<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 17 May 2026 07:39:08 +0530</lastBuildDate>
        <atom:link href="https://kannada.asianetnews.com/rss/udupi" rel="self" type="application/rss+xml"/>
        <item>
            <title><![CDATA[ಪತಿಯ ಲಾಕರ್‌ನಿಂದ 23 ಲಕ್ಷ ಮೌಲ್ಯದ ಚಿನ್ನ ಕದ್ದ ಪತ್ನಿ! ಕಾಪುವಿನಲ್ಲೊಂದು ವಿಚಿತ್ರ ಕಳ್ಳತನ]]></title>
            <link>https://kannada.asianetnews.com/gallery/karnataka-districts/udupi-wife-steals-gold-worth-rs-23-lakh-from-husband-s-locker-kapu-taluk-uchila-mrq-1exkwlo</link>
            <guid isPermaLink="true">https://kannada.asianetnews.com/gallery/karnataka-districts/udupi-wife-steals-gold-worth-rs-23-lakh-from-husband-s-locker-kapu-taluk-uchila-mrq-1exkwlo</guid>
            <pubDate>Mon, 20 Apr 2026 07:57:54 +0530</pubDate>
            <description><![CDATA[&lt;p&gt;ಉಡುಪಿಯ ಉಚ್ಚಿಲದಲ್ಲಿ, ಪತಿಯೊಬ್ಬರು ತಮ್ಮ ಪತ್ನಿಯೇ ಬ್ಯಾಂಕ್ ಲಾಕರ್ ಕೀ ಕದ್ದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿ ನಕಲಿ ಕೀ ತಯಾರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpmb0vttza2zrcw5gbt3cwdq,imgname-gold--1--1776651628378.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಡುಪಿಯ ಉಚ್ಚಿಲದಲ್ಲಿ, ಪತಿಯೊಬ್ಬರು ತಮ್ಮ ಪತ್ನಿಯೇ ಬ್ಯಾಂಕ್ ಲಾಕರ್ ಕೀ ಕದ್ದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿ ನಕಲಿ ಕೀ ತಯಾರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಉಡುಪಿ: ಕಾಪು ತಾಲೂಕಿನ ಉಚ್ಚಿಲ ಎಂಬಲ್ಲಿ ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯೇ ಪತಿಯ ಲಾಕರ್&zwnj; ಕೀ ಕಳವು ಮಾಡಿ ಲಕ್ಷಾಂತರ ಮೌಲ್ಯದ ಚಿನ್ನ ದೋಚಿರುವ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ಉಚ್ಚಿಲ ಗ್ರಾಮದ ನಿವಾಸಿ ಕಿರಣ್ ಕುಮಾರ್ (42), ಪಡುಬಿದ್ರಿಯ ಕಂಪನಿಯೊಂದರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದಾರೆ. ಇವರು 2016ರಲ್ಲಿ ವನಿತಾ ಎಂಬವರೊಂದಿಗೆ ವಿವಾಹವಾಗಿದ್ದು, ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ವಾಸಿಸುತ್ತಿದ್ದರು. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ಕಿರಣ್ ಕುಮಾರ್ ತಮ್ಮ ಅಗತ್ಯ ದಾಖಲಾತಿಗಳು ಹಾಗೂ ಚಿನ್ನಾಭರಣಗಳನ್ನು ಐಡಿಬಿಐ ಬ್ಯಾಂಕಿನ ಉಡುಪಿ ಶಾಖೆಯ ಲಾಕರ್&zwnj; ನಲ್ಲಿರಿಸಿದ್ದರು ಮತ್ತು ಅದರ ಕೀಯನ್ನು ಮನೆಯ ಅಲ್ಮಾರಿಯಲ್ಲಿ ಇಟ್ಟಿದ್ದರು. ಈ ವಿಷಯ ಪತ್ನಿಗೆ ಗೊತ್ತಾಗಿತ್ತು. (ಸಾಂದರ್ಭಿಕ ಚಿತ್ರ)&lt;/p&gt;&lt;img&gt;&lt;p&gt;ಏಪ್ರಿಲ್ 10ರಂದು ಕಿರಣ್ ಕುಮಾರ್ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಸುಮಾರು 2 ಗಂಟೆಗೆ ವನಿತಾ ಅವರು ಮನೆಯ ಅಲ್ಮಾರಿಯ ಕೀ ಎಲ್ಲೋ ಬಿಸಾಡಿ ಹೋಗಿದೆ ಎಂದು ಹೇಳಿ ಕೀ ಮೇಕರ್&zwnj;ರೊಬ್ಬರನ್ನು ಕರೆಸಿ ಅಲ್ಮಾರಿಯ ನಕಲಿ ಕೀ ತಯಾರಿಸಿಕೊಂಡು, ಆ ಕೀಯಿಂದ ಅಲ್ಮಾರಿ ತರೆದು ಅದರೊಳಗಿದ್ದ ಬ್ಯಾಂಕಿನ ಲಾಕರ್&zwnj;ನ ಕೀ ಕಳವು ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇಂದು ಅಕ್ಷಯ ತೃತೀಯ: ₹20000 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಸೇಲ್&zwnj; ನಿರೀಕ್ಷೆ&lt;/strong&gt;&lt;/p&gt;&lt;img&gt;&lt;p&gt;ನಂತರ ಆ ಕೀಯನ್ನು ಬಳಸಿ ಐಡಿಬಿಐ ಬ್ಯಾಂಕಿನ ಉಡುಪಿ ಶಾಖೆಗೆ ತೆರಳಿ ಲಾಕರ್ ತೆರೆದು, ಸುಮಾರು 169 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ 23.67 ಲಕ್ಷ ರು.) ಕಳವು ಮಾಡಿದ್ದಾರೆ ಎಂದು ಕಿರಣ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು ಕಸಕ್ಕೆ ಹೊಸ ಸೂತ್ರ: ಇನ್ಮುಂದೆ 4 ವಿಧದ ವಿಂಗಡಣೆ ಕಡ್ಡಾಯ; BSWML ಸೂಚನೆ&lt;/strong&gt;&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/udupi-wife-steals-gold-worth-rs-23-lakh-from-husband-s-locker-kapu-taluk-uchila-mrq-1exkwlo"/>
        </item>
        <item>
            <title><![CDATA[ಉಡುಪಿ: ಕಣ್ಣೀರಲ್ಲಿ ಅರಳಿದ ಮಾನವೀಯತೆ!  ಹೃದಯಸ್ಪರ್ಶಿ ಘಟನೆ ಹಂಚಿಕೊಂಡ ಸಚಿವೆ ಹೆಬ್ಬಾಳ್ಕರ್]]></title>
            <link>https://kannada.asianetnews.com/karnataka-districts/communal-harmony-is-the-essence-of-our-india-minister-laxmi-hebbalkar-shares-a-heart-warming-incident-in-udupi-mrq/articleshow-2pyroib</link>
            <guid isPermaLink="true">https://kannada.asianetnews.com/karnataka-districts/communal-harmony-is-the-essence-of-our-india-minister-laxmi-hebbalkar-shares-a-heart-warming-incident-in-udupi-mrq/articleshow-2pyroib</guid>
            <pubDate>Sun, 17 May 2026 07:36:53 +0530</pubDate>
            <description><![CDATA[&lt;p&gt;ಉಡುಪಿ ಪ್ರವಾಸದಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೋಮು ಸೌಹಾರ್ದತೆಯ ಅಪರೂಪದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಮಾನವೀಯ ಕಾರ್ಯವನ್ನು ಸಚಿವರು ಶ್ಲಾಘಿಸಿ, ತಕ್ಷಣವೇ ಆ ತಾಯಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krstr5gfy1e6gdbp4hgb0ern,imgname-laxmi-hebbalkar-1778983376399.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ:&lt;/strong&gt; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಘಟನೆಯ ಬಗ್ಗೆ ಬರೆದುಕೊಂಡಿದ್ದಾರೆ. ಕೋಮು ಸೌಹಾರ್ದತೆಯೇ ನಮ್ಮ ಭಾರತದ ಅಸ್ತಿತ್ವ ಎಂಬ ಶೀರ್ಷಿಕೆ ಜೊತೆ ಉಡುಪಿಯಲ್ಲಿ ತಮ್ಮನ್ನು ಸಂಪರ್ಕಿಸಿದ ಮೂವರು ಮಹಿಳೆಯರ ಬಗ್ಗೆ ಸಚಿವರು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಅತ್ಯಂತ ಅಪರೂಪದ ಘಟನೆ: ಲಕ್ಷ್ಮೀ ಹೆಬ್ಬಾಳ್ಕರ್&lt;/strong&gt;&lt;/h2&gt;&lt;p&gt;​ಉಡುಪಿಯ ಪ್ರವಾಸದಲ್ಲಿದ್ದಾಗ ಭಾರತದ ನೈಜ ಸಾಮರಸ್ಯ ಮತ್ತು ಮಾನವೀಯತೆಗೆ ಸಾಕ್ಷಿಯಾಗುವಂತಹ ಒಂದು ಅತ್ಯಂತ ಅಪರೂಪದ ಘಟನೆ ಜರುಗಿತು. ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿಯಾದ ಗಿರಿಜಾ ಶೆಟ್ಟಿಗಾರ್ ಎಂಬ ಬಡ ವಿಧವೆ ಮಹಿಳೆಗೆ 1989 ರಲ್ಲೇ ನಿವೇಶನ ಮಂಜೂರಾಗಿದ್ದರೂ, ತಾಂತ್ರಿಕ ಅಡಚಣೆಗಳಿಂದಾಗಿ ಇಂದಿಗೂ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅತ್ಯಂತ ಭಾವುಕ ಸಂಗತಿಯೆಂದರೆ, ಈ ಹಿಂದು ತಾಯಿಯ ಪರವಾಗಿ ಧ್ವನಿಯೆತ್ತಿ, ಅವರಿಗೆ ನ್ಯಾಯ ಕೊಡಿಸಬೇಕೆಂದು ಕಣ್ಣೀರು ಹಾಕುತ್ತಾ ನನ್ನ ಬಳಿ ನೆರವು ಕೇಳಿಕೊಂಡು ಬಂದಿದ್ದು ನೆರೆಮನೆಯ ಮುಸ್ಲಿಂ ಮಹಿಳೆಯರು!&lt;/p&gt;&lt;p&gt;ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುವವರು ಸಮಾಜದಲ್ಲಿ ಗೋಡೆಗಳನ್ನು ಕಟ್ಟುತ್ತಿದ್ದರೆ, ಇಂತಹ ಸಾಮಾನ್ಯ ಜನರೇ ನಮ್ಮ ದೇಶದ ನಿಜವಾದ ಸೌಹಾರ್ದತೆಯ ರಾಯಭಾರಿಗಳು. ಈ ಮುಸ್ಲಿಂ ಸಹೋದರಿಯರ ಕಾಳಜಿಯನ್ನು ಕಂಡು &ldquo;ಇದು ನೋಡಿ ನಮ್ಮ ಹೆಮ್ಮೆಯ ಭಾರತ&rdquo; ಎಂದು ನನಗೆ ಹೆಮ್ಮೆ ಎನಿಸಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: ಮನೆಯಲ್ಲಿರುವ ಹಳೆ ಬಟ್ಟೆ, ಹಾಸಿಗೆ,ಸೋಫಾ, ಚಪ್ಪಲಿ ಸಂಗ್ರಹಕ್ಕೆ ಆ್ಯಪ್&zwnj;&lt;/strong&gt;&lt;/p&gt;&lt;h3&gt;&lt;strong&gt;ಮಾನವೀಯತೆಯೊಂದೇ ಪರಮ ಧರ್ಮ&lt;/strong&gt;&lt;/h3&gt;&lt;p&gt;​ಬಡತನ ಮತ್ತು ಕಷ್ಟಗಳಿಗೆ ಯಾವುದೇ ಧರ್ಮವಿರುವುದಿಲ್ಲ, ಮಾನವೀಯತೆಯೊಂದೇ ಪರಮ ಧರ್ಮ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಷ್ಟದಲ್ಲಿರುವ ಆ ತಾಯಿಗೆ ಕಾನೂನುಬದ್ಧವಾಗಿ ಭೂಮಿಯ ವಾಸ್ತವ್ಯ ದೊರಕಿಸಿಕೊಟ್ಟು, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಸಮಾಜದಲ್ಲಿ ದ್ವೇಷ ಬಿತ್ತುವವರು ಸಾಮಾನ್ಯ ಜನರ ಈ ಪ್ರೀತಿ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ನೋಡಿ ಕಲಿಯಬೇಕಿದೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವುದು ಮತ್ತು ಇಂತಹ ಸೌಹಾರ್ದತೆಯನ್ನು ಎತ್ತಿಹಿಡಿಯುವುದೇ ನಮ್ಮ ಸರ್ಕಾರದ ಮುಖ್ಯ ಆಶಯವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗೃಹಲಕ್ಷ್ಮೀ ಹಣದಲ್ಲಿ ರೊಟ್ಟಿ ಕೇಂದ್ರ ಆರಂಭಿಸಿ ಸ್ವಾವಲಂಬಿ ಬದುಕಿನತ್ತ ಕುಷ್ಟಗಿಯ ಮಹಿಳೆಯರು&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಕೋಮು ಸೌಹಾರ್ದತೆಯೇ ನಮ್ಮ ಭಾರತದ ಅಸ್ತಿತ್ವ, ಉಡುಪಿಯಲ್ಲೊಂದು ಹೃದಯಸ್ಪರ್ಶಿ ಘಟನೆ!​ಉಡುಪಿಯ ಪ್ರವಾಸದಲ್ಲಿದ್ದಾಗ ಭಾರತದ ನೈಜ ಸಾಮರಸ್ಯ ಮತ್ತು ಮಾನವೀಯತೆಗೆ ಸಾಕ್ಷಿಯಾಗುವಂತಹ ಒಂದು ಅತ್ಯಂತ ಅಪರೂಪದ ಘಟನೆ ಜರುಗಿತು. ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿಯಾದ ಗಿರಿಜಾ ಶೆಟ್ಟಿಗಾರ್ ಎಂಬ ಬಡ ವಿಧವೆ ಮಹಿಳೆಗೆ 1989 ರಲ್ಲೇ ನಿವೇಶನ&hellip; pic.twitter.com/6d9lrsyouY&lt;/p&gt;&lt;p&gt;&mdash; Laxmi Hebbalkar (@laxmi_hebbalkar) May 16, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>udupi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/communal-harmony-is-the-essence-of-our-india-minister-laxmi-hebbalkar-shares-a-heart-warming-incident-in-udupi-mrq/articleshow-2pyroib"/>
        </item>
        <item>
            <title><![CDATA[ಉಡುಪಿ: ಪತಿ  ಸುದೀಪ್ ರೈ ಆತ್ಮ*ಹತ್ಯೆ ಪ್ರಕರಣ: ನಟಿ ಸೌಮ್ಯ ಶೆಟ್ಟಿ ಬಂಧನ]]></title>
            <link>https://kannada.asianetnews.com/relationship/udupi-husband-sudeep-rai-death-case-actress-soumya-shetty-arrested/articleshow-3cwm5e2</link>
            <guid isPermaLink="true">https://kannada.asianetnews.com/relationship/udupi-husband-sudeep-rai-death-case-actress-soumya-shetty-arrested/articleshow-3cwm5e2</guid>
            <pubDate>Sun, 12 Apr 2026 08:35:35 +0530</pubDate>
            <description><![CDATA[&lt;p&gt;ಮದುವೆಯಾದ ಒಂದೇ ತಿಂಗಳಿಗೆ ಪತಿ ಸುದೀಪ್ ರೈ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕರಾವಳಿಯ ನಟಿ ಸೌಮ್ಯ ಶೆಟ್ಟಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಸುದೀಪ್ ರೈ ಅವರ ತಂದೆ ನೀಡಿದ ದೂರಿನ ಅನ್ವಯ ಈ ಬಂಧನ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzt15ex09sar1wye749jhxz,imgname-sowmya-shetty-sudeep--rai-1775962723805.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪತಿ ಆತ್ಮ*ಹತ್ಯೆ ಪ್ರಕರಣ ನಟಿ ಸೌಮ್ಯ ಶೆಟ್ಟಿ ಬಂಧನ&lt;/strong&gt;&lt;/h2&gt;&lt;p&gt;ಉಡುಪಿ: ಮದುವೆಯಾದ ಒಂದೇ ತಿಂಗಳಿಗೆ ಪತಿ ವಿಷ ಸೇವಿಸಿ ಸಾವಿಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾವಳಿಯ ಖ್ಯಾತ ನಟಿ ಸೌಮ್ಯ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಷ ಸೇವಿಸಿದ ಸೌಮ್ಯ ಶೆಟ್ಟಿ ಪತಿ ಸುದೀಪ್ ರೈ ಮಾರ್ಚ್&zwnj; 31ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ರೈ ತಂದೆ ಪೊಲೀಸರಿಗೆ ಸೌಮ್ಯ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಈಗ ಸೌಮ್ಯ ಶೆಟ್ಟಿಯನ್ನು ಬಂಧಿಸಿದ್ದಾರೆ. ಸುದೀಪ್ ರೈ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮೂಲದ ಉದ್ಯಮಿಯಾಗಿದ್ದು, ಸೌಮ್ಯ ಜೊತೆ ಮದುವೆಯ ನಂತರ ಅವರು ಉಡುಪಿ ಜಿಲ್ಲೆಯ ಕಾರ್ಕಳದ ಬಂಗ್ಲೆಗುಡ್ಡೆಯ ಪತ್ನಿ ಮನೆಯಲ್ಲೇ ವಾಸವಿದ್ದರು.&lt;/p&gt;&lt;h3&gt;&lt;strong&gt;14 ದಿನಗಳ ನ್ಯಾಯಾಂಗ ಬಂಧನಕ್ಕೆ ಸೌಮ್ಯ ಶೆಟ್ಟಿ&lt;/strong&gt;&lt;/h3&gt;&lt;p&gt;ಸೌಮ್ಯ ಶೆಟ್ಟಿ ತನ್ನ ಮಗ ಆತ್ಮ*ಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರಚೋದನೆ ನೀಡಿದ್ದಾಳೆ ಎಂದು ಸುದೀಪ್ ರೈ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಈಗ ಕಾರ್ಕಳದಲ್ಲಿ ಸೌಮ್ಯ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.&lt;/p&gt;&lt;p&gt;ಸೌಮ್ಯ ಶೆಟ್ಟಿ ಹಾಗೂ ಸುದೀಪ್ ರೈ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಈ ವರ್ಷದ ಫೆ.17ರಂದು ಅವರಿಬ್ಬರು ಮದುವೆಯಾಗಿದ್ದರು. ಸೌಮ್ಯ ಕಾರ್ಕಳದವರಾಗಿದ್ದರೆ, ಸುದೀಪ್ ರೈ ದ.ಕ ಜಿಲ್ಲೆ ನೆಲ್ಯಾಡಿಯವರು, ಮದುವೆಯ ಬಳಿಕ ಸುದೀಪ್ ರೈ ಕಾರ್ಕಳದ ಬಂಗ್ಲೆಗುಡ್ಡೆಯ ಪತ್ನಿ ಮನೆಯಲ್ಲೇ ಇದ್ದರು. ಆದರೆ ಮಾ17ರಂದು ಮನೆಗೆ ಬಂದಿದ್ದ ಸುದೀಪ್ ರೈ ತಾಯಿ ಜೊತೆ ನೆಲ್ಯಾಡಿ ಭಾಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಸುದೀಪ್ ಕಾರಿಗೆ ಅಡ್ಡಗಟ್ಟಿದ್ದ ಸೌಮ್ಯ ಶೆಟ್ಟಿ ಅವಾಚ್ಯ ಶಬ್ದಗಳಿಂದ ಅವರಿಗೆ ನಿಂದಿಸಿ ಬೆದರಿಕೆ ಹಾಕಿದ್ದಾಳೆಂದು ಸೌಮ್ಯ ಶೆಟ್ಟಿ ಅತ್ತೆ ಮಾವ ಆರೋಪಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹೋರ್ಮುಜ್ ತೆರೆಯಲು ಜಲಬಾಂಬ್ ಅಡ್ಡಿ: ತಾನೇ ಹೂತಿಟ್ಟ ಬಾಂಬ್ ಎಲ್ಲಿದೆ ಎಂದು ಇರಾನ್&zwnj;ಗೆ ಗೊತ್ತಿಲ್ಲ&lt;/strong&gt;&lt;/p&gt;&lt;p&gt;ಆ ಬಳಿಕ ಮಾ.22ರಂದು ಸುದೀಪ್ ವಿಷ ಪದಾರ್ಥ ಸೇವಿಸಿರುವುದಾಗಿ ಸೌಮ್ಯ ಶೆಟ್ಟಿ ಸುದೀಪ್ ರೈ ಸಂಬಂಧಿಕರಿಗೆ ಕರೆ ಮಾಡಿ ಹೇಳಿದ್ದಳು. ನಂತರ ಸುದೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಚ್ 29ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುದೀಪ್ ರೈ ಮೃತಪಟ್ಟಿದ್ದರು. ಹೀಗಾಗಿ ಸುದೀಪ್ ರೈ ತಂದೆ ಸೊಸೆ ಸೌಮ್ಯ ಶೆಟ್ಟಿ ವಿರುದ್ಧ ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಕಾರ್ಕಳ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಈಗ ಸೌಮ್ಯ ಶೆಟ್ಟಿಯನ್ನು ಬಂಧಿಸಿದ್ದು, ಪ್ರಾಥಮಿಕ ತನಿಖೆ ನಡೆಸಿ ಸಾಕ್ಷ್ಯ ಪುರಾವೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Anusha Kb</dc:creator>
            <atom:link href="https://kannada.asianetnews.com/relationship/udupi-husband-sudeep-rai-death-case-actress-soumya-shetty-arrested/articleshow-3cwm5e2"/>
        </item>
        <item>
            <title><![CDATA[ಉಡುಪಿ: ಸಾಸ್ತಾನ ಯುವಕನ ಅಪಹರಣ ಪ್ರಕರಣ, ಪ್ರಮುಖ ಆರೋಪಿಗಳ ಪತ್ತೆಗೆ 50,000 ಬಹುಮಾನ ಘೋಷಣೆ]]></title>
            <link>https://kannada.asianetnews.com/karnataka-districts/udupi-kidnapping-case-7-arrested-under-kcoca-50000-reward-announced-for-absconding-accused-gdp/articleshow-4ro3mkg</link>
            <guid isPermaLink="true">https://kannada.asianetnews.com/karnataka-districts/udupi-kidnapping-case-7-arrested-under-kcoca-50000-reward-announced-for-absconding-accused-gdp/articleshow-4ro3mkg</guid>
            <pubDate>Thu, 02 Apr 2026 12:57:38 +0530</pubDate>
            <description><![CDATA[ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಡೆದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ್ ಕೋಡಿಕೆರೆ ಮತ್ತು ಚೇತನ್ ಕುಲಾಲ್ ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸರು ₹50,000 ಬಹುಮಾನ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn6h8q3dcecxf04rvwhc03g0,imgname-udupi-kidnapping-case-1775114673261.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಕೋಕಾ (KCOCA) ಕಾಯ್ದೆಯಡಿ ಪ್ರಕರಣ ದಾಖಲಿಸಿ ಈಗಾಗಲೇ ಏಳು ಮಂದಿಯನ್ನು ಬಂಧಿಸಿದ್ದಾರೆ. ಇದೇ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜೊತೆಗೆ ಇವರ ಪತ್ತೆಗೆ ₹50,000 ಬಹುಮಾನವನ್ನು ಸಹ ಘೋಷಿಸಲಾಗಿದೆ.&lt;/p&gt;&lt;h2&gt;ಬಂಧಿತ ಆರೋಪಿಗಳ ವಿವರ&lt;/h2&gt;&lt;p&gt;ಈ ಪ್ರಕರಣದಲ್ಲಿ ಬಂಧಿತರಾದವರು ಸುರತ್ಕಲ್ ಕಾಟಿಪಳ್ಳದ ದೇವಿಪ್ರಸಾದ್ ಶೆಟ್ಟಿ (33), ಸುದೀಪ್ (22), ಮಿಥುನ್ ಕೈಕಂಬ (20), ಕೃಷ್ಣಾಪುರದ ಶ್ರೀಷಾ ಆನಂದ ಶೆಟ್ಟಿ (35), ಹಿರಿಯಡ್ಕ ಅಂಜಾರು ಗ್ರಾಮದ ಸುಜಿತ್ (27), ಕೆಮ್ಮಣ್ಣು ಗ್ರಾಮ ಪಡುಕುದ್ರುವಿನ ಸುಹಾಸ್ (31) ಹಾಗೂ ಕೆಮ್ಮಣ್ಣು ಹೂಡೆಯ ಮನೋಜ್ ವಿ. ಕೋಟ್ಯಾನ್ (34) ಆಗಿದ್ದಾರೆ. ಈ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;h2&gt;ಪ್ರಮುಖ ಆರೋಪಿಗಳು ಇನ್ನೂ ನಾಪತ್ತೆ&lt;/h2&gt;&lt;p&gt;ಪ್ರಕರಣದ ಪ್ರಮುಖ ಆರೋಪಿಗಳಾದ ಮಂಗಳೂರು ಜೋಕಟ್ಟೆಯ ಮನೋಜ್ ಕೋಡಿಕೆರೆ (42) ಹಾಗೂ ಬಂಟ್ವಾಳ ತಾಲೂಕಿನ ಪಡು ರೊಟ್ಟಿಗುಡಿಯ ಚೇತನ್ ಕುಲಾಲ್ (38) ಘಟನೆ ಬಳಿಕದಿಂದಲೇ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗೆ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ಬಲೆ ಬೀಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.&lt;/p&gt;&lt;h2&gt;ಅಪಹರಣದ ಹಿನ್ನೆಲೆ&lt;/h2&gt;&lt;p&gt;2025ರ ನವೆಂಬರ್ 19ರಂದು ನಡೆದ ಈ ಘಟನೆದಲ್ಲಿ ಸಿದ್ದಾಪುರ ನಿವಾಸಿ ಮೋಹನ ದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಅವರನ್ನು ಅಪಹರಿಸಲಾಗಿತ್ತು. ಅಪಹರಣವು ಪ್ರಮುಖ ಆರೋಪಿ ಮನೋಜ್ ಕೋಡಿಕೆರೆ ಸೂಚನೆಯಂತೆ ನಡೆದಿದ್ದು, ಆರೋಪಿಗಳು ಕೋಟ್ಯಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;ಬಹುಮಾನ ಘೋಷಣೆ&lt;/h2&gt;&lt;p&gt;ಪ್ರಮುಖ ಆರೋಪಿಗಳು ಇನ್ನೂ ನಾಪತ್ತೆಯಾಗಿರುವ ಹಿನ್ನೆಲೆ, ಇವರ ಪತ್ತೆಗೆ ಸಹಾಯ ಮಾಡುವವರಿಗೆ ₹50,000 ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿದೆ. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ನೀಡುವವರು ತಕ್ಷಣವೇ ಪೊಲೀಸರಿಗೆ ತಿಳಿಸಲು ಮನವಿ ಮಾಡಲಾಗಿದೆ.&lt;/p&gt;&lt;h2&gt;ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು&lt;/h2&gt;&lt;p&gt;ಮನೋಜ್ ಕೋಡಿಕೆರೆ ವಿರುದ್ಧ ಮಂಗಳೂರು ನಗರದಲ್ಲಿ 18 ಹಾಗೂ ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಚೇತನ್ ಕುಲಾಲ್ ವಿರುದ್ಧ ಮಂಗಳೂರು ನಗರದಲ್ಲಿ 11 ಹಾಗೂ ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಇವರಿಬ್ಬರೂ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರೆಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಸಾರ್ವಜನಿಕರಿಗೆ ಮನವಿ&lt;/h2&gt;&lt;p&gt;ಈ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ಮೊಬೈಲ್ ಸಂಖ್ಯೆ 9480805422 ಗೆ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.&lt;/p&gt;&lt;h2&gt;ತನಿಖೆ ಮುಂದುವರಿಕೆ&lt;/h2&gt;&lt;p&gt;ಒಟ್ಟಾರೆ, ಈ ಅಪಹರಣ ಪ್ರಕರಣವು ಉಡುಪಿ ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದರೆ, ಈಗ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದರಿಂದ ಪ್ರಕರಣ ಗಂಭೀರತೆ ಹೆಚ್ಚಾಗಿದೆ. ಪ್ರಮುಖ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/udupi-kidnapping-case-7-arrested-under-kcoca-50000-reward-announced-for-absconding-accused-gdp/articleshow-4ro3mkg"/>
        </item>
        <item>
            <title><![CDATA[ಭಾರತದಲ್ಲಿ ಆಭರಣ ರಫ್ತಿಗೆ ವಿಫುಲ ಅವಕಾಶ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್]]></title>
            <link>https://kannada.asianetnews.com/karnataka-districts/udupi-iigj-jewellery-training-export-demand-nirmala-sitharaman-gvd/articleshow-5cu3tdb</link>
            <guid isPermaLink="true">https://kannada.asianetnews.com/karnataka-districts/udupi-iigj-jewellery-training-export-demand-nirmala-sitharaman-gvd/articleshow-5cu3tdb</guid>
            <pubDate>Wed, 29 Apr 2026 22:25:30 +0530</pubDate>
            <description><![CDATA[&lt;p&gt;ಭಾರತದಲ್ಲಿ ತಯಾರಾದ ಪಾರಂಪರಿಕ ಶೈಲಿಯ ರತ್ನಾಭರಣಗಳಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಭಾರತದಿಂದ ರತ್ನಾಭರಣ ರಪ್ತಿಗೂ ವಿಫುಲ ಅವಕಾಶಗಳಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg7019j9erdad87vqqmr8b9m,imgname-budget-2026-longest-shortest-budget-speech-nirmala-sitharaman-manmohan-02-1769761449545.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಏ.29):&lt;/strong&gt; ಭಾರತದಲ್ಲಿ ತಯಾರಾದ ಪಾರಂಪರಿಕ ಶೈಲಿಯ ರತ್ನಾಭರಣಗಳಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಭಾರತದಿಂದ ರತ್ನಾಭರಣ ರಪ್ತಿಗೂ ವಿಫುಲ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಯುವಜನತೆಗೆ ಆಭರಣ ತಯಾರಿಕೆಗೆ ತರಬೇತಿ ನೀಡುವುದಕ್ಕಾಗಿ ಉಡುಪಿಯೂ ಸೇರಿದಂತೆ ದೇಶದ 5 ಕಡೆಗಳಲ್ಲಿ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ)ಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.&lt;/p&gt;&lt;p&gt;ಭಾರತದಲ್ಲಿರುವ 5 ಐಐಜಿಜೆಗಳಲ್ಲಿ ಉಡುಪಿಯ ಕೇಂದ್ರವು 4ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ಉದ್ಯಮಾಧಾರಿತ ಕೌಶಲ್ಯ ತರಬೇತಿ ಯೋಜನೆಯು ದಕ್ಷಿಣ ಭಾರತದಾದ್ಯಂತ ಯುವಕರಿಗೆ ಜೀವನವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದಕ್ಕೆ ಉಡುಪಿ ಐಐಜಿಜೆ ಅತ್ಯಂತ ಪ್ರಶಸ್ತ ಉದಾಹರಣೆಯಾಗಿದೆ. ಉಡುಪಿಯಂತಹ ಚಿಕ್ಕ ಪಟ್ಟಣದಲ್ಲಿರುವ ಈ ಸಂಸ್ಥೆಯು ಕರ್ನಾಟಕ, ಕೇರಳ, ತಮಿಳುನಾಡಿನ ವಿದ್ಯಾರ್ಥಿಗಳನ್ನು ಇಲ್ಲಿಗೆ ಆಕರ್ಷಿಸುತ್ತಿದೆ. ಕಳೆದೊಂದು ವರ್ಷದಲ್ಲಿ ಈ ಕೇಂದ್ರವು 600ಕ್ಕೂ ಹೆಚ್ಚು ಯುವಕರಿಗೆ ಚಿನ್ನಾಭರಣ ತಯಾರಿಕೆಯ ತರಬೇತಿ ನೀಡಿದೆ.&lt;/p&gt;&lt;p&gt;ಅವರಲ್ಲಿ ಅನೇಕ ಮಂದಿ ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದರೆ, ಸಾಕಷ್ಟು ಮಂದಿ ಸ್ವಂತ ವ್ಯವಹಾರವನ್ನೂ ಆರಂಭಿಸಿದ್ದಾರೆ ಎಂಬುದೇ ಈ ಕೇಂದ್ರದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು. ರತ್ನಗಿರಿಯಿಂದ ತಿರುವಂತನಪುರದವರೆಗಿನ ಪಶ್ಚಿಮ ಕರಾವಳಿಯಲ್ಲಿ ಆಭರಣ ತಯಾರಿ ಒಂದು ಕಲೆಯಾಗಿ ಗುರುತಿಸಲ್ಪಡುತ್ತದೆ. ಇಲ್ಲಿನ ಆಭರಣಗಳಿಗೆ ಅಮೆರಿಕದಂತಹ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದಲೇ ಉಡುಪಿಯ ಐಐಜಿಜೆ ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಕೇಂದ್ರವಾಗಿ ರೂಪುಗೊಳ್ಳುತ್ತದೆ ಎಂದು ಅವರು ಹೇಳಿದರು.&lt;/p&gt;&lt;p&gt;ರತ್ನ ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿ (ಜಿಜೆಇಪಿಸಿ) ಅಧ್ಯಕ್ಷ ಕಿರಿಟ್ ಬನ್ಸಾಲಿ, ದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಐಐಜಿಜೆ ಕೇಂದ್ರಗಳು ಇದುವರೆಗೆ 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿವೆ ಮತ್ತು ಭಾರತೀಯ ಆಭರಣ ಉದ್ಯಮಕ್ಕೆ ಅತ್ಯಂತ ಪ್ರತಿಭಾನ್ವಿತ ಕುಶಲಕರ್ಮಿಗಳನ್ನು ನೀಡಿದೆ. ಇಂದು ಭಾರತೀಯ ರತ್ನ ಮತ್ತು ಆಭರಣ ರಪ್ಥು ಉದ್ಯಮವು 28 ಶತಕೋಟಿ ಡಾಲರ್ ವ್ಯವಹಾರ ನಡೆಸುತ್ತಿದೆ ಮತ್ತು 5 ಕೋಟಿಗಿಂತಲೂ ಹೆಚ್ಚು ಜನರ ಜೀವನೋಪಾಯಕ್ಕೆ ಸಹಕಾರಿಯಾಗಿದೆ ಎಂದರು.&lt;/p&gt;&lt;p&gt;ಕೇಂದ್ರ ಸರ್ಕಾರದ ವಿಕಸಿತ್ ಭಾರತ್ 2047ರ ದೃಷ್ಟಿಕೋನವನ್ನು ಹೊಂದಿರುವ ಭಾರತೀಯ ರತ್ನ ಮತ್ತು ಆಭರಣ ರಫ್ತನ್ನು 100 ಶತಕೋಟಿ ಡಾಲರ್ ಗೆ ಮುಟ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಇದೇ ಸಂದರ್ಭ ಉಡುಪಿಯ ಐಐಜಿಜೆಯ 5 ಮಂದಿ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿಗಳನ್ನು ಮತ್ತು 3 ಮಂದಿ ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದ ಅತ್ಯುತ್ತಮ ಫಲಾನುಭವಿಗಳನ್ನು ಅಭಿನಂದಿಸಲಾಯಿತು.&lt;/p&gt;&lt;h2&gt;&lt;strong&gt;ಐಐಜಿಜೆ- ಐಐಟಿ-ಎಂ ನಡುವೆ ಒಪ್ಪಂದ&lt;/strong&gt;&lt;/h2&gt;&lt;p&gt;ಈ ಕಾರ್&zwj;ಯಕ್ರಮದಲ್ಲಿ ಭಾರತೀಯ ರತ್ನಗಳು ಮತ್ತು ಆಭರಣ ಸಂಸ್ಥೆ (ಐಐಜಿಜೆ) ಮತ್ತು ಐಐಟಿ ಮದ್ರಾಸ್ (ಐಐಟಿ-ಎಂ) ನಡುವೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು. ಇದು ಪ್ರಯೋಗಾಲಯದಲ್ಲಿ ವಜ್ರಗಳನ್ನು ಸೃಷ್ಟಿಸುವ ತಂತ್ರಜ್ಞಾನ ಮತ್ತು ಪ್ರಮಾಣೀಕರಣ ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾದ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಯೋಗಾಲಯದಲ್ಲಿ ವಜ್ರ ಬೆಳೆಸುವ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಕಟಿಸಲಾಗಿದೆ.&lt;/p&gt;]]></content:encoded>
            <category>udupi</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/udupi-iigj-jewellery-training-export-demand-nirmala-sitharaman-gvd/articleshow-5cu3tdb"/>
        </item>
        <item>
            <title><![CDATA[ಇಂಗ್ಲೆಂಡ್‌ ಫ್ಲೀಟ್ ನಗರಸಭೆ ಚುನಾವಣೆ: ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಹ್ಯಾಟ್ರಿಕ್ ಜಯ]]></title>
            <link>https://kannada.asianetnews.com/state/nri-kannadiga-kumar-kuntikanamata-wins-consecutive-election-in-england-fleet-town-council-gdp/articleshow-5rat1cw</link>
            <guid isPermaLink="true">https://kannada.asianetnews.com/state/nri-kannadiga-kumar-kuntikanamata-wins-consecutive-election-in-england-fleet-town-council-gdp/articleshow-5rat1cw</guid>
            <pubDate>Tue, 12 May 2026 21:31:49 +0530</pubDate>
            <description><![CDATA[ಇಂಗ್ಲೆಂಡ್&zwnj;ನ ಫ್ಲೀಟ್ ನಗರಸಭೆ ಚುನಾವಣೆಯಲ್ಲಿ ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಸತತ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದಾರೆ. ಮೂಲತಃ ಕಾಸರಗೋಡಿನವರಾದ ಅವರು, ಫಾರ್ಮಾ ಸಂಶೋಧನೆ, ಭಾರತ-ಯುಕೆ ವಾಣಿಜ್ಯ ಸಂಬಂಧ ಹಾಗೂ ಕನ್ನಡ ಸಂಸ್ಕೃತಿ ಪ್ರಸಾರದಲ್ಲಿಯೂ ಸಕ್ರಿಯರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kreehzn3yvmvkrt9aqgd2eg0,imgname-nri-kannadiga-kumar-kuntikanamata-1778601492131.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಇಂಗ್ಲೆಂಡ್&zwnj;ನ ಹ್ಯಾಂಪ್&zwnj;ಶೈರ್ ಕೌಂಟಿಯ ಫ್ಲೀಟ್ ನಗರಸಭೆ ಚುನಾವಣೆಯಲ್ಲಿ ಅನಿವಾಸಿ ಕನ್ನಡಿಗ ಕುಮಾರ್ ಕುಂಟಿಕಾನಮಠ ಸತತ ಮೂರನೇ ಬಾರಿ ಭರ್ಜರಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಅವರು ಸ್ಥಳೀಯ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಬಲಿಷ್ಠ ಸ್ಥಾನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.&lt;/p&gt;&lt;h2&gt;ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಅನುಭವ&lt;/h2&gt;&lt;p&gt;ಅವರು ಜಾಗತಿಕ ಫಾರ್ಮಾಸ್ಯೂಟಿಕಲ್ ಮತ್ತು ಕ್ಲಿನಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಯುನೈಟೆಡ್ ಕಿಂಗ್&zwnj;ಡಮ್, ಭಾರತ, ಮಧ್ಯಪ್ರಾಚ್ಯ ಮತ್ತು ಅಮೆರಿಕಾದಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಬ್ರಿಟನ್&zwnj;ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. 2001ರಲ್ಲೇ ಯೋಗ ಮತ್ತು ಆಯುರ್ವೇದ ಕುರಿತ ಕ್ಲಿನಿಕಲ್ ಸಂಶೋಧನೆ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಡಕೆಯ ಕ್ಯಾನ್ಸರ್ ಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮಹತ್ವದ ಅಧ್ಯಯನಗಳನ್ನು ಕೈಗೊಂಡಿದ್ದಾರೆ.&lt;/p&gt;&lt;p&gt;ಬ್ರಿಟಿಷ್ ಸಂಸತ್ತಿನಲ್ಲಿ ಭಾರತ-ಯುಕೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕುಮಾರ್ ಅವರು ಸಕ್ರಿಯ ಪಾತ್ರವಹಿಸಿದ್ದಾರೆ. ಸೌತ್&zwnj;ಹಾಲ್&zwnj;ನ ಮಾಜಿ ಸಂಸದ ವೀರೇಂದ್ರ ಶರ್ಮಾ ಸೇರಿದಂತೆ ಗಣ್ಯರೊಂದಿಗೆ &lsquo;ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್&rsquo; ಸಂಸ್ಥೆಯನ್ನು ಸ್ಥಾಪಿಸಿದ್ದು, ಸಂಸತ್ತಿನ ಆವರಣದಲ್ಲಿ ಆಯೋಜಿಸಿದ ಉದ್ಯಮ ಸಭೆಗಳಲ್ಲಿ ಮಾಜಿ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ನಾಯಕರು ಮತ್ತು ಜಾಗತಿಕ ಹೂಡಿಕೆದಾರರು ಭಾಗವಹಿಸಿದ್ದಾರೆ.&lt;/p&gt;&lt;h2&gt;ಕಾಸರಗೋಡಿನ ಕುಂಟಿಕಾನಮಠದವರು&lt;/h2&gt;&lt;p&gt;ಮೂಲತಃ ಕಾಸರಗೋಡಿನ ಕುಂಟಿಕಾನಮಠದ ಕುಮಾರ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಬಿ.ಫಾರ್ಮಾ ಪದವಿ ಪಡೆದು, ನಂತರ ಲಂಡನ್&zwnj;ನಲ್ಲಿ ಎಂ.ಬಿ.ಎ ಪೂರ್ಣಗೊಳಿಸಿದ್ದಾರೆ. ಯುಕೆಯ ಅರಸ್ ಮಾರ್ಕೆಟಿಂಗ್ ಲಿಮಿಟೆಡ್ ಹಾಗೂ ಅಮೆರಿಕದ ಅರಸ್ ಮಾರ್ಕೆಟಿಂಗ್ ಎಲ್&zwnj;ಎಲ್&zwnj;ಸಿ&rsquo; ಸಂಸ್ಥೆಗಳ ನಿರ್ದೇಶಕರಾಗಿದ್ದು, &lsquo;Ondudo&rsquo; ಎಂಬ ಎಡ್-ಟೆಕ್ ವೇದಿಕೆಯ ಹಾಗೂ ಸೌತ್&zwnj;ಹಾಲ್&zwnj;ನ ಮಾಜಿ ಸಂಸದ ವೀರೇಂದ್ರ ಶರ್ಮಾ ಸೇರಿದಂತೆ ಗಣ್ಯರೊಂದಿಗೆ &lsquo;ಬ್ರಿಟಿಷ್ ಸೌತ್ ಇಂಡಿಯಾ ಕೌನ್ಸಿಲ್ ಆಫ್ ಕಾಮರ್ಸ್&rsquo; ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.&lt;/p&gt;&lt;p&gt;ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ಅವರ ಪುತ್ರರಾಗಿರುವ ಅವರು, 500 ವರ್ಷಗಳ ಇತಿಹಾಸವಿರುವ ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಆರಾಧನೆ, ಜೀರ್ಣೋದ್ಧಾರ, ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಆರ್ಯಭಟ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಮಂತ್ರಾಲಯ ಪರಿಮಳ ಪ್ರಶಸ್ತಿ ದೊರೆತಿವೆ. ಜೊತೆಗೆ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು, ಯೂರೋಪಿನಾದ್ಯಂತ ಕನ್ನಡ ಸಂಸ್ಕೃತಿಯನ್ನು ಹರಡುತ್ತಿದ್ದಾರೆ.&lt;/p&gt;&lt;p&gt;ಫಾರ್ಮಾ ಉದ್ಯಮ, ವ್ಯವಸ್ಥಾಪನಾ ಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯ ವಿಷಯಗಳ ಕುರಿತು &lsquo;ಕನ್ನಡಪ್ರಭ&rsquo; ಪತ್ರಿಕೆಯಲ್ಲಿ 70ಕ್ಕೂ ಹೆಚ್ಚು ಲೇಖನಗಳನ್ನು ಬರೆದು ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫಾರ್ಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ವಿಶ್ವ ಫಾರ್ಮಾಸಿಸ್ಟ್ ದಿನದಂದು ಮೈಸೂರಿನ ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನಲ್ಲಿ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಸೋಸಿಯೇಷನ್ ವತಿಯಿಂದ ಕುಮಾರ್ ಕುಂಟಿಕಾನಮಠ ಅವರನ್ನು ಗೌರವಿಸಲಾಗಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/state/nri-kannadiga-kumar-kuntikanamata-wins-consecutive-election-in-england-fleet-town-council-gdp/articleshow-5rat1cw"/>
        </item>
        <item>
            <title><![CDATA[ವಾರಾಹಿ ಕಾಲುವೆಗೆ ಬಿದ್ದಿದ್ದ ಬೃಹತ್ ಕಾಡುಕೋಣ: 20 ಗಂಟೆಗಳ ಭೀಕರ ಹೋರಾಟದ ನಂತರ ಜೀವರಕ್ಷಣೆ!]]></title>
            <link>https://kannada.asianetnews.com/karnataka-districts/udupi-kundapura-bison-rescued-from-varahi-canal-asodu-village-sat/articleshow-5yy37v6</link>
            <guid isPermaLink="true">https://kannada.asianetnews.com/karnataka-districts/udupi-kundapura-bison-rescued-from-varahi-canal-asodu-village-sat/articleshow-5yy37v6</guid>
            <pubDate>Sun, 26 Apr 2026 11:35:35 +0530</pubDate>
            <description><![CDATA[ಉಡುಪಿಯ ಕುಂದಾಪುರ ಬಳಿ ವಾರಾಹಿ ಕಾಲುವೆಗೆ ಬಿದ್ದಿದ್ದ ಬೃಹತ್ ಕಾಡುಕೋಣವನ್ನು, ಅರಣ್ಯ ಇಲಾಖೆ ಮತ್ತು ಸ್ಥಳೀಯರು ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಜೆಸಿಬಿ ಬಳಸಿ ಮಣ್ಣಿನ ಇಳಿಜಾರು ನಿರ್ಮಿಸಿ, ಪ್ರಾಣಿಯನ್ನು ಸುರಕ್ಷಿತವಾಗಿ ಕಾಡಿಗೆ ಮರಳುವಂತೆ ಮಾಡಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kq4673kbbqpmmkev84bcnhs5,imgname-kundapura-bison-rescued-1777183460971.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಏ.26): ಉ&lt;/strong&gt;ಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸೋಡು ಗ್ರಾಮದಲ್ಲಿ ಹದಿನೈದು ಅಡಿ ಆಳದ ವಾರಾಹಿ ಕಾಲುವೆಗೆ ಬಿದ್ದಿದ್ದ ಬೃಹತ್ ಗಾತ್ರದ ಕಾಡುಕೋಣವೊಂದನ್ನು ಸತತ 20 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಯಶಸ್ವಿಯಾಗಿ ರಕ್ಷಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮೂಕ ಪ್ರಾಣಿಯೊಂದು ಸಾವಿನ ದವಡೆಯಿಂದ ಪಾರಾಗಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಅಸೋಡು ಗ್ರಾಮದ ಶ್ರೀಕುಮಾರ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ವಾರಾಹಿ ಕಾಲುವೆಗೆ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಈ ಕಾಡುಕೋಣ ಆಕಸ್ಮಿಕವಾಗಿ ಬಿದ್ದಿತ್ತು. ಕಾಡಿನಿಂದ ನಾಡಿನತ್ತ ಆಹಾರ ಮತ್ತು ನೀರು ಅರಸಿಕೊಂಡು ಬಂದಿದ್ದ ಕಾಡುಕೋಣ, ಕಾಲುವೆಯ ಪಾರ್ಶ್ವ ಗೋಡೆಗಳ ಎತ್ತರ ಅರಿಯದೆ ಒಳಕ್ಕೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;h2&gt;&lt;strong&gt;ರಾತ್ರಿಯಿಡೀ ಕಾಲುವೆಯಲ್ಲೇ ಕಳೆದ ಪ್ರಾಣಿ:&lt;/strong&gt;&lt;/h2&gt;&lt;p&gt;ಕಾಲುವೆಯ ಪಾರ್ಶ್ವ ಗೋಡೆಗಳು ಕಡಿದಾಗಿದ್ದರಿಂದ ಕಾಡುಕೋಣಕ್ಕೆ ತನ್ನಷ್ಟಕ್ಕೆ ತಾನೇ ಮೇಲೆ ಬರಲು ಸಾಧ್ಯವಾಗಲಿಲ್ಲ. ಶುಕ್ರವಾರ ರಾತ್ರಿಯಿಡೀ ಕಾಲುವೆಯ ನೀರು ಮತ್ತು ಕತ್ತಲಲ್ಲೇ ಕಾಲ ಕಳೆದ ಪ್ರಾಣಿ, ಮೇಲೆ ಬರಲು ಹರಸಾಹಸ ಪಟ್ಟಿತ್ತು. ವಿಷಯ ತಿಳಿದ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.&lt;/p&gt;&lt;h3&gt;&lt;strong&gt;ರಕ್ಷಣಾ ಕಾರ್ಯಾಚರಣೆಯ ಹಂತಗಳು:&lt;/strong&gt;&lt;/h3&gt;&lt;p&gt;ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ರೂಪಿಸಿದರು. ಆರಂಭದಲ್ಲಿ ಪ್ರಾಣಿಯನ್ನು ಮೇಲಕ್ಕೆತ್ತುವುದು ಸವಾಲಾಗಿತ್ತು. ಹೀಗಾಗಿ, ಶನಿವಾರ ಬೆಳಿಗ್ಗೆ ಕಾಲುವೆಯ ಒಂದು ಭಾಗಕ್ಕೆ ಜೆಸಿಬಿ ಮೂಲಕ ಮಣ್ಣು ತುಂಬಿಸಿ ಇಳಿಜಾರು (Slope) ನಿರ್ಮಿಸಲಾಯಿತು. ಈ ಇಳಿಜಾರಿನ ಮೂಲಕ ಕಾಡುಕೋಣ ಸುಲಭವಾಗಿ ಮೇಲೆ ಬರಲು ದಾರಿ ಮಾಡಿಕೊಡಲಾಯಿತು.&lt;/p&gt;&lt;p&gt;ನಂತರ ಹಗ್ಗಗಳ ಸಹಕಾರ ಹಾಗೂ ಜೆಸಿಬಿ ನೆರವಿನಿಂದ ಕಾಡುಕೋಣವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಬರೋಬ್ಬರಿ 20 ಗಂಟೆಗಳ ಕಾಲ ಕಾಲುವೆಯಲ್ಲಿದ್ದ ಕಾಡುಕೋಣ ಮೇಲೆ ಬರುತ್ತಿದ್ದಂತೆಯೇ ಕಾಡಿನತ್ತ ಓಡಿ ಹೋಗಿದೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಜೆಸಿಬಿ ಚಾಲಕರು ಮತ್ತು ಅಸೋಡು ಗ್ರಾಮದ ನೂರಾರು ಸ್ಥಳೀಯರು ಕೈಜೋಡಿಸಿದ್ದರು.&lt;/p&gt;&lt;h3&gt;&lt;strong&gt;ಹೆಚ್ಚಿದ ವನ್ಯಜೀವಿಗಳ ದಾಳಿ ಭೀತಿ:&lt;/strong&gt;&lt;/h3&gt;&lt;p&gt;ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಕಾಡಿನಲ್ಲಿ ನೀರಿನ ಮೂಲಗಳು ಬತ್ತುತ್ತಿವೆ. ಈ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ನಾಡಿನತ್ತ ವಲಸೆ ಬರುತ್ತಿವೆ. ಸರ್ಕಾರ ಈ ಭಾಗದ ಕಾಲುವೆಗಳಿಗೆ ಪ್ರಾಣಿಗಳು ಬೀಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಡೆಬೇಲಿ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸದ್ಯ ಕಾಡುಕೋಣ ಪ್ರಾಣಾಪಾಯದಿಂದ ಪಾರಾಗಿರುವುದು ಗ್ರಾಮಸ್ಥರಲ್ಲಿ ಸಮಾಧಾನ ತಂದಿದೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/udupi-kundapura-bison-rescued-from-varahi-canal-asodu-village-sat/articleshow-5yy37v6"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್‌ ಎಕ್ಸ್‌ಪ್ರೆಸ್‌ ರೈಲು ಸಮಯ ಬದಲಾವಣೆಗೆ ಪಟ್ಟುಹಿಡಿದ ರೈಲ್ವೆ ಇಲಾಖೆ! ವ್ಯಾಪಕ ವಿರೋಧ]]></title>
            <link>https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3</link>
            <guid isPermaLink="true">https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3</guid>
            <pubDate>Thu, 02 Apr 2026 13:29:30 +0530</pubDate>
            <description><![CDATA[&lt;p&gt;ವರದಿ: ಆತ್ಮಭೂಷಣ್&zwnj;&lt;/p&gt;&lt;p&gt;ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ &amp;nbsp;ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjahh9kxjarta3ta7zt9a5vx,imgname-panchaganga-express-1772027946621.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಆತ್ಮಭೂಷಣ್&zwnj;&lt;/p&gt;&lt;p&gt;ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ &amp;nbsp;ಎಂದಿದೆ.&lt;/p&gt;&lt;img&gt;&lt;p&gt;ಮಂಗಳೂರು: ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ(16511) ಸಮಯವನ್ನು ವಿಳಂಬಿಸಲು ಹೊರಟಿರುವ ನೈಋತ್ಯ ರೈಲ್ವೆ ಪ್ರಸ್ತಾಪಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ವಿರುದ್ಧ ಜಾಲತಾಣಗಳಲ್ಲಿ ಅಭಿಯಾನವನ್ನೇ ನಡೆಸುತ್ತಿವೆ.&lt;/p&gt;&lt;p&gt;ಪ್ರಸಕ್ತ ಬೆಂಗಳೂರು-ಕೋಯಿಕ್ಕೋಡ್&zwnj; ರೈಲು ಬೆಳಗ್ಗೆ 7.15ಕ್ಕೆ ಮಂಗಳೂರು ಸೆಂಟ್ರಲ್&zwnj; ತಲುಪುತ್ತಿದೆ. ಇದರ ಸಮಯ ಬದಲಾಯಿಸಿದರೆ ಮಂಗಳೂರು ತಲುಪುವ ಸಮಯ 8 ಗಂಟೆ ಆಗಲಿದೆ. ಮಾತ್ರವಲ್ಲ ಬೆಂಗಳೂರು-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ರೈಲು ಕೂಡ ವಿಳಂಬವಾಗಿಯೇ ಮಂಗಳೂರಿಗೆ ಆಗಮಿಸಬೇಕಾಗುತ್ತದೆ. ಇದರಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವವರು ಬೇಗನೆ ಮನೆಗೆ ತಲುಪಿ ಉದ್ಯೋಗಕ್ಕೆ ತೆರಳಲು ಅನಾನುಕೂಲವಾಗಲಿದೆ ಎಂಬುದು ರೈಲ್ವೆ ಸಂಘಟನೆಗಳ ಅಭಿಪ್ರಾಯ.&lt;/p&gt;&lt;img&gt;&lt;p&gt;ಕಳೆದ ಎರಡು ತಿಂಗಳಿಂದ ಬೆಂಗಳೂರು-ಮಂಗಳೂರು ನಡುವಿನ ರಾತ್ರಿ ರೈಲುಗಳು ಗಮ್ಯ ಸ್ಥಾನ ತಲುಪುವಾಗ ನಿತ್ಯವೂ ವಿಳಂಬವಾಗುತ್ತಿದೆ. ಈ ಬಗ್ಗೆ ರೈಲ್ವೆ ಇಲಾಖೆ, ಸಂಸದರ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಕ್ರಾಸಿಂಗ್&zwnj; ವಿಚಾರದಲ್ಲಿ ದಿನಪ್ರಂತಿ 30 ನಿಮಿಷದಿಂದ 1 ಗಂಟೆಗಳ ಕಾಲ ವಿಳಂಬವಾಗಿ ತಲುಪುವುದನ್ನು ಪ್ರಯಾಣಿಕರು ಅನಿವಾರ್ಯವಾಗಿ ಸಹಿಸಲೇ ಬೇಕಾಗಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.&lt;/p&gt;&lt;img&gt;&lt;p&gt;ಬೆಂಗಳೂರು-ಕಾರವಾರ ನಡುವಿನ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj; ರೈಲಿಗೆ ಈ ಹಿಂದೆ 14 ಕೋಚ್&zwnj; ಇತ್ತು. ಆಗ ಸಿರಿಬಾಗಿಲಿನಲ್ಲಿ ಮಧ್ಯರಾತ್ರಿ ಕ್ರಾಸಿಂಗ್&zwnj;ಗೆ ನಿಲ್ಲಿಸಲಾಗುತ್ತಿತ್ತು. ಪ್ರಸಕ್ತ ಈ ರೈಲು 19 ಕೋಚ್&zwnj;ಗಳಲ್ಲಿ ಸಂಚರಿಸುತ್ತಿದೆ. 14ಕ್ಕಿಂತ ಜಾಸ್ತಿ ಕೋಚ್&zwnj; ಇದ್ದರೆ ಸಿರಿಬಾಗಿಲಿನಲ್ಲಿ ಕ್ರಾಸಿಂಗ್&zwnj;ಗೆ ಅವಕಾಶ ಇಲ್ಲ, ಬದಲು ಸುಬ್ರಹ್ಮಣ್ಯ ಮಾರ್ಗದಲ್ಲಿ ಕ್ರಾಸಿಂಗ್&zwnj;ಗೆ ನಿಲ್ಲಿಸಲಾಗುತ್ತಿದೆ. ಹೀಗಾಗಿ ಉಳಿದ ರೈಲುಗಳು ವಿಳಂಬವಾಗಿ ಸಂಚರಿಸುವಂತಾಗಿದೆ. ಇದೇ ಕಾರಣ ಮುಂದಿಟ್ಟುಕೊಂಡು ರೈಲ್ವೆ ಇಲಾಖೆ ಉಳಿದ ರೈಲುಗಳ ಸಂಚಾರವನ್ನು ತುಸು ವಿಳಂಬಿಸಲು ಮುಂದಾಗಿದೆ. ಕೋಯಿಕ್ಕೋಡ್&zwnj; ರೈಲಿನ ವೇಳಾಪಟ್ಟಿ ಬದಲಾಯಿಸುವಂತೆ ದಕ್ಷಿಣ ರೈಲ್ವೆಗೆ ನೈಋತ್ಯ ರೈಲ್ವೆ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ&lt;/p&gt;&lt;img&gt;&lt;p&gt;ಆದರೆ ರೈಲ್ವೆ ಸಂಘಟನೆಗಳು, ತಾಂತ್ರಿಕ ಸಲಹೆಗಾರರು ಕೋಯಿಕ್ಕೋಡ್&zwnj; ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಬದಲಾವಣೆಯನ್ನು ಒಪ್ಪುವುದಿಲ್ಲ. ಈ ರೀತಿ ಕೋಯಿಕ್ಕೋಡ್&zwnj; ರೈಲಿನ ಸಮಯ ಬದಲಾಯಿಸಿದರೆ ನಂತರದ ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ರೈಲಿನ ಸಮಯವನ್ನೂ ಬದಲಾಯಿಸಬೇಕಾಗುತ್ತದೆ. ಆಗ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಎಲ್ಲ ರೈಲುಗಳ ಸಮಯವನ್ನೂ ಬದಲಾಯಿಸಬೇಕಾಗುತ್ತದೆ. ಹಾಗಾಗಿ ರೈಲು ಇದ್ದರೂ ಪ್ರಯಾಣಿಕ ಸ್ನೇಹಿಯಾಗಿರುವುದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್&zwnj;.&lt;/p&gt;&lt;p&gt;ಬೇರೆ ರೈಲುಗಳ ಸಮಯ ಬದಲಾಯಿಸುವ ಬದಲು ಸಂಜೆ ಬೆಂಗಳೂರಿನಿಂದ ಹೊರಡುವ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj; ರೈಲನ್ನು ಸಂಜೆ 6.50ರ ಬದಲು 6.35ಕ್ಕೆ ಅಂದರೆ 15 ನಿಮಿಷ ಮುಂಚಿತವಾಗಿ ಹೊರಡುವಂತೆ ಮಾಡಿದರೆ ಬೇರೆ ಯಾವ ರೈಲುಗಳ ಸಮಯವನ್ನು ಬದಲಾಯಿಸುವ ಅಗತ್ಯ ಇರುವುದಿಲ್ಲ. ಈ ವಿಚಾರವನ್ನು ಸಂಸದರು ಹಾಗೂ ರೈಲ್ವೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಸೂಕ್ತ ಸ್ಪಂದನ ಸಿಗುತ್ತಿಲ್ಲ ಎನ್ನುವುದು ರೈಲ್ವೆ ಸಂಘಟನೆಗಳ ಮುಖಂಡರ ಅಸಮಾಧಾನ.&lt;/p&gt;&lt;img&gt;&lt;p&gt;ರೈಲು ಸಂಚಾರದಲ್ಲಿ ವಿಚಾರದಲ್ಲಿ ಗಂಟೆಗಟ್ಟಲೆ ವಿಳಂಬಕ್ಕೆ ಪ್ರಮುಖ ಕಾರಣವಾಗುತ್ತಿರುವುದು ಕ್ರಾಸಿಂಗ್&zwnj;. ಇದೇ ಸಮಸ್ಯೆ ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್&zwnj; ರೈಲು ಸಂಚಾರದಲ್ಲೂ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ನೈಋತ್ಯ ರೈಲ್ವೆ ಸೂಕ್ತ ಗಮನ ಹರಿಸುತ್ತಿಲ್ಲ ಎಂಬುದು ರೈಲ್ವೆ ಸಂಘಟನೆಗಳ ಆರೋಪ.&lt;/p&gt;&lt;img&gt;&lt;p&gt;ಹಾಸನ-ಮಂಗಳೂರು ರೈಲು ಮಾರ್ಗ ಸಿಂಗಲ್&zwnj; ಲೈನ್&zwnj;. ಹಾಸನ, ಸಕಲೇಶಪುರ ಬಳಿಕ ದೋಣಿಗಲ್&zwnj;, ಸಿರಿಬಾಗಿಲುಗಳಲ್ಲಿ ಕ್ರಾಸಿಂಗ್&zwnj;ಗೆ ಅವಕಾಶ ಇದೆ. ನಂತರ ಸುಬ್ರಹ್ಮಣ್ಯ ಮಾರ್ಗದಲ್ಲಿ. ಈ ಘಾಟ್&zwnj; ಪ್ರದೇಶದಲ್ಲಿ ಹಳಿ ಹಾಗೂ ಕ್ರಾಸಿಂಗ್&zwnj; ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎನ್ನುವುದು ರೈಲ್ವೆ ಅಧಿಕಾರಿಗಳ ಅಂಬೋಣ. ಅರೆಬೆಟ್ಟದಲ್ಲಿ ಕ್ರಾಸಿಂಗ್&zwnj; ರಚನೆಯ ಪ್ರಸ್ತಾಪ ಇದ್ದರೂ ಕಾರ್ಯಗತಗೊಂಡಿಲ್ಲ. ಹಾಗಾಗಿ ಈ ಮಾರ್ಗದಲ್ಲಿ ಹಳಿ ಹಾಕಿ 40 ವರ್ಷ ಕಳೆದರೂ ಕ್ರಾಸಿಂಗ್ ಸಮಸ್ಯೆಗೆ ಇನ್ನೂ ಮುಕ್ತಿ ಸಿಗುತ್ತಿಲ್ಲ ಎನ್ನುವುದು ರೈಲ್ವೆ ಸಂಘಟನೆಗಳ ಕೊರಗು.&lt;/p&gt;&lt;img&gt;&lt;p&gt;ಬೆಂಗಳೂರು-ಕೋಯಿಕ್ಕೋಡ್&zwnj; ರೈಲಿನ ಸಮಯ ಬದಲಾವಣೆ ಮಾಡಿದರೆ ಪ್ರಯಾಣಿಕರಿಗೆ ತೊಂದರೆ ಆಗುವುದು ಬಿಟ್ಟರೆ ಬೇರೆ ರೈಲುಗಳ ಸಂಚಾರವೂ ವಿಳಂಬವಾಗಲಿದೆ. ಅದರ ಬದಲು ಪಂಚಗಂಗಾ ರೈಲು ಬೆಂಗಳೂರನಿಂದ ಹೊರಡುವ ಸಮಯವನ್ನು ತುಸು ಮುಂಚಿತವಾಗಿ ಬದಲಾವಣೆ ಮಾಡಿದರೆ ಈ ಎಲ್ಲ ಸಮಸ್ಯೆಗೂ ಸುಲಭದಲ್ಲಿ ಪರಿಹಾರ ಸಾಧ್ಯವಿದೆ. ಈ ವಿಚಾರವನ್ನು ಸಂಸದರು ಹಾಗೂ ರೈಲ್ವೆ ಇಲಾಖೆಯ ಗಮನಕ್ಕೂ ತರಲಾಗಿದೆ.&lt;/p&gt;&lt;p&gt;-ಅನಿಲ್&zwnj; ಹೆಗ್ಡೆ, ತಾಂತ್ರಿಕ ಸಲಹೆಗಾರರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/railway-row-opposition-grows-over-proposal-to-delay-bengaluru-mangaluru-kozhikode-express-gdp-acqggr3"/>
        </item>
        <item>
            <title><![CDATA[ಉಡುಪಿ: ಮೊಬೈಲ್ ಚಾಟಿಂಗ್ ಪ್ರಶ್ನಿಸಿದ ಪತ್ನಿಗೆ ದೈಹಿಕ ಹಲ್ಲೆ, ಜೀವ ಬೆದರಿಕೆ ಹಾಕಿದ ಪತಿ, ಠಾಣೆ ಮೆಟ್ಟಲೇರಿದ ಹೆಂಡತಿ]]></title>
            <link>https://kannada.asianetnews.com/karnataka-districts/karnataka-udupi-husband-assaults-wife-over-mobile-chatting-dispute-death-threat-alleged-gdp/articleshow-bw6efq4</link>
            <guid isPermaLink="true">https://kannada.asianetnews.com/karnataka-districts/karnataka-udupi-husband-assaults-wife-over-mobile-chatting-dispute-death-threat-alleged-gdp/articleshow-bw6efq4</guid>
            <pubDate>Wed, 15 Apr 2026 20:42:22 +0530</pubDate>
            <description><![CDATA[ಕಾರ್ಕಳದಲ್ಲಿ, ಮೊಬೈಲ್ ಚಾಟಿಂಗ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ, ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ. ಗರ್ಭಿಣಿಯಾಗಿದ್ದಾಗಲೂ ಆರೈಕೆ ಮಾಡದೆ, ಮದ್ಯಪಾನ ಮಾಡಿ ಹಲ್ಲೆ ನಡೆಸಿದ್ದಾಗಿ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmjb0kfc0mfhmj1dnp96n0ct,imgname-new-project---2026-03-25t163828.357-1774437027308.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರ್ಕಳ:&lt;/strong&gt; ಮೊಬೈಲ್ ಚಾಟಿಂಗ್ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದು, ಜೀವ ಬೆದರಿಕೆ ಹಾಕಿದ ಆರೋಪದಡಿ ಪತಿ ಹಾಗೂ ಅತ್ತೆ-ಮಾವ ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ದೀಪ್ತಿ (24) ಅವರು ನೀಡಿದ ದೂರಿನ ಆಧಾರದಲ್ಲಿ ಪತಿ ದೀಪಕ್ ಶೆಟ್ಟಿ, ಅತ್ತೆ ಶೋಭ ಹಾಗೂ ಮಾವ ನಾರಾಯಣ ಶೆಟ್ಟಿ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.&lt;/p&gt;&lt;h2&gt;ಸಾಮಾಜಿಕ ಜಾಲತಾಣಗಳಲ್ಲಿ ಅನ್ಯರೊಂದಿಗೆ ಚಾಟ್&lt;/h2&gt;&lt;p&gt;ಮದುವೆಯಾದ ನಂತರ ಅಜೆಕಾರಿನಲ್ಲಿ ವಾಸವಿದ್ದ ವೇಳೆ ಪತಿ ಸಾಮಾಜಿಕ ಜಾಲತಾಣಗಳಲ್ಲಿ ಅನ್ಯರೊಂದಿಗೆ ಚಾಟ್ ಮಾಡುತ್ತಿರುವುದನ್ನು ದೀಪ್ತಿ ಪ್ರಶ್ನಿಸಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಕಲಹ ಉಂಟಾಗಿತ್ತು. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪತಿ ಆರೈಕೆ ಮಾಡದೆ ತವರು ಮನೆಗೆ ಬಿಟ್ಟು ಹೋಗಿದ್ದು, ಹೆರಿಗೆಯ ವೆಚ್ಚವನ್ನೂ ಭರಿಸದೆ ಸತಾಯಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಮದ್ಯಪಾನ ಮಾಡಿ ಬಂದು ಹಲ್ಲೆ&lt;/h2&gt;&lt;p&gt;ನಂತರ ಪತಿಯ ಮನೆಗೆ ಮರಳಿದಾಗ ಪತಿ ಮದ್ಯಪಾನ ಮಾಡಿ ಬಂದು ಹಲ್ಲೆ ನಡೆಸಿದ್ದಲ್ಲದೆ, ಅತ್ತೆ-ಮಾವ ಕೂಡ ಬೆಂಬಲ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಿಂದ ಹೊರ ಹಾಕಿದ್ದರೆಂದು ದೂರಲಾಗಿದೆ. ಸದ್ಯ ಮಗುವಿನೊಂದಿಗೆ ತವರು ಮನೆಯಲ್ಲಿ ಇರುವ ದೀಪ್ತಿಗೆ ಪತಿ ವಾಟ್ಸಾಪ್ ಮೂಲಕ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ದ.ಕ. ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್&zwnj;ಐಆರ್&zwnj;ನ್ನು ಅಜೆಕಾರು ಠಾಣೆಗೆ ವರ್ಗಾವಣೆ ಮಾಡಲಾಗಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-udupi-husband-assaults-wife-over-mobile-chatting-dispute-death-threat-alleged-gdp/articleshow-bw6efq4"/>
        </item>
        <item>
            <title><![CDATA[ಕುಂದಾಪುರ–ತೀರ್ಥಹಳ್ಳಿ ಸಂಪರ್ಕಿಸುವ ಬಾಳೆಬರೆ ಘಾಟಿ ಸಂಪೂರ್ಣ ಬಂದ್!  ಪರ್ಯಾಯವಾಗಿ ಈ ಮಾರ್ಗ ಬಳಸಿ]]></title>
            <link>https://kannada.asianetnews.com/karnataka-districts/balebare-ghat-closed-due-to-landslide-on-nh-52-between-kundapura-and-thirthahalli-alternate-routes-announced-gdp/articleshow-c6ogmtc</link>
            <guid isPermaLink="true">https://kannada.asianetnews.com/karnataka-districts/balebare-ghat-closed-due-to-landslide-on-nh-52-between-kundapura-and-thirthahalli-alternate-routes-announced-gdp/articleshow-c6ogmtc</guid>
            <pubDate>Tue, 14 Apr 2026 19:49:22 +0530</pubDate>
            <description><![CDATA[ಉಡುಪಿಯ ಕುಂದಾಪುರ&ndash;ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52ರಲ್ಲಿರುವ ಬಾಳೆಬರೆ ಘಾಟಿಯಲ್ಲಿ ಭೂಕುಸಿತ ಉಂಟಾದ ಕಾರಣ, ಸಾರ್ವಜನಿಕರ ಸುರಕ್ಷತೆಗಾಗಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp65h0k4j3dwzekqz9pqmgrs,imgname-balebare-ghat-1776176104036.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ&lt;/strong&gt; ಜಿಲ್ಲೆಯ ಕುಂದಾಪುರ&ndash;ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52ರಲ್ಲಿ ಇರುವ ಬಾಳೆಬರೆ ಘಾಟಿಯಲ್ಲಿ ಭೂಕುಸಿತ ಉಂಟಾದ ಹಿನ್ನೆಲೆ, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಏಪ್ರಿಲ್ 9ರಂದು ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ, ಸುಮಾರು 12 ಮೀಟರ್ ಎತ್ತರದಲ್ಲಿರುವ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ. ಇದರಿಂದಾಗಿ ರಸ್ತೆ ಮೇಲ್ಮೈಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಸಂಚಾರಕ್ಕೆ ಅಪಾಯ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h2&gt;&amp;nbsp;ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣ ಬಂದ್&lt;/h2&gt;&lt;p&gt;ಈ ಹಿನ್ನೆಲೆಯಲ್ಲಿ, ರಕ್ಷಣಾತ್ಮಕ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ತೀರ್ಥಹಳ್ಳಿ&ndash;ಕುಂದಾಪುರ ಸಂಪರ್ಕಿಸುವ ಈ ಘಾಟಿ ಮಾರ್ಗದಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಪರ್ಯಾಯ ಮಾರ್ಗ&lt;/h2&gt;&lt;p&gt;ಪರ್ಯಾಯ ಮಾರ್ಗಗಳ ವಿವರ ತೀರ್ಥಹಳ್ಳಿ&ndash;ರಾವೆ&ndash;ಕಾನುಗೋಡು&ndash;ನಗರ&ndash;ಕೊಲ್ಲೂರು&ndash;ಕುಂದಾಪುರ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ತೀರ್ಥಹಳ್ಳಿ&ndash;ಯಡೂರು&ndash;ಮಾಸ್ತಿಕಟ್ಟೆ&ndash;ಕಾನುಗೋಡು&ndash;ನಗರ&ndash;ಕೊಲ್ಲೂರು&ndash;ಕುಂದಾಪುರ ಮಾರ್ಗವೂ ಪ್ರಯಾಣಿಕರಿಗೆ ಲಭ್ಯವಿದೆ. ಶಿವಮೊಗ್ಗ ಅಥವಾ ಸಾಗರ ಕಡೆಯಿಂದ ಬರುವ ವಾಹನಗಳು, ಶಿವಮೊಗ್ಗ&ndash;ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ತಲುಪಿ, ಅಲ್ಲಿಂದ ಭಟ್ಕಳ&ndash;ಬೈಂದೂರು ಮಾರ್ಗವಾಗಿ ಕುಂದಾಪುರ ತಲುಪುವಂತೆ ಸೂಚಿಸಲಾಗಿದೆ.&lt;/p&gt;&lt;p&gt;ಒಟ್ಟಾರೆ, ಬಾಳೆಬರೆ ಘಾಟಿಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಸಂಚಾರಕ್ಕೆ ತೀವ್ರ ಅಪಾಯ ಇರುವುದರಿಂದ, ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಸಾರ್ವಜನಿಕರಿಗೆ ಮನವಿ ಮಾಡಿದೆ. ರಕ್ಷಣಾತ್ಮಕ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಂಚಾರವನ್ನು ಪುನಃ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/balebare-ghat-closed-due-to-landslide-on-nh-52-between-kundapura-and-thirthahalli-alternate-routes-announced-gdp/articleshow-c6ogmtc"/>
        </item>
        <item>
            <title><![CDATA[ಹುಲಿಕಲ್ ಘಾಟ್ ದುರಸ್ತಿ ವೇಳೆ 3 ಕಾರ್ಮಿಕರು ಬಲಿ ಹಿನ್ನೆಲೆ ಮುಂದಿನ ಆದೇಶದವರೆಗೆ ವಾಹನ ಸಂಚಾರ ಸಂಪೂರ್ಣ ಬಂದ್!]]></title>
            <link>https://kannada.asianetnews.com/state/deadly-landslide-at-hulikal-ghat-in-shivamogga-3-workers-killed-highway-closed-gdp/articleshow-f0kvs4e</link>
            <guid isPermaLink="true">https://kannada.asianetnews.com/state/deadly-landslide-at-hulikal-ghat-in-shivamogga-3-workers-killed-highway-closed-gdp/articleshow-f0kvs4e</guid>
            <pubDate>Fri, 10 Apr 2026 12:39:15 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟ್&zwnj;ನಲ್ಲಿ ರಸ್ತೆ ದುರಸ್ತಿ ಕಾಮಗಾರಿ ವೇಳೆ ಭೀಕರ ಭೂಕುಸಿತ ಸಂಭವಿಸಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ಶಿವಮೊಗ್ಗ-ಉಡುಪಿ ಸಂಪರ್ಕಿಸುವ ಪ್ರಮುಖ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knv3gx3fdt1zpnj30a8br132,imgname-hulikal-ghat-highway-closed--1--1775804904559.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಸಮೀಪದ ಹುಲಿಕಲ್ (ಬಾಳೇಬರೆ) ಘಾಟ್&zwnj;ನಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತವು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಘಾಟ್&zwnj; ರಸ್ತೆಯ ದುರಸ್ತಿ ಮತ್ತು ತಡೆಗೋಡೆ (ಕಾಂಕ್ರೀಟ್ ವಾಲ್) ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಅಕಸ್ಮಿಕವಾಗಿ ಗುಡ್ಡ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ನಗರ ಮತ್ತು ಮಣಿಪಾಲ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟ್&zwnj;ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.&lt;/p&gt;&lt;h2&gt;ಹುಲಿಕಲ್ ಘಾಟ್ ಮಾರ್ಗ ಬಂದ್&zwnj;&lt;/h2&gt;&lt;p&gt;ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾದ ಕಾರಣದಿಂದ ಮುಂದಿನ ಆದೇಶದವರೆಗೆ ಹುಲಿಕಲ್ ಘಾಟ್ ಮಾರ್ಗವನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಗುರುಲಿಂಗ ಕವಳಿಮಠ ಆದೇಶ ಹೊರಡಿಸಿದ್ದಾರೆ. ಕರಾವಳಿ ಮತ್ತು ಮಧ್ಯ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ಈ ರಸ್ತೆಯ ಬಂದ್&zwnj;ನಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ವಾಹನ ಸವಾರರು ತೀರ್ಥಹಳ್ಳಿಯ ಆಗುಂಬೆ ಘಾಟ್ ಹಾಗೂ ಹೊಸನಗರ ತಾಲೂಕಿನ ನಿಟ್ಟೂರು-ನಾಗೋಡಿ ಘಾಟ್ ಮಾರ್ಗಗಳನ್ನು ಪರ್ಯಾಯವಾಗಿ ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.&lt;/p&gt;&lt;h2&gt;ಮೃತದೇಹಗಳ ಗುರುತು ಪತ್ತೆ&lt;/h2&gt;&lt;p&gt;ಈ ದುರ್ಘಟನೆ ಚಂಡಿಕಾಂಬ ದೇವಸ್ಥಾನದ ಮೊದಲ ಹೇರ್&zwnj;ಪಿನ್ ತಿರುವಿನ ಬಳಿ ಸಂಭವಿಸಿದೆ. ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದ್ದ ತಡೆಗೋಡೆ ನಿರ್ಮಾಣ ಕಾಮಗಾರಿಯ ಸಮಯದಲ್ಲೇ ಈ ಅನಾಹುತ ಸಂಭವಿಸಿದ್ದು, ಕಾಮಗಾರಿಯನ್ನು ಚಂದ್ರಶೇಖರ್ ಎಂಬ ಗುತ್ತಿಗೆದಾರರು ನಿರ್ವಹಿಸುತ್ತಿದ್ದರು. ಪ್ರಾರಂಭಿಕ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಕಾಮಗಾರಿ ಮೇಲ್ವಿಚಾರಕ ರಾಘು (37) ಮತ್ತು ಕಾರ್ಮಿಕ ರಾಜು (30) ಎಂದು ಗುರುತಿಸಲಾಯಿತು. ನಂತರ ತಡರಾತ್ರಿ ವರೆಗೆ ಮುಂದುವರಿದ ಶೋಧ ಕಾರ್ಯಾಚರಣೆಯಲ್ಲಿ ಹಾವೇರಿ ಜಿಲ್ಲೆಯ ಶಬ್ಬೀರ್ (40) ಅವರ ಮೃತದೇಹವನ್ನು ಬೆಳಗಿನ ಜಾವ ಸುಮಾರು 3 ಗಂಟೆಗೆ ಎಸ್&zwnj;ಡಿಆರ್&zwnj;ಎಫ್, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಹೊರತೆಗೆದರು.&lt;/p&gt;&lt;p&gt;ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ, ಎಸ್&zwnj;ಡಿಆರ್&zwnj;ಎಫ್ ತಂಡ ಹಾಗೂ ಸ್ಥಳೀಯರು ಸೇರಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು. ಇದೀಗ ಮೂರು ಮೃತದೇಹಗಳನ್ನು ನಗರ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.&amp;nbsp;&lt;/p&gt;&lt;p&gt;ಇನ್ನೂ ಘಟನಾ ಸ್ಥಳಕ್ಕೆ ಮಾಜಿ ಗೃಹ ಸಚಿವ ಹಾಗೂ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸ್ಥಳದ ಸ್ಥಿತಿಗತಿಗಳನ್ನು ಅವಲೋಕಿಸಿ, ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು, &ldquo;ನಡೆಯಬಾರದ ಘಟನೆ ನಡೆದಿದೆ. ಮೃತಪಟ್ಟವರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಸರ್ಕಾರ ಮತ್ತು ನಾವು ಆ ಕುಟುಂಬಗಳ ಜೊತೆ ನಿಲ್ಲುತ್ತೇವೆ,&rdquo; ಎಂದು ಸಂತಾಪ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ದುರ್ಘಟನೆ ನಿರ್ಮಾಣ ಕಾಮಗಾರಿಗಳ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ. ಸ್ಥಳೀಯ ಆಡಳಿತವು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯವೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/state/deadly-landslide-at-hulikal-ghat-in-shivamogga-3-workers-killed-highway-closed-gdp/articleshow-f0kvs4e"/>
        </item>
        <item>
            <title><![CDATA[ಮಣಿಪಾಲದ ಎಂಐಟಿಗೆ ವಿಶ್ವ ಗರಿ, CFA ಮಾನ್ಯತೆ ಪಡೆದ ದೇಶದ ಮೊದಲ ಎಂಜಿನಿಯರಿಂಗ್ ಸಂಸ್ಥೆ! ಇನ್ಮುಂದೆ ಜಾಗತಿಕ ಶಿಕ್ಷಣ]]></title>
            <link>https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp</link>
            <guid isPermaLink="true">https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp</guid>
            <pubDate>Sun, 10 May 2026 18:06:20 +0530</pubDate>
            <description><![CDATA[ಮಣಿಪಾಲದ ಎಂಐಟಿಯು ಪ್ರತಿಷ್ಠಿತ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನಿಂದ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆಯಾಗಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಲಿದೆ. ಸಂಸ್ಥೆಯು 2023ರಿಂದ ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿಯಲ್ಲಿ ಬಿಟೆಕ್ ಕೋರ್ಸ್ ಅನ್ನು ಸಹ ಆರಂಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8xykemzxs2053j4vh0t6hw,imgname-mit-manipal--1--1778416307667.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಣಿಪಾಲ: &lt;/strong&gt;ಮಣಿಪಾಲ್ ಅಕಾಡೆಮಿ ಆಫ್&zwnj; ಹೈಯರ್&zwnj; ಎಜುಕೇಶನ್&zwnj; (ಮಾಹೆ) ವಿವಿಯ ಅಂಗ ಸಂಸ್ಥೆ ಮಣಿಪಾಲ್ ಇನ್&zwnj;ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ)ಗೆ ಪ್ರತಿಷ್ಠಿತ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಸಿಕ್ಕಿದ್ದು, ಎಂಐಟಿಯು ಈ ಮಾನ್ಯತೆ ಪಡೆದ ಭಾರತದ ಮೊದಲ ಮತ್ತು ಏಕೈಕ ಎಂಜಿನಿಯರಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಮೇ 6ರಂದು ಮಣಿಪಾಲದಲ್ಲಿ ನಡೆದ ಕಾರ್&zwj;ಯಕ್ರಮದಲ್ಲಿ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನ ಪ್ರತಿನಿಧಿಗಳಾದ ಸೈಮ್ ಫಕಿಹ್ ಮತ್ತು ಕುಮಾರಿ ಅಂಜನಾ ನಹರ್ ಅವರು ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರಿಗೆ ಈ ಮಾನ್ಯತೆ ಪ್ರಮಾಣಪತ್ರ ಅಧಿಕೃತವಾಗಿ ಹಸ್ತಾಂತರಿಸಿದರು.&lt;/p&gt;&lt;p&gt;ಎಂಐಟಿ ನಿರ್ದೇಶಕರಾದ ಕಮಾಂಡರ್ (ಡಾ) ಅನಿಲ್ ರಾಣಾ ಮತ್ತು ಡಾ. ಕುಂಚಂ ಶ್ಯಾಮ್ ಪ್ರಸಾದ್, ಎಂಐಟಿ ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್, ಹ್ಯುಮಾನಿಟೀಸ್ ಅಂಡ್ ಮ್ಯಾನೇಜ್&zwnj;ಮೆಂಟ್&zwnj;ನ ಸಹ ಡೀನ್ ಡಾ. ಯೋಗೇಶ್ ಪೈ ಪಿ. ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.&lt;/p&gt;&lt;h2&gt;ಜಾಗತಿಕ ಮಟ್ಟದ ಶಿಕ್ಷಣ&lt;/h2&gt;&lt;p&gt;ಈ ಮಾನ್ಯತೆಯಿಂದ ಎಂಐಟಿ ವಿದ್ಯಾರ್ಥಿಗಳಿಗೆ ಹಣಕಾಸು ತಂತ್ರಜ್ಞಾನದ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಶಿಕ್ಷಣ ದೊರೆಯಲಿದೆ. ಈ ಮಾನ್ಯತೆಯು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವುದಲ್ಲದೆ, ಉದ್ಯಮದ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ಮತ್ತು ವಿವಿಧ ವಿದ್ಯಾರ್ಥಿವೇತನಗಳನ್ನು ಪಡೆಯಲು ದಾರಿಯಾಗಲಿದೆ.&lt;/p&gt;&lt;p&gt;ಜಾಗತಿಕ ಮಟ್ಟದಲ್ಲಿ ಹಣಕಾಸು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಿಎಫ್&zwnj;ಎ ಇನ್&zwnj;ಸ್ಟಿಟ್ಯೂಟ್&zwnj;ನೊಂದಿಗೆ ಕೈಜೋಡಿಸಿರುವುದು ಎಂಐಟಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಜತೆಗೆ ಹಣಕಾಸು ಕ್ಷೇತ್ರದ ಜಾಗತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.&lt;/p&gt;&lt;h2&gt;ಬಿಟೆಕ್ ನೂತನ ಕೋರ್ಸ್ ಆರಂಭ&lt;/h2&gt;&lt;p&gt;ಸಿಎಸ್&zwnj;-ಎಫ್&zwnj;ಟಿ ಕೋರ್ಸ್ ಎಂಐಟಿಯ 2023ರಿಂದ ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಫೈನಾನ್ಶಿಯಲ್ ಟೆಕ್ನಾಲಜಿ) ಎಂಬ ವಿನೂತನ ಕೋರ್ಸನ್ನು ಆರಂಭಿಸಿದೆ. ಕಂಪ್ಯೂಟರ್ ಸೈನ್ಸ್ ಜತೆಗೆ ಹಣಕಾಸು, ಅನಲಿಟಿಕ್ಸ್&zwnj;, ತಂತ್ರಜ್ಞಾನಗಳನ್ನು ಒಳಗೊಂಡ ಅಂತರಶಿಸ್ತೀಯ ಕೋರ್ಸ್&zwnj; ಪರಿಚಯಿಸಿದ ದೇಶದ ಮೊದಲ ಮತ್ತು ಏಕೈಕ ಸಂಸ್ಥೆ ಎಂಬ ಕೀರ್ತಿಗೆ ಎಂಐಟಿ ಪಾತ್ರವಾಗಿದೆ. ಇಂದಿನ ಆಧುನಿಕ ಉದ್ಯೋಗ ಮಾರುಕಟ್ಟೆಗೆ ಪೂರಕವಾದ ಪರಿಣಿತರನ್ನು ಸಿದ್ಧಪಡಿಸುವಲ್ಲಿ ಎಂಐಟಿ ಮಹತ್ವದ ಪಾತ್ರ ವಹಿಸುತ್ತಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/education/mit-manipal-becomes-first-engineering-institute-in-india-to-receive-cfa-institute-recognition-gdp/articleshow-ffgu2tp"/>
        </item>
        <item>
            <title><![CDATA[ಉಡುಪಿ: ತ್ರಾಸಿ ಬಳಿ ಟ್ಯಾಂಕರ್-ಬಸ್ ಭೀಕರ ಅಪಘಾತ, ಕರಾವಳಿಗೆ ಪ್ರವಾಸ ಹೊರಟಿದ್ದ ವಿದ್ಯಾರ್ಥಿಗಳ ದುರಂತ ಅಂತ್ಯ!]]></title>
            <link>https://kannada.asianetnews.com/karnataka-districts/udupi-many-dead-several-injured-as-tourist-bus-crashes-into-tanker-near-trasi-beach-gdp/articleshow-ldl1bpb</link>
            <guid isPermaLink="true">https://kannada.asianetnews.com/karnataka-districts/udupi-many-dead-several-injured-as-tourist-bus-crashes-into-tanker-near-trasi-beach-gdp/articleshow-ldl1bpb</guid>
            <pubDate>Wed, 29 Apr 2026 15:15:22 +0530</pubDate>
            <description><![CDATA[ಉಡುಪಿಯ ಬೈಂದೂರು ತಾಲೂಕಿನ ತ್ರಾಸಿ ಬಳಿ, ಪ್ರವಾಸಕ್ಕೆ ಬಂದಿದ್ದ ಭದ್ರಾವತಿ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ನಿಂತಿದ್ದ ಟ್ಯಾಂಕರ್&zwnj;ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqc9yy1hkq5vvs34geqr77p0,imgname-udupi-trasi-beach-accident-1777455822897.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ:&lt;/strong&gt; ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿದ್ದ ಬಸ್ ಟ್ಯಾಂಕರ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಬೈಂದೂರು ತಾಲೂಕಿನ ತ್ರಾಸಿ ಸಮೀಪ ನಡೆದಿದೆ.&lt;/p&gt;&lt;p&gt;ತ್ರಾಸಿ ಬೀಚ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಟ್ಯಾಂಕರ್&zwnj;ಗೆ ಅತಿ ವೇಗದಲ್ಲಿ ಬಂದ &amp;nbsp;ಬಸ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಬಸ್&zwnj;ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ.&lt;/p&gt;&lt;h2&gt;ಕರಾವಳಿ ಭಾಗಕ್ಕೆ ಪ್ರವಾಸಕ್ಕಾಗಿ ಬಂದಿದ್ದ ವಿದ್ಯಾರ್ಥಿಗಳು&lt;/h2&gt;&lt;p&gt;ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬಸ್&zwnj;ನಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಶಂಕರಘಟ್ಟದ ರಂಭಾಪುರಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಕರಾವಳಿ ಭಾಗಕ್ಕೆ ಪ್ರವಾಸಕ್ಕಾಗಿ ಬಂದಿದ್ದು, ಮುರುಡೇಶ್ವರದಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಸುಮಾರು 47 ಮಂದಿ ಪ್ರಯಾಣಿಸುತ್ತಿದ್ದ ಈ ಬಸ್&zwnj;ನಲ್ಲಿ ಡಿಕ್ಕಿಯ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಹೆಚ್ಚಿನ ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ&lt;/h2&gt;&lt;p&gt;ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;p&gt;ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಸ್ತೆ ಬದಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯುವಂತಹ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಾಲಕರು ವಿಶೇಷ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣ ಮೂಡಿಸಿದ್ದು, ಮೃತರ ಗುರುತು ಹಾಗೂ ಗಾಯಾಳುಗಳ ಸ್ಥಿತಿಗತಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/udupi-many-dead-several-injured-as-tourist-bus-crashes-into-tanker-near-trasi-beach-gdp/articleshow-ldl1bpb"/>
        </item>
        <item>
            <title><![CDATA[ಉಡುಪಿ ಗ್ರಾಪಂ ದೇಶಕ್ಕೇ ನಂಬರ್ ಒನ್, ಬಡತನರಹಿತ ವಿಭಾಗದಲ್ಲಿ ಮುದ್ರಾಡಿ ಗ್ರಾಪಂಗೆ ₹1 ಕೋಟಿಯ ಪ್ರಥಮ ಪ್ರಶಸ್ತಿ]]></title>
            <link>https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr</link>
            <guid isPermaLink="true">https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr</guid>
            <pubDate>Sun, 10 May 2026 06:07:42 +0530</pubDate>
            <description><![CDATA[&lt;p&gt;ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 2025ನೇ ಸಾಲಿನ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಿದ್ದು, 'ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ' ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮುದ್ರಾಡಿ ಗ್ರಾಮ ಪಂಚಾಯತ್ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7mn5feyjgrvnqzqt8c5gcx,imgname-----------------------2026-05-10t055919.140-1778373006830.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.10): &lt;/strong&gt;ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 2025ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಘೋಷಿಸಿದ್ದು, &lsquo;ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ&rsquo; ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮುದ್ರಾಡಿ ಗ್ರಾಮ ಪಂಚಾಯತ್&zwnj;, ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.&lt;/p&gt;&lt;p&gt;ರಾಜ್ಯದ ಒಟ್ಟಾರೆ 6 ಗ್ರಾ.ಪಂ.ಗಳು ವಿವಿಧ ವಿಭಾಗಗಳಲ್ಲಿ ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿವೆ. ರಾಜ್ಯಕ್ಕೆ ಲಭಿಸಿದ 6 ಪ್ರಶಸ್ತಿಗಳ ಪೈಕಿ 5 ಪ್ರಶಸ್ತಿಗಳು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಲಭಿಸಿವೆ. ಜೂನ್&zwnj; 3ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಯ್ಕೆಯಾದ ಗ್ರಾ.ಪಂ.ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.&lt;/p&gt;&lt;p&gt;ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ, &lsquo;ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ&rsquo; ವಿಭಾಗದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಈ ಅಪೂರ್ವ ಸಾಧನೆಗಾಗಿ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಆ ಮೂಲಕ ಮುದ್ರಾಡಿ, ಇಂದು ಭಾರತದ ಮಾದರಿ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಈ ಮಧ್ಯೆ, ಆರೋಗ್ಯ ಮತ್ತು ಕಲ್ಯಾಣ ವಿಭಾಗದಲ್ಲಿ ಉಡುಪಿ ಜಿಲ್ಲೆಯ ವಂಡ್ಸೆ ಗ್ರಾಮ ಪಂಚಾಯಿತಿ ಹಾಗೂ ಮಕ್ಕಳ ಸ್ನೇಹಿ ಪಂಚಾಯಿತಿ ವಿಭಾಗದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಹಲನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ. ಸಮಗ್ರ ನೀರು ನಿರ್ವಹಣೆ ವಿಭಾಗದಲ್ಲಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು, ಇವುಗಳಿಗೆ ತಲಾ ₹75 ಲಕ್ಷ ಬಹುಮಾನ ಘೋಷಿಸಲಾಗಿದೆ.&lt;/p&gt;&lt;p&gt;ಅಲ್ಲದೆ, ಸ್ವಾವಲಂಬಿ ಮೂಲಸೌಕರ್ಯ ಅಭಿವೃದ್ಧಿ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಸಾಣೂರು ಹಾಗೂ ಸಾಮಾಜಿಕ ನ್ಯಾಯ ವಿಭಾಗದಲ್ಲಿ ಉಡುಪಿ ಜಿಲ್ಲೆ ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯಿತಿಗಳು ದೇಶದಲ್ಲಿ ಮೂರನೇ ಸ್ಥಾನ ಪಡೆದು, ತಲಾ 50 ಲಕ್ಷ ರುಪಾಯಿ ಬಹುಮಾನ ಗಳಿಸಿವೆ. ಮುದ್ರಾಡಿ ಗ್ರಾಪಂ ಸಾಧನೆಯೇನು?:&lt;/p&gt;&lt;p&gt;ಮುದ್ರಾಡಿ ಪಂಚಾಯಿತಿ ಒಟ್ಟು 1,671 ಮನೆಗಳನ್ನು ಹೊಂದಿದ್ದು, ಸುಮಾರು 6,102 ಜನರಿಗೆ ಸಮರ್ಪಕ ಸೇವೆ ಒದಗಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ 1,046 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ವಿಶೇಷ ಆದ್ಯತೆ ನೀಡಲಾಗಿದೆ.ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಪಂಚಾಯಿತಿ, ಕಾಡು ಉತ್ಪನ್ನ ಆಧಾರಿತ ಜೀವನೋಪಾಯ, ನೀರಿನ ಸಂರಕ್ಷಣೆ, ಮಣ್ಣಿನ ಸುಧಾರಣೆ ಮತ್ತು ಹಸಿರು ಆರ್ಥಿಕತೆಯತ್ತ ಗ್ರಾಮಸ್ಥರನ್ನು ಪ್ರೇರೇಪಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದು, ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗ ಭದ್ರತೆ ಒದಗಿಸುವುದರ ಜೊತೆಗೆ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೂ ಯೋಜನೆಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಶೇ.100ರಷ್ಟು ವ್ಯಾಪ್ತಿ ಸಾಧಿಸಿರುವುದು ಇಲ್ಲಿನ ಮತ್ತೊಂದು ಮೈಲಿಗಲ್ಲು. ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ನೆರವು ಸೇರಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಿದೆ.-----&lt;/p&gt;&lt;p&gt;ಪಂಚಾಯತಿಗಳ ಅಭಿವೃದ್ಧಿಯ ದೃಷ್ಟಿಕೋನ, ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಎಲ್ಲರ ಸಹಕಾರದಿಂದ ಈ ಅಭಿವೃದ್ಧಿ ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.&lt;/p&gt;&lt;h2&gt;-ವಿ&zwnj;.ಸುನೀಲ್ ಕುಮಾರ್, ಶಾಸಕರು ಕಾರ್ಕಳ.&lt;/h2&gt;&lt;p&gt;ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಶಾಶ್ವತ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆಯನ್ನು ಸಮಗ್ರವಾಗಿ ಜಾರಿಗೊಳಿಸಿದ ಮುದ್ರಾಡಿ ಪಂಚಾಯಿತಿ, ಗ್ರಾಮೀಣಾಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.&lt;/p&gt;&lt;p&gt;&lt;strong&gt;-ಸುಭಾಸ್, ಪಿಡಿಒ, ಮುದ್ರಾಡಿ.&lt;/strong&gt;&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/udupi-gram-panchayat-ranks-no-1-in-india-mudradi-gp-wins-first-prize-of-rs-1-crore-in-poverty-free-category-rav/articleshow-qi56zwr"/>
        </item>
        <item>
            <title><![CDATA[ಉದ್ಯಮಿ ಸುದೀಪ್ ಶೆಟ್ಟಿ ಕೇಸಲ್ಲಿ ಬಿಗ್ ಟ್ವಿಸ್ಟ್: ಅತ್ತೆ-ಮಾವ ಹಾಗೂ ವೇಣು ರಹಸ್ಯ ಬಿಚ್ಚಿಟ್ಟ ನಟಿ ಸೌಮ್ಯಾ ಶೆಟ್ಟಿ!]]></title>
            <link>https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96</link>
            <guid isPermaLink="true">https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96</guid>
            <pubDate>Thu, 02 Apr 2026 15:09:40 +0530</pubDate>
            <description><![CDATA[&lt;p&gt;ನೆಲ್ಯಾಡಿಯ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯ ಸಾವಿಗೆ ತಾನೇ ಕಾರಣ ಎಂಬ ಆರೋಪವನ್ನು ಪತ್ನಿ, ನಟಿ ಸೌಮ್ಯ ಶೆಟ್ಟಿ ನಿರಾಕರಿಸಿದ್ದು, ಬದಲಾಗಿ ಪತಿಯ ಸಾಲದ ಸಮಸ್ಯೆ ಮತ್ತು ಅವರ ಮನೆಯವರ ಕಿರುಕುಳದ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6rdmgxzbpx9ppm3eqvpjxn,imgname-sudeep-shetty-case-actress-sowmya-shetty-1775122174493.jpg" type="image/jpeg" height="390" width="690"/>
            <content:encoded><![CDATA[&lt;p&gt;ನೆಲ್ಯಾಡಿಯ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯ ಸಾವಿಗೆ ತಾನೇ ಕಾರಣ ಎಂಬ ಆರೋಪವನ್ನು ಪತ್ನಿ, ನಟಿ ಸೌಮ್ಯ ಶೆಟ್ಟಿ ನಿರಾಕರಿಸಿದ್ದು, ಬದಲಾಗಿ ಪತಿಯ ಸಾಲದ ಸಮಸ್ಯೆ ಮತ್ತು ಅವರ ಮನೆಯವರ ಕಿರುಕುಳದ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಉಡುಪಿ (ಏ.02): ದ&lt;/strong&gt;ಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಅವರ ಆತ್ಮ*ಹತ್ಯೆ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸುದೀಪ್ ಸಾವಿಗೆ ಅವರ ಪತ್ನಿ, ನಟಿ ಸೌಮ್ಯ ಶೆಟ್ಟಿ ಅವರೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದರು. ಆದರೆ, ಈಗ ಈ ಎಲ್ಲಾ ಆರೋಪಗಳಿಗೆ ನಟಿ ಸೌಮ್ಯ ಶೆಟ್ಟಿ ಖಡಕ್ ಪ್ರತಿಕ್ರಿಯೆ ನೀಡಿದ್ದು, ಪತಿ ಸಾವಿನ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಮಾತ್ರವಲ್ಲದೆ, ಸುದೀಪ್ ಸಾವಿಗೆ ಅವರ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಸುದೀಪ್ ಸಾವಿಗೂ ಮುನ್ನ ಸೌಮ್ಯ ಶೆಟ್ಟಿ ನೆಲ್ಯಾಡಿಗೆ ಬಂದು ರಂಪಾಟ ಮಾಡಿದ್ದರು ಎಂಬ ಅತ್ತೆ ಪುಷ್ಪಲತಾ ಶೆಟ್ಟಿ ಅವರ ಆರೋಪಕ್ಕೆ ಸೌಮ್ಯ ಉತ್ತರಿಸಿದ್ದಾರೆ. 'ಸುದೀಪ್ ಅವರ ಮೊಬೈಲ್ ಸ್ವಿಚ್ ಆಫ್ ಇದ್ದ ಕಾರಣ ನಾನು ಆತಂಕಗೊಂಡು ನೆಲ್ಯಾಡಿಗೆ ಹೋಗಿದ್ದೆ. ಅಲ್ಲಿ ಅವರ ಮನೆಯವರು ನನಗೆ ಅಸಭ್ಯ ಭಾಷೆಯಲ್ಲಿ ಬೈದರು. ಹೆಂಡತಿಯಾಗಿ ನಾನು ಅಲ್ಲಿ ಧ್ವನಿ ಎತ್ತಿದ್ದು ನಿಜ, ಆದರೆ ಅದು ರಂಪಾಟವಲ್ಲ. ನಾನು ವಿಷ ಹಾಕಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು, ಬೇಕಿದ್ದರೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಿ' ಎಂದು ಸವಾಲು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಸುದೀಪ್ ಶೆಟ್ಟಿ ಅವರ ಸಾವಿಗೆ ಸಾಲದ ಸಮಸ್ಯೆ ಮತ್ತು ಕುಟುಂಬದ ಒತ್ತಡವೇ ಕಾರಣ ಎಂದು ಸೌಮ್ಯ ಶೆಟ್ಟಿ ಹೇಳಿದ್ದಾರೆ. 'ಸುದೀಪ್ ಅವರಿಗೆ ಕಳೆದ 8-9 ವರ್ಷಗಳಿಂದ ಸಾಲ ಇತ್ತು. ಆದರೆ ಮಾರ್ಚ್ 16ರಂದು ಅವರು ನೆಲ್ಯಾಡಿಯ ತಮ್ಮ ತಂದೆಯ ಮನೆಗೆ ಹೋದ ನಂತರವೇ ಪರಿಸ್ಥಿತಿ ಬದಲಾಗಿದೆ.&lt;/p&gt;&lt;img&gt;&lt;p&gt;ನಮ್ಮ ಮದುವೆಗೆ ಅವರ ಮನೆಯವರು ಒಪ್ಪುತ್ತಿಲ್ಲ ಎಂಬ ಬೇಸರ ಅವರಿಗಿತ್ತು. ತಂದೆಯ ಮನೆಗೆ ಹೋಗಿ ಬಂದ ನಂತರ ಅವರು ಆತ್ಮ*ಹತ್ಯೆಯ ನಿರ್ಧಾರ ಮಾಡಿದ್ದಾರೆ ಎಂದರೆ, ಅಲ್ಲಿ ಅವರಿಗೆ ಮಾನಸಿಕ ಕಿರುಕುಳ ನೀಡಿ ಪ್ರಚೋದಿಸಿರುವ ಸಂಶಯ ನನಗಿದೆ' ಎಂದು ಸೌಮ್ಯ ಗಂಭೀರವಾಗಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt; ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ&lt;/p&gt;&lt;img&gt;&lt;p&gt;ಈ ಪ್ರಕರಣದಲ್ಲಿ ಸೌಮ್ಯಳ ಹಳೆ ಪ್ರೇಮಿ ಎಂದು ಹೇಳಿಕೊಂಡು ಆರೋಪ ಮಾಡಿದ್ದ ವೇಣು ಶೆಟ್ಟಿ ವಿರುದ್ಧವೂ ಸೌಮ್ಯ ಶೆಟ್ಟಿ ಕಿಡಿಕಾರಿದ್ದಾರೆ. 'ವೇಣು ಶೆಟ್ಟಿ ಒಬ್ಬ ನಾಟಕ ಕಲಾವಿದ, ಆತನ ಕ್ಯಾರೆಕ್ಟರ್ ಸರಿ ಇಲ್ಲ. ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಆತನ ಬಗ್ಗೆ ತಿಳಿಯುತ್ತಿದ್ದಂತೆಯೇ ನಾನು ದೂರವಾಗಿದ್ದೆ. ಆದರೆ ಆತ ಸುದೀಪ್ ಅವರ ತಂದೆಯ ತಲೆ ಕೆಡಿಸಿ ಈ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ್ದಾನೆ. ಆತನ ಬಗ್ಗೆ ಇರುವ ಎಲ್ಲಾ ದಾಖಲೆಗಳನ್ನು ನಾನು ಪೊಲೀಸರಿಗೆ ನೀಡುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಈಗಾಗಲೇ ಸೌಮ್ಯ ಶೆಟ್ಟಿ ಅವರು ಸುದೀಪ್ ಮನೆಯವರು ಹಾಗೂ ವೇಣು ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉದ್ಯಮಿಯ ಸಾವಿನ ಸುತ್ತಲಿನ ಈ ಆರೋಪ-ಪ್ರತ್ಯಾರೋಪಗಳು ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿವೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/mangaluru-businessman-sudeep-shetty-death-case-soumya-shetty-denies-allegations-their-family-members-sat-rd05t96"/>
        </item>
        <item>
            <title><![CDATA[ಮುಂಬೈಗೆ  ಹೋಗೋರ ಗಮನಕ್ಕೆ ರೈಲು ಸೇವೆಯಲ್ಲಿ 1ತಿಂಗಳು ಅನಿರೀಕ್ಷಿತ ಬದಲಾವಣೆ, ಕೊಂಕಣ-ದಕ್ಷಿಣ ರೈಲ್ವೆ ಜಂಟಿ ಪ್ರಕಟಣೆ]]></title>
            <link>https://kannada.asianetnews.com/state/indian-railways-update-csmt-platform-work-extends-train-diversions-to-dadar-thane-till-may-19-gdp/articleshow-ro4om1h</link>
            <guid isPermaLink="true">https://kannada.asianetnews.com/state/indian-railways-update-csmt-platform-work-extends-train-diversions-to-dadar-thane-till-may-19-gdp/articleshow-ro4om1h</guid>
            <pubDate>Tue, 28 Apr 2026 21:34:00 +0530</pubDate>
            <description><![CDATA[ಮುಂಬೈನ ಸಿಎಸ್&zwnj;ಎಂಟಿ ನಿಲ್ದಾಣದಲ್ಲಿ ಪ್ಲಾಟ್&zwnj;ಫಾರ್ಮ್ ವಿಸ್ತರಣಾ ಕಾಮಗಾರಿಯಿಂದಾಗಿ ಮೇ 19ರವರೆಗೆ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು-ಮುಂಬೈ ಸೂಪರ್&zwnj;ಫಾಸ್ಟ್ ಮತ್ತು ತೇಜಸ್ ಎಕ್ಸ್&zwnj;ಪ್ರೆಸ್ ಸೇರಿದಂತೆ ಹಲವು ರೈಲುಗಳು ದಾದರ್ ಮತ್ತು ಥಾಣೆಯಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ. ಜೊತೆಗೆ, ಪರಶುರಾಮ್ ಎಕ್ಸ್&zwnj;ಪ್ರೆಸ್ ಸೇವೆಯನ್ನೂ ಭಾಗಶಃ ರದ್ದುಪಡಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kd36v76hehqfa55j3kyrq74g,imgname-konkan-railway--1--1766413147345.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಲ್ದಾಣದಲ್ಲಿ ಪ್ಲಾಟ್&zwnj;ಫಾರ್ಮ್ ಸಂಖ್ಯೆ 16 ಮತ್ತು 17ರ ವಿಸ್ತರಣಾ ಕಾಮಗಾರಿಗಳು ಭರದಿಂದ ಸಾಗುತ್ತಿರುವ ಹಿನ್ನೆಲೆ, ಮೇ 19ರವರೆಗೆ ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಇಲಾಖೆ ತನ್ನ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.&lt;/p&gt;&lt;p&gt;ಈ ಕಾಮಗಾರಿಗಳ ಕಾರಣದಿಂದಾಗಿ ಮುಂಬೈಗೆ ಆಗಮಿಸುವ ಕೆಲವು ಪ್ರಮುಖ ರೈಲುಗಳು ಸಿಎಸ್&zwnj;ಎಂಟಿ ತಲುಪುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಬದಲಿಗೆ ದಾದರ್ ಮತ್ತು ಥಾಣೆ ನಿಲ್ದಾಣಗಳಲ್ಲಿಯೇ ತಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಲಿವೆ. ಈ ಕ್ರಮವು ಏಪ್ರಿಲ್ 27ರಿಂದ ಮೇ 19ರವರೆಗೆ ಒಟ್ಟು 23 ದಿನಗಳ ಕಾಲ ಜಾರಿಯಲ್ಲಿರಲಿದೆ.&lt;/p&gt;&lt;h2&gt;ಪ್ರಮುಖ ರೈಲುಗಳಲ್ಲಿ ಬದಲಾವಣೆ&lt;/h2&gt;&lt;p&gt;ಮಂಗಳೂರು ಜಂಕ್ಷನ್&ndash;ಮುಂಬೈ ಸಿಎಸ್&zwnj;ಎಂಟಿ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ 12134) ಮೇ 19ರವರೆಗೆ ಥಾಣೆ ನಿಲ್ದಾಣದಲ್ಲಿಯೇ ತನ್ನ ಸಂಚಾರವನ್ನು ಮುಕ್ತಾಯಗೊಳಿಸಲಿದೆ. ಇದೇ ರೀತಿ, ಏಪ್ರಿಲ್ 26ರಿಂದ ಮೇ 18ರವರೆಗೆ ಮಂಗಳೂರಿನಿಂದ ಹೊರಡುವ ಈ ರೈಲು ಥಾಣೆಯವರೆಗೆ ಮಾತ್ರ ಸಂಚರಿಸುವುದಾಗಿ ಪ್ರಕಟಿಸಲಾಗಿದೆ.&lt;/p&gt;&lt;p&gt;ಇನ್ನೊಂದೆಡೆ, ಮಡಗಾಂವ್&ndash;ಮುಂಬೈ ತೇಜಸ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ 22120) ಏಪ್ರಿಲ್ 26ರಿಂದ ಮೇ 17ರವರೆಗೆ ಮುಂಬೈ ಸಿಎಸ್&zwnj;ಎಂಟಿ ತಲುಪದೇ ದಾದರ್ ನಿಲ್ದಾಣದಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಈ ಬದಲಾವಣೆಗಳು ದಕ್ಷಿಣ ಭಾರತ ಮತ್ತು ಕೊಂಕಣ ಭಾಗದಿಂದ ಬರುವ ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.&lt;/p&gt;&lt;p&gt;ಈ ಕುರಿತು ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಹೊರಡಿಸಿರುವ ಪ್ರಕಟಣೆಗಳಲ್ಲಿ, ಪ್ಲಾಟ್&zwnj;ಫಾರ್ಮ್ ವಿಸ್ತರಣಾ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಈ ಕ್ರಮ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;ಪರಶುರಾಮ್ ಎಕ್ಸ್&zwnj;ಪ್ರೆಸ್&zwnj; ಭಾಗಶಃ ರದ್ದು&lt;/h2&gt;&lt;p&gt;ಇದಲ್ಲದೆ, ಮಂಗಳೂರು ಸೆಂಟ್ರಲ್&ndash;ಕನ್ಯಾಕುಮಾರಿ ಪರಶುರಾಮ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ 16649/16650) ಸೇವೆಯಲ್ಲಿಯೂ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ಏಪ್ರಿಲ್ 29 ಮತ್ತು 30ರಂದು ಸಂಚರಿಸುವ ಈ ರೈಲು ನಾಗರಕೋಯಿಲ್ ಜಂಕ್ಷನ್ ಮತ್ತು ಕನ್ಯಾಕುಮಾರಿ ನಡುವಿನ ಭಾಗದಲ್ಲಿ ಭಾಗಶಃ ರದ್ದುಗೊಂಡಿರುತ್ತದೆ.&lt;/p&gt;&lt;p&gt;ತಿರುವನಂತಪುರಂ ವಿಭಾಗದ ನಾಗರಕೋಯಿಲ್ ಜಂಕ್ಷನ್ ಯಾರ್ಡ್&zwnj;ನಲ್ಲಿ ಸೇತುವೆ ಸಂಖ್ಯೆ 8ರ ಆರ್&zwnj;ಸಿಸಿ ಬಾಕ್ಸ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪರಿಣಾಮವಾಗಿ, ರೈಲು ಸಂಖ್ಯೆ 16650 ಕನ್ಯಾಕುಮಾರಿ&ndash;ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್&zwnj;ಪ್ರೆಸ್ ಏಪ್ರಿಲ್ 30ರಂದು ನಾಗರಕೋಯಿಲ್ ಜಂಕ್ಷನ್&zwnj;ನಿಂದ ಬೆಳಿಗ್ಗೆ 4.10ಕ್ಕೆ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಮುಂಬೈ ಸಿಎಸ್&zwnj;ಎಂಟಿ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆ ಈ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೆ ತರಲಾಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸಿ ಯೋಜನೆ ರೂಪಿಸಿಕೊಳ್ಳುವುದು ಸೂಕ್ತವಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡ ನಂತರ ರೈಲು ಸಂಚಾರ ಇನ್ನಷ್ಟು ಸುಗಮವಾಗುವ ನಿರೀಕ್ಷೆಯಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/state/indian-railways-update-csmt-platform-work-extends-train-diversions-to-dadar-thane-till-may-19-gdp/articleshow-ro4om1h"/>
        </item>
        <item>
            <title><![CDATA[3 ದಿನ ಬಾವಿಯಲ್ಲಿ ಬಿದ್ದ ಉಡುಪಿಯ ವೃದ್ಧನ ಜೀವ ಉಳಿಸಿದ ಸಿಲಿಂಡರ್​ OTP- ವಿಡಿಯೋ ಇಲ್ಲಿದೆ]]></title>
            <link>https://kannada.asianetnews.com/karnataka-districts/cylinder-otp-saves-life-of-udupi-old-man-who-fell-into-well-for-3-days-video-suc/articleshow-uhp4505</link>
            <guid isPermaLink="true">https://kannada.asianetnews.com/karnataka-districts/cylinder-otp-saves-life-of-udupi-old-man-who-fell-into-well-for-3-days-video-suc/articleshow-uhp4505</guid>
            <pubDate>Tue, 07 Apr 2026 16:37:00 +0530</pubDate>
            <description><![CDATA[ಉಡುಪಿಯ ಕಂಬಳಕಟ್ಟೆಯಲ್ಲಿ 62 ವರ್ಷದ ಶ್ರೀನಿವಾಸ ಆಚಾರ್ಯ ಎಂಬ ವೃದ್ಧರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಸಿಲುಕಿಕೊಂಡಿದ್ದರು. ಗ್ಯಾಸ್ ಸಿಲಿಂಡರ್ ಡೆಲಿವರಿಗಾಗಿ ಬಂದ ಓಟಿಪಿ ವಿಚಾರಣೆಯಿಂದಾಗಿ ಅವರು ಬಾವಿಯಲ್ಲಿರುವುದು ಬೆಳಕಿಗೆ ಬಂದು, ಅಗ್ನಿಶಾಮಕ ದಳದವರು ಅವರನ್ನು ರಕ್ಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knksw31w5cxa18rntbg7nrbx,imgname-udupi-story-1775559904316.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವೊಮ್ಮೆ ಅದೃಷ್ಟ ಎನ್ನುವುದು ಯಾವ ರೂಪದಲ್ಲಿಯಾದರೂ ಬರುತ್ತದೆ. ಆಯಸ್ಸು ಗಟ್ಟಿಯಾಗಿದ್ದರೆ, ಜೀವ ಉಳಿಸಲು ಒಂದು ಹುಲ್ಲುಕಡ್ಡಿಯೂ ಸಾಕು ಎನ್ನುವ ಮಾತೇ ಇದೆ. ಆದರೆ ಉಡುಪಿಯ ವೃದ್ಧರೊಬ್ಬರಿಗೆ ಹುಲ್ಲುಕಡ್ಡಿಯಲ್ಲ, ಬದಲಿಗೆ ಗ್ಯಾಸ್​ ಸಿಲಿಂಡರ್​ ಓಟಿಪಿ ಜೀವ ಕಾಪಾಡಿದೆ! ಮೂರು ದಿನಗಳಿಂದ ಬಾವಿಯಲ್ಲಿ ಬಿದ್ದು ನರಕಯಾತನೆ ಅನುಭವಿಸಿದ್ದ ವ್ಯಕ್ತಿಗೆ ಓಟಿಪಿ ಜೀವ ನೀಡಿದೆ. ವಿಚಿತ್ರ ಎನ್ನಿಸಿದರೂ ಸತ್ಯ ಘಟನೆ ಇದಾಗಿದ್ದು, ಈಗ ಪವಾಡ ಸದೃಶರಾಗಿ ಬದುಕಿಬಂದವರು 62 ವರ್ಷದ ಶ್ರೀನಿವಾಸ ಆಚಾರ್ಯ ಅವರು. ಉಡುಪಿಯ ಕಂಬಳಕಟ್ಟೆಯಲ್ಲಿ ಈ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಆಗಿದ್ದೇನು?&lt;/strong&gt;&lt;/h2&gt;&lt;p&gt;ಶ್ರೀನಿವಾಸ ಆಚಾರ್ಯ ಅವರು ಒಂಟಿಯಾಗಿ ವಾಸವಾಗಿದ್ದರು. ಅವರು ಮೂರು ದಿನಗಳ ಹಿಂದೆ ನೀರು ತರುವುದಕ್ಕಾಗಿ ಬಾವಿಗೆ ಹೋಗಿದ್ದರು. ಆ ಸಮಯದಲ್ಲಿ ಹಗ್ಗ ತುಂಡಾಗಿ 20 ಅಡಿ ಆಳದ ನೀರಿರುವ ಬಾವಿಗೆ ಬಿದ್ದು ಬಿಟ್ಟಿದ್ದಾರೆ. ಮೇಲೆ ಬರಲು ಎಲ್ಲಾ ರೀತಿಯ ಸಾಹಸ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಅವರ ಕೂಗು ಕೂಡ ಸಮೀಪದಲ್ಲಿ ಯಾರಿಗೂ ಕೇಳಿಸಲಿಲ್ಲ. ಒಂದು ಹಂತದಲ್ಲಿ ಅವರು ಜೀವದ ಆಸೆಯನ್ನೇ ಬಿಟ್ಟುಬಿಟ್ಟಿದ್ದರು. ಆ ಬಾವಿಯ ಕಡೆಗೆ ಬೇರೆಯವರು ಬಾರದ ಕಾರಣ, ಹಾಗೂ ಶ್ರೀನಿವಾಸ್​ ಅವರು ಒಬ್ಬರೇ ವಾಸವಾಗಿದ್ದ ಕಾರಣ, ಅವರು ಎಲ್ಲಿ ಹೋದರು ಎಂದು ತಿಳಿಯುವವರೂ ಯಾರೂ ಇಲ್ಲವಾಗಿದ್ದರು. ಬಾವಿಯಿಂದ ಮೇಲಕ್ಕೆ ಬರಲು ಬಾವಿಯೊಳಗಿದ್ದ ಫುಟ್ ಬಾಲ್ ಪೈಪ್ ಹಾಗೂ ಅದಕ್ಕೆ ಕಟ್ಟಿದ್ದ ಹಗ್ಗ ಹಿಡಿದುಕೊಂಡಿದ್ದರು. ಆದರೂ ಯಾರಿಗೂ ಅವರು ಬಾವಿಯಲ್ಲಿ ಬಿದ್ದದ್ದು ತಿಳಿಯಲೇ ಇಲ್ಲ.&lt;/p&gt;&lt;h3&gt;&lt;strong&gt;ಜೀವ ಉಳಿಸಿದ ಗ್ಯಾಸ್​ ಓಟಿಪಿ&lt;/strong&gt;&lt;/h3&gt;&lt;p&gt;ಇಲ್ಲಿಯೇ ಇರುವುದು ರೋಚಕ ಟರ್ನ್​. ಶ್ರೀನಿವಾಸ್​​ ಅವರು ಗ್ಯಾಸ್​​ ಬುಕ್​ ಮಾಡಿದ್ದರು. ಆದರೆ ಗ್ಯಾಸ್​ ಸಮಸ್ಯೆ ಇದ್ದುದರಿಂದ ಅದು ಬಂದಿರಲಿಲ್ಲ. ಆದ್ದರಿಂದ ಶ್ರೀನಿವಾಸ್​ ಅವರು, ತಮ್ಮ ಪರಿಚಯದ ಗಣೇಶ್ ಎನ್ನುವವರ ಬಳಿ ಇದ್ದ ಹೆಚ್ಚುವರಿ ಸಿಲಿಂಡರ್​ ಪಡೆದುಕೊಂಡಿದ್ದರು. ಮೂರ್ನಾಲ್ಕು ದಿನಗಳಾದರೂ ಸಿಲಿಂಡರ್​ ಬಂದಿರಲಿಲ್ಲ. ಬಳಿಕ ಗಣೇಶ್​ ಅವರಿಗೆ ಗ್ಯಾಸ್​​ ಅಗತ್ಯ ಇದ್ದುದರಿಂದ ಗ್ಯಾಸ್​ ಎಜೆನ್ಸಿಗೆ ಕರೆ ಮಾಡಿ ಭಟ್ಟರಿಗೆ ಗ್ಯಾಸ್ ಸಿಲಿಂಡರ್&zwnj;ವೊಂದು ಆದಷ್ಟು ಬೇಗ ನೀಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಗ್ಯಾಸ್ ಸಿಬ್ಬಂದಿ ಸಿಲಿಂಡರ್​ ತೆಗೆದುಕೊಂಡು ಶ್ರೀನಿವಾಸ್​​ ಆಚಾರ್​ ಅವರ ಮನೆಗೆ ಹೋದರು, ಆದರೆ ಅವರು ಅಲ್ಲಿ ಇರದ ಕಾರಣ ವಾಪಸಾದರು.&lt;/p&gt;&lt;h3&gt;&lt;strong&gt;ಸಂದೇಹಗೊಂಡು ಬಾವಿಗೆ ಇಣುಕಿದರು&lt;/strong&gt;&lt;/h3&gt;&lt;p&gt;ಆದರೆ ಈ ವಿಷಯ ಗಣೇಶ್​ ಅವರಿಗೆ ತಿಳಿದಿರಲಿಲ್ಲ. ಪುನಃ ಗ್ಯಾಸ್​ ಏಜೆನ್ಸಿಗೆ ಕಾಲ್​ ಮಾಡಿದಾಗ, ಅವರ ಮನೆಗೆ ಎರಡು ದಿನಗಳ ಹಿಂದೆ ಹೋಗಿದ್ದೆ. ಓಟಿಪಿ ಬೇಕಿತ್ತು. ಆದರೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದಾಗ ಸಂದೇಹಗೊಂಡ ಗಣೇಶ್​ ಅವರು ಸಮೀಪವೇ ಇದ್ದ ಶ್ರೀನಿವಾಸ್​ ಅವರ ಮನೆಗೆ ಹೋಗಿದ್ದಾರೆ. ಆದರೆ ಅಲ್ಲಿ ಅವರು ಇಲ್ಲದಾಗ ಸಂದೇಹ ಬಂದಿದೆ. ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಗ್ಯಾಸ್​ ಕೊಳ್ಳುವುದಕ್ಕಾದರೂ ಅವರಿಗೆ ಓಟಿಪಿಯ ಅಗತ್ಯವಿತ್ತು. ಆದ್ದರಿಂದ ಎಲ್ಲಾ ಕಡೆ ಹುಡುಕಿ ಕೊನೆಗೆ ಬಾವಿಯನ್ನು ಇಣುಕಿದಾಗ ವಿಷಯ ಬೆಳಕಿಗೆ ಬಂದಿದೆ.&lt;/p&gt;&lt;h3&gt;&lt;strong&gt;ಅಗ್ನಿಶಾಮಕ ಸಿಬ್ಬಂದಿ&lt;/strong&gt;&lt;/h3&gt;&lt;p&gt;ಕೂಡಲೇ ಸ್ಥಳೀಯರು ಬಾವಿಗೆ ಏಣಿ ಹಾಕಿ ಅವರನ್ನು ಮೇಲಕ್ಕೆ ಎತ್ತಲು ನೋಡಿದರು. ಆದರೆ, ಮೂರು ದಿನಗಳಿಂದ ಉಪವಾಸ ಇದ್ದು, ನಿತ್ರಾಣಗೊಂಡಿದ್ದ ಅವರು ಹಗ್ಗ ಹಿಡಿದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅವರು ಬಾವಿಯೊಳಗೆ ಇಳಿದು ಆಚಾರ್ಯರನ್ನು ಮೇಲಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಅವರು ಆರೋಗ್ಯವಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Asianet Suvarna News (@asianetsuvarnanews)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/cylinder-otp-saves-life-of-udupi-old-man-who-fell-into-well-for-3-days-video-suc/articleshow-uhp4505"/>
        </item>
        <item>
            <title><![CDATA[ಎಸ್ಸೆಸ್ಸೆಲ್ಸಿ ಫಲಿತಾಂಶ:  ಕರಾವಳಿ ಜಿಲ್ಲೆಗಳ ಕಮಾಲ್, ಕಲಬುರಗಿ ಕೊನೆ ಸ್ಥಾನ, ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs</link>
            <guid isPermaLink="true">https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs</guid>
            <pubDate>Thu, 23 Apr 2026 13:06:30 +0530</pubDate>
            <description><![CDATA[2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 94.1ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆಯು ಸತತವಾಗಿ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hxfab2pjfxnzca3pghha8m3x,imgname-tn-sslc-results.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 94.1 ಆಗಿದ್ದು, ಕಳೆದ ವರ್ಷಗಳಿಗಿಂತ ಉತ್ತಮ ಸಾಧನೆ ದಾಖಲಾಗಿದೆ. ವಿದ್ಯಾರ್ಥಿಗಳ ಸಾಧನೆ, ಜಿಲ್ಲಾವಾರು ಫಲಿತಾಂಶ ಮತ್ತು ಗ್ರಾಮೀಣ ಪ್ರದೇಶಗಳ ಮೇಲುಗೈ&mdash;allವು ಈ ಬಾರಿ ವಿಶೇಷ ಚರ್ಚೆಗೆ ಕಾರಣವಾಗಿವೆ.&lt;/p&gt;&lt;h2&gt;ಯಾರು ಲಾಸ್ಟ್? ಯಾರು ಫಸ್ಟ್?&lt;/h2&gt;&lt;p&gt;ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಮತ್ತೆ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 98.40 ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಕಳೆದ ಬಾರಿಯೂ ಕಲಬುರಗಿ ಕಲಬುರಗಿ ಕೊನೆಯ ಸ್ಥಾನ ಪಡೆದಿತ್ತು. 2025ರಲ್ಲಿ 56.89 ಬಂದಿತ್ತು. &amp;nbsp;ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಫಲಿತಾಂಶವನ್ನು ಉತ್ತಮಗೊಳಿಸುವ ಮಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಮಹತ್ವದ ಕಾರ್ಯಗಳನ್ನು ಮಾಡಿತ್ತು.&lt;/p&gt;&lt;h2&gt;ಇಳಿಕೆಯತ್ತಲೇ ಸಾಗಿದ ಕಲಬುರಗಿ, ಏರಿಕೆ ಯಾವಾಗ?&lt;/h2&gt;&lt;p&gt;ಕಳೆದ ಬಾರಿಗಿಂತ ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನದಲ್ಲಿ ಇರುವ ಕಲಬುರಗಿ 2023 ನೇ ಸಾಲಿನಿಂದಲೇ &amp;nbsp;ಇಳಿಕೆಯತ್ತ ಫಲಿತಾಂಶವನ್ನು ದಾಖಲಿಸುತ್ತಲೇ ಬಂದಿದೆ. &amp;nbsp;2023ರಲ್ಲಿ 29ನೇ ಸ್ಥಾನದಲ್ಲಿತ್ತು, 2024ರಲ್ಲಿ 34ನೇ ಸ್ಥಾನ ಗಳಿಸಿತ್ತು. 2025ರಲ್ಲಿ 35ನೇ ಸ್ಥಾನ &amp;nbsp;ಪಡೆದು ಕೊನೆಯ ಸ್ಥಾನ ಪಡೆದಿತ್ತು. ಇದೀಗ ಈ ಸಾಲಿನಲ್ಲೂ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.&lt;/p&gt;&lt;h2&gt;ಜಿಲ್ಲಾವಾರು ಫಲಿತಾಂಶ ಹೀಗಿದೆ&lt;/h2&gt;&lt;p&gt;ದಕ್ಷಿಣ ಕನ್ನಡ 98.40&lt;/p&gt;&lt;p&gt;ಉಡುಪಿ 98.18&lt;/p&gt;&lt;p&gt;ಉತ್ತರ ಕನ್ನಡ 98.09&lt;/p&gt;&lt;p&gt;ಹಾಸನ 97.51&lt;/p&gt;&lt;p&gt;ಮಂಡ್ಯ 97.45&lt;/p&gt;&lt;p&gt;ಸಿರ್ಸಿ 97.21&lt;/p&gt;&lt;p&gt;ಹಾವೇರಿ 96.87&lt;/p&gt;&lt;p&gt;ಕೊಡಗು 96.70&lt;/p&gt;&lt;p&gt;ಶಿವಮೊಗ್ಗ 96.56&lt;/p&gt;&lt;p&gt;ವಿಜಯನಗರ 96.39&lt;/p&gt;&lt;p&gt;ಬೆಂಗಳೂರು ಗ್ರಾಮಾಂತರ 95.84&lt;/p&gt;&lt;p&gt;ಧಾರವಾಡ 95.59&lt;/p&gt;&lt;p&gt;ಕೋಲಾರ 95.50&lt;/p&gt;&lt;p&gt;ಬಾಗಲಕೋಟೆ 95.42&lt;/p&gt;&lt;p&gt;ಬೆಂಗಳೂರು ಉತ್ತರ 95.34&lt;/p&gt;&lt;p&gt;ಗದಗ 95.24&lt;/p&gt;&lt;p&gt;ಚಿಕ್ಕಮಗಳೂರು 94.99&lt;/p&gt;&lt;p&gt;ಬೆಳಗಾವಿ 94.75&lt;/p&gt;&lt;p&gt;ದಾವಣಗೆರೆ 94.64&lt;/p&gt;&lt;p&gt;ಮೈಸೂರು 94.50&lt;/p&gt;&lt;p&gt;ರಾಯಚೂರು 94.41&lt;/p&gt;&lt;p&gt;ವಿಜಯಪುರ 94.17&lt;/p&gt;&lt;p&gt;ಚಿಕ್ಕೋಡಿ 94.09&lt;/p&gt;&lt;p&gt;ಬಳ್ಳಾರಿ 93.36&lt;/p&gt;&lt;p&gt;ಕೊಪ್ಪಳ 93.10&lt;/p&gt;&lt;p&gt;ರಾಮನಗರ 92.83&lt;/p&gt;&lt;p&gt;ಚಿತ್ರದುರ್ಗ 92.25&lt;/p&gt;&lt;p&gt;ಬೀದರ 92.18&lt;/p&gt;&lt;p&gt;ತುಮಕೂರು 92.04&lt;/p&gt;&lt;p&gt;ಚಾಮರಾಜನಗರ 91.89&lt;/p&gt;&lt;p&gt;ಯಾದಗಿರಿ 91.89&lt;/p&gt;&lt;p&gt;ಬೆಂಗಳೂರು ದಕ್ಷಿಣ 91.65&lt;/p&gt;&lt;p&gt;ಚಿಕ್ಕಬಳ್ಳಾಪುರ 90.88&lt;/p&gt;&lt;p&gt;ಮಧುಗಿರಿ 90.26&lt;/p&gt;&lt;p&gt;ಕಲಬುರಗಿ 85.06&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-sslc-result-2026-announced-dakshina-kannada-top-kalaburagi-ranks-last-check-district-wise-results-gdp/articleshow-usbvvgs"/>
        </item>
        <item>
            <title><![CDATA[ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ 12 ವರ್ಷದ ಸಮರ್ಥ್]]></title>
            <link>https://kannada.asianetnews.com/karnataka-districts/karkala-s-12-year-old-samarth-performed-a-bhoot-kola-mrq/articleshow-w8kcz2c</link>
            <guid isPermaLink="true">https://kannada.asianetnews.com/karnataka-districts/karkala-s-12-year-old-samarth-performed-a-bhoot-kola-mrq/articleshow-w8kcz2c</guid>
            <pubDate>Sun, 05 Apr 2026 07:21:55 +0530</pubDate>
            <description><![CDATA[&lt;p&gt;ಕಾರ್ಕಳದ 12 ವರ್ಷದ ಬಾಲಕ ಸಮರ್ಥ್, ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ್ದಾನೆ. ತನ್ನ ಅಜ್ಜ ಮತ್ತು ತಂದೆಯ ಮೂರು ತಲೆಮಾರುಗಳ ಪರಂಪರೆಯನ್ನು ಮುಂದುವರಿಸಿರುವ ಈ ಬಾಲಕನ ದೈವಾರಾಧನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kndncfc8qwgvzye593zk7vm1,imgname-karkala-samarth-1775353871752.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರ್ಕಳ:&lt;/strong&gt; &amp;nbsp;ಕಾರ್ಕಳ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮರ್ಥ್&zwnj;, ಕಿರಿಯ ವಯಸ್ಸಿನಲ್ಲೇ ಭೂತ ಕೋಲ ಕಟ್ಟಿದ ಘಟನೆ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಅಗಿದೆ. ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಮರ್ಥ್&zwnj; ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿದ್ದಾನೆ.&lt;/p&gt;&lt;p&gt;ಮೂರು ತಲೆಮಾರುಗಳಿಂದ ಮುಂದುವರಿದ ಪರಂಪರೆಯ ಭಾಗವಾಗಿ, ಅಜ್ಜ ಮೋನು ಪಾಣರ ಮತ್ತು ತಂದೆ ಹರೀಶ ಅವರ ಹಾದಿಯಲ್ಲಿ ಸಮರ್ಥ್&zwnj; ಕೂಡ ನಡೆದು ದೈವರಾಧನೆಗೆ ತನ್ನ ಕೊಡುಗೆ ನೀಡಿದ್ದಾನೆ.&lt;/p&gt;&lt;h2&gt;&lt;strong&gt;ಸ್ಥಳೀಯರಲ್ಲಿ ಸಂತಸ&lt;/strong&gt;&lt;/h2&gt;&lt;p&gt;ಅವಿವಾಹಿತರು ಮಾತ್ರ ಪಾಲ್ಗೊಳ್ಳುವ ವಿಶೇಷ ಆಚರಣೆಯ ಈ ಕೋಲದಲ್ಲಿ ಬಾಲಕನ ಭಾಗವಹಿಸುವಿಕೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಕಳೆದ ಬಾರಿ&zwnj; ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲೂ ಕೂಡ ಗಗ್ಗರ ಕಟ್ಟಿದ್ದ&lt;/p&gt;&lt;p&gt;ಯುವಪೀಳಿಗೆ ಸಂಸ್ಕೃತಿಯನ್ನು ಉಳಿಸುವ ದಿಶೆಯಲ್ಲಿ ಇದು ಒಳ್ಳೆಯ ಬೆಳವಣಿಗೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ದೈವ ವೇಷ ಹಾಕಿ ಅತಿರೇಕ ವರ್ತನೆ: ದೂರು ದಾಖಲು&lt;/strong&gt;&lt;/h3&gt;&lt;p&gt;ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪವಿತ್ರ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮದುಮಗ ಮತ್ತು ಆತನ ಬೆಂಬಲಿಗರು ದೈವಕ್ಕೆ ಅವಮಾನ ಮಾಡಿದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಎಮ್ಮೆಮಾಡು ಗ್ರಾಮದಲ್ಲಿ ಗ್ರಾಮದ ಯುವಕರು ಎರಡು ದಿನಗಳ ಹಿಂದೆ ಮದುಮಗನೊಬ್ಬನಿಗೆ ದೈವದ ವೇಷ ತೊಡಿಸಿ ಉಳಿದವರು ದೇವರನ್ನು ಹೀಯಾಳಿಸಿ ಮೆರವಣಿಗೆ ನಡೆಸಿರುವ ಫೋಟೋ ವೈರಲ್&zwnj; ಆಗಿದೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವೈರಲ್ ಆಯ್ತು ಗ್ಲೋಬಲ್ ಸ್ಟಾರ್ ಅಧ್ಯಾತ್ಮಿಕ ಪಯಣ; ಸುವರ್ಣ ಮಂದಿರದಲ್ಲಿ 'ಸೇವೆ' ಮಾಡ್ತಿರೋ ಪ್ರಿಯಾಂಕಾ ಚೋಪ್ರಾ&lt;/strong&gt;&lt;strong&gt;!&lt;/strong&gt;&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಪೂರ್ವಜರ ನಂಬಿಕೆ ಹಾಗೂ ಸಂಸ್ಕೃತಿ, ಧರ್ಮವನ್ನು ಅಪಹಾಸ್ಯ ಮಾಡಿರುವುದರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಿಂದೂ ಪರ ಸಂಘಟನೆ ಪ್ರಮುಖರು ದೂರು ದಾಖಲಿಸಿದ್ದಾರೆ. ಎಮ್ಮೆಮಾಡು ಗ್ರಾಮದ ಯುವಕರಾದ ಅಬ್ದುಲ್ ರಾಶಿದ್, ಹನೀಫ್, ಲತೀಫ್, ಮೊಹಮ್ಮದ್ ಪೈಸಲ್ ,ಶಕೀರ್ ಹಾಗೂ ಬಶೀರ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉಡುಪಿಯ ಅಳಿಯ ಸೂರ್ಯಕುಮಾರ್ ಯಾದವ್&zwnj; ಬಾಳಲ್ಲಿ ಕಾಪು ಮಾರಿಯಮ್ಮನ ಪವಾಡ!&lt;/strong&gt;&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/karkala-s-12-year-old-samarth-performed-a-bhoot-kola-mrq/articleshow-w8kcz2c"/>
        </item>
        <item>
            <title><![CDATA[Karnataka News Live: ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು]]></title>
            <link>https://kannada.asianetnews.com/state/karnataka-news-live-7-april-2026-miracle-in-udupi-elderly-man-survives-3-days-inside-well-by-sitting-on-a-pump/liveblog-updates-z1dm7i0</link>
            <guid isPermaLink="true">https://kannada.asianetnews.com/state/karnataka-news-live-7-april-2026-miracle-in-udupi-elderly-man-survives-3-days-inside-well-by-sitting-on-a-pump/liveblog-updates-z1dm7i0</guid>
            <pubDate>Tue, 07 Apr 2026 23:37:46 +0530</pubDate>
            <description><![CDATA[&lt;p&gt;&lt;strong&gt;ಉಡುಪಿ:&lt;/strong&gt; ಆಯತಪ್ಪಿ ಬಾವಿಗೆ ಬಿದ್ದಿದ್ದ ವೃದ್ಧರೊಬ್ಬರು 3 ದಿನ ಪಂಪ್&zwnj; ಮೇಲೆ ಕೂತು ಜೀವ ಉಳಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಶ್ರೀನಿವಾಸ ಆಚಾರ್ಯ (63) ಸಾವನ್ನು ಗೆದ್ದು ಬಂದವರು. ನಿರ್ಜನ ಪ್ರದೇಶದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಅವರು, ತೋಟಕ್ಕೆ ನೀರುಣಿಸಲು ಹೋದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದರು.&amp;nbsp;&lt;/p&gt;&lt;p&gt;30 ಅಡಿಯ ಬಾವಿಯಲ್ಲಿ ಸಾಕಷ್ಟು ನೀರಿತ್ತು. ಆಗ ಅದರಲ್ಲಿದ್ದ ಸಬ್&zwnj; ಮರ್ಸಿಬಲ್ ಪಂಪಿನ ಮೇಲೆ ಕುಳಿತು ಮೇಲೆತ್ತುವಂತೆ ಕೂಗಿದರೂ, ಯಾರಿಗೂ ಕೇಳಲಿಲ್ಲ. ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ನೀಡಲು ಬಂದಾಗ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತೋಟದಲ್ಲಿ ಹುಡುಕಿದಾಗ ಆಚಾರ್ಯರು ಪಂಪಿನ ಮೇಲೆ ಕೂತಿರೋದು ಕಂಡುಬಂತು. ಅಗ್ನಿಶಾಮಕ ದಳ ಸಿಬ್ಬಂದಿ ಕರೆಸಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knmj1tb7d9ma1ceb1zk1kjxw,imgname-haveri-accident-1775585257830.png" type="image/jpeg" height="390" width="690"/>
            <category>udupi</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-7-april-2026-miracle-in-udupi-elderly-man-survives-3-days-inside-well-by-sitting-on-a-pump/liveblog-updates-z1dm7i0"/>
        </item>
    </channel>
</rss>
