<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 15 Sep 2026 20:31:09 +0530</lastBuildDate>
        <atom:link href="https://kannada.asianetnews.com/rss/udupi" rel="self" type="application/rss+xml"/>
        <item>
            <title><![CDATA[ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆ ಸ್ಥಾನಮಾನ, ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ]]></title>
            <link>https://kannada.asianetnews.com/karnataka-districts/tulu-language-second-official-language-karnataka-shivaraj-tangadagi-post-san/articleshow-0duo9by</link>
            <guid isPermaLink="true">https://kannada.asianetnews.com/karnataka-districts/tulu-language-second-official-language-karnataka-shivaraj-tangadagi-post-san/articleshow-0duo9by</guid>
            <pubDate>Tue, 15 Sep 2026 20:31:02 +0530</pubDate>
            <description><![CDATA[&lt;p&gt;ಕರಾವಳಿಯ ದಶಕಗಳ ಕನಸಾದ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಕರ್ನಾಟಕ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ತಜ್ಞರ ಸಮಿತಿ ವರದಿ ಹಾಗೂ ಆಂಧ್ರಪ್ರದೇಶದ ಮಾದರಿ ಅಧ್ಯಯನದ ನಂತರ, ಕಾನೂನು ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳುವುದಾಗಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2js54tws1e09n4g1bytb32t,imgname-shivaraj-tangadagi--on-tulu-1789484241756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.15):&lt;/strong&gt; ಕರಾವಳಿ ಕರ್ನಾಟಕದ ಕೋಟಿಗೂ ಅಧಿಕ ಜನರ ದಶಕಗಳ ಕನಸಾದ 'ತುಳು' ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳು ಭರದಿಂದ ಸಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಮಹತ್ವದ ಪೋಸ್ಟ್ ಹಂಚಿಕೊಂಡಿರುವ ಸಚಿವರು, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಒದಗಿಸುವಲ್ಲಿ ಸರ್ಕಾರ ಕೈಗೊಂಡಿರುವ ಸರಣಿ ಕ್ರಮಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ತಜ್ಞರ ಸಮಿತಿ ವರದಿ ಮತ್ತು ಅಧ್ಯಯನ&lt;/strong&gt;&lt;/h2&gt;&lt;p&gt;ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ, ಕರಾವಳಿಯ ಸಂಸ್ಕೃತಿ ಮತ್ತು ತುಳು ಶಾಸನಗಳ ಕುರಿತು ಈಗಾಗಲೇ ಸಮಗ್ರ ಅಧ್ಯಯನ ನಡೆಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯು 2023 ರ ಫೆಬ್ರವರಿ 14 ರಂದೇ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು.&lt;/p&gt;&lt;h2&gt;&lt;strong&gt;ಆಂಧ್ರಪ್ರದೇಶ ಮಾದರಿ ಅಧ್ಯಯನ ನಡೆಸಿದ ವಿಶೇಷ ತಂಡ&lt;/strong&gt;&lt;/h2&gt;&lt;p&gt;ಡಾ. ಆಳ್ವ ಸಮಿತಿಯ ವರದಿಯ ಮುಂದುವರಿದ ಭಾಗವಾಗಿ, ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಕಾನೂನು ಮಾದರಿಗಳನ್ನು ಅಧ್ಯಯನ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಉದ್ದೇಶಕ್ಕಾಗಿ 2025 ರ ಜುಲೈ 30 ರಂದು ವಿಶೇಷ ಅಧ್ಯಯನ ತಂಡವನ್ನು ರಚಿಸಲಾಗಿತ್ತು. ಈ ತಂಡವು 2026 ರ ಜನವರಿ 19 ಮತ್ತು 20 ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಅನುಷ್ಠಾನಗೊಳಿಸಿದ ಕಾನೂನು ಚೌಕಟ್ಟು ಹಾಗೂ ಆಡಳಿತಾತ್ಮಕ ಮಾದರಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದೆ. ಪರಿಶೀಲನೆಯ ನಂತರ ಅಧ್ಯಯನ ತಂಡವು 2026 ರ ಮಾರ್ಚ್&zwnj;ನಲ್ಲಿ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.&lt;/p&gt;&lt;h2&gt;&lt;strong&gt;ತುಳು ನಮ್ಮ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ&lt;/strong&gt;&lt;/h2&gt;&lt;p&gt;ತುಳು ಭಾಷೆಯ ಮಹತ್ವವನ್ನು ಒತ್ತಿ ಹೇಳಿರುವ ಸಚಿವ ಶಿವರಾಜ್ ತಂಗಡಗಿ, &quot;ತುಳು ಕೇವಲ ನಮ್ಮ ಕರಾವಳಿ ಭಾಗದ ಭಾಷೆಯಷ್ಟೇ ಅಲ್ಲ. ಅದು ಕರ್ನಾಟಕದ ಶ್ರೀಮಂತ ಭಾಷಾ-ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ತುಳು ಭಾಷೆಯ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಸೂಕ್ತ ಕಾನೂನು ಚೌಕಟ್ಟಿನೊಳಗೆ ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು&quot; ಎಂದು ಭರವಸೆ ನೀಡಿದ್ದಾರೆ.&lt;/p&gt;&lt;p&gt;ತಮ್ಮ ಪೋಸ್ಟ್&zwnj;ನ ಕೊನೆಯಲ್ಲಿ ತುಳು ಭಾಷೆಯಲ್ಲೇ &ldquo;ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪು&rdquo; (ನಾನು ಯಾವಾಗಲೂ ಜನರ ಭಾವನೆಗಳೊಂದಿಗೆ ಇರುತ್ತೇನೆ) ಎಂದು ಬರೆಯುವ ಮೂಲಕ ಕರಾವಳಿಗರ ಭಾವನೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಸಚಿವರ ಈ ಪೋಸ್ಟ್ ತುಳು ಅಭಿಮಾನಿಗಳಲ್ಲಿ ಹೊಸ ಆಶಾವಾದ ಮೂಡಿಸಿದೆ.&lt;/p&gt;&lt;p&gt;ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ.&amp;nbsp;ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ&hellip;&lt;/p&gt;&lt;p&gt;&mdash; Shivaraj S Tangadagi (@sstangadagi) September 15, 2026&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/tulu-language-second-official-language-karnataka-shivaraj-tangadagi-post-san/articleshow-0duo9by"/>
        </item>
        <item>
            <title><![CDATA[Agumbe Ghat: ಕರಾವಳಿ–ಮಲೆನಾಡು, ಉತ್ತರ ಕರ್ನಾಟಕದ ನಡುವಿನ ಸಂಪರ್ಕ ಮತ್ತಷ್ಟು ಸುಗಮ]]></title>
            <link>https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y</link>
            <guid isPermaLink="true">https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y</guid>
            <pubDate>Sun, 13 Sep 2026 08:36:02 +0530</pubDate>
            <description><![CDATA[&lt;p&gt;Agumbe Ghat: ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ₹18 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khmxh5a1jyhv3zt6ctn09asj,imgname-agumbe-1771302327617.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರ್ಕಳ: &lt;/strong&gt;ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ₹18 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.&lt;/p&gt;&lt;p&gt;ಆಗುಂಬೆ ಘಾಟ್&zwnj;ನಿಂದ ಹೆಬ್ರಿ ಪೇಟೆಯವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಮುಖ ತಿರುವುಗಳಲ್ಲಿ ಅಗತ್ಯ ಕಾಮಗಾರಿಗಳ ಜೊತೆಗೆ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಲು ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಅನುದಾನ ಬಿಡುಗಡೆ ಮಾಹಿತಿ ನೀಡಿದ ಸುನಿಲ್ ಕುಮಾರ್&lt;/strong&gt;&lt;/h2&gt;&lt;p&gt;ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿ ಹಾಗೂ ಅಪಾಯಕಾರಿ ತಿರುವುಗಳಲ್ಲಿ ವಾಹನಗಳ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಹಿಂದೆ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ₹18 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.&lt;/p&gt;&lt;p&gt;ಅನುದಾನ ಬಿಡುಗಡೆಗೆ ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಂಪರ್ಕ ಮತ್ತಷ್ಟು ಸುಗಮ&lt;/strong&gt;&lt;/h3&gt;&lt;p&gt;ರಸ್ತೆ ಅಭಿವೃದ್ಧಿಯಿಂದ ಆಗುಂಬೆ ಘಾಟ್ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಹೆಚ್ಚಿನ ಸುರಕ್ಷತೆ ದೊರೆಯಲಿದ್ದು, ಕರಾವಳಿ&ndash;ಮಲೆನಾಡು ಹಾಗೂ ಉತ್ತರ ಕರ್ನಾಟಕದ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y"/>
        </item>
        <item>
            <title><![CDATA[Shri Krishna Janmashtami 2026: ಉಡುಪಿಯಲ್ಲಿ ಇಂದು ರಾತ್ರಿ 12:12ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ಜನಸಾಗರವೇ ಕಾಯುತ್ತಿದೆ!]]></title>
            <link>https://kannada.asianetnews.com/gallery/festivals/shri-krishna-janmashtami-2026-ashtami-celebrations-in-full-swing-in-udupi-today-18skw5t</link>
            <guid isPermaLink="true">https://kannada.asianetnews.com/gallery/festivals/shri-krishna-janmashtami-2026-ashtami-celebrations-in-full-swing-in-udupi-today-18skw5t</guid>
            <pubDate>Fri, 04 Sep 2026 11:10:04 +0530</pubDate>
            <description><![CDATA[&lt;p&gt;Shri Krishna Janmashtami 2026 ಕೃಷ್ಣ ನಗರಿ ಉಡುಪಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ ನಡೆದಿದೆ. ಕೃಷ್ಣ ಭಕ್ತರು ಗುರುವಾರ ಉಪವಾಸ ವ್ರತ, ಜಪ, ಪಾರಾಯಣಗಳನ್ನು ನಡೆಯಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ne0j6ncn2x2q5cmc2gcrne,imgname-shri-krishna-janmashtami-2026-1788499478741.jpg" type="image/jpeg" height="390" width="690"/>
            <content:encoded><![CDATA[&lt;p&gt;Shri Krishna Janmashtami 2026 ಕೃಷ್ಣ ನಗರಿ ಉಡುಪಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ ನಡೆದಿದೆ. ಕೃಷ್ಣ ಭಕ್ತರು ಗುರುವಾರ ಉಪವಾಸ ವ್ರತ, ಜಪ, ಪಾರಾಯಣಗಳನ್ನು ನಡೆಯಲಿದೆ..&lt;/p&gt;&lt;img&gt;&lt;p&gt;ಕೃಷ್ಣ ನಗರಿ ಉಡುಪಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರದ ಸಿದ್ಧತೆ ನಡೆದಿದೆ. ಕೃಷ್ಣ ಭಕ್ತರು ಗುರುವಾರ ಉಪವಾಸ ವ್ರತ, ಜಪ, ಪಾರಾಯಣಗಳನ್ನು ನಡೆಸುತ್ತಿದ್ದು, ಕೃಷ್ಣಮಠದಲ್ಲಿ ಕೃಷ್ಣಾವತಾರದ ಗಳಿಗೆಯಲ್ಲಿ ಪಾವನ ಅರ್ಘ್ಯ ಪ್ರದಾನಕ್ಕೆ ಕಾಯುತಿದ್ದಾರೆ.&lt;/p&gt;&lt;img&gt;&lt;p&gt;ಶ್ರಾವಣ ಮಾಸದ ಅಷ್ಟಮಿ, ಮಧ್ಯರಾತ್ರಿ ಚಂದ್ರೋದಯದ 12.12 ಗಂಟೆಗೆ ರೋಹಿಣಿ ನಕ್ಷತ್ರದ ಸಹಯೋಗದಲ್ಲಿ ಶಿರೂರು ಮಠದ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕೃಷ್ಣನಿಗೆ ಮಹಾಪೂಜೆ ನೆರವೇರಿಸಿ, ಪ್ರಧಾನ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ನಂತರ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತರಿಗೂ ಕೃಷ್ಣಾರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿದೆ.ಈ ಮಹಾಪೂಜೆಯ ಸಂದರ್ಭದಲ್ಲಿ ಬಾಲಕೃಷ್ಣನಿಗೆ ವೈವಿಧ್ಯಮಯ ನೈವೇದ್ಯಗಳನ್ನು ಮಾಡಲಾಗುತ್ತದೆ, ಅದಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಬಾಣಸಿಗರು 2.50 ಲಕ್ಷಕ್ಕೂ ಅಧಿಕ ಚಕ್ಕುಲಿ ಹಾಗೂ ಗುಂಡಿಟ್ಟು, ಎಳ್ಳುಂಡೆ, ಅರಳುಂಡೆ, ಕಡಲೆಉಂಡೆ, ರವಾಉಂಡೆ ಇತ್ಯಾದಿ ವಿವಿಧ ಬಗೆಯ ಉಂಡೆಗಳನ್ನು ತಯಾರಿಸಿದ್ದಾರೆ.&lt;/p&gt;&lt;img&gt;&lt;p&gt;ನಾಳೆ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ - ಕೃಷ್ಣಲೀಲೋತ್ಸವ - ಮೊಸರುಕುಡಿಕೆಗೆ ಜನಸಾಗರವೇ ಸೇರಲಿದ್ದು, ಅವರಿಗೆ ಪ್ರಸಾದ ರೂಪದಲ್ಲಿ 1.50 ಲಕ್ಷ ಚಕ್ಕುಲಿ ಉಂಡೆಗಳನ್ನು ವಿತರಿಸಲಾಗುತ್ತದೆ. ಅಲ್ಲಗೆ ನಗರದ ವಿವಿಧ ಶಾಲೆಗಳಿಗೂ ಕೃಷ್ಣನ ಪ್ರಸಾದ ರೂಪದಲ್ಲಿ ಕಳಿಸಿಕೊಡಲಾಗುತ್ತದೆ.ಉಡುಪಿ ಕೃಷ್ಣ ಲೀಲೋತ್ಸವದ ಪ್ರಮುಖ ಆಕರ್ಷಣೆ ಹುಲಿವೇಷ ಕುಣಿತ, ಈ ಬಾರಿ ಸುಮಾರು 20ಕ್ಕೂ ಹೆಚ್ಚು ತಂಡಗಳು ಹುಲಿವೇಷ ಧರಿಸುತಿದ್ದು, ನಗರದ ಬೀದಿಗಳಲ್ಲಿ ಇಂದು ಮತ್ತು ನಾಳೆ ನೂರಾರು ಹುಲಿಗಳು ಅಬ್ಬರಿಸಲಿದ್ದಾವೆ. ನಗರದ ಅನೇಕ ಕಡೆಗಳಲ್ಲಿ ಲಕ್ಷಾಂತರ ರು. ಬಹುಮಾನವಿರುವ ಹುಲಿ ಕುಣಿತದ ಸ್ಪರ್ಧೆಗಳೂ ನಡೆಯಲಿವೆ.&lt;/p&gt;&lt;img&gt;&lt;p&gt;ಸಂಪ್ರದಾಯದಂತೆ ಕೃಷ್ಣಮಠದಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಶಿರೂರು ಮಠದ ವಿಶೇಷ ಎಂದರೆ ಹುಲಿವೇಷಧಾರಿಗಳಿಗೆ ನೋಟಿನ ಮಾಲೆಗಳನ್ನು ಹಾಕಿ ಸನ್ಮಾನ ಮಾಡುವುದು, ಹಿಂದಿನ ಶ್ರೀ ಲಕ್ಷ್ಮೀವರ ತೀರ್ಥರು ಆರಂಭಿಸಿದ್ದ ಈ ಸಂಪ್ರದಾಯವನ್ನು ಶ್ರೀ ವೇದವರ್ಧನ ತೀರ್ಥರೂ ಮುಂದಿಸಲು ನಿರ್ಧರಿಸಿದ್ದು, ಅದಕ್ಕಾಗಿ ಪ್ರತಿಯೊಬ್ಬ ಹುಲಿವೇಷಧಾರಿಗೆ ಹಾಕುವುದಕ್ಕೆ ನೂರಾರು ಸಂಖ್ಯೆಯಲ್ಲಿ 500 ರು. ಮೌಲ್ಯ.ದ ಮಾಲೆಗಳು ಸಿದ್ಧವಾಗಿವೆ. ಸ್ಪರ್ಧೆಯಲ್ಲಿ ಗೆದ್ದವರರಿಗೆ ವಿಶೇಷ ಬಹುಮಾನಗಳಿವೆ.&lt;/p&gt;]]></content:encoded>
            <category>udupi</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/festivals/shri-krishna-janmashtami-2026-ashtami-celebrations-in-full-swing-in-udupi-today-18skw5t"/>
        </item>
        <item>
            <title><![CDATA[ಕಾರ್ಕಳದ ಮಾಳದಲ್ಲಿ ಇತಿಹಾಸದ ಹೆಜ್ಜೆಗುರುತು, 5 ಅಪರೂಪದ ಜಿನ ಶಾಸನ ಪತ್ತೆ: 14ನೇ ಶತಮಾನದ ಐತಿಹಾಸಿಕ ರಹಸ್ಯ ಅನಾವರಣ!]]></title>
            <link>https://kannada.asianetnews.com/karnataka-districts/udupi-news-5-rare-ancient-jain-inscriptions-discovered-at-kote-basadi-in-mala-karkala-gdp/articleshow-44fc9qm</link>
            <guid isPermaLink="true">https://kannada.asianetnews.com/karnataka-districts/udupi-news-5-rare-ancient-jain-inscriptions-discovered-at-kote-basadi-in-mala-karkala-gdp/articleshow-44fc9qm</guid>
            <pubDate>Fri, 28 Aug 2026 10:47:44 +0530</pubDate>
            <description><![CDATA[ಕಾರ್ಕಳದ ಮಾಳ ಗ್ರಾಮದ ಐತಿಹಾಸಿಕ ಕೋಟೆ ಬಸದಿಯ ಜೀರ್ಣೋದ್ಧಾರ ಸಂದರ್ಭದಲ್ಲಿ ಐದು ಅಪರೂಪದ ಜಿನ ಶಾಸನಗಳು ಪತ್ತೆಯಾಗಿವೆ. 14 ರಿಂದ 19ನೇ ಶತಮಾನಕ್ಕೆ ಸೇರಿದ ಈ ಶಾಸನಗಳು, ಗಣಧರ ಪಾದ ಹಾಗೂ ತೀರ್ಥಂಕರರ ಪ್ರತಿಮೆಗಳ ಪ್ರತಿಷ್ಠಾಪನೆಯ ಐತಿಹಾಸಿಕ ಮಾಹಿತಿಯನ್ನು ಒದಗಿಸುತ್ತವೆ. ಈ ಆವಿಷ್ಕಾರದಿಂದ ಬಸದಿಯು 14-15ನೇ ಶತಮಾನದಷ್ಟು ಪ್ರಾಚೀನವಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13cqr7nj43sjm1h8fvmyxvh,imgname-jain-inscription-udupi-1787894161653.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ:&lt;/strong&gt; ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಕೋಟೆ ಬಸದಿಯಲ್ಲಿ ಐದು ಅಪರೂಪದ ಜಿನ ಶಾಸನಗಳು ಪತ್ತೆಯಾಗಿದೆ. ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ರಾಜಗುರು ಪೀಠದ ಪರಂಪರೆಗೆ ಒಳಪಟ್ಟಿರುವ ಕೋಟೆ ಬಸದಿಯಲ್ಲಿ ಆದಿನಾಥ ತೀರ್ಥಂಕರ, ನೇಮಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಹಾಗೂ ಪದ್ಮಾವತಿ ದೇವಿಯ ಸನ್ನಿಧಾನಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ಐದು ಪ್ರಾಚೀನ ಶಾಸನಗಳು ಗಮನಕ್ಕೆ ಬಂದಿವೆ.&lt;/p&gt;&lt;p&gt;ಆಯುರ್ವೇದ ವೈದ್ಯ ಡಾ. ಪಿ. ಸತ್ಯನಾರಾಯಣ ಭಟ್ ಅವರ ಮಾಹಿತಿಯ ಮೇರೆಗೆ ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ. ಕೃಷ್ಣಯ್ಯ ಅವರ ನೇತೃತ್ವದ ತಂಡ ಜಿನ ಪ್ರತಿಮೆಗಳು ಹಾಗೂ ಶ್ರುತಸ್ಕಂದದ ಪೀಠಭಾಗದಲ್ಲಿದ್ದ ಶಾಸನಗಳನ್ನು ಗುರುತಿಸಿತು. ಪುರಾತತ್ತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಶಾಸನಗಳ ಸಮಗ್ರ ಅಧ್ಯಯನ ನಡೆಸಿದ್ದಾರೆ.&lt;/p&gt;&lt;h2&gt;18&ndash;19ನೇ ಶತಮಾನಕ್ಕೆ ಸೇರಿರುವ ಅಂದಾಜು&lt;/h2&gt;&lt;p&gt;ಕಂಚಿನ ಗಣಧರ ಪಾದದ ಪೀಠದಲ್ಲಿರುವ ಮೂರು ಸಾಲಿನ ಶಾಸನವು ಮಾಳದ ಕೋಟೆ ಬಸದಿಗೆ ಹೆಗಡೆಯ ಮಗ &lsquo;ವಿಞ&rsquo; ಎಂಬುವವರು ಗಣಧರ ಪಾದವನ್ನು ಮಾಡಿಸಿಕೊಟ್ಟಿರುವುದನ್ನು ದಾಖಲಿಸಿದೆ. ಈ ಶಾಸನ 18&ndash;19ನೇ ಶತಮಾನಕ್ಕೆ ಸೇರಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯನ್ನು &lsquo;ಪಾಯಂಣ&rsquo; ಎಂಬ ವ್ಯಕ್ತಿ ಮಾಡಿಸಿದ್ದು 14ನೇ ಶತಮಾನಕ್ಕೆ ಸೇರಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಇನ್ನೊಂದು ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯ ಶಾಸನದಲ್ಲಿ &lsquo;ವಿರೋಧಿಕೃತು ಸಂವತ್ಸರ&rsquo;ದ ವೈಶಾಖ ಶುದ್ಧ ತ್ರಯೋದಶಿಯಂದು ಐತಪ್ಪ ಬಳಿಯ ಸಿರುಳಾಲ (ಶಿರ್ಲಾಲು) ಕೋಟಿಲದೇವನು ಪ್ರತಿಷ್ಠಾಪಿಸಿದ ಚವಿಸತೀರ್ಥ ಪಾರ್ಶ್ವನಾಥ ಪ್ರತಿಮೆಯ ಅಮೃತಪಡಿಗೆ ಮೂರುವರೆ ಮುಡಿ ಅಕ್ಕಿಯನ್ನು ಸಮರ್ಪಿಸಿರುವ ಮಾಹಿತಿ ದಾಖಲಾಗಿದೆ. ಇದು 1611, ಏಪ್ರಿಲ್ 15, ಸೋಮವಾರಕ್ಕೆ ಹೊಂದಿಕೆಯಾಗುತ್ತದೆ.&lt;/p&gt;&lt;p&gt;ಅಮೃತಶಿಲೆಯ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆಯ ಪೀಠದಲ್ಲಿ ದೇವನಾಗರಿ ಲಿಪಿಯ ಶಾಸನವಿದೆ. ಸಾಮಾನ್ಯ ಶಕೆ 17ನೇ ಶತಮಾನದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಿರುವುದನ್ನು ಈ ಶಾಸನ ದಾಖಲಿಸುತ್ತದೆ.&lt;/p&gt;&lt;p&gt;ಲಭ್ಯವಿರುವ ಐತಿಹಾಸಿಕ ಸಾಕ್ಷ್ಯಗಳ ಆಧಾರದ ಮೇಲೆ ಕೋಟೆ ಬಸದಿ 14&ndash;15ನೇ ಶತಮಾನಕ್ಕೆ ಸೇರಿದ ಪ್ರಾಚೀನ ಜೈನ ಆರಾಧನಾ ಕೇಂದ್ರವಾಗಿರಬಹುದು ಎಂಬ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಈ ಕ್ಷೇತ್ರಕಾರ್ಯದಲ್ಲಿ ಕೋಟೆ ಬಸದಿಯ ಶ್ರೀ ಚಂದ್ರನಾಥ ಇಂದ್ರರು, ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸಾಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್. ಅವರು ಸಹಕರಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/udupi-news-5-rare-ancient-jain-inscriptions-discovered-at-kote-basadi-in-mala-karkala-gdp/articleshow-44fc9qm"/>
        </item>
        <item>
            <title><![CDATA[ಕನಸಿನ ರೆಕ್ಕೆ ಕಟ್ಟಿದ ಕಾರ್ಕಳದ ಹುಡುಗಿ ಉಡುಪಿಯ ಮೊದಲ ಮಹಿಳಾ ಪೈಲಟ್! ಕರ್ನಾಟಕದಲ್ಲಿ ಮಹಿಳಾ ಪೈಲಟ್‌ಗಳೆಷ್ಟು?]]></title>
            <link>https://kannada.asianetnews.com/karnataka-districts/from-childhood-dream-to-cockpit-karkala-shiney-asma-saldanha-becomes-udupi-district-first-woman-commercial-pilot-gdp/articleshow-4fh62ei</link>
            <guid isPermaLink="true">https://kannada.asianetnews.com/karnataka-districts/from-childhood-dream-to-cockpit-karkala-shiney-asma-saldanha-becomes-udupi-district-first-woman-commercial-pilot-gdp/articleshow-4fh62ei</guid>
            <pubDate>Fri, 14 Aug 2026 16:57:09 +0530</pubDate>
            <description><![CDATA[ಕಾರ್ಕಳದ ಶೈನಿ ಅಸ್ಮಾ ಸಲ್ಡಾನಾ ಅವರು ವಾಣಿಜ್ಯ ಪೈಲಟ್ ಪರವಾನಗಿ ಪಡೆದು, ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಲ್ಯದಲ್ಲಿ ನಡೆದ ವಿಮಾನ ಅಪಘಾತದಿಂದ ಪ್ರೇರಿತರಾಗಿ, ಕಠಿಣ ಪರಿಶ್ರಮ ಮತ್ತು ತರಬೇತಿಯ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡ ಇವರ ಸಾಧನೆಯು ಕರಾವಳಿಯ ಯುವತಿಯರಿಗೆ ಸ್ಫೂರ್ತಿದಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzjhaq2k3k3mqh373750y2f,imgname-shiney-asma-saldanha-1786692283105.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ: &lt;/strong&gt;ಕಾರ್ಕಳ ತಾಲೂಕಿನ ಕೌದೂರು ರಂಗನಪಲ್ಕೆಯ ಯುವತಿ ಶೈನಿ ಅಸ್ಮಾ ಸಲ್ಡಾನಾ ಅವರು ತಮ್ಮ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ವಾಣಿಜ್ಯ ಪೈಲಟ್ ಪರವಾನಗಿ (CPL) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.&lt;/p&gt;&lt;h2&gt;ಬಾಲ್ಯದಲ್ಲೇ ಮೂಡಿದ ಬಲವಾದ ಕನಸು&lt;/h2&gt;&lt;p&gt;ಐದು ವರ್ಷದ ಬಾಲಕಿಯಾಗಿದ್ದಾಗ ಮಂಗಳೂರಿನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತವು ಶೈನಿ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು. ಆ ಸಂದರ್ಭದಲ್ಲಿ ವಿಮಾನ ಹಾಗೂ ಪೈಲಟ್ ವೃತ್ತಿಯ ಬಗ್ಗೆ ಉಂಟಾದ ಕುತೂಹಲವೇ ಮುಂದೆ ಅವರ ಜೀವನದ ಏಕೈಕ ಗುರಿಯಾಗಿ ಬದಲಾಯಿತು.&lt;/p&gt;&lt;p&gt;&quot;ನಾನು ಐದು ವರ್ಷದವಳಿದ್ದಾಗ ನಡೆದ ಮಂಗಳೂರು ವಿಮಾನ ಅಪಘಾತ ನನ್ನ ಮನಸ್ಸನ್ನು ಕಲಕಿತ್ತು. ಆಗಲೇ ನಾನು ಪೈಲಟ್ ಆಗಬೇಕೆಂಬ ದೃಢಸಂಕಲ್ಪ ಮಾಡಿದೆ. ಹಲವು ವರ್ಷಗಳ ಸತತ ಪರಿಶ್ರಮ, ಛಲ ಮತ್ತು ತಾಳ್ಮೆಯ ಫಲವಾಗಿ ಇಂದು ಆ ಬಾಲ್ಯದ ಕನಸು ನನಸಾಗಿದೆ&quot; ಎಂದು ಶೈನಿ ತಮ್ಮ ಸಾಧನೆಯ ಹಾದಿಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ಶಿಕ್ಷಣ ಮತ್ತು ತರಬೇತಿಯ ಹಾದಿ&lt;/h2&gt;&lt;p&gt;ಕೌದೂರಿನ ಅಶೋಕ್ ಜಾಕೋಬ್ ಸಲ್ಡಾನಾ ಮತ್ತು ಮಾರಿಯಾ ಗ್ರೆಟ್ಟಾ ಸಲ್ಡಾನಾ ದಂಪತಿಯ ಪುತ್ರಿಯಾದ ಶೈನಿ, ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಹಾಗೂ ಪದವಿ ಪೂರ್ವ (PUC) ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಿಕಾಂ ಶಿಕ್ಷಣದ ನಂತರ ತಮ್ಮ ಕನಸನ್ನು ಬೆನ್ನತ್ತಿದ ಶೈನಿ, ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (IGRUA) ಯ ಪ್ರವೇಶ ಪರೀಕ್ಷೆಗೆ ಹಾಜರಾದರು. ದೇಶಾದ್ಯಂತ 5,000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದ ಈ ಕಠಿಣ ಪರೀಕ್ಷೆಯಲ್ಲಿ ಆಯ್ಕೆಯಾದ 125 ಮಂದಿಯಲ್ಲಿ ಶೈನಿ ಕೂಡ ಒಬ್ಬರಾಗಿದ್ದರು. ತರುವಾಯ, 2023ರ ಆಗಸ್ಟ್&zwnj;ನಿಂದ ಉತ್ತರ ಪ್ರದೇಶದ ಫುರ್ಸತ್&zwnj;ಗಂಜ್&zwnj;ನಲ್ಲಿರುವ IGRUA ಕೇಂದ್ರದಲ್ಲಿ ವೃತ್ತಿಪರ ಪೈಲಟ್ ತರಬೇತಿಯನ್ನು ಪಡೆದರು.&lt;/p&gt;&lt;h2&gt;ಸವಾಲುಗಳನ್ನು ಮೆಟ್ಟಿ ನಿಂತು ಗೆದ್ದ ಸಾಧಕಿ&lt;/h2&gt;&lt;p&gt;ಪೈಲಟ್ ತರಬೇತಿಯು ಸುಲಭದ ಹಾದಿಯಾಗಿರಲಿಲ್ಲ. ತಾಂತ್ರಿಕ ಜ್ಞಾನ, ಮಾನಸಿಕ ಸಿದ್ಧತೆ, ಶಿಸ್ತು ಹಾಗೂ ಸುರಕ್ಷತಾ ಕ್ರಮಗಳ ತರಬೇತಿಯೊಂದಿಗೆ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಕೌಶಲ್ಯವನ್ನು ಅವರು ಸಿದ್ಧಿಸಿಕೊಂಡಿದ್ದಾರೆ. ಸದ್ಯ ಹಾರಾಟದ ಅಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿರುವ ಅವರು, ಡಿಜಿಸಿಎ (DGCA) ಗೆ ಸಂಬಂಧಿಸಿದ ಅಂತಿಮ ಪ್ರಕ್ರಿಯೆಗಳಲ್ಲಿದ್ದಾರೆ.&lt;/p&gt;&lt;h2&gt;ಯುವಜನತೆಗೆ ಸ್ಫೂರ್ತಿ&lt;/h2&gt;&lt;p&gt;&quot;ನನ್ನ ತಂದೆ-ತಾಯಿಯೇ ನನ್ನ ದೊಡ್ಡ ಸ್ಫೂರ್ತಿ. ಬಾಲ್ಯದ ಕನಸನ್ನು ಗುರಿಯಾಗಿಸಿಕೊಂಡು ಮುನ್ನಡೆಯಲು ತಂದೆಯ ಪ್ರೋತ್ಸಾಹವೇ ಪ್ರಮುಖ ಕಾರಣ. ಪ್ರತಿಯೊಬ್ಬರೂ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಿರಂತರ ಶ್ರಮವಹಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ&quot; ಎನ್ನುತ್ತಾರೆ ಶೈನಿ.&lt;/p&gt;&lt;p&gt;ಉಡುಪಿ ಜಿಲ್ಲೆಯ ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿರುವ ಶೈನಿ ಅಸ್ಮಾ ಸಲ್ಡಾನಾ ಅವರ ಈ ಸಾಧನೆ, ಪೈಲಟ್ ಆಗುವ ಕನಸು ಕಾಣುತ್ತಿರುವ ಕರಾವಳಿಯ ನೂರಾರು ಯುವತಿಯರಿಗೆ ದಾರಿದೀಪವಾಗಿದೆ.&lt;/p&gt;&lt;p&gt;ಈ ಸಾಧನೆ ಮೂಲಕ, ಚಿಕ್ಕಮಗಳೂರಿನ 2018 ರಲ್ಲಿ ವಾಯುಪಡೆಯ ಅಕಾಡೆಮಿಯಿಂದ (IAF) ಪದವಿ ಪಡೆದ ನಂತರ ಕರ್ನಾಟಕ ಮತ್ತು ದಕ್ಷಿಣ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಮೇಘನಾ ಶಾನ್&zwnj;ಬೌ, 2024 ರ ಕೊನೆಯಲ್ಲಿ 18 ನೇ ವಯಸ್ಸಿನಲ್ಲಿ ವಾಣಿಜ್ಯ ಪೈಲಟ್ ಪರವಾನಗಿ (CPL) ಗಳಿಸಿದ ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್&zwnj;ಗಳಲ್ಲಿ ಒಬ್ಬರೆಂದು ಮಣ್ಣನೆ ಪಡೆದ ವಿಜಯಪುರದ ಸಮೈರಾ ಹುಲ್ಲೂರ್, 2017 ರಲ್ಲಿ ಉತ್ತರ ಕರ್ನಾಟಕ ಪ್ರದೇಶದಿಂದ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಎಂದು ಗುರುತಿಸಲ್ಪಟ್ಟ ವಿಜಯಪುರದ ಪ್ರೀತಿ ಬಿರಾದಾರ್ ಸಾಲಿಗೆ ಉಡುಪಿಯ ಶೈನಿ ಅಸ್ಮಾ ಸೇರ್ಪಡೆಯಾಗಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/from-childhood-dream-to-cockpit-karkala-shiney-asma-saldanha-becomes-udupi-district-first-woman-commercial-pilot-gdp/articleshow-4fh62ei"/>
        </item>
        <item>
            <title><![CDATA[ಸರ್ಕಾರಿ ಶಾಲೆಯಲ್ಲೊಂದು ಹ್ಯಾಪಿ ಇಂಗ್ಲಿಷ್ ಲ್ಯಾಬ್: ಹಳ್ಳಿ ಮಕ್ಕಳ ಭಯ ಓಡಿಸಿದ ಶಿಕ್ಷಕ!]]></title>
            <link>https://kannada.asianetnews.com/karnataka-districts/innovative-teaching-methods-of-two-teachers-ashok-thekkatte-suresh-marakala-have-revolutionized-field-of-education-mrq/articleshow-56827d6</link>
            <guid isPermaLink="true">https://kannada.asianetnews.com/karnataka-districts/innovative-teaching-methods-of-two-teachers-ashok-thekkatte-suresh-marakala-have-revolutionized-field-of-education-mrq/articleshow-56827d6</guid>
            <pubDate>Sat, 05 Sep 2026 14:48:31 +0530</pubDate>
            <description><![CDATA[ಉಡುಪಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಾದ ಅಶೋಕ್ ತೆಕ್ಕಟ್ಟೆ ಮತ್ತು ಸುರೇಶ್ ಮರಕಾಲ ಅವರ ವಿನೂತನ ಬೋಧನಾ ಕ್ರಮಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿವೆ. ಅಶೋಕ್ ಅವರು 'ಹ್ಯಾಪಿ ಇಂಗ್ಲೀಷ್ ಲ್ಯಾಬ್' ಮೂಲಕ ಮಕ್ಕಳ ಇಂಗ್ಲೀಷ್ ಭೀತಿ ಹೋಗಲಾಡಿಸಿದರೆ, ಸುರೇಶ್ ಅವರ 'ಜೀವನ ಶಿಕ್ಷಣ' ಪ್ರಯೋಗವು ವಿದ್ಯಾರ್ಥಿಗಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1rdkkzgz80t63vv29jhh0ab,imgname-teacher-1788599717871.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸುಭಾಶ್ಚಂದ್ರ ವಾಗ್ಳೆ&lt;/strong&gt;&lt;/p&gt;&lt;p&gt;&lt;strong&gt;ಉಡುಪಿ:&lt;/strong&gt; ಇವತ್ತಿಗೂ ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳ ವಿದ್ಯಾರ್ಥಿಗಳ&zwj; ದೊಡ್ಡ ಸಮಸ್ಯೆ ಇಂಗ್ಲೀಷ್ ಭಾಷೆ, ಹಳ್ಳಿಯ ಮಕ್ಕಳು ಹೈಸ್ಕೂಲು ಮುಗಿದು ನಗರದ ಕಾಲೇಜಿಗೆ ಸೇರಿದಾಗ ಅಲ್ಲಿ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳ ಮುಂದೆ ಕಾಡುವ ಕೀಳರಿಮೆ, ಇಂಗ್ಲೀಷಿನಲ್ಲಿ ಪ್ರಾಧ್ಯಾಪಕರ ಪಾಠಗಳನ್ನು ಅರ್ಥ ಮಾಡಿಕೊಳ್ಳಲಾಗದ ಆಸಹಾಯಕತೆ, ಇಂಗ್ಲೀಷ್&zwnj;ನಲ್ಲಿ ಪ್ರಶ್ನೆಗೆ ಉತ್ತರಿಸಲಾಗದ ಆತಂಕ, ಇಂಗ್ಲೀಷಿನಲ್ಲಿ ಮಾತನಾಡಿದರೇ ಉಚ್ಛಾರ, ವ್ಯಾಕರಣ ತಪ್ಪಾಗುವ ಹೆದರಿಕೆ - ಇವುಗಳನ್ನು ದೂರ ಮಾಡುವುದಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹ್ಯಾಪಿ ಇಂಗ್ಲೀಷ್ ಲಾಂಗ್ವೆಜ್ ಲ್ಯಾಬ್&zwnj;ನ್ನು ಆರಂಭಿಸಲಾಗಿದೆ. ಈ ಯಶಸ್ವಿ ಪ್ರಯೋಗದ ಹಿಂದಿರುವವರು ಇಲ್ಲಿನ ಶಿಕ್ಷಕ ಅಶೋಕ್ ತೆಕ್ಕಟ್ಟೆ.&lt;/p&gt;&lt;p&gt;ಬಹುಶಃ ರಾಜ್ಯದಲ್ಲಿಯೇ ಇದೊಂದು ಅಪರೂಪದ ಪ್ರಯೋಗ, ದಾನಿಗಳ ನೆರವಿನಿಂದ ಆರಂಭಿಸಲಾದ ಈ ಪ್ರಯೋಗಾಲಯದಲ್ಲಿ ಉತ್ತಮ ಪೀಠೋಪಕರಣಗಳು, 30 ಕಂಪ್ಯೂಟರ್&zwnj;ಗಳು, ಅವುಗಳಿಗೆ ಗುಣಮಟ್ಟದ ಹೆಡ್&zwnj;ಫೋನ್&zwnj;ಗಳಿವೆ.&lt;/p&gt;&lt;p&gt;ಹೆಸಕುತ್ತೂರು ಗ್ರಾಮದ ಸುತ್ತಮುತ್ತಲಿನ 10 ಕಿಮಿ ವ್ಯಾಪ್ತಿಯ ಗ್ರಾಮೀಣ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ಅವರನ್ನು ಕಾಡುವ ಇಂಗ್ಲೀಷ್ ಭಾಷಾ ಕೀಳರಿಮೆ, ಭಯವನ್ನು ಹೋಗಲಾಡಿಸುವುದಕ್ಕಾಗಿ ಮತ್ತು ಗುಣಮಟ್ಟದ, ವ್ಯಾಕರಣಬದ್ಧ ಇಂಗ್ಲೀಷ್ ಭಾಷೆಯನ್ನು ಕಲಿಸುವುದಕ್ಕಾಗಿ ಪ್ರತಿದಿನ ಒಂದು ಗಂಟೆ ಕಾಲ ಅಶೋಕ್ ಅವರು ಈ ಲ್ಯಾಬ್&zwnj;ನಲ್ಲಿ ಪಾಠ ಮಾಡುತ್ತಾರೆ.&lt;/p&gt;&lt;p&gt;ಇಲ್ಲಿ ಕಂಪ್ಯೂಟರ್&zwnj;ಗಳಿಗೆ ಲ್ಯಾಂಗ್ವೆಜ್ ಲ್ಯಾಬ್ ಸಾಪ್ಟ್&zwnj;ವೇರನ್ನು ಅಳವಡಿಸಲಾಗಿದೆ. ಅವುಗಳ ಮೂಲಕ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯನ್ನು ಕಲಿಸುವ ರೈಮ್ಸ್&zwnj;, ಸ್ಟೊರೀಸ್, ಶಬ್ದಕೋಶ, ಸ್ಪೋಕನ್ ಇಂಗ್ಲೀಷ್, ಕಾರ್ಟೂನ್&zwnj;, ಸಿನೆಮಾಗಳಿವೆ. ಆದ್ದರಿಂದ ಇಲ್ಲಿ ವಿದ್ಯಾರ್ಥಿಗಳು ಕೇವಲ ಇಂಗ್ಲೀಷನ್ನು ಓದುವುದು ಅಥವಾ ಕೇಳುವುದು ಮಾಡುವುದಿಲ್ಲ, ನೋಡುತ್ತಾರೆ ಮತ್ತು ಕಂಪ್ಯೂಟರ್ ಜೊತೆ ಮಾತನಾಡುತ್ತಾರೆ, ತಪ್ಪಾದರೇ ತಿದ್ದಿಕೊಳ್ಳುತ್ತಾರೆ ಕೂಡ.&lt;/p&gt;&lt;p&gt;ಈ ಪ್ರಯೋಗಾಲಯದಿಂದ ಇಲ್ಲಿನ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್&zwnj;ನಲ್ಲಿ ಬರೆಯುವ ಓದುವ ಜೊತೆಗೆ ಜೊತೆಗೆ ವ್ಯಾಕರಣಬದ್ಧ ಸರಿಯಾದ ಉಚ್ಚಾರಸಹಿತ ಮಾತನಾಡುವ ಕೌಶಲ್ಯ, ಆತ್ಮಸ್ಥೈರ್ಯ ಗಣನೀಯವಾಗಿ ಹೆಚ್ಚಿದೆ, ಇದರಿಂದ ಫಲಿತಾಂಶದಲ್ಲಿಯೂ ಸುಧಾರಣೆಯಾಗಿದೆ, ಕೀಳರಿಮೆ ಕಡಿಮೆಯಾಗಿದೆ.&lt;/p&gt;&lt;p&gt;ಶಿಕ್ಷಕ ಅಶೋಕ್ ಅವರ ಈ ಸಾಧನೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿತ್ತು, ರಾಷ್ಟ್ರೀಯ ಪ್ರಶಸ್ತಿಗೆ ಅವರ ಹೆಸರು ಅಂತಿಮ ಸುತ್ತಿಗೂ ತಲುಪಿತ್ತು.&lt;/p&gt;&lt;h2&gt;&lt;strong&gt;ವಿದ್ಯಾರ್ಥಿಗಳನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸಾಧಕ ಶಿಕ್ಷಕ ಸುರೇಶ್ ಮರಕಾಲ&lt;/strong&gt;&lt;/h2&gt;&lt;p&gt;&lsquo;ಕಾಲೇಜಿನಲ್ಲಿ ಫೇಲಾಗಿದ್ದ ಹುಡುಗ, ಶಿಕ್ಷಕನಾಗಿ ಎರಡೆರಡು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ, ಜೊತೆಗೆ ತನ್ನ ಐದು ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟಕ್ಕೆ, ಇಬ್ಬರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸಾಧನಾಗಾಥೆಯ ನಾಯಕ ಈ ಸುರೇಶ್ ಮರಕಾಲ.&lt;/p&gt;&lt;p&gt;ಪಿಯುಸಿಯಲ್ಲಿ ಫೇಲಾಗಿ, 3 ವರ್ಷ ಅಲ್ಲಿ ಇಲ್ಲಿ ದುಡಿಮೆ ಮಾಡಿ, ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ದ್ವಿತೀಯ ಪದವಿಯಲ್ಲೇ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿ, ಎಸ್ಪಿ ಕಚೇರಿಯಲ್ಲಿ ಕಂಪ್ಯೂಟರ್ ಎಕ್ಸ್&zwnj;ಪರ್ಟ್, ಗೂಗಲ್ ಅರ್ಥ್ ಸ್ಪೆಷಲಿಸ್ಟ್ ಆಗಿ 8 ವರ್ಷ ಸೇವೆ ಸಲ್ಲಿಸಿ, ಶಿಕ್ಷಕನಾಗಬೇಕೆಂಬ ಬಾಲ್ಯದಾಸೆ ಈಡೇರಿಸಿಕೊಳ್ಳಲು, ಬಿಎಡ್ ಪದವಿಗೆ ಸೇರಿ ಪ್ರಥಮ ರಾಂಕ್, 4 ಚಿನ್ನದ ಪದಕಗಳೊಂದಿಗೆ ಪಾಸಾಗಿ, ಸಮಾಜವಿಜ್ಞಾನ ಶಿಕ್ಷಕರಾಗಿ ಕೊಡಗಿನ ಸೋಮವಾರಪೇಟೆ, ಬೆಸೂರು, ಕುಂದಾಪುರ ತಾಲೂಕಿನ ಚಾರ್ಮಕ್ಕಿ, ಅಲ್ಬಾಡಿ-ಆರ್ಡಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಕಾರ್ಕಳ ತಾಲೂಕಿನ ಸರ್ಕಾರಿ ಪಪೂ ಕಾಲೇಜಿನಲ್ಲಿ ಶಿಕ್ಷಕರಾಗಿದ್ದಾರೆ.&lt;/p&gt;&lt;p&gt;ಅವರು ತಮ್ಮ ಸಮಗ್ರ ಸಾಧನೆಗೆ 2010ರಲ್ಲಿ ಪ್ರಧಾನ ಮಂತ್ರಿ ಪುರಸ್ಕಾರ&zwnj;ವನ್ನು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್&zwnj; ಅವರಿಂದ ಸ್ವೀಕರಿಸಿದ್ದಾರೆ.&lt;/p&gt;&lt;p&gt;ಶಾಲೆಯ ಔಪಚಾರಿಕಾ ಶಿಕ್ಷಣವನ್ನು ಲವಲವಿಕೆಗೊಳಿಸುವುದಕ್ಕಾಗಿ, ಮಕ್ಕಳಿಗೆ ಶಾಡೋಪ್ಲೇ, ತಲೆಕೆಳಗಾಗಿ ಬರೆಯುವ ಕನ್ನಡಿ ಬರಹ, ಪಿಯಾನೋ ಕೊಳಲು ಕೀಬೋರ್ಡ್, ಅಭಿನಯ, ತೋಟ-ಗಾರೆ-ಪ್ಲಬಿಂಗ್ ತರಬೇತಿ, ಕ್ಯಾಲಿಗ್ರಫಿ, ಗೋಡೆ ಪೈಂಟಿಂಗ್, ವಿಜ್ಞಾನ ಮಾಡೆಲ್ ತಯಾರಿ, ಟ್ಯಾಬ್ಲೋ ರಚನೆ, ಕಂಪ್ಯೂಟರ್ ಶಿಕ್ಷಣ ಇತ್ಯಾದಿಗಳನ್ನೊಳಗೊಂಡ &lsquo;ಜೀವನ ಶಿಕ್ಷಣ&rsquo; ಎಂಬ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;ಕೊಡಗಿನ ಬೆಸೂರು ಶಾಲೆಯಲ್ಲಿದ್ದಾಗ ಈ &lsquo;ಜೀವನ ಶಿಕ್ಷಣ&rsquo;ಕ್ಕಾಗಿ 2019ರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಅತ್ಯುನ್ನತ ಶಿಕ್ಷಕ ರಾಷ್ಟ್ರಪ್ರಶಸ್ತಿ ಲಭಿಸಿತ್ತು.&lt;/p&gt;&lt;p&gt;2022ರಲ್ಲಿ ಚಾರ್ಮಕ್ಕಿ ಶಾಲೆಯಲ್ಲಿದ್ದಾಗ ಸುರೇಶ್ ಅವರಿಂದ ತರಬೇತಿ ಪಡೆದ ತಯಾರಿಸಿದ ವಿಜ್ಞಾನ ಮಾದರಿಗಳಿಗೆ, ಅತ್ಯಂತ ಹಿಂದುಳಿದ ಕುಡುಬಿ ಜನಾಂಗದ ವಿದ್ಯಾರ್ಥಿಗಳಾದ ರಕ್ಷಿತಾ ನಾಯ್ಕ - ಅನುಷಾ ನಾಯ್ಕ ರಾಷ್ಟ್ರಮಟ್ಟದ ಸಿಎಸ್&zwnj;ಐಆರ್ ಇನ್ನೊವೇಶನ್ ನ್ಯಾಷನಲ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ಡ್ರನ್ ಸ್ಪರ್ಧೆಯಲ್ಲಿ ಗೆದ್ದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಪ್ರಶಸ್ತಿ ಪಡೆದರು.&lt;/p&gt;&lt;p&gt;ಪ್ರಸ್ತುತ ಕುಕ್ಕುಜೆ ಶಾಲೆಯಲ್ಲಿ ಇನ್ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಸುರೇಶ್ ತರಬೇತಿ ನೀಡಿದ ಅಮೂಲ್ಯ ಹೆಗ್ಡೆ, ನಿಕಿತಾ, ಶ್ರೇಯಾ, ಅನಿಶ್ ಪೂಜಾರಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದರು. ಅಮೂಲ್ಯ, ನಿಕಿತಾ ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿ, ಅಮೂಲ್ಯ ಕಂಚಿನ ಪದಕ ಗೆದ್ದುಕೊಂಡಳು ಅಲ್ಲದೇ ಅಮೂಲ್ಯ, ನಿಕಿತಾ ಜಪಾನ್&zwnj;ನ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನ ಸುಕೂರಾಕ್ಕೂ ಆಯ್ಕೆಯಾಗಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/innovative-teaching-methods-of-two-teachers-ashok-thekkatte-suresh-marakala-have-revolutionized-field-of-education-mrq/articleshow-56827d6"/>
        </item>
        <item>
            <title><![CDATA[ಮೃತರ ಹೆಸರಲ್ಲಿ 5 ಲಕ್ಷ ರು. ವಸೂಲಿಗೆ ಯತ್ನ: ಇಬ್ಬರ ಬಂಧನ]]></title>
            <link>https://kannada.asianetnews.com/karnataka-districts/udupi-police-arrest-two-extorting-money-in-dead-man-name-san/articleshow-b7egs8g</link>
            <guid isPermaLink="true">https://kannada.asianetnews.com/karnataka-districts/udupi-police-arrest-two-extorting-money-in-dead-man-name-san/articleshow-b7egs8g</guid>
            <pubDate>Sat, 29 Aug 2026 06:12:08 +0530</pubDate>
            <description><![CDATA[&lt;p&gt;ಎಂಟು ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ 5 ಲಕ್ಷ ರುಪಾಯಿ ಹಣಕ್ಕೆ ಬೇಡಿಕೆ ಇಟ್ಟು ಕುಟುಂಬಕ್ಕೆ ಬೆದರಿಕೆ ಹಾಕಿದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m15fbp8qn69npz4b004rh7z3,imgname-money-extortion-in-udupi-1787964021015.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಉಡುಪಿ&lt;/strong&gt;&lt;/p&gt;&lt;p&gt;ಎಂಟು ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ 5 ಲಕ್ಷ ರು. ಬಾಕಿ ಹಣ ನೀಡುವಂತೆ ಕುಟುಂಬಸ್ಥರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ ಇಬ್ಬರನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಬಂಧಿತರನ್ನು ಉಡುಪಿಯ ಕುಕ್ಕುಂಜೆಯ ಸಾಜಿದ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಪನಳ್ಳಿ ನಿವಾಸಿ ಸೈಯದ್ ಸೈಫ್ ಅಹಮ್ಮದ್ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಜು.2ರಂದು ಅಶೋಕ್ ಪಡಿಯಾರ್ ಎಂಬವರಿಗೆ ವಾಟ್ಸ್&zwnj;ಆ್ಯಪ್ ಕರೆ ಮಾಡಿದ ಆರೋಪಿ ಹಿಂದಿಯಲ್ಲಿ, &lsquo;ನಿಮ್ಮ ಮಗ ಅಜಿತ್ ಪಡಿಯಾರ್ ನಮ್ಮೊಂದಿಗೆ ವಜ್ರದ ವ್ಯವಹಾರ ನಡೆಸಿದ್ದು, 5 ಲಕ್ಷ ಹಣ ರು. ಬಾಕಿ ಉಳಿಸಿಕೊಂಡಿದ್ದಾರೆ. ಕೂಡಲೇ ಹಣ ಪಾವತಿಸಿ ಎಂದು ಬೇಡಿಕೆ ಇಟ್ಟಿದ್ದ. ಆದರೇ ಅಜಿತ್ ಅವರು ಎಂಟು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಅಂತಹ ವ್ಯವಹಾರದ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಪಡಿಯಾರ್ ಹಣ ಕೊಡಲು ನಿರಾಕರಿಸಿದ್ದರು.&lt;/p&gt;&lt;p&gt;ಬಳಿಕ ಆರೋಪಿಗಳು ದುಬೈಯಲ್ಲಿದ್ದ ಅಶೋಕ್ ಅವರ ಮತ್ತೊಬ್ಬ ಪುತ್ರ ಅಮೀತ್ ಅವರಿಗೂ ಕರೆ ಮಾಡಿ, 5 ಲಕ್ಷ ರು. ಕೊಡದಿದ್ದರೆ, ಊರಿನಲ್ಲಿರುವ ಅವರ ಪತ್ನಿ ರಕ್ಷಾಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಪಡಿಯಾರ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಉಡುಪಿ ನಗರ ಠಾಣೆ ಪಿಎಸ್&zwnj;ಐ ರತ್ನಾಕರ ಕೆ. ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ.&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/udupi-police-arrest-two-extorting-money-in-dead-man-name-san/articleshow-b7egs8g"/>
        </item>
        <item>
            <title><![CDATA[Udupi: ಕೃಷ್ಣನ ಮಣ್ಣಿನ ಮೂರ್ತಿ ಭಗ್ನ; ಶೀಘ್ರದಲ್ಲೇ ಲೋಕಕ್ಕೆ ಕಾದಿದೆ ಅನಾಹುತ? ಸ್ಪೋಟಕ ಅಂಶ ಬಯಲು]]></title>
            <link>https://kannada.asianetnews.com/karnataka-districts/udupi-clay-idol-of-lord-krishna-damaged-explosive-detail-revealed-in-ashtamangala-prashna-sns/articleshow-byyq1kq</link>
            <guid isPermaLink="true">https://kannada.asianetnews.com/karnataka-districts/udupi-clay-idol-of-lord-krishna-damaged-explosive-detail-revealed-in-ashtamangala-prashna-sns/articleshow-byyq1kq</guid>
            <pubDate>Tue, 08 Sep 2026 13:01:23 +0530</pubDate>
            <description><![CDATA[ಉಡುಪಿಯ ವಿಟ್ಲಪಿಂಡಿ ಉತ್ಸವದ ವೇಳೆ ಕೃಷ್ಣನ ಮಣ್ಣಿನ ಮೂರ್ತಿಯು ವಿಸರ್ಜನೆಗೂ ಮುನ್ನ ಭಗ್ನಗೊಂಡಿದೆ. ಈ ಅನಿರೀಕ್ಷಿತ ಘಟನೆಯನ್ನು, ಮಠದಲ್ಲಿ ಈ ಹಿಂದೆ ಕಂಡುಬಂದಿದ್ದ ಕಾಳಸರ್ಪ ದೋಷಕ್ಕೆ ಹೋಲಿಸಲಾಗುತ್ತಿದ್ದು, ಇದು ಜಗತ್ತಿಗೆ ಎದುರಾಗಬಹುದಾದ ಕಂಟಕದ ಮುನ್ಸೂಚನೆ ಎಂಬ ಚರ್ಚೆಗಳು ನಡೆಯುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1zym7sz7627n4ft0b8n7nhx,imgname-udupi-1788852444991.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ: &lt;/strong&gt;ಕೆಲದಿನಗಳ ಹಿಂದಷ್ಟೇ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವವನ್ನು ಉದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ವಿಟ್ಲಪಿಂಡಿ ಉತ್ಸವವನ್ನು ಮುಗಿಸಿ ಕೃಷ್ಣ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡುವುದು ಸಂಪ್ರದಾಯ. ಆದರೆ ವಿಗ್ರಹ ವಿಸರ್ಜನೆಗೂ ಮುನ್ನ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಕಾರಣಗಳಿಂದ ಚರ್ಚೆ ಆಗುತ್ತಿದೆ.&lt;/p&gt;&lt;h2&gt;ಉಡುಪಿ ಕೃಷ್ಣ ಮಠದಲ್ಲಿ ವಿಗ್ರಹ ಭಗ್ನ: ಅಪಶಕುನದ ಸೂಚನೆಯೇ?&lt;/h2&gt;&lt;p&gt;ಶಿರೂರು ಶ್ರೀಗಳು ಮಠದ ವಿಟ್ಲಪಿಂಡಿ ಉತ್ಸವದ ಬಳಿಕ ಮಣ್ಣಿನ ಮೂರ್ತಿಯ ವಿಸರ್ಜನೆಗೂ ಮುನ್ನ ಅದು ಭಗ್ನಗೊಳ್ಳುತ್ತದೆ. ಭಿನ್ನಗೊಂಡ ವಿಗ್ರಹವನ್ನೇ ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡುವ ಅನಿವಾರ್ಯ ಸ್ಥಿತಿ ಎದುರಾಗಿತ್ತು. ಆದರೆ ಇದರ ಬಗ್ಗೆ ಭಾರೀ ಚರ್ಚೆ ಆಗುತ್ತಿದ್ದು, ಇದು ಮುಂದಿನ ಅಪಾಯದ ಮುನ್ಸೂಚನೆಯನ್ನು ಕೃಷ್ಣ ನೀಡಿದ್ದಾರೆ ಎಂದು ಚರ್ಚೆ ಆಗುತ್ತಿದೆ. ಈ ಘಟನೆ ಅಪಶಕುನದ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಇನ್ನೊಂದು ಘಟನೆಯನ್ನು ಜನರು ಲಿಂಕ್ ಮಾಡುತ್ತಿದ್ದು, ಕೆಲದಿನಗಳ ಹಿಂದೆ ಕಾಳಸರ್ಪ ಯೋಗಕ್ಕೂ ನಂಟು ಮಾಡುತ್ತಿದ್ದಾರೆ.&lt;/p&gt;&lt;h2&gt;ಜಗತ್ತಿಗೆ ಕಂಟಕ ಇದೆ..&lt;/h2&gt;&lt;p&gt;ಉಡುಪಿಯ ಕೃಷ್ಣಮಠದಲ್ಲಿ ಮಠದ ವ್ಯವಸ್ತೆಯ ಸುಧಾರಣೆಗೆ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅದರಲ್ಲಿ ಕಾಳಸರ್ಪ ಯೋಗ ಇದೆ ಅನ್ನೋ ವಿಚಾರ ಕಂಡು ಬಂದಿತ್ತು. ಇದರಿಂದ ಜಗತ್ತಿಗೆ ಕಂಟಕ ಇದೆ, ಕೃಷ್ಣಮಠ ಸೇರಿದಂತೆ ದೇಗುಲಗಳಲ್ಲಿ ಪರಿಹಾರ ನಡೆಸಬೇಕು ಎಂಬ ಸಲಹೆ ನೀಡಲಾಗಿತ್ತು. ಇದರೊಂದಿಗೆ ಶೀಘ್ರವೇ ಪರಿಹಾರ ಧಾರ್ಮಿಕ ಕಾರ್ಯ ನಡೆಸುವ ಚಿಂತನೆಯನ್ನು ಮಾಡಲಾಗಿದ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ರಥದಿಂದ ಮಣ್ಣಿನ ಮೂರ್ತಿಯನ್ನ ಕೆಳಕ್ಕೆ ಇಳಿಸಬೇಕಾದರೆ ಕೈಯಿಂದ ಜಾರಿ ಬಿದ್ದು ಮೂರ್ತಿ ಭಗ್ನಗೊಂಡಿತ್ತು. ಪರ್ಯಾಯ ಶಿರೂರು ಶ್ರೀಗಳು ಮೂರ್ತಿಯನ್ನು ರಥದಿಂದ ಕೆಳಕ್ಕೆ ಇಳಿಸುವಾಗ ಈ ಅವಘಡ ಸಂಭವಿಸಿತ್ತು. ಅನಿವಾರ್ಯ ಕಾರಣಗಳಿಂದ ಭಗ್ನಗೊಂಡ ಮೂರ್ತಿಯನ್ನೇ ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡಲಾಗಿತ್ತು. ಮಠದ ಇತಿಹಾಸದಲ್ಲಿ ಇಲ್ಲಿಯವರೆಗೂ ಇಂತಹ ಘಟನೆ ನಡೆದಿರಲಿಲ್ಲ. ಅದು ಜನ್ಮಾಷ್ಟಮಿಯ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರೋದು ಅಪಾಯದ ಮುನ್ಸೂಚನೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ.&lt;/p&gt;&lt;h2&gt;18 ಕೋಟಿ ರಾಮ ಮಂತ್ರ ಜಪ&lt;/h2&gt;&lt;p&gt;ದೇಶಕ್ಕೆ ಕಾಳಸರ್ಪ ಯೋಗದ ಉಂಟು, ಅದಕ್ಕಾಗಿ ಇಲ್ಲಿ ನಾವು ಪರಿಹಾರ ಮಾಡಿದರೆ ಕೃಷ್ಣಮಠದ ಸಮಸ್ಯೆ ಮಾತ್ರ ಅಲ್ಲ, ಆ ಕಾಳಸರ್ಪಕ್ಕೆ ಬೇಕಾಗುವಂತಹದ್ದನ್ನು ಕೂಡ ಕೃಷ್ಣಮಠದಲ್ಲಿ ಮಾಡಬೇಕು ಅಂತ ಇದೆ. ಇದನ್ನು ಮಾಡಿದರೆ ಪರಹಾರ ಆಗುತ್ತೆ ಅಂತ ಬಂತು. ಅದು ಇಡೀ ದೇಶಕ್ಕೆ ಯಾವಾಗ ಮಾಡಬೇಕು ಅಂತ ಪ್ರಶ್ನೆ ಹೇಳಿದಾಗ ಅದು ಹಾಗೆ ಬಂತು. ಅದನ್ನು ಆದಷ್ಟು ಬೇಗ ಮಾಡಿದರೆ ಈ ಕಾಳಸರ್ಪಯೋಗ ದೇಶಕ್ಕೆ ಇರೋದು ಹೋಗುತ್ತದೆ. ಹಾಗಾದರೆ ನಮ್ಮ ಸಮಸ್ಯೆಯಿಂದ ಹೋಗುವುದರ ಇರುವುದರಿಂದ ಬರುವುದ ಅಂತ ಕೇಳಿದರೆ, ಹಾಗಲ್ಲ.. ಇಲ್ಲಿ ಇನ್ನಷ್ಟು ವ್ಯವಸ್ತೆ ಒಳ್ಳೆ ಮಾಡಿದಾಗ ದೇವರು ಖುಷಿಯಾಗಿ ಎಲ್ಲವನ್ನು ಸರಿ ಮಾಡುತ್ತಾರೆ ಅಂತ. ಅದಕ್ಕೆ ಸುಮಾರು ಎಲ್ಲಾ ಉಂಟು, 18 ಕೋಟಿ ರಾಮ ಮಂತ್ರ ಜಪ, ಒಂದು ಕೋಟಿ ಕೃಷ್ಣ ಮಂತ್ರ ಜಪ, ಒಂದು ಲಕ್ಷ ವಿಷ್ಣು ಸಹಸ್ರನಾಮ ಹೀಗೆ ಅನೇಕ ಜಪಗಳನ್ನು ಹೇಳಿದ್ದಾರೆ. ಇದನ್ನು ಕೃಷ್ಣ ಮಠ ಮಾತ್ರವಲ್ಲದೇ ಲೋಕದ ಜನರು ಎಲ್ಲರೂ ಸೇರಿ ಮಾಡಬೇಕು. ಎಲ್ಲಾ ಭಕ್ತರು ಸೇರಿ ಮಾಡೇಕು ಎಂದು ಶಿರೂರು ಶ್ರೀ ವೇದವರ್ಧನ ತೀರ್ಥ ಸ್ವಾಮಿಜಿಗಳು ಹೇಳಿದ್ದರು.&lt;/p&gt;&lt;h2&gt;ಲೋಕರಾಷ್ಟ್ರಕ್ಕೆ ಒಳ್ಳೆಯದಾಗಬೇಕು..&lt;/h2&gt;&lt;p&gt;ಇನ್ನು, ಶ್ರೀಮಠದ ದಿವಾನರಾದ ಡಾ ಉದಯ ಸರಳತ್ತಾಯ ಅವರು ಮಾತನಾಡಿ, ಲೋಕರಾಷ್ಟ್ರಕ್ಕೆ ಒಳ್ಳೆಯದಾಗಬೇಕು ಎಂದು ಹೇಳಿದ್ದರಿಂದ, ಅಲ್ಲಿ ಕಾಳಸರ್ಪ ಯೋಗ ಅನ್ನೋದು ಕೂಡಿ ಬಂದ ಲಕ್ಷಣ ತೋರಿಬಂತು. ಕಾಳಸರ್ಪ ಎಂದರೆ ರಾಹು ಕೇತುಗಳ ಮಧ್ಯದಲ್ಲಿ ಏಳು ಗ್ರಹಗಳು ಬರುತ್ತದೆ. ಇದು ಖಗೋಳದಲ್ಲಿ ನಡೆಯುವಂತಹ ಒಂದು ವೈವಿಧ್ಯವಾಗಿದೆ. ಇಡೀ ಲೋಕಕ್ಕೆ ಇದು ಕ್ಷೋಭೆಯನ್ನು ತಂದುಕೊಡುವಂತದ್ದು, ಈ ಕ್ಷೇತ್ರದಲ್ಲಿ ಈ ಚಲನೆಗಳನ್ನು ಗುರುತಿಸಿದ್ದರಿಂದ ಇದಕ್ಕೆ ಪರಿಹಾರಕ್ಕೂ ಇಲ್ಲಿ ಆಗುತ್ತದೆ. ಆದ್ದರಿಂದ ಎಲ್ಲಿಯೇ ಇದ್ದರೂ ಪರಿಹಾರ ನಡೆಸಬಹುದು, ಭಕ್ತಿರಂದ ಲೋಕ್ಕೆ ಒಳ್ಳೆದಾಗುತ್ತದೆ ಎಂದು ತಿಳಿಸಿದ್ದರು.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/udupi-clay-idol-of-lord-krishna-damaged-explosive-detail-revealed-in-ashtamangala-prashna-sns/articleshow-byyq1kq"/>
        </item>
        <item>
            <title><![CDATA[ಶಾಲಾ-ಕಾಲೇಜುಗಳು ಸೇರಿ ಉಡುಪಿ ಜಿಲ್ಲೆಗೆ ನಾಳೆ ಸಾರ್ವತ್ರಿಕ ರಜೆ ಘೋಷಣೆ..!]]></title>
            <link>https://kannada.asianetnews.com/udupi/general-holiday-declared-for-udupi-district-tomorrow-including-schools-and-colleges-gkn/articleshow-dd3adnm</link>
            <guid isPermaLink="true">https://kannada.asianetnews.com/udupi/general-holiday-declared-for-udupi-district-tomorrow-including-schools-and-colleges-gkn/articleshow-dd3adnm</guid>
            <pubDate>Sun, 16 Aug 2026 22:49:38 +0530</pubDate>
            <description><![CDATA[&lt;p&gt;ನಾಗರಪಂಚಮಿ ಹಬ್ಬದ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ನಾಳೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05s6kymnv4qfhqdm3w2pze9,imgname-general-holiday-has-been-declared-for-all-schools--colleges-1786900598740.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಉಡುಪಿ: &lt;/strong&gt;ಕರಾವಳಿ ಜನರ ಪಾಲಿನ ಅತ್ಯಂತ ಪವಿತ್ರ ಹಾಗೂ ಶ್ರದ್ಧಾಭಕ್ತಿಯ ಹಬ್ಬವಾದ 'ನಾಗರಪಂಚಮಿ'ಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ನಾಳೆ (ಶನಿವಾರ) ಸಾರ್ವತ್ರಿಕ ರಜೆ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಜಿಲ್ಲಾಧಿಕಾರಿಗಳ ಆದೇಶ&lt;/strong&gt;&lt;/h2&gt;&lt;p&gt;ನಾಗರಪಂಚಮಿ ಹಬ್ಬದ ದಿನದಂದು ಜಿಲ್ಲೆಯಾದ್ಯಂತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಗಬನ ಹಾಗೂ ದೇವಾಲಯಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ (ಪ್ರಭಾರ ಡಿಸಿ ದರ್ಶನ್ ಎಚ್.ವಿ ಅವರ ಮೂಲಕ) ಸಾರ್ವತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಈ ರಜೆಯು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಕರಾವಳಿಯ ನಾಗಾರಾಧನೆಯ ವೈಶಿಷ್ಟ್ಯ&lt;/strong&gt;&lt;/h2&gt;&lt;p&gt;ಕರಾವಳಿ ಭಾಗದಲ್ಲಿ ಅಥವಾ 'ಪರಶುರಾಮ ಸೃಷ್ಟಿ'ಯಲ್ಲಿ ನಾಗರಪಂಚಮಿಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿ ನಾಗಾರಾಧನೆಯು ಕೇವಲ ಒಂದು ಹಬ್ಬವಲ್ಲ, ಅದು ಒಂದು ಜೀವನ ಪದ್ಧತಿಯಾಗಿದೆ. ಕರಾವಳಿ ಜನರಿಗೆ ನಾಗದೇವತೆಯ ಮೇಲೆ ಅಪಾರ ಭಯ ಮತ್ತು ಭಕ್ತಿ ಎರಡೂ ಇದೆ. ಪ್ರತಿಯೊಂದು ಕುಟುಂಬಕ್ಕೂ ತನ್ನದೇ ಆದ 'ನಾಗಬನ' (ಪವಿತ್ರ ಹಸಿರು ವನ) ಇರುತ್ತದೆ. ಹಬ್ಬದ ದಿನದಂದು ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರಿ ನಾಗಬನದಲ್ಲಿ ನಾಗದೇವತೆಗೆ ತಂಬಿಲ, ಅಭಿಷೇಕ ಮಾಡುವುದು ಇಲ್ಲಿನ ಪರಂಪರೆ.&lt;/p&gt;&lt;p&gt;ನಾಗದೇವನಿಗೆ ಹಾಲು, ಜೇನುತುಪ್ಪ, ಎಳನೀರು ಹಾಗೂ ಅರಿಶಿನದಿಂದ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ, ನಾಗದೇವನಿಗೆ ಅತ್ಯಂತ ಪ್ರಿಯವಾದ 'ಕೇದಗೆ' ಹೂವು ಹಾಗೂ 'ಪಿಂಗಾರ' (ಅಡಿಕೆ ಹೂವು) ಅರ್ಪಿಸಲಾಗುತ್ತದೆ. ಹಬ್ಬದ ಪ್ರಯುಕ್ತ ಮನೆಮನೆಗಳಲ್ಲಿ ಅರಿಶಿನ ಎಲೆಯ ಕಡುಬು (ಅರಿಶಿನ ಎಲೆ ಅಡ್ಡೆ) ವಿಶೇಷವಾಗಿ ತಯಾರಿಸಲಾಗುತ್ತದೆ. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನ, ಉಡುಪಿಯ ಅನಂತೇಶ್ವರ ದೇವಸ್ಥಾನಗಳಲ್ಲಿ ನಾಗರಪಂಚಮಿಯಂದು ಭಕ್ತರ ಸಾಗರವೇ ಹರಿದುಬರುತ್ತದೆ. ಸರ್ಪದೋಷ ನಿವಾರಣೆಗಾಗಿ ಸಾವಿರಾರು ಭಕ್ತರು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಹಾಗೂ ತಂಬಿಲ ಸೇವೆಗಳನ್ನು ಸಲ್ಲಿಸುತ್ತಾರೆ.&lt;/p&gt;&lt;h2&gt;&lt;strong&gt;ನಾಗರಪಂಚಮಿ ಮತ್ತು ಪರಿಸರ&lt;/strong&gt;&lt;/h2&gt;&lt;p&gt;ಕರಾವಳಿಯಲ್ಲಿ ನಾಗಾರಾಧನೆಯು ಪರಿಸರ ಸಂರಕ್ಷಣೆಯ ಸಂಕೇತವೂ ಹೌದು. ನಾಗಬನಗಳ ಹೆಸರಿನಲ್ಲಿ ಕಾಡುಗಳನ್ನು ಉಳಿಸಿಕೊಳ್ಳುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ಈ ಹಬ್ಬವು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ಒಟ್ಟಾರೆಯಾಗಿ ಕರಾವಳಿಯ ಜಿಲ್ಲೆಗಳಲ್ಲಿ ನಾಗರಪಂಚಮಿಯ ಸಡಗರ ಮನೆಮಾಡಿದ್ದು, ಭಕ್ತರು ಭಕ್ತಿಯಿಂದ ನಾಗದೇವನನ್ನು ಪೂಜಿಸಲು ಸಜ್ಜಾಗಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/udupi/general-holiday-declared-for-udupi-district-tomorrow-including-schools-and-colleges-gkn/articleshow-dd3adnm"/>
        </item>
        <item>
            <title><![CDATA[ಅರಬ್ಬಿ ಸಮುದ್ರದಲ್ಲಿ ಸತತ 3 ಗಂಟೆಗಳಿಂದ ಈಜುತ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ !]]></title>
            <link>https://kannada.asianetnews.com/karnataka-districts/udupi-kapu-mentally-ill-man-rescued-after-swimming-in-arabian-sea-for-3-hours-mrq/articleshow-evm875i</link>
            <guid isPermaLink="true">https://kannada.asianetnews.com/karnataka-districts/udupi-kapu-mentally-ill-man-rescued-after-swimming-in-arabian-sea-for-3-hours-mrq/articleshow-evm875i</guid>
            <pubDate>Tue, 18 Aug 2026 07:40:33 +0530</pubDate>
            <description><![CDATA[ಕಾಪುವಿನ ಅರಬ್ಬಿ ಸಮುದ್ರದಲ್ಲಿ ಸುಮಾರು 3 ಗಂಟೆಗಳ ಕಾಲ ಈಜುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ರಕ್ಷಿಸಲಾಗಿದೆ. ಶಾಸಕ ಯಶ್ಪಾಲ್ ಸುವರ್ಣ ಅವರ ಸೂಚನೆ ಮೇರೆಗೆ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ಈಶ್ವರ್ ಮಲ್ಪೆ ಅವರು ಯುವಕನನ್ನು ಮನವೊಲಿಸಿ ದಡಕ್ಕೆ ಕರೆತಂದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m09a4nnk2v5ar26ykmvrs6fk,imgname-kapu-1787019024051.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ&lt;/strong&gt;: ಅರಬ್ಬಿ ಸಮುದ್ರದಲ್ಲಿ ಸತತ 3 ಗಂಟೆಗಳಿಂದ ಈಜುತ್ತಿದ್ದ ಮಾನಸಿಕ ಅಸ್ವಸ್ಥರೊಬ್ಬರನ್ನು ಭಾನುವಾರ ರಕ್ಷಿಸಲಾಗಿದೆ. ಕಾಡಿಪಟ್ಟ ನಿವಾಸಿ ಯತೀಶ್ (38) ರಕ್ಷಣೆಗೊಳಗಾದವರು. ಯತೀಶ್ ಈ ಹಿಂದೆ ಕೂಡ ಎರಡು ಬಾರಿ ಇದೇ ರೀತಿಯ ಕೃತ್ಯಗಳಿಗೆ ಪ್ರಯತ್ನಿಸಿದ್ದರು. ಆದರೆ ನಿವಾಸಿಗಳು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದರು.&lt;/p&gt;&lt;p&gt;ಭಾನುವಾರ ಮಧ್ಯಾಹ್ನ ಯತೀಶ್ ಅರಬಿ ಸಮುದ್ರಕ್ಕೆ ಇಳಿದು ಈಜಲಾರಂಭಿಸಿದ್ದರು. ಸಮುದ್ರ ಪ್ರಕ್ಷುಬ್ದವಾಗಿದ್ದು ಅವರಿಗೆ ಅಪಾಯವಾಗುವ ಸಾಧ್ಯತೆ ಇತ್ತು. ದೋಣಿಯಲ್ಲಿ ಹೋಗಿ ಮೀನುಗಾರರು ಅವರನ್ನು ದೋಣಿಗೆ ಎಳೆಯಲು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನಿಸಿದರು, ಆದರೆ ಆತ ತಪ್ಪಿಸಿಕೊಳ್ಳುತಿದ್ದರು.&lt;/p&gt;&lt;h2&gt;&lt;strong&gt;ಮೂರು ನಾಟಿಕಲ್ ಮೈಲು ದೂರದಲ್ಲಿ ಈಜುತ್ತಿದ್ದ ಯತೀಶ್&lt;/strong&gt;&lt;/h2&gt;&lt;p&gt;ಈ ಬಗ್ಗೆ ಮಾಹಿತಿ ಪಡೆದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಆಪತ್ಬಾಂಧವ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಈಶ್ವರ್ ಮೂರು ನಾಟಿಕಲ್ ಮೈಲು ದೂರದಲ್ಲಿ ಈಜುತ್ತಿದ್ದ ಯತೀಶ್ ಇರುವಲ್ಲಿ ಈಜುತ್ತಾ ತೆರಳಿ, ಆತ ದಡಕ್ಕೆ ಬರುವಂತೆ ಮನವೊಲಿಸಿದರು.&lt;/p&gt;&lt;p&gt;ನಂತರ ಈಶ್ವರ್ ಅವರು ಯತೀಶ್ ಜೊತೆಗೆ ಈಜುತ್ತಾ ಮಧ್ಯಾಹ್ನ 3.15ರ ಸುಮಾರಿಗೆ ದಡಕ್ಕೆ ಕರೆತಂದರು. ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಲೈಫ್&zwnj;ಗಾರ್ಡ್&zwnj;ಗಳಾದ ಪ್ರಜ್ವಲ್, ಸುಶಾಂತ್ ಮತ್ತು ಬಾದಲ್ ಸಹಕರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯತೀಶ್ ಅವರನ್ನು ಉಡುಪಿಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.&lt;/p&gt;&lt;p&gt;ಸ್ಥಳಕ್ಕೆ ಕರಾವಳಿ ಕಾವಲು ಪೊಲೀಸರು ಮತ್ತು ಗೃಹರಕ್ಷಕ ದಳದವರು ಕೂಡ ಭೇಟಿ ನೀಡಿದ್ದರು. ಆದರೆ ಅವರ ಬಳಿ ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಸ್ಪೀಡ್ ಬೋಟ್ ಇಲ್ಲದಿರುವ ಬಗ್ಗೆ ಸ್ಥಳೀಯರು ಆಸಮಾಧಾನ ವ್ಯಕ್ತಪಡಿಸಿದ್ದಾರೆ&zwnj;.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಎಡಕುಮೇರಿ ಘಾಟ್&zwnj;ನಲ್ಲಿ ವಂದೇ ಭಾರತ್&zwnj;; ಸೋಮೇಶ್ವರ ರೈಲ್ವೇ ಗೇಟ್&zwnj; ಬಂದ್&zwnj;, ಬದಲಿ ಮಾರ್ಗ&lt;/strong&gt;&lt;/p&gt;]]></content:encoded>
            <category>udupi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/udupi-kapu-mentally-ill-man-rescued-after-swimming-in-arabian-sea-for-3-hours-mrq/articleshow-evm875i"/>
        </item>
        <item>
            <title><![CDATA[Udupi world record: 25 ಗಂಟೆ ದಾಸರ ಕೀರ್ತನೆ ಹಾಡಿ ವಿಶ್ವದಾಖಲೆ ಬರೆದ ವಿದುಷಿ ಸಂಗೀತ ಬಾಲಚಂದ್ರ]]></title>
            <link>https://kannada.asianetnews.com/karnataka-districts/udupi-vidushi-sangeetha-balachandra-sets-world-record-by-singing-dasara-keerthanas-for-25-hours/articleshow-h7bulwc</link>
            <guid isPermaLink="true">https://kannada.asianetnews.com/karnataka-districts/udupi-vidushi-sangeetha-balachandra-sets-world-record-by-singing-dasara-keerthanas-for-25-hours/articleshow-h7bulwc</guid>
            <pubDate>Tue, 25 Aug 2026 04:58:15 +0530</pubDate>
            <description><![CDATA[&lt;p&gt;ಖ್ಯಾತ ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಅವರು ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸತತ 25 ಗಂಟೆಗಳ ಕಾಲ ದಾಸರ ಕೀರ್ತನೆಗಳನ್ನು ಹಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮಹಾಸಾಧನೆಗಾಗಿ ಅವರ ಹೆಸರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್&zwnj;ನಲ್ಲಿ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0v195dj1mj4nznkj3p0pdwx,imgname-----------------------2026-08-25t044736.569-1787613713842.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಆ.25): &lt;/strong&gt;ಖ್ಯಾತ ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಅವರು ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸತತ 25 ಗಂಟೆಗಳ ಕಾಲ ನಿರಂತರವಾಗಿ ದಾಸರ ಕೀರ್ತನೆಗಳನ್ನು ಹಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಗಾಗಿ ಅವರ ಹೆಸರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್&zwnj;ನಲ್ಲಿ ದಾಖಲಾಗಿದೆ.&lt;/p&gt;&lt;h2&gt;ಸತತ 25 ಗಂಟೆಗಳ ಕಾಲ ಹಾಡಿ ವಿಶ್ವದಾಖಲೆ!&lt;/h2&gt;&lt;p&gt;ಭಾನುವಾರ ಬೆಳಗ್ಗೆ 6.30ಕ್ಕೆ ಪುತ್ತಿಗೆ ಮಠದ ಗೀತಾಮಂದಿರದ ಶ್ರೀ ನೃಸಿಂಹ ಸಭಾಭವನದಲ್ಲಿ ಆರಂಭಗೊಂಡ ಸಂಗೀತ ಬಾಲಚಂದ್ರ ಅವರ ನಿರಂತರ ಗಾಯನ ಸೋಮವಾರ ಬೆಳಗ್ಗೆ 7.40ಕ್ಕೆ ಮಂಗಳವಾಯಿತು. ಕೇವಲ ದಾಸರ ಪದ ಮತ್ತು ಕೀರ್ತನೆಗಳನ್ನೇ ಸತತ 25 ಗಂಟೆಗಳ ಕಾಲ ಹಾಡಿದ ಅವರ ಈ ಐತಿಹಾಸಿಕ ಸಾಧನೆಯನ್ನು ಅಧಿಕೃತವಾಗಿ ದೃಢೀಕರಿಸಲು ಆಗಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್&zwnj;ನ ಏಷ್ಯಾ ಹೆಡ್ ಡಾ.ಮನೀಷ್ ವಿಶ್ನೋಯಿ ಅವರು ವಿಶ್ವದಾಖಲೆ ಘೋಷಿಸಿದರು. ಬಳಿಕ, ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ವಿಶ್ವದಾಖಲೆಯ ಪ್ರಮಾಣಪತ್ರವನ್ನು ವಿದುಷಿ ಸಂಗೀತ ಅವರಿಗೆ ಹಸ್ತಾಂತರಿಸಿದರು.&lt;/p&gt;&lt;p&gt;ಜೊತೆಗೆ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯದಂತೆ &lsquo;ಗೀತಾ ಗಂಗೋತ್ರಿ&rsquo; ಎಂಬ ಬಿರುದನ್ನು ಪ್ರದಾನ ಮಾಡಿ ಆಶೀರ್ವದಿಸಿದರು.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/udupi-vidushi-sangeetha-balachandra-sets-world-record-by-singing-dasara-keerthanas-for-25-hours/articleshow-h7bulwc"/>
        </item>
        <item>
            <title><![CDATA[ಕಟ್ಟಡ, ನಿವೇಶನ ಕಡತಕ್ಕಾಗಿ ಕಾರ್ಕಳ ತಾಲೂಕಿನ ಜನರ 140 ಕಿ.ಮೀ. ಅಲೆದಾಟ;  ಕೊನೆ ಯಾವಾಗ?]]></title>
            <link>https://kannada.asianetnews.com/karnataka-districts/people-of-karkala-taluk-are-forced-to-go-to-kapu-for-building-construction-and-site-development-files-mrq/articleshow-kqrf3tk</link>
            <guid isPermaLink="true">https://kannada.asianetnews.com/karnataka-districts/people-of-karkala-taluk-are-forced-to-go-to-kapu-for-building-construction-and-site-development-files-mrq/articleshow-kqrf3tk</guid>
            <pubDate>Sat, 22 Aug 2026 10:40:29 +0530</pubDate>
            <description><![CDATA[ಕಾರ್ಕಳ ತಾಲೂಕಿನ ಜನರು ಕಟ್ಟಡ ನಿರ್ಮಾಣ ಮತ್ತು ನಿವೇಶನ ಅಭಿವೃದ್ಧಿ ಕಡತಗಳಿಗಾಗಿ ದೂರದ ಕಾಪು ಯೋಜನಾ ಪ್ರಾಧಿಕಾರಕ್ಕೆ ಅಲೆದಾಡಬೇಕಾಗಿದೆ. ಒಂದೇ ಪ್ರಾಧಿಕಾರ ಮತ್ತು ಒಬ್ಬರೇ ಇಂಜಿನಿಯರ್ ಇರುವುದರಿಂದ ಕಡತ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0j359v2k0rjwxbmzkk78xjy,imgname-kapu-1787313694562.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಂ ಅಜೆಕಾರು&lt;/strong&gt;&lt;/p&gt;&lt;p&gt;&lt;strong&gt;ಉಡುಪಿ:&lt;/strong&gt; ಕಾರ್ಕಳ ತಾಲೂಕಿನ ಗ್ರಾಮಗಳ ಜನರು ಕಟ್ಟಡ ನಿರ್ಮಾಣ ಹಾಗೂ ನಿವೇಶನ ಅಭಿವೃದ್ಧಿಗೆ ಸಂಬಂಧಿಸಿದ ಕಡತಗಳಿಗಾಗಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಗೆ ಪದೇಪದೇ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಪ್ರಯಾಣದ ಜತೆಗೆ ಕಡತ ವಿಲೇವಾರಿಯಲ್ಲೂ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ತೀವ್ರವಾಗಿ ಹೈರಾಣಾಗಿದ್ದಾರೆ.&lt;/p&gt;&lt;h2&gt;&lt;strong&gt;ಕಡತಕ್ಕಾಗಿ 140 ಕಿ.ಮೀ ಪ್ರಯಾಣ!&lt;/strong&gt;&lt;/h2&gt;&lt;p&gt;ಕಾರ್ಕಳ ಹಾಗೂ ಕಾಪು ತಾಲೂಕುಗಳಿಗೆ ಒಂದೇ ಯೋಜನಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಈದು, ಬೋಳೆಟ್ಟು ಸೇರಿದಂತೆ ಹಲವು ದೂರದ ಗ್ರಾಮಗಳ ಜನರು ಯೋಜನಾ ಪ್ರಾಧಿಕಾರದ ಅನುಮತಿ ಹಾಗೂ ದಾಖಲೆಗಳಿಗಾಗಿ ಕಾಪುವಿಗೆ ತೆರಳಬೇಕಾಗಿದೆ. ಕೆಲವು ಪ್ರದೇಶಗಳಿಂದ ಕಾಪುವಿಗೆ ಸುಮಾರು 140 ಕಿ.ಮೀ.ವರೆಗೆ ಪ್ರಯಾಣಿಸಬೇಕಾಗುತ್ತದೆ .&lt;/p&gt;&lt;p&gt;ಒಂದು ಕಡತದ ವಿಚಾರವಾಗಿ ಒಂದಕ್ಕಿಂತ ಹೆಚ್ಚು ಬಾರಿ ಕಚೇರಿಗೆ ತೆರಳಬೇಕಾದರೆ ಸಾರ್ವಜನಿಕರ ಸಂಕಷ್ಟ ಇನ್ನಷ್ಟು ಹೆಚ್ಚುತ್ತಿದೆ. ಇದರಿಂದ ಪ್ರಯಾಣ ವೆಚ್ಚದ ಜತೆಗೆ ಒಂದು ದಿನದ ಕೆಲಸವೂ ನಷ್ಟವಾಗುತ್ತಿದೆ. ಕಡತದಲ್ಲಿ ಸಣ್ಣಪುಟ್ಟ ತಿದ್ದುಪಡಿ ಅಥವಾ ಹೆಚ್ಚುವರಿ ದಾಖಲೆ ಬೇಕಾದರೂ ಮತ್ತೆ ಕಾಪುವಿನತ್ತ ಪ್ರಯಾಣಿಸಬೇಕಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ದೂರದ ಪ್ರಯಾಣ ಅನಿವಾರ್ಯ&lt;/strong&gt;&lt;/h3&gt;&lt;p&gt;ಕಾರ್ಕಳ ತಾಲೂಕಿನಲ್ಲಿ 39 ಕಂದಾಯ ಗ್ರಾಮಗಳು, 27 ಗ್ರಾಮ ಪಂಚಾಯಿತಿಗಳು, ಒಂದು ಪುರಸಭೆ ಹಾಗೂ ಅಜೆಕಾರು ಮತ್ತು ಕಾರ್ಕಳ ಎಂಬ ಎರಡು ಹೋಬಳಿಗಳಿವೆ. ಕಾಪು ತಾಲೂಕಿನಲ್ಲಿ 30 ಕಂದಾಯ ಗ್ರಾಮಗಳು, 16 ಗ್ರಾಮ ಪಂಚಾಯಿತಿಗಳು ಹಾಗೂ ಒಂದು ಹೋಬಳಿ ಇದೆ. ಇಷ್ಟು ವಿಶಾಲ ವ್ಯಾಪ್ತಿಯ ಪ್ರದೇಶಗಳ ಯೋಜನಾ ಸಂಬಂಧಿತ ಕೆಲಸಗಳು ಒಂದೇ ವ್ಯವಸ್ಥೆಯಡಿ ನಡೆಯುತ್ತಿರುವುದರಿಂದ ಕಾರ್ಕಳ ಭಾಗದ ಜನರಿಗೆ ಸೇವೆ ಪಡೆಯಲು ದೂರದ ಪ್ರಯಾಣ ಅನಿವಾರ್ಯವಾಗಿದೆ.&lt;/p&gt;&lt;p&gt;ಈ ಹಿಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ದೊರೆಯುತ್ತಿದ್ದ ಕಟ್ಟಡ ಪರವಾನಿಗೆ ಸೇರಿದಂತೆ ಹಲವು ಅಧಿಕಾರಗಳು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬಂದ ಬಳಿಕ ಸಮಸ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಿಂಗಲ್ ಲೇಔಟ್ ಅನುಮೋದನೆ, ಭೂ ಪರಿವರ್ತನೆ ನಂತರದ 9/11 ದಾಖಲೆ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ. ಭೂ ಪರಿವರ್ತನೆ ಪೂರ್ಣಗೊಂಡ ಬಳಿಕವೂ 9/11 ದಾಖಲೆ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾದ ಸಂದರ್ಭಗಳಿವೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h3&gt;&lt;strong&gt;ಎರಡು ತಾಲೂಕಿನ ಹೊಣೆ:&lt;/strong&gt;&lt;/h3&gt;&lt;p&gt;ಕಾಪು ಹಾಗೂ ಕಾರ್ಕಳ ಎರಡೂ ತಾಲೂಕುಗಳ ಯೋಜನಾ ಸಂಬಂಧಿತ ಕೆಲಸಗಳಿಗೆ ಒಬ್ಬರೇ ಇಂಜಿನಿಯರ್ ಕಾರ್ಯನಿರ್ವಹಿಸುತ್ತಿರುವುದು ಕೂಡ ಕಡತ ವಿಲೇವಾರಿ ವಿಳಂಬಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಅವರಿಗೆ ಎಸ್&zwnj;ಐಆರ್&zwnj; ಕರ್ತವ್ಯವನ್ನೂ ನೀಡಿರುವುದರಿಂದ ಯೋಜನಾ ಪ್ರಾಧಿಕಾರದ ಕೆಲಸಗಳಿಗೆ ಸಮರ್ಪಕ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಕಾರ್ಕಳಕ್ಕೆ ವಾರದಲ್ಲಿ ಮೀಸಲಾದ ದಿನದಲ್ಲಿ ಇತರ ಕರ್ತವ್ಯಗಳ ಒತ್ತಡ ದಿಂದ ಅಧಿಕಾರಿಗಳನ್ನು ಭೇಟಿಯಾಗಲು ಸಾಧ್ಯವಾಗದ ಪರಿಸ್ಥಿತಿ ಇದೆ.&lt;/p&gt;&lt;h3&gt;&lt;strong&gt;ಅಲೆದಾಟಕ್ಕೆ ಕೊನೆ ಯಾವಾಗ?&lt;/strong&gt;&lt;/h3&gt;&lt;p&gt;ಸಾರ್ವಜನಿಕರ ಸಮಸ್ಯೆಯನ್ನು ಪರಿಗಣಿಸಿ ಕಾರ್ಕಳ ಭಾಗದ ಅರ್ಜಿಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು, ಅಗತ್ಯವಿದ್ದಲ್ಲಿ ಹೆಚ್ಚುವರಿ ಇಂಜಿನಿಯರ್&zwnj;ರನ್ನು ನೇಮಿಸುವುದು ಹಾಗೂ ಕಾರ್ಕಳಕ್ಕೆ ಮೀಸಲಾದ ದಿನದಂದು ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.&lt;/p&gt;&lt;p&gt;ಕಾಪು ಪ್ರಾದಿಕಾರದ ಇಂಜಿನಿಯರ್ ಗೆ ಎಸ್ ಐ ಅರ್ ಡ್ಯೂಟಿ ನೀಡಲಾಗಿಲ್ಲ. ಕಾರ್ಯವ್ಯಾಪ್ತಿಯು ಹೆಚ್ಚಾಗಿದೆ.ಕಡತ ವಿಲೆವಾರಿಯಲ್ಲಿ ವಿಳಂಬವಾದರೆ ದೂರು ಬಂದರೆ ಕ್ರಮ&zwnj;ಕೈಗೊಳ್ಳಲಾಗುವುದು ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಹೇಳುತ್ತಾರೆ.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/people-of-karkala-taluk-are-forced-to-go-to-kapu-for-building-construction-and-site-development-files-mrq/articleshow-kqrf3tk"/>
        </item>
        <item>
            <title><![CDATA[ಕುಂದಾಪುರ: ಆಸ್ಪತ್ರೆ ಅಕ್ರಮ ಬಯಲಿಗೆಳೆದ 'ಕನ್ನಡಪ್ರಭ' ವರದಿಗಾರನ ಮಲೆ ಹಲ್ಲೆ; ಡಾ ಮಹೇಂದ್ರ ಶೆಟ್ಟಿ ಸಸ್ಪೆಂಡ್]]></title>
            <link>https://kannada.asianetnews.com/state/govt-doctor-assaults-kannada-prabha-reporter-who-exposed-hospital-irregularities-kundapur-rav/articleshow-mseiohl</link>
            <guid isPermaLink="true">https://kannada.asianetnews.com/state/govt-doctor-assaults-kannada-prabha-reporter-who-exposed-hospital-irregularities-kundapur-rav/articleshow-mseiohl</guid>
            <pubDate>Sat, 22 Aug 2026 05:41:17 +0530</pubDate>
            <description><![CDATA[&lt;p&gt;ಕುಂದಾಪುರ ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದ 'ಕನ್ನಡಪ್ರಭ' ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಆಸ್ಪತ್ರೆಯ ಸರ್ಜನ್ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಹಲ್ಲೆ ನಡೆಸಿದ್ದಾರೆ. ಘಟನೆ ಹಿನ್ನೆಲೆ ವೈದ್ಯರ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hsmawecxvfxna6b97w654r,imgname-screenshot-2026-08-21-121327-1787303701390.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುಂದಾಪುರ/ಬೆಂಗಳೂರು (ಆ.22): &lt;/strong&gt;ಉಡುಪಿ ಜಿಲ್ಲೆ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರದ ವರದಿ ಮಾಡಿದ್ದ ಕುಂದಾಪುರ ತಾಲೂಕು &lsquo;ಕನ್ನಡಪ್ರಭ&rsquo; ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಮೇಲೆ ಶುಕ್ರವಾರ ಬೆಳಗ್ಗೆ ಆ ಆಸ್ಪತ್ರೆಯ ಸರ್ಜನ್ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಏಕಾಏಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಹಲ್ಲೆಗೈದ ಡಾ। ಶೆಟ್ಟಿಯವರನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.&lt;/p&gt;&lt;p&gt;2 ವಾರಗಳ ಹಿಂದೆ &lsquo;ಕನ್ನಡಪ್ರಭ&rsquo;ದಲ್ಲಿ &lsquo;ಕುಂದಾಪುರ ಸರ್ಕಾರಿ ಆಸ್ಪತ್ರೆಯ ಮೇಲೆ ಭ್ರಷ್ಟಾಚಾರದ ಕರಿನೆರಳು&rsquo; ಶೀರ್ಷಿಕೆಯಡಿ ಶ್ರೀಕಾಂತ್ ಅವರು, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಯಲಿಗೆಳೆದಿದ್ದರು. ಹೀಗಾಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ.&lt;/p&gt;&lt;p&gt;ಕೃತ್ಯವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಖಂಡಿಸಿದ್ದಾರೆ ಹಾಗೂ ಡಾ। ಶೆಟ್ಟಿ ಅವರನ್ನು ಸರ್ಕಾರ ಅಮಾನತು ಮಾಡಿದೆ ಹಾಗೂ ಅವರ ವಿರುದ್ಧ ಕುಂದಾಪುರ ಪೊಲೀಸ್&zwnj; ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯಿಂದ ಕೈ ಮತ್ತು ಎದೆ ನೋವಿಗೊಳಗಾದ ಶ್ರೀಕಾಂತ್ ಹೆಮ್ಮಾಡಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ಏಕಾಏಕಿ ಹಲ್ಲೆ:&lt;/h2&gt;&lt;p&gt;ಶುಕ್ರವಾರ ಬೆಳಗ್ಗೆ ಪಟ್ಟಣದ ಹೋಟೆಲ್&zwnj;ವೊಂದರಲ್ಲಿ ಶ್ರೀಕಾಂತ್&zwnj; ಅವರು ತಮ್ಮ ಪತ್ನಿಯೊಂದಿಗೆ ತಿಂಡಿ ತಿನ್ನುತ್ತಿದ್ದರು. ಈ ವೇಳೆ, ಶ್ರೀಕಾಂತ್ ಬಳಿ ಬಂದ ಡಾ.ಮಹೇಂದ್ರ ಕುಮಾರ್ ಶೆಟ್ಟಿ, &lsquo;ನಿನ್ನ ಜೊತೆ ಸ್ವಲ್ಪ ಮಾತನಾಡುವುದಿದೆ&rsquo; ಎಂದು ಕೈಹಿಡಿದು ಪಕ್ಕಕ್ಕೆ ಕರೆದುಕೊಂಡು ಹೋಗಿ, ಕಾಲರ್&zwnj;ಗೆ ಕೈ ಹಾಕಿ, ಕೆನ್ನೆಗೆ ಹೊಡೆದಿದ್ದಾರೆ. ವರದಿ ಬರೆದ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ತಕ್ಷಣ ಶ್ರೀಕಾಂತ್ ಅವರ ಪತ್ನಿ ಮತ್ತು ಪತ್ರಕರ್ತ ಯೋಗೀಶ್ ಅವರು ವೈದ್ಯರನ್ನು ತಡೆದಿದ್ದಾರೆ.&lt;/p&gt;&lt;p&gt;ಶ್ರೀಕಾಂತ್ ತಮ್ಮ ವರದಿಯ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದರೂ ಅದನ್ನು ಕೇಳದೆ ಮತ್ತೆ, ಮತ್ತೆ ಶ್ರೀಕಾಂತ್&zwnj; ಅವರ ಮೇಲೆ ಹಲ್ಲೆಗೆ ಯತ್ನಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂದರ್ಭ ಈ ಸರ್ಕಾರಿ ವೈದ್ಯರ ಜೊತೆಗಿದ್ದ ಅವರ ಖಾಸಗಿ ಕ್ಲಿನಿಕ್&zwnj;ನ ಪಾಲುದಾರ ಮಹಿಳಾ ವೈದ್ಯೆಯೂ ಸಾಥ್ ನೀಡಿದ್ದಾರೆ.&lt;/p&gt;&lt;p&gt;ಹಲ್ಲೆಯಿಂದ ಕೈ ಮತ್ತು ಎದೆ ನೋವಿಗೊಳಗಾದ ಶ್ರೀಕಾಂತ್ ಹೆಮ್ಮಾಡಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;p&gt;ಇದೀಗ ದೂರಿನ ಮೇರೆಗೆ ಹಲ್ಲೆಯ ದೃಶ್ಯಾವಳಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಶ್ರೀಕಾಂತ್ ಹೇಳಿಕೆ ಪಡೆದು, ಘಟನಾ ಸ್ಥಳದಲ್ಲಿ ಸಾಕ್ಷಿಗಳ ಜೊತೆಗೆ ಹೋಟೆಲ್&zwnj;ನ ಸ್ಥಳ ಮಹಜರು ನಡೆಸಿದ್ದಾರೆ. ಪತ್ರಕರ್ತನ ಮೇಲಿನ ಹಲ್ಲೆಯನ್ನು ವಿವಿಧ ಸಂಘಟನೆಗಳು ಖಂಡಿಸಿವೆ.&lt;/p&gt;&lt;h3&gt;ಶೆಟ್ಟಿ ಅಮಾನತು:&lt;/h3&gt;&lt;p&gt;ಹಲ್ಲೆ ಬೆನ್ನಲ್ಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಸ್ತು ಪ್ರಾಧಿಕಾರಿ ಮತ್ತು ಆಯುಕ್ತ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.&lt;/p&gt;&lt;p&gt;ಹಲ್ಲೆಯ ದೃಶ್ಯಗಳು ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ರಾಜ್ಯ ಆಯುಕ್ತರಿಗೆ ಘಟನೆ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯಂತೆ, ಘಟನೆ ಬಗ್ಗೆ ಇಲಾಖಾ ವಿಚಾರಣೆಗೆ ಆದೇಶಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಶೆಟ್ಟಿಯವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.&lt;/p&gt;&lt;p&gt;ಅಲ್ಲದೆ, ತಕ್ಷಣವೇ ಶೆಟ್ಟಿಯವರನ್ನು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಶಸ್ತ್ರಚಿಕಿತ್ಸಕರ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಆದರೆ, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.&lt;/p&gt;&lt;h3&gt;ಶಾಸಕರ ಹೇಳಿಕೆಗೆ ಅನುಸಾರ ವರದಿ:&lt;/h3&gt;&lt;p&gt;ವಿಶೇಷ ಎಂದರೆ &lsquo;ಕನ್ನಡಪ್ರಭ&rsquo;ದಲ್ಲಿ ಪ್ರಕಟವಾದ ವರದಿಯಲ್ಲಿ ಯಾವುದೇ ವೈದ್ಯರ ಹೆಸರು ಉಲ್ಲೇಖವಾಗಿಲ್ಲ. ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಶಾಸಕರ ಹೇಳಿಕೆಹೆ ಅನುಗುಣವಾಗಿ ವರದಿ ಪ್ರಕಟಿಸಲಾಗಿತ್ತು. ಆದರೂ, ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅವರು ಶುಕ್ರವಾರ ಹಲ್ಲೆ ನಡೆಸುವ ಮೂಲಕ ಭ್ರಷ್ಟಾಚಾರದ ಆರೋಪವನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡಿದ್ದಾರೆ.&lt;/p&gt;&lt;h3&gt;&lsquo;ಕನ್ನಡಪ್ರಭ&rsquo; ವರದಿಯಲ್ಲೇನಿತ್ತು?:&lt;/h3&gt;&lt;p&gt;ಆಗಸ್ಟ್&zwnj; 1ರಂದು &lsquo;ಕನ್ನಡಪ್ರಭ&rsquo;ದಲ್ಲಿ &lsquo;ಕುಂದಾಪುರ ಸರ್ಕಾರಿ ಆಸ್ಪತ್ರೆಯ ಮೇಲೆ ಭ್ರಷ್ಟಾಚಾರದ ಕರಿನೆರಳು&rsquo; ಹೆಸರಿನಲ್ಲಿ ಶ್ರೀಕಾಂತ್ ಹೆಮ್ಮಾಡಿ ಬರೆದ ವರದಿ ಪ್ರಕಟವಾಗಿತ್ತು. ಸ್ವತಃ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು &lsquo;ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗುವ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ ಅಲ್ಲಿನ ವೈದ್ಯರು ಬಲವಂತವಾಗಿ ಹಣ ಪಡೆಯುತ್ತಾರೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ&rsquo; ಎಂದು ಜಿಲ್ಲಾಧಿಕಾರಿಗೆ ನೀಡಿದ ಸೂಚನೆ ಆಧರಿಸಿ ಶ್ರೀಕಾಂತ್ ಅವರು ಈ ತನಿಖಾ ವರದಿ ಸಿದ್ಧಪಡಿಸಿದ್ದರು.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/govt-doctor-assaults-kannada-prabha-reporter-who-exposed-hospital-irregularities-kundapur-rav/articleshow-mseiohl"/>
        </item>
        <item>
            <title><![CDATA[ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ಅವಘಡ: ಪರ್ಯಾಯ ಶ್ರೀಗಳ ಕೈಯಿಂದ ಜಾರಿಬಿದ್ದ ಕೃಷ್ಣನ ಮಣ್ಣಿನ ಮೂರ್ತಿ]]></title>
            <link>https://kannada.asianetnews.com/karnataka-districts/udupi-vitlapindi-shock-lord-krishna-clay-idol-falls-during-the-immersion-gkn/articleshow-ncf843w</link>
            <guid isPermaLink="true">https://kannada.asianetnews.com/karnataka-districts/udupi-vitlapindi-shock-lord-krishna-clay-idol-falls-during-the-immersion-gkn/articleshow-ncf843w</guid>
            <pubDate>Sun, 06 Sep 2026 17:07:14 +0530</pubDate>
            <description><![CDATA[&lt;p&gt;ಉಡುಪಿ ವಿಟ್ಲಪಿಂಡಿ ಉತ್ಸವದ ವೇಳೆ ಪರ್ಯಾಯ ಶ್ರೀಗಳ ಕೈಯಿಂದ ಕೃಷ್ಣನ ಮಣ್ಣಿನ ಮೂರ್ತಿ ಜಾರಿಬಿದ್ದು ಭಗ್ನಗೊಂಡ ಆಕಸ್ಮಿಕ ಅವಘಡ ಸಂಭವಿಸಿದೆ. ರಥೋತ್ಸವ ಮುಗಿದ ಬಳಿಕ ಮಧ್ವ ಸರೋವರದಲ್ಲಿ ವಿಸರ್ಜನೆಗಾಗಿ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v8122yvbvefsnxw13mxeg9,imgname-udupi-krishna-1788694530142.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ:&lt;/strong&gt; ಉಡುಪಿ ರಥಬೀದಿಯಲ್ಲಿ ಅದ್ಧೂರಿಯಾಗಿ ನಡೆದ ವಿಟ್ಲಪಿಂಡಿ ಉತ್ಸವದ ಸಮಾರೋಪದ ವೇಳೆ ಆಕಸ್ಮಿಕ ಅವಘಡ ಸಂಭವಿಸಿದೆ. ರಥೋತ್ಸವದ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರಕ್ಕೆ ಕೊಂಡೊಯ್ಯುವಾಗ ಪರ್ಯಾಯ ಶ್ರೀಗಳ ಕೈಯಿಂದ ಮೂರ್ತಿ ಜಾರಿ ಕೆಳಗೆ ಬಿದ್ದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ನಿನ್ನೆ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ವಿಟ್ಲಪಿಂಡಿ ಉತ್ಸವ ಅತ್ಯಂತ ಸಡಗರದಿಂದ ನಡೆಯಿತು. ಚಾತುರ್ಮಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣನ ಮಣ್ಣಿನ ಮೂರ್ತಿಯನ್ನು (ಮೃಣ್ಮಯ ಮೂರ್ತಿ) ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಗಿತ್ತು. ರಥೋತ್ಸವ ಮುಗಿದ ಬಳಿಕ, ಸಂಪ್ರದಾಯದಂತೆ ಈ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲು ಕೊಂಡೊಯ್ಯಲಾಗುತ್ತಿತ್ತು.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಕೈಯಿಂದ ಜಾರಿಬಿದ್ದ ಮೂರ್ತಿ&lt;/strong&gt;&lt;/h2&gt;&lt;p&gt;ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರು ರಥಾರೂಢವಾಗಿದ್ದ ಕೃಷ್ಣನ ಮೂರ್ತಿಯನ್ನು ಕೆಳಗಿಳಿಸಿ, ಮಧ್ವ ಸರೋವರಕ್ಕೆ ವಿಸರ್ಜನೆಗಾಗಿ ಕೊಂಡೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೂರ್ತಿಯು ಸ್ವಾಮೀಜಿಯವರ ಕೈಯಿಂದ ಕೆಳಗೆ ಬಿದ್ದಿದೆ. ಪರಿಣಾಮವಾಗಿ ಮಣ್ಣಿನ ಮೂರ್ತಿಯು ಭಗ್ನಗೊಂಡಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಉತ್ಸವದ ಪ್ರಮುಖ ಘಟ್ಟದಲ್ಲಿ ನಡೆದ ಈ ಘಟನೆಯಿಂದ ಭಕ್ತರಲ್ಲಿ ಆತಂಕ ಮತ್ತು ಆಶ್ಚರ್ಯ ಉಂಟಾಗಿದೆ. ಪ್ರತಿ ವರ್ಷವೂ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದು ಪದ್ಧತಿಯಾಗಿದ್ದು, ವಿಸರ್ಜನೆಗೆ ಕೆಲವೇ ಕ್ಷಣಗಳಿರುವಾಗ ಈ ಆಕಸ್ಮಿಕ ಸಂಭವಿಸಿದೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>udupi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/udupi-vitlapindi-shock-lord-krishna-clay-idol-falls-during-the-immersion-gkn/articleshow-ncf843w"/>
        </item>
        <item>
            <title><![CDATA[ನೈಋತ್ಯಕ್ಕೆ ಮಂಗಳೂರು ವಿವಾದದ ನಡುವೆಯೇ ಕೊಂಕಣ ರೈಲ್ವೆ ವಿಲೀನ ಪ್ರಸ್ತಾಪ, ಕರಾವಳಿಯ ರೈಲ್ವೆ ಭವಿಷ್ಯ ಸವಾಲು!]]></title>
            <link>https://kannada.asianetnews.com/india-news/mangaluru-railway-jurisdiction-shift-konkan-railway-merger-and-swr-integration-explained-gdp/articleshow-o7auq1x</link>
            <guid isPermaLink="true">https://kannada.asianetnews.com/india-news/mangaluru-railway-jurisdiction-shift-konkan-railway-merger-and-swr-integration-explained-gdp/articleshow-o7auq1x</guid>
            <pubDate>Sat, 29 Aug 2026 19:34:53 +0530</pubDate>
            <description><![CDATA[ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಲಾಗಿದೆ, ಇದು ಪ್ರತ್ಯೇಕ ಮಂಗಳೂರು ವಿಭಾಗ ರಚನೆಯ ಮೊದಲ ಹೆಜ್ಜೆಯಾಗಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯು ಷೇರುದಾರ ರಾಜ್ಯಗಳೊಂದಿಗಿನ ಮಾತುಕತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸವಾಲುಗಳನ್ನು ಎದುರಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvf6fzpgk0wjxhndqarech1m,imgname-konkan-railways--4--1781847817936.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸುವ ನಿರ್ಧಾರವು ಕೇವಲ ಆಡಳಿತಾತ್ಮಕ ಬದಲಾವಣೆಯಷ್ಟೇ ಅಲ್ಲ; ಇದು ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹೊಸ ಶಕೆಯ ಆರಂಭವಾಗಿದೆ. ಈ ಚ ಕೊಂಕಣ ರೈಲ್ವೆಯನ್ನು ಪೂರ್ಣಪ್ರಮಾಣದಲ್ಲಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಮತ್ತು ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗವನ್ನು ಸ್ಥಾಪಿಸುವ ಪ್ರಕ್ರಿಯೆಯು ಪ್ರಮುಖ ಘಟ್ಟ ತಲುಪಿದೆ.&lt;/p&gt;&lt;h2&gt;ವಲಯ ಪುನರ್ರಚನೆ ಮತ್ತು ನೂತನ ಮಂಗಳೂರು ವಿಭಾಗ&lt;/h2&gt;&lt;p&gt;ಉಳ್ಳಾಲ ಸೇರಿದಂತೆ ಮಂಗಳೂರು ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಅಡಿಯಲ್ಲಿ ಮೈಸೂರು ವಿಭಾಗಕ್ಕೆ ಸ್ಥಳಾಂತರಿಸುವುದರೊಂದಿಗೆ ಪ್ರಮುಖ ಮೊದಲ ಹಂತ ಪೂರ್ಣಗೊಂಡಿದೆ. ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗಗಳ ಮಾದರಿಯಲ್ಲೇ ನೈಋತ್ಯ ರೈಲ್ವೆಯ ಅಡಿಯಲ್ಲಿ ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗವನ್ನು ರಚಿಸುವ ಪ್ರಯತ್ನಗಳು ಸಾಗಿವೆ.&lt;/p&gt;&lt;p&gt;ಕೊಂಕಣ ರೈಲ್ವೆ ವ್ಯಾಪ್ತಿಯ ತೋಕೂರಿನಿಂದ ಗೋವಾದ ತಿವಿಮ್ ನಿಲ್ದಾಣದವರೆಗೆ 30 ನಿಲ್ದಾಣಗಳನ್ನೊಳಗೊಂಡ ಭಾಗವನ್ನು ನೈಋತ್ಯ ರೈಲ್ವೆಗೆ ಸೇರಿಸುವ ಯೋಜನೆ ಇದೆ. ರೋಹಾದಿಂದ ತಿವಿಮ್&zwnj;ವರೆಗಿನ 38 ನಿಲ್ದಾಣಗಳನ್ನು ಒಳಗೊಂಡ ಮಾರ್ಗವನ್ನು ಕೇಂದ್ರ ರೈಲ್ವೆಯ ಅಡಿಯಲ್ಲಿ ತರಲು ಉದ್ದೇಶಿಸಲಾಗಿದೆ. ಮಡಗಾಂವ್ ನಿಲ್ದಾಣವನ್ನು ಯಾವ ವಲಯಕ್ಕೆ ಸೇರಿಸಬೇಕೆಂಬ ಕುರಿತು ಎರಡು ವಲಯಗಳ ನಡುವೆ ಇರುವ ಭಿನ್ನಾಭಿಪ್ರಾಯದಿಂದಾಗಿ ಹೊಸ ವಿಭಾಗ ರಚನೆಯ ಕ್ರಮ ತುಸು ವಿಳಂಬವಾಗಿದೆ.&lt;/p&gt;&lt;h2&gt;ಕೊಂಕಣ ರೈಲ್ವೆ ಕಾರ್ಪೊರೇಷನ್ ಷೇರು&lt;/h2&gt;&lt;p&gt;ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಅನ್ನು 1990 ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ರೈಲ್ವೆ ಸಚಿವಾಲಯ ಮತ್ತು ನಾಲ್ಕು ರಾಜ್ಯಗಳು ಇದರಲ್ಲಿ ಷೇರುಗಳನ್ನು ಹೊಂದಿವೆ. ಕೇಂದ್ರ ರೈಲ್ವೆ ಸಚಿವಾಲಯ (ಶೇ. 66.79), ಮಹಾರಾಷ್ಟ್ರ (ಶೇ. 14.91), ಕರ್ನಾಟಕ (ಶೇ. 10.17), ಗೋವಾ ಹಾಗೂ ಕೇರಳ (ತಲಾ ಶೇ. 4.07).&lt;/p&gt;&lt;h2&gt;ವಿಲೀನ ಪ್ರಕ್ರಿಯೆ ಮತ್ತು ಎದುರಾಗಿರುವ ಸವಾಲುಗಳು&lt;/h2&gt;&lt;p&gt;ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ಸಂಪೂರ್ಣವಾಗಿ ವಿಲೀನಗೊಳಿಸಲು ಸಂಸ್ಥೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನಕ್ಕೆ ಬರಬೇಕಿದೆ. ಲೋಕಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ರೈಲ್ವೆ ಸಚಿವಾಲಯವು ಈ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಯನ್ನು ಸ್ಪಷ್ಟಪಡಿಸಿದೆ.&lt;/p&gt;&lt;p&gt;ಷೇರುದಾರ ರಾಜ್ಯಗಳು ಅಗತ್ಯವಿರುವ ಬಂಡವಾಳ ವೆಚ್ಚಕ್ಕೆ ಕೊಡುಗೆ ನೀಡಬೇಕು ಅಥವಾ ತಮ್ಮ ಷೇರುಗಳನ್ನು ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಬೇಕು ಎಂದು ಸೂಚಿಸಲಾಗಿದೆ. ಮಹಾರಾಷ್ಟ್ರ ತನ್ನ ಷೇರು ಹಿಂತೆಗೆತಕ್ಕೆ ಪ್ರತಿಯಾಗಿ ₹396.54 ಕೋಟಿ ಪರಿಹಾರ ಕೋರಿದೆ. ಕೇರಳ ತನ್ನ ಪಾಲಿನ (ಅಂದಾಜು ₹90 ಕೋಟಿ) ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಕರ್ನಾಟಕವು ಕೆಆರ್&zwnj;ಸಿಎಲ್&zwnj;ನಿಂದ ನಿರ್ಗಮಿಸಲು ವಿಭಿನ್ನ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದು, ಈ ಬೇಡಿಕೆಗಳ ಅಂತಿಮ ಪರಿಹಾರ ಇನ್ನೂ ಕಂಡುಕೊಳ್ಳಬೇಕಿದೆ.&lt;/p&gt;&lt;h2&gt;ಮೂಲಸೌಕರ್ಯ ಮತ್ತು ರೈಲು ಸೇವೆಗಳು&lt;/h2&gt;&lt;p&gt;ಮೂರು ದಶಕಗಳಷ್ಟು ಹಳೆಯದಾದ ಕೊಂಕಣ ರೈಲ್ವೆಯ ಹಳಿ ದ್ವಿಗುಣಗೊಳಿಸುವಿಕೆ, ಸುರಂಗ ನವೀಕರಣ ಮತ್ತು ಸುರಕ್ಷತಾ ಕಾರ್ಯಗಳಿಗೆ ಭಾರಿ ಬಂಡವಾಳದ ಅಗತ್ಯವಿದೆ. ಸಂಸ್ಥೆಯ ಸೀಮಿತ ಆದಾಯ ಮೂಲಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿದ್ದು, ವಿಲೀನದ ಮೂಲಕವೇ ಈ ಮೂಲಸೌಕರ್ಯಗಳನ್ನು ಆಧುನೀಕರಿಸಲು ಸಾಧ್ಯ.&lt;/p&gt;&lt;p&gt;ಪ್ರಸ್ತುತ ಈ ಮಾರ್ಗದಲ್ಲಿ ದಿನನಿತ್ಯ 114 ಮೇಲ್, ಎಕ್ಸ್&zwnj;ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿದ್ದು, ಬಹುತೇಕ ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರ ನಿರಂತರ ಬೇಡಿಕೆಯನ್ನು ಪರಿಗಣಿಸಿ ಹೊಸ ರೈಲು ಸೇವೆ, ಸಂಚಾರ ವಿಸ್ತರಣೆ ಮತ್ತು ತಾತ್ಕಾಲಿಕ ಅಥವಾ ಶಾಶ್ವತ ಬೋಗಿಗಳ ಹೆಚ್ಚಳದ ಮೂಲಕ ಸೇವೆಯನ್ನು ಸುಧಾರಿಸುವ ಪ್ರಯತ್ನಗಳು ಮುಂದುವರಿದಿವೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/mangaluru-railway-jurisdiction-shift-konkan-railway-merger-and-swr-integration-explained-gdp/articleshow-o7auq1x"/>
        </item>
        <item>
            <title><![CDATA[ಉಡುಪಿ: ಭ್ರಷ್ಟಾಚಾರ ವರದಿ ಮಾಡಿದ್ದಕ್ಕೆ 'ಕನ್ನಡಪ್ರಭ' ವರದಿಗಾರನ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ!]]></title>
            <link>https://kannada.asianetnews.com/gallery/karnataka-districts/udupi-kundapura-kannada-prabha-journalist-srikanth-hemmadi-attacked-by-government-doctor-mahendra-shetty-q5512ci</link>
            <guid isPermaLink="true">https://kannada.asianetnews.com/gallery/karnataka-districts/udupi-kundapura-kannada-prabha-journalist-srikanth-hemmadi-attacked-by-government-doctor-mahendra-shetty-q5512ci</guid>
            <pubDate>Fri, 21 Aug 2026 14:54:09 +0530</pubDate>
            <description><![CDATA[&lt;p&gt;ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ವರದಿ ಪ್ರಕಟಿಸಿದ್ದಕ್ಕೆ ಕನ್ನಡಪ್ರಭ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಪತ್ನಿಯ ಎದುರೇ ಹೋಟೆಲ್&zwnj;ನಲ್ಲಿ ನಡೆದ ಈ ಘಟನೆಯನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hsfp4bwtcpfxe70nqbte89,imgname-kundapura-kannada-prabha-reporter-sreekanth-vs-dr-mahendra-1787303549065.jpg" type="image/jpeg" height="390" width="690"/>
            <content:encoded><![CDATA[&lt;p&gt;ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ವರದಿ ಪ್ರಕಟಿಸಿದ್ದಕ್ಕೆ ಕನ್ನಡಪ್ರಭ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಪತ್ನಿಯ ಎದುರೇ ಹೋಟೆಲ್&zwnj;ನಲ್ಲಿ ನಡೆದ ಈ ಘಟನೆಯನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.&lt;/p&gt;&lt;img&gt;&lt;p&gt;ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ಸರಣಿ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ, &lsquo;ಕನ್ನಡಪ್ರಭ&rsquo; ದಿನಪತ್ರಿಕೆಯ ಕುಂದಾಪುರ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಸರ್ಕಾರಿ ವೈದ್ಯರೊಬ್ಬರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಹಲ್ಲೆಗೊಳಗಾದ ಪತ್ರಕರ್ತರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ. ಇನ್ನು ಹಲ್ಲೆ ಮಾಡುವ ದೃಶ್ಯವೂ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೋಟೆಲ್ ಸಿಬ್ಬಂದಿ ಹಲ್ಲೆಯಾಗುವುದನ್ನು ತಡೆದಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಪತ್ನಿ ಎದುರಲ್ಲೇ ಏಕಾಏಕಿ ಹಲ್ಲೆ:&lt;/strong&gt;&lt;/p&gt;&lt;p&gt;ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರು ತಮ್ಮ ಪತ್ನಿಯೊಂದಿಗೆ ಕುಂದಾಪುರದ ಹೋಟೆಲೊಂದರಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಡಾ. ಮಹೇಂದ್ರ ಶೆಟ್ಟಿ, ಏಕಾಏಕಿ ಆಕ್ರೋಶ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. 'ನನ್ನ ವಿರುದ್ಧವೇ ವರದಿ ಪ್ರಕಟಿಸುತ್ತೀಯಾ?' ಎಂದು ಬೆದರಿಕೆ ಹಾಕಿ, ಪತ್ನಿಯ ಎದುರಲ್ಲೇ ಶ್ರೀಕಾಂತ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಭ್ರಷ್ಟಾಚಾರ ವರದಿ ಮತ್ತು ವರ್ಗಾವಣೆಯ ದ್ವೇಷ:&lt;/strong&gt;&lt;/p&gt;&lt;p&gt;ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಮತ್ತು ಡಾ. ಮಹೇಂದ್ರ ಶೆಟ್ಟಿ ಅವರ ಭ್ರಷ್ಟಾಚಾರದ ಕುರಿತು ಶ್ರೀಕಾಂತ್ ಹೆಮ್ಮಾಡಿ ಅವರು ಇತ್ತೀಚೆಗೆ ತನಿಖಾ ವರದಿಗಳನ್ನು ಪ್ರಕಟಿಸಿದ್ದರು. ಈ ವರದಿಗಳು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ವರದಿಯು ಸರ್ಕಾರಕ್ಕೂ ತಲುಪಿದ್ದು, ಇದರ ಪರಿಣಾಮವಾಗಿ ಸರ್ಕಾರವು ಕೂಡಲೇ ಡಾ. ಮಹೇಂದ್ರ ಶೆಟ್ಟಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ವೈದ್ಯ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ&lt;/p&gt;&lt;img&gt;&lt;p&gt;ಕರ್ತವ್ಯನಿರತ ಪತ್ರಕರ್ತನ ಮೇಲೆ ವೈದ್ಯನೊಬ್ಬ ಗೂಂಡಾವರ್ತನೆ ತೋರಿ ಹಲ್ಲೆ ನಡೆಸಿರುವುದನ್ನು ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥ ವೈದ್ಯನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/udupi-kundapura-kannada-prabha-journalist-srikanth-hemmadi-attacked-by-government-doctor-mahendra-shetty-q5512ci"/>
        </item>
        <item>
            <title><![CDATA[ಉಡುಪಿ ಕೃಷ್ಣಗೆ ಯಶೋಧಾ ಸ್ತನ್ಯಪಾನ ಅಲಂಕಾರ, ಇಂದು ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ]]></title>
            <link>https://kannada.asianetnews.com/karnataka-districts/udupi-krishna-janmashtami-yashoda-stanyapana-alankara-leelotsava-san/articleshow-siy0603</link>
            <guid isPermaLink="true">https://kannada.asianetnews.com/karnataka-districts/udupi-krishna-janmashtami-yashoda-stanyapana-alankara-leelotsava-san/articleshow-siy0603</guid>
            <pubDate>Sat, 05 Sep 2026 07:15:47 +0530</pubDate>
            <description><![CDATA[&lt;p&gt;ಉಡುಪಿಯ ಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಪರ್ಯಾಯ ಶೀರೂರು ಶ್ರೀಗಳು ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ್ದು, ಮಧ್ಯರಾತ್ರಿ ಅರ್ಘ್ಯ ಪ್ರದಾನ ಮಾಡಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1qkt6pnd1pxsdh8apzw1vct,imgname-udupi-krishna-1788572670677.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಉಡುಪಿ (ಸೆ.5):&lt;/strong&gt; ಕೃಷ್ಣನಗರಿ ಉಡುಪಿಯಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ದಿನವಿಡೀ ಉಪವಾಸ, ಜಪ, ಪಾರಾಯಣಗಳಲ್ಲಿ ಕಳೆದ ಕೃಷ್ಣಭಕ್ತರು ಸಾವಿರಾರು ಸಂಖ್ಯೆಯಲ್ಲಿ ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭೇಟಿ ನೀಡಿ, ಅಷ್ಟಮಿಯ ಕೃಷ್ಣನನ್ನು ವೀಕ್ಷಿಸಿದರು.&lt;/p&gt;&lt;p&gt;ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣಮಠವನ್ನು ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿದೆ. ಮಳೆ ಇಲ್ಲದ ಕಾರಣ ಕೃಷ್ಣಮಠ ಮತ್ತು ರಥಬೀದಿ ಶುಕ್ರವಾರ ದಿನವಿಡೀ ಭಕ್ತರಿಗೆ ಗಿಜಿಗುಡುತ್ತಿತ್ತು.&lt;/p&gt;&lt;p&gt;ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರಿಗೆ ಇದು ಪ್ರಥಮ ಜನ್ಮಾಷ್ಟಮಿಯಾಗಿದ್ದು, ಅವರು ಶುಕ್ರವಾರ ಕೃಷ್ಣನನ್ನು ಯಶೋಧಾ ಸ್ತನ್ಯಪಾನ ಅಲಂಕಾರ ಮಾಡಿ ಮಹಾಪೂಜೆ ಸಲ್ಲಿಸಿದರು.&lt;/p&gt;&lt;p&gt;ಶ್ರಾವಣ ಮಾಸದ ಅಷ್ಟಮಿಯ ದಿನ ಅಂದರೆ ಶುಕ್ರವಾರ ಶನಿವಾರದ ಮಧ್ಯರಾತ್ರಿಯ 12.12ಕ್ಕೆ ಚಂದ್ರೋದಯ ಕಾಲದಲ್ಲಿ, ರೋಹಣಿ ನಕ್ಷತ್ರ ಸಹಯೋಗದಲ್ಲಿ, ಶ್ರೀಗಳು ಪ್ರಧಾನ ಅರ್ಘ್ಯ ಪ್ರದಾನ ಮಾಡಿದರು. ನಂತರ ಶ್ರೀಮಠದ ಅಧಿಕಾರಿ ವರ್ಗ ಮತ್ತು ಗಣ್ಯರು ಮತ್ತು ಭಕ್ತರಿಗೂ ತುಳಸಿಕಟ್ಟೆಯಲ್ಲಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು.&lt;/p&gt;&lt;h2&gt;&lt;strong&gt;ಇಂದು ಕೃಷ್ಣಲೀಲೋತ್ಸವ, ಮೊಸರುಕುಡಿಕೆ&lt;/strong&gt;&lt;/h2&gt;&lt;p&gt;ಶನಿವಾರ ಮಧ್ಯಾಹ್ನ 3ರ ನಂತರ ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ, ಮೊಸರುಕುಡಿಕೆ ನಡೆಯಲಿದೆ. ರಥಬೀದಿಯಲ್ಲಿ ಹಾಕಲಾಗಿರುವ ಗುಜ್ಜಿ (ಕಮಾನು)ಗಳಲ್ಲಿ ಕಟ್ಟಿರುವ ಪಂಚಕಜ್ಜಾಯ, ಮೊಸರು, ಓಕುಳಿ ನೀರು ಇತ್ಯಾದಿಗಳಿರುವ ಮಡಕೆಗಳನ್ನು ಗೊಲ್ಲವೇಷಧಾರಿಗಳು ಕೊಲಿನಿಂದ ಒಡೆದು ಬಾಯಿಬಡಿದುಕೊಂಡು ಕುಣಿಯುತ್ತಾ ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸುತ್ತಾರೆ.&lt;/p&gt;&lt;p&gt;ಅದೇ ಸಂದರ್ಭದಲ್ಲಿ ಅಬ್ಬದರ ಹುಲಿ ಕುಣಿತವೂ ಆಕರ್ಷಣೆಯಾಗಿರುತ್ತದೆ. ಜೊತೆಗೆ ಕೃಷ್ಣನ ಮಣ್ಣಿನ ವಿಗ್ರಹವನ್ನಿಟ್ಟು ಮಹಾಪೂಜೆ, ರಥೋತ್ಸವ ನೆರವೇರಿಸಲಾಗುತ್ತದೆ. ನಂತರ ಮೃಣ್ಮಯ ವಿಗ್ರಹವನ್ನು ಮಧ್ವಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಳ್ಳುತ್ತದೆ.&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/udupi-krishna-janmashtami-yashoda-stanyapana-alankara-leelotsava-san/articleshow-siy0603"/>
        </item>
        <item>
            <title><![CDATA['ಮೇ ಹೆಚ್ ಪಿ ಬೋಲ್ ರಹಾ ಹೂಂ...! 2013ರಲ್ಲೇ ಸತ್ತಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಬದುಕಿದ್ದಾನಾ?]]></title>
            <link>https://kannada.asianetnews.com/karnataka-districts/mumbai-underworld-gangster-hemant-poojary-hp-alive-udupi-mudarangadi-david-murder-audio/articleshow-u6t5xfq</link>
            <guid isPermaLink="true">https://kannada.asianetnews.com/karnataka-districts/mumbai-underworld-gangster-hemant-poojary-hp-alive-udupi-mudarangadi-david-murder-audio/articleshow-u6t5xfq</guid>
            <pubDate>Tue, 25 Aug 2026 20:14:58 +0530</pubDate>
            <description><![CDATA[&lt;p&gt;ಉಡುಪಿಯ ಮುದರಂಗಡಿಯಲ್ಲಿ ನಡೆದ ಉದ್ಯಮಿ ಡೇವಿಡ್ ಹತ್ಯೆ ಪ್ರಕರಣವು, ದಶಕದ ಹಿಂದೆ ಸತ್ತಿದ್ದಾನೆಂದು ನಂಬಲಾಗಿದ್ದ ಕುಖ್ಯಾತ ಭೂಗತ ಪಾತಕಿ ಹೇಮಂತ್ ಪೂಜಾರಿಯ (HP) ಪುನರಾಗಮನದ ಬಲವಾದ ಶಂಕೆ ಹುಟ್ಟಿಸಿದೆ. ಹತ್ಯೆಯ ಬಳಿಕ ಶೂಟರ್&zwnj;ಗೆ ಸೂಚನೆ ನೀಡಿರುವುದು ಮತ್ತು ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿರುವುದು 'HP'ಯದೆನ್ನಲಾದ ಆಡಿಯೋದಲ್ಲಿ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0wnzht56dzff1knfpz9z6ww,imgname-mumbai-underworld-gangster-hemant-poojary-1787668973381.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಆ.25): ಮುಂ&lt;/strong&gt;ಬೈ ಭೂಗತ ಜಗತ್ತಿನಲ್ಲಿ ಒಂದು ಕಾಲದಲ್ಲಿ ನಡುಕ ಹುಟ್ಟಿಸಿ, ಕಳೆದ ಒಂದು ದಶಕದಿಂದ ಸತ್ತುಹೋಗಿದ್ದಾನೆ ಎಂದೇ ನಂಬಲಾಗಿದ್ದ ಕುಖ್ಯಾತ ಭೂಗತ ಪಾತಕಿ ಹೇಮಂತ್ ಪೂಜಾರಿ (HP - Hemant Poojary) ಮತ್ತೆ ಪ್ರತ್ಯಕ್ಷನಾಗಿದ್ದಾನಾ? ಕರಾವಳಿಯ ಮುದರಂಗಡಿಯಲ್ಲಿ ಇತ್ತೀಚೆಗೆ ನಡೆದ ಉದ್ಯಮಿ ಡೇವಿಡ್ ಹತ್ಯೆ ಪ್ರಕರಣ ಈಗ ಇಡೀ ರಾಜ್ಯ ಮತ್ತು ಮುಂಬೈ ಪೊಲೀಸರನ್ನು ಬೆಚ್ಚಿಬೀಳಿಸಿದೆ. ಉಡುಪಿ ಜಿಲ್ಲೆಯ ಮುದರಂಗಡಿಯಲ್ಲಿ ಆಗಸ್ಟ್ 7 ರಂದು ನಡೆದ ಉದ್ಯಮಿ ಡೇವಿಡ್ ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಭೂಗತ ಲೋಕದ ನಂಟು ಇರುವುದು ಬಯಲಾಗಿದ್ದು, ಹೇಮಂತ್ ಪೂಜಾರಿಯದ್ದು ಎನ್ನಲಾದ ಆಡಿಯೋ ಕ್ಲಿಪ್&zwnj;ಗಳು ಲಭ್ಯವಾಗಿವೆ.&lt;/p&gt;&lt;h2&gt;&lt;strong&gt;ಆಡಿಯೋದಲ್ಲಿ ಏನಿದೆ? ಡೇವಿಡ್ ಕೊಲೆಯ ಬೆನ್ನಲ್ಲೇ ಕಾಲ್!&lt;/strong&gt;&lt;/h2&gt;&lt;p&gt;&lt;strong&gt;ಶೂಟರ್ ಜೊತೆ ಮಾತುಕತೆ:&lt;/strong&gt; ಡೇವಿಡ್&zwnj;ನನ್ನು ಗುಂಡಿಕ್ಕಿ ಕೊಂದ ಬೆನ್ನಲ್ಲೇ ಶಾರ್ಪ್ ಶೂಟರ್ ರಾಜು ನೇರವಾಗಿ 'HP'ಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ಆ ಕರೆಯಲ್ಲಿ, 'ನಿನಗೆ ಸಲ್ಲಬೇಕಾದ ಹಣ ತಲುಪುತ್ತದೆ, ನೀನು ತಕ್ಷಣವೇ ಯಾವುದಾದರೂ ಸುರಕ್ಷಿತ ಜಾಗ ನೋಡಿ ಅಡಗಿಕೋ' ಎಂದು ಎದುರಿನ ವ್ಯಕ್ತಿ ಹೇಳಿರುವ ಮಾತುಗಳು ರೆಕಾರ್ಡ್ ಆಗಿವೆ.&lt;/p&gt;&lt;p&gt;&lt;strong&gt;ಹೋಟೆಲ್ ಉದ್ಯಮಿಗೆ ಬೆದರಿಕೆ: &lt;/strong&gt;ಅಷ್ಟೇ ಅಲ್ಲದೆ, ಈ ಕೊಲೆಯ ಬಳಿಕ ಉಡುಪಿಯ ಪ್ರಮುಖ ಹೋಟೆಲ್ ಉದ್ಯಮಿಯೊಬ್ಬರಿಗೂ ಕರೆ ಹೋಗಿದ್ದು, 'ಮೇ ಹೆಚ್ ಪಿ ಬೋಲ್ ರಹಾ ಹೂಂ...' (ನಾನು ಹೇಮಂತ್ ಪೂಜಾರಿ ಮಾತನಾಡುತ್ತಿರುವುದು) ಎಂದು ಧಮಕಿ ಹಾಕಿರುವ ಮತ್ತೊಂದು ಆಡಿಯೋ ಕೂಡ ಪೊಲೀಸರ ಕೈಸೇರಿದೆ.&lt;/p&gt;&lt;p&gt;ಸದ್ಯ ಈ ಎರಡೂ ಆಡಿಯೋ ಧ್ವನಿಗಳು ನಿಜಕ್ಕೂ ಹೇಮಂತ್ ಪೂಜಾರಿಯದ್ದೇ ಅಥವಾ ಆತನ ಹೆಸರನ್ನು ಬಳಸಿ ಬೇರೆ ಯಾರಾದರೂ ಕೃತ್ಯ ಎಸಗುತ್ತಿದ್ದಾರೆಯೇ ಎಂಬ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ (FSL) ಮೂಲಕ ತನಿಖೆ ಚುರುಕುಗೊಂಡಿದೆ.&lt;/p&gt;&lt;h2&gt;&lt;strong&gt;ಯಾರೀತ ಹೇಮಂತ್ ಪೂಜಾರಿ (HP)?&lt;/strong&gt;&lt;/h2&gt;&lt;p&gt;ಕರಾವಳಿ ಮೂಲದ ಹೇಮಂತ್ ಪೂಜಾರಿ ಭೂಗತ ಜಗತ್ತಿಗೆ ಕಾಲಿಟ್ಟ ಕಥೆ ಸಿನಿಮಾ ಕಥೆಗಿಂತ ರೋಚಕವಾಗಿದೆ. ಮುಂಬೈನ ಘಾಟ್&zwnj;ಕೋಪರ್&zwnj;ನಲ್ಲಿರುವ ಹೋಟೆಲ್&zwnj;ವೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್ ಪೂಜಾರಿ, 1999ರಲ್ಲಿ ಮುಂಬೈ ಅಂಡರ್&zwnj;ವರ್ಲ್ಡ್&zwnj;ಗೆ ಪ್ರವೇಶ ಪಡೆದಿದ್ದ. ಅಲ್ಪಾವಧಿಯಲ್ಲೇ ಕುಖ್ಯಾತ ಗ್ಯಾಂಗ್&zwnj;ಸ್ಟರ್ ಛೋಟಾ ರಾಜನ್ ಆಪ್ತ ಬಳಗ ಸೇರಿದ ಆತ, ಗ್ಯಾಂಗ್&zwnj;ನ ಪ್ರಮುಖ 'ಶಾರ್ಪ್ ಶೂಟರ್' ಆಗಿ ಗುರುತಿಸಿಕೊಂಡ. ಮಾರ್ಚ್ 2011ರಲ್ಲಿ ಮುಂಬೈನ ಗೋರೆಗಾಂವ್&zwnj;ನಲ್ಲಿ 75 ವರ್ಷದ ಬೇಕರಿ ಮಾಲೀಕ ಅಂಗಾರ ಪೂಜಾರಿಯನ್ನು ಹಫ್ತಾ ವಸೂಲಿಗಾಗಿ ಭೀಕರವಾಗಿ ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಈತನ ಹೆಸರು ದೇಶಾದ್ಯಂತ ಸದ್ದು ಮಾಡಿತ್ತು.&lt;/p&gt;&lt;h2&gt;&lt;strong&gt;2013ರಲ್ಲಿ ಕಣ್ಮರೆ &ndash; 'ಸತ್ತಿದ್ದಾನೆ' ಎಂದೇ ಭಾವಿಸಲಾಗಿತ್ತು!&lt;/strong&gt;&lt;/h2&gt;&lt;p&gt;2011ರ ಬಳಿಕ ಯಾವುದೇ ಅಪರಾಧ ಕೃತ್ಯಗಳಲ್ಲಿ ಕಾಣಿಸಿಕೊಳ್ಳದೆ ಸೈಲೆಂಟ್ ಆಗಿದ್ದ ಹೇಮಂತ್ ಪೂಜಾರಿ, 2013ರಲ್ಲಿ ವಿದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಅಥವಾ ಹತ್ಯೆಯಾಗಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು. ಭಾರತೀಯ ತನಿಖಾ ಸಂಸ್ಥೆಗಳ ಕಣ್ಣಿಗೂ ಬೀಳದೆ ಆತ ಸಂಪೂರ್ಣ ಕಣ್ಮರೆಯಾಗಿದ್ದ. ಆದರೆ ಬರೋಬ್ಬರಿ 11 ವರ್ಷಗಳ ನಂತರ, ಉಡುಪಿಯ ಮುದರಂಗಡಿ ಶೂಟೌಟ್ ಮೂಲಕ 'HP' ಹೆಸರು ಮತ್ತೆ ಮುನ್ನೆಲೆಗೆ ಬಂದಿರುವುದು ಕರಾವಳಿ ಉದ್ಯಮಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಈ ಆಡಿಯೋದ ನೈಜತೆ ದೃಢಪಟ್ಟರೆ, ಭಾರತೀಯ ಭೂಗತ ಜಗತ್ತಿನ ಕರಾಳ ಇತಿಹಾಸದಲ್ಲಿ ಇದೊಂದು ಮತ್ತೊಂದು ದೊಡ್ಡ ತಿರುವು ಪಡೆಯಲಿದೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mumbai-underworld-gangster-hemant-poojary-hp-alive-udupi-mudarangadi-david-murder-audio/articleshow-u6t5xfq"/>
        </item>
        <item>
            <title><![CDATA[ಭಾರತೀಯ ರೈಲ್ವೆಯೊಂದಿಗೆ ಕೊಂಕಣ್‌ ರೈಲ್ವೆ ವಿಲೀನಕ್ಕೆ ವಿಘ್ನ: ಗೋವಾ ಒಪ್ಪಿಗೆ, ಮಹಾರಾಷ್ಟ್ರ, ಕರ್ನಾಟಕದಿಂದ ಕಂಡಿಷನ್!]]></title>
            <link>https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk</link>
            <guid isPermaLink="true">https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk</guid>
            <pubDate>Wed, 12 Aug 2026 23:02:40 +0530</pubDate>
            <description><![CDATA[&lt;p&gt;ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt3n5qcdeknrs04fxpwy231v,imgname-konkan-railway-1780386815373.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.12):&lt;/strong&gt; ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ರೈಲ್ವೆ ಜಾಲದ ಸಾಮರ್ಥ್ಯ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸಲು 'ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್' (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಈ ವಿಲೀನ ಪ್ರಕ್ರಿಯೆಗೆ ಪಾಲುದಾರ ರಾಜ್ಯಗಳಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ (ಆಗಸ್ಟ್ 12) ಲೋಕಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕೊಂಕಣ ರೈಲ್ವೆಯಲ್ಲಿ ಪಾಲುದಾರಿಕೆ ಹೊಂದಿರುವ ರಾಜ್ಯಗಳ ಪೈಕಿ ಗೋವಾ ಸರ್ಕಾರ ಮಾತ್ರವೇ ತನ್ನ ಶೇರುಗಳನ್ನು ಉಚಿತವಾಗಿ ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಲು ಸಮ್ಮತಿಸಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಆದರೆ, ಮಹಾರಾಷ್ಟ್ರ ಸರ್ಕಾರವು ತಾವು ಹೂಡಿಕೆ ಮಾಡಿರುವ ಬಂಡವಾಳವನ್ನು (Share Capital) ಮರಳಿಸುವಂತೆ ಪಟ್ಟು ಹಿಡಿದಿದ್ದರೆ, ಕರ್ನಾಟಕ ಸರ್ಕಾರವು ವಿವಿಧ ರೀತಿಯ ಎಕ್ಸಿಟ್ (ಹೊರನಡೆಯುವ) ಆಯ್ಕೆಗಳನ್ನು ನೀಡುವಂತೆ ಕೋರಿದೆ.&lt;/p&gt;&lt;h2&gt;&lt;strong&gt;ಕೊಂಕಣ ರೈಲ್ವೆಯ ಪಾಲುದಾರಿಕೆ ಮತ್ತು ಪ್ರಸ್ತುತ ಸ್ಥಿತಿ&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ತೋಕೂರ್&zwnj;ವರೆಗೆ ಮುಂಬೈ ಮತ್ತು ಮಂಗಳೂರನ್ನು ಸಂಪರ್ಕಿಸುವ 739 ಕಿಲೋಮೀಟರ್ ಉದ್ದದ ಕರಾವಳಿ ರೈಲು ಮಾರ್ಗದ ನಿರ್ಮಾಣಕ್ಕಾಗಿ 1990ರಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್&zwnj; ಅನ್ನು ಸ್ಥಾಪಿಸಲಾಯಿತು. ಪ್ರಸ್ತುತ ಈ ಸಂಸ್ಥೆಯಲ್ಲಿ ಐದು ಪ್ರಮುಖ ಪಾಲುದಾರರಿದ್ದಾರೆ. ರೈಲ್ವೆ ಸಚಿವಾಲಯ (ಕೇಂದ್ರ): ಶೇ. 66.79 ಪಾಲು ಹೊಂದಿದ್ದರೆ, ಮಹಾರಾಷ್ಟ್ರ ಸರ್ಕಾರ ಶೇ. 14.91, ಕರ್ನಾಟಕ ಸರ್ಕಾರ ಶೇ. 10.17, ಗೋವಾ ಸರ್ಕಾರ ಶೇ. 4.07 ಹಾಗೂ ಕೇರಳ ಸರ್ಕಾರ ಶೇ. 4.07 ಪಾಲು ಹೊಂದಿದೆ.&lt;/p&gt;&lt;p&gt;ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, &quot;ಕೊಂಕಣ ರೈಲ್ವೆಯ ಮೂಲಸೌಕರ್ಯಗಳಿಗೆ ಸುಮಾರು 30 ವರ್ಷಗಳಾಗಿದ್ದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೈಲುಗಳ ಸಂಚಾರ ಸಾಮರ್ಥ್ಯವನ್ನು ಹೆಚ್ಚಿಸಲು ಬೃಹತ್ ಪ್ರಮಾಣದ ಬಂಡವಾಳದ ಅಗತ್ಯವಿದೆ. ಸುರಂಗಗಳ ನವೀಕರಣ, ಹಳೆಯ ಆಸ್ತಿಗಳ ಬದಲಿ ವ್ಯವಸ್ಥೆ ಸೇರಿದಂತೆ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಹಣದ ಅಗತ್ಯವಿದೆ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಸಚಿವಾಲಯ ನೀಡಿದ ಪ್ರಸ್ತಾವನೆ ಏನು?&lt;/strong&gt;&lt;/h2&gt;&lt;p&gt;ಈ ಹಣಕಾಸಿನ ಅಗತ್ಯವನ್ನು ಪೂರೈಸಲು ರೈಲ್ವೆ ಸಚಿವಾಲಯವು ಎಲ್ಲ ಪಾಲುದಾರ ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ತಮಗೆ ಇರುವ ಶೇರುಗಳಿಗೆ ಅನುಗುಣವಾಗಿ ಅಗತ್ಯವಿರುವ ಬಂಡವಾಳ ವೆಚ್ಚವನ್ನು (Capex) ಭರಿಸುವುದು ಅಥವಾ ತಮ್ಮ ಶೇರುಗಳನ್ನು ಭಾರತೀಯ ರೈಲ್ವೆ ಸಚಿವಾಲಯಕ್ಕೆ ಬಿಟ್ಟುಕೊಡುವುದು. ಆದರೆ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ (Indian Railways) ಸಂಪೂರ್ಣವಾಗಿ ವಿಲೀನಗೊಳಿಸಬೇಕಾದರೆ, ಅದು ಶೇ. 100ರಷ್ಟು ಕೇಂದ್ರ ಸರ್ಕಾರದ ಮಾಲೀಕತ್ವದ ಸಂಸ್ಥೆಯಾಗುವುದು ಕಡ್ಡಾಯವಾಗಿದೆ. ಕಾನೂನಾತ್ಮಕ, ಕಾರ್ಪೊರೇಟ್ ಮತ್ತು ಆಡಳಿತಾತ್ಮಕ ಅನುಮೋದನೆಗಳೊಂದಿಗೆ ಪಾಲುದಾರ ಶೇರುದಾರರ ಒಪ್ಪಂದಕ್ಕೆ ಬದ್ಧವಾಗಿ ಈ ಪ್ರಕ್ರಿಯೆ ನಡೆಯಬೇಕಿದೆ.&lt;/p&gt;&lt;h2&gt;&lt;strong&gt;ಅಭಿವೃದ್ಧಿ ಕಾಮಗಾರಿಗಳ ಪ್ರಗತಿ&lt;/strong&gt;&lt;/h2&gt;&lt;p&gt;ಕೊಂಕಣ ರೈಲ್ವೆಯ 739 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೋಹಾ-ವೀರ್ ಹಾಗೂ ಮಡಗಾಂವ್-ಮಜೋರ್ಡಾ ನಡುವಿನ ಸುಮಾರು 55 ಕಿಲೋಮೀಟರ್ ಮಾರ್ಗದ ದ್ವಿಪಥ (Doubling) ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದಂತೆ ಸಾಮರ್ಥ್ಯ ಹೆಚ್ಚಿಸಲು ಗುರುತಿಸಲಾದ 263 ಕಿಲೋಮೀಟರ್ ಮಾರ್ಗವನ್ನು ದ್ವಿಪಥಗೊಳಿಸಲು ಅಗತ್ಯವಿರುವ ಸಾಧ್ಯತಾ ಸಮೀಕ್ಷೆಗೆ (Feasibility Survey) ಅನುಮೋದನೆ ನೀಡಲಾಗಿದೆ. ಅಲ್ಲದೆ, ಪ್ರಯಾಣಿಕರ ಸೌಲಭ್ಯಗಳು, ಆಸ್ತಿಗಳ ನವೀಕರಣ, ಸುರಕ್ಷತೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ KRCLನ ಮೂರನೇ ಆರ್ಥಿಕ ಪುನರ್ರಚನೆಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk"/>
        </item>
        <item>
            <title><![CDATA[ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾಂತರ! ಉಡುಪಿ ಕೃಷ್ಣ ಮಠದ 'ಅಷ್ಟಮಂಗಲ ಪ್ರಶ್ನೆ'ಯಲ್ಲಿ ಕಾಳಸರ್ಪ ದೋಷದ ಭವಿಷ್ಯ]]></title>
            <link>https://kannada.asianetnews.com/karnataka-districts/udupi-krishna-mutt-ashtamangala-prashne-kala-sarpa-yoga-world-disaster-warning-remedy-mantra-japa-sat/articleshow-wfyzce7</link>
            <guid isPermaLink="true">https://kannada.asianetnews.com/karnataka-districts/udupi-krishna-mutt-ashtamangala-prashne-kala-sarpa-yoga-world-disaster-warning-remedy-mantra-japa-sat/articleshow-wfyzce7</guid>
            <pubDate>Sat, 29 Aug 2026 13:06:40 +0530</pubDate>
            <description><![CDATA[ಉಡುಪಿ ಶ್ರೀ ಕೃಷ್ಣ ಮಠದ ಅಷ್ಟಮಂಗಲ ಪ್ರಶ್ನೆಯಲ್ಲಿ, ಕಾಳಸರ್ಪ ಯೋಗದಿಂದಾಗಿ ಡಿಸೆಂಬರ್ ಒಳಗೆ ಜಗತ್ತಿಗೆ ಭೀಕರ ಗಂಡಾಂತರ ಎದುರಾಗಲಿದೆ ಎಂಬ ದೈವಿಕ ಮುನ್ಸೂಚನೆ ವ್ಯಕ್ತವಾಗಿದೆ. ಈ ಜಾಗತಿಕ ಸಂಕಷ್ಟ ನಿವಾರಣೆಗಾಗಿ 18 ಕೋಟಿ ರಾಮ ಮಂತ್ರ ಹಾಗೂ 1 ಕೋಟಿ ಕೃಷ್ಣ ಮಂತ್ರ ಜಪ ಸೇರಿದಂತೆ ಬೃಹತ್ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1674xw2g2ym1xk03t61v1sc,imgname-udupi-sri-krishna-mutt-ashtamangala-prashne-1787988965250.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಆ.29): ಐ&lt;/strong&gt;ತಿಹಾಸಿಕ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚೆಗೆ ಮಠದ ಆಡಳಿತ ಮತ್ತು ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ನಡೆಸಲಾದ &lsquo;ಅಷ್ಟಮಂಗಲ ಪ್ರಶ್ನೆ&rsquo;ಯ (Ashtamangala Prashne) ಚಿಂತನೆಯಲ್ಲಿ ಇಡೀ ದೇಶ ಹಾಗೂ ಪ್ರಪಂಚಕ್ಕೇ ಕಾಳಸರ್ಪ ಯೋಗದ (Kala Sarpa Yoga) ಭೀಕರ ಗಂಡಾಂತರ ಕಾದಿದೆ ಎಂಬ ಆಘಾತಕಾರಿ ದೈವಿಕ ಮುನ್ಸೂಚನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಈ ಜಾಗತಿಕ ಸಂಕಷ್ಟ ನಿವಾರಣೆಗಾಗಿ ಉಡುಪಿ ಕೃಷ್ಣ ಮಠ ಸೇರಿದಂತೆ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಹಾಗೂ ಜಪ ಯಜ್ಞಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.&lt;/p&gt;&lt;h3&gt;&lt;strong&gt;ಡಿಸೆಂಬರ್ ಒಳಗೆ ಜಗತ್ತಿಗೆ ಆಪತ್ತು? ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡಿದ್ದೇನು?&lt;/strong&gt;&lt;/h3&gt;&lt;p&gt;ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಕೇತುಗಳ ಮಧ್ಯೆ ಉಳಿದ ಎಲ್ಲಾ ಗ್ರಹಗಳು ಬಂದಾಗ 'ಕಾಳಸರ್ಪ ಯೋಗ' ಸೃಷ್ಟಿಯಾಗುತ್ತದೆ. ಇದರ ದುಷ್ಪರಿಣಾಮ ಕೇವಲ ವ್ಯಕ್ತಿಗಳಿಗಷ್ಟೇ ಅಲ್ಲದೆ ಇಡೀ ಭೂಮಂಡಲಕ್ಕೆ ತಟ್ಟಲಿದೆ ಎಂದು ಪ್ರಶ್ನಾಚಿಂತನೆಯಲ್ಲಿ ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಪ್ರಾಕೃತಿಕ ವಿಕೋಪಗಳು: &lt;/strong&gt;ಸುನಾಮಿ, ಭೂಕಂಪ, ಅತಿವೃಷ್ಟಿ ಅಥವಾ ಭೀಕರ ಬರಗಾಲದಂತಹ ನೈಸರ್ಗಿಕ ದುರಂತಗಳ ಸಾಧ್ಯತೆ.&lt;/p&gt;&lt;p&gt;&lt;strong&gt;ಮಹಾಮಾರಿಗಳ ಭೀತಿ:&lt;/strong&gt; ಕರೋನಾದಂತಹ ಹೊಸ ಮಾದರಿಯ ಸಾಂಕ್ರಾಮಿಕ ರೋಗರುಜಿನಗಳು ಹರಡುವ ಆತಂಕ.&lt;/p&gt;&lt;p&gt;&lt;strong&gt;ರಾಜಕೀಯ &amp;amp; ಯುದ್ಧದ ಕಾರ್ಮೋಡ: &lt;/strong&gt;ಆಡಳಿತ ವ್ಯವಸ್ಥೆಗಳಲ್ಲಿ ಕ್ಷೋಭೆ, ದೇಶ-ವಿದೇಶಗಳಲ್ಲಿ ಆಂತರಿಕ ಗಲಭೆಗಳು ಹಾಗೂ ಉಕ್ರೇನ್ ಯುದ್ಧದಂತಹ ಪರಿಸ್ಥಿತಿಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ.&lt;/p&gt;&lt;p&gt;ಈ ಎಲ್ಲಾ ದುಷ್ಪರಿಣಾಮಗಳು ಮುಂದಿನ ಡಿಸೆಂಬರ್ ತಿಂಗಳ ಒಳಗಾಗಿಯೇ ಜಗತ್ತಿನ ಮೇಲೆ ಗೋಚರಿಸಲಿವೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;h2&gt;&lt;strong&gt;ದೋಷ ನಿವಾರಣೆಗೆ 18 ಕೋಟಿ ರಾಮ ಮಂತ್ರ, 1 ಕೋಟಿ ಕೃಷ್ಣ ಮಂತ್ರ ಜಪ!&lt;/strong&gt;&lt;/h2&gt;&lt;p&gt;ಲೋಕ ಕಲ್ಯಾಣಕ್ಕಾಗಿ ಹಾಗೂ ಸಂಭವನೀಯ ಗಂಡಾಂತರಗಳನ್ನು ತಡೆಯಲು ದೈವಜ್ಞರು ಸೂಚಿಸಿರುವ ಪರಿಹಾರಗಳನ್ನು ಉಡುಪಿ ಶ್ರೀಕೃಷ್ಣ ಮಠದ ದಿವಾಣರಾದ ಉದಯ ಸರಳತ್ತಾಯ ಅವರು ಹಂಚಿಕೊಂಡಿದ್ದಾರೆ:&lt;/p&gt;&lt;p&gt;18 ಕೋಟಿ &lsquo;ಶ್ರೀರಾಮ&rsquo; ಮಂತ್ರ ಜಪ&lt;/p&gt;&lt;p&gt;1 ಕೋಟಿ &lsquo;ಶ್ರೀಕೃಷ್ಣ&rsquo; ಮಂತ್ರ ಜಪ&lt;/p&gt;&lt;p&gt;1 ಲಕ್ಷ &lsquo;ವಿಷ್ಣು ಸಹಸ್ರನಾಮ&rsquo; ಪಾರಾಯಣ&lt;/p&gt;&lt;p&gt;ಈ ಜಪಾನುಷ್ಠಾನಗಳನ್ನು ಕೇವಲ ಮಠದ ಪುರೋಹಿತರಷ್ಟೇ ಅಲ್ಲದೆ, ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಭಕ್ತರು ತಮ್ಮ ಮನೆಗಳಲ್ಲೇ ಕುಳಿತು ಸಾಮೂಹಿಕವಾಗಿ ಜಪಿಸಬೇಕೆಂದು ಕರೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಅಷ್ಟಮಿ ಮುಗಿದ ಬೆನ್ನಲ್ಲೇ ಕೃಷ್ಣ ಮಠದಲ್ಲಿ ಮಹಾಪೂಜೆ:&lt;/strong&gt;&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಪರ್ಯಾಯ ಶ್ರೀ ಪುತ್ತಿಗೆ/ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ, 'ಶ್ರೀಕೃಷ್ಣ ಜನ್ಮಾಷ್ಟಮಿ ಮುಗಿದ ತಕ್ಷಣವೇ ಕೃಷ್ಣ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ತುಳಸಿ ಅರ್ಚನೆ, ಕೃಷ್ಣ ಮಂತ್ರ ಪಠಣ ಹಾಗೂ ಹೋಮ-ಹವನಾದಿ ಪ್ರಾಯಶ್ಚಿತ್ತ ಧಾರ್ಮಿಕ ಕಾರ್ಯಗಳನ್ನು ಅತ್ಯಂತ ಶೀಘ್ರವಾಗಿ ಆರಂಭಿಸಲಾಗುವುದು' ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/udupi-krishna-mutt-ashtamangala-prashne-kala-sarpa-yoga-world-disaster-warning-remedy-mantra-japa-sat/articleshow-wfyzce7"/>
        </item>
    </channel>
</rss>
