<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 30 Jun 2026 16:52:56 +0530</lastBuildDate>
        <atom:link href="https://kannada.asianetnews.com/rss/travel" rel="self" type="application/rss+xml"/>
        <item>
            <title><![CDATA[ಡಾ.ಬ್ರೋ, ಗ್ಲೋಬಲ್ ಕನ್ನಡಿಗ ಲೆಕ್ಕಕ್ಕಿಲ್ಲ, ಇವರೇ ನೋಡಿ ಅಸಲಿ 'ಟ್ರಾವೆಲ್ ಇನ್ ಫ್ಲೂಯೆನ್ಸರ್'! 245 ದೇಶಗಳ ಪ್ರವಾಸ!]]></title>
            <link>https://kannada.asianetnews.com/gallery/travel/not-dr-bro-or-global-kannadiga-real-vlogger-bengaluru-musician-benny-prasad-travels-245-countries-with-16-passports-417gocg</link>
            <guid isPermaLink="true">https://kannada.asianetnews.com/gallery/travel/not-dr-bro-or-global-kannadiga-real-vlogger-bengaluru-musician-benny-prasad-travels-245-countries-with-16-passports-417gocg</guid>
            <pubDate>Thu, 25 Jun 2026 16:20:45 +0530</pubDate>
            <description><![CDATA[ಬೆಂಗಳೂರು ಮೂಲದ ಸಂಗೀತಗಾರ ಬೆನ್ನಿ ಪ್ರಸಾದ್, ಕೇವಲ 6 ವರ್ಷಗಳಲ್ಲಿ 245 ದೇಶಗಳನ್ನು ಸುತ್ತಿ ವಿಶ್ವ ದಾಖಲೆ ಬರೆದಿದ್ದಾರೆ. ಬಾಲ್ಯದಲ್ಲಿ ತೀವ್ರ ಅನಾರೋಗ್ಯ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಅವರು, ಸಂಗೀತದ ಮೂಲಕ ತಮ್ಮ ಬದುಕನ್ನು ಬದಲಿಸಿಕೊಂಡು ಇಡೀ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvz64g910qsv2m21tge9b242,imgname-bengaluru-musician-benny-prasad-1782384312609.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರು ಮೂಲದ ಸಂಗೀತಗಾರ ಬೆನ್ನಿ ಪ್ರಸಾದ್, ಕೇವಲ 6 ವರ್ಷಗಳಲ್ಲಿ 245 ದೇಶಗಳನ್ನು ಸುತ್ತಿ ವಿಶ್ವ ದಾಖಲೆ ಬರೆದಿದ್ದಾರೆ. ಬಾಲ್ಯದಲ್ಲಿ ತೀವ್ರ ಅನಾರೋಗ್ಯ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಅವರು, ಸಂಗೀತದ ಮೂಲಕ ತಮ್ಮ ಬದುಕನ್ನು ಬದಲಿಸಿಕೊಂಡು ಇಡೀ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ.&lt;img&gt;&lt;p&gt;ಕನ್ನಡಿಗರಿಗೆ ವಿವಿಧ ದೇಶಗಳನ್ನು ಪರಿಚಯ ಮಾಡಿಕೊಡುವ ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್, ಫ್ಲೈಯಿಂಗ್ ಪಾಸ್&zwnj;ಪೋರ್ಟ್ ಖ್ಯಾತಿಯ ಆಶಾ ಅಂಡ್ ಕಿರಣ್, ಗ್ಲೋಬಲ್ ಕನ್ನಡಿಗ ಖ್ಯಾತಿಯ ಮಹಾಬಲ ರಾಮ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್&zwnj;ಗಳು ದೇಶಗಳನ್ನು ಸುತ್ತಾಡುತ್ತಾ ವ್ಲಾಗ್&zwnj;ಗಳನ್ನು ಮಾಡುತ್ತಾರೆ. ಇವರೆಲ್ಲರೂ ಬಹುಶಃ ಸುಮಾರು 50 ರಿಂದ 100 ದೇಶಗಳನ್ನು ಸುತ್ತಾಡಿರಬಹದು. ಆದರೆ, ಇಲ್ಲೊಬ್ಬ ಬೆಂಗಳೂರಿನ ಸಂಗೀತ ಕಲಾವಿದ ಬರೋಬ್ಬರಿ 245 ದೇಶಗಳನ್ನು ಸುತ್ತಾಡಿದ್ದಾರೆ. ಯಾರಿವರು? ಇವರ ಹಿನ್ನೆಲೆಯೇನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.&lt;/p&gt;&lt;img&gt;&lt;p&gt;ಇಂದಿನ ಕಾಲದಲ್ಲಿ ಒಂದೆರಡು ದೇಶ ಸುತ್ತುವುದೆಂದರೆ ದೊಡ್ಡ ಮಾತು. ಆದರೆ ಬೆಂಗಳೂರಿನ ಸಂಗೀತಗಾರರೊಬ್ಬರು ಇಡೀ ವಿಶ್ವವನ್ನೇ ಸುತ್ತಿ ಮುಗಿಸಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು, ಬೆಂಗಳೂರು ಮೂಲದ ಬೆನ್ನಿ ಪ್ರಸಾದ್ (Benny Prasad) ಅವರು ಕೇವಲ 6 ವರ್ಷ, 6 ತಿಂಗಳು ಮತ್ತು 22 ದಿನಗಳಲ್ಲಿ ಅಂಟಾರ್ಕ್ಟಿಕಾ ಸೇರಿದಂತೆ ವಿಶ್ವದ 245 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡುವ ಮೂಲಕ ಅತಿ ವೇಗವಾಗಿ ಜಗತ್ತನ್ನು ಸುತ್ತಿದ ವ್ಯಕ್ತಿ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ವೈರಲ್ ಆದ 16 ಪಾಸ್&zwnj;ಪೋರ್ಟ್&zwnj;ಗಳು:&lt;/strong&gt;&lt;/p&gt;&lt;p&gt;ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆನ್ನಿ ಪ್ರಸಾದ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ವೀಸಾ ಮತ್ತು ಇಮಿಗ್ರೇಷನ್ ಸ್ಟ್ಯಾಂಪ್&zwnj;ಗಳಿಂದ ತುಂಬಿ ಹೋಗಿರುವ ತಮ್ಮ 16 ಪಾಸ್&zwnj;ಪೋರ್ಟ್&zwnj;ಗಳನ್ನು ತೋರಿಸುತ್ತಿದ್ದಾರೆ. ಭಾರತದಂತಹ 'ವೀಸಾ ನಿರ್ಬಂಧ' ಹೆಚ್ಚಿರುವ ಪಾಸ್&zwnj;ಪೋರ್ಟ್ ಇಟ್ಟುಕೊಂಡು ಇಷ್ಟೊಂದು ದೇಶಗಳನ್ನು ಸುತ್ತುವುದು ಸುಲಭದ ಮಾತಲ್ಲ. ಇದನ್ನೇ ನೆಟ್ಟಿಗರು 'ರಿಯಲ್ ಒಜಿ ಟ್ರಾವೆಲ್ ಇನ್ ಫ್ಲೂಯೆನ್ಸರ್' (OG Travel Influencer) ಎಂದು ಕೊಂಡಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಕ್ರೇಜ್ ಆರಂಭವಾಗುವ ಮೊದಲೇ ಬೆನ್ನಿ ಇಡೀ ಜಗತ್ತನ್ನು ಅಂಗೈಯಲ್ಲಿ ಇಟ್ಟುಕೊಂಡಿದ್ದರು.&lt;/p&gt;&lt;img&gt;&lt;p&gt;&lt;strong&gt;ಸಾವಿನ ಅಂಚಿನಿಂದ ಸಾಧನೆಯ ಶಿಖರಕ್ಕೆ:&lt;/strong&gt;&lt;/p&gt;&lt;p&gt;ಬೆನ್ನಿ ಪ್ರಸಾದ್ ಅವರ ಈ ಸಾಧನೆಯ ಹಿಂದೆ ನೋವಿನ ಕಥೆಯಿದೆ. 1975ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಬೆನ್ನಿ, ಬಾಲ್ಯದಲ್ಲಿ ತೀವ್ರವಾದ ಅಸ್ತಮಾದಿಂದ ಬಳಲುತ್ತಿದ್ದರು. ಅತಿಯಾದ ಸ್ಟಿರಾಯ್ಡ್ ಚಿಕಿತ್ಸೆಯಿಂದಾಗಿ ಅವರ ಶ್ವಾಸಕೋಶ ಶೇ. 60ರಷ್ಟು ಹಾನಿಗೊಳಗಾಗಿತ್ತು ಮತ್ತು ಅವರಿಗೆ ಸಂಧಿವಾತ (Rheumatoid Arthritis) ಕಾಣಿಸಿಕೊಂಡಿತ್ತು. ಇದರಿಂದಾಗಿ ಅವರ ರೋಗನಿರೋಧಕ ಶಕ್ತಿ ಸಂಪೂರ್ಣ ಕುಸಿದಿತ್ತು.&lt;/p&gt;&lt;img&gt;&lt;p&gt;ಬಾಲ್ಯದಲ್ಲಿ ಅನುಭವಿಸಿದ ದೈಹಿಕ ಯಾತನೆ ಮತ್ತು ಸಮಾಜದ ಒತ್ತಡದಿಂದಾಗಿ ಬೆನ್ನಿ 16ನೇ ವಯಸ್ಸಿನಲ್ಲಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಒಂದು ಹಂತದಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನೂ ಮಾಡಿದ್ದರು. ಆದರೆ, ಅವರ ಬದುಕಿನ ತಿರುವು ಆರಂಭವಾಗಿದ್ದೇ ಸಂಗೀತದಿಂದ. ಗಿಟಾರ್ ಹಿಡಿದ ಬೆನ್ನಿ, ತಮ್ಮ ನೋವನ್ನೆಲ್ಲ ಸಂಗೀತದ ಮೂಲಕ ಮರೆತರು. ಅವರ ಪ್ರತಿಭೆಯೇ ಅವರನ್ನು ಇಡೀ ವಿಶ್ವ ಸುತ್ತುವಂತೆ ಮಾಡಿತು.&lt;/p&gt;&lt;img&gt;&lt;p&gt;&lt;strong&gt;ಬಡತನವಲ್ಲ, ಪ್ರತಿಭೆಯೇ ಬಂಡವಾಳ:&lt;/strong&gt;&lt;/p&gt;&lt;p&gt;ಬೆನ್ನಿ ಪ್ರಸಾದ್ ಅವರು ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಆದರೆ ತಮ್ಮ ಅದ್ಭುತ ಗಿಟಾರ್ ವಾದನ ಮತ್ತು ಮೋಟಿವೇಶನಲ್ ಸ್ಪೀಚ್ ಮೂಲಕ ಅವರು ಜಗತ್ತಿನ ಮೂಲೆ ಮೂಲೆಗೆ ಆಹ್ವಾನ ಪಡೆದರು. ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಜಗತ್ತಿನ ಪ್ರತಿ ದೇಶವನ್ನೂ ಸಂದರ್ಶಿಸಿದರು. 'ನಿಮ್ಮಲ್ಲಿ ಛಲವಿದ್ದರೆ ದೈಹಿಕ ನ್ಯೂನತೆ ಅಥವಾ ಹಣದ ಕೊರತೆ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ' ಎಂಬುದಕ್ಕೆ ಬೆನ್ನಿ ಪ್ರಸಾದ್ ಜೀವಂತ ಉದಾಹರಣೆ. ಇಂದು ಸಾವಿರಾರು ಪ್ರಯಾಣಿಕರಿಗೆ ಸ್ಫೂರ್ತಿಯಾಗಿರುವ ಬೆನ್ನಿ ಪ್ರಸಾದ್, ಕನ್ನಡಿಗರ ಸಾಧನೆಯ ಹಾದಿ ಎಷ್ಟು ದೊಡ್ಡದು ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/not-dr-bro-or-global-kannadiga-real-vlogger-bengaluru-musician-benny-prasad-travels-245-countries-with-16-passports-417gocg"/>
        </item>
        <item>
            <title><![CDATA[ಭಾರತದ ಮೊಟ್ಟಮೊದಲ ‘ಕಡಲ ಏರ್ಪೋರ್ಟ್’: ಮುಂಬೈ ಸಮುದ್ರದಲ್ಲೇ ತಲೆಯೆತ್ತಲಿದೆ ಅತ್ಯಾಧುನಿಕ ವಿಮಾನ ನಿಲ್ದಾಣ!]]></title>
            <link>https://kannada.asianetnews.com/india-news/india-s-first-offshore-airport-coming-up-near-mumbai-palghar-kore-beach-gdp/articleshow-6kp9ksm</link>
            <guid isPermaLink="true">https://kannada.asianetnews.com/india-news/india-s-first-offshore-airport-coming-up-near-mumbai-palghar-kore-beach-gdp/articleshow-6kp9ksm</guid>
            <pubDate>Tue, 30 Jun 2026 08:44:53 +0530</pubDate>
            <description><![CDATA[ಭಾರತದ ಮೊಟ್ಟಮೊದಲ 'ಆಫ್&zwnj;ಶೋರ್&zwnj; ಏರ್ಪೋರ್ಟ್&zwnj;' ಮಹಾರಾಷ್ಟ್ರದ ಪಾಲ್ಘರ್&zwnj; ಜಿಲ್ಲೆಯ ಕಡಲಿನಲ್ಲಿ ನಿರ್ಮಾಣವಾಗಲಿದೆ. ವಾಧ್ವಾನ್&zwnj; ಬಂದರು ಯೋಜನೆಯ ಭಾಗವಾಗಿರುವ ಈ ನಿಲ್ದಾಣವು, ಬುಲೆಟ್ ಟ್ರೈನ್ ಹಾಗೂ ಸೀ ಲಿಂಕ್ ಸಂಪರ್ಕದೊಂದಿಗೆ ವಾರ್ಷಿಕ 9 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwb8a4avfhx2qh33wve95cy9,imgname-offshore-airport-come-up-in-maharashtra-1782789247323.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಲು ವೇದಿಕೆ ಸಿದ್ಧವಾಗಿದೆ. ಭಾರತದ ಮೊಟ್ಟಮೊದಲ &lsquo;ಆಫ್&zwnj;ಶೋರ್&zwnj; ಏರ್ಪೋರ್ಟ್&zwnj;&rsquo; (ಕಡಲಲ್ಲಿನ ವಿಮಾನ ನಿಲ್ದಾಣ) ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಲಿದ್ದು, ವಾಣಿಜ್ಯ ನಗರಿ ಮುಂಬೈಗೆ ಜಾಗತಿಕ ಮಟ್ಟದ ಮತ್ತೊಂದು ಗರಿ ಸಿಗಲಿದೆ.&lt;/p&gt;&lt;p&gt;ಮಹಾರಾಷ್ಟ್ರದ ಪಾಲ್ಘರ್&zwnj; ಜಿಲ್ಲೆಯ ಕೋರೆ ಬೀಚ್&zwnj;ನ ಸಮುದ್ರ ಭಾಗದಲ್ಲಿ ಈ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣ ತಲೆಯೆತ್ತಲಿದ್ದು, ಯೋಜನೆಗೆ ಸಂಬಂಧಿಸಿದ ಪೂರ್ವ ಕಾರ್ಯಸಾಧ್ಯತಾ ವರದಿ (Pre-Feasibility Report) ಈಗಾಗಲೇ ಹಸಿರು ನಿಶಾನೆ ನೀಡಿದೆ.&lt;/p&gt;&lt;h2&gt;ಮುಖ್ಯಮಂತ್ರಿ ಸೂಚನೆ: ವಿಸ್ತೃತ ಯೋಜನಾ ವರದಿ (DPR) ಸಿದ್ಧತೆಗೆ ಆದೇಶ&lt;/h2&gt;&lt;p&gt;ಈ ದಿಕ್ಸೂಚಿ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್&zwnj; ಅವರ ಮುಂದೆ ಈಗಾಗಲೇ ಸವಿವರವಾದ ಪ್ರಾತ್ಯಕ್ಷಿಕೆ (Presentation) ನೀಡಿದ್ದಾರೆ. ಪೂರ್ವ ಕಾರ್ಯಸಾಧ್ಯತಾ ವರದಿಯಲ್ಲಿ ಯೋಜನೆ ಅನುಷ್ಠಾನ ಸಾಧ್ಯ ಎಂದು ಸ್ಪಷ್ಟತೆ ಸಿಕ್ಕಿರುವ ಹಿನ್ನೆಲೆಯಲ್ಲಿ, ತಕ್ಷಣವೇ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಪ್ರಸ್ತಾವಿತ ಈ ವಿಮಾನ ನಿಲ್ದಾಣವು ಮಹಾರಾಷ್ಟ್ರದ ಪ್ರಮುಖ ಯೋಜನೆಯಾದ 'ವಾಧ್ವಾನ್&zwnj; ಬಂದರು' (Wadhwan Port) ಅಭಿವೃದ್ಧಿಯ ಭಾಗವಾಗಿರಲಿದ್ದು, ಇದರ ಸಂಪೂರ್ಣ ಮೇಲುಸ್ತುವಾರಿಯನ್ನು ಮಹಾರಾಷ್ಟ್ರ ಏರ್ಪೋರ್ಟ್&zwnj; ಡೆವಲಪ್&zwnj;ಮೆಂಟ್&zwnj; ಕಾರ್ಪೊರೇಷನ್&zwnj; (MADC) ವಹಿಸಿಕೊಳ್ಳಲಿದೆ.&lt;/p&gt;&lt;h2&gt;ಸಾರಿಗೆ ಸಂಪರ್ಕದ ಮಹಾಸಂಗಮ: ಬುಲೆಟ್ ಟ್ರೈನ್ ಹಾಗೂ ಸೀ ಲಿಂಕ್ ಹತ್ತಿರದಲ್ಲೇ ಲಭ್ಯ&lt;/h2&gt;&lt;p&gt;ಈ ಆಫ್&zwnj;ಶೋರ್&zwnj; ಏರ್ಪೋರ್ಟ್&zwnj; ಕೇವಲ ವಿಮಾನ ನಿಲ್ದಾಣವಷ್ಟೇ ಅಲ್ಲದೆ, ಭವಿಷ್ಯದ ಅತ್ಯಾಧುನಿಕ ಸಾರಿಗೆ ಸಂಪರ್ಕದ ಕೇಂದ್ರಬಿಂದುವಾಗಲಿದೆ. ಪ್ರಸ್ತಾವಿತ ವಿಮಾನ ನಿಲ್ದಾಣವು ಉತ್ತನ್&zwnj;-ವಿರಾರ್&zwnj; ಸೀ ಲಿಂಕ್&zwnj;ನಿಂದ ಕೇವಲ 4.75 ಕಿ.ಮೀ. ದೂರದಲ್ಲಿದೆ. ಭವಿಷ್ಯದಲ್ಲಿ ಈ ಸೀ ಲಿಂಕ್&zwnj; ಅಭಿವೃದ್ಧಿಗೊಂಡರೆ, ವಿಮಾನ ನಿಲ್ದಾಣಕ್ಕೆ ನೇರ ಮತ್ತು ತಡೆರಹಿತ ರಸ್ತೆ ಸಂಪರ್ಕ ಸಿಗಲಿದೆ.&lt;/p&gt;&lt;p&gt;ಬುಲೆಟ್ ಟ್ರೈನ್ ಲಾಭ: ದೇಶದ ಹೆಮ್ಮೆಯ ಮುಂಬೈ-ಅಹಮದಾಬಾದ್&zwnj; ಬುಲೆಟ್&zwnj; ಟ್ರೈನ್&zwnj; ಯೋಜನೆಯು ಸಹ ಇದೇ ಸೀ ಲಿಂಕ್&zwnj;ನ ಸಮೀಪದಲ್ಲೇ ಹಾದುಹೋಗುವುದರಿಂದ, ಪ್ರಯಾಣಿಕರಿಗೆ ಅದ್ಭುತ ಮಲ್ಟಿ-ಮೋಡಲ್ ಸಾರಿಗೆ ವ್ಯವಸ್ಥೆ ಸಿಗಲಿದೆ. ಈ ವಿಮಾನ ನಿಲ್ದಾಣವು ಬೃಹತ್ ಗಾತ್ರದ ವಿಮಾನಗಳ ಸುಗಮ ಕಾರ್ಯಾಚರಣೆಗಾಗಿ ಎರಡು ರನ್&zwnj;ವೇಗಳನ್ನು ಹೊಂದಿರಲಿದೆ.&lt;/p&gt;&lt;h2&gt;ಮುಂಬೈ ಮೇಲಿನ ಒತ್ತಡಕ್ಕೆ ಮುಕ್ತಿ: 2050ರ ಭವಿಷ್ಯದ ಯೋಜನೆ&lt;/h2&gt;&lt;p&gt;ಪ್ರಸ್ತುತ ಮುಂಬೈನಲ್ಲಿರುವ ಎರಡು ವಿಮಾನ ನಿಲ್ದಾಣಗಳು ಅತಿಯಾದ ಪ್ರಯಾಣಿಕರ ದಟ್ಟಣೆಯನ್ನು ಎದುರಿಸುತ್ತಿವೆ. ಕೋರೆ ಬೀಚ್&zwnj;ನಲ್ಲಿ ನಿರ್ಮಾಣವಾಗಲಿರುವ ಈ ಹೊಸ ಏರ್&zwnj;ಪೋರ್ಟ್, 2050ರ ವೇಳೆಗೆ ಮುಂಬೈನ ವಾಯು ಸಾರಿಗೆ ಮೇಲಿನ ಒತ್ತಡವನ್ನು ಗಣನೀಯವಾಗಿ ತಗ್ಗಿಸಲಿದೆ. ಈ ಬೃಹತ್ ನಿಲ್ದಾಣವು ವಾರ್ಷಿಕವಾಗಿ ಬರೊಬ್ಬರಿ 90 ದಶಲಕ್ಷ (9 ಕೋಟಿ) ಪ್ರಯಾಣಿಕರನ್ನು ನಿರ್ವಹಿಸುವ ಬೃಹತ್ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;h2&gt;ಏನಿದು &lsquo;ಕಡಲಲ್ಲಿನ ವಿಮಾನ ನಿಲ್ದಾಣ&rsquo; (Offshore Airport)?&lt;/h2&gt;&lt;p&gt;ಸಾಮಾನ್ಯವಾಗಿ ನಾವು ನೋಡುವ ವಿಮಾನ ನಿಲ್ದಾಣಗಳು ಪ್ರಕೃತಿ ಸಹಜವಾದ ಭೂಮಿಯ ಮೇಲಿರುತ್ತವೆ. ಆದರೆ, ಭೂಮಿಯ ಕೊರತೆ ಇರುವ ಹಾಗೂ ದಟ್ಟಣೆ ಹೆಚ್ಚಿರುವ ಕರಾವಳಿ ನಗರಗಳಲ್ಲಿ ಸಮುದ್ರದ ಮಧ್ಯೆ ಕೃತಕ ದ್ವೀಪಗಳನ್ನು (Artificial Islands) ನಿರ್ಮಿಸಿ, ಅಥವಾ ಸಮುದ್ರದ ಭಾಗವನ್ನು ವಶಪಡಿಸಿಕೊಂಡು (Reclamation) ಅಲ್ಲಿ ರನ್&zwnj;ವೇ ಹಾಗೂ ಟರ್ಮಿನಲ್&zwnj;ಗಳನ್ನು ನಿರ್ಮಿಸಲಾಗುತ್ತದೆ. ಇದನ್ನೇ ಆಫ್&zwnj;ಶೋರ್&zwnj; ಅಥವಾ ಕಡಲಲ್ಲಿನ ವಿಮಾನ ನಿಲ್ದಾಣ ಎನ್ನಲಾಗುತ್ತದೆ. ಜಪಾನ್&zwnj;ನ ಕನ್ಸಾಯ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಹಾಗೂ ಹಾಂಗ್ ಕಾಂಗ್ ಏರ್ಪೋರ್ಟ್&zwnj;ಗಳು ಇದಕ್ಕೆ ಜಾಗತಿಕ ಉದಾಹರಣೆಗಳಾಗಿದ್ದು, ಈಗ ಭಾರತದಲ್ಲೂ ಇಂತಹದ್ದೇ ಅದ್ಭುತ ಸೃಷ್ಟಿಯಾಗಲಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/india-s-first-offshore-airport-coming-up-near-mumbai-palghar-kore-beach-gdp/articleshow-6kp9ksm"/>
        </item>
        <item>
            <title><![CDATA[ಮಹಿಳೆಯ ಚೈನ್​ ತಂದ ಆಪತ್ತು:  ಸ್ಟಾಪ್​ ಆಗೋಯ್ತು ನಮ್ಮ ಮೆಟ್ರೊ- ಲಕ್ಷಾಂತರ ಪ್ರಯಾಣಿಕರ ಪರದಾಟ]]></title>
            <link>https://kannada.asianetnews.com/karnataka-districts/bengaluru-metro-faces-second-disruption-in-3-days-officials-blame-metal-chain-suc/articleshow-74bpyzx</link>
            <guid isPermaLink="true">https://kannada.asianetnews.com/karnataka-districts/bengaluru-metro-faces-second-disruption-in-3-days-officials-blame-metal-chain-suc/articleshow-74bpyzx</guid>
            <pubDate>Fri, 26 Jun 2026 17:46:31 +0530</pubDate>
            <description><![CDATA[ಬೆಂಗಳೂರಿನ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಇತ್ತೀಚೆಗೆ ಉಂಟಾದ ವ್ಯತ್ಯಯಕ್ಕೆ ತಾಂತ್ರಿಕ ದೋಷ ಕಾರಣವೆಂದು ಭಾವಿಸಲಾಗಿತ್ತು. ಆದರೆ, ತನಿಖೆಯ ನಂತರ ಮಹಿಳೆಯೊಬ್ಬರ ಲೋಹದ ಸರ ರೈಲಿನ ಬಾಗಿಲಿಗೆ ಸಿಲುಕಿದ್ದೇ ಈ ವಿಳಂಬಕ್ಕೆ ಕಾರಣವೆಂದು ಬಿಎಂಆರ್&zwnj;ಸಿಎಲ್ ಸ್ಪಷ್ಟಪಡಿಸಿದೆ. ಈ ಘಟನೆಯಿಂದಾಗಿ ಸಂಜೆ ವೇಳೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kw1xr1p5wbyegnqxtraj2fb6,imgname-namma-metro-1782476179141.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿಗರ ಜೀವನಾಡಿಯಾಗಿದೆ ನಮ್ಮ ಮೆಟ್ರೊ: ದಿನವೂ ಲಕ್ಷಾಂತರ ಮಂದಿ ಪ್ರಯಾಣಿಕರು ಇದನ್ನು ಅವಲಂಬಿಸಿದ್ದಾರೆ. 2-3 ನಿಮಿಷಕ್ಕೆ ಒಂದು ಮೆಟ್ರೋ ಬಂದರೂ ದಟ್ಟಣೆ ಸಮಯದಲ್ಲಿ, ನಿಲ್ಲಲೂ ಆಗದಷ್ಟು ನೂಕು ನುಗ್ಗಲು ಪ್ರತಿಯೊಂದು ಮೆಟ್ರೋದಲ್ಲಿಯೂ ಇರುತ್ತದೆ ಎಂದರೆ, ಇದು ಯಾವ ರೀತಿಯಲ್ಲಿ ಬೆಂಗಳೂರಿಗರ ಅಗತ್ಯವಾಗಿದೆ ಎನ್ನುವುದು ತಿಳಿಯುತ್ತದೆ. ಅದರಲ್ಲಿಯೂ ಕೆಲವೊಂದು ಮಾರ್ಗಗಳಲ್ಲಿ ಅತಿಹೆಚ್ಚು ಐಟಿ ಕಂಪೆನಿಗಳು ಇರುವ ಕಾರಣ, ಅಲ್ಲಿ ಉದ್ಯೋಗಿಗಳಿಗೆ ಇದೇ ಜೀವನಾಧಾರ ಆಗಿಬಿಟ್ಟಿದೆ. ರೇಟ್​ ಹೆಚ್ಚು ಮಾಡಲಿ, ಫ್ರೀ ಬಸ್​ ಇರಲಿ. ಅದೇನೇ ಇದ್ದರೂ ಸಮಯ ಉಳಿಸಲು ಮತ್ತು ನಿಗದಿತ ಟೈಮ್​ಗೆ ಲಭ್ಯ ಇರುವ ಕಾರಣ, ಮೆಟ್ರೋ ಬೇಕೇ ಬೇಕು.&lt;/p&gt;&lt;p&gt;ಮೊನ್ನೆ ನೇರಳೆ ಮಾರ್ಗದ ಮೆಟ್ರೊದಲ್ಲಿ ತಾಂತ್ರಿಕ ಕಾರಣದಿಂದ ಮೆಟ್ರೋ ಸಂಚಾರ ಆಗಲಿಲ್ಲ. ಇದನ್ನು ಮೊದಲೇ ಬಿಎಂಆರ್​ಸಿಎಲ್​ ತಿಳಿಸಿದ್ದರೂ, ಅದು ಗೊತ್ತಿಲ್ಲದೇ ಬಂದ ಜನರು ಪಟ್ಟ ಪರದಾಟ ಆ ದೇವರಿಗೇ ಪ್ರೀತಿ. ಆದರೆ ನಿನ್ನೆ ಇದ್ದಕ್ಕಿದ್ದಂತೆಯೇ ಮತ್ತೆ ನೇರಳೆ ಮಾರ್ಗದ ಮೆಟ್ರೊ ಸ್ಥಗಿತಗೊಂಡು ಜನರು ಹಿಡಿಶಾಪ ಹಾಕಿದರು. ಹೀಗೆ ಪದೇ ಪದೇ ಮೆಟ್ರೊ ಕೈಕೊಡುತ್ತಿರುವುದು ರಾಜಕೀಯ ತಿರುವನ್ನು ಕೂಡ ಪಡೆದುಕೊಂಡಿತು. ಒಂದೇ ವಾರದಲ್ಲಿ ಎರಡನೇ ಬಾರಿಗೆ ಕಬ್ಬನ್ ಪಾರ್ಕ್ ನಿಲ್ದಾಣದ ಬಳಿ ಮೆಟ್ರೋ ಸಂಚಾರ ಕೈಕೊಟ್ಟಿರುವುದು ಟೀಕೆಗೆ ಗುರಿಯಾಯಿತು. ಅದರಲ್ಲಿಯೂ ಸಂಜೆಯ ವೇಳೆ ಉದ್ಯೋಗಿಗಳು ಇದನ್ನೇ ನಂಬಿಕೊಂಡು ಬಂದಿದ್ದರಿಂದ ಎಲ್ಲರೂ ಪರದಾಡುವಂತಾಯಿತು.&lt;/p&gt;&lt;h2&gt;&lt;strong&gt;ಮಹಿಳೆಯ ಚೈನ್​ ತಂದ ಫಜೀತಿ&lt;/strong&gt;&lt;/h2&gt;&lt;p&gt;ಆದರೆ ನಿನ್ನೆ ಅರ್ಥಾತ್​ ಜೂನ್​ 25ರ ಗುರುವಾರ ಅಚಾನಕ್​ ಹೀಗೆ ಮೆಟ್ರೊದಲ್ಲಿ ಸಮಸ್ಯೆ ಕಂಡಿರುವುದಕ್ಕೆ ಕಾರಣ ಮಹಿಳೆಯೊಬ್ಬಳ ಚೈನ್​ ಎನ್ನುವುದು ಬೆಳಕಿಗೆ ಬಂದಿದೆ! ಮೆಟಲ್​ ಚೈನ್​ ಒಂದು ಮೆಟ್ರೋ ರೈಲಿನ ಬಾಗಿಲಿಗೆ ಸಿಕ್ಕಿಹಾಕಿಕೊಂಡಿತ್ತು. ಈ ಘಟನೆಯಿಂದ ರಾತ್ರಿ 7:36 ರಿಂದ 7:54 ಗಂಟೆಯವರೆಗೆ ಮೆಟ್ರೋ ಸೇವೆಯಲ್ಲಿ, ತಾತ್ಕಾಲಿಕ ವ್ಯತ್ಯಯ ಉಂಟಾಗಿತ್ತು. ಮೆಟ್ರೋಗಾಗಿ ಕಾದೂ ಕಾದೂ ಸುಸ್ತಾದವರು ಹಿಡಿಶಾಪ ಹಾಕತೊಡಗಿದರು. ತಾಂತ್ರಿಕ ದೋಷ ಎಂದು ಮೊದಲು ಅಂದುಕೊಳ್ಳಲಾಗಿತ್ತು. ಆ ಬಳಿಕ ತಪಾಸಣೆ ಮಾಡಿದಾಗ ಕಂಡು ಬಂದದ್ದು ಮಹಿಳೆಯ ಚೈನು.&lt;/p&gt;&lt;h3&gt;&lt;strong&gt;ಡೋರ್ ಗೈಡ್&zwnj;ವೇನಲ್ಲಿ ಸಿಲುಕಿದ್ದ ಚೈನ್​&lt;/strong&gt;&lt;/h3&gt;&lt;p&gt;ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ನಡೆಸಿದ ತನಿಖೆಯಲ್ಲಿ, ಪ್ರಯಾಣಿಕರೊಬ್ಬರ ಲೋಹದ ಸರ (Metal Chain) ರೈಲಿನ ಬಾಗಿಲಿನ ಡೋರ್ ಗೈಡ್&zwnj;ವೇ ಯಲ್ಲಿ ಸಿಲುಕಿಕೊಂಡಿದ್ದರಿಂದ ಬಾಗಿಲುಗಳು ಸರಿಯಾಗಿ ಮುಚ್ಚಲು ಸಾಧ್ಯವಾಗದ ಪರಿಣಾಮವಾಗಿ ಕಾರ್ಯಾಚರಣೆಯಲ್ಲಿ ತಾತ್ಕಾಲಿಕ ವಿಳಂಬ ಉಂಟಾಗಿತ್ತು ಎಂದು ಬಿಎಂಆರ್&zwnj;ಸಿಎಲ್ ತಿಳಿಸಿದೆ. ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯ ಸಮಗ್ರ ತಾಂತ್ರಿಕ ಪರಿಶೀಲನೆಯ ನಂತರ, ರೈಲಿನ ಉಪಕರಣಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂಬುದು ದೃಢಪಟ್ಟಿದೆ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/bengaluru-metro-faces-second-disruption-in-3-days-officials-blame-metal-chain-suc/articleshow-74bpyzx"/>
        </item>
        <item>
            <title><![CDATA[ಬಿಎಂಟಿಎಸಿ, ಕೆಎಸ್​ಆರ್​ಟಿಸಿ ಟಿಕೆಟ್​ ದರ ಮತ್ತಷ್ಟು ಏರಿಕೆ? ಹಿಂದಿಗಿಂತಲೂ ದುಬಾರಿ? ಎಷ್ಟಾಗಲಿದೆ ರೇಟ್​]]></title>
            <link>https://kannada.asianetnews.com/gallery/karnataka-districts/transport-department-requested-cm-for-bmtc-ksrtc-tiket-rate-increase-suc-am4hx4u</link>
            <guid isPermaLink="true">https://kannada.asianetnews.com/gallery/karnataka-districts/transport-department-requested-cm-for-bmtc-ksrtc-tiket-rate-increase-suc-am4hx4u</guid>
            <pubDate>Mon, 22 Jun 2026 13:19:05 +0530</pubDate>
            <description><![CDATA[ಶಕ್ತಿ ಯೋಜನೆ, ಇಂಧನ ದರ ಏರಿಕೆ ಮತ್ತು ಸರ್ಕಾರದ ಬಾಕಿ ಅನುದಾನದಿಂದಾಗಿ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಈ ನಷ್ಟವನ್ನು ಸರಿದೂಗಿಸಲು, ಅಧಿಕಾರಿಗಳು ಶೇಕಡಾ 25 ರಷ್ಟು ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvq4td1ftnxvssb1zxj040pb,imgname-ksrtc-1782114497579.jpg" type="image/jpeg" height="390" width="690"/>
            <content:encoded><![CDATA[ಶಕ್ತಿ ಯೋಜನೆ, ಇಂಧನ ದರ ಏರಿಕೆ ಮತ್ತು ಸರ್ಕಾರದ ಬಾಕಿ ಅನುದಾನದಿಂದಾಗಿ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಈ ನಷ್ಟವನ್ನು ಸರಿದೂಗಿಸಲು, ಅಧಿಕಾರಿಗಳು ಶೇಕಡಾ 25 ರಷ್ಟು ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.&lt;img&gt;&lt;p&gt;ಮಹಿಳೆಯರಿಗೆ ನೀಡುತ್ತಿರುವ ಶಕ್ತಿ ಯೋಜನೆ ಹಾಗೂ ಯುದ್ಧದ ಪರಿಣಾಮ ಏರಿರುವ ಇಂಧನದ ಬೆಲೆಯಿಂದಾಗಿ ಇದಾಗಲೇ ಅಪಾರ ಸಂಕಷ್ಟದಲ್ಲಿರುವ ಬಿಎಂಟಿಎಸ್​ ಮತ್ತು ಕೆಎಸ್​ಆರ್​ಟಿಸಿ ಇದಾಗಲೇ ವರ್ಷದ ಹಿಂದಷ್ಟೇ ಶೇಕಡಾ 15ರಷ್ಟು ದರ ಹೆಚ್ಚಳ ಮಾಡಿತ್ತು. ಕೆಲವು ಊರುಗಳಿಗೆ ಇದ್ದ ರಾಜಹಂಸ ಬಸ್ಸನ್ನು ರದ್ದುಗೊಳಿಸಿ ಸ್ಲೀಪರ್​ ಕೋಚ್​ ಬಸ್ಸಷ್ಟೇ ಬಿಡಲಾಗಿದೆ. ಇದರಿಂದ ಅನಿವಾರ್ಯವಾಗಿ ಹೆಚ್ಚು ದರ ಕೊಟ್ಟು ಹೋಗುವ ಪರಿಸ್ಥಿತಿ ಸದ್ಯಕ್ಕೆ ಇದೆಯಾದರೂ, ಅದೇನೇ ಮಾಡಿದರೂ ಸರ್ಕಾರದ ಮೇಲಿನ ಹೊರೆ ಮಾತ್ರ ಕಡಿಮೆಯಾಗುತ್ತಿಲ್ಲ.&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು 5,000 ಕೋಟಿ ರೂಪಾಯಿಗಳ ಅನುದಾನವೂ ಬಾಕಿ ಉಳಿದಿದೆ. ಅದರ ಜೊತೆಗೆ ಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇಕಡಾ 12.5 ರಷ್ಟು ಹೊಸ ವೇತನವನ್ನು ನೀಡಬೇಕಾಗಿದೆ. ಇದರೊಂದಿಗೆ ನೌಕರರಿಗೆ ನೀಡಬೇಕಿರುವ ಒಟ್ಟು 1,271 ಕೋಟಿ ರೂಪಾಯಿಗಳ ವೇತನ ಹಿಂಬಾಕಿ ಹಣದಲ್ಲಿ ಸದ್ಯ 450 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ 821 ಕೋಟಿ ರೂಪಾಯಿಗಳನ್ನು ನೀಡಬೇಕಿದೆ.&lt;/p&gt;&lt;img&gt;&lt;p&gt;ಆದ್ದರಿಂದ ಈ ಸಲ ಟಿಕೆಟ್​ ದರವನ್ನು ಶೇಕಡಾ 25ಕ್ಕೆ ಏರಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ಇದಾಗಲೇ ಪೆಟ್ರೋಲ್​, ಡೀಸೆಲ್​ ಬೆಲೆ ಪ್ರತಿ ಲೀಟರ್&zwnj;ಗೆ 8 ರೂಪಾಯಿಯಷ್ಟು ಹೆಚ್ಚಾಗಿರುವ ಕಾರಣದಿಂದ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.&lt;/p&gt;&lt;img&gt;&lt;p&gt;ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಹೀಗೆ ಆಗಿದ್ದೇ ಆದಲ್ಲಿ, ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ 480 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕೆಎಸ್ಆರ್&zwnj;ಟಿಸಿ (KSRTC), ಬಿಎಂಟಿಸಿ (BMTC), ಈಶಾನ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳು ಬೆಲೆ ಏರಿಕೆ ಮಾಡುವಂತೆ ಅಧಿಕಾರಿಗಳು ಇದಾಗಲೇ ಮನವಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ.&lt;/p&gt;&lt;img&gt;&lt;p&gt;ಈಗ ಮಾಡಿಕೊಂಡಿರುವ ಮನವಿಯ ಪ್ರಕಾರ ಶೇಕಡಾ 25ರಷ್ಟು ದರ ಹೆಚ್ಚು ಮಾಡುವಂತೆ ಕೋರಲಾಗಿದೆ ಎಂದು ವರದಿಯಾಗಿದೆ. ಇದರ ಅರ್ಥ 100 ರೂಪಾಯಿ ಇದ್ದ ಟಿಕೆಟ್​ ಇನ್ನುಮುಂದೆ 125 ರೂಪಾಯಿ ಆಗುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಆದರೆ ಇದಾಗಲೇ ಮಹಿಳೆಯರೂ ಸೇರಿ ಹಲವರು ಶಕ್ತಿ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಇದಾಗಲೇ ವಿದ್ಯುತ್​ ರೇಟ್​ ಹೆಚ್ಚಾಗಿದೆ. ವಾಣಿಜ್ಯ ಬಳಕೆಗೆ ಕರೆಂಟ್​ ಬಿಲ್​ ಪಾವತಿ ಮಾಡುತ್ತಿರುವವರಿಗೆ ಮೂರು ಪಟ್ಟು ಹೆಚ್ಚು ಬಿಲ್​ ಕಟ್ಟುವ ಅನಿವಾರ್ಯತೆ ಎದುರಾಗಿದೆ. ಜೊತೆಗೆ, ನೀರಿನ ಬಿಲ್​ ಕೂಡ ಹೆಚ್ಚಿದೆ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು, ಇನ್ನು ಟಿಕೆಟ್​ ದರ ಏರಿಸುವ ಬದಲು ಶಕ್ತಿ ಯೋಜನೆಯನ್ನೇ ಕೈಬಿಡಬೇಕು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/karnataka-districts/transport-department-requested-cm-for-bmtc-ksrtc-tiket-rate-increase-suc-am4hx4u"/>
        </item>
        <item>
            <title><![CDATA[ಟ್ರಿಪ್ ಹೋಗುವಾಗ ಇರಲಿ ಎಚ್ಚರ, ಪ್ಯಾಂಗಾಂಗ್ ಲೇಕ್‍ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂ ದಂಡ]]></title>
            <link>https://kannada.asianetnews.com/travel/planning-a-trip-tourists-penalized-rs-2-lakh-for-taking-car-into-pangong-lake/articleshow-d4pynb8</link>
            <guid isPermaLink="true">https://kannada.asianetnews.com/travel/planning-a-trip-tourists-penalized-rs-2-lakh-for-taking-car-into-pangong-lake/articleshow-d4pynb8</guid>
            <pubDate>Sun, 28 Jun 2026 14:57:43 +0530</pubDate>
            <description><![CDATA[&lt;p&gt;ಸರಂಕ್ಷಿತ ಅರಣ್ಯ, ವನ್ಯಜೀವಿಗಳ ತಾಣ, ಸಂರಕ್ಷಿತ ಕೆರೆ, ನದಿ ಸೇರಿದಂತೆ ಕೆಲ ಪ್ರದೇಶಗಳಿಗೆ ಟ್ರಿಪ್ ಹೋಗುವ ಮಂದಿ ಎಚ್ಚರವಹಿಸುವುದು ಅಗತ್ಯ. ಇದೀಗ ಹೀಗೆ ಪ್ಯಾಂಗಾಂಗ್ ಲೇಕ್&zwnj;ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6rvvcxz1fyskk57edc1sxj,imgname-tourists-fined-rs-2-lakh-after-driving-into-pangong-lake-1782638833053.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಡಾಕ್ (ಜೂ.28)&lt;/strong&gt; ಪ್ರವಾಸ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾಗಿದೆ. ಇತ್ತೀಚೆಗೆ ಅತೀ ಹೆಚ್ಚಿನ ಮಂದಿ ಪ್ರವಾಸ ತೆರಳುತ್ತಾರೆ. ಹೀಗೆ ಪ್ರವಾಸಕ್ಕೆ ತೆರಳುವಾಗ ನಿಯಮಗಳ ಬಗ್ಗೆ ಎಚ್ಚರವಿರಲಿ. ಕೆಲ ಸೂಕ್ಷ್ಮ ಪ್ರದೇಶಗಲ್ಲಿ ಹುಚ್ಚಾಟ ಮೆರೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಲಡಾಕ್&zwnj;ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಪ್ಯಾಂಗಾಂಗ್ ಲೇಕ್&zwnj;ನಲ್ಲಿ ಕಾರು ಇಳಿಸಿ ಹುಚ್ಚಾಟ ಮೆರೆದ ನಾಲ್ವರು ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಮೂಲಕ ಎಲ್ಲಾ ಪ್ರವಾಸಿಗರಿಗೆ ಲಡಖ್ ಪ್ರವೋಸೋದ್ಯಮ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ.&lt;/p&gt;&lt;h2&gt;ಕೆರೆಗೆ ಕಾರು ಇಳಿಸಿ ಹುಚ್ಚಾಟ, ನಾಲ್ವರಿಗೆ 2 ಲಕ್ಷ ರೂ ದಂಡ&lt;/h2&gt;&lt;p&gt;ನಾಲ್ವರು ಗೆಳೆಯರು ಲಡಾಕ್&zwnj;ಗೆ ಪ್ರವಾಸ ತೆರಳಿದ್ದಾರೆ. ತಮ್ಮ ಮಹೀಂದ್ರ ಥಾರ್ ಕಾರಿನ ಮೂಲಕ ಲಡಾಖ್&zwnj;ನ ವಿವಿಧ ಪ್ರವಾಸಿ ತಾಣಗಳನ್ನು ಸಂದರ್ಶಿಸಿದ್ದಾರೆ. ಈ ನಾಲ್ವರು ಬಹುತೇಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರವಾಸ ಮಾಡಿದ್ದಾರೆ. ಈ ಪೈಕಿ ಪ್ಯಾಂಗಾಂಗ್ ಲೇಕ್&zwnj;ನಲ್ಲಿ ಕಾರು ಇಳಿಸಿದ್ದಾರೆ. ಇದು ಇಕೋ ಸೆನ್ಸಿಟೀವ್ ಝೋನ್. ಅತ್ಯಂತ ಸುಂದರ ಹಾಗ ಸ್ವಚ್ಚ ನೀರಿನ ಈ ಕೆರೆಯಲ್ಲಿ ಕಾರು ಇಳಿಸುವುದು, ನೀರಿನಲ್ಲಿ ಆಟವಾಡುವುದು, ಕಸ ಕಡ್ಡಿ ಎಸೆಯುವುದು ಸೇರಿದಂತೆ ಎಲ್ಲಾ ಚಟುವಟಿಕೆ ನಿಷೇಧ ಹೇರಲಾಗಿದೆ. 1972ರ ವೈಲ್ಡ್ ಲೈಫ್ ಪ್ರೊಟೆಕ್ಷನ್ ಕಾಯ್ದೆ ಈ ಪ್ರದೇಶ ಇಕೋ ಸೆನ್ಸಿಟೀವ್ ಝೋನ್ ಎಂದು ಘೋಷಿಸಲಾಗಿದೆ. ಇಲ್ಲಿ ಕಾರು ಇಳಿಸು ಹುಚ್ಚಾಟ ಮೆರೆದಿದ್ದಾರೆ. ಹೀಗಾಗಿ ನಾಲ್ವರು ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.&lt;/p&gt;&lt;p&gt;ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಚಂಡೀಘಡ ಹಾಗೂ ಪಂಜಾಬ್ ಮೂಲದ ನಾಲ್ವರ ಕಾರು ವಶಕ್ಕೆ ಪಡೆದ ಲಡಾಖ್ ಅಧಿಕಾರಿಗಳು ದಂಡ ಕಟ್ಟಿ ಕಾರು ರಿಲೀಸ್ ಮಾಡಿಸಿಕೊಳ್ಳಲು ಸೂಚಿಸಿದ್ದಾರೆ. ಇದರಂತೆ ನಾಲ್ವರು ಪ್ರವಾಸಿದರು ಕ್ಷಮಾಪಣೆ ಪತ್ರ ಬರೆದು 2 ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ. ಅಧಿಕಾರಿಗಳು ಖಡಕ್ ವಾರ್ನಿಂಗ್ ನೀಡಿ ನಾಲ್ವರು ಹಾಗೂ ಕಾರನ್ನು ರಿಲೀಸ್ ಮಾಡಿದ್ದಾರೆ.&lt;/p&gt;&lt;h2&gt;ಪ್ರವಾಸಿಗರಿಗೆ ಖಡಕ್ ವಾರ್ನಿಂಗ್&lt;/h2&gt;&lt;p&gt;ಜೂನ್ 23 ರಂದು ಪ್ರವಾಸಕ್ಕೆ ಬಂದ ಈ ನಾಲ್ವರು ನಿಯಮ ಉಲ್ಲಂಘಿಸಿ ಕಾರು ಪ್ಯಾಂಗಾಂಗ್ ಲೇಕ್&zwnj;ಗೆ ಇಳಿಸಿದ್ದಾರೆ. ಬಳಿಕ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಗಸ್ತು ತಿರುಗುತ್ತಿದ್ದ ಅಧಿಕಾರಿಗಳಿಗೂ ಈ ಕುರಿತು ಕೆಲ ಸೂಚನೆ ಸಿಕ್ಕಿದೆ. ಹೀಗಾಗಿ ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಇತ್ತ ಸೋಶಿಯಲ್ ಮೀಡಿಾಯದಲ್ಲೂ ಈ ಕುರಿತು ಫೋಟೋಗಳು ವೈರಲ್ ಆಗಿತ್ತು. ಹೀಗಾಗಿ ಲಡಾಖ್ ಅಧಿಕಾರಿಗಳು ತನಿಖೆ ನಡೆಸಿ ಪ್ರವಾಸಿಗರಿಗೆ ದಂಡ ವಿಧಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Acting strictly against rising menace of illegal off-roading, including cases of tourists driving cars in the ecologically sensitive lakes and river streams in Ladakh, the Ladakh Administration, on the directions of Lt. Governor Shri VK Saxena, has for the first time, begun&hellip; pic.twitter.com/zTr6x8p2TB&lt;/p&gt;&lt;p&gt;&mdash; ANI (@ANI) June 28, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>travel</category>
            <dc:creator>Chethan Kumar</dc:creator>
            <atom:link href="https://kannada.asianetnews.com/travel/planning-a-trip-tourists-penalized-rs-2-lakh-for-taking-car-into-pangong-lake/articleshow-d4pynb8"/>
        </item>
        <item>
            <title><![CDATA[ಭಾರತದಲ್ಲಿ ಅತೀ ಹೆಚ್ಚು ಶ್ರೀಮಂತ ದೇವಸ್ಥಾನಗಳಿವು, ಕೈಬಿಚ್ಚಿ ದಾನ ನೀಡ್ತಾರೆ ಭಕ್ತರು]]></title>
            <link>https://kannada.asianetnews.com/gallery/travel/india-top-5-richest-temples-annual-donation-cross-crores-dkxwcic</link>
            <guid isPermaLink="true">https://kannada.asianetnews.com/gallery/travel/india-top-5-richest-temples-annual-donation-cross-crores-dkxwcic</guid>
            <pubDate>Sat, 27 Jun 2026 09:37:56 +0530</pubDate>
            <description><![CDATA[&lt;p&gt;india top 5 richest temples : ಭಾರತದ ಗಲ್ಲಿ ಗಲ್ಲಿಯಲ್ಲಿ ದೇವಸ್ಥಾನಗಳಿವೆ. ಅದ್ರಲ್ಲಿ ಕೆಲ ದೇವಸ್ಥಾನ ಪ್ರತಿ ವರ್ಷ ಕೋಟಿ ಲೆಕ್ಕದಲ್ಲಿ ದಾನ ಪಡೆಯುತ್ತಿದೆ. ರಾಮಮಂದಿರ, ತಿರುಪತಿ ತಿರುಮಲ ಮಾತ್ರವಲ್ಲ ದೇಶದ ಪ್ರಸಿದ್ಧ ಐದು ದೇವಾಲಯಗಳ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw3kmdtw8ec5nsmp2gwqqf9k,imgname-hindu-temple-1782532683612.jpg" type="image/jpeg" height="390" width="690"/>
            <content:encoded><![CDATA[&lt;p&gt;india top 5 richest temples : ಭಾರತದ ಗಲ್ಲಿ ಗಲ್ಲಿಯಲ್ಲಿ ದೇವಸ್ಥಾನಗಳಿವೆ. ಅದ್ರಲ್ಲಿ ಕೆಲ ದೇವಸ್ಥಾನ ಪ್ರತಿ ವರ್ಷ ಕೋಟಿ ಲೆಕ್ಕದಲ್ಲಿ ದಾನ ಪಡೆಯುತ್ತಿದೆ. ರಾಮಮಂದಿರ, ತಿರುಪತಿ ತಿರುಮಲ ಮಾತ್ರವಲ್ಲ ದೇಶದ ಪ್ರಸಿದ್ಧ ಐದು ದೇವಾಲಯಗಳ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿನ ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ. ಜನರ ಆಳವಾದ ನಂಬಿಕೆಯ ಸಂಕೇತಗಳಾಗಿವೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ತಮ್ಮ ಆಸೆ ಈಡೇರಿದ ನಂತರ ದೇವಸ್ಥಾನಕ್ಕೆ ಬಂದು ನಗದು, ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದಾನ ಮಾಡ್ತಾರೆ. ಅದಕ್ಕಾಗಿಯೇ ದೇಶದ ಅನೇಕ ದೇವಾಲಯಗಳು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಮೌಲ್ಯದ ದೇಣಿಗೆ ಪಡೆಯುತ್ತವೆ.&lt;/p&gt;&lt;img&gt;&lt;p&gt;ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಾಲಯವನ್ನು ದೇಶದ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾಗಿದೆ. ವರದಿಯ ಪ್ರಕಾರ, ದೇವಾಲಯದ ಆರು ಕಮಾನುಗಳು ಒಟ್ಟು 20 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿವೆ. ಇದಲ್ಲದೆ, ಗರ್ಭಗುಡಿಯಲ್ಲಿ 500 ಕೋಟಿ ರೂಪಾಯಿ ಮೌಲ್ಯದ ವಿಷ್ಣುವಿನ ಬೃಹತ್ ಚಿನ್ನದ ಪ್ರತಿಮೆ ಇದೆ.&lt;/p&gt;&lt;img&gt;&lt;p&gt;ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನವು ತನ್ನ ದೇಣಿಗೆಗಳಿಗೆ ವಿಶ್ವಪ್ರಸಿದ್ಧವಾಗಿದೆ. ಇದು ವಾರ್ಷಿಕವಾಗಿ ಸುಮಾರು 650 ಕೋಟಿ ರೂಪಾಯಿ ಮೌಲ್ಯದ ದೇಣಿಗೆಗಳನ್ನು ಪಡೆಯುತ್ತದೆ. ಬ್ಯಾಂಕ್ ಠೇವಣಿಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಟನ್ಗಳಷ್ಟು ಚಿನ್ನವನ್ನು ಹೊಂದಿದೆ. ಲಡ್ಡು ಪ್ರಸಾದವನ್ನು ಮಾರಾಟ ಮಾಡುವುದರಿಂದ ದೇವಾಲಯವು ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತದೆ. ತಿರುಪತಿ ದೇವಸ್ಥಾನವು ವಿಷ್ಣುವಿನ ಅವತಾರವೆಂದು ಪರಿಗಣಿಸಲಾದ ಭಗವಾನ್ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ.&lt;/p&gt;&lt;img&gt;&lt;p&gt;ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿ ಬಾಬಾ ದೇವಸ್ಥಾನಕ್ಕೆ ಭಕ್ತರು ನಿರಂತರವಾಗಿ ಭೇಟಿ ನೀಡುತ್ತಾರೆ. ಈ ಪವಿತ್ರ ದೇವಸ್ಥಾನವು ವಾರ್ಷಿಕವಾಗಿ ಸುಮಾರು ₹350 ಕೋಟಿ ಮೌಲ್ಯದ ದೇಣಿಗೆಗಳನ್ನು ಪಡೆಯುತ್ತದೆ.&lt;/p&gt;&lt;img&gt;&lt;p&gt;ಜಮ್ಮುವಿನ ತ್ರಿಕೂಟ ಪರ್ವತಗಳ ಮೇಲಿರುವ ಮಾತಾ ವೈಷ್ಣೋದೇವಿಯ ದೇವಾಲಯವು ಭಕ್ತರ ಪ್ರಮುಖ ಭಕ್ತಿ ಕೇಂದ್ರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರ ಆಗಮನದಿಂದ, ಈ ದೇವಾಲಯವು ಸುಮಾರು ₹500 ಕೋಟಿ ದೇಣಿಗೆ ಗಳಿಸುತ್ತದೆ.&lt;/p&gt;&lt;img&gt;&lt;p&gt;ಗಣೇಶನಿಗೆ ಸಮರ್ಪಿತವಾದ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನವನ್ನು ಸಾರ್ವಜನಿಕರಿಂದ ಬಾಲಿವುಡ್ ತಾರೆಯರವರೆಗೆ ಎಲ್ಲರೂ ಭೇಟಿ ನೀಡುತ್ತಾರೆ. ಈ ಭವ್ಯ ದೇವಾಲಯವು ವಾರ್ಷಿಕವಾಗಿ ಸುಮಾರು ₹125 ಕೋಟಿ ದೇಣಿಗೆ ಮತ್ತು ಕಾಣಿಕೆಗಳನ್ನು ಪಡೆಯುತ್ತದೆ.&lt;/p&gt;]]></content:encoded>
            <category>travel</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/travel/india-top-5-richest-temples-annual-donation-cross-crores-dkxwcic"/>
        </item>
        <item>
            <title><![CDATA['ಕಾಳಿಂಗ ಸರ್ಪಗಳ ರಾಜಧಾನಿ', 'ದಕ್ಷಿಣದ ಚಿರಾಪುಂಜಿ' ಖ್ಯಾತಿಯ ಕರ್ನಾಟಕದ ಈ ಪುಟ್ಟ ಹಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು?]]></title>
            <link>https://kannada.asianetnews.com/gallery/travel/agumbe-guide-discover-south-indias-cherrapunji-and-its-hidden-gems-duas2do</link>
            <guid isPermaLink="true">https://kannada.asianetnews.com/gallery/travel/agumbe-guide-discover-south-indias-cherrapunji-and-its-hidden-gems-duas2do</guid>
            <pubDate>Sun, 28 Jun 2026 18:15:28 +0530</pubDate>
            <description><![CDATA[&lt;p&gt;Travel Guide Kannada: ಕರ್ನಾಟಕದ ಈ ಪುಟ್ಟ ಗ್ರಾಮ ಅತಿ ಹೆಚ್ಚು ಮಳೆಗೆ ಮಾತ್ರವಲ್ಲ, ಕಾಳಿಂಗ ಸರ್ಪಗಳು ಮತ್ತು ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕೂ ಪ್ರಸಿದ್ಧ. ಈ ಸುಂದರ ತಾಣದ ಬಗ್ಗೆ ಹೆಚ್ಚಿನ ಮಾಹಿತಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbq7vw9z5kzz2tfephnk02v2,imgname-akumbe-1764937822527.jpg" type="image/jpeg" height="390" width="690"/>
            <content:encoded><![CDATA[&lt;p&gt;Travel Guide Kannada: ಕರ್ನಾಟಕದ ಈ ಪುಟ್ಟ ಗ್ರಾಮ ಅತಿ ಹೆಚ್ಚು ಮಳೆಗೆ ಮಾತ್ರವಲ್ಲ, ಕಾಳಿಂಗ ಸರ್ಪಗಳು ಮತ್ತು ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕೂ ಪ್ರಸಿದ್ಧ. ಈ ಸುಂದರ ತಾಣದ ಬಗ್ಗೆ ಹೆಚ್ಚಿನ ಮಾಹಿತಿ ಓದಿ.&lt;/p&gt;&lt;img&gt;&lt;p&gt;&lt;strong&gt;&lsquo;ದಕ್ಷಿಣ ಭಾರತದ ಚಿರಾಪುಂಜಿ&rsquo;&lt;/strong&gt;ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಆಗುಂಬೆ ಪ್ರಕೃತಿ ಪ್ರೇಮಿಗಳ ಪಾಲಿನ ಸ್ವರ್ಗ. ಮಂಜಿನಿಂದ ಆವೃತವಾದ ಬೆಟ್ಟಗಳು, ಧುಮ್ಮಿಕ್ಕುವ ಜಲಪಾತಗಳು ಮತ್ತು ದಟ್ಟವಾದ ಮಳೆಕಾಡುಗಳನ್ನು ಹೊಂದಿರುವ ಈ ಸುಂದರ ತಾಣವನ್ನು 'ದಕ್ಷಿಣ ಭಾರತದ ಚಿರಾಪುಂಜಿ' ಎಂದೇ ಕರೆಯಲಾಗುತ್ತದೆ. ಅತಿ ಹೆಚ್ಚು ಮಳೆ ಮತ್ತು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರಾದ ಆಗುಂಬೆಯ ಸೌಂದರ್ಯದ ಪರಿಚಯ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಕೃತಿಯನ್ನು ಇಷ್ಟಪಡುವವರಿಗೆ ಬೆಸ್ಟ್&lt;/strong&gt;ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಆಗುಂಬೆ, ಪಶ್ಚಿಮ ಘಟ್ಟಗಳ ರಮಣೀಯ ತಾಣಗಳಲ್ಲಿ ಒಂದು. ಭಾರತದಲ್ಲೇ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಒಂದಾಗಿರುವ ಕಾರಣ ಇದಕ್ಕೆ 'ದಕ್ಷಿಣ ಭಾರತದ ಚೆರಾಪುಂಜಿ' ಎಂಬ ಹೆಗ್ಗಳಿಕೆ ಇದೆ. ಜನದಟ್ಟಣೆಯ ಗಿರಿಧಾಮಗಳಿಗಿಂತ ಭಿನ್ನವಾಗಿರುವ ಆಗುಂಬೆ, ಪ್ರಕೃತಿಯ ಶಾಂತತೆಯನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆ.&lt;/p&gt;&lt;img&gt;&lt;p&gt;&lt;strong&gt;ಜಲಪಾತಗಳ ತಾಣ&lt;/strong&gt;ಮಳೆಗಾಲದಲ್ಲಿ ಆಗುಂಬೆ ಹಸಿರು ಹೊದಿಕೆಯನ್ನು ಹೊದ್ದಂತೆ ಕಂಗೊಳಿಸುತ್ತದೆ. ಇಲ್ಲಿನ ಬರ್ಕಣ ಜಲಪಾತ ಭಾರತದ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಇದರೊಂದಿಗೆ ಜೋಗಿಗುಂಡಿ, ಒನಕೆ ಅಬ್ಬಿ ಮತ್ತು ಕೂಡ್ಲು ತೀರ್ಥ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತವೆ. ದಟ್ಟ ಕಾಡುಗಳ ನಡುವೆ ಇರುವ ಈ ಜಲಪಾತಗಳನ್ನು ತಲುಪಲು ಇರುವ ಟ್ರೆಕ್ಕಿಂಗ್ ಹಾದಿಗಳು ಸಾಹಸ ಪ್ರಿಯರಿಗೆ ಸಖತ್ ಇಷ್ಟವಾಗುತ್ತವೆ.&lt;/p&gt;&lt;img&gt;&lt;p&gt;&lt;strong&gt;ಕಾಳಿಂಗ ಸರ್ಪಗಳ ರಾಜಧಾನಿ&lt;/strong&gt;ಆಗುಂಬೆಯನ್ನು &quot;ಭಾರತದ ಕಾಳಿಂಗ ಸರ್ಪಗಳ ರಾಜಧಾನಿ&quot; (Cobra Capital of India) ಎಂದೂ ಕರೆಯಲಾಗುತ್ತದೆ. ಪ್ರಸಿದ್ಧ ಉರಗ ತಜ್ಞ ರೋಮುಲಸ್ ವಿಟೇಕರ್ ಸ್ಥಾಪಿಸಿದ 'ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ' (ARRS) ಇಲ್ಲಿನ ಪರಿಸರ ವ್ಯವಸ್ಥೆ ಮತ್ತು ಕಾಳಿಂಗ ಸರ್ಪಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿನ ಸೋಮೇಶ್ವರ ವನ್ಯಜೀವಿ ಅಭಯಾರಣ್ಯವು ಅಪರೂಪದ ಪಕ್ಷಿಗಳು, ಚಿಟ್ಟೆಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸೂರ್ಯಾಸ್ತದ ಸೊಬಗು ಮತ್ತು ಮಾಲ್ಗುಡಿ ಡೇಸ್&lt;/strong&gt;ಆಗುಂಬೆಯ 'ಸನ್&zwnj;ಸೆಟ್ ಪಾಯಿಂಟ್' ಅತ್ಯಂತ ಜನಪ್ರಿಯ ಸ್ಥಳ. ಇಲ್ಲಿಂದ ಕಣಿವೆಯ ಆಳದಲ್ಲಿ ಸೂರ್ಯ ಮುಳುಗುವ ದೃಶ್ಯ ಮತ್ತು ಅರಬ್ಬಿ ಸಮುದ್ರದ ಕಡೆಗೆ ಚಾಚಿಕೊಂಡಿರುವ ಕಾಡುಗಳ ನೋಟ ಅದ್ಭುತವಾಗಿರುತ್ತದೆ. ಅಲ್ಲದೆ, ಪ್ರಸಿದ್ಧ ದೂರದರ್ಶನ ಸರಣಿ 'ಮಾಲ್ಗುಡಿ ಡೇಸ್'ನ ಚಿತ್ರೀಕರಣ ಇಲ್ಲಿನ ದೊಡ್ಡಮನೆಯಲ್ಲಿ ನಡೆದಿದ್ದು, ಇಂದಿಗೂ ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸುತ್ತಾಡಲು ಉತ್ತಮ ಸಮಯ&lt;/strong&gt;ಕುಂದಾದ್ರಿ ಬೆಟ್ಟ ಮತ್ತು ನಿಶಾನಿ ಮೊಟ್ಟೆ ಇಲ್ಲಿನ ಇತರ ಪ್ರಮುಖ ಟ್ರೆಕ್ಕಿಂಗ್ ತಾಣಗಳು. ಜೂನ್&zwnj;ನಿಂದ ಸೆಪ್ಟೆಂಬರ್&zwnj;ವರೆಗೆ ಮಳೆಗಾಲದ ಸೌಂದರ್ಯ ಸವಿಯಲು ಸೂಕ್ತ ಸಮಯವಾದರೆ, ಅಕ್ಟೋಬರ್&zwnj;ನಿಂದ ಫೆಬ್ರವರಿವರೆಗೆ ಹಿತವಾದ ವಾತಾವರಣದಲ್ಲಿ ಸುತ್ತಾಡಲು ಉತ್ತಮ ಸಮಯ.&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/travel/agumbe-guide-discover-south-indias-cherrapunji-and-its-hidden-gems-duas2do"/>
        </item>
        <item>
            <title><![CDATA[Vande Bharat ರೈಲಿನಲ್ಲಿ ಸಾಕು ಪ್ರಾಣಿಗಳಿಗೆ ಟಿಕೆಟ್, ಬಾಕ್ಸ್​​ ಬುಕ್​ ಮಾಡೋದು ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​]]></title>
            <link>https://kannada.asianetnews.com/travel/how-to-book-pet-box-service-on-vande-bharat-sleeper-train-suc/articleshow-eg7g2ii</link>
            <guid isPermaLink="true">https://kannada.asianetnews.com/travel/how-to-book-pet-box-service-on-vande-bharat-sleeper-train-suc/articleshow-eg7g2ii</guid>
            <pubDate>Fri, 26 Jun 2026 12:44:12 +0530</pubDate>
            <description><![CDATA[ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಈಗ ಸಾಕುಪ್ರಾಣಿಗಳಿಗಾಗಿ ವಿಶೇಷ ಪೆಟ್ ಬಾಕ್ಸ್ ಬುಕಿಂಗ್ ಸೌಲಭ್ಯ ಲಭ್ಯವಿದೆ. ಪ್ರಯಾಣಿಕರು ದೃಢೀಕೃತ ಟಿಕೆಟ್ ಮತ್ತು ಅಗತ್ಯ ದಾಖಲೆಗಳೊಂದಿಗೆ ನಿಲ್ದಾಣದ ಪಾರ್ಸೆಲ್ ಕಚೇರಿಯಲ್ಲಿ ಈ ಸೇವೆಯನ್ನು ಬುಕ್ ಮಾಡಬಹುದು. ಸಾಕುಪ್ರಾಣಿಗಳನ್ನು ಪ್ರಯಾಣಿಕರ ಕ್ಯಾಬಿನ್&zwnj;ಗಳ ಒಳಗೆ ಅನುಮತಿಸಲಾಗುವುದಿಲ್ಲ, ಬದಲಿಗೆ ಮೀಸಲಾದ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw1cdkys0vsmhrssrzej2fsc,imgname-vande-bharat-train-1782458011608.jpg" type="image/jpeg" height="390" width="690"/>
            <content:encoded><![CDATA[&lt;p&gt;ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪೆಟ್ ಬಾಕ್ಸ್ ಬುಕಿಂಗ್ ಸೌಲಭ್ಯವಿದೆ. ವರದಿಗಳ ಪ್ರಕಾರ, ಈ ಮೀಸಲಾದ ಸೇವೆಯು ಸಾಕುಪ್ರಾಣಿಗಳಿಗೆ ಸುರಕ್ಷಿತ ಮತ್ತು ಸುತ್ತುವರಿದ ಸ್ಥಳವನ್ನು ನೀಡುತ್ತದೆ. ಈ ಪೆಟ್ಟಿಗೆಗಳು ಲೋಕೋಮೋಟಿವ್ ಬಳಿ ರೈಲಿನ ಎರಡೂ ತುದಿಗಳಲ್ಲಿವೆ. ಆದರೆ, ಈ ಸೌಲಭ್ಯವನ್ನು ಆನ್&zwnj;ಲೈನ್&zwnj;ನಲ್ಲಿ ಬುಕ್ ಮಾಡಲು ಸಾಧ್ಯವಿಲ್ಲ. ವರದಿಯ ಪ್ರಕಾರ, ಪ್ರಯಾಣಿಕರು ರೈಲ್ವೆ ನಿಲ್ದಾಣಗಳಲ್ಲಿ ಪೆಟ್ ಬಾಕ್ಸ್ ಅನ್ನು ಬುಕ್ ಮಾಡಬಹುದು.&lt;/p&gt;&lt;p&gt;ಸೌಲಭ್ಯವನ್ನು ಪಡೆಯಲು, ಪ್ರಯಾಣಿಕರು ತಮ್ಮ ನಿರ್ಗಮನ ನಿಲ್ದಾಣದಲ್ಲಿ ಪಾರ್ಸೆಲ್ ಅಥವಾ ಲಗೇಜ್ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿನ ಅಧಿಕಾರಿಯೊಬ್ಬರು ನಿಮ್ಮ ನಾಯಿ ಅಥವಾ ಬೆಕ್ಕಿಗೆ ಪೆಟ್ ಬಾಕ್ಸ್ ಅನ್ನು ಬುಕ್ ಮಾಡುತ್ತಾರೆ. ವಿಳಂಬವನ್ನು ತಪ್ಪಿಸಲು ರೈಲಿನ ನಿಗದಿತ ನಿರ್ಗಮನ ಸಮಯಕ್ಕೆ ಕನಿಷ್ಠ ಮೂರು ಗಂಟೆಗಳ ಮೊದಲು ಬುಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.&lt;/p&gt;&lt;h2&gt;&lt;strong&gt;ದೃಢೀಕೃತ ಟಿಕೆಟ್ ಹೊಂದಿರಬೇಕು&lt;/strong&gt;&lt;/h2&gt;&lt;p&gt;ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪೆಟ್ ಬಾಕ್ಸ್ ಅನ್ನು ಬುಕ್ ಮಾಡಲು, ಪ್ರಯಾಣಿಕರು ದೃಢೀಕೃತ ಟಿಕೆಟ್ ಹೊಂದಿರಬೇಕು. ಈ ಸೇವೆಗೆ RAC ಅಥವಾ ವೇಟ್&zwnj;ಲಿಸ್ಟ್ ಮಾಡಿದ ಟಿಕೆಟ್&zwnj;ಗಳನ್ನು ಸ್ವೀಕರಿಸಲಾಗುವುದಿಲ್ಲ. ಇದಲ್ಲದೆ, ಪ್ರಯಾಣಿಕರು ಇತ್ತೀಚಿನ ಪಶುವೈದ್ಯಕೀಯ ಫಿಟ್&zwnj;ನೆಸ್ ಪ್ರಮಾಣಪತ್ರ (ಪ್ರಯಾಣದಿಂದ 24-48 ಗಂಟೆಗಳ ಒಳಗೆ ನೀಡಲಾಗುತ್ತದೆ) ಮತ್ತು ಸಾಕುಪ್ರಾಣಿಗಳಿಗೆ ಮಾನ್ಯವಾದ ವ್ಯಾಕ್ಸಿನೇಷನ್ ದಾಖಲೆಗಳಂತಹ ದಾಖಲೆಗಳನ್ನು ಸಲ್ಲಿಸಬೇಕು. ಸಾಕುಪ್ರಾಣಿ ಪೆಟ್ಟಿಗೆಯ ಬೆಲೆಯನ್ನು ಪ್ರಾಣಿಗಳ ತೂಕವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಶುಲ್ಕವನ್ನು ಪ್ರತಿ ಕೆಜಿಗೆ ಸುಮಾರು 30 ರೂ. ಎಂದು ಲೆಕ್ಕಹಾಕಲಾಗುತ್ತದೆ. ಪಾವತಿಯ ನಂತರ, ಪ್ರಯಾಣಿಕರು ಬುಕಿಂಗ್ ದೃಢೀಕರಣವಾಗಿ ಲಗೇಜ್ ಟಿಕ್ಕರ್ ಅನ್ನು ಪಡೆಯುತ್ತಾರೆ.&lt;/p&gt;&lt;h3&gt;&lt;strong&gt;ಕ್ಯಾಬಿನ್&zwnj;ಗಳ ಒಳಗೆ ಅನುಮತಿಯಿಲ್ಲ&lt;/strong&gt;&lt;/h3&gt;&lt;p&gt;ಈ ಸೌಲಭ್ಯದ ಅಡಿಯಲ್ಲಿ, ಸಾಕುಪ್ರಾಣಿಗಳನ್ನು ರೈಲು ರೇಕ್&zwnj;ನ ಎರಡೂ ತುದಿಗಳಲ್ಲಿರುವ ಸ್ಥಿರ ಜಾಗದಲ್ಲಿ . ಸಾಕುಪ್ರಾಣಿಗಳನ್ನು ಪ್ರಯಾಣಿಕರ ಕ್ಯಾಬಿನ್&zwnj;ಗಳ ಒಳಗೆ ಅನುಮತಿಸಲಾಗುವುದಿಲ್ಲ. ಗಮನಾರ್ಹವಾಗಿ, ಸಾಕುಪ್ರಾಣಿ ಪೆಟ್ಟಿಗೆಯನ್ನು ಕಾಯ್ದಿರಿಸಲು ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ ಮತ್ತು ಪ್ರತಿ PNR ಗೆ ಕೇವಲ ಒಂದು ಸಾಕುಪ್ರಾಣಿಯನ್ನು ಮಾತ್ರ ಅನುಮತಿಸಲಾಗಿದೆ. ಆದ್ದರಿಂದ, ಮುಂಗಡ ಬುಕಿಂಗ್ ಅನ್ನು ಸೂಚಿಸಲಾಗಿದೆ. ಇದಲ್ಲದೆ, ಎಲ್ಲಾ ಮಾರ್ಗಗಳಲ್ಲಿ ಸೇವೆ ಲಭ್ಯವಿಲ್ಲದಿರಬಹುದು, ಆದ್ದರಿಂದ ಪ್ರಯಾಣಿಕರು ಬರುವ ಮೊದಲು ತಮ್ಮ ರೈಲು ಮತ್ತು ಮಾರ್ಗದ ಲಭ್ಯತೆಯನ್ನು ದೃಢೀಕರಿಸಬೇಕು.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/travel/how-to-book-pet-box-service-on-vande-bharat-sleeper-train-suc/articleshow-eg7g2ii"/>
        </item>
        <item>
            <title><![CDATA[ಹನಿಮೂನ್‌ಗೆ ಪ್ಲ್ಯಾನ್ ಮಾಡ್ತಿದ್ದೀರಾ? 5 ರೊಮ್ಯಾಂಟಿಕ್ ಪ್ಲೇಸ್ ಮಿಸ್ ಮಾಡ್ಕೋಬೇಡಿ!]]></title>
            <link>https://kannada.asianetnews.com/gallery/travel/top-5-romantic-honeymoon-destinations-in-india-for-july-kodagu-munnar-gangtok-manali-andaman-and-nicobar-islands-mrq-ggd6cxl</link>
            <guid isPermaLink="true">https://kannada.asianetnews.com/gallery/travel/top-5-romantic-honeymoon-destinations-in-india-for-july-kodagu-munnar-gangtok-manali-andaman-and-nicobar-islands-mrq-ggd6cxl</guid>
            <pubDate>Mon, 22 Jun 2026 12:56:06 +0530</pubDate>
            <description><![CDATA[ಜುಲೈ ತಿಂಗಳಲ್ಲಿ ಮದುವೆಯಾದ ನಂತರ ರೊಮ್ಯಾಂಟಿಕ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಿದ್ರೆ, ನಿಮ್ಮ ಸಂಗಾತಿ ಜೊತೆ ಭೇಟಿ ನೀಡಲೇಬೇಕಾದ 5 ಅತ್ಯುತ್ತಮ ಹನಿಮೂನ್ ತಾಣಗಳ ಮಾಹಿತಿ ಇಲ್ಲಿದೆ. ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವವನ್ನು ಈ ಸ್ಥಳಗಳು ನಿಮಗೆ ನೀಡುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvq32e51dxvk33ajsb9crghp,imgname-honeymoon-1782112663713.jpg" type="image/jpeg" height="390" width="690"/>
            <content:encoded><![CDATA[ಜುಲೈ ತಿಂಗಳಲ್ಲಿ ಮದುವೆಯಾದ ನಂತರ ರೊಮ್ಯಾಂಟಿಕ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಿದ್ರೆ, ನಿಮ್ಮ ಸಂಗಾತಿ ಜೊತೆ ಭೇಟಿ ನೀಡಲೇಬೇಕಾದ 5 ಅತ್ಯುತ್ತಮ ಹನಿಮೂನ್ ತಾಣಗಳ ಮಾಹಿತಿ ಇಲ್ಲಿದೆ. ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವವನ್ನು ಈ ಸ್ಥಳಗಳು ನಿಮಗೆ ನೀಡುತ್ತವೆ.&lt;img&gt;ಕರ್ನಾಟಕದಲ್ಲಿರುವ ಕೊಡಗನ್ನು 'ಭಾರತದ ಸ್ಕಾಟ್ಲೆಂಡ್' ಅಂತ ಕರೆಯುತ್ತಾರೆ. ಇಲ್ಲಿನ ಕಾಫಿ ತೋಟಗಳು, ಮಂಜು ಮುಸುಕಿದ ಬೆಟ್ಟಗಳು ನವ ಜೋಡಿಗಳಿಗೆ ಪ್ರಶಾಂತ ವಾತಾವರಣವನ್ನು ನೀಡುತ್ತವೆ. ಮಸಾಲೆ ತೋಟಗಳ ಪ್ರವಾಸ ಇಲ್ಲಿನ ಪ್ರಮುಖ ಆಕರ್ಷಣೆ. ಈ ಅನುಭವ ಜೀವನದಲ್ಲಿ ಮರೆಯಲಾಗದು.&lt;img&gt;ಕೇರಳದ ಮುನ್ನಾರ್ ಹೊಸದಾಗಿ ಮದುವೆಯಾದವರಿಗೆ ಸ್ವರ್ಗದಂತೆ ಭಾಸವಾಗುತ್ತದೆ. ಹಚ್ಚ ಹಸಿರಾದ ಬೆಟ್ಟಗಳು, ಮಂಜಿನ ಹೊದಿಕೆ, ಜಲಪಾತಗಳ ಸದ್ದು ನಿಮ್ಮನ್ನು ಮೋಡಿ ಮಾಡುತ್ತದೆ. ಸಂಗಾತಿಯ ಕೈ ಹಿಡಿದು ಬಿಸಿ ಬಿಸಿ ಚಹಾ ಹೀರುತ್ತಾ ಪ್ರಕೃತಿಯ ಸೌಂದರ್ಯವನ್ನು ಆನಂದಿಸುವುದೇ ಒಂದು ಅದ್ಭುತ ಅನುಭವ. ಜುಲೈ ಮಳೆ ಇಲ್ಲಿನ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ.&lt;img&gt;ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ ಜುಲೈ ತಿಂಗಳಲ್ಲಿ ಮಂಜಿನ ಮೋಡಗಳಿಂದ ತುಂಬಿ ರೊಮ್ಯಾಂಟಿಕ್ ಆಗಿ ಕಾಣುತ್ತದೆ. ಇಲ್ಲಿನ ಬೌದ್ಧ ಮಠಗಳು, ಸುಂದರ ಸರೋವರಗಳು ಮತ್ತು ಪರ್ವತಗಳ ದೃಶ್ಯಗಳು ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತವೆ. ಇಲ್ಲಿನ ಪ್ರಸಿದ್ಧ ಎಂಜಿ ರೋಡ್&zwnj;ನಲ್ಲಿ ವಾಕ್ ಮಾಡುವುದು, ಕೇಬಲ್ ಕಾರ್ ರೈಡ್ ಮತ್ತು ಸ್ಥಳೀಯ ಆಹಾರವನ್ನು ಸವಿಯುವುದನ್ನು ಮರೆಯಬೇಡಿ.&lt;img&gt;&lt;p&gt;ಹಿಮಾಚಲ ಪ್ರದೇಶದ ಮನಾಲಿಯು ಜೋಡಿಗಳ ನೆಚ್ಚಿನ ತಾಣವಾಗಿದೆ. ಎತ್ತರದ ಪರ್ವತಗಳು ಮತ್ತು ಸೇಬಿನ ತೋಟಗಳ ನಡುವೆ ಚಿಮುಕಿಸುವ ಮಳೆಯು ಒಂದು ವಿಭಿನ್ನ ಅನುಭವ ನೀಡುತ್ತದೆ. ಇಲ್ಲಿ ನೀವು ಸೋಲಾಂಗ್ ಕಣಿವೆಗೆ ಭೇಟಿ ನೀಡಬಹುದು. ಹಿಲ್&zwnj;ಸೈಡ್ ಕಾಟೇಜ್&zwnj;ಗಳಲ್ಲಿ ಉಳಿದುಕೊಂಡು, ಸ್ಥಳೀಯ ಕೆಫೆಗಳಲ್ಲಿ ಹಾಟ್ ಚಾಕೊಲೇಟ್ ಕುಡಿಯುತ್ತಾ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಬಹುದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮೈಸೂರು, ಬೆಂಗಳೂರು, ಚಿತ್ರದುರ್ಗದಿಂದ ವಿಜಯಪುರಕ್ಕಿದೆ ನೇರ ರೈಲು; ಪ್ರಯಾಣಿಕರಿಗೆ ಉತ್ತಮ ಆಯ್ಕೆ&lt;/strong&gt;&lt;/p&gt;&lt;img&gt;&lt;p&gt;ನೀವು ಸಮುದ್ರ ತೀರ ಮತ್ತು ನೀರಿನ ಚಟುವಟಿಕೆಗಳನ್ನು ಇಷ್ಟಪಡುವವರಾಗಿದ್ದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ತಿಳಿ ನೀಲಿ ನೀರು ಮತ್ತು ಪ್ರಶಾಂತವಾದ ಬೀಚ್&zwnj;ಗಳು ನವಜೋಡಿಗಳಿಗೆ ಉತ್ತಮ ಏಕಾಂತವನ್ನು ನೀಡುತ್ತವೆ. ಜುಲೈನಲ್ಲಿ ಮಳೆಯಿದ್ದರೂ, ಬಿಸಿಲು ಬಂದಾಗ ಸ್ಕೂಬಾ ಡೈವಿಂಗ್ ಮಾಡಬಹುದು. ಬೀಚ್&zwnj;ನಲ್ಲಿ ಕ್ಯಾಂಡಲ್&zwnj;ಲೈಟ್ ಡಿನ್ನರ್ ಮಾಡಿದರೆ ಆ ನೆನಪು ಶಾಶ್ವತವಾಗಿ ಉಳಿಯುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರಿನಿಂದ ಊಟಿಗೆ ಹೋಗ್ತಿದ್ದೀರಾ? ಇಲ್ಲಿದೆ ನೋಡಿ ನಮ್ಮ ಸಾರಿಗೆ ಬಸ್&zwnj;ಗಳ ಮಾಹಿತಿ&lt;/strong&gt;&lt;/p&gt;]]></content:encoded>
            <category>travel</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/travel/top-5-romantic-honeymoon-destinations-in-india-for-july-kodagu-munnar-gangtok-manali-andaman-and-nicobar-islands-mrq-ggd6cxl"/>
        </item>
        <item>
            <title><![CDATA[ನಿಂತು ಹೋಗಿದ್ದ ಬಂಡೀಪುರ-ನಾಗರಹೊಳೆ ಜಂಗಲ್ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ ರಾಜ್ಯ ಸರ್ಕಾರ ಘೋಷಣೆ]]></title>
            <link>https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6</link>
            <guid isPermaLink="true">https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6</guid>
            <pubDate>Fri, 26 Jun 2026 15:20:19 +0530</pubDate>
            <description><![CDATA[ಕರ್ನಾಟಕ ಸರ್ಕಾರವು, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಆರಂಭಿಸಲು ಅನುಮೋದನೆ ನೀಡಿದೆ. ಈ ನಿರ್ಧಾರವು ಪರಿಸರ ಸಂರಕ್ಷಣೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಸ್ಥಳೀಯ ಆರ್ಥಿಕತೆಗೆ ಚೈತನ್ಯ ನೀಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyqy1v1vekkrwc1j148qahy,imgname-cjjk-1778074453857.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕದ ಹೆಮ್ಮೆಯ ವನ್ಯಜೀವಿ ತಾಣಗಳಾದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇನ್ಮುಂದೆ ಪ್ರವಾಸಿಗರು ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಅನುಭವವನ್ನು ಪಡೆಯಬಹುದು. ತಜ್ಞರು ಮತ್ತು ಉನ್ನತಾಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯ ವರದಿ ಹಾಗೂ ಶಿಫಾರಸುಗಳನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ, ಈ ಎರಡೂ ರಾಷ್ಟ್ರೀಯ ಉದ್ಯಾನವನಗಳಲ್ಲಿ ಪೂರ್ಣ ಪ್ರಮಾಣದ ಸಫಾರಿ ಆರಂಭಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ.&lt;/p&gt;&lt;h2&gt;ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಗಣೆ ಸಾಮರ್ಥ್ಯಕ್ಕೆ ಆದ್ಯತೆ&lt;/h2&gt;&lt;p&gt;ಬಂಡೀಪುರ ಮತ್ತು ನಾಗರಹೊಳೆ ಕಾಡುಗಳ ನೈಸರ್ಗಿಕ ಸಮತೋಲನಕ್ಕೆ ಯಾವುದೇ ಧಕ್ಕೆ ಬಾರದಂತೆ ಈ ನಿರ್ಧಾರ ತಳೆಯಲಾಗಿದೆ. ತಾಂತ್ರಿಕ ಸಮಿತಿಯು ನಡೆಸಿರುವ ಕಟ್ಟುನಿಟ್ಟಿನ ವೈಜ್ಞಾನಿಕ ಮೌಲ್ಯಮಾಪನ ಹಾಗೂ ಅರಣ್ಯದ &quot;ಸಾಗಣೆ ಸಾಮರ್ಥ್ಯ&quot; (Carrying Capacity) ಆಧರಿಸಿ ಸಫಾರಿಗೆ ಹಸಿರು ನಿಶಾನೆ ನೀಡಲಾಗಿದೆ. ಅಂದರೆ, ಪರಿಸರ ವ್ಯವಸ್ಥೆಯ ಮೇಲಾಗುವ ಪರಿಣಾಮಗಳನ್ನು ಅಳೆದು ತೂಗಿ, ಕೇವಲ ನಿಯಂತ್ರಿತ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ಮಾತ್ರ ಜಂಗಲ್ ಸಫಾರಿ ನಡೆಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.&lt;/p&gt;&lt;h2&gt;ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಪ್ರವಾಸೋದ್ಯಮದ ಸಮನ್ವಯ&lt;/h2&gt;&lt;p&gt;ಕರ್ನಾಟಕವು ದೇಶದಲ್ಲೇ ಪರಿಸರ ಪ್ರವಾಸೋದ್ಯಮದಲ್ಲಿ (Eco-Tourism) ಮುಂಚೂಣಿಯಲ್ಲಿರುವ ರಾಜ್ಯವಾಗಿದೆ.&lt;/p&gt;&lt;p&gt;&lt;strong&gt;ವನ್ಯಜೀವಿಗಳ ರಕ್ಷಣೆ: &lt;/strong&gt;ಸಫಾರಿ ಆರಂಭಿಸಿದರೂ ವನ್ಯಜೀವಿಗಳ ಮುಕ್ತ ಮುಖಾಮುಖಿ ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನದ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.&lt;/p&gt;&lt;p&gt;&lt;strong&gt;ಪರಿಸರ ವ್ಯವಸ್ಥೆಯ ಸಮಗ್ರತೆ: &lt;/strong&gt;ಪ್ರವಾಸೋದ್ಯಮದ ಹೆಸರಿನಲ್ಲಿ ಕಾಡಿನ ಶಾಂತಿ ಕದಡದಂತೆ ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ.&lt;/p&gt;&lt;p&gt;&lt;strong&gt;ಉತ್ತಮ ಪ್ರವಾಸಿ ಅನುಭವ: &lt;/strong&gt;ಪ್ರಕೃತಿ ಪ್ರೇಮಿಗಳಿಗೆ ಪ್ರಕೃತಿಯನ್ನು ಹತ್ತಿರದಿಂದ ವೀಕ್ಷಿಸಲು ಹಾಗೂ ಜೀವವೈವಿಧ್ಯದ ಬಗ್ಗೆ ಅರಿವು ಮೂಡಿಸಲು ಇದು ಪೂರಕವಾಗಲಿದೆ.&lt;/p&gt;&lt;h2&gt;ಸ್ಥಳೀಯ ಉದ್ಯೋಗ ಹಾಗೂ ಆರ್ಥಿಕತೆಗೆ ಬೂಸ್ಟರ್ ಡೋಸ್&lt;/h2&gt;&lt;p&gt;ಸರ್ಕಾರದ ಈ ನಿರ್ಧಾರ ಕೇವಲ ಪ್ರವಾಸಿಗರಿಗಷ್ಟೇ ಅಲ್ಲದೆ, ಸ್ಥಳೀಯ ಜನಸಮುದಾಯಗಳಿಗೂ ಹೊಸ ಆಶಾಕಿರಣ ಮೂಡಿಸಿದೆ. ಜಂಗಲ್ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವುದರಿಂದ ಸ್ಥಳೀಯರ ಜೀವನೋಪಾಯ ಸುಧಾರಣೆಯಾಗಲಿದೆ. ಗೈಡ್&zwnj;ಗಳು, ಚಾಲಕರು ಮತ್ತು ಅರಣ್ಯ ಅವಲಂಬಿತ ಸಮುದಾಯಗಳಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಆರ್ಥಿಕ ಉತ್ತೇಜನವೂ ಆಗಲಿದ್ದು ಹೋಂಸ್ಟೇ, ಹೋಟೆಲ್ ಉದ್ಯಮ ಹಾಗೂ ಸ್ಥಳೀಯ ಸಾರಿಗೆ ವ್ಯವಸ್ಥೆ ಚುರುಕುಗೊಂಡು ಪ್ರಾದೇಶಿಕ ಆರ್ಥಿಕತೆ ಬಲಗೊಳ್ಳಲಿದೆ.&lt;/p&gt;&lt;p&gt;ಕರ್ನಾಟಕವು ಯಾವಾಗಲೂ ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ಪಾಲಿಸಿಕೊಂಡು ಬಂದಿದೆ. ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುವ ಜೊತೆಗೆ, ವನ್ಯಜೀವಿ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ ಮತ್ತು ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರದ ಈ ಪ್ರಕೃತಿ ಸ್ನೇಹಿ ಹಾಗೂ ಜನಪರ ನಿರ್ಧಾರವು ಕರ್ನಾಟಕದ ಪ್ರವಾಸೋದ್ಯಮ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದ್ದು, ಪ್ರಕೃತಿ ಸಂರಕ್ಷಣೆ ಮತ್ತು ಪ್ರಾದೇಶಿಕ ಅಭಿವೃದ್ಧಿ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಆಶಯ ಹೊಂದಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6"/>
        </item>
        <item>
            <title><![CDATA[ಅಂದು ಜೀವಂತ ಸಮಾಧಿ, ಇಂದು ಭೀಕರ ಹತ್ಯೆ! ಕೇತನ್ ಕೊಲೆ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂತು ಲೋಹಗಢ ಕೋಟೆ ರಹಸ್ಯ]]></title>
            <link>https://kannada.asianetnews.com/life/lohagad-fort-murder-case-and-haunted-history-ketan-agarwal-case-updates/articleshow-h3gfw9d</link>
            <guid isPermaLink="true">https://kannada.asianetnews.com/life/lohagad-fort-murder-case-and-haunted-history-ketan-agarwal-case-updates/articleshow-h3gfw9d</guid>
            <pubDate>Thu, 25 Jun 2026 12:06:54 +0530</pubDate>
            <description><![CDATA[&lt;p&gt;&lt;strong&gt;Lohagad Fort murder:&lt;/strong&gt; ಲೋಹಗಢ ಕೋಟೆಗೆ ಚಾರಣಕ್ಕೆ ಹೋದ ಕೇತನ್ ಅಗರ್ವಾಲ್ ಮತ್ತು ಸಿಯಾ ಅವರ ಪ್ರೇಮಕಥೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಪ್ರಿಯಕರನನ್ನೇ ಬೆಟ್ಟದ ಮೇಲಿಂದ ನೂಕಿ ಕೊಂದ ಸಿಯಾಳ ಕೃತ್ಯಕ್ಕೆ ಈ ಕೋಟೆ ಮೌನ ಸಾಕ್ಷಿಯಾಗಿದೆ. ಅಂದು ಕೋಟೆಯ ರಕ್ಷಣೆಗಾಗಿ ಮನುಷ್ಯರನ್ನು ಜೀವಂತ ಸಮಾಧಿ ಮಾಡಲಾಗುತ್ತಿದ್ದ ಜಾಗದಲ್ಲೇ ಇಂದು ಕೇತನ್ ಪ್ರಾಣ ಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕೋಟೆಯ ಅಸಲಿ ಮಿಸ್ಟರಿ ಏನು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvyqx8dhjr3ncggjmx22gp7m,imgname-thumbnail--20--1782369395121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ&lt;/strong&gt;ಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಲಾದಲ್ಲಿರುವ ಪ್ರಸಿದ್ಧ 'ಲೋಹಗಢ ' ಕೋಟೆ (Lohagad Fort) ಈಗ ಸುದ್ದಿಯಲ್ಲಿದೆ. ಆದರೆ ಈ ಬಾರಿ ಅದು ಪ್ರವಾಸಿ ತಾಣವಾಗಿ ಅಲ್ಲ, ಬದಲಾಗಿ ಅಲ್ಲಿ ನಡೆದ ಒಂದು ಭೀಕರ ಕೊ*ಲೆಯಿಂದಾಗಿ ಸಂಚಲನ ಮೂಡಿಸಿದೆ. 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal case) ಅವರನ್ನು ಅವರ ಭಾವಿ ಪತ್ನಿ ಸಿಯಾ ಎಂಬಾಕೆ ಕೋಟೆಯ ಎತ್ತರದಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯ ಬೆನ್ನಲ್ಲೇ, ಈ ಕೋಟೆಯ 2000 ವರ್ಷಗಳ ಹಳೆಯ ನಿಗೂಢ ಇತಿಹಾಸ ಮತ್ತು ಅಲ್ಲಿನ ಭಯಾನಕ ಲೋಕಕಥೆಗಳು ಮತ್ತೆ ಮುನ್ನೆಲೆಗೆ ಬಂದಿವೆ.&lt;/p&gt;&lt;h2&gt;&lt;strong&gt;2000 ವರ್ಷಗಳಷ್ಟು ಹಳೆಯ ಲೋಹಗಢ ಕೋಟೆಯ ಇತಿಹಾಸ&lt;/strong&gt;&lt;/h2&gt;&lt;p&gt;'ಲೋಹಗಢ ' ಎಂದರೆ 'ಕಬ್ಬಿಣದ ಕೋಟೆ'. ಇದರ ಇತಿಹಾಸ ಸುಮಾರು 2000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಶಾತವಾಹನರ ಕಾಲದಲ್ಲಿ ಈ ಕೋಟೆಯ ಅಡಿಪಾಯ ಹಾಕಲಾಗಿತ್ತು. ನಂತರದ ಶತಮಾನಗಳಲ್ಲಿ ನಿಝಾಮ್&zwnj;ಶಾಹಿ, ಬಿಜಾಪುರ ಸುಲ್ತಾನರು, ಮೊಘಲರು ಮತ್ತು ಮರಾಠರು ಈ ಕೋಟೆಯನ್ನು ಆಳಿದ್ದಾರೆ. ಪಶ್ಚಿಮ ಘಟ್ಟದ ವ್ಯಾಪಾರ ಮಾರ್ಗಗಳ ಮೇಲೆ ನಿಗಾ ಇಡಲು ಈ ಕೋಟೆ ಆಯಕಟ್ಟಿನ ಸ್ಥಳವಾಗಿತ್ತು. 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹೊಂದಿರುವ ಈ ಕೋಟೆ ಹತ್ತಲು ಇಂದಿಗೂ ಸಾಹಸವೇ ಸರಿ.&lt;/p&gt;&lt;h3&gt;&lt;strong&gt;ಗಣೇಶ ದರ್ವಾಜಾ ಮತ್ತು ಜೀವಂತ ಸಮಾಧಿಯ ರಹಸ್ಯ&lt;/strong&gt;&lt;/h3&gt;&lt;p&gt;'ಲೋಹಗಢ ' ಕೋಟೆಯ ಅತ್ಯಂತ ಭಯಾನಕ ಕಥೆ ಇಲ್ಲಿನ 'ಗಣೇಶ ದರ್ವಾಜಾ' (Ganesh Darwaza) ದೊಂದಿಗೆ ಬೆಸೆದುಕೊಂಡಿದೆ. ಸ್ಥಳೀಯ ಪುರಾಣಗಳ ಪ್ರಕಾರ, ಈ ಬೃಹತ್ ದ್ವಾರದ ಅಡಿಪಾಯವನ್ನು ಭದ್ರಪಡಿಸಲು ಮತ್ತು ಕೋಟೆಯ ಮೇಲಿದ್ದ ಶಾಪವನ್ನು ವಿಮೋಚನೆಗೊಳಿಸಲು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯನ್ನು ಜೀವಂತವಾಗಿ ಸಮಾಧಿ ಮಾಡಲಾಗಿತ್ತು ಎಂದು ಹೇಳಲಾಗುತ್ತದೆ. ದ್ವಾರದ ಗೋಡೆಯ ಅಡಿಯಲ್ಲಿ ಇಂದಿಗೂ ಅವರ ಆತ್ಮಗಳು ಅಲೆಯುತ್ತಿವೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಆದರೆ ಇದಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲದಿದ್ದರೂ, ಗೈಡ್&zwnj;ಗಳು ಇಂದಿಗೂ ಈ ಕಥೆಯನ್ನು ಪ್ರವಾಸಿಗರಿಗೆ ವಿವರಿಸುತ್ತಾರೆ.&lt;/p&gt;&lt;h3&gt;&lt;strong&gt;ಸಾವಲೆ ಕುಟುಂಬದ ಬಲಿ ಮತ್ತು ನಿಗೂಢ ಧ್ವನಿಗಳು&lt;/strong&gt;&lt;/h3&gt;&lt;p&gt;ಇನ್ನೊಂದು ಕಥೆಯ ಪ್ರಕಾರ, ಕೋಟೆಯ ರಕ್ಷಣೆಗಾಗಿ ಸಾವಲೆ ಕುಟುಂಬದ ವ್ಯಕ್ತಿಯೊಬ್ಬರು ಪ್ರಾಣತ್ಯಾಗ ಮಾಡಿದ್ದರು ಎನ್ನಲಾಗುತ್ತದೆ. ಈ ಕೋಟೆಯಲ್ಲಿ ಸೂರ್ಯಾಸ್ತದ ನಂತರ ವಿಚಿತ್ರ ಶಬ್ದಗಳು ಕೇಳಿಬರುತ್ತವೆ ಎಂಬುದು ಟ್ರೆಕ್ಕರ್&zwnj;ಗಳ ವಾದ. ರಾತ್ರಿಯ ಸಮಯದಲ್ಲಿ ಯಾರು ಇಲ್ಲದಿದ್ದರೂ ಸಿಳ್ಳೆ ಹೊಡೆದಂತೆ, ಯಾರೋ ಓಡಿದಂತೆ ಅಥವಾ ಪಿಸುಮಾತಿನ ಶಬ್ದಗಳು ಕೇಳಿಬರುತ್ತವೆ ಎಂದು ಅನೇಕರು ಹೇಳಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಮಂಜು ಮುಸುಕಿದಾಗ ಈ ಕೋಟೆ ಮತ್ತಷ್ಟು ಭಯಾನಕವಾಗಿ ಕಾಣುತ್ತದೆ.&lt;/p&gt;&lt;h3&gt;&lt;strong&gt;ಕಣ್ಮರೆಯಾಗುವ 'ನಿಗೂಢ ಕಾವಲುಗಾರ'&lt;/strong&gt;&lt;/h3&gt;&lt;p&gt;ಲೋಹಗಢ ಕೋಟೆಯ ಬಗ್ಗೆ ಇರುವ ಮತ್ತೊಂದು ರೋಚಕ ಕಥೆಯೆಂದರೆ 'ನಿಗೂಢ ಕಾವಲುಗಾರ'. ಕೆಲವು ಪ್ರವಾಸಿಗರು ದೂರದಿಂದ ಕೋಟೆಯ ಗೋಡೆಯ ಮೇಲೆ ಕಾವಲುಗಾರನಂತಹ ಆಕೃತಿಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಹತ್ತಿರ ಹೋದಂತೆ ಆ ಆಕೃತಿ ಇದ್ದಕ್ಕಿದ್ದಂತೆ ಮಾಯವಾಗುತ್ತದೆಯಂತೆ. ಇತ್ತೀಚೆಗೆ ನಡೆದ ಕೇತನ್ ಅಗರ್ವಾಲ್ ಹತ್ಯೆಯು ಈ ಕೋಟೆಯ ಭಯಾನಕತೆಗೆ ಮತ್ತೊಂದು ಕರಾಳ ಅಧ್ಯಾಯವನ್ನು ಸೇರಿಸಿದೆ. 300 ಮೆಟ್ಟಿಲುಗಳ ಮೇಲೆ ಪ್ರೇಮಿಯೊಂದಿಗೆ ಬಂದ ಕೇತನ್ ಅಲ್ಲಿಂದ ಕೆಳಕ್ಕೆ ಬಿದ್ದು ಹೆಣವಾಗಿದ್ದು ವಿಧಿಯ ಆಟವೋ ಅಥವಾ ಕೋಟೆಯ ನಿಗೂಢತೆಯೋ (Pune horror stories) ಎಂಬ ಪ್ರಶ್ನೆ ಎದ್ದಿದೆ.&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/life/lohagad-fort-murder-case-and-haunted-history-ketan-agarwal-case-updates/articleshow-h3gfw9d"/>
        </item>
        <item>
            <title><![CDATA[ಕೇತನ್ ಹತ್ಯೆ ಬಳಿಕ ಲೋಹಘಡಕ್ಕೆ ಟೂರಿಸ್ಟ್ ಸಂಖ್ಯೆ ಡಬಲ್, ಪ್ರವಾಸಿ ತಾಣವಾಗಿ ಬದಲಾದ ಸಿಯಾ ಪಾಯಿಂಟ್]]></title>
            <link>https://kannada.asianetnews.com/travel/tourist-footfall-doubles-at-lohagad-after-ketan-murder-case-siya-point-draws-crowds/articleshow-in16sng</link>
            <guid isPermaLink="true">https://kannada.asianetnews.com/travel/tourist-footfall-doubles-at-lohagad-after-ketan-murder-case-siya-point-draws-crowds/articleshow-in16sng</guid>
            <pubDate>Tue, 30 Jun 2026 16:52:51 +0530</pubDate>
            <description><![CDATA[&lt;p&gt;ಭಾವಿ ಪತ್ಯೆ ಸಿಯಾ ಗೊಯೆಲ್ ಲೋಹಘಡದಲ್ಲಿ ಕೇತನ್ ಕಳ್ಳಿ ಹಾಕಿ ಹತ್ಯೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಈ ಘಟನೆ ಬಳಿಕ ಲೋಹಘಡಕ್ಕೆ ಪ್ರವಾಸಿಗರ ಸಂಖ್ಯೆ ಡಬಲ್ ಆಗಿದೆ. ಪ್ರವಾಸಿಗರು ಕೋಟೆ, ಪರ್ವತ ಸೌಂದರ್ಯಕ್ಕಿಂತ ಸಿಯಾ ಪಾಯಿಂಟ್ ವೀಕ್ಷಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwc4280txb4c1rnehwexs4x7,imgname-siya-point-emerges-as-tourist-hotspot-in-lohagad-1782818349082.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುಣೆ (ಜೂ.30)&lt;/strong&gt; ಪುಣೆ ಉದ್ಯಮಿ ಪುತ್ರ ಕೇತನ್ ಅಗರ್ವಾಲ್&zwnj;ನ ಲೋಹಘಡ ಪರ್ವತದಿಂದ ತಳ್ಳಿ ಹಾಕಿದ ಭಾವಿ ಪತ್ನಿ ಸಿಯಾ ಗೋಯೆಲ್ ಅರೆಸ್ಟ್ ಆಗಿದ್ದಾಳೆ. ಪ್ರಕರಣ ಸಂಬಂಧ ಸಿಯಾ ಗೊಯೆಲ್ ಹಾಗೂ ಆಕೆಯ ಬಾಯ್&zwnj;ಫ್ರೆಂಡ್ ಚೇತನ್ ಅರೆಸ್ಟ್ ಆಗಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ತೀವ್ರಗೊಳಿಸಿದ್ದು ಸ್ಫೋಟಕ ಮಾಹಿತಿ ಬಯಲಾಗಿದೆ. ಈ ಪ್ರಕರಣದಿಂದ ಎಲ್ಲರೂ ಲೋಹಘಡ ಸೇರಿದಂತೆ ಪರ್ವತಗಳ ಟ್ರಕ್ಕಿಂಗ್ ಸಂಖ್ಯೆ ಇಳಿಕೆಯಾಗಲಿದೆ ಎಂದು ಹಲವರು ಭಾವಿಸಿದ್ದರು. ಆದರೆ ಎಲ್ಲಾ ಉಲ್ಟಾ ಆಗಿದೆ. ಇದೀಗ ಲೋಹಘಡಕ್ಕೆ ತೆರಳು ಪ್ರವಾಸಿಗರ ಸಂಖ್ಯೆ ಭಾರಿ ಏರಿಕೆಯಾಗಿದೆ. ಈ ಪ್ರವಾಸಿಗರ ಪೈಕಿ ಬಹುತೇಕರು ಲೋಹಘಡದ ಕೋಟೆ, ಲೋಹಘಡ ಬೆಟ್ಟ, ಅಲ್ಲಿನ ಸೌಂದರ್ಯಕ್ಕಿಂತ, ಕೇತನ್ ತಳ್ಳಿ ಹಾಕಿದ ಸ್ಥಳ ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಿದೆ.&lt;/p&gt;&lt;h2&gt;ಸಿಯಾ ಪಾಯಿಂಟ್ ಈಗ ಭಾರಿ ಜನಪ್ರಿಯ&lt;/h2&gt;&lt;p&gt;ಬೆಟ್ಟದ ಮೇಲೆ ನೂರಾರು ವರ್ಷಗಳ ಹಿಂದೆ ರಾಜ ಮಹಾರಾಜರ ಕಟ್ಟಿದ ಕೋಟೆ, ಅರಮನೆಗಳ ಜಾಗದಲ್ಲಿ ಬಂಧಿಸಲ್ಪಟ್ಟ ಅಪರಾಧಿಗಳನ್ನು, ತಪ್ಪಿಸ್ಥರನ್ನು, ವೈರಿ ಸೈನ್ಯದ ಸೈನಿಕರನ್ನು ತಳ್ಳಿ ಹಾಕುವ ಸ್ಥಳ ಇದ್ದೇ ಇರುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿರುವ ಕೆಲ ಬೆಟ್ಟಗಳಲ್ಲಿ ಟಿಪ್ಪು ಪಾಯಿಂಟ್ ಸೇರಿದಂತೆ ಹಲವು ಪಾಯಿಂಟ್ ಇದೆ. ಇದೇ ರೀತಿ ಇದೀಗ ಲೋಹಘಡದಲ್ಲಿ ಸಿಯಾ ಪಾಯಿಂಟ್ ಭಾರಿ ಜನಪ್ರಿಯವಾಗಿದೆ. ಕೇತನ್ ಅಗರ್ವಾಲ್ ತಳ್ಳಿ ಹಾಕಿದ ಜಾಗವನ್ನು ಇದೀಗ ಸಿಯಾ ಪಾಯಿಂಟ್ ಎಂದು ಪ್ರವಾಸಿಗರು ಕರೆಯುತ್ತಿದ್ದಾರೆ. ಈ ಸ್ಥಳ ವೀಕ್ಷಣೆಗೆ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದಾರೆ.&lt;/p&gt;&lt;h2&gt;ಸಿಯಾ ಪಾಯಿಂಗ್ ಈಗ ಭಾರಿ ಜನಪ್ರಿಯ ಸೆಲ್ಫಿ ಪಾಯಿಂಟ್&lt;/h2&gt;&lt;p&gt;ಕೇತನ್ ಅಗರ್ವಾಲ್ ತಳ್ಳಿ ಹಾಕಿದ ಸ್ಥಳವನ್ನು ಪ್ರವಾಸಿಗರು ಸಿಯಾ ಪಾಯಿಂಟ್ ಎಂದು ಕರೆಯುತ್ತಿದ್ದಾರೆ. ಲೋಹಘಡದ ಮೇಲೆ ಆಗಮಿಸುವ ಪ್ರವಾಸಿಗರು ನೇರವಾಗಿ ಸಿಯಾ ಪಾಯಿಂಟ್ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ಬಳಿಕ ಸಿಯಾ ಪಾಯಿಂಟ್ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕಾರಣ ಇದೀಗ ಸಿಯಾ ಪಾಯಿಂಟ್ ಬಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.&lt;/p&gt;&lt;p&gt;ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕುರಿತು ಲೋಹಘಡ ವಿಸಪುರ ಡೆಲವಪ್&zwnj;ಮೆಂಟ್ ಫೋರಮ್ ಅಧ್ಯಕ್ಷ ಸಚಿನ್ ಟಿಕಾವಾಡೆ ಪ್ರತಿಕ್ರಿಯಿಸಿದ್ದಾರೆ. ಕಳೆದ 5 ದಿನ ಭಾರಿ ಸಂಖ್ಯೆಯಲ್ಲಿ ಲೋಹಘಡಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕಿಕ್ಕಿರಿದು ಪ್ರವಾಸಿಗರು ಆಗಮಿಸುತ್ತಿರುವ ಕಾರಣ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಇತ್ತೀಚಿನ ಪ್ರಕರಣದಿಂದ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಇತ್ತ ಮುಂಗಾರು ಮಳೆ ವಿಳಂಬವಾಗಿರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಸಚಿನ್ ಟೆಕಾವಾಡೆ ಹೇಳಿದ್ದಾರೆ.&lt;/p&gt;&lt;p&gt;ಈ ವರ್ಷದ ಇಲ್ಲೀವರಿಗೆ ವಾರಾಂತ್ಯದ ಸರಾಸರಿ ಪ್ರವಾಸಿಗರ ಸಂಖ್ಯೆ 800 ರಿಂದ 1000. ಆದರೆ ಕಳೆದ ಐದು ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ 10,000 ದಾಟಿದೆ. ಲೋಹಘಡ ಅತ್ಯಂತ ಶ್ರೇಷ್ಠ ಇತಿಹಾಸವಿರುವ ಸ್ಥಳವಾಗಿದೆ. ನಮ್ಮ ಇತಿಹಾಸದ ಪುಟದಲ್ಲಿ ಪ್ರಮುಖ ಅಧ್ಯಾಯದ ಸ್ಥಳ ಲೋಹಘಡ. ಆದರೆ ಇದೀಗ ಬರುವ ಪ್ರವಾಸಿಗರು ಈ ಇತಿಹಾಸಕ್ಕಿಂತ ಸಿಯಾ ಪಾಯಿಂಟ್ ಎಲ್ಲಿ ಎಂದು ಹುಡುಕಿ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದು ಸಚಿನ್ ಟಿಕಾವಾಡೆ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>travel</category>
            <dc:creator>Chethan Kumar</dc:creator>
            <atom:link href="https://kannada.asianetnews.com/travel/tourist-footfall-doubles-at-lohagad-after-ketan-murder-case-siya-point-draws-crowds/articleshow-in16sng"/>
        </item>
        <item>
            <title><![CDATA[ರಾಜ್ಯದ ಜನತೆಗೆ ಗುಡ್​ನ್ಯೂಸ್​​: ರಾಮೇಶ್ವರಂ ಯಾತ್ರೆಗೆ ವಿಶೇಷ ರೈಲು- ಹುಬ್ಬಳ್ಳಿ ಸೇರಿ 20ಕ್ಕೂ ಅಧಿಕ ಕಡೆ ನಿಲುಗಡೆ]]></title>
            <link>https://kannada.asianetnews.com/gallery/travel/railway-to-run-more-special-trains-to-hubli-to-rameswaram-full-station-list-here-suc-ivl9w3v</link>
            <guid isPermaLink="true">https://kannada.asianetnews.com/gallery/travel/railway-to-run-more-special-trains-to-hubli-to-rameswaram-full-station-list-here-suc-ivl9w3v</guid>
            <pubDate>Thu, 25 Jun 2026 17:40:49 +0530</pubDate>
            <description><![CDATA[&lt;p&gt;ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ದಕ್ಷಿಣ ರೈಲ್ವೆಯು ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವಿನ ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ. ಈ ರೈಲು ಜುಲೈ 2026 ರಲ್ಲಿ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದ್ದು, ಕರ್ನಾಟಕದ ಯಾತ್ರಾರ್ಥಿಗಳಿಗೆ ರಾಮೇಶ್ವರಂ ದೇವಸ್ಥಾನಕ್ಕೆ &amp;nbsp;ಪ್ರಯಾಣ ಒದಗಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvzap0pqm4662gqcp03dswf3,imgname-rameshwaram-special-train-1782389080791.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ದಕ್ಷಿಣ ರೈಲ್ವೆಯು ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವಿನ ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ. ಈ ರೈಲು ಜುಲೈ 2026 ರಲ್ಲಿ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದ್ದು, ಕರ್ನಾಟಕದ ಯಾತ್ರಾರ್ಥಿಗಳಿಗೆ ರಾಮೇಶ್ವರಂ ದೇವಸ್ಥಾನಕ್ಕೆ &amp;nbsp;ಪ್ರಯಾಣ ಒದಗಿಸುತ್ತದೆ.&lt;/p&gt;&lt;img&gt;&lt;p&gt;ಪವಿತ್ರ ರಾಮೇಶ್ವರಂ ದೇವಸ್ಥಾನಕ್ಕೆ ತೀರ್ಥಯಾತ್ರೆ ಮಾಡಲು ಯೋಜಿಸುತ್ತಿದ್ದರೆ, ನಿಮ್ಮ ಪ್ರಯಾಣವು ಈಗ ಹೆಚ್ಚು ಅನುಕೂಲಕರವಾಗಿದೆ. ಪ್ರಯಾಣಿಕರ ಬಲವಾದ ಬೇಡಿಕೆಗೆ ಅನುಗುಣವಾಗಿ ದಕ್ಷಿಣ ರೈಲ್ವೆ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವಿನ ವಿಶೇಷ ರೈಲು ಸೇವೆಯನ್ನು ಹೆಚ್ಚುವರಿ ದಿನಗಳವರೆಗೆ ವಿಸ್ತರಿಸಿದೆ. ವಿಶೇಷ ರೈಲುಗಳು ಈ ಮಾರ್ಗದಲ್ಲಿ ದೀರ್ಘಾವಧಿಯವರೆಗೆ ಕಾರ್ಯನಿರ್ವಹಿಸಲಿವೆ. ಇದು ಭಕ್ತರಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ.&lt;/p&gt;&lt;img&gt;&lt;p&gt;ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವಿನ ವಿಶೇಷ ರೈಲು (ರೈಲು ಸಂಖ್ಯೆ 07355) ಜುಲೈ 5, 12, 19 ಮತ್ತು 26, 2026 ರಂದು (ಎಲ್ಲಾ ಭಾನುವಾರಗಳು) 4 ಸೇವೆಗಳಿಗೆ ಚಲಿಸುತ್ತದೆ. ರೈಲು ಹುಬ್ಬಳ್ಳಿಯಿಂದ ಬೆಳಿಗ್ಗೆ 06:50 ಕ್ಕೆ ಹೊರಟು ಮರುದಿನ ಬೆಳಿಗ್ಗೆ 05:20 ಕ್ಕೆ ರಾಮೇಶ್ವರಂ ದೇವಸ್ಥಾನವನ್ನು ತಲುಪುತ್ತದೆ.&lt;/p&gt;&lt;img&gt;&lt;p&gt;ಅದೇ ರೀತಿ, ರಾಮೇಶ್ವರಂನಿಂದ ಹುಬ್ಬಳ್ಳಿಗೆ ಹಿಂದಿರುಗುವ ರೈಲು (ರೈಲು ಸಂಖ್ಯೆ 07356) 6, 13, 20, ಮತ್ತು 27 ಜುಲೈ 2026 ರಂದು (ಎಲ್ಲಾ ಸೋಮವಾರಗಳು) ಚಲಿಸುತ್ತದೆ. ರೈಲು ರಾಮೇಶ್ವರಂನಿಂದ 20:00 ಗಂಟೆಗೆ ಹೊರಟು ಮರುದಿನ 19:40 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತದೆ.&lt;/p&gt;&lt;img&gt;&lt;p&gt;ಪ್ರಯಾಣದ ಸಮಯದಲ್ಲಿ, ರೈಲು ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಜಂ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರ್ ಜಂ, ಬೀರೂರು, ಅರಸೀಕೆರೆ ಜಂ, ತಿಪಟೂರು, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ ಜಂ, ನಾಮಕ್ಕಲ್, ತಿರುಚಿರಪ್ಪಳ್ಳಿ, ತಿರುಚಿರಪ್ಪಳ್ಳಿ, ಪುಕ್ಕಪ್ಪಳ್ಳಿ ಜಂ, ಜೆಎನ್, ಶಿವಗಂಗಾ, ಮನಮದುರೈ ಜಂ, ರಾಮನಾಥಪುರಂ ಮತ್ತು ರಾಮೇಶ್ವರಂಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.&lt;/p&gt;&lt;img&gt;&lt;p&gt;ಈ ವಿಶೇಷ ರೈಲು ಸೇವೆಯು ಪ್ರಯಾಣಿಕರಿಗೆ, ವಿಶೇಷವಾಗಿ ಕರ್ನಾಟಕದ ಪವಿತ್ರ ರಾಮೇಶ್ವರಂ ದೇವಸ್ಥಾನಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸುತ್ತದೆ. ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ನೇರ ಸಂಪರ್ಕವನ್ನು ನೀಡುವ ಮೂಲಕ, ಇದು ಬಹು ರೈಲು ಬದಲಾವಣೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ, ಪ್ರಯಾಣವನ್ನು ಸುಗಮ ಮತ್ತು ಹೆಚ್ಚು ಆರಾಮದಾಯಕವಾಗಿಸುತ್ತದೆ.&lt;/p&gt;&lt;img&gt;&lt;p&gt;ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ನೇರ ಸಂಪರ್ಕವನ್ನು ನೀಡುವ ಮೂಲಕ, ಇದು ಬಹು ರೈಲು ಬದಲಾವಣೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ, ಪ್ರಯಾಣವನ್ನು ಸುಗಮ ಮತ್ತು ಹೆಚ್ಚು ಆರಾಮದಾಯಕವಾಗಿಸುತ್ತದೆ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/travel/railway-to-run-more-special-trains-to-hubli-to-rameswaram-full-station-list-here-suc-ivl9w3v"/>
        </item>
        <item>
            <title><![CDATA[ಇತ್ತ ಪತಿಯನ್ನು ಕೊಂದು, ಅತ್ತ ಸಿಂಗಪುರಕ್ಕೆ ಹಾರಿದ Brahmagantu Serial ಸೌಂದರ್ಯ]]></title>
            <link>https://kannada.asianetnews.com/gallery/entertainment/brahmagantu-serial-soundarya-urf-preethi-shreenivas-tour-to-singapur-suc-o7lrgyd</link>
            <guid isPermaLink="true">https://kannada.asianetnews.com/gallery/entertainment/brahmagantu-serial-soundarya-urf-preethi-shreenivas-tour-to-singapur-suc-o7lrgyd</guid>
            <pubDate>Thu, 25 Jun 2026 12:40:33 +0530</pubDate>
            <description><![CDATA[&lt;p&gt;ಬ್ರಹ್ಮಗಂಟು ಸೀರಿಯಲ್&zwnj;ನ ಖಳನಾಯಕಿ 'ಸೌಂದರ್ಯ' ಪಾತ್ರಧಾರಿ ಪ್ರೀತಿ ಶ್ರೀನಿವಾಸ್, ತಮ್ಮ ನಿಜ ಜೀವನದಲ್ಲಿ ಪತಿ ಮತ್ತು ಮಗನೊಂದಿಗೆ ಸಿಂಗಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಯುನಿವರ್ಸಲ್ ಸ್ಟುಡಿಯೋಸ್, ಲಿಟಲ್ ಇಂಡಿಯಾಕ್ಕೆ &amp;nbsp;ಭೇಟಿ ನೀಡಿ, ತಮ್ಮ ಅದ್ಭುತ ಅನುಭವಗಳನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvysp23vk6yxwwhpepjvq3ja,imgname-brahmagantu-serial-soundarya-1782371256442.jpg" type="image/jpeg" height="390" width="690"/>
            <content:encoded><![CDATA[&lt;p&gt;ಬ್ರಹ್ಮಗಂಟು ಸೀರಿಯಲ್&zwnj;ನ ಖಳನಾಯಕಿ 'ಸೌಂದರ್ಯ' ಪಾತ್ರಧಾರಿ ಪ್ರೀತಿ ಶ್ರೀನಿವಾಸ್, ತಮ್ಮ ನಿಜ ಜೀವನದಲ್ಲಿ ಪತಿ ಮತ್ತು ಮಗನೊಂದಿಗೆ ಸಿಂಗಪುರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಯುನಿವರ್ಸಲ್ ಸ್ಟುಡಿಯೋಸ್, ಲಿಟಲ್ ಇಂಡಿಯಾಕ್ಕೆ &amp;nbsp;ಭೇಟಿ ನೀಡಿ, ತಮ್ಮ ಅದ್ಭುತ ಅನುಭವಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್​ (Brahmagantu Serial)ನಲ್ಲಿ, ಸದ್ಯ ಸೌಂದರ್ಯಳ ಮುಖವಾಡ ಬಯಲು ಆಗಬೇಕಿದೆ. ಇದಾಗಲೇ ತನ್ನ ರಹಸ್ಯ ಅರಿತಿರುವ ಪತಿಯ ಸಾವಿಗೆ ಒಂದರ್ಥದಲ್ಲಿ ಸೌಂದರ್ಯಳೇ ಕಾರಣ ಆಗಿದ್ದಾಳೆ. ಆತ ಕಾಲು ಜಾರಿ ಬಿದ್ದರೂ, ಅವನ ಸಾವಿನಿಂದ ಸೌಂದರ್ಯ ಖುಷಿಯಾಗಿದ್ದು, ಇದರ ಬಗ್ಗೆ ಚಿರುಗೆ ಎಲ್ಲಾ ತಿಳಿಯಬೇಕಿದೆಯಷ್ಟೇ.&lt;/p&gt;&lt;img&gt;&lt;p&gt;ಇದು ಬ್ರಹ್ಮಗಂಟು ಸೀರಿಯಲ್​ ಸ್ಟೋರಿ ಆದ್ರೆ, ನಿಜ ಜೀವನದಲ್ಲಿ ಸೌಂದರ್ಯ ಅರ್ಥಾತ್ ಪ್ರೀತಿ ಶ್ರೀನಿವಾಸ್ ಅವರು ರಿಯಲ್​ ಲೈಫ್​ ಗಂಡ ಮತ್ತು ಮಗನ ಜೊತೆ ಸಿಂಗಪುರದಲ್ಲಿ ಹಾರಿದ್ದು, ಅಲ್ಲಿಯ ಅನುಭವವನ್ನು ಈಗ ಶೇರ್​ ಮಾಡಿಕೊಳ್ಳುತ್ತಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಮಗನಿಗೆ ಬೇಸಿಗೆ ರಜೆ ಇದ್ದುದರಿಂದ ಗಂಡ ಮತ್ತು ಮಗನ ಜೊತೆ ಇದೇ ಮೊದಲ ಬಾರಿಗೆ ಸಿಂಗಪುರಕ್ಕೆ ಹೋಗಿರುವುದಾಗಿ ಹೇಳಿರುವ ನಟಿ, ವರ್ಷಕ್ಕೆ ಎರಡು ಬಾರಿಯಾದರೂ ಫ್ಯಾಮಿಲಿ ಟ್ರಿಪ್ ನಾವು ಹೋಗಿಯೇ ಹೋಗ್ತೀವಿ. ಈ ಬಾರಿ ಸಿಂಗಪುರ ಆರಿಸಿಕೊಂಡಿದ್ದು, ಇದು ಮಕ್ಕಳ ಕಲಿಕೆಗೂ ತುಂಬಾ ಚೆನ್ನಾಗಿರುತ್ತೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಸಿಂಗಪುರದಲ್ಲಿ ತಾವು ನೋಡಿದ್ದ ಸ್ಥಳಗಳ ಬಗ್ಗೆ ವಿವರಿಸಿದ ನಟಿ, ಅಲ್ಲಿ ಮರೀನಾ ಬೇ ಸ್ಯಾಂಡ್ಸ್&zwnj;ನ 57ನೇ ಫ್ಲೋರ್&zwnj;ಗೆ ಹೋಗಿದ್ವಿ. ಸಂಪೂರ್ಣ ನಗರದ ವ್ಯೂವ್ ಅದಲ್ಲಿ ಕಾಣಿಸುತ್ತದೆ. ಅದೊಂದು ಅದ್ಭುತ ಅನುಭವ. ಅಲ್ಲಿಯೇ ಇದ್ದ ಇಟಾಲಿಯನ್ ರೆಸ್ಟೋರೆಂಟ್&zwnj;ನಲ್ಲಿ ಡಿನ್ನರ್ ಮಾಡಿದ್ವಿ. ಅಲ್ಲಿಂದ ಇಡೀ ಊರು ಸುತ್ತಿದ್ವಿ ಎಂದಿದ್ದಾರೆ ಪ್ರೀತಿ.&lt;/p&gt;&lt;img&gt;&lt;p&gt;ಸಿಂಗಪುರ ತುಂಬಾ ಕ್ಲೀನ್ ಮತ್ತು ಗ್ರೀನ್ ಆಗಿರುವುದನ್ನು ನೋಡಿ ಖುಷಿ ಆಯ್ತು. ಅಲ್ಲಿ ಜುರಾಸಿಕ್ ವರ್ಲ್ಡ್, ಗ್ರೀನ್ ಹೌಸ್, ಯುನಿವರ್ಸಲ್ ಸ್ಟುಡಿಯೋಸ್, ಸೆಂಟೋಸಾ ಐಲ್ಯಾಂಡ್, ನೈಟ್ ಸಫಾರಿ ಮತ್ತು ಓಷನ್ ಏರಿಯಂ ಹೀಗೆ ಹಲವಾರು ಸ್ಥಳಗಳನ್ನು ನೋಡಿದ್ವಿ. ಆದರೆ ತುಂಬಾ ನಡೆಯಬೇಕು, ಅದಕ್ಕಾಗಿ ತುಂಬಾ ಶಕ್ತಿನೂ ಬೇಕು ಎಂದಿದ್ದಾರೆ ನಟಿ ಪ್ರೀತಿ.&lt;/p&gt;&lt;img&gt;&lt;p&gt;ಸಿಂಗಪುರದ ಸೆರಂಗೂನ್ ರಸ್ತೆಯಲ್ಲಿ ಹೋದರೆ ಭಾರತದಲ್ಲಿಯೇ ಇದ್ದ ಹಾಗೆ ಅನ್ನಿಸತ್ತೆ. ಅಲ್ಲಿ ಇಂಡಿಯನ್ಸ್​ ತುಂಬಾ ಮಂದಿ ಇದ್ದಾರೆ. ಸೋ ಅದನ್ನು ಲಿಟ್ಲ್​ ಇಂಡಿಯಾ ಅಂತಾನೇ ಕರೆಯೋದು ಎಂದಿರುವ ನಟಿ, ಚೈನಾಟೌನ್&zwnj;ನಿಂದ ಮತ್ತು ಕಂಪಾಂಗ್ ಗ್ಲಾಮ್&zwnj;ನ ಉತ್ತರಕ್ಕೆ ಅಡ್ಡಲಾಗಿರುವ ಈ ''ಲಿಟಲ್ ಇಂಡಿಯಾ''ದಲ್ಲಿ ಇರುವ ಬಹುತೇಕ ಭಾರತೀಯರು ಶಿಸ್ತನ್ನು ರೂಢಿಸಿಕೊಂಡಿದ್ದಾರೆ, ತುಂಬಾ ಶಿಸ್ತಿನ ಮಂದಿ ಎಂದು ಸಿಂಗಪುರದ ಅನುಭವ ಶೇರ್​ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ನಟಿಯ ಕುರಿತು ಹೇಳುವುದಾದರೆ, ಪ್ರೀತಿ ಶ್ರೀನಿವಾಸ್ ಅವರು, ಬ್ರಹ್ಮಗಂಟುವಿನಲ್ಲಿ ನೆಗೆಟಿವ್​ ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ''ವರಲಕ್ಷ್ಮಿ ಸ್ಟೋರ್ಸ್&zwnj;''ನಲ್ಲಿ ಕಾಣಿಸಿಕೊಂಡ ಪ್ರೀತಿ ತೆಲುಗಿನಲ್ಲಿಯೂ ಹಲವು ಸೀರಿಯಲ್​ ಮಾಡಿದ್ದಾರೆ. . ಆಂಧ್ರದಲ್ಲಿ ಇವರ ''ಪದಮತಿ ಸಂಧ್ಯಾ ರಾಗ'' ತುಂಬಾ ಫೇಮಸ್​ ಸೀರಿಯಲ್​. ಈ ಧಾರಾವಾಹಿ ನಂತರ ಕನ್ನಡಕ್ಕೆ ''ಸಂಧ್ಯಾರಾಗ'' ಎಂಬ ಟೈಟಲ್&zwnj;ನಲ್ಲಿ ಡಬ್ ಕೂಡಾ ಆಗಿತ್ತು&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/brahmagantu-serial-soundarya-urf-preethi-shreenivas-tour-to-singapur-suc-o7lrgyd"/>
        </item>
        <item>
            <title><![CDATA[Indian Railway: ಓಣಂ ವಿಶೇಷ, Bharat Gaurav ರೈಲಿನಲ್ಲಿ ಇಡೀ ದೇಶ ಸುತ್ತುವ ಸುವರ್ಣಾವಕಾಶ, ಶೇ.33 ರಿಯಾಯಿತಿ]]></title>
            <link>https://kannada.asianetnews.com/karnataka-districts/bharat-gaurav-scheme-special-onam-tourist-train-announced-with-33percent-subsidy-gdp/articleshow-owl99l5</link>
            <guid isPermaLink="true">https://kannada.asianetnews.com/karnataka-districts/bharat-gaurav-scheme-special-onam-tourist-train-announced-with-33percent-subsidy-gdp/articleshow-owl99l5</guid>
            <pubDate>Sat, 27 Jun 2026 11:20:42 +0530</pubDate>
            <description><![CDATA[ಮುಂಬರುವ ಓಣಂ ಹಬ್ಬದ ರಜೆಗಾಗಿ ಭಾರತೀಯ ರೈಲ್ವೆಯು 'ಭಾರತ್ ಗೌರವ್ ರೈಲು' ಯೋಜನೆಯಡಿ 11 ದಿನಗಳ ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಿಸಿದೆ. ಸೌತ್ ಸ್ಟಾರ್ ರೈಲ್ ಸಹಯೋಗದ ಈ ಪ್ರವಾಸವು ದೆಹಲಿ, ಆಗ್ರಾ, ಏಕತಾ ಪ್ರತಿಮೆ ಮತ್ತು ಗೋವಾದಂತಹ ಪ್ರಮುಖ ತಾಣಗಳನ್ನು ಒಳಗೊಂಡಿದ್ದು, ಶೇ. 33ರಷ್ಟು ಭಾರಿ ಸಬ್ಸಿಡಿ ಸೌಲಭ್ಯವನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01grjfhhrcknx1wkz8zgjfkaeb,imgname-train-1675657529099.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಕೊಚ್ಚಿ: &lt;/strong&gt;ಮುಂಬರುವ ಓಣಂ ಹಬ್ಬದ ಸಾಲು ಸಾಲು ರಜೆಗಳ ಸಂದರ್ಭದಲ್ಲಿ ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಭಾರತ್ ಗೌರವ್ ರೈಲು' ಯೋಜನೆಯಡಿ, ಖಾಸಗಿ ವಲಯದ ಪ್ರವರ್ತಕ ನಿರ್ವಾಹಕರಾದ ಸೌತ್ ಸ್ಟಾರ್ ರೈಲ್ ಹಾಗೂ ಪ್ರವಾಸೋದ್ಯಮ ಸಚಿವಾಲಯದ ಅಧಿಕೃತ ಪ್ರವಾಸ ಸಂಸ್ಥೆಯಾದ ಟೂರ್ ಟೈಮ್ಸ್ ಸಹಯೋಗದೊಂದಿಗೆ 11 ದಿನಗಳ ವಿಶೇಷ ಓಣಂ ರಜಾ ಪ್ರವಾಸ ಪ್ಯಾಕೇಜ್ ಅನ್ನು ಪ್ರಕಟಿಸಲಾಗಿದೆ. ಈ ವಿಶೇಷ ಪ್ರವಾಸಿ ರೈಲಿಗೆ ಭಾರತೀಯ ರೈಲ್ವೆಯಿಂದ ಶೇಕಡಾ 33 ರಷ್ಟು ಭಾರಿ ಸಹಾಯಧನ (Subsidy) ಲಭ್ಯವಿರುವುದು ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ.&lt;/p&gt;&lt;h2&gt;ಆಗಸ್ಟ್ 20 ರಿಂದ 11 ದಿನಗಳ ಮಹಾ ಪ್ರವಾಸ ಆರಂಭ&lt;/h2&gt;&lt;p&gt;ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಈ 11 ದಿನಗಳ ಸುದೀರ್ಘ ಪ್ಯಾಕೇಜ್ ಪ್ರವಾಸವು ಮುಂಬರುವ ಆಗಸ್ಟ್ 20 ರಂದು ಪ್ರಯಾಣ ಆರಂಭಿಸಲಿದೆ. ಈ ಅವಧಿಯಲ್ಲಿ ದೇಶದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಹೆಗ್ಗುರುತುಗಳಾದ ದೆಹಲಿ, ಆಗ್ರಾ, ಜೈಪುರ, ಅಮೃತಸರ, ಗುಜರಾತ್&zwnj;ನಲ್ಲಿರುವ ವಿಶ್ವದ ಅತಿ ಎತ್ತರದ 'ಏಕತಾ ಪ್ರತಿಮೆ' (Statue of Unity) ಮತ್ತು ಗೋವಾದ ಸುಂದರ ಕಡಲತೀರಗಳು ಸೇರಿದಂತೆ ಪ್ರಮುಖ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡುವ ಸಮಗ್ರ ಪ್ರವಾಸ ಯೋಜನೆಯನ್ನು ರೂಪಿಸಲಾಗಿದೆ.&lt;/p&gt;&lt;h2&gt;ಕೇರಳದ ಪ್ರಮುಖ ನಿಲ್ದಾಣಗಳಲ್ಲಿ ಬೋರ್ಡಿಂಗ್ ಸೌಲಭ್ಯ&lt;/h2&gt;&lt;p&gt;ಸ್ಥಳೀಯ ಪ್ರಯಾಣಿಕರಿಗೆ ಮತ್ತು ಕರಾವಳಿ ಭಾಗದ ಜನರಿಗೆ ಗರಿಷ್ಠ ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ರೈಲಿಗೆ ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ಸ್ಟಾಪೇಜ್ ನೀಡಲಾಗಿದೆ. ಪ್ರಯಾಣಿಕರು ತಿರುವನಂತಪುರಂ, ಕೊಲ್ಲಂ, ಕಾಯಂಕುಲಂ, ಕೊಟ್ಟಾಯಂ, ಎರ್ನಾಕುಲಂ ಟೌನ್, ತ್ರಿಶೂರ್, ಒಟ್ಟಪಾಲಂ ಮತ್ತು ಪಾಲಕ್ಕಾಡ್ ಜಂಕ್ಷನ್&zwnj; ಸೇರಿದಂತೆ ವಿವಿಧ ಪ್ರಮುಖ ನಿಲ್ದಾಣಗಳ ಮೂಲಕ ರೈಲನ್ನು ಏರಲು (Boarding) ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h2&gt;ಐಷಾರಾಮಿ ಸೌಕರ್ಯ ಮತ್ತು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ&lt;/h2&gt;&lt;p&gt;ಬಜೆಟ್ ಸ್ನೇಹಿ ದರದಲ್ಲಿ ಅತ್ಯುತ್ತಮ ಸೌಕರ್ಯ ಒದಗಿಸುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ. ರೈಲಿನಲ್ಲಿ ಪ್ರಯಾಣಿಕರ ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಈ ಕೆಳಗಿನ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.&lt;/p&gt;&lt;ul&gt; &lt;li&gt;ಪ್ರವಾಸದ ಅಪ್&zwnj;ಡೇಟ್&zwnj;ಗಳು ಮತ್ತು ಪ್ರಕಟಣೆಗಳಿಗಾಗಿ ರೈಲಿನೊಳಗೆ ಮೀಸಲಾದ ಸಾರ್ವಜನಿಕ ವಿಳಾಸ ವ್ಯವಸ್ಥೆ ಪಿಎ ಸಿಸ್ಟಮ್ (PA System) ಇರಲಿದೆ.&lt;/li&gt; &lt;li&gt;ಪ್ರತಿಯೊಂದು ಕೋಚ್&zwnj;ಗಳ ಭದ್ರತೆಗಾಗಿ ರೈಲಿನಲ್ಲಿ ವಿಶೇಷ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.&lt;/li&gt; &lt;li&gt;ಪ್ರತಿ ಗಮ್ಯಸ್ಥಾನದಲ್ಲಿ ಪ್ರಯಾಣಿಕರಿಗೆ ನೆರವಾಗಲು ಅನುಭವಿ ಟೂರ್ ಮ್ಯಾನೇಜರ್&zwnj;ಗಳು ಜೊತೆಯಲ್ಲಿರಲಿದ್ದಾರೆ.&lt;/li&gt; &lt;li&gt;ರೈಲಿನ ಒಳಗೂ ಮತ್ತು ಹೊರಗೂ ಪ್ರವಾಸಿಗರಿಗೆ ಗುಣಮಟ್ಟದ ಅನಿಯಮಿತ ಆಹಾರದ ವ್ಯವಸ್ಥೆ ಇರಲಿದೆ.&lt;/li&gt; &lt;li&gt;ಪ್ಯಾಕೇಜ್&zwnj;ನಲ್ಲಿ ಪ್ರಯಾಣ ವಿಮೆ, ಹೋಟೆಲ್ ವಸತಿ ಸೌಕರ್ಯ, ಸ್ಥಳ ದರ್ಶನ (Sightseeing) ಮತ್ತು ವರ್ಗಾವಣೆ (Transfer) ಸೌಲಭ್ಯಗಳು ಸೇರಿವೆ.&lt;/li&gt; &lt;li&gt;ಅರ್ಹ ಸರ್ಕಾರಿ ಮತ್ತು ಕಾರ್ಪೊರೇಟ್ ಉದ್ಯೋಗಿಗಳು ಈ ಪ್ರವಾಸಕ್ಕೆ ರಜೆ ಪ್ರಯಾಣ ರಿಯಾಯಿತಿ (LTC) ಹಾಗೂ ರಜೆ ಪ್ರಯಾಣ ಸೌಲಭ್ಯ (LFC) ಪ್ರಯೋಜನಗಳನ್ನು ಸಹ ಪಡೆಯಬಹುದು.&lt;/li&gt;&lt;/ul&gt;&lt;h2&gt;ವಿವಿಧ ದರ್ಜೆಯ ಶ್ರೇಣೀಕೃತ ದರಗಳ ವಿವರ&lt;/h2&gt;&lt;p&gt;ಪ್ರಯಾಣಿಕರ ಬಜೆಟ್&zwnj;ಗೆ ಅನುಗುಣವಾಗಿ ನಾಲ್ಕು ವಿಭಿನ್ನ ಸೌಕರ್ಯ ಶ್ರೇಣಿಗಳಲ್ಲಿ ಟಿಕೆಟ್ ದರಗಳನ್ನು ನಿಗದಿಪಡಿಸಲಾಗಿದೆ (ಎಲ್ಲಾ ಸೇವೆಗಳು ಒಳಗೊಂಡಂತೆ):&lt;/p&gt;&lt;ul&gt; &lt;li&gt;ಸ್ಲೀಪರ್ ಕ್ಲಾಸ್ (Sleeper Class): ₹28,750&lt;/li&gt; &lt;li&gt;ತೃತೀಯ ಎಸಿ (3AC): ₹39,950&lt;/li&gt; &lt;li&gt;ದ್ವಿತೀಯ ಎಸಿ (2AC): ₹49,950&lt;/li&gt; &lt;li&gt;ಪ್ರಥಮ ಎಸಿ (1AC): ₹58,950&lt;/li&gt;&lt;/ul&gt;&lt;p&gt;&quot;ಈ ಪ್ರವಾಸಿ ಉಪಕ್ರಮವು ಬಜೆಟ್ ಸ್ನೇಹಿ ಪ್ರಯಾಣ ಮತ್ತು ಅತ್ಯುತ್ತಮ ಸೌಕರ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಈ ಹಬ್ಬದ ಋತುವಿನಲ್ಲಿ ಕುಟುಂಬ ಸಮೇತರಾಗಿ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಯಾವುದೇ ಗೊಂದಲವಿಲ್ಲದೆ ಮನಬಂದಂತೆ ಅನುಭವಿಸಲು ಇದು ಉತ್ತಮ ಅವಕಾಶ&quot; ಎಂದು ಸೌತ್ ಸ್ಟಾರ್ ರೈಲ್&zwnj;ನ ಯೋಜನಾ ವ್ಯವಸ್ಥಾಪಕರಾದ ವಿಸ್ಟ್ರೇಶ್ ತಿಳಿಸಿದ್ದಾರೆ.&lt;/p&gt;&lt;h2&gt;ಯಶಸ್ವಿ ಇತಿಹಾಸ ಹೊಂದಿರುವ ಸಂಸ್ಥೆಗಳು&lt;/h2&gt;&lt;p&gt;ಸೌತ್ ಸ್ಟಾರ್ ರೈಲ್ ಮತ್ತು ಟೂರ್ ಟೈಮ್ಸ್ ಸಂಸ್ಥೆಗಳು ಈ ಹಿಂದೆ ಒಟ್ಟು 53 ಪ್ರವಾಸಿ ಪ್ರಯಾಣಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿವೆ. ಈ ಯೋಜನೆಗಳ ಅಡಿಯಲ್ಲಿ ಸುಮಾರು 3,02,850 ಕಿಲೋಮೀಟರ್&zwj;ಗಳಷ್ಟು ದೂರವನ್ನು ಕ್ರಮಿಸಲಾಗಿದ್ದು, ಒಟ್ಟು 25,070 ಕ್ಕೂ ಹೆಚ್ಚು ಯಾತ್ರಿಕರು ಹಾಗೂ ಪ್ರವಾಸಿಗರು ಸುರಕ್ಷಿತ ಮತ್ತು ಸುಖಮಯ ಪ್ರವಾಸದ ಅನುಭವ ಪಡೆದುಕೊಂಡಿದ್ದಾರೆ.&lt;/p&gt;&lt;h2&gt;ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:&lt;/h2&gt;&lt;p&gt;ಈ ವಿಶೇಷ ಓಣಂ ಪ್ರವಾಸಿ ರೈಲಿನ ಬುಕ್ಕಿಂಗ್&zwnj;ಗಳು ಈಗಾಗಲೇ ಅಧಿಕೃತವಾಗಿ ಆರಂಭಗೊಂಡಿವೆ. ಸೀಟುಗಳು ಸೀಮಿತವಾಗಿದ್ದು, ಆಸಕ್ತ ಪ್ರಯಾಣಿಕರು ತಡಮಾಡದೆ ತಮ್ಮ ಟಿಕೆಟ್&zwnj;ಗಳನ್ನು ಕಾಯ್ದಿರಿಸಬಹುದಾಗಿದೆ.&lt;/p&gt;&lt;p&gt;ಮೊಬೈಲ್ ಸಂಖ್ಯೆ: 7305858585&lt;/p&gt;&lt;p&gt;ಅಧಿಕೃತ ವೆಬ್&zwnj;ಸೈಟ್: www.tourtimes.in ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ಟಿಕೆಟ್ ಬುಕ್ ಮಾಡಬಹುದು.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bharat-gaurav-scheme-special-onam-tourist-train-announced-with-33percent-subsidy-gdp/articleshow-owl99l5"/>
        </item>
        <item>
            <title><![CDATA[ಶ್ರೀಮಂತ ಗಲ್ಫ್‌ ರಾಷ್ಟ್ರವಾಗಿದ್ದರೂ ಕುವೈತ್‌, ಬಹರೇನ್‌, ಕತಾರ್‌ನಲ್ಲೇಕೆ ರೈಲುಗಳಿಲ್ಲ?; ಇಲ್ಲಿದೆ ರೋಚಕ ಕಾರಣ!]]></title>
            <link>https://kannada.asianetnews.com/gallery/world-news/why-kuwait-qatar-bahrain-do-not-have-trains-gcc-railway-project-san-qvnkzx1</link>
            <guid isPermaLink="true">https://kannada.asianetnews.com/gallery/world-news/why-kuwait-qatar-bahrain-do-not-have-trains-gcc-railway-project-san-qvnkzx1</guid>
            <pubDate>Tue, 30 Jun 2026 16:15:50 +0530</pubDate>
            <description><![CDATA[&lt;p&gt;ಕುವೈತ್, ಕತಾರ್&zwnj;ನಂತಹ ಕೊಲ್ಲಿ ರಾಷ್ಟ್ರಗಳಲ್ಲಿ ಸಣ್ಣ ಭೌಗೋಳಿಕ ವಿಸ್ತೀರ್ಣ, ಅತ್ಯುತ್ತಮ ರಸ್ತೆ ಜಾಲ ಮತ್ತು ವೈಯಕ್ತಿಕ ಕಾರುಗಳ ವ್ಯಾಪಕ ಬಳಕೆಯಿಂದಾಗಿ ದೂರದ ರೈಲುಗಳಿಲ್ಲ. ನಗರ ಸಾರಿಗೆಗೆ ಮೆಟ್ರೋ ವ್ಯವಸ್ಥೆ ಇದ್ದು, ಸೌದಿ ಮತ್ತು ಯುಎಇಯಲ್ಲಿ ಈಗಾಗಲೇ ರೈಲು ಜಾಲವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwc1x3nr8ebydpp0b0ygpre0,imgname-gcc-railway--4--1782816083640.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕುವೈತ್, ಕತಾರ್&zwnj;ನಂತಹ ಕೊಲ್ಲಿ ರಾಷ್ಟ್ರಗಳಲ್ಲಿ ಸಣ್ಣ ಭೌಗೋಳಿಕ ವಿಸ್ತೀರ್ಣ, ಅತ್ಯುತ್ತಮ ರಸ್ತೆ ಜಾಲ ಮತ್ತು ವೈಯಕ್ತಿಕ ಕಾರುಗಳ ವ್ಯಾಪಕ ಬಳಕೆಯಿಂದಾಗಿ ದೂರದ ರೈಲುಗಳಿಲ್ಲ. ನಗರ ಸಾರಿಗೆಗೆ ಮೆಟ್ರೋ ವ್ಯವಸ್ಥೆ ಇದ್ದು, ಸೌದಿ ಮತ್ತು ಯುಎಇಯಲ್ಲಿ ಈಗಾಗಲೇ ರೈಲು ಜಾಲವಿದೆ.&lt;/p&gt;&lt;img&gt;&lt;p&gt;ಕೊಲ್ಲಿ ರಾಷ್ಟ್ರಗಳು (ಗಲ್ಫ್ ದೇಶಗಳು) ಅಂದ ತಕ್ಷಣ ಕಣ್ಣೆದುರು ಬರುವುದು ತೈಲ ಮತ್ತು ನೈಸರ್ಗಿಕ ಅನಿಲದ ಸಂಪತ್ತು, ಕಣ್ಣು ಕೋರೈಸುವ ಗಗನಚುಂಬಿ ಕಟ್ಟಡಗಳು, ಐಷಾರಾಮಿ ಕಾರುಗಳು ಹಾಗೂ ಅತ್ಯಾಧುನಿಕ ಮೂಲಸೌಕರ್ಯಗಳು. ಇಷ್ಟೆಲ್ಲಾ ಆರ್ಥಿಕವಾಗಿ ಸದೃಢವಾಗಿದ್ದರೂ ಮತ್ತು ಹಾರುವ ಟ್ಯಾಕ್ಸಿ (Flying Taxi) ತಂತ್ರಜ್ಞಾನವನ್ನೇ ದೇಶಕ್ಕೆ ತರುತ್ತಿದ್ದರೂ ಕುವೈತ್, ಕತಾರ್, ಬಹರೇನ್&zwnj;, ಯೆಮೆನ್&zwnj; ಮತ್ತು ಓಮನ್&zwnj;ನಂತಹ ದೇಶಗಳಲ್ಲಿ ದೂರದ ಪ್ರಯಾಣದ ರೈಲುಗಳೇ (Long Distance Trains) ಇಲ್ಲ! ಇಷ್ಟು ಶ್ರೀಮಂತ ದೇಶಗಳಲ್ಲಿ ರೈಲು ವ್ಯವಸ್ಥೆ ಇಲ್ಲದಿರಲು ಕಾರಣವೇನು?&lt;/p&gt;&lt;img&gt;&lt;p&gt;ಕುವೈತ್, ಕತಾರ್ ಮತ್ತು ಬಹರೇನ್&zwnj; ದೇಶಗಳಲ್ಲಿ ಯಾವುದೇ ರಾಷ್ಟ್ರೀಯ ರೈಲ್ವೆ ನೆಟ್&zwnj;ವರ್ಕ್ ಆಗಲಿ ಅಥವಾ ದೂರದ ಊರುಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಾಗಲಿ ಇಲ್ಲದಿರಲು ಮುಖ್ಯ ಕಾರಣ ಆ ದೇಶಗಳ ಅತ್ಯಂತ ಸಣ್ಣ ಭೌಗೋಳಿಕ ವಿಸ್ತೀರ್ಣ. ಈ ದೇಶಗಳ ಒಟ್ಟು ವಿಸ್ತೀರ್ಣ ಹಾಗೂ ಇಲ್ಲಿನ ಜನಸಂಖ್ಯೆ ಅತ್ಯಂತ ಸೀಮಿತವಾಗಿದೆ. ಬಹುತೇಕ ಜನರ ಜೀವನ ಮತ್ತು ಉದ್ಯೋಗ ತೈಲ ಕ್ಷೇತ್ರಗಳ ಸುತ್ತಮುತ್ತಲೇ ಇರುವುದರಿಂದ, ಇವರು ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸುವ ದೂರ ತುಂಬಾ ಕಡಿಮೆಯಿರುತ್ತದೆ. ಹಾಗಾಗಿ ದೀರ್ಘಾವಧಿಯ ರೈಲು ಪ್ರಯಾಣದ ಅಗತ್ಯ ಇಲ್ಲಿ ಕಂಡುಬಂದಿಲ್ಲ.&lt;/p&gt;&lt;img&gt;&lt;p&gt;ಈ ಕೊಲ್ಲಿ ರಾಷ್ಟ್ರಗಳು ತೈಲ ಸಂಪತ್ತಿನಿಂದಾಗಿ ಅತಿ ಹೆಚ್ಚು ಶ್ರೀಮಂತವಾಗಿವೆ. ರೈಲುಗಳ ಕೊರತೆಯನ್ನು ನೀಗಿಸಲು ಈ ದೇಶಗಳು ವಿಶ್ವದರ್ಜೆಯ, ಅತ್ಯಾಧುನಿಕ ಎಕ್ಸ್&zwnj;ಪ್ರೆಸ್&zwnj;ವೇಗಳು ಮತ್ತು ರಸ್ತೆಗಳ ಜಾಲವನ್ನು ನಿರ್ಮಿಸಿವೆ. ಇಲ್ಲಿನ ಇಂಧನ (ಪೆಟ್ರೋಲ್/ಡೀಸೆಲ್) ದರವೂ ತೀರಾ ಕಡಿಮೆ ಇರುವುದರಿಂದ, ಬಹುತೇಕ ಜನರು ವೈಯಕ್ತಿಕ ಐಷಾರಾಮಿ ಕಾರುಗಳು ಅಥವಾ ಅತ್ಯಾಧುನಿಕ ಸಾರ್ವಜನಿಕ ಬಸ್&zwnj;ಗಳ ಮೂಲಕವೇ ಪ್ರಯಾಣಿಸಲು ಇಷ್ಟಪಡುತ್ತಾರೆ. ರಸ್ತೆ ಸಾರಿಗೆಯೇ ಇಲ್ಲಿನ ಮುಖ್ಯ ಸಾರಿಗೆ ಮೂಲವಾಗಿರುವುದರಿಂದ ರೈಲ್ವೆ ಜಾಲದ ಅಗತ್ಯ ಹೆಚ್ಚಾಗಿ ಕಾಡಿಲ್ಲ.&lt;/p&gt;&lt;img&gt;&lt;p&gt;ಈ ದೇಶಗಳಲ್ಲಿ ದೇಶದಾದ್ಯಂತ ಓಡುವ ದೂರದ ಬಸ್ ಅಥವಾ ರೈಲುಗಳಿಲ್ಲದಿದ್ದರೂ, ನಗರದ ಒಳಗಿನ ಸಾರಿಗೆಯನ್ನು ಸುಲಭ ಹಾಗೂ ಅತ್ಯಾಧುನಿಕವಾಗಿಸಲು ಭಾರಿ ಹೂಡಿಕೆಯೊಂದಿಗೆ ಶ್ರೇಷ್ಠ ಮೆಟ್ರೋ ಜಾಲವನ್ನು (Metro Network) ಅಭಿವೃದ್ಧಿಪಡಿಸಲಾಗಿದೆ. ಉದಾಹರಣೆಗೆ, ಕತಾರ್ ದೇಶದಲ್ಲಿ ಜಾಗತಿಕ ಮಟ್ಟದ ಅತ್ಯಾಧುನಿಕ 'ದೋಹಾ ಮೆಟ್ರೋ' (Doha Metro) ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ನಗರದ ಜನರಿಗೆ ಸುಲಭ ಪ್ರಯಾಣದ ಸೌಕರ್ಯ ಒದಗಿಸಿದೆ.&lt;/p&gt;&lt;img&gt;&lt;p&gt;ಕೊಲ್ಲಿಯ ಇತರೆ ಪ್ರಮುಖ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಈಗಾಗಲೇ ಬಲಿಷ್ಠ ರೈಲ್ವೆ ನೆಟ್&zwnj;ವರ್ಕ್ ಅಸ್ತಿತ್ವದಲ್ಲಿದೆ. ಅಲ್ಲಿನ ಜನರು ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಂಚರಿಸಲು ಹೈ-ಸ್ಪೀಡ್ ಬುಲೆಟ್ ರೈಲುಗಳು ಮತ್ತು ಇಂಟರ್&zwnj;ಸಿಟಿ (ನಗರಗಳ ನಡುವಿನ) ರೈಲುಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇದನ್ನು ಮಾದರಿಯಾಗಿಟ್ಟುಕೊಂಡು ಉಳಿದ ಗಲ್ಫ್ ರಾಷ್ಟ್ರಗಳೂ ಈಗ ರೈಲ್ವೆ ಕಡೆ ಮುಖ ಮಾಡಿವೆ.&lt;/p&gt;&lt;img&gt;&lt;p&gt;ರೈಲು ಇಲ್ಲದ ಗಲ್ಫ್ ದೇಶಗಳ ಕೊರತೆಯನ್ನು ನೀಗಿಸಲು ಮತ್ತು ಎಲ್ಲಾ ಗಲ್ಫ್ ರಾಷ್ಟ್ರಗಳನ್ನು ಪರಸ್ಪರ ರೈಲ್ವೆ ಮೂಲಕ ಜೋಡಿಸಲು ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಅದೇ 'ಜಿಸಿಸಿ' (Gulf Cooperation Council - ಗಲ್ಫ್ ಸಹಕಾರ ಮಂಡಳಿ) ರೈಲ್ವೆ ಪ್ರಾಜೆಕ್ಟ್. ಈ ಮಹತ್ವಾಕಾಂಕ್ಷಿ ಯೋಜನೆಯಡಿ ಕುವೈತ್, ಕತಾರ್, ಬಹ್ರೇನ್, ಸೌದಿ ಅರೇಬಿಯಾ, ಯುಎಇ ಮತ್ತು ಓಮನ್ ದೇಶಗಳನ್ನು ಒಟ್ಟಿಗೆ ಬೆಸೆಯುವ ಬರೋಬ್ಬರಿ 2,117 ಕಿಲೋಮೀಟರ್ ಉದ್ದದ ಬೃಹತ್ ರೈಲ್ವೆ ಲೈನ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2030ರ ವೇಳೆಗೆ ಈ ಎಲ್ಲಾ ದೇಶಗಳ ನಡುವೆ ರೈಲುಗಳು ಸಂಚರಿಸಲಿವೆ.&lt;/p&gt;]]></content:encoded>
            <category>travel</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/world-news/why-kuwait-qatar-bahrain-do-not-have-trains-gcc-railway-project-san-qvnkzx1"/>
        </item>
        <item>
            <title><![CDATA[ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಕೇಂದ್ರದ ತೀವ್ರ ಎಚ್ಚರಿಕೆ, ನೇಪಾಳದಲ್ಲಿ 52 ಭಾರತೀಯರು ತ್ರಿಶಂಕು ಸ್ಥಿತಿ!]]></title>
            <link>https://kannada.asianetnews.com/india-news/kailash-mansarovar-yatra-advisory-52-indians-stranded-in-nepal-mea-issues-strict-warning-gdp/articleshow-ssifufy</link>
            <guid isPermaLink="true">https://kannada.asianetnews.com/india-news/kailash-mansarovar-yatra-advisory-52-indians-stranded-in-nepal-mea-issues-strict-warning-gdp/articleshow-ssifufy</guid>
            <pubDate>Mon, 29 Jun 2026 20:40:16 +0530</pubDate>
            <description><![CDATA[ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯವು ತುರ್ತು ಎಚ್ಚರಿಕೆ ನೀಡಿದೆ. ಅನಧಿಕೃತ ಪ್ರವಾಸ ಆಯೋಜಕರ ವಂಚನೆಗೆ ಒಳಗಾಗಿ, ಸೂಕ್ತ ದಾಖಲೆಗಳಿಲ್ಲದೆ ನೇಪಾಳದಲ್ಲಿ ಸಿಲುಕಿರುವ 52 ಯಾತ್ರಿಕರ ಸಂಕಷ್ಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾತ್ರಿಕರು ಅಧಿಕೃತ ಮಾರ್ಗಗಳನ್ನೇ ಬಳಸುವಂತೆ ಮತ್ತು ಪ್ರಯಾಣದ ಮೊದಲು ಎಲ್ಲಾ ದಾಖಲೆಗಳನ್ನು ಖಚಿತಪಡಿಸಿಕೊಳ್ಳುವಂತೆ ಸಚಿವಾಲಯವು ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jjnf9w338vnx15gdex9kt8jm,imgname-Kailash-Mansarovar-Yatra-1738034966627.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೊಸದಿಲ್ಲಿ: ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಭಾರತೀಯ ನಾಗರಿಕರಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ತುರ್ತು ಹಾಗೂ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದೆ. ಖಾಸಗಿ ಮತ್ತು ಅನಧಿಕೃತ ಪ್ರವಾಸ ಆಯೋಜಕರ (Tour Operators) ಆಮಿಷಗಳಿಗೆ ಒಳಗಾಗಿ ಸೂಕ್ತ ದಾಖಲೆಗಳಿಲ್ಲದೆ ಪ್ರಯಾಣ ಬೆಳೆಸದಂತೆ ಯಾತ್ರಿಕರಿಗೆ ಸೂಚಿಸಲಾಗಿದೆ. ಪ್ರಸ್ತುತ ನಕಲಿ ಆಪರೇಟರ್&zwnj;ಗಳ ವಂಚನೆಗೆ ಸಿಲುಕಿ ನೇಪಾಳದಲ್ಲಿ ಕಷ್ಟಪಡುತ್ತಿರುವ ಹಲವು ಭಾರತೀಯರಿಂದ ನೆರವು ಕೋರಿ ಸರಣಿ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಠಿಣ ಹೆಜ್ಜೆ ಇಟ್ಟಿದೆ.&lt;/p&gt;&lt;h2&gt;ಕಠ್ಮಂಡುವಿನಲ್ಲಿ ಸಿಲುಕಿದ 52 ಭಾರತೀಯರು&lt;/h2&gt;&lt;p&gt;ಚೀನಾಕ್ಕೆ ಪ್ರವೇಶಿಸಲು ಅಗತ್ಯವಿರುವ ಅಧಿಕೃತ 'ಪ್ರವೇಶ ಪರವಾನಗಿ' (Entry Permit) ಮತ್ತು 'ಚೀನಾ ವೀಸಾ' (China Visa) ಇಲ್ಲದ ಕಾರಣ, ಕೈಲಾಸ ಮಾನಸ ಸರೋವರಕ್ಕೆ ಖಾಸಗಿ ಆಪರೇಟರ್&zwnj;ಗಳ ಮೂಲಕ ತೆರಳಿದ್ದ ಸುಮಾರು 52 ಭಾರತೀಯ ಯಾತ್ರಿಕರು ಪ್ರಸ್ತುತ ನೇಪಾಳದ ಕಠ್ಮಂಡುವಿನಲ್ಲಿ ಸಿಲುಕಿಕೊಂಡಿದ್ದಾರೆ. ತಾವು ತಲುಪಬೇಕಾದ ಸ್ಥಳಕ್ಕೂ ಹೋಗಲಾಗದೆ, ಮರಳಿ ಬರಲಾಗದ ತ್ರಿಶಂಕು ಸ್ಥಿತಿಯಲ್ಲಿರುವ ಈ ಪ್ರವಾಸಿಗರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ತುರ್ತು ಸಹಾಯವನ್ನು ಕೋರುತ್ತಿದ್ದಾರೆ.&lt;/p&gt;&lt;h2&gt;ರಾಜಕೀಯ ವಲಯದಲ್ಲಿ ಧ್ವನಿ:&lt;/h2&gt;&lt;p&gt;ಈ ಗಂಭೀರ ವಿಷಯದ ಕುರಿತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಅವರು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. ಈ ಕುರಿತು 'X' (ಟ್ವಿಟರ್) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅವರು, ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಯಾತ್ರಿಕರಿಗೆ ತಕ್ಷಣದ ಬೆಂಬಲ ನೀಡಲು ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಂಘಟಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h2&gt;ವಿದೇಶಾಂಗ ಸಚಿವಾಲಯದ (MEA) ಪ್ರಮುಖ ಮಾರ್ಗಸೂಚಿಗಳು&lt;/h2&gt;&lt;p&gt;ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಯಾತ್ರಿಕರು ಪ್ರಯಾಣ ಆರಂಭಿಸುವ ಮುನ್ನ ಪಾಲಿಸಲೇಬೇಕಾದ ನಿಯಮಗಳನ್ನು ಸ್ಪಷ್ಟಪಡಿಸಿದೆ:&lt;/p&gt;&lt;p&gt;ದಾಖಲೆಗಳಿಲ್ಲದೆ ಪ್ರಯಾಣಿಸಬೇಡಿ: ಸಂಪೂರ್ಣ ತೀರ್ಥಯಾತ್ರೆಗೆ ಅಗತ್ಯವಿರುವ ಎಲ್ಲಾ ಕಾನೂನುಬದ್ಧ ಪ್ರಯಾಣ ದಾಖಲೆಗಳು ಮತ್ತು ವೀಸಾಗಳು ಕೈಸೇರುವವರೆಗೆ ಭಾರತದಿಂದ ಯಾರೂ ಪ್ರಯಾಣವನ್ನು ಪ್ರಾರಂಭಿಸಬಾರದು ಎಂದು ಸಚಿವಾಲಯ ನಾಗರಿಕರಿಗೆ ಕಟ್ಟುನಿಟ್ಟಿನ ಸಲಹೆ ನೀಡಿದೆ.&lt;/p&gt;&lt;p&gt;ನಂತರ ಸಿಗುವ ನಿರೀಕ್ಷೆ ಬೇಡ: ದೃಢಪಡಿಸಿದ ದಾಖಲೆಗಳಿಲ್ಲದೆ ಕೇವಲ &quot;ಮುಂದೆ ವೀಸಾ ಸಿಗಬಹುದು&quot; ಎಂಬ ಆಪರೇಟರ್&zwnj;ಗಳ ಆಶ್ವಾಸನೆ ನಂಬಿ ಪ್ರಯಾಣ ಬೆಳೆಸಿದರೆ, ವಿದೇಶಿ ನೆಲದಲ್ಲಿ ಸಿಕ್ಕಿಹಾಕಿಕೊಳ್ಳುವ ಮತ್ತು ಕಾನೂನು ಕ್ರಮ ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;p&gt;ಅಧಿಕೃತತೆ ಪರಿಶೀಲಿಸಿ: ಖಾಸಗಿ ಪ್ರವಾಸ ಆಯೋಜಕರು ಅಧಿಕೃತವಾಗಿ ಸರ್ಕಾರದಿಂದ ನೋಂದಣಿ ಮತ್ತು ಅನುಮೋದನೆ ಪಡೆದಿದ್ದಾರೆಯೇ ಎಂಬುದನ್ನು ಯಾತ್ರಿಕರು ಸ್ವಯಂ ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.&lt;/p&gt;&lt;h2&gt;2026ರ ಯಾತ್ರೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಗಡಿ ಮಾರ್ಗಗಳು&lt;/h2&gt;&lt;p&gt;ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ರಾಜತಾಂತ್ರಿಕ ಸಂಬಂಧಗಳು ಹಾಗೂ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ರಿಂದ ಸ್ಥಗಿತಗೊಂಡಿದ್ದ ಈ ಪವಿತ್ರ ಯಾತ್ರೆಯನ್ನು ಕಳೆದ ವರ್ಷವಷ್ಟೇ ಪುನರಾರಂಭಿಸಲಾಗಿತ್ತು. ಪ್ರಸ್ತುತ ವರ್ಷ ಜೂನ್&zwnj;ನಿಂದ ಆಗಸ್ಟ್ ಅವಧಿಯಲ್ಲಿ ಉತ್ತರಾಖಂಡದ ಲಿಪುಲೇಖ್ ಪಾಸ್ (Lipulekh Pass) ಹಾಗೂ ಸಿಕ್ಕಿಂನ ನಾಥು ಲಾ ಪಾಸ್ (Nathu La Pass) ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಧಿಕೃತವಾಗಿ ನಡೆಸುತ್ತಿದೆ.&lt;/p&gt;&lt;h2&gt;ಸಿಕ್ಕಿಂನ ನಾಥು ಲಾ ಪಾಸ್ ಮೂಲಕ ಮೊದಲ ತಂಡದ ಯಶಸ್ವಿ ಪ್ರಯಾಣ:&lt;/h2&gt;&lt;p&gt;ಕೇಂದ್ರದ ಎಚ್ಚರಿಕೆಯ ನಡುವೆಯೇ, ಸರ್ಕಾರದ ಅಧಿಕೃತ ಮಾರ್ಗಸೂಚಿಗಳ ಅಡಿಯಲ್ಲಿ ಜೂನ್ 20 ರಂದು ಕೈಲಾಸ ಮಾನಸ ಸರೋವರ ಯಾತ್ರೆ 2026 ರ ಯಾತ್ರಿಕರ ಮೊದಲ ಯಶಸ್ವಿ ತಂಡವು ನಾಥು ಲಾ ಪಾಸ್&zwnj;ನಲ್ಲಿರುವ ಭಾರತ-ಚೀನಾ ಗಡಿಯ ಮೂಲಕ ಚೀನಾವನ್ನು ಪ್ರವೇಶಿಸಿದೆ. ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರು, ಪ್ರವಾಸೋದ್ಯಮ ಸಚಿವ ತ್ಸೆರಿಂಗ್ ಥೆಂಡುಪ್ ಭೂಟಿಯಾ ಮತ್ತು ಸಿಕ್ಕಿಂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (STDC) ಅಧಿಕಾರಿಗಳ ಸಮ್ಮುಖದಲ್ಲಿ ಈ ಮೊದಲ ಬ್ಯಾಚ್&zwnj;ಗೆ ಹಸಿರು ನಿಶಾನೆ ತೋರಿ ಶುಭ ಹಾರೈಸಿದ್ದರು.&lt;/p&gt;&lt;p&gt;ಅಧಿಕೃತ ಗಡಿ ಮಾರ್ಗಗಳು ನಾಥು ಲಾ ಪಾಸ್ (ಸಿಕ್ಕಿಂ) ಮತ್ತು ಲಿಪುಲೇಖ್ ಪಾಸ್ (ಉತ್ತರಾಖಂಡ)&lt;/p&gt;&lt;p&gt;2026ರ ನಿರೀಕ್ಷಿತ ತಂಡಗಳು ಈ ವರ್ಷ ಕನಿಷ್ಠ 10 ತಂಡಗಳು (ಬ್ಯಾಚ್&zwnj;ಗಳು) ಪ್ರಯಾಣಿಸಲಿವೆ&lt;/p&gt;&lt;p&gt;ಪ್ರವಾಸೋದ್ಯಮದ ಮೌಲ್ಯ 5 ವರ್ಷಗಳ ಸುದೀರ್ಘ ವಿರಾಮದ ನಂತರ ಯಾತ್ರೆ ಆರಂಭವಾಗಿರುವುದು ಸಿಕ್ಕಿಂ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದೆ&lt;/p&gt;&lt;p&gt;ವಿದೇಶಾಂಗ ಸಚಿವಾಲಯವು ಪ್ರಸ್ತುತ ನೇಪಾಳದಲ್ಲಿ ಸಿಲುಕಿರುವ 52 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನಧಿಕೃತ ದಲ್ಲಾಳಿಗಳ ಮಾತು ಕೇಳಿ ಮೋಸ ಹೋಗಬಾರದು ಎಂದು ಮತ್ತೊಮ್ಮೆ ವಿನಂತಿಸಲಾಗಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/kailash-mansarovar-yatra-advisory-52-indians-stranded-in-nepal-mea-issues-strict-warning-gdp/articleshow-ssifufy"/>
        </item>
        <item>
            <title><![CDATA[ಹೋಟೆಲ್ ರೂಂಗೆ ಹೋದ ತಕ್ಷಣ ಲೈಟ್ ಆನ್ ಮಾಡ್ಬೇಡಿ! ಇಲ್ಲಿದೆ 99% ಜನರಿಗೆ ತಿಳಿಯದ 'ಸೀಕ್ರೆಟ್' ಟ್ರಿಕ್]]></title>
            <link>https://kannada.asianetnews.com/gallery/travel/99-percent-people-dont-know-this-hotel-trick-why-to-keep-lights-off-while-checking-your-room-wdpq6qh</link>
            <guid isPermaLink="true">https://kannada.asianetnews.com/gallery/travel/99-percent-people-dont-know-this-hotel-trick-why-to-keep-lights-off-while-checking-your-room-wdpq6qh</guid>
            <pubDate>Sun, 28 Jun 2026 10:40:48 +0530</pubDate>
            <description><![CDATA[&lt;p&gt;&lt;strong&gt;Hotel Safety Tips: &lt;/strong&gt;ಪ್ರವಾಸಕ್ಕೆ ಹೋದಾಗ ಹೋಟೆಲ್&zwnj;ಗಳಲ್ಲಿ ತಂಗುವುದು ಸಾಮಾನ್ಯ. ಆದರೆ ರೂಂಗೆ ಕಾಲಿಟ್ಟ ಕೂಡಲೇ ಲೈಟ್ ಆನ್ ಮಾಡುವ ನಿಮ್ಮ ಅಭ್ಯಾಸ ಸುರಕ್ಷತೆಗೆ ಅಪಾಯ ತಂದೊಡ್ಡಬಹುದು. ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಲು ಈ ಸಣ್ಣ ಟ್ರಿಕ್ ಹೇಗೆ ಸಹಾಯ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9c29bkkw58cwpbj7h4k74v,imgname-thumbnail---2026-04-28t114708.516-1777357366643.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Hotel Safety Tips: &lt;/strong&gt;ಪ್ರವಾಸಕ್ಕೆ ಹೋದಾಗ ಹೋಟೆಲ್&zwnj;ಗಳಲ್ಲಿ ತಂಗುವುದು ಸಾಮಾನ್ಯ. ಆದರೆ ರೂಂಗೆ ಕಾಲಿಟ್ಟ ಕೂಡಲೇ ಲೈಟ್ ಆನ್ ಮಾಡುವ ನಿಮ್ಮ ಅಭ್ಯಾಸ ಸುರಕ್ಷತೆಗೆ ಅಪಾಯ ತಂದೊಡ್ಡಬಹುದು. ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಲು ಈ ಸಣ್ಣ ಟ್ರಿಕ್ ಹೇಗೆ ಸಹಾಯ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ತಜ್ಞರು ಹೇಳಿದ ಟ್ರಿಕ್&lt;/strong&gt;ಹೋಟೆಲ್&zwnj;ಗೆ ಚೆಕ್-ಇನ್ ಮಾಡುವಾಗ ನಾವು ಅನೇಕ ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಸಾಮಾನ್ಯವಾಗಿ ಜನರು ಹೋಟೆಲ್ ರೂಂಗೆ ಪ್ರವೇಶಿಸುತ್ತಿದ್ದಂತೆ ಮೊದಲು ಮಾಡುವುದು ಲೈಟ್ ಸ್ವಿಚ್ ಆನ್ ಮಾಡುವುದು. ಆದರೆ ಸುರಕ್ಷತೆಯ ದೃಷ್ಟಿಯಿಂದ ಇದು ಸರಿಯಾದ ಕ್ರಮವಲ್ಲ. ರೂಂಗೆ ಹೋದ ತಕ್ಷಣ ಲೈಟ್ ಹಾಕುವ ಬದಲು ಮೊದಲು ಕೆಲವು ಮುಖ್ಯ ವಿಷಯಗಳನ್ನು ಪರಿಶೀಲಿಸಬೇಕು ಎಂದು ತಜ್ಞರು ಹೇಳುತ್ತಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಹಿಡನ್ ಕ್ಯಾಮೆರಾಗಳ ಪತ್ತೆ&lt;/strong&gt;ರೂಂನಲ್ಲಿ ಕತ್ತಲೆ ಇದ್ದರೆ, ಅಲ್ಲಿ ಅಡಗಿಸಿಟ್ಟಿರುವ ಹಿಡನ್ ಕ್ಯಾಮೆರಾಗಳ ಸಣ್ಣ ಎಲ್&zwnj;ಇಡಿ (LED) ಲೈಟ್ ಅಥವಾ ಅವುಗಳ ಮಿನುಗುವಿಕೆ (Blinking) ಸುಲಭವಾಗಿ ಕಣ್ಣಿಗೆ ಬೀಳುತ್ತದೆ. ಲೈಟ್ ಆನ್ ಮಾಡಿದರೆ ಈ ಸಣ್ಣ ಬೆಳಕು ನಮಗೆ ಕಾಣಿಸುವುದಿಲ್ಲ. ಹಾಗಾಗಿ ಮೊದಲು ಕತ್ತಲೆಯಲ್ಲಿಯೇ ರೂಂ ಅನ್ನು ಒಮ್ಮೆ ಸ್ಕ್ಯಾನ್ ಮಾಡುವುದು ಉತ್ತಮ.&lt;/p&gt;&lt;img&gt;&lt;p&gt;&lt;strong&gt;ತಿಗಣೆಗಳ (Bedbugs) ತಪಾಸಣೆ&lt;/strong&gt;ತಿಗಣೆಗಳ (Bedbugs) ತಪಾಸಣೆ ಹೋಟೆಲ್ ಬೆಡ್&zwnj;ಗಳ ಮೇಲೆ ಹೆಚ್ಚಾಗಿ ಬಿಳಿ ಚಾದರ ಇರುತ್ತದೆ. ಕತ್ತಲಿನಲ್ಲಿ ತಿಗಣೆಗಳು ಬಿಳಿ ಚಾದರದ ಮೇಲೆ ಓಡಾಡುವುದು ಅಥವಾ ಅಡಗಿಕೊಂಡಿರುವುದು ಸುಲಭವಾಗಿ ಗೋಚರಿಸುತ್ತದೆ. ರೂಂಗೆ ಹೋದ ತಕ್ಷಣ ಹಾಸಿಗೆ, ದಿಂಬು, ಪರದೆ ಮತ್ತು ಪೀಠೋಪಕರಣಗಳ ಮೂಲೆಗಳನ್ನು ಎಚ್ಚರಿಕೆಯಿಂದ ಗಮನಿಸಿ. ಏನಾದರೂ ಅನುಮಾನ ಬಂದರೆ ತಕ್ಷಣ ರೂಂ ಬದಲಿಸಲು ತಿಳಿಸಿ.&lt;/p&gt;&lt;img&gt;&lt;p&gt;&lt;strong&gt;ಕಣ್ತಪ್ಪಿ ಹೋಗಲ್ಲ&lt;/strong&gt;ನೀವು ಕತ್ತಲೆ ಇರುವ ಕೋಣೆಯಲ್ಲಿ ಸ್ವಲ್ಪ ಸಮಯ ಕಳೆದರೆ, ನಿಮ್ಮ ಕಣ್ಣುಗಳು ಆ ಕತ್ತಲೆಗೆ ಹೊಂದಿಕೊಳ್ಳುತ್ತವೆ. ಇದರಿಂದ ಕೋಣೆಯಲ್ಲಿರುವ ಯಾವುದೇ ಅಸಹಜ ಚಲನೆ, ನೆರಳು ಅಥವಾ ಅನುಮಾನಾಸ್ಪದ ವಸ್ತುಗಳು ಬೇಗನೆ ನಿಮ್ಮ ಗಮನಕ್ಕೆ ಬರುತ್ತವೆ. ಲೈಟ್ ಆನ್ ಮಾಡಿದರೆ ಇಂತಹ ಸಣ್ಣಪುಟ್ಟ ವಿಷಯಗಳು ಕಣ್ಣಿಗೆ ತಪ್ಪಿ ಹೋಗಬಹುದು.&lt;/p&gt;&lt;img&gt;&lt;p&gt;&lt;strong&gt;ಏನು ಮಾಡಬೇಕು?&lt;/strong&gt;ಹೋಟೆಲ್ ಕೋಣೆಗೆ ಪ್ರವೇಶಿಸಿದ ನಂತರ ಮೊದಲು ಬಾಗಿಲಿನ ಬಳಿ ಕೆಲವು ಸೆಕೆಂಡುಗಳ ಕಾಲ ನಿಂತು ಇಡೀ ಕೋಣೆಯನ್ನು ಗಮನಿಸಿ. ನಂತರ ಬಾಗಿಲುಗಳು, ಕಿಟಕಿಗಳು, ಕಪಾಟುಗಳು, ಬಾತ್&zwnj;ರೂಂ, ಬಾಲ್ಕನಿ ಮತ್ತು ಹಾಸಿಗೆಯ ಕೆಳಭಾಗವನ್ನು ಚೆನ್ನಾಗಿ ಪರೀಕ್ಷಿಸಿ. ಕೋಣೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಲೈಟ್ ಆನ್ ಮಾಡಿ ನಿಮ್ಮ ವಾಸ್ತವ್ಯವನ್ನು ಮುಂದುವರಿಸಿ.&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/travel/99-percent-people-dont-know-this-hotel-trick-why-to-keep-lights-off-while-checking-your-room-wdpq6qh"/>
        </item>
        <item>
            <title><![CDATA[White Bed Sheets Train: ರೈಲು ಪ್ರಯಾಣಿಕರಿಗೆ ಬಿಳಿ ಬೆಡ್‌ ಶೀಟ್‌ ಕೊಡೋದು ಯಾಕೆ? ಇದೆ ಬಲವಾದ ಕಾರಣ!]]></title>
            <link>https://kannada.asianetnews.com/travel/why-in-train-white-bed-sheets-to-passengers-in-india/articleshow-y5i03tu</link>
            <guid isPermaLink="true">https://kannada.asianetnews.com/travel/why-in-train-white-bed-sheets-to-passengers-in-india/articleshow-y5i03tu</guid>
            <pubDate>Sat, 27 Jun 2026 15:01:48 +0530</pubDate>
            <description><![CDATA[&lt;p&gt;ರೈಲುಗಳ ಎಸಿ ಕೋಚ್&zwnj;ಗಳಲ್ಲಿ ಕೊಡುವ ಬಿಳಿ ಬೆಡ್&zwnj;ಶೀಟ್&zwnj;ಗಳನ್ನು ನೋಡಿ, ಇದೇನಪ್ಪಾ ಆಸ್ಪತ್ರೆಯ ಶವಾಗಾರದಂತಿದೆ ಎಂದು ನೀವು ಮೀಮ್ಸ್&zwnj; ನೋಡಿರಬಹುದು. ಆದರೆ, ರೈಲ್ವೆ ಇಲಾಖೆ ಬಿಳಿ ಬೆಡ್&zwnj;ಶೀಟ್&zwnj;ಗಳನ್ನು ಬಳಸುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw46p61a0c4c82826gvpjca2,imgname-7da5c3fa-d941-4961-a8bc-437657158cd1-1782552664106.jpg" type="image/jpeg" height="390" width="690"/>
            <content:encoded><![CDATA[&lt;p&gt;ರೈಲಲ್ಲಿ ಕೊಡುವ ಬಿಳಿ ಬೆಡ್&zwnj;ಶೀಟ್, ದಿಂಬಿನ ಕವರ್ ನೋಡಿ ಕೆಲವರು, &quot;ಏನಪ್ಪಾ ಇದು... ಎಸಿ ಕೋಚ್ ನೋಡೋಕೆ ಆಸ್ಪತ್ರೆ ಶವಾಗಾರದ ಹಾಗೆ ಇದೆ&quot; ಎಂದು ತಮಾಷೆಯಾಗಿ ಕಾಮೆಂಟ್ ಮಾಡುತ್ತಾರೆ. ಮೇಲ್ನೋಟಕ್ಕೆ ಇದು ತಮಾಷೆಯಾಗಿ ಕಂಡರೂ, ಭಾರತೀಯ ರೈಲ್ವೆ (Indian Railways) ಎಲ್ಲಾ ರೈಲುಗಳಲ್ಲಿ ಬೆಡ್&zwnj;ಶೀಟ್&zwnj;ಗಳಿಗೆ 'ಬಿಳಿ' ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳಲು ಬಲವಾದ ವೈಜ್ಞಾನಿಕ, ನೈರ್ಮಲ್ಯ ಮತ್ತು ನಿರ್ವಹಣಾ ಕಾರಣಗಳಿವೆ. ಅವು ಯಾವುವು?&lt;/p&gt;&lt;h2&gt;ಬಿಳಿ ಬಟ್ಟೆ ಮೇಲೆ ಕಲೆ ಆದರೆ ಗೊತ್ತಾಗುತ್ತೆ!&lt;/h2&gt;&lt;p&gt;ರೈಲು ಪ್ರಯಾಣ ಹಲವು ಗಂಟೆಗಳ ಕಾಲ ಇರುತ್ತದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಈ ಬೆಡ್&zwnj;ಶೀಟ್&zwnj;ಗಳನ್ನು ಬಳಸುತ್ತಾರೆ. ರೈಲ್ವೆ ಇಲಾಖೆ ಬಟ್ಟೆಗಳನ್ನು ಸರಿಯಾಗಿ ತೊಳೆದಿದೆಯೇ ಇಲ್ಲವೇ ಎಂಬುದನ್ನು ಪ್ರಯಾಣಿಕರು ನೋಡಿದ ತಕ್ಷಣವೇ ಖಚಿತಪಡಿಸಿಕೊಳ್ಳಲು ಈ ಬಿಳಿ ಬಣ್ಣ ಸಹಾಯ ಮಾಡುತ್ತದೆ. ಬಿಳಿ ಬಟ್ಟೆಯ ಮೇಲೆ ಸಣ್ಣ ಕಲೆ ಇದ್ದರೂ ಅದು ಸ್ಪಷ್ಟವಾಗಿ ಕಾಣಿಸುತ್ತದೆ. ಅದೇ ಬಣ್ಣದ ಬಟ್ಟೆಗಳಾಗಿದ್ದರೆ, ಕೊಳೆಯನ್ನು ಸುಲಭವಾಗಿ ಮರೆಮಾಚಬಹುದಿತ್ತು.&lt;/p&gt;&lt;p&gt;ಪ್ರಯಾಣಿಕರಿಗೆ ಸ್ವಚ್ಛವಾದ ಬಟ್ಟೆಗಳನ್ನೇ ನೀಡಲಾಗುತ್ತಿದೆ ಎಂಬ ನಂಬಿಕೆ ಮೂಡಿಸಲು ಈ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, ಬೇರೆ ಬೇರೆ ಜನರು ಬಳಸುವುದರಿಂದ, ಈ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕ್ರಿಮಿ ಕೀಟಗಳು ಹರಡುವ ಸಾಧ್ಯತೆ ಹೆಚ್ಚು. ಇದನ್ನು ತಡೆಯಲು, ರೈಲ್ವೆಯ ಆಧುನಿಕ ಲಾಂಡ್ರಿಗಳಲ್ಲಿ ಈ ಬಟ್ಟೆಗಳನ್ನು ಅತಿ ಹೆಚ್ಚು ಉಷ್ಣಾಂಶದಲ್ಲಿ (ಬಿಸಿ ನೀರಿನಲ್ಲಿ)ಟ್ಟು ತೊಳೆಯಲಾಗುತ್ತದೆ. ಬಣ್ಣದ ಬಟ್ಟೆಗಳನ್ನು ಹೀಗೆ ಮಾಡಿದರೆ ಅದರ ಬಣ್ಣ ಮಾಸಿ, ಬಟ್ಟೆ ಹಾಳಾಗುತ್ತದೆ. ಆದರೆ, ಬಿಳಿ ಬಟ್ಟೆಗೆ ಹಾಗೆ ಆಗುವುದಿಲ್ಲ.&lt;/p&gt;&lt;h2&gt;ಬಿಳಿ ಬಟ್ಟೆ ಬ್ಲೀಚ್&zwnj; ಆಗೋದಿಲ್ಲ&lt;/h2&gt;&lt;p&gt;ಬಟ್ಟೆಗಳಲ್ಲಿರುವ ಮೊಂಡು ಕಲೆಗಳನ್ನು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳನ್ನು ನಾಶಮಾಡಲು 'ಕ್ಲೋರಿನ್ ಬ್ಲೀಚ್' ನಂತಹ ಶಕ್ತಿಯುತ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬಣ್ಣದ ಬಟ್ಟೆಗಳ ಮೇಲೆ ಬ್ಲೀಚಿಂಗ್ ಮಾಡಿದರೆ, ಬಣ್ಣ ಮಾಸಿ ಬಟ್ಟೆ ನೋಡಲು ಅಸಹ್ಯವಾಗಿ ಕಾಣುತ್ತದೆ. ಆದರೆ ಬಿಳಿ ಬಟ್ಟೆಯನ್ನು ಎಷ್ಟೇ ಬ್ಲೀಚ್ ಮಾಡಿದರೂ, ಅದು ಮತ್ತಷ್ಟು ಬಿಳುಪಾಗುತ್ತದೆಯೇ ಹೊರತು ಅದರ ಗುಣಮಟ್ಟ ಕೆಡುವುದಿಲ್ಲ.&lt;/p&gt;&lt;p&gt;ರೈಲ್ವೆ ಇಲಾಖೆಗೆ ಪ್ರತಿದಿನ ಲಕ್ಷಾಂತರ ಬೆಡ್&zwnj;ಶೀಟ್&zwnj;ಗಳನ್ನು ತೊಳೆಯಬೇಕಾಗುತ್ತದೆ. ಬಣ್ಣದ ಬಟ್ಟೆಗಳಾಗಿದ್ದರೆ, &quot;ಕೆಂಪು ಬಟ್ಟೆಯೊಂದಿಗೆ ನೀಲಿ ಬಟ್ಟೆಯನ್ನು ಹಾಕಬಾರದು, ಬಣ್ಣ ಅಂಟಿಕೊಳ್ಳುತ್ತದೆ&quot; ಎಂದು ಪ್ರತ್ಯೇಕಿಸಿ ಸಮಯ ವ್ಯರ್ಥ ಮಾಡಬೇಕಾಗುತ್ತದೆ. ಆದರೆ, ಎಲ್ಲವೂ ಬಿಳಿ ಬಣ್ಣದ್ದಾಗಿರುವುದರಿಂದ, ಎಲ್ಲವನ್ನೂ ಒಟ್ಟಿಗೆ ವಾಷಿಂಗ್ ಮೆಷಿನ್&zwnj;ಗೆ ಹಾಕಬಹುದು. ಇದು ರೈಲ್ವೆ ಸಿಬ್ಬಂದಿಯ ಸಮಯ ಮತ್ತು ಶ್ರಮವನ್ನು ದೊಡ್ಡ ಪ್ರಮಾಣದಲ್ಲಿ ಉಳಿಸುತ್ತದೆ.&lt;/p&gt;&lt;p&gt;ಬಣ್ಣಗಳ ವಿಜ್ಞಾನದ ಪ್ರಕಾರ, ಬಿಳಿ ಬಣ್ಣವು ಶಾಂತಿ, ಸ್ವಚ್ಛತೆ ಮತ್ತು ನೆಮ್ಮದಿಯ ಸಂಕೇತವಾಗಿದೆ. ವಿಶ್ವದ ಪ್ರಮುಖ ಪಂಚತಾರಾ ಹೋಟೆಲ್&zwnj;ಗಳಲ್ಲಿಯೂ ಇದೇ ಕಾರಣಕ್ಕಾಗಿ ಬಿಳಿ ಬಣ್ಣದ ಬೆಡ್&zwnj;ಶೀಟ್&zwnj;ಗಳನ್ನು ಬಳಸುತ್ತಾರೆ. ರೈಲು ಹತ್ತಿದ ತಕ್ಷಣ ಸ್ವಚ್ಛವಾದ ಬಿಳಿ ಬಟ್ಟೆಗಳನ್ನು ನೋಡಿದಾಗ, ಪ್ರಯಾಣಿಕರಿಗೆ ಮಾನಸಿಕವಾಗಿ ಒಂದು ಸಮಾಧಾನ ಮತ್ತು ಸುರಕ್ಷಿತ ಭಾವನೆ ಸಿಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>travel</category>
            <dc:creator>Padmashree Bhat</dc:creator>
            <atom:link href="https://kannada.asianetnews.com/travel/why-in-train-white-bed-sheets-to-passengers-in-india/articleshow-y5i03tu"/>
        </item>
        <item>
            <title><![CDATA[Indian Railway fine: ರೈಲಿನ ಮಹಿಳಾ ಬೋಗಿಯಲ್ಲಿ ಪುರುಷರ ಪ್ರಯಾಣ; ಟ್ರಾಫಿಕ್ ಫೈನ್‌ಗಿಂತ ಹೆಚ್ಚಾಯ್ತು ದಂಡದ ಮೊತ್ತ!]]></title>
            <link>https://kannada.asianetnews.com/gallery/travel/indian-railways-hikes-fine-fivefold-for-men-entering-womens-coaches-zqrnxqh</link>
            <guid isPermaLink="true">https://kannada.asianetnews.com/gallery/travel/indian-railways-hikes-fine-fivefold-for-men-entering-womens-coaches-zqrnxqh</guid>
            <pubDate>Mon, 22 Jun 2026 16:56:45 +0530</pubDate>
            <description><![CDATA[ಭಾರತೀಯ ರೈಲ್ವೆಯು 'ಜನ್ ವಿಶ್ವಾಸ್ ಕಾಯ್ದೆ, 2026' ಅಡಿಯಲ್ಲಿ, ಮಹಿಳಾ ಬೋಗಿಗಳಿಗೆ ಅಕ್ರಮವಾಗಿ ಪ್ರವೇಶಿಸುವ ಪುರುಷರಿಗೆ ವಿಧಿಸುವ ದಂಡವನ್ನು ₹2,500ಕ್ಕೆ ಹೆಚ್ಚಿಸಿದೆ. ಈ ಕಠಿಣ ಕ್ರಮವು ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01cwbth2csay6qbwhyz0c82g08,imgname-Ladies-Coach.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ರೈಲ್ವೆಯು 'ಜನ್ ವಿಶ್ವಾಸ್ ಕಾಯ್ದೆ, 2026' ಅಡಿಯಲ್ಲಿ, ಮಹಿಳಾ ಬೋಗಿಗಳಿಗೆ ಅಕ್ರಮವಾಗಿ ಪ್ರವೇಶಿಸುವ ಪುರುಷರಿಗೆ ವಿಧಿಸುವ ದಂಡವನ್ನು ₹2,500ಕ್ಕೆ ಹೆಚ್ಚಿಸಿದೆ. ಈ ಕಠಿಣ ಕ್ರಮವು ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.&lt;img&gt;&lt;p&gt;ರೈಲಿನಲ್ಲಿ ಮಹಿಳೆಯರಿಗಾಗಿಯೇ ಮೀಸಲಿಟ್ಟಿರುವ ಕೋಚ್&zwnj; ಮತ್ತು ಸೀಟ್&zwnj;ಗಳಿಗೆ ಅಕ್ರಮವಾಗಿ ನುಗ್ಗುವ ಪುರುಷ ಪ್ರಯಾಣಿಕರ ವಿರುದ್ಧ ಭಾರತೀಯ ರೈಲ್ವೆ ಕಠಿಣ ಕ್ರಮಕ್ಕೆ ಮುಂದಾಗಿದೆ. 'ಜನ್ ವಿಶ್ವಾಸ್ ಕಾಯ್ದೆ, 2026'ರ ಅಡಿಯಲ್ಲಿ, ಮಹಿಳಾ ಬೋಗಿಗೆ ಅತಿಕ್ರಮ ಪ್ರವೇಶ ಮಾಡುವವರಿಗೆ ವಿಧಿಸುವ ದಂಡವನ್ನು 500 ರೂಪಾಯಿಯಿಂದ 2,500 ರೂಪಾಯಿಗೆ ಏರಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.&lt;/p&gt;&lt;img&gt;&lt;p&gt;ರೈಲ್ವೆ ಅಧಿಕಾರಿಗಳ ಪ್ರಕಾರ, ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಹೀಗಿರುವಾಗ ಪುರುಷರು ಮಹಿಳೆಯರ ಕೋಚ್ ಅಥವಾ ಸೀಟ್&zwnj;ಗಳನ್ನು ಆಕ್ರಮಿಸಿಕೊಳ್ಳುವ ಅಗತ್ಯವೇ ಇಲ್ಲ. ಆದರೂ ಇಂತಹ ನಿಯಮ ಉಲ್ಲಂಘನೆಗಳು ಪದೇ ಪದೇ ನಡೆಯುತ್ತಿರುವುದರಿಂದ ದಂಡದ ಮೊತ್ತವನ್ನು భారీಯಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;2026ರ ಜೂನ್ 19ರಂದು ಭಾರತೀಯ ಗೆಜೆಟ್&zwnj;ನಲ್ಲಿ ರೈಲ್ವೆ ಸಚಿವಾಲಯ ಒಂದು ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಯಾವುದೇ ಪುರುಷ ಪ್ರಯಾಣಿಕ ಉದ್ದೇಶಪೂರ್ವಕವಾಗಿ ಮಹಿಳಾ ಬೋಗಿ ಪ್ರವೇಶಿಸಿದರೆ, ಅಥವಾ ಮಹಿಳೆಯರ ಸೀಟಿನಲ್ಲಿ ಕುಳಿತು ಪ್ರಯಾಣ ಮುಂದುವರಿಸಿದರೆ, ಅದನ್ನು ಕಾನೂನು ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದು ರೈಲ್ವೆ ಕಾಯ್ದೆಯ ಸೆಕ್ಷನ್ 162ರ ಉಲ್ಲಂಘನೆಯಾಗುತ್ತದೆ.&lt;/p&gt;&lt;img&gt;&lt;p&gt;ನಿಯಮ ಮುರಿದ ಪ್ರಯಾಣಿಕನಿಗೆ 2,500 ರೂ. ದಂಡ ವಿಧಿಸುವುದಲ್ಲದೆ, ಅವರ ಟಿಕೆಟ್ ರದ್ದುಪಡಿಸಬಹುದು ಅಥವಾ ಮುಟ್ಟುಗೋಲು ಹಾಕಿಕೊಳ್ಳಬಹುದು. ಅಷ್ಟೇ ಅಲ್ಲ, ಆ ಪ್ರಯಾಣಿಕನನ್ನು ರೈಲಿನಿಂದ ಕೆಳಗಿಳಿಸುವಂತೆ ಸೂಚಿಸುವ ಅಧಿಕಾರ ರೈಲ್ವೆ ಸಿಬ್ಬಂದಿಗೆ ಇರುತ್ತದೆ. ಒಂದು ವೇಳೆ ಪ್ರಯಾಣಿಕ ದಂಡ ಕಟ್ಟಲು ನಿರಾಕರಿಸಿದರೆ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆಗ ದಂಡದ ಮೊತ್ತ 5,000 ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಸೂಚನೆಯಲ್ಲಿ ಎಚ್ಚರಿಸಲಾಗಿದೆ.&lt;/p&gt;&lt;img&gt;&lt;p&gt;ಈ ಅಪರಾಧಕ್ಕೆ ಕನಿಷ್ಠ 2,500 ರೂ. ದಂಡ ವಿಧಿಸಬೇಕೆಂದು ಕಾನೂನು ಹೇಳುತ್ತದೆ. ಒಂದು ವೇಳೆ ವಿಶೇಷ ಸಂದರ್ಭಗಳಲ್ಲಿ ಇದಕ್ಕಿಂತ ಕಡಿಮೆ ದಂಡ ವಿಧಿಸುವುದಾದರೆ, ಅದಕ್ಕೆ ಸೂಕ್ತ ಕಾರಣವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಆದರೆ, ಈ ನಿಯಮವು ತೃತೀಯಲಿಂಗಿಗಳಿಗೆ ಅನ್ವಯಿಸುವುದಿಲ್ಲ. 'ತೃತೀಯಲಿಂಗಿ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣಾ ಕಾಯ್ದೆ'ಯ ಅಡಿ ಬರುವ ವ್ಯಕ್ತಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.&lt;/p&gt;&lt;img&gt;&lt;p&gt;ಮಹಿಳೆಯರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಈ ಹೊಸ ಕ್ರಮ ಕೈಗೊಂಡಿದೆ. ಮಹಿಳಾ ಬೋಗಿಗಳ ದುರ್ಬಳಕೆ ತಡೆಯುವುದು ಮತ್ತು ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಈ ಕಠಿಣ ನಿಯಮದ ಮುಖ್ಯ ಉದ್ದೇಶವಾಗಿದೆ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/indian-railways-hikes-fine-fivefold-for-men-entering-womens-coaches-zqrnxqh"/>
        </item>
    </channel>
</rss>
