<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 19 Sep 2026 18:51:10 +0530</lastBuildDate>
        <atom:link href="https://kannada.asianetnews.com/rss/travel" rel="self" type="application/rss+xml"/>
        <item>
            <title><![CDATA[Diwali Airfare: ದೀಪಾವಳಿಗೆ ಊರಿಗೆ ಹೋಗ್ತಿದ್ದೀರಾ? ಟಿಕೆಟ್ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ! ರಿಟರ್ನ್ ಟಿಕೆಟ್‌ಗೆ ₹18,000!]]></title>
            <link>https://kannada.asianetnews.com/india-news/indian-domestic-airfares-skyrocket-ahead-of-diwali-festival-rav/articleshow-08haasn</link>
            <guid isPermaLink="true">https://kannada.asianetnews.com/india-news/indian-domestic-airfares-skyrocket-ahead-of-diwali-festival-rav/articleshow-08haasn</guid>
            <pubDate>Tue, 15 Sep 2026 13:49:58 +0530</pubDate>
            <description><![CDATA[&lt;p&gt;ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿವೆ. ನವೆಂಬರ್ 6 ರಿಂದ 8ರ ನಡುವೆ ದೆಹಲಿ, ಮುಂಬೈ, ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಪ್ರಯಾಣ ದರ ಗಗನಕ್ಕೇರಿದೆ. ದರ ಏರಿಕೆಗೆ ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2j24f3s1xmnw27zhd5xszgs,imgname-indian-domestic-airfares-skyrocket-ahead-of-diwali-festival-rav-1789460102265.jpg" type="image/jpeg" height="390" width="690"/>
            <content:encoded><![CDATA[&lt;p&gt;ದೀಪಾವಳಿ ಸಮೀಪಿಸಿದೆ. ಹಬ್ಬಕ್ಕೆ ಊರಿಗೆ ಹೋಗಲು ಜನರು ತಯಾರಿ ಹೊತ್ತಲ್ಲಿ ಬಸ್ ಪ್ರಯಾಣ ದರ ಮಾತ್ರವಲ್ಲ, ವಿಮಾನಯಾನ ಕಂಪನಿಗಳು ಸಹ ಟಿಕೆಟ್ ದರ ಹೆಚ್ಚಿಸಿ ಶಾಕ್ ನೀಡಿವೆ&lt;/p&gt;&lt;p&gt;ಹೌದು. ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಟಿಕೆಟ್ ದರಗಳು ದೀಪಾವಳಿ ಹಬ್ಬದ ಹಿನ್ನೆಲೆ ಗಗನಕ್ಕೇರಿವೆ. ಅದರಲ್ಲೂ ನೀವು ನವೆಂಬರ್ 6 ರಿಂದ 8ರ ನಡುವೆ ಪ್ರಯಾಣಿಸುವುದಾದರೆ ನಿಮ್ಮ ಜೇಬಿಗೆ ಕತ್ತರಿ ಬಿಳುವುದು ಗ್ಯಾರೆಂಟಿ. ಯಾವ್ಯಾವ ರೂಟ್&zwnj;ಗಳಲ್ಲಿ ರಿಟರ್ನ್ ದರ ಹೆಚ್ಚಿಸಿವೆ ಅನ್ನೋದು ಇಲ್ಲಿ ವಿವರಿಸಲಾಗಿದೆ. ನೀವು ಇದನ್ನ ಓದಿದ ಬಳಿಕವೇ ಮುಂದಿನ ಪ್ರಯಾಣದ ದಿನಾಂಕ ನಿರ್ಧರಿಸುವುದು ಒಳ್ಳೆಯದು.&lt;/p&gt;&lt;h2&gt;ಪ್ರಮುಖ ರೂಟ್&zwnj;ಗಳಲ್ಲಿ ರಿಟರ್ನ್ ಟಿಕೆಟ್ ದರ ಹೀಗಿದೆ&lt;/h2&gt;&lt;ul&gt; &lt;li&gt;ದೆಹಲಿ - ಹೈದರಾಬಾದ್: ₹18,000 ವರೆಗೆ (AIR India)&lt;/li&gt; &lt;li&gt;ದೆಹಲಿ - ಕೋಲ್ಕತ್ತಾ: ₹17,000 ವರೆಗೆ (AIR India)&lt;/li&gt; &lt;li&gt;ದೆಹಲಿ - ಅಹಮದಾಬಾದ್: ₹17,000 ವರೆಗೆ (AIR India)&lt;/li&gt; &lt;li&gt;ದೆಹಲಿ - ಬೆಂಗಳೂರು: ₹16,000 ವರೆಗೆ&lt;/li&gt; &lt;li&gt;ದೆಹಲಿ - ಮುಂಬೈ: ₹13,000 ವರೆಗೆ (indiGO)&lt;/li&gt;&lt;/ul&gt;&lt;p&gt;ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಇದನ್ನೇ ಬಂಡವಾಳ ಮಾಡಿಕೊಳ್ಳುವ ವಿಮಾನಯಾನ ಕಂಪನಿಗಳು ದರ ಹೆಚ್ಚಿಸಲು ಮುಂದಾಗಿವೆ. ಅದರಲ್ಲೂ ದೀಪಾವಳಿ ಸೀಸನ್&zwnj;ಗೆ ದಿಢೀರ್ ಬೇಡಿಕೆ ಹೆಚ್ಚಾಗುತ್ತೆ. ಬೇರೆ ಬೇರೆ ನಗರಗಳಿಂದ ಬೆಂಗಳೂರಿಗೆ ಬಂದಿರುವ ಜನರು ದೀಪಾವಳಿ ಆಚರಿಸಲು ತಮ್ಮ ರಾಜ್ಯಗಳಿಗೆ ಹೋಗುವುದರಿಂದ ಬೇಡಿಕೆ ಹೆಚ್ಚಾಗುತ್ತೆ. ಕಡಿಮೆ ದರದ ಸೀಟುಗಳು ಬೇಗನೆ ಖಾಲಿಯಾಗುತ್ತವೆ. ಹೀಗಾಗಿ 'ಡೈನಾಮಿಕ್ ಪ್ರೈಸಿಂಗ್' (Dynamic Pricing) ವ್ಯವಸ್ಥೆಯಡಿ ವಿಮಾನಯಾನ ಕಂಪನಿಗಳು ಟಿಕೆಟ್ ದರಗಳನ್ನು ಹೆಚ್ಚಿಸುತ್ತವೆ. ವಾಯುಯಾನ ಡೇಟಾ ಏಜೆನ್ಸಿಯಾದ OAG ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ದೇಶೀಯ ವಿಮಾನಗಳ ಸೀಟುಗಳ ಸಂಖ್ಯೆಯಲ್ಲಿ (Capacity) ಶೇ. 5.6 ರಷ್ಟು ಇಳಿಕೆಯಾಗಿದೆ. ಇಂಡಿಗೋ ಶೇ. 4.5 ರಷ್ಟು ಮತ್ತು ಏರ್ ಇಂಡಿಯಾ ಶೇ. 8.8 ರಷ್ಟು ಸೀಟುಗಳನ್ನು ಕಡಿತಗೊಳಿಸಿವೆ. ವಿಮಾನಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದು ಮತ್ತು ವಿಮಾನಗಳ ಓಡಾಟ ಕಡಿಮೆ ಇರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಶೇ. 90ಕ್ಕಿಂತ ಹೆಚ್ಚು ದೇಶೀಯ ವಿಮಾನ ಸೇವೆಗಳನ್ನು ಇಂಡಿಗೋ ಮತ್ತು ಏರ್ ಇಂಡಿಯಾ ಕಂಪನಿಗಳೇ ನಿರ್ವಹಿಸುತ್ತವೆ. ಹೀಗಾಗಿ, ಈ ಕಂಪನಿಗಳು ಸೀಟುಗಳ ಸಂಖ್ಯೆ ಕಡಿಮೆ ಮಾಡಿರುವುದು, ಹಬ್ಬದಂತಹ ಹೆಚ್ಚು ಬೇಡಿಕೆಯಿರುವ ಸಮಯದಲ್ಲಿ ಸೀಟುಗಳ ಲಭ್ಯತೆ ಮತ್ತು ಟಿಕೆಟ್ ದರಗಳ ಮೇಲೆ ನೇರ ಪರಿಣಾಮ ಬೀರಿದೆ. ಮುಂಬರುವ ದಿನಗಳಲ್ಲಿ ಟಿಕೆಟ್ ದರಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.&lt;/p&gt;]]></content:encoded>
            <category>travel</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/indian-domestic-airfares-skyrocket-ahead-of-diwali-festival-rav/articleshow-08haasn"/>
        </item>
        <item>
            <title><![CDATA[ಮಂಗಳೂರು-ಕುವೈತ್ ನೇರ ವಿಮಾನ ಸೇವೆ 6 ತಿಂಗಳು ಸ್ಥಗಿತ, ಕರಾವಳಿ ಭಾಗದ ಪ್ರಯಾಣಿಕರಿಗೆ ಮುಗಿಯದ ಗೋಳು!]]></title>
            <link>https://kannada.asianetnews.com/dakshina-kannada/mangaluru-kuwait-direct-flights-still-suspended-coastal-karnataka-passengers-face-hardships-gdp/articleshow-0d4lt01</link>
            <guid isPermaLink="true">https://kannada.asianetnews.com/dakshina-kannada/mangaluru-kuwait-direct-flights-still-suspended-coastal-karnataka-passengers-face-hardships-gdp/articleshow-0d4lt01</guid>
            <pubDate>Thu, 10 Sep 2026 11:50:42 +0530</pubDate>
            <description><![CDATA[ಮಂಗಳೂರು ಮತ್ತು ಕುವೈತ್ ನಡುವಿನ ನೇರ ವಿಮಾನ ಸೇವೆ ಆರು ತಿಂಗಳಿಂದ ಸ್ಥಗಿತಗೊಂಡಿದ್ದು, ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ದುಬಾರಿ ಮತ್ತು ದೀರ್ಘಾವಧಿಯ ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸೇವೆಯನ್ನು ಪುನರಾರಂಭಿಸಬೇಕು ಅಥವಾ ಇತರ ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ನೀಡಬೇಕೆಂದು ಬಲವಾದ ಬೇಡಿಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22qnjbfxtn2jg7vp6p90pmc,imgname-fotojet--17--1788945811823.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮಂಗಳೂರು ಮತ್ತು ಕುವೈತ್ ನಡುವಿನ ನೇರ ವಿಮಾನ ಸೇವೆಗಳು ನಿಂತು ಆರು ತಿಂಗಳು ಕಳೆದರೂ, ಈ ಭಾಗದಿಂದ ಸಂಚರಿಸುವ ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರು ಪಡುತ್ತಿರುವ ಪಾಡಿಗೆ ಇನ್ನೂ ತೆರೆಬಿದ್ದಿಲ್ಲ. ಪ್ರತಿವರ್ಷ ಲಕ್ಷಾಂತರ ಮಂದಿ ವಲಸಿಗರು ಮತ್ತು ಪ್ರವಾಸಿಗರು ಅವಲಂಬಿಸಿರುವ ಈ ವಿಮಾನ ಮಾರ್ಗವು ಅನಿವಾರ್ಯ ಕಾರಣಗಳಿಂದಾಗಿ ಇನ್ನೂ ಪುನರಾರಂಭಗೊಳ್ಳದಿರುವುದು ಸಾರ್ವಜನಿಕರಲ್ಲಿ ತೀವ್ರ ನಿರಾಶೆಯನ್ನು ಮೂಡಿಸಿದೆ.&lt;/p&gt;&lt;h2&gt;ವಿಮಾನ ಸೇವೆ ರದ್ದಾಗಲು ಅಸಲಿ ಕಾರಣವೇನು?&lt;/h2&gt;&lt;p&gt;ಕಳೆದ ಫೆಬ್ರವರಿ 28ರಂದು ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧದಿಂದಾಗಿ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಹಲವಾರು ಗಲ್ಫ್ ರಾಷ್ಟ್ರಗಳ ವಾಯು ಮಾರ್ಗಗಳು ಅಸ್ತವ್ಯಸ್ತಗೊಂಡಿದ್ದವು. ಆದರೆ, ಕಾಲಕ್ರಮೇಣ ಸಂಘರ್ಷದ ತೀವ್ರತೆ ತಗ್ಗಿ, ಜಾಗತಿಕ ಮಟ್ಟದಲ್ಲಿ ಹೆಚ್ಚಿನೆಲ್ಲಾ ದೇಶಗಳಿಗೆ ವಿಮಾನ ಹಾರಾಟಗಳು ಯಶಸ್ವಿಯಾಗಿ ಪುನರಾರಂಭಗೊಂಡವು. ದುರದೃಷ್ಟವಶಾತ್, ಮಂಗಳೂರು-ಕುವೈತ್ ನಡುವಿನ ವಿಮಾನ ಸೇವೆ ಮಾತ್ರ ಇಲ್ಲಿಯವರೆಗೆ ಆರಂಭವಾಗಿಲ್ಲ.&lt;/p&gt;&lt;p&gt;ಈ ಬಿಕ್ಕಟ್ಟು ಎದುರಾಗುವುದಕ್ಕೂ ಮುನ್ನ 'ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್' ಸಂಸ್ಥೆಯು ಮಂಗಳೂರು ಮತ್ತು ಕುವೈತ್ ನಡುವೆ ವಾರಕ್ಕೆ ಮೂರು ದಿನಗಳ ಕಾಲ ನಿಯಮಿತವಾಗಿ ನೇರ ವಿಮಾನಗಳನ್ನು ಕಾರ್ಯಾಚರಣೆಗೊಳಿಸುತ್ತಿತ್ತು.&lt;/p&gt;&lt;h2&gt;ಪ್ರಯಾಣಿಕರ ಪರದಾಟ ಮತ್ತು ಅಧಿಕ ವೆಚ್ಚದ ಹೊರೆ:&lt;/h2&gt;&lt;p&gt;ನೇರ ವಿಮಾನಗಳಿಲ್ಲದೆ ಪರದಾಡುತ್ತಿರುವ ಕರಾವಳಿ ಭಾಗದ ಪ್ರಯಾಣಿಕರು, ಪ್ರಸ್ತುತ ಕುವೈತ್ ತಲುಪಲು ಬೆಂಗಳೂರು, ಮುಂಬೈ ಅಥವಾ ಕೋಝಿಕ್ಕೋಡ್ (ಕ್ಯಾಲಿಕಟ್) ಮುಂತಾದ ನಗರಗಳನ್ನು ಮೊದಲು ಸುತ್ತಿ ಆಮೇಲೆ ಪ್ರಯಾಣ ಮುಂದುವರೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕನೆಕ್ಟಿಂಗ್ ವಿಮಾನಗಳ ಪ್ರಯಾಣವು ಸುದೀರ್ಘ ಸಮಯವನ್ನು ತೆಗೆದುಕೊಳ್ಳುತ್ತಿರುವುದಲ್ಲದೆ, ಸಾಮಾನ್ಯ ಜನರ ಜೇಬಿಗೆ ಗಣನೀಯವಾದ ಕತ್ತರಿ ಬೀಳುವಂತೆ ಮಾಡಿದೆ.&lt;/p&gt;&lt;h2&gt;ಕರಾವಳಿಗರ ಬೃಹತ್ ಬೇಡಿಕೆ:&lt;/h2&gt;&lt;p&gt;ಉತ್ತರ ಕನ್ನಡದ ಭಟ್ಕಳದಿಂದ ಹಿಡಿದು ದಕ್ಷಿಣದ ಕಾಸರಗೋಡಿನವರೆಗಿನ ಕರಾವಳಿ ಪಟ್ಟಿಯ ಸುಮಾರು 40,000ಕ್ಕೂ ಅಧಿಕ ಕನ್ನಡಿಗರು ಕುವೈತ್&zwnj;ನಲ್ಲಿ ಉದ್ಯೋಗ ಹಾಗೂ ವ್ಯವಹಾರದಲ್ಲಿದ್ದಾರೆ. ಮಂಗಳೂರಿನಿಂದ ನೇರ ವಿಮಾನಗಳಿಲ್ಲದಿರುವುದು ಈ ಅನಿವಾಸಿ ಭಾರತೀಯರ ಕುಟುಂಬಗಳಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.&lt;/p&gt;&lt;p&gt;ಬೆಂಗಳೂರು ಹಾಗೂ ಮುಂಬೈನಂತಹ ಮಹಾನಗರಗಳಿಂದ ಕುವೈತ್&zwnj;ಗೆ ಎಂದಿನಂತೆ ವಿಮಾನಗಳು ಹಾರಾಡುತ್ತಿರುವಾಗ, ಕೇವಲ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾತ್ರ ಈ ಸೌಲಭ್ಯ ದೊರೆಯದಿರುವುದು ತಾರತಮ್ಯದಂತಿದೆ. ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸಂಸ್ಥೆಯು ತನ್ನ ಸೇವೆಯನ್ನು ಮರುಪ್ರಾರಂಭಿಸಲು ಮುಂದಾಗದಿದ್ದಲ್ಲಿ, ನಾಗರಿಕ ವಿಮಾನಯಾನ ಪ್ರಾಧಿಕಾರವು ಇತರ ಜಾಗತಿಕ ವಿಮಾನಯಾನ ಸಂಸ್ಥೆಗಳಿಗೆ ಮಂಗಳೂರು-ಕುವೈತ್ ನಡುವೆ ವಿಮಾನಗಳನ್ನು ಹಾರಿಸಲು ಅನುಮತಿ ನೀಡಬೇಕು ಎಂದು ಪ್ರಮುಖ ಅನಿವಾಸಿ ಭಾರತೀಯರಾದ ಮೋಹನದಾಸ್ ಕಾಮತ್ ಅವರು ಬಲವಾಗಿ ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಇತರ ಗಲ್ಫ್ ಮಾರ್ಗಗಳ ಸ್ಥಿತಿಗತಿ:&lt;/h2&gt;&lt;p&gt;ಕುವೈತ್ ಹೊರತಾಗಿ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿ, ಬಹ್ರೇನ್, ದಮ್ಮಾಮ್, ದುಬೈ, ದೋಹಾ, ಜೆಡ್ಡಾ ಮತ್ತು ಮಸ್ಕತ್ ಸೇರಿದಂತೆ ಪ್ರಮುಖ ಗಲ್ಫ್ ರಾಷ್ಟ್ರಗಳ ಇತರ ನಗರಗಳಿಗೆ ಎಂದಿನಂತೆ ನೇರ ವಿಮಾನ ಸೇವೆಗಳು ಸುಗಮವಾಗಿ ಮುಂದುವರಿದಿವೆ. ಕುವೈತ್ ವಿಮಾನಯಾನ ಕೂಡ ಆದಷ್ಟು ಬೇಗ ಪುನರಾರಂಭಗೊಂಡು ಪ್ರಯಾಣಿಕರ ಕಷ್ಟಗಳಿಗೆ ಶಾಶ್ವತ ಮುಕ್ತಿ ಸಿಗಲಿ ಎಂಬುದು ಕರಾವಳಿಗರ ಮನವಿಯಾಗಿದೆ&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/mangaluru-kuwait-direct-flights-still-suspended-coastal-karnataka-passengers-face-hardships-gdp/articleshow-0d4lt01"/>
        </item>
        <item>
            <title><![CDATA[Tirumala Free Bus: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್, ಬೆಟ್ಟದ ಮೇಲೆ ಇನ್ಮುಂದೆ ಉಚಿತ ಪ್ರಯಾಣ!]]></title>
            <link>https://kannada.asianetnews.com/gallery/india-news/reliance-donates-25-electric-buses-for-free-travel-in-tirumala-sat-0p1sziu</link>
            <guid isPermaLink="true">https://kannada.asianetnews.com/gallery/india-news/reliance-donates-25-electric-buses-for-free-travel-in-tirumala-sat-0p1sziu</guid>
            <pubDate>Mon, 07 Sep 2026 14:24:07 +0530</pubDate>
            <description><![CDATA[ತಿರುಮಲಕ್ಕೆ ಹೋಗುವ ಶ್ರೀವಾರಿ ಭಕ್ತರಿಗೆ ಒಂದು ಪ್ರಮುಖ ಮಾಹಿತಿ ಇಲ್ಲಿದೆ. ಶ್ರೀವಾರಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ, ತಿರುಮಲದಲ್ಲಿ ಭಕ್ತರ ಅನುಕೂಲಕ್ಕಾಗಿ ಹೊಸ ಎಲೆಕ್ಟ್ರಿಕ್ ಬಸ್&zwnj;ಗಳನ್ನು ಸೇವೆಗೆ ಸೇರಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j1h99d4xpa6nddckq9pvnys4,imgname-tamil-news--49-.png" type="image/jpeg" height="390" width="690"/>
            <content:encoded><![CDATA[ತಿರುಮಲಕ್ಕೆ ಹೋಗುವ ಶ್ರೀವಾರಿ ಭಕ್ತರಿಗೆ ಒಂದು ಪ್ರಮುಖ ಮಾಹಿತಿ ಇಲ್ಲಿದೆ. ಶ್ರೀವಾರಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ, ತಿರುಮಲದಲ್ಲಿ ಭಕ್ತರ ಅನುಕೂಲಕ್ಕಾಗಿ ಹೊಸ ಎಲೆಕ್ಟ್ರಿಕ್ ಬಸ್&zwnj;ಗಳನ್ನು ಸೇವೆಗೆ ಸೇರಿಸಲಾಗುತ್ತಿದೆ.&lt;img&gt;ತಿರುಮಲ ಶ್ರೀವಾರಿ ಭಕ್ತರಿಗೆ ಇದೊಂದು ಸಂತಸದ ಸುದ್ದಿ. ರಿಲಯನ್ಸ್ ಸಂಸ್ಥೆಯು ತಿರುಮಲ ತಿರುಪತಿ ದೇವಸ್ಥಾನಕ್ಕೆ 25 ಎಲೆಕ್ಟ್ರಿಕ್ ಬಸ್&zwnj;ಗಳನ್ನು ನೀಡುವುದಾಗಿ ಕಳೆದ ಜೂನ್&zwnj;ನಲ್ಲಿ ಘೋಷಿಸಿತ್ತು. ₹27.5 ಕೋಟಿ ಮೌಲ್ಯದ ಈ ಬಸ್&zwnj;ಗಳನ್ನು ಭಕ್ತರ ಉಚಿತ ಪ್ರಯಾಣಕ್ಕಾಗಿ ಬಳಸಲಾಗುತ್ತದೆ.&lt;img&gt;&lt;p&gt;ಈ 25 ಬಸ್&zwnj;ಗಳ ಪೈಕಿ, 15 ಎಲೆಕ್ಟ್ರಿಕ್ 'ಧರ್ಮರಥ' ಬಸ್&zwnj;ಗಳು ಈಗಾಗಲೇ ತಿರುಪತಿಗೆ ಬಂದು ತಲುಪಿವೆ. ಈ ಬಸ್&zwnj;ಗಳನ್ನು ತಿರುಮಲ ಬೆಟ್ಟದ ಮೇಲೆ ಓಡಿಸಲು ಟ್ರಯಲ್ ರನ್ ಕೂಡ ನಡೆಸಲಾಗಿದೆ. ಬೆಟ್ಟದ ರಸ್ತೆಯಲ್ಲಿ ಸಂಚಾರಕ್ಕೆ ಬೇಕಾದ ವ್ಯವಸ್ಥೆ ಹಾಗೂ ಚಾರ್ಜಿಂಗ್ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಉಳಿದ 10 ಬಸ್&zwnj;ಗಳು ನಂತರ ಸೇವೆಗೆ ಸೇರಲಿವೆ ಎಂದು ವರದಿಯಾಗಿದೆ.&lt;/p&gt;&lt;img&gt;ಹೊಸ ಬಸ್&zwnj;ಗಳು ಸೇವೆಗೆ ಬಂದ ನಂತರ, ತಿರುಮಲಕ್ಕೆ ಬರುವ ಭಕ್ತರು ಉಚಿತವಾಗಿ ಪ್ರಯಾಣಿಸಬಹುದು. ತಿರುಮಲದಲ್ಲಿ ಈಗಾಗಲೇ 'ಧರ್ಮರಥ' ಬಸ್ ಸೇವೆ ಚಾಲ್ತಿಯಲ್ಲಿದೆ. ಹಬ್ಬ ಹಾಗೂ ರಜಾದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ, ಈ ಹೆಚ್ಚುವರಿ ಬಸ್&zwnj;ಗಳು ಕಾಯುವ ಸಮಯ ಮತ್ತು ಜನದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ.&lt;img&gt;ಈ ಹಿಂದೆ ಅನಂತ್ ಅಂಬಾನಿ ತಿರುಮಲಕ್ಕೆ ಭೇಟಿ ನೀಡಿದ್ದಾಗ, ರಿಲಯನ್ಸ್ ಪರವಾಗಿ 25 ಎಲೆಕ್ಟ್ರಿಕ್ ಬಸ್&zwnj;ಗಳನ್ನು ನೀಡುವುದಾಗಿ ಘೋಷಿಸಿದ್ದರು. ಬಸ್&zwnj;ಗಳ ಜೊತೆಗೆ, ಚಾಲಕರ ವ್ಯವಸ್ಥೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಕ್ಕೂ ಬೆಂಬಲ ನೀಡುವುದಾಗಿ ತಿಳಿಸಲಾಗಿತ್ತು. ಈ ಮೂಲಕ ತಿರುಮಲದಲ್ಲಿ ಪರಿಸರ ಸ್ನೇಹಿ ಸಾರಿಗೆಯನ್ನು ಹೆಚ್ಚಿಸಲು ಟಿಟಿಡಿ ಮುಂದಾಗಿದೆ.&lt;img&gt;ಇದೇ ವೇಳೆ, 2026ರ ಶ್ರೀವಾರಿ ಬ್ರಹ್ಮೋತ್ಸವದ ಪ್ರಮುಖ ಕಾರ್ಯಕ್ರಮಗಳು ಸೆಪ್ಟೆಂಬರ್ 14 ರಿಂದ ಆರಂಭವಾಗಲಿವೆ. ಬ್ರಹ್ಮೋತ್ಸವದ ಸಮಯದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿರುವುದರಿಂದ, ಟಿಟಿಡಿ ಸಾರಿಗೆ ಮತ್ತು ಇತರ ಸೌಲಭ್ಯಗಳ ಬಗ್ಗೆ ವಿಶೇಷ ಗಮನ ಹರಿಸುತ್ತದೆ. ಈ ಹಿನ್ನೆಲೆಯಲ್ಲಿ, ಹೊಸ ಎಲೆಕ್ಟ್ರಿಕ್ ಬಸ್&zwnj;ಗಳ ಸೇರ್ಪಡೆ ಭಕ್ತರಿಗೆ ದೊಡ್ಡ ಅನುಕೂಲವಾಗಲಿದೆ.]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/reliance-donates-25-electric-buses-for-free-travel-in-tirumala-sat-0p1sziu"/>
        </item>
        <item>
            <title><![CDATA[ಪ್ರಸಿದ್ಧ ಗಡಾಯಿಕಲ್ಲು ಚಾರಣಿಗರಿಗೆ ಮುಕ್ತ, ದಿನಕ್ಕೆ ಕೇವಲ 500 ಮಂದಿಗೆ ಮಾತ್ರ ಪ್ರವೇಶ, ಈ ನಿಯಮ ನೆಟ್ಟಗೆ ಪಾಲಿಸಿ!]]></title>
            <link>https://kannada.asianetnews.com/dakshina-kannada/mangaluru-news-gadaikallu-known-as-jamalabad-fort-reopens-for-trekking-entry-rules-limits-and-details-gdp/articleshow-2q2p40h</link>
            <guid isPermaLink="true">https://kannada.asianetnews.com/dakshina-kannada/mangaluru-news-gadaikallu-known-as-jamalabad-fort-reopens-for-trekking-entry-rules-limits-and-details-gdp/articleshow-2q2p40h</guid>
            <pubDate>Fri, 18 Sep 2026 10:29:56 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಐತಿಹಾಸಿಕ ಜಮಲಾಬಾದ್ ಕೋಟೆ (ಗಡಾಯಿಕಲ್ಲು) ಮಳೆಗಾಲದ ನಿರ್ಬಂಧದ ಬಳಿಕ ಇದೀಗ ಮತ್ತೆ ಚಾರಣಿಗರಿಗೆ ಮುಕ್ತವಾಗಿದೆ. ದಿನವೊಂದಕ್ಕೆ ಕೇವಲ 500 ಮಂದಿಗೆ ಮಾತ್ರ ಪ್ರವೇಶವಿದ್ದು, ಮುಂಗಡ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಸಮೀಪದ ಜಲಪಾತಗಳ ವೀಕ್ಷಣೆಗೂ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2sd4ag2vrtv90w90ee792v2,imgname-gadaikallu-known-as-jamalabad-fort-1789706512898.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು:&lt;/strong&gt; ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಜಮಲಾಬಾದ್ ಕೋಟೆ ಅಥವಾ ನರಸಿಂಹ ಗಡ (ಗಡಾಯಿಕಲ್ಲು) 17ರಿಂದ ಪ್ರವಾಸಿಗರ ವೀಕ್ಷಣೆ ಮತ್ತು ಚಾರಣಕ್ಕೆ ಮುಕ್ತವಾಗಲಿದೆ. ಮಳೆಗಾಲದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಪ್ರವೇಶ ನಿರ್ಬಂಧ ವನ್ನು ಬೆಳ್ತಂಗಡಿ ವನ್ಯಜೀವಿ ವಿಭಾಗ ತೆರವುಗೊಳಿಸಿದೆ.&lt;/p&gt;&lt;p&gt;ಗಡಾಯಿಕಲ್ಲು ಪ್ರದೇಶದಲ್ಲಿ ಮಳೆಗಾಲದ ಸಂದರ್ಭ ಬಂಡೆ ಹಾಗೂ ಚಾರಣದ ಹಾದಿಗಳು ಜಾರುವ ಸ್ಥಿತಿ ಇರುವುದರಿಂದ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರವೇಶ ನಿರ್ಬಂಧಿಸಲಾಗಿತ್ತು. ಬೇಸಿಗೆ ಅವಧಿಯಲ್ಲಿ ಕಾಡಿಚ್ಚು ಹಾಗೂ ಬೆಂಕಿ ಅವಘಡಗಳ ಸಾಧ್ಯತೆ, ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಗಣತಿ ಸೇರಿದಂತೆ ವಿವಿಧ ಕಾರಣ ಗಳಿಂದಲೂ ಪ್ರವಾಸಿಗರ ಪ್ರವೇಶವನ್ನು ಹಂತಹಂತವಾಗಿ ನಿರ್ಬಂಧಿಸಲಾಗಿತ್ತು.&lt;/p&gt;&lt;p&gt;ಈ ಹಿಂದೆ ಜೂ.1ರಿಂದ ಗಡಾಯಿಕಲ್ಲು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು. ಪ್ರವೇಶ ಆರಂಭವಾದ ಒಂದೇ ವಾರದಲ್ಲಿ ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ ಜೂ.14ರಿಂದ ಮತ್ತೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಮಳೆ ಇಲ್ಲದ ಕಾರಣ ಮತ್ತೆ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಜು.8ರಿಂದ ಚಾರಣಕ್ಕೆ ಮುಂದುವರಿಸಲಾಗಿತ್ತು. ಮಧ್ಯೆ ಮತ್ತೆ ಮಳೆ ಸುರಿದ ಹಿನ್ನಲೆಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಈಗ ಮಳೆ ಕಡಿಮೆಯಾಗಿದ್ದು, ಚಾರಣದ ಹಾದಿ ಹಾಗೂ ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದ ಬಳಿಕ 17ರಿಂದ ಮತ್ತೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ವನ್ಯಜೀವಿ ವಿಭಾಗ ತಿಳಿಸಿದೆ.&lt;/p&gt;&lt;p&gt;ಗಡಾಯಿಕಲ್ಲು ಕರ್ನಾಟಕದ ಅತ್ಯಂತ ವಿಶಿಷ್ಟ ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ಸಮುದ್ರಮಟ್ಟದಿಂದ ಸುಮಾರು 3,600 ಅಡಿ ಎತ್ತರದಲ್ಲಿರುವ ಈ ಕೋಟೆ ತನ್ನ ಐತಿಹಾಸಿಕ ಹಿನ್ನೆಲೆ, ನೈಸರ್ಗಿಕ ಸೌಂದರ್ಯ, ವಿಶಿಷ್ಟ ಭೌಗೋಳಿಕ ವೈಶಿಷ್ಟ್ಯಗಳಿಂದ ಅಪಾರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ.ಕೋಟೆಯ ಶಿಖರ ತಲುಪಲು ಸುಮಾರು 2 ಸಾವಿರ ಕಲ್ಲಿನ ಮೆಟ್ಟಿಲುಗಳನ್ನು ಏರಬೇಕಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳು ಹಾಗೂ ದೈಹಿಕವಾಗಿ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗದ ಅನೇಕ ಪ್ರವಾಸಿಗರಿಗೆ ಈ ಐತಿಹಾಸಿಕ ತಾಣವನ್ನು ವೀಕ್ಷಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ಐತಿಹಾಸಿಕ ತಾಣವನ್ನು ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಘೋಷಿಸುವುದರೊಂದಿಗೆ, ಸಾರ್ವಜನಿಕರಿಗೆ ಸುಲಭವಾಗಿ ತಲುಪುವಂತೆ ರೋಪ್&zwnj;ವೇ ಯೋಜನೆ ಅನುಷ್ಢಾನಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ ಎಂಬ ಒತ್ತಾಯವೂ ಸರ್ಕಾರದ ಮುಂದಿದೆ.&lt;/p&gt;&lt;h2&gt;ಜಲಪಾತ ವೀಕ್ಷಣೆಗೂ ಅವಕಾಶ:&lt;/h2&gt;&lt;p&gt;ಪ್ರಸ್ತುತ ಮಳೆ ಇಲ್ಲದಿರುವ ಕಾರಣ ತಾಲೂಕಿನ ಕಡಮಗುಂಡಿ, ಎರ್ಮಾಯಿ ಮೊದಲಾದ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಜಲಪಾತಗಳು ಸಾಮಾನ್ಯ ಸ್ಥಿತಿಯಲ್ಲಿ ಧಮ್ಮಿಕ್ಕುತ್ತಿವೆ. ಚಾರ್ಮಾಡಿ ಘಾಟಿಯ ತಾತ್ಕಾಲಿಕ ಜಲಪಾತಗಳಲ್ಲಿ ನೀರಿನ ಧುಮ್ಮಿಕ್ಕುವಿಕೆ ದುರ್ಬಲಗೊಂಡಿದೆ.&lt;/p&gt;&lt;h2&gt;ನೋಂದಣಿ ಕಡ್ಡಾಯ:&lt;/h2&gt;&lt;p&gt;ಪ್ರವಾಸಿಗರ ಸಂಖ್ಯೆ ನಿಯಂತ್ರಿಸುವ ಉದ್ದೇಶದಿಂದ ದಿನವೊಂದಕ್ಕೆ ಗರಿಷ್ಠ 500 ಮಂದಿಗೆ ಮಾತ್ರ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಮುಂಗಡವಾಗಿ ಪೂರ್ವ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ವನ್ಯಜೀವಿ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/dakshina-kannada/mangaluru-news-gadaikallu-known-as-jamalabad-fort-reopens-for-trekking-entry-rules-limits-and-details-gdp/articleshow-2q2p40h"/>
        </item>
        <item>
            <title><![CDATA[2027ಕ್ಕೆ ಭಾರತೀಯರ ಕನಸಿನ ರೈಲು ಮಾರ್ಗ ಲೋಕಾರ್ಪಣೆ; ಇಲ್ಲಿದೆ ದೇಶದ ಮೊದಲ ಸುರಂಗ ರೈಲು ನಿಲ್ದಾಣ!]]></title>
            <link>https://kannada.asianetnews.com/india-news/indian-railway-sivok-rangpo-railway-line-80-percent-complete-sikkim-train-2027-sat/articleshow-5ceoret</link>
            <guid isPermaLink="true">https://kannada.asianetnews.com/india-news/indian-railway-sivok-rangpo-railway-line-80-percent-complete-sikkim-train-2027-sat/articleshow-5ceoret</guid>
            <pubDate>Fri, 18 Sep 2026 08:26:15 +0530</pubDate>
            <description><![CDATA[&lt;p&gt;ಈಶಾನ್ಯ ಭಾರತದ ಸಿಕ್ಕಿಂ ಗಡಿಯಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ 44.96 ಕಿ.ಮೀ. ಉದ್ದದ 'ಸಿವಾಕ್&zwnj; ರಾಂಗ್ಪೋ ರೈಲು ಮಾರ್ಗ' ನಿರ್ಮಾಣವಾಗುತ್ತಿದೆ. 17,146 ಕೋಟಿ ರೂ. ವೆಚ್ಚದ ಈ ಯೋಜನೆಯ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, 2027ರ ಡಿಸೆಂಬರ್&zwnj;ಗೆ ಲೋಕಾರ್ಪಣೆಯಾಗಲಿದೆ. ಇದರಲ್ಲಿ ಭಾರತದ ಮೊದಲ ಸುರಂಗ ರೈಲು ನಿಲ್ದಾಣವೂ ಸೇರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2s6nwzn52ah756sfbpgq9bp,imgname-indians-dream-sikkim-railway-1789699748852.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಶಾನ್ಯ ಭಾರತದ ಸಿಕ್ಕಿಂ ಗಡಿಯಲ್ಲಿ ಚೀನಾ ಆರ್ಭಟಕ್ಕೆ ಸೆಡ್ಡು ಹೊಡೆಯಲು ಸೇನಾ ಪಡೆಗಳ ನಿಯೋಜನೆ, ಗಡಿ ಪ್ರದೇಶಗಳ ಮೂಲಸೌಕರ್ಯ ಸುಧಾರಣೆ, ಪ್ರವಾಸೋದ್ಯಮ, ಸ್ಥಳೀಯ ಆರ್ಥಿಕತೆಗೆ ಹೊಸ ಅವಕಾಶ ಸೃಷ್ಟಿಸುವ ಮಹತ್ವಾಕಾಂಕ್ಷಿ &lsquo;ಸಿವಾಕ್&zwnj; ರಾಂಗ್ಪೋ ರೈಲು ಮಾರ್ಗ&rsquo; ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು, 2027ರ ಡಿಸೆಂಬರ್&zwnj;ಗೆ ಲೋಕಾರ್ಪಣೆಗೆ ಸಜ್ಜಾಗಲಿದೆ.&lt;/p&gt;&lt;p&gt;ಹಿಮಾಲಯದ ದುರ್ಗಮ ಬೆಟ್ಟ-ಕಣಿವೆಗಳ ನಡುವೆ ನಿರ್ಮಾಣವಾಗುತ್ತಿರುವ 44.96 ಕಿ.ಮೀ. ಉದ್ದದ ಈ ಸವಾಲಿನ ರೈಲು ಮಾರ್ಗ ಮೂಲಕ ಸಿಕ್ಕಿಂಗೆ ಮೊದಲ ಬಾರಿಗೆ ರೈಲು ಸಂಪರ್ಕ ದೊರೆಯಲಿದೆ. ತನ್ಮೂಲಕ ಹಿಮಾಲಯ ಮಡಿಲಲ್ಲಿ ಹೊಸ ರೈಲ್ವೆ ಕ್ರಾಂತಿ ನಡೆಯಲಿದ್ದು, ದೇಶದ ಇತರ ರಾಜ್ಯಗಳು ಹಾಗೂ ಸಿಕ್ಕಿಂ ನಡುವಿನ ಸಂಪರ್ಕದಲ್ಲಿ ಐತಿಹಾಸಿಕ ಬದಲಾವಣೆಗೆ ರೈಲ್ವೆ ಇಲಾಖೆ ನಾಂದಿ ಹಾಡಲಿದೆ.&lt;/p&gt;&lt;p&gt;ಹಿಮಾಲಯದಲ್ಲಿರುವ ಸಿಕ್ಕಿಂಗೆ ಸಂಪರ್ಕ ಅವಕಾಶಗಳ ಕೊರತೆಯಿಂದಾಗಿ ಗಡಿಯಲ್ಲಿ ಸೇನಾಪಡೆಗಳ ನಿಯೋಜನೆ, ಗಡಿ ಭಾಗದ ಮೂಲಸೌಕರ್ಯ ಸುಧಾರಣೆ, ದೇಶದ ಭದ್ರತೆಗೆ ಒತ್ತು ನೀಡುವಂಥ ಚಟುವಟಿಕೆಗೆ ಹಿನ್ನಡೆ ಆಗುತ್ತಿತ್ತು. ಜತೆಗೆ ಭೂಲೋಕದ ಸ್ವರ್ಗದಂತಿರುವ ಸಿಕ್ಕಿಂ ರಾಜ್ಯದ ಪ್ರವಾಸೋದ್ಯಮ, ವ್ಯಾಪಾರ, ಕೈಗಾರಿಕೆ ಹಾಗೂ ಸ್ಥಳೀಯ ಆರ್ಥಿಕತೆಗೆ ಹೊಸ ಅವಕಾಶ ಸೃಷ್ಟಿಸಲು ಸಹ ಸಂಪರ್ಕದ ಕೊರತೆ ಕಾಡುತ್ತಿತ್ತು.&lt;/p&gt;&lt;p&gt;ಇದೀಗ ಡಿಸೆಂಬರ್ 2027ರ ವೇಳೆಗೆ ಭಾರತದ ಮೊದಲ ಸುರಂಗ ರೈಲು ನಿಲ್ದಾಣ ''ತೀಸ್ತಾ ಬಜಾರ್'' ಸೇರಿ ಸಿವಾಕ್-ರಾಂಗ್ಪೋ ರೈಲು ಮಾರ್ಗ ಪೂರ್ಣಗೊಳ್ಳುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಸಿಕ್ಕಿಂನಲ್ಲಿ ಹೊಸ ರೈಲು ಕ್ರಾಂತಿ: ಮೋಹಿಂದರ್&zwnj; ಸಿಂಗ್&zwnj;&lt;/strong&gt;&lt;/h2&gt;&lt;p&gt;ಕರ್ನಾಟಕದಿಂದ ಯೋಜನೆ ಪ್ರಗತಿ ವೀಕ್ಷಣೆಗೆ ತೆರಳಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಯೋಜನೆ ಸಲಹೆಗಾರ ಮೋಹಿಂದರ್ ಸಿಂಗ್ ಅವರು, &lt;strong&gt;ಸಿವಾಕ್&zwnj; ರಾಂಗ್ಪೋ ರೈಲು ಮಾರ್ಗ&lt;/strong&gt;ದ ಮೂಲಕ ಸಿಕ್ಕಿಂನ ಮಂಜಿನಿಂದ ಆವೃತವಾದ ಬೆಟ್ಟಗಳು ಮತ್ತು ಆಳವಾದ ಕಣಿವೆಗಳಲ್ಲಿ ಉಕ್ಕಿನ ಹಳಿಗಳ ಮೇಲೆ ಒಂದು ಹೊಸ ರೈಲು ಕ್ರಾಂತಿ ಶುರುವಾಗಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಅತ್ಯಂತ ದುರ್ಗಮ ಭೂಪ್ರದೇಶವಾದ ಈ ಕಣಿವೆ ಪ್ರದೇಶದಲ್ಲಿ 44.96 ಕಿ.ಮೀ. ಉದ್ದದ ರೈಲ್ವೆ ಯೋಜನೆ ಮೂಲಕ ಸಿಕ್ಕಿಂ ಅನ್ನು ರೈಲ್ವೆ ಸಂಪರ್ಕ ಇಡೀ ದೇಶದ ಜತೆಗೆ ಬೆಸೆಯಲಿದೆ. ಇದು ಭಾರತದ ಈಶಾನ್ಯ ಗಡಿ ಭಾಗಕ್ಕೆ ಕೇವಲ ಸಂಪರ್ಕ ಸಾಧನೆಗೆ ಮಾತ್ರವಲ್ಲದೆ ವಾಣಿಜ್ಯ, ಸಾರಿಗೆ, ಪ್ರವಾಸೋದ್ಯಮ ಸೇರಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;17,146 ಕೋಟಿ ರು. ವೆಚ್ಚದ ಯೋಜನೆ:&lt;/strong&gt;&lt;/h2&gt;&lt;p&gt;ರೈಲ್ವೆ ಇಲಾಖೆಯು ₹17,146 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಯೋಜನೆ ದೇಶದ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಂತ ಸವಾಲಿನ ಹಾದಿಯಲ್ಲಿ ಯೋಜನೆ ಕಾಮಗಾರಿ ನಡೆಯತ್ತಿದ್ದು, ಪ್ರಾಕೃತಿಕ ಹಾಗೂ ಭೌಗೋಳಿಕ ಸವಾಲುಗಳನ್ನು ಮೆಟ್ಟಿ ನಿಂತು ಎಂಜಿನಿಯರ್&zwnj;ಗಳು ಹಾಗೂ ಕಾರ್ಮಿಕರು ಹಗಲಿರುಳು ಯೋಜನೆ ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ ಎಂದು ಯೋಜನೆ ಹಿಂದಿನ ಶ್ರಮದ ಬಗ್ಗೆ ಮೋಹಿಂದರ್&zwnj; ಸಿಂಗ್&zwnj; ವಿವರಿಸಿದರು. ಯೋಜನೆಯ ಶೇ.80 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಯೋಜನೆಯಡಿ ಒಟ್ಟು 14 ಸುರಂಗ, 23 ಸೇತುವೆ ಮತ್ತು 5 ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಮೋಹಿಂದರ್&zwnj;ಸಿಂಗ್&zwnj; ಮಾಹಿತಿ ನೀಡಿದರು.&lt;/p&gt;&lt;h2&gt;&lt;strong&gt;ಮೊದಲ ಸುರಂಗ ರೈಲು ನಿಲ್ದಾಣ:&lt;/strong&gt;&lt;/h2&gt;&lt;p&gt;ಮುಖ್ಯವಾಗಿ ಭಾರತದ ಮೊದಲ ಸುರಂಗ ರೈಲು ನಿಲ್ದಾಣವಾದ ರಂಗ್ಪೂ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಯೋಜನೆಯಲ್ಲಿ 5.3 ಕಿ.ಮೀ.ಉದ್ದದ ಅತಿ ಉದ್ದದ ಸುರಂಗವೂ ಸೇರಿದ್ದು, ಅತ್ಯಂತ ಕಿರಿದಾದ ಸುರಂಗದ ಉದ್ದ 542 ಮೀಟರ್&zwnj; ಆಗಿದೆ. ಯೋಜನೆಗೆ ಈಗ ವೇಗ ದೊರೆತಿದ್ದು, ಈ ಪ್ರಮುಖ ರೈಲು ಮಾರ್ಗ ಪೂರ್ಣಗೊಳ್ಳುವ ಮೂಲಕ ಸಿಕ್ಕಿಂ ರಾಜ್ಯ ದೇಶದ ಇತರ ಭಾಗಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅತ್ಯುತ್ತಮ ಮತ್ತು ಸುರಕ್ಷಿತ ಮಾರ್ಗ ತೆರೆದುಕೊಳ್ಳಲಿದೆ.&lt;/p&gt;&lt;p&gt;ಈ ವೇಳೆ ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕ ಎಂ.ಮಧು, ಪಿಐಬಿ ಸಿಕ್ಕಿಂನ ಮೋಹಿನಾಕ್&zwnj; ಚಟರ್ಜಿ, ಸತ್ಯೇಂದ್ರ ಕುಮಾರ್, ಯೋಜನೆಯ ಮುಖ್ಯ ವ್ಯವಸ್ಥಾಪಕರಾದ ರೆನಿಯಾ ಎಟೆ ಸೇರಿ ಹಲವರು ಹಾಜರಿದ್ದರು.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/indian-railway-sivok-rangpo-railway-line-80-percent-complete-sikkim-train-2027-sat/articleshow-5ceoret"/>
        </item>
        <item>
            <title><![CDATA[ರಾಜ್ಯಕ್ಕೆ ಮೋದಿ ಗಿಫ್ಟ್: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ₹10,021 ಕೋಟಿ ವೆಚ್ಚದ 5 ರೈಲ್ವೆ ಯೋಜನೆಗಳಿಗೆ ಅಸ್ತು!]]></title>
            <link>https://kannada.asianetnews.com/state/union-cabinet-approves-5-railway-multi-tracking-projects-karnataka-south-india-rs-10021-crore-sat/articleshow-7nh04ga</link>
            <guid isPermaLink="true">https://kannada.asianetnews.com/state/union-cabinet-approves-5-railway-multi-tracking-projects-karnataka-south-india-rs-10021-crore-sat/articleshow-7nh04ga</guid>
            <pubDate>Thu, 10 Sep 2026 06:05:58 +0530</pubDate>
            <description><![CDATA[ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ ದಕ್ಷಿಣದ ನಾಲ್ಕು ರಾಜ್ಯಗಳಿಗೆ ₹10,021 ಕೋಟಿ ವೆಚ್ಚದ ಐದು ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳಲ್ಲಿ ವೈಟ್&zwnj;ಫೀಲ್ಡ್-ಬಂಗಾರಪೇಟೆ ಮಾರ್ಗದ ವಿಸ್ತರಣೆಯೂ ಸೇರಿದ್ದು, ಇದು ಕೆಜಿಎಫ್ ಮತ್ತು ಹೋಗೇನಕಲ್&zwnj;ನಂತಹ ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಸುಧಾರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1k7yjhpkndq1fsj837ckq5c,imgname-indian-railway--2--1788426013238.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.10): ಪ್ರ&lt;/strong&gt;ಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕರ್ನಾಟಕ ಸೇರಿ ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ 10,021 ಕೋಟಿ ರು. ಅಂದಾಜು ವೆಚ್ಚದ ಐದು ರೈಲ್ವೆ ಮಲ್ಟಿ ಟ್ರ್ಯಾಕಿಂಗ್&zwnj; ಯೋಜನೆಗಳಿಗೆ ಬುಧವಾರ ಅನುಮೋದನೆ ನೀಡಿದೆ.&lt;/p&gt;&lt;p&gt;ಈ ಐದು ಯೋಜನೆಗಳು ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳ 17 ಜಿಲ್ಲೆಗಳ ಹಾಲಿ ಇರುವ ರೈಲ್ವೆ ಸಂಪರ್ಕ ಜಾಲವನ್ನು 540 ಕಿ.ಮೀ.ನಷ್ಟು ವಿಸ್ತರಿಸಲಿದೆ. ಈ ಬಹು ಟ್ರ್ಯಾಕಿಂಗ್&zwnj; ಯೋಜನೆಗಳು 2,121 ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದ್ದು, 52 ಲಕ್ಷ ಜನರಿಗೆ ಅನುಕೂಲ ಮಾಡಿಕೊಡಲಿದೆ.&lt;/p&gt;&lt;p&gt;&lt;strong&gt;ಏನೇನು ಯೋಜನೆ?:&lt;/strong&gt;&lt;/p&gt;&lt;p&gt;77 ಕಿ.ಮೀ. ಉದ್ದದ ಅರಕ್ಕೋಣಂ-ರೇಣಿಗುಂಟಾ ಮೂರನೇ ಮತ್ತು ನಾಲ್ಕನೇ ಪಥ, ವೈಟ್&zwnj;ಫೀಲ್ಡ್&zwnj;-ಬಂಗಾರಪೇಟೆ ನಡುವಿನ 47 ಕಿ.ಮೀ. ಉದ್ದದ 3ನೇ ಮತ್ತು ನಾಲ್ಕನೇ ಪಥ, 147ಕಿ.ಮೀ. ಉದ್ದದ ಹೊಸೂರು- ಒಮಾಲೂರು ಡಬ್ಲಿಂಗ್&zwnj;, 159 ಕಿ.ಮೀ. ಉದ್ದದ ಸೇಲಂ-ಕರೂರು-ದಿಂಡಿಗುಲ್&zwnj; ನಡುವಿನ ಡಬ್ಲಿಂಗ್&zwnj;, 110 ಕಿ.ಮೀ. ಉದ್ದದ ಸಿಕಂದರಾಬಾದ್&zwnj;-ಕಾಝಿಪೇಟೆ ನಡುವಿನ ಮಾರ್ಗ ವಿಸ್ತರಣೆ ಇದರಲ್ಲಿ ಸೇರಿದೆ.&lt;/p&gt;&lt;p&gt;ಈ ರೈಲ್ವೆ ಮಾರ್ಗ ವಿಸ್ತರಣೆ ಹಾಗೂ ಪಥ ಮೇಲ್ದರ್ಜೆಗೇರಿಸುವ ಕಾರ್ಯದಿಂದ ಸಾರ್ವಜನಿಕ, ಸರಕು ಸಾಗಣೆಗೆ ನೆರವಾಗಲಿದೆ. 20209-30ರ ವೇಳೆಗೆ ಈ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.&lt;/p&gt;&lt;h2&gt;&lt;strong&gt;ಪ್ರವಾಸಿ ತಾಣಗಳ ಸಂಪರ್ಕ ಸುಧಾರಣೆ:&lt;/strong&gt;&lt;/h2&gt;&lt;p&gt;ಈ ರೈಲು ಮಾರ್ಗಗಳಿಂದಾಗಿ ಪ್ರಮುಖ ಪ್ರವಾಸಿ ತಾಣಗಳಾದ ತಿರುಪತಿ, ಸುಬ್ರಹ್ಮಣ್ಯ ಸ್ವಾಮಿ ದೇಗುಲ(ತಿರುತ್ತನಿ), ಶ್ರೀ ಪದ್ಮಾವತಿ ಅಮ್ಮವಾರಿ ದೇವಸ್ಥಾನ (ತಿರುಚನೂರ್&zwnj;), ಕೋಟಿಲಿಂಗೇಶ್ವದ ದೇವಾಲಯ, ಶ್ರೀ ಸೀತಿ ಬೈರವೇಶ್ವರ ಸ್ವಾಮಿ ದೇವಸ್ಥಾನ, ಬಂಗಾರು ತಿರುಪತಿ, ಕೋಲಾರ ಚಿನ್ನದ ಗಣಿಗಳು, ಹೋಗೇನಕಲ್&zwnj; ಫಾಲ್ಸ್&zwnj;, ಹೊಸೂರು ಕೋಟೆ, ಮೆಟ್ಟೂರು ಡ್ಯಾಂ, ಕೊಡೈಕೆನಾಲ್&zwnj;, ಸತ್ಯಮಂಗಲಂ ವನ್ಯಜೀವಿ ತಾಣ, ನಮಕ್ಕಲ್&zwnj; ಆಂಜನೇಯ ದೇವಸ್ಥಾನ, ನಮಕ್ಕಲ್&zwnj; ಕೋಟೆ, ಕಲ್ಯಾಣ ಪಶುಪತೇಶ್ವರ ದೇವಸ್ಥಾನ, ಯದಗಿರಿಗುಟ್ಟ ದೇವಸ್ಥಾನ, ಭೋಂಗಿರ್&zwnj; ಕೋಟೆ, ಸುರೇಂದ್ರಪುರ ಮತ್ತು ಸ್ವರ್ಮಗಿರಿ ದೇವಸ್ಥಾನಗಳಿಗೆ ಸಂಪರ್ಕ ಸುಲಭವಾಗಲಿದೆ.&lt;/p&gt;&lt;p&gt;ಇದರ ಜತೆಗೆ ಕಲ್ಲಿದ್ದಲು, ಸಿಮೆಂಟ್&zwnj;, ಕಬ್ಬಿಣ, ಸ್ಟೀಲ್&zwnj;, ಕಂಟೈನರ್&zwnj;ಗಳು, ಅಟೋಮೊಬೈಲ್&zwnj;, ಆಹಾರ ಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ ಇತರೆ ವಸ್ತುಗಳ ಸಾಗಾಟವನ್ನೂ ಸುಲಭಗೊಳಿಸಲಿದೆ.&lt;/p&gt;&lt;p&gt;ಹೆಚ್ಚುವರಿ 47 ಎಂಟಿಪಿಎನಷ್ಟು ಸರಕುಗಳನ್ನು ಸಾಗಿಸಲು ರೈಲ್ವೆಗೆ ಈ ಯೋಜನೆಗಳಿಂದ ಸಾಧ್ಯವಾಗಲಿದ್ದು, 8 ಕೋಟಿ ಲೀಟರ್&zwnj;ನಷ್ಟು ಕಚ್ಚಾ ತೈಲದ ಆಮದು ಉಳಿತಾಯವಾಗಲಿದೆ ಮತ್ತು ಇಂಗಾಲದ ಡೈಆಕ್ಸೈಡ್&zwnj; ಹೊರಸೂಸುವಿಕೆ ಪ್ರಮಾಣ 42 ಕೆ.ಜಿ.ಯಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/union-cabinet-approves-5-railway-multi-tracking-projects-karnataka-south-india-rs-10021-crore-sat/articleshow-7nh04ga"/>
        </item>
        <item>
            <title><![CDATA[ಸಿಕ್ಕಿಂ ಗಡಿ ದೇಶದಲ್ಲೇ ಅತಿ ವಿಭಿನ್ನ ಟೂರಿಸಂ ತಾಣ, ಅನ್ಯ ಕಾರಣಕ್ಕೂ ಪ್ರಸಿದ್ಧಿ, ಇಲ್ಲಿ ಅದೃಶ್ಯ ಯೋಧನೇ ದೇವರು!]]></title>
            <link>https://kannada.asianetnews.com/india-news/nathu-la-pass-experience-thrilling-border-tourism-military-valour-and-sacred-legends-in-sikkim-gdp/articleshow-91la7za</link>
            <guid isPermaLink="true">https://kannada.asianetnews.com/india-news/nathu-la-pass-experience-thrilling-border-tourism-military-valour-and-sacred-legends-in-sikkim-gdp/articleshow-91la7za</guid>
            <pubDate>Sat, 19 Sep 2026 08:37:08 +0530</pubDate>
            <description><![CDATA[ಸಿಕ್ಕಿಂನ ನಾಥೂ ಲಾ ಪಾಸ್ ಕೇವಲ ಪ್ರವಾಸಿ ತಾಣವಲ್ಲ, ಬದಲಾಗಿ ಭಾರತದ ಗಡಿ ಭದ್ರತೆ ಮತ್ತು ಸೈನಿಕರ ಶೌರ್ಯವನ್ನು ಸಾರುವ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿನ ಬಾಬಾ ಹರ್ಭಜನ್ ಮಂದಿರದಲ್ಲಿ ಅದೃಶ್ಯ ಯೋಧನೊಬ್ಬ ಗಡಿ ಕಾಯುತ್ತಿದ್ದಾನೆ ಎಂಬ ನಂಬಿಕೆ ರೋಚಕವಾಗಿದೆ. ಇದರೊಂದಿಗೆ ತ್ಸ್ಯಾಂಗೋ ಸರೋವರ ಮತ್ತು ಗಡಿ ರಾಜತಾಂತ್ರಿಕತೆಯು ಈ ತಾಣದ ಪ್ರಮುಖ ಆಕರ್ಷಣೆಗಳಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khzrrfdy9eyxjtr7fmhrahbn,imgname-sikkim-travel-package-price-1771666423230.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಥೂ ಲಾ ಪಾಸ್ (ಸಿಕ್ಕಿಂ): &lt;/strong&gt;ವಿಶ್ವದ ಪ್ರವಾಸೋದ್ಯಮದಲ್ಲಿ ಕೃಷಿ, ಧಾರ್ಮಿಕ, ಆರೋಗ್ಯ, ಪರಿಸರ, ಕಡಲ ಪ್ರವಾಸೋದ್ಯಮ ಹೀಗೆ ಹಲವು ಪ್ರವಾಸೋದ್ಯಮ ಆಯ್ಕೆಗಳಿವೆ. ಆದರೆ, ಗಡಿಯನ್ನೇ ಪ್ರವಾಸದ ರೋಚಕ ಅನುಭವವನ್ನಾಗಿ ಉಣಬಡಿಸುವ ರಮಣೀಯ ಹಾಗೂ ರೋಮಾಂಚನ ಪ್ರವಾಸಿ ತಾಣಗಳು ವಿರಳ. ಅಂತಹ ಅಪರೂಪದ ಗಡಿ ಪ್ರವಾಸೋದ್ಯಮ ಸ್ಥಳವೇ ಸಿಕ್ಕಿಂನ &lsquo;ನಾಥೂ ಲಾ ಪಾಸ್&zwnj;&rsquo;.&lt;/p&gt;&lt;p&gt;ಸಮುದ್ರ ಮಟ್ಟದಿಂದ ಸುಮಾರು 14 ಸಾವಿರ ಅಡಿ ಎತ್ತರದಲ್ಲಿರುವ ನಾಥೂ ಲಾ ಕೇವಲ ಹಿಮಾಲಯದ ಸೌಂದರ್ಯ ಹೊದ್ದು ನಿಂತಿರುವ ಪ್ರವಾಸಿ ತಾಣವಲ್ಲ. ಇದು ಭಾರತದ ಗಡಿ ಭದ್ರತೆ, ಸೈನಿಕರ ಶೌರ್ಯ, ತ್ಯಾಗ, ಇತಿಹಾಸ ಮತ್ತು ರಾಜತಾಂತ್ರಿಕತೆಯನ್ನು ಒಂದೇ ಕಡೆ ಕಣ್ಣಿಗೆ ಕಟ್ಟಿದಂತೆ ತೋರಿಸುವ ಅದ್ಭುತ ತಾಣ, ಅದೊಂದು ರೋಚಕ ಅನುಭವ.&lt;/p&gt;&lt;p&gt;ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಈ ಪ್ರದೇಶ ಸದಾ ಬಿಗುವಿನ ವಾತಾವರಣದಿಂದ ಕೂಡಿರುವ ಸೂಕ್ಷ್ಮ ಗಡಿ. ಮೌನ, ಭಯ, ಅನಿಶ್ಚಿತತೆ, ಕ್ರೌರ್ಯ, ಸೇನಾ ಸಾಮರ್ಥ್ಯ, ಭದ್ರತೆ ಒದಗಿಸುವ ಸೈನಿಕರ ಶ್ರಮ, ಗಡಿ ಶಿಷ್ಟಾಚಾರ ಎಲ್ಲಾ ರೀತಿಯ ಗಡಿ ಪ್ರವಾಸೋದ್ಯಮ ಅರಿಯಲು ನಾಥೂ ಲಾ ಒಂದು ಆದರ್ಶ ಪಾಠ ಶಾಲೆ.&lt;/p&gt;&lt;p&gt;ಸಿಕ್ಕಿಂಗೆ ಪ್ರತಿ ವರ್ಷ 17 ಲಕ್ಷ ಮಂದಿ ಪ್ರವಾಸಿಗರು ಬಂದರೆ ಅದರಲ್ಲಿ ಸುಮಾರು 15 ಲಕ್ಷ ನಾಥೂ ಲಾ ಪಾಸ್&zwnj;ಗೆ ಭೇಟಿ ನೀಡುವುದು ಖಚಿತ. ಎದುರಲ್ಲೇ ಇರುವ ಚೀನಾ ಗಡಿ, ಅಲ್ಲಿನ ಗಡಿ ಭದ್ರತೆ, ಸೈನಿಕರ ಶ್ರಮ, ತ್ಯಾಗ, ವಿರೋಚಿತ ಕಥೆಗಳು, ಕಠಿಣ ಹವಾಮಾನ ಹಾಗೂ ಗಡಿನಲ್ಲಿನ ರಾಜತಾಂತ್ರಿಕ ಪ್ರಕ್ರಿಯೆ ಅರಿಯುವ ಸದವಕಾಶ ಇಲ್ಲಿದೆ.&lt;/p&gt;&lt;p&gt;ಈ ಪರ್ವತ ಪಾಸ್ ಟಿಬೆಟ್ ಮತ್ತು ಭಾರತ ಸಂಪರ್ಕಿಸುವ ಅತ್ಯಂತ ಹಳೆಯ ವ್ಯಾಪಾರ ಗಡಿ ಪೋಸ್ಟ್&zwnj;ಗಳಲ್ಲಿ ಒಂದು. ರೇಷ್ಮೆ ಮಾರ್ಗ, ಪ್ರಾಚೀನ ವ್ಯಾಪಾರ ಮಾರ್ಗವಿದು. ಇಲ್ಲಿ ನೋಡಲು ಪ್ರಕೃತಿ, ರಮಣೀಯ ದೃಶ್ಯಗಳ ಜತೆಗೆ ಮೂರ್ನಾಲ್ಕು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿವೆ.&lt;/p&gt;&lt;h2&gt;ಬಾಬಾ ಹರ್ಭಜನ್ ಮಂದಿರ, ಅದೃಶ್ಯ ಆತ್ಮವಿಲ್ಲಿ ಯೋಧ!&lt;/h2&gt;&lt;p&gt;ಬಾಬಾ ಹರ್ಭಜನ್&zwnj; ಮಂದಿರ. ಇದು ಸಿಕ್ಕಿಂ ಅದರಲ್ಲೂ ನಾಥೂ ಲಾ ಪಾಸ್&zwnj;ನ ಅತ್ಯಂತ ನಂಬಿಕೆಯ ಬಾಬಾ ಮಂದಿರ. ಯೋಧರು ನಮಗೆಲ್ಲಾ ದೇವರಿದ್ದಂತೆ ಎಂದು ಸದಾ ನೆನೆಯುತ್ತೇವೆ. ಆದರೆ, ಇಲ್ಲಿ ನಿಜಾರ್ಥದಲ್ಲಿ ಯೋಧ ದೇವರಾಗಿದ್ದಾರೆ. ಆತ್ಮದ ರೂಪದಲ್ಲಿ ಇವರು ಎಲ್ಲರನ್ನೂ ಕಾಯುತ್ತಿದ್ದಾರಂತೆ ಎಂಬ ನಂಬಿಕೆ ಇಲ್ಲಿನ ಜನರದ್ದು, ಸೈನಿಕರದ್ದು ಮಾತ್ರವಲ್ಲ ಚೀನಾ ಸೈನಿಕರದ್ದೂ ಕೂಡ.&lt;/p&gt;&lt;p&gt;ಹರ್ಭಜನ್ ಬಾಬಾ ಮಂದಿರ ಸೈನಿಕರಿಗೆ ಒಂದು ಶಕ್ತಿಕೇಂದ್ರ. ಮೊದಲ ಬಾರಿಗೆ ಇಲ್ಲಿ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸೈನಿಕರು ಪ್ರಥಮವಾಗಿ ಬಾಬಾ ಮಂದಿರಕ್ಕೆ ಬಂದು ಪ್ರಾರ್ಥಿಸುವುದು ವಾಡಿಕೆ. ಇಷ್ಟಕ್ಕೂ ಇವರು ಬಾಬಾ ಅಲ್ಲ. ಇವರೂ ಕೂಡ ಯೋಧರಾಗಿದ್ದವರು. ಸೇವೆಯಲ್ಲಿದ್ದಾಗ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟಿದ್ದರು. ಬಳಿಕ ತನ್ನ ಸ್ನೇಹಿತ ಯೋಧನ ಕನಸಿಗೆ ಬಂದಿದ್ದ ಹರ್ಭಜನ್&zwnj;, ತನ್ನ ಮೃತದೇಹ ಇರುವ ಸ್ಥಳ ತಿಳಿಸಿದ್ದರು. ಹುಡುಕಿದಾಗ ಮೃತದೇಹ ಪತ್ತೆಯಾಗಿತ್ತು. ಮತ್ತೊಮ್ಮೆ `ನನ್ನ ದೇಹಾಂತ್ಯ ಆಗಿರಬಹುದು. ಆದರೆ, ಆತ್ಮ ಸದಾ ಕರ್ತವ್ಯದಲ್ಲಿರುತ್ತದೆ'''''''' ಎಂದು ಹೇಳಿದ್ದರಂತೆ. ಆರಂಭದಲ್ಲಿ ಇವೆಲ್ಲ ಭ್ರಮೆ ಎಂದು ಯಾರೂ ಈ ಕನಸಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ದಿನಕಳೆದಂತೆ ಯೋಧರಿಗೆ ಬೇರೆ ಬೇರೆ ಅನುಭವ ಆಗುವುದಕ್ಕೆ ಆರಂಭವಾಯಿತಂತೆ. ಭವಿಷ್ಯದಲ್ಲಿ ಏನಾದರೂ ಘಟನೆ, ಸಮಸ್ಯೆ ಸಂಭವಿಸುವುದಿದ್ದರೆ ಇದನ್ನು ಮುಂಚಿತವಾಗಿಯೇ ಹರ್ಭಜನ್ ಕನಸಿನ ರೂಪದಲ್ಲಿ ಬಂದು ಹೇಳುತ್ತಿದ್ದರಂತೆ.&lt;/p&gt;&lt;p&gt;ಈ ರೀತಿ ಗಾಢವಾಗುತ್ತಾ ಹೋದ ನಂಬಿಕೆ ಇದೀಗ ಅಲ್ಲಿನ ಸೈನಿಕರನ್ನು ಆತ್ಮರೂಪಿ ಯೋಧ, ಹರ್ಭಜನ್&zwnj; ಬಾಬಾ ಅವರೇ ರಕ್ಷಿಸುತ್ತಿದ್ದಾರೆ ಎಂಬಂತೆ ಭಕ್ತಿ ರೂಪ ತಾಳಿದೆ. ಅವರಿಗಾಗಿ ಮಂದಿರ ನಿರ್ಮಿಸಿದ್ದಾರೆ. ಸೇನೆಯಲ್ಲಿ ಅವರು ಸೇವಾ ನಿರತರಾಗಿರುವಂತೆ ಬಂಕರ್&zwnj; ನಿರ್ಮಿಸಿದ್ದು, ಇಲ್ಲಿ ಬಾಬಾರ ಸಮವಸ್ತ್ರ, ಶೂ, ಹಾಸಿಗೆ ಸೇರಿದಂತೆ ಅವರು ಬಳಸುತ್ತಿದ್ದ ವಸ್ತುಗಳನ್ನೆಲ್ಲಾ ತಂದಿಡಲಾಗಿದೆ. ಬಾಬಾ ಅವರ ಈ ಕಚೇರಿಗೆ ಜನರು, ಸೈನಿಕರು ತಮ್ಮ ಬೇಡಿಕೆ, ಪ್ರಾರ್ಥನೆಗಳನ್ನೂ ಸಲ್ಲಿಸುವುದುಂಟು.&lt;/p&gt;&lt;h2&gt;ಕಾಲಕಾಲಕ್ಕೆ ಸಿಗುತ್ತಿತ್ತು ಹರ್ಭಜನ್&zwnj; ಆತ್ಮಕ್ಕೆ ಬಡ್ತಿ:&lt;/h2&gt;&lt;p&gt;ಹರ್ಭಜನ್&zwnj; ಸಿಂಗ್&zwnj; ಬದುಕಿರುವಂತೆ ಸೇನೆಯ ನಿಯಮದಂತೆ ಬಡ್ತಿ ಕೂಡಾ ನೀಡಲಾಗುತ್ತದೆ. ಅದರಂತೆ 2006ರಲ್ಲಿ ಹರ್ಭಜನ್ ಸಿಂಗ್ ಅವರನ್ನು ಸೇನೆಯಿಂದ ನಿವೃತ್ತಿಗೊಳಿಸಲಾಗಿತ್ತು. ಜೊತೆಗೆ, ಕರ್ತವ್ಯದಲ್ಲಿ ಇರುವ ತನಕ ಪ್ರತಿವರ್ಷ ಊರಿಗೆ ತೆರಳುವ ಎರಡು ತಿಂಗಳು ರಜೆ ಕೂಡಾ ಕೊಡಲಾಗುತ್ತಿತ್ತು. ಆಗ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ ಇವರ ಫೋಟೋವನ್ನು ಊರಿಗೆ ಸಂಭ್ರಮದಿಂದ ಕೊಂಡೊಯ್ಯಲಾಗುತ್ತಿತ್ತು. ಊರಿನ ಜನ ಕೂಡಾ ಈ ಫೋಟೋವನ್ನು ಭರ್ಜರಿಯಾಗಿ ಸ್ವಾಗತಿಸಿ ಹಬ್ಬ ಆಚರಿಸುತ್ತಿದ್ದರಂತೆ.&lt;/p&gt;&lt;h2&gt;ಚೀನಾ-ಭಾರತ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಜಾಗ:&lt;/h2&gt;&lt;p&gt;1967ರಲ್ಲಿ ಭಾರತೀಯ ಪಡೆಗಳು ಗಡಿಯಲ್ಲಿ ತಂತಿ ಬೇಲಿ ಹಾಕುತ್ತಿದ್ದಾಗ ಚೀನಾ ಪಡೆಗಳು ದಾಳಿ ನಡೆಸಿದ್ದರು. ಚೀನಿಯರು ಭೌಗೋಳಿಕ ಅನುಕೂಲ ಹೊಂದಿದ್ದರೂ ಸಹ ಭಾರತೀಯ ಸೇನೆಯು ಭೀಕರ ಪ್ರತಿ ದಾಳಿ ನಡೆಸಿ 400 ಸೈನಿಕರನ್ನು ಮಟ್ಟ ಹಾಕಿತ್ತು. ಈ ನಿರ್ಣಾಯಕ ವಿಜಯವು ಚೀನಾ ಆಕ್ರಮಣ ತಡೆಯಲು ಯಶಸ್ವಿಯಾಗಿತ್ತು.&lt;/p&gt;&lt;h2&gt;ತ್ಸ್ಯಾಂಗೋ ಸರೋವರ:&lt;/h2&gt;&lt;p&gt;ಇಲ್ಲಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ತ್ಸ್ಯಾಂಗೋ ಸರೋವರ ಕೂಡ ಒಂದು. ಈ ಶಾಂತಿಯುತ ಸರೋವರವು ಗ್ಯಾಂಗ್ಟಾಕ್-ನಾಥು ಲಾ ಹೆದ್ದಾರಿಯಲ್ಲಿ ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿದೆ. ಇದು ನಿರ್ಬಂಧಿತ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಅನುಮತಿ ಕಡ್ಡಾಯ. ಚಳಿಗಾಲದಲ್ಲಿ ಇದುಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ನೀಲಿ ಬಣ್ಣದ ಈ ಸರೋವರ ಪ್ರವಾಸಿಗರ ಪ್ರಮುಖ ಆಕರ್ಷಣೆ.&lt;/p&gt;&lt;h2&gt;ತ್ಸ್ಯಾಂಗೋ ರೋಪ್&zwnj; ವೇ:&lt;/h2&gt;&lt;p&gt;14,000 ಅಡಿ ಎತ್ತರದಲ್ಲಿರುವ ಏಷ್ಯಾದ ಮೊದಲ ಕೇಬಲ್&zwnj; ಕಾರ್&zwnj; ಮಾರ್ಗ ಈ ತ್ಸ್ಯಾಂಗೋ ರೋಪ್ ವೇ. ರೋಪ್&zwnj;ವೇಯಲ್ಲಿ ಪ್ರಯಾಣಿಸುವಾಗ ಹಿಮದಿಂದ ಆವೃತವಾದ ಹಿಮಾಲಯದ ಪರ್ವತಗಳು, ಕಣಿವೆಗಳು ಮತ್ತು ಇಡೀ ತ್ಸ್ಯಾಂಗೋ ಸರೋವರದ ಅದ್ಭುತ ವೈಮಾನಿಕ ನೋಟ ಗಮನ ಸೆಳೆಯುತ್ತದೆ.&lt;/p&gt;&lt;h2&gt;ರಾಜತಾಂತ್ರಿಕತೆಯ ಪ್ರಮುಖ ಕೇಂದ್ರ:&lt;/h2&gt;&lt;p&gt;ನಾಥೂ ಲಾ ಪಾಸ್&zwnj; ರಕ್ಷಣೆ ಮತ್ತು ರಾಜತಾಂತ್ರಿಕತೆಯ ಪ್ರಮುಖ ಕೇಂದ್ರ. ಉಭಯ ದೇಶಗಳ ನಡುವೆ ಶಾಂತಿ ಕಾಪಾಡಿಕೊಳ್ಳಲು ಭಾರತ ಮತ್ತು ಚೀನಾ ನಡುವೆ ವರ್ಷಕ್ಕೆ ಎಂಟು ಬಾರಿ ಗಡಿ ಸಿಬ್ಬಂದಿ ಸಭೆಗಳು ನಡೆಯುತ್ತವೆ. ಬೈಸಾಖಿ, ಗಣರಾಜ್ಯೋತ್ಸವ ಮತ್ತು ದೀಪಾವಳಿಯಂತಹ ಪ್ರಮುಖ ಸಂದರ್ಭಗಳಲ್ಲಿ ಭಾರತವು ಈ ಪೈಕಿ ಐದು ಸಭೆಗಳನ್ನು ಆಯೋಜಿಸಿದರೆ, ಚೀನಾ ತನ್ನ ಪಿಎಲ್ಎ ಸಂಸ್ಥಾಪನಾ ದಿನ ಸೇರಿದಂತೆ ಮೂರು ಸಭೆ ಆಯೋಜಿಸುತ್ತದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/nathu-la-pass-experience-thrilling-border-tourism-military-valour-and-sacred-legends-in-sikkim-gdp/articleshow-91la7za"/>
        </item>
        <item>
            <title><![CDATA[ಭಾರತದ ಅತಿ ಉದ್ದದ ತಡೆರಹಿತ ರೈಲು! 528 ಕಿ.ಮೀ. ಚಲಿಸಿದರೂ ಒಂದೇ ಒಂದು ನಿಲ್ದಾಣದಲ್ಲಿ ನಿಲ್ಲೋದಿಲ್ಲ!]]></title>
            <link>https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx</link>
            <guid isPermaLink="true">https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx</guid>
            <pubDate>Sun, 13 Sep 2026 08:44:09 +0530</pubDate>
            <description><![CDATA[ಒಂದು ರೈಲು ಸುಮಾರು 528 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ಆದರೆ, ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಮಧ್ಯದಲ್ಲಿ ಒಬ್ಬ ಪ್ರಯಾಣಿಕನನ್ನೂ ಹತ್ತಿಸಿಕೊಳ್ಳುವುದಿಲ್ಲ. ಈ ರೈಲು ಯಾವುದೇ ನಿಲ್ದಾಣದಲ್ಲಿ ಯಾಕೆ ನಿಲ್ಲುವುದಿಲ್ಲ? ಇಲ್ಲಿದೆ ವಿವರ.]]></description>
            <media:content url="https://static.asianetnews.com/images/w-1280,h-720,format-jpg,imgid-01m1p1s7f382tqdjvcmpj7hn2e,imgname-vjh-1788520209891.png" type="image/jpeg" height="390" width="690"/>
            <content:encoded><![CDATA[ಒಂದು ರೈಲು ಸುಮಾರು 528 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ಆದರೆ, ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಮಧ್ಯದಲ್ಲಿ ಒಬ್ಬ ಪ್ರಯಾಣಿಕನನ್ನೂ ಹತ್ತಿಸಿಕೊಳ್ಳುವುದಿಲ್ಲ. ಈ ರೈಲು ಯಾವುದೇ ನಿಲ್ದಾಣದಲ್ಲಿ ಯಾಕೆ ನಿಲ್ಲುವುದಿಲ್ಲ? ಇಲ್ಲಿದೆ ವಿವರ.&lt;img&gt;ನಮ್ಮ ದೇಶದಲ್ಲಿ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ದೂರದ ಪ್ರಯಾಣಕ್ಕೆ ರೈಲು ಮೊದಲ ಆಯ್ಕೆಯಾಗಿರುತ್ತದೆ. ಗಂಟೆಗಟ್ಟಲೆ ಸಾಗುವ ಈ ಪ್ರಯಾಣದಲ್ಲಿ ರೈಲು ಹಲವು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಆದರೆ, ನಮ್ಮ ದೇಶದಲ್ಲಿ ಒಂದೇ ಒಂದು ನಿಲ್ದಾಣದಲ್ಲೂ ನಿಲ್ಲದೆ, ಬರೋಬ್ಬರಿ 528 ಕಿಲೋಮೀಟರ್ ನಾನ್&zwnj;ಸ್ಟಾಪ್ ಆಗಿ ಚಲಿಸುವ ರೈಲು ಒಂದಿದೆ. ರಾಜಸ್ಥಾನದ ಕೋಟಾದಿಂದ ಗುಜರಾತ್&zwnj;ನ ವಡೋದರಾವರೆಗೆ ಸಾಗುವ ಆ ರೈಲಿನ ಬಗ್ಗೆ ಈಗ ನೋಡೋಣ.&lt;img&gt;ಒಂದೇ ಒಂದು ನಿಲ್ದಾಣದಲ್ಲೂ ನಿಲ್ಲದೆ 528 ಕಿಲೋಮೀಟರ್ ಪ್ರಯಾಣಿಸುವ ಮೂಲಕ ತ್ರಿವೇಂಡ್ರಂ ರಾಜಧಾನಿ ಎಕ್ಸ್&zwnj;ಪ್ರೆಸ್ ದಾಖಲೆ ನಿರ್ಮಿಸಿದೆ. ಸಾಮಾನ್ಯವಾಗಿ ಎಕ್ಸ್&zwnj;ಪ್ರೆಸ್ ಅಥವಾ ಸೂಪರ್&zwnj;ಫಾಸ್ಟ್ ರೈಲುಗಳು ಪ್ರತಿ 50 ರಿಂದ 100 ಕಿಲೋಮೀಟರ್&zwnj;ಗೆ ಒಮ್ಮೆ ಯಾವುದಾದರೂ ನಿಲ್ದಾಣದಲ್ಲಿ ನಿಲ್ಲುತ್ತವೆ. ಆದರೆ ತ್ರಿವೇಂಡ್ರಂ ರಾಜಧಾನಿ ಎಕ್ಸ್&zwnj;ಪ್ರೆಸ್ ಕೋಟಾ ಜಂಕ್ಷನ್&zwnj;ನಿಂದ ಹೊರಟರೆ, ಮತ್ತೆ 528 ಕಿಲೋಮೀಟರ್ ದೂರದಲ್ಲಿರುವ ವಡೋದರಾ ಜಂಕ್ಷನ್&zwnj;ನಲ್ಲೇ ನಿಲ್ಲುತ್ತದೆ. ಈ ಎರಡು ದೊಡ್ಡ ಜಂಕ್ಷನ್&zwnj;ಗಳ ನಡುವೆ ಇರುವ ಹತ್ತಾರು ಸಣ್ಣ, ದೊಡ್ಡ ರೈಲ್ವೆ ನಿಲ್ದಾಣಗಳನ್ನು ಈ ರೈಲು ಕ್ಯಾರೇ ಎನ್ನದೆ ಸಾಗುತ್ತದೆ.&lt;img&gt;ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಎರಡು ಕಮರ್ಷಿಯಲ್ ಹಾಲ್ಟ್&zwnj;ಗಳ ನಡುವೆ ಅತಿ ಹೆಚ್ಚು ದೂರ ನಾನ್&zwnj;ಸ್ಟಾಪ್ ಆಗಿ ಸಂಚರಿಸುವ ರೈಲು ಇದಾಗಿದೆ. ಮಧ್ಯದಲ್ಲಿ ಎಲ್ಲಿಯೂ ನಿಲ್ಲದೆ ಇರುವುದರಿಂದ, ಈ ರೈಲು ಸುಮಾರು 528 ಕಿಲೋಮೀಟರ್&zwnj;ಗಳ ಈ ದೈತ್ಯ ದೂರವನ್ನು ಕೇವಲ 5 ರಿಂದ 6 ಗಂಟೆಗಳಲ್ಲಿ ಕ್ರಮಿಸುತ್ತದೆ. ಈ ಸುದೀರ್ಘ ನಾನ್&zwnj;ಸ್ಟಾಪ್ ಪ್ರಯಾಣದಲ್ಲಿ ಪ್ರಯಾಣಿಕರು ಯಾವುದೇ ಅಡೆತಡೆ ಇಲ್ಲದೆ, ನಿರಂತರ ಪ್ರಯಾಣವನ್ನು ಆನಂದಿಸಬಹುದು. ರೈಲು ವೇಗವಾಗಿ ಚಲಿಸುವುದರಿಂದ ದಣಿವಾದ ಅನುಭವ ಆಗುವುದಿಲ್ಲ. ಕಡಿಮೆ ಸಮಯದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪುತ್ತಾರೆ.]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx"/>
        </item>
        <item>
            <title><![CDATA[ಬೆಂಗಳೂರಲ್ಲಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಆಗೋಕೆ ಇಂಥವರೇ ಕಾರಣ! ಬೈಕ್ ಅಡ್ಡಗಟ್ಟಿ ಪುಂಡಾಟ]]></title>
            <link>https://kannada.asianetnews.com/bengaluru-urban/road-rage-causes-massive-traffic-jam-viral-video-prompts-bengaluru-police-action-sat/articleshow-ffete2i</link>
            <guid isPermaLink="true">https://kannada.asianetnews.com/bengaluru-urban/road-rage-causes-massive-traffic-jam-viral-video-prompts-bengaluru-police-action-sat/articleshow-ffete2i</guid>
            <pubDate>Tue, 15 Sep 2026 11:39:35 +0530</pubDate>
            <description><![CDATA[ಬೆಂಗಳೂರಿನಲ್ಲಿ ವಾಹನ ಸವಾರರ ನಡುವಿನ ಕ್ಷುಲ್ಲಕ ಜಗಳಗಳು ಮತ್ತು ಅಹಂಕಾರದಿಂದಾಗಿ ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ರಸ್ತೆ ಮಧ್ಯೆ ಜಗಳವಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಬೆಂಗಳೂರು ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ರಸ್ತೆಯಲ್ಲಿ ತಾಳ್ಮೆ ಮತ್ತು ಸುರಕ್ಷಿತ ಚಾಲನೆಯೇ ಮುಖ್ಯವೇ ಹೊರತು ಶಕ್ತಿ ಪ್ರದರ್ಶನವಲ್ಲ ಎಂಬುದನ್ನು ಈ ಲೇಖನ ಒತ್ತಿಹೇಳುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2htq3ehnzrdx13edpwkzefd,imgname-bengaluru-road-rage-traffic-jam-1789452324305.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.15): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿನ್ನಿ ಮೊನ್ನೆಯದಲ್ಲ. ಆದರೆ, ವಾಹನಗಳ ದಟ್ಟಣೆಗಿಂತ ಹೆಚ್ಚಾಗಿ ಕೆಲವರ ಬೇಜವಾಬ್ದಾರಿತನ ಮತ್ತು ರಸ್ತೆಗಳಲ್ಲಿ ನಡೆಯುವ ಸಣ್ಣಪುಟ್ಟ ಜಗಳಗಳೇ (Road Rage) ಕಿಲೋಮೀಟರ್&zwnj;ಗಟ್ಟಲೆ ಟ್ರಾಫಿಕ್ ಜಾಮ್&zwnj;ಗೆ ಪ್ರಮುಖ ಕಾರಣವಾಗುತ್ತಿವೆ. ಇಬ್ಬರ ನಡುವಿನ ಕ್ಷುಲ್ಲಕ ಜಗಳ ಮತ್ತು &lsquo;ಇಗೋ&rsquo;ದಿಂದಾಗಿ ನೂರಾರು ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯುವಂತಾಗುತ್ತಿದ್ದು, ಇಂತಹ ಪ್ರವೃತ್ತಿ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಜಗಳವಾಡಿಕೊಂಡು ಇತರ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (ಹಿಂದಿನ ಟ್ವಿಟರ್) ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದು, ಪೊಲೀಸರು ವಿಡಿಯೋ ಪರಿಶೀಲಿಸಿ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.&lt;/p&gt;&lt;h2&gt;&lt;strong&gt;ರಸ್ತೆಯಲ್ಲಿ 'ಇಗೋ' ಜೇಬಿನಲ್ಲಿರಲಿ, ಪ್ರಾಣ ಮುಖ್ಯ!&lt;/strong&gt;&lt;/h2&gt;&lt;p&gt;ಬೆಂಗಳೂರಿನ ರಸ್ತೆಗಳಲ್ಲಿ ದಿನಬೆಳಗಾದರೆ ಸಾಕು ಒಂದಲ್ಲ ಒಂದು ಕಡೆ ಬೈಕ್ ಸವಾರರು, ಕಾರು ಚಾಲಕರು ಅಥವಾ ಪಾದಚಾರಿಗಳ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ. ವಾಹನ ಸ್ವಲ್ಪ ತಾಗಿದರೂ ಸಾಕು, ಇಬ್ಬರೂ ರಸ್ತೆ ಮಧ್ಯದಲ್ಲೇ ವಾಹನ ನಿಲ್ಲಿಸಿ ಜಟಾಪಟಿಗೆ ಇಳಿಯುತ್ತಾರೆ.&lt;/p&gt;&lt;h3&gt;&lt;strong&gt;ನೆನಪಿಡಿ, ರಸ್ತೆಯಲ್ಲಿ 'ರೋಡ್ ರೇಜ್' ಎಂದಿಗೂ ಪರಿಹಾರವಲ್ಲ:&lt;/strong&gt;&lt;/h3&gt;&lt;p&gt;ಕ್ಷಣಿಕ ಆವೇಶದಲ್ಲಿ ಮಾಡುವ ಜಗಳ ಗಂಭೀರ ಅಪಘಾತಕ್ಕೆ, ಗಾಯಗಳಿಗೆ ಅಥವಾ ಪೊಲೀಸ್-ಕೋರ್ಟ್ ಕೇಸುಗಳಿಗೆ ದಾರಿ ಮಾಡಿಕೊಡಬಹುದು. ಇಬ್ಬರು ರಸ್ತೆಯಲ್ಲಿ ನಿಂತು ಕಿತ್ತಾಡಿದರೆ, ಅವರ ಹಿಂದೆ ಬರುವ ಆಂಬ್ಯುಲೆನ್ಸ್, ಆಫೀಸ್&zwnj;ಗೆ ಹೋಗುವವರು, ಶಾಲಾ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ತುರ್ತು ಕೆಲಸಗಳಿರುತ್ತವೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ, ಇನ್ನೊಬ್ಬರ ಅಸಹನೆಗೆ ನಿಮ್ಮ ಮನಃಶಾಂತಿಯನ್ನು ಹಾಳುಮಾಡಿಕೊಳ್ಳಬೇಡಿ. ಸಾಧ್ಯವಾದಷ್ಟು ದಾರಿ ಬಿಟ್ಟು ಮುನ್ನಡೆಯುವುದೇ ಜಾಣತನ.&lt;/p&gt;&lt;h3&gt;&lt;strong&gt;ಸುರಕ್ಷಿತವಾಗಿ ಮನೆ ತಲುಪುವುದೇ ಅಂತಿಮ ಗೆಲುವು!&lt;/strong&gt;&lt;/h3&gt;&lt;p&gt;ರಸ್ತೆಯಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುವುದಕ್ಕಿಂತ, ನಿಗದಿತ ಸಮಯಕ್ಕೆ ಸುರಕ್ಷಿತವಾಗಿ ಮನೆಗೆ ತಲುಪುವುದು ಮುಖ್ಯ. ನಿಮ್ಮ ಕೋಪ ಮತ್ತು ಅಹಂ (Ego) ಎರಡನ್ನೂ ಮನೆಯಲ್ಲೇ ಬಿಟ್ಟು ರಸ್ತೆಗಿಳಿಯಿರಿ. ತಾಳ್ಮೆಯಿಂದ ವಾಹನ ಚಲಾಯಿಸುವುದೇ ರಸ್ತೆಯ ಮೇಲಿನ ನಿಜವಾದ ವಿಜಯ.&lt;/p&gt;&lt;h2&gt;&lt;strong&gt;ಪೊಲೀಸರ ಕಣ್ಣು: ಕಿಡಿಗೇಡಿಗಳಿಗೆ ಎಚ್ಚರಿಕೆ!&lt;/strong&gt;&lt;/h2&gt;&lt;p&gt;ರಸ್ತೆಯಲ್ಲಿ ಗಲಾಟೆ ನಡೆಸಿ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಅಲರ್ಟ್ ಆಗಿರುವ ಬೆಂಗಳೂರು ನಗರ ಪೊಲೀಸರು, ಘಟನೆಯ ಸ್ಥಳ ಹಾಗೂ ವಾಹನಗಳ ನೋಂದಣಿ ಸಂಖ್ಯೆಯನ್ನು ಆಧರಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಶಾಂತಿಭಂಗ ಉಂಟುಮಾಡುವ ಮತ್ತು ಕೃತಕ ಟ್ರಾಫಿಕ್ ಜಾಮ್ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.&lt;/p&gt;&lt;p&gt;Every day, we see one fight or another on the road. Whether you&rsquo;re riding, driving, or even walking, remember that road rage is never the solution.Keep your ego in your pocket and keep moving. A few seconds of anger can turn into a serious accident, a legal issue, or even&hellip; pic.twitter.com/blfmAWoiqc&lt;/p&gt;&lt;p&gt;&mdash; Karnataka Portfolio (@karnatakaportf) September 15, 2026&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/road-rage-causes-massive-traffic-jam-viral-video-prompts-bengaluru-police-action-sat/articleshow-ffete2i"/>
        </item>
        <item>
            <title><![CDATA[ಮೀನು, ಮಾಂಸ, ಮದ್ಯವೇ ದೇವರ ನೈವೇದ್ಯ; ಭಾರತದ ಈ ದೇವಾಲಯಗಳ ಸಂಪ್ರದಾಯ ಅಚ್ಚರಿ ಮೂಡಿಸುತ್ತದೆ]]></title>
            <link>https://kannada.asianetnews.com/travel/indias-unusual-temple-traditions-where-fish-meat-and-alcohol-become-offerings/articleshow-gle9f6g</link>
            <guid isPermaLink="true">https://kannada.asianetnews.com/travel/indias-unusual-temple-traditions-where-fish-meat-and-alcohol-become-offerings/articleshow-gle9f6g</guid>
            <pubDate>Fri, 11 Sep 2026 12:00:05 +0530</pubDate>
            <description><![CDATA[&lt;p&gt;ಭಾರತದ ಎಲ್ಲ ಹಿಂದೂ ದೇವಾಲಯಗಳಲ್ಲೂ ನೈವೇದ್ಯದ ಸಂಪ್ರದಾಯ ಒಂದೇ ಆಗಿಲ್ಲ. ಕೆಲವು ಶಕ್ತಿ, ತಾಂತ್ರಿಕ ಮತ್ತು ಜಾನಪದ ಪರಂಪರೆಯ ದೇವಾಲಯಗಳಲ್ಲಿ ಮೀನು, ಮಾಂಸ ಅಥವಾ ಮದ್ಯವನ್ನು ದೇವರಿಗೆ ಅರ್ಪಿಸುವ ಆಚರಣೆಗಳಿವೆ. ಕಾಮಾಖ್ಯಾ, ತಾರಾಪೀಠ, ಕಾಳಿಘಾಟ್, ಮುಟ್ಟಪ್ಪನ್, ಕಾಲ ಭೈರವ ಸೇರಿದಂತೆ ಹಲವು ದೇವಾಲಯಗಳ ವಿಭಿನ್ನ ಸಂಪ್ರದಾಯಗಳು ಭಾರತದ ಧಾರ್ಮಿಕ ವೈವಿಧ್ಯತೆಯನ್ನು ತೋರಿಸುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25xnnyn4y6ss0424t92g32z,imgname-indian-hindu-temples--1--1789052770261.jpg" type="image/jpeg" height="390" width="690"/>
            <content:encoded><![CDATA[&lt;h2&gt;ಮೀನು, ಮಾಂಸ, ಮದ್ಯವೇ ನೈವೇದ್ಯ! ಭಾರತದ ದೇವಾಲಯಗಳ ವಿಭಿನ್ನ ಸಂಪ್ರದಾಯ&lt;/h2&gt;&lt;p&gt;ನವರಾತ್ರಿ ಸಂದರ್ಭದಲ್ಲಿ ದೇವಿಯ ಮೂರ್ತಿಗಳ ಬಳಿ ಮಾಂಸಾಹಾರ ಮಾರಾಟದ ವಿಚಾರದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಭಾರತದಲ್ಲಿನ ಹಿಂದೂ ಧಾರ್ಮಿಕ ಆಚರಣೆಗಳ ವೈವಿಧ್ಯತೆಯೂ ಗಮನ ಸೆಳೆಯುತ್ತದೆ. ದೇಶದ ಎಲ್ಲ ದೇವಾಲಯಗಳಲ್ಲೂ ನೈವೇದ್ಯದ ಪದ್ಧತಿ ಒಂದೇ ಆಗಿಲ್ಲ. ಬಹುತೇಕ ದೇವಾಲಯಗಳಲ್ಲಿ ಹಣ್ಣು, ಸಿಹಿತಿಂಡಿ ಮತ್ತು ಸಸ್ಯಾಹಾರಿ ಭೋಗ್ ಅರ್ಪಿಸುವ ಪದ್ಧತಿ ಇದ್ದರೂ, ಕೆಲವು ಶಕ್ತಿ, ತಾಂತ್ರಿಕ ಮತ್ತು ಜಾನಪದ ಸಂಪ್ರದಾಯಗಳಲ್ಲಿ ಮೀನು, ಮಾಂಸ ಅಥವಾ ಮದ್ಯವೂ ನೈವೇದ್ಯದ ಭಾಗವಾಗಿವೆ.&lt;/p&gt;&lt;p&gt;&lt;strong&gt;ಕಾಮಾಖ್ಯಾ ದೇವಾಲಯ: ಶಕ್ತಿ ಆರಾಧನೆಯ ವಿಶಿಷ್ಟ ಪರಂಪರೆ&lt;/strong&gt;&lt;/p&gt;&lt;p&gt;ಅಸ್ಸಾಂನ ಪ್ರಸಿದ್ಧ ಕಾಮಾಖ್ಯಾ ದೇವಾಲಯವು ಶಕ್ತಿ ಆರಾಧನೆಯ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಕೆಲವು ಧಾರ್ಮಿಕ ಆಚರಣೆಗಳಲ್ಲಿ ಪ್ರಾಣಿ ಬಲಿ ಪರಂಪರೆ ಕಂಡುಬರುತ್ತದೆ. ದೇವಾಲಯದ ಪೂಜಾ ಪದ್ಧತಿಗಳು ಶಕ್ತಿ ಮತ್ತು ತಾಂತ್ರಿಕ ಸಂಪ್ರದಾಯಗಳೊಂದಿಗೆ ಐತಿಹಾಸಿಕವಾಗಿ ನಿಕಟ ಸಂಬಂಧ ಹೊಂದಿವೆ.&lt;/p&gt;&lt;p&gt;&lt;strong&gt;ತಾರಾಪೀಠ ಮತ್ತು ಕಾಳಿಘಾಟ್: ಬಂಗಾಳದ ವಿಭಿನ್ನ ಆಚರಣೆ&lt;/strong&gt;&lt;/p&gt;&lt;p&gt;ಪಶ್ಚಿಮ ಬಂಗಾಳದ ತಾರಾಪೀಠದಲ್ಲಿ ತಾರಾ ದೇವಿಗೆ ಮೀನು ಮತ್ತು ಮೇಕೆ ಮಾಂಸ ಅರ್ಪಿಸುವ ಸಂಪ್ರದಾಯದ ಉಲ್ಲೇಖಗಳಿವೆ. ಕೆಲವು ತಾಂತ್ರಿಕ ಆಚರಣೆಗಳಲ್ಲಿ ಮದ್ಯವೂ ಕಾಣಿಸಿಕೊಳ್ಳುತ್ತದೆ. ಕೋಲ್ಕತ್ತಾದ ಕಾಳಿಘಾಟ್ ಕಾಳಿ ದೇವಾಲಯದಲ್ಲಿಯೂ ಪ್ರಾಣಿ ಬಲಿ ಐತಿಹಾಸಿಕವಾಗಿ ಕೆಲವು ಆಚರಣೆಗಳ ಭಾಗವಾಗಿತ್ತು. ಇಲ್ಲಿ ಸಸ್ಯಾಹಾರಿ ಅರ್ಪಣೆಗಳೂ ಇವೆ ಎಂಬುದು ಗಮನಾರ್ಹ.&lt;/p&gt;&lt;p&gt;&lt;strong&gt;ದಕ್ಷಿಣೇಶ್ವರ: ಮೀನು ಭೋಗ್&zwnj;ನ ವಿಶೇಷತೆ&lt;/strong&gt;&lt;/p&gt;&lt;p&gt;ಕೋಲ್ಕತ್ತಾದ ದಕ್ಷಿಣೇಶ್ವರ ಕಾಳಿ ದೇವಾಲಯದಲ್ಲಿ ಭವತಾರಿಣಿ ದೇವಿಗೆ ಅರ್ಪಿಸುವ ಭೋಗ್&zwnj;ನಲ್ಲಿ ಮೀನು ಸೇರಿಸುವ ಸಂಪ್ರದಾಯವಿದೆ. ಆದರೆ ಬಂಗಾಳದ ಕೆಲವು ಇತರ ಕಾಳಿ ದೇವಾಲಯಗಳಿಗಿಂತ ಭಿನ್ನವಾಗಿ, ಇಲ್ಲಿ ಪ್ರಾಣಿ ಬಲಿ ನೀಡಲಾಗುವುದಿಲ್ಲ. ಇದರಿಂದ ಒಂದೇ ಪ್ರದೇಶದ ದೇವಾಲಯಗಳಲ್ಲೂ ಆಚರಣೆಗಳಲ್ಲಿ ವ್ಯತ್ಯಾಸ ಇರಬಹುದು ಎಂಬುದು ಸ್ಪಷ್ಟವಾಗುತ್ತದೆ.&lt;/p&gt;&lt;p&gt;&lt;strong&gt;ಪುರಿಯ ವಿಮಲ ದೇವಾಲಯದಿಂದ ಕೇರಳದ ಮುಟ್ಟಪ್ಪನ್&zwnj;ವರೆಗೆ&lt;/strong&gt;&lt;/p&gt;&lt;p&gt;ಒಡಿಶಾದ ಪುರಿ ಜಗನ್ನಾಥ ದೇವಾಲಯ ಸಂಕೀರ್ಣದಲ್ಲಿರುವ ವಿಮಲ ದೇವಾಲಯವು ಶಕ್ತಿ ಸಂಪ್ರದಾಯದ ಪ್ರಮುಖ ಕೇಂದ್ರವಾಗಿದೆ. ಕೆಲವು ವಿಶೇಷ ಆಚರಣೆಗಳಲ್ಲಿ ಮೀನು ಮತ್ತು ಮೇಕೆ ಮಾಂಸ ಅರ್ಪಿಸುವ ಪದ್ಧತಿ ಇದೆ. ಕೇರಳದ ಪರಶ್ಶಿನಿಕಡವು ಮುಟ್ಟಪ್ಪನ್ ದೇವಾಲಯದಲ್ಲಿ ಒಣಮೀನು ಮತ್ತು ಸ್ಥಳೀಯ ಮದ್ಯಪಾನೀಯವಾದ ತಾಡಿಯನ್ನು ಅರ್ಪಿಸುವ ಸಂಪ್ರದಾಯವಿದೆ ಎಂದು ಉಲ್ಲೇಖಿಸಲಾಗಿದೆ.&lt;/p&gt;&lt;p&gt;&lt;strong&gt;ತಮಿಳುನಾಡಿನ ಮುನಿಯಾಂಡಿ ಸ್ವಾಮಿ ದೇವಾಲಯ&lt;/strong&gt;&lt;/p&gt;&lt;p&gt;ಮಧುರೈ ಸಮೀಪದ ಮುನಿಯಾಂಡಿ ಸ್ವಾಮಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಕೋಳಿ ಮತ್ತು ಮಟನ್ ಬಿರಿಯಾನಿ ತಯಾರಿಸಿ ಭಕ್ತರಿಗೆ ವಿತರಿಸುವ ವಿಶಿಷ್ಟ ಆಚರಣೆ ಇದೆ. ಇದು ಸ್ಥಳೀಯ ಜಾನಪದ ದೇವತಾ ಆರಾಧನೆ, ಆಹಾರ ಸಂಸ್ಕೃತಿ ಮತ್ತು ಸಮುದಾಯದ ಆಚರಣೆಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ಮದ್ಯ ನೈವೇದ್ಯದ ಕಾಲ ಭೈರವ ಪರಂಪರೆ&lt;/strong&gt;&lt;/p&gt;&lt;p&gt;ಉಜ್ಜಯಿನಿಯ ಪ್ರಸಿದ್ಧ ಕಾಲ ಭೈರವ ದೇವಾಲಯದಲ್ಲಿ ಮದ್ಯವನ್ನು ದೇವರಿಗೆ ಅರ್ಪಿಸುವ ಆಚರಣೆ ಅತ್ಯಂತ ಪ್ರಸಿದ್ಧವಾಗಿದೆ. ವಾರಾಣಸಿಯ ಕಾಲ ಭೈರವ ಆರಾಧನೆಯಲ್ಲಿಯೂ ವಿಭಿನ್ನ ನೈವೇದ್ಯ ಪದ್ಧತಿಗಳ ಉಲ್ಲೇಖಗಳು ಕಂಡುಬರುತ್ತವೆ. ಇವು ಭೈರವ ಮತ್ತು ಕೆಲವು ತಾಂತ್ರಿಕ ಪರಂಪರೆಗಳೊಂದಿಗೆ ಸಂಬಂಧ ಹೊಂದಿವೆ.&lt;/p&gt;&lt;p&gt;&lt;strong&gt;ಹಿಂದೂ ಧರ್ಮದಲ್ಲಿ ಒಂದೇ ಆಹಾರ ಸಂಪ್ರದಾಯವೇ?&lt;/strong&gt;&lt;/p&gt;&lt;p&gt;ಇತಿಹಾಸದ ವಿವಿಧ ಹಂತಗಳಲ್ಲಿ ಕೆಲವು ವೈದಿಕ ಯಜ್ಞಗಳಲ್ಲಿ ಪ್ರಾಣಿ ಬಲಿಯ ಉಲ್ಲೇಖಗಳಿವೆ. ಆದರೆ ಇದರಿಂದ ಮಾಂಸಾಹಾರವೇ ಸಾರ್ವತ್ರಿಕ ಹಿಂದೂ ಆಚರಣೆ ಎಂದು ಹೇಳಲಾಗುವುದಿಲ್ಲ. ಬದಲಾಗಿ, ಭಾರತದ ಹಿಂದೂ ಧಾರ್ಮಿಕ ಪರಂಪರೆಗಳು ಪ್ರದೇಶ, ಸಮುದಾಯ, ದೇವತಾ ಆರಾಧನೆ ಮತ್ತು ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ವೈವಿಧ್ಯಮಯವಾಗಿವೆ.&lt;/p&gt;&lt;p&gt;ಹೀಗಾಗಿ ಮೀನು, ಮಾಂಸ ಅಥವಾ ಮದ್ಯದ ನೈವೇದ್ಯ ಇರುವ ದೇವಾಲಯಗಳ ಆಚರಣೆಗಳನ್ನು ಇಡೀ ಹಿಂದೂ ಧರ್ಮದ ಪ್ರತಿನಿಧಿ ಎಂದು ನೋಡುವುದಕ್ಕಿಂತ, ಭಾರತದ ವಿಶಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಒಂದು ಭಾಗವಾಗಿ ಅರ್ಥಮಾಡಿಕೊಳ್ಳುವುದು ಸೂಕ್ತ.&lt;/p&gt;]]></content:encoded>
            <category>travel</category>
            <dc:creator>Chandrashekar GS</dc:creator>
            <atom:link href="https://kannada.asianetnews.com/travel/indias-unusual-temple-traditions-where-fish-meat-and-alcohol-become-offerings/articleshow-gle9f6g"/>
        </item>
        <item>
            <title><![CDATA[ಸಿನಿಮಾ ಶೂಟಿಂಗ್‌ನಿಂದಲೇ ಫೇಮಸ್ ಆಯ್ತು ಈ 5 ಟಾಪ್ ತಾಣಗಳು: ಒಂದೊಂದರ ಕಥೆಯೇ ರೋಚಕ!]]></title>
            <link>https://kannada.asianetnews.com/gallery/entertainment/top-5-tamil-cinema-shooting-spots-that-became-famous-tourist-destinations-from-reel-to-real-gvd-nn9msdw</link>
            <guid isPermaLink="true">https://kannada.asianetnews.com/gallery/entertainment/top-5-tamil-cinema-shooting-spots-that-became-famous-tourist-destinations-from-reel-to-real-gvd-nn9msdw</guid>
            <pubDate>Sat, 19 Sep 2026 09:00:03 +0530</pubDate>
            <description><![CDATA[&lt;p&gt;ತಮಿಳು ಸಿನಿಮಾಗಳ ಹಾಡುಗಳು ಮತ್ತು ಬೃಹತ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಇಡೀ ಭಾರತದಲ್ಲೇ ಫೇಮಸ್ ಆದ 5 ಐತಿಹಾಸಿಕ ಶೂಟಿಂಗ್&zwnj; ತಾಣಗಳ ಹಿನ್ನೆಲೆ ಹಾಗೂ ಈಗಿನ ಸ್ಥಿತಿಯ ಬಗ್ಗೆ ನಾವಿಲ್ಲಿ ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2tntpgqbbcsrvz9bat1b9hy,imgname-bjbj-1789749189143.png" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳು ಸಿನಿಮಾಗಳ ಹಾಡುಗಳು ಮತ್ತು ಬೃಹತ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಇಡೀ ಭಾರತದಲ್ಲೇ ಫೇಮಸ್ ಆದ 5 ಐತಿಹಾಸಿಕ ಶೂಟಿಂಗ್&zwnj; ತಾಣಗಳ ಹಿನ್ನೆಲೆ ಹಾಗೂ ಈಗಿನ ಸ್ಥಿತಿಯ ಬಗ್ಗೆ ನಾವಿಲ್ಲಿ ನೋಡೋಣ.&lt;/p&gt;&lt;img&gt;&lt;p&gt;ತಮಿಳು ಸಿನಿಮಾದ ಹಲವು ಹಿಟ್ ಚಿತ್ರಗಳ ಪ್ರಮುಖ ದೃಶ್ಯಗಳು ಮತ್ತು ಹಾಡುಗಳನ್ನು ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯವಿರುವ ಜಾಗಗಳಲ್ಲಿ ಶೂಟ್ ಮಾಡಲಾಗಿದೆ. ತೆರೆಯ ಮೇಲೆ ಆ ಬೃಹತ್ ದೃಶ್ಯಗಳು ಮತ್ತು ಪ್ರಕೃತಿ ಸೌಂದರ್ಯವನ್ನು ನೋಡಿ ಬೆರಗಾಗುವ ಫ್ಯಾನ್ಸ್, &quot;ಈ ಜಾಗ ಎಲ್ಲಿದೆ? ಇದು ಯಾವ ಊರು?&quot; ಎಂದು ಹುಡುಕಿಕೊಂಡು ಹೋಗಿ ನೋಡಲು ಶುರುಮಾಡಿದ್ದಾರೆ. ಹೀಗೆ ಬೆಳ್ಳಿತೆರೆಯ ಮೇಲೆ ಬಂದು ಇಡೀ ಭಾರತದಲ್ಲೇ ಫೇಮಸ್ ಆಗಿ, ಈಗ ಪ್ರಮುಖ ಪ್ರವಾಸಿ ತಾಣಗಳಾಗಿ ಬದಲಾಗಿರುವ ಜಾಗಗಳು ಮತ್ತು ಅವುಗಳ ಶೂಟಿಂಗ್ ಹಿನ್ನೆಲೆಯ ಬಗ್ಗೆ ತಿಳಿಯೋಣ.&lt;/p&gt;&lt;img&gt;&lt;p&gt;ಇರುವರ್, ಬಾಂಬೆ (ಕಣ್ಣಾಲನೇ ಹಾಡು), ಗುರು (ಆರುಯಿರೇ ಹಾಡು), ಭೀಮಾ (ರಹಸ್ಯ ಕನವುಗಳ್ ಹಾಡು) ಸೇರಿದಂತೆ ಹಲವು ಸಿನಿಮಾಗಳ ದೃಶ್ಯಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. ಮಣಿರತ್ನಂ ನಿರ್ದೇಶನದ 'ಬಾಂಬೆ' ಸಿನಿಮಾದ 'ಕಣ್ಣಾಲನೇ' ಹಾಡಿನಲ್ಲಿ, ಬೆಳದಿಂಗಳ ರಾತ್ರಿಯಲ್ಲಿ ಬೃಹತ್ ಕಂಬಗಳ ನಡುವೆ ಮನಿಷಾ ಕೊಯಿರಾಲಾ ಡ್ಯಾನ್ಸ್ ಮಾಡುವ ದೃಶ್ಯ ತಮಿಳು ಫ್ಯಾನ್ಸ್&zwnj;ಗೆ ಸಖತ್ ಇಷ್ಟವಾಗಿತ್ತು. ಈ ಅರಮನೆಯ ವಿಶಿಷ್ಟವಾದ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪ ಮತ್ತು ಬೃಹತ್ ಕಂಬಗಳು ಈ ಸಿನಿಮಾದ ನಂತರ ಇಡೀ ಭಾರತದಲ್ಲೇ ಫೇಮಸ್ ಆದವು. ತಮಿಳುನಾಡು ಪುರಾತತ್ವ ಇಲಾಖೆ ನಿರ್ವಹಿಸುತ್ತಿರುವ ಇಲ್ಲಿ, ಪ್ರತಿದಿನ ಸಂಜೆ ಲೈಟ್ ಅಂಡ್ ಸೌಂಡ್ ಶೋ (Light &amp;amp; Sound Show) ನಡೆಯುತ್ತದೆ. ಇಂದಿಗೂ ಇತಿಹಾಸಕಾರರು ಮತ್ತು ಸಿನಿಮಾ ಪ್ರವಾಸಿಗರ ಫೇವರಿಟ್ ತಾಣವಿದು.&lt;/p&gt;&lt;img&gt;&lt;p&gt;ಆಯುಧ ಎಳುತ್ತು, ವಾಲಿ, ಚೆನ್ನೈ 600028 ಸೇರಿದಂತೆ ಹಲವು ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. ಮಣಿರತ್ನಂ ಅವರ 'ಆಯುಧ ಎಳುತ್ತು' ಸಿನಿಮಾದಲ್ಲಿ ಮಾಧವನ್ (ಇನ್ಬಾ) ಮತ್ತು ಸೂರ್ಯ (ಮೈಕೇಲ್) ನಡುವಿನ ಪ್ರಮುಖ ಕ್ಲೈಮ್ಯಾಕ್ಸ್ ಫೈಟ್ ದೃಶ್ಯಗಳನ್ನು ಇಲ್ಲೇ ಚಿತ್ರೀಕರಿಸಲಾಗಿತ್ತು. ಅಡ್ಯಾರ್ ನದಿ ಮುಖಜಭೂಮಿಯಲ್ಲಿರುವ ಈ ಅರ್ಧಂಬರ್ಧ ಸೇತುವೆ, ಚೆನ್ನೈ ಯುವಕರ ಪಾಲಿಗೆ ಪ್ರೀತಿ ಮತ್ತು ಸಿನಿಮಾದ ಗುರುತಾಗಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕರ ಪ್ರವೇಶವನ್ನು ಇಲ್ಲಿ ಸಾಕಷ್ಟು ನಿರ್ಬಂಧಿಸಲಾಗಿದೆ. ಆದರೂ, ಫೋಟೋಗ್ರಾಫರ್&zwnj;ಗಳು ಮತ್ತು ಸಿನಿಮಾ ಪ್ರೇಮಿಗಳು ಹೊರಗಿನಿಂದಲೇ ನಿಂತು ಎಂಜಾಯ್ ಮಾಡುವ ಪ್ರಮುಖ ಜಾಗವಿದು.&lt;/p&gt;&lt;img&gt;&lt;p&gt;ಕಾದಲಿಕ್ಕ ನೇರಮಿಲೈ, ವಿನ್ನರ್, ಚಿನ್ನ ತಂಬಿ, ದೇವರ್ ಮಗನ್, ಸೂರ್ಯವಂಶಂ, ಅಮೈದಿಪ್ಪಡೈ ಸೇರಿದಂತೆ ಅಸಂಖ್ಯಾತ ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. 90ರ ದಶಕದ ತಮಿಳು ಸಿನಿಮಾಗಳಲ್ಲಿ ಹಳ್ಳಿ ಹಿನ್ನೆಲೆ ಎಂದರೆ ಪೊಳ್ಳಾಚಿ ಮೊದಲ ಆಯ್ಕೆಯಾಗಿತ್ತು. ಅದರಲ್ಲೂ ಆಳಿಯಾರ್ ಸರ್ಕಾರಿ ಅತಿಥಿಗೃಹ ಮತ್ತು ಅದರ ಸುತ್ತಮುತ್ತಲಿನ ಹಸಿರು ತೆಂಗಿನ ತೋಟಗಳು 'ಚಿನ್ನ ತಂಬಿ' ಸೇರಿದಂತೆ ನೂರಾರು ಸಿನಿಮಾಗಳ ಪ್ರಮುಖ ಶೂಟಿಂಗ್ ಸ್ಪಾಟ್&zwnj;ಗಳಾಗಿ ಬದಲಾದವು. ಇಂದಿಗೂ ತಮಿಳು ಸಿನಿಮಾ ಶೂಟಿಂಗ್&zwnj;ಗಳ ಪ್ರಮುಖ ತಾಣವಾಗಿ ಇದು ಗುರುತಿಸಿಕೊಂಡಿದೆ. ಇದನ್ನು ಇನ್ನಷ್ಟು ಪ್ರೋತ್ಸಾಹಿಸಲು, ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಈ ಭಾಗವನ್ನು &quot;ಸಿನಿಮಾ ಟೂರಿಸಂ ಸರ್ಕ್ಯೂಟ್&quot; (Film Tourism Circuit) ಆಗಿ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ.&lt;/p&gt;&lt;img&gt;&lt;p&gt;ಪುನ್ನಗೈ ಮನ್ನನ್, ರಾವಣನ್ (ಉಸಿರೇ ಪೋಗುದೆ ಹಾಡು), ರಿದಮ್ (ನದಿಯೇ ನದಿಯೇ ಹಾಡು), ಪೈಯಾ (ಅಡಡಾ ಮಳೈಡಾ ಹಾಡು), ಬಾಹುಬಲಿ ಮುಂತಾದ ಹಲವು ಬೃಹತ್ ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. 'ಪುನ್ನಗೈ ಮನ್ನನ್' ಸಿನಿಮಾದಲ್ಲಿ ಕಮಲ್ ಹಾಸನ್ ಮತ್ತು ರೇಖಾ ಜಲಪಾತದಿಂದ ಹಾರುವ ದೃಶ್ಯವನ್ನು ಇಲ್ಲಿ ತೆಗೆದಿದ್ದರಿಂದ, ಬಹಳ ಕಾಲ ಇದನ್ನು ಜನ &quot;ಪುನ್ನಗೈ ಮನ್ನನ್ ಜಲಪಾತ&quot; ಎಂದೇ ಕರೆಯುತ್ತಿದ್ದರು. ಆಮೇಲೆ ಮಣಿರತ್ನಂ ಅವರ ರಾವಣನ್, ಕೆ.ವಿ. ಆನಂದ್ ಅವರ ರಿದಮ್ ಹಾಡುಗಳ ಮೂಲಕ ಇದರ ಸೌಂದರ್ಯ ಇಡೀ ದೇಶಾದ್ಯಂತ ಹರಡಿತು. ದಕ್ಷಿಣ ಭಾರತದ ಪ್ರಮುಖ ಪರಿಸರ ಪ್ರವಾಸೋದ್ಯಮ ತಾಣವಾಗಿ (Eco-Tourism Spot) ಬದಲಾಗಿರುವ ಈ ಜಲಪಾತಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ.&lt;/p&gt;&lt;img&gt;&lt;p&gt;ಕಂಡುಕೊಂಡೇನ್ ಕಂಡುಕೊಂಡೇನ್, ಸಾಮಿ (ಇದುತಾನಾ ಹಾಡು), ಪಿರಿವೋಮ್ ಸಂತಿಪ್ಪೋಮ್, ಸಂಡೈಕೋಳಿ ಸೇರಿದಂತೆ ಹಲವು ಸಿನಿಮಾಗಳನ್ನು ಇಲ್ಲಿ ಶೂಟ್ ಮಾಡಲಾಗಿದೆ. ರಾಜೀವ್ ಮೆನನ್ ಅವರ 'ಕಂಡುಕೊಂಡೇನ್ ಕಂಡುಕೊಂಡೇನ್' ಸಿನಿಮಾದಲ್ಲಿ ಟಬು ಮತ್ತು ಐಶ್ವರ್ಯಾ ರೈ ಕುಟುಂಬ ವಾಸಿಸುವ ಸಾಂಪ್ರದಾಯಿಕ ಅರಮನೆಯಾಗಿ ಇದನ್ನು ತೋರಿಸಲಾಗಿತ್ತು. ಆತ್ತಂಗುಡಿ ನೆಲದ ಕಲ್ಲುಗಳು ಮತ್ತು ಸೂಕ್ಷ್ಮವಾದ ತೇಗದ ಮರದ ಕೆತ್ತನೆಗಳಿಂದ ತುಂಬಿರುವ ಈ ಚೆಟ್ಟಿನಾಡು ಅರಮನೆ ಸಿನಿಮಾಗೆ ಒಂದು ಗಾಂಭೀರ್ಯವನ್ನು ತಂದುಕೊಟ್ಟಿತ್ತು. 1980ರ ದಶಕದಿಂದ ಶುರುವಾಗಿ ಇಂದಿನವರೆಗೂ ಹಲವು ಸಿನಿಮಾಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಇದು ಚೆಟ್ಟಿಯಾರ್ ಕುಟುಂಬದ ನಿಯಂತ್ರಣದಲ್ಲಿರುವ ಪಾರಂಪರಿಕ ಆಸ್ತಿಯಾಗಿದೆ. ಹೊರಗಿನ ಭಾಗಗಳನ್ನು ನೋಡಲು ಮತ್ತು ಫೋಟೋಗಳನ್ನು ತೆಗೆದುಕೊಳ್ಳಲು ಇಲ್ಲಿ ಅನುಮತಿಯಿದೆ. ಜೊತೆಗೆ, ಹಣ ಪಾವತಿಸಿ ಕೆಲವು ದಿನಗಳ ಕಾಲ ಉಳಿದುಕೊಂಡು, ಸಾಂಪ್ರದಾಯಿಕ ಚೆಟ್ಟಿನಾಡು ಊಟವನ್ನು ಸವಿಯುವ ಸೌಲಭ್ಯಗಳನ್ನೂ ಈಗ ಮಾಡಲಾಗಿದೆ. ಕಾರೈಕುಡಿ ಪಾರಂಪರಿಕ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿ ಇದು ಗುರುತಿಸಿಕೊಂಡಿದೆ.&lt;/p&gt;]]></content:encoded>
            <category>travel</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/top-5-tamil-cinema-shooting-spots-that-became-famous-tourist-destinations-from-reel-to-real-gvd-nn9msdw"/>
        </item>
        <item>
            <title><![CDATA[Google Maps ಟ್ರಾಫಿಕ್ ಜಾಮ್ ಹೇಗೆ ಪತ್ತೆ ಮಾಡುತ್ತೆ? 99% ಜನರಿಗೆ ಗೊತ್ತಿಲ್ಲದ ಸತ್ಯ!]]></title>
            <link>https://kannada.asianetnews.com/technology/how-does-google-maps-know-where-traffic-is-the-gps-magic-behind-your-red-route/articleshow-oevldx7</link>
            <guid isPermaLink="true">https://kannada.asianetnews.com/technology/how-does-google-maps-know-where-traffic-is-the-gps-magic-behind-your-red-route/articleshow-oevldx7</guid>
            <pubDate>Sun, 13 Sep 2026 09:14:12 +0530</pubDate>
            <description><![CDATA[&lt;p&gt;Google Maps&zwnj;ನಲ್ಲಿ ರಸ್ತೆ ಕೆಂಪು ಬಣ್ಣಕ್ಕೆ ತಿರುಗಿ ಟ್ರಾಫಿಕ್ ಜಾಮ್ ತೋರಿಸುವುದು ಹೇಗೆ? ಬಳಕೆದಾರರ GPS ಸ್ಥಳ, ನ್ಯಾವಿಗೇಶನ್ ಮಾರ್ಗ ಮತ್ತು ಸಾಧನದ ಕೆಲವು ಸೆನ್ಸರ್ ಡೇಟಾವನ್ನು ಬಳಸಿಕೊಂಡು Google ರಸ್ತೆಗಳಲ್ಲಿ ವಾಹನಗಳ ಚಲನೆಯ ವೇಗವನ್ನು ಅಂದಾಜಿಸುತ್ತದೆ. ಹಳೆಯ ಹಾಗೂ ಪ್ರಸ್ತುತ ಮಾಹಿತಿಯನ್ನು ಸಂಯೋಜಿಸಿ ಟ್ರಾಫಿಕ್ ಮತ್ತು ವೇಗದ ಪರ್ಯಾಯ ಮಾರ್ಗಗಳನ್ನು ಸೂಚಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2ca480f30nbms9jjjfpa5rp,imgname-how-google-maps-detects-traffic-without-cameras-everywhere--1--1789267157007.jpg" type="image/jpeg" height="390" width="690"/>
            <content:encoded><![CDATA[&lt;h2&gt;Google Maps&zwnj;ಗೆ ಟ್ರಾಫಿಕ್ ಹೇಗೆ ಗೊತ್ತಾಗುತ್ತೆ?&lt;/h2&gt;&lt;p&gt;ನೀವು ಕಾರಿನಲ್ಲಿ ಹೋಗುತ್ತಿದ್ದೀರಿ. ಏಕಾಏಕಿ Google Maps&zwnj;ನಲ್ಲಿದ್ದ ರಸ್ತೆ ಹಸಿರಿನಿಂದ ಕಿತ್ತಳೆ ಅಥವಾ ಕೆಂಪು ಬಣ್ಣಕ್ಕೆ ಬದಲಾಗುತ್ತದೆ. ಮುಂದೆ ಟ್ರಾಫಿಕ್ ಜಾಮ್ ಇದೆ, ಪ್ರಯಾಣಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು Maps ಎಚ್ಚರಿಸುತ್ತದೆ. ಆದರೆ ರಸ್ತೆಯ ಪ್ರತಿಯೊಂದು ಭಾಗದಲ್ಲೂ ಕ್ಯಾಮೆರಾ ಅಳವಡಿಸಿರುವುದಿಲ್ಲ. ಹಾಗಿದ್ದರೆ Google Maps&zwnj;ಗೆ ಟ್ರಾಫಿಕ್ ಬಗ್ಗೆ ಹೇಗೆ ಗೊತ್ತಾಗುತ್ತದೆ?&lt;/p&gt;&lt;h3&gt;ನಿಮ್ಮ ಫೋನ್&zwnj;ನ GPS ಪ್ರಮುಖ ಸುಳಿವು&lt;/h3&gt;&lt;p&gt;Google Maps&zwnj;ನ ಟ್ರಾಫಿಕ್ ಮಾಹಿತಿ ಪಡೆಯುವ ಪ್ರಮುಖ ಮೂಲಗಳಲ್ಲಿ ಬಳಕೆದಾರರ ನ್ಯಾವಿಗೇಶನ್ ಡೇಟಾವೂ ಒಂದು. ನೀವು Maps ಬಳಸಿ ಪ್ರಯಾಣಿಸುವಾಗ, GPS ಸ್ಥಳ, ನೀವು ತೆಗೆದುಕೊಂಡ ಮಾರ್ಗ ಮತ್ತು ಕೆಲವು ಸಾಧನದ ಸೆನ್ಸರ್ ಮಾಹಿತಿಯನ್ನು ಬಳಸಿಕೊಂಡು ರಸ್ತೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು Googleಗೆ ಸಹಾಯವಾಗುತ್ತದೆ.&lt;/p&gt;&lt;p&gt;ಒಂದೇ ರಸ್ತೆಯಲ್ಲಿ ಹಲವಾರು Maps ಬಳಕೆದಾರರ ಫೋನ್&zwnj;ಗಳು ಸಾಮಾನ್ಯಕ್ಕಿಂತ ನಿಧಾನವಾಗಿ ಚಲಿಸುತ್ತಿವೆ ಎಂದು ಊಹಿಸಿ. ಈ ಮಾಹಿತಿಯನ್ನು ಇತರ ಮೂಲಗಳೊಂದಿಗೆ ಸಂಯೋಜಿಸುವ ಮೂಲಕ ಆ ರಸ್ತೆಯಲ್ಲಿ ಸಂಚಾರ ನಿಧಾನವಾಗಿದೆ ಎಂಬುದನ್ನು Maps ಅಂದಾಜಿಸಬಹುದು. Google ಹೇಳುವಂತೆ, ಇಂತಹ ಡೇಟಾ ರಿಯಲ್-ಟೈಮ್ ಟ್ರಾಫಿಕ್ ಪರಿಸ್ಥಿತಿಗಳನ್ನು ತೋರಿಸಲು ಮತ್ತು ವೇಗವಾದ ಪರ್ಯಾಯ ಮಾರ್ಗಗಳನ್ನು ಸೂಚಿಸಲು ಸಹಾಯ ಮಾಡುತ್ತದೆ.&lt;/p&gt;&lt;h3&gt;ಹಳೆಯ ಡೇಟಾ + ಈಗಿನ ಪರಿಸ್ಥಿತಿ&lt;/h3&gt;&lt;p&gt;ಇದು ಕೇವಲ ಆ ಕ್ಷಣದ GPS ಮಾಹಿತಿಯ ಮೇಲಷ್ಟೇ ಅವಲಂಬಿತವಾಗಿರುವುದಿಲ್ಲ. ಹಿಂದಿನ ಮತ್ತು ಪ್ರಸ್ತುತ ಸ್ಥಳದ ಮಾಹಿತಿಯನ್ನು ಬಳಸಿಕೊಂಡು ಪ್ರಯಾಣದ ಸಮಯವನ್ನು ಅಂದಾಜಿಸಲಾಗುತ್ತದೆ. ರಸ್ತೆಗಳಲ್ಲಿ ಸಂಭವಿಸುವ ವ್ಯತ್ಯಾಸಗಳನ್ನು ಗುರುತಿಸಲು ಇತರ ಮೂಲಗಳಿಂದ ದೊರೆಯುವ ಟ್ರಾಫಿಕ್ ಮತ್ತು ಘಟನೆಗಳ ಮಾಹಿತಿಯನ್ನೂ ಬಳಸಬಹುದು.&lt;/p&gt;&lt;h3&gt;Google Maps&zwnj;ನಲ್ಲಿ ರಸ್ತೆ ಕೆಂಪಾಗೋದು ಯಾಕೆ?&lt;/h3&gt;&lt;p&gt;Maps&zwnj;ನಲ್ಲಿ ರಸ್ತೆ ಹಸಿರು, ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸುವುದರ ಉದ್ದೇಶವೇ ಸಂಚಾರದ ವೇಗದ ಬಗ್ಗೆ ತಕ್ಷಣದ ಸೂಚನೆ ನೀಡುವುದು. ಹೀಗಾಗಿ ಚಾಲಕರು ಮುಂದೆ ಇರುವ ರಸ್ತೆಯಲ್ಲಿ ನಿಧಾನಗತಿ ಇದೆಯೇ ಅಥವಾ ಬೇರೆ ಮಾರ್ಗ ತೆಗೆದುಕೊಳ್ಳುವುದು ಉತ್ತಮವೇ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.&lt;/p&gt;&lt;h3&gt;ನಿಮ್ಮ ಲೊಕೇಶನ್ ಡೇಟಾ Google Maps&zwnj;ಗೆ ಹೇಗೆ ಸಹಾಯ ಮಾಡುತ್ತದೆ?&lt;/h3&gt;&lt;p&gt;Google ಪ್ರಕಾರ, Maps&zwnj;ನ ನ್ಯಾವಿಗೇಶನ್ ಡೇಟಾವನ್ನು ಸಂಸ್ಕರಿಸಿ Maps ಅನುಭವ ಸುಧಾರಿಸಲು ಬಳಸಲಾಗುತ್ತದೆ. ನ್ಯಾವಿಗೇಶನ್&zwnj;ಗಾಗಿ ಬಳಸುವ ಕೆಲವು ಡೇಟಾವನ್ನು Google ಅಜ್ಞಾತ ರೀತಿಯಲ್ಲಿ ಸಂಯೋಜಿಸುತ್ತದೆ ಮತ್ತು Maps&zwnj;ಗೆ ನೀಡುವ ಅಪ್&zwnj;ಡೇಟ್&zwnj;ಗಳನ್ನು Google Account ಅಥವಾ ನಿರ್ದಿಷ್ಟ ಸಾಧನಕ್ಕೆ ಜೋಡಿಸದಂತೆ ಮಾಡುತ್ತದೆ ಎಂದು ಕಂಪನಿ ಹೇಳುತ್ತದೆ.&lt;/p&gt;&lt;p&gt;ಅಂದರೆ, ನೀವು ಟ್ರಾಫಿಕ್&zwnj;ನಲ್ಲಿ ಸಿಲುಕಿಕೊಂಡಿರುವುದನ್ನು Maps ಮಾಯಾಜಾಲದಿಂದ ತಿಳಿಯುವುದಿಲ್ಲ. ಸಾವಿರಾರು ಫೋನ್&zwnj;ಗಳಿಂದ ಬರುವ ಸ್ಥಳ ಮತ್ತು ಚಲನೆಯ ಮಾಹಿತಿಯನ್ನು ತಂತ್ರಜ್ಞಾನ ಬಳಸಿ ವಿಶ್ಲೇಷಿಸಿ, ರಸ್ತೆಯ ಸ್ಥಿತಿಯನ್ನು ಅಂದಾಜಿಸುತ್ತದೆ. ಇದೇ Google Maps&zwnj;ನ ಟ್ರಾಫಿಕ್ ವ್ಯವಸ್ಥೆಯ ಹಿಂದಿರುವ ಪ್ರಮುಖ ತಂತ್ರಜ್ಞಾನ.&lt;/p&gt;]]></content:encoded>
            <category>travel</category>
            <dc:creator>Chandrashekar GS</dc:creator>
            <atom:link href="https://kannada.asianetnews.com/technology/how-does-google-maps-know-where-traffic-is-the-gps-magic-behind-your-red-route/articleshow-oevldx7"/>
        </item>
        <item>
            <title><![CDATA[4 ಕಿ.ಮೀ. ಬಸ್ ಪ್ರಯಾಣ, 'ಆ' ಯುವತಿಯ ಶಾರ್ಟ್ ಡ್ರೆಸ್: ಬೆಂಗಳೂರಿನ ಯುವಕನಿಗೆ ಎದುರಾಯ್ತು ವಿಚಿತ್ರ ಅನುಭವ!]]></title>
            <link>https://kannada.asianetnews.com/bengaluru-urban/womans-outfit-leaves-bengaluru-passenger-uncomfortable-bus-reddit-debate-follows/articleshow-p8i0hhk</link>
            <guid isPermaLink="true">https://kannada.asianetnews.com/bengaluru-urban/womans-outfit-leaves-bengaluru-passenger-uncomfortable-bus-reddit-debate-follows/articleshow-p8i0hhk</guid>
            <pubDate>Wed, 16 Sep 2026 12:09:27 +0530</pubDate>
            <description><![CDATA[&lt;p&gt;ಬೆಂಗಳೂರಿನ ಬಸ್&zwnj;ನಲ್ಲಿ ಎದುರು ಕುಳಿತಿದ್ದ ಮಹಿಳೆಯ ಉಡುಪಿನಿಂದ ತಮಗೆ ಮುಜುಗರವಾದ ಅನುಭವವನ್ನು ವ್ಯಕ್ತಿಯೊಬ್ಬರು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ಸೀಟ್ ಬದಲಾಯಿಸಲು ಸಾಧ್ಯವಾಗದ ಕಾರಣ ಪ್ರಯಾಣದ ವೇಳೆ ದೃಷ್ಟಿಯನ್ನು ಬೇರೆಡೆ ಇರಿಸಲು ಪ್ರಯತ್ನಿಸಿದ್ದಾಗಿ ಅವರು ಹೇಳಿದ್ದಾರೆ. ಪೋಸ್ಟ್ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಆರಾಮ, ಉಡುಪು ಮತ್ತು ಪರಸ್ಪರ ಗೌರವದ ಕುರಿತು ಚರ್ಚೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2m1h64qf3w0rm4txcqh4shg,imgname-woman-s-outfit-leaves-passenger-uncomfortable---reddit-debate-follows-1789526579351.jpg" type="image/jpeg" height="390" width="690"/>
            <content:encoded><![CDATA[&lt;h2&gt;&lsquo;ಎಲ್ಲಿ ನೋಡಲಿ?&rsquo; ಎಂದು ಮುಜುಗರಗೊಂಡ ಪ್ರಯಾಣಿಕ&lt;/h2&gt;&lt;p&gt;ಬೆಂಗಳೂರಿನಲ್ಲಿ ಬಸ್&zwnj;ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಎದುರು ಕುಳಿತಿದ್ದ ಮಹಿಳೆಯ ಉಡುಪಿನಿಂದ ತಮಗೆ ಮುಜುಗರವಾಗಿದ್ದ ಅನುಭವವನ್ನು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 4 ಕಿ.ಮೀ. ಪ್ರಯಾಣದ ವೇಳೆ ನಡೆದ ಈ ಘಟನೆ, ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಆರಾಮ ಮತ್ತು ಇತರರ ಆಯ್ಕೆಗಳನ್ನು ಹೇಗೆ ಗೌರವಿಸಬೇಕು ಎಂಬ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h3&gt;ಎದುರಿನ ಸೀಟ್&zwnj;ನಿಂದ ಶುರುವಾದ ಗೊಂದಲ: ದೃಷ್ಟಿಯನ್ನು ಹೇಗೆ ನಿಯಂತ್ರಿಸಬೇಕು?&lt;/h3&gt;&lt;p&gt;ತಮ್ಮ ಪೋಸ್ಟ್&zwnj;ನಲ್ಲಿ ವ್ಯಕ್ತಿ ಮಹಿಳೆ ಏನು ಧರಿಸಬೇಕು ಎಂಬುದರ ಬಗ್ಗೆ ತೀರ್ಪು ನೀಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ಇಷ್ಟದ ಉಡುಪು ಧರಿಸುವ ಸ್ವಾತಂತ್ರ್ಯವಿದೆ ಎಂದೂ ಹೇಳಿದ್ದಾರೆ.&lt;/p&gt;&lt;p&gt;ಆದರೆ ಬಸ್&zwnj;ನ ಸೀಟ್&zwnj;ಗಳ ವಿನ್ಯಾಸದಿಂದಾಗಿ ಮಹಿಳೆ ನೇರವಾಗಿ ತಮ್ಮ ದೃಷ್ಟಿಯಲ್ಲೇ ಕಾಣಿಸುತ್ತಿದ್ದರು. ಇದರಿಂದ ಸಹಜವಾಗಿ ಎದುರಿಗೆ ನೋಡುವುದಕ್ಕೂ ಮುಜುಗರವಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಬಸ್ ತುಂಬಿದ್ದರಿಂದ ಸೀಟ್ ಬದಲಾಯಿಸಲು ಸಾಧ್ಯವಾಗಲಿಲ್ಲ ಎನ್ನುವುದು ಅವರ ಮತ್ತೊಂದು ಅಸೌಕರ್ಯವಾಗಿತ್ತು.&lt;/p&gt;&lt;h3&gt;ಅಸಹಜ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದರು?&lt;/h3&gt;&lt;p&gt;ತಮ್ಮಿಂದ ಮಹಿಳೆಗೆ ಯಾವುದೇ ರೀತಿಯ ಅನಾನುಕೂಲ ಉಂಟಾಗಬಾರದು ಎಂಬ ಕಾರಣಕ್ಕೆ ಆಕೆಯನ್ನು ಉದ್ದೇಶಪೂರ್ವಕವಾಗಿ ನೋಡದಿರಲು ಪ್ರಯತ್ನಿಸಿದ್ದಾಗಿ ಅವರು ಹೇಳಿದ್ದಾರೆ. ಕೊನೆಗೆ ಸ್ನೇಹಿತನಿಗೆ ಕರೆ ಮಾಡಿ, ಉಳಿದ ಪ್ರಯಾಣದ ವೇಳೆ ಮಾತನಾಡುತ್ತಾ ಕಿಟಕಿಯ ಹೊರಗೆ ನೋಡುತ್ತಾ ಕುಳಿತಿದ್ದಾಗಿ ವಿವರಿಸಿದ್ದಾರೆ.&lt;/p&gt;&lt;p&gt;ಅವರ ಪ್ರಕಾರ, ಕೆಲವೇ ಕಿಲೋಮೀಟರ್&zwnj;ಗಳ ಪ್ರಯಾಣವಾದರೂ ಆ ಸಮಯದಲ್ಲಿ ಅದು ದೀರ್ಘವಾಗಿ ಅನುಭವವಾಯಿತು.&lt;/p&gt;&lt;h3&gt;ನೆಟ್ಟಿಗರಿಂದ ವಿಭಿನ್ನ ಅಭಿಪ್ರಾಯ&lt;/h3&gt;&lt;p&gt;ಈ ಪೋಸ್ಟ್&zwnj;ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ವ್ಯಕ್ತಿ ತನ್ನ ಗಮನವನ್ನು ಬೇರೆಡೆ ಕೇಂದ್ರೀಕರಿಸಿ ಸಾಮಾನ್ಯವಾಗಿ ಪ್ರಯಾಣಿಸಬೇಕಿತ್ತು ಎಂದು ಹೇಳಿದ್ದಾರೆ. ಇನ್ನೂ ಕೆಲವರು, ಯಾರಾದರೂ ತಮ್ಮ ಉಡುಪಿನಲ್ಲಿ ಆರಾಮವಾಗಿದ್ದರೆ ಅದನ್ನು ಪ್ರಶ್ನಿಸುವ ಬದಲು ವೈಯಕ್ತಿಕ ಗಡಿಗಳನ್ನು ಗೌರವಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಮತ್ತೊಂದು ವಿಭಾಗದವರು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಪರಸ್ಪರರ ವೈಯಕ್ತಿಕ ಆರಾಮದ ಬಗ್ಗೆ ಗಮನ ಹರಿಸಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.&lt;/p&gt;&lt;h3&gt;ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯವಾದುದು ಏನು?&lt;/h3&gt;&lt;p&gt;ಈ ಘಟನೆ ಅಂತಿಮವಾಗಿ ಉಡುಪಿನ ಕುರಿತ ಚರ್ಚೆಗಿಂತ ವೈಯಕ್ತಿಕ ಗಡಿ, ಪರಸ್ಪರ ಗೌರವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜವಾಬ್ದಾರಿಯುತ ವರ್ತನೆ ಕುರಿತು ಪ್ರಶ್ನೆ ಎತ್ತಿದೆ. ಒಬ್ಬರ ಆಯ್ಕೆ ಮತ್ತೊಬ್ಬರಿಗೆ ಅಸೌಕರ್ಯ ತಂದರೂ, ಅದನ್ನು ನಿಭಾಯಿಸುವಾಗ ಗೌರವ ಮತ್ತು ಸಂಯಮ ಎರಡೂ ಕಾಪಾಡಿಕೊಳ್ಳುವುದು ಮುಖ್ಯ ಎಂಬ ಅಭಿಪ್ರಾಯವೂ ಚರ್ಚೆಯಲ್ಲಿ ವ್ಯಕ್ತವಾಗಿದೆ.&lt;/p&gt;]]></content:encoded>
            <category>travel</category>
            <dc:creator>Chandrashekar GS</dc:creator>
            <atom:link href="https://kannada.asianetnews.com/bengaluru-urban/womans-outfit-leaves-bengaluru-passenger-uncomfortable-bus-reddit-debate-follows/articleshow-p8i0hhk"/>
        </item>
        <item>
            <title><![CDATA[ಭಾರತದ ಈ ಏಕೈಕ ಗಂಡು ನದಿ… ಬಾಂಗ್ಲಾದೇಶದಲ್ಲಿ ಹೆಣ್ಣಾಗಿ ಹರಿಯುತ್ತೆ… ಯಾವ ನದಿ ಗೊತ್ತಾ?]]></title>
            <link>https://kannada.asianetnews.com/travel/brahmaputra-in-india-jamuna-in-bangladesh-why-does-this-river-have-different-names/articleshow-r2bihtq</link>
            <guid isPermaLink="true">https://kannada.asianetnews.com/travel/brahmaputra-in-india-jamuna-in-bangladesh-why-does-this-river-have-different-names/articleshow-r2bihtq</guid>
            <pubDate>Thu, 17 Sep 2026 18:25:51 +0530</pubDate>
            <description><![CDATA[&lt;p&gt;ಭಾರತದಲ್ಲಿ ಬ್ರಹ್ಮಪುತ್ರ ಎಂದು ಕರೆಯಲಾಗುವ ಈ ಪ್ರಸಿದ್ಧ ನದಿ ಬಾಂಗ್ಲಾದೇಶ ಪ್ರವೇಶಿಸಿದ ಬಳಿಕ ಜಮುನಾ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಟಿಬೆಟ್&zwnj;ನಿಂದ ಆರಂಭವಾಗಿ ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿಯುವ ಈ ನದಿಯ ಹೆಸರು ಏಕೆ ಬದಲಾಗುತ್ತದೆ? ಇದರ ವಿಶೇಷತೆ ಏನು? ಬ್ರಹ್ಮಪುತ್ರ-ಜಮುನಾ ನದಿಯ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzwqmjmrn0p9j8ges2ev117s,imgname-3-1786596969112.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಭಾರತದಲ್ಲಿ ನದಿಗಳನ್ನು ಪೂಜಿಸಲಾಗುತ್ತದೆ&lt;/strong&gt;&lt;/h2&gt;&lt;p&gt;ಭಾರತವು ನದಿಗಳ ನಾಡು ಎಂದು ಪ್ರಸಿದ್ಧವಾಗಿದ್ದು, ಒಂದೆರಡಲ್ಲ, ಹಲವಾರು ನದಿಗಳು ಇಲ್ಲಿ ಹರಿಯುತ್ತವೆ. ಭಾರತದಲ್ಲಿ, ನದಿಗಳು ನೀರಿನ ಮೂಲಗಳಷ್ಟೇ ಅಲ್ಲ, ಧಾರ್ಮಿಕ ನಂಬಿಕೆಗಳೊಂದಿಗೆ ಸಹ ಸಂಬಂಧ ಹೊಂದಿವೆ. ಅದಕ್ಕಾಗಿಯೇ ಜನರು ಗಂಗಾ ಮತ್ತು ಯಮುನಾದಂತಹ ನದಿಗಳನ್ನು ಪೂಜಿಸುತ್ತಾರೆ ಮತ್ತು ಅವುಗಳನ್ನು ತಾಯಂದಿರೆಂದು ಪರಿಗಣಿಸುತ್ತಾರೆ. ಬ್ರಹ್ಮಪುತ್ರ ನದಿಯನ್ನು ವಿಶೇಷವಾದ ನದಿ ಎಂದು ಪರಿಗಣಿಸಲಾಗಿದೆ. ಯಾಕಂದ್ರೆ ಭಾರತದಲ್ಲಿ ಹರಿಯುವ ಏಕೈಕ ಗಂಡು ನದಿ.&lt;/p&gt;&lt;h3&gt;&lt;strong&gt;ಬ್ರಹ್ಮಪುತ್ರ ನದಿ&lt;/strong&gt;&lt;/h3&gt;&lt;p&gt;ಕೈಲಾಶ್ ಶ್ರೇಣಿಯ ಚೆಮಾಯುಂಗ್&zwnj;ಡಂಗ್ ಹಿಮನದಿಯಿಂದ ಹುಟ್ಟುವ ಬ್ರಹ್ಮಪುತ್ರ ನದಿ ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. 2,900 ಕಿಲೋಮೀಟರ್ ಉದ್ದದ ಈ ನದಿಯನ್ನು ಬಾಂಗ್ಲಾದೇಶಕ್ಕೆ ಮಾತ್ರವಲ್ಲದೆ ಭಾರತಕ್ಕೂ, ವಿಶೇಷವಾಗಿ ಅರುಣಾಚಲ ಪ್ರದೇಶ ಮತ್ತು ಅಸರ್&zwnj;ಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ, ಬ್ರಹ್ಮಪುತ್ರ ನದಿಯನ್ನು ಕೇವಲ ಒಂದು ಹೆಸರಿನಿಂದ ಅಲ್ಲ, ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಯ ಮೂಲಕ ಹರಿಯುವುದರಿಂದ ಸ್ಕೈ ರಿವರ್ (&quot;ಆಕಾಶದ ನದಿ&quot;) ಸೇರಿದಂತೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಕೆಂಪು ನದಿ ಎಂದೂ ಕರೆಯುತ್ತಾರೆ.&lt;/p&gt;&lt;p&gt;&lt;strong&gt;ಈ ನದಿ ಭಾರತದ ಹಲವು ರಾಜ್ಯಗಳಿಗೆ ಜೀವಾಳ&lt;/strong&gt;&lt;/p&gt;&lt;p&gt;ಟಿಬೆಟ್&zwnj;ನಲ್ಲಿ ಹುಟ್ಟುವ ಈ ನದಿ ಭಾರತದ ಹಲವಾರು ರಾಜ್ಯಗಳ ಮೂಲಕ ಹರಿಯುತ್ತದೆ. ಅದರ ಮಾರ್ಗದಿಂದಾಗಿ, ಇದು ಅನೇಕ ಜನರ, ವಿಶೇಷವಾಗಿ ರೈತರು ಮತ್ತು ಮೀನುಗಾರರ ಜೀವನದೊಂದಿಗೆ ಹೆಣೆದುಕೊಂಡಿದೆ. ಬ್ರಹ್ಮಪುತ್ರದ ಮಾರ್ಗವು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳನ್ನು ಒಳಗೊಂಡಿದೆ. ನಂತರ ಅದು ಬಾಂಗ್ಲಾದೇಶವನ್ನು ಪ್ರವೇಶಿಸಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.&lt;/p&gt;&lt;p&gt;&lt;strong&gt;ಭಾರತದ ಈ ಗಂಡು ನದಿ ಬಾಂಗ್ಲಾದೇಶದಲ್ಲಿ ಹೆಣ್ಣಾಗಿ ಹರಿಯುತ್ತಾಳೆ&lt;/strong&gt;&lt;/p&gt;&lt;p&gt;ಭಾರತದಲ್ಲಿ, ಈ ನದಿಗೆ ಬ್ರಹ್ಮಪುತ್ರ ಎಂದು ಹೆಸರಿಸಲಾಗಿದೆ, ಇದು ಭಾರತದ ಏಕೈಕ ಗಂಡು ನದಿ ಎನ್ನುವ ಹೆಸರನ್ನು ಕೂಡ ಹೊಂದಿದೆ. ಆದರೆ, ಇದು ಬಾಂಗ್ಲಾದೇಶವನ್ನು ಪ್ರವೇಶಿಸಿದಾಗ, ಅದರ ಹೆಸರು ಬದಲಾಗುತ್ತದೆ. ಬಾಂಗ್ಲಾದೇಶದಲ್ಲಿ, ಇದನ್ನು ಜಮುನಾ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಇದು ಭಾರತದಲ್ಲಿ ಪುಲ್ಲಿಂಗ ಮತ್ತು ಬಾಂಗ್ಲಾದೇಶದಲ್ಲಿ ಸ್ತ್ರೀಲಿಂಗವಾಗುತ್ತದೆ.&lt;/p&gt;&lt;p&gt;&lt;strong&gt;ಬ್ರಹ್ಮಪುತ್ರ ನದಿಯನ್ನು ಎಷ್ಟು ಪ್ರಮುಖ ನದಿಗಳು ಸೇರುತ್ತವೆ?&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ, ಬ್ರಹ್ಮಪುತ್ರ ನದಿ ವ್ಯವಸ್ಥೆಯ ಉಪನದಿಗಳೆಂದರೆ ಲಾಸಾ ನದಿ, ನ್ಯಾಂಗ್ ನದಿ, ಪರ್ಲುಂಗ್ ಜಾಂಗ್ಬೋ ನದಿ, ಲೋಹಿತ್ ನದಿ, ಧನ್ಶ್ರೀ ನದಿ, ಕೊಲಾಂಗ್ ನದಿ, ಕಾಮೆಂಗ್ ನದಿ, ಮಾನಸ್ ನದಿ, ಬೆಕಿ ನದಿ, ರೈದಕ್ ನದಿ, ಜಲಧಕ ನದಿ, ತೀಸ್ತಾ ನದಿ ಮತ್ತು ಸುಬನ್ಸಿರಿ ನದಿ. ಇನ್ನು ಬ್ರಹ್ಮಪುತ್ರ ನದಿಯ ವಿಶೇಷತೆ ಏನಂದ್ರೆ, ಇದು ಭಾರತದ ಅತ್ಯಂತ ಆಳವಾದ ನದಿಯಾಗಿದೆ. ಕೆಲವು ವರದಿಗಳ ಪ್ರಕಾರ, ಇದರ ಸರಾಸರಿ ಆಳ ಸುಮಾರು 124 ಅಡಿ (38 ಮೀಟರ್) ಮತ್ತು ಗರಿಷ್ಠ ಆಳ 380 ರಿಂದ 450 ಅಡಿ (ಸುಮಾರು 115 ರಿಂದ 135 ಮೀಟರ್) ವರೆಗೆ ಇದೆ.&lt;/p&gt;]]></content:encoded>
            <category>travel</category>
            <dc:creator>Pavna Das</dc:creator>
            <atom:link href="https://kannada.asianetnews.com/travel/brahmaputra-in-india-jamuna-in-bangladesh-why-does-this-river-have-different-names/articleshow-r2bihtq"/>
        </item>
        <item>
            <title><![CDATA[ಕಾಲ ಯಾರಿಗಾಗಿಯೂ ಕಾಯುವುದಿಲ್ಲ, 14 ಕೋಟಿ ರೂ ಖರ್ಚು ಮಾಡಿ ಇಡೀ ಜಗತ್ತು ಸುತ್ತಿದ ಅಸಾಧಾರಣ ಸಾಹಸಿ!]]></title>
            <link>https://kannada.asianetnews.com/travel/chinese-entrepreneur-travels-to-233-countries-over-33-years-spends-rs-14-crore-an-inspiring-global-journey-gdp/articleshow-s02w9y4</link>
            <guid isPermaLink="true">https://kannada.asianetnews.com/travel/chinese-entrepreneur-travels-to-233-countries-over-33-years-spends-rs-14-crore-an-inspiring-global-journey-gdp/articleshow-s02w9y4</guid>
            <pubDate>Thu, 10 Sep 2026 11:11:18 +0530</pubDate>
            <description><![CDATA[ಚೀನಾದ ಉದ್ಯಮಿ ಚೆನ್ ಜಿನ್ವೇ ಅವರು 33 ವರ್ಷಗಳ ಕಾಲ ವಿಶ್ವಯಾತ್ರೆ ನಡೆಸಿ, ಇದಕ್ಕಾಗಿ ಸುಮಾರು 14 ಕೋಟಿ ರೂ. ಖರ್ಚು ಮಾಡಿದ್ದಾರೆ. ತಮ್ಮ ವ್ಯಾಪಾರ ಮತ್ತು ಕುಟುಂಬದ ನಡುವೆ ಸಮತೋಲನ ಸಾಧಿಸುತ್ತಾ, ಅಂಟಾರ್ಕ್ಟಿಕಾದಂತಹ ಕಠಿಣ ಸವಾಲುಗಳನ್ನು ಎದುರಿಸಿ, 198 ದೇಶಗಳ ನಾಣ್ಯಗಳನ್ನು ಸಂಗ್ರಹಿಸಿ ತಮ್ಮ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24wxrb6qaa2jktdxn3mdzkn,imgname-chinese-entrepreneur-travel-1789018431846.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗತ್ತಿನ ಪ್ರತಿಯೊಂದು ಮೂಲೆಗೂ ಭೇಟಿ ನೀಡಬೇಕೆಂಬ ಅಸಾಧಾರಣ ಛಲವುಳ್ಳ ಚೀನಾದ ಉದ್ಯಮಿಯೊಬ್ಬರು, ತಮ್ಮ 33 ವರ್ಷಗಳ ಸುದೀರ್ಘ ಹಾಗೂ ರೋಮಾಂಚನಕಾರಿ ವಿಶ್ವಯಾತ್ರೆಯ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ಬೃಹತ್ ಸಾಹಸಕ್ಕಾಗಿ ಅವರು ಅಂದಾಜು 1.5 ಮಿಲಿಯನ್ ಡಾಲರ್ ಅಂದರೆ ಸುಮಾರು 14 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. ವಿಶ್ವ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, 53 ವರ್ಷ ವಯಸ್ಸಿನ ಚೆನ್ ಜಿನ್ವೇ ಅವರು ಇತ್ತೀಚೆಗೆ ಪೆರು ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ತಮ್ಮ ಜಾಗತಿಕ ಯಾತ್ರೆಗೆ ಅಂತಿಮ ತೆರೆ ಎಳೆದು, ಝೆಜಿಯಾಂಗ್ ಪ್ರಾಂತ್ಯದ ತಮ್ಮ ಸ್ವಗ್ರಾಮ ಝುಜಿಗೆ ಮರಳಿದ್ದಾರೆ.&lt;/p&gt;&lt;h2&gt;ಪ್ರಯಾಣದ ಆರಂಭ ಮತ್ತು ಹಿನ್ನೆಲೆ:&lt;/h2&gt;&lt;p&gt;ಯಂತ್ರೋಪಕರಣ ತಯಾರಿಕಾ ಕಂಪನಿಯೊಂದರ ಮಾಲೀಕರಾಗಿರುವ ಚೆನ್, ತಮ್ಮ ಅಂತರರಾಷ್ಟ್ರೀಯ ಸಾಹಸಯಾತ್ರೆಯನ್ನು 1993ರಲ್ಲಿ ಸಿಂಗಾಪುರ, ಮಲೇಷ್ಯಾ ಮತ್ತು ಥೈಲ್ಯಾಂಡ್ ಪ್ರವಾಸಗಳೊಂದಿಗೆ ಆರಂಭಿಸಿದರು. ಆ ಕಾಲದಲ್ಲಿ ಇಂಟರ್ನೆಟ್ ಸೌಲಭ್ಯವು ಎಲ್ಲರಿಗೂ ಸುಲಭವಾಗಿ ಲಭ್ಯವಿರಲಿಲ್ಲ. ಹೀಗಾಗಿ, ಪ್ರಪಂಚದ ಇನ್ನೊಂದು ಬದಿ ಹೇಗಿರುತ್ತದೆ ಎಂಬುದನ್ನು ನಾನೇ ಸ್ವತಃ ಕಣ್ಣಾರೆ ಕಂಡು ತಿಳಿಯಬೇಕು ಎಂಬ ತೀವ್ರ ಕುತೂಹಲವೇ ಅವರನ್ನು ಈ ಮಹಾ ಯಾನಕ್ಕೆ ಪ್ರೇರೇಪಿಸಿತು.&lt;/p&gt;&lt;h2&gt;ವ್ಯವಹಾರ, ಕುಟುಂಬ ಮತ್ತು ಪ್ರಯಾಣದ ಸುಂದರ ಸಮತೋಲನ&lt;/h2&gt;&lt;p&gt;ಚೆನ್ ತಮ್ಮ ಹವ್ಯಾಸಕ್ಕಾಗಿ ಎಂದಿಗೂ ತಮ್ಮ ವ್ಯವಹಾರಕ್ಕಾಗಲಿ ಅಥವಾ ಕುಟುಂಬ ಜೀವನಕ್ಕಾಗಲಿ ಕುತ್ತು ತಂದುಕೊಳ್ಳಲಿಲ್ಲ. ಬದಲಾಗಿ ಇವೆರಡರ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳಲು ಒಂದು ವಿಶಿಷ್ಟ ದಿನಚರಿಯನ್ನು ರೂಢಿಸಿಕೊಂಡಿದ್ದರು. ಅವರು ವರ್ಷದಲ್ಲಿ ಒಂದು ತಿಂಗಳು ಮನೆಯಲ್ಲಿ ಕುಟುಂಬದೊಂದಿಗೆ ಕಾಲ ಕಳೆದರೆ, ಮತ್ತೊಂದು ತಿಂಗಳು ಜಗತ್ತಿನಾತ್ಯಂತ ಪ್ರವಾಸ ಕೈಗೊಳ್ಳುತ್ತಿದ್ದರು. ವರ್ಷಗಳು ಕಳೆದಂತೆ ಅವರು ಕೇವಲ ಸುಲಭದ ಸ್ಥಳಗಳಷ್ಟೇ ಅಲ್ಲದೆ, ಧ್ರುವ ಪ್ರದೇಶಗಳಂತಹ ಅತ್ಯಂತ ಸವಾಲಿನ ತಾಣಗಳನ್ನೂ ಕೂಡ ತಮ್ಮ ಸಾಹಸ ಪಟ್ಟಿಗೆ ಸೇರಿಸಿಕೊಂಡರು.&lt;/p&gt;&lt;h2&gt;ಅಂಟಾರ್ಕ್ಟಿಕಾ ಮತ್ತು ಟೊಕೆಲಾವ್&zwnj;ನಂತಹ ಕಠಿಣ ಸವಾಲುಗಳು&lt;/h2&gt;&lt;p&gt;ನವೆಂಬರ್ 2015ರಲ್ಲಿ ಅಂಟಾರ್ಕ್ಟಿಕಾವನ್ನು ತಲುಪಲು ಅವರು ಮಾಡಿದ ಮೊದಲ ಪ್ರಯತ್ನವು ವಿಫಲಗೊಂಡಿತು. ಅವರು ಪ್ರಯಾಣಿಸುತ್ತಿದ್ದ ಫ್ರೆಂಚ್ ದಂಡಯಾತ್ರೆಯ 'ಲೆ ಬೊರಿಯಾಲ್' ಕ್ರೂಸ್ ಹಡಗು, ಪ್ರಯಾಣದ ಮೂರನೇ ದಿನವೇ ತನ್ನ ವಿದ್ಯುತ್ ಶಕ್ತಿಯನ್ನು ಕಳೆದುಕೊಂಡು ಕಪ್ಪು ಹೊಗೆಯನ್ನು ಕಾರಲು ಆರಂಭಿಸಿತು. ಆದರೆ ಛಲಬಿಡದ ಚೆನ್, ಜನವರಿ 2016ರಲ್ಲಿ ಮತ್ತೊಮ್ಮೆ ಪ್ರಯತ್ನಿಸಿ ಯಶಸ್ವಿಯಾಗಿ ಅಂಟಾರ್ಕ್ಟಿಕಾ ನೆಲವನ್ನು ಸ್ಪರ್ಶಿಸಿದರು.&lt;/p&gt;&lt;p&gt;ಹಾಗೆಯೇ, ನ್ಯೂಜಿಲೆಂಡ್&zwnj;ನ ಅಧೀನದಲ್ಲಿರುವ ಪುಟ್ಟ ದ್ವೀಪ ಪ್ರದೇಶ 'ಟೊಕೆಲಾವ್' ಅವರಿಗೆ ಮತ್ತೊಂದು ಕಠಿಣ ಪರೀಕ್ಷೆಯೊಡ್ಡಿತು. 2019ರಲ್ಲಿ ಸಾಕಷ್ಟು ಸಿದ್ಧತೆಗಳೊಂದಿಗೆ ಅಲ್ಲಿಗೆ ತಲುಪಿದರೂ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಿಂದಾಗಿ ಅವರು ತಮ್ಮ ಭೇಟಿಯನ್ನು ರದ್ದುಗೊಳಿಸಬೇಕಾಯಿತು. ಆದರೆ ಎಷ್ಟೇ ಕಷ್ಟ ಎದುರಾದರೂ ಬಿಡದ ಅವರು, ಈ ವರ್ಷ ಮತ್ತೊಮ್ಮೆ ಪ್ರಯತ್ನಿಸಿ ಆ ಪ್ರದೇಶದ ದೂರದ ಅಟಾಲ್&zwnj;ಗಳಿಗೆ ಕಾಲಿಡುವಲ್ಲಿ ಯಶಸ್ವಿಯಾದರು. ಈ ಅಪರೂಪದ ಅನುಭವವನ್ನು ಅವರು &quot;ನಂಬಲಾಗದಷ್ಟು ರೋಮಾಂಚಕಾರಿ&quot; ಎಂದು ಬಣ್ಣಿಸಿದ್ದಾರೆ.&lt;/p&gt;&lt;h2&gt;ಅನಿರೀಕ್ಷಿತ ಸಂಕಷ್ಟಗಳೇ ಪಾಠ ಕಲಿಸಿದ ಗುರು&lt;/h2&gt;&lt;p&gt;ಚೆನ್ ಅವರ ಈ ಸುದೀರ್ಘ ಪ್ರಯಾಣವು ಹೂವಿನ ಹಾಸಿಗೆಯಾಗಿರಲಿಲ್ಲ. ಆಫ್ರಿಕಾದಲ್ಲಿದ್ದಾಗ ಅವರಿಗೆ ಮಲೇರಿಯಾ ಜ್ವರ ಬಾಧಿಸಿತ್ತು ಮತ್ತು ಗ್ರೀಸ್&zwnj;ನಲ್ಲಿ ಪ್ರವಾಸದಲ್ಲಿದ್ದಾಗ ಭೀಕರ ಭೂಕಂಪ ಸಂಭವಿಸಿತ್ತು. ಇಂತಹ ಅನಿರೀಕ್ಷಿತ ಘಟನೆಗಳು ಅವರನ್ನು ಎಂದಿಗೂ ಕುಗ್ಗಿಸಲಿಲ್ಲ. ಬದಲಾಗಿ, ಕಠಿಣ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುವುದು ಹೇಗೆ ಮತ್ತು ಯಾವುದೇ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಹೇಗೆ ಎಂಬುದನ್ನು ಈ ಸಂಕಷ್ಟಗಳು ಅವರಿಗೆ ಕಲಿಸಿಕೊಟ್ಟವು. ಯಾವುದೇ ಸಮಸ್ಯೆ ಎದುರಾದಾಗ ಮೊದಲು ಶಾಂತವಾಗಿರಿ, ನಂತರ ಅದರ ಪರಿಹಾರದ ಬಗ್ಗೆ ಯೋಚಿಸಿ ಎಂಬುದು ಅವರ ಜೀವನದ ಸರಳ ಸೂತ್ರವಾಗಿದೆ.&lt;/p&gt;&lt;h2&gt;ಸಂಗ್ರಹಿಸಿದ ಅಪರೂಪದ ನಾಣ್ಯಗಳು&lt;/h2&gt;&lt;p&gt;ಚೆನ್ ಅವರಿಗೆ ಪ್ರಯಾಣವೆಂದರೆ ಕೇವಲ ಪ್ರವಾಸಿ ತಾಣಗಳನ್ನು ವೀಕ್ಷಿಸುವುದಷ್ಟೇ ಆಗಿರಲಿಲ್ಲ. ಬದಲಿಗೆ ಪ್ರತಿ ಸ್ಥಳದಲ್ಲೂ ಸಾಕಷ್ಟು ಸಮಯ ಕಳೆದು, ಅಲ್ಲಿನ ಸ್ಥಳೀಯ ಸಂಸ್ಕೃತಿಯನ್ನು ಆಳವಾಗಿ ಅರಿಯುವುದೇ ಆಗಿತ್ತು. ತಮ್ಮ ಈ 33 ವರ್ಷಗಳ ಸುದೀರ್ಘ ಅವಧಿಯಲ್ಲಿ ಅವರು ಬರೋಬ್ಬರಿ 198 ದೇಶಗಳ ಕರೆನ್ಸಿ (ನಾಣ್ಯ ಹಾಗೂ ನೋಟುಗಳು) ಗಳನ್ನು ಸಂಗ್ರಹಿಸಿ, ಆ ಅಮೂಲ್ಯ ಸಂಗ್ರಹವನ್ನು 'ಕ್ಸು ಕ್ಸಿಯಾಕೆ ಸ್ಮಾರಕ ಸಭಾಂಗಣ'ಕ್ಕೆ ಹೆಮ್ಮೆಯಿಂದ ದಾನ ಮಾಡಿದರು.&lt;/p&gt;&lt;p&gt;ವ್ಯವಹಾರ ನಿರ್ವಹಣೆ ಮತ್ತು ಪ್ರಯಾಣದ ನಡುವೆ ಆಳವಾದ ಸಾಮ್ಯತೆಯನ್ನು ಕಾಣುವ ಚೆನ್, ಎರಡೂ ಕ್ಷೇತ್ರಗಳಲ್ಲೂ ಎದುರಾಗುವ ಹಿನ್ನಡೆಗಳನ್ನು ನಿಭಾಯಿಸಬೇಕು ಮತ್ತು ತೊಂದರೆಗಳ ನಡುವೆಯೂ ಮುನ್ನಡೆಯಬೇಕು ಎಂದಿದ್ದಾರೆ. ಜೀವನದಲ್ಲಿ ಏರಿಳಿತಗಳು, ಸುಖ-ದುಃಖಗಳು ಏನೇ ಇರಲಿ, ನೀವು ಕೈಗೊಂಡ ಯಾವುದೇ ಕೆಲಸದಲ್ಲಿ ಸತತ ನಿರಂತರ ಪ್ರಯತ್ನ ಇರಲಿ ಎಂದು ಅವರು ಸಲಹೆ ನೀಡುತ್ತಾರೆ.&lt;/p&gt;&lt;h2&gt;ಮುಂದಿನ ಯೋಜನೆ:&lt;/h2&gt;&lt;p&gt;ಪ್ರಯಾಣದ ಕನಸು ಕಾಣುತ್ತಲೇ ಅದನ್ನು ಮುಂದೂಡುತ್ತಾ ಕಾಲಹರಣ ಮಾಡುವವರಿಗೆ ಚೆನ್ ನೀಡುವ ಕಿವಿಮಾತು ಇಲ್ಲಿದೆ: &quot;ಯಾವಾಗಲೂ ಕಾಯುತ್ತಾ ಕೂರಬೇಡಿ. ಕಾಲ ಯಾರಿಗಾಗಿಯೂ ಕಾಯುವುದಿಲ್ಲ.&quot;&lt;/p&gt;&lt;p&gt;ತಮ್ಮ ಮೂರೂವರೆ ದಶಕಗಳ ಸುದೀರ್ಘ ಜಾಗತಿಕ ಯಾನವನ್ನು ಪೂರ್ಣಗೊಳಿಸಿರುವ ಚೆನ್, ಈಗ ತಮ್ಮ ಪೋಷಕರು ಮತ್ತು ಮಕ್ಕಳೊಂದಿಗೆ ಹೆಚ್ಚು ಗುಣಮಟ್ಟದ ಸಮಯವನ್ನು ಕಳೆಯಲು ನಿರ್ಧರಿಸಿದ್ದಾರೆ. ಇದರೊಂದಿಗೆ, ಹೊರಾಂಗಣ ಚಟುವಟಿಕೆಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರ ಸಾಧನೆಗೈದ 100 ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿ ಅವರ ಸ್ಫೂರ್ತಿದಾಯಕ ಜೀವನ ಕಥೆಗಳನ್ನು ದಾಖಲಿಸುವ ಹೊಸ ಕನಸಿಗೆ ಅವರು ಕೈಹಾಕಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/travel/chinese-entrepreneur-travels-to-233-countries-over-33-years-spends-rs-14-crore-an-inspiring-global-journey-gdp/articleshow-s02w9y4"/>
        </item>
        <item>
            <title><![CDATA[5000 ವರ್ಷ ಹಿಂದಿನ ಕಾಲದಂತೆ ಬದುಕುತ್ತಿರುವ ಜನರು! ಭಾರತದ ಈ ವೈದಿಕ ಗ್ರಾಮ ನೋಡಿದರೆ ಅಚ್ಚರಿ ಪಡ್ತೀರಿ]]></title>
            <link>https://kannada.asianetnews.com/gallery/travel/indias-unique-vedic-village-where-people-live-a-simple-traditional-life-away-from-modern-technology-sc54p5x</link>
            <guid isPermaLink="true">https://kannada.asianetnews.com/gallery/travel/indias-unique-vedic-village-where-people-live-a-simple-traditional-life-away-from-modern-technology-sc54p5x</guid>
            <pubDate>Sat, 19 Sep 2026 18:51:07 +0530</pubDate>
            <description><![CDATA[&lt;p&gt;Vedic Village: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ಕುರ್ಮಾಗ್ರಾಮ್ ವೈದಿಕ ವಿಲೇಜ್ ಆಧುನಿಕ ಸೌಲಭ್ಯಗಳಿಂದ ದೂರವಿದ್ದು, ಸರಳ ಮತ್ತು ಆಧ್ಯಾತ್ಮಿಕ ಜೀವನಶೈಲಿಯನ್ನು ಅನುಸರಿಸುತ್ತಿರುವ ವಿಶಿಷ್ಟ ಸಮುದಾಯವಾಗಿದೆ. ಇಲ್ಲಿನ ಜನ ಸತ್ಯಯುಗದಂತೆ ಜೀವನ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2wx4jgbat9sbt253aw4qzk5,imgname-vedic-village-8-1789823961609.jpg" type="image/jpeg" height="390" width="690"/>
            <content:encoded><![CDATA[&lt;p&gt;Vedic Village: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ಕುರ್ಮಾಗ್ರಾಮ್ ವೈದಿಕ ವಿಲೇಜ್ ಆಧುನಿಕ ಸೌಲಭ್ಯಗಳಿಂದ ದೂರವಿದ್ದು, ಸರಳ ಮತ್ತು ಆಧ್ಯಾತ್ಮಿಕ ಜೀವನಶೈಲಿಯನ್ನು ಅನುಸರಿಸುತ್ತಿರುವ ವಿಶಿಷ್ಟ ಸಮುದಾಯವಾಗಿದೆ. ಇಲ್ಲಿನ ಜನ ಸತ್ಯಯುಗದಂತೆ ಜೀವನ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಇಂದಿನ ಕಾಲದಲ್ಲಿ ಸ್ಮಾರ್ಟ್&zwnj;ಫೋನ್, ಇಂಟರ್&zwnj;ನೆಟ್ ಮತ್ತು ವಿದ್ಯುತ್ ಇಲ್ಲದೆ ದಿನನಿತ್ಯದ ಜೀವನ ನಡೆಸುವುದನ್ನು ಊಹಿಸಿಕೊಳ್ಳುವುದೇ ಕಷ್ಟ. ಆದರೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿರುವ ಕುರ್ಮಾಗ್ರಾಮ್ ವೈದಿಕ ವಿಲೇಜ್ ಆಧುನಿಕ ಸೌಲಭ್ಯಗಳಿಂದ ದೂರವಿರುವ ವಿಭಿನ್ನ ಜೀವನಶೈಲಿಯನ್ನು ಅಳವಡಿಸಿಕೊಂಡಿದೆ. ಸುಮಾರು 60 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಸಮುದಾಯ 2018ರಲ್ಲಿ ಆರಂಭವಾಯಿತು.&lt;/p&gt;&lt;img&gt;&lt;p&gt;ಕುರ್ಮಾಗ್ರಾಮ್&zwnj;ನ ಪ್ರಮುಖ ವಿಶೇಷತೆ ಎಂದರೆ ಇಲ್ಲಿ ವಿದ್ಯುತ್ ಬಳಕೆ ಮಾಡುವುದಿಲ್ಲ. ಮಾಹಿತಿಯ ಪ್ರಕಾರ, ಕತ್ತಲಾದ ನಂತರ ಬೆಳಕಿಗಾಗಿ ವಿದ್ಯುತ್ ಬಲ್ಬ್&zwnj;ಗಳ ಬದಲಿಗೆ ಎಣ್ಣೆ ದೀಪಗಳನ್ನು ಬಳಸಲಾಗುತ್ತದೆ. ಇಲ್ಲಿನ ಮನೆಗಳನ್ನು ಕೂಡ ಪರಿಸರ ಸ್ನೇಹಿ ಹಾಗೂ ಸಾಂಪ್ರದಾಯಿಕ ವಸ್ತುಗಳಿಂದ ನಿರ್ಮಿಸಲಾಗುತ್ತದೆ. ಮಣ್ಣು, ಕಲ್ಲು, ಮರ ಮತ್ತು ಸುಣ್ಣದಂತಹ ವಸ್ತುಗಳನ್ನು ಕಟ್ಟಡ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಅಡುಗೆ ಮಾಡುವುದಕ್ಕೂ ಗ್ಯಾಸ್ ಸಿಲಿಂಡರ್ ಅಥವಾ ಗ್ಯಾಸ್ ಸ್ಟೌವ್ ಬದಲಿಗೆ ಮರ ಮತ್ತು ಗೋಮಯದ ಬೆರಣಿಗಳನ್ನು ಬಳಸಲಾಗುತ್ತದೆ.&lt;/p&gt;&lt;img&gt;&lt;p&gt;ಕುರ್ಮಾಗ್ರಾಮ್&zwnj;ನ ದಿನಚರಿಯಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಪ್ರಮುಖ ಸ್ಥಾನವಿದೆ. ಇಲ್ಲಿ ದಿನವು ಬೆಳಗ್ಗೆ ಸುಮಾರು 4.30ಕ್ಕೆ ಮಂಗಳಾರತಿ ಮತ್ತು ಜಪದೊಂದಿಗೆ ಆರಂಭವಾಗುತ್ತದೆ. ನಂತರ ಪೂಜೆ, ಸೇವೆ, ಕೃಷಿ ಮತ್ತು ಇತರ ದಿನನಿತ್ಯದ ಕೆಲಸಗಳನ್ನು ಮಾಡಲಾಗುತ್ತದೆ. ಸಂಜೆಯ ವೇಳೆಯಲ್ಲೂ ಕೀರ್ತನೆ ಮತ್ತು ಆಧ್ಯಾತ್ಮಿಕ ಚರ್ಚೆಗಳು ನಡೆಯುತ್ತವೆ. ಇಲ್ಲಿನ ಜನರಿಗೆ ಭಕ್ತಿ ಎನ್ನುವುದು ಕೇವಲ ದೇವಸ್ಥಾನಕ್ಕೆ ಸೀಮಿತವಾಗಿಲ್ಲ. ಕೃಷಿ ಮಾಡುವುದು, ಪ್ರಾಣಿಗಳನ್ನು ನೋಡಿಕೊಳ್ಳುವುದು, ಆಹಾರ ತಯಾರಿಸುವುದು ಸೇರಿದಂತೆ ದಿನನಿತ್ಯದ ಕೆಲಸಗಳನ್ನೂ ಸೇವೆಯ ರೂಪದಲ್ಲಿ ನೋಡಲಾಗುತ್ತದೆ.&lt;/p&gt;&lt;img&gt;&lt;p&gt;ಇಲ್ಲಿನ ಮಕ್ಕಳ ಶಿಕ್ಷಣ ವ್ಯವಸ್ಥೆಯೂ ನಗರಗಳಿಗಿಂತ ವಿಭಿನ್ನವಾಗಿದೆ. ಕುರ್ಮಾಗ್ರಾಮ್&zwnj;ನಲ್ಲಿ ವೈದಿಕ ಗುರುಕುಲವಿದ್ದು, ಇಲ್ಲಿ ಮಕ್ಕಳಿಗೆ ಸಂಸ್ಕೃತ, ತೆಲುಗು, ಇಂಗ್ಲಿಷ್, ಗಣಿತ ಮತ್ತು ಸಾಮಾನ್ಯ ಜ್ಞಾನದ ಜೊತೆಗೆ ಭಗವದ್ಗೀತೆ, ಶ್ರೀಮದ್ಭಾಗವತ, ರಾಮಾಯಣ ಮತ್ತು ಮಹಾಭಾರತದಂತಹ ಗ್ರಂಥಗಳ ಬಗ್ಗೆಯೂ ಶಿಕ್ಷಣ ನೀಡಲಾಗುತ್ತದೆ. ಇದರ ಜೊತೆಗೆ ಶಿಸ್ತು, ಜೀವನ ಕೌಶಲ್ಯಗಳು ಮತ್ತು ಸಾಂಪ್ರದಾಯಿಕ ಭಾರತೀಯ ಸಂಸ್ಕೃತಿಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ.&lt;/p&gt;&lt;img&gt;&lt;p&gt;ಕುರ್ಮಾಗ್ರಾಮ್&zwnj;ನ ಜೀವನದ ಪ್ರಮುಖ ಭಾಗ ಕೃಷಿ ಮತ್ತು ಪಶುಪಾಲನೆ. ನೈಸರ್ಗಿಕ ಕೃಷಿಯ ಮೂಲಕ ತಮ್ಮ ಅಗತ್ಯಕ್ಕೆ ಬೇಕಾದ ಆಹಾರವನ್ನು ತಾವೇ ಉತ್ಪಾದಿಸಿಕೊಳ್ಳುತ್ತಾರೆ. ಸಮುದಾಯದಲ್ಲಿ ಗೋಶಾಲೆಯೂ ಇದ್ದು, ಗೋವುಗಳ ಆರೈಕೆಗೆ ಮಹತ್ವ ನೀಡಲಾಗುತ್ತದೆ. ಇಲ್ಲಿ ಅಕ್ಕಿ, ಸಿರಿಧಾನ್ಯಗಳು ಮತ್ತು ವಿವಿಧ ತರಕಾರಿಗಳನ್ನು ಬೆಳೆಯಲಾಗುತ್ತದೆ. ಹೀಗಾಗಿ ಆಹಾರ ಮತ್ತು ದಿನನಿತ್ಯದ ಅಗತ್ಯಗಳಿಗಾಗಿ ಹೊರಗಿನ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ.&lt;/p&gt;&lt;img&gt;&lt;p&gt;ಇಂದಿನ ದಿನಗಳಲ್ಲಿ ಅನೇಕರ ಬೆಳಗ್ಗೆ ಮೊಬೈಲ್ ನೋಟಿಫಿಕೇಶನ್&zwnj;ಗಳಿಂದ ಆರಂಭವಾಗುತ್ತದೆ. ಆದರೆ ಕುರ್ಮಾಗ್ರಾಮ್ ಡಿಜಿಟಲ್ ಜಗತ್ತಿನಿಂದ ದೂರವಿರುವುದನ್ನೇ ತನ್ನ ಜೀವನಶೈಲಿಯ ಭಾಗವಾಗಿಸಿಕೊಂಡಿದೆ. ಇಲ್ಲಿ ಸ್ಮಾರ್ಟ್&zwnj;ಫೋನ್ ಮತ್ತು ಇಂಟರ್&zwnj;ನೆಟ್ ಬಳಕೆ ಮಾಡಲಾಗುವುದಿಲ್ಲ. ಪ್ರವಾಸಿಗರು ಅಥವಾ ಭೇಟಿ ನೀಡುವವರೂ ಕೂಡ ಸ್ಮಾರ್ಟ್&zwnj;ಫೋನ್&zwnj;, ಎಲೆಕ್ಟ್ರಾನಿಕ್ ಸಾಧನಗಳಿಂದ ದೂರವಿರುವ ನಿಯಮಗಳಿವೆ.&lt;/p&gt;&lt;img&gt;&lt;p&gt;ಕುರ್ಮಾಗ್ರಾಮ್&zwnj;ನಲ್ಲಿ ಆಧುನಿಕ ಸಾರಿಗೆ ಮತ್ತು ಯಂತ್ರಗಳ ಬಳಕೆಯನ್ನು ಸೀಮಿತಗೊಳಿಸಲು ಒತ್ತು ನೀಡಲಾಗುತ್ತದೆ. ಆವರಣದೊಳಗೆ ನಡೆದುಕೊಂಡು ಹೋಗುವುದರ ಜೊತೆಗೆ ಎತ್ತಿನಗಾಡಿ ಮತ್ತು ಕುದುರೆಗಾಡಿಯಂತಹ ಸಾಂಪ್ರದಾಯಿಕ ಸಾರಿಗೆ ವಿಧಾನಗಳಿಗೆ ಉತ್ತೇಜನ ನೀಡಲಾಗುತ್ತದೆ. ನೈಸರ್ಗಿಕ ಕೃಷಿ, ಮರ-ಗಿಡಗಳು, ಕೆರೆಗಳು ಮತ್ತು ಬಾವಿಗಳೂ ಇವೆ. ಆದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಾ ವ್ಯವಸ್ಥೆಗಳೂ ಇವೆ.&lt;/p&gt;&lt;img&gt;&lt;p&gt;ಕುರ್ಮಾಗ್ರಾಮ್ ಗ್ರಾಮದ ಸ್ಥಾಪನೆ 2018ರಲ್ಲಿ ನಡೆದಿದೆ. ವೈದಿಕ ಸಂಸ್ಕೃತಿ, ಕೃಷ್ಣ ಭಕ್ತಿ, ನೈಸರ್ಗಿಕ ಕೃಷಿ ಮತ್ತು ಸ್ವಾವಲಂಬಿ ಜೀವನದ ತತ್ವಗಳಿಂದ ಪ್ರೇರಿತವಾದ ಸಮುದಾಯ ಇದಾಗಿದೆ. ಆಧುನಿಕ ಸೌಲಭ್ಯಗಳನ್ನು ಉದ್ದೇಶಪೂರ್ವಕವಾಗಿ ಸೀಮಿತಗೊಳಿಸಿ, ಸರಳ ಜೀವನ, ಕೃಷಿ, ಗೋಸೇವೆ, ಗುರುಕುಲ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳತ್ತ ಗಮನ ಹರಿಸುವುದು ಇಲ್ಲಿನ ಜೀವನಶೈಲಿಯ ಪ್ರಮುಖ ಉದ್ದೇಶವಾಗಿದೆ.&lt;/p&gt;]]></content:encoded>
            <category>travel</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/travel/indias-unique-vedic-village-where-people-live-a-simple-traditional-life-away-from-modern-technology-sc54p5x"/>
        </item>
        <item>
            <title><![CDATA[ನಾಯಿ ಮಾಂಸಕ್ಕೆ ಭಾರತದಲ್ಲೂ ಇದೆ ಬೇಡಿಕೆ, ಯಾವ ರಾಜ್ಯದಲ್ಲಿ ಹೆಚ್ಚು ಸೇವನೆ ಮಾಡ್ತಾರೆ ಗೊತ್ತಾ?]]></title>
            <link>https://kannada.asianetnews.com/travel/do-you-know-which-state-in-india-consumes-dog-meat/articleshow-sy973i2</link>
            <guid isPermaLink="true">https://kannada.asianetnews.com/travel/do-you-know-which-state-in-india-consumes-dog-meat/articleshow-sy973i2</guid>
            <pubDate>Wed, 09 Sep 2026 19:29:52 +0530</pubDate>
            <description><![CDATA[&lt;p&gt;ಭಾರತದಲ್ಲಿ ಮಾಂಸಹಾರಿಗಳ ಸಂಖ್ಯೆ ಸಾಕಷ್ಟಿದೆ. ಜನರು ಕೋಳಿ, ಹಂದಿ, ಮೀನು ಅಂತ ನಾನಾ ಪ್ರಾಣಿಗಳ ಮಾಂಸ ಸೇವನೆ ಮಾಡ್ತಾರೆ. ಆದ್ರೆ ನಾಯಿ ಮಾಂಸ ಸೇವನೆ ಮಾಡುವ ಜಾಗವೂ ಭಾರತದಲ್ಲಿದೆ. ಯಸ್, ಭಾರತದ ಯಾವ ಭಾಗದಲ್ಲಿ ನಾಯಿ ಮಾಂಸಕ್ಕೆ ಹೆಚ್ಚು ಡಿಮ್ಯಾಂಡ್ ಇದೆ ಎಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m237bbqz82ypc3x17qq2qaf3,imgname-dog-meat-1788962254590.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೌ ಬೌ ಬಿರ್ಯಾನಿ ಎನ್ನುವ ಹೆಸರು ಕೇಳ್ತಿದ್ರೆ ಜಗ್ಗೇಶ್ ಅವರ ಸಿನಿಮಾ ನೆನಪಿಗೆ ಬರುತ್ತೆ. ನಾಯಿ ಮಾಂಸದ ಬಿರಿಯಾನಿ ತಿಂದು ನಾಯಿಯಂತೆ ಜಗ್ಗೇಶ್ ಬೊಗಳ್ತಿದ್ರೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ರು. ಇದು ಬರೀ ಸಿನಿಮಾದಲ್ಲಿ ಮಾತ್ರವಲ್ಲ ರಿಯಲ್ ಆಗಿ ಭಾರತದಲ್ಲೂ ನಾಯಿ ಮಾಂಸ ತಿನ್ನುವ ಪ್ರದೇಶಗಳಿವೆ.&lt;/p&gt;&lt;h2&gt;ಎಲ್ಲಿ ನಾಯಿ ಮಾಂಸ ಸೇವನೆ ಮಾಡ್ತಾರೆ?&lt;/h2&gt;&lt;p&gt;ಭಾರತದ ಸುಂದರ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸ ಸೇವನೆ ಮಾಡಲಾಗುತ್ತದೆ. ಇಲ್ಲಿ ನಾಯಿ ಮಾಂಸವನ್ನು ಸಾಂಪ್ರದಾಯಿಕ ಆಹಾರವಾಗಿ ಸೇವನೆ ಮಾಡ್ತಾ ಬರಲಾಗಿದೆ. ಇದಲ್ದೆ ಮಣಿಪುರ, ಅರುಣಾಚಲಪ್ರದೇಶ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲ ಪ್ರದೇಶಗಳಲ್ಲೂ ನಾಯಿ ಮಾಂಸ ತಿನ್ನುವ ಜನಾಂಗವಿದೆ. ನಾಗಾಲ್ಯಾಂಡ್ ಮತ್ತು ಅಸ್ಸಾಂನ ಗಡಿಯಲ್ಲಿರುವ ದಿಮಾಪುರ್ ಪ್ರದೇಶವು ನಾಯಿ ಮಾಂಸಕ್ಕೆ ಅತಿ ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಲಾಗಿದೆ. 2020ರಲ್ಲಿ ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿತ್ತು. ಪ್ರಕರಣ ಕೋರ್ಟ್ ನಲ್ಲಿದೆ. ಕೆಲ ತಿಂಗಳ ಹಿಂದೆ ಗೌಹಾಟಿ ಹೈಕೋರ್ಟ್ ನಲ್ಲಿ ಇಬ್ಬರು ನ್ಯಾಯಾಧೀಶರು ವಿಭಜಿತ ತೀರ್ಪು ನೀಡಿದ್ದರೆ.&lt;/p&gt;&lt;h3&gt;ನಾಯಿ ಮಾಂಸ ಸೇವಿಸುವ ದೇಶಗಳು&lt;/h3&gt;&lt;p&gt;ಭಾರತ ಮಾತ್ರವಲ್ಲ ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ನಾಯಿ ಮಾಂಸವನ್ನು ಸೇವನೆ ಮಾಡಲಾಗುತ್ತದೆ. ಚೀನಾದಲ್ಲಿ, ನಾಯಿ ಮಾಂಸವನ್ನು ಐತಿಹಾಸಿಕವಾಗಿ ಪ್ರಾದೇಶಿಕ ಪಾಕಪದ್ಧತಿಯ ಭಾಗವಾಗಿದೆ. ಅಂಕಿಅಂಶಗಳ ಪ್ರಕಾರ, ಚೀನಾದಲ್ಲಿ ಪ್ರತಿ ವರ್ಷ ಸುಮಾರು 20 ಮಿಲಿಯನ್ ನಾಯಿಗಳನ್ನು ಸೇವಿಸಲಾಗುತ್ತದೆ. ದೇಶದಲ್ಲಿ ನಾಯಿ ಮಾಂಸ ಉತ್ಸವ ಕೂಡ ನಡೆಯುತ್ತದೆ. ವಿಯೆಟ್ನಾಂನ ಕೆಲವು ಪ್ರದೇಶಗಳಲ್ಲಿ ನಾಯಿ ಮಾಂಸ ಸೇವಿಸುವ ಜನರಿದ್ದಾರೆ. ಇದು ಶಕ್ತಿ ಅಥವಾ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಜನ ನಂಬಿದ್ದಾರೆ.&lt;/p&gt;&lt;p&gt;ದಕ್ಷಿಣ ಕೊರಿಯಾ ಕೂಡ ನಾಯಿ ಮಾಂಸ ಸೇವಿಸುವ ದೇಶಗಳಲ್ಲಿ ಒಂದು. ಕೊರಿಯಾ, ಇಂಡೋನೇಷ್ಯಾದ ಕೆಲ ಸಮುದಾಯಗಳಲ್ಲಿ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ನಾಯಿ ಮಾಂಸವನ್ನು ಸೇರಿಸಲಾಗಿದೆ. ಇದಲ್ಲದೆ, ನೈಜೀರಿಯಾ ಮತ್ತು ಘಾನಾ ಸೇರಿದಂತೆ ಆಫ್ರಿಕಾದ ಕೆಲವು ಭಾಗಗಳಲ್ಲಿ ನಾಯಿ ಮಾಂಸವನ್ನು ಸೇವಿಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಕಾಂಬೋಡಿಯಾ, ಲಾವೋಸ್, ಫಿಲಿಪೈನ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್ನ ಕೆಲವು ಭಾಗಗಳಲ್ಲಿ ಇದರ ಸೇವನೆಯು ಸೀಮಿತ ಪ್ರಮಾಣದಲ್ಲಿ ವರದಿಯಾಗಿದೆ.&lt;/p&gt;]]></content:encoded>
            <category>travel</category>
            <dc:creator>Roopa Hegde</dc:creator>
            <atom:link href="https://kannada.asianetnews.com/travel/do-you-know-which-state-in-india-consumes-dog-meat/articleshow-sy973i2"/>
        </item>
        <item>
            <title><![CDATA[ಡೆವಿಲ್ಸ್ ಕಿಚನ್ Vs ಸಿನಿಮಾ ನಂಟು: ಪ್ರಕೃತಿಯ ರಹಸ್ಯದೊಳಗಿನ ಸಾಹಸದ ಲೋಕ 'ಗುಣ ಗುಹೆ']]></title>
            <link>https://kannada.asianetnews.com/gallery/travel/tamil-nadu-famous-guna-caves-the-mysterious-kodaikanal-spot-made-famous-by-cinema-gvd-wv3q0vx</link>
            <guid isPermaLink="true">https://kannada.asianetnews.com/gallery/travel/tamil-nadu-famous-guna-caves-the-mysterious-kodaikanal-spot-made-famous-by-cinema-gvd-wv3q0vx</guid>
            <pubDate>Mon, 07 Sep 2026 16:43:17 +0530</pubDate>
            <description><![CDATA[&lt;p&gt;&lsquo;ಗುಣ&rsquo; ಸಿನಿಮಾ ಮತ್ತು &lsquo;ಮಂಜುಮ್ಮಲ್ ಬಾಯ್ಸ್&rsquo; ಮೂಲಕ ಪ್ರಸಿದ್ಧಿ ಪಡೆದ ಕೊಡೈಕೆನಾಲ್&zwnj;ನ ಗುಣ ಗುಹೆಗಳು ಇಂದಿಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ನಿಗೂಢ ಗುಹೆಗಳು, ಆಳವಾದ ಬಿರುಕುಗಳು ಮತ್ತು ಪೈನ್ ಕಾಡಿನ ಸೌಂದರ್ಯ ಈ ತಾಣದ ವಿಶೇಷತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xrg59ekjmbrx81f4a76wgf,imgname-1-1788778911022.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಗುಣ&rsquo; ಸಿನಿಮಾ ಮತ್ತು &lsquo;ಮಂಜುಮ್ಮಲ್ ಬಾಯ್ಸ್&rsquo; ಮೂಲಕ ಪ್ರಸಿದ್ಧಿ ಪಡೆದ ಕೊಡೈಕೆನಾಲ್&zwnj;ನ ಗುಣ ಗುಹೆಗಳು ಇಂದಿಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ನಿಗೂಢ ಗುಹೆಗಳು, ಆಳವಾದ ಬಿರುಕುಗಳು ಮತ್ತು ಪೈನ್ ಕಾಡಿನ ಸೌಂದರ್ಯ ಈ ತಾಣದ ವಿಶೇಷತೆ.&lt;/p&gt;&lt;img&gt;&lt;p&gt;ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್&zwnj;ನ ಸುಂದರ ಗಿರಿಧಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು 2,230 ಮೀಟರ್ (7,320 ಅಡಿ) ಎತ್ತರದಲ್ಲಿರುವ ಗುಣ ಗುಹೆಗಳು ಪ್ರಕೃತಿಯ ವಿಸ್ಮಯಗಳಿಗೆ ಜೀವಂತ ಸಾಕ್ಷಿಯಾಗಿದೆ. ಕೋಟ್ಯಂತರ ವರ್ಷಗಳ ಭೂವೈಜ್ಞಾನಿಕ ಬದಲಾವಣೆಗಳಿಂದ ರೂಪುಗೊಂಡ ಈ ಗುಹೆಗಳು ದಟ್ಟ ಶೋಲಾ ಕಾಡು, ಎತ್ತರದ ಪೈನ್ ಮರಗಳು ಹಾಗೂ ಆಳವಾದ ಕಲ್ಲಿನ ಬಿರುಕುಗಳಿಂದ ಕೂಡಿದ್ದು, ಪ್ರಕೃತಿ ಪ್ರಿಯರು ಮತ್ತು ಸಾಹಸಾಸಕ್ತರನ್ನು ತನ್ನತ್ತ ಸೆಳೆಯುತ್ತವೆ.&lt;/p&gt;&lt;img&gt;&lt;p&gt;1821ರಲ್ಲಿ ಬ್ರಿಟಿಷ್ ಅನ್ವೇಷಕ ಬಿ.ಎಸ್. ವಾರ್ಡ್ ಇದನ್ನು ಪತ್ತೆ ಮಾಡಿದರು. ಈ ಗುಹೆಗಳನ್ನು ಹಿಂದೆ ಡೆವಿಲ್ಸ್ ಕಿಚನ್ ಎಂದು ಕರೆಯಲಾಗುತ್ತಿತ್ತು. ಆದರೆ 1991ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಗುಣ ಚಿತ್ರದ ಪ್ರಮುಖ ದೃಶ್ಯಗಳು ಇಲ್ಲಿ ಚಿತ್ರೀಕರಣಗೊಂಡ ಬಳಿಕ ಈ ಸ್ಥಳವು ಗುಣ ಗುಹೆ ಎಂಬ ಹೆಸರಿನಿಂದ ದೇಶಾದ್ಯಂತ ಜನಪ್ರಿಯವಾಯಿತು. ಸುಮಾರು ಮೂರು ದಶಕಗಳ ನಂತರ, 2024ರಲ್ಲಿ ಬಿಡುಗಡೆಯಾದ ಮಲಯಾಳಂನ ಬ್ಲಾಕ್&zwnj;ಬಸ್ಟರ್ ಮಂಜುಮ್ಮಿಲ್ ಬಾಯ್ಸ್ ಈ ಗುಹೆಯನ್ನು ಮತ್ತೊಮ್ಮೆ ವಿಶ್ವದ ಗಮನಕ್ಕೆ ತಂದಿತು.&lt;/p&gt;&lt;img&gt;&lt;p&gt;2006ರಲ್ಲಿ ನಡೆದ ನೈಜ ಘಟನೆಯ ಆಧಾರದ ಮೇಲೆ ನಿರ್ಮಿತವಾದ ಈ ಚಿತ್ರದಲ್ಲಿ, ಗುಹೆಯ ಆಳವಾದ ಬಿರುಕಿಗೆ ಬಿದ್ದ ಸ್ನೇಹಿತನನ್ನು ಉಳಿಸಲು ಇತರ ಸ್ನೇಹಿತರು ತೋರಿದ ಧೈರ್ಯ ಮತ್ತು ಸ್ನೇಹದ ಮೌಲ್ಯವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಸಾವಿರಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಲು ಆರಂಭಿಸಿದರು.&lt;/p&gt;&lt;img&gt;&lt;p&gt;ಗುಣ ಗುಹೆಯ ಬಿರುಕುಗಳು ನೂರಾರು ಅಡಿ ಆಳ ಹೊಂದಿರುವುದರಿಂದ ಇಲ್ಲಿ ಈ ಹಿಂದೆ ಹಲವು ಅಪಘಾತಗಳು ಸಂಭವಿಸಿವೆ. ಈ ಕಾರಣದಿಂದ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗುಹೆಯ ಒಳಭಾಗಕ್ಕೆ ಪ್ರವೇಶವನ್ನು ಸರ್ಕಾರ ನಿರ್ಬಂಧಿಸಿದೆ. ಆದರೂ ಸುರಕ್ಷಿತ ವೀಕ್ಷಣಾ ಪ್ರದೇಶಗಳಿಂದ ಪೈನ್ ಕಾಡು, ಮಂಜಿನ ಹೊದಿಕೆ ಮತ್ತು ವಿಶಿಷ್ಟ ಶಿಲಾರಚನೆಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು.&lt;/p&gt;&lt;img&gt;&lt;p&gt;ಪ್ರಕೃತಿಯ ಸೌಂದರ್ಯ, ಭೂವೈಜ್ಞಾನಿಕ ವೈಶಿಷ್ಟ್ಯ, ಸಿನಿರಂಗದ ಇತಿಹಾಸ ಹಾಗೂ ಸಾಹಸದ ರೋಮಾಂಚನ ಈ ನಾಲ್ಕೂ ಅಂಶಗಳನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಸಾಧ್ಯವಾಗುವ ಅಪರೂಪದ ಪ್ರವಾಸಿ ತಾಣವೇ ಗುಣ ಗುಹೆ. ಕೊಡೈಕೆನಾಲ್ ಪ್ರವಾಸದ ಅವಿಭಾಜ್ಯ ಆಕರ್ಷಣೆಯಾಗಿ ಇದು ಇಂದಿಗೂ ಲಕ್ಷಾಂತರ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.&lt;/p&gt;]]></content:encoded>
            <category>travel</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/travel/tamil-nadu-famous-guna-caves-the-mysterious-kodaikanal-spot-made-famous-by-cinema-gvd-wv3q0vx"/>
        </item>
        <item>
            <title><![CDATA[Indian Railways: ರೈಲಿನ ಜನರಲ್ ಬೋಗಿಗಳು ಮುಂದೆ-ಹಿಂದೆ ಯಾಕಿರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್]]></title>
            <link>https://kannada.asianetnews.com/gallery/viral/train-coach-mystery-solved-why-general-compartments-stay-at-the-ends-kvn-x22h798</link>
            <guid isPermaLink="true">https://kannada.asianetnews.com/gallery/viral/train-coach-mystery-solved-why-general-compartments-stay-at-the-ends-kvn-x22h798</guid>
            <pubDate>Sat, 12 Sep 2026 15:51:35 +0530</pubDate>
            <description><![CDATA[&lt;p&gt;ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೋಚ್&zwnj;ಗಳ ಜೋಡಣೆಯನ್ನು ಗಮನಿಸಿರಬಹುದು. ಜನರಲ್ ಬೋಗಿಗಳು ಸಾಮಾನ್ಯವಾಗಿ ರೈಲಿನ ಮಧ್ಯದಲ್ಲಿ ಇರುವುದಿಲ್ಲ, ಬದಲಾಗಿ ಮುಂಭಾಗ ಅಥವಾ ಹಿಂಭಾಗದಲ್ಲಿರುತ್ತವೆ. ಹೀಗೆ ಯಾಕೆ ಇರುತ್ತೆ ಅಂತ ಎಂದಾದರೂ ಯೋಚಿಸಿದ್ದೀರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7vqdjdvnc1cy078ydnn1kj,imgname-idnian-railways--3--1778380420685.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೋಚ್&zwnj;ಗಳ ಜೋಡಣೆಯನ್ನು ಗಮನಿಸಿರಬಹುದು. ಜನರಲ್ ಬೋಗಿಗಳು ಸಾಮಾನ್ಯವಾಗಿ ರೈಲಿನ ಮಧ್ಯದಲ್ಲಿ ಇರುವುದಿಲ್ಲ, ಬದಲಾಗಿ ಮುಂಭಾಗ ಅಥವಾ ಹಿಂಭಾಗದಲ್ಲಿರುತ್ತವೆ. ಹೀಗೆ ಯಾಕೆ ಇರುತ್ತೆ ಅಂತ ಎಂದಾದರೂ ಯೋಚಿಸಿದ್ದೀರಾ?&lt;/p&gt;&lt;img&gt;&lt;p&gt;ಒಂದು ರೈಲಿನಲ್ಲಿ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಜನರಲ್, ಸ್ಲೀಪರ್, ಎಸಿ ಹೀಗೆ ಹಲವು ಬಗೆಯ ಕೋಚ್&zwnj;ಗಳಿರುತ್ತವೆ. ರೈಲ್ವೆ ಇಲಾಖೆಯು ಸಾಮಾನ್ಯವಾಗಿ ಜನರಲ್ ಬೋಗಿಗಳನ್ನು ರೈಲಿನ ಮುಂಭಾಗ ಅಥವಾ ಹಿಂಭಾಗದಲ್ಲಿ ಇರಿಸುತ್ತದೆ. ಸ್ಲೀಪರ್ ಮತ್ತು ಎಸಿ ಕೋಚ್&zwnj;ಗಳು ಮಧ್ಯದಲ್ಲಿರುತ್ತವೆ. ಆದರೆ, ಈ ವ್ಯವಸ್ಥೆ ಎಲ್ಲಾ ರೈಲುಗಳಿಗೂ ಕಡ್ಡಾಯವಲ್ಲ. ರೈಲಿನ ಮಾದರಿ, ಮಾರ್ಗ ಮತ್ತು ಕೋಚ್&zwnj;ಗಳ ಸಂಖ್ಯೆಗೆ ಅನುಗುಣವಾಗಿ ಈ ಜೋಡಣೆಯಲ್ಲಿ ಬದಲಾವಣೆಗಳಿರಬಹುದು. ಆದರೂ, ಜನರಲ್ ಬೋಗಿಗಳು ತುದಿಯಲ್ಲಿರಲು ಮುಖ್ಯ ಕಾರಣ ಜನದಟ್ಟಣೆಯನ್ನು ಒಂದೇ ಕಡೆ ಸೇರದಂತೆ ನೋಡಿಕೊಳ್ಳುವುದು.&lt;/p&gt;&lt;img&gt;&lt;p&gt;ಜನರಲ್ ಕೋಚ್&zwnj;ಗಳಿಗೆ ರಿಸರ್ವೇಶನ್ ಅಗತ್ಯವಿಲ್ಲದ ಕಾರಣ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇವುಗಳನ್ನು ಬಳಸುತ್ತಾರೆ. ಅದರಲ್ಲೂ ದಿನನಿತ್ಯದ ಪ್ರಯಾಣಿಕರು, ಕಡಿಮೆ ದೂರ ಹೋಗುವವರು ಮತ್ತು ಕೊನೆ ಕ್ಷಣದಲ್ಲಿ ಟಿಕೆಟ್ ಪಡೆಯುವವರು ಈ ಬೋಗಿಗಳನ್ನೇ ಅವಲಂಬಿಸಿರುತ್ತಾರೆ. ಇದರಿಂದಾಗಿ, ಇತರೆ ಕೋಚ್&zwnj;ಗಳಿಗೆ ಹೋಲಿಸಿದರೆ ಜನರಲ್ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಈ ಕೋಚ್&zwnj;ಗಳನ್ನು ರೈಲಿನ ಮಧ್ಯದಲ್ಲಿ ಇಟ್ಟರೆ, ಪ್ಲಾಟ್&zwnj;ಫಾರ್ಮ್&zwnj;ನ ಒಂದೇ ಜಾಗದಲ್ಲಿ ಭಾರಿ ಜನಸಂದಣಿ ಉಂಟಾಗುತ್ತದೆ. ಇದನ್ನೇ ತಪ್ಪಿಸಲು ಅವುಗಳನ್ನು ಎರಡೂ ತುದಿಗಳಿಗೆ ಹಂಚಲಾಗುತ್ತದೆ.&lt;/p&gt;&lt;img&gt;&lt;p&gt;ಜನರಲ್ ಕೋಚ್&zwnj;ಗಳನ್ನು ಎರಡೂ ತುದಿಗಳಲ್ಲಿ ಇಡುವುದರಿಂದ ಪ್ರಯಾಣಿಕರು ಒಂದೇ ಕಡೆ ಗುಂಪುಗೂಡುವುದನ್ನು ತಪ್ಪಿಸಬಹುದು. ರೈಲು ನಿಂತಾಗ, ಪ್ರಯಾಣಿಕರು ತಮಗೆ ಹತ್ತಿರವಿರುವ ಬೋಗಿಯ ಕಡೆಗೆ ಹೋಗುತ್ತಾರೆ. ಇದರಿಂದ ಪ್ಲಾಟ್&zwnj;ಫಾರ್ಮ್&zwnj;ನ ಮಧ್ಯಭಾಗದಲ್ಲಿ ಉಂಟಾಗಬಹುದಾದ ಭಾರಿ ದಟ್ಟಣೆ ಕಡಿಮೆಯಾಗುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಚಲನವಲನವನ್ನು ಸುಗಮಗೊಳಿಸಲು ಈ ವ್ಯವಸ್ಥೆ ಸಹಾಯ ಮಾಡುತ್ತದೆ. ಅದರಲ್ಲೂ ಹೆಚ್ಚು ಜನನಿಬಿಡ ಸಮಯದಲ್ಲಿ ಒಂದೇ ಕಡೆ ಜನ ಸೇರುವುದನ್ನು ಇದು ತಡೆಯುತ್ತದೆ.&lt;/p&gt;&lt;img&gt;&lt;p&gt;ಜನಸಂದಣಿಯನ್ನು ವಿಭಜಿಸುವುದರ ಜೊತೆಗೆ, ತುರ್ತು ಪರಿಸ್ಥಿತಿಗಳಲ್ಲಿಯೂ ಈ ಕೋಚ್&zwnj;ಗಳ ಜೋಡಣೆ ಸಹಕಾರಿಯಾಗಿದೆ. ಒಂದೇ ಕಡೆ ಹೆಚ್ಚು ಪ್ರಯಾಣಿಕರು ಇದ್ದರೆ, ಯಾವುದೇ ಸಮಸ್ಯೆ ಎದುರಾದಾಗ ಅವರನ್ನು ನಿಯಂತ್ರಿಸುವುದು ಮತ್ತು ಸುರಕ್ಷಿತವಾಗಿ ಸ್ಥಳಾಂತರಿಸುವುದು ಕಷ್ಟವಾಗುತ್ತದೆ. ಜನರಲ್ ಕೋಚ್&zwnj;ಗಳು ರೈಲಿನ ಎರಡೂ ಬದಿಗಳಲ್ಲಿ ಇರುವುದರಿಂದ, ಪ್ರಯಾಣಿಕರ ಚಲನವಲನವನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಇದೇ ವೇಳೆ, ರೈಲ್ವೆ ಸಿಬ್ಬಂದಿಗೂ ಪ್ಲಾಟ್&zwnj;ಫಾರ್ಮ್ ಮೇಲಿನ ದಟ್ಟಣೆಯನ್ನು ಗಮನಿಸಲು ಅನುಕೂಲವಾಗುತ್ತದೆ. ಹೀಗಾಗಿ, ಜನರಲ್ ಬೋಗಿಗಳನ್ನು ರೈಲಿನ ತುದಿಗಳಲ್ಲಿ ಇರಿಸುವ ಹಿಂದೆ ಪ್ರಯಾಣಿಕರ ದಟ್ಟಣೆ, ನಿಲ್ದಾಣ ನಿರ್ವಹಣೆ, ಅನುಕೂಲ ಮತ್ತು ಸುರಕ್ಷತೆಯಂತಹ ಹಲವು ಕಾರಣಗಳಿವೆ.&lt;/p&gt;&lt;img&gt;&lt;p&gt;ರೈಲಿನ ಮಧ್ಯಭಾಗದಲ್ಲಿ ಸ್ಲೀಪರ್ ಮತ್ತು ಎಸಿ ಕೋಚ್&zwnj;ಗಳು ಇರುವುದರಿಂದ, ರಿಸರ್ವೇಶನ್ ಮಾಡಿದ ಪ್ರಯಾಣಿಕರು ತಮ್ಮ ಬೋಗಿಗಳನ್ನು ಸುಲಭವಾಗಿ ಗುರುತಿಸಬಹುದು. ಜನರಲ್ ಕೋಚ್&zwnj;ಗಳ ಬಳಿ ಇರುವ ಜನದಟ್ಟಣೆಯಿಂದ ರಿಸರ್ವ್ಡ್ ಪ್ರಯಾಣಿಕರು ದೂರವಿರುತ್ತಾರೆ. ಇದರಿಂದಾಗಿ, ರೈಲು ಹತ್ತುವಾಗ ಆಗುವ ಗೊಂದಲ ಕಡಿಮೆಯಾಗುತ್ತದೆ. ವಿಶೇಷವಾಗಿ ವೃದ್ಧರು, ಮಕ್ಕಳು ಮತ್ತು ಕುಟುಂಬದೊಂದಿಗೆ ಪ್ರಯಾಣಿಸುವವರಿಗೆ ತಮ್ಮ ಕೋಚ್&zwnj;ಗಳನ್ನು ತಲುಪುವುದು ಸ್ವಲ್ಪ ಸುಲಭವಾಗುತ್ತದೆ. ಆದರೂ, ಪ್ರಯಾಣಿಕರು ಡಿಸ್&zwnj;ಪ್ಲೇ ಬೋರ್ಡ್&zwnj;ಗಳನ್ನು ನೋಡಿ ಕೋಚ್ ಪೊಸಿಷನ್ ಖಚಿತಪಡಿಸಿಕೊಳ್ಳುವುದು ಉತ್ತಮ.&lt;/p&gt;]]></content:encoded>
            <category>travel</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/viral/train-coach-mystery-solved-why-general-compartments-stay-at-the-ends-kvn-x22h798"/>
        </item>
        <item>
            <title><![CDATA[Indian Railways Free Travel: ನವೆಂಬರ್ 1ರಿಂದ ರೈಲ್ವೆ ಹೊಸ ರೂಲ್; ಇವರಿಗೆಲ್ಲಾ ಎಸಿ ಪ್ರಯಾಣ ಫ್ರೀ! ಮಹತ್ವದ ಘೋಷಣೆ]]></title>
            <link>https://kannada.asianetnews.com/gallery/india-news/indian-railways-big-update-gallantry-award-winners-can-travel-free-in-ac-coaches-kvn-yqdct27</link>
            <guid isPermaLink="true">https://kannada.asianetnews.com/gallery/india-news/indian-railways-big-update-gallantry-award-winners-can-travel-free-in-ac-coaches-kvn-yqdct27</guid>
            <pubDate>Thu, 17 Sep 2026 12:25:21 +0530</pubDate>
            <description><![CDATA[&lt;p&gt;ಭಾರತೀಯ ಯೋಧರಿಗೆ ರಕ್ಷಣಾ ಸಚಿವಾಲಯ ಭರ್ಜರಿ ಗಿಫ್ಟ್ ಕೊಟ್ಟಿದೆ. ನವೆಂಬರ್ 1ರಿಂದ ಶೌರ್ಯ ಪ್ರಶಸ್ತಿ ವಿಜೇತರಿಗೆ ರೈಲುಗಳಲ್ಲಿ 1ನೇ ಮತ್ತು 2ನೇ ಎಸಿ ಕ್ಲಾಸ್&zwnj;ನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2nkksws1pgk3ktc307pnekb,imgname-indian-railways-free-ac-travel-1789579093913.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಯೋಧರಿಗೆ ರಕ್ಷಣಾ ಸಚಿವಾಲಯ ಭರ್ಜರಿ ಗಿಫ್ಟ್ ಕೊಟ್ಟಿದೆ. ನವೆಂಬರ್ 1ರಿಂದ ಶೌರ್ಯ ಪ್ರಶಸ್ತಿ ವಿಜೇತರಿಗೆ ರೈಲುಗಳಲ್ಲಿ 1ನೇ ಮತ್ತು 2ನೇ ಎಸಿ ಕ್ಲಾಸ್&zwnj;ನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಗಡಿ ಕಾಯುವ ಯೋಧರು ಹಾಗೂ ಅವರ ಕುಟುಂಬವನ್ನು ಗೌರವಿಸಲು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸೇನಾ ಪದಕ, ನೌಕಾ ಸೇನಾ ಪದಕ ಹಾಗೂ ವಾಯು ಸೇನಾ ಪದಕ ವಿಜೇತರಿಗೆ ಭಾರತೀಯ ರೈಲ್ವೆಯಲ್ಲಿ ಲೈಫ್&zwnj;ಟೈಮ್ ಫ್ರೀ ಟ್ರಾವೆಲ್ ಸೌಲಭ್ಯ ಸಿಗಲಿದೆ. ನವೆಂಬರ್ 1ರಿಂದ ಈ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿ ಬದಲಾಗಲಿದೆ.&lt;/p&gt;&lt;img&gt;&lt;p&gt;ಅರ್ಹರು ಭಾರತೀಯ ರೈಲ್ವೆಯ ಫಸ್ಟ್ ಕ್ಲಾಸ್ ಎಸಿ, ಸೆಕೆಂಡ್ ಎಸಿ ಮತ್ತು ಎಸಿ ಚೇರ್ ಕಾರ್&zwnj;ಗಳಲ್ಲಿ ಉಚಿತವಾಗಿ ಓಡಾಡಬಹುದು. ಪ್ರಶಸ್ತಿ ವಿಜೇತರು ಮಾತ್ರವಲ್ಲದೆ ಅವರ ಪತ್ನಿ ಅಥವಾ ಪತಿಗೂ ಈ ಸೌಲಭ್ಯ ಅನ್ವಯಿಸುತ್ತದೆ. ಯೋಧರು ಹುತಾತ್ಮರಾಗಿದ್ದರೆ, ಅವರ ಸಂಗಾತಿ ಮರುಮದುವೆ ಆಗುವವರೆಗೂ ಈ ಫ್ರೀ ಪಾಸ್ ಬಳಸಬಹುದು. ಮದುವೆಗೂ ಮುನ್ನವೇ ಹುತಾತ್ಮರಾದ ಯೋಧರ ಪೋಷಕರಿಗೂ ಈ ಸೌಲಭ್ಯ ಸಿಗಲಿದೆ.&lt;/p&gt;&lt;img&gt;&lt;p&gt;ಈ ಸೌಲಭ್ಯ ಪಡೆಯಲು ಯೋಧರು ಯಾವುದೇ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಿಲ್ಲ. ಅರ್ಹರು ಭಾರತೀಯ ರೈಲ್ವೆಯ ಕನ್ಸೆಷನ್ ಕಾರ್ಡ್ ಪೋರ್ಟಲ್&zwnj;ಗೆ ಭೇಟಿ ನೀಡಿ ಆನ್&zwnj;ಲೈನ್&zwnj;ನಲ್ಲಿ ಉಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳಬೇಕು. ದಾಖಲೆಗಳ ಪರಿಶೀಲನೆ ಮುಗಿದ ತಕ್ಷಣ ಆನ್&zwnj;ಲೈನ್ ಎಲೆಕ್ಟ್ರಾನಿಕ್ ಟ್ರಾವೆಲ್ ಪಾಸ್ ಸಿಗುತ್ತದೆ. ಇದರಿಂದ ಸಮಯ ಉಳಿಯುವುದರ ಜೊತೆಗೆ ಪೇಪರ್ ವರ್ಕ್ ಕೂಡ ಇರುವುದಿಲ್ಲ.&lt;/p&gt;&lt;img&gt;&lt;p&gt;ಡಿಜಿಟಲ್ ಟ್ರಾವೆಲ್ ಪಾಸ್ ಕೈಸೇರಿದ ಮೇಲೆ ಟಿಕೆಟ್ ಬುಕ್ ಮಾಡುವುದು ತುಂಬಾನೇ ಈಸಿ. ನವೆಂಬರ್ 1ರಿಂದ ಭಾರತೀಯ ರೈಲ್ವೆಯ ಐಆರ್&zwnj;ಸಿಸಿಪಿ (IRCCP) ವೆಬ್ ಪೋರ್ಟಲ್&zwnj;ನಲ್ಲಿ ಎಲೆಕ್ಟ್ರಾನಿಕ್ ಪಾಸ್ ಬಳಸಿ ಟಿಕೆಟ್ ಬುಕ್ ಮಾಡಬಹುದು. ಈ ಪೇಪರ್&zwnj;ಲೆಸ್ ಸಿಸ್ಟಮ್&zwnj;ನಿಂದಾಗಿ ಯೋಧರು ಮನೆಯಲ್ಲೇ ಕುಳಿತು ಕ್ಷಣಾರ್ಧದಲ್ಲಿ ಉಚಿತ ರೈಲು ಟಿಕೆಟ್ ಪಡೆಯಬಹುದು.&lt;/p&gt;&lt;img&gt;&lt;p&gt;ಪ್ರಾಣದ ಹಂಗು ತೊರೆದು ಗಡಿ ಕಾಯುವ ಯೋಧರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರದ ಈ ಐತಿಹಾಸಿಕ ನಿರ್ಧಾರವು ಹಾಲಿ ಹಾಗೂ ನಿವೃತ್ತ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ. ಜೊತೆಗೆ ಇಂದಿನ ಯುವಜನತೆಯಲ್ಲಿ ದೇಶಭಕ್ತಿ ಮೂಡಿಸಿ, ಸೇನೆ ಸೇರಲು ಇದೊಂದು ದೊಡ್ಡ ಪ್ರೇರಣೆಯಾಗಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/india-news/indian-railways-big-update-gallantry-award-winners-can-travel-free-in-ac-coaches-kvn-yqdct27"/>
        </item>
    </channel>
</rss>
