<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 15 Sep 2026 17:56:56 +0530</lastBuildDate>
        <atom:link href="https://kannada.asianetnews.com/rss/tumakuru" rel="self" type="application/rss+xml"/>
        <item>
            <title><![CDATA[ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ.. ಆದ್ರೂ 10 ಲಕ್ಷ ಮೌಲ್ಯದ ವಜ್ರಾಭರಣ ಮಾಯ! ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದ ಮಾಲೀಕ]]></title>
            <link>https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs</link>
            <guid isPermaLink="true">https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs</guid>
            <pubDate>Fri, 31 Jul 2026 07:32:57 +0530</pubDate>
            <description><![CDATA[&lt;p&gt;Tumakuru Vishwas jewellery theft case: ಜ್ಯುವೆಲ್ಲರಿಗೆ ಸಾಮಾನ್ಯವಾಗಿ ಕಳ್ಳತನವಾದರೆ ಬಾಗಿಲು ಮುರಿದು ಕಳ್ಳತನ ಮಾಡ್ತಾರೆ, ಅವರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿರುತ್ತೆ. ಆದ್ರೆ ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಶಾಪ್&zwnj; ಚಿನ್ನಾಭರಣ ಕಳ್ಳತನ ವಿಚಿತ್ರವಾಗಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyty29sxcemc979p4jm45njc,imgname-----------------------2026-07-31t072402.801-1785462859581.jpg" type="image/jpeg" height="390" width="690"/>
            <content:encoded><![CDATA[&lt;p&gt;Tumakuru Vishwas jewellery theft case: ಜ್ಯುವೆಲ್ಲರಿಗೆ ಸಾಮಾನ್ಯವಾಗಿ ಕಳ್ಳತನವಾದರೆ ಬಾಗಿಲು ಮುರಿದು ಕಳ್ಳತನ ಮಾಡ್ತಾರೆ, ಅವರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿರುತ್ತೆ. ಆದ್ರೆ ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಶಾಪ್&zwnj; ಚಿನ್ನಾಭರಣ ಕಳ್ಳತನ ವಿಚಿತ್ರವಾಗಿದೆ!&lt;/p&gt;&lt;img&gt;&lt;p&gt;ಈ ಘಟನೆ ಸಿನಿಮಾ ಕಥೆಯನ್ನೇ ಮೀರಿಸುವಂತಿದೆ. ತುಮಕೂರಿನ ಪ್ರತಿಷ್ಠಿತ ಜ್ಯುವೆಲ್ಲರಿ ಶಾಪ್ ನಡೆದ ಕೃತ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಶಾಪ್&zwnj;ನಲ್ಲಿ ಚಿನ್ನಾಭರಣ ಮಾಯ. ಬಾಗಿಲು ಮುರಿದಿಲ್ಲ. ಒಳಗೆ ಯಾರೂ ಹೋಗಿಲ್ಲ. ಆದ್ರೂ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳ್ಳತನ ಆಗಿದೆ. ಇಂಥ ಕಳ್ಳತನ ಎಲ್ಲೂ ನಡೆದಿರಲಿಲ್ಲ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಚಿನ್ನಾಭರಣ ಅಂಗಡಿಗಳಿಗೆ ಖದೀಮರು ಕನ್ನಹಾಕಿ ಚಿನ್ನ ದೋಚುತ್ತಾರೆ. ಆದರೆ ಇಲ್ಲಿ ಇಲಿಯೊಂದು ಜ್ಯುವೆಲ್ಲರಿ ಅಂಗಡಿಯಲ್ಲಿದ್ದ 10 ಲಕ್ಷ ರು. ಮೌಲ್ಯದ 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣವನ್ನು ಹೊತ್ತೊಯ್ದು ಬಿಲದಲ್ಲಿ ಅಡಗಿಸಿಟ್ಟಿದ್ದ ಅಪರೂಪದ ಘಟನೆ ತುಮಕೂರಿನ ವಿಶ್ವಾಸ ಜ್ಯುವೆಲ್ಲರಿ ಶಾಪ್&zwnj;ನಲ್ಲಿ ವರದಿಯಾಗಿದೆ.&lt;/p&gt;&lt;img&gt;&lt;p&gt;ಅಂಗಡಿ ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ. ಹೀಗಿದ್ದರೂ ಆಭರಣ ಕಳುವಾಗಿರುವ ಬಗ್ಗೆ ಶಾಪ್&zwnj;ನ ಸಿಬ್ಬಂದಿಗೆ ಅಚ್ಚರಿಯಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡುವ ಮುನ್ನ ಅಂಗಡಿಯಲ್ಲಿದ್ದ ಸಿಸಿಟೀವಿ ನೋಡಿದಾಗ ಮಾಲೀಕರು ಹಾಗೂ ಸಿಬ್ಬಂದಿ ಬೆರಗಾಗಿದ್ದಾರೆ&lt;/p&gt;&lt;img&gt;&lt;p&gt;ಇಲಿಯೊಂದು ಆಭರಣಗಳನ್ನು ಹೊತ್ತೊಯ್ದುತ್ತಿದ್ದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಸಿಸಿಟೀವಿ ವೀಕ್ಷಿಸಿದ ಬಳಿಕ ಅಂಗಡಿಯ ಸಿಬ್ಬಂದಿ ಇಲಿ ಜಾಡು ಹಿಡಿದು ಹೊರಟಾಗ ಆಭರಣಗಳು ಇಲಿಯ ಬಿಲದಲ್ಲಿ ಪತ್ತೆಯಾಗಿದೆ.&lt;/p&gt;&lt;img&gt;&lt;p&gt;10 ಉಂಗುರ ಹಾಗೂ 3 ಸರವನ್ನು ಇಲಿ ತನ್ನ ಬಿಲದಲ್ಲಿ ಅಡಗಿಸಿಟ್ಟಿತ್ತು. ಕೊನೆಗೂ ಆಭರಣ ಸಿಕ್ಕ ಬಳಿಕ ಜ್ಯುವೆಲ್ಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs"/>
        </item>
        <item>
            <title><![CDATA[ಪಂಪ್‌ಸೆಟ್‌ಗೆ ನಾಡಬಾಂಬ್‌ ಕಟ್ಟಿ ರೈತನ ಕೊ*ಗೆ ಯತ್ನ, ಮೋಟಾರ್‌ ಆನ್‌ ಮಾಡುತ್ತಿದ್ದಂತೆ ಸ್ಫೋಟ]]></title>
            <link>https://kannada.asianetnews.com/karnataka-districts/pavagada-farmer-murder-attempt-nada-bomb-pump-house-san/articleshow-2nlsk4f</link>
            <guid isPermaLink="true">https://kannada.asianetnews.com/karnataka-districts/pavagada-farmer-murder-attempt-nada-bomb-pump-house-san/articleshow-2nlsk4f</guid>
            <pubDate>Sat, 29 Aug 2026 06:24:03 +0530</pubDate>
            <description><![CDATA[&lt;p&gt;ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ರೈತನೋರ್ವನನ್ನು ನಾಡಬಾಂಬ್ ಸ್ಫೋಟಿಸಿ ಕೊಲೆ ಮಾಡಲು ಯತ್ನಿಸಲಾಗಿದೆ. ರೈತ ಕರಿಯಣ್ಣ ಪಂಪ್&zwnj;ಹೌಸ್&zwnj;ನ ಸ್ಟಾಟರ್ ಆನ್ ಮಾಡಿದಾಗ ಬಾಂಬ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m15g27an7p8bp7586k1x9b9c,imgname-tumkur-farmer-nada-bomb-1787964759381.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಪಾವಗಡ (ತುಮಕೂರು)&lt;/strong&gt;&lt;/p&gt;&lt;p&gt;ನಾಡಬಾಂಬ್&zwnj; ಸ್ಫೋಟಿಸಿ ರೈತನೋರ್ವನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕನಿಕಲಬಂಡೆ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ. ಅದೃಷ್ಟವಶಾತ್&zwnj; ರೈತ ಪಾರಾಗಿದ್ದಾನೆ. ರೈತ ಕರಿಯಣ್ಣ ತಮ್ಮ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಪಂಪ್&zwnj;ಹೌಸ್&zwnj;ನಲ್ಲಿದ್ದ ಸ್ಟಾಟರ್ ಆನ್ ಮಾಡುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿದೆ.&lt;/p&gt;&lt;p&gt;ಪಂಪ್&zwnj;ಹೌಸ್&zwnj;ನ ಮೂಲೆಯಲ್ಲಿ ಪರಿಶೀಲಿಸಿದಾಗ ಮತ್ತೊಂದು ಬಾಂಬ್ ಪತ್ತೆಯಾಗಿದೆ. ಘಟನೆ ಬಗ್ಗೆ ರೈತ ಕರಿಯಣ್ಣ ಮಾತನಾಡಿ, ಕಳೆದ 3 ತಿಂಗಳ ಹಿಂದೆ ವೆಂಕಟೇಶ್ ಎನ್ನುವರು ತಮ್ಮ ಜಮೀನಿಗೆ ಪ್ರವೇಶಿಸಿ ಈ ಜಮೀನು ನಮಗೆ ಸೇರಿದ್ದು ಎಂದು ಪ್ರಾಣ ಬೆದರಿಕೆ ಹಾಕಿದ್ದ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಇದೇ ದ್ವೇಷದಿಂದ ಆತನೇ ಪಂಪ್&zwnj;ಹೌಸ್&zwnj;ನಲ್ಲಿ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ತಿಳಿಸಿದ್ದಾನೆ. ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಘಟನಾ ಸ್ಥಳಕ್ಕೆ ಎಸ್ಪಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/pavagada-farmer-murder-attempt-nada-bomb-pump-house-san/articleshow-2nlsk4f"/>
        </item>
        <item>
            <title><![CDATA[ಕೂದಲು, ನಿಂಬೆ, ಮೇಕೆ ತಲೆ, ಚಿನ್ನದ ತಾಳಿ..! ತುಮಕೂರಿನ ಬನವಾಸಿ ಆಂಜನೇಯ ದೇಗುಲದ ಬಳಿ ವಾಮಾಚಾರಕ್ಕೆ ಬೆಚ್ಚಿಬಿದ್ದ ಸ್ಥಳೀಯರು]]></title>
            <link>https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg</link>
            <guid isPermaLink="true">https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg</guid>
            <pubDate>Sat, 08 Aug 2026 10:29:33 +0530</pubDate>
            <description><![CDATA[&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfvq94v6dfrgja4e45b526n,imgname-----------------------2026-08-08t102646.342-1786165044379.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಬನವಾಸಿ ಆಂಜನೇಯ ದೇವಸ್ಥಾನದ ಬಳಿಯೇ ವಾಮಾಚಾರ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳದಲ್ಲಿ ಮೇಕೆಯ ತಲೆ, ಮಣ್ಣಿನ ಕುಡಿಕೆಯೊಳಗೆ ಬೇವಿನ ಸೊಪ್ಪು, ಕೂದಲು, ನಿಂಬೆ, ಸೇರಿದಂತೆ ವಾಮಾಚಾರಕ್ಕೆ ಬಳಸುವ ಹಲವು ವಸ್ತಗಳು ಕಂಡುಬಂದಿವೆ.&lt;/p&gt;&lt;img&gt;&lt;p&gt;ದುಷ್ಕರ್ಮಿಗಳು ನಿಧಿ ಆಸೆಗೆ ವಾಮಾಚಾರ ಮಾಡಿದ್ದಾರಾ? ಅಥವಾ ಶತ್ರು ಸಂಹಾರ ಪೂಜೆಯಾ? ಸ್ಥಳದಲ್ಲಿ ಪತ್ತೆಯಾದ ಕೂದಲು ಯಾರದ್ದು? ಇನ್ನು ಬೆಚ್ಚಿಬಿಳಿಸುವ ವಿಷಯ ಎಂದರೆ ಮೇಕೆ ಬಲಿ ಕೊಡುವ ಮುನ್ನ ಸಿಂಗರಿಸಿ ಚಿನ್ನದ ತಾಳಿ ಕಟ್ಟಿ ಪೂಜೆ ಮಾಡಲಾಗಿದೆ. ಮಹಿಳೆಯರ ಬಟ್ಟೆಗಳು ಸಹ ಚೆಲ್ಲಪಿಲ್ಲಿ ಬಿದ್ದಿದ್ದು ವಾಮಾಚಾರ ಮುಗಿದ ಬಳಿಕ ಎಲ್ಲ ವಸ್ತುಗಳನ್ನು ಅಲ್ಲಿಯೇ ಬಿಟ್ಟು ತೆರಳಿರುವ ದುಷ್ಮರ್ಮಿಗಳು. ಇದೆಲ್ಲ ಗಮನಿಸಿದರೆ ದುಷ್ಕರ್ಮಿಗಳು ಹೆಣ್ಣಿನ ವಶೀಕರಣ ಪೂಜೆ ನಡೆದಿದೆಯೇನೋ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಮಾನಗಳಿಗೆ ಇಂಬು ಕೊಡುವಂತೆ ಮಹಿಳೆಯ ಬಟ್ಟೆ, ಚಿನ್ನದ ತಾಳಿ, ಕೂದಲು ಸ್ಥಳದಲ್ಲಿ ಕಂಡು ಬಂದಿವೆ&lt;/p&gt;&lt;img&gt;&lt;p&gt;ಎಂದಿನಂತೆ ಜನ ಇಂದು ದೇವಸ್ಥಾನದ ಬಳಿ ಹೋದಾಗ ಅಲ್ಲಿ ಕಂಡುಬಂದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಬಂದ ಜನರು. ಕೆಲವರು ನಿಧಿ ಆಸೆಗಾಗಿ ಕಳ್ಳರ ಕೆಲಸ ಇದು ಎಂದರೆ, ಇನ್ನು ಕೆಲವರು ಸ್ತ್ರೀವಶೀಕರಣ ಪೂಜೆ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಈ ರೀತಿ ವಾಮಾಚಾರ ಮಾಡುವುದರ ಹಿಂದೆ ಏನು ಉದ್ದೇಶವಿತ್ತು ಅನ್ನೊದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg"/>
        </item>
        <item>
            <title><![CDATA[ತುಮಕೂರು: ಈ ಸರ್ಕಾರದಲ್ಲಿ ಅನುದಾನ ತರಲು ಮುಖ್ಯಮಂತ್ರಿಗೇ ಲಂಚ ಕೊಡಬೇಕು! ಶಾಸಕನ ಹೇಳಿಕೆ ಸಂಚಲನ]]></title>
            <link>https://kannada.asianetnews.com/politics/turuvekere-mla-mt-krishnappa-serious-allegation-13-per-cents-bribe-against-govt-rav/articleshow-50gby5q</link>
            <guid isPermaLink="true">https://kannada.asianetnews.com/politics/turuvekere-mla-mt-krishnappa-serious-allegation-13-per-cents-bribe-against-govt-rav/articleshow-50gby5q</guid>
            <pubDate>Thu, 10 Sep 2026 07:49:56 +0530</pubDate>
            <description><![CDATA[&lt;p&gt;ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಸರ್ಕಾರದ ಅನುದಾನ ಪಡೆಯಲು 13% ಲಂಚ ನೀಡಬೇಕೆಂದು ಗಂಭೀರ ಆರೋಪ ಮಾಡಿದ್ದಾರೆ. ತಾಲೂಕಿನ ಕಾಮಗಾರಿಗಳ ವಿಳಂಬ ಮತ್ತು ಇತರ ಸಮಸ್ಯೆಗಳಿಗೆ ತಮಗೂ ಸಂಬಂಧವಿಲ್ಲ ಎಂದಿರುವ ಅವರು, ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಸವಾಲು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m24he4ta80wspy5hztwx3s1j,imgname-karnataka-politics--2--1789006385994.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುರುವೇಕೆರೆ (ಸೆ.10): &lt;/strong&gt;ಈ ಸರ್ಕಾರದಲ್ಲಿ ಅನುದಾನ ತರಬೇಕೆಂದರೆ ಮುಲಾಜಿಲ್ಲದೇ 13 ಪರ್ಸೆಂಟ್ ಲಂಚ ಕೊಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಗುತ್ತಿಗೆದಾರರು ಮುಖ್ಯಮಂತ್ರಗೆ ಎಷ್ಟು ಪಾಲು ಕೊಡಬೇಕು?&lt;/h2&gt;&lt;p&gt;ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಲ್ಲಿಯ ಕಾಂಗ್ರೆಸ್ಸಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧವೇ ದನಿ ಎತ್ತಿರುವುದು ಸ್ವಾಗತಾರ್ಹ. ಕೆಆರ್&zwnj;ಐಡಿಎಲ್ ಕಾಮಗಾರಿಯನ್ನು ತಾಲೂಕಿನಲ್ಲಿ ಮಾಡಲು ಗುತ್ತಿಗೆದಾರರು ಮುಖ್ಯಮಂತ್ರಿಗೆ ಎಷ್ಟು ಪಾಲು ಕೊಡಬೇಕು ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಿದೆಯಾ?. ಅಷ್ಟೊಂದು ಲಂಚ ಕೊಟ್ಟು ಗುತ್ತಿಗೆದಾರ ಕೆಲಸ ಮಾಡು ಎಂದರೆ ಹೇಗೆ ಸಾಧ್ಯ?. ಕೆಆರ್&zwnj;ಐಡಿಎಲ್&zwnj;ನ ಕೆಲಸಗಳನ್ನು ಭೂ ಸೇನಾ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ವಹಿಸಿದೆ. ಅದಕ್ಕೂ ನನಗೂ ಸಂಬಂಧವಿಲ್ಲ. ತಾಕತ್ತಿದ್ದರೆ ಆ ಎಲ್ಲಾ ಕಾಮಗಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿ. ಮುಖ್ಯಮಂತ್ರಿಗಳಿಗೇ ದೂರು ಸಲ್ಲಿಸಲಿ. ಅದು ಬಿಟ್ಟು ನನ್ನನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.&lt;/p&gt;&lt;p&gt;ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತ ಕುಮಾರ್ ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಅವರು ಆನೇಕೆರೆಯಲ್ಲಿ ಗೋಮಾಳವನ್ನು ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆಂಬ ಮಾಹಿತಿ ಇದೆ. ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ.&lt;/p&gt;&lt;h3&gt;ಈ ಗೊಡ್ಡು ಸರ್ಕಾರದಲ್ಲಿ ಹಣ ಎಲ್ಲಿದೆ?&lt;/h3&gt;&lt;p&gt;ಜಿಪಂ ಮತ್ತು ತಾಪಂನಲ್ಲಿ ಯಾವ ಅನುದಾನ ಬಿಡುಗಡೆ ಆಗಿದೆ ಎಂಬುದನ್ನು ವಸಂತಕುಮಾರ್ ಬಹಿರಂಗಪಡಿಸಬೇಕು. ಈ ಗೊಡ್ಡು ಸರ್ಕಾರದಲ್ಲಿ ಹಣ ಎಲ್ಲಿದೆ? ಎಂದರು. ಪಟ್ಟಣದಲ್ಲಿರುವ ವಾಣಿಜ್ಯ ಸಂಕೀರ್ಣ ಪ್ರಾರಂಭವಾಗದೇ ಇರುವುದಕ್ಕೆ ನಾನು ಕಾರಣವಲ್ಲ. ಪಂಚಾಯಿತಿ ಆಡಳಿತಾಧಿಕಾರಿಗಳಾಗಿರುವ ತಹಸೀಲ್ದಾರ್ ಮತ್ತು ಸಿಇಒ ಅವರೇ ಹೊಣೆ. ಈಗಾಗಲೇ ಬಾಡಿಗೆ ಕರಾರು ಪಡೆದಿರುವವರು ತಮ್ಮ ಅಂಗಡಿ ಓಪನ್ ಮಾಡಲಿ. ತಾನೇ ತಾನಾಗಿ ಬೀದಿಬದಿ ವ್ಯಾಪಾರಿಗಳು ಅಲ್ಲಿಂದ ತಮ್ಮ ಅಂಗಡಿ ತೆರವು ಮಾಡುತ್ತಾರೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸಮಜಾಯಿಶಿ ನೀಡಿದರು.&lt;/p&gt;&lt;h3&gt;ರಾಜಕೀಯ ದ್ವೇಷಕ್ಕೆ ನನ್ನನ್ನು ದೂರುವುದು ಸರಿಯಲ್ಲ&lt;/h3&gt;&lt;p&gt;ಒಳಚರಂಡಿ ವ್ಯವಸ್ಥೆ ಜಾರಿ ಮಾಡಿರುವುದು ಸರ್ಕಾರ. ಟೆಂಡರ್&zwnj;ನಲ್ಲಿ ಕೂಗಿಕೊಂಡಿರುವವರ ಜವಾಬ್ದಾರಿ ಅದು. ಹೊಟ್ಟೆಕಿಚ್ಚಿಗೆ, ರಾಜಕೀಯ ದ್ವೇಷಕ್ಕೆ ನನ್ನನ್ನು ದೂರುವುದು ಸರಿಯಲ್ಲ. ಗ್ರಾಮ ದೇವತೆ ಉಡುಸಲಮ್ಮ ದೇವಾಲಯದ ಹಿಂಭಾಗ ಕೆರೆ ಒತ್ತುವರಿ ಆಗಿದ್ದರೆ ಕಾಂಗ್ರೆಸ್ಸಿಗರು ಭೂಮಾಪನ ಇಲಾಖೆಗೆ ದೂರು ಸಲ್ಲಿಸಿ ಅಳತೆ ಮಾಡಿಸಲಿ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಸುಖಾಸುಮ್ಮನೆ ನಮ್ಮನ್ನು ಗುರಿ ಮಾಡಿ ಮಾತನಾಡುವುದು ಸರಿಯಲ್ಲ. ವಿನಾ ಕಾರಣ ತಮ್ಮ ವಿರುದ್ಧ ದೂರಿದರೆ ನಾನು ಸುಮ್ಮನೆ ಕೂರುವುದಿಲ್ಲ. ನಾನೂ ಸಹ ಮುಂದೆ ಏನು ಮಾಡುತ್ತೇನೆ ಎಂಬುದನ್ನು ಕಾದು ನೋಡಲಿ ಎಂದು ಎಚ್ಚರಿಸಿದರು.&lt;/p&gt;&lt;p&gt;ತಾಲೂಕಿನಲ್ಲಿ ಕಾಂಗ್ರೆಸ್ ಸರ್ಕಾರ ಹಾಕಿರುವ ಅಧಿಕಾರಿಗಳಿರುವುದು. ನಾನ್ಯಾರನ್ನೂ ಲೆಟರ್ ಕೊಟ್ಟು ಹಾಕಿಸಿಕೊಂಡಿಲ್ಲ. ಅವರು ಲಂಚ ಪಡೆಯುತ್ತಿದ್ದರೆ, ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಹಿಡಿಸಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು. ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ರಂಜಿತ್, ಮುಖಂಡರಾದ ವಿಜಯೇಂದ್ರ, ಪರಮೇಶ್ ಉಪಸ್ಥಿತರಿದ್ದರು.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/turuvekere-mla-mt-krishnappa-serious-allegation-13-per-cents-bribe-against-govt-rav/articleshow-50gby5q"/>
        </item>
        <item>
            <title><![CDATA[Bribe: ಕಾಮಗಾರಿಗೆ 30% ಲಂಚದ ಕಮಿಷನ್ ಬೇಡಿಕೆ; ಲಂಚ ಪಡೆಯುತ್ತಿದ್ದಾಗ ಲೋಕಾ ಬಲೆಗೆ ಬಿದ್ದ RFO!]]></title>
            <link>https://kannada.asianetnews.com/karnataka-districts/gubbi-rfo-bribe-tumakuru-lokayukta-trap-30-percent-commission-forest-officer-arrested-bmk/articleshow-7wgfy91</link>
            <guid isPermaLink="true">https://kannada.asianetnews.com/karnataka-districts/gubbi-rfo-bribe-tumakuru-lokayukta-trap-30-percent-commission-forest-officer-arrested-bmk/articleshow-7wgfy91</guid>
            <pubDate>Fri, 11 Sep 2026 20:01:46 +0530</pubDate>
            <description><![CDATA[&lt;p&gt;ಗುಬ್ಬಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಮಂಜೂರಾದ ಕಾಮಗಾರಿಗೆ ಗುತ್ತಿಗೆದಾರನಿಂದ 30% ಕಮಿಷನ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, RFO ಹಾಗೂ ಅವರ ಸಹವರ್ತಿಯನ್ನು ರೆಡ್&zwnj;ಹ್ಯಾಂಡ್&zwnj; ಆಗಿ ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m28e2ms5ermxy0ejkvx0b192,imgname-lokayukta-1789137081125.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು/ಗುಬ್ಬಿ; ಅರಣ್ಯ ಇಲಾಖೆಯಿಂದ ಮಂಜೂರಾಗಿದ್ದ ಕಾಮಗಾರಿಗೆ ಶೇಕಡಾ 30 ರಷ್ಟು ಲಂಚದ ಕಮಿಷನ್ ಬೇಡಿಕೆಯಿಟ್ಟು, ಗುತ್ತಿಗೆದಾರನಿಂದ ಹಣ ಪಡೆಯುತ್ತಿದ್ದ ಗುಬ್ಬಿಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ (RFO) ಹಾಗೂ ಅವರ ಕೆಳಹಂತದ ಸಿಬ್ಬಂದಿ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರೆಡ್&zwnj;ಹ್ಯಾಂಡ್&zwnj; ಆಗಿ ಸಿಕ್ಕಿಬಿದ್ದಿದ್ದಾರೆ. ಗುಬ್ಬಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಕೆ.ಎಸ್ ಮತ್ತು ಅವರ ಸೂಚನೆಯಂತೆ ಹಣ ಸ್ವೀಕರಿಸುತ್ತಿದ್ದ ಹೊರಗುತ್ತಿಗೆ ಆಧಾರದ ಕ್ಯಾಂಪ್ ವಾಚರ್ ಶೌಕತ್ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ!&lt;/strong&gt;&lt;/h2&gt;&lt;p&gt;ಮಂಡ್ಯ ಮೂಲದ ಶಿವರಾಜು ಎಂಬುವವರು ಅರಣ್ಯ ಹಾಗೂ ಸಿವಿಲ್ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತುಮಕೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಸಿ.ಸಿ.ಟಿ (CCT) ಅಗೆಯುವಿಕೆ, ಬದುಗಳ ಮೇಲೆ ಅಗೇವಾ ಸಸ್ಯಗಳನ್ನು ನೆಡುವ ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಟೆಂಡರ್ ಪಡೆದಿದ್ದರು. ಸರ್ಕಾರದಿಂದ ಕಾರ್ಯಾದೇಶ (Work Order) ಸಿಕ್ಕ ನಂತರ, ಗುತ್ತಿಗೆದಾರ ಶಿವರಾಜು ಕಾಮಗಾರಿ ಪ್ರಾರಂಭಿಸಲು ಸ್ಥಳಕ್ಕೆ ತೆರಳಿದ್ದರು. ಆದರೆ, ಗುಬ್ಬಿ RFO ಸತೀಶ್ ಚಂದ್ರ ಕೆ.ಎಸ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಂತೆ ಅಡ್ಡಿಪಡಿಸಿ ತಡೆದು ನಿಲ್ಲಿಸಿದ್ದರು. ಮಂಜೂರಾದ ಒಟ್ಟು ಕಾಮಗಾರಿ ಮೊತ್ತದ ಶೇಕಡಾ 30 ರಷ್ಟು ಹಣವನ್ನು ತಮಗೆ ಲಂಚವಾಗಿ ನೀಡಬೇಕು, ಅಂದರೆ ಒಟ್ಟು 5 ಲಕ್ಷ ರೂಪಾಯಿ ಲಂಚ ಕೊಟ್ಟರೆ ಮಾತ್ರ ಕೆಲಸ ಪ್ರಾರಂಭಿಸಲು ಬಿಡುವುದಾಗಿ ಬೆದರಿಕೆ ಒಡ್ಡಿದ್ದರು.&lt;/p&gt;&lt;h3&gt;&lt;strong&gt;ಹಂತ ಹಂತವಾಗಿ ಲಂಚದ ಬೇಡಿಕೆ!&lt;/strong&gt;&lt;/h3&gt;&lt;p&gt;ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ಗುತ್ತಿಗೆದಾರ ಶಿವರಾಜು, ಕಾಮಗಾರಿ ಆರಂಭಿಸುವ ಉದ್ದೇಶದಿಂದ ಆರಂಭದಲ್ಲಿ 50,000 ರೂಪಾಯಿಗಳನ್ನು RFO ಸತೀಶ್ ಚಂದ್ರ ಅವರಿಗೆ ನೀಡಿದ್ದರು. ಆದಾಗ್ಯೂ, ಉಳಿದ 3,50,000 ರೂಪಾಯಿ ಲಂಚದ ಹಣಕ್ಕಾಗಿ ಸತೀಶ್ ಚಂದ್ರ ನಿರಂತರವಾಗಿ ಪೀಡಿಸಲು ಪ್ರಾರಂಭಿಸಿದ್ದರು. ಲಂಚ ನೀಡಲು ಇಷ್ಟವಿಲ್ಲದ ಗುತ್ತಿಗೆದಾರ ಶಿವರಾಜು, ಈ ಕುರಿತು ಸಮಗ್ರ ಸಾಕ್ಷ್ಯಾಧಾರಗಳೊಂದಿಗೆ ತುಮಕೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.&lt;/p&gt;&lt;h3&gt;&lt;strong&gt;ಲೋಕಾಯುಕ್ತ ಟ್ರ್ಯಾಪ್ ಕಾರ್ಯಾಚರಣೆ!&lt;/strong&gt;&lt;/h3&gt;&lt;p&gt;ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಪಕ್ಕಾ ಯೋಜನೆಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರು. ಯೋಜನೆಯಂತೆ, ಇಂದು ಮಧ್ಯಾಹ್ನ ಗುತ್ತಿಗೆದಾರ ಶಿವರಾಜು ಅವರು ಗುಬ್ಬಿಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿಗೆ ತೆರಳಿ, ಮುಂಗಡವಾಗಿ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು. RFO ಸತೀಶ್ ಚಂದ್ರ ಅವರ ಸೂಚನೆಯಂತೆ, ಕ್ಯಾಂಪ್ ವಾಚರ್ ಶೌಕತ್ ದೂರುದಾರರಿಂದ 2 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ ದಾಳಿ ನಡೆಸಿದ ಲೋಕಾಯುಕ್ತ ತಂಡ, ಹಣದೊಂದಿಗೆ ಇಬ್ಬರನ್ನೂ ರೆಡ್&zwnj;ಹ್ಯಾಂಡ್&zwnj; ಆಗಿ ವಶಕ್ಕೆ ಪಡೆದುಕೊಂಡಿದೆ.&lt;/p&gt;&lt;h3&gt;&lt;strong&gt;ಮುಂದುವರಿದ ತನಿಖೆ!&lt;/strong&gt;&lt;/h3&gt;&lt;p&gt;ದೂರುದಾರರಿಂದ ಪಡೆದಿದ್ದ 2 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, RFO ಸತೀಶ್ ಚಂದ್ರ ಹಾಗೂ ಕ್ಯಾಂಪ್ ವಾಚರ್ ಶೌಕತ್&zwnj;ನನ್ನು ಬಂಧಿಸಿದ್ದಾರೆ. ಕಚೇರಿಯಲ್ಲಿ ಇತರೆ ಕಡತಗಳು ಹಾಗೂ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/gubbi-rfo-bribe-tumakuru-lokayukta-trap-30-percent-commission-forest-officer-arrested-bmk/articleshow-7wgfy91"/>
        </item>
        <item>
            <title><![CDATA[ಶಾಸಕ ಸುರೇಶ್ ಗೌಡ ಪುತ್ರಿಯಿಂದ ಪಿಎಸ್‌ಐಗೆ ಕಪಾಳಮೋಕ್ಷ, ಮಗಳ ತಪ್ಪಿಗೆ ಕ್ಷಮೆಗೆ ಮುಂದಾದ ಅಪ್ಪ!]]></title>
            <link>https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr</link>
            <guid isPermaLink="true">https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr</guid>
            <pubDate>Fri, 14 Aug 2026 12:25:56 +0530</pubDate>
            <description><![CDATA[ತುಮಕೂರು ಶಾಸಕ ಬಿ. ಸುರೇಶ್&zwnj;ಗೌಡರ ಪುತ್ರಿ ಐಶ್ವರ್ಯ, ದೇವಸ್ಥಾನದಲ್ಲಿ ದರ್ಶನ ವಿಳಂಬವಾದ ಕಾರಣಕ್ಕೆ ಮಹಿಳಾ ಪಿಎಸ್&zwnj;ಐ ಜೊತೆ ವಾಗ್ವಾದ ನಡೆಸಿ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಸಕರು ಪ್ರತಿಕ್ರಿಯಿಸಿದ್ದು, ಮಗಳದ್ದು ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzgpffnrrkz5115c5swxwp9,imgname-bjp-mla-suresh-gowda-daughter-1786690354677.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್&zwnj;ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಅವರ ಪತ್ನಿ ಐಶ್ವರ್ಯ ಅವರು ದೇವಸ್ಥಾನದಲ್ಲಿ ದರ್ಶನ ತಡವಾದ ವಿಚಾರವಾಗಿ ಅಹಂಕಾರ ತೋರಿಸಿ ಮಹಿಳಾ ಸಬ್ ಇನ್ಸ್&zwnj;ಪೆಕ್ಟರ್ (PSI) ಅವರೊಂದಿಗೆ ವಾಗ್ವಾದ ನಡೆಸಿ, ಕಪಾಳಮೋಕ್ಷ ಮಾಡಿರುವ ಘಟನೆ ಆಗಸ್ಟ್ 12ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ನಡೆದಿದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಶಾಸಕ ಸುರೇಶ್&zwnj;ಗೌಡ ಅವರು ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ನನ್ನ ಮಗಳ ತಪ್ಪಿದ್ದರೆ ನಾನು ಕ್ಷಮೆಯಾಚಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಘಟನೆಯ ಹಿನ್ನೆಲೆ:&lt;/h2&gt;&lt;p&gt;ಭೀಮನ ಅಮಾವಾಸ್ಯೆಯ ಶುಭ ಸಂದರ್ಭದಲ್ಲಿ ಶಾಸಕ ಸುರೇಶ್&zwnj;ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಪತ್ನಿ ಐಶ್ವರ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಂಡ್ಯ ಜಿಲ್ಲೆಯ ಶೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದರು. ತನ್ನ ಪ್ರಭಾವ ಬಳಸಿ ದೇಗುಲಕ್ಕೆ ಬಂದಿದ್ದ ಐಶ್ವರ್ಯಾ ವಿಐಪಿ (VIP) ಸಾಲಿನಲ್ಲಿ ನಿಂತು ದರ್ಶನಕ್ಕೆ ಕಾಯುತ್ತಿದ್ದರು. ದೇಗುಲದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಮಹಿಳಾ ಸಬ್ ಇನ್ಸ್&zwnj;ಪೆಕ್ಟರ್ ಸುನೀತಾ ಪಾಟೀಲ್ ಕೇಳಿದಾಗ ಆ ರೀತಿಯ ನಿಯಮ ಇಲ್ಲ ಎಂದಿದ್ದಾರೆ. ಇದೇ ವೇಳೆ ಮಹಿಳಾ ಪೇದೆಯೊಬ್ಬರು ಕೆಲಸ ನಿಮಿತ್ತ ಗರ್ಭಗುಡಿಯ ಒಳಗೆ ಹೋದರು. ಆ ಸಮಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ನಾನು ಎಂಎಲ್&zwnj;ಎ ಮಗಳು ಎಸಿಪಿ ಪತ್ನಿ ಎಂದು ದರ್ಪ ತೋರಿದ್ದಾರೆನ್ನಲಾಗಿದೆ.&lt;/p&gt;&lt;p&gt;ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್&zwnj;ಪೆಕ್ಟರ್ (CI) ಅವರು ಶಾಸಕರ ಪುತ್ರಿಯನ್ನು ಗುರುತಿಸಿ, ಅವರನ್ನು ದರ್ಶನಕ್ಕೆ ಒಳಗೆ ಬಿಟ್ಟಿದ್ದಾರೆ. ಈ ವೇಳೆ ಐಶ್ವರ್ಯ ಅವರು, &quot;ನನ್ನನ್ನು ಏಕೆ ತಡೆದಿರಿ?&quot; ಎಂದು ಸಬ್ ಇನ್ಸ್&zwnj;ಪೆಕ್ಟರ್ ಅವರನ್ನು ಮತ್ತೆ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವಾಗ್ವಾದದ ನಡುವೆ ಶಾಸಕರ ಪುತ್ರಿ ಐಶ್ವರ್ಯ ಅವರು ಸಬ್ ಇನ್ಸ್&zwnj;ಪೆಕ್ಟರ್ ಅವರ ಕಪಾಳಕ್ಕೆ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.&lt;/p&gt;&lt;h2&gt;ಮಗಳು ಮಾಡಿದ ತಪ್ಪಿಗೆ ಕ್ಷಮೆ ಕೇಳೋದಾಗಿ ಹೇಳಿದ ಅಪ್ಪ&lt;/h2&gt;&lt;p&gt;ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಿ. ಸುರೇಶ್&zwnj;ಗೌಡ ಅವರು ಕಳಕಳಿ ಮತ್ತು ಹೊಣೆಗಾರಿಕೆಯ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;&quot;ದೇವಸ್ಥಾನದಲ್ಲಿ ಗಲಾಟೆಯಾಗಿದ್ದು ನಿಜ ಎಂದು ನನ್ನ ಮಗಳು ಒಪ್ಪಿಕೊಂಡಿದ್ದಾಳೆ. ದೇವಸ್ಥಾನಕ್ಕೆ ಪ್ರತಿಯೊಬ್ಬರೂ ಮನಸ್ಸಿನ ಶಾಂತಿಗಾಗಿ ಹೋಗುತ್ತಾರೆ, ಅಲ್ಲಿ ಇಂತಹ ಗಲಾಟೆಗಳು ನಡೆಯಬಾರದಿತ್ತು. ಮಾಧ್ಯಮಗಳಲ್ಲಿ ನನ್ನ ಮಗಳು ಕಪಾಳಕ್ಕೆ ಹೊಡೆದಿದ್ದಾಳೆ ಎಂಬ ಸುದ್ದಿಗಳನ್ನು ನೋಡಿದ್ದೇನೆ. ಈ ಘಟನೆಯಲ್ಲಿ ಪರಿಶೀಲನೆ ನಡೆಸಿ, ಒಂದು ವೇಳೆ ನನ್ನ ಮಗಳದ್ದೇ ತಪ್ಪು ಅಂತ ಸಾಬೀತಾದರೆ, ನಾನು ಬಹಿರಂಗವಾಗಿ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದಿದ್ದಾರೆ.&lt;/p&gt;&lt;h2&gt;ಪ್ರಭಾವಿಗಳ ಮಕ್ಕಳಿಗೇಕೆ ಈ ನಿಯಮ&lt;/h2&gt;&lt;p&gt;ಇನ್ನು ಘಟನೆ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಬಿಎನ್&zwnj;ಎಸ್&zwnj;ನ ಸೆಕ್ಷನ್&zwnj; 132, 115(2), 352 ಮತ್ತು 351(2) ಅಡಿಯಲ್ಲಿ ಎಫ್&zwnj;ಐಆರ್&zwnj; ದಾಖಲಾಗಿದೆ. ಇದೇ ವೇಳೆ, ಮಹಿಳಾ ಪಿಎಸ್&zwnj;ಐ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಶಾಸಕರ ಪುತ್ರಿಯನ್ನು ಪಿಎಸ್&zwnj;ಐ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಈ ಪ್ರತಿದೂರು ನೀಡಲಾಗಿದೆಯಂತೆ.&lt;/p&gt;&lt;p&gt;ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಂಎಲ್&zwnj;ಎಗಳು, ಡಿವೈಎಸ್&zwnj;ಪಿ ಗಳು ಬಂದಾಗ ದೇಗುಲದಲ್ಲಿ ವಿಶೇಷ ದರ್ಶನ, ಗರ್ಭಗುಡಿ ಸಮೀಪ ಬಿಡುವುದು ಶಿಷ್ಟಾಚಾರ. ಪ್ರಭಾವಿಗಳ ಮಕ್ಕಳಿಗೆ ಏಕೆ ಎಂದು ಚರ್ಚೆ ಆರಂಭವಾಗಿದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr"/>
        </item>
        <item>
            <title><![CDATA[ಬೆಂಗಳೂರು 'ಫಿಲ್ಟರ್ ಕಾಫಿ' ಹಿಂದೆ ಇಷ್ಟೊಂದು ದೊಡ್ಡ ಹಿಸ್ಟರಿ ಇದೆಯಾ?! 'ಕಾಫಿ ಪುಡಿ ಸಾಕಮ್ಮ'ನ ಅಪರೂಪದ ಕಥೆ!]]></title>
            <link>https://kannada.asianetnews.com/karnataka-districts/coffee-pudi-sakamma-the-karnataka-woman-who-built-bengaluru-early-coffee-culture/articleshow-dswb8ph</link>
            <guid isPermaLink="true">https://kannada.asianetnews.com/karnataka-districts/coffee-pudi-sakamma-the-karnataka-woman-who-built-bengaluru-early-coffee-culture/articleshow-dswb8ph</guid>
            <pubDate>Mon, 07 Sep 2026 19:48:32 +0530</pubDate>
            <description><![CDATA[&lt;p&gt;&lsquo;ಕಾಫಿ ಪುಡಿ ಸಾಕಮ್ಮ&rsquo; ಎಂದು ಖ್ಯಾತರಾದ ದೊಡ್ಡಮನೆ ಸಾಕಮ್ಮ, ಕರ್ನಾಟಕದ ಆರಂಭಿಕ ಮಹಿಳಾ ಉದ್ಯಮಿಗಳಲ್ಲೊಬ್ಬರು. ಕೊಡಗಿನ ಕಾಫಿ ತೋಟಗಳ ಜವಾಬ್ದಾರಿ ವಹಿಸಿಕೊಂಡ ಅವರು, 1920ರಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ಮತ್ತು ಪೌಡರಿಂಗ್ ಘಟಕ ಆರಂಭಿಸಿದರು. ಅವರ ಕಾಫಿ ಪುಡಿ ಮನೆಮಾತಾಗಿ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ಹೊಸ ಇತಿಹಾಸ ನಿರ್ಮಿಸಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1tvtszfrmethak7v1d42v1n,imgname-coffee-pudi-sakamma-1788681742318.jpg" type="image/jpeg" height="390" width="690"/>
            <content:encoded><![CDATA[&lt;h2&gt;ಕಾಫಿ ಪುಡಿಯಿಂದ ಮನೆಮಾತಾದ ಮಹಿಳೆ&lt;/h2&gt;&lt;p&gt;ಇಂದು ಬೆಂಗಳೂರಿನ ಕಾಫಿ ಸಂಸ್ಕೃತಿ ಎಂದರೆ ಫಿಲ್ಟರ್ ಕಾಫಿಯ ಘಮ, ಹಳೆಯ ಕಾಫಿ ಅಂಗಡಿಗಳು ಮತ್ತು ಹೊಸ ತಲೆಮಾರಿನ ಕಾಫಿ ಸಂಸ್ಕೃತಿ ನೆನಪಾಗುತ್ತದೆ. ಆದರೆ ಈ ಸಂಸ್ಕೃತಿಗೆ ಶತಮಾನಕ್ಕೂ ಹಿಂದೆಯೇ ಬಲವಾದ ಅಡಿಪಾಯ ಹಾಕಿದ ಮಹಿಳೆಯೊಬ್ಬರಿದ್ದರು. ಅವರೇ &lsquo;ಕಾಫಿ ಪುಡಿ ಸಾಕಮ್ಮ&rsquo; ಎಂದು ಜನಪ್ರಿಯರಾದ ದೊಡ್ಡಮನೆ ಸಾಕಮ್ಮ.&lt;/p&gt;&lt;p&gt;1880ರಲ್ಲಿ ತುಮಕೂರು ಜಿಲ್ಲೆಯ ಬಿದರೆ ಗ್ರಾಮದಲ್ಲಿ ಜನಿಸಿದ ಸಾಕಮ್ಮ, ಬಾಲ್ಯದಲ್ಲೇ ಶಿಕ್ಷಣದ ಮಹತ್ವ ಅರಿತಿದ್ದರು. ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣವೇ ಅಪರೂಪವಾಗಿದ್ದರೂ, ಅವರು ಅಂದಿನ ಮೈಸೂರು ಪ್ರಾಂತ್ಯದ ಕೆಲವೇ ವಿದ್ಯಾವಂತ ಬಾಲಕಿಯರಲ್ಲಿ ಒಬ್ಬರಾಗಿದ್ದರು.&lt;/p&gt;&lt;h3&gt;18ನೇ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ವಿಧವೆಯಾದರೂ ಧೈರ್ಯ ಕಳೆದುಕೊಳ್ಳಲಿಲ್ಲ&lt;/h3&gt;&lt;p&gt;ಸುಮಾರು 16ನೇ ವಯಸ್ಸಿನಲ್ಲಿ ಕೊಡಗಿನ ಸೋಮವಾರಪೇಟೆಯ ಕಾಫಿ ಬೆಳೆಗಾರ ದೊಡ್ಡಮನೆ ಚಿಕ್ಕಬಸಪ್ಪ ಶೆಟ್ಟಿ ಅವರನ್ನು ಸಾಕಮ್ಮ ವಿವಾಹವಾದರು. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿ ನಿಧನರಾದರು. ಕೇವಲ 18ನೇ ವಯಸ್ಸಿನಲ್ಲೇ ವಿಧವೆಯಾದ ಸಾಕಮ್ಮ ಅವರ ಮುಂದೆ ಬೃಹತ್ ಕಾಫಿ ತೋಟಗಳ ನಿರ್ವಹಣೆಯ ಜವಾಬ್ದಾರಿ ಬಂತು.&lt;/p&gt;&lt;p&gt;ಆ ಕಾಲದ ಸಾಮಾಜಿಕ ನಿರ್ಬಂಧಗಳ ನಡುವೆಯೂ ಸಾಕಮ್ಮ ಹಿಂಜರಿಯಲಿಲ್ಲ. ತಮ್ಮ ಶಿಕ್ಷಣ, ನಿರ್ವಹಣಾ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮವನ್ನು ಬಳಸಿಕೊಂಡು ಕಾಫಿ ತೋಟಗಳ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರ ಆಡಳಿತದಲ್ಲಿ ಎಸ್ಟೇಟ್&zwnj;ಗಳು ಮತ್ತೆ ಅಭಿವೃದ್ಧಿಯ ಹಾದಿಗೆ ಬಂದವು.&lt;/p&gt;&lt;p&gt;&lt;strong&gt;1920ರಲ್ಲಿ ಬೆಂಗಳೂರಿನಲ್ಲಿ ಕಾಫಿ ಉದ್ಯಮಕ್ಕೆ ಹೊಸ ತಿರುವು ಬಸವನಗುಡಿಯಿಂದ ಆರಂಭವಾದ ಯಶೋಗಾಥೆ!&lt;/strong&gt;&lt;/p&gt;&lt;p&gt;ಕಾಫಿ ಬೆಳೆಸುವುದಷ್ಟೇ ಸಾಕಾಗುವುದಿಲ್ಲ; ಅದಕ್ಕೆ ಉತ್ತಮ ಮಾರುಕಟ್ಟೆಯೂ ಬೇಕು ಎಂಬುದನ್ನು ಸಾಕಮ್ಮ ಅರಿತುಕೊಂಡಿದ್ದರು. ಹೀಗಾಗಿ 1920ರಲ್ಲಿ ಅವರು ಬೆಂಗಳೂರಿಗೆ ಬಂದು, ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ಸಮೀಪ ಕಾಫಿ ಕ್ಯೂರಿಂಗ್ ಮತ್ತು ಪೌಡರಿಂಗ್ ಘಟಕ ಆರಂಭಿಸಿದರು.&lt;/p&gt;&lt;p&gt;ಅಂದಿನ ದಿನಗಳಲ್ಲಿ ಕಾಫಿ ಸಂಸ್ಕರಣೆಗೆ ಅಗತ್ಯವಿದ್ದ ಯಂತ್ರೋಪಕರಣಗಳನ್ನು ವಿದೇಶದಿಂದ ತರಿಸಿಕೊಳ್ಳಬೇಕಾಗಿತ್ತು. ಸಾಕಮ್ಮ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾಫಿ ಬೀಜಗಳನ್ನು ಹುರಿದು, ಪುಡಿ ಮಾಡಿ, ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ರೂಪಿಸಿದರು.&lt;/p&gt;&lt;p&gt;&lt;strong&gt;&lsquo;ಸಾಕಮ್ಮಾಸ್ ಕಾಫಿ ವರ್ಕ್ಸ್&rsquo; ಮನೆಮಾತಾಯಿತು&lt;/strong&gt;&lt;/p&gt;&lt;p&gt;ಸಾಕಮ್ಮ ಅವರ ಕಾಫಿ ಪುಡಿ ರುಚಿ ಮತ್ತು ಗುಣಮಟ್ಟದಿಂದ ಬೆಂಗಳೂರಿನ ಮನೆಮನೆಗೂ ತಲುಪಿತು. ನಗರದ ವಿವಿಧ ಭಾಗಗಳಲ್ಲಿ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿದ ಅವರು, ಕಾಫಿಯನ್ನು ಸಾಮಾನ್ಯ ಕುಟುಂಬಗಳ ದಿನನಿತ್ಯದ ಬದುಕಿನ ಭಾಗವಾಗಿಸಲು ನೆರವಾದರು.&lt;/p&gt;&lt;p&gt;ಇದರ ಪರಿಣಾಮವಾಗಿ ಅವರಿಗೆ &lsquo;ಕಾಫಿ ಪುಡಿ ಸಾಕಮ್ಮ&rsquo; ಎಂಬ ಹೆಸರು ಬಂದಿತು. ಅವರ ಕಾಫಿ ಪುಡಿಯ ಜನಪ್ರಿಯತೆ ಎಷ್ಟಿತ್ತೆಂದರೆ, ಕನ್ನಡದ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಿ.ವಿ. ಗುಂಡಪ್ಪ ಅವರ ಬರಹಗಳಲ್ಲಿಯೂ ಸಾಕಮ್ಮ ಕಾಫಿಯ ಉಲ್ಲೇಖಗಳು ಕಾಣಿಸಿಕೊಂಡಿದ್ದವು ಎಂದು ವರದಿಗಳು ಹೇಳುತ್ತವೆ.&lt;/p&gt;&lt;p&gt;&lt;strong&gt;ಉದ್ಯಮದ ಜೊತೆಗೆ ಸಮಾಜ ಸೇವೆಯಲ್ಲೂ ಮುಂಚೂಣಿ, ಮಹಿಳೆಯರಿಗೆ ಮಾದರಿಯಾದ ಸಾಕಮ್ಮ&lt;/strong&gt;&lt;/p&gt;&lt;p&gt;ಸಾಕಮ್ಮ ಕೇವಲ ಯಶಸ್ವಿ ಉದ್ಯಮಿಯಾಗಿರಲಿಲ್ಲ. ಸಮಾಜ ಸೇವೆಯಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದರು. ಮಹಿಳೆಯರ ಕಲ್ಯಾಣ, ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗೆ ಅವರು ನೆರವಾದರು. ಬಸವನಗುಡಿಯಲ್ಲಿ ಕುರುಹಿನ ಶೆಟ್ಟಿ ಸಮುದಾಯದ ಹಾಸ್ಟೆಲ್ ಹಾಗೂ ಪ್ರಯಾಣಿಕರಿಗಾಗಿ ಧರ್ಮಶಾಲೆ ನಿರ್ಮಿಸಿದರೆಂದು ದಾಖಲೆಗಳು ಉಲ್ಲೇಖಿಸುತ್ತವೆ.&lt;/p&gt;&lt;p&gt;ಅವರ ಉದ್ಯಮಶೀಲತೆ ಮತ್ತು ಸಮಾಜ ಸೇವೆಯನ್ನು ಗುರುತಿಸಿದ ಮೈಸೂರು ಸಂಸ್ಥಾನದ ದರ್ಬಾರ್, ಅವರಿಗೆ &lsquo;ಲೋಕಸೇವಾ ಪರಾಯಣೆ&rsquo; ಎಂಬ ಗೌರವ ಬಿರುದು ನೀಡಿತು. ಅವರು ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದರು. ಬ್ರಿಟಿಷ್ ಸರ್ಕಾರದಿಂದ &lsquo;ಕೈಸರ್-ಇ-ಹಿಂದ್&rsquo; ಪದಕವೂ ಅವರಿಗೆ ದೊರಕಿತ್ತು.&lt;/p&gt;&lt;p&gt;&lt;strong&gt;ಇಂದಿಗೂ ಉಳಿದಿರುವ ನೆನಪು&lt;/strong&gt;&lt;/p&gt;&lt;p&gt;ಕೊಡಗಿನ ಸೋಮವಾರಪೇಟೆಯಲ್ಲಿರುವ &lsquo;ಸಾಕಮ್ಮ ಬಂಗಲೆ&rsquo; ಮತ್ತು ಬೆಂಗಳೂರಿನ &lsquo;ಸಾಕಮ್ಮ ಗಾರ್ಡನ್&rsquo; ಅವರ ಪರಂಪರೆಯನ್ನು ನೆನಪಿಸುತ್ತವೆ. ಕಾಫಿ ಉದ್ಯಮ, ಮಹಿಳಾ ಸ್ವಾವಲಂಬನೆ ಮತ್ತು ಸಮಾಜ ಸೇವೆ&mdash;ಈ ಮೂರು ಕ್ಷೇತ್ರಗಳಲ್ಲಿ ಸಾಕಮ್ಮ ಬಿಟ್ಟ ಹೆಜ್ಜೆ ಗುರುತುಗಳು ಇಂದಿಗೂ ಪ್ರೇರಣೆಯಾಗಿವೆ.&lt;/p&gt;&lt;p&gt;ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದ ಸಾಕಮ್ಮ, ಕಷ್ಟಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡ ಅಪರೂಪದ ಮಹಿಳೆ. ಕಾಫಿಯ ಘಮದೊಂದಿಗೆ ಕರ್ನಾಟಕದ ಉದ್ಯಮಶೀಲತೆಯ ಇತಿಹಾಸದಲ್ಲೂ ಅವರ ಹೆಸರು ಸದಾ ಉಳಿಯಲಿದೆ.&lt;/p&gt;]]></content:encoded>
            <category>tumakuru</category>
            <dc:creator>Chandrashekar GS</dc:creator>
            <atom:link href="https://kannada.asianetnews.com/karnataka-districts/coffee-pudi-sakamma-the-karnataka-woman-who-built-bengaluru-early-coffee-culture/articleshow-dswb8ph"/>
        </item>
        <item>
            <title><![CDATA[ತುಮಕೂರಿನಲ್ಲಿ HAL-SAFRAN ಕಂಪನಿಯಿಂದ ಜಂಟಿಯಾಗಿ ಅರಾವಳಿ ಹೆಲಿಕಾಪ್ಟರ್‌ ಇಂಜಿನ್‌ ನಿರ್ಮಾಣ]]></title>
            <link>https://kannada.asianetnews.com/karnataka-districts/hal-safran-deal-aravalli-helicopter-engine-tumakuru-plant-san/articleshow-f36ah8r</link>
            <guid isPermaLink="true">https://kannada.asianetnews.com/karnataka-districts/hal-safran-deal-aravalli-helicopter-engine-tumakuru-plant-san/articleshow-f36ah8r</guid>
            <pubDate>Thu, 27 Aug 2026 18:17:54 +0530</pubDate>
            <description><![CDATA[&lt;p&gt;HAL ಮತ್ತು ಯುರೋಪಿನ ಸಾಫ್ರಾನ್ (Safran) ಭಾರತದಲ್ಲೇ 'ಅರಾವಳಿ' ಎಂಜಿನ್&zwnj;ಗಳನ್ನು ತಯಾರಿಸಲು ಜಂಟಿ ಉದ್ಯಮ ಸ್ಥಾಪಿಸಿವೆ. ಈ ಶಕ್ತಿಶಾಲಿ ಎಂಜಿನ್&zwnj;ಗಳು ಸೇನೆಯ ಮುಂದಿನ ಪೀಳಿಗೆಯ 13-ಟನ್ ತೂಕದ IMRH ಮತ್ತು ನೌಕಾಪಡೆಯ DBMRH ಹೆಲಿಕಾಪ್ಟರ್&zwnj;ಗಳಿಗೆ ಶಕ್ತಿ ತುಂಬಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11m2takdsr8cq2jratjb77e,imgname-hal-and-safran-joint-venture-1787834755411.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.27): &lt;/strong&gt;ಭಾರತೀಯ ಸೇನೆಯ ಮುಂದಿನ ಪೀಳಿಗೆಯ ಮಧ್ಯಮ ತೂಕದ ಮಿಲಿಟರಿ ಹೆಲಿಕಾಪ್ಟರ್&zwnj;ಗಳಿಗೆ ಬಳಸಲಾಗುವ ಶಕ್ತಿಶಾಲಿ ಎಂಜಿನ್&zwnj;ಗಳು ಇದೇ ಮೊದಲ ಬಾರಿಗೆ ಭಾರತದಲ್ಲೇ ತಯಾರಾಗಲಿವೆ. &lsquo;ಅರಾವಳಿ&rsquo; (Aravalli) ಎಂಜಿನ್&zwnj;ಗಳ ವಿನ್ಯಾಸ, ಅಭಿವೃದ್ಧಿ ಹಾಗೂ ತಯಾರಿಕೆಗಾಗಿ &lsquo;ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್&rsquo; (HAL) ಮತ್ತು ಯುರೋಪ್&zwnj;ನ ಪ್ರಮುಖ ರಕ್ಷಣಾ ಉತ್ಪಾದನಾ ಸಂಸ್ಥೆ &lsquo;ಸಾಫ್ರಾನ್&rsquo; (Safran) ಬುಧವಾರ ಜಂಟಿ ಉದ್ಯಮ ಸ್ಥಾಪನೆಯ ಅಂತಿಮ ವಾಣಿಜ್ಯ ಒಪ್ಪಂದಕ್ಕೆ ಅಂಕಿತ ಹಾಕಿವೆ.&lt;/p&gt;&lt;p&gt;ಮೂಲಗಳ ಪ್ರಕಾರ, ಈ ಎಂಜಿನ್&zwnj;ಗಳ ವಿನ್ಯಾಸ ಹಾಗೂ ಅಭಿವೃದ್ಧಿ ಕಾರ್ಯವು 2032-33 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಹೆಚ್&zwnj;ಎಎಲ್&zwnj;ನ ತುಮಕೂರು ಘಟಕದಲ್ಲಿ ಇವುಗಳ ಉತ್ಪಾದನೆ ನಡೆಯಲಿದೆ. ಶಕ್ತಿಶಾಲಿ &lsquo;ಅರಾವಳಿ&rsquo; ಎಂಜಿನ್&zwnj;ಗಳು ಭಾರತೀಯ ಸೇನೆಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಹಳೆಯ &lsquo;ಮಿ-17&rsquo; (Mi-17) ಹೆಲಿಕಾಪ್ಟರ್&zwnj;ಗಳ ಜಾಗಕ್ಕೆ ಬರಲಿರುವ 13-ಟನ್ ತೂಕದ &lsquo;ಇಂಡಿಯನ್ ಮಲ್ಟಿ-ರೋಲ್ ಹೆಲಿಕಾಪ್ಟರ್&rsquo; (IMRH) ಮತ್ತು ನೌಕಾಪಡೆಯ ಬಳಕೆಯ &lsquo;ಡೆಕ್-ಬೇಸ್ಡ್ ಮಲ್ಟಿ-ರೋಲ್ ಹೆಲಿಕಾಪ್ಟರ್&rsquo; (DBMRH) ಗಳಿಗೆ ಶಕ್ತಿ ತುಂಬಲಿವೆ.&lt;/p&gt;&lt;p&gt;ಭಾರತೀಯ ಸೇನೆ (Indian Army) ಮತ್ತು ಭಾರತೀಯ ವಾಯುಪಡೆ (IAF) ಬಳಸಲಿರುವ ಐಎಮ್&zwnj;ಆರ್&zwnj;ಹೆಚ್ (IMRH) ಯೋಜನೆಗೆ ರಕ್ಷಣಾ ಸಚಿವಾಲಯದಿಂದ &lsquo;ಅಗತ್ಯತೆಯ ಅಂಗೀಕಾರ&rsquo; (AON) ಸಿಗುವುದು ಇನ್ನಷ್ಟೇ ಬಾಕಿ ಇದೆ. ಎಂಜಿನ್ ಅಭಿವೃದ್ಧಿ ಕಾರ್ಯಗಳು ಆರಂಭವಾಗುವ ಮುನ್ನ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟದ ರಕ್ಷಣಾ ಸಮಿತಿಯ (CCS) ಅಂತಿಮ ಅನುಮೋದನೆ ಸಿಗಬೇಕಿದೆ.&lt;/p&gt;&lt;p&gt;2023 ರ ಫೆಬ್ರವರಿಯಲ್ಲಿ ನಡೆದ ಏರೋ ಇಂಡಿಯಾ ಪ್ರದರ್ಶನದಲ್ಲಿ ಈ ಅರಾವಳಿ ಎಂಜಿನ್ ಯೋಜನೆಯ ಎಂಓಯುಗೆ ಅಂಕಿತ ಹಾಕಲಾಗಿತ್ತು. ಬಹುನಿರೀಕ್ಷಿತ ಈ ಹೆಲಿಕಾಪ್ಟರ್ ಯೋಜನೆಗೆ ಪ್ರಸ್ತುತ ಸಹಿ ಬಿದ್ದಿರುವ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಿದೆ.&lt;/p&gt;&lt;h2&gt;&lt;strong&gt;ಹೊಸ ಜಂಟಿ ಸಂಸ್ಥೆ: SAFHAL ಹೆಲಿಕಾಪ್ಟರ್ ಎಂಜಿನ್ಸ್&lt;/strong&gt;&lt;/h2&gt;&lt;p&gt;ಒಪ್ಪಂದದ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್&zwnj;ಎಎಲ್, &quot;ಜಂಟಿ ಉದ್ಯಮ ಸಂಸ್ಥೆಯಾದ 'ಸಾಫ್&zwnj;ಹಾಲ್ ಹೆಲಿಕಾಪ್ಟರ್ ಎಂಜಿನ್ಸ್ ಪ್ರೈವೇಟ್ ಲಿಮಿಟೆಡ್' (SAFHAL Helicopter Engines Pvt Ltd) 3,500 ರಿಂದ 4,000 ಶಾಫ್ಟ್ ಹಾರ್ಸ್&zwnj;ಪವರ್ (SHP) ಸಾಮರ್ಥ್ಯದ ಹೊಸ ಪೀಳಿಗೆಯ ಶಕ್ತಿಶಾಲಿ ಹೆಲಿಕಾಪ್ಟರ್ ಎಂಜಿನ್&zwnj;ಗಳ ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಪೂರೈಕೆ ಮತ್ತು ಲೈಫ್&zwnj;ಸೈಕಲ್ ಬೆಂಬಲವನ್ನು ನೋಡಿಕೊಳ್ಳಲಿದೆ. ಇದು ಹೆಚ್&zwnj;ಎಎಲ್&zwnj;ನ 13-ಟನ್ ಸಾಮರ್ಥ್ಯದ ಐಎಮ್&zwnj;ಆರ್&zwnj;ಹೆಚ್ ಮತ್ತು ಡಿಬಿಎಮ್&zwnj;ಆರ್&zwnj;ಹೆಚ್ ಹೆಲಿಕಾಪ್ಟರ್&zwnj;ಗಳಿಗೆ ಬಳಸಲ್ಪಡುತ್ತದೆ&quot; ಎಂದು ತಿಳಿಸಿದೆ.&lt;/p&gt;&lt;p&gt;ಈ ಯೋಜನೆಯ ಮೂಲಕ ಹೆಚ್&zwnj;ಎಎಲ್ ಎಂಜಿನಿಯರ್&zwnj;ಗಳಿಗೆ ಹೈ-ಪ್ರೆಶರ್ ಕಂಪ್ರೆಸರ್, ಪವರ್ ಟರ್ಬೈನ್, ಇಂಧನ ಮತ್ತು ತೈಲ ವ್ಯವಸ್ಥೆಯ ಬಿಡಿಭಾಗಗಳು, ಆಕ್ಸೆಸರಿ ಗೇರ್&zwnj;ಬಾಕ್ಸ್ ಹಾಗೂ ಎಂಜಿನ್&zwnj;ನ ಬಾಹ್ಯ ವ್ಯವಸ್ಥೆಗಳಂತಹ ಪ್ರಮುಖ ಎಂಜಿನ್ ತಂತ್ರಜ್ಞಾನಗಳ ಪ್ರವೇಶಾವಕಾಶ ದೊರೆಯಲಿದೆ. ಸ್ವದೇಶಿ ವಿಮಾನ-ಎಂಜಿನ್&zwnj;ಗಳನ್ನು ಅಭಿವೃದ್ಧಿಪಡಿಸಲು ಈ ಸಾಫ್ಟ್&zwnj;ವೇರ್ ಮತ್ತು ತಂತ್ರಜ್ಞಾನಗಳು ಅತ್ಯಂತ ನಿರ್ಣಾಯಕವಾಗಿವೆ.&lt;/p&gt;&lt;h2&gt;&lt;strong&gt;ತಂತ್ರಜ್ಞಾನದ ಸ್ವಾವಲಂಬನೆಗೆ ನಾಂದಿ&lt;/strong&gt;&lt;/h2&gt;&lt;p&gt;ಅರಾವಳಿ ಎಂಜಿನ್ ಅಭಿವೃದ್ಧಿಯಿಂದಾಗಿ ಹೆಚ್&zwnj;ಎಎಲ್ ಎಂಜಿನ್ ವಿನ್ಯಾಸ ಕ್ಷೇತ್ರದಲ್ಲಿ ಸ್ವಂತ ಬೌದ್ಧಿಕ ಆಸ್ತಿ (IPR) ಮತ್ತು ಪರಿಣತಿಯನ್ನು ಪಡೆಯುವುದಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದ ವಿನ್ಯಾಸ ವಿಧಾನಗಳು, ಪರೀಕ್ಷಾ ಪದ್ಧತಿಗಳು ಮತ್ತು ಪ್ರಮಾಣೀಕರಣ (Certification) ನಿಯಮಗಳ ಕುರಿತು ಎಂಜಿನಿಯರ್&zwnj;ಗಳಿಗೆ ಉತ್ತಮ ತರಬೇತಿ ಹಾಗೂ ಅನುಭವ ಸಿಗಲಿದೆ. ಇದು ಭವಿಷ್ಯದ ಸ್ವದೇಶಿ ಏರೋ-ಎಂಜಿನ್ ಯೋಜನೆಗಳಿಗೆ ಬಲವಾದ ಅಡಿಪಾಯ ಹಾಕಿಕೊಡಲಿದೆ.&lt;/p&gt;&lt;p&gt;ಸಹಿ ವಿನಿಮಯದ ನಂತರ ಮಾತನಾಡಿದ ಹೆಚ್&zwnj;ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (CMD) ರವಿ ಕೆ., &quot;ಏರೋ-ಎಂಜಿನ್ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಒಪ್ಪಂದವು ಪ್ರಮುಖ ಹೆಜ್ಜೆಯಾಗಿದೆ. ಈ ಜಂಟಿ ಸಹಭಾಗಿತ್ವದ ಮೂಲಕ ನಾವು ಭಾರತದ ಮುಂದಿನ ಪೀಳಿಗೆಯ ಹೆಲಿಕಾಪ್ಟರ್ ಯೋಜನೆಗಳಿಗೆ ಬಲವಾದ ಅಡಿಪಾಯ ಹಾಕುತ್ತಿದ್ದೇವೆ&quot; ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ, ಈ ಒಪ್ಪಂದವು ಭಾರತೀಯ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ಕಚ್ಚಾ ವಸ್ತುಗಳ ಪೂರೈಕೆ, ನಿಖರ ಯಂತ್ರೋಪಕರಣಗಳು ಮತ್ತು ಕ್ಯಾಸ್ಟಿಂಗ್&zwnj;ಗಳಂತಹ ಅತ್ಯಾಧುನಿಕ ವಿಭಾಗಗಳಲ್ಲಿ ಹೊಸ ಅವಕಾಶಗಳನ್ನು ತೆರೆಯಲಿದೆ. ಅಲ್ಲದೆ, ದೇಶದಲ್ಲೇ ಸ್ವದೇಶಿ 'ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ' (MRO) ಸಾಮರ್ಥ್ಯಗಳನ್ನು ಬೆಳೆಸಲು ಇದು ನೆರವಾಗಲಿದೆ ಎಂದು ಹೆಚ್&zwnj;ಎಎಲ್ ಹೇಳಿದೆ.&lt;/p&gt;]]></content:encoded>
            <category>tumakuru</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hal-safran-deal-aravalli-helicopter-engine-tumakuru-plant-san/articleshow-f36ah8r"/>
        </item>
        <item>
            <title><![CDATA[ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ನಾಳೆ ಅಂತ್ಯಕ್ರಿಯೆ!]]></title>
            <link>https://kannada.asianetnews.com/karnataka-districts/karnataka-news-former-minister-senior-bjp-leader-bc-nagesh-passes-away-funeral-in-tipatur-bmk/articleshow-horab1s</link>
            <guid isPermaLink="true">https://kannada.asianetnews.com/karnataka-districts/karnataka-news-former-minister-senior-bjp-leader-bc-nagesh-passes-away-funeral-in-tipatur-bmk/articleshow-horab1s</guid>
            <pubDate>Tue, 18 Aug 2026 22:36:43 +0530</pubDate>
            <description><![CDATA[ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ಬಿ.ಸಿ. ನಾಗೇಶ್ ವಿಧಿವಶರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದ ಅವರು, ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0awyx7c0057n4dvce2cfa23,imgname-bc-nagesh-1787072312512.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ತಿಟಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ!&lt;/p&gt;&lt;p&gt;ಕರ್ನಾಟಕ ರಾಜಕಾರಣದ ಹಿರಿಯ ನಾಯಕ, ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ತಿಪಟೂರು ಕ್ಷೇತ್ರದ ಮಾಜಿ ಶಾಸಕರಾದ ಬಿ.ಸಿ.ನಾಗೇಶ್ (67) ಅವರು ಅನಾರೋಗ್ಯದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಂತೆ, ಸದ್ಧಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಅವರ ನಿಧನ ಸುದ್ದಿ ಕೇಳಿ ರಾಜ್ಯ ರಾಜಕೀಯ ಕ್ಷೇತ್ರ, ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಶೋಕ ಸಾಗರ ಮನೆಮಾಡಿದೆ.&lt;/p&gt;&lt;h2&gt;&lt;strong&gt;ಶೈಕ್ಷಣಿಕ ರಂಗದಲ್ಲಿ ಕ್ರಾಂತಿಕಾರಿ ನಿರ್ಧಾರಗಳು!&lt;/strong&gt;&lt;/h2&gt;&lt;p&gt;ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ (ಸಕಾಲ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು) ಕಾರ್ಯನಿರ್ವಹಿಸಿದ್ದ ಬಿ.ಸಿ. ನಾಗೇಶ್ ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಪ್ರಮುಖ ಹಾಗೂ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಕರಾವಳಿಯಿಂದ ಹಿಡಿದು ಕಲ್ಯಾಣ ಕರ್ನಾಟಕದವರೆಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಲ್ಲಿದ್ದರು.&lt;/p&gt;&lt;p&gt;&lt;strong&gt;ಪಠ್ಯಪುಸ್ತಕ ಪರಿಷ್ಕರಣೆ; &lt;/strong&gt;ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ವಿಷಯದಲ್ಲಿ ಅತ್ಯಂತ ಧೈರ್ಯದಿಂದ ಹೆಜ್ಜೆ ಇಟ್ಟು, ತಮ್ಮ ಸಿದ್ಧಾಂತ ಹಾಗೂ ನಿಲುವಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದ್ದರು.&lt;/p&gt;&lt;p&gt;&lt;strong&gt;ಶಾಲಾ ಸಮವಸ್ತ್ರ ನಿಯಮ;&lt;/strong&gt; ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಮತ್ತು ಶಿಸ್ತು ಪಾಲನೆ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದ ಗಮನ ಸೆಳೆದಿದ್ದರು.&lt;/p&gt;&lt;p&gt;&lt;strong&gt;ಶಿಕ್ಷಣದಲ್ಲಿ ಮೌಲ್ಯವರ್ಧನೆ;&lt;/strong&gt; ಶಾಲಾ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಪ್ರಾರ್ಥನೆ ಮತ್ತು ಕಲಿವಿನ ವಾತಾವರಣ ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು.&lt;/p&gt;&lt;h3&gt;&lt;strong&gt;ಸಂಘ ಪರಿವಾರದ ಶಿಸ್ತು, ಸರಳತೆಯ ವ್ಯಕ್ತಿತ್ವ!&lt;/strong&gt;&lt;/h3&gt;&lt;p&gt;ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್&zwnj;ಎಸ್&zwnj;ಎಸ್) ಹಿನ್ನೆಲೆಯಿಂದ ಬಂದಿದ್ದ ಬಿ.ಸಿ. ನಾಗೇಶ್ ಅವರು ರಾಜಕೀಯಕ್ಕೆ ಬಂದ ಮೇಲೆಯೂ ತಮ್ಮ ಸರಳತೆಯನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅವರು ಕ್ಷೇತ್ರದ ಜನರೊಂದಿಗೆ ಅತ್ಯಂತ ನಿಕಟ ಹಾಗೂ ಪ್ರೀತಿಯ ಬಾಂಧವ್ಯ ಹೊಂದಿದ್ದರು. ವಿಧಾನಸಭೆಯ ಸದಸ್ಯರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಅವರು, ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣದಿಂದಾಗಿ 'ಟಿಪಟೂರಿನ ಜನಪ್ರಿಯ ನಾಯಕ' ಎನಿಸಿಕೊಂಡಿದ್ದರು. ರಾಜಕೀಯದಲ್ಲಿ ಅಧಿಕಾರ ಅನುಭವಿಸಿದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದೆ, ಶಾಸಕರಾಗಿಯೂ, ಸಚಿವರಾಗಿಯೂ ಕೇವಲ ಕರ್ತವ್ಯಕ್ಕೆ ಆದ್ಯತೆ ನೀಡಿದ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು.&lt;/p&gt;&lt;h3&gt;&lt;strong&gt;ತೀವ್ರ ಸಂತಾಪ, ನಾಳೆ ಅಂತ್ಯಕ್ರಿಯೆ!&lt;/strong&gt;&lt;/h3&gt;&lt;h3&gt;ಬಿ.ಸಿ. ನಾಗೇಶ್ ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಹಾಗೂ ವಿವಿಧ ಪಕ್ಷಗಳ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. &quot;ಸರಳ ಸಜ್ಜನಿಕೆಯ ನಾಯಕ, ಪಕ್ಷ ಕಟ್ಟಲು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಅಪಾರ ಕೊಡುಗೆ ನೀಡಿದ್ದ ನಾಗೇಶ್ ಅವರ ಅಗಲಿಕೆ ನಾಡಿಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ&quot; ಎಂದು ಗಣ್ಯರು ಸಂತಾಪ ಸೂಚಿಸಿದ್ದಾರೆ. &lt;strong&gt;ಕಾಡಿದ ಬ್ರೈನ್&zwnj; ಟ್ಯೂಮರ್!&lt;/strong&gt;&lt;/h3&gt;&lt;p&gt;ಕರ್ನಾಟಕದ ಮಾಜಿ ಶಿಕ್ಷಣ ಸಚಿವರು ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ (೬೭) ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬಿ.ಇ. ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್&zwnj;ಎಸ್&zwnj;ಎಸ್) ಪೂರ್ಣಕಾಲಿಕ ಕಾರ್ಯಕರ್ತರಾಗಿ ಪ್ರಾರಂಭಿಸಿದ್ದರು. ತಿಪಟೂರು ಕ್ಷೇತ್ರದಿಂದ ೨೦೦೮ ಮತ್ತು ೨೦೧೮ ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್, ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್&zwnj;ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆಯಾಗಿತ್ತು. ಬೆಂಗಳೂರಿನ ಮಗಳ ಮನೆಯಲ್ಲಿ ಕೊನೆಯುಸಿರೆಳೆದ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ತಿಪಟೂರಿಗೆ ತೆಗೆದುಕೊಂಡು ಹೋಗುತ್ತಿದ್ದು, ನಾಳೆ ಸ್ವಕ್ಷೇತ್ರದಲ್ಲೇ ಅಂತಿಮ ಸಂಸ್ಕಾರ ನಡೆಯಲಿದೆ. ಮೃತರು ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/karnataka-news-former-minister-senior-bjp-leader-bc-nagesh-passes-away-funeral-in-tipatur-bmk/articleshow-horab1s"/>
        </item>
        <item>
            <title><![CDATA[ರಾಷ್ಟ್ರಮಟ್ಟದಲ್ಲಿ ಮಿಂಚಿದ ತುಮಕೂರು ಜಿಲ್ಲೆ; ರಾಜ್ಯಕ್ಕೆ ಫಸ್ಟ್, ದೇಶಕ್ಕೆ 9ನೇ ಸ್ಥಾನ]]></title>
            <link>https://kannada.asianetnews.com/karnataka-districts/tumakuru-has-ranked-1st-in-state-and-9th-in-country-implementation-of-the-pradhan-mantri-dhan-dhanya-krishi-yojana-mrq/articleshow-ie72qrd</link>
            <guid isPermaLink="true">https://kannada.asianetnews.com/karnataka-districts/tumakuru-has-ranked-1st-in-state-and-9th-in-country-implementation-of-the-pradhan-mantri-dhan-dhanya-krishi-yojana-mrq/articleshow-ie72qrd</guid>
            <pubDate>Wed, 02 Sep 2026 06:19:57 +0530</pubDate>
            <description><![CDATA[ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಮತ್ತು ದೇಶದಲ್ಲಿ 9ನೇ ಸ್ಥಾನ ಪಡೆದಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಈ ವಿಷಯವನ್ನು ಪ್ರಕಟಿಸಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರವೇ ಈ ಸಾಧನೆಗೆ ಕಾರಣವೆಂದು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1ey2wz323ynt47vvm44ky55,imgname-tumakuru-1788281451491.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಹಾಗೂ ದೇಶದಲ್ಲಿ 9ನೇ ರ&zwj;್ಯಾಂಕ್ ಪಡೆದಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಜರುಗಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು&lt;/p&gt;&lt;h2&gt;&lt;strong&gt;ರಾಜ್ಯದಲ್ಲಿ ಪ್ರಥಮ ರ&zwj;್ಯಾಂಕ್ ಹಾಗೂ ದೇಶದಲ್ಲಿ 9ನೇ ರ&zwj;್ಯಾಂಕ್&lt;/strong&gt;&lt;/h2&gt;&lt;p&gt;ಪ್ರಸಕ್ತ ಸಾಲಿನ ಜುಲೈ ಮಾಹೆಯವರೆಗೆ ಎಲ್ಲಾ ಇಲಾಖೆಗಳ ಪ್ರಗತಿಯ ಮಾನದಂಡಗಳ ಆಧಾರದಲ್ಲಿ ತುಮಕೂರು ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿ ಪ್ರಥಮ ರ&zwj;್ಯಾಂಕ್ ಹಾಗೂ ದೇಶದಲ್ಲಿ 9ನೇ ರ&zwj;್ಯಾಂಕ್ ಪಡೆದಿರುತ್ತದೆ ಎಂದು ತಿಳಿಸಿದರು.&lt;/p&gt;&lt;p&gt;ಕೇಂದ್ರ ಸರ್ಕಾರದ ಜಿಲ್ಲಾ ನೋಡಲ್ ಅಧಿಕಾರಿ ಡಾ. ಏಕರೂಪ್ ಖೌರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಉಪ ಕಾರ್ಯದರ್ಶಿ ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ, ಕೆ.ವಿ.ಕೆ. ವಿಜ್ಞಾನಿಗಳು, ಲೀಡ್ ಬ್ಯಾಂಕ್, ನಬಾರ್ಡ್ ಅಧಿಕಾರಿಗಳ ಸಹಕಾರವು ಈ ಸಾಧನೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತುಮಕೂರಿನಲ್ಲಿ HAL-SAFRAN ಕಂಪನಿಯಿಂದ ಜಂಟಿಯಾಗಿ ಅರಾವಳಿ ಹೆಲಿಕಾಪ್ಟರ್&zwnj; ಇಂಜಿನ್&zwnj; ನಿರ್ಮಾಣ&lt;/strong&gt;&lt;/p&gt;&lt;p&gt;ಸಭೆಯಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಶಾರದಮ್ಮ, ಕೆವಿಕೆ ಮುಖ್ಯಸ್ಥ ಲೋಗಾನಂದನ್ ಸೇರಿದಂತೆ ಮತ್ತಿತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;2ನೇ ಏರ್&zwnj;ಪೋರ್ಟ್ ತುಮಕೂರು ಜಿಲ್ಲೆಯಲ್ಲಾಗಲಿ: 3 ತಾಲೂಕುಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tumakuru-has-ranked-1st-in-state-and-9th-in-country-implementation-of-the-pradhan-mantri-dhan-dhanya-krishi-yojana-mrq/articleshow-ie72qrd"/>
        </item>
        <item>
            <title><![CDATA[BPL Card Holders: ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್, 14 ಸಾವಿರ ಕಾರ್ಡ್‌ಗಳಿಗೆ ಕೋಕ್!]]></title>
            <link>https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2</link>
            <guid isPermaLink="true">https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2</guid>
            <pubDate>Sun, 09 Aug 2026 11:16:57 +0530</pubDate>
            <description><![CDATA[&lt;p&gt;ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ರಾಜ್ಯ ಸರ್ಕಾರವು ತುಮಕೂರು ಜಿಲ್ಲೆಯೊಂದರಲ್ಲೇ 14,000 ಬಿಪಿಎಲ್ ಕಾರ್ಡ್&zwnj;ಗಳನ್ನು ಎಪಿಎಲ್&zwnj;ಗೆ ಪರಿವರ್ತಿಸಿದೆ. ಆದರೆ ಅರ್ಹರು ಬಿಪಿಎಲ್ ಕಾರ್ಡ್&zwnj;ನಿಂದ ವಂಚಿತರಾಗದಂತೆ ತಡೆಯಲು ಮತ್ತೊಂದು ಅವಕಾಶವನ್ನು ನೀಡಿದ್ದು, ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjgwwrhc1y56d9ppwsk8zrv,imgname-bpl-card-1786254357265.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪರೀಕ್ಷಣೆಯನ್ನು ಕೈಗೆತ್ತಿಕೊಂಡಿತ್ತು. ಇದರ ನಡುವೆಯೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್ ಕೊಟ್ಟಿದೆ. ಇದರಂತೆ ಬರೋಬ್ಬರಿ 14 ಸಾವಿರ ಕಾರ್ಡ್&zwnj;ಗಳಿಗೆ ಸರ್ಕಾರ ಕೋಕ್ ಕೊಟ್ಟಿದೆ.&lt;/p&gt;&lt;h2&gt;ತುಮಕೂರಿನಲ್ಲಿ 6 ಲಕ್ಷ ಪಡಿತರ ಚೀಟಿ&lt;/h2&gt;&lt;p&gt;ತುಮಕೂರು ಜಿಲ್ಲೆಯೊಂದರಲ್ಲೇ ಮೇಜರ್ ಸರ್ಜರಿ ನಡೆದಿದ್ದು, 14 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ಆಹಾರ ಇಲಾಖೆ ಎಪಿಎಲ್ ಕಾರ್ಡ್&zwnj;ಗೆ ಕನ್ವರ್ಟ್ ಮಾಡಿದೆ. ಗ್ಯಾರಂಟಿ ಹೊರೆ ತಗ್ಗಿಸಲು ಸರ್ಕಾರದಿಂದ ಮೇಜರ್ ಸರ್ಜರಿಗೆ ಮುಂದಾಗಿದ್ದು, ಐಟಿ ರಿಟರ್ನ್ ಸಲ್ಲಿಸಿರುವ, ಕಾರು ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ಅಪ್&zwnj;ಗ್ರೇಡ್ ಮಾಡಲಾಗಿದೆ.&lt;/p&gt;&lt;p&gt;ತುಮಕೂರು ಜಿಲ್ಲೆಯಲ್ಲಿ 6 ಲಕ್ಷ ಪಡಿತರ ಚೀಟಿದಾರರು ಇದ್ದು, ಈ ಪೈಕಿ 14 ಸಾವಿರ ಬಿಪಿಎಲ್ ಕಾರ್ಡ್&zwnj;ದಾರರನ್ನು ಹೊರಗೆ ಕಳುಹಿಸಲಾಗಿದೆ. ಬಡತನ ರೇಖೆಗಿಂತ ಹೆಚ್ಚಿನ ಆದಾಯ ಹೊಂದಿದ್ದ ನಕಲಿ ಕಾರ್ಡ್&zwnj;ದಾರರನ್ನು ಪತ್ತೆ ಮಾಡಿರುವ ಆಹಾರ ಇಲಾಖೆ, ಕೇಂದ್ರ ಆದಾಯ ತೆರಿಗೆ ಇಲಾಖೆಯಿಂದ ಲಭ್ಯವಾದ ಮಾಹಿತಿ ಆಧಾರದ ಮೇಲೆ ಕಾರ್ಡ್ ಗಳ ವಜಾ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು?&lt;/h2&gt;&lt;p&gt;ಈ ಬಗ್ಗೆ ನ್ಯೂಸ್&zwnj;18 ಕನ್ನಡದೊಂದಿಗೆ ಮಾತನಾಡಿರುವ ಆಹಾರ ಇಲಾಖೆ ಡಿಡಿ ಅರುಣ್ ಕುಮಾರ್ ಸಂಗಾವಿ, ಈಗ ನಮ್ಮ ಪ್ರಸ್ತುತ ಈ ಆಗಸ್ಟ್ ತಿಂಗಳಿನಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 6 ಲಕ್ಷದ 40 ಸಾವಿರ ಪಡಿತರ ಚೀಟಿಗಳು ಇದೆ. ಈಗಾಗಲೇ ನಾವು ಹೇಳಿದಂತೆ, ಆಯುಕ್ತರ ಕಚೇರಿಯಿಂದ ನಮಗೆ 32 ಸಾವಿರ ಕಾರ್ಡ್&zwnj;ಗಳ ಪಟ್ಟು ಬಂದಿತ್ತು. ಅವುಗಳನ್ನು ಪರಿಶೀಲನೆ ನಡೆಸಿ ಸಂದರ್ಭದಲ್ಲಿ ನಮಗೆ ಸುಮಾರು 14 ಸಾವಿರ ಕಾರ್ಡ್ ಗಳು ಅನರ್ಹ ಎಂದು ಕಂಡು ಬಂದಿದೆ. ಆದ್ದರಿಂದ ನಾವು ಅವುಗಳನ್ನು ಕನ್ವರ್ಟ್ ಮಾಡಿದ್ದೇವೆ. ಈ 14 ಸಾವಿರ ಕಾರ್ಡ್&zwnj;ದಾರರಲ್ಲಿ ನಾವು ಯಾರಾದರೂ ಬಿಪಿಎಲ್ ಕಾರ್ಡ್&zwnj;ಗಳಿಗೆ ಅರ್ಹರಿದ್ದೇವೆ ಎಂದು ಹೇಳಿದರೆ ಅವುಗಳ ಮರುಪರಿಶೀಲನೆಗೂ ಅವಕಾಶ ಇದೆ.&lt;/p&gt;&lt;p&gt;&lt;strong&gt;ಮತ್ತೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಏನು ಮಾಡಬೇಕು?&lt;/strong&gt;&lt;/p&gt;&lt;p&gt;ಅರ್ಹರು ಅಗತ್ಯ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಮನವಿಯನ್ನು ಸಲ್ಲಿಕೆ ಮಾಡಬಹುದು. ಅಂತಹ ಅರ್ಜಿಗಳನ್ನು ಸ್ವೀಕಾರ ಮಾಡಿ ನಮ್ ಆಹಾರ ನಿರೀಕ್ಷಕರು, ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ನಡೆಸಿ ನಮಗೆ ವರದಿಯನ್ನು ನೀಡುತ್ತಾರೆ. ಅಂತಹ ಅರ್ಹತೆಗಳು ಕಂಡು ಬಂದರೆ ಮತ್ತೆ ಕಾರ್ಡ್&zwnj;ಗಳನ್ನ ಮರುಸ್ಥಾಪನೆ ಮಾಡುವ ಅವಕಾಶವಿದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಕೆಲವರು ಇನ್ಕಮ್ ಟ್ಯಾಕ್ಸ್ ಪೇ ಮಾಡಿರುತ್ತಾರೆ. ಅವರು ಆದಾಯ ತೆರಿಗೆ ಪಾವತಿ ಮಾಡಿರುವವರ ಮಾಹಿತಿಯನ್ನು ಆಯುಕ್ತರು ನಮಗೆ ನೀಡ್ತಾರೆ. ಸ್ವತಃ ನಾಲ್ಕು ಚಕ್ರದ ವಾಹನ ಹೊಂದಿದ್ದರೆ. ಜೊತೆಗೆ ಯಾರಾದರೂ ಏಳೂವರೆ ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದ್ದರೆ, ಇಂತಹ ಅವರನ್ನು ಪಟ್ಟಿಯಲ್ಲಿ ಗುರುತಿಸಿ ಅವರ ಕಾರ್ಡ್&zwnj;ಗಳನ್ನು ನಾವು ಕನ್ವರ್ಟ್ ಮಾಡಿದ್ದೇವೆ ಎಂದು ಆಹಾರ ಇಲಾಖೆ ಡಿಡಿ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>tumakuru</category>
            <dc:creator>Sumanth SN</dc:creator>
            <atom:link href="https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2"/>
        </item>
        <item>
            <title><![CDATA[Tumakuru: ಪಾವಗಡ, ಶಂಕಿತ ನಕ್ಸಲ್ ಗಾಗಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ; ಡ್ರೋಣ್ ಮೂಲಕ ಶೋಧ]]></title>
            <link>https://kannada.asianetnews.com/karnataka-districts/tumakuru-pavagadh-massive-combing-operation-for-suspected-naxal-search-using-drone-sns/articleshow-nlmsvfr</link>
            <guid isPermaLink="true">https://kannada.asianetnews.com/karnataka-districts/tumakuru-pavagadh-massive-combing-operation-for-suspected-naxal-search-using-drone-sns/articleshow-nlmsvfr</guid>
            <pubDate>Sun, 13 Sep 2026 15:52:31 +0530</pubDate>
            <description><![CDATA[ಪಾವಗಡ ತಾಲ್ಲೂಕಿನ ಕನಿಕಲಬಂಡೆ ಬೆಟ್ಟಗಳಲ್ಲಿ ನಕ್ಸಲ್ ಶಂಕಿತ ಉಪ್ಪಾರ ವೆಂಕಟೇಶ್ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. 120ಕ್ಕೂ ಹೆಚ್ಚು ಸಿಬ್ಬಂದಿಯ ವಿಶೇಷ ತಂಡಗಳು ಡ್ರೋಣ್ ಕ್ಯಾಮೆರಾ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶೋಧ ನಡೆಸುತ್ತಿದ್ದು, ಕಾರ್ಯಾಚರಣೆ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2d4f08pmm1nxkxby4z4mdpz,imgname-tumakuru-police--1789294772502.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಪಾವಗಡ, ತಾಲ್ಲೂಕಿನ ಕನಿಕಲಬಂಡೆ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ನಕ್ಸಲ್ ಶಂಕಿತ ಉಪ್ಪಾರ ವೆಂಕಟೇಶ್ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.&lt;/p&gt;&lt;h2&gt;ಪಾವಗಡದಲ್ಲಿ ನಕ್ಸಲ್ ಶಂಕೆ: ಬೆಟ್ಟಗಳಲ್ಲಿ ಪೊಲೀಸರ ಮಹಾ ಶೋಧ&lt;/h2&gt;&lt;p&gt;ತುಮಕೂರು ಹೆಚ್ಚುವರಿ ಎಸ್&zwnj;ಪಿ ಗೋಪಾಲ್ ಮತ್ತು ಮಧುಗಿರಿ ಡಿವೈಎಸ್&zwnj;ಪಿ ಮಂಜುನಾಥ್ ನೇತೃತ್ವದಲ್ಲಿ 120ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ 5 ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. 10 ಪೊಲೀಸ್ ಜೀಪ್, ವ್ಯಾನ್ ಹಾಗೂ ಒಂದು ಖಾಸಗಿ ಬಸ್&zwnj;ನಲ್ಲಿ ತೆರಳಿದ ಪೊಲೀಸರು, ಎಕೆ-47 ಸೇರಿದಂತೆ ಇತರೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ಕಾರ್ಯಾಚರಣೆ ನಡೆಸಿದ್ದಾರೆ.&lt;/p&gt;&lt;p&gt;ತಾಲೂಕಿನ ಪಳವಳ್ಳಿ ಕಡಪಲಕೆರೆ, ವೀರಮ್ಮನಹಳ್ಳಿ, ಗಂಗಾಸಾಗರ, ಅಚ್ಚಮ್ಮನಹಳ್ಳಿ, ಈರಮ್ಮನಹಳ್ಳಿ ಹಾಗೂ ಕನಿಕಲಬಂಡೆ ಸುತ್ತಮುತ್ತಲಿನ ಸುಮಾರು 12 ಕಿ.ಮೀ ವ್ಯಾಪ್ತಿಯ ಬೆಟ್ಟಗುಡ್ಡಗಳಲ್ಲಿ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಸತತ 5 ಗಂಟೆಗಳ ಕಾಲ ಕೂಂಬಿಂಗ್ ನಡೆಸಿ ಶೋಧ ನಡೆಸಲಾಯಿತು.&lt;/p&gt;&lt;p&gt;ಬಳಿಕ ವಿಶೇಷ ಪಡೆಯ 120 ಮಂದಿ ತಂಡದೊಂದಿಗೆ ಡ್ರೋಣ್ ಕ್ಯಾಮೆರಾ ಮೂಲಕವೂ ಸರ್ಚ್ ಕಾರ್ಯಾಚರಣೆ ಮುಂದುವರಿಸಲಾಗಿದೆ. 5-6 ಭಾರಿ ವಾಹನಗಳಲ್ಲಿ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೂ ಶಂಕಿತ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ನಿರಂತರ ಕಾರ್ಯಾಚರಣೆಗಾಗಿ ವಿಶೇಷ ತಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>tumakuru</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/tumakuru-pavagadh-massive-combing-operation-for-suspected-naxal-search-using-drone-sns/articleshow-nlmsvfr"/>
        </item>
        <item>
            <title><![CDATA[ತುಮಕೂರಲ್ಲಿ ಹೃದಯ ವಿದ್ರಾವಕ ಘಟನೆ.. 8ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ..]]></title>
            <link>https://kannada.asianetnews.com/tumakuru/8th-standard-student-died-due-to-heart-attack-gkn/articleshow-p1hlmda</link>
            <guid isPermaLink="true">https://kannada.asianetnews.com/tumakuru/8th-standard-student-died-due-to-heart-attack-gkn/articleshow-p1hlmda</guid>
            <pubDate>Sun, 09 Aug 2026 09:22:48 +0530</pubDate>
            <description><![CDATA[&lt;p&gt;ಪಾವಗಡ ತಾಲೂಕಿನಲ್ಲಿ ಅತ್ಯಂತ ವಿಷಾದನೀಯ ಘಟನೆ ನಡೆದಿದೆ. ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸ್ಟೆಲ್&zwnj;ನ ಶೌಚಾಲಯದಲ್ಲಿ ಬಾಲಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೋಷಕರ ಕಣ್ಣೀರಿಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjaddtfzw9dpqg39q1726cv,imgname-heart-attack-1786247558991.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಅತ್ಯಂತ ವಿಷಾದನೀಯ ಘಟನೆ ನಡೆದಿದೆ. ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸ್ಟೆಲ್&zwnj;ನ ಶೌಚಾಲಯದಲ್ಲಿ ಬಾಲಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೋಷಕರ ಕಣ್ಣೀರಿಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಮೃತ ಬಾಲಕಿಯನ್ನು ಕಾರಗಾನಹಟ್ಟಿ ಗ್ರಾಮದ ನರಸಿಂಹ ಮೂರ್ತಿ ಹಾಗೂ ಶಾರದಮ್ಮ ದಂಪತಿಯ ಪುತ್ರಿ ಪ್ರಿಯಾಂಕ (14) ಎಂದು ಗುರುತಿಸಲಾಗಿದೆ. ಈಕೆ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದ ಕಸ್ತೂರಿ ಬಾ ಗಾಂಧಿ ಬಾಲಕಿಯರ ಹಾಸ್ಟೆಲ್&zwnj;ನಲ್ಲಿ ಉಳಿದುಕೊಂಡು, ತ್ರೀಯಂಬಕೇಶ್ವರ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.&lt;/p&gt;&lt;p&gt;ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಿಯಾಂಕ, ಚಿಕಿತ್ಸೆಗಾಗಿ ತನ್ನ ಊರಿಗೆ ತೆರಳಿದ್ದಳು. ಗುಣಮುಖಳಾದ ನಂತರ ಆಗಸ್ಟ್ 7ರಂದು ಮತ್ತೆ ಹಾಸ್ಟೆಲ್&zwnj;ಗೆ ವಾಪಸ್ ಬಂದಿದ್ದಳು. ನಿನ್ನೆ ಮುಂಜಾನೆ ಹಾಸ್ಟೆಲ್&zwnj;ನ ಶೌಚಾಲಯಕ್ಕೆ ತೆರಳಿದ್ದ ವೇಳೆ ಹಠಾತ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಲೋ ಬಿಪಿ (Low BP) ಯಿಂದಾಗಿ ಆಕೆ ಪ್ರಜ್ಞೆ ತಪ್ಪಿದ್ದಾಳೆ ಎಂದು ಹೇಳಲಾಗಿದೆ. ತಕ್ಷಣವೇ ಹಾಸ್ಟೆಲ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ದಾರಿ ಮಧ್ಯೆಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ವೈದ್ಯರು ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಬಾಲಕಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್&zwnj;ನಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಸ್ಟೆಲ್ ಆವರಣದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ, ಸ್ವಚ್ಛತೆ ಕಾಪಾಡುತ್ತಿಲ್ಲ. ಇಂತಹ ಅವ್ಯವಸ್ಥೆಯೇ ಮಗುವಿನ ಅನಾರೋಗ್ಯಕ್ಕೆ ಮತ್ತು ಸಾವಿಗೆ ಕಾರಣ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಪಾವಗಡ ತಹಸಿಲ್ದಾರ್ ವೈ. ರವಿ ಹಾಗೂ ಪಾವಗಡ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/tumakuru/8th-standard-student-died-due-to-heart-attack-gkn/articleshow-p1hlmda"/>
        </item>
        <item>
            <title><![CDATA[ಪಾವಗಡದಲ್ಲಿ ನಕ್ಸಲ್ ಹೆಸರಲ್ಲಿ ಬೆದರಿಕೆ, ನಾಡಬಾಂಬ್ ಸ್ಫೋಟ: 'ಉಪ್ಪಾರ ವೆಂಕಟೇಶ'ನ ಸೆರೆಗೆ 120 ಪೊಲೀಸರಿಂದ ತಲಾಶ್!]]></title>
            <link>https://kannada.asianetnews.com/state/pavagada-police-manhunt-naxal-uppara-venkatesh-threat-letter-bomb-blast-sat/articleshow-pvhab5q</link>
            <guid isPermaLink="true">https://kannada.asianetnews.com/state/pavagada-police-manhunt-naxal-uppara-venkatesh-threat-letter-bomb-blast-sat/articleshow-pvhab5q</guid>
            <pubDate>Mon, 14 Sep 2026 05:50:01 +0530</pubDate>
            <description><![CDATA[&lt;p&gt;ಪಾವಗಡ ತಾಲೂಕಿನಲ್ಲಿ ನಕ್ಸಲ್ ಸಂಘಟನೆ ಹೆಸರಲ್ಲಿ 5 ಲಕ್ಷ ರೂ.ಗೆ ಬೇಡಿಕೆ ಇಟ್ಟ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ, ಶಂಕಿತ ನಕ್ಸಲ್ ನಾಯಕ ಉಪ್ಪಾರ ವೆಂಕಟೇಶನ ಪತ್ತೆಗಾಗಿ 120ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಪೊಲೀಸರು ಕನಿಕಲಬಂಡೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಡ್ರೋನ್&zwnj; ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ಶೋಧ ನಡೆಸಲಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d4f08pmm1nxkxby4z4mdpz,imgname-tumakuru-police--1789294772502.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ- ನಾಗೇಂದ್ರ ಜೆ.&lt;/strong&gt;&lt;/p&gt;&lt;p&gt;&lt;strong&gt;ತುಮಕೂರು (ಸೆ.14): &lt;/strong&gt;ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕನಿಕಲಬಂಡೆ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಶಂಕಿತ ನಕ್ಸಲ್ ನಾಯಕ, ಉಪ್ಪಾರ ವೆಂಕಟೇಶನ ಪತ್ತೆಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.&lt;/p&gt;&lt;p&gt;ಕಳೆದ ನಾಲ್ಕು ದಿನಗಳ ಹಿಂದೆ ರೈತರ ಜಮೀನಿನ ಗೇಟ್&zwnj;ಗೆ ನಕ್ಸಲ್&zwnj; ಸಂಘಟನೆ ಹೆಸರಲ್ಲಿ ಅನಾಮಿಕನೊಬ್ಬ ಪತ್ರ ಅಂಟಿಸಿದ್ದ. ಪೀಪಲ್ಸ್&zwnj; ವಾರ್&zwnj; ಜನಶಕ್ತಿ ಪಾರ್ಟಿ ಕಾಮ್ರೇಡ್&zwnj; ದೇವಣ್ಣ ದಳಂ ಹೆಸರಲ್ಲಿ ಪತ್ರ ಅಂಟಿಸಲಾಗಿತ್ತು. ತೆಲುಗು ಭಾಷೆಯಲ್ಲಿರುವ ಪತ್ರದಲ್ಲಿ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಡಲಾಗಿತ್ತು. ಪತ್ರ ಪತ್ತೆಯಾದ ಬೆನ್ನಲ್ಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ.&lt;/p&gt;&lt;p&gt;ಕನಿಕಲಬಂಡೆ ಗ್ರಾಮದ ಉಪ್ಪಾರ ವೆಂಕಟೇಶ್, ಕಳೆದ 2-2 ವರ್ಷದಿಂದ ಗ್ರಾಮದ ಹೊರವಲಯಗಳಲ್ಲಿನ ಬೆಟ್ಟ ಹಾಗೂ ದಟ್ಟ ಪೊದೆಗಳಲ್ಲಿ ಅಡಗಿ ರಸ್ತೆಯಲ್ಲಿ ಓಡಾಡುವ ವಾಹನ ಸವಾರರನ್ನು ಅಡ್ಡಗಟ್ಟಿ ಬೆದರಿಕೆವೊಡ್ಡಿ ಹಣ ಪಡೆಯುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಆತನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.&lt;/p&gt;&lt;h2&gt;&lt;strong&gt;ಶೋಧ ಹೇಗೆ?:&lt;/strong&gt;&lt;/h2&gt;&lt;p&gt;ಭಾನುವಾರ ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಸತತ 5 ಗಂಟೆಗಳ ಕಾಲ ತಾಲೂಕಿನ ಕನಿಕಲಬಂಡೆ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ವೆಂಕಟೇಶ್ ನಿಗಾಗಿ ಪೊಲೀಸರು ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ತುಮಕೂರು ಹೆಚ್ಚುವರಿ ಎಸ್ಪಿ ಗೋಪಾಲ್ ಮತ್ತು ಮಧುಗಿರಿ ಡಿವೈಎಸ್&zwnj;ಪಿ ಮಂಜುನಾಥ್ ನೇತೃತ್ವದಲ್ಲಿ 5 ವಿಶೇಷ ತಂಡಗಳಲ್ಲಿ 120ಕ್ಕೂ ಹೆಚ್ಚು ಪೊಲೀಸರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ. 10 ಪೊಲೀಸ್ ಜೀಪ್, ವ್ಯಾನ್ ಹಾಗೂ ಒಂದು ಖಾಸಗಿ ಬಸ್&zwnj;ನಲ್ಲಿ ತೆರಳಿದ ಪೊಲೀಸರು, ಎಕೆ-47 ಸೇರಿದಂತೆ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು 12 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು.&lt;/p&gt;&lt;p&gt;ತಾಲೂಕಿನ ಪಳವಳ್ಳಿ ಕಡಪಲಕೆರೆ, ವೀರಮ್ಮನಹಳ್ಳಿ, ಗಂಗಾಸಾಗರ, ಅಚ್ಚಮ್ಮನಹಳ್ಳಿ, ಕೆಂಚಗಾನಹಳ್ಳಿ ಹಾಗೂ ಕನಿಕಲಬಂಡೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯಿತು. ಡ್ರೋನ್&zwnj; ಕ್ಯಾಮರಾ ಮೂಲಕವೂ ಕಾರ್ಯಾಚರಣೆ ಮುಂದುವರಿಸಲಾಗಿದೆ. ಆದರೂ, ಶಂಕಿತ ನಕ್ಸಲರ ಯಾವುದೇ ಕುರುಹು ಪತ್ತೆಯಾಗಿಲ್ಲ. ಕರಪತ್ರ ಅಂಟಿಸಿದವರು ಯಾರು ಎಂಬುದು ತಿಳಿದು ಬಂದಿಲ್ಲ. ಕಾರ್ಯಾಚರಣೆ ಮುಂದುವರಿದಿದ್ದು, ವಿಶೇಷ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/pavagada-police-manhunt-naxal-uppara-venkatesh-threat-letter-bomb-blast-sat/articleshow-pvhab5q"/>
        </item>
        <item>
            <title><![CDATA[ಅಂದು ಸಿದ್ದರಾಮಯ್ಯ, ಪರಮೇಶ್ವರ್ ಭೇಟಿ; ವ್ಯವಸ್ಥೆ ವಿರುದ್ಧ ಯುದ್ಧ ಸಾರಿ ಗೆದ್ದಿದ್ದ ರಾಬಿಯಾ, ಮಕ್ಕಳಿಗೆ ವಿಷವಿಟ್ಟು ಸಾವನ್ನಪ್ಪಿದ್ದೇಕೆ?]]></title>
            <link>https://kannada.asianetnews.com/karnataka-districts/signal-mother-rabia-meets-siddaramaiah-and-parameshwara-last-year-today-found-dead-in-home-with-her-two-children-sns/articleshow-qfdu3qc</link>
            <guid isPermaLink="true">https://kannada.asianetnews.com/karnataka-districts/signal-mother-rabia-meets-siddaramaiah-and-parameshwara-last-year-today-found-dead-in-home-with-her-two-children-sns/articleshow-qfdu3qc</guid>
            <pubDate>Thu, 27 Aug 2026 17:28:12 +0530</pubDate>
            <description><![CDATA[&lt;p&gt;ನಿವೇಶನಕ್ಕಾಗಿ ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡಿ ಗೆದ್ದಿದ್ದ ಶಿರಾ ಮೂಲದ ರುಬಿಯಾ, ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಸೂರು ಪಡೆದಿದ್ದರೂ, ಈ ದುರಂತ ಅಂತ್ಯ ಕಂಡಿದ್ದೇಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11h2q8gmgryjnqhx4regbwg,imgname-tumakuru-mother-1787831606544.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ನಿವೇಶನ ಹಾಗೂ ಮನೆಗಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದ ಶಿರಾ ಮೂಲದ ಮಹಿಳೆ ರುಬಿಯಾ ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಶಿರಾನಗರವನ್ನೇ ಬೆಚ್ಚಿ ಬೀಳಿಸಿದೆ. ಇನ್ನು ಈಕೆ ಸಾವಿಗೆ ಕಾರಣ ತಿಳಿದು ಬಂದಿದೆ. ನಿವೇಶನಕ್ಕಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಜನಸ್ಪಂದನ ಸಭೆಯಲ್ಲಿ ಹೋರಾಟ ನಡೆಸಿ ಸುದ್ದಿಯಾಗಿದ್ದ ಈ ಮಹಿಳೆ, ಸರ್ಕಾರ ಮಂಜೂರು ಮಾಡಿದ್ದ ಜಾಗದಲ್ಲೇ ಮನೆ ಕಟ್ಟಿ ವಾಸವಿದ್ದರು. ಆದರೆ, ಸರ್ಕಾರ ಸೂರು ನೀಡಿದ ಮೇಲೂ ರಾಬಿಯಾ ಇಷ್ಟೊಂದು ಕಠೋರ ನಿರ್ಧಾರ ಕೈಗೊಂಡಿದ್ದೇಕೆ? ಎಂಬ ವಿಷಯ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.&lt;/p&gt;&lt;h2&gt;ಹೋರಾಟ ಗೆದ್ದ ಶಿರಾ ಮಹಿಳೆ: ಸಾವಿನ ಹಿಂದಿನ ನಿಗೂಢ ಸತ್ಯ&lt;/h2&gt;&lt;p&gt;ತುಮಕೂರು ಜಿಲ್ಲೆಯ ಶಿರಾ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆ ಪಡೆಯಲು ವ್ಯವಸ್ಥೆ ವಿರುದ್ಧ ಸುದೀರ್ಘ ಹೋರಾಟ ನಡೆಸಿದ್ದ ರಾಬಿಯಾ ಅಸ್ಲಾಂ ಪಾಷ, ಇಂದು ತಮ್ಮ ಇಬ್ಬರು ಮುದ್ದು ಮಕ್ಕಳಿಗೆ ವಿಷ ನೀಡಿ, ಬಳಿಕ ತಾವೂ ಸೇವಿಸಿ ಜೀವ ತೊರೆದಿದ್ದಾರೆ. ವಿಷಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ ತಾಯಿ ರಾಬಿಯಾ ಹಾಗೂ ಇಬ್ಬರು ಮಕ್ಕಳು ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;ಸಿದ್ದರಾಮಯ್ಯ ಭೇಟಿ, ನಿವೇಶನಕ್ಕೆ ಬೇಡಿಕೆ&lt;/h2&gt;&lt;p&gt;ಅಷ್ಟಕ್ಕೂ ಈ ರಾಬಿಯಾ ಸಾಮಾನ್ಯ ಮಹಿಳೆಯಾಗಿರಲಿಲ್ಲ. ಸೂರು ಪಡೆದುಕೊಳ್ಳಲು ವ್ಯವಸ್ಥೆಯ ವಿರುದ್ಧವೇ ಸಮರ ಸಾರಿದ್ದ ಮಹಿಳೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ನಿಂತು ತಮ್ಮ ನೋವು ತೋಡಿಕೊಂಡಿದ್ದಾಗ, ತಕ್ಷಣ ನಿವೇಶನ ನೀಡುವಂತೆ ಸಿಎಂ ಆದೇಶಿಸಿದ್ದರು. ಆದರೂ ಅಧಿಕಾರಿಗಳು ಒಂದೂವರೆ ವರ್ಷಗಳ ಕಾಲ ಸೈಟು ನೀಡದೆ ಅಲೆದಾಡಿಸಿ ಸತಾಯಿಸಿದ್ದರು ಎಂದು ಆರೋಪಿಸಲಾಗಿತ್ತು.&lt;/p&gt;&lt;h2&gt;ಪರಮೇಶ್ವರ್&zwnj;ಗೆ ದಯಾಮರಣಕ್ಕಾಗಿ ಮನವಿ&lt;/h2&gt;&lt;p&gt;ಅಧಿಕಾರಿಗಳ ಈ ನಿರ್ಲಕ್ಷ್ಯದ ಧೋರಣೆಯಿಂದ ಬೇಸತ್ತ ರಾಬಿಯಾ, ತುಮಕೂರಿನಲ್ಲಿ ನಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಜನಸ್ಪಂದನ ಸಭೆಯಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಗೃಹ ಸಚಿವರಿಗೆ ನೇರವಾಗಿ ದಯಾಮರಣ ಕೋರಿ ಮನವಿ ಸಲ್ಲಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಆಗ ಗೃಹ ಸಚಿವರು ಸ್ವತಃ ಕರೆಸಿ ಅವರ ಕಷ್ಟ ಆಲಿಸಿ, ನಿವೇಶನ ನೀಡುವಂತೆ ಸೂಚಿಸಿದ್ದರು.&lt;/p&gt;&lt;h2&gt;ಸರ್ಕಾರಿ ವ್ಯವಸ್ಥೆಯ ವಿರುದ್ಧ ಸುದೀರ್ಘ ಹೋರಾಟ&lt;/h2&gt;&lt;p&gt;ಸುದೀರ್ಘ ಹೋರಾಟದ ಫಲವಾಗಿ ಸರ್ಕಾರ ಕೊನೆಗೂ ಶಿರಾದಲ್ಲಿ ನಿವೇಶನ ಮಂಜೂರು ಮಾಡಿತ್ತು. ರಾಬಿಯಾ ಆ ಜಾಗದಲ್ಲಿ ಸಣ್ಣ ಮನೆ ಕೂಡ ನಿರ್ಮಿಸಿಕೊಂಡು ವಾಸವಾಗಿದ್ದರು. ಆದರೆ, ಸರ್ಕಾರದಿಂದ ಸೂರು ಸಿಕ್ಕ ಮೇಲೂ ರಾಬಿಯಾ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇಬ್ಬರ ಜೀವ ಬಲಿ ಪಡೆದ ಈ ಕಠೋರ ನಿರ್ಧಾರದ ಹಿಂದಿರುವ ನೈಜ ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ.&lt;/p&gt;&lt;h2&gt;ರಾಬಿಯಾ ಅಮಾನವೀಯ ನಿರ್ಧಾರಕ್ಕೆ ಕಾರಣವೇನು?&lt;/h2&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆ.ವಿ ಹಾಗೂ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳ ಕಾರಣವೇ ಅಥವಾ ಕುಟುಂಬದ ಆಂತರಿಕ ಕಲಹವೇ ಎಂಬ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. &lt;strong&gt;(ವರದಿ ಮಹಾಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು)&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/signal-mother-rabia-meets-siddaramaiah-and-parameshwara-last-year-today-found-dead-in-home-with-her-two-children-sns/articleshow-qfdu3qc"/>
        </item>
        <item>
            <title><![CDATA[ಆಷಾಢ  ಮುಗಿದ್ರೂ ತವರಿನಿಂದ ಬರಲಿಲ್ಲ ಪತ್ನಿ; ಪ್ರಾಣ ಕಳೆದುಕೊಂಡ ನವವಿವಾಹಿತ ಅವಿನಾಶ್]]></title>
            <link>https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc</link>
            <guid isPermaLink="true">https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc</guid>
            <pubDate>Sat, 15 Aug 2026 10:56:01 +0530</pubDate>
            <description><![CDATA[&lt;p&gt;ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದ ಪತ್ನಿ ಮರಳಿ ಬಾರದಿದ್ದಕ್ಕೆ ಮನನೊಂದ ನವ ವಿವಾಹಿತನೊಬ್ಬ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ತನ್ನ ಪತ್ನಿಯೇ ಕಾರಣ ಎಂದು ವಾಟ್ಸಪ್&zwnj; ಸಂದೇಶ ಕಳುಹಿಸಿ ಪಟ್ಟಣದ ಮಹಾವೀರ ನಗರದ ನಿವಾಸಿ ಅವಿನಾಶ್ (26) ನೇಣಿಗೆ ಶರಣಾಗಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01x122bh836g3r5rbyhw8mg,imgname-tumakuru-1786770393163.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; ತವರಿಗೆ ಹೋದ ಹೆಂಡತಿ ಮರಳಿ ಬಾರದೆ ಇದ್ದುದರಿಂದ ಮನನೊಂದ ನವ ವಿವಾಹಿತನೊಬ್ಬ ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವನನ್ನು ಪಟ್ಟಣದ ಮಹಾವೀರ ನಗರದ ವಾಸಿ ಅವಿನಾಶ್ (26) ಎಂದು ಗುರುತಿಸಲಾಗಿದೆ. ಮೃತಪಟ್ಟ ಅವಿನಾಶ್&zwnj; ಕೆಲ ತಿಂಗಳ ಹಿಂದೆ ತಾನು ಪ್ರೀತಿಸಿದ್ದ ಧಾಮಿನಿ (22) ಎಂಬ ಯುವತಿಯನ್ನು ಮದುವೆಯಾಗಿದ್ದ. ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದ ಧಾಮಿನಿಗೆ ಗುರುವಾರ ರಾತ್ರಿ ಕರೆ ಮಾಡಿದ್ದ ಅವಿನಾಶ ಬರುವಂತೆ ತಿಳಿಸಿದ್ದ. ಆದರೆ ಹೆಂಡತಿ ಧಾಮಿನಿ ನಾಗರ ಪಂಚಮಿ ಹಬ್ಬ ಮುಗಿಸಿ ಬರುವುದಾಗಿ ತಿಳಿಸಿದ್ದು ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಸಾವಿಗೆ ಹೆಂಡ್ತಿಯೇ ಕಾರಣ, ಶಿಕ್ಷೆ ಆಗಬೇಕು!&lt;/strong&gt;&lt;/h2&gt;&lt;p&gt;ತಡರಾತ್ರಿ ಅವಿನಾಶ ತಮ್ಮನಿಗೆ ವಾಟ್ಸಪ್&zwnj; ಮೂಲಕ ಮೆಸೇಜ್ ಮಾಡಿದ್ದು, ಹೆಂಡತಿಗೆ ಶಿಕ್ಷೆಯಾಗಬೇಕು. ನನ್ನ ಸಾವಿಗೆ ಅವಳೇ ಕಾರಣ ಎಂದು ತಿಳಿಸಿದ್ದ. ಬೆಳಿಗ್ಗೆ ಮೆಸೇಜ್ ನೋಡಿದ ಸೋದರ, ಆತನ ರೂಮಿಗೆ ಹೋಗಿ ಬಾಗಿಲು ಒಡೆದು ನೋಡಿದಾಗ ಅವಿನಾಶ ನೇಣಿಗೆ ಶರಣಾಗಿದ್ದು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h3&gt;&lt;strong&gt;ಅನೈತಿಕ ಸಂಬಂಧ ಶಂಕೆ: ಗಂಡನಿಂದಲೇ ಹೆಂಡತಿಯ ಮೇಲೆ ಹಲ್ಲೆ&lt;/strong&gt;&lt;/h3&gt;&lt;p&gt;ಹೊಸದುರ್ಗ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪತಿಯು ತನ್ನ ಪತ್ನಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಾಲೂಕಿನ ಶ್ರೀರಾಂಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.&lt;/p&gt;&lt;p&gt;ಹಿರಿಯೂರು ತಾಲೂಕು ಕುಂಟಪ್ಪನಹಳ್ಳಿ ಗ್ರಾಮದ ನೇತ್ರಾವತಿ (30) ಹಲ್ಲೆಗೊಳಗಾದ ಮಹಿಳೆ. ಈಕೆಯ ಗಂಡ ತಿಪ್ಪೆಸ್ವಾಮಿ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಹಿರಿಯೂರು ತಾಲೂಕು ಕುಂಟಪ್ಪನಹಳ್ಳಿ ಗ್ರಾಮದ ನೇತ್ರಾವತಿ ತನ್ನ ಗಂಡ ಹಾಗೂ ಇಬ್ಬರು ಮಕ್ಕಳೋಂದಿಗೆ ಕೂಲಿ ಕೆಲಸಕ್ಕಾಗಿ ಶ್ರೀರಾಂಪುರಕ್ಕೆ ಬಂದು ಇಲ್ಲಿಯೇ ಕಳೆದ 20 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ರಾತ್ರಿ ಹೊಸದುರ್ಗಕ್ಕೆ ಹೊಗಿದ್ದ ಗಂಡ ತಿಪ್ಪೆಸ್ವಾಮಿ ಮನೆಗೆ ಬಂದಾಗ ಇವರೊಂದಿಗೆ ಕೆಲಸ ಮಾಡುತ್ತಿದ್ದ ಕಂಚೀಪುರ ಗ್ರಾಮದ ವಿಜಯಕುಮಾರ ಎಂಬಾತ ತನ್ನ ಮನೆಯಲ್ಲಿರುವುದನ್ನು ಕಂಡು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಸ್&zwnj;ನಲ್ಲೂ ವಂದೇ ಭಾರತ್ ವೈಭೋಗ: ಶೌಚಾಲಯ, ಪ್ಯಾಂಟ್ರಿ ಹೊಂದಿರುವ ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ KSRTC!&lt;/strong&gt;&lt;/p&gt;&lt;p&gt;ಗಂಡನ ಗಲಾಟೆಯಿಂದ ಬೇಸತ್ತ ನೇತ್ರಾವತಿ ಶ್ರೀರಾಂಪುದ ಪೊಲೀಸ್&zwnj; ಠಾಣೆಗೆ ದೂರು ನೀಡಲು ಮನೆಯಿಂದ ಹೊರ ಬಂದಾಗ ಅವಳನ್ನೆ ಹಿಂಬಾಲಿಸಿಕೊಂಡು ಬಂದು ಶ್ರೀರಾಂಪುರದ ಅಂಬೇಡ್ಕರ್&zwnj; ವೃತ್ತದ ಬಳಿ ಚಾಕುವಿನಿಂದ ಮುಖ ಹಾಗೂ ಮೈ ಕೈಗೆ ಗಾಯಗೊಳಿಸಿದ್ದಾನೆ. ನಂತರ ಇದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೋಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸರ್ಕಾರದ ₹100 ಕೋಟಿಯ 1.37 ಎಕರೆ ಕಬಳಿಕೆ, ದಾಖಲೆ ಸಹಿತ ಲೋಕಾಯುಕ್ತ, ಜಿಬಿಎ ದಕ್ಷಿಣ ನಗರ ಪಾಲಿಕೆ ಆಯುಕ್ತರಿಗೆ ದೂರು&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc"/>
        </item>
        <item>
            <title><![CDATA[ಬೆಸ್ಕಾಂ ಆನ್‌ಲೈನ್ ಸೇವೆ ಸ್ಥಗಿತ: ಮುಂದಿನ 2 ದಿನ ಈ 20 ಪಟ್ಟಣಗಳಲ್ಲಿ ಕರೆಂಟ್ ಬಿಲ್, ಹೊಸ ಸಂಪರ್ಕ ಸಿಗಲ್ಲ]]></title>
            <link>https://kannada.asianetnews.com/bengaluru-urban/bescom-online-services-down-for-two-days-in-20-towns-software-upgrade-sat/articleshow-qstgqt0</link>
            <guid isPermaLink="true">https://kannada.asianetnews.com/bengaluru-urban/bescom-online-services-down-for-two-days-in-20-towns-software-upgrade-sat/articleshow-qstgqt0</guid>
            <pubDate>Tue, 15 Sep 2026 17:56:48 +0530</pubDate>
            <description><![CDATA[ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ತಂತ್ರಾಂಶ ಉನ್ನತೀಕರಣ ಕಾಮಗಾರಿಯಿಂದಾಗಿ ಆನ್&zwnj;ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಆನ್&zwnj;ಲೈನ್ ಬಿಲ್ ಪಾವತಿ ಸೇರಿದಂತೆ ಎಲ್ಲಾ ಡಿಜಿಟಲ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2jgbmcj50k2jrxwada2h1b0,imgname-bescom-online-service-down-1789475017105.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.15): ಬೆಂ&lt;/strong&gt;ಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ - BESCOM) ವ್ಯಾಪ್ತಿಯ ಗ್ರಾಹಕರಿಗೆ ಪ್ರಮುಖ ಸೂಚನೆಯೊಂದು ಹೊರಬಿದ್ದಿದೆ. ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಒಟ್ಟು 20 ಪಟ್ಟಣಗಳಲ್ಲಿ ತಂತ್ರಾಂಶ (ಸಾಫ್ಟ್&zwnj;ವೇರ್) ಉನ್ನತೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಮುಂದಿನ ಎರಡು ದಿನಗಳ ಕಾಲ ಎಲ್ಲಾ ರೀತಿಯ ಆನ್&zwnj;ಲೈನ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.&lt;/p&gt;&lt;p&gt;ಇಂದು (ಸೆಪ್ಟೆಂಬರ್ 15) ಮಧ್ಯರಾತ್ರಿಯಿಂದಲೇ ಈ ನಿರ್ಬಂಧ ಜಾರಿಗೆ ಬರಲಿದ್ದು, ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಆನ್&zwnj;ಲೈನ್ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ತನ್ನ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ?&lt;/strong&gt;&lt;/h2&gt;&lt;p&gt;ಈ ಎರಡು ದಿನಗಳ ಅವಧಿಯಲ್ಲಿ ಗ್ರಾಹಕರಿಗೆ ಕೆಳಕಂಡ ಪ್ರಮುಖ ಆನ್&zwnj;ಲೈನ್ ಸೇವೆಗಳು ಲಭ್ಯವಿರುವುದಿಲ್ಲ:&lt;/p&gt;&lt;p&gt;&lt;strong&gt;ಆನ್&zwnj;ಲೈನ್ ಬಿಲ್ ಪಾವತಿ: &lt;/strong&gt;ವೆಬ್&zwnj;ಸೈಟ್ ಅಥವಾ ಯುಪಿಐ ಆ್ಯಪ್&zwnj;ಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ.&lt;/p&gt;&lt;p&gt;&lt;strong&gt;ಹೊಸ ವಿದ್ಯುತ್ ಸಂಪರ್ಕ: &lt;/strong&gt;ನೂತನ ಗೃಹ ಅಥವಾ ವಾಣಿಜ್ಯ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ.&lt;/p&gt;&lt;p&gt;&lt;strong&gt;ಹೆಸರು ವರ್ಗಾವಣೆ (Name Transfer): &lt;/strong&gt;ಮೀಟರ್ ಮಾಲೀಕತ್ವ ಬದಲಾವಣೆ ಪ್ರಕ್ರಿಯೆ.&lt;/p&gt;&lt;p&gt;&lt;strong&gt;ಲೋಡ್ ಹೆಚ್ಚಳ/ಕಡಿತ: &lt;/strong&gt;ಹೆಚ್ಚುವರಿ ಲೋಡ್ ಮಂಜೂರಾತಿ ಅಥವಾ ಲೋಡ್ ಬದಲಾವಣೆ ಸೇವೆಗಳು.&lt;/p&gt;&lt;p&gt;ಬೆಸ್ಕಾಂ ಪೋರ್ಟಲ್ ಮೂಲಕ ಸಿಗುವ ಇತರ ನಾಗರಿಕ ಆನ್&zwnj;ಲೈನ್ ಸೇವೆಗಳು.&lt;/p&gt;&lt;h2&gt;&lt;strong&gt;ಸೇವೆ ಸ್ಥಗಿತಗೊಳ್ಳಲಿರುವ 20 ಪಟ್ಟಣಗಳ ಪಟ್ಟಿ ಇಲ್ಲಿದೆ:&lt;/strong&gt;&lt;/h2&gt;&lt;p&gt;ಬೆಸ್ಕಾಂ ವ್ಯಾಪ್ತಿಯ ಈ ಕೆಳಗಿನ ಪಟ್ಟಣಗಳಲ್ಲಿ ಆನ್&zwnj;ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ:&lt;/p&gt;&lt;ol&gt; &lt;li&gt;ಬಾಗೇಪಲ್ಲಿ&lt;/li&gt; &lt;li&gt;ದೇವನಹಳ್ಳಿ&lt;/li&gt; &lt;li&gt;ಗುಡಿಬಂಡೆ&lt;/li&gt; &lt;li&gt;ಮಾಗಡಿ&lt;/li&gt; &lt;li&gt;ಮಾಲೂರು&lt;/li&gt; &lt;li&gt;ನೆಲಮಂಗಲ&lt;/li&gt; &lt;li&gt;ಶ್ರೀನಿವಾಸಪುರ&lt;/li&gt; &lt;li&gt;ವಿಜಯಪುರ&lt;/li&gt; &lt;li&gt;ಚನ್ನಗಿರಿ&lt;/li&gt; &lt;li&gt;ಚಿಕ್ಕನಾಯಕನಹಳ್ಳಿ&lt;/li&gt; &lt;li&gt;ಗುಬ್ಬಿ&lt;/li&gt; &lt;li&gt;ಹೊಳಲ್ಕೆರೆ&lt;/li&gt; &lt;li&gt;ಹೊನ್ನಾಳಿ&lt;/li&gt; &lt;li&gt;ಹೊಸದುರ್ಗ&lt;/li&gt; &lt;li&gt;ಜಗಳೂರು&lt;/li&gt; &lt;li&gt;ಕೊರಟಗೆರೆ&lt;/li&gt; &lt;li&gt;ಮಧುಗಿರಿ&lt;/li&gt; &lt;li&gt;ಮೊಳಕಾಲ್ಮೂರು&lt;/li&gt; &lt;li&gt;ಪಾವಗಡ&lt;/li&gt; &lt;li&gt;ತುರುವೇಕೆರೆ&lt;/li&gt;&lt;/ol&gt;&lt;h2&gt;&lt;strong&gt;ಸ್ಥಗಿತಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರದ ನೆರವಿನ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (IPDS - ಹಂತ-2) ಅಡಿಯಲ್ಲಿ ಗ್ರಾಹಕರಿಗೆ ಮತ್ತಷ್ಟು ವೇಗದ ಮತ್ತು ಅತ್ಯಾಧುನಿಕ ಡಿಜಿಟಲ್ ಸೇವೆಗಳನ್ನು ಒದಗಿಸಲು ಹೊಸ ಐಟಿ ಅಪ್ಲಿಕೇಶನ್ ಅನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ ಬಳಕೆಯಲ್ಲಿರುವ ಸಾಫ್ಟ್&zwnj;ವೇರ್ ಅನ್ನು ಅಪ್&zwnj;ಗ್ರೇಡ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ವರ್ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರು ಈ ತಾಂತ್ರಿಕ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು ಹಾಗೂ ಆನ್&zwnj;ಲೈನ್ ಸೇವೆಗಳಿಗಾಗಿ ಸೆಪ್ಟೆಂಬರ್ 18ರ ನಂತರ ಪ್ರಯತ್ನಿಸಬೇಕು ಎಂದು ಬೆಸ್ಕಾಂ ಸಾರ್ವಜನಿಕರಲ್ಲಿ ಮನವಿ ಮಾಡಿದೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bescom-online-services-down-for-two-days-in-20-towns-software-upgrade-sat/articleshow-qstgqt0"/>
        </item>
        <item>
            <title><![CDATA[Tumkuru: ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ; ಬಿಜೆಪಿ ಶಾಸಕನ ಪುತ್ರಿಗೆ ಎದುರಾಯ್ತು ಕಾನೂನು ಸಂಕಷ್ಟ!]]></title>
            <link>https://kannada.asianetnews.com/karnataka-districts/aishwarya-suresh-gowda-woman-psi-savitha-slap-case-bail-plea-rejected-3rd-additional-sessions-court-news-bmk/articleshow-ruviwvp</link>
            <guid isPermaLink="true">https://kannada.asianetnews.com/karnataka-districts/aishwarya-suresh-gowda-woman-psi-savitha-slap-case-bail-plea-rejected-3rd-additional-sessions-court-news-bmk/articleshow-ruviwvp</guid>
            <pubDate>Thu, 03 Sep 2026 16:26:53 +0530</pubDate>
            <description><![CDATA[&lt;p&gt;ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್&zwnj;ಐ ಸವಿತಾ ಅವರಿಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕನ ಪುತ್ರಿ ಐಶ್ವರ್ಯಗೆ ಕಾನೂನು ಸಂಕಷ್ಟ ಎದುರಾಗಿದೆ. ಹಾಗಾದರೆ ಆಗಿದ್ದೇನು ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1kek2hwhm927sknhvfatx0p,imgname-bjp-mla-daughter-1788432976444.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್&zwnj;ಇನ್ಸ್&zwnj;ಪೆಕ್ಟರ್ (ಪಿಎಸ್&zwnj;ಐ) ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್&zwnj;ಗೌಡ ಅವರ ಪುತ್ರಿ ಐಶ್ವರ್ಯ ಅವರಿಗೆ ಕಾನೂನು ಹಾದಿಯಲ್ಲಿ ಭಾರಿ ಹಿನ್ನಡೆಯಾಗಿದೆ. ಮುಂಜಾಗ್ರತಾ/ಮುಂಗಡ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಶ್ರೀರಂಗಪಟ್ಟಣದ 3ನೇ ಅಪರ ಸತ್ರ ನ್ಯಾಯಾಲಯವು ವಜಾಗೊಳಿಸಿ ಆದೇಶಿಸಿದೆ.&lt;/p&gt;&lt;h2&gt;&lt;strong&gt;ದೇವಸ್ಥಾನದಲ್ಲಿ ನಡೆದ ಘಟನೆ ಮತ್ತು ಹಲ್ಲೆಯ ಹಿನ್ನೆಲೆ!&lt;/strong&gt;&lt;/h2&gt;&lt;p&gt;ಆಗಸ್ಟ್ 2ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದಲ್ಲಿರುವ ಶ್ರೀ ಮಾರಮ್ಮ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಭದ್ರತಾ ಕರ್ತವ್ಯಕ್ಕಾಗಿ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್&zwnj;ಐ ಸವಿತಾ ಅವರನ್ನು ನಿಯೋಜಿಸಲಾಗಿತ್ತು. ಸಾಲಿನಲ್ಲಿ ನಿಂತಿದ್ದ ಸಾವಿರಾರು ಭಕ್ತರ ನಡುವೆ ಐಶ್ವರ್ಯ ಅವರು ನೇರವಾಗಿ ಗರ್ಭಗುಡಿಗೆ ತೆರಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಪಿಎಸ್&zwnj;ಐ ಸವಿತಾ, &quot;ಸಾಲಿನಲ್ಲಿ ನಿಂತಿರುವ ಭಕ್ತರಿಗೆ ತೊಂದರೆಯಾಗುತ್ತದೆ, ಸ್ವಲ್ಪ ಸಮಯ ಕಾಯಿರಿ&quot; ಎಂದು ವಿನಂತಿಸಿದ್ದಾರೆ.&lt;/p&gt;&lt;h3&gt;&lt;strong&gt;ಹೆಚ್ಚಿದ್ದ ಮಾತಿನ ಚಕಮಕಿ!&lt;/strong&gt;&lt;/h3&gt;&lt;p&gt;ಇದರಿಂದ ಕೋಪಗೊಂಡ ಐಶ್ವರ್ಯ ತಮ್ಮ ರಾಜಕೀಯ ಪ್ರಭಾವದ ಮಾತುಗಳನ್ನಾಡಿ, ಪಿಎಸ್&zwnj;ಐ ಜೊತೆ ತೀವ್ರ ಬಿಸಿಬಿಸಿ ವಾಗ್ವಾದಕ್ಕಿಳಿದಿದ್ದಾರೆ. ಮಾತು ಬೆಳೆದು ಮಾತಿನ ಚಕಮಕಿ ತಾರಕಕ್ಕೇರಿದಾಗ, ಸಾರ್ವಜನಿಕರ ಎದುರಲ್ಲೇ ಕರ್ತವ್ಯದಲ್ಲಿದ್ದ ಪಿಎಸ್&zwnj;ಐ ಸವಿತಾ ಅವರ ಮುಖಕ್ಕೆ ಐಶ್ವರ್ಯ ಕಪಾಳಮೋಕ್ಷ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಕ್ಯಾತನಹಳ್ಳಿ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲು!&lt;/strong&gt;&lt;/h3&gt;&lt;p&gt;ಘಟನೆ ನಡೆದ ತಕ್ಷಣವೇ ಸಂತ್ರಸ್ತ ಪಿಎಸ್&zwnj;ಐ ಸವಿತಾ ಅವರು ಕ್ಯಾತನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ, ಹಲ್ಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ಹಲವು ಕಠಿಣ ಕಾಯ್ದೆಗಳಡಿ (BNS ಕಾಯ್ದೆಯಡಿ) ಐಶ್ವರ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಪ್ರಕರಣ ದಾಖಲಾದ ನಂತರವೂ ಜನಪ್ರತಿನಿಧಿಯ ಪುತ್ರಿಯಾದ ಐಶ್ವರ್ಯ ಅವರನ್ನು ಪೊಲೀಸರು ಬಂಧಿಸಿರಲಿಲ್ಲ. ಬದಲಿಗೆ ಅವರನ್ನು ಠಾಣೆಗೆ ಕರೆಸಿ ಕೇವಲ ಪ್ರಾಥಮಿಕ ವಿಚಾರಣೆ ನಡೆಸಿ ಕಳುಹಿಸಲಾಗಿತ್ತು ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು.&lt;/p&gt;&lt;h3&gt;&lt;strong&gt;ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ!&lt;/strong&gt;&lt;/h3&gt;&lt;p&gt;ಬಂಧನದಿಂದ ತಪ್ಪಿಸಿಕೊಳ್ಳಲು ಮತ್ತು ಪ್ರಕರಣದಿಂದ ಕಾನೂನಾತ್ಮಕ ರಕ್ಷಣೆ ಪಡೆಯಲು ಐಶ್ವರ್ಯ ಅವರು ಶ್ರೀರಂಗಪಟ್ಟಣದ 3ನೇ ಅಪರ ಸತ್ರ ನ್ಯಾಯಾಲಯದಲ್ಲಿ ಮುಂಗಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಸರ್ಕಾರಿ ನೌಕರರ ಮೇಲಿನ ಹಲ್ಲೆ ಮತ್ತು ಅಧಿಕಾರ ದುರ್ಬಳಕೆಯ ಆರೋಪದ ಗಂಭೀರತೆಯನ್ನು ಪರಿಗಣಿಸಿ, ಜಾಮೀನು ನೀಡಲು ನಿರಾಕರಿಸಿದೆ ಹಾಗೂ ಅರ್ಜಿಯನ್ನು ವಜಾಗೊಳಿಸಿದೆ.&lt;/p&gt;&lt;h3&gt;&lt;strong&gt;ಜಾಮೀನು ಅರ್ಜಿ ತಿರಸ್ಕಾರ!&lt;/strong&gt;&lt;/h3&gt;&lt;p&gt;ಕೋರ್ಟ್ ಜಾಮೀನು ಅರ್ಜಿಯನ್ನು ತಳ್ಳಿಹಾಕಿರುವುದರಿಂದ, ಶಾಸಕರ ಪುತ್ರಿ ಐಶ್ವರ್ಯ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಮುಂಬರುವ ದಿನಗಳಲ್ಲಿ ಪೊಲೀಸರು ಅವರನ್ನು ಬಂಧಿಸುತ್ತಾರೋ ಅಥವಾ ಅವರು ಉನ್ನತ ನ್ಯಾಯಾಲಯದ ಬಾಗಿಲು ತಟ್ಟುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.&lt;/p&gt;]]></content:encoded>
            <category>tumakuru</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/aishwarya-suresh-gowda-woman-psi-savitha-slap-case-bail-plea-rejected-3rd-additional-sessions-court-news-bmk/articleshow-ruviwvp"/>
        </item>
        <item>
            <title><![CDATA[ನನಗೀಗ 80, ಎಷ್ಟು ವರ್ಷ ಬದುಕಿರ್‍ತೀನೋ? ಚುನಾವಣೆಗಳು ಈಗ ತುಂಬಾ ದುಬಾರಿ: ಸಿದ್ದರಾಮಯ್ಯ]]></title>
            <link>https://kannada.asianetnews.com/karnataka-districts/former-cm-siddaramaiah-s-speech-about-the-electoral-system-mrq/articleshow-x62hy4t</link>
            <guid isPermaLink="true">https://kannada.asianetnews.com/karnataka-districts/former-cm-siddaramaiah-s-speech-about-the-electoral-system-mrq/articleshow-x62hy4t</guid>
            <pubDate>Mon, 31 Aug 2026 05:42:14 +0530</pubDate>
            <description><![CDATA[ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹದಗೆಟ್ಟಿರುವ ಮತ್ತು ದುಬಾರಿಯಾಗಿರುವ ಚುನಾವಣಾ ವ್ಯವಸ್ಥೆಯಿಂದಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ತುಮಕೂರಿನಲ್ಲಿ ಹೇಳಿದ್ದಾರೆ. ಆದರೆ, ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದಾಗಿಯೂ, ವ್ಯವಸ್ಥೆಯ ಸುಧಾರಣೆಗಾಗಿ ಹೋರಾಡುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1ajeynv2gra0rhq4xb2p3nx,imgname-siddaramaiah-1788135045819.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; &lsquo;ನನಗೆ ಈಗ 80 ವರ್ಷ, ಆರೋಗ್ಯವಾಗಿದ್ದೇನೆ. ಎಷ್ಟು ವರ್ಷ ಬದುಕಿರುತ್ತೇನೆ ಅಂತಾ ಗೊತ್ತಿಲ್ಲ. ಆದರೆ, ನಾನು&zwnj; ಮುಂದಿನ&zwnj; ಚುನಾವಣೆಗೆ &zwnj;ನಿಲ್ಲಬಾರದು ಅಂತಾ ಅಂದುಕೊಂಡಿದ್ದೇನೆ. ಕಾರಣ ವಯಸ್ಸಾಯಿತು ಅಂತಲ್ಲ. ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ, ಬಹಳ ದುಬಾರಿಯಾಗಿದೆ ಎಂಬ ಕಾರಣಕ್ಕಾಗಿ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ&rsquo; ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ&lt;/strong&gt;&lt;/h2&gt;&lt;p&gt;ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆ ವತಿಯಿಂದ ನಡೆದ ವೀರಣ್ಣ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಚುನಾವಣೆ ವ್ಯವಸ್ಥೆ ಬಹಳ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಅಭಿಪ್ರಾಯ ನನ್ನದು. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ವ್ಯವಸ್ಥೆ ಸುಧಾರಣೆಯಾಗದೆ ನಾನು ಪ್ರಾಮಾಣಿಕ ಎಂದರೆ ಆತ್ಮವಂಚನೆಯಾಗುತ್ತದೆ ಎಂದರು.&lt;/p&gt;&lt;p&gt;ನನಗೆ ಲೋಕಸಭಾ ಚುನಾವಣೆಗೆ ನಿಲ್ಲಲು ಆಫರ್ ಬಂದಿತ್ತು, ತಿರಸ್ಕರಿಸಿದೆ. ಈ ಹಿಂದೆ 1991ರಲ್ಲಿ ಕೊಪ್ಪಳದಿಂದ ಲೋಕಸಭೆಗೆ ನಿಂತಿದ್ದೆ. 10 ಸಾವಿರ ಮತಗಳಿಂದ ಸೋತಿದ್ದೆ. ಆಗ ರಾಮಕೃಷ್ಣ ಹೆಗಡೆಯವರು ಕೂಡ ಸೋತರು. ಆವತ್ತೆ ನಾನು ಲೋಕಸಭೆಗೆ ಮತ್ತೆ ನಿಲ್ಲಬಾರದು ಎಂದು ತೀರ್ಮಾನ ಮಾಡಿಬಿಟ್ಟೆ. ಇನ್ನು ಮುಂದೆ ಲೋಕಸಭೆಗೂ ನಿಲ್ಲೊಲ್ಲ, ವಿಧಾನಸಭೆಗೂ ನಿಲ್ಲೊಲ್ಲ ಎಂದರು.&lt;/p&gt;&lt;h3&gt;&lt;strong&gt;ಚುನಾವಣಾ ವ್ಯವಸ್ಥೆ&lt;/strong&gt;&lt;/h3&gt;&lt;p&gt;ಚುನಾವಣೆಯಲ್ಲಿ ಚುನಾವಣಾ ಆಯೋಗದವರು ಹೇಳಿದಷ್ಟು ಹಣ ಮಾತ್ರ ಖರ್ಚು ಮಾಡಬೇಕು. ಆದರೆ, ಅದು ಆಗುತ್ತಿಲ್ಲ. 1983ರ ಚುನಾವಣೆಗೂ, 2023ರ ಚುನಾವಣೆಗೂ ಬಹಳಷ್ಟು ವ್ಯತ್ಯಾಸವಿದೆ. ಚುನಾವಣೆಯಲ್ಲಿ ಅಕ್ರಮವಾಗಿ ಹಣ ಖರ್ಚು ಮಾಡದಂತೆ ಹೋರಾಟ ಮಾಡಬೇಕು. ಇದಕ್ಕೆ ಜನರು ಕೂಡ ಸಹಕಾರ&zwnj; ನೀಡಬೇಕು. ಇಂದು ಚುನಾವಣಾ ವ್ಯವಸ್ಥೆ ಹದಗೆಟ್ಟಿದ್ದು, ಅದರಲ್ಲಿ ಸುಧಾರಣೆ ತರುವುದೇ ನಾವು ವೀರಣ್ಣನವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಎಂದು ತಿಳಿಸಿದರು.&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/former-cm-siddaramaiah-s-speech-about-the-electoral-system-mrq/articleshow-x62hy4t"/>
        </item>
        <item>
            <title><![CDATA[ತುಮಕೂರು ಬ್ರೇಕಿಂಗ್: ಮಧುಗಿರಿ-ತಿರುಪತಿ ನೂತನ ಬಸ್‌ ಸೇವೆ ಆರಂಭ, ಟೈಮಿಂಗ್ಸ್ ಹೀಗಿದೆ]]></title>
            <link>https://kannada.asianetnews.com/karnataka-districts/mlc-rajendra-drives-ksrtc-bus-to-launch-new-madhugiri-tirupati-route-gkn/articleshow-y0q5y1w</link>
            <guid isPermaLink="true">https://kannada.asianetnews.com/karnataka-districts/mlc-rajendra-drives-ksrtc-bus-to-launch-new-madhugiri-tirupati-route-gkn/articleshow-y0q5y1w</guid>
            <pubDate>Wed, 02 Sep 2026 17:33:57 +0530</pubDate>
            <description><![CDATA[&lt;p&gt;ಇದುವರೆಗೆ ತಿರುಪತಿಗೆ ಹೋಗಲು ಮಧುಗಿರಿ ಭಾಗದ ಜನರು ಖಾಸಗಿ ವಾಹನ ಅಥವಾ ಬೇರೆ ಊರುಗಳ ಬಸ್&zwnj;ಗಳನ್ನು ಅವಲಂಬಿಸಬೇಕಿತ್ತು. ಈಗ ನೇರ ಕೆಎಸ್&zwnj;ಆರ್&zwnj;ಟಿಸಿ ಬಸ್ ಸೌಲಭ್ಯ ದೊರೆತಿರುವುದರಿಂದ ಮಧ್ಯಮ ವರ್ಗದ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ತಿಮ್ಮಪ್ಪನ ದರ್ಶನ ಪಡೆಯಲು ಬಹಳ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1h01rsfns7053q9n9f8853h,imgname-madhugiri-to-tirupati-1788350620463.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಜಿಲ್ಲೆಯ ಮಧುಗಿರಿ ಭಾಗದ ಭಕ್ತಾದಿಗಳಿಗೆ ಸಾರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಪತಿಗೆ ಮಧುಗಿರಿಯಿಂದ ನೇರ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರ ಆರಂಭವಾಗಿದೆ. ಈ ನೂತನ ಮಾರ್ಗಕ್ಕೆ ವಿಧಾನ ಪರಿಷತ್ ಸದಸ್ಯ (MLC) ರಾಜೇಂದ್ರ ಅವರು ಸ್ವತಃ ಬಸ್ ಚಲಾಯಿಸುವ ಮೂಲಕ ಚಾಲನೆ ನೀಡಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ಚಾಲಕನ ಸೀಟಲ್ಲಿ ಎಂಎಲ್&zwnj;ಸಿ ರಾಜೇಂದ್ರ&lt;/strong&gt;&lt;/h2&gt;&lt;p&gt;ಮಧುಗಿರಿ ಕೆಎಸ್&zwnj;ಆರ್&zwnj;ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಎಲ್&zwnj;ಸಿ ರಾಜೇಂದ್ರ ಅವರು ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಕೇವಲ ಹಸಿರು ನಿಶಾನೆ ತೋರುವುದು ಮಾತ್ರವಲ್ಲದೆ, ಸ್ವತಃ ಚಾಲಕನ ಸೀಟಿನಲ್ಲಿ ಕುಳಿತು ಬಸ್ ಚಲಾಯಿಸಿದರು. ಮಧುಗಿರಿಯ ಪ್ರಮುಖ ರಸ್ತೆಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಸ್ ಓಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.&lt;/p&gt;&lt;h2&gt;&lt;strong&gt;ಬಸ್ ಸಂಚಾರದ ಸಮಯ ಹೀಗಿದೆ&lt;/strong&gt;&lt;/h2&gt;&lt;p&gt;ಮಧುಗಿರಿ ಮತ್ತು ತಿರುಪತಿ ನಡುವೆ ಪ್ರತಿನಿತ್ಯ ಈ ಬಸ್ ಸಂಚರಿಸಲಿದ್ದು, ಭಕ್ತರಿಗೆ ಅನುಕೂಲವಾಗುವಂತೆ ಸಮಯ ನಿಗದಿಪಡಿಸಲಾಗಿದೆ.&lt;/p&gt;&lt;ul&gt; &lt;li&gt;ಮಧುಗಿರಿಯಿಂದ ಹೊರಡುವುದು: ಪ್ರತಿದಿನ ಬೆಳಗ್ಗೆ 10:00 ಗಂಟೆಗೆ ಮಧುಗಿರಿ ಕೆಎಸ್&zwnj;ಆರ್&zwnj;ಟಿಸಿ ಬಸ್ ನಿಲ್ದಾಣದಿಂದ ಬಸ್ ಹೊರಡಲಿದೆ.&lt;/li&gt; &lt;li&gt;ತಿರುಪತಿ ತಲುಪುವುದು: ಅದೇ ದಿನ ಸಂಜೆ 5:30ಕ್ಕೆ ಬಸ್ ತಿರುಪತಿಯನ್ನು ತಲುಪಲಿದೆ.&lt;/li&gt; &lt;li&gt;ತಿರುಪತಿಯಿಂದ ಮಧುಗಿರಿಗೆ: ತಿರುಪತಿಯಿಂದ ಪ್ರತಿದಿನ ಬೆಳಗ್ಗೆ 8:00 ಗಂಟೆಗೆ ಬಸ್ ಮಧುಗಿರಿಯತ್ತ ಪ್ರಯಾಣ ಬೆಳೆಸಲಿದೆ.&lt;/li&gt;&lt;/ul&gt;&lt;h2&gt;&lt;strong&gt;ಭಕ್ತರಿಗೆ ಅನುಕೂಲ&lt;/strong&gt;&lt;/h2&gt;&lt;p&gt;ಇದುವರೆಗೆ ತಿರುಪತಿಗೆ ಹೋಗಲು ಮಧುಗಿರಿ ಭಾಗದ ಜನರು ಖಾಸಗಿ ವಾಹನ ಅಥವಾ ಬೇರೆ ಊರುಗಳ ಬಸ್&zwnj;ಗಳನ್ನು ಅವಲಂಬಿಸಬೇಕಿತ್ತು. ಈಗ ನೇರ ಕೆಎಸ್&zwnj;ಆರ್&zwnj;ಟಿಸಿ ಬಸ್ ಸೌಲಭ್ಯ ದೊರೆತಿರುವುದರಿಂದ ಮಧ್ಯಮ ವರ್ಗದ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ತಿಮ್ಮಪ್ಪನ ದರ್ಶನ ಪಡೆಯಲು ಬಹಳ ಅನುಕೂಲವಾಗಲಿದೆ.&lt;/p&gt;]]></content:encoded>
            <category>tumakuru</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/mlc-rajendra-drives-ksrtc-bus-to-launch-new-madhugiri-tirupati-route-gkn/articleshow-y0q5y1w"/>
        </item>
    </channel>
</rss>
