<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 17 May 2026 20:29:32 +0530</lastBuildDate>
        <atom:link href="https://kannada.asianetnews.com/rss/tumakuru" rel="self" type="application/rss+xml"/>
        <item>
            <title><![CDATA[ತುಮಕೂರು: ಮುಲ್ಲಾನ ಹಿಂಸೆ ತಾಳಲಾರದೆ ಬರೋಬ್ಬರಿ 24 ಮಕ್ಕಳು ಎಸ್ಕೇಪ್! ಬೆಂಗಳೂರಲ್ಲಿ ಬಯಲಾಯ್ತು ಬೆಚ್ಚಿಬೀಳಿಸೋ ಸತ್ಯ!]]></title>
            <link>https://kannada.asianetnews.com/state/tumakuru-madrasa-horror-fir-registered-against-maulvi-for-physical-and-mental-abuse-of-children/articleshow-1l213b2</link>
            <guid isPermaLink="true">https://kannada.asianetnews.com/state/tumakuru-madrasa-horror-fir-registered-against-maulvi-for-physical-and-mental-abuse-of-children/articleshow-1l213b2</guid>
            <pubDate>Tue, 12 May 2026 12:44:50 +0530</pubDate>
            <description><![CDATA[ತುಮಕೂರಿನ ಮದರಸಾದಲ್ಲಿ ಮೌಲ್ವಿಯೊಬ್ಬನ ನಿರಂತರ ಕಿರುಕುಳ ಮತ್ತು ದೈಹಿಕ ಹಿಂಸೆಯಿಂದ ಬೇಸತ್ತು 24 ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಈ ಮಕ್ಕಳ ಹೇಳಿಕೆ ಆಧರಿಸಿ, ಮೌಲ್ವಿ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krdg9pph35ts27wxzg2q21jw,imgname-----------------------2026-05-12t123839.904-1778569763537.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮೇ.12):&lt;/strong&gt;ತುಮಕೂರು ಮದರಸಾದಲ್ಲಿ ಮೌಲ್ವಿಯಿಂದ ನಿರಂತರ ಕಿರುಕುಳಕ್ಕೆ ಹೆದರಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ 24 ಮಕ್ಕಳು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಘಟನೆಯ ಮಾಹಿತಿ ಪಡೆದ ರೈಲ್ವೆ ಪೊಲೀಸರೇ ಶಾಕ್ ಆಗಿದ್ದಾರೆ.&lt;/p&gt;&lt;h2&gt;ಮದರಸ ಒಳಗೆ ನಡೆದಿದ್ದೇನು?&lt;/h2&gt;&lt;p&gt;ತುಮಕೂರಿನ ಮದರಸಾದಲ್ಲಿ ನಡೆದ ಈ ಘಟನೆಯಿಂದ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಬಿಹಾರ ಮೂಲದ 24 ಮಕ್ಕಳು ತುಮಕೂರಿನ ಅಮ್ಲಾಪುರದಲ್ಲಿರುವ ಜಾಮಿಯಾ ಅರೇಬಿಯಾ ಹಸೀನಿಯಾ ಟ್ರಸ್ಟ್ ಮದರಸಾದಲ್ಲಿ ಓದಲು ಇದ್ದರು. ಆದರೆ ಅಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ ಮೌಲ್ವಿಯ ಕಿರುಕುಳ ತಾಳಲಾರದೆ ಒಂದಲ್ಲ ಎರಡಲ್ಲ ಬರೊಬ್ಬರಿ ಇಪ್ಪತ್ನಾಲ್ಕು ಮಕ್ಕಳು ರಾತ್ರಿ ವೇಳೆ ಮದರಸಾದಿಂದ ತಪ್ಪಿಸಿಕೊಂಡಿದ್ದಾರೆ.&lt;/p&gt;&lt;h3&gt;ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪತ್ತೆ&lt;/h3&gt;&lt;p&gt;ಮದರಸಾದಿಂದ ತಪ್ಪಿಸಿಕೊಂಡ ಆ ಮಕ್ಕಳು ಬಳಿಕ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಕ್ಕಳನ್ನು ಗಮನಿಸಿದ ರೈಲ್ವೇ ರಕ್ಷಣಾ ದಳ ವಿಚಾರಿಸಿದಾಗ ಬೆಚ್ಚಿಬೀಳಿಸುವ ಸಂಗತಿಗಳು ಹೊರಬಂದಿವೆ.&lt;/p&gt;&lt;p&gt;ಮದರಸಾದ ಮೌಲ್ವಿ ಮೌಲಾಲಿ ಎಂಥ ಕ್ರೂರನೆಂದರೆ ಓದಲು ಬಂದ ಮಕ್ಕಳಿಂದ ಕಲ್ಲು ಹೊರೆಸಿಸುತ್ತಿದ್ದನೆಂದು ಮಕ್ಕಳು ಆರೋಪಿಸಿದ್ದಾರೆ. ದಿನಾ ಕಲ್ಲು ಮಣ್ಣು ಹೊರಿಸುತ್ತಿದ್ದರು. ಕೆಲಸ ಮಾಡಲು ಆಗೋದಿಲ್ಲ ಎಂದರೆ ಹಿಗ್ಗಾಮುಗ್ಗಾ ಥಳಿಸಿ ಹಿಂಸೆ ನೀಡುತ್ತಿದ್ದನಂತೆ ಮೌಲ್ವಿ. ಇದಕ್ಕಿಂತಲೂ ಶಾಕಿಂಗ್ ಅಂದ್ರೆ, ಕೆಲವೊಮ್ಮೆ ಮಕ್ಕಳಿಗೆ ಸರಿಯಾಗಿ ಊಟ ಕೂಡ ಕೊಡುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ದೈಹಿಕ ಹಿಂಸೆ, ಕಿರುಕುಳ, ಬಲವಂತದ ಕೆಲಸಗಳಿಂದ ಬೇಸತ್ತ ಮಕ್ಕಳು ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಈ ವಿಚಾರ ಮಕ್ಕಳ ಕಲ್ಯಾಣ ಸಮಿತಿ (CWC) ಗಮನಕ್ಕೆ ಬಂದ ಬಳಿಕ ಪ್ರಕರಣ ತುಮಕೂರಿಗೆ ವರ್ಗಾವಣೆಯಾಗಿದೆ. ಇದೀಗ ಮೌಲ್ವಿ ಮೌಲಾಲಿ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;ಇನ್ನೂ ಮದರಸಾದ ಒಳಗೆ ಏನೇನು ನಡೆದಿತ್ತು? ಮಕ್ಕಳ ಹೇಳಿಕೆಯಲ್ಲಿ ಇನ್ನೇನು ಹೊರಬೀಳಬಹುದು? ತನಿಖೆ ಬಳಿಕ ಬಯಲಿಗೆ ಬರಲಿದೆ.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/tumakuru-madrasa-horror-fir-registered-against-maulvi-for-physical-and-mental-abuse-of-children/articleshow-1l213b2"/>
        </item>
        <item>
            <title><![CDATA[ಬೆಂಗಳೂರು ಮುಂಬೈ ನಡುವೆ ಹೊಸ ದ್ವಿಸಾಪ್ತಾಹಿಕ ಎಕ್ಸಪ್ರೆಸ್‌ ರೈಲು ಆರಂಭ, ಸಚಿವ ಜೋಶಿ ಚಾಲನೆ, ವೇಳಾಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8</link>
            <guid isPermaLink="true">https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8</guid>
            <pubDate>Sun, 17 May 2026 20:29:20 +0530</pubDate>
            <description><![CDATA[ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುವ ಹೊಸ ದ್ವಿಸಪ್ತಾಹಿಕ ವಿಶೇಷ ರೈಲಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದ್ದಾರೆ. ಈ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸಲು ಹೆಚ್ಚು ಅನುಕೂಲಕರವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krv6zk5wx9t8zxpzhr580ac2,imgname-pralhad-joshi-flags-off-train-1779029757116.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಲ್&zwnj;, ಮುಂಬೈ ನಡುವೆ ಹುಬ್ಬಳ್ಳಿ ಮುಖಾಂತರ ಸಂಚರಿಸುವ ನೂತನ ವಿಶೇಷ ರೈಲಿಗೆ (06557) ಮೇ 17ರಂದು ಸಂಜೆ ನಗರದ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಸಿರು ನಿಶಾನೆ ತೋರಿದರು.&lt;/p&gt;&lt;h2&gt;ಯಾವ ಊರೆಲ್ಲ ಹಾದು ಹೋಗಲಿದೆ?&lt;/h2&gt;&lt;p&gt;ಬೆಂಗಳೂರಿನಿಂದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ಮುಂಬೈಗೆ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಸಂಚರಿಸುವಂತೆ ಜೋಶಿ ಮನವಿ ಮೇರೆಗೆ ಈ ರೈಲಿಗೆ ಅನುಮೋದನೆ ನೀಡಲಾಗಿತ್ತು. ಈ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ರೈಲು ಮಾರ್ಗದ (16553/16554) ಮೇ 23ರಿಂದ ಬೆಂಗಳೂರು ಮತ್ತು ಮೇ 24ರಿಂದ ಮುಂಬೈನಿಂದ ಪ್ರಾರಂಭವಾಗಲಿದೆ.&lt;/p&gt;&lt;h2&gt;ಯಾವಾಗ ಎಲ್ಲಿಂದ ಹೊರಡಲಿದೆ?&lt;/h2&gt;&lt;p&gt;ಪ್ರತಿ ಶನಿವಾರ ಮತ್ತು ಮಂಗಳವಾರ ಬೆಂಗಳೂರಿನಿಂದ ಪ್ರತಿ ಭಾನುವಾರ ಮತ್ತು ಬುಧವಾರ ಮುಂಬೈನಿಂದ ರೈಲು ಸಂಚರಿಸಲಿದೆ. ಈ ಹೊಸ ರೈಲು ಸೇವೆಯು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕಾಗಿ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸುವವರಿಗೆ ವರದಾನವಾಗಲಿದೆ.&lt;/p&gt;&lt;p&gt;ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಚಿವ ಪ್ರಹ್ಲಾದ ಜೋಶಿ ಅವರು, ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ತುಂಬುತ್ತಿದ್ದು, ನೂತನ ರೈಲು ಸೇವೆಗಳ ಮೂಲಕ ಸಾಮಾನ್ಯ ಜನರ ಪ್ರಯಾಣ ಸುಗಮ, ಸುರಕ್ಷಿತ ಹಾಗೂ ವೇಗದಾಯಕವಾಗುತ್ತಿದೆ. ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು ರಾಜ್ಯದ ಪ್ರತಿಯೊಂದು ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ,ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ,ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಹುಬ್ಬಳ್ಳಿ ಮುಖಾಂತರ ಸಂಪರ್ಕದ ಹೊಸ ಕ್ರಾಂತಿ!&amp;nbsp;ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿಯ ಮೂಲಕ ಹೊಸ ದ್ವಿಸಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ಪ್ರಾರಂಭ.ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಮುಂಬೈ ನಡುವೆ&hellip; pic.twitter.com/NddQEBPea4&lt;/p&gt;&lt;p&gt;&mdash; Pralhad Joshi (@JoshiPralhad) May 17, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/new-bengaluru-mumbai-superfast-train-via-hubballi-flagged-off-by-union-minister-pralhad-joshi-gdp/articleshow-4w8k9e8"/>
        </item>
        <item>
            <title><![CDATA[ತುಮಕೂರು: PWD ಇಂಜಿನಿಯರ್ ದುರಂತ ಅಂತ್ಯ, ತಾಯಿ ಇಲ್ಲದ ನೋವಲ್ಲಿ ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಪ್ರಾಣಬಿಟ್ಟ!!]]></title>
            <link>https://kannada.asianetnews.com/karnataka-districts/tumakuru-pwd-engineer-33-year-old-aee-manju-prasad-dies-after-devarayanadurga-hill-gdp/articleshow-68bek7w</link>
            <guid isPermaLink="true">https://kannada.asianetnews.com/karnataka-districts/tumakuru-pwd-engineer-33-year-old-aee-manju-prasad-dies-after-devarayanadurga-hill-gdp/articleshow-68bek7w</guid>
            <pubDate>Tue, 12 May 2026 00:22:30 +0530</pubDate>
            <description><![CDATA[ತುಮಕೂರಿನಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಯುವ ಇಂಜಿನಿಯರ್ ಮಂಜು ಪ್ರಸಾದ್, ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯ ಸಾವಿನ ನಂತರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಅವರು, ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krc5vdabnbczmc6t075zkxmm,imgname-tumakuru-pwd-engineer-1778525254986.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು: ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ಇಂಜಿನಿಯರ್&zwnj; ಒಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುಮಕೂರಿನಲ್ಲಿ ಸಂಭವಿಸಿದೆ. ದೇವರಾಯನದುರ್ಗ ಬೆಟ್ಟದಿಂದ ಜಿಗಿದು 33 ವರ್ಷದ ಮಂಜು ಪ್ರಸಾದ್ ಎಂಬವರು ಸಾವಿಗೆ ಶರಣಾಗಿದ್ದಾರೆ.&lt;/p&gt;&lt;h2&gt;ಪಾವಗಡದ ಪಿಡಬ್ಲ್ಯೂಡಿ ಇಲಾಖೆಯಲ್ಲಿ AEE&lt;/h2&gt;&lt;p&gt;ಮಂಜು ಪ್ರಸಾದ್ ಅವರು ಪಾವಗಡದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ (AEE) ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ತುಮಕೂರು ನಗರದ ಸತ್ಯಮಂಗಲ ಪ್ರದೇಶದ ನಿವಾಸಿಯಾಗಿದ್ದ ಅವರು ಕಳೆದ ಕೆಲವು ತಿಂಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.&lt;/p&gt;&lt;p&gt;ಸುಮಾರು ಒಂದೂವರೆ ವರ್ಷದ ಹಿಂದೆ ಅವರ ತಾಯಿ ಅನಾರೋಗ್ಯದಿಂದ ನಿಧನರಾದರು. ಆ ಬಳಿಕ ಮಂಜು ಪ್ರಸಾದ್ ಅವರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರಂತೆ. ಈ ಹಿನ್ನೆಲೆ ಅವರ ನಡೆನುಡಿಗಳಲ್ಲೂ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಘಟನೆಯ ದಿನ ಬೆಳಿಗ್ಗೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟ ಮಂಜು ಪ್ರಸಾದ್, ನಂತರ ಕೊರಟಗೆರೆಯಲ್ಲಿ ತಮ್ಮ ಸಂಬಂಧಿಕರೊಬ್ಬರಿಗೆ ತಮ್ಮ ಮೊಬೈಲ್ ಫೋನ್ ಹಾಗೂ ಮನೆಯ ಕೀಲಿಯನ್ನು ಒಪ್ಪಿಸಿದ್ದರು. ಮಿಟಿಂಗ್&zwnj;ಗೆ ಹೋಗುತ್ತಿದ್ದೇನೆ ಎಂದು ಹೇಳಿ ಅಲ್ಲಿಂದ ತೆರಳಿದ ಅವರು ಬಳಿಕ ದೇವರಾಯನದುರ್ಗ ಬೆಟ್ಟಕ್ಕೆ ತೆರಳಿ ಸಾವಿಗೆ ಶರಣಾಗಿದ್ದಾರೆ.&lt;/p&gt;&lt;h2&gt;ಅನುಮಾನಗೊಂಡ ಕುಟುಂಬಸ್ಥರಿಂದ ಹುಡುಕಾಟ&lt;/h2&gt;&lt;p&gt;ಸಂಜೆವರೆಗೆ ಮನೆಗೆ ಮರಳದ ಹಿನ್ನೆಲೆ ಅನುಮಾನಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದು, ದೇವರಾಯನದುರ್ಗ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಕ್ಯಾತಸಂದ್ರ ಪೊಲೀಸ್ ಠಾಣೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು , ಸಾವಿಗೆ ನಿಖರ ಕಾರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/tumakuru-pwd-engineer-33-year-old-aee-manju-prasad-dies-after-devarayanadurga-hill-gdp/articleshow-68bek7w"/>
        </item>
        <item>
            <title><![CDATA[ತಮಿಳನಾಡಲ್ಲಿ ಬಾರ್‌ ಬಂದ್‌ ಮಾಡುವ ವಿಜಯ್‌ ನಿರ್ಧಾರ ಸರಿಯಿಲ್ಲ: ರಾಜಣ್ಣ ಸಲಹೆ]]></title>
            <link>https://kannada.asianetnews.com/state/cm-vijay-s-decision-to-close-bars-in-tamil-nadu-is-not-right-says-kn-rajanna-rav/articleshow-7738lll</link>
            <guid isPermaLink="true">https://kannada.asianetnews.com/state/cm-vijay-s-decision-to-close-bars-in-tamil-nadu-is-not-right-says-kn-rajanna-rav/articleshow-7738lll</guid>
            <pubDate>Thu, 14 May 2026 05:12:07 +0530</pubDate>
            <description><![CDATA[ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ದೇಗುಲ ಮತ್ತು ಶಾಲೆಗಳ ಬಳಿಯ 700 ಬಾರ್&zwnj;ಗಳನ್ನು ಮುಚ್ಚುವ ನಿರ್ಧಾರವನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ಟೀಕಿಸಿದ್ದಾರೆ. ಇದು ಆಡಳಿತದ ಅನುಭವವಿಲ್ಲದ ಆತುರದ ನಿರ್ಧಾರವಾಗಿದ್ದು, ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krhv5c6zgcgqfsdbshavmmnj,imgname-----------------------2026-05-14t050548.972-1778715373791.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಧುಗಿರಿ (ತುಮಕೂರು):&lt;/strong&gt; ತಮಿಳುನಾಡಿನಲ್ಲಿ ಮುಖ್ಯಮಂತ್ರಿ ವಿಜಯ್&zwnj; ಅವರು ದೇಗುಲ ಮತ್ತು ಶಾಲೆಗಳ ಬಳಿಯ 700 ಬಾರ್&zwnj;ಗಳನ್ನು ಏಕಾಏಕಿ ಬಂದ್&zwnj; ಮಾಡುವುದಾಗಿ ಕೈಗೊಂಡಿರುವ ನಿರ್ಧಾರ ಸರಿಯಲ್ಲ ಎಂದು ಮಾಜಿ ಸಚಿವ ಕೆ.ಎನ್&zwnj;. ರಾಜಣ್ಣ ಹೇಳಿದರು.&amp;nbsp;&lt;/p&gt;&lt;h2&gt;ವಿಜಯ್&zwnj;ಗೆ ಆಡಳಿತ ನಡೆಸಿದ ಅನುಭವ ಇಲ್ಲ:&lt;/h2&gt;&lt;p&gt;ಸುದ್ದಿಗಾರರ ಜೊತೆ ಮಾತನಾಡಿದ ಅವರು, &lsquo;ವಿಜಯ್&zwnj; ಅವರಿಗೆ ಆಡಳಿತದ ಅನುಭವವಿಲ್ಲ. ಸರ್ಕಾರಕ್ಕೆ ಆದಾಯವನ್ನು ತರುವ ಬಾರ್&zwnj;ಗಳನ್ನು ಬಂದ್&zwnj; ಮಾಡುವುದು ಆತುರದ ನಿರ್ಧಾರ. 700 ಬಾರ್&zwnj;ಗಳನ್ನು ಮುಚ್ಚುವ ಬದಲಾಗಿ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು, ದೇಗುಲಗಳ ಬಳಿ ಅವುಗಳನ್ನು ತೆರೆಯದಂತೆ ಕ್ರಮ ವಹಿಸಬಹುದಾಗಿತ್ತು&rsquo; ಎಂದು ಸಲಹೆ ನೀಡಿದರು.&lt;/p&gt;&lt;h3&gt;ಬಾರ್ ಬಂದ್ ಮಾಡಿದರೆ ಸಮಸ್ಯೆ ಎದುರಿಸಬೇಕು&lt;/h3&gt;&lt;p&gt;ಭಾವಾವೇಶದಿಂದ ಭರವಸೆಗಳನ್ನು ನೀಡುವುದರಿಂದ ಮುಂಬರುವ ಸಮಸ್ಯೆ-ಸವಾಲು ಹೇಗೆ ಎದುರಿಸುವರೋ ನೋಡಬೇಕು. ವಿಜಯ್&zwnj;ರ ಹಾದಿ ಮುಳ್ಳಿನಿಂದ ಕೂಡಿದ್ದು, ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು.&lt;/p&gt;&lt;p&gt;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cm-vijay-s-decision-to-close-bars-in-tamil-nadu-is-not-right-says-kn-rajanna-rav/articleshow-7738lll"/>
        </item>
        <item>
            <title><![CDATA[4.50 ಲಕ್ಷದ ಸಾಲಕ್ಕೆ  6.14 ಎಕರೆ ಜಮೀನು ಹರಾಜು ಹಾಕಿದ ಬ್ಯಾಂಕ್? ರೈತ ಸಂಘದ ಆರೋಪ]]></title>
            <link>https://kannada.asianetnews.com/karnataka-districts/tumakuru-turuvekere-farmers-association-alleges-bank-auctioned-6-acres-of-land-for-a-loan-of-rs-4-lakh-50-thousand-mrq/articleshow-7aps7zb</link>
            <guid isPermaLink="true">https://kannada.asianetnews.com/karnataka-districts/tumakuru-turuvekere-farmers-association-alleges-bank-auctioned-6-acres-of-land-for-a-loan-of-rs-4-lakh-50-thousand-mrq/articleshow-7aps7zb</guid>
            <pubDate>Fri, 15 May 2026 10:18:35 +0530</pubDate>
            <description><![CDATA[&lt;p&gt;ಬ್ಯಾಂಕ್, ರಿಯಲ್ ಎಸ್ಟೇಟ್&zwnj;ನವರೊಂದಿಗೆ ಶಾಮೀಲಾಗಿ ರೈತನ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಅತಿ ಕಡಿಮೆ ಬೆಲೆಗೆ ಹರಾಜು ಹಾಕಿದೆ ಎಂದು ರೈತ ಸಂಘ ಆರೋಪಿಸಿದೆ. ಈ ಹಿಂದೆ ನೀಡಿದ ಭರವಸೆಯಂತೆ ರೈತನಿಗೆ ಭೂಮಿ ಹಿಂತಿರುಗಿಸದಿದ್ದರೆ, ಬ್ಯಾಂಕ್ ವಿರುದ್ಧ ಅಹೋರಾತ್ರಿ ಚಳುವಳಿ ನಡೆಸುವುದಾಗಿ ಸಂಘದ ಅಧ್ಯಕ್ಷರು ಎಚ್ಚರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke8xzaqp5dcrwds7ktg19xyy,imgname-d64fd18c-18d0-4c57-9733-98686904b57d-1767678913270.jpg" type="image/jpeg" height="390" width="690"/>
            <content:encoded><![CDATA[&lt;p&gt;ತುರುವೇಕೆರೆ: ಇಲ್ಲಿಯ ಕರ್ಣಾಟಕ ಬ್ಯಾಂಕ್ ರಿಯಲ್ ಎಸ್ಟೇಟ್ ನವರೊಂದಿಗೆ ಶಾಮೀಲಾಗಿ ಕೋಟ್ಯಂತರ ರು ಬೆಲೆ ಬಾಳುವ ಜಮೀನನ್ನು ಕೇವಲ ಕೆಲವೇ ಲಕ್ಷಗಳಿಗೆ ಮಾರಾಟ ಮಾಡಿಸಿ ರೈತನನ್ನು ಬೀದಿಪಾಲು ಮಾಡಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ ಗೌಡ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ನಾಲ್ಕೂವರೆ ಲಕ್ಷ ಪಡೆದಿದ್ರು!&lt;/strong&gt;&lt;/h2&gt;&lt;p&gt;ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನ ತಾಳಕೆರೆ ಗ್ರಾಮದ ಈರಯ್ಯ ಹಾಗೂ ಕೃಷ್ಣಪ್ಪ ಕುಟುಂಬದವರು ಸರ್ವೆ ನಂ 273 ರ 6.14 ಎಕರೆ ಜಮೀನಿನ ಮೇಲೆ 4.50 ಸಾವಿರ ಸಾಲ ಪಡೆದಿದ್ದರು. ಅದನ್ನು ಬ್ಯಾಂಕ್ ಬಡ್ಡಿ, ಸುಸ್ತಿ ಬಡ್ಡಿ ಎಲ್ಲಾ ಸೇರಿ 34.80 ಲಕ್ಷ ರು.ಗಳ ಸಾಲ ಎಂದು ಡಿಕ್ರಿ ಮಾಡಿಸಿ 2024ರಲ್ಲಿ ರಿಯಲ್ ಎಸ್ಟೇಟ್ ನವರೊಂದಿಗೆ ಶಾಮೀಲಾಗಿ ರೈತನಿಗೆ ಗೊತ್ತಿಲ್ಲದಂತೆ ಈ ಹರಾಜು ಮೂಲಕ ಹರಾಜು ಮಾಡಿದೆ.&lt;/p&gt;&lt;p&gt;ಜಮೀನನ್ನು ಬ್ಯಾಂಕ್ ನವರು ರಿಯಲ್ ಎಸ್ಟೇಟ್ ಗಳ ಜೊತೆ ಶಾಮೀಲಾಗಿ ಬಿಡ್ ಹಾಕಿಸಿ ರೈತರ ಭೂಮಿಯನ್ನು ಪಡೆದುಕೊಂಡು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಿದೆ. ಈ ಹರಾಜು ರದ್ದುಪಡಿಸಿ ರೈತನ ಭೂಮಿಯನ್ನು ರೈತನ ಹೆಸರಿಗೆ ಹಾಕಬೇಕು ಎಂದು ಆಗ್ರಹಿಸಿ ಈ ಹಿಂದೆಯೇ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಂತರ ಕರ್ನಾಟಕ ಬ್ಯಾಂಕ್ ಮುಖ್ಯಸ್ಥರು ಹಾಗೂ ರಾಜ್ಯ ರೈತಸಂಘದ ಮುಖಂಡರು ಮಾತಕತೆ ನಡೆಸಿ ರೈತ 5 ಲಕ್ಷ ಡಿಡಿ ತೆಗೆದು ಕಟ್ಟಿ ಜಮೀನು ವಾಪಸ್ಸು ರೈತನ ಹೆಸರಿಗೆ ನೀಡಬೇಕು ಎಂದು ಒಡಂಬಡಿಕೆ ಮಾಡಿಕೊಂಡು ಪ್ರತಿಭಟನೆ ಕೈಬಿಡಲಾಗಿತ್ತು.&amp;nbsp;&lt;/p&gt;&lt;p&gt;ನಂತರ ಸುಮಾರು 2 ವರ್ಷಗಳಿಂದ ಸಬೂಬು ಹೇಳಿಕೊಂಡು ಬಂದ ಬ್ಯಾಂಕ್ ಸಿಬ್ಬಂದಿಗಳು ಹರಾಜು ಮಾಡಿಕೊಂಡಿರುವ ಸುಬ್ರಮಣಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿಗೆ ಭೂಮಿ ಬಿಡಿಸಿಕೊಡಲು ಪೋಲೀಸರನ್ನು ಜಮೀನಿನ ಬಳಿ ಕರೆದುಕೊಂಡು ಹೋಗಿದ್ದರು. ವಿಷಯ ತಿಳಿದ ರಾಜ್ಯ ರೈತಸಂಘದವರು ಬ್ಯಾಂಕ್ ನ ರೈತ ವಿರೋಧಿ ಕ್ರಮ ಖಂಡಿಸಿ ಸಿಬ್ಬಂದಿ ಮತ್ತು ರಿಯಲ್ ಎಸ್ಟೇಟ್ ನವರನ್ನು ವಾಪಸ್ಸು ಕಳಿಸಲಾಗಿದೆ.&lt;/p&gt;&lt;h3&gt;&lt;strong&gt;ಬ್ಯಾಂಕ್ ಎದುರು ಅಹೋರಾತ್ರಿ ಚಳುವಳಿ&lt;/strong&gt;&lt;/h3&gt;&lt;p&gt;ದಲಿತ ಕುಟುಂಬದ ರೈತರು ಇದೇ ಜಮೀನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಭೂಮಿ ಕಿತ್ತುಕೊಂಡರೆ ರೈತರು ಆತ್ಮ*ಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಬ್ಯಾಂಕ್ ನ ಅಧಿಕಾರಿಗಳು ಮಾತು ನೀಡಿದಂತೆ ರೈತನಿಂದ ಹಣ ಪಡೆದು ರೈತನ ಹೆಸರಿಗೆ ವಾಪಸ್ಸು ಭೂಮಿಯನ್ನು ನೀಡಬೇಕು. ಇಲ್ಲವಾದರೆ ಬ್ಯಾಂಕ್ ಎದುರು ಅಹೋರಾತ್ರಿ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಶ್ರೀನಿವಾಸ್ ಗೌಡ ಎಚ್ಚರಿಸಿದರು.&lt;/p&gt;&lt;p&gt;ಈ ವೇಳೆ ರೈತ ಸಂಘದ ಮುಖಂಡರಾದ ಸಿದ್ದರಾಮಣ್ಣ, ಗೋವಿಂದರಾಜು, ದೇವರಾಜು, ಚೆಂಡೂರು ರಹಮತ್, ಚರಣ್ ರಾಜ್, ಬ್ಯಾಟಪ್ಪ, ಪರಮೇಶ್ವರಯ್ಯ, ಶಶಿಕುಮಾರ್, ನಾಗರಾಜು, ಮಹಾಲಿಂಗಯ್ಯ ಸೇರಿದಂತೆ ರೈತ ಮುಖಂಡರು ಇದ್ದರು.&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tumakuru-turuvekere-farmers-association-alleges-bank-auctioned-6-acres-of-land-for-a-loan-of-rs-4-lakh-50-thousand-mrq/articleshow-7aps7zb"/>
        </item>
        <item>
            <title><![CDATA[ಬೆಂಗಳೂರು-ತುಮಕೂರು ರೈಲು ಮಾರ್ಗ ಚತುಷ್ಪಥ, ಯಲಹಂಕದಿಂದ ಅರಸೀಕೆರೆಗೆ ಹೊಸ ಮೆಮು, ಏನಿದು ಮಹಾಯೋಜನೆ?]]></title>
            <link>https://kannada.asianetnews.com/karnataka-districts/bengaluru-tumakuru-railway-line-to-be-quadrupled-says-union-minister-v-somanna-gdp/articleshow-8tgwbxb</link>
            <guid isPermaLink="true">https://kannada.asianetnews.com/karnataka-districts/bengaluru-tumakuru-railway-line-to-be-quadrupled-says-union-minister-v-somanna-gdp/articleshow-8tgwbxb</guid>
            <pubDate>Tue, 28 Apr 2026 17:44:50 +0530</pubDate>
            <description><![CDATA[ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು-ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ಯಲಹಂಕದಿಂದ ಅರಸೀಕೆರೆವರೆಗೆ ಹೊಸ ಮೆಮು ರೈಲು ಸೇವೆ ಮತ್ತು ತುಮಕೂರಿನಲ್ಲಿ ಪಾದಚಾರಿ ಸುರಂಗ ಮಾರ್ಗಗಳ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ, ಇದು ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಯನ್ನು ಹೆಚ್ಚಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jrvze3gtqabj6f2aspz2e39c,imgname-tumakuru-railway-station--2-.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು: ಬೆಂಗಳೂರು&ndash;ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಈ ಯೋಜನೆ ಜಾರಿಗೆ ಬಂದರೆ, ಈ ಪ್ರಮುಖ ಮಾರ್ಗದಲ್ಲಿ ರೈಲು ಸಂಚಾರ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಾಗಿ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಸಿಗಲಿದೆ.&lt;/p&gt;&lt;p&gt;ತುಮಕೂರು ನಗರದ ಮಾರುತಿನಗರ ಹಾಗೂ ಕ್ಯಾತ್ಸಂದ್ರ ರೈಲು ನಿಲ್ದಾಣಗಳ ಸಮೀಪ ಪಾದಚಾರಿ ಸುರಂಗ ಮಾರ್ಗಗಳ (ಸಬ್&zwnj;ವೇ) ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಶನಿವಾರ ನೆರವೇರಿಸಲಾಯಿತು. ಈ ಸಬ್&zwnj;ವೇಗಳ ನಿರ್ಮಾಣದಿಂದ ಪಾದಚಾರಿಗಳಿಗೆ ಸುರಕ್ಷಿತವಾಗಿ ರೈಲು ಹಳಿಗಳನ್ನು ದಾಟುವ ಅವಕಾಶ ದೊರೆಯಲಿದೆ.&lt;/p&gt;&lt;h2&gt;ಅರಸೀಕೆರೆವರೆಗೆ ಹೊಸ ಮೆಮು ರೈಲು ಸೇವೆ&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಯಲಹಂಕದಿಂದ ಯಶವಂತಪುರ, ತುಮಕೂರು ಮಾರ್ಗವಾಗಿ ಅರಸೀಕೆರೆವರೆಗೆ ಹೊಸ ಮೆಮು ರೈಲು ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಇದರೊಂದಿಗೆ, ಯಲಹಂಕದಲ್ಲಿ ಹೊಸ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡುವ ಯೋಜನೆಯೂ ರೂಪುಗೊಂಡಿದೆ.&lt;/p&gt;&lt;p&gt;ತುಮಕೂರಿನ ತಿಮ್ಮರಾಜನಹಳ್ಳಿಯಲ್ಲಿ ಇಂಟಿಗ್ರೇಟೆಡ್ ಕಂಟೈನರ್ ಲಾಜಿಸ್ಟಿಕ್ಸ್ ಹಬ್ ನಿರ್ಮಾಣಗೊಳ್ಳಲಿದ್ದು, ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ. ಇದೇ ವೇಳೆ, ರಾಯದುರ್ಗ&ndash;ತುಮಕೂರು ಹೊಸ ರೈಲು ಮಾರ್ಗ ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ ಎಂದು ಅವರು ತಿಳಿಸಿದರು. ತುಮಕೂರು&ndash;ದಾವಣಗೆರೆ&ndash;ಚಿತ್ರದುರ್ಗ ಹೊಸ ರೈಲು ಯೋಜನೆಯೂ ತ್ವರಿತಗತಿಯಲ್ಲಿ ಮುಂದುವರಿಯುತ್ತಿದೆ.&lt;/p&gt;&lt;h2&gt;ಸಬ್&zwnj;ವೇಗಳ ನಿರ್ಮಾಣ&lt;/h2&gt;&lt;p&gt;ಪಾದಚಾರಿ ಸುರಂಗ ಮಾರ್ಗಗಳ ನಿರ್ಮಾಣದಿಂದ ರೈಲು ಹಳಿಗಳ ಬಳಿ ಅನಧಿಕೃತ ಪ್ರವೇಶವನ್ನು ತಡೆಗಟ್ಟುವ ಜೊತೆಗೆ ಸುರಕ್ಷತೆಯನ್ನು ಹೆಚ್ಚಿಸಲಾಗುತ್ತದೆ. ಕ್ಯಾತ್ಸಂದ್ರ ರೈಲು ನಿಲ್ದಾಣದ ಸಮೀಪದ ಹಳೆಯ ಲೆವೆಲ್ ಕ್ರಾಸಿಂಗ್ ಬಳಿ ಸುಮಾರು 5.5 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಸಬ್&zwnj;ವೇ ನಿರ್ಮಾಣಗೊಳ್ಳಲಿದೆ. ಹಾಗೆಯೇ, ತುಮಕೂರು ಮತ್ತು ಕ್ಯಾತ್ಸಂದ್ರ ನಡುವಿನ ಮಾರುತಿನಗರದಲ್ಲಿ ಸುಮಾರು 3.4 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಸಬ್&zwnj;ವೇ ನಿರ್ಮಿಸಲಾಗುತ್ತಿದೆ.&lt;/p&gt;&lt;p&gt;ಈ ಎರಡೂ ಕಾಮಗಾರಿಗಳು 2027ರ ಜನವರಿ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶಗೌಡ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;&lt;p&gt;ಒಟ್ಟಿನಲ್ಲಿ, ಬೆಂಗಳೂರು&ndash;ತುಮಕೂರು ರೈಲು ಮಾರ್ಗದ ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದರೆ, ಪ್ರಯಾಣಿಕರಿಗೆ ಹೆಚ್ಚು ಸುರಕ್ಷತೆ, ವೇಗ ಮತ್ತು ಅನುಕೂಲತೆ ದೊರೆಯುವಂತಾಗಲಿದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-tumakuru-railway-line-to-be-quadrupled-says-union-minister-v-somanna-gdp/articleshow-8tgwbxb"/>
        </item>
        <item>
            <title><![CDATA[ತುಮಕೂರಲ್ಲಿ ನವಿಲುಗಳ ಸರಣಿ ಸಾವಿನ ಸತ್ಯಾಂಶ ಬಹಿರಂಗ, ಸಾರ್ವಜನಿಕರಿಗೆ ಜಾಗೃತಿ, ಹೈ ಅಲರ್ಟ್]]></title>
            <link>https://kannada.asianetnews.com/karnataka-districts/bird-flu-confirmed-in-tumakuru-h5n1-virus-causes-peacocks-deaths-high-alert-issued-gdp/articleshow-anxnaeo</link>
            <guid isPermaLink="true">https://kannada.asianetnews.com/karnataka-districts/bird-flu-confirmed-in-tumakuru-h5n1-virus-causes-peacocks-deaths-high-alert-issued-gdp/articleshow-anxnaeo</guid>
            <pubDate>Fri, 01 May 2026 12:35:21 +0530</pubDate>
            <description><![CDATA[ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸರಣಿ ಸಾವಿಗೆ ಹಕ್ಕಿಜ್ವರ (H5N1) ಕಾರಣವೆಂದು ಅಧಿಕೃತವಾಗಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಪಶು ಸಂಗೋಪನಾ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರಿಗೆ ಸತ್ತ ಪಕ್ಷಿಗಳನ್ನು ಮುಟ್ಟದಂತೆ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kj51ddycf6vxv0pf4sq5ymrj,imgname-peacock-pic-vastu-tips-02-1771843270604.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸರಣಿ ಸಾವು ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ಹಕ್ಕಿಜ್ವರ (ಬರ್ಡ್ ಫ್ಲೂ) ಕಾರಣ ಎಂಬುದು ಅಧಿಕೃತವಾಗಿ ದೃಢಪಟ್ಟಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದರೂ, ಸಂಬಂಧಿಸಿದ ಇಲಾಖೆಗಳು ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ.&lt;/p&gt;&lt;h2&gt;ಹಕ್ಕಿಜ್ವರ ಎಂಬುದು ದೃಢ&lt;/h2&gt;&lt;p&gt;ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಕೋಳಿಹಳ್ಳಿ ಗ್ರಾಮ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನವಿಲುಗಳ ಅಸಹಜ ಸಾವುಗಳು ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಸತ್ತ ನವಿಲುಗಳ ಅಂಗಾಂಶ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್&zwnj;ನ ರಾಷ್ಟ್ರೀಯ ಉಚ್ಚ ಸುರಕ್ಷಾ ಪಶುರೋಗ ಸಂಸ್ಥೆ (NIHSAD)ಗೆ ಕಳುಹಿಸಲಾಗಿತ್ತು. ಇದೀಗ ಬಂದಿರುವ ವರದಿಯಲ್ಲಿ H5N1 ವೈರಸ್ ಪತ್ತೆಯಾಗಿರುವುದು ದೃಢಪಟ್ಟಿದ್ದು, ಹಕ್ಕಿಜ್ವರವೇ ಈ ಸಾವುಗಳಿಗೆ ಕಾರಣ ಎಂದು ದೃಢಪಟ್ಟಿದೆ.&lt;/p&gt;&lt;p&gt;ಈ ಕುರಿತು ಮಾಹಿತಿ ನೀಡಿದ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಶಿವಪ್ರಸಾದ್, ವರದಿ ಸಿಕ್ಕ ತಕ್ಷಣವೇ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕೋಳಿಹಳ್ಳಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಲಾಗಿದ್ದು, ಕೋಳಿ ಸಾಕಾಣಿಕೆ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಯಾವುದೇ ರೀತಿಯ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಸಾರ್ವಜನಿಕರಿಗೆ ಜಾಗೃತಿ&lt;/h2&gt;&lt;p&gt;ಇದೇ ವೇಳೆ, ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್ ಘೋಷಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಡಳಿತವೂ ಕೂಡ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದು, ಸತ್ತ ಪಕ್ಷಿಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಎಂದು ಕಡ್ಡಾಯವಾಗಿ ಸೂಚಿಸಿದೆ. ಯಾವುದೇ ಅನುಮಾನಾಸ್ಪದ ಸಾವುಗಳು ಕಂಡುಬಂದಲ್ಲಿ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.&lt;/p&gt;&lt;p&gt;ಡಾ. ಶಿವಪ್ರಸಾದ್ ಅವರು ಜನರಲ್ಲಿ ಅನಗತ್ಯ ಭೀತಿ ಬೇಡ ಎಂದು ಸ್ಪಷ್ಟಪಡಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಾಕು ಪ್ರಾಣಿ-ಪಕ್ಷಿಗಳ ವಧೆಗೆ ಯಾವುದೇ ಆದೇಶ ಇಲ್ಲ ಎಂದು ಹೇಳಿದ್ದಾರೆ. ರಾಷ್ಟ್ರಪಕ್ಷಿಗಳಿಗೂ ಹಾಗೂ ಸಾಕು ಪ್ರಾಣಿಗಳಿಗೆ ತಕ್ಷಣದ ಅಪಾಯ ಕಂಡುಬಂದಿಲ್ಲದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಗಾ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲಾಗುತ್ತಿದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ತುಮಕೂರಿನಲ್ಲಿ ನವಿಲುಗಳ ಸಾವಿಗೆ ಹಕ್ಕಿಜ್ವರ ಕಾರಣ ಎಂದು ದೃಢಪಟ್ಟಿದ್ದರೂ, ಸಂಬಂಧಿಸಿದ ಇಲಾಖೆಗಳು ತ್ವರಿತವಾಗಿ ಕ್ರಮ ಕೈಗೊಂಡಿರುವುದರಿಂದ ಜನರು ಆತಂಕಪಡದೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bird-flu-confirmed-in-tumakuru-h5n1-virus-causes-peacocks-deaths-high-alert-issued-gdp/articleshow-anxnaeo"/>
        </item>
        <item>
            <title><![CDATA[ಕಿಸಾನ್ ಸಮ್ಮಾನ್ ಯೋಜನೆಯ 4 ಸಾವಿರ ನಿಲ್ಲಿಸಿದ್ದು ಸರಿಯಲ್ಲ: ಸಂಸದ ಗೋವಿಂದ ಕಾರಜೋಳ]]></title>
            <link>https://kannada.asianetnews.com/karnataka-districts/mp-govind-karjol-kisan-samman-yojana-4000-scheme-karnataka-gvd/articleshow-aosq1wh</link>
            <guid isPermaLink="true">https://kannada.asianetnews.com/karnataka-districts/mp-govind-karjol-kisan-samman-yojana-4000-scheme-karnataka-gvd/articleshow-aosq1wh</guid>
            <pubDate>Sat, 16 May 2026 22:27:49 +0530</pubDate>
            <description><![CDATA[&lt;p&gt;ಬಿಜೆಪಿ ಸರ್ಕಾರದಿಂದ ನೀಡಲಾಗುತ್ತಿದ್ದ ಕಿಸಾನ್&zwnj; ಸಮ್ಮಾನ್&zwnj; ಯೋಜನೆಯ 4 ಸಾವಿರ ನೀಡುವ ಯೋಜನೆಯನ್ನು ಪ್ರಸ್ತುತ ಸರ್ಕಾರ ನಿಲ್ಲಿಸಿದ್ದು ಸರಿಯಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ggdhkn8akrw19gf8h434eqdv,imgname-govinda-karjola.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿರಾ (ಮೇ.16): &lt;/strong&gt;ಬಿಜೆಪಿ ಸರ್ಕಾರದಿಂದ ನೀಡಲಾಗುತ್ತಿದ್ದ ಕಿಸಾನ್&zwnj; ಸಮ್ಮಾನ್&zwnj; ಯೋಜನೆಯ 4 ಸಾವಿರ ನೀಡುವ ಯೋಜನೆಯನ್ನು ಪ್ರಸ್ತುತ ಸರ್ಕಾರ ನಿಲ್ಲಿಸಿದ್ದು ಸರಿಯಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ &rsquo;ಕಿಸಾನ್ ಸಮ್ಮಾನ್ ಯೋಜನೆ&rsquo;ಯಡಿ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿ ಜಮೆಯಾಗುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈ ಮೊತ್ತಕ್ಕೆ 4 ಸಾವಿರ ರೂಪಾಯಿ ಸೇರಿಸಿ ಒಟ್ಟು 10 ಸಾವಿರ ರೂಪಾಯಿ ನೀಡುವ ಯೋಜನೆ ರೂಪಿಸಲಾಗಿತ್ತು. ಆದರೆ, ಪ್ರಸ್ತುತ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಿರುವುದು ಬೇಸರದ ಸಂಗತಿ. ಸರ್ಕಾರಗಳು ಬದಲಾದಾಗ ಜನಪರ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಅವರು ಆಗ್ರಹಿಸಿದರು.&lt;/p&gt;&lt;p&gt;ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಪ್ರತಿ ತಿಂಗಳು 14.5 ಕೋಟಿ ರುಪಾಯಿ ಪ್ರೋತ್ಸಾಹಧನ ಬರುತ್ತಿರುವುದು ಶ್ಲಾಘನೀಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಲಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿಗೆ ತಂದು, ಪ್ರತಿ ಲೀಟರ್ ಹಾಲಿಗೆ 3 ರುಪಾಯಿ ಇದ್ದ ಪ್ರೋತ್ಸಾಹಧನವನ್ನು 5 ರುಪಾಯಿಗೆ ಹೆಚ್ಚಿಸಲಾಗಿತ್ತು. ಪ್ರಸ್ತುತ ಹಸು, ಎಮ್ಮೆಗಳ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಈಗಿನ ರಾಜ್ಯ ಸರ್ಕಾರ ಪ್ರೋತ್ಸಾಹಧನವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದರು.&lt;/p&gt;&lt;p&gt;ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ, ಮಾತನಾಡಿ ನೇಜಂತಿ ಕುಗ್ರಾಮದಲ್ಲಿ ಇಂದು ಸಹಕಾರ ಸಂಘ ಪ್ರಾರಂಭ ಆಗಿರುವುದು ಇಡೀ ಊರಿಗೆ ಒಂದು ಆರ್ಥಿಕವಾಗಿ ಶಕ್ತಿ ಕೊಡುವಂತಹ ಕಾರ್ಯಕ್ರಮ. ಗ್ರಾಮದವರೆಲ್ಲರೂ ಕೂಡ ಅರ್ಥೈಸಿ ಆದಾಯ ಇರತಕ್ಕಂತ ಹೈನುಗಾರಿಕೆ ಉದ್ಯಮವನ್ನು ನೀವು ಉಳಿಸಿಕೊಂಡು ಬೆಳೆಸುವತ್ತ ಹೆಚ್ಚು ಪ್ರಾಮುಖ್ಯತೆ ಕೊಡಬೇಕಿದೆ ಎಂದರು.&lt;/p&gt;&lt;h2&gt;&lt;strong&gt;ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿ&lt;/strong&gt;&lt;/h2&gt;&lt;p&gt;ತುಮಕೂರು ಹಾಲು ಒಕ್ಕೂಟದ ಗುಬ್ಬಿ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ಈ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಅಭಿಲಾಷ್ ಗೌಡ ಇಂಜಿನಿಯರ್ ಪದವಿ ಮುಗಿಸಿ, ಬೆಂಗಳೂರಿನಲ್ಲಿ ಲಕ್ಷಗಟ್ಟಲೆ ಸಂಬಳ ಪಡೆದು ಜೀವನ ನಡೆಸುತ್ತಿದ್ದರು. ಇಂದು ತಮ್ಮ ಸ್ವಗ್ರಾಮದಲ್ಲಿ ಗೆಳೆಯ ಮೋಹನ್ ಜೊತೆ ಗೂಡಿ ಬೃಹತ್ ಆಧಾರ್ ಡೈರಿ ಫಾರಂ ಮತ್ತು ಸೈಲೇಜ್ ಘಟಕ ಸ್ಥಾಪಿಸಿ, ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೆ ಶ್ರಮಿಸಿ ಇಂದು ಉದ್ಘಾಟನೆ ಮಾಡಿ ಹೈನುಗಾರಿಕೆ ಉದ್ಯಮಕ್ಕೆ ಹೊಸ ಅರ್ಥ ನೀಡುವಲ್ಲಿ ಜೊತೆಗೆ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇವರ ಈ ನಡೆ ಇತರರಿಗೂ ಸ್ಫೂರ್ತಿದಾಯಕವಾಗಲಿ ಎಂದರು.&lt;/p&gt;]]></content:encoded>
            <category>tumakuru</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-govind-karjol-kisan-samman-yojana-4000-scheme-karnataka-gvd/articleshow-aosq1wh"/>
        </item>
        <item>
            <title><![CDATA[ತುಮಕೂರು: ಎಣ್ಣೆಗೆ ಹಣ ಕೊಡದ ತಮ್ಮನ ಹೆಣ ಕೆಡವಿದ ಅಣ್ಣ, ಎದೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ!]]></title>
            <link>https://kannada.asianetnews.com/karnataka-districts/tumakuru-crime-elder-brother-kills-younger-brother-for-alcohol-money-sat/articleshow-dvgoiur</link>
            <guid isPermaLink="true">https://kannada.asianetnews.com/karnataka-districts/tumakuru-crime-elder-brother-kills-younger-brother-for-alcohol-money-sat/articleshow-dvgoiur</guid>
            <pubDate>Tue, 28 Apr 2026 15:12:45 +0530</pubDate>
            <description><![CDATA[ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ, ಮದ್ಯಪಾನಕ್ಕೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅಣ್ಣನೊಬ್ಬ ತನ್ನ ತಮ್ಮನನ್ನೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಈ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅಣ್ಣನನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9qfnyx0mb3peag0skvhcr9,imgname-tumakuru-brother-murder-1777369339869.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.28): ಮ&lt;/strong&gt;ದ್ಯಪಾನದ ವ್ಯಸನವು ಹೇಗೆ ರಕ್ತಸಂಬಂಧಗಳನ್ನೇ ಮರೆಸುತ್ತದೆ ಮತ್ತು ಸುಂದರ ಸಂಸಾರದಲ್ಲಿ ವಿಷವುಣ್ಣಿಸುತ್ತದೆ ಎಂಬುದಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ಕೇವಲ ಕುಡಿತಕ್ಕೆ ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನೇ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಧುಗಿರಿ ತಾಲೂಕಿನಲ್ಲಿ ವರದಿಯಾಗಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ನಿಟ್ಟರಹಳ್ಳಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಗಂಗರಾಜು (36) ಕೊಲೆಯಾದ ದುರ್ದೈವಿ. ಅಣ್ಣ ನರಸಿಂಹಮೂರ್ತಿ ತನ್ನ ತಮ್ಮನನ್ನೇ ಬಲಿಪಡೆದ ಹಂತಕ ಅಣ್ಣ. ಕಳೆದ ಕೆಲವು ಕಾಲದಿಂದ ನರಸಿಂಹಮೂರ್ತಿ ಕುಡಿತದ ಚಟಕ್ಕೆ ಸಂಪೂರ್ಣವಾಗಿ ದಾಸನಾಗಿದ್ದನು ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಹಣದ ವಿಚಾರಕ್ಕೆ ಶುರುವಾದ ಗಲಾಟೆ:&lt;/strong&gt;&lt;/h3&gt;&lt;p&gt;ನಿನ್ನೆ ಸಂಜೆ ನರಸಿಂಹಮೂರ್ತಿ ಮದ್ಯ ಸೇವಿಸಲು ಹಣ ಬೇಕೆಂದು ತಮ್ಮ ಗಂಗರಾಜು ಬಳಿ ಕೇಳಿದ್ದಾನೆ. ಇದಕ್ಕೆ ಗಂಗರಾಜು ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜೋರಾದ ಮಾತಿನ ಚಕಮಕಿ ಆರಂಭವಾಗಿದೆ. ಕುಡಿತದ ಅಮಲಿನಲ್ಲಿದ್ದ ನರಸಿಂಹಮೂರ್ತಿ, ತನಗೆ ಹಣ ಕೊಡದ ತಮ್ಮನ ಮೇಲೆ ತೀವ್ರ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ, ಗಂಗರಾಜನನ್ನು ಕೆಳಕ್ಕೆ ತಳ್ಳಿ ಆತನ ಎದೆಯ ಮೇಲೆ ಭಾರವಾದ ಕಲ್ಲನ್ನು ಎತ್ತಿಹಾಕಿದ್ದಾನೆ. ಕಲ್ಲಿನ ಏಟಿಗೆ ತೀವ್ರವಾಗಿ ಗಾಯಗೊಂಡ ಗಂಗರಾಜು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.&lt;/p&gt;&lt;h2&gt;&lt;strong&gt;ಬಂಧನ ಮತ್ತು ತನಿಖೆ:&lt;/strong&gt;&lt;/h2&gt;&lt;p&gt;ತಮ್ಮನ ಕೊಲೆ ಕಂಡು ಆಘಾತಕ್ಕೊಳಗಾದ ಮತ್ತೊಬ್ಬ ಸಹೋದರ ಸುಬ್ರಹ್ಮಣ್ಯ ಅವರು ಕೂಡಲೇ ಕೊಡಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ನರಸಿಂಹಮೂರ್ತಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;ಕೊಡಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕುಡಿತದ ಚಟಕ್ಕೆ ಬಲಿಯಾದ ಅಣ್ಣನೊಬ್ಬ ತನ್ನ ರಕ್ತಸಂಬಂಧವನ್ನೇ ಬಲಿಪಡೆದಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಮತ್ತು ಬೇಸರ ಮೂಡಿಸಿದೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/tumakuru-crime-elder-brother-kills-younger-brother-for-alcohol-money-sat/articleshow-dvgoiur"/>
        </item>
        <item>
            <title><![CDATA[ಪರಿಹಾರ ನೀಡದಿದ್ದರೆ ವಿಮೆ ತುಂಬಬೇಡಿ ಎಂದು ನಾನೇ ಹೇಳುವೆ: ಗೃಹ ಸಚಿವ ಪರಮೇಶ್ವರ್]]></title>
            <link>https://kannada.asianetnews.com/karnataka-districts/farmers-insurance-companies-warning-dr-g-parameshwar-tumakuru-gvd/articleshow-g3dxxtr</link>
            <guid isPermaLink="true">https://kannada.asianetnews.com/karnataka-districts/farmers-insurance-companies-warning-dr-g-parameshwar-tumakuru-gvd/articleshow-g3dxxtr</guid>
            <pubDate>Sun, 26 Apr 2026 20:18:20 +0530</pubDate>
            <description><![CDATA[&lt;p&gt;ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4xhfwvwx123bnzfr5ztfa93,imgname-----------------------2025-09-12t045335.769-1757633049467.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.26): &lt;/strong&gt;ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪಂಚಾಯ್ತಿಯಲ್ಲಿ ಶನಿವಾರ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು, ವಿಮಾ ಕಂಪನಿ ರೈತರಿಂದ ವಿಮೆ ಮಾಡಿಸಿ ಪರಿಹಾರ ಕೊಡುವಾಗ ನಿಬಂಧನೆಗಳನ್ನು ವಿಧಿಸಿ ಕಡಿಮೆ ಪರಿಹಾರ ನೀಡುವುದು ಸರಿಯಲ್ಲ. ರೈತರಿಗೆ ಸರಿಯಾದ ವಿಮೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನಾವೇ ರೈತರಿಗೆ ವಿಮಾ ಮಾಡದಂತೆ ತಿಳಿಸಬೇಕಾಗುತ್ತದೆ ಎಂದರು.&lt;/p&gt;&lt;p&gt;ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಮಾ ಕಂಪನಿಗಳ ಸಭೆ ಕರೆದು ಚರ್ಚಿಸಿ ನಿಬಂಧನೆಗಳನ್ನು ಸಡಿಲಗೊಳಿಸಲು ತಿಳಿಸಬೇಕು. ಅಲ್ಲದೆ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ. ಮುಂದಿನ ತೀರ್ಮಾನವನ್ನು ರ್ಕಾ ರ ಕೈಗೊಳ್ಳಲಿದೆ ಎಂದರು. ಕೃಷಿ ಇಲಾಖೆ ಮಾಹಿತಿ ಪಡೆಯುವ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೋಲಿಸಿದರೆ ಕುಣಿಗಲ್ ತಾಲೂಕಿನಲ್ಲಿ ಮಾತ್ರ ಅತ್ಯಂತ ಕಡಿಮೆ 1453 ರೈತರು ವಿಮೆ ಮಾಡಿಸಿದ್ದಾರೆ.&lt;/p&gt;&lt;p&gt;ಕಾರಣ ಏನು ಎಂದು ಪ್ರಶ್ನಿಸಿದರು. ಶಾಸಕ ಎಚ್.ಡಿ.ರಂಗನಾಥ್ ಅವರು ಕೇಂದ್ರ ಸರ್ಕಾರದ ಮೇಲೆ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ರೈತರು ವಿಮೆ ಮಾಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರಿಗೆ ವಿಮೆ ಮಾಡಿಸುವ ಸಂಬಂಧ ಜಾಗೃತಿ ಮೂಡಿಸಬೇಕು. ಅಲ್ಲದೆ ವಿಮಾ ಕಂಪನಿಗಳ ನಿಬಂಧನೆಗಳನ್ನು ಪರಿಷ್ಕರಿಸಬೇಕು ಹಾಗೂ ನಿಯಮಗಳ ಸಡಿಲಿಕೆಯೂ ಆಗಬೇಕು. ಈ ಬಗ್ಗೆ ರಾಜ್ಯ ಸರ್ಕಾರರ ಮಧ್ಯ ಪ್ರವೇಶಿಸಬೇಕು ಎಂದು ಸಭೆಯಲ್ಲಿದ್ದ ಶಾಸಕರು ಆಗ್ರಹಿಸಿದರು.&lt;/p&gt;&lt;p&gt;ವಿಮಾ ಕಂಪನಿಗಳು ರೈತರ ವಿಮಾ ಹಣದಿಂದಲೇ ಬದುಕುತ್ತಿರವುದು. ಜಿಲ್ಲೆಯಲ್ಲಿ 7 ಕೋಟಿ ರೂ. ವಿಮೆ ಪಡೆದು 1.5 ಕೋಟಿ ರೂ. ಪರಿಹಾರ ನೀಡಿವೆ ಎಂದರೆ ಏರ್ಥತ ಎಂದು ಸಭೆಯಲ್ಲಿ ಶಾಸಕರು ಪ್ರಶ್ನಿಸಿದರು. ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾವು ಬೆಳೆನಷ್ಟದ ಬಗ್ಗೆ ಪರಿಶೀಲಿಸಿ ಸರ್ಕಾರರಕ್ಕೆ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು. ಪ್ರಸ್ತುತ ಜಿಲ್ಲೆಯ ಕೆಲವು ಭಾಗದಲ್ಲಿ ಸರ್ಕಾರಿ ಶಾಲೆ, ಕಟ್ಟಡಗಳು ಸೇರಿದಂತೆ ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿವೆ ಎಂದು ಹೇಳಲಾಗುತ್ತಿದೆ. ಇದು ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ತಿಕ್ಕಾಟ ಇದೆ.&lt;/p&gt;&lt;p&gt;ಆದ್ದರಿಂದ ಅರಣ್ಯ ಇಲಾಖೆ ತಕ್ಷಣ ಜಂಟಿ ಸರ್ವೆ ಮಾಡಿಸಿ ಕಂದಾಯ ಇಲಾಖೆ ಜಾಗ ಇದ್ದರೆ ಕಂದಾಯ ಇಲಾಖೆಗೆ ಬಿಟ್ಟು ಕೊಡಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ 4584 ಜಾನುವಾರುಗಳ ಸಾವಿನ ಕಾರಣದ ಬಗ್ಗೆ ಚರ್ಚಿಸಲಾಯಿತು. ಸಂಬಂಧಿಸಿದ ಪರಿಹಾರಗಳನ್ನು ಶೀಘ್ರ ರೈತರಿಗೆ ನೀಡಬೇಕು ಎಂದರು. ಅಲ್ಲದೆ ನವಿಲುಗಳು ಸಾವೀಡಾಗುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಇದು ಹಕ್ಕಿಜ್ಚರದ ಶಂಕೆ ವ್ಯಕ್ತವಾಗಿದ್ದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ. ವಾರದಲ್ಲಿ ವರದಿ ಬರುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ ಕಾಯಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು.&lt;/p&gt;&lt;h2&gt;&lt;strong&gt;ಅಧಿಕಾರಿಗಳಿಗೆ ಸೂಚನೆ&lt;/strong&gt;&lt;/h2&gt;&lt;p&gt;ರೇಷ್ಮೆ ಬೆಳೆಗಾರರಿಗೆ ನೀಡಬೇಕಾಗಿರುವ ಪ್ರೋತ್ಸಾಹ ಧನ ಹಾಗೂ ಬೋನಸ್ ಧನ 6 ಕೋಟಿ ರು. ವಿತರಣೆ ಬಾಕಿ ಇದ್ದು, ಈ ಬಗ್ಗೆ ಜಿಲ್ಲೆಯಿಂದ ರೇಷ್ಮೆ ಇಲಾಖೆ ಕೇಂದ್ರ ಕಚೇರಿಗೆ ಪತ್ರ ಬರೆದು ವಿತರಣೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಸಕ್ತ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇಕಡಾವಾರು ಫಲಿತಾಂಶ ಉತ್ತಮವಾಗಿದೆ. ಆದರೆ ರಾಜ್ಯದಲ್ಲಿ ಸ್ಥಾನ ಕೆಳಗಿಳಿದಿರುವುದು ಸ್ವಲ್ಪ ಮಟ್ಟಿನ ಅಸಮಾಧಾನ. ಶಾಲಾ ಶಿಕ್ಷಣ ಇಲಾಖೆಯ ತುಮಕೂರು ಹಾಗೂ ಮಧುಗಿರಿ ಎರಡೂ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿರ್ದಿಷ್ಟ ವಿಷಯಗಳಲ್ಲಿ ಕಳಪೆ ಪ್ರಗತಿ ತೋರಿಸಿರುವ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಕಡಿಮೆ ಸಾಧನೆ ಮಾಡುವ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ ಅವಶ್ಯವಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.&lt;/p&gt;]]></content:encoded>
            <category>tumakuru</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/farmers-insurance-companies-warning-dr-g-parameshwar-tumakuru-gvd/articleshow-g3dxxtr"/>
        </item>
        <item>
            <title><![CDATA[ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ, ಬೀದಿ ನಾಯಿಗಳ ಪಾಲಾದ ಮೃತದೇಹ! ಗ್ರಾಮಕ್ಕೆ ಸೋಂಕಿನ ಭೀತಿ!]]></title>
            <link>https://kannada.asianetnews.com/gallery/karnataka-districts/tumakuru-peacock-deaths-bird-flu-outbreak-goolarive-village-negligence-sat-gw5qvdk</link>
            <guid isPermaLink="true">https://kannada.asianetnews.com/gallery/karnataka-districts/tumakuru-peacock-deaths-bird-flu-outbreak-goolarive-village-negligence-sat-gw5qvdk</guid>
            <pubDate>Wed, 06 May 2026 18:32:12 +0530</pubDate>
            <description><![CDATA[&lt;p&gt;ತುಮಕೂರು ಜಿಲ್ಲೆಯ ಗೂಳರಿವೆ ಗ್ರಾಮದಲ್ಲಿ ರಾಷ್ಟ್ರಪಕ್ಷಿ ನವಿಲುಗಳು ಸಾಯುತ್ತಿವೆ. ಮತ್ತೆರಡು ನವಿಲುಗಳು ಬಲಿಯಾಗಿದ್ದು, ಅವುಗಳ ಮೃತದೇಹಗಳನ್ನು ಬೀದಿ ನಾಯಿಗಳು ತಿನ್ನುತ್ತಿರುವುದರಿಂದ ಸೋಂಕು ಹರಡುವ ಭೀತಿ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqynkr4rzkyqt02ngxymb2mb,imgname-tumakuru-peacock-deaths-1778072019096.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ಜಿಲ್ಲೆಯ ಗೂಳರಿವೆ ಗ್ರಾಮದಲ್ಲಿ ರಾಷ್ಟ್ರಪಕ್ಷಿ ನವಿಲುಗಳು ಸಾಯುತ್ತಿವೆ. ಮತ್ತೆರಡು ನವಿಲುಗಳು ಬಲಿಯಾಗಿದ್ದು, ಅವುಗಳ ಮೃತದೇಹಗಳನ್ನು ಬೀದಿ ನಾಯಿಗಳು ತಿನ್ನುತ್ತಿರುವುದರಿಂದ ಸೋಂಕು ಹರಡುವ ಭೀತಿ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಕಲ್ಪತರು ನಾಡು ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ ಮುಂದುವರಿದಿದೆ. ಹಕ್ಕಿಜ್ವರದ (Bird Flu) ಭೀತಿ ಜಿಲ್ಲೆಯನ್ನು ಆವರಿಸಿದ್ದು, ಇದೀಗ ಮತ್ತೆರಡು ನವಿಲುಗಳು ಬಲಿಯಾಗಿವೆ. ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯ ನಿರ್ಲಕ್ಷ್ಯದ ನಡುವೆ ನವಿಲುಗಳ ಮೃತದೇಹಗಳು ಬೀದಿ ನಾಯಿಗಳ ಪಾಲಾಗುತ್ತಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.&lt;/p&gt;&lt;img&gt;&lt;p&gt;ತುಮಕೂರು ಜಿಲ್ಲೆಯ ಗೂಳರಿವೆ ಗ್ರಾಮದ ಹೊರವಲಯದ &lsquo;ಸುಣ್ಣಕಲ್ಲು ಕಟ್ಟೆ&rsquo; ಎಂಬಲ್ಲಿ ಈ ಘಟನೆ ಸಂಭವಿಸಿದೆ. ಹಕ್ಕಿಜ್ವರದಿಂದಾಗಿ ಈಗಾಗಲೇ ಹಲವಾರು ನವಿಲುಗಳು ಸಾವನ್ನಪ್ಪಿದ್ದವು. ಇದೀಗ ಅದೇ ಜಾಗದಲ್ಲಿ ಮತ್ತೆರಡು ನವಿಲುಗಳು ಅನಾಥವಾಗಿ ಸತ್ತು ಬಿದ್ದಿವೆ.&amp;nbsp;&lt;/p&gt;&lt;p&gt;ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ರಾಷ್ಟ್ರಪಕ್ಷಿಯ ಮೃತದೇಹಗಳಿಗೆ ಗೌರವ ನೀಡುವ ಬದಲು, ಅವುಗಳನ್ನು ಬೀದಿ ನಾಯಿಗಳು ಕಿತ್ತು ತಿನ್ನುತ್ತಿವೆ. ನವಿಲುಗಳ ಮಾಂಸಕ್ಕೆ ನಾಯಿಗಳು ಮುಗಿಬಿದ್ದಿರುವ ದೃಶ್ಯ ಕಂಡು ಗ್ರಾಮಸ್ಥರು ಮರುಗಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗಷ್ಟೇ ಈ ಭಾಗದಲ್ಲಿ ನವಿಲುಗಳು ಸಾಯುತ್ತಿರುವುದು ಹಕ್ಕಿಜ್ವರದಿಂದಲೇ ಎಂದು ಪ್ರಯೋಗಾಲಯದ ವರದಿ ದೃಢಪಡಿಸಿತ್ತು. ಹೀಗಿದ್ದರೂ ಸಹ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಸತ್ತ ನವಿಲುಗಳನ್ನು ನಾಯಿಗಳು ತಿನ್ನುತ್ತಿರುವುದರಿಂದ, ಈ ಸೋಂಕು ನಾಯಿಗಳ ಮೂಲಕ ಗ್ರಾಮದ ಇತರೆ ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೂ ಹರಡುವ ಸಾಧ್ಯತೆ ದಟ್ಟವಾಗಿದೆ. ಈ ಸೋಂಕಿನ ಭೀತಿಯಿಂದ ಗೂಳರಿವೆ ಗ್ರಾಮದ ಜನರು ನಿದ್ದೆಯಿಲ್ಲದಂತಾಗಿದ್ದಾರೆ.&lt;/p&gt;&lt;img&gt;&lt;p&gt;ಹಕ್ಕಿಜ್ವರ ಎಂದು ವರದಿ ಬಂದಿದ್ದರೂ ಅಧಿಕಾರಿಗಳು ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ? ಎಂಬುದು ಗ್ರಾಮಸ್ಥರ ಪ್ರಶ್ನೆ. ಸತ್ತ ಪಕ್ಷಿಗಳ ಮೃತದೇಹಗಳನ್ನು ಶಾಸ್ತ್ರೋಕ್ತವಾಗಿ ವಿಲೇವಾರಿ ಮಾಡಬೇಕಾದ ಅರಣ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ ಮೌನಕ್ಕೆ ಶರಣಾಗಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ವಿಲೇವಾರಿ ಮಾಡಬೇಕು ಮತ್ತು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;&lt;img&gt;&lt;p&gt;ರಾಷ್ಟ್ರಪಕ್ಷಿಗಳ ಈ ಸಾವು ಸರಣಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಪರಿಸರ ಪ್ರೇಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/tumakuru-peacock-deaths-bird-flu-outbreak-goolarive-village-negligence-sat-gw5qvdk"/>
        </item>
        <item>
            <title><![CDATA[ಅವಾಂತರಗಳ ಮಧ್ಯೆ ಕೂಲ್ ಆದ ಬೆಂಗಳೂರು, 25 ವರ್ಷಗಳ ದಾಖಲೆ ಮೀರಿದ ಮಳೆ! ಈ ಮೂರು ಜಿಲ್ಲೆಗಳಿಗೆ ಮತ್ತೆ ಹೈ ಅಲರ್ಟ್ ಘೋಷಣೆ]]></title>
            <link>https://kannada.asianetnews.com/state/bengaluru-records-highest-april-rainfall-in-history-111-mm-rain-breaks-25-year-record-gdp/articleshow-heb2wp7</link>
            <guid isPermaLink="true">https://kannada.asianetnews.com/state/bengaluru-records-highest-april-rainfall-in-history-111-mm-rain-breaks-25-year-record-gdp/articleshow-heb2wp7</guid>
            <pubDate>Thu, 30 Apr 2026 11:08:15 +0530</pubDate>
            <description><![CDATA[ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ಸುರಿದ 111.0 ಮಿ.ಮೀ ಮಳೆಯು ಹಲವು ವರ್ಷಗಳ ದಾಖಲೆಯನ್ನು ಮುರಿದಿದೆ. ಈ ಭಾರೀ ಮಳೆಯೊಂದಿಗೆ ಬಲವಾದ ಗಾಳಿ, ಆಲಿಕಲ್ಲು ಮಳೆ ಕೂಡ ಸಂಭವಿಸಿದ್ದು, ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿಯೂ ಮಳೆಯಾಗುವ ಮುನ್ಸೂಚನೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcr7cd3yx2fnwsndqf4rzvb,imgname-bengaluru-rains--2--1777470779811.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದಲ್ಲಿ ಏಪ್ರಿಲ್ 29ರಂದು ಸುರಿದ ಭಾರೀ ಮಳೆ ಹಲವು ವರ್ಷಗಳ ದಾಖಲೆಗಳನ್ನು ಮುರಿದಿದೆ. ಭಾರತೀಯ ಹವಾಮಾನ ಇಲಾಖೆ (IMD) ನಗರದ ವೀಕ್ಷಣಾಲಯ ನೀಡಿದ ಮಾಹಿತಿಯ ಪ್ರಕಾರ, ಒಂದೇ ದಿನದಲ್ಲಿ 111.0 ಮಿಲಿಮೀಟರ್ ಮಳೆಯು ದಾಖಲಾಗಿದ್ದು, ಇದು ಏಪ್ರಿಲ್ ತಿಂಗಳಲ್ಲಿ ಈವರೆಗೆ ಕಂಡುಬಂದ ಅತ್ಯಧಿಕ ಮಳೆಯಾಗಿದೆ. ಇದಕ್ಕೂ ಮೊದಲು 2001ರ ಏಪ್ರಿಲ್&zwnj;ನಲ್ಲಿ 108.6 ಮಿಲಿಮೀಟರ್ ಮಳೆಯೇ ಗರಿಷ್ಠ ದಾಖಲೆಯಾಗಿತ್ತು.&lt;/p&gt;&lt;h2&gt;ಮಳೆ ಜೊತೆಗೆ ಬಲವಾದ ಗಾಳಿ&lt;/h2&gt;&lt;p&gt;ನಿನ್ನೆ ಸುರಿದ ಮಳೆ ಕೇವಲ ಪ್ರಮಾಣದಲ್ಲೇ ಅಲ್ಲ, ತೀವ್ರತೆಯಲ್ಲಿಯೂ ಗಮನಾರ್ಹವಾಗಿತ್ತು. ಕೇವಲ ಒಂದು ಗಂಟೆಯ ಅವಧಿಯಲ್ಲಿ ಭಾರೀ ಮಳೆಯೊಂದಿಗೆ ಮಿಂಚು, ಗುಡುಗು ಮತ್ತು ಆಲಿಕಲ್ಲು ಮಳೆಯೂ ಸಂಭವಿಸಿತು. ಜೊತೆಗೆ ಗಂಟೆಗೆ ಸುಮಾರು 75 ಕಿಲೋಮೀಟರ್ ವೇಗದ ಬಲವಾದ ಗಾಳಿಯೂ ಬೀಸಿದ ಪರಿಣಾಮ ನಗರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಮರಗಳು ಉರುಳುವುದು, ವಿದ್ಯುತ್ ವ್ಯತ್ಯಯ, ರಸ್ತೆಗಳಲ್ಲಿನ ನೀರಿನ ನಿಲುಗಡೆ ಸೇರಿದಂತೆ ಹಲವು ಅವಾಂತರ ಆಯ್ತು.&lt;/p&gt;&lt;p&gt;ಈ ಅಕಾಲಿಕ ಮಳೆಯ ಪರಿಣಾಮವಾಗಿ ನಗರದಲ್ಲಿ ತಾಪಮಾನ ತಕ್ಷಣವೇ ಕುಸಿತಗೊಂಡಿದ್ದು, ಸುಮಾರು 10 ಡಿಗ್ರಿ ಸೆಲ್ಸಿಯಸ್ ಮಟ್ಟಿಗೆ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ತೀವ್ರತೆಯಿಂದ ಬಳಲುತ್ತಿದ್ದ ನಾಗರಿಕರಿಗೆ ತಾತ್ಕಾಲಿಕ ತಂಪಿನ ಅನುಭವ ನೀಡಿದರೂ, ಆಲಿಕಲ್ಲು ಮಳೆ ಮತ್ತು ಬಲವಾದ ಗಾಳಿಯಿಂದ ಉಂಟಾದ ಹಾನಿ ಮಾತ್ರ ಹೇಳ ತೀರದಾಗಿದೆ.&lt;/p&gt;&lt;h2&gt;ಅತ್ಯಂತ ತೀವ್ರ ಆಲಿಕಲ್ಲು ಮಳೆ&lt;/h2&gt;&lt;p&gt;ಐಎಂಡಿ ಬೆಂಗಳೂರು ನಿರ್ದೇಶಕ (ಕಾರ್ಯನಿರ್ವಹಣೆ) ಎನ್. ಪುವಿಯಾರಸನ್ ಅವರು ಈ ಕುರಿತು ಮಾತನಾಡಿ, ಇತ್ತೀಚಿನ ಅವಧಿಯಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಮಳೆಯಲ್ಲಿದು ಮೂರನೇ ಹಾಗೂ ಅತ್ಯಂತ ತೀವ್ರ ಆಲಿಕಲ್ಲು ಮಳೆಯಾಗಿದೆ. ಮಾರ್ಚ್ ತಿಂಗಳ ಎರಡನೇ ವಾರ ಮತ್ತು ಏಪ್ರಿಲ್ ಮೊದಲ ವಾರದಲ್ಲಿಯೂ ನಗರದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯ ಘಟನೆಗಳು ವರದಿಯಾಗಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಮುಂದಿನ ದಿನಗಳ ಹವಾಮಾನ ಕುರಿತು ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ತುಮಕೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆಗಳಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆಯೂ ಇದೆ. ಇದೇ ವೇಳೆ ಗರಿಷ್ಠ ತಾಪಮಾನದಲ್ಲಿ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ.&lt;/p&gt;&lt;h2&gt;ಮೂರು ಜಿಲ್ಲೆಗಳಿಗೆ ಅಲರ್ಟ್&lt;/h2&gt;&lt;p&gt;ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.&lt;/p&gt;&lt;p&gt;ಒಟ್ಟಾರೆ, ಏಪ್ರಿಲ್ ತಿಂಗಳಲ್ಲೇ ಇಷ್ಟು ತೀವ್ರ ಮಳೆಯಾಗಿರುವುದು ಹವಾಮಾನ ವೈಪರಿತ್ಯದ ಸೂಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/state/bengaluru-records-highest-april-rainfall-in-history-111-mm-rain-breaks-25-year-record-gdp/articleshow-heb2wp7"/>
        </item>
        <item>
            <title><![CDATA[ತುಮಕೂರಿನ ಜೆರಾಕ್ಸ್​ ಅಂಗಡಿಯಲ್ಲಿ ಲವ್​: ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ]]></title>
            <link>https://kannada.asianetnews.com/crime/husband-leaves-pregnant-wife-and-prepares-for-another-marriage-in-tumkur-suc/articleshow-l1hhnqk</link>
            <guid isPermaLink="true">https://kannada.asianetnews.com/crime/husband-leaves-pregnant-wife-and-prepares-for-another-marriage-in-tumkur-suc/articleshow-l1hhnqk</guid>
            <pubDate>Wed, 06 May 2026 13:41:26 +0530</pubDate>
            <description><![CDATA[ತುಮಕೂರಿನಲ್ಲಿ ಏಳು ವರ್ಷಗಳ ಕಾಲ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಮದುವೆಯಾದ ಯುವತಿಯೊಬ್ಬರು ಗರ್ಭಿಣಿಯಾದಾಗ, ಆಕೆಯ ಪತಿ ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾನೆ. ಇದೀಗ ಆರು ತಿಂಗಳ ಗರ್ಭಿಣಿಯಾಗಿರುವ ಆ ಯುವತಿ, ನ್ಯಾಯಕ್ಕಾಗಿ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqy5d4738d4zs2k5q2nm1sdy,imgname-tumkur-incident-1778055024867.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೆರಾಕ್ಸ್​ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಲವ್​ ಮಾಡಿ, ಮದುವೆಯಾಗಿ ಈಗ ಆಕೆ ಗರ್ಭಿಣಿಯಾದಾಗ ಇನ್ನೊಬ್ಬರ ಜೊತೆ ಮದುವೆಯಾಗಲು ಹೊರಟ ವ್ಯಕ್ತಿಯೊಬ್ಬನ ಆಘಾತಕಾರಿ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ಇದೀಗ ಆ ಯುವತಿ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಏಳು ವರ್ಷ ಲವ್​ ಮಾಡಿ, ಬಳಿಕ ಮದುವೆಯಾಗಿ ಗರ್ಭಿಣಿಯಾದ ಬಳಿಕ ತನ್ನ ಗಂಡ ತನ್ನನ್ನು ಬಿಟ್ಟು ಬೇರೊಬ್ಬರನ್ನು ಮದುವೆಯಾಗಲು ಹೊರಟಿದ್ದು ತನಗೆ ನ್ಯಾಯ ಕೊಡಿಸುವಂತೆ ಆಕೆ ಕೇಳಿಕೊಂಡಿದ್ದಾರೆ.&lt;/p&gt;&lt;p&gt;ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆಯ ಯುವತಿ ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಜೆರಾಕ್ಸ್​ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಜೆರಾಕ್ಸ್ ಬಂದಿದ್ದ ಬೊಮ್ಮಾ ನಾಯಕ್ ಈಕೆಯನ್ನು ನೋಡಿದ್ದ. ಕೊನೆಗೆ ಇಬ್ಬರಲ್ಲಿಯೂ ಪ್ರೀತಿ ಅರಳಿತ್ತು. ಪರಸ್ಪರ ಪ್ರೀತಿಯ ವಿಷಯ ಮಾತನಾಡಿದ್ದರು. ಏಳು ವರ್ಷಗಳವರೆಗೆ ಪ್ರೀತಿ ನಡೆದಿತ್ತು. ಬಳಿಕ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಒಂದೂವರೆ ವರ್ಷವಾಗಿದೆ.&lt;/p&gt;&lt;h2&gt;&lt;strong&gt;ಗರ್ಭಿಣಿಯಾದ ಬಳಿಕ ದೂರ&lt;/strong&gt;&lt;/h2&gt;&lt;p&gt;ಇದೀಗ ಯುವತಿ ಗರ್ಭಿಣಿಯಾಗಿದ್ದಾರೆ. ಗರ್ಭಿಣಿಯಾಗುತ್ತಲೇ ಈ ಮದುವೆಗೆ ತನ್ನ ಮನೆಯವರ ವಿರೋಧ ಇರುವ ಕಾರಣ, ಬೇರೊಂದು ಮದುವೆಯಾಗಲು ಹೊರಟಿದ್ದಾರೆ ತನ್ನ ಪತಿ ಎಂದು ಯುವತಿ ಪೊಲೀಸರಲ್ಲಿ ದೂರಿದ್ದಾರೆ. ನಾವಿಬ್ಬರೂ ಏಳು ವರ್ಷಗಳ ಕಾಲ ಜೊತೆಗಿದ್ದೆವು. ತಮ್ಮದು ಬೇರೆ ಜಾತಿ. ಆದ್ದರಿಂದ ಅವರ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ. ಇದರ ಹೊರತಾಗಿಯೂ ನಾವಿಬ್ಬರೂ ಮದುವೆಯಾದೆವು. ಆದರೆ ಇದೀಗ ನಾನು ಪ್ರೆಗ್ನೆಂಟ್​ ಆದ ಬಳಿಕ ಕಿರುಕುಳ ಕೊಡುತ್ತಿದ್ದಾರೆ. ಅವರ ಮನೆಯವರು ಬೇರೊಂದು ಮದುವೆಗೆ ರೆಡಿ ಮಾಡಿದ್ದರೂ, ಪತಿ ಏನೂ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಯುವತಿ.&lt;/p&gt;&lt;h3&gt;&lt;strong&gt;ಎಫ್​ಐಆರ್​ ದಾಖಲು&lt;/strong&gt;&lt;/h3&gt;&lt;p&gt;ಪೊಲೀಸರಲ್ಲಿ ದೂರಿರುವ ಯುವತಿ, ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊ*ಲೆ ಬೆದರಿಕೆ ದೂರು ದಾಖಲಿಸಿದ್ದಾರೆ. ಸದ್ಯ ಯುವತಿ ಆರು ತಿಂಗಳ ಗರ್ಭಿಣಿ. ನನಗೆ ಪತಿ ಬೇಕು. ನ್ಯಾಯ ಬೇಕು. ಹುಟ್ಟುವ ಮಗುವಿಗೆ ಅಪ್ಪ ಬೇಕು. ನ್ಯಾಯ ಕೊಡಿಸಿ ಎಂದು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪತಿ, ಆತನ ತಾಯಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tumakuru</category>
            <dc:creator>Suchethana D</dc:creator>
            <atom:link href="https://kannada.asianetnews.com/crime/husband-leaves-pregnant-wife-and-prepares-for-another-marriage-in-tumkur-suc/articleshow-l1hhnqk"/>
        </item>
        <item>
            <title><![CDATA[ಪ್ರೀತಿ ವಿಚಾರಕ್ಕೆ 17ರ ಮಗಳನ್ನೇ ಕೊಂದ ಪಾಪಿ ತಂದೆ! ಶವ ಹೂತು ಹಾಕಿ ತಿಂಗಳ ಕಾಲ ನಾಟಕವಾಡಿದ್ದ ಆರೋಪಿ ಅರೆಸ್ಟ್]]></title>
            <link>https://kannada.asianetnews.com/karnataka-districts/tumakuru-honor-killing-case-father-thimmarayappa-arrested-for-daughter-s-murder-sat/articleshow-m1uuc4x</link>
            <guid isPermaLink="true">https://kannada.asianetnews.com/karnataka-districts/tumakuru-honor-killing-case-father-thimmarayappa-arrested-for-daughter-s-murder-sat/articleshow-m1uuc4x</guid>
            <pubDate>Sun, 17 May 2026 16:22:20 +0530</pubDate>
            <description><![CDATA[ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ, ಪ್ರೀತಿಯ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ತಂದೆಯೊಬ್ಬ ತನ್ನ 17 ವರ್ಷದ ಮಗಳನ್ನು ಹತ್ಯೆ ಮಾಡಿದ್ದಾನೆ. ಒಂದು ತಿಂಗಳ ನಂತರ, ಪೊಲೀಸರ ತನಿಖೆಯಿಂದ ಈ ಘೋರ ಕೃತ್ಯ ಬಯಲಾಗಿದ್ದು, ಜಮೀನಿನ ಬಳಿ ಹೂತಿದ್ದ ಮೃತದೇಹವನ್ನು ಹೊರತೆಗೆಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krtrx4q6wvefyqy5ymp26ypa,imgname-tumakuru-news-1779014996710.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮೇ 17): ಮ&lt;/strong&gt;ಕ್ಕಳ ರಕ್ಷಣೆಗೆ ನಿಲ್ಲಬೇಕಾದ ತಂದೆಯೇ ಕಾಲಾಂತಕನಾದ ಘೋರ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಯ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಂದೆ, ತನ್ನ 17 ವರ್ಷದ ಮಗಳನ್ನು ಹತ್ಯೆ ಮಾಡಿ, ಜಮೀನಿನ ಪಕ್ಕದ ಹಳ್ಳದಲ್ಲಿ ಹೂತು ಹಾಕಿದ್ದ ಆತಂಕಕಾರಿ ವಿಷಯ ಈಗ ಬಯಲಾಗಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಕೊಲೆಯಾದ ಯುವತಿಯನ್ನು ಮೇಘನಾ (17) ಎಂದು ಗುರುತಿಸಲಾಗಿದೆ. ಈಕೆಯ ತಂದೆ ತಿಮ್ಮರಾಯಪ್ಪ (48) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಹಂತಕ. ಮೇಘನಾ ತನ್ನ ತಾಯಿಯ ಸಂಬಂಧಿಕರ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಈ ಪ್ರೇಮ ಸಂಬಂಧಕ್ಕೆ ತಂದೆ ತಿಮ್ಮರಾಯಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಮನೆಯಲ್ಲಿ ಈ ವಿಚಾರವಾಗಿ ಹಲವು ಬಾರಿ ಗಲಾಟೆಗಳೂ ನಡೆದಿದ್ದವು.&lt;/p&gt;&lt;h3&gt;&lt;strong&gt;ಏಪ್ರಿಲ್ 16 ರಂದು ನಡೆದಿದ್ದ ಘೋರ ಕೃತ್ಯ:&lt;/strong&gt;&lt;/h3&gt;&lt;p&gt;ಮಗಳ ಹಠಕ್ಕೆ ಬೇಸತ್ತಿದ್ದ ತಿಮ್ಮರಾಯಪ್ಪ, ಕಳೆದ ಏಪ್ರಿಲ್ 16 ರಂದೇ ಮೇಘನಾಳನ್ನು ಕೊಲೆ ಮಾಡಿದ್ದ. ಯಾರಿಗೂ ಸಂಶಯ ಬಾರದಂತೆ ತನ್ನ ಜಮೀನಿನ ಪಕ್ಕದಲ್ಲೇ ಇರುವ ಸರ್ಕಾರಿ ಹಳ್ಳವೊಂದರಲ್ಲಿ ಮಗಳ ಶವವನ್ನು ಹೂತು ಹಾಕಿದ್ದ. ಮಗಳು ಮನೆಗೆ ಬಾರದೇ ಇದ್ದಾಗ, ಏನೂ ಅರಿಯದವನಂತೆ ನಾಟಕವಾಡಿದ್ದ ಈತ, ಬಳಿಕ ಮಗಳ ಮಿಸ್ಸಿಂಗ್ ಕೇಸ್ ದಾಖಲಾಗುವಂತೆ ನೋಡಿಕೊಂಡಿದ್ದ.&lt;/p&gt;&lt;h2&gt;&lt;strong&gt;ಪೊಲೀಸರ ತನಿಖೆ ಮತ್ತು ಬಯಲಾದ ಸತ್ಯ:&lt;/strong&gt;&lt;/h2&gt;&lt;p&gt;ಮೇಘನಾ ನಾಪತ್ತೆಯಾಗಿರುವ ಕುರಿತು ಆಕೆಯ ತಾಯಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ತಿಮ್ಮರಾಯಪ್ಪನ ವರ್ತನೆ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು ವಿಚಾರಣೆಗೆ ಕರೆದಾಗ ಗಾಬರಿಗೊಂಡ ತಿಮ್ಮರಾಯಪ್ಪ, ನಾಪತ್ತೆಯಾಗಿದ್ದ. ಸುಮಾರು ಒಂದು ತಿಂಗಳ ಕಾಲ ತಿರುಪತಿ, ಧರ್ಮಸ್ಥಳ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇತ್ತ ಪತಿಯೂ ನಾಪತ್ತೆಯಾದ ಹಿನ್ನೆಲೆಯಲ್ಲಿ ಪತ್ನಿ ಮತ್ತೆ ಕಳ್ಳಂಬೆಳ್ಳ ಠಾಣೆಗೆ ಪತಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರು. ಈ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ತಿಮ್ಮರಾಯಪ್ಪನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಗಳನ್ನು ಕೊಲೆ ಮಾಡಿದ ಸತ್ಯವನ್ನು ಆತ ಒಪ್ಪಿಕೊಂಡಿದ್ದಾನೆ.&lt;/p&gt;&lt;h3&gt;&lt;strong&gt;ತಿಂಗಳ ಬಳಿಕ ಹೊರಬಂತು ಮೃತದೇಹ:&lt;/strong&gt;&lt;/h3&gt;&lt;p&gt;ಕೊಲೆಯಾಗಿ ಒಂದು ತಿಂಗಳ ಬಳಿಕ ಪ್ರಕರಣ ಬಯಲಾಗಿದ್ದು, ಇಂದು ಶಿರಾ ತಹಸೀಲ್ದಾರ್ ಸಮ್ಮುಖದಲ್ಲಿ ಹೂತು ಹಾಕಿದ್ದ ಮೃತದೇಹವನ್ನು ಹೊರತೆಗೆಯಲಾಯಿತು. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. 'ಗೌರವ'ದ ಹೆಸರಿನಲ್ಲಿ ಹೆತ್ತ ಮಗಳನ್ನೇ ಬಲಿಪಡೆದ ತಂದೆಯ ಕ್ರೌರ್ಯಕ್ಕೆ ಜಿಲ್ಲೆಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕಳ್ಳಂಬೆಳ್ಳ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/tumakuru-honor-killing-case-father-thimmarayappa-arrested-for-daughter-s-murder-sat/articleshow-m1uuc4x"/>
        </item>
        <item>
            <title><![CDATA[ಶಿವಣ್ಣನ ಅಕ್ಕನ ಮಗನೊಂದಿಗೆ ಅಕ್ರಮ ಸಂಬಂಧ, ಹೆಂಡತಿಯ ದ್ರೋಹಕ್ಕೆ ಬಲಿಯಾದವು ಮೂರು ಜೀವಗಳು!]]></title>
            <link>https://kannada.asianetnews.com/crime/kunigal-husband-and-children-tragic-end-due-to-wife-s-illicit-affair-rav/articleshow-n7hlhln</link>
            <guid isPermaLink="true">https://kannada.asianetnews.com/crime/kunigal-husband-and-children-tragic-end-due-to-wife-s-illicit-affair-rav/articleshow-n7hlhln</guid>
            <pubDate>Sat, 02 May 2026 10:59:27 +0530</pubDate>
            <description><![CDATA[ತುಮಕೂರಿನ ಕುಣಿಗಲ್&zwnj;ನಲ್ಲಿ, ಪತ್ನಿಯ ಅಕ್ರಮ ಸಂಬಂಧ ಮತ್ತು ಆಕೆ ಬೆಳೆಸಿದ ಅಕ್ಕನ ಮಗನ ನಂಬಿಕೆ ದ್ರೋಹದಿಂದ ನೊಂದ ವ್ಯಕ್ತಿಯೊಬ್ಬರು, ತಮ್ಮ ಇಬ್ಬರು ಮುದ್ದಾದ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಂಡ ಮನೆಗೆ ಕನ್ನ ಹಾಕಿದ ಈ ಘೋರ ದುರಂತವು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqkje3phc0q5vvf2p62qmwhx,imgname-----------------------2026-05-02t105533.973-1777699589841.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮೇ.2):&lt;/strong&gt; ಅದು ಒಂದು ಸುಂದರ ಸಂಸಾರ. ಇಬ್ಬರು ಮುದ್ದಾದ ಗಂಡು ಮಕ್ಕಳು. ಆದರೆ, ಅಕ್ಕನ ಮಗ ಅಂತಾ ಮನೆಯಲ್ಲಿಟ್ಕೊಂಡಿದ್ದಕ್ಕೆ ಸಂಸಾರ ಹಾಳುಮಾಡಿ ಕುಟುಂಬದ ಪಾಲಿಗೆ ಯಮನಾದ. ಉಂಡ ಮನೆಗೆ ಕನ್ನ ಹಾಕಿದ ಅಕ್ಕನ ಮಗನ ನಂಬಿಕೆ ದ್ರೋಹಕ್ಕೆ ತಂದೆ, ಇಬ್ಬರು ಮಕ್ಕಳು ಸೇರಿ ಮೂವರು ಬಲಿಯಾಗಿದ್ದಾರೆ. ತುಮಕೂರಿನ ಕುಣಿಗಲ್&zwnj;ನಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.&lt;/p&gt;&lt;h2&gt;ಘಟನೆ ಹಿನ್ನೆಲೆ ಏನು?&lt;/h2&gt;&lt;p&gt;ಈ ದುರಂತ ಕಥೆ ಶುರುವಾಗೋದು ಶಿವಣ್ಣ ಎಂಬುವವರ ಉದಾರ ಗುಣದಿಂದ. ತನ್ನ ಅಕ್ಕ ಮೃತಪಟ್ಟ ಬಳಿಕ ಅನಾಥನಾಗಿದ್ದ ಅಕ್ಕನ ಮಗ ಹೇಮಂತನನ್ನು ಶಿವಣ್ಣ ಮಗನಂತೆ ಸಾಕಿ ಸಲಹಿದ್ದರು. ಆದರೆ, ಅದೇ ಹೇಮಂತ್ ದೊಡ್ಡವನಾಗಿ ತನಗೆ ಅನ್ನ ಹಾಕಿದ ಮಾವನ ಬೆನ್ನಿಗೆ ಚೂರಿ ಹಾಕಿದ್ದ. ಶಿವಣ್ಣನ ಪತ್ನಿ ಕಾವ್ಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ!&lt;/p&gt;&lt;h2&gt;ಅಕ್ಕನ ಮಗನೇ ವಿಲನ್ ಆದ!&lt;/h2&gt;&lt;p&gt;ಈ ವಿಚಾರ ತಿಳಿಯುತ್ತಿದ್ದಂತೆಯೇ ಶಿವಣ್ಣನಿಗೆ ಮುಗಿಲು ಮುರಿದುಬಿದ್ದಂತಾಯ್ತು, ಸಂಸಾರ, ಕುಟುಂಬದ ಬದುಕು ನರಕವಾಯಿತು. ನಂಬಿಕೆ ದ್ರೋಹದಿಂದ ಆಘಾತಕ್ಕೊಳಗಾಗಿ ಅಕ್ಕನ ಮಗನನ್ನು ಮನೆಯಿಂದ ಹೊರಹಾಕಿ, ಮನನೊಂದು ವಿಷ ಸೇವಿಸಿ ಶಿವಣ್ಣ ಆತ್ಮ೧ಹತ್ಯೆಗೂ ಯತ್ನಿಸಿದ್ದರು. ಆಗ ಗ್ರಾಮಸ್ಥರು ಮಧ್ಯಪ್ರವೇಶಿಸಿ ಪಂಚಾಯಿತಿ ಮಾಡಿ, 'ಇನ್ನಾದರೂ ಅನ್ಯೋನ್ಯವಾಗಿರಿ&quot; ಎಂದು ಬುದ್ಧಿ ಹೇಳಿ ಗಂಡ-ಹೆಂಡತಿಯನ್ನು ಒಂದು ಮಾಡಿದ್ದರು.&lt;/p&gt;&lt;h3&gt;ಕ್ಷಮೆ ಕೇಳಿ ಮನೆಗೆ ಬಂದವಳು ಚಿನ್ನಾಭರಣ ದೋಚಿದಳು!&lt;/h3&gt;&lt;p&gt;ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಕಾವ್ಯ ತನ್ನ ಅಸಲಿ ರೂಪ ತೋರಿಸಿದ್ದಳು. ಕಳೆದ ಒಂದು ವಾರದ ಹಿಂದೆ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರ ಹೇಮಂತನ ಜೊತೆ ಓಡಿಹೋಗಿದ್ದಳು. ಈ ಬಗ್ಗೆ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ, ಪೊಲೀಸರ ಮುಂದೆ ಬಂದು ಕ್ಷಮೆ ಕೇಳಿ ನಾಟಕವಾಡಿ ಮತ್ತೆ ಮನೆಗೆ ಮರಳಿದ್ದಳು.&lt;/p&gt;&lt;p&gt;ಆದರೆ ಅವಳು ಮರಳಿ ಬಂದಿದ್ದು ಸಂಸಾರ ಮಾಡಲಿಕ್ಕಲ್ಲ, ದರೋಡೆ ಮಾಡಲಿಕ್ಕೆ! ಮನೆಗೆ ಬಂದ ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ನೋಡಿ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಮತ್ತೆ ಅದೇ ಹೇಮಂತನ ಜೊತೆ ಪರಾರಿಯಾಗಿದ್ದಳು. ಎಂಥ ಮೋಸಗಾತಿ!&lt;/p&gt;&lt;p&gt;ಪತ್ನಿಯ ಹಾದರ, ಅಕ್ಕನ ಮಗನ ದ್ರೋಹ, ಸಮಾಜದಲ್ಲಿ ಆದ ಅವಮಾನದಿಂದ ಶಿವಣ್ಣ ಸಂಪೂರ್ಣವಾಗಿ ಕುಸಿದುಹೋದರು. ಇನ್ನು ಬದುಕುವುದರಲ್ಲಿ ಅರ್ಥವಿಲ್ಲ ಎಂದು ನಿರ್ಧರಿಸಿದ ಅವರು, ನಿನ್ನೆ ರಾತ್ರಿ ಕ್ರೂರ ನಿರ್ಧಾರವೊಂದನ್ನು ತೆಗೆದುಕೊಂಡರು. ಮೊದಲು ತನ್ನ ಇಬ್ಬರು ಮುದ್ದಾದ ಗಂಡು ಮಕ್ಕಳನ್ನು ಕೈಯಾರೆ ಉಸಿರುಗಟ್ಟಿಸಿ ಸಾಯಿಸಿ, ನಂತರ ತಾವೂ ನೇಣು ಬಿಗಿದುಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ.&lt;/p&gt;&lt;p&gt;ಇಂದು ಬೆಳಿಗ್ಗೆ ಅಕ್ಕಪಕ್ಕದವರು ನೋಡಿದಾಗ ಈ ಘೋರ ದುರಂತ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಕುಣಿಗಲ್ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಂಬಿದವರಿಂದಲೇ ವಂಚನೆಗೊಳಗಾದ ಶಿವಣ್ಣನ ಕಥೆ ಈಗ ದುರಂತ ಅಂತ್ಯವಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/kunigal-husband-and-children-tragic-end-due-to-wife-s-illicit-affair-rav/articleshow-n7hlhln"/>
        </item>
        <item>
            <title><![CDATA[ತುಮಕೂರಲ್ಲಿ 44 ನವಿಲುಗಳ ಸರಣಿ ಸಾವಿಗೆ ಕಾರಣವೇನು? ಭೋಪಾಲ್ ಲ್ಯಾಬ್ ಶಾಕಿಂಗ್ ರಿಪೋರ್ಟ್!]]></title>
            <link>https://kannada.asianetnews.com/state/karnataka-h1n1-confirmed-in-44-peacock-dies-at-tumakuru-district-rav/articleshow-owomnn1</link>
            <guid isPermaLink="true">https://kannada.asianetnews.com/state/karnataka-h1n1-confirmed-in-44-peacock-dies-at-tumakuru-district-rav/articleshow-owomnn1</guid>
            <pubDate>Sat, 02 May 2026 10:22:37 +0530</pubDate>
            <description><![CDATA[ತುಮಕೂರು ತಾಲೂಕಿನಲ್ಲಿ 44 ನವಿಲುಗಳ ಅಸಹಜ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ಭೋಪಾಲ್ ಲ್ಯಾಬ್ ವರದಿ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆ ತೀವ್ರ ನಿಗಾ ವಹಿಸಿದ್ದು, ಸತ್ತ ಪಕ್ಷಿಗಳನ್ನು ಮುಟ್ಟದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqkfwga3d52e8p8fgntdhmy0,imgname-----------------------2026-05-02t101125.367-1777696915779.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮೇ.2): &lt;/strong&gt;ನವಿಲುಗಳ ಸರಣಿ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ಭೋಪಾಲ್&zwnj; ಲ್ಯಾಬ್&zwnj; ಸ್ಪಷ್ಟಪಡಿಸಿದ್ದು, ರಾಷ್ಟ್ರೀಯ ಉಚ್ಚ ಸುರಕ್ಷಾ ಪಶುರೋಗ ಸಂಸ್ಥೆ ನೀಡಿದ ಅಧಿಕೃತ ವರದಿ ಪ್ರಕಾರ ನವಿಲುಗಳ ಅಂಗಾಂಶ ಮಾದರಿಯಲ್ಲಿ ಎಚ್5ಎನ್&zwnj;1 ವೈರಸ್ ಇರುವುದು ದೃಢಪಟ್ಟಿದೆ.&lt;/p&gt;&lt;p&gt;ಈ ಹಿಂದೆ ತುಮಕೂರು ತಾಲೂಕಿನ ಸುತ್ತಮುತ್ತ 44 ನವಿಲುಗಳ ಅಸಹಜವಾಗಿ ಏಕಾಏಕಿ ಸಾವನ್ನಪ್ಪಿಪ್ಪಿದ್ದವು. ಈ ವೇಳೆ ಮೃತ ನವಿಲುಗಳಿಂದ ಅರಣ್ಯ ಇಲಾಖೆ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಲ್ಯಾಬಿಗೆ ಕಳುಹಿಸಿತ್ತು. ಈಗ ಅದರ ವರದಿ ಬಂದಿದ್ದು, ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ದೃಢಪಟ್ಟಿದೆ.&lt;/p&gt;&lt;h2&gt;ಪಶು ಸಂಗೋಪನಾ ಇಲಾಖೆ ಜಾಗ್ರತೆ:&lt;/h2&gt;&lt;p&gt;ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ತುರ್ತುಕ್ರಮಕ್ಕೆ ಪಶು ಸಂಗೋಪನಾ ಇಲಾಖೆ ಮುಂದಾಗಿದೆ. ಈ ಭಾಗದ ಕೋಳಿ ಸಾಕಾಣಿಕೆ ಕೇಂದ್ರಗಳ ಮೇಲೆ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಜನರು ಆತಂಕ ಪಡದೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.&lt;/p&gt;&lt;h3&gt;ಸತ್ತ ಪಕ್ಷಿ ಮುಟ್ಟದಂತೆ ಮನವಿ:&lt;/h3&gt;&lt;p&gt;ಈ ಮಧ್ಯೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗಾಗಿ ಸತ್ತ ಯಾವುದೇ ಪಕ್ಷಿಗಳನ್ನು ಮುಟ್ಟದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಮನವಿ ಮಾಡಿದೆ.&lt;/p&gt;&lt;p&gt;ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಸಾಕು ಪ್ರಾಣಿ-ಪಕ್ಷಿಗಳ ಕುರಿತು ಯಾವುದೇ ಆದೇಶವಿಲ್ಲ. ಆದ್ದರಿಂದ ಜನರು ಆತಂಕ ಪಡಬಾರದು ಎಂದು ಶಿವಪ್ರಸಾದ್ ತಿಳಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-h1n1-confirmed-in-44-peacock-dies-at-tumakuru-district-rav/articleshow-owomnn1"/>
        </item>
        <item>
            <title><![CDATA[ತಮಿಳುನಾಡಿನ ಚುನಾವಣೆಯಲ್ಲಿ ತುರುವೇಕೆರೆ ವ್ಯಕ್ತಿಗೆ ಗೆಲುವು; ಮೆಟ್ಟುಪಾಳ್ಯಂನಿಂದ ವಿಧಾನಸಭೆಗೆ ಪ್ರವೇಶ]]></title>
            <link>https://kannada.asianetnews.com/india-news/sunil-anand-from-thuruvakere-wins-in-tamil-nadu-elections-enters-the-assembly-from-mettupalayam-mrq/articleshow-po7nga3</link>
            <guid isPermaLink="true">https://kannada.asianetnews.com/india-news/sunil-anand-from-thuruvakere-wins-in-tamil-nadu-elections-enters-the-assembly-from-mettupalayam-mrq/articleshow-po7nga3</guid>
            <pubDate>Wed, 06 May 2026 06:30:41 +0530</pubDate>
            <description><![CDATA[ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷದಿಂದ ಸ್ಪರ್ಧಿಸಿದ್ದ ತುಮಕೂರು ಜಿಲ್ಲೆಯ ತುರುವೇಕೆರೆ ಮೂಲದ ಎನ್&zwnj;. ಸುನೀಲ್&zwnj; ಆನಂದ್&zwnj; ಗೆಲುವು ಸಾಧಿಸಿದ್ದಾರೆ. ಮೆಟ್ಟುಪಾಳ್ಯಂ ಕ್ಷೇತ್ರದಿಂದ ಡಿಎಂಕೆ ಹಾಗೂ ಎಐಎಡಿಎಂಕೆ ಅಭ್ಯರ್ಥಿಗಳನ್ನು ಮಣಿಸಿ, ಶಾಸಕರಾಗಿ ಆಯ್ಕೆಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqxcprfc0s7gz9hwwxeav8nv,imgname-sunil-anand--1778029126124.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ/ತುರುವೇಕೆರೆ&lt;/strong&gt;: ತಮಿಳುನಾಡಿನಲ್ಲಿ ನಟ ವಿಜಯ್&zwnj; ಅವರ ಟಿವಿಕೆ ಪಕ್ಷ ಜಯಭೇರಿ ಬಾರಿಸಿದ ಬೆನ್ನಲ್ಲೇ, ಕರ್ನಾಟಕದ ತುಮಕೂರು ಜಿಲ್ಲೆಯ ತುರುವೇಕೆರೆಯ ವ್ಯಕ್ತಿಯೊಬ್ಬರು ಟಿವಿಕೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಎಂಬ ಅಚ್ಚರಿಯ ವಿಷಯ ತಿಳಿದುಬಂದಿದೆ.&lt;/p&gt;&lt;p&gt;ಎನ್&zwnj;. ಸುನೀಲ್&zwnj; ಆನಂದ್&zwnj; ಇಂಥ ಗೆಲುವು ಸಾಧಿಸಿದವರು. 75,664 ಮತ ಪಡೆದ ಇವರು ಡಿಎಂಕೆ ಹಾಗೂ ಎಐಎಡಿಎಂಕೆ ಎರಡೂ ಪಕ್ಷದವರನ್ನು ಮಣಿಸಿ, 7778 ಮತಗಳ ಅಂತರದಿಂದ ಮೆಟ್ಟುಪಾಳ್ಯಂನಲ್ಲಿ ವಿಜಯ ಸಾಧಿಸಿದ್ದಾರೆ.&lt;/p&gt;&lt;h2&gt;&lt;strong&gt;ರಿಯಲ್&zwnj; ಎಸ್ಟೇಟ್&zwnj; ಉದ್ಯಮಿ:&lt;/strong&gt;&lt;/h2&gt;&lt;p&gt;ಮೂಲತಃ ತುರುವೇಕೆರೆಯವರಾದ ಇವರು, ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ನೆಲೆಸಿದ್ದಾರೆ.&lt;/p&gt;&lt;p&gt;ಸುನೀಲ್ ಆನಂದ್ ಅವರ ಅಜ್ಜನ ಊರು ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡಿಕೇಘಟ್ಟ. ಹಲವು ದಶಕಗಳ ಹಿಂದೆ ನಿಂಗೇಗೌಡರು ತಮಿಳುನಾಡಿಗೆ ವಲಸೆ ಹೋಗಿದ್ದರು. ತದ ನಂತರದ ದಿನಗಳಲ್ಲಿ ಅಲ್ಲೇ ತಮ್ಮ ಜೀವನ ಸಾಗಿಸಿದರು. ನಿಂಗೇಗೌಡರ ಮಗ ಎಚ್.ಎನ್.ನಾಗರಾಜು ಅವರ ಮಗನೇ ಈಗ ಮೆಟ್ಟುಪಾಳ್ಯಂನ ಶಾಸಕರಾಗಿರುವ ಸುನಿಲ್ ಆನಂದ್.&lt;/p&gt;&lt;p&gt;10ನೇ ತರಗತಿಯವರೆಗೆ ಓದು ಪೂರೈಸಿದ್ದು, ತಮಿಳುನಾಡಿನಲ್ಲಿಯೇ ರಿಯಲ್&zwnj; ಎಸ್ಟೇಟ್&zwnj; ಹಾಗೂ ಇತರ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಬಹುದೀರ್ಘಕಾಲದಿಂದಲೂ ವಿಜಯ್&zwnj;ರ ಬೆಂಬಲಿಗರಾಗಿದ್ದರು. ಜೊತೆಗೆ, ಟಿವಿಕೆಯ ನಿಷ್ಠಾವಂತ ಕಾರ್ಯಕರ್ತ ಕೂಡಾ ಹೌದು. ಚುನಾವಣೆಗೆ ನಿಲ್ಲುವ ಮೊದಲು ಪಕ್ಷದಲ್ಲಿ ತಮ್ಮ ವರ್ಚಸ್ಸು ಬೆಳೆಸಿಕೊಳ್ಳುತ್ತಾ ಬಂದಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ ಮೇಲೆ ಮತ್ತೆ ಚರ್ಚೆ ಅಪ್ರಸ್ತುತ: ಸಚಿವ ಪ್ರಿಯಾಂಕ್&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉಪಚುನಾವಣೆ ಸೋಲಿನ ಕಾರಣ ಬಿಚ್ಚಿಟ್ಟು, ತಪ್ಪು ಸರಿಪಡಿಸಿಕೊಳ್ತೇವೆ ಎಂದ ಸಚಿವ ಸೋಮಣ್ಣ&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/sunil-anand-from-thuruvakere-wins-in-tamil-nadu-elections-enters-the-assembly-from-mettupalayam-mrq/articleshow-po7nga3"/>
        </item>
        <item>
            <title><![CDATA[ಆ ಒಂದು ಕಾರಣಕ್ಕೆ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಏಕಾಏಕಿ 20ರಿಂದ 19ಕ್ಕೆ ಶಿಫ್ಟ್!]]></title>
            <link>https://kannada.asianetnews.com/state/karnataka-govt-sadhana-samavesha-event-shifted-to-may-19-rav/articleshow-to3vw4t</link>
            <guid isPermaLink="true">https://kannada.asianetnews.com/state/karnataka-govt-sadhana-samavesha-event-shifted-to-may-19-rav/articleshow-to3vw4t</guid>
            <pubDate>Sat, 16 May 2026 10:16:12 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ತುಮಕೂರಿನಲ್ಲಿ ಆಯೋಜನೆ. ಕೆಎಸ್&zwnj;ಆರ್&zwnj;ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ, ಮೇ 20ರಂದು ನಡೆಯಬೇಕಿದ್ದ 'ಸಾರ್ಥಕ ಸೇವೆಗಳ ಸಮರ್ಪಣೆ' ಕಾರ್ಯಕ್ರಮ ಮೇ 19ಕ್ಕೆ ಬದಲಾಯಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqhbr2ztjg8gj31t2yd98w4,imgname-----------------------2026-05-16t100954.700-1778906423391.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮೇ.16): &lt;/strong&gt;ಮೇ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ 3 ವರ್ಷಗಳು ತುಂಬಲಿದೆ. ಅದರ ಅಂಗವಾಗಿ ತುಮಕೂರಿನಲ್ಲಿ ರಾಜ್ಯದ ಜನತೆಗೆ ಆಗಿರುವ ಪ್ರಯೋಜನಗಳ ಸೌಲಭ್ಯ ವಿತರಣೆ ಕಾರ್ಯಕ್ರಮವಾಗಿ ಸಾರ್ಥಕ ಸೇವೆಗಳ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದಕ್ಕೆ ಮುನ್ನಾ ದಿನ 19ಕ್ಕೆ ಅಧಿಕೃತವಾಗಿ ಕಾರ್ಯಕ್ರಮ ನಿಗದಿಯಾಗಿದೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್&zwnj; ಅವರು ತಿಳಿಸಿದ್ದಾರೆ.&lt;/p&gt;&lt;p&gt;ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾತನಾಡಿ, ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಚಾಲನೆ ನೀಡಿ ಅವುಗಳನ್ನು ಆದ್ಯತಾ ಕಾರ್ಯಕ್ರಮಗಳಾಗಿ ತೆಗೆದುಕೊಂಡು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಈ ವಿಷಯವನ್ನು ಜನಸಮುದಾಯದೊಂದಿಗೆ ಹಂಚಿಕೊಳ್ಳಬೇಕಿತ್ತು. 20 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 2ನೇ ಅವಧಿಯ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಸಂದ ಹಿನ್ನೆಲೆಯಲ್ಲಿ ಆ ದಿನದಂದು ಕಾರ್ಯಕ್ರಮ ಆಯೋಜಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಬೇಡಿಕೆ ಈಡೇರಿಸುವಂತೆ ಅಂದೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಅದಕ್ಕೆ ಮುನ್ನಾ ದಿನ 19ರಂದೇ ಕಾರ್ಯಕ್ರಮ ಆಯೋಜಿಸಲು ಮುಖ್ಯಮಂತ್ರಿಯವರು ಸೂಚಿಸಿದ ಹಿನ್ನೆಲೆಯಲ್ಲಿ ದಿನಾಂಕ ಮಾತ್ರ ಬದಲಾಗಿದೆ. ಉಳಿದಂತೆ ಎಲ್ಲ ಕಾರ್ಯಕ್ರಮಗಳು ಪೂರ್ವ ಯೋಜಿತದಂತೆ ನಡೆಯಲಿವೆ ಎಂದು ವಿವರಿಸಿದರು.&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-govt-sadhana-samavesha-event-shifted-to-may-19-rav/articleshow-to3vw4t"/>
        </item>
        <item>
            <title><![CDATA[ದೇಶವನ್ನು ನಶೆ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಪಣ: ಕೇಂದ್ರ ಸಚಿವ ವಿ.ಸೋಮಣ್ಣ]]></title>
            <link>https://kannada.asianetnews.com/karnataka-districts/v-somanna-drug-free-india-campaign-tumakuru-walkathon-gvd/articleshow-vt4b3pf</link>
            <guid isPermaLink="true">https://kannada.asianetnews.com/karnataka-districts/v-somanna-drug-free-india-campaign-tumakuru-walkathon-gvd/articleshow-vt4b3pf</guid>
            <pubDate>Sat, 25 Apr 2026 23:52:16 +0530</pubDate>
            <description><![CDATA[&lt;p&gt;ದೇಶವನ್ನು ನಶೆ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3bsw54jhm01y45dw647d2sg,imgname-v-somanna-9-1755964118161.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.25):&lt;/strong&gt; ದೇಶವನ್ನು ನಶೆ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಅಮಾನಿಕೆರೆಯ ಗಾಜಿನ ಮನೆವರೆಗೆ ರಾಜೀವ್&zwnj;ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್.ಬಿ.ಸಿ. ಅವರ ನೇತೃತ್ವದಲ್ಲಿ ರಾಜೀವ್&zwnj;ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ, ಕರ್ನಾಟಕಕ್ಕೆ ಸಂಯೋಜನೆಗೊಳಪಟ್ಟಿರುವ ಕಾಲೇಜುಗಳ ಸಂಘ, ರಾಜೀವ್&zwnj;ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ,&lt;/p&gt;&lt;p&gt;ದಿಶಾ ಬೋಧ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ, ಯುವ ಶುದ್ಧಿ ಅಭಿಯಾನ, ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.&lt;/p&gt;&lt;p&gt;ರಾಷ್ಟ್ರ ಮತ್ತು ರಾಜ್ಯಗಳನ್ನು ಡ್ರಗ್ಸ್ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ. ಸದೃಢ ಭಾರತ ಕಟ್ಟುವುದು ಪ್ರಧಾನಿ ನರೇಂದ್ರ ಮೋದಿಯವರು ಸಂಕಲ್ಪವಾಗಿದೆ ಎಂದರು. ದೇಶದ ವ್ಯವಸ್ಥೆಯನ್ನು ಮತ್ತಷ್ಟು ಬಲಾಢ್ಯಗೊಳಿಸಲು ಮುಂದಿನ ಪೀಳಿಗೆ ಸಶಕ್ತರಾಗಬೇಕಿದೆ. ಮುಂದಿನ ದಿನಗಳಲ್ಲಿ ದೇಶದ ಸಮಗ್ರತೆಗೆ ನಶೆ ಮುಕ್ತ ಅಭಿಯಾನ ವಾಕಥಾನ್ ಸಹಕಾರಿಯಾಗಲಿದೆ ಎಂದರು.&lt;/p&gt;&lt;h2&gt;&lt;strong&gt;ಆರೋಗ್ಯವೂ ಅಷ್ಟೇ ಅವಶ್ಯಕತೆ&lt;/strong&gt;&lt;/h2&gt;&lt;p&gt;ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಶಿಕ್ಷಣ ಎಷ್ಟು ಅವಶ್ಯಕತೆ ಇದೆಯೋ ಆರೋಗ್ಯವೂ ಅಷ್ಟೇ ಅವಶ್ಯಕತೆ. ದೃಹಿಕವಾಗಿ ಸದೃಢವಾಗಿದ್ದರೆ ಅದನ್ನು ಆರೋಗ್ಯ ಎಂದು ಕರೆಯಲು ಸಾಧ್ಯವಿಲ್ಲ. ಹಾಗಾಗಿ ಮನುಷ್ಯ ಭೌತಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಆರೋಗ್ಯವಂತನಾಗಿದ್ದಾನೆ ಎಂದು ಕರೆಯಬಹುದು ಎಂದರು.&lt;/p&gt;&lt;p&gt;ಅಧ್ಯಕ್ಷತೆ ವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ನಶೆ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್ ಉತ್ತಮ ಕಾರ್ಯಕ್ರಮವಾಗಿದ್ದು, ಈ ಅಭಿಯಾನ ಯಶಸ್ವಿಯಾಗಲಿ ಎಂದರು.&lt;/p&gt;&lt;p&gt;ಶಾಸಕ ಡಾ. ರಂಗನಾಥ್ ಮಾತನಾಡಿ, ಯುವ ಜನತೆ ದುಶ್ಚಟಗಳಿಂದ ದೂರ ಉಳಿದು ಬದುಕು ಕಟ್ಟಿಕೊಳ್ಳಬೇಕು. ಬದುಕಿನ ಹಲವಾರು ಜಂಜಾಟಗಳ ಮಧ್ಯೆ ಯುವ ಜನತೆ ದುಶ್ಚಟಗಳ ದಾಸರಾಗುತ್ತಿದ್ದಾರೆ. ಇದರಿಂದ ಯುವಕರನ್ನು ಮುಕ್ತರಾಗಿಸುವ ನಿಟ್ಟಿನಲ್ಲಿ ರಾಜೀವ್&zwnj;ಗಾಂಧಿ ಆರೋಗ್ಯ ವಿವಿ ಹಮ್ಮಿಕೊಂಡಿರುವ ನಶೆ ಮುಕ್ತ ಭಾರತ ಅಭಿಯಾನ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು.&lt;/p&gt;&lt;p&gt;ರಾಜೀವ್&zwnj;ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್.ಬಿ.ಸಿ. ಮಾತನಾಡಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಆರಂಭವಾದ ನಶೆ ಮುಕ್ತ ಭಾರತ ವಾಕಥಾನ್ ಬಿ.ಎಚ್. ರಸ್ತೆ ಮುಖೇನ ಸಾಗಿ ಬಿಜಿಎಸ್ ಸರ್ಕಲ್&zwnj;ನಿಂದ ಅಶೋಕ ರಸ್ತೆ, ಚರ್ಚ್ ಸರ್ಕಲ್ ಮೂಲಕ ಹಾದು ಗಾಜಿನ ಮನೆ ಮುಂಭಾಗ ಮುಕ್ತಾಯಗೊಂಡಿತು. ಕೋಟೆ ಆಂಜನೇಯಸ್ವಾಮಿ ವೃತ್ತ ಬಳಿ ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಯುವ ಜನರಲ್ಲಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.&lt;/p&gt;]]></content:encoded>
            <category>tumakuru</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/v-somanna-drug-free-india-campaign-tumakuru-walkathon-gvd/articleshow-vt4b3pf"/>
        </item>
        <item>
            <title><![CDATA[ಲಾಭ ಕಾಣದ ತರಕಾರಿ ಕೃಷಿಯಿಂದ ನೊಂದು, ಸುಗಂಧರಾಜ ಹೂವು ಬೆಳೆದು ರಾಜನಾದ ತುಮಕೂರು ರೈತನ ಕಥೆ!]]></title>
            <link>https://kannada.asianetnews.com/gallery/karnataka-districts/karnataka-farmer-sri-ramanjunaiah-becomes-a-role-model-in-floriculture-through-sugandaraja-or-tuberose-farming-gdp-yxe6kf0</link>
            <guid isPermaLink="true">https://kannada.asianetnews.com/gallery/karnataka-districts/karnataka-farmer-sri-ramanjunaiah-becomes-a-role-model-in-floriculture-through-sugandaraja-or-tuberose-farming-gdp-yxe6kf0</guid>
            <pubDate>Thu, 14 May 2026 12:45:10 +0530</pubDate>
            <description><![CDATA[ತುಮಕೂರಿನ ರೈತ ರಾಮಾಂಜುನಯ್ಯ ಅವರು ಸಾಂಪ್ರದಾಯಿಕ ತರಕಾರಿ ಕೃಷಿ ತೊರೆದು, ವೈಜ್ಞಾನಿಕವಾಗಿ 'ಅರ್ಕಾ ಪ್ರಜ್ವಲ್' ತಳಿಯ ಸುಗಂಧರಾಜ ಹೂವಿನ ಕೃಷಿ ಆರಂಭಿಸಿದರು. ಈ ಬದಲಾವಣೆಯಿಂದ ಅವರು ಅಧಿಕ ಲಾಭ ಗಳಿಸಿದ್ದಲ್ಲದೆ, ತಮ್ಮ ಗ್ರಾಮದ ಆರ್ಥಿಕತೆಯನ್ನೇ ಪರಿವರ್ತಿಸಿ ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krjm2ma3n7arzrxf1vyenzx3,imgname-tuberose-farming-in-karnataka--2--1778741498179.jpg" type="image/jpeg" height="390" width="690"/>
            <content:encoded><![CDATA[ತುಮಕೂರಿನ ರೈತ ರಾಮಾಂಜುನಯ್ಯ ಅವರು ಸಾಂಪ್ರದಾಯಿಕ ತರಕಾರಿ ಕೃಷಿ ತೊರೆದು, ವೈಜ್ಞಾನಿಕವಾಗಿ 'ಅರ್ಕಾ ಪ್ರಜ್ವಲ್' ತಳಿಯ ಸುಗಂಧರಾಜ ಹೂವಿನ ಕೃಷಿ ಆರಂಭಿಸಿದರು. ಈ ಬದಲಾವಣೆಯಿಂದ ಅವರು ಅಧಿಕ ಲಾಭ ಗಳಿಸಿದ್ದಲ್ಲದೆ, ತಮ್ಮ ಗ್ರಾಮದ ಆರ್ಥಿಕತೆಯನ್ನೇ ಪರಿವರ್ತಿಸಿ ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.&lt;img&gt;&lt;p&gt;ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಎತ್ತಿನಹಳ್ಳಿ ಗ್ರಾಮ ಇಂದು ಪುಷ್ಪ ಕೃಷಿಯ ಮೂಲಕ ಹೊಸ ಗುರುತನ್ನು ಪಡೆದಿದೆ. ಈ ಬದಲಾವಣೆಯ ಹಿಂದೆ ಇರುವ ಪ್ರಮುಖ ವ್ಯಕ್ತಿ ಪ್ರಗತಿಪರ ರೈತ ಶ್ರೀ ರಾಮಾಂಜುನಯ್ಯ. ಸಾಂಪ್ರದಾಯಿಕ ತರಕಾರಿ ಕೃಷಿಯಿಂದ ಹೊರಬಂದು ಟ್ಯೂಬೆರೋಸ್ (ಸುಗಂಧರಾಜ) ಬೆಳೆ ಬೆಳೆಸುವ ಮೂಲಕ ಅವರು ಕೇವಲ ತಮ್ಮ ಜೀವನವನ್ನಷ್ಟೇ ಅಲ್ಲ, ಗ್ರಾಮದ ಆರ್ಥಿಕ ಸ್ಥಿತಿಯನ್ನೇ ಪರಿವರ್ತಿಸಿದ್ದಾರೆ.&lt;/p&gt;&lt;img&gt;&lt;p&gt;ಪ್ರಾರಂಭದಲ್ಲಿ ರಾಮಾಂಜುನಯ್ಯ ಅವರು ಟೊಮೆಟೊ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆಸುತ್ತಿದ್ದರು. ಆದರೆ ಬೆಲೆಗಳ ಏರಿಳಿತ ಮತ್ತು ಅನಿಶ್ಚಿತ ಆದಾಯವು ಅವರಿಗೆ ದೊಡ್ಡ ಸವಾಲಾಗಿತ್ತು. ಇದರ ಪರಿಹಾರಕ್ಕಾಗಿ ಅವರು ಹೆಚ್ಚು ಸ್ಥಿರ ಮತ್ತು ಲಾಭದಾಯಕ ಉದ್ಯಮವನ್ನು ಹುಡುಕಲು ಮುಂದಾದರು. ಈ ಸಂದರ್ಭದಲ್ಲಿ ಪುಷ್ಪ ಕೃಷಿಯತ್ತ ಅವರ ಗಮನ ಹರಿದು, ಟ್ಯೂಬೆರೋಸ್ ಬೆಳೆಗೆ ಒತ್ತು ಕೊಟ್ಟರು. ಇದು ಜೀವನದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿತು.&lt;/p&gt;&lt;img&gt;&lt;p&gt;ಬೆಂಗಳೂರಿನ ಐಸಿಎಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ ಅಭಿವೃದ್ಧಿಪಡಿಸಿದ &lsquo;ಅರ್ಕಾ ಪ್ರಜ್ವಲ್&rsquo; ಎಂಬ ಉನ್ನತ ತಳಿಯನ್ನು ಅಳವಡಿಸಿಕೊಂಡದ್ದು ಅವರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಈ ತಳಿ ದೊಡ್ಡ ಹಾಗೂ ಆಕರ್ಷಕ ಹೂವುಗಳನ್ನು ನೀಡುವುದರ ಜೊತೆಗೆ, ಸ್ಥಳೀಯ ತಳಿಗಳಿಗಿಂತ ಸುಮಾರು 20% ಹೆಚ್ಚು ಇಳುವರಿ ನೀಡುತ್ತದೆ. ಹೂಮಾಲೆ ಹಾಗೂ ಅಲಂಕಾರಿಕ ಬಳಕೆಗಾಗಿ ಇದು ಅತ್ಯಂತ ಸೂಕ್ತವಾಗಿದೆ.&lt;/p&gt;&lt;img&gt;&lt;p&gt;ತುಮಕೂರಿನ ಕೃಷಿ ವಿಜ್ಞಾನ ಕೇಂದ್ರ (KVK) ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮಾಂಜುನಯ್ಯ ಅವರು ಟ್ಯೂಬೆರೋಸ್ ಕೃಷಿಯ ವೈಜ್ಞಾನಿಕ ವಿಧಾನಗಳನ್ನು ಕಲಿತುಕೊಂಡರು. ಫ್ರಂಟ್ ಲೈನ್ ಡೆಮೋನ್ಸ್ಟ್ರೇಷನ್ (FLD) ಯೋಜನೆಯಡಿ ಗುಣಮಟ್ಟದ ಬಲ್ಬ್&zwnj;ಗಳನ್ನು ಪಡೆದ ಅವರು, ಸರಿಯಾದ ಅಂತರದಲ್ಲಿ ನೆಡುವುದು, ಸಾವಯವ ಪೋಷಕಾಂಶ ನಿರ್ವಹಣೆ, ಸಮರ್ಪಕ ನೀರಾವರಿ ಹಾಗೂ ಕೀಟ-ರೋಗ ನಿಯಂತ್ರಣದಂತಹ ವಿಧಾನಗಳನ್ನು ಅನುಸರಿಸಿದರು.&lt;/p&gt;&lt;img&gt;&lt;p&gt;ಮಾತ್ರ 2 ಎಕರೆಯಲ್ಲಿ ಟ್ಯೂಬೆರೋಸ್ ಬೆಳೆ ಬೆಳೆದ ರಾಮಾಂಜುನಯ್ಯ ಅವರು ಒಂದು ವರ್ಷದೊಳಗೆ 11.74 ಟನ್ ಬಿಡಿ ಹೂವುಗಳ ಇಳುವರಿಯನ್ನು ಪಡೆದರು. ಇದರ ಮೂಲಕ ಅವರು ಸುಮಾರು ₹5.85 ಲಕ್ಷ ಆದಾಯ ಗಳಿಸಿ, ತಮ್ಮ ಹಿಂದಿನ ತರಕಾರಿ ಕೃಷಿಯ ಆದಾಯಕ್ಕಿಂತ ಬಹಳ ಹೆಚ್ಚು ಲಾಭ ಪಡೆದರು. ಇದರ ಜೊತೆಗೆ ಅವರು ಬಲ್ಬ್ ಉತ್ಪಾದನೆಯನ್ನೂ ಪ್ರಾರಂಭಿಸಿದ್ದು, ಪ್ರತಿ ಹೆಕ್ಟೇರ್&zwnj;ಗೆ 18-20 ಟನ್ ಬಲ್ಬ್ ಹಾಗೂ ಬಲ್ಬ್ಲೆಟ್&zwnj;ಗಳನ್ನು ಉತ್ಪಾದಿಸುವ ಮೂಲಕ ಹೆಚ್ಚುವರಿ ಆದಾಯದ ಮೂಲವನ್ನು ನಿರ್ಮಿಸಿಕೊಂಡಿದ್ದಾರೆ. ಈ ಬಲ್ಬ್&zwnj;ಗಳನ್ನು ಮರುಬಳಕೆ ಮಾಡುವುದು ಅಥವಾ ಇತರ ರೈತರಿಗೆ ಮಾರಾಟ ಮಾಡುವುದು ಸಾಧ್ಯವಾಗಿದೆ.&lt;/p&gt;&lt;img&gt;&lt;p&gt;ಟ್ಯೂಬೆರೋಸ್ ಬೆಳೆ ವರ್ಷಪೂರ್ತಿ ಹೂ ಬಿಡುವುದರಿಂದ ನಿರಂತರ ಆದಾಯ ಸಾಧ್ಯವಾಗುತ್ತದೆ. ಎತ್ತಿನಹಳ್ಳಿಯ ಹೂವುಗಳು ಈಗ ಪಾವಗಡ, ತುಮಕೂರು, ಬೆಂಗಳೂರು, ಚೆನ್ನೈ ಸೇರಿದಂತೆ ಹಲವು ಪ್ರಮುಖ ಮಾರುಕಟ್ಟೆಗಳಿಗೆ ಸಾಗುತ್ತಿವೆ. ಹಬ್ಬಗಳು ಹಾಗೂ ಮದುವೆ ಕಾಲದಲ್ಲಿ ಬೇಡಿಕೆ ಹೆಚ್ಚುವುದರಿಂದ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ. ಇದಲ್ಲದೆ, ಕೆವಿಕೆ ಮತ್ತು ರೈತ ಉತ್ಪಾದಕ ಸಂಸ್ಥೆಗಳ (FPO) ಸಹಕಾರದಿಂದ ಸಾಮೂಹಿಕ ಮಾರುಕಟ್ಟೆ ವ್ಯವಸ್ಥೆ ಬಲಗೊಂಡಿದ್ದು, ರೈತರಿಗೆ ಉತ್ತಮ ಬೆಲೆ ದೊರೆಯಲು ಸಹಾಯವಾಗಿದೆ. ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗಿದ್ದು, ನೇರ ಲಾಭ ರೈತರಿಗೆ ತಲುಪುತ್ತಿದೆ.&lt;/p&gt;&lt;img&gt;&lt;p&gt;ಟ್ಯೂಬೆರೋಸ್ ಕೃಷಿಯ ಪರಿಣಾಮವಾಗಿ ಎತ್ತಿನಹಳ್ಳಿ ಗ್ರಾಮದಲ್ಲಿ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಅನೇಕ ರೈತರು ತಮ್ಮ ಆದಾಯವನ್ನು ಹಲವು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ ಹೂವಿನ ಕೃಷಿಯಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ವಿಶೇಷವಾಗಿ ಮಹಿಳೆಯರು ಕೊಯ್ಲು, ವಿಂಗಡಣೆ ಮತ್ತು ಶ್ರೇಣೀಕರಣದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಅವರ ಆರ್ಥಿಕ ಸಬಲೀಕರಣಕ್ಕೂ ಇದು ಕಾರಣವಾಗಿದೆ. ಗ್ರಾಮದಲ್ಲಿ ಒಟ್ಟಾರೆ ವರ್ಷಕ್ಕೆ ₹30 ಲಕ್ಷಕ್ಕಿಂತ ಹೆಚ್ಚು ಆದಾಯ ಉಂಟಾಗುತ್ತಿದ್ದು, ಸುಮಾರು 15 ರೈತ ಕುಟುಂಬಗಳು ಇದರ ಲಾಭ ಪಡೆಯುತ್ತಿವೆ.&lt;/p&gt;&lt;img&gt;&lt;p&gt;ರಾಮಾಂಜುನಯ್ಯ ಅವರ ಯಶಸ್ಸಿನಿಂದ ಪ್ರೇರಿತರಾಗಿ, ಸುತ್ತಮುತ್ತಲಿನ ರೈತರೂ ಟೊಮೆಟೊ ಮತ್ತು ಇತರ ತರಕಾರಿ ಬೆಳೆಗಳಿಂದ ಟ್ಯೂಬೆರೋಸ್ ಕೃಷಿಯತ್ತ ತಿರುಗುತ್ತಿದ್ದಾರೆ. ಪ್ರಸ್ತುತ ಎತ್ತಿನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 15 ಹೆಕ್ಟೇರ್&zwnj;ನಲ್ಲಿ ಟ್ಯೂಬೆರೋಸ್ ಬೆಳೆ ಬೆಳೆದಿದ್ದು, ಇದು ಸುಸ್ಥಿರ ಕೃಷಿ ಮಾದರಿಯಾಗಿ ಬೆಳೆಯುತ್ತಿದೆ.&lt;/p&gt;&lt;img&gt;&lt;p&gt;ಶ್ರೀ ರಾಮಾಂಜುನಯ್ಯ ಅವರ ದೃಢಸಂಕಲ್ಪ, ನವೀನತೆ ಸ್ವೀಕರಿಸುವ ಮನೋಭಾವ ಮತ್ತು ವೈಜ್ಞಾನಿಕ ವಿಧಾನಗಳ ಅಳವಡಿಕೆ ಅವರ ಯಶಸ್ಸಿನ ಮೂಲಸ್ತಂಭಗಳಾಗಿವೆ. ತಂತ್ರಜ್ಞಾನ, ತರಬೇತಿ ಮತ್ತು ಸಾಂಸ್ಥಿಕ ಬೆಂಬಲ ಒಟ್ಟುಗೂಡಿದಾಗ ಗ್ರಾಮೀಣ ಪ್ರದೇಶಗಳಲ್ಲಿ ಹೇಗೆ ಶಾಶ್ವತ ಅಭಿವೃದ್ಧಿ ಸಾಧ್ಯವಿದೆ ಎಂಬುದಕ್ಕೆ ಎತ್ತಿನಹಳ್ಳಿ ಒಂದು ಜೀವಂತ ಉದಾಹರಣೆ. ಟ್ಯೂಬೆರೋಸ್ ಕೃಷಿಯ ಮೂಲಕ ಒಂದು ಗ್ರಾಮವು ಹೇಗೆ ಆರ್ಥಿಕವಾಗಿ ಬಲಿಷ್ಠವಾಗಬಹುದು ಮತ್ತು ಸಮುದಾಯದ ಜೀವನಮಟ್ಟವನ್ನು ಎತ್ತಬಹುದು ಎಂಬುದನ್ನು ಈ ಕಥೆ ಸ್ಪಷ್ಟವಾಗಿ ತೋರಿಸುತ್ತದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/karnataka-farmer-sri-ramanjunaiah-becomes-a-role-model-in-floriculture-through-sugandaraja-or-tuberose-farming-gdp-yxe6kf0"/>
        </item>
    </channel>
</rss>
