<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 28 May 2026 12:55:39 +0530</lastBuildDate>
        <atom:link href="https://kannada.asianetnews.com/rss/tv-talk" rel="self" type="application/rss+xml"/>
        <item>
            <title><![CDATA[ತುಂಡುಡುಗೆಯಲ್ಲಿ ಸ್ಪಂದನಾ, ಕಾವ್ಯ ನೋಡಿ ಕಲಿ ಎಂದ ನೆಟ್ಟಿಗರು]]></title>
            <link>https://kannada.asianetnews.com/gallery/tv-talk/bigg-boss-contestant-spandana-somanna-got-trolled-vahdlyc</link>
            <guid isPermaLink="true">https://kannada.asianetnews.com/gallery/tv-talk/bigg-boss-contestant-spandana-somanna-got-trolled-vahdlyc</guid>
            <pubDate>Thu, 29 Jan 2026 19:45:20 +0530</pubDate>
            <description><![CDATA[&lt;p&gt;Spandana Somanna dress trolled : ಬಿಗ್ ಬಾಸ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ನಟಿ ಸ್ಪಂದನಾ ತುಂಡುಡುಗೆ ತೊಟ್ಟು ಟ್ರೋಲ್ ಆಗಿದ್ದಾಅರೆ. ಅವರ ಡ್ರೆಸ್ ನೋಡಿ ನೆಟ್ಟಿಗರು ಕೋಪಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg51e2rme0pazwz8e2kkaqr0,imgname-spandana-dress-1769695808276.jpg" type="image/jpeg" height="390" width="690"/>
            <content:encoded><![CDATA[&lt;p&gt;Spandana Somanna dress trolled : ಬಿಗ್ ಬಾಸ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ನಟಿ ಸ್ಪಂದನಾ ತುಂಡುಡುಗೆ ತೊಟ್ಟು ಟ್ರೋಲ್ ಆಗಿದ್ದಾಅರೆ. ಅವರ ಡ್ರೆಸ್ ನೋಡಿ ನೆಟ್ಟಿಗರು ಕೋಪಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಕನ್ನಡ ಸೀನಸ್ 12ರ ಸ್ಪರ್ಧಿ ಸ್ಪಂದನಾ ಸೋಮಣ್ಣ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಜನವರಿ 22 ರಂದು ಸ್ಪಂದನಾ ಸೋಮಣ್ಣ 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬರ್ತ್ ಡೇ ರೀಲ್ಸನ್ನು ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್ ಆಗಿ ವಿಡಿಯೋ ಮಾಡಿರುವ ಸ್ಪಂದನಾ, ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ಸ್ಪಂದನಾ ಸೋಮಣ್ಣ ತಮ್ಮ ಬರ್ತ್ ಡೇ ರೀಲ್ಸ್ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೆ ತುಂಡುಡುಗೆಯ ಫೋಟೋವನ್ನು ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕ್ಕ ಬಟ್ಟೆಯಲ್ಲಿ ಅವರ ಸಂಪೂರ್ಣ ಕಾಲು ಕಾಣ್ತಿದೆ. ಬೆಂಕಿ ಮುಂದೆ ಕುಳಿತು ಸ್ಪಂದನಾ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಗುಡ್ ನೈಟ್ ಫ್ಯಾಮಿಲಿ ಅಂತ ಫೋಟೋಕ್ಕೆ ಸ್ಪಂದನಾ ಶೀರ್ಷಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಸ್ಪಂದನಾ ಈ ಫೋಟೋ ಬಳಕೆದಾರರಿಗೆ ಇಷ್ಟವಾಗಿಲ್ಲ. ಸ್ಪಂದನಾ ಡ್ರೆಸ್ ನೋಡಿ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ನಿಮ್ಮ ಡ್ರೆಸ್ ಸೆನ್ಸ್ ಚೆನ್ನಾಗಿಲ್ಲ, ಸೀರೆಯುಟ್ಟರೆ ಅಪ್ಸರೆಯಂತೆ ಕಾಣ್ತೀರಿ, ಇಂಥ ಡ್ರೆಸ್ ನಿಮಗೆ ಬೇಡ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮೈ ತುಂಬಾ ಬಟ್ಟೆ ಹಾಕಿಕೊಳ್ಳಿ ಎನ್ನುವ ಕಮೆಂಟ್ ಬಂದಿದೆ. ಮತ್ತೆ ಕೆಲವರು ಕಾವ್ಯ ನೋಡಿ ಕಲಿಯಬೇಕು, ಅವರು ಹೇಗಿದ್ದಾರೆ ನೋಡಿ ಕಲಿತುಕೊಳ್ಳಿ ಅಂತ ಸ್ಪಂದನಾಗೆ ಸಲಹೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಕಳ್ಳ ಪುಟ್ಟಿ ಎಂದೇ ಪ್ರಸಿದ್ಧಿ ಪಡೆದಿದ್ದರು. ಗಿಲ್ಲಿ, ಸ್ಪಂದನಾಗೆ ಈ ನಾಮಕರಣ ಮಾಡಿದ್ರು. ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಸ್ಪಂದನಾ ಮಧ್ಯೆ ಒಳ್ಳೆ ಫ್ರೆಂಡ್ ಶಿಫ್ ಬೆಳೆದಿತ್ತು. ಬಿಗ್ ಬಾಸ್ ಮುಗಿದ ಮೇಲೂ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತುಂಡುಡುಗೆಯಲ್ಲಿ ಟ್ರೋಲ್ ಆಗ್ತಿದ್ದಂತೆ ಸ್ಪಂದನಾ ತಮ್ಮ ಡ್ರೆಸ್ ಸ್ಟೈಲ್ ಬದಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೀರೆಯುಟ್ಟ ಫೋಟೋ ಪೋಸ್ಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಸೋಮಾರಿ ಎಂಬುದು ವೀಕ್ಷಕರಿಗೆ ಗೊತ್ತಾಗಿದೆ. ತಟ್ಟೆಗೆ ಊಟ ಹಾಕಿಕೊಳ್ಳಲೂ ಸ್ಪಂದನಾ ಬೇಸರ ಮಾಡ್ಕೊಳ್ತಾರೆ ಅಂತ ಅನೇಕ ಸ್ಪರ್ಧಿಗಳು ಹೇಳಿದ್ದರು. ಚೆನ್ನಾಗಿ ಡ್ರೆಸ್ ಮಾಡ್ಕೊಂಡು, ತಮಾಷೆ ಮಾಡ್ತಾ ಓಡಾಡ್ತಿದ್ದ ಸ್ಪಂದನಾಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಿದೆ.&lt;/p&gt;&lt;img&gt;&lt;p&gt;ಸ್ಪಂದನಾ ಸೋಮಣ್ಣ ಕಲರ್ಸ್ ಕನ್ನಡದ ಹುಡುಗಿ. ಸ್ಪಂದನಾ ಕರಿಮಣಿ ಸೀರಿಯಲ್ ಮುಗಿಯುತ್ತಿದ್ದಂತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ನಾನು ನನ್ನ ಕನಸು ಕನ್ನಡ ಸೀರಿಯಲ್ ಮೂಲಕ ಕಿರುತೆರೆಗೆ ಬಂದಿದ್ದ ಸ್ಪಂದನಾ ತೆಲುಗು ಸೀರಿಯಲ್ ನಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಮೂಲತಃ ಮೈಸೂರಿನವರಾದ ಸ್ಪಂದನಾ ಸೋಮಣ್ಣ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಜನವರಿ 22, 1998 ರಂದು ಜನಿಸಿದ ಸ್ಪಂದನಾ ಆಕ್ಟಿಂಗ್ ಜೊತೆ ಮಾಡಲಿಂಗ್ ಕೂಡ ಮಾಡ್ತಾರೆ. ಸದ್ಯ ಸ್ಪಂದನಾ, ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಯಾವ ಪ್ರಾಜೆಕ್ಟ್ ಜೊತೆ ತೆರೆಗೆ ಬರ್ತಾರೆ ಕಾದು ನೋಡ್ಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/tv-talk/bigg-boss-contestant-spandana-somanna-got-trolled-vahdlyc"/>
        </item>
        <item>
            <title><![CDATA[Mahalakshmi Maduve Serial: ಮದುವೆ ಆದ್ಮೇಲೂ ತಾಯಿ ಮನೆಗೆ ಹಣ ಕೊಡ್ತೀನಿ ಎಂದು ಷರತ್ತು ಹಿಡಿದ ಮಹಾಲಕ್ಷ್ಮೀ!]]></title>
            <link>https://kannada.asianetnews.com/tv-talk/amulya-gowda-starrer-mahalakshmi-maduve-serial-kannada-on-sun-udaya-tv/articleshow-relcbdr</link>
            <guid isPermaLink="true">https://kannada.asianetnews.com/tv-talk/amulya-gowda-starrer-mahalakshmi-maduve-serial-kannada-on-sun-udaya-tv/articleshow-relcbdr</guid>
            <pubDate>Tue, 26 May 2026 12:33:41 +0530</pubDate>
            <description><![CDATA[&lt;p&gt;Mahalakshmi Maduve Serial: ನಟಿ ಅಮೂಲ್ಯ ಗೌಡ, ಭರತ್&zwnj; ಶಿವಣ್ಣ, ಶಿವಾಜಿರಾವ್&zwnj; ಜಾಧವ್, ಸೀತಾ ಕೋಟೆ, ಅಮೃತಾ ರಾಮಮೂರ್ತಿ, ಪದ್ಮಿನಿ, ಹರಿಪ್ರಿಯಾ, ಮಂಜು ಪಾವಗಡ, ಮಾನಸ, ಮೇಘಶ್ರೀ, &zwnj;ಪ್ರತೀಕ್ಷಾ, ಸ್ನೇಹಾ ಭಟ್&zwnj;, ಧನುಷ್&zwnj; ಗೌಡ ನಟಿಸುತ್ತಿರುವ &lsquo;ಮಹಾಲಕ್ಷ್ಮೀ ಮದುವೆ&rsquo; ಧಾರಾವಾಹಿ ಸನ್ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshhax8p0y4ng642nm5xdz8d,imgname-new-project---2026-05-26t121237.292-1779778811158.jpg" type="image/jpeg" height="390" width="690"/>
            <content:encoded><![CDATA[&lt;p&gt;ಸನ್&zwnj; ಉದಯ ಟಿವಿ, ಇದೀಗ ಮಧ್ಯಮ ವರ್ಗದ ಮನೆ ಮನೆ ಕತೆಯೊಂದನ್ನು ಹೊತ್ತು ತಂದಿದೆ. ʻಮಹಾಲಕ್ಷ್ಮೀ ಮದುವೆʼ ( Mahalakshmi Maduve Serial ) ಎಂಬ ಈ ಹೊಸ ದೈನಿಕ ಧಾರಾವಾಹಿ ಜೂನ್&zwnj; 1 ರಿಂದ ಪ್ರಸಾರ ಕಾಣಲಿದೆ.&lt;/p&gt;&lt;h2&gt;ಈ ಧಾರಾವಾಹಿ ಕಥೆ ಏನು?&lt;/h2&gt;&lt;p&gt;ಹುಡುಗ ಶ್ರೀಹರಿ ಮಧ್ಯಮ ವರ್ಗದವನು, ಹುಡುಗಿ ಮಹಾಲಕ್ಷ್ಮೀಯದೂ ಮಧ್ಯಮ ವರ್ಗವೇ. ಬ್ಯಾಂಕಲ್ಲಿ ಕೆಲಸ ಮಾಡೋ ಮಗನಿಗೆ ಒಳ್ಳೆ ವರದಕ್ಷಿಣೆ ಮತ್ತು ಒಡವೆ ತರೋ ಹುಡುಗಿ ಬರಲಿ ಎಂಬುದು ಹುಡುಗನ ಅಮ್ಮನ ಆಸೆ. ಈ ಆಸೆಗೆ ಇನ್ನೂ ಸ್ವಲ್ಪ ಕುಮ್ಮಕ್ಕು ಕೊಡೋಳು ಹುಡುಗನ ಅಕ್ಕ. ಹಾಗೆಂದು ಅವರೇನೂ ಕೆಟ್ಟವರಲ್ಲ, ʼನಮ್ ಶ್ರೀಹರಿ ಚೆನ್ನಾಗಿದ್ರೆ ನಾವೂ ಚೆನ್ನಾಗಿರ್ತೀವಿʼ ಎಂಬ ಮಹದಾಸೆ ಅವರಿಗೆ. ಆದ್ರೆ ಮಹಾಲಕ್ಷ್ಮೀ ಗಟ್ಟಿಗಿತ್ತಿ. ಅಪ್ಪನ ಆಸರೆ ಇಲ್ಲದೆ ಮನೆ ಜವಾಬ್ದಾರಿ ತಾನೇ ಹೊತ್ತುಕೊಂಡೋಳು. ತಂಗೀರನ್ನ ಓದಿಸ್ಬೇಕು, ಅಮ್ಮನಿಗೆ ಆಸರೆಯಾಗ್ಬೇಕು ಅನ್ನೋದು ಆಕೆಯ ಉದ್ದೇಶ. ಹಾಗಾಗಿ ಮದುವೆ ಆದ್ರೂ ಸಂಬಳವನ್ನು ಅಮ್ಮನಿಗೆ ಕೊಡ್ತೀನಿ ಅನ್ನೋದು ಆಕೆಯ ಷರತ್ತು. ಸಾವಿರ ಸುಳ್ಳು ಇಲ್ಲ, ಒಂದೇ ಒಂದು ಸುಳ್ಳಿನ ಮೂಲಕ ನಡೆಯೋ ಶ್ರೀಹರಿ ಮತ್ತು ಮಹಾಲಕ್ಷ್ಮೀ ಮದುವೆ ಯಾವ ರೀತಿ ಮುಂದೆ ಸಾಗುತ್ತೆ ಅನ್ನೋದೆ ಈ ಧಾರಾವಾಹಿಯ ಕತೆ.&lt;/p&gt;&lt;h2&gt;ಪಾತ್ರಧಾರಿಗಳು ಯಾರು?&lt;/h2&gt;&lt;p&gt;ಮಹಾಲಕ್ಷ್ಮೀ ಪಾತ್ರದಲ್ಲಿ ನಟಿ ಅಮೂಲ್ಯ ಗೌಡ ಕಾಣಿಸಿಕೊಳ್ಳಲಿದ್ದಾರೆ. ನಾಯಕನಾಗಿ ಭರತ್&zwnj; ಶಿವಣ್ಣ ಟಿವಿ ಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಶಿವಾಜಿರಾವ್&zwnj; ಜಾಧವ್, ಸೀತಾ ಕೋಟೆ, ಅಮೃತಾ ರಾಮಮೂರ್ತಿ, ಪದ್ಮಿನಿ, ಕಾಮಿಡಿ ನಟರಾದ ಮಂಜು ಪಾವಗಡ ಮತ್ತು ಮಾನಸ, ಮೇಘಶ್ರೀ, ಸ್ನೇಹಾ ಭಟ್&zwnj;, &zwnj;ಪ್ರತೀಕ್ಷಾ, ಧನುಷ್&zwnj; ಗೌಡ, ಹರಿಪ್ರಿಯಾ, ʻಮಹಾಲಕ್ಷ್ಮೀ ಮದುವೆʼ ಧಾರಾವಾಹಿಯ ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.&lt;/p&gt;&lt;p&gt;ಲೈಮ್&zwnj;ಲೈಟ್ ಪ್ರೊಡಕ್ಷನ್ಸ್&zwnj; ಮುಖಾಂತರ ನೀರ್ಮಾಣಗೊಳ್ಳುತ್ತಿರುವ ʻಮಹಾಲಕ್ಷ್ಮೀ ಮದುವೆʼ ಧಾರಾವಾಹಿಗೆ ಶಿವಧ್ವಜ್ ಶೆಟ್ಟಿ ಮತ್ತು ಪ್ರಶಾಂತ್ ರೈ ನೀರ್ಮಾಪಕರು. ಪಾಪಾ ಔಟ್&zwnj;ಡೋರ್&zwnj; ಯೂನಿಟ್&zwnj;ನ ಗಾಯತ್ರಿ ಸೆಲ್ವಂ ಈ ಧಾರಾವಾಹಿಯ ಕಾರ್ಯಕಾರಿ ನಿರ್ಮಾಪಕರು.&lt;/p&gt;&lt;p&gt;ಶಿವು ಪೂಜೇನ ಅಗ್ರಹಾರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ಯೋಗೇಶ್ ಗೌಡ ಅವರದು.&lt;/p&gt;&lt;p&gt;ಸನ್&zwnj; ಉದಯ ಟಿವಿ ಹೊಸ ಧಾರಾವಾಹಿ &lsquo;ಮಹಾಲಕ್ಷ್ಮೀ ಮದುವೆ&rsquo; ಜೂನ್ 1 ರಿಂದ ಸೋಮವಾರದಿಂದ ಶನಿವಾರದ ತನಕ ಸಂಜೆ 6.30ಕ್ಕೆ ಪ್ರಸಾರವಾಗಲಿದೆ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/amulya-gowda-starrer-mahalakshmi-maduve-serial-kannada-on-sun-udaya-tv/articleshow-relcbdr"/>
        </item>
        <item>
            <title><![CDATA[41ನೇ ವಯಸ್ಸಿಗೆ ನೈಜವಾಗಿ ಇಬ್ಬರು ಮಕ್ಕಳಿಗೆ ಜನ್ಮಕೊಟ್ಟ ಖ್ಯಾತ ಧಾರಾವಾಹಿ ನಟಿ!]]></title>
            <link>https://kannada.asianetnews.com/gallery/tv-talk/actor-vivek-dahiya-and-divyanka-tripathi-blessed-with-baby-boys-9npdilh</link>
            <guid isPermaLink="true">https://kannada.asianetnews.com/gallery/tv-talk/actor-vivek-dahiya-and-divyanka-tripathi-blessed-with-baby-boys-9npdilh</guid>
            <pubDate>Tue, 26 May 2026 16:51:07 +0530</pubDate>
            <description><![CDATA[&lt;p&gt;Actor vivek dahiya and divyanka tripathi: ಯೇ ಹೈ ಮೊಹಬತೇ ಧಾರಾವಾಹಿ ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾರ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಹೌದು, ದಿವ್ಯಾಂಕಾ ಮನೆಗೆ ಅವಳಿ ಗಂಡು ಮಕ್ಕಳು ಬಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngn1whgttgstydz4mv67m93,imgname-divyanka-tripathi-godh-bharai-2-1775454188080.jpg" type="image/jpeg" height="390" width="690"/>
            <content:encoded><![CDATA[&lt;p&gt;Actor vivek dahiya and divyanka tripathi: ಯೇ ಹೈ ಮೊಹಬತೇ ಧಾರಾವಾಹಿ ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾರ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಹೌದು, ದಿವ್ಯಾಂಕಾ ಮನೆಗೆ ಅವಳಿ ಗಂಡು ಮಕ್ಕಳು ಬಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಯೇ ಹೈ ಮೊಹಬತೇ ಧಾರಾವಾಹಿ ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾರ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ. ಹೌದು, ದಿವ್ಯಾಂಕಾ ಮನೆಗೆ ಅವಳಿ ಗಂಡು ಮಕ್ಕಳು ಬಂದಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ ದಿವ್ಯಾಂಕಾ ಅವರು ಪ್ರಗ್ನೆಂಟ್&zwnj; ಎಂದು ಸಾಕಷ್ಟು ಬಾರಿ ಗಾಸಿಪ್&zwnj; ಹರಡಿತ್ತು. ಆಗ ಅವರು ಸುಳ್ಳು ಎಂದು ಹೇಳಿದ್ದರು. ನಿಜಕ್ಕೂ ಗರ್ಭಿಣಿಯಾದಾಗ ಅವರು ಆರು ತಿಂಗಳಗಳ ಕಾಲ ಎಲ್ಲಿಯೂ ವಿಷಯವನ್ನೇ ಹೇಳಿರಲಿಲ್ಲ. ಈಗ ಮಗು ಹುಟ್ಟಿರುವ ಸುದ್ದಿಯನ್ನು ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಒಂದೇ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾ ಅವರು ಪ್ರೀತಿಸಿ ಮದುವೆಯಾಗಿದ್ದರು. ವಿವೇಕ್&zwnj; ಇನ್ನೂ ನಟನಾಗಿ ಹೆಸರು ಮಾಡಿರಲಿಲ್ಲ, ಆದರೆ ದಿವ್ಯಾಂಕಾ ಸ್ಟಾರ್&zwnj; ಆಗಿದ್ದರು. ಹೀಗಿದ್ದರೂ ಇವರ ನಡುವಿನ ಪ್ರೀತಿ ಗೆದ್ದಿತು.&lt;/p&gt;&lt;img&gt;&lt;p&gt;&quot;ನಾವು ಸಂತೋಷವನ್ನು ಕೇಳಿದ್ದೆವು, ಆದರೆ ದೇವರು ನಮಗೆ ಡಬಲ್ ಖುಷಿ ಕೊಟ್ಟಿದ್ದಾನೆ. ನಮ್ಮ ಮನೆಗೆ ಇಬ್ಬರು ಗಂಡು ಮಕ್ಕಳು ಬಂದಿದ್ದಾರೆ&quot; ಎಂದು ಈ ಜೋಡಿ ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj;ನಲ್ಲಿ ಬರೆದುಕೊಂಡಿದ್ದಾರೆ. ಅನೇಕರು ಈ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ವಿವೇಕ್ ದಹಿಯಾ ಕೂಡ, &quot;ಕೊನೆಗೂ ಕಾಯುವಿಕೆ ಮುಗಿದಿದೆ. 'The Boyz', ಜೀವನವು ನಮ್ಮ ಕಲ್ಪನೆಗಿಂತಲೂ ಹೆಚ್ಚು ಸುಂದರವಾಗಿ ಕಾಣುತ್ತಿದೆ. ನನ್ನ ಕರಣ್ ಅರ್ಜುನ್ ಬಂದರು! ದಿವ್ ಮತ್ತು ನಾನು ಜೀವನದ ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ, ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮಗೆ ಬೇಕು&quot; ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/actor-vivek-dahiya-and-divyanka-tripathi-blessed-with-baby-boys-9npdilh"/>
        </item>
        <item>
            <title><![CDATA[ಕಡಿತೈತಾ? ಕಾಮೆಂಟ್‌ ಹಾಕ್ತೀರಾ? ಕನ್ನಡದಲ್ಲೂ ಒಳ್ಳೇ ಪದ ಇದೆ, ನಮಗೂ ಬರತ್ತೆ: ಸಿಡಿದೆದ್ದ 'ನಂದಗೋಕುಲ' ನಟಿ]]></title>
            <link>https://kannada.asianetnews.com/gallery/tv-talk/nandagokula-kannada-serial-arpitha-gowda-anupallavi-gowda-on-negative-comments-48ef23z</link>
            <guid isPermaLink="true">https://kannada.asianetnews.com/gallery/tv-talk/nandagokula-kannada-serial-arpitha-gowda-anupallavi-gowda-on-negative-comments-48ef23z</guid>
            <pubDate>Tue, 26 May 2026 18:20:56 +0530</pubDate>
            <description><![CDATA[&lt;p&gt;ಸೋಶಿಯಲ್&zwnj; ಮೀಡಿಯಾ ಸ್ಟ್ರಾಂಗ್&zwnj; ಇದ್ದು, ನೆಗೆಟಿವ್-ಪಾಸಿಟಿವ್&zwnj; ಪ್ರತಿಕ್ರಿಯೆ ಬರುತ್ತಲಿರುತ್ತದೆ. ಈಗ ಬೃಂದಾವನ ಧಾರಾವಾಹಿ ನಟಿ ಅನುಪಲ್ಲವಿ ಗೌಡ ಹಾಗೂ ನಂದಗೋಕುಲ ಧಾರಾವಾಹಿ ನಟಿ ಅರ್ಪಿತಾ ಗೌಡರಿಗೆ ನೆಗೆಟಿವ್&zwnj; ಪ್ರತಿಕ್ರಿಯೆ ಸಿಗುತ್ತಿದೆ. ಈ ಬಗ್ಗೆ ಅವರು ಯುಟ್ಯೂಬ್&zwnj; ಚಾನೆಲ್&zwnj;ನಲ್ಲಿ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksj23hhq05vhpvm5kz6nb553,imgname-new-project---2026-05-26t172007.246-1779796395575.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೋಶಿಯಲ್&zwnj; ಮೀಡಿಯಾ ಸ್ಟ್ರಾಂಗ್&zwnj; ಇದ್ದು, ನೆಗೆಟಿವ್-ಪಾಸಿಟಿವ್&zwnj; ಪ್ರತಿಕ್ರಿಯೆ ಬರುತ್ತಲಿರುತ್ತದೆ. ಈಗ ಬೃಂದಾವನ ಧಾರಾವಾಹಿ ನಟಿ ಅನುಪಲ್ಲವಿ ಗೌಡ ಹಾಗೂ ನಂದಗೋಕುಲ ಧಾರಾವಾಹಿ ನಟಿ ಅರ್ಪಿತಾ ಗೌಡರಿಗೆ ನೆಗೆಟಿವ್&zwnj; ಪ್ರತಿಕ್ರಿಯೆ ಸಿಗುತ್ತಿದೆ. ಈ ಬಗ್ಗೆ ಅವರು ಯುಟ್ಯೂಬ್&zwnj; ಚಾನೆಲ್&zwnj;ನಲ್ಲಿ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂದು ಸಾಕಷ್ಟು ಜನರಿಗೆ ಕೆಲಸವೇ ಇಲ್ಲ, ಲೇಆಫ್&zwnj; ಆಗುತ್ತಿದೆ. ಜನರಿಗೆ ಕಡಿಯುತ್ತೆ, ಹೀಗಾಗಿ ಕಾಮೆಂಟ್&zwnj; ಹಾಕುತ್ತಾರೆ. ಸ್ವೈಪ್&zwnj; ಆಪ್ಶನ್&zwnj; ಕೂಡ ಇರುತ್ತದೆ, ಎಲ್ಲದನ್ನು ಸ್ಕಿಪ್&zwnj; ಮಾಡಿಕೊಳ್ಳಿ. ವಿಡಿಯೋ ಮಾಡೋಕೆ ಯೋಗ್ಯತೆ ಇಲ್ಲ, ನೀವು ವಿಡಿಯೋ ಮಾಡಿದ್ರೆ ನಾವು ಲೈಕ್&zwnj; ಮಾಡ್ತೀವಿ ಎಂದು ಅರ್ಪಿತಾ ಗೌಡ ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಾವು ಕೂಡ ದಿನದಿಂದ ದಿನಕ್ಕೆ ಚೆನ್ನಾಗಿ ವಿಡಿಯೋ ಮಾಡಲು ಪ್ರಯತ್ನಮಾಡ್ತೀವಿ. ಆದರೆ ನೀವು ಅದು ದಪ್ಪ, ಇದು ದಪ್ಪ ಎಂದು ಕಾಮೆಂಟ್&zwnj; ಮಾಡುತ್ತೀರಾ, ನಮಗೆ ನೀವು ಅನ್ನ ತಂದು ಹಾಕೋದಿಲ್ಲ. ಕನ್ನಡದಲ್ಲಿರುವ ಕೆಟ್ಟ ಪದಗಳು ನಮಗೂ ಬರುತ್ತವೆ ಎಂದು ಅರ್ಪಿತಾ ಗೌಡ ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಮ್ಮ ಆರೋಗ್ಯ ಹೇಗಿದೆ? ಎಷ್ಟು ಗಂಟೆ ಕೆಲಸ ಮಾಡ್ತೀವಿ ಎನ್ನೋದು ನಮಗೆ ಗೊತ್ತಿದೆ. ದಯವಿಟ್ಟು ಕೆಟ್ಟ ಕಾಮೆಂಟ್&zwnj; ಮಾಡಬೇಡಿ, ನೀವು ಆರಾಮಾಗಿರಿ, ನಮ್ಮನ್ನು ಆರಾಮಾಗಿ ಇರೋಕೆ ಬಿಡಿ ಎಂದು ಅರ್ಪಿತಾ ಗೌಡ ಅವರು ಹೇಳಿದ್ದಾರೆ.&lt;/p&gt;&lt;p&gt;ಕರ್ಕಿ ನೀನು, ಬುದ್ಧಿ ಇಲ್ವಾ ಎಮ್ಮೆ ಥರ ಆಗಿದ್ಯಾ ಎಂದು ಕಾಮೆಂಟ್&zwnj; ಮಾಡಿದ್ದಾರೆ ಎಂದು ಅನುಪಲ್ಲವಿ ಗೌಡ ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಮಗೆ ಯೋಗ್ಯತೆ ಇಲ್ಲ, ನಾನು ನೋಡೋಕೆ ಚೆನ್ನಾಗಿಲ್ಲ, ನಟನೆ ಬರೋದಿಲ್ಲ. ಅದಕ್ಕೆ ನಮ್ಮನ್ನು ಟಿವಿಯಲ್ಲಿ ತೋರಸ್ತಿದ್ದಾರೆ. ನಿಮಗೆ ಟ್ಯಾಲೆಂಟ್&zwnj; ಇದ್ದರೆ, ಹೊರಗಡೆ ಬನ್ನಿ ಎಂದು ಅರ್ಪಿತಾ ಗೌಡ ಅವರು ಹೇಳಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/nandagokula-kannada-serial-arpitha-gowda-anupallavi-gowda-on-negative-comments-48ef23z"/>
        </item>
        <item>
            <title><![CDATA[Karna Serial: ನಿತ್ಯಾ ಬಾಳಲ್ಲಿ ಮತ್ತೊಮ್ಮೆ ಬಿರುಗಾಳಿ: ತೇಜಸ್​ಗೆ ಮದ್ವೆ ಆಗೋಯ್ತು- ನಿತ್ಯಾ ಇನ್ನು ವಿಲನ್​?]]></title>
            <link>https://kannada.asianetnews.com/gallery/tv-talk/karna-serial-twist-tejas-already-got-married-and-nithya-again-become-single-suc-lhgqw0v</link>
            <guid isPermaLink="true">https://kannada.asianetnews.com/gallery/tv-talk/karna-serial-twist-tejas-already-got-married-and-nithya-again-become-single-suc-lhgqw0v</guid>
            <pubDate>Tue, 26 May 2026 21:39:21 +0530</pubDate>
            <description><![CDATA[ಕರ್ಣ ಮತ್ತು ನಿಧಿ ಮದುವೆಯಾಗಿ ಒಂದಾಗಿದ್ದಾರೆ. ಆದರೆ, ಅತ್ತ ತೇಜಸ್ ಬೇರೊಬ್ಬಳನ್ನು ಮದುವೆಯಾಗಿ ನಿತ್ಯಾಳಿಗೆ ಕೈಕೊಟ್ಟಿದ್ದಾನೆ. ಇದರಿಂದ ಒಂಟಿಯಾದ ನಿತ್ಯಾ, ಕರ್ಣ-ನಿಧಿ ಬಾಳಲ್ಲಿ ವಿಲನ್ ಆಗಿ ಎಂಟ್ರಿ ಕೊಡುತ್ತಾಳಾ ಎಂಬ ಕುತೂಹಲ ಮೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksjggq0kx66w4cpfg73g0vxq,imgname-nidhi-01-1779811507219.jpg" type="image/jpeg" height="390" width="690"/>
            <content:encoded><![CDATA[ಕರ್ಣ ಮತ್ತು ನಿಧಿ ಮದುವೆಯಾಗಿ ಒಂದಾಗಿದ್ದಾರೆ. ಆದರೆ, ಅತ್ತ ತೇಜಸ್ ಬೇರೊಬ್ಬಳನ್ನು ಮದುವೆಯಾಗಿ ನಿತ್ಯಾಳಿಗೆ ಕೈಕೊಟ್ಟಿದ್ದಾನೆ. ಇದರಿಂದ ಒಂಟಿಯಾದ ನಿತ್ಯಾ, ಕರ್ಣ-ನಿಧಿ ಬಾಳಲ್ಲಿ ವಿಲನ್ ಆಗಿ ಎಂಟ್ರಿ ಕೊಡುತ್ತಾಳಾ ಎಂಬ ಕುತೂಹಲ ಮೂಡಿದೆ.&lt;img&gt;&lt;p&gt;ಕರ್ಣ ಸೀರಿಯಲ್​ (Karna Serial) ಇದೀಗ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕಾಣುತ್ತಿದೆ. ನಿಧಿ ಮತ್ತು ಕರ್ಣನ ಮದುವೆ ಆಗಿದೆ. ಅವರು ಮೊದಲ ರಾತ್ರಿಯ ಸಂಭ್ರಮದಲ್ಲಿ ಇದ್ದಾರೆ. ಇವರಿಬ್ಬರ ಮದುವೆಯಾಗಿರುವುದು ಅಭಿಮಾನಿಗಳಲ್ಲಿ ಭಾರಿ ಖುಷಿ ತಂದಿದೆ.&lt;/p&gt;&lt;img&gt;&lt;p&gt;ಅತ್ತ ತೇಜಸ್​ ಎಂಟ್ರಿ ಕೊಟ್ಟಿದ್ದರಿಂದ ಇನ್ನೇನು ಸೀರಿಯಲ್​ ಮುಗಿದೇ ಹೋಯ್ತಲ್ಲ. ತೇಜಸ್​ ಮತ್ತು ನಿತ್ಯಾ ಮದುವೆಯಾಗಿಬಿಡುತ್ತಾರೆ. ಅಲ್ಲಿಗೆ ಎಲ್ಲವೂ ಸುಸೂತ್ರವಾಗಿದೆ ಎನ್ನಲಾಗಿತ್ತು.&lt;/p&gt;&lt;img&gt;&lt;p&gt;ಆದರೆ, ಆಗಿದ್ದೇ ಬೇರೆ. ತಾನು ಮಾಡಿದ ತಪ್ಪಿಗೆ ನಿತ್ಯಾಳ ಕಾಲು ಹಿಡಿದು ಕ್ಷಮೆ ಕೋರಿದ್ದಾನೆ ತೇಜಸ್​. ಆದರೆ ಮದುವೆ ಮಾತ್ರ ಆಗಲು ಸಾಧ್ಯವಿಲ್ಲ ಎಂದಿದ್ದಾನೆ.&lt;/p&gt;&lt;img&gt;&lt;p&gt;ಇದಕ್ಕೆ ಕಾರಣ, ಇದಾಗಲೇ ನಿತ್ಯಾ ಮೇಲಿನ ಸಿಟ್ಟಿನಲ್ಲಿ ತೇಜಸ್ ಬೇರೆ ಮದುವೆಯಾಗಿದ್ದಾನೆ. ರಮೇಶ್​ ಮಾಡಿದ ಕುತಂತ್ರದಿಂದ ನಿತ್ಯಾಳ ಮಗು ತನ್ನದಲ್ಲ ಎಂದು ಹೇಳಿದ್ದ ತೇಜಸ್​, ನಿತ್ಯಾ ಕರ್ಣನನ್ನು ಮದುವೆಯಾದ ಕಾರಣದಿಂದ ಕೋಪದಿಂದ ಮತ್ತೊಂದು ಮದುವೆಯಾಗಿದ್ದಾನೆ.&lt;/p&gt;&lt;img&gt;&lt;p&gt;ಈಗ ನಿತ್ಯಾ ಅಕ್ಷರಶಃ ತತ್ತರಿಸಿ ಹೋಗಿದ್ದಾಳೆ. ತೇಜಸ್​ ಕೈಕೊಟ್ಟಾಯ್ತು. ಪ್ರೀತಿಸಿದ ಕರ್ಣನ ಮದುವೆಯಾಯಿತು. ಇನ್ನು ಅವಳು ಒಂಟಿ. ಈ ರೀತಿ ಪ್ರೀತಿ ಕಳೆದುಕೊಂಡ ಒಂಟಿ ಹೆಣ್ಣು ಭಾರಿ ಅಪಾಯ. ಈಕೆಯೇ ನಿಧಿ ಮತ್ತು ಕರ್ಣನ ಪಾಲಿಗೆ ವಿಲನ್​ ಆಗುವಳಾ ಎನ್ನುವ ಸಂದೇಹ ಕಾಡುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-twist-tejas-already-got-married-and-nithya-again-become-single-suc-lhgqw0v"/>
        </item>
        <item>
            <title><![CDATA[ಮಂತ್ರಾಲಯ ರಾಯರ ಸನ್ನಿಧಾನದಲ್ಲಿ ‘ನಂದಗೋಕುಲ’ದ ಮುದ್ದಿನ ಸೊಸೆಯಂದಿರು]]></title>
            <link>https://kannada.asianetnews.com/gallery/tv-talk/nandagokula-serial-actresses-visits-mantralaya-with-family-tx6n5gx</link>
            <guid isPermaLink="true">https://kannada.asianetnews.com/gallery/tv-talk/nandagokula-serial-actresses-visits-mantralaya-with-family-tx6n5gx</guid>
            <pubDate>Wed, 27 May 2026 08:21:30 +0530</pubDate>
            <description><![CDATA[&lt;p&gt;&lsquo;ನಂದಗೋಕುಲ&rsquo; ಧಾರಾವಾಹಿಯ ಮುದ್ದಿನ ಸೊಸೆಯಂದಿರಾದ ಮೀನಾ, ಅಮೂಲ್ಯ ಮತ್ತು ಪ್ರಿಯಾ ಜೊತೆಯಾಗಿ ಮಂತ್ರಾಲಯಕ್ಕೆ ತೆರಳಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಬಂದಿದ್ದಾರೆ. ಅಮೂಲ್ಯ ಪಾತ್ರಧಾರಿ ಊರ್ಜಿತಾ ಫೋಟೊಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kskne5bysy62w28j66k24571,imgname-nandagokula-s-1779850220925.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ನಂದಗೋಕುಲ&rsquo; ಧಾರಾವಾಹಿಯ ಮುದ್ದಿನ ಸೊಸೆಯಂದಿರಾದ ಮೀನಾ, ಅಮೂಲ್ಯ ಮತ್ತು ಪ್ರಿಯಾ ಜೊತೆಯಾಗಿ ಮಂತ್ರಾಲಯಕ್ಕೆ ತೆರಳಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಬಂದಿದ್ದಾರೆ. ಅಮೂಲ್ಯ ಪಾತ್ರಧಾರಿ ಊರ್ಜಿತಾ ಫೋಟೊಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಲರ್ಸ್&zwnj; ಕನ್ನಡದಲ್ಲಿ ಪ್ರಸಾರವಾಗುತ್ತಿರುವ &lsquo;ನಂದಗೋಕುಲ&rsquo; ಧಾರಾವಾಹಿ ನಟಿಯರಾದ ಮೇಘಾ ಸಂಜು, ಅರ್ಪಿತಾ ಗೌಡ ಹಾಗೂ ಊರ್ಜಿತಾ ವಲ್ತಾಜೆ ಜೊತೆಯಾಗಿ ತಮ್ಮ ಕುಟುಂಬದೊಂದಿಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಬಂದಿದ್ದಾರೆ.&lt;/p&gt;&lt;img&gt;&lt;p&gt;ನಂದನ ಮುದ್ದು ಸೊಸೆಯಂದಿರು ಜೊತೆಯಾಗಿ ರಾಯರ ದರ್ಶನ ಪಡೆದಿದ್ದು, ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ನಟಿಯರ ಫೋಟೊಗಳು.&lt;/p&gt;&lt;img&gt;&lt;p&gt;ಮೀನಾ ಪಾತ್ರಧಾರಿ ಮೇಘಾ, ಅಮ್ಮು ಪಾತ್ರದಲ್ಲಿ ನಟಿಸುತ್ತಿರುವ ಊರ್ಜಿತಾ ಹಾಗೂ ಪ್ರಿಯಾ ಪಾತ್ರದಲ್ಲಿ ನಟಿಸುತ್ತಿರುವ ಅರ್ಪಿತಾ ಗೌಡ, ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದು, ಜೊತೆಯಾಗಿ ರಾಯರ ದರ್ಶನ ಪಡೆದು ಬಂದಿದ್ದಾರೆ. ನಂದನ ಸೊಸೆಯಂದಿರನ್ನು ಒಟ್ಟಾಗಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.&lt;/p&gt;&lt;img&gt;&lt;p&gt;ನಟಿಯರು ತಮ್ಮ ರಿಯಲ್ ಫ್ಯಾಮಿಲಿ ಜೊತೆ ರಾಯರ ದರ್ಶನ ಪಡೆದಿದ್ದರೆ. ಪ್ರಿಯಾ ಪಾತ್ರಧಾರಿ ನಟಿ ಅರ್ಪಿತಾ ಗೌಡ ಅವರು ಪತಿ ಹೇಮಂತ್&zwnj; ಜೊತೆ, ಮೀನಾ ಪಾತ್ರ ಮಾಡುತ್ತಿರುವ ನಟಿ ಮೇಘಾ ಸಂಜು ಅವರು ಪತಿ ಸಂಜು ಜೊತೆಗೆ ಮಂತ್ರಾಲಯ ದರ್ಶನ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ನಂದಗೋಕುಲ ಧಾರಾವಾಹಿ ನಂದ ಮತ್ತು ಗಿರಿಜಾರ ಕೂಡು ಕುಟುಂಬದ ಕಥೆಯಾಗಿದೆ. ನಂದನ ಮೂವರು ಗಂಡು ಮಕ್ಕಳ ಮದುವೆ, ಸಂಸಾರದ ಕಥೆ ವ್ಯಥೆಯೇ ಈ ಧಾರಾವಾಹಿಯ ಮುಖ್ಯ ಕಥೆಯಾಗಿದೆ. ಪ್ರತಿಯೊಬ್ಬ ನಟರೂ ಕೂಡ ಈ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ಮತ್ತು ಅಮ್ಮು ತುಂಬಾನೆ ಕ್ಲೋಸ್ ಇದ್ದಾರೆ, ಆದರೆ ಹಿರಿಯ ಸೊಸೆ ಪ್ರಿಯಾ ಎಂದರೆ ಅಕ್ಕ ತಂಗಿ ಇಬ್ಬರಿಗೂ ಆಗಿ ಬರೋದಿಲ್ಲ. ಅದಕ್ಕೆ ಕಾರಣ ಪ್ರಿಯಾ ಎಲ್ಲರ ಮಧ್ಯೆ ತಂದಿಡುವ ಗುಣ. ಆದರೆ ತೆರೆಯ ಹಿಂದೆ ಎಲ್ಲರೂ ತುಂಬಾನೆ ಕ್ಲೋಸ್ ಆಗಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/nandagokula-serial-actresses-visits-mantralaya-with-family-tx6n5gx"/>
        </item>
        <item>
            <title><![CDATA[ಮುಕ್ತಾಯವಾಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್​: ನಟಿ ಸುಷ್ಮಾ  ರಾವ್​ ಭಾವುಕ ಪೋಸ್ಟ್​- ಧಾರಾವಾಹಿ ಅಂತ್ಯ ಏನು]]></title>
            <link>https://kannada.asianetnews.com/gallery/tv-talk/bhagyalakshmi-serial-will-end-soon-post-by-sushma-k-rao-suc-eoqmyxl</link>
            <guid isPermaLink="true">https://kannada.asianetnews.com/gallery/tv-talk/bhagyalakshmi-serial-will-end-soon-post-by-sushma-k-rao-suc-eoqmyxl</guid>
            <pubDate>Wed, 27 May 2026 10:44:23 +0530</pubDate>
            <description><![CDATA[ಮೂರೂವರೆ ವರ್ಷಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಅಂತ್ಯದ ಹಂತ ತಲುಪಿದೆ. ನಾಯಕಿ ಸುಷ್ಮಾ ಕೆ. ರಾವ್ ಅವರ ಪೋಸ್ಟ್ ಶೂಟಿಂಗ್ ಮುಕ್ತಾಯದ ಸುಳಿವು ನೀಡಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kskx3kjb15pgwh6bbvfpgwn1,imgname-bhagyalakshmi-1779858263627.jpg" type="image/jpeg" height="390" width="690"/>
            <content:encoded><![CDATA[ಮೂರೂವರೆ ವರ್ಷಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಅಂತ್ಯದ ಹಂತ ತಲುಪಿದೆ. ನಾಯಕಿ ಸುಷ್ಮಾ ಕೆ. ರಾವ್ ಅವರ ಪೋಸ್ಟ್ ಶೂಟಿಂಗ್ ಮುಕ್ತಾಯದ ಸುಳಿವು ನೀಡಿದ್ದು, ಇದು ಅಭಿಮಾನಿಗಳಿಗೆ ಬೇಸರ ತಂದಿದೆ.&lt;img&gt;&lt;p&gt;2022ರ ಅಕ್ಟೋಬರ್​ 10ರಿಂದ ಕಲರ್ಸ್​ ಕನ್ನಡದಲ್ಲಿ ಆರಂಭವಾಗಿದ್ದ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial)ಗೆ ಈಗ ಮೂರೂವರೆ ವರ್ಷ ಕಳೆದಿವೆ. ಆಗ ಮುಗಿಯತ್ತೆ, ಈಗ ಮುಗಿಯತ್ತೆ ಎಂದುಕೊಂಡಿದ್ದ ಸೀರಿಯಲ್​ ಕೊನೆಗೂ ಮುಗಿಯುವ ಹಂತಕ್ಕೆ ಬಂದಿದೆ.&lt;/p&gt;&lt;img&gt;&lt;p&gt;ಸೀರಿಯಲ್​ನಲ್ಲಿ ಹೀಗೆಯೇ ಆಗುತ್ತದೆ ಎಂದು ಈಗ ಸುಲಭದಲ್ಲಿ ಹೇಳಬಹುದಾಗಿದ್ದರೂ, ಸದ್ಯ ಧಾರಾವಾಹಿ ನಡೆಯುತ್ತಿರುವ ರೀತಿ ನೋಡಿದರೆ ಇನ್ನೂ ಸ್ವಲ್ಪ ಎಳೆಯುತ್ತಾರೆಯೋ ಎಂದು ಎನ್ನಿಸಿದ್ದು ಉಂಟು. ಆದರೆ ಇದೀಗ ಅದನ್ನು ಮುಗಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.&lt;/p&gt;&lt;img&gt;&lt;p&gt;ಈ ಹಿಂದೆ ತಾಂಡವ್ ಜೈಲಿಗೆ ಹೋದ ಮೇಲೆ, ಭಾಗ್ಯ ಮತ್ತು ಆದಿಯ ಮದುವೆಯಾದ ಮೇಲೆ ಸೀರಿಯಲ್​ ಮುಗಿಯತ್ತೆ ಎಂದೇ ಹೇಳಲಾಗಿತ್ತು. ಆಗ ಭಾಗ್ಯ ಅರ್ಥಾತ್​ ಸುಷ್ಮಾ ಕೆ.ರಾವ್​ ಅವರು ಸೀರಿಯಲ್​ ಮುಗಿಯಲ್ಲ ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಆದರೆ, ಇದೀಗ ಖುದ್ದು ಸುಷ್ಮಾ ಅವರೇ ಈ ಬಗ್ಗೆ ಬರೆದುಕೊಂಡಿದ್ದಾರೆ. ಒಳ್ಳೆಯ ಮೂವ್​ಮೆಂಟ್​ಗಳನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಆದಿ ಮತ್ತು ಭಾಗ್ಯ ಖುಷಿಯಾಗಿದ್ದಾರೆ. ವಿಲನ್​ ಕನ್ನಿಕಾಳ ಮುಖವಾಡ ಬಯಲಾಗಬೇಕಿದೆ. ಆದಿಯ ಚಿಕ್ಕಮ್ಮನ ವಿಚಿತ್ರ ವರ್ತನೆಯ ಕಾರಣವೂ ತಿಳಿಯಬೇಕಿದೆ. ಅದೇ ಇನ್ನೊಂದೆಡೆ, ತಾಂಡವ್​ ಮತ್ತು ಶ್ರೇಷ್ಠಾ ಇಬ್ಬರಿಗೂ ಒಳ್ಳೆಯ ಬುದ್ಧಿ ಬರಬೇಕಿದೆ. ತನ್ಮಯಿ ಆದಿಯನ್ನು ಅಪ್ಪ ಎಂದು ಒಪ್ಪಿಕೊಳ್ಳಬೇಕಿದೆ.&lt;/p&gt;&lt;img&gt;&lt;p&gt;ಇಷ್ಟೆಲ್ಲಾ ಮುಗಿಯಲು ಇನ್ನೂ ಸ್ವಲ್ಪ ಕಾಲಾವಲಾಶ ಬೇಕೇ ಬೇಕು. ಆದ್ದರಿಂದ ಸೀರಿಯಲ್​ ಯಾವಾಗ ಮುಗಿಯತ್ತೆ ಎನ್ನುವುದು ಇನ್ನೂ ಕನ್​ಫರ್ಮ್​ ಆಗಿಲ್ಲವಾದರೂ ಶೂಟಿಂಗ್​ ಅಂತೂ ಮುಗಿದಿರುವುದು ನಟಿ ಸುಷ್ಮಾ ಅವರ ಪೋಸ್ಟ್​ನಿಂದ ತಿಳಿದು ಬರುತ್ತಿದೆ. ಇದು ಭಾಗ್ಯಲಕ್ಷ್ಮಿ ಸೀರಿಯಲ್​ ಪ್ರೇಮಿಗಳಿಗೆ ಬೇಸರ ತಂದಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bhagyalakshmi-serial-will-end-soon-post-by-sushma-k-rao-suc-eoqmyxl"/>
        </item>
        <item>
            <title><![CDATA[ಗೌರಿ ಕಲ್ಯಾಣ ಚೆಲುವೆ ಶಿಲ್ಪಾ ಕಾಮತ್ ಹುಟ್ಟುಹಬ್ಬ… ಬ್ಯಾಂಕ್ ಕೆಲಸ ಬಿಟ್ಟು ನಟಿಯಾಗಿದ್ದು ಹೇಗೆ?]]></title>
            <link>https://kannada.asianetnews.com/gallery/tv-talk/gowri-kalyana-actress-shilpa-kamath-birthday-3axu10l</link>
            <guid isPermaLink="true">https://kannada.asianetnews.com/gallery/tv-talk/gowri-kalyana-actress-shilpa-kamath-birthday-3axu10l</guid>
            <pubDate>Mon, 25 May 2026 19:51:55 +0530</pubDate>
            <description><![CDATA[&lt;p&gt;Shilpa Kamath: &lsquo;ಗೌರಿ ಕಲ್ಯಾಣ&rsquo; ಧಾರಾವಾಹಿಯಲ್ಲಿ ನಾಯಕಿ ಗೌರಿ ಪಾತ್ರದಲ್ಲಿ ನಟಿಸುತ್ತಿರುವ ಗುಳಿ ಕೆನ್ನೆ ಚೆಲುವೆ ಶಿಲ್ಪಾ ಕಾಮತ್ ಮೇ 24ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಬ್ಯಾಂಕ್ ಉದ್ಯೋಗಿಯಾಗಿದ್ದವರು ನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಹೇಗೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfqy7z65jshxja79hag0ye4,imgname-shilpa-kamath-1779718627298.jpg" type="image/jpeg" height="390" width="690"/>
            <content:encoded><![CDATA[&lt;p&gt;Shilpa Kamath: &lsquo;ಗೌರಿ ಕಲ್ಯಾಣ&rsquo; ಧಾರಾವಾಹಿಯಲ್ಲಿ ನಾಯಕಿ ಗೌರಿ ಪಾತ್ರದಲ್ಲಿ ನಟಿಸುತ್ತಿರುವ ಗುಳಿ ಕೆನ್ನೆ ಚೆಲುವೆ ಶಿಲ್ಪಾ ಕಾಮತ್ ಮೇ 24ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಬ್ಯಾಂಕ್ ಉದ್ಯೋಗಿಯಾಗಿದ್ದವರು ನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಹೇಗೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಗೆ ಕೆಲವು ವರ್ಷಗಳ ಹಿಂದಷ್ಟೆ ಪರಿಚಿತರಾದ ನಟಿ ಶಿಲ್ಪಾ ಕಾಮತ್. &lsquo;ನೂರು ಜನ್ಮಕೂ&rsquo; ಧಾರಾವಾಹಿಯಿಂದ ತಮ್ಮ ನಟನೆ ಜರ್ನಿ ಶುರು ಮಾಡಿ, ಇದೀಗ &lsquo;ಗೌರಿ ಕಲ್ಯಾಣ&rsquo;ದ ಮೂಲಕ ಮಿಂಚುತ್ತಿರುವ , ಮೇ 24ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗುಳಿ ಕೆನ್ನೆಯ ಬೆಡಗಿ ಕುರಿತು ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ನಿಮಗಾಗಿ.&lt;/p&gt;&lt;img&gt;&lt;p&gt;ಮೂಲತಃ ಉಡುಪಿಯವರಾದ ಶಿಲ್ಪಾ, ಹುಟ್ಟಿ ಬೆಳೆದಿದ್ದು ಎಲ್ಲವೂ ಮಂಗಳೂರಿನಲ್ಲಿ. ಸದ್ಯ ನಟನೆಗಾಗಿ ಬೆಂಗಳೂರಿನಲ್ಲಿ ನೆಲೆಯಾಗಿದ್ದಾರೆ. ಅಂದ ಹಾಗೆ ಶಿಲ್ಪಾ ಕಾಮತ್ ಎಂಕಾಂ ಪದವೀಧರೆ. ವಿದ್ಯಭ್ಯಾಸ ಮುಗಿದ ಮೇಲೆ ಒಂದಷ್ಟು ಸಮಯ ಬ್ಯಾಂಕ್&zwnj;ನಲ್ಲಿ ಕೆಲಸ ಮಾಡಿದ್ದರು. ನಂತರ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು.&lt;/p&gt;&lt;img&gt;&lt;p&gt;ಶಿಲ್ಪಾ ಕಾಮತ್ ಕಿರುತೆರೆಯಲ್ಲಿ ಬಣ್ಣ ಹಚ್ಚುವ ಮುನ್ನ ಮಾಡೆಲಿಂಗ್&zwnj;ನಲ್ಲಿ ಗುರುತಿಸಿಕೊಂಡಿದ್ದರು. 2023ರಲ್ಲಿ 'ಮಿಸ್ ಮಂಗಳೂರು' ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಬಳಿಕ ಕಿರುಚಿತ್ರವೊಂದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.&lt;/p&gt;&lt;img&gt;&lt;p&gt;ಶಿಲ್ಪಾ ಕಾಮತ್ ನಟಿಸಿದ ಮೊದಲ ಚಿತ್ರ &lsquo;ರಂಗಸ್ಠಳ&rsquo;. ಬಳಿಕ ಶಿಲ್ಪಾ &lsquo;ನೂರು ಜನ್ಮಕೂ&rsquo; ಎನ್ನುವ ಹಾರರ್ ಕಥಾ ಹಂದರ ಇರುವ ಧಾರಾವಾಹಿಯಲ್ಲಿ ನಾಯಕಿ ಮೈತ್ರಿ ಪಾತ್ರಕ್ಕೆ ಜೀವ ತುಂಬಿದರು. ಆದರೆ ಈ ಧಾರಾವಾಹಿ ಹೆಚ್ಚು ಸಮಯ ಓಡಲಿಲ್ಲ. ಆದರೆ ಈ ಧಾರಾವಾಹಿ ಮೂಲಕ ಶಿಲ್ಪಾ ಲಕ್ ಮಾತ್ರ ಬದಲಾಯಿತು.&lt;/p&gt;&lt;img&gt;&lt;p&gt;ನೂರು ಜನ್ಮಕೂ ಧಾರಾವಾಹಿ ಅಂತ್ಯವಾಗುತ್ತಿದ್ದಂತೆ, ಶಿಲ್ಪಾ ಕಾಮತ್ ಗೆ ಕಾಮಿಡಿ ಕಿಚನ್ ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಇವರು ಅಲ್ಲೂ ಕಾಮಿಡಿ ಮಾಡುತ್ತಾ, ಉತ್ತಮ ರೀತಿಯಲ್ಲಿ ಅಡುಗೆ ಮಾಡುತ್ತಾ ಸ್ಪರ್ಧೆಯಲ್ಲಿ ಮುಂದುವರೆದಿದ್ದರು.&lt;/p&gt;&lt;img&gt;&lt;p&gt;ಇದೀಗ ಶಿಲ್ಪಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ &lsquo;ಗೌರಿ ಕಲ್ಯಾಣ&rsquo; ಧಾರಾವಾಹಿಗೆ ನಾಯಕಿ ಗೌರಿಯಾಗಿ ನಟಿಸುತ್ತಿದ್ದಾರೆ. ಅಕ್ಕ ಇಷ್ಟಪಟ್ಟ ಹುಡುಗನನ್ನು, ಅಕ್ಕ ಮದುವೆ ಮಂಟಪದಿಂದ ಎದ್ದು ಹೋದ ಕಾರಣಕ್ಕೆ ತಂಗಿಯೇ ಮದುವೆಯಾದ ಕಥೆ, ನಂತರ ನಾಯಕನ ಜೊತೆಗಿನ ಜಗಳ ಇದೇ ಸೀರಿಯಲ್ ಹೈಲೈಟ್. ಮುಂದೆ ನಾಯಕಿ ಹೇಗೆ ಎಲ್ಲವನ್ನೂ ಸರಿ ಮಾಡ್ತಾಳೆ ಅನ್ನೋದು ಕಾದು ನೋಡಬೇಕು.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/gowri-kalyana-actress-shilpa-kamath-birthday-3axu10l"/>
        </item>
        <item>
            <title><![CDATA[ಹೊಸ ಹೇರ್‌ಸ್ಟೈಲ್‌ನಲ್ಲಿ ಗುರುತೇ ಸಿಗದಷ್ಟು ಬದಲಾದ್ರಾ 'ಕೃಷ್ಣ ರುಕ್ಕು' ನಟಿ: ಇಲ್ಲಿವೆ ಮೌನಾ ಗುಡ್ಡೆಮನೆ ಫೋಟೋಸ್!]]></title>
            <link>https://kannada.asianetnews.com/gallery/tv-talk/kannada-actress-mouna-guddemane-new-short-hairstyle-viral-photos-gvd-4v8z2am</link>
            <guid isPermaLink="true">https://kannada.asianetnews.com/gallery/tv-talk/kannada-actress-mouna-guddemane-new-short-hairstyle-viral-photos-gvd-4v8z2am</guid>
            <pubDate>Tue, 26 May 2026 19:27:22 +0530</pubDate>
            <description><![CDATA[&lt;p&gt;ಹೊಸ ಹೇರ್&zwnj;ಸ್ಟೈಲ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿರುವ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ಅವರ ಈ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksj917fvn2yb0yfqwfr2m6nt,imgname-jj-1779803659771.png" type="image/jpeg" height="390" width="690"/>
            <content:encoded><![CDATA[&lt;p&gt;ಹೊಸ ಹೇರ್&zwnj;ಸ್ಟೈಲ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿರುವ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ಅವರ ಈ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ತಮ್ಮ ಹೊಸ ಅವತಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರ ಹೊಸ ಫೋಟೋಗಳು ಭಾರೀ ವೈರಲ್ ಆಗಿದ್ದು, ಅದರಲ್ಲಿರುವ ಹೊಚ್ಚಹೊಸ ಶಾರ್ಟ್ ಹೇರ್&zwnj;ಸ್ಟೈಲ್ ಎಲ್ಲರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಸದಾ ಸಾಂಪ್ರದಾಯಿಕ ಲುಕ್&zwnj;ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೌನಾ, ಈ ಬಾರಿ ಸಂಪೂರ್ಣ ಮಾಡರ್ನ್ ಸ್ಟೈಲ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಕೇಶವಿನ್ಯಾಸವು ಅವರ ವ್ಯಕ್ತಿತ್ವಕ್ಕೆ ವಿಭಿನ್ನ ಮೆರಗು ನೀಡಿದ್ದು, ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ವೈರಲ್ ಫೋಟೋಗಳಲ್ಲಿ ಮೌನಾ ತಿಳಿ ಹಳದಿ ಮತ್ತು ಬಿಳಿ ಬಣ್ಣದ ಫ್ಲೋರಲ್ ಗೌನ್ ಧರಿಸಿದ್ದು, ಅದರೊಂದಿಗೆ ಶಾರ್ಟ್ ಹೇರ್&zwnj;ಸ್ಟೈಲ್ ಅದ್ಭುತವಾಗಿ ಹೊಂದಿಕೊಂಡಿದೆ. ಈ ಹೊಸ ಲುಕ್&zwnj;ನಲ್ಲಿ ಅವರು ಅತ್ಯಂತ ಸ್ಟೈಲಿಶ್ ಹಾಗೂ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ನೆಟ್ಟಿಗರ ಅಭಿಪ್ರಾಯ.&lt;/p&gt;&lt;img&gt;&lt;p&gt;ಬೆಂಗಳೂರಿನ ಖ್ಯಾತ ಹೇರ್ ಸಲೂನ್&zwnj;ನಲ್ಲಿ ಈ ಹೊಸ ಹೇರ್&zwnj;ಕಟ್ ಮಾಡಿಸಿಕೊಂಡಿರುವ ಮೌನಾ, ಕ್ಯಾಮೆರಾ ಮುಂದೆ ನಗುಮುಖದಿಂದ ವಿವಿಧ ಪೋಸ್&zwnj;ಗಳನ್ನು ನೀಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಮತ್ತು ಕಮೆಂಟ್&zwnj;ಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;&lt;img&gt;&lt;p&gt;'ಶಾರ್ಟ್ ಹೇರ್ ನಿಮಗೆ ತುಂಬಾ ಸೂಟ್ ಆಗಿದೆ', 'ಇದು ನಿಮ್ಮ ಬೆಸ್ಟ್ ಲುಕ್', 'ಇನ್ನಷ್ಟು ಸುಂದರವಾಗಿ ಕಾಣಿಸುತ್ತಿದ್ದೀರಿ' ಎಂಬ ಕಾಮೆಂಟ್&zwnj;ಗಳ ಮೂಲಕ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಿರುತೆರೆಯಲ್ಲಿ ರಾಮಾಚಾರಿ ಧಾರಾವಾಹಿಯ ಮೂಲಕ ಗಮನ ಸೆಳೆದಿದ್ದ ಮೌನಾ, ಪ್ರಸ್ತುತ ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ, ಲವ್ ಪಂಚ್ ವೆಬ್ ಸರಣಿಯಲ್ಲಿ ವಿಭಿನ್ನ ಹಾಗೂ ಬೋಲ್ಡ್ ಪಾತ್ರದ ಮೂಲಕವೂ ಅವರು ಗಮನ ಸೆಳೆದಿದ್ದರು.&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/tv-talk/kannada-actress-mouna-guddemane-new-short-hairstyle-viral-photos-gvd-4v8z2am"/>
        </item>
        <item>
            <title><![CDATA[MLA, MPಯಾಗಲು Bigg Boss ಜಾಹ್ನವಿ ಸಿದ್ಧತೆ ಹೇಗೆ ನಡೀತಿದೆ? ನಟಿ ಓಪನ್​ ಮಾತು]]></title>
            <link>https://kannada.asianetnews.com/gallery/entertainment/bigg-boss-jhanvi-wants-to-become-mla-or-mp-what-she-says-suc-670uu2o</link>
            <guid isPermaLink="true">https://kannada.asianetnews.com/gallery/entertainment/bigg-boss-jhanvi-wants-to-become-mla-or-mp-what-she-says-suc-670uu2o</guid>
            <pubDate>Wed, 27 May 2026 12:15:27 +0530</pubDate>
            <description><![CDATA[ಬಿಗ್​ಬಾಸ್​ ಖ್ಯಾತಿಯ ನಟಿ ಜಾಹ್ನವಿ, ಎಚ್​.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್​ ಪಕ್ಷ ಸೇರಿದ್ದಾರೆ. ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksm1sfrttr8tc8p754n6swek,imgname-bigg-boss-jhanvi-1779863174938.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ ಖ್ಯಾತಿಯ ನಟಿ ಜಾಹ್ನವಿ, ಎಚ್​.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್​ ಪಕ್ಷ ಸೇರಿದ್ದಾರೆ. ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.&lt;img&gt;&lt;p&gt;ಖ್ಯಾತ ಆ್ಯಂಕರ್ ಆಗಿಯೂ ನಟಿಯಾಗಿಯೂ ಗುರುತಿಸಿಕೊಂಡಿರೋ ಜಾಹ್ನವಿ (Bigg Boss Jhanvi) ಅವರು ಬಿಗ್​ಬಾಸ್​ 12ಕ್ಕೆ ಹೋಗಿ ಬಂದ ಮೇಲೆ ಬಿಗ್​ಬಾಸ್​ ಜಾಹ್ನವಿಯಾಗಿದ್ದಾರೆ. ಬಿಗ್​ಬಾಸ್​ನಿಂದ ಬಂದ ಮೇಲೆ ಸಹಜವಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಜೊತೆಗೆನೇ ಒಳ್ಳೆಯ ಆಫರ್ಸ್​ಗಳೂ ಬರುತ್ತಿವೆ.&lt;/p&gt;&lt;img&gt;&lt;p&gt;ನಟಿ, ನಿರೂಪಕಿಯಾಗಿ ಇಲ್ಲಿಯವರೆಗೆ ಗುರುತಿಸಿಕೊಂಡಿದ್ದ ಜಾಹ್ನವಿ ಇದೀಗ ರಾಜಕಾರಣಿಯಾಗಿದ್ದಾರೆ. ಈಚೆಗಷ್ಟೇ ಅವರು ಜೆಡಿಎಸ್​ ಪಕ್ಷವನ್ನು ಸೇರಿದ್ದಾರೆ. ಎಚ್​ಜಿಎಸ್​ ನಾಯಕ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಟಿ ಪಕ್ಷವನ್ನು ಸೇರಿದರು.&lt;/p&gt;&lt;img&gt;&lt;p&gt;ಇದೀಗ ಅವರಿಗೆ ದೊಡ್ಡ ಹುದ್ದೆ ಏರುವ ಆಸೆನಾ ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಜಾಹ್ನವಿ ಅವರು, ಸದ್ಯ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆ ನಡೆಯುತ್ತಿದೆ. ಆಗಸ್ಟ್​ 31ರ ಒಳಗೆ ಮಾಡುವಂತೆ ಸುಪ್ರೀಂಕೋರ್ಟ್​ ಕೂಡ ಹೇಳಿದೆ. ನಾನು ಪವರ್​ ಆಕಾಂಕ್ಷಿ ಅಲ್ಲ ಅಂತ ಖಂಡಿತ ಹೇಳುವುದಿಲ್ಲ ಎನ್ನುತ್ತಲೇ ಇದರಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಜಾಹ್ನವಿ.&lt;/p&gt;&lt;img&gt;&lt;p&gt;ಪವರ್​ ಇದ್ದರೆ ಜನರ ಸೇವೆ ಮಾಡಬಹುದು. ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಆಗಲೀ, ಎಂಎಲ್​ಎ, ಎಂಪಿ ಯಾವುದಕ್ಕೇ ಆದರೂ ಪಕ್ಷ ನೀವು ನಿಂತುಕೊಳ್ಳಿ ಎಂದರೆ ಹೇಳಿದರೆ ನಾನು ಅದಕ್ಕೆ ಸಿದ್ಧ ಇದ್ದೇನೆ. ಇದಾಗಲೇ ನನ್ನ ಇಂಗಿತವನ್ನು ವ್ಯಕ್ತಪಡಿಸಿದ್ದೇನೆ. ಪಕ್ಷದ ಧುರೀಣರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ಧವಾಗಿದ್ದೇನೆ ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಜಾಹ್ನವಿ ಡ್ರೆಸ್​​ ಸೆನ್ಸ್​ಗೆ ಸಕತ್​ ಫೇಮಸ್​ ಆಗಿದ್ದಾರೆ. ಮನೆಯಲ್ಲಿದ್ದ ಅವಧಿಯಲ್ಲಿ ತಮ್ಮ ಡ್ರೆಸ್ ಹಾಗೂ ಮೇಕಪ್&zwnj;ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಬಿಗ್ ಬಾಸ್ ಸಂಭಾವನೆಗಿಂತ ಬಟ್ಟೆಗೆ ಮಾಡಿರೋ ಖರ್ಚು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಜಾಹ್ನವಿ ಅವರು ಬಿಗ್​ಬಾಸ್​ನಲ್ಲಿ ಇದ್ದ ಸಂದರ್ಭದಲ್ಲಿ ಜಗಳದಿಂದಲೇ ಫೇಮಸ್​ ಆಗಿದ್ದರು. ಒಂದು ಸ್ಪರ್ಧೆ ಎಂದು ಬಂದಾಗ ಎಲ್ಲವೂ ಅನಿವಾರ್ಯ ಆಗುವ ಕಾರಣದಿಂದ ಅವರು, ಸಹಜವಾಗಿ ಜಗಳ ಮಾಡಿದ್ದರು. ಅವರು ಮನೆಯೊಳಕ್ಕೆ ಇದ್ದಾಗ, ಹೊರಗಡೆಯಲ್ಲಿ ಅವರ ಮಾಜಿ ಪತಿ ನೀಡ್ತಿದ್ದ ಹೇಳಿಕೆಯಿಂದಾಗಿ ಇವರಿಬ್ಬರ ಡಿವೋರ್ಸ್​ ವಿಷ್ಯ ವಿವಿಧ ರೂಪಗಳನ್ನು ಪಡೆದಿತ್ತು. ಇದೀಗ ಜಾಹ್ನವಿ ಅವರು ತಮಗೆ 2ನೇ ಮದುವೆಯ ಯೋಚನೆಯೇ ಇಲ್ಲ, ಮಗನೇ ಎಲ್ಲಾ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bigg-boss-jhanvi-wants-to-become-mla-or-mp-what-she-says-suc-670uu2o"/>
        </item>
        <item>
            <title><![CDATA[ಸ್ಯಾಂಡಲ್’ವುಡ್’ಗೆ ಎಂಟ್ರಿ ಕೊಡಲು ರೆಡಿಯಾದ್ರು ‘ಪುಟ್ಟಕ್ಕನ ಮಕ್ಕಳು’ ನಟ ಧನುಷ್]]></title>
            <link>https://kannada.asianetnews.com/gallery/tv-talk/puttakkana-makkalu-fame-dhanush-acting-in-new-movie-7xbdf0g</link>
            <guid isPermaLink="true">https://kannada.asianetnews.com/gallery/tv-talk/puttakkana-makkalu-fame-dhanush-acting-in-new-movie-7xbdf0g</guid>
            <pubDate>Wed, 27 May 2026 16:31:51 +0530</pubDate>
            <description><![CDATA[&lt;p&gt;ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟ ಧನುಷ್ ಇದೀಗ ಭರ್ಜರಿಯಾಗಿ ಚಂದನವನಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾ ಮುಹೂರ್ತ ಕೂಡ ನಡೆದಿದೆ. ಯಾವ ಸಿನಿಮಾ? ನಾಯಕಿ ಯಾರು? ಇಲ್ಲಿದೆ ಮಾಹಿತಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmhehn5jy3j70gv2spg0ssx,imgname-dhanush-1779879593636.jpg" type="image/jpeg" height="390" width="690"/>
            <content:encoded><![CDATA[&lt;p&gt;ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟ ಧನುಷ್ ಇದೀಗ ಭರ್ಜರಿಯಾಗಿ ಚಂದನವನಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾ ಮುಹೂರ್ತ ಕೂಡ ನಡೆದಿದೆ. ಯಾವ ಸಿನಿಮಾ? ನಾಯಕಿ ಯಾರು? ಇಲ್ಲಿದೆ ಮಾಹಿತಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ &lsquo;ಪುಟ್ಟಕ್ಕನ ಮಕ್ಕಳು&rsquo; ಧಾರಾವಾಹಿಯಲ್ಲಿ ನಾಯಕ ಕಂಠಿ ಪಾತ್ರದ ಮೂಲಕ ಜನರಿಗೆ ಚಿರಪರಿಚಿತರಾದ ನಟ ಧನುಷ್ ಎನ್ ಇದೀಗ ಚಂದನವನಕ್ಕೆ ಎಂಟ್ರಿ ಕೊಡಲು ತಯಾರಾಗಿ ನಿಂತಿದ್ದಾರೆ. ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಂಠಿಯಾಗಿ ಕರುನಾಡ ಜನಮನ ಗೆದ್ದ ಧನುಷ್, ಸದ್ಯದಲ್ಲೇ ನಾಯಕನಾಗಿ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಂಡೆಕಾಳಿ ದೇವಸ್ಥಾನದಲ್ಲಿ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಪ್ರೊಡಕ್ಷನ್ ನಂ 2ʼ ಹೆಸರಿನಲ್ಲಿ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.&lt;/p&gt;&lt;img&gt;&lt;p&gt;ʻಟಗರು ಪಲ್ಯʼ ಸಿನಿಮಾ ಮೂಲಕ ಅಪಾರ ಮೆಚ್ಚುಗೆ ಪಡೆದುಕೊಂಡ ನಿರ್ದೇಶಕ ಉಮೇಶ್ ಕೆ ಕೃಪ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದು ನಿರ್ದೇಶಕರ ಎರಡನೇ ಸಿನಿಮಾ ಆಗಿದೆ. ಮತ್ತೊಂದು ಹೊಸ ಕಥೆಯೊಂದಿಗೆ ನಿರ್ದೇಶಕರು ತಯಾರಿ ನಡೆಸಿದ್ದಾರೆ. ಆಕಾಂಕ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗೇಶ್ ವಾಸ್ಟರ್ ಅವರು ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಎಲ್ಲವನ್ನೂ ನಿರ್ದೇಶಕ ಉಮೇಶ್ ಕೆ ಕೃಪ ಅವರೇ ಮಾಡಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ, ಪಳನಿ ಡಿ ಸೇನಾಪತಿ ಸಂಗೀತ ನಿರ್ದೇಶನ, ಮಧು ತುಂಬಕೆರೆ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಹಾಗೂ ಎ ಸತೀಶ್ ಅವರ ಕಲಾ ನಿರ್ದೇಶನ, ಎಚ್ ಜಗದೀಶ್ ರಾವ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಧನುಷ್ ಅವರಿಗೆ ಕನ್ನಡ ಕಿರುತೆರೆಯ ಮತ್ತೊಬ್ಬ ನಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೈ ಲಲಿತಾ ಧಾರಾವಾಹಿ ನಾಯಕಿ ಲಲಿತಾ ಪಾತ್ರಧಾರಿ ಮನಸ್ವಿ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/puttakkana-makkalu-fame-dhanush-acting-in-new-movie-7xbdf0g"/>
        </item>
        <item>
            <title><![CDATA[ಶಿವಮೊಗ್ಗ ಕುದರೆಗಣಿ ಕೆರೆಯಲ್ಲಿ ಭರ್ಜರಿ ಕೆರೆಬೇಟೆ ಹಬ್ಬ! ಇದರ ಹಿಂದಿರೋ ಉದ್ದೇಶ ಮೀನು ಹಿಡಿಯೋದಲ್ಲ!]]></title>
            <link>https://kannada.asianetnews.com/gallery/tv-talk/shivamogga-massive-traditional-fishing-festival-kerebete-held-in-kudaregani-lake-sat-bmv0h1e</link>
            <guid isPermaLink="true">https://kannada.asianetnews.com/gallery/tv-talk/shivamogga-massive-traditional-fishing-festival-kerebete-held-in-kudaregani-lake-sat-bmv0h1e</guid>
            <pubDate>Mon, 25 May 2026 12:57:17 +0530</pubDate>
            <description><![CDATA[&lt;p&gt;ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುದರೆಗಣಿ ಗ್ರಾಮದಲ್ಲಿ ಮಾರಿಕಾಂಬಾ ದೇವಸ್ಥಾನದ ನಿರ್ಮಾಣಕ್ಕಾಗಿ ವಿಶೇಷ 'ಕೆರೆಬೇಟೆ'ಯನ್ನು ಆಯೋಜಿಸಲಾಗಿತ್ತು. ಸಾವಿರಾರು ಜನರು ಈ ಸಾಂಪ್ರದಾಯಿಕ ಮೀನು ಹಿಡಿಯುವ ಹಬ್ಬದಲ್ಲಿ ಭಾಗವಹಿಸಿ, ಸವಾಲುಗಳ ನಡುವೆಯೂ ಬೃಹತ್ ಗಾತ್ರದ ಮೀನುಗಳನ್ನು ಹಿಡಿದು ಸಂಭ್ರಮಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksevs7x1znj487rywn7nakzp,imgname-shivamogga-kudaregani-kerebete-1779689103264.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುದರೆಗಣಿ ಗ್ರಾಮದಲ್ಲಿ ಮಾರಿಕಾಂಬಾ ದೇವಸ್ಥಾನದ ನಿರ್ಮಾಣಕ್ಕಾಗಿ ವಿಶೇಷ 'ಕೆರೆಬೇಟೆ'ಯನ್ನು ಆಯೋಜಿಸಲಾಗಿತ್ತು. ಸಾವಿರಾರು ಜನರು ಈ ಸಾಂಪ್ರದಾಯಿಕ ಮೀನು ಹಿಡಿಯುವ ಹಬ್ಬದಲ್ಲಿ ಭಾಗವಹಿಸಿ, ಸವಾಲುಗಳ ನಡುವೆಯೂ ಬೃಹತ್ ಗಾತ್ರದ ಮೀನುಗಳನ್ನು ಹಿಡಿದು ಸಂಭ್ರಮಿಸಿದರು.&lt;/p&gt;&lt;img&gt;&lt;p&gt;&lt;strong&gt;ಶಿವಮೊಗ್ಗ : &lt;/strong&gt;ಮಲೆನಾಡಿನ ಸಾಂಪ್ರದಾಯಿಕ ಸೊಗಡನ್ನು ಬಿಂಬಿಸುವ ಅಪರೂಪದ 'ಕೆರೆಬೇಟೆ' (ಮೀನು ಹಿಡಿಯುವ ಹಬ್ಬ) ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ವೈಭವದಿಂದ ಜರುಗಿದೆ. ಜಿಲ್ಲೆಯ ಸೊರಬ ತಾಲೂಕಿನ ಕುದರೆಗಣಿ ಗ್ರಾಮದ ಊರಮುಂದಿನ ದೊಡ್ಡ ಕೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಾಂಪ್ರದಾಯಿಕ ಮೀನು ಬೇಟೆ ಹಬ್ಬದಲ್ಲಿ ಸಾವಿರಾರು ಜನರು ಭಾಗವಹಿಸಿ ಭರ್ಜರಿ ಬೇಟೆಯ ಸಂಭ್ರಮವನ್ನು ಸವಿದರು. ಈ ಬಾರಿ ಕೆರೆಬೇಟೆಗೆ ಹೋದವರು ಒಬ್ಬರು ಹೊತ್ತುಕೊಂಡು ಹೋಗಲಾಗದಷ್ಟು ಮೀನು ಹಿಡಿದುಕೊಂಡು ಹೋದರು.&lt;/p&gt;&lt;img&gt;&lt;p&gt;ಈ ಮೀನು ಬೇಟೆ ಕೇವಲ ಮನರಂಜನೆಗಾಗಿ ಮಾತ್ರ ನಡೆದಿರಲಿಲ್ಲ, ಇದರ ಹಿಂದೆ ಒಂದು ಪವಿತ್ರವಾದ ಉದ್ದೇಶವಿತ್ತು. ಕುದರೆಗಣಿ ಗ್ರಾಮದ ಅತ್ಯಂತ ಪ್ರಸಿದ್ಧ ಹಾಗೂ ಶ್ರದ್ಧಾಕೇಂದ್ರವಾಗಿರುವ ಮಾರಿಕಾಂಬಾ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ನಿಧಿ ಸಂಗ್ರಹಕ್ಕಾಗಿ ಈ ವಿಶೇಷ ಕೆರೆ ಬೇಟೆಯನ್ನು ಆಯೋಜಿಸಲಾಗಿತ್ತು.&lt;/p&gt;&lt;img&gt;&lt;p&gt;ಈ ಹಿಂದೆ ಗ್ರಾಮಸ್ಥರು ಜಂಟಿಯಾಗಿ ಇದೇ ಕೆರೆಗೆ ಸುಮಾರು ಎರಡು ಲಕ್ಷ ಮೀನಿನ ಮರಿಗಳನ್ನು ಬಿಟ್ಟು ಪೋಷಿಸಿದ್ದರು. ಈಗ ಬೇಸಿಗೆಯ ಕಾಲವಾಗಿರುವುದರಿಂದ ಕೆರೆಯಲ್ಲಿ ಮೀನು ಬೇಟೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಈ ಮೂಲಕ ಸಂಗ್ರಹವಾದ ಹಣವನ್ನು ಸಂಪೂರ್ಣವಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಗ್ರಾಮ ಸಮಿತಿ ತೀರ್ಮಾನಿಸಿದೆ.&lt;/p&gt;&lt;img&gt;&lt;p&gt;ಪ್ರಸುತ್ತ ಬೇಸಿಗೆಯ ದಿನಗಳಾಗಿದ್ದರೂ, ಕುದರೆಗಣಿ ದೊಡ್ಡ ಕೆರೆಯಲ್ಲಿ ಈ ಬಾರಿ ಇನ್ನೂ ಅಧಿಕ ಪ್ರಮಾಣದಲ್ಲಿ ನೀರು ಉಳಿದುಕೊಂಡಿತ್ತು. ಆಳವಾದ ನೀರಿದ್ದ ಕಾರಣ ಬೇಟೆಗಾರರಿಗೆ ಕೆರೆಗೆ ಇಳಿದು ಮೀನುಗಳನ್ನು ಹುಡುಕಿ ಹಿಡಿಯುವುದು ದೊಡ್ಡ ಸವಾಲಿನ ಸಂಗತಿಯಾಗಿತ್ತು. ಆದಾಗ್ಯೂ, ಮೀನು ಶಿಕಾರಿಯ ಹುರುಪಿನಲ್ಲಿದ್ದ ಜನರಿಗೆ ನೀರು ಅಡ್ಡಿಯಾಗಲಿಲ್ಲ.&lt;/p&gt;&lt;img&gt;&lt;p&gt;ಕುದರೆಗಣಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಯುವಕರು, ಹಿರಿಯರು ಕೆರೆಗೆ ಇಳಿದು ಸಾಹಸ ಪ್ರವೃತ್ತಿಯಿಂದ ಮೀನು ಬೇಟೆಯಾಡಿದರು. ತಮಗೆ ಎಷ್ಟು ಸಾಧ್ಯವೋ ಅಷ್ಟು ಮೀನುಗಳನ್ನು ಹಿಡಿದುಕೊಂಡು ಹೋದರು.&lt;/p&gt;&lt;img&gt;&lt;p&gt;ಈ ಅಪರೂಪದ ಕೆರೆಬೇಟೆಯಲ್ಲಿ ಯಾವುದೇ ಜಾತಿ, ಮತ ಅಥವಾ ವಯಸ್ಸಿನ ಭೇದವಿರಲಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೆರೆಯ ದಂಡೆಯ ಮೇಲೆ ಜಮಾಯಿಸಿದ್ದರು. ಮಹಿಳೆಯರು ಮತ್ತು ಮಕ್ಕಳು ಕೆರೆಯ ದಂಡೆಯ ಮೇಲೆ ನಿಂತು ಬೇಟೆಗಾರರು ಮೀನು ಹಿಡಿಯುವ ರೋಚಕ ಕ್ಷಣಗಳನ್ನು ಕಣ್ತುಂಬಿಕೊಂಡು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಇಡೀ ಗ್ರಾಮದಲ್ಲಿ ಯುಗಾದಿ-ದೀಪಾವಳಿಯಂತಹ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.&lt;/p&gt;&lt;img&gt;&lt;p&gt;ಕೆರೆಬೇಟೆಯಲ್ಲಿ ಪಾಲ್ಗೊಳ್ಳಲು ಆಸಕ್ತರಿಗೆ ಒಂದು ಕುಣಿಗೆ 500 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಮಲೆನಾಡಿನ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತಂತ್ರಜ್ಞಾನದ ಬದಲಾವಣೆಯೂ ಇಲ್ಲಿ ಎದ್ದು ಕಾಣುತ್ತಿತ್ತು:&lt;/p&gt;&lt;p&gt;&lt;strong&gt;ಹಳೆಯ ಪದ್ಧತಿ: &lt;/strong&gt;ಈ ಹಿಂದೆ ಬಿದಿರಿನಿಂದ ತಯಾರಿಸಲಾದ ಸಾಂಪ್ರದಾಯಿಕ ಕುಣಿಗಳನ್ನು ಬಳಸಲಾಗುತ್ತಿತ್ತು. ಇವು ಕೇವಲ 1 ರಿಂದ 1.5 ಕೆಜಿ ತೂಕವಿರುತ್ತಿದ್ದವು.&lt;/p&gt;&lt;p&gt;&lt;strong&gt;ಆಧುನಿಕ ಪದ್ಧತಿ: &lt;/strong&gt;ಈಗ ಬಿದಿರಿನ ಜಾಗಕ್ಕೆ ಕಬ್ಬಿಣದ ಕುಣಿಗಳು ಬಂದಿವೆ. ಇವು 3 ರಿಂದ 4 ಕೆಜಿ ತೂಕ ಹೊಂದಿದ್ದರೂ, ಕೆರೆಯ ಆಳದ ನೀರಿನಲ್ಲಿ ತಳ ಮುಟ್ಟಿ ಮೀನುಗಳನ್ನು ಲಾಕ್ ಮಾಡಲು ಬೇಟೆಗಾರರಿಗೆ ಹೆಚ್ಚು ಅನುಕೂಲಕರವಾಗಿದ್ದವು.&lt;/p&gt;&lt;img&gt;&lt;p&gt;ಕೆರೆಗೆ ಇಳಿದ ಬಹುತೇಕ ಬೇಟೆಗಾರರಿಗೆ ನಿರಾಸೆಯಾಗಲಿಲ್ಲ. ಕೆಲವರು ಸತತ ಪ್ರಯತ್ನ ನಡೆಸಿ ಒಟ್ಟು 4 ರಿಂದ 5 ಕೆಜಿಯಷ್ಟು ತೂಕದ ಬೇರೆ ಬೇರೆ ಮೀನುಗಳನ್ನು ಹಿಡಿದು ಸಂಭ್ರಮಿಸಿದರೆ, ಇನ್ನು ಕೆಲವು ಅದೃಷ್ಟವಂತ ಬೇಟೆಗಾರರಿಗೆ ಒಂದೊಂದೇ ಮೀನು ಬರೋಬ್ಬರಿ 5 ಕೆಜಿ ತೂಕದ್ದು ಸಿಕ್ಕಿತು!&lt;/p&gt;&lt;img&gt;&lt;p&gt;ಇಷ್ಟು ದೊಡ್ಡ ಗಾತ್ರದ ಮೀನುಗಳನ್ನು ಕೈಯಲ್ಲಿ ಹಿಡಿದು ಬೇಟೆಗಾರರು ಕೆರೆಯಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಸಾರ್ವಜನಿಕರು ಜೋರಾಗಿ ಕೂಗಿ ಹರ್ಷ ವ್ಯಕ್ತಪಡಿಸಿದರು. ಸುಮಾರು ವರ್ಷಗಳ ಬಳಿಕ ಕೆರೆಬೇಟೆಗೆ ಹೋದವರಿಗೆ ದೊಡ್ಡ ದೊಡ್ಡ ಮೀನುಗಳು ಸಿಕ್ಕಿರುವುದು ಸುತ್ತಲಿನ ಗ್ರಾಮಸ್ಥರದಲ್ಲಿ ಸಂತಸ ಮೂಡಿಸಿತು.&lt;/p&gt;&lt;img&gt;&lt;p&gt;ಸಾವಿರಾರು ಜನರು ಒಂದೆಡೆ ಸೇರಿದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳೀಯ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕುದರೆಗಣಿ ಗ್ರಾಮಸ್ಥರು ಹಾಗೂ ಗ್ರಾಮದ ಹಬ್ಬದ ಸಮಿತಿಯವರು ಇಡೀ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕರ ಮತ್ತು ಅಧಿಕಾರಿಗಳ ವ್ಯಾಪಕ ಮೆಚ್ಚುಗೆಗೆ ಪಾತ್ರರಾದರು. ಈ ಕೆರೆಬೇಟೆ ಮಲೆನಾಡಿನ ಸಾಮರಸ್ಯ ಮತ್ತು ಸಂಸ್ಕೃತಿಗೆ ಸಾಕ್ಷಿಯಾಯಿತು.&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/shivamogga-massive-traditional-fishing-festival-kerebete-held-in-kudaregani-lake-sat-bmv0h1e"/>
        </item>
        <item>
            <title><![CDATA[ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ತಾರಾ ಜೋಡಿ: ವಾರ್ಷಿಕೋತ್ಸವದ ಸಂಭ್ರಮ- ಕ್ಯೂಟ್​ ಫೋಟೋಸ್​]]></title>
            <link>https://kannada.asianetnews.com/gallery/relationship/shreerastu-shubhamastu-lavanya-bharadwaj-and-shashi-couple-wedding-anniversary-suc-dltbs6d</link>
            <guid isPermaLink="true">https://kannada.asianetnews.com/gallery/relationship/shreerastu-shubhamastu-lavanya-bharadwaj-and-shashi-couple-wedding-anniversary-suc-dltbs6d</guid>
            <pubDate>Mon, 25 May 2026 13:03:45 +0530</pubDate>
            <description><![CDATA[&lt;p&gt;'ಶ್ರೀರಸ್ತು ಶುಭಮಸ್ತು' ಖ್ಯಾತಿಯ ಲಾವಣ್ಯ ಭಾರದ್ವಾಜ್ ಮತ್ತು 'ಅಮೃತಧಾರೆ' ಖ್ಯಾತಿಯ ಶಶಿ ಹೆಗ್ಡೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವದಂದು ಸುದ್ದಿಯನ್ನು ಹಂಚಿಕೊಂಡಿದ್ದು, 'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ &amp;nbsp;ಪ್ರೇಮಕಥೆ ಕುತೂಹಲಕಾರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf0metkpxq2w8bxgftjmzz5,imgname-lavanya-and-shashi-1779694189395.jpg" type="image/jpeg" height="390" width="690"/>
            <content:encoded><![CDATA[&lt;p&gt;'ಶ್ರೀರಸ್ತು ಶುಭಮಸ್ತು' ಖ್ಯಾತಿಯ ಲಾವಣ್ಯ ಭಾರದ್ವಾಜ್ ಮತ್ತು 'ಅಮೃತಧಾರೆ' ಖ್ಯಾತಿಯ ಶಶಿ ಹೆಗ್ಡೆ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವದಂದು ಸುದ್ದಿಯನ್ನು ಹಂಚಿಕೊಂಡಿದ್ದು, 'ರಾಜಾ ರಾಣಿ' ಧಾರಾವಾಹಿಯಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ &amp;nbsp;ಪ್ರೇಮಕಥೆ ಕುತೂಹಲಕಾರಿಯಾಗಿದೆ.&lt;/p&gt;&lt;img&gt;&lt;p&gt;ಶ್ರೀರಸ್ತು ಶುಭಮಸ್ತು ಪೂರ್ಣಿ ಅರ್ಥಾತ್​ ನಟಿ ಲಾವಣ್ಯ ಭಾರದ್ವಾಜ್​ ಮತ್ತು ಅಮೃತಧಾರೆಯಲ್ಲಿ ಜೀವ ಪಾತ್ರಧಾರಿಯಾಗಿದ್ದ ಶಶಿ ದಂಪತಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಅರ್ಥಾತ್​ ಮೇ 25 ಈ ಜೋಡಿಯ ವಿವಾಹ ವಾರ್ಷಿಕೋತ್ಸವ.&lt;/p&gt;&lt;img&gt;&lt;p&gt;ವಿವಾಹ ವಾರ್ಷಿಕೋತ್ಸವದ ಶುಭ ಗಳಿಗೆಯಲ್ಲಿ ಜೋಡಿ ಕ್ಯೂಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡಿದೆ. ಇದರಲ್ಲಿ ಲಾವಣ್ಯ ಅವರು ತುಂಬು ಗರ್ಭಿಣಿಯಾಗಿದ್ದು ವಾರ್ಷಿಕೋತ್ಸವದ ನಿಮಿತ್ತ ಪತಿಯ ಜೊತೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಲಾವಣ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಆಗಾಗ್ಗೆ ಹಲವಾರು ರೀಲ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.&lt;/p&gt;&lt;img&gt;&lt;p&gt;ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು.&lt;/p&gt;&lt;img&gt;&lt;p&gt;&lsquo;ರಾಜಾ ರಾಣಿ&rsquo; ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ.&lt;/p&gt;&lt;img&gt;&lt;p&gt;ಮದುವೆಯಾಗಿ ವರ್ಷದ ಬಳಿಕ ಈ ಜೋಡಿ ಈಚೆಗೆ ಮನಾಲಿಗೆ ಹೋಗಿ ಪ್ರವಾಸ ಮಾಡಿದ್ದು, ಇದು ನಮ್ಮ ಹನಿಮೂನ್​ ಎಂದು ತಮಾಷೆ ಮಾಡಿದ್ದರು. ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ತಂದೆ, ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು. ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್&zwnj; ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/shreerastu-shubhamastu-lavanya-bharadwaj-and-shashi-couple-wedding-anniversary-suc-dltbs6d"/>
        </item>
        <item>
            <title><![CDATA[Jahnavi: 'ಅವನೇ ನನ್ನ ಪ್ರಪಂಚ, ಮಿಕ್ಕಂತೆ ಸಮಾಜ ಸೇವೆ+ ರಾಜಕೀಯಕ್ಕೆ ಮೀಸಲು ಎಂದ 'Bigg Boss' ಜಾಹ್ನವಿ!]]></title>
            <link>https://kannada.asianetnews.com/tv-talk/my-son-is-my-world-and-my-remaining-time-is-for-politics-and-social-service-says-bigg-boss-fame-jahnavi-for-plans/articleshow-gmmvvzg</link>
            <guid isPermaLink="true">https://kannada.asianetnews.com/tv-talk/my-son-is-my-world-and-my-remaining-time-is-for-politics-and-social-service-says-bigg-boss-fame-jahnavi-for-plans/articleshow-gmmvvzg</guid>
            <pubDate>Wed, 27 May 2026 15:38:38 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ ಕಿರೀಟ ಮುಡಿಗೇರಿಸಿಕೊಳ್ಳದಿದ್ದರೂ ಜನರ ಮನ ಗೆದ್ದಿರುವ ಜಾಹ್ನವಿ, ಈಗ ರಾಜಕೀಯದಲ್ಲಿ ಯಾವ ರೀತಿಯ ಮೋಡಿ ಮಾಡಲಿದ್ದಾರೆ? ಜೆಡಿಎಸ್ ಪಕ್ಷಕ್ಕೆ ಈ ಗ್ಲಾಮರಸ್ ನಾಯಕಿಯ ಸೇರ್ಪಡೆಯಿಂದ ಎಷ್ಟು ಬಲ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmeed7y5swtyfc8wx9w56jt,imgname-jahnavi-1779876443390.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ ಮನೆಯಿಂದ ರಾಜಕೀಯ ಅಖಾಡಕ್ಕೆ ಜಾಹ್ನವಿ ಎಂಟ್ರಿ:&lt;/p&gt;&lt;p&gt;ಬಣ್ಣದ ಲೋಕದ ಮಿಂಚು, ಬಿಗ್&zwnj;ಬಾಸ್ ಕನ್ನಡ ಸೀಸನ್ 11ರ ಸಂಚಲನ, ಖ್ಯಾತ ನಿರೂಪಕಿ ಜಾಹ್ನವಿ (Jahnavi) ಈಗ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬಿಗ್&zwnj;ಬಾಸ್ ಮನೆಯೊಳಗೆ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮತ್ತು ನೇರ ನುಡಿಯಿಂದಲೇ ಹಲ್ಚಲ್ ಎಬ್ಬಿಸಿದ್ದ ಈ ನಟಿ, ಈಗ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ 'ತೆನೆ ಹೊತ್ತ ಮಹಿಳೆ'ಯನ್ನು ಅಪ್ಪಿಕೊಂಡಿರುವ ಜಾಹ್ನವಿ, ಜೆಡಿಎಸ್ ಪಕ್ಷದ ಮೂಲಕ ತಮ್ಮ ಸಮಾಜ ಸೇವೆಯ ಕನಸಿಗೆ ರೆಕ್ಕೆ ಕಟ್ಟಿದ್ದಾರೆ.&lt;/p&gt;&lt;p&gt;&quot;ನಾನು ಸುಳ್ಳು ಹೇಳಲ್ಲ, ನನಗೆ ಪವರ್ ಬೇಕು!&quot;&lt;/p&gt;&lt;p&gt;ಸಾಮಾನ್ಯವಾಗಿ ರಾಜಕೀಯಕ್ಕೆ ಬರುವವರು &quot;ನಾನು ಅಧಿಕಾರಕ್ಕಾಗಿ ಬಂದಿಲ್ಲ, ಕೇವಲ ಸೇವೆಗಾಗಿ ಬಂದಿದ್ದೇನೆ&quot; ಎಂದು ನಾಟಕೀಯವಾಗಿ ಹೇಳುತ್ತಾರೆ. ಆದರೆ ಜಾಹ್ನವಿ ಅವರ ಶೈಲಿಯೇ ಬೇರೆ! ಜೆಡಿಎಸ್ ಸೇರಿದ ಬೆನ್ನಲ್ಲೇ ಅವರು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. &quot;ನಾನು ಪವರ್ ಆಕಾಂಕ್ಷಿ ಅಲ್ಲ ಎಂದು ಖಂಡಿತವಾಗಿಯೂ ಸುಳ್ಳು ಹೇಳಲ್ಲ. ಅಧಿಕಾರ ಕೈಯಲ್ಲಿದ್ದರೆ ಜನಸಾಮಾನ್ಯರ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು&quot; ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಆಸೆಯನ್ನು ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;ಚುನಾವಣಾ ಅಖಾಡಕ್ಕೆ ಸಿದ್ಧರಾದರೇ 'ಆಂಕರ್' ಜಾಹ್ನವಿ?&lt;/p&gt;&lt;p&gt;ಸುಪ್ರೀಂಕೋರ್ಟ್ ಆದೇಶದಂತೆ ಆಗಸ್ಟ್ 31ರ ಒಳಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಯಬೇಕಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಜಾಹ್ನವಿ ಸಖತ್ ಆಸಕ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲ, &quot;ಪಕ್ಷದ ನಾಯಕರು ಸೂಚಿಸಿದರೆ ನಾನು ಎಂಎಲ್&zwnj;ಎ ಅಥವಾ ಎಂಪಿ ಚುನಾವಣೆಗೆ ಸ್ಪರ್ಧಿಸಲೂ ಸಿದ್ಧಳಿದ್ದೇನೆ. ನನ್ನ ಇಚ್ಛೆಯನ್ನು ಈಗಾಗಲೇ ದಳಪತಿಗಳ ಮುಂದೆ ಇಟ್ಟಿದ್ದೇನೆ&quot; ಎನ್ನುವ ಮೂಲಕ ತಾವು ಕೇವಲ ಸ್ಟಾರ್ ಪ್ರಚಾರಕಿಯಾಗಿ ಉಳಿಯುವವರಲ್ಲ, ಬದಲಾಗಿ ಜನರ ಪ್ರತಿನಿಧಿಯಾಗಿ ವಿಧಾನಸೌಧ ಏರುವ ಛಲ ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಬಿಗ್&zwnj;ಬಾಸ್&zwnj;ನಲ್ಲಿ ಸಿಕ್ಕ ಸಂಭಾವನೆಗಿಂತ ಬಟ್ಟೆಗೇ ಹೆಚ್ಚು ಖರ್ಚು!&lt;/p&gt;&lt;p&gt;ಜಾಹ್ನವಿ ಅಂದ ಕೂಡಲೇ ನೆನಪಾಗುವುದು ಅವರ ಹೈ-ಕ್ಲಾಸ್ ಫ್ಯಾಷನ್. ಬಿಗ್&zwnj;ಬಾಸ್ ಮನೆಯಲ್ಲಿದ್ದಾಗ ಪ್ರತಿ ದಿನವೂ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಅವರು, ಇತ್ತೀಚೆಗೆ ಒಂದು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದರು. ಬಿಗ್&zwnj;ಬಾಸ್ ಕಾರ್ಯಕ್ರಮದಿಂದ ತಮಗೆ ಸಿಕ್ಕ ಸಂಭಾವನೆಗಿಂತಲೂ, ಅಲ್ಲಿ ಧರಿಸಿದ ಬಟ್ಟೆ ಮತ್ತು ಮೇಕಪ್&zwnj;ಗಾಗಿ ತಾವು ಲಕ್ಷಾಂತರ ರೂಪಾಯಿ ಹೆಚ್ಚು ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದರು. ಈ ವಿಚಾರ ಕೇಳಿ ನೆಟ್ಟಿಗರು ದಂಗಾಗಿದ್ದರು.&lt;/p&gt;&lt;p&gt;ವೈಯಕ್ತಿಕ ಜೀವನ ಮತ್ತು ಎರಡನೇ ಮದುವೆ ಬಗ್ಗೆ ಸ್ಪಷ್ಟನೆ:&lt;/p&gt;&lt;p&gt;ಬಿಗ್&zwnj;ಬಾಸ್ ಮನೆಯಲ್ಲಿದ್ದಾಗ ಜಾಹ್ನವಿ ಅವರ ವೈಯಕ್ತಿಕ ಜೀವನ, ವಿಚ್ಛೇದನ ಮತ್ತು ಮಾಜಿ ಪತಿಯ ಹೇಳಿಕೆಗಳು ಭಾರಿ ಸುದ್ದಿಯಾಗಿದ್ದವು. ಆದರೆ ಈಗ ಎಲ್ಲದಕ್ಕೂ ಪೂರ್ಣವಿರಾಮ ಹಾಕಿರುವ ಅವರು, &quot;ಸದ್ಯಕ್ಕೆ ನನಗೆ ಎರಡನೇ ಮದುವೆ ಆಗುವ ಯೋಚನೆಯೇ ಇಲ್ಲ. ನನ್ನ ಮಗನೇ ನನ್ನ ಸರ್ವಸ್ವ, ಅವನೇ ನನ್ನ ಪ್ರಪಂಚ. ಉಳಿದ ಸಮಯವನ್ನು ಸಮಾಜ ಸೇವೆ ಮತ್ತು ರಾಜಕೀಯಕ್ಕಾಗಿ ಮೀಸಲಿಡುತ್ತೇನೆ&quot; ಎಂದು ಖಡಕ್ ಆಗಿ ಹೇಳಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಬಿಗ್&zwnj;ಬಾಸ್ ಕಿರೀಟ ಮುಡಿಗೇರಿಸಿಕೊಳ್ಳದಿದ್ದರೂ ಜನರ ಮನ ಗೆದ್ದಿರುವ ಜಾಹ್ನವಿ, ಈಗ ರಾಜಕೀಯದಲ್ಲಿ ಯಾವ ರೀತಿಯ ಮೋಡಿ ಮಾಡಲಿದ್ದಾರೆ? ಜೆಡಿಎಸ್ ಪಕ್ಷಕ್ಕೆ ಈ ಗ್ಲಾಮರಸ್ ನಾಯಕಿಯ ಸೇರ್ಪಡೆಯಿಂದ ಎಷ್ಟು ಬಲ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/my-son-is-my-world-and-my-remaining-time-is-for-politics-and-social-service-says-bigg-boss-fame-jahnavi-for-plans/articleshow-gmmvvzg"/>
        </item>
        <item>
            <title><![CDATA[Karna Serial : ಮಧುಮಂಚದಲ್ಲಿ ನಿಧಿಗೆ ಮುತ್ತಿಟ್ಟ ಕರ್ಣ, ನಾಚಿನೀರಾದ ವೀಕ್ಷಕರ ಬೇಡಿಕೆ ಏನು?]]></title>
            <link>https://kannada.asianetnews.com/gallery/tv-talk/fans-are-happy-to-see-karna-kissing-nidhi-in-the-karna-serial-hx6p4b9</link>
            <guid isPermaLink="true">https://kannada.asianetnews.com/gallery/tv-talk/fans-are-happy-to-see-karna-kissing-nidhi-in-the-karna-serial-hx6p4b9</guid>
            <pubDate>Wed, 27 May 2026 16:07:32 +0530</pubDate>
            <description><![CDATA[&lt;p&gt;ಕರ್ಣ ಸೀರಿಯಲ್ ಫೈನಲಿ ಕರ್ಣ &ndash; ನಿಧಿ ಫಸ್ಟ್ ನೈಟ್ ಗೆ ಬಂದು ನಿಂತಿದೆ. ವೀಕ್ಷಕರ ಬಯಕೆಯಂತೆ ನಿಧಿ ಹಾಗೂ ಕರ್ಣನ ಮದುವೆಯಾಗಿದೆ. ಆದ್ರೆ ಮದುವೆ, ಪ್ರವೇಶದ ಮಧ್ಯೆ ಸೀರಿಯಲ್ ಸಾಕಷ್ಟು ಟ್ವಿಸ್ಟ್ ಗಳನ್ನು ಕಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmfqxktacbb26q2142z8rk3,imgname-karna-serial-1779877803642.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್ ಫೈನಲಿ ಕರ್ಣ &ndash; ನಿಧಿ ಫಸ್ಟ್ ನೈಟ್ ಗೆ ಬಂದು ನಿಂತಿದೆ. ವೀಕ್ಷಕರ ಬಯಕೆಯಂತೆ ನಿಧಿ ಹಾಗೂ ಕರ್ಣನ ಮದುವೆಯಾಗಿದೆ. ಆದ್ರೆ ಮದುವೆ, ಪ್ರವೇಶದ ಮಧ್ಯೆ ಸೀರಿಯಲ್ ಸಾಕಷ್ಟು ಟ್ವಿಸ್ಟ್ ಗಳನ್ನು ಕಂಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಿಧಿ ಹಾಗೂ ಕರ್ಣ ಕೊನೆಗೂ ಗಂಡ &ndash; ಹೆಂಡತಿಯಾಗಿದ್ದಾರೆ. ಮದುವೆ ನಂತ್ರ ನಿಧಿ ಹಾಗೂ ಕರ್ಣನ ಫಸ್ಟ್ ನೈಟ್ ಗೆ ಎಲ್ಲ ತಯಾರಿ ನಡೆದಿದೆ. ಕರ್ಣನನ್ನು ನೋಡಿದ ನಿಧಿ, ನಾಚಿ ನೀರಾಗಿದ್ದಾಳೆ. ಆಕೆ ಹತ್ತಿರ ಬರುವ ಕರ್ಣ, ದಾಂಪತ್ಯಕ್ಕೆ ಮುತ್ತಿನ ಮುನ್ನುಡಿ ಬರೆದಿದ್ದಾನೆ. ಕೊನೆಗೂ ಈ ಕ್ಷಣ ಬಂತ್ತು. ಇನ್ಮುಂದೆ ಹೆಮ್ಮೆಯಿಂದ ಹೇಳಿಕೊಳ್ತೇನೆ ನನ್ನ ಹೆಂಡ್ತಿ, ನನ್ನವರು ಅಂತ ಎಂದಿದ್ದಾನೆ ಕರ್ಣ.&lt;/p&gt;&lt;img&gt;&lt;p&gt;ಕರ್ಣ ಹಾಗೂ ನಿಧಿ ಮದುವೆಯಾಗಿದ್ದೇ ವೀಕ್ಷಕರಿಗೆ ದೊಡ್ಡ ಗಿಫ್ಟ್ ಆಗಿತ್ತು. ಕೊನೆಯವರೆಗೂ ಕರ್ಣ ನಿಧಿ ಮದುವೆ ನಡೆಯುತ್ತೇ ಅನ್ನೋದನ್ನು ನಂಬಲು ವೀಕ್ಷಕರು ಸಿದ್ಧ ಇರಲಿಲ್ಲ. ಆದ್ರೆ ನಿತ್ಯಾ ದೊಡ್ಡ ತ್ಯಾಗ ಮಾಡಿ, ಕರ್ಣನನ್ನು ನಿಧಿಗೆ ಬಿಟ್ಟುಕೊಟ್ಟಿದ್ದಾಳೆ. ಬೇಸರದಲ್ಲಿದ್ದ ವೀಕ್ಷಕರಿಗೆ ಕೊನೆಗೂ ಕರ್ಣ- ನಿಧಿ ಒಂದಾಗೋದನ್ನು ನೋಡುವ ಅವಕಾಶ ಸಿಕ್ಕಿದೆ.&lt;/p&gt;&lt;img&gt;&lt;p&gt;ಕರ್ಣನ ಮನೆಗೆ ಸಿದ್ದೆ ಒದ್ದು ನಿಧಿ ಬರ್ತಿದ್ದಂತೆ ದೊಡ್ಡ ಸತ್ಯ ಎಲ್ಲರ ಮುಂದೆ ಸ್ಫೋಟವಾಗಿದೆ. ನಿಧಿ ಹಾಗೂ ಕರ್ಣನ ಮದುವೆಗೆ ಅಡ್ಡಿಯಾಗಿದ್ದು ಯಾರು, ನಿತ್ಯಾ ಬಾಳಲ್ಲಿ ಆಟವಾಡಿದ ವ್ಯಕ್ತಿ ಯಾರು ಎಂಬ ಸತ್ಯವನ್ನು ಕರ್ಣ ಮನೆಯವರಿಗೆ ಹೇಳಿದ್ದಾನೆ. ರಮೇಶನ ಮುಖವಾಡ ಎಲ್ಲರ ಮುಂದೆ ಬಹಿರಂಗವಾಗ್ತಿದ್ದಂತೆ ಎಲ್ಲರೂ ದಂಗಾಗಿದ್ದಾರೆ. ರಮೇಶನನ್ನು ಮನೆಯಿಂದ ಹೊರಹಾಕುವ ಪ್ರಯತ್ನ ನಡೆದಿದೆ. ಆದ್ರೆ ನಿಧಿಯ ಮಾತಿಗೆ ಎಲ್ಲರೂ ಕರಗಿದ್ದು, ರಮೇಶನಿಗೆ ಇನ್ನೊಂದು ಅವಕಾಶ ನೀಡಿದ್ದಾರೆ.&lt;/p&gt;&lt;img&gt;&lt;p&gt;ನಿತ್ಯಾಗೆ ಅವಮಾನ ಮಾಡಿದ್ದ ತೇಜಸ್ ಈಗ ನಿತ್ಯಾ ಕ್ಷಮೆ ಕೇಳಿದ್ದಾನೆ. ಆದ್ರೆ ನಿತ್ಯಾ ಮದುವೆಯಾಗಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಲ್ಲದೆ, ತನಗೆ ಇನ್ನೊಂದು ಮದುವೆಯಾಗಿರುವ ವಿಷ್ಯವನ್ನು ನಿತ್ಯಾ ಮುಂದಿಟ್ಟಿದ್ದಾನೆ. ಈ ಮಧ್ಯೆ ಈ ಎಲ್ಲದರ ಹಿಂದೆ ಲೇಡಿ ಡಾನ್ ಒಬ್ಬರಿದ್ದಾರೆ ಎನ್ನುವುದನ್ನು ಸೂಕ್ಷ್ಮವಾಗಿ ತೋರಿಸಲಾಗಿದ್ದು, ಅದು ಯಾರು ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡ್ತಿದೆ.&lt;/p&gt;&lt;img&gt;&lt;p&gt;ಪ್ರೋಮೋ ನೋಡಿದ ವೀಕ್ಷಕರು, ನಿಧಿ- ಕರ್ಣನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದೇವೆ ಅಂತ ಕಮೆಂಟ್ ಮಾಡಿದ್ದಾರೆ. ಆದ್ರೆ ವೀಕ್ಷಕರಿಗೆ ಮೌನದ ರೋಮ್ಯಾನ್ಸ್ ಇಷ್ಟವಾಗ್ತಿಲ್ಲ. ಇಬ್ಬರ ಮಧ್ಯೆ ರೋಮ್ಯಾಂಟಿಕ್ ಮಾತುಗಳು ಬೇಕು, ನಿಧಿ ತನ್ನ ಪ್ರೀತಿಯನ್ನು ಕರ್ಣನ ಮುಂದೆ ಹೇಳಿಕೊಳ್ಬೇಕು ಎನ್ನುವ ಆಸೆ ವೀಕ್ಷಕರದ್ದು. ಇನ್ನಷ್ಟು ರಿಚ್ ಆಗಿರ್ಬೇಕಿತ್ತು ಮದುವೆ, ಫಸ್ಟ್ ನೈಟ್, ತುಂಬಾ ಸಿಂಪಲ್ ಆಯ್ತು ಎನ್ನುವ ಬೇಸರವನ್ನೂ ವೀಕ್ಷಕರು ತೋಡಿಕೊಂಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/tv-talk/fans-are-happy-to-see-karna-kissing-nidhi-in-the-karna-serial-hx6p4b9"/>
        </item>
        <item>
            <title><![CDATA[ಕೊನೆಯಾಯ್ತು ಶ್ರೀ ರಾಘವೇಂದ್ರ ಸ್ವಾಮಿಗಳ ತಾಯಿ ಗೋಪಿ ಪಾತ್ರ… ಶ್ರೀಲತಾ ಅನೂಪ್ ಭಾವುಕ]]></title>
            <link>https://kannada.asianetnews.com/gallery/tv-talk/sri-raghavendra-mahatme-actress-srilata-anoop-emotional-post-ihn83d4</link>
            <guid isPermaLink="true">https://kannada.asianetnews.com/gallery/tv-talk/sri-raghavendra-mahatme-actress-srilata-anoop-emotional-post-ihn83d4</guid>
            <pubDate>Mon, 25 May 2026 17:30:04 +0530</pubDate>
            <description><![CDATA[&lt;p&gt;Srilata Anoop: ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯ ಕತೆಯನ್ನು ಹೇಳುವ &lsquo;ಶ್ರೀ ರಾಘವೇಂದ್ರ ಮಹಾತ್ಮೆ&rsquo; ಧಾರಾವಾಹಿಯಲ್ಲಿ ಸ್ವಾಮಿಗಳ ಪೂರ್ವಾಶ್ರಮದ ತಾಯಿ ಗೋಪಿಯಾಗಿ ನಟಿಸಿದ ಶ್ರೀಲತಾ ಅನೂಪ್ ಪಾತ್ರವು ಕೊನೆಗೊಂಡಿದ್ದು, ನಟಿ ಭಾವುಕ ಪತ್ರ ಬರೆದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfg0p49syw1r6kvxqbqfsx4,imgname-srilata-anoop--6--1779710318729.jpg" type="image/jpeg" height="390" width="690"/>
            <content:encoded><![CDATA[&lt;p&gt;Srilata Anoop: ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯ ಕತೆಯನ್ನು ಹೇಳುವ &lsquo;ಶ್ರೀ ರಾಘವೇಂದ್ರ ಮಹಾತ್ಮೆ&rsquo; ಧಾರಾವಾಹಿಯಲ್ಲಿ ಸ್ವಾಮಿಗಳ ಪೂರ್ವಾಶ್ರಮದ ತಾಯಿ ಗೋಪಿಯಾಗಿ ನಟಿಸಿದ ಶ್ರೀಲತಾ ಅನೂಪ್ ಪಾತ್ರವು ಕೊನೆಗೊಂಡಿದ್ದು, ನಟಿ ಭಾವುಕ ಪತ್ರ ಬರೆದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಶ್ರೀಲತಾ ಅನೂಪ್ ಎಂದರೆ ಬಹುಶಃ ಯಾರಿಗೂ ತಿಳಿಯಲು ಸಾಧ್ಯವಿಲ್ಲ. ಆದರೆ ರಾಘವೇಂದ್ರ ಸ್ವಾಮಿಗಳ ತಾಯಿ ಗೋಪಿಕಾಂಬ ಎಂದರೆ ಖಂಡಿತಾ ನೆನಪಾಗಬಹುದು. ಆ ಪಾತ್ರಕ್ಕೆ ಜೀವ ತುಂಬಿ ನಟಿಸಿದವರು ಶ್ರೀಲತಾ ಅನೂಪ್. ಇದೀಗ ಶ್ರೀ ರಾಘವೇಂದ್ರ ಮಹಾತ್ಮೆ&rsquo; ಧಾರಾವಾಹಿಯಲ್ಲಿ ಗೋಪಿ ಪಾತ್ರವು ಕೊನೆಯಾಗಿದ್ದು, ನಟಿ ಭಾವುಕ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಟಿಯ ಸೋಶಿಯಲ್ ಮೀಡಿಯಾ ಪೋಸ್ಟ್ ಹೀಗಿದೆ&hellip; &lsquo;ಈ ಅದ್ಭುತ ಪ್ರಯಾಣವನ್ನು ನನಗೆ ಆಶೀರ್ವದಿಸಿದ್ದಕ್ಕಾಗಿ ಮತ್ತು ದೈವಿಕ ಕಥೆಯ ಭಾಗವಾಗಲು ನನಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಶ್ರೀ ಗುರು ರಾಯರಿಗೆ ನಾನು ತುಂಬಾ ಕೃತಜ್ಞಳಾಗಿದ್ದೇನೆ.... ಈ ಅನುಭವವು ನಿಜವಾಗಿಯೂ ಕಲಿಕೆ, ಭಕ್ತಿ ಮತ್ತು ಅನುಗ್ರಹದಿಂದ ತುಂಬಿದ ಆಶೀರ್ವಾದವಾಗಿದೆ.&lt;/p&gt;&lt;img&gt;&lt;p&gt;ನಮ್ಮ ನಿರ್ದೇಶಕ ನವೀನ್ ಕೃಷ್ಣ ಸರ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಪ್ರತಿಯೊಂದು ಹಂತದಲ್ಲೂ ನನಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ನಿರಂತರ ಬೆಂಬಲ, ಅಮೂಲ್ಯವಾದ ಮಾರ್ಗದರ್ಶನ ಮತ್ತು ನಟನೆಯ ಬಗ್ಗೆ ನೀವು ಹಂಚಿಕೊಂಡ ಜ್ಞಾನವು ನನಗೆ ನಟನೆಯನ್ನು ಕಲಿಯಲು, ಬೆಳೆಯಲು ಮತ್ತು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ.&lt;/p&gt;&lt;img&gt;&lt;p&gt;ಈ ಪಾತ್ರದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ, ಇಷ್ಟು ಅದ್ಭುತವಾದ ಅವಕಾಶವನ್ನು ನೀಡಿದ್ದಕ್ಕಾಗಿ ಮತ್ತು ಇಷ್ಟು ಅರ್ಥಪೂರ್ಣ ಪಾತ್ರಕ್ಕೆ ಜೀವ ತುಂಬಲು ನೆರವಾಗಿರುವುದಕ್ಕೆ ನಮ್ಮ ನಿರ್ಮಾಪಕ ಮಹೇಶ್ ಸುಖಧರೆ, ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಪ್ರತಿಯೊಂದು ಫ್ರೇಮ್ ಅನ್ನು ನಿಜವಾಗಿಯೂ ವಿಶೇಷವಾಗಿಸಿದ್ದಕ್ಕಾಗಿ ನಮ್ಮ ಕ್ಯಾಮೆರಾಮನ್ ರವಿ ಮತ್ತು ದಿಲೀಪ್ ಕುಮಾರ್ ಅವರಿಗೆ ವಿಶೇಷ ಕೃತಜ್ಞತೆಗಳು. ಆಡಿಷನ್&zwnj;ನ ಮೊದಲ ದಿನದಿಂದ ಇಲ್ಲಿಯವರೆಗೆ ನಿಮ್ಮ ಅಪಾರ ಸಹಾಯಗಳಿಗೆ, ಬೆಂಬಲಕ್ಕೆ ಅಂಕಿತಾ ಸುಖದರೆ, ಹರೀಶ್ ಜಯಕೃಷ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಇಂತಹ ಅದ್ಭುತ ವೇದಿಕೆಯನ್ನು ಒದಗಿಸಿದ್ದಕ್ಕಾಗಿ ಮತ್ತು ನಿರಂತರ ಬೆಂಬಲಕ್ಕಾಗಿ ಜೀ ಕನ್ನಡ, ಪೃಥ್ವಿರಾಜ್ ಕುಲಕರ್ಣಿ, ಮೂರ್ತಿ ಕೆನ್ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.&lt;/p&gt;&lt;img&gt;&lt;p&gt;ನನ್ನ ಪ್ರೀತಿಯ ಸಹ-ಕಲಾವಿದರಾದ ಯಧುಕೃಷ್ಣ, ಭವಾನಿ ಪುರೋಹಿತ್, ಮದನ್, ಸ್ಪರ್ಶ ಶೆಣೈ, ಚಂದ್ರಶೇಖರ್, ಸೌರಭ್ ಕುಲಕರ್ಣಿ, ಡ್ರಾಮಾ ಜೂನಿಯರ್ ಅನುರಾಗ್, ಬಿಂದು, ಪುಣ್ಯ ಬಸವರಾಜ್ ಅವರಿಗೆ ವಿಶೇಷ ಸೂಚನೆ ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೆ ನಾವು ಈ ಪ್ರಯಾಣವನ್ನು ಒಟ್ಟಿಗೆ ಹಂಚಿಕೊಂಡಿದ್ದೇವೆ&hellip; ನಿಮ್ಮೆಲ್ಲರೊಂದಿಗೆ ಕೆಲಸ ಮಾಡುವುದು ನಿಜಕ್ಕೂ ಗೌರವದ ವಿಷಯ. ಇದು ಕೇವಲ ದೃಶ್ಯಗಳು ಅಥವಾ ಪ್ರದರ್ಶನಗಳ ಬಗ್ಗೆ ಅಲ್ಲ&hellip; ಅದು ಒಂದು ಬಂಧ, ಕುಟುಂಬವಾಗಿತ್ತು, ನಾನು ಶಾಶ್ವತವಾಗಿ ನನ್ನೊಂದಿಗೆ ಸಾಗಿಸುವ ಭಾವನೆಯಾಗಿದೆ ಎಂದು ಭಾವುಕರಾಗಿ ಸಹ ಕಲಾವಿದರ ಬಗ್ಗೆ ಬರೆದಿದ್ದಾರೆ. .&lt;/p&gt;&lt;img&gt;&lt;p&gt;ನನ್ನ ಎಲ್ಲಾ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಿನಿಮ್ಮನ್ನು ಪಡೆದುದಕ್ಕಾಗಿ ನನಗೆ ಖುಷಿ ಇದೆ, ಅದ್ಭುತವಾದ ಪೋಸ್ಟ್&zwnj;ಗಳನ್ನು ನಿರಂತರವಾಗಿ ಹಂಚಿಕೊಳ್ಳುವ ಮೂಲಕ ಮತ್ತು ನಮ್ಮ ಕೆಲಸವು ಪ್ರತಿಯೊಬ್ಬ ಪ್ರೇಕ್ಷಕರನ್ನು ತುಂಬಾ ಎಚ್ಚರಿಕೆಯಿಂದ ತಲುಪಲು ಸಹಾಯ ಮಾಡಿದ್ದಕ್ಕಾಗಿ ಫ್ಯಾನ್ ಪೇಜ್ ಗಳಾದ @shreelatha_admirer @sri_ragavendra_mahathme_ ಅವರಿಗೆ ವಿಶೇಷ ಧನ್ಯವಾದಗಳು. ನಿಮ್ಮ ಸಮರ್ಪಣೆ ನಿಜವಾಗಿಯೂ ನನಗೆ ತುಂಬಾನೆ ಖುಷಿ ಕೊಟ್ಟಿದೆ ಎಂದಿದ್ದಾರೆ ಶ್ರೀಲತಾ.&lt;/p&gt;&lt;img&gt;&lt;p&gt;ಮತ್ತು ಕೊನೆಯದಾಗಿ, ನನಗೆ ಅಪಾರ ಪ್ರೀತಿ ಮತ್ತು ಬೆಂಬಲ ನೀಡಿದ ಎಲ್ಲಾ ಪ್ರೇಕ್ಷಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು... ನಿಮ್ಮ ಬೆಂಬಲ ಈ ಪ್ರಯಾಣವನ್ನು ನಿಜವಾಗಿಯೂ ಅರ್ಥಪೂರ್ಣವಾಗಿಸಿದೆ&hellip;ಶ್ರೀ ಗುರು ರಾಯರ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ. ಭಾರವಾದ ಹೃದಯದಿಂದ ಬೀಳ್ಕೊಡುತ್ತೇನೆ. ನಿಮ್ಮ, ಗೋಪಿ ಎಂದು ನಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/sri-raghavendra-mahatme-actress-srilata-anoop-emotional-post-ihn83d4"/>
        </item>
        <item>
            <title><![CDATA[ಫ್ಯಾಮಿಲಿ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ‘ಗೌರಿ ಕಲ್ಯಾಣ’ ನಟಿ Shilpa Kamath]]></title>
            <link>https://kannada.asianetnews.com/gallery/tv-talk/gowri-kalyana-actress-shilpa-kamath-birthday-celebration-photos-pngzgvc</link>
            <guid isPermaLink="true">https://kannada.asianetnews.com/gallery/tv-talk/gowri-kalyana-actress-shilpa-kamath-birthday-celebration-photos-pngzgvc</guid>
            <pubDate>Wed, 27 May 2026 23:22:33 +0530</pubDate>
            <description><![CDATA[&lt;p&gt;&lsquo;ಗೌರಿ ಕಲ್ಯಾಣ&rsquo; ಧಾರಾವಾಹಿ ನಟಿ ಶಿಲ್ಪಾ ಕಾಮತ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಸಿಂಪಲ್ ಆಗಿ ಆಚರಿಸಿಕೊಂಡಿದ್ದು, ಮುದ್ದಾದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksn8z28cg7mexh4vvqjhw9vx,imgname-shilpa-kamath--1--1779904252172.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಗೌರಿ ಕಲ್ಯಾಣ&rsquo; ಧಾರಾವಾಹಿ ನಟಿ ಶಿಲ್ಪಾ ಕಾಮತ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಸಿಂಪಲ್ ಆಗಿ ಆಚರಿಸಿಕೊಂಡಿದ್ದು, ಮುದ್ದಾದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆ ನಟಿ ಶಿಲ್ಪಾ ಕಾಮತ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ತಮ್ಮ ಅಪ್ಪ ಅಮ್ಮ ಮತ್ತು ಸ್ನೇಹಿತರ ಜೊತೆಗೆ ಸಿಂಪಲ್ ಆಗಿ ಆದರೆ ಗ್ರ್ಯಾಂಡ್ ರೆಸ್ಟೋರೆಂಟಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇಲ್ಲಿದೆ ಸುಂದರವಾದ ಫೋಟೊಗಳು&lt;/p&gt;&lt;img&gt;&lt;p&gt;ನಿಜವಾಗಿಯೂ ಆಶೀರ್ವಾದ ಮತ್ತು ಪ್ರೀತಿಯಿಂದ ತುಂಬಿ ತುಳುಕುತ್ತಿರುವ ಭಾವನೆ. ನನ್ನ ಹುಟ್ಟುಹಬ್ಬವನ್ನು ಎಲ್ಲಾ ಸುಂದರ ಸರ್ಪ್ರೈಸ್, ಪ್ರೀತಿ ಮತ್ತು ಪ್ರಯತ್ನಗಳೊಂದಿಗೆ ವಿಶೇಷವಾಗಿಸಿದ್ದಕ್ಕಾಗಿ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ತುಂಬಾ ಧನ್ಯವಾದಗಳು.&lt;/p&gt;&lt;img&gt;&lt;p&gt;ನನಗೆ ಶುಭ ಹಾರೈಸಲು ಸಮಯ ತೆಗೆದುಕೊಂಡ ಎಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು. ನಿಮ್ಮಲ್ಲಿ ಅನೇಕರಿಗೆ ರಿಪ್ಲೈ ಮಾಡಲು ನಾನು ಮಿಸ್ ಮಾಡಿರಬಹುದು, ಮತ್ತು ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ, ಆದರೆ ನಿಮ್ಮ ಎಲ್ಲಾ ಸಂದೇಶಗಳನ್ನು ನಾನು ನೋಡಿದ್ದೇನೆ ಮತ್ತು ಅವು ನಿಜವಾಗಿಯೂ ಅರ್ಥಪೂರ್ಣವಾಗಿದೆ. ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳಿಗೆ ಮತ್ತೊಮ್ಮೆ ಧನ್ಯವಾದಗಳು. ದಯವಿಟ್ಟು ಯಾವಾಗಲೂ ಇದೇ ರೀತಿ ನನ್ನನ್ನು ಬೆಂಬಲಿಸಿ ಮತ್ತು ಆಶೀರ್ವದಿಸಿ.&lt;/p&gt;&lt;img&gt;&lt;p&gt;ಶಿಲ್ಪಾ ಕಾಮತ್ ಹುಟ್ಟುಹಬ್ಬ ಸಿಂಪಲ್ ಆಗಿ, ಆದರೆ ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಗ್ರ್ಯಾಂಡ್ ಹೋಟೇಲ್ ಒಂದರಲ್ಲಿ ಗ್ರ್ಯಾಂಡ್ ಸೆಲೆಬ್ರೇಟ್ ಮಾಡಿದ್ದಾರೆ. ಶಿಲ್ಪಾ ಕಾಮತ್ ಗೌನ್ ಧರಿಸಿ, ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಸಹ ನಟಿ ವಿಶ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಗೆ ಕೆಲವು ವರ್ಷಗಳ ಹಿಂದಷ್ಟೆ ಪರಿಚಿತರಾದ ನಟಿ ಶಿಲ್ಪಾ ಕಾಮತ್. &lsquo;ನೂರು ಜನ್ಮಕೂ&rsquo; ಧಾರಾವಾಹಿಯಿಂದ ತಮ್ಮ ನಟನೆ ಜರ್ನಿ ಶುರು ಮಾಡಿ, ಬಳಿಕ ಕಾಮಿಡಿ ಕಿಚನ್ ಸ್ಪರ್ಧಿಯಾಗಿದ್ದರು, ಇದೀಗ &lsquo;ಗೌರಿ ಕಲ್ಯಾಣ&rsquo;ದಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಮೂಲತಃ ಉಡುಪಿಯವರಾದ ಶಿಲ್ಪಾ, ಹುಟ್ಟಿ ಬೆಳೆದಿದ್ದು ಎಲ್ಲವೂ ಮಂಗಳೂರಿನಲ್ಲಿ. ಸದ್ಯ ನಟನೆಗಾಗಿ ಬೆಂಗಳೂರಿನಲ್ಲಿ ನೆಲೆಯಾಗಿದ್ದಾರೆ. ಅಂದ ಹಾಗೆ ಶಿಲ್ಪಾ ಕಾಮತ್ ಎಂಕಾಂ ಪದವೀಧರೆ. ವಿದ್ಯಭ್ಯಾಸ ಮುಗಿದ ಮೇಲೆ ಒಂದಷ್ಟು ಸಮಯ ಬ್ಯಾಂಕ್&zwnj;ನಲ್ಲಿ ಕೆಲಸ ಮಾಡಿದ್ದರು. ನಂತರ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು.&lt;/p&gt;&lt;img&gt;&lt;p&gt;ಶಿಲ್ಪಾ ಕಾಮತ್ ಕಿರುತೆರೆಯಲ್ಲಿ ಬಣ್ಣ ಹಚ್ಚುವ ಮುನ್ನ ಮಾಡೆಲಿಂಗ್&zwnj;ನಲ್ಲಿ ಗುರುತಿಸಿಕೊಂಡಿದ್ದರು. 2023ರಲ್ಲಿ 'ಮಿಸ್ ಮಂಗಳೂರು' ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಬಳಿಕ ಕಿರುಚಿತ್ರವೊಂದರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/gowri-kalyana-actress-shilpa-kamath-birthday-celebration-photos-pngzgvc"/>
        </item>
        <item>
            <title><![CDATA[ನನ್ನ ದುಡ್ಡೆಲ್ಲ ಹೊಡ್ಕೊಂಡು ಹೋದ; ಮೈಸೂರಿನ ಮಾಜಿ ಪತಿ ಕೃತ್ಯದ ಬಗ್ಗೆ ಇಂಚಿಂಚೂ ಬಿಚ್ಚಿಟ್ಟ Rakhi Sawant]]></title>
            <link>https://kannada.asianetnews.com/gallery/tv-talk/bigg-boss-rakhi-sawant-on-ex-husband-aadil-khan-mysore-q5v5fd6</link>
            <guid isPermaLink="true">https://kannada.asianetnews.com/gallery/tv-talk/bigg-boss-rakhi-sawant-on-ex-husband-aadil-khan-mysore-q5v5fd6</guid>
            <pubDate>Wed, 27 May 2026 16:00:11 +0530</pubDate>
            <description><![CDATA[&lt;p&gt;Bigg Boss Rakhi Sawant On Husband Adil Khan Durrani: ಬಿಗ್&zwnj; ಬಾಸ್&zwnj; ಶೋ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ನಗಿಸುವ ರಾಖಿ ಸಾವಂತ್&zwnj; ಅವರು ಮೈಸೂರಿನ ಆದಿಲ್&zwnj; ಖಾನ್&zwnj; ಬಗ್ಗೆ ಭಾರತಿ ಟಿವಿ ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಾಜಿ ಪತಿ ಬಗ್ಗೆ ಆರೋಪ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmfep6ey8w0wk2sr4nsyakb,imgname-new-project---2026-05-27t155053.055-1779877501134.jpg" type="image/jpeg" height="390" width="690"/>
            <content:encoded><![CDATA[&lt;p&gt;Bigg Boss Rakhi Sawant On Husband Adil Khan Durrani: ಬಿಗ್&zwnj; ಬಾಸ್&zwnj; ಶೋ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ನಗಿಸುವ ರಾಖಿ ಸಾವಂತ್&zwnj; ಅವರು ಮೈಸೂರಿನ ಆದಿಲ್&zwnj; ಖಾನ್&zwnj; ಬಗ್ಗೆ ಭಾರತಿ ಟಿವಿ ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಾಜಿ ಪತಿ ಬಗ್ಗೆ ಆರೋಪ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;Bigg Boss Rakhi Sawant On Husband Adil Khan: &ldquo;ನನ್ನ ಮದುವೆ ಆಗೋಕೆ ಬಂದವನು ನನ್ನನ್ನು ಲೂಠಿ ಮಾಡಿದನು. ನಾನು ಎಷ್ಟು ಹಣವನ್ನು ಸೇವ್&zwnj; ಮಾಡಿದ್ದೀನೋ ಅದನ್ನೆಲ್ಲ ಲೂಠಿ ಹೊಡೆದರು. ನಾನು ಸಿಕ್ಕಾಪಟ್ಟೆ ಮಾತನಾಡುತ್ತೀನಿ ಎಂದು ನಾನು ಅತ್ತರೂ ಕೂಡ, ಜನರು ಸೀರಿಯಸ್&zwnj; ಆಗಿ ತಗೊಳೋದಿಲ್ಲ. ನಾನು ಅತ್ತರೂ ಕೂಡ ಜನರು ನಗುತ್ತಾರೆ&rdquo; ಎಂದು ರಾಖಿ ಸಾವಂತ್&zwnj; ಹೇಳಿದ್ದಾರೆ.&lt;/p&gt;&lt;img&gt;&lt;p&gt;&ldquo;ಮುಸ್ಲಿಂ ಹುಡುಗನನ್ನು ನಾನು ಮದುವೆ ಆಗು ಅಂತ ತಾಯಿ ಹೇಳುತ್ತಿದ್ದಳು. ನಾನು ಮದುವೆ ಆದರೆ ನಿನ್ನ ಕಥೆ ಏನು ಎಂದು ನಾನು ತಾಯಿಗೆ ಹೇಳಿದೆ. ನಾನು ರೆಸ್ಟೋರೆಂಟ್&zwnj; ಅಥವಾ ಇನ್ನು ಯಾವುದಾದರೂ ಜಾಗಕ್ಕೆ ಹೋಗಿ ಮದುವೆ ಆಗು ಅಂತ ಯಾರನ್ನಾದರೂ ಕೇಳಬೇಕಾ? ನನ್ನ ಫ್ರೆಂಡ್&zwnj; ಒಬ್ಬನಿದ್ದನು, ಅವನೇ ನನ್ನ ಎಕ್ಸ್.&zwnj; ನನ್ನನ್ನು ಭೇಟಿಯಾಗಿ ನನ್ನ ಹಣವನ್ನೆಲ್ಲ ಹಾಳು ಮಾಡಿದ&rdquo; ಎಂದು ರಾಖಿ ಸಾವಂತ್&zwnj; ಹೇಳಿದ್ದಾರೆ.&lt;/p&gt;&lt;img&gt;&lt;p&gt;&ldquo;ನನ್ನ ಜೀವನ ಚೆನ್ನಾಗಿ ಆಯ್ತು, ಸೆಟಲ್&zwnj; ಆಯ್ತು ಎಂದುಕೊಂಡೆ.&zwnj; ನನ್ನ ಜೀವನ ಹಾಳಾಯ್ತು. ಒಂದು ಆಪ್&zwnj;ನಲ್ಲಿ ನನಗೆ ರಿತೇಶ್ ಪರಿಚಯ ಆದ, ಆಪ್&zwnj;ನಲ್ಲಿ ನಾನು ಕೋಟಿಗಟ್ಟಲೇ ಹಣ ದುಡಿದೆ. ಮುಂದಿನ ಜನ್ಮದಲ್ಲಿ ನನಗೆ ತಂದೆ-ತಾಯಿ ಸಿಗೋದೇ ಬೇಡ, ನನ್ನನ್ನು ಏಲಿಯನ್&zwnj; ಆದರೆ ಸಾಕು, ರಿತೇಶ್&zwnj; ನನಗೆ ತುಂಬ ಸಹಾಯ ಮಾಡಿದ್ದಾನೆ. ಬಿಗ್&zwnj; ಬಾಸ್&zwnj;ಗೆ ನನ್ನನ್ನು ಕರೆದುಕೊಂಡು ಹೋಗು ಎಂದು ಹೇಳಿದನು. ನಾನು ನನ್ನ ಪತಿ ಎಂದು ಬಿಗ್&zwnj;ಬಾಸ್&zwnj; ಶೋಗೆ ಹೋದೆ, ಸಲ್ಮಾನ್&zwnj; ಖಾನ್&zwnj; ಅವರು ನಮ್ಮಿಬ್ಬರಿಗೂ ಬೈದರು. ರಾಕೇಶ್&zwnj; ಪತ್ನಿ ಮೀಡಿಯಾದಲ್ಲಿ ರಾಖಿ ನನ್ನ ಪತಿಯನ್ನು ಕರೆದುಕೊಂಡು ಹೋದಳು ಎಂದು ಹೇಳಿದಳು. ಈಗ ರಾಕೇಶ್&zwnj;ಗೂ ಡಿವೋರ್ಸ್&zwnj; ಆಗಿದೆ, ನನ್ನಿಂದಲೇ ಡಿವೋರ್ಸ್&zwnj; ಆಗಿದೆ&quot; ಎಂದು ರಾಖಿ ಸಾವಂತ್&zwnj; ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಮೈಸೂರು ಮೂಲದ ಆದಿಲ್&zwnj; ಖಾನ್&zwnj; ಜೊತೆ ರಾಖಿ ಸಾವಂತ್&zwnj; ಅವರು ಸಾಕಷ್ಟು ಓಡಾಟ ಮಾಡಿದ್ದರು. ಆದಿಲ್&zwnj;ಗೂ ರಾಖಿಗೂ ಸಿಕ್ಕಾಪಟ್ಟೆ ವಯಸ್ಸಿನ ಅಂತರ ಇತ್ತು. ಆರಂಭದಲ್ಲಿ ಆದಿಲ್&zwnj; ಅವರೇ ರಾಖಿಗೆ ಕಾರ್&zwnj; ಗಿಫ್ಟ್&zwnj; ಮಾಡಿದ್ದಾರೆ, ಗೋಲ್ಡ್&zwnj; ಮೊಬೈಲ್&zwnj; ಗಿಫ್ಟ್&zwnj; ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ಆ ಬಳಿಕ ಇವರಿಬ್ಬರ ಮಧ್ಯೆ ಮನಸ್ತಾಪ ಆಗಿದ್ದು, ಆದಿಲ್&zwnj; ಅವರು ಡಿವೋರ್ಸ್&zwnj; ನೀಡಿದ್ದಾರೆ. ರಾಖಿ ಸಾವಂತ್&zwnj; ಅವರು ಮೈಸೂರಿನ ಆದಿಲ್&zwnj; ಮನೆಗೆ ಬಂದು ಕೂಡ ಜಗಳ ಆಡಿದ್ದರು.&lt;/p&gt;&lt;img&gt;&lt;p&gt;&ldquo;ತಾಯಿ ಇದ್ದರೆ ನನ್ನ ಆರೋಗ್ಯದ ಬಗ್ಗೆ ಕೇಳುತ್ತಿದ್ದಳು, ಊಟ ಆಯ್ತಾ ಎಂದು ಕೇಳುತ್ತಿದ್ದಳು. ಈಗ ನಾನು ಮನೆಯಲ್ಲಿ ಒಬ್ಬಳೇ ಆಗಿದ್ದು, ಯಾರೂ ಏನೂ ಕೇಳೋವವರಿಲ್ಲ. ಪದೇ ಪದೇ ಜೈಲಿಗೆ ಹೋಗುತ್ತಿದ್ದೆ. ದುಬೈನಲ್ಲಿ ಬದುಕುತ್ತಿದ್ದೆ, ನಾನು ಭಾರತದಿಂದ ದೂರ ಆಗಿದ್ದೇನೆ ಎಂದು ಅನಿಸಿತು&rdquo; ಎಂದು ರಾಖಿ ಸಾವಂತ್&zwnj; ಅವರು ಹೇಳಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/bigg-boss-rakhi-sawant-on-ex-husband-aadil-khan-mysore-q5v5fd6"/>
        </item>
        <item>
            <title><![CDATA[Amruthadhaare: ಭೂಮಿಕಾಗೆ ಮತ್ತೊಂದು ಮಗುವಾಗೋ ಟೈಮ್​ ಬಂದಾಯ್ತು? ಶ್ರೀರಸ್ತು ಶುಭಮಸ್ತು ರಿಪೀಟ್ಸ್]]></title>
            <link>https://kannada.asianetnews.com/gallery/entertainment/amruthadhaare-kannada-serial-twist-bhoomika-will-delivery-another-child-suc-qcq1yy9</link>
            <guid isPermaLink="true">https://kannada.asianetnews.com/gallery/entertainment/amruthadhaare-kannada-serial-twist-bhoomika-will-delivery-another-child-suc-qcq1yy9</guid>
            <pubDate>Wed, 27 May 2026 12:40:12 +0530</pubDate>
            <description><![CDATA[ಮಕ್ಕಳಿಲ್ಲದ ಮಹಿಮಾಗಾಗಿ ಭೂಮಿಕಾ ಮತ್ತೊಂದು ಮಗುವನ್ನು ಹೆರುತ್ತಾಳಾ ಎಂಬ ಪ್ರಶ್ನೆ ಅಮೃತಧಾರೆ ಸೀರಿಯಲ್​ನಲ್ಲಿ ಮೂಡಿದೆ. ಜ್ಯೋತಿಷಿಯ ಭವಿಷ್ಯದಂತೆ ಹೊಸ ಮಗು ಗೌತಮ್ ಪ್ರಾಣಕ್ಕೆ ಕಂಟಕ ತಂದರೆ, ಆ ಮಗು ಮುಂದೆ ವಿಲನ್ ಆಗುವ ಸಾಧ್ಯತೆಯ ಬಗ್ಗೆ ಕಥೆ ಕುತೂಹಲ ಕೆರಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksm49brhch33dcq4y8vsm088,imgname-amruthadhaare-serial-1779865792273.jpg" type="image/jpeg" height="390" width="690"/>
            <content:encoded><![CDATA[ಮಕ್ಕಳಿಲ್ಲದ ಮಹಿಮಾಗಾಗಿ ಭೂಮಿಕಾ ಮತ್ತೊಂದು ಮಗುವನ್ನು ಹೆರುತ್ತಾಳಾ ಎಂಬ ಪ್ರಶ್ನೆ ಅಮೃತಧಾರೆ ಸೀರಿಯಲ್​ನಲ್ಲಿ ಮೂಡಿದೆ. ಜ್ಯೋತಿಷಿಯ ಭವಿಷ್ಯದಂತೆ ಹೊಸ ಮಗು ಗೌತಮ್ ಪ್ರಾಣಕ್ಕೆ ಕಂಟಕ ತಂದರೆ, ಆ ಮಗು ಮುಂದೆ ವಿಲನ್ ಆಗುವ ಸಾಧ್ಯತೆಯ ಬಗ್ಗೆ ಕಥೆ ಕುತೂಹಲ ಕೆರಳಿಸಿದೆ.&lt;img&gt;&lt;p&gt;​ಅಮೃತಧಾರೆ ಸೀರಿಯಲ್​ (Amruthadhaare serial) ಇದೀಗ ರೋಚಕ ಹಂತ ತಲುಪಿದೆ. ಮಕ್ಕಳಾಗದ ಮಹಿಮಾ ದಂಪತಿಗೆ ಮಿಂಚುವನ್ನು ನೀಡುವಂತೆ ಭೂಮಿಕಾ ಅಮ್ಮ ಸಲಹೆ ಕೊಟ್ಟಾಗಿದೆ. ಆದರೆ, ಮಿಂಚು ತಮ್ಮ ಹೆತ್ತ ಪುತ್ರಿ ಎಂದು ಅರಿವೇ ಇರದಿದ್ದರೂ, ಆಕೆಯನ್ನು ಹೇಗೆ ಕೊಟ್ಟಾರು ಭೂಮಿಕಾ ಮತ್ತು ಗೌತಮ್​?&lt;/p&gt;&lt;img&gt;&lt;p&gt;ಇದರ ನಡುವೆಯೇ, ಮಹಿಮಾಳನ್ನು ಸಮಾಧಾನ ಮಾಡಲು ಮಗು ಬೇಕೇ ಬೇಕು. ಅದೇ ಇನ್ನೊಂದೆಡೆ ಭೂಮಿಕಾಗೆ ಇನ್ನೊಂದು ಹೆಣ್ಣುಮಗು ಹುಟ್ಟತ್ತೆ, ಅದರಿಂದ ಗೌತಮ್​ ಪ್ರಾಣಕ್ಕೆ ಕಂಟಕ ಇದೆ ಎನ್ನುವ ಮಾತನ್ನು ಜ್ಯೋತಿಷಿಗಳು ಹೇಳಿದ್ದು, ಸೀರಿಯಲ್​ ಜ್ಯೋತಿಷಿಗಳ ಮಾತು ನಿಜವಾಗಲೇಬೇಕಿದೆ.&lt;/p&gt;&lt;img&gt;&lt;p&gt;ಇವನ್ನೆಲ್ಲಾ ನೋಡಿದ್ರೆ ಮಹಿಮಾಗೆ ಕೊಡುವ ಸಲುವಾಗಿ ಭೂಮಿಕಾ-ಗೌತಮ್​ ಮತ್ತೊಂದು ಮಗುವನ್ನು ಮಾಡಿಕೊಳ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ.&lt;/p&gt;&lt;img&gt;&lt;p&gt;ಹಾಗೆ ಆದಲ್ಲಿ ಶ್ರೀರಸ್ತು ಶುಭಮಸ್ತು ಸೀರಿಯಲ್​ ರಿಪೀಟ್​ ಆಗೋ ಸಾಧ್ಯತೆ ಇದೆ. ಏಕೆಂದರೆ, ಅಲ್ಲಿ ಕೂಡ ತುಳಸಿ ಮಗುವಾಗದ ತನ್ನ ಸೊಸೆ ಪೂರ್ಣಿಗಾಗಿ ಮಗುವನ್ನು ಹೆತ್ತು ಕೊಟ್ಟಿದ್ದಳು. ಅದೇ ರೀತಿ ಮಹಿಮಾಗಾಗಿ ಭೂಮಿಕಾ ಮಗು ಹೆರುತ್ತಾಳಾ ಎನ್ನುವುದು ಸದ್ಯಕ್ಕೆ ಇರುವ ಸಂದೇಹ.&lt;/p&gt;&lt;img&gt;&lt;p&gt;ಒಂದು ವೇಳೆ ಹೀಗಾದರೆ ಅದೇ ಮಗು, ತನ್ನನ್ನು ಬೇರೆಯವರಿಗೆ ಕೊಟ್ಟ ಕಾರಣ ಸಿಟ್ಟಾಗಿ ಅಪ್ಪ-ಅಮ್ಮನ ಮೇಲೆ ದ್ವೇಷ ಸಾಧಿಸ್ತಾಳಾ ಅಥವಾ ಆಕೆ ಜೈದೇವನ ಕೈಗೆ ಸಿಕ್ಕು ಆತ ಬ್ರೈನ್​ವಾಷ್​ ಮಾಡ್ತಾನಾ ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/amruthadhaare-kannada-serial-twist-bhoomika-will-delivery-another-child-suc-qcq1yy9"/>
        </item>
        <item>
            <title><![CDATA[Shocking- Bigg Boss: ಅಯ್ಯೋ, ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆಯಲ್ಲೇ ಭಾರೀ ಅವಮಾನ; ಅದ್ಯಾಕೆ ಹಾಗೆಲ್ಲಾ ಮಾಡಿದ್ದು?]]></title>
            <link>https://kannada.asianetnews.com/gallery/tv-talk/bigg-boss-contestant-kavya-shaiva-insulted-on-stage-find-out-what-transpired-after-her-mic-was-snatched-away-xxx1td1</link>
            <guid isPermaLink="true">https://kannada.asianetnews.com/gallery/tv-talk/bigg-boss-contestant-kavya-shaiva-insulted-on-stage-find-out-what-transpired-after-her-mic-was-snatched-away-xxx1td1</guid>
            <pubDate>Mon, 25 May 2026 20:06:51 +0530</pubDate>
            <description><![CDATA[&lt;p&gt;ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮಾಡಿದ್ದಕ್ಕೆ ಕಾವ್ಯಾ ಕಣ್ಣೀರು ಹಾಕಿದರು..!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfr05d2jg3pp2363pxg5712,imgname-kavya-shaiva-1779718690210.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮಾಡಿದ್ದಕ್ಕೆ ಕಾವ್ಯಾ ಕಣ್ಣೀರು ಹಾಕಿದರು..!&lt;/p&gt;&lt;img&gt;&lt;p&gt;ಬಿಗ್ ಬಾಸ್ ಕಾವ್ಯ ಶೈವಗೆ ಕಲಬುರಗಿಯಲ್ಲಿ ಅವಮಾನ! ಕಣ್ಣೀರು ಹಾಕಿದ್ರಾ 'ಬಜಾರಿ' ಕುವರಿ?&lt;/p&gt;&lt;p&gt;ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಮಾತಾಗಿದ್ದ ಕ್ಯೂಟ್ ಅಂಡ್ ಬೋಲ್ಡ್ ಬೆಡಗಿ ಕಾವ್ಯ ಶೈವ (Kavya Shaiva) ಅವರಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್. ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ 'ಬಜಾರಿ' ಸ್ಟೈಲ್ ಮೂಲಕ ಫೈನಲ್ ಹಂತದವರೆಗೆ ತಲುಪಿ ಜನರ ಮನಗೆದ್ದಿದ್ದ ಕಾವ್ಯ, ಹೊರಗೆ ಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೆ, ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ನಟಿಗೆ ಅಕ್ಷರಶಃ ಶಾಕ್ ಕಾದಿತ್ತು! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಆ ಸೀಕ್ರೆಟ್ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಸೆಲ್ಫಿ ಕ್ರೇಜ್.. ಆಯೋಜಕರ ಕಿರಿಕ್!&lt;/p&gt;&lt;p&gt;ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾವ್ಯ ಶೈವ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾವ್ಯ ಅವರನ್ನ ನೋಡಲು ಅಲ್ಲಿ ಅಭಿಮಾನಿಗಳು ಜೇನುಗೂಡಿನಂತೆ ಮುತ್ತಿಕೊಂಡಿದ್ದರು. ಯಾವಾಗ ಕಾವ್ಯ ವೇದಿಕೆ ಮೇಲೆ ಬಂದರೋ, ಅಭಿಮಾನಿಗಳಿಗೆ ಸೆಲ್ಫಿ ತಗೊಳ್ಳೋಕೆ ಅದೇನು ಆತುರವೋ ಗೊತ್ತಿಲ್ಲ! ಸೀದಾ ಸ್ಟೇಜ್ ಹತ್ತೋಕೆ ಶುರು ಮಾಡಿದರು. ಆಗ ಶುರುವಾಯ್ತು ನೋಡಿ ಅಸಲಿ ಕಿರಿಕ್. ಆಯೋಜಕರು ಅಭಿಮಾನಿಗಳನ್ನು ತಡೆಯಲು ಹೋಗಿ ಅಲ್ಲಿ ಗದ್ದಲ ಸೃಷ್ಟಿಯಾಯಿತು.&lt;/p&gt;&lt;img&gt;&lt;p&gt;ವೇದಿಕೆ ಮೇಲೆಯೇ ಮೈಕ್ ಕಿತ್ತಾಟ!&lt;/p&gt;&lt;p&gt;ಕಾರ್ಯಕ್ರಮ ಸುಗಮವಾಗಿ ಸಾಗುತ್ತಿದೆ ಎನ್ನುವಾಗಲೇ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಕಾವ್ಯ ಶೈವ ಅವರು ಮೈಕ್ ಹಿಡಿದು ಮಾತನಾಡಲು ಮುಂದಾದಾಗ, ಅಲ್ಲಿದ್ದ ಒಬ್ಬ ವ್ಯಕ್ತಿ (ಸ್ಥಳೀಯ ಸಿಬ್ಬಂದಿ ಅಥವಾ ಆಯೋಜಕ ಎನ್ನಲಾಗಿದೆ) ಏಕಾಏಕಿ ಕಾವ್ಯ ಅವರ ಬಳಿ ಬಂದು, ಅವರ ಕೈಯಲ್ಲಿದ್ದ ಮೈಕ್ ಅನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನಿಸಿದ!&lt;/p&gt;&lt;img&gt;&lt;p&gt;ಒಬ್ಬ ಸೆಲೆಬ್ರಿಟಿ, ಅದೂ ಒಬ್ಬ ಹೆಣ್ಣುಮಗಳು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು ನೋಡಿ ಅಲ್ಲಿದ್ದವರು ಬೆಚ್ಚಿಬಿದ್ದರು. ಸಾವಿರಾರು ಜನರ ಮುಂದೆ ಈ ರೀತಿ ಮೈಕ್ ಕಿತ್ತುಕೊಂಡಿದ್ದು ಕಾವ್ಯ ಅವರಿಗೆ ಆದ ದೊಡ್ಡ ಅವಮಾನವಾಗಿತ್ತು. ಕಾವ್ಯ ಒಂದು ಕ್ಷಣ ಸ್ತಬ್ದರಾಗಿ ಹೋದರು.&lt;/p&gt;&lt;img&gt;&lt;p&gt;ಸುಮ್ಮನೆ ಬಿಡ್ತಾರಾ ಕಾವ್ಯ? ಶುರುವಾಯ್ತು ವಾರ್!&lt;/p&gt;&lt;p&gt;ನಮಗೆಲ್ಲಾ ಗೊತ್ತಿರುವಂತೆ ಕಾವ್ಯ ಶೈವ ಏನೂ ಅಂದ್ರೆ ಸುಮ್ಮನೆ ಕೂರುವವರಲ್ಲ. ಬಿಗ್ ಬಾಸ್ ಮನೆಯಲ್ಲೇ ಅಷ್ಟೊಂದು ಟಕ್ಕರ್ ಕೊಟ್ಟಿದ್ದ ಅವರು, ವೇದಿಕೆ ಮೇಲೆ ಆದ ಅವಮಾನವನ್ನು ಸಹಿಸಿಕೊಳ್ಳಲಿಲ್ಲ. &quot;ಒಬ್ಬ ನಟಿಗೆ ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಅವಮಾನ ಮಾಡುವುದಾ? ನಿಮ್ಮ ನಡೆ ಸರಿಯಿಲ್ಲ&quot; ಎಂದು ಅವರು ನೇರವಾಗಿಯೇ ಆಯೋಜಕರನ್ನು ಪ್ರಶ್ನಿಸಿದರು. ಅಲ್ಲಿಗೆ ವೇದಿಕೆ ಮೇಲೆ ಮಾತಿನ ಚಕಮಕಿ ಜೋರಾಯಿತು. ಅಭಿಮಾನಿಗಳು ಕೂಡ ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದರು.&lt;/p&gt;&lt;p&gt;ಮನನೊಂದು ವೇದಿಕೆ ತೊರೆದ ನಟಿ!&lt;/p&gt;&lt;img&gt;&lt;p&gt;ಕಾರ್ಯಕ್ರಮದಲ್ಲಿ ಭದ್ರತೆಯ ಕೊರತೆ ಮತ್ತು ಸಂಘಟಕರ ಬೇಜವಾಬ್ದಾರಿಯಿಂದ ಮನನೊಂದ ಕಾವ್ಯ ಶೈವ, ಅರ್ಧಕ್ಕೇ ಕಾರ್ಯಕ್ರಮವನ್ನು ಬಿಟ್ಟು ಹೊರನಡೆದರು. &quot;ನನಗೆ ಗೌರವ ಇಲ್ಲದ ಕಡೆ ನಾನು ಇರಲಾರೆ&quot; ಎನ್ನುವ ಸಂದೇಶವನ್ನು ನೀಡಿ ಅವರು ಅಲ್ಲಿಂದ ನಿರ್ಗಮಿಸಿದರು.&amp;nbsp;&lt;/p&gt;&lt;img&gt;&lt;p&gt;ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾವ್ಯ ಅಭಿಮಾನಿಗಳು ಆಯೋಜಕರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. &quot;ಸೆಲೆಬ್ರಿಟಿಗಳನ್ನು ಕರೆಸಿದ ಮೇಲೆ ಅವರಿಗೆ ಸರಿಯಾದ ಭದ್ರತೆ ಕೊಡಬೇಡವೇ?&quot; ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಿಂದ ಖ್ಯಾತಿ ಗಳಿಸಿದ ಕಾವ್ಯ ಶೈವಗೆ ಕಲಬುರಗಿಯ ಈ ಕಹಿ ಅನುಭವ ಮಾತ್ರ ಮರೆಯಲಾಗದ ಗಾಯವನ್ನಂತೂ ಮಾಡಿದೆ!&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/bigg-boss-contestant-kavya-shaiva-insulted-on-stage-find-out-what-transpired-after-her-mic-was-snatched-away-xxx1td1"/>
        </item>
        <item>
            <title><![CDATA[Amruthadhaare Serial: ಶಕುಂತಲಾ ಮಾಡಿದ ಕರ್ಮ ಮಗಳಿಗೆ ತಟ್ಟಿತು; ಗೌತಮ್-ಭೂಮಿಗೆ ಹೊಸ ಕಷ್ಟ ಬಂತು!]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-mahima-want-to-adopt-minchu-yhkneqw</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-mahima-want-to-adopt-minchu-yhkneqw</guid>
            <pubDate>Mon, 25 May 2026 11:18:16 +0530</pubDate>
            <description><![CDATA[&lt;p&gt;Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಲಕ್ಷ್ಮೀಕಾಂತ್&zwnj; ಮಾವ ಕಿಡ್ನ್ಯಾಪ್&zwnj; ಆಗಿದೆ. ಗೌತಮ್&zwnj; ಹಾಗೂ ಭೂಮಿಕಾಳ ರಿಯಲ್&zwnj; ಮಗಳು ಯಾರು ಎಂದು ಗೊತ್ತಾಗಬೇಕಿತ್ತು. ಹೀಗಿರುವಾಗ ಇನ್ನೊಂದು ಸಮಸ್ಯೆ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksetdrk4xj1hcj1xz71p2bn2,imgname-new-project---2026-05-25t110551.155-1779687678564.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಲಕ್ಷ್ಮೀಕಾಂತ್&zwnj; ಮಾವ ಕಿಡ್ನ್ಯಾಪ್&zwnj; ಆಗಿದೆ. ಗೌತಮ್&zwnj; ಹಾಗೂ ಭೂಮಿಕಾಳ ರಿಯಲ್&zwnj; ಮಗಳು ಯಾರು ಎಂದು ಗೊತ್ತಾಗಬೇಕಿತ್ತು. ಹೀಗಿರುವಾಗ ಇನ್ನೊಂದು ಸಮಸ್ಯೆ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೌದು, ಗೌತಮ್&zwnj; ದಿವಾನ್&zwnj; ತಂಗಿ ಮಹಿಮಾಗೆ ಮತ್ತೆ ಗರ್ಭಪಾತ ಆಗಿದೆ. ಈ ಹಿಂದೆ ಅವಳೇ ಗರ್ಭಪಾತ ಮಾಡಿಸಿಕೊಂಡಿದ್ದಳು. ಈಗ ಅವಳು ಬಯಸಿದರೂ ಕೂಡ ತಾಯಿ ಆಗೋಕೆ ಆಗ್ತಿಲ್ಲ. ಅವಳಿಗೆ ತಾಯಿ ಆಗೋಕೆ ಆಗ್ತಿಲ್ಲ ಎನ್ನೋದು ಬಹಳ ನೋವು ಕೊಟ್ಟಿದೆ.&lt;/p&gt;&lt;img&gt;&lt;p&gt;ಈಗ ಸದಾಶಿವ ದಂಪತಿ ಗೌತಮ್&zwnj; ಮನೆಗೆ ಬಂದು, &ldquo;ಮಹಿಮಾ ನಾರ್ಮಲ್&zwnj; ಆಗಿರುತ್ತಾಳೆ, ಒಮ್ಮೊಮ್ಮೆ ವಿಚಿತ್ರವಾಗಿ ಆಡ್ತಾಳೆ. ಅವಳಿಗೆ ಮಗು ಇಲ್ಲ ಎಂದು ತುಂಬ ಬೇಸರ ಆಗಿದೆ. ಮಿಂಚುಳನ್ನು ಅವಳಿಗೆ ದತ್ತು ಕೊಟ್ಟರೆ ಚೆನ್ನಾಗಿರುತ್ತದೆ&rdquo; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಈ ಮಾತು ಕೇಳಿ ಭೂಮಿಕಾ, ಆಕಾಶ್&zwnj;, ಗೌತಮ್&zwnj; ಎಲ್ಲರೂ ಕಂಗಾಲಾಗಿದ್ದಾರೆ. ಇನ್ನೊಂದು ಕಡೆ ಎಷ್ಟೇ ಜಗಳ ಆಡಿಕೊಂಡರೂ ಕೂಡ ಆಕಾಶ್-ಮಿಂಚು ಇಬ್ಬರೂ ತುಂಬ ಪ್ರೀತಿ ಮಾಡ್ತಾರೆ. ಇವರಿಬ್ಬರು ಒಂದೇ ಥರ ಆಡುತ್ತಾರೆ, ಅವಳಿ ಜವಳಿ ಎಂದು ಡೌಟ್&zwnj; ಬರೋ ಹಾಗೆ ಇವರಿಬ್ಬರು ವರ್ತಿಸುತ್ತಾರೆ. ಇದನ್ನು ನೋಡಿ ಗೌತಮ್&zwnj;-ಭೂಮಿಕಾಗೆ ಆಶ್ಚರ್ಯ ಆಗಿದೆ.&lt;/p&gt;&lt;img&gt;&lt;p&gt;ಈಗ ಮಿಂಚು ತನ್ನಿಂದ ದೂರ ಆಗ್ತಾಳೆ ಎಂದು ಆಕಾಶ್&zwnj;ಗೆ ಗೊತ್ತಾದರೆ ಅವನು ಸಹಿಸೋದಿಲ್ಲ. ಇನ್ನೊಂದು ಕಡೆ ಗೌತಮ್-ಭೂಮಿಗೂ ಕೂಡ ಮಿಂಚು ಇಲ್ಲ ಅಂದರೆ ಕಷ್ಟ ಆಗುವುದು. ಒಟ್ಟಿನಲ್ಲಿ ಇದೇ ವಿಚಾರಕ್ಕೆ ಮತ್ತೊಂದಿಷ್ಟು ಜಗಳ ಕೂಡ ಆಗಬಹುದು. ಒಟ್ಟಿನಲ್ಲಿ ಮಿಂಚು ಟಾಪಿಕ್&zwnj;ನಿಂದ ಇನ್ನೇನು ಆಗಬಹುದೋ ಏನೋ!&lt;/p&gt;&lt;img&gt;&lt;ul&gt; &lt;li&gt;ಕಹಾನಿ ಮೆ ಟ್ವಿಸ್ಟ್ ಇದೆ. ದತ್ತು ತಗೊಂಡ ಮೇಲೆ ಮಹಿಮಾ ಮತ್ತೆ ಪ್ರಗ್ನೆಂಟ್&zwnj; ಆಗ್ತಾಳೆ. ಯಾಕಂದ್ರೆ ಮಿಂಚು ಅದೃಷ್ಟ ದೇವತೆ&lt;/li&gt; &lt;li&gt;ಡೈರೆಕ್ಟರ್ ಸರ್, ಏನಿದು ಇಷ್ಟೊಂದು ಅನ್ಯಾಯ ಮಾಡೋದು ಸರಿ ಇಲ್ಲ. ಸೀರಿಯಲ್&zwnj;ನ ಎಲ್ಲಿಂದ ಎಲ್ಲಿಗೋ ತಗೊಂಡ್ ಹೋಗ್ತಾ ಇದ್ದೀರಾ, ಬೇಡ. ಈ ತರ ಕಥೆ.&lt;/li&gt; &lt;li&gt;ಪಾಪ ಮಹಿಮಾಗೆ ಒಂದು ಮಗು ಆಗ್ಬೇಕು&lt;/li&gt; &lt;li&gt;ಈಗ ಮಿಂಚುಳನ್ನು ದತ್ತು ಕೊಡ್ತಾರೋ ಇಲ್ಲವೋ ಅಂತ ಡೌಟ್ ಯಾರಿಗೆ ಇದೆ?&lt;/li&gt; &lt;li&gt;ಮಿಂಚು ಗೌತಮ್ ಸರ್ ಭೂಮಿ ಇಂದ ದೂರ ಆಗ್ಬಾರ್ದು, ಅವರ ಮಗಳು ಅಂತ ಗೊತ್ತಾಗ್ಬೇಕು.&lt;/li&gt; &lt;li&gt;ಯಾವುದೇ ಕಾರಣಕ್ಕೂ ಮಿಂಚುಳನ್ನು ದತ್ತು ಕೊಡಬಾರದು&lt;/li&gt; &lt;li&gt;ಶಕುಂತಲಾ ನೀನು ಮಾಡಿದ ಪಾಪ, ನೀ ಅನ್ಯಾಯವಾಗಿ ಮಹಿಮಾಗೆ ತಟ್ಟಿದೆ!&lt;/li&gt;&lt;/ul&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-mahima-want-to-adopt-minchu-yhkneqw"/>
        </item>
    </channel>
</rss>
