<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 06 Aug 2026 05:47:45 +0530</lastBuildDate>
        <atom:link href="https://kannada.asianetnews.com/rss/udupi" rel="self" type="application/rss+xml"/>
        <item>
            <title><![CDATA[Udupi Mutt: ಉಡುಪಿ ಶ್ರೀ ಕೃಷ್ಣನ ಮಠದಲ್ಲಿ ಶ್ರೀ ಶಂಕಾರಾಚಾರ್ಯರ ನಿಂದನೆ; ಕ್ಷಮೆ ಕೇಳಿದ ಮಹಿಳೆ]]></title>
            <link>https://kannada.asianetnews.com/karnataka-districts/udupi-sri-krishna-mutt-shri-shankaracharya-controversy-women-apology/articleshow-0kh3eve</link>
            <guid isPermaLink="true">https://kannada.asianetnews.com/karnataka-districts/udupi-sri-krishna-mutt-shri-shankaracharya-controversy-women-apology/articleshow-0kh3eve</guid>
            <pubDate>Tue, 14 Jul 2026 16:02:52 +0530</pubDate>
            <description><![CDATA[&lt;p&gt;Shankaracharya controversy In Udupi Mutt: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಆಚಾರ್ಯ ಶಂಕರರ ನಿಂದನೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಬಗ್ಗೆ ಹರಿಕಥೆ ನಡೆಸಿದ ಮಹಿಳೆ ಕ್ಷಮೆ ಕೇಳಿದ್ದು, ಮಠವೂ ಕೂಡ ಸ್ಪಷ್ಟನೆ ನೀಡಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxg2y1r3fdevsf62xb943cwz,imgname-new-project--32--1784025122563.jpg" type="image/jpeg" height="390" width="690"/>
            <content:encoded><![CDATA[&lt;p&gt;Shankaracharya controversy In Udupi Mutt: ಉಡುಪಿ ಮಠದಲ್ಲಿ ಹರಿಕಥೆ ನಡೆದಿದೆ. ಹರಿಕಥೆ ನಡೆಸುವ ವೇಳೆ ಯುವತಿಯರಿಂದ ಶಂಕರಾಚಾರ್ಯರ ಅವಹೇಳನ ಮಾಡಲಾಗಿದೆ. ಸೋಶಿಯಲ್&zwnj; ಮೀಡಿಯಾದಲ್ಲಿ ಈ ವಿಡಿಯೋ ವೈರಲ್&zwnj; ಆಗಿದೆ. ಆಚಾರ್ಯ ಮಧ್ವರ ಕಥೆ ಹೇಳುವ ಸಂದರ್ಭದಲ್ಲಿ, ಶಂಕರಾಚಾರ್ಯರ ಅವಹೇಳನ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿದೆ. ಈಗ ಮಠದವರು, ಆ ಯುವತಿ ಕೂಡ ಕ್ಷಮೆ ಕೇಳಿದ್ದಾರೆ.&lt;/p&gt;&lt;p&gt;ಏಕವಚನದಲ್ಲಿ ಆಚಾರ್ಯ ಶಂಕರರನ್ನು ಉಲ್ಲೇಖಿಸಿ ಮಾತು ಆಡಲಾಗಿದೆ. ಕಟ್ಟುಕಥೆಗಳನ್ನು ಪ್ರಸ್ತಾಪಿಸಿ ಶಂಕರಾಚಾರ್ಯರ ಬಗ್ಗೆ ಕೀಳು ಮಾತನಾಡಿರುವುದಾಗಿ ಆರೋಪ ಹೊರಿಸಲಾಗಿತ್ತು.&lt;/p&gt;&lt;p&gt;ಬೆಳಗಾವಿಯಿಂದ ಬಂದ ಯುವತಿಯರ ತಂಡದ ಧಾರ್ಮಿಕ ಕಾರ್ಯಕ್ರಮ ನೀಡಿದೆ. ಉಡುಪಿಯ ರಾಜಾಂಗಣ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಹೇಳನ ಮಾಡಲಾಗಿದೆ. ಸೋಶಿಯಲ್&zwnj; ಮೀಡಿಯಾದಲ್ಲಿ ಆಚಾರ್ಯ ಶಂಕರರ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದರು, ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದು, ಇಲ್ಲವಾದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು.&lt;/p&gt;&lt;h2&gt;ಆ ಹುಡುಗಿ ಹರಿಕಥೆಯಲ್ಲಿ ಏನು ಹೇಳಿತ್ತು?&lt;/h2&gt;&lt;p&gt;&ldquo;ಹಿಂದೆ ಭೀಮಸೇನನಿಂದ ಪರಾಜಿತರಾದ ದೈತ್ಯರು ಕಲಿಯುಗದಲ್ಲಿ ತಮ್ಮ ಸ್ವಭಾವಕ್ಕೆ ತಕ್ಕಂತೆ ಭಗವಂತನು ನಿರ್ಗುಣನೆಂದು ಪ್ರತಿಪಾದಿಸಲು ಹುಟ್ಟಿ ಬರುತ್ತಾರೆ. ಮಣಿಮಂತ ಎಂಬ ದೈತ್ಯನು ರುದ್ರದೇವರ ವರ ಪಡೆದು ಕಲಾಡಿ ಗ್ರಾಮದಲ್ಲಿ ಶಂಕರ ಎಂಬ ಹೆಸರಿನಿಂದ ಜನಿಸುತ್ತಾನೆ. ವೇದವ್ಯಾಸರಿಗೆ ವಿರುದ್ಧವಾದ ದುಶ್ಶಾಸ್ತ್ರಗಳನ್ನು ರಚಿಸಿ, ಜಗತ್ತು ಮಿಥ್ಯ, ಜೀವ-ಬ್ರಹ್ಮರಿಗೆ ಭೇದವಿಲ್ಲ ಎಂದು ಪ್ರತಿಪಾದಿಸಿ ಸಜ್ಜನರ ಮನಸ್ಸನ್ನು ಕೆಡಿಸುತ್ತಾನೆ. ಆಗ ದೇವತೆಗಳು ಮುಕುಂದನನ್ನು ಪ್ರಾರ್ಥಿಸಿದಾಗ, ಭಗವಂತನು ತನ್ನ ಪುತ್ರನಾದ ಹನುಮಂತನನ್ನು ಮಧ್ವಾಚಾರ್ಯರನ್ನಾಗಿ ಕಲಿಯುಗಕ್ಕೆ ಕಳುಹಿಸಿಕೊಡುತ್ತಾನೆ&quot; ಎಂದು ಹರಿಕಥೆಯಲ್ಲಿ ಹೇಳಿದ್ದರು.&lt;/p&gt;&lt;p&gt;ಈ ಕಥಾ ಪ್ರಸಂಗದ ನಿರೂಪಣೆಯಲ್ಲಿ ಶಂಕರಾಚಾರ್ಯರನ್ನು ನಿಂದಿಸಿದ ರೀತಿ ಇಡೀ ಹಿಂದೂ ಸಮಾಜದ ಹಾಗೂ ಶಂಕರ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ಉಂಟುಮಾಡಿತ್ತು&lt;/p&gt;&lt;h2&gt;ಕಲಾವಿದೆಯಿಂದ ಕ್ಷಮೆಯಾಚನೆ&lt;/h2&gt;&lt;p&gt;&ldquo;ಯಾರನ್ನು ನಿಂದನೆ ಮಾಡುವ ಉದ್ದೇಶ ನಮಗೆ ಇರಲಿಲ್ಲ. ಮಧ್ವ ಮಠದವರೂ ನಮಗೆ ಇದನ್ನು ಹೇಳಿಕೊಟ್ಟಿಲ್ಲ. ಪುಸ್ತಕವನ್ನು ರೆಫರ್ ಮಾಡಿ ನಾವು ಓದಿದೆವು, ನಮ್ಮಿಂದ ಬೇರೆ ಮತದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ. ಉಡುಪಿ ಮಠ ಅಥವಾ ಶಿರೂರು ಮಠಕ್ಕೂ ನಮ್ಮ ಮಾತಿಗೂ ಸಂಬಂಧವಿಲ್ಲ. ನಮ್ಮಿಂದ ಮಠದವರಿಗೆ ತೊಂದರೆಯಾಗಿದ್ದರೆ ನಾವು ಕ್ಷಮೆಯನ್ನು ಕೇಳುತ್ತೇವೆ. ಶ್ರೀ ಶಂಕರಾಚಾರ್ಯರನ್ನು ಏಕವಚನದಲ್ಲಿ, ಮಾನಹಾನಿಯಾಗುವಂತೆ ಮಾತನಾಡಿದ್ದ ಕಲಾವಿದೆ ವಿಡಿಯೋ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ.&lt;/p&gt;&lt;h2&gt;ಮಠದವರು ಏನು ಹೇಳಿದರು?&lt;/h2&gt;&lt;p&gt;ಅಂದಹಾಗೆ ಪರ್ಯಾಯ ಶಿರೂರು ಮಠದಿಂದಲೂ ಸ್ಪಷ್ಟೀಕರಣ ನೀಡಿದೆ. &ldquo;ಮಠದ ಸುಪರ್ದಿಗೊಳಪಟ್ಟ ರಾಜಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ. ಅಂಕಿತಾ ನಾಯಕ್ ಮತ್ತು ಗೌರಿ ಪಾಂಡುರಂಗಿ ಎನ್ನುವರು ಭರತನಾಟ್ಯಕ್ಕಾಗಿ ಅನುಮತಿ ಕೇಳಿದ್ದರು. ಕಾರ್ಯಕ್ರಮದ ನಡುವೆ ಭಕ್ತ ಪ್ರಹ್ಲಾದ ಎಂಬ ಹರಿಕಥೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಇಬ್ಬರೂ ಕೂಡ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದು ಸೂಚಿಸಿದ್ದೇವೆ. ಈ ಅನಪೇಕ್ಷಿತ ಘಟನೆಯ ಬಗ್ಗೆ ಮಠ ವಿಷಾದಿಸುತ್ತದೆ&rdquo; ಎಂದು ಶಿರೂರು ಮಠದ ದಿವಾನರಾದ ಡಾ.ಉದಯಕುಮಾರ ಸರಳತಾಯ ಅವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Padmashree Bhat</dc:creator>
            <atom:link href="https://kannada.asianetnews.com/karnataka-districts/udupi-sri-krishna-mutt-shri-shankaracharya-controversy-women-apology/articleshow-0kh3eve"/>
        </item>
        <item>
            <title><![CDATA[ಉಡುಪಿ:ಹೌಸ್ ಕೀಪಿಂಗ್ ಮಗಳು, ಕನ್ನಡ ಶಾಲೆಯ ಹಳ್ಳಿ ಪ್ರತಿಭೆ ಸ್ಪೂರ್ತಿ ಶೆಟ್ಟಿ'ಮಿಸ್ ಯೂನಿವರ್ಸ್ ಇಂಡಿಯಾ' ಫೈನಲಿಸ್ಟ್!]]></title>
            <link>https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg</link>
            <guid isPermaLink="true">https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg</guid>
            <pubDate>Thu, 16 Jul 2026 15:54:06 +0530</pubDate>
            <description><![CDATA[&lt;p&gt;ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxn67nng7gegp1x7vcxtdnh4,imgname-spoorthi-shetty-miss-universe-india-finalist--4--1784196355760.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.&lt;/p&gt;&lt;img&gt;&lt;p&gt;ಉಡುಪಿ: ಕರಾವಳಿಯ ಪ್ರತಿಭೆಗಳು ಕೇವಲ ಶಿಕ್ಷಣ, ಕ್ರೀಡೆಯಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೂ ತಮ್ಮ ಛಾಪು ಮೂಡಿಸಬಲ್ಲರು ಎಂಬುದನ್ನು ಉಡುಪಿಯ ಬೆಡಗಿ ಸ್ಪೂರ್ತಿ ಶೆಟ್ಟಿ ಸಾಬೀತುಪಡಿಸಿದ್ದಾರೆ. ಉಡುಪಿಯಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಕುಟುಂಬದ ಹೆಣ್ಣುಮಗಳು ಸ್ಪೂರ್ತಿ ಶೆಟ್ಟಿ, ಇದೀಗ ಪ್ರತಿಷ್ಠಿತ 'ಮಿಸ್ ಯೂನಿವರ್ಸ್ ಇಂಡಿಯಾ' (Miss Universe India) ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆ ಮತ್ತು ರಾಜ್ಯವೇ ಹೆಮ್ಮೆಪಡುವಂತೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸ್ಪೂರ್ತಿ ಶೆಟ್ಟಿ ಅವರ ಈ ಸಾಧನೆಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅತ್ಯಂತ ಸಾಮಾನ್ಯ ಮತ್ತು ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಚೆಲುವೆ ಇವರು. ಇವರ ತಾಯಿ ಮಣಿಪಾಲ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ (ಸ್ವಚ್ಛತಾ ಸಿಬ್ಬಂದಿ) ಆಗಿ ಕೆಲಸ ಮಾಡುತ್ತಾ ಮಗಳ ಕನಸುಗಳಿಗೆ ಆಸರೆಯಾಗಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದ ಸ್ಪೂರ್ತಿ, ಉಡುಪಿಯಲ್ಲೇ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬಳಿಕ ಉನ್ನತ ವ್ಯಾಸಂಗದಲ್ಲಿ ಎಂಬಿಎ (MBA) ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡುತ್ತಿರುವ ಇವರು, ತಮ್ಮ ಕೆಲಸದ ಜೊತೆಜೊತೆಗೇ ಮಾಡಲಿಂಗ್ ಕ್ಷೇತ್ರವನ್ನು ಹವ್ಯಾಸವಾಗಿ ಆರಂಭಿಸಿದ್ದರು.&lt;/p&gt;&lt;img&gt;&lt;p&gt;ಮಿಸ್ ಯೂನಿವರ್ಸ್ ವೇದಿಕೆ ತಲುಪುವ ಮುನ್ನ ಸ್ಪೂರ್ತಿ ಆರಂಭದಲ್ಲಿ ತೀವ್ರ ನಿರಾಶೆ ಎದುರಿಸಬೇಕಾಗಿ ಬಂದಿತ್ತು. ಮಿಸ್ ಯೂನಿವರ್ಸ್ ಸ್ಪರ್ಧೆಯ ಕರ್ನಾಟಕ ವಿಭಾಗದ ಪ್ರಾದೇಶಿಕ ಸುತ್ತಿನಲ್ಲಿ ಸ್ಪರ್ಧಿಸಿದ್ದ ಇವರು ಜಯಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಅವರಲ್ಲಿದ್ದ ಪ್ರತಿಭೆ, ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಗುರುತಿಸಿದ ತೀರ್ಪುಗಾರರು ಇವರಿಗೆ 'ವೈಲ್ಡ್ ಕಾರ್ಡ್ ಎಂಟ್ರಿ' (Wild Card Entry) ನೀಡಿದ್ದಾರೆ. ಈ ಮೂಲಕ ಸೋಲನ್ನು ಮೆಟ್ಟಿ ನಿಂತು ನೇರವಾಗಿ ರಾಷ್ಟ್ರೀಯ ಮಟ್ಟದ ಅಂತಿಮ ಸುತ್ತಿಗೆ ಲಗ್ಗೆ ಇಡುವಲ್ಲಿ ಸ್ಪೂರ್ತಿ ಯಶಸ್ವಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಆಗಸ್ಟ್ 23ರಂದು ನವದೆಹಲಿಯಲ್ಲಿ ಮಹಾ ಫೈನಲ್ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿ ಬಂದಿರುವ ಅತ್ಯಂತ ಪ್ರತಿಭಾವಂತ 50 ಸುಂದರಿಯರೊಂದಿಗೆ ಉಡುಪಿಯ ಸ್ಪೂರ್ತಿ ಶೆಟ್ಟಿ ಅಂತಿಮ ಸುತ್ತಿನಲ್ಲಿ ಪೈಪೋಟಿ ನಡೆಸಲಿದ್ದಾರೆ. ಈ ಬಹುನಿರೀಕ್ಷಿತ 'ಮಿಸ್ ಯೂನಿವರ್ಸ್ ಇಂಡಿಯಾ'ದ ಗ್ರ್ಯಾಂಡ್ ಫಿನಾಲೆ (Grand Finale) ಇದೇ ಆಗಸ್ಟ್ 23ರಂದು ನವದೆಹಲಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ.&lt;/p&gt;&lt;img&gt;&lt;p&gt;ಕನ್ನಡ ಮಾಧ್ಯಮದಲ್ಲಿ ಓದಿ, ಕಷ್ಟದ ಪರಿಸ್ಥಿತಿಯಲ್ಲೂ ಕಾರ್ಪೊರೇಟ್ ಉದ್ಯೋಗದ ಜೊತೆಗೆ ಗ್ಲಾಮರ್ ಲೋಕದಲ್ಲೂ ಸಾಧನೆ ಮಾಡಿರುವ ಸ್ಪೂರ್ತಿ ಶೆಟ್ಟಿ ಅವರ ಈ ಯಶೋಗಾಥೆ ಇಂದು ಸಹಸ್ರಾರು ಗ್ರಾಮೀಣ ಭಾಗದ ಯುವತಿಯರಿಗೆ ದೊಡ್ಡ ಪ್ರೇರಣೆಯಾಗಿದೆ. ನವದೆಹಲಿಯ ಅಂತಿಮ ಜಿದ್ದಾಜಿದ್ದಿನಲ್ಲಿ ಗೆದ್ದು ಉಡುಪಿಯ ಈ ಮಗಳು ವಿಶ್ವ ಸುಂದರಿ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವಂತಾಗಲಿ ಎಂಬುದು ಕನ್ನಡಿಗರ ಆಶಯವಾಗಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/house-keeping-staff-daughter-udupi-spoorthi-shetty-kannada-medium-school-to-miss-universe-india-grand-finale-stage-gdp-1u0qbwg"/>
        </item>
        <item>
            <title><![CDATA[ಭಾರೀ ಮಳೆ ಮುನ್ಸೂಚನೆ: ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ!]]></title>
            <link>https://kannada.asianetnews.com/karnataka-districts/dakshina-kannada-heavy-rain-school-college-holiday-august-4-san/articleshow-3px7yr6</link>
            <guid isPermaLink="true">https://kannada.asianetnews.com/karnataka-districts/dakshina-kannada-heavy-rain-school-college-holiday-august-4-san/articleshow-3px7yr6</guid>
            <pubDate>Mon, 03 Aug 2026 21:51:57 +0530</pubDate>
            <description><![CDATA[&lt;p&gt;ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 4 ರಂದು ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvhwrse23v1n9479bcp3xbjf,imgname-rains-1781938283970.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಆ.3): &lt;/strong&gt;ದಕ್ಷಿಣ ಕನ್ನಡ &amp;nbsp;ಹಾಗೂ ಉಡುಪಿ ಜಿಲ್ಲೆಯಾದ್ಯಂತ ನಾಳೆ (ಆಗಸ್ಟ್ 4) ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಾಲೂಕುವಾರು ರಜೆಯನ್ನು ಹಂಚಿಕೆ ಮಾಡಲಾಗಿದ್ದು, ಮಂಗಳೂರು ಮತ್ತು ಪುತ್ತೂರು ಉಪವಿಭಾಗಗಳಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗಲಿವೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ಎಷ್ಟು ರಜೆ? ಸಂಪೂರ್ಣ ವಿವರ ಇಲ್ಲಿದೆ&lt;/strong&gt;&lt;/h2&gt;&lt;p&gt;ಮಂಗಳೂರು ಉಪವಿಭಾಗ: ಮಂಗಳೂರು, ಉಳ್ಳಾಲ, ಮೂಡಬಿದಿರೆ, ಬಂಟ್ವಾಳ ಹಾಗೂ ಮುಲ್ಕಿ ತಾಲೂಕುಗಳಲ್ಲಿ ಅಂಗನವಾಡಿಯಿಂದ ಪ್ರೌಢಶಾಲೆ (ಹೈಸ್ಕೂಲ್) ವರೆಗೆ ಮಾತ್ರ ರಜೆ ನೀಡಲಾಗಿದೆ. (ಪದವಿಪೂರ್ವ ಕಾಲೇಜುಗಳಿಗೆ ರಜೆ ಇರುವುದಿಲ್ಲ).&lt;/p&gt;&lt;p&gt;ಪುತ್ತೂರು ಉಪವಿಭಾಗ: ಪುತ್ತೂರು, ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಮಳೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಂಗನವಾಡಿಯಿಂದ ಹಿಡಿದು ಪಿಯುಸಿವರೆಗೂ ಸಂಪೂರ್ಣ ರಜೆ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಡಿಸಿ ದರ್ಶನ್ ಎಚ್.ವಿ. ಆದೇಶ&lt;/strong&gt;&lt;/h2&gt;&lt;p&gt;ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಾಗದಂತೆ ತಡೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ನದಿ, ತೊರೆ ಹಾಗೂ ತಗ್ಗು ಪ್ರದೇಶಗಳಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.&lt;/p&gt;&lt;h2&gt;&lt;strong&gt;ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ&lt;/strong&gt;&lt;/h2&gt;&lt;p&gt;ಮಂಗಳವಾರ ವ್ಯಾಪಕ ಮಳೆ ಸಾಧ್ಯತೆ ಇರುವ ಹಿನ್ನಲೆಯಲ್ಲಿ, &amp;nbsp;ಉಡುಪಿ ಜಿಲ್ಲೆಯ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/dakshina-kannada-heavy-rain-school-college-holiday-august-4-san/articleshow-3px7yr6"/>
        </item>
        <item>
            <title><![CDATA[ಅಮೆರಿಕ ಯುವತಿ, ಸುಳ್ಯ ಯುವಕ.. ಇಬ್ಬರನ್ನೂ ಒಂದಾಗಿಸಿತು ಉಡುಪಿ ಶ್ರೀಕೃಷ್ಣನ ಮೇಲಿನ ಭಕ್ತಿ!]]></title>
            <link>https://kannada.asianetnews.com/karnataka-districts/american-woman-marries-sullia-man-after-udupi-krishna-devotion-rav/articleshow-4fqgzm8</link>
            <guid isPermaLink="true">https://kannada.asianetnews.com/karnataka-districts/american-woman-marries-sullia-man-after-udupi-krishna-devotion-rav/articleshow-4fqgzm8</guid>
            <pubDate>Fri, 17 Jul 2026 08:01:37 +0530</pubDate>
            <description><![CDATA[&lt;p&gt;ಅವರಿಬ್ಬರೂ ಕೃಷ್ಣ ಭಕ್ತರು. ಯುವಕ ಭಾರತೀಯ. ಯುವತಿ ಅಮೆರಿಕದವರು. ಪಶ್ಚಿಮ ಬಂಗಾಳದ ಮಾಯಾಪುರದಲ್ಲಿದ್ದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.&zwnj;&zwnj; ಈಗ ಮದುವೆಯೂ ಆಯಿತು. ಯಾರು ಆ ಯುವ ಜೋಡಿ? ಪ್ರೀತಿ ಹುಟ್ಟಿದ್ದು ಹೇಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxpy6btbxg6ef51mtdwpw0hn,imgname-----------------------2026-07-17t074226.825-1784255033163.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಬ್ಬರನ್ನೂ ಒಂದಾಗಿಸಿದ ಶ್ರೀ ಕೃಷ್ಣನ ಮೇಲಿನ ಭಕ್ತಿ&lt;/p&gt;&lt;p&gt;&lt;strong&gt;ಸುಳ್ಯ (ಜು.17): &lt;/strong&gt;ಅವರಿಬ್ಬರೂ ಕೃಷ್ಣ ಭಕ್ತರು. ಯುವಕ ಭಾರತೀಯ. ಯುವತಿ ಅಮೆರಿಕದವರು. ಪಶ್ಚಿಮ ಬಂಗಾಳದ ಮಾಯಾಪುರದಲ್ಲಿದ್ದ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.&zwnj;&zwnj; ಈಗ ಮದುವೆಯೂ ಆಯಿತು.&lt;/p&gt;&lt;p&gt;ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸಾಯಿ ಸಂಕೇತ್&zwnj; ವಿವಾಹ ಅಮೆರಿಕದ ಷಿಕಾಗೋ ನಗರದ ಡಾ। ಚಾರ್ಲ್ಸ್ ಅವರ ಪುತ್ರಿ ಶಾನೋನ್ ಜೊತೆಗೆ ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು.&lt;/p&gt;&lt;p&gt;ಸಾಯಿ ಸಂಕೇತ್&zwnj; ಮಡಿಕೇರಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದು ಚೆನ್ನೈಯಲ್ಲಿ ಐಐಟಿ ಅಧ್ಯಯನ ನಡೆಸಿದ್ದರು. ಬಳಿಕ ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಬಳಿಕ ಪಶ್ಚಿಮ ಬಂಗಾಲದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ನಿರ್ವಹಿಸುತ್ತಿದ್ದರು. ಶಾನೋನ್ ಅಮೆರಿಕದಲ್ಲಿ ಶಿಕ್ಷಣ ಪೂರೈಸಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಮೆಚ್ಚಿ ಇಲ್ಲಿಗೆ ಬಂದು ಆನ್&zwnj;ಲೈನ್&zwnj; ವೃತ್ತಿ ನಿರ್ವಹಿಸುತ್ತಿದ್ದರು.&lt;/p&gt;&lt;h2&gt;ಪ್ರೀತಿ ಹುಟ್ಟಿದ್ದೇಗೆ?&lt;/h2&gt;&lt;p&gt;ಸಂಕೇತ್&zwnj; ಉದ್ಯಮ ಮಳಿಗೆಗೆ ಶಾರೋನ್ ಭೇಟಿ ನೀಡುತ್ತಿದ್ದಾಗ ಪರಸ್ಪರ ಪರಿಚಯವಾಯಿತು. ಪರಿಚಯ ಪ್ರೀತಿಯಾಗಿ ಅಂಕುರಿಸಿತು. ಆಧ್ಯಾತ್ಮಿಕ ಆಸಕ್ತಿ ಮತ್ತು ಕೃಷ್ಣ ಭಕ್ತಿ ಇಬ್ಬರನ್ನೂ ಒಂದುಗೂಡಿಸಿತು.&lt;/p&gt;&lt;p&gt;ಎರಡು ವರ್ಷದ ಬಳಿಕ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಇಬ್ಬರ ಮನೆಯವರಿಂದಲೂ ಅಡ್ಡಿ ಬಾರಲಿಲ್ಲ. ಆಷಾಢ ಮಾಸ ಬರುತ್ತಿರುವುದರಿಂದ ಶೀಘ್ರ ಮದುವೆ ಆಗುವ ನಿರ್ಧಾರಕ್ಕೆ ಬಂದ ಹಿನ್ನೆಲೆಯಲ್ಲಿ ಶಾನೋನ್ ಮನೆಯವರಿಗೆ ವಿವಾಹದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಂಪಾಜೆ ದೇವಸ್ಥಾನದಲ್ಲಿ ಕುಟುಂಬ ಬಂಧುಗಳ ಉಪಸ್ಥಿತಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿತು. ಶಾನೋನ್ ಅವರಿಗೆ ಅಲ್ಪಸ್ವಲ್ಪ ಕನ್ನಡ ಬರುತ್ತದೆ. ಇಲ್ಲಿಯ ಆಹಾರ ಪದ್ಧತಿ ಅವರಿಗೆ ತುಂಬ ಇಷ್ಟವಂತೆ.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/american-woman-marries-sullia-man-after-udupi-krishna-devotion-rav/articleshow-4fqgzm8"/>
        </item>
        <item>
            <title><![CDATA[ಮಂಗಳೂರು-ಬೆಂಗಳೂರು ರೈಲ್ವೆ ಸಂಚಾರ ರದ್ದು, ಪೊಲೀಸ್‌ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳು, ಮತ್ತೆ ರೈಲು ಆರಂಭ ಯಾವಾಗ?]]></title>
            <link>https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu</link>
            <guid isPermaLink="true">https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu</guid>
            <pubDate>Mon, 03 Aug 2026 11:05:23 +0530</pubDate>
            <description><![CDATA[&lt;p&gt;ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಕಲೇಶಪುರ ಸಮೀಪದ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿ, ಬದಲಿ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ರೈಲ್ವೆ ಇಲಾಖೆ ಹಳಿ ದುರಸ್ತಿ ಕಾರ್ಯ ಕೈಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz31cs273a27mdbahsh3pqps,imgname-mangaluru-bengaluru-trains--1--1785734784068.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಟ್ಟಗಳ ಇಳಿಜಾರು ಭಾಗಗಳಲ್ಲಿ ಮಣ್ಣು ಸಡಿಲಗೊಂಡ ಪರಿಣಾಮ ಈ ಭೂಕುಸಿತ ಸಂಭವಿಸುತ್ತಿದೆ. ಸಕಲೇಶಪುರ ಸಮೀಪ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ಶನಿವಾರ ರಾತ್ರಿ ರಾತ್ರಿ 9 ಗಂಟೆಗೆ ಮಣ್ಣು ಕುಸಿದಿದ್ದು, ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾಝಿಕ್ಕೋಡ್&zwnj;- ಬೆಂಗಳೂರು ರೈಲನ್ನು ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಿಂದ ವಾಪಸ್&zwnj; ಕಳುಹಿಸಲಾದರೆ, ಮಂಗಳೂರಿಗೆ ತೆರಳುತ್ತಿದ್ದ ಕಾರವಾರ ಎಕ್ಸ್&zwnj;ಪ್ರೆಸ್&zwnj; ರೈಲನ್ನು ಹಾಸನ ರೈಲ್ವೆ ನಿಲ್ದಾಣದಿಂದ ಬದಲಿ ಮಾರ್ಗದಲ್ಲಿ ಕಳುಹಿಸಿಕೊಡಲಾಯಿತು. ಭೂಕುಸಿತದಿಂದ ಈ ಮಾರ್ಗದಲ್ಲಿ ಸಂಚರಿಸುವ ಏಳು ರೈಲುಗಳ ಸಂಚಾರವನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆ ಅಧಿಕಾರಿಗಳು ಮೈಸೂರಿನಿಂದ ಇನ್ನೂರಕ್ಕೂ ಅಧಿಕ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿ ಮಧ್ಯರಾತ್ರಿಯಿಂದಲೆ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ ಘಟನಾ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಸಮರೋಪಾಧಿ ಕಾರ್ಯಚರಣೆಗೆ ಅಡ್ಡಿಯಾಗಿದೆ.&lt;/p&gt;&lt;h2&gt;ಸಂಚಾರ ಪುನರಾರಂಭಕ್ಕೆ ಸಮಯ ಬೇಕು:&lt;/h2&gt;&lt;p&gt;ಹಳಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಾಂತ್ರಿಕ ತಂಡ ದೃಢಪಡಿಸಿದ ಬಳಿಕವೇ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸಲು ಉದ್ದೇಶಿಸಿರುವ ಪ್ರಯಾಣಿಕರು ರೈಲುಗಳ ಸ್ಥಿತಿಗತಿ ಕುರಿತು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿಕೊಂಡು ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಮಲೆನಾಡಿನಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆ ಪಶ್ಚಿಮ ಘಟ್ಟ ಪ್ರದೇಶದ ರೈಲ್ವೆ ಮಾರ್ಗಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.&lt;/p&gt;&lt;h2&gt;ತಪ್ಪಿದ ಬಾರೀ ಅನಾಹುತ&lt;/h2&gt;&lt;p&gt;ರೈಲು ಸಂಚಾರ ಆರಂಭಕ್ಕೂ ಮುನ್ನವೇ ಹಳಿ ಮೇಲೆ ಮಣ್ಣು ಕುಸಿದಿರುವುದು ಪತ್ತೆಯಾಗಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸುರಕ್ಷತಾ ದೃಷ್ಟಿಯಿಂದ ರೈಲ್ವೆ ಅಧಿಕಾರಿಗಳು ತಕ್ಷಣವೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ತಡೆದು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿದರು. ಭೂಕುಸಿತದ ಪರಿಣಾಮ ಬೆಂಗಳೂರು- ಮುರುಡೇಶ್ವರ, ಬೆಂಗಳೂರು- ಕೋಝಿಕೋಡ್ ಹಾಗೂ ವಿಜಯಪುರ- ಮಂಗಳೂರು ರೈಲುಗಳನ್ನು ಹಾಸನ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಯಿತು. ಬೆಂಗಳೂರು- ಕಾರವಾರ ಎಕ್ಸ್&zwnj;ಪ್ರೆಸ್ ರೈಲು ಸಕಲೇಶಪುರದಲ್ಲಿ ಸ್ಥಗಿತಗೊಂಡರೆ, ಮುರುಡೇಶ್ವರ- ಬೆಂಗಳೂರು ಹಾಗೂ ಮಂಗಳೂರು- ವಿಜಯಪುರ ರೈಲುಗಳನ್ನು ಸುಬ್ರಹ್ಮಣ್ಯ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಕೋಝಿಕೋಡ್- ಬೆಂಗಳೂರು ರೈಲು ಪುತ್ತೂರು ನಿಲ್ದಾಣದಲ್ಲಿ ನಿಂತಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರೆ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.&lt;/p&gt;&lt;h2&gt;ಪೊಲೀಸ್&zwnj; ಕಾನ್&zwnj;ಸ್ಟೇಬಲ್&zwnj; ನೇಮಕಾತಿ ಪರೀಕ್ಷೆಗೆ ಹೊರಟಿದ್ದವರಿಗೆ ಶಾಕ್&lt;/h2&gt;&lt;p&gt;ರಾಜ್ಯದಲ್ಲಿ ಭಾನುವಾರ ನಡೆದ ಸಿವಿಲ್&zwnj; ಪೊಲೀಸ್&zwnj; ಕಾನ್&zwnj;ಸ್ಟೇಬಲ್&zwnj; ನೇಮಕಾತಿ ಪರೀಕ್ಷೆಯಲ್ಲಿ ಕರಾವಳಿ ಸೇರಿ ಪಶ್ಚಿಮ ಘಟ್ಟದ ಭಾಗಗಳಿಂದ ಪರೀಕ್ಷೆ ಬರೆಯಲು ಬರಬೇಕಿದ್ದ ಹಲವು ಮಂದಿ ಬರಲಾಗದೆ ನಿರಾಸೆಗೊಂಡರು. ಕಾರಣ ರೈಲು ಸಂಚಾರ ಸಡನ್ ಸ್ಥಗಿತಗೊಂಡಿತು. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳ ರೈಲು ಸುಬ್ರಹ್ಮಣ್ಯ ರೋಡ್&zwnj;ನಲ್ಲಿ ರದ್ದುಗೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ. ಮಾನವೀಯ ನೆಲೆಯಲ್ಲಿ ರೈಲು ರದ್ದತಿಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಎಲ್ಲ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್&zwnj; ವೈರಲ್&zwnj; ಆಗಿದೆ.&lt;/p&gt;&lt;h2&gt;ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ:&lt;/h2&gt;&lt;p&gt;ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಹಾಗೂ ಪುತ್ತೂರು ರೈಲು ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ರಾತ್ರಿ ಪೂರ್ತಿ ಸಿಲುಕಿಕೊಂಡರು. ಹಲವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸಿದರು. ನಡುರಾತ್ರಿ ವೇಳೆಯಲ್ಲೇ ಪ್ರಯಾಣ ಮುಂದುವರಿಸಲು ಟಿಕೆಟ್ ಹಣ ವಾಪಸ್ ಪಡೆದು ಬಸ್ ಸೇರಿದಂತೆ ಪರ್ಯಾಯ ಸಾರಿಗೆ ವ್ಯವಸ್ಥೆ ಹುಡುಕುತ್ತಾ ಪ್ರಯಾಣಿಕರು ಲಗೇಜ್ ಹೊತ್ತು ಬಸ್ ನಿಲ್ದಾಣಗಳತ್ತ ತೆರಳಿದ ದೃಶ್ಯಗಳು ಕಂಡುಬಂದವು.&lt;/p&gt;&lt;h2&gt;ಪರ್ಯಾಯ ವ್ಯವಸ್ಥೆ ಬಗ್ಗೆ ಅಸಮಾಧಾನ&lt;/h2&gt;&lt;p&gt;ರೈಲುಗಳ ರದ್ದತಿ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದರೂ, ತಕ್ಷಣದ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸದ ಹಿನ್ನೆಲೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ರೈಲು ನಿಲ್ದಾಣದಲ್ಲಿ ಟಿಕೆಟ್ ಹಣ ಮರುಪಾವತಿಗಾಗಿ ಉದ್ದ ಸಾಲುಗಳು ಕಂಡುಬಂದವು. ಹಲವು ಮಂದಿ ತಮ್ಮ ಪ್ರಯಾಣವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ಖಾಸಗಿ ವಾಹನ ಹಾಗೂ ಬಸ್&zwnj;ಗಳ ಮೊರೆ ಹೋಗಬೇಕಾಯಿತು. ಪ್ರಯಾಣಿಕರ ಅನುಕೂಲ್ಕಕಾಗಿ ಹಾಸನ, ಸುಬ್ರಹ್ಮಣ್ಯ ರೋಡ್&zwnj; ಮತ್ತು ಬಂಟ್ವಾಳ ರೈಲು ನಿಲ್ದಾಣಗಳಲ್ಲಿ ಅಡುಗೆ ವ್ಯವಸ್ಥೆ ಮಾಡಲಾಯಿತು. ಭೂಕುಸಿತ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ವಿಜಯಪುರ ಎಕ್ಸ್&zwnj;ಪ್ರೆಸ್&zwnj; ಪ್ರಯಾಣಿಕರಿಗೆ ಉಪಹಾರಗಳನ್ನು ಸರಬರಾಜು ಮಾಡಲಾಯಿತು.&lt;/p&gt;&lt;h2&gt;ಭಾನುವಾರ ರದ್ದಾದ ರೈಲು ಮತ್ತು ಬದಲಿ ಮಾರ್ಗ&lt;/h2&gt;&lt;ul&gt; &lt;li&gt;ಭಾನುವಾರದ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್&zwnj;ಪ್ರೆಸ್ ಪ್ರಯಾಣ, ರೈಲು ಸಂಖ್ಯೆ 16575 ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸ್&zwnj;ಪ್ರೆಸ್ ಪ್ರಯಾಣ ರದ್ದುಗೊಳಿಸಲಾಯಿತು.&lt;/li&gt; &lt;li&gt;ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಎಸ್&zwnj;ಎಸ್&zwnj;ಎಸ್&zwnj; ಹುಬ್ಬಳ್ಳಿ - ಲೋಂಡಾ - ಕ್ಯಾಸಲ್ ರಾಕ್ - ಮಡಗಾಂವ್ - ಕಾರವಾರ - ತೋಕೂರು ಮೂಲಕ ಮಂಗಳೂರು ಜಂಕ್ಷನ್&zwnj;ಗೆ ಸಂಚಾರಕ್ಕೆ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್&zwnj;ಪ್ರೆಸ್&zwnj;ನ್ನು ಮಂಗಳೂರು ಜಂಕ್ಷನ್ - ತೋಕೂರು - ಕಾರವಾರ - ಮಡಗಾಂವ್ - ಕ್ಯಾಸಲ್ ರಾಕ್ - ಲೋಂಡಾ - ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಮೂಲಕ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16586 ಮುರ್ಡೇಶ್ವರ - ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೋದನೂರು - ಜೋಲಾರ್&zwnj;ಪೆಟ್ಟೈ - ಎಸ್&zwnj;ಎಂವಿಟಿ ಬೆಂಗಳೂರಿಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16512 ಕೋಝಿಕ್ಕೋಡ್ - ಕೆಎಸ್ಆರ್ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ್ನು ಬದಲಿ ಮಾರ್ಗವಾಗಿ ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೊದನೂರು - ಜೋಲಾರ್ಪೆಟ್ಟೈ - ಎಸ್&zwnj;ಎಂವಿಟಿ ಬೆಂಗಳೂರಿಗೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ. 16511 ಕೆಎಸ್&zwnj;ಆರ್&zwnj; ಬೆಂಗಳೂರು - ಕೋಝಿಕೋಡ್ ಎಕ್ಸ್&zwnj;ಪ್ರೆಸ್&zwnj;ನ್ನು ಬೆಂಗಳೂರು ಎಸ್&zwnj;ಎಂವಿಬಿನಲ್ಲಿ ಪ್ರಯಾಣ ಆರಂಭಿಸಿ ಎಸ್&zwnj;ಎಂವಿಟಿ ಬೆಂಗಳೂರು ಜೋಲಾರ್&zwnj;ಪೇಟ್ಟೈ ಜಂಕ್ಷನ್ - ಪೊದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕೋಝಿಕ್ಕೋಡ್ - ಮಂಗಳೂರು ಸೆಂಟ್ರಲ್&zwnj;ಗೆ ಸಂಚಾರ ಅನುವು ಮಾಡಿ ಕೊಡಲಾಯ್ತು.&lt;/li&gt; &lt;li&gt;ರೈಲು ಸಂಖ್ಯೆ 16585 ಎಸ್&zwnj;ಎಂವಿಟಿ ಬೆಂಗಳೂರು - ಮುರ್ಡೇಶ್ವರ ಎಕ್ಸ್&zwnj;ಪ್ರೆಸ್&zwnj;ನ್ನು ಎಸ್&zwnj;ಎಂವಿಟಿ ಬೆಂಗಳೂರು - ಓಮಲೂರು ಜಂಕ್ಷನ್ - ಪೋದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕಣ್ಣೂರು - ತೋಕೂರು - ಮುರ್ಡೇಶ್ವರಕ್ಕೆ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/li&gt;&lt;/ul&gt;&lt;h2&gt;ಶನಿವಾರ ರದ್ದಾದ ರೈಲುಗಳು&lt;/h2&gt;&lt;ul&gt; &lt;li&gt;ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್&zwnj;- ವಿಜಯಪುರ ಎಕ್ಸ್&zwnj;ಪ್ರೆಸ್ ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.&lt;/li&gt; &lt;li&gt;ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್&zwnj;ಎಂವಿಟಿ ಬೆಂಗಳುರು ಎಕ್ಸ್&zwnj;ಪ್ರೆಸ್&zwnj; ನ್ನು ರಾತ್ರಿ ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16512 ಕೋಝಿಕ್ಕೋಡ್&zwnj;-ಕೆಎಸ್&zwnj;ಆರ್&zwnj; ಬೆಂಗಳೂರು ಕಬಕ ಪುತ್ತೂರಿನಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ&lt;/li&gt; &lt;li&gt;ರೈಲು ಸಂಖ್ಯೆ 16596 ಕಾರವಾರ-ಕೆಎಸ್&zwnj;ಆರ್&zwnj; ಬೆಂಗಳೂರಿಗೆ ರಾತ್ರಿ ಬಾರ್ಕೂರಿನಿಂದ ಹೊರಟು ಸಂಚಾರ ವ್ಯತ್ಯಯವಾಯಿತು. ಅದನ್ನು ಮಂಗಳೂರು ಜಂಕ್ಷನ್&zwnj;, ಶೊರನೂರು ಜಂಕ್ಷನ್&zwnj;, ಪಾಲಕ್ಕಾಡ್&zwnj; ಜಂಕ್ಷನ್&zwnj;, ಇರೊಡೆ ಜಂಕ್ಷನ್&zwnj; ಮೂಲಕ ಕೆಎಸ್&zwnj;ಆರ್&zwnj; ಬೆಂಗಳೂರಿಗೆ ಮಾರ್ಗ ಬದಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16595 ಕೆಎಸ್&zwnj;ಆರ್&zwnj; ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj;ನ್ನು ಹಾಸನ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16585 ಎಸ್&zwnj;ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್&zwnj;ಪ್ರೆಸ್&zwnj; ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಹಾಸನ ತಲುಪಿದ್ದು, ಹಾಸನ-ಮುರುಡೇಶ್ವರ ಪ್ರಯಾಣ ಭಾಗಶಃ ರದ್ದು ಮಾಡಲಾಯಿತು.&lt;/li&gt; &lt;li&gt;ರೈಲುಸಂಖ್ಯೆ 16511 ಕೆಎಸ್&zwnj;ಆರ್&zwnj; ಬೆಂಗಳೂರು-ಕೋಝಿಕೋ ಎಕ್ಸ್&zwnj;ಪ್ರೆಸ್ ರೈಲು ಕೆಎಸ್&zwnj;ಆರ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದು, ಹಾಸನದಲ್ಲಿ ಅಲ್ಪಾವಧಿಗೆ ಸಂಚಾರ ಕೊನೆಗೊಂಡಿತು.&lt;/li&gt; &lt;li&gt;ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್ ಸಂಚಾರ ಹಾಸನದಲ್ಲಿ ಮುಕ್ತಾಯಗೊಂಡಿದೆ.&lt;/li&gt; &lt;li&gt;ರೈಲು ಸಂಖ್ಯೆ 16586 ಮುರುಡೇಶ್ವರ - ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್ ಸುಬ್ರಹ್ಮಣ್ಯ ರೋಡ್&zwnj; ನಿಲ್ದಾಣದಲ್ಲಿ ಅಲ್ಪಾವಧಿಗೆ ಮುಕ್ತಾಯಗೊಂಡಿದೆ.&lt;/li&gt;&lt;/ul&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/western-ghats-edakumeri-landslide-disrupts-mangaluru-bengaluru-trains-full-list-of-cancelled-and-diverted-routes-gdp/articleshow-4mg8mmu"/>
        </item>
        <item>
            <title><![CDATA[ಕಾಮನ್‌ವೆಲ್ತ್ ಗೇಮ್ಸ್ 2026ರ ಭಾರತೀಯ ತಂಡದ ಫಿಸಿಯೋ ಆಗಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪುತ್ರ ರೋಹನ್]]></title>
            <link>https://kannada.asianetnews.com/other-sports/raghupathy-bhat-son-rohan-appointed-team-india-physio-for-glasgow-2026-commonwealth-games-gdp/articleshow-apl1rsz</link>
            <guid isPermaLink="true">https://kannada.asianetnews.com/other-sports/raghupathy-bhat-son-rohan-appointed-team-india-physio-for-glasgow-2026-commonwealth-games-gdp/articleshow-apl1rsz</guid>
            <pubDate>Mon, 27 Jul 2026 11:03:26 +0530</pubDate>
            <description><![CDATA[ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಪುತ್ರ ರೋಹನ್ ಆರ್. ಬಾರಿತ್ತಾಯ ಅವರು ಸ್ಕಾಟ್&zwnj;ಲ್ಯಾಂಡ್&zwnj;ನ ಗ್ಲಾಸ್ಕೋದಲ್ಲಿ ನಡೆಯಲಿರುವ 'ಕಾಮನ್&zwnj;ವೆಲ್ತ್ ಗೇಮ್ಸ್ - 2026'ರ ಭಾರತೀಯ ತಂಡದ ಅಧಿಕೃತ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಕ್ರೀಡಾ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆದಿರುವ ರೋಹನ್ ಅವರ ಈ ಜಾಗತಿಕ ಸಾಧನೆಯು ಉಡುಪಿ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyh0vjyy94pyw0j7m5sehgmh,imgname-raghupathy-bhat-son-rohan-1785130240989.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ: &lt;/strong&gt;ಜಾಗತಿಕ ಕ್ರೀಡಾ ಲೋಕದಲ್ಲಿ ಉಡುಪಿಯ ಕೀರ್ತಿಪತಾಕೆ ಮತ್ತೊಮ್ಮೆ ಹಾರಾಡಿದೆ. ಉಡುಪಿಯ ನಿಕಟಪೂರ್ವ ಶಾಸಕ ಕೆ. ರಘುಪತಿ ಭಟ್ ಅವರ ಸುಪುತ್ರ ರೋಹನ್ ಆರ್. ಬಾರಿತ್ತಾಯ ಅವರು ಸ್ಕಾಟ್&zwnj;ಲ್ಯಾಂಡ್&zwnj;ನ ಗ್ಲಾಸ್ಕೋದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 'ಕಾಮನ್&zwnj;ವೆಲ್ತ್ ಗೇಮ್ಸ್ - 2026' ರ ಭಾರತೀಯ ಕ್ರೀಡಾಪಟುಗಳ ತಂಡದ ಅಧಿಕೃತ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಈ ಅತ್ಯುನ್ನತ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಫಿಟ್&zwnj;ನೆಸ್ ಜವಾಬ್ದಾರಿಯನ್ನು ಉಡುಪಿಯ ಯುವಕನೊಬ್ಬ ಹೆಗಲಿಗೇರಿಸಿಕೊಂಡಿರುವುದು ಇಡೀ ಜಿಲ್ಲೆ ಹಾಗೂ ರಾಜ್ಯ ಹೆಮ್ಮೆ ಪಡುವಂತಹ ಸಂಗತಿಯಾಗಿದೆ.&lt;/p&gt;&lt;h2&gt;ಉನ್ನತ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದಲ್ಲಿ ಸಾಧನೆ&lt;/h2&gt;&lt;p&gt;ರೋಹನ್ ಆರ್. ಬಾರಿತ್ತಾಯ ಅವರು ಯುಕೆಯ (UK) ವಿಶ್ವವಿಖ್ಯಾತ ಲಾಫ್&zwnj;ಬೋರೋ ವಿಶ್ವವಿದ್ಯಾಲಯದಿಂದ (Loughborough University) 'MSc Strength and Conditioning' ವಿಷಯದಲ್ಲಿ ಉನ್ನತ ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ವಿದೇಶದಲ್ಲಿ ಶಿಕ್ಷಣ ಮುಗಿಸಿ ಬಂದ ನಂತರ, ಅವರು ತಮ್ಮ ಜ್ಞಾನವನ್ನು ಭಾರತೀಯ ಕ್ರೀಡಾಲೋಕಕ್ಕೆ ಧಾರೆ ಎರೆಯಲು ನಿರ್ಧರಿಸಿದರು. ಇದರ ಭಾಗವಾಗಿ ಉಡುಪಿ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ 'ಐಕ್ಯಂ ಸ್ಪೋರ್ಟ್ಸ್ ಸೈನ್ಸ್' (Aikyam Sports Science) ಸಂಸ್ಥೆಯನ್ನು ಆರಂಭಿಸಿ, ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಅತ್ಯಾಧುನಿಕ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಸೇವೆಗಳನ್ನು ನೀಡುತ್ತಾ ಬಂದಿದ್ದಾರೆ. ಕ್ರೀಡಾ ವಿಜ್ಞಾನ ಕ್ಷೇತ್ರದಲ್ಲಿ ಅವರಿಗಿರುವ ಅಪಾರ ಜ್ಞಾನ, ಕೌಶಲ್ಯ ಮತ್ತು ಅನುಭವವನ್ನು ಪರಿಗಣಿಸಿ ಇಂದು ಈ ಜಾಗತಿಕ ಜವಾಬ್ದಾರಿ ಅವರನ್ನರಸಿ ಬಂದಿದೆ.&lt;/p&gt;&lt;h2&gt;ಹೆಮ್ಮೆಯ ವಿಷಯ ಹಂಚಿಕೊಂಡ ಮಾಜಿ ಶಾಸಕ ರಘುಪತಿ ಭಟ್&lt;/h2&gt;&lt;p&gt;ತಮ್ಮ ಮಗನ ಈ ಜಾಗತಿಕ ಸಾಧನೆಯ ಕುರಿತು ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಭಾವುಕರಾಗಿ ಮತ್ತು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. &quot;ನನ್ನ ಮಗ ರೋಹನ್ ಆರ್. ಬಾರಿತ್ತಾಯನಿಗೆ 2026ರ ಗ್ಲಾಸ್ಕೋ ಕಾಮನ್&zwnj;ವೆಲ್ತ್ ಗೇಮ್ಸ್&zwnj;ನಲ್ಲಿ ಟೀಮ್ ಇಂಡಿಯಾದ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನಮ್ಮ ಕುಟುಂಬಕ್ಕೆ ಸಂದ ಅಪಾರ ಗೌರವವಾಗಿದೆ. ರೋಹನ್&zwnj;ನ ನಿರಂತರ ಪರಿಶ್ರಮ, ಕಠಿಣ ಶ್ರಮ, ತ್ಯಾಗ ಮತ್ತು ವೃತ್ತಿಪರ ನಿಷ್ಠೆಗೆ ಸಿಕ್ಕ ಪ್ರತಿಫಲ ಇದಾಗಿದೆ. ಜಾಗತಿಕ ಕ್ರೀಡಾ ವೇದಿಕೆಯಲ್ಲಿ ದೇಶದ ಹೆಮ್ಮೆಯ ಕ್ರೀಡಾಪಟುಗಳ ಆರೋಗ್ಯ ಮತ್ತು ಉತ್ತಮ ಪ್ರದರ್ಶನಕ್ಕಾಗಿ ನನ್ನ ಮಗ ಸೇವೆ ಸಲ್ಲಿಸುತ್ತಿರುವುದನ್ನು ನೋಡುವುದು ಒಬ್ಬ ತಂದೆಯಾಗಿ ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ,&quot; ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇದೇ ಸಂದರ್ಭದಲ್ಲಿ, ರೋಹನ್ ಅವರ ಕೌಶಲ್ಯವನ್ನು ಗುರುತಿಸಿ ಭಾರತೀಯ ತಂಡದಲ್ಲಿ ಕಾರ್ಯನಿರ್ವಹಿಸಲು ದೊಡ್ಡ ಅವಕಾಶ ಮಾಡಿಕೊಟ್ಟ ಇಂಡಿಯನ್ ಪ್ಯಾರಾ ಒಲಿಂಪಿಕ್ ಸಮಿತಿಯ ಚೀಫ್ ಕೋಚ್ ಸತ್ಯನಾರಾಯಣ್ ಅವರಿಗೆ ರಘುಪತಿ ಭಟ್ ಅವರು ಸಾರ್ವಜನಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, &quot;ಮಗನ ಪರಿಶ್ರಮ, ವಿನಯ ಮತ್ತು ಸೇವಾ ಮನೋಭಾವವು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಎತ್ತರಕ್ಕೆ ತಲುಪಲಿ. ಉಡುಪಿಯ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಆಶೀರ್ವಾದ ಸದಾ ಅವನ ಮೇಲಿರಲಿ&quot; ಎಂದು ಹಾರೈಸಿದ್ದಾರೆ.&lt;/p&gt;&lt;h2&gt;ಗ್ಲಾಸ್ಕೋದಲ್ಲಿ ಕ್ರೀಡಾ ಹಬ್ಬ&lt;/h2&gt;&lt;p&gt;2026ರ ಜುಲೈ 23 ರಿಂದ ಆಗಸ್ಟ್ 2 ರವರೆಗೆ ಸ್ಕಾಟ್&zwnj;ಲ್ಯಾಂಡ್&zwnj;ನ ಗ್ಲಾಸ್ಕೋದಲ್ಲಿ ಕಾಮನ್&zwnj;ವೆಲ್ತ್ ಕ್ರೀಡಾಕೂಟವು ಅದ್ಧೂರಿಯಾಗಿ ನಡೆಯುತ್ತಿದ್ದು, ವಿಶ್ವದ ವಿವಿಧ ಕಾಮನ್&zwnj;ವೆಲ್ತ್ ರಾಷ್ಟ್ರಗಳ ಸಾವಿರಾರು ಶ್ರೇಷ್ಠ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ಬೃಹತ್ ವೇದಿಕೆಯಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆಯಾಡಲು ಸಜ್ಜಾಗಿದ್ದು, ಅವರ ಬೆನ್ನೆಲುಬಾಗಿ ನಿಂತು ದೈಹಿಕ ಫಿಟ್&zwnj;ನೆಸ್ ಕಾಯ್ದುಕೊಳ್ಳುವಲ್ಲಿ ಉಡುಪಿಯ ರೋಹನ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ರೋಹನ್ ಅವರ ಈ ಅಂತರರಾಷ್ಟ್ರೀಯ ಸಾಧನೆಗೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/other-sports/raghupathy-bhat-son-rohan-appointed-team-india-physio-for-glasgow-2026-commonwealth-games-gdp/articleshow-apl1rsz"/>
        </item>
        <item>
            <title><![CDATA[ಉಡುಪಿಯ 9 ಗ್ರಾಮ ಪಂಚಾಯ್ತಿಗಳಲ್ಲಿ ಭಾರತ್ ಪಂಪ್, ಭಾರತ್ ಕೆಫೆ, ಇವಿ ಸ್ಟೇಷನ್ ಆರಂಭ]]></title>
            <link>https://kannada.asianetnews.com/karnataka-districts/bharat-petrol-bunks-ev-charging-stations-bharat-cafes-are-being-set-up-udupi-9-gram-panchayat-highways-mrq/articleshow-blfsg7m</link>
            <guid isPermaLink="true">https://kannada.asianetnews.com/karnataka-districts/bharat-petrol-bunks-ev-charging-stations-bharat-cafes-are-being-set-up-udupi-9-gram-panchayat-highways-mrq/articleshow-blfsg7m</guid>
            <pubDate>Sun, 19 Jul 2026 14:38:34 +0530</pubDate>
            <description><![CDATA[ಉಡುಪಿ ಜಿಲ್ಲೆಯ 9 ಗ್ರಾಮ ಪಂಚಾಯಿತಿಗಳ ಹೆದ್ದಾರಿ ಬದಿಯಲ್ಲಿ ಭಾರತ್ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಸ್ಟೇಷನ್ ಹಾಗೂ ಭಾರತ್ ಕೆಫೆಗಳನ್ನು ಸ್ಥಾಪಿಸಲಾಗುತ್ತಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದ ಈ ಯೋಜನೆಯು, ಬಾಡಿಗೆ ಮತ್ತು ಕಮಿಷನ್ ಮೂಲಕ ಪಂಚಾಯಿತಿಗಳ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxwt2t8qs5fxpqr3x5f8z2g9,imgname-bharat-petrol-bunks-ev-charging-stations-bharat-cafes--1784452049175.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ&lt;/strong&gt;: ತೆಲಂಗಾಣದ ನಂತರ ಪ್ರಥಮ ಬಾರಿಗೆ ಕರ್ನಾಟಕದ ಉಡುಪಿ ಜಿಲ್ಲೆಯ 9 ಪಂಚಾಯಿತಿಗಳ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರತ್ ಪೆಟ್ರೋಲ್ ಬಂಕ್, ಇ.ವಿ. ಚಾರ್ಜಿಂಗ್ ಮತ್ತು ಭಾರತ್ ಕೆಫೆಗಳನ್ನು ಮುಂದಿನ ವರ್ಷದೊಳಗೆ ಆರಂಭಿಸಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.&lt;/p&gt;&lt;p&gt;ಉಡುಪಿಯಲ್ಲಿ ಭಾರತ್ ಪೆಟ್ರೋಲಿಯಂ ಅಧಿಕಾರಿಗಳ ಮತ್ತು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ ಸಂಸದರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.&lt;/p&gt;&lt;h2&gt;&lt;strong&gt;ಆರು ತಿಂಗಳ ಗುರಿ ನೀಡಿರುವ ಕೇಂದ್ರ ಸರ್ಕಾರ&lt;/strong&gt;&lt;/h2&gt;&lt;p&gt;ಜಿಲ್ಲೆಯ ಆಯ್ದ ಪಂಚಾಯಿತಿಗಳನ್ನು ಹಾದು ಹೋಗುವ ಹೆದ್ದಾರಿಗಳಲ್ಲಿ ಭಾರತ್ ಪೆಟ್ರೋಲಿಯಂ ಸಂಸ್ಥೆ ಮೂಲಕ ಪೆಟ್ರೋಲ್ ಬಂಕ್, ಇವಿ ಚಾಜಿಂಗ್ ಸ್ಟೇಷನ್, ಸಿಎನ್&zwnj;ಜಿ ಮತ್ತು ಭಾರತ್ ಕೆಫೆಗಳನ್ನು ನಿರ್ಮಿಸಲಾಗುವುದು. ಕನಿಷ್ಠ ಇನ್ನು ಆರು ತಿಂಗಳಲ್ಲಿ ಅವುಗಳು ಕಾರ್ಯರಂಭಿಸುವುದಕ್ಕೆ ಕೇಂದ್ರ ಸರ್ಕಾರ ಗುರಿ ನೀಡಿದೆ ಎಂದು ವಿವರಿಸಿದರು.&lt;/p&gt;&lt;p&gt;ಗ್ರಾಪಂಗೆ ಸೇರಿದ ಜಾಗದಲ್ಲಿ ಈ ಪಂಪ್&zwnj;, ಕೆಫೆಗಳು ಕಾರ್ಯನಿರ್ವಹಿಸಲಿದ್ದು, ಈ ಗ್ರಾಪಂಗಳಿಗೆ ಭಾರತ್ ಪೆಟ್ರೋಲಿಯಂ ಬಾಡಿಗೆ ಮತ್ತು ವ್ಯವಹಾರದಲ್ಲಿ ಕಮಿಷನ್ ನೀಡುತ್ತದೆ. ಇದರಿಂದ ಪಂಚಾಯಿತಿಗಳ ಆರ್ಥಿಕ ಮತ್ತು ಆಡಳಿತಾತ್ಮಕ ಶಕ್ತಿ ಹೆಚ್ಚಲಿದೆ ಎಂದು ಕೋಟ ಹೇಳಿದ್ದಾರೆ.&lt;/p&gt;&lt;p&gt;ಗ್ರಾಪಂಗಳಲ್ಲಿ ನಡೆಸುವ ಪೆಟ್ರೋಲ್ ಪಂಪ್&zwnj;ಗಳಲ್ಲಿ ಇವಿ ಚಾಜಿಂಗ್, ಸಿಎನ್&zwnj;ಜಿ ವಿತರಣೆಯ ಜೊತೆಗೆ ಡೀಸೆಲ್ ಸಹಿತ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟಕ್ಕೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ಇದೇ ಸಂದರ್ಭದಲ್ಲಿ ಆಯ್ಕೆಯಾದ ಪಂಚಾಯಿತಿಗಳ ನಿವೇಶನ ದಾಖಲೆಗಳನ್ನು ಸಂಸದರು ಕೋಟ ಭಾರತ್ ಪೆಟ್ರೋಲಿಯಂ ಅಧಿಕಾರಿಗಳಿಗೆ ಹಸ್ತಾಂತರಿಸಿ ಶೀಘ್ರವೇ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.&lt;/p&gt;&lt;p&gt;ಸಭೆಯಲ್ಲಿ ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ವ್ಯವಸ್ಥಾಪಕ ವಿಪಿನ್ ದಾಸ್ ವಂಶ್ವಾಲ್, ಉಡುಪಿ ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಹಾಯಕ ಕಾರ್ಯದರ್ಶಿ ಜೇಮ್ಸ್ ಡಿಸಿಲ್ವಾ, ಕಾರ್ಕಳ ತಾಪಂ ಇಓ ಪ್ರಶಾಂತ್ ಎಂ.ಎನ್, ಉಡುಪಿ ತಾಪಂ ಇಓ ವಿಜಯ ಮತ್ತಿತರರು ಉಪಸ್ಥಿತರಿದ್ದರು.&lt;/p&gt;&lt;p&gt;ಪಂಚಾಯಿತಿ ಮೂಲಕ ಪೆಟ್ರೋಲ್ ಪಂಪ್ ಗಳ ನಿರ್ಮಾಣದ ಯೋಜನೆ ವೈಯಕ್ತಿಕವಾಗಿ ತನಗೆ ಖುಷಿ ತಂದಿದೆ ಎಂದು ಸಂಸದ ಕೋಟ ಮಾಧ್ಯಮಗಳಿಗೆ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮೂಡುಬಿದಿರೆಯ ಅನುಷಾ ಆಚಾರ್ ಸ್ಟಾರ್ಟಪ್&zwnj;ಗೆ ರಾಷ್ಟ್ರಪತಿ ಭವನದಿಂದ ಅಹ್ವಾನ! ರಾಷ್ಟ್ರೀಯ ಮನ್ನಣೆ&lt;/strong&gt;&lt;/p&gt;&lt;h3&gt;&lt;strong&gt;ಎಲ್ಲೆಲ್ಲಿ ಪಂಪ್-ಕೆಫೆ-ಸ್ಟೇಷನ್ ?&lt;/strong&gt;&lt;/h3&gt;&lt;p&gt;ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ, ಬೆಳ್ವೆ, ಅಲ್ಬಾಡಿ, ಕಾರ್ಕಳ ತಾಲೂಕಿನ ಮುಡಾರು ಬೆಳ್ಮಣ್ಣು, ಸಾಣೂರು, ಕುಕ್ಕಂದೂರು, ಬೈಲೂರು, ಉಡುಪಿ ತಾಲೂಕಿನ ತೆಂಕನಿಡಿಯೂರು ಪಂಚಾಯಿತಿಗಳಲ್ಲಿ ನಿವೇಶನ ಗುರುತಿಸಲಾಗಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪಂಚಾಯಿತಿ ಪೆಟ್ರೋಲ್ ಬಂಕ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಕೋಟ ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ಮಂಗಳೂರು-ಉಡುಪಿ-ಕಾರವಾರ ನಡುವೆ ವಂದೇ ಭಾರತ್ ರೈಲು: ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದೇನು?&lt;/strong&gt;&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bharat-petrol-bunks-ev-charging-stations-bharat-cafes-are-being-set-up-udupi-9-gram-panchayat-highways-mrq/articleshow-blfsg7m"/>
        </item>
        <item>
            <title><![CDATA[ಕೊಂಕಣ ರೈಲ್ವೆಯಲ್ಲಿ ಕಳ್ಳರ ಕಾಟ: ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಜೀವಕ್ಕೆ ಆಪತ್ತು!]]></title>
            <link>https://kannada.asianetnews.com/karnataka-districts/security-crisis-on-konkan-railway-robberies-in-matsyagandha-and-mangaluru-express-passengers-demand-rpf-action-gdp/articleshow-dei67wc</link>
            <guid isPermaLink="true">https://kannada.asianetnews.com/karnataka-districts/security-crisis-on-konkan-railway-robberies-in-matsyagandha-and-mangaluru-express-passengers-demand-rpf-action-gdp/articleshow-dei67wc</guid>
            <pubDate>Thu, 23 Jul 2026 10:14:37 +0530</pubDate>
            <description><![CDATA[&lt;p&gt;ಮಂಗಳೂರಿನಿಂದ ಗೋವಾ, ಮಹಾರಾಷ್ಟ್ರವನ್ನು ಸಂಪರ್ಕಿಸುವ ಕೊಂಕಣ ರೈಲು ಮಾರ್ಗದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಪ್ರಯಾಣಿಕರ ಸುರಕ್ಷತೆ ಸಂಪೂರ್ಣವಾಗಿ ಹದಗೆಟ್ಟಿದೆ. ಮತ್ಸ್ಯಗಂಧ ಮತ್ತು ಮಂಗಳೂರು ಎಕ್ಸ್&zwnj;ಪ್ರೆಸ್&zwnj;ಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳುವಾಗಿದ್ದು, ಟಿಟಿಇ ಮೇಲೆಯೂ ಹಲ್ಲೆ ನಡೆದಿದೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಸಿಸಿಟಿವಿ ಅಳವಡಿಕೆ ಮತ್ತು ಗಸ್ತು ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky6mbhwbbbz3kkh9dv4grwkc,imgname-konkan-railway--1--1784781588363.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೂಲ್ಕಿ: &lt;/strong&gt;ಮಂಗಳೂರಿನಿಂದ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಕೊಂಕಣ ರೈಲು ಮಾರ್ಗದಲ್ಲಿ ಈಗ ಸರಣಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಯಾಣಿಕರ ನೆಮ್ಮದಿ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಮಾರ್ಗದಲ್ಲಿ ಚಲಿಸುವ ಪ್ರಮುಖ ರೈಲುಗಳಾದ ಮತ್ಸ್ಯಗಂಧ ಎಕ್ಸ್&zwnj;ಪ್ರೆಸ್ (12619/12620) ಮತ್ತು ಮಂಗಳೂರು ಎಕ್ಸ್&zwnj;ಪ್ರೆಸ್ (12133/12134) ರೈಲುಗಳಲ್ಲಿ ಕುಟುಂಬ ಸಮೇತ ನೆಮ್ಮದಿಯಿಂದ ಪ್ರಯಾಣಿಸುವುದು ಈಗ ಗಗನಕುಸುಮವಾಗಿದೆ. ಒಮ್ಮೆ ರೈಲು ಹತ್ತಿದರೆ ಸಾಕು, ಸುರಕ್ಷಿತವಾಗಿ ತಲುಪಬೇಕಾದ ಸ್ಥಳ ತಲುಪುತ್ತೇವೆಯೋ ಇಲ್ಲವೋ ಎಂಬ ಆತಂಕ ಸಾರ್ವಜನಿಕರನ್ನು ಕಾಡತೊಡಗಿದೆ.&lt;/p&gt;&lt;p&gt;ಕಳೆದ ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ರೈಲುಗಳಲ್ಲಿ ಸಾಲು ಸಾಲು ಕಳವು ಘಟನೆಗಳು ಸಂಭವಿಸಿದ್ದು, ಕಷ್ಟಪಟ್ಟು ದುಡಿದ ಹಣದಲ್ಲಿ ಮಾಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡು ಹಲವಾರು ಮಹಿಳಾ ಪ್ರಯಾಣಿಕರು ಕಣ್ಣೀರು ಹಾಕುವಂತಾಗಿದೆ.&lt;/p&gt;&lt;h2&gt;ಸರಣಿ ಅಪರಾಧ ಘಟನೆಗಳು&lt;/h2&gt;&lt;p&gt;30 ಲಕ್ಷದ ಚಿನ್ನಾಭರಣ ಕಳವು! ಇತ್ತೀಚೆಗೆ ನಡೆದ ಪ್ರಮುಖ ಪ್ರಕರಣವೊಂದರಲ್ಲಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಲಲಿತಾ ಸಾಲ್ಯಾನ್ ಎಂಬ ಮಹಿಳೆಯ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಈ ಘಟನೆ ನಡೆದು 50 ದಿನಗಳು ಕಳೆದಿದ್ದರೂ, ಇದುವರೆಗೆ ಕಳ್ಳರ ಸಣ್ಣ ಸುಳಿವನ್ನು ಹಿಡಿಯಲು ಸಹ ರೈಲ್ವೆ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ತಡೆಯಲು ಹೋದ ಟಿಟಿಇ ಮೇಲೆಯೇ ಚಾಕು ದಾಳಿ! ರೈಲುಗಳಲ್ಲಿ ಕಳ್ಳರ ಜಾಲ ಎಷ್ಟು ವ್ಯವಸ್ಥಿತವಾಗಿ ಮತ್ತು ಹುಂಬತನದಿಂದ ಕಾರ್ಯನಿರ್ವಹಿಸುತ್ತಿದೆ ಎಂದರೆ, ಅವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಜುಲೈ 15ರಂದು ನಡೆದ ಮತ್ತೊಂದು ಭೀಕರ ಪ್ರಕರಣದಲ್ಲಿ, ರೈಲಿನಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಹಿಡಿಯಲು ಹೋದ ಟಿಟಿಇ (TTE) ಹಾಗೂ ಮಂಜುನಾಥ್ ಪೂಜಾರಿ ಎಂಬ ಪ್ರಯಾಣಿಕರ ಮೇಲೆಯೇ ದುಷ್ಕರ್ಮಿಗಳು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯು ರೈಲಿನಲ್ಲಿ ಪ್ರಯಾಣಿಕರ ಜೀವಕ್ಕೆ ಯಾವುದೇ ರಕ್ಷಣೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.&lt;/p&gt;&lt;p&gt;ನಾಗರಿಕರ ತೀವ್ರ ಆಕ್ರೋಶ ಮತ್ತು ಪ್ರಶ್ನೆಗಳು ಪ್ರಸ್ತುತ ರೈಲುಗಳಲ್ಲಿ ಬ್ಯಾಗ್ ಹಾಗೂ ಒಡವೆಗಳು ಕಳುವಾಗುತ್ತಿವೆ. ಆದರೆ, ರೈಲ್ವೆ ಅಧಿಕಾರಿಗಳ ಈ ನಿರಂತರ ನಿರ್ಲಕ್ಷ್ಯ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಕುಟುಂಬದ ಹೆಣ್ಣುಮಕ್ಕಳು ಅಥವಾ ವಯಸ್ಸಾದ ಪೋಷಕರ ಜೀವಕ್ಕೆ ಅಪಾಯ ಎದುರಾದರೆ ಅದಕ್ಕೆ ಯಾರು ಹೊಣೆ? ಇನ್ನೂ ಎಷ್ಟು ಜೀವಗಳು ಅಪಾಯಕ್ಕೆ ಸಿಲುಕಿದ ನಂತರ ಇಲಾಖೆ ಎಚ್ಚೆತ್ತುಕೊಳ್ಳುತ್ತದೆ? ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಪ್ರಯಾಣಿಕರ ಪ್ರಮುಖ ಬೇಡಿಕೆಗಳು:&lt;/strong&gt; ರೈಲ್ವೆ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿರುವ ಪ್ರಯಾಣಿಕರು ಮತ್ತು ನಾಗರಿಕರು ಕೆಲವು ಪ್ರಮುಖ ರಕ್ಷಣಾತ್ಮಕ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:&lt;/p&gt;&lt;p&gt;&lt;strong&gt;ಕಡ್ಡಾಯ ಸಿಸಿಟಿವಿ ಅಳವಡಿಕೆ: &lt;/strong&gt;ಪ್ರತಿಯೊಂದು ರೈಲು ಬೋಗಿಯಲ್ಲೂ (Coaches) ಕಡ್ಡಾಯವಾಗಿ ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.&lt;/p&gt;&lt;p&gt;&lt;strong&gt;ಆರ್&zwnj;ಪಿಎಫ್ ಗಸ್ತು ಹೆಚ್ಚಳ&lt;/strong&gt;: ವಿಶೇಷವಾಗಿ ರಾತ್ರಿ ವೇಳೆಯಲ್ಲಿ ರೈಲುಗಳಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಯ ಗಸ್ತು (Patrolling) ವ್ಯವಸ್ಥೆಯನ್ನು ತೀವ್ರಗೊಳಿಸಬೇಕು.&lt;/p&gt;&lt;p&gt;&lt;strong&gt;ಕಠಿಣ ಶಿಕ್ಷೆ ಮತ್ತು ವಸೂಲಾತಿ: &lt;/strong&gt;ಕಳವು ಮತ್ತು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಕಳುವಾದ ಒಡವೆ-ವಸ್ತುಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸಬೇಕು.&lt;/p&gt;&lt;p&gt;ಸುರಕ್ಷಿತ ಪ್ರಯಾಣವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಆದ್ದರಿಂದ, ಇದುವರೆಗೆ ಕುಂಭಕರ್ಣ ನಿದ್ದೆಯಲ್ಲಿರುವ ರೈಲ್ವೆ ಆಡಳಿತ ಮಂಡಳಿಯು ತಕ್ಷಣವೇ ಎಚ್ಚೆತ್ತುಕೊಂಡು, ಪ್ರಯಾಣಿಕರ ಜೀವ ಮತ್ತು ಜೀವಾಳದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕೆಂದು ಕರಾವಳಿಯ ನಾಗರಿಕರು ಜಂಟಿಯಾಗಿ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/security-crisis-on-konkan-railway-robberies-in-matsyagandha-and-mangaluru-express-passengers-demand-rpf-action-gdp/articleshow-dei67wc"/>
        </item>
        <item>
            <title><![CDATA['CID ವರದಿ ಟ್ರಾನ್ಸ್‌ಲೇಟ್‌ ಮಾಡಿದ್ದನ್ನ ಬಿಟ್ಟು ಮತ್ತೇನು ಮಾಡಿದ್ದೀರಿ..' ಧರ್ಮಸ್ಥಳ Soujanya Case ವಿಚಾರದಲ್ಲಿ ಸಿಬಿಐಗೆ ಸುಪ್ರೀಂ ಚಾಟಿ]]></title>
            <link>https://kannada.asianetnews.com/gallery/karnataka-districts/soujanya-case-supreme-court-cbi-criticism-reinvestigation-sit-order-san-fmlqtvv</link>
            <guid isPermaLink="true">https://kannada.asianetnews.com/gallery/karnataka-districts/soujanya-case-supreme-court-cbi-criticism-reinvestigation-sit-order-san-fmlqtvv</guid>
            <pubDate>Wed, 22 Jul 2026 17:32:26 +0530</pubDate>
            <description><![CDATA[&lt;p&gt;ಧರ್ಮಸ್ಥಳದ ಸೌಜನ್ಯ ಅತ್ಯಾ*ರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತನ್ನ ಆದೇಶವನ್ನು ಕಾಯ್ದಿರಿಸಿದೆ. ಸಿಬಿಐ ತನಿಖೆಯ ವೈಫಲ್ಯವನ್ನು ತೀವ್ರವಾಗಿ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky4v1kgznxay7hxg47v1dfr4,imgname-soujanya-case-1784721493535.jpg" type="image/jpeg" height="390" width="690"/>
            <content:encoded><![CDATA[&lt;p&gt;ಧರ್ಮಸ್ಥಳದ ಸೌಜನ್ಯ ಅತ್ಯಾ*ರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತನ್ನ ಆದೇಶವನ್ನು ಕಾಯ್ದಿರಿಸಿದೆ. ಸಿಬಿಐ ತನಿಖೆಯ ವೈಫಲ್ಯವನ್ನು ತೀವ್ರವಾಗಿ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.&lt;/p&gt;&lt;img&gt;&lt;p&gt;ಭಾರಿ ಚರ್ಚೆಗೆ ಗ್ರಾಸವಾಗಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾ*ರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್&zwnj;ನಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಪೀಠವು ತನ್ನ ಆದೇಶವನ್ನು ಕಾಯ್ದಿರಿಸಿದೆ. ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ ನಡೆಸಿತು.&lt;/p&gt;&lt;img&gt;&lt;p&gt;ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದ್ದು, ತನಿಖೆಯನ್ನು ಯಾವ ಸ್ವರೂಪದಲ್ಲಿ ನಡೆಸಬೇಕು ಎನ್ನುವುದರ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿದೆ. ಅಂತಿಮ ಆದೇಶದಲ್ಲಿ ಈ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಸ್ತೃತವಾದ ನಿರ್ದೇಶನಗಳನ್ನು ನೀಡಲಿದೆ.&lt;/p&gt;&lt;img&gt;&lt;p&gt;ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಿಬಿಐ (CBI) ಕಾರ್ಯವೈಖರಿಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿತು. &quot;ಪರಕರಣ ನಡೆದು 14 ವರ್ಷಗಳಾಗಿದ್ದರೂ ಸರಿಯಾದ ತನಿಖೆ ನಡೆದಿಲ್ಲ. ಸಿಐಡಿ ನೀಡಿದ್ದ ವರದಿಯನ್ನಷ್ಟೇ ಭಾಷಾಂತರಿಸಲಾಗಿದೆ ಹೊರತು, ತನಿಖಾಧಿಕಾರಿ ಘಟನಾ ಸ್ಥಳಕ್ಕೂ ಭೇಟಿ ನೀಡಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಇನ್ನು ಕೆಲ ಆರೋಪಿಗಳ ವಿರುದ್ಧ ತನಿಖೆ ನಡೆಸಬೇಕಿದೆ ಎಂದು ಹೇಳಿದ್ದ ಸಿಬಿಐ, ಈಗ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆ ಎಂದು ನೆಪ ಹೇಳುತ್ತಿರುವುದು ಸಮಂಜಸವಲ್ಲ ಎಂದು ಕೋರ್ಟ್ ಕಿಡಿಕಾರಿತು.&lt;/p&gt;&lt;img&gt;&lt;p&gt;ಸೌಜನ್ಯ ತಾಯಿ ಕುಸುಮಾವತಿ ಅವರು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ತಾವು ಸಿದ್ಧರಿರುವುದಾಗಿ ಸುಪ್ರೀಂ ಕೋರ್ಟ್&zwnj;ಗೆ ತಿಳಿಸಿದೆ.&lt;/p&gt;&lt;img&gt;&lt;p&gt;ಪ್ರಕರಣದ ತನಿಖೆಗೆ ಎಸ್&zwnj;ಐಟಿ ರಚಿಸಬೇಕೇ ಅಥವಾ ಇತರ ಯಾವುದೇ ಸಂಸ್ಥೆಗೆ ವಹಿಸಬೇಕೇ ಎಂಬುದನ್ನು ತಾನೇ ನಿರ್ಧರಿಸುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಆದೇಶ ಪ್ರಕಟಿಸಿದ ಬಳಿಕ ಈ ತನಿಖೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ಕೇಳುವುದಾಗಿ ನ್ಯಾಯಪೀಠ ಹೇಳಿದೆ.&lt;/p&gt;&lt;img&gt;&lt;p&gt;ಪ್ರಕರಣ ನಡೆದ ಇಷ್ಟೂ ವರ್ಷಗಳಲ್ಲಿ ಸಾಕ್ಷ್ಯಗಳು ನಾಶವಾಗದಂತೆ ಮತ್ತು ಸಾಕ್ಷಿಗಳಿಗೆ ಯಾವುದೇ ಅಪಾಯ ಎದುರಾಗದಂತೆ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/soujanya-case-supreme-court-cbi-criticism-reinvestigation-sit-order-san-fmlqtvv"/>
        </item>
        <item>
            <title><![CDATA[ಕರಾವಳಿಯ ಕಂಬಳಕ್ಕೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: 23 ಕೂಟಗಳಿಗೆ ಬಂಪರ್‌ ಅನುದಾನ ಘೋಷಣೆ]]></title>
            <link>https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a</link>
            <guid isPermaLink="true">https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a</guid>
            <pubDate>Thu, 16 Jul 2026 16:32:15 +0530</pubDate>
            <description><![CDATA[ರಾಜ್ಯ ಸರ್ಕಾರವು ಕರಾವಳಿಯ 23 ಕಂಬಳ ಕೂಟಗಳಿಗೆ ತಲಾ 5 ಲಕ್ಷದಂತೆ ಒಟ್ಟು 1.15 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಈ ನಿರ್ಧಾರವನ್ನು ಕಂಬಳ ಸಮಿತಿ ಸ್ವಾಗತಿಸಿದ್ದು, ಇದೇ ವೇಳೆ ಮೈಸೂರು ಕಂಬಳ ಆಯೋಜನೆಗೆ ಸಂಬಂಧಿಸಿದ ವಿವಾದದ ಬಗ್ಗೆ ಸಮಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxn9by9k33bg6yjwx6kxp0pr,imgname-kambala-grant-1784199641395.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.16):&lt;/strong&gt; ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆಯೋಜಕರಿಗೆ ಬಿಗ್ ಸಿಹಿ ಸುದ್ದಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಕಂಬಳದ ಸುತ್ತ ಹಲವು ವಿವಾದಗಳು ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಕಂಬಳ ಕೂಟಗಳ ಸುಗಮ ಆಯೋಜನೆಗಾಗಿ ಭಾರಿ ಮೊತ್ತದ ಅನುದಾನವನ್ನು ಪ್ರಕಟಿಸಿದೆ. 2025-26ನೇ ಸಾಲಿನ ಕಂಬಳ ಋತುವಿಗಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಒಟ್ಟು 1 ಕೋಟಿ 15 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಕಂಬಳ ಆಯೋಜಕರು ಹಾಗೂ ಅಭಿಮಾನಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿ ಕಂಬಳಕ್ಕೂ 5 ಲಕ್ಷ ರೂಪಾಯಿ ನೆರವು&lt;/strong&gt;&lt;/h2&gt;&lt;p&gt;ಈ ಬಾರಿ ಕರಾವಳಿ ಅವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧಿಕೃತವಾಗಿ ನಡೆಯುವ ಒಟ್ಟು 23 ಕಂಬಳ ಕೂಟಗಳನ್ನು ಈ ಯೋಜನೆಯಡಿ ಗುರುತಿಸಲಾಗಿದೆ. ಸರ್ಕಾರದ ಆದೇಶದನ್ವಯ, ಆಯ್ಕೆಯಾಗಿರುವ ಪ್ರತಿಯೊಂದು ಕಂಬಳ ಕೂಟದ ಆಯೋಜನೆಗೂ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಹರಿದುಬರಲಿದೆ. ಪ್ರಸ್ತುತ ದಿನಗಳಲ್ಲಿ ಕಂಬಳ ಆಯೋಜನೆ ಮಾಡುವುದು ಆಯೋಜಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಸರ್ಕಾರದ ಈ ಸಕಾಲಿಕ ನೆರವು ತುಳುನಾಡಿನ ಕೀರ್ತಿ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು ದೊಡ್ಡ ಬಲ ನೀಡಿದಂತಾಗಿದೆ.&lt;/p&gt;&lt;h2&gt;&lt;strong&gt;'ಸರ್ಕಾರ ನುಡಿದಂತೆ ನಡೆದಿದೆ' - ಡಾ. ದೇವಿಪ್ರಸಾದ್ ಶೆಟ್ಟಿ ಹರ್ಷ&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳ ಆಯೋಜಕರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು ಸಿಹಿ ಸುದ್ದಿ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಪ್ರವಾಸೋದ್ಯಮ ಹಾಗೂ ಕ್ರೀಡಾ ಇಲಾಖೆಯಿಂದ ಕಂಬಳಕ್ಕೆ ಅನುದಾನ ಸಿಕ್ಕಿತ್ತು. ಅದಕ್ಕೂ ಮುನ್ನ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಂಬಳಕ್ಕೆ 1 ಕೋಟಿ ರೂಪಾಯಿ ನೀಡಿದ್ದರು. ರಾಜಕೀಯ ಭೇದಭಾವವಿಲ್ಲದೆ ಎಲ್ಲಾ ಸರ್ಕಾರಗಳು ಕಂಬಳವನ್ನು ಪೋಷಿಸಿಕೊಂಡು ಬಂದಿವೆ. ಇದು ಕ್ರೀಡೆಗೆ ಸಿಕ್ಕ ಗೌರವ ಎಂದು ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ, ಮುಂದಿನ ರಾಜ್ಯ ಬಜೆಟ್&zwnj;ನಲ್ಲಿ ಕಂಬಳ ಕ್ರೀಡೆಗಾಗಿಯೇ ಪ್ರತ್ಯೇಕವಾಗಿ 5 ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಸಾಂಪ್ರದಾಯಿಕ ಹಾಗೂ ಒಂಟಿ ಕರೆ ಕಂಬಳಗಳಿಗೂ ಮಾನ್ಯತೆ&lt;/strong&gt;&lt;/h2&gt;&lt;p&gt;ಸಾಂಪ್ರದಾಯಿಕ ಕಂಬಳಗಳ ಕುರಿತು ಮಾತನಾಡಿದ ಸಮಿತಿ ಅಧ್ಯಕ್ಷರು, ಜೋಡುಕರೆಯಲ್ಲಿ ಸದ್ಯ ಎಂಟು ಸಾಂಪ್ರದಾಯಿಕ ಕಂಬಳಗಳಿದ್ದು, ಅವುಗಳಿಗೂ ಈ ಅನುದಾನ ಲಭ್ಯವಾಗಲಿದೆ. ಇದರೊಂದಿಗೆ ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಸುದೀರ್ಘ ಕಾಲದಿಂದ ನಡೆಸಿಕೊಂಡು ಬರುತ್ತಿರುವ 'ಒಂಟಿ ಕರೆ' ಕಂಬಳಗಳ ಆಯೋಜಕರನ್ನೂ ಸಹ ರಾಜ್ಯ ಕಂಬಳ ಅಸೋಸಿಯೇಷನ್&zwnj;ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಈ ಸಾಂಪ್ರದಾಯಿಕ ಒಂಟಿ ಕರೆ ಕಂಬಳಗಳಿಗೂ ಸರ್ಕಾರದಿಂದ ಆರ್ಥಿಕ ಅನುದಾನ ದೊರಕಿಸಿಕೊಡುವಂತೆ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದರು.&lt;/p&gt;&lt;h2&gt;&lt;strong&gt;ಮೈಸೂರು ಕಂಬಳ ವಿವಾದ: ಕರಾವಳಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ!&lt;/strong&gt;&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಮೈಸೂರು ಕಂಬಳ ಆಯೋಜನೆಗೆ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ಡಾ. ದೇವಿಪ್ರಸಾದ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಂಬಳ ಎಂಬುದು ರಾಜಕೀಯ ಮತ್ತು ಧರ್ಮವನ್ನು ಮೀರಿದ ಒಂದು ಸಾಂಸ್ಕೃತಿಕ ಕ್ರೀಡೆ. ಇಲ್ಲಿ ಎಲ್ಲಾ ಪಕ್ಷದವರೂ ಒಟ್ಟಾಗಿ ಕಂಬಳ ನಡೆಸುತ್ತಾರೆ. ಮೈಸೂರು ಸಂಸದರು ಇದನ್ನು ವಿರೋಧಿಸುತ್ತಾರೆ ಎಂಬ ಒಂದೇ ಕಾರಣಕ್ಕೆ, ಅವರದ್ದೇ ಪಕ್ಷದ (ಬಿಜೆಪಿ) ಕರಾವಳಿಯ ಶಾಸಕರು ಮತ್ತು ಜನಪ್ರತಿನಿಧಿಗಳು ಮೈಸೂರು ಕಂಬಳವನ್ನು ವಿರೋಧಿಸುತ್ತಿರುವುದು ಸರಿಯಲ್ಲ. ನೀವು ಕಂಬಳಕ್ಕೆ ಗೌರವ ತಂದಿಲ್ಲ, ಬದಲಿಗೆ ಕಂಬಳವೇ ನಿಮಗೆ ಸಮಾಜದಲ್ಲಿ ಗೌರವ ಕೊಟ್ಟಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&quot;ಕಂಬಳ ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವೇ? ಮೈಸೂರಿನಲ್ಲಿ ಕಂಬಳ ಯಾಕೆ ನಡೆಯಬಾರದು? ಅಲ್ಲಿ ಕಂಬಳದ ಬಗ್ಗೆ ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಕೆಳವರ್ಗದವರ ಮೇಲಿನ ದಬ್ಬಾಳಿಕೆ ಎಂಬಂತೆ ಬಿಂಬಿಸಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ನಾವು ಹಿಂದುಳಿದ ವರ್ಗದ ಆರಾಧ್ಯ ದೈವಗಳಾದ ಕೋಟಿ-ಚೆನ್ನಯ್ಯ, ಕಾಂತಬಾರೆ-ಬೂದಬಾರೆ ಹಾಗೂ ಸೂರ್ಯ-ಚಂದ್ರರ ಹೆಸರಿನಲ್ಲಿ ಕಂಬಳ ಮಾಡುತ್ತೇವೆ. ಇದು ಇಡೀ ದೇಶಕ್ಕೇ ಮಾದರಿಯಾದ ವ್ಯವಸ್ಥೆ. ಕರಾವಳಿಯ ಜನಪ್ರತಿನಿಧಿಗಳು ಯಾವುದೇ ರಾಜಕೀಯ ಪಕ್ಷದ ಕೈಗೊಂಬೆಗಳಂತೆ ವರ್ತಿಸದೆ, ಕಂಬಳದ ವೈಭವವನ್ನು ರಾಜ್ಯಾದ್ಯಂತ ಪಸರಿಸಲು ಧೈರ್ಯದಿಂದ ಕೆಲಸ ಮಾಡಬೇಕು ಎಂದು ಕರಾವಳಿಯ ಬಿಜೆಪಿ ಜನಪ್ರತಿನಿಧಿಗಳಿಗೆ ದೇವಿಪ್ರಸಾದ್ ಶೆಟ್ಟಿ ನೇರ ಮನವಿ ಹಾಗೂ ಒತ್ತಾಯ ಮಾಡಿದರು.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-govt-announces-grant-for-23-coastal-kambala-events-san/articleshow-g7ocb7a"/>
        </item>
        <item>
            <title><![CDATA[Udupi: ಕಾರ್ಕಳ ತಾಲೂಕಿನ ಪುಟ್ಟ ಗ್ರಾಮದಲ್ಲಿ ಪತ್ತೆಯಾಯ್ತು 400 ವರ್ಷಗಳ ಹಿಂದಿನ ರಹಸ್ಯ]]></title>
            <link>https://kannada.asianetnews.com/karnataka-districts/udupi-an-unpublished-inscription-dating-back-to-1616-ad-has-been-discovered-in-mala-village-of-karkala-taluk-mrq/articleshow-kktrt8r</link>
            <guid isPermaLink="true">https://kannada.asianetnews.com/karnataka-districts/udupi-an-unpublished-inscription-dating-back-to-1616-ad-has-been-discovered-in-mala-village-of-karkala-taluk-mrq/articleshow-kktrt8r</guid>
            <pubDate>Tue, 04 Aug 2026 08:33:06 +0530</pubDate>
            <description><![CDATA[ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ಕ್ರಿ.ಶ. 1616ರ ಕಾಲದ ಅಪ್ರಕಟಿತ ಶಿಲಾಶಾಸನವೊಂದು ಪತ್ತೆಯಾಗಿದೆ. ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ತಂಡವು ಅಧ್ಯಯನ ನಡೆಸಿದ್ದು, 15 ಸಾಲುಗಳ ಈ ಕನ್ನಡ ಶಾಸನವು ಸಾಂತೈಯನಯ್ಯನ ಪುತ್ರ ಮಲೈಯ ಎಂಬಾತನಿಂದ ರಚಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5bjrbf0rnp9v874z8f3g6k,imgname-karkala-1785812574575.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರ್ಕಳ: &lt;/strong&gt;ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಚೌಕಿ ಪ್ರದೇಶದಲ್ಲಿರುವ ಶ್ರೀ ಪಾಂಡಿರಾಜ ಪೆರ್ಗಡೆ ಮನೆಯ ಮುಂಭಾಗದಲ್ಲಿರುವ ಅಪರೂಪದ ಶಿಲಾಶಾಸನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ತಂಡ ಅಧ್ಯಯನ ನಡೆಸಿದ್ದು, ಇದು ಕ್ರಿ.ಶ. 1616ರ ಕಾಲಘಟ್ಟಕ್ಕೆ ಸೇರಿರುವ ಅಪ್ರಕಟಿತ ಶಿಲಾಶಾಸನವಾಗಿರಬಹುದೆಂದು ಪ್ರಾಥಮಿಕ ಅಧ್ಯಯನದಲ್ಲಿ ತಿಳಿದು ಬಂದಿದೆ.&lt;/p&gt;&lt;p&gt;ಧರ್ಮಚಾವಡಿ ಹೆಗ್ಗಡತಿ ಎಂಬ ಹೆಸರಿನ ಮನೆಯ ಹೊರಭಾಗದಲ್ಲಿ ಸಂರಕ್ಷಿಸಲಾಗಿರುವ ಈ ಶಾಸನವು ಹಿಂದೆ ದುಗ್ಗಲ್ಲಾಯ ದೈವಗುಂಡದ ಸಮೀಪದಲ್ಲಿದ್ದು, ಬಳಿಕ ಮನೆ ವಿಸ್ತರಣೆ ವೇಳೆ ಸುರಕ್ಷಿತವಾಗಿ ಹೊರಭಾಗದಲ್ಲಿ ನಿಲ್ಲಿಸಲಾಗಿದೆ ಎಂದು ಪಾಂಡಿರಾಜ ಪೆರ್ಗಡೆ ಹಾಗೂ ರವಿರಾಜ ಪೆರ್ಗಡೆ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಸಂಶೋಧನಾ ತಂಡದಿಂದ ಪರಿಶೀಲನೆ&lt;/strong&gt;&lt;/h2&gt;&lt;p&gt;ಶಾಸನಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯ ಡಾ. ಪಿ. ಸತ್ಯನಾರಾಯಣ ಭಟ್ ಅವರ ಪ್ರಾಥಮಿಕ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್. ಎ. ಕೃಷ್ಣಯ್ಯ ಅವರು ಸಂಶೋಧನಾ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.&lt;/p&gt;&lt;p&gt;ಅಪ್ರಕಟಿತ ಶಾಸನದ ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ನಡೆಸಿದ್ದು, ಕನ್ನಡ ಲಿಪಿ ಹಾಗೂ ಭಾಷೆಯಲ್ಲಿ ರಚಿತವಾಗಿರುವ ಈ ಶಾಸನದಲ್ಲಿ ಒಟ್ಟು 15 ಸಾಲುಗಳಿವೆ.&lt;/p&gt;&lt;h3&gt;&lt;strong&gt;ಶಾಸನದಲ್ಲಿ ಏನಿದೆ?&lt;/strong&gt;&lt;/h3&gt;&lt;p&gt;ಶಾಸನದಲ್ಲಿ ಉಲ್ಲೇಖಿಸಿರುವ ಕಾಲಮಾನವು ಶಾಲಿವಾಹನ ಶಕ 1538, ನಳ ಸಂವತ್ಸರ, ವೈಶಾಖ ಶುದ್ಧ ದ್ವಾದಶಿ, ಇಂದುವಾರ ಎಂದು ದಾಖಲಾಗಿದ್ದು, ಇದು ಸಾಮಾನ್ಯ ಕಾಲಗಣನೆಯ ಪ್ರಕಾರ ಕ್ರಿ.ಶ. 1616ರ ಏಪ್ರಿಲ್ 26ರ ಸೋಮವಾರಕ್ಕೆ ಹೊಂದುತ್ತದೆ. ಇದೇ ವೇಳೆ ಮಾಲ್ಲೂರ (ಇಂದಿನ ಮಲ್ಲಾರ್) ಪ್ರದೇಶದಲ್ಲಿ ಹಿರಿಯರ ಅನುಮತಿಯೊಂದಿಗೆ ಸಾಂತೈಯನಯ್ಯನ ಪುತ್ರ ಮಲೈಯ ಈ ಶಾಸನವನ್ನು ಮಾಡಿಸಿದ್ದಾನೆ ಎಂಬ ಮಾಹಿತಿಯೂ ದೊರೆತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು ಮಣ್ಣಲ್ಲಿ ಗಂಗರ ಕಾಲದ ಹುಲಿಬೇಟೆ ವೀರರಹಸ್ಯ! ಕ್ರಿ.ಶ 850ರ ಕಾಲಮಾನದ ಕನ್ನಡದ ಶಾಸನ ರಕ್ಷಣೆಗೆ ಒತ್ತಾಯ&lt;/strong&gt;&lt;/p&gt;&lt;p&gt;ಅಧ್ಯಯನದಲ್ಲಿ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸ ಆಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್. ಸಹಕರಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉತ್ಖನನ ವೇಳೆ 30ಕ್ಕೂ ಅಧಿಕ ರಾವಣನ ವಿಗ್ರಹಗಳು ಪತ್ತೆ! ಇತಿಹಾಸ ತಜ್ಞರಲ್ಲಿ ಆಶ್ಚರ್ಯ&lt;/strong&gt;&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/udupi-an-unpublished-inscription-dating-back-to-1616-ad-has-been-discovered-in-mala-village-of-karkala-taluk-mrq/articleshow-kktrt8r"/>
        </item>
        <item>
            <title><![CDATA[ಬರದ ಮಧ್ಯೆಯೂ ರಾಜ್ಯದ ಹಲವೆಡೆ ಭಾರೀ ಮಳೆ: ಕಣ್ಮನ ಸೆಳೆದ ಹೊಗೇನಲ್‌ ಜಲಪಾತ!]]></title>
            <link>https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n</link>
            <guid isPermaLink="true">https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n</guid>
            <pubDate>Wed, 05 Aug 2026 05:29:20 +0530</pubDate>
            <description><![CDATA[&lt;p&gt;ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್&zwnj; ನೀರು ಬಿಡುಗಡೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz7k3sxapnx47sc2vamewk44,imgname-----------------------2026-08-05t051946.874-1785887582122.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.5)&lt;/strong&gt;: ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್&zwnj; ನೀರು ಬಿಡುಗಡೆ ಮಾಡಲಾಗಿದೆ.&lt;/p&gt;&lt;p&gt;ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಆರ್ಭಟ ಮುಂದುವರಿದಿದ್ದು, ಕುಂದಾಪುರ ಮತ್ತು ಹೆಬ್ರಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕೊರ್ಗಿ ಗ್ರಾಮದ ಮನೆವೊಂದಕ್ಕೆ ಹಾನಿಯಾಗಿ ₹80,000 ನಷ್ಟ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 104.40 ಮಿ.ಮೀ. ಮಳೆ ದಾಖಲಾಗಿದೆ.&lt;/p&gt;&lt;p&gt;ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸಣ್ಣದಾಗಿ ಬರುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಭರ್ಜರಿಯಾಗಿ ಸುರಿದಿದೆ. ಚನ್ನಗಿರಿ ತಾಲೂಕಿನ ಹೊಸಕೆರೆ ಮತ್ತು ಕೊರಟಿಕೆರೆ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ನೆಲಸಮವಾಗಿವೆ.&lt;/p&gt;&lt;h2&gt;ಕಣ್ಮನ ಸೆಳೆದ ಹೊಗೇನಲ್&zwnj; ಜಲಪಾತ:&lt;/h2&gt;&lt;p&gt;ಕಬಿನಿ ಜಲಾಶಯದಿಂದ ಮಂಗಳವಾರ 25,000 ಕ್ಯುಸೆಕ್&zwnj; ನೀರು ಕಾವೇರಿ ನದಿಗೆ ಬಿಡುಗಡೆಗೊಳಿಸಲಾಯಿತು. ಇದರ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತವು ರುದ್ರ ರಮಣೀಯವಾಗಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕರ್ನಾಟಕದ ನಯಾಗರ ಎಂದೇ ಕರೆಯಲ್ಪಡುವ ಈ ಜಲಪಾತವು ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದಾಗಿ ಬತ್ತಿ ಹೋಗುವ ಹಂತಕ್ಕೆ ತಲುಪಿತ್ತು.&lt;/p&gt;&lt;p&gt;ಇದೀಗ ಮತ್ತೆ ತನ್ನ ಮೂಲ ಸೌಂದರ್ಯವನ್ನು ಪಡೆದುಕೊಂಡಿದ್ದು, ದೋಣಿ ವಿಹಾರ, ಜಲಪಾತದ ಸಮೀಪದಲ್ಲಿ ಸ್ನಾನ, ಫೋಟೋ ಶೂಟ್&zwnj; ಮತ್ತು ಪ್ರಕೃತಿ ಸೊಬಗನ್ನು ಸವಿಯಲು ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ.&lt;/p&gt;&lt;p&gt;ರೈತರಿಗೆ ಬಿತ್ತನೆಗೆ ಇದು ಅನುಕೂಲವಾಗಿದ್ದು, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ಬೆಳೆಯಲು ಮಳೆ ಪೂರಕವಾಗಿದೆ. ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶಾಲೆ-ಕಾಲೇಜು, ಕಚೇರಿಗಳು ಬಿಡುವ ವೇಳೆಯಲ್ಲಿ ಮಳೆ ಬರುತ್ತಿದ್ದ ಕಾರಣ ಮನೆಗೆ ತೆರಳಲು ಜನರು ಪರದಾಡಿದರು. ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತ್ತಿದ್ದರಿಂದ ವಾಹನ ಸವಾರರಿಗೆ ದಾರಿ ಕಾಣದಂತಾಗಿತ್ತು. ಮಳೆಯಿಂದಾಗಿ ಬೀದಿಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.&lt;/p&gt;&lt;h3&gt;ಸಂಚಾರ ಸ್ಥಗಿತ:&lt;/h3&gt;&lt;p&gt;ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದ್ದು, ಮಡಿಕೇರಿ ರಸ್ತೆಗೆ ಅಡ್ಡಲಾಗಿ ಮರಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿದರು. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಸರಾಸರಿ 8.90 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 7147 ಕ್ಯುಸೆಕ್ ನೀರಿನ ಒಳಹರಿವು ಇದ್ದು, 6291 ಕ್ಯುಸೆಕ್ ಹೊರ ಹರಿವು ಕಂಡುಬಂತು.&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n"/>
        </item>
        <item>
            <title><![CDATA[ಮುಂಬೈನಿಂದ ವೃದ್ಧನನ್ನು ಬಲವಂತವಾಗಿ ಉಡುಪಿಗೆ ಕರೆತಂದು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ಕುಟುಂಬ!]]></title>
            <link>https://kannada.asianetnews.com/karnataka-districts/mumbai-family-abandons-ailing-elderly-father-at-udupi-railway-station-case-registered-in-manipal-gdp/articleshow-ne9sp2z</link>
            <guid isPermaLink="true">https://kannada.asianetnews.com/karnataka-districts/mumbai-family-abandons-ailing-elderly-father-at-udupi-railway-station-case-registered-in-manipal-gdp/articleshow-ne9sp2z</guid>
            <pubDate>Thu, 16 Jul 2026 11:22:07 +0530</pubDate>
            <description><![CDATA[ಮುಂಬೈನಲ್ಲಿ ವಾಸವಿದ್ದ 67 ವರ್ಷದ ಜಗದೀಶ್ ಶೆಟ್ಟಿ ಎಂಬುವವರನ್ನು ಅವರ ಪತ್ನಿ ಮತ್ತು ಮಕ್ಕಳೇ ಉಡುಪಿಗೆ ಕರೆತಂದು ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ. ದೈಹಿಕ ಮತ್ತು ಮಾನಸಿಕ ಹಿಂಸೆಯ ಬಗ್ಗೆ ವೃದ್ಧರು ದೂರು ನೀಡಿದ್ದು, ಮಣಿಪಾಲ ಪೊಲೀಸರು ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxmqj1agpxbhy32dnthpxbff,imgname-udupi-railway-station-1784180966734.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಣಿಪಾಲ:&lt;/strong&gt; ರಕ್ತಸಂಬಂಧಗಳೇ ಬೆಲೆ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮುಂಬೈಯ ವೃದ್ಧರೊಬ್ಬರನ್ನು ಸ್ವತಃ ಹೆಂಡತಿ ಮಕ್ಕಳೇ ಉಡುಪಿಗೆ ಕರೆದುಕೊಂಡು ಬಂದು ಬಿಟ್ಟು ಹೋದ ಪ್ರಕರಣ ಮಣಿಪಾಲ ಠಾಣೆಯಲ್ಲಿ ದಾಖಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 67 ವರ್ಷದ ವೃದ್ಧರೊಬ್ಬರನ್ನು ಮುಂಬೈ ನಿಂದ ರೈಲಿನಲ್ಲಿ ಕರೆದುಕೊಂಡು ಬಂದು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಲವಂತವಾಗಿ ಇಳಿಸಿ, ಬಿಟ್ಟು ಹೋಗಿದ್ದಾರೆ. ಮೂಲತಃ ಮಣಿಪಾಲದವರಾದ ಜಗದೀಶ್ ಶೆಟ್ಟಿ (67) ಎಂಬ ಹಿರಿಯ ಜೀವವೇ ಮನೆಯವರ ಈ ಕ್ರೂರತ್ವಕ್ಕೆ ತುತ್ತಾದ ದುರ್ದೈವಿ. ಇವರು ಮುಂಬೈನ ಪನ್ವೇಲ್&zwnj;ನಲ್ಲಿ ತಮ್ಮ ಇಡೀ ಕುಟುಂಬದೊಂದಿಗೆ ವಾಸವಾಗಿದ್ದರು.&lt;/p&gt;&lt;h2&gt;ಮುಂಬೈಯಿಂದ ಕರೆತಂದು ರಸ್ತೆಗೆ ತಳ್ಳಿದ ಹೆಂಡತಿ, ಮಕ್ಕಳು&lt;/h2&gt;&lt;p&gt;ದೂರುದಾರರಾದ ಜಗದೀಶ್ ಶೆಟ್ಟಿ ಅವರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರ ಪತ್ನಿ ಸುನಂದಾ, ಪುತ್ರಿಯರಾದ ಶ್ವೇತಾ, ನೀತಾ ಮತ್ತು ಮಗ ನಿತಿನ್ ಸೇರಿ ಜುಲೈ 11 ರಂದು ಜಗದೀಶ್ ಶೆಟ್ಟಿ ಅವರನ್ನು ಮುಂಬೈ ಬಳಿಯ ಪನ್ವೇಲ್&zwnj;ನಿಂದ ಬಲವಂತವಾಗಿ ರೈಲಿನಲ್ಲಿ ಉಡುಪಿಗೆ ಕರೆದುಕೊಂಡು ಬಂದಿದ್ದರು.&lt;/p&gt;&lt;p&gt;ಮರುದಿನ ಅಂದರೆ ಜುಲೈ 12 ರಂದು ಬೆಳಗ್ಗೆ ಸುಮಾರು 8:30 ರ ಸುಮಾರಿಗೆ, ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲು ನಿಲ್ದಾಣದ ಬಳಿ ಎಲ್ಲರೂ ಆಟೋರಿಕ್ಷಾದಲ್ಲಿ ಬಂದಿದ್ದಾರೆ. ಅಲ್ಲಿ ಜಗದೀಶ್ ಶೆಟ್ಟಿ ಅವರನ್ನು ಆಟೋದಿಂದ ಬಲವಂತವಾಗಿ ಕೆಳಗೆ ಇಳಿಸಿದ ಕುಟುಂಬಸ್ಥರು, ಇನ್ನು ಮುಂದೆ ನಾವು ನಿನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ, ನಿನ್ನನ್ನು ನೋಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.&lt;/p&gt;&lt;h2&gt;ದೈಹಿಕ, ಮಾನಸಿಕ ಹಿಂಸೆ ಮತ್ತು ಹಸಿವಿನ ಯಾತನೆ&lt;/h2&gt;&lt;p&gt;ಮನೆಯವರಿಂದಲೇ ಬೀದಿಗೆ ತಳ್ಳಲ್ಪಟ್ಟ ಜಗದೀಶ್ ಶೆಟ್ಟಿ ಅವರು ಹೇಗೋ ಮಣಿಪಾಲ ಪೊಲೀಸ್ ಠಾಣೆಗೆ ತಲುಪಿ ತಮ್ಮ ಹೆಂಡತಿ ಹಾಗೂ ಮಕ್ಕಳ ವಿರುದ್ಧ ಗಂಭೀರವಾದ ದೂರು ನೀಡಿದ್ದಾರೆ. &quot;ನಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ನನ್ನ ಪತ್ನಿ ಮತ್ತು ಮಕ್ಕಳು ನನಗೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತಿರಲಿಲ್ಲ. ಕನಿಷ್ಠ ಪಕ್ಷ ದಿನಕ್ಕೆ ಒಂದು ಹೊತ್ತು ಸರಿಯಾಗಿ ಊಟ-ತಿಂಡಿಯನ್ನೂ ನೀಡದೆ ತೀವ್ರವಾಗಿ ಸತಾಯಿಸುತ್ತಿದ್ದರು. ಕಾನೂನುಬದ್ಧವಾಗಿ ನನ್ನ ಆರೈಕೆ ಮತ್ತು ರಕ್ಷಣೆ ಮಾಡಬೇಕಾದವರೇ ನನಗೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಹಿಂಸೆ ನೀಡಿ, ಕೊನೆಗೆ ಒಂಟಿಯಾಗಿ ಕೈಬಿಟ್ಟು ಹೋಗಿದ್ದಾರೆ ಎಂದು ಶೆಟ್ಟಿ ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;ಮಣಿಪಾಲ ಪೊಲೀಸರಿಂದ ಪ್ರಕರಣ ದಾಖಲು&lt;/h2&gt;&lt;p&gt;ಹಿರಿಯ ನಾಗರಿಕರಾದ ಜಗದೀಶ್ ಶೆಟ್ಟಿ ಅವರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ, 2007 ರ ಸೆಕ್ಷನ್ 24 ರ ಅಡಿಯಲ್ಲಿ (ಅಪರಾಧ ಸಂಖ್ಯೆ 109/2026) ಆರೋಪಿಗಳಾದ ಪತ್ನಿ ಸುನಂದಾ, ಪುತ್ರಿಯರಾದ ಶ್ವೇತಾ, ನೀತಾ ಮತ್ತು ಪುತ್ರ ನಿತಿನ್ ವಿರುದ್ಧ ಕಠಿಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.&lt;/p&gt;&lt;p&gt;ಸದ್ಯ ಪೊಲೀಸರು ವೃದ್ಧರಿಗೆ ಸೂಕ್ತ ಆಸರೆ ಕಲ್ಪಿಸಿದ್ದು, ತಲೆಮರೆಸಿಕೊಂಡಿರುವ ಕುಟುಂಬಸ್ಥರ ಪತ್ತೆಗಾಗಿ ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ತುತ್ತು ಅನ್ನ ನೀಡದೆ, ಕಾಯಿಲೆಗೆ ಮದ್ದನ್ನೂ ಕೊಡಿಸದೆ ಹೆತ್ತ ತಂದೆಯನ್ನು ಇಳಿವಯಸ್ಸಿನಲ್ಲಿ ಬೀದಿಗೆ ತಳ್ಳಿದ ಮಕ್ಕಳ ಕ್ರೌರ್ಯಕ್ಕೆ ಏನನ್ನಬೇಕೋ&lt;/p&gt;]]></content:encoded>
            <category>udupi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mumbai-family-abandons-ailing-elderly-father-at-udupi-railway-station-case-registered-in-manipal-gdp/articleshow-ne9sp2z"/>
        </item>
        <item>
            <title><![CDATA[ಉಡುಪಿಯಲ್ಲಿ ಭೀಕರ ಅಪಘಾತ: ಖಾಸಗಿ ಬಸ್‌ ಡಿಕ್ಕಿಯಾಗಿ ನಗರಸಭೆ ಮಾಜಿ ಉಪಾಧ್ಯಕ್ಷೆ ಸ್ಥಳದಲ್ಲೇ ಸಾವು!]]></title>
            <link>https://kannada.asianetnews.com/karnataka-districts/udupi-former-cmc-vice-president-lakshmi-manjunath-dies-in-bus-accident-san/articleshow-qcx9cc1</link>
            <guid isPermaLink="true">https://kannada.asianetnews.com/karnataka-districts/udupi-former-cmc-vice-president-lakshmi-manjunath-dies-in-bus-accident-san/articleshow-qcx9cc1</guid>
            <pubDate>Sat, 01 Aug 2026 15:15:15 +0530</pubDate>
            <description><![CDATA[&lt;p&gt;ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ ಹಿಂದೂ ಮುಖಂಡ ಮಂಜುನಾಥ್ ಕೊಳ ಅವರ ಪತ್ನಿ ಲಕ್ಷ್ಮೀ ಮಂಜುನಾಥ್ ಕೊಳ ಅವರು ನಗರದ ಲಯನ್ಸ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ದುರಂತವಾಗಿ ಮೃತಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyyba1gxy2dygwpbt092thew,imgname-udupi-manjunath-kola-wife-lakshmi-1785577408029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಆ.1): &lt;/strong&gt;ನಗರದ ಕೋರ್ಟ್ ರಸ್ತೆಯ ಲಯನ್ಸ್ ಸರ್ಕಲ್ ಬಳಿ ಶನಿವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಹಾಗೂ ಹಿಂದೂ ಮುಖಂಡ ಮಂಜುನಾಥ್ ಕೊಳ ಅವರ ಪತ್ನಿ ಲಕ್ಷ್ಮೀ ಮಂಜುನಾಥ್ ಕೊಳ (37) ಸ್ಥಳದಲ್ಲೇ ದುರಂತವಾಗಿ ಮೃತಪಟ್ಟಿದ್ದಾರೆ. ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮೀ ಅವರು, ಬಳಿಕ ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಉಡುಪಿ ಶಾಸಕರ ಕಚೇರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಮನೆಗೆ ತೆರಳಲು ನಗರದ ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಬಸ್&zwnj; ಅವರಿಗೆ ಭೀಕರವಾಗಿ ಢಿಕ್ಕಿ ಹೊಡೆದಿದೆ.&lt;/p&gt;&lt;h2&gt;&lt;strong&gt;ಸ್ಥಳದಲ್ಲೇ ಕೊನೆಯುಸಿರೆಳೆದ ಮಾಜಿ ಉಪಾಧ್ಯಕ್ಷೆ&lt;/strong&gt;&lt;/h2&gt;&lt;p&gt;ಬಸ್ ಡಿಕ್ಕಿಯಾದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಲಕ್ಷ್ಮೀ ಮಂಜುನಾಥ್ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/udupi-former-cmc-vice-president-lakshmi-manjunath-dies-in-bus-accident-san/articleshow-qcx9cc1"/>
        </item>
        <item>
            <title><![CDATA[ಇನ್ನೂ ಎಷ್ಟು ದಿನ ಮಳೆ ಸುರಿಯುತ್ತೆ..? ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?]]></title>
            <link>https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn</link>
            <guid isPermaLink="true">https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn</guid>
            <pubDate>Mon, 03 Aug 2026 10:52:13 +0530</pubDate>
            <description><![CDATA[&lt;p&gt;ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತಗೊಂಡಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಾಗೂ ಕಾರ್ಕಳದಲ್ಲಿ ಕಿರು ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz313w30f1gdqv7pkgfgntfd,imgname-rain--1--1785734492255.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಕಾರವಾರ: &lt;/strong&gt;ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದೂ ಕೂಡ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಪ್ರಮುಖ ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಇಂದು ಆರೆಂಜ್ ಅಲರ್ಟ್, ನಾಳೆ ಎಲ್ಲೋ ಅಲರ್ಟ್&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ, ಮಲೆನಾಡಿನ ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ನಾಳೆಯಿಂದ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ಮುನ್ಸೂಚನೆ ಇದೆ.&lt;/p&gt;&lt;h2&gt;&lt;strong&gt;ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಗರದ ಕೋಟೆ ಕೆರೆ ತುಂಬಿ ಹರಿಯುತ್ತಿದ್ದು, ನೀರು ರಸ್ತೆಗೆ ನುಗ್ಗಿದೆ. ಹಲವು ಬಡಾವಣೆಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಇತ್ತ ದಾಂಡೇಲಿಯಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಗೆ ಮಸಿದಿಗಲ್ಲಿಯ ಯುಸೂಫ್ ಶೇಖ್ ಎಂಬುವವರ ಮನೆ ಕುಸಿದಿದೆ. ಮನೆಯಲ್ಲಿದ್ದ ಇಬ್ಬರು ವೃದ್ಧರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;h2&gt;&lt;strong&gt;ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು&lt;/strong&gt;&lt;/h2&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಎಎಂಆರ್ (AMR) ಡ್ಯಾಂನಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನೇತ್ರಾವತಿ ನದಿ ತೀರದ ಜನರಲ್ಲಿ ಆತಂಕ ಶುರುವಾಗಿದೆ. ಬಂಟ್ವಾಳದ ಅಲಡ್ಕ, ಬೋಗೋಡಿ, ನಂದಾವರ, ಗೂಡಿನಬಳಿ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.&lt;/p&gt;&lt;h2&gt;&lt;strong&gt;ಸಂಪರ್ಕ ಕಡಿತಗೊಳಿಸಿದ ಕಿರು ಸೇತುವೆ&lt;/strong&gt;&lt;/h2&gt;&lt;p&gt;ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿವೆ. ನೀರಿನ ಮಟ್ಟ ಹೆಚ್ಚಾದ ಕಾರಣ ಇಲ್ಲಿನ ಕಿರು ಸೇತುವೆಯೊಂದು ಮುಳುಗಡೆಯಾಗಿದ್ದು, ಸ್ಥಳೀಯ ಗ್ರಾಮಸ್ಥರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಹೊಳೆ-ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಅಬ್ಬರ ಜೋರಾಗಿರುವುದರಿಂದ ನದಿ ಪಾತ್ರದ ಜನರು ಹಾಗೂ ಗುಡ್ಡಗಾಡು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸೂಚಿಸಿವೆ.&lt;/p&gt;]]></content:encoded>
            <category>udupi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn"/>
        </item>
        <item>
            <title><![CDATA[ಮೃತ ಕಾನ್‌ಸ್ಟೇಬಲ್ ಅರ್ಜುನ್ ಶಂಕರ್ ಕುಟುಂಬಕ್ಕೆ 1.45 ಕೋಟಿ ರೂಪಾಯಿ ವಿಮೆ ಹಸ್ತಾಂತರ]]></title>
            <link>https://kannada.asianetnews.com/karnataka-districts/udupi-rs-1-point-45-crore-insurance-handed-over-to-family-of-deceased-constable-arjun-shankar-nellur-mrq/articleshow-v0e5oxv</link>
            <guid isPermaLink="true">https://kannada.asianetnews.com/karnataka-districts/udupi-rs-1-point-45-crore-insurance-handed-over-to-family-of-deceased-constable-arjun-shankar-nellur-mrq/articleshow-v0e5oxv</guid>
            <pubDate>Thu, 06 Aug 2026 05:47:40 +0530</pubDate>
            <description><![CDATA[ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಉಡುಪಿ ಜಿಲ್ಲಾ ಪೊಲೀಸ್ ಸಿಬ್ಬಂದಿ ಅರ್ಜುನ ಶಂಕರ ನೆಲ್ಲೂರ ಅವರ ಕುಟುಂಬಕ್ಕೆ ಎಸ್.ಬಿ.ಐ. ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ 1.45 ಕೋಟಿ ರೂಪಾಯಿ ವಿಮಾ ಚೆಕ್ ಹಸ್ತಾಂತರಿಸಲಾಯಿತು. ಪೊಲೀಸ್ ಇಲಾಖೆ ಮತ್ತು ಎಸ್.ಬಿ.ಐ. ನಡುವಿನ ಒಪ್ಪಂದದಂತೆ ಈ ಸೌಲಭ್ಯವನ್ನು ಒದಗಿಸಲಾಗಿದ್ದು, ಇದರ ಸದುಪಯೋಗ ಪಡೆಯಲು ಇತರೆ ಸಿಬ್ಬಂದಿಗೆ ಕರೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kza6mspnab131xd4neajeyfm,imgname-udupi-constable-1785975170773.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ:&lt;/strong&gt; ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿ ಅರ್ಜುನ ಶಂಕರ ನೆಲ್ಲೂರ ಕುಟುಂಬಕ್ಕೆ ಎಸ್.ಬಿ.ಐ. ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ 1,45,00,000 ರು. ಮೊತ್ತದ ವಿಮಾ ಚೆಕ್ ಹಸ್ತಾಂತರಿಸಲಾಯಿತು.&lt;/p&gt;&lt;p&gt;2023-24ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಸಿ.ಎಸ್.ಪಿ. ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ ಅರ್ಜುನ ನೆಲ್ಲೂರ ಹಾವೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.&lt;/p&gt;&lt;h2&gt;&lt;strong&gt;ವೈಯಕ್ತಿಕ ಅಪಘಾತ ವಿಮೆಯ ಚೆಕ್&zwnj; ಹಸ್ತಾಂತರ&lt;/strong&gt;&lt;/h2&gt;&lt;p&gt;ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಟೇಟ್&zwnj; ಬ್ಯಾಂಕ್ ಆಫ್&zwnj; ಇಂಡಿಯಾದ ಪ್ರಾದೇಶಿಕ ಪ್ರಬಂಧಕರಾದ ಬಿ. ಪ್ರಕಾಶ್ ಅಡಿಗ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಉಪಸ್ಥಿತಿಯಲ್ಲಿ ಈ ವೈಯಕ್ತಿಕ ಅಪಘಾತ ವಿಮೆಯ ಚೆಕ್&zwnj; ಹಸ್ತಾಂತರಿಸಿದರು.&lt;/p&gt;&lt;p&gt;ಪೊಲೀಸ್ ಇಲಾಖೆ ಮತ್ತು ಎಸ್.ಬಿ.ಐ. ನಡುವಿನ ಒಪ್ಪಂದದಂತೆ ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿಯವರ ಕುಟುಂಬಕ್ಕೆ ಈ ವಿಮಾ ಸೌಲಭ್ಯ ನೀಡಲಾಗುತ್ತದೆ. ಇಂಥ ವಿಮಾ ಯೋಜನೆಗಳು ಎಲ್ಲ ಎಸ್&zwnj;.ಬಿ.ಐ. ಶಾಖೆಗಳಲ್ಲಿ ಲಭ್ಯವಿದ್ದು ಇದರ ಸದುಪಯೋಗವನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ ಪಡೆದುಕೊಳ್ಳಬೇಕು ಎಂದು ಪ್ರಕಾಶ ಅಡಿಗ ವಿನಂತಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಚಿವನಾಗಿ ಮೊದಲ ಭೇಟಿಯಲ್ಲೇ 'ಕೊಡಗಿನ ಮೂಲ ಸಮಸ್ಯೆ' ಪರಿಹಾರಕ್ಕೆ ಕೈಹಾಕಿದ ಪಿ.ಎಂ. ನರೇಂದ್ರಸ್ವಾಮಿ!&lt;/strong&gt;&lt;/p&gt;&lt;p&gt;ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಕೀಳಂಜೆ ಶ್ರೀಕೃಷ್ಣರಾಜ ಭಟ್, ಮಲ್ಪೆ ಶಾಖೆ ವ್ಯವಸ್ಥಾಪಕ ರಾಜೇಶ್ ಗಂಗೊಳ್ಳಿ ಮತ್ತು ಇತರ ಅಧಿಕಾರಿಗಳಾದ ಶ್ರೀನಿವಾಸ್, ಪ್ರಣವ್ ಪೈ, ತನ್ಮಯ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮೃತ ಪೇದೆ ಕುಟುಂಬಸ್ಥರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Viral: ಒಂದೇ ಒಂದು ವಿಡಿಯೋ, ಬಿಎಂಟಿಸಿ ಚಾಲಕ ಸಸ್ಪೆಂಡ್! ವಿಡಿಯೋ ನೋಡಿ ಶಾಕ್&zwnj; ಆದ ಬೆಂಗಳೂರಿನ ಜನ!&lt;/strong&gt;&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/udupi-rs-1-point-45-crore-insurance-handed-over-to-family-of-deceased-constable-arjun-shankar-nellur-mrq/articleshow-v0e5oxv"/>
        </item>
        <item>
            <title><![CDATA[ಕರ್ನಾಟಕದ ಕೆಲವೆಡೆ ಭಾರಿ ಮಳೆ, ರಾಜ್ಯ ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ]]></title>
            <link>https://kannada.asianetnews.com/karnataka-districts/heavy-rain-in-parts-of-karnataka-schools-and-colleges-in-udupi-declared-holiday-tomorrow/articleshow-vvp814g</link>
            <guid isPermaLink="true">https://kannada.asianetnews.com/karnataka-districts/heavy-rain-in-parts-of-karnataka-schools-and-colleges-in-udupi-declared-holiday-tomorrow/articleshow-vvp814g</guid>
            <pubDate>Fri, 24 Jul 2026 21:14:45 +0530</pubDate>
            <description><![CDATA[&lt;p&gt;ಕರ್ನಾಟಕ ಹಲವು ಜಿಲ್ಲೆಗಳು ಬರಗಾಲ ಪರಿಸ್ಥಿತಿ ಎದುರಿಸುತ್ತಿದ್ದರೆ, ಕೆಲವೇ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದೀಗ ದಕ್ಷಿಣ ಕನ್ನಡ ಬಳಿಕ ಉಡುಪಿಯಲ್ಲಿ ಮಳೆಯಾಗುತ್ತಿದೆ. ಪರಿಣಾಮ ನಾಳೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwexq061yhgxbwyeqwt28hj8,imgname-karnataka-rain-school-holiday-1782912352449.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.24) &lt;/strong&gt;ಕರ್ನಾಟಕದ ಹಲವು ಜಿಲ್ಲೆಗಳು ಬರಗಾಲ ಪರಿಸ್ಥಿತಿ ಎದುರಿಸುತ್ತಿದೆ. ಉತ್ತಮ ಮಳೆಯಾಗುತ್ತಿದ್ದ ಹಲವು ಜಿಲ್ಲೆಗಳು ಮಳೆ ಕೊರತೆ ಎದುರಿಸಿದೆ. ಇನ್ನು ದಕ್ಷಿಣ ಕನ್ನಡದಲ್ಲಿ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಆದರೆ ಕೊಡಗು, ಉಡುಪಿಯಲ್ಲಿ ಮಳೆ ಕೊರತೆ ಕಂಡುಬಂದಿತ್ತು. ಇದೀಗ ಉಡುಪಿಯಲ್ಲಿ ಭಾರಿ ಮಳೆಯಾಗುತ್ತಿದೆ. ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಮುನ್ನಚ್ಚೆರಿಕಾ ಕ್ರಮವಾಗಿ ನಾಳೆ (ಜುಲೈ 25) ಉಡುಪಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.&lt;/p&gt;&lt;h2&gt;ಜಿಲ್ಲಾಧಿಕಾರಿ ಮಹತ್ವದ ಘೋಷಣೆ&lt;/h2&gt;&lt;p&gt;ನಾಳೆ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಸಭೆ ಸೇರಿದ ಉಡುಪಿ ಜಿಲ್ಲಾಧಿಕಾರಿ ಸ್ವೂರಪ ಟಿಕೆ, ಮಹತ್ವದ ಘೋಷಣೆ ಮಾಡಿದ್ದಾರೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಡಿಪ್ಲೋಮೋ, ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.&lt;/p&gt;&lt;h2&gt;ದಕ್ಷಿಣ ಕನ್ನಡಲ್ಲಿ ಭಾರಿ ಮಳೆ&lt;/h2&gt;&lt;p&gt;ದಕ್ಷಿಣ ಕನ್ನಡದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಇಂದು (ಜುಲೈ.24) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿತ್ತ ಅಂಗನವಾಡಿಯಿಂದ ಪಿಯುಸಿ ವರೆಗೆ ಇಂದು ರಜೆ ಘೋಷಣೆ ಮಾಡಲಾಗಿತ್ತು .ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಆದೇಶ ನೀಡಿದ್ದರು.&lt;/p&gt;&lt;h2&gt;ಉತ್ತರ ಕನ್ನಡದಲ್ಲೂ ಭಾರಿ ಮಳೆ&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಪ್ರಮುಖವಾಗಿ ಸಿದ್ದಾಪುರ, ಶಿರಸಿ ಹಾಗೂ ಜೊಯಿಡಾ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು (ಜು.24) ಭಾರಿ ಮಳೆಯಾಗುತಿದ್ದ ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ ತಾಲೂಕುಗಳ ಅಂಗನವಾಡಿ ಹಾಗೂ ಶಾಲೆಗೆ ರಜೆ ಘೋಷಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಹಲೆವೆಡೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮುಂಜಾಗ್ರತಾ ಕ್ರಮಕ್ಕಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.&lt;/p&gt;&lt;p&gt;ಭಾರಿ ಮಳೆಗೆ ಕಾರವಾರದ ಮುದುಗ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಬಂಡೆ ಕಲ್ಲುಗಳು, ಮಣ್ಣು ಹೆದ್ದಾರಿಗೆ ಬಿದ್ದಿದೆ. ಈ ಪ್ರದೇಶದಲ್ಲಿ ಸಂಚಾರಕ್ಕೆ ನಿರ್ಬಂಧ ಇರುವ ಕಾರಣ ಯಾವುದೇ ಸಮಸ್ಯೆ ಆಗಿಲ್ಲ. ಇನ್ನು ಜೋಯಿಡಾದಲ್ಲಿ ಮಳೆ ಅಬ್ಬರಕ್ಕೆ ಮನೆಯ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕುಂಬಾರವಾಡದ ಕಾತೇಲಿಯಲ್ಲಿ ಘಟನೆ ನಡೆದಿದೆ.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/heavy-rain-in-parts-of-karnataka-schools-and-colleges-in-udupi-declared-holiday-tomorrow/articleshow-vvp814g"/>
        </item>
        <item>
            <title><![CDATA['ಹೆಣ್ಣಾನೆ ಇದ್ರೆ ದಾನ ಮಾಡಿ..' ಕೇರಳ ಸಿಎಂಗೆ ಪತ್ರ ಬರೆದ ಸಿಎಂ ಡಿಕೆ ಶಿವಕುಮಾರ್‌]]></title>
            <link>https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va</link>
            <guid isPermaLink="true">https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va</guid>
            <pubDate>Mon, 13 Jul 2026 12:38:25 +0530</pubDate>
            <description><![CDATA[&lt;p&gt;ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗಾಗಿ ಹೆಣ್ಣಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2xg6xfggnqq9znzah8jaq5,imgname-dk-shivakumar--5--1783583218607.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): &lt;/strong&gt;ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯುಳ್ಳ ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಿಗಾಗಿ ಹೆಣ್ಣು ಸಾಕಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತ ವಿನಂತಿ ಮಾಡಿದೆ. ನೆರೆರಾಜ್ಯಗಳಿಗೆ ಸಾಕಾನೆಗಳನ್ನು ದಾನ ಮಾಡುವ ಅಥವಾ ವರ್ಗಾವಣೆ ಮಾಡುವಂತೆ ಕೇರಳ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ಕೇರಳದ ಯಾವುದೇ ದೇವಸ್ಥಾನದಿಂದ ಇಚ್ಛಾಪೂರ್ವಕವಾಗಿ ಹೆಣ್ಣು ಆನೆಯೊಂದನ್ನು ದಾನವಾಗಿ ನೀಡಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.&lt;/p&gt;&lt;p&gt;ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮತ್ತು ದೇವಸ್ಥಾನದ ಆಚರಣೆಗಳಲ್ಲಿ ಭಾಗವಹಿಸಲು ಆನೆಯ ಅಗತ್ಯವಿದೆ. ಚಾಲ್ತಿಯಲ್ಲಿರುವ ಎಲ್ಲಾ ಕಾನೂನು ನಿಬಂಧನೆಗಳು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿಯೇ ಈ ಆನೆ ದಾನದ ಪ್ರಕ್ರಿಯೆಗೆ ನೆರವಾಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಪತ್ರದಲ್ಲಿ ವಿನಂತಿಸಿದ್ದಾರೆ. ಕೇರಳ ಸರ್ಕಾರದ ಈ ತ ನಡೆ ಉಭಯ ರಾಜ್ಯಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ತೆಲಂಗಾಣ ಪ್ರಸ್ತಾವನೆ ತಿರಸ್ಕರಿಸಿದ್ದ ಕೇರಳ&lt;/strong&gt;&lt;/h2&gt;&lt;p&gt;ಇದಕ್ಕೂ ಮುನ್ನ, ತೆಲಂಗಾಣ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಧಾರ್ಮಿಕ ಉದ್ದೇಶಗಳಿಗಾಗಿ ಕೇರಳದ ಅರಣ್ಯ ಇಲಾಖೆಯ ಶಿಬಿರದ ಆನೆಗಳನ್ನು (ರಕ್ಷಿಸಿ ಸಾಕಲಾಗುತ್ತಿರುವ ಆನೆಗಳು) ನೀಡುವಂತೆ ಕೋರಿದ್ದ ಪ್ರಸ್ತಾವನೆಯನ್ನು ಕೇರಳ ಸರ್ಕಾರ ತಿರಸ್ಕರಿಸಿತ್ತು ಎಂದು ಅರಣ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಪ್ರಸ್ತುತ ಕೇರಳದ ಕೊಟ್ಟೂರು, ಧೋನಿ, ಮಲಯಾತ್ತೂರು ಮತ್ತು ಕೊನ್ನಿ ಸೇರಿದಂತೆ ರಾಜ್ಯದಾದ್ಯಂತ ಇರುವ ವಿವಿಧ ಶಿಬಿರಗಳಲ್ಲಿ ಸುಮಾರು 30 ಸಾಕಾನೆಗಳನ್ನು ನಿರ್ವಹಿಸಲಾಗುತ್ತಿದೆ. ಇಡೀ ಕೇರಳ ರಾಜ್ಯದಲ್ಲಿ ಒಟ್ಟು ಸಾಕಾನೆಗಳ ಸಂಖ್ಯೆ ಸುಮಾರು 368 ರಷ್ಟಿದ್ದು, ವಾರ್ಷಿಕವಾಗಿ 15 ರಿಂದ 20 ಆನೆಗಳು ಮೃತಪಡುತ್ತಿವೆ.&lt;/p&gt;&lt;p&gt;ಕೇವಲ ತೆಲಂಗಾಣ ಮಾತ್ರವಲ್ಲದೆ, ಮೂರು ವರ್ಷಗಳ ಹಿಂದೆ ತ್ರಿಪುರಾದ ವ್ಯಕ್ತಿಯೊಬ್ಬರು ಮಾವೇಲಿಕ್ಕರಾದ ದೇವಸ್ಥಾನಕ್ಕೆ ಆನೆಯೊಂದನ್ನು ಉಡುಗೊರೆಯಾಗಿ ನೀಡಲು ಕೋರಿದ್ದ ಮನವಿಯನ್ನೂ ಕೇರಳ ಅಧಿಕಾರಿಗಳು ತಿರಸ್ಕರಿಸಿದ್ದರು. ಅಸ್ಸಾಂ ಮತ್ತು ಇತರ ಆನೆ ಬಾಹುಳ್ಯವಿರುವ ರಾಜ್ಯಗಳಿಂದ ಸಾಕಾನೆಗಳನ್ನು ತರಲು ಈ ಹಿಂದೆ ಕೆಲವು ಮಧ್ಯವರ್ತಿಗಳು ಅನೌಪಚಾರಿಕವಾಗಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಅಂತರರಾಜ್ಯ ಆನೆ ವರ್ಗಾವಣೆಗೆ ಕಠಿಣ ನಿಯಮಗಳು&lt;/strong&gt;&lt;/h2&gt;&lt;p&gt;ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ 'ಸಾಕಾನೆ (ವರ್ಗಾವಣೆ ಅಥವಾ ಸಾರಿಗೆ) ನಿಯಮಗಳು, 2024' ರ ಅಡಿಯಲ್ಲಿ ಅಂತರರಾಜ್ಯ ಆನೆ ವರ್ಗಾವಣೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ಫೆಬ್ರವರಿ 24, 2024 ಕ್ಕಿಂತ ಮೊದಲು ಮಾಲೀಕತ್ವದ ಪ್ರಮಾಣಪತ್ರವನ್ನು ಹೊಂದಿರುವ ಮತ್ತು ಕೇಂದ್ರ ಸಚಿವಾಲಯದ ಎಲೆಕ್ಟ್ರಾನಿಕ್ ಮಾನಿಟರಿಂಗ್ ಅಪ್ಲಿಕೇಶನ್&zwnj;ನಲ್ಲಿ ಜೆನೆಟಿಕ್ ಪ್ರೊಫೈಲ್ (Genetic Profile) ನಮೂದಾಗಿರುವ ಆನೆಗಳ ವರ್ಗಾವಣೆಗೆ ಮಾತ್ರ ಅವಕಾಶವಿರುತ್ತದೆ. ದಾನ ನೀಡುವ ರಾಜ್ಯದ ಮುಖ್ಯ ವನ್ಯಜೀವಿ ಪಾಲಕರು (Chief Wildlife Warden), ಪ್ರಸ್ತುತ ಮಾಲೀಕರು ಆನೆಯನ್ನು ಪೋಷಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಮತ್ತು ಹೊಸ ಸ್ಥಳದಲ್ಲಿ ಪ್ರಸ್ತುತ ಸಂದರ್ಭಕ್ಕಿಂತ ಉತ್ತಮ ಪಾಲನೆ ಸಿಗಲಿದೆ ಎಂದು ತೃಪ್ತಿಪಟ್ಟರೆ ಮಾತ್ರ ವರ್ಗಾವಣೆಗೆ ಒಪ್ಪಿಗೆ ನೀಡಬಹುದು.&lt;/p&gt;&lt;h2&gt;&lt;strong&gt;ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಕೇರಳ ಅರಣ್ಯ ಇಲಾಖೆ&lt;/strong&gt;&lt;/h2&gt;&lt;p&gt;ಕರ್ನಾಟಕ ಮುಖ್ಯಮಂತ್ರಿಗಳಿಂದ ಪತ್ರ ಬಂದಿರುವುದನ್ನು ಕೇರಳದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ದೇವಸ್ಥಾನಗಳಿಂದ ದಾನಿಗಳನ್ನು ಹುಡುಕುವುದು ಅಥವಾ ಆನೆ ದಾನದ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಅರಣ್ಯ ಇಲಾಖೆಯ ಕಾನೂನು ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ನಿಯಮಾವಳಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಸಲ್ಲಿಕೆಯಾಗುವ ಅರ್ಜಿಗಳನ್ನು ಮೌಲ್ಯೀಕರಿಸುವುದು ಮತ್ತು ಅದರ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಇಲಾಖೆಯ ಕೆಲಸ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>udupi</category>
            <dc:creator>Santosh Naik</dc:creator>
            <atom:link href="https://kannada.asianetnews.com/udupi/karnataka-requests-kerala-female-elephant-kollur-mookambika-temple-dk-shivakumar-san/articleshow-w9px5va"/>
        </item>
        <item>
            <title><![CDATA[ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲೇ ಟೇಬಲ್ ಹಾಕಿ ಕುಳಿತ ಯುವಕ! ಬುದ್ಧಿ ಹೇಳಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ!]]></title>
            <link>https://kannada.asianetnews.com/karnataka-districts/udupi-youth-blocks-kota-national-highway-66-road-with-table-police-arrested-viral-video/articleshow-xypd6ft</link>
            <guid isPermaLink="true">https://kannada.asianetnews.com/karnataka-districts/udupi-youth-blocks-kota-national-highway-66-road-with-table-police-arrested-viral-video/articleshow-xypd6ft</guid>
            <pubDate>Tue, 14 Jul 2026 20:22:48 +0530</pubDate>
            <description><![CDATA[&lt;p&gt;ಉಡುಪಿಯ ಕೋಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೊಬ್ಬ ಟೇಬಲ್, ಟಿವಿ ಇಟ್ಟು ರಸ್ತೆ ತಡೆದು ಹುಚ್ಚಾಟ ಮೆರೆದಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೇ ಕತ್ತಿ ಬೀಸಿ ಹಲ್ಲೆಗೆ ಯತ್ನಿಸಿದ್ದು, ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxggz50cwa41q02gxxjz44nh,imgname-udupi-viral-video-1784039838732.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.14): ಕೋ&lt;/strong&gt;ಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೊಬ್ಬ ನಡೆಸಿದ ಹುಚ್ಚಾಟ ವಾಹನ ಸವಾರರು ಮತ್ತು ಸ್ಥಳೀಯ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಹೆದ್ದಾರಿಯ ಮಧ್ಯೆಯೇ ಟೇಬಲ್ ಇಟ್ಟು, ಅದರ ಮೇಲೆ ಟಿವಿ ಹಾಗೂ ಮ್ಯೂಸಿಕ್ ಸಿಸ್ಟಮ್ ಹಾಕಿ ವಾಹನಗಳನ್ನು ತಡೆಗಟ್ಟಿದ ಘಟನೆ ನಡೆದಿದ್ದು, ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.&lt;/p&gt;&lt;h2&gt;ನಡೆದಿದ್ದೇನು?&lt;/h2&gt;&lt;p&gt;ಬೆಲ್ಲದ ಗಣಪತಿ ದೇವಸ್ಥಾನದ ಸಮೀಪದ ನಿವಾಸಿ ರಂಜಿತ್ ಸೋಮಯಾಜಿ (25) ಎಂಬಾತನೇ ಈ ಕೃತ್ಯ ಎಸಗಿದ ಯುವಕ. ಈತ ಉದ್ದನೆಯ ತಲೆಕೂದಲು ಮತ್ತು ಗಡ್ಡ ಬಿಟ್ಟಿದ್ದು, ವಿಚಿತ್ರವಾದ ನೋಟದಿಂದಲೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರನ್ನು ಭಯಭೀತರನ್ನಾಗಿಸಿದ್ದಾನೆ. ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಟೇಬಲ್ ಹಾಕಿ, ಅದರ ಮೇಲೆ ಟಿವಿಯ ಸೌಂಡ್ ಸ್ಪೀಕರ್ ಇಟ್ಟು ಜೋರಾಗಿ ಹಾಡುಗಳನ್ನು ಹಾಕುತ್ತಾ ರಸ್ತೆಯನ್ನು ಅಡ್ಡಗಟ್ಟಿದ್ದಾನೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಜನರು ಹೆದರಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸರ ಮೇಲೆ ಕತ್ತಿ ಬೀಸಿದ ರಂಜಿತ್:&lt;/strong&gt;&lt;/h2&gt;&lt;p&gt;ಯುವಕನ ಈ ವಿಲಕ್ಷಣ ವರ್ತನೆಯನ್ನು ಕಂಡು ಗಾಬರಿಗೊಂಡ ಸ್ಥಳೀಯರು ತಕ್ಷಣ ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದಾಗ, ಆತ ತನ್ನ ಬಳಿಯಿದ್ದ ಕತ್ತಿಯನ್ನು ತೆಗೆದು ಪೊಲೀಸರಿಗೆ ತೋರಿಸಿದ್ದಾನೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರಂಜಿತ್&zwnj;ನನ್ನು ಸತತ ಪ್ರಯತ್ನದ ನಂತರ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಮಾನಸಿಕ ಅಸ್ವಸ್ಥನೇ?&lt;/strong&gt;&lt;/h2&gt;&lt;p&gt;ಬಂಧಿತ ಯುವಕ ರಂಜಿತ್ ಸೋಮಯಾಜಿಯನ್ನು ವಿಚಾರಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥನಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಆದರೆ, ಆತನ ಕುಟುಂಬದವರು ಆತನ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಟ ಪೊಲೀಸರು ಆತನ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;p&gt;ಈ ಇಡೀ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್&zwnj;ಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಹೆದ್ದಾರಿಯಲ್ಲಿ ಅಟ್ಟಹಾಸ ಮೆರೆದ ಯುವಕನ ಧೈರ್ಯ ಮತ್ತು ಪೊಲೀಸರ ಮೇಲಿನ ಹಲ್ಲೆ ಯತ್ನ ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>udupi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/udupi-youth-blocks-kota-national-highway-66-road-with-table-police-arrested-viral-video/articleshow-xypd6ft"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು-ಉಡುಪಿ-ಕಾರವಾರ ನಡುವೆ ವಂದೇ ಭಾರತ್ ರೈಲು: ಸಂಸದರು ಹೇಳಿದ್ದೇನು?]]></title>
            <link>https://kannada.asianetnews.com/karnataka-districts/konkan-railway-likely-to-merge-with-indian-railways-soon-mp-kota-srinivas-poojary-mrq/articleshow-y3pisgc</link>
            <guid isPermaLink="true">https://kannada.asianetnews.com/karnataka-districts/konkan-railway-likely-to-merge-with-indian-railways-soon-mp-kota-srinivas-poojary-mrq/articleshow-y3pisgc</guid>
            <pubDate>Sat, 18 Jul 2026 08:36:15 +0530</pubDate>
            <description><![CDATA[ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಕಾರ, ಕೊಂಕಣ ರೈಲ್ವೆಯು ಶೀಘ್ರದಲ್ಲೇ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳ್ಳುವ ಸಾಧ್ಯತೆಯಿದೆ. ಈ ವಿಲೀನದಿಂದ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ನಿರೀಕ್ಷಿಸಲಾಗಿದ್ದು, ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಉದ್ಘಾಟನೆ ವೇಳೆ ಅವರು ಈ ಮಾಹಿತಿ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kxsjf68m31tcb0nkdd2qtarm,imgname-mp-kota-srinivas-poojary-1784343402772.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ: &lt;/strong&gt;ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ಸದ್ಯವೇ ವಿಲೀನವಾಗುವ ಸಾಧ್ಯತೆ ಇದೆ. ಇದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯುವುದಲ್ಲದೆ ರೈಲ್ವೆ ಅಭಿವೃದ್ಧಿ, ಜನಸ್ನೇಹಿಗೊಳಿಸಲು ಸಾಧ್ಯವಾಗಲಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.&lt;/p&gt;&lt;p&gt;ಶುಕ್ರವಾರ ಇಲ್ಲಿನ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆ ವತಿಯಿಂದ ಪ್ಲಾಟ್&zwnj;ಫಾರ್ಮ್&zwnj;ಗಳ ನಡುವೆ ಓಡಾಡಲು ಹಿರಿಯ ನಾಗರಿಕರ, ವಿಶೇಷ ಚೇತನರ ಅನುಕೂಲಕ್ಕಾಗಿ 2.26 ಕೋಟಿ ರು. ವೆಚ್ಚದಲ್ಲಿ ಅಳವಡಿಸಲಾದ ಲಿಫ್ಟ್ ಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.&lt;/p&gt;&lt;h2&gt;&lt;strong&gt;ಬಾರ್ಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿ&lt;/strong&gt;&lt;/h2&gt;&lt;p&gt;ಬೆಂಗಳೂರು - ಮಂಗಳೂರು - ಉಡುಪಿ - ಕಾರವಾರ ನಡುವೆ ವಂದೇ ಭಾರತ್ ರೈಲು ಓಡಾಟಕ್ಕೆ ಸಿದ್ದತೆಗಳಾಗುತ್ತಿದ್ದು, ಪ್ರಸ್ತುತ ಪ್ರಾಯೋಗಿಕವಾಗಿ ಸರ್ವೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಾರ್ಕೂರು ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಸುಮಾರು 14 ಕೋಟಿ ರು. ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಮಂಜೂರಾಗುವ ಭರವಸೆ ಇದೆ ಎಂದರು.&lt;/p&gt;&lt;p&gt;ಉಡುಪಿ ಶಾಸಕ ಯಶ್&zwnj;ಪಾಲ್ ಎ ಸುವರ್ಣ ಮಾತನಾಡಿ, ಈ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಹೈಡ್ರೋಜನ್ ಟ್ರೈನ್&zwnj; ಮತ್ತು ಅಮೃತ್ ಯೋಜನೆಯಡಿ ಮೇಲ್ದರ್ಜೆಗೇರಿಲಾದ ದೇಶದ ಸುಮಾರು 75 ರೈಲ್ವೆ ಸ್ಟೇಷನ್&zwnj;ಗಳನ್ನು ಲೋಕಾರ್ಪಣೆ ಮಾಡಿದ್ದು, ಇದೇ ಹೊತ್ತಿಗೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಹಿರಿಯರ ನಾಗರಿಕರಿಗಾಗಿ ಲಿಫ್ಟ್ ಗೆ ಚಾಲನೆ ನೀಡಲಾಗಿದೆ. ಪ್ರಯಾಣಿಕರು ರಾತ್ರಿ ವೇಳೆ ಆಶ್ರಯಕ್ಕಾಗಿ ಈಗಾಗಲೇ ಶೆಲ್ಟರ್ ನಿರ್ಮಿಸಲಾಗಿದೆ. ಮುಂದೆ ಈ ನಿಲ್ದಾಣದ ಸುತ್ತಮುತ್ತಲಿನ ಪರಿಸರವನ್ನು ಸುಂದರಗೊಳಿಸುವ, ರಸ್ತೆಯನ್ನು ಅಗಲಗೊಳಿಸುವ ಯೋಜನೆ ಇದೆ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;₹17.20 ಕೋಟಿ ವೆಚ್ಚದಲ್ಲಿ ಅಳ್ನಾವರ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಪ್ರಧಾನಿ ಮೋದಿ ಲೋಕಾರ್ಪಣೆ&lt;/strong&gt;&lt;/p&gt;&lt;p&gt;ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರೈಲ್ವೆ ಇಲಾಖೆಯ ಉಪಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಕೊಂಕಣ ರೈಲ್ವೆ ಪಿಆರ್&zwnj;ಓ ಸುಧಾ ಕೃಷ್ಣಮೂರ್ತಿ ಮತ್ತಿತರರಿದ್ದರು.&lt;/p&gt;&lt;p&gt;ಕಾರವಾರ ಪ್ರಾದೇಶಿಕ ರೈಲ್ವೆ ಪ್ರಬಂಧಕಿ ಆಶಾ ಶೆಟ್ಟಿ ಸ್ವಾಗತಿಸಿ, ಅವಿನಾಶ್ ಕಾಮತ್ ನಿರೂಪಿಸಿ, ಕೊಂಕಣ ರೈಲ್ವೆಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ದಿಲೀಪ್ ಭಟ್ ವಂದಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದೇಶದ ಮೊದಲ ಜಲಜನಕ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ನರೇಂದ್ರ ಮೋದಿ, ಇತಿಹಾಸ ಬರೆದ ಭಾರತೀಯ ರೈಲ್ವೆ&lt;/strong&gt;&lt;/p&gt;]]></content:encoded>
            <category>udupi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/konkan-railway-likely-to-merge-with-indian-railways-soon-mp-kota-srinivas-poojary-mrq/articleshow-y3pisgc"/>
        </item>
    </channel>
</rss>
