        <item>
            <title><![CDATA[ಮುಂಡಗೋಡನಿಂದ ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗವಾಗಿ ರಾಯಚೂರು ನಗರಕ್ಕೆ ನೇರ ಬಸ್ ಆರಂಭ]]></title>
            <link>https://kannada.asianetnews.com/karnataka-districts/direct-nwkrtc-bus-service-from-mundagoda-to-raichur-city-via-hubballi-gadag-koppal-begins-mrq/articleshow-5e5he1p</link>
            <guid isPermaLink="true">https://kannada.asianetnews.com/karnataka-districts/direct-nwkrtc-bus-service-from-mundagoda-to-raichur-city-via-hubballi-gadag-koppal-begins-mrq/articleshow-5e5he1p</guid>
            <pubDate>Thu, 09 Jul 2026 08:18:01 +0530</pubDate>
            <description><![CDATA[&lt;p&gt;Mundagoda-Raichur bus service begins: ಮುಂಡಗೋಡ ಘಟಕದಿಂದ ರಾಯಚೂರಿಗೆ ನೂತನ ಬಸ್ ಸೇವೆ ಆರಂಭಗೊಂಡಿದೆ. ಈ ಬಸ್ ಪ್ರತಿದಿನ ಮುಂಡಗೋಡದಿಂದ ಹೊರಟು, ಹುಬ್ಬಳ್ಳಿ, ಗದಗ, ಕೊಪ್ಪಳ, ಸಿಂಧನೂರು ಮಾರ್ಗವಾಗಿ ರಾಯಚೂರು ತಲುಪಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2c8gmnd1njan0xtyt3kedn,imgname-bus--1--1783565140629.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ &lt;/strong&gt;: ಮುಂಡಗೋಡ ಘಟಕದಿಂದ ರಾಯಚೂರಿಗೆ ನೂತನ ಬಸ್ ಸೇವೆ ಆರಂಭಿಸಲಾಗಿದ್ದು, ಬುಧವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.&lt;/p&gt;&lt;p&gt;ಪ್ರತಿದಿನ ಬೆಳಗ್ಗೆ 10ಗಂಟೆಗೆ ಮುಂಡಗೋಡದಿಂದ ಹೊರಡುವ ಬಸ್ ಹುಬ್ಬಳ್ಳಿ, ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ಮಾನ್ವಿ ಮಾರ್ಗವಾಗಿ ಸಂಜೆ 7 ಗಂಟೆಗೆ ರಾಯಚೂರು ತಲುಪುತ್ತದೆ. ಮರು ದಿನ ಬೆಳಗ್ಗೆ 8 ಗಂಟೆಗೆ ರಾಯಚೂರಿನಿಂದ ಹೊರಟು ಸಂಜೆ 5 ಗಂಟೆಗೆ ಮುಂಡಗೋಡ ತಲುಪುತ್ತದೆ.&lt;/p&gt;&lt;p&gt;ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಹಾಗೂ ಗ್ಯಾರಂಟಿ ಸದಸ್ಯರಾದ ಧರ್ಮರಾಜ ನಡಗೇರ, ಹನುಮಂತಗೌಡ, ಸಚಿನ್ ಬಾಂದೇಕರ್, ಪಪಂ ಮಾಜಿ ಸದಸ್ಯ ಎಂ.ಕೆ. ರಜಾಕ, ಮುಂಡಗೋಡ ಡಿಪೋ ಮ್ಯಾನೇಜರ್ ಸಲೀಂ ಕುರ್ತುಕೋಟಿ, ಬಸವರಾಜ ಸಂಗಮೇಶ್ವರ, ಆಶಿಫ್ ಮಖಾಂದಾರ ಮುಂತಾದವರಿದ್ದರು.&lt;/p&gt;&lt;h2&gt;&lt;strong&gt;ಬಸ್ ಬ್ರೇಕ್ ಫೇಲ್: ಬೈಕ್ ಸವಾರರು ಪಾರು&lt;/strong&gt;&lt;/h2&gt;&lt;p&gt;ಹೊಸ ಬಸ್ ನಿಲ್ದಾಣದ ಬಳಿ ಸಾರಿಗೆ ಸಂಸ್ಥೆಯ ಬಸ್ ಒಂದರ ಬ್ರೇಕ್ ಫೇಲ್ ಆದ ಪರಿಣಾಮ, ಎರಡು ಬೈಕ್&zwnj;ಗಳು ಬಸ್ಸಿನ ಚಕ್ರದಡಿ ಸಿಲುಕಿ ಸವಾರರು ಪಾರಾದ ಘಟನೆ ಬುಧವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರರು ಸಮಯಪ್ರಜ್ಞೆ ಮೆರೆದು ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಮುಂಡರಗಿಯಿಂದ ಗದಗ ನಗರಕ್ಕೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್, ಕೇಂದ್ರ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಏಕಾಏಕಿ ಬ್ರೇಕ್ ಫೇಲ್ ಆಗಿದೆ. ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ಬಸ್ಸಿನ ಹಿಂಬದಿಯಲ್ಲೇ ಬರುತ್ತಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಬಸ್ ನುಗ್ಗಿದೆ.&lt;/p&gt;&lt;p&gt;ಬಸ್ ತಮ್ಮ ಕಡೆಗೆ ನಿಯಂತ್ರಣ ತಪ್ಪಿ ಬರುತ್ತಿರುವುದನ್ನು ಮತ್ತು ಅದರ ಅಪಾಯವನ್ನು ತಕ್ಷಣವೇ ಅರಿತ ಇಬ್ಬರು ಬೈಕ್ ಸವಾರರು, ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಪಕ್ಕಕ್ಕೆ ಜಿಗಿದಿದ್ದಾರೆ. ಪರಿಣಾಮವಾಗಿ ಇಬ್ಬರೂ ಸವಾರರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಸವಾರರ ಕಣ್ಣೆದುರೇ ಅವರ ಎರಡು ಬೈಕ್&zwnj;ಗಳು ಬಸ್ಸಿನ ಹಿಂಬದಿಯ ಚಕ್ರಗಳ ಅಡಿಯಲ್ಲಿ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.&lt;/p&gt;&lt;p&gt;ಬಸ್ ಏಕಾಏಕಿ ಹಿಂದಕ್ಕೆ ನುಗ್ಗಿದ ಹಾಗೂ ಬೈಕ್&zwnj;ಗಳು ಚಕ್ರದಡಿ ಸಿಲುಕಿದ ಸದ್ದಿಗೆ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಯಿತು.&lt;/p&gt;&lt;p&gt;ಸಾರಿಗೆ ಸಂಸ್ಥೆಯಲ್ಲಿ ಸದ್ಯ ಹಳೆಯ ಹಾಗೂ ಸೂಕ್ತ ನಿರ್ವಹಣೆ ಇಲ್ಲದ ಡಕೋಟಾ ಬಸ್&zwnj; ಗಳೇ ಇಂತಹ ಅಹಿತಕರ ಘಟನೆಗಳಿಗೆ ಮುಖ್ಯ ಕಾರಣವಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/direct-nwkrtc-bus-service-from-mundagoda-to-raichur-city-via-hubballi-gadag-koppal-begins-mrq/articleshow-5e5he1p"/>
        </item>
        <item>
            <title><![CDATA[ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI]]></title>
            <link>https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd</link>
            <guid isPermaLink="true">https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd</guid>
            <pubDate>Fri, 10 Jul 2026 19:25:34 +0530</pubDate>
            <description><![CDATA[&lt;p&gt;ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx64pz5xwr12fyahv2jpms8d,imgname-sardine-fish-cmfri-warning--2--1783691443389.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.&amp;nbsp;&lt;/p&gt;&lt;img&gt;&lt;p&gt;ಮೀನು ಪ್ರಿಯರ ಸಾರ್ವಕಾಲಿಕ ನೆಚ್ಚಿನ ಹಾಗೂ ಅಗ್ಗದ ದರದ ಮೀನು ಎನಿಸಿಕೊಂಡಿರುವ ಭೂತಾಯಿ (ಕೆಲವು ಕಡೆ ಮತ್ತಿ, ಬೈಗೆ ಎಂದೂ ಹೇಳುತ್ತಾರೆ) ಲಭ್ಯತೆ ಮುಂದಿನ ವರ್ಷ ಗಣನೀಯವಾಗಿ ಕುಸಿಯಲಿದೆ ಎಂಬ ಆತಂಕಕಾರಿ ಮುನ್ಸೂಚನೆಯನ್ನು ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆ (CMFRI) ನೀಡಿದೆ. ಸಮುದ್ರದಲ್ಲಿ ಬಿಸಿಹವೆಗೆ ಕಾರಣವಾಗುವ ಜಾಗತಿಕ ಹವಾಮಾನ ವಿದ್ಯಮಾನವಾದ 'ಎಲ್ ನಿನೊ' (El Nino) ಪ್ರಭಾವದಿಂದಾಗಿ ಕಡಲಿನಲ್ಲಿ ಮೀನುಗಳ ಲಭ್ಯತೆ ತಗ್ಗಲಿದ್ದು, ದೇಶಾದ್ಯಂತ ಕಡಲ ಮತ್ಸ್ಯೋದ್ಯಮದ ಮೇಲೆ ಇದು ಭಾರಿ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಸಂಸ್ಥೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ಮುಂದಿನ ದಿನಗಳು ಮತ್ಸ್ಯಪ್ರಿಯರಿಗೆ ಅಷ್ಟೊಂದು ಆಶಾದಾಯಕವಾಗಿ ಇರುವುದಿಲ್ಲ. ಪ್ರಸ್ತುತ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ತೀವ್ರಗೊಳ್ಳಲಿರುವ 'ಎಲ್ ನಿನೊ' ವಿದ್ಯಮಾನದ ನೇರ ಪ್ರಭಾವವು ಮುಂದಿನ ವರ್ಷದ (2027) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಪ್ರಕಟವಾಗಲಿದೆ ಎಂದು ಸಿಎಂಎಫ್&zwnj;ಆರ್&zwnj;ಐ ಮುನ್ಸೂಚನೆ ನೀಡಿದೆ. ಹವಾಮಾನ ತಜ್ಞರು ಊಹಿಸಿದಂತೆ ಈ ಜಾಗತಿಕ ತಾಪಮಾನ ವೈಪರೀತ್ಯ ಸಂಭವಿಸಿದರೆ, ಮಾರುಕಟ್ಟೆಯಲ್ಲಿ ಭೂತಾಯಿ ಮೀನಿನ ಲಭ್ಯತೆ ತೀವ್ರವಾಗಿ ಕುಸಿಯಲಿದ್ದು, ಅದರ ಬೆಲೆ ಸಾಮಾನ್ಯ ಜನರಿಗೆ ಸಿಗದಂತೆ ಗಗನಕ್ಕೇರಲಿದೆ.&lt;/p&gt;&lt;img&gt;&lt;p&gt;ಕಡಲಿನಲ್ಲಿ ಉಂಟಾಗುವ ಉಷ್ಣ ತರಂಗಗಳು ಮತ್ತು ಹಠಾತ್ ತಾಪಮಾನ ವೈಪರೀತ್ಯಗಳು ಸಮುದ್ರದ ಮೇಲ್ಮೈ ಭಾಗದಲ್ಲಿ ವಾಸಿಸುವ ಭೂತಾಯಿ ಸೇರಿದಂತೆ ಇತರ ಸಣ್ಣ ಪ್ರಭೇದದ ಮೀನುಗಳ ಪಾಲಿಗೆ ವಿಷಕಾರಿಯಾಗಿದೆ. ಇದರ ಜೊತೆಗೆ ನಿರಂತರವಾಗಿ ಸಮುದ್ರದ ನೀರು ಕಾಯುವುದರಿಂದ ಸಮುದ್ರದೊಳಗಿನ ಜೀವವೈವಿಧ್ಯದ ಆಧಾರವಾಗಿರುವ ಹವಳದ ದಿಬ್ಬಗಳು (Coral Reefs) ನಾಶವಾಗಲಿವೆ. ಇದು ಹವಳದ ದಿಬ್ಬಗಳನ್ನೇ ಆಶ್ರಯಿಸಿ ಬದುಕುವ 'ಶಂಕರ' (Red Snapper) ರೀತಿಯ ಮೌಲ್ಯಯುತ ಮೀನುಗಳ ನೈಸರ್ಗಿಕ ಸಂತಾನೋತ್ಪತ್ತಿ ಮತ್ತು ಲಭ್ಯತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಸಿಎಂಎಫ್&zwnj;ಆರ್&zwnj;ಐ ಅಧ್ಯಯನ ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;ಎಲ್ ನಿನೊ ಭೀತಿಯ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಕರಾವಳಿ ಭಾಗದ ಮತ್ಸ್ಯ ಕೃತಕ ಕೃಷಿಕರಿಗೆ (Fish Farmers) ಈ ವರ್ಷವೇ ಸಿಎಂಎಫ್&zwnj;ಆರ್&zwnj;ಐ ವಿಶೇಷ ಜಾಗೃತಿ ಮಾರ್ಗಸೂಚಿಯನ್ನು ಹೊರಡಿಸಲಿದೆ. ಹವಾಮಾನ ವೈಪರೀತ್ಯದ ಈ ಅವಧಿಯಲ್ಲಿ ಕಡಲು ಹಾಗೂ ಕರಾವಳಿ ಜಲಮೂಲಗಳ ರಕ್ಷಣೆ ಮತ್ತು ನಿರ್ವಹಣೆಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;ತೀವ್ರವಾದ ಬೇಸಿಗೆಯ ಬಿಸಿಲು ಹಾಗೂ ನೀರಿನಲ್ಲಿ ಲವಣಾಂಶ (Salinity) ಹೆಚ್ಚಾದ ಬೆನ್ನಲ್ಲೇ ಹಠಾತ್ ಮಳೆ ಸುರಿದರೆ ಕರಾವಳಿ ಮತ್ತು ಹಿನ್ನೀರು ಪ್ರದೇಶಗಳಲ್ಲಿನ ನೀರಿನ ಲವಣಾಂಶದ ಮಟ್ಟವು ದಿಢೀರನೆ ಏರುಪೇರಾಗುತ್ತದೆ. ಈ ರಾಸಾಯನಿಕ ಬದಲಾವಣೆಯು ಕೃತಕವಾಗಿ ಕೊಳಗಳಲ್ಲಿ ಅಥವಾ ಹಿನ್ನೀರಿನಲ್ಲಿ ಮಾಡುವ ಮತ್ಸ್ಯಕೃಷಿಯ (Aquaculture) ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮೀನುಗಳು ಸಾಯುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ಮೀನು ಕೃಷಿಕರು ಮುಂಚಿತವಾಗಿಯೇ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸ್ಥೆ ಸೂಚಿಸಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಜಾಗತಿಕ ತಾಪಮಾನ ಏರಿಕೆಯು ಕೇವಲ ಮೀನಿನ ಲಭ್ಯತೆಯನ್ನು ಕುಗ್ಗಿಸುವುದಲ್ಲದೆ, ಸಮುದ್ರದ ಸಂಪೂರ್ಣ ಜೈವಿಕ ಸರಪಳಿಯನ್ನೇ ಏರುಪೇರು ಮಾಡುತ್ತದೆ. ದೇಶದಾದ್ಯಂತ ಕಡಲ ಮೀನುಗಾರಿಕೆಯ ಒಟ್ಟು ಉತ್ಪಾದನೆಯಲ್ಲಿ ಇಳಿಕೆಯಾಗುವ ಮುನ್ಸೂಚನೆ ಇರುವುದರಿಂದ, ಮೀನುಗಾರಿಕೆಯನ್ನು ನಂಬಿ ಬದುಕುವ ಲಕ್ಷಾಂತರ ಕುಟುಂಬಗಳ ಆರ್ಥಿಕತೆಯ ಮೇಲೆ ಇದು ನೇರ ಹೊಡೆತ ನೀಡಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd"/>
        </item>
        <item>
            <title><![CDATA[Bhatkal: ಆನಂದ ಆಶ್ರಮ ಪದವಿ ಪೂರ್ವ ಕಾಲೇಜಿನಲ್ಲಿ ನಾಳೆ Business Day 2026 ಸಂಭ್ರಮ]]></title>
            <link>https://kannada.asianetnews.com/uttara-kannada/bhatkal-anand-ashram-pu-college-organises-business-day-2026-san/articleshow-9zd09p2</link>
            <guid isPermaLink="true">https://kannada.asianetnews.com/uttara-kannada/bhatkal-anand-ashram-pu-college-organises-business-day-2026-san/articleshow-9zd09p2</guid>
            <pubDate>Wed, 22 Jul 2026 21:51:02 +0530</pubDate>
            <description><![CDATA[&lt;p&gt;ಭಟ್ಕಳದ ಆನಂದ ಆಶ್ರಮ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಉದ್ಯಮಶೀಲತೆ ಮತ್ತು ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಲು 'ಬಿಸಿನೆಸ್ ಡೇ 2026' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky5a0n832ttrrvc636d97tbz,imgname-anand-ashram-pu-college-to-host--business-day-2026-bhatkal-1784737191171.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಟ್ಕಳ, ಉತ್ತರ ಕನ್ನಡ(ಜು.22): &lt;/strong&gt;ಇಲ್ಲಿನ ಪ್ರಸಿದ್ಧ ಆನಂದ ಆಶ್ರಮ ಸಂಯೋಜಿತ ಪದವಿ ಪೂರ್ವ ಕಾಲೇಜಿನ (Anand Ashram PU College) ವತಿಯಿಂದ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಜುಲೈ 23ರ ಗುರುವಾರದಂದು 'ಬಿಸಿನೆಸ್ ಡೇ 2026' (Business Day 2026) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. &quot;ಯೋಚಿಸಿ, ಯೋಜಿಸಿ, ಕಾರ್ಯರೂಪಕ್ಕಿಳಿಸಿ, ಯಶಸ್ವಿಯಾಗಿ&quot; (Think. Plan. Act. Succeed.) ಎಂಬ ಧೈಯವಾಕ್ಯದೊಂದಿಗೆ ಆಯೋಜಿಸಲಾಗಿರುವ ಈ ಸಮ್ಮೇಳನವು ಕಾಲೇಜಿನ ಹೈಸ್ಕೂಲ್ ಸಭಾಂಗಣದಲ್ಲಿ ಬೆಳಿಗ್ಗೆ 9:30ಕ್ಕೆ ಚಾಲನೆಗೊಳ್ಳಲಿದೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳಿಂದ ಬಿಸಿನೆಸ್ ಸ್ಟಾಲ್&zwnj;ಗಳ ಪ್ರದರ್ಶನ&lt;/strong&gt;&lt;/h2&gt;&lt;p&gt;ಯುವ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲ ವ್ಯವಹಾರಿಕ ಕಲ್ಪನೆಗಳನ್ನು ಪ್ರದರ್ಶಿಸಲು ಸ್ಟಾಲ್&zwnj;ಗಳನ್ನು ಆಯೋಜಿಸಲಿದ್ದಾರೆ. &quot;ಇಂದಿನ ನಾವೀನ್ಯತೆ, ನಾಳೆಯ ಪ್ರೇರಣೆ&quot; ಎಂಬ ಉದ್ದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ಉದ್ಯಮಶೀಲತೆಯ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಲಿದೆ.&lt;/p&gt;&lt;p&gt;ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಉದ್ಘಾಟನಾ ಭಾಷಣವನ್ನು ಆನಂದ ಆಶ್ರಮ ಸಂಸ್ಥೆಯ ಮ್ಯಾನೇಜರ್ ಆದ ಸಿಸ್ಟರ್ ಲೂಸಿ ಡಿಸೋಜಾ (Sr Lucy Dsouza) ನೆರವೇರಿಸಲಿದ್ದಾರೆ. ಆನಂದ ಆಶ್ರಮ ಸಂಸ್ಥೆಯ ಕ್ಯಾಂಪಸ್ ಇನ್&zwnj;ಚಾರ್ಜ್ ಹಾಗೂ ಅನಿಮೇಟರ್ ಆದ ಸಿಸ್ಟರ್ ಅನಿತಾ ಪಿಂಟೋ (Sr Anitha Pinto) ಅವರು ಪ್ರಾರ್ಥನೆ ಮತ್ತು ಆಶೀರ್ವಚನ ನೀಡಲಿದ್ದಾರೆ. ಕಲಿಕೆ, ನಾಯಕತ್ವ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಈ ವಿಶೇಷ ಆಚರಣೆಯಲ್ಲಿ ಭಾಗವಹಿಸುವಂತೆ ಕಾಲೇಜು ಆಡಳಿತ ಮಂಡಳಿಯು ಸರ್ವರನ್ನೂ ಆತ್ಮೀಯವಾಗಿ ಆಹ್ವಾನಿಸಿದೆ.&lt;/p&gt;&lt;p&gt;&lt;/p&gt;&lt;p&gt;&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/uttara-kannada/bhatkal-anand-ashram-pu-college-organises-business-day-2026-san/articleshow-9zd09p2"/>
        </item>
        <item>
            <title><![CDATA[ಕೊಂಕಣ ರೈಲ್ವೆಯಲ್ಲಿ ಕಳ್ಳರ ಕಾಟ: ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಜೀವಕ್ಕೆ ಆಪತ್ತು!]]></title>
            <link>https://kannada.asianetnews.com/karnataka-districts/security-crisis-on-konkan-railway-robberies-in-matsyagandha-and-mangaluru-express-passengers-demand-rpf-action-gdp/articleshow-dei67wc</link>
            <guid isPermaLink="true">https://kannada.asianetnews.com/karnataka-districts/security-crisis-on-konkan-railway-robberies-in-matsyagandha-and-mangaluru-express-passengers-demand-rpf-action-gdp/articleshow-dei67wc</guid>
            <pubDate>Thu, 23 Jul 2026 10:14:37 +0530</pubDate>
            <description><![CDATA[&lt;p&gt;ಮಂಗಳೂರಿನಿಂದ ಗೋವಾ, ಮಹಾರಾಷ್ಟ್ರವನ್ನು ಸಂಪರ್ಕಿಸುವ ಕೊಂಕಣ ರೈಲು ಮಾರ್ಗದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಪ್ರಯಾಣಿಕರ ಸುರಕ್ಷತೆ ಸಂಪೂರ್ಣವಾಗಿ ಹದಗೆಟ್ಟಿದೆ. ಮತ್ಸ್ಯಗಂಧ ಮತ್ತು ಮಂಗಳೂರು ಎಕ್ಸ್&zwnj;ಪ್ರೆಸ್&zwnj;ಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳುವಾಗಿದ್ದು, ಟಿಟಿಇ ಮೇಲೆಯೂ ಹಲ್ಲೆ ನಡೆದಿದೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಸಿಸಿಟಿವಿ ಅಳವಡಿಕೆ ಮತ್ತು ಗಸ್ತು ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky6mbhwbbbz3kkh9dv4grwkc,imgname-konkan-railway--1--1784781588363.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೂಲ್ಕಿ: &lt;/strong&gt;ಮಂಗಳೂರಿನಿಂದ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಕೊಂಕಣ ರೈಲು ಮಾರ್ಗದಲ್ಲಿ ಈಗ ಸರಣಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಯಾಣಿಕರ ನೆಮ್ಮದಿ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಮಾರ್ಗದಲ್ಲಿ ಚಲಿಸುವ ಪ್ರಮುಖ ರೈಲುಗಳಾದ ಮತ್ಸ್ಯಗಂಧ ಎಕ್ಸ್&zwnj;ಪ್ರೆಸ್ (12619/12620) ಮತ್ತು ಮಂಗಳೂರು ಎಕ್ಸ್&zwnj;ಪ್ರೆಸ್ (12133/12134) ರೈಲುಗಳಲ್ಲಿ ಕುಟುಂಬ ಸಮೇತ ನೆಮ್ಮದಿಯಿಂದ ಪ್ರಯಾಣಿಸುವುದು ಈಗ ಗಗನಕುಸುಮವಾಗಿದೆ. ಒಮ್ಮೆ ರೈಲು ಹತ್ತಿದರೆ ಸಾಕು, ಸುರಕ್ಷಿತವಾಗಿ ತಲುಪಬೇಕಾದ ಸ್ಥಳ ತಲುಪುತ್ತೇವೆಯೋ ಇಲ್ಲವೋ ಎಂಬ ಆತಂಕ ಸಾರ್ವಜನಿಕರನ್ನು ಕಾಡತೊಡಗಿದೆ.&lt;/p&gt;&lt;p&gt;ಕಳೆದ ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ರೈಲುಗಳಲ್ಲಿ ಸಾಲು ಸಾಲು ಕಳವು ಘಟನೆಗಳು ಸಂಭವಿಸಿದ್ದು, ಕಷ್ಟಪಟ್ಟು ದುಡಿದ ಹಣದಲ್ಲಿ ಮಾಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡು ಹಲವಾರು ಮಹಿಳಾ ಪ್ರಯಾಣಿಕರು ಕಣ್ಣೀರು ಹಾಕುವಂತಾಗಿದೆ.&lt;/p&gt;&lt;h2&gt;ಸರಣಿ ಅಪರಾಧ ಘಟನೆಗಳು&lt;/h2&gt;&lt;p&gt;30 ಲಕ್ಷದ ಚಿನ್ನಾಭರಣ ಕಳವು! ಇತ್ತೀಚೆಗೆ ನಡೆದ ಪ್ರಮುಖ ಪ್ರಕರಣವೊಂದರಲ್ಲಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಲಲಿತಾ ಸಾಲ್ಯಾನ್ ಎಂಬ ಮಹಿಳೆಯ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಈ ಘಟನೆ ನಡೆದು 50 ದಿನಗಳು ಕಳೆದಿದ್ದರೂ, ಇದುವರೆಗೆ ಕಳ್ಳರ ಸಣ್ಣ ಸುಳಿವನ್ನು ಹಿಡಿಯಲು ಸಹ ರೈಲ್ವೆ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ತಡೆಯಲು ಹೋದ ಟಿಟಿಇ ಮೇಲೆಯೇ ಚಾಕು ದಾಳಿ! ರೈಲುಗಳಲ್ಲಿ ಕಳ್ಳರ ಜಾಲ ಎಷ್ಟು ವ್ಯವಸ್ಥಿತವಾಗಿ ಮತ್ತು ಹುಂಬತನದಿಂದ ಕಾರ್ಯನಿರ್ವಹಿಸುತ್ತಿದೆ ಎಂದರೆ, ಅವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಜುಲೈ 15ರಂದು ನಡೆದ ಮತ್ತೊಂದು ಭೀಕರ ಪ್ರಕರಣದಲ್ಲಿ, ರೈಲಿನಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಹಿಡಿಯಲು ಹೋದ ಟಿಟಿಇ (TTE) ಹಾಗೂ ಮಂಜುನಾಥ್ ಪೂಜಾರಿ ಎಂಬ ಪ್ರಯಾಣಿಕರ ಮೇಲೆಯೇ ದುಷ್ಕರ್ಮಿಗಳು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯು ರೈಲಿನಲ್ಲಿ ಪ್ರಯಾಣಿಕರ ಜೀವಕ್ಕೆ ಯಾವುದೇ ರಕ್ಷಣೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.&lt;/p&gt;&lt;p&gt;ನಾಗರಿಕರ ತೀವ್ರ ಆಕ್ರೋಶ ಮತ್ತು ಪ್ರಶ್ನೆಗಳು ಪ್ರಸ್ತುತ ರೈಲುಗಳಲ್ಲಿ ಬ್ಯಾಗ್ ಹಾಗೂ ಒಡವೆಗಳು ಕಳುವಾಗುತ್ತಿವೆ. ಆದರೆ, ರೈಲ್ವೆ ಅಧಿಕಾರಿಗಳ ಈ ನಿರಂತರ ನಿರ್ಲಕ್ಷ್ಯ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಕುಟುಂಬದ ಹೆಣ್ಣುಮಕ್ಕಳು ಅಥವಾ ವಯಸ್ಸಾದ ಪೋಷಕರ ಜೀವಕ್ಕೆ ಅಪಾಯ ಎದುರಾದರೆ ಅದಕ್ಕೆ ಯಾರು ಹೊಣೆ? ಇನ್ನೂ ಎಷ್ಟು ಜೀವಗಳು ಅಪಾಯಕ್ಕೆ ಸಿಲುಕಿದ ನಂತರ ಇಲಾಖೆ ಎಚ್ಚೆತ್ತುಕೊಳ್ಳುತ್ತದೆ? ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಪ್ರಯಾಣಿಕರ ಪ್ರಮುಖ ಬೇಡಿಕೆಗಳು:&lt;/strong&gt; ರೈಲ್ವೆ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿರುವ ಪ್ರಯಾಣಿಕರು ಮತ್ತು ನಾಗರಿಕರು ಕೆಲವು ಪ್ರಮುಖ ರಕ್ಷಣಾತ್ಮಕ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:&lt;/p&gt;&lt;p&gt;&lt;strong&gt;ಕಡ್ಡಾಯ ಸಿಸಿಟಿವಿ ಅಳವಡಿಕೆ: &lt;/strong&gt;ಪ್ರತಿಯೊಂದು ರೈಲು ಬೋಗಿಯಲ್ಲೂ (Coaches) ಕಡ್ಡಾಯವಾಗಿ ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.&lt;/p&gt;&lt;p&gt;&lt;strong&gt;ಆರ್&zwnj;ಪಿಎಫ್ ಗಸ್ತು ಹೆಚ್ಚಳ&lt;/strong&gt;: ವಿಶೇಷವಾಗಿ ರಾತ್ರಿ ವೇಳೆಯಲ್ಲಿ ರೈಲುಗಳಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಯ ಗಸ್ತು (Patrolling) ವ್ಯವಸ್ಥೆಯನ್ನು ತೀವ್ರಗೊಳಿಸಬೇಕು.&lt;/p&gt;&lt;p&gt;&lt;strong&gt;ಕಠಿಣ ಶಿಕ್ಷೆ ಮತ್ತು ವಸೂಲಾತಿ: &lt;/strong&gt;ಕಳವು ಮತ್ತು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಕಳುವಾದ ಒಡವೆ-ವಸ್ತುಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಬೇಕು.&lt;/p&gt;&lt;p&gt;ಸುರಕ್ಷಿತ ಪ್ರಯಾಣವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಆದ್ದರಿಂದ, ಇದುವರೆಗೆ ಕುಂಭಕರ್ಣ ನಿದ್ದೆಯಲ್ಲಿರುವ ರೈಲ್ವೆ ಆಡಳಿತ ಮಂಡಳಿಯು ತಕ್ಷಣವೇ ಎಚ್ಚೆತ್ತುಕೊಂಡು, ಪ್ರಯಾಣಿಕರ ಜೀವ ಮತ್ತು ಜೀವಾಳದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕೆಂದು ಕರಾವಳಿಯ ನಾಗರಿಕರು ಜಂಟಿಯಾಗಿ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/security-crisis-on-konkan-railway-robberies-in-matsyagandha-and-mangaluru-express-passengers-demand-rpf-action-gdp/articleshow-dei67wc"/>
        </item>
        <item>
            <title><![CDATA[ಕರಾವಳಿಯ ಕಂಬಳಕ್ಕೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: 23 ಕೂಟಗಳಿಗೆ ಬಂಪರ್‌ ಅನುದಾನ ಘೋಷಣೆ]]></title>
            <link>https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a</link>
            <guid isPermaLink="true">https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a</guid>
            <pubDate>Thu, 16 Jul 2026 16:32:15 +0530</pubDate>
            <description><![CDATA[ರಾಜ್ಯ ಸರ್ಕಾರವು ಕರಾವಳಿಯ 23 ಕಂಬಳ ಕೂಟಗಳಿಗೆ ತಲಾ 5 ಲಕ್ಷದಂತೆ ಒಟ್ಟು 1.15 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಈ ನಿರ್ಧಾರವನ್ನು ಕಂಬಳ ಸಮಿತಿ ಸ್ವಾಗತಿಸಿದ್ದು, ಇದೇ ವೇಳೆ ಮೈಸೂರು ಕಂಬಳ ಆಯೋಜನೆಗೆ ಸಂಬಂಧಿಸಿದ ವಿವಾದದ ಬಗ್ಗೆ ಸಮಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxn9by9k33bg6yjwx6kxp0pr,imgname-kambala-grant-1784199641395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.16):&lt;/strong&gt; ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆಯೋಜಕರಿಗೆ ಬಿಗ್ ಸಿಹಿ ಸುದ್ದಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಕಂಬಳದ ಸುತ್ತ ಹಲವು ವಿವಾದಗಳು ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಕಂಬಳ ಕೂಟಗಳ ಸುಗಮ ಆಯೋಜನೆಗಾಗಿ ಭಾರಿ ಮೊತ್ತದ ಅನುದಾನವನ್ನು ಪ್ರಕಟಿಸಿದೆ. 2025-26ನೇ ಸಾಲಿನ ಕಂಬಳ ಋತುವಿಗಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಒಟ್ಟು 1 ಕೋಟಿ 15 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಕಂಬಳ ಆಯೋಜಕರು ಹಾಗೂ ಅಭಿಮಾನಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿ ಕಂಬಳಕ್ಕೂ 5 ಲಕ್ಷ ರೂಪಾಯಿ ನೆರವು&lt;/strong&gt;&lt;/h2&gt;&lt;p&gt;ಈ ಬಾರಿ ಕರಾವಳಿ ಅವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧಿಕೃತವಾಗಿ ನಡೆಯುವ ಒಟ್ಟು 23 ಕಂಬಳ ಕೂಟಗಳನ್ನು ಈ ಯೋಜನೆಯಡಿ ಗುರುತಿಸಲಾಗಿದೆ. ಸರ್ಕಾರದ ಆದೇಶದನ್ವಯ, ಆಯ್ಕೆಯಾಗಿರುವ ಪ್ರತಿಯೊಂದು ಕಂಬಳ ಕೂಟದ ಆಯೋಜನೆಗೂ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಹರಿದುಬರಲಿದೆ. ಪ್ರಸ್ತುತ ದಿನಗಳಲ್ಲಿ ಕಂಬಳ ಆಯೋಜನೆ ಮಾಡುವುದು ಆಯೋಜಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಸರ್ಕಾರದ ಈ ಸಕಾಲಿಕ ನೆರವು ತುಳುನಾಡಿನ ಕೀರ್ತಿ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು ದೊಡ್ಡ ಬಲ ನೀಡಿದಂತಾಗಿದೆ.&lt;/p&gt;&lt;h2&gt;&lt;strong&gt;'ಸರ್ಕಾರ ನುಡಿದಂತೆ ನಡೆದಿದೆ' - ಡಾ. ದೇವಿಪ್ರಸಾದ್ ಶೆಟ್ಟಿ ಹರ್ಷ&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳ ಆಯೋಜಕರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು ಸಿಹಿ ಸುದ್ದಿ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಪ್ರವಾಸೋದ್ಯಮ ಹಾಗೂ ಕ್ರೀಡಾ ಇಲಾಖೆಯಿಂದ ಕಂಬಳಕ್ಕೆ ಅನುದಾನ ಸಿಕ್ಕಿತ್ತು. ಅದಕ್ಕೂ ಮುನ್ನ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಂಬಳಕ್ಕೆ 1 ಕೋಟಿ ರೂಪಾಯಿ ನೀಡಿದ್ದರು. ರಾಜಕೀಯ ಭೇದಭಾವವಿಲ್ಲದೆ ಎಲ್ಲಾ ಸರ್ಕಾರಗಳು ಕಂಬಳವನ್ನು ಪೋಷಿಸಿಕೊಂಡು ಬಂದಿವೆ. ಇದು ಕ್ರೀಡೆಗೆ ಸಿಕ್ಕ ಗೌರವ ಎಂದು ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ, ಮುಂದಿನ ರಾಜ್ಯ ಬಜೆಟ್&zwnj;ನಲ್ಲಿ ಕಂಬಳ ಕ್ರೀಡೆಗಾಗಿಯೇ ಪ್ರತ್ಯೇಕವಾಗಿ 5 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಸಾಂಪ್ರದಾಯಿಕ ಹಾಗೂ ಒಂಟಿ ಕರೆ ಕಂಬಳಗಳಿಗೂ ಮಾನ್ಯತೆ&lt;/strong&gt;&lt;/h2&gt;&lt;p&gt;ಸಾಂಪ್ರದಾಯಿಕ ಕಂಬಳಗಳ ಕುರಿತು ಮಾತನಾಡಿದ ಸಮಿತಿ ಅಧ್ಯಕ್ಷರು, ಜೋಡುಕರೆಯಲ್ಲಿ ಸದ್ಯ ಎಂಟು ಸಾಂಪ್ರದಾಯಿಕ ಕಂಬಳಗಳಿದ್ದು, ಅವುಗಳಿಗೂ ಈ ಅನುದಾನ ಲಭ್ಯವಾಗಲಿದೆ. ಇದರೊಂದಿಗೆ ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಸುದೀರ್ಘ ಕಾಲದಿಂದ ನಡೆಸಿಕೊಂಡು ಬರುತ್ತಿರುವ 'ಒಂಟಿ ಕರೆ' ಕಂಬಳಗಳ ಆಯೋಜಕರನ್ನೂ ಸಹ ರಾಜ್ಯ ಕಂಬಳ ಅಸೋಸಿಯೇಷನ್&zwnj;ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ಸಾಂಪ್ರದಾಯಿಕ ಒಂಟಿ ಕರೆ ಕಂಬಳಗಳಿಗೂ ಸರ್ಕಾರದಿಂದ ಆರ್ಥಿಕ ಅನುದಾನ ದೊರಕಿಸಿಕೊಡುವಂತೆ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದರು.&lt;/p&gt;&lt;h2&gt;&lt;strong&gt;ಮೈಸೂರು ಕಂಬಳ ವಿವಾದ: ಕರಾವಳಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ!&lt;/strong&gt;&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಮೈಸೂರು ಕಂಬಳ ಆಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ಡಾ. ದೇವಿಪ್ರಸಾದ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಂಬಳ ಎಂಬುದು ರಾಜಕೀಯ ಮತ್ತು ಧರ್ಮವನ್ನು ಮೀರಿದ ಒಂದು ಸಾಂಸ್ಕೃತಿಕ ಕ್ರೀಡೆ. ಇಲ್ಲಿ ಎಲ್ಲಾ ಪಕ್ಷದವರೂ ಒಟ್ಟಾಗಿ ಕಂಬಳ ನಡೆಸುತ್ತಾರೆ. ಮೈಸೂರು ಸಂಸದರು ಇದನ್ನು ವಿರೋಧಿಸುತ್ತಾರೆ ಎಂಬ ಒಂದೇ ಕಾರಣಕ್ಕೆ, ಅವರದ್ದೇ ಪಕ್ಷದ (ಬಿಜೆಪಿ) ಕರಾವಳಿಯ ಶಾಸಕರು ಮತ್ತು ಜನಪ್ರತಿನಿಧಿಗಳು ಮೈಸೂರು ಕಂಬಳವನ್ನು ವಿರೋಧಿಸುತ್ತಿರುವುದು ಸರಿಯಲ್ಲ. ನೀವು ಕಂಬಳಕ್ಕೆ ಗೌರವ ತಂದಿಲ್ಲ, ಬದಲಿಗೆ ಕಂಬಳವೇ ನಿಮಗೆ ಸಮಾಜದಲ್ಲಿ ಗೌರವ ಕೊಟ್ಟಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&quot;ಕಂಬಳ ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವೇ? ಮೈಸೂರಿನಲ್ಲಿ ಕಂಬಳ ಯಾಕೆ ನಡೆಯಬಾರದು? ಅಲ್ಲಿ ಕಂಬಳದ ಬಗ್ಗೆ ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಕೆಳವರ್ಗದವರ ಮೇಲಿನ ದಬ್ಬಾಳಿಕೆ ಎಂಬಂತೆ ಬಿಂಬಿಸಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ನಾವು ಹಿಂದುಳಿದ ವರ್ಗದ ಆರಾಧ್ಯ ದೈವಗಳಾದ ಕೋಟಿ-ಚೆನ್ನಯ್ಯ, ಕಾಂತಬಾರೆ-ಬೂದಬಾರೆ ಹಾಗೂ ಸೂರ್ಯ-ಚಂದ್ರರ ಹೆಸರಿನಲ್ಲಿ ಕಂಬಳ ಮಾಡುತ್ತೇವೆ. ಇದು ಇಡೀ ದೇಶಕ್ಕೇ ಮಾದರಿಯಾದ ವ್ಯವಸ್ಥೆ. ಕರಾವಳಿಯ ಜನಪ್ರತಿನಿಧಿಗಳು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಗಳಂತೆ ವರ್ತಿಸದೆ, ಕಂಬಳದ ವೈಭವವನ್ನು ರಾಜ್ಯಾದ್ಯಂತ ಪಸರಿಸಲು ಧೈರ್ಯದಿಂದ ಕೆಲಸ ಮಾಡಬೇಕು ಎಂದು ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳಿಗೆ ದೇವಿಪ್ರಸಾದ್ ಶೆಟ್ಟಿ ನೇರ ಮನವಿ ಹಾಗೂ ಒತ್ತಾಯ ಮಾಡಿದರು.&lt;/p&gt;&lt;p&gt;&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a"/>
        </item>
        <item>
            <title><![CDATA[School Holiday: ಭಾರೀ ಮಳೆ ಎಚ್ಚರಿಕೆ; ದಕ್ಷಿಣ ಕನ್ನಡ ಹಾಗೂ ಜೊಯಿಡಾದಲ್ಲಿ ಶಾಲಾ-ಕಾಲೇಜುಗಳಿಗೆ ದಿಢೀರ್ ರಜೆ ಘೋಷಣೆ!]]></title>
            <link>https://kannada.asianetnews.com/karnataka-districts/heavy-rain-school-college-holiday-declared-in-dakshina-kannada-and-joida-uttara-kannada-sat/articleshow-gic9ah9</link>
            <guid isPermaLink="true">https://kannada.asianetnews.com/karnataka-districts/heavy-rain-school-college-holiday-declared-in-dakshina-kannada-and-joida-uttara-kannada-sat/articleshow-gic9ah9</guid>
            <pubDate>Thu, 23 Jul 2026 08:45:50 +0530</pubDate>
            <description><![CDATA[&lt;p&gt;ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡದ ಜೊಯಿಡಾ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwwzr70s73d09r1aphzdjvb6,imgname-----------------------2026-07-07t055621.952-1783384251417.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ/ ದಕ್ಷಿಣ ಕನ್ನಡ (ಜು.23): ರಾ&lt;/strong&gt;ಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವರುಣನ ಅಬ್ಬರ (Heavy Rain) ಮುಂದುವರೆದಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆ (Dakshina Kannada District) ಹಾಗೂ ಉತ್ತರ ಕನ್ನಡದ ಜೊಯಿಡಾ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ (School and College Holiday) ಇಂದು (ಜು.23ರ ಗುರುವಾರ) ಘೋಷಿಸಿ ಆಯಾ ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಅಧಿಕೃತ ಆದೇಶ ಹೊರಡಿಸಿವೆ.&lt;/p&gt;&lt;h2&gt;&lt;strong&gt;ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಜೆ (Dakshina Kannada Holiday):&lt;/strong&gt;&lt;/h2&gt;&lt;p&gt;ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮಳೆಯ ಅಬ್ಬರ ಜೋರಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ (Meteorological Department) ಎಚ್ಚರಿಕೆ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ಜಿಲ್ಲೆಯಾದ್ಯಂತ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi), ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ (PUC Colleges) ರಜೆ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (Deputy Commissioner) ದರ್ಶನ್ ಎಚ್.ವಿ. (Darshan H.V.) ಅವರು ಅಧಿಕೃತ ಆದೇಶ (Official Order) ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಉತ್ತರ ಕನ್ನಡದ ಜೊಯಿಡಾದಲ್ಲಿ ಶಾಲೆಗಳಿಗೆ ರಜೆ (Joida Taluk Holiday):&lt;/strong&gt;&lt;/h2&gt;&lt;p&gt;ಇತ್ತ ಮಲೆನಾಡು ಹಾಗೂ ಕರಾವಳಿ ಬೆಸೆದಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಹೆಚ್ಚಾಗಿದೆ. ಕಾಳಿ ನದಿ ತೀರದ ಜೊಯಿಡಾ ತಾಲೂಕಿನಲ್ಲಿ (Joida Taluk) ನಿರಂತರ ಮಳೆಯಾಗುತ್ತಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ತಾಲೂಕಿನಾದ್ಯಂತ ಇರುವ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆ (Primary Schools) ಹಾಗೂ ಪ್ರೌಢಶಾಲೆಗಳಿಗೆ (High Schools) ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜೊಯಿಡಾ ತಹಶೀಲ್ದಾರ್ (Tahsildar) ಮಂಜುನಾಥ ಮುನ್ನೊಳಿ ಅವರು ಈ ಆದೇಶವನ್ನು ಪ್ರಕಟಿಸಿದ್ದಾರೆ.&lt;/p&gt;&lt;p&gt;&lt;strong&gt;ಜಿಲ್ಲಾಡಳಿತಗಳ ಕಟ್ಟುನಿಟ್ಟಿನ ಸೂಚನೆ (Safety Guidelines):&lt;/strong&gt;&lt;/p&gt;&lt;p&gt;ಮಳೆಯಿಂದಾಗಿ ನದಿ, ತೊರೆಗಳು ಉಕ್ಕಿ ಹರಿಯುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ನೀರಿನ ಹತ್ತಿರ, ಕೆರೆ-ಕುಂಟೆಗಳ ಬಳಿ ಆಟವಾಡಲು ಬಿಡದಂತೆ ಎಚ್ಚರಿಕೆ ವಹಿಸಬೇಕು. ಮಳೆಗಾಲದ (Monsoon Season) ಸಂದರ್ಭದಲ್ಲಿ ಅಪಾಯಕಾರಿ ಸ್ಥಳಗಳಿಗೆ, ಪ್ರವಾಸಿ ತಾಣಗಳಿಗೆ ತೆರಳದಂತೆ ಜಿಲ್ಲಾಡಳಿತಗಳು (District Administration) ಸಾರ್ವಜನಿಕರಲ್ಲಿ ಮನವಿ ಮಾಡಿವೆ. ಅಲ್ಲದೆ, ಮಳೆಯಿಂದಾಗಿ ನಷ್ಟವಾದ ಶೈಕ್ಷಣಿಕ ಅವಧಿಯನ್ನು ಮುಂದಿನ ರಜಾ ದಿನಗಳಲ್ಲಿ ಹೆಚ್ಚುವರಿ ತರಗತಿಗಳನ್ನು (Extra Classes) ನಡೆಸುವ ಮೂಲಕ ಸರಿದೂಗಿಸುವಂತೆ ಶಿಕ್ಷಣ ಇಲಾಖೆ (Education Department) ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/heavy-rain-school-college-holiday-declared-in-dakshina-kannada-and-joida-uttara-kannada-sat/articleshow-gic9ah9"/>
        </item>
        <item>
            <title><![CDATA[ದಾಂಡೇಲಿ ರೆಸಾರ್ಟ್‌ನಲ್ಲಿ ಜಿಪ್ ಲೈನ್ ತುಂಡಾಗಿ 40 ಅಡಿ ಎತ್ತರದಿಂದ ಬಿದ್ದ ಪ್ರವಾಸಿಗ; 15 ದಿನದ ಬಳಿಕ FIR ದಾಖಲು!]]></title>
            <link>https://kannada.asianetnews.com/gallery/karnataka-districts/dandeli-tourist-falls-from-40-feet-zip-line-fir-filed-against-sterling-resort-owner-sat-gw0z0g5</link>
            <guid isPermaLink="true">https://kannada.asianetnews.com/gallery/karnataka-districts/dandeli-tourist-falls-from-40-feet-zip-line-fir-filed-against-sterling-resort-owner-sat-gw0z0g5</guid>
            <pubDate>Tue, 21 Jul 2026 12:08:39 +0530</pubDate>
            <description><![CDATA[&lt;p&gt;ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್&zwnj;ನಲ್ಲಿ ಜಿಪ್&zwnj;ಲೈನ್ ಆಡುವಾಗ ಸುರಕ್ಷತಾ ಬೆಲ್ಟ್ ತುಂಡಾಗಿ ಪ್ರವಾಸಿಗರೊಬ್ಬರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ದಿನದ ಬಳಿಕ ರೆಸಾರ್ಟ್ ಸಿಬ್ಬಂದಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky1n90090jb3xk7j600xq6pz,imgname-dandeli-resost-zypline-tragedy-1784614780937.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್&zwnj;ನಲ್ಲಿ ಜಿಪ್&zwnj;ಲೈನ್ ಆಡುವಾಗ ಸುರಕ್ಷತಾ ಬೆಲ್ಟ್ ತುಂಡಾಗಿ ಪ್ರವಾಸಿಗರೊಬ್ಬರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ದಿನದ ಬಳಿಕ ರೆಸಾರ್ಟ್ ಸಿಬ್ಬಂದಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಜು.21): ರಾ&lt;/strong&gt;ಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದಾಂಡೇಲಿಯಲ್ಲಿ ಜು.3ರಂದು ಭೀಕರ ಅವಘಡವೊಂದು ಸಂಭವಿಸಿದೆ. ಇಲ್ಲಿನ ಸ್ಟರ್ಲಿಂಗ್ ರಿವರ್ ರೆಸಾರ್ಟ್&zwnj;ನಲ್ಲಿ (Sterling River Resort) ಜಿಪ್ ಲೈನ್ (Zip-line) ಆಟವಾಡುತ್ತಿದ್ದಾಗ ಸುರಕ್ಷತಾ ಬೆಲ್ಟ್ (Safety Belt) ತುಂಡಾಗಿ ಪ್ರವಾಸಿಗರೊಬ್ಬರು ಸುಮಾರು 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು (Viral Video), ನೋಡಿದವರ ಎದೆ ಝಲ್ಲೆನ್ನುವಂತಿದೆ.&lt;/p&gt;&lt;img&gt;&lt;p&gt;ವಿಜಯಪುರ (Vijayapura) ನಗರದ ನಿವಾಸಿ ಕುಬೇರ ಸುರಪುರ (Kuber Surpur, 40) ಅವರು ಕಳೆದ ಜುಲೈ 3 ರಂದು ತಮ್ಮ ಸಹೋದರ ಪ್ರಶಾಂತ್ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್&zwnj;ಗೆ ಪ್ರವಾಸಕ್ಕೆ ಬಂದಿದ್ದರು. ರೆಸಾರ್ಟ್&zwnj;ನಲ್ಲಿ ಸಾಹಸ ಕ್ರೀಡೆಯಾದ ಜಿಪ್ ಲೈನ್ ಆಡುತ್ತಿದ್ದಾಗ, ಹಠಾತ್ತಾಗಿ ಜಿಪ್ ಲೈನ್ ಲಾಕ್ (Lock Cut) ಕಟ್ ಆಗಿದೆ. ಪರಿಣಾಮ ಕುಬೇರ ಅವರು 30 ರಿಂದ 40 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಕುಬೇರ ಅವರು ಜಿಪ್ ಲೈನ್&zwnj;ನಲ್ಲಿ ಬರುತ್ತಿದ್ದ ದೃಶ್ಯವನ್ನು ಅವರ ಸಹೋದರ ಪ್ರಶಾಂತ್ ಮೊಬೈಲ್&zwnj;ನಲ್ಲಿ ವಿಡಿಯೋ ಮಾಡುತ್ತಿದ್ದರು. ಖುಷಿಯಿಂದ ಕಿರುಚುತ್ತಾ ಬರುತ್ತಿದ್ದ ಕುಬೇರ, ಕ್ಷಣಾರ್ಧದಲ್ಲಿ ಬೆಲ್ಟ್ ತುಂಡಾಗಿ ಕೆಳಕ್ಕೆ ಬೀಳುವ ದೃಶ್ಯ ಕಂಡು ಪ್ರಶಾಂತ್ ಬೆಚ್ಚಿಬಿದ್ದಿದ್ದಾರೆ. ಈ ಅಪಘಾತದಲ್ಲಿ ಕುಬೇರ ಅವರ ಎರಡೂ ಕೈ ಮತ್ತು ಎರಡೂ ಕಾಲುಗಳ ಎಲುಬು ಮುರಿದಿದ್ದು (Multiple Fractures), ನರಗಳಿಗೂ ಗಂಭೀರ ಹಾನಿಯಾಗಿದೆ.&lt;/p&gt;&lt;p&gt;ವಿಡಿಯೋ ನೋಡಲು &lt;strong&gt;ಈ ಲಿಂಕ್ ಕ್ಲಿಕ್ ಮಾಡಿ&lt;/strong&gt;&lt;/p&gt;&lt;img&gt;&lt;p&gt;ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯವೇ (Staff Negligence) ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದ ರೆಸಾರ್ಟ್ ಮ್ಯಾನೇಜ್&zwnj;ಮೆಂಟ್ (Resort Management), ಈಗ ಸ್ಪಂದಿಸುತ್ತಿಲ್ಲ ಎಂದು ಗಾಯಾಳುವಿನ ಕುಟುಂಬದವರು ದೂರಿದ್ದಾರೆ. ಸದ್ಯ ಕುಬೇರ ಅವರು ಮೀರಜ್ ಆಸ್ಪತ್ರೆಯಲ್ಲಿ (Miraj Hospital) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹಾಸಿಗೆ ಹಿಡಿದಿದ್ದಾರೆ.&lt;/p&gt;&lt;img&gt;&lt;p&gt;ಈ ಘಟನೆಗೆ ಸಂಬಂಧಿಸಿದಂತೆ ಜುಲೈ 21 ರಂದು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Dandeli Rural Police Station) ಪ್ರಕರಣ ದಾಖಲಾಗಿದೆ. ರೆಸಾರ್ಟ್ ಮಾಲೀಕ ಉಸ್ಮಾನ್ ವಹಾಬ್, ಸಿಬ್ಬಂದಿಗಳಾದ ರಾಘವೇಂದ್ರ ಶೆಟ್ಟಿ ಮತ್ತು ಪವನ್ ಎಂಬುವವರ ಮೇಲೆ ಬಿಎನ್ಎಸ್ (BNS 2023) ಕಾಯ್ದೆಯಡಿ ವಿವಿಧ ಕಲಂಗಳಲ್ಲಿ ಕೇಸ್ ದಾಖಲಿಸಲಾಗಿದೆ. ಸಾಹಸ ಕ್ರೀಡೆಗಳ ಹೆಸರಿನಲ್ಲಿ ಪ್ರವಾಸಿಗರ ಪ್ರಾಣದ ಜೊತೆ ಆಟವಾಡುತ್ತಿರುವ ರೆಸಾರ್ಟ್&zwnj;ಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/dandeli-tourist-falls-from-40-feet-zip-line-fir-filed-against-sterling-resort-owner-sat-gw0z0g5"/>
        </item>
        <item>
            <title><![CDATA[Gruhalakshmi scheme Update: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್‌ನ್ಯೂಸ್! ಮುಂದಿನ ಕಂತು ಯಾವಾಗ? ಹಣ ಜಮೆ ಬಗ್ಗೆ ಬಂತು ಹೊಸ ಅಪ್‌ಡೇಟ್]]></title>
            <link>https://kannada.asianetnews.com/karnataka-districts/good-news-for-gruha-lakshmi-beneficiaries-in-uttara-kannada-rav/articleshow-hgk98ky</link>
            <guid isPermaLink="true">https://kannada.asianetnews.com/karnataka-districts/good-news-for-gruha-lakshmi-beneficiaries-in-uttara-kannada-rav/articleshow-hgk98ky</guid>
            <pubDate>Sat, 11 Jul 2026 08:23:00 +0530</pubDate>
            <description><![CDATA[&lt;p&gt;ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಅರ್ಹ 3,12,818 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಎರಡು ಅಥವಾ ಮೂರು ದಿನಗಳಲ್ಲಿ ಒಟ್ಟು ₹62,56,36,000 ಗಳ ಮೊತ್ತವನ್ನು ಜಮೆ ಮಾಡಲಾಗುವುದು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಿ. ನಾಯ್ಕ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmy83hhvn93ye2ghwb54zs7,imgname-gruhalakshmi-1779893014065.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ (ಜು.11): &lt;/strong&gt;ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಅರ್ಹ 3,12,818 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಎರಡು ಅಥವಾ ಮೂರು ದಿನಗಳಲ್ಲಿ ಒಟ್ಟು ₹62,56,36,000 ಗಳ ಮೊತ್ತವನ್ನು ಜಮೆ ಮಾಡಲಾಗುವುದು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಿ. ನಾಯ್ಕ ಹೇಳಿದರು.&lt;/p&gt;&lt;h2&gt;ಗೃಹಲಕ್ಷ್ಮಿ ಫಲಾನುಭಾವಿಗಳು ಆತಂಕ ಬೇಡ&lt;/h2&gt;&lt;p&gt;ಕಾರವಾರದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಅಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಒಂದೇ ಫಲಾನುಭವಿ ಹಲವು ಖಾತೆಗಳನ್ನು ಹೊಂದಿರುವ ಸಾಧ್ಯತೆ ಇರುವ ಹಿನ್ನೆಲೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ 26,986 ಫಲಾನುಭವಿಗಳ ಖಾತೆಗಳನ್ನು ಮರುಪರಿಶೀಲನೆ ನಡೆಸಲಾಗಿದೆ. ಈ ತಪಾಸಣೆಯಲ್ಲಿ ಜಿಲ್ಲೆಯ ಯಾವುದೇ ಫಲಾನುಭವಿಯ ಖಾತೆಗೆ ಒಂದೇ ತಿಂಗಳಲ್ಲಿ ಎರಡು ಬಾರಿ ಹಣ ಜಮೆಯಾಗಿರುವುದು ಕಂಡುಬಂದಿಲ್ಲ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;h3&gt;ಗೃಹಜ್ಯೋತಿ ಯೋಜನೆ ನಿಲ್ಲುತ್ತಾ?&lt;/h3&gt;&lt;p&gt;ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆಗೆ ಆಗಮಿಸುವ ಅಧಿಕಾರಿಗಳಿಗೆ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು. ಗೃಹಜ್ಯೋತಿ ಮರು ಪರಿಶೀಲನೆಗೆ ಬರುವ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ನಿರಾಕರಿಸುವ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಮುಂದುವರಿಯುವುದು ಕಷ್ಟವಾಗಬಹುದು. ಜಿಲ್ಲೆಯಲ್ಲಿ ಮಳೆಯ ಹಿನ್ನೆಲೆ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನಾ ಕಾರ್ಯ ಕೆಲವೆಡೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಕಾರ್ಯವನ್ನು ಚುರುಕುಗೊಳಿಸಿ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.&lt;/p&gt;&lt;p&gt;ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಮತ್ತಿತರರು ಇದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/good-news-for-gruha-lakshmi-beneficiaries-in-uttara-kannada-rav/articleshow-hgk98ky"/>
        </item>
        <item>
            <title><![CDATA[School holiday: ಕರ್ನಾಟಕ ಮಳೆ ಆರ್ಭಟ: ಉತ್ತರ ಕನ್ನಡ, ಬೆಳಗಾವಿ ಸೇರಿ ಈ ಜಿಲ್ಲೆಗಳ ಶಾಲೆಗಳಿಗೆ ನಾಳೆ ರಜೆ ಘೋಷಣೆ]]></title>
            <link>https://kannada.asianetnews.com/karnataka-districts/karnataka-heavy-rain-school-holiday-list-uttara-kannada-belagavi-chikkamagaluru/articleshow-itvggim</link>
            <guid isPermaLink="true">https://kannada.asianetnews.com/karnataka-districts/karnataka-heavy-rain-school-holiday-list-uttara-kannada-belagavi-chikkamagaluru/articleshow-itvggim</guid>
            <pubDate>Mon, 06 Jul 2026 21:15:30 +0530</pubDate>
            <description><![CDATA[ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ, ಉತ್ತರ ಕನ್ನಡ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ (ಜುಲೈ 07) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01je0hg3jv4vysegq8xa7vs33w,imgname-school-holiday.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮಿತಿಮೀರಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವರುಣನ ರೌದ್ರಾವತಾರ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ನಾಳೆ (ಜುಲೈ 07) ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 'ರೆಡ್ ಅಲರ್ಟ್' ಘೋಷಣೆಯಾಗಿದ್ದರೆ, ಬೆಳಗಾವಿ ಮತ್ತು ಚಿಕ್ಕಮಗಳೂರಿನಲ್ಲೂ ಮಳೆ ಅಬ್ಬರಿಸುತ್ತಿದೆ.&lt;/p&gt;&lt;h2&gt;&lt;strong&gt;1. ಉತ್ತರ ಕನ್ನಡ: ಐದು ತಾಲೂಕುಗಳಲ್ಲಿ ರಜೆ, ರೆಡ್ ಅಲರ್ಟ್ ಘೋಷಣೆ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿದೆ. ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ 5 ತಾಲೂಕುಗಳಾದ ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ ಮತ್ತು ಯಲ್ಲಾಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;2. ಬೆಳಗಾವಿ: ಶಾಲೆಯೊಂದಿಗೆ ಪಿಯು ಕಾಲೇಜುಗಳಿಗೂ ರಜೆ&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರಮುಖ ಆದೇಶ ನೀಡಿದ್ದಾರೆ. ಬೆಳಗಾವಿ ತಾಲೂಕು ಮತ್ತು ಖಾನಾಪುರ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;3. ಚಿಕ್ಕಮಗಳೂರು: ಕಳಸ ತಾಲೂಕಿನಲ್ಲಿ ರಜೆ&lt;/strong&gt;&lt;/h2&gt;&lt;p&gt;ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಳಸ ತಾಲೂಕಿನ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗಳಿಗೆ ನಾಳೆ ರಜೆ ಘೋಷಿಸಿ ತಹಸಿಲ್ದಾರ್ ಆದೇಶಿಸಿದ್ದಾರೆ. ಘಟ್ಟ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಇರುವುದರಿಂದ ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ಸೂಚನೆ:&lt;/strong&gt;&lt;/h3&gt;&lt;p&gt;ಮಳೆಯ ತೀವ್ರತೆ ಹೆಚ್ಚಿರುವ ಭಾಗಗಳಲ್ಲಿ ಜನರು ಅನಗತ್ಯವಾಗಿ ನದಿ, ಹಳ್ಳ-ಕೊಳ್ಳಗಳು ಮತ್ತು ವಿದ್ಯುತ್ ಕಂಬಗಳ ಹತ್ತಿರ ಹೋಗದಂತೆ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಸೂಚನೆ ನೀಡಿವೆ. ತುರ್ತು ಪರಿಸ್ಥಿತಿ ಎದುರಾದಲ್ಲಿ ಜಿಲ್ಲಾ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-heavy-rain-school-holiday-list-uttara-kannada-belagavi-chikkamagaluru/articleshow-itvggim"/>
        </item>
        <item>
            <title><![CDATA[ಮುಂಡಗೋಡ-ಸವದತ್ತಿ: ಭಕ್ತರ ಬಹುದಿನದ ಕನಸು ನನಸು, ನೂತನ ಬಸ್‌ಗೆ ಶಾಸಕ ಹೆಬ್ಬಾರ್ ಚಾಲನೆ]]></title>
            <link>https://kannada.asianetnews.com/gallery/karnataka-districts/mla-shivarama-hebbar-flagged-off-the-new-mundagoda-to-savadatti-bus-service-mrq-m8gpa09</link>
            <guid isPermaLink="true">https://kannada.asianetnews.com/gallery/karnataka-districts/mla-shivarama-hebbar-flagged-off-the-new-mundagoda-to-savadatti-bus-service-mrq-m8gpa09</guid>
            <pubDate>Wed, 15 Jul 2026 07:57:29 +0530</pubDate>
            <description><![CDATA[ಮಂಗಳವಾರ ಮುಂಡಗೋಡ ಬಸ್ ನಿಲ್ದಾಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಮುಂಡಗೋಡ-ಸವದತ್ತಿ ನೂತನ ಬಸ್ ಸೇವೆಗೆ ಹಸಿರು ನಿಶಾನೆ ತೋರಿದರು. ಈ ಹೊಸ ಬಸ್ ಸೇವೆಯು ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಉತ್ತರ ಕನ್ನಡ ಜಿಲ್ಲೆಯ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxhs7r72pdqsegck6p5s43q6,imgname-mundagodu-savadatti--2--1784082063586.jpg" type="image/jpeg" height="390" width="690"/>
            <content:encoded><![CDATA[ಮಂಗಳವಾರ ಮುಂಡಗೋಡ ಬಸ್ ನಿಲ್ದಾಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಮುಂಡಗೋಡ-ಸವದತ್ತಿ ನೂತನ ಬಸ್ ಸೇವೆಗೆ ಹಸಿರು ನಿಶಾನೆ ತೋರಿದರು. ಈ ಹೊಸ ಬಸ್ ಸೇವೆಯು ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಉತ್ತರ ಕನ್ನಡ ಜಿಲ್ಲೆಯ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ.&lt;img&gt;&lt;p&gt;ಇಲ್ಲಿನ ಬಸ್ ನಿಲ್ದಾಣದಲ್ಲಿ ನೂತನವಾಗಿ ಮುಂಡಗೋಡ-ಸವದತ್ತಿ ನೂತನ ಬಸ್ ಸೇವೆಗೆ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ ಹಸಿರು ನಿಶಾನೆ ತೋರಿದರು. ಈ ಭಾಗದಿಂದ ಸವದತ್ತಿಗೆ ತೆರಳುವ ಭಕ್ತರಿಗೆ ಈ ಬಸ್&zwnj;ಗೆ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಈ ಸಂದರ್ಭ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಭಕ್ತರು ಹಾಗೂ ಸಾರ್ವಜನಿಕರಿಗೆ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಸುಲಭವಾಗಿ ಸಂಚಾರ ಮಾಡಲು ಈ ನೂತನ ಬಸ್ ಸೇವೆ ಅನುಕೂಲಕರವಾಗಲಿದೆ. ಪುಣ್ಯ ಕ್ಷೇತ್ರ ಸೇರಿದಂತೆ ಅಗತ್ಯವಿರುವ ಕಡೆಗೆ ಹಂತ ಹಂತವಾಗಿ ಬಸ್ ಸೇವೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬಸ್ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಸಾರ್ವಜನಿಕರು ಈ ಬಸ್ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.&lt;/p&gt;&lt;img&gt;&lt;p&gt;ಧಾರ್ಮಿಕ ಕ್ಷೇತ್ರವಾದ ಸೌವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಭಕ್ತರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಈ ಹೊಸ ಬಸ್ ಸೇವೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂಬ ವಿಶ್ವಾಸವಿದೆ. ಸಾರ್ವಜನಿಕರು ಈ ನೂತನ ಬಸ್ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡುತ್ತೇನೆ.&lt;/p&gt;&lt;img&gt;&lt;p&gt;ಈ ಸಂದರ್ಭ ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ, ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವೈ.ಪಿ. ಬುಜಂಗಿ, ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕ ಪರಶುರಾಮ ತಹಸೀಲ್ದಾರ, ಕಾಂಗ್ರೆಸ್ ಹಿಂದುಳಿದ ವರ್ಗ ಸಮಿತಿಯ ತಾಲೂಕಾಧ್ಯಕ್ಷ ದೇವು ಪಾಟೀಲ್, ಪ್ರಚಾರ ಸಮಿತಿಯ ಅಧ್ಯಕ್ಷ ಕೆಂಜೋಡಿ ಗಲಬಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್&zwnj;ಗೌಸ್ ಮಕಾನದಾರ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಧರ್ಮರಾಜ ನಾಡಿಗೇರ, ಪ್ರಮುಖರಾದ ರಾಜು ಗುಬ್ಬಕ್ಕನವರ, ನಿತಿನ್ ರಾಯ್ಕರ, ಗೋಪಾಲ ಪಾಟೀಲ್, ರಜಾ ಫಠಾಣ, ರಫೀಕ್ ಇನಾಮದಾರ್ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಂಡಗೋಡ ಘಟಕದ ವ್ಯವಸ್ಥಾಪಕ ಎಸ್.ಎಂ. ಕುರ್ತಕೋಟಿ ಮುಂತಾದವರಿದ್ದರು&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/mla-shivarama-hebbar-flagged-off-the-new-mundagoda-to-savadatti-bus-service-mrq-m8gpa09"/>
        </item>
        <item>
            <title><![CDATA[ಜೀವನದ ಕೊನೆಯ ಸೆಲ್ಫಿ: ಅರಬೈಲ್ ಘಾಟ್‌ನಲ್ಲಿ ಅಂತ್ಯವಾದ ಸ್ನೇಹಯಾತ್ರೆ, ಮೃತರ ಫೋಟೋ ರಿಲೀಸ್ ಮಾಡಿದ ಜಿಲ್ಲಾಡಳಿತ!]]></title>
            <link>https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih</link>
            <guid isPermaLink="true">https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih</guid>
            <pubDate>Thu, 09 Jul 2026 19:38:48 +0530</pubDate>
            <description><![CDATA[&lt;p&gt;ಉತ್ತರ ಕನ್ನಡದ ಅರಬೈಲ್ ಘಾಟ್&zwnj;ನಲ್ಲಿ ಲಾರಿ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ಏಳು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಡೆಲಿವರಿ ಬಾಯ್ಸ್ ತಂಡದ ವಾಹನವು ಅಪಘಾತವಾಗಿದ್ದು, ಮೃತರ ಫೋಟೋಗಳನ್ನು ಜಿಲ್ಲಾಡಳಿತ ಹಂಚಿಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3jk5zf2ffxtv0t141ek2zf,imgname-uttara-kannada-arabail-ghat-accident--2--1783605336047.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕನ್ನಡದ ಅರಬೈಲ್ ಘಾಟ್&zwnj;ನಲ್ಲಿ ಲಾರಿ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಧಾರವಾಡ ಮೂಲದ ಏಳು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕರ್ಣ ಪ್ರವಾಸಕ್ಕೆ ಹೊರಟಿದ್ದ ಡೆಲಿವರಿ ಬಾಯ್ಸ್ ತಂಡದ ವಾಹನವು ಅಪಘಾತವಾಗಿದ್ದು, ಮೃತರ ಫೋಟೋಗಳನ್ನು ಜಿಲ್ಲಾಡಳಿತ ಹಂಚಿಕೊಂಡಿದೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಜು.09): &lt;/strong&gt;ಬೆಳ್ಳಂಬೆಳಗ್ಗೆ ಅರಬೈಲ್ ಘಟ್ಟ ಪ್ರದೇಶದಲ್ಲಿ ಜವರಾಯನ ಅಟ್ಟಹಾಸ ನಡೆದಿದೆ. ಪ್ರವಾಸಕ್ಕೆಂದು ಖುಷಿಯಿಂದ ಹೊರಟಿದ್ದ ಸ್ನೇಹಿತರ ತಂಡವೊಂದು ಮನೆಗೆ ಶವವಾಗಿ ಮರಳುವಂತಾದ ಎದೆನಡುಗಿಸುವ ಘಟನೆ ಸಂಭವಿಸಿದೆ. ಲಾರಿ ಮತ್ತು ತೂಫಾನ್ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಧಾರವಾಡ ಮೂಲದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಫೋಟೋಗಳನ್ನು ಜಿಲ್ಲಾಡಳಿತವು ಬಿಡುಗಡೆ ಮಾಡಿದೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಗೋಕರ್ಣ, ಮುರುಡೇಶ್ವರ ಮತ್ತು ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಒಟ್ಟು ಒಂಬತ್ತು ಜನ ಸ್ನೇಹಿತರು ಕ್ರೂಸರ್ ವಾಹನದಲ್ಲಿ ಹೊರಟಿದ್ದರು. ಇಂದು ಮುಂಜಾನೆ ಸುಮಾರು ಧಾರವಾಡದಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದಾಗ, ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್&zwnj;ನಲ್ಲಿ ಮಂಗಳೂರಿನಿಂದ ಕುಡತನಿ ಕಡೆಗೆ ಬರುತ್ತಿದ್ದ ಲಾರಿಗೆ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, 7 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ದೇವಸ್ಥಾನದಲ್ಲಿ ತೆಗೆಸಿಕೊಂಡಿದ್ದ ಸೆಲ್ಫಿಯೇ ಕೊನೆಯಾಯ್ತು!&lt;/strong&gt;&lt;/p&gt;&lt;p&gt;ಮೃತಪಟ್ಟವರೆಲ್ಲರೂ ಧಾರವಾಡದ ವಿವಿಧ ಕಂಪನಿಗಳಲ್ಲಿ 'ಡೆಲಿವರಿ ಬಾಯ್ಸ್' ಆಗಿ ಕೆಲಸ ಮಾಡುತ್ತಿದ್ದ ಸ್ನೇಹಿತರು. ಕೆಲಸದ ಒತ್ತಡದಿಂದ ಸ್ವಲ್ಪ ವಿರಾಮ ಪಡೆಯಲು ಗೋಕರ್ಣ, ಧರ್ಮಸ್ಥಳ ಪ್ರವಾಸಕ್ಕೆ ಯೋಜಿಸಿದ್ದರು. ಪ್ರವಾಸಕ್ಕೆ ಹೊರಡುವ ಮುನ್ನ ಧಾರವಾಡದ ಕೆಸಿಡಿ ಸರ್ಕಲ್ ಬಳಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ದರ್ಶನ ಪಡೆದ ಬಳಿಕ ಎಲ್ಲರೂ ಸೇರಿ ಒಂದು ಗ್ರೂಪ್ ಸೆಲ್ಫಿ ತೆಗೆದುಕೊಂಡಿದ್ದರು. ದುರದೃಷ್ಟವಶಾತ್, ಆ ಫೋಟೋ ಅವರ ಜೀವನದ ಕೊನೆಯ ಸೆಲ್ಫಿಯಾಗಿದೆ. ದೇವರ ಆಶೀರ್ವಾದ ಪಡೆದು ಹೊರಟವರು ಅರ್ಧ ಹಾದಿಯಲ್ಲೇ ಸಾವಿನ ದವಡೆಗೆ ಸಿಲುಕಿರುವುದು ಸಂಕಟ ಮೂಡಿಸಿದೆ.&lt;/p&gt;&lt;img&gt;&lt;p&gt;&lt;strong&gt;ಮೃತರ ವಿವರ:&lt;/strong&gt;&lt;/p&gt;&lt;ul&gt; &lt;li&gt;ಸಂಜಯ್ ಅಂಗಡಿ (33) - ಚಾಲಕ&lt;/li&gt; &lt;li&gt;ಅಭಿಷೇಕ ಈಶ್ವರ (28)&lt;/li&gt; &lt;li&gt;ಅಭಿಷೇಕ ಮಡಬಾವಿ (26)&lt;/li&gt; &lt;li&gt;ಬಸವರಾಜ (48)&lt;/li&gt; &lt;li&gt;ಅಕ್ಷಯ್ (26)&lt;/li&gt; &lt;li&gt;ಮಂಜುನಾಥ ಚುಲಕಿ (32)&lt;/li&gt; &lt;li&gt;ಸಚಿನ್ (28)&lt;/li&gt;&lt;/ul&gt;&lt;p&gt;ಗಾಯಾಳುಗಳಾದ ಶಿವರಾಜ್ ಮಡಿವಾಳ್ ಮತ್ತು ಚೆನ್ನಬಸಯ್ಯ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬದುಕುಳಿದ ಶಿವರಾಜ್ ಹೇಳಿಕೆ:&lt;/strong&gt;&lt;/p&gt;&lt;p&gt;ಅಪಘಾತದಲ್ಲಿ ಬದುಕುಳಿದ ಶಿವರಾಜ್ ಮಾತನಾಡಿ, 'ನಾವು ರಾತ್ರಿ 11 ಗಂಟೆಗೆ ಧಾರವಾಡದಿಂದ ಹೊರಟಿದ್ದೆವು. ನಾವೆಲ್ಲರೂ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದೆವು. ಘಟನೆಯ ಸಮಯದಲ್ಲಿ ನಾನು ಮಲಗಿದ್ದೆ, ಒಮ್ಮೆಲೇ ಜೋರಾಗಿ ಶಬ್ದವಾಯಿತು. ಕಣ್ಣು ಬಿಟ್ಟು ನೋಡಿದಾಗ ಅಪಘಾತವಾಗಿತ್ತು. ನಾನು ಮತ್ತು ಚನ್ನಬಸು ಮಾತ್ರ ಬದುಕಿದ್ದೇವೆ, ಉಳಿದವರೆಲ್ಲಾ ನಮ್ಮ ಕಣ್ಣ ಮುಂದೆಯೇ ಪ್ರಾಣ ಬಿಟ್ಟರು' ಎಂದು ಕಣ್ಣೀರಿಟ್ಟಿದ್ದಾರೆ.&amp;nbsp;&lt;/p&gt;&lt;p&gt;ಇನ್ನು ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನು ವಿಚಾರಿಸಿದ್ದಾರೆ. ಜೊತೆಗೆ, ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಲಾರಿ ಚಾಲಕನ ಪ್ರತಿಕ್ರಿಯೆ:&lt;/strong&gt;&lt;/p&gt;&lt;p&gt;ಲಾರಿ ಚಾಲಕ ಸಮ್ಸೀರ್ ಪ್ರಕಾರ, ಅರಬೈಲ್ ಘಾಟ್ ಹತ್ತುವಾಗ ಎದುರುಗಡೆಯಿಂದ ಬಂದ ಕ್ರೂಸರ್ ವಾಹನ ಅತ್ಯಂತ ವೇಗವಾಗಿತ್ತು. ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದರೂ ಸಹ ವೇಗವಾಗಿ ಬಂದ ಕ್ರೂಸರ್ ನೇರವಾಗಿ ಲಾರಿಗೆ ಗುದ್ದಿದೆ ಎಂದು ತಿಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಕೆಲವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರು.&lt;/p&gt;&lt;img&gt;&lt;p&gt;&lt;strong&gt;ಸ್ಥಳಕ್ಕೆ ಅಧಿಕಾರಿಗಳ ಭೇಟಿ:&lt;/strong&gt;&lt;/p&gt;&lt;p&gt;ಘಟನೆ ನಡೆದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಎಸ್ಪಿ ದೀಪನ್ ಮತ್ತು ಸಿಇಒ ದಿಲೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಶಿವರಾಮ್ ಹೆಬ್ಬಾರ್ ಅವರು ಯಲ್ಲಾಪುರ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಶೀಘ್ರವಾಗಿ ಮುಗಿಸಿ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/yallapur-arbail-ghat-accident-cruiser-lorry-collision-7-food-delivery-boys-dead-dharwad-nt2kgih"/>
        </item>
        <item>
            <title><![CDATA[ಧಾರವಾಡ ಡೆಲಿವರಿ ಬಾಯ್ ಸ್ನೇಹಿತರು ಯಲ್ಲಾಪುರ ಭೀಕರ ಅಪಘಾತದಲ್ಲಿ ಮೃತ್ಯು, ಭೀಕರತೆ ಬಿಚ್ಚಿಟ್ಟ ಫೋಟೋಗಳು!]]></title>
            <link>https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2</link>
            <guid isPermaLink="true">https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2</guid>
            <pubDate>Thu, 09 Jul 2026 08:53:56 +0530</pubDate>
            <description><![CDATA[ಧಾರವಾಡದಿಂದ ಧಾರ್ಮಿಕ ಪ್ರವಾಸಕ್ಕೆ ಹೊರಟಿದ್ದ ಏಳು ಸ್ನೇಹಿತರು ಯಲ್ಲಾಪುರದ ಅರಬೈಲ್ ಘಾಟ್&zwnj;ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2dey9dbwmn0d47fv2y89mx,imgname-uttar-kannada-road-accident-1783566399789.jpg" type="image/jpeg" height="390" width="690"/>
            <content:encoded><![CDATA[ಧಾರವಾಡದಿಂದ ಧಾರ್ಮಿಕ ಪ್ರವಾಸಕ್ಕೆ ಹೊರಟಿದ್ದ ಏಳು ಸ್ನೇಹಿತರು ಯಲ್ಲಾಪುರದ ಅರಬೈಲ್ ಘಾಟ್&zwnj;ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.&lt;img&gt;&lt;p&gt;&lt;strong&gt;ಕಾರವಾರ/ಯಲ್ಲಾಪುರ&lt;/strong&gt;: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಪ್ರದೇಶದಲ್ಲಿ ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರಿದ್ದ ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಗೋಕರ್ಣ, ಮುರುಡೇಶ್ವರ ಹಾಗೂ ಧರ್ಮಸ್ಥಳದ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕಾಗಿ ಹೊರಟಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಮೃತಪಟ್ಟವರೆಲ್ಲರೂ ಧಾರವಾಡದಲ್ಲಿ ಡೆಲಿವರಿ ಬಾಯ್ಸ್ ಕೆಲಸ ಮಾಡುತ್ತಿದ್ದ ಸ್ನೇಹಿತರಾಗಿದ್ದಾರೆ. ಪ್ರತಿನಿತ್ಯದ ಕೆಲಸದ ಒತ್ತಡದಿಂದ ಕೊಂಚ ಬಿಡುವು ಮಾಡಿಕೊಂಡು, ದೇವಸ್ಥಾನಗಳ ದರ್ಶನ ಹಾಗೂ ಪ್ರವಾಸದ ಖುಷಿಯಲ್ಲಿದ್ದ ಯುವಕರಿಗೆ ವಿಧಿಯೇ ಸಂಚು ರೂಪಿಸಿತ್ತು. ಒಟ್ಟು 9 ಜನರಿದ್ದ ಈ ಸ್ನೇಹಿತರ ತಂಡವು ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಕರಾವಳಿಯತ್ತ ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ, ಇವರು ಚಲಿಸುತ್ತಿದ್ದ ಕ್ರೂಸರ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.&lt;/p&gt;&lt;img&gt;&lt;p&gt;ಪ್ರವಾಸ ಹೊರಡುವ ಮುನ್ನ ಈ ಸ್ನೇಹಿತರು ಧಾರವಾಡದ ಪ್ರಸಿದ್ಧ ಕೆ.ಸಿ.ಡಿ (KCD) ಸರ್ಕಲ್ ಬಳಿ ಇರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದರು. ಸುಖಕರ ಪ್ರಯಾಣಕ್ಕಾಗಿ ಗಣಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ದೇವಸ್ಥಾನದ ಮುಂಭಾಗದಲ್ಲೇ ಎಲ್ಲರೂ ಒಟ್ಟಾಗಿ ಅತ್ಯಂತ ಸಡಗರದಿಂದ ಸೆಲ್ಫಿ ಫೋಟೋವನ್ನೂ ತೆಗೆದುಕೊಂಡಿದ್ದರು. ಆದರೆ, ಆ ದೇವರ ದರ್ಶನ ಹಾಗೂ ಸೆಲ್ಫಿ ಫೋಟೋವೇ ಆ ಸ್ನೇಹಿತರ ಪಾಲಿಗೆ ಕೊನೆಯಾಗುವುದೆಂದು ಯಾರೂ ಊಹಿಸಿರಲಿಲ್ಲ. ದೇವರಲ್ಲಿ ಮಾಡಿದ ಪ್ರಾರ್ಥನೆ ಫಲಿಸಲಿಲ್ಲ. ಕೆಲವೇ ಗಂಟೆಗಳಲ್ಲಿ ಜವರಾಯ ಜೀವ ಕಸಿದುಕೊಂಡಿದ್ದಾನೆ.&lt;/p&gt;&lt;img&gt;&lt;p&gt;ಅಪಘಾತದ ಭೀಕರತೆಗೆ ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, 6 ಜನ ಸ್ಥಳದಲ್ಲೇ ಜೀವ ಬಿಟ್ಟಿದ್ದು ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.&lt;/p&gt;&lt;ul&gt; &lt;li&gt;ಬಸವರಾಜ್ (48 ವರ್ಷ)&lt;/li&gt; &lt;li&gt;ಅಭಿಷೇಕ್ ಈಶ್ವರ್ (28 ವರ್ಷ)&lt;/li&gt; &lt;li&gt;ಅಕ್ಷಯ (26 ವರ್ಷ)&lt;/li&gt; &lt;li&gt;ಅಭಿಷೇಕ್ (26 ವರ್ಷ)&lt;/li&gt; &lt;li&gt;ಸಂಜೀವ / ಸಂಜಯ ಅಂಗಡಿ (33 ವರ್ಷ - ಕ್ರೂಸರ್ ಚಾಲಕ)&lt;/li&gt; &lt;li&gt;ಮಂಜುನಾಥ ಚುಲಕಿ (32 ವರ್ಷ)&lt;/li&gt; &lt;li&gt;ಸಚಿನ್ ಹೆಬ್ಬಳ್ಳಿ(26 - ಕಿಮ್ಸ್ ಆಸ್ಪತ್ರೆಯಲ್ಲಿ ಸಾವು)&lt;/li&gt;&lt;/ul&gt;&lt;p&gt;ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.&lt;/p&gt;&lt;img&gt;&lt;p&gt;ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಹೊರತೆಗೆಯಲಾಯಿತು. ಸದ್ಯ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಧಾರವಾಡದ ಇವರ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/dharwad-delivery-boys-group-killed-in-horrific-cruiser-lorry-crash-at-yellapura-arabail-ghat-last-selfie-goes-viral-gdp-ozqapq2"/>
        </item>
        <item>
            <title><![CDATA[ಸಿಂಗಾಪುರದ ತಟ್ಟೆಯಲ್ಲಿ ಅಂಕೋಲಾ ಫೇಮಸ್ ಏಡಿ; ವಿಮಾನ ಏರುವ ಮಾದನಗೇರಿಯ ಕಲ್ಲು ಜೆಂಜಿ]]></title>
            <link>https://kannada.asianetnews.com/karnataka-districts/demand-for-the-special-crab-kallu-genji-from-madanageri-ankola-in-international-markets-like-singapore-and-malaysia-mrq/articleshow-uspa9yd</link>
            <guid isPermaLink="true">https://kannada.asianetnews.com/karnataka-districts/demand-for-the-special-crab-kallu-genji-from-madanageri-ankola-in-international-markets-like-singapore-and-malaysia-mrq/articleshow-uspa9yd</guid>
            <pubDate>Tue, 14 Jul 2026 07:39:08 +0530</pubDate>
            <description><![CDATA[ಅಂಕೋಲಾದ ಮಾದನಗೇರಿಯ 'ಕಲ್ಲು ಜೆಂಜಿ' ಎಂಬ ವಿಶೇಷ ಏಡಿಗೆ ಸಿಂಗಾಪುರ, ಮಲೇಶಿಯಾದಂತಹ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಸಜೀವವಾಗಿ ವಿಮಾನದ ಮೂಲಕ ರಫ್ತಾಗುವ ಈ ಏಡಿಗಳು ಮೀನುಗಾರರಿಗೆ ಉತ್ತಮ ಆದಾಯ ತರುತ್ತಿದ್ದರೂ, ಪರಿಸರ ಮಾಲಿನ್ಯ ಮತ್ತು ಇತರ ಕಾರಣಗಳಿಂದ ಇವುಗಳ ಸಂತತಿ ಕ್ಷೀಣಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxf5v4d264tvdrr0214e146d,imgname-crab-1783994618274.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಘು ಕಾಕರಮಠ&lt;/strong&gt;&lt;/p&gt;&lt;p&gt;&lt;strong&gt;ಉತ್ತರ ಕನ್ನಡ (ಅಂಕೋಲ): &lt;/strong&gt;ಅರಬ್ಬಿ ಸಮುದ್ರದ ನದಿ ಸಂಗಮ ಪಾತ್ರಗಳಲ್ಲಿ ಕಂಡು ಬರುವ &lsquo;ಕಲ್ಲು ಜೆಂಜಿ&rsquo; (ಕ್ರಾಬ್) ಏಡಿಗೆ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್&zwnj; ಬಂದಿದೆ!&lt;/p&gt;&lt;p&gt;ಅಂಕೋಲಾದ ಮಾದನಗೇರಿಯಿಂದ ವಿದೇಶಿಗರ ನೆಲಕ್ಕೆ ವಿಶೇಷವಾಗಿ ರಪ್ತಾಗುವ ಈ ಏಡಿ ಮೀನುಗಾರರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸಿದೆ. ಏಡಿಗೇನೊ ಭಾರಿ ಬೆಲೆ ಬಂದಿದೆ. ಆದರೆ ಏಡಿಗಳು ಸಂಖ್ಯೆ ಮಾತ್ರ ಕ್ಷೀಣಿಸ ತೊಡಗಿದೆ.&lt;/p&gt;&lt;h2&gt;&lt;strong&gt;ವಿಮಾನ ಏರುವ ಏಡಿಗಳು&lt;/strong&gt;&lt;/h2&gt;&lt;p&gt;ಉಕ ಜಿಲ್ಲೆಯ ಅಂಕೋಲಾದ ಮಾದನಗೇರಿ, ಬೇಲೆಕೇರಿ, ತದಡಿ, ಹೊಸ್ಕಟಾ, ಅಘನಾಶಿನಿ, ಬಾಡಾ, ಕಾಗಾಲ, ಕುಮಟಾ, ಹೊನ್ನಾವರ ಭಾಗಗಳ ಸಮುದ್ರ ಸಂಗಮ ಹಾಗೂ ಪಾರ್ಮಗಳಲ್ಲಿ ಬೆಳೆಸಿದ ಏಡಿಗಳು ಮಂಗಳೂರು ಹಾಗೂ ಚೆನ್ನೈ ಮೂಲಕ ಸಿಂಗಾಪುರ, ಥೈಲ್ಯಾಂಡ್ ಹಾಗೂ ಮಲೇಶಿಯಾಕ್ಕೆ ವಿಮಾನದಲ್ಲಿ ರಪ್ತು ಆಗುತ್ತಿವೆ.&lt;/p&gt;&lt;p&gt;ನದಿಗಳು ಸಮುದ್ರ ಪ್ರವೇಶಿಸುವ ಅಳಿವೆ ಬಾಗಿಲು ಮತ್ತು ಹಿನ್ನೀರು ಪ್ರದೇಶದಲ್ಲಿ ಲಭ್ಯವಾಗುವ ಕ್ರಾಬ್&zwnj; (ಏಡಿಗಳು) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಅತ್ಯಧಿಕ ಪ್ರೊಟೀನ್&zwnj;ಗಳುಳ್ಳ ತಿನ್ನಲು ರುಚಿಕರವಾದ ಈ ಸಿಹಿ ನೀರಿನ ಏಡಿಗಳು ಮುಖ್ಯವಾಗಿ ಆಗ್ನೇಯೇಷ್ಯಾ ದೇಶಗಳಾದ ಸಿಂಗಾಪುರ, ತೈವಾನ್, ಮಲೇಶಿಯಾ, ಹಾಂಕಾಂಗ್ ಮತ್ತು ಚೀನಾ ಜನತೆಗೆ ಬಲು ಇಷ್ಟದ ತಿನಿಸಾಗಿವೆ.&lt;/p&gt;&lt;p&gt;ಸ್ಥಳೀಯವಾಗಿ ಈ ಎಡಿ ಕೆಜಿಗೆ 2000 ರು. ಬೆಲೆ ಇದ್ದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 3500 ಇದೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಕೆಸರು ನೆಲದಲ್ಲಿ ಒಸರು ಏಡಿ&lt;/strong&gt;&lt;/h3&gt;&lt;p&gt;ಇಂಗ್ಲಿಷ್&zwnj;ನಲ್ಲಿ ಮಡ್ ಕ್ರ್ಯಾಬ್ ಎಂದು ಕರೆಯಲಾಗುವ ಏಡಿಯನ್ನು ಅಂಕೋಲಾದಲ್ಲಿ ಕರಿ ಏಡಿ ಎಂದೂ ಕರೆಯುವುದುಂಟು. ಗಾತ್ರಕ್ಕೆ ಅನುಗುಣವಾಗಿ ಎಕ್ಸೆಲ್ (ಭಾರಿ ಗಾತ್ರ), ಬಿಗ್ (ದೊಡ್ಡ) ಮತ್ತು ಮೀಡಿಯಂ (ಮಧ್ಯಮ) ಎಂದು ವರ್ಗೀಕರಿಸಲಾಗಿದೆ. ಏಡಿಯ ಗುಣಮಟ್ಟಕ್ಕೆ ಅನುಗುಣವಾಗಿ ಸಾಮಾನ್ಯ ನಸುಗಪ್ಪು ಮತ್ತು ಕಡುಹಸಿರು ಬಣ್ಣದ ಏಡಿಗಳಿಗೆ ಬೇಡಿಕೆಯಿದೆ. ದೊಡ್ಡ ಗಾತ್ರ ಏಡಿಯೊಂದು ಗರಿಷ್ಟ ಮೂರುವರೆ ಕೆಜಿ ತೂಗಿದರೆ, ಒಂಬತ್ತು ಇಂಚಿನಷ್ಟು ಅಗಲದ ತನಕವು ಬೆಳೆಯುತ್ತದೆ. ಏಳು ದಿನಗಳವರೆಗೆ ಭೂಮಿಯ ಮೇಲೆ ಉಸಿರಾಡುವ ಸಾಮರ್ಥ್ಯ ಈ ಏಡಿಗಿದೆ. ಈ ಅವಧಿಯೊಳಗೆ ಏಡಿಗಳು ವಿದೇಶಕ್ಕೆ ಸಾಗಿಸಲಾಗುತ್ತದೆ.&lt;/p&gt;&lt;h3&gt;&lt;strong&gt;ಸಜೀವವಾಗಿಯೇ ರಪ್ತು&lt;/strong&gt;&lt;/h3&gt;&lt;p&gt;ಉಕ ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ ಒಂದು ಟನ್&zwnj;ಗೂ ಜಾಸ್ತಿ ಏಡಿ ರಪ್ತಾಗುತ್ತಿವೆ. ಏಡಿಗಳನ್ನು ಹಿಡಿದು ಗಾಳಿಯಾಡುವ ಬುಟ್ಟಿಯೊಳಗೆ ಸಜೀವವಾಗಿಯೇ ರಪ್ತು ಮಾಡಲಾಗುತ್ತದೆ. ಇಂತಹ ಸಜೀವ ಏಡಿಗಳಿಗೆ ಮಾತ್ರ ಭಾರಿ ಬೇಡಿಕೆ ಇರುತ್ತದೆ. ಏಡಿಗಳ ಶರೀರದ ಯಾವುದೇ ಅಂಗಾಂಗ ಸ್ವಲ್ಪವೂ ಊನವಾಗಿರಬಾರದು. ಏಡಿಗಳು ನಿರ್ಜೀವವಾಗಿದ್ದರೆ ಅಥವಾ ಅಂಗ ಆಕಸ್ಮಿಕವಾಗಿ ತುಂಡಾಗಿದ್ದರೆ ಅವುಗಳ ಬೆಲೆ ಇಳಿಯುತ್ತಾ ಹೋಗುತ್ತದೆ. ಕೆಲವೊಮ್ಮೆ ನಾನಾ ಕಾರಣಕ್ಕೆ ಏಡಿಗಳು ತಿರಸ್ಕೃತವಾಗುವುದೂ ಇದೆ. ಏಡಿಗಳು ತಮ್ಮ ಎರಡು ಕಾಲುಗಳಲ್ಲಿರುವ ಹರಿತ ದವಡೆಗಳಿಂದ ಕಚ್ಚಿ ತುಂಡರಿಸುವ ಮೂಲಕ ಯಾವುದೇ ಬಲೆ, ಸೆರೆಗಳಿಂದ ತಪ್ಪಿಸಿಕೊಳ್ಳುತ್ತವೆ. ಹೀಗಾಗಿ ಪ್ರತಿಯೊಂದು ಏಡಿಯ ಕಾಲುಗಳನ್ನು ಕಟ್ಟಿ ಹಾಕಿಯೇ ರಪ್ತಿಗೆ ಸಿದ್ಧಪಡಿಸಲಾಗುತ್ತದೆ.&lt;/p&gt;&lt;h3&gt;&lt;strong&gt;ಬೆಳೆಗಾರರಿಗೆ ಸೂಕ್ತ ಬೆಲೆಯಿಲ್ಲ&lt;/strong&gt;&lt;/h3&gt;&lt;p&gt;ವಿದೇಶಿಗರ ಬಾಯಲ್ಲಿ ನೀರಿರುಸುವ ಏಡಿಗಳ ಬಲಿಷ್ಠ ಕಾಲುಗಳು ನಾನಾ ವಿಧದ ಸೂಪ್ ತಯಾರಿಕೆಗೂ ಬಳಸಲಾಗುತ್ತದೆ. ಆದರೆ ಇಲ್ಲಿನ ಮೀನುಗಾರರು ನೆರವಾಗಿ ವಿದೇಶಕ್ಕೆ ರಪ್ತು ಮಾಡಲು ಪರವಾನಿಗೆಯ ತಾಂತ್ರಿಕ ತೊಡಕುಗಳಿವೆ. ಹೀಗಾಗಿ ಏಜೆಂಟರ ಮೂಲಕ ಇಲ್ಲಿನ ಏಡಿಗಳು ಬೆಳೆಗಾರರಿಗೆ ಸೂಕ್ತ ಬೆಲೆಯಿಲ್ಲದೇ ವಿಮಾನ ಏರುತ್ತದೆ.&lt;/p&gt;&lt;p&gt;&lt;strong&gt;ಈ ವರ್ಷ ಉತ್ತಮ ಬೆಳೆ&lt;/strong&gt;&lt;/p&gt;&lt;p&gt;ಮಾದನಗೇರಿಯ ಆನಂದು ಹರಿಕಂತ್ರ, ಭೈರವ ಹರಿಕಂತ್ರ ಹಾಗೂ ಮೋಹನ ಹರಿಕಂತ್ರ ಸಹೋದರರು ಕಳೆದ 34 ವರ್ಷದಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸಂದರ್ಭ ಲಾಕ್&zwnj;ಡೌನ್&zwnj;ನಿಂದ ವಿಮಾನ ರದ್ದಾಗಿ ಏಡಿ ಉದ್ಯಮ ಸಂಪೂರ್ಣ ಕುಸಿತ ಕಂಡಿತ್ತು. ಆದರೆ ಈಗ ವಿಮಾನ ಹಾರಾಟಕ್ಕೆ ಅವಕಾಶವಿರುವುದರಿಂದ ಏಡಿಗಳು ಸಹ ವಿದೇಶಗರ ಬಾಯಿ ರುಚಿಸಲು ರಪ್ತಾಗುತ್ತಿವೆ.&lt;/p&gt;&lt;p&gt;&lt;strong&gt;ಸಂತತಿ ಕ್ಷೀಣ&lt;/strong&gt;&lt;/p&gt;&lt;p&gt;ಪರಿಸರ ವೈಪರೀತ್ಯ, ಸಮುದ್ರ ಮಾಲಿನ್ಯದ ಪರಿಣಾಮ ಏಡಿಗಳ ಸಂತತಿ ಕ್ಷೀಣಿಸುವಿಕೆಗೆ ಕಾರಣವಾಗಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಾರೆ. ಏಡಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಪ್ರಕೃತಿಯ ಮುನಿಸಿಗೆ ಸಾಕ್ಷಿ ಒದಗಿಸಿದೆ.&lt;/p&gt;&lt;p&gt;ಅನೇಕ ವರ್ಷಗಳಿಂದ ಇಲ್ಲಿನ ಕ್ರಾಬ್&zwnj;(ಏಡಿ) ಗಳನ್ನು ವಿದೇಶಕ್ಕೆ ಏಜೆಂಟ್&zwnj;ರ ಮೂಲಕ ರಪ್ತು ಮಾಡಲಾಗುತ್ತದೆ. ಈ ವರ್ಷ ಉತ್ತಮ ಬೆಲೆ ಕೂಡ ಬಂದಿದೆ. ಆದರೂ ಬರುಬರುತ್ತ ಏಡಿಗಳ ಸಂಖ್ಯೆಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಮಾದನಗೇರಿಯ ಏಡಿ ಪೂರೈಕೆದಾರ ಭೈರವ ನಾಗಪ್ಪ ಹರಿಕಂತ್ರ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/demand-for-the-special-crab-kallu-genji-from-madanageri-ankola-in-international-markets-like-singapore-and-malaysia-mrq/articleshow-uspa9yd"/>
        </item>
        <item>
            <title><![CDATA[ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಅಪರೂಪದ ಎಂಜಿನಿಯರಿಂಗ್ ಮೈಲಿಗಲ್ಲು ಸಾಧಿಸಿದ MEIL]]></title>
            <link>https://kannada.asianetnews.com/karnataka-districts/meil-completes-largest-concrete-pour-npcil-kaiga-nuclear-plant-karnataka-san/articleshow-v49edvk</link>
            <guid isPermaLink="true">https://kannada.asianetnews.com/karnataka-districts/meil-completes-largest-concrete-pour-npcil-kaiga-nuclear-plant-karnataka-san/articleshow-v49edvk</guid>
            <pubDate>Mon, 06 Jul 2026 21:58:16 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ, 'ಮೇಘಾ ಇಂಜಿನಿಯರಿಂಗ್' (MEIL) ಸಂಸ್ಥೆಯು 5 ಮತ್ತು 6ನೇ ಘಟಕಗಳಿಗಾಗಿ ಐತಿಹಾಸಿಕ ಬೃಹತ್ ಕಾಂಕ್ರೀಟ್ ಹಾಕುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಕಾರ್ಯಾಚರಣೆಯು ಭಾರತೀಯ ಅಣುಶಕ್ತಿ ಇತಿಹಾಸದಲ್ಲೇ ಒಂದು ದೊಡ್ಡ ಮೈಲಿಗಲ್ಲಾಗಿದೆ,&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kww3xzw3687p9f5pzgqbqhcm,imgname-kaiga-plant-1783355080578.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ(ಜು.6):&lt;/strong&gt; ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ (Kaiga Units 5 &amp;amp; 6) ಪರಮಾಣು ವಿದ್ಯುತ್ ಯೋಜನೆಯಲ್ಲಿ ಅತ್ಯಂತ ಅಪರೂಪದ ಎಂಜಿನಿಯರಿಂಗ್ ಮೈಲಿಗಲ್ಲು ನಿರ್ಮಾಣವಾಗಿದೆ. ಮೂಲಸೌಕರ್ಯ ಕ್ಷೇತ್ರದ ದೈತ್ಯ ಸಂಸ್ಥೆಯಾದ 'ಮೇಘಾ ಇಂಜಿನಿಯರಿಂಗ್ ಆಂಡ್ ಇನ್&zwnj;ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್' (MEIL) ಸೋಮವಾರ ಪ್ರಕಟಣೆ ಹೊರಡಿಸಿದ್ದು, ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಇತಿಹಾಸದಲ್ಲೇ ಅತ್ಯಂತ ಬೃಹತ್ ಪ್ರಮಾಣದ ನಿರಂತರವಾಗಿ ಕಾಂಕ್ರೀಟ್ ಹಾಕುವ (Monolithic Concrete Pour) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.&lt;/p&gt;&lt;p&gt;ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯವು ಎಂಇಐಎಲ್ (MEIL) ಸಂಸ್ಥೆಯ ಪಾಲಿಗೆ ಅತ್ಯಂತ ಪ್ರತಿಷ್ಠಿತ ಹಾಗೂ ಚೊಚ್ಚಲ (Maiden) ಪರಮಾಣು ಯೋಜನೆಯಾಗಿದೆ. ಈ ಮಹತ್ವದ ಕಾರ್ಯಾಚರಣೆಯಲ್ಲಿ ಸಂಸ್ಥೆಯು ಸರಿಸುಮಾರು 7,250 ಘನ ಮೀಟರ್&zwnj;ಗಳಷ್ಟು (Cubic Meters) ಬೃಹತ್ ಪ್ರಮಾಣದ ಕಾಂಕ್ರೀಟ್ ಅನ್ನು ನಿರಂತರವಾಗಿ ಹಾಕಿದೆ. ಅತ್ಯಂತ ಜವಾಬ್ದಾರಿಯುತ ಹಾಗೂ ಕಠಿಣ ಸವಾಲುಗಳಿಂದ ಕೂಡಿರುವ ಇನ್ಫ್ರಾಸ್ಟ್ರಕ್ಚರ್ ವಲಯದಲ್ಲಿ, ತನ್ನ ಮೊದಲ ಅಣುಶಕ್ತಿ ಪ್ರಾಜೆಕ್ಟ್&zwnj;ನಲ್ಲೇ ಇಷ್ಟು ದೊಡ್ಡ ಪ್ರಮಾಣದ ನಿರಂತರ ಕಾಂಕ್ರೀಟ್ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಕಂಪನಿಯ ಎಂಜಿನಿಯರಿಂಗ್ ಸಾಮರ್ಥ್ಯ, ನಿಖರ ಯೋಜನೆ ಮತ್ತು ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.&lt;/p&gt;&lt;h2&gt;&lt;strong&gt;ಅತ್ಯಂತ ದಟ್ಟ ಉಕ್ಕಿನ ಸಾಂದ್ರತೆಯೊಂದಿಗೆ ರಚನೆ ನಿರ್ಮಾಣ&lt;/strong&gt;&lt;/h2&gt;&lt;p&gt;ಪರಮಾಣು ರಿಯಾಕ್ಟರ್&zwnj;ಗಳ ಸುರಕ್ಷತೆ ಮತ್ತು ದೀರ್ಘಕಾಲೀನ ಬಾಳಿಕೆ ಅತ್ಯಂತ ಮುಖ್ಯವಾಗಿರುತ್ತದೆ. ಹೀಗಾಗಿ, ಈ ಕಾಂಕ್ರೀಟ್ ಪ್ರಕ್ರಿಯೆಯಲ್ಲಿ ಅತ್ಯಂತ ಕಟ್ಟುನಿಟ್ಟಾದ ತಾಂತ್ರಿಕ ಮಾನದಂಡಗಳನ್ನು ಅನುಸರಿಸಲಾಗಿದೆ. ಈ ಇಡೀ ಕಾರ್ಯಾಚರಣೆಯಲ್ಲಿ ಪ್ರತಿ ಘನ ಮೀಟರ್ ಕಾಂಕ್ರೀಟ್&zwnj;ಗೆ ಬರೋಬ್ಬರಿ 360 ಕಿಲೋಗ್ರಾಂ ಉಕ್ಕಿನ ಸಾಂದ್ರತೆಯನ್ನು (Rebar Density of 360 kg/cubic meters) ಬಳಸಲಾಗಿದೆ. ಈ ಅತ್ಯುನ್ನತ ಗುಣಮಟ್ಟದ ಉಕ್ಕಿನ ದಟ್ಟಣೆಯು ರಿಯಾಕ್ಟರ್&zwnj;ನ ಒಟ್ಟಾರೆ ರಚನೆಗೆ ಗರಿಷ್ಠ ಮಟ್ಟದ ಸ್ಥಿರತೆ ಹಾಗೂ ದೀರ್ಘಕಾಲೀನ ಬಲವನ್ನು ನೀಡಲಿದ್ದು, ಭಾರತೀಯ ಅಣುಶಕ್ತಿ ಇತಿಹಾಸದಲ್ಲೇ ಇದೊಂದು ದೊಡ್ಡ ಮೈಲಿಗಲ್ಲು ಎನಿಸಿಕೊಂಡಿದೆ.&lt;/p&gt;&lt;p&gt;ಈ ಬೃಹತ್ ಕಾಂಕ್ರೀಟ್ ಕಾರ್ಯಾಚರಣೆಯನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ವ್ಯವಸ್ಥಿತವಾಗಿ ಪೂರ್ಣಗೊಳಿಸಲು ಬೃಹತ್ ಪ್ರಮಾಣದ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲಾಗಿತ್ತು. ವಿವಿಧ ಶಿಫ್ಟ್&zwnj;ಗಳಲ್ಲಿ ನೂರಾರು ಎಂಜಿನಿಯರ್&zwnj;ಗಳು, ಮೇಲ್ವಿಚಾರಕರು (Supervisors), ಕ್ವಾಲಿಟಿ ಪ್ರೊಫೆಷನಲ್&zwnj;ಗಳು, ಸರ್ವೇಯರ್&zwnj;ಗಳು, ತಂತ್ರಜ್ಞರು, ಆಪರೇಟರ್&zwnj;ಗಳು, ಸುರಕ್ಷತಾ ಸಿಬ್ಬಂದಿ ಮತ್ತು ನುರಿತ ಕಾರ್ಮಿಕರು ದಿನದ 24 ಗಂಟೆಯೂ (Round the clock) ಹಗಲಿರುಳು ಶ್ರಮಿಸಿದ್ದಾರೆ. ಕರಾವಳಿ ಭಾಗದ ಕಠಿಣ ಹವಾಮಾನ ಪರಿಸ್ಥಿತಿ ಮತ್ತು ಹತ್ತಾರು ಕಾರ್ಯಾಚರಣೆಯ ಸವಾಲುಗಳ ನಡುವೆಯೂ ಈ ಇಡೀ ತಂಡವು ಅಸಾಧಾರಣ ಬದ್ಧತೆ ಪ್ರದರ್ಶಿಸಿದೆ ಎಂದು ಕಂಪನಿ ಶ್ಲಾಘಿಸಿದೆ.&lt;/p&gt;&lt;h2&gt;&lt;strong&gt;ಅತ್ಯಂತ ಕಟ್ಟುನಿಟ್ಟಿನ ನ್ಯೂಕ್ಲಿಯರ್ ಸುರಕ್ಷತಾ ನಿಯಮಗಳ ಪಾಲನೆ&lt;/strong&gt;&lt;/h2&gt;&lt;p&gt;ಅಣುಶಕ್ತಿ ವಲಯದ ನಿಯಮಾವಳಿಗಳ ಪ್ರಕಾರ ಇಡೀ ಕಾರ್ಯಾಚರಣೆಯ ಉದ್ದಕ್ಕೂ ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್&zwnj;ಗಳನ್ನು (Safety Protocols) ಪಾಲಿಸಲಾಗಿದೆ. ರಿಯಾಕ್ಟರ್&zwnj;ನ ರಚನಾತ್ಮಕ ಸಮಗ್ರತೆ ಮತ್ತು ದೀರ್ಘಕಾಲೀನ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಾತರಿಪಡಿಸಿಕೊಳ್ಳಲು, ಪರಮಾಣು ವಲಯದ ಕಠಿಣ ಅಗತ್ಯತೆಗಳಿಗೆ ಅನುಗುಣವಾಗಿ ಎಲ್ಲಾ ರೀತಿಯ ಗುಣಮಟ್ಟದ ತಪಾಸಣೆಗಳು ಮತ್ತು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಎಂಇಐಎಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಈ ಯಶಸ್ಸಿನೊಂದಿಗೆ ಕೈಗಾ ಸ್ಥಾವರದ ಮುಂಬರುವ ಘಟಕಗಳ ನಿರ್ಮಾಣ ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಂತಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/meil-completes-largest-concrete-pour-npcil-kaiga-nuclear-plant-karnataka-san/articleshow-v49edvk"/>
        </item>
    </channel>
</rss>
