<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 18 Aug 2026 22:36:48 +0530</lastBuildDate>
        <atom:link href="https://kannada.asianetnews.com/rss/tumakuru" rel="self" type="application/rss+xml"/>
        <item>
            <title><![CDATA[ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ.. ಆದ್ರೂ 10 ಲಕ್ಷ ಮೌಲ್ಯದ ವಜ್ರಾಭರಣ ಮಾಯ! ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದ ಮಾಲೀಕ]]></title>
            <link>https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs</link>
            <guid isPermaLink="true">https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs</guid>
            <pubDate>Fri, 31 Jul 2026 07:32:57 +0530</pubDate>
            <description><![CDATA[&lt;p&gt;Tumakuru Vishwas jewellery theft case: ಜ್ಯುವೆಲ್ಲರಿಗೆ ಸಾಮಾನ್ಯವಾಗಿ ಕಳ್ಳತನವಾದರೆ ಬಾಗಿಲು ಮುರಿದು ಕಳ್ಳತನ ಮಾಡ್ತಾರೆ, ಅವರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿರುತ್ತೆ. ಆದ್ರೆ ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಶಾಪ್&zwnj; ಚಿನ್ನಾಭರಣ ಕಳ್ಳತನ ವಿಚಿತ್ರವಾಗಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyty29sxcemc979p4jm45njc,imgname-----------------------2026-07-31t072402.801-1785462859581.jpg" type="image/jpeg" height="390" width="690"/>
            <content:encoded><![CDATA[&lt;p&gt;Tumakuru Vishwas jewellery theft case: ಜ್ಯುವೆಲ್ಲರಿಗೆ ಸಾಮಾನ್ಯವಾಗಿ ಕಳ್ಳತನವಾದರೆ ಬಾಗಿಲು ಮುರಿದು ಕಳ್ಳತನ ಮಾಡ್ತಾರೆ, ಅವರ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿರುತ್ತೆ. ಆದ್ರೆ ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಶಾಪ್&zwnj; ಚಿನ್ನಾಭರಣ ಕಳ್ಳತನ ವಿಚಿತ್ರವಾಗಿದೆ!&lt;/p&gt;&lt;img&gt;&lt;p&gt;ಈ ಘಟನೆ ಸಿನಿಮಾ ಕಥೆಯನ್ನೇ ಮೀರಿಸುವಂತಿದೆ. ತುಮಕೂರಿನ ಪ್ರತಿಷ್ಠಿತ ಜ್ಯುವೆಲ್ಲರಿ ಶಾಪ್ ನಡೆದ ಕೃತ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಶಾಪ್&zwnj;ನಲ್ಲಿ ಚಿನ್ನಾಭರಣ ಮಾಯ. ಬಾಗಿಲು ಮುರಿದಿಲ್ಲ. ಒಳಗೆ ಯಾರೂ ಹೋಗಿಲ್ಲ. ಆದ್ರೂ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳ್ಳತನ ಆಗಿದೆ. ಇಂಥ ಕಳ್ಳತನ ಎಲ್ಲೂ ನಡೆದಿರಲಿಲ್ಲ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಚಿನ್ನಾಭರಣ ಅಂಗಡಿಗಳಿಗೆ ಖದೀಮರು ಕನ್ನಹಾಕಿ ಚಿನ್ನ ದೋಚುತ್ತಾರೆ. ಆದರೆ ಇಲ್ಲಿ ಇಲಿಯೊಂದು ಜ್ಯುವೆಲ್ಲರಿ ಅಂಗಡಿಯಲ್ಲಿದ್ದ 10 ಲಕ್ಷ ರು. ಮೌಲ್ಯದ 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣವನ್ನು ಹೊತ್ತೊಯ್ದು ಬಿಲದಲ್ಲಿ ಅಡಗಿಸಿಟ್ಟಿದ್ದ ಅಪರೂಪದ ಘಟನೆ ತುಮಕೂರಿನ ವಿಶ್ವಾಸ ಜ್ಯುವೆಲ್ಲರಿ ಶಾಪ್&zwnj;ನಲ್ಲಿ ವರದಿಯಾಗಿದೆ.&lt;/p&gt;&lt;img&gt;&lt;p&gt;ಅಂಗಡಿ ಬಾಗಿಲು ಮುರಿದಿಲ್ಲ, ಒಳಗೆ ಯಾರೂ ಹೋಗಿಲ್ಲ. ಹೀಗಿದ್ದರೂ ಆಭರಣ ಕಳುವಾಗಿರುವ ಬಗ್ಗೆ ಶಾಪ್&zwnj;ನ ಸಿಬ್ಬಂದಿಗೆ ಅಚ್ಚರಿಯಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡುವ ಮುನ್ನ ಅಂಗಡಿಯಲ್ಲಿದ್ದ ಸಿಸಿಟೀವಿ ನೋಡಿದಾಗ ಮಾಲೀಕರು ಹಾಗೂ ಸಿಬ್ಬಂದಿ ಬೆರಗಾಗಿದ್ದಾರೆ&lt;/p&gt;&lt;img&gt;&lt;p&gt;ಇಲಿಯೊಂದು ಆಭರಣಗಳನ್ನು ಹೊತ್ತೊಯ್ದುತ್ತಿದ್ದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಸಿಸಿಟೀವಿ ವೀಕ್ಷಿಸಿದ ಬಳಿಕ ಅಂಗಡಿಯ ಸಿಬ್ಬಂದಿ ಇಲಿ ಜಾಡು ಹಿಡಿದು ಹೊರಟಾಗ ಆಭರಣಗಳು ಇಲಿಯ ಬಿಲದಲ್ಲಿ ಪತ್ತೆಯಾಗಿದೆ.&lt;/p&gt;&lt;img&gt;&lt;p&gt;10 ಉಂಗುರ ಹಾಗೂ 3 ಸರವನ್ನು ಇಲಿ ತನ್ನ ಬಿಲದಲ್ಲಿ ಅಡಗಿಸಿಟ್ಟಿತ್ತು. ಕೊನೆಗೂ ಆಭರಣ ಸಿಕ್ಕ ಬಳಿಕ ಜ್ಯುವೆಲ್ಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/rat-steals-jewellery-worth-rs-10-lakh-from-shop-in-tumakuru-karnataka-14s6evs"/>
        </item>
        <item>
            <title><![CDATA[Tumakuru: ಏಕಕಾಲದಲ್ಲಿ ಹಲವು ಇಲಾಖೆಗಳ ಸಚಿವರಾಗಿದ್ದ ಹಿರಿಯ  ನಾಯಕ ಸಿ. ವೀರಪ್ಪ ನಿಧನ]]></title>
            <link>https://kannada.asianetnews.com/karnataka-districts/tumakuru-senior-leader-c-veerappa-who-was-the-minister-of-11-departments-simultaneously-passes-away-mrq/articleshow-196t3z3</link>
            <guid isPermaLink="true">https://kannada.asianetnews.com/karnataka-districts/tumakuru-senior-leader-c-veerappa-who-was-the-minister-of-11-departments-simultaneously-passes-away-mrq/articleshow-196t3z3</guid>
            <pubDate>Sat, 25 Jul 2026 08:45:59 +0530</pubDate>
            <description><![CDATA[&lt;p&gt;ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಮಾವ ಮಾಜಿ ಸಚಿವರಾಗಿದ್ದ ವೀರಪ್ಪ ನಿಧನರಾಗಿದ್ದಾರೆ. ತುಮಕೂರು ಜಲ್ಲೆಯ ಕೊರಟಗೆರೆಯ ತೋಟದ ಮನೆಯಲ್ಲಿ ರಾತ್ರಿ ನಿಧನರಾಗಿರುವ ಮಾಹಿತಿ ಲಭ್ಯವಾಗಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kybmbbfcp19x5v2bqkcxvmkh,imgname-c-veerappa-1784949353964.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಮಾವ ಮಾಜಿ ಸಚಿವರಾಗಿದ್ದ ವೀರಪ್ಪ ನಿಧನರಾಗಿದ್ದಾರೆ. ತುಮಕೂರು ಜಲ್ಲೆಯ ಕೊರಟಗೆರೆಯ ತೋಟದ ಮನೆಯಲ್ಲಿ ರಾತ್ರಿ ನಿಧನರಾಗಿರುವ ಮಾಹಿತಿ ಲಭ್ಯವಾಗಿದೆ. ವೀರಪ್ಪ ಏಕಕಾಲದಲ್ಲಿ ಏಳು ಇಲಾಖೆಯ ಸಚಿವರಾಗಿದ್ರು. ಹಾಗೆಯೇ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವೀರಪ್ಪ ಅವರಿಗೆ ಇಬ್ಬರು ಗಂಡು ಮತ್ತು ಓರ್ವ ಮಗಳಿದ್ದಾರೆ. &amp;nbsp;ವೀರಪ್ಪ ಅವರ ಪುತ್ರಿ ಕೆ.ವಿ.ಮಂಜುಳಾ ಅವರನ್ನು ವಿ.ಎಸ್.ಉಗ್ರಪ್ಪ ಮದುವೆಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಸುಮಾರು ಹನ್ನೊಂದು ಇಲಾಖೆ&lt;/strong&gt;&lt;/h2&gt;&lt;p&gt;1983ರಲ್ಲಿ ಡೆಪ್ಯೂಟಿ ಸ್ಪೀಕರ್, 1984-89ವರೆಗೂ ಸಚಿವರಾಗಿದ್ದ ವೀರಣ್ಣ, ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು. ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್. ಬೊಮ್ಮಾಯಿ ಅವರ ಸಂಪುಟದಲ್ಲಿ ಸಾರಿಗೆ, ಸಣ್ಣ ಉಳಿತಾಯ, ಕೈಗಾರಿಕೆ ಹಾಗೂ ವಾಣಿಜ್ಯ, ಬಂದಿಖಾನೆ ಸೇರಿದಂತೆ ಸುಮಾರು ಹನ್ನೊಂದು ಇಲಾಖೆಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.&lt;/p&gt;&lt;p&gt;ಪರಿಶಿಷ್ಟ ಪಂಗಡದ (ST) ಪಟ್ಟಿಯಲ್ಲಿ 'ವಾಲ್ಮೀಕಿ' ಸಮುದಾಯದ ಪದವನ್ನು ಸೇರ್ಪಡೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ತಿಂಗಳು ಆರೋಗ್ಯ ಸಮಸ್ಯೆಯಿಂದಾಗಿ ಅವರು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದ ವೀರಣ್ಣನವರು ನಿನ್ನೆ ರಾತ್ರಿ ತಮ್ಮ ತೋಟದ ಮನೆಯಲ್ಲಿ ನಿಧನರಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ಅನಾರೋಗ್ಯದ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವರಾದ ವೀರಣ್ಣ ಅವರನ್ನು ಭೇಟಿಮಾಡಿ, ಆರೋಗ್ಯ ವಿಚಾರಿಸಿದೆ.ವೀರಣ್ಣ ಹಾಗೂ ನಾನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದೆವು. ಅತ್ಯಂತ ಸರಳತೆ, ಸಜ್ಜನಿಕೆ ಮೈಗೂಡಿಸಿಕೊಂಡಿದ್ದ ವೀರಣ್ಣನವರು ಅಷ್ಟೇ ದಕ್ಷ,&hellip; pic.twitter.com/nIAUzJNtCl&lt;/p&gt;&lt;p&gt;&mdash; Siddaramaiah (@siddaramaiah) June 30, 2026&lt;/p&gt;&lt;p&gt;&lt;/p&gt;]]></content:encoded>
            <category>tumakuru</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/tumakuru-senior-leader-c-veerappa-who-was-the-minister-of-11-departments-simultaneously-passes-away-mrq/articleshow-196t3z3"/>
        </item>
        <item>
            <title><![CDATA[ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್:  6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!]]></title>
            <link>https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</link>
            <guid isPermaLink="true">https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</guid>
            <pubDate>Wed, 08 Jul 2026 11:25:56 +0530</pubDate>
            <description><![CDATA[ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್&zwnj;ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx04edrp64anbam01r602epp,imgname-lokayukta-raids-in-across-karnataka-1783489836822.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನೂರಾರು ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ಮೆಗಾ ಆಪರೇಷನ್ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಧಾರವಾಡ ಮತ್ತು ಶಿವಮೊಗ್ಗ: ಎಸಿಎಫ್ ಕಿರಣ್ ಅಂಗಡಿಗೆ ಶಾಕ್!&lt;/h2&gt;&lt;p&gt;ಶಿವಮೊಗ್ಗದ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಅಂಗಡಿ ಅವರಿಗೆ ಸೇರಿದ ಧಾರವಾಡ ಮತ್ತು ಶಿವಮೊಗ್ಗದ ಒಟ್ಟು ೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಧಾರವಾಡದ ಲೋಕಾ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಶಿವಮೊಗ್ಗದ ಲೋಕಾಯುಕ್ತ ಇನ್&zwnj;ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಐಷಾರಾಮಿ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪತ್ನಿಯ ಹೆಸರಿನಲ್ಲಿದೆ ಎನ್ನಲಾದ ಉದ್ಯಮ) ಹಾಗೂ ಅವರ ಸೋದರ ಮಾವನ ಮನೆಗಳ ಮೇಲೆ ಶೋಧ ನಡೆಸಲಾಗುತ್ತಿದೆ.&lt;/p&gt;&lt;h2&gt;ಶಿವಮೊಗ್ಗದ ಕಚೇರಿ ಮೇಲೂ ದಾಳಿ&lt;/h2&gt;&lt;p&gt;ಇತ್ತ ಶಿವಮೊಗ್ಗದ ಆಲ್ಕೋಳ ರಸ್ತೆಯಲ್ಲಿರುವ ಕಿರಣ್ ಅಂಗಡಿ ಅವರ ಅರಣ್ಯ ಸಂಶೋಧನಾ ಕಚೇರಿಯ ಮೇಲೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿದೆ. ದಾಳಿಯ ವೇಳೆ ಅಧಿಕಾರಿ ಕಿರಣ್ ಅಂಗಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಐದು ಜನರ ಅಧಿಕಾರಿಗಳ ತಂಡ ಸದ್ಯ ದಾಖಲೆಗಳನ್ನು ಜಾಲಾಡುತ್ತಿದೆ.&lt;/p&gt;&lt;h2&gt;ರಾಯಚೂರು: ಕೆಬಿಜೆಎನ್&zwnj;ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ&lt;/h2&gt;&lt;p&gt;ರಾಯಚೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸನಗೌಡ ಅವರ ವಿರುದ್ಧ ಲೋಕಾಯುಕ್ತರು ತನಿಖೆ ತೀವ್ರಗೊಳಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ 7 ಪ್ರತ್ಯೇಕ ತಂಡಗಳು ಏಕಕಾಲದಲ್ಲಿ 7 ಕಡೆ ಧಾಳಿ ನಡೆಸಿವೆ. ಬಸನಗೌಡ ಅವರ ರಾಯಚೂರು ನಗರದ ಎಚ್.ಆರ್.ಬಿ ಲೇಔಟ್&zwnj;ನಲ್ಲಿರುವ ಮನೆ, ಯಕ್ಲಾಸಪುರದ ಸೆಲೆಬ್ರಿಟಿ ಗಾರ್ಡನ್&zwnj;ನಲ್ಲಿರುವ ಅಣ್ಣನ ಮನೆ ಹಾಗೂ ಯಕ್ಲಾಪುರದ ತೋಟದ ಮನೆಯಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;h2&gt;ಬಾರ್ ಮತ್ತು ಪೆಟ್ರೋಲ್ ಬಂಕ್ ಪತ್ತೆ&lt;/h2&gt;&lt;p&gt;ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲೇ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗೋದಾಮಿನ (Warehouse) ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿ ವ್ಯಾಪ್ತಿಯ ಕೆಬಿಜೆಎನ್&zwnj;ಎಲ್ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.&lt;/p&gt;&lt;h2&gt;ಚಿತ್ರದುರ್ಗ ಆರ್&zwnj;ಎಫ್&zwnj;ಒ ಮತ್ತು ಪ್ರೊಫೆಸರ್ ಮನೆಗೆ ಅಧಿಕಾರಿಗಳ ಎಂಟ್ರಿ&lt;/h2&gt;&lt;p&gt;ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಬ್ಬರು ಪ್ರಮುಖ ಅಧಿಕಾರಿಗಳ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿರುವ ವಲಯ ಅರಣ್ಯಾಧಿಕಾರಿ (RFO) ದುಗ್ಗಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆ ಹಾಗೂ ತೋಟದ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;ಕಲಬುರಗಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಫ್ಲ್ಯಾಟ್ ಮೇಲೆ ದಾಳಿ&lt;/h2&gt;&lt;p&gt;ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅಮೃತರಾವ್ ಯಲಾಲ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ಮಾಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಬಸವ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಫ್ಲ್ಯಾಟ್, ಮತ್ತು ಕೊತ್ತಂಬರಿ ಲೇಔಟ್&zwnj;ನಲ್ಲಿರುವ ಜೇಸ್ಕಾಂ ಕಚೇರಿಗಳ ಮೇಲೆ ದಾಳಿಯಾಗಿದೆ. ಇದಲ್ಲದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯ ಮೇಲೂ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಎಇಇ ಅಮೃತರಾವ್ ಅವರು ಜಾಗೃತಿ ಕಾಲೋನಿಯಲ್ಲಿ 'ಪ್ಲಾಟಿನಂ ಸ್ಟುಡಿಯೋ' ಎಂಬ ಹೈಟೆಕ್ ಸ್ಟುಡಿಯೋ ಹೊಂದಿದ್ದು, ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಲ್ಯಾಟ್ ಹಾಗೂ ವಿವಿಧೆಡೆ 20 ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ತುಮಕೂರು ಸಣ್ಣ ನೀರಾವರಿ ಇಲಾಖೆ ಎಇಇ ಮನೆ ಮೇಲೆ ಲೋಕಾ ದಾಳಿ&lt;/h2&gt;&lt;p&gt;ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಆಗಿರುವ ಮಧುಸೂದನ್ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಮಧುಸೂದನ್ ಮನೆ. ಸಣ್ಣ ನೀರಾವರಿ ಇಲಾಖೆ ತಿಪಟೂರು ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಮಧುಸೂದನ್ ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಲೋಕಾ ದಾಳಿ. ಮಧುಸೂದನ್ ಮನೆಯನ್ನ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಮ್. ಸದ್ಯ ಎಲ್ಲಾ ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಚಿನ್ನಾಭರಣ, ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಬೇಕಿದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet"/>
        </item>
        <item>
            <title><![CDATA[ಕೂದಲು, ನಿಂಬೆ, ಮೇಕೆ ತಲೆ, ಚಿನ್ನದ ತಾಳಿ..! ತುಮಕೂರಿನ ಬನವಾಸಿ ಆಂಜನೇಯ ದೇಗುಲದ ಬಳಿ ವಾಮಾಚಾರಕ್ಕೆ ಬೆಚ್ಚಿಬಿದ್ದ ಸ್ಥಳೀಯರು]]></title>
            <link>https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg</link>
            <guid isPermaLink="true">https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg</guid>
            <pubDate>Sat, 08 Aug 2026 10:29:33 +0530</pubDate>
            <description><![CDATA[&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfvq94v6dfrgja4e45b526n,imgname-----------------------2026-08-08t102646.342-1786165044379.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಬೆಟ್ಟದ ಬುಡದಲ್ಲಿರುವ ದೇವಸ್ಥಾನದ ಬಳಿ ದುಷ್ಕರ್ಮಿಗಳು ಮೇಕೆ ಬಲಿ ಕೊಟ್ಟು ವಾಮಾಚಾರ ಪೂಜೆ ಮಾಡಿರುವ ಘಟನೆ ಘಟನೆ ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿರುವ ಬನವಾಸಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದ್ದು, ಮುಂಜಾನೆ ದೇವಸ್ಥಾನಕ್ಕೆ ಹೋದ ಜನರು ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಬನವಾಸಿ ಆಂಜನೇಯ ದೇವಸ್ಥಾನದ ಬಳಿಯೇ ವಾಮಾಚಾರ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳದಲ್ಲಿ ಮೇಕೆಯ ತಲೆ, ಮಣ್ಣಿನ ಕುಡಿಕೆಯೊಳಗೆ ಬೇವಿನ ಸೊಪ್ಪು, ಕೂದಲು, ನಿಂಬೆ, ಸೇರಿದಂತೆ ವಾಮಾಚಾರಕ್ಕೆ ಬಳಸುವ ಹಲವು ವಸ್ತಗಳು ಕಂಡುಬಂದಿವೆ.&lt;/p&gt;&lt;img&gt;&lt;p&gt;ದುಷ್ಕರ್ಮಿಗಳು ನಿಧಿ ಆಸೆಗೆ ವಾಮಾಚಾರ ಮಾಡಿದ್ದಾರಾ? ಅಥವಾ ಶತ್ರು ಸಂಹಾರ ಪೂಜೆಯಾ? ಸ್ಥಳದಲ್ಲಿ ಪತ್ತೆಯಾದ ಕೂದಲು ಯಾರದ್ದು? ಇನ್ನು ಬೆಚ್ಚಿಬಿಳಿಸುವ ವಿಷಯ ಎಂದರೆ ಮೇಕೆ ಬಲಿ ಕೊಡುವ ಮುನ್ನ ಸಿಂಗರಿಸಿ ಚಿನ್ನದ ತಾಳಿ ಕಟ್ಟಿ ಪೂಜೆ ಮಾಡಲಾಗಿದೆ. ಮಹಿಳೆಯರ ಬಟ್ಟೆಗಳು ಸಹ ಚೆಲ್ಲಪಿಲ್ಲಿ ಬಿದ್ದಿದ್ದು ವಾಮಾಚಾರ ಮುಗಿದ ಬಳಿಕ ಎಲ್ಲ ವಸ್ತುಗಳನ್ನು ಅಲ್ಲಿಯೇ ಬಿಟ್ಟು ತೆರಳಿರುವ ದುಷ್ಮರ್ಮಿಗಳು. ಇದೆಲ್ಲ ಗಮನಿಸಿದರೆ ದುಷ್ಕರ್ಮಿಗಳು ಹೆಣ್ಣಿನ ವಶೀಕರಣ ಪೂಜೆ ನಡೆದಿದೆಯೇನೋ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಮಾನಗಳಿಗೆ ಇಂಬು ಕೊಡುವಂತೆ ಮಹಿಳೆಯ ಬಟ್ಟೆ, ಚಿನ್ನದ ತಾಳಿ, ಕೂದಲು ಸ್ಥಳದಲ್ಲಿ ಕಂಡು ಬಂದಿವೆ&lt;/p&gt;&lt;img&gt;&lt;p&gt;ಎಂದಿನಂತೆ ಜನ ಇಂದು ದೇವಸ್ಥಾನದ ಬಳಿ ಹೋದಾಗ ಅಲ್ಲಿ ಕಂಡುಬಂದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಬಂದ ಜನರು. ಕೆಲವರು ನಿಧಿ ಆಸೆಗಾಗಿ ಕಳ್ಳರ ಕೆಲಸ ಇದು ಎಂದರೆ, ಇನ್ನು ಕೆಲವರು ಸ್ತ್ರೀವಶೀಕರಣ ಪೂಜೆ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಈ ರೀತಿ ವಾಮಾಚಾರ ಮಾಡುವುದರ ಹಿಂದೆ ಏನು ಉದ್ದೇಶವಿತ್ತು ಅನ್ನೊದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.&lt;/p&gt;]]></content:encoded>
            <category>tumakuru</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/crime/miscreants-black-magic-near-banavasi-anjaneya-temple-in-vaddarahalli-tumakuru-district-rav-3flg3yg"/>
        </item>
        <item>
            <title><![CDATA[ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ, ದಾಬಸ್ ಪೇಟೆ-ಮಧುಗಿರಿ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ]]></title>
            <link>https://kannada.asianetnews.com/karnataka-districts/tumakur-rayadurga-new-railway-line-request-to-declare-dabaspet-madhugiri-bellary-national-highway-mrq/articleshow-6agp6me</link>
            <guid isPermaLink="true">https://kannada.asianetnews.com/karnataka-districts/tumakur-rayadurga-new-railway-line-request-to-declare-dabaspet-madhugiri-bellary-national-highway-mrq/articleshow-6agp6me</guid>
            <pubDate>Sun, 12 Jul 2026 09:00:11 +0530</pubDate>
            <description><![CDATA[ಕೇಂದ್ರ ಸಚಿವ ವಿ.ಸೋಮಣ್ಣ ಅವರು ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ದಾಬಸ್ ಪೇಟೆ-ಮಧುಗಿರಿ-ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲು ಮನವಿ ಮಾಡಿದ್ದಾರೆ. ಇದರೊಂದಿಗೆ ಶಿರಾ-ಮಧುಗಿರಿ ಚತುಷ್ಪಥ ರಸ್ತೆ ಕಾಮಗಾರಿ ಮತ್ತು ಮಧುಗಿರಿಯಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವ ಯೋಜನೆಗಳನ್ನು ಘೋಷಿಸಿದ್ದು, ಈ ಭಾಗದ ಆರ್ಥಿಕತೆಗೆ ಉತ್ತೇಜನ ನೀಡುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxa5v4vdrty4x7vszkr3793r,imgname-train-highway-1783826846573.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು: ದಾಬಸ್ ಪೇಟೆಯಿಂದ -ಮಧುಗಿರಿ-ಪಾವಗಡ ಮೂಲಕ ಬಳ್ಳಾರಿ ಸಂಪರ್ಕಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.&lt;/p&gt;&lt;p&gt;ಪಟ್ಟಣದ ಹೊರ ವಲಯದಲ್ಲಿ ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಹೊಸ ಹೆದ್ದಾರಿ ನಿರ್ಮಾಣದಿಂದ ಈ ಭಾಗದ ರೈತರ ,ಸಂಚಾರ ವ್ಯಪಾರ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.&lt;/p&gt;&lt;p&gt;ಮಧುಗಿರಿ ರೈಲು ನಿಲ್ದಾಣಕ್ಕೆ ಮಧುಗಿರಿ ಎಂದೇ ನಾಮಕರಣ ಮಾಡಲಾಗುವುದು ಎಂದು ಘೋಷಿಸಿದ ಅವರು, ಮುಂದಿನ 15 ದಿನಗಳ ಒಳಗಾಗಿ 180 ಕೋಟಿ ರು.ವೆಚ್ಚದ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. 2027ರ ಡಿಸೆಂಬರ್ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಧುಗಿರಿ ರೈಲು ನಿಲ್ದಾಣವನ್ನು ಉದ್ಘಾಟಿಸುವ ಗುರಿ ಹೊಂದಿದ್ದು, ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮಧುಗಿರಿಯಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವುದಾಗಿ ತಿಳಿಸಿ ಇದರಿಂದ ರೈತರು, ಕೂಲಿಕಾರ್ಮಿಕರು ವ್ಯಾಪಾರಿಗಳು ಕೈಗಾರಿಕೆಗಳಿಗೆ ಸರಕು ಸಾಗಾಣೆ ಸುಲಭವಾಗಿ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಠು ಉತ್ತೇಜನ ದೊರೆಯಲಿದೆ ಎಂದರು.&lt;/p&gt;&lt;p&gt;ಶಿರಾ ನಗರದಿಂದ ಬಡವನಹಳ್ಳಿ-ಮಧುಗಿರಿ ಮೂಲಕ ಭೈರೇನಹಳ್ಳಿ ಸಂಪರ್ಕಿಸುವ ರಾಷ್ಟ್ರಿಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 675 ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು.&lt;/p&gt;&lt;p&gt;ಶಾಸಕ ಕೆ.ಎನ್.ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, 2012ರಲ್ಲಿಯೇ 24 ಎಕರೆ ಭೂಮಿಯನ್ನು ರೈಲು ಮಾರ್ಗ ನಿರ್ಮಾಣಕ್ಕೆ ರೈತರು ಜಮೀನು ಬಿಟ್ಟು ಕೊಟ್ಟಿದ್ದು ಇದೀಗ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ಸಂತಸದ ವಿಚಾರ. ಭೂಮಿ ನೀಡಿದ ಎಲ್ಲಾ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನೀರಾವರಿ ಅಭಿವೃದ್ಧಿಗೆ 120 ಕೋಟಿ ಅನುದಾನ ಮಂಜೂರಾಗಿದ್ದು, ಈ ಯೋಜನೆಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಇದರ ಕೀರ್ತಿ ಸೋಮಣ್ಣಗೆ ಸಲ್ಲಬೇಕು ಎಂದರು.&lt;/p&gt;&lt;p&gt;ಮಧುಗಿರಿಯನ್ನು ಜಿಲ್ಲೆಯಾಗಿಸುವ ಎಲ್ಲ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದ ಅವರು, ಕೊರಟಗೆರೆ, ಶಿರಾ, ಪಾವಗಡ ಹಾಗೂ ಮಧುಗಿರಿ ಈ ನಾಲ್ಕೂ ತಾಲೂಕುಗಳನ್ನು ಸೇರಿಸಿ ಮಧುಗಿರಿ ಜಿಲ್ಲೆಯನ್ನಾಗಿಸಬೇಕಿದೆ. ಅದೇ ರೀತಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ಅರಸೀಕೆರೆ ಸೇರಿ ಜಿಲ್ಲೆಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವ್ಪಪ್ಪ , ತಹಸೀಲ್ದಾರ್ ನಂದಿನಿ, ಪ್ರಸಾದ್, ಸೂರಜ್, ವಿಜಯ ಕುಮಾರ್, ಶ್ರೀನಿವಾಸ್, ರಾಜ್ ಗೋಪಾಲ್, ಜಿ.ಜೆ.ರಾಜಣ್ಣ, ಹನುಮಂತರೆಡ್ಡಿ, ಕೆ.ಎಸ್.ಪಾಂಡುರಂಗಾರೆಡ್ಡಿ, ಡಾ.ಎಂ.ಜಿ.ಶ್ರೀನಿವಾಕಸಮೂರ್ತಿ, ಎಲ್&zwnj;.ಸಿ.ನಾಗರಾಜು,ತುಂಗೋಟಿ ರಾಮಣ್ಣ, ಎಂ.ಕೆ.ನಂಜುಂಡರಾಜು, ಲಾಲಪೇಟೆ ಮಂಜುನಾಥ್, ಲಕ್ಷ್ಮೀಪತಿ ಸೇರಿದಂತೆ ಅನೇಕರಿದ್ದರು.&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tumakur-rayadurga-new-railway-line-request-to-declare-dabaspet-madhugiri-bellary-national-highway-mrq/articleshow-6agp6me"/>
        </item>
        <item>
            <title><![CDATA[ಬೆಂಗಳೂರು TO ತುಮಕೂರು: ಐಟಿ ಉದ್ಯೋಗಿಗಳಿಗೆ BMTC ಭರ್ಜರಿ ಗಿಫ್ಟ್​; 101 ಕಿ.ಮೀ ಬಸ್​ ಸೇವೆ ಹೀಗಿದೆ]]></title>
            <link>https://kannada.asianetnews.com/travel/bangalore-to-tumkur-bmtcs-great-gift-for-it-employees-101-km-bus-service-suc/articleshow-a7tqt9f</link>
            <guid isPermaLink="true">https://kannada.asianetnews.com/travel/bangalore-to-tumkur-bmtcs-great-gift-for-it-employees-101-km-bus-service-suc/articleshow-a7tqt9f</guid>
            <pubDate>Tue, 14 Jul 2026 19:46:01 +0530</pubDate>
            <description><![CDATA[ತುಮಕೂರಿನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಐಟಿ ಉದ್ಯೋಗಿಗಳಿಗಾಗಿ ಬಿಎಂಟಿಸಿ ಹೊಸ ವಿಸ್ತಾರ ಎಸಿ ಬಸ್ ಸೇವೆಯನ್ನು ಆರಂಭಿಸಿದೆ. ನೈಸ್ ರಸ್ತೆ ಮೂಲಕ 101 ಕಿ.ಮೀ ಸಂಚರಿಸುವ ಈ ನೇರ ಸೇವೆಯಿಂದಾಗಿ ಪ್ರಯಾಣಿಕರ ಸುಮಾರು ಒಂದು ಗಂಟೆ ಸಮಯ ಉಳಿತಾಯವಾಗಲಿದ್ದು, ಇದು ಬಿಎಂಟಿಸಿಯ ಅತಿ ಉದ್ದದ ಮಾರ್ಗವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs19q6nrdgcc06hhwsm2dd5,imgname----------------------58--1782177914069.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರಿನ ಐಟಿ ಹಬ್​ ಎಂದೇ ಫೇಮಸ್​ ಆಗಿರೋ ಎಲೆಕ್ಟ್ರಾನಿಕ್​ ಸಿಟಿಗೆ ಬೇರೆ ಬೇರೆ ಊರುಗಳಿಂದ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲಿಯೂ ತುಮಕೂರಿನಿಂದ ಪ್ರತಿನಿತ್ಯವೂ ಓಡಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ತುಮಕೂರು ಮತ್ತು ಬೆಂಗಳೂರಿಗೆ ರೈಲಿನ ಮೂಲಕ ಬರುವವರು ಹೆಚ್ಚಾಗಿದ್ದರೂ ಎಲೆಕ್ಟ್ರಾನಿಕ್​ ಸಿಟಿ ತಲುಪಲು ಮತ್ತಷ್ಟು ಸಾಹಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಇಲ್ಲಿಯ ಉದ್ಯೋಗಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಸಾಫ್ಟ್​ವೇರ್​ ಉದ್ಯೋಗಿಗಳಿಗೆ ಈಗ ಬಿಎಂಟಿಸಿ ಭರ್ಜರಿ ಗುಡ್​​ನ್ಯೂಸ್​ ಕೊಟ್ಟಿದೆ. ತುಮಕೂರಿನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ನೈಸ್ ರಸ್ತೆಯ ಮುಖಾಂತರ ವಿಸ್ತಾರ ಎಸಿ ಬಸ್ ಸೇವೆ ಆರಂಭಿಸಲಾಗಿದೆ. ಇದು 101 ಕಿಲೋಮಿಟರ್​ಗಳಷ್ಟು ಸಂಚರಿಸಲು ಬಿಎಂಟಿಸಿ ವ್ಯವಸ್ಥೆ ಮಾಡಿದೆ.&lt;/p&gt;&lt;p&gt;ತುಮಕೂರಿನಿಂದ ಬೆಂಗಳೂರು ಐಟಿ ಹಬ್ ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ ಸುಮಾರು 101 ಕಿಲೋ ಮೀಟರ್ ದೂರವಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಡೆಸುತ್ತಿರುವ ಬಸ್​ ಸರ್ವೀಸ್​ಗಳಲ್ಲಿ ಈ ಮಾರ್ಗವೇ ಅತೀ ಉದ್ದದ ಮಾರ್ಗವಾಗಿದೆ. ಕರ್ನಾಟಕ ಸರ್ಕಾರ ಬಿಎಂಟಿಸಿಗೆ ಗ್ರೇಟರ್ ಬೆಂಗಳೂರು ಗಡಿದಾಟಿ ಸುಮಾರು 40 ಕಿಲೋ ಮೀಟರ್ ದೂರದ ವರೆಗೂ ವಿಸ್ತಾರ ಎಸಿ ಬಸ್ ಓಡಿಸಲು ಅನುಮತಿ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಅತಿ ಉದ್ದನೆಯ ಸೇವೆ&lt;/strong&gt;&lt;/h2&gt;&lt;p&gt;ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ಈ ಬಸ್​ ತುಮಕೂರಿನಿಂದ ಬೆಳಿಗ್ಗೆ 7.45ಕ್ಕೆ ಹೊರಟು ಬೆಳಿಗ್ಗೆ 9.45ರ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ತಲುಪುತ್ತದೆ. ಸಾಯಂಕಾಲ 5.45ಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೊರಡುವ ಬಸ್ ರಾತ್ರಿ 9ರ ವೇಳೆಗೆ ತುಮಕೂರು ತಲುಪಲಿದೆ. ಈ ಮಾರ್ಗವು ನೆಲಮಂಗಲ, ಮಾದಾವರ ಮೂಲಕ ನೈಸ್ ರಸ್ತೆಯನ್ನು ಸೇರುತ್ತದೆ. ಏಕಮುಖ ಸಂಚಾರದ ಪ್ರಯಾಣ ದರ 200 ನಿಗದಿಪಡಿಸಲಾಗಿದೆ. ಹೊಸ ಬಸ್ ನೇರವಾದ ಸೇವೆಯಿಂದ ಪ್ರತಿದಿನ ಪ್ರಯಾಣ ಮಾಡುವವರ ಸುಮಾರು 45 ನಿಮಿಷದಿಂದ ಒಂದು ಗಂಟೆಯವರಗೆ ಸಮಯ ಉಳಿಯಲಿದೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಎಲ್ಲೆಲ್ಲಿ ಸ್ಟಾಪ್​&lt;/strong&gt;&lt;/h3&gt;&lt;p&gt;ತುಮಕೂರು ಎಲೆಕ್ಟ್ರಾನಿಕ್ ಮಾರ್ಗವಾಗಿ ಸಂಚರಿಸುವ ಈ ಬಸ್​, ತುಮಕೂರು, ನೆಲಮಂಗಲ, ಮಾದವರ, ನೈಸ್ ರೋಡ್​ನಲ್ಲಿ ನಿಲ್ಲಲಿದೆ ಎಂದು ಬಿಎಂಟಿಸಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಜಿಟಿ ಪ್ರಭಾಕರ್ ರೆಡ್​ಡಿ ತಿಳಿಸಿದ್ದಾರೆ. ತುಮಕೂರು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವಿನ ಪ್ರಯಾಣಿಕರ ದಟ್ಟಣೆ ಪ್ರಸ್ತುತ ತುಂಬಾ ಉತ್ತಮವಾಗಿದೆ. ಇದಕ್ಕೂ ಮುನ್ನ ತುಮಕೂರು ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಪ್ರಯಾಣಿಸಲು ಹಲವು ಬಸ್ ಗಳನ್ನು ಬದಲಾವಣೆ ಮಾಡಬೇಕಿತ್ತು. ಆದರೆ ಈಗ ಒಂದೇ ಬಸ್ ಮೂಲಕ ಪ್ರಯಾಣ ಮಾಡುವುದರಿಂದ ಸುಮಾರು 45 ನಿಮಿಷದಿಂದ ಒಂದು ಗಂಟೆ ಸಮಯ ಉಳಿಯುತ್ತದೆ. ಈ ಹಿಂದೆ ನೆಲಮಂಗಲ ಮತ್ತು ಹೊಸಕೋಟೆ ನಡುವೆ 80 ಕಿ.ಮೀ ಮಾರ್ಗವನ್ನು ಬಿಎಂಟಿಸಿ ಆರಂಭ ಮಾಡಿತ್ತು ಎಂದು ಅವರು ವಿವರಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>tumakuru</category>
            <dc:creator>Suchethana D</dc:creator>
            <atom:link href="https://kannada.asianetnews.com/travel/bangalore-to-tumkur-bmtcs-great-gift-for-it-employees-101-km-bus-service-suc/articleshow-a7tqt9f"/>
        </item>
        <item>
            <title><![CDATA[ಆಂಧ್ರದಲ್ಲಿ 2 ಸಾವು ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೆ ಕೊರೋನಾ ಸಕ್ರೀಯ, ಈ ತಿಂಗಳು 32 ಪ್ರಕರಣ ಪತ್ತೆ!]]></title>
            <link>https://kannada.asianetnews.com/state/covid-scare-returns-karnataka-cases-rise-high-alert-in-pavagada-gdp/articleshow-a7z4qw6</link>
            <guid isPermaLink="true">https://kannada.asianetnews.com/state/covid-scare-returns-karnataka-cases-rise-high-alert-in-pavagada-gdp/articleshow-a7z4qw6</guid>
            <pubDate>Wed, 15 Jul 2026 11:13:05 +0530</pubDate>
            <description><![CDATA[ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ನಿಧಾನವಾಗಿ ಏರುತ್ತಿದ್ದು, ನೆರೆಯ ಆಂಧ್ರಪ್ರದೇಶದಲ್ಲಿ ಸಾವುಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆಯು ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲು ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jwr4dcc766esf26fne0c0wat,imgname-social-distancing--1--1748861628807.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಾಲ್ಕು ವರ್ಷಗಳ ಹಿಂದೆ ಇಡೀ ವಿಶ್ವವನ್ನೇ ನಲುಗಿಸಿ, ಲಕ್ಷಾಂತರ ಜೀವಗಳನ್ನು ಬಲಿಪಡೆದಿದ್ದ ಮಹಾಮಾರಿ ಕೊರೋನಾ (ಕೋವಿಡ್-19) ಮತ್ತೆ ನಿಧಾನವಾಗಿ ಆತಂಕ ಸೃಷ್ಟಿಸಲು ಆರಂಭಿಸಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ಜೊತೆಗೆ ಸಾವುಗಳು ವರದಿಯಾಗುತ್ತಿರುವುದರಿಂದ ದೇಶಾದ್ಯಂತ ಮತ್ತೆ ಕೋವಿಡ್ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ತೀವ್ರ ನಿಗಾ ವಹಿಸಲು ಆದೇಶಿಸಿದೆ.&lt;/p&gt;&lt;h2&gt;ರಾಜ್ಯದಲ್ಲಿ ನಿಧಾನಗತಿಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳು&lt;/h2&gt;&lt;p&gt;ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳು ನಿಧಾನಗತಿಯಲ್ಲಿ ತಲೆ ಎತ್ತುತ್ತಿವೆ. ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತಿದೆ. ಕಳೆದ ತಿಂಗಳು ರಾಜ್ಯದಲ್ಲಿ ಕೇವಲ 14 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ಚಾಲ್ತಿ ತಿಂಗಳಿನಲ್ಲಿ ಆ ಸಂಖ್ಯೆ ದಿಢೀರನೆ 32ಕ್ಕೆ ಏರಿಕೆಯಾಗಿದೆ. ಕೋವಿಡ್ ಲಕ್ಷಣಗಳಿರುವ ಸುಮಾರು 193 ಶಂಕಿತರನ್ನು ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಿದ್ದು, ಈ ಪೈಕಿ 32 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ರಾಜ್ಯದಲ್ಲಿ 32 ಸಕ್ರಿಯ ಪ್ರಕರಣಗಳು ದಾಖಲಾಗಿವೆ.&lt;/p&gt;&lt;h2&gt;ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕರೊನಾ ಅಟ್ಟಹಾಸ&lt;/h2&gt;&lt;p&gt;ಕರ್ನಾಟಕದ ನೆರೆರಾಜ್ಯವಾದ ಆಂಧ್ರಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಆಂಧ್ರದಲ್ಲಿ ಸದ್ಯ 8 ಸಕ್ರಿಯ ಪ್ರಕರಣಗಳಿದ್ದರೂ, ಈಗಾಗಲೇ ಕೋವಿಡ್ ಸೋಂಕಿಗೆ ಇಬ್ಬರು ಬಲಿಯಾಗಿರುವುದು ಇಡೀ ದಕ್ಷಿಣ ಭಾರತವನ್ನು ಎಚ್ಚರಗೊಳ್ಳುವಂತೆ ಮಾಡಿದೆ. ಈ ಸಾವಿನ ವರದಿಗಳ ಬೆನ್ನಲ್ಲೇ ಆಂಧ್ರದ ಗಡಿ ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ತುಮಕೂರಿನ ಪಾವಗಡಲ್ಲಿ ಚೆಕ್&zwnj;ಪೋಸ್ಟ್&zwnj;ಗಳ ನಿರ್ಮಾಣ ಮಾಡಲಾಗಿದೆ.&lt;/p&gt;&lt;h2&gt;ಒಡಿಶಾದ ಗಂಜಾಂ ಜಿಲ್ಲೆಯಲ್ಲೂ ಹೈ ಅಲರ್ಟ್!&lt;/h2&gt;&lt;p&gt;ಆಂಧ್ರಪ್ರದೇಶದಲ್ಲಿ ಕೋವಿಡ್ ಸಾವುಗಳು ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಒಡಿಶಾ ಸರ್ಕಾರವು, ಆಂಧ್ರದ ಗಡಿಗೆ ಹೊಂದಿಕೊಂಡಿರುವ ತನ್ನ ಗಂಜಾಂ ಜಿಲ್ಲೆಯನ್ನು ಕಟ್ಟೆಚ್ಚರದಲ್ಲಿರಿಸಿದೆ. ಒಡಿಶಾ ಆರೋಗ್ಯ ಆಡಳಿತ ಮಂಡಳಿಯು ಜಿಲ್ಲೆಗೆ ಸಮಗ್ರ ಸಿದ್ಧತೆ ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.&lt;/p&gt;&lt;p&gt;ಆಂಧ್ರಪ್ರದೇಶ ಮತ್ತು ಗಂಜಾಂ ನಡುವೆ ಪ್ರತಿದಿನ ಸಾವಿರಾರು ಜನರು ಉದ್ಯೋಗ ಹಾಗೂ ವ್ಯಾಪಾರಕ್ಕಾಗಿ ಪ್ರಯಾಣಿಸುವುದರಿಂದ, ವೈರಸ್ ತೀವ್ರವಾಗಿ ಹರಡುವ ಸಾಧ್ಯತೆಯ ಬಗ್ಗೆ ಆತಂಕಗಳು ಹೆಚ್ಚಾಗಿವೆ. ಆದಾಗ್ಯೂ, ಆರೋಗ್ಯ ಅಧಿಕಾರಿಗಳು ನಿವಾಸಿಗಳು ಭಯಭೀತರಾಗದಂತೆ ಒತ್ತು ನೀಡಿದ್ದು, ಈಗ ಕೈಗೊಂಡಿರುವ ಎಲ್ಲಾ ಕ್ರಮಗಳು ಕೇವಲ ಮುನ್ನೆಚ್ಚರಿಕೆಗಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಆರೋಗ್ಯ ಇಲಾಖೆಯಿಂದ ಹೊಸ ಗೈಡ್&zwnj;ಲೈನ್ಸ್ ಮತ್ತು ಮುನ್ನೆಚ್ಚರಿಕೆ&lt;/h2&gt;&lt;p&gt;ಕೋವಿಡ್ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರಮುಖ ಸೂಚನೆಗಳನ್ನು ನೀಡಿದೆ.&lt;/p&gt;&lt;p&gt;ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಮತ್ತು ಕೋವಿಡ್ ವಾರ್ಡ್&zwnj;ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸೂಚಿಸಲಾಗಿದೆ.&lt;/p&gt;&lt;p&gt;ಕೆಮ್ಮು, ಜ್ವರ, ಶೀತ ಅಥವಾ ಉಸಿರಾಟದ ತೊಂದರೆಯಂತಹ ಕೋವಿಡ್ ಗುಣಲಕ್ಷಣಗಳು ಕಂಡುಬಂದರೆ ತಕ್ಷಣವೇ ಕೋವಿಡ್ ಪರೀಕ್ಷೆ (Testing) ಮಾಡಿಸಿಕೊಳ್ಳಲು ನಾಗರಿಕರಿಗೆ ತಿಳಿಸಲಾಗಿದೆ.&lt;/p&gt;&lt;p&gt;ಹಳೇ ದಿನಗಳು ಮರುಕಳಿಸದಂತೆ ತಡೆಯಲು ಸಾರ್ವಜನಿಕರು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸ್ವಯಂ ಮುನ್ನೆಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸಲಹೆ ನೀಡಿದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/state/covid-scare-returns-karnataka-cases-rise-high-alert-in-pavagada-gdp/articleshow-a7z4qw6"/>
        </item>
        <item>
            <title><![CDATA[ಆಂಧ್ರದಲ್ಲಿ ಕೋವಿಡ್‌ಗೆ ಇಬ್ಬರು ಬಲಿ! ತುಮಕೂರು ಗಡಿಭಾಗ ಪಾವಗಡದಲ್ಲಿ ತೀವ್ರ ನಿಗಾ, 5 ಕಡೆ ಚೆಕ್‌ಪೋಸ್ಟ್ ಸ್ಥಾಪನೆ]]></title>
            <link>https://kannada.asianetnews.com/karnataka-districts/following-two-covid-deaths-in-andhra-pradesh-tumakuru-covid-alert-high-vigil-at-pavagada-border-gdp/articleshow-bqm682a</link>
            <guid isPermaLink="true">https://kannada.asianetnews.com/karnataka-districts/following-two-covid-deaths-in-andhra-pradesh-tumakuru-covid-alert-high-vigil-at-pavagada-border-gdp/articleshow-bqm682a</guid>
            <pubDate>Wed, 15 Jul 2026 10:29:54 +0530</pubDate>
            <description><![CDATA[ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೋವಿಡ್-19 ಸಾವುಗಳು ವರದಿಯಾದ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಡಿಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆಂಧ್ರದಿಂದ ಬರುವವರನ್ನು ತಪಾಸಣೆ ಮಾಡಲು ರಾಜವಂತಿ, ನಾಗಲಮಡಿಕೆ ಸೇರಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ಕೋವಿಡ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ, ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k2cg5tbhr35nv6c3m30j7g2j,imgname-xfg-covid-virus-1754913761649.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೊರೋನಾ ಸೋಂಕಿಗೆ (ಕೋವಿಡ್&zwnj;-19) ಇಬ್ಬರು ಬಲಿಯಾಗಿರುವ ಬೆನ್ನಲ್ಲೇ, ಆಂಧ್ರಪ್ರದೇಶದೊಂದಿಗೆ ಸುದೀರ್ಘ ಗಡಿಯನ್ನು ಹಂಚಿಕೊಂಡಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಗಡಿಭಾಗದಲ್ಲಿ ಕೋವಿಡ್ ಹರಡದಂತೆ ತಡೆಯಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜಂಟಿಯಾಗಿ ಹೈ ಅಲರ್ಟ್ ಘೋಷಿಸಿದ್ದು, ಗಡಿ ದಾಟಿ ಬರುವವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.&lt;/p&gt;&lt;h2&gt;ಆಂಧ್ರ ಸಂಪರ್ಕಿಸುವ 5 ಪ್ರಮುಖ ಕಡೆ ತಪಾಸಣಾ ಕೇಂದ್ರ ಸ್ಥಾಪನೆ&lt;/h2&gt;&lt;p&gt;ಆಂಧ್ರಪ್ರದೇಶದಿಂದ ಪಾವಗಡ ತಾಲೂಕಿಗೆ ಬರುವ ಸಾರ್ವಜನಿಕರು ಹಾಗೂ ವಾಹನಗಳ ತಪಾಸಣೆಗಾಗಿ ಗಡಿಭಾಗದ ಐದು ಆಯಕಟ್ಟಿನ ಸ್ಥಳಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಕೋವಿಡ್ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜವಂತಿ, ನಾಗಲಮಡಿಕೆ, ಅರಸೀಕೆರೆ, ಮತ್ತು ಟಿ.ಎನ್. ಪೇಟೆ ಸೇರಿದಂತೆ ಒಟ್ಟು ಐದು ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್&zwnj;ಪೋಸ್ಟ್ ಕೇಂದ್ರಗಳನ್ನು ತೆರೆಯಲಾಗಿದೆ. ಈ ಎಲ್ಲಾ ಐದು ಕೇಂದ್ರಗಳಲ್ಲಿ ಅಗತ್ಯ ಆರೋಗ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ.&lt;/p&gt;&lt;h2&gt;ಪಾವಗಡ ತಹಶೀಲ್ದಾರ್ ಕಟ್ಟುನಿಟ್ಟಿನ ಆದೇಶ&lt;/h2&gt;&lt;p&gt;ಗಡಿಭಾಗದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಬಾರದು ಎಂದು ಪಾವಗಡ ತಹಶೀಲ್ದಾರ್ ಅವರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆಂಧ್ರಪ್ರದೇಶದಿಂದ ಬರುವವರ ಮೇಲೆ ತೀವ್ರ ನಿಗಾ ಇಡಲು ಮತ್ತು ಗಡಿ ಗ್ರಾಮಗಳಲ್ಲಿ ಜನರಿಗೆ ಕೋವಿಡ್ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಪಿಡಿಒಗಳಿಗೆ ಆದೇಶ ಹೊರಡಿಸಲಾಗಿದೆ.&lt;/p&gt;&lt;h2&gt;ಜಿಲ್ಲಾಧಿಕಾರಿಗಳ ತುರ್ತು ಸಭೆಯ ಬೆನ್ನಲ್ಲೇ ಆ್ಯಕ್ಷನ್&lt;/h2&gt;&lt;p&gt;ನೆರೆರಾಜ್ಯ ಆಂಧ್ರದಲ್ಲಿ ಕೋವಿಡ್ ನಿಂದ ಸಾವು ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ತುಮಕೂರು ಜಿಲ್ಲಾಧಿಕಾರಿಗಳು ನಿನ್ನೆಯಷ್ಟೇ ಜಿಲ್ಲೆಯ ಎಲ್ಲಾ ತಹಶೀಲ್ದಾರ್&zwnj;ಗಳು ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ತುರ್ತು ಸಭೆ ನಡೆಸಿದ್ದರು. ಗಡಿಭಾಗದ ತಾಲೂಕುಗಳಲ್ಲಿ ತಕ್ಷಣವೇ ರಕ್ಷಣಾತ್ಮಕ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನೀಡಿದ್ದ ಕಟ್ಟುನಿಟ್ಟಿನ ಸೂಚನೆಯ ಬೆನ್ನಲ್ಲೇ, ಪಾವಗಡ ತಾಲೂಕು ಆಡಳಿತ ಸಕಲ ಸಿದ್ಧತೆಗಳೊಂದಿಗೆ ಕಣಕ್ಕಿಳಿದಿದೆ. ಸದ್ಯಕ್ಕೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲದಿದ್ದರೂ, ಗಡಿ ದಾಟುವಾಗ ತಪಾಸಣೆಗೆ ಸಹಕರಿಸಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/following-two-covid-deaths-in-andhra-pradesh-tumakuru-covid-alert-high-vigil-at-pavagada-border-gdp/articleshow-bqm682a"/>
        </item>
        <item>
            <title><![CDATA[ಶಾಸಕ ಸುರೇಶ್ ಗೌಡ ಪುತ್ರಿಯಿಂದ ಪಿಎಸ್‌ಐಗೆ ಕಪಾಳಮೋಕ್ಷ, ಮಗಳ ತಪ್ಪಿಗೆ ಕ್ಷಮೆಗೆ ಮುಂದಾದ ಅಪ್ಪ!]]></title>
            <link>https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr</link>
            <guid isPermaLink="true">https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr</guid>
            <pubDate>Fri, 14 Aug 2026 12:25:56 +0530</pubDate>
            <description><![CDATA[ತುಮಕೂರು ಶಾಸಕ ಬಿ. ಸುರೇಶ್&zwnj;ಗೌಡರ ಪುತ್ರಿ ಐಶ್ವರ್ಯ, ದೇವಸ್ಥಾನದಲ್ಲಿ ದರ್ಶನ ವಿಳಂಬವಾದ ಕಾರಣಕ್ಕೆ ಮಹಿಳಾ ಪಿಎಸ್&zwnj;ಐ ಜೊತೆ ವಾಗ್ವಾದ ನಡೆಸಿ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಸಕರು ಪ್ರತಿಕ್ರಿಯಿಸಿದ್ದು, ಮಗಳದ್ದು ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzgpffnrrkz5115c5swxwp9,imgname-bjp-mla-suresh-gowda-daughter-1786690354677.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್&zwnj;ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಅವರ ಪತ್ನಿ ಐಶ್ವರ್ಯ ಅವರು ದೇವಸ್ಥಾನದಲ್ಲಿ ದರ್ಶನ ತಡವಾದ ವಿಚಾರವಾಗಿ ಅಹಂಕಾರ ತೋರಿಸಿ ಮಹಿಳಾ ಸಬ್ ಇನ್ಸ್&zwnj;ಪೆಕ್ಟರ್ (PSI) ಅವರೊಂದಿಗೆ ವಾಗ್ವಾದ ನಡೆಸಿ, ಕಪಾಳಮೋಕ್ಷ ಮಾಡಿರುವ ಘಟನೆ ಆಗಸ್ಟ್ 12ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ನಡೆದಿದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಶಾಸಕ ಸುರೇಶ್&zwnj;ಗೌಡ ಅವರು ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ನನ್ನ ಮಗಳ ತಪ್ಪಿದ್ದರೆ ನಾನು ಕ್ಷಮೆಯಾಚಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಘಟನೆಯ ಹಿನ್ನೆಲೆ:&lt;/h2&gt;&lt;p&gt;ಭೀಮನ ಅಮಾವಾಸ್ಯೆಯ ಶುಭ ಸಂದರ್ಭದಲ್ಲಿ ಶಾಸಕ ಸುರೇಶ್&zwnj;ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಪತ್ನಿ ಐಶ್ವರ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಂಡ್ಯ ಜಿಲ್ಲೆಯ ಶೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದರು. ತನ್ನ ಪ್ರಭಾವ ಬಳಸಿ ದೇಗುಲಕ್ಕೆ ಬಂದಿದ್ದ ಐಶ್ವರ್ಯಾ ವಿಐಪಿ (VIP) ಸಾಲಿನಲ್ಲಿ ನಿಂತು ದರ್ಶನಕ್ಕೆ ಕಾಯುತ್ತಿದ್ದರು. ದೇಗುಲದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಮಹಿಳಾ ಸಬ್ ಇನ್ಸ್&zwnj;ಪೆಕ್ಟರ್ ಸುನೀತಾ ಪಾಟೀಲ್ ಕೇಳಿದಾಗ ಆ ರೀತಿಯ ನಿಯಮ ಇಲ್ಲ ಎಂದಿದ್ದಾರೆ. ಇದೇ ವೇಳೆ ಮಹಿಳಾ ಪೇದೆಯೊಬ್ಬರು ಕೆಲಸ ನಿಮಿತ್ತ ಗರ್ಭಗುಡಿಯ ಒಳಗೆ ಹೋದರು. ಆ ಸಮಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ನಾನು ಎಂಎಲ್&zwnj;ಎ ಮಗಳು ಎಸಿಪಿ ಪತ್ನಿ ಎಂದು ದರ್ಪ ತೋರಿದ್ದಾರೆನ್ನಲಾಗಿದೆ.&lt;/p&gt;&lt;p&gt;ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್&zwnj;ಪೆಕ್ಟರ್ (CI) ಅವರು ಶಾಸಕರ ಪುತ್ರಿಯನ್ನು ಗುರುತಿಸಿ, ಅವರನ್ನು ದರ್ಶನಕ್ಕೆ ಒಳಗೆ ಬಿಟ್ಟಿದ್ದಾರೆ. ಈ ವೇಳೆ ಐಶ್ವರ್ಯ ಅವರು, &quot;ನನ್ನನ್ನು ಏಕೆ ತಡೆದಿರಿ?&quot; ಎಂದು ಸಬ್ ಇನ್ಸ್&zwnj;ಪೆಕ್ಟರ್ ಅವರನ್ನು ಮತ್ತೆ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವಾಗ್ವಾದದ ನಡುವೆ ಶಾಸಕರ ಪುತ್ರಿ ಐಶ್ವರ್ಯ ಅವರು ಸಬ್ ಇನ್ಸ್&zwnj;ಪೆಕ್ಟರ್ ಅವರ ಕಪಾಳಕ್ಕೆ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.&lt;/p&gt;&lt;h2&gt;ಮಗಳು ಮಾಡಿದ ತಪ್ಪಿಗೆ ಕ್ಷಮೆ ಕೇಳೋದಾಗಿ ಹೇಳಿದ ಅಪ್ಪ&lt;/h2&gt;&lt;p&gt;ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಿ. ಸುರೇಶ್&zwnj;ಗೌಡ ಅವರು ಕಳಕಳಿ ಮತ್ತು ಹೊಣೆಗಾರಿಕೆಯ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;&quot;ದೇವಸ್ಥಾನದಲ್ಲಿ ಗಲಾಟೆಯಾಗಿದ್ದು ನಿಜ ಎಂದು ನನ್ನ ಮಗಳು ಒಪ್ಪಿಕೊಂಡಿದ್ದಾಳೆ. ದೇವಸ್ಥಾನಕ್ಕೆ ಪ್ರತಿಯೊಬ್ಬರೂ ಮನಸ್ಸಿನ ಶಾಂತಿಗಾಗಿ ಹೋಗುತ್ತಾರೆ, ಅಲ್ಲಿ ಇಂತಹ ಗಲಾಟೆಗಳು ನಡೆಯಬಾರದಿತ್ತು. ಮಾಧ್ಯಮಗಳಲ್ಲಿ ನನ್ನ ಮಗಳು ಕಪಾಳಕ್ಕೆ ಹೊಡೆದಿದ್ದಾಳೆ ಎಂಬ ಸುದ್ದಿಗಳನ್ನು ನೋಡಿದ್ದೇನೆ. ಈ ಘಟನೆಯಲ್ಲಿ ಪರಿಶೀಲನೆ ನಡೆಸಿ, ಒಂದು ವೇಳೆ ನನ್ನ ಮಗಳದ್ದೇ ತಪ್ಪು ಅಂತ ಸಾಬೀತಾದರೆ, ನಾನು ಬಹಿರಂಗವಾಗಿ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದಿದ್ದಾರೆ.&lt;/p&gt;&lt;h2&gt;ಪ್ರಭಾವಿಗಳ ಮಕ್ಕಳಿಗೇಕೆ ಈ ನಿಯಮ&lt;/h2&gt;&lt;p&gt;ಇನ್ನು ಘಟನೆ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಬಿಎನ್&zwnj;ಎಸ್&zwnj;ನ ಸೆಕ್ಷನ್&zwnj; 132, 115(2), 352 ಮತ್ತು 351(2) ಅಡಿಯಲ್ಲಿ ಎಫ್&zwnj;ಐಆರ್&zwnj; ದಾಖಲಾಗಿದೆ. ಇದೇ ವೇಳೆ, ಮಹಿಳಾ ಪಿಎಸ್&zwnj;ಐ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಶಾಸಕರ ಪುತ್ರಿಯನ್ನು ಪಿಎಸ್&zwnj;ಐ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಈ ಪ್ರತಿದೂರು ನೀಡಲಾಗಿದೆಯಂತೆ.&lt;/p&gt;&lt;p&gt;ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಂಎಲ್&zwnj;ಎಗಳು, ಡಿವೈಎಸ್&zwnj;ಪಿ ಗಳು ಬಂದಾಗ ದೇಗುಲದಲ್ಲಿ ವಿಶೇಷ ದರ್ಶನ, ಗರ್ಭಗುಡಿ ಸಮೀಪ ಬಿಡುವುದು ಶಿಷ್ಟಾಚಾರ. ಪ್ರಭಾವಿಗಳ ಮಕ್ಕಳಿಗೆ ಏಕೆ ಎಂದು ಚರ್ಚೆ ಆರಂಭವಾಗಿದೆ.&lt;/p&gt;]]></content:encoded>
            <category>tumakuru</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr"/>
        </item>
        <item>
            <title><![CDATA[Yettinahole water: 10 ವರ್ಷಗಳ ಬಳಿಕ ಕೊನೆಗೂ ತುಮಕೂರಿಗೆ ಬಂತು ಎತ್ತಿನಹೊಳೆ ನೀರು!]]></title>
            <link>https://kannada.asianetnews.com/karnataka-districts/yettinahole-supplying-water-to-tumakuru-by-septement-rav/articleshow-d32yrxu</link>
            <guid isPermaLink="true">https://kannada.asianetnews.com/karnataka-districts/yettinahole-supplying-water-to-tumakuru-by-septement-rav/articleshow-d32yrxu</guid>
            <pubDate>Thu, 16 Jul 2026 07:14:07 +0530</pubDate>
            <description><![CDATA[ದಶಕದ ಬಳಿಕ ಪೂರ್ಣಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆ, ಪದೇ ಪದೇ ಪೈಪ್&zwnj;ಲೈನ್ ಸೋರಿಕೆಯಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಈ ಸೋರಿಕೆಯಿಂದಾದ ನಷ್ಟ ಹಾಗೂ ಇದನ್ನು ತಡೆಯಲು ಅಧಿಕಾರಿಗಳು ರೂಪಿಸಿರುವ ಬಟರ್&zwnj;ಫ್ಲೈ ವಾಲ್ವ್ ಮತ್ತು ಆಲ್ಟ್ರಾಸೋನಿಕ್ ಟೆಸ್ಟ್&zwnj;ನಂತಹ ಅತ್ಯಾಧುನಿಕ ಪರಿಹಾರಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxm9bhmk5wtqmy62q8hd3jww,imgname-----------------------2026-07-16t071042.747-1784166074002.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಕಲೇಶಪುರ (ಜು.16): &lt;/strong&gt;ಹೌದು 2014ರಲ್ಲಿ ಹಾಸನ, ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಟಿ.ಜಿ ಹಳ್ಳಿ ಜಲಾಶಯ, ಹೆಸರುಘಟ್ಟ ಜಲಾಶಯ,ದೇವನಹಳ್ಳಿ ಕೈಗಾರಿಕ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ಆರಂಭಗೊಂಡಿತು.&amp;nbsp;&lt;/p&gt;&lt;h2&gt;ಹತ್ತು ವರ್ಷಗಳ ಬಳಿಕ ತುಮಕೂರಿಗೆ ಬಂತು ಎತ್ತಿನಹೊಳೆ ನೀರು&lt;/h2&gt;&lt;p&gt;10 ವರ್ಷಗಳ ಬಳಿಕ ಅಂದರೆ 2024ರಲ್ಲಿ ಉದ್ಘಾಟನೆಗೊಂಡರೂ ಅರಸೀಕೆರೆ ಹಾಗೂ ತುಮಕೂರು ಸಮೀಪ ತಲಾ ಮೂರು ಕಿ.ಮೀ. ಕಾಮಗಾರಿ ವಿವಿಧ ಕಾರಣಗಳಿಂದ ಸಂಪೂರ್ಣಗೊಳ್ಳದ ಕಾರಣ ಎತ್ತಿನಹೊಳೆಯಿಂದ ಮೇಲೆತ್ತುವ ನೀರನ್ನು ಕಾಗೆ ಹಳ್ಳದ ಮೂಲಕ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತಿತ್ತು. ಸದ್ಯ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರ ಪ್ರಯತ್ನದ ಫಲವಾಗಿ ಅರಣ್ಯ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವ ಮೂಲಕ ಅರಸೀಕೆರೆ ತಾಲೂಕಿನ ಐದಳ್ಳ ಕಾವಲಿನ 2.5 ಕಿ.ಮೀ. ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದರೆ, ಬಾಕಿ ಇರುವ ಐದುನೂರು ಮೀಟರ್&zwnj;ನಲ್ಲಿ ರೈತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಜಮೀನಿನ ಪರಿಹಾರದ ವಿಚಾರ ಸದ್ಯ ಸರ್ಕಾರದ ಮುಂದಿದ್ದು ಸಮಸ್ಯೆಗೆ ಪರಿಹಾರ ದೊರಕಿದ ಕೇವಲ ಒಂದು ತಿಂಗಳಿನಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಜುಲೈ ತಿಂಗಳ ಅಂತ್ಯಕ್ಕೆ ಪರಿಹಾರ ದೊರೆಯಲಿದೆ ಎಂಬ ಆಶಾಭಾವನೆ ಅಧಿಕಾರಿಗಳಲ್ಲಿದೆ ಇನ್ನೂ ತುಮಕೂರು ಜಿಲ್ಲೆಯಲ್ಲಿ ಬಾಕಿ ಇದ್ದ ಮೂರು ಕಿ.ಮೀ. ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ನೀರು ಹರಿಯಲು ಕಾಲುವೆ ಸಜ್ಜಾಗಿದೆ.&lt;/p&gt;&lt;p&gt;ಸದ್ಯ ವಾಣಿವಿಲಾಸ ಸಾಗರದ ಬದಲಾಗಿ ಯೋಜನೆಯ ಉದ್ದೇಶಿತ ಪ್ರದೇಶಗಳಿಗೆ ನೀರು ಹರಿಸುವುದಾದರೆ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಹರಿಸ ಬಹುದಾಗಿದ್ದು ಕಾಲುವೆಯ ನೀರು ಹರಿಯುವ ಸಾಮರ್ಥ್ಯ ಪ್ರತಿ ಸೆಂಕೆಡ್&zwnj;ಗೆ ಮೂರು ಸಾವಿರ ಕ್ಯುಸೆಕ್&zwnj; ಆಗಿದ್ದು ಕಳೆದ ಮೂರು ವರ್ಷಗಳಲ್ಲಿ ನಾಲ್ಕರಿಂದ ಐದು ಬಾರಿ ಮಾತ್ರ ಇಷ್ಟು ಪ್ರಮಾಣದ ನೀರು ಹರಿಸಲಾಗಿದೆ. ಉತ್ತಮ ಮಳೆಯಾದರೆ ೧೫೦೦ ರಿಂದ ೨೦೦೦ ಕ್ಯುಸೆಕ್&zwnj; ನೀರು ಹರಿಯುವುದು ಸಾಮಾನ್ಯವಾಗಲಿದೆ ಎಂಬುದು ನಿಗಮದ ಅಧಿಕಾರಿಗಳ ಮಾತು.&lt;/p&gt;&lt;h3&gt;ಸಮಸ್ಯೆ ಏನು?&lt;/h3&gt;&lt;p&gt;ತಾಲೂಕಿನ ಎತ್ತಿನಹೊಳೆ ಅಚ್ಚುಕಟ್ಟು ಪ್ರದೇಶದಿಂದ ತಾಲೂಕಿನ ಹೆಬ್ಬನಹಳ್ಳಿವರಗೆ ಒಟ್ಟು 126 ಕಿ.ಮೀ. ಪೈಪ್&zwnj;ಲೈನ್ ಮೂಲಕ ನೀರು ಹರಿದು ನಂತರ ತೆರೆದ ಕಾಲುವೆ ಮೂಲಕ ನೀರು ಹೊರಹೋಗಲಿದೆ. ಆದರೆ ಪೈಪ್&zwnj;ಲೈನ್ ಪದೇ ಪದೇ ತೆರೆದುಕೊಳ್ಳುವುದು ಎಂಜಿನಿಯರ್&zwnj;ಗಳಿಗೆ ಸಮಸ್ಯೆ ಸೃಷ್ಟಿಸಿದೆ. 2024ರಲ್ಲಿ ಪ್ರಾಯೋಗಿಕ ನೀರು ಹರಿವಿಕೆ ಚಾಲನೆ ನೀಡಿದ ವೇಳೆ ತಾಲೂಕಿನ ಹಾರ್ಲೇ ಕೂಡಿಗೆ, ದೇಖ್ಲಾ, ಕಾಡುಮನೆ ಹಾಗೂ ಹೆಬ್ಬಸಾಲೆ ಗ್ರಾಮಗಳ ಸಮೀಪ ಪೈಪ್&zwnj;ಲೈನ್ ಮ್ಯಾನ್ ಹೋಲು ಹಾಗೂ ಕೀ ಹೋಲುಗಳು ತೆರೆದುಕೊಂಡು ಭಾರಿ ಸಮಸ್ಯೆ ಸೃಷ್ಟಿಸಿದ್ದರಿಂದ ಸಮೀಪದ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಿಗೆ ನೀರು ನುಗ್ಗಿ ಬಾರಿ ನಷ್ಟ ಸಂಭವಿಸಿತ್ತು. ಇದರಿಂದ ಎಚ್ಚೆತ್ತಿದ್ದ ಅಧಿಕಾರಿಗಳು ಸಂಪೂರ್ಣ ಪೈಪ್&zwnj;ಲೈನ್ ಪರಿಶೀಲನೆ ನಡೆಸುವ ಮೂಲಕ ಮ್ಯಾನ್ ಹೋಲ್&zwnj; ಹಾಗೂ ಕೀ ಹೋಲ್&zwnj;ಗಳನ್ನು ಭದ್ರಪಡಿಸಿದ್ದಾರೆ.&amp;nbsp;&lt;/p&gt;&lt;p&gt;ಪರಿಶೀಲನೆ ನಂತರ ಇದುವರೆಗೆ ಮ್ಯಾನ್&zwnj;ಹೋಲ್&zwnj; ಹಾಗೂ ಕೀ ಹೋಲುಗಳು ತೆರೆದುಕೊಂಡು ಉದಾಹರಣೆ ಕಂಡುಬಂದಿಲ್ಲ. ಆದರೆ, ೨೦೨೫ರ ಜುಲೈ ತಿಂಗಳಿನಲ್ಲಿ ಬೈಕೆರೆ ಗ್ರಾಮ ಸಮೀಪ ಪೈಪ್&zwnj;ಗಳ ಜಾಯಿಂಟ್ ವಿಫಲವಾಗಿ ನೀರು ಸೋರಿಕೆಯಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿತ್ತು. ಇದಾದ ನಂತರ 2024 ಜುಲೈ 10ರಂದು ತಾಲೂಕಿನ ಹಲುಸುಲಿಗೆ ಗ್ರಾಮ ಸಮೀಪ ಮತ್ತೆ ಪೈಪ್&zwnj;ಗಳ ಮದ್ಯದ ಜಾಯಿಂಟ್ ವಿಫಲವಾಗಿ ಮತ್ತೆ ನೀರು ಹೊರಹರಿದಿದೆ. ಇದರಿಂದ ಎಚ್ಚೆತ್ತಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಅಧಿಕಾರಿಗಳ ತಂಡ ಸಂಪೂರ್ಣ ಯೋಜನೆಯ ೧೨೬ ಕಿ. ಮೀ. ಉದ್ದದ ಪೈಪ್ ಲೈನ್ ಪರೀಕ್ಷಿಸಿ ಬಟರ್ ಪ್ಲೇ ವಾಲ್ಟ್ ಆಳವಡಿಸಲು ಚಿಂತನೆ ನಡೆಸಿದ್ದು ಇದಕ್ಕಾಗಿ ಸುಮಾರು ೮ ಕೋಟಿ ರು. ಅನುದಾನ ಬೇಕಾಗುತ್ತದೆ ಎನ್ನಲಾಗುತ್ತಿದೆ.&lt;/p&gt;&lt;p&gt;&lt;strong&gt;ಆಲ್ಟ್ರಸ್ಕೋಪಿಕ್ ಟೆಸ್ಟ್:&lt;/strong&gt;&lt;/p&gt;&lt;p&gt;ಸದ್ಯ ಎತ್ತಿನಹೊಳೆಯ ಎಂಟು ಚೆಕ್ ಡ್ಯಾಮ್&zwnj;ಗಳಲ್ಲಿ ಎರಡು ಸಾವಿರದಿಂದ ೧೬ ಸಾವಿರ ಎಚ್.ಪಿ ಸಾಮರ್ಥ್ಯದ ೨೦ಕ್ಕೂ ಅಧಿಕ ಮೋಟರ್&zwnj;ಗಳಿದ್ದು ಪ್ರತಿ ಮೋಟರ್&zwnj;ನಿಂದ ಕನಿಷ್ಠ ೧೦೦ ಕ್ಯುಸೆಕ್&zwnj;ನಿಂದ ಒಂದು ಸಾವಿರ ಕ್ಯುಸೆಕ್&zwnj; ನೀರು ಮೇಲೆತ್ತುವ ಸಾಮರ್ಥ್ಯ ಹೊಂದಿವೆ ಏಕಕಾಲಕ್ಕೆ ನಾಲ್ಕಾರು ಮೋಟರುಗಳು ಕಾರ್ಯನಿರ್ವಯಿಸಿದರೆ ಕನಿಷ್ಠ ೧೫೦೦ ಕ್ಯುಸೆಕ್&zwnj; ನೀರು ಪೈಪ್&zwnj;ಗಳ ಮೂಲಕ ಹರಿಯಲಿದೆ. ಇಷ್ಟೊಂದು ನೀರು ಹರಿಯುವ ವೇಳೆ ಪೈಪ್&zwnj;ಗಳಲ್ಲಿ ಸೋರಿಕೆ ಕಂಡು ಬಂದರೆ ಪತ್ತೆ ಮಾಡಲು ಅತ್ಯಾಧುನಿಕ ಆಲ್ಟ್ರಸ್ಕೋಪಿಕ್ ಟೆಸ್ಟ್ ಆಳವಡಿಸಲಾಗುತ್ತಿದ್ದು. ನೀರು ಸೋರಿಕೆ ಪತ್ತೆಯಾದ ತಕ್ಷಣ ಬಟರ್&zwnj;ಪ್ಲೇ ವಾಲ್ಟ್ ಮೂಲಕ ದುರಸ್ತಿ ನಡೆಸಲು ಯೋಜನೆ ರೂಪಿಸಲಾಗಿದೆ. ಈ ತಂತ್ರಜ್ಞಾನದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುವುದು ಹಾಗೂ ಅನವಶ್ಯಕವಾಗಿ ಹಣ ಹಾಗೂ ಶ್ರಮ ವ್ಯರ್ಥವಾಗುವುದು ತಪ್ಪಲಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;\B \B&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/yettinahole-supplying-water-to-tumakuru-by-septement-rav/articleshow-d32yrxu"/>
        </item>
        <item>
            <title><![CDATA[1400 ರೈತರಿಗೆ ಹಸು ಖರೀದಿಸಲು 2 ಲಕ್ಷ ರು. ಸಾಲ; ಹಾಲು ಒಕ್ಕೂಟದಿಂದ ಬ್ಯಾಂಕ್‌ಗೆ ಮನವಿ]]></title>
            <link>https://kannada.asianetnews.com/karnataka-districts/1400-farmers-to-get-rs-2-lakh-loan-to-buy-cows-tumakuru-milk-union-appeals-to-canara-bank-mrq/articleshow-d3vcbkx</link>
            <guid isPermaLink="true">https://kannada.asianetnews.com/karnataka-districts/1400-farmers-to-get-rs-2-lakh-loan-to-buy-cows-tumakuru-milk-union-appeals-to-canara-bank-mrq/articleshow-d3vcbkx</guid>
            <pubDate>Sun, 12 Jul 2026 07:42:40 +0530</pubDate>
            <description><![CDATA[&lt;p&gt;ಸುಮಾರು 1400 ಹೈನುಗಾರರಿಗೆ ಹಸುಗಳನ್ನು ಖರೀದಿಸಲು ತಲಾ 2 ಲಕ್ಷ ರು. ಸಾಲ ನೀಡುವಂತೆ ತುಮಕೂರು ಹಾಲು ಒಕ್ಕೂಟವು ಕೆನರಾ ಬ್ಯಾಂಕ್&zwnj;ಗೆ ಮನವಿ ಮಾಡಿದೆ. ಈ ಸಾಲವನ್ನು ಸದ್ಬಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡುವುದರ ಮಹತ್ವವನ್ನು ತಿಳಿಸಲಾಗಿದ್ದು, ಇದರಿಂದ ರೈತರ ಅಭಿವೃದ್ಧಿ ಸಾಧ್ಯ ಎಂದು ಒತ್ತಿಹೇಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxa17k4da2j9rbnk3skb6avg,imgname-shira--1--1783822011533.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; ಶಿರಾನೂರು ಹೈನುಗಾರರಿಗೆ ಹಸುಗಳನ್ನು ಖರೀದಿಸಲು ಸುಮಾರು 14 ರೈತರಿಗೆ ಕನಿಷ್ಠ 2 ಲಕ್ಷ ರು. ಸಾಲ ನೀಡುವಂತೆ ಕೆನರಾ ಬ್ಯಾಂಕ್&zwnj;ಗೆ ಬೇಡಿಕೆ ಇಡಲಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.&lt;/p&gt;&lt;p&gt;ಅವರು ನಗರದ ನಂದಿನಿ ಕ್ಷೀರ ಭವನದಲ್ಲಿ ತುಮಕೂರು ಹಾಲು ಒಕ್ಕೂಟ, ಕೆನರಾ ಬ್ಯಾಂಕ್ ಜೊತೆ ರೈತರಿಗೆ ಸಾಲ ವಿತರಣೆಗೆ ರೈತ ಸಂಪರ್ಕ ಸಭೆ ಉದ್ಘಾಟಿಸಿದರು. ಪ್ರಸ್ತುತ ಬ್ಯಾಂಕ್ ಪ್ರತಿ ಸಂಘಕ್ಕೆ 10 ರಿಂದ 15 ಲಕ್ಷ ರು.ಗಳ ಸಾಲವನ್ನು ನೀಡಲು ತಯಾರಿವೆ. ಇಂದು ಉತ್ತಮ ಹಸುವಿನ ಬೆಲೆ 70 ಸಾವಿರದಿಂದ 1 ಲಕ್ಷದವರೆಗೆ ಇರುತ್ತದೆ. ಈ ಸಾಲದ ಮೊತ್ತದಲ್ಲಿ ಎರಡು ಹಸುಗಳನ್ನು ಖರೀದಿಸಲು ರೈತರಿಗೆ ಅನುಕೂಲ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ.&amp;nbsp;&lt;/p&gt;&lt;h2&gt;&lt;strong&gt;ಪ್ರಾಮಾಣಿಕ ಮರುಪಾವತಿ&lt;/strong&gt;&lt;/h2&gt;&lt;p&gt;ಕೆಲವು ರೈತರು ಸಾಲ ಮಂಜೂರಾದ ತಕ್ಷಣ, ಹೊಸ ಹಸು ಖರೀದಿಸುವ ಬದಲು ಮನೆಯಲ್ಲಿರುವ ಹಳೆಯ ಹಸುಗಳನ್ನೇ ತೋರಿಸಿ ವಿಮೆ ಮಾಡಿಸಿ, ಬಂದ ಹಣವನ್ನು ಮಗಳ ಮದುವೆ, ಶಿಕ್ಷಣ ಅಥವಾ ಇತರ ವೈಯಕ್ತಿಕ ಖರ್ಚುಗಳಿಗೆ ಬಳಸುವ ಪ್ರವೃತ್ತಿ ಇದೆ. ಇದು ಅತ್ಯಂತ ತಪ್ಪು. ಇದರಿಂದ ಸಾಲ ತೀರಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹತ್ತು ಜನ ಸೇರಿ ಈ ರೀತಿ ಮಾಡಿದರೆ, ಸೊಸೈಟಿಯ ಮೇಲಿನ ನಂಬಿಕೆ ಕಳೆದುಹೋಗಿ ಭವಿಷ್ಯದಲ್ಲಿ ನಿಜವಾದ ಅರ್ಹ ರೈತನಿಗೂ ಸಾಲ ಸಿಗದಂತಾಗುತ್ತದೆ. ಈ ಬ್ಯಾಂಕ್ ಸಾಲದ ಸದುಪಯೋಗ ಹಾಗೂ ಪ್ರಾಮಾಣಿಕ ಮರುಪಾವತಿಯಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯವಾಗಿದೆ.&lt;/p&gt;&lt;p&gt;ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಗಂಗೇಶ್ ಗುಂಜನ್ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ), ಹೈನುಗಾರಿಕೆ, ಹಾಗೂ ಸ್ವಸಹಾಯ ಸಂಘಗಳ ಮೂಲಕ ವಿವಿಧ ಕೃಷಿ ಸಾಲ ಯೋಜನೆಗಳನ್ನು ಜಾಮೀನು ರಹಿತವಾಗಿ ಬ್ಯಾಂಕ್ ಒದಗಿಸುತ್ತಿದೆ ಎಂದರು.&lt;/p&gt;&lt;p&gt;ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್ ಮಾತನಾಡಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವಲಯ ಮ್ಯಾನೇಜರ್ ಅಭಿನವ್, ಸೀನಿಯರ್ ಮ್ಯಾನೇಜರ್ ರಮಾನಾಥ್ ರಾಮನ್, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಹರೀಶ್ ಕುಮಾರ್, ಗಿರೀಶ್, ಬಾಲಾಜಿ, ಪುಷ್ಪಲಕ್ಷ್ಮೀ, ಸುಬೇಂದ್ರ ,ಪ್ರವೀಣ್, ಬಾಬಾ ಫಕೃದ್ಧಿನ್ ಪಿ. ಎಂ., ಹನುಮಂತರಾಯ ಇತರರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನವೀಕರಣಗೊಂಡ ರಾಜ್ಯದ 4 ರೈಲು ನಿಲ್ದಾಣಗಳು ಜುಲೈ 17ರಂದು ಲೋಕಾರ್ಪಣೆ; ಅತ್ಯಾಧುನಿಕ ಸೌಲಭ್ಯ&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/1400-farmers-to-get-rs-2-lakh-loan-to-buy-cows-tumakuru-milk-union-appeals-to-canara-bank-mrq/articleshow-d3vcbkx"/>
        </item>
        <item>
            <title><![CDATA[ಎರಡು ಪ್ರತ್ಯೇಕ ರೈಲು ಮಾರ್ಗದ ಕಾಮಗಾರಿಗೆ ವೇಗ; ಮಧುಗಿರಿ–ಶಿರಾ–ಪಾವಗಡ ಜನರ ಕಾಯುವಿಕೆ ಅಂತ್ಯ!]]></title>
            <link>https://kannada.asianetnews.com/gallery/karnataka-districts/minister-v-somanna-gives-an-important-update-on-progress-of-the-new-separate-indian-railways-lines-mrq-gbbsp13</link>
            <guid isPermaLink="true">https://kannada.asianetnews.com/gallery/karnataka-districts/minister-v-somanna-gives-an-important-update-on-progress-of-the-new-separate-indian-railways-lines-mrq-gbbsp13</guid>
            <pubDate>Tue, 14 Jul 2026 12:19:41 +0530</pubDate>
            <description><![CDATA[&lt;p&gt;ಮಧುಗಿರಿ, ಶಿರಾ ಮತ್ತು ಪಾವಗಡ ಭಾಗದ ಜನರ ದಶಕಗಳ ಕಾಲದ ರೈಲ್ವೆ ಕನಸು ಕೊನೆಗೂ ನನಸಾಗುವತ್ತ ದಾಪುಗಾಲು ಇಟ್ಟಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಭಾಗದ ಎರಡು ಪ್ರತ್ಯೇಕ ನೂತನ ರೈಲು ಮಾರ್ಗಗಳ ಪ್ರಗತಿಯ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxfnmjsmfwhc6rq5aqhdybav,imgname-indian-railways-1784011180852.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಧುಗಿರಿ, ಶಿರಾ ಮತ್ತು ಪಾವಗಡ ಭಾಗದ ಜನರ ದಶಕಗಳ ಕಾಲದ ರೈಲ್ವೆ ಕನಸು ಕೊನೆಗೂ ನನಸಾಗುವತ್ತ ದಾಪುಗಾಲು ಇಟ್ಟಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಭಾಗದ ಎರಡು ಪ್ರತ್ಯೇಕ ನೂತನ ರೈಲು ಮಾರ್ಗಗಳ ಪ್ರಗತಿಯ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮಧುಗಿರಿ, ಶಿರಾ ಹಾಗೂ ಪಾವಗಡ ಭಾಗದ ಜನರು ಹಲವು ದಶಕಗಳಿಂದ ಎದುರು ನೋಡುತ್ತಿದ್ದ ರೈಲ್ವೆ ಸಂಪರ್ಕದ ಕನಸು ಇದೀಗ ನನಸಾಗುವತ್ತ ಸಾಗುತ್ತಿದೆ. 2027ರ ಡಿಸೆಂಬರ್ ವೇಳೆಗೆ ದಾವಣಗೆರೆ&ndash;ಪಾವಗಡ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ದಾವಣಗೆರೆ&ndash;ತುಮಕೂರು ಹಾಗೂ ತುಮಕೂರು&ndash;ಕಲ್ಯಾಣದುರ್ಗ ಸಂಪರ್ಕ ಕಲ್ಪಿಸುವ ಎರಡು ಮಹತ್ವದ ಹೊಸ ರೈಲು ಮಾರ್ಗಗಳ ಕಾಮಗಾರಿ ವೇಗ ಪಡೆದುಕೊಂಡಿದ್ದು, ಹಲವು ವರ್ಷಗಳಿಂದ ಭೂಸ್ವಾಧೀನ ಹಂತದಲ್ಲೇ ವಿಳಂಬವಾಗಿದ್ದ ಯೋಜನೆಗಳು ಇದೀಗ ಚುರುಕುಗೊಂಡಿವೆ.&lt;/p&gt;&lt;img&gt;&lt;p&gt;ರಾಯದುರ್ಗದಿಂದ ಪಾವಗಡ ಪಟ್ಟಣದವರೆಗೆ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ತುಮಕೂರಿನಿಂದ ಊರುಕೆರೆ ಜಂಕ್ಷನ್&zwnj;ವರೆಗಿನ ಕಾಮಗಾರಿಯೂ ಮುಕ್ತಾಯವಾಗಿದೆ. ಪಾವಗಡ&ndash;ಮಧುಗಿರಿ&ndash;ಕೊರಟಗೆರೆ&ndash;ತುಮಕೂರು ಮಾರ್ಗದ ಮಧ್ಯ ಭಾಗದಲ್ಲಿಯೂ ಕಾಮಗಾರಿ ವೇಗವಾಗಿ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಮಧುಗಿರಿ ರೈಲ್ವೇ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸಚಿವ ಕೆ.ಎನ್. ರಾಜಣ್ಣ ಗುದ್ದಲಿ ಪೂಜೆ ನೆರವೇರಿಸಿದ್ದು, ಯೋಜನೆಗೆ ಮತ್ತಷ್ಟು ಚೈತನ್ಯ ಸಿಕ್ಕಿದೆ. ಮತ್ತೊಂದೆಡೆ, ದಾವಣಗೆರೆ&ndash;ತುಮಕೂರು ರೈಲು ಮಾರ್ಗದ ಕಾಮಗಾರಿಯೂ ವೇಗ ಪಡೆದುಕೊಂಡಿದ್ದು, ತುಮಕೂರು&ndash;ಶಿರಾ ನಡುವಿನ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.&lt;/p&gt;&lt;img&gt;&lt;p&gt;ಈ ಎರಡೂ ಮಹತ್ವದ ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ನೀಡಿಸುವ ಉದ್ದೇಶ ಹೊಂದಿರುವ ರೈಲ್ವೆ ಇಲಾಖೆ, ಇನ್ನೊಂದೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗಡುವು ನಿಗದಿಪಡಿಸಿದೆ. ಈ ಯೋಜನೆಗಳು ಪೂರ್ಣಗೊಂಡರೆ ತುಮಕೂರು, ಮಧುಗಿರಿ, ಶಿರಾ, ಪಾವಗಡ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಆಂಧ್ರ ಗಡಿಭಾಗದ ಜನರಿಗೆ ಉತ್ತಮ ರೈಲು ಸಂಪರ್ಕ ದೊರೆಯಲಿದ್ದು, ವ್ಯಾಪಾರ, ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೊಸ ದಿಕ್ಕು ಸಿಗುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;&lt;strong&gt;1. ತುಮಕೂರು - ಕಲ್ಯಾಣದುರ್ಗ (ಪಾವಗಡ/ಮಧುಗಿರಿ) ಮಾರ್ಗ:&lt;/strong&gt;&lt;/p&gt;&lt;p&gt;ರಾಯದುರ್ಗದಿಂದ ಪಾವಗಡ ಪಟ್ಟಣದವರೆಗಿನ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇತ್ತ ತುಮಕೂರಿನಿಂದ ಊರುಕೆರೆ ಜಂಕ್ಷನ್ ವರೆಗಿನ ರೈಲ್ವೆ ಕಾಮಗಾರಿಯೂ ಮುಕ್ತಾಯಗೊಂಡಿದೆ. ಸದ್ಯ ಪಾವಗಡ - ಮಧುಗಿರಿ - ಕೊರಟಗೆರೆ - ತುಮಕೂರು ಮಧ್ಯದ ಭಾಗದಲ್ಲಿ ಕಾಮಗಾರಿ ಅತ್ಯಂತ ವೇಗವಾಗಿ ಪ್ರಗತಿಯಲ್ಲಿದೆ.&lt;/p&gt;&lt;p&gt;&lt;strong&gt;2.ತುಮಕೂರು - ದಾವಣಗೆರೆ ನೇರ ಮಾರ್ಗ&lt;/strong&gt;&lt;/p&gt;&lt;p&gt;ದಾವಣಗೆರೆ ರೈಲು ಮಾರ್ಗದ ಕಾಮಗಾರಿಗೂ ಭಾರಿ ವೇಗ ಸಿಕ್ಕಿದ್ದು, ತುಮಕೂರು ಮತ್ತು ಶಿರಾ ನಡುವಿನ ಕಾಮಗಾರಿ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಒಟ್ಟಾರೆಯಾಗಿ, ಈ ಭಾಗದ ಜನರ ಬಹುಕಾಲದ ರೈಲ್ವೆ ಸಂಪರ್ಕದ ಬೇಡಿಕೆಯು ಕಾಲಮಿತಿಯೊಳಗೆ ಪೂರ್ಣಗೊಳ್ಳುವ ಭರವಸೆ ಸಿಕ್ಕಿದ್ದು, ಶೀಘ್ರದಲ್ಲೇ ಈ ಮಾರ್ಗದಲ್ಲಿ ರೈಲುಗಳು ಸಂಚರಿಸಲಿವೆ.&lt;/p&gt;]]></content:encoded>
            <category>tumakuru</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/minister-v-somanna-gives-an-important-update-on-progress-of-the-new-separate-indian-railways-lines-mrq-gbbsp13"/>
        </item>
        <item>
            <title><![CDATA[2ನೇ ಏರ್‌ಪೋರ್ಟ್ ತುಮಕೂರು ಜಿಲ್ಲೆಯಲ್ಲಾಗಲಿ: 3 ತಾಲೂಕುಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ]]></title>
            <link>https://kannada.asianetnews.com/karnataka-districts/bengaluru-s-second-international-airport-to-be-set-up-in-tumakuru-district-mrq/articleshow-hig778t</link>
            <guid isPermaLink="true">https://kannada.asianetnews.com/karnataka-districts/bengaluru-s-second-international-airport-to-be-set-up-in-tumakuru-district-mrq/articleshow-hig778t</guid>
            <pubDate>Wed, 22 Jul 2026 07:38:07 +0530</pubDate>
            <description><![CDATA[ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಮಾಜಿ ಸಂಸದ ಜಿ.ಎಸ್. ಬಸವರಾಜು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಯೋಜನೆಯು ಕೈಗಾರಿಕೆಗಳು ಮತ್ತು ಉತ್ತರ ಕರ್ನಾಟಕಕ್ಕೆ ಅನುಕೂಲಕರವಾಗಿದ್ದು, ಇದಕ್ಕೆ ಹಲವು ರಾಜಕೀಯ ನಾಯಕರು ಮತ್ತು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ ಎಂದು ಅವರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx2ndtm79yv2nz3k29hfvzr0,imgname-bengaluru-2nd-airport--5--1783574751879.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು: ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿರುವ ತುಮಕೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಿದರೆ ಕೈಗಾರಿಕೋದ್ಯಮಿಗಳು ಸೇರಿದಂತೆ ಉತ್ತರ ಕರ್ನಾಟದ ಭಾಗಕ್ಕೂ ಅನುಕೂಲವಾಗಲಿದೆ. ಹಾಗಾಗಿ ತುಮಕೂರು ಜಿಲ್ಲೆಯಲ್ಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.&lt;/p&gt;&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಕನಕಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ವಿಶೇಷ ಆಸಕ್ತಿ ವಹಿಸಿದ್ದಾರೆ. ಆದರೆ ಉದ್ದೇಶಿತ ಎಲ್ಲಾ ಪ್ರಸ್ತಾವನೆಗಳ ವೈಮಾನಿಕ ದೂರಕ್ಕಿಂತ, ತುಮಕೂರು ಪ್ರಸ್ತಾವನೆ ದೂರ ಇದ್ದರೂ, ರಾಜ್ಯ ಸರ್ಕಾರ ಗುರುತಿಸಿರುವ ಎಲ್ಲಾ ಸ್ಥಳಗಳಿಗಿಂತ ಉತ್ತಮವಾಗಿದೆ. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಲಿದೆ. ಕರ್ನಾಟಕ ರಾಜ್ಯದ ಬಹುತೇಕ ಪ್ರದೇಶಗಳಿಗೆ ಅನೂಕೂಲವಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.&lt;/p&gt;&lt;h2&gt;&lt;strong&gt;ಯಾಕೆ ತುಮಕೂರು?&lt;/strong&gt;&lt;/h2&gt;&lt;p&gt;ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಜಾಸ್ತಿ ಇದೆ, ಉದ್ದೇಶಿತ ಬೇರೆ ಪ್ರಸ್ತಾವನೆಗಳ ಜಮೀನಿಗೆ ಹೋಲಿಸಿದರೆ, ಇಲ್ಲಿ ಜಮೀನು ಬೆಲೆ ಕಡಿಮೆ ಇದೆ. ಕೈಗಾರಿಕಾ ಕ್ರಾಂತಿಗೆ ಪೂರಕವಾಗಲಿದೆ. ಯಾವ ಸ್ಥಳ ಸೂಕ್ತ ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿ. 19 ಜಿಲ್ಲೆಗಳ ಹೆಬ್ಬಾಗಿಲು, ಬೆಂಗಳೂರು-ಪುಣೆ ಎಕನಾಮಿಕ್ ಕಾರಿಡಾರ್, ಚನೈ- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್, ಉದ್ದೇಶಿತ ಬೀದರ್-ಬೆಂಗಳೂರು ಎಕ್ಸಪ್ರೆಸ್&zwnj; ಹೈವೇ, ಸುಮಾರು 12500 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಇಂಡಸ್ಟ್ರಿಯಲ್ ನೋಡ್ ಅಭಿವೃದ್ದಿಗೂ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ನಾನು ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು 2020 ರಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರರವರು ತುಮಕೂರಿನಲ್ಲಿ ನಿರ್ಮಾಣ ಮಾಡಲು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಸೇರ್ಪಡೆ ಮಾಡಲು ನಾನೇ ಮನವಿ ಮಾಡಿದ್ದೆ. ಜತೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸಚಿವ ವಿ. ಸೋಮಣ್ಣನವರು ಈ ಪ್ರಸ್ತಾಪಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಅನೇಕ ಸಂಘ ಸಂಸ್ಥೆಗಳು ಸಹಮತ ವ್ಯಕ್ತಪಡಿಸಿದ್ದಾರೆ. ಇದೊಂದು ಜಿಲ್ಲೆಯ ಮತ್ತು ಮಧ್ಯ ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದರು.&lt;/p&gt;&lt;h3&gt;&lt;strong&gt;ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ&lt;/strong&gt;&lt;/h3&gt;&lt;p&gt;ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ನನ್ನ ಕನಸಾಗಿತ್ತು. ಎಲ್ಲರಿಗಿಂತ ಮೊದಲೇ, ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಚರ್ಚಿಸಿ, ತುಮಕೂರು ಸ್ಥಳ ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆರಂಭದಿಂದ ಕಡತದ ಅನುಸರಣೆಯನ್ನು ರಾಜ್ಯಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ಅನುಸರಣೆ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಅರವಿಂದ್ ಬೆಲ್ಲದ್ ಸೇರಿದಂತೆ ಉತ್ತರ ಕರ್ನಾಟಕದ 19 ಜಿಲ್ಲೆಗಳ 37 ಜನ ಚುನಾಯಿತ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ಮಾಡಲು ಮನವಿ ಮಾಡಿದ್ದಾರೆ. ಯಾವುದೇ ಬೃಹತ್ ವಿಶೇಷ ಯೋಜನೆಗೆ ವೈಜ್ಞಾನಿಕ ಅಭಿವೃದ್ಧಿ ಲಾಬಿ ಅಗತ್ಯ ಎಂದರು.&lt;/p&gt;&lt;h3&gt;&lt;strong&gt;ಮೂರು ತಾಲೂಕುಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ&lt;/strong&gt;&lt;/h3&gt;&lt;p&gt;ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವಾಗ ಮಧುಗಿರಿ, ಕೊರಟಗೆರೆ, ಸಿರಾ ಮತ್ತು ತುಮಕೂರು ತಾಲ್ಲೂಕು ಜಮೀನುಗಳಲ್ಲಿ ಈಗಾಗಲೇ ಗುರುತಿಸಿ ಸರ್ಕಾರಕ್ಕೆ ಸಲ್ಲಿರುವ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಆದರೆ ನಿಖರವಾಗಿ ಎಷ್ಟು ಎಕರೆ ಸರ್ಕಾರಿ ಜಮೀನು ಇದೆ, ಎಷ್ಟು ಜನ ರೈತರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಹಾಕಿದ್ದಾರೆ. ಎಷ್ಟು ಎಕರೆ ಹಿಡುವಳಿ ಜಮೀನು ಅವಶ್ಯಕತೆ ಇದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿಲ್ಲ ಎಂದರು.&lt;/p&gt;&lt;p&gt;ಕೇಂದ್ರ ಐಟಿ ಸಚಿವರಾದ ಅಶ್ವಿನಿ ವೈಷ್ಣವ್ ರವರು ತುಮಕೂರಿನಲ್ಲಿ ಸಿಲಿಕಾನ್ ಮಾದರಿ ಸಿಟಿ ಸ್ಥಾಪಿಸಿ ಎಂದು ರಾಜ್ಯದ ಎಂ.ಬಿ. ಪಾಟೀಲ್ ರವರಿಗೆ ಸಭೆಯಲ್ಲಿಯೇ ಹೇಳಿದ್ದರೂ ಇದುವರೆಗೂ ಪ್ರಸ್ತಾವನೆ ಸಲ್ಲಿಸದೇ ಇರುವುದು ವಿಷಾದಕರ ಸಂಗತಿ ಎಂದಿದ್ದಾರೆ. ಜಮೀನು ಗುರುತಿಸಿ ಎರಡು ಯೋಜನೆಗಳಿಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು ಸೂಕ್ತವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಂದರಹಳ್ಳಿ ರಮೇಶ್, ಶಿವರುದ್ರಪ್ಪ, ಮಲ್ಲಿಕಾರ್ಜುನಯ್ಯ ಬಿ.ಬಿ., ಮಹದೇವಯ್ಯ, ವೀರಭದ್ರಯ್ಯ, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-s-second-international-airport-to-be-set-up-in-tumakuru-district-mrq/articleshow-hig778t"/>
        </item>
        <item>
            <title><![CDATA[ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ನಾಳೆ ಅಂತ್ಯಕ್ರಿಯೆ!]]></title>
            <link>https://kannada.asianetnews.com/karnataka-districts/karnataka-news-former-minister-senior-bjp-leader-bc-nagesh-passes-away-funeral-in-tipatur-bmk/articleshow-horab1s</link>
            <guid isPermaLink="true">https://kannada.asianetnews.com/karnataka-districts/karnataka-news-former-minister-senior-bjp-leader-bc-nagesh-passes-away-funeral-in-tipatur-bmk/articleshow-horab1s</guid>
            <pubDate>Tue, 18 Aug 2026 22:36:43 +0530</pubDate>
            <description><![CDATA[ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ಬಿ.ಸಿ. ನಾಗೇಶ್ ವಿಧಿವಶರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದ ಅವರು, ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0awyx7c0057n4dvce2cfa23,imgname-bc-nagesh-1787072312512.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ತಿಟಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ!&lt;/p&gt;&lt;p&gt;ಕರ್ನಾಟಕ ರಾಜಕಾರಣದ ಹಿರಿಯ ನಾಯಕ, ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ತಿಪಟೂರು ಕ್ಷೇತ್ರದ ಮಾಜಿ ಶಾಸಕರಾದ ಬಿ.ಸಿ.ನಾಗೇಶ್ (67) ಅವರು ಅನಾರೋಗ್ಯದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಂತೆ, ಸದ್ಧಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಅವರ ನಿಧನ ಸುದ್ದಿ ಕೇಳಿ ರಾಜ್ಯ ರಾಜಕೀಯ ಕ್ಷೇತ್ರ, ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಶೋಕ ಸಾಗರ ಮನೆಮಾಡಿದೆ.&lt;/p&gt;&lt;h2&gt;&lt;strong&gt;ಶೈಕ್ಷಣಿಕ ರಂಗದಲ್ಲಿ ಕ್ರಾಂತಿಕಾರಿ ನಿರ್ಧಾರಗಳು!&lt;/strong&gt;&lt;/h2&gt;&lt;p&gt;ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ (ಸಕಾಲ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು) ಕಾರ್ಯನಿರ್ವಹಿಸಿದ್ದ ಬಿ.ಸಿ. ನಾಗೇಶ್ ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಪ್ರಮುಖ ಹಾಗೂ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಕರಾವಳಿಯಿಂದ ಹಿಡಿದು ಕಲ್ಯಾಣ ಕರ್ನಾಟಕದವರೆಗೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಲ್ಲಿದ್ದರು.&lt;/p&gt;&lt;p&gt;&lt;strong&gt;ಪಠ್ಯಪುಸ್ತಕ ಪರಿಷ್ಕರಣೆ; &lt;/strong&gt;ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ವಿಷಯದಲ್ಲಿ ಅತ್ಯಂತ ಧೈರ್ಯದಿಂದ ಹೆಜ್ಜೆ ಇಟ್ಟು, ತಮ್ಮ ಸಿದ್ಧಾಂತ ಹಾಗೂ ನಿಲುವಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದ್ದರು.&lt;/p&gt;&lt;p&gt;&lt;strong&gt;ಶಾಲಾ ಸಮವಸ್ತ್ರ ನಿಯಮ;&lt;/strong&gt; ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಮತ್ತು ಶಿಸ್ತು ಪಾಲನೆ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದ ಗಮನ ಸೆಳೆದಿದ್ದರು.&lt;/p&gt;&lt;p&gt;&lt;strong&gt;ಶಿಕ್ಷಣದಲ್ಲಿ ಮೌಲ್ಯವರ್ಧನೆ;&lt;/strong&gt; ಶಾಲಾ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಪ್ರಾರ್ಥನೆ ಮತ್ತು ಕಲಿವಿನ ವಾತಾವರಣ ಸುಧಾರಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು.&lt;/p&gt;&lt;h3&gt;&lt;strong&gt;ಸಂಘ ಪರಿವಾರದ ಶಿಸ್ತು, ಸರಳತೆಯ ವ್ಯಕ್ತಿತ್ವ!&lt;/strong&gt;&lt;/h3&gt;&lt;p&gt;ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್&zwnj;ಎಸ್&zwnj;ಎಸ್) ಹಿನ್ನೆಲೆಯಿಂದ ಬಂದಿದ್ದ ಬಿ.ಸಿ. ನಾಗೇಶ್ ಅವರು ರಾಜಕೀಯಕ್ಕೆ ಬಂದ ಮೇಲೆಯೂ ತಮ್ಮ ಸರಳತೆಯನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅವರು ಕ್ಷೇತ್ರದ ಜನರೊಂದಿಗೆ ಅತ್ಯಂತ ನಿಕಟ ಹಾಗೂ ಪ್ರೀತಿಯ ಬಾಂಧವ್ಯ ಹೊಂದಿದ್ದರು. ವಿಧಾನಸಭೆಯ ಸದಸ್ಯರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಅವರು, ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣದಿಂದಾಗಿ 'ಟಿಪಟೂರಿನ ಜನಪ್ರಿಯ ನಾಯಕ' ಎನಿಸಿಕೊಂಡಿದ್ದರು. ರಾಜಕೀಯದಲ್ಲಿ ಅಧಿಕಾರ ಅನುಭವಿಸಿದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದೆ, ಶಾಸಕರಾಗಿಯೂ, ಸಚಿವರಾಗಿಯೂ ಕೇವಲ ಕರ್ತವ್ಯಕ್ಕೆ ಆದ್ಯತೆ ನೀಡಿದ ಅಪರೂಪದ ವ್ಯಕ್ತಿತ್ವ ಅವರದ್ದಾಗಿತ್ತು.&lt;/p&gt;&lt;h3&gt;&lt;strong&gt;ತೀವ್ರ ಸಂತಾಪ, ನಾಳೆ ಅಂತ್ಯಕ್ರಿಯೆ!&lt;/strong&gt;&lt;/h3&gt;&lt;h3&gt;ಬಿ.ಸಿ. ನಾಗೇಶ್ ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಹಾಗೂ ವಿವಿಧ ಪಕ್ಷಗಳ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. &quot;ಸರಳ ಸಜ್ಜನಿಕೆಯ ನಾಯಕ, ಪಕ್ಷ ಕಟ್ಟಲು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಅಪಾರ ಕೊಡುಗೆ ನೀಡಿದ್ದ ನಾಗೇಶ್ ಅವರ ಅಗಲಿಕೆ ನಾಡಿಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ&quot; ಎಂದು ಗಣ್ಯರು ಸಂತಾಪ ಸೂಚಿಸಿದ್ದಾರೆ. &lt;strong&gt;ಕಾಡಿದ ಬ್ರೈನ್&zwnj; ಟ್ಯೂಮರ್!&lt;/strong&gt;&lt;/h3&gt;&lt;p&gt;ಕರ್ನಾಟಕದ ಮಾಜಿ ಶಿಕ್ಷಣ ಸಚಿವರು ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ (೬೭) ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬಿ.ಇ. ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್&zwnj;ಎಸ್&zwnj;ಎಸ್) ಪೂರ್ಣಕಾಲಿಕ ಕಾರ್ಯಕರ್ತರಾಗಿ ಪ್ರಾರಂಭಿಸಿದ್ದರು. ತಿಪಟೂರು ಕ್ಷೇತ್ರದಿಂದ ೨೦೦೮ ಮತ್ತು ೨೦೧೮ ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್, ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್&zwnj;ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆಯಾಗಿತ್ತು. ಬೆಂಗಳೂರಿನ ಮಗಳ ಮನೆಯಲ್ಲಿ ಕೊನೆಯುಸಿರೆಳೆದ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ತಿಪಟೂರಿಗೆ ತೆಗೆದುಕೊಂಡು ಹೋಗುತ್ತಿದ್ದು, ನಾಳೆ ಸ್ವಕ್ಷೇತ್ರದಲ್ಲೇ ಅಂತಿಮ ಸಂಸ್ಕಾರ ನಡೆಯಲಿದೆ. ಮೃತರು ಒಬ್ಬ ಮಗ ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/karnataka-news-former-minister-senior-bjp-leader-bc-nagesh-passes-away-funeral-in-tipatur-bmk/articleshow-horab1s"/>
        </item>
        <item>
            <title><![CDATA[BPL Card Holders: ಬಿಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್, 14 ಸಾವಿರ ಕಾರ್ಡ್‌ಗಳಿಗೆ ಕೋಕ್!]]></title>
            <link>https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2</link>
            <guid isPermaLink="true">https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2</guid>
            <pubDate>Sun, 09 Aug 2026 11:16:57 +0530</pubDate>
            <description><![CDATA[&lt;p&gt;ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ರಾಜ್ಯ ಸರ್ಕಾರವು ತುಮಕೂರು ಜಿಲ್ಲೆಯೊಂದರಲ್ಲೇ 14,000 ಬಿಪಿಎಲ್ ಕಾರ್ಡ್&zwnj;ಗಳನ್ನು ಎಪಿಎಲ್&zwnj;ಗೆ ಪರಿವರ್ತಿಸಿದೆ. ಆದರೆ ಅರ್ಹರು ಬಿಪಿಎಲ್ ಕಾರ್ಡ್&zwnj;ನಿಂದ ವಂಚಿತರಾಗದಂತೆ ತಡೆಯಲು ಮತ್ತೊಂದು ಅವಕಾಶವನ್ನು ನೀಡಿದ್ದು, ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjgwwrhc1y56d9ppwsk8zrv,imgname-bpl-card-1786254357265.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪರೀಕ್ಷಣೆಯನ್ನು ಕೈಗೆತ್ತಿಕೊಂಡಿತ್ತು. ಇದರ ನಡುವೆಯೇ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್ ಕೊಟ್ಟಿದೆ. ಇದರಂತೆ ಬರೋಬ್ಬರಿ 14 ಸಾವಿರ ಕಾರ್ಡ್&zwnj;ಗಳಿಗೆ ಸರ್ಕಾರ ಕೋಕ್ ಕೊಟ್ಟಿದೆ.&lt;/p&gt;&lt;h2&gt;ತುಮಕೂರಿನಲ್ಲಿ 6 ಲಕ್ಷ ಪಡಿತರ ಚೀಟಿ&lt;/h2&gt;&lt;p&gt;ತುಮಕೂರು ಜಿಲ್ಲೆಯೊಂದರಲ್ಲೇ ಮೇಜರ್ ಸರ್ಜರಿ ನಡೆದಿದ್ದು, 14 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ಆಹಾರ ಇಲಾಖೆ ಎಪಿಎಲ್ ಕಾರ್ಡ್&zwnj;ಗೆ ಕನ್ವರ್ಟ್ ಮಾಡಿದೆ. ಗ್ಯಾರಂಟಿ ಹೊರೆ ತಗ್ಗಿಸಲು ಸರ್ಕಾರದಿಂದ ಮೇಜರ್ ಸರ್ಜರಿಗೆ ಮುಂದಾಗಿದ್ದು, ಐಟಿ ರಿಟರ್ನ್ ಸಲ್ಲಿಸಿರುವ, ಕಾರು ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ಅಪ್&zwnj;ಗ್ರೇಡ್ ಮಾಡಲಾಗಿದೆ.&lt;/p&gt;&lt;p&gt;ತುಮಕೂರು ಜಿಲ್ಲೆಯಲ್ಲಿ 6 ಲಕ್ಷ ಪಡಿತರ ಚೀಟಿದಾರರು ಇದ್ದು, ಈ ಪೈಕಿ 14 ಸಾವಿರ ಬಿಪಿಎಲ್ ಕಾರ್ಡ್&zwnj;ದಾರರನ್ನು ಹೊರಗೆ ಕಳುಹಿಸಲಾಗಿದೆ. ಬಡತನ ರೇಖೆಗಿಂತ ಹೆಚ್ಚಿನ ಆದಾಯ ಹೊಂದಿದ್ದ ನಕಲಿ ಕಾರ್ಡ್&zwnj;ದಾರರನ್ನು ಪತ್ತೆ ಮಾಡಿರುವ ಆಹಾರ ಇಲಾಖೆ, ಕೇಂದ್ರ ಆದಾಯ ತೆರಿಗೆ ಇಲಾಖೆಯಿಂದ ಲಭ್ಯವಾದ ಮಾಹಿತಿ ಆಧಾರದ ಮೇಲೆ ಕಾರ್ಡ್ ಗಳ ವಜಾ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು?&lt;/h2&gt;&lt;p&gt;ಈ ಬಗ್ಗೆ ನ್ಯೂಸ್&zwnj;18 ಕನ್ನಡದೊಂದಿಗೆ ಮಾತನಾಡಿರುವ ಆಹಾರ ಇಲಾಖೆ ಡಿಡಿ ಅರುಣ್ ಕುಮಾರ್ ಸಂಗಾವಿ, ಈಗ ನಮ್ಮ ಪ್ರಸ್ತುತ ಈ ಆಗಸ್ಟ್ ತಿಂಗಳಿನಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 6 ಲಕ್ಷದ 40 ಸಾವಿರ ಪಡಿತರ ಚೀಟಿಗಳು ಇದೆ. ಈಗಾಗಲೇ ನಾವು ಹೇಳಿದಂತೆ, ಆಯುಕ್ತರ ಕಚೇರಿಯಿಂದ ನಮಗೆ 32 ಸಾವಿರ ಕಾರ್ಡ್&zwnj;ಗಳ ಪಟ್ಟು ಬಂದಿತ್ತು. ಅವುಗಳನ್ನು ಪರಿಶೀಲನೆ ನಡೆಸಿ ಸಂದರ್ಭದಲ್ಲಿ ನಮಗೆ ಸುಮಾರು 14 ಸಾವಿರ ಕಾರ್ಡ್ ಗಳು ಅನರ್ಹ ಎಂದು ಕಂಡು ಬಂದಿದೆ. ಆದ್ದರಿಂದ ನಾವು ಅವುಗಳನ್ನು ಕನ್ವರ್ಟ್ ಮಾಡಿದ್ದೇವೆ. ಈ 14 ಸಾವಿರ ಕಾರ್ಡ್&zwnj;ದಾರರಲ್ಲಿ ನಾವು ಯಾರಾದರೂ ಬಿಪಿಎಲ್ ಕಾರ್ಡ್&zwnj;ಗಳಿಗೆ ಅರ್ಹರಿದ್ದೇವೆ ಎಂದು ಹೇಳಿದರೆ ಅವುಗಳ ಮರುಪರಿಶೀಲನೆಗೂ ಅವಕಾಶ ಇದೆ.&lt;/p&gt;&lt;p&gt;&lt;strong&gt;ಮತ್ತೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಏನು ಮಾಡಬೇಕು?&lt;/strong&gt;&lt;/p&gt;&lt;p&gt;ಅರ್ಹರು ಅಗತ್ಯ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಮನವಿಯನ್ನು ಸಲ್ಲಿಕೆ ಮಾಡಬಹುದು. ಅಂತಹ ಅರ್ಜಿಗಳನ್ನು ಸ್ವೀಕಾರ ಮಾಡಿ ನಮ್ ಆಹಾರ ನಿರೀಕ್ಷಕರು, ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ನಡೆಸಿ ನಮಗೆ ವರದಿಯನ್ನು ನೀಡುತ್ತಾರೆ. ಅಂತಹ ಅರ್ಹತೆಗಳು ಕಂಡು ಬಂದರೆ ಮತ್ತೆ ಕಾರ್ಡ್&zwnj;ಗಳನ್ನ ಮರುಸ್ಥಾಪನೆ ಮಾಡುವ ಅವಕಾಶವಿದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಕೆಲವರು ಇನ್ಕಮ್ ಟ್ಯಾಕ್ಸ್ ಪೇ ಮಾಡಿರುತ್ತಾರೆ. ಅವರು ಆದಾಯ ತೆರಿಗೆ ಪಾವತಿ ಮಾಡಿರುವವರ ಮಾಹಿತಿಯನ್ನು ಆಯುಕ್ತರು ನಮಗೆ ನೀಡ್ತಾರೆ. ಸ್ವತಃ ನಾಲ್ಕು ಚಕ್ರದ ವಾಹನ ಹೊಂದಿದ್ದರೆ. ಜೊತೆಗೆ ಯಾರಾದರೂ ಏಳೂವರೆ ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದ್ದರೆ, ಇಂತಹ ಅವರನ್ನು ಪಟ್ಟಿಯಲ್ಲಿ ಗುರುತಿಸಿ ಅವರ ಕಾರ್ಡ್&zwnj;ಗಳನ್ನು ನಾವು ಕನ್ವರ್ಟ್ ಮಾಡಿದ್ದೇವೆ ಎಂದು ಆಹಾರ ಇಲಾಖೆ ಡಿಡಿ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>tumakuru</category>
            <dc:creator>Sumanth SN</dc:creator>
            <atom:link href="https://kannada.asianetnews.com/news/major-shock-from-karnataka-government-for-bpl-cardholders-tumakuru-14000-ineligible-cards-cancelled-sns/articleshow-ik824b2"/>
        </item>
        <item>
            <title><![CDATA[ಡಿಸಿಎಂ ತವರಲ್ಲಿ 12 ಜೀತ ಕಾರ್ಮಿಕರ ರಕ್ಷಣೆ; ಪ್ರಪಂಚವನ್ನೇ ನೋಡದೆ 20 ವರ್ಷ ಕಲ್ಲು ಕ್ವಾರಿಯಲ್ಲಿ ಕೆಲಸ!]]></title>
            <link>https://kannada.asianetnews.com/gallery/karnataka-districts/tumakuru-kunigal-bonded-labor-rescue-illegal-stone-mining-12-workers-sat-lxrmyqf</link>
            <guid isPermaLink="true">https://kannada.asianetnews.com/gallery/karnataka-districts/tumakuru-kunigal-bonded-labor-rescue-illegal-stone-mining-12-workers-sat-lxrmyqf</guid>
            <pubDate>Wed, 22 Jul 2026 12:33:57 +0530</pubDate>
            <description><![CDATA[&lt;p&gt;ತುಮಕೂರು ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 12 ಕಾರ್ಮಿಕರನ್ನು ಅಧಿಕಾರಿಗಳ ತಂಡ ರಕ್ಷಿಸಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky49sy25qsb93rg7mnjwfcmh,imgname-tumakuru-bonded-labor-rescue-1784703416388.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 12 ಕಾರ್ಮಿಕರನ್ನು ಅಧಿಕಾರಿಗಳ ತಂಡ ರಕ್ಷಿಸಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.&lt;/p&gt;&lt;img&gt;&lt;p&gt;ತುಮಕೂರು (ಜು.22): ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಎರಡು ದಶಕಗಳಿಂದ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ (Illegal Stone Quarrying) ಜೀತಕ್ಕಿದ್ದ 12 ಮಂದಿ ಕಾರ್ಮಿಕರನ್ನು ಅಧಿಕಾರಿಗಳ ತಂಡ ಸಿನಿಮೀಯ ಮಾದರಿಯಲ್ಲಿ ದಾಳಿ ನಡೆಸಿ ರಕ್ಷಿಸಿದೆ.&lt;/p&gt;&lt;img&gt;&lt;p&gt;&lt;strong&gt;20 ವರ್ಷಗಳ ಸುದೀರ್ಘ ನರಕಯಾತನೆ:&lt;/strong&gt;&lt;/p&gt;&lt;p&gt;ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ (KRS, Mandya) ಮೂಲದ ಕಾರ್ಮಿಕರನ್ನು ಈ ಗಣಿ ಮಾಲೀಕರು ಮುಂಗಡ ಹಣ (Advance Money) ನೀಡಿ ಈ ಹಿಂದೆ ಕರೆತಂದಿದ್ದರು. ಅಂದಿನಿಂದ ಇಂದಿನವರೆಗೆ, ಅಂದರೆ ಬರೋಬ್ಬರಿ 20 ವರ್ಷಗಳಿಂದ ಈ ಕಾರ್ಮಿಕರನ್ನು ಜೀತಕ್ಕೆ (Bonded Labor) ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;img&gt;&lt;p&gt;ತುಮಕೂರಿನ ಕುಣಿಗಲ್ ತಾಲ್ಲೂಕಿನ (Kunigal Taluk) ಹುಲಿಯೂರುದುರ್ಗದ ಸಮೀಪದ ಪಾವಸಂದ್ರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಈ ಅಕ್ರಮ ಗಣಿಗಾರಿಕೆಯಲ್ಲಿ ಕಾರ್ಮಿಕರಿಗೆ ಕನಿಷ್ಠ ಸ್ವಾತಂತ್ರ್ಯವೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ :&lt;/strong&gt;&lt;/p&gt;&lt;p&gt;'ಮುಕ್ತಿ' (MUKTI NGO) ಎಂಬ ಸ್ವಯಂಸೇವಾ ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆ, ತುಮಕೂರು ಉಪವಿಭಾಗಾಧಿಕಾರಿ (Assistant Commissioner) ನಹಿದಾ ಜಮ್ ಜಮ್ ಅವರ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿದಂತೆ ಒಟ್ಟು 12 ಕಾರ್ಮಿಕರನ್ನು ರಕ್ಷಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ರಕ್ಷಣೆಗೊಳಗಾದವರ ವಿವರ:&lt;/strong&gt;&lt;/p&gt;&lt;p&gt;ರಕ್ಷಣೆಗೊಳಗಾದವರಲ್ಲಿ ಚೆಲುವಾ ಭೋವಿ (45), ಸರಸ್ವತಿ (40), ಪಳನಿ (50), ಸರೋಜಾ (40), ಸೌಮ್ಯ (40), ಪುರುಷೋತ್ತಮ (20), ರವಿ (20), ಪವಿತ್ರಾ (25), ಕೃಷ್ಣ (25), ಮಂಜುಳಾ (35), ಆರ್ಮುಗಮ್ (56) ಮತ್ತು ಭಾಗ್ಯಮ್ಮ (47) ಸೇರಿದ್ದಾರೆ. ಇವರೆಲ್ಲರನ್ನೂ ಸದ್ಯ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅವರಿಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಪೊಲೀಸ್ ಠಾಣೆಯಲ್ಲಿ ದೂರು ದಾಖಲು:&lt;/strong&gt;&lt;/p&gt;&lt;p&gt;ಈ ಅಕ್ರಮ ಗಣಿಗಾರಿಕೆ ಮತ್ತು ಜೀತ ಪದ್ಧತಿಯ (Jeeta System) ಕುರಿತು ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರ್ಕಾರಿ ಜಮೀನಿನಲ್ಲಿ ಇಷ್ಟು ವರ್ಷಗಳ ಕಾಲ ಅಕ್ರಮವಾಗಿ ಗಣಿಗಾರಿಕೆ ಹೇಗೆ ನಡೆಯಿತು? ಅಧಿಕಾರಿಗಳ ಗಮನಕ್ಕೆ ಇದು ಏಕ ಬರಲಿಲ್ಲ? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಜೀತ ಪದ್ಧತಿ ಕಾನೂನುಬಾಹಿರವಾಗಿದ್ದರೂ, ಇಂದಿನ ಕಾಲದಲ್ಲೂ ಇಂತಹ ದೌರ್ಜನ್ಯಗಳು ನಡೆಯುತ್ತಿರುವುದು ನಿಜಕ್ಕೂ ದುರಂತ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ (Legal Action) ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/tumakuru-kunigal-bonded-labor-rescue-illegal-stone-mining-12-workers-sat-lxrmyqf"/>
        </item>
        <item>
            <title><![CDATA[ನಾಳೆಯಿಂದ ಯಲಹಂಕ-ಅರಸೀಕೆರೆ ನಡುವೆ Memu Train ಸರ್ವೀಸ್‌ ಆರಂಭ, ಈ ಸ್ಟೇಷನ್‌ಗಳಲ್ಲಿ ಇರಲಿದೆ ಸ್ಟಾಪ್‌]]></title>
            <link>https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o</link>
            <guid isPermaLink="true">https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o</guid>
            <pubDate>Mon, 13 Jul 2026 11:32:37 +0530</pubDate>
            <description><![CDATA[&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ಹೊಸ ಮೇಮು (MEMU) ರೈಲು ಸೇವೆ ಜುಲೈ 14 ರಿಂದ ಆರಂಭವಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು, ಯಶವಂತಪುರ, ತುಮಕೂರು, ಮತ್ತು ತಿಪಟೂರಿನಂತಹ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxd0t4yhbyg2axjmk5vpadr9,imgname-railway-board-approves-yelahanka-arsikere-memu-train-service-starting-july-14--2--1783922234321.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ಹೊಸ ಮೇಮು (MEMU) ರೈಲು ಸೇವೆ ಜುಲೈ 14 ರಿಂದ ಆರಂಭವಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು, ಯಶವಂತಪುರ, ತುಮಕೂರು, ಮತ್ತು ತಿಪಟೂರಿನಂತಹ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸಲಿದೆ.&lt;/p&gt;&lt;img&gt;&lt;p&gt;ಯಲಹಂಕ ಮತ್ತು ಅರಸೀಕೆರೆ ನಡುವೆ ದೈನಂದಿನ ಪ್ರಯಾಣ ಬೆಳೆಸುವ ಸಾರ್ವಜನಿಕರಿಗೆ ರೈಲ್ವೆ ಮಂಡಳಿಯು ಭರ್ಜರಿ ಕೊಡುಗೆ ನೀಡಿದೆ. ಈ ಎರಡು ಪ್ರಮುಖ ನಿಲ್ದಾಣಗಳ ಮಧ್ಯೆ ಹೊಸ ಮೇಮು (MEMU) ರೈಲು ಸೇವೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಜುಲೈ 14 ರಿಂದ (ಮಂಗಳವಾರ) ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 66505 ಯಲಹಂಕ-ಅರಸೀಕೆರೆ ಮೇಮು ರೈಲು ಪ್ರತಿದಿನ ಬೆಳಿಗ್ಗೆ 6:45 ಕ್ಕೆ ಯಲಹಂಕದಿಂದ ಹೊರಟು, 11:00 ಗಂಟೆಗೆ ಅರಸೀಕೆರೆಯನ್ನು ತಲುಪಲಿದೆ. ಅದೇ ರೀತಿ ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 66506 ಅರಸೀಕೆರೆ-ಯಲಹಂಕ ಮೇಮು ರೈಲು ಮಧ್ಯಾಹ್ನ 2:10 ಕ್ಕೆ ಅರಸೀಕೆರೆಯಿಂದ ನಿರ್ಗಮಿಸಿ, ಸಂಜೆ 7:15 ಕ್ಕೆ ಯಲಹಂಕ ನಿಲ್ದಾಣಕ್ಕೆ ಬಂದು ತಲುಪಲಿದೆ.&lt;/p&gt;&lt;img&gt;&lt;p&gt;ಈ ಹೊಸ ರೈಲು ಸೇವೆಯು ಒಟ್ಟು 8 ಮೇಮು (MEMU) ಕೋಚ್&zwnj;ಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ರೈಲು ವಾರದಲ್ಲಿ ಒಟ್ಟು 6 ದಿನಗಳ ಕಾಲ (ಭಾನುವಾರವನ್ನು ಹೊರತುಪಡಿಸಿ) ನಿಯಮಿತವಾಗಿ ಸಂಚರಿಸಲಿದೆ.&lt;/p&gt;&lt;img&gt;&lt;p&gt;ಹೊಸ ಯೋಜನೆಯ ಅಧಿಕೃತ ಚಾಲನೆಗಾಗಿ ಜುಲೈ 13 ರಂದು (ಸೋಮವಾರ) ವಿಶೇಷ ಉದ್ಘಾಟನಾ ರೈಲನ್ನು ಓಡಿಸಲಾಗುತ್ತಿದೆ. ನೈಋತ್ಯ ರೈಲ್ವೆಯ (SWR) ಪ್ರಕಟಣೆಯ ಪ್ರಕಾರ, ಈ ಸೇವೆಯು ಯಲಹಂಕ, ಯಶವಂತಪುರ, ತುಮಕೂರು, ತಿಪಟೂರು ಮತ್ತು ಅರಸೀಕೆರೆ ನಡುವೆ ಸಂಚರಿಸುವ ಮಧ್ಯಮ ವರ್ಗದ ಪ್ರಯಾಣಿಕರಿಗೆ ಅತ್ಯಂತ ಆರ್ಥಿಕ, ಆರಾಮದಾಯಕ ಮತ್ತು ನಂಬಿಕಸ್ಥ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಿದೆ.&lt;/p&gt;&lt;img&gt;&lt;p&gt;ಈ ರೈಲು ಮಾರ್ಗವು ಬೆಂಗಳೂರಿನ ಹೊರವಲಯ ಹಾಗೂ ಗ್ರಾಮಾಂತರ ಪ್ರದೇಶಗಳ ನಡುವಿನ ಸಂಪರ್ಕವನ್ನು ಗಣನೀಯವಾಗಿ ಸುಧಾರಿಸಲಿದೆ. ಯಲಹಂಕದಿಂದ ಹೊರಡುವ ರೈಲು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಯಶವಂತಪುರ, ತುಮಕೂರು ಹಾಗೂ ತಿಪಟೂರು ನಗರಗಳನ್ನು ಜೋಡಿಸುವ ಮೂಲಕ ಸಾವಿರಾರು ದೈನಂದಿನ ಉದ್ಯೋಗಿಗಳಿಗೆ ನೆರವಾಗಲಿದೆ.&lt;/p&gt;&lt;img&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲು ಮಾರ್ಗದ ಮಧ್ಯೆ ಬರುವ ಒಟ್ಟು 26 ಸಣ್ಣ ಮತ್ತು ದೊಡ್ಡ ನಿಲ್ದಾಣಗಳಲ್ಲಿ ನಿಲ್ಲಲಿದೆ. ನಿಲ್ದಾಣಗಳ ವಿವರ ಹೀಗಿದೆ:&lt;/p&gt;&lt;p&gt;ಕೊಡಿಗೆಹಳ್ಳಿ, ಯಶವಂತಪುರ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ಬೈರನಾಯಕನಹಳ್ಳಿ, ದೊಡ್ಡಬೆಲೆ, ಮುದ್ದಲಿಂಗನಹಳ್ಳಿ, ನಿಡವಂದ, ದಾಬಸ್&zwnj;ಪೇಟೆ, ಹಿರೇಹಳ್ಳಿ, ಕ್ಯಾತ್ಸಂದ್ರ, ತುಮಕೂರು, ಹೆಗ್ಗರೆ ಹಾಲ್ಟ್, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರ್ಡಿ, ಬನಶಂಕರಿ ಹಾಲ್ಟ್, ತಿಪಟೂರು, ಶ್ರೀ ಶಾರದಾನಗರ, ಹೊನ್ನವಳ್ಳಿ ರೋಡ್ ಮತ್ತು ಆದಿಹಳ್ಳಿ.&lt;/p&gt;]]></content:encoded>
            <category>tumakuru</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/yelahanka-arsikere-memu-train-service-starts-july-14-timetable-stoppages-san-op7hr1o"/>
        </item>
        <item>
            <title><![CDATA[ತುಮಕೂರಲ್ಲಿ ಹೃದಯ ವಿದ್ರಾವಕ ಘಟನೆ.. 8ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ..]]></title>
            <link>https://kannada.asianetnews.com/tumakuru/8th-standard-student-died-due-to-heart-attack-gkn/articleshow-p1hlmda</link>
            <guid isPermaLink="true">https://kannada.asianetnews.com/tumakuru/8th-standard-student-died-due-to-heart-attack-gkn/articleshow-p1hlmda</guid>
            <pubDate>Sun, 09 Aug 2026 09:22:48 +0530</pubDate>
            <description><![CDATA[&lt;p&gt;ಪಾವಗಡ ತಾಲೂಕಿನಲ್ಲಿ ಅತ್ಯಂತ ವಿಷಾದನೀಯ ಘಟನೆ ನಡೆದಿದೆ. ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸ್ಟೆಲ್&zwnj;ನ ಶೌಚಾಲಯದಲ್ಲಿ ಬಾಲಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೋಷಕರ ಕಣ್ಣೀರಿಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzjaddtfzw9dpqg39q1726cv,imgname-heart-attack-1786247558991.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಅತ್ಯಂತ ವಿಷಾದನೀಯ ಘಟನೆ ನಡೆದಿದೆ. ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸ್ಟೆಲ್&zwnj;ನ ಶೌಚಾಲಯದಲ್ಲಿ ಬಾಲಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೋಷಕರ ಕಣ್ಣೀರಿಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಮೃತ ಬಾಲಕಿಯನ್ನು ಕಾರಗಾನಹಟ್ಟಿ ಗ್ರಾಮದ ನರಸಿಂಹ ಮೂರ್ತಿ ಹಾಗೂ ಶಾರದಮ್ಮ ದಂಪತಿಯ ಪುತ್ರಿ ಪ್ರಿಯಾಂಕ (14) ಎಂದು ಗುರುತಿಸಲಾಗಿದೆ. ಈಕೆ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದ ಕಸ್ತೂರಿ ಬಾ ಗಾಂಧಿ ಬಾಲಕಿಯರ ಹಾಸ್ಟೆಲ್&zwnj;ನಲ್ಲಿ ಉಳಿದುಕೊಂಡು, ತ್ರೀಯಂಬಕೇಶ್ವರ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.&lt;/p&gt;&lt;p&gt;ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಿಯಾಂಕ, ಚಿಕಿತ್ಸೆಗಾಗಿ ತನ್ನ ಊರಿಗೆ ತೆರಳಿದ್ದಳು. ಗುಣಮುಖಳಾದ ನಂತರ ಆಗಸ್ಟ್ 7ರಂದು ಮತ್ತೆ ಹಾಸ್ಟೆಲ್&zwnj;ಗೆ ವಾಪಸ್ ಬಂದಿದ್ದಳು. ನಿನ್ನೆ ಮುಂಜಾನೆ ಹಾಸ್ಟೆಲ್&zwnj;ನ ಶೌಚಾಲಯಕ್ಕೆ ತೆರಳಿದ್ದ ವೇಳೆ ಹಠಾತ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಲೋ ಬಿಪಿ (Low BP) ಯಿಂದಾಗಿ ಆಕೆ ಪ್ರಜ್ಞೆ ತಪ್ಪಿದ್ದಾಳೆ ಎಂದು ಹೇಳಲಾಗಿದೆ. ತಕ್ಷಣವೇ ಹಾಸ್ಟೆಲ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ದಾರಿ ಮಧ್ಯೆಯೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ವೈದ್ಯರು ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಬಾಲಕಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್&zwnj;ನಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಸ್ಟೆಲ್ ಆವರಣದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ, ಸ್ವಚ್ಛತೆ ಕಾಪಾಡುತ್ತಿಲ್ಲ. ಇಂತಹ ಅವ್ಯವಸ್ಥೆಯೇ ಮಗುವಿನ ಅನಾರೋಗ್ಯಕ್ಕೆ ಮತ್ತು ಸಾವಿಗೆ ಕಾರಣ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಪಾವಗಡ ತಹಸಿಲ್ದಾರ್ ವೈ. ರವಿ ಹಾಗೂ ಪಾವಗಡ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/tumakuru/8th-standard-student-died-due-to-heart-attack-gkn/articleshow-p1hlmda"/>
        </item>
        <item>
            <title><![CDATA[ಆಷಾಢ  ಮುಗಿದ್ರೂ ತವರಿನಿಂದ ಬರಲಿಲ್ಲ ಪತ್ನಿ; ಪ್ರಾಣ ಕಳೆದುಕೊಂಡ ನವವಿವಾಹಿತ ಅವಿನಾಶ್]]></title>
            <link>https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc</link>
            <guid isPermaLink="true">https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc</guid>
            <pubDate>Sat, 15 Aug 2026 10:56:01 +0530</pubDate>
            <description><![CDATA[&lt;p&gt;ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದ ಪತ್ನಿ ಮರಳಿ ಬಾರದಿದ್ದಕ್ಕೆ ಮನನೊಂದ ನವ ವಿವಾಹಿತನೊಬ್ಬ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ತನ್ನ ಪತ್ನಿಯೇ ಕಾರಣ ಎಂದು ವಾಟ್ಸಪ್&zwnj; ಸಂದೇಶ ಕಳುಹಿಸಿ ಪಟ್ಟಣದ ಮಹಾವೀರ ನಗರದ ನಿವಾಸಿ ಅವಿನಾಶ್ (26) ನೇಣಿಗೆ ಶರಣಾಗಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01x122bh836g3r5rbyhw8mg,imgname-tumakuru-1786770393163.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; ತವರಿಗೆ ಹೋದ ಹೆಂಡತಿ ಮರಳಿ ಬಾರದೆ ಇದ್ದುದರಿಂದ ಮನನೊಂದ ನವ ವಿವಾಹಿತನೊಬ್ಬ ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವನನ್ನು ಪಟ್ಟಣದ ಮಹಾವೀರ ನಗರದ ವಾಸಿ ಅವಿನಾಶ್ (26) ಎಂದು ಗುರುತಿಸಲಾಗಿದೆ. ಮೃತಪಟ್ಟ ಅವಿನಾಶ್&zwnj; ಕೆಲ ತಿಂಗಳ ಹಿಂದೆ ತಾನು ಪ್ರೀತಿಸಿದ್ದ ಧಾಮಿನಿ (22) ಎಂಬ ಯುವತಿಯನ್ನು ಮದುವೆಯಾಗಿದ್ದ. ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದ ಧಾಮಿನಿಗೆ ಗುರುವಾರ ರಾತ್ರಿ ಕರೆ ಮಾಡಿದ್ದ ಅವಿನಾಶ ಬರುವಂತೆ ತಿಳಿಸಿದ್ದ. ಆದರೆ ಹೆಂಡತಿ ಧಾಮಿನಿ ನಾಗರ ಪಂಚಮಿ ಹಬ್ಬ ಮುಗಿಸಿ ಬರುವುದಾಗಿ ತಿಳಿಸಿದ್ದು ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಸಾವಿಗೆ ಹೆಂಡ್ತಿಯೇ ಕಾರಣ, ಶಿಕ್ಷೆ ಆಗಬೇಕು!&lt;/strong&gt;&lt;/h2&gt;&lt;p&gt;ತಡರಾತ್ರಿ ಅವಿನಾಶ ತಮ್ಮನಿಗೆ ವಾಟ್ಸಪ್&zwnj; ಮೂಲಕ ಮೆಸೇಜ್ ಮಾಡಿದ್ದು, ಹೆಂಡತಿಗೆ ಶಿಕ್ಷೆಯಾಗಬೇಕು. ನನ್ನ ಸಾವಿಗೆ ಅವಳೇ ಕಾರಣ ಎಂದು ತಿಳಿಸಿದ್ದ. ಬೆಳಿಗ್ಗೆ ಮೆಸೇಜ್ ನೋಡಿದ ಸೋದರ, ಆತನ ರೂಮಿಗೆ ಹೋಗಿ ಬಾಗಿಲು ಒಡೆದು ನೋಡಿದಾಗ ಅವಿನಾಶ ನೇಣಿಗೆ ಶರಣಾಗಿದ್ದು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h3&gt;&lt;strong&gt;ಅನೈತಿಕ ಸಂಬಂಧ ಶಂಕೆ: ಗಂಡನಿಂದಲೇ ಹೆಂಡತಿಯ ಮೇಲೆ ಹಲ್ಲೆ&lt;/strong&gt;&lt;/h3&gt;&lt;p&gt;ಹೊಸದುರ್ಗ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪತಿಯು ತನ್ನ ಪತ್ನಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಾಲೂಕಿನ ಶ್ರೀರಾಂಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.&lt;/p&gt;&lt;p&gt;ಹಿರಿಯೂರು ತಾಲೂಕು ಕುಂಟಪ್ಪನಹಳ್ಳಿ ಗ್ರಾಮದ ನೇತ್ರಾವತಿ (30) ಹಲ್ಲೆಗೊಳಗಾದ ಮಹಿಳೆ. ಈಕೆಯ ಗಂಡ ತಿಪ್ಪೆಸ್ವಾಮಿ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಹಿರಿಯೂರು ತಾಲೂಕು ಕುಂಟಪ್ಪನಹಳ್ಳಿ ಗ್ರಾಮದ ನೇತ್ರಾವತಿ ತನ್ನ ಗಂಡ ಹಾಗೂ ಇಬ್ಬರು ಮಕ್ಕಳೋಂದಿಗೆ ಕೂಲಿ ಕೆಲಸಕ್ಕಾಗಿ ಶ್ರೀರಾಂಪುರಕ್ಕೆ ಬಂದು ಇಲ್ಲಿಯೇ ಕಳೆದ 20 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ರಾತ್ರಿ ಹೊಸದುರ್ಗಕ್ಕೆ ಹೊಗಿದ್ದ ಗಂಡ ತಿಪ್ಪೆಸ್ವಾಮಿ ಮನೆಗೆ ಬಂದಾಗ ಇವರೊಂದಿಗೆ ಕೆಲಸ ಮಾಡುತ್ತಿದ್ದ ಕಂಚೀಪುರ ಗ್ರಾಮದ ವಿಜಯಕುಮಾರ ಎಂಬಾತ ತನ್ನ ಮನೆಯಲ್ಲಿರುವುದನ್ನು ಕಂಡು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಸ್&zwnj;ನಲ್ಲೂ ವಂದೇ ಭಾರತ್ ವೈಭೋಗ: ಶೌಚಾಲಯ, ಪ್ಯಾಂಟ್ರಿ ಹೊಂದಿರುವ ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ KSRTC!&lt;/strong&gt;&lt;/p&gt;&lt;p&gt;ಗಂಡನ ಗಲಾಟೆಯಿಂದ ಬೇಸತ್ತ ನೇತ್ರಾವತಿ ಶ್ರೀರಾಂಪುದ ಪೊಲೀಸ್&zwnj; ಠಾಣೆಗೆ ದೂರು ನೀಡಲು ಮನೆಯಿಂದ ಹೊರ ಬಂದಾಗ ಅವಳನ್ನೆ ಹಿಂಬಾಲಿಸಿಕೊಂಡು ಬಂದು ಶ್ರೀರಾಂಪುರದ ಅಂಬೇಡ್ಕರ್&zwnj; ವೃತ್ತದ ಬಳಿ ಚಾಕುವಿನಿಂದ ಮುಖ ಹಾಗೂ ಮೈ ಕೈಗೆ ಗಾಯಗೊಳಿಸಿದ್ದಾನೆ. ನಂತರ ಇದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೋಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸರ್ಕಾರದ ₹100 ಕೋಟಿಯ 1.37 ಎಕರೆ ಕಬಳಿಕೆ, ದಾಖಲೆ ಸಹಿತ ಲೋಕಾಯುಕ್ತ, ಜಿಬಿಎ ದಕ್ಷಿಣ ನಗರ ಪಾಲಿಕೆ ಆಯುಕ್ತರಿಗೆ ದೂರು&lt;/strong&gt;&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc"/>
        </item>
        <item>
            <title><![CDATA[46 ಸೆಕೆಂಡಲ್ಲಿ ಮಾನವನಲ್ಲಿನ 206 ಮೂಳೆ ಹೆಸರೇಳಿ ಮಾಚೇನಹಳ್ಳಿಯ 5 ವರ್ಷದ ಚಾರ್ವಿಕ್]]></title>
            <link>https://kannada.asianetnews.com/karnataka-districts/tumakuru-5-year-old-charvik-from-machenahalli-village-names-206-bones-in-a-human-body-in-46-seconds-mrq/articleshow-s8vqgqx</link>
            <guid isPermaLink="true">https://kannada.asianetnews.com/karnataka-districts/tumakuru-5-year-old-charvik-from-machenahalli-village-names-206-bones-in-a-human-body-in-46-seconds-mrq/articleshow-s8vqgqx</guid>
            <pubDate>Tue, 07 Jul 2026 07:19:30 +0530</pubDate>
            <description><![CDATA[&lt;p&gt;ಚಾರ್ವಿಕ್&zwnj;, ಇತ್ತೀಚೆಗೆ ತನ್ನ ದೇಹವನ್ನೇ ತೋರಿಸಿಕೊಂಡು ದೇಹದಲ್ಲಿರುವ ಮೂಳೆಯ ಹೆಸರು ಮತ್ತು ಅಲ್ಲಿರುವ ಮೂಳೆಗಳ ಸಂಖ್ಯೆಯನ್ನು ಕೇವಲ 46 ಸೆಕೆಂಡ್&zwnj;ನಲ್ಲಿ ಹೇಳುವ ಮೂಲಕ ಈ ಸಾಧನೆ ಮಾಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwx3ya2sqnv2bfgnq50grnra,imgname-tumakuru-1783388645464.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ಮಾನವನ ದೇಹದಲ್ಲಿರುವ 206 ಮೂಳೆಗಳ ಹೆಸರನ್ನು ಕೇವಲ 46 ಸೆಕೆಂಡ್&zwnj;ನಲ್ಲಿ ಹೇಳುವ ಮೂಲಕ ತುರುವೇಕೆರೆ ತಾಲೂಕಿನ ಮಾಚೇನಹಳ್ಳಿ ಗ್ರಾಮದ 5 ವರ್ಷದ ಬಾಲಕ ಚಾರ್ವಿಕ್&zwnj; ಪತ್ರೆಮನೆ, ಇಂಡಿಯಾ ಬುಕ್&zwnj; ಆಫ್ ರೆಕಾರ್ಡ್&zwnj;ಗೆ ಸೇರ್ಪಡೆಯಾಗಿದ್ದಾನೆ. ಅಶ್ವಿನ್&zwnj; ಪತ್ರೆಮನೆ ಮತ್ತು ಪವಿತ್ರ ದಂಪತಿ ಪುತ್ರ ಚಾರ್ವಿಕ್&zwnj;, ಇತ್ತೀಚೆಗೆ ತನ್ನ ದೇಹವನ್ನೇ ತೋರಿಸಿಕೊಂಡು ದೇಹದಲ್ಲಿರುವ ಮೂಳೆಯ ಹೆಸರು ಮತ್ತು ಅಲ್ಲಿರುವ ಮೂಳೆಗಳ ಸಂಖ್ಯೆಯನ್ನು ಕೇವಲ 46 ಸೆಕೆಂಡ್&zwnj;ನಲ್ಲಿ ಹೇಳುವ ಮೂಲಕ ಈ ಸಾಧನೆ ಮಾಡಿದ್ದಾನೆ.&amp;nbsp;&lt;/p&gt;&lt;p&gt;ಇಲ್ಲಿಯ ಶ್ರೀ ಕೃಷ್ಣ ಪ್ರೀ ಸ್ಕೂಲ್&zwnj;ನ ಯುಕೆಜಿಯಲ್ಲಿ ಬಾಲಕ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಈ ಹಿಂದೆ 206 ಮೂಳೆಗಳ ಹೆಸರನ್ನು ಸುಮಾರು 11 ವರ್ಷದ ಬಾಲಕನೋರ್ವ 2.30 ನಿಮಿಷದಲ್ಲಿ ಹೇಳಿದ್ದನೆಂದು ತಿಳಿದುಬಂದಿದೆ.&lt;/p&gt;&lt;p&gt;ಈಗ ಚಾರ್ವಿಕ್&zwnj; ಪತ್ರೆಮನೆ ಕೇವಲ 46 ಸೆಕೆಂಡ್&zwnj;ನಲ್ಲಿ ಹೇಳುವ ಮೂಲಕ ನೂತನ ದಾಖಲೆಯನ್ನು ಮಾಡಿದ್ದಾನೆ.&lt;/p&gt;&lt;h2&gt;&lt;strong&gt;ದಿನಕರ ಕಲಾನಿಕೇತನ ವಿದ್ಯಾರ್ಥಿಗಳ ಸಾಧನೆ&lt;/strong&gt;&lt;/h2&gt;&lt;p&gt;ಕಾರವಾರ: ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮುಂಬಯಿ ಈಚೆಗೆ ನಡೆಸಿದ ಗಂಧರ್ವ ಪ್ರಾರಂಭಿಕ ಮತ್ತು ಪ್ರಾವೇಶಿಕ ಸಂಗೀತ ಪರೀಕ್ಷೆಯಲ್ಲಿ ದಿನಕರ ಕಲಾನಿಕೇತನದ ಕಾರವಾರ ಹಾಗೂ ಅಂಕೋಲಾ ಕೇಂದ್ರಗಳ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.&lt;/p&gt;&lt;p&gt;ಪರೀಕ್ಷೆಗೆ ಹಾಜರಾದ ಒಟ್ಟು 25 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ ಐದು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.&lt;/p&gt;&lt;p&gt;ಕಾರವಾರದ ಕಲ್ಪನಾ ರಶ್ಮಿ ಕಲಾ ಲೋಕದಲ್ಲಿ ನಡೆದ ಪ್ರಾರಂಭಿಕ ಪರೀಕ್ಷೆಯಲ್ಲಿ ಡಾ. ಅನುರಾಧ ಗೋವಿಂದರಾಜನ್ ಹಾಗೂ ಅವನಿ ನಾಯ್ಕ ಪ್ರಥಮ, ಮೋನಿಕಾ ಜೆ.ಕೆ. ಹಾಗೂ ಉನ್ನತಿ ನಾಯ್ಕ್ ದ್ವಿತೀಯ ಮತ್ತು ನವಿಕಾ ಭಟ್ ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರಾವೇಶಿಕ ಪ್ರಥಮದಲ್ಲಿ ವಾತ್ಸಲ್ಯ ಭಂಡಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ.&lt;/p&gt;]]></content:encoded>
            <category>tumakuru</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tumakuru-5-year-old-charvik-from-machenahalli-village-names-206-bones-in-a-human-body-in-46-seconds-mrq/articleshow-s8vqgqx"/>
        </item>
    </channel>
</rss>
