<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 18 Jun 2026 18:06:10 +0530</lastBuildDate>
        <atom:link href="https://kannada.asianetnews.com/rss/tv-talk" rel="self" type="application/rss+xml"/>
        <item>
            <title><![CDATA[Tiffany Gaurika: ಕ್ಯಾಲಿಫೋರ್ನಿಯಾ ವಿವಿಯಿಂದ ಡಿಸ್ಟಿಂಕ್ಷನ್‌ನಲ್ಲಿ MBA ಪದವಿ ಪಡೆದ ಡಾ.ರಾಜ್‌ಕುಮಾರ್‌ ಹೀರೋಯಿನ್‌ ಪುತ್ರಿ!]]></title>
            <link>https://kannada.asianetnews.com/gallery/tv-talk/actress-madhavi-daughter-tiffany-gaurika-mba-graduation-photos-viral-san-0rwu7bl</link>
            <guid isPermaLink="true">https://kannada.asianetnews.com/gallery/tv-talk/actress-madhavi-daughter-tiffany-gaurika-mba-graduation-photos-viral-san-0rwu7bl</guid>
            <pubDate>Tue, 16 Jun 2026 17:00:25 +0530</pubDate>
            <description><![CDATA[&lt;p&gt;ಹಿರಿಯ ನಟಿ ಮಾಧವಿ ಅವರ ಪುತ್ರಿ ಟಿಫಾನಿ ಗೌರಿಕಾ, ಅಮೆರಿಕದ ಪ್ರತಿಷ್ಠಿತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿಸ್ಟಿಂಕ್ಷನ್&zwnj;ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಮಗಳ ಈ ಶೈಕ್ಷಣಿಕ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿರುವ ಮಾಧವಿ, ಸೋಶಿಯಲ್&zwnj; ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಸಂಭ್ರಮಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv82x8892jdk81btt2bax0cc,imgname-madhavi-actress-daughter--2--1781609177353.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿರಿಯ ನಟಿ ಮಾಧವಿ ಅವರ ಪುತ್ರಿ ಟಿಫಾನಿ ಗೌರಿಕಾ, ಅಮೆರಿಕದ ಪ್ರತಿಷ್ಠಿತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿಸ್ಟಿಂಕ್ಷನ್&zwnj;ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಮಗಳ ಈ ಶೈಕ್ಷಣಿಕ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿರುವ ಮಾಧವಿ, ಸೋಶಿಯಲ್&zwnj; ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಸಂಭ್ರಮಿಸಿದ್ದಾರೆ.&lt;/p&gt;&lt;img&gt;&lt;p&gt;ಒಂದಾನೊಂದು ಕಾಲದ ಬಹುಭಾಷಾ ತಾರೆ ಮಾಧವಿ ಮತ್ತು ರಾಲ್ಫ್ ಶರ್ಮಾ ದಂಪತಿಯ ಹಿರಿಯ ಪುತ್ರಿ ಟಿಫಾನಿ ಗೌರಿಕಾ ಈಗ ಉನ್ನತ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಅಮೆರಿಕದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ &lsquo;ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಇರ್ವಿನ್&rsquo; (UCI) ನಿಂದ ಟಿಫಾನಿ ಗೌರಿಕಾ ಅವರು ಎಂಬಿಎ (MBA) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.&lt;/p&gt;&lt;img&gt;&lt;p&gt;ಟಿಫಾನಿ ಗೌರಿಕಾ ಅವರು ಕೇವಲ ಎಂಬಿಎ ಪದವಿ ಪಡೆದಿಲ್ಲ, ಬದಲಿಗೆ ಇಡೀ ಕೋರ್ಸ್&zwnj;ನಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ &lsquo;ಡಿಸ್ಟಿಂಕ್ಷನ್&rsquo; (Distinction) ನಲ್ಲಿ ತೇರ್ಗಡೆಯಾಗಿದ್ದಾರೆ. ಮಗಳ ಈ ಅದ್ಭುತ ಶೈಕ್ಷಣಿಕ ಸಾಧನೆ ಕಂಡು ಪೋಷಕರಾದ ಮಾಧವಿ ಮತ್ತು ರಾಲ್ಫ್ ಶರ್ಮಾ ದಂಪತಿ ಅಪಾರ ಸಂತಸ ವ್ಯಕ್ತಪಡಿಸಿದ್ದು, ಹೆಮ್ಮೆಯ ಪೋಷಕರಾಗಿ ಮಗಳ ಘಟಿಕೋತ್ಸವ (Graduation) ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.&lt;/p&gt;&lt;img&gt;&lt;p&gt;ಮಗಳ ಈ ಯಶಸ್ಸಿನ ಕುರಿತು ನಟಿ ಮಾಧವಿ ಅವರು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಫೋಟೋಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. &quot;ಡಿಸ್ಟಿಂಕ್ಷನ್&zwnj;ನಲ್ಲಿ ಎಂಬಿಎ ಮುಗಿಸಿದ ಟಿಫಾನಿ ಗೌರಿಕಾಗೆ ಅಭಿನಂದನೆಗಳು. ನಿನ್ನ ಉಜ್ವಲ ಭವಿಷ್ಯದ ಹಾದಿಯಲ್ಲಿ ಗಣೇಶ ಹಾಗೂ ನಮ್ಮ ಗುರುಗಳಾದ ಸ್ವಾಮಿ ರಾಮ ಅವರ ಆಶೀರ್ವಾದ ಸದಾ ಇರಲಿದೆ. ಅಪ್ಪ, ತಂಗಿಯರಾದ ಪ್ರಿಸ್ಸಿಲ್ಲಾ, ಎವೆಲಿನ್ ಮತ್ತು ನಾನು ಯಾವಾಗಲೂ ನಿನ್ನ ಅತಿ ದೊಡ್ಡ ಚಿಯರ್&zwnj;ಲೀಡರ್&zwnj;ಗಳಾಗಿ ಇರುತ್ತೇವೆ. ನಿನ್ನ ಸಾಧನೆ ನಮಗೆ ಹೆಮ್ಮೆ ತಂದಿದೆ&quot; ಎಂದು ಮಾಧವಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;80 ಹಾಗೂ 90 ರ ದಶಕದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಾಧವಿ ಅವರು ಸ್ಟಾರ್ ನಟಿಯಾಗಿ ಮಿಂಚಿದ್ದರು. ರಾಜ್&zwnj;ಕುಮಾರ್, ವಿಷ್ಣುವರ್ಧನ್ ಸೇರಿದಂತೆ ದಕ್ಷಿಣ ಭಾರತದ ಸೂಪರ್ ಸ್ಟಾರ್&zwnj;ಗಳ ಜೊತೆ ನಟಿಸಿ ಸಕ್ಸಸ್&zwnj;ಫುಲ್ ನಟಿಯಾಗಿದ್ದ ಮಾಧವಿ, ಮದುವೆಯ ನಂತರ ಚಿತ್ರರಂಗದಿಂದ ಸಂಪೂರ್ಣ ದೂರ ಸರಿದಿದ್ದಾರೆ. ಪ್ರಸ್ತುತ ಅವರು ಪತಿ ರಾಲ್ಫ್ ಶರ್ಮಾ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದು, ಪತಿಯ ಜೊತೆ ಉದ್ಯಮದಲ್ಲೂ ಸಕ್ರಿಯರಾಗಿದ್ದಾರೆ.&lt;/p&gt;&lt;img&gt;&lt;p&gt;ಮಗಳ ಪದವಿ ಪ್ರದಾನ ಸಮಾರಂಭದ ಸುಂದರ ಕ್ಷಣಗಳ ಫೋಟೋಗಳು ಸದ್ಯ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರೀ ಗಮನ ಸೆಳೆಯುತ್ತಿವೆ. ಸಾಂಪ್ರದಾಯಿಕ ಕಪ್ಪು ಗೌನ್ ಧರಿಸಿರುವ ಮಗಳು ಟಿಫಾನಿ ಮತ್ತು ಅವರ ಜೊತೆ ನಿಂತಿರುವ ಹೆಮ್ಮೆಯ ತಾಯಿ ಮಾಧವಿ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಮಾಧವಿ ಅವರ ಮಗಳಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/actress-madhavi-daughter-tiffany-gaurika-mba-graduation-photos-viral-san-0rwu7bl"/>
        </item>
        <item>
            <title><![CDATA[ನಟಿಸೋದು ಅಷ್ಟೊಂದು ಸುಲಭಾನ! ರಾಘವೇಂದ್ರ ಸ್ವಾಮಿ ಪಾತ್ರಧಾರಿ ಪರೀಕ್ಷಿತ್’ಗೆ ಆಗಿದ್ದೇನು?]]></title>
            <link>https://kannada.asianetnews.com/gallery/tv-talk/sri-raghavendra-mahatme-star-parikshith-shares-video-from-the-set-1e7md7g</link>
            <guid isPermaLink="true">https://kannada.asianetnews.com/gallery/tv-talk/sri-raghavendra-mahatme-star-parikshith-shares-video-from-the-set-1e7md7g</guid>
            <pubDate>Tue, 16 Jun 2026 16:38:00 +0530</pubDate>
            <description><![CDATA[&lt;p&gt;ರಾಘವೇಂದ್ರ ಸ್ವಾಮಿಗಳ ಪವಾಡವನ್ನು ತಿಳಿಸುವ &lsquo;ಶ್ರೀ ರಾಘವೇಂದ್ರ ಮಹಾತ್ಮೆ&rsquo; ಧಾರಾವಾಹಿಯಲ್ಲಿ ರಾಯರ ಪಾತ್ರವನ್ನು ಮಾಡುತ್ತಿರುವ ನಟ ಪರೀಕ್ಷಿತ್, ತೆರೆ ಮೇಲೆ ಅದ್ಭುತವಾಗಿ ಕಾಣಿಸುತ್ತಾರೆ ನಿಜಾ, ಆದರೆ ತೆರೆಯ ಹಿಂದೆ ಆ ಪಾತ್ರಕ್ಕಾಗಿ ಅವರು ಏನೆಲ್ಲಾ ಅನುಭವಿಸಬೇಕಾಗಿ ಬರುತ್ತದೆ ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv81pb2376fe96fxxsprgzve,imgname-raghavendra-mahatme-1781607902275.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಘವೇಂದ್ರ ಸ್ವಾಮಿಗಳ ಪವಾಡವನ್ನು ತಿಳಿಸುವ &lsquo;ಶ್ರೀ ರಾಘವೇಂದ್ರ ಮಹಾತ್ಮೆ&rsquo; ಧಾರಾವಾಹಿಯಲ್ಲಿ ರಾಯರ ಪಾತ್ರವನ್ನು ಮಾಡುತ್ತಿರುವ ನಟ ಪರೀಕ್ಷಿತ್, ತೆರೆ ಮೇಲೆ ಅದ್ಭುತವಾಗಿ ಕಾಣಿಸುತ್ತಾರೆ ನಿಜಾ, ಆದರೆ ತೆರೆಯ ಹಿಂದೆ ಆ ಪಾತ್ರಕ್ಕಾಗಿ ಅವರು ಏನೆಲ್ಲಾ ಅನುಭವಿಸಬೇಕಾಗಿ ಬರುತ್ತದೆ ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಯರ ಪವಾಡಗಳನ್ನು ತಿಳಿಸುವಂತಹ &lsquo;ಶ್ರೀ ರಾಘವೇಂದ್ರ ಮಹಾತ್ಮೆ&rsquo; ಧಾರಾವಾಹಿಯಲ್ಲಿ ಇದೀಗ ರಾಘವೇಂದ್ರ ಸ್ವಾಮಿಗಳಾಗಿ ನಟ ಪರೀಕ್ಷಿತ್ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟ, ತಾವು ತೆರೆ ಹಿಂದೆ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ ಎನ್ನುವುದನ್ನು ತೋರಿಸಿದ್ದಾರೆ.&lt;/p&gt;&lt;img&gt;&lt;p&gt;ರಾಯರ ಪಾತ್ರದಲ್ಲಿ ಪರೀಕ್ಷಿತ್ ಅದ್ಭುತವಾಗಿ ಮಿಂಚುತ್ತಿದ್ದಾರೆ. ಅವರನ್ನು ನೋಡಿದರೆ ಸ್ವತಃ ರಾಯರನ್ನೇ ನೋಡಿದ ಹಾಗಾಗುತ್ತದೆ ಎಂದು ವೀಕ್ಷಕರು ಹೇಳಿದ್ದಾರೆ. ಆದರೆ ಆ ಪಾತ್ರಕ್ಕಾಗಿ ತಾವು ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ ಎನ್ನುವುದನ್ನು ಪುಟ್ಟದಾಗಿ ವಿಡೀಯೋ ಮಾಡಿ ನಟ ತಮ್ಮ ಇನ್&rsquo;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ಪರೀಕ್ಷಿತ್ ರಾಯರ ಪಾತ್ರದಲ್ಲಿ ನಟಿಸಲು ಆರಂಭಿಸಿದ ಮೇಲೆ ಮೊದಲ ದೃಶ್ಯದಲ್ಲಿ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ, ಕೇಶ ಮುಂಡನ ಮಾಡಿ, ಪಿತೃಗಳಿಗೆ ತರ್ಪಣ ಬಿಡುವಂತಹ ದೃಶ್ಯವನ್ನು ದೃಶ್ಯೀಕರಿಸಿದ್ದಾರೆ. ತೆರೆ ಮೇಲೆ ನೀರಲ್ಲಿ ಮುಳುಗಿ ಏಳುವ ದೃಶ್ಯ ಸೆಕೆಂಡುಗಳ ಕಾಲ ಬಂದರೂ ಸಹ ಆ ದೃಶ್ಯವನ್ನು ಶೂಟ್ ಮಾಡಲು ಹೆಚ್ಚು ಸಮಯಗಳ ಕಾಲ ಪರೀಕ್ಷಿನಲ್ಲಿ ನೀರಿನಲ್ಲಿ ಮುಳುಗಿ ಕುಳಿತುಕೊಳ್ಳಬೇಕಾಗಿತ್ತು.&lt;/p&gt;&lt;img&gt;&lt;p&gt;ಹೆಚ್ಚು ಸಮಯ ನೀರಲ್ಲಿ, ಬಿಸಿಲಿನಲ್ಲಿ ಇದ್ದ ಪರಿಣಾಮ ಮೂರು ದಿನಗಳ ಬಳಿಕ ಪರೀಕ್ಷಿತ್ ಮೈಯೆಲ್ಲಾ ಕೆಂಪಾಗಿ, ಚರ್ಮ ಎದ್ದು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೈ ಪೂರ್ತಿಯಾಗಿ ಈ ರೀತಿಯಾಗಿದೆ. ಸ್ಕಿನ್ ಬರ್ನಿಂಗ್ ಅಥವಾ ನೀರಿನಿಂದಾದ ಅಲರ್ಜಿಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ಆದರೆ ನಟ ಆರಾಮವಾಗಿದ್ದಾರೆ. ಯಾವುದೂ ಫ್ರೀ ಆಗಿ ಬರೋದಿಲ್ಲ ಕಮೀಟ್ ಮೆಂಟ್ ಮುಖ್ಯ (Nothing comes free it demands commitment) ಎಂದು ನಟ ವಿಡಿಯೋ ಶೇರ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ನಿಮ್ಮ ಶ್ರಮಕ್ಕೆ ರಾಯರು ಕಾಪಾಡುತ್ತಾರೆ, ರಾಯರು ಒಳ್ಳೆದ್ ಮಾಡ್ತರೇ Hats Off To Your Dedication Sir. ರಾಯರನ್ನೇ ನೋಡ್ದಂಗ್ ಆಗುತ್ತೆ. ಗುರು ರಾಘವೇಂದ್ರ ಸ್ವಾಮಿ ಒಳ್ಳೆದು ಮಾಡುತ್ತಾರೆ. ನಿಮಗೆ.ಶ್ರೀ ಗುರು ರಾಯರ ಪಾತ್ರಕ್ಕೆ ನೀವೇ ತುಂಬಾ ಅಚ್ಚುಕಟ್ಟು..ಸರ್ ನಿಮಗೆ ಹ್ಯಾಟ್ಸ್ ಆಫ್ ಸರ್..ನೀವು ಮತ್ತೆ ಗುರು ರಾಯರ ಪಾತ್ರ ಮಾಡ್ತಿರೋದು ನನಗಂತೂ ತುಂಬಾ ಇಷ್ಟ ಆಯ್ತು. ರಾಯರ ಆಶೀರ್ವಾದ ನಿಮ್ಮ ಮೇಲೆ ನಿಮ್ಮ ಕುಟುಂಬದ ಮೇಲೆ ನೂರಾರು ಕಾಲ ಇರ್ಲಿ ಒಳ್ಳೇದು ಆಗ್ಲಿ ಸರ್ ಎಂದು ಅಭಿಮಾನಿಗಳು ಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಪರೀಕ್ಷಿತ್ ಬರೋಬ್ಬರಿ 14 ವರ್ಷಗಳ ಬಳಿಕ ಮತ್ತೆ ರಾಯರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಪರೀಕ್ಷಿತ್ ಸ್ಟಾರ್ ಸುವರ್ಣ ವಾಹಿನಿಯ &lsquo;ರಾಘವೇಂದ್ರ ವೈಭವ&rsquo; ಧಾರಾವಾಹಿಯಲ್ಲಿ ರಾಯರ ಪಾತ್ರದಲ್ಲಿ ನಟಿಸಿದ್ದರು. ಈ ನಟನಲ್ಲಿ ಜನ ರಾಘವೇಂದ್ರ ಸ್ವಾಮಿಗಳನ್ನೇ ಕಂಡಿದ್ದರು. ಇದೀಗ ಮತ್ತೆ ತಮ್ಮ ಡೆಡಿಕೇಶನ್ ಮೂಲಕ ರಾಯರ ಪಾತ್ರದಲ್ಲಿ ಜೀವಿಸುತ್ತಿದ್ದಾರೆ ಪರೀಕ್ಷಿತ್.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/sri-raghavendra-mahatme-star-parikshith-shares-video-from-the-set-1e7md7g"/>
        </item>
        <item>
            <title><![CDATA[ಫೇಸ್‌ಬುಕ್‌ನಲ್ಲಿ ಪರಿಚಯ; 60ನೇ ವಯಸ್ಸಿನಲ್ಲಿ ಫಸ್ಟ್‌ ಟೈಮ್‌ ಮದುವೆಯಾದ ನಟಿ; ವರನಿಗೆ 80ರ ಹರೆಯ!]]></title>
            <link>https://kannada.asianetnews.com/gallery/tv-talk/bollywood-actress-suhasini-mulay-marriage-at-the-age-of-60-with-atul-gurtu-2omz3xe</link>
            <guid isPermaLink="true">https://kannada.asianetnews.com/gallery/tv-talk/bollywood-actress-suhasini-mulay-marriage-at-the-age-of-60-with-atul-gurtu-2omz3xe</guid>
            <pubDate>Thu, 18 Jun 2026 17:46:46 +0530</pubDate>
            <description><![CDATA[&lt;p&gt;ಯಾವಾಗ ಮದುವೆ ಭಾಗ್ಯ ಬರಲಿದೆ, ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಗೊತ್ತಾಗೋದಿಲ್ಲ. ಈಗ 'ಲಗಾನ್' ಸಿನಿಮಾ ನಟಿ ಸುಹಾಸಿನಿ ಮುಲಾಯ್ ಅವರು 60ನೇ ವಯಸ್ಸಿಗೆ ಮದುವೆ ಆಗಿದ್ದಾರೆ. ಈಗ ಮದುವೆ ಆಗೋಕೆ ಕಾರಣ ಏನು? ವರ ಯಾರು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvda87s9kbn551d2wtmw3zz9,imgname-new-project---2026-06-18t170510.454-1781784649513.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವಾಗ ಮದುವೆ ಭಾಗ್ಯ ಬರಲಿದೆ, ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಗೊತ್ತಾಗೋದಿಲ್ಲ. ಈಗ 'ಲಗಾನ್' ಸಿನಿಮಾ ನಟಿ ಸುಹಾಸಿನಿ ಮುಲಾಯ್ ಅವರು 60ನೇ ವಯಸ್ಸಿಗೆ ಮದುವೆ ಆಗಿದ್ದಾರೆ. ಈಗ ಮದುವೆ ಆಗೋಕೆ ಕಾರಣ ಏನು? ವರ ಯಾರು?&amp;nbsp;&lt;/p&gt;&lt;img&gt;&lt;p&gt;'ಲಗಾನ್' ಮತ್ತು 'ಜೋಧಾ ಅಕ್ಬರ್' ಸಿನಿಮಾ ನಟಿ ಸುಹಾಸಿನಿ ಅವರು ತನಗೆ ಹೊಂದಿಕೆ ಆಗುವಂಥ ಸಂಗಾತಿ ಬೇಕು ಎಂದು ಇಷ್ಟು ವರ್ಷಗಳ ಕಾಲ ಕಾದಿದ್ದಾರೆ. ಮದುವೆಯಾಗಬೇಕು ಎಂದು ಅವರು ಯಾರನ್ನೋ ಮದುವೆ ಆಗಲು ರೆಡಿ ಇರಲಿಲ್ಲವಂತೆ.&lt;/p&gt;&lt;img&gt;&lt;p&gt;&quot;ನಾನು ನನ್ನ 60ನೇ ವಯಸ್ಸಿನಲ್ಲಿ ಫಸ್ಟ್&zwnj; ಟೈಮ್ ಮದುವೆಯಾದೆ. ಇಲ್ಲಿಯವರೆಗೆ ನನಗೆ ಸರಿಯಾದ ಸಂಗಾತಿ ಸಿಕ್ಕಿರಲಿಲ್ಲ. ನನ್ನ ಪತಿ ಸೈಂಟಿಸ್ಟ್.&zwnj; ವಿಜ್ಞಾನದ ಬಗ್ಗೆ ಅವರು ಮಾತನಾಡಿದರೆ ನನಗೆ ಏನೂ ಅರ್ಥ ಆಗಿರೋದಿಲ್ಲ. ಆದರೆ ಅವರೊಬ್ಬ ಅದ್ಭುತ ವ್ಯಕ್ತಿ&rdquo; ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಾನು ಫೇಸ್&zwnj;ಬುಕ್&zwnj; ಅಕೌಂಟ್&zwnj; ಮಾಡಿಕೊಂಡೆ. ಆಗ ಅತುಲ್ ಪ್ರೊಫೈಲ್ ಕಾಣಿಸಿದೆ. ಆ ವಿಜ್ಞಾನಿಯು ಭೌತವಿಜ್ಞಾನದಲ್ಲಿ ಹೆಚ್ಚು ತಿಳಿದುಕೊಂಡಿದ್ದರು. ಹೀಗಾಗಿ ಸುಹಾಸಿನಿ ಅವರು ಅತುಲ್&zwnj;ರನ್ನು ಕಾಂಟ್ಯಾಕ್ಟ್&zwnj; ಮಾಡಿದ್ದಾರೆ. ವಿಜ್ಞಾನದ ಬಗ್ಗೆ ಒಂದು ಪ್ರಶ್ನೆ ಮಾಡಿದ್ದರು. ಇದೀಗ ಮದುವೆ ಹಂತಕ್ಕೆ ಬಂದಿದೆ.&lt;/p&gt;&lt;img&gt;&lt;p&gt;&ldquo;ಈ ವಯಸ್ಸಿನಲ್ಲಿ ಮದುವೆ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನನಗೆ ಸಂಗಾತಿ ಬೇಕು ಎಂದು ಅತುಲ್&zwnj; ಪರೋಕ್ಷವಾಗಿ ಹೇಳಿದ್ದರು. ಅದರಂತೆ ನಾವಿಬ್ಬರು ಒಂದಾಗಿದ್ದೇವೆ. ಸೋಶಿಯಲ್&zwnj; ಮೀಡಿಯಾದಲ್ಲಿ ನಾವು ಯಾರನ್ನು ಭೇಟಿಯಾಗುತ್ತಿದ್ದೇವೆ ಎನ್ನೋದಕ್ಕಿಂತ ಏನನ್ನು ಭೇಟಿಯಾಗುತ್ತಿದ್ದೇವೆ ಎನ್ನುವುದು ಮುಖ್ಯ&quot; ಎಂದಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/bollywood-actress-suhasini-mulay-marriage-at-the-age-of-60-with-atul-gurtu-2omz3xe"/>
        </item>
        <item>
            <title><![CDATA[ಎಲ್ಲಾ ವೈರಲ್​ ಮಾಡಿದ್ರಲ್ವಾ, ಈಗ ನಾವು ಹೇಳೋದನ್ನು ಕೇಳಿಸ್ಕೊಳ್ಳಿ: ಲೈವ್​ನಲ್ಲಿ ಗೀತಾಭಾರತಿ ಗರಂ]]></title>
            <link>https://kannada.asianetnews.com/gallery/tv-talk/jodi-number-1-contraversy-geethabharati-and-rajaram-live-on-instagram-suc-4vee26w</link>
            <guid isPermaLink="true">https://kannada.asianetnews.com/gallery/tv-talk/jodi-number-1-contraversy-geethabharati-and-rajaram-live-on-instagram-suc-4vee26w</guid>
            <pubDate>Tue, 16 Jun 2026 21:42:02 +0530</pubDate>
            <description><![CDATA['ಜೋಡಿ ನಂ. 1' ಶೋನಲ್ಲಿ ಪತಿಯ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದ ನಟಿ ಗೀತಾ ಭಾರತಿ ಭಟ್, ಟಿಆರ್&zwnj;ಪಿಗಾಗಿ ನಾಟಕವಾಡಿದ್ದಾರೆಂದು ಟ್ರೋಲ್ ಆಗಿದ್ದರು. ಇದಕ್ಕೆ ಲೈವ್ ಮೂಲಕ ಉತ್ತರಿಸಿದ ಗೀತಾ-ರಾಜಾರಾಮ್ ದಂಪತಿ, ಟ್ರೋಲಿಗರ ಮನಸ್ಥಿತಿಯನ್ನು ಪ್ರಶ್ನಿಸಿ ಖಡಕ್ ಉತ್ತರ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv8k2rej4p6xxfc36ekgz758,imgname-geetha-bharati-and-rajaram-1781626134994.jpg" type="image/jpeg" height="390" width="690"/>
            <content:encoded><![CDATA['ಜೋಡಿ ನಂ. 1' ಶೋನಲ್ಲಿ ಪತಿಯ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದ ನಟಿ ಗೀತಾ ಭಾರತಿ ಭಟ್, ಟಿಆರ್&zwnj;ಪಿಗಾಗಿ ನಾಟಕವಾಡಿದ್ದಾರೆಂದು ಟ್ರೋಲ್ ಆಗಿದ್ದರು. ಇದಕ್ಕೆ ಲೈವ್ ಮೂಲಕ ಉತ್ತರಿಸಿದ ಗೀತಾ-ರಾಜಾರಾಮ್ ದಂಪತಿ, ಟ್ರೋಲಿಗರ ಮನಸ್ಥಿತಿಯನ್ನು ಪ್ರಶ್ನಿಸಿ ಖಡಕ್ ಉತ್ತರ ನೀಡಿದ್ದಾರೆ.&lt;img&gt;&lt;p&gt;ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ. 1. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ &lsquo;ಬ್ರಹ್ಮಗಂಟು&rsquo; ಖ್ಯಾತಿಯ ಗೀತಾ ಭಾರತಿ ಭಟ್ ಹಾಗೂ ರಾಜಾರಾಮ್ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೋಲ್​​ ಆಗಿದ್ದರು.&lt;/p&gt;&lt;img&gt;&lt;p&gt;ಅದಕ್ಕೆ ಕಾರಣ, ಈ ಷೋನಲ್ಲಿ ಒಂದು ಹಂತದಲ್ಲಿ ಗೀತಾ ಅವರು ಪತಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. 'ನಾನೇನಾದ್ರು ಮಾತಾಡಿದ್ರೆ, ಹೇಯ್ ಎಕ್ಸ್ಟ್ರಾ ಮಾತುಗಳನ್ನು ಆಡ್ಬೇಡಮ್ಮ, ಏನಕ್ಕೆ ಇದೆಲ್ಲಾ ಡ್ರಾಮಾ ಮಾಡ್ತಿಯಾ, ನನಗೊಂದು ನ್ಯಾಯ, ನಿಮಗೊಂದು ನ್ಯಾಯ ಏನಕ್ಕೆ ಎಂದಿದ್ರು. ನಾನು ಬಿಕ್ಕಿ ಬಿಕ್ಕಿ ಅತ್ತಿರುವಾಗ ಗೇಲಿ ಮಾಡಿದ್ದೀರಾ ಏನಕ್ಕೆ? ದೂರ ತಳ್ಬೋದು, ಆದ್ರೆ ನಾನು ಎಷ್ಟೋ ಸಲ ಅತ್ತುಕೊಂಡು ಮಲಗಿದ್ದೀನಿ, ಆದರೆ ನನ್ನ ಅತ್ತುಕೊಂಡು ಮಲಗೋಕೆ ಬಿಡಬೇಡಿ ಅಷ್ಟೇ' ಎಂದಿದ್ದರು.&lt;/p&gt;&lt;img&gt;&lt;p&gt;ಇದಕ್ಕಾಗಿ ನಾಲ್ಕು ಗೋಡೆಗಳ ಮಧ್ಯೆ ಇರೋ ವಿಷ್ಯವನ್ನು ಟಿಆರ್​ಪಿಗೋಸ್ಕರ, ದುಡ್ಡನ್ನು ಪಡೆದು ಇಂಥ ರಿಯಾಲಿಟಿ ಷೋನಲ್ಲಿ ಹೇಳಿರುವುದಾಗಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ಇಂಥ ವಿಷ್ಯ ಕ್ಯಾಮೆರಾ ಮುಂದೆ ಹೇಳುವ ಅಗತ್ಯವೇನಿದೆ, ಸೆಲೆಬ್ರಿಟಿಯಾಗಿ ಹೀಗೆ ಮಾಡಬಾರದು ಎಂದು ತಿಳಿಯುವುದಿಲ್ಲವೆ, ದುಡ್ಡು ಪಡೆದುಕೊಂಡು ಇಂಥ ಪರ್ಸನಲ್​ ವಿಷ್ಯ ಮಾತನಾಡ್ಬೋದಾ ಎಂದೆಲ್ಲಾ ಪ್ರಶ್ನೆ ಮಾಡಿದ್ದರು.&lt;/p&gt;&lt;img&gt;&lt;p&gt;ಇದಕ್ಕೆ ನಟಿ ಗೀತಾ ಭಾರತಿ ಮತ್ತು ರಾಜಾರಾಮ್​ ಅವರು ಲೈವ್​ನಲ್ಲಿ ಬಂದು ಟ್ರೋಲ್​ ಮಾಡಿದವರಿಗೆ ಚಳಿ ಬಿಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನೀವು ಇಷ್ಟು ದಿನ ಮಾತನಾಡಿದ್ದನ್ನೆಲ್ಲಾ ನಾವು ಪೇಷನ್ಸ್​ನಿಂದ ಕೇಳಿಸಿಕೊಂಡ್ವಿ. ಈಗ ನಾವು ಮಾತನಾಡೋದನ್ನು ನೀವು ಕೇಳಿಸಿಕೊಳ್ಳಿ ಎಂದು ಆರಂಭಿಸಿ ಟ್ರೋಲ್​ ಮಾಡಿದವರ ವಿರುದ್ಧ ಗರಂ ಆಗಿದ್ದಾರೆ.&lt;/p&gt;&lt;img&gt;&lt;p&gt;ಎಷ್ಟು ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿದ್ವಿ. ಅದನ್ನು ಹೇಳದೇ ಯಾವುದೋ ಒಂದು ವಿಷ್ಯ ಇಟ್ಟುಕೊಂಡು ವೈರಲ್​ ಮಾಡಿದ್ರಿ. ನಾಲ್ಕು ಗೋಡೆಗಳ ನಡುವಿನ ವಿಷ್ಯ ಎಂದ್ರಿ. ನಾಲ್ಕು ಗೋಡೆಗಳ ನಡುವಿನ ವಿಷ್ಯವನ್ನು ನಾಲ್ಕು ಗೋಡೆಗಳ ನಡುವೆ ಇಟ್ಟುಕೊಂಡಿದ್ದೇವೆ. ಅದನ್ನೇನೂ ನಾವು ಮಾತನಾಡಲಿಲ್ಲ. ಆದರೆ ಕಾಂಟ್ರವರ್ಸಿ ಮಾಡಿ ವೈರಲ್​ ಮಾಡಿದ್ದು ವಿಚಿತ್ರ ಎಂದಿದ್ದಾರೆ.&lt;/p&gt;&lt;img&gt;&lt;p&gt;ಟಿಆರ್​ಪಿಗೋಸ್ಕರ, ದುಡ್ಡು ಗೋಸ್ಕರ ಮಾಡ್ತಾ ಇದ್ದೀವಿ ಎಂದೆಲ್ಲಾ ಹೇಗೆ ಮಾತನಾಡ್ತೀರಾ? ಅವೆಲ್ಲಾ ನಿಮ್ಮ ಓಪಿನಿಯನ್​ ಆಗಿರಬಹುದು. ನಮಗೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಲ್ಲವೂ ಗೊತ್ತಿದೆ. ನೀವು ಒಪೀನಿಯನ್​ ಕೊಡೋದು ಬಿಡಿ. ಸಮಸ್ಯೆ ಇರೋದು ಈ ಷೋನಲ್ಲಿ ಅಲ್ಲ. ಬದಲಿಗೆ ನಿಮ್ಮ ಮನಸ್ಥಿತಿಯಲ್ಲಿ. ಇಂಥ ವಿಷ್ಯಗಳನ್ನು ವೈರಲ್​ ಮಾಡೋ ಮುನ್ನ ಯೋಚನೆ ಮಾಡಿ. ಎಷ್ಟೋ ಮಂದಿ ಫೋನ್​ ಮಾಡಿ ನಾನು ಮಾತನಾಡಿರುವುದು ಸರಿ, ನಮಗೂ ಇಂಥ ಸಮಸ್ಯೆ ಇದೆ ಎಂದಿದ್ದಾರೆ. ಆದರೆ ಕೆಲವರು ಅದನ್ನು ಟ್ರೋಲ್​ ಮಾಡ್ತಾ ಇದ್ದಾರೆ ಎಂದಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/jodi-number-1-contraversy-geethabharati-and-rajaram-live-on-instagram-suc-4vee26w"/>
        </item>
        <item>
            <title><![CDATA[ಸೀರಿಯಲ್‌ ನಟಿ ಸಂಚಿತಾ ಉಗಾಲೆ ಸಾವಿನ ಬೆನ್ನಲ್ಲಿಯೇ ಆಕೆಯ ಪ್ರೈವೇಟ್‌ ಚಾಟ್‌ ಲೀಕ್‌]]></title>
            <link>https://kannada.asianetnews.com/tv-talk/actress-sanchita-ugale-death-private-whatsapp-chats-leak-depression-updates-san/articleshow-7vz3b68</link>
            <guid isPermaLink="true">https://kannada.asianetnews.com/tv-talk/actress-sanchita-ugale-death-private-whatsapp-chats-leak-depression-updates-san/articleshow-7vz3b68</guid>
            <pubDate>Wed, 17 Jun 2026 16:05:55 +0530</pubDate>
            <description><![CDATA[&lt;p&gt;ಸಂಚಿತಾ ಉಗಾಲೆಯ ಖಾಸಗಿ ಚಾಟ್&zwnj;ಗಳು ಲೀಕ್ ಆಗಿವೆ. ಆಕೆ ನಿಜಕ್ಕೂ ಎಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಳು? ಕಳೆದ 2 ದಿನಗಳಲ್ಲಿ ಏನೇನು ನಡೆಯಿತು? ಅನ್ನೋದರ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv53vm6vq2jsew804z0hrpe7,imgname-sanchita-ugale-death--1--1781509509327.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜೂ.17): &lt;/strong&gt;ನಟಿ ಸಂಚಿತಾ ಉಗಾಲೆ ಸಣ್ಣ ವಯಸ್ಸಲ್ಲೇ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳಿದ್ದಾರೆ. ಸಂಚಿತಾ ಖಿನ್ನತೆಯಿಂದ (ಡಿಪ್ರೆಷನ್) ಬಳಲುತ್ತಿದ್ದರು. ಈ ನಿಟ್ಟಿನಲ್ಲಿ ವೈದ್ಯರೊಬ್ಬರ ಬಳಿ ಅವರಿಗೆ ಚಿಕಿತ್ಸೆ ಕೂಡ ನಡೆಯುತ್ತಿತ್ತು.ಆಕೆಯ ಸಾವಿನ ನಂತರ ಹಲವು ರೀತಿಯ ಆರೋಪಗಳು ಕೇಳಿಬರುತ್ತಿವೆ. ಚಿತ್ರರಂಗದ (ಇಂಡಸ್ಟ್ರಿ) ಒತ್ತಡದಿಂದಾಗಿಯೇ ಆಕೆ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ ಎಂದು ಸಂಚಿತಾಳ ಸ್ನೇಹಿತರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಕೆಲವರ ಪ್ರಕಾರ, ಆಕೆಗೆ ಕೆಲಸ ಸಿಗುತ್ತಿರಲಿಲ್ಲ ಎನ್ನುವ ಆರೋಪಗಳು ಇದ್ದವು. ಈ ನಡುವೆ ಸಂಚಿತಾಳ ಕೆಲವು ಚಾಟ್&zwnj;ಗಳು ಮುನ್ನೆಲೆಗೆ ಬಂದಿವೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸಂಚಿತಾ ತನ್ನ ಮನೆಯ ಒಂದು ಕೋಣೆಯಲ್ಲಿ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ತದನಂತರ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ನಟಿ ಮೃತಪಟ್ಟಿರುವುದಾಗಿ ಘೋಷಿಸಿದರು.&lt;/p&gt;&lt;p&gt;ಪೊಲೀಸರು ಸಂಚಿತಾ ಉಗಾಲೆ ಅವರ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖಾಧಿಕಾರಿಗಳು ಈ ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆಯ ಕುಟುಂಬಸ್ಥರು ಸಾವಿನ ಕಾರಣದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ನಟಿಯ ತಂದೆಯ ಆರೋಪದ ಪ್ರಕಾರ, ಆಕೆಯ ಮೇಲೆ ತೀವ್ರ ಮಾನಸಿಕ ಒತ್ತಡವಿತ್ತು.&lt;/p&gt;&lt;p&gt;&quot;ಸಾವಿಗೂ ಮುನ್ನಆಕೆಗೆ ನಿರಂತರವಾಗಿ ಕಿರುಕುಳ ನೀಡಲಾಗಿತ್ತು. ಇಂಡಸ್ಟ್ರಿಯ ಕೆಲವು ಜನರ ಒತ್ತಡ ಆಕೆಯ ಮೇಲಿತ್ತು. ಆಕೆ ಮನೆಯಲ್ಲಿ ಸದಾ ಸಮಸ್ಯೆಯಲ್ಲಿ ಇದ್ದ ಹಾಗೆಯೇ ಇರುತ್ತಿದ್ದಳು. ಮೇಲ್ನೋಟಕ್ಕೆ ಎಲ್ಲವೂ ಸರಿಯಿದ್ದಂತೆ ಕಾಣಿಸುತ್ತಿತ್ತು, ಆದರೆ ಆಕೆ ಒಳಗಿನಿಂದ ಸಂಪೂರ್ಣವಾಗಿ ನೊಂದಿದ್ದಳು. ಇಂಡಸ್ಟ್ರಿಯ ಒತ್ತಡದಿಂದಾಗಿಯೇ ನನ್ನ ಮಗಳು ಹೀಗೆ ಮಾಡಿಕೊಂಡಿದ್ದಾಳೆ' ಎಂದು ತಂದೆ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಚಿತಾ ಉಗಾಲೆ ಅವರ ಖಾಸಗಿ ಚಾಟ್&zwnj;ಗಳು&lt;/strong&gt;&lt;/h2&gt;&lt;p&gt;ಸಂಚಿತಾ ಉಗಾಲೆ ಮತ್ತು ಆಕೆಯ ಸೈಕಾಲಜಿಸ್ಟ್ (ಮನಶ್ಶಾಸ್ತ್ರಜ್ಞ) ನಡುವೆ ನಡೆದಿರುವ ವಾಟ್ಸಾಪ್ ಚಾಟ್&zwnj;ಗಳು ಕೂಡ ಈಗ ಮುನ್ನಲೆಗೆ ಬಂದಿವೆ. ಈ ಚಾಟ್&zwnj;ಗಳನ್ನು ನೋಡಿದರೆ, ಸಂಚಿತಾ ತನ್ನ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಳು ಮತ್ತು ಭಯದ ನೆರಳಿನಲ್ಲಿದ್ದಳು ಎಂಬುದು ಕಂಡುಬರುತ್ತದೆ. ಇದಲ್ಲದೆ, ಶೂಟಿಂಗ್ ಸಮಯದಲ್ಲಿ ಆಕೆಗೆ ಡೈಲಾಗ್&zwnj;ಗಳನ್ನು (ಸಂಭಾಷಣೆ) ನೆನಪಿಟ್ಟುಕೊಳ್ಳಲು ಸಹ ತೊಂದರೆಯಾಗುತ್ತಿತ್ತು. ಚಾಟ್&zwnj;ಗಳ ಪ್ರಕಾರ, ಸಂಚಿತಾ ಅತಿಯಾದ ಒತ್ತಡದಲ್ಲದ್ದಳು ಮತ್ತು ಆಕೆಗೆ ಮೊದಲಿನಂತೆ ನಟನೆ ಮಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂಬುದು ತಿಳಿದುಬರುತ್ತಿದೆ. ಈ ಬಗ್ಗೆ ಆಕೆ ವೈದ್ಯರೊಂದಿಗೂ ಸಂವಾದ ನಡೆಸಿದ್ದಳು. ಚಿಕಿತ್ಸೆಯ ನಂತರವೂ ಆಕೆಗೆ ತನ್ನಲ್ಲಿ ಯಾವುದೇ ಬದಲಾವಣೆಗಳು ಕಾಣಿಸುತ್ತಿರಲಿಲ್ಲ. ವೈದ್ಯರು ಆಕೆಗೆ ಧೈರ್ಯದಿಂದ ಇರುವಂತೆ ಸಲಹೆ ನೀಡಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ನಟಿ ಮೇಘಾ ಶರ್ಮಾ ಸ್ಫೋಟಕ ಹೇಳಿಕೆ&lt;/strong&gt;&lt;/h2&gt;&lt;p&gt;ನಟಿ ಸಂಚಿತಾ ನಿಧನದ ನಂತರ ಮೇಘಾ ಶರ್ಮಾ ಭಾರೀ ಹೇಳಿಕೆ ನೀಡಿದ್ದಾರೆ. 'ಸಂಚಿತಾ ಜನವರಿ ತಿಂಗಳಿನಿಂದಲೇ ಡಿಪ್ರೆಷನ್ ಎದುರಿಸುತ್ತಿದ್ದಳು ಮತ್ತು ಇಂಡಸ್ಟ್ರಿಯ ಒತ್ತಡ ಆಕೆಯ ಈ ಸಮಸ್ಯೆಗೆ ಕಾರಣವಾಗಿರಲಿಲ್ಲ. ಆಕೆಗೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದವು' ಎಂದು ಹೇಳಿದ್ದಾರೆ.&lt;/p&gt;&lt;p&gt;ಸಂಚಿತಾಳ ಮೇಲೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಒತ್ತಡವಿರಲಿಲ್ಲ ಎಂದು ಮೇಘಾ ತಿಳಿಸಿದ್ದಾರೆ. &quot;ಈ ವದಂತಿಗಳಿಗೆ ಯಾವುದೇ ಆಧಾರವಿಲ್ಲ. ಕೆಲಸ ಆಕೆಗೆ ಎಂದಿಗೂ ಸಮಸ್ಯೆಯಾಗಿರಲಿಲ್ಲ, ಹಾಗೆಯೇ ಆಕೆಗೆ ಈ ಇಂಡಸ್ಟ್ರಿಯಿಂದ ಯಾವುದೇ ರೀತಿಯ ಒತ್ತಡ ಅಥವಾ ಕಿರುಕುಳ ಎದುರಾಗಿರಲಿಲ್ಲ. ಅಂತಹದ್ದೇನೂ ಸಂಭವಿಸಿಲ್ಲ,&quot; ಎಂದು ನಟಿ ಹೇಳಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ತೀವ್ರ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tv-talk</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/actress-sanchita-ugale-death-private-whatsapp-chats-leak-depression-updates-san/articleshow-7vz3b68"/>
        </item>
        <item>
            <title><![CDATA[Om Praksah Rao: ನಿಂತ್ ನಿಂತಲ್ಲೇ ಹೀರೋಯಿನ್ ಜೊತೆ ಕಾಡಲ್ಲಿ ನಡೆದ ಘಟನೆ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್!]]></title>
            <link>https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500</link>
            <guid isPermaLink="true">https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500</guid>
            <pubDate>Wed, 17 Jun 2026 21:40:39 +0530</pubDate>
            <description><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಹಲವು ವೇದಿಕೆಗಳಲ್ಲಿ ತಮ್ಮ ಮಾತಿನಿಂದಲೇ ಕಾಂಟ್ರವರ್ಸಿ ಮತ್ತು ಕಾಮಿಡಿ ಮಾಡುತ್ತಿರುವ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಕಿರುತೆರೆಗೆ ಬಂದಿದ್ದಾರೆ. ಇದೀಗ ಮಾಧ್ಯಮವೊಂದಕ್ಕೆ ನಟಿಯೊಂದಿಗೆ ಕಾಡಿನಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvb5ftva0x7hfzpa2bsfb8nm,imgname-om-praksah-rao-1781712546666.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಟರೂ ಆಗಿರುವ ಓಂ ಪ್ರಕಾಶ್ ರಾವ್ ಅವರು ಶೂಟಿಂಗ್ ಲೊಕೇಶನ್ ನೋಡಲು ನಟಿಯನ್ನು ಕರೆದುಕೊಂಡು ಹೋದಾಗ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ದಟ್ಟ ಕಾಡಿನಲ್ಲಿ ಕಾರು ನಿಲ್ಲಿಸಿದಾಗ ನಟಿ ಕೇಳಿದ್ದನ್ನು ಹೇಗೆ ಪೂರೈಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಕ್ಲಾಟ್ಲೆ ಕಿಚನ್&zwnj;ಗೆ ಹೇಗೆ ಸೆಲೆಕ್ಟ್ ಆದರು ಎಂಬುದನ್ನು ಹೇಳುತ್ತಾ, ನಟಿಯೊಂದಿಗೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ನಮ್ಮ ಸಿನಿಮಾ ಹೀರೋಯಿನ್ ಜೊತೆಗೆ ಲೊಕೇಶನ್ ನೋಡೋದಕ್ಕೆ ಹೋಗಿದ್ದೆವು. ಅವರು ನನ್ನನ್ನ ಸುಬ್ಬ ಎಂದು ಕರೆಯುತ್ತಿದ್ದರು. ನಾನು ಅವರಿಗೆ ಸುಬ್ಬಲಕ್ಷ್ಮಿ ಎಂದು ಹೆಸರಿಟ್ಟಿದ್ದೇನೆ. ಕುದುರೆಮುಖ ರೋಡಲ್ಲಿ ಹೋಗುವಾಗ ಕಾಡಿನ ಮಧ್ಯದಲ್ಲಿ ಕಾರ್ಕಳದಲ್ಲಿ ಕಾರು ನಿಲ್ಲಿಸಿದ್ದೆವು. ಆಗ ನನಗೆ ತುಂಬಾ ಹೊಟ್ಟೆ ಹಸಿವು ಎಂದು ಹೇಳಿದರು. ಸುಮ್ಮನಿರು ನೀನು ನನ್ನ ತಲೇನೂ ತಿನ್ನಬೇಡ, ನನ್ನನ್ನೂ ತಿನ್ನಬೇಡ. ನಿನಗೆ ರೆಡಿ ಮಾಡಿರೋ ಹೊಟ್ಟೆ ತುಂಬಾ ಊಟ ಬೇಕು ಅಲ್ವಾ ಅಡುಗೆ ಮಾಡಿಕೊಡ್ತೇನೆ ಸುಮ್ಮನಿರು ಎಂದು ಹೇಳಿದೆ.&lt;/p&gt;&lt;h2&gt;&lt;strong&gt;ಸ್ಥಳದಲ್ಲೇ ಸಿದ್ಧವಾಯಿತು ಹಲಸಿನ ಹಣ್ಣಿನ ಬರ್ಫಿ!&lt;/strong&gt;&lt;/h2&gt;&lt;p&gt;ಆಗ ನಾನು ಅಡುಗೆ ಮಾಡೋದಕ್ಕೆ ಏನಾದರೂ ಸಿಗುತ್ತಾ ಎಂದು ನೋಡಿದಾಗ ಒಲೆ ಹಚ್ಚೋಕೆ ಸೌದೆಗಳು ಸಿಕ್ಕವು. ಹಳ್ಳೀಲಿ ಅವರರಿವರ ಮನೆಯಲ್ಲಿ ಹೋಗಿ ಬೆಲ್ಲ ಹಾಗೂ ಹಲಸಿನ ಹಣ್ಣು ಕೊಯ್ದಿದ್ದರು ಅದನ್ನ ಇಸ್ಕೊಂಡು ಬಂದೆ. ಜೊತೆಗೆ ಒಂದಷ್ಟು ತೆಂಗಿನಕಾಯಿ ತೆಗೆದುಕೊಂಡು ಬಂದೆ. ಜೊತೆಗೆ ಪಕ್ಕದಲ್ಲಿಯೇ ಇದ್ದ ಮನೆಯಲ್ಲಿ ಒಂದು ಹಂಚು ಇಸ್ಕೊಂಡು ಒಲೆ ಸಿದ್ಧಪಡಿಸಿ ಸೌದೆಗೆ ಬೆಂಕಿಹಚ್ಚಿ ಹಲಸಿನ ಹಣ್ಣಿನ ಬರ್ಫಿಯನ್ನು ಮಾಡಿಕೊಟ್ಟೆ. ಅದು ಸುಬ್ಬಲಕ್ಷ್ಮಿಗೆ ತುಂಬಾ ಇಷ್ಟ ಆಯ್ತು. ಅದನ್ನು ತಿಂದು ನಾನೂ ತಿಂದು ಖುಷಿಪಟ್ಟಿದ್ದೆ. ನಾನು ಈಗ ಅದನ್ನೇ ಕ್ಲಾಟ್ಲೆ ಕಿಚನ್&zwnj;ನಲ್ಲಿ ಮಾಡಬೇಕು ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದರು.&lt;/p&gt;&lt;h2&gt;&lt;strong&gt;ತರಹೇವಾರಿ ಅಡುಗೆ ಮಾಡುವ ನಳಪಾಕ&lt;/strong&gt;&lt;/h2&gt;&lt;p&gt;ನಾನು ಎಲ್ಲಾರ ಜೊತೆಗೆ ಹೋಗಿಲ್ಲ. ಒಂದಿಬ್ಬರ ಜೊತೆಗೆ ಲೊಕೇಶನ್ ನೋಡಲು ಹೋದಾಗ ಈ ತರಹದ ಅಡುಗೆ ಮಾಡಿದ್ದೇನೆ. ಇನ್ನು ಉಪ್ಪಿಟ್ಟು, ದೋಸೆ, ಪೂರಿ, ಚಟ್ನಿ, ಗಸಗಸೆ ಪಾಯಸ ಮಾಡ್ತೇನೆ. ದೋಸೆ ಹಿಟ್ಟಿಗೆ ಅಕ್ಕಿ, ಉದ್ದಿನಬೇಳೆ ಹಾಕಿ ಸ್ವಲ್ಪ ಒಗ್ಗರಣೆ ಹಾಕಿಕೊಳ್ಳಬಹುದು. ನಾನು ಮೊಟ್ಟೆ ದೋಸೆ ತಿನ್ನಲು ಇಷ್ಟಪಡ್ತೇನೆ ಎಂದು ತಮಗೆ ಸಿದ್ಧಿಸಿರುವ ಅಡುಗೆ ಕಲೆಯನ್ನು ತಿಳಿಸಿದರು.&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500"/>
        </item>
        <item>
            <title><![CDATA[Bigg Boss ರಕ್ಷಿತಾ ಶೆಟ್ಟಿ ಈಗ ಸಾಫ್ಟ್​ವೇರ್​  ಎಂಜಿನಿಯರ್​: ಉದ್ಯೋಗ ಸಿಕ್ಕಿದ್ದು ಹೇಗೆ]]></title>
            <link>https://kannada.asianetnews.com/gallery/tv-talk/bigg-boss-rakshita-shetty-and-maja-bharat-raghavendra-new-reels-suc-c13ciim</link>
            <guid isPermaLink="true">https://kannada.asianetnews.com/gallery/tv-talk/bigg-boss-rakshita-shetty-and-maja-bharat-raghavendra-new-reels-suc-c13ciim</guid>
            <pubDate>Tue, 16 Jun 2026 20:01:52 +0530</pubDate>
            <description><![CDATA[ಬಿಗ್&zwnj;ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು 'ಮಜಾ ಭಾರತ'ದ ರಾಘವೇಂದ್ರ ಜೊತೆಯಾಗಿ ಮಾಡಿದ ರೀಲ್ಸ್ ವೈರಲ್ ಆಗಿದೆ. ಇದರಲ್ಲಿ ರಕ್ಷಿತಾ ಸಾಫ್ಟ್&zwnj;ವೇರ್ ಎಂಜಿನಿಯರ್ ಆಗಿ ಡೆಡ್&zwnj;ಲೈನ್ ಫಜೀತಿಯನ್ನು ಹಾಸ್ಯಮಯವಾಗಿ ತೋರಿಸಿದ್ದು, ರಾಘವೇಂದ್ರ ಮ್ಯಾನೇಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv8d8fc1s30fr3232396jkkd,imgname-rakshita-shetty-01-1781620030849.jpg" type="image/jpeg" height="390" width="690"/>
            <content:encoded><![CDATA[ಬಿಗ್&zwnj;ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಮತ್ತು 'ಮಜಾ ಭಾರತ'ದ ರಾಘವೇಂದ್ರ ಜೊತೆಯಾಗಿ ಮಾಡಿದ ರೀಲ್ಸ್ ವೈರಲ್ ಆಗಿದೆ. ಇದರಲ್ಲಿ ರಕ್ಷಿತಾ ಸಾಫ್ಟ್&zwnj;ವೇರ್ ಎಂಜಿನಿಯರ್ ಆಗಿ ಡೆಡ್&zwnj;ಲೈನ್ ಫಜೀತಿಯನ್ನು ಹಾಸ್ಯಮಯವಾಗಿ ತೋರಿಸಿದ್ದು, ರಾಘವೇಂದ್ರ ಮ್ಯಾನೇಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.&lt;img&gt;&lt;p&gt;Bigg Boss ರಕ್ಷಿತಾ ಶೆಟ್ಟಿ ಹವಾ ಇನ್ನೂ ನಿಂತಿಲ್ಲ. ಇದಾಗಲೇ ರಕ್ಷಿತಾ 'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ ಅವರ ಜೊತೆ ಸಾಕಷ್ಟು ರೀಲ್ಸ್​ ಮಾಡಿದ್ದಾರೆ. ತಮ್ಮ ಸ್ತ್ರೀವೇಷದ ಮೂಲಕ 'ರಾಗಿಣಿ' ಎಂದೇ ಜನಪ್ರಿಯರಾಗಿರುವ ರಾಘವೇಂದ್ರ ಮತ್ತು ರಕ್ಷಿತಾ ಶೆಟ್ಟಿ ಜೊತೆಯಾಗಿ ಹೊಸಹೊಸ ಹವಾ ಸೃಷ್ಟಿಸುತ್ತಲೇ ಇದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ರಕ್ಷಿತಾ ಶೆಟ್ಟಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ಖುದ್ದು ರಕ್ಷಿತಾ ಅವರೇ ಶೇರ್​ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಇದು ಇದೇ ಜೋಡಿ ಸಾಫ್ಟ್​ವೇರ್​ ಉದ್ಯೋಗಿಯ ಡೆಡ್​ಲೈನ್​ ಫಜೀತಿಯನ್ನು ತೋರಿಸುತ್ತದೆ. ಇದರಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ಸಾಫ್ಟ್​ವೇರ್​ ಎಂಜಿನಿಯರ್​ ಆಗಿದ್ದು, ಡೆಡ್​ಲೈನ್​ ಬಂದರೂ ಕೆಲಸ ಮಾಡಲು ಆಗದೇ ಫಜೀತಿ ಪಡುವ ಹಾಸ್ಯಮಯ ಪ್ರಸಂಗ ಇದಾಗಿದೆ.&lt;/p&gt;&lt;img&gt;&lt;p&gt;ಇದರಲ್ಲಿ ರಾಘವೇಂದ್ರ ಅವರು ಮ್ಯಾನೇಜರ್​ ಆಗಿದ್ದಾರೆ. ರಕ್ಷಿತಾಶೆಟ್ಟಿಗೆ ಅವರೇ ಮ್ಯಾನೇಜರ್​ ಎಂದು ತಿಳಿಯದೇ ಡೆಡ್​ಲೈನ್​ ಕೊಟ್ಟಿರೋ ಮ್ಯಾನೇಜರ್​ ಅನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ರೀಲ್ಸ್​ ಇದಾಗಿದೆ.&amp;nbsp;&lt;/p&gt;&lt;img&gt;&lt;p&gt;ಇಬ್ಬರೂ ಕಾಮೇಡಿಯನ್​ ಒಟ್ಟಿಗೇ ಸೇರಿದ್ರೆ ಏನಾಗತ್ತೆ ಎನ್ನೋದನ್ನು ಇದರಲ್ಲಿ ತೋರಿಸಲಾಗಿದೆ. ಇವರಿಬ್ಬರ ಕಾಂಬೀನೇಷನ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದಾಗಲೇ ಈ ಜೋಡಿ ಇಂಥದ್ದೇ ಕಾಮಿಡಿ ವಿಷ್ಯ ಇಟ್ಟುಕೊಂಡು ಹಲವು ರೀಲ್ಸ್​ ಮಾಡಿವೆ.&lt;/p&gt;&lt;img&gt;&lt;p&gt;ರಾಘವೇಂದ್ರ ಎನ್ನೋಕ್ಕಿಂತ ರಾಗಿಣಿ ಎಂದೇ ಫೇಮಸ್​ ಆದವರು 'ಮಜಾ ಭಾರತ' ಖ್ಯಾತಿಯ ನಟ. ಸ್ತ್ರೀವೇಷದಲ್ಲಿ ಹೆಣ್ಣುಮಕ್ಕಳನ್ನೂ ನಾಚಿಸುವ ಹಾಗೆ ನಟಿಸುವುದರಲ್ಲಿ ಎತ್ತಿದ ಕೈ ಯಾರದ್ದು ಎಂದು ಕೇಳಿದರೆ ಕಿರುತೆರೆ ವೀಕ್ಷಕರಿಗೆ ಮೊದಲಿಗೆ ನೆನಪಾಗುವುದು ರಾಘವೇಂದ್ರ. ರಾಗಿಣಿ ಎಂದೇ ಫೇಮಸ್​ ಆಗಿರೋ ಕಾಮಿಡಿ ಹೀರೋ ರಾಘು ಅಂದ್ರೆ ಒಂದು ಲೆವೆಲ್​ ಮೇಲೆಯೇ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದಾರೆ, ಹಾಗೆ ಕದ್ದಿದ್ದಾರೆ ಕೂಡ. ಇವರು ಸ್ತ್ರೀವೇಷ ಹಾಕಿದರೆನೇ ನೋಡಲು ಸೊಗಸು ಎನ್ನುವಷ್ಟರ ಮಟ್ಟಿಗೆ ವೀಕ್ಷಕರು ಇವರನ್ನು ಹಾಗೆಯೇ ನೋಡಲು ಬಯಸುವುದು ಇದೆ. ಆದರೆ ಇದೀಗ ರಕ್ಷಿತಾ ಜೊತೆ ರಿಯಲ್​ ವೇಷದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-rakshita-shetty-and-maja-bharat-raghavendra-new-reels-suc-c13ciim"/>
        </item>
        <item>
            <title><![CDATA[ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!]]></title>
            <link>https://kannada.asianetnews.com/entertainment/akash-ugale-the-brother-of-actress-sanchita-ugale-statement-on-his-sister-tragic-death-videoshow-c5fcckh</link>
            <guid isPermaLink="true">https://kannada.asianetnews.com/entertainment/akash-ugale-the-brother-of-actress-sanchita-ugale-statement-on-his-sister-tragic-death-videoshow-c5fcckh</guid>
            <pubDate>Wed, 17 Jun 2026 19:44:39 +0530</pubDate>
            <description><![CDATA[&lt;p&gt;ಭಾನುವಾರ ಸಂಜೆ ಇಡೀ ಹಿಂದಿ ಚಿತ್ರರಂಗವೇ ನಡುಗಿಹೋಗುವಂತಹ ಆ ದುರಂತ ಸಂಭವಿಸಿಬಿಟ್ಟಿದೆ. ತನ್ನ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಸಂಚಿತಾ, ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಕೆಯ ಸಹೋದರ ಹೇಳಿದ್ದೇನು?&lt;/p&gt;]]></description>
            <media:content url="https://geo.dailymotion.com/player/x1tbu.html?video=xagctuy" medium="video" height="768" width="1024"/>
            <content:encoded><![CDATA[&lt;p&gt;ಸುಶಾಂತ್ ಸಿಂಗ್ ಮಾದರಿಯಲ್ಲೇ ಸಾವಿಗೆ ಶರಣಾದ ನಟಿ..!ಹೊರಗಿನಿಂದ ನೋಡುವ ಕಣ್ಣುಗಳಿಗೆ ಇದು ಬಣ್ಣದ ಲೋಕ, ಯಶಸ್ಸಿನ ಶಿಖರ. ಆದರೆ, ಇದೇ ಬಣ್ಣದ ಪ್ರಪಂಚದ ಒಳಗೆ ಅದೆಷ್ಟೋ ಕಣ್ಣೀರಿನ ಕಥೆಗಳಿವೆ, ಉಸಿರುಗಟ್ಟಿಸುವ ಒತ್ತಡಗಳಿವೆ. ಅದಕ್ಕೆ ಮತ್ತೊಂದು ಲೇಟೆಸ್ಟ್ ಸಾಕ್ಷಿ ಈ ಕೇಸ್- ಕೇವಲ 30 ವರ್ಷದ ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಾಲೆ (Sanchita Ugale) ನಿಗೂಢ ಸಾವು!.. ನಟಿ ಸಂಚಿತಾ ಆ*ತ್ಮಹತ್ಯೆಯನ್ನ ಸುಶಾಂತ್ ಸಿಂಗ್ ಸೂಸೈಡ್ ಮಿಸ್ಟರಿ ಜೊತೆ ಹೋಲಿಕೆ ಮಾಡಲಾಗ್ತಾ ಇದೆ.&lt;/p&gt;&lt;p&gt;ಸುಶಾಂತ್ ಸಿಂಗ್ ಸಾವಿನ ದಿನವೇ ಸಂಚಿತಾ ಉಗಾಲೆ ಆತ್ಮಹತ್ಯೆ..!ಭಾನುವಾರ ಸಂಜೆ ಇಡೀ ಹಿಂದಿ ಚಿತ್ರರಂಗವೇ ನಡುಗಿಹೋಗುವಂತಹ ಆ ದುರಂತ ಸಂಭವಿಸಿಬಿಟ್ಟಿದೆ. ತನ್ನ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಸಂಚಿತಾ, ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಆಕೆ &amp;nbsp;ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ರು. ಸಂಚಿತಾ 30 ವರ್ಷಕ್ಕೆಲ್ಲಾ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವಾದರೂ ಏನು? ಪೊಲೀಸರು ತನಿಖೆ ಆರಂಭಿಸಿದ &amp;nbsp;ಬೆನ್ನಲ್ಲೇ ಈಗ ಇಡೀ ಪ್ರಕರಣಕ್ಕೆ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ!ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/akash-ugale-the-brother-of-actress-sanchita-ugale-statement-on-his-sister-tragic-death-videoshow-c5fcckh"/>
        </item>
        <item>
            <title><![CDATA[ಬಿಗ್​ಬಾಸ್ 13​ನಲ್ಲಿ ಅರುಣ್​ ಹೆಸ್ರು ನೋಡಿ ನಂಗೂ ಆಶ್ಚರ್ಯ ಆಯ್ತು: ನಟಿ ರಜಿನಿ ಏನಂದ್ರು ಕೇಳಿ]]></title>
            <link>https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv</link>
            <guid isPermaLink="true">https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv</guid>
            <pubDate>Thu, 18 Jun 2026 18:06:05 +0530</pubDate>
            <description><![CDATA[ನಟಿ ರಜಿನಿ ಅವರ ಪತಿ ಅರುಣ್ ಗೌಡ ಬಿಗ್&zwnj;ಬಾಸ್&zwnj;ಗೆ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿದ ರಜಿನಿ, ತನಗೂ ಈ ಸುದ್ದಿ ಕೇಳಿ ಅಚ್ಚರಿಯಾಯಿತಾದರೂ, ಅವರು ಬಿಗ್&zwnj;ಬಾಸ್&zwnj;ಗೆ ಹೋಗಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದ್ದಾರೆ. ಇದರಿಂದ ಅವರು ಜನರೊಂದಿಗೆ ಬೆರೆಯಲು ಕಲಿಯುತ್ತಾರೆ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvdbmxvar42wmzycq4jzcs8k,imgname-rajini-and-arun-gowda-1781786113898.jpg" type="image/jpeg" height="390" width="690"/>
            <content:encoded><![CDATA[ನಟಿ ರಜಿನಿ ಅವರ ಪತಿ ಅರುಣ್ ಗೌಡ ಬಿಗ್&zwnj;ಬಾಸ್&zwnj;ಗೆ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿದ ರಜಿನಿ, ತನಗೂ ಈ ಸುದ್ದಿ ಕೇಳಿ ಅಚ್ಚರಿಯಾಯಿತಾದರೂ, ಅವರು ಬಿಗ್&zwnj;ಬಾಸ್&zwnj;ಗೆ ಹೋಗಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದ್ದಾರೆ. ಇದರಿಂದ ಅವರು ಜನರೊಂದಿಗೆ ಬೆರೆಯಲು ಕಲಿಯುತ್ತಾರೆ ಎಂದಿದ್ದಾರೆ.&lt;img&gt;&lt;p&gt;ಹಿಂದೆಂದಿನ ಸೀಸನ್​ಗಿಂತಲೂ ಬಿಗ್​ಬಾಸ್​ನ 13ನೇ ಸೀಸನ್​ ಬಹಳ ಸ್ಪೆಷಲ್​ ಆಗಿದೆ. ಅದಕ್ಕೆ ಕಾರಣ, ಈ ಸಲ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿರೋದು. ಅದಕ್ಕಾಗಿಯೇ ಕಲರ್ಸ್​ ವಾಹಿನಿ ಇದಾಗಲೇ ಹಲವಾರು ಪ್ರೊಮೋಗಳನ್ನು ಬಿಡುತ್ತಲೇ ಇದ್ದು, ಇದಾಗಲೇ ಸಹಸ್ರಾರು ಮಂದಿ ಆಡಿಷನ್​ನಲ್ಲಿ ಭಾಗಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ಹಲವರ ಹೆಸರು ಇದರಲ್ಲಿ ಕೇಳಿಬರುತ್ತಿದೆ. ಪ್ರತಿಬಾರಿಯಂತೆಯೇ ಈ ಬಾರಿಯೂ ಇವರು ಹೋಗ್ತಾರೆ, ಅವರು ಹೋಗ್ತಾರೆ ಎಂದೇ ಹೇಳಲಾಗುತ್ತಿದ್ದು, ಅಂಥ ಸೆಲೆಬ್ರಿಟಿಗಳನ್ನು ಮಾಧ್ಯಮಗಳು ಮಾತನಾಡಿಸುವುವದು ಇದೆ.&lt;/p&gt;&lt;img&gt;&lt;p&gt;ಅದೇ ರೀತಿ, ಇದೀಗ 'ಅಮೃತವರ್ಷಿಣಿ', ಹಿಟ್ಲರ್&zwnj; ಕಲ್ಯಾಣ, &lsquo;ನೀ ಇರಲು ಜೊತೆಯಲಿ&rsquo; ಸೇರಿ ಹಲವಾರು ಸೀರಿಯಲ್&zwnj;ಗಳಲ್ಲಿ ನಟಿಸಿ ಮನೆಮಾತಾಗಿರೋ ನಟಿ ರಜಿನಿ ಅವರ ಪತಿ ಜಿಮ್&zwnj; ಟ್ರೈನರ್&zwnj; ಅರುಣ್&zwnj; ಗೌಡ ಅವರು ಈ ಬಾರಿಯ ಸೀಸನ್​ನಲ್ಲಿ ಹೋಗಬಹುದು ಎಂದೇ ಕೆಲವರು ಅಂದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಬಗ್ಗೆ ನಟಿ ರಜಿನಿ ಫೋಕಸ್​ ಕನ್ನಡ ಚಾನೆಲ್​ ಜೊತೆ ಮಾತನಾಡಿದ್ದಾರೆ. ನನಗೂ ಈ ವಿಷ್ಯ ಕೇಳಿ ಅಚ್ಚರಿ ಆಯ್ತು. ವೈರಲ್​ ಆಗ್ತಿರೋ ಸುದ್ದಿ ಕೇಳಿ ನಾನೂ ಅರುಣ್​ಗೆ ನೀನು ಹೋಗ್ತಿಯಾ ಎಂದು ಕೇಳಿದೆ. ಆದರೆ ಆತ ಇದಕ್ಕೆಲ್ಲಾ ಒಪ್ಪುವುದಿಲ್ಲ. ಆತ ಹೋದರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅರುಣ್​ ಜನರ ಜೊತೆ ಬೆರೆಯುವುದು ಕಡಿಮೆ. ಆದ್ದರಿಂದ ಅವರನ್ನು ಬಿಗ್​ಬಾಸ್​ಗೆ ತಳ್ಳಿ ಸ್ವಲ್ಪ ಮಾತು ಕಲಿಸಬೇಕಿದೆ. ಹೋದ ಬಾರಿ ಮ್ಯೂಟಂಟ್​ ರಘು ಹೋಗಿದ್ರು. ಅದೇ ರೀತಿ ಬಾಲಿ ಬಿಲ್ಡರ್​ ಒಬ್ಬರು ಹೋದ್ರೆ ಅದಕ್ಕೂ ಪ್ರಚಾರ ಸಿಕ್ಕ ಹಾಗೆ ಆಗುತ್ತದೆ. ಅವನು ಹೋಗಬೇಕು ಎನ್ನೋದು ನನ್ನ ಇಚ್ಛೆ ಕೂಡ ಎಂದಿದ್ದಾರೆ ರಜಿನಿ.&lt;/p&gt;&lt;img&gt;&lt;p&gt;ಅಂದಹಾಗೆ ಈ ಜೋಡಿ, ಇಬ್ಬರೂ ಜೊತೆಯಾಗಿ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ನಾವಿಬ್ಬರು ಆ ರೀತಿ ಅಲ್ಲ, ಬರಿಯ ಸ್ನೇಹಿತರು ಎಂದು ಕೊನೆಯವರೆಗೂ ಮದುವೆಯ ಬಗ್ಗೆ ಮಾತನಾಡಲಿಲ್ಲ ರಜಿನಿ ಅಥವಾ ಅರುಣ್. ಈ ಜೋಡಿ ಬಗ್ಗೆ ಅವರ ಅಭಿಮಾನಿಗಳಿಗೆ ಅನುಮಾನ ಮೂಡಿದ್ದರೂ ಇಲ್ಲ ಇಲ್ಲ ಎನ್ನುತ್ತಲೇ ಕೊನೆಗೆ ಸಿಂಪಲ್&zwnj; ಆಗಿ ಮದುವೆಯಾಗಿದ್ದರು.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv"/>
        </item>
        <item>
            <title><![CDATA[ಅನುಮಾನಾಸ್ಪದವಾಗಿ 'ಮಜಾ ಭಾರತ' ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ನಿಧನ; ಶವ ಪತ್ತೆ]]></title>
            <link>https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f</link>
            <guid isPermaLink="true">https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f</guid>
            <pubDate>Tue, 16 Jun 2026 05:30:34 +0530</pubDate>
            <description><![CDATA[ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ಬೀದರ್&zwnj;ನಲ್ಲಿ ನಿಧನರಾಗಿದ್ದಾರೆ. ಹುಮ್ನಾಬಾದ್ ಹೊರವಲಯದಲ್ಲಿ ಅವರ ಶವ ಪತ್ತೆಯಾಗಿದ್ದು, ವಿದ್ಯುತ್ ಶಾಕ್&zwnj;ನಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv6ved5ykgzzvcqzcrf673kb,imgname-siddu-1781567796414.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಉರ್ಫ್ ಸಿದ್ಧಾರ್ಥ್ ಪರಸನೂರು ನಿಧನರಾಗಿದ್ದಾರೆ. ಸಿದ್ದು ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೀದರ್ ಜಿಲ್ಲೆಯ ನಿವಾಸಿಯಾಗಿದ್ದ ಸಿದ್ದು ಪರಸನೂರು ಹುಮ್ನಾಬಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ವಾಸವಾಗಿದ್ದರು.&lt;/p&gt;&lt;h2&gt;&lt;strong&gt;ಸಾವಿನ ಸುತ್ತ ಅನುಮಾನ&lt;/strong&gt;&lt;/h2&gt;&lt;p&gt;ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿ ಸಿದ್ದು ಅವರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿದ್ದು ಅವರದ್ದು ಸಹಜ ಸಾವು ಅಲ್ಲ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ ಶಾಕ್&zwnj;ನಿಂದ ಸಾವು ಸಂಭವಿಸಿರುವ ಸಾಧ್ಯತೆಗಳಿವೆ.&lt;/p&gt;&lt;p&gt;ಈ ಸಂಬಂಧ ಹುಮ್ನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಜಾ ಭಾರತ ರಿಯಾಲಿಟಿ ಶೋ ಸಿದ್ದು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನಂತರ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡಿದ್ದರು. 'ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿಯೂ ಸಿದ್ದು ನಟಿಸಿದ್ದಾರೆ. ವಿಭಿನ್ನ ಹಾಗೂ ಸಹಜವಾದ ಹಾಸ್ಯ ಶೈಲಿಗೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಿದ್ದು ಪರಸನೂರು ಹೊಂದಿದ್ದರು.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f"/>
        </item>
        <item>
            <title><![CDATA[ಪಿಂಕ್ ಸೀರೆಯಲ್ಲಿ ಮಿಂಚಿದ  ಕರ್ಣ ಸೀರಿಯಲ್ ನಟಿಗೆ ಫ್ಯಾನ್ಸ್ ಏನಂದ್ರು ಗೊತ್ತಾ?]]></title>
            <link>https://kannada.asianetnews.com/webstories/tv-talk/namratha-gowda-looks-beautiful-in-pink-saree-oz5tohf</link>
            <guid isPermaLink="true">https://kannada.asianetnews.com/webstories/tv-talk/namratha-gowda-looks-beautiful-in-pink-saree-oz5tohf</guid>
            <pubDate>Tue, 16 Jun 2026 18:49:15 +0530</pubDate>
            <description><![CDATA[&lt;p&gt;ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಇದೀಗ ತಮ್ಮ ಇನ್&rsquo;ಸ್ಟಾಗ್ರಾಂನಲ್ಲಿ ಪಿಂಕ್ ಬಣ್ಣದ ಸೀರೆಯುಟ್ಟು ಸಖತ್ ಆಗಿ ಮಿಂಚುತ್ತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಏನು ಹೇಳಿದ್ದಾರೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv8986q9cyrxv5n4gg30fdnm,imgname-namratha-gowda-1781615827686.jpg" type="image/jpeg" height="390" width="690"/>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/tv-talk/namratha-gowda-looks-beautiful-in-pink-saree-oz5tohf"/>
        </item>
        <item>
            <title><![CDATA[ಕಲರ್ಸ್ ಕನ್ನಡ ಪ್ರೋಮೋದಲ್ಲಿ ಭವ್ಯಾ ಗೌಡ ನೋಡಿ ಫ್ಯಾನ್ಸ್ ಹೇಳಿದ್ದೇನು?]]></title>
            <link>https://kannada.asianetnews.com/gallery/tv-talk/bhavya-gowda-of-bigg-boss-fame-shined-in-colors-kannada-promo-p04oc4v</link>
            <guid isPermaLink="true">https://kannada.asianetnews.com/gallery/tv-talk/bhavya-gowda-of-bigg-boss-fame-shined-in-colors-kannada-promo-p04oc4v</guid>
            <pubDate>Wed, 17 Jun 2026 11:11:52 +0530</pubDate>
            <description><![CDATA[&lt;p&gt;Chittar Star Awards: : ಬಿಗ್ ಬಾಸ್ ಖ್ಯಾತಿಯ ನಟಿ ಭವ್ಯಾ ಗೌಡ, ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಅವರ ಡಾನ್ಸ್, ಡ್ರೆಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva17tggpf4fjce21edn9r8m,imgname-bhavya-gowda-1781674535440.jpg" type="image/jpeg" height="390" width="690"/>
            <content:encoded><![CDATA[&lt;p&gt;Chittar Star Awards: : ಬಿಗ್ ಬಾಸ್ ಖ್ಯಾತಿಯ ನಟಿ ಭವ್ಯಾ ಗೌಡ, ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಅವರ ಡಾನ್ಸ್, ಡ್ರೆಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡ ಜೂನ್ 21 ರಂದು ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರ ಮಾಡ್ತಿದೆ. ಈ ಪ್ರೋಗ್ರಾಂ ಪ್ರೋಮೋ ಆಗಲೇ ಕಲರ್ಸ್ ಕನ್ನಡದಲ್ಲಿ ಹರಿದಾಡ್ತಿದೆ. ಹಿಂದೆ ಗಿಲ್ಲಿ ಪ್ರೋಮೋ ಬಿಡುಗಡೆ ಮಾಡಿದ್ದ ಕಲರ್ಸ್ ಕನ್ನಡ ಈಗ ನಟಿಯರ ಡಾನ್ಸ್ ವಿಡಿಯೋ ಪೋಸ್ಟ್ ಮಾಡಿದೆ. ಇದ್ರಲ್ಲಿ ಭವ್ಯ ಗೌಡ ಡಾನ್ಸ್ ಮಾಡೋದು ಎಲ್ಲರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡದ ಹುಡುಗಿ ಎಂದೇ ಪ್ರಸಿದ್ಧಿ ಪಡೆದಿದ್ದ ಭವ್ಯಾ ಗೌಡ ಈಗ ಮತ್ತೆ ಕಲರ್ಸ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಭರ್ಜರಿ ಡಾನ್ಸ್ ಮಾಡಿದ್ದು, ನೀಲಿ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಸದ್ಯ ಪ್ರೋಮೋದಲ್ಲಿ ಭವ್ಯಾ ಗೌಡ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಭವ್ಯಾ ಗೌಡ ಸೀರಿಯಲ್ ಕೆರಿಯರ್ ಶುರು ಮಾಡಿದ್ದು ಗೀತಾ ಸೀರಿಯಲ್ ನಿಂದ. ಈ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿತ್ತು. ನಂತ್ರ ಭವ್ಯಾ ಗೌಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿ, ಮತ್ತಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಆದ್ರೆ ಬಿಗ್ ಬಾಸ್ ನಂತ್ರ ಆದ ಕೆಲ ಸಮಸ್ಯೆಯಿಂದಾಗಿ ಭವ್ಯಾ ಗೌಡ ಮತ್ತೆ ಕಲರ್ಸ್ ಗೆ ಬರೋದಿಲ್ಲ ಅಂತ ಫ್ಯಾನ್ಸ್ ಭಾವಿಸಿದ್ದರು. ಈಗ ಪ್ರೋಮೋ ನೋಡಿ ಸಂತೋಷಪಟ್ಟಿದ್ದಾರೆ. ಭವ್ಯಾ ಗೌಡ ಅವರನ್ನು ಕಲರ್ಸ್ ಕನ್ನಡ ಪ್ರೋಮೋದಲ್ಲಿ ನೋಡಿ ನೆಮ್ಮದಿಯಾಗಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಚಿತ್ತಾರ ಸ್ಟಾರ್ ಅವಾರ್ಡ್ಸ್ ನಲ್ಲಿ ಬಿಗ್ ಬಾಸ್ ಬೆಡಗಿಯರ ಡಾನ್ಸ್ ಕಣ್ತುಂಬಿಕೊಳ್ಬಹುದು. ಭವ್ಯಾ ಗೌಡ, ಕಾವ್ಯಾ ಪ್ರಿಯಾಂಕಾ ಆಚಾರ್, ರಾಶಿಕಾ ಸೇರಿದಂತೆ ಚೆಲುವೆಯರು ಮಸ್ತ್ ಮಸ್ತ್ ಡಾನ್ಸ್ ಮೂಲಕ ಎಲ್ಲರನ್ನು ಸೆಳೆಯಲಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು, ಕಾವ್ಯಾ, ಭವ್ಯಾ ಅಂತ ತಮ್ಮ ನೆಚ್ಚಿನ ನಟಿಯರ ಡಾನ್ಸ್ ನೋಡಲು ಕಾತರರಾಗಿದ್ದಾರೆ. ಜೂನ್ 21ರ ಸಂಜೆ 5 ಗಂಟೆಗೆ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ.&lt;/p&gt;]]></content:encoded>
            <category>tv-talk</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/tv-talk/bhavya-gowda-of-bigg-boss-fame-shined-in-colors-kannada-promo-p04oc4v"/>
        </item>
        <item>
            <title><![CDATA[ಲಂಡನ್‌ನಲ್ಲಿ ಹುಟ್ಟಿ ಬೆಳೆದ ಮಗಳು; ಹರ ಹರ ಮಹಾದೇವ ಧಾರಾವಾಹಿ ನಟಿ Priyanka Chincholi Family Photos]]></title>
            <link>https://kannada.asianetnews.com/gallery/tv-talk/hara-hara-mahadeva-serial-actress-priyanka-chincholi-daughter-in-london-pwz2b23</link>
            <guid isPermaLink="true">https://kannada.asianetnews.com/gallery/tv-talk/hara-hara-mahadeva-serial-actress-priyanka-chincholi-daughter-in-london-pwz2b23</guid>
            <pubDate>Thu, 18 Jun 2026 16:42:37 +0530</pubDate>
            <description><![CDATA[&lt;p&gt;Kannada Actress Priyanka Chincholi Photos: &lsquo;ಹರ ಹರ ಮಹಾದೇವ&rsquo;, &lsquo;ಮನಸೆಲ್ಲಾ ನೀನೆ&rsquo; ಸೀರಿಯಲ್&zwnj;ಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚಿಂಚೋಳಿ ಈಗ ಲಂಡನ್&zwnj;ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd5m5fx68pzpw9f3qaaqc07,imgname-new-project---2026-06-18t161015.696-1781779797500.jpg" type="image/jpeg" height="390" width="690"/>
            <content:encoded><![CDATA[&lt;p&gt;Kannada Actress Priyanka Chincholi Photos: &lsquo;ಹರ ಹರ ಮಹಾದೇವ&rsquo;, &lsquo;ಮನಸೆಲ್ಲಾ ನೀನೆ&rsquo; ಸೀರಿಯಲ್&zwnj;ಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚಿಂಚೋಳಿ ಈಗ ಲಂಡನ್&zwnj;ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;2021ರಲ್ಲಿ ಬೆಂಗಳೂರಿನಲ್ಲಿ ನಟಿ ಪ್ರಿಯಾಂಕಾ ಚಿಂಚೋಳಿ ಅವರು ಮೊದಲು ರಾಕೇಶ್&zwnj; ಕುಮಾರ್&zwnj; ಜೊತೆ ಗ್ರ್ಯಾಂಡ್&zwnj; ಆಗಿ ಎಂಗೇಜ್&zwnj; ಆಗಿದ್ದರು. ಆಮೇಲೆ ಕೋರ್ಟ್&zwnj; ಮ್ಯಾರೇಜ್&zwnj; ಮಾಡಿಕೊಂಡಿದ್ದರು.&lt;/p&gt;&lt;img&gt;&lt;p&gt;ರೆಸಾರ್ಟ್&zwnj;ವೊಂದರಲ್ಲಿ ಪ್ರಿಯಾಂಕಾ ಹಾಗೂ ರಾಕೇಶ್&zwnj; ಅವರು ಮದುವೆಯಾಗಿದ್ದರು. ಅದ್ದೂರಿಯಾಗಿ ಎಲ್ಲ ಮದುವೆ ಶಾಸ್ತ್ರ ನಡೆದಿತ್ತು.&lt;/p&gt;&lt;img&gt;&lt;p&gt;ಮದುವೆ ಆಗಿ, ವಿದೇಶಕ್ಕೆ ಹೋದ ಬಳಿಕ ರಾಕೇಶ್&zwnj; ಅವರು ನಟನೆಯಿಂದ ದೂರ ಇದ್ದಾರೆ. &ldquo;ಬೆಂಗಳೂರಿನಿಂದ ದೂರ ಹೋಗೋದು, ವಿದೇಶದಲ್ಲಿ ನೆಲೆಸೋದು, ನಟನೆ ಬಿಡೋದು ಕಷ್ಟವಾಗಿದೆ&rdquo; ಎಂದು ಪ್ರಿಯಾಂಕಾ ಚಿಂಚೋಳಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಪ್ರಿಯಾಂಕಾ ಹಾಗೂ ರಾಕೇಶ್&zwnj;ರದ್ದು ಅರೇಂಜ್ ಮ್ಯಾರೇಜ್&zwnj; ಆಗಿತ್ತು. ಪರಿಚಯಸ್ಥರ ಮೂಲಕ ಪ್ರಿಯಾಂಕಾಗೆ ರಾಕೇಶ್&zwnj; ಪರಿಚಯ ಆಗಿತ್ತು.&lt;/p&gt;&lt;img&gt;&lt;p&gt;ಮದುವೆ ಬಳಿಕ ಪ್ರಿಯಾಂಕಾ ಅವರು ವಿದೇಶಕ್ಕೆ ಹೋಗಿದ್ದರು. ಆಮೇಲೆ 2024 ಸೆಪ್ಟೆಂಬರ್&zwnj;ನಲ್ಲಿ ಹೊಸ ಮನೆ ಖರೀದಿ ಮಾಡಿದ್ದರು.&lt;/p&gt;&lt;img&gt;&lt;p&gt;ಪ್ರಗ್ನೆಂಟ್&zwnj; ಆದ ಬಳಿಕ ಪ್ರಿಯಾಂಕಾ ಅವರು ಸೀಮಂತಕ್ಕೆಂದು ಬೆಂಗಳೂರಿಗೆ ಬಂದಿದ್ದರು.&lt;/p&gt;&lt;img&gt;&lt;p&gt;ಈ ದಂಪತಿಗೆ ಓರ್ವ ಮಗಳಿದ್ದಾಳೆ.&lt;/p&gt;&lt;img&gt;&lt;p&gt;ನೀನು ನನ್ನನ್ನು ಬೇಷರತ್ತಾಗಿ ಪ್ರೀತಿಸಬೇಕು ಎಂದು ಬಯಸುತ್ತಿದ್ದೆ, ನನಗೆ ದೇವರು ನನಗೆ ನಿನ್ನನ್ನು ನೀಡಿದನು. ನಂತರ ನಮಗೆ ರಾಯಾಳ ಆಶೀರ್ವಾದ ಸಿಕ್ಕಿತು, ಮತ್ತು ನೀನು ನಮ್ಮಿಬ್ಬರನ್ನು ಪ್ರೀತಿಸುವ ಮತ್ತು ಬೆಂಬಲಿಸುವ ವಿಧಾನವನ್ನು ನೋಡುವುದೇ ನನ್ನ ಜೀವನವನ್ನು ನಿಜಕ್ಕೂ ಅದ್ಭುತವಾಗಿಸಿದೆ.&lt;/p&gt;&lt;p&gt;ನಮ್ಮ ಪುಟ್ಟ ಸಂಸಾರವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಶಕ್ತಿ ನೀನು, ನಮ್ಮ ದೊಡ್ಡ ಬೆಂಬಲಿಗ ಮತ್ತು ಪ್ರತಿ ದಿನವನ್ನು ಹೆಚ್ಚು ಉಜ್ವಲಗೊಳಿಸುವ ವ್ಯಕ್ತಿ ನೀನು. ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನೀನು ನನ್ನ ಪಕ್ಕದಲ್ಲಿ ಇಲ್ಲದಿದ್ದರೆ ಜೀವನ ಹೀಗಿರುತ್ತಿರಲಿಲ್ಲ ಎಂಬುದು ಮಾತ್ರ ನನಗೆ ಗೊತ್ತು.&lt;/p&gt;&lt;p&gt;ನಿನ್ನ ಪ್ರೀತಿ, ನಿನ್ನ ಕಾಳಜಿ ಮತ್ತು ನೀನು ನಮಗಾಗಿ ಮಾಡುವ ಎಲ್ಲದಕ್ಕೂ ಧನ್ಯವಾದಗಳು. ನೀನು ನಮ್ಮೊಂದಿಗೆ ಇರಲು ನಾವು ತುಂಬಾ ಅದೃಷ್ಟ ಮಾಡಿದ್ದೇವೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/hara-hara-mahadeva-serial-actress-priyanka-chincholi-daughter-in-london-pwz2b23"/>
        </item>
        <item>
            <title><![CDATA[Gilli Nata: ಮದುವೆಯೋ? ಸಿನಿಮಾ ಡೈರೆಕ್ಷನ್ನೋ? ಸ್ಪೆಷಲ್‌ ಅನೌನ್ಸ್‌ಮೆಂಟ್‌ಗೆ ರೆಡಿಯಾದ ಬಿಗ್‌ಬಾಸ್‌ ವಿನ್ನರ್‌]]></title>
            <link>https://kannada.asianetnews.com/gallery/tv-talk/bigg-boss-kannada-season-12-winner-gilli-nata-special-announcement-marriage-movie-san-rbig6gz</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-season-12-winner-gilli-nata-special-announcement-marriage-movie-san-rbig6gz</guid>
            <pubDate>Tue, 16 Jun 2026 11:59:07 +0530</pubDate>
            <description><![CDATA[ಬಿಗ್ ಬಾಸ್ ಸೀಸನ್-12ರ ವಿಜೇತ ಗಿಲ್ಲಿ ನಟ, ಇಂದು ಸಂಜೆ 6.15ಕ್ಕೆ ಒಂದು 'ವಿಶೇಷ ಘೋಷಣೆ' ಮಾಡುವುದಾಗಿ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಪ್ರಕಟಿಸಿದ್ದಾರೆ. ಈ ಘೋಷಣೆಯು ಹೊಸ ಸಿನಿಮಾ ನಿರ್ದೇಶನ, ನಾಯಕನಾಗಿ ಹೊಸ ಚಿತ್ರ ಅಥವಾ ಅವರ ಮದುವೆಯ ಕುರಿತಾಗಿರಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv7hqfd7zgqq4m93na5366gb,imgname-gilli-nata--1--1781591162279.jpg" type="image/jpeg" height="390" width="690"/>
            <content:encoded><![CDATA[ಬಿಗ್ ಬಾಸ್ ಸೀಸನ್-12ರ ವಿಜೇತ ಗಿಲ್ಲಿ ನಟ, ಇಂದು ಸಂಜೆ 6.15ಕ್ಕೆ ಒಂದು 'ವಿಶೇಷ ಘೋಷಣೆ' ಮಾಡುವುದಾಗಿ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಪ್ರಕಟಿಸಿದ್ದಾರೆ. ಈ ಘೋಷಣೆಯು ಹೊಸ ಸಿನಿಮಾ ನಿರ್ದೇಶನ, ನಾಯಕನಾಗಿ ಹೊಸ ಚಿತ್ರ ಅಥವಾ ಅವರ ಮದುವೆಯ ಕುರಿತಾಗಿರಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.&lt;img&gt;&lt;p&gt;ದೊಡ್ಮನೆಯ ಸೀಸನ್-12 ರ ಟ್ರೋಫಿ ಗೆದ್ದು ಬೀಗಿದ್ದ ಗಿಲ್ಲಿ ನಟ ಈಗ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿರುವ ಒಂದೇ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. ತಾವು &quot;ಒಂದು ವಿಶೇಷ ಘೋಷಣೆ&quot; ಮಾಡಲಿದ್ದೇನೆ ಎಂದು ಗಿಲ್ಲಿ ಪ್ರಕಟಿಸಿದ್ದಾರೆ. ಜೂನ್-16 ರಂದು (ಇಂದು) ಸಂಜೆ ಸರಿಯಾಗಿ 6.15 ಕ್ಕೆ ಈ ರಹಸ್ಯ ಹೊರಬೀಳಲಿದೆ ಎಂದು ಅವರು ತಿಳಿಸಿದ್ದು, ಪೋಸ್ಟ್ ಕೊನೆಯಲ್ಲಿ &quot;ಇಂತಿ ನಿಮ್ಮ ಪ್ರೀತಿಯ ಗಿಲ್ಲಿ&quot; ಎಂದು ಬರೆದುಕೊಂಡಿದ್ದಾರೆ. ಈ ಟೈಮ್ ಫಿಕ್ಸ್ ಬೆನ್ನಲ್ಲೇ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.&lt;/p&gt;&lt;img&gt;&lt;p&gt;ಗಿಲ್ಲಿ ನಟ ಮಾಡಲಿರುವ ಈ ಸ್ಪೆಷಲ್ ಅನೌನ್ಸ್&zwnj;ಮೆಂಟ್ ಹೊಸ ಚಿತ್ರದ ನಿರ್ದೇಶನದ ಕುರಿತಾಗಿ ಇರಬಹುದೇ? ಎಂಬ ಬಲವಾದ ಅನುಮಾನ ಮೂಡಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನೀಡಿದ್ದ ಹಲವು ಸಂದರ್ಶನಗಳಲ್ಲಿ ಗಿಲ್ಲಿ ಅವರು ಚಿತ್ರ ನಿರ್ದೇಶನದ (Movie Direction) ಕಡೆಗೆ ತಮಗಿರುವ ಅತಿಯಾದ ಆಸಕ್ತಿಯ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು. ಹೀಗಾಗಿ, ಅವರು ಕಥೆ ಸಿದ್ಧಪಡಿಸಿ ಮೆಗಾ ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಾ ಎಂಬ ಚರ್ಚೆಗಳು ಗಾಂಧಿನಗರದಲ್ಲಿ ಶುರುವಾಗಿವೆ.&lt;/p&gt;&lt;img&gt;&lt;p&gt;ನಿರ್ದೇಶನ ಮಾತ್ರವಲ್ಲದೆ, ಗಿಲ್ಲಿ ಅವರು ಈ ಬಾರಿ ಮತ್ತೊಮ್ಮೆ ನಾಯಕ ನಟನಾಗಿ (Hero) ದೊಡ್ಡ ಪ್ರೊಡಕ್ಷನ್ ಹೌಸ್ ಸಿನಿಮಾ ಒಪ್ಪಿಕೊಂಡಿರುವ ಸಾಧ್ಯತೆಯೂ ದಟ್ಟವಾಗಿದೆ. ದೊಡ್ಮನೆಯಿಂದ ಆಚೆ ಬಂದಾಗಿನಿಂದಲೂ ಗಿಲ್ಲಿ ನಟ ಹೀರೋ ಆಗಿ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಳಿಸುದ್ದಿ ಗಟ್ಟಿಯಾಗಿಯೇ ಕೇಳಿಬರುತ್ತಿತ್ತು. ಇಂದು ಸಂಜೆ ರಿವೀಲ್ ಆಗಲಿರುವ ಪೋಸ್ಟರ್ ಇವರ ಹೀರೋಗಿರಿಯ ಹೊಸ ಚಿತ್ರದ್ದೇ ಇರಬಹುದು ಎಂದು ಫ್ಯಾನ್ಸ್ ಲೆಕ್ಕಾಚಾರ ಹಾಕುತ್ತಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಸಡನ್ ಆಗಿ ಮದುವೆ ಅಥವಾ ಎಂಗೇಜ್&zwnj;ಮೆಂಟ್ ಸುದ್ದಿ ಕೊಡುವುದು ಕಾಮನ್ ಆಗಿದೆ. ಗಿಲ್ಲಿ ನಟ ಕೂಡ ತಮ್ಮ ವೈಯಕ್ತಿಕ ಜೀವನದ ಬಗ್ಗೆ &quot;ವಿಶೇಷ ಘೋಷಣೆ&quot; ಎಂದು ಹೇಳಿರುವುದರಿಂದ, ಇದು ಅವರ ಮದುವೆಯ (Wedding) ಅನೌನ್ಸ್&zwnj;ಮೆಂಟ್ ಇರಬಹುದೇ? ಎಂಬ ಅಚ್ಚರಿಯ ಪ್ರಶ್ನೆಯೂ ಹುಟ್ಟಿಕೊಂಡಿದೆ. ಸಿನಿಮಾ ಅಥವಾ ಮದುವೆ ಎಂಬ ಈ ಗೊಂದಲವೇ ಈಗ ನೆಟ್ಟಿಗರ ನಿದ್ದೆ ಕೆಡಿಸಿದೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಬೆನ್ನಲ್ಲೇ ಗಿಲ್ಲಿ ನಟ ಅಭಿನಯದ ಸೂಪರ್ ಹಿಟ್ ಚಿತ್ರವೊಂದು ತೆರೆಗೆ ಬಂದು ಧೂಳೆಬ್ಬಿಸಿತ್ತು. ಖ್ಯಾತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರ ವಿಜಯಾನಂದ್ ಈ ಚಿತ್ರವನ್ನು ಅದ್ಭುತವಾಗಿ ಡೈರೆಕ್ಷನ್ ಮಾಡಿದ್ದರು. ಗೌರವ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿದ್ದ ಈ ಔಟ್ ಅಂಡ್ ಔಟ್ ಕಾಮಿಡಿ ಚಿತ್ರವನ್ನು ಸಿನಿಪ್ರೇಕ್ಷಕರು ಮುಗಿಬಿದ್ದು ನೋಡಿ ಮೆಚ್ಚಿಕೊಂಡಿದ್ದರು. ಈ ಚಿತ್ರದಲ್ಲಿ ಗಿಲ್ಲಿ ಅವರ ನಾಯಕತ್ವದ ನಟನೆಯನ್ನು ಪ್ರಮುಖವಾಗಿ ಹೈಲೈಟ್ ಮಾಡಲಾಗಿತ್ತು. ಆ ಯಶಸ್ಸಿನ ಬೆನ್ನಲ್ಲೇ ಈಗ ಈ ಹೊಸ ಘೋಷಣೆ ಬರುತ್ತಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ.&lt;/p&gt;]]></content:encoded>
            <category>tv-talk</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-season-12-winner-gilli-nata-special-announcement-marriage-movie-san-rbig6gz"/>
        </item>
        <item>
            <title><![CDATA['ಪರಮಾತ್ಮ ಅಪ್ಪುವಿನ ಗುಣವುಳ್ಳ ಗುಣವಂತ..' ಕಷ್ಟಕಾಲದಲ್ಲಿ ಜೊತೆ ನಿಂತವನ ನೆನೆದ ಆಂಕರ್‌ ಅನುಶ್ರೀ]]></title>
            <link>https://kannada.asianetnews.com/gallery/tv-talk/anchor-anushree-emotional-post-varun-gowda-birthday-appu-qualities-san-rhiyndb</link>
            <guid isPermaLink="true">https://kannada.asianetnews.com/gallery/tv-talk/anchor-anushree-emotional-post-varun-gowda-birthday-appu-qualities-san-rhiyndb</guid>
            <pubDate>Wed, 17 Jun 2026 16:38:49 +0530</pubDate>
            <description><![CDATA[&lt;p&gt;ನಿರೂಪಕಿ ಅನುಶ್ರೀ ತಮ್ಮ ವರುಣ್ ಗೌಡ ಅವರ ಜನ್ಮದಿನದಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಂತ ವರುಣ್ ಅವರನ್ನು ಪುನೀತ್ ರಾಜ್&zwnj;ಕುಮಾರ್ ಅವರ ಗುಣಗಳಿಗೆ ಹೋಲಿಸಿ, ರಕ್ತಸಂಬಂಧವಿಲ್ಲದಿದ್ದರೂ ಅಣ್ಣನಾಗಿ ತನ್ನ ಮದುವೆ ನಡೆಸಿಕೊಟ್ಟಿದ್ದನ್ನು ಸ್ಮರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvakzz3c8w2b06x769nqwthz,imgname-anchor-anushree-emotional-post-varun-gowda--3--1781694200940.jpeg" type="image/jpeg" height="390" width="690"/>
            <content:encoded><![CDATA[&lt;p&gt;ನಿರೂಪಕಿ ಅನುಶ್ರೀ ತಮ್ಮ ವರುಣ್ ಗೌಡ ಅವರ ಜನ್ಮದಿನದಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಂತ ವರುಣ್ ಅವರನ್ನು ಪುನೀತ್ ರಾಜ್&zwnj;ಕುಮಾರ್ ಅವರ ಗುಣಗಳಿಗೆ ಹೋಲಿಸಿ, ರಕ್ತಸಂಬಂಧವಿಲ್ಲದಿದ್ದರೂ ಅಣ್ಣನಾಗಿ ತನ್ನ ಮದುವೆ ನಡೆಸಿಕೊಟ್ಟಿದ್ದನ್ನು ಸ್ಮರಿಸಿದ್ದಾರೆ.&lt;/p&gt;&lt;img&gt;&lt;p&gt;ಜನಪ್ರಿಯ ನಿರೂಪಕಿ ಅನುಶ್ರೀ ಸೋಶಿಯಲ್&zwnj; ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಬದುಕಿನ ಏಳುಬೀಳುಗಳಲ್ಲಿ, ಕಷ್ಟಕಾಲದಲ್ಲಿ ಸದಾ ಬೆನ್ನೆಲುಬಾಗಿ ನಿಂತ ಆಪ್ತ ಗೆಳೆಯ ವರುಣ್ ಗೌಡ ಅವರ ಜನ್ಮದಿನದಂದು ವರುಣ್ ಅವರ ಗುಣಗಳನ್ನು ಕೊಂಡಾಡಿ ಭಾವುಕರಾಗಿದ್ದಾರೆ.&lt;/p&gt;&lt;img&gt;&lt;p&gt;ವರುಣ್ ಗೌಡ ಅವರಿಗೆ ಹುಟ್ಟುಹಬ್ಬದ ಶುಭ ಕೋರಿರುವ ಅನುಶ್ರೀ, &quot;ಅಣ್ಣ ಎನ್ನಲೇ ನಿನ್ನ.. ಗೆಳೆಯ ಎಂದು ಕೂಗಲೇ ನಿನ್ನ&hellip; ಅಥವಾ ಪರಮಾತ್ಮ ಅಪ್ಪುವಿನ ಗುಣವುಳ್ಳ ಗುಣವಂತ ಎನ್ನಲೇ ನಿನ್ನ&hellip;&quot; ಎಂದು ಬರೆದುಕೊಂಡಿದ್ದಾರೆ. ಕರ್ನಾಟಕದ ಹೆಮ್ಮೆ, ದಿವಂಗತ ನಟ ಪುನೀತ್ ರಾಜ್&zwnj;ಕುಮಾರ್ (ಅಪ್ಪು) ಅವರಂತೆ ಎಲ್ಲರಿಗೂ ಸಹಾಯ ಮಾಡುವ, ಎಲ್ಲರ ಕಷ್ಟಕ್ಕೂ ಮಿಡಿಯುವ ಅದ್ಭುತ ಗುಣ ವರುಣ್ ಅವರಲ್ಲಿದೆ ಎಂಬುದನ್ನು ಅನುಶ್ರೀ ಈ ಮೂಲಕ ಮನಸಾರೆ ಶ್ಲಾಘಿಸಿದ್ದಾರೆ.&lt;/p&gt;&lt;img&gt;&lt;p&gt;ಬದುಕಿನ ಕಠಿಣ ಸಂದರ್ಭಗಳನ್ನು ನೆನೆದಿರುವ ಅನುಶ್ರೀ, &quot;ನನ್ನ ಬದುಕಿನ ನೋವು ನಲಿವುಗಳಲ್ಲಿ ಸದಾ ನನ್ನ ಹಿಂದೆ ನಿಂತು ಧೈರ್ಯ ಹೇಳಿ, ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಗೆಳೆಯ ನೀನು&quot; ಎಂದು ಹೇಳಿದ್ದಾರೆ. ಕೇವಲ ಸಂತೋಷದ ಸಮಯದಲ್ಲಿ ಮಾತ್ರವಲ್ಲದೆ, ಬದುಕಿನ ಪ್ರತಿಯೊಂದು ನೋವಿನ ಕ್ಷಣದಲ್ಲೂ ವರುಣ್ ತಮಗೆ ಧೈರ್ಯ ತುಂಬಿದ ರೀತಿಯನ್ನು ಅವರು ಸ್ಮರಿಸಿದ್ದಾರೆ.&lt;/p&gt;&lt;img&gt;&lt;p&gt;ವರುಣ್ ಅವರ ಜವಾಬ್ದಾರಿಯುತ ನಡವಳಿಕೆಯನ್ನು ಶ್ಲಾಘಿಸಿರುವ ಅನುಶ್ರೀ, &quot;ರಕ್ತ ಸಂಬಂಧ ಇಲ್ಲದಿದ್ದರೂ ಈ ತಂಗಿಯ ಮದುವೆಯನ್ನು ಬಲು ಜೋರಾಗಿ ಮುಂದೆ ನಿಂತು ನಡೆಸಿಕೊಟ್ಟ ಅಣ್ಣ ನೀನು&quot; ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಯಾವುದೇ ರಕ್ತದ ನಂಟಿಲ್ಲದಿದ್ದರೂ ಒಬ್ಬ ಸ್ವಂತ ಅಣ್ಣನ ಸ್ಥಾನದಲ್ಲಿ ನಿಂತು ಮದುವೆಯ ಇಡೀ ಜವಾಬ್ದಾರಿಯನ್ನು ವರುಣ್ ಹೊತ್ತುಕೊಂಡಿದ್ದನ್ನು ಅವರು ಭಾವುಕರಾಗಿ ನೆರೆದಿದ್ದಾರೆ.&lt;/p&gt;&lt;img&gt;&lt;p&gt;ವರುಣ್ ಅವರು ಮಾಡಿದ ಸಹಾಯ ಮತ್ತು ತೋರಿದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿರುವ ಅನುಶ್ರೀ, &quot;ನಾನು ಮತ್ತು ನನ್ನ ಗಂಡ ಎಂದಿಗೂ ತೀರಿಸಲಾಗದು ಈ ನಿನ್ನ ಋಣ&hellip; ಪ್ರತಿಯೊಬ್ಬರಿಗೂ ಮಾದರಿ ಈ ನಿನ್ನ ಗುಣ!!!!&quot; ಎಂದು ಬರೆದಿದ್ದಾರೆ. ವರುಣ್ ಅವರ ನಿಸ್ವಾರ್ಥ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕೊನೆಯದಾಗಿ ವರುಣ್ ಅವರ ಪರೋಪಕಾರಿ ಗುಣವನ್ನು ಕೊಂಡಾಡಿರುವ ಅವರು, &quot;ಯಾರೇನೆ ಕಷ್ಟ ಅಂದ್ರು ಎಲ್ಲರಿಗಾಗಿ ಸದಾ ನಿಲ್ಲುವ ಜೀವ ನೀ ವರುಣ್!!! ನೀನು ನೂರು ಕಾಲ ಚೆನ್ನಾಗಿರು, ಖುಷಿಯಾಗಿರು, ನೆಮ್ಮದಿಯಿಂದಿರು&hellip;&quot; ಎಂದು ಪ್ರಾರ್ಥಿಸಿದ್ದಾರೆ. ಅತ್ಯುತ್ತಮ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು (Happiest birthday to the bestest soul) ಎಂದು ಬರೆಯುವ ಮೂಲಕ ವರುಣ್ ಗೌಡ ಅವರಿಗೆ ದೇವರ ಆಶೀರ್ವಾದವಿರಲಿ ಎಂದು ಹಾರೈಸಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by ಅನುಶ್ರೀ Anchor APPU FAN (@anchor_anushreeofficial)&lt;/p&gt;&lt;p&gt;&lt;/p&gt;]]></content:encoded>
            <category>tv-talk</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/anchor-anushree-emotional-post-varun-gowda-birthday-appu-qualities-san-rhiyndb"/>
        </item>
        <item>
            <title><![CDATA[Actress Roopika Marriage: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಲಗ್ನಪತ್ರಿಕೆ ಶಾಸ್ತ್ರ ಆಯ್ತು!]]></title>
            <link>https://kannada.asianetnews.com/gallery/tv-talk/lakshmi-nivasa-kannada-serial-sinchana-real-name-actress-roopika-marriage-lagna-patrike-shastra-swgv4ga</link>
            <guid isPermaLink="true">https://kannada.asianetnews.com/gallery/tv-talk/lakshmi-nivasa-kannada-serial-sinchana-real-name-actress-roopika-marriage-lagna-patrike-shastra-swgv4ga</guid>
            <pubDate>Thu, 18 Jun 2026 09:35:35 +0530</pubDate>
            <description><![CDATA[&lt;p&gt;Lakshmi Nivasa Serial Kannada: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಅವರು ಮದುವೆಗೆ ರೆಡಿಯಾಗಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? ಏನು ಮಾಡುತ್ತಿದ್ದಾರೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcdxq8s1wzdafesyv46vf86,imgname-new-project---2026-06-18t092144.789-1781754944793.jpg" type="image/jpeg" height="390" width="690"/>
            <content:encoded><![CDATA[&lt;p&gt;Lakshmi Nivasa Serial Kannada: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಅವರು ಮದುವೆಗೆ ರೆಡಿಯಾಗಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? ಏನು ಮಾಡುತ್ತಿದ್ದಾರೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿಂಚನಾ ಎನ್ನುವ ಪಾತ್ರ ಮಾಡುತ್ತಿರುವ ರೂಪಿಕಾ ಜೀವನದಲ್ಲಿ ಚೆಲುವಿನ ಚಿಲಿಪಿಲಿ ಶುರು ಆಗ್ತಿದೆ. ಹೌದು, ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ರೂಪಿಕಾ ಅವರು ಮದುವೆ ಆಗುತ್ತಿದ್ದಾರಂತೆ. ಈಗಾಗಲೇ ಲಗ್ನಪತ್ರಿಕೆ ಶಾಸ್ತ್ರ ಕೂಡ ನಡೆದಿದೆ.&lt;/p&gt;&lt;img&gt;&lt;p&gt;ರೂಪಿಕಾ ಅವರು &ldquo;ಹೆಣ್ಣು ಮಕ್ಕಳ ಜೀವನದಲ್ಲಿ ಮದುವೆ ಎನ್ನೋದು ತುಂಬ ವಿಶೇಷ, ಹಾಗೆಯೇ ನನ್ನ ಜೀವನದಲ್ಲಿ ಕೂಡ ಮದುವೆ ಆಗುವ ಟೈಮ್&zwnj; ಬಂದಿದೆ. ಮದುವೆ ಶಾಸ್ತ್ರಗಳು ಶುರು ಆಗುತ್ತಿವೆ&rdquo; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ರೂಪಿಕಾ ಮದುವೆ ಆಗುತ್ತಿರುವ ಹುಡುಗ ಯಾರು? ಏನು ಮಾಡುತ್ತಿದ್ದಾರೆ? ಲವ್&zwnj; ಮ್ಯಾರೇಜ್?&zwnj; ಅರೇಂಜ್ಜ್&zwnj; ಮ್ಯಾರೇಜ್ ಎಂಬ ಬಗ್ಗೆ ಇನ್ನೂ ಉತ್ತರ ಹೊರಬೀಳಬೇಕಿದೆ. ಮದುವೆ ಬಳಿಕ ಅವರು ಧಾರಾವಾಹಿ ಬಿಡ್ತಾರಾ? ಇಲ್ಲವಾ ಎಂಬ ಬಗ್ಗೆ ಕೂಡ ಸ್ಪಷ್ಟನೆ ಇಲ್ಲ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/lakshmi-nivasa-kannada-serial-sinchana-real-name-actress-roopika-marriage-lagna-patrike-shastra-swgv4ga"/>
        </item>
        <item>
            <title><![CDATA[ಒಬ್ನೇ ಇರೋ ಖುಷಿನೇ ಬೇರೆ, ಮದ್ವೆ ಯಾಕೆ ಅನ್ನೋದಾ ಗಟ್ಟಿಮೇಳದ ವಿಕ್ರಾಂತ್​? ಹುಡುಗಿಯರ ಹಾರ್ಟ್​ ಬ್ರೇಕ್ ಮಾಡಿದ ನಟ]]></title>
            <link>https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw</link>
            <guid isPermaLink="true">https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw</guid>
            <pubDate>Wed, 17 Jun 2026 18:36:47 +0530</pubDate>
            <description><![CDATA['ಗಟ್ಟಿಮೇಳ' ಖ್ಯಾತಿಯ ನಟ ಅಭಿಷೇಕ್ ರಾಮದಾಸ್ ಇತ್ತೀಚೆಗೆ ತಮ್ಮ ಸಹೋದರಿಯ ಮದುವೆಯನ್ನು ನೆರವೇರಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲವೆಂದಿರುವ ಅವರು, ವೃತ್ತಿಜೀವನದತ್ತ ಗಮನ ಹರಿಸುವುದಾಗಿ ಮತ್ತು ಒಂಟಿ ಜೀವನವನ್ನು ಆನಂದಿಸುವುದಾಗಿ ಹೇಳಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvatzzcdhk6d19ps2n5m72z9,imgname-abhishek-ramdas-1781701541261.jpg" type="image/jpeg" height="390" width="690"/>
            <content:encoded><![CDATA['ಗಟ್ಟಿಮೇಳ' ಖ್ಯಾತಿಯ ನಟ ಅಭಿಷೇಕ್ ರಾಮದಾಸ್ ಇತ್ತೀಚೆಗೆ ತಮ್ಮ ಸಹೋದರಿಯ ಮದುವೆಯನ್ನು ನೆರವೇರಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲವೆಂದಿರುವ ಅವರು, ವೃತ್ತಿಜೀವನದತ್ತ ಗಮನ ಹರಿಸುವುದಾಗಿ ಮತ್ತು ಒಂಟಿ ಜೀವನವನ್ನು ಆನಂದಿಸುವುದಾಗಿ ಹೇಳಿಕೊಂಡಿದ್ದಾರೆ.&lt;img&gt;&lt;p&gt;'ಗಟ್ಟಿಮೇಳ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟ ಅಭಿಷೇಕ್&zwnj; ರಾಮದಾಸ್. ಅಭಿದಾಸ್&zwnj; ಅಂತಲೇ ಫೇಮಸ್​ ಆಗಿರೋ ನಟ ಸದ್ಯ ಸದ್ಯ &lsquo;ನಂದಗೋಕುಲ&rsquo; ಸೀರಿಯಲ್​ನಲ್ಲಿ ವಲ್ಲಭನಾಗಿ ಮಿಂಚುತ್ತಿದ್ದಾರೆ. ಈಚೆಗೆ ತಮ್ಮ ಸಹೋದರಿಯ ಮದುವೆ ಮಾಡಿರುವ ನಟ, ಸದ್ಯ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಆಗಿದ್ದಾರೆ.&lt;/p&gt;&lt;img&gt;&lt;p&gt;ಅಭಿಷೇಕ್ ದಾಸ್ ಅವರು ಗಟ್ಟಿಮೇಳಕ್ಕೂ ಮುನ್ನ ಸರಯೂ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.&lt;/p&gt;&lt;img&gt;&lt;p&gt;ಇಂತಿಪ್ಪ ನಟ ಇದೀಗ ಮದುವೆಯ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. ನನಗೆ ಇದೀ ರೀತಿಯ ಹುಡುಗಿ ಬೇಕೆಂದೇನೂ ಇಲ್ಲ. ಆದರೆ ಮದುವೆಯ ಬಗ್ಗೆ ಸದ್ಯ ಯೋಚನೆಯನ್ನೂ ಮಾಡಲಿಲ್ಲ. ಮುಂದಿನ ಐದು ವರ್ಷ ಹೇಗೆಲ್ಲಾ ದುಡ್ಡು ಸಂಪಾದನೆ ಮಾಡಬಹುದು, ಗುರಿ ಏನಿರಬೇಕು ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಹಾಗೆಯೇ ಲೈಫ್​ನಲ್ಲಿ ಯಾರಾದ್ರೂ ಎಂಟರ್​ ಆದ್ರೆ ನೋಡೋಣ. ಆದ್ರೆ ಒಂಟಿ ಇರೋದರಲ್ಲಿ ಇರೋ ಮಜಾ ಮದ್ವೆಯಾದ ಮೇಲೆ ಇರಲ್ಲ. ದುಡಿದದ್ದನ್ನೆಲ್ಲಾ ನಾನೊಬ್ಬನೇ ಎಂಜಾಯ್​ ಮಾಡಬಹುದು. ಅದಕ್ಕೆ ಮದ್ವೆ-ಗಿದ್ವೆ ಬಗ್ಗೆ ಸದ್ಯ ತಲೆ ಕೆಡಿಸಿಕೊಳ್ಳಲ್ಲ. ಒಬ್ನೇ ಇರೋದೇ ಇಷ್ಟ ಎಂದಿದ್ದಾರೆ ನಟ.&lt;/p&gt;&lt;img&gt;&lt;p&gt;ಈಚೆಗಷ್ಟೇ ಅಭಿಷೇಕ್ ಅವರು ತಮ್ಮ ತಂಗಿ ಐಶ್ವರ್ಯಾ ರಾಮದಾಸ್&zwnj; ಮದುವೆ ಮಾಡಿದ್ದರು. ಅಭಿದಾಸ್&zwnj;ಗೆ ಒಬ್ಬಳೇ ಒಬ್ಬಳು ತಂಗಿ ಇದ್ದು, ತಾಯಿ - ತಂಗಿನೇ ಇವರ ಪ್ರಪಂಚ. ಐಶ್ವರ್ಯಾ ಅವರು ಮೇಕಪ್&zwnj; ಆರ್ಟಿಸ್ಟ್&zwnj; ಆಗಿದ್ದು, ಸೆಲಿಬ್ರಿಟಿ ಮೇಕಪ್&zwnj; ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಹರ್ಷ ಎಂಬುವವರನ್ನ ವರಿಸಿದ್ದಾರೆ. ಅಪ್ಪನ ಸ್ಥಾನದಲ್ಲಿ ನಿಂತು ಸಹೋದರಿ ಮದುವೆ ಮಾಡಿದ್ದರು ಅಭಿಷೇಕ್&zwnj; ರಾಮದಾಸ್&zwnj;.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw"/>
        </item>
        <item>
            <title><![CDATA[ರಾಜಮಾತೆ ಶಿವಗಾಮಿ ಈಗ ಲವ್ ಗುರು: ಬ್ರೇಕಪ್ ಆದವರ ಕಷ್ಟ ಕೇಳಲು 'ಸೆಕೆಂಡ್‌ ಲವ್‌' ಅಂತಾ ಬರ್ತಿದ್ದಾರೆ ರಮ್ಯಕೃಷ್ಣ]]></title>
            <link>https://kannada.asianetnews.com/gallery/tv-talk/ramyakrishna-host-tamil-dating-show-second-love-jio-hotstar-ott-details-san-vqdy632</link>
            <guid isPermaLink="true">https://kannada.asianetnews.com/gallery/tv-talk/ramyakrishna-host-tamil-dating-show-second-love-jio-hotstar-ott-details-san-vqdy632</guid>
            <pubDate>Thu, 18 Jun 2026 16:13:28 +0530</pubDate>
            <description><![CDATA[&lt;p&gt;'ಬಾಹುಬಲಿ' ಖ್ಯಾತಿಯ ರಾಜಮಾತೆ ಶಿವಗಾಮಿಯಾಗಿ ಗುರುತಿಸಿಕೊಂಡಿರುವ ನಟಿ ರಮ್ಯಕೃಷ್ಣ, ಇದೀಗ 'ಸೆಕೆಂಡ್ ಲವ್' ಎಂಬ ಹೊಸ ತಮಿಳು ಡೇಟಿಂಗ್ ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ಈ ಶೋ ಪ್ರಸಾರವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd4py3ngch01ymy57mzq49b,imgname-second-love-ramyakrishna-1781778839669.jpeg" type="image/jpeg" height="390" width="690"/>
            <content:encoded><![CDATA[&lt;p&gt;'ಬಾಹುಬಲಿ' ಖ್ಯಾತಿಯ ರಾಜಮಾತೆ ಶಿವಗಾಮಿಯಾಗಿ ಗುರುತಿಸಿಕೊಂಡಿರುವ ನಟಿ ರಮ್ಯಕೃಷ್ಣ, ಇದೀಗ 'ಸೆಕೆಂಡ್ ಲವ್' ಎಂಬ ಹೊಸ ತಮಿಳು ಡೇಟಿಂಗ್ ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ಈ ಶೋ ಪ್ರಸಾರವಾಗಲಿದೆ.&lt;/p&gt;&lt;img&gt;&lt;p&gt;'ಬಾಹುಬಲಿ' ಚಿತ್ರದ ರಾಜಮಾತೆ ಶಿವಗಾಮಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿದ್ದ ಹಿರಿಯ ನಟಿ ರಮ್ಯಕೃಷ್ಣ, ಈಗ ರಿಯಾಲಿಟಿ ಶೋ ಲೋಕಕ್ಕೆ ಗ್ರಾಂಡ್ ಎಂಟ್ರಿ ನೀಡುತ್ತಿದ್ದಾರೆ. 'ಜಿಯೋ ಹಾಟ್&zwnj;ಸ್ಟಾರ್' (Jio Hotstar) ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿರುವ ತಮಿಳಿನ ವಿಶಿಷ್ಟ ರೊಮ್ಯಾಂಟಿಕ್ ಡೇಟಿಂಗ್ ಶೋ ಒಂದಕ್ಕೆ ಅವರು ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;img&gt;&lt;p&gt;ಈ ರಿಯಾಲಿಟಿ ಶೋಗೆ 'ಸೆಕೆಂಡ್ ಲವ್' (Second Love) ಎಂದು ಹೆಸರಿಡಲಾಗಿದೆ. ಈಗಾಗಲೇ ಪ್ರೀತಿಯಲ್ಲಿ ಬ್ರೇಕಪ್ ಮಾಡಿಕೊಂಡಿರುವ, 30 ವರ್ಷದೊಳಗಿನ 12 ಮಂದಿ ಸಿಂಗಲ್ಸ್ (ಯುವಕ-ಯುವತಿಯರನ್ನು) ಒಂದು ಐಷಾರಾಮಿ ವಿಲ್ಲಾ ಒಳಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ತಮ್ಮ ಜೀವನದ ಎರಡನೇ ಪ್ರೀತಿಯನ್ನು ಹುಡುಕಿಕೊಳ್ಳಲು ಬೇಕಾದ ಸನ್ನಿವೇಶಗಳನ್ನು ಸೃಷ್ಟಿಸುವುದು ಈ ಶೋನ ಮುಖ್ಯ ಕಾನ್ಸೆಪ್ಟ್ ಆಗಿದೆ. ಇಂದಿನ ಜೆನ್-ಜಿ (Gen-Z) ಯುವ ಪೀಳಿಗೆಯನ್ನು ಈ ವೆರೈಟಿ ಶೋ ಎಷ್ಟು ಸೆಳೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;&lt;img&gt;&lt;p&gt;ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಶೋನ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪೋಸ್ಟರ್&zwnj;ನಲ್ಲಿ ರಮ್ಯಕೃಷ್ಣ ಅವರು ಒಡೆದ ಹೃದಯದ ಸಿಂಬಲ್ ಅನ್ನು ಪ್ಯಾಚ್-ಅಪ್ (ಜೋಡಿಸುವ) ಮಾಡುತ್ತಿರುವಂತೆ ಪೋಸ್ ನೀಡಿದ್ದಾರೆ. ಇದರಲ್ಲಿ ಅವರು 90ರ ದಶಕದ ನಟಿಯಂತೆ ಕಾಣದೆ, ಇಂದಿನ ಯುವ ನಾಯಕಿಯರಿಗೇ ಪೈಪೋಟಿ ನೀಡುವಷ್ಟು ಸಖತ್ ಯಂಗ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ಶೋನ ನಿರ್ಮಾಪಕರು ಕೇವಲ 'ತಮಿಳು ಜಿಯೋ ಹಾಟ್&zwnj;ಸ್ಟಾರ್' ಇನ್&zwnj;ಸ್ಟಾಗ್ರಾಮ್ ಹ್ಯಾಂಡಲ್&zwnj;ಗಳಲ್ಲಿ ಮಾತ್ರ ಈ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ತಮಿಳಿನಲ್ಲಿ ಸೃಷ್ಟಿಸುತ್ತಿರುವ ಇದೇ ಶೋ ಅನ್ನು ಅದೇ ಹೋಸ್ಟ್ (ರಮ್ಯಕೃಷ್ಣ) ಅವರೊಂದಿಗೆ ತೆಲುಗಿನಲ್ಲೂ ಸ್ಟ್ರೀಮಿಂಗ್ ಮಾಡುತ್ತಾರಾ ಅಥವಾ ಇಲ್ಲವೇ ಎಂಬುದು ತಿಳಿಯಲು ಇನ್ನು ಕೆಲವು ದಿನಗಳು ಕಾಯಬೇಕಾಗಿದೆ.&lt;/p&gt;&lt;img&gt;&lt;p&gt;ರಮ್ಯಕೃಷ್ಣ ಅವರ ಸಮಕಾಲೀನ ಸಹ-ನಟರಾದ ಕಿಂಗ್ ನಾಗಾರ್ಜುನ, ಜಗಪತಿ ಬಾಬು, ಬಾಲಕೃಷ್ಣ ಅವರಂತಹ ಸ್ಟಾರ್ ನಟರು ಈಗಾಗಲೇ ಹಲವು ಟಿವಿ ಹಾಗೂ ಓಟಿಟಿ ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಪ್ರತಿವರ್ಷ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಸಾರವಾದ 'ಮ್ಯಾಡ್ ಫಾರ್ ಈಚ್ ಅದರ್' ಹಾಗೂ ಪ್ರಮುಖ ಕುಕಿಂಗ್ ಶೋಗಳ ಮೂಲಕ ಹಳೆಯ ನಟಿಯರಾದ ಲಯಾ, ರಾಧಾ ಮತ್ತು ಮುಚ್ಚರ್ಲ ಅರುಣಾ ಅವರು ಕೂಡ ತೆಲುಗು ಪ್ರೇಕ್ಷಕರೆದುರು ಮತ್ತೆ ಬಂದಿದ್ದಾರೆ. ಈಗ ಅದೇ ಹಾದಿಯಲ್ಲಿ ರಮ್ಯಕೃಷ್ಣ ಕೂಡ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;ಇದು ಡೇಟಿಂಗ್ ಆಧಾರಿತ ರಿಯಾಲಿಟಿ ಶೋ ಆಗಿರುವುದರಿಂದ, ಈ ಸರಣಿಗೆ ಪ್ರಶಂಸೆಗಳ ಜೊತೆಗೆ ಅಷ್ಟೇ ಮಟ್ಟದ ಟೀಕೆ ಮತ್ತು ವಿಮರ್ಶೆಗಳು ಬರುವ ಸಾಧ್ಯತೆಯೂ ಇದೆ. ಇಂತಹ ಡೇಟಿಂಗ್ ಶೋಗಳು ದಕ್ಷಿಣ ಭಾರತದ ಮಾರುಕಟ್ಟೆಗೆ ತೀರಾ ಹೊಸದು. ಆದರೆ ಉತ್ತರ ಭಾರತದಲ್ಲಿ (ಬಾಲಿವುಡ್&zwnj;ನಲ್ಲಿ) 'ಎಂಟಿವಿ ಸ್ಪ್ಲಿಟ್ಸ್&zwnj;ವಿಲ್ಲಾ' (MTV Splitsvilla) ಹೆಸರಿನಲ್ಲಿ ಇಂತಹ ಶೋಗಳ ಹಲವು ಸೀಸನ್&zwnj;ಗಳು ಈಗಾಗಲೇ ಯಶಸ್ವಿಯಾಗಿ ನಡೆದಿವೆ ಮತ್ತು ನಡೆಯುತ್ತಿವೆ. ರಮ್ಯಕೃಷ್ಣ ಅವರ ಈ 'ಸೆಕೆಂಡ್ ಲವ್' ಶೋ ಅವರ ಸೆಕೆಂಡ್ ಇನಿಂಗ್ಸ್&zwnj;ನಲ್ಲಿ ಎಷ್ಟು ವರ್ಕ್-ಔಟ್ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/ramyakrishna-host-tamil-dating-show-second-love-jio-hotstar-ott-details-san-vqdy632"/>
        </item>
        <item>
            <title><![CDATA[ಸಾಲು ಸಾಲು ಸಿನಿಮಾ ಆಫರ್ಸ್​ ರಿಜೆಕ್ಟ್​ ಮಾಡಿದ್ಯಾಕೆ Bigg Boss ವಿನ್ನರ್​ ಹನುಮಂತು? ಏನಂದ್ರು ಕೇಳಿ]]></title>
            <link>https://kannada.asianetnews.com/gallery/tv-talk/bigg-boss-11-winner-hanumantha-lamani-about-why-he-rejected-film-offers-suc-wzc3zba</link>
            <guid isPermaLink="true">https://kannada.asianetnews.com/gallery/tv-talk/bigg-boss-11-winner-hanumantha-lamani-about-why-he-rejected-film-offers-suc-wzc3zba</guid>
            <pubDate>Thu, 18 Jun 2026 16:10:24 +0530</pubDate>
            <description><![CDATA[&lt;p&gt;ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಕೆವಿಎನ್&zwnj; ಪ್ರೊಡಕ್ಷನ್ಸ್ ಅಡಿಯಲ್ಲಿ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ, ಮತ್ತೊಬ್ಬ ವಿನ್ನರ್ ಹನುಮಂತ ಲಮಾಣಿ, &amp;nbsp;ಸಾಲು ಸಾಲು ಆಫರ್ಸ್​ ಬಂದರೂ &amp;nbsp;ಸಿನಿಮಾ ಆಫರ್&zwnj;ಗಳನ್ನು ತಿರಸ್ಕರಿಸಿದ್ದಾರೆ. ಅವರು ಕೊಟ್ಟ ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd4vde9amsgrw9s800az00w,imgname-hanumantha-lamani-02-1781778986441.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಕೆವಿಎನ್&zwnj; ಪ್ರೊಡಕ್ಷನ್ಸ್ ಅಡಿಯಲ್ಲಿ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ, ಮತ್ತೊಬ್ಬ ವಿನ್ನರ್ ಹನುಮಂತ ಲಮಾಣಿ, &amp;nbsp;ಸಾಲು ಸಾಲು ಆಫರ್ಸ್​ ಬಂದರೂ &amp;nbsp;ಸಿನಿಮಾ ಆಫರ್&zwnj;ಗಳನ್ನು ತಿರಸ್ಕರಿಸಿದ್ದಾರೆ. ಅವರು ಕೊಟ್ಟ ಕಾರಣವೇನು?&lt;/p&gt;&lt;img&gt;&lt;p&gt;ಬಿಗ್​ಬಾಸ್​​ 12ರ ವಿನ್ನರ್​ ಗಿಲ್ಲಿ ನಟ ನಿನ್ನೆಯಷ್ಟೇ ಬಿಗ್​ ನ್ಯೂಸ್​ ಕೊಟ್ಟಿದ್ದಾರೆ. 'ಟಾಕ್ಸಿಕ್', 'ಜನ ನಾಯಗನ್', 'ಕೆಡಿ: ದಿ ಡೆವಿಲ್' ಮುಂತಾದ ಬಿಗ್ ಬಜೆಟ್&zwnj; ಚಿತ್ರಗಳನ್ನ ನಿರ್ಮಿಸಿರುವ ಕೆವಿಎನ್&zwnj; ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಮೂಡಿಬರಲಿರುವ ಚಿತ್ರದ ಮೂಲಕ ಹೀರೋ ಆಗಿ ಗಿಲ್ಲಿ ನಟ ಮಿಂಚಲಿದ್ದಾರೆ. ಗಿಲ್ಲಿ ನಟನಿಗೆ ಸ್ಯಾಂಡಲ್​ವುಡ್ ಕೈ ಹಿಡಿಯಲಿ ಎನ್ನುವುದು ಅವರ ಅಭಿಮಾನಿಗಳ ಆಶಯ.&lt;/p&gt;&lt;img&gt;&lt;p&gt;ಇದೇ ವೇಳೆ, ʻಬಿಗ್&zwnj; ಬಾಸ್&zwnj; ಕನ್ನಡ 11&rsquo;ರ ವಿನ್ನರ್​ ಹುನಮಂತ ಲಮಾಣಿ ಅವರು ತಾವ್ಯಾಕೆ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎನ್ನುವ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ. ಬಿಗ್​ಬಾಸ್​ ವಿನ್​ ಆಗುತ್ತಿದ್ದಂತೆಯೇ ಸಾಲು ಸಾಲು ಆಫರ್​ ಬಂದರೂ ತಾವು ರಿಜೆಕ್ಟ್​ ಮಾಡಿದ್ಯಾಕೆ ಎನ್ನುವ ಬಗ್ಗೆ ಹನುಮಂತು ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ವೈಲ್ಡ್&zwnj; ಕಾರ್ಡ್&zwnj; ಎಂಟ್ರಿ ಮೂಲಕ ಬಿಗ್​ಬಾಸ್​ ಪ್ರವೇಶಿ ವಿನ್ನರ್​ ಆಗುವ ಮೂಲಕ ದಾಖಲೆ ಮಾಡಿದವರು ಹನುಮಂತು. ಬಳಿಕ ಹಲವು ರಿಯಾಲಿಟಿ ಷೋಗಳಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕಲರ್ಸ್ ಕನ್ನಡ ವಾಹಿನಿಯ 'ಕ್ವಾಟ್ಲೆ ಕಿಚನ್ ಸೀಸನ್ 2' ಅಡುಗೆ ಶೋನಲ್ಲಿ ಭಾಗವಹಿಸುತ್ತಿದ್ದು, ಸಿನಿಮಾ ಮಾತ್ರ ಒಲ್ಲೆ ಎಂದಿದ್ದಾರೆ.&lt;/p&gt;&lt;img&gt;&lt;p&gt;'ಬಿಗ್​ಬಾಸ್​ ವಿನ್​ ಆಗುತ್ತಿದ್ದಂತೆಯೇ ಸಿನಿಮಾ ಆಫರ್ ಬಂತು. ಆದರೆ ನಾನು ಬೇಡ ಎಂದುಬಿಟ್ಟೆ. ಇದಕ್ಕೆ ಕಾರಣ ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳೇ ಓಡ್ತಿಲ್ಲ, ಅಂಥದ್ದರಲ್ಲಿ ಸರಿಯಾಗಿ ನಟನೆಯೇ ಬಾರದ ನಾನು ಸಿನಿಮಾ ಮಾಡಿದರೆ, ನಮ್ಮನ್ನು ನಂಬಿಕೊಂಡ ಸಿನಿಮಾ ತಂಡದ ಕಥೆ ಅಷ್ಟೇ' ಎಂದಿದ್ದಾರೆ.&lt;/p&gt;&lt;img&gt;&lt;p&gt;ನಮ್ಮದು ನಾಲ್ಕು ದಿನಗಳ ಹೆಸರು. ಈ ಹೆಸರನ್ನೇ ನಂಬಿ ನಮ್ಮನ್ನ ಹಾಕೊಂಡು ಸಿನಿಮಾ ಮಾಡಿದ್ರೆ ಅದು ಓಡಿಲ್ಲ ಎಂದರೆ ಎಲ್ಲರಿಗೂ ಲಾಸ್​ ಎಂದಿದ್ದಾರೆ ಹನುಮಂತು. ನನಗೆ ನಟನೆ ಬರಲ್ಲ, ಆದರೆ ಹಾಡು ಬರುತ್ತೆ. ಅದಕ್ಕಾಗಿಯೇ ಸಿನಿಮಾಗಳಲ್ಲಿ ಹಾಡಿದ್ದೇನೆ. 2-3 ಸಿನಿಮಾಗಳಿಗೆ ಹಾಡಿನ ಮೂಲಕ ದನಿಯಾಗಿದ್ದೇನೆ. ಅವೆಲ್ಲಾ ಬಿಡುಗಡೆಯಾಗಬೇಕಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​​ ಪ್ರೈಸ್​ ಇದ್ದುದು 50 ಲಕ್ಷ, ಎಲ್ಲಾ ಕಟ್​ ಆಗಿ 35 ಲಕ್ಷ ರೂಪಾಯಿ ಬಂದಿದ್ದು, ಅದರಿಂದ ಮನೆ ಕಟ್ಟಿಸುತ್ತಿದ್ದಾರೆ ಹನುಮಂತು. ಮನೆ ಕಟ್ಟಿಸಿ ನೋಡಿ ಎನ್ನೋ ಗಾದೆ ಮಾತಿದ್ಯಲ್ಲಾ... ಅದೇ ರೀತಿ ಹಿರಿಯರು ಹೇಳಿದ ಹಾಗೆ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸ. ಈಗ ಅದೇ ದುಡ್ಡಿನಲ್ಲಿ ನಮ್ಮ ಸ್ವಂತ ಊರಿನಲ್ಲಿ ಮನೆ ಕಟ್ಟಿಸುತ್ತಿದ್ದೇನೆ, ತುಂಬಾ ಕಷ್ಟವಿದೆ&quot; ಎಂದಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-11-winner-hanumantha-lamani-about-why-he-rejected-film-offers-suc-wzc3zba"/>
        </item>
        <item>
            <title><![CDATA[Bigg Boss Gilli Nata Debut Sandalwood Hero: ಕೆವಿಎನ್ ಪ್ರೊಡಕ್ಷನ್ ಸಿನಿಮಾಗೆ ಹೀರೋ ಆದ 'ಗಿಲ್ಲಿ ನಟ'!]]></title>
            <link>https://kannada.asianetnews.com/gallery/tv-talk/gilli-nata-turns-hero-with-sreeleela-kvn-productions-to-back-the-bigg-boss-winner-s-debut-film-sat-zodfgdh</link>
            <guid isPermaLink="true">https://kannada.asianetnews.com/gallery/tv-talk/gilli-nata-turns-hero-with-sreeleela-kvn-productions-to-back-the-bigg-boss-winner-s-debut-film-sat-zodfgdh</guid>
            <pubDate>Tue, 16 Jun 2026 20:16:07 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಹಾಸ್ಯನಟ ಗಿಲ್ಲಿ ನಟ ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಡಿಯೋ ಮೂಲಕ ಘೋಷಣೆ ಮಾಡಲಾಗಿದೆ. ಚಿತ್ರದ ಮುಹೂರ್ತವು ಜೂನ್ 21 ರಂದು ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv8dpc4mkke64skxfjy1ctm3,imgname-bigg-boss-gilli-nata-hero-debew-sandalwood-1781620486292.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಹಾಸ್ಯನಟ ಗಿಲ್ಲಿ ನಟ ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಡಿಯೋ ಮೂಲಕ ಘೋಷಣೆ ಮಾಡಲಾಗಿದೆ. ಚಿತ್ರದ ಮುಹೂರ್ತವು ಜೂನ್ 21 ರಂದು ನಡೆಯಲಿದೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಸೀಸನ್ 12ರ ವಿಜೇತ ಹಾಸ್ಯನಟ ನಟರಾಜ್ ಅಲಿಯಾಸ್ ಗಿಲ್ಲಿ ನಟ ಅವರು ಇದೀಗ ತಾವು ಬೆಂಗಳೂರಿಗೆ ಬಂದಿದ್ದ ಕನಸನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ನಾಯಕ ನಟನಾಗಿ ಅವಕಾಶ ಸಿಕ್ಕಿದ್ದು, ಇದೇ ಜೂ.21ರಂದು ಗಿಲ್ಲಿ ಟವರ ಜನ್ಮದಿನದಂದೇ ಸಿನಿಮಾ ಮುಹೂರ್ತ ಇಟ್ಟುಕೊಳ್ಳಲಾಗಿದೆ.&amp;nbsp;&lt;/p&gt;&lt;p&gt;ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯಾದ ಹಾಗೂ ವಿವಿಧ ಭಾಷೆಗಳಲ್ಲಿ ನೂರಾರು ಕೋಟಿ ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುವ ಕೆವಿಎನ್ ಪ್ರೊಡಕ್ಷನ್ ಗಿಲ್ಲಿ ನಟನೆಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.&lt;/p&gt;&lt;img&gt;&lt;p&gt;ನಿನ್ನೆಯೇ ನಾಳೆ ಸಂಜೆ ಒಂದು ದೊಡ್ಡ ಘೋಷಣೆ ಮಾಡುವುದಾಗಿ ಗಿಲ್ಲಿನಟ ಮುನ್ಸೂಚನೆ ನೀಡಿದ್ದರು. ಅದರಂತೆ ಇಂದು ಸಂಜೆ ಒಂದು ಹಾಸ್ಯ ವಿಡಿಯೋ ಗಿಲ್ಲಿ ನಟ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದು, ಸದ್ಯಕ್ಕೆ ಪ್ಯಾನ್ ಇಂಡಿಯಾ ನಟಿ ಶ್ರೀಲೀಲಾ ಅವರನ್ನು ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿದೆ. ಈ ಬಗ್ಗೆ ವಿಡಿಯೋದಲ್ಲಿ ನಡೆದ ಸಂಭಾಷಣೆಯ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ನನಗೆ 2028ರವರೆಗೆ ಬಿಟ್ಟುಬಿಡಿ ಸರ್. ಆಲ್&zwnj; ದಿ ಬೆಸ್ಟ್ ಎಂದು ಪ್ರೊಡೂಸರ್ ಅವರು ಹೇಳುತ್ತಾರೆ. ನೀವು ಪದೇಪದೆ ಫೋನ್&zwnj; ಮಾಡಿ ತೊಂದರೆ ಕೊಡ್ತಿದ್ದರೆ ನಾನು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಫಾರಿನ್&zwnj;ಗೆ ಹೋಗಿ ಬಿಡ್ತೀನಿ. ಊಟಿ, ಕೊಡೈಕೆನಾಲ್&zwnj;ಗೆ ಹೋಗ್ತೇನೆ ಎಂದು ಸಿಟ್ಟಿನಿಂದಲೇ ಗಿಲ್ಲಿನಟ ಫೋನ್ ಕಟ್ ಮಾಡ್ತಾರೆ. ಆಗ ಎಲ್ಲಿಗೆ ಬಂದ ಡೈರೆಕ್ಟರ್, ಪ್ರೊಡೂಸರ್ ಅವರು ಗಿಲ್ಲಿ ನಟ ಅವರಿಗೆ ಕಂಗ್ರಾಟ್ಸ್ ಹೇಳುತ್ತಾ ನೀವು ಹೀರೋ ಎಂದು ಮಾತು ಆರಂಭಿಸುತ್ತಾರೆ.&lt;/p&gt;&lt;img&gt;&lt;p&gt;ಆಗ ಗಿಲ್ಲಿಗೆ ಆಶ್ಚರ್ಯವಾಗಿ ನೀವು ತಪ್ಪಾದ ಅಡ್ರೆಸ್&zwnj;ಗೆ ಬಂದಿಲ್ಲವಲ್ಲಾ ಎಂದು ಕೇಳುತ್ತಾರೆ. ಆಗ ನಾವೆಲ್ಲರೂ ಮಾತನಾಡಿಕೊಂಡೇ ನಿಮ್ಮನ್ನ ಹೀರೋ ಮಾಡುವುದಕ್ಕೆ ಸಿದ್ಧವಾಗಿ ಬಂದಿದ್ದೇವೆ ಎಂದು ಹೇಳುತ್ತಾರೆ. ಆಗ ಮನಸ್ಸಿನಲ್ಲಿ ಗಿಲ್ಲಿನಟ ಖುಷಿಪಡುತ್ತಾ, ಹೌದು, ನಾನು ಇತ್ತೀಚೆಗೆ ಜಿಮ್&zwnj;ಗೆಲ್ಲಾ ಹೋಗಿ ಫಿಟ್ ಆಗಿದ್ದೀನಿ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ.&amp;nbsp;&lt;/p&gt;&lt;img&gt;&lt;p&gt;ಮುಂದುವರೆದು, ನನಗೆ ಹೀರೋಯಿನ್ ಯಾರು ಸರ್ ಎಂದು ಗಿಲ್ಲಿ ಕೇಳಿದಾಗ ನಿರ್ದೇಶಕರು ಹಾಗೂ ಪ್ರೊಡೂಸರ್ ಅವರು ಶ್ರೀಲೀಲಾ ಅವರ ಫೋಟೋ ತೋರಿಸುತ್ತಾರೆ. ಆಗ ಡೈರೆಕ್ಟರ್ ನಿಮಗೆ ಆಸೆ ಪಡುವುದಕ್ಕೂ ಒಂದು ಮಿತಿ ಇಲ್ಲವೇ ಬೇರೆ ಫೋಟೋ ಇದೆ ಎಂದು ಹೇಳುತ್ತಾರೆ. ಆದರೆ ಅದನ್ನು ನೋಡಲಾಗುವುದಿಲ್ಲ. ಇದರ ಅರ್ಥ ಸದ್ಯಕ್ಕೆ ಶ್ರೀಲೀಲಾ ಹೀರೋಯಿನ್ ಅನ್ನುವುದು ಖಚಿತವಾಗುತ್ತಿದೆ.&lt;/p&gt;&lt;img&gt;&lt;p&gt;ನಿರ್ದೇಶಕರು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿ ನಟ ಪ್ಯಾನ್ ಇಂಡಿಯಾ ಸಿನಿಮಾ ಬೇಡ, ಪ್ಯಾನ್ ಕರ್ನಾಟಕ ಸಿನಿಮಾ ಮಾಡೋಣ 4 ಭಾಷೆಗಳಲ್ಲಿ ಎಂದು ಗಿಲ್ಲಿ ನಟ ನಿರ್ದೆಶಕರಿಗೆ ಸಲಹೆ ನೀಡುತ್ತಾರೆ. ಆಗ ಕರ್ನಾಟಕದಲ್ಲಿ ಯಾವ ನಾಲ್ಕು ಭಾಷೆಗಳಿವೆ ಎಂದು ಕೇಳಿದಾಗ ಮಂಡ್ಯ, ಮಂಗಳೂರು, ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಷೆಗಳನ್ನು ಹೇಳುತ್ತಾರೆ.&lt;/p&gt;&lt;img&gt;&lt;p&gt;ಮುಂದುವರೆದು, ಪಾರ್ಟ್&zwnj; 2ಕ್ಕೆ ಪ್ಯಾನ್ ಡಿಸ್ಟ್ರಿಕ್ಟ್, ಪ್ಯಾನ್ ತಾಲೂಕು ಮತ್ತು ಪ್ಯಾನ್ ಪಂಚಾಯಿತಿ ಮಟ್ಟದಲ್ಲಿ ಸಿನಿಮಾ ಮಾಡೋಣ ಎಂದು ಗಿಲ್ಲಿನಟ ಸಲಹೆ ಕೊಡುತ್ತಾರೆ. ಆಗ ಪ್ರೊಡೂಸರ್ ನೀವು ಸೂಪರ್ ಟ್ಯಾಲೆಂಟ್ ಸರ್ ಎಂದು ಹೇಳುತ್ತಾರೆ. ಆದರೆ, ನಿರ್ದೇಶಕರು ಯಾಕಾದರೂ ಇವರು ಇಂತಹ ಕೆಟ್ಟ ಸಲಹೆ ಕೊಡ್ತಾರೆ ಎಂದು ಪೇಚಾಡುತ್ತಾರೆ.&lt;/p&gt;&lt;img&gt;&lt;p&gt;ಶೂಟಿಂಗ್ ಎಲ್ಲಿ ಎಂದು ಕೇಳಿದಾಗ ನಿರ್ದೇಶಕರು, ರಾಮನಗರ, ಚನ್ನಪಟ್ಟಣದಲ್ಲಿ ಸಿನಿಮಾ ಶೂಟಿಂಗ್ ಮಾಡೋಣ ಎಂದು ಹೇಳುತ್ತಾರೆ. ಆಗ ಗಿಲ್ಲಿನಟ ಫಾರಿನ್&zwnj;ಗೆ ಹೋಗೋಣ ಎನ್ನುತ್ತಾರೆ. ಡೈರೆಕ್ಟರ್ ಅವರು ಬೇರೆ ದೇಶದವರಿಗೆ ನಮ್ಮ ದೇಶ ಫಾರಿನ್ ಆಗುತ್ತಲ್ವಾ ಸರ್, ಇಲ್ಲಿಯೇ ಶೂಟಿಂಗ್ ಮಾಡೋಣ ಎಂದು ಗಿಲ್ಲಿ ಹೇಳಿದ ಪಾಯಿಂಟ್&zwnj; ಅನ್ನು ವಾಪಸ್ ಹೇಳಿ ಟಾಂಗ್ ಕೊಡ್ತಾರೆ. ಆಗ ಎಷ್ಟು ಸಂಭಾವನೆ ಕೊಡಬೇಕು ಎಂದು ಕೇಳುತ್ತಾರೆ.&lt;/p&gt;&lt;img&gt;&lt;p&gt;ಆಗ ದನಗಳ ವ್ಯಾಪಾರವನ್ನು ಮಾಡುವಾಗ ದಲ್ಲಾಳಿಗಳು ಕೈ ಮೇಲೆ ಸೋಫಾ ಕವರ್ ಮುಚ್ಚಿಕೊಂಡು ಹಾಕಿಕೊಂಡು ರೇಟ್ ಕುದುರಿಸುವ ರೀತಿಯಲ್ಲಿ ಗಿಲ್ಲಿಗೆ ಕೊಡುವ ಸಂಭಾವನೆ ಹಣದ ಬಗ್ಗೆ ಮಾತನಾಡುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಇನ್ನೇನು ಚರ್ಚೆ ಜೋರಾಗಿ ನಡೆಯುತ್ತಿದೆ ಎನ್ನುವಾಗ ಗಿಲ್ಲಿಯ ಮನೆಯವರು ಬಂದು ಅವರ ಕೈಮೇಲಿದ್ದ ಸೋಫಾ ಕವರ್ ಅನ್ನು ತೆಗದು, ಗಾಳಿಗೆ ಬಂದು ಇಲ್ಲಿಗೆ ಬಿದ್ದಿರಬೇಕು ಎಂದು ತೆಗೆದು ಪಕ್ಕಕ್ಕೆ ಇಡುತ್ತಾರೆ. ಕೊನೆಗೆ, ಗಿಲ್ಲಿನಟ ಒಂದಷ್ಟು ಸಂಭಾವನೆಗೆ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಇದಾದ ನಂತರ ನಾನು ಹೀರೋ ಆಗ್ತೀನಿ ಎನ್ನೋದನ್ನು ಹೊರಗೆ ಯಾರಿಗೂ ಹೇಳಬೇಡಿ ಎಂದು ಡೈರೆಕ್ಟರ್&zwnj;ಗೆ ಹೇಳುತ್ತಾರೆ. ಯಾವಾಗ ಮುಹೂರ್ತ ಎಂದು ಚರ್ಚೆ ಮಾಡುವಾಗ ಇದೇ ವೇಳೆ ಜೂ.21 ಗಿಲ್ಲಿನಟ ನನ್ನ ಬರ್ತಡೇ ಎಂದು ಹೇಳುತ್ತಾರೆ. ಆಗ ಅದೇ ದಿನಾಂಕಕ್ಕೆ ಸಿನಿಮಾ ಮುಹೂರ್ತ ಇಟ್ಟುಕೊಳ್ಳೋಣ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಈ ಚರ್ಚೆ ಮುಗಿದ ನಂತರ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಗೆ ಹೋಗಿ ಸಿನಿಮಾ ಮಾಡುವುದಕ್ಕೆ ಹಾಗೂ ಮುಹೂರ್ತಕ್ಕೆ ಎಲ್ಲರೂ ಚರ್ಚೆ ಮಾಡಿ ಶುಭಾಶಯ ಕೋರುತ್ತಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈಗಾಗಲೇ ಸಿನಿಮಾಗಳಿಗೆ ನೂರಾರು ಕೋಟಿಬಂಡವಾಳವನ್ನು ಹೂಡಿಕೆ ಮಾಡಿ ಪ್ಯಾನ್ ಇಂಡಿಯಾ ಮತ್ತು ಪ್ಯಾನ್ ವರ್ಲ್ಡ್&zwnj; ಲೆವೆಲ್&zwnj;ನಲ್ಲಿ ಹೆಸರು ಮಾಡಿದೆ. ಇದೀಗ ಗಿಲ್ಲಿ ನಟನಿಗೆ ಪ್ರೊಡಕ್ಷನ್ ಒಪ್ಪಿಕೊಂಡಿರುವುದು ಗಿಲ್ಲಿಯ ಟ್ಯಾಲೆಂಟ್&zwnj;ಗೆ ಹಿಡಿದ ಕನ್ನಡಿಯಾಗಿದೆ.&lt;/p&gt;&lt;p&gt;&lt;strong&gt;ವಿಡಿಯೋ ನೋಡಲು&lt;/strong&gt;&lt;strong&gt; ಈ ಲಿಂಕ್ ಕ್ಲಿಕ್ ಮಾಡಿ.&lt;/strong&gt;&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/gilli-nata-turns-hero-with-sreeleela-kvn-productions-to-back-the-bigg-boss-winner-s-debut-film-sat-zodfgdh"/>
        </item>
    </channel>
</rss>
