<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 05 Apr 2026 07:22:01 +0530</lastBuildDate>
        <atom:link href="https://kannada.asianetnews.com/rss/udupi" rel="self" type="application/rss+xml"/>
        <item>
            <title><![CDATA[ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಬೆಂಗಳೂರು ಟು ಮಂಗಳೂರು ಟ್ರೈನ್ ಕೋಯಿಕ್ಕೋಡ್‌ವರೆಗೆ ವಿಸ್ತರಣೆ]]></title>
            <link>https://kannada.asianetnews.com/state/indian-railways-extends-bengaluru-mangaluru-kannur-express-to-kozhikode-gdp/articleshow-133zmeg</link>
            <guid isPermaLink="true">https://kannada.asianetnews.com/state/indian-railways-extends-bengaluru-mangaluru-kannur-express-to-kozhikode-gdp/articleshow-133zmeg</guid>
            <pubDate>Mon, 16 Mar 2026 22:06:23 +0530</pubDate>
            <description><![CDATA[ಬೆಂಗಳೂರು ಮತ್ತು ಮಂಗಳೂರು ಮೂಲಕ ಕಣ್ಣೂರುವರೆಗೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಇದೀಗ ಕೇರಳದ ಕೋಯಿಕ್ಕೋಡ್&zwnj;ವರೆಗೆ ವಿಸ್ತರಿಸಲಾಗಿದೆ. ಮಾರ್ಚ್ 15 ರಿಂದ ಜಾರಿಗೆ ಬರುವ ಈ ವಿಸ್ತರಣೆಯು, ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kd6243fcjxrv96wmk1ggke23,imgname-image-5a758be4-76e8-4466-b9d6-05a95d17bb18-1766508858860.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಬೆಂಗಳೂರು ಮತ್ತು ಮಂಗಳೂರು ಮೂಲಕ &amp;nbsp;ಕರಾವಳಿ ತೀರದಲ್ಲಿ ಸಾಗಿ ಕೇರಳದ ಕಣ್ಣೂರುವರೆಗೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್&zwnj;ಪ್ರೆಸ್ ರಾತ್ರಿ ರೈಲು ಸೇವೆಯನ್ನು ಇದೀಗ ಕೇರಳದ ಕೋಯಿಕ್ಕೋಡ್&zwnj;ವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಕರಾವಳಿ ಕರ್ನಾಟಕ ಹಾಗೂ ಉತ್ತರ ಕೇರಳದ ಕರಾವಳಿ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲಾಗಿದೆ.&lt;/p&gt;&lt;h2&gt;ದಕ್ಷಿಣ ಪಶ್ಚಿಮ ರೈಲ್ವೆ &amp;nbsp;ಹುಬ್ಬಳ್ಳಿ ಪ್ರಧಾನ ಕಚೇರಿಯಿಂದ ಅಧಿಕೃತ ಅಧಿಸೂಚನೆ&lt;/h2&gt;&lt;p&gt;ಈ ಕುರಿತು ದಕ್ಷಿಣ ಪಶ್ಚಿಮ ರೈಲ್ವೆಯ ಹುಬ್ಬಳ್ಳಿ ಪ್ರಧಾನ ಕಚೇರಿಯಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಇದುವರೆಗೆ ರೈಲು ಸಂಖ್ಯೆ 16511/16512 ಕೆಎಸ್&zwnj;ಆರ್ ಬೆಂಗಳೂರು ನಗರ&ndash;ಕಣ್ಣೂರು ನಡುವೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್&zwnj;ಪ್ರೆಸ್ ರೈಲು ಇನ್ನುಮುಂದೆ ಕೋಯಿಕ್ಕೋಡ್&zwnj;ವರೆಗೆ ವಿಸ್ತರಿಸಿ ಸಂಚರಿಸಲಿದೆ. ರೈಲ್ವೆ ಮಂಡಳಿಯ ಅನುಮೋದನೆಯೊಂದಿಗೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;p&gt;ಅಧಿಸೂಚನೆಯ ಪ್ರಕಾರ, ಮಾರ್ಚ್ 15ರಿಂದ ಕೆಎಸ್&zwnj;ಆರ್ ಬೆಂಗಳೂರು ನಗರದಿಂದ ಹೊರಡುವ 16511 ಎಕ್ಸ್&zwnj;ಪ್ರೆಸ್ ರೈಲು ತನ್ನ ಪ್ರಯಾಣವನ್ನು ಕಣ್ಣೂರಿನಲ್ಲೇ ಅಂತ್ಯಗೊಳಿಸುವ ಬದಲು ಕೋಯಿಕ್ಕೋಡ್&zwnj;ವರೆಗೆ ಮುಂದುವರಿಸಲಿದೆ. ಅದೇ ರೀತಿ, ಮಾರ್ಚ್ 16ರಿಂದ ಕೋಯಿಕ್ಕೋಡ್&zwnj;ನಿಂದ ಹೊರಡುವ 16512 ಎಕ್ಸ್&zwnj;ಪ್ರೆಸ್ ರೈಲು ಬೆಂಗಳೂರು ನಗರಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;ರೈಲು ಸೇವೆ ವಿಸ್ತರಣೆಗೊಂಡಿರುವ ಹೊಸ ಮಾರ್ಗದಲ್ಲಿ ಕಣ್ಣೂರಿನ ನಂತರ ತಲಶ್ಶೇರಿ, ವಡಕರ ಮತ್ತು ಕೊಯಿಲಾಂಡಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಮಧ್ಯಾಹ್ನ 12.40ಕ್ಕೆ ಕೋಯಿಕ್ಕೋಡ್ ರೈಲು ನಿಲ್ದಾಣಕ್ಕೆ ತಲುಪಲಿದೆ.&lt;/p&gt;&lt;p&gt;ಮರಳಿ ಪ್ರಯಾಣದ ವೇಳೆ ರೈಲು ಸಂಜೆ 3.30ಕ್ಕೆ ಕೋಯಿಕ್ಕೋಡ್&zwnj;ನಿಂದ ಹೊರಟು ಮಂಗಳೂರು ಸೆಂಟ್ರಲ್ ಮಾರ್ಗವಾಗಿ ಬೆಂಗಳೂರಿನತ್ತ ತನ್ನ ಪ್ರಯಾಣವನ್ನು ಮುಂದುವರಿಸಲಿದೆ.&lt;/p&gt;&lt;h2&gt;ಬೆಂಗಳೂರು ಟು ಕಣ್ಣೂರು &amp;nbsp;ಪ್ರಯಾಣ ಇನ್ನಷ್ಟು ಸುಲಭ&lt;/h2&gt;&lt;p&gt;ರೈಲ್ವೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಕೆಎಸ್&zwnj;ಆರ್ ಬೆಂಗಳೂರು ನಗರದಿಂದ ಪಯ್ಯನ್ನೂರುವರೆಗೆ ಈಗಿರುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೊಸ ವಿಸ್ತರಣೆ ಭಾಗಕ್ಕೆ ಕೂಡ ಈಗಿರುವ ರೇಕ್ ಹಾಗೂ ರೈಲು ಸಂಯೋಜನೆಯನ್ನೇ ಬಳಸಲಾಗುತ್ತದೆ.&lt;/p&gt;&lt;p&gt;ಈ ವಿಸ್ತರಣೆಯಿಂದ ಬೆಂಗಳೂರು, ಮಂಗಳೂರು, ಕಣ್ಣೂರು ಹಾಗೂ ಕೋಯಿಕ್ಕೋಡ್ ನಡುವಿನ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ. ವಿಶೇಷವಾಗಿ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರ ಉದ್ದೇಶಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದು ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/state/indian-railways-extends-bengaluru-mangaluru-kannur-express-to-kozhikode-gdp/articleshow-133zmeg"/>
        </item>
        <item>
            <title><![CDATA[ಕರಾವಳಿಯಲ್ಲಿ ನಾಳೆ 'ಈದುಲ್ ಫಿತ್ರ್' ಸಂಭ್ರಮ: ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ಈದ್ ಆಚರಣೆಗೆ ಖಾಝಿಗಳ ಘೋಷಣೆ]]></title>
            <link>https://kannada.asianetnews.com/karnataka-districts/eid-ul-fitr-celebration-coastal-karnataka-mangalore-udupi-kazis-announcement-san/articleshow-2fqo4q2</link>
            <guid isPermaLink="true">https://kannada.asianetnews.com/karnataka-districts/eid-ul-fitr-celebration-coastal-karnataka-mangalore-udupi-kazis-announcement-san/articleshow-2fqo4q2</guid>
            <pubDate>Thu, 19 Mar 2026 20:05:49 +0530</pubDate>
            <description><![CDATA[ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆ 'ಈದುಲ್ ಫಿತ್ರ್' ಹಬ್ಬವನ್ನು ಆಚರಿಸಲು ಜಿಲ್ಲಾ ಖಾಝಿಗಳು ಘೋಷಿಸಿದ್ದಾರೆ. ಒಂದು ತಿಂಗಳ ರಂಜಾನ್ ಉಪವಾಸದ ಬಳಿಕ ಕರಾವಳಿಯಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಸಿದ್ಧತೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km387bj25hsjq3sxe5x3f886,imgname-eid-ul-fitr-1773930786370.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಉಡುಪಿ (ಮಾ.19): &lt;/strong&gt;ಕರಾವಳಿಯಾದ್ಯಂತ ನಾಳೆ (ಶುಕ್ರವಾರ) ಸಡಗರದ 'ಈದುಲ್ ಫಿತ್ರ್' ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಮುಸ್ಸಂಜೆ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಬ್ಬ ಆಚರಿಸುವಂತೆ ಜಿಲ್ಲಾ ಖಾಝಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ನಾಯಿಬ್ ಖಾಝಿ ಉಸ್ತಾದ್ ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಮೂಳೂರು ಅವರು ಚಂದ್ರದರ್ಶನವನ್ನು ಖಚಿತಪಡಿಸಿದ್ದು, ನಾಳೆ ಈದ್ ಹಬ್ಬ ಆಚರಿಸಲು ಕರೆ ನೀಡಿದ್ದಾರೆ. ಈ ಕುರಿತು ಉಡುಪಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಕಳೆದ ಒಂದು ತಿಂಗಳಿನಿಂದ ರಂಜಾನ್ ಉಪವಾಸ ಆಚರಿಸಿದ್ದ ಮುಸ್ಲಿಮರಿಗೆ ಇಂದು ಚಂದ್ರದರ್ಶನವಾಗುವ ಮೂಲಕ ಉಪವಾಸ ಮುಕ್ತಾಯಗೊಂಡಿದೆ. ಒಂದು ತಿಂಗಳ ಕಠಿಣ ಉಪವಾಸ ನಂತರ ರಂಜಾನ್&zwnj; ಸಂಭ್ರಮ ಮನೆಮಾಡಿದೆ.&lt;/p&gt;&lt;h2&gt;&lt;strong&gt;ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ&lt;/strong&gt;&lt;/h2&gt;&lt;p&gt;ನಾಳೆ ಬೆಳಿಗ್ಗೆ ಕರಾವಳಿಯ ಎಲ್ಲಾ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಈದ್ ಉಲ್ ಫಿತ್ರ್ ನಿಮಿತ್ತ ವಿಶೇಷ ಪ್ರಾರ್ಥನೆ (ನಮಾಜ್) ನಡೆಯಲಿದೆ. ಸದ್ಯ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯಾದ್ಯಂತ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದ್ದು, ಈದ್ ಸಂಭ್ರಮ ಕಳೆಗಟ್ಟಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/eid-ul-fitr-celebration-coastal-karnataka-mangalore-udupi-kazis-announcement-san/articleshow-2fqo4q2"/>
        </item>
        <item>
            <title><![CDATA[ಮುಂಬೈನಿಂದ ಮಂಗಳೂರು ಕೊಂಕಣ ರೈಲು ಮಾರ್ಗದಲ್ಲಿ ಅಧಿಕಾರಿಗಳ ತಪಾಸಣೆ, ಕಾರಣವೇನು?]]></title>
            <link>https://kannada.asianetnews.com/karnataka-districts/konkan-railway-conducts-pre-monsoon-inspection-from-mumbai-to-thokur-near-mangaluru-gdp/articleshow-2gfx92i</link>
            <guid isPermaLink="true">https://kannada.asianetnews.com/karnataka-districts/konkan-railway-conducts-pre-monsoon-inspection-from-mumbai-to-thokur-near-mangaluru-gdp/articleshow-2gfx92i</guid>
            <pubDate>Wed, 18 Mar 2026 23:24:32 +0530</pubDate>
            <description><![CDATA[ಮುಂಬಯಿಯಿಂದ ಮಂಗಳೂರಿನ ತೋಕೂರುವರೆಗಿನ ಕೊಂಕಣ ರೈಲು ಮಾರ್ಗದಲ್ಲಿ ವಾರ್ಷಿಕ ಮಳೆಗಾಲ ಪೂರ್ವ ತಪಾಸಣೆ ಆರಂಭವಾಗಿದೆ. ರೈಲು ಹಳಿ, ಸುರಂಗ, ಭೂಕುಸಿತ ಸಾಧ್ಯತೆಯಿರುವ ಪ್ರದೇಶಗಳನ್ನು ಪರಿಶೀಲಿಸಿ, ಮಳೆಗಾಲದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ನಿರಂತರ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km112gf1dn2rj8n5dahs7r1g,imgname-konkan-railway-1773856178656.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮುಂಬಯಿಯಿಂದ ಮಂಗಳೂರು ಸಮೀಪದ ತೋಕೂರುವರೆಗೆ ವ್ಯಾಪಿಸಿರುವ ಕೊಂಕಣ ರೈಲು ಮಾರ್ಗದಲ್ಲಿ ವಾರ್ಷಿಕ ಮಳೆಗಾಲ ಪೂರ್ವ ತಪಾಸಣೆ ಪ್ರಕ್ರಿಯೆ ಆರಂಭವಾಗಿದೆ. ಪ್ರಾಕೃತಿಕ ಸೌಂದರ್ಯಕ್ಕಾಗಿ ಪ್ರಸಿದ್ಧವಾಗಿರುವ ಈ ಮಾರ್ಗ, ಮಳೆಗಾಲದಲ್ಲಿ ಭಾರೀ ಮಳೆ, ಭೂಕುಸಿತ ಮತ್ತು ನೀರು ನಿಲ್ಲುವ ಸಮಸ್ಯೆಗಳಂತಹ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ಮನಗಂಡು ಪ್ರತಿ ವರ್ಷ ಮುಂಗಾರು ಮಳೆ ಆರಂಭಕ್ಕೂ ಮುನ್ನ ಸಮಗ್ರ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿದೆ.&lt;/p&gt;&lt;h2&gt;ಮಾರ್ಗದ ವಿವಿಧ ಅಂಶ ಪರಿಶೀಲನೆ&lt;/h2&gt;&lt;p&gt;ಈ ಬಾರಿ ಮುಂಗಾರು ಪೂರ್ವ ತಪಾಸಣೆಯ ನೇತೃತ್ವವನ್ನು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ್ ಕುಮಾರ್ ಝಾ ವಹಿಸಿಕೊಂಡಿದ್ದರು. ನಿಗಮದ ವಿವಿಧ ತಾಂತ್ರಿಕ ಮತ್ತು ಕಾರ್ಯಾಚರಣಾ ವಿಭಾಗಗಳ ಹಿರಿಯ ಅಧಿಕಾರಿಗಳು ಈ ಪರಿವೀಕ್ಷಣೆಯಲ್ಲಿ ಪಾಲ್ಗೊಂಡು ಮಾರ್ಗದ ವಿವಿಧ ಅಂಶಗಳನ್ನು ಪರಿಶೀಲಿಸಿದರು.&lt;/p&gt;&lt;p&gt;ಮಳೆಗಾಲ ಪ್ರಾರಂಭವಾಗುವ ಮೊದಲು ರೈಲು ಮಾರ್ಗದ ಸುರಕ್ಷತೆ ಖಚಿತಪಡಿಸಿಕೊಳ್ಳುವುದು, ಮೂಲಭೂತ ಸೌಕರ್ಯಗಳಲ್ಲಿ ಇರುವ ಕೊರತೆಗಳನ್ನು ಗುರುತಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವುದು ಮತ್ತು ಪ್ರಯಾಣಿಕರಿಗೆ ನಿರಂತರ ಹಾಗೂ ಸುರಕ್ಷಿತ ಸಂಚಾರವನ್ನು ಒದಗಿಸುವುದು ಈ ತಪಾಸಣೆಯ ಮುಖ್ಯ ಉದ್ದೇಶವಾಗಿದೆ.&lt;/p&gt;&lt;h2&gt;ಸೂಕ್ಷ್ಮ ಅವಲೋಕನ&lt;/h2&gt;&lt;p&gt;ಪರಿಶೀಲನೆ ಪ್ರಕ್ರಿಯೆ ಮಡಗಾಂವ್&zwnj;ನಿಂದ ತೋಕೂರುವರೆಗಿನ ವಿಭಾಗದಿಂದ ಆರಂಭಗೊಂಡು, ಬಳಿಕ ಮರುದಿನ ಮಡಗಾಂವ್&zwnj;ನಿಂದ ರೋಹಾ ತನಕದ ಮಾರ್ಗವನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಈ ವೇಳೆ ರೈಲು ಹಳಿ, ಸೇತುವೆಗಳು, ಸುರಂಗ ಮಾರ್ಗಗಳು, ಇಳಿಜಾರು ಪ್ರದೇಶಗಳು ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಯಿತು.&lt;/p&gt;&lt;p&gt;ಇದರ ಜೊತೆಗೆ ಸಿಗ್ನಲ್ ವ್ಯವಸ್ಥೆಗಳ ಕಾರ್ಯಕ್ಷಮತೆ, ಮಳೆಗಾಲದಲ್ಲಿ ನೀರು ನಿಲ್ಲುವ ಪ್ರದೇಶಗಳ ನಿರ್ವಹಣೆ, ನಿಲ್ದಾಣಗಳ ಮೂಲಭೂತ ಸೌಲಭ್ಯಗಳು ಹಾಗೂ ಸೋಲಾರ್ ಲೈಟಿಂಗ್ ವ್ಯವಸ್ಥೆಗಳ ಅಳವಡಿಕೆ ಮತ್ತು ಕಾರ್ಯನಿರ್ವಹಣೆಯನ್ನು ಕೂಡ ಪರಿಶೀಲಿಸಲಾಯಿತು.&lt;/p&gt;&lt;p&gt;ಒಟ್ಟಾರೆ, ಕೊಂಕಣ ರೈಲು ಮಾರ್ಗದಲ್ಲಿ ನಡೆಸಲಾಗುತ್ತಿರುವ ಈ ಮುಂಗಾರು ಪೂರ್ವ ತಪಾಸಣೆ ಮಳೆಗಾಲದಲ್ಲಿ ಸಂಭವಿಸಬಹುದಾದ ಅಡಚಣೆಗಳನ್ನು ತಡೆಗಟ್ಟುವ ಮೂಲಕ ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಸಂಚಾರದ ನಿರಂತರತೆಯನ್ನು ಖಚಿತಪಡಿಸಲು ಮಹತ್ವದ ಪಾತ್ರವಹಿಸುತ್ತದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/konkan-railway-conducts-pre-monsoon-inspection-from-mumbai-to-thokur-near-mangaluru-gdp/articleshow-2gfx92i"/>
        </item>
        <item>
            <title><![CDATA[ಕರ್ನಾಟಕದ ವಿಶಿಷ್ಟ ಹೆರಿಟೇಜ್ ವಿಲೇಜ್ ಮ್ಯೂಸಿಯಂ, ಈ ಮಾಯಾಲೋಕದಲ್ಲಿದೆ 100 ವರ್ಷಗಳ ಹಿಂದಿನ ಜಗತ್ತು!]]></title>
            <link>https://kannada.asianetnews.com/gallery/karnataka-districts/hasta-shilpa-heritage-village-museum-in-manipal-at-udupi-a-living-museum-of-south-indian-architecture-gdp-4bpnkxl</link>
            <guid isPermaLink="true">https://kannada.asianetnews.com/gallery/karnataka-districts/hasta-shilpa-heritage-village-museum-in-manipal-at-udupi-a-living-museum-of-south-indian-architecture-gdp-4bpnkxl</guid>
            <pubDate>Tue, 10 Mar 2026 22:22:50 +0530</pubDate>
            <description><![CDATA[&lt;p&gt;ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್, ದಕ್ಷಿಣ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಪ್ರದರ್ಶಿಸುವ ಒಂದು ವಿಶಿಷ್ಟ ತೆರೆದ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ 1 ಶತಮಾನಕ್ಕೂ ಹಳೆಯದಾದ ಸಾಂಪ್ರದಾಯಿಕ ಮನೆಗಳು, ದೇವಾಲಯಗಳನ್ನು ಪುನರ್ ನಿರ್ಮಿಸಿ, ಆ ಕಾಲದ ಜೀವನಶೈಲಿ ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkc8rm622g01adnxv68rbd4k,imgname-heritage-village-1773159600322.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್, ದಕ್ಷಿಣ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಪ್ರದರ್ಶಿಸುವ ಒಂದು ವಿಶಿಷ್ಟ ತೆರೆದ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ 1 ಶತಮಾನಕ್ಕೂ ಹಳೆಯದಾದ ಸಾಂಪ್ರದಾಯಿಕ ಮನೆಗಳು, ದೇವಾಲಯಗಳನ್ನು ಪುನರ್ ನಿರ್ಮಿಸಿ, ಆ ಕಾಲದ ಜೀವನಶೈಲಿ ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಇರುವ ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ ಒಂದು ವಿಶಿಷ್ಟವಾದ ತೆರೆದ ಗಾಳಿಯ ವಸ್ತುಸಂಗ್ರಹಾಲಯವಾಗಿದೆ. ಸುಂದರವಾಗಿ ಪುನಃಸ್ಥಾಪಿಸಲಾದ ಸಾಂಪ್ರದಾಯಿಕ ಮನೆಗಳು, ದೇವಾಲಯಗಳು ಹಾಗೂ ಅಪರೂಪದ ಕಲಾಕೃತಿಗಳ ಮೂಲಕ ಈ ವಸ್ತುಸಂಗ್ರಹಾಲಯವು ದಕ್ಷಿಣ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಜೀವಂತವಾಗಿ ಉಳಿಸಿದೆ. 100 ವರ್ಷಗಳ ಹಳೆಯ ಈ ಕಟ್ಟಡಗಳು ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ವಸ್ತುಸಂಗ್ರಹಾಲಯ ಎಂದರೆ ಅಪರೂಪದ ಕಲಾಕೃತಿಗಳು, ಐತಿಹಾಸಿಕ ವಸ್ತುಗಳು ಮತ್ತು ಪ್ರದರ್ಶನ ಗ್ಯಾಲರಿಗಳಿಂದ ತುಂಬಿದ ಕಟ್ಟಡ ನೆನಪಿಗೆ ಬರುತ್ತದೆ. ಆದರೆ ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ ಆ ಅನುಭವದಿಂದ ಭಿನ್ನವಾಗಿದೆ. ಇಲ್ಲಿ ಪ್ರದರ್ಶನ ಪೆಟ್ಟಿಗೆಗಳು ಅಥವಾ ಸಾಮಾನ್ಯ ಗ್ಯಾಲರಿಗಳ ಬದಲಿಗೆ, ಸಾಂಪ್ರದಾಯಿಕ ಮನೆಗಳು ಮತ್ತು ದೇವಾಲಯಗಳನ್ನು ಸಂಪೂರ್ಣ ರೂಪದಲ್ಲಿ ಪುನರ್ ನಿರ್ಮಿಸಿ ಪ್ರದರ್ಶಿಸಲಾಗಿದೆ. ಈ ಮೂಲಕ ಸಂದರ್ಶಕರು ಹಿಂದಿನ ಕಾಲದ ಜೀವನಶೈಲಿಯನ್ನು ನೇರವಾಗಿ ಅನುಭವಿಸುವ ಅವಕಾಶ ಪಡೆಯುತ್ತಾರೆ.&lt;/p&gt;&lt;img&gt;&lt;p&gt;ಈ ಪಾರಂಪರಿಕ ಗ್ರಾಮವು ಉಡುಪಿ ಜಿಲ್ಲೆಯ ಮಣಿಪಾಲದ ಶಿಕ್ಷಣ ಕೇಂದ್ರದಲ್ಲಿದೆ. ಇದನ್ನು ಉದ್ಯಮಿ ಹಾಗೂ ಸಂಸ್ಕೃತಿ ಪ್ರೇಮಿ ವಿಜಯನಾಥ್ ಶೆಣೈ (1934&ndash;2017) ಅವರು ಸ್ಥಾಪಿಸಿದರು. ಮಣಿಪಾಲದ ಟೈಗರ್ ಸರ್ಕಲ್&zwnj;ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಮಣಿಪಾಲ&ndash;ಅಲೆವೂರು ರಸ್ತೆಯಲ್ಲಿರುವ ಈ ತೆರೆದ ವಸ್ತುಸಂಗ್ರಹಾಲಯವು ಸುಮಾರು ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.&lt;/p&gt;&lt;img&gt;&lt;p&gt;ಈ ವಸ್ತುಸಂಗ್ರಹಾಲಯವು ಜಾನಪದ ಕಲೆಗಳು, ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ಪಾರಂಪರಿಕ ಜೀವನಶೈಲಿಯನ್ನು ಉಳಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ದಕ್ಷಿಣ ಭಾರತದ ವಿವಿಧ ಭಾಗಗಳಿಂದ ತರಲಾದ ಐತಿಹಾಸಿಕ ಮನೆಗಳನ್ನು ಇಲ್ಲಿ ಪುನರ್ ನಿರ್ಮಿಸಿ ಸಂರಕ್ಷಿಸಲಾಗಿದೆ. ಅವುಗಳಲ್ಲಿ ಹಲವು ಮನೆಗಳು ಒಂದು ಶತಮಾನಕ್ಕೂ ಹೆಚ್ಚು ಹಳೆಯವು. ಈ ಮಹತ್ವಾಕಾಂಕ್ಷಿ ಯೋಜನೆಯಡಿ ಒಟ್ಟು 28 ಸಾಂಪ್ರದಾಯಿಕ ಮನೆಗಳನ್ನು ಇಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಅವುಗಳಲ್ಲಿ ಕೆಲವು ಮನೆಗಳನ್ನು ಈಗಾಗಲೇ ಪುನಃಸ್ಥಾಪಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.&lt;/p&gt;&lt;img&gt;&lt;p&gt;ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂನಲ್ಲಿ ಹಲವು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ಕಟ್ಟಡಗಳನ್ನು ನೋಡಬಹುದು. ಅವುಗಳಲ್ಲಿ ಪ್ರಮುಖವಾದವುಗಳು:&lt;/p&gt;&lt;ul&gt; &lt;li&gt;ಕುಂಜುರು ಚೌಕಿಮನೆ&lt;/li&gt; &lt;li&gt;ಶೃಂಗೇರಿ ಮನೆ&lt;/li&gt; &lt;li&gt;ರಾಮಚಂದ್ರಾಪುರ ಮಠದ ವಿದ್ಯಾಮಂದಿರ&lt;/li&gt; &lt;li&gt;ಕುಕನೂರಿನ ಕಮಲ ಮಹಲ್&lt;/li&gt; &lt;li&gt;ದೆಕ್ಕಾನಿ ನವಾಬ್ ಮಹಲ್&lt;/li&gt; &lt;li&gt;ವಡೇರಹೋಬಳಿ ಮನೆ&lt;/li&gt; &lt;li&gt;ಬೈಂದೂರು&ndash;ನೆಲ್ಯಾಡಿ ಮನೆ&lt;/li&gt; &lt;li&gt;ಮಂಗಳೂರು ಕ್ರಿಶ್ಚಿಯನ್ ಮನೆ&lt;/li&gt; &lt;li&gt;ಮುಧೋಳ ಅರಮನೆಯ ದರ್ಬಾರ್ ಹಾಲ್&lt;/li&gt; &lt;li&gt;ನಂದಿಕೇಶ್ವರ ದೇವಾಲಯ&lt;/li&gt;&lt;/ul&gt;&lt;p&gt;ಇವುಗಳಲ್ಲಿ ವಿಶೇಷವಾಗಿ ಗಮನಸೆಳೆಯುವ ಕಟ್ಟಡವೆಂದರೆ ಕುಂಜುರು ಚೌಕಿಮನೆ. ಸುಮಾರು 192 ವರ್ಷಗಳಷ್ಟು ಹಳೆಯದಾದ ಈ ಮನೆ ಸಾಂಪ್ರದಾಯಿಕ ನಿರ್ಮಾಣಕಾರರ ಅದ್ಭುತ ಕರಕುಶಲತೆಯನ್ನು ಪ್ರತಿಬಿಂಬಿಸುತ್ತದೆ.&lt;/p&gt;&lt;img&gt;&lt;p&gt;ಈ ಮನೆಗಳೊಳಗೆ ಕಾಲಿಟ್ಟಾಗ ಸಂದರ್ಶಕರಿಗೆ ಬೇರೆ ಯುಗಕ್ಕೆ ಪ್ರವೇಶಿಸಿದಂತ ಅನುಭವವಾಗುತ್ತದೆ. ಮನೆಗಳ ಒಳಾಂಗಣವು ಮರದ ಅಂಶಗಳಿಂದ ಕೂಡಿದ್ದು, ಸಂಕೀರ್ಣವಾಗಿ ಕೆತ್ತಿದ ಕಂಬಗಳು, ಪ್ರಾಚೀನ ಬಾಗಿಲುಗಳು ಹಾಗೂ ಭಾರವಾದ ಮರದ ಕಂಬಗಳು ಅಲ್ಲಿ ಕಂಡುಬರುತ್ತವೆ.&lt;/p&gt;&lt;p&gt;ಇಳಿಜಾರಿನ ಹೆಂಚಿನ ಛಾವಣಿಗಳು, ವಿಶಾಲವಾದ ವರಾಂಡಾಗಳು ಹಾಗೂ ತೆರೆದ ಅಂಗಳಗಳು ಈ ಮನೆಗಳ ವಿಶೇಷ ಲಕ್ಷಣಗಳಾಗಿವೆ. ಇವು ನೈಸರ್ಗಿಕ ವಾತಾಯನಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಮನೆಯೊಳಗೆ ಮುಕ್ತತೆಯ ಭಾವನೆಯನ್ನು ಸೃಷ್ಟಿಸುತ್ತವೆ.&lt;/p&gt;&lt;img&gt;&lt;p&gt;ಮನೆಗಳ ಹಲವಾರು ಕೊಠಡಿಗಳನ್ನು ಹಿಂದಿನ ಕಾಲದ ವಾಸಿಸುವ ಸ್ಥಳಗಳಂತೆ ಅಲಂಕರಿಸಲಾಗಿದೆ. ಅಲ್ಲಿ ಪ್ರಾಚೀನ ಪೀಠೋಪಕರಣಗಳು, ಮರದ ಪೆಟ್ಟಿಗೆಗಳು, ವಿಂಟೇಜ್ ಹಾಸಿಗೆಗಳು ಹಾಗೂ ಸಾಂಪ್ರದಾಯಿಕ ಆಸನ ವ್ಯವಸ್ಥೆಗಳು ಕಂಡುಬರುತ್ತವೆ. ಜೊತೆಗೆ ಸುಂದರವಾಗಿ ಕೆತ್ತಿದ ಕಪಾಟುಗಳು ಮತ್ತು ಮರದ ಕೆಲಸಗಳೂ ಗಮನ ಸೆಳೆಯುತ್ತವೆ.&lt;/p&gt;&lt;p&gt;ಇದಲ್ಲದೆ ಹಿತ್ತಾಳೆ ದೀಪಗಳು, ತಾಮ್ರದ ಪಾತ್ರೆಗಳು, ಜವಳಿ ವಸ್ತುಗಳು, ಆಟಿಕೆಗಳು ಹಾಗೂ ಹಳೆಯ ಉಪಕರಣಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗಿದೆ. ಇವುಗಳ ಮೂಲಕ ಹಿಂದಿನ ತಲೆಮಾರುಗಳ ಜೀವನಶೈಲಿ ಮತ್ತು ಗೃಹ ಸಂಸ್ಕೃತಿಯ ಬಗ್ಗೆ ಸಂದರ್ಶಕರಿಗೆ ಸ್ಪಷ್ಟವಾದ ಅರಿವು ಸಿಗುತ್ತದೆ.&lt;/p&gt;&lt;img&gt;&lt;p&gt;ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್ ಕೇವಲ ವಾಸ್ತುಶಿಲ್ಪ ಪ್ರದರ್ಶನಕ್ಕೆ ಮಾತ್ರ ಸೀಮಿತವಲ್ಲ. ಇಲ್ಲಿ ಜವಳಿ, ಕರಕುಶಲ ವಸ್ತುಗಳು, ಪಾತ್ರೆಗಳು ಮತ್ತು ಹಿಂದಿನ ಕಾಲದ ದೈನಂದಿನ ಜೀವನವನ್ನು ಪ್ರತಿಬಿಂಬಿಸುವ ಅನೇಕ ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶಿಸಲಾಗಿದೆ.&lt;/p&gt;&lt;p&gt;ಭವಿಷ್ಯದಲ್ಲಿ ಸಾಂಪ್ರದಾಯಿಕ ಹಾಗೂ ಜಾನಪದ ಚಿತ್ರಕಲೆಗಳು ಮತ್ತು ಜವಳಿಗಳಿಗೆ ಮೀಸಲಾದ ವಿಶೇಷ ಗ್ಯಾಲರಿಗಳನ್ನು ಸ್ಥಾಪಿಸುವ ಯೋಜನೆಯೂ ಇದೆ. ಇದರಿಂದ ಕಲಾತ್ಮಕ ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಈ ವಸ್ತುಸಂಗ್ರಹಾಲಯದ ಪಾತ್ರ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ ದಕ್ಷಿಣ ಭಾರತದ ಪಾರಂಪರಿಕ ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಪ್ರಮುಖ ಕೇಂದ್ರವಾಗಿದ್ದು, ಸಂಸ್ಕೃತಿ ಪ್ರೇಮಿಗಳು ಹಾಗೂ ಪ್ರವಾಸಿಗರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/hasta-shilpa-heritage-village-museum-in-manipal-at-udupi-a-living-museum-of-south-indian-architecture-gdp-4bpnkxl"/>
        </item>
        <item>
            <title><![CDATA[ಉಡುಪಿ: ಸಾಸ್ತಾನ ಯುವಕನ ಅಪಹರಣ ಪ್ರಕರಣ, ಪ್ರಮುಖ ಆರೋಪಿಗಳ ಪತ್ತೆಗೆ 50,000 ಬಹುಮಾನ ಘೋಷಣೆ]]></title>
            <link>https://kannada.asianetnews.com/karnataka-districts/udupi-kidnapping-case-7-arrested-under-kcoca-50000-reward-announced-for-absconding-accused-gdp/articleshow-4ro3mkg</link>
            <guid isPermaLink="true">https://kannada.asianetnews.com/karnataka-districts/udupi-kidnapping-case-7-arrested-under-kcoca-50000-reward-announced-for-absconding-accused-gdp/articleshow-4ro3mkg</guid>
            <pubDate>Thu, 02 Apr 2026 12:57:38 +0530</pubDate>
            <description><![CDATA[ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಡೆದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ್ ಕೋಡಿಕೆರೆ ಮತ್ತು ಚೇತನ್ ಕುಲಾಲ್ ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸರು ₹50,000 ಬಹುಮಾನ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6h8q3dcecxf04rvwhc03g0,imgname-udupi-kidnapping-case-1775114673261.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಕೋಕಾ (KCOCA) ಕಾಯ್ದೆಯಡಿ ಪ್ರಕರಣ ದಾಖಲಿಸಿ ಈಗಾಗಲೇ ಏಳು ಮಂದಿಯನ್ನು ಬಂಧಿಸಿದ್ದಾರೆ. ಇದೇ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜೊತೆಗೆ ಇವರ ಪತ್ತೆಗೆ ₹50,000 ಬಹುಮಾನವನ್ನು ಸಹ ಘೋಷಿಸಲಾಗಿದೆ.&lt;/p&gt;&lt;h2&gt;ಬಂಧಿತ ಆರೋಪಿಗಳ ವಿವರ&lt;/h2&gt;&lt;p&gt;ಈ ಪ್ರಕರಣದಲ್ಲಿ ಬಂಧಿತರಾದವರು ಸುರತ್ಕಲ್ ಕಾಟಿಪಳ್ಳದ ದೇವಿಪ್ರಸಾದ್ ಶೆಟ್ಟಿ (33), ಸುದೀಪ್ (22), ಮಿಥುನ್ ಕೈಕಂಬ (20), ಕೃಷ್ಣಾಪುರದ ಶ್ರೀಷಾ ಆನಂದ ಶೆಟ್ಟಿ (35), ಹಿರಿಯಡ್ಕ ಅಂಜಾರು ಗ್ರಾಮದ ಸುಜಿತ್ (27), ಕೆಮ್ಮಣ್ಣು ಗ್ರಾಮ ಪಡುಕುದ್ರುವಿನ ಸುಹಾಸ್ (31) ಹಾಗೂ ಕೆಮ್ಮಣ್ಣು ಹೂಡೆಯ ಮನೋಜ್ ವಿ. ಕೋಟ್ಯಾನ್ (34) ಆಗಿದ್ದಾರೆ. ಈ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;h2&gt;ಪ್ರಮುಖ ಆರೋಪಿಗಳು ಇನ್ನೂ ನಾಪತ್ತೆ&lt;/h2&gt;&lt;p&gt;ಪ್ರಕರಣದ ಪ್ರಮುಖ ಆರೋಪಿಗಳಾದ ಮಂಗಳೂರು ಜೋಕಟ್ಟೆಯ ಮನೋಜ್ ಕೋಡಿಕೆರೆ (42) ಹಾಗೂ ಬಂಟ್ವಾಳ ತಾಲೂಕಿನ ಪಡು ರೊಟ್ಟಿಗುಡಿಯ ಚೇತನ್ ಕುಲಾಲ್ (38) ಘಟನೆ ಬಳಿಕದಿಂದಲೇ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗೆ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ಬಲೆ ಬೀಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.&lt;/p&gt;&lt;h2&gt;ಅಪಹರಣದ ಹಿನ್ನೆಲೆ&lt;/h2&gt;&lt;p&gt;2025ರ ನವೆಂಬರ್ 19ರಂದು ನಡೆದ ಈ ಘಟನೆದಲ್ಲಿ ಸಿದ್ದಾಪುರ ನಿವಾಸಿ ಮೋಹನ ದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಅವರನ್ನು ಅಪಹರಿಸಲಾಗಿತ್ತು. ಅಪಹರಣವು ಪ್ರಮುಖ ಆರೋಪಿ ಮನೋಜ್ ಕೋಡಿಕೆರೆ ಸೂಚನೆಯಂತೆ ನಡೆದಿದ್ದು, ಆರೋಪಿಗಳು ಕೋಟ್ಯಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;ಬಹುಮಾನ ಘೋಷಣೆ&lt;/h2&gt;&lt;p&gt;ಪ್ರಮುಖ ಆರೋಪಿಗಳು ಇನ್ನೂ ನಾಪತ್ತೆಯಾಗಿರುವ ಹಿನ್ನೆಲೆ, ಇವರ ಪತ್ತೆಗೆ ಸಹಾಯ ಮಾಡುವವರಿಗೆ ₹50,000 ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿದೆ. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ನೀಡುವವರು ತಕ್ಷಣವೇ ಪೊಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.&lt;/p&gt;&lt;h2&gt;ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು&lt;/h2&gt;&lt;p&gt;ಮನೋಜ್ ಕೋಡಿಕೆರೆ ವಿರುದ್ಧ ಮಂಗಳೂರು ನಗರದಲ್ಲಿ 18 ಹಾಗೂ ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಚೇತನ್ ಕುಲಾಲ್ ವಿರುದ್ಧ ಮಂಗಳೂರು ನಗರದಲ್ಲಿ 11 ಹಾಗೂ ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಇವರಿಬ್ಬರೂ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರೆಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಸಾರ್ವಜನಿಕರಿಗೆ ಮನವಿ&lt;/h2&gt;&lt;p&gt;ಈ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ಮೊಬೈಲ್ ಸಂಖ್ಯೆ 9480805422 ಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.&lt;/p&gt;&lt;h2&gt;ತನಿಖೆ ಮುಂದುವರಿಕೆ&lt;/h2&gt;&lt;p&gt;ಒಟ್ಟಾರೆ, ಈ ಅಪಹರಣ ಪ್ರಕರಣವು ಉಡುಪಿ ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದರೆ, ಈಗ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದರಿಂದ ಪ್ರಕರಣ ಗಂಭೀರತೆ ಹೆಚ್ಚಾಗಿದೆ. ಪ್ರಮುಖ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/udupi-kidnapping-case-7-arrested-under-kcoca-50000-reward-announced-for-absconding-accused-gdp/articleshow-4ro3mkg"/>
        </item>
        <item>
            <title><![CDATA[ಗ್ಯಾಸ್‌ ಏಜೆನ್ಸಿ ಹೆಸರಲ್ಲಿ ಕರೆ ಮಾಡಿ ₹12 ಲಕ್ಷ ಲೂಟಿ! ಒಂದೇ ಒಂದು ಕರೆಗೆ ಬ್ಯಾಂಕ್ ಅಕೌಂಟ್ ಖಾಲಿ!]]></title>
            <link>https://kannada.asianetnews.com/karnataka-districts/gas-agency-impersonation-scam-man-loses-rs-12-lakh-to-fraudsters-in-udupi-rav/articleshow-6yp9mn1</link>
            <guid isPermaLink="true">https://kannada.asianetnews.com/karnataka-districts/gas-agency-impersonation-scam-man-loses-rs-12-lakh-to-fraudsters-in-udupi-rav/articleshow-6yp9mn1</guid>
            <pubDate>Thu, 19 Mar 2026 10:24:48 +0530</pubDate>
            <description><![CDATA[&lt;p&gt;ಉಡುಪಿಯಲ್ಲಿ ಎಲ್&zwnj;ಪಿಜಿ ಗ್ಯಾಸ್ ಕೆವೈಸಿ ಅಪ್&zwnj;ಡೇಟ್ ಮಾಡುವ ನೆಪದಲ್ಲಿ ಸೈಬರ್ ವಂಚಕರು ಹೊಸ ಜಾಲ ಬೀಸಿದ್ದು, ಇಬ್ಬರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. &amp;nbsp;ಗ್ಯಾಸ್ ಅಧಿಕಾರಿಗಳೆಂದು ನಂಬಿಸಿ, &amp;nbsp;ಬ್ಯಾಂಕ್ ವಿವರ ಪಡೆದು ಹಣ ದೋಚಿದ್ದು, ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkq8r340x21rjngfkx8g7ryj,imgname-1-1773528681600.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಮಾ.19)&lt;/strong&gt; ಮಧ್ಯಪ್ರಾಚ್ಯ ಯುದ್ಧದಿಂದಾಗಿ ಗ್ಯಾಸ್ ಕೊರತೆಯಾಗಿ ಎಲ್ಲರೂ ಅದನ್ನೇ ಮಾತನಾಡುತ್ತಿದ್ದಾರೆ. ಸೈಬರ್ ವಂಚಕರು ಕೂಡ ತಮ್ಮ ವಂಚನೆಗೆ ಈ ಗ್ಯಾಸ್ ವಿಷಯವನ್ನೇ ಬಳಸಿಕೊಳ್ಳುತ್ತಿದ್ದಾರೆ!. ಇಂತಹ 2 ಘಟನೆಗಳು ಉಡುಪಿ ಜಿಲ್ಲೆಯಲ್ಲಿ ವರದಿಯಾಗಿವೆ.&lt;/p&gt;&lt;p&gt;ಇಲ್ಲಿನ ಸಂತೆಕಟ್ಟೆಯ ಹಿರಿಯ ನಾಗರಿಕರಾದ ಲಿಲ್ಲಿ ಪ್ಲೋರಿನ್ ಡಿಸಿಲ್ವಾ ಅವರ ಮೊಬೈಲಿಗೆ ಬೆಳಿಗ್ಗೆ 11ಕ್ಕೆ ಕರೆಯೊಂದು ಬಂದಿದ್ದು, ತಾನು ಮುಂಬೈಯ ಮಹಾನಗರ ಗ್ಯಾಸ್ ಲಿಮಿಡೆಟ್ ಅಧಿಕಾರಿ ದೇವೇಶ ಜೋಷಿ ಎಂದು ಪರಿಚಯ ಮಾಡಿಕೊಂಡಿದ್ದು, ಲಿಲ್ಲಿ ಅವರು ಎಲ್&zwnj;ಪಿಜಿ ಗ್ಯಾಸ್&zwnj;ಗೆ ಆನ್&zwnj;ಲೈನ್&zwnj;ನಲ್ಲಿ ಹಣ ಪಾವತಿಸಿದ್ದು, ಕೆವೈಸಿ ಅಪ್&zwnj;ಡೇಟ್ ಆಗಿಲ್ಲ ಎಂದು ಹೇಳಿದರು. ನಂತರ ಅವರ ವಾಟ್ಸಾಪ್&zwnj;ಗೆ ಸಂದೇಶವನ್ನು ಕಳುಹಿಸಿದ್ದು ಅದನ್ನು ಡೌನ್&zwnj;ಲೋಡ್ ಮಾಡುವಂತೆ ಹೇಳಿದ್ದರು, ಅದರಂತೆ ಲಿಲ್ಲಿಅವರು ಡೌನ್ ಲೋಡ್ ಮಾಡಿ ಅದರಲ್ಲಿ ಕೆವೈಸಿ ಅಪ್&zwnj;ಡೇಟ್ ಮಾಡಿದ್ದರು. ಮಧ್ಯಾಹ್ನ 3ಕ್ಕೆ ಆರೋಪಿ ಮತ್ತೆ ಕರೆ ಮಾಡಿ ತಾಂತ್ರಿಕ ದೋಷದಿಂದ ಅಪ್&zwnj;ಡೇಟ್ ಆಗಿಲ್ಲ ಎಂದು ಹೇಳಿ, ಲಿಲ್ಲಿ ಅವರ ಗಂಡನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ ಪಡೆದುಕೊಂಡಿದ್ದ. 4 ಗಂಟೆಗೆ ಮೊಬೈಲ್ ಗೆ ಮೇಸೆಜ್ ಬಂದಿದ್ದು, ಅದರಲ್ಲಿ ಲಿಲಿ ಅವರ ಮುಂಬೈಯ ಐಸಿಐಸಿಐ ಬ್ಯಾಂಕ್ ಖಾತೆಯಿಂದ 46,636 ರು. ಮತ್ತು 29,381 ರು., ಗಂಡನ ಖಾತೆಯಿಂದ 69,005.31 ರು. ಕಡಿತಗೊಂಡಿರುವುದು ಪತ್ತೆಯಾಯಿತು. ವಂಚಕರು ಒಟ್ಟು 1,45,022 ರು. ಗಳನ್ನು ಕಡಿತಗೊಳಿಸಿ ವಂಚಿಸಿದ್ದಾರೆ.&lt;/p&gt;&lt;p&gt;ಇನ್ನೊಂದು ಪ್ರಕರಣದಲ್ಲಿ, ಇಲ್ಲಿನ ಶಿವಳ್ಳಿ ಗ್ರಾಮದ ಮಂಗಳ ರವಿದಾಸ್&zwnj; ನಾಯಕ್&zwnj; ಎಂಬವರಿಗೂ ಅಪರಿಚಿತ ವ್ಯಕ್ತಿ ತಾನು ಮಹಾನಗರ ಗ್ಯಾಸ್ ಸಂಸ್ಥೆಯಿಂದ ಎಂದು ಪರಿಚಯಿಸಿ ಎಲ್&zwnj;ಪಿಜಿ ಬಿಲ್ ಬಾಕಿಯಾಗಿದೆ ಎಂದು ವಾಟ್ಸಾಪ್&zwnj;ಗೆ ಸಂದೇಶ ಕಳುಹಿಸಿದ್ದು, ಅವರ ಮತ್ತು ಗಂಡನ ಬ್ಯಾಂಕ್ ಖಾತೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್&zwnj;ಗಳ ವಿವರ ಪಡೆದಿದ್ದಾನೆ. ನಂತರ ಗಂಡನ ಬಂಧನ್&zwnj; ಬ್ಯಾಂಕ್&zwnj;, ಯೆಸ್&zwnj; ಬ್ಯಾಂಕ್&zwnj; ಹಾಗೂ ಹೆಚ್&zwnj;ಡಿಎಫ್&zwnj;ಸಿ ಬ್ಯಾಂಕ್&zwnj; ಖಾತೆಗಳಿಂದ ಒಟ್ಟು 9,78,036.50 ರು.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ.&lt;/p&gt;&lt;p&gt;ಅಧಿಕೃತ ಏಜೆನ್ಸಿಯೊಂದಿಗೆ ವ್ಯವಹರಿಸಿ: ಇಂತಹ ಸೈಬರ್ ವಂಚಕರ ಕರೆಗಳಿಗೆ ಸ್ಪಂದಿಸಬೇಡಿ, ನಿಮ್ಮ ಅಧಿಕೃತ ಎಲ್&zwnj;ಪಿಜಿ ಪೂರೈಕೆದಾರರೊಂದಿಗೆ ಮಾತ್ರ ವ್ಯವಹರಿಸಿ, ಅಪರಿಚಿತರು ಕಳಹಿಸುವ ಎಪಿಕೆ ಎಪಿಪಿ ಸಂದೇಶಗಳನ್ನು ತೆರೆಯಬೇಡಿ, ಅವುಗಳಲ್ಲಿ ಯಾವುದೇ ಮಾಹಿತಿಗಳನ್ನು ಅಪ್&zwnj;ಡೇಟ್ ಮಾಡಬೇಡಿ, ಎಪಿಕೆ ಎಪಿಪಿ ಫೈಲುಗಳನ್ನು ಸೈಬರ್ ವಂಚಕರೇ ಕಳುಹಿಸಿರುತ್ತಾರೆ. ಫಾಸ್ಟ್ ಎಲ್&zwnj;ಪಿಜಿ ಬುಕ್ಕಿಂಗ್, ಕಡಿಮೆ ಬೆಲೆಗೆ ಎಲ್&zwnj;ಪಿಜಿ ಇತ್ಯಾದಿಗಳನ್ನು ನಂಬಬೇಡಿ. ಇಂತಹ ಕರೆಗಳು ಬಂದಲ್ಲಿ, ತಿಳಿಯದೇ ಮೋಸ ಹೋದರೇ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ 1930ಗೆ ತಕ್ಷಣ ಕರೆ ಮಾಡಿ, ಇದರಿಂದ ಖಾತೆಯಿಂದ ಹಣ ಕಡಿತವಾಗುವುದನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಉಡುಪಿ ಎಸ್&zwnj;ಪಿ ಹರಿರಾಮ್&zwnj; ಶಂಕರ್ ತಿಳಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gas-agency-impersonation-scam-man-loses-rs-12-lakh-to-fraudsters-in-udupi-rav/articleshow-6yp9mn1"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾವಣೆಗೆ ಪಟ್ಟುಹಿಡಿದ ರೈಲ್ವೆ ಇಲಾಖೆ! ವ್ಯಾಪಕ ವಿರೋಧ]]></title>
            <link>https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3</link>
            <guid isPermaLink="true">https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3</guid>
            <pubDate>Thu, 02 Apr 2026 13:29:30 +0530</pubDate>
            <description><![CDATA[&lt;p&gt;ವರದಿ: ಆತ್ಮಭೂಷಣ್&zwnj;&lt;/p&gt;&lt;p&gt;ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ &amp;nbsp;ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjahh9kxjarta3ta7zt9a5vx,imgname-panchaganga-express-1772027946621.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಆತ್ಮಭೂಷಣ್&zwnj;&lt;/p&gt;&lt;p&gt;ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ &amp;nbsp;ಎಂದಿದೆ.&lt;/p&gt;&lt;img&gt;&lt;p&gt;ಮಂಗಳೂರು: ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ(16511) ಸಮಯವನ್ನು ವಿಳಂಬಿಸಲು ಹೊರಟಿರುವ ನೈಋತ್ಯ ರೈಲ್ವೆ ಪ್ರಸ್ತಾಪಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ವಿರುದ್ಧ ಜಾಲತಾಣಗಳಲ್ಲಿ ಅಭಿಯಾನವನ್ನೇ ನಡೆಸುತ್ತಿವೆ.&lt;/p&gt;&lt;p&gt;ಪ್ರಸಕ್ತ ಬೆಂಗಳೂರು-ಕೋಯಿಕ್ಕೋಡ್&zwnj; ರೈಲು ಬೆಳಗ್ಗೆ 7.15ಕ್ಕೆ ಮಂಗಳೂರು ಸೆಂಟ್ರಲ್&zwnj; ತಲುಪುತ್ತಿದೆ. ಇದರ ಸಮಯ ಬದಲಾಯಿಸಿದರೆ ಮಂಗಳೂರು ತಲುಪುವ ಸಮಯ 8 ಗಂಟೆ ಆಗಲಿದೆ. ಮಾತ್ರವಲ್ಲ ಬೆಂಗಳೂರು-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ರೈಲು ಕೂಡ ವಿಳಂಬವಾಗಿಯೇ ಮಂಗಳೂರಿಗೆ ಆಗಮಿಸಬೇಕಾಗುತ್ತದೆ. ಇದರಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವವರು ಬೇಗನೆ ಮನೆಗೆ ತಲುಪಿ ಉದ್ಯೋಗಕ್ಕೆ ತೆರಳಲು ಅನಾನುಕೂಲವಾಗಲಿದೆ ಎಂಬುದು ರೈಲ್ವೆ ಸಂಘಟನೆಗಳ ಅಭಿಪ್ರಾಯ.&lt;/p&gt;&lt;img&gt;&lt;p&gt;ಕಳೆದ ಎರಡು ತಿಂಗಳಿಂದ ಬೆಂಗಳೂರು-ಮಂಗಳೂರು ನಡುವಿನ ರಾತ್ರಿ ರೈಲುಗಳು ಗಮ್ಯ ಸ್ಥಾನ ತಲುಪುವಾಗ ನಿತ್ಯವೂ ವಿಳಂಬವಾಗುತ್ತಿದೆ. ಈ ಬಗ್ಗೆ ರೈಲ್ವೆ ಇಲಾಖೆ, ಸಂಸದರ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಕ್ರಾಸಿಂಗ್&zwnj; ವಿಚಾರದಲ್ಲಿ ದಿನಪ್ರಂತಿ 30 ನಿಮಿಷದಿಂದ 1 ಗಂಟೆಗಳ ಕಾಲ ವಿಳಂಬವಾಗಿ ತಲುಪುವುದನ್ನು ಪ್ರಯಾಣಿಕರು ಅನಿವಾರ್ಯವಾಗಿ ಸಹಿಸಲೇ ಬೇಕಾಗಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.&lt;/p&gt;&lt;img&gt;&lt;p&gt;ಬೆಂಗಳೂರು-ಕಾರವಾರ ನಡುವಿನ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj; ರೈಲಿಗೆ ಈ ಹಿಂದೆ 14 ಕೋಚ್&zwnj; ಇತ್ತು. ಆಗ ಸಿರಿಬಾಗಿಲಿನಲ್ಲಿ ಮಧ್ಯರಾತ್ರಿ ಕ್ರಾಸಿಂಗ್&zwnj;ಗೆ ನಿಲ್ಲಿಸಲಾಗುತ್ತಿತ್ತು. ಪ್ರಸಕ್ತ ಈ ರೈಲು 19 ಕೋಚ್&zwnj;ಗಳಲ್ಲಿ ಸಂಚರಿಸುತ್ತಿದೆ. 14ಕ್ಕಿಂತ ಜಾಸ್ತಿ ಕೋಚ್&zwnj; ಇದ್ದರೆ ಸಿರಿಬಾಗಿಲಿನಲ್ಲಿ ಕ್ರಾಸಿಂಗ್&zwnj;ಗೆ ಅವಕಾಶ ಇಲ್ಲ, ಬದಲು ಸುಬ್ರಹ್ಮಣ್ಯ ಮಾರ್ಗದಲ್ಲಿ ಕ್ರಾಸಿಂಗ್&zwnj;ಗೆ ನಿಲ್ಲಿಸಲಾಗುತ್ತಿದೆ. ಹೀಗಾಗಿ ಉಳಿದ ರೈಲುಗಳು ವಿಳಂಬವಾಗಿ ಸಂಚರಿಸುವಂತಾಗಿದೆ. ಇದೇ ಕಾರಣ ಮುಂದಿಟ್ಟುಕೊಂಡು ರೈಲ್ವೆ ಇಲಾಖೆ ಉಳಿದ ರೈಲುಗಳ ಸಂಚಾರವನ್ನು ತುಸು ವಿಳಂಬಿಸಲು ಮುಂದಾಗಿದೆ. ಕೋಯಿಕ್ಕೋಡ್&zwnj; ರೈಲಿನ ವೇಳಾಪಟ್ಟಿ ಬದಲಾಯಿಸುವಂತೆ ದಕ್ಷಿಣ ರೈಲ್ವೆಗೆ ನೈಋತ್ಯ ರೈಲ್ವೆ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ&lt;/p&gt;&lt;img&gt;&lt;p&gt;ಆದರೆ ರೈಲ್ವೆ ಸಂಘಟನೆಗಳು, ತಾಂತ್ರಿಕ ಸಲಹೆಗಾರರು ಕೋಯಿಕ್ಕೋಡ್&zwnj; ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಬದಲಾವಣೆಯನ್ನು ಒಪ್ಪುವುದಿಲ್ಲ. ಈ ರೀತಿ ಕೋಯಿಕ್ಕೋಡ್&zwnj; ರೈಲಿನ ಸಮಯ ಬದಲಾಯಿಸಿದರೆ ನಂತರದ ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನೂ ಬದಲಾಯಿಸಬೇಕಾಗುತ್ತದೆ. ಆಗ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಎಲ್ಲ ರೈಲುಗಳ ಸಮಯವನ್ನೂ ಬದಲಾಯಿಸಬೇಕಾಗುತ್ತದೆ. ಹಾಗಾಗಿ ರೈಲು ಇದ್ದರೂ ಪ್ರಯಾಣಿಕ ಸ್ನೇಹಿಯಾಗಿರುವುದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್&zwnj;.&lt;/p&gt;&lt;p&gt;ಬೇರೆ ರೈಲುಗಳ ಸಮಯ ಬದಲಾಯಿಸುವ ಬದಲು ಸಂಜೆ ಬೆಂಗಳೂರಿನಿಂದ ಹೊರಡುವ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj; ರೈಲನ್ನು ಸಂಜೆ 6.50ರ ಬದಲು 6.35ಕ್ಕೆ ಅಂದರೆ 15 ನಿಮಿಷ ಮುಂಚಿತವಾಗಿ ಹೊರಡುವಂತೆ ಮಾಡಿದರೆ ಬೇರೆ ಯಾವ ರೈಲುಗಳ ಸಮಯವನ್ನು ಬದಲಾಯಿಸುವ ಅಗತ್ಯ ಇರುವುದಿಲ್ಲ. ಈ ವಿಚಾರವನ್ನು ಸಂಸದರು ಹಾಗೂ ರೈಲ್ವೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಸೂಕ್ತ ಸ್ಪಂದನ ಸಿಗುತ್ತಿಲ್ಲ ಎನ್ನುವುದು ರೈಲ್ವೆ ಸಂಘಟನೆಗಳ ಮುಖಂಡರ ಅಸಮಾಧಾನ.&lt;/p&gt;&lt;img&gt;&lt;p&gt;ರೈಲು ಸಂಚಾರದಲ್ಲಿ ವಿಚಾರದಲ್ಲಿ ಗಂಟೆಗಟ್ಟಲೆ ವಿಳಂಬಕ್ಕೆ ಪ್ರಮುಖ ಕಾರಣವಾಗುತ್ತಿರುವುದು ಕ್ರಾಸಿಂಗ್&zwnj;. ಇದೇ ಸಮಸ್ಯೆ ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್&zwnj; ರೈಲು ಸಂಚಾರದಲ್ಲೂ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ನೈಋತ್ಯ ರೈಲ್ವೆ ಸೂಕ್ತ ಗಮನ ಹರಿಸುತ್ತಿಲ್ಲ ಎಂಬುದು ರೈಲ್ವೆ ಸಂಘಟನೆಗಳ ಆರೋಪ.&lt;/p&gt;&lt;img&gt;&lt;p&gt;ಹಾಸನ-ಮಂಗಳೂರು ರೈಲು ಮಾರ್ಗ ಸಿಂಗಲ್&zwnj; ಲೈನ್&zwnj;. ಹಾಸನ, ಸಕಲೇಶಪುರ ಬಳಿಕ ದೋಣಿಗಲ್&zwnj;, ಸಿರಿಬಾಗಿಲುಗಳಲ್ಲಿ ಕ್ರಾಸಿಂಗ್&zwnj;ಗೆ ಅವಕಾಶ ಇದೆ. ನಂತರ ಸುಬ್ರಹ್ಮಣ್ಯ ಮಾರ್ಗದಲ್ಲಿ. ಈ ಘಾಟ್&zwnj; ಪ್ರದೇಶದಲ್ಲಿ ಹಳಿ ಹಾಗೂ ಕ್ರಾಸಿಂಗ್&zwnj; ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎನ್ನುವುದು ರೈಲ್ವೆ ಅಧಿಕಾರಿಗಳ ಅಂಬೋಣ. ಅರೆಬೆಟ್ಟದಲ್ಲಿ ಕ್ರಾಸಿಂಗ್&zwnj; ರಚನೆಯ ಪ್ರಸ್ತಾಪ ಇದ್ದರೂ ಕಾರ್ಯಗತಗೊಂಡಿಲ್ಲ. ಹಾಗಾಗಿ ಈ ಮಾರ್ಗದಲ್ಲಿ ಹಳಿ ಹಾಕಿ 40 ವರ್ಷ ಕಳೆದರೂ ಕ್ರಾಸಿಂಗ್ ಸಮಸ್ಯೆಗೆ ಇನ್ನೂ ಮುಕ್ತಿ ಸಿಗುತ್ತಿಲ್ಲ ಎನ್ನುವುದು ರೈಲ್ವೆ ಸಂಘಟನೆಗಳ ಕೊರಗು.&lt;/p&gt;&lt;img&gt;&lt;p&gt;ಬೆಂಗಳೂರು-ಕೋಯಿಕ್ಕೋಡ್&zwnj; ರೈಲಿನ ಸಮಯ ಬದಲಾವಣೆ ಮಾಡಿದರೆ ಪ್ರಯಾಣಿಕರಿಗೆ ತೊಂದರೆ ಆಗುವುದು ಬಿಟ್ಟರೆ ಬೇರೆ ರೈಲುಗಳ ಸಂಚಾರವೂ ವಿಳಂಬವಾಗಲಿದೆ. ಅದರ ಬದಲು ಪಂಚಗಂಗಾ ರೈಲು ಬೆಂಗಳೂರನಿಂದ ಹೊರಡುವ ಸಮಯವನ್ನು ತುಸು ಮುಂಚಿತವಾಗಿ ಬದಲಾವಣೆ ಮಾಡಿದರೆ ಈ ಎಲ್ಲ ಸಮಸ್ಯೆಗೂ ಸುಲಭದಲ್ಲಿ ಪರಿಹಾರ ಸಾಧ್ಯವಿದೆ. ಈ ವಿಚಾರವನ್ನು ಸಂಸದರು ಹಾಗೂ ರೈಲ್ವೆ ಇಲಾಖೆಯ ಗಮನಕ್ಕೂ ತರಲಾಗಿದೆ.&lt;/p&gt;&lt;p&gt;-ಅನಿಲ್&zwnj; ಹೆಗ್ಡೆ, ತಾಂತ್ರಿಕ ಸಲಹೆಗಾರರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3"/>
        </item>
        <item>
            <title><![CDATA[ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಸಂಭ್ರಮ ಡಬಲ್]]></title>
            <link>https://kannada.asianetnews.com/udupi/eid-ul-fitr-2026-public-holiday-announced-for-udupi-district-on-march-20/articleshow-bgx65p7</link>
            <guid isPermaLink="true">https://kannada.asianetnews.com/udupi/eid-ul-fitr-2026-public-holiday-announced-for-udupi-district-on-march-20/articleshow-bgx65p7</guid>
            <pubDate>Fri, 20 Mar 2026 07:32:09 +0530</pubDate>
            <description><![CDATA[&lt;p&gt;ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಹಿನ್ನಲೆಯಲ್ಲಿ ಶಾಲಾ ಕಾಲೇಜು ಸೇರಿದಂತೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇದರಿಂದ ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಡಬಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-eba6592b-5488-49f2-a0d5-34e038fedb2b,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಮಾ.20) &lt;/strong&gt;ರಾಜ್ಯದಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಇದೀಗ ಮುಸ್ಲಿಮರು ಈದುಲ್ ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಚಂದ್ರದರ್ಶನ ಹಿನ್ನಲೆಯಲ್ಲಿ ಉಡುಪಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಇಂದೇ ಆಚರಿಸಲಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಘೋಷಣೆ ಹೊರಬೀಳುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಡಬಲ್ ಆಗಿದೆ.&lt;/p&gt;&lt;p&gt;ಚಂದ್ರದರ್ಶನದ ಸಮಯ ಹಾಗೂ ದಿನಾಂಕದಲ್ಲಿ ವ್ಯತ್ಯಾಸಗಳಿರುವ ಕಾರಣ ಹಲೆವೆಡೆ ಗೊಂದಲ ಎರ್ಪಟ್ಟಿದೆ. ಆದರೆ ಉಡುಪಿಯಲ್ಲಿ ಇಂದು ಚಂದ್ರದರ್ಶನದ ಹಿನ್ನಲೆಯಲ್ಲಿ ಇಂದೇ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದೆ. ಇದರ ನಡುವೆ ರಜೆ ಘೋಷಣೆ ಪೋಷಕರ ನಿದ್ದೆಗೆಡಿಸಿದೆ. ಉಡುಪಿ ಹೊರತುಪಡಿಸಿದರೆ ಇನ್ಯಾವುದೇ ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಿಲ್ಲ.&lt;/p&gt;&lt;h2&gt;ಬೆಂಗಳೂರು ಸೇರಿದಂತೆ ಹಲೆವೆಡೆ ಹೊಸತೊಡಕು ಸಂಭ್ರಮ&lt;/h2&gt;&lt;p&gt;ಬೆಂಗಳೂರು ಸೇರಿದಂತೆ ರಾಜ್ಯದ ಹೆಲೆವೆಡೆ ಇಂದು (ಮಾ.20) ಹೊಸತೊಡಕು ಸಂಭ್ರಮ. ಯುಗಾದಿ ಹಬ್ಬದ ಮರುದಿನ ಮಾಂಸಪ್ರಿಯರು ಹೊಸತೊಡಕು ಹಬ್ಬ ಆಚರಿಸುತ್ತಾರೆ. ಬೆಂಗಳೂರಿನಲ್ಲಿ ಹೊಸತೊಡಕು ಹಬ್ಬದ ಹಿನ್ನಲೆಯಲ್ಲಿ ಇಂದು ಬಳಗ್ಗೆಯಿಂದಲೇ ಮಾಂಸದ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿದೆ. ಅದರಲ್ಲೂ ಬ್ಯಾಟರಾಯನಪುರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್&zwnj;ನಲ್ಲಿ ಸರದಿ ಸಾಲಿನಲ್ಲಿ ನಿಂತು ಜನ ಮಟನ್ ಖರೀದಿಸುತ್ತಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಯಿಂದ ಪಾಪಣ್ಣ ಮಟನ್ ಸ್ಟಾಲ್ ತೆರೆದಿದೆ. ಹಲವು ಕೌಂಟರ್ ಮೂಲಕ ಜನರಿಗೆ ಮಾಂಸ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆಜಿಗೆ 900 ರೂಪಾಯಿ ದರದಲ್ಲಿ ಮಟನ್ ಮಾರಾಟ ಮಾಡಲಾಗುತ್ತಿದೆ. ಪಾಪಣ್ಣ ಮಟನ್ ಸ್ಟಾಲ್&zwnj;ನಲ್ಲಿ ಎಂದಿನ ದರದಲ್ಲೇ ಮಟನ್ ಮಾರಾಟ ಮಾಡಲಾಗುತ್ತಿದೆ. ಹಬ್ಬದ ಕಾರಣ ಬೆಲೆ ಏರಿಕೆ ಮಾಡಿಲ್ಲ. ರಾಜ್ಯದ ವಿವಿದೆಡೆ ಇಂದು ಹೊಸತೊಡಕು ಹಬ್ಬ ಆಚರಿಸಲಾಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>udupi</category>
            <dc:creator>Chethan Kumar</dc:creator>
            <atom:link href="https://kannada.asianetnews.com/udupi/eid-ul-fitr-2026-public-holiday-announced-for-udupi-district-on-march-20/articleshow-bgx65p7"/>
        </item>
        <item>
            <title><![CDATA[ಯಕ್ಷಗಾನ ನೋಡುವಾಗ ವೀಕ್ಷಕರು ಶಿಳ್ಳೆ ಹಾಕಬಾರದಾ? ಕಲಾವಿದರಲ್ಲಿಯೇ ಭಿನ್ನ ಅಭಿಪ್ರಾಯಗಳು]]></title>
            <link>https://kannada.asianetnews.com/karnataka-districts/ujire-yakshagana-senior-artist-ashok-bhat-viral-video-pros-and-cons-debate-on-social-media-mrq/articleshow-cuisdgl</link>
            <guid isPermaLink="true">https://kannada.asianetnews.com/karnataka-districts/ujire-yakshagana-senior-artist-ashok-bhat-viral-video-pros-and-cons-debate-on-social-media-mrq/articleshow-cuisdgl</guid>
            <pubDate>Mon, 30 Mar 2026 11:40:22 +0530</pubDate>
            <description><![CDATA[&lt;p&gt;ಇತ್ತೀಚೆಗೆ ಯಕ್ಷಗಾನ ಪ್ರದರ್ಶನವೊಂದರಲ್ಲಿ ಪ್ರೇಕ್ಷಕರೊಬ್ಬರು ಶಿಳ್ಳೆ ಹಾಕಿದ್ದಕ್ಕೆ ಕಲಾವಿದ ಅಶೋಕ್ ಭಟ್ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಯಕ್ಷಗಾನದಲ್ಲಿ ಶಿಳ್ಳೆ ಹಾಕುವುದು ಮೆಚ್ಚುಗೆಯ ಸಂಕೇತವೇ ಅಥವಾ ಕಲೆಗೆ ತೋರುವ ಅಗೌರವವೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmynn097gmgq03a9cfg1aq3z,imgname-yakshagana-1774850834727.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಕರಾವಳಿ ಭಾಗ ಅಂದ್ರೆ ನೆನಪಿಗೆ ಬರುವ ಕಲೆ ಅಂದ್ರೆ ಯುಕ್ಷಗಾನ. ಇಂದಿಗೂ ವಿಶೇಷ ಸ್ಥಾನಮಾನ ಉಳಿಸಿಕೊಂಡಿರುವ ಯಕ್ಷಗಾನ ಕಲೆಯನ್ನು ವೀಕ್ಷಿಸಲು ದೂರದೂರುಗಳಿಂದ ಜನರು ಬರುತ್ತಾರೆ. ಇಡೀ ರಾತ್ರಿ ಜಾಗರಣೆ ಮಾಡಿ ಯಕ್ಷಗಾನ ನೋಡೋದು ಅಂದ್ರೆ ಒಂದು ಖುಷಿ. ಕಲಾವಿದರ ನಟನೆ ಇಷ್ಟವಾದ್ರೆ ವೀಕ್ಷಕರು ಚಪ್ಪಾಳೆ ಮತ್ತು ಶಿಳ್ಳೆ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ. ಆದ್ರೆ ಈಗ ಯಕ್ಷಗಾನ ನಡೆಯುವಾಗ ಶಿಳ್ಳೆ ಹಾಕಬಾರದಾ ಎಂಬ ಚರ್ಚೆ ಆರಂಭಗೊಂಡಿದೆ. ಶಿಳ್ಳೆ ಹಾಕಿದ್ರೆ ಅದು ಕಲಾವಿದರನ್ನು ಅವಮಾನಿಸಿದಂರತಾಗುತ್ತಾ ಎಂದು ಜನರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.&lt;/p&gt;&lt;h2&gt;&lt;strong&gt;ಈ ಚರ್ಚೆಗೆ ಕಾರಣ ಏನು?&lt;/strong&gt;&lt;/h2&gt;&lt;p&gt;ಇತ್ತೀಚೆಗಷ್ಟೇ ಕುಂದಾಪುರದ ಹೆನ್ನಾಬೈಲಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಯಕ್ಷಗಾನ ಭಾಗವತಿಕೆ ವೇಳೆ ಪ್ರೇಕ್ಷಕರು ಶಿಳ್ಳೆ ಹಾಕಿದ್ದಾರೆ. ವೀಕ್ಷಕ ಪದೇ ಪದೇ ಶಿಳ್ಳೆ ಹಾಕಿದ ಕಾರಣ ವೇದಿಕೆ ಮೇಲಿದ್ದ ಕಲಾವಿದ ಅಶೋಕ್ ಭಟ್ ಗರಂ ಆಗಿದ್ದಾರೆ. ವೇದಿಕೆ ಮೇಲಿಂದಲೇ ಶಿಳ್ಳೆ ಹಾಕುತ್ತಿದ್ದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಶೋಕ್ ಭಟ್&zwnj; ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಶೋಕ್ ಭಟ್ ಅವರು ಅತ್ಯಂತ ಜನಪ್ರಿಯ ಯಕ್ಷಗಾನ ಕಲಾವಿದರಾಗಿದ್ದು, ಈ ರೀತಿ ನಡೆದುಕೊಂಡಿದ್ದು ಎಷ್ಟು ಸರಿ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಕಲಾವಿದ ಅಶೋಕ್ ಭಟ್ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ನೀವು ಶಿಳ್ಳೆ ನಿಲ್ಲಿಸದಿದ್ರೆ ನಾನು ಇಲ್ಲಿಂದ ಹೋಗುತ್ತೇನೆ. ಇದು ದೊಂ*ಬರಾಟ ಅಲ್ಲ. ನಾನು ಸಭ್ಯ ಸಭೆಯನ್ನು ಬಯಸುತ್ತೇನೆ. ನಾನು ಆಗಿನಿಂದಲೂ ಶಿಳ್ಳೆ ಹಾಕೋದನ್ನು ಗಮನಿಸುತ್ತಿದ್ದೇನೆ. ಶಿಳ್ಳೆ ಹಾಕೋದಕ್ಕೆ ಇದು ಕಂಬಳ ಆಟವಲ್ಲ? ನನಗೆ ಯಾರ ದಾಕ್ಷಿಣ್ಯವೂ ಇಲ್ಲ. ನಿಮ್ಮಂಥ ಪ್ರೇಕ್ಷಕರ ಅಗತ್ಯ ಇಲ್ಲ. ಯಕ್ಷಗಾನ ಪ್ರದರ್ಶನ ವೇಳೆ ಶಿಳ್ಳೆ ಹಾಕಿ ಸೌಜನ್ಯ ಮೀರಬೇಡಿ. ಈ ಕ್ಷೇತ್ರದಲ್ಲಿ ನಮ್ಮ ಓಡಾಟ ಏನು ಎಂಬುದರ ಮಾಹಿತಿ ನಿನಗಿದೆಯಾ? ಯಾರು ಶಿಳ್ಳೆ ಹಾಕಿದ್ದು? ಆಗದಿದ್ರೆ ಬನ್ಸ್ ತಿಂದು ಹೋಗು ಎಂದು ಅಶೋಕ್ ಭಟ್&zwnj; ಕ್ಲಾಸ್ ತೆಗೆದುಕೊಂಡಿದ್ದರು.&lt;/p&gt;&lt;h3&gt;&lt;strong&gt;ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಬೇಸರ&lt;/strong&gt;&lt;/h3&gt;&lt;p&gt;ಹಿರಿಯ ಯಕ್ಷಗಾನ ಕಲಾವಿದರಾಗಿರುವ ಸರಪಾಡಿ ಅಶೋಕ್ ಶೆಟ್ಟಿ ಅವರು ವೈರಲ್ ವಿಡಿಯೋ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಉಜಿರೆಯ ಅಶೋಕ್ ಅವರ ವೇದಿಕೆ ಮೇಲಿಂದಲೇ ಇಡೀ ವೀಕ್ಷಕ ವರ್ಗವನ್ನು ಕೆಣಕಿದ್ದಾರೆ. ಯಕ್ಷಗಾನ ರಾತ್ರಿ ನಡೆಯುವ ಕಾರ್ಯಕ್ರಮವಾಗಿದ್ದು, ಇದನ್ನು ನೋಡಲು ಪಾಮರರು, ಪಂಡಿತರು ಸೇರಿದಂತೆ ಎಲ್ಲಾ ವರ್ಗದವರು ಬರುತ್ತಾರೆ. ಜನರು ತಮಗೆ ಸರಿ ಅನ್ನಿಸುವ ಮಾರ್ಗದ ಮೂಲಕ ಕಲಾವಿದರ ನಟನೆಗೆ ಮೆಚ್ಚುಗೆ ಸೂಚಿಸುತ್ತಾರೆ. ಆ ಮೆಚ್ಚುಗೆ ಚಪ್ಪಾಳೆ, ಮತ್ತೊಮ್ಮೆ ಶಿಳ್ಳೆಯೂ ಆಗಿರುತ್ತದೆ. ಈ ಚಪ್ಪಾಳೆ-ಶಿಳ್ಳೆಯಿಂದಾಗಿ ಕಲಾವಿದರಿಗೆ ಅಡಚಣೆಯುಂಟಾದ್ರೆ ಕಾರ್ಯಕ್ರಮದ ಆಯೋಜಕರಿಗೆ ಹೇಳಬಹುದು. ಅದನ್ನು ಬಿಟ್ಟು ವೇದಿಕೆ ಮೇಲಿಂದ ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.&lt;/p&gt;&lt;p&gt;&lt;/p&gt;&lt;h3&gt;&lt;strong&gt;ಕಲಾವಿದ ಅಶೋಕ್ ಭಟ್ ಪರವಾಗಿರುವ ಜನರ ವಾದ ಏನು?&lt;/strong&gt;&lt;/h3&gt;&lt;p&gt;ಯಕ್ಷಗಾನದ ಮಧ್ಯೆ ಪದೇ ಪದೇ ಶಿಳ್ಳೆ ಹಾಕೋದರಿಂದ ಮಾತುಗಳು ಸಹ ಸರಿಯಾಗಿ ಕೇಳಿಸಲ್ಲ. ಈ ರೀತಿ ಶಿಳ್ಳೆಗಳು ಕೆಲವೊಮ್ಮೆ ಕಲಾವಿದರಿಗೆ ಮಾತುಗಳನ್ನು ಹೇಳುವಾಗ ಕಿರಿಕಿರಿಯನ್ನುಂಟು ಮಾಡುತ್ತವೆ. ಇದರಿಂದ ಹಿರಿಯರಾಗಿರುವ ಅಶೋಕ್ ಭಟ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶೋಕ್ ಭಟ್ ಅವರು ಎಲ್ಲರನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳಿಲ್ಲ. ಆ ಸಂದರ್ಭದಲ್ಲಿ ಅತಿಯಾಗಿ ಶಿಳ್ಳೆ ಹಾಕುವ ವ್ಯಕ್ತಿಗೆ ಹೇಳಿದ್ದಾರೆ ಎಂದು ಅಶೋಕ್ ಭಟ್ ಪರವಾಗಿಯೂ ಅಭಿಪ್ರಾಯಗಳು ವ್ಯಕ್ತವಾಗಿವೆ.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/ujire-yakshagana-senior-artist-ashok-bhat-viral-video-pros-and-cons-debate-on-social-media-mrq/articleshow-cuisdgl"/>
        </item>
        <item>
            <title><![CDATA[ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ ಕೇಸ್‌ಗೆ ಬಿಗ್ ಟ್ವಿಸ್ಟ್: ಪೊಲೀಸ್‌ ವರದಿ ಕೇಳಿ ಬೆಚ್ಚಿಬಿದ್ದ ಸಂತ್ರಸ್ಥೆಯರು!]]></title>
            <link>https://kannada.asianetnews.com/state/moodabidri-pi-sandesh-case-twist-police-report-mangaluru-commissioner-investigation-san/articleshow-dh4f46t</link>
            <guid isPermaLink="true">https://kannada.asianetnews.com/state/moodabidri-pi-sandesh-case-twist-police-report-mangaluru-commissioner-investigation-san/articleshow-dh4f46t</guid>
            <pubDate>Sat, 21 Mar 2026 17:43:19 +0530</pubDate>
            <description><![CDATA[&lt;p&gt;ಮೂಡಬಿದ್ರೆ ಇನ್ಸ್&zwnj;ಪೆಕ್ಟರ್ ಸಂದೇಶ್ ಪಿ.ಜಿ. ಮೇಲಿನ ಲೈಂಗಿಕ ಕಿರುಕುಳ ಆರೋಪವು ಸುಳ್ಳು ಮತ್ತು ಪ್ರಚೋದಿತ ಎಂದು ಪೊಲೀಸ್ ಪ್ರಾಥಮಿಕ ತನಿಖೆ ಹೇಳಿದೆ. ಆದರೆ, ಈ ವರದಿಯನ್ನು ತಿರಸ್ಕರಿಸಿರುವ ದೂರುದಾರ ಮಹಿಳೆ, ಇದು ಹಿರಿಯ ಅಧಿಕಾರಿಗಳ ಶಾಮೀಲಿನಿಂದ ಕೂಡಿದ ವರದಿ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkx98wa2w7fpn47epthvv1q2,imgname-moodbidri-police-inspector-sandesh-1773730558274.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಮಾ.21): &lt;/strong&gt;ಮೂಡಬಿದ್ರೆ ಪೊಲೀಸ್ ಇನ್ಸ್&zwnj;ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪದ ತನಿಖೆಯಲ್ಲಿ ಸ್ಫೋಟಕ ಸತ್ಯಾಂಶವೊಂದು ಹೊರಬಿದ್ದಿದೆ. ಮಹಿಳೆಯರು ಮಾಡಿದ್ದ ಆರೋಪಗಳು ಸುಳ್ಳು ಮತ್ತು ಪ್ರಚೋದಿತ ಎಂದು ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದು, ಇನ್ಸ್&zwnj;ಪೆಕ್ಟರ್ ಸಂದೇಶ್ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ ಎಂದಿದ್ದಾರೆ. ದೂರು ನೀಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಅವರು ಯಾರೋ ಒಬ್ಬರ ಪ್ರಚೋದನೆಗೆ ಒಳಗಾಗಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ.&lt;/p&gt;&lt;p&gt;ವೈರಲ್ ಆಗಿದ್ದ ಆಡಿಯೋ ಮತ್ತು ವಿಡಿಯೋಗಳಲ್ಲಿರುವ ಮಹಿಳೆಯರು ಅದು ತಮ್ಮದೇ ಎಂದು ಒಪ್ಪಿಕೊಂಡಿದ್ದಾರಾದರೂ, ದೂರು ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ನಡೆದ ಈ ತನಿಖೆಯ ವರದಿಯನ್ವಯ, ಹಲ್ಲೆ ಅಥವಾ ಲೈಂಗಿಕ ಕಿರುಕುಳ ನಡೆದಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ.&lt;/p&gt;&lt;h2&gt;&lt;strong&gt;ವರದಿಯಲ್ಲಿದೆ ಅಸಭ್ಯ ವರ್ತನೆಯ ಉಲ್ಲೇಖ&lt;/strong&gt;&lt;/h2&gt;&lt;p&gt;ಆರೋಪಗಳು ಸುಳ್ಳು ಎಂದು ವರದಿ ಹೇಳಿದರೂ, ವೈರಲ್ ಆದ ಆಡಿಯೋ ಮತ್ತು ವಿಡಿಯೋಗಳು ಹಳೆಯದಾಗಿದ್ದು, ಅದರಲ್ಲಿ ಇನ್ಸ್&zwnj;ಪೆಕ್ಟರ್ ಸಂದೇಶ್ ಅವರ ವರ್ತನೆ ಅಸಭ್ಯವಾಗಿರುವುದು ಸ್ಪಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸಲಾಗಿತ್ತು. ಆದರೆ, ದೂರುದಾರ ಮಹಿಳೆಯರು ಕಾನೂನುಬದ್ಧವಾಗಿ ದೂರು ನೀಡಲು ನಿರಾಕರಿಸುತ್ತಿರುವುದು ಪ್ರಕರಣದ ದಿಕ್ಕನ್ನೇ ಬದಲಿಸಿದೆ.&lt;/p&gt;&lt;h2&gt;&lt;strong&gt;ತನಿಖೆ ನಂಬಲ್ಲ; ಉನ್ನತ ಮಟ್ಟದ ತನಿಖೆಗೆ ಆಗ್ರಹ&lt;/strong&gt;&lt;/h2&gt;&lt;p&gt;ಇತ್ತ ಪೊಲೀಸ್ ವರದಿಯನ್ನು ದೂರುದಾರೆ ಸುಮತಿ ನಾಯಕ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತನಿಖೆ ನಡೆಸಿದ ಎಸಿಪಿ ಶ್ರೀಕಾಂತ್ ಅವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. &quot;ಎಸಿಪಿ ಶ್ರೀಕಾಂತ್ ಮತ್ತು ಕಮಿಷನರ್ ಸುಧೀರ್ ಕುಮಾರ್ ಅವರ ನಡುವೆ ಚೈನ್ ಲಿಂಕ್ ಇದೆ. ಎಸಿಪಿ ಶ್ರೀಕಾಂತ್ ಅವರನ್ನು ಮೊದಲು ಸಸ್ಪೆಂಡ್ ಮಾಡಬೇಕು. ಮಂಗಳೂರು ಅಧಿಕಾರಿಗಳ ಮೇಲೆ ನಮಗೆ ನಂಬಿಕೆ ಇಲ್ಲ. ಬೆಂಗಳೂರು ಮಟ್ಟದ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿದರೆ ಮಾತ್ರ ಇನ್ಸ್&zwnj;ಪೆಕ್ಟರ್ ಸಂದೇಶ್ ಅವರ ಕಾಮಕಾಂಡದ ಅಸಲಿ ಸತ್ಯ ಹೊರಬರಲು ಸಾಧ್ಯ,&quot; ಎಂದು ಸುಮತಿ ನಾಯಕ್ ಒತ್ತಾಯಿಸಿದ್ದಾರೆ. ಸದ್ಯ ಈ ಪ್ರಕರಣವು ಪೊಲೀಸ್ ಇಲಾಖೆಯ ವರದಿ ಮತ್ತು ದೂರುದಾರ ಮಹಿಳೆಯರ ಹಠದ ನಡುವೆ ದೊಡ್ಡ ಮಟ್ಟದ ತಿಕ್ಕಾಟಕ್ಕೆ ಕಾರಣವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/state/moodabidri-pi-sandesh-case-twist-police-report-mangaluru-commissioner-investigation-san/articleshow-dh4f46t"/>
        </item>
        <item>
            <title><![CDATA[ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಗೆಲುವು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್]]></title>
            <link>https://kannada.asianetnews.com/karnataka-districts/karnataka-by-election-2026-congress-win-lakshmi-hebbalkar-statement-gvd/articleshow-geziq0z</link>
            <guid isPermaLink="true">https://kannada.asianetnews.com/karnataka-districts/karnataka-by-election-2026-congress-win-lakshmi-hebbalkar-statement-gvd/articleshow-geziq0z</guid>
            <pubDate>Fri, 27 Mar 2026 22:28:12 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್&zwnj; ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jm1m4qthbwpskrrh98tcftpj,imgname-1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಂದಾಪುರ (ಮಾ.27):&lt;/strong&gt; ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್&zwnj; ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಕುಂದಾಪುರದ ಕೋಟೇಶ್ವರ ಸಮೀಪದ ಯುವ ಮೆರಿಡಿಯನ್&zwnj; ಹೆಲಿಪ್ಯಾಡ್&zwnj; ಬಳಿ ಮಾತನಾಡಿದ ಅವರು, ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಪಕ್ಷದ ಕಡೆಗೆ ಮತದಾರರ ಒಲವಿರುತ್ತದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿವೆ. ಅಭಿವೃದ್ಧಿಯ ಜೊತೆಗೆ ಜನರ ಆದಾಯ ಕೂಡ ಜಾಸ್ತಿ ಆಗಿದೆ. ಅದರಲ್ಲೂ ಮಹಿಳಾ ಮತದಾರರು ಸಂತೋಷದಲ್ಲಿದ್ದಾರೆ ಎಂದರು.&lt;/p&gt;&lt;p&gt;ಎರಡು ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತೇವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಟಿಕೆಟ್&zwnj; ಕೇಳುವ ಹಕ್ಕಿದೆ. ಗೆಲುವೊಂದೇ ನಮಗೆ ಮಾನದಂಡ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಅವರ ಕುಟುಂಬ ಸದಸ್ಯರಿಗೆ ಟಿಕೆಟ್&zwnj; ನೀಡಲಾಗಿದೆ. ಹೈಕಮಾಂಡ್&zwnj; ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.&lt;/p&gt;&lt;h2&gt;&lt;strong&gt;ವಾರಾಹಿ ಯೋಜನೆ: ಯಾರಿಗೂ ಅನ್ಯಾಯ ಆಗಲು ಬಿಡಲ್ಲ&lt;/strong&gt;&lt;/h2&gt;&lt;p&gt;ವಾರಾಹಿ ಯೋಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಎರಡು ಕಡೆಯ ರೈತರು ಮನವಿ ನೀಡಿದ್ದು, ಯಾರಿಗೂ ಅನ್ಯಾಯ ಆಗಬಾರದು ಎಂಬುದೇ ಜಿಲ್ಲಾಡಳಿತ ಹಾಗೂ ಸರ್ಕಾರದ ಆಶಯವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕಕರ್&zwnj; ತಿಳಿಸಿದರು. ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತಾಪಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.&lt;/p&gt;&lt;p&gt;ಇನ್ನು ಬೈಂದೂರು ನೂತನ ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ನಿಲ್ದಾಣಕ್ಕೆ ಸರ್ಕಾರಿ ಬಸ್&zwnj;ಗಳ ಪ್ರವೇಶಕ್ಕೆ ರಸ್ತೆ ತೊಡಕಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ ಕರೆದು ಶೀಘ್ರವೇ ಸಮಸ್ಯೆ ಬಗೆ ಹರಿಸಲಾಗುವುದು ಎಂದರು.&lt;/p&gt;&lt;p&gt;ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಎಸ್&zwnj;ಪಿ ಹರಿರಾಮ್ ಶಂಕರ್, ಸಿಇಓ ಪ್ರತೀಕ್ ಬಾಯಲ್, ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್, ಉದ್ಯಮಿ ಬೈಲೂರು ಉದಯ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಇನ್ಸ್&zwnj;ಪೆಕ್ಟರ್ ಜಯರಾಮ್ ಗೌಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಪ್ರಮುಖರಾದ ಸಂಪಿಗೇಡಿ ಸಂಜೀವ ಶೆಟ್ಟಿ, ರಮೇಶ್ ಕಾಂಚನ್, ಸಂತೋಷ ಶೆಟ್ಟಿ ಬಲಾಡಿ, ಶೇಖರ ಪೂಜಾರಿ, ಯುವ ಕಾಂಗ್ರೆಸ್ ನ ಸಂಜಯ್ ಆಚಾರ್ಯ ಇದ್ದರು.&lt;/p&gt;]]></content:encoded>
            <category>udupi</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-by-election-2026-congress-win-lakshmi-hebbalkar-statement-gvd/articleshow-geziq0z"/>
        </item>
        <item>
            <title><![CDATA[ರಾಜ್ಯದ ಜನತೆಗೆ ಅಲರ್ಟ್: ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ!]]></title>
            <link>https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</guid>
            <pubDate>Tue, 24 Mar 2026 20:43:56 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmc4fptfwz060wyzsnqeqzh5,imgname-rain-1774228855631.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.&lt;img&gt;&lt;p&gt;ಕರ್ನಾಟಕದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದೆ.&lt;/p&gt;&lt;img&gt;&lt;p&gt;ರಾಜ್ಯದ ಆರು ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು 'ಯೆಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಿರಲಿದೆ.&lt;/p&gt;&lt;img&gt;&lt;p&gt;ಈ ಜಿಲ್ಲೆಗಳಲ್ಲಿ ಕೇವಲ ಮಳೆ ಮಾತ್ರವಲ್ಲದೆ, ಜೋರಾದ ಗಾಳಿಯೊಂದಿಗೆ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಮಳೆಯ ಸಮಯದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಓಡಾಡಬಾರದು. ವಿಶೇಷವಾಗಿ ಮಿಂಚಿನ ಸಂದರ್ಭದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಮತ್ತು ವಿದ್ಯುತ್ ಕಂಬಗಳು ಅಥವಾ ತಂತಿಗಳ ಬಳಿ ಹೋಗಬಾರದು ಎಂದು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಹವಾಮಾನ ಬದಲಾವಣೆಯ ಈ ಸಂದರ್ಭದಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc"/>
        </item>
        <item>
            <title><![CDATA[ಯುಗಾದಿ ಸಂಭ್ರಮದಲ್ಲಿ ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ! ಬೆಂಗಳೂರು-ಮಂಗಳೂರು-ಗೋವಾ ಈ ದಿನದಂದು ವಿಶೇಷ ರೈಲು]]></title>
            <link>https://kannada.asianetnews.com/karnataka-districts/south-western-railway-special-ugadi-train-announced-between-bengaluru-and-karwar-via-coastal-karnataka-gdp/articleshow-lw8hw4o</link>
            <guid isPermaLink="true">https://kannada.asianetnews.com/karnataka-districts/south-western-railway-special-ugadi-train-announced-between-bengaluru-and-karwar-via-coastal-karnataka-gdp/articleshow-lw8hw4o</guid>
            <pubDate>Sun, 15 Mar 2026 22:24:07 +0530</pubDate>
            <description><![CDATA[ಯುಗಾದಿ ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ಕರಾವಳಿ ಮಾರ್ಗವಾಗಿ ಗೋವಾದ ಮಡಗಾಂವ್&zwnj;ಗೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು (06267/06268) ಮಾರ್ಚ್ 18 ಮತ್ತು 19 ರಂದು ಸಂಚರಿಸಲಿದ್ದು, ಮಂಗಳೂರು, ಉಡುಪಿ, ಕುಂದಾಪುರ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khaxra5e5ctrv1mpr1kxk322,imgname-train-1770967017646.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಯುಗಾದಿ ಹಬ್ಬದ ಸಂದರ್ಭದಲ್ಲಿ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗುವ ಹಿನ್ನೆಲೆಯಲ್ಲಿ, ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. ಈ ವಿಶೇಷ ರೈಲು ಸೇವೆಯ ಮೂಲಕ ಬೆಂಗಳೂರಿನಿಂದ ಕರಾವಳಿ ಭಾಗದ ಹಲವು ಪ್ರಮುಖ ನಿಲ್ದಾಣಗಳಿಗೆ ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು.&lt;/p&gt;&lt;p&gt;ನೈರುತ್ಯ ರೈಲ್ವೆ ಪ್ರಕಟಿಸಿರುವ ಮಾಹಿತಿ ಪ್ರಕಾರ, ವಿಶೇಷ ರೈಲು (06267/06268) ಬೆಂಗಳೂರಿನ Yeshwantpur Junction Railway Station ನಿಂದ ಹೊರಟು ಕರಾವಳಿ ಮಾರ್ಗವಾಗಿ Mangaluru ಮತ್ತು Udupi ಮೂಲಕ ಗೋವಾದ Madgaon ವರೆಗೆ ಸಂಚರಿಸಲಿದೆ.&lt;/p&gt;&lt;h2&gt;ರೈಲು ಸಂಚಾರದ ವಿವರ&lt;/h2&gt;&lt;ul&gt; &lt;li&gt;ರೈಲು ಸಂಖ್ಯೆ 06267 (ಯಶವಂತಪುರ &ndash; ಮಡಗಾಂವ್):&lt;/li&gt; &lt;li&gt;ಈ ವಿಶೇಷ ರೈಲು ಮಾರ್ಚ್ 18ರಂದು ಯಶವಂತಪುರದಿಂದ ಹೊರಟು ಕರಾವಳಿ ಭಾಗದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಮಡಗಾಂವ್ ತಲುಪಲಿದೆ.&lt;/li&gt; &lt;li&gt;ರೈಲು ಸಂಖ್ಯೆ 06268 (ಮಡಗಾಂವ್ &ndash; ಬೆಂಗಳೂರು ಕ್ಯಾಂಟೋನ್ಮೆಂಟ್):&lt;/li&gt; &lt;li&gt;ಮರು ಪ್ರಯಾಣವಾಗಿ ಮಾರ್ಚ್ 19ರಂದು ಮಡಗಾಂವ್&zwnj;ನಿಂದ ಹೊರಟು ಬೆಂಗಳೂರು ಕ್ಯಾಂಟೋನ್ಮೆಂಟ್&zwnj; ತಲುಪಲಿದೆ.&lt;/li&gt;&lt;/ul&gt;&lt;h2&gt;ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ&lt;/h2&gt;&lt;p&gt;ಈ ವಿಶೇಷ ರೈಲು ಕರಾವಳಿ ಭಾಗದ ಹಲವು ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ. ಅವುಗಳೆಂದರೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ, ಮಂಗಳೂರು ಜಂಕ್ಷನ್ ರೈಲು ನಿಲ್ದಾಣ, ಸುರತ್ಕಲ್ ರೈಲು ನಿಲ್ದಾಣ, ಉಡುಪಿ ರೈಲು ನಿಲ್ದಾಣ, ಕುಂದಾಪುರ ರೈಲು ನಿಲ್ದಾಣ, ಮೂಕಾಂಬಿಕಾ ರೋಡ್ (ಬೈಂದೂರು) ರೈಲು ನಿಲ್ದಾಣ,,ಭಟ್ಕಳ ರೈಲು ನಿಲ್ದಾಣ, ಮುರುಡೇಶ್ವರ ರೈಲು ನಿಲ್ದಾಣ, ಕುಮಟಾ ರೈಲು ನಿಲ್ದಾಣ,&lt;/p&gt;&lt;p&gt;ಗೋಕರ್ಣ ರೋಡ್ ರೈಲು ನಿಲ್ದಾಣ, ಅಂಕೋಲಾ ರೈಲು ನಿಲ್ದಾಣ ,ಕಾರವಾರ ರೈಲು ನಿಲ್ದಾಣ (Mangaluru Central Railway Station / Mangaluru Junction Railway Station, Surathkal Railway Station, Udupi Railway Station, Kundapura Railway Station, Mookambika Road Byndoor Railway Station, Bhatkal Railway Station, Murdeshwar Railway Station, Kumta Railway Station, Gokarna Road Railway Station, Ankola Railway Station ಹಾಗೂ Karwar Railway Station)&lt;/p&gt;&lt;h2&gt;24 ಬೋಗಿಗಳ ವಿಶೇಷ ರೈಲು&lt;/h2&gt;&lt;p&gt;ಈ ವಿಶೇಷ ರೈಲು ಒಟ್ಟು 24 ಬೋಗಿಗಳನ್ನು ಹೊಂದಿದ್ದು, ಪ್ರಯಾಣಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ತರಗತಿಗಳ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸ್ಲೀಪರ್ ಕ್ಲಾಸ್ ಬೋಗಿಗಳು, ಸಾಮಾನ್ಯ (ಜನರಲ್) ಬೋಗಿಗಳು ಹಾಗೂ ಲಗೇಜ್ ವ್ಯಾನ್&zwnj;ಗಳು ಒಳಗೊಂಡಿವೆ.&lt;/p&gt;&lt;p&gt;ಯುಗಾದಿ ಹಬ್ಬದ ಸಮಯದಲ್ಲಿ ಬೆಂಗಳೂರಿನಿಂದ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ಗೋವಾ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತೆರಳುವ ಹಿನ್ನೆಲೆ, ಈ ವಿಶೇಷ ರೈಲು ಸೇವೆ ಅವರಿಗೆ ಹೆಚ್ಚಿನ ನೆರವಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹಬ್ಬದ ಸಮಯದಲ್ಲಿ ಪ್ರಯಾಣಿಕರ ಒತ್ತಡ ಕಡಿಮೆ ಮಾಡಲು ಮತ್ತು ಸುಗಮ ಸಂಚಾರಕ್ಕೆ ನೆರವಾಗಲು ಈ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-special-ugadi-train-announced-between-bengaluru-and-karwar-via-coastal-karnataka-gdp/articleshow-lw8hw4o"/>
        </item>
        <item>
            <title><![CDATA[ರೈಲು ಪ್ರಯಾಣಿಕರ ಗಮನಕ್ಕೆ, ಬರೋಬ್ಬರಿ 35 ದಿನಗಳ ಕಾಲ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ರದ್ದು!]]></title>
            <link>https://kannada.asianetnews.com/karnataka-districts/south-western-railway-cancels-mangaluru-subrahmanya-passenger-trains-for-35-days-schedule-changes-announced-gdp/articleshow-mple1n1</link>
            <guid isPermaLink="true">https://kannada.asianetnews.com/karnataka-districts/south-western-railway-cancels-mangaluru-subrahmanya-passenger-trains-for-35-days-schedule-changes-announced-gdp/articleshow-mple1n1</guid>
            <pubDate>Fri, 20 Mar 2026 11:39:46 +0530</pubDate>
            <description><![CDATA[ನೈಋತ್ಯ ರೈಲ್ವೆ ನಿರ್ವಹಣಾ ಕಾಮಗಾರಿಯಿಂದಾಗಿ, ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ಪ್ಯಾಸೆಂಜರ್ ರೈಲುಗಳನ್ನು 35 ದಿನಗಳ ಕಾಲ ರದ್ದುಗೊಳಿಸಲಾಗಿದೆ. ಕೆಲವು ಎಕ್ಸ್&zwnj;ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾಗಿದ್ದು, ಯುಗಾದಿ ಮತ್ತು ರಂಜಾನ್ ಹಬ್ಬಕ್ಕಾಗಿ ವಿಶೇಷ ರೈಲು ಸೇವೆಗಳನ್ನು ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km4xsq1xkfvyypbsnr1ny7hr,imgname-mangaluru-subrahmanya-passenger-trains-1773986962493.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ತುರ್ತು ಹಳಿ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆ, ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ಪ್ರಯಾಣಿಕ ರೈಲು ಸೇವೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಈ ಕಾಮಗಾರಿಗಳ ಪರಿಣಾಮವಾಗಿ ಹಲವಾರು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದುಪಡಿಸಲ್ಪಟ್ಟಿದ್ದು, ಕೆಲವು ರೈಲುಗಳ ವೇಳಾಪಟ್ಟಿಯಲ್ಲೂ ತಿದ್ದುಪಡಿ ಮಾಡಲಾಗಿದೆ.&lt;/p&gt;&lt;h2&gt;ಪ್ಯಾಸೆಂಜರ್ ರೈಲುಗಳು ರದ್ದು&lt;/h2&gt;&lt;p&gt;ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು &ndash; ಸುಬ್ರಹ್ಮಣ್ಯ ರಸ್ತೆ) ಮತ್ತು 56630 (ಸುಬ್ರಹ್ಮಣ್ಯ ರಸ್ತೆ &ndash; ಮಂಗಳೂರು) ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ ಹಾಗೂ ಜೂನ್ 10ರಿಂದ ಜೂನ್ 21ರವರೆಗೆ ಸಂಚರಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.&lt;/p&gt;&lt;h2&gt;ಎಕ್ಸ್&zwnj;ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ&lt;/h2&gt;&lt;p&gt;ಏಪ್ರಿಲ್ ತಿಂಗಳಲ್ಲಿ ಕೆಲವು ಪ್ರಮುಖ ಎಕ್ಸ್&zwnj;ಪ್ರೆಸ್ ರೈಲುಗಳ ಸಂಚಾರ ವೇಳೆಯಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಯಶವಂತಪುರ ರೈಲು ನಿಲ್ದಾಣದಿಂದ ಸಂಚರಿಸುವ ಯಶವಂತಪುರ&ndash;ಕಾರವಾರ (16515), ಯಶವಂತಪುರ&ndash;ಮಂಗಳೂರು (16575) ಮತ್ತು ಯಶವಂತಪುರ&ndash;ಮಂಗಳೂರು (16539) ಎಕ್ಸ್&zwnj;ಪ್ರೆಸ್ ರೈಲುಗಳು ಸುಮಾರು 20 ನಿಮಿಷಗಳಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದೇ ವೇಳೆ, ಮಂಗಳೂರು&ndash;ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು (56229) ಏಪ್ರಿಲ್ 21ರಿಂದ ಜೂನ್ 9ರವರೆಗೆ ಸುಮಾರು 55 ನಿಮಿಷಗಳಷ್ಟು ವಿಳಂಬವಾಗಿ ಸಂಚರಿಸಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;h2&gt;ದಕ್ಷಿಣ ಮಧ್ಯ ರೈಲ್ವೆಯಲ್ಲಿ ರದ್ದುಗೊಳಿಸಿದ ಸೇವೆಗಳು&lt;/h2&gt;&lt;p&gt;ಇದರ ಜೊತೆಗೆ, ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲೂ ನಿರ್ವಹಣಾ ಕಾರ್ಯಗಳ ಹಿನ್ನೆಲೆ ಹಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕರ್ನೂಲ್ ನಗರ&ndash;ಕಾಚೆಗುಡ (17436) ಮತ್ತು ಕಾಚೆಗುಡ&ndash;ಕರ್ನೂಲ್ ನಗರ (17435) ರೈಲುಗಳು ಮಾರ್ಚ್ 12ರಿಂದ ಏಪ್ರಿಲ್ 1ರವರೆಗೆ ರದ್ದಾಗಿವೆ.&lt;/p&gt;&lt;p&gt;ಹಾಗೆಯೇ, ಕಾಚೆಗುಡ&ndash;ರಾಯಚೂರು (67787, 17693) ಮತ್ತು ರಾಯಚೂರು&ndash;ಕಾಚೆಗುಡ (67788, 17694) ರೈಲುಗಳು ಮಾರ್ಚ್ 11ರಿಂದ ಮಾರ್ಚ್ 31ರವರೆಗೆ ಸಂಚರಿಸುವುದಿಲ್ಲ. ಗದ್ವಾಲ್&ndash;ರಾಯಚೂರು (67784) ಮತ್ತು ರಾಯಚೂರು&ndash;ಗದ್ವಾಲ್ (67783) ರೈಲುಗಳೂ ಇದೇ ಅವಧಿಯಲ್ಲಿ ರದ್ದುಪಡಿಸಲ್ಪಟ್ಟಿವೆ.&lt;/p&gt;&lt;h2&gt;ಯುಗಾದಿ ಮತ್ತು ರಂಜಾನ್&zwnj;ಗೆ ವಿಶೇಷ ರೈಲು&lt;/h2&gt;&lt;p&gt;ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಎಕ್ಸ್&zwnj;ಪ್ರೆಸ್ ರೈಲನ್ನು ಸಂಚರಿಸಲು ನಿರ್ಧರಿಸಿದೆ.&lt;/p&gt;&lt;p&gt;ಯಶವಂತಪುರ&ndash;ಮಡಗಾಂವ್ ವಿಶೇಷ ಎಕ್ಸ್&zwnj;ಪ್ರೆಸ್ ಮಾರ್ಚ್ 20ರಂದು ಬೆಳಿಗ್ಗೆ 11:50ಕ್ಕೆ ಯಶವಂತಪುರದಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 6:45ಕ್ಕೆ ಮಡಗಾಂವ್ ತಲುಪಲಿದೆ. ಹಿಂದಿರುಗುವ ರೈಲು ಮಾರ್ಚ್ 22ರಂದು ಬೆಳಿಗ್ಗೆ 11 ಗಂಟೆಗೆ ಮಡಗಾಂವ್&zwnj;ನಿಂದ ಹೊರಟು, ಸೋಮವಾರ ಬೆಳಿಗ್ಗೆ 5:20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.&lt;/p&gt;&lt;p&gt;ಈ ವಿಶೇಷ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾ ಮತ್ತು ಕಾರವಾರ ಸೇರಿದಂತೆ ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.&lt;/p&gt;&lt;p&gt;ಒಟ್ಟಾರೆ, ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಈ ಬದಲಾವಣೆಗಳು ಅನಿವಾರ್ಯವಾಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವುದು ಅಗತ್ಯವಾಗಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-cancels-mangaluru-subrahmanya-passenger-trains-for-35-days-schedule-changes-announced-gdp/articleshow-mple1n1"/>
        </item>
        <item>
            <title><![CDATA[ಟೋಲ್ ದರ ಹೆಚ್ಚಳ ಟೋಲ್‌ಗಳಲ್ಲಿ ನಗದು ಸ್ವೀಕಾರ ಇಲ್ಲ: ಯುಪಿಐ ಮೂಲಕವೇ ಪೇಮೆಂಟ್]]></title>
            <link>https://kannada.asianetnews.com/state/toll-rate-hike-no-cash-accepted-at-tolls-payment-through-upi-only/articleshow-qa0ylg2</link>
            <guid isPermaLink="true">https://kannada.asianetnews.com/state/toll-rate-hike-no-cash-accepted-at-tolls-payment-through-upi-only/articleshow-qa0ylg2</guid>
            <pubDate>Wed, 01 Apr 2026 13:32:50 +0530</pubDate>
            <description><![CDATA[ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶಾದ್ಯಂತ ಟೋಲ್ ದರವನ್ನು ಹೆಚ್ಚಿಸಿದ್ದು, ಉಡುಪಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲೂ ದರ ಏರಿಕೆಯಾಗಿದೆ. ಕಾರು, ಬಸ್, ಟ್ರಕ್&zwnj;ಗಳ ಶುಲ್ಕದಲ್ಲಿ 5 ರಿಂದ 30 ರೂ.ವರೆಗೆ ಹೆಚ್ಚಳವಾಗಿದ್ದು, ಇನ್ನು ಮುಂದೆ ಯುಪಿಐ ಮೂಲಕವೇ ಪಾವತಿ ಕಡ್ಡಾಯವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jdxt873ffbaazemrre3m3q55,imgname-fotojet---2024-11-30t112357.520.jpg" type="image/jpeg" height="390" width="690"/>
            <content:encoded><![CDATA[&lt;h3&gt;&lt;strong&gt;ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಳ&lt;/strong&gt;&lt;/h3&gt;&lt;p&gt;ಉಡುಪಿ/ ಕೊಪ್ಪಳ: ದೇಶದೆಲ್ಲೆಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಟೋಲ್ ದರ ಹೆಚ್ಚಳ ಮಾಡಿದ್ದು, ಇದರ ಬಿಸಿ ಜನ ಸಾಮಾನ್ಯರಿಗೂ ತಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಮೂರು ಟೋಲ್&zwnj;ಗಳಿವೆ. ಜಿಲ್ಲೆಯ ಗಡಿ ಭಾಗಗಳಾದ ಹೆಜಮಾಡಿ, ಶಿರೂರು ಹಾಗೂ ಸಾಸ್ತಾನ ಈ ಮೂರು ಟೋಲ್&zwnj;ಗಳಲ್ಲೂ ಮಧ್ಯರಾತ್ರಿ 12 ಗಂಟೆಯಿಂದಲೇ ಟೋಲ್ ದರ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಸ ಸೂಚನೆಯಂತೆ ಟೋಲ್&zwnj;ದರದಲ್ಲಿ 5 ರಿಂದ 10 ರೂಪಾಯಿವರೆಗೆ ಏರಿಕೆ ಆಗಿದೆ. ಹೀಗಾಗಿ 60 ರೂಪಾಯಿ ಇದ್ದ ಕಾರ್ ಜೀಪ್ ವ್ಯಾನ್&zwnj;ಗಳ ಟೋಲ್ ದರ 65ಕ್ಕೆ ಏರಿಕೆ ಆಗಿದೆ. ಹಾಗೆಯೇ ಬಸ್ ಹಾಗೂ ಟ್ರಕ್&zwnj;ಗಳ ಟೋಲ್ ದರ 210 ರಿಂದ 215 ಕ್ಕೆ ಏರಿಕೆಯಾಗಿದೆ. ಮೂರರಿಂದ ಆರು ಎಕ್ಸೆಲ್ ವಾಹನಗಳ ದರ 325 ರಿಂದ 335 ರೂಪಾಯಿಗೆ ಏರಿಕೆ.&lt;/p&gt;&lt;h2&gt;&lt;strong&gt;ನಗದು ಸ್ವೀಕಾರ ಇಲ್ಲ ಯುಪಿಐ ಮೂಲಕವೇ ಪಾವತಿ&lt;/strong&gt;&lt;/h2&gt;&lt;p&gt;ಟೋಲ್&zwnj;ಗಳಲ್ಲಿ ಇನ್ನು ಮುಂದೆ ನಗದು ಸ್ವೀಕರಿಸುವುದಕ್ಕೆ ಅವಕಾಶ ಇರುವುದಿಲ್ಲ, ಯುಪಿಐ ಮೂಲಕವೇ ಪೇಮೆಂಟ್ ಮಾಡಬೇಕಾಗುತ್ತದೆ. ಉಡುಪಿ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿ ಅತೀಹೆಚ್ಚು ವಾಹನಗಳು ಓಡಾಟ ನಡೆಸುತ್ತವೆ. ಇಲ್ಲಿಂದ ಮಂಗಳೂರು ಬಂದರಿಗೆ ಅತೀ ಹೆಚ್ಚು ವಾಹನಗಳು ಓಡಾಡುತ್ತವೆ. ಗ್ಯಾಸ್ ತುಂಬಿ ಟ್ಯಾಂಕರ್&zwnj;ಗಳ ಓಡಾಟ ಹೆಚ್ಚಾಗಿದ್ದು, ಈಗ ಟೋಲ್ ದರ ಏರಿಕೆಯಿಂದಾಗಿ ಎಲ್ಲರಿಗೂ ದರ ಏರಿಕೆಯ ಬಿಸಿ ತಟ್ಟಿದೆ.&lt;/p&gt;&lt;p&gt;ಹಾಗೆಯೇ ಕೊಪ್ಪಳದಲ್ಲೂ ಜಿಲ್ಲೆಯ ಮೂರು ಟೋಲ್&zwnj;ಗಳಲ್ಲಿ ದರ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 50 ಹಾಗೂ 67 ರಲ್ಲಿ ಟೋಲ್ ದರ ಕನಿಷ್ಠ 5 ರಿಂದ ಗರಿಷ್ಠ 30ಕ್ಕೆ ಏರಿಕೆಯಾಗಿದೆ. ಕಾರುಗಳಿಗೆ ಇಲ್ಲಿ ಈ ಮೊದಲು ಸಿಂಗಲ್ ಟ್ರಿಪ್ ಗೆ 50 ಇತ್ತು ಈಗ 55 ಆಗಿದೆ. ರಿಟರ್ನ್ ಟ್ರಿಪ್ 75ರಿಂದ ನಿಂದ 80ಕ್ಕೆ ಏರಿಕೆಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಕಾಮಕ್ಯ ದೇಗುಲದ ಪುರೋಹಿತರ ಮಾತು ನಿಜವಾಯ್ತು: ಕೊಲೆ ನಡೆದು ಸರಿಯಾಗಿ 9 ತಿಂಗಳ ನಂತರ ರಾಜ ರಘುವಂಶಿ ಮನೆಗೆ ಹೊಸ ಸದಸ್ಯನ ಆಗಮನ&lt;/strong&gt;&lt;/p&gt;&lt;p&gt;ಮಿನಿ ಬಸ್&zwnj;ನ ಟೋಲ್ ದರ 10 ರೂ ಏರಿಕೆಯಾಗಿದೆ. ಬಸ್ ಹಾಗೂ ಲಾರಿಗಳ ಟೋಲ್ ದರ 5ರಿಂದ 15ರೂಗೆ ಏರಿಕೆಯಾಗಿದೆ. 3 ಎಕ್ಸ್ ಎಲ್ ನಿಂದ 6 ಎಕ್ಸ್ ಎಲ್ ನ ವಾಹನಗಳ ಟೋಲ್ ದರ 15 ರಿಂದ 20 ಕ್ಕೆ ಏರಿಕೆ ಆಗಿದೆ.7 ಎಕ್ಸ್ ಎಲ್ ಮೇಲ್ಪಟ್ಟ ವಾಹನಗಳ ಟೋಲ್ ದರ 20 ರಿಂದ 25ಕ್ಕೆ ಏರಿಕೆಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿ: ದೇಶದೆಲ್ಲೆಡೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ&lt;/strong&gt;&lt;/p&gt;]]></content:encoded>
            <category>udupi</category>
            <dc:creator>Anusha Kb</dc:creator>
            <atom:link href="https://kannada.asianetnews.com/state/toll-rate-hike-no-cash-accepted-at-tolls-payment-through-upi-only/articleshow-qa0ylg2"/>
        </item>
        <item>
            <title><![CDATA[ಉದ್ಯಮಿ ಸುದೀಪ್ ಶೆಟ್ಟಿ ಕೇಸಲ್ಲಿ ಬಿಗ್ ಟ್ವಿಸ್ಟ್: ಅತ್ತೆ-ಮಾವ ಹಾಗೂ ವೇಣು ರಹಸ್ಯ ಬಿಚ್ಚಿಟ್ಟ ನಟಿ ಸೌಮ್ಯಾ ಶೆಟ್ಟಿ!]]></title>
            <link>https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96</link>
            <guid isPermaLink="true">https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96</guid>
            <pubDate>Thu, 02 Apr 2026 15:09:40 +0530</pubDate>
            <description><![CDATA[&lt;p&gt;ನೆಲ್ಯಾಡಿಯ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯ ಸಾವಿಗೆ ತಾನೇ ಕಾರಣ ಎಂಬ ಆರೋಪವನ್ನು ಪತ್ನಿ, ನಟಿ ಸೌಮ್ಯ ಶೆಟ್ಟಿ ನಿರಾಕರಿಸಿದ್ದು, ಬದಲಾಗಿ ಪತಿಯ ಸಾಲದ ಸಮಸ್ಯೆ ಮತ್ತು ಅವರ ಮನೆಯವರ ಕಿರುಕುಳದ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6rdmgxzbpx9ppm3eqvpjxn,imgname-sudeep-shetty-case-actress-sowmya-shetty-1775122174493.jpg" type="image/jpeg" height="390" width="690"/>
            <content:encoded><![CDATA[&lt;p&gt;ನೆಲ್ಯಾಡಿಯ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯ ಸಾವಿಗೆ ತಾನೇ ಕಾರಣ ಎಂಬ ಆರೋಪವನ್ನು ಪತ್ನಿ, ನಟಿ ಸೌಮ್ಯ ಶೆಟ್ಟಿ ನಿರಾಕರಿಸಿದ್ದು, ಬದಲಾಗಿ ಪತಿಯ ಸಾಲದ ಸಮಸ್ಯೆ ಮತ್ತು ಅವರ ಮನೆಯವರ ಕಿರುಕುಳದ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಉಡುಪಿ (ಏ.02): ದ&lt;/strong&gt;ಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸುದೀಪ್ ಸಾವಿಗೆ ಅವರ ಪತ್ನಿ, ನಟಿ ಸೌಮ್ಯ ಶೆಟ್ಟಿ ಅವರೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದರು. ಆದರೆ, ಈಗ ಈ ಎಲ್ಲಾ ಆರೋಪಗಳಿಗೆ ನಟಿ ಸೌಮ್ಯ ಶೆಟ್ಟಿ ಖಡಕ್ ಪ್ರತಿಕ್ರಿಯೆ ನೀಡಿದ್ದು, ಪತಿ ಸಾವಿನ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಮಾತ್ರವಲ್ಲದೆ, ಸುದೀಪ್ ಸಾವಿಗೆ ಅವರ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಸುದೀಪ್ ಸಾವಿಗೂ ಮುನ್ನ ಸೌಮ್ಯ ಶೆಟ್ಟಿ ನೆಲ್ಯಾಡಿಗೆ ಬಂದು ರಂಪಾಟ ಮಾಡಿದ್ದರು ಎಂಬ ಅತ್ತೆ ಪುಷ್ಪಲತಾ ಶೆಟ್ಟಿ ಅವರ ಆರೋಪಕ್ಕೆ ಸೌಮ್ಯ ಉತ್ತರಿಸಿದ್ದಾರೆ. 'ಸುದೀಪ್ ಅವರ ಮೊಬೈಲ್ ಸ್ವಿಚ್ ಆಫ್ ಇದ್ದ ಕಾರಣ ನಾನು ಆತಂಕಗೊಂಡು ನೆಲ್ಯಾಡಿಗೆ ಹೋಗಿದ್ದೆ. ಅಲ್ಲಿ ಅವರ ಮನೆಯವರು ನನಗೆ ಅಸಭ್ಯ ಭಾಷೆಯಲ್ಲಿ ಬೈದರು. ಹೆಂಡತಿಯಾಗಿ ನಾನು ಅಲ್ಲಿ ಧ್ವನಿ ಎತ್ತಿದ್ದು ನಿಜ, ಆದರೆ ಅದು ರಂಪಾಟವಲ್ಲ. ನಾನು ವಿಷ ಹಾಕಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು, ಬೇಕಿದ್ದರೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಿ' ಎಂದು ಸವಾಲು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಸುದೀಪ್ ಶೆಟ್ಟಿ ಅವರ ಸಾವಿಗೆ ಸಾಲದ ಸಮಸ್ಯೆ ಮತ್ತು ಕುಟುಂಬದ ಒತ್ತಡವೇ ಕಾರಣ ಎಂದು ಸೌಮ್ಯ ಶೆಟ್ಟಿ ಹೇಳಿದ್ದಾರೆ. 'ಸುದೀಪ್ ಅವರಿಗೆ ಕಳೆದ 8-9 ವರ್ಷಗಳಿಂದ ಸಾಲ ಇತ್ತು. ಆದರೆ ಮಾರ್ಚ್ 16ರಂದು ಅವರು ನೆಲ್ಯಾಡಿಯ ತಮ್ಮ ತಂದೆಯ ಮನೆಗೆ ಹೋದ ನಂತರವೇ ಪರಿಸ್ಥಿತಿ ಬದಲಾಗಿದೆ.&lt;/p&gt;&lt;img&gt;&lt;p&gt;ನಮ್ಮ ಮದುವೆಗೆ ಅವರ ಮನೆಯವರು ಒಪ್ಪುತ್ತಿಲ್ಲ ಎಂಬ ಬೇಸರ ಅವರಿಗಿತ್ತು. ತಂದೆಯ ಮನೆಗೆ ಹೋಗಿ ಬಂದ ನಂತರ ಅವರು ಆತ್ಮ*ಹತ್ಯೆಯ ನಿರ್ಧಾರ ಮಾಡಿದ್ದಾರೆ ಎಂದರೆ, ಅಲ್ಲಿ ಅವರಿಗೆ ಮಾನಸಿಕ ಕಿರುಕುಳ ನೀಡಿ ಪ್ರಚೋದಿಸಿರುವ ಸಂಶಯ ನನಗಿದೆ' ಎಂದು ಸೌಮ್ಯ ಗಂಭೀರವಾಗಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt; ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ&lt;/p&gt;&lt;img&gt;&lt;p&gt;ಈ ಪ್ರಕರಣದಲ್ಲಿ ಸೌಮ್ಯಳ ಹಳೆ ಪ್ರೇಮಿ ಎಂದು ಹೇಳಿಕೊಂಡು ಆರೋಪ ಮಾಡಿದ್ದ ವೇಣು ಶೆಟ್ಟಿ ವಿರುದ್ಧವೂ ಸೌಮ್ಯ ಶೆಟ್ಟಿ ಕಿಡಿಕಾರಿದ್ದಾರೆ. 'ವೇಣು ಶೆಟ್ಟಿ ಒಬ್ಬ ನಾಟಕ ಕಲಾವಿದ, ಆತನ ಕ್ಯಾರೆಕ್ಟರ್ ಸರಿ ಇಲ್ಲ. ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಆತನ ಬಗ್ಗೆ ತಿಳಿಯುತ್ತಿದ್ದಂತೆಯೇ ನಾನು ದೂರವಾಗಿದ್ದೆ. ಆದರೆ ಆತ ಸುದೀಪ್ ಅವರ ತಂದೆಯ ತಲೆ ಕೆಡಿಸಿ ಈ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ್ದಾನೆ. ಆತನ ಬಗ್ಗೆ ಇರುವ ಎಲ್ಲಾ ದಾಖಲೆಗಳನ್ನು ನಾನು ಪೊಲೀಸರಿಗೆ ನೀಡುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಈಗಾಗಲೇ ಸೌಮ್ಯ ಶೆಟ್ಟಿ ಅವರು ಸುದೀಪ್ ಮನೆಯವರು ಹಾಗೂ ವೇಣು ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉದ್ಯಮಿಯ ಸಾವಿನ ಸುತ್ತಲಿನ ಈ ಆರೋಪ-ಪ್ರತ್ಯಾರೋಪಗಳು ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿವೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96"/>
        </item>
        <item>
            <title><![CDATA[ಉಡುಪಿ ಅಬಕಾರಿ ಅಧಿಕಾರಿಗೆ ಲೋಕಾಯುಕ್ತ ಶಾಕ್: 15 ಕಡೆ ದಾಳಿ, ಕೋಟಿಗಟ್ಟಲೆ ಪತ್ತೆ, ಅಕ್ರಮ ಆಸ್ತಿ ಗುಟ್ಟು ರಟ್ಟು!]]></title>
            <link>https://kannada.asianetnews.com/karnataka-districts/karnataka-lokayukta-raid-more-than-8-crore-disproportionate-assets-found-linked-to-udupi-excise-officer-srinivas-t-m-gdp/articleshow-rfk1dnl</link>
            <guid isPermaLink="true">https://kannada.asianetnews.com/karnataka-districts/karnataka-lokayukta-raid-more-than-8-crore-disproportionate-assets-found-linked-to-udupi-excise-officer-srinivas-t-m-gdp/articleshow-rfk1dnl</guid>
            <pubDate>Fri, 13 Mar 2026 22:28:12 +0530</pubDate>
            <description><![CDATA[ಉಡುಪಿ ಜಿಲ್ಲಾ ಅಬಕಾರಿ ಅಧಿಕಾರಿ ಶ್ರೀನಿವಾಸ್ ಟಿ. ಎಂ. ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, 15 ಸ್ಥಳಗಳಲ್ಲಿ ಶೋಧ ನಡೆಸಿ, ಸುಮಾರು 8.69 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆಹಚ್ಚಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkm1qhvjbnw12vemvy484yhe,imgname-udupi-excise-officer-srinivas-t-m--1--1773420660594.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಡುಪಿ ಜಿಲ್ಲೆಯ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಯಾದ ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದಂತೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಭಾರೀ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.&lt;/p&gt;&lt;h2&gt;ರಾಜ್ಯದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ&lt;/h2&gt;&lt;p&gt;ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಲೋಕಾಯುಕ್ತ ಅಧಿಕಾರಿಗಳು, ಉಡುಪಿ ಜಿಲ್ಲಾ ಅಬಕಾರಿ ಅಧಿಕಾರಿಗೆ ಸಂಬಂಧಿಸಿದ ಮನೆ, ಕಚೇರಿ ಸೇರಿದಂತೆ ಒಟ್ಟು 15 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಈ ದಾಳಿ ಮಾರ್ಚ್ 11 ರಿಂದ ಮಾರ್ಚ್ 12ರವರೆಗೆ ಎರಡು ದಿನಗಳ ಕಾಲ ಮುಂದುವರಿದಿದ್ದು, ಅಧಿಕಾರಿಯ ಆದಾಯಕ್ಕಿಂತ ಮೀರಿದ ಆಸ್ತಿಯ ಮಹತ್ವದ ವಿವರಗಳು ಬೆಳಕಿಗೆ ಬಂದಿವೆ.&lt;/p&gt;&lt;h2&gt;8.69 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ&lt;/h2&gt;&lt;p&gt;ಲೋಕಾಯುಕ್ತ ತನಿಖೆಯಲ್ಲಿ ಅಧಿಕಾರಿಗೆ ಸಂಬಂಧಿಸಿದಂತೆ ಒಟ್ಟು 8 ಕೋಟಿ 69 ಲಕ್ಷ 23 ಸಾವಿರ 435 ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಇದರಲ್ಲಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳೆರಡೂ ಸೇರಿವೆ.&lt;/p&gt;&lt;h2&gt;ಸ್ಥಿರಾಸ್ತಿಗಳ ವಿವರ&lt;/h2&gt;&lt;p&gt;ಶೋಧ ಕಾರ್ಯಾಚರಣೆಯಲ್ಲಿ ಅಧಿಕಾರಿಗೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ಸ್ಥಿರಾಸ್ತಿಗಳು ಪತ್ತೆಯಾಗಿವೆ. 11 ನಿವೇಶನಗಳು, 6 ವಾಸದ ಮನೆಗಳು, 31 ಎಕರೆ ಕೃಷಿ ಜಮೀನು ಈ ಎಲ್ಲವನ್ನು ಸೇರಿಸಿ ಒಟ್ಟು 6,90,64,716 ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಚರಾಸ್ತಿಗಳ ವಿವರ&lt;/h2&gt;&lt;p&gt;ಇದೇ ವೇಳೆ ಹಲವು ಮೌಲ್ಯದ ಚರಾಸ್ತಿಗಳೂ ಪತ್ತೆಯಾಗಿವೆ. ₹3,95,941 ನಗದು, ₹1,47,50,506 ಮೌಲ್ಯದ ಚಿನ್ನಾಭರಣಗಳು, ₹17,00,000 ಮೌಲ್ಯದ ವಾಹನಗಳು, ₹25,75,000 ಮೌಲ್ಯದ ಬ್ಯಾಂಕ್ ಠೇವಣಿಗಳು, ₹72,68,554 ಮೌಲ್ಯದ ಇತರೆ ವಸ್ತುಗಳು, ಈ ಎಲ್ಲವನ್ನು ಸೇರಿಸಿ ಒಟ್ಟು ₹2,66,90,001 ಮೌಲ್ಯದ ಚರಾಸ್ತಿಗಳು ಪತ್ತೆಯಾಗಿವೆ.&lt;/p&gt;&lt;h2&gt;ಮಂಗಳೂರು ಲೋಕಾಯುಕ್ತ ವಿಭಾಗದ ನೇತೃತ್ವದಲ್ಲಿ ದಾಳಿ&lt;/h2&gt;&lt;p&gt;ಈ ಶೋಧ ಕಾರ್ಯಾಚರಣೆಯನ್ನು ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ನಡೆಸಿತು. ಎರಡು ದಿನಗಳ ಕಾಲ ನಡೆದ ಈ ದಾಳಿಯಲ್ಲಿ ಅಧಿಕಾರಿಗೆ ಸಂಬಂಧಿಸಿದ ಹಲವು ದಾಖಲೆಗಳು ಹಾಗೂ ಆಸ್ತಿಯ ವಿವರಗಳನ್ನು ಪರಿಶೀಲಿಸಲಾಗಿದೆ.&lt;/p&gt;&lt;h2&gt;ತನಿಖೆ ಮುಂದುವರಿಕೆ&lt;/h2&gt;&lt;p&gt;ಲೋಕಾಯುಕ್ತ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಆಸ್ತಿಗಳು ಅಧಿಕಾರಿಯ ಅಧಿಕೃತ ಆದಾಯಕ್ಕಿಂತ ಹೆಚ್ಚಿನವು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿಸಲಾಗಿದ್ದು, ಸಂಪೂರ್ಣ ಆಸ್ತಿ ವಿವರಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿ ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಸಂಸ್ಥೆ ಕೈಗೊಂಡಿರುವ ಪ್ರಮುಖ ಕಾರ್ಯಾಚರಣೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-lokayukta-raid-more-than-8-crore-disproportionate-assets-found-linked-to-udupi-excise-officer-srinivas-t-m-gdp/articleshow-rfk1dnl"/>
        </item>
        <item>
            <title><![CDATA[ಕನ್ನಡದ ನಟಿ ಸೌಮ್ಯ ಶೆಟ್ಟಿ ಮದುವೆಯಾದ ಒಂದೇ ತಿಂಗಳಿಗೆ ಗಂಡ ಆತ್ಮ*ಹತ್ಯೆ! ಸೊಸೆ ವಿರುದ್ಧ ತಿರುಗಿಬಿದ್ದ ಮಾವ!]]></title>
            <link>https://kannada.asianetnews.com/gallery/tv-talk/udupi-kannada-actress-sowmya-shetty-husband-death-in-karkala-allegations-sat-t6w3zpf</link>
            <guid isPermaLink="true">https://kannada.asianetnews.com/gallery/tv-talk/udupi-kannada-actress-sowmya-shetty-husband-death-in-karkala-allegations-sat-t6w3zpf</guid>
            <pubDate>Tue, 31 Mar 2026 16:48:16 +0530</pubDate>
            <description><![CDATA[&lt;p&gt;ಖ್ಯಾತ ಕಲಾವಿದೆ ಸೌಮ್ಯ ಶೆಟ್ಟಿ ಅವರ ಪತಿ ಸುದೀಪ್ ಶೆಟ್ಟಿ ಮದುವೆಯಾದ ಒಂದೇ ತಿಂಗಳಲ್ಲಿ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸುದೀಪ್ ತಂದೆ ತಮ್ಮ ಸೊಸೆಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದು, ಸೌಮ್ಯ ಶೆಟ್ಟಿ ಈ ಆರೋಪಗಳನ್ನು ನಿರಾಕರಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1s67n40am2xj197ge5jtv2,imgname-udupi-actress-sowmya-shetty-husband-death-1774955208356.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಕಲಾವಿದೆ ಸೌಮ್ಯ ಶೆಟ್ಟಿ ಅವರ ಪತಿ ಸುದೀಪ್ ಶೆಟ್ಟಿ ಮದುವೆಯಾದ ಒಂದೇ ತಿಂಗಳಲ್ಲಿ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸುದೀಪ್ ತಂದೆ ತಮ್ಮ ಸೊಸೆಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದು, ಸೌಮ್ಯ ಶೆಟ್ಟಿ ಈ ಆರೋಪಗಳನ್ನು ನಿರಾಕರಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಉಡುಪಿ (ಮಾ.31): ಪ್ರೀ&lt;/strong&gt;ತಿಸಿ ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ಖ್ಯಾತ ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಸೌಮ್ಯ ಶೆಟ್ಟಿಯ ಗಂಡ ಸುದೀಪ್ ಶೆಟ್ಟಿ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಪ್ರಕರಣ ಹಲವು ಸಂಶಯಗಳ ಸುಳಿಗೆ ಸಿಲಿಕಿದ್ದು, ಆರೋಪ-ಪ್ರತ್ಯಾರೋಪಗಳ ಕಣವಾಗಿ ಮಾರ್ಪಟ್ಟಿದೆ.&lt;/p&gt;&lt;img&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ನಿವಾಸಿ ಸುದೀಪ್ ಶೆಟ್ಟಿ ಮತ್ತು ಕಾರ್ಕಳದ ಬಂಗ್ಲೆಗುಡ್ಡೆ ನಿವಾಸಿ, ಖ್ಯಾತ ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಸೌಮ್ಯ ಶೆಟ್ಟಿ ಕಳೆದ ಫೆಬ್ರವರಿ 17ರಂದು ಪುತ್ತೂರಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಬಳಿಕ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕವಾಗಿ ವಿವಾಹವಾಗಿದ್ದರು. ಆದರೆ, ಮಾರ್ಚ್ 22ರಂದು ಸುದೀಪ್ ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;img&gt;&lt;p&gt;ಸುದೀಪ್ ಶೆಟ್ಟಿ ಅವರ ತಂದೆ ದಾಮೋದರ್ ಅವರು ತಮ್ಮ ಸೊಸೆ ಸೌಮ್ಯ ಶೆಟ್ಟಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. 'ಸೌಮ್ಯ ನನ್ನ ಮಗನಿಗೆ ವಿಷ ಹಾಕಿ ಕೊಂದಿದ್ದಾಳೆ. ಅವಳು ಈ ಹಿಂದೆಯೂ ಹಲವು ಮಂದಿಗೆ ಹೀಗೆಯೇ ವಂಚಿಸಿದ್ದಾಳೆ. ನನ್ನ ಮಗ ವಿಷ ಸೇವಿಸಿದ ವಿಷಯವನ್ನು 7 ದಿನಗಳ ಕಾಲ ಮುಚ್ಚಿಟ್ಟಿದ್ದಾಳೆ. ಸರಿಯಾದ ಚಿಕಿತ್ಸೆ ಕೊಡಿಸದೆ ಆತನ ಸಾವಿಗೆ ಕಾರಣವಾಗಿದ್ದಾಳೆ' ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ ದೂರು ದಾಖಲಿಸಿದ್ದಾರೆ. ಅಲ್ಲದೆ, ಸುದೀಪ್ ಮನೆಯವರು ಶ್ರೀಮಂತರಾಗಿದ್ದು, ಈ ಮದುವೆಗೆ ಅವರ ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ.&lt;/p&gt;&lt;img&gt;&lt;p&gt;ತನ್ನ ಮೇಲೆ ಕೇಳಿ ಬಂದಿರುವ ಎಲ್ಲಾ ಆರೋಪಗಳನ್ನು ಸೌಮ್ಯ ಶೆಟ್ಟಿ ನಿರಾಕರಿಸಿದ್ದಾರೆ. ಈ ಕುರಿತು ಸುದೀರ್ಘ ಹೇಳಿಕೆ ನೀಡಿರುವ ಅವರು, 'ಸುದೀಪ್ ಸಾವಿಗೆ ನಾನು ಕಾರಣವಲ್ಲ. ಅವರು ತಮ್ಮ ಮನೆಯವರ ವಿರೋಧ ಮತ್ತು ಮಾನಸಿಕ ಒತ್ತಡದಿಂದ ವಿಷ ಸೇವಿಸಿರಬಹುದು. ಅವರು ನೆಲ್ಯಾಡಿಯ ತಮ್ಮ ಮನೆಗೆ ಹೋಗಿದ್ದಾಗಲೇ ವಿಷ ಸೇವಿಸಿ ಬಂದಿದ್ದರು. ಈ ವಿಚಾರ ನನಗೆ ತಡವಾಗಿ ತಿಳಿಯಿತು. ವಿಷ ಸೇವಿಸಿದ ನಂತರವೂ ಅವರು ಆರಾಮವಾಗಿಯೇ ಇದ್ದರು, ನಾವು ವಾಟರ್ ಪಾರ್ಕ್&zwnj;ಗೆ ಕೂಡ ಹೋಗಿದ್ದೆವು. ಆದರೆ ನಂತರ ಅವರ ಆರೋಗ್ಯ ಕ್ಷೀಣಿಸಿತು' ಎಂದಿದ್ದಾರೆ.&lt;/p&gt;&lt;img&gt;&lt;p&gt;ಸೌಮ್ಯ ಅವರ ಪ್ರಕಾರ, ಸುದೀಪ್ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಈ ವಿಷಯ ತಿಳಿದಿದ್ದರೂ ತಾನು ಅವರನ್ನು ಪ್ರೀತಿಸಿ ಮದುವೆಯಾಗಿದ್ದೆ. 'ನಾನು ಹಣಕ್ಕಾಗಿ ಅವರನ್ನು ಮದುವೆಯಾಗಿಲ್ಲ. ಅವರ ಮನೆಯವರೇ ಸುದೀಪ್&zwnj;ನನ್ನು ಮನೆಯಿಂದ ದೂರವಿಟ್ಟಿದ್ದರು. ಮದುವೆಗೆ ಮೊದಲು ಒಪ್ಪಿದ್ದವರು ನಂತರ ನಿರಾಕರಿಸಿದ್ದರಿಂದ ಸುದೀಪ್ ಮನನೊಂದಿದ್ದರು' ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ತಾನು ನಾಲ್ಕೈದು ಮದುವೆಯಾಗಿದ್ದೇನೆ ಎಂಬ ಆರೋಪಕ್ಕೆ ಉತ್ತರಿಸಿದ ಸೌಮ್ಯ, 'ನಾನು 9 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದು ನಿಜ. ಆದರೆ ಪತಿಯ ನಡವಳಿಕೆಯಿಂದಾಗಿ ನಾನೇ ವಿಚ್ಛೇದನ ಪಡೆದಿದ್ದೆ. ಅದಾದ ನಂತರ ಕಲಾವಿದೆಯಾಗಿ ಕೆಲಸ ಮಾಡುತ್ತಿರುವಾಗ ಸುದೀಪ್ ಅವರೇ ಫೇಸ್&zwnj;ಬುಕ್ ಮೂಲಕ ನನ್ನನ್ನು ಸಂಪರ್ಕಿಸಿ ಮದುವೆಯ ಪ್ರಸ್ತಾಪ ಇಟ್ಟಿದ್ದರು. ನನ್ನ ಹಳೆಯ ಜೀವನದ ಬಗ್ಗೆ ಅವರಿಗೆ ಎಲ್ಲವೂ ತಿಳಿದಿತ್ತು' ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಳೂರಿನ ಎನಪೋಯ ಆಸ್ಪತ್ರೆಯಲ್ಲಿ ಸುದೀಪ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 'ಪೋಸ್ಟ್ ಮಾರ್ಟಂ ವರದಿ ಬಂದ ನಂತರ ಸುದೀಪ್ ಯಾವ ವಿಷ ಸೇವಿಸಿದ್ದರು ಮತ್ತು ಸಾವು ಸಂಭವಿಸಲು ನಿಖರ ಕಾರಣವೇನು ಎಂಬುದು ತಿಳಿಯಲಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/udupi-kannada-actress-sowmya-shetty-husband-death-in-karkala-allegations-sat-t6w3zpf"/>
        </item>
        <item>
            <title><![CDATA[ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ 12 ವರ್ಷದ ಸಮರ್ಥ್]]></title>
            <link>https://kannada.asianetnews.com/karnataka-districts/karkala-s-12-year-old-samarth-performed-a-bhoot-kola-mrq/articleshow-w8kcz2c</link>
            <guid isPermaLink="true">https://kannada.asianetnews.com/karnataka-districts/karkala-s-12-year-old-samarth-performed-a-bhoot-kola-mrq/articleshow-w8kcz2c</guid>
            <pubDate>Sun, 05 Apr 2026 07:21:55 +0530</pubDate>
            <description><![CDATA[&lt;p&gt;ಕಾರ್ಕಳದ 12 ವರ್ಷದ ಬಾಲಕ ಸಮರ್ಥ್, ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ್ದಾನೆ. ತನ್ನ ಅಜ್ಜ ಮತ್ತು ತಂದೆಯ ಮೂರು ತಲೆಮಾರುಗಳ ಪರಂಪರೆಯನ್ನು ಮುಂದುವರಿಸಿರುವ ಈ ಬಾಲಕನ ದೈವಾರಾಧನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kndncfc8qwgvzye593zk7vm1,imgname-karkala-samarth-1775353871752.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರ್ಕಳ:&lt;/strong&gt; &amp;nbsp;ಕಾರ್ಕಳ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮರ್ಥ್&zwnj;, ಕಿರಿಯ ವಯಸ್ಸಿನಲ್ಲೇ ಭೂತ ಕೋಲ ಕಟ್ಟಿದ ಘಟನೆ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಅಗಿದೆ. ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಮರ್ಥ್&zwnj; ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿದ್ದಾನೆ.&lt;/p&gt;&lt;p&gt;ಮೂರು ತಲೆಮಾರುಗಳಿಂದ ಮುಂದುವರಿದ ಪರಂಪರೆಯ ಭಾಗವಾಗಿ, ಅಜ್ಜ ಮೋನು ಪಾಣರ ಮತ್ತು ತಂದೆ ಹರೀಶ ಅವರ ಹಾದಿಯಲ್ಲಿ ಸಮರ್ಥ್&zwnj; ಕೂಡ ನಡೆದು ದೈವರಾಧನೆಗೆ ತನ್ನ ಕೊಡುಗೆ ನೀಡಿದ್ದಾನೆ.&lt;/p&gt;&lt;h2&gt;&lt;strong&gt;ಸ್ಥಳೀಯರಲ್ಲಿ ಸಂತಸ&lt;/strong&gt;&lt;/h2&gt;&lt;p&gt;ಅವಿವಾಹಿತರು ಮಾತ್ರ ಪಾಲ್ಗೊಳ್ಳುವ ವಿಶೇಷ ಆಚರಣೆಯ ಈ ಕೋಲದಲ್ಲಿ ಬಾಲಕನ ಭಾಗವಹಿಸುವಿಕೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಕಳೆದ ಬಾರಿ&zwnj; ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲೂ ಕೂಡ ಗಗ್ಗರ ಕಟ್ಟಿದ್ದ&lt;/p&gt;&lt;p&gt;ಯುವಪೀಳಿಗೆ ಸಂಸ್ಕೃತಿಯನ್ನು ಉಳಿಸುವ ದಿಶೆಯಲ್ಲಿ ಇದು ಒಳ್ಳೆಯ ಬೆಳವಣಿಗೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ದೈವ ವೇಷ ಹಾಕಿ ಅತಿರೇಕ ವರ್ತನೆ: ದೂರು ದಾಖಲು&lt;/strong&gt;&lt;/h3&gt;&lt;p&gt;ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪವಿತ್ರ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮದುಮಗ ಮತ್ತು ಆತನ ಬೆಂಬಲಿಗರು ದೈವಕ್ಕೆ ಅವಮಾನ ಮಾಡಿದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಎಮ್ಮೆಮಾಡು ಗ್ರಾಮದಲ್ಲಿ ಗ್ರಾಮದ ಯುವಕರು ಎರಡು ದಿನಗಳ ಹಿಂದೆ ಮದುಮಗನೊಬ್ಬನಿಗೆ ದೈವದ ವೇಷ ತೊಡಿಸಿ ಉಳಿದವರು ದೇವರನ್ನು ಹೀಯಾಳಿಸಿ ಮೆರವಣಿಗೆ ನಡೆಸಿರುವ ಫೋಟೋ ವೈರಲ್&zwnj; ಆಗಿದೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವೈರಲ್ ಆಯ್ತು ಗ್ಲೋಬಲ್ ಸ್ಟಾರ್ ಅಧ್ಯಾತ್ಮಿಕ ಪಯಣ; ಸುವರ್ಣ ಮಂದಿರದಲ್ಲಿ 'ಸೇವೆ' ಮಾಡ್ತಿರೋ ಪ್ರಿಯಾಂಕಾ ಚೋಪ್ರಾ&lt;/strong&gt;&lt;strong&gt;!&lt;/strong&gt;&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಪೂರ್ವಜರ ನಂಬಿಕೆ ಹಾಗೂ ಸಂಸ್ಕೃತಿ, ಧರ್ಮವನ್ನು ಅಪಹಾಸ್ಯ ಮಾಡಿರುವುದರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಿಂದೂ ಪರ ಸಂಘಟನೆ ಪ್ರಮುಖರು ದೂರು ದಾಖಲಿಸಿದ್ದಾರೆ. ಎಮ್ಮೆಮಾಡು ಗ್ರಾಮದ ಯುವಕರಾದ ಅಬ್ದುಲ್ ರಾಶಿದ್, ಹನೀಫ್, ಲತೀಫ್, ಮೊಹಮ್ಮದ್ ಪೈಸಲ್ ,ಶಕೀರ್ ಹಾಗೂ ಬಶೀರ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉಡುಪಿಯ ಅಳಿಯ ಸೂರ್ಯಕುಮಾರ್ ಯಾದವ್&zwnj; ಬಾಳಲ್ಲಿ ಕಾಪು ಮಾರಿಯಮ್ಮನ ಪವಾಡ!&lt;/strong&gt;&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/karkala-s-12-year-old-samarth-performed-a-bhoot-kola-mrq/articleshow-w8kcz2c"/>
        </item>
        <item>
            <title><![CDATA[ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ  ಮಂಗಳೂರು  ಆಗಿ ರಾಜಧಾನಿಗೆ ಪಯಣ]]></title>
            <link>https://kannada.asianetnews.com/karnataka-districts/indian-railways-runs-special-train-from-madgaon-to-bengaluru-via-coastal-karnataka-on-march-22-gdp/articleshow-zkuprlo</link>
            <guid isPermaLink="true">https://kannada.asianetnews.com/karnataka-districts/indian-railways-runs-special-train-from-madgaon-to-bengaluru-via-coastal-karnataka-on-march-22-gdp/articleshow-zkuprlo</guid>
            <pubDate>Sat, 21 Mar 2026 22:49:39 +0530</pubDate>
            <description><![CDATA[ಯುಗಾದಿ ಮತ್ತು ರಂಜಾನ್ ಹಬ್ಬದ ನಂತರ ತಮ್ಮ ಊರುಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು ಮಡ್ಗಾಂವ್&zwnj;ನಿಂದ ಹೊರಟು ಕಾರವಾರ, ಉಡುಪಿ ಮತ್ತು ಮಂಗಳೂರು ಮಾರ್ಗವಾಗಿ ಬೆಂಗಳೂರು ತಲುಪಲಿದ್ದು, ಹಬ್ಬದ ಸೀಟುಗಳ ಕೊರತೆಯನ್ನು ನೀಗಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khp601b9hctbmkhxep8fe8wz,imgname-indian-railway--2--1771344758121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ಪ್ರಯಾಣಿಕರು ಮತ್ತೆ ಬೆಂಗಳೂರಿಗೆ ಸುಗಮವಾಗಿ ಮರಳಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಮಡ್ಗಾಂವ್&zwnj;ನಿಂದ ಹೊರಡಲಿರುವ ಈ ವಿಶೇಷ ರೈಲು ಕಾರವಾರ, ಉಡುಪಿ ಮತ್ತು ಮಂಗಳೂರು ಮೂಲಕ ಬೆಂಗಳೂರು ನಗರ ತಲುಪಲಿದೆ.&lt;/p&gt;&lt;p&gt;ಈ ಕುರಿತು ಉಡುಪಿ&ndash;ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಯುಗಾದಿ ಹಬ್ಬದ ವೇಳೆ ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ತೆರಳಿದ್ದ ಅನೇಕ ಪ್ರಯಾಣಿಕರು ವಾಪಸ್ಸು ಬರಲು ರೈಲು ಸೀಟುಗಳ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಜನರ ಬೇಡಿಕೆಗೆ ಸ್ಪಂದಿಸಿ ಈ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ವಿಶೇಷ ರೈಲು ಮಾರ್ಗ ಮತ್ತು ದಿನಾಂಕ&lt;/h2&gt;&lt;p&gt;ಈ ವಿಶೇಷ ರೈಲು ಮಾರ್ಚ್ 22 ರಂದು ಮಡ್ಗಾಂವ್&zwnj;ನಿಂದ ಹೊರಟು ಕಾರವಾರ&ndash;ಉಡುಪಿ&ndash;ಮಂಗಳೂರು ಮಾರ್ಗವಾಗಿ ಬೆಂಗಳೂರು ನಗರಕ್ಕೆ ಸಂಚಾರ ನಡೆಸಲಿದೆ. ಕರಾವಳಿ ಭಾಗದ ಪ್ರಯಾಣಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.&lt;/p&gt;&lt;h2&gt;ಸಮಯಪಟ್ಟಿ ವಿವರಗಳು&lt;/h2&gt;&lt;p&gt;ಈ ವಿಶೇಷ ರೈಲು ಮಡ್ಗಾಂವ್&zwnj;ನಿಂದ ಬೆಳಿಗ್ಗೆ 11:00 ಗಂಟೆಗೆ ಹೊರಡಲಿದೆ. ಬಳಿಕ ವಿವಿಧ ನಿಲ್ದಾಣಗಳಲ್ಲಿ ತಲುಪುವ ಸಮಯಗಳು ಹೀಗಿವೆ:&lt;/p&gt;&lt;ul&gt; &lt;li&gt;ಕಾರವಾರ &ndash; ಬೆಳಿಗ್ಗೆ 11:28&lt;/li&gt; &lt;li&gt;ಗೋಕರ್ಣ &ndash; ಮಧ್ಯಾಹ್ನ 12:30&lt;/li&gt; &lt;li&gt;ಮುರ್ಡೇಶ್ವರ &ndash; ಮಧ್ಯಾಹ್ನ 1:40&lt;/li&gt; &lt;li&gt;ಬೈಂದೂರು &ndash; ಮಧ್ಯಾಹ್ನ 2:12&lt;/li&gt; &lt;li&gt;ಕುಂದಾಪುರ &ndash; ಮಧ್ಯಾಹ್ನ 2:40&lt;/li&gt; &lt;li&gt;ಬಾರ್ಕೂರು &ndash; ಮಧ್ಯಾಹ್ನ 2:55&lt;/li&gt; &lt;li&gt;ಉಡುಪಿ &ndash; ಮಧ್ಯಾಹ್ನ 3:30&lt;/li&gt; &lt;li&gt;ಮೂಲ್ಕಿ &ndash; ಮಧ್ಯಾಹ್ನ 3:58&lt;/li&gt; &lt;li&gt;ಸುರತ್ಕಲ್ &ndash; ಮಧ್ಯಾಹ್ನ 4:14&lt;/li&gt;&lt;/ul&gt;&lt;p&gt;ಇದರ ನಂತರ ರೈಲು ಬಂಟ್ವಾಳ ಸಂಜೆ 6:00, ಕಬಕ&ndash;ಪುತ್ತೂರು ಸಂಜೆ 6:28, ಸುಬ್ರಹ್ಮಣ್ಯ ಸಂಜೆ 7:50ಕ್ಕೆ ತಲುಪಲಿದೆ. ಕೊನೆಗೆ ಬೆಂಗಳೂರು ನಗರದ ಕ್ಯಾಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಮುಂದಿನ ದಿನ ಬೆಳಿಗ್ಗೆ 5:00ಕ್ಕೆ ತಲುಪಲಿದೆ.&lt;/p&gt;&lt;h2&gt;ಪ್ರಯಾಣಿಕರಿಗೆ ಮಹತ್ವದ ಅನುಕೂಲ&lt;/h2&gt;&lt;p&gt;ಹಬ್ಬದ ಸಂದರ್ಭದಲ್ಲಿ ಕರಾವಳಿ ಭಾಗಕ್ಕೆ ತೆರಳಿದ ಪ್ರಯಾಣಿಕರಿಗೆ ಹಿಂದಿರುಗುವ ವೇಳೆ ಎದುರಾಗುತ್ತಿರುವ ಭಾರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ಇದರ ಮೂಲಕ ಪ್ರಯಾಣಿಕರು ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ಬೆಂಗಳೂರಿಗೆ ತಲುಪಿ, ಸೋಮವಾರದಂದು ತಮ್ಮ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ.&lt;/p&gt;&lt;h2&gt;ಹಿಂದಿನ ಸೇವೆಗೆ ಉತ್ತಮ ಸ್ಪಂದನೆ&lt;/h2&gt;&lt;p&gt;ಯುಗಾದಿ ಹಬ್ಬದ ಪ್ರಯುಕ್ತ ಇದೇ ಮಾರ್ಗದಲ್ಲಿ ಹಿಂದೆಯೂ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು. ಆ ರೈಲು ಮಧ್ಯಾಹ್ನ ಹೊರಟಿದ್ದರೂ 700ಕ್ಕೂ ಹೆಚ್ಚು ಸೀಟುಗಳು ತುಂಬಿ, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಈ ಬಾರಿ ಕೂಡ ಹೆಚ್ಚಿನ ಪ್ರಯಾಣಿಕರು ಈ ಸೇವೆಯನ್ನು ಬಳಸುವ ನಿರೀಕ್ಷೆ ಇದೆ.&lt;/p&gt;&lt;p&gt;ಒಟ್ಟಿನಲ್ಲಿ, ಕರಾವಳಿ ಪ್ರದೇಶದ ಜನರಿಗೆ ಹಬ್ಬದ ನಂತರ ಬೆಂಗಳೂರಿಗೆ ವಾಪಸ್ಸಾಗಲು ಈ ವಿಶೇಷ ರೈಲು ಸೇವೆ ಅತ್ಯಂತ ಉಪಯುಕ್ತವಾಗಿದ್ದು, ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/indian-railways-runs-special-train-from-madgaon-to-bengaluru-via-coastal-karnataka-on-march-22-gdp/articleshow-zkuprlo"/>
        </item>
    </channel>
</rss>
