<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 09 Sep 2026 18:45:07 +0530</lastBuildDate>
        <atom:link href="https://kannada.asianetnews.com/rss/tv-talk" rel="self" type="application/rss+xml"/>
        <item>
            <title><![CDATA['ಮಾಲ್ಗುಡಿ ಡೇಸ್' ಅಭಿಮಾನಿಗಳೇ, ಈ ಸುದ್ದಿ ಮಿಸ್ ಮಾಡ್ಕೋಬೇಡಿ: ಬರ್ತಿದೆ ಮತ್ತೊಂದು ಸ್ವಾಮಿ ಕಥೆ!]]></title>
            <link>https://kannada.asianetnews.com/tv-talk/malgudi-days-returns-master-manjunath-post-sparks-curiosity-at-a-new-story-after-40-years-gvd/articleshow-0kccasg</link>
            <guid isPermaLink="true">https://kannada.asianetnews.com/tv-talk/malgudi-days-returns-master-manjunath-post-sparks-curiosity-at-a-new-story-after-40-years-gvd/articleshow-0kccasg</guid>
            <pubDate>Tue, 08 Sep 2026 16:49:30 +0530</pubDate>
            <description><![CDATA[&lt;p&gt;&lsquo;ಮಾಲ್ಗುಡಿ ಡೇಸ್&rsquo; ಅಭಿಮಾನಿಗಳಿಗೆ ಸಿಹಿಸುದ್ದಿಯ ಸುಳಿವು ಸಿಕ್ಕಿದೆ. 40 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಆಗುಂಬೆಗೆ ಭೇಟಿ ನೀಡಿ, &lsquo;ಮಾಲ್ಗುಡಿಯಿಂದ ಮತ್ತೊಂದು ಕಥೆ ಮತ್ತೆ ಬರುತ್ತಿದೆ&rsquo; ಎಂದು ಪೋಸ್ಟ್ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20bp7tpm8mksget74hs05xy,imgname-jnl-1788866142038.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇಂದಿಗೂ ತನ್ನದೇ ಆದ ಸ್ಥಾನ ಹೊಂದಿರುವ ಧಾರಾವಾಹಿ ಎಂದರೆ &lsquo;ಮಾಲ್ಗುಡಿ ಡೇಸ್&rsquo;. 80-90ರ ದಶಕದಲ್ಲಿ ದೂರದರ್ಶನದ ಮೂಲಕ ಮನೆಮಾತಾಗಿದ್ದ ಈ ಸರಣಿ, ಹೆಸರಾಂತ ಸಾಹಿತಿ ಆರ್.ಕೆ. ನಾರಾಯಣ್ ಅವರ ಕಥೆಗಳಿಗೆ ಜೀವ ತುಂಬಿತ್ತು. ಅದರಲ್ಲೂ ನಟ, ನಿರ್ದೇಶಕ ಶಂಕರ್ ನಾಗ್ ಅವರ ಅದ್ಭುತ ನಿರೂಪಣೆ &lsquo;ಮಾಲ್ಗುಡಿ ಡೇಸ್&rsquo;ಗೆ ಇಂದಿಗೂ ವಿಶೇಷ ಮೆರುಗು ನೀಡುತ್ತದೆ.&lt;/p&gt;&lt;p&gt;ಅದರಲ್ಲೂ &lsquo;ಸ್ವಾಮಿ&rsquo; ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದವರು ಮಾಸ್ಟರ್ ಮಂಜುನಾಥ್. ಇದೀಗ ಇದೇ &lsquo;ಸ್ವಾಮಿ&rsquo; ಪಾತ್ರದ ನೆನಪುಗಳೊಂದಿಗೆ &lsquo;ಮಾಲ್ಗುಡಿ&rsquo; ಮತ್ತೊಂದು ಕಥೆ ಹೇಳಲು ಸಜ್ಜಾಗುತ್ತಿರುವ ಸುಳಿವು ಸಿಕ್ಕಿದೆ.&lt;/p&gt;&lt;p&gt;ಈ ಕುತೂಹಲಕಾರಿ ಮಾಹಿತಿಯನ್ನು ಮಾಸ್ಟರ್ ಮಂಜುನಾಥ್ ಅವರು ತಮ್ಮ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. &lsquo;ಮಾಲ್ಗುಡಿ ಡೇಸ್&rsquo; ಚಿತ್ರೀಕರಣ ನಡೆದ ಆಗುಂಬೆಗೆ ಬರೋಬ್ಬರಿ 40 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಸೇರಿದಂತೆ ಮೂವರು ಆಪ್ತ ಸ್ನೇಹಿತರು ಮತ್ತೆ ಭೇಟಿ ನೀಡಿದ್ದಾರೆ. ಈ ಭೇಟಿಯ ಫೋಟೋಗಳ ಜೊತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಅವರು, ಹೊಸ ಯೋಜನೆಯೊಂದರ ಮುನ್ಸೂಚನೆಯನ್ನೂ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಘೋಷಣೆ ಶೀಘ್ರದಲ್ಲೇ..&lt;/strong&gt;&lt;/h2&gt;&lt;p&gt;40 ವರ್ಷಗಳ ಪಯಣದ ಬಳಿಕ ಮತ್ತೆ ಅದೇ ಸ್ಥಳಕ್ಕೆ ಮರಳಿದ ಅನುಭವವನ್ನು ಹಂಚಿಕೊಂಡಿರುವ ಮಾಸ್ಟರ್ ಮಂಜುನಾಥ್, &lsquo;40 ವರ್ಷಗಳು. ಮೂವರು ಸ್ನೇಹಿತರು. ಒಂದು ಮರೆಯಲಾಗದ ಸ್ಥಳ.ನಾವು ಮತ್ತೆ ಆಗುಂಬೆಗೆ ಮರಳಿದ್ದೇವೆ. ಹಳೆಯ ನೆನಪುಗಳ ನಡುವೆ ನಡೆದಾಡಿದೆವು, ಒಮ್ಮೆ ನಮ್ಮ ಬದುಕಿನ ಭಾಗವಾಗಿದ್ದ ಸ್ಥಳಗಳನ್ನು ಮತ್ತೆ ನೋಡಿದೆವು.. ಮತ್ತು ಕೆಲವು ನೆನಪುಗಳು ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಅರಿತುಕೊಂಡೆವು. ಮಾಲ್ಗುಡಿಯಿಂದ ಮತ್ತೊಂದು ಕಥೆ ಮತ್ತೆ ಬರುತ್ತಿದೆ. ಈ ಬಾರಿ.. ಈ ಪಯಣದಲ್ಲಿ ನೀವೂ ನಮ್ಮೊಂದಿಗೆ ಇರಬೇಕೆಂದು ನಾವು ಬಯಸುತ್ತೇವೆ. ಘೋಷಣೆ ಶೀಘ್ರದಲ್ಲೇ..&rsquo; ಎಂಬ ಅರ್ಥದ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;ಅಷ್ಟೇ ಸಾಕು, &lsquo;ಮಾಲ್ಗುಡಿ ಡೇಸ್&rsquo; ಅಭಿಮಾನಿಗಳ ಕುತೂಹಲ ಗರಿಗೆದರಿದೆ. ಹಾಗಾದರೆ ಇದು ಹಳೆಯ &lsquo;ಮಾಲ್ಗುಡಿ ಡೇಸ್&rsquo;ನ ಮುಂದುವರಿದ ಕಥೆಯೇ? ಅಥವಾ ಅದೇ ಲೋಕದಲ್ಲಿ ಹೊಸ ಕಥೆಯೊಂದನ್ನು ಹೇಳಲು ತಂಡ ಸಿದ್ಧವಾಗುತ್ತಿದೆಯೇ? ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ ಎಂಬ ಸುಳಿವು ಮಾತ್ರ ಸಿಕ್ಕಿದೆ.&lt;/p&gt;View this post on Instagram&lt;p&gt;A post shared by mastermanjunath (@mastermanjunath)&lt;/p&gt;&lt;p&gt;ಆಗುಂಬೆಯ ಹಸಿರು ಪರಿಸರ, ಅಲ್ಲಿನ ಹಳೆಯ ಮನೆಗಳು, ಬೀದಿಗಳು ಹಾಗೂ ಮುಗ್ಧ ಸ್ವಾಮಿ ಮತ್ತು ಆತನ ಗೆಳೆಯರ ಕಥೆಗಳು ಒಂದು ಕಾಲದ ಪ್ರೇಕ್ಷಕರನ್ನು ಬಾಲ್ಯದ ನೆನಪುಗಳಿಗೆ ಕರೆದೊಯ್ದಿದ್ದವು. ಇದೀಗ ನಾಲ್ಕು ದಶಕಗಳ ಬಳಿಕ ಅದೇ ಮಾಲ್ಗುಡಿ ಮತ್ತೊಂದು ಕಥೆಯೊಂದಿಗೆ ಮರಳುವ ಸೂಚನೆ ಸಿಕ್ಕಿರುವುದು ಸಹಜವಾಗಿಯೇ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಹಳೆಯ ನೆನಪುಗಳಿಗೆ ಹೊಸ ಸ್ಪರ್ಶ ನೀಡಲು &lsquo;ಮಾಲ್ಗುಡಿ&rsquo; ಮತ್ತೊಮ್ಮೆ ಸಿದ್ಧವಾಗುತ್ತಿದೆಯಾ? ಅಧಿಕೃತ ಘೋಷಣೆ ಹೊರಬರುವವರೆಗೂ ಈ ಕುತೂಹಲಕ್ಕೆ ತೆರೆ ಬೀಳುವುದಿಲ್ಲ.&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/malgudi-days-returns-master-manjunath-post-sparks-curiosity-at-a-new-story-after-40-years-gvd/articleshow-0kccasg"/>
        </item>
        <item>
            <title><![CDATA[ಲವ್​ ಬ್ರೇಕಪ್​, ಮದುವೆ, ಡಿಪ್ರೆಷನ್​, ಮೋಸ: Lakshmi Nivasa ನಟಿ ಅನಿಕಾ ಸಿಂಧ್ಯಾ ಓಪನ್​ ಮಾತು]]></title>
            <link>https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r</link>
            <guid isPermaLink="true">https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r</guid>
            <pubDate>Mon, 07 Sep 2026 19:29:05 +0530</pubDate>
            <description><![CDATA[&lt;p&gt;'ಲಕ್ಷ್ಮೀ ನಿವಾಸ' ಖ್ಯಾತಿಯ ನಟಿ ಅನಿಕಾ ಸಿಂಧ್ಯ ಅವರು ತಮ್ಮ ಪ್ರೀತಿಯಲ್ಲಿನ ಮೋಸ ಮತ್ತು ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರೀತಿಸಿದ ವ್ಯಕ್ತಿಗಿಂತ, ಆತನಿಗಾಗಿ ವ್ಯರ್ಥ ಮಾಡಿದ ಸಮಯದ ಬಗ್ಗೆ ಹೆಚ್ಚು ಪಶ್ಚಾತ್ತಾಪವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y29t9nfked1wree9bmsem6,imgname-anikha-sindya-1788789188917.jpg" type="image/jpeg" height="390" width="690"/>
            <content:encoded><![CDATA[&lt;p&gt;'ಲಕ್ಷ್ಮೀ ನಿವಾಸ' ಖ್ಯಾತಿಯ ನಟಿ ಅನಿಕಾ ಸಿಂಧ್ಯ ಅವರು ತಮ್ಮ ಪ್ರೀತಿಯಲ್ಲಿನ ಮೋಸ ಮತ್ತು ಖಿನ್ನತೆಯ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರೀತಿಸಿದ ವ್ಯಕ್ತಿಗಿಂತ, ಆತನಿಗಾಗಿ ವ್ಯರ್ಥ ಮಾಡಿದ ಸಮಯದ ಬಗ್ಗೆ ಹೆಚ್ಚು ಪಶ್ಚಾತ್ತಾಪವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಲಕ್ಷ್ಮೀ ಬಾರಮ್ಮ ಸೇರಿದಂತೆ 50ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿ, ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೊ ನಟಿ ಅನಿಕಾ ಸಿಂಧ್ಯ. ಯಾಹೂ, ಜೊತೆಜೊತೆಯಲಿ, ನೆನಪಿರಲಿ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದರೂ, ನನ್ನಂಥವಳಿಗೆ ಸಿನಿಮಾ ಇಂಡಸ್ಟ್ರಿ ಉಸಾಬರಿಯೇ ಬೇಡ ಎಂದುಕೊಂಡು ಸಿನಿಮಾದಿಂದ ಹೊರಕ್ಕೆ ಬಂದು ಸೀರಿಯಲ್​ಗಳಲ್ಲಿಯೇ ಮಿಂಚುತ್ತಿರುವ ಅನಿಕಾ ಅವರು ಸೀರಿಯಲ್​ ಪ್ರೇಮಿಗಳ ಫೆವರೆಟ್​ ವಿಲನ್​ ಕೂಡ ಹೌದು. ಸದ್ಯ ಅವರು ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ನೀಲು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಈಗ ನಟಿಸಿರುವ ಹಲವಾರು ಸೀರಿಯಲ್​ಗಳಲ್ಲಿ ಇವರದ್ದು ನೆಗೆಟಿವ್​ ರೋಲ್​ಗಳೇ. ಒಂದು ನೆಗೆಟಿವ್​ ರೋಲ್​ ಹಿಟ್​ ಆಯಿತು ಎಂದಾಕ್ಷಣ ಸಹಜವಾಗಿ ಅದೇ ರೋಲ್​ಗಳು ನಟ-ನಟಿಯರನ್ನು ಹುಡುಕಿ ಬರುವುದು ಇದೆ. ಅವರಿಗೆ ಇಷ್ಟ ಇರಲಿ, ಇಲ್ಲದೇ ಇರಲಿ, ಇಂಥ ರೋಲ್​ ಮಾಡುವುದು ಅನಿವಾರ್ಯ ಎನ್ನುವ ಸನ್ನಿವೇಶವೂ ಎದುರಾಗಿಬಿಡುತ್ತದೆ. ಅಂಥವರಲ್ಲಿ ಒಬ್ಬರು ಅನಿಕಾ.&lt;/p&gt;&lt;img&gt;&lt;p&gt;ಇದೀಗ ನಟಿ, ತಮ್ಮ ಲವ್​ ಫೇಲ್ಯೂರ್​ ಮತ್ತು ಡಿಪ್ರೆಷನ್​ ಬಗ್ಗೆ ಮಾತನಾಡಿದ್ದಾರೆ. SumanTv Kannada Entertainmentಗೆ ನೀಡಿರುವ ಸಂದರ್ಶನದಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ಪ್ರೀತಿಯಲ್ಲಿ ಮೋಸ ಹೋದೆ. ಆದರೆ ಆ ಹುಡುಗನನ್ನು ಕಳೆದುಕೊಂಡೆ ಅಂತ ಡಿಪ್ರೆಷನ್​ಗೆ ನಾನು ಹೋಗಲಿಲ್ಲ. ಆದರೆ ನನ್ನ ಜೀವನದ ಅಮೂಲ್ಯ ವರ್ಷಗಳನ್ನು ಆತನಿಗಾಗಿ ಕಳೆದುಬಿಟ್ಟೆನಲ್ಲ ಎಂದು ಒಂದು ರೀತಿ ಡಿಪ್ರೆಷನ್​ ಆಯ್ತು. ಅದನ್ನು ಖಿನ್ನತೆ ಎನ್ನಲು ಆಗದು. ನನ್ನನ್ನು ನಾನು ಹೀಲ್​ ಮಾಡಿಕೊಳ್ಳಲು ಕೊಟ್ಟಿರುವ ಟೈಮ್​ ಅದು ಎಂದಿದ್ದಾರೆ ನಟಿ ಅನಿಕಾ.&lt;/p&gt;&lt;img&gt;&lt;p&gt;ನಾನು ಅರ್ಜೆಂಟ್​ನಲ್ಲಿ ಯಾಕೆ ಟೈಂ ವೇಸ್ಟ್​ ಮಾಡಿಕೊಂಡೆ. ಆ ಬಾವಿಯೊಳಗೆ ತರಾತುರಿಯಲ್ಲಿ ಯಾಕೆ ಬಿದ್ದೆ, ಈಗಿರುವ ಮೈಂಡ್​ಸೆಟ್​, ಕೂಲ್​ ಆಗಿ ಯೋಚನೆ ಮಾಡುವುದು ಯಾಕೆ ಆ ಟೈಮ್​ನಲ್ಲಿ ನನಗೆ ಬರಲಿಲ್ಲ ಎನ್ನುವ ಬಗ್ಗೆ ನೋವಾಗ್ತಿದೆ. ಇದರಿಂದ ನನಗೆ ರಿಗ್ರೇಟ್​ ಇದೆಯೇ ವಿನಾ ಆ ವ್ಯಕ್ತಿ ಹೋದ ಎನ್ನುವ ಬಗ್ಗೆ ಬೇಸರ ಇಲ್ಲ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಪಾರ್ಟನರ್​ಗಳಿಗೆ ಬ್ರಾಡ್​ ಮೈಂಡೆಡ್​ ಮುಖ್ಯ. ಅವರಿಗೆ ಅದೇ ರೀತಿಯ ಮೆಂಟ್ಯಾಲಿಟಿ ಇರಬೇಕು. ಇಲ್ಲದಿದ್ದರೆ ಜೀವನ ತುಂಬಾ ಕಷ್ಟ ಎಂದಿದ್ದಾರೆ ನಟಿ. ಪತ್ನಿ ಆ್ಯಕ್ಟ್​ ಮಾಡಿದರೆ ಓಕೆ ಅನ್ನಬೇಕು, ಸಪೋರ್ಟ್​ ಮಾಡಬೇಕು. ಇಲ್ಲದಿದ್ದರೆ, ನಟಿಯಾದವಳು ನನಗೆ ಆ್ಯಕ್ಟಿಂಗ್​ ಬೇಡ, ಗೃಹಿಣಿಯಾಗಿ ಇರ್ತೇನೆ ಎಂದು ಒಪ್ಪಿಕೊಳ್ಳಬೇಕು. ಹೀಗೆ ಇಬ್ಬರ ಮನಸ್ಥಿತಿ ಇದ್ದರಷ್ಟೇ ಲೈಫ್​ ಸಕ್ಸಸ್​ ಆಗುತ್ತದೆ ಎಂದಿದ್ದಾರೆ ಅನಿಕಾ.&lt;/p&gt;&lt;img&gt;&lt;p&gt;ಇನ್ನು ನಟಿಯ ಕುರಿತು ಹೇಳುವುದಾದರೆ, ಕಾದಂಬರಿ ಸೀಡಿಯಲ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ, ಹೆಚ್ಚಾಗಿ ಕಾಣಿಸಿಕೊಂಡದ್ದು ನೆಗೆಟಿವ್ ಪಾತ್ರಗಳಲ್ಲಿ. ಡಾಕ್ಟರ್ ಆಗಬೇಕೆಂದುಕೊಂಡಿದ್ದ ಅನಿಕಾ ಅವರಿಗೆ ಬಣ್ಣದ ಲೋಕ ಒಲಿದಿದ್ದೂ ಅಚಾನಕ್​ ಆಗಿಯೇ. ಖಳನಾಯಕಿಯಾಗಿಯೇ ಗುರುತಿಸಿಕೊಂಡಿರುವ ಅನಿಕಾ ತಾವು ಯಾವ ರೋಲ್​ಗೂ ಇದುವರೆಗೆ ಆಡಿಶನ್ ಕೊಟ್ಟಿಲ್ಲ ಎಂದು ಈ ಹಿಂದೆ ಹೇಳಿದ್ದರು. ಮೊದಲೆಲ್ಲಾ ಡೈಲಾಗ್ ಡೆಲಿವರಿ ಬಗ್ಗೆ ನಿರ್ದೇಶಕರು ಗಮನ ಕೊಡುತ್ತಿದ್ದರು. ಈಗ ಆಡಿಷನ್​ ಹೆಚ್ಚಾಗಿ ಮಾಡ್ತಾರೆ ಜೊತೆಗೆ ಲುಕ್ ಟೆಸ್ಟಿಗೆ ಪ್ರಾಮುಖ್ಯತೆ ಇದೆ. ಆದರೆ ನಾನು ಶುರು ಮಾಡಿದಾಗ ಹೀಗೆಲ್ಲಾ ಇರಲಿಲ್ಲ ಎಂದು ನಟಿ ಹೇಳಿದ್ದಾರೆ. ಆಕಾಶದೀಪ, ಗುಪ್ತಗಾಮಿನಿ, ಕುಂಕುಮಭಾಗ್ಯ, ಕಂಕಣ, ನನ್ನವಳು, ಆಕಾಶದೀಪ, ಸುಕನ್ಯಾ, ಮನೆಮಗಳು, ಶುಭಮಂಗಳ, ಮಂದಾರ, ಸೂರ್ಯಕಾಂತಿ, ಲಕ್ಷ್ಮಿ ಬಾರಮ್ಮ ಹೀಗೆ ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಲಕ್ಷ್ಮಿ ಬಾರಮ್ಮ ಸೀರಿಯಲ್​ನಲ್ಲಿ ವಿಲನ್​ ಕುಮುದಾ ರೋಲ್​ ಸಕತ್​ ಹೆಸರು ತಂದುಕೊಟ್ಟಿತು.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/real-life-love-breakup-depression-cheating-lakshmi-nivasa-actress-anika-sindhya-suc-7vnco2r"/>
        </item>
        <item>
            <title><![CDATA[Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್​ಗಾಗಿ ರಿಯಲ್​ ಮತ್ತು ರೀಲ್​ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ]]></title>
            <link>https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh</link>
            <guid isPermaLink="true">https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh</guid>
            <pubDate>Mon, 07 Sep 2026 20:03:37 +0530</pubDate>
            <description><![CDATA[&lt;p&gt;'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತಾಂಡವ್ ಪಾತ್ರಧಾರಿ ಸುದರ್ಶನ್, ಅವರ ರಿಯಲ್ ಪತ್ನಿ ಸಂಗೀತಾ ಮತ್ತು ರೀಲ್ ಪತ್ನಿ ಕಾವ್ಯಾ ಗೌಡ ಬಿಗ್&zwnj;ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ 'ತಾಂಡವ್ ಯಾರ ಗಂಡ' ಎಂಬ ವಿಷಯವಾಗಿ ಇಬ್ಬರು ಪತ್ನಿಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y4f5w5fvpk1207ywrhw5rq,imgname-bigg-boss-13-1788791461765.jpg" type="image/jpeg" height="390" width="690"/>
            <content:encoded><![CDATA[&lt;p&gt;'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತಾಂಡವ್ ಪಾತ್ರಧಾರಿ ಸುದರ್ಶನ್, ಅವರ ರಿಯಲ್ ಪತ್ನಿ ಸಂಗೀತಾ ಮತ್ತು ರೀಲ್ ಪತ್ನಿ ಕಾವ್ಯಾ ಗೌಡ ಬಿಗ್&zwnj;ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ 'ತಾಂಡವ್ ಯಾರ ಗಂಡ' ಎಂಬ ವಿಷಯವಾಗಿ ಇಬ್ಬರು ಪತ್ನಿಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ನಡೆದಿದೆ.&lt;/p&gt;&lt;img&gt;&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ತಾಂಡವ್​ನ ರೀಲ್​ ಹೆಂಡ್ತಿ ಶ್ರೇಷ್ಠಾ ಉರ್ಫ್​ ಕಾವ್ಯಾ ಗೌಡ ಮತ್ತು ರಿಯಲ್​ ಹೆಂಡ್ತಿ ಸಂಗೀತಾ ಇಬ್ಬರನ್ನೂ ಬಿಗ್​ಬಾಸ್​ಗೆ ಕರೆಸಲಾಗಿದ್ದು, ಇವರ ನಡುವೆ ಮಾತಿನ ಸಮರ ಶುರುವಾಗಿಬಿಟ್ಟಿದೆ!&lt;/p&gt;&lt;img&gt;&lt;p&gt;ತಾಂಡವ್​ ಪಾತ್ರಧಾರಿ ಉರ್ಫ್​ ಸುದರ್ಶನ್​ ರಂಗಪ್ರಸಾದ್​ ಅವರು ಮೊದಲ ದಿನ ಇಬ್ಬರೂ ಈ ಷೋನಲ್ಲಿ ಇರೋದನ್ನು ನೋಡಿ, ಅಯ್ಯಯ್ಯೋ ಇಬ್ಬರೂ ಕಚ್ಚಾಡಿಕೊಂಡರೆ ಏನು ಮಾಡೋದು ಎಂದು ಪ್ರಶ್ನೆ ಮಾಡಿದ್ದರು. ಇದೀಗ ಇಲ್ಲಿ ರಿಯಲ್​ ಆಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಆಗಿದ್ದೇನೆಂದರೆ, ಕಾವ್ಯಾ ಗೌಡ ಅವರು, ಸುದರ್ಶನ್​ ನನ್ನ ಫ್ರೆಂಡ್​ ಅಷ್ಟೇ. ತಾಂಡವ್​ ಮೊದಲು ನನಗೆ ಫ್ರೆಂಡ್​ ಆಗಿದ್ರು, ಆಮೇಲೆ ಲವ್​ ಆಯ್ತು, ಆಮೇಲೆ ಮದುವೆಯಾದೆ. ಈಗ ಸುದರ್ಶನ್​ ನನ್ನ ಫ್ರೆಂಡ್​ ಅಷ್ಟೇ ಎಂದಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಅಲ್ಲಿದ್ದವರು ಎಲ್ಲರೂ ಇಬ್ಬರ ಕಾಲೆಳೆದಿದ್ದಾರೆ. ಸಂಗೀತಾ ಅವರು, ಸುದರ್ಶನ್​ ಈಗ ನನ್ನ ರಿಯಲ್​ ಗಂಡ ಎಂದಿದ್ದರೆ, ಅಲ್ಲಿರುವ ಸ್ಪರ್ಧಿಗಳು, ಇಬ್ಬರಲ್ಲಿ ಅವರು ಯಾರ ಗಂಡ ಎನ್ನೋದನ್ನು ಮೊದಲು ಸರಿಯಾಗಿ ಕನ್​ಫರ್ಮ್​ ಮಾಡಿಕೊಳ್ಳಿ ಎಂದರು.&lt;/p&gt;&lt;img&gt;&lt;p&gt;ಹಾಸ್ಯದ ರೂಪದಲ್ಲಿ ಈ ಸಂಭಾಷಣೆ ನಡೆದಿದೆ. ಕಾವ್ಯಾ ಅವರು, ಸುದರ್ಶನ್​ ಅಲ್ಲಿ ನನ್ನ ಗಂಡ ಆಗಿದ್ರು, ಈಗ ನನ್ನ ಗಂಡ ಅಲ್ಲ ಅಂತಿದ್ರೆ, ಸಂಗೀತಾ ಅವರು ಈಗ ನನ್ನ ಗಂಡ ಎಂದಿದ್ದಾರೆ. ಅಲ್ಲಿದ್ದೋರು ಅವರು ಯಾರ ಗಂಡನಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಈ ಸಂಭಾಷಣೆ ಹಾಸ್ಯದ ರೂಪದಲ್ಲಿ ನಡೆದಿದ್ದು, ಮುಂದೆ ಹೋಗುತ್ತಾ ಯಾರ ನಡುವೆ ದ್ವೇಷ ಹುಟ್ಟುತ್ತದೆ, ರಿಯಲ್​ ಆಗಿ ಯಾರು ಕಿತ್ತಾಟ ಮಾಡುತ್ತಾರೆ ಎಂದು ನೋಡಬೇಕಿದೆಯಷ್ಟೇ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-13-the-battle-between-the-real-and-reel-wives-of-bhagya-lakshmi-tandav-suc-9v7imfh"/>
        </item>
        <item>
            <title><![CDATA[Bigg Boss ಸಹವಾಸವೇ ಬೇಡ ಎಂದು ಗೋಡೆ ಹಾರಲು ಯತ್ನಿಸಿದ ಸ್ಪರ್ಧಿ: ಶಾಕಿಂಗ್​ ವಿಡಿಯೋ ವೈರಲ್​]]></title>
            <link>https://kannada.asianetnews.com/gallery/tv-talk/bigg-boss-tamil-contestant-ansar-tries-to-jump-over-wall-shocking-video-goes-viral-suc-cri133w</link>
            <guid isPermaLink="true">https://kannada.asianetnews.com/gallery/tv-talk/bigg-boss-tamil-contestant-ansar-tries-to-jump-over-wall-shocking-video-goes-viral-suc-cri133w</guid>
            <pubDate>Wed, 09 Sep 2026 13:02:23 +0530</pubDate>
            <description><![CDATA[ತಮಿಳು ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಯೊಬ್ಬರು ಗೋಡೆ ಹಾರಿ ಪಲಾಯನ ಮಾಡಲು ಯತ್ನಿಸಿರುವುದು ಭಾರೀ ಸದ್ದು ಮಾಡುತ್ತಿದೆ. 'ಕುಕ್ ವಿತ್ ಕೋಮಾಲಿ' ಖ್ಯಾತಿಯ ಅನ್ಸಾರ್ ಈ ರೀತಿ ಮಾಡಿದ್ದು, ಇದು ಟಿಆರ್​ಪಿಗಾಗಿ ಮಾಡಿದ ಸ್ಕ್ರಿಪ್ಟೆಡ್​ ನಾಟಕವೇ ಎಂಬ ಚರ್ಚೆ ಶುರುವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22h2xn9zyg3esm2hvq5g07y,imgname-bigg-boss-tamil-1788938909353.jpg" type="image/jpeg" height="390" width="690"/>
            <content:encoded><![CDATA[ತಮಿಳು ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಯೊಬ್ಬರು ಗೋಡೆ ಹಾರಿ ಪಲಾಯನ ಮಾಡಲು ಯತ್ನಿಸಿರುವುದು ಭಾರೀ ಸದ್ದು ಮಾಡುತ್ತಿದೆ. 'ಕುಕ್ ವಿತ್ ಕೋಮಾಲಿ' ಖ್ಯಾತಿಯ ಅನ್ಸಾರ್ ಈ ರೀತಿ ಮಾಡಿದ್ದು, ಇದು ಟಿಆರ್​ಪಿಗಾಗಿ ಮಾಡಿದ ಸ್ಕ್ರಿಪ್ಟೆಡ್​ ನಾಟಕವೇ ಎಂಬ ಚರ್ಚೆ ಶುರುವಾಗಿದೆ.&lt;img&gt;&lt;p&gt;ಈಗ ಆರು ಭಾಷೆಗಳಲ್ಲಿ ಬಿಗ್​ಬಾಸ್​ (Bigg Boss) ಶುರುವಾಗಿದೆ. ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಮೊದಲ ದಿನವೇ ಜಟಾಪಟಿ ಶುರುವಾಗಿದೆ. ಇಂಥ ಸನ್ನಿವೇಶವನ್ನು ಬಿಗ್​ಬಾಸ್​ ಕ್ರಿಯೇಟ್​ ಮಾಡುವುದು ಸಹಜ. ಕಿರುಚಾಟ, ಕೂಗಾಟ, ಹಾರಾಟವೇ ಈ ಷೋನ ಹೈಲೈಟ್​ ಆಗಿದ್ದು, ಜನರಿಗೂ ಇದೇ ಬೇಕಿರುವ ಕಾರಣದಿಂದಾಗಿ, ಇಂಥ ದೃಶ್ಯಗಳನ್ನು ಕ್ರಿಯೇಟ್​ ಮಾಡುವುದು ಮಾಮೂಲು. ಅದೇ ರೀತಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ಸ್ಪರ್ಧಿಗಳ ನಡುವೆ ಜಟಾಪಟಿ ಶುರುವಾಗಿದೆ.&lt;/p&gt;&lt;img&gt;&lt;p&gt;ಇದೀಗ ತಮಿಳಿನ ಬಿಗ್​ಬಾಸ್​​ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಸ್ಪರ್ಧಿಯೊಬ್ಬರು Bigg Boss ಗೋಡೆ ಹಾರಿ ಹೋಗಲು ಪ್ರಯತ್ನಿಸಿರುವುದು. ವಿಜಯ್ ಸೇತುಪತಿ ನಿರೂಪಣೆಯ ಈ ಕಾರ್ಯಕ್ರಮದಲ್ಲಿ 19 ಸ್ಪರ್ಧಿಗಳು ಮನೆಗೆ ಪ್ರವೇಶಿಸಿದ್ದಾರೆ. ಇವರಲ್ಲಿ 'ಕುಕ್ ವಿತ್ ಕೋಮಾಲಿ' ಕಾರ್ಯಕ್ರಮದ ಮೂಲಕ ಪ್ರಸಿದ್ಧರಾದ ಅನ್ಸಾರ್ ಕೂಡ ಒಬ್ಬರು.&lt;/p&gt;&lt;img&gt;&lt;p&gt;ಎರಡನೆಯ ದಿನವೇ ಅನ್ಸಾರ್ , ಮನೆಯಿಂದ ಹೊರಹೋಗಲು ಪ್ರಯತ್ನಿಸಿದರು. ಇದಕ್ಕಾಗಿ ಗೋಡೆ ಹಾರಲು ಪ್ರಯತ್ನಿಸಿರುವ ವಿಡಿಯೋಗಳು ಸೋಷಿಷಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಈ ಹಿಂದೆ ತಮಿಳು ಬಿಗ್ ಬಾಸ್ ಸೀಸನ್ 1 ರಲ್ಲಿ ನಟ ಭರಣಿ ಅವರು ಗೋಡೆ ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೀಗ ಅದೇ ಮಾದರಿಯಲ್ಲಿ ಅನ್ಸಾರ್ ಕೂಡ ಮನೆಯಿಂದ ಓಡಿಹೋಗಲು ಯತ್ನಿಸಿದ್ದಾರೆ.&lt;/p&gt;&lt;img&gt;&lt;p&gt;ಅನ್ಸಾರ್ ಈ ರೀತಿ ಹಠಾತ್ತನೆ ಈ ರೀತಿ ಮಾಡಲು ಕಾರಣ ಇನ್ನೂ ತಿಳಿದಿಲ್ಲ. ಆದರೆ, ಇವೆಲ್ಲವೂ ಉದ್ದೇಶಪೂರ್ವಕವಾಗಿ ನಡೆದದ್ದು, ಷೋಗೆ ಟಿಆರ್​ಪಿ ಬರುವುದಕ್ಕಾಗಿ ಇಂಥವುಗಳನ್ನು ಸ್ಕ್ರಿಪ್ಟೆಡ್​ ಮಾಡಲಾಗುತ್ತದೆ. ಇವುಗಳನ್ನು ನೋಡಿ ಜನರು ನಿಜ ಎಂದು ನಂಬಿ ಬಾಯಿಬಿಟ್ಟು ನೋಡುತ್ತಾರೆ. ಈ ಮೂಲಕ, ಎಲ್ಲೆಡೆ ಷೋ ಜನಪ್ರಿಯತೆ ಪಡೆದುಕೊಳ್ಳುತ್ತದೆ ಎಂದೆಲ್ಲಾ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.&lt;/p&gt;&lt;img&gt;&lt;p&gt;'ಕುಕ್ ವಿತ್ ಕೋಮಾಲಿ' ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅನ್ಸಾರ್ ಬಹಳ ಪ್ರಸಿದ್ಧರಾದರು. ಇದಲ್ಲದೇ, ಅನ್ಸಾರ್ ಅನೇಕ ಟಿವಿ ಕಾರ್ಯಕ್ರಮಗಳೊಂದಿಗೆ ಉತ್ತಮ ಮನ್ನಣೆ ಗಳಿಸಿದ್ದಾರೆ. ಅದೇ ಕ್ರೇಜ್&zwnj;ನೊಂದಿಗೆ, ಅವರು ಈಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಸಹ ಸ್ಪರ್ಧಿ ಜೇಸನ್ ಜೊತೆಗಿನ ಜಗಳಗಳು ಮತ್ತು ನಾಯಕತ್ವದ ಬಗ್ಗೆ ಚರ್ಚೆಗಳಿಂದಾಗಿ ಅನ್ಸಾರ್ ಅಸಮಾಧಾನಗೊಂಡಿದ್ದಾರೆ ಎಂದು ತೋರುತ್ತದೆ.&lt;/p&gt;&lt;img&gt;&lt;p&gt;ಅಂದಹಾಗೆ, ಕುಕ್ ವಿತ್ ಕೋಮಾಲಿ' (Cooku with Comali / CWC) ಎಂಬುದು ತಮಿಳು ಭಾಷೆಯ ಅತ್ಯಂತ ಜನಪ್ರಿಯ ಹಾಸ್ಯ ಆಧರಿತ ಅಡುಗೆ ರಿಯಾಲಿಟಿ ಶೋ ಆಗಿದೆ. ಇದೊಂದು ರೀತಿಯಲ್ಲಿ ಕಲರ್ಸ್ ಕನ್ನಡದಲ್ಲಿ ಬರುವ ಕ್ವಾಟ್ಲೆ ಕಿಚನ್​ ರಿಯಾಲಿಟಿ ಷೋ ರೀತಿ. ಈ ಷೋ ಮೂಲಕ ಪ್ರಸಿದ್ಧಿ ಪಡೆದವರು ಅನ್ಸಾರಿ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-tamil-contestant-ansar-tries-to-jump-over-wall-shocking-video-goes-viral-suc-cri133w"/>
        </item>
        <item>
            <title><![CDATA[Karna Serial ರೋಚಕ ಟ್ವಿಸ್ಟ್​: ಈಡೇರಿತು ಭುವೇಶ್ವರಿಯ ಆಸೆ; ಮಗನಿಗಿಟ್ಟ ಬಾಳೆಯಲ್ಲಿ ಕರ್ಣನ ಊಟ]]></title>
            <link>https://kannada.asianetnews.com/gallery/tv-talk/karna-serial-exciting-twist-bhuveswaris-wish-comes-true-mother-and-son-together-suc-entspx6</link>
            <guid isPermaLink="true">https://kannada.asianetnews.com/gallery/tv-talk/karna-serial-exciting-twist-bhuveswaris-wish-comes-true-mother-and-son-together-suc-entspx6</guid>
            <pubDate>Wed, 09 Sep 2026 13:33:54 +0530</pubDate>
            <description><![CDATA[ಕರ್ಣ ಸೀರಿಯಲ್​ನಲ್ಲಿ ಅಪ್ಪ-ಮಗ ಒಂದಾದ ನಂತರ, ಇದೀಗ ಅಮ್ಮ-ಮಗನ ಮಿಲನದ ಕ್ಷಣ ಹತ್ತಿರವಾಗಿದೆ. ತನ್ನ ಮಗನಿಗಾಗಿ ಹಾತೊರೆಯುತ್ತಿರುವ ತಾಯಿ ಭುವನೇಶ್ವರಿಯ ಕಣ್ಣೆದುರೇ ಕರ್ಣ ಬಂದರೂ, ಅವರಿಬ್ಬರಿಗೂ ಸತ್ಯ ತಿಳಿದಿಲ್ಲ. ಕರುಳಿನ ಸಂಬಂಧದ ಈ ಸತ್ಯ ಯಾವಾಗ ಬಹಿರಂಗವಾಗುತ್ತದೆ ಎನ್ನುವುದೇ ಕಥೆಯ ತಿರುವು.]]></description>
            <media:content url="https://static.asianetnews.com/images/w-1280,h-720,format-jpg,imgid-01m22jx21m80xcjn0fxtg6pcbe,imgname-karna-serial-00-1788940814388.jpg" type="image/jpeg" height="390" width="690"/>
            <content:encoded><![CDATA[ಕರ್ಣ ಸೀರಿಯಲ್​ನಲ್ಲಿ ಅಪ್ಪ-ಮಗ ಒಂದಾದ ನಂತರ, ಇದೀಗ ಅಮ್ಮ-ಮಗನ ಮಿಲನದ ಕ್ಷಣ ಹತ್ತಿರವಾಗಿದೆ. ತನ್ನ ಮಗನಿಗಾಗಿ ಹಾತೊರೆಯುತ್ತಿರುವ ತಾಯಿ ಭುವನೇಶ್ವರಿಯ ಕಣ್ಣೆದುರೇ ಕರ್ಣ ಬಂದರೂ, ಅವರಿಬ್ಬರಿಗೂ ಸತ್ಯ ತಿಳಿದಿಲ್ಲ. ಕರುಳಿನ ಸಂಬಂಧದ ಈ ಸತ್ಯ ಯಾವಾಗ ಬಹಿರಂಗವಾಗುತ್ತದೆ ಎನ್ನುವುದೇ ಕಥೆಯ ತಿರುವು.&lt;img&gt;&lt;p&gt;ಕರ್ಣ ಸೀರಿಯಲ್​ನಲ್ಲಿ (Karna Serial) ರಮೇಶನೇ ತನ್ನ ಅಪ್ಪ ಎನ್ನುವ ಸತ್ಯ ಕರ್ಣನಿಗೆ ತಿಳಿದಿದೆ. ರಮೇಶನೇ ಈ ಸತ್ಯವನ್ನು ಹೇಳಿದ್ದು, ಇದರಿಂದ ಅಪ್ಪ-ಮಗ ಒಂದಾಗಿ ಆಗಿದೆ.&lt;/p&gt;&lt;img&gt;&lt;p&gt;ಈಗ ಏನಿದ್ದರೂ ಸೀತಾ ಉರ್ಫ್​ ಭುವನೇಶ್ವರಿ ಮತ್ತು ಕರ್ಣ- ಅಮ್ಮ, ಮಗ ಒಂದಾಗಬೇಕಿದೆ. ಭುವನೇಶ್ವರಿಗೆ ಕರ್ಣನನ್ನು ನೋಡಿದಾಗ ಹೆತ್ತ ಕರುಳು ಚುರುಕ್​ ಎನ್ನುತ್ತಿದೆ. ಕಣ್ಣು ಅರಿಯದಿದ್ದರೂ, ಕರುಳು ಅರಿಯುತ್ತೆ ಎನ್ನುವ ಸ್ಥಿತಿ ಆಕೆಯದ್ದು.&lt;/p&gt;&lt;img&gt;&lt;p&gt;ಇದೀಗ, ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಿಂದ ತನ್ನ ಮಗನಿಗಾಗಿ ಭುವನೇಶ್ವರಿ ಹಾತೊರೆದಿದ್ದಾಳೆ. ಮಕ್ಕಳಿಗೆ ಪ್ರಸಾದದ ರೂಪದಲ್ಲಿ ಊಟದ ವ್ಯವಸ್ಥೆಯನ್ನು ಮಾಡಿಸಿ, ಮಗನಿಗಾಗಿ ಹಂಬಲಿಸಿದ್ದಾಳೆ.&lt;/p&gt;&lt;img&gt;&lt;p&gt;ಅಲ್ಲಿಗೆ ಬಂದವನು ಕರ್ಣ. ಪೂಜೆಯ ದಿನ ನಿಮ್ಮನ್ನು ನೋಡಲು ಬಂದಿರುವೆ ಎಂದು ಕರ್ಣ ಹೇಳಿದ್ದಾನೆ. ಕೊನೆಗೆ ಊಟಕ್ಕೆ ಇಟ್ಟ ಬಾಳೆ ಎಲೆಯ ಎದುರಿಗೆ ಕುಳಿತಿದ್ದಾನೆ.&lt;/p&gt;&lt;img&gt;&lt;p&gt;ಅಲ್ಲಿಗೆ ಬಂದ ಭುವನೇಶ್ವರಿಯ ಅಸಿಸ್ಟೆಂಟ್​, ಏನು ತಪ್ಪು ಮಾಡಿದ್ರಿ? ಇದು ಭುವನೇಶ್ವರಿ ಅವರು ತಮ್ಮ ಮಗನಿಗಾಗಿ ಇಟ್ಟಿದ್ದು ಎಂದಾಗ ಏಳಲು ಕರ್ಣ ಮುಂದಾಗಿದ್ದಾನೆ.&lt;/p&gt;&lt;img&gt;&lt;p&gt;ಆಗ ಭುವನೇಶ್ವರಿ, ಪರವಾಗಿಲ್ಲ. ಊಟಕ್ಕೆ ಕುಳಿತವರನ್ನು ಎಬ್ಬಿಸಬಾರದು. ಊಟ ಮಾಡು ಎಂದು ಕರ್ಣನ ಸಮೀಪ ಹೋದಾಗ, ಅವಳಿಗೆ ರೋಮಾಂಚನವಾಗಿದೆ. ಯಾವುದೋ ತಾಯಿಯ ಶಕ್ತಿ ತನ್ನನ್ನು ಸೆಳೆಯುತ್ತಿದೆ ಎಂದು ಎನ್ನಿಸಿದೆ. ಅಮ್ಮ- ಮಗ ಕಣ್ಣೆದುರೇ ಇದ್ದರೂ ಸತ್ಯ ತಿಳಿದಿಲ್ಲ. ತಿಳಿದರೆ ಮಾಲತಿಯ ಪಾಡು ಏನು ಎನ್ನೋದು ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-exciting-twist-bhuveswaris-wish-comes-true-mother-and-son-together-suc-entspx6"/>
        </item>
        <item>
            <title><![CDATA[ಜೈದೇವ್ ಕಣ್ಮರೆ, ಶಕುಂತಲಾ ಹುಡುಕಾಟ; ಸೀರಿಯಲ್ ಬಿಟ್ರಾ ಗೌತಮ್ ದಿವಾನ್? ಇದೇನಾ ಹೊಸ ಅಧ್ಯಾಯ]]></title>
            <link>https://kannada.asianetnews.com/gallery/tv-talk/zee-kannada-amruthadhaare-new-chapter-begun-shakuntala-s-search-for-her-son-jaidev-where-did-the-old-gautam-diwan-go-mrq-g9wfbhb</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-new-chapter-begun-shakuntala-s-search-for-her-son-jaidev-where-did-the-old-gautam-diwan-go-mrq-g9wfbhb</guid>
            <pubDate>Tue, 08 Sep 2026 11:43:24 +0530</pubDate>
            <description><![CDATA[&lt;p&gt;ಅಮೃತಧಾರೆ ಸೀರಿಯಲ್&zwnj;ನಲ್ಲಿ ರೋಚಕ ತಿರುವು! ಜೈದೇವ್ ಹತ್ಯೆಯ ರಹಸ್ಯವನ್ನು ಮುಚ್ಚಿಟ್ಟ ಭೂಮಿಕಾ-ಜೀವಾ. ಮಗನನ್ನು ಹುಡುಕಿ ಬಂದ ಶಕುಂತಲಾ ಸತ್ಯವನ್ನು ಪತ್ತೆ ಹಚ್ಚುತ್ತಾಳಾ? ಮುಂದೇನಿದೆ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1zt7c56h845npttzaegvks7,imgname-amruthadhaare-1788847829158.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಸೀರಿಯಲ್&zwnj;ನಲ್ಲಿ ರೋಚಕ ತಿರುವು! ಜೈದೇವ್ ಹತ್ಯೆಯ ರಹಸ್ಯವನ್ನು ಮುಚ್ಚಿಟ್ಟ ಭೂಮಿಕಾ-ಜೀವಾ. ಮಗನನ್ನು ಹುಡುಕಿ ಬಂದ ಶಕುಂತಲಾ ಸತ್ಯವನ್ನು ಪತ್ತೆ ಹಚ್ಚುತ್ತಾಳಾ? ಮುಂದೇನಿದೆ ತಿಳಿಯಿರಿ.&lt;/p&gt;&lt;img&gt;&lt;p&gt;ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಳ್ಳುವ ಜೊತೆಗೆ ಹೊಸ ಅಧ್ಯಾಯ ಶುರುವಾಗಲಿದೆ ಎಂಬ ಮಾಹಿತಿಯನ್ನು ಧಾರಾವಾಹಿ ತಂಡ ಹೇಳಿಕೊಂಡಿದೆ. ಸೋಮವಾರದ ಎಪಿಸೋಡ್&zwnj;ನಲ್ಲಿ ಜೀವಾ ಹೊಡೆದ ಏಟಿನಿಂದ ಜೈದೇವ್&zwnj; ಪ್ರಾಣ ಹೋಗಿರೋದನ್ನು ತೋರಿಸಲಾಗಿತ್ತು. ಇಂದಿನ ಪ್ರೋಮೋದಲ್ಲಿ ಜೈದೇವ್&zwnj;ನನ್ನು ಹುಡುಕಿಕೊಂಡು ಆತನ ಮನೆಗೆ ತಾಯಿ ಶಕುಂತಲಾ ಬಂದಿದ್ದಾಳೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ರಾತ್ರಿಯಿಡೀ ನಿದ್ದೆಯಿಲ್ಲದೇ ಆತಂಕದಲ್ಲಿರುವ ಭೂಮಿಕಾಳಲ್ಲಾದ ಬದಲಾವಣೆಯನ್ನು ಗೌತಮ್ ಕಂಡು ಹಿಡಿದಿದ್ದಾನೆ. ವಿಡಿಯೋ ಕಾಲ್&zwnj;ನಲ್ಲಿ ಮಾತನಾಡಿದ ಗೌತಮ್, ನನ್ನಿಂದ ಏನೋ ವಿಷಯ ಮುಚ್ಚಿಡುತ್ತಿದ್ದೀರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾನೆ. ಮಣ್ಣಲ್ಲಿ ಮಣ್ಣಾದ ಜೈದೇವ್&zwnj;ನನ್ನು ಶಕುಂತಲಾ ಪತ್ತೆ ಮಾಡುತ್ತಾಳಾ ಎಂಬುವುದು ಮುಂದಿನ ಸಂಚಿಕೆಯಲ್ಲಿನ ತಿಳಿಯಲಿದೆ.&lt;/p&gt;&lt;img&gt;&lt;p&gt;ಜೈದೇವ್ ಸಾವನ್ನಪ್ಪಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡೋಣ ಎಂದು ಭೂಮಿಕಾ ಹೇಳುತ್ತಾಳೆ. ಆದ್ರೆ ಇದಕ್ಕೆ ವಿರೋಧಿಸುವ ಜೀವಾ, ಒಂದು ವೇಳೆ ನೀನು ಜೈಲಿಗೆ ಹೋದ್ರೆ ಅಪ್ಪ-ಅಮ್ಮಾ, ಗೌತಮ್ ಅವರಿಗೆ ಆಘಾತದ ಜೊತೆ ಅವಮಾನ ಆಗುತ್ತೆ. ಮತ್ತೊಂದೆಡೆ ಮಕ್ಕಳು ತನ್ನ ತಾಯಿ ಕೊಲೆಗಾರ್ತಿ ಅಂತ ತಿಳಿದ್ರೆ ಹೇಗಾಗುತ್ತೆ ಎಂದು ಜೀವಾ ಎಮೋಷನಲ್ ಬ್ಲ್ಯಾಕ್&zwnj;ಮೇಲ್ ಮಾಡಿದ್ದಾನೆ.&lt;/p&gt;&lt;img&gt;&lt;p&gt;ಅಂತಿಮವಾಗಿ ಪೊಲೀಸರಿಗೆ ವಿಷಯ ತಿಳಿಸದೇ ಜೀವಾ ಮತ್ತು ಮಧುರಾ ಜೊತೆಯಾಗಿ ಕಾಡಿನಲ್ಲಿ ಜೈದೇವ್&zwnj; ಹೆಣವನ್ನು ಹೂತಿದ್ದಾರೆ. ಅಲ್ಲಿಂದ ಎಲ್ಲರೂ ಕಾಲ್ಕಿತ್ತಿದ್ದಾರೆ. ಆದ್ರೆ ಈ ಭಯದಲ್ಲಿರುವ ಭೂಮಿಕಾಗೆ ರಾತ್ರಿಯಿಡೀ ನಿದ್ದೆಯೇ ಬಂದಿಲ್ಲ. ಮುಂದೇನು ಆಗುತ್ತೆ ಎಂಬ ಭಯದಲ್ಲಿ ಭೂಮಿಕಾ ಸಿಲುಕಿದ್ರೆ, ಮತ್ತೊಂದೆಡೆ ಜೈದೇವ್&zwnj;ನನ್ನು ಬಂಧಿಸಲು ಮಲ್ಲಿ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಸೋಮವಾರ ಬಿಡುಗಡೆಯಾದ ಪ್ರೋಮೋದಿಂದ ಅಮೃತಧಾರೆ ಸೀರಿಯಲ್ ನಿಂದ ರಾಜೇಶ್&zwnj; ನಟರಂಗ ಹೊರಗೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಧಾರಾವಾಹಿಯಲ್ಲಿ ಗೌತಮ್&zwnj;, ಬ್ಯುಸಿನೆಸ್ ಸಂಬಂಧ ವಿದೇಶ ಪ್ರವಾಸದಲ್ಲಿದ್ದಾನೆ. ಹಾಗಾಗಿ ಧಾರಾವಾಹಿಯಲ್ಲಿ ಗೌತಮ್ ಪಾತ್ರ ಕಡಿಮೆ ಕಾಣಿಸುತ್ತಿದೆ. ಇತ್ತ ಜೈದೇವ್ ಪಾತ್ರ ಮುಕ್ತಾಯದ ಬೆನ್ನಲ್ಲೇ ಮಧುರಾ ಮಿಸ್ ಆಗಿದ್ದಾಳೆ. ಹಾಗಾದ್ರೆ ಮಧುರಾ ಎಲ್ಲಿ ಹೋದ್ಳು ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-new-chapter-begun-shakuntala-s-search-for-her-son-jaidev-where-did-the-old-gautam-diwan-go-mrq-g9wfbhb"/>
        </item>
        <item>
            <title><![CDATA[ಬಡ್ದು ಬಾಯಿಗೆ ಹಾಕೊಂಡು ತೇಗಿದ ಮಂಜ;  ಟಾಸ್ಕ್ ಬಳಿಕ ಭುಗಿಲೆದ್ದ ಬೇಸ್‌ ವಾಯ್ಸ್‌ ಜಗಳ!]]></title>
            <link>https://kannada.asianetnews.com/gallery/tv-talk/bigg-boss-kannada-13-madiddunnno-maraya-food-task-was-held-between-the-flight-crew-and-house-members-mrq-h5gowhf</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-madiddunnno-maraya-food-task-was-held-between-the-flight-crew-and-house-members-mrq-h5gowhf</guid>
            <pubDate>Wed, 09 Sep 2026 08:47:00 +0530</pubDate>
            <description><![CDATA[ಬಿಗ್&zwnj;ಬಾಸ್ ಮನೆಯಲ್ಲಿ ವಿಮಾನದ ಸದಸ್ಯರು ಮತ್ತು ಮನೆಯ ಸದಸ್ಯರ ನಡುವೆ 'ಮಾಡಿದ್ದುಣ್ಣೋ ಮಾರಾಯಾ' ಆಹಾರ ಟಾಸ್ಕ್ ನಡೆದಿದೆ. ಈ ಮಧ್ಯೆ, ಬೇಸ್&zwnj; ವಾಯ್ಸ್&zwnj; ವಿಚಾರವಾಗಿ ಗಗನ್ ಚಿನ್ನಪ್ಪ ಮತ್ತು ಮಂಜ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಡೈಮಂಡ್ ಹುಡುಕಾಟದಲ್ಲಿ ಸೋತ ಆಸಿಯಾ ಮತ್ತೆ ವಿಮಾನ ಸೇರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m222ckc0c8kb07ctrx5q4hjb,imgname-bigg-boss-kananda--4--1788923497856.jpg" type="image/jpeg" height="390" width="690"/>
            <content:encoded><![CDATA[ಬಿಗ್&zwnj;ಬಾಸ್ ಮನೆಯಲ್ಲಿ ವಿಮಾನದ ಸದಸ್ಯರು ಮತ್ತು ಮನೆಯ ಸದಸ್ಯರ ನಡುವೆ 'ಮಾಡಿದ್ದುಣ್ಣೋ ಮಾರಾಯಾ' ಆಹಾರ ಟಾಸ್ಕ್ ನಡೆದಿದೆ. ಈ ಮಧ್ಯೆ, ಬೇಸ್&zwnj; ವಾಯ್ಸ್&zwnj; ವಿಚಾರವಾಗಿ ಗಗನ್ ಚಿನ್ನಪ್ಪ ಮತ್ತು ಮಂಜ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಡೈಮಂಡ್ ಹುಡುಕಾಟದಲ್ಲಿ ಸೋತ ಆಸಿಯಾ ಮತ್ತೆ ವಿಮಾನ ಸೇರಿದ್ದಾರೆ.&lt;img&gt;&lt;p&gt;ವಿಮಾನದಲ್ಲಿರೋರು ಮತ್ತು ಬಿಗ್&zwnj;ಬಾಸ್ ಮನೆಯೊಳಗಿರುವ ಸ್ಪರ್ಧಿಗಳ ನಡುವೆ ಟಾಸ್ಕ್ ಶುರುವಾಗಿದೆ. ಆರು ಜನರ ಒಂದೊಂದು ತಂಡಗಳ ನಡುವೆ ಸೇವಿಸಲು ಸಾಧ್ಯವಾಗದಂತಹ ಆಹಾರ ತಿನ್ನಬೇಕು. ಒಂದೆಡೆ ಇಂತಹ ಆಹಾರ ತಿನ್ನಲು ಮಂಜ ಮತ್ತು ಲಿಖಿತ್ ಕುಳಿತಿದ್ದಾರೆ. ಮತ್ತೊಂದೆಡೆ ಓಂಪ್ರಕಾಶ್ ರಾವ್ ಮತ್ತು ಜಗದೀಶ್ ತಿನ್ನುತ್ತಿದ್ದಾರೆ.&lt;/p&gt;&lt;img&gt;&lt;p&gt;ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ವಿಮಾನದ ಸದಸ್ಯರು ಟಾಸ್ಕ್ ಗೆದ್ದಂತೆ ಕಾಣಿಸುತ್ತಿದೆ. ಗೆದ್ದ ಬಳಿಕ ಮಾಡರ್ನ್ ಕವಿ ಮಂಜ, ಬಡದ್ದು ಬಾಯಿಗೆ ಹಾಕೊಂಡು ತೇಗ್ ಹೊಡೆದು ಹೋಗ್ತಿನಿ ಎಂದು ಡೈಲಾಗ್ ಹೊಡೆಯುತ್ತಾರೆ. ನಂತರ ಗಗನ್ ಚಿನ್ನಪ್ಪ ಮತ್ತು ಮಂಜ ನಡುವೆ ಮಾತಿನ ಚಕಮಕಿ ಉಂಟಾಗಿದೆ.&lt;/p&gt;&lt;img&gt;&lt;p&gt;ಈ ಹಿಂದೆಯೂ ವಿಮಾನದಲ್ಲಿದ್ದಾಗ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಅಧಿಕ ಪ್ರಸಂಗತನ ಮಾತಾಡಬೇಡ, ಸೈಡ್&zwnj;ಗೆ ಹೋಗ್ರಿ ಎಂದು ಮಂಜನಿಗೆ ಗಗನ್ ವಾರ್ನಿಂಗ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಂಜ, ಆರಾಮ್ ಆಗಿ ಮಾತಾಡು ಬ್ರೋ ಎಂದು ಗಗನ್ ರೀತಿಯಲ್ಲಿ ಹೇಳಿ ಟಾಂಗ್ ಕೊಟ್ಟಿದ್ದಾರೆ. ಇಬ್ಬರ ನಡುವೆ ಬೇಸ್&zwnj; ವಾಯ್ಸ್&zwnj;ಗಾಗಿ ಜಗಳ ನಡೆದಿದೆ ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ.&lt;/p&gt;&lt;img&gt;&lt;p&gt;ಡೈಮಂಡ್ ಹುಡುಕಾಟದಲ್ಲಿ ಎಲ್ಲಾ ಸದಸ್ಯರು ತಪ್ಪಾಗಿ ಆಸಿಯಾ ಫಿರ್ದೋಸ್ ಹೆಸರು ಹೇಳಿದ್ದರಿಂದ ಶ್ರಾವಣಿ ಕಣ್ಣೀರು ಹಾಕುತ್ತಾ ಮತ್ತೆ ವಿಮಾನ ಸೇರಿಕೊಂಡಿದ್ದಾಳೆ. ಕಣ್ಣೀರು ಹಾಕುತ್ತಾ ಬಂದ ಶ್ರಾವಣಿಯನ್ನು ವಿಮಾನದಲ್ಲಿದ್ದ ಸದಸ್ಯರು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆಸಿಯಾ ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಡೈಮಂಡ್ ಹುಡುಕಾಟದಲ್ಲಿ ಚಾಣಕ್ಷನಾಗಿ ಗೆದ್ದಿರುವ ಗಗನ್ ಚಿನ್ನಪ್ಪ, ಈ ವಾರ ಸೇಫ್ ಆಗಿದ್ದಾರೆ. ಇಂದಿನ ಟಾಸ್ಕ್ ಗೆದ್ದಿರುವ ಸ್ಪರ್ಧಿಗಳು ಯಾರು ಸೇವ್ ಆಗ್ತಾರೆ ಅನ್ನೋದು ಇವತ್ತಿನ ಸಂಚಿಕೆಯಲ್ಲಿ ತಿಳಿಯಲಿದೆ. ಮೊದಲ ಸೇವ್ ಕಂಟೆಸ್ಟಂಟ್ ಆಗಿರೋ ಗಗನ್&zwnj;, ಈಗ ಮನೆಯ ವಿವಿಐಪಿ ಆಗಿ ಹಲವು ಸೌಲಭ್ಯ ಮತ್ತು ಅಧಿಕಾರಗಳನ್ನು ಪಡೆದುಕೊಂಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-madiddunnno-maraya-food-task-was-held-between-the-flight-crew-and-house-members-mrq-h5gowhf"/>
        </item>
        <item>
            <title><![CDATA[Amruthadhaare ಸೀರಿಯಲ್​ನಲ್ಲಿ ಗೌತಮ್​ ಪಾತ್ರ ಬದಲಾಗ್ತಿದೆಯಾ? ನಟ ರಾಜೇಶ್​ ನಟರಂಗ ಸೀರಿಯಲ್​ ಬಿಟ್ರಾ]]></title>
            <link>https://kannada.asianetnews.com/gallery/tv-talk/is-gauthams-role-changing-in-amruthadhaare-serial-is-actor-rajesh-nataranga-left-serial-suc-kn008h0</link>
            <guid isPermaLink="true">https://kannada.asianetnews.com/gallery/tv-talk/is-gauthams-role-changing-in-amruthadhaare-serial-is-actor-rajesh-nataranga-left-serial-suc-kn008h0</guid>
            <pubDate>Tue, 08 Sep 2026 13:42:31 +0530</pubDate>
            <description><![CDATA['ಅಮೃತಧಾರೆ' ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಜೈದೇವ್ ಪಾತ್ರದ ಅಂತ್ಯವಾಗಿದೆ. ಇದರ ನಡುವೆ ಬಿಡುಗಡೆಯಾದ ಹೊಸ ಪ್ರೊಮೋ, ಗೌತಮ್ ಪಾತ್ರಕ್ಕೆ ಹೊಸ ನಟನ ಆಗಮನದ ಬಗ್ಗೆ ಸುಳಿವು ನೀಡುತ್ತಿದ್ದು, ರಾಜೇಶ್ ನಟರಂಗ ಧಾರಾವಾಹಿ ಬಿಡುತ್ತಾರೆಯೇ ಎಂಬ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2010dp0388w99ahex7t3e2m,imgname-amruthadhaar-serial-1788854941376.jpg" type="image/jpeg" height="390" width="690"/>
            <content:encoded><![CDATA['ಅಮೃತಧಾರೆ' ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಜೈದೇವ್ ಪಾತ್ರದ ಅಂತ್ಯವಾಗಿದೆ. ಇದರ ನಡುವೆ ಬಿಡುಗಡೆಯಾದ ಹೊಸ ಪ್ರೊಮೋ, ಗೌತಮ್ ಪಾತ್ರಕ್ಕೆ ಹೊಸ ನಟನ ಆಗಮನದ ಬಗ್ಗೆ ಸುಳಿವು ನೀಡುತ್ತಿದ್ದು, ರಾಜೇಶ್ ನಟರಂಗ ಧಾರಾವಾಹಿ ಬಿಡುತ್ತಾರೆಯೇ ಎಂಬ ಚರ್ಚೆ ಹುಟ್ಟುಹಾಕಿದೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial) ಸದ್ಯ ಕುತೂಹಲ ಹಂತ ತಲುಪಿದೆ. ಇನ್ನೇನು ಸೀರಿಯಲ್​ ಮುಗಿಯತ್ತೆ, ಮುಗಿಯತ್ತೆ ಎನ್ನೋವಾಗ್ಲೇ ಮತ್ತೊಂದು, ಇನ್ನೊಂದು ರೋಚಕತೆ ತಂದು ಸೀರಿಯಲ್​ ಎಳೆಯಲಾಗುತ್ತಿದೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ಜೈದೇವನ ಅಂತ್ಯ ಹಾಡಿದಂತೆ ತೋರಿಸಲಾಗಿದೆ. ಮಿಂಚುವನ್ನು ಜೈದೇವ್​ ಕಿಡ್​ನ್ಯಾಪ್​ ಮಾಡಿದಾಗ, ಜೀವನ ಕೈಯಿಂದ ಅವನ ಕೊಲೆಯಾದಂತೆ ತೋರಿಸಲಾಗಿದ್ದು, ಅವನನ್ನು ಹೂತು ಕೂಡ ಆಗಿದೆ.&lt;/p&gt;&lt;img&gt;&lt;p&gt;ಆದರೆ ಜೈದೇವ ಬದುಕಿ ಬರ್ತಾನಾ ಎನ್ನುವ ಕುತೂಹಲ ಕೂಡ ಇದೆ. ಇದಕ್ಕೆ ಕಾರಣ, ಜೈದೇವನ ಪಾತ್ರ ಇಲ್ಲದೇ ಹೋದರೆ ಈ ಸೀರಿಯಲ್​ಗೆ ಕಳೆಯೇ ಇಲ್ಲ.&lt;/p&gt;&lt;img&gt;&lt;p&gt;ಆದರೆ, ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ, ಗೌತಮ್​ ಪಾತ್ರಕ್ಕೆ ಬೇರೆ ನಟನ ಎಂಟ್ರಿ ಆಗಲಿದೆಯೇ ಎನ್ನುವ ಸಂದೇಹವೂ ಕಾಡುತ್ತಿದೆ. ಇದಕ್ಕೆ ಕಾರಣ, ಬಿಡುಗಡೆಯಾಗಿರುವ ಹೊಸ ಪ್ರೊಮೋ.&lt;/p&gt;&lt;img&gt;&lt;p&gt;ಇದರಲ್ಲಿ ಭೂಮಿಕಾಳನ್ನಷ್ಟೇ ತೋರಿಸಲಾಗಿದ್ದು, ಪಕ್ಕದಲ್ಲಿ ಪ್ರಶ್ನಾರ್ಥಕ ಚಿಹ್ನೆ ಇಡಲಾಗಿದೆ. ಹೊಸ ಅಧ್ಯಾಯ ಎಂದು ತೋರಿಸಲಾಗಿದೆ. ಹಾಗಿದ್ದರೆ ಗೌತಮ್​ ಪಾತ್ರ ಬದಲಾಗ್ತಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.&lt;/p&gt;&lt;img&gt;&lt;p&gt;ಇದಾಗಲೇ ಗೌತಮ್​ ಪಾತ್ರಧಾರಿ ರಾಜೇಶ್​ ನಟರಂಗ ಅವರು, ಬೇರೆ ಬೇರೆ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿ ಬಿಜಿಯಾಗಿದ್ದಾರೆ. ಸೀರಿಯಲ್​ನಲ್ಲಿ ಸದ್ಯ ಗೌತಮ್​ನನ್ನು ಫಾರಿನ್​ಗೆ ಕಳುಹಿಸಲಾಗಿದೆ. ಈ ಎಲ್ಲಾ ಘಟನೆ ನೋಡಿದರೆ, ಹೊಸ ಪ್ರೊಮೋ ಬೇರೆಯದ್ದೇ ಹಿಂಟ್​ ಕೊಡುತ್ತಿದೆ ಎಂದು ಎನ್ನಿಸುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/is-gauthams-role-changing-in-amruthadhaare-serial-is-actor-rajesh-nataranga-left-serial-suc-kn008h0"/>
        </item>
        <item>
            <title><![CDATA[Bigg Boss ​ ಮನೆಯಲ್ಲಿ ಮೊದಲ ದಿನವೇ ಹೊತ್ತಿಕೊಂಡ ಕಿಡಿ! ಗಗನ್​-ಮಂಜು ನಡುವೆ ಕಿತ್ತಾಟ, ಓಪನ್ ಚಾಲೆಂಜ್​]]></title>
            <link>https://kannada.asianetnews.com/gallery/tv-talk/bigg-boss-kannada-13-first-day-fight-between-manjunath-and-gagan-suc-ovl00yv</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-first-day-fight-between-manjunath-and-gagan-suc-ovl00yv</guid>
            <pubDate>Mon, 07 Sep 2026 16:58:25 +0530</pubDate>
            <description><![CDATA[ಬಿಗ್​ಬಾಸ್​ ಕನ್ನಡ 13ರ ಮೊದಲ ದಿನವೇ, ಟಾಸ್ಕ್ ವಿಚಾರವಾಗಿ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ಮಂಜುನಾಥ್ ನಡುವೆ ತೀವ್ರ ಜಗಳ ಶುರುವಾಗಿದೆ. ಮಂಜುನಾಥ್ ಅವರ 'ಧಗ ಧಗ ಧಗ' ಎಂಬ ಡೈಲಾಗ್ ವೈರಲ್ ಆಗಿದ್ದು, ಇಬ್ಬರ ನಡುವಿನ ಕಿತ್ತಾಟ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xss82j921vbvkh83sgjxn7,imgname-bb-13-01-1788780257362.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ ಕನ್ನಡ 13ರ ಮೊದಲ ದಿನವೇ, ಟಾಸ್ಕ್ ವಿಚಾರವಾಗಿ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ಮಂಜುನಾಥ್ ನಡುವೆ ತೀವ್ರ ಜಗಳ ಶುರುವಾಗಿದೆ. ಮಂಜುನಾಥ್ ಅವರ 'ಧಗ ಧಗ ಧಗ' ಎಂಬ ಡೈಲಾಗ್ ವೈರಲ್ ಆಗಿದ್ದು, ಇಬ್ಬರ ನಡುವಿನ ಕಿತ್ತಾಟ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.&lt;img&gt;&lt;p&gt;ಬಿಗ್​ಬಾಸ್​ 13 (Bigg Boss Kannada 13) ಆರಂಭಗೊಂಡ ಬೆನ್ನಲ್ಲೇ, ಮೊದಲ ದಿನವೇ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಅದು ಸೀತಾರಾಮ ಸೀರಿಯಲ್​​ ಖ್ಯಾತಿಯ ರಾಮ ಉರ್ಫ್​ ಗಗನ್​ ಚಿನ್ನಪ್ಪ ಮತ್ತು ಕಾಮನ್​ ಮ್ಯಾನ್​ ಆಗಿ ಎಂಟ್ರಿ ಕೊಟ್ಟಿರುವ, ಅಗ್ನಿಪರೀಕ್ಷೆಯಲ್ಲಿ ಅರ್ಧ ತಲೆ ಬೋಳಿಸಿಕೊಂಡು ಸುದ್ದಿಯಾಗಿದ್ದ ಮಂಜುನಾಥ್​ ಅವರ ನಡುವೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ, ಇವರಿಬ್ಬರ ನಡುವೆ ಕಿಡಿ ಹೊತ್ತುಕೊಂಡದ್ದು, ಬಿಗ್​ಬಾಸ್​ ಕೊಟ್ಟಿರುವ ಟಾಸ್ಕ್​ನಿಂದಾಗಿ. ಮೊದಲ ದಿನವೇ ತಮಗೆ ಇಷ್ಟವಾಗದ ಪ್ರಯಾಣಿಕರನ್ನು ಹೊರಹಾಕುವಂತೆ ಬಿಗ್​ಬಾಸ್​​ ಹೇಳಿತ್ತು. ಆ ಸಮಯದಲ್ಲಿ ಉಂಟಾದ ಕಿತ್ತಾಟ ಇದು.&lt;/p&gt;&lt;img&gt;&lt;p&gt;ಈ ಸಮಯದಲ್ಲಿ ಮಂಜು ಅವರು ಗಗನ್​ ಅವರನ್ನು ಉದ್ದೇಶಿಸಿ ಕೆಟ್ಟದ್ದಾಗಿ ಮಾತನಾಡಿದ್ದು, ಅದಕ್ಕೆ ಗಗನ್​ ಅವರು ತುಂಬಾ ಮಾತನಾಡಬೇಡ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಆಗ ಮಂಜುನಾಥ್​, ನನಗೆ ಉರ್ಸೋದು ಎಂದರೆ ಇಷ್ಟ, ಅದರ ಮಜಾನೇ ಬೇರೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಲ್ಲಿಗೆ ಅವರಿಬ್ಬರ ನಡುವೆ ಜಟಾಪಟಿ ನಡೆದಿದೆ. ಮಂಜು ಅವರು ಧಗ ಧಗ ಧಗ... ನನಗೆ ಉರಿಸೋದು ಅಂದ್ರೆ ತುಂಬಾ ಖುಷಿ ಎಂದಿದ್ದಾರೆ.&lt;/p&gt;&lt;img&gt;&lt;p&gt;ಇದರ ಪ್ರೊಮೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿಕೊಂಡಿದೆ. ಮಂಜುನಾಥ್ ಉರ್ಸಿದ್ದು ನಿಜಾನಾ? ಗಗನ್ ಉರ್ಕೊಂಡಿದ್ದು ಸುಳ್ಳಾ ಎಂದು ಇದಕ್ಕೆ ಕ್ಯಾಪ್ಷನ್​ ನೀಡಲಾಗಿದೆ.&lt;/p&gt;&lt;img&gt;&lt;p&gt;ಮಂಜು ಅವರ ಧಗಧಗಧಗ ಡೈಲಾಗ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಅವರಿಗೆ ಮೊದಲ ದಿನವೇ ಧಗ ಧಗ ಧಗ ಎಂದು ಬಿರುದು ಕೊಡಲಾಗಿದೆ. ಒಟ್ಟಿನಲ್ಲಿ ಮೊದಲ ದಿನವೇ ವೀಕ್ಷಕರು ಕುತೂಹಲದಿಂದ ಷೋ ನೋಡುವಂತೆ ಆಗುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-first-day-fight-between-manjunath-and-gagan-suc-ovl00yv"/>
        </item>
        <item>
            <title><![CDATA[ಬಿಗ್ ಬಾಸ್ ಗ್ರ್ಯಾಂಡ್‌ ಓಪನಿಂಗ್‌ ದಿನ ನಡೆದ ಈ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರಾ? ಸುದೀಪ್ ವ್ಯಕ್ತಿತ್ವಕ್ಕೆ ನೆಟ್ಟಿಗರು ಫಿದಾ]]></title>
            <link>https://kannada.asianetnews.com/gallery/tv-talk/kiccha-sudeeps-heartwarming-gesture-on-bigg-boss-stage-goes-viral-pbhin3x</link>
            <guid isPermaLink="true">https://kannada.asianetnews.com/gallery/tv-talk/kiccha-sudeeps-heartwarming-gesture-on-bigg-boss-stage-goes-viral-pbhin3x</guid>
            <pubDate>Wed, 09 Sep 2026 14:53:53 +0530</pubDate>
            <description><![CDATA[&lt;p&gt;Bigg Boss Kannada: ಬಿಗ್ ಬಾಸ್ ಗ್ರ್ಯಾಂಡ್&zwnj; ಓಪನಿಂಗ್&zwnj; ವೇದಿಕೆಯಲ್ಲಿ ಯುವತಿಯೊಬ್ಬಳಿಗೆ ಕಿಚ್ಚ ಸುದೀಪ್ ತೋರಿದ ಅಪಾರ ಗೌರವ ಮತ್ತು ಕಾಳಜಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m22q9y4psysjbv927adjvj7y,imgname-thumbnail--6--1788945430677.png" type="image/jpeg" height="390" width="690"/>
            <content:encoded><![CDATA[&lt;p&gt;Bigg Boss Kannada: ಬಿಗ್ ಬಾಸ್ ಗ್ರ್ಯಾಂಡ್&zwnj; ಓಪನಿಂಗ್&zwnj; ವೇದಿಕೆಯಲ್ಲಿ ಯುವತಿಯೊಬ್ಬಳಿಗೆ ಕಿಚ್ಚ ಸುದೀಪ್ ತೋರಿದ ಅಪಾರ ಗೌರವ ಮತ್ತು ಕಾಳಜಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ಕಿಚ್ಚನ ಮೇಲಿನ ಗೌರವ ದುಪ್ಪಟ್ಟು&lt;/strong&gt;ಕಿರುತೆರೆಯ ಬಹುನಿರೀಕ್ಷಿತ 'ಬಿಗ್ ಬಾಸ್ ಕನ್ನಡ' ಸೀಸನ್ 13 ಅದ್ದೂರಿಯಾಗಿ ಶುರುವಾಗಿದೆ. ಎಂದಿನಂತೆ ಕಿಚ್ಚ ಸುದೀಪ್ ತಮ್ಮ ಖಡಕ್ ನಿರೂಪಣೆ ಮತ್ತು ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಆದರೆ, ಗ್ರ್ಯಾಂಡ್&zwnj; ಓಪನಿಂಗ್&zwnj; ನಡೆದ ಒಂದು ಸೂಕ್ಷ್ಮ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಕಿಚ್ಚನ ಮೇಲಿನ ಗೌರವವನ್ನು ದುಪ್ಪಟ್ಟು ಮಾಡಿದೆ.&lt;/p&gt;&lt;img&gt;&lt;p&gt;&lt;strong&gt;ವೇದಿಕೆಯಲ್ಲಿ ನಡೆದಿದ್ದೇನು?&lt;/strong&gt;ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಮುನ್ನ ಪ್ರತಿ ಸ್ಪರ್ಧಿಗೂ ಸುದೀಪ್ 'ಫ್ಲೈಟ್ ಟಿಕೆಟ್' ನೀಡಿ ಕಳುಹಿಸುವುದು ಈ ಬಾರಿಯ ಪರಿಕಲ್ಪನೆ (Concept) ಆಗಿತ್ತು. ಈ ಟಿಕೆಟ್ ಅನ್ನು ಸುದೀಪ್ ಅವರ ಕೈಗೆ ತಲುಪಿಸಲು ಏರ್&zwnj;ಹೋಸ್ಟೆಸ್ ವೇಷ ಧರಿಸಿದ ಯುವತಿಯೊಬ್ಬರು ವೇದಿಕೆಗೆ ಬರುತ್ತಿದ್ದರು. ಆದರೆ ಆರಂಭದಲ್ಲಿ ವೇದಿಕೆಯ ಮೆಟ್ಟಿಲುಗಳನ್ನು ಹತ್ತಿ ಇಳಿದು ಬರುವಾಗ ಆ ಯುವತಿ ಆಯತಪ್ಪಿ ಒಮ್ಮೆ ಎಡವುತ್ತಾರೆ.&lt;/p&gt;&lt;p&gt;ಇದನ್ನು ಕಣ್ಣಾರೇ ಕಂಡ ಕಿಚ್ಚ ಸುದೀಪ್, ಆಕೆಗೆ ಮತ್ತೆ ಯಾವುದೇ ಮುಜುಗರ ಅಥವಾ ಕಷ್ಟವಾಗಬಾರದು ಎಂದು ತಕ್ಷಣವೇ ನಿರ್ಧಾರ ಬದಲಿಸುತ್ತಾರೆ. ನಂತರ ಪ್ರತಿ ಬಾರಿಯೂ ಆ ಯುವತಿಯನ್ನು ವೇದಿಕೆಯ ಮೇಲೆ ಹತ್ತಲು ಬಿಡದೆ, ಆಕೆ ದೂರದಲ್ಲಿ ಬರುತ್ತಿದ್ದಂತೆಯೇ ತಾವೇ ಸ್ವತಃ ಮುಂದೆ ನಡೆದುಹೋಗಿ ಆಕೆಯ ಬಳಿಯೇ ಟಿಕೆಟ್ ಪಡೆದುಕೊಂಡು ಬರುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ವಿಡಿಯೋ ಮಾಡಿ ಗುಟ್ಟು ರಟ್ಟು ಮಾಡಿದ ನೆಟ್ಟಿಗ!&lt;/strong&gt;ವೀಕ್ಷಕರ ಕಣ್ಣಿಗೆ ಸಾಮಾನ್ಯವಾಗಿ ಕಾಣದ ಈ ಪುಟ್ಟ ಘಟನೆಯನ್ನು ತೇಜಸ್ ಗೌಡ ಎಂಬ ಇನ್&zwnj;ಸ್ಟಾಗ್ರಾಮ್ ಬಳಕೆದಾರರು ಸೂಕ್ಷ್ಮವಾಗಿ ಗಮನಿಸಿ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ. &quot;ಸುದೀಪ್ ಸರ್ ಆ ಯುವತಿಯನ್ನು ಸ್ಟೇಜ್ ಮೇಲೆ ಕರೆಯದೆ ತಾವೇ ಏಕೆ ಹೋಗಿ ಟಿಕೆಟ್ ಪಡೆಯುತ್ತಿದ್ದರು&quot;? ಎಂಬ ಅಸಲಿ ಕಾರಣವನ್ನು ವಿವರಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ವಿಷ್ಣುದಾದಾ ಅವರನ್ನ ನೆನೆದ ಅಭಿಮಾನಿಗಳು&lt;/strong&gt;ಸುದೀಪ್ ಅವರ ಈ ಮಾನವೀಯತೆ ಮತ್ತು ಹೆಣ್ಣುಮಕ್ಕಳಿಗೆ ನೀಡುವ ಗೌರವವನ್ನು ಕಂಡ ನೆಟ್ಟಿಗರು, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡಿದ್ದಾರೆ. ವಿಷ್ಣುದಾದಾ ಕೂಡ ಹೆಣ್ಣುಮಕ್ಕಳಿಗೆ ಅಪಾರ ಗೌರವ ನೀಡುತ್ತಿದ್ದರು, ಸುದೀಪ್ ಅವರಲ್ಲೂ ಅದೇ ಸಂಸ್ಕಾರ ಎದ್ದು ಕಾಣುತ್ತಿದೆ ಎಂದು ಕೊಂಡಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ವೈರಲ್ ವಿಡಿಯೋಗೆ ಬಂದ ನೆಟ್ಟಿಗರ ಮೆಚ್ಚುಗೆಯ ಕಮೆಂಟ್&zwnj;ಗಳು&lt;/strong&gt;&quot;ಸತ್ಯ ಸತ್ಯ ಸತ್ಯ... ಇದು ನೂರಕ್ಕೆ ನೂರರಷ್ಟು ಸತ್ಯ. ವಿಷ್ಣುವರ್ಧನ್ ಅವರು ಹೆಣ್ಣಿಗೆ ತುಂಬಾ ಗೌರವ ಕೊಡುತ್ತಿದ್ದರು. ಕಿಚ್ಚ ಕೂಡ ಹೆಣ್ಣನ್ನು ಅಷ್ಟೇ ಗೌರವದಿಂದ ಕಾಣುತ್ತಾರೆ. ಹೆಣ್ಣಿಗೆ ಗೌರವ ಕೊಡುವ ಮನುಷ್ಯ ಯಾವತ್ತೂ ದೊಡ್ಡವನೇ!&quot;&lt;/p&gt;&lt;p&gt;&quot;ವಿಷ್ಣು ಸರ್... ಕಿಚ್ಚನ ದೇವರು, ಗುರುವಿನ ಗುಣ ಶಿಷ್ಯನಿಗೆ ಬಂದಿದೆ.&quot;&lt;/p&gt;&lt;p&gt;&quot;Proud to be a Kiccha Fan! ಸುದೀಪ್ ಅವರ ಈ ಸರಳತೆ ಮತ್ತು ಕಾಳಜಿಯೇ ಅವರನ್ನು ಎತ್ತರಕ್ಕೆ ಕೊಂಡೊಯ್ದಿರುವುದು.&quot;&lt;/p&gt;&lt;p&gt;ಒಟ್ಟಿನಲ್ಲಿ ಬಿಗ್ ಬಾಸ್ ಜಗಳ, ಕಾಂಟ್ರವರ್ಸಿಗಳ ನಡುವೆ ಸುದೀಪ್ ಅವರ ಈ 'ಜೆಂಟಲ್&zwnj;ಮ್ಯಾನ್' ಗುಣ ವೀಕ್ಷಕರ ಮನಗೆದ್ದಿರುವುದಂತೂ ಸುಳ್ಳಲ್ಲ!&lt;/p&gt;]]></content:encoded>
            <category>tv-talk</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/tv-talk/kiccha-sudeeps-heartwarming-gesture-on-bigg-boss-stage-goes-viral-pbhin3x"/>
        </item>
        <item>
            <title><![CDATA[ಯಾವಾಗ್ಲೂ ಜಾನು ಅಂತಿದ್ದ ಜಯಂತ್ ಇನ್ನೊಂದು ಮದುವೆಯಾದ್ರಾ? ಧಾರಾವಾಹಿಯಲ್ಲಿ ಸಿಗುತ್ತಾ ಮತ್ತೊಂದು ಟ್ವಿಸ್ಟ್?]]></title>
            <link>https://kannada.asianetnews.com/gallery/tv-talk/lakshmi-nivasa-jayanths-wedding-video-goes-viral-here-is-the-truth-qohg3gv</link>
            <guid isPermaLink="true">https://kannada.asianetnews.com/gallery/tv-talk/lakshmi-nivasa-jayanths-wedding-video-goes-viral-here-is-the-truth-qohg3gv</guid>
            <pubDate>Wed, 09 Sep 2026 10:32:04 +0530</pubDate>
            <description><![CDATA[&lt;p&gt;Lakshmi Nivasa Jayanth: 'ಲಕ್ಷ್ಮೀ ನಿವಾಸ' ಧಾರಾವಾಹಿಯ ಜಯಂತ್ ಪಾತ್ರಧಾರಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇದನ್ನು ನೋಡಿ ವೀಕ್ಷಕರು ಫುಲ್ ಕನ್&zwnj;ಫ್ಯೂಸ್ ಆಗಿದ್ದಾರೆ. ಅದೇನೆಂದು ತಿಳಿಯಲು ಮುಂದೆ ಓದಿ...&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m228h8x6zk97xgrhefv08c40,imgname-thumbnail---2026-09-09t102829.708-1788929942438.jpg" type="image/jpeg" height="390" width="690"/>
            <content:encoded><![CDATA[&lt;p&gt;Lakshmi Nivasa Jayanth: 'ಲಕ್ಷ್ಮೀ ನಿವಾಸ' ಧಾರಾವಾಹಿಯ ಜಯಂತ್ ಪಾತ್ರಧಾರಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇದನ್ನು ನೋಡಿ ವೀಕ್ಷಕರು ಫುಲ್ ಕನ್&zwnj;ಫ್ಯೂಸ್ ಆಗಿದ್ದಾರೆ. ಅದೇನೆಂದು ತಿಳಿಯಲು ಮುಂದೆ ಓದಿ...&lt;/p&gt;&lt;img&gt;&lt;p&gt;&lt;strong&gt;ಸೀರಿಯಲ್ ಪ್ರೇಕ್ಷಕರಲ್ಲಿ ಗೊಂದಲ&lt;/strong&gt;ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಲಕ್ಷ್ಮೀ ನಿವಾಸ'ದಲ್ಲಿ ಜಯಂತ್ ಪಾತ್ರ ಎಲ್ಲರ ಗಮನ ಸೆಳೆದಿದೆ. ಸೈಕೋ ರೀತಿಯಲ್ಲಿ ವರ್ತಿಸುತ್ತಾ ಜಾಹ್ನವಿ (ಜಾನು) ಮೇಲೆ ಜಯಂತ್ ತೋರಿಸುವ ಹುಚ್ಚು ಪ್ರೀತಿ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಹೀಗಿರುವಾಗ, ಜಯಂತ್ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗಿರುವ ವಿಡಿಯೋವೊಂದು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹರಿದಾಡುತ್ತಿದ್ದು, ಸೀರಿಯಲ್ ಪ್ರೇಕ್ಷಕರಲ್ಲಿ ಭಾರೀ ಗೊಂದಲ ಉಂಟುಮಾಡಿದೆ.&lt;/p&gt;&lt;img&gt;&lt;p&gt;&lt;strong&gt;ವೈರಲ್ ವಿಡಿಯೋದ ಅಸಲಿ ಕಥೆಯೇನು?&lt;/strong&gt;ಜಯಂತ್ ಜಾನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾದ್ರಾ? ಅಥವಾ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಸಿಕ್ತಾ? ಎಂದು ತಲೆಕೆಡಿಸಿಕೊಂಡವರಿಗೆ ಇಲ್ಲಿದೆ ಉತ್ತರ. ವಾಸ್ತವವಾಗಿ ಇದು 'ಲಕ್ಷ್ಮೀ ನಿವಾಸ' ಧಾರಾವಾಹಿಯ ದೃಶ್ಯವೇ ಅಲ್ಲ! ಬದಲಿಗೆ, ಕಿರು-ನಾಟಕಗಳನ್ನು (Micro-drama) ಒದಗಿಸುವ 'ಬುಲೆಟ್' (Bullet) ಎಂಬ ಆ್ಯಪ್&zwnj;ನಲ್ಲಿ ಪ್ರಸಾರವಾಗುತ್ತಿರುವ 'ಲವ್ ಫಾರ್ ಸೇಲ್' (Love for Sale) ಎಂಬ ಸರಣಿಯ ವಿಡಿಯೋ.&lt;/p&gt;&lt;img&gt;&lt;p&gt;&lt;strong&gt;ಕಥೆ ಏನು?&lt;/strong&gt;ಈ ಮೈಕ್ರೋ-ಡ್ರಾಮಾದಲ್ಲೂ ಜಯಂತ್ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಅವರು ದೊಡ್ಡ ಕಂಪನಿಯ ಸಿಇಒ ಪಾತ್ರದಲ್ಲಿ ಮಿಂಚಿದ್ದಾರೆ. ಕಥೆಯ ಪ್ರಕಾರ, ತಾತನ ಬಲವಂತಕ್ಕೆ ಒಂದು ಹುಡುಗಿಯನ್ನು ಮದುವೆಯಾಗುತ್ತಾರೆ. ಆದರೆ, ಆಕೆ ತನ್ನನ್ನು ಪ್ರೀತಿಸಿ ಮದುವೆಯಾಗಿದ್ದಾಳೋ ಅಥವಾ ತನ್ನ ಆಸ್ತಿ ಮತ್ತು ದುಡ್ಡಿಗಾಗಿ ಮದುವೆಯಾಗಿದ್ದಾಳೋ ಎಂಬ ಅನುಮಾನದಲ್ಲಿ ಸತ್ಯ ಹುಡುಕಲು ಹೊರಡುವ ಕಥಾಹಂದರ ಇದಕ್ಕಿದೆ.&lt;/p&gt;&lt;img&gt;&lt;p&gt;&lt;strong&gt;ದೀಪಕ್ - ಸಾರಾ ಅಣ್ಣಯ್ಯ ಹೊಸ ಜೋಡಿ!&lt;/strong&gt;ವಿಶೇಷವೆಂದರೆ, ಈ ಸರಣಿಯಲ್ಲಿ ದೀಪಕ್ ಸುಬ್ರಹ್ಮಣ್ಯ ಅವರಿಗೆ ನಾಯಕಿಯಾಗಿ 'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ ನಟಿಸಿದ್ದಾರೆ. ತೆರೆಯ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ಸರಣಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಮುಂದಿನ ಎಪಿಸೋಡ್&zwnj;ನಲ್ಲಿ ಏನಾಗಲಿದೆ ಎಂದು ತಿಳಿಯಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ ಜಾನು ಬಿಟ್ಟು ಜಯಂತ್ ಇನ್ನೊಂದು ಮದುವೆಯಾದ ಎಂಬ ಗೊಂದಲಕ್ಕೆ ಈಗ ಸ್ಪಷ್ಟ ತೆರೆ ಬಿದ್ದಿದೆ!&lt;/p&gt;]]></content:encoded>
            <category>tv-talk</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/tv-talk/lakshmi-nivasa-jayanths-wedding-video-goes-viral-here-is-the-truth-qohg3gv"/>
        </item>
        <item>
            <title><![CDATA[ನಿಧಿಗೆ ಕರ್ಣ ಮಾಡಿಕೊಟ್ಟ ಟೇಸ್ಟಿ ತರಕಾರಿ ದೋಸೆಯನ್ನ ಎರಡು ವಿಧಾನದಲ್ಲಿ ಮಾಡ್ಕೊಳ್ಳಿ]]></title>
            <link>https://kannada.asianetnews.com/gallery/tv-talk/make-the-tasty-vegetable-dosa-in-two-ways-that-zee-kannada-serial-karna-made-for-his-wife-nidhi-mrq-rqgyz2f</link>
            <guid isPermaLink="true">https://kannada.asianetnews.com/gallery/tv-talk/make-the-tasty-vegetable-dosa-in-two-ways-that-zee-kannada-serial-karna-made-for-his-wife-nidhi-mrq-rqgyz2f</guid>
            <pubDate>Tue, 08 Sep 2026 15:02:37 +0530</pubDate>
            <description><![CDATA[ಈ ಲೇಖನದಲ್ಲಿ ರುಚಿಕರ ಮತ್ತು ಆರೋಗ್ಯಕರ ತರಕಾರಿ ದೋಸೆ ಮಾಡುವ ವಿಧಾನವನ್ನು ವಿವರಿಸಲಾಗಿದೆ. ದೋಸೆ ಹಿಟ್ಟು ಮತ್ತು ಕ್ಯಾರಟ್, ಸೌತೆಕಾಯಿ, ಈರುಳ್ಳಿಯಂತಹ ತರಕಾರಿಗಳನ್ನು ಬಳಸಿ, ಹಿಟ್ಟಿನಲ್ಲಿ ಮಿಶ್ರಣ ಮಾಡಿ ಅಥವಾ ದೋಸೆಯ ಮೇಲೆ ಉದುರಿಸಿ ಎರಡು ವಿಧಗಳಲ್ಲಿ ಇದನ್ನು ತಯಾರಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m205db6e3jmxstwsz0adaad0,imgname-karna-with-dosa--5--1788859559118.jpg" type="image/jpeg" height="390" width="690"/>
            <content:encoded><![CDATA[ಈ ಲೇಖನದಲ್ಲಿ ರುಚಿಕರ ಮತ್ತು ಆರೋಗ್ಯಕರ ತರಕಾರಿ ದೋಸೆ ಮಾಡುವ ವಿಧಾನವನ್ನು ವಿವರಿಸಲಾಗಿದೆ. ದೋಸೆ ಹಿಟ್ಟು ಮತ್ತು ಕ್ಯಾರಟ್, ಸೌತೆಕಾಯಿ, ಈರುಳ್ಳಿಯಂತಹ ತರಕಾರಿಗಳನ್ನು ಬಳಸಿ, ಹಿಟ್ಟಿನಲ್ಲಿ ಮಿಶ್ರಣ ಮಾಡಿ ಅಥವಾ ದೋಸೆಯ ಮೇಲೆ ಉದುರಿಸಿ ಎರಡು ವಿಧಗಳಲ್ಲಿ ಇದನ್ನು ತಯಾರಿಸಬಹುದು.&lt;img&gt;&lt;p&gt;ಮಸಾಲೆ, ಬೆಣ್ಣೆ, ಖಾಲಿ ದೋಸೆಯನ್ನು ಎಲ್ಲರ ಮನೆಯಲ್ಲಿಯೂ ಟ್ರೈ ಮಾಡಬಹುದು. ಇಂದು ನಾವು ನಿಮಗೆ ಪತ್ನಿ ನಿಧಿಗಾಗಿ ಡಾಕ್ಟರ್ ಕರ್ಣ ಮಾಡಿಕೊಟ್ಟ ರುಚಿಯಾದ ಮತ್ತು ಆರೋಗ್ಯಕರ ತರಕಾರಿ ದೋಸೆ ಮಾಡೋದು ಹೇಗೆ ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ದೋಸೆ ಹಿಟ್ಟು, ಕ್ಯಾರಟ್ (ಗಜ್ಜರಿ), ಸೌತೆಕಾಯಿ, ಈರುಳ್ಳಿ, ಕೋತಂಬರಿ ಸೊಪ್ಪು, ಕರೀಬೇವು, ಟೊಮೆಟೋ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಡುಗೆಎಣ್ಣೆ ಅಥವಾ ತುಪ್ಪ&lt;/p&gt;&lt;img&gt;&lt;p&gt;ಮೊದಲಿಗೆ ಕ್ಯಾರಟ್, ಸೌತೆಕಾಯಿಯನ್ನು ತುರಿದುಕೊಳ್ಳಿ. ನಂತರ ಈರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಹಾಗೆಯೇ ಕರೀಬೇವು ಮತ್ತು ಕೋತಂಬರಿ ಸೊಪ್ಪು ಸಹ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. (ಇವುಗಳ ಜೊತೆ ನಿಮ್ಮಿಷ್ಟದ ತರಕಾರಿ ಸೇರಿಸಿಕೊಳ್ಳಿ). ಎರಡು ವಿಧಾನದಲ್ಲಿ ಈ ದೋಸೆ ಮಾಡಿಕೊಳ್ಳಿ.&lt;/p&gt;&lt;img&gt;&lt;p&gt;ಈ ವಿಧಾನದಲ್ಲಿ ಕತ್ತರಿಸಿಕೊಂಡಿರುವ ಎಲ್ಲಾ ತರಕಾರಿಯನ್ನು ಹಿಟ್ಟಿನಲ್ಲಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾವಲಿ ಬಿಸಿಯಾದ್ಮೇಲೆ ತರಕಾರಿ ಮಿಶ್ರಿತ ದೋಸೆಹಿಟ್ಟನ್ನು ಹಾಕಿ. ನಂತರ ಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ 2 ರಿಂದ 3 ನಿಮಿಷ ಬೇಯಿಸಿಕೊಳ್ಳಿ. ತದನಂತರ ಮುಚ್ಚಳ ತೆಗೆದು ಎರಡೂ ಬದಿಯಲ್ಲಿ ಬೇಯಿಸಿಕೊಂಡ್ರೆ ತರಕಾರಿ ದೋಸೆ ಸವಿಯಲು ರೆಡಿ&lt;/p&gt;&lt;img&gt;&lt;p&gt;ಈ ವಿಧಾನದಲ್ಲಿ ಕಾವಲಿ ಮೇಲೆ ಹಿಟ್ಟನ್ನು ಸೆಟ್ ದೋಸೆಯಂದೆ ದಪ್ಪವಾಗಿ ಹಾಕಿಕೊಳ್ಳಿ. ಈಗ ಕತ್ತರಿಸಿಕೊಂಡಿರುವ ತರಕಾರಿಗಳನ್ನು ದೋಸೆ ಮೇಲೆ ಹಾಕಿ, ಕೈಯಿಂದ ಒತ್ತಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಂಡ್ರೆ ರುಚಿಯಾದ ತರಕಾರಿ ದೋಸೆ ಸವಿಯಲು ಸಿದ್ಧವಾಗುತ್ತದೆ. ಟೊಮೆಟೋ ಅಥವಾ ತೆಂಗಿನಕಾಯಿ ಚಟ್ನಿ ಜೊತೆ ದೋಸೆ ಸವಿಯಬಹುದು.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/make-the-tasty-vegetable-dosa-in-two-ways-that-zee-kannada-serial-karna-made-for-his-wife-nidhi-mrq-rqgyz2f"/>
        </item>
        <item>
            <title><![CDATA[Viral 80s AI ಟ್ರೆಂಡಲ್ಲಿ ಮಿಂಚಿದ ನಮ್ರತಾ ಗೌಡ ಬ್ಯೂಟಿಗೆ ಫಿದಾ ಆದ ಅಭಿಮಾನಿಗಳು]]></title>
            <link>https://kannada.asianetnews.com/gallery/tv-talk/namratha-gowda-stuns-in-viral-80s-ai-trend-rqrd11i</link>
            <guid isPermaLink="true">https://kannada.asianetnews.com/gallery/tv-talk/namratha-gowda-stuns-in-viral-80s-ai-trend-rqrd11i</guid>
            <pubDate>Wed, 09 Sep 2026 18:45:04 +0530</pubDate>
            <description><![CDATA[&lt;p&gt;Viral 80s AI Trend: ಸದ್ಯ ದೇಶದೆಲ್ಲೆಡೆ 80&rsquo;s ರೆಟ್ರೋ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಸಹ ಈ ಟ್ರಂಡಲ್ಲಿ ಭಾಗಿಯಾಗಿದ್ದು, ತಮ್ಮ ಮುದ್ದಾದ ಒಂದಷ್ಟು ರೆಟ್ರೋ ಫೋಟೊಗಳನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m234m03dn1qv0ftfv1n3q8d6,imgname-namratha-gowda-1788959391852.jpg" type="image/jpeg" height="390" width="690"/>
            <content:encoded><![CDATA[&lt;p&gt;Viral 80s AI Trend: ಸದ್ಯ ದೇಶದೆಲ್ಲೆಡೆ 80&rsquo;s ರೆಟ್ರೋ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಸಹ ಈ ಟ್ರಂಡಲ್ಲಿ ಭಾಗಿಯಾಗಿದ್ದು, ತಮ್ಮ ಮುದ್ದಾದ ಒಂದಷ್ಟು ರೆಟ್ರೋ ಫೋಟೊಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ತಮ್ಮ ಜೀವನಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಖುಷಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸದ್ಯ ವೈರಲ್ ಆಗುತ್ತಿರುವ ಒಂದು ಟ್ರೆಂಡನ್ನು ನಟಿ ಫಾಲೋ ಮಾಡಿದ್ದು, ಸೋಶಿಯಲ್ ಮೀಡೀಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಮ್ರತಾ ಗೌಡ, ಸದ್ಯ ವೈರಲ್ ಆಗುತ್ತಿರುವ 80&rsquo;s ರೆಟ್ರೋ ಲುಕ್ ಟ್ರೆಂಡಲ್ಲಿ ಪಾಲ್ಗೊಂಡಿದ್ದು, ತಮ್ಮ 80ರ ದಶಕದ ಸುಂದರವಾದ ಫೋಟೋಗಳನ್ನು ತಮ್ಮ ಇನ್&rsquo;ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ಮುದ್ದಾದ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ನಮ್ರತಾ ಗೌಡ ಅವರ ಹೆಸರಲ್ಲಿರುವ ಫ್ಯಾನ್ಸ್ ಪೇಜ್ ಆಗಿರುವ ಒಬ್ಸೆಸ್ಡ್ ವಿತ್ ನಮ್ಮು ಎನ್ನುವ ಇನ್&rsquo;ಸ್ಟಾಗ್ರಾಂ ಪೇಜ್ ಕ್ರಿಯೇಟ್ ಮಾಡಿರುವ ರೆಟ್ರೋ ಲುಕ್ ಫೋಟೋಗಳನ್ನು ನಮ್ರತಾ ಸಂತೋಷದಿಂದಲೇ ಹಂಚಿಕೊಂಡಿದ್ದಾರೆ. ಈ ರೆಟ್ರೋ ಲುಕ್ ಗಳಲ್ಲಿ ನಮ್ಮು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಮ್ರತಾ ಗೌಡ ರೆಡ್ ಮತ್ತು ಬ್ಲ್ಯಾಕ್ ಬ್ಲೇಸರ್ ಲುಕ್, ಬಿಳಿ ಕೆಂಪು ಬಣ್ಣದ ಸೀರೆ ಲುಕ್, ಜೀನ್ಸ್ ಗಾಗಲ್ಸ್ ಲುಕ್, ಮತ್ತೊಂದಿಷ್ಟು ವಿಂಟೇಜ್ ಬ್ಯೂಟಿ ಲುಕ್ ನಲ್ಲಿ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ. ಸೀರೆಯಲ್ಲೂ, ವೆಸ್ಟರ್ನ್ ವೇರ್ ಗಳಲ್ಲೂ ನಮ್ಮು ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಮ್ರತಾ ಗೌಡ ಫೋಟೊ ಮೆಚ್ಚಿಕೊಂಡಿರುವ ಫ್ಯಾನ್ಸ್ ನೀವೇ ಟ್ರೆಂಡ್ ವಿನ್ನರ್ ಎನ್ನುತ್ತಿದ್ದಾರೆ. ನಿಮಗೂ ಈ ಫೋಟೋಸ್ ಹೇಗೆ ಮಾಡೋದು ಗೊತ್ತು ತಾನೇ? ಇಲ್ಲಾ ಅಂದ್ರೆ ನೋಡಿ ChatGptಯಲ್ಲಿ ಸರಿಯಾದ ಪ್ರಾಂಪ್ಟ್, ನಿಮಗೆ ಬಾಲಿವುಡ್, ಸೌತ್ ಇಂಡಿಯನ್ ಯಾವ ಸ್ಟೈಲ್ ಬೇಕೋ ಆ ರೀತಿಯ ಲುಕ್, ಕೇಶ ವಿನ್ಯಾಸ, ಬ್ಯಾಕ್ ಗ್ರೌಂಡ್ ಪ್ರಾಂಪ್ಟ್ ಕೊಟ್ಟು, ನಿಮ್ಮ ಫೋಟೊ ಅಪ್ ಲೋಡ್ ಮಾಡಿದ್ರೆ, 1980 ಲುಕ್ ನಿಮ್ಮದಾಗುತ್ತದೆ.&lt;/p&gt;&lt;img&gt;&lt;p&gt;ಸದ್ಯ ನಮ್ರತಾ ಗೌಡ &lsquo;ಕರ್ಣ&rsquo; ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಆದರೆ ಶೀಘ್ರದಲ್ಲೇ ಸೀಮಂತದ ಎಪಿಸೋಡ್ ಗಳಲ್ಲಿ ಕಂ ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ನಮ್ರತಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ನಾಯಕರಾಗಿ ನಟಿಸುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/namratha-gowda-stuns-in-viral-80s-ai-trend-rqrd11i"/>
        </item>
        <item>
            <title><![CDATA[Bigg Boss: ಪತ್ನಿ ಬಳಿ ಮಾತ್ರ ಇದನ್ನು ಟ್ರೈ ಮಾಡ್ಲೇ ಬೇಡಿ: ಸ್ಪರ್ಧಿಗಳಿಗೆ ಓಂ ಪ್ರಕಾಶ್​ ಕಿವಿಮಾತು]]></title>
            <link>https://kannada.asianetnews.com/gallery/tv-talk/bigg-boss-13-dont-try-this-only-with-your-wife-om-prakashs-advice-to-contestants-suc-shvuriv</link>
            <guid isPermaLink="true">https://kannada.asianetnews.com/gallery/tv-talk/bigg-boss-13-dont-try-this-only-with-your-wife-om-prakashs-advice-to-contestants-suc-shvuriv</guid>
            <pubDate>Tue, 08 Sep 2026 19:52:13 +0530</pubDate>
            <description><![CDATA[ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್&zwnj;ಗೆ ಎರಡನೇ ಬಾರಿಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳಿಗೆ ಹೆಂಡತಿಯ ಎದುರು ಗೆಲ್ಲಲು ಪ್ರಯತ್ನಿಸಬೇಡಿ ಎಂದು ಕಿವಿಮಾತು ಹೇಳಿದ್ದು, ಸುದೀಪ್ ಅವರ ಪಯಣವನ್ನು ಟೆಸ್ಟ್ ಮ್ಯಾಚ್&zwnj;ಗೆ ಹೋಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m20p6xgjhx9ewr8kb964190x,imgname-bigg-boss-13-1788877174290.jpg" type="image/jpeg" height="390" width="690"/>
            <content:encoded><![CDATA[ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್&zwnj;ಗೆ ಎರಡನೇ ಬಾರಿಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳಿಗೆ ಹೆಂಡತಿಯ ಎದುರು ಗೆಲ್ಲಲು ಪ್ರಯತ್ನಿಸಬೇಡಿ ಎಂದು ಕಿವಿಮಾತು ಹೇಳಿದ್ದು, ಸುದೀಪ್ ಅವರ ಪಯಣವನ್ನು ಟೆಸ್ಟ್ ಮ್ಯಾಚ್&zwnj;ಗೆ ಹೋಲಿಸಿದ್ದಾರೆ.&lt;img&gt;&lt;p&gt;ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಎರಡನೇ ಬಾರಿಗೆ ಬಿಗ್ ಬಾಸ್​ಗೆ ಬಂದಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಬಿಗ್ ಹಿಟ್ ನೀಡಿದ ʻಹುಚ್ಚʼ ಸಿನಿಮಾದ ನಿರ್ದೇಶಕರೇ ಈ ಓಂ ಪ್ರಕಾಶ್ ರಾವ್. ಈ ಹಿಂದೆ ಅವರು ಬಿಗ್​ಬಾಸ್​ ಮನೆಗೆ ಬಂದಿದ್ದರೂ, ಅನಾರೋಗ್ಯ ಕಾರಣದಿಂದ ಹೊರಕ್ಕೆ ಹೋಗಿದ್ದರು. ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;ಇವರಿದ್ದರೆ ಹಾಸ್ಯಕ್ಕೆ ಕೊರತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಆದ್ದರಿಂದ ಅವರ ಹಾಸ್ಯದ ತುಣುಕುಗಳು ಇನ್ನಷ್ಟೇ ಒಂದೊಂದೇ ಹೊರಬರಬೇಕಿದೆ. ಅವರೀಗ ಬಿಗ್​ಬಾಸ್​ ಸ್ಪರ್ಧಿಗಳಿಗೆ ಒಂದು ಕಿವಿಮಾತು ಹೇಳಿಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅದೇನೆಂದರೆ, ಪ್ರಪಂಚದಲ್ಲಿ ಎಲ್ಲಿ ಬೇಕಾದ್ರೂ ಗೆಲ್ಲೋಕೆ ಟ್ರೈ ಮಾಡಿ, ಆದ್ರೆ ಹೆಂಡ್ತಿ ಎದುರು ಮಾತ್ರ ಇದನ್ನು ಟ್ರೈ ಮಾಡಬೇಡಿ ಎಂದಿದ್ದಾರೆ. ಇದಕ್ಕೆ ಅಲ್ಲಿ ಇದ್ದವರು ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಬಳಿಕ, ಗಗನ್​ ಚಿನ್ನಪ್ಪ ಅವರು, ನನ್ನ ಅಪ್ಪನೂ ಹಾಗೆ ಹೇಳ್ತಾರೆ ಎಂದರು.&lt;/p&gt;&lt;img&gt;&lt;p&gt;ಅಂದಹಾಗೆ, ʻಹುಚ್ಚʼ ಸಿನಿಮಾದಲ್ಲಿ ನಾಯಕಿ ರೇಖಾ ದಾಸ್ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದವರೇ ಓಂ ಪ್ರಕಾಶ್ ಅವರ ಧರ್ಮಪತ್ನಿ. ಇದನ್ನು ಬಿಗ್​ಬಾಸ್​ ವೇದಿಕೆ ಮೇಲೆ ಸುದೀಪ್ ಹೇಳಿದ್ದರು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ, ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕೊಟ್ಟʻಹುಚ್ಚʼ ಸಿನಿಮಾದ ನೆನಪುಗಳನ್ನ ಮೆಲುಕು ಹಾಕಿದರು. &ldquo;ಹುಚ್ಚ ಸಿನಿಮಾದಲ್ಲಿ ನಾಯಕಿ ರೇಖಾ ವೇದವ್ಯಾಸ್ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದವರೇ ಓಂ ಪ್ರಕಾಶ್ ಅವರ ಪತ್ನಿ. ನನ್ನ ಸಿನಿಮಾದ ಕ್ಲೈಮ್ಯಾಕ್ಸ್ ಏನಾಯ್ತೋ ಗೊತ್ತಿಲ್ಲ, ಆದರೆ ಇವರ ಜೀವನದ ಕ್ಲೈಮ್ಯಾಕ್ಸ್ ಮಾತ್ರ ಎಕ್ಸ್​ಟ್ರಾ ಆರ್ಡಿನರಿ ಎಂದರು.&lt;/p&gt;&lt;img&gt;&lt;p&gt;ಓಂ ಪ್ರಕಾಶ್ ರಾವ್ ಅವರ ಬಿಗ್ ಬಾಸ್ ಪಯಣವನ್ನ ಕ್ರಿಕೆಟ್​ಗೆ ಹೋಲಿಸಿದ ಸುದೀಪ್, &ldquo;ಕೆಲವರು ಬಿಗ್ ಬಾಸ್&zwnj;ಗೆ 20-20 ಮ್ಯಾಚ್ ತರಹ ಬಂದು ಹೋಗ್ತಾರೆ. ಇನ್ನು ಕೆಲವರಿಗೆ 50 ಓವರ್&zwnj;ಗಳ ಇನ್ನಿಂಗ್ಸ್. ಆದರೆ ನೀವು ಮಾತ್ರ ಇದನ್ನ ಟೆಸ್ಟ್ ಮ್ಯಾಚ್ ಮಾಡಿಕೊಂಡು ಬಿಟ್ಟಿದ್ದೀರ&rdquo; ಎಂದರು.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-13-dont-try-this-only-with-your-wife-om-prakashs-advice-to-contestants-suc-shvuriv"/>
        </item>
        <item>
            <title><![CDATA[ವಿಮಾನದ ಒಳಕ್ಕೆ ಬಂದ ಮಗುವಿಗೆ ಲಾಲಿ ಹಾಡಿದ ಸಂಗೀತಾ, ಬಿಗ್ ಬಾಸ್ ಮೊದಲ ದಿನವೇ ಟ್ವಿಸ್ಟ್]]></title>
            <link>https://kannada.asianetnews.com/tv-talk/bigg-boss-kannada-day-1-twist-contestant-sangeetha-cuddles-baby-inside-the-flight/articleshow-smn7rgg</link>
            <guid isPermaLink="true">https://kannada.asianetnews.com/tv-talk/bigg-boss-kannada-day-1-twist-contestant-sangeetha-cuddles-baby-inside-the-flight/articleshow-smn7rgg</guid>
            <pubDate>Mon, 07 Sep 2026 18:57:24 +0530</pubDate>
            <description><![CDATA[&lt;p&gt;ಬಿಗ್ ಬಾಸ್ 13ನೇ ಸೀಸನ್ ಆರಂಭದಲ್ಲೇ ಟ್ವಿಸ್ಟ್. ಪ್ರತಿ ಬಾರಿ ವೇದಿಕೆ ಮೇಲೆ ಬಂದ ಸ್ಪರ್ಧಿಗಳು ಮನೆಯೊಳಗೆ ಹೋದರೆ ಈ ಬಾರಿ ವಿಮಾನದಲ್ಲೇ ಉಳಿದಿದ್ದಾರೆ. ಇದರ ನಡುವೆ ವಿಮಾನ ಒಳಗೆ ಬಂದ ಪುಟ್ಟ ಕಂದನಿಗೆ ಸಂಗೀತಾ ಲಾಲಿ ಹಾಡಿದ್ದಾರೆ. ಮಗುವಿನ ನಗಿಸಿದ್ದು ಯಾರು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y0sxa7trbwt68xwjp401zh,imgname-big-boss-1788787619143.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.07)&lt;/strong&gt; ಬಿಗ್ ಬಾಸ್ 13ನೇ ಆವೃತ್ತಿ ಅದ್ಧೂರಿಯಾಗಿ ಆರಂಭಗೊಂಡಿದೆ. ಗ್ರ್ಯಾಂಡ್ ಪ್ರೀಮಿಯರ್ ಮೂಲಕ 16 ಸ್ಪರ್ಧಿಗಳು ಕಣದಲ್ಲಿದ್ದಾರೆ. ವಿಶೇಷ ಅಂದರೆ ಈ ಬಾರಿ ವಿಮಾನ ಪರಿಕಲ್ಪನೆ ಮೂಲಕ ಹೊಸತನ ನೀಡಲಾಗಿದೆ. 16 ಸ್ಪರ್ಧಿಗಳು ವಿಮಾನದೊಳಗೆ ಉಳಿದುಕೊಂಡಿದ್ದಾರೆ. ಇನ್ನು ಮನೆ ಸೇರಿಲ್ಲ, ಇಷ್ಟೇ ಅಲ್ಲ ಆರಂಭದಲ್ಲೇ ಟ್ವಿಸ್ಟ್ ಕೊಟ್ಟು ವಿಮಾನದಲ್ಲೇ ಟಾಸ್ಕ್ ನೀಡಲಾಗಿದೆ. ವಿಮಾನದೊಳಕ್ಕೆ ಪುಟ್ಟ ಕಂದನ ಆಗಮನವಾಗಿದೆ. ಮಗುವನ್ನು ನಗಿಸಲು ಟಾಸ್ಕ್ ನೀಡಲಾಗಿದ್ದು, ಸಂಗೀತಾ ಲಾಲಿ ಹಾಡಿದ್ದಾರೆ. ಲಾಲಿ ಹಾಡಿ ಮುದ್ದು ಮಾಡಿದ ಸಂಗೀತಾ ಮಗುವನ್ನು ನೇರವಾಗಿ ಓಂ ಪ್ರಕಾಶ್ ಕೈಗೆ ನೀಡಿದ್ದಾರೆ. ಓಂ ಪ್ರಕಾಶ್ ಮ್ಯಾಜಿಕ್ ಮಾಡಿದ್ದಾರೆ.&lt;/p&gt;&lt;h2&gt;ಮಗುವಿನ ಮುದ್ದು ಮಾಡಿದ ಸಂಗೀತಾ&lt;/h2&gt;&lt;p&gt;ಪ್ರತಿ ಬಾರಿ ಕಿಚ್ಚು ಸುದೀಪ್ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡ ಬಳಿಕ ನೇರವಾಗಿ ಮನೆಯೊಳಗೆ ಪ್ರವೇಶ ಮಾಡುತ್ತಿದ್ದರು. ಆದರೆ ಈ ಬಾರಿ ಎಲ್ಲರು ವಿಮಾನದಲ್ಲೇ ಉಳಿಯಬೇಕಾಗಿದೆ. ವಿಮಾನದೊಳಗೆ ಬಂದ ಪುಟ್ಟ ಕಂದನ ಒಬ್ಬೊಬ್ಬೊರೆ ಎತ್ತಿಕೊಂಡು ಮುದ್ದಾಡಿದ್ದಾರೆ. ಆದರೆ ಮಗುವಿನ ಅಳು ನಿಲ್ಲಲಿಲ್ಲ. ಕೊನೆಗೆ ಸಂಗೀತಾ ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ಲಾಲಿ ಹಾಡಿದ್ದಾರೆ. ಸಂಗೀತಾ ಪ್ರೀತಿ, ಆರೈಕೆಗೆ ಮಗು ಅಳು ನಿಲ್ಲಿಸಿ ನಗಲು ಆರಂಭಿಸಿದೆ. ಅಲ್ಲಿಗೆ ಸ್ಪರ್ಧಿಗಳ ಪ್ರಯತ್ನ ಯಶಸ್ವಿಯಾಗಿದೆ.&lt;/p&gt;&lt;p&gt;ಸಂಗೀತಾ ಮಗುವಿನ ಅಳು ನಿಲ್ಲಿಸಿದ ನಗುವಂತೆ ಮಾಡಿದ್ದಾರೆ. ಇದೇ ವೇಳೆ ಸಂಗೀತಾ ಕೈಯಿಂದ ಮಗುವನ್ನು ಎತ್ತಿಕೊಂಡ ಓಂ ಪ್ರಕಾಶ್ ಹಣೆಗೆ ಮುತ್ತಿಕ್ಕಿದ್ದಾರೆ. ಓಂ ಪ್ರಕಾಶ್ ಕೈಗಳ ಸ್ಪರ್ಶಕ್ಕೆ ಮಗು ನಗಲು ಆರಂಭಿಸಿದೆ. ಇತ್ತ ಸಹ ಸ್ಪರ್ಧಿಗಳು ತಾತನ ಕೈಯಲ್ಲಿ ಮಗು ನಗುತ್ತಿದೆ ಎಂದು ಸಂಭ್ರಮಿಸಿದ್ದಾರೆ. ಆದರೆ ಈ ಟಾಸ್ಕ್ ಇಲ್ಲಿಗೆ ಮುಗಿದಿಲ್ಲ. ಈ ಟಾಸ್ಕ್&zwnj;ನಲ್ಲಿ ಕೆಲ ಟ್ವಿಸ್ಟ್ ನೀಡಲಾಗಿದೆ. ಈ ಕುತೂಹಲ ಇಂದು ರಾತ್ರಿ ತಣಿಯಲಿದೆ.&lt;/p&gt;&lt;h2&gt;ಬಿಗ್ ಬಾಸ್ 13ರ ಸ್ಪರ್ಧಿಗಳು&lt;/h2&gt;&lt;p&gt;ಬಿಗ್ ಬಾಸ್ 13ನೇ ಆವೃತ್ತಿ ಹಲವು ವಿಶೇಷತೆಗಳಿಂದ ಕೂಡಿದೆ. 16 ಸ್ಪರ್ಧಿಗಳು ಯಾರು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಅದ್ದೂರಿ ಪ್ರೀಮಿಯರ್&zwnj;ನಲ್ಲಿ 16 ಸ್ಪರ್ಧಿಗಳು ವೇದಿಕೆ ಮೇಲೆ ಬಂದಿದ್ದಾರೆ.ಸೆಲೆಬ್ರೆಟಿಗಳಾದ ಜಗದೀಶ್ ಎಂಬಿ, ಸೌಂದರ್ಯ ಶೆಟ್ಟಿ, ಅವಿನಾಶ್ ಶತಮರ್ಶನ್, ಪ್ರಥಮ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ, ಕಾವ್ಯ ಗೌಡ, ಓಂ ಪ್ರಕಾಶ್ ರಾವ್, ಅಸಿಯಾ ಫಿರ್ಡೋಸ್, ತಾಂಡವ್ ರಾಮ್, ವೈಷ್ಣವಿ, ಯಶಸ್ ಕೃಷ್ಣ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಅಗ್ನಿಪರೀಕ್ಷೆ ಮೂಲಕ ಲಿಖಿತ್ ಗೊಂಡಿ, ಧನುಷ್, ಕೃಷ್ಣ ಶಾಸ್ತ್ರಿ ಹಾಗೂ ಮಂಜಾ ಬಿಗ್ ಬಾಸ್ 13ನೇ ಆವೃತ್ತಿಗೆ ಸೇರಿಕೊಂಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Chethan Kumar</dc:creator>
            <atom:link href="https://kannada.asianetnews.com/tv-talk/bigg-boss-kannada-day-1-twist-contestant-sangeetha-cuddles-baby-inside-the-flight/articleshow-smn7rgg"/>
        </item>
        <item>
            <title><![CDATA[ಅವರು ಖಾಲಿ ಪುಲಾವ್, ಇವರು ಕೊಳೆತ ಟೊಮೆಟೋ: ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಗಾಸಿಪ್]]></title>
            <link>https://kannada.asianetnews.com/gallery/tv-talk/bigg-boss-kannada-season-13-gossip-begins-tandav-ram-is-khali-phulav-gagan-chinnappa-is-rotten-tomato-mrq-vemuwsa</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-season-13-gossip-begins-tandav-ram-is-khali-phulav-gagan-chinnappa-is-rotten-tomato-mrq-vemuwsa</guid>
            <pubDate>Tue, 08 Sep 2026 15:54:06 +0530</pubDate>
            <description><![CDATA[&lt;p&gt;ಬಿಗ್&zwnj;ಬಾಸ್ ಸೀಸನ್ 13ರ ಮನೆ ಎರಡು ತಂಡಗಳಾಗಿ ವಿಂಗಡನೆಯಾಗಿದ್ದು, ವಿಮಾನದಲ್ಲಿರುವ ತಂಡವು ಮನೆಯೊಳಗಿನ ಸ್ಪರ್ಧಿಗಳ ಬಗ್ಗೆ ಗಾಸಿಪ್ ಮಾಡಲು ಆರಂಭಿಸಿದೆ. ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಈ ಗಾಸಿಪ್ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2088s299k7m3ka3se9m8ycw,imgname-1-1788862555209.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ ಸೀಸನ್ 13ರ ಮನೆ ಎರಡು ತಂಡಗಳಾಗಿ ವಿಂಗಡನೆಯಾಗಿದ್ದು, ವಿಮಾನದಲ್ಲಿರುವ ತಂಡವು ಮನೆಯೊಳಗಿನ ಸ್ಪರ್ಧಿಗಳ ಬಗ್ಗೆ ಗಾಸಿಪ್ ಮಾಡಲು ಆರಂಭಿಸಿದೆ. ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಈ ಗಾಸಿಪ್ ನಡೆದಿದೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಮನೆ ಅಂದ್ರೆ ಗಾಸಿಪ್ ಎಂಬ ಮಾತಿದೆ. ಸ್ಪರ್ಧಿಗಳು ತಮ್ಮೊಳಗೆ ಯಾರು ಹೇಗೆ ಎಂಬುದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಆಡಿದ ಮಾತುಗಳೇ ಮುಂದೆ ಅವರ ಆಟಕ್ಕೆ ತೊಡಕಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸೀಸನ್ 13ರ ಮನೆ ಸದ್ಯ ಎರಡು ಭಾಗಗಳಾಗಿ ವಿಂಗಡನೆಯಾಗಿವೆ.&lt;/p&gt;&lt;img&gt;&lt;p&gt;ಒಂದು ತಂಡ ಬಿಗ್&zwnj;ಬಾಸ್ ಮನೆಯೊಳಗೆ ಸೇರಿದ್ದು, ಮತ್ತೊಂದು ತಂಡ ವಿಮಾನದಲ್ಲಿಯೇ ಉಳಿದುಕೊಂಡಿದೆ. ವಿಮಾನದಲ್ಲಿರುವ ಸದಸ್ಯರು ಮನೆಯೊಳಗೆ ಹೋಗಿರುವ ಸ್ಪರ್ಧಿಗಳ ಬಗ್ಗೆ ಗಾಸಿಪ್ ಮಾಡುತ್ತಿದ್ದಾರೆ. ಸ್ಪರ್ಧಿ ಪ್ರಥಮಾ ಪ್ರಸಾದ್ ಗಾಸಿಪ್ ಮಾಡೋಣ ಬನ್ನಿ ಎಂದು ಎಲ್ಲರನ್ನು ಕರೆಯತ್ತಾರೆ. ನಂತರ ಒಂದೊಂದಾಗಿಯೇ ಸದಸ್ಯರ ಹೆಸರುಗಳನ್ನು ತೆಗೆದುಕೊಳ್ಳಲು ಆರಂಭಿಸುತ್ತಾರೆ.&lt;/p&gt;&lt;img&gt;&lt;p&gt;ಕಿರುತೆರೆ ನಟ ತಾಂಡವ್ ರಾಮ್ ಸದ್ಯ ಬಿಗ್&zwnj;ಬಾಸ್ ಮನೆ ಸೇರಿದ್ದಾರೆ. ವಿಮಾನದಲ್ಲಿರೋ ಸದಸ್ಯರ ಪೈಕಿ ಕಿರಣ್ ಶಾಸ್ತ್ರಿ, ಸಹಸ್ಪರ್ಧಿಯಾಗಿರೋ ತಾಂಡವ್ ರಾಮ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾಂಡವ್ ರಾಮ್ ತಮ್ಮನ್ನು ತಾವು ಪುಲಾವ್ ಅಂದ್ಕೊಂಡಿದ್ದಾರೆ. ತಮಗೆ ಬೇಕಾದವರ ಜೊತೆ ಮಾತ್ರ ಮಾತನಾಡುತ್ತಾರೆ. ಯಾರ ಜೊತೆಯಲ್ಲಿಯೂ ಹೊಂದಿಕೊಳ್ಳದ ಕಾರಣ ಅವರು ಖಾಲಿ ಪುಲಾವ್ ಎಂದು ಹೇಳಿದರು&lt;/p&gt;&lt;img&gt;&lt;p&gt;ಇನ್ನು ಗಗನ್ ಚಿನ್ನಪ್ಪ ಅವರ ಹೆಸರು ಬಂದಾಗ ಅವರನ್ನು ಕೊಳೆತ ಟೊಮೆಟೋ ಎಂದು ಲಿಖಿತ್ ಹೇಳುತ್ತಾರೆ. ಯಾಕೆ ಎಂದು ಪ್ರಶ್ನೆ ಮಾಡಿದಾಗ ಉತ್ತರಿಸಿದ ಕಿರಣ್ ಶಾಸ್ತ್ರಿ, ಅವರಲ್ಲಿ ಸ್ಪರ್ಧಾತ್ಮಕ ಮನೋಭಾವವೇ ಇಲ್ಲ. ನಾನೇ ಮಾತನಾಡ್ತೀನಿ ಅಂತಾರೆ. ತಾಂಡವ್ ಮತ್ತು ಗಗನ್ ಚಿನ್ನಪ್ಪ ಒಬ್ಬರಿಗೊಬ್ಬರು ಸೇವ್ ಮಾಡಿಕೊಂಡರು. ಒಂದು ರೀತಿ ಕಡಲೆಬೀಜ ಇಲ್ಲದ ಚಿತ್ರನ್ನಾ ಎಂದು ಗಗನ್ ಚಿನ್ನಪ್ಪ ಬಗ್ಗೆ ಗಾಸಿಪ್ ಮಾಡಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬಿಗ್&zwnj;ಬಾಸ್ ಮನೆಯಲ್ಲಿರೋ ಸದಸ್ಯರು:&lt;/strong&gt; ಆಸಿಯಾ ಫಿರ್ಧೋಸ್, ಗಗನ್ ಚಿನ್ನಪ್ಪ, ಜಗದೀಶ್, ಸಂಗೀತಾ ಭಟ್, ಕಾವ್ಯಾ ಗೌಡ, ಯಶಸ್ ಕೃಷ್ಣ, ಓಂಪ್ರಕಾಶ್ ರಾವ್&lt;/p&gt;&lt;p&gt;&lt;strong&gt;ವಿಮಾನದಲ್ಲಿಯೇ ಉಳಿದುಕೊಂಡ ಸದಸ್ಯರು: &lt;/strong&gt;ವೈಷ್ಣವಿ ಕೌಂಡಿನ್ಯ, ಕಿರಣ್ ಶಾಸ್ತ್ರಿ, ಧನುಷ್, ಪ್ರಥಮಾ ಪ್ರಸಾದ್, ಸೌಂದರ್ಯ ಶೆಟ್ಟಿ, ಅವಿನಾಶ್, ಮಾಡರ್ನ್ ಮಹಾಕವಿ ಮಂಜ, ಲಿಖಿತ್ ಗೋಂಧಿ&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-season-13-gossip-begins-tandav-ram-is-khali-phulav-gagan-chinnappa-is-rotten-tomato-mrq-vemuwsa"/>
        </item>
        <item>
            <title><![CDATA[DKD Super Mom: 2 ತಿಂಗಳ ಎಳೆ ಮಗು, ಕ್ಯಾನ್ಸರ್ ಗೆದ್ದ ಅಮ್ಮ: ಈ ತಾಯಂದಿರ ಡ್ಯಾನ್ಸ್ ನೋಡಿ ಜಡ್ಜಸ್ ಶಾಕ್!]]></title>
            <link>https://kannada.asianetnews.com/tv-talk/zee-kannada-super-mom-mega-audition-emotional-stories-meet-high-energy-dance-powerful-stories-gvd/articleshow-vl7ssea</link>
            <guid isPermaLink="true">https://kannada.asianetnews.com/tv-talk/zee-kannada-super-mom-mega-audition-emotional-stories-meet-high-energy-dance-powerful-stories-gvd/articleshow-vl7ssea</guid>
            <pubDate>Tue, 08 Sep 2026 16:27:03 +0530</pubDate>
            <description><![CDATA[&lt;p&gt;ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ &lsquo;ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್&rsquo; ಮೆಗಾ ಆಡಿಷನ್ ಶುರುವಾಗಿದೆ. ಅಮ್ಮಂದಿರ ಅದ್ಭುತ ಡ್ಯಾನ್ಸ್, ಭಾವುಕ ಕತೆಗಳು ಹಾಗೂ ಕ್ಯಾನ್ಸರ್ ಗೆದ್ದ ತಾಯಿಯ ವಿಶೇಷ ಪ್ರದರ್ಶನ ಗಮನ ಸೆಳೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m209hvbm0kxr194c8v0fqrmx,imgname-vhj-1788863901044.png" type="image/jpeg" height="390" width="690"/>
            <content:encoded><![CDATA[&lt;p&gt;ಅಮ್ಮಂದಿರು ಅಂದರೆ ಮನೆ, ಮಕ್ಕಳು, ಜವಾಬ್ದಾರಿ ಎಂದಷ್ಟೇ ಅಲ್ಲ. ತಮ್ಮ ಕನಸುಗಳಿಗೂ ರೆಕ್ಕೆ ಕೊಟ್ಟು ವೇದಿಕೆ ಏರಬಹುದು ಎಂಬುದನ್ನು ತೋರಿಸಲು &lsquo;ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್&rsquo; ಸಜ್ಜಾಗಿದೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಹೊಸ ಶೋ ಆರಂಭಕ್ಕೂ ಮುನ್ನವೇ ಕುತೂಹಲ ಮೂಡಿಸಿದ್ದು, ಮೆಗಾ ಆಡಿಷನ್&zwnj;ನ ಅಧಿಕೃತ ಪ್ರೋಮೋ ಭರ್ಜರಿ ಸದ್ದು ಮಾಡುತ್ತಿದೆ.&lt;/p&gt;&lt;p&gt;ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ಪ್ರತಿಭಾವಂತ ಅಮ್ಮಂದಿರು ಈ ಮೆಗಾ ಆಡಿಷನ್&zwnj;ನಲ್ಲಿ ತಮ್ಮ ಡ್ಯಾನ್ಸ್ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಒಂದೊಂದು ಪ್ರದರ್ಶನವೂ ವಿಭಿನ್ನವಾಗಿದ್ದು, ಅಮ್ಮಂದಿರ ಎನರ್ಜಿ ಮತ್ತು ಆತ್ಮವಿಶ್ವಾಸ ನೋಡುಗರ ಗಮನ ಸೆಳೆಯುತ್ತಿದೆ.&lt;/p&gt;&lt;p&gt;&lt;strong&gt;ಮಕ್ಕಳಾದ್ಮೇಲೂ ಕನಸುಗಳಿಗೆ ಬ್ರೇಕ್ ಇಲ್ಲ!&lt;/strong&gt;&lt;/p&gt;&lt;p&gt;&lsquo;ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್&rsquo;ನಲ್ಲಿ ಅಮ್ಮಂದಿರ ಡ್ಯಾನ್ಸ್ ಮಾತ್ರವಲ್ಲ, ಅವರ ಬದುಕಿನ ಕತೆಗಳಿಗೂ ಜಾಗವಿದೆ. ಮಕ್ಕಳು, ಕುಟುಂಬ ಹಾಗೂ ವೈಯಕ್ತಿಕ ಜವಾಬ್ದಾರಿಗಳ ನಡುವೆಯೂ ತಮ್ಮೊಳಗಿನ ಕಲಾವಿದೆಯನ್ನು ಜೀವಂತವಾಗಿಟ್ಟುಕೊಂಡು ಡ್ಯಾನ್ಸ್ ವೇದಿಕೆ ಏರಿರುವ ತಾಯಂದಿರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.&lt;/p&gt;&lt;p&gt;ಕೆಲವರು ಪುಟ್ಟ ಮಕ್ಕಳನ್ನೂ ಕರೆದುಕೊಂಡೇ ಆಡಿಷನ್&zwnj;ಗೆ ಬಂದಿದ್ದಾರೆ. ತಾಯ್ತನದ ಜವಾಬ್ದಾರಿಗಳ ನಡುವೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ವೇದಿಕೆ ಏರಿರುವ ಇವರ ಕತೆಗಳನ್ನು ಜಡ್ಜ್&zwnj;ಗಳಾದ ಶಿವರಾಜ್&zwnj;ಕುಮಾರ್, ತರುಣ್ ಸುಧೀರ್, ವಿಜಯ್ ರಾಘವೇಂದ್ರ ಹಾಗೂ ರಚಿತಾ ರಾಮ್ ಕೇಳಿದ್ದಾರೆ.&lt;/p&gt;&lt;p&gt;&lt;strong&gt;ಕ್ಯಾನ್ಸರ್ ಗೆದ್ದ ಅಮ್ಮನ ಡ್ಯಾನ್ಸ್!&lt;/strong&gt;&lt;/p&gt;&lt;p&gt;ಈ ಮೆಗಾ ಆಡಿಷನ್&zwnj;ನಲ್ಲಿ ಕ್ಯಾನ್ಸರ್&zwnj;ನಿಂದ ಬಳಲಿದ್ದ ತಾಯಿಯೊಬ್ಬರು ಭಾಗಿಯಾಗಿರುವುದು ವಿಶೇಷ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಅವರು ಮತ್ತೆ ನೃತ್ಯ ಮಾಡುವಷ್ಟು ಆತ್ಮವಿಶ್ವಾಸದಿಂದ ವೇದಿಕೆ ಏರಿದ್ದಾರೆ. ಇವರ ಕತೆ ಕೇಳಿದ ಶಿವಣ್ಣ ಸೇರಿದಂತೆ ಜಡ್ಜ್&zwnj;ಗಳು ಭಾವುಕರಾಗಿದ್ದಾರೆ. ಮತ್ತೊಂದೆಡೆ, ಕೇವಲ ಎರಡು ತಿಂಗಳ ಮಗುವನ್ನು ಹೊತ್ತು ಆಡಿಷನ್&zwnj;ಗೆ ಬಂದ ತಾಯಿಯೊಬ್ಬರನ್ನು ನೋಡಿ &lsquo;ಚಿನ್ನಾರಿ ಮುತ್ತ&rsquo; ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮಗುವಿನ ವಯಸ್ಸಿನ ಬಗ್ಗೆಯೂ ಅವರು ಕುತೂಹಲದಿಂದ ಪ್ರಶ್ನಿಸಿದ್ದಾರೆ.&lt;/p&gt;&lt;p&gt;&lt;strong&gt;ಡ್ಯಾನ್ಸ್&zwnj;ನಲ್ಲಿ ಅಮ್ಮಂದಿರ ಎನರ್ಜಿ ನೋಡಿದ್ರೆ ಶಾಕ್!&lt;/strong&gt;&lt;/p&gt;&lt;p&gt;ಇಲ್ಲಿ ಬಂದಿರುವ ಸ್ಪರ್ಧಿಗಳು ಸಾಮಾನ್ಯ ಪ್ರತಿಭೆಗಳಲ್ಲ. ಎರಡು-ಮೂರು ಮಕ್ಕಳ ತಾಯಂದಿರಾಗಿದ್ದರೂ ಡ್ಯಾನ್ಸ್ ಮಾಡುವಾಗ ಅವರ ಎನರ್ಜಿ ಮಾತ್ರ ಕಮ್ಮಿಯಾಗಿಲ್ಲ. ಪ್ರೋಮೋದಲ್ಲಿನ ಅವರ ಅದ್ಭುತ ಹೆಜ್ಜೆಗಳು, ವೇಗ ಮತ್ತು ಆತ್ಮವಿಶ್ವಾಸ ನೋಡಿದರೆ &lsquo;ಸೂಪರ್ ಮಾಮ್&rsquo; ಎಂಬ ಹೆಸರೇ ಇವರಿಗೆ ಸೂಕ್ತ ಎನ್ನಿಸುವಂತಿದೆ. ಆದರೆ ಮೆಗಾ ಆಡಿಷನ್&zwnj;ನಲ್ಲಿ ಮಿಂಚುವ ಈ ಪ್ರತಿಭಾವಂತ ಅಮ್ಮಂದಿರ ಪೈಕಿ ಅಂತಿಮವಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಈಗಾಗಲೇ ಶುರುವಾಗಿದೆ.&lt;/p&gt;&lt;p&gt;&lt;strong&gt;ಹಾರುವ ಹಕ್ಕಿಯ ರೆಕ್ಕೆಯಂತೆ ಡಿಕೆಡಿ ಸೆಟ್&lt;/strong&gt;&lt;/p&gt;&lt;p&gt;ಈ ಬಾರಿ &lsquo;ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್&rsquo; ಶೋನ ಸೆಟ್ ಕೂಡ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಹಾರುವ ಹಕ್ಕಿಯ ರೆಕ್ಕೆಗಳ ಕಲ್ಪನೆಯಲ್ಲಿ ರೂಪಿಸಲಾಗಿರುವ ವೇದಿಕೆ, ಅಮ್ಮಂದಿರ ಕನಸುಗಳಿಗೆ ರೆಕ್ಕೆ ನೀಡುವಂತಿದೆ. ಒಟ್ಟಿನಲ್ಲಿ ಡ್ಯಾನ್ಸ್, ಎಮೋಷನ್, ತಾಯ್ತನದ ಕತೆಗಳು ಹಾಗೂ ಮನರಂಜನೆ-ಎಲ್ಲವನ್ನೂ ಒಟ್ಟಿಗೆ ನೀಡುವ ಪ್ರಯತ್ನ ಈ ಶೋನಲ್ಲಿದೆ. ಅಮ್ಮಂದಿರ ಅದ್ಭುತ ಎನರ್ಜಿ ಈಗಾಗಲೇ ಪ್ರೋಮೋ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು, ಈ ಬಾರಿ ಡಿಕೆಡಿ ವೇದಿಕೆಯಲ್ಲಿ &lsquo;ಸೂಪರ್ ಮಾಮ್&rsquo;ಗಳ ಹವಾ ಜೋರಾಗುವ ಲಕ್ಷಣ ಕಾಣಿಸುತ್ತಿದೆ.&lt;/p&gt;View this post on Instagram&lt;p&gt;A post shared by Zee Kannada (@zeekannada)&lt;/p&gt;&lt;p&gt;&lt;/p&gt;&lt;h2&gt;&lt;strong&gt;ಈ ವಾರದಿಂದಲೇ ಮೆಗಾ ಆಡಿಷನ್&lt;/strong&gt;&lt;/h2&gt;&lt;p&gt;&lsquo;ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್&rsquo; ಮೆಗಾ ಆಡಿಷನ್ ಈ ವಾರಾಂತ್ಯದಿಂದ ಆರಂಭವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ಶೋ ಪ್ರಸಾರವಾಗಲಿದೆ. ಜೀ ಕನ್ನಡ ತನ್ನ ಅಧಿಕೃತ ಪೇಜ್&zwnj;ನಲ್ಲಿ ಮೆಗಾ ಆಡಿಷನ್&zwnj;ನ ಪ್ರೋಮೋ ಹಂಚಿಕೊಂಡಿದ್ದು, ಅಮ್ಮಂದಿರ ವಿಭಿನ್ನ ಡ್ಯಾನ್ಸ್ ಪ್ರದರ್ಶನಗಳು ಮತ್ತು ಅವರ ಬದುಕಿನ ಕತೆಗಳು ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿವೆ.&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/zee-kannada-super-mom-mega-audition-emotional-stories-meet-high-energy-dance-powerful-stories-gvd/articleshow-vl7ssea"/>
        </item>
        <item>
            <title><![CDATA[ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ]]></title>
            <link>https://kannada.asianetnews.com/gallery/tv-talk/bigg-boss-kannada-13-asia-firdosh-lashes-out-at-gagan-chinnappa-and-tandav-ram-in-diamond-search-task-mrq-y1g1m62</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-asia-firdosh-lashes-out-at-gagan-chinnappa-and-tandav-ram-in-diamond-search-task-mrq-y1g1m62</guid>
            <pubDate>Tue, 08 Sep 2026 18:10:35 +0530</pubDate>
            <description><![CDATA[ಡೈಮಂಡ್ ಹುಡುಕಾಟದ ಟಾಸ್ಕ್&zwnj;ನಲ್ಲಿ, ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಆಸಿಯಾ, ತನ್ನನ್ನು ಗಗನ್ ಮತ್ತು ತಾಂಡವ್ ರಾಮ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m20g4cqzrhcmg1csapcyg27c,imgname-bigg-boss-kannada--4--1788870800127.jpg" type="image/jpeg" height="390" width="690"/>
            <content:encoded><![CDATA[ಡೈಮಂಡ್ ಹುಡುಕಾಟದ ಟಾಸ್ಕ್&zwnj;ನಲ್ಲಿ, ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಆಸಿಯಾ, ತನ್ನನ್ನು ಗಗನ್ ಮತ್ತು ತಾಂಡವ್ ರಾಮ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.&lt;img&gt;&lt;p&gt;ಡೈಮಂಡ್ ಹುಡುಕಾಟದ ಟಾಸ್ಕ್&zwnj;ನಲ್ಲಿ ಆಸಿಯಾ ಕೋಪಗೊಂಡು ನೇರವಾಗಿಯೇ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಟಾಸ್ಕ್ ಆರಂಭಕ್ಕೂ ಮುಂಚೆಯೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಸಿಯಾ ಅರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಮನೆಯಲ್ಲಿರುವ ಸದಸ್ಯರಿಗೆ ಬಿಗ್&zwnj;ಬಾಸ್&zwnj;ನಿಂದ ಚಿಕ್ಕ ಬ್ರೀಫ್&zwnj;ಕೇಸ್ ಸಿಕ್ಕಿದೆ. ಗಗನ್ ಚಿನ್ನಪ್ಪ ಬ್ರೀಫ್&zwnj;ಕೇಸ್&zwnj;ನಲ್ಲಿ ಮಾತ್ರ ಡೈಮಂಡ್ ಮಾದರಿಯ ತುಂಡನ್ನು ಇರಿಸಲಾಗಿದೆ. ಯಾರ ಬಳಿ ಡೈಮಂಡ್ ಇದೆ ಎಂಬುದನ್ನು ಪತ್ತೆ ಮಾಡಿದ್ರೆ ಆ ವ್ಯಕ್ತಿ ನೇರವಾಗಿ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗುತ್ತಾರೆ.&lt;/p&gt;&lt;img&gt;&lt;p&gt;ಈ ಕಾರಣದಿಂದ ಗಗನ್ ಚಿನ್ನಪ್ಪ ತಮ್ಮ ಮೇಲೆ ಅನುಮಾನ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಆಸಿಯಾ ಮೇಲೆ ಅನುಮಾನ ಮೂಡುವಂತೆ ಗಗನ್ ಮಾಡಿದ್ದು, ಇದರಿಂದ ಮನೆಯಲ್ಲಿ ಜಗಳ ಶುರುವಾಗಿದೆ. ನನ್ನ ಬ್ರೀಫ್&zwnj;ಕೇಸ್ ಖಾಲಿ ಅಂತ ಆಸಿಯಾ ಹೇಳಿದ್ರೂ ಯಾರು ನಂಬುತ್ತಿಲ್ಲ.&lt;/p&gt;&lt;img&gt;&lt;p&gt;ಮೊದಲ ಟಾಸ್ಕ್&zwnj;ನಲ್ಲಿಯೇ ಟ್ರಿಗರ್ ಆಗಿರೋ ಆಸಿಯಾ ಫಿರ್ದೋಸ್, ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಿಮ್ಮನ್ನು ಯಾರೂ ಟಾರ್ಗೆಟ್ ಮಾಡಿಲ್ಲ ಎಂದು ಗಗನ್ ಮತ್ತು ಕಾವ್ಯಾ ಗೌಡ ಹೇಳಿರೋದನ್ನು ಪ್ರೋಮೋದಲ್ಲಿ ನೋಡಬಹುದು.&lt;/p&gt;&lt;img&gt;&lt;p&gt;ಈ ಪ್ರೋಮೋಗೆ ಕಮೆಂಟ್ ಮಾಡಿರುವ ವೀಕ್ಷಕರು, ಶ್ರಾವಣಿ Rock, ರಾಮ್ Shock. ಶ್ರಾವಣಿ ಮತ್ತು ರಾಮ್ ನಿಧಾನವಾಗಿ ತಮ್ಮ ಆಟ ಆರಂಭಿಸಿದ್ದಾರೆ. ಗಗನ್ ತುಂಬಾ ಓವರ್ ಆಗಿ ಆಡ್ತಿದ್ದಾನೆ ಅಲ್ಲವಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-asia-firdosh-lashes-out-at-gagan-chinnappa-and-tandav-ram-in-diamond-search-task-mrq-y1g1m62"/>
        </item>
        <item>
            <title><![CDATA[ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಬರೆದ ಕನ್ನಡ ರಿಯಾಲಿಟಿ ಶೋ; ಹಿಂದಿ, ತೆಲುಗು, ಮಲಯಾಳಂ ಎಲ್ಲೂ ನಡೆದಿಲ್ಲ!]]></title>
            <link>https://kannada.asianetnews.com/gallery/tv-talk/bigg-boss-kannada-season-13-creates-history-with-female-voice-twist-first-time-sat-y64i51y</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-season-13-creates-history-with-female-voice-twist-first-time-sat-y64i51y</guid>
            <pubDate>Wed, 09 Sep 2026 13:36:08 +0530</pubDate>
            <description><![CDATA[ಕನ್ನಡ ಬಿಗ್ ಬಾಸ್ ಸೀಸನ್ 13, ಭಾರತೀಯ ರಿಯಾಲಿಟಿ ಶೋ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ, ಸ್ಪರ್ಧಿಗಳು ಪುರುಷ ಧ್ವನಿಯ ಬದಲಿಗೆ ಮಹಿಳಾ ಧ್ವನಿಯ ಆದೇಶಗಳನ್ನು ಪಾಲಿಸುತ್ತಿದ್ದು, ಒಬ್ಬ ಸ್ಪರ್ಧಿ ಬಿಗ್ ಬಾಸ್ ಧ್ವನಿಯನ್ನು ಕೇಳುವ ಮೊದಲೇ ಎಲಿಮಿನೇಟ್ ಆಗುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22jtx47r8vwrc1qkw6v4fsy,imgname-bigg-boss-kannada--1--1788940743812.jpg" type="image/jpeg" height="390" width="690"/>
            <content:encoded><![CDATA[ಕನ್ನಡ ಬಿಗ್ ಬಾಸ್ ಸೀಸನ್ 13, ಭಾರತೀಯ ರಿಯಾಲಿಟಿ ಶೋ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ, ಸ್ಪರ್ಧಿಗಳು ಪುರುಷ ಧ್ವನಿಯ ಬದಲಿಗೆ ಮಹಿಳಾ ಧ್ವನಿಯ ಆದೇಶಗಳನ್ನು ಪಾಲಿಸುತ್ತಿದ್ದು, ಒಬ್ಬ ಸ್ಪರ್ಧಿ ಬಿಗ್ ಬಾಸ್ ಧ್ವನಿಯನ್ನು ಕೇಳುವ ಮೊದಲೇ ಎಲಿಮಿನೇಟ್ ಆಗುವ ಸಾಧ್ಯತೆಯಿದೆ.&lt;img&gt;&lt;p&gt;ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲೇ ಇದೀಗ ಅತ್ಯಂತ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ. ಭಾರತದಲ್ಲಿ ಹಿಂದಿ ಬಿಗ್ ಬಾಸ್ ಆರಂಭವಾಗಿ ಬರೋಬ್ಬರಿ 19 ಸೀಸನ್&zwnj;ಗಳು ಯಶಸ್ವಿಯಾಗಿ ಮುಗಿದು 20ನೇ ಸೀಸನ್&zwnj;ಗೆ ಕಾಲಿಟ್ಟಿದೆ. ಇತ್ತ ಕನ್ನಡದಲ್ಲಿ 13ನೇ ಸೀಸನ್ ಅದ್ಧೂರಿಯಾಗಿ ಶುರುವಾಗಿದೆ. ಆದರೆ, ಇಷ್ಟು ಸುದೀರ್ಘ ವರ್ಷಗಳ ಇತಿಹಾಸದಲ್ಲಿ ಯಾವ ಭಾಷೆಯಲ್ಲೂ ನಡೆಯದ ಅಚ್ಚರಿಯ ಘಟನೆಯೊಂದು ಕನ್ನಡದ ನೆಲದಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಬಂಗಾಳಿ ಸೇರಿದಂತೆ ಯಾವುದೇ ಭಾಷೆಯ ಬಿಗ್ ಬಾಸ್ ಇತಿಹಾಸವನ್ನು ಗಮನಿಸಿದರೂ ಅಲ್ಲಿ ಸಾರ್ವಭೌಮನಾಗಿ ಕೇಳಿಬರುತ್ತಿದ್ದದ್ದು ಕೇವಲ ಗಂಭೀರ ಗಂಡು ಧ್ವನಿ ಮಾತ್ರ. ಆದರೆ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಆವರಣದಲ್ಲಿ ಮಹಿಳೆಯೊಬ್ಬರ ಧ್ವನಿ ಮೊಳಗಿದ್ದು, ಆ ಧ್ವನಿಯೇ ನೀಡಿದ ನಿಯಮ-ಆದೇಶಗಳನ್ನು ಸ್ಪರ್ಧಿಗಳು ಪಾಲಿಸಿದ್ದಾರೆ. ಈ ಮೂಲಕ ಇಡೀ ಭಾರತೀಯ ಬಿಗ್ ಬಾಸ್ ಶೋಗಳಲ್ಲೇ ಹೊಸ ಇತಿಹಾಸ ಸೃಷ್ಟಿಯಾಗಿದೆ.&lt;/p&gt;&lt;img&gt;&lt;p&gt;ಈ ಬಾರಿಯ ಸೀಸನ್&zwnj;ನಲ್ಲಿ ಬಿಗ್ ಬಾಸ್ ಮನೆಯ ಮುಖ್ಯ ದ್ವಾರದ ಒಳಗೆ ಪ್ರವೇಶಿಸುವ ಮುನ್ನ, ಆವರಣದಲ್ಲಿ ನಿಲ್ಲಿಸಲಾಗಿರುವ ವಿಶೇಷ ವಿಮಾನದಲ್ಲಿ 16 ಮಂದಿ ಸ್ಪರ್ಧಿಗಳನ್ನು ಕೂರಿಸಲಾಗಿತ್ತು. ಅಚ್ಚರಿಯೆಂದರೆ, ಈ ವಿಮಾನದ ಒಳಗಿದ್ದ ಸ್ಪರ್ಧಿಗಳಿಗೆ ಯಾವುದೇ ಪುರುಷ ಬಿಗ್ ಬಾಸ್ ಧ್ವನಿ ಕೇಳಿಸಲಿಲ್ಲ! ಬದಲಾಗಿ, ಮಹಿಳೆಯೊಬ್ಬರ ಖಡಕ್ ಧ್ವನಿ ಕೇಳಿಸಿದ್ದು, ಆಕೆ ನೀಡಿದ ಪ್ರತಿಯೊಂದು ಆದೇಶ ಮತ್ತು ನಿಯಮಗಳನ್ನು ಎಲ್ಲಾ ಸ್ಪರ್ಧಿಗಳು ಚಾಚೂತಪ್ಪದೆ ಪಾಲಿಸಿದ್ದಾರೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಪ್ರತಿಯೊಬ್ಬ ಸ್ಪರ್ಧಿಗೂ ಸ್ವತಃ ಬಿಗ್ ಬಾಸ್ ಧ್ವನಿಯೇ ಸ್ವಾಗತ ಕೋರುತ್ತದೆ. ಆದರೆ, ಈ ಬಾರಿ ವಿಮಾನದಲ್ಲಿ ಸಿಲುಕಿರುವ 8 ಮಂದಿ ಸ್ಪರ್ಧಿಗಳಿಗೆ ಇನ್ನುವರೆಗೆ ಸಾಕ್ಷಾತ್ ಬಿಗ್ ಬಾಸ್ ಧ್ವನಿಯನ್ನು ನೇರವಾಗಿ ಆಲಿಸುವ ಅವಕಾಶವೇ ಸಿಕ್ಕಿಲ್ಲ. ಈ 8 ಜನರಲ್ಲಿ ಒಬ್ಬರು ಬಿಗ್ ಬಾಸ್ ಧ್ವನಿಯನ್ನು ಆಲಿಸುವುದಿರಲಿ, ಮನೆಯೊಳಗೆ ಪ್ರವೇಶ ಪಡೆಯುವ ಮುನ್ನವೇ ವಿಮಾನದಿಂದಲೇ ನೇರವಾಗಿ ಮನೆಯಿಂದ ಹೊರಬೀಳಲಿದ್ದಾರೆ (ಎಲಿಮಿನೇಟ್ ಆಗಲಿದ್ದಾರೆ) ಎಂಬ ಮಾತುಗಳು ಕೇಳಿಬರುತ್ತಿವೆ.&lt;/p&gt;&lt;img&gt;&lt;p&gt;ಹಿಂದಿನ 12 ಸೀಸನ್&zwnj;ಗಳಲ್ಲಿ ಶೋ ಆರಂಭವಾದ ಮೊದಲ ದಿನವೇ ಗಂಭೀರ ಧ್ವನಿಯೊಂದಿಗೆ ಬಿಗ್ ಬಾಸ್ ಸ್ಪರ್ಧಿಗಳನ್ನು ಸ್ವಾಗತಿಸಿ ಮನೆಯ ಜವಾಬ್ದಾರಿಗಳನ್ನು ವಹಿಸುತ್ತಿದ್ದರು. ಆದರೆ, ಸೀಸನ್ 13ರಲ್ಲಿ ಬರೋಬ್ಬರಿ 36 ಗಂಟೆಗಳ ಕಾಲ ಆ ಪ್ರಸಿದ್ಧ ಧ್ವನಿಯೇ ಕೇಳಿಸಿಲ್ಲ. ಬದಲಿಗೆ, ಒಂದು ದಿನಕ್ಕೂ ಹೆಚ್ಚು ಕಾಲ ಮಹಿಳಾ ಧ್ವನಿಯನ್ನೇ ಆಲಿಸಿ ಆಕೆಯ ಆದೇಶಗಳನ್ನು ಪಾಲಿಸಿರುವುದು ಈ ಸೀಸನ್&zwnj;ನ ರೋಚಕ ಟ್ವಿಸ್ಟ್&zwnj;ಗಳಿಗೆ ಮುನ್ನುಡಿ ಬರೆದಿದೆ.&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/bigg-boss-kannada-season-13-creates-history-with-female-voice-twist-first-time-sat-y64i51y"/>
        </item>
        <item>
            <title><![CDATA[Karna Serial ನಟ ಕಿರಣ್​ ರಾಜ್​ ಮೇಲೆ ಸಿಂಹದ ದಾಳಿ: ಶಾಕಿಂಗ್​ ವಿಡಿಯೋ ವೈರಲ್​- ಫ್ಯಾನ್ಸ್​ ಶಾಕ್​]]></title>
            <link>https://kannada.asianetnews.com/entertainment/karna-serial-actor-kiran-raj-attacked-by-lion-shocking-video-goes-viral-suc/articleshow-ygdkh4d</link>
            <guid isPermaLink="true">https://kannada.asianetnews.com/entertainment/karna-serial-actor-kiran-raj-attacked-by-lion-shocking-video-goes-viral-suc/articleshow-ygdkh4d</guid>
            <pubDate>Tue, 08 Sep 2026 14:03:02 +0530</pubDate>
            <description><![CDATA['ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರು ಸಿಂಹಕ್ಕೆ ತರಬೇತಿ ನೀಡುವಾಗ ನಡೆದ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಾವು ಸುರಕ್ಷಿತವಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಈ ಲೇಖನವು ಅವರ ಸಮಾಜ ಸೇವೆ ಮತ್ತು ನಟನಾ ವೃತ್ತಿಜೀವನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m202bf06nd278s1ta24a6zmc,imgname-kiran-raj-1788856351750.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್​ (Karna Serial)ನಲ್ಲಿ ಕರ್ಣನಾಗಿ ಮಿಂಚುತ್ತಿರುವ ಕರ್ಣ ಉರ್ಫ್​ ನಟ ಕಿರಣ್​ ರಾಜ್​ (Kiran Raj) ಸದ್ಯ ಸೀರಿಯಲ್​ನಲ್ಲಿ ಹೊಸ ಜೀವನ ಶುರು ಮಾಡಿದ್ದಾರೆ. ಅಪ್ಪನ ಪ್ರೀತಿಯೂ ಸಿಕ್ಕಿದ್ದು, ರಿಯಲ್​ ಅಮ್ಮ ಕಣ್ಣೆದುರು ಬರಬೇಕಿದೆ ಅಷ್ಟೇ. ಇಂತಿಪ್ಪ ಕಿರಣ್​ ರಾಜ್​ ಅವರು ಇದೀಗ ಶಾಕಿಂಗ್​ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಸಫಾರಿಗೆ ಹೋದಾಗ, ಸಿಂಹವೊಂದು ದಾಳಿ ಮಾಡಿರುವ ವಿಡಿಯೋ ಇದಾಗಿದೆ. ಇದನ್ನು ನೋಡಿದ ಕಿರಣ್​ ರಾಜ್​ ಫ್ಯಾನ್ಸ್​ ಗಾಬರಿಯಾಗಿ, ನಿಮಗೇನೂ ಆಗಿಲ್ಲ ತಾನೇ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;ಈ ವಿಡಿಯೋ ಶೇರ್​ ಮಾಡಿಕೊಂಡಿರುವ ನಟ ಕಿರಣ್​ ರಾಜ್​, ಇದು ಸಿಂಹಕ್ಕೆ ತರಬೇತಿ ನೀಡುವುದನ್ನು ಕಲಿತ ಮೊದಲ ದಿನ ಎಂದು ಬರೆದುಕೊಂಡಿದ್ದಾರೆ. ಅಲ್ಲಿ ಎರಡು ಸಿಂಹಗಳನ್ನು ನೋಡಬಹುದಾಗಿದೆ. ಈ ಸಿಂಹದ ಹೆಸರು ರೋಜರ್ ಮತ್ತು ರಾಕಿ ಎಂದಿರುವ ನಟ, ನಾವು ಶೀಘ್ರದಲ್ಲೇ ಸ್ನೇಹಿತರಾಗುತ್ತೇವೆ ಎಂದಿದ್ದಾರೆ. ಜೊತೆಗೆ, ಸಿಂಹದ ಜೊತೆ ಸ್ನೇಹ ಬೆಳೆಸಲು ಹೋದಾಗ ಕಲಿತಿರುವ ಪಾಠದ ಬಗ್ಗೆಯೂ ಅವರು ತಿಳಿಸಿದ್ದಾರೆ. ಸಿಂಹ ಯಾವಾಗಲೂ ನಿಮ್ಮನ್ನು ಬೀಳಿಸಲು ಪ್ರಯತ್ನಿಸುತ್ತದೆ, ಆದ್ದರಿಂದ ಯಾವಾಗಲೂ ಬಲವಾದ ಕಡೆಗೆ ವಾಲುತ್ತದೆ ಎಂದಿರುವ ಕಿರಣ್​ ರಾಜ್​, ದೂರ ಹೋದರೂ ಸಹ ಯಾವಾಗಲೂ ಸಿಂಹದ ಕಡೆಗೆ ಮುಖ ಇರಿಸಿ ಎಂದಿದ್ದಾರೆ. ಸಿಂಹಗಳು ನಿಮ್ಮ ಕಣ್ಣುಗಳನ್ನು ಓದಬಲ್ಲವು. ಅವು ನಿಮ್ಮನ್ನು ತಬ್ಬಿಕೊಳ್ಳಲು ಮತ್ತು ಅಪ್ಪಿಕೊಳ್ಳಲು ಇಷ್ಟಪಡುತ್ತವೆ ಎಂದಿರುವ ಕಿರಣ್​ ರಾಜ್​ ಅವರು ಸಿಂಹದ ಸ್ನೇಹ ಪರತೆಯ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;ಇವೆಲ್ಲವುಗಳ ನಡುವೆ, ಸಿಂಹವನ್ನು ಅವರ ಮೇಲೆ ದಾಳಿ ಮಾಡಿರುವ ವಿಡಿಯೋ ನೋಡಿ ಶಾಕ್​ ಆಗಿ ಪ್ರಶ್ನೆ ಕೇಳ್ತಿರೋ ಅಭಿಮಾನಿಗಳಿಗೆ ನಟ, ನಾನು ಹುಷಾರಾಗಿ ಇದ್ದೇನೆ. ಭಯ ಪಡಬೇಡಿ. ಒಂದು ವೇಳೆ ಹುಷಾರಾಗಿ ಇರದಿದ್ದರೆ, ಈ ಪೋಸ್ಟ್​ ಹಾಕಲು ಆಗ್ತಿರಲಿಲ್ಲ ಎಂದಿದ್ದಾರೆ. ಇದರ ಹೊರತಾಗಿಯೂ ಅವರ ಫ್ಯಾನ್ಸ್, ಈ ರೀತಿಯ ಸಾಹಸಕ್ಕೆ ಕೈಹಾಕಬೇಡಿ ಎಂದು ನಟನನ್ನು ಎಚ್ಚರಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ನಟನ ಕುರಿತು&lt;/strong&gt;&lt;/h2&gt;&lt;p&gt;ಇನ್ನು ನಟನ ಕುರಿತು ಹೇಳುವುದಾದರೆ, ಕಿರಣ್​ ರಾಜ್​ (Kiran Raj) ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್​ ರಾಜ್. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್&zwnj;ಬುಕ್&zwj;ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್&zwnj;-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಟಿಆರ್​ಪಿ ಕಿಂಗ್​&lt;/strong&gt;&lt;/h3&gt;&lt;p&gt;ಅಷ್ಟಕ್ಕೂ, ಕಿರಣ್ ರಾಜ್ ಅವರನ್ನು ಟಿಆರ್​ಪಿ ಕಿಂಗ್​ ಎಂದೇ ಹೇಳಲಾಗುತ್ತದೆ. ಕರ್ಣ ಸೀರಿಯಲ್​ನಲ್ಲಿಯೂ ಅವರು ಇದನ್ನು ಮೆಂಟೇನ್​ ಮಾಡಿಕೊಂಡು ಬಂದಿದ್ದಾರೆ. ಅವರ ನಟನೆ, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಸಂಭಾಷಣೆ, ಕರ್ಣನ ಆಂತರಿಕ ಸಂಘರ್ಷ ಎಲ್ಲವುಗಳಲ್ಲಿಯೂ ನಟ ತಮ್ಮ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/karna-serial-actor-kiran-raj-attacked-by-lion-shocking-video-goes-viral-suc/articleshow-ygdkh4d"/>
        </item>
    </channel>
</rss>
