<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Jul 2026 08:34:14 +0530</lastBuildDate>
        <atom:link href="https://kannada.asianetnews.com/rss/udupi" rel="self" type="application/rss+xml"/>
        <item>
            <title><![CDATA[ಕರಾವಳಿ ರೈಲು: ಮಂಗಳೂರು-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಗಳೂರು-ಬಾಂದ್ರಾ ಟರ್ಮಿನಸ್ ಹೊಸ ರೈಲು ಸೇವೆ ಶೀಘ್ರ!]]></title>
            <link>https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g</link>
            <guid isPermaLink="true">https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g</guid>
            <pubDate>Sat, 27 Jun 2026 10:35:27 +0530</pubDate>
            <description><![CDATA[ಮಂಗಳೂರಿನಿಂದ ಬಾಂದ್ರಾ ಟರ್ಮಿನಸ್&zwnj;ಗೆ ಹೊಸ ರೈಲು ಸೇವೆ ಆರಂಭಿಸುವ ಪ್ರಸ್ತಾವನೆ ಸಕಾರಾತ್ಮಕ ಹಂತದಲ್ಲಿದೆ. ಪ್ರಸ್ತುತ ಮಂಗಳೂರಿನಲ್ಲಿ ಐದು ದಿನಗಳ ಕಾಲ ನಿಲ್ಲುವ ರಾಮೇಶ್ವರಂ ರೈಲಿನ ರೇಕ್ ಅನ್ನು ಈ ಸೇವೆಗೆ ಬಳಸಿಕೊಳ್ಳುವ ಯೋಜನೆ ಇದಾಗಿದ್ದು, ಕರಾವಳಿ ಭಾಗದ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpfrh03j5ft3q01br2z,imgname-konkan-railways--1--1781847817935.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮಂಗಳೂರಿನಿಂದ ವಸಾಯ್ ರೋಡ್ ಮೂಲಕವಾಗಿ ಬಾಂದ್ರಾ ಟರ್ಮಿನಸ್&zwnj;ಗೆ ನೇರ ರೈಲು ಸೇವೆ ಆರಂಭವಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿರುವುದಾಗಿ ವರದಿ ತಿಳಿಸಿದೆ. ಪ್ರಸ್ತುತ ಮಂಗಳೂರು ಸೆಂಟ್ರಲ್&zwnj;ನಿಂದ ರೈಲು ಸಂಖ್ಯೆ 16622 ಸಾಪ್ತಾಹಿಕವಾಗಿ ಪ್ರತಿ ಶನಿವಾರ ರಾಮೇಶ್ವರಂಗೆ ತೆರಳಿ, ಸೋಮವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮರಳುತ್ತದೆ. ಸೋಮವಾರದಿಂದ ಶನಿವಾರ ವರೆಗೆ ಸುಮಾರು ಐದು ದಿನಗಳ ಕಾಲ ಜರ್ಮನ್ ತಂತ್ರಜ್ಞಾನದ ಎಲ್&zwnj;ಎಚ್&zwnj;ಬಿ (LHB) ಬೋಗಿಗಳನ್ನು ಒಳಗೊಂಡ ಸಂಪೂರ್ಣ ರೇಕ್ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲೇ ಖಾಲಿಯಾಗಿ ನಿಲ್ಲುತ್ತದೆ. ಈ ರೇಕಲ್ಲಿ 4 ಸಾಮಾನ್ಯ ಬೋಗಿ, 2 ಹವಾನಿಯಂತ್ರಿತ ಟು ಟಯರ್, 6 ತ್ರೀ ಟಯರ್, 6 ಸ್ಲೀಪರ್ ಹಾಗೂ 2 ಎಕಾನಮಿ ಬೋಗಿಗಳು ಸೇರಿವೆ.&lt;/p&gt;&lt;p&gt;ಈ ರೇಕ್ ಅನ್ನು ಉಪಯೋಗಿಸಿ ಮಂಗಳೂರು ಸೆಂಟ್ರಲ್&zwnj;ನಿಂದ ಕೊಂಕಣ ರೈಲ್ವೆ ಮಾರ್ಗವಾಗಿ ವಸಾಯ್ ರೋಡ್ ಮೂಲಕ ಬಾಂದ್ರಾ ಟರ್ಮಿನಸ್ ತನಕ ರೈಲು ಸೇವೆ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೇ ರೇಕ್ ಬಾಂದ್ರಾ ಟರ್ಮಿನಸ್&zwnj;ನಿಂದ ವಾಪಸ್ ವಸಾಯ್ ರೋಡ್ ಮುಖಾಂತರ ಮಂಗಳೂರು ಸೆಂಟ್ರಲ್&zwnj;ಗೆ ಸಂಚರಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ ಎಂದು ವರದಿ ತಿಳಿಸಿವೆ.&lt;/p&gt;&lt;h2&gt;ನಾಲ್ಕು ದಿನಗಳ ರೈಲು ಮಾರ್ಗ ಲಭ್ಯ:&lt;/h2&gt;&lt;p&gt;ಮಂಗಳೂರು ಸೆಂಟ್ರಲ್ ಮತ್ತು ವಸಾಯ್ ರೋಡ್ ನಡುವಿನ ಈ ಹೊಸ ರೈಲು ಸೇವೆಗೆ ಅಗತ್ಯವಾದ ರೈಲು ಮಾರ್ಗ (ರಹದಾರಿ) ಲಭ್ಯವಿರುವುದು ಯೋಜನೆಗೆ ಮತ್ತಷ್ಟು ಬಲ ನೀಡಿದೆ. ಇತ್ತೀಚೆಗೆ ಸೂರತ್-ಮಂಗಳೂರು ಸಾಪ್ತಾಹಿಕ ರೈಲು ಸೇವೆ ಆರಂಭವಾದ ಬಳಿಕ ವಾರದಲ್ಲಿ 4 ದಿನಗಳ ಕಾಲ ಈ ರೈಲು ಮಾರ್ಗದಲ್ಲಿ ಅವಕಾಶವಿರುವುದಾಗಿ ಹೇಳಲಾಗಿದೆ.&lt;/p&gt;&lt;p&gt;ಈ ಲಭ್ಯವಿರುವ ಮಾರ್ಗವನ್ನು ಬಳಸಿಕೊಂಡು, ಪ್ರಸ್ತುತ ರಾಮೇಶ್ವರಂ-ಮಂಗಳೂರು ನಡುವೆ ಸಂಚರಿಸುತ್ತಿರುವ ರೈಲಿನ ರೇಕ್&zwnj;ನ್ನೇ ಮಂಗಳೂರು-ವಸಾಯ್ ರೋಡ್-ಬಾಂದ್ರಾ ಟರ್ಮಿನಸ್ ಸೇವೆಗೆ ಬಳಸಬಹುದಾಗಿದೆ ಎಂದು ಮುಂಬೈ ರೈಲು ಯಾತ್ರಿ ಸಂಘದ ಕಾರ್ಯಕಾರಿ ಕಾರ್ಯದರ್ಶಿ ಒಲಿವರ್ ಡಿ ಸೋಜಾ ತಿಳಿಸಿದ್ದಾರೆ.&lt;/p&gt;&lt;h2&gt;ಸಂಸದರ ಮನವಿ, ಮುಂಬೈ ಭಾಗದಿಂದಲೂ ಒತ್ತಾಯ:&lt;/h2&gt;&lt;p&gt;ಈ ಕುರಿತು ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಕ್ಷೇತ್ರಗಳ ಸಂಸದರು ರೈಲ್ವೆ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಇದರ ಜೊತೆಗೆ ಮುಂಬೈ ಭಾಗದಿಂದಲೂ ಈ ಯೋಜನೆಗೆ ಬೆಂಬಲ ವ್ಯಕ್ತವಾಗಿದ್ದು, ಪಿಯೂಷ್ ಗೋಯಲ್ ಹಾಗೂ ಮಾಜಿ ಸಂಸದ ಗೋಪಾಲ ಶೆಟ್ಟಿ ಅವರು ವಿಶೇಷ ಮುತುವರ್ಜಿ ವಹಿಸಿ ರಾಮೇಶ್ವರಂ-ಮಂಗಳೂರು ರೈಲಿನ ರೇಕ್ ಅನ್ನು ಮಂಗಳೂರು ಸೆಂಟ್ರಲ್-ಬಾಂದ್ರಾ ಟರ್ಮಿನಸ್ ಸೇವೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಕರಾವಳಿ-ಮುಂಬೈ ಪ್ರಯಾಣಿಕರಿಗೆ ಅನುಕೂಲ&lt;/h2&gt;&lt;p&gt;ಈ ಯೋಜನೆ ಅನುಷ್ಠಾನಗೊಂಡರೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ಪ್ರಯಾಣಿಕರಿಗೆ ಮುಂಬೈ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣ ಸೌಲಭ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ರೈಲ್ವೆ ಸಚಿವಾಲಯ ಮತ್ತು ಸಂಬಂಧಿತ ಜನಪ್ರತಿನಿಧಿಗಳ ಮುಂದಿನ ಕ್ರಮಗಳತ್ತ ಪ್ರಯಾಣಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mumbai-to-mangaluru-new-direct-train-service-via-konkan-railway-on-the-cards-gdp/articleshow-0i1h85g"/>
        </item>
        <item>
            <title><![CDATA[Udupi Mutt: ಉಡುಪಿ ಶ್ರೀ ಕೃಷ್ಣನ ಮಠದಲ್ಲಿ ಶ್ರೀ ಶಂಕಾರಾಚಾರ್ಯರ ನಿಂದನೆ; ಕ್ಷಮೆ ಕೇಳಿದ ಮಹಿಳೆ]]></title>
            <link>https://kannada.asianetnews.com/karnataka-districts/udupi-sri-krishna-mutt-shri-shankaracharya-controversy-women-apology/articleshow-0kh3eve</link>
            <guid isPermaLink="true">https://kannada.asianetnews.com/karnataka-districts/udupi-sri-krishna-mutt-shri-shankaracharya-controversy-women-apology/articleshow-0kh3eve</guid>
            <pubDate>Tue, 14 Jul 2026 16:02:52 +0530</pubDate>
            <description><![CDATA[&lt;p&gt;Shankaracharya controversy In Udupi Mutt: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಆಚಾರ್ಯ ಶಂಕರರ ನಿಂದನೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಬಗ್ಗೆ ಹರಿಕಥೆ ನಡೆಸಿದ ಮಹಿಳೆ ಕ್ಷಮೆ ಕೇಳಿದ್ದು, ಮಠವೂ ಕೂಡ ಸ್ಪಷ್ಟನೆ ನೀಡಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxg2y1r3fdevsf62xb943cwz,imgname-new-project--32--1784025122563.jpg" type="image/jpeg" height="390" width="690"/>
            <content:encoded><![CDATA[&lt;p&gt;Shankaracharya controversy In Udupi Mutt: ಉಡುಪಿ ಮಠದಲ್ಲಿ ಹರಿಕಥೆ ನಡೆದಿದೆ. ಹರಿಕಥೆ ನಡೆಸುವ ವೇಳೆ ಯುವತಿಯರಿಂದ ಶಂಕರಾಚಾರ್ಯರ ಅವಹೇಳನ ಮಾಡಲಾಗಿದೆ. ಸೋಶಿಯಲ್&zwnj; ಮೀಡಿಯಾದಲ್ಲಿ ಈ ವಿಡಿಯೋ ವೈರಲ್&zwnj; ಆಗಿದೆ. ಆಚಾರ್ಯ ಮಧ್ವರ ಕಥೆ ಹೇಳುವ ಸಂದರ್ಭದಲ್ಲಿ, ಶಂಕರಾಚಾರ್ಯರ ಅವಹೇಳನ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿದೆ. ಈಗ ಮಠದವರು, ಆ ಯುವತಿ ಕೂಡ ಕ್ಷಮೆ ಕೇಳಿದ್ದಾರೆ.&lt;/p&gt;&lt;p&gt;ಏಕವಚನದಲ್ಲಿ ಆಚಾರ್ಯ ಶಂಕರರನ್ನು ಉಲ್ಲೇಖಿಸಿ ಮಾತು ಆಡಲಾಗಿದೆ. ಕಟ್ಟುಕಥೆಗಳನ್ನು ಪ್ರಸ್ತಾಪಿಸಿ ಶಂಕರಾಚಾರ್ಯರ ಬಗ್ಗೆ ಕೀಳು ಮಾತನಾಡಿರುವುದಾಗಿ ಆರೋಪ ಹೊರಿಸಲಾಗಿತ್ತು.&lt;/p&gt;&lt;p&gt;ಬೆಳಗಾವಿಯಿಂದ ಬಂದ ಯುವತಿಯರ ತಂಡದ ಧಾರ್ಮಿಕ ಕಾರ್ಯಕ್ರಮ ನೀಡಿದೆ. ಉಡುಪಿಯ ರಾಜಾಂಗಣ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಹೇಳನ ಮಾಡಲಾಗಿದೆ. ಸೋಶಿಯಲ್&zwnj; ಮೀಡಿಯಾದಲ್ಲಿ ಆಚಾರ್ಯ ಶಂಕರರ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದರು, ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದು, ಇಲ್ಲವಾದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು.&lt;/p&gt;&lt;h2&gt;ಆ ಹುಡುಗಿ ಹರಿಕಥೆಯಲ್ಲಿ ಏನು ಹೇಳಿತ್ತು?&lt;/h2&gt;&lt;p&gt;&ldquo;ಹಿಂದೆ ಭೀಮಸೇನನಿಂದ ಪರಾಜಿತರಾದ ದೈತ್ಯರು ಕಲಿಯುಗದಲ್ಲಿ ತಮ್ಮ ಸ್ವಭಾವಕ್ಕೆ ತಕ್ಕಂತೆ ಭಗವಂತನು ನಿರ್ಗುಣನೆಂದು ಪ್ರತಿಪಾದಿಸಲು ಹುಟ್ಟಿ ಬರುತ್ತಾರೆ. ಮಣಿಮಂತ ಎಂಬ ದೈತ್ಯನು ರುದ್ರದೇವರ ವರ ಪಡೆದು ಕಲಾಡಿ ಗ್ರಾಮದಲ್ಲಿ ಶಂಕರ ಎಂಬ ಹೆಸರಿನಿಂದ ಜನಿಸುತ್ತಾನೆ. ವೇದವ್ಯಾಸರಿಗೆ ವಿರುದ್ಧವಾದ ದುಶ್ಶಾಸ್ತ್ರಗಳನ್ನು ರಚಿಸಿ, ಜಗತ್ತು ಮಿಥ್ಯ, ಜೀವ-ಬ್ರಹ್ಮರಿಗೆ ಭೇದವಿಲ್ಲ ಎಂದು ಪ್ರತಿಪಾದಿಸಿ ಸಜ್ಜನರ ಮನಸ್ಸನ್ನು ಕೆಡಿಸುತ್ತಾನೆ. ಆಗ ದೇವತೆಗಳು ಮುಕುಂದನನ್ನು ಪ್ರಾರ್ಥಿಸಿದಾಗ, ಭಗವಂತನು ತನ್ನ ಪುತ್ರನಾದ ಹನುಮಂತನನ್ನು ಮಧ್ವಾಚಾರ್ಯರನ್ನಾಗಿ ಕಲಿಯುಗಕ್ಕೆ ಕಳುಹಿಸಿಕೊಡುತ್ತಾನೆ&quot; ಎಂದು ಹರಿಕಥೆಯಲ್ಲಿ ಹೇಳಿದ್ದರು.&lt;/p&gt;&lt;p&gt;ಈ ಕಥಾ ಪ್ರಸಂಗದ ನಿರೂಪಣೆಯಲ್ಲಿ ಶಂಕರಾಚಾರ್ಯರನ್ನು ನಿಂದಿಸಿದ ರೀತಿ ಇಡೀ ಹಿಂದೂ ಸಮಾಜದ ಹಾಗೂ ಶಂಕರ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟುಮಾಡಿತ್ತು&lt;/p&gt;&lt;h2&gt;ಕಲಾವಿದೆಯಿಂದ ಕ್ಷಮೆಯಾಚನೆ&lt;/h2&gt;&lt;p&gt;&ldquo;ಯಾರನ್ನು ನಿಂದನೆ ಮಾಡುವ ಉದ್ದೇಶ ನಮಗೆ ಇರಲಿಲ್ಲ. ಮಧ್ವ ಮಠದವರೂ ನಮಗೆ ಇದನ್ನು ಹೇಳಿಕೊಟ್ಟಿಲ್ಲ. ಪುಸ್ತಕವನ್ನು ರೆಫರ್ ಮಾಡಿ ನಾವು ಓದಿದೆವು, ನಮ್ಮಿಂದ ಬೇರೆ ಮತದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ. ಉಡುಪಿ ಮಠ ಅಥವಾ ಶಿರೂರು ಮಠಕ್ಕೂ ನಮ್ಮ ಮಾತಿಗೂ ಸಂಬಂಧವಿಲ್ಲ. ನಮ್ಮಿಂದ ಮಠದವರಿಗೆ ತೊಂದರೆಯಾಗಿದ್ದರೆ ನಾವು ಕ್ಷಮೆಯನ್ನು ಕೇಳುತ್ತೇವೆ. ಶ್ರೀ ಶಂಕರಾಚಾರ್ಯರನ್ನು ಏಕವಚನದಲ್ಲಿ, ಮಾನಹಾನಿಯಾಗುವಂತೆ ಮಾತನಾಡಿದ್ದ ಕಲಾವಿದೆ ವಿಡಿಯೋ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ.&lt;/p&gt;&lt;h2&gt;ಮಠದವರು ಏನು ಹೇಳಿದರು?&lt;/h2&gt;&lt;p&gt;ಅಂದಹಾಗೆ ಪರ್ಯಾಯ ಶಿರೂರು ಮಠದಿಂದಲೂ ಸ್ಪಷ್ಟೀಕರಣ ನೀಡಿದೆ. &ldquo;ಮಠದ ಸುಪರ್ದಿಗೊಳಪಟ್ಟ ರಾಜಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ. ಅಂಕಿತಾ ನಾಯಕ್ ಮತ್ತು ಗೌರಿ ಪಾಂಡುರಂಗಿ ಎನ್ನುವರು ಭರತನಾಟ್ಯಕ್ಕಾಗಿ ಅನುಮತಿ ಕೇಳಿದ್ದರು. ಕಾರ್ಯಕ್ರಮದ ನಡುವೆ ಭಕ್ತ ಪ್ರಹ್ಲಾದ ಎಂಬ ಹರಿಕಥೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಇಬ್ಬರೂ ಕೂಡ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದು ಸೂಚಿಸಿದ್ದೇವೆ. ಈ ಅನಪೇಕ್ಷಿತ ಘಟನೆಯ ಬಗ್ಗೆ ಮಠ ವಿಷಾದಿಸುತ್ತದೆ&rdquo; ಎಂದು ಶಿರೂರು ಮಠದ ದಿವಾನರಾದ ಡಾ.ಉದಯಕುಮಾರ ಸರಳತಾಯ ಅವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/udupi-sri-krishna-mutt-shri-shankaracharya-controversy-women-apology/articleshow-0kh3eve"/>
        </item>
        <item>
            <title><![CDATA[ಉಡುಪಿ:ಹೌಸ್ ಕೀಪಿಂಗ್ ಮಗಳು, ಕನ್ನಡ ಶಾಲೆಯ ಹಳ್ಳಿ ಪ್ರತಿಭೆ ಸ್ಪೂರ್ತಿ ಶೆಟ್ಟಿ'ಮಿಸ್ ಯೂನಿವರ್ಸ್ ಇಂಡಿಯಾ' ಫೈನಲಿಸ್ಟ್!]]></title>
            <link>https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg</link>
            <guid isPermaLink="true">https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg</guid>
            <pubDate>Thu, 16 Jul 2026 15:54:06 +0530</pubDate>
            <description><![CDATA[&lt;p&gt;ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxn67nng7gegp1x7vcxtdnh4,imgname-spoorthi-shetty-miss-universe-india-finalist--4--1784196355760.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.&lt;/p&gt;&lt;img&gt;&lt;p&gt;ಉಡುಪಿ: ಕರಾವಳಿಯ ಪ್ರತಿಭೆಗಳು ಕೇವಲ ಶಿಕ್ಷಣ, ಕ್ರೀಡೆಯಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೂ ತಮ್ಮ ಛಾಪು ಮೂಡಿಸಬಲ್ಲರು ಎಂಬುದನ್ನು ಉಡುಪಿಯ ಬೆಡಗಿ ಸ್ಪೂರ್ತಿ ಶೆಟ್ಟಿ ಸಾಬೀತುಪಡಿಸಿದ್ದಾರೆ. ಉಡುಪಿಯಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಕುಟುಂಬದ ಹೆಣ್ಣುಮಗಳು ಸ್ಪೂರ್ತಿ ಶೆಟ್ಟಿ, ಇದೀಗ ಪ್ರತಿಷ್ಠಿತ 'ಮಿಸ್ ಯೂನಿವರ್ಸ್ ಇಂಡಿಯಾ' (Miss Universe India) ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆ ಮತ್ತು ರಾಜ್ಯವೇ ಹೆಮ್ಮೆಪಡುವಂತೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸ್ಪೂರ್ತಿ ಶೆಟ್ಟಿ ಅವರ ಈ ಸಾಧನೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅತ್ಯಂತ ಸಾಮಾನ್ಯ ಮತ್ತು ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಚೆಲುವೆ ಇವರು. ಇವರ ತಾಯಿ ಮಣಿಪಾಲ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ (ಸ್ವಚ್ಛತಾ ಸಿಬ್ಬಂದಿ) ಆಗಿ ಕೆಲಸ ಮಾಡುತ್ತಾ ಮಗಳ ಕನಸುಗಳಿಗೆ ಆಸರೆಯಾಗಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದ ಸ್ಪೂರ್ತಿ, ಉಡುಪಿಯಲ್ಲೇ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬಳಿಕ ಉನ್ನತ ವ್ಯಾಸಂಗದಲ್ಲಿ ಎಂಬಿಎ (MBA) ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡುತ್ತಿರುವ ಇವರು, ತಮ್ಮ ಕೆಲಸದ ಜೊತೆಜೊತೆಗೇ ಮಾಡಲಿಂಗ್ ಕ್ಷೇತ್ರವನ್ನು ಹವ್ಯಾಸವಾಗಿ ಆರಂಭಿಸಿದ್ದರು.&lt;/p&gt;&lt;img&gt;&lt;p&gt;ಮಿಸ್ ಯೂನಿವರ್ಸ್ ವೇದಿಕೆ ತಲುಪುವ ಮುನ್ನ ಸ್ಪೂರ್ತಿ ಆರಂಭದಲ್ಲಿ ತೀವ್ರ ನಿರಾಶೆ ಎದುರಿಸಬೇಕಾಗಿ ಬಂದಿತ್ತು. ಮಿಸ್ ಯೂನಿವರ್ಸ್ ಸ್ಪರ್ಧೆಯ ಕರ್ನಾಟಕ ವಿಭಾಗದ ಪ್ರಾದೇಶಿಕ ಸುತ್ತಿನಲ್ಲಿ ಸ್ಪರ್ಧಿಸಿದ್ದ ಇವರು ಜಯಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಅವರಲ್ಲಿದ್ದ ಪ್ರತಿಭೆ, ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಗುರುತಿಸಿದ ತೀರ್ಪುಗಾರರು ಇವರಿಗೆ 'ವೈಲ್ಡ್ ಕಾರ್ಡ್ ಎಂಟ್ರಿ' (Wild Card Entry) ನೀಡಿದ್ದಾರೆ. ಈ ಮೂಲಕ ಸೋಲನ್ನು ಮೆಟ್ಟಿ ನಿಂತು ನೇರವಾಗಿ ರಾಷ್ಟ್ರೀಯ ಮಟ್ಟದ ಅಂತಿಮ ಸುತ್ತಿಗೆ ಲಗ್ಗೆ ಇಡುವಲ್ಲಿ ಸ್ಪೂರ್ತಿ ಯಶಸ್ವಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಆಗಸ್ಟ್ 23ರಂದು ನವದೆಹಲಿಯಲ್ಲಿ ಮಹಾ ಫೈನಲ್ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿ ಬಂದಿರುವ ಅತ್ಯಂತ ಪ್ರತಿಭಾವಂತ 50 ಸುಂದರಿಯರೊಂದಿಗೆ ಉಡುಪಿಯ ಸ್ಪೂರ್ತಿ ಶೆಟ್ಟಿ ಅಂತಿಮ ಸುತ್ತಿನಲ್ಲಿ ಪೈಪೋಟಿ ನಡೆಸಲಿದ್ದಾರೆ. ಈ ಬಹುನಿರೀಕ್ಷಿತ 'ಮಿಸ್ ಯೂನಿವರ್ಸ್ ಇಂಡಿಯಾ'ದ ಗ್ರ್ಯಾಂಡ್ ಫಿನಾಲೆ (Grand Finale) ಇದೇ ಆಗಸ್ಟ್ 23ರಂದು ನವದೆಹಲಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ.&lt;/p&gt;&lt;img&gt;&lt;p&gt;ಕನ್ನಡ ಮಾಧ್ಯಮದಲ್ಲಿ ಓದಿ, ಕಷ್ಟದ ಪರಿಸ್ಥಿತಿಯಲ್ಲೂ ಕಾರ್ಪೊರೇಟ್ ಉದ್ಯೋಗದ ಜೊತೆಗೆ ಗ್ಲಾಮರ್ ಲೋಕದಲ್ಲೂ ಸಾಧನೆ ಮಾಡಿರುವ ಸ್ಪೂರ್ತಿ ಶೆಟ್ಟಿ ಅವರ ಈ ಯಶೋಗಾಥೆ ಇಂದು ಸಹಸ್ರಾರು ಗ್ರಾಮೀಣ ಭಾಗದ ಯುವತಿಯರಿಗೆ ದೊಡ್ಡ ಪ್ರೇರಣೆಯಾಗಿದೆ. ನವದೆಹಲಿಯ ಅಂತಿಮ ಜಿದ್ದಾಜಿದ್ದಿನಲ್ಲಿ ಗೆದ್ದು ಉಡುಪಿಯ ಈ ಮಗಳು ವಿಶ್ವ ಸುಂದರಿ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವಂತಾಗಲಿ ಎಂಬುದು ಕನ್ನಡಿಗರ ಆಶಯವಾಗಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg"/>
        </item>
        <item>
            <title><![CDATA[ಅಮೆರಿಕ ಯುವತಿ, ಸುಳ್ಯ ಯುವಕ.. ಇಬ್ಬರನ್ನೂ ಒಂದಾಗಿಸಿತು ಉಡುಪಿ ಶ್ರೀಕೃಷ್ಣನ ಮೇಲಿನ ಭಕ್ತಿ!]]></title>
            <link>https://kannada.asianetnews.com/karnataka-districts/american-woman-marries-sullia-man-after-udupi-krishna-devotion-rav/articleshow-4fqgzm8</link>
            <guid isPermaLink="true">https://kannada.asianetnews.com/karnataka-districts/american-woman-marries-sullia-man-after-udupi-krishna-devotion-rav/articleshow-4fqgzm8</guid>
            <pubDate>Fri, 17 Jul 2026 08:01:37 +0530</pubDate>
            <description><![CDATA[&lt;p&gt;ಅವರಿಬ್ಬರೂ ಕೃಷ್ಣ ಭಕ್ತರು. ಯುವಕ ಭಾರತೀಯ. ಯುವತಿ ಅಮೆರಿಕದವರು. ಪಶ್ಚಿಮ ಬಂಗಾಳದ ಮಾಯಾಪುರದಲ್ಲಿದ್ದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.&zwnj;&zwnj; ಈಗ ಮದುವೆಯೂ ಆಯಿತು. ಯಾರು ಆ ಯುವ ಜೋಡಿ? ಪ್ರೀತಿ ಹುಟ್ಟಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxpy6btbxg6ef51mtdwpw0hn,imgname-----------------------2026-07-17t074226.825-1784255033163.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಬ್ಬರನ್ನೂ ಒಂದಾಗಿಸಿದ ಶ್ರೀ ಕೃಷ್ಣನ ಮೇಲಿನ ಭಕ್ತಿ&lt;/p&gt;&lt;p&gt;&lt;strong&gt;ಸುಳ್ಯ (ಜು.17): &lt;/strong&gt;ಅವರಿಬ್ಬರೂ ಕೃಷ್ಣ ಭಕ್ತರು. ಯುವಕ ಭಾರತೀಯ. ಯುವತಿ ಅಮೆರಿಕದವರು. ಪಶ್ಚಿಮ ಬಂಗಾಳದ ಮಾಯಾಪುರದಲ್ಲಿದ್ದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.&zwnj;&zwnj; ಈಗ ಮದುವೆಯೂ ಆಯಿತು.&lt;/p&gt;&lt;p&gt;ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸಾಯಿ ಸಂಕೇತ್&zwnj; ವಿವಾಹ ಅಮೆರಿಕದ ಷಿಕಾಗೋ ನಗರದ ಡಾ। ಚಾರ್ಲ್ಸ್ ಅವರ ಪುತ್ರಿ ಶಾನೋನ್ ಜೊತೆಗೆ ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು.&lt;/p&gt;&lt;p&gt;ಸಾಯಿ ಸಂಕೇತ್&zwnj; ಮಡಿಕೇರಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದು ಚೆನ್ನೈಯಲ್ಲಿ ಐಐಟಿ ಅಧ್ಯಯನ ನಡೆಸಿದ್ದರು. ಬಳಿಕ ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಬಳಿಕ ಪಶ್ಚಿಮ ಬಂಗಾಲದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ನಿರ್ವಹಿಸುತ್ತಿದ್ದರು. ಶಾನೋನ್ ಅಮೆರಿಕದಲ್ಲಿ ಶಿಕ್ಷಣ ಪೂರೈಸಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಮೆಚ್ಚಿ ಇಲ್ಲಿಗೆ ಬಂದು ಆನ್&zwnj;ಲೈನ್&zwnj; ವೃತ್ತಿ ನಿರ್ವಹಿಸುತ್ತಿದ್ದರು.&lt;/p&gt;&lt;h2&gt;ಪ್ರೀತಿ ಹುಟ್ಟಿದ್ದೇಗೆ?&lt;/h2&gt;&lt;p&gt;ಸಂಕೇತ್&zwnj; ಉದ್ಯಮ ಮಳಿಗೆಗೆ ಶಾರೋನ್ ಭೇಟಿ ನೀಡುತ್ತಿದ್ದಾಗ ಪರಸ್ಪರ ಪರಿಚಯವಾಯಿತು. ಪರಿಚಯ ಪ್ರೀತಿಯಾಗಿ ಅಂಕುರಿಸಿತು. ಆಧ್ಯಾತ್ಮಿಕ ಆಸಕ್ತಿ ಮತ್ತು ಕೃಷ್ಣ ಭಕ್ತಿ ಇಬ್ಬರನ್ನೂ ಒಂದುಗೂಡಿಸಿತು.&lt;/p&gt;&lt;p&gt;ಎರಡು ವರ್ಷದ ಬಳಿಕ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಇಬ್ಬರ ಮನೆಯವರಿಂದಲೂ ಅಡ್ಡಿ ಬಾರಲಿಲ್ಲ. ಆಷಾಢ ಮಾಸ ಬರುತ್ತಿರುವುದರಿಂದ ಶೀಘ್ರ ಮದುವೆ ಆಗುವ ನಿರ್ಧಾರಕ್ಕೆ ಬಂದ ಹಿನ್ನೆಲೆಯಲ್ಲಿ ಶಾನೋನ್ ಮನೆಯವರಿಗೆ ವಿವಾಹದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಂಪಾಜೆ ದೇವಸ್ಥಾನದಲ್ಲಿ ಕುಟುಂಬ ಬಂಧುಗಳ ಉಪಸ್ಥಿತಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿತು. ಶಾನೋನ್ ಅವರಿಗೆ ಅಲ್ಪಸ್ವಲ್ಪ ಕನ್ನಡ ಬರುತ್ತದೆ. ಇಲ್ಲಿಯ ಆಹಾರ ಪದ್ಧತಿ ಅವರಿಗೆ ತುಂಬ ಇಷ್ಟವಂತೆ.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/american-woman-marries-sullia-man-after-udupi-krishna-devotion-rav/articleshow-4fqgzm8"/>
        </item>
        <item>
            <title><![CDATA[ಮಹಿಳೆ ಕಟ್ಟಿಹಾಕಿ ಹಲ್ಲೆ ಪ್ರಕರಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್]]></title>
            <link>https://kannada.asianetnews.com/karnataka-districts/malpe-port-speech-karnataka-high-court-quashes-fir-against-ex-minister-pramod-madhwaraj-gdp/articleshow-5q0ytm8</link>
            <guid isPermaLink="true">https://kannada.asianetnews.com/karnataka-districts/malpe-port-speech-karnataka-high-court-quashes-fir-against-ex-minister-pramod-madhwaraj-gdp/articleshow-5q0ytm8</guid>
            <pubDate>Sat, 27 Jun 2026 13:41:17 +0530</pubDate>
            <description><![CDATA[ಮಲ್ಪೆ ಬಂದರಿನಲ್ಲಿ ಮಹಿಳೆ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದ ಮೇಲೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದಾಖಲಾಗಿದ್ದ ಎಫ್&zwnj;ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಅವರ ಭಾಷಣದಲ್ಲಿ ಗಲಭೆ ಸೃಷ್ಟಿಸುವ ಯಾವುದೇ ಕ್ರಿಮಿನಲ್ ಅಂಶಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ಸಂಪೂರ್ಣ ವಿಚಾರಣಾ ಪ್ರಕ್ರಿಯೆಯನ್ನು ವಜಾಗೊಳಿಸಿ ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kb7zr1snn7d2ftrc1h1gjece,imgname-pramod-madhwaraj-on-udupi-1764425991989.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಉಡುಪಿಯ ಮಲ್ಪೆ ಬಂದರಿನಲ್ಲಿ ಕಳೆದ ವರ್ಷ ನಡೆದಿದ್ದ ಮಹಿಳೆ ಮೇಲಿನ ಹಲ್ಲೆ ಪ್ರಕರಣವನ್ನು ಸಮರ್ಥಿಸಿಕೊಂಡು ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದಾಖಲಾಗಿದ್ದ ಎಫ್&zwnj;ಐಆರ್ (FIR) ಮತ್ತು ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಸಂಪೂರ್ಣವಾಗಿ ರದ್ದುಪಡಿಸಿ ಆದೇಶ ಹೊರಡಿಸಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ.&lt;/p&gt;&lt;h2&gt;ಏನಿದು ವಿವಾದಾತ್ಮಕ ಪ್ರಕರಣ? ಹಿನ್ನೆಲೆ ಇಲ್ಲಿದೆ&lt;/h2&gt;&lt;p&gt;ಪ್ರಕರಣದ ವಿವರಗಳ ಪ್ರಕಾರ, 2025 ರ ಮಾರ್ಚ್ 18 ರಂದು ಉಡುಪಿಯ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಮಹಿಳೆಯೊಬ್ಬರನ್ನು ಸ್ಥಳೀಯರು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.&lt;/p&gt;&lt;p&gt;ಈ ಘಟನೆಯಿಂದಾಗಿ ಮಲ್ಪೆ ಬಂದರು ಪ್ರದೇಶದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಲು ಹಾಗೂ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮಲ್ಪೆ ಮೀನುಗಾರರ ಸಂಘ ಮತ್ತು ಇತರ ಪ್ರಮುಖ ಮೀನುಗಾರಿಕಾ ಸಂಘಟನೆಗಳು 2025 ರ ಮಾರ್ಚ್ 22 ರಂದು ಮಲ್ಪೆ ಬಂದರಿನಲ್ಲಿ ಸಾರ್ವಜನಿಕ ಸಭೆಯೊಂದನ್ನು ಹಮ್ಮಿಕೊಂಡಿದ್ದವು.&lt;/p&gt;&lt;h2&gt;ವಿವಾದ ಸೃಷ್ಟಿಸಿದ್ದ ಪ್ರಮೋದ್ ಮಧ್ವರಾಜ್ ಹೇಳಿಕೆ&lt;/h2&gt;&lt;p&gt;ಈ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸ್ಥಳೀಯ ಮೀನುಗಾರರ ಪರವಾಗಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. &quot;ನಮ್ಮ ಮನೆಗೆ ಕಳ್ಳರು ಬಂದಾಗ, ಪೊಲೀಸರು ಬರುವುದಕ್ಕೆ 5-6 ಗಂಟೆ ತಡವಾದರೆ ನಾವು ಸುಮ್ಮನೆ ಕೂರಲು ಸಾಧ್ಯವೇ? ಆಗ ನಾವು ಏನು ಮಾಡುತ್ತೇವೆ? ಕಳ್ಳರನ್ನು ಕಟ್ಟಿ ಹಾಕಲೇಬೇಕು.&zwnj; ಕಳ್ಳಿಗೆ ನಾವೇನು ಮಚ್ಚು ಅಥವಾ ಖಡ್ಗದಿಂದ ಹೊಡೆದೆವಾ? ಕೆನ್ನೆಗೆ ಎರಡು ಬಾರಿಸಲಾಗಿದೆ ಅಷ್ಟೇ&quot; ಎಂದು ಹೇಳುವ ಮೂಲಕ ಹಲ್ಲೆಯ ಘಟನೆಯನ್ನು ಸಮರ್ಥಿಸಿಕೊಂಡಿದ್ದರು.&lt;/p&gt;&lt;h2&gt;ಅಪರಾಧಕ್ಕೆ ಪ್ರೇರಣೆ ಎಂದು ದೂರು ನೀಡಿದ್ದ ಪಿಎಸ್&zwnj;ಐ&lt;/h2&gt;&lt;p&gt;ಮಾಜಿ ಸಚಿವರ ಈ ಹೇಳಿಕೆಯು ಸಾರ್ವಜನಿಕವಾಗಿ ಮಹಿಳೆಗೆ ಕಟ್ಟಿಹಾಕಿ ಹೊಡೆದ ಕಾನೂನುಬಾಹಿರ ಕೃತ್ಯವನ್ನು ಸಮರ್ಥಿಸಿದಂತಾಗಿದೆ ಮತ್ತು ಇದು ಸಾರ್ವಜನಿಕರು ಮತ್ತಷ್ಟು ಅಪರಾಧ ಮಾಡಲು ಪ್ರೇರಣೆ ನೀಡುತ್ತದೆ ಎಂದು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು. ಸಮಾಜದಲ್ಲಿ ದ್ವೇಷ ಭಾವನೆ ಮೂಡಿಸಲು ಹಾಗೂ ದೊಂಬಿ ಸೃಷ್ಟಿಸಲು ಪ್ರಮೋದ್ ಮಧ್ವರಾಜ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಸಬ್ ಇನ್ಸ್&zwnj;ಪೆಕ್ಟರ್ (PSI) ಬಿ.ಕೆ. ರವಿ ಅವರು ಅಧಿಕೃತವಾಗಿ ದೂರು ದಾಖಲಿಸಿದ್ದರು.&lt;/p&gt;&lt;p&gt;ಈ ದೂರನ್ನು ಆಧರಿಸಿ ಮಲ್ಪೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 191(1) (ಅಕ್ರಮ ಕೂಟ ಸೇರುವುದು) ಮತ್ತು ಸೆಕ್ಷನ್ 192 (ಗಲಭೆ ಸೃಷ್ಟಿಸಲು ಪ್ರಚೋದನೆ) ಅಡಿಯಲ್ಲಿ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್&zwnj;ಐಆರ್ ದಾಖಲಿಸಿದ್ದರು.&lt;/p&gt;&lt;h2&gt;ಹೈಕೋರ್ಟ್ ನೀಡಿದ ತೀರ್ಪಿನ ಸಾರಾಂಶ&lt;/h2&gt;&lt;p&gt;ತಮ್ಮ ವಿರುದ್ಧ ದಾಖಲಾದ ರಾಜಕೀಯ ಪ್ರೇರಿತ ಎಫ್&zwnj;ಐಆರ್ ರದ್ದುಗೊಳಿಸುವಂತೆ ಕೋರಿ ಪ್ರಮೋದ್ ಮಧ್ವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಅರ್ಜಿದಾರರು ಸಾರ್ವಜನಿಕ ಸಭೆಯಲ್ಲಿ ನೀಡಿರುವ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಗಲಭೆ ಸೃಷ್ಟಿಸಲು ಸಾರ್ವಜನಿಕರನ್ನು ಪ್ರಚೋದಿಸಿದ ಅಥವಾ ಅಕ್ರಮ ಕೂಟವನ್ನು ಮುನ್ನಡೆಸಿದ ಯಾವುದೇ ಕ್ರಿಮಿನಲ್ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮಾಜಿ ಸಚಿವರ ವಿರುದ್ಧದ ಎಫ್&zwnj;ಐಆರ್ ಮತ್ತು ಕೆಳ ನ್ಯಾಯಾಲಯದಲ್ಲಿದ್ದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಅರ್ಜಿಯನ್ನು ಪುರಸ್ಕರಿಸಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/malpe-port-speech-karnataka-high-court-quashes-fir-against-ex-minister-pramod-madhwaraj-gdp/articleshow-5q0ytm8"/>
        </item>
        <item>
            <title><![CDATA[ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI]]></title>
            <link>https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd</link>
            <guid isPermaLink="true">https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd</guid>
            <pubDate>Fri, 10 Jul 2026 19:25:34 +0530</pubDate>
            <description><![CDATA[&lt;p&gt;ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx64pz5xwr12fyahv2jpms8d,imgname-sardine-fish-cmfri-warning--2--1783691443389.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ.&amp;nbsp;&lt;/p&gt;&lt;img&gt;&lt;p&gt;ಮೀನು ಪ್ರಿಯರ ಸಾರ್ವಕಾಲಿಕ ನೆಚ್ಚಿನ ಹಾಗೂ ಅಗ್ಗದ ದರದ ಮೀನು ಎನಿಸಿಕೊಂಡಿರುವ ಭೂತಾಯಿ (ಕೆಲವು ಕಡೆ ಮತ್ತಿ, ಬೈಗೆ ಎಂದೂ ಹೇಳುತ್ತಾರೆ) ಲಭ್ಯತೆ ಮುಂದಿನ ವರ್ಷ ಗಣನೀಯವಾಗಿ ಕುಸಿಯಲಿದೆ ಎಂಬ ಆತಂಕಕಾರಿ ಮುನ್ಸೂಚನೆಯನ್ನು ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆ (CMFRI) ನೀಡಿದೆ. ಸಮುದ್ರದಲ್ಲಿ ಬಿಸಿಹವೆಗೆ ಕಾರಣವಾಗುವ ಜಾಗತಿಕ ಹವಾಮಾನ ವಿದ್ಯಮಾನವಾದ 'ಎಲ್ ನಿನೊ' (El Nino) ಪ್ರಭಾವದಿಂದಾಗಿ ಕಡಲಿನಲ್ಲಿ ಮೀನುಗಳ ಲಭ್ಯತೆ ತಗ್ಗಲಿದ್ದು, ದೇಶಾದ್ಯಂತ ಕಡಲ ಮತ್ಸ್ಯೋದ್ಯಮದ ಮೇಲೆ ಇದು ಭಾರಿ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಸಂಸ್ಥೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ಮುಂದಿನ ದಿನಗಳು ಮತ್ಸ್ಯಪ್ರಿಯರಿಗೆ ಅಷ್ಟೊಂದು ಆಶಾದಾಯಕವಾಗಿ ಇರುವುದಿಲ್ಲ. ಪ್ರಸ್ತುತ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ತೀವ್ರಗೊಳ್ಳಲಿರುವ 'ಎಲ್ ನಿನೊ' ವಿದ್ಯಮಾನದ ನೇರ ಪ್ರಭಾವವು ಮುಂದಿನ ವರ್ಷದ (2027) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಪ್ರಕಟವಾಗಲಿದೆ ಎಂದು ಸಿಎಂಎಫ್&zwnj;ಆರ್&zwnj;ಐ ಮುನ್ಸೂಚನೆ ನೀಡಿದೆ. ಹವಾಮಾನ ತಜ್ಞರು ಊಹಿಸಿದಂತೆ ಈ ಜಾಗತಿಕ ತಾಪಮಾನ ವೈಪರೀತ್ಯ ಸಂಭವಿಸಿದರೆ, ಮಾರುಕಟ್ಟೆಯಲ್ಲಿ ಭೂತಾಯಿ ಮೀನಿನ ಲಭ್ಯತೆ ತೀವ್ರವಾಗಿ ಕುಸಿಯಲಿದ್ದು, ಅದರ ಬೆಲೆ ಸಾಮಾನ್ಯ ಜನರಿಗೆ ಸಿಗದಂತೆ ಗಗನಕ್ಕೇರಲಿದೆ.&lt;/p&gt;&lt;img&gt;&lt;p&gt;ಕಡಲಿನಲ್ಲಿ ಉಂಟಾಗುವ ಉಷ್ಣ ತರಂಗಗಳು ಮತ್ತು ಹಠಾತ್ ತಾಪಮಾನ ವೈಪರೀತ್ಯಗಳು ಸಮುದ್ರದ ಮೇಲ್ಮೈ ಭಾಗದಲ್ಲಿ ವಾಸಿಸುವ ಭೂತಾಯಿ ಸೇರಿದಂತೆ ಇತರ ಸಣ್ಣ ಪ್ರಭೇದದ ಮೀನುಗಳ ಪಾಲಿಗೆ ವಿಷಕಾರಿಯಾಗಿದೆ. ಇದರ ಜೊತೆಗೆ ನಿರಂತರವಾಗಿ ಸಮುದ್ರದ ನೀರು ಕಾಯುವುದರಿಂದ ಸಮುದ್ರದೊಳಗಿನ ಜೀವವೈವಿಧ್ಯದ ಆಧಾರವಾಗಿರುವ ಹವಳದ ದಿಬ್ಬಗಳು (Coral Reefs) ನಾಶವಾಗಲಿವೆ. ಇದು ಹವಳದ ದಿಬ್ಬಗಳನ್ನೇ ಆಶ್ರಯಿಸಿ ಬದುಕುವ 'ಶಂಕರ' (Red Snapper) ರೀತಿಯ ಮೌಲ್ಯಯುತ ಮೀನುಗಳ ನೈಸರ್ಗಿಕ ಸಂತಾನೋತ್ಪತ್ತಿ ಮತ್ತು ಲಭ್ಯತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಸಿಎಂಎಫ್&zwnj;ಆರ್&zwnj;ಐ ಅಧ್ಯಯನ ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;ಎಲ್ ನಿನೊ ಭೀತಿಯ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಕರಾವಳಿ ಭಾಗದ ಮತ್ಸ್ಯ ಕೃತಕ ಕೃಷಿಕರಿಗೆ (Fish Farmers) ಈ ವರ್ಷವೇ ಸಿಎಂಎಫ್&zwnj;ಆರ್&zwnj;ಐ ವಿಶೇಷ ಜಾಗೃತಿ ಮಾರ್ಗಸೂಚಿಯನ್ನು ಹೊರಡಿಸಲಿದೆ. ಹವಾಮಾನ ವೈಪರೀತ್ಯದ ಈ ಅವಧಿಯಲ್ಲಿ ಕಡಲು ಹಾಗೂ ಕರಾವಳಿ ಜಲಮೂಲಗಳ ರಕ್ಷಣೆ ಮತ್ತು ನಿರ್ವಹಣೆಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;ತೀವ್ರವಾದ ಬೇಸಿಗೆಯ ಬಿಸಿಲು ಹಾಗೂ ನೀರಿನಲ್ಲಿ ಲವಣಾಂಶ (Salinity) ಹೆಚ್ಚಾದ ಬೆನ್ನಲ್ಲೇ ಹಠಾತ್ ಮಳೆ ಸುರಿದರೆ ಕರಾವಳಿ ಮತ್ತು ಹಿನ್ನೀರು ಪ್ರದೇಶಗಳಲ್ಲಿನ ನೀರಿನ ಲವಣಾಂಶದ ಮಟ್ಟವು ದಿಢೀರನೆ ಏರುಪೇರಾಗುತ್ತದೆ. ಈ ರಾಸಾಯನಿಕ ಬದಲಾವಣೆಯು ಕೃತಕವಾಗಿ ಕೊಳಗಳಲ್ಲಿ ಅಥವಾ ಹಿನ್ನೀರಿನಲ್ಲಿ ಮಾಡುವ ಮತ್ಸ್ಯಕೃಷಿಯ (Aquaculture) ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮೀನುಗಳು ಸಾಯುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ಮೀನು ಕೃಷಿಕರು ಮುಂಚಿತವಾಗಿಯೇ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸ್ಥೆ ಸೂಚಿಸಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಜಾಗತಿಕ ತಾಪಮಾನ ಏರಿಕೆಯು ಕೇವಲ ಮೀನಿನ ಲಭ್ಯತೆಯನ್ನು ಕುಗ್ಗಿಸುವುದಲ್ಲದೆ, ಸಮುದ್ರದ ಸಂಪೂರ್ಣ ಜೈವಿಕ ಸರಪಳಿಯನ್ನೇ ಏರುಪೇರು ಮಾಡುತ್ತದೆ. ದೇಶದಾದ್ಯಂತ ಕಡಲ ಮೀನುಗಾರಿಕೆಯ ಒಟ್ಟು ಉತ್ಪಾದನೆಯಲ್ಲಿ ಇಳಿಕೆಯಾಗುವ ಮುನ್ಸೂಚನೆ ಇರುವುದರಿಂದ, ಮೀನುಗಾರಿಕೆಯನ್ನು ನಂಬಿ ಬದುಕುವ ಲಕ್ಷಾಂತರ ಕುಟುಂಬಗಳ ಆರ್ಥಿಕತೆಯ ಮೇಲೆ ಇದು ನೇರ ಹೊಡೆತ ನೀಡಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/food/cmfri-el-nino-impact-bhoothayi-matti-sardine-fish-shortage-karnataka-coast-2027-san-6iwwgkd"/>
        </item>
        <item>
            <title><![CDATA[ಆಂಬುಲೆನ್ಸ್ ವಿಳಂಬಕ್ಕೆ ಬ್ರೇಕ್! ಚಾಲಕನಿಗೆ ಸಮಯದ ನಿಗದಿ, ತಪ್ಪಿದ್ರೆ 5000 ರೂ. ದಂಡ]]></title>
            <link>https://kannada.asianetnews.com/udupi/ambulance-drivers-will-be-given-a-fixed-time-if-they-did-not-reach-fine-will-be-imposed-announced-by-minister-ut-khadar/articleshow-burod4m</link>
            <guid isPermaLink="true">https://kannada.asianetnews.com/udupi/ambulance-drivers-will-be-given-a-fixed-time-if-they-did-not-reach-fine-will-be-imposed-announced-by-minister-ut-khadar/articleshow-burod4m</guid>
            <pubDate>Sun, 05 Jul 2026 13:02:25 +0530</pubDate>
            <description><![CDATA[ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ವಿಳಂಬದಿಂದಾಗುತ್ತಿರುವ ಸಾವುಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕರೆ ಮಾಡಿದ 15 ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ತಲುಪದಿದ್ದರೆ ಚಾಲಕನಿಗೆ ₹5,000 ದಂಡ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯು ಹೈಟೆಕ್ ಕಂಟ್ರೋಲ್ ರೂಮ್, ಹೊಸ ವಾಹನಗಳು ಮತ್ತು ರಿಯಲ್-ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq43kab8cb448fq2zw9mwpz6,imgname-ambulance-patient-dies-petrol-pump-fuel-denied-fir-ballia-uttar-pradesh-emergency-negligence-01--2--1777180715368.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಸ್ತೆ ಅಪಘಾತ, ಹೆರಿಗೆ ನೋವು ಅಥವಾ ಹಠಾತ್ ಹೃದಯಾಘಾತ.. ಇಂತಹ ತುರ್ತು ಸಂದರ್ಭಗಳಲ್ಲಿ ಮನುಷ್ಯನ ಜೀವ ಉಳಿಸಲು ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಇಂತಹ ಹೊತ್ತಿನಲ್ಲಿ ನಮಗೆ ಮೊದಲು ನೆನಪಾಗುವುದೇ '108 ಆರೋಗ್ಯ ಕವಚ'. ದುರಂತ ಏನೆಂದರೆ ಕರೆ ಮಾಡಿದರೆ ಆಂಬುಲೆನ್ಸ್ ಬರುವುದು ಗಂಟೆಗಟ್ಟಲೆ ತಡವಾಗುತ್ತಿದೆ. ಈ ವಿಳಂಬದಿಂದಾಗಿ ರಾಜ್ಯದಲ್ಲಿ ನೂರಾರು ಪ್ರಾಣಗಳು ಹಾದಿಯಲ್ಲೇ ಹೋಗುತ್ತಿವೆ. ಈ ಗಂಭೀರ ಸಮಸ್ಯೆಗೆ ಮುಕ್ತಿ ಹಾಡಲು ಈಗ ರಾಜ್ಯ ಸರ್ಕಾರ ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದೆ.&lt;/p&gt;&lt;p&gt;ರಾಜ್ಯದಲ್ಲಿ ಪ್ರಕೃತಿ ವಿಕೋಪ ಅಥವಾ ದೊಡ್ಡ ದುರಂತಗಳು ಸಂಭವಿಸಿದಾಗ 108 ಆಂಬುಲೆನ್ಸ್&zwnj;ಗಳ ಸೇವೆ ಅತ್ಯಗತ್ಯ. ಆದರೆ ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು, ಹಳೆಯ ವಾಹನಗಳು ಮತ್ತು ನಿರ್ವಹಣಾ ವೈಫಲ್ಯದಿಂದಾಗಿ ಆಂಬುಲೆನ್ಸ್&zwnj;ಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪುತ್ತಿಲ್ಲ. ನಗರ ಪ್ರದೇಶಗಳಲ್ಲಿ ಅರ್ಧ ಗಂಟೆ, ಗ್ರಾಮೀಣ ಭಾಗದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ 'ಗೋಲ್ಡನ್ ಅವರ್' (Golden Hour) ಚಿಕಿತ್ಸೆ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂಬ ದೂರುಗಳು ಹೆಚ್ಚಾಗಿತ್ತು.&lt;/p&gt;&lt;h2&gt;&lt;strong&gt;ಸರ್ಕಾರದ ಹೊಸ ಹೆಜ್ಜೆ ಏನು?&lt;/strong&gt;&lt;/h2&gt;&lt;p&gt;ಈ ಸಾವಿನ ಸರಣಿಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಈಗ 108 ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣವಾಗಿ z ಮೇಲ್ದರ್ಜೆಗೇರಿಸಲು ಸಜ್ಜಾಗಿದೆ. ಉಡುಪಿಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿರುವ ಆರೋಗ್ಯ ಸಚಿವ ಯುಟಿ ಖಾದರ್, ಉಡುಪಿ ರಾಜ್ಯದಲ್ಲಿ ಇನ್ನು ಮುಂದೆ ಆ್ಯಂಬುಲೆನ್ಸ್ ಚಾಲಕನಿಗೆ ಸಮಯದ ನಿಗದಿ ಮಾಡಲಾಗುವುದು. ಕರೆ ಮಾಡಿದ ಹದಿನೈದು&zwnj; ನಿಮಿಷದಲ್ಲಿ ನಿಗದಿತ ಸ್ಥಳ &zwnj;ತಲುಪದಿದ್ದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.&lt;/p&gt;&lt;p&gt;108 ಆ್ಯಂಬುಲೆನ್ಸ್ 15 ನಿಮಿಷದಲ್ಲಿ ತಲುಪಿಸಿದರೆ 90 ಶೇಖಡ&zwnj; ಸಮಸ್ಯೆ ಸರಿಯಾಗುತ್ತದೆ. ಆ್ಯಂಬುಲೆನ್ಸ್ ತಲುಪುವ ಸಮಯ ಸರಿಯಾಗದಿದ್ದರೆ ವ್ಯವಸ್ಥೆ ಸರಿಯಾಗುವುದಿಲ್ಲ. 700 ರಿಂದ 800 ಆ್ಯಂಬುಲೆನ್ಸ್ ವ್ಯವಸ್ಥಿತವಾಗಿಡಬೇಕಾಗಿದೆ. ಭಾರತದಲ್ಲಿ &zwnj;20 ನಿಮಿಷ ಆದರೆ ನಮ್ಮ ರಾಜ್ಯದಲ್ಲಿ ಇನ್ನು&zwnj; ಮುಂದೆ 15 ನಿಮಿಷದಲ್ಲಿ ತಲುಪಬೇಕು. ಯಾರು ಆ ಸಮಯದಲ್ಲಿ ತಲುಪದಿಲ್ವೋ ಆ ಆ್ಯಂಬುಲೆನ್ಸ್ ಚಾಲಕನಿಗೆ 5 ಸಾವಿರ ದಂಡ. ಎಲ್ಲಿಂದ ಕರೆ ಬಂದರೂ ಹದಿನೈದು ನಿಮಿಷದಲ್ಲಿ ಬಂದು ತಲುಪಬೇಕು. ಈ&zwnj; ಬಗ್ಗೆ ಮಾರ್ಗಸೂಚಿಗಳನ್ನು ತರುತ್ತೇವೆ ಎಂದು ಖಾದರ್ ಭರವಸೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಸರ್ಕಾರದ ಪ್ಲಾನ್ ಏನು?&lt;/strong&gt;&lt;/h3&gt;&lt;p&gt;&lt;strong&gt;ಹೈಟೆಕ್ ಕಂಟ್ರೋಲ್ ರೂಮ್: &lt;/strong&gt;ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೇಂದ್ರೀಕೃತ ಕಂಟ್ರೋಲ್ ರೂಮ್ ಸ್ಥಾಪನೆ. ಇದರಿಂದ ಕರೆ ಮಾಡಿದವರ ನಿಖರ ಸ್ಥಳ (Location) ಪತ್ತೆ ಹಚ್ಚುವುದು ಸುಲಭವಾಗಲಿದೆ.&lt;/p&gt;&lt;p&gt;&lt;strong&gt;ರೆಸ್ಪಾನ್ಸ್ ಟೈಮ್ ಕಡಿತ: &lt;/strong&gt;ನಗರ ಪ್ರದೇಶಗಳಲ್ಲಿ ಕರೆ ಮಾಡಿದ 15 ನಿಮಿಷದೊಳಗೆ ಹಾಗೂ ಗ್ರಾಮೀಣ ಭಾಗದಲ್ಲಿ 20 ರಿಂದ 25 ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ತಲುಪುವಂತೆ ಕಟ್ಟುನಿಟ್ಟಿನ ಕ್ರಮ.&lt;/p&gt;&lt;p&gt;&lt;strong&gt;ಹೊಸ ವಾಹನಗಳ ಸೇರ್ಪಡೆ: &lt;/strong&gt;ಹಳೆಯದಾದ ಮತ್ತು ಪದೇ ಪದೇ ಕೆಟ್ಟು ನಿಲ್ಲುವ ಆಂಬುಲೆನ್ಸ್&zwnj;ಗಳ ಬದಲಿಗೆ ಸುಸಜ್ಜಿತವಾದ ಹೊಸ 'ಲೈಫ್ ಸಪೋರ್ಟ್' ಆಂಬುಲೆನ್ಸ್&zwnj;ಗಳನ್ನು ರಸ್ತೆಗಿಳಿಸಲಾಗುತ್ತಿದೆ.&lt;/p&gt;&lt;p&gt;&lt;strong&gt;ರಿಯಲ್ ಟೈಮ್ ಟ್ರ್ಯಾಕಿಂಗ್: &lt;/strong&gt;ಆಂಬುಲೆನ್ಸ್ ಎಲ್ಲಿದೆ? ಎಷ್ಟು ಹೊತ್ತಿಗೆ ಬರಲಿದೆ? ಎಂಬ ಮಾಹಿತಿಯನ್ನು ಈಗ ಊಬರ್ ಅಥವಾ ಓಲಾ ಮಾದರಿಯಲ್ಲಿ ಮೊಬೈಲ್ ಮೂಲಕವೇ ಟ್ರ್ಯಾಕ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ.&lt;/p&gt;&lt;p&gt;&lt;strong&gt;ಸಿಬ್ಬಂದಿಗೆ ತರಬೇತಿ:&lt;/strong&gt; ತುರ್ತು ಸಂದರ್ಭಗಳನ್ನು ನಿಭಾಯಿಸಲು ಚಾಲಕರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಜೀವ ಉಳಿಸುವುದೇ ಮೊದಲ ಆದ್ಯತೆ&lt;/strong&gt;&lt;/h3&gt;&lt;p&gt;ಆಂಬುಲೆನ್ಸ್ ವಿಳಂಬದ ಕಾರಣಕ್ಕೆ ಇನ್ಮುಂದೆ ಯಾವುದೇ ಜೀವ ಹೋಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಬದಲಾವಣೆಗೆ ಮುಂದಾಗಿದೆ. ಟೆಂಡರ್ ಪ್ರಕ್ರಿಯೆ ಮತ್ತು ಹೊಸ ನಿಯಮಗಳ ಜಾರಿಯಿಂದಾಗಿ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ವೇಗದ ಮತ್ತು ಗುಣಮಟ್ಟದ 108 ಸೇವೆ ಲಭ್ಯವಾಗಲಿದೆ. ಒಟ್ಟಿನಲ್ಲಿ, ವ್ಯವಸ್ಥೆಯ ಲೋಪದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಜನಸಾಮಾನ್ಯರಿಗೆ ಸರ್ಕಾರದ ಈ ನಿರ್ಧಾರ ಹೊಸ ಆಶಾಕಿರಣ ಮೂಡಿಸಿದೆ.&lt;/p&gt;]]></content:encoded>
            <category>udupi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/udupi/ambulance-drivers-will-be-given-a-fixed-time-if-they-did-not-reach-fine-will-be-imposed-announced-by-minister-ut-khadar/articleshow-burod4m"/>
        </item>
        <item>
            <title><![CDATA[ಕರಾವಳಿಯ ಕಂಬಳಕ್ಕೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: 23 ಕೂಟಗಳಿಗೆ ಬಂಪರ್‌ ಅನುದಾನ ಘೋಷಣೆ]]></title>
            <link>https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a</link>
            <guid isPermaLink="true">https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a</guid>
            <pubDate>Thu, 16 Jul 2026 16:32:15 +0530</pubDate>
            <description><![CDATA[ರಾಜ್ಯ ಸರ್ಕಾರವು ಕರಾವಳಿಯ 23 ಕಂಬಳ ಕೂಟಗಳಿಗೆ ತಲಾ 5 ಲಕ್ಷದಂತೆ ಒಟ್ಟು 1.15 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಈ ನಿರ್ಧಾರವನ್ನು ಕಂಬಳ ಸಮಿತಿ ಸ್ವಾಗತಿಸಿದ್ದು, ಇದೇ ವೇಳೆ ಮೈಸೂರು ಕಂಬಳ ಆಯೋಜನೆಗೆ ಸಂಬಂಧಿಸಿದ ವಿವಾದದ ಬಗ್ಗೆ ಸಮಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxn9by9k33bg6yjwx6kxp0pr,imgname-kambala-grant-1784199641395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.16):&lt;/strong&gt; ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆಯೋಜಕರಿಗೆ ಬಿಗ್ ಸಿಹಿ ಸುದ್ದಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಕಂಬಳದ ಸುತ್ತ ಹಲವು ವಿವಾದಗಳು ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಕಂಬಳ ಕೂಟಗಳ ಸುಗಮ ಆಯೋಜನೆಗಾಗಿ ಭಾರಿ ಮೊತ್ತದ ಅನುದಾನವನ್ನು ಪ್ರಕಟಿಸಿದೆ. 2025-26ನೇ ಸಾಲಿನ ಕಂಬಳ ಋತುವಿಗಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಒಟ್ಟು 1 ಕೋಟಿ 15 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಕಂಬಳ ಆಯೋಜಕರು ಹಾಗೂ ಅಭಿಮಾನಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿ ಕಂಬಳಕ್ಕೂ 5 ಲಕ್ಷ ರೂಪಾಯಿ ನೆರವು&lt;/strong&gt;&lt;/h2&gt;&lt;p&gt;ಈ ಬಾರಿ ಕರಾವಳಿ ಅವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧಿಕೃತವಾಗಿ ನಡೆಯುವ ಒಟ್ಟು 23 ಕಂಬಳ ಕೂಟಗಳನ್ನು ಈ ಯೋಜನೆಯಡಿ ಗುರುತಿಸಲಾಗಿದೆ. ಸರ್ಕಾರದ ಆದೇಶದನ್ವಯ, ಆಯ್ಕೆಯಾಗಿರುವ ಪ್ರತಿಯೊಂದು ಕಂಬಳ ಕೂಟದ ಆಯೋಜನೆಗೂ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಹರಿದುಬರಲಿದೆ. ಪ್ರಸ್ತುತ ದಿನಗಳಲ್ಲಿ ಕಂಬಳ ಆಯೋಜನೆ ಮಾಡುವುದು ಆಯೋಜಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಸರ್ಕಾರದ ಈ ಸಕಾಲಿಕ ನೆರವು ತುಳುನಾಡಿನ ಕೀರ್ತಿ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು ದೊಡ್ಡ ಬಲ ನೀಡಿದಂತಾಗಿದೆ.&lt;/p&gt;&lt;h2&gt;&lt;strong&gt;'ಸರ್ಕಾರ ನುಡಿದಂತೆ ನಡೆದಿದೆ' - ಡಾ. ದೇವಿಪ್ರಸಾದ್ ಶೆಟ್ಟಿ ಹರ್ಷ&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳ ಆಯೋಜಕರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು ಸಿಹಿ ಸುದ್ದಿ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಪ್ರವಾಸೋದ್ಯಮ ಹಾಗೂ ಕ್ರೀಡಾ ಇಲಾಖೆಯಿಂದ ಕಂಬಳಕ್ಕೆ ಅನುದಾನ ಸಿಕ್ಕಿತ್ತು. ಅದಕ್ಕೂ ಮುನ್ನ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಂಬಳಕ್ಕೆ 1 ಕೋಟಿ ರೂಪಾಯಿ ನೀಡಿದ್ದರು. ರಾಜಕೀಯ ಭೇದಭಾವವಿಲ್ಲದೆ ಎಲ್ಲಾ ಸರ್ಕಾರಗಳು ಕಂಬಳವನ್ನು ಪೋಷಿಸಿಕೊಂಡು ಬಂದಿವೆ. ಇದು ಕ್ರೀಡೆಗೆ ಸಿಕ್ಕ ಗೌರವ ಎಂದು ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ, ಮುಂದಿನ ರಾಜ್ಯ ಬಜೆಟ್&zwnj;ನಲ್ಲಿ ಕಂಬಳ ಕ್ರೀಡೆಗಾಗಿಯೇ ಪ್ರತ್ಯೇಕವಾಗಿ 5 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಸಾಂಪ್ರದಾಯಿಕ ಹಾಗೂ ಒಂಟಿ ಕರೆ ಕಂಬಳಗಳಿಗೂ ಮಾನ್ಯತೆ&lt;/strong&gt;&lt;/h2&gt;&lt;p&gt;ಸಾಂಪ್ರದಾಯಿಕ ಕಂಬಳಗಳ ಕುರಿತು ಮಾತನಾಡಿದ ಸಮಿತಿ ಅಧ್ಯಕ್ಷರು, ಜೋಡುಕರೆಯಲ್ಲಿ ಸದ್ಯ ಎಂಟು ಸಾಂಪ್ರದಾಯಿಕ ಕಂಬಳಗಳಿದ್ದು, ಅವುಗಳಿಗೂ ಈ ಅನುದಾನ ಲಭ್ಯವಾಗಲಿದೆ. ಇದರೊಂದಿಗೆ ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಸುದೀರ್ಘ ಕಾಲದಿಂದ ನಡೆಸಿಕೊಂಡು ಬರುತ್ತಿರುವ 'ಒಂಟಿ ಕರೆ' ಕಂಬಳಗಳ ಆಯೋಜಕರನ್ನೂ ಸಹ ರಾಜ್ಯ ಕಂಬಳ ಅಸೋಸಿಯೇಷನ್&zwnj;ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ಸಾಂಪ್ರದಾಯಿಕ ಒಂಟಿ ಕರೆ ಕಂಬಳಗಳಿಗೂ ಸರ್ಕಾರದಿಂದ ಆರ್ಥಿಕ ಅನುದಾನ ದೊರಕಿಸಿಕೊಡುವಂತೆ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದರು.&lt;/p&gt;&lt;h2&gt;&lt;strong&gt;ಮೈಸೂರು ಕಂಬಳ ವಿವಾದ: ಕರಾವಳಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ!&lt;/strong&gt;&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಮೈಸೂರು ಕಂಬಳ ಆಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ಡಾ. ದೇವಿಪ್ರಸಾದ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಂಬಳ ಎಂಬುದು ರಾಜಕೀಯ ಮತ್ತು ಧರ್ಮವನ್ನು ಮೀರಿದ ಒಂದು ಸಾಂಸ್ಕೃತಿಕ ಕ್ರೀಡೆ. ಇಲ್ಲಿ ಎಲ್ಲಾ ಪಕ್ಷದವರೂ ಒಟ್ಟಾಗಿ ಕಂಬಳ ನಡೆಸುತ್ತಾರೆ. ಮೈಸೂರು ಸಂಸದರು ಇದನ್ನು ವಿರೋಧಿಸುತ್ತಾರೆ ಎಂಬ ಒಂದೇ ಕಾರಣಕ್ಕೆ, ಅವರದ್ದೇ ಪಕ್ಷದ (ಬಿಜೆಪಿ) ಕರಾವಳಿಯ ಶಾಸಕರು ಮತ್ತು ಜನಪ್ರತಿನಿಧಿಗಳು ಮೈಸೂರು ಕಂಬಳವನ್ನು ವಿರೋಧಿಸುತ್ತಿರುವುದು ಸರಿಯಲ್ಲ. ನೀವು ಕಂಬಳಕ್ಕೆ ಗೌರವ ತಂದಿಲ್ಲ, ಬದಲಿಗೆ ಕಂಬಳವೇ ನಿಮಗೆ ಸಮಾಜದಲ್ಲಿ ಗೌರವ ಕೊಟ್ಟಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&quot;ಕಂಬಳ ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವೇ? ಮೈಸೂರಿನಲ್ಲಿ ಕಂಬಳ ಯಾಕೆ ನಡೆಯಬಾರದು? ಅಲ್ಲಿ ಕಂಬಳದ ಬಗ್ಗೆ ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಕೆಳವರ್ಗದವರ ಮೇಲಿನ ದಬ್ಬಾಳಿಕೆ ಎಂಬಂತೆ ಬಿಂಬಿಸಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ನಾವು ಹಿಂದುಳಿದ ವರ್ಗದ ಆರಾಧ್ಯ ದೈವಗಳಾದ ಕೋಟಿ-ಚೆನ್ನಯ್ಯ, ಕಾಂತಬಾರೆ-ಬೂದಬಾರೆ ಹಾಗೂ ಸೂರ್ಯ-ಚಂದ್ರರ ಹೆಸರಿನಲ್ಲಿ ಕಂಬಳ ಮಾಡುತ್ತೇವೆ. ಇದು ಇಡೀ ದೇಶಕ್ಕೇ ಮಾದರಿಯಾದ ವ್ಯವಸ್ಥೆ. ಕರಾವಳಿಯ ಜನಪ್ರತಿನಿಧಿಗಳು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಗಳಂತೆ ವರ್ತಿಸದೆ, ಕಂಬಳದ ವೈಭವವನ್ನು ರಾಜ್ಯಾದ್ಯಂತ ಪಸರಿಸಲು ಧೈರ್ಯದಿಂದ ಕೆಲಸ ಮಾಡಬೇಕು ಎಂದು ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳಿಗೆ ದೇವಿಪ್ರಸಾದ್ ಶೆಟ್ಟಿ ನೇರ ಮನವಿ ಹಾಗೂ ಒತ್ತಾಯ ಮಾಡಿದರು.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a"/>
        </item>
        <item>
            <title><![CDATA[ಮಂಗಳೂರಿಂದ ಹೊರಡುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಲವು ಟ್ರೈನ್ ಸಂಚಾರ ಭಾಗಶಃ ರದ್ದು, ಮರು ವೇಳಾಪಟ್ಟಿ ಪ್ರಕಟ!]]></title>
            <link>https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk</link>
            <guid isPermaLink="true">https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk</guid>
            <pubDate>Tue, 23 Jun 2026 16:33:34 +0530</pubDate>
            <description><![CDATA[ಕೊಂಕಣ ರೈಲ್ವೆ ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಜೂನ್ 23 ರಿಂದ 28ರವರೆಗೆ ಹಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಮಯವನ್ನು ಮರುನಿಗದಿಪಡಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ವೇಳಾಪಟ್ಟಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpgk0wjxhndqarech1m,imgname-konkan-railways--4--1781847817936.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಕೊಂಕಣ ರೈಲ್ವೆ ಮಾರ್ಗದಲ್ಲಿ ಅತ್ಯಗತ್ಯವಾಗಿ ನಡೆಯಬೇಕಿರುವ ಹಳಿ ನಿರ್ವಹಣಾ ಕಾಮಗಾರಿಗಳ (Track Maintenance) ಕಾರಣದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ವಿವಿಧ ರೈಲು ಸೇವೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜೂನ್ 23 ರಿಂದ ಜೂನ್ 28 ರವರೆಗಿನ ವಿವಿಧ ದಿನಾಂಕಗಳಲ್ಲಿ ಕೆಲವು ರೈಲುಗಳ ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದರೆ, ಇನ್ನು ಕೆಲವು ರೈಲುಗಳ ಸಂಚಾರದ ಸಮಯವನ್ನು ಮರುನಿಗದಿಪಡಿಸಲಾಗಿದೆ.&lt;/p&gt;&lt;h2&gt;ರೈಲುಗಳ ಭಾಗಶಃ ರದ್ದತಿ (Partial Cancellation)&lt;/h2&gt;&lt;p&gt;ಜೂನ್ 25, 2026 ರಂದು ಮಂಗಳೂರು ಸೆಂಟ್ರಲ್&zwnj;ನಿಂದ ಹೊರಡಬೇಕಿದ್ದ ರೈಲು ಸೇವೆಗಳಲ್ಲಿ ಭಾಗಶಃ ಕಡಿತ ಮಾಡಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56616 (ಮಂಗಳೂರು ಸೆಂಟ್ರಲ್ - ಮಡ್ಗಾಂವ್ ಜಂಕ್ಷನ್ ಪ್ಯಾಸೆಂಜರ್): &lt;/strong&gt;ಜೂನ್ 25 ರಂದು ಮಂಗಳೂರಿನಿಂದ ಹೊರಡುವ ಈ ರೈಲನ್ನು ಕಾರವಾರ ನಿಲ್ದಾಣದಲ್ಲೇ ಅಲ್ಪಾವಧಿಗೆ ಸ್ಥಗಿತಗೊಳಿಸಲಾಗುವುದು. ಹೀಗಾಗಿ, ಅಂದು ಕಾರವಾರ ಮತ್ತು ಮಡ್ಗಾಂವ್ ಜಂಕ್ಷನ್ ನಿಲ್ದಾಣಗಳ ನಡುವೆ ಈ ರೈಲಿನ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56615 (ಮಡ್ಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್):&lt;/strong&gt; ಜೂನ್ 25 ರಂದು ಮಧ್ಯಾಹ್ನ 2:15 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಬೇಕಿದ್ದ ಈ ರೈಲು, ಅಂದು ಮಡ್ಗಾಂವ್ ಬದಲಿಗೆ ಮಧ್ಯಾಹ್ನ 3:24 ಕ್ಕೆ ಕಾರವಾರ ನಿಲ್ದಾಣದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಪರಿಣಾಮವಾಗಿ, ಮಡ್ಗಾಂವ್ ಜಂಕ್ಷನ್ ಮತ್ತು ಕಾರವಾರ ನಡುವಿನ ರೈಲು ಸಂಚಾರ ರದ್ದಾಗಲಿದೆ.&lt;/p&gt;&lt;h2&gt;ಮರುನಿಗದಿತ ರೈಲು ಸೇವೆಗಳು (Rescheduled Services)&lt;/h2&gt;&lt;p&gt;ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ಕೆಳಗಿನ ಪ್ರಮುಖ ರೈಲುಗಳ ಸಮಯವನ್ನು ಬದಲಾಯಿಸಲಾಗಿದ್ದು, ಇವು ತಡವಾಗಿ ಸಂಚರಿಸಲಿವೆ:&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 56615 (ಮಡ್ಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್): &lt;/strong&gt;* ಜೂನ್ 23 ರಂದು: ಈ ರೈಲು ಮಧ್ಯಾಹ್ನ 2:15 ರ ನಿಗದಿತ ಸಮಯದ ಬದಲಾಗಿ ಸಂಜೆ 4:55 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಲಿದ್ದು, ಒಟ್ಟು 2 ಗಂಟೆ 40 ನಿಮಿಷ ವಿಳಂಬವಾಗಲಿದೆ.&lt;/p&gt;&lt;p&gt;ಜೂನ್ 26 ಮತ್ತು ಜೂನ್ 28 ರಂದು: ಇದೇ ರೈಲು ಮಧ್ಯಾಹ್ನ 2:15 ರ ಬದಲಿಗೆ ಮಧ್ಯಾಹ್ನ 3:45 ಕ್ಕೆ ಮಡ್ಗಾಂವ್&zwnj;ನಿಂದ ಹೊರಡಲಿದ್ದು, 1 ಗಂಟೆ 30 ನಿಮಿಷ ತಡವಾಗಿ ಸಂಚರಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 22149 (ಎರ್ನಾಕುಲಂ ಜಂಕ್ಷನ್ - ಪುಣೆ ದ್ವೈವಾರ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್):&lt;/strong&gt; ಜೂನ್ 26 ರಂದು ಮುಂಜಾನೆ 2:15 ಕ್ಕೆ ಎರ್ನಾಕುಲಂನಿಂದ ಹೊರಡಬೇಕಿದ್ದ ಈ ರೈಲು, ಒಂದು ಗಂಟೆ ತಡವಾಗಿ ಅಂದರೆ ಮುಂಜಾನೆ 3:15 ಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 11097 (ಪುಣೆ ಜಂಕ್ಷನ್ - ಎರ್ನಾಕುಲಂ ಜಂಕ್ಷನ್ ಪೂರ್ಣ ಎಕ್ಸ್&zwnj;ಪ್ರೆಸ್): &lt;/strong&gt;ಜೂನ್ 28 ರಂದು ರಾತ್ರಿ 10:50 ಕ್ಕೆ ಪುಣೆಯಿಂದ ಹೊರಡಬೇಕಿದ್ದ ಈ ರೈಲು, 1 ಗಂಟೆ ವಿಳಂಬವಾಗಿ ರಾತ್ರಿ 11:50 ಕ್ಕೆ ಜರ್ನಿ ಆರಂಭಿಸಲಿದೆ.&lt;/p&gt;&lt;h2&gt;ರೈಲು ಸಂಚಾರ ನಿಯಂತ್ರಣ (Regulation of Train)&lt;/h2&gt;&lt;p&gt;&lt;strong&gt;ರೈಲು ಸಂಖ್ಯೆ 09057 (ಸೂರತ್ - ಮಂಗಳೂರು ಜಂಕ್ಷನ್ ದ್ವೈವಾರ ವಿಶೇಷ ಎಕ್ಸ್&zwnj;ಪ್ರೆಸ್): &lt;/strong&gt;ಜೂನ್ 24 ರಂದು ಸೂರತ್&zwnj;ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುವ ಈ ವಿಶೇಷ ರೈಲನ್ನು, ಕೊಂಕಣ ಮಾರ್ಗದಲ್ಲಿ ನಡೆಯುವ ಕಾಮಗಾರಿಗಳ ಕಾರಣದಿಂದಾಗಿ ಮಾರ್ಗ ಮಧ್ಯೆ ಸುಮಾರು 25 ನಿಮಿಷಗಳ ಕಾಲ ನಿಯಂತ್ರಿಸಿ (ತಡೆಹಿಡಿದು) ಚಲಾಯಿಸಲು ತೀರ್ಮಾನಿಸಲಾಗಿದೆ.&lt;/p&gt;&lt;h2&gt;ರೈಲ್ವೆ ಇಲಾಖೆಯ ಪ್ರಮುಖ ಸೂಚನೆ&lt;/h2&gt;&lt;p&gt;ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸಲು ಯೋಜಿಸಿರುವ ಸಾರ್ವಜನಿಕರು ಮತ್ತು ಪ್ರಯಾಣಿಕರು ತಮ್ಮ ನಿಲ್ದಾಣಗಳಿಗೆ ಹೊರಡುವ ಮುನ್ನ ಅಧಿಕೃತ ವೆಬ್&zwnj;ಸೈಟ್ ಅಥವಾ ಸಹಾಯವಾಣಿ ಮೂಲಕ ಇತ್ತೀಚಿನ ರೈಲು ವೇಳಾಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಈ ತಾತ್ಕಾಲಿಕ ಬದಲಾವಣೆಗಳಿಗೆ ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಅಧಿಕಾರಿಗಳು ಕೋರಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/konkan-railway-updates-trains-cancelled-rescheduled-until-june-28-gdp/articleshow-k1smltk"/>
        </item>
        <item>
            <title><![CDATA[ಬೆಂಗಳೂರು ಬಿಟ್ರೆ ಹೂಡಿಕೆಗೆ ರಾಜ್ಯದ ಈ ಜಿಲ್ಲೆಯೇ ಈಗ ನಂಬರ್ 1! ಇದರ ಅದ್ಭುತ ಬೆಳವಣಿಗೆ ಹಿಂದಿರುವ ಅಸಲಿ ಕಾರಣಗಳಿವು!]]></title>
            <link>https://kannada.asianetnews.com/gallery/karnataka-districts/mangaluru-karnatakas-most-livable-city-and-top-investment-destination-after-bengaluru-mszgypv</link>
            <guid isPermaLink="true">https://kannada.asianetnews.com/gallery/karnataka-districts/mangaluru-karnatakas-most-livable-city-and-top-investment-destination-after-bengaluru-mszgypv</guid>
            <pubDate>Tue, 30 Jun 2026 15:18:00 +0530</pubDate>
            <description><![CDATA[&lt;p&gt;&lt;strong&gt;Most livable city Karnataka: &lt;/strong&gt;ಬೆಂಗಳೂರು ಬಿಟ್ಟರೆ ಇಂದು ರಾಜ್ಯದ ಈ ಜಿಲ್ಲೆ ಕರ್ನಾಟಕದ ಎರಡನೇ ಪ್ರಮುಖ ವಾಸಯೋಗ್ಯ ಮತ್ತು ಶ್ರೀಮಂತ ನಗರವಾಗಿ ಬೆಳೆಯುತ್ತಿದೆ. ಇಲ್ಲಿನ ಐಟಿ ಬೆಳವಣಿಗೆ ಮತ್ತು ರಿಯಲ್ ಎಸ್ಟೇಟ್ ಹೂಡಿಕೆಯ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-c69e7c9d-a1df-438b-af6b-76ce6c971872,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Most livable city Karnataka: &lt;/strong&gt;ಬೆಂಗಳೂರು ಬಿಟ್ಟರೆ ಇಂದು ರಾಜ್ಯದ ಈ ಜಿಲ್ಲೆ ಕರ್ನಾಟಕದ ಎರಡನೇ ಪ್ರಮುಖ ವಾಸಯೋಗ್ಯ ಮತ್ತು ಶ್ರೀಮಂತ ನಗರವಾಗಿ ಬೆಳೆಯುತ್ತಿದೆ. ಇಲ್ಲಿನ ಐಟಿ ಬೆಳವಣಿಗೆ ಮತ್ತು ರಿಯಲ್ ಎಸ್ಟೇಟ್ ಹೂಡಿಕೆಯ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. &amp;nbsp;&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರನ್ನು ಮೀರಿಸುತ್ತದೆ&lt;/strong&gt;ಕರ್ನಾಟಕದ ಅತ್ಯಂತ ಅಭಿವೃದ್ಧಿ ಹೊಂದಿದ ನಗರ ಯಾವುದು ಅಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಬೆಂಗಳೂರು. ಆದರೆ ಈಗ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಂಗಳೂರನ್ನು ಮೀರಿಸುವ ವೇಗದಲ್ಲಿ ಬೆಳೆಯುತ್ತಿದೆ. ಹೂಡಿಕೆ, ಪರಿಸರ ಸ್ನೇಹಿ ಜೀವನ ಮತ್ತು ಉದ್ಯೋಗದ ದೃಷ್ಟಿಯಿಂದ ಮಂಗಳೂರು ಇಂದು ದಕ್ಷಿಣ ಭಾರತದ ಅತ್ಯಂತ ವಾಸಯೋಗ್ಯ ನಗರವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಪೂರಕವಾಗಿರುವ ಅಂಶಗಳು ಮತ್ತು ಮಂಗಳೂರಿನ ಹೊಸ ಮುಖದ ಕುರಿತಾದ ವಿಶೇಷ ವರದಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಕರ್ನಾಟಕದ ಅತ್ಯಂತ ಶ್ರೀಮಂತ ಜಿಲ್ಲೆ&lt;/strong&gt;ಭಾರತದ ಪ್ರಮುಖ ನಗರಗಳ ಪಟ್ಟಿಯಲ್ಲಿ ಮಂಗಳೂರು ಈಗ ಗಟ್ಟಿಯಾಗಿ ನೆಲೆನಿಂತಿದೆ. 2025ರ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯು ಕರ್ನಾಟಕದ ಅತ್ಯಂತ ಶ್ರೀಮಂತ ಜಿಲ್ಲೆಗಳಲ್ಲಿ ಒಂದಾಗಿದ್ದು, ತಲಾ ಜಿಡಿಪಿ (Per Capita GDP) 6.69 ಲಕ್ಷ ರೂಪಾಯಿಗಳಷ್ಟಿದೆ. ಇದು ಬೆಂಗಳೂರು ಬಿಟ್ಟರೆ ರಾಜ್ಯದಲ್ಲೇ ಗರಿಷ್ಠ ಮಟ್ಟದ ಆದಾಯವಾಗಿದೆ. ಮಂಗಳೂರಿನ ಈ ಆರ್ಥಿಕ ಬೆಳವಣಿಗೆಗೆ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ದೊಡ್ಡ ಶಕ್ತಿಯಾಗಿ ನಿಂತಿವೆ.&lt;/p&gt;&lt;img&gt;&lt;p&gt;&lt;strong&gt;ಐಟಿ ಮತ್ತು ಕೈಗಾರಿಕಾ ಕ್ರಾಂತಿ&lt;/strong&gt;ಮಂಗಳೂರಿನ ನವ ಮಂಗಳೂರು ಬಂದರು (NMPT) ದೇಶದ ಪ್ರಮುಖ ಕಂಟೈನರ್ ಟರ್ಮಿನಲ್ ಆಗಿದ್ದು, ಭಾರತದ ಕಾಫಿ ರಫ್ತಿನಲ್ಲಿ ಬಹುದೊಡ್ಡ ಪಾಲನ್ನು ಹೊಂದಿದೆ. ಇದಲ್ಲದೆ, ಐಟಿ ಕ್ಷೇತ್ರದಲ್ಲಿ ಮಂಗಳೂರು ಅಭೂತಪೂರ್ವ ವೇಗವನ್ನು ಪಡೆದುಕೊಂಡಿದೆ. 2018 ರಲ್ಲಿ ಕೇವಲ 300 ಕೋಟಿ ರೂ. ಇದ್ದ ಐಟಿ ಆದಾಯವು 2024 ರ ವೇಳೆಗೆ 2,500 ಕೋಟಿ ರೂ. ದಾಟಿದೆ. ಇನ್ಫೋಸಿಸ್, ಕಾಗ್ನಿಸೆಂಟ್ ಮತ್ತು ಎಂಫಾಸಿಸ್&zwnj;ನಂತಹ ದೈತ್ಯ ಕಂಪನಿಗಳು ಇಲ್ಲಿ ನೆಲೆಯೂರಿವೆ. ಬೆಂಗಳೂರಿಗಿಂತ ಶೇ. 25-30ರಷ್ಟು ಕಡಿಮೆ ಕಾರ್ಯಾಚರಣಾ ವೆಚ್ಚ ಇರುವುದು ಉದ್ಯಮಿಗಳನ್ನು ಇಲ್ಲಿಗೆ ಸೆಳೆಯುತ್ತಿದೆ.&lt;/p&gt;&lt;img&gt;&lt;p&gt;ಎನ್&zwnj;ಆರ್&zwnj;ಐ ನಂಟು ಮತ್ತು ರಿಯಲ್ ಎಸ್ಟೇಟ್ಮಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಅತ್ಯಂತ ಸ್ಥಿರವಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಕನ್ನಡದ ಜನರ ದೊಡ್ಡ ಬಳಗವು ಇಲ್ಲಿನ ಹೂಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಾರ್ಷಿಕವಾಗಿ ಇಲ್ಲಿನ ವಸತಿ ಪ್ರದೇಶಗಳ ಮೌಲ್ಯ ಶೇ. 8 ರಿಂದ 12 ರಷ್ಟು ಏರಿಕೆಯಾಗುತ್ತಿದೆ. ದಟ್ಟಣೆಯಿಲ್ಲದ ರಸ್ತೆಗಳು, ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಮಂಗಳೂರನ್ನು ವಾಸಯೋಗ್ಯ ನಗರವನ್ನಾಗಿಸಿವೆ. ಅಂದಹಾಗೆ ಮುಂಬರುವ ದಿನಗಳಲ್ಲಿ ಮಂಗಳೂರು ಕರ್ನಾಟಕದ ಮುಂದಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.&lt;/p&gt;]]></content:encoded>
            <category>udupi</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/karnataka-districts/mangaluru-karnatakas-most-livable-city-and-top-investment-destination-after-bengaluru-mszgypv"/>
        </item>
        <item>
            <title><![CDATA[ಮುಂಬೈನಿಂದ ವೃದ್ಧನನ್ನು ಬಲವಂತವಾಗಿ ಉಡುಪಿಗೆ ಕರೆತಂದು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ಕುಟುಂಬ!]]></title>
            <link>https://kannada.asianetnews.com/karnataka-districts/mumbai-family-abandons-ailing-elderly-father-at-udupi-railway-station-case-registered-in-manipal-gdp/articleshow-ne9sp2z</link>
            <guid isPermaLink="true">https://kannada.asianetnews.com/karnataka-districts/mumbai-family-abandons-ailing-elderly-father-at-udupi-railway-station-case-registered-in-manipal-gdp/articleshow-ne9sp2z</guid>
            <pubDate>Thu, 16 Jul 2026 11:22:07 +0530</pubDate>
            <description><![CDATA[ಮುಂಬೈನಲ್ಲಿ ವಾಸವಿದ್ದ 67 ವರ್ಷದ ಜಗದೀಶ್ ಶೆಟ್ಟಿ ಎಂಬುವವರನ್ನು ಅವರ ಪತ್ನಿ ಮತ್ತು ಮಕ್ಕಳೇ ಉಡುಪಿಗೆ ಕರೆತಂದು ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ. ದೈಹಿಕ ಮತ್ತು ಮಾನಸಿಕ ಹಿಂಸೆಯ ಬಗ್ಗೆ ವೃದ್ಧರು ದೂರು ನೀಡಿದ್ದು, ಮಣಿಪಾಲ ಪೊಲೀಸರು ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxmqj1agpxbhy32dnthpxbff,imgname-udupi-railway-station-1784180966734.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಣಿಪಾಲ:&lt;/strong&gt; ರಕ್ತಸಂಬಂಧಗಳೇ ಬೆಲೆ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮುಂಬೈಯ ವೃದ್ಧರೊಬ್ಬರನ್ನು ಸ್ವತಃ ಹೆಂಡತಿ ಮಕ್ಕಳೇ ಉಡುಪಿಗೆ ಕರೆದುಕೊಂಡು ಬಂದು ಬಿಟ್ಟು ಹೋದ ಪ್ರಕರಣ ಮಣಿಪಾಲ ಠಾಣೆಯಲ್ಲಿ ದಾಖಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 67 ವರ್ಷದ ವೃದ್ಧರೊಬ್ಬರನ್ನು ಮುಂಬೈ ನಿಂದ ರೈಲಿನಲ್ಲಿ ಕರೆದುಕೊಂಡು ಬಂದು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಲವಂತವಾಗಿ ಇಳಿಸಿ, ಬಿಟ್ಟು ಹೋಗಿದ್ದಾರೆ. ಮೂಲತಃ ಮಣಿಪಾಲದವರಾದ ಜಗದೀಶ್ ಶೆಟ್ಟಿ (67) ಎಂಬ ಹಿರಿಯ ಜೀವವೇ ಮನೆಯವರ ಈ ಕ್ರೂರತ್ವಕ್ಕೆ ತುತ್ತಾದ ದುರ್ದೈವಿ. ಇವರು ಮುಂಬೈನ ಪನ್ವೇಲ್&zwnj;ನಲ್ಲಿ ತಮ್ಮ ಇಡೀ ಕುಟುಂಬದೊಂದಿಗೆ ವಾಸವಾಗಿದ್ದರು.&lt;/p&gt;&lt;h2&gt;ಮುಂಬೈಯಿಂದ ಕರೆತಂದು ರಸ್ತೆಗೆ ತಳ್ಳಿದ ಹೆಂಡತಿ, ಮಕ್ಕಳು&lt;/h2&gt;&lt;p&gt;ದೂರುದಾರರಾದ ಜಗದೀಶ್ ಶೆಟ್ಟಿ ಅವರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರ ಪತ್ನಿ ಸುನಂದಾ, ಪುತ್ರಿಯರಾದ ಶ್ವೇತಾ, ನೀತಾ ಮತ್ತು ಮಗ ನಿತಿನ್ ಸೇರಿ ಜುಲೈ 11 ರಂದು ಜಗದೀಶ್ ಶೆಟ್ಟಿ ಅವರನ್ನು ಮುಂಬೈ ಬಳಿಯ ಪನ್ವೇಲ್&zwnj;ನಿಂದ ಬಲವಂತವಾಗಿ ರೈಲಿನಲ್ಲಿ ಉಡುಪಿಗೆ ಕರೆದುಕೊಂಡು ಬಂದಿದ್ದರು.&lt;/p&gt;&lt;p&gt;ಮರುದಿನ ಅಂದರೆ ಜುಲೈ 12 ರಂದು ಬೆಳಗ್ಗೆ ಸುಮಾರು 8:30 ರ ಸುಮಾರಿಗೆ, ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲು ನಿಲ್ದಾಣದ ಬಳಿ ಎಲ್ಲರೂ ಆಟೋರಿಕ್ಷಾದಲ್ಲಿ ಬಂದಿದ್ದಾರೆ. ಅಲ್ಲಿ ಜಗದೀಶ್ ಶೆಟ್ಟಿ ಅವರನ್ನು ಆಟೋದಿಂದ ಬಲವಂತವಾಗಿ ಕೆಳಗೆ ಇಳಿಸಿದ ಕುಟುಂಬಸ್ಥರು, ಇನ್ನು ಮುಂದೆ ನಾವು ನಿನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ, ನಿನ್ನನ್ನು ನೋಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.&lt;/p&gt;&lt;h2&gt;ದೈಹಿಕ, ಮಾನಸಿಕ ಹಿಂಸೆ ಮತ್ತು ಹಸಿವಿನ ಯಾತನೆ&lt;/h2&gt;&lt;p&gt;ಮನೆಯವರಿಂದಲೇ ಬೀದಿಗೆ ತಳ್ಳಲ್ಪಟ್ಟ ಜಗದೀಶ್ ಶೆಟ್ಟಿ ಅವರು ಹೇಗೋ ಮಣಿಪಾಲ ಪೊಲೀಸ್ ಠಾಣೆಗೆ ತಲುಪಿ ತಮ್ಮ ಹೆಂಡತಿ ಹಾಗೂ ಮಕ್ಕಳ ವಿರುದ್ಧ ಗಂಭೀರವಾದ ದೂರು ನೀಡಿದ್ದಾರೆ. &quot;ನಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ನನ್ನ ಪತ್ನಿ ಮತ್ತು ಮಕ್ಕಳು ನನಗೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತಿರಲಿಲ್ಲ. ಕನಿಷ್ಠ ಪಕ್ಷ ದಿನಕ್ಕೆ ಒಂದು ಹೊತ್ತು ಸರಿಯಾಗಿ ಊಟ-ತಿಂಡಿಯನ್ನೂ ನೀಡದೆ ತೀವ್ರವಾಗಿ ಸತಾಯಿಸುತ್ತಿದ್ದರು. ಕಾನೂನುಬದ್ಧವಾಗಿ ನನ್ನ ಆರೈಕೆ ಮತ್ತು ರಕ್ಷಣೆ ಮಾಡಬೇಕಾದವರೇ ನನಗೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಹಿಂಸೆ ನೀಡಿ, ಕೊನೆಗೆ ಒಂಟಿಯಾಗಿ ಕೈಬಿಟ್ಟು ಹೋಗಿದ್ದಾರೆ ಎಂದು ಶೆಟ್ಟಿ ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;ಮಣಿಪಾಲ ಪೊಲೀಸರಿಂದ ಪ್ರಕರಣ ದಾಖಲು&lt;/h2&gt;&lt;p&gt;ಹಿರಿಯ ನಾಗರಿಕರಾದ ಜಗದೀಶ್ ಶೆಟ್ಟಿ ಅವರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ, 2007 ರ ಸೆಕ್ಷನ್ 24 ರ ಅಡಿಯಲ್ಲಿ (ಅಪರಾಧ ಸಂಖ್ಯೆ 109/2026) ಆರೋಪಿಗಳಾದ ಪತ್ನಿ ಸುನಂದಾ, ಪುತ್ರಿಯರಾದ ಶ್ವೇತಾ, ನೀತಾ ಮತ್ತು ಪುತ್ರ ನಿತಿನ್ ವಿರುದ್ಧ ಕಠಿಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.&lt;/p&gt;&lt;p&gt;ಸದ್ಯ ಪೊಲೀಸರು ವೃದ್ಧರಿಗೆ ಸೂಕ್ತ ಆಸರೆ ಕಲ್ಪಿಸಿದ್ದು, ತಲೆಮರೆಸಿಕೊಂಡಿರುವ ಕುಟುಂಬಸ್ಥರ ಪತ್ತೆಗಾಗಿ ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ತುತ್ತು ಅನ್ನ ನೀಡದೆ, ಕಾಯಿಲೆಗೆ ಮದ್ದನ್ನೂ ಕೊಡಿಸದೆ ಹೆತ್ತ ತಂದೆಯನ್ನು ಇಳಿವಯಸ್ಸಿನಲ್ಲಿ ಬೀದಿಗೆ ತಳ್ಳಿದ ಮಕ್ಕಳ ಕ್ರೌರ್ಯಕ್ಕೆ ಏನನ್ನಬೇಕೋ&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mumbai-family-abandons-ailing-elderly-father-at-udupi-railway-station-case-registered-in-manipal-gdp/articleshow-ne9sp2z"/>
        </item>
        <item>
            <title><![CDATA[ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಮುಂದಿನ 3 ದಿನಗಳು ನಿರ್ಣಾಯಕ!]]></title>
            <link>https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe</link>
            <guid isPermaLink="true">https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe</guid>
            <pubDate>Wed, 08 Jul 2026 09:16:51 +0530</pubDate>
            <description><![CDATA[ರಾಜ್ಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದೆ. ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಭೂಕುಸಿತದ ಆತಂಕವಿದ್ದು, ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwse2bepv93dvfq097p3dr1g,imgname-rain-alert--5--1783265045974.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವರುಣನ ಆರ್ಭಟಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅತ್ಯಂತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (IMD) ತೀವ್ರ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ತೀವ್ರತೆ ವಿಪರೀತವಾಗಿರಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ 24 ರಿಂದ 48 ಗಂಟೆಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ದಟ್ಟ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.&lt;/p&gt;&lt;h2&gt;ಕರಾವಳಿ-ಮಲೆನಾಡಿಗೆ 60 ಕಿ.ಮೀ ವೇಗದ ಬಿರುಗಾಳಿ ತಲ್ಲಣ!&lt;/h2&gt;&lt;p&gt;ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬೀಸಲಿರುವ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಎಚ್ಚರಿಕೆ ರವಾನಿಸಲಾಗಿದೆ. ಮತ್ತೊಂದೆಡೆ ಮಲೆನಾಡು ಮತ್ತು ಘಟ್ಟ ಪ್ರದೇಶಗಳಾದ ಬೆಳಗಾವಿ ಘಟ್ಟ ಪ್ರದೇಶ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;ul&gt; &lt;li&gt;ಜುಲೈ 8 : ಕರಾವಳಿ ಕರ್ನಾಟಕದಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದ್ದು, ಭಾರೀ ಮಳೆಯಾಗಲಿದೆ. ಇದರೊಂದಿಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಮುಂಜಾನೆಯಿಂದಲೇ ವರುಣನ ಅಬ್ಬರ ಜೋರಾಗಿರಲಿದೆ.&lt;/li&gt; &lt;li&gt;ಜುಲೈ 9: ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.&lt;/li&gt; &lt;li&gt;ಜುಲೈ 10: ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರವರೆಗೂ ಯಾವುದೇ ಬಿಡುಗಿಲ್ಲದೆ ನಿರಂತರವಾಗಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.&lt;/li&gt;&lt;/ul&gt;&lt;h2&gt;ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆ&lt;/h2&gt;&lt;p&gt;ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಮಧ್ಯಮ ಗಾತ್ರದ ಮಳೆಯಾಗಲಿದೆ. ಆದರೆ, ಈ ಭಾಗಗಳಲ್ಲೂ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಹಳೆಯ ಕಟ್ಟಡಗಳು ಹಾಗೂ ಮರಗಳ ಕೆಳಗೆ ವಾಹನ ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.&lt;/p&gt;&lt;h2&gt;ಭೂಕುಸಿತದ (Landslide) ಭೀತಿ, ಘಟ್ಟ ಪ್ರದೇಶಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ&lt;/h2&gt;&lt;p&gt;ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಘಟ್ಟ ರಸ್ತೆಗಳಲ್ಲಿ ಜುಲೈ 11ರವರೆಗೆ ಭೂಕುಸಿತ (Landslide) ಸಂಭವಿಸುವ ತೀವ್ರ ಆತಂಕವಿದೆ. ಹೀಗಾಗಿ, ಸಾರ್ವಜನಿಕರು ತುರ್ತು ಕೆಲಸಗಳಿಲ್ಲದೆ ಘಟ್ಟ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಆರು ದಿನಗಳ ಕಾಲ ಮುಂದೂಡುವುದು ಒಳಿತು. ಸಾರ್ವಜನಿಕರ ಸುರಕ್ಷತೆಗಾಗಿ ಈ ಕೆಳಗಿನ ಪ್ರಮುಖ ಸೂಚನೆಗಳನ್ನು ಅಧಿಕಾರಿಗಳು ಹೊರಡಿಸಿದ್ದಾರೆ.&lt;/p&gt;&lt;p&gt;ನದಿಗಳು ಮತ್ತು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಅಥವಾ ವೀಕ್ಷಿಸಲು ನದಿ ತೀರಕ್ಕೆ ಹೋಗಬಾರದು.&lt;/p&gt;&lt;p&gt;ಮಳೆ ನೀರು ನುಗ್ಗುವ ಸಾಧ್ಯತೆ ಇರುವ ತಗ್ಗು ಪ್ರದೇಶಗಳ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.&lt;/p&gt;&lt;p&gt;ಬಿರುಗಾಳಿ ಹಾಗೂ ಸಿಡಿಲು ಸಹಿತ ಮಳೆಯಾಗುತ್ತಿರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ವಿದ್ಯುತ್ ಕಂಬ ಹಾಗೂ ಮರಗಳ ಕೆಳಗೆ ಕಟ್ಟಬಾರದು.&lt;/p&gt;&lt;p&gt;ರಾಜ್ಯಾದ್ಯಂತ ಎನ್&zwnj;ಡಿಆರ್&zwnj;ಎಫ್ (NDRF) ಹಾಗೂ ಎಸ್&zwnj;ಡಿಆರ್&zwnj;ಎಫ್ (SDRF) ಸಿಬ್ಬಂದಿಗಳು ತರ್ತು ಸಂದರ್ಭಕ್ಕೆ , ಯಾವುದೇ ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತಗಳು ಕಂಟ್ರೋಲ್ ರೂಮ್&zwnj;ಗಳನ್ನು ತೆರೆದಿವೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe"/>
        </item>
        <item>
            <title><![CDATA[ಪುತ್ತೂರು-ಸುಬ್ರಹ್ಮಣ್ಯ 3 ಹೊಸ ರೈಲ್ವೆ ಓವರ್‌ಬ್ರಿಜ್ ಗೆ ₹18 ಕೋಟಿ, ದ.ಕನ್ನಡ ರಸ್ತೆ ಅಭಿವೃದ್ಧಿಗೆ 57 ಕೋಟಿ ಅನುದಾನ!]]></title>
            <link>https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451</link>
            <guid isPermaLink="true">https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451</guid>
            <pubDate>Sat, 20 Jun 2026 14:39:55 +0530</pubDate>
            <description><![CDATA[ಪುತ್ತೂರು-ಸುಬ್ರಹ್ಮಣ್ಯ ರೈಲು ಮಾರ್ಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹18 ಕೋಟಿ ಅನುದಾನದಲ್ಲಿ ಮೂರು ಹೊಸ ರೈಲ್ವೇ ಮೇಲ್ಸೇತುವೆಗಳನ್ನು ಮಂಜೂರು ಮಾಡಿದೆ. ಇದರೊಂದಿಗೆ, ಕಬಕ ಪುತ್ತೂರು ನಿಲ್ದಾಣದಲ್ಲಿ ವಿಸ್ತರಿತ ಶೆಲ್ಟರ್ ಮತ್ತು ಸುಬ್ರಹ್ಮಣ್ಯ ನಿಲ್ದಾಣದಲ್ಲಿ 'ಕೋಚ್ ವಾಟರಿಂಗ್' ವ್ಯವಸ್ಥೆ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv7z26y09sqwvy8xay9yk85c,imgname-4-1781605145536.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುತ್ತೂರು: &lt;/strong&gt;ಕರಾವಳಿಯ ಪ್ರಮುಖ ಸಂಪರ್ಕ ಕೊಂಡಿಯಾದ ಪುತ್ತೂರು ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ ಸಿಕ್ಕಿದೆ. ಈ ವ್ಯಾಪ್ತಿಯಲ್ಲಿ ಹೊಸದಾಗಿ 3 ರೈಲ್ವೇ ಓವರ್&zwnj;ಬ್ರಿಜ್ (ಮೇಲ್ಸೇತುವೆ) ನಿರ್ಮಾಣ ಮಾಡಲು ಬರೋಬ್ಬರಿ 18 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಕಟಿಸಿದ್ದಾರೆ. ಗುರುವಾರದಂದು ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ವಿಸ್ತರಿತ ಶೆಲ್ಟರ್ ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.&lt;/p&gt;&lt;h2&gt;ಎಲ್ಲೆಲ್ಲಿ ನಿರ್ಮಾಣವಾಗಲಿವೆ ಹೊಸ ರೈಲ್ವೇ ಓವರ್&zwnj;ಬ್ರಿಜ್&zwnj;ಗಳು?&lt;/h2&gt;&lt;p&gt;ರೈಲ್ವೆ ಹಳಿ ದಾಟುವಾಗ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಎದುರಾಗುತ್ತಿದ್ದ ತೊಂದರೆಗಳನ್ನು ನಿವಾರಿಸಲು ಈ ಕೆಳಗಿನ ಮೂರು ಪ್ರಮುಖ ಲೆವೆಲ್ ಕ್ರಾಸಿಂಗ್&zwnj;ಗಳಲ್ಲಿ ಹೊಸ ಮೇಲ್ಸೇತುವೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ:&lt;/p&gt;&lt;ul&gt; &lt;li&gt;ಮುಕ್ವೆ ಲೆವೆಲ್ ಕ್ರಾಸಿಂಗ್&lt;/li&gt; &lt;li&gt;ಪುತ್ತೂರು ಕ್ಲಬ್ ಲೆವೆಲ್ ಕ್ರಾಸಿಂಗ್&lt;/li&gt; &lt;li&gt;ಪುತ್ತೂರು ಗೇಟ್ ಲೆವೆಲ್ ಕ್ರಾಸಿಂಗ್&lt;/li&gt;&lt;/ul&gt;&lt;p&gt;ಈ ಮೂರು ಓವರ್&zwnj;ಬ್ರಿಜ್&zwnj;ಗಳ ನಿರ್ಮಾಣದಿಂದ ಈ ಭಾಗದ ಸಂಚಾರ ದಟ್ಟಣೆ ಸಂಪೂರ್ಣ ನಿವಾರಣೆಯಾಗಲಿದ್ದು, ಅಪಘಾತಗಳ ಭಯವಿಲ್ಲದೆ ಸಾರ್ವಜನಿಕರು ನಿರಾಳವಾಗಿ ಸಂಚರಿಸಬಹುದಾಗಿದೆ.&lt;/p&gt;&lt;h2&gt;ಕಬಕ ಪುತ್ತೂರು ಹಾಗೂ ಸುಬ್ರಹ್ಮಣ್ಯ ನಿಲ್ದಾಣಗಳ ಮೇಲ್ದರ್ಜೆ&lt;/h2&gt;&lt;p&gt;ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ₹4.4 ಕೋಟಿ ವೆಚ್ಚದಲ್ಲಿ ವಿಸ್ತರಿತ ಶೆಲ್ಟರ್ ಹಾಗೂ ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಈ ಹಿಂದೆ ಮೀಟರ್&zwnj;ಗೇಜ್ ಹಳಿಯು ಬ್ರಾಡ್&zwnj;ಗೇಜ್ ಆಗಿ ಬದಲಾದ ನಂತರ ಪುತ್ತೂರು ನಿಲ್ದಾಣದಿಂದ ನಿತ್ಯ ಪ್ರಯಾಣಿಸುವ ನೂರಾರು ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಹೀಗಾಗಿ, ನಿಲ್ದಾಣದಲ್ಲಿ ವಿಸ್ತರಿತ ಶೆಲ್ಟರ್ ನಿರ್ಮಾಣ ಮಾಡುವುದು ಅನಿವಾರ್ಯವಾಗಿತ್ತು.&lt;/p&gt;&lt;p&gt;ಇದಲ್ಲದೆ, ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ಆಧುನಿಕ 'ಕೋಚ್ ವಾಟರಿಂಗ್' ವ್ಯವಸ್ಥೆಯನ್ನು ₹5.29 ಕೋಟಿ ವೆಚ್ಚದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಸಂಸದರು ವಿವರಿಸಿದರು. ಈ ಭಾಗದ ರೈಲ್ವೆ ನಿಲ್ದಾಣಗಳ ಒಟ್ಟಾರೆ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಮೈಸೂರು ರೈಲ್ವೆ ವಿಭಾಗದ ಡಿಆರ್&zwnj;ಎಂ (DRM) ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.&lt;/p&gt;&lt;h2&gt;ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ₹57 ಕೋಟಿ ಕೇಂದ್ರ ನಿಧಿ&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕುರಿತು ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ, &quot;ಕೇಂದ್ರ ರಸ್ತೆ ನಿಧಿಯಿಂದ (Central Road Fund) ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ರಸ್ತೆಗಳ ಬಲವರ್ಧನೆ ಹಾಗೂ ಅಭಿವೃದ್ಧಿಗಾಗಿ ಒಟ್ಟು ₹57 ಕೋಟಿ ಹಣ ಬಿಡುಗಡೆಯಾಗಿದೆ. ಈ ಯೋಜನೆಯಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ಹಾಗೂ ನಗರ ಭಾಗದ ಪ್ರಮುಖ ರಸ್ತೆಗಳು ಸೇರಿವೆ,&quot; ಎಂದರು.&lt;/p&gt;&lt;p&gt;&quot;ನಾವು ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ಭಾರತೀಯ ಜನತಾ ಪಾರ್ಟಿ (BJP) ಕೇವಲ ವಿಕಾಸವಾದ ಮತ್ತು ಸರ್ವತೋಮುಖ ಪ್ರಗತಿಯಲ್ಲಿ ಮಾತ್ರ ನಂಬಿಕೆ ಇಟ್ಟುಕೊಂಡಿದೆ. ಅದಕ್ಕೆ ತಕ್ಕಂತೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.&quot;&lt;/p&gt;&lt;p&gt;&mdash; ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು&lt;/p&gt;&lt;h2&gt;ಗಣ್ಯರ ಉಪಸ್ಥಿತಿ ಮತ್ತು ನಿಲ್ದಾಣ ಪರಿಶೀಲನೆ&lt;/h2&gt;&lt;p&gt;ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರು ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹಿರಿಯ ಡಿವಿಶನಲ್ ಎಂಜಿನಿಯರ್ ರೋಹನ್ ಡೋಂಗ್ರೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈಲ್ವೆ ಎಂಜಿನಿಯರ್ ಹರ್ಷವರ್ಧನ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಸಂಸದರು ಅಧಿಕಾರಿಗಳೊಂದಿಗೆ ಕಬಕ ಪುತ್ತೂರು ನಿಲ್ದಾಣದ ಒಳಾಂಗಣ ಹಾಗೂ ರೈಲ್ವೆ ಹಳಿಗಳ ಸುರಕ್ಷತೆಯನ್ನು ಖುದ್ದಾಗಿ ಪರಿಶೀಲಿಸಿದರು.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/dakshina-kannada-railways-mp-brijesh-chowta-announces-rs18-crore-new-overbridges-and-rs57-crore-for-road-projects-gdp/articleshow-p93z451"/>
        </item>
        <item>
            <title><![CDATA[ಕರಾವಳಿಯಲ್ಲಿ ಶೇ.54ರಷ್ಟು ಭಾರೀ ಕುಸಿದ ಮುಂಗಾರು, ಮಳೆಗಾಲದಲ್ಲೂ ಮುಂದುವರಿದ ಬೇಸಿಗೆ ಹವೆ, ಬತ್ತಿದ ನೇತ್ರಾವತಿ!]]></title>
            <link>https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k</link>
            <guid isPermaLink="true">https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k</guid>
            <pubDate>Sat, 20 Jun 2026 16:21:21 +0530</pubDate>
            <description><![CDATA[&lt;p&gt;ಈ ವರ್ಷ &amp;nbsp;ಮುಂಗಾರು ದುರ್ಬಲಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಶೇ.54ರಷ್ಟು ಭಾರೀ ಕುಸಿತ ಕಂಡಿದೆ. ಇದರಿಂದಾಗಿ ನದಿಗಳು ಬತ್ತುತ್ತಿದ್ದು, ಡ್ಯಾಂ ಗೇಟ್ ತೆರೆದ ನಂತರ ನೀರಿನ ಸಮಸ್ಯೆ ಉಂಟಾಗಿದೆ ಹಾಗೂ ಭತ್ತದ ಕೃಷಿಕರು ನಾಟಿ ಮಾಡಲು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvj95x31k7he9ak1bma3vk37,imgname-nethravathi-river--2--1781951296608.jpg" type="image/jpeg" height="390" width="690"/>
            <content:encoded><![CDATA[&lt;p&gt;ಈ ವರ್ಷ &amp;nbsp;ಮುಂಗಾರು ದುರ್ಬಲಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಶೇ.54ರಷ್ಟು ಭಾರೀ ಕುಸಿತ ಕಂಡಿದೆ. ಇದರಿಂದಾಗಿ ನದಿಗಳು ಬತ್ತುತ್ತಿದ್ದು, ಡ್ಯಾಂ ಗೇಟ್ ತೆರೆದ ನಂತರ ನೀರಿನ ಸಮಸ್ಯೆ ಉಂಟಾಗಿದೆ ಹಾಗೂ ಭತ್ತದ ಕೃಷಿಕರು ನಾಟಿ ಮಾಡಲು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;img&gt;&lt;p&gt;ವರದಿ: ದಯಾನಂದ ಕಲ್ನಾರ್&zwnj;&lt;/p&gt;&lt;p&gt;ಮಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಬಾರಿ ಮಳೆ ದೂರವಾಗಿದೆ. ದ.ಕ. ಜಿಲ್ಲೆಯಲ್ಲಿ ಜೂನ್&zwnj; ತಿಂಗಳ ಮಳೆ ಹಂಗಾಮಿನಲ್ಲೂ ಬೇಸಿಗೆ ವಾತಾವರಣ ಕಂಡುಬರುತ್ತಿದೆ. ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.&lt;/p&gt;&lt;p&gt;ಈ ಬಾರಿಗೆ ಮೇ 29ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತಾದರೂ, ಜೂ.4ಕ್ಕೆ ಅಧಿಕೃತವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಬಳಿಕದಲ್ಲಿ ಕರಾವಳಿ ಕರ್ನಾಟದ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಆದರೆ ಮಳೆಗಾಲ ಆರಂಭದಲ್ಲೇ ಮುಂಗಾರು ದುರ್ಬಲಗೊಂಡಿತ್ತು.&lt;/p&gt;&lt;img&gt;&lt;p&gt;ದ.ಕ. ಜಿಲ್ಲೆಯಲ್ಲಿ 2025ರ ಜೂ.1ರಿಂದ ಜೂ.19ರ ವರೆಗೆ 998.8 ಮಿಲಿ ಮೀಟರ್&zwnj; ಮಳೆಯಾಗಿದ್ದರೆ, 2026ರ ಜೂ.1ರಿಂದ ಜೂ.19ರ ವರೆಗೆ ಕೇವಲ 229.1 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ. ಈ ವರ್ಷ 502 ಮಿ.ಮೀ. ಸಾಮಾನ್ಯ ಮಳೆಯೂ ಆಗಿಲ್ಲ.&lt;/p&gt;&lt;img&gt;&lt;p&gt;2025ರ ಜೂ.1ರಿಂದ 19ರ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ 1121.1 ಮಿ.ಮೀ., ಬಂಟ್ವಾಳದಲ್ಲಿ 1034.9 ಮಿ.ಮೀ., ಮಂಗಳೂರಿನಲ್ಲಿ 880.4 ಮಿ.ಮೀ., ಪುತ್ತೂರಿನಲ್ಲಿ 881.2 ಮಿ.ಮೀ., ಸುಳ್ಯದಲ್ಲಿ 869.5 ಮಿ.ಮೀ., ಮೂಡುಬಿದಿರೆಯಲ್ಲಿ 1144.4 ಮಿ.ಮೀ., ಕಡಬದಲ್ಲಿ 981.2 ಮಿ.ಮೀ., ಮೂಲ್ಕಿಯಲ್ಲಿ 930.5 ಮಿ.ಮೀ., ಉಳ್ಳಾಲದಲ್ಲಿ 799.9 ಮಿ.ಮೀ.ಮಳೆಯಾಗಿತ್ತು. ಆದರೆ ಈ ವರ್ಷ ಬೆಳ್ತಂಗಡಿಯಲ್ಲಿ 210.5 ಮಿ.ಮೀ., ಬಂಟ್ವಾಳದಲ್ಲಿ 218 ಮಿ.ಮೀ., ಮಂಗಳೂರಿನಲ್ಲಿ 307.2 ಮಿ.ಮೀ., ಪುತ್ತೂರಿನಲ್ಲಿ 168.9 ಮಿ.ಮೀ., ಸುಳ್ಯದಲ್ಲಿ 203 ಮಿ.ಮೀ., ಮೂಡುಬಿದಿರೆಯಲ್ಲಿ 227.2 ಮಿ.ಮೀ., ಕಡಬದಲ್ಲಿ 264.8 ಮಿ.ಮೀ., ಮೂಲ್ಕಿಯಲ್ಲಿ 288.4 ಮಿ.ಮೀ., ಉಳ್ಳಾಲದಲ್ಲಿ 327.9 ಮಿ.ಮೀ.ಮಾತ್ರವೇ ಮಳೆಯಾಗಿದೆ. ಕಳೆದ ವರ್ಷವೂ ಮಂಗಳೂರು (ಶೇ.-14), ಪುತ್ತೂರು (ಶೇ.-9), ಮುಲ್ಕಿ (ಶೇ.-14), ಉಳ್ಳಾಲ (ಶೇ.-22) ತಾಲೂಕುಗಳಲ್ಲೂ ಸಾಮಾನ್ಯ ಮಳೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.&lt;/p&gt;&lt;img&gt;&lt;p&gt;ಜೂನ್&zwnj; ಆರಂಭದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ನದಿಗೆ ನಿರ್ಮಿಸಲಾದ ಡ್ಯಾಂಗಳ ಗೇಟ್&zwnj; ತೆರೆಯಲಾಗಿದೆ. ಅದರಂತೆ ಉಪ್ಪಿನಂಗಡಿ ಸಮೀಪದ ಬಿಳಿಯೂರು ಡ್ಯಾಂ ಗೇಟ್&zwnj; ತೆರವು ಮಾಡಲಾಗಿತ್ತು. ಸಮೃದ್ಧ ನೀರಿನಿಂದ ಕಂಗೊಳಿಸುತ್ತಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿ ಡ್ಯಾಂ ಗೇಟ್&zwnj; ತೆರವು ಬಳಿಕ ನೀರಿಲ್ಲದೇ ಬರಿದಾದಂತೆ ಕಾಣುತ್ತಿದೆ.&lt;/p&gt;&lt;p&gt;ಸುಳ್ಯದ ಪಯಸ್ವಿನಿ ನದಿಯ ಡ್ಯಾಂನ ಗೇಟ್&zwnj; ತೆರವು ಮಾಡಲಾಗಿತ್ತು. ಆದರೆ ಮಳೆಯಾಗದೆ ನದಿ ಸಂಪೂರ್ಣ ಬರಿದು ಸ್ಥಿತಿಯಲ್ಲಿ ಇದೀಗ ಕಾಣುತ್ತಿದೆ. ಸುಳ್ಯದಲ್ಲಿ ಡ್ಯಾಂ ಗೇಟ್&zwnj; ತೆರೆದ ಬಳಿಕ ಮಳೆಯಾಗದೇ ನದಿಯಲ್ಲೂ ನೀರಿನ ಮಟ್ಟ ಕುಸಿದು ಕುಡಿಯಲು ನೀರಿನ ಸಮಸ್ಯೆ ಉಂಟಾಗಿತ್ತು. ಬಳಿಕ ನದಿಯ ಹೂಳು ತೆಗೆದು ಜಾಕ್&zwnj;ವೆಲ್&zwnj;ಗೆ ನೀರು ಹರಿಸಲು ವ್ಯವಸ್ಥೆ ಮಾಡಲಾಗಿ ನೀರಿನ ಸಮಸ್ಯೆಗೆ ಪರಿಹಾರ ಕ್ರಮ ವಹಿಸಲಾಗಿತ್ತು.&lt;/p&gt;&lt;p&gt;ಜೂನ್&zwnj; ಆರಂಭದಲ್ಲಿ ಮಳೆಯಾಗಿದ್ದರಿಂದ ಸಣ್ಣ-ಪುಟ್ಟ ತೋಡು, ಹಳ್ಳಗಳಲ್ಲಿ ನೀರಿನ ಒರತೆ ಉಂಟಾಗಿ ನೀರು ಹರಿವು ಆರಂಭಗೊಂಡಿತ್ತು. ಇದೀಗ ಮಳೆಯಿಲ್ಲದೇ ಮತ್ತೆ ತೋಡು, ಹಳ್ಳಗಳು ನೀರಿಲ್ಲದೇ ಬತ್ತುತ್ತಿದೆ.&lt;/p&gt;&lt;img&gt;&lt;p&gt;ಈ ಬಾರಿ ಮಳೆ ಇಲ್ಲದೇ ಗದ್ದೆ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗದ್ದೆ ಬೇಸಾಯ ಕೃಷಿಕರು ನೇಜಿ ಹಾಕಿ ನಾಟಿ ಮಾಡಲು ಮಳೆ ಇಲ್ಲದೇ ಅಡ್ಡಿಯಾಗಿದ್ದು, ಎರಡು, ಮೂರನೇ ಹಂತದ ನೇಜಿ ನಾಟಿಗೆ ಮಳೆ ಕೊರತೆ ಅಡ್ಡಿಯಾಗಲಿದೆ. ಈ ಬಾರಿ ಒಂದೇ ಹಂತದ ನೇಜಿ ಮಾಡಲು ಮಾತ್ರವೇ ಸಾಧ್ಯವಾಗುವ ಪರಿಸ್ಥಿತಿ ಕೃಷಿಕರಲ್ಲಿದೆ.ಮಳೆ ದೂರವಾಗಿರುವುದರಿಂದ ಅಡಕೆ ಕೃಷಿಕರಿಗೆ ಕೊಳರೋಗ ಭೀತಿ ಕೊಂಚ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ತೋಟಕ್ಕೆ ಔಷಧಿ ಸಿಂಪಡಿಸಲು ಅನುಕೂಲಕರವಾಗಿದೆ.&lt;/p&gt;&lt;h2&gt;&lt;strong&gt;ಬತ್ತಿದ ಸ್ಥಿತಿಯಲ್ಲಿ ನೇತ್ರಾವತಿ&lt;/strong&gt;&lt;/h2&gt;&lt;p&gt;2025ರ ಜೂ. 19 ರಂದು ಉಪ್ಪಿನಂಗಡಿಯ ನೇತ್ರಾವತಿ ನದಿ ಮೈತುಂಬಿ ಹರಿಯುತ್ತಿತ್ತು, 2026ರ ಜೂ .19ರಂದು ನದಿ ನೀರಿನ ಹರಿವು ಇಲ್ಲದ ದೃಶ್ಯ ಕಂಡುಬಂದಿದೆ. ಉಪ್ಪಿನಂಗಡಿ ಪ್ರವಾಹ ರಕ್ಷಣಾ ತಂಡದ ಲೀಡರ್ ದಿನೇಶ್ ಬಿ. ಅವರು ಕಳೆದ ವರ್ಷ ಹಾಗೂ ಈ ವರ್ಷದ ನದಿಯ ನೀರಿನ ಮಟ್ಟದ ಸ್ಥಿತಿ ಪೋಟೋಗಳನ್ನು ಒದಗಿಸಿದ್ದಾರೆ.&lt;/p&gt;&lt;p&gt;ಈ ಬಾರಿ ಮುಂಗಾರು ದುರ್ಬಲಗೊಂಡಿರುವುದು ಕಂಡುಬಂದಿದೆ. ಜೂನ್&zwnj; ಕೊನೆವರೆಗೂ ಮಳೆಯಾಗದೇ ಇದ್ದಲ್ಲಿ ಭತ್ತ ಕೃಷಿಕರಿಗೆ ತೊಂದರೆಯಾಗಲಿದೆ. ಈಗ ಭತ್ತ ನರ್ಸರಿ ಪ್ರಕ್ರಿಯೆಯಲ್ಲಿದ್ದು, ಜುಲೈನಲ್ಲಿ ನಾಟಿ ಸಂದರ್ಭದ ಮೊದಲು ಮಳೆ ಆಗದೇ ಇದ್ದಲ್ಲಿ ತೊಂದರೆ ಆಗಲಿದೆ. ಪರ್ಯಾಯ ಕ್ರಮದ ಬಗ್ಗೆಯೂ ಕ್ರಮ ವಹಿಸಲಾಗುವುದು.&lt;/p&gt;&lt;p&gt;-ಹೊನ್ನಪ್ಪ ಗೌಡ, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಮಂಗಳೂರು&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/costal-karnataka-dakshina-kannada-monsoon-deficit-2026-faces-54-percent-rain-deficit-nethravathi-river-drying-up-gdp-rffbe4k"/>
        </item>
        <item>
            <title><![CDATA[ತಮಿಳುನಾಡಿನ ವಿಜಯ್ ಬೆನ್ನಲ್ಲೇ ಮೂಕಾಂಬಿಕೆ ಸನ್ನಿಧಿಗೆ ಮತ್ತೊಬ್ಬ ನೂತನ ಸಿಎಂ ಭೇಟಿ..!]]></title>
            <link>https://kannada.asianetnews.com/gallery/udupi/following-tamil-nadu-cms-vijay-now-kerala-new-chief-minister-vd-satheesan-visits-the-kolluru-mookambika-temple-gkn-s3fgxnq</link>
            <guid isPermaLink="true">https://kannada.asianetnews.com/gallery/udupi/following-tamil-nadu-cms-vijay-now-kerala-new-chief-minister-vd-satheesan-visits-the-kolluru-mookambika-temple-gkn-s3fgxnq</guid>
            <pubDate>Sat, 11 Jul 2026 08:53:40 +0530</pubDate>
            <description><![CDATA[&lt;p&gt;ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ದೇಗುಲವು ದಕ್ಷಿಣ ಭಾರತದ ರಾಜಕಾರಣಿಗಳ ಪಾಲಿಗೆ ಪ್ರಮುಖ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಅಧಿಕಾರ ಮತ್ತು ಯಶಸ್ಸಿಗಾಗಿ ಹಲವು ನಾಯಕರು ಇಲ್ಲಿಗೆ ಆಗಮಿಸುತ್ತಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktxrv4zmkzgsqqa1gcbdtcm0,imgname-thalapathy-vijay-kolluru-1781263078388.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ದೇಗುಲವು ದಕ್ಷಿಣ ಭಾರತದ ರಾಜಕಾರಣಿಗಳ ಪಾಲಿಗೆ ಪ್ರಮುಖ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಅಧಿಕಾರ ಮತ್ತು ಯಶಸ್ಸಿಗಾಗಿ ಹಲವು ನಾಯಕರು ಇಲ್ಲಿಗೆ ಆಗಮಿಸುತ್ತಾರೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಉಡುಪಿ: &lt;/strong&gt;ಕರಾವಳಿಯ ಪವಿತ್ರ ಕ್ಷೇತ್ರ, ಸಿದ್ಧಿ ಬುದ್ಧಿ ಪ್ರದಾಯಿನಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿ ಈಗ ದಕ್ಷಿಣ ಭಾರತದ ಘಟಾನುಘಟಿ ರಾಜಕಾರಣಿಗಳ ನಂಬಿಕೆಯ ಸ್ಥಳವಾಗಿ ಮಾರ್ಪಟ್ಟಿದೆ. ಇತ್ತೀಚೆಗಷ್ಟೇ ತಮಿಳುನಾಡು ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸಿಎಂ ವಿಜಯ್ ಕೊಲ್ಲೂರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಬೆನ್ನಲ್ಲೇ ಈಗ ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಮೂಕಾಂಬಿಕಾ ದೇವಿಯ ದರ್ಶನ ಪಡೆದಿದ್ದಾರೆ.&lt;/p&gt;&lt;h3&gt;&lt;strong&gt;ಮುಂಜಾನೆಯೇ ದೇವಿಯ ದರ್ಶನ ಪಡೆದ ಸತೀಶನ್&lt;/strong&gt;&lt;/h3&gt;&lt;p&gt;ಕೇರಳದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ವಿ.ಡಿ.ಸತೀಶನ್ ಅವರಿಗೆ ದೇವಾಲಯದ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ಮುಂಜಾನೆಯೇ ದೇವಸ್ಥಾನಕ್ಕೆ ಆಗಮಿಸಿದ ಅವರು, ತಾಯಿ ಮೂಕಾಂಬಿಕೆಗೆ ಸಲ್ಲುವ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದರು.&lt;/p&gt;&lt;img&gt;&lt;p&gt;ವಿ.ಡಿ. ಸತೀಶನ್ ಅವರ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. Z-ಪ್ಲಸ್ ಕೆಟಗರಿ ಭದ್ರತೆಯಲ್ಲಿ ಅವರು ದೇವಸ್ಥಾನಕ್ಕೆ ಆಗಮಿಸಿದ್ದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಪೂಜೆಯ ಬಳಿಕ ದೇವಸ್ಥಾನದ ಆಡಳಿತ ಮಂಡಳಿಯು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಮಂಗಳೂರಿಗೆ ತೆರಳಿದ ಅವರು, ಬಳಿಕ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.&lt;/p&gt;&lt;h3&gt;&lt;strong&gt;ರಾಜಕಾರಣಿಗಳು ಮತ್ತು ಕೊಲ್ಲೂರು ಮೂಕಾಂಬಿಕೆಯ ಅವಿನಾಭಾವ ನಂಟು&lt;/strong&gt;&lt;/h3&gt;&lt;p&gt;ಕೊಲ್ಲೂರು ಮೂಕಾಂಬಿಕೆ ಕೇವಲ ಭಕ್ತರ ಪಾಲಿನ ದೇವತೆಯಲ್ಲ, ಬದಲಿಗೆ ದಕ್ಷಿಣ ಭಾರತದ ರಾಜಕಾರಣಿಗಳ ಪಾಲಿನ ಪವರ್ ಹೌಸ್. ಕರ್ನಾಟಕಕ್ಕಿಂತಲೂ ಹೆಚ್ಚಾಗಿ ಕೇರಳ ಮತ್ತು ತಮಿಳುನಾಡಿನ ರಾಜಕಾರಣಿಗಳು ಈ ಕ್ಷೇತ್ರವನ್ನು ಅತೀವವಾಗಿ ನಂಬುತ್ತಾರೆ. ಅದಕ್ಕೆ ಕಾರಣಗಳು ಇಲ್ಲಿವೆ. ಮೂಕಾಂಬಿಕೆಯನ್ನು 'ಶಕ್ತಿ'ಯ ಸ್ವರೂಪವೆಂದು ನಂಬಲಾಗುತ್ತದೆ. ರಾಜಕೀಯ ಏರಿಳಿತಗಳಲ್ಲಿ ಜಯ ಸಿಗಲಿ ಅಥವಾ ಅಧಿಕಾರ ಪ್ರಾಪ್ತಿಯಾಗಲಿ ಎಂದು ಬಯಸುವ ನಾಯಕರು ಇಲ್ಲಿಗೆ ಬರುವುದು ದಶಕಗಳಿಂದ ನಡೆದು ಬಂದ ಸಂಪ್ರದಾಯ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಂದ ಹಿಡಿದು ತಮಿಳುನಾಡಿನ ದಿ. ಎಂ.ಜಿ. ರಾಮಚಂದ್ರನ್ (MGR) ವರೆಗೆ ಎಲ್ಲರೂ ದೇವಿಯ ಪರಮ ಭಕ್ತರು.&lt;/p&gt;&lt;h3&gt;&lt;strong&gt;ಕೇರಳ-ತಮಿಳುನಾಡು ನಾಯಕರ ನೆಚ್ಚಿನ ತಾಣ&lt;/strong&gt;&lt;/h3&gt;&lt;p&gt;ತಮಿಳುನಾಡಿನ 'ದಳಪತಿ' ವಿಜಯ್ ತಮ್ಮ ರಾಜಕೀಯ ಪಕ್ಷ 'ಟಿವಿಕೆ' ಸ್ಥಾಪನೆಯ ಯಶಸ್ಸಿಗಾಗಿ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಮಾತುಗಳಿವೆ. ಈಗ ಕೇರಳದ ವಿ.ಡಿ. ಸತೀಶನ್ ಅವರ ಭೇಟಿಯೂ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಕೇರಳದ ಬಹುತೇಕ ರಾಜಕಾರಣಿಗಳಿಗೆ ಕೊಲ್ಲೂರು ಮನೆದೇವರಿದ್ದಂತೆ.&lt;/p&gt;&lt;img&gt;&lt;p&gt;ಕೊಲ್ಲೂರಿನಲ್ಲಿ ನಡೆಯುವ 'ಚಂಡಿಕಾಯಾಗ'ಕ್ಕೆ ವಿಶೇಷ ಶಕ್ತಿಯಿದೆ ಎಂಬ ನಂಬಿಕೆಯಿದೆ. ರಾಜಕೀಯ ಎದುರಾಳಿಗಳನ್ನು ಮಣಿಸಲು ಅಥವಾ ಆಡಳಿತದಲ್ಲಿ ಬರುವ ವಿಘ್ನಗಳನ್ನು ನಿವಾರಿಸಿಕೊಳ್ಳಲು ದೊಡ್ಡ ಮಟ್ಟದ ರಾಜಕಾರಣಿಗಳು ಇಲ್ಲಿ ಗುಪ್ತವಾಗಿ ಅಥವಾ ಬಹಿರಂಗವಾಗಿ ಯಾಗಗಳನ್ನು ಮಾಡಿಸುತ್ತಾರೆ. ಮೂಕಾಂಬಿಕೆಯು ವಿದ್ಯಾಧಿದೇವತೆಯೂ ಆಗಿರುವುದರಿಂದ, ಉತ್ತಮ ತೀರ್ಮಾನಗಳನ್ನು ತೆಗೆದುಕೊಳ್ಳುವ ಬುದ್ಧಿಶಕ್ತಿ ದೊರೆಯಲಿ ಎಂಬ ಕಾರಣಕ್ಕೆ ನಾಯಕರು ಇಲ್ಲಿ ಶರಣಾಗುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯು ಈಗ ದಕ್ಷಿಣ ಭಾರತದ ರಾಜಕೀಯ ಶಕ್ತಿಯ ಕೇಂದ್ರಬಿಂದುವಾಗಿ (Political Power Center) ಮಾರ್ಪಟ್ಟಿದೆ. ವಿಜಯ್ ಮತ್ತು ಸತೀಶನ್ ಅವರಂತಹ ನೂತನ ತಲೆಮಾರಿನ ನಾಯಕರು ಈ ಪರಂಪರೆಯನ್ನು ಮುಂದುವರಿಸುತ್ತಿರುವುದು ದೇವಸ್ಥಾನದ ಮಹಿಮೆಗೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>udupi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/udupi/following-tamil-nadu-cms-vijay-now-kerala-new-chief-minister-vd-satheesan-visits-the-kolluru-mookambika-temple-gkn-s3fgxnq"/>
        </item>
        <item>
            <title><![CDATA[ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?]]></title>
            <link>https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a</link>
            <guid isPermaLink="true">https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a</guid>
            <pubDate>Tue, 07 Jul 2026 13:09:42 +0530</pubDate>
            <description><![CDATA[ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಲು ಸಿದ್ಧತೆ ನಡೆದಿದ್ದು, ಇದಕ್ಕೆ 5 ಕೋಟಿ ರೂ. ವೆಚ್ಚದ ಅಂದಾಜಿದೆ. ಆದರೆ, ಇದು ಸಾಂಸ್ಕೃತಿಕವಾಗಿ ಸೂಕ್ತವಲ್ಲ, ದುಂದುವೆಚ್ಚ ಮತ್ತು ಬರಗಾಲದ ಸಮಯದಲ್ಲಿ ಅನಗತ್ಯ ಎಂದು ಸಂಸದ ಯದುವೀರ ಒಡೆಯರ್ ಸೇರಿದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xamd3pa" medium="video" height="768" width="1024"/>
            <content:encoded><![CDATA[&lt;p&gt;ಮೈಸೂರು ದಸರಾದಲ್ಲಿ ಕಂಬಳ ಬೇಕಾ ಬೇಡವಾ..? ದಸರಾ ಕಂಬಳ ವಿಚಾರದಲ್ಲಿ ಶುರುವಾಗಿದೆ ಹಗ್ಗ ಜಗ್ಗಾಟ. ದಸರಾದಲ್ಲಿ ಕಂಬಳ ಬೇಡ ಅಂತಿದ್ದಾರೆ ಮೈಸೂರಿಗರು. ಮಾಡ್ತೇವೆ ಎನ್ನುತ್ತಿದ್ದಾರೆ ಆಯೋಜಕರು. ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿ ಕಂಬಳಕ್ಕೆ ಸಿದ್ಧತೆ. 120 ಜೋಡಿ ಕೋಣಗಳು ಮೈಸೂರಿಗೆ ಆಗಮಿಸುವ ನಿರೀಕ್ಷೆ. ಆಯೋಜನೆಗೆ 5 ಕೋಟಿ ರೂ. ವೆಚ್ಚದ ಲೆಕ್ಕಾಚಾರ. 2 ದಿನಗಳ ಕಾಲ ಕಂಬಳ ನಡೆಸಲು ಸಮಾಲೋಚನೆ. 2 ಸಮಾನಾಂತರ ಸ್ಥಳದಲ್ಲಿ 16 ಸುತ್ತುಗಳಲ್ಲಿ ಆಯೋಜನೆಗೆ ಚಿಂತನೆ. 48 ಗಂಟೆ ನಿರಂತರವಾಗಿ ಬೆಳಕಿನ ವ್ಯವಸ್ಥೆಯಡಿ ಕಂಬಳ.&lt;/p&gt;&lt;p&gt;ಕಂಬಳಕ್ಕಾಗಿ ಎರಡು ಸ್ಥಳಗಳ ಪರಿಶೀಲನೆ. ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್&zwnj; ಬಂಕ್&zwnj; ಬಳಿ 15 ಎಕರೆ ಜಾಗ. ಸಾತಗಳ್ಳಿಯ VTU ಸಮೀಪದ 23 ಎಕರೆ ಜಾಗ ಅಂತಿಮ ಪಟ್ಟಿಗೆ. ದಸರಾದಲ್ಲಿ ಕಂಬಳ ಆಯೋಜನೆಗೆ ಮೈಸೂರು ಸಂಸದರಿಂದಲೇ ವಿರೋಧ. ಕಂಬಳಕ್ಕೆ ತನ್ನದೇ ಆದ ಸಂಪ್ರದಾಯ, ಗೌರವ ಇದೆ. ಕಂಬಳ ಮೈಸೂರು ದಸರಾಗೆ ಬೇಡ ಎಂದ ಯದುವೀರ ಒಡೆಯರ್ . ದಸರಾ ಧಾರ್ಮಿಕವಾದ ಆಚರಣೆ. ಅಲ್ಲಿನ ಸಂಸ್ಕೃತಿಗಳು ಅಲ್ಲಲ್ಲಿಯೇ ಆಚರಣೆ ಆಗಬೇಕು. ಇಲ್ಲಿಗೆ ಕಂಬಳವನ್ನು ಹೇರುವುದು ಬೇಡ ಎಂದ ಒಡೆಯರ್ .&lt;/p&gt;&lt;p&gt;ಕಂಬಳದಂತ ಜನಪದ ಕಲೆ ಆಯಾ ಪ್ರದೇಶಕ್ಕೆ ಸೀಮಿತವಾಗಿರಬೇಕು. ಅದನ್ನು ಬೇರೆಡೆಗೆ ತರುವಾಗ ಯೋಚನೆ ಮಾಡಬೇಕು. 5 -8 ಕೋಟಿ ಖರ್ಚು ಮಾಡಿ ದಸರಾದಲ್ಲಿ ಕಂಬಳ ಬೇಡ. ಕಂಬಳವನ್ನು ಅಲ್ಲೇ ಮಾಡಲಿ, ಇಲ್ಲಿ ಮಾಡಿದರೆ ದುಂದುವೆಚ್ಚ. ಕಂಬಳಕ್ಕಾಗಿ ಪ್ರತ್ಯೇಕ ಮೈದಾನ ಸಿದ್ಧ ಮಾಡಬೇಕು. ಕೋಟಿಗಟ್ಟಲೆ ಹಣ ಖರ್ಚು, ಮರಗಳನ್ನು ಕಡಿಯಬೇಕು. ಅಪಾರ ಪ್ರಮಾಣದ ನೀರನ್ನು ಬಳಸಿ ಕೆಸರು ಗದ್ದೆ ನಿರ್ಮಿಸಬೇಕು. ಬರಗಾಲದ ಸಂದರ್ಭದಲ್ಲಿ ಮೈಸೂರಲ್ಲಿ ಕಂಬಳ ಬೇಡ ಎಂದು ವಿರೋಧ&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/state/mysuru-dasara-kambala-row-mp-yaduveer-wadiyar-opposes-event-gdp-videoshow-tsh744a"/>
        </item>
        <item>
            <title><![CDATA[Udupi: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕಳ್ಳಿಯರ ಕೈಚಳಕ: ಭಕ್ತೆಯ ಬ್ಯಾಗ್‌ನಿಂದ ₹80 ಸಾವಿರ ಕಳವು!]]></title>
            <link>https://kannada.asianetnews.com/crime/udupi-kollur-mookambika-theft-case-3-women-arrested-gvd/articleshow-vmwgi4k</link>
            <guid isPermaLink="true">https://kannada.asianetnews.com/crime/udupi-kollur-mookambika-theft-case-3-women-arrested-gvd/articleshow-vmwgi4k</guid>
            <pubDate>Mon, 06 Jul 2026 18:01:46 +0530</pubDate>
            <description><![CDATA[&lt;p&gt;Udupi: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್&zwnj;ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvpjzjhw0twb5v2enhf9283,imgname-kk-1783341088337.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.06): &lt;/strong&gt;ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್&zwnj;ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಹಿಂದೆಯೂ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;&lt;strong&gt;ಏನಿದು ಘಟನೆ?&lt;/strong&gt;&lt;/p&gt;&lt;p&gt;ಮೂಕಾಂಬಿಕಾ ದೇವಿಯ ದರ್ಶನಕ್ಕೆ ಬಂದಿದ್ದ ನಿಮಿಶಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್&zwnj;ನಲ್ಲಿದ್ದ ₹80 ಸಾವಿರ ನಗದು ದೇವಸ್ಥಾನದ ಆವರಣದಲ್ಲೇ ಕಳ್ಳತನವಾಗಿತ್ತು. ಹಣ ಕಾಣೆಯಾಗಿರುವುದು ತಿಳಿದ ಬಳಿಕ ಅವರು ದೇವಸ್ಥಾನದ ಸುತ್ತಮುತ್ತ ಸಾಕಷ್ಟು ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.&lt;/p&gt;&lt;p&gt;&lt;strong&gt;ಬಂಧಿಸುವಲ್ಲಿ ಯಶಸ್ವಿ&lt;/strong&gt;&lt;/p&gt;&lt;p&gt;ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿ ಹಾಗೂ ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಮೊಬೈಲ್&zwnj;ನಲ್ಲಿ ಸೆರೆಹಿಡಿದಿದ್ದ ಫೋಟೋಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದರು. ತಾಂತ್ರಿಕ ಮಾಹಿತಿ ಹಾಗೂ ದೃಶ್ಯ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲೇ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದರು.&lt;/p&gt;&lt;p&gt;&lt;strong&gt;ಪೊಲೀಸ್ ತನಿಖೆಯಲ್ಲಿ ಬಹಿರಂಗ&lt;/strong&gt;&lt;/p&gt;&lt;p&gt;ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನಿವಾಸಿಗಳಾದ ನೇತ್ರಾವತಿ, ಶಾರದಾ ಹಾಗೂ ದುರ್ಗಮ್ಮ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಈಗಾಗಲೇ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ದುರ್ಗಮ್ಮ ವಿರುದ್ಧ ಎರಡು ಹಾಗೂ ಶಾರದಾ ವಿರುದ್ಧ ಮೂರು ಪ್ರಕರಣಗಳಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;h2&gt;&lt;strong&gt;ಸುಳಿವು ಸಿಗುವ ಸಾಧ್ಯತೆ&lt;/strong&gt;&lt;/h2&gt;&lt;p&gt;ಪ್ರಸಿದ್ಧ ಯಾತ್ರಾ ಕ್ಷೇತ್ರಗಳಲ್ಲಿ ಭಕ್ತರನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಈ ಮಹಿಳಾ ತಂಡದ ಬಂಧನದಿಂದ ಮತ್ತಷ್ಟು ಪ್ರಕರಣಗಳ ಸುಳಿವು ಸಿಗುವ ಸಾಧ್ಯತೆ ಇದೆ. ಬಂಧಿತರಿಂದ ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಕೊಲ್ಲೂರು ಪೊಲೀಸರು, ಇತರ ಜಿಲ್ಲೆಗಳಲ್ಲೂ ಇದೇ ತಂಡದ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/udupi-kollur-mookambika-theft-case-3-women-arrested-gvd/articleshow-vmwgi4k"/>
        </item>
        <item>
            <title><![CDATA[Konkan Railway ನೂತನ ಫುಟ್‌ ಓವರ್ ಬ್ರಿಡ್ಜ್‌ಗೆ ಟೆಂಡರ್‌, ಬದಲಾಗಲಿದೆ ಮೂಲ್ಕಿ ರೈಲು ನಿಲ್ದಾಣದ ಚಿತ್ರಣ!]]></title>
            <link>https://kannada.asianetnews.com/karnataka-districts/mangaluru-news-konkan-railway-major-upgrade-for-mulki-railway-station-tender-invited-for-new-foot-over-bridge-gdp/articleshow-w8xa5fg</link>
            <guid isPermaLink="true">https://kannada.asianetnews.com/karnataka-districts/mangaluru-news-konkan-railway-major-upgrade-for-mulki-railway-station-tender-invited-for-new-foot-over-bridge-gdp/articleshow-w8xa5fg</guid>
            <pubDate>Fri, 26 Jun 2026 19:24:41 +0530</pubDate>
            <description><![CDATA[ಮೂಲ್ಕಿ ರೈಲು ನಿಲ್ದಾಣವನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಹೊಸ ಪ್ಲಾಟ್&zwnj;ಫಾರ್ಮ್, ಫುಟ್ ಓವರ್ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಸೇರಿದ್ದು, ಸಂಸದ ಬ್ರಿಜೇಶ್ ಚೌಟ ಈ ಕುರಿತು ಮಾಹಿತಿ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw2361vbp8w3hq4zc38fk79e,imgname-mulki-railway-station-development-1782481880928.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೂಲ್ಕಿ:&lt;/strong&gt; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಅತ್ಯಂತ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ಮೂಲ್ಕಿ ರೈಲು ನಿಲ್ದಾಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತಗೊಳಿಸಲು ಬರೋಬ್ಬರಿ 5 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಎರಡು ಪ್ಲಾಟ್&zwnj;ಫಾರ್ಮ್&zwnj;ಗಳನ್ನು ಸಂಪರ್ಕಿಸುವ ನೂತನ ಫುಟ್ ಓವರ್ ಬ್ರಿಡ್ಜ್ (ಪಾದಚಾರಿ ಮೇಲ್ಸೇತುವೆ) ನಿರ್ಮಾಣಕ್ಕಾಗಿ 2.45 ಕೋಟಿ ರೂಪಾಯಿ ವೆಚ್ಚದ ಟೆಂಡರ್ ಕರೆಯಲಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.&lt;/p&gt;&lt;p&gt;ಮೂಲ್ಕಿ ರೈಲು ನಿಲ್ದಾಣಕ್ಕೆ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರೊಂದಿಗೆ ಜಂಟಿಯಾಗಿ ಭೇಟಿ ನೀಡಿದ ಸಂಸದರು, ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ಲಾಟ್&zwnj;ಫಾರ್ಮ್ ಸೇರಿದಂತೆ ವಿವಿಧ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.&lt;/p&gt;&lt;h2&gt;5 ಕೋಟಿ ರೂ. ವೆಚ್ಚದ ಪ್ರಮುಖ ಕಾಮಗಾರಿಗಳ ವಿವರಗಳು:&lt;/h2&gt;&lt;p&gt;ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಲ್ಕಿ ರೈಲು ನಿಲ್ದಾಣವು ಈ ಭಾಗದ ಪ್ರಯಾಣಿಕರಿಗೆ ಅತ್ಯಂತ ಪ್ರಮುಖವಾಗಿದ್ದು, ಅದರ ಹಂತ-ಹಂತದ ಆಧುನೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಪ್ರಸ್ತುತ ನಡೆಯುತ್ತಿರುವ ಒಟ್ಟು 5 ಕೋಟಿ ರೂ. ವೆಚ್ಚದ ಕಾಮಗಾರಿಗಳ ವಿವರ &amp;nbsp;ಇಲ್ಲಿದೆ.&lt;/p&gt;&lt;p&gt;&lt;strong&gt;ಪ್ಲಾಟ್&zwnj;ಫಾರ್ಮ್-1 ಮತ್ತು ಶೆಲ್ಟರ್ ಅಭಿವೃದ್ಧಿ: &lt;/strong&gt;ಒಂದನೇ ಪ್ಲಾಟ್&zwnj;ಫಾರ್ಮ್&zwnj;ನ ನವೀಕರಣ ಹಾಗೂ ಪ್ರಯಾಣಿಕರ ನೆರಳಿನ ವ್ಯವಸ್ಥೆಗಾಗಿ (ಶೆಲ್ಟರ್) 2.05 ಕೋಟಿ ರೂ. ವಿನಿಯೋಗಿಸಲಾಗಿದೆ.&lt;/p&gt;&lt;p&gt;&lt;strong&gt;ನೂತನ ಪ್ಲಾಟ್&zwnj;ಫಾರ್ಮ್-2 ನಿರ್ಮಾಣ:&lt;/strong&gt; ಪ್ರಯಾಣಿಕರ ದಟ್ಟಣೆ ನಿರ್ವಹಣೆಗಾಗಿ ಸುಸಜ್ಜಿತವಾದ ಎರಡನೇ ಪ್ಲಾಟ್&zwnj;ಫಾರ್ಮ್ ಅನ್ನು 2.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.&lt;/p&gt;&lt;p&gt;&lt;strong&gt;ನಿಲ್ದಾಣದ ರಸ್ತೆ ಅಭಿವೃದ್ಧಿ&lt;/strong&gt;: ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು 19 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.&lt;/p&gt;&lt;p&gt;ಫುಟ್ ಓವರ್ ಬ್ರಿಡ್ಜ್ (Foot Over Bridge): ಎರಡು ಪ್ಲಾಟ್&zwnj;ಫಾರ್ಮ್&zwnj;ಗಳ ನಡುವೆ ಪ್ರಯಾಣಿಕರು ಸುಲಭವಾಗಿ ಓಡಾಡಲು ಅನುವಾಗುವಂತೆ 2.45 ಕೋಟಿ ರೂ. ವೆಚ್ಚದಲ್ಲಿ ನೂತನ ಮೇಲ್ಸೇತುವೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.&lt;/p&gt;&lt;h2&gt;ಭವಿಷ್ಯದ ಯೋಜನೆಗಳು ಮತ್ತು ರೈಲುಗಳ ನಿಲುಗಡೆ:&lt;/h2&gt;&lt;p&gt;ಮೂಲ್ಕಿ ನಿಲ್ದಾಣದಲ್ಲಿ ಹೆಚ್ಚಿನ ರೈಲುಗಳ ನಿಲುಗಡೆಗೆ ಸಾರ್ವಜನಿಕರಿಂದ ಕೇಳಿಬರುತ್ತಿರುವ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ ಸಂಸದರು, &quot;ಈ ಭಾಗದ ಭವಿಷ್ಯದ ಹಿತದೃಷ್ಟಿಯಿಂದ ರೈಲು ಹಳಿಗಳ ದ್ವಿಪಥ (Doubling of Railway Tracks) ಅತ್ಯಂತ ಪ್ರಮುಖವಾಗಿದೆ. ದ್ವಿಪಥ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಮೂಲ್ಕಿ ನಿಲ್ದಾಣದಲ್ಲಿ ಹೆಚ್ಚುವರಿ ರೈಲುಗಳ ನಿಲುಗಡೆ (Stoppage) ನೀಡುವ ಕುರಿತು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಪರಿಶೀಲನೆ ನಡೆಸಲಾಗುವುದು,&quot; ಎಂದು ಭರವಸೆ ನೀಡಿದರು.&lt;/p&gt;&lt;h2&gt;ಸಂಸದರಿಗೆ ಮನವಿ ಸಲ್ಲಿಕೆ:&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಕೆ.ಎಸ್. ರಾವ್ ನಗರದ ಸಾರ್ವಜನಿಕರು ಹಾಗೂ ರೈಲು ನಿಲ್ದಾಣದ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಸಂಸದರನ್ನು ಭೇಟಿಯಾಗಿ ಮನವಿ ಪತ್ರವೊಂದನ್ನು ಸಲ್ಲಿಸಿದರು. ರೈಲು ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಕೆಂಚನಕೆರೆ ಹಾಗೂ ಕೆ.ಎಸ್. ರಾವ್ ನಗರದ ರಸ್ತೆಗಳು ಸದ್ಯ ಅತ್ಯಂತ ಕ crappy ಯಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಈ ರಸ್ತೆಗಳನ್ನು ತಕ್ಷಣವೇ ದುರಸ್ತಿ ಮಾಡಿಕೊಡಬೇಕು ಎಂದು ಅವರು ಈ ವೇಳೆ ಒತ್ತಾಯಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್&zwnj; ಆಳ್ವ, ಮೂಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್&zwnj; ಪುತ್ರನ್&zwnj;, ಬಿಜೆಪಿ ನಾಯಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಸತೀಶ್ ಅಂಚನ್&zwnj;, ರಂಗನಾಥ ಶೆಟ್ಟಿ, ನವೀನ್ ರಾಜ್, ಜೀವನ್ ಶೆಟ್ಟಿ ಅಂಗರಗುಡ್ಡೆ, ಶೈಲೇಶ್ ಕುಮಾರ್, ವಿಠಲ್ ಎನ್&zwnj;.ಎಂ., ಕೊಂಕಣ ರೈಲ್ವೆ ಅಧಿಕಾರಿಗಳಾದ ಗಜಾನನ ಬಂಟ್&zwnj;, ಗೋಪಾಲಕೃಷ್ಣ, ಬಿ.ಎಂ. ವೆಂಕಟೇಶ, ಕಮರ್ಷಿಯಲ್ ಸೂಪರ್ ವೈಸರ್ ಸತೀಶ್ ಹೆಗ್ಡೆ, ಮೂಲ್ಕಿ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಬೀ&zwnj;ರ್ , ರೈಲ್ವೆ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mangaluru-news-konkan-railway-major-upgrade-for-mulki-railway-station-tender-invited-for-new-foot-over-bridge-gdp/articleshow-w8xa5fg"/>
        </item>
        <item>
            <title><![CDATA['ಹೆಣ್ಣಾನೆ ಇದ್ರೆ ದಾನ ಮಾಡಿ..' ಕೇರಳ ಸಿಎಂಗೆ ಪತ್ರ ಬರೆದ ಸಿಎಂ ಡಿಕೆ ಶಿವಕುಮಾರ್‌]]></title>
            <link>https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va</link>
            <guid isPermaLink="true">https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va</guid>
            <pubDate>Mon, 13 Jul 2026 12:38:25 +0530</pubDate>
            <description><![CDATA[&lt;p&gt;ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗಾಗಿ ಹೆಣ್ಣಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2xg6xfggnqq9znzah8jaq5,imgname-dk-shivakumar--5--1783583218607.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): &lt;/strong&gt;ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಿಗಾಗಿ ಹೆಣ್ಣು ಸಾಕಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತ ವಿನಂತಿ ಮಾಡಿದೆ. ನೆರೆರಾಜ್ಯಗಳಿಗೆ ಸಾಕಾನೆಗಳನ್ನು ದಾನ ಮಾಡುವ ಅಥವಾ ವರ್ಗಾವಣೆ ಮಾಡುವಂತೆ ಕೇರಳ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ಕೇರಳದ ಯಾವುದೇ ದೇವಸ್ಥಾನದಿಂದ ಇಚ್ಛಾಪೂರ್ವಕವಾಗಿ ಹೆಣ್ಣು ಆನೆಯೊಂದನ್ನು ದಾನವಾಗಿ ನೀಡಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.&lt;/p&gt;&lt;p&gt;ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮತ್ತು ದೇವಸ್ಥಾನದ ಆಚರಣೆಗಳಲ್ಲಿ ಭಾಗವಹಿಸಲು ಆನೆಯ ಅಗತ್ಯವಿದೆ. ಚಾಲ್ತಿಯಲ್ಲಿರುವ ಎಲ್ಲಾ ಕಾನೂನು ನಿಬಂಧನೆಗಳು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿಯೇ ಈ ಆನೆ ದಾನದ ಪ್ರಕ್ರಿಯೆಗೆ ನೆರವಾಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಪತ್ರದಲ್ಲಿ ವಿನಂತಿಸಿದ್ದಾರೆ. ಕೇರಳ ಸರ್ಕಾರದ ಈ ತ ನಡೆ ಉಭಯ ರಾಜ್ಯಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ತೆಲಂಗಾಣ ಪ್ರಸ್ತಾವನೆ ತಿರಸ್ಕರಿಸಿದ್ದ ಕೇರಳ&lt;/strong&gt;&lt;/h2&gt;&lt;p&gt;ಇದಕ್ಕೂ ಮುನ್ನ, ತೆಲಂಗಾಣ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಧಾರ್ಮಿಕ ಉದ್ದೇಶಗಳಿಗಾಗಿ ಕೇರಳದ ಅರಣ್ಯ ಇಲಾಖೆಯ ಶಿಬಿರದ ಆನೆಗಳನ್ನು (ರಕ್ಷಿಸಿ ಸಾಕಲಾಗುತ್ತಿರುವ ಆನೆಗಳು) ನೀಡುವಂತೆ ಕೋರಿದ್ದ ಪ್ರಸ್ತಾವನೆಯನ್ನು ಕೇರಳ ಸರ್ಕಾರ ತಿರಸ್ಕರಿಸಿತ್ತು ಎಂದು ಅರಣ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಪ್ರಸ್ತುತ ಕೇರಳದ ಕೊಟ್ಟೂರು, ಧೋನಿ, ಮಲಯಾತ್ತೂರು ಮತ್ತು ಕೊನ್ನಿ ಸೇರಿದಂತೆ ರಾಜ್ಯದಾದ್ಯಂತ ಇರುವ ವಿವಿಧ ಶಿಬಿರಗಳಲ್ಲಿ ಸುಮಾರು 30 ಸಾಕಾನೆಗಳನ್ನು ನಿರ್ವಹಿಸಲಾಗುತ್ತಿದೆ. ಇಡೀ ಕೇರಳ ರಾಜ್ಯದಲ್ಲಿ ಒಟ್ಟು ಸಾಕಾನೆಗಳ ಸಂಖ್ಯೆ ಸುಮಾರು 368 ರಷ್ಟಿದ್ದು, ವಾರ್ಷಿಕವಾಗಿ 15 ರಿಂದ 20 ಆನೆಗಳು ಮೃತಪಡುತ್ತಿವೆ.&lt;/p&gt;&lt;p&gt;ಕೇವಲ ತೆಲಂಗಾಣ ಮಾತ್ರವಲ್ಲದೆ, ಮೂರು ವರ್ಷಗಳ ಹಿಂದೆ ತ್ರಿಪುರಾದ ವ್ಯಕ್ತಿಯೊಬ್ಬರು ಮಾವೇಲಿಕ್ಕರಾದ ದೇವಸ್ಥಾನಕ್ಕೆ ಆನೆಯೊಂದನ್ನು ಉಡುಗೊರೆಯಾಗಿ ನೀಡಲು ಕೋರಿದ್ದ ಮನವಿಯನ್ನೂ ಕೇರಳ ಅಧಿಕಾರಿಗಳು ತಿರಸ್ಕರಿಸಿದ್ದರು. ಅಸ್ಸಾಂ ಮತ್ತು ಇತರ ಆನೆ ಬಾಹುಳ್ಯವಿರುವ ರಾಜ್ಯಗಳಿಂದ ಸಾಕಾನೆಗಳನ್ನು ತರಲು ಈ ಹಿಂದೆ ಕೆಲವು ಮಧ್ಯವರ್ತಿಗಳು ಅನೌಪಚಾರಿಕವಾಗಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಅಂತರರಾಜ್ಯ ಆನೆ ವರ್ಗಾವಣೆಗೆ ಕಠಿಣ ನಿಯಮಗಳು&lt;/strong&gt;&lt;/h2&gt;&lt;p&gt;ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ 'ಸಾಕಾನೆ (ವರ್ಗಾವಣೆ ಅಥವಾ ಸಾರಿಗೆ) ನಿಯಮಗಳು, 2024' ರ ಅಡಿಯಲ್ಲಿ ಅಂತರರಾಜ್ಯ ಆನೆ ವರ್ಗಾವಣೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ಫೆಬ್ರವರಿ 24, 2024 ಕ್ಕಿಂತ ಮೊದಲು ಮಾಲೀಕತ್ವದ ಪ್ರಮಾಣಪತ್ರವನ್ನು ಹೊಂದಿರುವ ಮತ್ತು ಕೇಂದ್ರ ಸಚಿವಾಲಯದ ಎಲೆಕ್ಟ್ರಾನಿಕ್ ಮಾನಿಟರಿಂಗ್ ಅಪ್ಲಿಕೇಶನ್&zwnj;ನಲ್ಲಿ ಜೆನೆಟಿಕ್ ಪ್ರೊಫೈಲ್ (Genetic Profile) ನಮೂದಾಗಿರುವ ಆನೆಗಳ ವರ್ಗಾವಣೆಗೆ ಮಾತ್ರ ಅವಕಾಶವಿರುತ್ತದೆ. ದಾನ ನೀಡುವ ರಾಜ್ಯದ ಮುಖ್ಯ ವನ್ಯಜೀವಿ ಪಾಲಕರು (Chief Wildlife Warden), ಪ್ರಸ್ತುತ ಮಾಲೀಕರು ಆನೆಯನ್ನು ಪೋಷಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಮತ್ತು ಹೊಸ ಸ್ಥಳದಲ್ಲಿ ಪ್ರಸ್ತುತ ಸಂದರ್ಭಕ್ಕಿಂತ ಉತ್ತಮ ಪಾಲನೆ ಸಿಗಲಿದೆ ಎಂದು ತೃಪ್ತಿಪಟ್ಟರೆ ಮಾತ್ರ ವರ್ಗಾವಣೆಗೆ ಒಪ್ಪಿಗೆ ನೀಡಬಹುದು.&lt;/p&gt;&lt;h2&gt;&lt;strong&gt;ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಕೇರಳ ಅರಣ್ಯ ಇಲಾಖೆ&lt;/strong&gt;&lt;/h2&gt;&lt;p&gt;ಕರ್ನಾಟಕ ಮುಖ್ಯಮಂತ್ರಿಗಳಿಂದ ಪತ್ರ ಬಂದಿರುವುದನ್ನು ಕೇರಳದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ದೇವಸ್ಥಾನಗಳಿಂದ ದಾನಿಗಳನ್ನು ಹುಡುಕುವುದು ಅಥವಾ ಆನೆ ದಾನದ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಅರಣ್ಯ ಇಲಾಖೆಯ ಕಾನೂನು ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ನಿಯಮಾವಳಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಮೌಲ್ಯೀಕರಿಸುವುದು ಮತ್ತು ಅದರ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಇಲಾಖೆಯ ಕೆಲಸ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va"/>
        </item>
        <item>
            <title><![CDATA[ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲೇ ಟೇಬಲ್ ಹಾಕಿ ಕುಳಿತ ಯುವಕ! ಬುದ್ಧಿ ಹೇಳಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ!]]></title>
            <link>https://kannada.asianetnews.com/karnataka-districts/udupi-youth-blocks-kota-national-highway-66-road-with-table-police-arrested-viral-video/articleshow-xypd6ft</link>
            <guid isPermaLink="true">https://kannada.asianetnews.com/karnataka-districts/udupi-youth-blocks-kota-national-highway-66-road-with-table-police-arrested-viral-video/articleshow-xypd6ft</guid>
            <pubDate>Tue, 14 Jul 2026 20:22:48 +0530</pubDate>
            <description><![CDATA[&lt;p&gt;ಉಡುಪಿಯ ಕೋಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೊಬ್ಬ ಟೇಬಲ್, ಟಿವಿ ಇಟ್ಟು ರಸ್ತೆ ತಡೆದು ಹುಚ್ಚಾಟ ಮೆರೆದಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೇ ಕತ್ತಿ ಬೀಸಿ ಹಲ್ಲೆಗೆ ಯತ್ನಿಸಿದ್ದು, ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxggz50cwa41q02gxxjz44nh,imgname-udupi-viral-video-1784039838732.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.14): ಕೋ&lt;/strong&gt;ಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೊಬ್ಬ ನಡೆಸಿದ ಹುಚ್ಚಾಟ ವಾಹನ ಸವಾರರು ಮತ್ತು ಸ್ಥಳೀಯ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಹೆದ್ದಾರಿಯ ಮಧ್ಯೆಯೇ ಟೇಬಲ್ ಇಟ್ಟು, ಅದರ ಮೇಲೆ ಟಿವಿ ಹಾಗೂ ಮ್ಯೂಸಿಕ್ ಸಿಸ್ಟಮ್ ಹಾಕಿ ವಾಹನಗಳನ್ನು ತಡೆಗಟ್ಟಿದ ಘಟನೆ ನಡೆದಿದ್ದು, ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.&lt;/p&gt;&lt;h2&gt;ನಡೆದಿದ್ದೇನು?&lt;/h2&gt;&lt;p&gt;ಬೆಲ್ಲದ ಗಣಪತಿ ದೇವಸ್ಥಾನದ ಸಮೀಪದ ನಿವಾಸಿ ರಂಜಿತ್ ಸೋಮಯಾಜಿ (25) ಎಂಬಾತನೇ ಈ ಕೃತ್ಯ ಎಸಗಿದ ಯುವಕ. ಈತ ಉದ್ದನೆಯ ತಲೆಕೂದಲು ಮತ್ತು ಗಡ್ಡ ಬಿಟ್ಟಿದ್ದು, ವಿಚಿತ್ರವಾದ ನೋಟದಿಂದಲೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರನ್ನು ಭಯಭೀತರನ್ನಾಗಿಸಿದ್ದಾನೆ. ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಟೇಬಲ್ ಹಾಕಿ, ಅದರ ಮೇಲೆ ಟಿವಿಯ ಸೌಂಡ್ ಸ್ಪೀಕರ್ ಇಟ್ಟು ಜೋರಾಗಿ ಹಾಡುಗಳನ್ನು ಹಾಕುತ್ತಾ ರಸ್ತೆಯನ್ನು ಅಡ್ಡಗಟ್ಟಿದ್ದಾನೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಜನರು ಹೆದರಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸರ ಮೇಲೆ ಕತ್ತಿ ಬೀಸಿದ ರಂಜಿತ್:&lt;/strong&gt;&lt;/h2&gt;&lt;p&gt;ಯುವಕನ ಈ ವಿಲಕ್ಷಣ ವರ್ತನೆಯನ್ನು ಕಂಡು ಗಾಬರಿಗೊಂಡ ಸ್ಥಳೀಯರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದಾಗ, ಆತ ತನ್ನ ಬಳಿಯಿದ್ದ ಕತ್ತಿಯನ್ನು ತೆಗೆದು ಪೊಲೀಸರಿಗೆ ತೋರಿಸಿದ್ದಾನೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರಂಜಿತ್&zwnj;ನನ್ನು ಸತತ ಪ್ರಯತ್ನದ ನಂತರ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಮಾನಸಿಕ ಅಸ್ವಸ್ಥನೇ?&lt;/strong&gt;&lt;/h2&gt;&lt;p&gt;ಬಂಧಿತ ಯುವಕ ರಂಜಿತ್ ಸೋಮಯಾಜಿಯನ್ನು ವಿಚಾರಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥನಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಆದರೆ, ಆತನ ಕುಟುಂಬದವರು ಆತನ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಟ ಪೊಲೀಸರು ಆತನ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;p&gt;ಈ ಇಡೀ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್&zwnj;ಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಹೆದ್ದಾರಿಯಲ್ಲಿ ಅಟ್ಟಹಾಸ ಮೆರೆದ ಯುವಕನ ಧೈರ್ಯ ಮತ್ತು ಪೊಲೀಸರ ಮೇಲಿನ ಹಲ್ಲೆ ಯತ್ನ ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/udupi-youth-blocks-kota-national-highway-66-road-with-table-police-arrested-viral-video/articleshow-xypd6ft"/>
        </item>
    </channel>
</rss>
