<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 07 Apr 2026 11:55:30 +0530</lastBuildDate>
        <atom:link href="https://kannada.asianetnews.com/rss/tumakuru" rel="self" type="application/rss+xml"/>
        <item>
            <title><![CDATA[ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ]]></title>
            <link>https://kannada.asianetnews.com/tumakuru/sniffer-dog-salutes-swamiji-during-inspection-ahead-of-president-siddaganga-math-visit-videoshow-1anfe26</link>
            <guid isPermaLink="true">https://kannada.asianetnews.com/tumakuru/sniffer-dog-salutes-swamiji-during-inspection-ahead-of-president-siddaganga-math-visit-videoshow-1anfe26</guid>
            <pubDate>Tue, 31 Mar 2026 22:36:16 +0530</pubDate>
            <description><![CDATA[&lt;p&gt;ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನದಿಂದ ನಡೆದ ಭಾರಿ ಭದ್ರತಾ ತಪಾಸಣೆ ನಡುವೆ ಭದ್ರತಾ ಪಡೆಯ ಶ್ವಾನ ಸಿದ್ಧಲಿಂಗ ಸ್ವಾಮೀಜಿಗಳಿಗೆ ಸಲ್ಯೂಟ್ ಹೊಡೆದ ದೃಶ್ಯ ಎಲ್ಲರ ಗಮನಸೆಳೆದಿದೆ. &amp;nbsp;ಶ್ವಾನಕ್ಕೆ ಬಿಸ್ಕೆಟ್ ನೀಡಿ ಕೆಲ ಹೊತ್ತು ಮುದ್ದಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xa3si8c" medium="video" height="768" width="1024"/>
            <content:encoded><![CDATA[&lt;p&gt;ಡಾ. ಶ್ರೀ &amp;nbsp;ಶಿವಕುಮಾರ ಮಹಾಸ್ವಾಮೀಜಿಗಳವರ ಜನ್ಮದಿನಾಚರಣೆ ಮತ್ತು ಗುರುವಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದಾರೆ. ಈಗಾಗಲೆ ಬೆಂಗಳೂರಿಗೆ ಆಗಮಿಸಿರುವ ದ್ರೌಪದಿ ಮುರ್ಮುವನ್ನು ರಾಜ್ಯಪಾಲರು ಬರಮಾಡಿಕೊಂಡಿದ್ದಾರೆ. ಇತ್ತ ರಾಷ್ಟ್ರಪತಿಗಳ ಆಗಮನದ ಹಿನ್ನಲೆಯಲ್ಲಿ ತುಮಕೂರು ಸಿದ್ಧಗಂಗಾ ಮಠದಲ್ಲಿ ಭದ್ರತಾ ತಪಾಸಣೆ ನಡೆದಿದೆ. ಭದ್ರತಾ ಸಿಬ್ಬಂದಿಗಳ ಜೊತೆ ಶ್ವಾನದಳ ಕೂಡ ತಪಾಸಣೆ ನಡೆಸಿದೆ. ಈ ವೇಳೆ ಸಿದ್ದಲಿಂಗ ಸ್ವಾಮೀಜಿ ಮುಂದೆ ಶ್ವಾನ ಸಲ್ಯೂಟ್ ಮಾಡಿದ ದೃಶ್ಯ ಎಲ್ಲರ ಗಮನಸೆಳೆದಿದೆ. ಈ ವೇಳೆ ಸ್ವಾಮೀಜಿಗಳು ಶ್ವಾನಕ್ಕೆ ಬಿಸ್ಕಟ್ ನೀಡಿದ್ದಾರೆ.&amp;nbsp;&lt;/p&gt;]]></content:encoded>
            <category>tumakuru</category>
            <dc:creator>Chethan Kumar</dc:creator>
            <atom:link href="https://kannada.asianetnews.com/tumakuru/sniffer-dog-salutes-swamiji-during-inspection-ahead-of-president-siddaganga-math-visit-videoshow-1anfe26"/>
        </item>
        <item>
            <title><![CDATA[ಮಧುಗಿರಿ ಬೆಟ್ಟದಲ್ಲಿ ನೀಳ ದೇಹ,  ಮೊನಚಾದ ತಲೆಯುಳ್ಳ 'ನಾಗಾರ್ಜುನ ಸಾಗರ ರೇಸರ್' ಹಾವು ಪತ್ತೆ]]></title>
            <link>https://kannada.asianetnews.com/karnataka-districts/nagarjuna-sagar-racer-snake-with-long-body-and-pointed-head-found-in-madhugiri-hills-tumakuru-mrq/articleshow-2eqbuz3</link>
            <guid isPermaLink="true">https://kannada.asianetnews.com/karnataka-districts/nagarjuna-sagar-racer-snake-with-long-body-and-pointed-head-found-in-madhugiri-hills-tumakuru-mrq/articleshow-2eqbuz3</guid>
            <pubDate>Sat, 04 Apr 2026 06:40:01 +0530</pubDate>
            <description><![CDATA[&lt;p&gt;ಅಪರೂಪದ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆಯಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರ ಕಂಡುಬರುವ ಈ ಹಾವು, ತನ್ನ ವೇಗದ ಚಲನೆಯಿಂದ 'ರೇಸರ್' ಎಂದು ಹೆಸರುವಾಸಿಯಾಗಿದೆ. ಇದು ರಸೆಲ್ಸ್ ಕುಕ್ರಿ ಹಾವನ್ನು ಹೋಲುತ್ತದೆಯಾದರೂ, ವಿಶಿಷ್ಟ ದೈಹಿಕ ಲಕ್ಷಣಗಳಿಂದ ಭಿನ್ನವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knb0ggvcv1tczsxk4ee60tms,imgname-nagarjunsagar-racer--1775264875372.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಜಿಲ್ಲೆಯ ಮಧುಗಿರಿ ಪಟ್ಟಣದ ಬೆಟ್ಟದ ಇಳಿಜಾರಿನ ಕಲ್ಲು ಬಂಡೆಗಳಿಂದ ಕೂಡಿದ ಬಂಡೆಯ ಬುಡದಲ್ಲಿ ಅಪರೂಪದ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆಯಾಗಿದ್ದು ಉರಗ ಪ್ರೇಮಿಗಳಿಗೆ ಕುತೂಹಲ ಹೆಚ್ಚಾಗಿದೆ.&lt;/p&gt;&lt;h2&gt;&lt;strong&gt;ಈ ಹಾವಿನ ಲಕ್ಷಣಗಳೇನು?&lt;/strong&gt;&lt;/h2&gt;&lt;p&gt;ಇದು ರಸೆಲ್ಸ್ ಕುಕ್ರಿ ಹಾವನ್ನು ಹೋಲುತ್ತದೆಯಾದರೂ ಮೊನಚಾದ ತಲೆ, ದೇಹದ ಮೇಲಿನ ಹುರುಪೆಗಳು ಹಾಗೂ ಬಣ್ಣದ ಸಹಾಯದಿಂದ ವ್ಯತ್ಯಾಸ ತಿಳಿಯಬಹುದು. ನೀಳ ದೇಹದ ಮೇಲೆ ಮೃದುವಾದ ಹುರುಪೆಗಳು, ಬೆನ್ನಿನ ಭಾಗದಲ್ಲಿ ಗಾಢವಾದ ಬೂದು ಬಣ್ಣದ ಉಂಗುರಾಕಾರದ ರಚನೆಗಳು ದೇಹದ ಅರ್ದ ಭಾಗದವರೆಗೂ ಕಂಡು ಬರುತ್ತವೆ.&lt;/p&gt;&lt;h3&gt;&lt;strong&gt;ಈ ಹೆಸರು ಬಂದಿದ್ದು ಹೇಗೆ?&lt;/strong&gt;&lt;/h3&gt;&lt;p&gt;ದಕ್ಷಿಣ ಭಾರತದ ದಖನ್&zwnj; ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡು ಬರುವ ಈ ಹಾವು 1976ರಲ್ಲಿ ಆಂಧ್ರ ಪ್ರದೇಶದ ಗೂಂಟೂರು ಜಿಲ್ಲೆಯ ನಾಗಾರ್ಜುನ ಬೆಟ್ಟದಲ್ಲಿ ಕಂಡು ಬಂದಿದ್ದರಿಂದ ಈ ಹಾವಿಗೆ ಈ ಹೆಸರಿಟ್ಟಿದ್ದಾರೆ. ಈ ಹಾವುಗಳು ಶತೃಗಳಿಂದ ರಕ್ಷಸಿ ಕೊಳ್ಳಲು ಹಾಗೂ ಆಹಾರ ಜೀವಿಗಳನ್ನು ಹಿಡಿಯಲು ವೇಗ ಗತಿಯಲ್ಲಿ ಸಾಗುವುದರಿಂದ ರೇಸರ್ ಹೆಸರು ಬಂದಿದೆ. ಇದು ವಿಷ ರಹಿತ ಹಾವಾಗಿದ್ದು ಮಾನವರಿಗೆ ಯಾವುದೇ ಹಾನಿಯಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಾರವಾರದ ಮನೆ ಅಂಗಳದಲ್ಲಿ 8-12 ಅಡಿಯ 6 ಹೆಬ್ಬಾವು ಪ್ರತ್ಯಕ್ಷ! ಒಂದೆಡೆ ಇಷ್ಟೊಂದು ಹಾವು ಬಂದಿದ್ಯಾಕೆ?&lt;/strong&gt;&lt;/p&gt;&lt;p&gt;&lt;strong&gt;ಇದನ್ನು ಓದಿ: &lt;/strong&gt;&lt;strong&gt;ಹಾವುಗಳಿಗೆ ಮೃತ್ಯು ಸಮಾನ ಈ ಗಿಡದ ವಾಸನೆ! ಮನೆ ಮುಂದೆ ಈ ಗಿಡ ಇದ್ರೆ ಯಾವ ಹಾವು ಅಪ್ಪಿ-ತಪ್ಪಿಯೂ ಬರೋದಿಲ್ಲ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಚಿಕ್ಕಮಗಳೂರಿನಲ್ಲಿ ಅಪರೂಪದ ರಕ್ತಗನ್ನಡಿ ಹಾವು ಪತ್ತೆ#Chikkamagaluru #Snake https://t.co/HPMecKbZao&lt;/p&gt;&lt;p&gt;&mdash; Asianet Suvarna News (@AsianetNewsSN) December 10, 2024&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/nagarjuna-sagar-racer-snake-with-long-body-and-pointed-head-found-in-madhugiri-hills-tumakuru-mrq/articleshow-2eqbuz3"/>
        </item>
        <item>
            <title><![CDATA[ಶೇ‌.50 ಮಹಿಳಾ ಮೀಸಲಾತಿ ಮಸೂದೆ ಅನುಮೋದಿಸಲಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ]]></title>
            <link>https://kannada.asianetnews.com/karnataka-districts/women-reservation-bill-india-50-percent-demand-dr-g-parameshwar-statement-gvd/articleshow-2t54tg5</link>
            <guid isPermaLink="true">https://kannada.asianetnews.com/karnataka-districts/women-reservation-bill-india-50-percent-demand-dr-g-parameshwar-statement-gvd/articleshow-2t54tg5</guid>
            <pubDate>Fri, 20 Mar 2026 20:14:24 +0530</pubDate>
            <description><![CDATA[&lt;p&gt;ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyphkd70wdjfdfadahewv7kv,imgname-vdv-1750955832544.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮಾ.20):&lt;/strong&gt; ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.&lt;/p&gt;&lt;p&gt;ಈ ಹಿಂದೆ ರಾಜೀವಗಾಂಧಿ ಅವರು ಪ್ರಧಾನಮಂತ್ರಿ ಆಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ಸ್ಥಾನಮಾನಗಳನ್ನು ಕೊಡುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅವಕಾಶ ನೀಡಲಾಯಿತು&zwnj;. ಅದರಿಂದ ಇದೀಗ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಸಿಕ್ಕಿದೆ ಎಂದರು.&lt;/p&gt;&lt;p&gt;ನಂತರ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಇದ್ದಾಗ ಸಂಸತ್ತಿನಲ್ಲೂ ಶೇ.50 ಅವಕಾಶ ಕಲ್ಪಿಸುವ ಮಹಿಳಾ ಮಸೂದೆಯನ್ನು ಮಂಡಿಸಲಾಯಿತು. ಆ ದಿನಗಳಲ್ಲಿ ರಾಜ್ಯಸಭೆಯಲ್ಲಿ ಅದು ಅನುಮೋದನೆ ಆಗಲಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ಈ ಮಸೂದೆಯನ್ನು ಅನುಮೋದಿಸಿ ಮಹಿಳೆಗೆ ಶಕ್ತಿ ನೀಡಬೇಕು ಎಂದರು. ಇಡೀ ವಿಶ್ವದಲ್ಲಿ ಭಾರತದಲ್ಲಿಯೇ ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿ ಸಬಲೀಕರಣಗೊಳಿಸಲಾಗಿದೆ. ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲೂ ಪುರುಷರನ್ನು ಹಿಂದಿಕ್ಕಿ ಸಾಧನೆ ಮಾಡುತ್ತಿದ್ದಾರೆ ಎಂದರು.&lt;/p&gt;&lt;h2&gt;&lt;strong&gt;ಅತಿದೊಡ್ಡ ಜವಾಬ್ದಾರಿ&lt;/strong&gt;&lt;/h2&gt;&lt;p&gt;ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಯಾರೂ ಅವಕಾಶಗಳನ್ನು ಕಾದು ಕೂರುವುದು ಸರಿಯಲ್ಲ. ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು. ವಿಶೇಷವಾಗಿ ಮಹಿಳೆಯವರು ಅತಿದೊಡ್ಡ ಜವಾಬ್ದಾರಿ ಹೊಂದಿರುತ್ತಾರೆ. ಮನೆಯ ಒಳಗೆ ಮತ್ತು ಹೊರಗೆ ದುಡಿಯಬೇಕಾಗುತ್ತದೆ. ಈ ನಡುವೆ ತಮ್ಮ ಆರೋಗ್ಯವನ್ನೂ ನೋಡಿಕೊಳ್ಳಬೇಕು ಎಂದರು. ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ಮು ಮಾಡಿದ್ದು, ಜಿಲ್ಲೆಯಲ್ಲಿ 1160 ಕಂದಾಯ ಗ್ರಾಮಗಳನ್ನು ಗುರುತಿಸಿದ್ದು, ಸದ್ಯದಲ್ಲೇ 22 ಸಾವಿರ ಹಕ್ಕುಪತ್ರಗಳನ್ನು ನೀಡಲಿದ್ದೇವೆ. ಇದನ್ನು ನಾವು ಸೃಷ್ಟಿಕೊಂಡಿದ್ದೇವೆ ಎಂದರು.&lt;/p&gt;&lt;p&gt;ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ನೂರುನ್ನಿಸಾ ಮಾತನಾಡಿ, ಮಹಿಳೆಯೇ ತಮ್ಮ ಆತ್ಮ ಸಂತೋಷಕ್ಕಾಗಿ ಕೆಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಇಂದಿನ ದಿನಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಿದ್ದಾರೆ, ಆದರೆ ಆರ್ಥಿಕ ಸ್ವಾವಲಂಭನೆಯನ್ನು ಅನುಭವಿಸುವ ಹಕ್ಕನ್ನು ಜಯಿಸಿಕೊಳ್ಳಬೇಕಿದೆ ಎಂದರು.&lt;/p&gt;&lt;p&gt;ಜಿಪಂ ಸಿಇಒ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭ ಸಿ., ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಶಾರದಮ್ಮ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>tumakuru</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/women-reservation-bill-india-50-percent-demand-dr-g-parameshwar-statement-gvd/articleshow-2t54tg5"/>
        </item>
        <item>
            <title><![CDATA[ಹುಬ್ಬಳ್ಳಿ-ರಾಮೇಶ್ವರಂ ನಡುವೆ ವಿಶೇಷ ರೈಲು, ಒಟ್ಟು 9 ಟ್ರಿಪ್‌, ಕರ್ನಾಟಕದ ಈ ಎಲ್ಲಾ ಜಿಲ್ಲೆಗಳಲ್ಲಿ ಹಾದು ಹೋಗಲಿದೆ!]]></title>
            <link>https://kannada.asianetnews.com/state/hubballi-to-rameswaram-special-train-announced-9-summer-trips-by-south-western-railway-gdp/articleshow-5trwb39</link>
            <guid isPermaLink="true">https://kannada.asianetnews.com/state/hubballi-to-rameswaram-special-train-announced-9-summer-trips-by-south-western-railway-gdp/articleshow-5trwb39</guid>
            <pubDate>Wed, 25 Mar 2026 08:15:48 +0530</pubDate>
            <description><![CDATA[ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಶ್ರೀಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು (07355/07356) ಏಪ್ರಿಲ್&zwnj;ನಿಂದ ಜೂನ್&zwnj;ವರೆಗೆ ಒಟ್ಟು 9 ಟ್ರಿಪ್&zwnj;ಗಳನ್ನು ಮಾಡಲಿದ್ದು, ಹಾವೇರಿ, ದಾವಣಗೆರೆ, ತುಮಕೂರು, ಸೇಲಂ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲ್ಲಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kj7xvae990vg1k41hbrwb5jh,imgname-gangavati-railway-1771940194761.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ನೈಋತ್ಯ ರೈಲ್ವೆ ಮಹತ್ವದ ಕ್ರಮ ಕೈಗೊಂಡಿದೆ. ಶ್ರೀಸಿದ್ಧಾರೂಢ ಸ್ವಾಮೀಜಿ (ಎಸ್&zwnj;ಎಸ್&zwnj;ಎಸ್) ಹುಬ್ಬಳ್ಳಿ ಜಂಕ್ಷನ್ ಮತ್ತು ರಾಮೇಶ್ವರಂ ನಿಲ್ದಾಣಗಳ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಒಟ್ಟು 9 ಟ್ರಿಪ್&zwnj;ಗಳ ಸಾಪ್ತಾಹಿಕ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಸಂಚರಿಸಲು ರೈಲ್ವೆ ಇಲಾಖೆ ಪ್ರಕಟಣೆ ನೀಡಿದೆ.&lt;/p&gt;&lt;h2&gt;ರೈಲು ಸಂಖ್ಯೆ ಹೀಗಿದೆ&lt;/h2&gt;&lt;p&gt;ರೈಲು ಸಂಖ್ಯೆ 07355 ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ&ndash;ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಏಪ್ರಿಲ್ 5, 12, 19, 26 ಹಾಗೂ ಮೇ 3, 10, 17, 24 ಮತ್ತು 31ರಂದು ಪ್ರತೀ ಭಾನುವಾರ ಬೆಳಗ್ಗೆ 6.50ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ಈ ರೈಲು ಮರುದಿನ ಬೆಳಗ್ಗೆ 5.20ಕ್ಕೆ ರಾಮೇಶ್ವರಂ ತಲುಪುವಂತೆ ವೇಳಾಪಟ್ಟಿ ರೂಪಿಸಲಾಗಿದೆ.&lt;/p&gt;&lt;p&gt;ಇದರ ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 07356 ರಾಮೇಶ್ವರಂ&ndash;ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಏಪ್ರಿಲ್ 6, 13, 20, 27 ಹಾಗೂ ಮೇ 4, 11, 18, 25 ಮತ್ತು ಜೂನ್ 1ರಂದು ಪ್ರತೀ ಸೋಮವಾರ ರಾತ್ರಿ 8 ಗಂಟೆಗೆ ರಾಮೇಶ್ವರಂನಿಂದ ಹೊರಡಲಿದೆ. ಈ ರೈಲು ಮರುದಿನ ರಾತ್ರಿ 7.40ಕ್ಕೆ ಹುಬ್ಬಳ್ಳಿ ತಲುಪಲಿದೆ.&lt;/p&gt;&lt;h2&gt;ಯಾವೆಲ್ಲ ನಿಲ್ದಾಣಗಳಲ್ಲಿ ಪ್ರಯಾಣ&lt;/h2&gt;&lt;p&gt;ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ. ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರು, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕುಡಿ, ಶಿವಗಂಗಾ, ಮನಮಧುರೈ ಹಾಗೂ ರಾಮನಾಥಪುರಂ ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ.&lt;/p&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲುಗಳಲ್ಲಿ ವಿವಿಧ ವರ್ಗಗಳ ಬೋಗಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಂದು ಎಸಿ ಫಸ್ಟ್ ಕ್ಲಾಸ್, 2 ಎಸಿ ಟು-ಟೈರ್, 3 ಎಸಿ ತ್ರೀ-ಟೈರ್, 6 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಸೇರಿದಂತೆ ಒಂದು ಪ್ಯಾಂಟ್ರಿ ಕಾರ್, ಒಂದು ಜನರೇಟರ್-ಕಮ್-ಬ್ರೇಕ್ ವ್ಯಾನ್ ಹಾಗೂ ಒಂದು ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗ ಸ್ನೇಹಿ ಸೌಲಭ್ಯಗಳೊಂದಿಗೆ) ಸೇರಿವೆ.&lt;/p&gt;&lt;p&gt;ಈ ವಿಶೇಷ ರೈಲುಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಈಗಾಗಲೇ ಪ್ರಾರಂಭಗೊಂಡಿದ್ದು, ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ. ಬೇಸಿಗೆ ರಜೆ ಪ್ರಯಾಣವನ್ನು ಸುಗಮಗೊಳಿಸುವ ಈ ಯೋಜನೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/state/hubballi-to-rameswaram-special-train-announced-9-summer-trips-by-south-western-railway-gdp/articleshow-5trwb39"/>
        </item>
        <item>
            <title><![CDATA[Tumakuru: ಹೆಂಡ್ತಿಯೊಂದಿಗೆ ಅಕ್ರಮ ಸಂಬಂಧ ಶಂಕೆ: ತಮ್ಮನ ಹೊಟ್ಟೆಗೆ ಚಾಕು ಚುಚ್ಚಿದ ಅಣ್ಣ]]></title>
            <link>https://kannada.asianetnews.com/gallery/karnataka-districts/brother-stabs-brother-in-stomach-over-suspicion-of-having-illicit-relationship-with-wife-two-arrested-tmakuru-65so9ce</link>
            <guid isPermaLink="true">https://kannada.asianetnews.com/gallery/karnataka-districts/brother-stabs-brother-in-stomach-over-suspicion-of-having-illicit-relationship-with-wife-two-arrested-tmakuru-65so9ce</guid>
            <pubDate>Tue, 31 Mar 2026 12:51:47 +0530</pubDate>
            <description><![CDATA[&lt;p&gt;&amp;nbsp;ಅಣ್ಣನೇ ತನ್ನ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ನಡೆದ ಗಲಾಟೆಯಲ್ಲಿ ಈ ಕೃತ್ಯ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಅಣ್ಣ ಮತ್ತು ತಂದೆಯನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1bv84732hqq8zb5fay5ge4,imgname-tumakuru-murder-1774941216903.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಅಣ್ಣನೇ ತನ್ನ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ನಡೆದ ಗಲಾಟೆಯಲ್ಲಿ ಈ ಕೃತ್ಯ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಅಣ್ಣ ಮತ್ತು ತಂದೆಯನ್ನು ಬಂಧಿಸಿದ್ದಾರೆ.&lt;/p&gt;&lt;img&gt;&lt;p&gt;ಒಡಹಹುಟ್ಟಿದ ತಮ್ಮನಿಗೆ ಅಣ್ಣನೇ ಚಾಕು ಇರಿದು ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ. ಮಾರ್ಚ 22ರಂದು ಸೋದರರ ನಡುವೆ ಗಲಾಟೆ ನಡೆದಿದೆ. ಈ ವೇಳೆ ತಮ್ಮನಿಗೆ ಅಣ್ಣ ಚಾಕುವಿನಿಂದ ಇರಿದಿದ್ದನು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಸಾವನ್ನಪ್ಪಿದ್ದಾನೆ.&lt;/p&gt;&lt;img&gt;&lt;p&gt;29 ವರ್ಷದ ಸ್ಟಾಲಿನ್ ಮೃತ ವ್ಯಕ್ತಿ. ಈ ಸಂಬಂಧ ಸ್ಟಾಲಿನ್ ಹಿರಿಯ ಸೋದರ ನವೀನ್ ಮತ್ತು ತಂದೆ ಜಾನ್ ಪಾಲ್&zwnj; ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅಣ್ಣನಿಂದ ಚಾಕು ಇರಿತಕ್ಕೊಳಗಾಗಿದ್ದ ಸ್ಟಾಲಿನ್ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದನು. ಚಿಕಿತ್ಸೆ ಫಲಕಾರಿಯಾಗದೇ ಸ್ಟಾಲಿನ್ ಮಾರ್ಚ್ 28ರಂದು ಮೃತಪಟ್ಟಿದ್ದಾನೆ.&lt;/p&gt;&lt;img&gt;&lt;p&gt;ಇತ್ತೀಚೆಗಷ್ಟೇ ಸ್ಟಾಲಿನ್&zwnj;ಗೆ ಮದುವೆ ಫಿಕ್ಸ್ ಆಗಿತ್ತು. ಆದ್ರೆ ಸ್ಟಾಲಿನ್ ತನ್ನ ಹಿರಿಯ ಸೋದರ ನವೀನ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಮದುವೆಯಾಗ್ತಿರೋ ಯುವತಿ ಗಂಭೀರ ಆರೋಪ ಮಾಡಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕಾಗಿ ಮಾರ್ಚ್ 22ರಂದು ನವೀನ್ ಮತ್ತು ಸ್ಟಾಲಿನ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ಸ್ಟಾಲಿನ್ ಹೊಟ್ಟೆಗೆ ನವೀನ್ ಚಾಕುನಿಂದ ಚುಚ್ಚಿದ್ದಾನೆ.&lt;/p&gt;&lt;img&gt;&lt;p&gt;ಚಾಕು ಇರಿತಕ್ಕೊಳಗಾಗಿದ್ದ ಸ್ಟಾಲಿನ್&zwnj;ನನ್ನು ತಂದೆ ಜಾನ್ ಸಹಾಯದೊಂದಿಗೆ ತುಮಕೂರಿನ ಖಾಸಗಿ ಅಸ್ಪತ್ರೆಗೆ ನವೀನ್ ದಾಖಲಿಸಿದ್ದನು. ಈ ವೇಳೆ ವೈದ್ಯರ ಬಳಿ ಮನೆಯಲ್ಲಿ ಕುಸಿದುಬಿದ್ದು ಹೊಟ್ಟೆಗೆ ಗಾಯವಾಗಿದೆ ಎಂದು ಜಾನ್&zwnj;ಪಾಲ್ ಹೇಳಿ ಪ್ರಕರಣ ಮುಚ್ಚಿ ಹಾಕಲು ಇಬ್ಬರು ಮುಂದಾಗಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಐವರು ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಳು, ಬೀಗ ಹಾಕಿ 10 ವರ್ಷ ಚಿಕ್ಕವನೊಂದಿಗೆ ಐನಾತಿ ಆಂಟಿ ಜೂಟ್!&lt;/strong&gt;&lt;/p&gt;&lt;img&gt;&lt;p&gt;ಹೊಟ್ಟೆಗೆ ಬಲವಾಗಿ ಇರಿದಿರೋದರಿಂದ ಆಗಿರುವ ಗಾಯ ಎಂದು ಚಿಕಿತ್ಸೆ ನೀಡಿದ್ದ ವೈದ್ಯರು ದೃಢಪಡಿಸಿದ್ದರು. ವಿಷಯ ತಿಳಿದು ಪೊಲೀಸರು ಜಾನ್ ಪಾಲ್ ಮತ್ತು ನವೀನ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇಬ್ಬರು ನಡೆದ ಘಟನೆಯನ್ನು ವಿವರಿಸಿದ್ದಾರೆ. ಇಬ್ಬರನ್ನು ಬಂಧಿಸಿರುವ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪೆಟ್ರೋಲ್ ಸುರಿದು ಹೊಲದಲ್ಲಿದ್ದ 37 ಕ್ವಿಂಟಲ್&zwnj; ಮೆಣಸಿನಕಾಯಿ ರಾಶಿಗೆ ಕಿಡಿಗೇಡಿಗಳಿಂದ ಬೆಂಕಿ&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/brother-stabs-brother-in-stomach-over-suspicion-of-having-illicit-relationship-with-wife-two-arrested-tmakuru-65so9ce"/>
        </item>
        <item>
            <title><![CDATA[ಒಣ ಕೊಬ್ಬರಿ ಬೆಲೆಯು ಕ್ವಿಂಟಾಲ್‌ಗೆ ₹32,218 ತಲುಪಿ ಐತಿಹಾಸಿಕ ದಾಖಲೆ; ಮತ್ತಷ್ಟು ಏರಿಕೆ ನಿರೀಕ್ಷೆ]]></title>
            <link>https://kannada.asianetnews.com/state/the-price-of-dry-coconut-in-the-tumakuru-s-tiptur-apmc-market-has-reached-a-historic-record-of-rs-3218-per-quintal-mrq/articleshow-74q2so4</link>
            <guid isPermaLink="true">https://kannada.asianetnews.com/state/the-price-of-dry-coconut-in-the-tumakuru-s-tiptur-apmc-market-has-reached-a-historic-record-of-rs-3218-per-quintal-mrq/articleshow-74q2so4</guid>
            <pubDate>Tue, 07 Apr 2026 08:13:30 +0530</pubDate>
            <description><![CDATA[ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಒಣ ಕೊಬ್ಬರಿ ಬೆಲೆಯು ಕ್ವಿಂಟಾಲ್&zwnj;ಗೆ ₹32,218 ತಲುಪಿ ಐತಿಹಾಸಿಕ ದಾಖಲೆ ಬರೆದಿದೆ. ತೆಂಗಿನ ಇಳುವರಿ ಕುಸಿತ, ಹೆಚ್ಚಿದ ಬೇಡಿಕೆ ಮತ್ತು ಕೊಬ್ಬರಿ ದಾಸ್ತಾನು ಕೊರತೆಯಿಂದಾಗಿ ಬೆಲೆಯಲ್ಲಿ ಈ ಏರಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knjwy62vghzjnj7s95gqtrj8,imgname-dry-coconut-1775529564251.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಇಂದಿನ ಸೋಮವಾರದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ 32,218ಕ್ಕೆ ಟೆಂಡರ್ ಆಗಿರುವುದು ಈವರೆಗಿನ ಕೊಬ್ಬರಿ ಬೆಲೆಯಲ್ಲಿ ಇತಿಹಾಸ ದಾಖಲಿಸುವ ಬೆಲೆ ಬಂದಿದೆ ಎಂಬ ಸಂತಸದಲ್ಲಿ ಕೊಬ್ಬರಿ ಬೆಳೆಗಾರರು ಹಾಗೂ ರೈತರು ಖುಷಿಪಡುತ್ತಿರುವುದು ಕಂಡು ಬರುತ್ತಿದೆ.&lt;/p&gt;&lt;p&gt;2024 ರ ಮದ್ಯಭಾಗದಿಂದ ನಿಧಾನವಾಗಿ ಕೊಬ್ಬರಿ ಬೆಲೆಯಲ್ಲಿ ಚೇತರಿಕೆ ಕಂಡುಬಂದು ಕಳೆದ ಗುರುವಾರದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ರು. 30830 ದಾಖಲಿಸಿದ್ದು ಬೆಳೆಗಾರರಲ್ಲಿ ತುಸು ಮಂದಹಾಸ ಮೂಡಿಸಿದ್ದ ಬೆನ್ನಲ್ಲೇ, ಸೋಮವಾರದ ಹರಾಜು ರು. 32,218 ಸಾವಿರ ಮುಟ್ಟುವ ಮೂಲಕ ಈವರೆಗಿನ ಕೊಬ್ಬರಿ ಬೆಲೆಯಲ್ಲಿ ಇತಿಹಾಸ ದಾಖಲಿಸುವ ಸಂತಸದಲ್ಲಿ ಕೊಬ್ಬರಿ ಬೆಳೆಗಾರರು ಹಾಗೂ ರೈತರು ಸಂತಸದಲ್ಲಿರುವುದು ಕಂಡು ಬರುತ್ತಿದೆ.&lt;/p&gt;&lt;h2&gt;&lt;strong&gt;ಅಪರೂಪದ ಸಿಹಿ ಕೊಬ್ಬರಿ&lt;/strong&gt;&lt;/h2&gt;&lt;p&gt;ತಿಪಟೂರು ಮಾರುಕಟ್ಟೆಯಲ್ಲಿ ದೊರೆಯುವ ವಿಶಿಷ್ಟಗುಣ ಹೊಂದಿರುವ ಅಪರೂಪದ ಸಿಹಿ ಕೊಬ್ಬರಿಯು ತನ್ನದೇ ಆದ ವಿಶೇಷ ಗುಣಗಳಿಂದ ದೇಶ-ವಿದೇಶಗಳಲ್ಲಿ ಪ್ರಸಿದ್ದಿಯಾಗಿದೆ. ಕೊಬ್ಬರಿ ವಹಿವಾಟಿನ ಇತಿಹಾಸದಲ್ಲಿ ಯಾವತ್ತೂ ಕ್ವಿಂಟಾಲ್ ಕೊಬ್ಬರಿ ಬೆಲೆ ರು. 20 ಸಾವಿರ ದಾಟಿಲ್ಲದಿರುವ ಬಗ್ಗೆ ರೈತರಲ್ಲಿ ಆಗಾಗ್ಗೆ ಚರ್ಚೆ ಉಂಟುಮಾಡುತ್ತಿತ್ತು. ಏಳೆಂಟು ವರ್ಷಗಳ ಹಿಂದೆ ಒಮ್ಮೆ 18 ಸಾವಿರದ ಸನಿಹಕ್ಕೆ ಬಂದಿದ್ದ ಬೆಲೆ ನಂತರ ಹಠಾತ್ ಕುಸಿದು 2023ರಲ್ಲಿ 8-10ಸಾವಿರದ ಆಜುಬಾಜಿನಲ್ಲೇ ಗಿರಕಿ ಹೊಡೆಯುತ್ತಿತ್ತು.&amp;nbsp;&lt;/p&gt;&lt;p&gt;ಈ ಸಂದರ್ಭದಲ್ಲಿ ಬೆಳೆಗಾರರಿಗೆ ಕೊಬ್ಬರಿ ಉತ್ಪಾದಿಸಲು ಹೆಚ್ಚಾಗಿ ಆದಾಯ ತುಂಬಾ ಕಡಿಮೆಯಾದ್ದರಿಂದ ತೆಂಗಿನ ಮರಗಳನ್ನು ಬೆಳೆಯುವುದು ಬೇಡವೆಂಬ ಬೇಸರಕ್ಕೆ ಬಂದಿದ್ದರು. ಹಾಗಾಗಿ ರೈತರು ಅಡಿಕೆ, ಬಾಳೆ, ದಾಳಿಂಬೆ ಮತ್ತಿತರೆ ವಾಣಿಜ್ಯ ತೋಟಗಾರಿಕೆಯತ್ತ ಮುಂದಾಗಿದ್ದರು. ಆದರೆ ಕಳೆದ ವರ್ಷದಿಂದ ತೆಂಗಿನ ಕಾಯಿಗಳ ಇಳುವರಿಯಲ್ಲಿ ಬಹುದೊಡ್ಡ ಕುಸಿತ ಕಂಡಿದ್ದರಿಂದ ಎಳನೀರು ಹಾಗೂ ತೆಂಗಿನ ಕಾಯಿಗಳಿಗೆ ನಿರೀಕ್ಷೆ ಮೀರಿ ಬೆಲೆ ಹಾಗೂ ಬೇಡಿಕೆ ಹೆಚ್ಚಾಗತೊಡಗಿದ್ದರಿಂದ ಬೆಳೆಗಾರರು ಎಳನೀರು ಹಾಗೂ ತೆಂಗಿನಕಾಯಿಗಳನ್ನೇ ಮಾರಾಟ ಮಾಡಲು ಪ್ರಾರಂಭಿಸಿದ್ದರಿಂದ, ಕೊಬ್ಬರಿ ದಾಸ್ತಾನು ಸಹಜವಾಗಿ ಕಡಿಮೆಯಾಗಿ ಕೊಬ್ಬರಿ ಬೆಲೆ ಏರುಮುಖದಲ್ಲಿ ಸಾಗುತ್ತಿದ್ದು, ಸೋಮವಾರದ ಹರಾಜಿನಲ್ಲಿ ರು. 32ಸಾವಿರ ಗಡಿ ದಾಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆ-ಬೆಲೆ ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿ ರೈತರು, ವರ್ತಕರು ಚರ್ಚೆ ಮಾಡುತ್ತಿರುವುದು ಕಂಡು ಬರುತ್ತಿದೆ.&lt;/p&gt;&lt;h3&gt;&lt;strong&gt;ಬೇಡಿಕೆ ಹೆಚ್ಚು-ಅವಕ ಕಡಿಮೆ&lt;/strong&gt;&lt;/h3&gt;&lt;p&gt;ರೈತರ ಬಳಿ ನಾನಾ ಕಾರಣಗಳಿಂದ ಕೊಬ್ಬರಿ ದಾಸ್ತಾನು ತುಂಬಾ ಕಡಿಮೆ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರುವ ಅವಕ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗತೊಡಗಿದೆ. ಉತ್ತರ ಭಾರತದಲ್ಲಿ ಶ್ರಾವಣ ಮಾಸದಿಂದ ಪ್ರಾರಂಭವಾಗಿ, ದೀಪಾವಳಿವರೆಗೂ ಆಚರಿಸುವ ಎಲ್ಲ ಹಬ್ಬಗಳಿಗೂ ಕೊಬ್ಬರಿ ಬೇಡಿಕೆ ಹೆಚ್ಚು ಇರುವುದರಿಂದ ಬೆಲೆಯೂ ಹೆಚ್ಚಾಗುವುದು ವಾಡಿಕೆಯಾದರೂ, ಈ ಸಂದರ್ಭದಲ್ಲಿ ಬೆಲೆ ಹೆಚ್ಚಾಗಿರುವುದು ಭವಿಷ್ಯದಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂಬುದು ಮಾರುಕಟ್ಟೆ ತಜ್ಞರ ಅನಿಸಿಕೆ.&lt;/p&gt;&lt;p&gt;ಈಗಾಗಲೆ ತಮಿಳುನಾಡು, ಆಂದ್ರ, ಕೇರಳ ಮತ್ತಿತರೆ ತೆಂಗು ಬೆಳೆಯುವ ಪ್ರದೇಶಗಳಲ್ಲೂ ತೆಂಗಿನ ಕಾಯಿಗಳ ಇಳುವರಿ ಕುಸಿತ ಕಂಡಿದ್ದು, ನಮ್ಮ ರಾಜ್ಯದ ಕಲ್ಪತರು ನಾಡಿನಲ್ಲಿ ಇತ್ತೀಚೆಗೆ ಹೆಚ್ಚು ರೈತರು ಉತ್ತಮ ಬೆಲೆ ಬಂದ ಕಾರಣ ಎಳನೀರು ಮತ್ತು ತೆಂಗಿನಕಾಯಿಗಳನ್ನೇ ಮಾರಾಟಮಾಡುತ್ತಿರುವುದರಿಂದ ಕೊಬ್ಬರಿ ದಾಸ್ತಾನು ತುಂಬಾ ಕಡಿಮೆಯಾಗಿದೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;25 ವರ್ಷದ ಭೂಸ್ವಾಧೀನ ಕಾನೂನು ಸಮರದಲ್ಲಿ ಎಪಿಎಂಸಿಗೆ ಜಯ&lt;/strong&gt;&lt;/p&gt;&lt;p&gt;ಇದರ ಜೊತೆಗೆ ಕಳೆದ ಆರೇಳು ವರ್ಷಗಳಿಂದ ಮಳೆ ಕೊರತೆ, ತೆಂಗಿನ ಮರಗಳನ್ನು ಕಾಡುತ್ತಿರುವ ಹಲವಾರು ರೋಗಗಳು ತೆಂಗಿನ ಕಾಯಿಗಳ ಇಳುವರಿಯಲ್ಲಿ ಗಣನೀಯ ಕೊರತೆ ಉಂಟುಮಾಡುತ್ತಿರುವುದಲ್ಲದೆ, ಲೆಕ್ಕವಿಲ್ಲದಷ್ಟು ತೆಂಗಿನ ಮರಗಳು ಬಿದ್ದು ಹೋಗಿರುವ ಕಾರಣಗಳಿಂದಲೂ ಮುಂದಿನ ದಿನಮಾನಗಳಲ್ಲಿ ಎಳನೀರು, ತೆಂಗಿನಕಾಯಿ ಹಾಗೂ ಕೊಬ್ಬರಿಗೆ ನಿರೀಕ್ಷೆ ಮೀರಿ ಬೆಲೆ ಬರುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಜೇಂದ್ರಗಢದಲ್ಲಿ ಕ್ವಿಂಟಾಲ್ ಶೇಂಗಾ 11 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟ: ರೈತರು ಖುಷ್&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/the-price-of-dry-coconut-in-the-tumakuru-s-tiptur-apmc-market-has-reached-a-historic-record-of-rs-3218-per-quintal-mrq/articleshow-74q2so4"/>
        </item>
        <item>
            <title><![CDATA[ತುಮಕೂರಿನಲ್ಲಿ ನಾಪತ್ತೆಯಾಗಿದ್ದ ಮಹಿಳಾ ಪಿಎಸ್ಐ ಪತ್ತೆ! ಎಲ್ಲಿದ್ದರು ಗೊತ್ತಾ?]]></title>
            <link>https://kannada.asianetnews.com/karnataka-districts/missing-tumakuru-woman-psi-found-at-chikkamagaluru-rav/articleshow-7gb3tsr</link>
            <guid isPermaLink="true">https://kannada.asianetnews.com/karnataka-districts/missing-tumakuru-woman-psi-found-at-chikkamagaluru-rav/articleshow-7gb3tsr</guid>
            <pubDate>Sat, 04 Apr 2026 12:18:25 +0530</pubDate>
            <description><![CDATA[ತುಮಕೂರಿನ ಹೊಸ ಬಡಾವಣೆ ಠಾಣೆಯ ಪಿಎಸ್ಐ ಮಂಗಳಮ್ಮ ಅವರ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಕೌಟುಂಬಿಕ ಕಲಹದಿಂದ ಮನನೊಂದು ಮನೆಬಿಟ್ಟು ಹೋಗಿದ್ದ ಅವರು, ತೀವ್ರ ಹುಡುಕಾಟದ ಬಳಿಕ ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knbkj756tnc8dy6hnvv5ypgf,imgname----------------------58--1775284853926.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.4): &lt;/strong&gt;ತೀವ್ರ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ ಮಹಿಳಾ ಪೊಲೀಸ್ ಸಬ್&zwnj; ಇನ್ಪೆಕ್ಟರ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ-2 ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳಮ್ಮ ಅವರು ಕೊನೆಗೂ ಪತ್ತೆಯಾಗಿದ್ದಾರೆ.&lt;/p&gt;&lt;p&gt;ನಿನ್ನೆ ಬೆಳಗ್ಗೆ ಡಿವೈಎಸ್ ಪಿ ಕಚೇರಿಯಲ್ಲಿ ಮೀಟಿಂಗ್ ನಲ್ಲಿ ಭಾಗಿಯಾಗಿದ್ದ ಮಂಗಳಮ್ಮ ಅವರು, ಸಭೆಯ ಮಧ್ಯೆಯೇ ಇಂಪಾರ್ಟೆಂಟ್ ಫೋನ್&zwnj; ಬಂದಿದೆ ಎಂದು ಮೀಟಿಂಗ್&zwnj;ನಿಂದ ಹೊರಬಂದಿದ್ದರು. ಸಮವಸ್ತ್ರದಲ್ಲೇ ಹೊರಬಂದಿದ್ದ ಮಂಗಳಮ್ಮ ಆ ಬಳಿಕ ಎಲ್ಲಿ ಹೋದರೆಂಬ ಸುಳಿವು ಸಿಕ್ಕಿರಲಿಲ್ಲ. ಇಡೀ ದಿನ ಹುಡುಕಿದ್ರೂ ನಿನ್ನೆ ಇಡೀ ದಿನ ಯಾರ ಸಂಪರ್ಕಕ್ಕೆ ಸಿಗದ ಹಿನ್ನೆಲೆ. ಆತಂಕಗೊಂಡು ಪಿಎಸ್ ಐ ಮಂಗಲಮ್ಮ ಪುತ್ರಿಯಿಂದ ದೂರು ನೀಡಿದ್ದರು.ಹುಡುಕಾಟದ ಬಳಿಕವೂ ತಾಯಿ ಪತ್ತೆಯಾಗಿರುವುದು ಕಂಡು ಮಗಳು ಕೊನೆಗೆ ಪಿಎಸ್&zwnj;ಐ ಮಂಗಳಮ್ಮ ಅವರ ಮಗಲು ಹುಡಕಾಟ ನಡೆಸಿದ್ದರು.ಅನಂತರ ಅವರು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರು.&lt;/p&gt;&lt;p&gt;ತಾಯಿ ಮನೆಗೆ ಬಾರದೆ ಮತ್ತು ಫೋನ್ ಕರೆಗೂ ಲಭ್ಯವಿಲ್ಲದ ಕಾರಣ ಆತಂಕಗೊಂಡ ಮಂಗಳಮ್ಮ ಅವರ ಪುತ್ರಿ, ನಿನ್ನೆ ರಾತ್ರಿ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗಷ್ಟೇ ಪುತ್ರಿಗೆ ವಿಚ್ಛೇದನವಾಗಿದ್ದ ಕಾರಣ, ತಾಯಿ ಮತ್ತು ಮಗಳು ಒಟ್ಟಿಗೆ ವಾಸವಿದ್ದರು ಎನ್ನಲಾಗಿದೆ.&lt;/p&gt;&lt;h2&gt;ಕೌಟುಂಬಿಕ ಕಲಹವೇ ಕಾರಣ?&lt;/h2&gt;&lt;p&gt;ಪ್ರಾಥಮಿಕ ಮಾಹಿತಿ ಪ್ರಕಾರ, ಮನೆಯಲ್ಲಿ ನಡೆದಿದ್ದ ಕೌಟುಂಬಿಕ ಕಲಹದಿಂದ ಮಂಗಳಮ್ಮ ಅವರು ತೀವ್ರ ಮನನೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಹುಡುಕಾಟ ಆರಂಭಿಸಿದ್ದರು.&lt;/p&gt;&lt;h3&gt;ಚಿಕ್ಕಮಗಳೂರಿನಲ್ಲಿ ಪತ್ತೆಯಾದ ಮಂಗಳಮ್ಮ&lt;/h3&gt;&lt;p&gt;ತೀವ್ರ ಹುಡುಕಾಟದ ನಂತರ, ನಾಪತ್ತೆಯಾಗಿದ್ದ ಪಿಎಸ್ಐ ಮಂಗಳಮ್ಮ ಅವರು ಚಿಕ್ಕಮಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿರುವುದು ಪತ್ತೆಯಾಗಿದೆ. ಮನಸ್ಥಾಪದಿಂದ ಬೇಸತ್ತು ಅವರು ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದ್ದು, ಸದ್ಯ ಪೊಲೀಸರು ಮತ್ತು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/missing-tumakuru-woman-psi-found-at-chikkamagaluru-rav/articleshow-7gb3tsr"/>
        </item>
        <item>
            <title><![CDATA['ಗ್ಯಾಸ್ ಸಿಲಿಂಡರ್ ಬಳಸುವ ಮುನ್ನ 5 ಬಾರಿ ಯೋಚಿಸಿ': ಮಠದ ಭಕ್ತರಿಗೆ ಸಿದ್ಧಲಿಂಗ ಶ್ರೀಗಳ ಸಂದೇಶ]]></title>
            <link>https://kannada.asianetnews.com/state/tumakuru-siddaganga-mutt-siddalinga-swamiji-israel-iran-war-gas-water-saving-message-sat/articleshow-87btgg1</link>
            <guid isPermaLink="true">https://kannada.asianetnews.com/state/tumakuru-siddaganga-mutt-siddalinga-swamiji-israel-iran-war-gas-water-saving-message-sat/articleshow-87btgg1</guid>
            <pubDate>Sun, 29 Mar 2026 19:19:01 +0530</pubDate>
            <description><![CDATA[&lt;p&gt;ಇಸ್ರೇಲ್-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಬಿಕ್ಕಟ್ಟಿನ ಕುರಿತು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಗ್ಯಾಸ್&zwnj; ಹಾಗೂ ಇಂಧನ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು. ಮಠದಲ್ಲಿ ಸೌದೆ ಮತ್ತು ಅಡಿಕೆ ಸಿಪ್ಪೆ ಬಳಸಲಾಗುತ್ತದೆ ಎಂದು ಸಾರ್ವಜನಿಕರಿಗೆ ಸಂದೇಶ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmwxd6tggq7zhge4ra6qpva9,imgname-tumakuru-siddaganga-mutt-siddalinga-swamiji-1774791859022.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮಾ.29): ಇ&lt;/strong&gt;ಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದ್ದು, ಇದರ ನೇರ ಪರಿಣಾಮ ಇಂಧನ ಮತ್ತು ಸಂಪನ್ಮೂಲಗಳ ಮೇಲೆ ಬೀರುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರಿನ ಐತಿಹಾಸಿಕ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಲಭ್ಯವಿರುವ ಇಂಧನ ಸಂಪನ್ಮೂಲಗಳನ್ನು ಹಿತ-ಮಿತವಾಗಿ ಬಳಸುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟಕ್ಕೆ ಸಿದ್ಧರಾಗಬೇಕು ಎಂದು ಸಾರ್ವಜನಿಕರಿಗೆ ಮಹತ್ವದ ಕಿವಿಮಾತು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಐದು ಬಾರಿ ಯೋಚಿಸಿ ಬಳಸಿ:&lt;/strong&gt;&lt;/h2&gt;&lt;p&gt;ಶ್ರೀ ಮಠದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, 'ನಮ್ಮ ಬಳಿ ಸಂಪನ್ಮೂಲಗಳು ಅಧಿಕವಾಗಿದ್ದರೂ ಸಹ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಮಿತವಾಗಿ ಬಳಸಬೇಕು. ನೀರು, ವಿದ್ಯುತ್ ಮತ್ತು ಗ್ಯಾಸ್ ಅತ್ಯಂತ ಅಮೂಲ್ಯವಾದವು. ಪ್ರತಿಯೊಂದು ವಸ್ತುವನ್ನು ಖರ್ಚು ಮಾಡುವಾಗ ಕನಿಷ್ಠ ಐದು ಬಾರಿ ಯೋಚಿಸಬೇಕು' ಎಂದು ಎಚ್ಚರಿಸಿದರು. 'ನಮಗೆ ಲಭ್ಯವಿರುವ ಸೌಲಭ್ಯಗಳು ಇನ್ನೊಬ್ಬರಿಗೂ ಸಿಗಲಿ ಎಂಬ ಉದಾತ್ತ ಉದ್ದೇಶ ಮತ್ತು ಉದಾರತೆ ಪ್ರತಿಯೊಬ್ಬರಲ್ಲೂ ಇರಲಿ' ಎಂದು ಆಶಯ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಮಠದಲ್ಲಿ ಸರಳತೆ ಮತ್ತು ಉಳಿತಾಯದ ಪಾಠ:&lt;/strong&gt;&lt;/h2&gt;&lt;p&gt;ಸಾವಿರಾರು ವಿದ್ಯಾರ್ಥಿಗಳಿಗೆ ದಾಸೋಹ ನೀಡುವ ಸಿದ್ಧಗಂಗಾ ಮಠದಲ್ಲಿ ಈಗಾಗಲೇ ಗ್ಯಾಸ್ ಬಳಕೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು. 'ಮಠದಲ್ಲಿ ಈಗ ಅಡುಗೆಗಾಗಿ ಸೌದೆ ಮತ್ತು ಅಡಿಕೆ ಸಿಪ್ಪೆಯನ್ನು ಇಂಧನವಾಗಿ ಬಳಸಲಾಗುತ್ತಿದೆ. ಚಪಾತಿ ಮಾಡುವಂತಹ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಗ್ಯಾಸ್ ಬಳಸಲಾಗುತ್ತಿದೆ. ನಮಗೆ ಲಭ್ಯವಿರುವ ಪರ್ಯಾಯ ಇಂಧನಗಳನ್ನು ಬಳಸುವ ಮೂಲಕ ಅನಿಲ ಉಳಿತಾಯಕ್ಕೆ ನಾವು ಮುಂದಾಗಿದ್ದೇವೆ' ಎಂದರು.&lt;/p&gt;&lt;h3&gt;&lt;strong&gt;ಗೋಬರ್ ಗ್ಯಾಸ್ ಮತ್ತು ಸ್ವಾವಲಂಬನೆ:&lt;/strong&gt;&lt;/h3&gt;&lt;p&gt;ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಮಠದಲ್ಲಿ ಗೋಬರ್ ಗ್ಯಾಸ್ ಪ್ಲಾಂಟ್ ಅಳವಡಿಸುವ ಆಲೋಚನೆಯೂ ಇದೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ತಿಳಿಸಿದರು. ನೈಸರ್ಗಿಕ ಮೂಲಗಳಿಂದ ಇಂಧನ ಪಡೆಯುವ ಮೂಲಕ ಗ್ಯಾಸ್ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಇದರ ಉದ್ದೇಶವಾಗಿದೆ. 'ಯುದ್ಧದಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ನಾವು ಲಭ್ಯವಿರುವ ಸಂಪನ್ಮೂಲಗಳನ್ನು ಗೌರವಿಸಬೇಕು. ದುಂದುವೆಚ್ಚ ಮಾಡುವುದು ಸಮಾಜಕ್ಕೆ ಮಾಡುವ ದ್ರೋಹ' ಎಂದು ಮಾರ್ಮಿಕವಾಗಿ ನುಡಿದರು.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ಸಂದೇಶ:&lt;/strong&gt;&lt;/h3&gt;&lt;p&gt;ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್&zwnj;ಪಿಜಿ ಗ್ಯಾಸ್ ಬೆಲೆ ಏರಿಕೆಯಾಗುವ ಅಥವಾ ಅಭಾವ ಉಂಟಾಗುವ ಭೀತಿ ಇದೆ. ಇಂತಹ ಸಮಯದಲ್ಲಿ ಸಾಮಾನ್ಯ ಜನರು ಮಿತವ್ಯಯದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಸಿದ್ಧಗಂಗಾ ಶ್ರೀಗಳ ಈ ಕರೆ ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗಿಲ್ಲ, ಬದಲಾಗಿ ಇದು ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಸಾಮಾನ್ಯ ಜನರಿಗೆ ನೀಡಿದ ದೂರದೃಷ್ಟಿಯ ಸಂದೇಶವಾಗಿದೆ. ನಮಗೆ ಸಿಕ್ಕ ಸೌಲಭ್ಯಗಳು ಮುಂದಿನ ಪೀಳಿಗೆಗೂ ಸಿಗಬೇಕೆಂದರೆ ಇಂದೇ ಉಳಿತಾಯ ಮಾಡುವುದು ಅವಶ್ಯಕ ಎಂಬ ಶ್ರೀಗಳ ಮಾತು ಈಗ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/tumakuru-siddaganga-mutt-siddalinga-swamiji-israel-iran-war-gas-water-saving-message-sat/articleshow-87btgg1"/>
        </item>
        <item>
            <title><![CDATA[ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವದ ಸಂಭ್ರಮದ ನಡುವೆಯೇ ಮಠದ ಹಳೆ ವಿದ್ಯಾರ್ಥಿ ಸಾವು!]]></title>
            <link>https://kannada.asianetnews.com/karnataka-districts/tumakuru-siddaganga-matha-old-student-nataraju-death-heart-attack-shivakumara-swamiji-birthday-sat/articleshow-ae0ggt2</link>
            <guid isPermaLink="true">https://kannada.asianetnews.com/karnataka-districts/tumakuru-siddaganga-matha-old-student-nataraju-death-heart-attack-shivakumara-swamiji-birthday-sat/articleshow-ae0ggt2</guid>
            <pubDate>Wed, 01 Apr 2026 14:41:12 +0530</pubDate>
            <description><![CDATA[ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 117ನೇ ಜನ್ಮದಿನೋತ್ಸವದ ದಿನದಂದು ಸಿದ್ದಗಂಗಾ ಮಠದಲ್ಲಿ ವಿಷಾದನೀಯ ಘಟನೆ ನಡೆದಿದೆ. ಗುರುವಂದನೆ ಸಲ್ಲಿಸಲು ಬಂದಿದ್ದ ಮಠದ ಹಳೆಯ ವಿದ್ಯಾರ್ಥಿ ನಟರಾಜು ಎಂಬುವವರು ಹೃದಯಾಘಾತದಿಂದ ಮಠದ ಆವರಣದಲ್ಲೇ ಕೊನೆಯುಸಿರೆಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn44vhvcv2t96va6997mkwzz,imgname-tumakuru-shivakumara-swamiji-1775034550124.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.01): ನ&lt;/strong&gt;ಡೆದಾಡುವ ದೇವರು, ಶ್ರೀ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ 117ನೇ ಜನ್ಮದಿನೋತ್ಸವದ ಸಂಭ್ರಮದ ನಡುವೆಯೇ ಮಠದಲ್ಲಿ ಇಂದು ಒಂದು ಅತ್ಯಂತ ವಿಷಾದನೀಯ ಘಟನೆ ಸಂಭವಿಸಿದೆ. ಶ್ರೀಗಳ ದರ್ಶನ ಪಡೆಯಲು ಹಾಗೂ ಗುರುವಂದನೆ ಸಲ್ಲಿಸಲು ಬಂದಿದ್ದ ಹಳೆಯ ವಿದ್ಯಾರ್ಥಿಯೊಬ್ಬರು ಹೃದಯಾಘಾತದಿಂದ ಮಠದ ಆವರಣದಲ್ಲೇ ಸಾವನ್ನಪ್ಪಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಮೃತ ದುರ್ದೈವಿಯನ್ನು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಯೂರು ಗ್ರಾಮದ ನಿವಾಸಿ ನಟರಾಜು (60 ವರ್ಷ) ಎಂದು ಗುರುತಿಸಲಾಗಿದೆ. ನಟರಾಜು ಅವರು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಯಾಗಿದ್ದು, ಪರಮಪೂಜ್ಯ ಶಿವಕುಮಾರ ಶ್ರೀಗಳ ಮೇಲೆ ಅಪಾರ ಭಕ್ತಿ ಹೊಂದಿದ್ದರು. ಪ್ರತಿ ವರ್ಷ ಶ್ರೀಗಳ ಜನ್ಮದಿನೋತ್ಸವಕ್ಕೆ ಮಠಕ್ಕೆ ಆಗಮಿಸುತ್ತಿದ್ದ ಅವರು, ಈ ವರ್ಷವೂ ಕೂಡ ತಮ್ಮ ಇಬ್ಬರು ಸ್ನೇಹಿತರೊಂದಿಗೆ ನಿನ್ನೆ (ಶುಕ್ರವಾರ) ರಾತ್ರಿಯೇ ಮಠಕ್ಕೆ ಆಗಮಿಸಿದ್ದರು.&lt;/p&gt;&lt;p&gt;ಇಂದು ಮುಂಜಾನೆ ಮಠದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿದ್ಧರಾಗುತ್ತಿದ್ದಾಗ, ಶೌಚಾಲಯಕ್ಕೆ ಹೋಗಿ ವಾಪಸ್ ಬರುತ್ತಿದ್ದ ನಟರಾಜು ಅವರಿಗೆ ಇದ್ದಕ್ಕಿದ್ದಂತೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಶ್ರೀಗಳ ಗದ್ದುಗೆಯ ಹಿಂಭಾಗದಲ್ಲೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದವರು ಸಹಾಯಕ್ಕೆ ಧಾವಿಸಿದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಹಳೆಯ ವಿದ್ಯಾರ್ಥಿಯ ಭಕ್ತಿ:&lt;/strong&gt;&lt;/h2&gt;&lt;p&gt;ನಟರಾಜು ಅವರು ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದವರು. ಮಠದ ದಾಸೋಹ ಮತ್ತು ಶ್ರೀಗಳ ತತ್ವಗಳಿಂದ ಪ್ರೇರಿತರಾಗಿದ್ದ ಅವರು, ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಅವರು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ (Heart Surgery) ಒಳಗಾಗಿದ್ದರು ಎನ್ನಲಾಗಿದೆ. ಆರೋಗ್ಯದ ಸಮಸ್ಯೆ ಇದ್ದರೂ ಸಹ ಶ್ರೀಗಳ ಮೇಲಿನ ಭಕ್ತಿಯಿಂದ ಮಠಕ್ಕೆ ಬಂದಿದ್ದರು. ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ತಾವು ವಿದ್ಯಾಭ್ಯಾಸ ಮಾಡಿದ, ತಮಗೆ ಅನ್ನ ನೀಡಿದ ಮಠದ ಆವರಣದಲ್ಲೇ ಅವರು ಕೊನೆಯುಸಿರೆಳೆದಿರುವುದು ಮಠದ ಭಕ್ತರಲ್ಲಿ ಮತ್ತು ಅವರ ಸ್ನೇಹಿತರಲ್ಲಿ ಭಾರೀ ನೋವುಂಟು ಮಾಡಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ಭೇಟಿ:&lt;/strong&gt;&lt;/h3&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಕ್ಯಾತಸಂದ್ರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶ್ರೀಗಳ ಜನ್ಮದಿನೋತ್ಸವದ ಪುಣ್ಯದಿನದಂದೇ ಭಕ್ತನೊಬ್ಬ ಮಠದ ಆವರಣದಲ್ಲಿ ಸಾವನ್ನಪ್ಪಿರುವುದು ಮಠಕ್ಕೆ ಬಂದಿದ್ದ ಇತರೆ ಭಕ್ತರಲ್ಲಿಯೂ ಕೂಡ ವಿಷಾದ ಮೂಡಿಸಿದೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/tumakuru-siddaganga-matha-old-student-nataraju-death-heart-attack-shivakumara-swamiji-birthday-sat/articleshow-ae0ggt2"/>
        </item>
        <item>
            <title><![CDATA[ಯುವತಿ ವಿಚಾರಕ್ಕೆ ಎರಡು ಮುಸ್ಲಿಂ ಕುಟುಂಬಗಳ ನಡುವೆ ಮಾರಾಮರಿ, ತುಮಕೂರು ರಸ್ತೆಯಲ್ಲಿ ಗಲಾಟೆ]]></title>
            <link>https://kannada.asianetnews.com/karnataka-districts/high-drama-as-two-families-clash-over-woman-in-tumakuru-case-registered/articleshow-baggiem</link>
            <guid isPermaLink="true">https://kannada.asianetnews.com/karnataka-districts/high-drama-as-two-families-clash-over-woman-in-tumakuru-case-registered/articleshow-baggiem</guid>
            <pubDate>Mon, 06 Apr 2026 22:34:29 +0530</pubDate>
            <description><![CDATA[&lt;p&gt;ಯುವತಿ ವಿಚಾರಕ್ಕೆ ಎರಡು ಮುಸ್ಲಿಂ ಕುಟುಂಬಗಳ ನಡುವೆ ಮಾರಾಮರಿ, ತುಮಕೂರು ರಸ್ತೆಯಲ್ಲಿ ಗಲಾಟೆ ನಡೆದಿದೆ. ಹಲವರ ಮೊಬೈಲ್&zwnj;ನಲ್ಲಿ ಗಲಾಟೆ ದೃಶ್ಯಗಳು ಸೆರೆಯಾಗಿದ್ದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knhw0714mngk59dvcskzk8z7,imgname-tumkur-1775495027748.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.06) &lt;/strong&gt;ಯುವತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಇಲ್ಲಿನ ಕುಣಿಗಲ್ ಪಟ್ಟಣದ 15ನೇ ವಾರ್ಡ್&zwnj;ನ ರಸ್ತೆಯಲ್ಲಿ ಮಾರಾಮಾರಿ ನಡೆದಿದೆ. ಯುವತಿ ವಿಚಾರವಾಗಿ ಗಲಾಟೆ ಬಳಿಕ ತೀವ್ರ ಸ್ವರೂಪ ಪಡೆದುಕೊಂಡು ಎರಡು ಮುಸ್ಲಿಂ ಕುಟುಂಬಗಳು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಎರಡು ಕುಟುಂಬದ ಹಲವು ಸದಸ್ಯರು ಗಾಯಗೊಂಡಿದ್ದಾರೆ.&lt;/p&gt;&lt;h2&gt;ಅಕ್ಕ ಪಕ್ಕದ ಮನೆಯವರ ಗಲಾಟೆ&lt;/h2&gt;&lt;p&gt;ಯುವತಿ ವಿಚಾರಕ್ಕೆ ಅಕ್ಕಪಕ್ಕದ ಮನೆಯ ಎರಡು ಮುಸ್ಲಿಂ ಕುಟುಂಬಗಳ ಗಲಾಟೆ ಶುರುವಾಗಿದೆ. ಆರಂಭದಲ್ಲೇ ಕೈಕೈಮಿಲಾಯಿಸಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಗಲಾಟೆ ಜೋರಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಮೂವರಿಗೆ ಗಂಭೀರ ಗಾಯವಾಗಿದೆ. ಇತ್ತ ಹೊಡೆದಾಡಿಕೊಂಡ ಕುಟುಂಬದ ಹಲವು ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಎರಡು ಕುಟುಂಬದ ಪ್ರಮುಖ ಸದಸ್ಯರನ್ನು ಪೊಲೀಸ್ ಠಾಣೆಗೆ ಕರೆಯಿಸಿದ ಕುಣಿಗಲ್ ಪೊಲೀಸರು ರಾಜಿ ಮಾತುಕತೆ ಮಾಡಿದ್ದಾರೆ. ಇದೇ ವೇಳೆ ಮತ್ತೆ ಇದೇ ರೀತಿಯ ಘಟನೆ ಮರುಕಳಿಸಿದರೆ ಇಡೀ ಕುಟುಂಬವೇ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;ಮಂಡ್ಯದಲ್ಲಿ ಯುವಕರ ಗುಂಪುಗಳ ನಡುವೆ ಗಲಾಟೆ&lt;/h2&gt;&lt;p&gt;ಕ್ಷುಲ್ಲಕ ವಿಚಾರಕ್ಕೆ&zwnj; ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಮಂಡ್ಯದ ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಬಳಿ ನಡೆದಿದೆ. ಸಿಗರೆಟ್ ವಿಚಾರವಾಗಿ ಎರಡು ಗುಂಪಗಳ ನಡುವೆ ಗಲಾಟೆ ಶುರುವಾಗಿದೆ ಎನ್ನಲಾಗಿದೆ. ಬಳಿಕ ಕಳೆದ ರಾತ್ರಿ ರಾಜೀ ಮಾತುಕತೆ&zwnj; ನಡೆಯುವಾಗ ಮತ್ತೆ ಗಲಾಟೆ ಶುರುವಾಗಿದೆ. ಇದು ಪರಿಸ್ಥಿತಿ ಕೈಮೀರಿದೆ. ದೊಣ್ಣೆಯಲ್ಲಿ&zwnj;&zwnj; ಯುವಕರು ಗುಂಪು ದಾಳಿ ಮಾಡಿದೆ. ಇದರ ಪರಿಣಾಮ ಈ ವೇಳೆ ಯುವಕ ಯಶ್ವಂತ್ ಸಾವು ಕಂಡರೆ ದರ್ಶನ್ ಹಾಗೂ ಸಚಿನ್ ಗಂಭೀರ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್&zwnj;ಪಿ ಡಾ.ವಿಜೆ ಶೋಭಾರಾಣಿ&zwnj; ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.&lt;/p&gt;&lt;p&gt;.&lt;/p&gt;]]></content:encoded>
            <category>tumakuru</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/high-drama-as-two-families-clash-over-woman-in-tumakuru-case-registered/articleshow-baggiem"/>
        </item>
        <item>
            <title><![CDATA[ನಿವೃತ್ತಿಗೆ ವಾರ ಇರುವಾಗಲೇ ಸಮಾಜ ಕಲ್ಯಾಣ ಅಧಿಕಾರಿ ಆತ್ಮ*ತ್ಯೆ, ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್]]></title>
            <link>https://kannada.asianetnews.com/tumakuru/week-before-retirement-tumakuru-officer-life-ends-in-tragedy-final-video-goes-viral/articleshow-ecyxh8n</link>
            <guid isPermaLink="true">https://kannada.asianetnews.com/tumakuru/week-before-retirement-tumakuru-officer-life-ends-in-tragedy-final-video-goes-viral/articleshow-ecyxh8n</guid>
            <pubDate>Sat, 21 Mar 2026 08:30:33 +0530</pubDate>
            <description><![CDATA[&lt;p&gt;ನಿವೃತ್ತಿಗೆ ವಾರ ಇರುವಾಗಲೇ ಸಮಾಜ ಕಲ್ಯಾಣ ಅಧಿಕಾರಿ ಆತ್ಮ*ತ್ಯೆ, ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್, ತನ್ನ ಸಾವಿಗೆ ಕಾರಣ ಏನು ಅನ್ನೋದು ಬಹಿರಂಗಪಡಿಸಿದ್ದಾರೆ. ಆದರೆ ಅಧಿಕಾರಿ ತಂದೆಯ ಸಾವು ಹಾಗೂ ಈಗಿನ ನಿರ್ಧಾರಗಳು ಕೆಲ ಅನುಮಾನಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km75c7t29qch6xdja68x1sx3,imgname-tumkur-officer-tragic-end-1774062018366.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮಾ.21) &lt;/strong&gt;ಕಚೇರಿಯಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದುರಂತ ಅಂತ್ಯ ಕಂಡ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ. ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ನಿನ್ನೆ (ಮಾ.20) ಕಚೇರಿಯಲ್ಲೇ ದುರಂತ ಅಂತ್ಯಕಂಡಿದ್ದಾರೆ. ಮೇಲಧಿಕಾರಿ ಕೃಷ್ಣಪ್ಪ ಕಿರುಕುಳ ತಾಳಲಾರದೇ ಈ ನಿರ್ಧಾರ ಮಾಡಿರುವುದಾಗಿ ಮಲ್ಲಿಕಾರ್ಜುನ ವಿಡಿಯೋ ಮೂಲಕ ಹೇಳಿದ್ದಾರೆ. ಸಾವಿಗೂ ಮುನ್ನ ಮಾಡಿರುವ ಕೊನೆಯ ವಿಡಿಯೋ ವನ್ನು ಸ್ವತಃ ಮಲ್ಲಿಕಾರ್ಜುನ ಇತರ ಸಹೋದ್ಯೋಗಿಗಳಿಗೆ ಕಳುಹಿಸಿದ್ದಾರೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ಒಂದೇ ವಾರದಲ್ಲಿ ನಿವೃತ್ತಿ&lt;/h2&gt;&lt;p&gt;ಕಳೆದ 3 ವರ್ಷಗಳಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್ , ಇನ್ನು ಒಂದೇ ವಾರದಲ್ಲಿ ಇವರ ಸೇವಾ ಅವಧಿ ಮುಕ್ತಾಯಗೊಳ್ಳಬೇಕಿತ್ತು. ನಿವೃತ್ತಿಗೆ ಒಂದು ವಾರ ಇರುವಾಗಲೇ ಮಲ್ಲಿಕಾರ್ಜುನ್ ದುರಂತ ಅಂತ್ಯಕಂಡಿದ್ದಾರೆ. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಕೃಷ್ಣಪ್ಪ ನೀಡಿದ ಕಿರುಕಳವೇ ಈ ನಿರ್ಧಾರಕ್ಕೆ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.&lt;/p&gt;&lt;h2&gt;ಸಾವಿಗೂ ಮುನ್ನ ವಿಡಿಯೋದಲ್ಲಿ ಅಧಿಕಾರಿ ಹೇಳಿದ್ದೇನು?&lt;/h2&gt;&lt;p&gt;ನಮ್ಮ ತಾಯಿ ಹೆಂಡತಿ ಮಕ್ಕಳು ನಮ್ಮ ಇಡೀ ಸಂಸಾರ ನನ್ನ ಚೆನ್ನಾಗಿ ನೋಡಿಕೊಂಡಿದೆ, ನನಗೆ ಒಳ್ಳೆಯ ಬೆಲೆ ಕೊಟ್ಟಿದ್ದಾರೆ, ನಾನು ಅವರಿಗೆ ಇನ್ನು ಸಹಾಯ ಮಾಡಬೇಕಿತ್ತು ಆದ್ರೆ ಅದು ಆಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ನನಗೆ ತೊಂದರೆ ಕೊಟ್ಟಿರುವುದರಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಅವನು ತರ್ಲೆ ಇರುವುದರಿಂದ ನಮ್ ಕುಟುಂಬದವರು ಏನು ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲಾ, ಅವನಿಗೆ ದೇವರು, ಕಾನೂನು ಶಿಕ್ಷೆ ಕೊಟ್ಟೆ ಕೊಡುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.&lt;/p&gt;&lt;h2&gt;ದುರಂತ ಸಾವಿನ ಹಿಂದೆ ಅನುಮಾನ&lt;/h2&gt;&lt;p&gt;ಅಧಿಕಾರಿ ಮಲ್ಲಿಕಾರ್ಜುನ ನಿವೃತ್ತಿಗೆ ಒಂದು ವಾರ ಇರುವಾಗಲೇ ದುರಂತ ಅಂತ್ಯಕಂಡಿದ್ದಾರೆ. ಮಲ್ಲಿಕಾರ್ಜುನ ತಂದೆ ಕೂಡ ಸಮಾಜ ಕಲ್ಯಾಣ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದರು. ಮಲ್ಲಿಕಾರ್ಜುನ ತಂದೆ ನಿವೃತ್ತಿಗೆ ಕೆಲವೇ ತಿಂಗಳು ಇರುವಾಗ ಮೃತಪಟ್ಟಿದ್ದರು. ತಂದೆ ಸಾವಿನಿಂದ ಅನುಕಂಪದ ಆಧಾರದ ಮೇಲೆ ಮಲ್ಲಿಕಾರ್ಜುನಗೆ ಕೆಲಸ ಸಿಕ್ಕಿತ್ತು. ಮಲ್ಲಿಕಾರ್ಜನ ಕೂಡ ಸಮಾಜ ಕಲ್ಯಾಣ ಇಲಾಖೆಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದರು. ಇದೀಗ ಇದೀಗ ಮಲ್ಲಿಕಾರ್ಜುನ್ ಗೆ ನಿವೃತ್ತಿ ಕೇವಲ ಒಂದು ವಾರ ಇರುವಾಗ ದುರಂತ ಅಂತ್ಯಕಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಹೇಳಿರುವಂತೆ ಮೇಲಧಿಕಾರಿಗಳ ಕಿರುಕುಳಕ್ಕೆ ಈ ನಿರ್ಧಾರ ಮಾಡಿಕೊಂಡ್ರಾ, ಇಲ್ಲ ಮಕ್ಕಳಿಗೆ ಕೆಲಸ ಸಿಗಲಿ ಎಂದು ದುರಂತ ಅಂತ್ಯ ಕಂಡಿದ್ದಾರಾ ಅನ್ನೋ ಅನುಮಾನ ಕಾಡಕೊಡಗಿದೆ. ಸದ್ಯ ಪೊಲೀಸರು ಮಲ್ಲಿಕಾರ್ಜುನ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tumakuru</category>
            <dc:creator>Chethan Kumar</dc:creator>
            <atom:link href="https://kannada.asianetnews.com/tumakuru/week-before-retirement-tumakuru-officer-life-ends-in-tragedy-final-video-goes-viral/articleshow-ecyxh8n"/>
        </item>
        <item>
            <title><![CDATA[ತುಮಕೂರು ಸರ್ಕಾರಿ ಅಧಿಕಾರಿ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ಜಂಟಿ ನಿರ್ದೇಶಕ ಕೃಷ್ಣಪ್ಪ ಕೊಟ್ರು ರೋಚಕ ತಿರುವು!]]></title>
            <link>https://kannada.asianetnews.com/karnataka-districts/tumakuru-pavagada-government-officer-mallikarjun-suicide-case-get-twist-jd-krishnappa-clarification-sat/articleshow-g5fabfg</link>
            <guid isPermaLink="true">https://kannada.asianetnews.com/karnataka-districts/tumakuru-pavagada-government-officer-mallikarjun-suicide-case-get-twist-jd-krishnappa-clarification-sat/articleshow-g5fabfg</guid>
            <pubDate>Sun, 22 Mar 2026 16:01:52 +0530</pubDate>
            <description><![CDATA[&lt;p&gt;ನಿವೃತ್ತಿಗೆ 10 ದಿನ ಬಾಕಿ ಇರುವಾಗ ಆತ್ಮ*ಹತ್ಯೆ ಮಾಡಿಕೊಂಡ ಪಾವಗಡ ಸರ್ಕಾರಿ ಅಧಿಕಾರಿ ಮಲ್ಲಿಕಾರ್ಜುನಯ್ಯ ಪ್ರಕರಣದ ಕುರಿತು, ಆರೋಪಿತ ಜಂಟಿ ನಿರ್ದೇಶಕ ಕೃಷ್ಣಪ್ಪ ಸ್ಪಷ್ಟನೆ ನೀಡಿದ್ದಾರೆ. ಮೃತರ ಪೆನ್ಷನ್ ದಾಖಲೆಗಳನ್ನು ತಾವೇ ದೃಢೀಕರಿಸಿದ್ದಾಗಿ ಹೇಳಿದ್ದು, ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmahc9thwbz6ey4fj4t1qxxa,imgname-tumakuru-mallikarjunayya-death-1774175266638.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮಾ.22): ಪಾ&lt;/strong&gt;ವಗಡದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರು ನಿವೃತ್ತಿಗೆ ಕೇವಲ 10 ದಿನ ಬಾಕಿ ಇರುವಾಗ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮೃತರ ಡೆತ್ ನೋಟ್ ಮತ್ತು ವಿಡಿಯೋದಲ್ಲಿ ಕೇಳಿಬಂದಿದ್ದ ಗಂಭೀರ ಆರೋಪಗಳ ಬೆನ್ನಲ್ಲೇ, ಈಗ ಆರೋಪಿತ ಅಧಿಕಾರಿ, ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ಮಾಧ್ಯಮಗಳ ಮುಂದೆ ಬಂದು ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆ ದುರದೃಷ್ಟಕರ, ನನ್ನ ಮನಸ್ಸಿಗೆ ನೋವಾಗಿದೆ:&lt;/strong&gt;&lt;/h2&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಜಂಟಿ ನಿರ್ದೇಶಕ ಕೃಷ್ಣಪ್ಪ, 'ಮಲ್ಲಿಕಾರ್ಜುನಯ್ಯ ಅವರು ನನ್ನ ಸಹೋದ್ಯೋಗಿ ಮಿತ್ರರು. ಅವರು ಕಚೇರಿಯಲ್ಲೇ ಆತ್ಮ*ಹತ್ಯೆ ಮಾಡಿಕೊಂಡ ವಿಷಯ ತಿಳಿದು ನನಗೆ ತುಂಬಾ ಆಘಾತವಾಗಿದೆ. ಕೇವಲ 10 ದಿನಗಳ ಸೇವಾವಧಿ ಬಾಕಿ ಇರುವಾಗ ಅವರು ಈ ರೀತಿಯ ನಿರ್ಧಾರ ಮಾಡಬಾರದಿತ್ತು. ನಿವೃತ್ತಿಯ ನಂತರ ಅವರು ಸುಖವಾಗಿ ಜೀವನ ನಡೆಸಬಹುದಿತ್ತು. ಅವರ ಸಾವು ಅತ್ಯಂತ ದುರದೃಷ್ಟಕರ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಶೇ. 1 ರಷ್ಟು ಕಿರುಕುಳ ನೀಡಿಲ್ಲ:&lt;/strong&gt;&lt;/h2&gt;&lt;p&gt;ಮಲ್ಲಿಕಾರ್ಜುನಯ್ಯ ಅವರು ಮಾಡಿರುವ ಕಿರುಕುಳದ ಆರೋಪವನ್ನು ಕೃಷ್ಣಪ್ಪ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. 'ನಾನು ವೈಯಕ್ತಿಕವಾಗಿ ಮಲ್ಲಿಕಾರ್ಜುನಯ್ಯ ಅವರಿಗೆ ಶೇ. 1 ರಷ್ಟು ಕೂಡ ತೊಂದರೆ ನೀಡಿಲ್ಲ. ನಾನು ಅವರ ಕಚೇರಿಗೆ ಭೇಟಿ ನೀಡಿ ಅವರಿಗೆ ನೋಟಿಸ್ ನೀಡಿದ ಅಥವಾ ಕಿರುಕುಳ ನೀಡಿದ ಒಂದೇ ಒಂದು ಉದಾಹರಣೆ ಇಲ್ಲ. ಪಾವಗಡ ಕಚೇರಿಯ ಸಿಬ್ಬಂದಿ ಅಥವಾ ಅಲ್ಲಿನ ನಿಲಯ ಪಾಲಕರನ್ನು ಕೇಳಿದರೆ ಸತ್ಯಾಂಶ ತಿಳಿಯುತ್ತದೆ. ನಾನು ಇಡೀ ಜಿಲ್ಲೆಯ ಎಲ್ಲಾ ಸಿಬ್ಬಂದಿಯೊಂದಿಗೆ ಕುಟುಂಬದ ಸದಸ್ಯನಂತೆ ಕೆಲಸ ಮಾಡುತ್ತಾ ಬಂದಿದ್ದೇನೆ' ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ತನಿಖೆಗೆ ಪತ್ರ ಬರೆದಿದ್ದು ನಿಜ, ಆದರೆ ಅದು ಕರ್ತವ್ಯ:&lt;/strong&gt;&lt;/h3&gt;&lt;p&gt;ಅಧಿಕಾರಿ ಮಲ್ಲಿಕಾರ್ಜುನಯ್ಯ ಅವರ ವಿರುದ್ಧ ಕೇಳಿಬಂದಿದ್ದ ಕೆಲವು ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ನಾನು ಪತ್ರ ಬರೆದಿದ್ದು ನಿಜ ಎಂದು ಕೃಷ್ಣಪ್ಪ ಒಪ್ಪಿಕೊಂಡಿದ್ದಾರೆ. 'ಮೇಲಾಧಿಕಾರಿಗಳಿಂದ ಬಂದ ಅರ್ಜಿಯ ಆಧಾರದ ಮೇಲೆ ತನಿಖೆ ನಡೆಸಲು ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಿ ಪತ್ರ ಬರೆದಿದ್ದೆ. ಅದನ್ನು ಹೊರತುಪಡಿಸಿ ನಾನು ಯಾವುದೇ ಮಾನಸಿಕ ಕಿರುಕುಳ ನೀಡಿಲ್ಲ. ತನಿಖೆಗಾಗಿ ನಾನು ಅವರ ಕಚೇರಿಗೆ ಒಮ್ಮೆಯೂ ಭೇಟಿ ನೀಡಿರಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;Karnataka govt officer ends life at office just week before retirement; alleges harassment by seniorAn incident of a Karnataka government Social Welfare Department officer dying by suicide at his office just before his retirement came to light on Saturday. The officer recorded&hellip; pic.twitter.com/Ozgru66SMT&lt;/p&gt;&lt;p&gt;&mdash; Karnataka Portfolio (@karnatakaportf) March 22, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಪೆನ್ಷನ್ ದಾಖಲೆಗಳನ್ನ ನಾನೇ ದೃಢೀಕರಿಸಿದ್ದೆ:&lt;/strong&gt;&lt;/h2&gt;&lt;p&gt;ಇನ್ನೊಂದು ಪ್ರಮುಖ ಅಂಶವನ್ನು ಬಿಚ್ಚಿಟ್ಟ ಕೃಷ್ಣಪ್ಪ, 'ಮಲ್ಲಿಕಾರ್ಜುನಯ್ಯ ಅವರ ನಿವೃತ್ತಿಗೆ 10 ದಿನಗಳಷ್ಟೇ ಬಾಕಿ ಇತ್ತು. ಅವರ ಪೆನ್ಷನ್&zwnj;ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾನೇ ಸ್ವತಃ ಪರಿಶೀಲಿಸಿ, ದೃಢೀಕರಿಸಿ ಮೂರು ತಿಂಗಳ ಹಿಂದೆಯೇ ಕಳುಹಿಸಿಕೊಟ್ಟಿದ್ದೇನೆ. ಅವರ ನಿವೃತ್ತಿ ಸೌಲಭ್ಯಗಳನ್ನು ತಡೆಯುವ ಯಾವುದೇ ಉದ್ದೇಶ ಅಥವಾ ಅಧಿಕಾರ ನನಗಿರಲಿಲ್ಲ. ಹೀಗಿದ್ದರೂ ಅವರು ಯಾವ ಉದ್ದೇಶಕ್ಕೆ ನನ್ನ ಹೆಸರನ್ನು ಪ್ರಸ್ತಾಪಿಸಿ ವಿಡಿಯೋ ಮಾಡಿದ್ದಾರೋ ಎಂಬುದು ನನಗೆ ತಿಳಿಯುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಾವಿನ ಹಿಂದಿರೋ ಉದ್ದೇಶ ಬೇರೆಯದ್ದೇ ಇರಬಹುದು?&lt;/strong&gt;&lt;/h2&gt;&lt;p&gt;ತಮ್ಮ ಮೇಲಿನ ಆರೋಪದಿಂದ ಮುಕ್ತರಾಗಲು ಕೃಷ್ಣಪ್ಪ ಅವರು ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 'ಇದರ ಹಿಂದೆ ಯಾವುದೋ ದುರುದ್ದೇಶ ಇರುವಂತೆ ಕಾಣುತ್ತಿದೆ. ಮಲ್ಲಿಕಾರ್ಜುನಯ್ಯ ಅವರು ಮೊದಲೇ ಅನುಕಂಪದ ಆಧಾರದಲ್ಲಿ ಕೆಲಸ ಪಡೆದಿದ್ದರು. ಇದೀಗ ನಿವೃತ್ತಿಗೆ 10 ದಿನಗಳು ಬಾಕಿ ಇರುವಾಗ ತಾವು ನೇಣಿಗೆ ಶರಣಾಗಿರುವುದರ ಹಿಂದೆಯೂ ಬೇರೆಯದೇ ಉದ್ದೇಶವೂ ಇರಬಹುದು. ಈ ಹಿನ್ನೆಲೆಯಲ್ಲಿ ಅವರ ಸಾವಿನ ಬಗ್ಗೆ ಹಾಗೂ ನನ್ನ ಮೇಲಿನ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಲಿ. ಮಲ್ಲಿಕಾರ್ಜುನಯ್ಯ ಅವರ ಸಾವಿನಲ್ಲಿ ನನ್ನ 1% ಹಸ್ತಕ್ಷೇಪವೂ ಇಲ್ಲ ಎಂದು ನನ್ನ ಆತ್ಮಸಾಕ್ಷಿಯಿಂದ ಹೇಳುತ್ತಿದ್ದೇನೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.&lt;/p&gt;&lt;p&gt;ಮಲ್ಲಿಕಾರ್ಜುನಯ್ಯ ಅವರ ಆತ್ಮ*ಹತ್ಯೆಯ ಹಿಂದೆ ಹಿರಿಯ ಅಧಿಕಾರಿಯ ಕಿರುಕುಳವಿದೆಯೇ ಅಥವಾ ಇಲಾಖೆಯೊಳಗಿನ ಬೇರೆ ಯಾವುದಾದರೂ ಒತ್ತಡಗಳಿವೆಯೇ ಎಂಬುದು ಈಗ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/tumakuru-pavagada-government-officer-mallikarjun-suicide-case-get-twist-jd-krishnappa-clarification-sat/articleshow-g5fabfg"/>
        </item>
        <item>
            <title><![CDATA[ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಅಲ್ಲಿ ತನಕ ಕುರಿಮೇಯಿಸಿಕೊಂಡಿರು ಎಂದಿದ್ದಕ್ಕೆ ಯುವಕ ಸಾವಿಗೆ ಶರಣು!]]></title>
            <link>https://kannada.asianetnews.com/karnataka-districts/chikkamagaluru-tragedy-26-year-old-shepherd-dies-by-suicide-over-marriage-related-distress-gdp/articleshow-iasofq8</link>
            <guid isPermaLink="true">https://kannada.asianetnews.com/karnataka-districts/chikkamagaluru-tragedy-26-year-old-shepherd-dies-by-suicide-over-marriage-related-distress-gdp/articleshow-iasofq8</guid>
            <pubDate>Sat, 04 Apr 2026 10:22:27 +0530</pubDate>
            <description><![CDATA[&lt;p&gt;ಮದುವೆಯಾಗುತ್ತಿಲ್ಲವೆಂದು ಮನನೊಂದು ಚಿಕ್ಕಮಗಳೂರಿನಲ್ಲಿ ಕುರಿಗಾಹಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಕಬ್ಬನ್ ಪಾರ್ಕ್&zwnj;ನಲ್ಲಿ ವೈಯಕ್ತಿಕ ಕಾರಣಗಳಿಂದ ಕಾರ್ಮಿಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಎರಡೂ ಘಟನೆಗಳ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knbd0zhfcbvrbwcfaepn46zx,imgname-shepherd-1775277997615.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು:&lt;/strong&gt; ಮದುವೆ ವಯಸ್ಸಿಗೆ ಬಂದಿದ್ದರೂ ಕೂಡ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ಜಿಗುಪ್ಸೆಗೊಂಡ ಕುರಿಗಾಹಿ ಯುವಕನೋರ್ವ ಮದ್ಯ ಸೇವಿಸಿ ತೆಂಗಿನ ಮರಕ್ಕೆ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ಕುರಿಗಾಹಿ ಯುವಕ ಕುಮಾರ (26)ಮೃತಪಟ್ಟ ದುರ್ದೈವಿ. ತಾಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದ ಪರಮೇಶ್ವರಪ್ಪ ಅವರ ತೋಟದಲ್ಲಿ ಕುರಿಗಳ ಮಂದೆಯನ್ನು ಬಿಟ್ಟುಕೊಂಡಿದ್ದನ್ನು. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಹಬ್ಬಕ್ಕೆಂದು ಊರಿಗೆ ತೆರಳಿದ್ದು ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದನು ಎನ್ನಲಾಗಿದೆ.&lt;/p&gt;&lt;h2&gt;ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ&lt;/h2&gt;&lt;p&gt;ಮನೆಯ ಇಬ್ಬರು ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಮಾಡಲಾಗುತ್ತದೆ. ಅಲ್ಲಿಯ ತನಕ ಕುರಿ ಮೇಯಿಸಿಕೊಂಡು ಇರುವಂತೆ ತಿಳಿಹೇಳಿದ್ದಾರೆ. ಮದುವೆ ವಿಚಾರದಲ್ಲಿ ಮಾನಸಿಕವಾಗಿ &zwnj;ಜಿಗುಪ್ಸೆಗೊಂಡು ಮಗನು ನೇಣಿಗೆ ಶರಣಾಗಿರುವುದಾಗಿ ಮೃತನ ತಂದೆ ಬೋಜರಾಜ ದೂರು ನೀಡಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ವಿಜಯಪುರದಲ್ಲೂ ಮದುವೆಯಾಗದ್ದಕ್ಕೆ ಕುರಿಗಾಹಿ ಸಾವು!&lt;/h2&gt;&lt;p&gt;ವಿಜಯಪುರ ಜಿಲ್ಲೆಯಲ್ಲಿ ಮನಸ್ಸು ಕಲಕುವಂತಹ ದುರ್ಘಟನೆ ಸಂಭವಿಸಿದೆ. ಮದುವೆಗೆ ಹೆಣ್ಣು ಸಿಗದೇ ನಿರಾಶೆಗೊಂಡ ಕುರಿಗಾಹಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ&ndash;2 ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೃತ ಯುವಕನನ್ನು ಶಂಕರ ತಳವಾರ (25) ಎಂದು ಗುರುತಿಸಲಾಗಿದೆ. ಆತ ಸ್ಥಳೀಯವಾಗಿ ಕೃಷಿ ಕೆಲಸಗಳ ಜೊತೆಗೆ ಕುರಿಗಾಹಿಯಾಗಿ ಜೀವನ ನಡೆಸುತ್ತಿದ್ದನು. ಕುಟುಂಬದ ಆಧಾರವಾಗಿದ್ದ ಶಂಕರನ ಜೀವನದಲ್ಲಿ ಮದುವೆ ವಿಚಾರವೇ ದೊಡ್ಡ ಸಂಕಟವಾಗಿ ಪರಿಣಮಿಸಿತ್ತು.&lt;/p&gt;&lt;p&gt;ಮಾಹಿತಿಯ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಶಂಕರನ ಮದುವೆ ನಿಶ್ಚಯವಾಗಿತ್ತು. ಆದರೆ ಕೆಲವು ಕಾರಣಗಳಿಂದ ಆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದಾದ ಬಳಿಕ ಕುಟುಂಬದವರು ಹಾಗೂ ಬಂಧುಗಳು ಎಷ್ಟೇ ಪ್ರಯತ್ನಪಟ್ಟರೂ ಶಂಕರನಿಗೆ ಮದುವೆಗಾಗಿ ಸೂಕ್ತವಾದ ವಧು ಸಿಗಲಿಲ್ಲ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಈ ವಿಚಾರದಿಂದ ಶಂಕರ ಮನಸ್ಸಿನಲ್ಲಿ ತೀವ್ರ ಬೇಸರ ಮತ್ತು ನಿರಾಶೆ ಮೂಡಿದ್ದು, ದಿನೇದಿನೇ ಆತ ಮಾನಸಿಕವಾಗಿ ಕುಗ್ಗುತ್ತಿದ್ದನು ಎನ್ನಲಾಗಿದೆ. ಮದುವೆ ವಿಚಾರದಲ್ಲಿ ಎದುರಾದ ನಿರಾಸೆಯಿಂದ ಮನನೊಂದು, ಕೊನೆಗೆ ಆತ ತನ್ನ ಜಮೀನಿನಲ್ಲಿರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾನೆ.&lt;/p&gt;&lt;h2&gt;ಕಬ್ಬನ್ ಪಾರ್ಕ್&zwnj;ನಲ್ಲಿ ಕಾರ್ಮಿಕ ಆತ್ಮ*ಹತ್ಯೆ&lt;/h2&gt;&lt;p&gt;ಬೆಂಗಳೂರು: ಕಬ್ಬನ್ ಪಾರ್ಕ್&zwnj; ಆವರಣದ ಮರಕ್ಕೆ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸುರೇಶ್ (35) ಮೃತ ದುರ್ದೈವಿ. ಕಬ್ಬನ್ ಪಾರ್ಕ್&zwnj; ಆವರಣದ ಮರದಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಪೊಲೀಸರಿಗೆ ವಾಯು ವಿಹಾರಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಆತನ ಪೂರ್ವಾಪರ ಪರಿಶೀಲಿಸಿದಾಗ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದ ಸುರೇಶ್, ಎಸ್&zwnj;.ಪಿ. ರಸ್ತೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ವೈಯಕ್ತಿಕ ಸಮಸ್ಯೆಗಳಿಂದ ಜಿಗುಪ್ಸೆಗೊಂಡು ಆತ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chikkamagaluru-tragedy-26-year-old-shepherd-dies-by-suicide-over-marriage-related-distress-gdp/articleshow-iasofq8"/>
        </item>
        <item>
            <title><![CDATA[ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದು ಎರಡೂ ಕ್ಷೇತ್ರಗಳಲ್ಲಿ ಗೆಲ್ತೇವೆ: ಮಾಜಿ‌ ಸಚಿವ ಕೆ.ಎನ್.ರಾಜಣ್ಣ]]></title>
            <link>https://kannada.asianetnews.com/politics/kn-rajanna-congress-invisible-voters-win-bypolls-karnataka-gvd/articleshow-igd2nep</link>
            <guid isPermaLink="true">https://kannada.asianetnews.com/politics/kn-rajanna-congress-invisible-voters-win-bypolls-karnataka-gvd/articleshow-igd2nep</guid>
            <pubDate>Tue, 07 Apr 2026 11:55:23 +0530</pubDate>
            <description><![CDATA[&lt;p&gt;ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ ಮಾಡಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ&zwnj; ಗೆಲ್ಲುತ್ತೇವೆಂದು ಮಾಜಿ&zwnj; ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9yn2ayhv8s8hp1vjz096j7x,imgname-----------------------2025-11-13t183215.867-1763039062993.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.07): &lt;/strong&gt;ಕಾಂಗ್ರೆಸ್&zwnj;ಗೆ ಅದೃಶ್ಯ ಮತದಾರರಿದ್ದು ಎರಡೂ ಕ್ಷೇತ್ರಗಳಲ್ಲಿ&zwnj; ಗೆಲ್ಲುತ್ತೇವೆಂದು ಮಾಜಿ&zwnj; ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜೊತೆಗೆ ನಿಲ್ಲುವವರು ಎಲ್ಲರೂ ಬಡವರು. ಯಾವತ್ತು ಕೂಡ ಉಪಕಾರ ಸ್ಮರಣೆ ಇಟ್ಟುಕೊಂಡವರು. ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಕಡೆನೂ ನಾವು ಗೆಲ್ಲುತ್ತೇವೆ ಎಂದರು.&lt;/p&gt;&lt;p&gt;ಜನರ ಮನಸ್ಸಿನಲ್ಲಿ ನಾವಿದ್ದೇವೆ, ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರು ಇದ್ದಾರೆ ಎಂದರು. ಒಳಮೀಸಲಾತಿ ಒಂದು ರೀತಿನಲ್ಲಿ ಗೊಂದಲದ ಗೂಡಾಗಿದೆ. ಯಾರೊಬ್ಬರು ಕೂಡ ಅದರಿಂದ ಸಮಾಧಾನ ಪಟ್ಟಂಗೆ ಅನ್ನಿಸುತ್ತಿಲ್ಲ ಲೆಫ್ಟ್ ಆಗಲಿ, ರೈಟ್ ಆಗಲಿ ಅದರ್ಸ್ ಆಗಲಿ ಇನ್ನೊಬ್ಬರಾಗಲಿ ಗೊಂದಲ ಇದೆ ಎಂದರು. ಇನ್ನೆರೆಡು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಸೆಂಬ್ಲಿಯಲ್ಲೇ ಇನ್ನೆರೆಡು ಬಜೆಟ್ ಅನ್ನು ಹೈ ಕಮಾಂಡ್ ಒಪ್ಪಿದರೆ ಮಾಡುತ್ತೀನಿ ಅಂತ ಹೇಳಿದ್ದಾರೆ.&lt;/p&gt;&lt;p&gt;ಜನ ಕೂಡ ನಿರೀಕ್ಷೆ ಮಾಡಿದ್ದಾರೆ. ಹೈ ಕಮಾಂಡ್ ಆ ನಿರೀಕ್ಷೆಗೆ ಗೌರವ ಕೊಡುತ್ತಾರೆ ಅಂತ ನಾನು ಅಂದುಕೊಳ್ಳುತ್ತೇನೆ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಾಡಬೇಕು ಅನ್ನುವುದು ಮೊದಲಿಂದಲೂ ನನ್ನ ವಾದ. ಗ್ರಾಮ ಪಂಚಾಯಿತಿ ಇರಲಿ, ಮುನ್ಸಿಪಾಲಿಟಿಗಳು ಇರಲಿ, ಕಾರ್ಪೊರೇಷನ್ ಇರಲಿ, ಜಿಲ್ಲಾ ಪಂಚಾಯಿತಿ ಇರಲಿ, ತಾಲೂಕು ಪಂಚಾಯಿತಿ ಇರಲಿ. ಯಾವತ್ತೂ ಕೂಡ ಜನಪ್ರತಿನಿಧಿಗಳು ಇದ್ದರೆ ಆ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ ಬರುತ್ತದೆ ಎಂದರು.&lt;/p&gt;&lt;h2&gt;&lt;strong&gt;ಯೋಚನೆ ಮಾಡುವುದಿಲ್ಲ&lt;/strong&gt;&lt;/h2&gt;&lt;p&gt;ಜನಪ್ರತಿನಿಧಿಗಳು ಇಲ್ಲದೆ ಬರಿ ಅಧಿಕಾರಿಗಳ ಕಡೆಯಿಂದ ನಾವು ಸರ್ಕಾರ ನಡೆಸುತ್ತೇವೆ. ಅಧಿಕಾರಿಗಳ ಮೂಲಕ ಸ್ಥಳೀಯ ಸಂಸ್ಥೆಗಳು ನಡೆಸುತ್ತೇವೆ ಅನ್ನೋ ಪ್ರಯತ್ನ ಸರಿಯಲ್ಲ ಎಂದರು. ಕ್ಯಾಬಿನೆಟ್ ವಿಸ್ತರಣೆ ಮಾಡಬಹುದು ಮಾಡದೆ ಇರಬಹುದು. ಚುನಾವಣಾ ಫಲಿತಾಂಶಗಳು ಬಂದ ನಂತರ ವಿಸ್ತರಣೆಯಾಗಬಹುದು ಎಂದ ಅವರು ನನಗೆ ಮಂತ್ರಿ ಸ್ಥಾನ ಬಂದರೆ ಬರ್ತದೆ, ಹೋದರೆ ಹೋಗುತ್ತದೆ. ಅದಕ್ಕೆ ನಾವೇನು ಯೋಚನೆ ಮಾಡುವುದಿಲ್ಲ ಎಂದರು.&lt;/p&gt;&lt;p&gt;ಪವರ್ ಇಸ್ ಪಾಯಿಸನ್ ಅಂತ ಒಂದು ಗಾದೆ ಕೇಳಿದ್ದೀನಿ. ಪಾಯಿಸನ್ ಅನ್ನು ಸರಿಯಾಗಿ ಬಳಸಿದರೆ ಔಷಧಿನೂ ಮಾಡಿಕೊಳ್ಳಬಹುದು. ಈಗ ಕ್ಯಾನ್ಸರ್ ಗೆ ಪಾಯಿಸನ್ ಇಂದಾನೆ ಔಷಧಿ ಮಾಡೋದು ಎಂದ ಅವರು ಹಾಗಾಗಿ ಆ ಪವರ್ ಅನ್ನು ಪಾಯಿಸನ್. ಅದನ್ನು ಬಳಸುದರ ಮೇಲೆ ಅದರ ಪರಿಣಾಮ, ದುಷ್ಪರಿಣಾಮ, ಸತ್ಪರಿಣಾಮಗಳು ಗೊತ್ತಾಗುತ್ತದೆ ಎಂದರು.&lt;/p&gt;]]></content:encoded>
            <category>tumakuru</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/kn-rajanna-congress-invisible-voters-win-bypolls-karnataka-gvd/articleshow-igd2nep"/>
        </item>
        <item>
            <title><![CDATA[ಸಿದ್ದಗಂಗಾ ಮಠದ ವೇದಿಕೆಯಲ್ಲಿ ಪ್ರೊಟೊಕಾಲ್ ಗೊಂದಲ, ಸಿದ್ದಲಿಂಗ ಶ್ರೀಗಳಿಗೆ ವೇದಿಕೆಯಲ್ಲಿ ಕೊನೆಯ ಸೀಟು! ಆಗಿದ್ದೇನು?]]></title>
            <link>https://kannada.asianetnews.com/state/president-murmu-visit-to-siddaganga-math-protocol-confusion-leads-to-siddalinga-swamiji-seated-in-the-last-row/articleshow-inug5uc</link>
            <guid isPermaLink="true">https://kannada.asianetnews.com/state/president-murmu-visit-to-siddaganga-math-protocol-confusion-leads-to-siddalinga-swamiji-seated-in-the-last-row/articleshow-inug5uc</guid>
            <pubDate>Wed, 01 Apr 2026 13:13:15 +0530</pubDate>
            <description><![CDATA[&lt;p&gt;ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮಿಗಳ ಜಯಂತೋತ್ಸವದಲ್ಲಿ ಆಸನ ವ್ಯವಸ್ಥೆಯ ಶಿಷ್ಟಾಚಾರವು ದೊಡ್ಡ ಗೊಂದಲಕ್ಕೆ ಕಾರಣವಾಯಿತು. ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿಗೆ ಕೇಂದ್ರ ಸಚಿವರ ಮನವಿ ಬಳಿಕವೂ ಮಠದ ಸಿದ್ದಲಿಂಗ ಶ್ರೀಗಳ ಆಸನದ ಕೊನೆಯಲ್ಲಿ ಕುಳಿತುಕೊಳ್ಳಬೇಕಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn3z66ez7xxcnkr1fyvsgasw,imgname----------------------28--1775028607455.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಏ.1):&lt;/strong&gt; ತುಮಕೂರಿನ ಸಿದ್ದಗಂಗಾ ಮಠದಲ್ಲಿ ಇಂದು (ಏ.1) ಆಯೋಜಿಸಲಾಗಿರುವ ಡಾ.ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಆಸನ ವ್ಯವಸ್ಥೆಯ ಶಿಷ್ಟಾಚಾರ (Protocol) ದೊಡ್ಡ ಮಟ್ಟದ ಗೊಂದಲಕ್ಕೆ ಕಾರಣವಾಯಿತು. ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರ ಸಚಿವರ ನಡುವೆ ಆಸನದ ವಿಚಾರವಾಗಿ ಗೊಂದಲ ಉಂಟುಮಾಡಿತು.&lt;/p&gt;&lt;p&gt;ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮವಾದ್ದರಿಂದ ಶಿಷ್ಟಾಚಾರದ ಪ್ರಕಾರವೇ ಕುಳಿತುಕೊಳ್ಳುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದರು. ಅದರ ಪ್ರಕಾರ ವೇದಿಕೆಯ ಕೊನೆಯಲ್ಲಿ ಸಿದ್ದಲಿಂಗಸ್ವಾಮೀಜಿ ಕುಳಿತುಕೊಳ್ಳುವಂತೆ ಹೇಳಲಾಯಿತು. ಆದರೆ ಶ್ರೀಗಳು ವೇದಿಕೆಯ ಕೊನೆಯಲ್ಲಿ ಕೂರುವುದು ಸರಿಯಲ್ಲ ರಾಷ್ಟ್ರಪತಿಗಳ ಪಕ್ಕದಲ್ಲಿ ಸಿದ್ದಲಿಂಗಸ್ವಾಮೀಜಿ ಅವರು ಕುಳಿತುಕೊಳ್ಳಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಪ್ರಹ್ಲಾದ್ ಜೋಶಿ ಅವರು ಭದ್ರತಾ ಸಿಬ್ಬಂದಿಗೆ ಮನವಿ ಮಾಡಿದರು. ಆದರೆ ಭದ್ರತಾ ಸಿಬ್ಬಂದಿ ಇದ್ಯಾವುದಕ್ಕೂ ಕಿವಿಗೊಡಲಿಲ್ಲ.&lt;/p&gt;&lt;h2&gt;ಕೇಂದ್ರ ಸಚಿವರು ಮನವಿ ಮಾಡಿದ್ರೂ ಕೇಳದ ಭದ್ರತಾ ಸಿಬ್ಬಂದಿ&lt;/h2&gt;&lt;p&gt;ಎಷ್ಟೇ ಹೇಳಿದರೂ ಕೇಂದ್ರ ಸಚಿವರ ಮನವಿಗೂ ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ಒಪ್ಪಲಿಲ್ಲ. ಬದಲಾಗಿ ರಾಷ್ಟ್ರಪತಿಗಳ ಪಕ್ಕದಲ್ಲಿ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರಿಗೆ ಅವಕಾಶ ನೀಡಿದರು. ನಂತರ ಗೃಹಸಚಿವ ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್, ಎಂಬಿ ಪಾಟೀಲ್ ಅವರಿಗೆ ಅವಕಾಶ ಮಾಡಿಕೊಡಲಾಯಿತು. ಮಠದ ಆತಿಥೇಯರಾದ ಸಿದ್ದಲಿಂಗ ಶ್ರೀಗಳು ಅನಿವಾರ್ಯವಾಗಿ ವೇದಿಕೆಯ ಕೊನೆಯಲ್ಲಿ ಕುಳಿತುಕೊಳ್ಳಬೇಕಾಯಿತು. ಈ ವೇಳೆ ಸ್ವಾಮೀಜಿ ವೇದಿಕೆಯ ಕೊನೆಯಲ್ಲಿ ಕುಳಿತಿರುವುದು ಕೇಂದ್ರ ಸಚಿವರಿಗೆ ಇರಿಸುಮುರಿಸು ಉಂಟುಮಾಡಿತು&lt;/p&gt;&lt;h3&gt;10 ನಿಮಿಷಗಳ ಹೈಡ್ರಾಮಾ - ರಾಷ್ಟ್ರಪತಿ ಆಗಮನ ವಿಳಂಬ&lt;/h3&gt;&lt;p&gt;ಈ ಆಸನ ವ್ಯವಸ್ಥೆಯ ಗೊಂದಲದಿಂದಾಗಿ ಸುಮಾರು 10 ನಿಮಿಷಗಳ ಕಾಲ ವೇದಿಕೆಗೆ ರಾಷ್ಟ್ರಪತಿ ಬರಲು ವಿಳಂಬವಾಯಿತು. ಶಿಷ್ಟಾಚಾರದ ಗೊಂದಲ ಸಂಪೂರ್ಣವಾಗಿ ಬಗೆಹರಿದು, ಎಲ್ಲರೂ ಆಸನಗಳಲ್ಲಿ ಕುಳಿತ ನಂತರವಷ್ಟೇ ರಾಷ್ಟ್ರಪತಿಗಳು ವೇದಿಕೆಗೆ ಆಗಮಿಸಿದರು.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/president-murmu-visit-to-siddaganga-math-protocol-confusion-leads-to-siddalinga-swamiji-seated-in-the-last-row/articleshow-inug5uc"/>
        </item>
        <item>
            <title><![CDATA[ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ 119ನೇ ಜಯಂತಿ: ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು]]></title>
            <link>https://kannada.asianetnews.com/state/tumakuru-dr-sri-shivakumara-swamijis-119th-birth-anniversary-president-draupadi-murmu-visits-siddaganga-mutt-today-mrq/articleshow-lfz6umg</link>
            <guid isPermaLink="true">https://kannada.asianetnews.com/state/tumakuru-dr-sri-shivakumara-swamijis-119th-birth-anniversary-president-draupadi-murmu-visits-siddaganga-mutt-today-mrq/articleshow-lfz6umg</guid>
            <pubDate>Wed, 01 Apr 2026 08:57:45 +0530</pubDate>
            <description><![CDATA[&lt;p&gt;ತುಮಕೂರಿನ ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಮಹೋತ್ಸವವನ್ನು ವೈಭವೋಪೇತವಾಗಿ ಆಚರಿಸಲಾಗುತ್ತಿದೆ. ಈ ಗುರುವಂದನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಲಕ್ಷಾಂತರ ಭಕ್ತರಿಗಾಗಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn3h2ettqk4q3zmd9ex32bva,imgname-shivakumar-swamiji-1775013804890.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಪ್ರಖ್ಯಾತರಾದ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಶ್ರೀಕ್ಷೇತ್ರದಲ್ಲಿ ಭರದ ಸಿದ್ಧತೆ ನಡೆದಿವೆ.&lt;/p&gt;&lt;p&gt;ನಗರದಲ್ಲಿ ಬುಧವಾರ ಗುರುವಂದನಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಕಳೆದ 4-5 ದಿನಗಳಿಂದ ಶ್ರೀಕ್ಷೇತ್ರದಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಶ್ರೀಗಳ ಜಯಂತಿ ಪ್ರಯುಕ್ತ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಅತ್ಯಂತ ವೈಭವೋಪೇತವಾಗಿ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಗಳ ಗದ್ದುಗೆ ದರ್ಶನ ಮಾಡಲು ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಗಳ ಗದ್ದುಗೆ, ದೇವಸ್ಥಾನ ಸೇರಿದಂತೆ ಮಠವನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗಿದೆ.&lt;/p&gt;&lt;p&gt;ರಾಷ್ಟ್ರಪತಿ ಅವರು ಶ್ರೀಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಭದ್ರತಾ ದೃಷ್ಠಿಯಿಂದ ಮಂಗಳವಾರವೂ ಕೇಂದ್ರ ಮೀಸಲು ಪಡೆಯಿಂದ ತಪಾಸಣೆ ನಡೆಸಲಾಯಿತು.&lt;/p&gt;&lt;h2&gt;&lt;strong&gt;6 ಕಡೆ ದಾಸೋಹ ವ್ಯವಸ್ಥೆ&lt;/strong&gt;&lt;/h2&gt;&lt;p&gt;ಶ್ರೀಕ್ಷೇತ್ರಕ್ಕೆ ಏ.1ರಂದು ಆಗಮಿಸುವ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರಿಗಾಗಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮಹಾಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಶ್ರೀಮಠದ ಪ್ರಾರ್ಥನಾ ಮಂದಿರ, ಡಾ.ಶ್ರೀ ಶಿವಕುಮಾರ ಸ್ವಾಮೀಜಿ ದಾಸೋಹ ಮಂಟಪ, ಲಿಂಗಾಯತರ ಕೊಪ್ಪಲು, ಸಾದರ ಕೊಪ್ಪಲು, ಮಠದ ಸಮುದಾಯದ ಭವನ, ಅತಿಥಿ ಗೃಹಗಳು ಸೇರಿದಂತೆ ಶ್ರೀಕ್ಷೇತ್ರದ 6 ಕಡೆಗಳಲ್ಲಿ ಪ್ರಸಾದ ನಿಲಯಗಳನ್ನು ನಿರ್ಮಿಸಲಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ದಾಸೋಹ ನಡೆಯಲಿದೆ. ಭಕ್ತಾದಿಗಳು ಪ್ರಸಾದ ಸೇವಿಸಲು ಟೇಬಲ್ ಮತ್ತು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ವಿಶೇಷ ಸಿಹಿಬೂಂದಿ ತಯಾರಿ&lt;/strong&gt;&lt;/h3&gt;&lt;p&gt;ಈಗಾಗಲೇ ಕಳೆದ 4-5 ದಿನಗಳಿಂದ ನೂರಾರು ಬಾಣಸಿಗರು ಸಿಹಿಬೂಂದಿ ಸೇರಿದಂತೆ ಸಿಹಿ ಖಾದ್ಯ ಹಾಗೂ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ. ಏ.1ರಂದು ಉಪ್ಪಿನಕಾಯಿ, ಕೋಸಂಬರಿ, ಪಾಯಸ, ಬೂಂದಿ, ಚಿತ್ರಾನ್ನ, ಅನ್ನ, ಸಾರು, ಮಜ್ಜಿಗೆ, ಕೇಸರಿ ಬಾತ್, ಖಾರಾಬಾತ್, ಖಾರಾಬೂಂದಿ ಸೇರಿದಂತೆ ವಿಶೇಷ ದಾಸೋಹ ಇರಲಿದೆ.&lt;/p&gt;&lt;h3&gt;&lt;strong&gt;ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ&lt;/strong&gt;&lt;/h3&gt;&lt;p&gt;ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏ.1ರಂದು ಆಯೋಜಿಸಲಾಗಿರುವ ಡಾ.ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು. ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್&zwnj; ಅವರು ಆತ್ಮೀಯವಾಗಿ ಬರಮಾಡಿಕೊಂಡರು.&lt;/p&gt;&lt;p&gt;ನಡೆದಾಡುವ ದೇವರು, ಮಹಾನ್ ಮಾನವತಾವಾದಿ, ತ್ರಿವಿಧ ದಾಸೋಹ ಕರ್ತೃ, ಸಿದ್ಧಗಂಗಾ ಮಠದ ಶಿವಕುಮಾರ ಮಹಾ ಸ್ವಾಮೀಜಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರದಲ್ಲಿ 1 ಏಪ್ರಿಲ್ 1907 ರಂದು ಜನಿಸಿದರು. 1930ರಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಜವಾಬ್ದಾರಿ ಹೊತ್ತು ಅಂದು ಶ್ರೀ ಸಿದ್ಧಗಂಗಾ ಎಜುಕೇಶನ್ ಸೊಸೈಟಿ ಸ್ಥಾಪಿಸಿದರು, ನರ್ಸರಿಯಿಂದ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳವರೆಗೂ 132ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ವಿಧದ ಮಹಾನ್ ದಾಸೋಹ ಸೇವೆ ಸಲ್ಲಿಸಿದರು. ಸುಮಾರು 77 ವರ್ಷಗಳ ಕಾಲ ಮಠದಲ್ಲಿ ಸೇವೆ ಸಲ್ಲಿಸಿ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವಜನರ ಏಳ್ಗೆಗಾಗಿ ದುಡಿದ ಮಹಾನ್ ಸಂತ ಶಿವಕುಮಾರ ಶ್ರೀಗಳಿಗೆ ಭಾರತ ಸರ್ಕಾರ 2015ರಲ್ಲಿ ಪದ್ಮವಿಭೂಷಣ, ಕರ್ನಾಟಕ ಸರ್ಕಾರದಿಂದ ಅತ್ಯುನ್ನತ ಗೌರವ ಕರ್ನಾಟಕ ರತ್ನ ನೀಡಿ ಗೌರವಿಸಲಾಗಿದೆ. ಅಂತಿಮವಾಗಿ ಈ ಮಹಾನ್ ಕಾಯಕಯೋಗಿ 21 ಜನವರಿ 2019 ರಂದು ತಮ್ಮ 111ನೇ ವಯಸ್ಸಿನಲ್ಲಿ ಅಪಾರ ಭಕ್ತಗಣವನ್ನು ಆಗಲಿ ಲಿಂಗೈಕ್ಯರಾದರು. ಪ್ರತಿ ವರ್ಷ ಏಪ್ರಿಲ್ 1 ಶ್ರೀಗಳ ಜನ್ಮದಿನದಂದು ಅವರ ಸೇವೆ ಸ್ಮರಿಸಲು ರಾಜ್ಯಾದ್ಯಂತ ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ.&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/tumakuru-dr-sri-shivakumara-swamijis-119th-birth-anniversary-president-draupadi-murmu-visits-siddaganga-mutt-today-mrq/articleshow-lfz6umg"/>
        </item>
        <item>
            <title><![CDATA[ಮೇಡಂ, ಒಂದು ಪ್ಯಾಕ್ ಗೆ ಕೇವಲ 20 ರು.ಮಾತ್ರ; ಊದಿನಕಡ್ಡಿ ವಾಸನೆಗೆ ಹಣ ಕಳೆದುಕೊಂಡ ಜನ]]></title>
            <link>https://kannada.asianetnews.com/karnataka-districts/a-network-of-fraudsters-is-active-going-door-to-door-under-the-pretext-of-selling-agarabatti-turuvekere-tumakuru-mrq/articleshow-lptcypg</link>
            <guid isPermaLink="true">https://kannada.asianetnews.com/karnataka-districts/a-network-of-fraudsters-is-active-going-door-to-door-under-the-pretext-of-selling-agarabatti-turuvekere-tumakuru-mrq/articleshow-lptcypg</guid>
            <pubDate>Mon, 23 Mar 2026 08:42:06 +0530</pubDate>
            <description><![CDATA[&lt;p&gt;ಊದುಬತ್ತಿ ಮಾರಾಟದ ನೆಪದಲ್ಲಿ ಮನೆಮನೆಗೆ ಬರುವ ವಂಚಕರ ಜಾಲವೊಂದು ಸಕ್ರಿಯವಾಗಿದೆ. ಅದೃಷ್ಟದ ಕೂಪನ್ ಆಮಿಷವೊಡ್ಡಿ, ಸಾವಿರಾರು ರೂಪಾಯಿ ಪಡೆದು ಕಳಪೆ ಗುಣಮಟ್ಟದ ಗೃಹೋಪಯೋಗಿ ವಸ್ತುಗಳನ್ನು ನೀಡಿ, ಹೆಚ್ಚುವರಿ ಹಣ ಪಡೆದು ಫ್ರಿಡ್ಜ್, ವಾಷಿಂಗ್ ಮೆಷಿನ್ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmcapwyg563f06dz7dwkbhpb,imgname-agarabatti--1774235382735.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎಸ್.ನಾಗಭೂಷಣ&amp;nbsp;&lt;/strong&gt;&lt;/p&gt;&lt;p&gt;ತುರುವೇಕೆರೆ: ಮೇಡಂ. ನಾವು ನಮ್ಮ ಊದುಬತ್ತಿಯನ್ನು ಪ್ರಮೋಷನ್ ಮಾಡಕ್ಕೆ ಬಂದಿದ್ದೀವಿ. ಒಂದು ಪ್ಯಾಕ್ ಗೆ ಕೇವಲ 20 ರು.ಮಾತ್ರ. ಇದರಲ್ಲಿ ಒಂದು ಕೂಪನ್ ಇರುತ್ತೆ. ಅದರಲ್ಲಿ ನಿಮ್ಮ ಅದೃಷ್ಠ ಗೊತ್ತಾಗುತ್ತೆ. ಅದರಲ್ಲೇನಾದರೂ ನಿಮಗೆ ಆಫರ್ ಸಿಕ್ಕರೆ ಸುಮಾರು 8 ಸಾವಿರ ರು ಬೆಲೆ ಬಾಳುವ ಐಟಮ್ ಗಳನ್ನು ಕೇವಲ 4 ಸಾವಿರ ರುಪಾಯಿಗೆ ಕೊಡ್ತೀವಿ. ನೋಡಿ ಮೇಡಮ್. ನಿಮ್ಮ ಅದೃಷ್ಠನ ಒಮ್ಮೆ ಟೆಸ್ಟ್ ಮಾಡಿ.&lt;/p&gt;&lt;p&gt;ಹೀಗೆ ನಿಮ್ಮ ಮನೆ ಬಾಗಿಲಿಗೆ ಬರುವ ಇವರು ನಿಮ್ಮ ಮನಸ್ಸಿನ ಭಾವನೆಯನ್ನು ಕೆಲವೇ ಕ್ಷಣಗಳಲ್ಲಿ ಅಳೆದು ಬಿಡ್ತಾರೆ. ನೀವು ಅವರ ಮಾತಿಗೆ ಮರುಳಾಗಿ ಊದುಗಡ್ಡಿ ಪ್ಯಾಕ್ ನ್ನು ಕೊಂಡರೋ, ನೀವು ಗ್ಯಾರಂಟಿ ಗುಂಡಿಗೆ ಬಿದ್ದಿರಿ ಎಂದೇ ಅರ್ಥ. ಈ ರೀತಿಯಾಗಿ ತುರುವೇಕೆರೆಯಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮಂದಿ ಈ ಭೋಗಸ್ ಗೆ ಸಿಲುಕಿ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.&lt;/p&gt;&lt;h2&gt;&lt;strong&gt;ಊದುಗಡ್ಡಿ ಗ್ಯಾಂಗ್ ಹೇಗೆ ಮೋಸ ಮಾಡುತ್ತೆ?&lt;/strong&gt;&lt;/h2&gt;&lt;p&gt;ಮನೆ ಮನೆಗೆ ಬರುತ್ತಿರುವ ಈ ಗ್ಯಾಂಗ್&zwnj; ಊದುಗಡ್ಡಿ ಗ್ಯಾಂಗ್&zwnj; ಎಂದೇ ಪ್ರಸಿದ್ದಿಯಾಗಿದೆ. ಇವರು ನೀಡುವ ಪ್ಯಾಕ್ ಒಳಗೆ ಒಂದು ಆಫರ್ ಕೂಪನ್ ಇಟ್ಟಿರುತ್ತಾರೆ. ಅದರಲ್ಲಿ ತಮ್ಮ ಶ್ರೀ ಜಯಲಕ್ಷ್ಮಿ ಹೋಂ ಅಪ್ಲೆಯನ್ಸೆಸ್ ಡಿಸ್ಕೌಂಟ್ ಆಫರ್ ಅಂತ ಇದ್ದು 8000 ಸಾವಿರ ರು. ಬದಲಿಗೆ ನಿಮಗೆ ಕೇವಲ 3999 ಕ್ಕೆ ವಿವಿಧ ಗೃಹೋಪಯೋಗಿ ವಸ್ತುಗಳು ನಿಮಗೆ ಸಿಕ್ಕಿದೆ. ನಿಮಗೆ ಶುಭಾಶಯಗಳು ಅಂತ ಇರುತ್ತೆ.&amp;nbsp;&lt;/p&gt;&lt;p&gt;ಈಗ ನಿಮಗೆ 3999 ಕ್ಕೆ ಮಿಕ್ಸಿ, ಪ್ರೆಸರ್ ಕುಕ್ಕರ್, ಚಪಾತಿ ಮೇಕರ್, ನಾಸ್ಟಿಕ್ ಕಡಾಯಿ (ದೊಡ್ಡದು), ನಾನ್ ಸ್ಟಿಕ್ ಕಡಾಯಿ (ಚಿಕ್ಕದು), ತೆಂಗಿನಕಾಯಿ ತುರಿಯುವ ಮಣೆ, ಒಂದು ಸೋಲಾರ್ ಲ್ಯಾಂಪ್ ದೊರೆಯಲಿದೆ ಎಂದು ಆಸೆ ಹುಟ್ಟಿಸುತ್ತಾರೆ. ಇದು ಬೇಡ ಅಂದರೆ ಹೇಳಿ ಬೇರೆ ಕಡೆ ಊದುಗಡ್ಡಿ ತೆಗೆದುಕೊಂಡವರಿಗೆ ಯಾವ ಕೂಪನ್ನು ಸಿಕ್ಕಿರಲಿಲ್ಲ. ಅವರಿಗೆ ಕೊಡ್ತೀವಿ ಅಂತ ಹೇಳಿ ಮಾನಸಿಕವಾಗಿ ಬ್ಲಾಕ್ ಮೇಲ್ ಮಾಡ್ತಾರೆ.&lt;/p&gt;&lt;p&gt;ತಾವು ಮೊದಲೇ ಕೊಟ್ಟಿದ್ದ ಊದುಗಡ್ಡಿಯಿಂದಲೇ ಆ ಎಲ್ಲಾ ಐಟಮ್ ಗಳಿಗೆ ಪೂಜೆ ಮಾಡಿಸುವ ಅವರು ನೋಡಿ ಮೇಡಮ್ ಇನ್ನೊಂದು ಆಫರ್ ಇದೆ. ಇದು ನಿಮಗೆ ಮಾತ್ರ ಸಿಗುತ್ತೆ. ಎಕ್ಟ್ರಾ 600 ರು ಕೊಟ್ರೆ ನಿಮಗೆ ಒಂದು ವಾಷಿಂಗ್ ಮಷನ್ ಅಥವಾ ಫ್ರಿಡ್ಜ್ ಸಿಗುತ್ತೆ. ಇದು ಕೆಲವೇ ಜನಕ್ಕೆ ಮಾತ್ರ. ಎರಡು ವರ್ಷ ವಾರಂಟಿ ಇರುತ್ತೆ. ಇದಕ್ಕೆ ನೀವು ಹೂ ಅಂದ್ರೆ ಮೂರು ದಿನಗಳ ಒಳಗೆ ನಿಮ್ಮ ಮನೆಗೇ ನಮ್ಮ ಹುಡುಗರು ಬಂದು ವಾಷಿಂಗ್ ಮೆಷಿನ್ ಅಥವಾ ಫ್ರಿಡ್ಜ್ ನ ತಂದುಕೊಡ್ತಾರೆ. ಇವತ್ತು ಮಾತ್ರ ಈ ಚಾನ್ಸ್ ಇರುತ್ತೆ. ನೀವು ಹೂ ಅಂದ್ರೆ ಆರ್ಡರ್ ಬುಕ್ ಮಾಡ್ಕೋತೀವಿ ಅಂತನೂ ನಯವಾಗಿ ಮಾತನಾಡಿ ಕಿವಿಗೆ ಲಾಲ್ ಬಾಗ್ ನ್ನೇ ಮುಡಿಸಿ ಈಗ ಪರಾರಿಯಾಗಿದ್ದಾರೆ. ಇವರ ಮಾತಿಗೆ ಮರುಳಾಗಿರುವ ಜನ ಕೇವಲ 600 ರೂಪಾಯಿಗೆ ವಾಷಿಂಗ್ ಮಷಿನ್ ಅಥವಾ ಫ್ರಿಡ್ಜ್ ಸಿಗುತ್ತೆ ಎಂದು ಹೇಳಿ ಅದನ್ನು ಕಳೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಫೋನ್ ಮಾಡಿದ್ರೆ ಸ್ವಿಚ್ ಆಫ್&lt;/strong&gt;&lt;/h3&gt;&lt;p&gt;&amp;nbsp;3999 ರೂ ಕೊಟ್ಟು ಕೊಂಡಿದ್ದ ವಸ್ತುಗಳನ್ನು ಮನೆಯಲ್ಲಿ ಬಿಚ್ಚಿ ನೋಡಿದರೆ ಎಲ್ಲವೂ ಕಳಪೆ ಗುಣಮಟ್ಟದ ವಸ್ತುಗಳು, ತಗಡಿನಿಂದ ಮಾಡಿರುವ ಹಾಗೂ ಕಳಪೆ ಕಚ್ಚಾ ವಸ್ತುಗಳನ್ನು ಬಳಸಿ ಮಾಡಿರುವ ವಸ್ತುಗಳಾಗಿರುತ್ತೆ. ಈ ಎಲ್ಲವನ್ನೂ ಕ್ರೋಢೀಕರಿಸಿದರೂ ಸಹ ಮಾರುಕಟ್ಟೆಯಲ್ಲಿ 1500-2000 ದೊರೆಯಬಹುದು ಅಷ್ಟೇ. ಅವರು ಕೊಟ್ಟಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ, ನೀವು ಯಾವ ನಂಬರ್ ಗೆ ಕರೆ ಮಾಡಿದ್ದೀರೋ ಅವರು ಮೊಬೈಲ್ ನ್ನು ಸ್ಚಿಚ್ ಆಫ್ ಮಾಡಿದ್ದಾರೆ ಎಂದು ಹೇಳುತ್ತೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಬಸ್ ಅಪಘಾತ; ಹಬ್ಬ ಮುಗಿಸಿ ಬರ್ತಿದ್ದ ನಾಲ್ವರ ದುರ್ಮರಣ&lt;/strong&gt;&lt;/p&gt;&lt;p&gt;ಇತ್ತ ಊದುಬತ್ತಿ ಮಾರುವವರಿಗೆ ಕನಿಷ್ಠ ಎಂದರೂ ಒಬ್ಬರಿಂದ 2 ಸಾವಿರ ಲಾಭ. ಅಲ್ಲದೇ ಫ್ರಿಡ್ಜ್, ವಾಷಿಂಗ್ ಮೆಷಿನ್ ಆಸೆ ಹುಟ್ಟಿಸಿ ಪಡೆದ 600 ರು ಸಹ ಲಾಭವಾಗಿದ್ದು ನಿಮ್ಮ ಅದೃಷ್ಟ ಪರೀಕ್ಷಿಸಿ ಅಂತ ಬಂದಾರು ಹುಷಾರಾಗಿರಿ ಎಂದು ಹಣ ಕಳೆದುಕೊಂಡುವರು ಪೆಚ್ಚು ಮೋರೆ ಹಾಕಿಕೊಂಡು ಸಂಬಂಧಿಕರಿಗೆ ಪೋನಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದೇವಸ್ಥಾನದ ನಿಧಿ ದೋಚಿದವನಿಗೆ ಪಾಪಪ್ರಜ್ಞೆ: ಪೊಲೀಸ್ ಠಾಣೆಗೆ ಬಂದು ಶರಣಾದ ಇಳಕಲ್&zwnj; ವ್ಯಕ್ತಿ&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-network-of-fraudsters-is-active-going-door-to-door-under-the-pretext-of-selling-agarabatti-turuvekere-tumakuru-mrq/articleshow-lptcypg"/>
        </item>
        <item>
            <title><![CDATA[ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಕೇಂದ್ರ ಸಚಿವ ವಿ.ಸೋಮಣ್ಣ ವಿಶ್ವಾಸ]]></title>
            <link>https://kannada.asianetnews.com/politics/bjp-will-win-byelections-says-v-somanna-karnataka-politics-news-gvd/articleshow-om7tzr3</link>
            <guid isPermaLink="true">https://kannada.asianetnews.com/politics/bjp-will-win-byelections-says-v-somanna-karnataka-politics-news-gvd/articleshow-om7tzr3</guid>
            <pubDate>Sun, 22 Mar 2026 17:21:19 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3bsw54jhm01y45dw647d2sg,imgname-v-somanna-9-1755964118161.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮಾ.22): &lt;/strong&gt;ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ.&lt;/p&gt;&lt;p&gt;ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಉಂಟಾಗಿರುವ ಅರಾಜಕತೆ, ನೋವನ್ನು ಚುನಾವಣೆ ಮೂಲಕ ತೋರಿಸುವ ಸದಾವಕಾಶ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರಿಗೆ ದೊರೆತಿದೆ. ಈ ಉಪಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ದುರಾಡಳಿತವನ್ನು ಅನಾವರಣ ಮಾಡುವ ಸದಾವಕಾಶವನ್ನು ಉಪಯೋಗಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.&lt;/p&gt;&lt;p&gt;ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಚಿಂತನೆಯೇ ಕಾರಣ. ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್&zwnj;ಗಳ ಸಮಸ್ಯೆ ಉಂಟಾಗದಂತೆ ಈಗಾಗಲೇ ಆಹಾರ ಸಚಿವರು ಗ್ಯಾಸ್ ವಿತರಕರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಅಧಿಕಾರಿಗಳು ಸಹ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಅವರು ಸಲಹೆ ಹೇಳಿದರು.&lt;/p&gt;&lt;h2&gt;&lt;strong&gt;ಆತಂಕ ಪಡುವ ಅಗತ್ಯವಿಲ್ಲ&lt;/strong&gt;&lt;/h2&gt;&lt;p&gt;ಇನ್ನೆರಡು ದಿನಗಳಲ್ಲಿ ಇನ್ನೂ 2 ಹಡಗುಗಳಲ್ಲಿ ದೇಶಕ್ಕೆ ಗ್ಯಾಸ್ ಬರುತ್ತಿದೆ. ಜನತೆ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಪ್ರಪಂಚದ ಬೇರೆ, ಬೇರೆ ಭಾಗಗಳಲ್ಲಿ ಆಗುವ ಅನಾಹುತಗಳಿಂದ ನಮ್ಮ ದೇಶವನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಎಂಬ ದೂರದೃಷ್ಠಿಯನ್ನು ಪ್ರಧಾನಿಯವರು ಹೊಂದಿದ್ದಾರೆ. ಮುಂದಿನ 3-4 ದಿನಗಳಲ್ಲಿ ಯುದ್ಧದ ವಾತಾವರಣ ತಿಳಿಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಅವರು ಹೇಳಿದರು.&lt;/p&gt;]]></content:encoded>
            <category>tumakuru</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/bjp-will-win-byelections-says-v-somanna-karnataka-politics-news-gvd/articleshow-om7tzr3"/>
        </item>
        <item>
            <title><![CDATA[ಅತ್ತಿಗೆಯೊಂದಿಗೆ ಸರಸವಾಡ್ತಿದ್ದ ತಮ್ಮನಿಗೆ ಚುಚ್ಚಿದ ಅಣ್ಣ; ಆದ್ರೆ ಅಪ್ಪ ಮಾಡಿದ ಮಹಾನಾಟಕಕ್ಕೆ ತೆರೆ ಎಳೆದ ಡಾಕ್ಟರ್!]]></title>
            <link>https://kannada.asianetnews.com/karnataka-districts/tumakuru-murder-brother-kills-younger-brother-over-illicit-affair-doctor-exposes-father-lie-sat/articleshow-on39dh0</link>
            <guid isPermaLink="true">https://kannada.asianetnews.com/karnataka-districts/tumakuru-murder-brother-kills-younger-brother-over-illicit-affair-doctor-exposes-father-lie-sat/articleshow-on39dh0</guid>
            <pubDate>Tue, 31 Mar 2026 19:15:26 +0530</pubDate>
            <description><![CDATA[ತುಮಕೂರಿನಲ್ಲಿ ಅಕ್ರಮ ಸಂಬಂಧದ ಶಂಕೆಯಿಂದ ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಗನ ಕೃತ್ಯ ಮುಚ್ಚಿಹಾಕಲು ತಂದೆ ಸುಳ್ಳು ಕಥೆ ಕಟ್ಟಿದ್ದರೂ, ವೈದ್ಯರ ಅನುಮಾನದಿಂದಾಗಿ ಕೊಲೆ ಪ್ರಕರಣ ಬಯಲಾಗಿದ್ದು, ಪೊಲೀಸರು ತಂದೆ-ಮಗ ಇಬ್ಬರನ್ನೂ ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn21swper1wtktj4mbk4ejf8,imgname-tumakuru-stalin-murder-1774964241102.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮಾ.31): ತು&lt;/strong&gt;ಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ರಕ್ತಸಂಬಂಧಗಳ ನಡುವಿನ ಕಲಹವೊಂದು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಒಡಹುಟ್ಟಿದ ತಮ್ಮನನ್ನೇ ಅಣ್ಣ ಚಾಕುವಿನಿಂದ ಇರಿದು ಕೊಂದಿದ್ದಾನೆ. ಇದರಲ್ಲಿ ಕುತೂಹಲದ ವಿಚಾರವೆಂದರೆ, ಮಗನ ಈ ಕ್ರೂರ ಕೃತ್ಯವನ್ನು ಮುಚ್ಚಿಹಾಕಲು ತಂದೆಯೂ ಸಾಥ್ ನೀಡಿದ್ದು, ಪೊಲೀಸರ ಮುಂದೆ ಸುಳ್ಳು ಕಥೆ ಕಟ್ಟಿದ್ದರು. ಆದರೆ, ಚಿಕಿತ್ಸೆ ನೀಡಿದ ವೈದ್ಯರ ಅನುಮಾನದಿಂದಾಗಿ ಅಸಲಿ ಕೊಲೆ ಪ್ರಕರಣ ಬಯಲಿಗೆ ಬಂದಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಬನಶಂಕರಿ ನಿವಾಸಿ ಜಾನ್ ಪಾಲ್ ಎಂಬುವವರಿಗೆ ನವೀನ್ ಹಾಗೂ ಸ್ಟಾಲಿನ್ (29) ಎಂಬ ಇಬ್ಬರು ಮಕ್ಕಳಿದ್ದಾರೆ. ಕೊಲೆಯಾದ ಸ್ಟಾಲಿನ್ ತನ್ನ ಅಣ್ಣ ನವೀನ್&zwnj;ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಸ್ವತಃ ಸ್ಟಾಲಿನ್ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೇ ಈ ಆರೋಪ ಮಾಡಿದ್ದು, ಮನೆಯಲ್ಲಿ ಕಿಡಿ ಹೊತ್ತಲು ಕಾರಣವಾಗಿತ್ತು.&lt;/p&gt;&lt;h3&gt;&lt;strong&gt;ಚಾಕು ಇರಿತ ಹಾಗೂ ತಂದೆಯ ನಾಟಕ:&lt;/strong&gt;&lt;/h3&gt;&lt;p&gt;ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ 22ರಂದು ಅಣ್ಣ-ತಮ್ಮಂದಿರ ನಡುವೆ ಮನೆಯಲ್ಲೇ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ, ಆಕ್ರೋಶಗೊಂಡ ನವೀನ್ ಚಾಕುವಿನಿಂದ ತಮ್ಮ ಸ್ಟಾಲಿನ್&zwnj;ಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಸ್ಟಾಲಿನ್&zwnj;ನನ್ನು ತಂದೆ ಜಾನ್ ಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪೊಲೀಸರಿಗೆ ಮಾಹಿತಿ ನೀಡುವಾಗ ಜಾನ್ ಪಾಲ್ ಸತ್ಯ ಮರೆಮಾಚಿದ್ದರು. 'ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದು ಸ್ಟಾಲಿನ್ ಹೊಟ್ಟೆಗೆ ಗಾಯವಾಗಿದೆ' ಎಂದು ಸುಳ್ಳು ಕಥೆ ಹೇಳಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದರು.&lt;/p&gt;&lt;h2&gt;&lt;strong&gt;ವೈದ್ಯರಿಂದ ಬಯಲಾದ ರಹಸ್ಯ:&lt;/strong&gt;&lt;/h2&gt;&lt;p&gt;ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಲಿನ್ ಕಳೆದ 6 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾ.28ರಂದು ಮೃತಪಟ್ಟಿದ್ದಾನೆ. ಈ ವೇಳೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೈದ್ಯರು, ಗಾಯದ ಸ್ವರೂಪವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸತ್ಯ ಹೊರಬಂದಿದೆ. 'ಇದು ಆಕಸ್ಮಿಕವಾಗಿ ಬಿದ್ದು ಆದ ಗಾಯವಲ್ಲ, ಬದಲಾಗಿ ಹರಿತವಾದ ಆಯುಧದಿಂದ (ಚಾಕು) ಉದ್ದೇಶಪೂರ್ವಕವಾಗಿ ಇರಿದ ಗಾಯ' ಎಂದು ವೈದ್ಯರು ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸರಿಂದ ತಂದೆ-ಮಗನ ಬಂಧನ:&lt;/strong&gt;&lt;/h3&gt;&lt;p&gt;ವೈದ್ಯರ ಹೇಳಿಕೆಯಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ತಂದೆ ಜಾನ್ ಪಾಲ್ ಹಾಗೂ ಅಣ್ಣ ನವೀನ್&zwnj;ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಕ್ರಮ ಸಂಬಂಧದ ಶಂಕೆಯಿಂದ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಸದ್ಯ ಜಯನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಅಣ್ಣ ನವೀನ್ ಮತ್ತು ಸಾಕ್ಷಿ ನಾಶಕ್ಕೆ ಯತ್ನಿಸಿದ ತಂದೆ ಜಾನ್ ಪಾಲ್ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರೀತಿಯಿಂದ ಸಂಸಾರ ನಡೆಸಬೇಕಿದ್ದ ಮನೆಯಲ್ಲಿ ಅಕ್ರಮ ಸಂಬಂಧದ ಶಂಕೆ ಒಂದು ಜೀವವನ್ನು ಬಲಿ ಪಡೆದಿದೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/tumakuru-murder-brother-kills-younger-brother-over-illicit-affair-doctor-exposes-father-lie-sat/articleshow-on39dh0"/>
        </item>
        <item>
            <title><![CDATA[ಮಾರ್ಚ್‌ 22 ರಂದು ಬೆಂಗಳೂರಿಗೆ ವಿಶೇಷ ಮೆಮು ರೈಲು, ತುಮಕೂರಿನಿಂದ ಯಶವಂತಪುರ ಮಾರ್ಗವಾಗಿ ಬಾಣಸವಾಡಿಗೆ ಪ್ರಯಾಣ]]></title>
            <link>https://kannada.asianetnews.com/karnataka-districts/special-memu-train-between-tumakuru-and-bengaluru-announced-on-march-22-to-ease-festival-rush-gdp/articleshow-qzsphfg</link>
            <guid isPermaLink="true">https://kannada.asianetnews.com/karnataka-districts/special-memu-train-between-tumakuru-and-bengaluru-announced-on-march-22-to-ease-festival-rush-gdp/articleshow-qzsphfg</guid>
            <pubDate>Sat, 21 Mar 2026 22:25:04 +0530</pubDate>
            <description><![CDATA[ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ, ಸ್ವಗ್ರಾಮಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೇ ವಿಶೇಷ ಮೆಮು ರೈಲು ಸಂಚಾರವನ್ನು ಘೋಷಿಸಿದೆ. ಈ ರೈಲು ಭಾನುವಾರ ಸಂಜೆ ತುಮಕೂರು-ಯಶವಂತಪುರ-ಬಾಣಸವಾಡಿ ಮಾರ್ಗದಲ್ಲಿ ಸಂಚರಿಸಲಿದ್ದು, ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k1dr117pmgvfqrgpf76tkdxz,imgname-bengaluru-hubli-10-memu-train-3-1753881806070.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ಪ್ರಯಾಣಿಕರು ಸುಗಮವಾಗಿ ಮತ್ತೆ ಬೆಂಗಳೂರಿಗೆ ಮರಳಲು ಅನುಕೂಲವಾಗುವಂತೆ ನೈಋತ್ಯ ರೈಲ್ವೇ ಬೆಂಗಳೂರು ವಿಭಾಗವು ವಿಶೇಷ ಮೆಮು (MEMU) ರೈಲು ಸಂಚಾರವನ್ನು ವ್ಯವಸ್ಥೆ ಮಾಡಿದೆ. ಈ ಕುರಿತು ರೈಲ್ವೇ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಭಾನುವಾರ ಸಂಜೆ ತುಮಕೂರು&ndash;ಯಶವಂತಪುರ&ndash;ಬಾಣಸವಾಡಿ ಮಾರ್ಗದಲ್ಲಿ ವಿಶೇಷ ರೈಲು ಓಡಿಸಲಾಗುವುದು ಎಂದು ತಿಳಿಸಿದೆ.&lt;/p&gt;&lt;p&gt;ಈ ವಿಶೇಷ ರೈಲು ಸಂಚಾರಕ್ಕಾಗಿ ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ಕೇಂದ್ರ ರೈಲ್ವೇ ರಾಜ್ಯ ಸಚಿವರು ಹಾಗೂ ನೈಋತ್ಯ ರೈಲ್ವೇಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಪ್ರಯಾಣಿಕರ ಅಗತ್ಯವನ್ನು ಗಮನಿಸಿದ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಭಾನುವಾರ ಸಂಜೆ ವಿಶೇಷ ರೈಲು ಓಡಿಸಲು ಅನುಮೋದನೆ ನೀಡಿದ್ದಾರೆ.&lt;/p&gt;&lt;h2&gt;ರೈಲು ಸಂಚಾರದ ವಿವರಗಳು&lt;/h2&gt;&lt;p&gt;06589 ಸಂಖ್ಯೆಯ ಬಾಣಸವಾಡಿ&ndash;ತುಮಕೂರು ಮೆಮು ವಿಶೇಷ ರೈಲು 2026ರ ಮಾರ್ಚ್ 22ರಂದು ಮಧ್ಯಾಹ್ನ 3:30ಕ್ಕೆ ಬಾಣಸವಾಡಿಯಿಂದ ಹೊರಟು ಸಂಜೆ 5:15ಕ್ಕೆ ತುಮಕೂರಿಗೆ ತಲುಪಲಿದೆ.&lt;/p&gt;&lt;p&gt;ಇದಾದ ಬಳಿಕ, 06590 ಸಂಖ್ಯೆಯ ತುಮಕೂರು&ndash;ಬಾಣಸವಾಡಿ ಮೆಮು ವಿಶೇಷ ರೈಲು ಅದೇ ದಿನ ಸಂಜೆ 5:45ಕ್ಕೆ ತುಮಕೂರಿನಿಂದ ಹೊರಟು ರಾತ್ರಿ 7:40ಕ್ಕೆ ಬಾಣಸವಾಡಿಗೆ ತಲುಪಲಿದೆ. ಈ ರೈಲು ಸಂಜೆ 6:55ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದ್ದು, ಅಲ್ಲಿ ಪ್ರಯಾಣಿಕರಿಗೆ ನಿಲುಗಡೆಯ ವ್ಯವಸ್ಥೆ ಕಲ್ಪಿಸಲಾಗಿದೆ.&lt;/p&gt;&lt;h2&gt;ನಿಲುಗಡೆಗಳ ಮಾಹಿತಿ&lt;/h2&gt;&lt;p&gt;ಈ ವಿಶೇಷ ಮೆಮು ರೈಲು ಮಾರ್ಗ ಮಧ್ಯದಲ್ಲಿ ಕೆಳಕಂಡ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ. ಹೆಬ್ಬಾಳ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ದೊಡ್ಡಬೆಲೆ, ನಿಡವಂದ, ಹಿರೇಹಳ್ಳಿ ಹಾಗೂ ಕ್ಯಾತ್ಸಂದ್ರ.&lt;/p&gt;&lt;h2&gt;ಪ್ರಯಾಣಿಕರಿಗೆ ಅನುಕೂಲ&lt;/h2&gt;&lt;p&gt;ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ತುಮಕೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯಲಿದೆ.&lt;/p&gt;&lt;p&gt;ರೈಲ್ವೇ ಅಧಿಕಾರಿಗಳ ಪ್ರಕಾರ, ಈ ಕ್ರಮವು ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ಹಬ್ಬದ ನಂತರದ ಪ್ರಯಾಣವನ್ನು ಸುಗಮಗೊಳಿಸುವಲ್ಲಿ ಸಹಕಾರಿ ಆಗಲಿದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/special-memu-train-between-tumakuru-and-bengaluru-announced-on-march-22-to-ease-festival-rush-gdp/articleshow-qzsphfg"/>
        </item>
    </channel>
</rss>
