<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 02 Sep 2026 07:28:11 +0530</lastBuildDate>
        <atom:link href="https://kannada.asianetnews.com/rss/uttara-kannada" rel="self" type="application/rss+xml"/>
        <item>
            <title><![CDATA['ನನ್ನ ಏಕೈಕ ಕೆಲಸ ಬಡವರಿಗೆ ಸಹಾಯ ಮಾಡೋದು..' ವಿಧಾನಸಭೆ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಮಂಕಾಳ ವೈದ್ಯ ಭಾವುಕ ಭಾಷಣ!]]></title>
            <link>https://kannada.asianetnews.com/politics/mankal-vaidya-unanimously-elected-karnataka-assembly-deputy-speaker-san/articleshow-0cczwp7</link>
            <guid isPermaLink="true">https://kannada.asianetnews.com/politics/mankal-vaidya-unanimously-elected-karnataka-assembly-deputy-speaker-san/articleshow-0cczwp7</guid>
            <pubDate>Tue, 18 Aug 2026 20:49:27 +0530</pubDate>
            <description><![CDATA[ಭಟ್ಕಳ ಶಾಸಕ ಮಂಕಾಳ ಸುಬ್ಬಾ ವೈದ್ಯ ಅವರು ರಾಜ್ಯ ವಿಧಾನಸಭೆಯ ನೂತನ ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸದನದಲ್ಲಿ ಮಾತನಾಡಿದ ಅವರು, ಹೋಟೆಲ್ ಕೆಲಸದಿಂದ ರಾಜಕೀಯ ಪ್ರವೇಶಿಸಿ, ಪಕ್ಷೇತರನಾಗಿ ಗೆದ್ದು ಬಂದ ತಮ್ಮ ಕಷ್ಟದ ರಾಜಕೀಯ ಹಾದಿಯನ್ನು ಭಾವುಕರಾಗಿ ವಿವರಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0aq497m0v8f90hf8ymxg7ez,imgname-mankal-vaidya-1787066197236.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (.18): &lt;/strong&gt;ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಭಟ್ಕಳ ಶಾಸಕ, ಮಾಜಿ ಸಚಿವ ಮಂಕಾಳ ಸುಬ್ಬಾ ವೈದ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಕಾಳ ವೈದ್ಯ ಪರವಾಗಿ ಸಿಎಂ ಡಿ ಕೆ ಶಿವಕುಮಾರ್&zwnj; ಮಂಡಿಸಿದ ಪ್ರಸ್ತಾಪಕ್ಕೆ ಇಡೀ ಸದನ ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು. ಸಭಾಧ್ಯಕ್ಷ ಜಿ ಎಸ್ ಪಾಟೀಲ್ ಅಧಿಕೃತವಾಗಿ ಮಂಕಾಳ ಸುಬ್ಬಾ ವೈದ್ಯ ಅವರು ಅವಿರೋಧವಾಗಿ ಉಪಸಭಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಘೋಷಿಸಿದರು. ನೂತನ ಉಪಸಭಾಧ್ಯಕ್ಷ ವೈದ್ಯ ಕುರಿತು ಸಿಎಂ ಡಿಕೆಶಿ, ಉಪಮುಖ್ಯಮಂತ್ರಿ ಡಾ.ಜಿ&zwnj; ಪರಮೇಶ್ವರ್ ಅಭಿನಂದನೆ ಸಲ್ಲಿಸಿದರು.&lt;/p&gt;&lt;p&gt;ಸದನದಲ್ಲಿ ಬಿಜೆಪಿ ಶಾಸಕರಾದ ದಿನಕರ್ ಶೆಟ್ಟಿ, ಹರೀಶ್ ಪೂಂಜಾ, ಯಶಪಾಲ ಸುವರ್ಣ, ಆರ್ ವಿ ದೇಶಪಾಂಡೆ, ಎಚ್ ಡಿ ತಮ್ಮಯ್ಯ, ಅರವಿಂದ ಬೆಲ್ಲದ್ ಅವರು ವೈದ್ಯ ಅವರ ರಾಜಕೀಯ ಹಾದಿಯ ಕುರಿತು ಸದನಕ್ಕೆ ವಿವರಿಸಿದರು. ನಂತರ ಮಾತನಾಡಿದ ನೂತನ ಉಪಸಭಾಧ್ಯಕ್ಷ ಮಂಕಾಳ ವೈದ್ಯ, ಹೊಸ ಜವಾಬ್ದಾರಿ ನೀಡಿದಕ್ಕೆ ಕೃತಜ್ಞತೆ ಸಲ್ಲಿದರು. 'ನಾನು ಹುಟ್ಟಿದಾಗ ನಮ್ಮ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ..ನಾನು ಬೆಂಗಳೂರಿಗೆ ಬಂದು ಅನೇಕ ಕೆಲಸ ಮಾಡಿದ್ದೇನೆ. ಹೋಟೆಲ್ ನಲ್ಲಿ ಕೆಲಸ ಮಾಡಿದ್ದೇನೆ, ನಂತರ ಊರಿಗೆ ಹೋಗಿ ಜಿಲ್ಲಾ ಪಂಚಾಯತಿ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಿದೆ' ಎಂದರು.&lt;/p&gt;&lt;p&gt;ನಾನು ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದೆ.ಆಗ ಎಲ್ಲರೂ ನಾಮಪತ್ರ ವಾಪಸ್ ತಗೊಳಿ ಅಂತ ಒತ್ತಡ ಹಾಕಿದ್ದರು.ನಾನು ಇಡಗುಂಜಿ ಗಣೇಶನನ್ನ ನಂಬಿದವನು. ಅವನನ್ನು ನಂಬಿ ಕೆಲಸ ಮಾಡುವವನು. ಅಲ್ಲಿ ಭೇಟಿ ಕೊಟ್ಟು ನಾಮಿನೇಷನ್ ಹಾಕಿದೆ. 180 ವೋಟಿನಿಂದ ನಾನು ಗೆದ್ದಿದ್ದೆ. ಸೋತೆ ಅಂತ ಹಲವರು ಹೇಳಿದರು. ನಾನು ಮನೆಗೆ ಹೊರಟಿದ್ದೆ, ಆಗ ನನಗೆ 180 ವೋಟಿನಿಂದ ಗೆದ್ದಿದ್ದು ಹೇಳಿದರು.ಮತ್ತೆ ಹೋಗಿ ಪ್ರಮಾಣ ಪತ್ರ ತಗೊಂಡೆ ಎಂದರು.&lt;/p&gt;&lt;h2&gt;&lt;strong&gt;ಬಡವರಿಗೆ ಸಹಾಯ ಮಾಡೋದೇ ನನ್ನ ಕೆಲಸ&lt;/strong&gt;&lt;/h2&gt;&lt;p&gt;ಆರ್.ವಿ ದೇಶಪಾಂಡೆ ಅವರು ಪಕ್ಷಕ್ಕೆ ಸೇರಿಸಿಕೊಂಡರು.ನನ್ನ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಮಾಡಿದ್ದರು. ಬಡವರಿಗೆ ಸಹಾಯ ಮಾಡುವುದು ನನ್ನ ಕೆಲಸ. ಶಾಲೆ ಕಟ್ಟಿದ್ದೇನೆ, ಬಡವರಿಗೆ ಸಹಾಯ ಮಾಡಿದ್ದೇನೆ.ನನಗೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡದ ಹಾಗೆ ಮೀಸಲಾತಿ ಬಂತು. ಇದ್ದ ಒಂದು ಜಿಲ್ಲಾಪಂಚಾಯತ್ ಜಾಲಿ ಜಿ.ಪಂ ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ರೂ ಕೊಡಲಿಲ್ಲ. ಅದಕ್ಕೆ ಎರಡನೆಯ ಬಾರಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದೆ. ಬಿಜೆಪಿ ಕಾಂಗ್ರೆಸ್ ಸೋಲಿಸಿ ಮತ್ತೇ ಸದಸ್ಯ ಆದೆ.ದೇಶಪಾಂಡೆ ಅವರಲ್ಲಿ ಟಿಕೆಟ್ ಕೇಳಿಕೊಂಡೆ. ಜಾಲಿ ಕ್ಷೇತ್ರ ಜನರಲ್ ಇದೆ ಆಗಲ್ಲ ಅಂದ್ರು. ಆದರೂ ಪಕ್ಷೇತರನಾಗಿ 1800 ಮತಗಳಿಂದ ಮತ್ತೆ ಜಿಲ್ಲಾ ಪಂಚಾಯತಿ ಗೆದ್ದೆ ಎಂದು ಹೇಳಿದರು.&lt;/p&gt;&lt;p&gt;2013ರಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಟಿಕೆಟ್ ಕೊಡಲಿಲ್ಲ. ಆಗ ಟಿಕೆಟ್ ಕೇಳಿದೆ ಸಿಗಲಿಲ್ಲ. ಆಗಲೂ ಬೇರೆ ಪಕ್ಷಕ್ಕೆ ಹೋಗದೆ ಪಕ್ಷೇತರ ಆಗಿ ನಿಂತೆ ಗೆದ್ದೆ. 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಂತು 5000 ಮತಗಳ ಅಂತರದಿಂದ ಸೋತೆ. ಆಗ ಡಿ ಕೆ ಶಿವಕುಮಾರ್ ಅವರು, ನೀನು ಕ್ಷೇತ್ರದಲ್ಲಿ ಕೆಲಸ ಮಾಡು, ಬಿ ಫಾರಂ ಚಿಂತೆ ಬೇಡ ಅಂತ ಹೇಳಿ ಧೈರ್ಯ ಹೇಳಿದ್ರು. 2023ರಲ್ಲಿ ಬಿ ಫಾರಂ ಮನೆಗೆ ಕಳುಹಿಸಿದ್ದರು. ಬೇರೆ ರೀತಿಯ ಸಹಾಯ ಸಹ ಮಾಡಿದ್ದರು. ಚುನಾವಣೆಯಲ್ಲಿ 30 ಸಾವಿರ ಅಂತರದಿಂದ ಗೆದ್ದೆ, ಮೂರು ವರ್ಷ ಮಂತ್ರಿ ಆಗಿದ್ದೆ.ಆದರೆ ನನ್ನ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗಿಲ್ಲ. ಅದಕ್ಕೆ&zwnj;ಬೇರೆ ಬೇರೆ ಕಾರಣ ಇದೆ. ಅದನ್ನು ಸದನದಲ್ಲಿ ಹೇಳಲಾರೆ ಅಂತ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು.&lt;/p&gt;&lt;p&gt;ಮೊನ್ನೆ ಕೂಡ ಸಚಿವರಾಗಿದ್ದೀಯಾ ಅಂತ ಕರೆ ಮಾಡಿದ್ರು. ಬಳಿಕ ಏನೋ ವ್ಯತ್ಯಾಸ ಆಯ್ತು ಅಂದ್ರು. ನನ್ನ ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ಕೈಗೊಂಡರು. ನಾನು ಏನೂ ಮಾತನಾಡಲಿಲ್ಲ ಎಂದು ವೈದ್ಯ ಹೇಳಿದರು.&lt;/p&gt;&lt;p&gt;ಏನೂ ಆಸೆ ಇಲ್ಲದ ನನಗೆ, ನನ್ನ ಕ್ಷೇತ್ರದ ಜನ ನನ್ನನ್ನ ಇಲ್ಲಿಗೆ ತಂದು ನಿಲ್ಲಿಸಿದ್ದಾರೆ.ಈಗ ಉಪಾಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ.ಈ ಸ್ಥಾನದಲ್ಲಿ ಕುಳಿತು ರಾಜ್ಯದ ಜನರಿಗೆ ಸಹಾಯ ಆಗುವ ಕೆಲಸ ಮಾಡ್ತೇನೆ. ನನ್ನ ಬಗ್ಗೆ ಬಹಳ ಶಾಸಕರು ಹತ್ತಿರದಿಂದ ತಿಳಿದುಕೊಂಡು ಮಾತನಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸ್ತೇನೆ. ಪ್ರಜಾಪ್ರಭುತ್ವದ ಮೌಲ್ಯ ಕಾಪಾಡುವುದು ನನ್ನ ಕರ್ತವ್ಯ. ನಿಮ್ಮೆಲ್ಲರ ಸಹಕಾರದಿಂದ ಈ ಜವಾಬ್ದಾರಿ ನಿರ್ವಹಿಸುತ್ತೇನೆ ಅಂತ ಭಾವುಕರಾಗಿ ಸದನದಲ್ಲಿ ಮಂಕಾಳ ವೈದ್ಯ ಹೇಳಿದರು.&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/politics/mankal-vaidya-unanimously-elected-karnataka-assembly-deputy-speaker-san/articleshow-0cczwp7"/>
        </item>
        <item>
            <title><![CDATA[ಕಾರವಾರದಲ್ಲಿ ನಡುಕ ಹುಟ್ಟಿಸಿತ್ತು ದೈತ್ಯ ಕಾಳಿಂಗ ಸರ್ಪ.. ರೋಚಕವಾಗಿ ಸೆರೆ ಹಿಡಿದ ತಜ್ಞರು..]]></title>
            <link>https://kannada.asianetnews.com/karnataka-districts/thrilling-rescue-10-foot-king-cobra-caught-by-forest-officials-on-a-compound-wall-in-karwar-gkn/articleshow-0ic521b</link>
            <guid isPermaLink="true">https://kannada.asianetnews.com/karnataka-districts/thrilling-rescue-10-foot-king-cobra-caught-by-forest-officials-on-a-compound-wall-in-karwar-gkn/articleshow-0ic521b</guid>
            <pubDate>Mon, 31 Aug 2026 08:24:44 +0530</pubDate>
            <description><![CDATA[&lt;p&gt;ಕಾರವಾರದ ಮಲ್ಲಾಪುರದಲ್ಲಿ ಕಾಂಪೌಂಡ್ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ 10 ಅಡಿಯ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಾದ ಬಿಲಾಲ್ ಶೇಖ್ ಮತ್ತು ರಾಯಪ್ಪ ರೋಚಕವಾಗಿ ಸೆರೆಹಿಡಿದಿದ್ದಾರೆ. ನೂರಾರು ಜನರ ಸಮ್ಮುಖದಲ್ಲಿ ನಡೆದ ಈ ಕಾರ್ಯಾಚರಣೆಯ ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m19s68z7hwk475dq14ap7frq,imgname-king-cobra-in-karwar-1788108547046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ: &lt;/strong&gt;ಜಿಲ್ಲೆಯ ಕಾರವಾರ ಅಂದಾಕ್ಷಣ ನಮಗೆ ನೆನಪಾಗುವುದು ಸುಂದರ ಸಮುದ್ರ ಮತ್ತು ದಟ್ಟ ಅರಣ್ಯ. ಆದರೆ, ಇದೇ ಅರಣ್ಯದ ರಾಜ 'ಕಾಳಿಂಗ ಸರ್ಪ' ಜನವಸತಿ ಪ್ರದೇಶಕ್ಕೆ ಬಂದರೆ ಹೇಗಿರುತ್ತೆ? ಅಂತಹದ್ದೇ ಒಂದು ಮೈನವಿರೇಳಿಸುವ ಘಟನೆ ಕಾರವಾರದ ಮಲ್ಲಾಪುರದಲ್ಲಿ ನಡೆದಿದೆ. ಕಾಂಪೌಂಡ್ ಮೇಲೆ ಕುಳಿತು ಸುತ್ತಮುತ್ತಲಿನ ಜನರಲ್ಲಿ ನಡುಕ ಹುಟ್ಟಿಸಿದ್ದ ಬರೋಬ್ಬರಿ 10 ಅಡಿಯ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದಿದ್ದಾರೆ.&lt;/p&gt;&lt;h2&gt;&lt;strong&gt;ಕಾಂಪೌಂಡ್ ಮೇಲೆ ಕಾಳಿಂಗ ಪ್ರತ್ಯಕ್ಷ&lt;/strong&gt;&lt;/h2&gt;&lt;p&gt;ಕಾರವಾರ ತಾಲೂಕಿನ ಮಲ್ಲಾಪುರ ಸಮೀಪದ ಕುರ್ನಿಪೇಟೆಯಲ್ಲಿ ಘಟನೆ ನಡೆದಿದೆ. ಗುರುವಾರ ಸಂಜೆ ಸಾರ್ವಜನಿಕರು ಓಡಾಡುವ ಜಾಗದಲ್ಲಿರುವ ಮನೆಯೊಂದರ ಕಾಂಪೌಂಡ್ ಮೇಲೆ ಸುಮಾರು 10 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಪ್ರತ್ಯಕ್ಷವಾಯಿತು. ಸಾಧಾರಣ ಹಾವನ್ನೇ ಕಂಡು ಹೆದರುವ ಜನರಿಗೆ, ಸಾಕ್ಷಾತ್ ನಾಗರಹಾವಿನ ರಾಜ 'ಕಾಳಿಂಗ' ಕಂಡೊಡನೆ ಇಡೀ ಏರಿಯಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ಈ ಹಾವನ್ನು ನೋಡಲು ಜಮಾಯಿಸಿದರು.&lt;/p&gt;&lt;p&gt;ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಬಿಲಾಲ್ ಶೇಖ್ ಮತ್ತು ರಾಯಪ್ಪ ಅವರು ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ ಕಾಳಿಂಗ ಸರ್ಪ ಕಾಂಪೌಂಡ್&zwnj;ನಿಂದ ಕೆಳಗಿಳಿಯಲು ಪ್ರಯತ್ನಿಸುತ್ತಿತ್ತು. ಜನಜಂಗುಳಿಯ ನಡುವೆಯೂ ಅತ್ಯಂತ ಸಂಯಮ ಮತ್ತು ಧೈರ್ಯದಿಂದ ಬಿಲಾಲ್ ಮತ್ತು ರಾಯಪ್ಪ ಅವರು ಕಾರ್ಯಾಚರಣೆ ಆರಂಭಿಸಿದರು.&lt;/p&gt;&lt;h2&gt;&lt;strong&gt;ಬಾಕ್ಸ್&zwnj;ನಲ್ಲಿ ಸೆರೆಯಾದ ಕಾಳಿಂಗ&lt;/strong&gt;&lt;/h2&gt;&lt;p&gt;ಕಾಳಿಂಗ ಸರ್ಪವು ಸಿಬ್ಬಂದಿ ಮೇಲೆ ಎರಗಲು ಪ್ರಯತ್ನಿಸಿದರೂ ಯಾವುದೇ ಭಯವಿಲ್ಲದೆ ತಮ್ಮಲ್ಲಿರುವ ಹಾವನ್ನು ಹಿಡಿಯುವ ಉಪಕರಣಗಳನ್ನು ಬಳಸಿ ಅತ್ಯಂತ ಕೌಶಲ್ಯದಿಂದ ಅದನ್ನು ಸೆರೆ ಹಿಡಿಯಲಾಯಿತು. ಹತ್ತಿರ ಹತ್ತಿರ 10 ಅಡಿ ಉದ್ದವಿದ್ದ ಈ ಸರ್ಪವನ್ನು ಹಿಡಿಯುವ ದೃಶ್ಯವನ್ನು ಜನರು ಉಸಿರು ಬಿಗಿಹಿಡಿದು ನೋಡುತ್ತಿದ್ದರು. ಅಂತಿಮವಾಗಿ ಹಾವನ್ನು ಸುರಕ್ಷಿತವಾಗಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ತುಂಬಿದಾಗ ಜನರು ನಿಟ್ಟುಸಿರು ಬಿಟ್ಟರು.&lt;/p&gt;&lt;p&gt;ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಜನವಸತಿ ಪ್ರದೇಶದಿಂದ ದೂರವಿರುವ ದಟ್ಟ ಕಾಡಿಗೆ ಕೊಂಡೊಯ್ದು ಸುರಕ್ಷಿತವಾಗಿ ಬಿಟ್ಟಿದ್ದಾರೆ. ಸಮಯಪ್ರಜ್ಞೆ ಮೆರೆದ ಬಿಲಾಲ್ ಶೇಖ್ ಮತ್ತು ರಾಯಪ್ಪ ಅವರ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/thrilling-rescue-10-foot-king-cobra-caught-by-forest-officials-on-a-compound-wall-in-karwar-gkn/articleshow-0ic521b"/>
        </item>
        <item>
            <title><![CDATA[ಪರ್ತಗಾಳಿ ಶ್ರೀರಾಮನ ಕಂಚಿನ ಪ್ರತಿಮೆಗೆ ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗರಿ]]></title>
            <link>https://kannada.asianetnews.com/karnataka-districts/parthagali-bronze-statue-of-lord-rama-enters-india-asia-book-of-records-mrq/articleshow-0mimp44</link>
            <guid isPermaLink="true">https://kannada.asianetnews.com/karnataka-districts/parthagali-bronze-statue-of-lord-rama-enters-india-asia-book-of-records-mrq/articleshow-0mimp44</guid>
            <pubDate>Sat, 29 Aug 2026 10:01:53 +0530</pubDate>
            <description><![CDATA[&lt;p&gt;ಗೋವಾದ ಪರ್ತಗಾಳಿಯ ಶ್ರೀ ಸಂಸ್ಥಾನ ಗೋಕರ್ಣ ಮಠದಲ್ಲಿ ಸ್ಥಾಪಿಸಲಾದ ಶ್ರೀರಾಮನ ಕಂಚಿನ ಪ್ರತಿಮೆಯು ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್&zwnj;ನಲ್ಲಿ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m15wgt2awjmed2z5tdf3efrk,imgname-parthagali-bronze-statue-of-lord-rama-1787977820234.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ:&lt;/strong&gt; ಗೋವಾದ ಕಾಣಕೋಣದ ಪರ್ತಗಾಳಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಆದರ್ಶ ಧಾಮದಲ್ಲಿ ಸ್ಥಾಪಿಸಲಾಗಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಕಂಚಿನ ಪ್ರತಿಮೆಯು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬ ದಾಖಲೆಗೆ ಪಾತ್ರವಾಗಿದೆ.&lt;/p&gt;&lt;p&gt;ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಗಳ 82ನೇ ಜನ್ಮತಿಥಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕೃತ ತೀರ್ಪುಗಾರ್ತಿ ಡಾ. ಚಿತ್ರಾ ಜೈನ್ ದಾಖಲೆ ಪ್ರಮಾಣಪತ್ರಗಳನ್ನು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗೆ ಹಸ್ತಾಂತರಿಸಿದರು.&lt;/p&gt;&lt;h2&gt;&lt;strong&gt;2025ರ ನ.28ರಂದು ಪ್ರತಿಮೆ ಲೋಕಾರ್ಪಣೆ&lt;/strong&gt;&lt;/h2&gt;&lt;p&gt;ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಪ್ರತಿಮೆಯು ಪೀಠದಿಂದ 78.74 ಅಡಿ (24 ಮೀಟರ್) ಎತ್ತರ ಹೊಂದಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025ರ ನ.28ರಂದು ಪ್ರತಿಮೆ ಲೋಕಾರ್ಪಣೆಗೊಳಿಸಿದ್ದರು. ಖ್ಯಾತ ಶಿಲ್ಪಿ ಪದ್ಮಭೂಷಣ ದಿವಂಗತ ರಾಮ್ ಸುತಾರ್ ಹಾಗೂ ಅವರ ಪುತ್ರ ಅನಿಲ್ ಸುತಾರ್ ಪ್ರತಿಮೆಯನ್ನು ರೂಪಿಸಿದ್ದಾರೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ವಿಠ್ಠಲ ಮಾಸ್ತರ ಗೌರವ ಪುರಸ್ಕಾರವನ್ನು ರಾಮಚಂದ್ರ ಪದ್ಮನಾಭ ಭಟ್ಟ ಗಾಂವ್ಕರ ಅವರಿಗೆ ನೀಡಿ ಗೌರವಿಸಲಾಯಿತು. ವಿವಿಧ ಸ್ಥಳಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.&lt;/p&gt;&lt;p&gt;ಮಠದ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ದೆಂಪೊ, ಗೋವಾ ಲೋಕೋಪಯೋಗಿ ಸಚಿವ ದಿಗಂಬರ ಕಾಮತ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಅನಿಲ್ ಪೈ ಇದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/parthagali-bronze-statue-of-lord-rama-enters-india-asia-book-of-records-mrq/articleshow-0mimp44"/>
        </item>
        <item>
            <title><![CDATA[‘ದಾನ ನಾಶ ಮಾಡಿದರೆ ಅಪಾರ ಪಾಪ’ ಕ್ರಿ.ಶ 800 ರ ಅಪರೂಪದ ಶಾಸನ ಪತ್ತೆ: ಕರಾವಳಿ ಇತಿಹಾಸಕ್ಕೆ ಸಿಕ್ಕಿತು ಹೊಸ ಬೆಳಕು!]]></title>
            <link>https://kannada.asianetnews.com/karnataka-districts/rare-800-ad-kannada-inscription-found-in-honnavar-reveals-coastal-karnataka-early-history-gdp/articleshow-17ga0dc</link>
            <guid isPermaLink="true">https://kannada.asianetnews.com/karnataka-districts/rare-800-ad-kannada-inscription-found-in-honnavar-reveals-coastal-karnataka-early-history-gdp/articleshow-17ga0dc</guid>
            <pubDate>Tue, 11 Aug 2026 15:13:40 +0530</pubDate>
            <description><![CDATA[ಹೊನ್ನಾವರದ ಕಡಗೇರಿ ಗ್ರಾಮದಲ್ಲಿ ಪತ್ತೆಯಾದ ಕ್ರಿ.ಶ 800ರ ಶಾಸನವು ಕರಾವಳಿ ಕರ್ನಾಟಕದ ಆರಂಭಿಕ ಕನ್ನಡ ಲಿಪಿ, ಹಳೆಗನ್ನಡ ಭಾಷೆ, ಮತ್ತು ದೇವಾಲಯದ ಆಡಳಿತದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಶಾಸನವು ದಾನ ವ್ಯವಸ್ಥೆ, ಕೃಷಿ ಆದಾಯ ಮತ್ತು ಅಂದಿನ ಸಾಮಾಜಿಕ ನಿಯಮಗಳನ್ನು ತಿಳಿಸುವ ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzr38jh89zyvxb569wpenv9c,imgname-kadageri-inscription-1786441386535.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡಗೇರಿ ಗ್ರಾಮದ ವರಾಹವಿಷ್ಣುಮೂರ್ತಿ (Varahavishnumurthy Temple) ದೇವಾಲಯದ ಎದುರಿಗಿರುವ ಶಾಸನಶಿಲೆಯು ಕ್ರಿಶ ಸುಮಾರು 800ರ ಕಾಲದ್ದಾಗಿದ್ದು, (800 AD Halegannada inscription) ಕರಾವಳಿ ಕರ್ನಾಟಕದ ಆರಂಭಿಕ ಕನ್ನಡ ಲಿಪಿ (Kannada script evolution), ಹಳೆಗನ್ನಡ ಭಾಷೆ, ದೇವಾಲಯದ ಆಡಳಿತ, ಕೃಷಿ ಆದಾಯ ಹಾಗೂ ಧರ್ಮದಾನದ ವ್ಯವಸ್ಥೆಯನ್ನು ತಿಳಿಸುವ ಅಪರೂಪದ ದಾಖಲೆಯಾಗಿದೆ ಎಂದು ಅಂಕೋಲಾದ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ತಿಳಿಸಿದ್ದಾರೆ.&lt;/p&gt;&lt;h2&gt;ದಾನವ್ಯವಸ್ಥೆಯ ಸ್ವರೂಪ ಸ್ಪಷ್ಟ&lt;/h2&gt;&lt;p&gt;ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಾಸನವನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಹಾಗೂ ಅದರ ಛಾಯಾಚಿತ್ರಗಳನ್ನು ಹಲವು ಬಾರಿ ಅವಲೋಕಿಸಿ ಪ್ರೊ. ಜಿ.ಕೆ. ದೇವರಾಜ ಸ್ವಾಮಿ ಅವರ ಜೊತೆಸೇರಿ ಸಿದ್ಧಪಡಿಸಿದ ಪಾಠದ ಆಧಾರದ ಮೇಲೆ ಲಿಪಿ, ಭಾಷೆ, ಶಿಲ್ಪ ಮತ್ತು ವಿಷಯ ವಸ್ತುಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗಿದೆ. ಈ ಎಲ್ಲ ಸಾಕ್ಷ್ಯಗಳನ್ನು ಪರಸ್ಪರ ಹೋಲಿಸಿದಾಗ ಶಾಸನದ ಕಾಲ, ಅದರ ಧಾರ್ಮಿಕ ಉದ್ದೇಶ ಹಾಗೂ ದಾನವ್ಯವಸ್ಥೆಯ ಸ್ವರೂಪ ಸ್ಪಷ್ಟವಾಗುತ್ತದೆ ಎಂದಿದ್ದಾರೆ.&lt;/p&gt;&lt;h2&gt;ಕಪಿಲೆ ಗೋವುಗಳನ್ನು ದಾನ ಮಾಡಿದ ಪುಣ್ಯ&lt;/h2&gt;&lt;p&gt;ಶಾಸನದ ಫಲಶ್ರುತಿಯಲ್ಲಿ ದಾನವನ್ನು ಕಾಯುವವರಿಗೆ ಸಾವಿರ ಕಪಿಲೆ ಗೋವುಗಳನ್ನು ದಾನ ಮಾಡಿದ ಪುಣ್ಯ ದೊರೆಯುತ್ತದೆ; ದಾನವನ್ನು ಹಾಳುಮಾಡುವವರಿಗೆ ಗೋವುಗಳನ್ನು ಕದ್ದ ಪಾಪ ತಗಲುತ್ತದೆ ಎಂದು ಹೇಳಲಾಗಿದೆ. ಇದು ಸಾಮಾನ್ಯ ನೀತಿವಾಕ್ಯವಲ್ಲ. ದಾನದ ಆದಾಯವನ್ನು ಬೇರೆಡೆಗೆ ತಿರುಗಿಸುವುದು, ನಿಗದಿತ ಸೇವೆಯನ್ನು ನಿಲ್ಲಿಸುವುದು ಅಥವಾ ಲಿಖಿತ ನಿಯಮ ಬದಲಿಸುವುದರ ವಿರುದ್ಧ ನೀಡಿದ ಕಠಿಣ ಎಚ್ಚರಿಕೆಯಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ದಾನಶಾಸನವಲ್ಲ, ಆರಂಭಿಕ ಕನ್ನಡ ಲಿಪಿಯ ವಿಕಾಸ&lt;/h2&gt;&lt;p&gt;ಕಡಗೇರಿ ಶಾಸನವು (Kadageri inscription) ಕೇವಲ ಒಂದು ದೇವಾಲಯದ ದಾನಶಾಸನವಲ್ಲ. ಆರಂಭಿಕ ಕನ್ನಡ ಲಿಪಿಯ ವಿಕಾಸ, ಹಳೆಗನ್ನಡದ ವ್ಯಾಕರಣ, ಕರಾವಳಿಯ ಕೃಷಿ ಅಳತೆಗಳು, ಬೆಳೆಪಾಲು, ಭೂಮಿ ಮತ್ತು ಹಣದ ದಾನ, ದೇವಾಲಯದ ನಿತ್ಯಸೇವೆ, ಸ್ವಾಧ್ಯಾಯ, ಸ್ಥಳೀಯ ಅಧಿಕಾರಿಗಳು ಹಾಗೂ ಪಟ್ಟೆಗಾರರ ಆಡಳಿತ ವನ್ನು ಒಂದೇ ದಾಖಲೆಯ ಮೂಲಕ ತಿಳಿಸುತ್ತದೆ. ಮೊದಲ ಸಹಸ್ರಮಾನದ ಉತ್ತರ ಕನ್ನಡ (uttara kannada) ಜಿಲ್ಲೆಯ ಇತಿಹಾಸವನ್ನು ಕಟ್ಟುವಲ್ಲಿ ಈ ಶಾಸನ ಪ್ರಮುಖ ಆಧಾರವಾಗಿದೆ ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-800-ad-kannada-inscription-found-in-honnavar-reveals-coastal-karnataka-early-history-gdp/articleshow-17ga0dc"/>
        </item>
        <item>
            <title><![CDATA[Greater Coucal:ಹಿಚ್ಕಡದಲ್ಲಿ ಅಪರೂಪದ ಅತಿಥಿ;  ಹಸಿರು ಪರಿಸರಕ್ಕೆ ಮನಸೋತ ಕೃಷ್ಣ ಪಕ್ಷಿ]]></title>
            <link>https://kannada.asianetnews.com/karnataka-districts/a-rare-crow-pheasant-or-greater-coucal-has-laid-six-eggs-in-a-garden-in-hichkada-village-of-ankola-taluk-mrq/articleshow-550di1i</link>
            <guid isPermaLink="true">https://kannada.asianetnews.com/karnataka-districts/a-rare-crow-pheasant-or-greater-coucal-has-laid-six-eggs-in-a-garden-in-hichkada-village-of-ankola-taluk-mrq/articleshow-550di1i</guid>
            <pubDate>Sun, 23 Aug 2026 08:05:07 +0530</pubDate>
            <description><![CDATA[ಅಂಕೋಲಾ ತಾಲೂಕಿನ ಹಿಚ್ಕಡ ಗ್ರಾಮದ ತೋಟವೊಂದರಲ್ಲಿ, ಅಪರೂಪದ ಕೃಷ್ಣ ಪಕ್ಷಿ (ಕೆಂಬುತಾ) ಆರು ಮೊಟ್ಟೆಗಳನ್ನಿಟ್ಟಿದೆ. ಈ ನೈಸರ್ಗಿಕ ವಿದ್ಯಮಾನವು ಆ ಪ್ರದೇಶದ ಸಮೃದ್ಧ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದ್ದು, ತೋಟದ ಮಾಲೀಕರು ಪಕ್ಷಿಯ ಗೂಡನ್ನು ರಕ್ಷಿಸುತ್ತಿರುವುದು ಮನುಷ್ಯ-ಪ್ರಕೃತಿ ಬಾಂಧವ್ಯವನ್ನು ಸಾರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0p78czvfb5kp9w7gc46eqbd,imgname-ankola-1787452208123.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಘು ಕಾಕರಮಠ&lt;/strong&gt;&lt;/p&gt;&lt;p&gt;&lt;strong&gt;ಕಾರವಾರ:&lt;/strong&gt; ಪ್ರಕೃತಿಯ ಮಡಿಲಿನಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವೂ ತನ್ನದೇ ಆದ ವಿಶೇಷತೆ ಹೊಂದಿರುತ್ತದೆ. ಅಂತಹ ಅಪರೂಪದ ನೈಸರ್ಗಿಕ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಿ ತಾಲೂಕಿನ ಹಿಚ್ಕಡ ಗ್ರಾಮದ ತೋಟದ ಪರಿಸರದಲ್ಲಿ ಬಲು ಅಪರೂಪದ ಕೃಷ್ಣ ಪಕ್ಷಿ (ಕೆಂಬುತಾ) ಯೊಂದು ಮೊಟ್ಟೆ ಇಟ್ಟಿರುವುದು ಪಕ್ಷಿಪ್ರೇಮಿಗಳು ಹಾಗೂ ಪ್ರಕೃತಿ ಆಸಕ್ತರ ಗಮನ ಸೆಳೆದಿದೆ.&lt;/p&gt;&lt;p&gt;ಹಿಚ್ಕಡದ ಗುರು ನಾಯ್ಕ ಅವರ ತೋಟದಲ್ಲಿ ಕೃಷ್ಣ ಪಕ್ಷಿ 6 ಮೊಟ್ಟೆ ಇಟ್ಟಿರುವುದು ಇಲ್ಲಿನ ಪರಿಸರದ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದೆ.&lt;/p&gt;&lt;h2&gt;&lt;strong&gt;ಮೊಟ್ಟೆಯ ಸುತ್ತಲೂ ಎಚ್ಚರಿಕೆಯ ಕಾವಲು:&lt;/strong&gt;&lt;/h2&gt;&lt;p&gt;ಮೊಟ್ಟೆ ಇಟ್ಟಿರುವ ಪ್ರದೇಶದಲ್ಲಿ ಪಕ್ಷಿಯ ಚಲನವಲನ ಗಮನಿಸಿದ ಗುರು ನಾಯಕ ಅದರ ನೈಸರ್ಗಿಕ ಜೀವನ ಕ್ರಮಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಪಕ್ಷಿಯ ಗೂಡು ಅಥವಾ ಮೊಟ್ಟೆಯನ್ನು ಮುಟ್ಟದೆ, ಹತ್ತಿರ ಹೋಗಿ ಗದ್ದಲ ಮಾಡದೆ ದೂರದಿಂದಲೇ ವೀಕ್ಷಿಸುವ ಮೂಲಕ ಪಕ್ಷಿಯ ರಕ್ಷಣೆಗೆ ಸಹಕರಿಸುತ್ತಿದ್ದಾರೆ.&lt;/p&gt;&lt;p&gt;ಕಪ್ಪು ಬಣ್ಣದ ಆಕರ್ಷಕ ಮೈಬಣ್ಣ ಹಾಗೂ ವಿಶಿಷ್ಟ ಚಲನವಲನದಿಂದ ಗಮನ ಸೆಳೆಯುವ ಕೃಷ್ಣ ಪಕ್ಷಿ, ಸಾಮಾನ್ಯವಾಗಿ ತನ್ನ ವಾಸಸ್ಥಳವನ್ನು ಆಯ್ಕೆ ಮಾಡುವಾಗ ಸುರಕ್ಷಿತ ಹಾಗೂ ಅನುಕೂಲಕರ ಪರಿಸರಕ್ಕೆ ಆದ್ಯತೆ ನೀಡುತ್ತದೆ. ಗ್ರಾಮದ ಹಸಿರು ಪರಿಸರ, ಮರಗಿಡಗಳು ಹಾಗೂ ನೈಸರ್ಗಿಕ ವಾತಾವರಣ ಪಕ್ಷಿಗಳಿಗೆ ಅನುಕೂಲಕರವಾಗಿರುವುದರಿಂದ ಕೃಷ್ಣ ಪಕ್ಷಿಯು ಇಲ್ಲಿ ಸಂತಾನೋತ್ಪತ್ತಿಗೆ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು ಎಂದು ಪ್ರಕೃತಿ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷಿಯು ಮೊಟ್ಟೆ ಇಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಕುತೂಹಲವೂ ಹೆಚ್ಚಾಗಿದೆ.&lt;/p&gt;&lt;p&gt;ಪಕ್ಷಿಗಳು ತಮ್ಮ ಮೊಟ್ಟೆ ಹಾಗೂ ಮರಿಗಳನ್ನು ರಕ್ಷಿಸಲು ಅತ್ಯಂತ ಎಚ್ಚರಿಕೆಯಿಂದಿರುತ್ತವೆ. ಮಾನವನ ಅತಿಯಾದ ಓಡಾಟ, ಗದ್ದಲ ಅಥವಾ ಗೂಡಿನ ಬಳಿ ಕುತೂಹಲದಿಂದ ತೆರಳುವುದು ಪಕ್ಷಿಗೆ ಒತ್ತಡ ಉಂಟುಮಾಡಬಹುದು. ಹೀಗಾಗಿ ಹಿಚ್ಕಡದಲ್ಲಿ ಕಂಡುಬಂದಿರುವ ಈ ಅಪರೂಪದ ನೈಸರ್ಗಿಕ ವಿದ್ಯಮಾನವನ್ನು ಸಂರಕ್ಷಣೆಯ ದೃಷ್ಟಿಯಿಂದ ನೋಡಬೇಕಾಗಿದೆ.&lt;/p&gt;&lt;h3&gt;&lt;strong&gt;ಜೀವವೈವಿಧ್ಯದ ಸೂಚಕ:&lt;/strong&gt;&lt;/h3&gt;&lt;p&gt;ಒಂದು ಗ್ರಾಮದಲ್ಲಿ ವಿವಿಧ ಜಾತಿಯ ಪಕ್ಷಿಗಳು ಕಾಣಿಸಿಕೊಳ್ಳುವುದು ಅಲ್ಲಿನ ನೈಸರ್ಗಿಕ ಪರಿಸರ ವ್ಯವಸ್ಥೆ ಇನ್ನೂ ಜೀವಂತವಾಗಿರುವುದರ ಸೂಚಕವಾಗಿದೆ. ಕೃಷಿ ಭೂಮಿ, ತೋಟಗಳು, ಮರಗಿಡಗಳು ಹಾಗೂ ಜಲಮೂಲಗಳನ್ನು ಸಂರಕ್ಷಿಸುವುದರಿಂದ ಪಕ್ಷಿಗಳಿಗೆ ಸುರಕ್ಷಿತ ವಾಸಸ್ಥಾನ ಒದಗುತ್ತದೆ.&lt;/p&gt;&lt;p&gt;ಹಿಚ್ಕಡದ ಈ ಪುಟ್ಟ ಪಕ್ಷಿಗೂಡು, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ. ಹಿಚ್ಕಡದಲ್ಲಿ ಕೃಷ್ಣ ಪಕ್ಷಿ ಮೊಟ್ಟೆ ಇಟ್ಟಿರುವುದು ಗ್ರಾಮಸ್ಥರ ಪಾಲಿಗೆ ಕೇವಲ ಕುತೂಹಲದ ಸಂಗತಿಯಲ್ಲ. ನಮ್ಮ ಸುತ್ತಲಿನ ಪ್ರಕೃತಿಯನ್ನೂ ನಾವು ಕಾಪಾಡಬೇಕು ಎಂಬ ಸಂದೇಶ ಸಾರುವ ಅಪರೂಪದ ಘಟನೆಯಾಗಿದೆ.&lt;/p&gt;&lt;p&gt;ಕೃಷ್ಣ ಪಕ್ಷಿಯನ್ನು ಸ್ಥಳೀಯ ವಾಡಿಕೆ ಭಾಷೆಯಲ್ಲಿ ಕೆಂಬುತಾ, ರತ್ನ ಪಕ್ಷಿ ಎಂತಲು ಕರೆಯಲಾಗುತ್ತದೆ. ಇದನ್ನು ಹಿಂದಿನ ಕಾಲದಲ್ಲಿ ಶಕುನ ಪಕ್ಷಿ ಅಂತಲು ಕರೆಯಲಾಗುತ್ತಿತ್ತು. ಮಾಂತ್ರಿಕತೆಯಲ್ಲಿ ಈ ಪಕ್ಷಿಯನ್ನು ಬಳಸಲಾಗುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಈ ಪಕ್ಷಿ ದಾರಿಯಲ್ಲಿ ಹೋಗುವಾಗ ಎದುರಾದರೆ ಶುಭ ಸೂಚನೆ ಎಂದು ಹೇಳಲಾಗುತ್ತಿರುವುದರಿಂದ ಇದನ್ನು ಶಕುನದ ಪಕ್ಷಿ ಎಂತಲೂ ಕರೆಯಲಾಗುತ್ತದೆ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-rare-crow-pheasant-or-greater-coucal-has-laid-six-eggs-in-a-garden-in-hichkada-village-of-ankola-taluk-mrq/articleshow-550di1i"/>
        </item>
        <item>
            <title><![CDATA[ಹೊನ್ನಾವರ ರೈಲ್ವೆ ನಿಲ್ದಾಣದಲ್ಲಿ ಮೂರು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಮನವಿ ಸಲ್ಲಿಕೆ]]></title>
            <link>https://kannada.asianetnews.com/karnataka-districts/appeal-submitted-for-halting-of-three-express-trains-at-honnavara-railway-station-mrq/articleshow-9xbhyd0</link>
            <guid isPermaLink="true">https://kannada.asianetnews.com/karnataka-districts/appeal-submitted-for-halting-of-three-express-trains-at-honnavara-railway-station-mrq/articleshow-9xbhyd0</guid>
            <pubDate>Wed, 02 Sep 2026 07:28:07 +0530</pubDate>
            <description><![CDATA[ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೊನ್ನಾವರ ಕೊಂಕಣ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರ ಮತ್ತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಮೇಲ್ಸೇತುವೆ ನಿರ್ಮಾಣ, ಪ್ರಮುಖ ರೈಲುಗಳ ನಿಲುಗಡೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಸ್ಥಳೀಯರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m1fxcterr8xr7bqkwbp1jafw,imgname-honnavara--1788314282456.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ: &lt;/strong&gt;ಹೊನ್ನಾವರ ತಾಲೂಕಿನ ಕೊಂಕಣ ರೈಲ್ವೆ ನಿಲ್ದಾಣಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೇ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.&lt;/p&gt;&lt;p&gt;ಸಾರ್ವಜನಿಕರ ಬಹುಕಾಲದ ಬೇಡಿಕೆಗಳಾದ ಪ್ರಮುಖ ರೈಲುಗಳ ನಿಲುಗಡೆ ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ಮೂಲ ಸೌಕರ್ಯಗಳ ಮೇಲ್ದರ್ಜೀಕರಣದ ಕುರಿತು ಕೊಂಕಣ ರೈಲ್ವೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.&lt;/p&gt;&lt;h2&gt;&lt;strong&gt;ತಿರುಪತಿ ರೈಲು, ಮಂಗಳೂರು ಸಿಎಸ್&zwnj;ಟಿ ರೈಲು, ನೇತ್ರಾವತಿ ಎಕ್ಸ್&zwnj;ಪ್ರೆಸ್ ರೈಲು&lt;/strong&gt;&lt;/h2&gt;&lt;p&gt;ರೈಲ್ವೆ ನಿಲ್ದಾಣದ ಫ್ಲಾಟ್&zwnj;ಫಾರ್ಮ್ ಸರಿಪಡಿಸುವುದು, ನಿಲ್ದಾಣದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸುವುದು. ಅಗತ್ಯವಿರುವ ರೈಲುಗಳನ್ನು ನಿಲುಗಡೆ ಮಾಡುವ ಬಗ್ಗೆ ಅದರಲ್ಲೂ ತಿರುಪತಿ ರೈಲು, ಮಂಗಳೂರು ಸಿಎಸ್&zwnj;ಟಿ ರೈಲು, ನೇತ್ರಾವತಿ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಹೊನ್ನಾವರದಲ್ಲಿ ನಿಲ್ಲಿಸಬೇಕು.&lt;/p&gt;&lt;p&gt;ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್, ನಿರ್ಮಿಸಿಕೊಡಬೇಕು. ಅಗತ್ಯವಾಗಿ ಬೇಕಾದ ಕಡೆ ರೈಲ್ವೆ ಗೇಟ್ ಮಂಜೂರು ಹಾಗೂ ಗೇಟ್ ಸರಿಪಡಿಸುವಲ್ಲಿ ಅದನ್ನು ಸರಿಪಡಿಸುವ ಕೆಲಸವಾಗಬೇಕು. ಮಂಕಿ ರೈಲ್ವೆ ಉನ್ನತಿಕರಣ, ರೈಲ್ವೆ ಗೇಟ್ ಬಳಿ ಅಂಡರ್ ಪಾಸ್&zwnj; ನಿರ್ಮಾಣ ಕುರಿತ ಬೇಡಿಕೆಗಳನ್ನು ಈಡೇರಿಸುವಂತೆ ಸ್ಥಳೀಯರು, ವಿವಿಧ ಸಂಘಟನೆಯ ಮುಖಂಡರು ಸಂಸದರಲ್ಲಿ ಕೋರಿದರು.&lt;/p&gt;&lt;p&gt;&lt;strong&gt;ಮಂಕಿ ರೈಲ್ವೆ ಉನ್ನತಿಕರಣ&lt;/strong&gt;&lt;/p&gt;&lt;p&gt;ಇದೇ ವೇಳೆ ಸ್ಥಳೀಯರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಂಸದರು, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಸಂತೋಷ್ ಝಾ ಅವರಿಗೂ ಪತ್ರವನ್ನು ಕಳಿಸುತ್ತೇನೆ. ರೈಲ್ವೆ ಗೇಟ್&zwnj;ಗಳನ್ನು ಸರಿಯಾಗಿ ಮಾಡಿ, ಜಾನುವಾರುಗಳು ಸಾವಿಗೀಡಾಗದಂತೆ ನೋಡಿಕೊಳ್ಳಿ. ಮಂಕಿ ರೈಲ್ವೆ ಉನ್ನತಿಕರಣ, ಹೊನ್ನಾವರದಲ್ಲಿ ಮೇಲ್ಸೇತುವೆ, ರೈಲ್ವೆ ಗೇಟ್ ಇರುವಲ್ಲಿ ಅಂಡರ್ ಪಾಸ್ ನಿರ್ಮಾಣ ಕುರಿತು ಬೇಡಿಕೆಗಳನ್ನು ಈಡೇರಿಸುವ ಹಾಗೂ ನಿಲ್ದಾಣದ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.&lt;/p&gt;&lt;p&gt;ತಾಳಗುಪ್ಪ ಮತ್ತು ಹೊನ್ನಾವರ ರೈಲ್ವೆ ಕುರಿತು ಸರ್ವೆ ಕಾರ್ಯಕ್ಕೆ ಹಣ ಮಂಜೂರು ಆಗಿದೆ. ಪರಿಸರ ಇಲಾಖೆಯ ಕ್ಲಿಯರೆನ್ಸ್ ಸಿಗುವುದು ಬಾಕಿಯಿದೆ. ಈ ಕುರಿತು ಪ್ರಯತ್ನ ಮುಂದುವರಿದಿದೆ. ಅಲ್ಲದೆ ಕಾರವಾರದವರೆಗೂ ಕೆಲವು ರೈಲುಗಳನ್ನು ವಿಸ್ತರಿಸುವ ಯೋಜನೆಯಿದೆ. ಆದರೆ ನಮ್ಮಲ್ಲಿ ವಾಟರಿಂಗ್ ಫೆಸಿಲಿಟಿ ಇಲ್ಲ. ಹೀಗಾಗಿ ಕೆಲವು ರೈಲುಗಳನ್ನು ಬಿಡಲು ಕಷ್ಟವಾಗಿದೆ. ಅದು ನಮ್ಮಲ್ಲಿ ನಿರ್ಮಾಣವಾದರೆ ಇನ್ನಷ್ಟು ರೈಲುಗಳ ಸಂಚಾರ ಆರಂಭಿಸಬಹುದು ಎಂದರು.&lt;/p&gt;&lt;p&gt;ನಂತರ ಹೊನ್ನಾವರ ಮಂಡಲದ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ''''ಡ್ರಗ್ಸ್ ಮುಕ್ತ ಭಾರತ'''' ಅಭಿಯಾನದಲ್ಲಿ ಸಂಸದರು ಪಾಲ್ಗೊಂಡಿದ್ದರು. ಯುವಶಕ್ತಿಯನ್ನು ಮಾದಕ ದ್ರವ್ಯಗಳ ದುಷ್ಪರಿಣಾಮಗಳಿಂದ ರಕ್ಷಿಸಿ, ಆರೋಗ್ಯಕರ ಹಾಗೂ ಸದೃಢ ಸಮಾಜವನ್ನು ನಿರ್ಮಿಸುವ ಸಂಕಲ್ಪಕ್ಕೆ ಕೈಜೋಡಿಸಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.&lt;/p&gt;&lt;p&gt;ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಕೊಂಕಣ ರೈಲ್ವೆ ಡಿಆರ್&zwnj;ಎಂ ಆಶಾ ಶೆಟ್ಟಿ, ಪಕ್ಷದ ಪ್ರಮುಖರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.&lt;/p&gt;&lt;h3&gt;&lt;strong&gt;ಏಣಿ ಮೂಲಕ ಫ್ಲಾಟ್&zwnj;ಫಾರ್ಮ್&zwnj; ಏರಿದ ಪ್ರಯಾಣಿಕರು&lt;/strong&gt;&lt;/h3&gt;&lt;p&gt;ಸಂಸದರು ಬರುವ ಕೆಲವೇ ನಿಮಿಷದ ಮೊದಲು ಮಂಗಳೂರು- ಮುಂಬೈ ಮತ್ಸ್ಯಗಂಧ ರೈಲು ನಿಲುಗಡೆಯಾಗಿತ್ತು. ಆಗ ಪ್ರಯಾಣಿಕರು ತಮ್ಮ ಲಗೇಜ್&zwnj;ಗಳನ್ನು ಇಳಿಸಿಕೊಂಡು ರೈಲ್ವೆ ಹಳಿಯನ್ನು ದಾಟಿ ಬರುವಾಗ ಫ್ಲಾಟ್&zwnj;ಫಾರ್ಮ್ ಹತ್ತಲು ಏಣಿಯನ್ನು ಹಾಕಿದ್ದು ವಿಶೇಷವಾಗಿತ್ತು. ಇಲ್ಲಿ ಮೇಲ್ಸೇತುವೆಯನ್ನು ನಿರ್ಮಿಸಿದರೆ ಇಂತಹ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ನೆರೆದಿದ್ದವರು ಮಾತನಾಡಿಕೊಳ್ಳುತ್ತಿದ್ದರು.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/appeal-submitted-for-halting-of-three-express-trains-at-honnavara-railway-station-mrq/articleshow-9xbhyd0"/>
        </item>
        <item>
            <title><![CDATA[ಶಿರಸಿಯಲ್ಲಿ 100 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ವಶಕ್ಕೆ: ಪಶ್ಚಿಮ ಘಟ್ಟದಲ್ಲಿ ಬೃಹತ್ ಕಾರ್ಯಾಚರಣೆ!]]></title>
            <link>https://kannada.asianetnews.com/karnataka-districts/sirsi-forest-department-reclaims-100-crore-encroached-land-banavasi-highway-san/articleshow-dc4g1dn</link>
            <guid isPermaLink="true">https://kannada.asianetnews.com/karnataka-districts/sirsi-forest-department-reclaims-100-crore-encroached-land-banavasi-highway-san/articleshow-dc4g1dn</guid>
            <pubDate>Mon, 24 Aug 2026 13:06:54 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಬನವಾಸಿ ಹೆದ್ದಾರಿ ಬಳಿಯ 110 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ 37 ವರ್ಷಗಳ ನಂತರ ಯಶಸ್ವಿಯಾಗಿ ವಶಕ್ಕೆ ಪಡೆದಿದೆ. ಈ ಭೂಮಿಯು 'ಕಾಮಧೇನು ಸಹಕಾರಿ ಸಂಸ್ಥೆ'ಗೆ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆ ಅವಧಿ ಮುಗಿದರೂ ಕಾನೂನು ಸಂಘರ್ಷದಿಂದಾಗಿ ಪ್ರಕ್ರಿಯೆ ವಿಳಂಬವಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0sb2wf0qmsk8jc03ayw66g3,imgname-sirsi-forest-land-1787556884960.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಶಿರಸಿ (ಆ.24): &lt;/strong&gt;ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಬನವಾಸಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾಗೂ ಪಶ್ಚಿಮ ಘಟ್ಟಗಳ ವನ್ಯಜೀವಿ ಕಾರಿಡಾರ್ ಭಾಗವಾಗಿರುವ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ವಾಣಿಜ್ಯ ಮೌಲ್ಯದ 110 ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಯಶಸ್ವಿಯಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಜಮೀನು ಸರ್ಕಾರದಿಂದ 'ಕಾಮಧೇನು ಸಹಕಾರಿ ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಸ್ಥೆ'ಗೆ (Kamadhenu Cooperative Milk and Fruit Processing Society) ಗುತ್ತಿಗೆ ನೀಡಲಾಗಿದ್ದ ಒಟ್ಟು 389.07 ಎಕರೆ ಅರಣ್ಯ ಭೂಮಿಯ ಒಂದು ಭಾಗವಾಗಿದೆ.&lt;/p&gt;&lt;p&gt;37 ವರ್ಷಗಳ ಬಳಿಕ ತೆರವು ಕಾರ್ಯಾಚರಣೆ: ಕಾಮಧೇನು ಸಂಸ್ಥೆಗೆ ನೀಡಲಾಗಿದ್ದ ಗುತ್ತಿಗೆ ಅವಧಿಯು 1989 ರಲ್ಲೇ ಅಂತ್ಯಗೊಂಡಿತ್ತು. ಆದರೆ, ಭೂಮಿಯನ್ನು ಹಿಂಪಡೆಯಲು ಇಲಾಖೆ ನಡೆಸಿದ್ದ ತಪ್ಪಾದ ಪ್ರಯತ್ನ ಕಾನೂನು ಸಂಘರ್ಷಕ್ಕೆ ಕಾರಣವಾಗಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇತ್ತೀಚೆಗೆ ಈ ಜಮೀನಿನ ಮೇಲಿನ ಹಕ್ಕನ್ನು ಪ್ರತಿಪಾದಿಸುತ್ತಿದ್ದವರು ತೆರವು ಆದೇಶವನ್ನು ಹೈಕೋರ್ಟ್&zwnj;ನಲ್ಲಿ ಪ್ರಶ್ನಿಸಲು ವಿಫಲರಾದ ಬೆನ್ನಲ್ಲೇ, ಉನ್ನತ ನ್ಯಾಯಾಲಯವು ಕಾನೂನುಬದ್ಧವಾಗಿ ಭೂಮಿಯ ವಶಕ್ಕೆ ಕ್ರಮ ಕೈಗೊಳ್ಳಿ ಎಂದು ಇಲಾಖೆಗೆ ನಿರ್ದೇಶನ ನೀಡಿತ್ತು. ಯಾವುದೇ ತಡೆಯಾಜ್ಞೆ ಸಿಗದಂತೆ ಅರಣ್ಯ ಇಲಾಖೆಯು ನ್ಯಾಯಾಲಯದಲ್ಲಿ ಮುನ್ನೆಚ್ಚರಿಕೆಯಾಗಿ ಕೇವಿಯೆಟ್&zwnj; ಸಲ್ಲಿಸಿತ್ತು.&lt;/p&gt;&lt;h2&gt;&lt;strong&gt;389.07 ಎಕರೆ ಅರಣ್ಯ ಭೂಮಿಯ ಬಳಕೆ ವಿವರ&lt;/strong&gt;&lt;/h2&gt;&lt;p&gt;ಇಲಾಖೆಯು ಭೂಬಳಕೆ ಮಾದರಿಯನ್ನು ವಿಶ್ಲೇಷಿಸಿದಾಗ, 389.07 ಎಕರೆ ಜಮೀನನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು ಎಂಬುದು ಕಂಡುಬಂದಿದೆ. ಇದರಲ್ಲಿ ದೊಡ್ಡ ಪ್ರಮಾಣದ ಜಾಗ ಅಂದಾಜು 110 ಎಕರೆ ಭೂಮಿ ಖಾಲಿಯಾಗಿಯೇ ಉಳಿದಿತ್ತು. ಉಳಿದಂತೆ ತೆಂಗು, ಬತ್ತ ಸೇರಿದಂತೆ ಬೆಳೆದು ನಿಂತಿರುವ ಕೃಷಿ ಭೂಮಿ, ಅಡಿಕೆ ಮರಗಳನ್ನು ಹೊಂದಿರುವ ತೋಟಗಾರಿಕೆ ಭಾಗ ವಶಪಡಿಸಿಕೊಳ್ಳಲಾಗಿದೆ. 9 ಎಕರೆಗಿಂತ ಕಡಿಮೆ ಜಾಗದಲ್ಲಿ 33 ಕಟ್ಟಡಗಳನ್ನು ಕೂಡ ನಿರ್ಮಾಣ ಮಾಡಲಾಗಿತ್ತು.&lt;/p&gt;&lt;h2&gt;&lt;strong&gt;ಮಹಿಳೆಯಿಂದ ವಿಷ ಸೇವನೆ ಯತ್ನ&lt;/strong&gt;&lt;/h2&gt;&lt;p&gt;ಅಧಿಕಾರಿಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ, ಬೆಳೆದು ನಿಂತಿರುವ ಕೃಷಿ ಭೂಮಿಯನ್ನೂ ಇಲಾಖೆ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ವದಂತಿ ಹಬ್ಬಿ ನೂರಾರು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಈ ವೇಳೆ ಮಹಿಳೆಯೊಬ್ಬಳು ವಿಷ ಸೇವಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.&lt;/p&gt;&lt;h2&gt;&lt;strong&gt;ಜೆಸಿಬಿ ಬಳಸಿ ತೆರವು, ಸ್ಥಳದಲ್ಲೇ ಸಸಿ ನೆಟ್ಟು ಬೇಲಿ&lt;/strong&gt;&lt;/h2&gt;&lt;p&gt;ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸಂದೀಪ್ ಸೂರ್ಯವಂಶಿ ಅವರ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸ್ ಬಂದೋಬಸ್ತ್&zwnj;ನೊಂದಿಗೆ ಕಾರ್ಯಾಚರಣೆ ನಡೆಸಿದರು. ವಶಪಡಿಸಿಕೊಂಡ ಖಾಲಿ ಜಾಗದಲ್ಲಿ ಜೆಸಿಬಿ (Earthmovers) ಮೂಲಕ ಗುಂಡಿಗಳನ್ನು ತೋಡಿ, ಸಂಜೆಯ ವೇಳೆಗೆ ಸ್ಥಳೀಯ ತಳಿಯ ಗಿಡಗಳನ್ನು ನೆಡಲಾಯಿತು. ಜೊತೆಗೆ ಇಡೀ 110 ಎಕರೆ ಪ್ರದೇಶಕ್ಕೆ ಬೇಲಿ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಯಿತು.&lt;/p&gt;&lt;p&gt;ಕಾರ್ಯಾಚರಣೆಯ ಕುರಿತು ಮಾತನಾಡಿದ ಡಿಎಸ್&zwnj;ಎಫ್ ಸಂದೀಪ್ ಸೂರ್ಯವಂಶಿ, &quot;ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಪಾಲಿಸಿ, ಕಾನೂನು ಪ್ರಕಾರವೇ ಭೂಮಿಯನ್ನು ಹಿಂಪಡೆಯುತ್ತಿದ್ದೇವೆ. ಪ್ರಸ್ತುತ ಖಾಲಿ ಜಾಗವನ್ನು ವಶಕ್ಕೆ ಪಡೆದಿದ್ದೇವೆ. ಇನ್ನುಳಿದ ಜಾಗದ ಕುರಿತು ಕಾನೂನು ತಂಡದೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ,&quot; ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/sirsi-forest-department-reclaims-100-crore-encroached-land-banavasi-highway-san/articleshow-dc4g1dn"/>
        </item>
        <item>
            <title><![CDATA[ಮಲಗಿದ್ದ ಪತ್ನಿಯ ಕುತ್ತಿಗೆ ಹಿಚುಕಿ ಜೀವ ತೆಗೆದ.. 'ಹೃದಯಾಘಾತ' ಎಂದು ಕತೆ ಕಟ್ಟಿದ್ದ ಪತಿ ಲಾಕ್ ಆಗಿದ್ದೇಗೆ?]]></title>
            <link>https://kannada.asianetnews.com/karnataka-districts/honnavar-ruthless-husband-arrested-after-strangling-his-sleeping-wife-to-death-and-staging-it-as-a-heart-attack-gkn/articleshow-i8b4gli</link>
            <guid isPermaLink="true">https://kannada.asianetnews.com/karnataka-districts/honnavar-ruthless-husband-arrested-after-strangling-his-sleeping-wife-to-death-and-staging-it-as-a-heart-attack-gkn/articleshow-i8b4gli</guid>
            <pubDate>Thu, 27 Aug 2026 19:35:13 +0530</pubDate>
            <description><![CDATA[&lt;p&gt;ಕುಡಿದ ಮತ್ತಿನಲ್ಲಿ ಬಂದು ಮಲಗಿದ್ದ ಪತ್ನಿಯ ಜೀವ ತೆಗೆದು ಹೃದಯಾಘಾತದ ನಾಟಕ ಕಟ್ಟಿದ್ದ ಪತಿ ಕೊನೆಗೂ ಅರೆಸ್ಟ್ ಆಗಿದ್ದಾನೆ. ನಂತರ ಪ್ರಕರಣ ಬಯಲಾಗಿದ್ದು ಹೇಗೆ? ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11rjsmr61r6mtvs125nsqdx,imgname-honnavar-husband-and-wife-1787839473299.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಂದು ಏನೂ ತಿಳಿಯದವನಂತೆ 'ಹೃದಯಾಘಾತ'ದ ನಾಟಕವಾಡಿದ್ದ ಪತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಈ ಬೆಚ್ಚಿಬೀಳಿಸುವ ಘಟನೆ ಹೊನ್ನಾವರ ತಾಲೂಕಿನ ದೊಡ್ಡಗುಂಡ ಗ್ರಾಮದಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ದೊಡ್ಡಗುಂಡ ಗ್ರಾಮದ ನಿವಾಸಿ ಗಣಪತಿ ಮಂಜುನಾಥ ನಾಯ್ಕ ಬಂಧಿತ ಆರೋಪಿ. ಈತ ತನ್ನ ಪತ್ನಿ ಮಂಗಲಾ ಗಣಪತಿ ನಾಯ್ಕ (27) ಎಂಬಾಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ದಿನ ಆರೋಪಿ ಗಣಪತಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಎನ್ನಲಾಗಿದೆ. ರಾತ್ರಿ ಪತ್ನಿ ಮಂಗಲಾ ಮಲಗಿದ್ದಾಗ, ಕುಡಿದ ಮತ್ತಿನಲ್ಲಿದ್ದ ಗಣಪತಿ ಆಕೆಯ ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.&lt;/p&gt;&lt;p&gt;ಪತ್ನಿ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಆರೋಪಿ ಯಾರಿಗೂ ಸಂಶಯ ಬಾರದಿರಲಿ ಎಂದು ಹೊಸ ಕಥೆ ಕಟ್ಟಿದ್ದ. ತನ್ನ ಪತ್ನಿ ಮಂಗಲಾಗೆ ಇದ್ದಕ್ಕಿದ್ದಂತೆ 'ಹೃದಯಾಘಾತ' ಸಂಭವಿಸಿ ಸಾವನ್ನಪ್ಪಿದ್ದಾಳೆ ಎಂದು ಎಲ್ಲರಿಗೂ ನಂಬಿಸಿದ್ದ. ಆಕೆಯ ಸಾವು ನೈಸರ್ಗಿಕ ಎಂದು ಬಿಂಬಿಸಲು ಆತ ಸಾಕಷ್ಟು ಪ್ರಯತ್ನ ನಡೆಸಿದ್ದ.&lt;/p&gt;&lt;p&gt;ಮಂಗಲಾಳ ಸಾವಿನ ಬಗ್ಗೆ ಆಕೆಯ ಸಹೋದರಿಗೆ ಬಲವಾದ ಸಂಶಯ ವ್ಯಕ್ತವಾಗಿತ್ತು. ಆರೋಗ್ಯವಾಗಿದ್ದ ತಂಗಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿತ್ತು. ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಮಂಕಿ ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಬಯಲಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ವಿಚಾರಣೆಯಲ್ಲಿ ಕೊಲೆ ಒಪ್ಪಿಕೊಂಡ ಆರೋಪಿ&lt;/strong&gt;&lt;/h2&gt;&lt;p&gt;ಪೊಲೀಸರು ಸಂಶಯದ ಮೇಲೆ ಪತಿ ಗಣಪತಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಪತ್ನಿಯನ್ನೇ ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಮಂಕಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/honnavar-ruthless-husband-arrested-after-strangling-his-sleeping-wife-to-death-and-staging-it-as-a-heart-attack-gkn/articleshow-i8b4gli"/>
        </item>
        <item>
            <title><![CDATA[ಕರ್ನಾಟಕದ ಕರಾವಳಿಯಲ್ಲಿ ಗಣನೀಯವಾಗಿ ಕ್ಷೀಣಿಸುತ್ತಿದೆ ಕಪ್ಪೆ ಸಂತತಿ! ಯಾವುದರ ಸಂಕೇತ?]]></title>
            <link>https://kannada.asianetnews.com/karnataka-districts/uttara-kannada-the-population-of-frogs-is-declining-on-the-coast-of-karnataka-what-is-this-a-sign-of-mrq/articleshow-kut6urq</link>
            <guid isPermaLink="true">https://kannada.asianetnews.com/karnataka-districts/uttara-kannada-the-population-of-frogs-is-declining-on-the-coast-of-karnataka-what-is-this-a-sign-of-mrq/articleshow-kut6urq</guid>
            <pubDate>Mon, 17 Aug 2026 06:19:08 +0530</pubDate>
            <description><![CDATA[ಕರಾವಳಿ ಪ್ರದೇಶದಲ್ಲಿ ಮಳೆಯ ಅಭಾವ, ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಮಾಂಸಕ್ಕಾಗಿ ಬೇಟೆಯಾಡುವುದರಿಂದ ಕಪ್ಪೆಗಳ ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿದೆ. ಇದು ಪರಿಸರ ವ್ಯವಸ್ಥೆಯ ಆಹಾರ ಸರಪಳಿಯ ಮೇಲೆ ಪರಿಣಾಮ ಬೀರಿದ್ದು, ಕೀಟಗಳು ಮತ್ತು ಸೊಳ್ಳೆಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿ ಹಾವುಗಳು ಆಹಾರ ಅರಸಿ ಮಾನವ ವಸತಿ ಪ್ರದೇಶಗಳಿಗೆ ಬರುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m06k0kzjq5kxzqsby8s0wztc,imgname-frog-1786927665138.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಘು ಕಾಕರಮಠ&lt;/strong&gt;&lt;/p&gt;&lt;p&gt;&lt;strong&gt;ಉತ್ತರ ಕನ್ನಡ:&lt;/strong&gt; ಮಳೆಯ ಅಭಾವ, ಸಾಂಪ್ರದಾಯಿಕ ಕೃಷಿಗೆ ರಾಸಾಯನಿಕ ಗೊಬ್ಬರಗಳ ಬಳಕೆ... ಇವುಗಳ ಹೊಡೆತಕ್ಕೆ ಸಿಲುಕಿ ಮಳೆಗಾಲದ ಅತಿಥಿ ಎಂದೇ ಕರೆಯಲ್ಪಡುವ ಕಪ್ಪೆಗಳ ಸಂತತಿ ಕರಾವಳಿಯಲ್ಲಿ ಕ್ಷೀಣಿಸುತ್ತಿದೆ.&lt;/p&gt;&lt;p&gt;ಪರಿಸರ ವ್ಯವಸ್ಥೆಯ ಆಹಾರ ಸರಪಣಿಯ ಪ್ರಮುಖ ಕೊಂಡಿಯಾಗಿರುವ ಕಪ್ಪೆಗಳು ಮಾಯವಾಗುತ್ತಿರುವುದು ಕೃಷಿಕರು ಹಾಗೂ ಪರಿಸರ ಪ್ರೇಮಿಗಳಲ್ಲಿ ಕಳವಳ ಮೂಡಿಸಿದೆ.&lt;/p&gt;&lt;h2&gt;&lt;strong&gt;ಗೋವಾ ಖಾದ್ಯಕ್ಕೆ ಭಾರಿ ಡಿಮ್ಯಾಂಡ್:&lt;/strong&gt;&lt;/h2&gt;&lt;p&gt;ನೆರೆಯ ಗೋವಾ ಹಾಗೂ ಚೀನಾದಲ್ಲಿ ಕಪ್ಪೆ ಮಾಂಸಕ್ಕೆ ವಿಪರೀತ ಬೇಡಿಕೆಯಿದೆ. ಆದರೆ, ಕರಾವಳಿಯಲ್ಲಿ ಕಪ್ಪೆಗಳ ಸಂತತಿ ಕ್ಷೀಣಿಸುತ್ತಿರುವುದರಿಂದ ಗೋವಾದ ಪ್ರಸಿದ್ಧ ಹೋಟೆಲ್&zwnj;ಗಳಲ್ಲಿ ಈಗ ಕಪ್ಪೆ ಖಾದ್ಯಕ್ಕೆ ಅಭಾವ ಸೃಷ್ಟಿಯಾಗಿದೆ. ಕಳೆದ ವರ್ಷ ಗೋವಾದಲ್ಲಿ ಒಂದು ದೊಡ್ಡ ಗಾತ್ರದ ಕಪ್ಪೆಗೆ ₹700 ವರೆಗೆ ಬೆಲೆಯಿದ್ದರೆ, ಈ ವರ್ಷ ₹900 ನೀಡಿದರೂ ಕಪ್ಪೆಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಮಳೆಗಾಲ ಆರಂಭವಾಗುತ್ತಿದ್ದಂತೆ ಹೋಟೆಲ್&zwnj; ಉದ್ಯಮಿಗಳು ಕಪ್ಪೆಗಳು ಕೊಡಿಸುವಂತೆ ಏಜೆಂಟ್&zwnj;ಗಳಿಗೆ ಮುಂಗಡ ಹಣ ನೀಡುತ್ತಿದ್ದರು. ಆದರೆ, ಈಗ ಹಣ ನೀಡಿದರೂ ಕಪ್ಪೆಗಳೇ ಸಿಗುತ್ತಿಲ್ಲ.&lt;/p&gt;&lt;p&gt;ಮಳೆಗಾಲದ ಆಗಮನದ ಸೂಚನೆ ನೀಡುತ್ತಾ ಕೃಷಿ ಗದ್ದೆಗಳಲ್ಲಿ ಮೊಳಗುತ್ತಿದ್ದ ಕಪ್ಪೆಗಳ ಗುಟುರ್ ಗುಟುರ್ ನಾದ ಈಗ ಕ್ಷೀಣಿಸಿದೆ. ಜೈವಿಕ ವೈವಿಧ್ಯತೆಯ ಸಂಕೇತವಾಗಿದ್ದ, ಅನ್ನದಾತನ ಆಪ್ತ ಮಿತ್ರ ಆಗಿದ್ದ ಕಪ್ಪೆಗಳು ಕಾಣೆಯಾಗುತ್ತಿರುವುದು ರೈತರಲ್ಲಿ ಜಿಜ್ಞಾಸೆ ಮೂಡಿಸಿದೆ.&lt;/p&gt;&lt;h3&gt;&lt;strong&gt;ರೈತನ ಅಪರೂಪದ ಮಿತ್ರ ಕಪ್ಪೆ:&lt;/strong&gt;&lt;/h3&gt;&lt;p&gt;ಕಪ್ಪೆಗಳು ಕೇವಲ ಜೀವಿಯಲ್ಲ, ಕೃಷಿಕನ ಬೆಳೆಯ ರಕ್ಷಕ. ಗದ್ದೆಗಳಲ್ಲಿ ಬೆಳೆ ಹಾಳು ಮಾಡುವ ಕ್ರಿಮಿ-ಕೀಟಗಳು ಹಾಗೂ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳನ್ನು ಕಪ್ಪೆಗಳು ಆಹಾರವಾಗಿ ಸೇವಿಸಿ ಕೀಟನಾಶಕವಾಗಿ ಕೆಲಸ ಮಾಡುತ್ತಿದ್ದವು. ಸೊಳ್ಳೆಗಳ ಹಾವಳಿ ನಿಯಂತ್ರಣದಲ್ಲಿದ್ದರೆ ಸಾಂಕ್ರಾಮಿಕ ರೋಗಗಳೂ ದೂರವಿರುತ್ತವೆ ಎಂಬುದು ತಜ್ಞರ ಅಭಿಮತವಾಗಿದೆ.&lt;/p&gt;&lt;h3&gt;&lt;strong&gt;ರಾಸಾಯನಿಕ ಗೊಬ್ಬರಗಳ ಮಾರಕ ಪ್ರಭಾವ:&lt;/strong&gt;&lt;/h3&gt;&lt;p&gt;ಮಳೆಯ ಅಭಾವ ಒಂದೆಡೆಯಾದರೆ, ಗದ್ದೆ, ಹಳ್ಳ-ಕೊಳ್ಳ ಮತ್ತು ಬಾವಿಗಳಲ್ಲಿ ಅತಿಯಾಗಿ ಬಳಸಲಾಗುತ್ತಿರುವ ಅಸಾಂಪ್ರದಾಯಿಕ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು ಕಪ್ಪೆಗಳ ಜೀವಕ್ಕೆ ಕಂಟಕವಾಗಿವೆ. ರಾಸಾಯನಿಕಯುಕ್ತ ನೀರು ಕಪ್ಪೆಗಳ ಆವಾಸ ಸ್ಥಾನವನ್ನೇ ನಾಶಪಡಿಸುತ್ತಿದೆ.&lt;/p&gt;&lt;p&gt;ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಗಣನೀಯವಾಗಿ ಹೆಚ್ಚಿದ್ದು, ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.&lt;/p&gt;&lt;h3&gt;&lt;strong&gt;ಆಹಾರದ ಕ್ಷಾಮ ಎದುರಿಸುತ್ತಿರುವ ಉರಗ:&lt;/strong&gt;&lt;/h3&gt;&lt;p&gt;ನಿಸರ್ಗದ ಆಹಾರ ಸರಪಣಿಯಲ್ಲಿ ಒಂದು ಜೀವಿಯನ್ನು ತಿಂದು ಇನ್ನೊಂದು ಜೀವಿ ಬದುಕುತ್ತದೆ. ಕಪ್ಪೆಗಳು ಹಾವಿನ ಪ್ರಮುಖ ಆಹಾರ. ಗದ್ದೆಗಳಲ್ಲಿ ಕಪ್ಪೆಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಆಹಾರದ ಕ್ಷಾಮ ಎದುರಿಸುತ್ತಿರುವ ಉರಗಗಳು (ಹಾವುಗಳು) ಈಗ ಆಹಾರ ಅರಸಿ ನಾಡಿನತ್ತ ಹಾಗೂ ಮಾನವ ವಸತಿ ಪ್ರದೇಶಗಳತ್ತ ದಾಂಗುಡಿ ಇಡುತ್ತಿರುವುದು ವಾಸ್ತವ ಸಂಗತಿಯಾಗಿದೆ.&lt;/p&gt;&lt;p&gt;ಹಿಂದೆ ಮಳೆಗಾಲದಲ್ಲಿ ಕಪ್ಪೆಗಳ ನಾದ ಹೆಚ್ಚಾಗಿ ಕೇಳಿಸುತ್ತಿತ್ತು. ಈಗ ಆ ವಾತಾವರಣವಿಲ್ಲ. ಜೀವವೈವಿಧ್ಯತೆಯನ್ನು ಉಳಿಸಲು ಕಪ್ಪೆಗಳ ರಕ್ಷಣೆಗೆ ಆಡಳಿತ ವ್ಯವಸ್ಥೆ ಇಚ್ಛಾಶಕ್ತಿ ತೋರಬೇಕಿದೆ.&lt;/p&gt;&lt;p&gt;- ವಿನೋದ ನಾಯ್ಕ, ಹಟ್ಟಿಕೇರಿ ಗ್ರಾಮಸ್ಥ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kannada-the-population-of-frogs-is-declining-on-the-coast-of-karnataka-what-is-this-a-sign-of-mrq/articleshow-kut6urq"/>
        </item>
        <item>
            <title><![CDATA[ಕರ್ನಾಟಕ ಪೊಲೀಸರ ಲಂಚದ ಆಡಿಯೋ ವೈರಲ್ ಪ್ರಕರಣ; ಮೂವರು ಪಿಎಸ್‌ಐಗಳು ಅಮಾನತು!]]></title>
            <link>https://kannada.asianetnews.com/karnataka-districts/karnataka-police-haliyal-psi-audio-viral-case-3-sub-inspectors-suspended-karwar-sat/articleshow-m00znv0</link>
            <guid isPermaLink="true">https://kannada.asianetnews.com/karnataka-districts/karnataka-police-haliyal-psi-audio-viral-case-3-sub-inspectors-suspended-karwar-sat/articleshow-m00znv0</guid>
            <pubDate>Mon, 31 Aug 2026 11:30:29 +0530</pubDate>
            <description><![CDATA[ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಪಿಎಸ್&zwnj;ಐ ಪೋಸ್ಟಿಂಗ್&zwnj;ಗೆ ಸಂಬಂಧಿಸಿದ ಲಂಚದ ವ್ಯವಹಾರದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಕರ್ತವ್ಯಲೋಪ ಸಾಬೀತಾದ ಕಾರಣ, ಪಿಎಸ್&zwnj;ಐಗಳಾದ ಕಿರಣ್ ಪಾಟೀಲ್, ಕೃಷ್ಣ ಹಾಗೂ ವಿನೋದ್ ರೆಡ್ಡಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1b6azqf44rxe5cweed0973y,imgname-karnataka-police-haliyal-3-si-suspended-1788155887342.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉತ್ತರ ಕನ್ನಡ (ಆ.31): ಉ&lt;/strong&gt;ತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್&zwnj;ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈರಲ್ ಆಗಿದ್ದ ಆಡಿಯೋ ಪ್ರಕರಣವು ದೊಡ್ಡ ಸ್ಫೋಟವನ್ನೇ ಸೃಷ್ಟಿಸಿತ್ತು. ಇದರ ಬೆನ್ನಲ್ಲಿಯೇ ಮೂವರು ಪಿಎಸ್&zwnj;ಐಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.&lt;/p&gt;&lt;p&gt;ಲಂಚದ ಪೋಸ್ಟಿಂಗ್ ಬಗ್ಗೆ ಪೊಲೀಸ್ ಇನ್ಸ್&zwnj;ಪೆಕ್ಟರ್&zwnj;ಗಳು ಮಾತನಾಡಿದ ಆಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ಪರಿಣಾಮವಾಗಿ ಎಚ್ಚೆತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಂಭೀರ ಆರೋಪ ಎದುರಿಸುತ್ತಿದ್ದ ಮೂರು ಮಂದಿ ಪಿಎಸ್&zwnj;ಐಗಳನ್ನು ಅಮಾನತುಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಆಡಿಯೋದಲ್ಲೇನಿತ್ತು?&lt;/strong&gt;&lt;/h2&gt;&lt;p&gt;ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ (L&amp;amp;O) ಪಿಎಸ್&zwnj;ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್&zwnj;ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್&zwnj;ಐ ಆಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿದ್ದ ವಿನೋದ್ ರೆಡ್ಡಿ ಎಂಬುವವರು ಮಾತನಾಡಿಕೊಂಡಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಠಾಣೆಯ ಎಲ್&zwnj;ಆಂಡ್&zwnj;ಒ ಪಿಎಸ್&zwnj;ಐ ಸ್ಥಾನಕ್ಕಾಗಿ ನಡೆದ ಹಣದ ಭಾರಿ ವ್ಯವಹಾರ, ಸ್ಟೇಷನ್ ಹಪ್ತಾ ಹಾಗೂ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳಿಗೆ ಮುಟ್ಟಿಸಬೇಕಾದ 'ಮಂತ್ಲಿ' (Monthly) ಮಾಮೂಲಿ ಬಗ್ಗೆ ಈ ಮೂವರು ಪಿಎಸ್&zwnj;ಐಗಳು ಮುಕ್ತವಾಗಿ ಚರ್ಚೆ ನಡೆಸಿದ್ದರು. ಈ ಆಡಿಯೋ ಸಂಭಾಷಣೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿತ್ತು.&lt;/p&gt;&lt;h2&gt;&lt;strong&gt;ತನಿಖೆ ನಡೆಸಿ ಕ್ರಮ ಕೈಗೊಂಡ ಎಸ್ಪಿ:&lt;/strong&gt;&lt;/h2&gt;&lt;p&gt;ಪೊಲೀಸ್ ಇಲಾಖೆಯ ಘನತೆಗೆ ಕುತ್ತು ತಂದಿರುವ ಈ ಆಡಿಯೋ ವೈರಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP), ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಿದ್ದರು.&lt;/p&gt;&lt;p&gt;ಎಡಿಎಸ್ಪಿ ನೇತೃತ್ವದ ತನಿಖಾ ತಂಡವು ನಡೆಸಿದ ತನಿಖೆಯಲ್ಲಿ ಪಿಎಸ್&zwnj;ಐಗಳ ಅಕ್ರಮ ಮತ್ತು ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಎಸ್&zwnj;ಪಿ ದೀಪನ್ ಎಂ.ಎನ್. ಅವರು, ಕರ್ತವ್ಯ ಲೋಪ ಹಾಗೂ ಇಲಾಖೆಗೆ ಕಳಂಕ ತಂದ ಹಿನ್ನೆಲೆಯಲ್ಲಿ ಹಳಿಯಾಳ ಪಿಎಸ್&zwnj;ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್&zwnj;ಐ ಕೃಷ್ಣ ಹಾಗೂ ವಿನೋದ್ ರೆಡ್ಡಿ ಅವರನ್ನು ಅಮಾನತು (Suspension) ಮಾಡಿ ಆದೇಶ ಹೊರಡಿಸಿದ್ದಾರೆ. ಅಕ್ರಮ ಎಸಗುವ ಪೊಲೀಸ್ ಅಧಿಕಾರಿಗಳಿಗೆ ಈ ಕ್ರಮ ಎಚ್ಚರಿಕೆಯಾಗಲಿದೆ.&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-police-haliyal-psi-audio-viral-case-3-sub-inspectors-suspended-karwar-sat/articleshow-m00znv0"/>
        </item>
        <item>
            <title><![CDATA[ಉತ್ತರಕನ್ನಡದಲ್ಲಿ ಉಲ್ಟಾ, ವಿಜಯಪುರದಲ್ಲಿ ಅರ್ಧಕ್ಕೆ ಹಾರಾಡಿದ ರಾಷ್ಟ್ರಧ್ವಜ!]]></title>
            <link>https://kannada.asianetnews.com/karnataka-districts/independence-day-highlights-insult-to-indian-national-flag-while-hoisting-in-vijayapur-and-uttarakannada-rav/articleshow-omqhhwv</link>
            <guid isPermaLink="true">https://kannada.asianetnews.com/karnataka-districts/independence-day-highlights-insult-to-indian-national-flag-while-hoisting-in-vijayapur-and-uttarakannada-rav/articleshow-omqhhwv</guid>
            <pubDate>Sun, 16 Aug 2026 06:28:18 +0530</pubDate>
            <description><![CDATA[ಸ್ವಾತಂತ್ರ್ಯೋತ್ಸವದ ಅಂಗವಾಗಿ ಉತ್ತರ ಕನ್ನಡದ ಮುಂಡಗೋಡದಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದೆ. ಮತ್ತೊಂದು ಘಟನೆಯಲ್ಲಿ, ವಿಜಯಪುರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಧ್ವಜವನ್ನು ಅರ್ಧಕ್ಕೆ ಹಾರಿಸಿ ಅಗೌರವ ತೋರಲಾಗಿದ್ದು, ಈ ಎರಡೂ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0416azx2t6g8te2yaz552ys,imgname-----------------------2026-08-16t062731.758-1786841869309.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಡಗೋಡ(ಉತ್ತರ ಕನ್ನಡ):&lt;/strong&gt; ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೊಸೈಟಿ ಗೋದಾಮು ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಇಂದೂರ ಸೊಸೈಟಿ ಆಡಳಿತದ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಕೇಸರಿ ಬಣ್ಣ ಕೆಳಭಾಗದಲ್ಲಿದ್ದು, ಹಸಿರು ಬಣ್ಣ ಮೇಲ್ಬಾಗದಲ್ಲಿ ಕಾಣಿಸಿಕೊಂಡಿದೆ. ಇದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ರಾಷ್ಟ್ರೀಯ ದಿನದಂದು ರಾಷ್ಟ್ರಧ್ವಜಕ್ಕೆ ಸೂಕ್ತ ಗೌರವ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಆದರೆ ಸೊಸೈಟಿ ಆಡಳಿತದ ನೇತೃತ್ವದಲ್ಲೇ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಸರಿಯಾದ ರೀತಿಯಲ್ಲಿ ಹಾರಿಸದೇ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.&lt;/p&gt;&lt;h2&gt;ವಿಜಯಪುರದಲ್ಲಿ ಅರ್ಧಕ್ಕೆ ಹಾರಿದ ರಾಷ್ಟ್ರಧ್ವಜ&lt;/h2&gt;&lt;p&gt;ವಿಜಯಪುರ:ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಧ್ವಜ ಅರ್ಧ ಹಾರಿ, ಅಪಮಾನವಾದ ಘಟನೆ ವಿಜಯಪುರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ನಡೆದಿದೆ. ಅಧಿಕಾರಿಗಳ ಯಡವಟ್ಟಿನಿಂದ ಈ ಅಚಾತುರ್ಯ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಜಯಪುರ ನಗರದ ಕನಕದಾಸ ಬಡಾವಣೆಯ ಕೃಷಿ&zwnj; ತಂತ್ರಜ್ಞರ ಕಚೇರಿಯಲ್ಲಿ ಅರ್ಧಕ್ಕೆ ಧ್ವಜ ಹಾರಿಸಲಾಗಿತ್ತು. ಅರ್ಧಮಟ್ಟಕ್ಕೆ ಧ್ವಜವನ್ನು ಅಧಿಕಾರಿಗಳು ಹಾರಿಸಿ ಹೋಗಿದ್ದಾರೆ. ಕೃಷಿ ತಂತ್ರಜ್ಞರ ಸಂಸ್ಥೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/independence-day-highlights-insult-to-indian-national-flag-while-hoisting-in-vijayapur-and-uttarakannada-rav/articleshow-omqhhwv"/>
        </item>
        <item>
            <title><![CDATA[ಹುಬ್ಬಳ್ಳಿ ಆಂಕೋಲಾ ನಡುವೆ ₹18,424 ಕೋಟಿ ವೆಚ್ಚದ ಹೊಸ ರೈಲ್ವೆ ಯೋಜನೆ; ಬರೋಬ್ಬರಿ 57 ಸುರಂಗ ನಿರ್ಮಾಣ]]></title>
            <link>https://kannada.asianetnews.com/gallery/karnataka-districts/hubballi-ankola-railway-line-revived-govt-issues-notification-for-163-km-double-line-with-57-tunnels-ptu4n6o</link>
            <guid isPermaLink="true">https://kannada.asianetnews.com/gallery/karnataka-districts/hubballi-ankola-railway-line-revived-govt-issues-notification-for-163-km-double-line-with-57-tunnels-ptu4n6o</guid>
            <pubDate>Tue, 11 Aug 2026 11:14:34 +0530</pubDate>
            <description><![CDATA[&lt;p&gt;ದಶಕಗಳ ಕನಸಾದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಪರಿಷ್ಕೃತ ರೂಪದಲ್ಲಿ ಮರುಚಾಲನೆ ನೀಡಲಾಗಿದ್ದು, 163 ಕಿ.ಮೀ. ಉದ್ದದ ವಿದ್ಯುದೀಕೃತ ಜೋಡಿ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಪಶ್ಚಿಮ ಘಟ್ಟದ ಪರಿಸರ ಹಾನಿ ತಗ್ಗಿಸಲು 57 ಸುರಂಗ ಪ್ರಸ್ತಾಪಿಸಲಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಳು ಬೇಕಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzqm7mtqtrh1gz16gh0by5ep,imgname-hubballi-ankola-train-double-track-new-project-1786425627468.jpg" type="image/jpeg" height="390" width="690"/>
            <content:encoded><![CDATA[&lt;p&gt;ದಶಕಗಳ ಕನಸಾದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಪರಿಷ್ಕೃತ ರೂಪದಲ್ಲಿ ಮರುಚಾಲನೆ ನೀಡಲಾಗಿದ್ದು, 163 ಕಿ.ಮೀ. ಉದ್ದದ ವಿದ್ಯುದೀಕೃತ ಜೋಡಿ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಪಶ್ಚಿಮ ಘಟ್ಟದ ಪರಿಸರ ಹಾನಿ ತಗ್ಗಿಸಲು 57 ಸುರಂಗ ಪ್ರಸ್ತಾಪಿಸಲಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಳು ಬೇಕಾಗಿವೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಕನ್ನಡ (ಆ.11): ಉ&lt;/strong&gt;ತ್ತರ ಕನ್ನಡದ ದಶಕಗಳ ಕನಸಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಪರಿಷ್ಕೃತ ರೂಪದಲ್ಲಿ ಬಂದಿದ್ದು, 163 ಕಿಮೀ ಉದ್ದದ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.&lt;/p&gt;&lt;p&gt;ಹಳೆಯ ಏಕಹಳಿ ಯೋಜನೆಗೆ ಬದಲಾಗಿ ಇದೀಗ ವಿದ್ಯುದೀಕೃತ ಬ್ರಾಡಗೇಜ್ ಡಬಲ್&zwnj;ಲೈನ್ ನಿರ್ಮಾಣದ ಪರಿಷ್ಕೃತ ಪ್ರಸ್ತಾವನೆ ರೂಪಿಸಲಾಗಿದೆ. ಸುಮಾರು ₹18,424 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ ಕಡಿಮೆ ಮಾಡುವ ಉದ್ದೇಶದಿಂದ 57 ಸುರಂಗಗಳನ್ನು ನಿರ್ಮಿಸುವ ಪ್ರಸ್ತಾವವಿದೆ. ಒಟ್ಟು 163 ಕಿಮೀ ಉದ್ದದ ಈ ಯೋಜನೆಗೆ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ, ಖಾಸಗಿ ಮತ್ತು ಅರಣ್ಯ ಭೂಮಿ ಒಳಗೊಳ್ಳಲಿದೆ.&lt;/p&gt;&lt;img&gt;&lt;p&gt;&lt;strong&gt;ಅಧಿಸೂಚನೆ ಹೊರಡಿಸಲಾದ ಗ್ರಾಮಗಳ ವಿವರ:&lt;/strong&gt;&lt;/p&gt;&lt;p&gt;ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ನಗರಪಾಲಿಕೆ, ಬಿಂದಾಳ, ಗಬ್ಬೂರ, ಹಳಿಯಾಳ, ಕೊಟಗೊಂಡ ಹುಣಶಿ, ಅಜ್ಜನಪುರ, ಬುಡರಸಿಂಗಿ, ಮಾವನೂರ, ಗಿರಿಯಾಲ, ಕಾತನೂರ, ಚನ್ನಾಪುರ, ರಾಮಾಪುರ ಹಾಗೂ ಚಾವರಗುಡ್ಡ. ಕಲಘಟಗಿ ತಾಲೂಕಿನ ಚಳಮಟ್ಟಿ, ಮಿಶ್ರಿಕೋಟಿ, ಉಗ್ಗಿನಕೇರಿ, ಕಾಮಧೇನು, ಹಾರೋಗೇರಿ, ರಾಮನಾಳ, ದಾಸ್ತಿಕೊಪ್ಪ, ಮಡ್ಕಿಹೊನ್ನಿಹಳ್ಳಿ, ಬೆಂಡಿಗೇರಿ, ಕಲಘಟಗಿ, ಮಚ್ಚಾಪುರ, ಗಳಗಿನಕಟ್ಟಿ, ದೇವಿಕೊಪ್ಪ, ಜುಂಜನಬೈಲ್, ತಂಬೂರ ಹಾಗೂ ಸಂಗಟಿಕೊಪ್ಪ.&lt;/p&gt;&lt;img&gt;&lt;p&gt;ಉತ್ತರ ಕನ್ನಡದಲ್ಲಿ ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಳಿಕೇರಿ, ರಾಮನಕೊಪ್ಪ, ಕನ್ನಡಗಲ್, ಸಹಸ್ರಳ್ಳಿ, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪದಮನೆ, ಹಿತ್ತಲಕಾರಗದ್ದೆ, ಇಡಗುಂದಿ, ಜೋಗದಮನೆ, ಕೊಮ್ಮಾಡಿ, ಅರಬೈಲ್, ತೆಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಅಂಬಾಗಾವ, ಗುಳ್ಳಾಪುರ, ಕೊಡ್ಲಗದ್ದೆ, ಕಳಚೆ ಹಾಗೂ ಮಾವಿನಮನೆ. ಅಂಕೋಲಾ ತಾಲೂಕಿನ ಸುಂಕಸಾಳ, ಕಟ್ಟಿನಹಕ್ಕಲ, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗಾರಮಕ್ಕಿಗದ್ದೆ, ಅಡ್ಲೂರ, ನವಗದ್ದೆ, ಬೊಗ್ರಿಬೈಲ, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಹಾಗೂ ಅಂಕೋಲಾ.&lt;/p&gt;&lt;img&gt;&lt;p&gt;ಆದರೆ ಹೊಸ ಅಧಿಸೂಚನೆ ಬಂದಿರುವುದರಿಂದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದರ್ಥವಲ್ಲ. ಅರಣ್ಯ, ವನ್ಯಜೀವಿ ಹಾಗೂ ಇತರ ಅಗತ್ಯ ಅನುಮತಿಗಳು ಇನ್ನೂ ದೊರೆಯಬೇಕಿದೆ. ಆದರೂ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಹೊಸ ರೂಪದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವುದು ಉತ್ತರ ಕನ್ನಡದ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ. ಅಧಿಸೂಚನೆ ಹೊರಡಿಸಿರುವುದರಿಂದ ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಈ ಯೋಜನೆ ಜಾರಿಯಾಗಲಿದೆ ಎಂದು ನಾನು ಹಿಂದಿನಿಂದ ಹೇಳುತ್ತಾ ಬಂದಿದ್ದೇನೆ. ಈ ರೈಲ್ವೇ ಮಾರ್ಗಕ್ಕೆ ಇನ್ನೂ ಹಲವು ಪರವಾನಿಗೆ ಬೇಕಾಗಲಿದೆ ಎನ್ನುತ್ತಾರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.&lt;/p&gt;&lt;img&gt;&lt;p&gt;&lt;strong&gt;ಜಾರ್ಜ್&zwnj; ಫರ್ನಾಂಡಿಸ್ ಸಂತಸ:&lt;/strong&gt;&lt;/p&gt;&lt;p&gt;ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಿರುವುದು ಸಂತಸಕರ ಸಂಗತಿ ಎಂದು ಉತ್ತರಕನ್ನಡ ಜಿಲ್ಲಾ ರೈಲ್ವೆ ಸೇವಾ ಸೇವಾ ಸಮಿತಿ ಅಧ್ಯಕ್ಷ ಜಾರ್ಜ್&zwnj; ಫರ್ನಾಂಡಿಸ್ ತಿಳಿಸಿದ್ದಾರೆ. ಬಹುಕಾಲದಿಂದ ಈ ರೈಲ್ವೆ ಮಾರ್ಗಕ್ಕಾಗಿ ಜಿಲ್ಲೆಯ ಜನತೆ ಕಂಡ ಕನಸು ಈಗ ಮೊಳಕೆಯೊಡೆಯುತ್ತಿದೆ. ರೈಲ್ವೆ ಮಾರ್ಗಕ್ಕಾಗಿ ಪ್ರಯತ್ನಿಸುತ್ತಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಬಂಧಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ವರದಿ- ವಸಂತಕುಮಾರ್ ಕತಗಾಲ&lt;/strong&gt;&lt;/p&gt;]]></content:encoded>
            <category>uttara-kannada</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/hubballi-ankola-railway-line-revived-govt-issues-notification-for-163-km-double-line-with-57-tunnels-ptu4n6o"/>
        </item>
        <item>
            <title><![CDATA[ಉತ್ತರಕನ್ನಡ: ಧ್ವಜಾರೋಹಣದ ಬಳಿಕ ಭಾಷಣಕ್ಕೆ ಬಂದ ಸವದಿ, ವೇದಿಕೆಯಲ್ಲಿ ಲೈಟ್ ಇಲ್ಲದೆ ಫಜೀತಿ; ಮೊಬೈಲ್ ಟಾರ್ಚ್‌ನಲ್ಲೇ ಭಾಷಣ!]]></title>
            <link>https://kannada.asianetnews.com/karnataka-districts/independence-day-2026-minister-laxman-savadi-reads-speech-under-mobile-torch-in-karwar-uttarakannada-rav/articleshow-rk9xg4x</link>
            <guid isPermaLink="true">https://kannada.asianetnews.com/karnataka-districts/independence-day-2026-minister-laxman-savadi-reads-speech-under-mobile-torch-in-karwar-uttarakannada-rav/articleshow-rk9xg4x</guid>
            <pubDate>Sat, 15 Aug 2026 11:16:33 +0530</pubDate>
            <description><![CDATA[ಕಾರವಾರದಲ್ಲಿ ನಡೆದ 80ನೇ ಸ್ವಾತಂತ್ರ&zwj;್ಯ ದಿನಾಚರಣೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಅವರು ಧ್ವಜಾರೋಹಣ ನೆರವೇರಿಸಿದರು. ಆದರೆ, ವೇದಿಕೆಯಲ್ಲಿ ಸರಿಯಾದ ಲೈಟಿಂಗ್ ವ್ಯವಸ್ಥೆ ಇಲ್ಲದ ಕಾರಣ, ಭಾಷಣ ಓದಲು ಪರದಾಡಿ ಮೊಬೈಲ್&zwnj; ಟಾರ್ಚ್ ಬಳಸಬೇಕಾದ ಪ್ರಸಂಗ ನಡೆಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m01z1we8bdsp7tx68n38qt30,imgname-----------------------2026-08-15t111131.468-1786772517320.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರವಾರ, ಉತ್ತರಕನ್ನಡ (ಆ.15) ಇಂದು ಶನಿವಾರ, 2026ನೇ ಇಸವಿ ಆಗಸ್ಟ್ 15 ದೇಶದೆಲ್ಲೆಡೆ 80ನೇ ಸ್ವಾತಂತ್ರ&zwj;್ಯ ದಿನಾಚರಣೆಯ ಸಂಭ್ರಮ. ಇದರ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮಣ್ ಸವದಿ ಅವರು ಧ್ವಜಾರೋಹಣ ನೇರವರಿಸಿದರು.&lt;/p&gt;&lt;h2&gt;ಕತ್ತಲಲ್ಲಿ ಭಾಷಣ ಓದಲು ತಡವಡಿಸಿದ ಸಚಿವ:&lt;/h2&gt;&lt;p&gt;ಧ್ವಜಾರೋಹಣ ನೆರವೇರಿಸಿ ಮಾತನಾಡಲು ಮುಂದಾದ ಸಚಿವ ಲಕ್ಷ್ಮಣ್ ಸವದಿ ಅವರು, ಕಾರ್ಯಕ್ರಮದ ವೇದಿಕೆಯಲ್ಲಿ ಲೈಟಿಂಗ್ ವ್ಯವಸ್ಥೆ ಇಲ್ಲದ ಪರಿಣಾಮ ಭಾಷಣ ಓದಲು ತಡವಡಿಸಿದ ಘಟನೆ ನಡೆಯಿತು. ವೇದಿಕೆ ಮೇಲೆ ಕತ್ತಲಿದ್ದ ಪರಿಣಾಮ ಬರೆದಿದ್ದ ಭಾಷಣ ಪ್ರತಿ ಸರಿಯಾಗಿ ಕಾಣಿಸದೆ ಮತ್ತೆ ಮತ್ತೆ ದಿಟ್ಟಿಸತೊಡಗಿದರು. ಆಗಲೂ ಕಾಣಿಸದಿದ್ದರಿಂದ ಕೊನೆಗೆ ಮೊಬೈಲ್&zwnj; ಟಾರ್ಚ್ ಹಾಕಿ ಭಾಷಣ ಓದಲಾರಂಭಿಸಿದರು.&lt;/p&gt;&lt;h3&gt;ಲೈಟ್ ವ್ಯವಸ್ಥೆ ಇಲ್ಲದ್ದಕ್ಕೆ ಸಚಿವ ಗರಂ:&lt;/h3&gt;&lt;p&gt;ಭಾರತ ಸ್ವಾತಂತ್ರ್ಯೋತ್ಸವ ದಿನವಾದ ಇಂದು ಬೆಳಕಿನಿಂದ ಕಂಗೊಳಿಸಬೇಕಿದ್ದ ವೇದಿಕೆಗೆ ಸರಿಯಾಗಿ ಲೈಟಿಂಗ್ ವ್ಯವಸ್ಥೆ ಇರಲಿಲ್ಲ. ಲೈಟ್ ವ್ಯವಸ್ಥೆ ಇಲ್ಲದ ಸಮಸ್ಯೆಯಿಂದ ಸಚಿವರು ಭಾಷಣ ಪ್ರತಿ ಸರಿಯಾಗಿ ಓದಲಾಗದೆ ಮುಜುಗರ ಅನುಭವಿಸುವಂತಾಯ್ತು. ಇದರಿಂದ ಸವದಿ ಆ ಕ್ಷಣ ಸಿಬ್ಬಂದಿ ವಿರುದ್ಧ ಸಿಟ್ತಾದಂತೆ ಕಂಡರು. ಸಿಬ್ಬಂದಿ ತಕ್ಷಣ ಡಯಾಸನ್ನು ಬೆಳಕಿರುವ ಜಾಗಕ್ಕೆ ಸ್ಥಳಾಂತರಿಸಿದರು. ಬಳಿಕ ಭಾಷಣ ಮುಂದುವರಿಸಿದರು.&lt;/p&gt;]]></content:encoded>
            <category>uttara-kannada</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/independence-day-2026-minister-laxman-savadi-reads-speech-under-mobile-torch-in-karwar-uttarakannada-rav/articleshow-rk9xg4x"/>
        </item>
        <item>
            <title><![CDATA[Shocking incident in Bhatkal: ಭಟ್ಕಳದಲ್ಲಿ ರೌಡಿಗಳ ಅಟ್ಟಹಾಸ! ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಚಾಕು ಇರಿತ!]]></title>
            <link>https://kannada.asianetnews.com/karnataka-districts/uttara-kannada-rowdy-sheeters-stabbed-police-personnel-late-at-night-rav/articleshow-sm5mupy</link>
            <guid isPermaLink="true">https://kannada.asianetnews.com/karnataka-districts/uttara-kannada-rowdy-sheeters-stabbed-police-personnel-late-at-night-rav/articleshow-sm5mupy</guid>
            <pubDate>Sun, 09 Aug 2026 12:21:30 +0530</pubDate>
            <description><![CDATA[ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರೌಡಿಶೀಟರ್&zwnj;ಗಳ ನಡುವಿನ ಜಗಳ ಬಿಡಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಆರೋಪಿಗಳಾದ ರೌಡಿಶೀಟರ್&zwnj;ಗಳ ವಿರುದ್ಧ ಪ್ರಕರಣ ದಾಖಲಿಸಿ, ಕೆಲವರನ್ನು ವಶಕ್ಕೆ ಪಡೆಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzjmga0gcm5t1brm7aqzhj75,imgname-----------------------2026-08-09t121452.761-1786258139152.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರವಾರ, ಉತ್ತರಕನ್ನಡ (ಆ.9): ರಾಜ್ಯಾದ್ಯಂತ ಪುಂಡರ ಹಾವಳಿ ಮಿತಿಮೀರಿದೆ ಈ ಮೊದಲು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿದ್ದ ರೌಡಿಶೀಟರ್&zwnj;ಗಳು ಇದೀಗ ನೇರ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗುತ್ತಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;h2&gt;ಪೊಲೀಸ್ ಸಿಬ್ಬಂದಿಗೆ ಚಾಕು ಇರಿದ ರೌಡಿಶೀಟರ್&zwnj;ಗಳು!&lt;/h2&gt;&lt;p&gt;ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು. ರಾತ್ರಿವೇಳೆ ರೌಡಿಶೀಟರ್&zwnj;ಗಳ ಮಧ್ಯೆ ನಡೆದ ಜಗಳಕ್ಕೆ ಸಂಬಂಧಿಸಿದದಂತೆ ಸ್ಥಳಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಪುಂಡರು ಏಕಾಏಕಿ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಚಾಕು ಇರಿತಕ್ಕೊಳಗಾದ ಪೊಲೀಸರಿಗೆ ಗಂಭೀರ ಗಾಯಗೊಂಡಿದ್ದು ಸ್ಥಳೀಯರ ಸಹಾಯದಿಂದ ಮಂಗಳೂರಿನ ಆದರ್ಶ ಹಾಸ್ಪೆಟಲ್ ಗೆ ದಾಖಲಿಸಲಾಗಿದೆ.&lt;/p&gt;&lt;h3&gt;ಪೊಲೀಸರಿಗೆ ಚಾಕು ಇರಿದು ರೌಡಿಗಳು ಎಸ್ಕೇಪ್!&lt;/h3&gt;&lt;p&gt;ತಡರಾತ್ರಿ ರೌಡಿಶೀಟರ್ ರಾಜು, ಅವನ ಗುಂಪು ಮನೋಜ್ ಎಂಬುವವನ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ಆಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ಸಿಬ್ಬಂದಿ ಹವಾಲ್ದಾರ ಸಂಗಪ್ಪ,ಕಾನಸ್ಟೇಬಲ್ ವಿನಾಯಕ್ ಶಟ್ಟಿ ಸ್ಥಳಕ್ಕೆ ಬಂದಿದ್ದಾರೆ. ಬಂದ ವೇಳೆ ರೌಡಿಶೀಟರ್&zwnj;ಗಳು ಜಗಳ ಮುಂದುವರಿಸಿದ್ದರು ಎನ್ನಲಾಗಿದೆ.&lt;/p&gt;&lt;p&gt;ರೌಡಿಗಳ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕೋಪಗೊಂಡು ಹವಾಲ್ದಾರ್ ಸಂಗಪ್ಪಗ ಹಾಗೂ ಕಾನ್ಸ್&zwnj;ಟೇಬಲ್ ಗೆ ಚಾಕುವಿನಿಂದ ಇರಿದಿದ್ದಾರೆ. ಆದರೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರಿಗೆ ಚಾಕು ಇರಿಯುತ್ತಿದ್ದಂತೆ ರೌಡಿಗಳು ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾರೆ. ಇತ್ತ ಗಾಯಗೊಂಡ ಪೊಲೀಸರನ್ನು ಸ್ಥಳೀಯರು ಮಂಗಳೂರಿನ ಆದರ್ಶ ಹಾಸ್ಪಿಟಲ್&zwnj;ಗೆ ದಾಖಲಿಸಿದ್ದಾರೆ.&lt;/p&gt;&lt;p&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/p&gt;&lt;p&gt;ಪೊಲೀಸ್ ಸಿಬ್ಬಂದಿಗೆ ಚಾಕು ಇರಿದ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳಾದ ರಾಜು, ರಿತೀಕ್, ಮದನ್ ನಾಯ್ಕ್, ಯೋಗೇಶ್, ದರ್ಶನ್ ಎಂಬ ನಾಲ್ವರು ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ರೌಡಿಶೀಟರ್&zwnj;ಗಳಾದ ರಾಜು, ಮನೋಜ್ ಎಂಬುವವರನ್ನ ವಶಕ್ಕೆ ಪಡೆದಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.&lt;/p&gt;&lt;p&gt;ತಡರಾತ್ರಿ ನಡೆದ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಪೊಲೀಸರ ಮೇಲೆಯೇ ಈ ರೀತಿ ದಾಳಿ ಮಾಡುವ ರೌಡಿಗಳು ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ರೌಡಿಶೀಟರ್&zwnj;ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/uttara-kannada-rowdy-sheeters-stabbed-police-personnel-late-at-night-rav/articleshow-sm5mupy"/>
        </item>
        <item>
            <title><![CDATA[ಭಾರತೀಯ ರೈಲ್ವೆಯೊಂದಿಗೆ ಕೊಂಕಣ್‌ ರೈಲ್ವೆ ವಿಲೀನಕ್ಕೆ ವಿಘ್ನ: ಗೋವಾ ಒಪ್ಪಿಗೆ, ಮಹಾರಾಷ್ಟ್ರ, ಕರ್ನಾಟಕದಿಂದ ಕಂಡಿಷನ್!]]></title>
            <link>https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk</link>
            <guid isPermaLink="true">https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk</guid>
            <pubDate>Wed, 12 Aug 2026 23:02:40 +0530</pubDate>
            <description><![CDATA[&lt;p&gt;ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3n5qcdeknrs04fxpwy231v,imgname-konkan-railway-1780386815373.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.12):&lt;/strong&gt; ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ರೈಲ್ವೆ ಜಾಲದ ಸಾಮರ್ಥ್ಯ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸಲು 'ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್' (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಈ ವಿಲೀನ ಪ್ರಕ್ರಿಯೆಗೆ ಪಾಲುದಾರ ರಾಜ್ಯಗಳಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ (ಆಗಸ್ಟ್ 12) ಲೋಕಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕೊಂಕಣ ರೈಲ್ವೆಯಲ್ಲಿ ಪಾಲುದಾರಿಕೆ ಹೊಂದಿರುವ ರಾಜ್ಯಗಳ ಪೈಕಿ ಗೋವಾ ಸರ್ಕಾರ ಮಾತ್ರವೇ ತನ್ನ ಶೇರುಗಳನ್ನು ಉಚಿತವಾಗಿ ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಲು ಸಮ್ಮತಿಸಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಆದರೆ, ಮಹಾರಾಷ್ಟ್ರ ಸರ್ಕಾರವು ತಾವು ಹೂಡಿಕೆ ಮಾಡಿರುವ ಬಂಡವಾಳವನ್ನು (Share Capital) ಮರಳಿಸುವಂತೆ ಪಟ್ಟು ಹಿಡಿದಿದ್ದರೆ, ಕರ್ನಾಟಕ ಸರ್ಕಾರವು ವಿವಿಧ ರೀತಿಯ ಎಕ್ಸಿಟ್ (ಹೊರನಡೆಯುವ) ಆಯ್ಕೆಗಳನ್ನು ನೀಡುವಂತೆ ಕೋರಿದೆ.&lt;/p&gt;&lt;h2&gt;&lt;strong&gt;ಕೊಂಕಣ ರೈಲ್ವೆಯ ಪಾಲುದಾರಿಕೆ ಮತ್ತು ಪ್ರಸ್ತುತ ಸ್ಥಿತಿ&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ತೋಕೂರ್&zwnj;ವರೆಗೆ ಮುಂಬೈ ಮತ್ತು ಮಂಗಳೂರನ್ನು ಸಂಪರ್ಕಿಸುವ 739 ಕಿಲೋಮೀಟರ್ ಉದ್ದದ ಕರಾವಳಿ ರೈಲು ಮಾರ್ಗದ ನಿರ್ಮಾಣಕ್ಕಾಗಿ 1990ರಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್&zwnj; ಅನ್ನು ಸ್ಥಾಪಿಸಲಾಯಿತು. ಪ್ರಸ್ತುತ ಈ ಸಂಸ್ಥೆಯಲ್ಲಿ ಐದು ಪ್ರಮುಖ ಪಾಲುದಾರರಿದ್ದಾರೆ. ರೈಲ್ವೆ ಸಚಿವಾಲಯ (ಕೇಂದ್ರ): ಶೇ. 66.79 ಪಾಲು ಹೊಂದಿದ್ದರೆ, ಮಹಾರಾಷ್ಟ್ರ ಸರ್ಕಾರ ಶೇ. 14.91, ಕರ್ನಾಟಕ ಸರ್ಕಾರ ಶೇ. 10.17, ಗೋವಾ ಸರ್ಕಾರ ಶೇ. 4.07 ಹಾಗೂ ಕೇರಳ ಸರ್ಕಾರ ಶೇ. 4.07 ಪಾಲು ಹೊಂದಿದೆ.&lt;/p&gt;&lt;p&gt;ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, &quot;ಕೊಂಕಣ ರೈಲ್ವೆಯ ಮೂಲಸೌಕರ್ಯಗಳಿಗೆ ಸುಮಾರು 30 ವರ್ಷಗಳಾಗಿದ್ದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೈಲುಗಳ ಸಂಚಾರ ಸಾಮರ್ಥ್ಯವನ್ನು ಹೆಚ್ಚಿಸಲು ಬೃಹತ್ ಪ್ರಮಾಣದ ಬಂಡವಾಳದ ಅಗತ್ಯವಿದೆ. ಸುರಂಗಗಳ ನವೀಕರಣ, ಹಳೆಯ ಆಸ್ತಿಗಳ ಬದಲಿ ವ್ಯವಸ್ಥೆ ಸೇರಿದಂತೆ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಹಣದ ಅಗತ್ಯವಿದೆ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಸಚಿವಾಲಯ ನೀಡಿದ ಪ್ರಸ್ತಾವನೆ ಏನು?&lt;/strong&gt;&lt;/h2&gt;&lt;p&gt;ಈ ಹಣಕಾಸಿನ ಅಗತ್ಯವನ್ನು ಪೂರೈಸಲು ರೈಲ್ವೆ ಸಚಿವಾಲಯವು ಎಲ್ಲ ಪಾಲುದಾರ ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ತಮಗೆ ಇರುವ ಶೇರುಗಳಿಗೆ ಅನುಗುಣವಾಗಿ ಅಗತ್ಯವಿರುವ ಬಂಡವಾಳ ವೆಚ್ಚವನ್ನು (Capex) ಭರಿಸುವುದು ಅಥವಾ ತಮ್ಮ ಶೇರುಗಳನ್ನು ಭಾರತೀಯ ರೈಲ್ವೆ ಸಚಿವಾಲಯಕ್ಕೆ ಬಿಟ್ಟುಕೊಡುವುದು. ಆದರೆ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ (Indian Railways) ಸಂಪೂರ್ಣವಾಗಿ ವಿಲೀನಗೊಳಿಸಬೇಕಾದರೆ, ಅದು ಶೇ. 100ರಷ್ಟು ಕೇಂದ್ರ ಸರ್ಕಾರದ ಮಾಲೀಕತ್ವದ ಸಂಸ್ಥೆಯಾಗುವುದು ಕಡ್ಡಾಯವಾಗಿದೆ. ಕಾನೂನಾತ್ಮಕ, ಕಾರ್ಪೊರೇಟ್ ಮತ್ತು ಆಡಳಿತಾತ್ಮಕ ಅನುಮೋದನೆಗಳೊಂದಿಗೆ ಪಾಲುದಾರ ಶೇರುದಾರರ ಒಪ್ಪಂದಕ್ಕೆ ಬದ್ಧವಾಗಿ ಈ ಪ್ರಕ್ರಿಯೆ ನಡೆಯಬೇಕಿದೆ.&lt;/p&gt;&lt;h2&gt;&lt;strong&gt;ಅಭಿವೃದ್ಧಿ ಕಾಮಗಾರಿಗಳ ಪ್ರಗತಿ&lt;/strong&gt;&lt;/h2&gt;&lt;p&gt;ಕೊಂಕಣ ರೈಲ್ವೆಯ 739 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೋಹಾ-ವೀರ್ ಹಾಗೂ ಮಡಗಾಂವ್-ಮಜೋರ್ಡಾ ನಡುವಿನ ಸುಮಾರು 55 ಕಿಲೋಮೀಟರ್ ಮಾರ್ಗದ ದ್ವಿಪಥ (Doubling) ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದಂತೆ ಸಾಮರ್ಥ್ಯ ಹೆಚ್ಚಿಸಲು ಗುರುತಿಸಲಾದ 263 ಕಿಲೋಮೀಟರ್ ಮಾರ್ಗವನ್ನು ದ್ವಿಪಥಗೊಳಿಸಲು ಅಗತ್ಯವಿರುವ ಸಾಧ್ಯತಾ ಸಮೀಕ್ಷೆಗೆ (Feasibility Survey) ಅನುಮೋದನೆ ನೀಡಲಾಗಿದೆ. ಅಲ್ಲದೆ, ಪ್ರಯಾಣಿಕರ ಸೌಲಭ್ಯಗಳು, ಆಸ್ತಿಗಳ ನವೀಕರಣ, ಸುರಕ್ಷತೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ KRCLನ ಮೂರನೇ ಆರ್ಥಿಕ ಪುನರ್ರಚನೆಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk"/>
        </item>
        <item>
            <title><![CDATA[ಕಾರವಾರ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್ ಮಾಲವನ್‌ ಕಾರ್ಯಾಚರಣೆ: ನೌಕೆಗೆ ಬಲ ತುಂಬಿದ AM/NS ಇಂಡಿಯಾ ಉಕ್ಕು!]]></title>
            <link>https://kannada.asianetnews.com/karnataka-districts/ins-malvan-anti-submarine-warship-joins-indian-navy-commissioned-at-karwar-powered-by-am-ns-india-special-steel-gdp/articleshow-wat9er3</link>
            <guid isPermaLink="true">https://kannada.asianetnews.com/karnataka-districts/ins-malvan-anti-submarine-warship-joins-indian-navy-commissioned-at-karwar-powered-by-am-ns-india-special-steel-gdp/articleshow-wat9er3</guid>
            <pubDate>Thu, 06 Aug 2026 16:10:02 +0530</pubDate>
            <description><![CDATA[ಭಾರತೀಯ ನೌಕಾಪಡೆಯ ಬಲ ಹೆಚ್ಚಿಸಲು 'ಮೇಕ್ ಇನ್ ಇಂಡಿಯಾ' ಅಭಿಯಾನದಡಿ ನಿರ್ಮಿಸಲಾದ ಅತ್ಯಾಧುನಿಕ 'ಐಎನ್&zwnj;ಎಸ್ ಮಾಲವನ್&zwnj;' ಯುದ್ಧನೌಕೆಯು ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಜಲಾಂತರ್ಗಾಮಿ ನಿರೋಧಕ ಸಾಮರ್ಥ್ಯ ಹೊಂದಿರುವ ಈ ನೌಕೆಗೆ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಸಂಸ್ಥೆಯು ಸಂಪೂರ್ಣ ದೇಶೀಯವಾಗಿ ತಯಾರಿಸಿದ ವಿಶೇಷ ನೇವಿ-ಗ್ರೇಡ್ ಉಕ್ಕನ್ನು ಪೂರೈಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky40ymy67fzx3j1yj6xv1atg,imgname-ins-malvan-warship-commissioned-1784694133702.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಭಾರತೀಯ ನೌಕಾಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸುವ ಅತ್ಯಾಧುನಿಕ 'ಐಎನ್&zwnj;ಎಸ್ ಮಾಲವನ್&zwnj;' (INS Malvan) ಯುದ್ಧನೌಕೆಯು ಕರ್ನಾಟಕದ ಕಾರವಾರದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಅಧಿಕೃತವಾಗಿ ಕಾರ್ಯಾಚರಣೆಗೆ ಇಳಿದಿದೆ. ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಹಾಗೂ 'ಆತ್ಮನಿರ್ಭರ್ ಭಾರತ್' ಅಭಿಯಾನದಡಿ ನಿರ್ಮಾಣಗೊಂಡಿರುವ ಈ ನೌಕೆಯ ಶೇಕಡಾ 100ರಷ್ಟು ವಿಶೇಷ ನೇವಿ-ಗ್ರೇಡ್ ಉಕ್ಕನ್ನು ಪ್ರಸಿದ್ಧ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS India) ಪೂರೈಸಿದೆ. ಭಾರತದ ಕಡಲ ಭದ್ರತೆಯನ್ನು ಬಲಪಡಿಸುವಲ್ಲಿ ಈ ಯುದ್ಧನೌಕೆ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ.&lt;/p&gt;&lt;h2&gt;ಐಎನ್&zwnj;ಎಸ್ ಮಾಲವನ್&zwnj; ಯುದ್ಧನೌಕೆಯ ಪ್ರಮುಖ ವೈಶಿಷ್ಟ್ಯಗಳು&lt;/h2&gt;&lt;p&gt;&lt;strong&gt;ಜಲಾಂತರ್ಗಾಮಿ ನಿರೋಧಕ ಸಾಮರ್ಥ್ಯ: &lt;/strong&gt;ಕೊಚ್ಚಿನ್ ಶಿಪ್&zwnj;ಯಾರ್ಡ್ ಲಿಮಿಟೆಡ್&zwnj; ಸಂಸ್ಥೆಯು ನಿರ್ಮಿಸಿರುವ ಈ ಯುದ್ಧನೌಕೆಯು ಪ್ರಮುಖವಾಗಿ ಜಲಾಂತರ್ಗಾಮಿ ನಿರೋಧಕ (Anti-Submarine Warfare) ತಂತ್ರಜ್ಞಾನವನ್ನು ಹೊಂದಿದೆ.&lt;/p&gt;&lt;p&gt;&lt;strong&gt;ಕಡಲ ಕಣ್ಗಾವಲು: &lt;/strong&gt;ಸಮುದ್ರದ ಆಳದಲ್ಲಿ ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಿ ಹೊಡೆದುರುಳಿಸುವುದು ಮತ್ತು ಕರಾವಳಿ ತೀರದ ಕಣ್ಗಾವಲು ನಡೆಸುವುದು ಇದರ ಮುಖ್ಯ ಕಾರ್ಯವಾಗಿದೆ.&lt;/p&gt;&lt;p&gt;&lt;strong&gt;ದೇಶೀಯ ತಂತ್ರಜ್ಞಾನ: &lt;/strong&gt;ಈ ನೌಕೆಯ ನಿರ್ಮಾಣದಲ್ಲಿ ಶೇಕಡಾ 80ಕ್ಕೂ ಹೆಚ್ಚು ದೇಶೀಯ ಬಿಡಿಭಾಗಗಳು ಹಾಗೂ ವಸ್ತುಗಳನ್ನು ಬಳಸಲಾಗಿದ್ದು, ಇದು 'ವಿಕಸಿತ ಭಾರತ'ದ ಗುರಿಗೆ ಭಾರಿ ವೇಗ ನೀಡಿದೆ.&lt;/p&gt;&lt;p&gt;&lt;strong&gt;'ಮಾಹೆ' ಸರಣಿಯ ನೌಕೆ:&lt;/strong&gt; ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾಗುತ್ತಿರುವ ಒಟ್ಟು 8 'ಮಾಹೆ' ಸರಣಿಯ ಸಣ್ಣ ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆಗಳಲ್ಲಿ ಐಎನ್&zwnj;ಎಸ್ ಮಾಲವನ್&zwnj; ಎರಡನೆಯದ್ದಾಗಿದೆ.&lt;/p&gt;&lt;h2&gt;ಗುಜರಾತ್&zwnj;ನಿಂದ ಪೂರೈಕೆಯಾದ ವಿಶೇಷ 'ನೇವಿ-ಗ್ರೇಡ್' ಸ್ಟೀಲ್&lt;/h2&gt;&lt;p&gt;ಯುದ್ಧನೌಕೆಗಳ ನಿರ್ಮಾಣಕ್ಕೆ ಸಾಮಾನ್ಯ ಉಕ್ಕನ್ನು ಬಳಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಗುಜರಾತ್&zwnj;ನ ಹಜೀರಾದಲ್ಲಿರುವ ಎಎಂ/ಎನ್ಎಸ್ ಇಂಡಿಯಾ ಉತ್ಪಾದನಾ ಘಟಕದಲ್ಲಿ ಅತ್ಯುನ್ನತ ಗುಣಮಟ್ಟದ 'ನೇವೆಲ್-ಗ್ರೇಡ್' ಸ್ಟೀಲ್ ಅನ್ನು ಪ್ರತ್ಯೇಕವಾಗಿ ತಯಾರಿಸಿ ಪೂರೈಸಲಾಗಿದೆ.&lt;/p&gt;&lt;p&gt;ಈ ಸಾಧನೆಯ ಬಗ್ಗೆ ಮಾತನಾಡಿದ ಎಎಂ/ಎನ್ಎಸ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಹಾಗೂ ಉಪಾಧ್ಯಕ್ಷ ರಂಜನ್ ಧರ್, &quot;ಭಾರತದ ರಕ್ಷಣಾ ವಲಯವು ದೇಶೀಯ ಉತ್ಪಾದನೆ ಮತ್ತು ಸ್ವಾವಲಂಬನೆಯಿಂದ ಹೇಗೆ ಬಲಗೊಳ್ಳುತ್ತಿದೆ ಎಂಬುದಕ್ಕೆ ಐಎನ್&zwnj;ಎಸ್ ಮಾಲವನ್&zwnj; ಅತ್ಯುತ್ತಮ ಉದಾಹರಣೆಯಾಗಿದೆ. ನೌಕಾಪಡೆಗೆ ಅಗತ್ಯವಿರುವ ಅತ್ಯುನ್ನತ ಗುಣಮಟ್ಟದ ಉಕ್ಕನ್ನು ಪೂರೈಸಿ, ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಭಾಗಿಯಾಗಿರುವುದು ನಮಗೆ ಹೆಮ್ಮೆಯ ವಿಷಯ&quot; ಎಂದು ಹರ್ಷ ವ್ಯಕ್ತಪಡಿಸಿದರು.&lt;/p&gt;&lt;h2&gt;ರಾಷ್ಟ್ರೀಯ ಯೋಜನೆಗಳಿಗೂ ಎಎಂ/ಎನ್&zwnj;ಎಸ್ ಕೊಡುಗೆ&lt;/h2&gt;&lt;p&gt;ನೌಕಾಪಡೆಗಾಗಿ ತಯಾರಾಗುತ್ತಿರುವ 'ಮಾಹೆ' ಸರಣಿಯ ಎಲ್ಲಾ 8 ಯುದ್ಧನೌಕೆಗಳಿಗೂ ಎಎಂ/ಎನ್ಎಸ್ ಇಂಡಿಯಾ ಕಂಪನಿಯೇ ಸಂಪೂರ್ಣ ಉಕ್ಕನ್ನು ಪೂರೈಸುತ್ತಿದೆ. ಇದಕ್ಕೂ ಮುನ್ನ ಭಾರತೀಯ ನೌಕಾಪಡೆಯ ಹೆಮ್ಮೆಯ ಐಎನ್&zwnj;ಎಸ್ ವಿಶಾಖಪಟ್ಟಣಂ ಹಾಗೂ ಐಎನ್&zwnj;ಎಸ್ ಸೂರತ್ ಯುದ್ಧನೌಕೆಗಳಿಗೂ ಈ ಸಂಸ್ಥೆಯೇ ಉಕ್ಕು ನೀಡಿತ್ತು.&lt;/p&gt;&lt;p&gt;ಕೇವಲ ರಕ್ಷಣಾ ವಲಯ ಮಾತ್ರವಲ್ಲದೆ, ದೇಶದ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೂ ಸಂಸ್ಥೆ ಕೊಡುಗೆ ನೀಡಿದೆ:&lt;/p&gt;&lt;p&gt;&lt;strong&gt;ಜಮ್ಮು-ಕಾಶ್ಮೀರ: &lt;/strong&gt;ವಿಶ್ವದ ಅತಿ ಎತ್ತರದ 'ಚೀನಾಬ್ ರೈಲ್ವೇ ಸೇತುವೆ' ಹಾಗೂ 'ಅಂಜಿಕಾಡ್ ರೈಲ್ವೇ ಸೇತುವೆ'.&lt;/p&gt;&lt;p&gt;&lt;strong&gt;ಅಸ್ಸಾಂ: &lt;/strong&gt;ಬೋಗಿಬೀಲ್ ಸೇತುವೆ.&lt;/p&gt;&lt;p&gt;&lt;strong&gt;ಇತರ ಯೋಜನೆಗಳು: &lt;/strong&gt;ಭಾರತೀಯ ನ್ಯೂಟ್ರಿನೋ ವೀಕ್ಷಣಾಲಯ (INO) ಯೋಜನೆ.&lt;/p&gt;&lt;h2&gt;ಪರಿಸರ ಸ್ನೇಹಿ 'ಗ್ರೀನ್ ಸ್ಟೀಲ್' ಮಾನ್ಯತೆ&lt;/h2&gt;&lt;p&gt;ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ಸಂಸ್ಥೆಗಳ ಜಂಟಿ ಉದ್ಯಮವಾಗಿರುವ ಎಎಂ/ಎನ್ಎಸ್ ಇಂಡಿಯಾ, ಭಾರತದಲ್ಲಿ ವಾರ್ಷಿಕ 90 ಲಕ್ಷ ಟನ್ ಕಚ್ಚಾ ಉಕ್ಕು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಆಂಧ್ರಪ್ರದೇಶದಲ್ಲೂ ವಾರ್ಷಿಕ 82 ಲಕ್ಷ ಟನ್ ಸಾಮರ್ಥ್ಯದ ನೂತನ ಸ್ಟೀಲ್ ಪ್ಲಾಂಟ್ ಅನ್ನು ಸ್ಥಾಪಿಸುತ್ತಿದೆ. ವಿಶೇಷವೆಂದರೆ, ಕೇಂದ್ರ ಉಕ್ಕು ಸಚಿವಾಲಯದಿಂದ ಪರಿಸರ ಸ್ನೇಹಿ 'ಗ್ರೀನ್ ಸ್ಟೀಲ್ ಪ್ರಮಾಣಪತ್ರ' ಪಡೆದ ದೇಶದ ಏಕೈಕ ಸ್ಟೀಲ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.&lt;/p&gt;]]></content:encoded>
            <category>uttara-kannada</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/ins-malvan-anti-submarine-warship-joins-indian-navy-commissioned-at-karwar-powered-by-am-ns-india-special-steel-gdp/articleshow-wat9er3"/>
        </item>
        <item>
            <title><![CDATA[26 ಮನೆಗಳ ನೆಲಸಮಕ್ಕೆ ಆದೇಶ.. ಹೊನ್ನಾವರ ಅರಣ್ಯ ಇಲಾಖೆಯ ನೋಟಿಸ್‌ಗೆ ಬೆಚ್ಚಿಬಿದ್ದ ಜನ..!]]></title>
            <link>https://kannada.asianetnews.com/uttara-kannada/forest-department-issued-an-order-to-vacate-26-houses-located-in-the-hadinabala-forest-range-of-honnavar-gkn/articleshow-wze4k7r</link>
            <guid isPermaLink="true">https://kannada.asianetnews.com/uttara-kannada/forest-department-issued-an-order-to-vacate-26-houses-located-in-the-hadinabala-forest-range-of-honnavar-gkn/articleshow-wze4k7r</guid>
            <pubDate>Fri, 14 Aug 2026 17:02:01 +0530</pubDate>
            <description><![CDATA[&lt;p&gt;ಅರಣ್ಯವನ್ನೇ ನಂಬಿ ಬದುಕು ಕಟ್ಟಿಕೊಂಡ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ಅರಣ್ಯ ಇಲಾಖೆಯ ತೊಂದರೆ ನಿನ್ನೆ ಮೊನ್ನೆಯದಲ್ಲ. ಇದೀಗ ಹೊನ್ನಾವರ ತಾಲೂಕಿನ 26 ಮನೆಗಳನ್ನ ನೆಲಸಮಗೊಳಿಸವಂತೆ ಆದೇಶ ನೀಡಲಾಗಿದೆ. ಅರಣ್ಯಾ ಇಲಾಖೆಯ ಏಕಾಏಕಿ ಈ ಕ್ರಮವು ಅಲ್ಲಿನ ನಿವಾಸಿಗಳನ್ನ ಕಂಗಾಲಾಗುವಂತೆ ಮಾಡಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m000mqepb2d29xk0ze7xvwfx,imgname-honnavar-hadinabal-1786707074517.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊನ್ನಾವರ: &lt;/strong&gt;ತಲತಲಾಂತರಗಳಿಂದ ಅರಣ್ಯ ನಂಬಿ ಬದುಕುತ್ತಿರುವ ಬಡ ಕುಟುಂಬಗಳ ಮೇಲೆ ಈಗ ಅರಣ್ಯ ಇಲಾಖೆಯ 'ತೆರವು' ಭೀತಿ ಎದುರಾಗಿದೆ. ಹೊನ್ನಾವರ ತಾಲೂಕಿನ ಹಡಿನಬಾಳ ಅರಣ್ಯ ವ್ಯಾಪ್ತಿಯಲ್ಲಿ ವಾಸವಿರುವ 26 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದ್ದು, ಅರಣ್ಯವಾಸಿಗಳು ದಿಕ್ಕುತೋಚದಂತಾಗಿದ್ದಾರೆ.&lt;/p&gt;&lt;h2&gt;&lt;strong&gt;ಬೆಟ್ಟದ ಮೇಲಿನ ಬದುಕಿಗೆ ಈಗ ಸಂಚಕಾರ!&lt;/strong&gt;&lt;/h2&gt;&lt;p&gt;ಹೊನ್ನಾವರ ತಾಲೂಕಿನ ಮೇಲಿನ ಹಡಿನಬಾಳ ಅರಣ್ಯ ವ್ಯಾಪ್ತಿಯ ಮೂಡ್ಕಣಿಯಲ್ಲಿರುವ ಸುಮಾರು 15 ಗುಂಟೆ ಅರಣ್ಯ ಪ್ರದೇಶದಲ್ಲಿ 26 ಕುಟುಂಬಗಳು ವಾಸವಾಗಿವೆ. ತಗ್ಗು ಪ್ರದೇಶದಲ್ಲಿ ವಾಸಿಸಲು ಹತ್ತಾರು ಸಮಸ್ಯೆಗಳಿದ್ದ ಕಾರಣ, ಈ ಕುಟುಂಬಗಳು ಕೊಂಚ ಎತ್ತರದ ಪ್ರದೇಶವಾದ ಬೆಟ್ಟದ ಮೇಲೆ ಮನೆ ಮಾಡಿಕೊಂಡಿದ್ದವು. ಆದರೆ, ಈಗ ಈ ಜಾಗವನ್ನು ಅರಣ್ಯ ಅತಿಕ್ರಮಣ ಎಂದು ಪರಿಗಣಿಸಿರುವ ಇಲಾಖೆ, ತಕ್ಷಣವೇ ಮನೆಗಳನ್ನು ತೆರವುಗೊಳಿಸಲು ಆದೇಶಿಸಿದೆ.&lt;/p&gt;&lt;h2&gt;&lt;strong&gt;ಇಲಾಖೆಯ ಖಡಕ್ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಅತಿಕ್ರಮಿತ ಜಾಗದಲ್ಲಿರುವ ಕಟ್ಟಡ ಹಾಗೂ ಬೆಳೆಗಳನ್ನು ನಿವಾಸಿಗಳೇ ಸ್ವಂತ ಖರ್ಚಿನಲ್ಲಿ ತೆರವುಗೊಳಿಸಬೇಕು. ಒಂದು ವೇಳೆ ನಿಗದಿತ ಸಮಯದೊಳಗೆ ತೆರವು ಮಾಡದಿದ್ದರೆ, ಇಲಾಖೆಯೇ ಜಪ್ತಿ ಮಾಡಿ ತೆರವು ಕಾರ್ಯ ನಡೆಸಲಿದೆ ಎಂದು ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಆತಂಕದಲ್ಲಿರುವ ನಿವಾಸಿಗಳು ಯಾರು?&lt;/strong&gt;&lt;/h2&gt;&lt;p&gt;ಅರಣ್ಯ ಇಲಾಖೆಯ ಈ ನೋಟಿಸ್&zwnj;ನಿಂದಾಗಿ ಕೆರವಳ್ಳಿಯ ಕೇಶವ ನಾಯ್ಕ ಸೇರಿದಂತೆ ಜಾಕಿ ಬಾಂವ ಅಡಾ, ಧರ್ಮ ಮಂಜುನಾಥ ನಾಯ್ಕ ಮರಬಳ್ಳಿ, ಶಾಂತಾನಂದ ಅನಂತ ಶಾನಭಾಗ, ಸಂತೋಷ ನರಸಿಂಹ ಶಾನಭಾಗ, ಬೇತಾಳ ನರಸಿಂಹ ಶಾನಭಾಗ, ರಾಮಚಂದ್ರ ಗಣಪ ನಾಯ್ಕ, ನಾರಾಯಣ ಅಮಕೂಸ ಗೌಡ, ಪ್ರಶಾಂತ ಶೇಷಗಿರಿ ನಾಯ್ಕ, ಕೇಶವ ಗಣಪಯ್ಯ ನಾಯ್ಕ, ರಾಘು ನಾರಾಯಣ ಶೆಟ್ಟಿ, ಐವಾನ ಆಶಿಸಿ ಮೆಂಡಿಸ್, ವಿನಾಯಕ ಸುಬ್ರಮಣ್ಯ ವೈದ್ಯ, ವಿಘ್ನಶ್ವರ ಸುಬ್ರಮಣ್ಯ ವೈದ್ಯ, ಪಾರ್ವತಿ ಗಜಾನನ ನಾಯ್ಕ, ವಿಲಿಯಂ ಸಂತಾನ ಮಿರಾಂಡ, ಆಶಿಸ್ ಬಾಂವ್, ದಯಾನಂದ ಈಶ್ವರ ನಾಯ್ಕ, ಶ್ರೀಧರ ಮಂಜಪ್ಪ ಮಹಾಲೆ, ಕೃಷ್ಣಪ್ಪ ಗಣಪತಿ ನಾಯ್ಕ, ಸಂತಾ ಡಿಯೋಗ ಡಯಾಸ, ದಯಾನಂದ ಧರ್ಮ ನಾಯ್ಕ, ಹನುಮಂತ ಸುಬ್ರಾಯ ನಾಯ್ಕ, ಮಹಾದೇವ ಮಂಜಪ್ಪ ಮಹಾಲೆ, ನಿತ್ಯಾನಂದ ವೆಂಕಟೇಶ ಶ್ಯಾನಭಾಗ ಹಾಗೂ ಮಾಲ್ವೇಶ್ವರ ಸಣ್ಣ ತಮ್ಮ ನಾಯ್ಕ ಎಂಬುವವರು ಅಕ್ಷರಶಃ ಕಂಗಾಲಾಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿಭಟನೆಯ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಜುಲೈ 15ರಂದೇ ಈ ಆದೇಶ ಹೊರಡಿಸಲಾಗಿದ್ದರೂ ನಿವಾಸಿಗಳ ಕೈಗೆ ಸಿಕ್ಕಿದ್ದು ಮಾತ್ರ ಮೂರು ದಿನಗಳ ಹಿಂದೆ! ಅಂದರೆ 30 ದಿನಗಳ ಕಾಲಾವಕಾಶದಲ್ಲಿ ಈಗಾಗಲೇ 25 ದಿನಗಳು ಕಳೆದುಹೋಗಿವೆ. ಕೇವಲ 5-6 ದಿನಗಳ ಬಾಕಿ ಇರುವಾಗ ನೋಟಿಸ್ ನೀಡಿರುವುದು ಅರಣ್ಯವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಭೂಮಿ ಹಕ್ಕಿನ ಹೋರಾಟಗಾರ ಮಹೇಶ ನಾಯ್ಕ, ಜುಲೈ 15ರ ಆದೇಶವನ್ನು ತಲುಪಿಸಲು 25 ದಿನ ವಿಳಂಬ ಮಾಡಿರುವುದು ವಿಷಾದನೀಯ. ಆಗಸ್ಟ್ 14ರ ಒಳಗೆ ಒಕ್ಕಲೆಬ್ಬಿಸುವಂತೆ ಸೂಚಿಸಿರುವುದು ಅನ್ಯಾಯ. ಬದುಕು ಕಟ್ಟಿಕೊಂಡಿರುವ ಅರಣ್ಯವಾಸಿಗಳನ್ನು ಈ ರೀತಿ ಬೀದಿಗೆ ಹಾಕುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಮಳೆಗಾಲದ ಈ ಸಂದರ್ಭದಲ್ಲಿ ಮನೆ ತೆರವುಗೊಳಿಸುವಂತೆ ಆದೇಶಿಸಿರುವುದು ಮಾನವೀಯತೆಯ ದೃಷ್ಟಿಯಿಂದಲೂ ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಬಡ ಕುಟುಂಬಗಳು ಈಗ ನ್ಯಾಯಕ್ಕಾಗಿ ಸರ್ಕಾರದ ಕಡೆಗೆ ಮುಖ ಮಾಡಿವೆ.&lt;/p&gt;]]></content:encoded>
            <category>uttara-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/uttara-kannada/forest-department-issued-an-order-to-vacate-26-houses-located-in-the-hadinabala-forest-range-of-honnavar-gkn/articleshow-wze4k7r"/>
        </item>
        <item>
            <title><![CDATA[20 ವರ್ಷಗಳ ಬಳಿಕ ಮತ್ತೆ ಕಚೇರಿಗೆ ಬಂದ ಅಧಿಕಾರಿ..! ಚಿಂತೆಗೆ ಬಿದ್ದ ಅಂಕೋಲಾ, ಯಲ್ಲಾಪುರ ಜನ]]></title>
            <link>https://kannada.asianetnews.com/uttara-kannada/hubballi-ankola-railway-project-office-gets-a-full-time-officer-after-two-decades-to-expedite-work-gkn/articleshow-xddc9ty</link>
            <guid isPermaLink="true">https://kannada.asianetnews.com/uttara-kannada/hubballi-ankola-railway-project-office-gets-a-full-time-officer-after-two-decades-to-expedite-work-gkn/articleshow-xddc9ty</guid>
            <pubDate>Mon, 17 Aug 2026 20:07:07 +0530</pubDate>
            <description><![CDATA[&lt;p&gt;ಕಳೆದ 20 ವರ್ಷಗಳಿಂದ ಖಾಲಿ ಇದ್ದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ ಅವರ ನೇಮಕವಾಗಿದ್ದು, ನೆನೆಗುದಿಗೆ ಬಿದ್ದಿದ್ದ ಈ ರೈಲ್ವೆ ಯೋಜನೆಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m082dzse2qpwdac4mwn3wskj,imgname-hubballi-ankola-railway-project-1786977386286.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಂಕೋಲಾ: &lt;/strong&gt;ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ಜನರ ಕನಸಿನ ಯೋಜನೆಯಾದ 'ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ'ಗೆ (Hubballi-Ankola Railway Project) ಹೊಸ ಕಳೆ ಬಂದಿದೆ. ಕಳೆದ 20 ವರ್ಷಗಳಿಂದ ಬಿಕೋ ಎನ್ನುತ್ತಿದ್ದ ಸರ್ಕಾರಿ ಕಚೇರಿಯೊಂದಕ್ಕೆ ಈಗ ಕೊನೆಗೂ ಅಧಿಕಾರಿಯೊಬ್ಬರು ನೇಮಕವಾಗುವ ಮೂಲಕ ಯೋಜನೆಗೆ ಮರುಜೀವ ಸಿಕ್ಕಂತಾಗಿದೆ.&lt;/p&gt;&lt;h2&gt;&lt;strong&gt;20 ವರ್ಷಗಳ ನಂತರ ಬಂದ ಅಧಿಕಾರಿ!&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ 1998ರಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯನ್ನು ಆರಂಭಿಸಲಾಗಿತ್ತು. ಆದರೆ 2006ರಲ್ಲಿ ಯೋಜನೆಗೆ ಕಾನೂನು ತೊಡಕುಗಳು ಮತ್ತು ಪರಿಸರ ಕಾರಣಗಳಿಂದ ತಡೆ ಬಂದ ಮೇಲೆ ಈ ಕಚೇರಿ ಕೇವಲ ಹೆಸರಿಗಷ್ಟೇ ಇತ್ತು. ಕೆಲಸವಿಲ್ಲದ ಕಾರಣ ಇಲ್ಲಿಗೆ ನೇಮಕವಾಗಿದ್ದ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಆಗಿದ್ದರು. ಕಳೆದ ಎರಡು ದಶಕಗಳಿಂದ ಕೇವಲ 'ಪ್ರಭಾರಿ' (In-charge) ಅಧಿಕಾರಿಗಳೇ ಈ ಹುದ್ದೆಯನ್ನು ನಿಭಾಯಿಸುತ್ತಿದ್ದರು.&lt;/p&gt;&lt;p&gt;ಸದ್ಯ ರಾಜ್ಯ ಸರ್ಕಾರವು ಕೆಎಎಸ್ (KAS) ಆಯ್ಕೆ ಶ್ರೇಣಿಯ ಅಧಿಕಾರಿ ರವಿಚಂದ್ರ ನಾಯಕ ಅವರನ್ನು ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ನೇಮಕ ಮಾಡಿದೆ. ಇದರೊಂದಿಗೆ 20 ವರ್ಷಗಳ ನಂತರ ಈ ಕಚೇರಿಗೆ ಪೂರ್ಣಾವಧಿ ಅಧಿಕಾರಿ ಬಂದಂತಾಗಿದೆ.&lt;/p&gt;&lt;h2&gt;&lt;strong&gt;ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ?&lt;/strong&gt;&lt;/h2&gt;&lt;p&gt;ಇತ್ತೀಚೆಗಷ್ಟೇ ನೈಋತ್ಯ ರೈಲ್ವೆಯು ಈ ಯೋಜನೆಗಾಗಿ ಭೂ ಸ್ವಾಧೀನಗೊಳ್ಳಲಿರುವ ಗ್ರಾಮಗಳ ಪಟ್ಟಿಯನ್ನು ಪ್ರಕಟಿಸಿತ್ತು. ಇದರಿಂದಾಗಿ ಯಲ್ಲಾಪುರ ಮತ್ತು ಅಂಕೋಲಾ ಭಾಗದ ಜನರಲ್ಲಿ ಕುತೂಹಲ ಮೂಡಿದೆ. 1998 ರಿಂದ 2006ರ ನಡುವೆ ಹುಬ್ಬಳ್ಳಿ ಮತ್ತು ಕಲಘಟಗಿ ಭಾಗದ ಭೂ ಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಈಗ ಅಂಕೋಲಾ ಮತ್ತು ಯಲ್ಲಾಪುರ ಭಾಗದ ಅರಣ್ಯ ಹಾಗೂ ಖಾಸಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಜವಾಬ್ದಾರಿ ಹೊಸ ಅಧಿಕಾರಿಯ ಮೇಲಿದೆ.&lt;/p&gt;&lt;p&gt;ರೈಲ್ವೆ ಇಲಾಖೆ ಪ್ರಕಟಿಸಿರುವ ಪಟ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ 52 ರಿಂದ ದೂರದಲ್ಲಿರುವ ಕಳಚೆ, ತೆಲಂಗಾರ ಮುಂತಾದ ಗ್ರಾಮಗಳ ಹೆಸರೂ ಸೇರಿದೆ. ಇದರಿಂದಾಗಿ ರೈಲ್ವೆ ಮಾರ್ಗ ನಿಖರವಾಗಿ ಎಲ್ಲಿಂದ ಹಾದು ಹೋಗಲಿದೆ ಎಂಬ ಬಗ್ಗೆ ಜನರಲ್ಲಿ ಸ್ಪಷ್ಟತೆ ಇಲ್ಲ. ಈ ಗೊಂದಲಗಳ ನಡುವೆಯೇ ಭೂ ಸ್ವಾಧೀನಾಧಿಕಾರಿಗಳ ನೇಮಕವಾಗಿರುವುದು ರೈಲ್ವೆ ಮಾರ್ಗ ನಿರ್ಮಾಣದ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಎನ್ನಲಾಗಿದೆ. ಒಟ್ಟಾರೆಯಾಗಿ 20 ವರ್ಷಗಳಿಂದ ಧೂಳು ಹಿಡಿಯುತ್ತಿದ್ದ ಕಚೇರಿ ಈಗ ಮತ್ತೆ ಚಟುವಟಿಕೆಯಿಂದ ಕೂಡಲಿದ್ದು, ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆ ಹಳಿಗೆ ಬರುತ್ತಾ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.&lt;/p&gt;]]></content:encoded>
            <category>uttara-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/uttara-kannada/hubballi-ankola-railway-project-office-gets-a-full-time-officer-after-two-decades-to-expedite-work-gkn/articleshow-xddc9ty"/>
        </item>
        <item>
            <title><![CDATA[ಸಚಿವ ಸ್ಥಾನ ಅನುಭವಿಸಿದ ಹಿರಿಯರೇ ಮಂತ್ರಿ ಸ್ಥಾನ ತಪ್ಪಿಸುವ ಕೆಲ್ಸ ಮಾಡಿದ್ದಾರೆ -ಉ.ಕನ್ನಡ ಕಾಂಗ್ರೆಸ್‌ನ ಅಸಲಿ ಸತ್ಯ ಬಿಚ್ಚಿಟ್ಟ ಸೈಲ್]]></title>
            <link>https://kannada.asianetnews.com/politics/seniors-who-held-posts-behind-denial-of-ministerial-berths-in-north-karnataka-congress-said-satish-sail-gkn/articleshow-xlohilq</link>
            <guid isPermaLink="true">https://kannada.asianetnews.com/politics/seniors-who-held-posts-behind-denial-of-ministerial-berths-in-north-karnataka-congress-said-satish-sail-gkn/articleshow-xlohilq</guid>
            <pubDate>Thu, 06 Aug 2026 15:14:38 +0530</pubDate>
            <description><![CDATA[&lt;p&gt;ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಶಾಸಕರ ನಡುವಿನ ಒಗ್ಗಟ್ಟಿನ ಕೊರತೆಯೇ ಕಾರಣ ಎಂದು ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ. ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಮತ್ತು ಮಂಕಾಳು ವೈದ್ಯರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಇತ್ತ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮೀನುಗಾರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzb7bmm7pnt9c13rqscfs7gx,imgname-r-v-deshapande-satish-sail-mankalu-vaodya-1786009473670.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರವಾರ: &lt;/strong&gt;ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಈ ಆಂತರಿಕ ಭಿನ್ನಮತವೇ ಜಿಲ್ಲೆಗೆ ಸಚಿವ ಸ್ಥಾನ ತಪ್ಪಲು ಮುಖ್ಯ ಕಾರಣ ಎಂದು ಕಾರವಾರ ಶಾಸಕ ಸತೀಶ್ ಸೈಲ್ ನೇರವಾಗಿ ಆರೋಪಿಸಿದ್ದಾರೆ. ಆ ಮೂಲಕ ಜಿಲ್ಲಾ ಕಾಂಗ್ರೆಸ್&zwnj;ನಲ್ಲಿನ ಅಸಮಾಧಾನ ಸ್ಫೋಟಗೊಂಡಿದೆ.&lt;/p&gt;&lt;p&gt;ಕಾರವಾರದಲ್ಲಿ ಮಾತನಾಡಿದ ಸತೀಶ್ ಸೈಲ್, ಜಿಲ್ಲೆಯ ಹಿರಿಯ ಶಾಸಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಶಾಸಕರಲ್ಲಿ ಒಗ್ಗಟ್ಟಿಲ್ಲದ ಕಾರಣ ನಮಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಚಿವ ಸ್ಥಾನ ಅನುಭವಿಸಿದ ಹಿರಿಯರು, ಕಿರಿಯ ಶಾಸಕರಿಗೆ ಮಂತ್ರಿ ಸ್ಥಾನ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಹಾಗೂ ಮಂಕಾಳು ವೈದ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ನನಗೆ ಸಿಗಬೇಕಿದ್ದ ಸ್ಥಾನ ತಪ್ಪಿಸಿದರು&lt;/strong&gt;&lt;/h2&gt;&lt;p&gt;ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಕಳೆದ ಬಾರಿಯೇ ಮುಖ್ಯಮಂತ್ರಿಗಳು ನನಗೆ ಆಶ್ವಾಸನೆ ನೀಡಿದ್ದರು. ಮೊದಲು ಮೀನುಗಾರ ಸಮುದಾಯದ ಮಂಕಾಳು ವೈದ್ಯ ಅವರಿಗೆ ಸ್ಥಾನ ನೀಡಿ, ಬಳಿಕ ನನ್ನನ್ನು ಮಂತ್ರಿ ಮಾಡುತ್ತೇನೆ ಎಂದಿದ್ದರು. ಆದರೆ ಈಗ ಜಿಲ್ಲೆಯ ಯಾರಿಗೂ ಸ್ಥಾನ ಸಿಕ್ಕಿಲ್ಲ. ನನಗೆ ಮಂತ್ರಿ ಸ್ಥಾನ ತಪ್ಪಿಸಿದ ಜಿಲ್ಲೆಯ ಶಾಸಕರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.&lt;/p&gt;&lt;h2&gt;&lt;strong&gt;ಆರ್.ವಿ. ದೇಶಪಾಂಡೆ ಬಗ್ಗೆ ಚಾಟಿ&lt;/strong&gt;&lt;/h2&gt;&lt;p&gt;ಕಾಂಗ್ರೆಸ್ ಪಕ್ಷವು ಆರ್.ವಿ. ದೇಶಪಾಂಡೆ ಅವರಿಗೆ ಕಳೆದ 40 ವರ್ಷಗಳಿಂದ ಅಧಿಕಾರ ನೀಡಿದೆ. ಮಂಕಾಳು ವೈದ್ಯ ಅವರು ಕೂಡ ಸಚಿವರಾಗಿ ಕೆಲಸ ಮಾಡಿದ್ದಾರೆ. ಆದರೆ ಈ ಬಾರಿ ಜಿಲ್ಲೆಗೆ ಸಂಪೂರ್ಣ ಅನ್ಯಾಯವಾಗಿದೆ. ಒಗ್ಗಟ್ಟಿನ ಕೊರತೆಯಿಂದಾಗಿ ಜಿಲ್ಲೆಯ ಹಿತಾಸಕ್ತಿ ಬಲಿಯಾಗಿದೆ ಎಂಬುದು ಸೈಲ್ ಅವರ ಮಾತಿನ ಸಾರಾಂಶವಾಗಿತ್ತು.&lt;/p&gt;&lt;h2&gt;&lt;strong&gt;ಭಟ್ಕಳದಲ್ಲಿ ಮಂಕಾಳು ವೈದ್ಯ ಪರ ಮೀನುಗಾರರ ಆಕ್ರೋಶ&lt;/strong&gt;&lt;/h2&gt;&lt;p&gt;ಇತ್ತ ಕಾರವಾರ ಶಾಸಕರು ಹಿರಿಯರ ವಿರುದ್ಧ ಕಿಡಿಕಾರುತ್ತಿದ್ದರೆ, ಅತ್ತ ಭಟ್ಕಳದಲ್ಲಿ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮೀನುಗಾರ ಸಮುದಾಯ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಹೈಕಮಾಂಡ್ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಇದ್ದರೂ, ಕೊನೆ ಕ್ಷಣದಲ್ಲಿ ಕೈಬಿಟ್ಟಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಭಟ್ಕಳದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮೊಗೇರ ಸಮಾಜ, ಮೀನುಗಾರಿಕೆ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;p&gt;ಮೀನುಗಾರ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಮತ್ತು ಕೂಡಲೇ ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಇಬ್ಬರು ಪ್ರಬಲ ಶಾಸಕರ ನಡುವಿನ ಈ ಶೀತಲ ಸಮರ ಮತ್ತು ಮೀನುಗಾರರ ಪ್ರತಿಭಟನೆ ಈಗ ಉತ್ತರ ಕನ್ನಡ ಕಾಂಗ್ರೆಸ್&zwnj;ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ.&lt;/p&gt;]]></content:encoded>
            <category>uttara-kannada</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/seniors-who-held-posts-behind-denial-of-ministerial-berths-in-north-karnataka-congress-said-satish-sail-gkn/articleshow-xlohilq"/>
        </item>
        <item>
            <title><![CDATA[ತದಡಿ-ಅಘನಾಶಿನಿ ಬಾರ್ಜ್‌ನ ಪ್ರಯಾಣದ ದರ ಪಟ್ಟಿ ಅಳವಡಿಸಲು ಸಿದ್ಧತೆ; ಪ್ರಯಾಣಿಕರಲ್ಲಿ ಗೊಂದಲ]]></title>
            <link>https://kannada.asianetnews.com/karnataka-districts/uttara-kananda-gokarna-preparations-to-implement-fare-schedule-for-tadadi-aghanashini-barge-journey-mrq/articleshow-ygah42d</link>
            <guid isPermaLink="true">https://kannada.asianetnews.com/karnataka-districts/uttara-kananda-gokarna-preparations-to-implement-fare-schedule-for-tadadi-aghanashini-barge-journey-mrq/articleshow-ygah42d</guid>
            <pubDate>Mon, 24 Aug 2026 08:46:33 +0530</pubDate>
            <description><![CDATA[ತದಡಿ-ಅಘನಾಶಿನಿ ನಡುವಿನ ಬಾರ್ಜ್ ಸೇವೆಗೆ ಕೊನೆಗೂ ದರಪಟ್ಟಿ ಅಳವಡಿಸಲಾಗುತ್ತಿದ್ದು, ಇಲಾಖೆ ನಿಗದಿತ ದರಕ್ಕಿಂತ ಹೆಚ್ಚಳ ಮಾಡಲಾಗಿದೆ. ಈ ಹೊಸ ದರಪಟ್ಟಿಯು ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ದರ ತಾರತಮ್ಯದ ಅನುಮಾನ ಮೂಡಿಸಿ, ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rw6xxy8hccs9ktge32wnft,imgname-aghanashini-tadadi-port-1787541288894.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೋಕರ್ಣ:&lt;/strong&gt; ತದಡಿ-ಅಘನಾಶಿನಿ ನಡುವೆ ಸಂಚರಿಸುವ ಬಾರ್ಜ್&zwnj;ನ ಪ್ರಯಾಣದ ದರ ಪಟ್ಟಿಯನ್ನು ಅಂತೂ ಅಳವಡಿಸಲು ಸಿದ್ಧತೆ ನಡೆದಿದೆ. ಗೋಕರ್ಣದಿಂದ ಕುಮಟಾಕ್ಕೆ ತೆರಳುವ ನಿತ್ಯ ಪ್ರಯಾಣಿಕರು, ಹಾಗೂ ಅಘನಾಶಿನಿ, ಬಾಡ ಕಡೆ ತೆರಳುವ ಪ್ರವಾಸಿಗರು ಈ ಬಾರ್ಜ ಅವಲಂಬಿಸಿದ್ದಾರೆ.&lt;/p&gt;&lt;p&gt;ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಎರಡು ವರ್ಷದ ಹಿಂದೆ ಟೆಂಡರ್ ಮೂಲಕ ಬಾರ್ಜ ನಡೆಸಲು ಖಾಸಗಿಯರಿಗೆ ನೀಡಲಾಗಿತ್ತು. ಆದರೆ ಇಲಾಖೆಯ ನಿಯಮದಂತೆ ಪ್ರಯಾಣದರ ಆಕರಿಸದೆ ದುಪ್ಪಟ್ಟು ಹಣ ಪಡೆಯಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿ, ದರಪಟ್ಟಿ ಹಾಕುವಂತೆ ಆಗ್ರಹಿಸಿದ್ದರು. ಈ ಕುರಿತು ನಿರಂತರ ಪತ್ರಿಕೆ ವರದಿ ಪ್ರಕಟಿಸಿ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿತ್ತು. ಇದರ ಪರಿಣಾಮ ಬಾರ್ಜ್&zwnj; ನಡೆಸುವವರು ದರ ಪಟ್ಟಿಯನ್ನು ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ದರ ಹೆಚ್ಚಳದ ನಾಮಫಲಕ&lt;/strong&gt;&lt;/h2&gt;&lt;p&gt;ಇಲಾಖೆ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ತೋರಿಸಲಾಗಿದೆ. ಪ್ರಸ್ತುತ ಡಿಸೇಲ್ ದರ ಏರಿಕೆ, ಕೆಲಸಗಾರರ ಸಂಬಳ, ನಿರ್ವಹಣೆ ಕಾರಣದಿಂದ ದರ ಹೆಚ್ಚಿಸಲಾಗಿದೆ ಎಂದು ನಾಮಫಲಕದಲ್ಲಿ ತಿಳಿಸಲಾಗಿದೆ. ಆದರೆ ಇದಕ್ಕೆ ಇಲಾಖೆ ಅನುಮತಿ ಇದೆಯೇ ಎಂಬುದು ತಿಳಿಯದಾಗಿದೆ.&lt;/p&gt;&lt;p&gt;ಇನ್ನು ಈ ದರ ಪಟ್ಟಿಯಲ್ಲಿ ಸ್ಥಳೀಯರಿಗೆ ಎಂದು ದರ ನಮೂದಿಸಲಾದೆ. ಇದರಿಂದ ಪ್ರವಾಸಿಗರಿಗೆ ಹಾಗೂ ಹೊರಗಿನವರಿಗೆ ಇದಕ್ಕೂ ಹೆಚ್ಚು ಹಣ ಪಡೆಯುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಕನ್ನಡದಲ್ಲಿ ಮಾತ್ರ ದರಪಟ್ಟಿ ಹಾಕಿದ್ದು, ಉಳಿದ ಭಾಷೆಯಲ್ಲೂ ನಮೂದು ಮಾಡಬೇಕಿದೆ.&lt;/p&gt;&lt;h3&gt;&lt;strong&gt;ದರ ಎಷ್ಟು?&lt;/strong&gt;&lt;/h3&gt;&lt;p&gt;ಈ ಮೊದಲು ಜನರಿಗೆ ₹5, ದ್ವಿಚಕ್ರವಾಹನಕ್ಕೆ ₹10 ಇಲಾಖೆಯಿಂದ ನಿಗದಿ ಮಾಡಲಾಗಿತ್ತು. ಆದರೂ ಹೆಚ್ಚು ಹಣ ಪಡೆಯುತ್ತಿದ್ದರು. ಹೊಸ ದರಪಟ್ಟಿಯಲ್ಲಿ ಸ್ಥಳೀಯ ಪ್ರಯಾಣಿಕರಿಗೆ 20, ಸ್ಥಳೀಯ ದ್ವಿಚಕ್ರವಾಹನ್ನಕ್ಕೆ 20 ಎಂದು ನಮೂದಿಸಿದ್ದಾರೆ. ಆದರೆ ಪ್ರವಾಸಿಗರಿಗೆ ಎಷ್ಟು ಹಣ ಎಂದು ಎಲ್ಲಿಯೂ ನಮೂದಿಸಿಲ್ಲ, ಹಿಂದೆ ₹50 ಪಡೆಯುತ್ತಿದ್ದು, ಪ್ರಸ್ತುತ ಎಷ್ಟು ತೆಗೆದುಕೊಳ್ಳುತ್ತಾರೆ ಎಂಬುದು ತಿಳಿಯದಾಗಿದ್ದು, ಪ್ರವಾಸಿಗರು ಎಂದರೆ ಎಲ್ಲರಂತೆ ಪ್ರಯಾಣಿಕರೇ ಆಗಿದ್ದು, ಎಲ್ಲರಿಗೂ ಒಂದೇ ದರ ನಿಗದಿಪಡಿಸುವಂತೆ ಇಲಾಖೆ ಕ್ರಮವಹಿಸಬೇಕಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳನ್ನ ಸಂಪರ್ಕಿಸಲು ಪತ್ರಿಕೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.&lt;/p&gt;]]></content:encoded>
            <category>uttara-kannada</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kananda-gokarna-preparations-to-implement-fare-schedule-for-tadadi-aghanashini-barge-journey-mrq/articleshow-ygah42d"/>
        </item>
    </channel>
</rss>
