<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 20 Aug 2026 10:51:13 +0530</lastBuildDate>
        <atom:link href="https://kannada.asianetnews.com/rss/tv-talk" rel="self" type="application/rss+xml"/>
        <item>
            <title><![CDATA[ಜೈದೇವ್ ರಹಸ್ಯ ಬಯಲಿಗೆಳೆಯಲು 'ಮಧುರ' ವ್ಯೂಹ ರಚಿಸಿದ IPS ಮಲ್ಲಿ; ಜಾಣೆಯಾದ ಭೂಮಿಕಾ]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-promo-update-malli-jeeva-bhoomika-devise-a-new-plan-to-uncover-jaidev-secrets-mrq-glgv6as</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-promo-update-malli-jeeva-bhoomika-devise-a-new-plan-to-uncover-jaidev-secrets-mrq-glgv6as</guid>
            <pubDate>Thu, 20 Aug 2026 10:51:10 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ, ಖಳನಾಯಕ ಜೈದೇವ್&zwnj;ನ ರಹಸ್ಯಗಳನ್ನು ಬಯಲಿಗೆಳೆಯಲು ಮಲ್ಲಿ, ಜೀವ ಮತ್ತು ಭೂಮಿಕಾ ಹೊಸ ಯೋಜನೆ ರೂಪಿಸಿದ್ದಾರೆ. ಜೈದೇವ್&zwnj;ನ ಹೆಣ್ಣಿನ ವೀಕ್&zwnj;ನೆಸ್ ಬಳಸಿಕೊಂಡು, ಅವನ ಬಾಯಿಂದಲೇ ಸತ್ಯ ಹೊರತರಲು 'ಮಧುರ ವ್ಯೂಹ' ರಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0esgzcjxvkc8swzwdttgnkj,imgname-amruthadhaare--4--1787202928018.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ, ಖಳನಾಯಕ ಜೈದೇವ್&zwnj;ನ ರಹಸ್ಯಗಳನ್ನು ಬಯಲಿಗೆಳೆಯಲು ಮಲ್ಲಿ, ಜೀವ ಮತ್ತು ಭೂಮಿಕಾ ಹೊಸ ಯೋಜನೆ ರೂಪಿಸಿದ್ದಾರೆ. ಜೈದೇವ್&zwnj;ನ ಹೆಣ್ಣಿನ ವೀಕ್&zwnj;ನೆಸ್ ಬಳಸಿಕೊಂಡು, ಅವನ ಬಾಯಿಂದಲೇ ಸತ್ಯ ಹೊರತರಲು 'ಮಧುರ ವ್ಯೂಹ' ರಚಿಸಿದ್ದಾರೆ.&lt;/p&gt;&lt;img&gt;&lt;p&gt;ಕೆಡಿ ಜೈದೇವ್ ರಹಸ್ಯ ತಿಳಿಯಲು ಮಲ್ಲಿ, ಜೀವ ಮತ್ತು ಭೂಮಿಕಾ ಹೊಸ ವ್ಯೂಹವೊಂದನ್ನು ರಚಿಸಿದ್ದಾರೆ. ಆರಂಭದಲ್ಲಿ ಈ ಪ್ಲಾನ್&zwnj;ಗೆ ಭೂಮಿಕಾ ವಿರೋಧ ವ್ಯಕ್ತಪಡಿಸಿದ್ರೂ ನಂತರ ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾಳೆ. ಜೈದೇವ್ ವಿರುದ್ಧ ಮಲ್ಲಿ ಮಾಡಿರುವ ಪ್ಲಾನ್ ಹೆಸರು 'ಮಧುರ' ವ್ಯೂಹ.&lt;/p&gt;&lt;img&gt;&lt;p&gt;ಹೌದು, ಮಲ್ಲಿ ಬಿಟ್ಟ ಬಳಿಕ ಜೈದೇವ್ ಜೀವನದಲ್ಲಿ ದಿಯಾ ಮತ್ತು ಅನು ಎಂಬ ಇಬ್ಬರು ಯುವತಿಯರು ಬಂದಿದ್ದರು. ಇದೀಗ ಇಬ್ಬರು ಕಾಣೆಯಾಗಿರೋದರಿಂದ ಮಲ್ಲಿ ಅವರಿಬ್ಬರ ಹುಡುಕಾಟಕ್ಕೆ ಮಲ್ಲಿ ಮುಂದಾಗಿದ್ದಾಳೆ. ಆರಂಭದಲ್ಲಿ ಲಕ್ಷ್ಮೀಕಾಂತ್&zwnj;ನನ್ನು ಜೈದೇವ್ ಮನೆಗೆ ಭೂಮಿಕಾ ಕಳುಹಿಸಿದ್ದಳು. ಆದ್ರೆ ಮದ್ಯ ಕುಡಿದ್ರೂ ಜೈದೇವ್ ಅಲರ್ಟ್ ಆಗಿದ್ದರಿಂದ ಯಾವುದೇ ವಿಷಯ ಬಿಟ್ಟುಕೊಟ್ಟಿರಲಿಲ್ಲ.&lt;/p&gt;&lt;img&gt;&lt;p&gt;ಮಾಹಿತಿ ಸಂಗ್ರಹಿಸಲು ಲಕ್ಷ್ಮೀಕಾಂತ್ ಫೇಲ್ ಆಗಿದ್ದರಿಂದ. ಮತ್ತೊಂದು ಪ್ಲಾನ್ ಮಾಡಲು ಹೋಟೆಲ್&zwnj;ನಲ್ಲಿ ಭೂಮಿಕಾ, ಮಲ್ಲಿ ಮತ್ತು ಜೀವ ಸೇರಿದ್ದಾರೆ. ಮನೆಯಲ್ಲಿ ಮಾತನಾಡಿದ್ರೆ ವಿಷಯ ಲೀಕ್ ಆಗಬಹುದು ಎಂದ ಅಂದಾಜಿಸಿ ಭೂಮಿಕಾ ಎಲ್ಲರನ್ನೂ ಹೋಟೆಲ್&zwnj;ಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾಳೆ. ಇತ್ತ ಮನೆಯಲ್ಲಿ ಭೂಮಿಕಾ ಇಲ್ಲದಿರೋದನ್ನು ಕಂಡು ಶಕುಂತಲಾ ವಿಲವಿಲ ಒದ್ದಾಡುತ್ತಿದ್ದಾಳೆ. ಅಂತೂ ಜಾಣೆಯಾಗಿ ಭೂಮಿಕಾ, ಮೀಟಿಂಗ್&zwnj;ನಲ್ಲಿ ಹೋಟೆಲ್&zwnj;ನಲ್ಲಿ ನಡೆಸಿದ್ದಾಳೆ.&lt;/p&gt;&lt;img&gt;&lt;p&gt;ಕೆಡಿ ಜೈದೇವ್&zwnj;ಗೆ ಎರಡು ವೀಕ್&zwnj;ನೆಸ್, ಒಂದು ಎಣ್ಣೆ ಮತ್ತೊಂದು ಹೆಣ್ಣು. ಮೊದಲಿಗೆ ಎಣ್ಣೆ ಕುಡಿಸುತ್ತಾ ಬಾಯಿ ಬಿಡಿಸಲು ಲಕ್ಷ್ಮೀಕಾಂತ್ ಮೂಲಕ ಪ್ರಯತ್ನಿಸಲಾಗಿತ್ತು. ಆದ್ರೆ ನಶೆಯಲ್ಲಿದ್ರೂ ಜೈದೇವ್ ಅಲರ್ಟ್ ಆಗಿದ್ರಿಂದ ಯಾವುದೇ ವಿಷಯ ಗೊತ್ತಾಗಿರಲಿಲ್ಲ. ಹಾಗಾಗಿ ಇದೀಗ ಎರಡನೇ ವೀಕ್&zwnj;ನೆಸ್ ಮುಂದಿಟ್ಟುಕೊಂಡು ರಹಸ್ಯ ಬೇಧಿಸಲು ಮಲ್ಲಿ ಮುಂದಾಗಿದ್ದಾಳೆ.&lt;/p&gt;&lt;img&gt;&lt;p&gt;ಇದಕ್ಕಾಗಿ ಮಲ್ಲಿ ತನ್ನ ಸಹೋದ್ಯೋಗಿ ಮಧುರಾ ಎಂಬಾಕೆಯನ್ನು ಕರೆಸಿಕೊಂಡಿದ್ದಾಳೆ. ಜೈದೇವ್ ಎಷ್ಟು ದುಷ್ಟ ಎಂಬುದನ್ನು ವಿವರಿಸಿ, ಆತನ ಸ್ನೇಹ ಬೆಳೆಸಿ ನಂಬಿಕೆ ಗಳಿಸಬೇಕು. ನಂತರ ಆತನ ಬಾಯಿಂದಲೇ ದಿಯಾ ಮತ್ತು ಅನು ಎಲ್ಲಿ ಹೋದ್ರು ಎಂಬುದನ್ನ ಹೇಳಿಸಬೇಕು ಎಂಬ ಟಾಸ್ಕ್ ನೀಡಿದ್ದಾಳೆ. ಈ ವ್ಯೂಹದಲ್ಲಿ ಜೈದೇವ್ ಸಿಲುಕ್ತಾನಾ ಅಥವಾ ಪರಾರಿಯಾಗ್ತಾನಾ ಎಂಬುದನ್ನು ಸಂಚಿಕೆಯಲ್ಲಿ ತಿಳಿಯಲಿದೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-promo-update-malli-jeeva-bhoomika-devise-a-new-plan-to-uncover-jaidev-secrets-mrq-glgv6as"/>
        </item>
        <item>
            <title><![CDATA[ಮದುವೆಯಾಗಿ 6 ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ರುದ್ರ ಮಾಸ್ಟರ್….  ಪತ್ನಿ ನಿರೀಕ್ಷಾ ಅದ್ಧೂರಿ ಸೀಮಂತ]]></title>
            <link>https://kannada.asianetnews.com/gallery/tv-talk/dance-choreographer-rudra-master-wife-nireeksha-baby-shower-8os6cgl</link>
            <guid isPermaLink="true">https://kannada.asianetnews.com/gallery/tv-talk/dance-choreographer-rudra-master-wife-nireeksha-baby-shower-8os6cgl</guid>
            <pubDate>Wed, 19 Aug 2026 20:22:55 +0530</pubDate>
            <description><![CDATA[&lt;p&gt;Rudra Master: ಕನ್ನಡ ಕಿರುತೆರೆಯ ಜನಪ್ರಿಯ ಡ್ಯಾನ್ಸ್ ಕೊರಿಯೋಗ್ರಾಫರ್ ರುದ್ರ ಮಾಸ್ಟರ್ ಇದೀಗ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ, ಇದೀಗ ಪೋಷಕರಾಗಿ ಭಡ್ತಿ ಪಡೆಯುತ್ತಿದ್ದಾರೆ. ಸೀಮಂತದ ಫೋಟೊಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0d81j8vnk52n1cdmfmmr0wr,imgname-rudra-master-1787151042840.jpg" type="image/jpeg" height="390" width="690"/>
            <content:encoded><![CDATA[&lt;p&gt;Rudra Master: ಕನ್ನಡ ಕಿರುತೆರೆಯ ಜನಪ್ರಿಯ ಡ್ಯಾನ್ಸ್ ಕೊರಿಯೋಗ್ರಾಫರ್ ರುದ್ರ ಮಾಸ್ಟರ್ ಇದೀಗ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ, ಇದೀಗ ಪೋಷಕರಾಗಿ ಭಡ್ತಿ ಪಡೆಯುತ್ತಿದ್ದಾರೆ. ಸೀಮಂತದ ಫೋಟೊಗಳು ಇಲ್ಲಿವೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ಕೊರಿಯೋಗ್ರಾಫರ್ &lsquo;ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್&rsquo; ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿರುವ ನೃತ್ಯ ಸಂಯೋಜಕ ರುದ್ರ ಮಾಸ್ಟರ್. ಇದೀಗ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸಂಭ್ರಮದಲ್ಲಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡು ಸಂಭ್ರಮವನ್ನು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಹೌದು ರುದ್ರ ಮಾಸ್ಟರ್ ತಂದೆಯಾಗಿ ಭಡ್ತಿ ಪಡೆಯುತ್ತಿದ್ದು, ಈ ಸಂಭ್ರಮವನ್ನು ಸೆಲೆಬ್ರೇಟ್ ಮಾಡಲು ಐದನೇ ತಿಂಗಳಿಗೆ ಕಾಲಿಟ್ಟಿರುವ ಪತ್ನಿಗೆ ಅದ್ದೂರಿಯಾಗಿ ಸೀಮಂತ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದು, ಹೊಸ ಅಧ್ಯಾಯ, ಹೊಸ ಸಂತೋಷ&hellip; ನಮ್ಮ ಪುಟ್ಟ ಪ್ರಪಂಚಕ್ಕೆ ಪುಟ್ಟ ಹೆಜ್ಜೆ&hellip; ಎಂದು ಪತ್ನಿ ನಿರೀಕ್ಷಾ ಭೂಷಣ್ ಕ್ಯಾಪ್ಶನ್ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ರುದ್ರ ಮಾಸ್ಟರ್ ಮತ್ತು ನಿರೀಕ್ಷಾ ಇದೇ ವರ್ಷ ಅಂದರೆ ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ರುದ್ರ ಮಾಸ್ಟರ್ ಮತ್ತು ನಿರೀಕ್ಷಾ ಕುಟುಂಬಸ್ಥರ ಸಮ್ಮತಿ ಪಡೆದು ಸರಳ ಸಮಾರಂಭದಲ್ಲಿ, ತಮ್ಮ ಬಂಧು ಬಳಗ ಹಾಗೂ ಸ್ನೇಹಿತರ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.&lt;/p&gt;&lt;img&gt;&lt;p&gt;&lsquo;ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್&rsquo; ಮೂಲಕ ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಸೈಲೆಂಟ್ ನೇಚರ್ ಮೂಲಕವೇ ಮನೆಮಾತಾಗಿದ್ದ ರುದ್ರ ಮಾಸ್ಟರ್ ಮದುವೆಯಾದ ಕೆಲವೇ ಸಮಯದಲ್ಲಿ ಪತ್ನಿ ನಿರೀಕ್ಷಾ ಜೊತೆ &lsquo;ಜೋಡಿ ನಂ 1&rsquo; ಕಾರ್ಯಕ್ರಮದಲ್ಲಿ ಸ್ಪರ್ಧಿಸಿದರು. ಅಲ್ಲೂ ಬೆಸ್ಟ್ ಜೋಡಿ ಎಂದು ಗುರುತಿಸಿಕೊಂಡಿದ್ದರು.&lt;/p&gt;&lt;img&gt;&lt;p&gt;ರುದ್ರ ಮಾಸ್ಟರ್ ಪತ್ನಿ ನಿರೀಕ್ಷಾ ಈಗ 5 ತಿಂಗಳ ಗರ್ಭಿಣಿಯಾಗಿದ್ದು. ನವದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪತ್ನಿ ನಿರೀಕ್ಷಾರ ಸೀಮಂತ ಕಾರ್ಯಕ್ರಮವನ್ನ ರುದ್ರ ಮಾಸ್ಟರ್ ಅದ್ಧೂರಿಯಾಗಿ ನೆರವೇರಿಸಿದ್ದು, ಸೋಶಿಯಲ್ ಮೀಡೀಯಾದಲ್ಲಿ ವಿಡೀಯೋ ಮತ್ತು ಫೋಟೊಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ರುದ್ರ ಮಾಸ್ಟರ್ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/dance-choreographer-rudra-master-wife-nireeksha-baby-shower-8os6cgl"/>
        </item>
        <item>
            <title><![CDATA[Amruthadhaare: ಜೈದೇವ್​ನ ಹನಿಟ್ರ್ಯಾಪ್​ ಮಾಡಿ ಖೆಡ್ಡಾದಲ್ಲಿ ಬೀಳಿಸಲು ರೆಡಿಯಾದ್ಲು ಈ ಸುಂದರಿ! ಯಾರೀಕೆ]]></title>
            <link>https://kannada.asianetnews.com/gallery/tv-talk/amruthadhaare-bhoomika-and-malli-decided-to-send-lady-to-jaidev-to-know-about-truth-suc-c5ibw9r</link>
            <guid isPermaLink="true">https://kannada.asianetnews.com/gallery/tv-talk/amruthadhaare-bhoomika-and-malli-decided-to-send-lady-to-jaidev-to-know-about-truth-suc-c5ibw9r</guid>
            <pubDate>Wed, 19 Aug 2026 20:25:36 +0530</pubDate>
            <description><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ದಿಯಾ ಮತ್ತು ಅನು ಎಂಬ ಯುವತಿಯರ ಕಣ್ಮರೆಗೆ ಕಾರಣನಾದ ಜೈದೇವ್&zwnj;ನನ್ನು ಹಿಡಿಯಲು ಭೂಮಿಕಾ ಮತ್ತು ಮಲ್ಲಿ ಸಂಚು ರೂಪಿಸಿದ್ದಾರೆ. ಜೈದೇವ್&zwnj;ನ ವೀಕ್ನೆಸ್ ಬಳಸಿ ಸತ್ಯ ಹೊರತರಲು ಹನಿಟ್ರ್ಯಾಪ್ ಮಾಡಲು ನಿರ್ಧರಿಸಿದ್ದು, ಆ ಸುಂದರಿ ಯಾರು ಎಂಬ ಕುತೂಹಲ ಮೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0d85vxj86jpehs9qngv6y5d,imgname-amruthadhaare-1787151183794.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ದಿಯಾ ಮತ್ತು ಅನು ಎಂಬ ಯುವತಿಯರ ಕಣ್ಮರೆಗೆ ಕಾರಣನಾದ ಜೈದೇವ್&zwnj;ನನ್ನು ಹಿಡಿಯಲು ಭೂಮಿಕಾ ಮತ್ತು ಮಲ್ಲಿ ಸಂಚು ರೂಪಿಸಿದ್ದಾರೆ. ಜೈದೇವ್&zwnj;ನ ವೀಕ್ನೆಸ್ ಬಳಸಿ ಸತ್ಯ ಹೊರತರಲು ಹನಿಟ್ರ್ಯಾಪ್ ಮಾಡಲು ನಿರ್ಧರಿಸಿದ್ದು, ಆ ಸುಂದರಿ ಯಾರು ಎಂಬ ಕುತೂಹಲ ಮೂಡಿದೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಜೈದೇವನನ್ನು ಖೆಡ್ಡಾಕ್ಕೆ ಉರುಳಿಸಲು ಪ್ಲ್ಯಾನ್​ ಮಾಡುತ್ತಿದ್ದಾರೆ ಭೂಮಿಕಾ ಮತ್ತು ಮಲ್ಲಿ. ದಿಯಾ ಮತ್ತು ಅನು ಎನ್ನುವ ಯುವತಿಯರ ಕಾಣೆಯ ಹಿಂದೆ ಇರುವ ಕೈವಾಡ ಯಾರದ್ದು ಎಂದು ನೋಡಲು ಇನ್ನೋರ್ವ ಹುಡುಗಿಯನ್ನು ಕಳುಹಿಸುವ ಪ್ಲ್ಯಾನ್​ ಸಿದ್ಧವಾಗುತ್ತಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಜೈದೇವ್​ ದಿಯಾಳನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದಾನೆ. ಇನ್ನೋರ್ವ ಯುವತಿ ಅನು ಎಂಬಾಕೆ ಕಾಣೆಯಾಗಿದ್ದಾಳೆ. ಈ ಇಬ್ಬರ ಕಾಣೆಯ ಹಿಂದೆ ಜೈದೇವನ ಕೈವಾಡ ಇದೆ ಎನ್ನುವುದು ಭೂಮಿಕಾ ಮತ್ತು ಮಲ್ಲಿಗೆ ತಿಳಿದಿದೆ ಜೀವ ಕೂಡ ಇದಕ್ಕೆ ಸಾಥ್​ ಕೊಟ್ಟಿದ್ದಾನೆ.&lt;/p&gt;&lt;img&gt;&lt;p&gt;ಲಕ್ಷ್ಮೀಕಾಂತನನ್ನು ಜೈದೇವ್​ ಬಳಿ ಭೂಮಿಕಾ ವಿಷಯ ಕೆದುಕಲು ಬಿಟ್ಟಿದ್ದಳು. ಆದ್ರೆ ಜೈದೇವನಿಗೆ ಡೌಟ್​ ಬಂದು ಏನೂ ಹೇಳಲಿಲ್ಲ. ಆದರೆ ದಿಯಾ ಮತ್ತು ಅನು ಹೆಸರು ಕೇಳುತ್ತಿದ್ದಂತೆಯೇ ಅವನಲ್ಲಿ ಆದ ಬದಲಾವಣೆ ಬಗ್ಗೆ ಲಕ್ಷ್ಮೀಕಾಂತ ತಿಳಿಸಿದ್ದರಿಂದ ಎಲ್ಲರ ಅನುಮಾನ ಬಲವಾಗಿದೆ.&lt;/p&gt;&lt;img&gt;&lt;p&gt;ಈಗ ಜೈದೇವನನ್ನು ಅವನ ವೀಕ್​ನೆಸ್​ ಬಳಸಿ ಸತ್ಯ ಕುಕ್ಕುವಂತೆಮಾಡಬೇಕು ಎನ್ನುವ ಪ್ಲ್ಯಾನ್​ ಜೀವ ಕೊಟ್ಟಿದ್ದಾನೆ. ಆದರೆ ಇದಾಗಲೇ ಇಬ್ಬರು ಹುಡುಗಿಯರು ನಾಪತ್ತೆಯಾಗಿರುವ ಕಾರಣದಿಂದ, ಈ ಪ್ಲ್ಯಾನ್​ ಬೇಡ ಎಂದಿದ್ದಾಳೆ ಭೂಮಿಕಾ.&lt;/p&gt;&lt;img&gt;&lt;p&gt;ಆದರೆ, ಮಲ್ಲಿ ಇದೇ ಪ್ಲ್ಯಾನ್​ ಸರಿ ಇದೆ. ನಾವೇ ಒಬ್ಬಳನ್ನು ಕಳಿಸಿ ಟ್ರ್ಯಾಪ್​ ಮಾಡಬೇಕು. ಅವಳಿಗೆ ಏನೂ ಹಾನಿಯಾಗದಂತೆ ನೋಡಬೇಕು. ಇದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಎಂದಿದ್ದಾಳೆ.&lt;/p&gt;&lt;img&gt;&lt;p&gt;ಹಾಗಿದ್ದರೆ, ಆ ಸುಂದರಿ ಯಾರು ಎನ್ನುವ ಕುತೂಹಲ ಈಗ ವೀಕ್ಷಕರನ್ನು ಕಾಡುತ್ತಿದೆ. ಮಲ್ಲಿಯೇ ವೇಷ ಬದಲಿಸಿ ಹೋಗ್ತಾಳಾ (ಸೀರಿಯಲ್​ಗಳಲ್ಲಿ ಇವೆಲ್ಲಾ ಕಾಮನ್​. ಮೇಕಪ್​ ಬದಲಾಯಿಸಿದ ತಕ್ಷಣ ಸೀರಿಯಲ್​ನಲ್ಲಿ ಇರುವ ನಟ-ನಟಿಯರಿಗೆ ಇವರೇ ಅವರು ಎನ್ನೋದು ಗೊತ್ತಾಗಲ್ಲ. ಉದಾ: ಬ್ರಹ್ಮಗಂಟು ಸೀರಿಯಲ್​ ದೀಪಾ!). ಅಥವಾ ಬೇರೆ ಯರಾದರೂ ಸುಂದರಿ ಬರುತ್ತಾಳೋ ಎಂದು ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-bhoomika-and-malli-decided-to-send-lady-to-jaidev-to-know-about-truth-suc-c5ibw9r"/>
        </item>
        <item>
            <title><![CDATA[ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ: ಅನುಪಮಾ ಗೌಡ ವಿಶೇಷ ಸಂದರ್ಶನ]]></title>
            <link>https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo</link>
            <guid isPermaLink="true">https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo</guid>
            <pubDate>Wed, 19 Aug 2026 23:47:07 +0530</pubDate>
            <description><![CDATA[&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು ಎಂದು ಅನುಪಮಾ ಗೌಡ ಸಂದರ್ಶನದಲ್ಲಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dhd72gvzpt5x7ns7k0mpy0,imgname-jvj-1787160861776.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ನಿರೂಪಣೆಯಿಂದ ದೂರವಾಗಬೇಕೆಂಬ ನಿರ್ಧಾರಕ್ಕೆ ಕಾರಣ ಏನು?&lt;/strong&gt;&lt;/p&gt;&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು. ಮನಸ್ಸಿಗೆ ತೃಪ್ತಿ ಕೊಡದ ಕೆಲಸ ಬೇಡವೆನಿಸಿ ಈ ನಿರ್ಧಾರ ತೆಗೆದುಕೊಂಡೆ.&lt;/p&gt;&lt;p&gt;&lt;strong&gt;* ಆ್ಯಂಕರಿಂಗ್&zwnj;ಗೆ ವಿದಾಯ ಹೇಳಲು ಬೇರೆ ಕಾರಣಗಳಿವೆ ಅಂತಿದ್ದಾರಲ್ಲ?&lt;/strong&gt;&lt;/p&gt;&lt;p&gt;ಅದೆಲ್ಲವೂ ಸುಳ್ಳು. ನಾನು ಮಾಡುತ್ತಿದ್ದ ಕೆಲಸ ನಾನೇ ಎಂಜಾಯ್&zwnj; ಮಾಡಕ್ಕೆ ಆಗುತ್ತಿಲ್ಲ, ಇದರ ಜೊತೆಗೆ ವರ್ಷದಲ್ಲಿ ನಾನು ಎರಡೇ ಶೋ ಮಾಡುತ್ತಿದ್ದೆ. ಈ ಎರಡೂ ಶೋಗಳಿಂದ ವರ್ಷದಲ್ಲಿ 6 ತಿಂಗಳು ಕೆಲಸ, ಉಳಿದ 6 ತಿಂಗಳು ಖಾಲಿ ಕೂರಬೇಕಿತ್ತು. ಹಾಗಾಗಿ ಬೇರೆ ಏನಾದರು ಸ್ವಂತವಾಗಿ ಮಾಡೋ ಯೋಚನೆಯಿಂದ ನಿರೂಪಣೆ ಬಿಟ್ಟಿದ್ದು.&lt;/p&gt;&lt;p&gt;&lt;strong&gt;* ನಿಮ್ಮ ಮತ್ತು ಕಲರ್ಸ್&zwnj; ವಾಹಿನಿಯ ನಂಟು ಹಳೆಯದು. ಬೇರೆ ಶೋಗಳು ನಿಮಗೆ ಕೊಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಈ ವಿಚಾರದಲ್ಲಿ ನಾನು ಯಾರ ಮೇಲೂ ಆರೋಪ ಮಾಡಲಾರೆ. ಯಾಕೆಂದರೆ ಅವರಿಗೂ ವಾಹಿನಿಯಲ್ಲಿ ಶೋಗಳು ಅಪ್ರೂವ್&zwnj; ಆಗುತ್ತಿರಲಿಲ್ಲ. ಬಂದ ಶೋಗಳನ್ನು ನನಗೆ ಕೊಡುತ್ತಿದ್ದರು. 9 ಶೋಗಳಿಗೆ ಹೋಸ್ಟ್&zwnj; ಆಗಿದ್ದೇನೆ. ಇದಕ್ಕಿಂತ ಇನ್ನೇನು ಬೇಕು!?&lt;/p&gt;&lt;p&gt;&lt;strong&gt;* ನಿರೂಪಣೆ ಜೊತೆಗೆ ಖಾಲಿ ಇರುವಾಗ ಬೇರೆ ಕೆಲಸಗಳನ್ನೂ ಮಾಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಎರಡು ದೋಣಿಯ ಪ್ರಯಾಣ ಅಭ್ಯಾಸ ಇಲ್ಲ. ಸಿನಿಮಾ ಅಂದರೆ ಸಿನಿಮಾ, ನಿರೂಪಣೆ ಅಂದ್ರೆ ನಿರೂಪಣೆ ಮಾತ್ರ. ಆ್ಯಂಕರಿಂಗ್&zwnj; ಜೊತೆಗೆ ಖಾಲಿ ಇರೋ ಆರು ತಿಂಗಳಲ್ಲಿ ಏನಂತ ಮಾಡಲಿ. ಎಂಟು ವರ್ಷ ಆ್ಯಂಕರಿಂಗ್&zwnj; ಮಾಡಿದ್ದೇನೆ.&lt;/p&gt;&lt;p&gt;&lt;strong&gt;* ಸ್ವಂತವಾಗಿ ಏನಾದರು ಮಾಡಬೇಕು ಅಂದ್ರಿ, ಏನು?&lt;/strong&gt;&lt;/p&gt;&lt;p&gt;ಸದ್ಯಕ್ಕೆ ಒಂದು ಸಿನಿಮಾ ಶೂಟಿಂಗ್&zwnj; ಮುಗಿಸಿದ್ದೇನೆ. ಒಂದು ವೆಬ್&zwnj; ಸರಣಿ ಆಗಿದೆ. ನಾನೇ ಒಂದು ಕಿರು ಚಿತ್ರ ನಿರ್ದೇಶಿಸಿದ್ದು, ಈಗ ಅದರ ಎಡಿಟಿಂಗ್&zwnj; ನಡೆಯುತ್ತಿದ್ದೆ. &lsquo;ಪ್ರೆಸ್ಟೀಜ್&zwnj;&rsquo; ಎಂಬುದು ಆ ಕಿರುಚಿತ್ರದ ಹೆಸರು. ಕಲಾವಿದರ ಕೆರಿಯರ್&zwnj; ಯಾವಾಗ ಶುರುವಾಗುತ್ತೆ, ಯಾವಾಗ ನಿಂತೋಗುತ್ತೆ, ಮತ್ತೆ ಯಾವಾಗ ಓಪನ್&zwnj; ಆಗುತ್ತೆ ಅಂತ ಗೊತ್ತಿರಲ್ಲ.&lt;/p&gt;&lt;p&gt;&lt;strong&gt;* &lsquo;ಆ ಕರಾಳ ರಾತ್ರಿ&rsquo; ಚಿತ್ರದ ನಂತರ ನಿಮಗೆ ಸಿನಿಮಾಗಳು ಅವಕಾಶಗಳು ಬರಲಿಲ್ಲವೇ?&lt;/strong&gt;&lt;/p&gt;&lt;p&gt;ಬಂದಿದ್ದವು. ಆದರೆ, ಎಲ್ಲಾ ಪಾತ್ರಗಳಲ್ಲೂ ಅದೇ &lsquo;ಆ ಕರಾಳ ರಾತ್ರಿ&rsquo; ಚಿತ್ರದ ನೆರಳು. ಒಂದೇ ರೀತಿಯ ಪಾತ್ರದ 10 ಸಿನಿಮಾ ಮಾಡೋದಕ್ಕಿಂತ ಒಂದು ಸಿನಿಮಾ ಮಾಡಬೇಕು ಅನ್ನೋ ನಿಲುವು ನನ್ನದು. ಹಾಗೆ ಬಂದಿದ್ದೆಲ್ಲ ಒಪ್ಪಿಕೊಂಡಿದ್ದರೆ ಕನಿಷ್ಠ 15 ಸಿನಿಮಾಗಳಲ್ಲಿ ನಟಿಸುತ್ತಿದ್ದೆ.&lt;/p&gt;&lt;p&gt;&lt;strong&gt;* ಹೌದು, ಈಗ ನಿಮ್ಮ ಆದಾಯ ಏನು?&lt;/strong&gt;&lt;/p&gt;&lt;p&gt;ಇಲ್ಲಿಯವರೆಗೂ ನಿರೂಪಣೆಯಿಂದ ಬರುತ್ತಿತ್ತು. ಈಗ ಮೊದಲಿಗಿಂತ ಸೋಷಿಯಲ್&zwnj; ಮೀಡಿಯಾ ಸ್ಟ್ರಾಂಗ್&zwnj; ಆಗಿದೆ. ಇನ್&zwnj;ಸ್ಟಗ್ರಾಮ್&zwnj; ಕೋಲಾಬರೇಷನ್&zwnj;, ಪ್ರಚಾರಗಳಿಂದ ಆದಾಯ ಬರುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo"/>
        </item>
        <item>
            <title><![CDATA[Anupama Gowda: ವಿದಾಯದ ನುಡಿ ಹೇಳಿ ಫ್ಯಾನ್ಸ್​ಗೆ ಬಿಗ್​ ಶಾಕ್​ ಕೊಟ್ಟ ಆ್ಯಂಕರ್​ ಅನುಪಮಾ ಗೌಡ: ಏನಾಯ್ತು ನಟಿಗೆ]]></title>
            <link>https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx</link>
            <guid isPermaLink="true">https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx</guid>
            <pubDate>Tue, 18 Aug 2026 12:27:36 +0530</pubDate>
            <description><![CDATA[ಖ್ಯಾತ ನಿರೂಪಕಿ ಮತ್ತು ನಟಿ ಅನುಪಮಾ ಗೌಡ, 8 ವರ್ಷಗಳ ಆ್ಯಂಕರಿಂಗ್ ಪಯಣಕ್ಕೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಅವರು, ಈ ಅನಿರೀಕ್ಷಿತ ನಿರ್ಧಾರಕ್ಕೆ ಕಾರಣ ಹಾಗೂ ತಮ್ಮ ಮನದ ನೋವನ್ನು ಬಿಚ್ಚಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09tegvpbg7mdew0wxcrm9n3,imgname-anupama-gowda-1787036124022.jpg" type="image/jpeg" height="390" width="690"/>
            <content:encoded><![CDATA[&lt;p&gt;ಆ್ಯಂಕರ್ ಎಂದಾಕ್ಷಣ ಕೆಲವೇ ಕೆಲವು ಜನ ನೆನಪಾಗ್ತಾರೆ. ಅವರಲ್ಲಿ ಒಬ್ಬರು ಆ್ಯಂಕರ್​ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು ನಟಿಯೂ ಆಗಿರುವ ಅನುಪಮಾ ಗೌಡ. ಇವರ ಆ್ಯಂಕರಿಂಗ್​ ಪಯಣಕ್ಕೆ 8 ವರ್ಷಗಳಾಗಿವೆ. ಇದೀಗ ಅವರು ತಮ್ಮ ಆ್ಯಂಕರಿಂಗ್​ ಕ್ಷೇತ್ರಕ್ಕೆ ಗುಡ್​ಬೈ ಹೇಳಿದ್ದು, ಈ ಕುರಿತು ವಿಡಿಯೋ ಮಾಡಿ ಅಭಿಮಾನಿಗಳಿಗೆ ಬಿಗ್​ ಶಾಕ್​ ನೀಡಿದ್ದಾರೆ. ತಮ್ಮ ನಿರೂಪಣಾ ವೃತ್ತಿಗೆ ನಿವೃತ್ತಿ ಘೋಷಿಸಿರೋ ಅನುಪಮಾ ಗೌಡ ಅವರು, ಇದನ್ನು ತಮ್ಮ ಜಾಲತಾಣದಲ್ಲಿ ಶೇರ್​ಮಾಡಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ಆ್ಯಂಕರಿಂಗ್​ ಪಯಣದ ಕುರಿತು ಮಾತನಾಡಿರುವ ನಟಿ, ನಾನು 2016ರಲ್ಲಿಯೇ ನಿರೂಪಕಿಯಾಗಬೇಕಿತ್ತು. ಆದರೆ 2 ವರ್ಷಗಳ ಸಮಯ ತೆಗೆದುಕೊಂಡು ಮೊದಲ ಬಾರಿಗೆ ವೇದಿಕೆ ಹತ್ತಿದ್ದು 2018 ಜೂ.22ರಂದು. ಅಲ್ಲಿಂದ ಪ್ರಾರಂಭವಾದ ಈ ಪ್ರಯಾಣ ಕೊನೆಗೊಂಡಿದ್ದು 2026ರ ಮೇ 05. ಅದು ಅನಿರೀಕ್ಷಿತವಾಗಿ ಒಲಿದು ಬಂದ ನಿವೃತ್ತಿ. ಏನೂ ಗೊತ್ತಿಲ್ಲದ್ದಿದ್ದ ನನಗೆ ಕನ್ನಡ ಕಲಿಸಿ, ವೇದಿಕೆ ಮೇಲೆ ನಿಲ್ಲೋದನ್ನು ಕಲಿಸಿಕೊಟ್ಟು.. ನನ್ನನ್ನು ನಿರೂಪಕಿಯಾಗಿ ಮಾಡಿ ಇಲ್ಲಿಯವರೆಗೂ ಬರಲು ನನ್ನ ಹಿಂದೆ ನಿಂತವರು ಹಲವರು. ನನ್ನ ನಿರೂಪಣೆಯ ಜರ್ನಿಯಲ್ಲಿ ಅತ್ಯುತ್ತಮ ವ್ಯಕ್ತಿಗಳು ಪರಿಚಯವಾದ್ರು, ಅವರೆಲ್ಲರೊಂದಿಗಿನ ಸಂಬಂಧವನ್ನು ನಾನು ನನ್ನ ಜೀವನದುದ್ದಕ್ಕೂ ಇಟ್ಟುಕೊಳ್ತೀನಿ ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ತುಂಬಾ ಕಲಿತಿದ್ದೇನೆ&lt;/strong&gt;&lt;/h2&gt;&lt;p&gt;ನಾನು ನನ್ನೊಳಗಿನ ಕಲಾವಿದೆಗೆ ತೃಪ್ತಿಪಡಿಸಬೇಕು ಅನ್ನೋದೇ ಈ ನಿರ್ಧಾರಕ್ಕೆ ಕಾರಣ.. ನಿಮ್ಮಿಂದ ತುಂಬಾ ಕಲಿತಿದ್ದೀನಿ, ತುಂಬಾ ಪ್ರೀತಿ ಕೊಟ್ಟಿದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತೆ. ಮುಂದೆ ಬೇರೆ ಬೇರೆ ದಾರಿಗಳಿವೆ. ಮುಂದೆ ಜೀವನ ಇನ್ನೂ ಚೆನ್ನಾಗಿದೆ. ಈ ವಿದಾಯಕ್ಕೆ ಇದು ಸರಿಯಾದ ಸಮಯ.. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ಅನುಪಮಾ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಅಷ್ಟಕ್ಕೂ ಏನಾಯ್ತು?&lt;/strong&gt;&lt;/h3&gt;&lt;p&gt;ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ಸಾಕಮ್ಮ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ&rsquo; ಎಂದು ನೊಂದು ನುಡಿದಂತಿದೆ ಅನುಪಮಾ. &lsquo;ಸೀರಿಯಲ್​ಗೆ ಮತ್ತೆ ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ&rsquo; ಎಂದೂ ಹೇಳಿದ್ದಾರೆ. ಮಜಾ ಭಾರತ​&rsquo;, &lsquo;ಕನ್ನಡ ಕೋಗಿಲೆ&rsquo;, &lsquo;ರಾಜಾ ರಾಣಿ&rsquo;, &lsquo;ನಮ್ಮಮ್ಮ ಸೂಪರ್ ಸ್ಟಾರ್&rsquo;, &lsquo;ಸುವರ್ಣ ಸೂಪರ್​ಸ್ಟಾರ್ಸ್&rsquo;, &lsquo;ಸುವರ್ಣ ಜ್ಯಾಕ್​ಪಾಟ್&rsquo;, &lsquo;ಗರ್ಲ್ಸ್ vs ಬಾಯ್ಸ್&rsquo;, &lsquo;ಕ್ವಾಟ್ಲೆ ಕಿಚನ್&rsquo; ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/anchor-anupama-gowda-gave-a-big-shock-to-fans-by-saying-goodbye-what-happened-to-the-actress-suc/articleshow-19vlvvx"/>
        </item>
        <item>
            <title><![CDATA[ಕುಲದೇವಿ ದರ್ಶನಕ್ಕಾಗಿ ಮೊದಲ ಬಾರಿ ಗಂಡನ ಜೊತೆ ಕೇರಳಕ್ಕೆ ತೆರಳಿದ ನಟಿ ವೈಷ್ಣವಿ ಗೌಡ]]></title>
            <link>https://kannada.asianetnews.com/gallery/tv-talk/vaishnavi-gowda-visits-kerala-to-kuladevi-darshana-with-husband-39o473g</link>
            <guid isPermaLink="true">https://kannada.asianetnews.com/gallery/tv-talk/vaishnavi-gowda-visits-kerala-to-kuladevi-darshana-with-husband-39o473g</guid>
            <pubDate>Tue, 18 Aug 2026 17:48:23 +0530</pubDate>
            <description><![CDATA[&lt;p&gt;Vaishnavi Gowda: ನಟಿ ವೈಷ್ಣವಿ ಗೌಡ, ಈಗಷ್ಟೇ ಉದಯ ಟಿವಿ ಸೀರಿಯಲ್ ಮೂಲಕ ಮತ್ತೊಮ್ಮೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ ಶಾರ್ಟ್ ಬ್ರೇಕ್ ತೆಗೆದುಕೊಂಡು ಗಂಡನ ಜೊತೆ ಕೇರಳಕ್ಕೆ ತೆರಳಿ ತಮ್ಮ ಕುಲ ದೇವಿಯ ದರ್ಶನ ಪಡೆದು ಬಂದಿದ್ದಾರೆ ನಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0acvkjzwd4kcpfnds5kb13c,imgname-vaishnavi-gowda-1787055427165.jpg" type="image/jpeg" height="390" width="690"/>
            <content:encoded><![CDATA[&lt;p&gt;Vaishnavi Gowda: ನಟಿ ವೈಷ್ಣವಿ ಗೌಡ, ಈಗಷ್ಟೇ ಉದಯ ಟಿವಿ ಸೀರಿಯಲ್ ಮೂಲಕ ಮತ್ತೊಮ್ಮೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ ಶಾರ್ಟ್ ಬ್ರೇಕ್ ತೆಗೆದುಕೊಂಡು ಗಂಡನ ಜೊತೆ ಕೇರಳಕ್ಕೆ ತೆರಳಿ ತಮ್ಮ ಕುಲ ದೇವಿಯ ದರ್ಶನ ಪಡೆದು ಬಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ, ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ. ಇದೀಗ ತಮ್ಮ ಬ್ಯುಸಿ ಸೀರಿಯಲ್ ಶೆಡ್ಯೂಲ್ ನಡುವೆ ನಟಿ ಬ್ರೇಕ್ ತೆಗೆದುಕೊಂಡು ಕುಲದೇವಿ ದರ್ಶನ ಪಡೆದು ಬಂದಿದ್ದಾರೆ. ತಮ್ಮ ಪತಿ ಜೊತೆಗಿನ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೇರಳದ ನಮ್ಮ ಕುಲದೇವಿ ದೇವಸ್ಥಾನಕ್ಕೆ ನಮ್ಮ ಮೊದಲ ಭೇಟಿ. ಆಶೀರ್ವಾದಗಳನ್ನು ಹುಡುಕುವುದು, ಪ್ರಶಾಂತವಾದ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸುವುದು ಮತ್ತು ಕುಟುಂಬವಾಗಿ ಒಟ್ಟಿಗೆ ಅಮೂಲ್ಯ ಸಮಯವನ್ನು ಕಳೆಯುವ ಸುಂದರ ಅನುಭವ. ಕೆಲವು ಪ್ರಯಾಣಗಳು ನಾವು ಭೇಟಿ ನೀಡುವ ಸ್ಥಳಗಳಿಗೆ ಮಾತ್ರವಲ್ಲ, ದಾರಿಯುದ್ದಕ್ಕೂ ನಾವು ಸೃಷ್ಟಿಸುವ ನೆನಪುಗಳಿಗೂ ವಿಶೇಷವಾಗಿರುತ್ತದೆ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವೈಷ್ಣವಿ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಫೋಟೋಗಳಲ್ಲಿ ನಟಿ ಕೇರಳ ಕಸುವು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಲೆ ತುಂಬ ದುಂಡು ಮಲ್ಲಿಗೆ ಮುಡಿದು, ಜುಮುಕಿ ಧರಿಸಿ, ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತಿ ಅನುಕೂಲ್ ಮಿಶ್ರಾ ಪಂಚೆ ಹಾಗೂ ಶಾಲು ಧರಿಸಿ ಫೋಟೊಗೆ ಹೆಂಡ್ತಿ ಜೊತೆ ಪೋಸ್ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಇಬ್ಬರೂ ಸಹ ಟ್ರಾವೆಲ್ ಪ್ರಿಯರಾಗಿದ್ದು, ಹೆಚ್ಚಾಗಿ ದೇಶದ ವಿವಿಧ ಸುಂದರ ತಾಣಗಳನ್ನು ಜೊತೆಯಾಗಿ ಎಕ್ಸ್ ಪ್ಲೋರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಈ ಜೋಡಿ ಮೇಘಾಲಯದ ಸುಂದರ ಜಾಗವನ್ನು ಎಕ್ ಪ್ಲೋರ್ ಮಾಡಿ ಬಂದಿದ್ದರು. ಅಲ್ಲಿನ ಪ್ರಕೃತಿ ಜೊತೆ ಕಳೆದು ಹೋಗಿದ್ದರು. ಇದೀಗ ಕೇರಳದ ಸೌಂದರ್ಯಕ್ಕೆ ಮನ ಸೋತಿದ್ದಾರೆ ಜೋಡಿ.&lt;/p&gt;&lt;img&gt;&lt;p&gt;ವೈಷ್ಣವಿ ಗೌಡ, ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ &lsquo;ಗೆಳತಿ ಗಾಯತ್ರಿ&rsquo;ಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲ್ಯದಲ್ಲಿಜೊತೆಯಾಗಿದ್ದ ಗೆಳತಿ ಗಾಯತ್ರಿಯನ್ನು ಹುಡುಕುವ ಪ್ರಯತ್ನದಲ್ಲಿರುವ, ಅದಕ್ಕಾಗಿ ಪ್ರತಿ ವರ್ಷ ರಿ ಯೂನಿಯನ್ ಮಾಡುತ್ತಿರುವ ಶ್ರೀಮಂತ ಮನೆಯ ಹುಡುಗಿ ಹಾಗೂ ಪ್ರೀತಿ ಮಾಡುವ ಗಂಡ ಮುದ್ದಾದ ಮಗುವಿನ ಅಮ್ಮ ಪಾರ್ವತಿಯಾಗಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/vaishnavi-gowda-visits-kerala-to-kuladevi-darshana-with-husband-39o473g"/>
        </item>
        <item>
            <title><![CDATA[Amruthadhaare: ಜೈದೇವ್ ಮುಂದೆ ಟುಸ್ ಪಟಾಕಿ ಆಯ್ತು ಭೂಮಿಕಾ ಪ್ಲಾನ್; ಮಲ್ಲಿ ಕನ್ಫ್ಯೂಸ್!]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-promo-update-dia-secret-bhumika-and-malli-s-strategy-fails-in-front-of-jaidev-mrq-4plwofg</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-promo-update-dia-secret-bhumika-and-malli-s-strategy-fails-in-front-of-jaidev-mrq-4plwofg</guid>
            <pubDate>Wed, 19 Aug 2026 08:26:30 +0530</pubDate>
            <description><![CDATA[ದಿಯಾಳ ರಹಸ್ಯವನ್ನು ತಿಳಿಯಲು ಭೂಮಿಕಾ ಕಳುಹಿಸಿದ ಲಕ್ಷ್ಮೀಕಾಂತ್, ಯಾವುದೇ ಮಾಹಿತಿ ಇಲ್ಲದೆ ಬರಿಗೈಯಲ್ಲಿ ಹಿಂತಿರುಗುತ್ತಾನೆ. ಈ ನಡುವೆ, ಭೂಮಿಕಾ ಮತ್ತು ಮಲ್ಲಿಯ ಮುಂದಿನ ಯೋಜನೆಯನ್ನು ಶಕುಂತಲಾ ಕೇಳಿಸಿಕೊಂಡಿದ್ದು, ಜೈದೇವ್&zwnj;ನನ್ನು ಎಚ್ಚರಿಸುವ ಸಾಧ್ಯತೆ ಇದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0byq19rjvwahemkcf6qvvfc,imgname-amruthadhaare--3--1787107706168.jpg" type="image/jpeg" height="390" width="690"/>
            <content:encoded><![CDATA[ದಿಯಾಳ ರಹಸ್ಯವನ್ನು ತಿಳಿಯಲು ಭೂಮಿಕಾ ಕಳುಹಿಸಿದ ಲಕ್ಷ್ಮೀಕಾಂತ್, ಯಾವುದೇ ಮಾಹಿತಿ ಇಲ್ಲದೆ ಬರಿಗೈಯಲ್ಲಿ ಹಿಂತಿರುಗುತ್ತಾನೆ. ಈ ನಡುವೆ, ಭೂಮಿಕಾ ಮತ್ತು ಮಲ್ಲಿಯ ಮುಂದಿನ ಯೋಜನೆಯನ್ನು ಶಕುಂತಲಾ ಕೇಳಿಸಿಕೊಂಡಿದ್ದು, ಜೈದೇವ್&zwnj;ನನ್ನು ಎಚ್ಚರಿಸುವ ಸಾಧ್ಯತೆ ಇದೆ.&lt;img&gt;&lt;p&gt;ದಿಯಾಳ ವಿಷಯ ತಿಳಿದುಕೊಂಡು ಬರಲು ಲಕ್ಷ್ಮೀಕಾಂತ್&zwnj;ನನ್ನು ಜೈದೇವ್ ಮನೆಗೆ ಕಳುಹಿಸಿದ ಭುಮಿಕಾ ಪ್ಲಾನ್ ಟುಸ್ ಪಟಾಕಿಯಾಗಿದೆ. ಯಾವುದೇ ಮಾಹಿತಿ ತಿಳಿದುಕೊಳ್ಳಲಾಗದೇ ಜೈದೇವ್ ಮನೆಯಿಂದ ಲಕ್ಷ್ಮೀಕಾಂತ್ ಹೊರಗೆ ಬಂದಿದ್ದಾನೆ. ಮೊದಲ ಹಂತದಲ್ಲಿಯೇ ಭೂಮಿಕಾ ಮಾಡಿದ ಪ್ಲಾನ್ ಫೇಲ್ ಆಗಿದೆ.&lt;/p&gt;&lt;img&gt;&lt;p&gt;ದಿಯಾಳ ಗೆಳೆಯ ಗೋಕುಲ್ ಜೈಲುಪಾಲಾಗಿದ್ದು, ಈತ ಭೂಮಿಕಾಳ ಸೋದರನ ಸ್ನೇಹಿತನಾಗಿದ್ದ. ಹಾಗಾಗಿ ಗೆಳೆಯನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಜೀವಾ, ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದನು. ಇದಕ್ಕೆ ಐಪಿಎಸ್ ಆಗಿರೋ ಮಲ್ಲಿ ಸಹಾಯ ಸಹ ಕೇಳಿದ್ದನು. ಆದ್ರೆ ಭೂಮಿಕಾ ಬಳಿ ಬಂದ ಮಲ್ಲಿ ಮುಂದೇನು ಮಾಡಬೇಕು ಅಂತ ಭೂಮಿಕಾಳನ್ನು ಕೇಳಿದ್ದಳು.&lt;/p&gt;&lt;img&gt;&lt;p&gt;ಈ ವಿಷಯ ತಿಳಿಯುತ್ತಿದ್ದಂತೆ ಲಕ್ಷ್ಮೀಕಾಂತ್ ಮೂಲಕ ಭೂಮಿಕಾ ಗೂಢಚಾರಿಕೆ ಅರಂಭಿಸಿದ್ದಳು. ಭೂಮಿಕಾ ಮಾತಿನಂತೆ ಜೈದೇವ್ ಮನೆಗೆ ಹೋಗಿದ್ದ ಲಕ್ಷ್ಮೀಕಾಂತ್&zwnj;ಗೆ ಯಾವ ವಿಷಯ ಗೊತ್ತಾಗಲಿಲ್ಲ. ಆದ್ರೆ ದಿಯಾ ಹೆಸರು ಹೇಳುತ್ತಿದ್ದಂತೆ ಜೈದೇವ್ ಮುಖದಲ್ಲಾದ ಬದಲಾವಣೆಯ ಮಾಹಿತಿಯನ್ನು ಭೂಮಿಕಾ ಮುಂದೆ ಲಕ್ಷ್ಮೀಕಾಂತ್ ಹೇಳಿದ್ದನು.&lt;/p&gt;&lt;img&gt;&lt;p&gt;ಗೂಢಚಾರಿಕೆ ಪ್ಲಾನ್ ಫೇಲ್ ಆಗಿದ್ದರಿಂದ ಮುಂದೇನು ಮಾಡೋದು ಅಂತ ಮಲ್ಲಿ ಸಹ ಕನ್ಫ್ಯೂಸ್ ಆಗಿದ್ದಾಳೆ. ಲಕ್ಷ್ಮೀಕಾಂತ್ ಜೊತೆ ಮಲ್ಲಿ ಮತ್ತು ಭೂಮಿಕಾ ಮಾತನಾಡಿದೆಲ್ಲವನ್ನು ಶಕುಂತಲಾ ಕೇಳಿಸಿಕೊಂಡಿದ್ದಾಳೆ. ಇದರಿಂದ ಮುಂದೆ ಜೈದೇವ್ ಮತ್ತೆ ಬಚಾಚ್ ಆಗೋದು ಪಕ್ಕಾ ಆಗಿದೆ. ಭೂಮಿಕಾ-ಮಲ್ಲಿ ಮಾಡುತ್ತಿರುವ ಪ್ಲಾನ್ ಮಗನಿಗೆ ಶಕುಂತಲಾ ತಿಳಿಸಲಿದ್ದಾಳೆ. ಇದರಿಂದ ಜೈದೇವ್ ಅಲರ್ಟ್ ಆಗೋದು ಸಹ ನಿಶ್ಚಿತವಾಗಿದೆ.&lt;/p&gt;&lt;img&gt;&lt;p&gt;ಇತ್ತ ಮನೆಗೆ ಬಂದ ಮಾವ ಲಕ್ಷ್ಮೀಕಾಂತ್ ಮೇಲೆ ಜೈದೇವ್&zwnj;ಗೆ ಸಣ್ಣದಾದ ಅನುಮಾನ ಮೂಡಿತ್ತು. ಇದೀಗ ಈ ವಿಷಯ ತಾಯಿಯಿಂದ ಗೊತ್ತಾದ್ರೆ ಲಕ್ಷ್ಮೀಕಾಂತ್ ಜೀವಕ್ಕೆ ಜೈದೇವ್ ಅಪಾಯವನ್ನುಂಟು ಮಾಡ್ತಾನಾ ಅಥವಾ ಮಲ್ಲಿ-ಭೂಮಿಕಾ ತಂತ್ರಕ್ಕೆ ಶಕುಂತಲಾ-ಜೈದೇವ್ ಪ್ರತಿತಂತ್ರ ಹೇಗಿರುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-promo-update-dia-secret-bhumika-and-malli-s-strategy-fails-in-front-of-jaidev-mrq-4plwofg"/>
        </item>
        <item>
            <title><![CDATA[‘ಲಕ್ಷ್ಮೀ ನಿವಾಸ’ ಖ್ಯಾತಿಯ ಮಾನಸ ಮನೋಹರ್ ಮಗನಿಗೆ ನಾಮಕರಣ: ಆ ಹೆಸರಿನಲ್ಲೇ ಅಡಗಿದೆ ಅಮ್ಮ-ಅಪ್ಪನ ಪ್ರೀತಿ!]]></title>
            <link>https://kannada.asianetnews.com/tv-talk/tv-actress-manasa-manohar-names-her-son-pranam-fans-love-the-emotional-story-gvd/articleshow-8gfya5n</link>
            <guid isPermaLink="true">https://kannada.asianetnews.com/tv-talk/tv-actress-manasa-manohar-names-her-son-pranam-fans-love-the-emotional-story-gvd/articleshow-8gfya5n</guid>
            <pubDate>Wed, 19 Aug 2026 21:06:47 +0530</pubDate>
            <description><![CDATA[&lt;p&gt;Manasa Manohar Son: ಕನ್ನಡ ಕಿರುತೆರೆಯಲ್ಲಿ &lsquo;ಜೊತೆ ಜೊತೆಯಲಿ&rsquo; ಹಾಗೂ &lsquo;ಲಕ್ಷ್ಮೀ ನಿವಾಸ&rsquo; ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಮಾನಸ ಮನೋಹರ್ ಅವರ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0damt7gq5apx9vxr2y6e9rd,imgname-jv-1787153770736.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಕಿರುತೆರೆಯಲ್ಲಿ &lsquo;ಜೊತೆ ಜೊತೆಯಲಿ&rsquo; ಹಾಗೂ &lsquo;ಲಕ್ಷ್ಮೀ ನಿವಾಸ&rsquo; ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಮಾನಸ ಮನೋಹರ್ ಅವರ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ. ತಮ್ಮ ಮುದ್ದು ಮಗನಿಗೆ ನಟಿ ಅದ್ದೂರಿಯಾಗಿ ನಾಮಕರಣ ಮಾಡಿದ್ದು, ಮಗನಿಗೆ ಇಟ್ಟಿರುವ ವಿಶೇಷ ಹೆಸರನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಮಾನಸ ಮನೋಹರ್ ತಮ್ಮ ಮಗನಿಗೆ &lsquo;ಪ್ರಣಮ್&rsquo; ಎಂದು ನಾಮಕರಣ ಮಾಡಿದ್ದಾರೆ. ಹೆಸರಿನ ಜೊತೆಗೆ ಅದರ ಹಿಂದಿರುವ ಭಾವನಾತ್ಮಕ ಕಾರಣವನ್ನೂ ಅವರು ಬಹಿರಂಗಪಡಿಸಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.&lt;/p&gt;&lt;p&gt;&lt;strong&gt;ಮುದ್ದು ಮಗನಿಗೆ &lsquo;ಪ್ರಣಮ್&rsquo; ಎಂದು ಹೆಸರಿಟ್ಟ ಮಾನಸ!&lt;/strong&gt;&lt;/p&gt;&lt;p&gt;ನಾಮಕರಣದ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ಮಾನಸ, ತಮ್ಮ ಮಗನನ್ನು ಪ್ರೀತಿಯಿಂದ &lsquo;ಬಂಬಲ್ ಬೀ&rsquo; ಎಂದು ಕರೆಯುವುದಾಗಿಯೂ ತಿಳಿಸಿದ್ದಾರೆ. &lsquo;ಪ್ರಣಮ್&rsquo; ಎಂದರೆ ಭಕ್ತಿ ಮತ್ತು ಗೌರವ ಎಂಬ ಅರ್ಥವಿದೆ. ನಮ್ಮಿಬ್ಬರ ಪ್ರೀತಿಗೆ ನಾವು ಸಲ್ಲಿಸುತ್ತಿರುವ ಅತ್ಯುನ್ನತ ಗೌರವದ ಸಂಕೇತವಾಗಿ ಆತ ನಮ್ಮ ಬದುಕಿಗೆ ಬಂದಿದ್ದಾನೆ ಎಂಬ ಭಾವನೆಯನ್ನು ನಟಿ ತಮ್ಮ ಪೋಸ್ಟ್&zwnj;ನಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಗನ ಹೆಸರಿನಲ್ಲೇ ತಮ್ಮ ಪ್ರೀತಿ ಹಾಗೂ ಭಾವನೆಗಳನ್ನು ಅಡಗಿಸಿಟ್ಟಿರುವುದು ವಿಶೇಷ.&lt;/p&gt;&lt;p&gt;&lt;strong&gt;&lsquo;ಪ್ರಣಮ್&rsquo; ಹೆಸರಿನ ಹಿಂದೆ ಇದೆ ಸ್ಪೆಷಲ್ ಕಥೆ!&lt;/strong&gt;&lt;/p&gt;&lt;p&gt;ಮಗನಿಗೆ ಈ ಹೆಸರು ಇಡುವ ನಿರ್ಧಾರದ ಹಿಂದೆ ಒಂದು ಸುಂದರ ಕಥೆಯಿದೆ ಎಂದು ಮಾನಸ ಮನೋಹರ್ ಹೇಳಿದ್ದಾರೆ. ಮಗು ಹೊಟ್ಟೆಯಲ್ಲಿದ್ದಾಗಿನಿಂದಲೇ ಆತನನ್ನು ಪ್ರೀತಿಯಿಂದ &lsquo;ಪ್ರಾಣ&rsquo; ಎಂದು ಕರೆಯುತ್ತಿದ್ದರಂತೆ. ನಂತರ ಮಗುವಿಗೆ ಯಾವ ಹೆಸರು ಇಡಬೇಕು ಎಂಬ ಚರ್ಚೆ ನಡೆದಾಗ, &lsquo;ಪ್ರಣಮ್&rsquo; ಎಂಬ ಹೆಸರು ಆಯ್ಕೆಯಾಯಿತು ಎಂದು ನಟಿ ತಿಳಿಸಿದ್ದಾರೆ. ಇದರಲ್ಲೂ ಮತ್ತೊಂದು ವಿಶೇಷತೆ ಇದೆ. &lsquo;ಪ್ರಣಮ್&rsquo; ಹೆಸರಿನ ಮೊದಲ ಮೂರು ಅಕ್ಷರಗಳು ಅವರ ಪತಿ ಪ್ರೀತಂ ಅವರ ಹೆಸರಿನಿಂದ ಬಂದಿದ್ದು, ಹೆಸರನ್ನು ಕೊನೆಯಿಂದ ಓದಿದಾಗ ತಮ್ಮ ಹೆಸರಿನೊಂದಿಗೆ ಹೊಂದಿಕೊಳ್ಳುವಂತೆ ರೂಪಿಸಲಾಗಿದೆ ಎಂದು ಮಾನಸ ವಿವರಿಸಿದ್ದಾರೆ. ಹೀಗಾಗಿ &lsquo;ಪ್ರಣಮ್&rsquo; ಕೇವಲ ಒಂದು ಹೆಸರು ಮಾತ್ರವಲ್ಲ, ದಂಪತಿಯ ಪ್ರೀತಿ ಹಾಗೂ ಮಗನ ಮೇಲಿನ ಭಾವನೆಗಳನ್ನು ಒಳಗೊಂಡಿರುವ ವಿಶೇಷ ಹೆಸರಾಗಿದೆ.&lt;/p&gt;&lt;p&gt;&lt;strong&gt;&lsquo;ಬಂಬಲ್ ಬೀ&rsquo; ಎಂದು ಕರೆಯುವುದೇಕೆ?&lt;/strong&gt;&lt;/p&gt;&lt;p&gt;ಮಗನನ್ನು &lsquo;ಬಂಬಲ್ ಬೀ&rsquo; ಎಂದು ಕರೆಯುವುದೇಕೆ ಎಂಬ ಪ್ರಶ್ನೆ ಅಭಿಮಾನಿಗಳಿಂದ ಪದೇಪದೆ ಕೇಳಿಬರುತ್ತಿತ್ತಂತೆ. ಇದೀಗ ಅದಕ್ಕೂ ಮಾನಸ ಉತ್ತರ ನೀಡಿದ್ದಾರೆ. ಈ ಮುದ್ದಾದ ಅಡ್ಡಹೆಸರಿನ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ. ಅದರ ಸಂಪೂರ್ಣ ವಿವರವನ್ನು ತಮ್ಮ &lsquo;Manifest Diaries by Manasa&rsquo; ಯೂಟ್ಯೂಬ್ ಚಾನೆಲ್&zwnj;ನಲ್ಲಿ ಶೀಘ್ರದಲ್ಲೇ ವಿಡಿಯೋ ಮೂಲಕ ಹಂಚಿಕೊಳ್ಳುವುದಾಗಿ ನಟಿ ತಿಳಿಸಿದ್ದಾರೆ. ಹೀಗಾಗಿ &lsquo;ಬಂಬಲ್ ಬೀ&rsquo; ಹಿಂದಿನ ಆ ಕಥೆ ಏನು ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;h2&gt;&lt;strong&gt;&lsquo;ಜೊತೆ ಜೊತೆಯಲಿ&rsquo;ಯಿಂದ &lsquo;ಲಕ್ಷ್ಮೀ ನಿವಾಸ&rsquo;ದ ನೀಲೂವರೆಗೆ&lt;/strong&gt;&lt;/h2&gt;&lt;p&gt;ಮಾನಸ ಮನೋಹರ್ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಮುಖ. &lsquo;ಜೊತೆ ಜೊತೆಯಲಿ&rsquo; ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ನಟಿಸಿದ್ದ ಅವರು, ಬಳಿಕ &lsquo;ಲಕ್ಷ್ಮೀ ನಿವಾಸ&rsquo; ಧಾರಾವಾಹಿಯಲ್ಲಿ ನೀಲೂ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನೀಲೂ ಪಾತ್ರದ ವಿಭಿನ್ನ ಶೇಡ್&zwnj;ಗಳ ಮೂಲಕ ವೀಕ್ಷಕರನ್ನು ರಂಜಿಸಿದ್ದ ಮಾನಸ, ಇದೀಗ ನಟನೆಯ ಜೊತೆಗೆ ತಮ್ಮ ಮಗನ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. 2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಅವರೊಂದಿಗೆ ವಿವಾಹವಾದ ಮಾನಸ, ಸದ್ಯ ತಮ್ಮ ಮುದ್ದು ಮಗನೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇದೀಗ ಮಗನ ನಾಮಕರಣದ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ನಟಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.&lt;/p&gt;View this post on Instagram&lt;p&gt;A post shared by Mansa PreethaM (@itsme_mansamanohar)&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/tv-actress-manasa-manohar-names-her-son-pranam-fans-love-the-emotional-story-gvd/articleshow-8gfya5n"/>
        </item>
        <item>
            <title><![CDATA[ಗಿಲ್ಲಿ ನಿಮ್ಮ ಕ್ರಶ್ಶಾ ಕೇಳ್ದೋರಿಗೆ ಮುಟ್ಟಿಕೊಳ್ಳೋ ಉತ್ತರ ಕೊಟ್ಟ Rakshita Shetty: ಮತ್ತೆ ಪ್ರಶ್ನೆ ಕೇಳೋ ಸಾಹಸ ಮಾಡಲ್ಲ]]></title>
            <link>https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t</link>
            <guid isPermaLink="true">https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t</guid>
            <pubDate>Tue, 18 Aug 2026 18:44:53 +0530</pubDate>
            <description><![CDATA[ಬಿಗ್&zwnj;ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ತಮಗೂ ಗಿಲ್ಲಿ ನಟನಿಗೂ ಇರುವ ಸಂಬಂಧದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಂದ ಬೇಸತ್ತಿದ್ದಾರೆ. 'ಕ್ರಷ್' ಇದೆಯೇ ಎಂಬ ಪ್ರಶ್ನೆಗೆ, ಮೀನಿನ ಸಾಂಬಾರಿಗೆ ಮಸಾಲೆ ಅರೆಯುವುದನ್ನು 'ಕ್ರಷ್' ಎನ್ನುತ್ತೇವೆ ಎಂದು ಉತ್ತರಿಸಿ, ಸ್ನೇಹವನ್ನು ಕೇವಲ ಪ್ರೀತಿಯ ದೃಷ್ಟಿಯಿಂದ ನೋಡುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ag4zkdb1g0y1cgfdk73zxx,imgname-rakshita-shetty-1787058880109.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಷೋ ಅಥವಾ ಸೀರಿಯಲ್​ಗಳಲ್ಲಿ ಒಂದು ಜೋಡಿ ಫೇಮಸ್​ ಆಯ್ತು ಎಂದಾಕ್ಷಣ, ಅವರಿಬ್ಬರ ಮಧ್ಯೆ ಸಂಬಂಧ ತಂದು, ಅದನ್ನು ಅಸಹ್ಯ ಎನ್ನುವಷ್ಟರಮಟ್ಟಿಗೆ ಮುಂದಕ್ಕೆ ಕರೆದುಕೊಂಡು ಹೋಗುವ ದೊಡ್ಡ ವರ್ಗವೇ ಇದೆ. ಗಂಡು-ಹೆಣ್ಣು ಒಟ್ಟಿಗೆ ಇದ್ದರೆ ಸಾಕು, ಅವರಿಗೆ ಮುಜುಗರ ಆಗುವಂಥ ಪ್ರಶ್ನೆ ಕೇಳುವ ಚಾಳಿ ಹಲವರದ್ದು. ಕೆಲವೊಮ್ಮೆ ಎಐ ಫೋಟೋದ ಮೂಲಕ, ಆ ನಟ-ನಟಿಯರಿಗೆ ಅಸಹ್ಯ ಆಗುವಂಥ ಚಿತ್ರಗಳನ್ನು ತಾವೇ ಚಿತ್ರಿಸುವುದು ಉಂಟು. ಸ್ನೇಹವನ್ನು ಕೂಡ ಬರೀ ಲವರ್ಸ್​ ದೃಷ್ಟಿಯಲ್ಲಿಯೇ ನೋಡುವ ಮನಸ್ಥಿತಿಯವರು ಹಲವರು. ಅವರ ತಲೆಯಲ್ಲಿ ತುಂಬಿರುವುದು ಇಂಥ ವಿಚಾರಗಳೇ. ಅದಕ್ಕಾಗಿ ಎಲ್ಲಿಯಾದರೂ, ಸೆಲೆಬ್ರಿಟಿಗಳು ಕಂಡಾಗ ಬೇರೊಬ್ಬರ ಹೆಸರು ಹೇಳಿ ಸಂಬಂಧಗಳ ಬಗ್ಗೆ ಕೇಳುತ್ತಾ ಅವರಿಗೆ ಮುಜುಗರ ಮಾಡುತ್ತಾರೆ.&lt;/p&gt;&lt;p&gt;ಅದೇ ರೀತಿ, ಬಿಗ್​ಬಾಸ್​ 12ರಲ್ಲಿ ಸದ್ದು ಮಾಡಿದ್ದ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿಗೂ ಇಂಥದ್ದೇ ಪ್ರಶ್ನೆಗಳು ಎದುರಾಗುತ್ತವೆ. ತಮಗೆ ಗಿಲ್ಲಿ ನಟನಂಥ ಹುಡುಗ ಬೇಕು ಎಂದು ರಕ್ಷಿತಾ (Bigg Boss Rakshita Shetty) ಹೇಳಿದ ಮಾತುಗಳನ್ನೇ ಇಟ್ಟುಕೊಂಡು, ಆಕೆ ಹೋದಲ್ಲಿ, ಬಂದಲ್ಲಿ ಗಿಲ್ಲಿ ನಟನ ಪ್ರಶ್ನೆ ಕೇಳಲಾಗುತ್ತದೆ. ಆದರೆ ತುಳುನಾಡಿನ ಈ ಬೆಡಗಿ ಪ್ರತಿಬಾರಿಯೂ ತನ್ನದೇ ಆದ ರೀತಿಯಲ್ಲಿ ಪ್ರಶ್ನೆ ಕೇಳಿದವರನ್ನು ಕಕ್ಕಾಬಿಕ್ಕಿ ಮಾಡುವುದು ಉಂಟು. ಇದೀಗ ಅಂಥದ್ದೇ ಇನ್ನೊಂದು ಪ್ರಶ್ನೆಗೆ ಉತ್ತರಿಸಿರುವ ರಕ್ಷಿತಾ, ಪ್ರಶ್ನೆ ಕೇಳಿದವರು ಮುಟ್ಟಿಕೊಳ್ಳುವ ಹಾಗೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಮೀನಿನ ಸಾಂಬಾರ್ ಮಾಡುವಾಗ...&lt;/strong&gt;&lt;/h2&gt;&lt;p&gt;ನಿಮಗೆ ಗಿಲ್ಲಿಯ ಮೇಲೆ ಕ್ರಷ್​ ಇದ್ಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದರಿಂದ ಗರಂ ಆದ ರಕ್ಷಿತಾ ಕ್ರಷ್​ ಎಂದ್ರೆ ಏನು ಎಂದು ಪ್ರಶ್ನಿಸಿದ್ದಾರೆ. ಕ್ರಷ್​ ಎಂದರೆ ಜಸ್ಟ್​ ಇಷ್ಟ ಆಯ್ತು ಅಂತ ಅಷ್ಟೇ ಎಂದು ಉತ್ತರ ಬಂತು. ಅದಕ್ಕೆ ರಕ್ಷಿತಾ ಶೆಟ್ಟಿ, ನಮ್ಮ ಕಡೆ ಮೀನಿನ ಸಾಂಬಾರು ಮಾಡುವಾಗ ಎಲ್ಲಾ ಮಸಾಲೆ ಹಾಕಿ ಅದನ್ನು ಪುಡಿ ಪುಡಿ ಮಾಡ್ತೇವೆ, ಅದಕ್ಕೆ ಕ್ರಷ್​ ಅಂತೇವೆ, ನೀವು ಹೇಳ್ತಿರೋದು ನನಗೆ ಅರ್ಥ ಆಗ್ತಿಲ್ಲಾ ಎಂದಾಗ, ಪುನಃ ಅಲ್ಲಿದ್ದೋರು ಸುಮ್ಮನೇ ಇಷ್ಟ ಆಯ್ತು ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಇಷ್ಟ ಎಂದ್ರೆ ಏನರ್ಥ?&lt;/strong&gt;&lt;/h3&gt;&lt;p&gt;ಅದಕ್ಕೆ ರೊಚ್ಚಿಗೆದ್ದ ರಕ್ಷಿತಾ, ಇಷ್ಟ ಆಯ್ತು ಅಂದರೆ ಏನು, ನನಗೆ ಎಲ್ಲರೂ ಇಷ್ಟ ಆಗ್ತಾರೆ. ಅಣ್ಣ-ತಂಗಿ ಸಂಬಂಧದಲ್ಲೂ ಇಷ್ಟ ಇದೆ. ಸ್ನೇಹದಲ್ಲೂ ಇಷ್ಟ ಇದೆ. ಗಂಡ-ಹೆಂಡತಿನೂ ಇಷ್ಟ ಪಡ್ತಾರೆ. ಅದರಲ್ಲಿ ಏನಿದೆ ಎಂದು ಸ್ನೇಹ ಎನ್ನೋದನ್ನು ಬರೀ ಕಾಮುಕ ದೃಷ್ಟಿಯಿಂದಲೇ ನೋಡುವವರಿಗೆ ತಿರುಗೇಟು ನೀಡಿ, ಅವರ ಬಾಯಿ ಮುಚ್ಚಿಸಿದ್ದಾರೆ ರಕ್ಷಿತಾ ಶೆಟ್ಟಿ. ಬೆಂಕಿ ಉತ್ತರ ಇದು ಎಂದು ಕಮೆಂಟ್ಸ್​ ಸುರಿಮಳೆಯೇ ಸುರಿಯುತ್ತಿದೆ. ಎಲ್ಲವೂ ಒಂದು ಹಂತಕ್ಕೆ ಚೆಂದ. ಪದೇ ಪದೇ ಅದೇ ಪ್ರಶ್ನೆ ಕೇಳಿ ಸೆಲೆಬ್ರಿಟಿಗಳನ್ನು ಮುಜುಗರ ಉಂಟು ಮಾಡಬೇಡಿ, ನಿಮ್ಮ ಈ ಬುದ್ಧಿ ಪದೇಪದೇ ತೋರಿಸಬೇಡಿ ಎಂದೆಲ್ಲಾ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/rakshita-shettys-strong-answer-for-those-who-asked-about-gilli-nata-and-crush-suc/articleshow-9unfl4t"/>
        </item>
        <item>
            <title><![CDATA[‘ಒಂದು ವೃತ್ತಕ್ಕೆ ಎಷ್ಟು ಸೈಡ್ಸ್‌ ಇರುತ್ತವೆ?’: ಬಿಗ್‌ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ವಿನಯ್ ಗೌಡ ಎಡವಟ್ಟು? ಭರ್ಜರಿ ಟ್ರೋಲ್]]></title>
            <link>https://kannada.asianetnews.com/tv-talk/bigg-boss-kannada-13-vinay-gowda-gets-trolled-over-circle-has-two-sides-remark-gvd/articleshow-aqryffl</link>
            <guid isPermaLink="true">https://kannada.asianetnews.com/tv-talk/bigg-boss-kannada-13-vinay-gowda-gets-trolled-over-circle-has-two-sides-remark-gvd/articleshow-aqryffl</guid>
            <pubDate>Wed, 19 Aug 2026 21:28:40 +0530</pubDate>
            <description><![CDATA[&lt;p&gt;&lsquo;ಅಗ್ನಿಪರೀಕ್ಷೆ&rsquo;ಯ ಹೊಸ ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡುತ್ತಾ ವೇದಿಕೆಗೆ ಎಂಟ್ರಿ ಕೊಡುತ್ತಾನೆ. ತಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಜಡ್ಜ್&zwnj;ಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪ್ರಶ್ನಿಸುತ್ತಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dbxcaz4sn2x4x5ca4vgg7d,imgname-jvjv-1787155099998.png" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ &lsquo;ಅಗ್ನಿಪರೀಕ್ಷೆ&rsquo; ವೇದಿಕೆ ಸಖತ್ ಸದ್ದು ಮಾಡುತ್ತಿದೆ. ಸ್ಪರ್ಧಿಗಳ ವಿಭಿನ್ನ ವರ್ತನೆ, ಜಡ್ಜ್&zwnj;ಗಳ ಪ್ರಶ್ನೆ-ಉತ್ತರಗಳ ನಡುವೆ ಇದೀಗ ತೀರ್ಪುಗಾರ ವಿನಯ್ ಗೌಡ ಕೇಳಿದ ಒಂದು ಪ್ರಶ್ನೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆಗೆ ಕಾರಣವಾಗಿದೆ. &lsquo;ಒಂದು ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತವೆ?&rsquo; ಎಂಬ ಪ್ರಶ್ನೆ ಕೇಳಿದ ವಿನಯ್, ಅದಕ್ಕೆ ನೀಡಿದ ವಿವರಣೆಯಿಂದಲೇ ನೆಟ್ಟಿಗರ ಟ್ರೋಲ್&zwnj;ಗೆ ಗುರಿಯಾಗಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಿಮ್ಮ ಪ್ರಶ್ನೆಯೇ ತಪ್ಪು!&rsquo; ಎಂದ ಸ್ಪರ್ಧಿ&lt;/strong&gt;&lt;/p&gt;&lt;p&gt;&lsquo;ಅಗ್ನಿಪರೀಕ್ಷೆ&rsquo;ಯ ಹೊಸ ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡುತ್ತಾ ವೇದಿಕೆಗೆ ಎಂಟ್ರಿ ಕೊಡುತ್ತಾನೆ. ತಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಜಡ್ಜ್&zwnj;ಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಜಡ್ಜ್ ಶ್ರುತಿ, &lsquo;ನಮ್ಮ ಪ್ರತಿಕ್ರಿಯೆಗಾಗಿ ಕಾಯದೆ ಹೀಗೆ ಕಾಮೆಂಟ್ ಮಾಡಬಾರದು&rsquo; ಎಂದು ಹೇಳುತ್ತಾರೆ. ಆದರೆ ಯುವಕ ಮಾತ್ರ ತಾನು ಇರುವುದೇ ಹೀಗೆ ಎಂದು ಖಡಕ್ ಆಗಿ ಉತ್ತರಿಸುತ್ತಾನೆ. ನಂತರ ನಿರೂಪಕ ನಿರಂಜನ್ ದೇಶಪಾಂಡೆ, &lsquo;ನಿಮ್ಮನ್ನೇ ಯಾಕೆ ಆಯ್ಕೆ ಮಾಡಬೇಕು?&rsquo; ಎಂದು ಕೇಳಿದಾಗಲೂ, &lsquo;ನೀವು ಕೇಳುತ್ತಿರುವ ಪ್ರಶ್ನೆಯೇ ತಪ್ಪು&rsquo; ಎಂದು ತಿರುಗೇಟು ನೀಡುತ್ತಾನೆ. ಈ ಉತ್ತರವೇ ವೇದಿಕೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸುತ್ತದೆ.&lt;/p&gt;&lt;p&gt;&lt;strong&gt;&lsquo;ವೃತ್ತಕ್ಕೆ ಎಷ್ಟು ಸೈಡ್ಸ್?&rsquo; ಎಂದು ಕೇಳಿದ ವಿನಯ್ ಗೌಡ&lt;/strong&gt;&lt;/p&gt;&lt;p&gt;ಸ್ಪರ್ಧಿಯ ಆತ್ಮವಿಶ್ವಾಸವನ್ನು ಗಮನಿಸಿದ ವಿನಯ್ ಗೌಡ, ಆತನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಾರೆ. ಬಳಿಕ ಇದ್ದಕ್ಕಿದ್ದಂತೆ, &lsquo;ಒಂದು ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತವೆ?&rsquo; ಎಂದು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಸ್ಪರ್ಧಿ, &lsquo;ವೃತ್ತಕ್ಕೆ ಯಾವುದೇ ಸೈಡ್ಸ್ ಇರುವುದಿಲ್ಲ&rsquo; ಎಂದು ಉತ್ತರಿಸುತ್ತಾನೆ. ಆದರೆ ಇಲ್ಲೇ ಅಸಲಿ ಟ್ವಿಸ್ಟ್ ಎದುರಾಗುತ್ತದೆ. ಸ್ಪರ್ಧಿಯ ಉತ್ತರವನ್ನು ಒಪ್ಪಿಕೊಳ್ಳುವ ಬದಲು ವಿನಯ್ ಗೌಡ, &lsquo;ವೃತ್ತಕ್ಕೆ ಎರಡು ಸೈಡ್ಸ್ ಇರುತ್ತವೆ. ಒಂದು ಇನ್&zwnj;ಸೈಡ್, ಇನ್ನೊಂದು ಔಟ್&zwnj;ಸೈಡ್&rsquo; ಎಂದು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದೇ ಮಾತು ಈಗ ನೆಟ್ಟಿಗರ ಟ್ರೋಲ್&zwnj;ಗೆ ಕಾರಣ!&lt;/strong&gt;&lt;/p&gt;&lt;p&gt;ವಿನಯ್ ಗೌಡ ಅವರ ಈ ಉತ್ತರದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಸಾಮಾನ್ಯ ಜ್ಯಾಮಿತಿಯಲ್ಲಿ ವೃತ್ತಕ್ಕೆ ನೇರ ಅಂಚುಗಳು ಅಥವಾ &lsquo;ಸೈಡ್ಸ್&rsquo; ಇರುವುದಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಹಲವರು ವಿನಯ್ ಅವರ ಲಾಜಿಕ್ ಅನ್ನು ಪ್ರಶ್ನಿಸಿದ್ದಾರೆ. &lsquo;ಸ್ಪರ್ಧಿ ಸರಿಯಾದ ಉತ್ತರ ಕೊಟ್ಟಿದ್ದರೂ, ವಿನಯ್ ಗೌಡ ತಪ್ಪು ಲಾಜಿಕ್ ಕೊಟ್ಟು ಕೌಂಟರ್ ಕೊಡಲು ಹೋಗಿದ್ದಾರೆ&rsquo; ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನೂ ಕೆಲವರು ಈ ಪ್ರೋಮೋವನ್ನು ತಮಾಷೆಯಾಗಿ ತೆಗೆದುಕೊಂಡು ಮೀಮ್ಸ್ ಹಾಗೂ ಟ್ರೋಲ್&zwnj;ಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಅಗ್ನಿಪರೀಕ್ಷೆ&rsquo;ಯಲ್ಲಿ ಶುರುವಾಯಿತಾ ಟ್ರೋಲ್ ಪರೀಕ್ಷೆ?&lt;/strong&gt;&lt;/h2&gt;&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13ಕ್ಕೂ ಮುನ್ನ ಪ್ರಸಾರವಾಗುತ್ತಿರುವ &lsquo;ಅಗ್ನಿಪರೀಕ್ಷೆ&rsquo; ಈಗಾಗಲೇ ಸ್ಪರ್ಧಿಗಳಿಂದ ಗಮನ ಸೆಳೆಯುತ್ತಿದೆ. ಆದರೆ ಈ ಬಾರಿ ಸ್ಪರ್ಧಿಗಿಂತ ಹೆಚ್ಚಾಗಿ ತೀರ್ಪುಗಾರರೊಬ್ಬರ ಪ್ರಶ್ನೆಯೇ ಸೋಷಿಯಲ್ ಮೀಡಿಯಾದ ಚರ್ಚೆಯ ಕೇಂದ್ರವಾಗಿದೆ. ಅಂತಿಮವಾಗಿ ಈ ಎಪಿಸೋಡ್&zwnj;ನಲ್ಲಿ ವಿನಯ್ ಗೌಡ ಅವರ ಪ್ರಶ್ನೆಗೆ ಸಂಬಂಧಿಸಿದಂತೆ ಇನ್ನೇನು ತಿರುವು ಸಿಗಲಿದೆ? ಆ ಸ್ಪರ್ಧಿಯ ಆಯ್ಕೆ ಆಗುತ್ತಾನಾ? ಎಂಬ ಕುತೂಹಲವೂ ಮೂಡಿದೆ. ಒಟ್ಟಿನಲ್ಲಿ, &lsquo;ವೃತ್ತಕ್ಕೆ ಎಷ್ಟು ಸೈಡ್ಸ್?&rsquo; ಎಂಬ ಒಂದೇ ಪ್ರಶ್ನೆ &lsquo;ಅಗ್ನಿಪರೀಕ್ಷೆ&rsquo; ಪ್ರೋಮೋಗೆ ಹೊಸದೊಂದು ಟ್ರೋಲ್ ಆಂಗಲ್ ಕೊಟ್ಟಿದೆ.&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-kannada-13-vinay-gowda-gets-trolled-over-circle-has-two-sides-remark-gvd/articleshow-aqryffl"/>
        </item>
        <item>
            <title><![CDATA[‘ಮಾತನಾಡೋದು ಸುಲಭ, ಮಾಡೋದು ಕಷ್ಟ’: 'ರಾಧಾ ಮಿಸ್‌' ಶ್ವೇತಾ ಮಾತಿಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆ]]></title>
            <link>https://kannada.asianetnews.com/tv-talk/it-s-easy-to-talk-hard-to-act-shwetha-prasad-post-sparks-discussion-gvd/articleshow-by2e3sy</link>
            <guid isPermaLink="true">https://kannada.asianetnews.com/tv-talk/it-s-easy-to-talk-hard-to-act-shwetha-prasad-post-sparks-discussion-gvd/articleshow-by2e3sy</guid>
            <pubDate>Wed, 19 Aug 2026 16:55:12 +0530</pubDate>
            <description><![CDATA[&lt;p&gt;ಕಿರುತೆರೆಯ ಮೂಲಕ ಗುರುತಿಸಿಕೊಂಡು, ಮಾಡೆಲಿಂಗ್ ಹಾಗೂ ನಟನೆಯಿಂದಲೂ ಗಮನ ಸೆಳೆದಿರುವ ಶ್ವೇತಾ ಪ್ರಸಾದ್ (Shwetha Prasad) ಇದೀಗ ತಮ್ಮ ಒಂದು ಪೋಸ್ಟ್&zwnj;ನಿಂದ ಸದ್ದು ಮಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cw4rtgcjmqaczhmb5pxxc3,imgname-bjbv-1787138564944.png" type="image/jpeg" height="390" width="690"/>
            <content:encoded><![CDATA[&lt;p&gt;ಕಿರುತೆರೆಯ ಮೂಲಕ ಗುರುತಿಸಿಕೊಂಡು, ಮಾಡೆಲಿಂಗ್ ಹಾಗೂ ನಟನೆಯಿಂದಲೂ ಗಮನ ಸೆಳೆದಿರುವ ಶ್ವೇತಾ ಪ್ರಸಾದ್ (Shwetha Prasad) ಇದೀಗ ತಮ್ಮ ಒಂದು ಪೋಸ್ಟ್&zwnj;ನಿಂದ ಸದ್ದು ಮಾಡುತ್ತಿದ್ದಾರೆ. ಗ್ಲಾಮರ್ ಲುಕ್ ಹಾಗೂ ಸಕಾರಾತ್ಮಕ ವಿಚಾರಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ, ಈ ಬಾರಿ ಹಂಚಿಕೊಂಡಿರುವ ಬರಹ ಮಾತ್ರ ಸಾಕಷ್ಟು ಗಂಭೀರ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಯಾರನ್ನೂ ನೇರವಾಗಿ ಹೆಸರಿಸದೆ, ಸಮಾಜದಲ್ಲಿ ಸತ್ಯ, ನ್ಯಾಯ ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಮಾತನಾಡುವವರ ನಡೆ-ನುಡಿಗಳ ನಡುವಿನ ವ್ಯತ್ಯಾಸವನ್ನು ಶ್ವೇತಾ ಪ್ರಶ್ನಿಸಿದ್ದಾರೆ. ಅವರ ಬರಹದ ಪ್ರತಿಯೊಂದು ಸಾಲಿನಲ್ಲೂ ಅಸಮಾಧಾನ ಹಾಗೂ ಖಡಕ್ ಸಂದೇಶ ಕಾಣಿಸುತ್ತಿದ್ದು, ಈ ಪೋಸ್ಟ್ ಯಾರನ್ನು ಉದ್ದೇಶಿಸಿದೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;p&gt;&lt;strong&gt;ಸ್ಟೋರಿಗಷ್ಟೇ ಸೀಮಿತವಾಗದ ಶ್ವೇತಾ!&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯವನ್ನು ಇನ್&zwnj;ಸ್ಟಾಗ್ರಾಂ ಸ್ಟೋರಿಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಶ್ವೇತಾ ಪ್ರಸಾದ್ ಈ ಬಾರಿ ತಮ್ಮ ಮಾತನ್ನು ನೇರವಾಗಿ ಇನ್&zwnj;ಸ್ಟಾ ಪೋಸ್ಟ್ ಮೂಲಕವೇ ಹಂಚಿಕೊಂಡಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಘಟನೆಯನ್ನು ಉಲ್ಲೇಖಿಸದೇ, ಸತ್ಯ, ನ್ಯಾಯ ಹಾಗೂ ಮಹಿಳೆಯರ ರಕ್ಷಣೆಯ ಬಗ್ಗೆ ಮಾತನಾಡುವವರನ್ನು ತಮ್ಮ ಬರಹದ ಮೂಲಕ ಪ್ರಶ್ನಿಸಿದ್ದಾರೆ. ಹೀಗಾಗಿ, ಈ ಪೋಸ್ಟ್&zwnj;ನ ಹಿಂದಿನ ಕಾರಣವೇನು ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.&lt;/p&gt;&lt;p&gt;&lt;strong&gt;&lsquo;ಮಾತನಾಡೋದು ಸುಲಭ, ಮಾಡೋದು ಕಷ್ಟ!&rsquo;&lt;/strong&gt;&lt;/p&gt;&lt;p&gt;ಶ್ವೇತಾ ತಮ್ಮ ಪೋಸ್ಟ್&zwnj;ನಲ್ಲಿ, ಸತ್ಯದ ಪರವಾಗಿ ಮಾತನಾಡುವವರು ನಿಜವಾಗಿಯೂ ಅದರ ಪರ ನಿಂತಿದ್ದರೆ, ನ್ಯಾಯದ ಬಗ್ಗೆ ಧ್ವನಿ ಎತ್ತುವವರು ಅದಕ್ಕಾಗಿ ಹೋರಾಡಿದ್ದರೆ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುವವರು ನಿಜಕ್ಕೂ ಅವರ ಬೆಂಬಲಕ್ಕೆ ನಿಂತಿದ್ದರೆ, ಸಮಾಜ ಇಷ್ಟು ಸಮಸ್ಯೆಗಳಿಂದ ಕೂಡಿರುತ್ತಿರಲಿಲ್ಲ ಎಂಬ ಅರ್ಥದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತನಾಡುವುದು, ಭರವಸೆ ನೀಡುವುದು ಹಾಗೂ ದೊಡ್ಡ ದೊಡ್ಡ ತತ್ವಗಳನ್ನು ಹೇಳುವುದು ಸುಲಭ. ಆದರೆ ಅದೇ ಮಾತುಗಳನ್ನು ತಮ್ಮ ಜೀವನದಲ್ಲೂ ಪಾಲಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಅವರು ಸೂಚಿಸಿದ್ದಾರೆ.&lt;/p&gt;&lt;p&gt;&lt;strong&gt;ಕಷ್ಟ ಬಂದಾಗಲೇ ನಿಜವಾದ ವ್ಯಕ್ತಿತ್ವ ಗೊತ್ತಾಗುತ್ತೆ!&lt;/strong&gt;&lt;/p&gt;&lt;p&gt;ಶ್ವೇತಾ ಅವರ ಬರಹದ ಪ್ರಮುಖ ಸಂದೇಶವೇನೆಂದರೆ, ವ್ಯಕ್ತಿಯ ನಿಜವಾದ ಸ್ವಭಾವ ಆತನ ಮಾತುಗಳಲ್ಲಿ ಅಲ್ಲ, ಕಠಿಣ ಪರಿಸ್ಥಿತಿಯಲ್ಲಿ ಆತ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಕಾಣಿಸುತ್ತದೆ ಎಂಬುದು. &lsquo;ಜನ ಏನು ಹೇಳುತ್ತಾರೆ?&rsquo; ಎಂಬುದಕ್ಕಿಂತ &lsquo;ಅವರು ನಿಜವಾಗಿ ಏನು ಮಾಡುತ್ತಾರೆ?&rsquo; ಎಂಬುದನ್ನೇ ಗಮನಿಸುವ ಹಂತಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ. ಈ ಸಾಲುಗಳೇ ಇದೀಗ ಅವರ ಪೋಸ್ಟ್&zwnj;ನ ಪ್ರಮುಖ ಚರ್ಚೆಯ ವಿಷಯವಾಗಿದೆ. ಯಾರನ್ನೂ ಹೆಸರಿಸದೆ ಇಷ್ಟು ನೇರವಾಗಿ ಬರೆದಿರುವುದರಿಂದ, ಶ್ವೇತಾ ಅವರ ಮನಸ್ಸಿನಲ್ಲಿರುವ ಆ ಘಟನೆ ಅಥವಾ ವಿಚಾರ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;h2&gt;&lt;strong&gt;ಶ್ವೇತಾ ಮಾತಿಗೆ ಅಮೂಲ್ಯ ಸಾಥ್&lt;/strong&gt;&lt;/h2&gt;&lt;p&gt;ಶ್ವೇತಾ ಪ್ರಸಾದ್ ಅವರ ಈ ಪೋಸ್ಟ್&zwnj;ಗೆ ಸ್ಯಾಂಡಲ್&zwnj;ವುಡ್ ನಟಿ ಅಮೂಲ್ಯ ಕೂಡ ಪ್ರತಿಕ್ರಿಯಿಸಿದ್ದಾರೆ. ಶ್ವೇತಾ ಅವರ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿರುವ ಅಮೂಲ್ಯ, ಕಾಮೆಂಟ್&zwnj;ನಲ್ಲಿ &lsquo;True&rsquo; ಎಂದು ಬರೆದುಕೊಂಡಿದ್ದಾರೆ. ಇದೀಗ ಇಬ್ಬರು ನಟಿಯರ ಈ ಸಂಭಾಷಣೆ ನೆಟ್ಟಿಗರ ಗಮನ ಸೆಳೆದಿದೆ. ಶ್ವೇತಾ ಅವರ ಮಾತುಗಳನ್ನು ಕೆಲವರು ಕಟು ಸತ್ಯ ಎಂದು ಬಣ್ಣಿಸಿದರೆ, ಇನ್ನೂ ಕೆಲವರು ಇದು ಸಮಾಜದ ವಾಸ್ತವ ಪರಿಸ್ಥಿತಿಗೆ ಹಿಡಿದ ಕನ್ನಡಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶ್ವೇತಾ ಪ್ರಸಾದ್ ಈ ಪೋಸ್ಟ್&zwnj;ನಲ್ಲಿ ಯಾರನ್ನೂ ನೇರವಾಗಿ ಉಲ್ಲೇಖಿಸಿಲ್ಲ. ಹೀಗಾಗಿ, ಅವರು ಯಾವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಬರಹ ಹಂಚಿಕೊಂಡಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ.&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/it-s-easy-to-talk-hard-to-act-shwetha-prasad-post-sparks-discussion-gvd/articleshow-by2e3sy"/>
        </item>
        <item>
            <title><![CDATA[ಬ್ರೇಕಪ್ ಬಳಿಕ ‘ಓದು-ಜಿಮ್’ ಎಂದ ಶ್ರವಣ್ ಬ್ರೋ; ಈಗ ತಿಂಗಳಿಗೆ ₹2-3 ಸಾವಿರ ಡಾಲರ್ ಯೂಟ್ಯೂಬ್ ಆದಾಯ]]></title>
            <link>https://kannada.asianetnews.com/gallery/tv-talk/kannada-youtuber-and-fitness-coach-shravan-bro-love-story-youtube-income-suh-f9e73s8</link>
            <guid isPermaLink="true">https://kannada.asianetnews.com/gallery/tv-talk/kannada-youtuber-and-fitness-coach-shravan-bro-love-story-youtube-income-suh-f9e73s8</guid>
            <pubDate>Wed, 19 Aug 2026 15:37:41 +0530</pubDate>
            <description><![CDATA[&lt;p&gt;ಬ್ರೇಕಪ್&zwnj; ಬಳಿಕ ತಮ್ಮ ಜೀವನದ ಫೋಕಸ್&zwnj; ಬದಲಿಸಿಕೊಂಡ ಶ್ರವಣ್&zwnj; ಬ್ರೋ, ಯೂಟ್ಯೂಬ್&zwnj; ಆದಾಯದಿಂದ ಹಿಡಿದು ಲವ್&zwnj; ಲೈಫ್&zwnj;, ಫಿಟ್&zwnj;ನೆಸ್&zwnj; ಮತ್ತು ಯುವಜನತೆಗೆ ನೀಡಿದ ಸಲಹೆಗಳವರೆಗೆ ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cq7dd9r74y9hhnzkfmv5h5,imgname-kannada-youtuber-and-fitness-coach-shravan-bro-love-story-youtube-income-1787133408681.jpg" type="image/jpeg" height="390" width="690"/>
            <content:encoded><![CDATA[&lt;p&gt;ಬ್ರೇಕಪ್&zwnj; ಬಳಿಕ ತಮ್ಮ ಜೀವನದ ಫೋಕಸ್&zwnj; ಬದಲಿಸಿಕೊಂಡ ಶ್ರವಣ್&zwnj; ಬ್ರೋ, ಯೂಟ್ಯೂಬ್&zwnj; ಆದಾಯದಿಂದ ಹಿಡಿದು ಲವ್&zwnj; ಲೈಫ್&zwnj;, ಫಿಟ್&zwnj;ನೆಸ್&zwnj; ಮತ್ತು ಯುವಜನತೆಗೆ ನೀಡಿದ ಸಲಹೆಗಳವರೆಗೆ ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡದ ಜನಪ್ರಿಯ ಯುಟ್ಯೂಬರ್&zwnj;, ಫಿಟ್&zwnj;ನೆಸ್&zwnj; ಕೋಚ್&zwnj; ಹಾಗೂ ಕಂಟೆಂಟ್&zwnj; ಕ್ರಿಯೇಟರ್&zwnj; ಶ್ರವಣ್ ಬ್ರೋ ತಮ್ಮ ಇನ್&zwnj;ಸ್ಟಾಗ್ರಾಮ್&zwnj; ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ &lsquo;ರಾ ಅಂಡ್ ರಿಯಲ್&rsquo; ರೀತಿಯಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಯೂಟ್ಯೂಬ್&zwnj; ಜರ್ನಿ, ಯಶಸ್ಸಿನ ಸೂತ್ರ, ಆದಾಯ, ವೈಯಕ್ತಿಕ ಜೀವನ, ಬ್ರೇಕಪ್&zwnj;, ಹೊಸ ಕ್ರಿಯೇಟರ್&zwnj;ಗಳಿಗೆ ಸಲಹೆ ಸೇರಿದಂತೆ ಹಲವು ವಿಚಾರಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;2017-18ರಲ್ಲಿ ಶುರುವಾದ ಯೂಟ್ಯೂಬ್ ಜರ್ನಿ&lt;/strong&gt;&lt;/p&gt;&lt;p&gt;ಶ್ರವಣ್ ಬ್ರೋ ಅವರು 2017-18ರಲ್ಲಿ ಚೆನ್ನೈನಲ್ಲಿ ಇಂಜಿನಿಯರಿಂಗ್&zwnj; 3ನೇ ವರ್ಷ ಓದುತ್ತಿದ್ದ ಸಂದರ್ಭದಲ್ಲಿ ಯೂಟ್ಯೂಬ್&zwnj; ಜಗತ್ತಿಗೆ ಕಾಲಿಟ್ಟರು. ಕಾಲೇಜಿನಲ್ಲಿ ಸ್ನೇಹಿತರು ಪ್ರೋಟೀನ್&zwnj;, ಡಯಟ್&zwnj; ಹಾಗೂ ಫಿಟ್&zwnj;ನೆಸ್&zwnj; ಬಗ್ಗೆ ಪದೇಪದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೇ ಪ್ರಶ್ನೆಗಳು ತಮ್ಮ ಫಿಟ್&zwnj;ನೆಸ್&zwnj; ಜ್ಞಾನವನ್ನು ಕಂಟೆಂಟ್&zwnj; ರೂಪದಲ್ಲಿ ಹಂಚಿಕೊಳ್ಳಲು ಪ್ರೇರಣೆ ನೀಡಿದವು ಎಂದು ಅವರು ಹೇಳಿದ್ದಾರೆ. ಆದರೆ ಅವರ ಜೀವನದಲ್ಲಿ ಒಂದು ಹಂತದಲ್ಲಿ ನಡೆದ ಬ್ರೇಕಪ್&zwnj; ಕೂಡ ದೊಡ್ಡ ತಿರುವು ನೀಡಿತು. ಬ್ರೇಕಪ್&zwnj; ಬಳಿಕ ತಮ್ಮ ಸಂಪೂರ್ಣ ಗಮನವನ್ನು &lsquo;ಓದು-ಜಿಮ್&zwnj;, ಓದು-ಜಿಮ್&zwnj;&rsquo; ಎಂಬಂತೆ ತಮ್ಮ ಗುರಿಗಳತ್ತ ಕೇಂದ್ರೀಕರಿಸಿಕೊಂಡೆ ಎಂದು ಶ್ರವಣ್&zwnj; ಬ್ರೋ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಯಶಸ್ಸಿಗೆ ಲಕ್&zwnj;ಗಿಂತ ಹಾರ್ಡ್&zwnj;ವರ್ಕ್ ಮುಖ್ಯ&lt;/strong&gt;&lt;/p&gt;&lt;p&gt;ಯಶಸ್ಸಿನ ಬಗ್ಗೆ ಮಾತನಾಡಿರುವ ಶ್ರವಣ್&zwnj; ಬ್ರೋ, ಅದೃಷ್ಟಕ್ಕಿಂತ 1000 ಪಟ್ಟು ಹಾರ್ಡ್&zwnj;ವರ್ಕ್&zwnj; ಮತ್ತು ಡಿಸಿಪ್ಲಿನ್&zwnj; ಮುಖ್ಯ ಎಂದು ಹೇಳಿದ್ದಾರೆ. ವೀಡಿಯೊ ವೈರಲ್&zwnj; ಆಗಲು ಹ್ಯಾಶ್&zwnj;ಟ್ಯಾಗ್&zwnj; ಅಥವಾ ಪೋಸ್ಟ್&zwnj; ಮಾಡುವ ಸಮಯವೇ ಪ್ರಮುಖವಲ್ಲ. ಕಂಟೆಂಟ್&zwnj;ನಲ್ಲಿ ಶಕ್ತಿ ಇದ್ದರೆ ಅದು ಜನರಿಗೆ ತಲುಪುತ್ತದೆ ಮತ್ತು ವೈರಲ್&zwnj; ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಅವರ ಅಭಿಪ್ರಾಯ.&lt;/p&gt;&lt;img&gt;&lt;p&gt;ತಮ್ಮ ಯೂಟ್ಯೂಬ್&zwnj; ಆದಾಯದ ಬಗ್ಗೆಯೂ ಶ್ರವಣ್&zwnj; ಬ್ರೋ ಮುಕ್ತವಾಗಿ ಮಾತನಾಡಿದ್ದಾರೆ. ಆರಂಭದಲ್ಲಿ ತಿಂಗಳಿಗೆ ಸುಮಾರು 300-400 ಡಾಲರ್ ಆದಾಯ ಬರುತ್ತಿತ್ತು. ಇದೀಗ ತಿಂಗಳಿಗೆ ಸುಮಾರು $2,000ರಿಂದ $3,000 ವರೆಗೆ ಯೂಟ್ಯೂಬ್&zwnj; ಆದಾಯ ಸಿಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಇನ್&zwnj;ಸ್ಟಾಗ್ರಾಮ್&zwnj; ಹೊರತಾಗಿ ತಮ್ಮ ದಿನನಿತ್ಯದ ಕೆಲಸಗಳಲ್ಲಿ ChatGPT ಅನ್ನು ಹೆಚ್ಚು ಬಳಸುವುದಾಗಿ ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಪ್ರೀತಿ, ಮದುವೆ ಬಗ್ಗೆ ಏನಂದ್ರು?&lt;/strong&gt;&lt;/p&gt;&lt;p&gt;ತಮ್ಮ ವೈಯಕ್ತಿಕ ಜೀವನದ ಕುರಿತ ಪ್ರಶ್ನೆಗಳಿಗೂ ಶ್ರವಣ್&zwnj; ಬ್ರೋ ಉತ್ತರ ನೀಡಿದ್ದಾರೆ. ಸದ್ಯ ಯಾವುದೇ ಲವ್&zwnj; ರಿಲೇಷನ್&zwnj;ಶಿಪ್&zwnj;ನಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮದುವೆಯಾಗುವ ಹುಡುಗಿ ಫಿಕ್ಸ್&zwnj; ಆದ ಬಳಿಕವೇ ತಮ್ಮ ಗರ್ಲ್&zwnj;ಫ್ರೆಂಡ್&zwnj; ಅನ್ನು ಸಾರ್ವಜನಿಕವಾಗಿ ರಿವೀಲ್&zwnj; ಮಾಡುವುದಾಗಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಎಕ್ಸ್&zwnj; ಅನ್ನು ಮರೆಯುವುದು ಹೇಗೆ?&lt;/strong&gt;&lt;/p&gt;&lt;p&gt;ಬ್ರೇಕಪ್&zwnj; ಬಳಿಕ ಎಕ್ಸ್&zwnj; ಅನ್ನು ಮರೆಯುವುದು ಹೇಗೆ ಎಂಬ ಪ್ರಶ್ನೆಗೆ ಶ್ರವಣ್&zwnj; ಬ್ರೋ ನೀಡಿದ ಸಲಹೆ ಗಮನ ಸೆಳೆಯುವಂತಿದೆ. ಎಕ್ಸ್&zwnj; ಅನ್ನು ಮರೆಯಲು ನಿರಂತರವಾಗಿ ಪ್ರಯತ್ನಿಸುವ ಬದಲು, ನಿಮ್ಮನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಎಂದು ಅವರು ಹೇಳಿದ್ದಾರೆ. ಕೆಲಸ, ಗುರಿ ಮತ್ತು ಇತರ ಪ್ರೊಡಕ್ಟಿವ್&zwnj; ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮನಸ್ಸನ್ನು ಬೇರೆಡೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಎಂಬುದು ಅವರ ಸಲಹೆ.&lt;/p&gt;&lt;img&gt;&lt;p&gt;ಮಾನಸಿಕವಾಗಿ ಕಷ್ಟದ ಸಮಯ ಎದುರಾದಾಗ ದೈನಂದಿನ ಜೀವನದಲ್ಲಿ ಪ್ರೊಡಕ್ಟಿವ್&zwnj; ಆಗಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ಶ್ರವಣ್&zwnj; ಬ್ರೋ ಹೇಳಿದ್ದಾರೆ. ಕೆಲಸ ಮತ್ತು ದಿನನಿತ್ಯದ ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುವ ಮೂಲಕ ಜೀವನದಲ್ಲಿ ಮತ್ತೆ ಫೋಕಸ್&zwnj; ಪಡೆಯಬಹುದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.&lt;/p&gt;&lt;p&gt;&lt;strong&gt;ಕಾಲೇಜು ವಿದ್ಯಾರ್ಥಿಗಳಿಗೆ ಶ್ರವಣ್ ಬ್ರೋ ಸಲಹೆ&lt;/strong&gt;&lt;/p&gt;&lt;p&gt;ಕಾಲೇಜು ಜೀವನದಲ್ಲಿ ಕೇವಲ ಎಂಜಾಯ್&zwnj; ಮಾಡುವುದಕ್ಕೆ ಸೀಮಿತವಾಗದೆ, ಕಾಲೇಜು ಮುಗಿಸುವಷ್ಟರಲ್ಲಿ ಕನಿಷ್ಠ ಒಂದು ಸ್ಕಿಲ್&zwnj; ಕಲಿತು ಅದರಲ್ಲಿ ಮಾಸ್ಟರ್&zwnj; ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಹೊಸ ಕಂಟೆಂಟ್&zwnj; ಕ್ರಿಯೇಟರ್&zwnj;ಗಳು ತಮ್ಮ ಕ್ಷೇತ್ರದಲ್ಲಿ ಆಥಾರಿಟಿ ಬಿಲ್ಡ್&zwnj; ಮಾಡಿಕೊಳ್ಳಬೇಕು. ಜನರಿಗೆ ನಿಜವಾದ ಮೌಲ್ಯ ನೀಡುವಂತಹ ಕಂಟೆಂಟ್&zwnj; ಸೃಷ್ಟಿಸಬೇಕು ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸ್ಪರ್ಧೆಯ ವಿಚಾರದಲ್ಲೂ ಶ್ರವಣ್&zwnj; ಬ್ರೋ ವಿಭಿನ್ನ ಸಂದೇಶ ನೀಡಿದ್ದಾರೆ. ಬೇರೆಯವರನ್ನು ನೋಡಿ ಅವರೊಂದಿಗೆ ಸ್ಪರ್ಧಿಸುವ ಬದಲು ನಿನ್ನೆಯ ನಿಮ್ಮನ್ನು ಇಂದಿನ ನೀವು ಮೀರಬೇಕು. ಪ್ರತಿದಿನ ಸ್ವಲ್ಪವಾದರೂ ಬೆಳೆಯುವ ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಾನು ಕೇವಲ ಯೂಟ್ಯೂಬರ್ ಅಲ್ಲ, ಫಿಟ್&zwnj;ನೆಸ್ ಕೋಚ್&rsquo;&lt;/strong&gt;&lt;/p&gt;&lt;p&gt;ತಮ್ಮ ಗುರುತಿನ ಬಗ್ಗೆ ಮಾತನಾಡಿರುವ ಶ್ರವಣ್&zwnj; ಬ್ರೋ, &ldquo;ನಾನು ಕೇವಲ ಯೂಟ್ಯೂಬರ್&zwnj; ಅಲ್ಲ, ಒಬ್ಬ ಫಿಟ್&zwnj;ನೆಸ್&zwnj; ಕೋಚ್&zwnj; ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ&rdquo; ಎಂದು ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ಜನರನ್ನು ಫಿಟ್&zwnj; ಮಾಡುವುದು ಹಾಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ತಮ್ಮ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/kannada-youtuber-and-fitness-coach-shravan-bro-love-story-youtube-income-suh-f9e73s8"/>
        </item>
        <item>
            <title><![CDATA[ಅಮೃತಧಾರೆ: IPS ಆದ್ರೂ ಅಕ್ಕಾರ ಬಳಿಗೆ ಓಡೋಡಿ ಬಂದ ಮಲ್ಲಿ;  ಜೈದೇವ್‌ಗಿಲ್ಲ ಉಳಿಗಾಲ]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-laxmikant-goes-to-jaidev-s-house-to-find-out-the-secret-of-dia-baby-mrq-gmn5s4u</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-laxmikant-goes-to-jaidev-s-house-to-find-out-the-secret-of-dia-baby-mrq-gmn5s4u</guid>
            <pubDate>Tue, 18 Aug 2026 11:21:53 +0530</pubDate>
            <description><![CDATA[ಜೀ ಕನ್ನಡದ ಅಮೃತಧಾರೆ ಸೀರಿಯಲ್&zwnj;ನಲ್ಲಿ, ನಾಪತ್ತೆಯಾದ ದಿಯಾಳನ್ನು ಹುಡುಕಲು ಭೂಮಿಕಾ, ಶಕುನಿ ಮಾಮ ಲಕ್ಷ್ಮೀಕಾಂತ್ ಅವರ ಸಹಾಯದಿಂದ ಜೈದೇವ್ ವಿರುದ್ಧ ಗೂಢಚಾರಿಕೆ ಆರಂಭಿಸಿದ್ದಾಳೆ. ಭೂಮಿಕಾಳ ಮಾತಿನಂತೆ ಜೈದೇವ್ ಮನೆಗೆ ಹೋದ ಲಕ್ಷ್ಮೀಕಾಂತ್, ಅವರಿಂದ ಸತ್ಯ ಬಾಯಿಬಿಡಿಸಲು ಪ್ರಯತ್ನಿಸುತ್ತಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09pe4n419hdfns2j8tw62yp,imgname-amruthadhaare--2--1787031917220.jpg" type="image/jpeg" height="390" width="690"/>
            <content:encoded><![CDATA[ಜೀ ಕನ್ನಡದ ಅಮೃತಧಾರೆ ಸೀರಿಯಲ್&zwnj;ನಲ್ಲಿ, ನಾಪತ್ತೆಯಾದ ದಿಯಾಳನ್ನು ಹುಡುಕಲು ಭೂಮಿಕಾ, ಶಕುನಿ ಮಾಮ ಲಕ್ಷ್ಮೀಕಾಂತ್ ಅವರ ಸಹಾಯದಿಂದ ಜೈದೇವ್ ವಿರುದ್ಧ ಗೂಢಚಾರಿಕೆ ಆರಂಭಿಸಿದ್ದಾಳೆ. ಭೂಮಿಕಾಳ ಮಾತಿನಂತೆ ಜೈದೇವ್ ಮನೆಗೆ ಹೋದ ಲಕ್ಷ್ಮೀಕಾಂತ್, ಅವರಿಂದ ಸತ್ಯ ಬಾಯಿಬಿಡಿಸಲು ಪ್ರಯತ್ನಿಸುತ್ತಾನೆ.&lt;img&gt;&lt;p&gt;ಜೀ ಕನ್ನಡದ &lt;strong&gt;ಅಮೃತಧಾರೆ ಸೀರಿಯಲ್&lt;/strong&gt; ಸಂಚಿಕೆಯಿಂದ ಸಂಚಿಕೆಗೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೀರಿಯಲ್ ವೀಕ್ಷಕರೆಲ್ಲಾ ಕಾಯುತ್ತಿದ್ದ ಸಮಯ ಬಂದಿದ್ದು, ಕೆಡಿ ಜೈದೇವ್ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೌದು, ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಾಳೆ.&lt;/p&gt;&lt;img&gt;&lt;p&gt;ಜೈದೇವ್&zwnj;ನ ದಿಯಾ ಬೇಬಿ ಮತ್ತು ಹಾಲಿ ಗೆಳತಿ ದಿಢೀರ್ ನಾಪತ್ತೆಯಾಗಿದ್ದು, ಇಬ್ಬರ ಹುಡುಕಲು ಜೀವಾ ಮುಂದಾಗಿದ್ದಾನೆ. ಇದಕ್ಕಾಗಿ ಐಪಿಎಸ್ ಆಗಿರೋ ಮಲ್ಲಿ ಸಹಾಯ ಕೇಳಿದ್ದನು. ಇದೀಗ ಜೈದೇವ್ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ಭೂಮಿಕಾ ಅಭಿಪ್ರಾಯವನ್ನು ಮಲ್ಲಿ ಕೇಳಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿ ಮೇಡಂಗೆ ಅಕ್ಕರಾ ಸಹಾಯ ಬೇಕಾಯ್ತಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಜೈದೇವ್ ವಿಷಯ ತಿಳಿಯುತ್ತಲೇ ಅಖಾಡಕ್ಕೆ ಇಳಿದಿರೋ ಭೂಮಿಕಾ, ಹಳೆ ಹುಲಿ ಶಕುನಿ ಮಾಮಾ (ಲಕ್ಷ್ಮೀಕಾಂತ್&zwnj;) ಸಹಾಯ ಕೇಳಿದ್ದಾಳೆ. ಜೈದೇವ್ ಬಳಿಗೆ ಹೋಗಿ ದಿಯಾ ವಿಷಯ ತಿಳಿದುಕೊಂಡು ಬರುವಂತೆ ಮನವಿ ಮಾಡಿಕೊಂಡಿದ್ದಾಳೆ. ಭೂಮಿಕಾ ಹೇಳಿದಂತೆ ಜೈದೇವ್ ಮನೆಗೆ ಲಕ್ಷ್ಮೀಕಾಂತ್ ಹೋಗಿದ್ದಾನೆ.&lt;/p&gt;&lt;img&gt;&lt;p&gt;ತನ್ನ ಮನೆಗೆ ಬಂದ ಮಾವ ಲಕ್ಷ್ಮೀಕಾಂತ್&zwnj;ನನ್ನು ನೋಡಿ ಜೈದೇವ್ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ನಿನ್ನೊಂದಿಗೆ ಮದ್ಯ ಕುಡಿಯೋಕೆ ಬಂದೆ ಎಂದು ಹೇಳುತ್ತಾ ಲಕ್ಷ್ಮೀಕಾಂತ್ ತನ್ನ ಮಾತುಗಳನ್ನು ಆರಂಭಿಸಿದ್ದಾನೆ. ಬೇಕಂತಲೇ ಜೈದೇವ್ ಮುಂದೆ ಗೌತಮ್, ಭೂಮಿಕಾ ವಿರುದ್ಧ ವಾಗ್ದಾಳಿ ನಡೆಸುತ್ತಾ ನಿನ್ನ ಕಷ್ಟಕ್ಕೆ ಯಾರು ಬರಲಿಲ್ಲ ಅಲ್ಲವಾ ಅಳಿಮಯ್ಯಾ ಎಂದಿದ್ದಾನೆ.&lt;/p&gt;&lt;img&gt;&lt;p&gt;ನಿನಗೆ ಯಾರೂ ಖುಷಿ ಅನ್ನೋದನ್ನ ಕೊಡಲಿಲ್ಲವಲ್ಲಾ? ಆ ಖುಷಿ ಸಿಕ್ಕಿದ್ದು ದಿಯಾಳಿಂದ ಮಾತ್ರ ಅಲ್ಲವಾ ಎಂದು ಲಕ್ಷ್ಮೀಕಾಂತ್ ಹೇಳುತ್ತಾನೆ. ದಿಯಾ ಹೆಸರು ಕೇಳುತ್ತಿದ್ದಂತೆ ಜೈದೇವ್ ಅಲರ್ಟ್ ಆದಂತೆ ಕಾಣಿಸುತ್ತಿದೆ. ಲಕ್ಷ್ಮೀಕಾಂತ್ ಮುಂದೆ ಜೈದೇವ್ ಸತ್ಯ ಹೇಳ್ತಾನಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-laxmikant-goes-to-jaidev-s-house-to-find-out-the-secret-of-dia-baby-mrq-gmn5s4u"/>
        </item>
        <item>
            <title><![CDATA[ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸಂಭ್ರಮದಿಂದ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಗೊಂಬೆ]]></title>
            <link>https://kannada.asianetnews.com/webstories/tv-talk/kannada-serial-actress-neha-gowda-celebrates-her-birthday-with-family-and-friends-lec3s03</link>
            <guid isPermaLink="true">https://kannada.asianetnews.com/webstories/tv-talk/kannada-serial-actress-neha-gowda-celebrates-her-birthday-with-family-and-friends-lec3s03</guid>
            <pubDate>Wed, 19 Aug 2026 21:38:30 +0530</pubDate>
            <description><![CDATA[&lt;p&gt;Neha Gowda Birthday: ಕನ್ನಡ ಕಿರುತೆರೆ ನಟಿ, ಕಿರುತೆರೆ ವೀಕ್ಷಕರ ಮೆಚ್ಚಿನ ಗೊಂಬೆ ಖ್ಯಾತಿಯ ನೇಹಾ ಗೌಡ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರು ಹಾಗೂ ಕುಟುಂಬದ ಜೊತೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dccapb8hp8vmbge7sxk0nr,imgname-neha-gowda--1--1787155589835.jpg" type="image/jpeg" height="390" width="690"/>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/tv-talk/kannada-serial-actress-neha-gowda-celebrates-her-birthday-with-family-and-friends-lec3s03"/>
        </item>
        <item>
            <title><![CDATA[ಮಮ್ಮಿ ಎಂದೇ ಕರೆಯುತ್ತಿದ್ದ ಜಿಮ್ ಫ್ರೆಂಡ್‌ನೇ ಮದುವೆಯಾದ ನಟಿ ರಜನಿ; 10 ಮಿಲಿಯನ್ ವೀಕ್ಷಣೆ ಪಡೆದ ಲವ್‌ಸ್ಟೋರಿ ಇದು]]></title>
            <link>https://kannada.asianetnews.com/gallery/tv-talk/amruthavarshini-fame-actress-rajini-and-husband-arun-gowda-love-story-suh-lg6ciwx</link>
            <guid isPermaLink="true">https://kannada.asianetnews.com/gallery/tv-talk/amruthavarshini-fame-actress-rajini-and-husband-arun-gowda-love-story-suh-lg6ciwx</guid>
            <pubDate>Tue, 18 Aug 2026 11:15:09 +0530</pubDate>
            <description><![CDATA[&lt;p&gt;&lsquo;ಪೈಲ್ವಾನ್-ಪ್ರಿಟಿ ಗರ್ಲ್&rsquo; ಕಾಂಬಿನೇಷನ್&zwnj;ನ ಕಾಮಿಡಿ, ರಜನಿ ಹಾಗೂ ಅರುಣ್ ಗೌಡ ಅವರ ಸ್ನೇಹ, ಪ್ರೀತಿ ಮತ್ತು ಫಿಟ್&zwnj;ನೆಸ್ ಮೆಸೇಜ್&zwnj;ಗಳು ಸದ್ಯ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09nymze34h1e0amn8swyhxk,imgname-amruthavarshini-fame-actress-rajini-and-husband-arun-gowda-love-story-1787031409646.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಪೈಲ್ವಾನ್-ಪ್ರಿಟಿ ಗರ್ಲ್&rsquo; ಕಾಂಬಿನೇಷನ್&zwnj;ನ ಕಾಮಿಡಿ, ರಜನಿ ಹಾಗೂ ಅರುಣ್ ಗೌಡ ಅವರ ಸ್ನೇಹ, ಪ್ರೀತಿ ಮತ್ತು ಫಿಟ್&zwnj;ನೆಸ್ ಮೆಸೇಜ್&zwnj;ಗಳು ಸದ್ಯ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯಲ್ಲಿ &lsquo;ಅಮೃತವರ್ಷಿಣಿ&rsquo; ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ ನಟಿ ರಜನಿ ಸದ್ಯ ಸ್ಟಾರ್ ಸುವರ್ಣ ವಾಹಿನಿಯ &lsquo;ನೀ ಇರಲು ಜೊತೆಯಲ್ಲಿ&rsquo; ಹಾಗೂ ಉದಯ ಟಿವಿಯ &lsquo;ಕೃಷ್ಣವಂಶಿ&rsquo; ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಮುಖವಾಗಿರುವ ರಜನಿ ಇದೀಗ ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿಯೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರ ಪತಿ ಅರುಣ್ ಗೌಡ ಅವರೊಂದಿಗಿನ ವಿಶಿಷ್ಟ ಕಾಂಬಿನೇಷನ್. ಫಿಟ್&zwnj;ನೆಸ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಅರುಣ್ ಗೌಡ ಹಾಗೂ ರಜನಿ ಅವರ ಜೋಡಿ ಇಂದು ಸೋಶಿಯಲ್ ಮೀಡಿಯಾದಲ್ಲಿ &lsquo;ಪೈಲ್ವಾನ್ ಮತ್ತು ಪ್ರಿಟಿ ಗರ್ಲ್&rsquo; ಎಂದೇ ಫೇಮಸ್ ಆಗಿದೆ.&lt;/p&gt;&lt;p&gt;&lt;strong&gt;7 ವರ್ಷಗಳ ಸ್ನೇಹ, ನಂತರ ಪ್ರೀತಿಯಾಗಿ ಬದಲಾದ ಸಂಬಂಧ&lt;/strong&gt;&lt;/p&gt;&lt;p&gt;ರಜನಿ ಹಾಗೂ ಅರುಣ್ ಗೌಡ ಸುಮಾರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದರು. ಕೋವಿಡ್ ಸಮಯದಲ್ಲಿ ಇವರಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ಜಿಮ್&zwnj;ನಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿದ್ದ ಈ ಜೋಡಿ, ತಮಾಷೆಯಾಗಿ ವಿಡಿಯೋಗಳನ್ನು ಮಾಡಲು ಆರಂಭಿಸಿತು. ಆ ವಿಡಿಯೋಗಳೇ ಮುಂದೆ ಇವರ ಜೀವನಕ್ಕೆ ಹೊಸ ತಿರುವು ನೀಡಿದವು. ವರ್ಷಗಳ ಕಾಲ ಪ್ರೀತಿಸಿದ ಬಳಿಕ ರಜನಿ ಹಾಗೂ ಅರುಣ್ ಗೌಡ 2025ರ ನವೆಂಬರ್ 10ರಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾದರು. ಇದೀಗ ದಂಪತಿಯಾಗಿ ಮಾತ್ರವಲ್ಲದೆ ಕಂಟೆಂಟ್ ಕ್ರಿಯೇಟರ್&zwnj;ಗಳಾಗಿಯೂ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ರಜನಿ ಮತ್ತು ಅರುಣ್ ಗೌಡ ಅವರ ಕಂಟೆಂಟ್ ಕ್ರಿಯೇಟರ್ ಜರ್ನಿಯಲ್ಲಿ ತಿರುವು ತಂದದ್ದು ಜಿಮ್&zwnj;ನಲ್ಲಿ ಮಾಡಿದ ಒಂದು ತಮಾಷೆಯ ವಿಡಿಯೋ. ಇವರಿಬ್ಬರು ಮಾಡಿದ &lsquo;ಲೆಗ್ ಪ್ರೆಸ್&rsquo; ವಿಡಿಯೋ ಬರೋಬ್ಬರಿ 10 ಮಿಲಿಯನ್&zwnj;ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತು. ಈ ವಿಡಿಯೋ ದಕ್ಷಿಣ ಆಫ್ರಿಕಾದವರೆಗೂ ಟ್ರೆಂಡ್ ಆಗಿತ್ತು ಎನ್ನಲಾಗಿದೆ. ಅಲ್ಲಿಂದ ಆರಂಭವಾದ ಇವರ ಸೋಶಿಯಲ್ ಮೀಡಿಯಾ ಪಯಣ ಇಂದು ಮಿಲಿಯನ್&zwnj;ಗಟ್ಟಲೆ ವೀಕ್ಷಣೆ ಪಡೆಯುವ ಹಂತಕ್ಕೆ ತಲುಪಿದೆ.&lt;/p&gt;&lt;p&gt;&lt;strong&gt;&lsquo;ಮಮ್ಮಿ&rsquo; ಎಂದು ಯಾಕೆ ಕರೆಯುತ್ತಾರೆ?&lt;/strong&gt;&lt;/p&gt;&lt;p&gt;ಅರುಣ್ ಗೌಡ, ರಜನಿ ಅವರನ್ನು ಆಗಾಗ್ಗೆ &lsquo;ಮಮ್ಮಿ&rsquo; ಎಂದು ಕರೆಯುವುದು ಇವರ ಕಂಟೆಂಟ್&zwnj;ನ ಪ್ರಮುಖ ಆಕರ್ಷಣೆ. ಇದರ ಹಿಂದೆಯೂ ಒಂದು ತಮಾಷೆಯ ಕಾರಣವಿದೆ. ಅರುಣ್ ಏನಾದರೂ ಮಾಡಿದಾಗ ರಜನಿ, &lsquo;ಬ್ಯಾಗ್ ಎಲ್ಲಿಟ್ಟಿದ್ದೀಯ? ಯಾಕೆ ತಡ ಮಾಡಿದೆ?&rsquo; ಎಂದು ಅಮ್ಮನ ರೀತಿಯಲ್ಲಿ ಬೈಯುತ್ತಾರಂತೆ. ಹೀಗಾಗಿ ತಮಾಷೆಗಾಗಿ ಅರುಣ್, ರಜನಿ ಅವರನ್ನು &lsquo;ಮಮ್ಮಿ&rsquo; ಎಂದು ಕರೆಯಲು ಆರಂಭಿಸಿದ್ದರಂತೆ. ಆ ತಮಾಷೆಯೇ ಮುಂದೆ ಇವರ ಕಂಟೆಂಟ್&zwnj;ನ ವಿಶಿಷ್ಟ ಗುರುತಾಗಿ ಬದಲಾಗಿದೆ.&lt;/p&gt;&lt;img&gt;&lt;p&gt;ಅರುಣ್ ಗೌಡ ಅವರನ್ನು ಬಹುತೇಕರು ಬಾಡಿಬಿಲ್ಡರ್ ಮತ್ತು ಫಿಟ್&zwnj;ನೆಸ್ ಅಥ್ಲೀಟ್ ಎಂದೇ ಗುರುತಿಸುತ್ತಾರೆ. ಆದರೆ ಅವರ ಮತ್ತೊಂದು ಮುಖ ಅನೇಕರಿಗೆ ಗೊತ್ತಿಲ್ಲ. ಅರುಣ್ ಸುಮಾರು 9 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಸಂಕೇತ್ ಮತ್ತು ರಂಗಶಂಕರ ಸೇರಿದಂತೆ ವಿವಿಧ ರಂಗಭೂಮಿ ತಂಡಗಳೊಂದಿಗೆ 15ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 200ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಅವರು ಎರಡು ನಾಟಕಗಳನ್ನು ನಿರ್ದೇಶಿಸಿರುವ ಅನುಭವವನ್ನೂ ಹೊಂದಿದ್ದಾರೆ. ಹೀಗಾಗಿ ಕ್ಯಾಮೆರಾ ಮುಂದೆ ಕಾಮಿಡಿ ಮಾಡುವ ಕಲೆ ಅವರಿಗೆ ಹೊಸದೇನಲ್ಲ.&lt;/p&gt;&lt;p&gt;&lt;strong&gt;&lsquo;ಡ್ಯಾನ್ಸಿಂಗ್ ಸ್ಟಾರ್ 2&rsquo; ಕೊಟ್ಟ ಫಿಟ್&zwnj;ನೆಸ್ ಟರ್ನಿಂಗ್ ಪಾಯಿಂಟ್&lt;/strong&gt;&lt;/p&gt;&lt;p&gt;2016ರಲ್ಲಿ ಪ್ರಸಾರವಾದ &lsquo;ಡ್ಯಾನ್ಸಿಂಗ್ ಸ್ಟಾರ್ 2&rsquo; ರಿಯಾಲಿಟಿ ಶೋ ರಜನಿ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತು. ನೃತ್ಯ ಪ್ರದರ್ಶನಗಳಿಗೆ ಉತ್ತಮ ಕೋರ್ ಸ್ಟ್ರೆಂತ್ ಅಗತ್ಯವಿದ್ದ ಕಾರಣ ರಜನಿ ಮೊದಲ ಬಾರಿಗೆ ಜಿಮ್ ಮತ್ತು ಫಿಟ್&zwnj;ನೆಸ್&zwnj;ನತ್ತ ಗಮನ ಹರಿಸಿದರು. ಇದೇ ಆಸಕ್ತಿ ಮುಂದೆ ಅರುಣ್ ಗೌಡ ಅವರೊಂದಿಗೆ ಕಂಟೆಂಟ್ ಮಾಡಲು ಸಹ ಕಾರಣವಾಯಿತು.&lt;/p&gt;&lt;img&gt;&lt;p&gt;ರಜನಿ ಮತ್ತು ಅರುಣ್ ಗೌಡ ಅವರ ವಿಡಿಯೋಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ತಮ್ಮ ಕಂಟೆಂಟ್ ಮೂಲಕ ಫಿಟ್&zwnj;ನೆಸ್ ಮತ್ತು ಆರೋಗ್ಯದ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪ್ರೋಟೀನ್ ಸೇವನೆ, ಡಯಟ್, ವರ್ಕೌಟ್ ಮತ್ತು ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸರಳವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ. ಟ್ರೈನರ್ ಇಲ್ಲದೆ ಯೂಟ್ಯೂಬ್ ವಿಡಿಯೋ ನೋಡಿ ವರ್ಕೌಟ್ ಮಾಡಿ ಗಾಯ ಮಾಡಿಕೊಳ್ಳಬೇಡಿ, ನೈಸರ್ಗಿಕ ಆಹಾರದಿಂದಲೂ ಉತ್ತಮ ಪ್ರೋಟೀನ್ ಪಡೆಯಬಹುದು ಮತ್ತು ಆರೋಗ್ಯದ ಮೇಲೆ ಪ್ರತಿದಿನ ಹೂಡಿಕೆ ಮಾಡಬೇಕು ಎಂಬ ಸಂದೇಶವನ್ನು ತಮ್ಮದೇ ಶೈಲಿಯಲ್ಲಿ ನೀಡುತ್ತಿದ್ದಾರೆ. ಅವರ ಮಾತಿನಲ್ಲಿ ಹೇಳುವುದಾದರೆ, ನೇರವಾಗಿ ಫಿಟ್&zwnj;ನೆಸ್ ಸಲಹೆ ನೀಡಿದರೆ ಕೆಲವರು ಗಮನ ಕೊಡದೇ ಇರಬಹುದು. ಹೀಗಾಗಿ &lsquo;ಮಿರ್ಚಿ ಮಸಾಲಾ&rsquo; ಮತ್ತು ಕಾಮಿಡಿ ಸೇರಿಸಿ ಆರೋಗ್ಯದ ಸಂದೇಶವನ್ನು ಜನರಿಗೆ ತಲುಪಿಸುವುದು ಇವರ ಕಂಟೆಂಟ್&zwnj;ನ ವಿಶೇಷತೆ.&lt;/p&gt;&lt;p&gt;&lt;strong&gt;ನಟಿಯಿಂದ ಇನ್ಫ್ಲುಯೆನ್ಸರ್ ಆಗಿದ್ದಕ್ಕೆ ಟೀಕೆ&lt;/strong&gt;&lt;/p&gt;&lt;p&gt;ರಜನಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಗುರುತಿಸಿಕೊಳ್ಳಲು ಆರಂಭಿಸಿದಾಗ ಕೆಲವರು ಅವರನ್ನು ಟೀಕಿಸಿದ್ದರು. ನಟಿಯಾಗಿದ್ದವರು ಇನ್ಫ್ಲುಯೆನ್ಸರ್ ಆಗಿ ಬದಲಾಗಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದರು. ಆದರೆ ಈ ಟೀಕೆಗಳಿಗೆ ರಜನಿ ತಲೆಕೆಡಿಸಿಕೊಂಡಿಲ್ಲ. ಜನರು ತಮ್ಮ ವಿಡಿಯೋ ನೋಡಿ ದಿನದ ಒತ್ತಡ, ಬೇಸರ ಮತ್ತು ದಣಿವು ಮರೆತು ನಗುತ್ತೇವೆ ಎಂದು ಕಮೆಂಟ್ ಮಾಡಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದು ಅವರ ನಿಲುವು. ಕಲಾವಿದ ಎಲ್ಲೇ ಇದ್ದರೂ ಪ್ರೇಕ್ಷಕರಿಗೆ ಮನರಂಜನೆ ತಲುಪಿಸುವುದು ಮುಖ್ಯ ಎಂಬ ತತ್ವವನ್ನು ಅವರು ತಮ್ಮದೇ ರೀತಿಯಲ್ಲಿ ಮುಂದುವರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ನಟನೆ, ಕಂಟೆಂಟ್ ಕ್ರಿಯೇಷನ್ ಮತ್ತು ಫಿಟ್&zwnj;ನೆಸ್ ನಡುವೆ ಬ್ಯುಸಿಯಾಗಿರುವ ಈ ಜೋಡಿ ಇತ್ತೀಚೆಗೆ ಥೈಲ್ಯಾಂಡ್ ಪ್ರವಾಸಕ್ಕೂ ತೆರಳಿ ಒಟ್ಟಿಗೆ ಕ್ವಾಲಿಟಿ ಟೈಮ್ ಕಳೆದಿದ್ದಾರೆ. ದಂಪತಿಯ ಪ್ರವಾಸದ ಕ್ಷಣಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆದಿವೆ. ಒಟ್ಟಿನಲ್ಲಿ, ಧಾರಾವಾಹಿಯಿಂದ ಕಿರುತೆರೆ ಪ್ರೇಕ್ಷಕರ ಮನ ಗೆದ್ದ ರಜನಿ, ಫಿಟ್&zwnj;ನೆಸ್ ಮತ್ತು ರಂಗಭೂಮಿ ಹಿನ್ನೆಲೆಯ ಅರುಣ್ ಗೌಡ ಜೊತೆ ಸೇರಿ ಹೊಸ ರೀತಿಯ ಡಿಜಿಟಲ್ ಕಂಟೆಂಟ್ ಮೂಲಕ ಮತ್ತೊಂದು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. &lsquo;ಪೈಲ್ವಾನ್-ಪ್ರಿಟಿ ಗರ್ಲ್&rsquo; ಕಾಂಬಿನೇಷನ್&zwnj;ನ ಕಾಮಿಡಿ, ಸ್ನೇಹ, ಪ್ರೀತಿ ಮತ್ತು ಫಿಟ್&zwnj;ನೆಸ್ ಮೆಸೇಜ್&zwnj;ಗಳು ಸದ್ಯ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.&lt;/p&gt;]]></content:encoded>
            <category>tv-talk</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/amruthavarshini-fame-actress-rajini-and-husband-arun-gowda-love-story-suh-lg6ciwx"/>
        </item>
        <item>
            <title><![CDATA[Bigg Boss ಅಗ್ನಿಪರೀಕ್ಷೆ ಬಗ್ಗೆ ನೀವು ಅಂದ್ಕೊಂಡಿರೋದೆಲ್ಲಾ ಸುಳ್ಳು: ಗಿನ್ನೆಸ್​ ದಾಖಲೆ ಹರಿದ ಅಭ್ಯರ್ಥಿ ಏನಂದ್ರು ಕೇಳಿ]]></title>
            <link>https://kannada.asianetnews.com/tv-talk/bigg-boss-13-kannada-contestant-dhanush-who-torn-guinness-world-record-about-the-show-suc/articleshow-n8oxmcr</link>
            <guid isPermaLink="true">https://kannada.asianetnews.com/tv-talk/bigg-boss-13-kannada-contestant-dhanush-who-torn-guinness-world-record-about-the-show-suc/articleshow-n8oxmcr</guid>
            <pubDate>Tue, 18 Aug 2026 15:16:25 +0530</pubDate>
            <description><![CDATA[ಬಿಗ್​ಬಾಸ್​ 13ರ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿ ಧನುಷ್​ ಮಂಜುನಾಥ್ ತಮ್ಮ ಗಿನ್ನೆಸ್​ ದಾಖಲೆ ಹರಿದು ಹಾಕಿದ್ದು ಭಾರೀ ಟ್ರೋಲ್​ಗೆ ಕಾರಣವಾಗಿತ್ತು. ಆದರೆ, ತಾನು ಹರಿದಿದ್ದು ನಕಲಿ ದಾಖಲೆ ಎಂದು ಸ್ಪಷ್ಟನೆ ನೀಡಿರುವ ಧನುಷ್, ಬಿಗ್​ಬಾಸ್​ಗೆ ಹೋಗುವ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಸಿಗುತ್ತದೆ ಎಂದಿದ್ದಾರೆ. ಈ ಘಟನೆಯು ಬಿಗ್​ಬಾಸ್​ಗೆ ಹೋಗಲು ಜನರು ಹೊಂದಿರುವ ಕನಸು ಮತ್ತು ಭ್ರಮೆಗಳನ್ನು ತೆರೆದಿಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0a46zzhne2hpdfqjhecj85d,imgname-bigg-boss-13-1787046363121.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ 13 (Bigg Boss 13) ಅಗ್ನಿಪರೀಕ್ಷೆ ಮಾಡಿ ಸಾಮಾನ್ಯ ಜನರನ್ನು ಈ ಬಾರಿ ಒಳಗೆ ಕಳಿಸಲಾಗುತ್ತಿದೆ. ಈ ಸಮಯದಲ್ಲಿ ನಡೆದ ಅಗ್ನಿಪರೀಕ್ಷೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದೆ. ಸ್ಪರ್ಧೆಯ ಹೆಸರಿನಲ್ಲಿ ಮುಖಕ್ಕೆ ಸೆಗಣಿ ಬಳಿದುಕೊಳ್ಳುವಂತೆ ಮಾಡುವುದು, ಕೆಲಸ ಬಿಡುವಂತೆ ಹೇಳುವುದು, ಇನ್ನೂ ಏನೇನೋ ಟಾಸ್ಕ್​ ಮಾಡಿಸುವುದು... ಹೀಗೆ ಇಲ್ಲಿ ನಡೆದ ಟಾಸ್ಕ್​ಗಳ ಬಗ್ಗೆ ಸಿಕ್ಕಾಪಟ್ಟೆ ಟೀಕೆಗಳು ಕೇಳಿಬರುತ್ತಿವೆ. ಅಷ್ಟಕ್ಕೂ ಇವೆಲ್ಲಾ ರಿಯಾಲಿಟಿ ಷೋ ನಡೆಸುವವರಿಗೆ ತಿಳಿಯದೇ ಇರುವ ವಿಷಯವೇನಲ್ಲ. ಆದರೆ ಜನರನ್ನು ಆಕರ್ಷಿಸಲು ನೆಗೆಟಿವ್​ ಕಮೆಂಟ್ಸ್​ಗಳು ಸೋಷಿಯಲ್​ ಮೀಡಿಯಾಕ್ಕೆ ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ಇದು ಕೂಡ ಅದರ ಒಂದು ಭಾಗವಾಗಿರಲಿಕ್ಕೆ ಸಾಕು.&lt;/p&gt;&lt;p&gt;ಆದರೆ ಎಲ್ಲಕ್ಕಿಂತಲೂ ಮಿಗಿಲಾಗಿ ಭಾರಿ ಟ್ರೋಲ್​ ಆಗಿದ್ದು ಮಾತ್ರವಲ್ಲದೇ ಸ್ಪರ್ಧಿಯ ನಡವಳಿಕೆಯ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದ್ದು, ಧನುಷ್​ ಮಂಜುನಾಥ್​ ಎನ್ನುವ ಸ್ಪರ್ಧಿ ತಮ್ಮ ಗಿನ್ನೆಸ್​ ದಾಖಲೆ ಹರಿದು ಹಾಕಿದ್ದು. ಇಂಥ ದಾಖಲೆ ಜೀವನದಲ್ಲಿ ಮಾಡುವುದು ಎಷ್ಟೋ ಮಂದಿಗೆ ಒಂದೇ ಬಾರಿಯಾಗಿರುತ್ತದೆ. ಆದರೆ ಬಿಗ್​ಬಾಸ್​​ ಷೋಗೆ ಹೋಗುವುದಕ್ಕಾಗಿ ಜೀವಮಾನದ ಸಾಧನೆಯನ್ನೇ ಪಣಕ್ಕಿಡುವಂತೆ ಹೇಳಿದ್ದು, ಹಾಗೂ ರಿಯಾಲಿಟಿ ಷೋದಿಂದ ಫೇಮಸ್​ ಆಗಿಯೇ ತೀರುತ್ತೇವೆ ಎನ್ನುವ ಭ್ರಮೆಯಿಂದ ಕೆಲವರು ಈ ರೀತಿ ದಾಖಲೆ ಹರಿದು ಹಾಕಿದ್ದು ಎಷ್ಟರಮಟ್ಟಿಗೆ ಸರಿ ಎಂದು ಸಾಕಷ್ಟು ಮಂದಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಧನುಷ್​ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ಆದರೆ, ಅದಕ್ಕೀಗ ಖುದ್ದು ಧನುಷ್​ ಅವರೇ ಸ್ಪಷ್ಟನೆ ನೀಡಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ನೀವು ನೋಡಿದ್ದೆಲ್ಲಾ ಸತ್ಯವಲ್ಲ. ಅದು ನನ್ನ ಒರಿಜಿನಲ್​ ದಾಖಲೆಯಲ್ಲ. ನನಗೆ ದಾಖಲೆಯ ನಕಲಿ ಪ್ರತಿಯನ್ನು ನೀಡಲಾಗಿತ್ತು. ಒರಿಜಿನಲ್​ ನನ್ನ ಬಳಿಯೇ ಇದೆ. ಅಷ್ಟಕ್ಕೂ ಇಂಥದ್ದೊಂದು ದಾಖಲೆಯನ್ನು ಇನ್ನೊಂದು ಬಾರಿ ಬೇಕಾದ್ರೂ ಮಾಡಬಹುದು. ಆದರೆ ಬಿಗ್​ಬಾಸ್​ಗೆ ಹೋಗುವ ಅವಕಾಶ ಸಿಗುವುದು ಜೀವನದಲ್ಲಿ ಒಂದೇ ಬಾರಿ. ಎಷ್ಟೋ ಮಂದಿಯಲ್ಲಿ ಸೆಲೆಕ್ಟ್​ ಆಗಿರುವಾಗ ಇಂಥ ಅವಕಾಶವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮೂಲಕ, ಅಸಲಿ ದಾಖಲೆ ಹರಿದು ಹಾಕಿದರೂ ತಮಗೆ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.&lt;/p&gt;&lt;h3&gt;&lt;strong&gt;ಬಿಗ್​ಬಾಸ್ ಎನ್ನುವ ಕನಸು...&lt;/strong&gt;&lt;/h3&gt;&lt;p&gt;ಇವರ ಮಾತಿನಿಂದ ಬಿಗ್​ಬಾಸ್​​ಗೆ ಹೋಗುವುದು ಅದೆಷ್ಟು ಮಂದಿಯ ದೊಡ್ಡ ಕನಸು ಎನ್ನುವುದು ತಿಳಿಯುತ್ತದೆ. ಬಿಗ್​ಬಾಸ್​ಗೆ ಹೋಗಿ ಬಂದರೆ ಅದರ ಲೆವೆಲ್ಲೇ ಬೇರೆಯದ್ದು ಎನ್ನುವ ಕಲ್ಪನೆ ಹಲವರಿಗೆ ಇದೆ. ಗಿನ್ನೆಸ್​ ದಾಖಲೆ ಮಾಡಿದರೂ ಸಿಗದ ಮರ್ಯಾದೆ ಬಿಗ್​ಬಾಸ್​ಗೆ ಹೋಗಿ ಬಂದರೆ ತಮಗೆ ಸಿಕ್ಕಾಪಟ್ಟೆ ಸಿಗುತ್ತದೆ, ಇದರಿಂದ ಮುಂದೆ ದೊಡ್ಡ ದೊಡ್ಡ ಅವಕಾಶಗಳು ಹುಡುಕಿ ಬರುತ್ತವೆ, ಜನರು ನಮ್ಮ ಹಿಂದೆ ಬೀಳುತ್ತಾರೆ, ಹೋದಲ್ಲಿ, ಬಂದಲ್ಲಿ ಆಟೋಗ್ರಾಫ್​ ಕೇಳುತ್ತಾರೆ. ಮುಂದೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ.... ಹೀಗೆ ಹಲವರ ಕಲ್ಪನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ, ಅವರ ಅದೃಷ್ಟ ಕಾಲವೇ ನಿರ್ಧರಿಸಬೇಕಷ್ಟೇ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/tv-talk/bigg-boss-13-kannada-contestant-dhanush-who-torn-guinness-world-record-about-the-show-suc/articleshow-n8oxmcr"/>
        </item>
        <item>
            <title><![CDATA[Karna Serial ರೋಚಕ ಟ್ವಿಸ್ಟ್​: ಕರ್ಣನೇ ಮಗ ಎನ್ನೋ ಸತ್ಯ ಸೀತಾಗೂ ತಿಳಿಯಿತು! ಸೀರಿಯಲ್​ ಮುಕ್ತಾಯ?]]></title>
            <link>https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy</link>
            <guid isPermaLink="true">https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy</guid>
            <pubDate>Tue, 18 Aug 2026 17:28:23 +0530</pubDate>
            <description><![CDATA[&lt;p&gt;ಕರ್ಣ ಸೀರಿಯಲ್​ನಲ್ಲಿ, ತನ್ನ ಮಗನೆಂದು ರಮೇಶ್&zwnj;ಗೆ ಸತ್ಯ ತಿಳಿದರೂ ಹೇಳಲಾಗದ ಸ್ಥಿತಿಯಲ್ಲಿದ್ದಾನೆ. ಇತ್ತ, ಆಸ್ಪತ್ರೆಯಲ್ಲಿರುವ ಕರ್ಣನನ್ನು ನೋಡಲು ಬಂದ ಸೀತಾ, ಅವನನ್ನು ಸ್ಪರ್ಶಿಸಿದಾಗ ತಾಯ್ತನದ ಅನುಭೂತಿ ಪಡೆದು ಆಘಾತಕ್ಕೊಳಗಾಗುತ್ತಾಳೆ. ಈ ಸ್ಪರ್ಶದಿಂದ ಕರ್ಣನಲ್ಲಿ ಚಲನೆ ಕಾಣಿಸಿಕೊಂಡಿದ್ದು, ಮುಂದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0abpw0vzm8ze7p1pwwpjhs3,imgname-k.-serial-00-1787054223387.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್​ನಲ್ಲಿ, ತನ್ನ ಮಗನೆಂದು ರಮೇಶ್&zwnj;ಗೆ ಸತ್ಯ ತಿಳಿದರೂ ಹೇಳಲಾಗದ ಸ್ಥಿತಿಯಲ್ಲಿದ್ದಾನೆ. ಇತ್ತ, ಆಸ್ಪತ್ರೆಯಲ್ಲಿರುವ ಕರ್ಣನನ್ನು ನೋಡಲು ಬಂದ ಸೀತಾ, ಅವನನ್ನು ಸ್ಪರ್ಶಿಸಿದಾಗ ತಾಯ್ತನದ ಅನುಭೂತಿ ಪಡೆದು ಆಘಾತಕ್ಕೊಳಗಾಗುತ್ತಾಳೆ. ಈ ಸ್ಪರ್ಶದಿಂದ ಕರ್ಣನಲ್ಲಿ ಚಲನೆ ಕಾಣಿಸಿಕೊಂಡಿದ್ದು, ಮುಂದೇನು?&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ನಲ್ಲಿ (Karna Serial) ಇದಾಗಲೇ ಕರ್ಣನೇ ತನ್ನ ಮಗ ಎನ್ನುವ ಸತ್ಯ ರಮೇಶ್​ಗೆ ತಿಳಿದಿದೆ. ಆದರೆ ಅದನ್ನು ತಿಳಿಯುವ ಮೊದಲೇ ರಮೇಶ್​ ತನ್ನ ಸ್ವಂತ ಮಗನನ್ನೇ ಕೊಲೆಮಾಡಲು ನೋಡಿ ಎಲ್ಲರ ಕಣ್ಣಿನಲ್ಲಿ ಅಪರಾಧಿಯಾಗಿದ್ದಾನೆ.&lt;/p&gt;&lt;img&gt;&lt;p&gt;ಅವನನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಅವನೇ ತನ್ನ ಮಗ ಎಂದು ಹೇಳುವುದಕ್ಕೂ ಅವನಿಂದ ಸಾಧ್ಯವಾಗುತ್ತಿಲ್ಲ. ತಪ್ಪಿತಸ್ಥ ಭಾವನೆಯಲ್ಲಿ ಕರ್ಣ ಇದ್ದಾನೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ, ಕರ್ಣನಿಗೆ ತಾನು ಆ್ಯಕ್ಸಿಡೆಂಟ್​ ಮಾಡಿಸಿರುವುದಾಗಿ ನಯನತಾರಾ ಭುವನೇಶ್ವರಿ ಉರ್ಫ್​ ಸೀತಾಗೆ ಹೇಳಿದಾಗ ಅವಳಿಗೆ ಅದ್ಯಾಕೋ ಸಂಕಟವಾಗುತ್ತದೆ. ತನ್ನ ಹಗೆತನ ಏನಿದ್ದರೂ ಕೆಲಸದಲ್ಲಿಯೇ ವಿನಾ ಜೀವ ತೆಗೆಯುವ ಮಟ್ಟಿಗೆ ಅಲ್ಲ ಎಂದು ನಯನತಾರಾ ಮೇಲೆ ಕೈ ಮಾಡಲು ಹೋಗುತ್ತಾಳೆ ಅವಳು.&lt;/p&gt;&lt;img&gt;&lt;p&gt;ಕೊನೆಗೆ ಕರ್ಣನನ್ನು ನೋಡಲು ಆಸ್ಪತ್ರೆಗೆ ಬರುತ್ತಾಳೆ. ತನ್ನ ಕೈಮೀರಿ ಇಂಥದ್ದೊಂದು ನಡೆದು ಹೋಯಿತು ಎಂದು ಮರಗುತ್ತಾಳೆ.&lt;/p&gt;&lt;img&gt;&lt;p&gt;ಅದೇ ಸಮಯದಲ್ಲಿ ಕರ್ಣನನ್ನು ಮುಟ್ಟುತ್ತಾಳೆ. ಹೀಗೆ ಆಗುತ್ತಲೇ ಆಕೆಯ ಮೈಯಲ್ಲೆಲ್ಲಾ ರೋಮಾಂಚನವಾಗುತ್ತದೆ. ಅದ್ಯಾವುದೋ ಅಮ್ಮನ ಶಕ್ತಿ ಆಕೆಯಲ್ಲಿ ಜಾಗೃತವಾಗುತ್ತದೆ. ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುತ್ತಾರಲ್ಲ, ಹಾಗೆ ಆಗಿ ಅವಳಿಗೆ ಶಾಕ್​ ಆಗುತ್ತದೆ.&lt;/p&gt;&lt;img&gt;&lt;p&gt;ಅಮ್ಮನ ಸ್ಪರ್ಶ ಆಗುತ್ತಿದ್ದಂತೆಯೇ ಕರ್ಣನಲ್ಲಿ ಚಲನೆ ಕಾಣಿಸುತ್ತದೆ. ಭುವನೇಶ್ವರಿಗೆ ಕರ್ಣನನ್ನು ಮುಟ್ಟುತ್ತಿದ್ದಂತೆಯೇ ಅದೇನೋ ಸಂಕಟ ಉಂಟಾಗುತ್ತದೆ. ಹಾಗಿದ್ದರೆ, ಕರ್ಣನೇ ತನ್ನ ಮಗ ಎನ್ನುವ ಸತ್ಯ ತಿಳಿಯತ್ತಾ? ಸೀರಿಯಲ್​ನಲ್ಲಿ ಇಷ್ಟು ಆದರೆ ಮುಂದೇನು ಇರುತ್ತೆ ಎನ್ನುವ ಕುತೂಹಲ ಸದ್ಯಕ್ಕಿದೆ!&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-bhuvaneshwari-urf-seetha-also-came-to-know-about-karnas-truth-suc-o1x4zdy"/>
        </item>
        <item>
            <title><![CDATA[ನೀರಿನಲ್ಲೇ ಚಿತ್ರೀಕರಣ ಮಾಡಿ ‘ಅಣ್ಣಯ್ಯ’ ತಂಡ ಪಟ್ಟ ಕಷ್ಟ ಎಷ್ಟು?: ಮಾರಿಗುಡಿ ಶಿವು ಪೋಸ್ಟ್ ವೈರಲ್]]></title>
            <link>https://kannada.asianetnews.com/tv-talk/annayya-shivu-aka-vikash-uthaiah-gets-emotional-recalling-the-makalavva-jatre-episode-gvd/articleshow-r2gw0wo</link>
            <guid isPermaLink="true">https://kannada.asianetnews.com/tv-talk/annayya-shivu-aka-vikash-uthaiah-gets-emotional-recalling-the-makalavva-jatre-episode-gvd/articleshow-r2gw0wo</guid>
            <pubDate>Wed, 19 Aug 2026 18:50:15 +0530</pubDate>
            <description><![CDATA[&lt;p&gt;&lsquo;ಅಣ್ಣಯ್ಯ&rsquo; ಧಾರಾವಾಹಿ ತನ್ನ ಭಾವನಾತ್ಮಕ ಕಥಾಹಂದರದ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ತಂಗಿಯರಿಗಾಗಿ ಎಲ್ಲವನ್ನೂ ಮಾಡುವ ಅಣ್ಣನ ಪಾತ್ರ ಹಾಗೂ ಅಣ್ಣ-ತಂಗಿಯರ ನಡುವಿನ ಬಾಂಧವ್ಯ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0d2t37atef80dh6kb0yw6xf,imgname-bjb-1787145555178.png" type="image/jpeg" height="390" width="690"/>
            <content:encoded><![CDATA[&lt;p&gt;ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ &lsquo;ಅಣ್ಣಯ್ಯ&rsquo; ಧಾರಾವಾಹಿ ತನ್ನ ಭಾವನಾತ್ಮಕ ಕಥಾಹಂದರದ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ತಂಗಿಯರಿಗಾಗಿ ಎಲ್ಲವನ್ನೂ ಮಾಡುವ ಅಣ್ಣನ ಪಾತ್ರ ಹಾಗೂ ಅಣ್ಣ-ತಂಗಿಯರ ನಡುವಿನ ಬಾಂಧವ್ಯ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಈ ಧಾರಾವಾಹಿಯಲ್ಲಿ ಮಾರಿಗುಡಿ ಶಿವು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ವಿಕಾಸ್ ಉತ್ತಯ್ಯ ಅವರ ಅಭಿನಯಕ್ಕೂ ಪ್ರೇಕ್ಷಕರಿಂದ ನಿರಂತರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವು ಪಾತ್ರದ ವಿಭಿನ್ನ ಶೇಡ್&zwnj;ಗಳನ್ನು ತಮ್ಮ ಅಭಿನಯದ ಮೂಲಕ ಕಟ್ಟಿಕೊಡುತ್ತಿರುವ ವಿಕಾಸ್, ಇದೀಗ ತಮ್ಮ ಹಳೆಯ ಸಂಚಿಕೆಯೊಂದನ್ನು ನೆನಪಿಸಿಕೊಂಡು ಮಾಡಿರುವ ಪೋಸ್ಟ್&zwnj;ನಿಂದ ಮತ್ತೆ ಸುದ್ದಿಯಾಗಿದ್ದಾರೆ.&lt;/p&gt;&lt;p&gt;&lt;strong&gt;ಒಂದು ವರ್ಷದ ಹಿಂದಿನ &lsquo;ಮಾಕಳವ್ವ ಜಾತ್ರೆ&rsquo; ನೆನಪು!&lt;/strong&gt;&lt;/p&gt;&lt;p&gt;ಸುಮಾರು ಒಂದು ವರ್ಷದ ಹಿಂದೆ ಪ್ರಸಾರವಾಗಿದ್ದ &lsquo;ಮಾಕಳವ್ವ ಜಾತ್ರೆ&rsquo; ಸಂಚಿಕೆಯಲ್ಲಿ ಶಿವು ವಿಭಿನ್ನವಾದ ರೆಬೆಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಶಿವು ಪಾತ್ರದ ಈ ಹೊಸ ಶೇಡ್ ವೀಕ್ಷಕರಿಗೆ ಅಚ್ಚರಿ ಮೂಡಿಸಿತ್ತು. ಅದೇ ಸಮಯದಲ್ಲಿ ವಿಕಾಸ್ ಉತ್ತಯ್ಯ ಅವರ ಅಭಿನಯಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಆ ಸಂಚಿಕೆಯ ನೆನಪುಗಳನ್ನು ಹಂಚಿಕೊಂಡಿರುವ ವಿಕಾಸ್, ತಮ್ಮ ನೆಚ್ಚಿನ ಪ್ರೇಕ್ಷಕರು ಹಾಗೂ ಅಭಿಮಾನಿಗಳು ನೀಡಿದ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸಂಚಿಕೆ ಚಿಕ್ಕದಾದರೂ ಶೂಟಿಂಗ್ ಸುಲಭವಾಗಿರಲಿಲ್ಲ!&rsquo;&lt;/strong&gt;&lt;/p&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ ಹಳೆಯ ಸಂಚಿಕೆಯ ಕೆಲವು ನೆನಪುಗಳನ್ನು ಹಂಚಿಕೊಂಡಿರುವ ವಿಕಾಸ್ ಉತ್ತಯ್ಯ, &lsquo;ಮಾಕಳವ್ವ ಜಾತ್ರೆ&rsquo; ಸಂಚಿಕೆ ನೋಡಲು ಚಿಕ್ಕದಾಗಿ ಕಂಡರೂ ಅದರ ಚಿತ್ರೀಕರಣದ ಹಿಂದೆ ಸಾಕಷ್ಟು ಶ್ರಮವಿತ್ತು ಎಂಬುದನ್ನು ತಿಳಿಸಿದ್ದಾರೆ. ಈ ಸಂಚಿಕೆಯನ್ನು ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಚಿತ್ರೀಕರಿಸಬೇಕಾಗಿತ್ತು. ಆದರೆ ಅಷ್ಟೊಂದು ಪರಿಶ್ರಮದ ಬಳಿಕ ಪ್ರಸಾರವಾದ ಸಂಚಿಕೆಗಳಿಗೆ ಕಳೆದ ವರ್ಷ ವೀಕ್ಷಕರು ತೋರಿದ ಪ್ರೀತಿ ಅಪಾರವಾಗಿತ್ತು ಎಂದು ವಿಕಾಸ್ ಹೇಳಿದ್ದಾರೆ. ವೀಕ್ಷಕರು ಹಾಗೂ ಅಭಿಮಾನಿಗಳು ನೀಡುತ್ತಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರಿಗಾಗಿ ಏನೇ ಮಾಡಿದರೂ ಕಡಿಮೆಯೇ ಎಂಬ ಭಾವನೆಯನ್ನು ನಟ ತಮ್ಮ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ತೆರೆ ಹಿಂದಿನ ನಿಮ್ಮ ಶ್ರಮಕ್ಕೆ ಪ್ರತಿಫಲ ಇದು!&rsquo;&lt;/strong&gt;&lt;/p&gt;&lt;p&gt;ವಿಕಾಸ್ ಅವರ ಪೋಸ್ಟ್&zwnj;ಗೆ ಅಭಿಮಾನಿಗಳಿಂದಲೂ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ತೆರೆ ಮೇಲೆ ಪಾತ್ರವನ್ನು ನೋಡಿ ಮೆಚ್ಚಿಕೊಳ್ಳುವ ಪ್ರೇಕ್ಷಕರು, ಅದರ ಹಿಂದೆ ಕಲಾವಿದರು ಹಾಗೂ ಇಡೀ ತಂಡ ಪಡುವ ಶ್ರಮವನ್ನೂ ನೆನಪಿಸಿಕೊಂಡಿದ್ದಾರೆ. ಅಭಿಮಾನಿಯೊಬ್ಬರು, ಪಾತ್ರಕ್ಕೆ ಜೀವ ತುಂಬಲು ಕಲಾವಿದರು ತೆರೆ ಹಿಂದೆ ಎಷ್ಟು ಕಷ್ಟಪಡುತ್ತಾರೆ ಎಂಬುದು ಗೊತ್ತಾಗುತ್ತದೆ. ನಿಮ್ಮ ಶ್ರಮದಿಂದಲೇ ಧಾರಾವಾಹಿ ಇಷ್ಟು ಚೆನ್ನಾಗಿ ಮೂಡಿಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಅಭಿಮಾನಿ, &lsquo;ಮಾಕಳವ್ವ ಸದಾ ನಿನ್ನ ಜೊತೆ ಇರಲಿ ಶಿವಣ್ಣ&rsquo; ಎಂದು ಕಾಮೆಂಟ್ ಮಾಡುವ ಮೂಲಕ ಶಿವು ಪಾತ್ರದ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಶಿವು ಪಾತ್ರಕ್ಕೆ ಹೆಚ್ಚುತ್ತಿರುವ ಫ್ಯಾನ್&zwnj;ಬೇಸ್&lt;/strong&gt;&lt;/h2&gt;&lt;p&gt;&lsquo;ಅಣ್ಣಯ್ಯ&rsquo; ಧಾರಾವಾಹಿಯಲ್ಲಿ ಶಿವು ಪಾತ್ರ ವಿಕಾಸ್ ಉತ್ತಯ್ಯ ಅವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಅಣ್ಣ-ತಂಗಿಯರ ಬಾಂಧವ್ಯ, ಕುಟುಂಬದ ಭಾವನೆಗಳು ಹಾಗೂ ಕಥೆಯಲ್ಲಿನ ತಿರುವುಗಳ ನಡುವೆ ಶಿವು ಪಾತ್ರದ ವಿಭಿನ್ನ ಮುಖಗಳು ವೀಕ್ಷಕರಿಗೆ ಇಷ್ಟವಾಗುತ್ತಿವೆ. ಒಟ್ಟಿನಲ್ಲಿ, ಒಂದು ವರ್ಷದ ಹಿಂದಿನ &lsquo;ಮಾಕಳವ್ವ ಜಾತ್ರೆ&rsquo; ಸಂಚಿಕೆಯನ್ನು ನೆನಪಿಸಿಕೊಂಡು ವಿಕಾಸ್ ಹಂಚಿಕೊಂಡಿರುವ ಈ ಪೋಸ್ಟ್ ಇದೀಗ ಅಭಿಮಾನಿಗಳಲ್ಲೂ ಹಳೆಯ ನೆನಪುಗಳನ್ನು ಮತ್ತೆ ಕೆದಕಿದೆ. ತೆರೆ ಮೇಲಿನ ಅಭಿನಯಕ್ಕೆ ಸಿಗುವ ಚಪ್ಪಾಳೆಯ ಹಿಂದೆ ಇರುವ ತೆರೆಮರೆಯ ಶ್ರಮವನ್ನೂ ಈ ಪೋಸ್ಟ್ ಮತ್ತೊಮ್ಮೆ ನೆನಪಿಸಿದೆ.&lt;/p&gt;View this post on Instagram&lt;p&gt;A post shared by Vikash Uthaiah (@vikash_uthaiah)&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/annayya-shivu-aka-vikash-uthaiah-gets-emotional-recalling-the-makalavva-jatre-episode-gvd/articleshow-r2gw0wo"/>
        </item>
        <item>
            <title><![CDATA[Bigg Boss 13 ಮನೆ ಹೇಗಿದೆ ನೋಡ್ಬೇಕಾ? ಹಾಗಿದ್ರೆ ನಿಮಗಿದೆ ಇಲ್ಲೊಂದು ಸೂಪರ್​ ಅವಕಾಶ]]></title>
            <link>https://kannada.asianetnews.com/tv-talk/want-to-see-bigg-boss-kannada-13-house-is-like-then-here-is-a-super-opportunity-for-you-suc/articleshow-tzl49se</link>
            <guid isPermaLink="true">https://kannada.asianetnews.com/tv-talk/want-to-see-bigg-boss-kannada-13-house-is-like-then-here-is-a-super-opportunity-for-you-suc/articleshow-tzl49se</guid>
            <pubDate>Tue, 18 Aug 2026 13:56:40 +0530</pubDate>
            <description><![CDATA[ಬಿಗ್​ಬಾಸ್​ 13ನೇ ಸೀಸನ್&zwnj;ಗಾಗಿ 'ಅಗ್ನಿ ಪರೀಕ್ಷೆ' ಮೂಲಕ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದ್ದು, ಇದರಲ್ಲಿ ಮಂಡ್ಯದ ಮೆಕ್ಯಾನಿಕ್ ಜಿ.ಕೆ ಪೂರ್ಣಿಮಾ 'ಸ್ಟಾರ್&zwnj; ಕಂಟೆಸ್ಟಂಟ್&zwnj;' ಆಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ, ವೀಕ್ಷಕರಿಗೂ ಒಂದು ಸ್ಪರ್ಧೆಯ ಮೂಲಕ ಬಿಗ್​ಬಾಸ್​ ಮನೆಯ ಸೆಟ್ ನೋಡುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09zmr9znxn03w8e4bf2nt0w,imgname-bigg-boss-13-1787041571135.jpg" type="image/jpeg" height="390" width="690"/>
            <content:encoded><![CDATA[&lt;h3&gt;ಬಿಗ್​ಬಾಸ್​ 13ನೇ ಕನ್ನಡ ಸೀಸನ್​ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀಸನ್​ ಆರಂಭ ಆಗಲಿದೆ. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದ್ದು, ಅದರ ಸ್ಪರ್ಧೆ ಇದಾಗಲೇ ನಡೆದಿದೆ. ನಾಳೆ ಅದರ ಟೆಲಿಕಾಸ್ಟ್​ ಆಗಲಿದೆ. ಕೆಲವರನ್ನು ಆಯ್ಕೆ ಮಾಡಲಾಗಿದ್ದು, ಕೆಲವರನ್ನು ಪೆಂಡಿಂಗ್​ನಲ್ಲಿ ಇಡಲಾಗಿದೆ. ಮೊದಲ ಸುತ್ತಿನಲ್ಲಿ, 60ಜನ ಆಯ್ಕೆ ಆಗಿ ಬಂದಿರುವವರಲ್ಲಿ 8 ಜನರಿಗೆ ಅರ್ಹತೆ ಟೆಸ್ಟ್&zwnj; ಮಾಡಲಾಗಿತ್ತು. ದೀಕ್ಷಾ ಆರ್&zwnj; ಶೆಟ್ಟಿ, ಮಾಡ್ರನ್&zwnj; ಕವಿ ಮಂಜ, ಇಶಾ ನವೀನ್&zwnj;, ಯೋಗಿತಾ-ಯೋಗಶ್ರೀ, ಚರಣ್&zwnj; ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್&zwnj; ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್&zwnj;ಪಾಸ್&zwnj; ಆಗಿ ಮಾಡ್ರನ್&zwnj; ಕವಿ ಮಂಜ, ಚರಣ್&zwnj; ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.&lt;/h3&gt;&lt;h2&gt;&lt;strong&gt;ಬಿಗ್​ಬಾಸ್​ ಸೆಟ್​ ನೋಡಲು ಅವಕಾಶ&lt;/strong&gt;&lt;/h2&gt;&lt;p&gt;ಇದು ಅಗ್ನಿಪರೀಕ್ಷೆ ಸುತ್ತಾದರೆ, ಇನ್ನು ಬಿಗ್​ಬಾಸ್​ ಸೆಟ್​ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ವಾಹಿನಿ ಪ್ರೊಮೋ ಒಂದನ್ನು ಶೇರ್​ ಮಾಡಿಕೊಂಡಿದೆ. ಬಿಗ್​ಬಾಸ್​​ನ ಸೆಟ್​ ಹೇಗೆ ಇರುತ್ತದೆ ಎನ್ನುವುದನ್ನು ನೋಡುವುದಕ್ಕಾಗಿ ಲಕ್ಷಾಂತರ ಮಂದಿ ಬಯಸುತ್ತಾರೆ. ಆದರೆ ಕೆಲವು ಷರತ್ತುಗಳು ಇರುವ ಹಿನ್ನೆಲೆಯಲ್ಲಿ, ಎಲ್ಲರಿಗೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದಕ್ಕೂ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಅರ್ಹರಿಗೆ ಬಿಗ್​ಬಾಸ್​ ಸೆಟ್​ ನೋಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.&lt;/p&gt;&lt;p&gt;ಅದಕ್ಕೆ ಮೂರು ಹೆಜ್ಜೆಗಳು ಎಂದು ಪ್ರೊಮೋ ಶೇರ್​ ಮಾಡಲಾಗಿದೆ. ಬಿಗ್​ಬಾಸ್​ ಅಗ್ನಿಪರೀಕ್ಷೆಯ ಪ್ರತಿ ಎಪಿಸೋಡ್​ ನೋಡಿ, ಸಿಂಪಲ್​ ಪ್ರಶ್ನೆಗಳಿಗೆ ಉತ್ತರ ಕೊಡಿ, ಜಿಯೋಹಾಸ್ಟ್​ ಸ್ಟಾರ್​ ಆರ್ಮಿ ಬೋರ್ಡ್​ನಲ್ಲಿ ಮೇಲೇರಿ, ಅವಕಾಶ ಪಡೆಯಿರಿ ಎಂದು ಹೇಳಲಾಗಿದೆ. ಆದ್ದರಿಂದ ಬಿಗ್​ಬಾಸ್ ಸೆಟ್​ಗೆ ಹೋಗಲು ಬಯಸುವವರು ಈ ಸ್ಪರ್ಧೆಯಲ್ಲಿ ವಿನ್​ ಆಗಬೇಕಿದೆ.&lt;/p&gt;&lt;p&gt;&lt;strong&gt;ಮನ ಗೆದ್ದ ಮಂಡ್ಯದ ಯುವತಿ&lt;/strong&gt;&lt;/p&gt;&lt;p&gt;ಇನ್ನು ಬಿಗ್​ಬಾಸ್​ ಅಗ್ನಿ ಪರೀಕ್ಷೆ (Bigg Boss Agni Pareekshe) ಕುರಿತು ಹೇಳುವುದಾದರೆ, ಇದರಲ್ಲಿ, ಮಂಡ್ಯ ಜಿಲ್ಲೆಯ ಕೆಎಸ್&zwnj;ಆರ್&zwnj;ಟಿಸಿ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಜಿ.ಕೆ ಪೂರ್ಣಿಮಾ ಅವರಿಗೆ 30 ಸೆಕೆಂಡ್&zwnj; ದೊಡ್ಡ ಗಾತ್ರದ ಟೈಯರ್&zwnj; ಗಾಲಿ ಹೊಲ್ಡ್&zwnj; ಮಾಡುವಂತೆ ಟಾಸ್ಕ್&zwnj; ಕೊಟ್ಟಿದ್ದರು. ಇವರು 45 ಸೆಕೆಂಡ್&zwnj; ಟೈಯರ್&zwnj; ಎತ್ತಿ ಹಿಡಿದು, ತೀರ್ಪುಗಾರರಿಂದ ಸೈ ಎನ್ನಿಸಿಕೊಂಡರು. ಜೊತೆತೆ, ಇವರಿಗೆ ಕುಡುಕರ ರೀತಿಯಲ್ಲಿ ಟೈಟ್&zwnj; ಆಗಿ ಸಂಗೀತಾ ಶೃಂಗೇರಿ ಮತ್ತು ವಿನಯ್&zwnj; ಗೌಡ ಅವರಿಗೆ ಕ್ಲಾಸ್&zwnj; ತೆಗೆದುಕೊಳ್ಳುವಂತೆ ಟೆಸ್ಟ್&zwnj; ನೀಡಲಾಯಿತು. ಅದರಲ್ಲೂ ಅವರು ಎಲ್ಲರನ್ನೂ ರಂಜಿಸಿದರು. ನಾಲ್ವರ ಕಡೆಯಿಂದ ಗ್ರೀನ್&zwnj; ಸಿಗ್ನಲ್&zwnj; ಪಡೆದು ಮೊದಲ &lsquo;ಸ್ಟಾರ್&zwnj; ಕಂಟೆಸ್ಟಂಟ್&zwnj;&rsquo;(ನಾಲ್ವರು ಗ್ರೀನ್&zwnj; ಸಿಗ್ನಲ್ ಕೊಟ್ಟರೆ ಆ ಸ್ಪರ್ಧಿಗೆ ಸ್ಟಾರ್&zwnj; ಕಂಟೆಸ್ಟಂಟ್ ಬಿರುದು ಸಿಗುತ್ತೆ) ಎಂಬ ಬಿರುದು ಪಡೆದರು.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/tv-talk/want-to-see-bigg-boss-kannada-13-house-is-like-then-here-is-a-super-opportunity-for-you-suc/articleshow-tzl49se"/>
        </item>
        <item>
            <title><![CDATA[ಗ್ಲಾಮರ್‌ನಿಂದ ಆಧ್ಯಾತ್ಮಿಕತೆಯತ್ತ: ಕಾಮಾಕ್ಯ ದೇವಿ ದರ್ಶನ ಪಡೆದ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ!]]></title>
            <link>https://kannada.asianetnews.com/tv-talk/niveditha-gowda-visits-kamakhya-temple-calls-the-spiritual-journey-peaceful-gvd/articleshow-uythbtv</link>
            <guid isPermaLink="true">https://kannada.asianetnews.com/tv-talk/niveditha-gowda-visits-kamakhya-temple-calls-the-spiritual-journey-peaceful-gvd/articleshow-uythbtv</guid>
            <pubDate>Wed, 19 Aug 2026 19:47:06 +0530</pubDate>
            <description><![CDATA[&lt;p&gt;ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿವೇದಿತಾ ಗೌಡ ಇದೀಗ ಆಧ್ಯಾತ್ಮಿಕ ಪ್ರವಾಸವೊಂದರ ಮೂಲಕ ಗಮನ ಸೆಳೆದಿದ್ದಾರೆ. ಈ ಆಧ್ಯಾತ್ಮಿಕ ಪಯಣದ ಅನುಭವವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0d63bk524t3pxc6svddtmsq,imgname-jbjv-1787149004389.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿವೇದಿತಾ ಗೌಡ ಇದೀಗ ಆಧ್ಯಾತ್ಮಿಕ ಪ್ರವಾಸವೊಂದರ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡದ ಬಿಗ್&zwnj;ಬಾಸ್ ಮಾಜಿ ಸ್ಪರ್ಧಿ ಹಾಗೂ &lsquo;ಗಿಚ್ಚಿ ಗಿಲಿಗಿಲಿ&rsquo; ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿರುವ ನಿವೇದಿತಾ, ಅಸ್ಸಾಂನ ಪ್ರಸಿದ್ಧ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಗುವಾಹಟಿಯ ಕಾಮಾಕ್ಯ ಕ್ಷೇತ್ರದವರೆಗೆ ಕೈಗೊಂಡ ತಮ್ಮ ಪ್ರವಾಸದ ಸುಂದರ ಕ್ಷಣಗಳನ್ನು ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ದೇವಸ್ಥಾನದ ದರ್ಶನದ ಜೊತೆಗೆ ತಮ್ಮ ಈ ಆಧ್ಯಾತ್ಮಿಕ ಪಯಣದ ಅನುಭವವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಕಾಮಾಕ್ಯ ದೇವಿ ದರ್ಶನದ ಆಸೆ ಕೊನೆಗೂ ಈಡೇರಿತು!&lt;/strong&gt;&lt;/p&gt;&lt;p&gt;ಕಾಮಾಕ್ಯ ದೇವಿಯ ದರ್ಶನ ಪಡೆಯಬೇಕು ಎಂಬುದು ಬಹಳ ದಿನಗಳ ತಮ್ಮ ಆಸೆಯಾಗಿತ್ತು ಎಂದು ನಿವೇದಿತಾ ಹೇಳಿದ್ದಾರೆ. ಇದೀಗ ಆ ಆಸೆ ಈಡೇರಿದ್ದು, ಈ ಪ್ರಯಾಣ ತಮ್ಮ ಪಾಲಿಗೆ ವಿಶೇಷ ಅನುಭವವಾಗಿದೆ ಎಂದು ತಿಳಿಸಿದ್ದಾರೆ. &lsquo;ಶ್ರದ್ಧೆ, ಸಂಸ್ಕೃತಿ, ಮನಮೋಹಕ ಅನುಭವಗಳು ಹಾಗೂ ಮರೆಯಲಾಗದ ನೆನಪುಗಳಿಂದ ಕೂಡಿದ ಸುಂದರ ಪಯಣ. ಮನಸ್ಸಿಗೆ ನೆಮ್ಮದಿ ನೀಡಿದ ಪ್ರಯಾಣ&rsquo; ಎಂಬ ಅರ್ಥದಲ್ಲಿ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ನಿವೇದಿತಾ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರವಾಸದ ವಿವಿಧ ಕ್ಷಣಗಳು ಹಾಗೂ ಕಾಮಾಕ್ಯ ಕ್ಷೇತ್ರದ ವಾತಾವರಣವನ್ನು ಕಾಣಬಹುದಾಗಿದೆ.&lt;/p&gt;&lt;p&gt;&lt;strong&gt;51 ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ಕ್ಷೇತ್ರ&lt;/strong&gt;&lt;/p&gt;&lt;p&gt;ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನ ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ನಿಲಾಚಲ ಬೆಟ್ಟದ ಮೇಲಿರುವ ಈ ಪ್ರಸಿದ್ಧ ದೇವಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಕಾಮಾಕ್ಯ ದೇವಿಯನ್ನು ಶಕ್ತಿಯ ಸ್ವರೂಪವಾಗಿ ಆರಾಧಿಸಲಾಗುತ್ತದೆ. ಇಲ್ಲಿ ಸಾಮಾನ್ಯ ದೇವಾಲಯಗಳಂತೆ ದೇವಿಯ ಮೂರ್ತಿಯನ್ನು ಪೂಜಿಸುವ ಬದಲು, ಪವಿತ್ರ ಯೋನಿ ಆಕಾರದ ಶಿಲೆಯನ್ನು ದೇವಿಯ ಸ್ವರೂಪವಾಗಿ ಪೂಜಿಸುವ ವಿಶಿಷ್ಟ ಪರಂಪರೆ ಇದೆ.&lt;/p&gt;&lt;p&gt;&lt;strong&gt;ಅಂಬುಬಾಚಿ ಮೇಳದ ವೇಳೆ ವಿಶೇಷ ಆಚರಣೆ&lt;/strong&gt;&lt;/p&gt;&lt;p&gt;ಕಾಮಾಕ್ಯ ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖ ಆಚರಣೆಗಳಲ್ಲಿ ಅಂಬುಬಾಚಿ ಮೇಳವೂ ಒಂದು. ದೇವಿಯ ಋತುಸ್ರಾವದ ಅವಧಿಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಜೂನ್&zwnj;ನಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವಾಲಯವನ್ನು ಕೆಲವು ದಿನಗಳ ಕಾಲ ಮುಚ್ಚಲಾಗುತ್ತದೆ. ಈ ವಿಶಿಷ್ಟ ಧಾರ್ಮಿಕ ಆಚರಣೆ ಹಾಗೂ ದೇವಾಲಯದ ಪುರಾತನ ಪರಂಪರೆಯಿಂದಾಗಿ ಕಾಮಾಕ್ಯ ಕ್ಷೇತ್ರ ದೇಶದ ಪ್ರಮುಖ ಆಧ್ಯಾತ್ಮಿಕ ಪ್ರವಾಸಿ ತಾಣಗಳಲ್ಲೊಂದಾಗಿದೆ.&lt;/p&gt;&lt;h2&gt;&lt;strong&gt;ಸೆಲೆಬ್ರಿಟಿಗಳಿಗೂ ನೆಚ್ಚಿನ ಆಧ್ಯಾತ್ಮಿಕ ತಾಣ&lt;/strong&gt;&lt;/h2&gt;&lt;p&gt;ಕಾಮಾಕ್ಯ ದೇವಿಯ ದರ್ಶನಕ್ಕೆ ಇತ್ತೀಚಿನ ವರ್ಷಗಳಲ್ಲಿ ಹಲವು ಸೆಲೆಬ್ರಿಟಿಗಳು ಭೇಟಿ ನೀಡಿದ್ದಾರೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ತಮಿಳು ನಟ ಸೂರ್ಯ ದಂಪತಿ ಕೂಡ ಈ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೀಗ ನಿವೇದಿತಾ ಗೌಡ ಕೂಡ ಕಾಮಾಕ್ಯ ದೇವಿಯ ದರ್ಶನ ಪಡೆದುಕೊಂಡಿದ್ದು, ತಮ್ಮ ಪ್ರವಾಸದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಗ್ಲಾಮರ್ ಹಾಗೂ ಮನರಂಜನೆಯ ಸುದ್ದಿಗಳ ನಡುವೆ ನಿವೇದಿತಾ ಅವರ ಈ ಆಧ್ಯಾತ್ಮಿಕ ಪಯಣವೂ ಇದೀಗ ಗಮನ ಸೆಳೆಯುತ್ತಿದೆ.&lt;/p&gt;View this post on Instagram&lt;p&gt;A post shared by Niveditha Gowda  (@niveditha__gowda)&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/niveditha-gowda-visits-kamakhya-temple-calls-the-spiritual-journey-peaceful-gvd/articleshow-uythbtv"/>
        </item>
        <item>
            <title><![CDATA[ಬಿಗ್ ಬಾಸ್ 'ಅಗ್ನಿ ಪರೀಕ್ಷೆ'ಯಲ್ಲಿ ಸೆಲೆಕ್ಟ್ ಆಗೋರು ಎಷ್ಟು? ವೇಟಿಂಗ್‌ ಲಿಸ್ಟ್‌ನಲ್ಲಿ ಎಷ್ಟು, ಮನೆ ಒಳಗೆ ಹೋಗೋರು ಎಷ್ಟು ಮಂದಿ?]]></title>
            <link>https://kannada.asianetnews.com/tv-talk/how-many-people-will-be-selected-in-bigg-boss-13-agniparikshe-and-how-many-are-on-the-waiting-list/articleshow-y2vg71z</link>
            <guid isPermaLink="true">https://kannada.asianetnews.com/tv-talk/how-many-people-will-be-selected-in-bigg-boss-13-agniparikshe-and-how-many-are-on-the-waiting-list/articleshow-y2vg71z</guid>
            <pubDate>Wed, 19 Aug 2026 16:21:01 +0530</pubDate>
            <description><![CDATA[&lt;p&gt;ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆ, ಹೊಸ ಮನೆ, ಹೊಸ ಸ್ಪರ್ಧಿಗಳು ಮತ್ತು ಈ ಸಲ ಅಗ್ನಿಪರೀಕ್ಷೆ ಗೆದ್ದು ಬಂದಿರೋ 'ಖತರ್ನಾಕ್' ಸ್ಪರ್ಧಿಗಳು.. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಮನೆ ರಣರಂಗವಾಗೋದಂತೂ ಗ್ಯಾರಂಟಿ! ಯಾರು ಆ ನಾಲ್ಕು ಜನ? ನಿಮ್ಮ ಫೇವರೆಟ್ ಯಾರು? ವಿವರಗಳಿಗೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1c0m9emf668h8ae1xp30tm,imgname-bigg-boss-kannada-season-13-1785678811438.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Bigg Boss Kannada season 13: Bigg Boss Season 13 'Agniparikshe': Who will be the lucky ones out of those 13 people?ಬಿಗ್ ಬಾಸ್ ಸೀಸನ್-13 'ಅಗ್ನಿಪರೀಕ್ಷೆ': ಆ 13 ಮಂದಿಯಲ್ಲಿ ಅದೃಷ್ಟ ಯಾರಿಗೆ? ಫೋನ್ ಪುಡಿ, ಐಸ್ ಸ್ನಾನ.. ಇದು ಸುಮ್ಮನೆ ಅಲ್ಲ ಗುರು!&lt;/strong&gt;&lt;/p&gt;&lt;p&gt;ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ 'ಬಿಗ್ ಬಾಸ್' ಅಂದ್ರೆ ಅಲ್ಲಿ ಬರೀ ಡ್ರಾಮಾ ಇರಲ್ಲ, ಅದೊಂದು ಎಮೋಷನ್! ಸದ್ಯ ಕಿರುತೆರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಹೋಗಲು 'ಅಗ್ನಿಪರೀಕ್ಷೆ' ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೌದು, 'ಬಿಗ್ ಬಾಸ್ ಸೀಸನ್-13' ಶುರುವಾಗುವ ಮೊದಲೇ ಕಲರ್ಸ್ ಕನ್ನಡದಲ್ಲಿ ನಡೀತಿರೋ ಈ ಅಗ್ನಿಪರೀಕ್ಷೆ ಈಗ ಇಡೀ ರಾಜ್ಯದ ಕುತೂಹಲ ಕೆರಳಿಸಿದೆ. 60 ಜನರಿಂದ ಶುರುವಾದ ಈ ಬೇಟೆ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ.&lt;/p&gt;&lt;p&gt;ಫೋನ್ ಪುಡಿಪುಡಿ, ಮೈ ಜುಂ ಎನ್ನುವ ಐಸ್ ಬಾತ್!&lt;/p&gt;&lt;p&gt;ಈ ಸಲ ಬಿಗ್ ಬಾಸ್ ಮನೆ ಸೇರೋದು ಅಷ್ಟು ಸುಲಭವಿಲ್ಲ ಅನ್ನೋದು ಈ ಟಾಸ್ಕ್&zwnj;ಗಳನ್ನು ನೋಡಿದ್ರೆ ಗೊತ್ತಾಗುತ್ತೆ. ಬಿಗ್ ಬಾಸ್ ಮನೆಗೆ ಹೋಗಬೇಕು ಅನ್ನೋ ಹಠಕ್ಕೆ ಬಿದ್ದಿರೋ ಸ್ಪರ್ಧಿಗಳು ಮಾಡುತ್ತಿರೋ ಸಾಹಸ ಅಷ್ಟಿಷ್ಟಲ್ಲ. ಒಬ್ಬರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿರೋ ಸ್ಮಾರ್ಟ್&zwnj;ಫೋನ್ ಅನ್ನೇ ಸುತ್ತಿಗೆಯಲ್ಲಿ ಹೊಡೆದು ಪುಡಿ ಮಾಡಿದ್ದಾರೆ! ಇನ್ನೊಬ್ಬರು ಎದೆ ಮೇಲಿನ ಕೂದಲನ್ನು ನೋವಿನ ನಡುವೆಯೂ ವ್ಯಾಕ್ಸ್ ಮಾಡಿಸಿಕೊಂಡಿದ್ದಾರೆ. ಇನ್ನು ಮೈ ಜುಂ ಎನ್ನುವ ಚಳಿಯಲ್ಲಿ, ಐಸ್ ತುಂಬಿರೋ ಡ್ರಮ್ ಒಳಗೆ ಗಂಟೆಗಟ್ಟಲೆ ಕುಳಿತುಕೊಳ್ಳೋದು ಅಂದ್ರೆ ಸಾಮಾನ್ಯ ಮಾತಲ್ಲ. ಈ ಎಲ್ಲ 'ಕ್ರೇಜಿ' ಟಾಸ್ಕ್&zwnj;ಗಳ ಉದ್ದೇಶ ಒಂದೇ&mdash;ಆ ಲಕ್ಕಿ ಮನೆಗೆ ಎಂಟ್ರಿ ಕೊಡೋದು!&lt;/p&gt;&lt;h2&gt;ಲೆಕ್ಕಾಚಾರ ಶುರು: 13 ರಲ್ಲಿ ಉಳಿಯೋದು ನಾಲ್ಕು ಮಂದಿ ಮಾತ್ರ!&lt;/h2&gt;&lt;p&gt;ಅಗ್ನಿಪರೀಕ್ಷೆಯ ವೇದಿಕೆಯಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ ಒಂದು ಶಾಕಿಂಗ್ ಅಪ್&zwnj;ಡೇಟ್ ನೀಡಿದ್ದಾರೆ. ಅಗ್ನಿಪರೀಕ್ಷೆಗೆ ಬಂದಿದ್ದ ಒಟ್ಟು 60 ಸ್ಪರ್ಧಿಗಳ ಪೈಕಿ, ಸದ್ಯ 13 ಜನ 'ವೇಟಿಂಗ್ ಲಿಸ್ಟ್'ನಲ್ಲಿದ್ದಾರೆ. ಆದರೆ, ಈ 13 ಮಂದಿಗೂ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಗೋದಿಲ್ಲ. ಈ ಪೈಕಿ ಕೇವಲ ನಾಲ್ಕು ಜನ ಮಾತ್ರ ಅಂತಿಮವಾಗಿ ಬಿಗ್ ಬಾಸ್ ಮನೆಗೆ ಅಧಿಕೃತವಾಗಿ ಕಾಲಿಡಲಿದ್ದಾರೆ.&lt;/p&gt;&lt;p&gt;ಈಗಾಗಲೇ 72 ವರ್ಷದ ಹಿರಿಯ ಜೀವ ರತ್ನಮ್ಮ ಹಾಗೂ 20 ವರ್ಷದ ಕುಮಾರಿ ಅವರು ತಮ್ಮ ಛಲದಿಂದ ಬಿಗ್ ಬಾಸ್ ಮನೆಗೆ ಸೆಲೆಕ್ಟ್ ಆಗಿದ್ದಾರೆ. ಅಲ್ಲಿಗೆ ಅಗ್ನಿಪರೀಕ್ಷೆಯ ಮೂಲಕ ಒಟ್ಟು ಆರು ಜನ ಸಾಮಾನ್ಯ ಜನರಿಗೆ ಬಿಗ್ ಬಾಸ್ ಮನೆಗೆ ಹೋಗೋ ಚಾನ್ಸ್ ಸಿಕ್ಕಂತಾಗಲಿದೆ. ಇನ್ನುಳಿದ ಆ 4 ಸೀಟ್&zwnj;ಗಳಿಗಾಗಿ 13 ಜನರ ನಡುವೆ ಬಿಗ್ ಫೈಟ್ ನಡೀತಿದೆ.&lt;/p&gt;&lt;h3&gt;ಯಾವಾಗ ಶುರು ಬಿಗ್ ಬಾಸ್ ಅಸಲಿ ಆಟ?&lt;/h3&gt;&lt;p&gt;ಪ್ರತಿ ದಿನ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಅಗ್ನಿಪರೀಕ್ಷೆ ಸಂಚಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಪ್ರೋಮೋಗಳಂತೂ ಬೆಂಕಿ ಹಚ್ಚುತ್ತಿವೆ. ಈ ಅಗ್ನಿಪರೀಕ್ಷೆ ಮುಗಿದ ಬೆನ್ನಲ್ಲೇ, ಅಂದರೆ ಮುಂದಿನ ತಿಂಗಳು ಬಿಗ್ ಬಾಸ್ ಸೀಸನ್-13 ಅದ್ಧೂರಿಯಾಗಿ ಲಾಂಚ್ ಆಗಲಿದೆ. ದಿನಾಂಕ ಇನ್ನೂ ಅಧಿಕೃತವಾಗಿ ಅನೌನ್ಸ್ ಆಗದಿದ್ದರೂ, ಅಕ್ಟೋಬರ್ ಮೊದಲ ವಾರದಲ್ಲೇ ಶೋ ಶುರುವಾಗಬಹುದು ಎನ್ನಲಾಗುತ್ತಿದೆ.&lt;/p&gt;&lt;p&gt;ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆ, ಹೊಸ ಮನೆ, ಹೊಸ ಸ್ಪರ್ಧಿಗಳು ಮತ್ತು ಈ ಸಲ ಅಗ್ನಿಪರೀಕ್ಷೆ ಗೆದ್ದು ಬಂದಿರೋ 'ಖತರ್ನಾಕ್' ಸ್ಪರ್ಧಿಗಳು.. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಮನೆ ರಣರಂಗವಾಗೋದಂತೂ ಗ್ಯಾರಂಟಿ! ಯಾರು ಆ ನಾಲ್ಕು ಜನ? ನಿಮ್ಮ ಫೇವರೆಟ್ ಯಾರು? ಕಾದು ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/how-many-people-will-be-selected-in-bigg-boss-13-agniparikshe-and-how-many-are-on-the-waiting-list/articleshow-y2vg71z"/>
        </item>
    </channel>
</rss>
