<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 29 Aug 2026 19:49:23 +0530</lastBuildDate>
        <atom:link href="https://kannada.asianetnews.com/rss/travel" rel="self" type="application/rss+xml"/>
        <item>
            <title><![CDATA[ಬೆಂಗಳೂನಿಂದ  3 ವಿಶೇಷ ರೈಲು ಸೇವೆ ಆರಂಭ; ಊರಿಗೆ ಹೋಗುವವರಿಗೆ ಇಲ್ಲಿದೆ ವೇಳಾಪಟ್ಟಿ]]></title>
            <link>https://kannada.asianetnews.com/travel/indian-railway-onam-special-trains-bengaluru-to-kerala-thiruvananthapuram-schedule-stops-booking-details/articleshow-19hmv4n</link>
            <guid isPermaLink="true">https://kannada.asianetnews.com/travel/indian-railway-onam-special-trains-bengaluru-to-kerala-thiruvananthapuram-schedule-stops-booking-details/articleshow-19hmv4n</guid>
            <pubDate>Fri, 21 Aug 2026 15:55:37 +0530</pubDate>
            <description><![CDATA[&lt;p&gt;ಹಬ್ಬದ ಪ್ರಯಾಣಿಕರ ದಟ್ಟಣೆ ನಿವಾರಿಸಲು, ದಕ್ಷಿಣ ರೈಲ್ವೆಯು ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿ ವಿಶೇಷ ರೈಲುಗಳನ್ನು ಘೋಷಿಸಿದೆ. ಬೆಂಗಳೂರಿನ ಕಂಟೋನ್ಮೆಂಟ್, ಎಸ್&zwnj;ಎಂವಿಟಿ, ಮತ್ತು ಯಶವಂತಪುರ ನಿಲ್ದಾಣಗಳಿಂದ ತಿರುವನಂತಪುರಂಗೆ ಈ ರೈಲುಗಳು ಸಂಚರಿಸಲಿದ್ದು, ಅವುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbm7g4ap4k43pgd92r76vmt,imgname-ksr-bengaluru-railway-station-1786022969482.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ: ಓ&lt;/strong&gt;ಣಂ ಹಬ್ಬದ ಹಿನ್ನೆಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ದಕ್ಷಿಣ ರೈಲ್ವೆ, ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿ ವಿಶೇಷ ರೈಲುಗಳನ್ನು ಘೋಷಿಸಿದೆ. ಬೆಂಗಳೂರು ಕಂಟೋನ್ಮೆಂಟ್, ಎಸ್&zwnj;ಎಂವಿಟಿ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳಿಂದ ತಿರುವನಂತಪುರಂ ನಾರ್ತ್ ರೈಲ್ವೆ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಾಪಸ್ ಬರಲು ಈ ಹೊಸ ಎಕ್ಸ್&zwnj;ಪ್ರೆಸ್ ವಿಶೇಷ ರೈಲುಗಳು ಸಂಚರಿಸಲಿವೆ. ಈ ಮೂರೂ ರೈಲುಗಳು ಕೊಟ್ಟಾಯಂ ಮಾರ್ಗವಾಗಿ ಚಲಿಸುತ್ತವೆ. ರೈಲುಗಳ ವೇಳಾಪಟ್ಟಿ ಮತ್ತು ಇತರ ವಿವರಗಳು ಹೀಗಿವೆ.&lt;/p&gt;&lt;h2&gt;&lt;strong&gt;1. ಬೆಂಗಳೂರು ಕಂಟೋನ್ಮೆಂಟ್ - ತಿರುವನಂತಪುರಂ ನಾರ್ತ್ (06579/06580)&lt;/strong&gt;&lt;/h2&gt;&lt;p&gt;ಈ ರೈಲು ಆಗಸ್ಟ್ 28ರಂದು ಸಂಜೆ 4:40ಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಹೊರಟು, ಮರುದಿನ ಅಂದರೆ ಆಗಸ್ಟ್ 29ರಂದು ಬೆಳಗ್ಗೆ 10:30ಕ್ಕೆ ತಿರುವನಂತಪುರಂ ನಾರ್ತ್ ನಿಲ್ದಾಣವನ್ನು ತಲುಪಲಿದೆ. ಮರಳಿ, ಆಗಸ್ಟ್ 29ರಂದು ಮಧ್ಯಾಹ್ನ 12:40ಕ್ಕೆ ತಿರುವನಂತಪುರಂ ನಾರ್ತ್&zwnj;ನಿಂದ ಹೊರಡುವ ರೈಲು, ಆಗಸ್ಟ್ 30ರಂದು ಮುಂಜಾನೆ 5:15ಕ್ಕೆ ಬೆಂಗಳೂರು ಕಂಟೋನ್ಮೆಂಟ್&zwnj;ಗೆ ಬಂದು ಸೇರಲಿದೆ. ಈ ರೈಲಿಗೆ ಕೆ.ಆರ್. ಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಪೋಡನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕರುನಾಗಪಲ್ಲಿ, ಸಾಸ್ತಾಂಕೋಟ್ಟ, ಕೊಲ್ಲಂ ಮತ್ತು ವರ್ಕಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಆಗಸ್ಟ್ 21ರ ಬೆಳಗ್ಗೆ 8 ಗಂಟೆಯಿಂದಲೇ ಈ ರೈಲಿನ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾಗಿದೆ.&lt;/p&gt;&lt;h2&gt;&lt;strong&gt;2. ಎಸ್&zwnj;ಎಂವಿಟಿ ಬೆಂಗಳೂರು - ತಿರುವನಂತಪುರಂ ನಾರ್ತ್ (06575/06576)&lt;/strong&gt;&lt;/h2&gt;&lt;p&gt;ಈ ರೈಲು ಎಸ್&zwnj;ಎಂವಿಟಿ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಆಗಸ್ಟ್ 22ರಂದು ಸಂಜೆ 4:40ಕ್ಕೆ ಹೊರಟು, ಆಗಸ್ಟ್ 23ರಂದು ಬೆಳಗ್ಗೆ 10 ಗಂಟೆಗೆ ತಿರುವನಂತಪುರಂ ನಾರ್ತ್ ನಿಲ್ದಾಣವನ್ನು ತಲುಪಲಿದೆ. ಮರಳಿ, ಆಗಸ್ಟ್ 23ರಂದು ಮಧ್ಯಾಹ್ನ 12:40ಕ್ಕೆ ತಿರುವನಂತಪುರಂ ನಾರ್ತ್&zwnj;ನಿಂದ ಹೊರಡುವ ರೈಲು, ಆಗಸ್ಟ್ 24ರಂದು ಮುಂಜಾನೆ 5:15ಕ್ಕೆ ಬೆಂಗಳೂರು ಕಂಟೋನ್ಮೆಂಟ್&zwnj;ಗೆ ಬಂದು ಸೇರಲಿದೆ. ಈ ರೈಲಿಗೆ ಬೆಂಗಳೂರು ಕಂಟೋನ್ಮೆಂಟ್, ಕೆ.ಆರ್. ಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರ್, ಪೋಡನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಂಕುಳಂ, ಕರುನಾಗಪಲ್ಲಿ, ಸಾಸ್ತಾಂಕೋಟ್ಟ, ಕೊಲ್ಲಂ ಮತ್ತು ವರ್ಕಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಆಗಸ್ಟ್ 21ರ ಬೆಳಗ್ಗೆ 8 ಗಂಟೆಯಿಂದಲೇ ಈ ರೈಲಿನ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾಗಿದೆ.&lt;/p&gt;&lt;h2&gt;&lt;strong&gt;3. ಯಶವಂತಪುರ - ತಿರುವನಂತಪುರಂ ನಾರ್ತ್ (06573/06574)&lt;/strong&gt;&lt;/h2&gt;&lt;p&gt;ಯಶವಂತಪುರ ರೈಲ್ವೆ ನಿಲ್ದಾಣದಿಂದ ಆಗಸ್ಟ್ 21ರಂದು ರಾತ್ರಿ 8:45ಕ್ಕೆ ಹೊರಡುವ ಈ ರೈಲು, ಆಗಸ್ಟ್ 22ರಂದು ಮಧ್ಯಾಹ್ನ 1:30ಕ್ಕೆ ತಿರುವನಂತಪುರಂ ನಾರ್ತ್ ನಿಲ್ದಾಣವನ್ನು ತಲುಪಲಿದೆ. ಮರಳಿ, ಆಗಸ್ಟ್ 22ರಂದು ಮಧ್ಯಾಹ್ನ 3:15ಕ್ಕೆ ತಿರುವನಂತಪುರಂ ನಾರ್ತ್&zwnj;ನಿಂದ ಹೊರಟು, ಆಗಸ್ಟ್ 23ರಂದು ಬೆಳಗ್ಗೆ 9:45ಕ್ಕೆ ಯಶವಂತಪುರಕ್ಕೆ ಬಂದು ಸೇರಲಿದೆ. ಈ ರೈಲಿಗೆ ಹೊಸೂರು, ಧರ್ಮಪುರಿ, ಸೇಲಂ, ಈರೋಡ್, ತಿರುಪ್ಪೂರ್, ಪೋಡನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಂಕುಳಂ, ಕರುನಾಗಪಲ್ಲಿ, ಸಾಸ್ತಾಂಕೋಟ್ಟ, ಕೊಲ್ಲಂ ಮತ್ತು ವರ್ಕಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/indian-railway-onam-special-trains-bengaluru-to-kerala-thiruvananthapuram-schedule-stops-booking-details/articleshow-19hmv4n"/>
        </item>
        <item>
            <title><![CDATA[ಹುಬ್ಬಳ್ಳಿ- ಪುಣೆ- ಪಿಂಪ್ರಿ ನಡುವೆ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ: ಡಿಸ್ಕೌಂಟ್ ಲಭ್ಯ]]></title>
            <link>https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7</link>
            <guid isPermaLink="true">https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7</guid>
            <pubDate>Mon, 24 Aug 2026 09:39:13 +0530</pubDate>
            <description><![CDATA[ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ, ಪುಣೆ ಮತ್ತು ಪಿಂಪ್ರಿ ನಡುವೆ ಪ್ರತಿದಿನ 'ರಾಜರಥ' ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ನೂತನ ಬಸ್ ಸೇವೆಯು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಗುರಿ ಹೊಂದಿದ್ದು, ವೇಳಾಪಟ್ಟಿ, ದರ ಮತ್ತು ಮುಂಗಡ ಬುಕ್ಕಿಂಗ್ ವಿವರಗಳನ್ನು ಒದಗಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rz3b4k9c56tdhe8502fprc,imgname-nwkrtc-raja-ratha-1787544317075.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ: &lt;/strong&gt;ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ -ಪುಣೆ- ಪಿಂಪ್ರಿ ನಡುವೆ ಪ್ರತಿದಿನ ನೂತನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.&lt;/p&gt;&lt;p&gt;ಈ ಕುರಿತು ಪ್ರಕಟಣೆ ನೀಡಿ, ಉಭಯ ರಾಜ್ಯಗಳ ನಡುವೆ ಪ್ರಯಾಣ ಮಾಡುವವರಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಈ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಬಸ್ ವೇಳಾ ಪಟ್ಟಿ&lt;/strong&gt;&lt;/h2&gt;&lt;p&gt;ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರತಿದಿನ ರಾತ್ರಿ 9.30ಕ್ಕೆ ಹೊರಡುತ್ತದೆ. ಹೊಸೂರು ಬಸ್ ನಿಲ್ದಾಣದಿಂದ 9.40ಕ್ಕೆ, ನವನಗರ 9.55, ಎಸ್.ಡಿ.ಎಂ. ಆಸ್ಪತ್ರೆ 10.05, ಧಾರವಾಡ ಹೊಸ ಬಸ್ ನಿಲ್ದಾಣದಿಂದ 10.15ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 11.35ಕ್ಕೆ ಹೊರಡುತ್ತದೆ. ಕೊಲ್ಹಾಪುರಕ್ಕೆ ರಾತ್ರಿ1.35ಕ್ಕೆ, ಪುಣೆ ಸ್ವಾರಗೇಟ್ ಬಸ್ ನಿಲ್ದಾಣಕ್ಕೆ ಬೆಳಗ್ಗೆ 6ಕ್ಕೆ ಹಾಗೂ ಪಿಂಪ್ರಿಗೆ 6.30ಕ್ಕೆ ತಲುಪುತ್ತದೆ.&lt;/p&gt;&lt;p&gt;ಪಿಂಪ್ರಿ ಬಸ್ ನಿಲ್ದಾಣದಿಂದ ರಾತ್ರಿ 9.30ಕ್ಕೆ ಹಾಗೂ ಪುಣೆ ಸ್ವಾರಗೇಟ್ ಬಸ್ ನಿಲ್ದಾಣದಿಂದ 10.15ಕ್ಕೆ ಹೊರಡುತ್ತದೆ. ಬೆಳಗಾವಿಗೆ ಮರುದಿನ ಬೆಳಗ್ಗೆ 4.15, ಧಾರವಾಡಕ್ಕೆ 5.40 ಹಾಗೂ ಹುಬ್ಬಳ್ಳಿಗೆ 6.30ಕ್ಕೆ ಆಗಮಿಸುತ್ತದೆ.&lt;/p&gt;&lt;p&gt;ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಪುಣೆಗೆ ₹1202 ಹಾಗೂ ಪಿಂಪ್ರಿಗೆ ₹1252 ನಿಗದಿಪಡಿಸಲಾಗಿದೆ.&lt;/p&gt;&lt;h3&gt;&lt;strong&gt;ಮುಂಗಡ ಬುಕ್ಕಿಂಗ್, ರಿಯಾಯಿತಿ&lt;/strong&gt;&lt;/h3&gt;&lt;p&gt;ಸಾರ್ವಜನಿಕರು www.ksrtc.in ವೆಬ್ ಸೈಟ್, KSRTC Mobile App, ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಇತರ ಪ್ರಮುಖ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಒಂದೇ ಟಿಕೆಟ್&zwnj;ನಲ್ಲಿ 4 ಅಥವಾ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಖರೀದಿಸಿದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತದಡಿ-ಅಘನಾಶಿನಿ ಬಾರ್ಜ್&zwnj;ನ ಪ್ರಯಾಣದ ದರ ಪಟ್ಟಿ ಅಳವಡಿಸಲು ಸಿದ್ಧತೆ; ಪ್ರಯಾಣಿಕರಲ್ಲಿ ಗೊಂದಲ&lt;/strong&gt;&lt;/p&gt;]]></content:encoded>
            <category>travel</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/daily-nwkrtc-raja-ratha-ac-sleeper-bus-service-starts-between-hubballi-pune-and-pimpri-mrq/articleshow-1eg7rk7"/>
        </item>
        <item>
            <title><![CDATA[ಭಾರತೀಯ ಪಾಸ್‌ಪೋರ್ಟ್ ನೋಡಿ ಏರ್‌ಪೋರ್ಟ್‌ನಲ್ಲಿ ಪ್ರವಾಸಿಗನ ತೀವ್ರ ತಪಾಸಣೆ; ಯುವಕನ 'ವಿಶ್ವಗುರು' ಪೋಸ್ಟ್ ವೈರಲ್!]]></title>
            <link>https://kannada.asianetnews.com/viral/indian-passport-traveler-manoj-ahirwar-timor-leste-airport-immigration-experience-viral-post/articleshow-4w3boqh</link>
            <guid isPermaLink="true">https://kannada.asianetnews.com/viral/indian-passport-traveler-manoj-ahirwar-timor-leste-airport-immigration-experience-viral-post/articleshow-4w3boqh</guid>
            <pubDate>Thu, 20 Aug 2026 13:07:54 +0530</pubDate>
            <description><![CDATA[&lt;p&gt;ವಿಮಾನ ನಿಲ್ದಾಣದಲ್ಲಿ 'ವೀಸಾ ಆನ್ ಅರೈವಲ್' ಸೌಲಭ್ಯವಿದ್ದರೂ, ಭಾರತೀಯ ಪ್ರವಾಸಿಗರೊಬ್ಬರನ್ನು ಅವರ ಪಾಸ್&zwnj;ಪೋರ್ಟ್ ಕಾರಣಕ್ಕೆ ಪ್ರತ್ಯೇಕಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಈ ತಾರತಮ್ಯದ ಅನುಭವವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರತೀಯ ಪಾಸ್&zwnj;ಪೋರ್ಟ್&zwnj;ನ ಮೌಲ್ಯ ಮತ್ತು ವಿದೇಶಗಳಲ್ಲಿ ಭಾರತೀಯರು ಎದುರಿಸುವ ತಪಾಸಣೆಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ey6nhmwqh7acp71krvj3f9,imgname-manoj-ahirwar-1787207833140.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: ವಿ&lt;/strong&gt;ದೇಶಗಳಿಗೆ ಪ್ರಯಾಣಿಸುವ ಭಾರತೀಯರಿಗೆ ಆಗಾಗ ಎದುರಾಗುವ ಕಠಿಣ ಇಮಿಗ್ರೇಷನ್ ತಪಾಸಣೆ ಮತ್ತು ಪಾಸ್&zwnj;ಪೋರ್ಟ್ ಶ್ರೇಯಾಂಕದ (Passport Ranking) ಕುರಿತು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಭಾರೀ ಚರ್ಚೆ ಆರಂಭವಾಗಿದೆ. ಭಾರತೀಯ ಪ್ರವಾಸಿಗರೊಬ್ಬರು ಟಿಮೋರ್-ಲೆಸ್ಟೆ (Timor-Leste) ದೇಶದ ವಿಮಾನ ನಿಲ್ದಾಣದಲ್ಲಿ ತಮಗೆ ಎದುರಾದ ಇಮಿಗ್ರೇಷನ್ ಕಿರುಕುಳ ಹಾಗೂ ತಾರತಮ್ಯದ ಅನುಭವವನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಮನೋಜ್ ಅಹಿರ್ವಾರ್ ಎಂಬ ಭಾರತೀಯ ಪ್ರವಾಸಿಗ, &quot;ವಿಶ್ವಗುರು ಪಾಸ್&zwnj;ಪೋರ್ಟ್ ಹೊಂದಿರುವುದು ನಿಜಕ್ಕೂ ವಿಭಿನ್ನ ಅನುಭವ&quot; ಎಂದು ವ್ಯಂಗ್ಯವಾಡುತ್ತಾ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಟಿಮೋರ್-ಲೆಸ್ಟೆ ಏರ್&zwnj;ಪೋರ್ಟ್&zwnj;ನಲ್ಲಿ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಮನೋಜ್ ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ:&lt;/p&gt;&lt;p&gt;ಟಿಮೋರ್-ಲೆಸ್ಟೆ ರಾಜಧಾನಿಯ ದಿಲಿ (Dili) ವಿಮಾನ ನಿಲ್ದಾಣವು ಕೇವಲ ಎರಡು ಇಮಿಗ್ರೇಷನ್ ಕೌಂಟರ್&zwnj;ಗಳನ್ನು ಹೊಂದಿರುವ ಪುಟ್ಟ ಏರ್&zwnj;ಪೋರ್ಟ್ ಆಗಿದೆ.&lt;/p&gt;&lt;p&gt;ಭಾರತ ಸೇರಿದಂತೆ ಬಹುತೇಕ ದೇಶಗಳ ನಾಗರಿಕರಿಗೆ ಇಲ್ಲಿ 'ವೀಸಾ ಆನ್ ಅರೈವಲ್' (Visa on Arrival - VOA) ಸೌಲಭ್ಯವಿದೆ.&lt;/p&gt;&lt;p&gt;ವಿಮಾನದಿಂದ ಇಳಿದ ಉಳಿದ ಎಲ್ಲಾ ದೇಶಗಳ ಪ್ರವಾಸಿಗರಿಗೆ ಸುಲಭವಾಗಿ ವೀಸಾ ಸಿಕ್ಕಿದೆ.&lt;/p&gt;&lt;p&gt;ಆದರೆ, ಮನೋಜ್ ಅವರ ಬಳಿ ಇದ್ದ 'ಭಾರತೀಯ ಪಾಸ್&zwnj;ಪೋರ್ಟ್' ನೋಡುತ್ತಿದ್ದಂತೆಯೇ, ಅಧಿಕಾರಿಗಳು ಅವರನ್ನು ಪ್ರತ್ಯೇಕವಾಗಿ ಪಕ್ಕಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಇಮಿಗ್ರೇಷನ್ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?&lt;/strong&gt;&lt;/h2&gt;&lt;p&gt;ಅಧಿಕಾರಿಗಳು ಮನೋಜ್ ಅವರನ್ನು ಸಾಲು ಸಾಲು ಪ್ರಶ್ನೆಗಳಿಂದ ಸುಸ್ತಾಗಿಸಿದ್ದಾರೆ:&lt;/p&gt;&lt;p&gt;&quot;ನಿಮ್ಮ ಬಳಿ ಆಹ್ವಾನ ಪತ್ರಿಕೆ (Letter of Invitation) ಇದೆಯೇ?&quot;&lt;/p&gt;&lt;p&gt;&quot;ಟಿಮೋರ್-ಲೆಸ್ಟೆಯಲ್ಲಿ ನಿಮ್ಮ ಸ್ನೇಹಿತರು ಯಾರಾದರೂ ಇದ್ದಾರೆಯೇ?&quot;&lt;/p&gt;&lt;p&gt;&quot;ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ಯಾವಾಗ ವಾಪಸ್ ಹೋಗುತ್ತೀರಿ?&quot;&lt;/p&gt;&lt;p&gt;&quot;ಹೋಟೆಲ್ ಬುಕ್ಕಿಂಗ್ ದಾಖಲೆಗಳನ್ನು ತೋರಿಸಿ.&quot;&lt;/p&gt;&lt;p&gt;&quot;ನಿಮ್ಮ ಬಳಿ ಎಷ್ಟು ನಗದು ಹಣವಿದೆ? ಅದನ್ನು ನಮಗೆ ಎಣಿಸಿ ತೋರಿಸಿ!&quot;&lt;/p&gt;&lt;h2&gt;&lt;strong&gt;ರಸ್ತೆ ಮಾರ್ಗದ ಪ್ರಯಾಣಕ್ಕೂ ಅಡ್ಡಿ!&lt;/strong&gt;&lt;/h2&gt;&lt;p&gt;ಟಿಮೋರ್-ಲೆಸ್ಟೆಯಿಂದ ಬಸ್ ಮೂಲಕ ರಸ್ತೆ ಮಾರ್ಗವಾಗಿ ಇಂಡೋನೇಷ್ಯಾಕ್ಕೆ ಹೋಗಲು ಮನೋಜ್ ಯೋಜಿಸಿದ್ದರು. &quot;ಬಸ್ ಟಿಕೆಟ್&zwnj;ಗಳನ್ನು ನೇರವಾಗಿ ಬಸ್ ನಿಲ್ದಾಣದಲ್ಲೇ ಪಡೆಯಬೇಕಾಗುತ್ತದೆ&quot; ಎಂದು ಅವರು ವಿವರಿಸಿದರೂ, ಅಧಿಕಾರಿಗಳು &quot;ಹಾಗೆ ಪ್ರವೇಶಿಸಲು ಸಾಧ್ಯವಿಲ್ಲ&quot; ಎಂದು ತಗಾದೆ ತೆಗೆದಿದ್ದಾರೆ. ಅದೃಷ್ಟವಶಾತ್, ಅವರ ಬಳಿ ಇಂಡೋನೇಷ್ಯಾದಿಂದ ವಾಪಸ್ ಭಾರತಕ್ಕೆ ಬರುವ ವಿಮಾನದ ಟಿಕೆಟ್ ಹಾಗೂ ಇಂಡೋನೇಷ್ಯಾದ ಇ-ವೀಸಾ (eVOA) ಇದ್ದಿದ್ದರಿಂದ ಅಧಿಕಾರಿಗಳು ಅಂತಿಮವಾಗಿ 30 ದಿನಗಳ ವೀಸಾ ಮಂಜೂರು ಮಾಡಿದ್ದಾರೆ.&lt;/p&gt;&lt;h2&gt;&lt;strong&gt;'ಭಾರತೀಯ ಪಾಸ್&zwnj;ಪೋರ್ಟ್ ಇರೋದೇ ಕೆಲವೊಮ್ಮೆ ಬೇಸರ ತರಿಸುತ್ತೆ':&lt;/strong&gt;&lt;/h2&gt;&lt;p&gt;ತಮಗೆ ಎದುರಾದ ಈ ಕಹಿ ಅನುಭವವನ್ನು ಕೊನೆಗೊಳಿಸುತ್ತಾ ಮನೋಜ್, &quot;ಗಂಭೀರವಾಗಿ ಹೇಳಬೇಕೆಂದರೆ, ಕೆಲವೊಮ್ಮೆ ಭಾರತೀಯ ಪಾಸ್&zwnj;ಪೋರ್ಟ್ ಹೊಂದಿರುವುದೇ ನಿಜಕ್ಕೂ ದುಃಖದ ಸಂಗತಿ&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು &quot;ಭಾರತೀಯ ಪಾಸ್&zwnj;ಪೋರ್ಟ್&zwnj;ನ ಜಾಗತಿಕ ಮೌಲ್ಯ ಹೆಚ್ಚಾಗಬೇಕಿದೆ ಮತ್ತು ವಿದೇಶಗಳಲ್ಲಿ ಭಾರತೀಯರನ್ನು ಅನುಮಾನದಿಂದ ನೋಡುವುದು ನಿಲ್ಲಬೇಕು&quot; ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು &quot;ಇದು ಕೇವಲ ಮುಂಜಾಗ್ರತಾ ತಪಾಸಣೆಯಷ್ಟೇ&quot; ಎಂದು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;Having a vishwaguru passport is definitely something else- Dili airport is fairly small airport with just 2 immigration counters- Timor Leste have VOA for most of the countries including India- Everyone got their VOA- When they saw my Indian passport, they pulled me aside&hellip; https://t.co/06PrCEmemF&lt;/p&gt;&lt;p&gt;&mdash; Manoj Ahirwar (@manoj_ahi) August 19, 2026&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/indian-passport-traveler-manoj-ahirwar-timor-leste-airport-immigration-experience-viral-post/articleshow-4w3boqh"/>
        </item>
        <item>
            <title><![CDATA[ರೈಲು ಪ್ರಯಾಣಿಕರ ಗಮನಕ್ಕೆ: ಮೈಸೂರು-ಶಿವಮೊಗ್ಗ ನಡುವಿನ ವಿವಿಧ ರೈಲುಗಳು ರದ್ದು: ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/karnataka-districts/attention-train-passengers-various-trains-between-mysore-shivamogga-cancelled-details-here-suc/articleshow-528fdhc</link>
            <guid isPermaLink="true">https://kannada.asianetnews.com/karnataka-districts/attention-train-passengers-various-trains-between-mysore-shivamogga-cancelled-details-here-suc/articleshow-528fdhc</guid>
            <pubDate>Wed, 19 Aug 2026 20:35:58 +0530</pubDate>
            <description><![CDATA[ಹಾಸನ ಮತ್ತು ಹೊಳೆ ನರಸೀಪುರ ಯಾರ್ಡ್&zwnj;ಗಳಲ್ಲಿನ ನಿರ್ವಹಣಾ ಕಾರ್ಯದಿಂದಾಗಿ, ದಕ್ಷಿಣ ಪಶ್ಚಿಮ ರೈಲ್ವೆಯು ಹಲವು ರೈಲು ಸೇವೆಗಳನ್ನು ರದ್ದುಗೊಳಿಸಿದೆ ಮತ್ತು ಭಾಗಶಃ ರದ್ದುಪಡಿಸಿದೆ. ಮೈಸೂರು, ಅರಸೀಕೆರೆ, ಶಿವಮೊಗ್ಗ, ಮತ್ತು ಬೆಂಗಳೂರು ಮಾರ್ಗದ ಅನೇಕ ರೈಲುಗಳ ಸಂಚಾರದಲ್ಲಿ ಆಗಸ್ಟ್ ತಿಂಗಳ ನಿಗದಿತ ದಿನಾಂಕಗಳಂದು ಬದಲಾವಣೆಗಳಾಗಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz58c67rr3hw34442hrz0fw4,imgname-indian-railways-1785809213688.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ ಮತ್ತು ಹೊಳೆ ನರಸೀಪುರ ಯಾರ್ಡ್&zwnj;ಗಳಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳಿಂದಾಗಿ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ, ಭಾಗಶಃ ರದ್ದುಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ಪ್ರಕಟಣೆ ಮೂಲಕ ತಿಳಿಸಿದೆ.&lt;/p&gt;&lt;h2&gt;&lt;strong&gt;ರೈಲುಗಳ ರದ್ದತಿ:&lt;/strong&gt;&lt;/h2&gt;&lt;p&gt;1. ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ದೈನಂದಿನ ಪ್ಯಾಸೆಂಜರ್ ಅನ್ನು 19.08.2026 ರಂದು ರದ್ದುಗೊಳಿಸಲಾಗಿದೆ.&lt;/p&gt;&lt;p&gt;2. ರೈಲು ಸಂಖ್ಯೆ 56268 ಮೈಸೂರು-ಅರಸೀಕೆರೆ ದೈನಂದಿನ ಪ್ಯಾಸೆಂಜರ್ ಅನ್ನು 25.08.2026 ಮತ್ತು 01.09.2026 ರಂದು ರದ್ದುಗೊಳಿಸಲಾಗಿದೆ&lt;/p&gt;&lt;h3&gt;&lt;strong&gt;II. ರೈಲುಗಳ ಭಾಗಶಃ ರದ್ದತಿ:&lt;/strong&gt;&lt;/h3&gt;&lt;p&gt;1. ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್&zwnj;ಪ್ರೆಸ್ ಅನ್ನು 19.08.2026 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು.&lt;/p&gt;&lt;p&gt;2. ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್&zwnj;ಪ್ರೆಸ್ ಅನ್ನು 25.08.2026 ಮತ್ತು 01.09.2026 ರಂದು ಅರಸೀಕೆರೆ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗುವುದು.&lt;/p&gt;&lt;h3&gt;&lt;strong&gt;III. ರೈಲುಗಳ ಭಾಗಶಃ ರದ್ದತಿ:&lt;/strong&gt;&lt;/h3&gt;&lt;p&gt;1. ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್&zwnj;ಪ್ರೆಸ್, 19.08.2026 ರಂದು ಪ್ರಾರಂಭವಾಗಲಿದ್ದು, ಮಾರ್ಗದಲ್ಲಿ 90 ನಿಮಿಷಗಳ ಕಾಲ ನಿಯಂತ್ರಣದಲ್ಲಿರಲಿದೆ.&lt;/p&gt;&lt;p&gt;ಇದಾಗಲೇ ಇನ್ನೂ ಕೆಲವು ರೈಲುಗಳ ರದ್ದತಿ ಕುರಿತು ಮಾಹಿತಿ ನೀಡಲಾಗಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 20652:&lt;/strong&gt; ತಾಳಗುಪ್ಪ&ndash;ಕೆಎಸ್ಆರ್ ಬೆಂಗಳೂರು ಎಕ್ಸ್&zwnj;ಪ್ರೆಸ್ (Talguppa &ndash; KSR Bengaluru Express) ರೈಲಿನ ಸಂಚಾರವು ಭಾಗಶಃ ರದ್ದಾಗಲಿದೆ. ಆಗಸ್ಟ್ 22, 23 ಮತ್ತು 26 ರಂದು ಈ ರೈಲು ಅರಸೀಕೆರೆಯಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಮುಂದೆ ಹೋಗುವವರು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 20689: &lt;/strong&gt;ಯಶವಂತಪುರ&ndash;ಶಿವಮೊಗ್ಗ ಟೌನ್ ಇಂಟರ್&zwnj;ಸಿಟಿ ಎಕ್ಸ್&zwnj;ಪ್ರೆಸ್ ( Yesvantpur&ndash;Shivamogga Town Intercity Express) ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ. ಆಗಸ್ಟ್ 22, 23 ಮತ್ತು 26 ರಂದು ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲಿಗೆ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.&lt;/p&gt;&lt;h2&gt;&lt;strong&gt;ಈ ರೈಲುಗಳ ಸೇವೆಗಳೂ ರದ್ದು&lt;/strong&gt;&lt;/h2&gt;&lt;p&gt;ಆಗಸ್ಟ್ 26 ರಂದು ಈ ರೈಲುಗಳ ಸೇವೆ ರದ್ದು ಆಗಲಿವೆ. ಅವುಗಳೆಂದರೆ&lt;/p&gt;&lt;p&gt;ಚಿಕ್ಕಮಗಳೂರು&ndash;ಯಶವಂತಪುರ (ರೈಲು ಸಂಖ್ಯೆ: 16239),&lt;/p&gt;&lt;p&gt;ಯಶವಂತಪುರ&ndash;ಚಿಕ್ಕಮಗಳೂರು (ರೈಲು ಸಂಖ್ಯೆ: 16240),&lt;/p&gt;&lt;p&gt;ಕೆಎಸ್ಆರ್ ಬೆಂಗಳೂರು&ndash;ಮೈಸೂರು ಒಡೆಯರ್ (ರೈಲು ಸಂಖ್ಯೆ: 12614),&lt;/p&gt;&lt;p&gt;ಕೆಎಸ್ಆರ್ ಬೆಂಗಳೂರು&ndash;ತುಮಕೂರು ಮೆಮು (ರೈಲು ಸಂಖ್ಯೆ: 66567) ಹಾಗೂ&lt;/p&gt;&lt;p&gt;ತುಮಕೂರು&ndash;ಕೆಎಸ್ಆರ್ ಬೆಂಗಳೂರು ಮೆಮು (ರೈಲು ಸಂಖ್ಯೆ: 66572)&lt;/p&gt;&lt;p&gt;ಅದೇ ರೀತಿ, ಆಗಸ್ಟ್ 22 ಮತ್ತು 26 ರಂದು ಯಲಹಂಕ&ndash;ಅರಸೀಕೆರೆ (ರೈಲು ಸಂಖ್ಯೆ: 66505) ಮತ್ತು ಅರಸೀಕೆರೆ&ndash;ಯಲಹಂಕ (ರೈಲು ಸಂಖ್ಯೆ: 66506) ಮೆಮು ರೈಲುಗಳ ಸಂಚಾರವೂ ಇರುವುದಿಲ್ಲ.&lt;/p&gt;&lt;p&gt;ಅಂತೆಯೇ, ವಾಸ್ಕೋ ಡ ಗಾಮ&ndash;ಯಶವಂತಪುರ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 17310) ಹಾಗೂ ಮೈಸೂರು&ndash;ಬೆಳಗಾವಿ ವಿಶ್ವಮಾನವ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 20676) ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇವು ತಿಪಟೂರು ಮತ್ತು ತುಮಕೂರು ಬದಲಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/attention-train-passengers-various-trains-between-mysore-shivamogga-cancelled-details-here-suc/articleshow-528fdhc"/>
        </item>
        <item>
            <title><![CDATA[ವರ್ಷದ ಕೆಲವು ತಿಂಗಳು ಮಾತ್ರ ಕಾಣಿಸಿ ಮರೆಯಾಗುವ ‘ನಾಗ ದೇವತೆಯ ಕಣ್ಣು’; ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ]]></title>
            <link>https://kannada.asianetnews.com/life/the-mysterious-demon-eye-of-thailand-a-natural-wonder-at-naka-cave/articleshow-5dga7dk</link>
            <guid isPermaLink="true">https://kannada.asianetnews.com/life/the-mysterious-demon-eye-of-thailand-a-natural-wonder-at-naka-cave/articleshow-5dga7dk</guid>
            <pubDate>Fri, 21 Aug 2026 16:06:46 +0530</pubDate>
            <description><![CDATA[&lt;p&gt;&lt;strong&gt;Demon Eye Thailand:&lt;/strong&gt; ಪ್ರಕೃತಿಯ ಅದ್ಭುತಗಳಲ್ಲಿ ಇದೊಂದು ಅತ್ಯಂತ ವಿಚಿತ್ರ ಮತ್ತು ಭಯಾನಕ ವಿಸ್ಮಯ! ಥೈಲ್ಯಾಂಡ್&zwnj;ನ ಬೆಟ್ಟವೊಂದರಲ್ಲಿ ಬೃಹತ್ &lsquo;ದೈತ್ಯ ಕಣ್ಣು&rsquo; ಪ್ರತ್ಯಕ್ಷವಾಗಿದ್ದು, ಇಡೀ ಜಗತ್ತು ಬೆರಗಿನಿಂದ ನೋಡುತ್ತಿದೆ. ಮನುಷ್ಯನ ಕಣ್ಣನ್ನೇ ಹೋಲುವ ಈ ಆಕೃತಿಯ ಹಿಂದಿರುವ ರಹಸ್ಯವೇನು? ಇದು ದೈವಿಕ ಪವಾಡವೇ ಅಥವಾ ವಿಜ್ಞಾನದ ಕೈಚಳಕವೇ? ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hy9sp87mpf5xv7adcrevs2,imgname-demon-eye-thailand-1787308598984.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರ&lt;/strong&gt;ಕೃತಿಯ ವಿಸ್ಮಯಗಳ ಪಟ್ಟಿಗೆ ಈಗ ಥೈಲ್ಯಾಂಡ್&zwnj;ನ ಈ 'ದೈತ್ಯ ಕಣ್ಣು' ಅಥವಾ &lsquo;ನಾಗ ದೇವತೆಯ ಕಣ್ಣು&rsquo; ಹೊಸ ಸೇರ್ಪಡೆಯಾಗಿದೆ. ಮನುಷ್ಯನ ಕಣ್ಣನ್ನೇ ಹೋಲುವ ಈ ವಿಚಿತ್ರ ಆಕೃತಿ ಈಗ ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದೆ. ಥೈಲ್ಯಾಂಡ್&zwnj;ನ &lsquo;ಬುಯೆಂಗ್ ಕಾನ್&rsquo; ಗಡಿಯಲ್ಲಿರುವ ಫು ಲಂಗ್ಕಾ ನ್ಯಾಶನಲ್ ಪಾರ್ಕ್&zwnj;ನ ವ್ಯಾಪ್ತಿಯಲ್ಲಿರುವ &lsquo;ನಾಕಾ ಕೇವ್&rsquo; (ನಾಕಾ ಗುಹೆ) ಎಂಬ ರಹಸ್ಯ ತಾಣದಲ್ಲಿ ಈ ಅದ್ಭುತ ದೃಶ್ಯ ಗೋಚರಿಸಿದೆ.&lt;/p&gt;&lt;h2&gt;&lt;strong&gt;ಏನಿದು &lsquo;ದೈತ್ಯ ಕಣ್ಣು&rsquo; ಅಥವಾ &lsquo;ನಾಗ ದೇವತೆಯ ಕಣ್ಣು&rsquo;?&lt;/strong&gt;&lt;/h2&gt;&lt;p&gt;ಥೈಲ್ಯಾಂಡ್&zwnj;ನ ಈ ಗುಹೆಯ ಪ್ರದೇಶವು ಕೇವಲ ಬೆಟ್ಟಗುಡ್ಡಗಳು ಇರುವ ಜಾಗವಲ್ಲ, ಇದು ಅನೇಕ ಪುರಾಣ ಗಾಥೆಗಳು ಮತ್ತು ರಹಸ್ಯ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಜಾಗ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಇಲ್ಲಿನ ಬೃಹತ್ ಬಂಡೆಯ ಮೇಲೆ ಮನುಷ್ಯನ ಕಣ್ಣನ್ನೇ ಹೋಲುವ ಆಕೃತಿಯೊಂದು ಪ್ರತ್ಯಕ್ಷವಾಗುತ್ತದೆ. ಇದನ್ನು ನೋಡಲು ಭಯಾನಕವಾಗಿದ್ದರೂ, ಪ್ರವಾಸಿಗರಲ್ಲಿ ಮಾತ್ರ ಅತೀವ ಕುತೂಹಲ ಮೂಡಿಸಿದೆ. ಸ್ಥಳೀಯರು ಇದನ್ನು ಭಕ್ತಿಯಿಂದ &lsquo;ನಾಗ ಐ&rsquo; ಅಥವಾ &lsquo;ನಾಗ ದೇವತೆಯ ಕಣ್ಣು&rsquo; ಎಂದು ಕರೆಯುತ್ತಿದ್ದಾರೆ. ಇದನ್ನು ನೇರವಾಗಿ ನೋಡಿದ ಪ್ರವಾಸಿಗರು &quot;ನಮ್ಮ ಕಣ್ಣುಗಳನ್ನೇ ನಮಗೆ ನಂಬಲಾಗುತ್ತಿಲ್ಲ, ಮೈ ಜುಂ ಎನ್ನುವಂತಹ ಅನುಭವವಾಗುತ್ತಿದೆ&quot; ಎಂದು ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೆಳಕು ಮತ್ತು ನೀರಿನ ನಡುವೆ ಅಡಗಿರುವ ರಹಸ್ಯ&lt;/strong&gt;&lt;/h2&gt;&lt;p&gt;ಇದರ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದರೆ, ಶತಮಾನಗಳ ಕಾಲ ನಡೆದ ಕಲ್ಲಿನ ಸವೆತದಿಂದಾಗಿ ಬಂಡೆಯ ಮೇಲೆ ಸುಮಾರು 1.5 ರಿಂದ 2 ಮೀಟರ್ ಆಳದ ನೈಸರ್ಗಿಕ ಗುಂಡಿಯೊಂದು ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಗುಂಡಿಯಲ್ಲಿ ನೀರು ತುಂಬಿಕೊಂಡಾಗ ವಿಸ್ಮಯಕಾರಿ ಬದಲಾವಣೆ ಕಾಣಿಸಿಕೊಳ್ಳುತ್ತದೆ.&lt;/p&gt;&lt;h2&gt;&lt;strong&gt;ಕಣ್ಣಿನ ಆಕಾರ ಮೂಡುವುದು ಹೇಗೆ?&lt;/strong&gt;&lt;/h2&gt;&lt;p&gt;ಪ್ರತಿ ವರ್ಷ ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ಸೂರ್ಯನ ಕಿರಣಗಳು ಒಂದು ನಿರ್ದಿಷ್ಟ ಕೋನದಲ್ಲಿ ಈ ಗುಂಡಿಯಲ್ಲಿರುವ ನೀರಿನ ಮೇಲೆ ಬಿದ್ದಾಗ, ಬೆಳಕಿನ ಪ್ರತಿಫಲನ ಉಂಟಾಗುತ್ತದೆ. ಈ ಬೆಳಕು ಬೃಹತ್ ಪರ್ವತದ ನಡುವೆ ದೊಡ್ಡದಾದ ಕಣ್ಣೊಂದು ತೆರೆದುಕೊಂಡಂತೆ ಭಾಸವಾಗುವಂತೆ ಮಾಡುತ್ತದೆ. ಅಕ್ಟೋಬರ್ ತಿಂಗಳು ಕಳೆದ ನಂತರ ನೀರಿನ ಮಟ್ಟ ಕಡಿಮೆಯಾಗುವುದರಿಂದ ಮತ್ತು ಮರಗಳ ಒಣ ಎಲೆಗಳು ಗುಂಡಿಯಲ್ಲಿ ಬೀಳುವುದರಿಂದ ಈ ಕಣ್ಣಿನ ಆಕೃತಿ ಮೆಲ್ಲಗೆ ಮರೆಯಾಗುತ್ತದೆ.&lt;/p&gt;&lt;p&gt;ವರ್ಷದ ಕೆಲವು ತಿಂಗಳು ಮಾತ್ರ ಕಾಣಿಸಿಕೊಳ್ಳುವ ಈ ಪ್ರಕೃತಿಯ ಮಾಯಾಜಾಲವನ್ನು ನೋಡಲು ಪ್ರವಾಸಿಗರು &lsquo;ನಾಕಾ ಕೇವ್ ಟ್ರಯಲ್&rsquo; ಮೂಲಕ ಸಾಲುಗಟ್ಟುತ್ತಿದ್ದಾರೆ. ಈ ಅಪರೂಪದ ನೈಸರ್ಗಿಕ ಆಕೃತಿಯನ್ನು ಯಾರೂ ಮುಟ್ಟಬಾರದು ಮತ್ತು ಯಾವುದೇ ರೀತಿಯ ಹಾನಿ ಮಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ 'ದೈತ್ಯ ಕಣ್ಣಿನ' ವಿಡಿಯೋಗಳು ವೈರಲ್ ಆಗುತ್ತಿವೆ.&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/life/the-mysterious-demon-eye-of-thailand-a-natural-wonder-at-naka-cave/articleshow-5dga7dk"/>
        </item>
        <item>
            <title><![CDATA[31 ದೇಶ ಸುತ್ತಿದ ಪ್ರವಾಸಿಗನಿಗೆ ಭಾರತ 'ವಿಚಿತ್ರ ದೇಶ' ಅನಿಸಿದ್ದು ಏಕೆ? ವೈರಲ್ ಆಯ್ತು ಪೋಸ್ಟ್‌!]]></title>
            <link>https://kannada.asianetnews.com/viral/traveller-who-visited-31-countries-on-life-in-india-says-never-seen-such-income-inequality/articleshow-6tzw011</link>
            <guid isPermaLink="true">https://kannada.asianetnews.com/viral/traveller-who-visited-31-countries-on-life-in-india-says-never-seen-such-income-inequality/articleshow-6tzw011</guid>
            <pubDate>Mon, 24 Aug 2026 14:07:35 +0530</pubDate>
            <description><![CDATA[&lt;p&gt;31 ದೇಶಗಳಿಗೆ ಭೇಟಿ ನೀಡಿರುವ ವ್ಯಕ್ತಿಯೊಬ್ಬರು ಭಾರತದಲ್ಲಿನ ಆದಾಯ ಅಸಮಾನತೆ ಕುರಿತು Xನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಪ್ರಮುಖ ನಗರಗಳಲ್ಲಿ ₹2.15 ಲಕ್ಷದವರೆಗಿನ ಬಾಡಿಗೆ, ₹46 ಲಕ್ಷ ತೆರಿಗೆ ಪಾವತಿಸುವವರು ಒಂದೆಡೆ ಇದ್ದರೆ, ಮತ್ತೊಂದೆಡೆ ₹20-30 ಸಾವಿರ ಮಾಸಿಕ ಆದಾಯದಲ್ಲಿ ಜೀವನ ನಡೆಸುವ ಜನರಿದ್ದಾರೆ ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qazq71mwfsbesjhn7h9ad3,imgname-this-traveller-says-india-has-the-most-brutal-income-inequality--1--1787489672417.jpg" type="image/jpeg" height="390" width="690"/>
            <content:encoded><![CDATA[&lt;h2&gt;31 ದೇಶ ಸುತ್ತಿದ ವ್ಯಕ್ತಿ ಹೇಳಿದ ಮಾತು: &lsquo;ಭಾರತದಲ್ಲಿ ಕಂಡಷ್ಟು ಆದಾಯ ಅಸಮಾನತೆ ಎಲ್ಲೂ ನೋಡಿಲ್ಲ&rsquo;&lt;/h2&gt;&lt;p&gt;31 ದೇಶಗಳಿಗೆ ಭೇಟಿ ನೀಡಿರುವ ವ್ಯಕ್ತಿಯೊಬ್ಬರು ಭಾರತದಲ್ಲಿ ವಾಸಿಸುವ ಅನುಭವದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಭಿಪ್ರಾಯ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿನ ಆದಾಯ, ಬಾಡಿಗೆ ಮತ್ತು ಜೀವನಮಟ್ಟದ ನಡುವಿನ ತೀವ್ರ ವ್ಯತ್ಯಾಸ ತಮ್ಮನ್ನು ಅಚ್ಚರಿಗೊಳಿಸಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h3&gt;&lsquo;ಭಾರತದಲ್ಲಿ ವಾಸಿಸುವುದು ವಿಚಿತ್ರ ಅನುಭವ&rsquo;&lt;/h3&gt;&lt;p&gt;Xನಲ್ಲಿ ಹಂಚಿಕೊಂಡ ಪೋಸ್ಟ್&zwnj;ನಲ್ಲಿ, ಪ್ರಮುಖ ಭಾರತೀಯ ನಗರಗಳಲ್ಲಿನ ಬಾಡಿಗೆ ದರಗಳು ಕೆಲವು ಪಾಶ್ಚಿಮಾತ್ಯ ದೇಶಗಳ ನಗರಗಳಿಗೆ ಹೋಲಿಸಬಹುದಾದ ಮಟ್ಟಕ್ಕೆ ತಲುಪಿವೆ ಎಂದು ಅವರು ಹೇಳಿದ್ದಾರೆ. ತಮ್ಮ ಅಪಾರ್ಟ್&zwnj;ಮೆಂಟ್&zwnj;ನ ಕೆಳಗಿರುವ ಮನೆಯೊಂದು ಸುಮಾರು $2,250, ಅಂದರೆ ₹2.15 ಲಕ್ಷದಷ್ಟು ಬಾಡಿಗೆಗೆ ಹೋಗಿದೆ ಎಂದು ಅವರು ಉದಾಹರಿಸಿದ್ದಾರೆ.&lt;/p&gt;&lt;p&gt;ಆದರೆ ಇದೇ ಸಂದರ್ಭದಲ್ಲಿ, ದೇಶದ ಮತ್ತೊಂದು ವರ್ಗದ ಜನರು ತಿಂಗಳಿಗೆ ಕೇವಲ $200&ndash;300, ಅಂದರೆ ಸುಮಾರು ₹19,000&ndash;₹29,000 ಆದಾಯದಲ್ಲಿ ಜೀವನ ನಡೆಸುತ್ತಿರುವುದನ್ನು ಅವರು ಗಮನಿಸಿದ್ದಾರೆ.&lt;/p&gt;&lt;h3&gt;₹46 ಲಕ್ಷ ತೆರಿಗೆ Vs ₹20&ndash;30 ಸಾವಿರ ಮಾಸಿಕ ಆದಾಯ&lt;/h3&gt;&lt;p&gt;ತಮ್ಮ ಅನುಭವವನ್ನು ವಿವರಿಸಲು ಅವರು ಮತ್ತೊಂದು ವೈಯಕ್ತಿಕ ಉದಾಹರಣೆ ನೀಡಿದ್ದಾರೆ. ಅವರ ಆಪ್ತ ಸ್ನೇಹಿತರೊಬ್ಬರು ಕಳೆದ ವರ್ಷ ತೆರಿಗೆಯ ರೂಪದಲ್ಲೇ ಸುಮಾರು $47,500, ಅಂದರೆ ₹46 ಲಕ್ಷ ಪಾವತಿಸಿದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಒಂದೆಡೆ ಹೆಚ್ಚಿನ ಆದಾಯ ಗಳಿಸಿ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುವ ವರ್ಗವಿದ್ದರೆ, ಮತ್ತೊಂದೆಡೆ ತಿಂಗಳಿಗೆ ಕೆಲವೇ ಸಾವಿರ ಅಥವಾ ಹತ್ತಾರು ಸಾವಿರ ರೂಪಾಯಿಗಳಲ್ಲಿ ಜೀವನ ನಡೆಸುವ ದೊಡ್ಡ ಜನಸಂಖ್ಯೆ ಇದೆ ಎಂಬುದು ಅವರ ಪ್ರಮುಖ ವಾದ.&lt;/p&gt;&lt;h3&gt;ಶ್ರೀಮಂತರು&ndash;ಬಡವರ ನಡುವೆ ಭಾರೀ ಅಂತರ&lt;/h3&gt;&lt;p&gt;ಈ ವೈರುಧ್ಯವನ್ನು ಅವರು ಭಾರತದಲ್ಲಿ ತಾವು ಕಂಡ ಅತ್ಯಂತ &ldquo;ಅರಿವಿನ ಅಸಂಗತ&rdquo; ಅನುಭವಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ. ಕೊನೆಯಲ್ಲಿ ಭಾರತವನ್ನು &ldquo;ವಾಸಿಸಲು ವಿಚಿತ್ರ ದೇಶ&rdquo; ಎಂದು ಕರೆದ ಅವರು, ತಾವು ಕಂಡ ದೇಶಗಳಲ್ಲೇ ಅತ್ಯಂತ ತೀವ್ರ ಆದಾಯ ಅಸಮಾನತೆ ಇಲ್ಲಿ ಕಾಣಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h3&gt;ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ!&lt;/h3&gt;&lt;p&gt;ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಭಾರತದ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಆದಾಯದ ಅಂತರ ನಿಜವಾದ ಸಮಸ್ಯೆ ಎಂದು ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;ಇನ್ನು ಕೆಲವರು ಡಾಲರ್&zwnj;ಗಳಲ್ಲಿ ಭಾರತೀಯ ಆದಾಯ ಮತ್ತು ಬಾಡಿಗೆಯನ್ನು ಹೋಲಿಸುವುದು ಸರಿಯಾದ ಚಿತ್ರಣ ನೀಡುವುದಿಲ್ಲ ಎಂದು ವಾದಿಸಿದ್ದಾರೆ. ಅಮೆರಿಕದಂತಹ ಶ್ರೀಮಂತ ದೇಶಗಳಲ್ಲಿಯೂ ಅತಿ ಶ್ರೀಮಂತರು ಮತ್ತು ಕಡಿಮೆ ಆದಾಯದ ಕಾರ್ಮಿಕರ ನಡುವೆ ದೊಡ್ಡ ಅಂತರವಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಹೀಗಾಗಿ ಈ ಪೋಸ್ಟ್ ಕೇವಲ ಬಾಡಿಗೆ ಅಥವಾ ಸಂಬಳದ ಚರ್ಚೆಯಲ್ಲ; ಭಾರತದ ನಗರ ಜೀವನದ ವೆಚ್ಚ, ಆದಾಯದ ಅಂತರ ಮತ್ತು ಆರ್ಥಿಕ ಅಸಮಾನತೆ ಕುರಿತ ಮತ್ತೊಂದು ದೊಡ್ಡ ಚರ್ಚೆಗೆ ವೇದಿಕೆಯಾಗಿದೆ.&lt;/p&gt;&lt;p&gt;I've been to 31 countries but nothing feels more cognitively dissonant than living in India right nowRents in good locations are near western tier. The apartment below mine rented out for $2,250 last weekIncomes are absurd, as are taxes. Best friend paid $47,500 last year in&hellip;&lt;/p&gt;&lt;p&gt;&mdash; MetaHacker (@metahacker_) August 22, 2026&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/traveller-who-visited-31-countries-on-life-in-india-says-never-seen-such-income-inequality/articleshow-6tzw011"/>
        </item>
        <item>
            <title><![CDATA[ಸಾಯುವ ಮುನ್ನ ಒಮ್ಮೆಯಾದರೂ ಸ್ವರ್ಗ ನೋಡಬೇಕು ಅಂದ್ರೆ ಇಲ್ಲಿಗೆ ಬನ್ನಿ! ಹಿಮಾಲಯದ ಮಡಿಲಲ್ಲಿದೆ ಈ ಅದ್ಭುತ ತಾಣ]]></title>
            <link>https://kannada.asianetnews.com/gallery/travel/heaven-on-the-earth-must-visit-place-in-himalaya-madhyamaheshwar-hill-8dub6ys</link>
            <guid isPermaLink="true">https://kannada.asianetnews.com/gallery/travel/heaven-on-the-earth-must-visit-place-in-himalaya-madhyamaheshwar-hill-8dub6ys</guid>
            <pubDate>Fri, 21 Aug 2026 19:05:14 +0530</pubDate>
            <description><![CDATA[&lt;p&gt;Madhyamaheshwar: ಉತ್ತರಾಖಂಡದ ಮದ್ಮಹೇಶ್ವರವು ಪಂಚ ಕೇದಾರಗಳಲ್ಲಿ ಒಂದಾಗಿದೆ. ನೀವು ಸಾಯುವ ಮುನ್ನ ಒಂದು ಬಾರಿಯಾದರು ಸ್ವರ್ಗ ನೋಡಬೇಕು ಅಂದ್ರೆ, ನೀವು ಈ ತಾಣಕ್ಕೆ ಭೇಟಿ ನೀಡಲೇಬೇಕು. ಹಿಮಚ್ಚಾಧಿತ ಪರ್ವತಗಳು, ಶಿವನ ದೇವಾಲಯ, ಸುಂದರ ಪ್ರಕೃತಿ, ಹಸಿರು ಹೊದ್ದ ಬೆಟ್ಟಗಳು, ಇದೇ ನಿಜವಾದ ಸ್ವರ್ಗ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j8ecyvh3xf5jtenq3d7xhw,imgname-madmaheshwar-1787319235533.jpg" type="image/jpeg" height="390" width="690"/>
            <content:encoded><![CDATA[&lt;p&gt;Madhyamaheshwar: ಉತ್ತರಾಖಂಡದ ಮದ್ಮಹೇಶ್ವರವು ಪಂಚ ಕೇದಾರಗಳಲ್ಲಿ ಒಂದಾಗಿದೆ. ನೀವು ಸಾಯುವ ಮುನ್ನ ಒಂದು ಬಾರಿಯಾದರು ಸ್ವರ್ಗ ನೋಡಬೇಕು ಅಂದ್ರೆ, ನೀವು ಈ ತಾಣಕ್ಕೆ ಭೇಟಿ ನೀಡಲೇಬೇಕು. ಹಿಮಚ್ಚಾಧಿತ ಪರ್ವತಗಳು, ಶಿವನ ದೇವಾಲಯ, ಸುಂದರ ಪ್ರಕೃತಿ, ಹಸಿರು ಹೊದ್ದ ಬೆಟ್ಟಗಳು, ಇದೇ ನಿಜವಾದ ಸ್ವರ್ಗ.&lt;/p&gt;&lt;img&gt;&lt;p&gt;ಪರ್ವತಗಳು, ಹಸಿರು ಕಾಡುಗಳು, ಜಲಪಾತಗಳು, ನದಿಗಳು ಮತ್ತು ಹಿಮದಿಂದ ಆವೃತವಾಗಿರುವ ಎತ್ತರದ ಶಿಖರಗಳ ನಡುವೆ ನೆಮ್ಮದಿಯ ಕ್ಷಣಗಳನ್ನು ಕಳೆಯಬೇಕು ಅನ್ನೋ ಆಸೆ ನಿಮಗಿದ್ದರೆ, ಉತ್ತರಾಖಂಡದ ಮದ್ಮಹೇಶ್ವರ ನಿಮ್ಮ ಮುಂದಿನ ಪ್ರವಾಸದ ತಾಣವಾಗಬಹುದು. ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಮದ್ಮಹೇಶ್ವರವು ಪಂಚಕೇದಾರಗಳಲ್ಲಿ ಒಂದಾಗಿದ್ದು, ಇಲ್ಲಿ ಶಿವನ ಮಧ್ಯಭಾಗ ಅಂದರೆ ನಾಭಿಯನ್ನು ಪೂಜಿಸಲಾಗುತ್ತದೆ.&lt;/p&gt;&lt;img&gt;&lt;p&gt;ಸಮುದ್ರಮಟ್ಟದಿಂದ ಸುಮಾರು 3,497 ಮೀಟರ್ ಎತ್ತರದಲ್ಲಿರುವ ಮದ್ಮಹೇಶ್ವರ ದೇವಾಲಯದ ಸುತ್ತಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿಂದ ಚೌಖಂಭಾ ಸೇರಿದಂತೆ ಹಿಮಾಲಯದ ಎತ್ತರದ ಶಿಖರಗಳ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವವರಿಗೂ ಇದು ವಿಶೇಷ ಅನುಭವ ನೀಡುವ ತಾಣವಾಗಿದೆ.&lt;/p&gt;&lt;img&gt;&lt;p&gt;ದೆಹಲಿಯಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸುವವರು ಹರಿದ್ವಾರ, ಋಷಿಕೇಶ, ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ ಮತ್ತು ಊಖಿಮಠ ಮಾರ್ಗವಾಗಿ ರಾಂಸಿ ಗ್ರಾಮ ತಲುಪಬಹುದು. ರಾಂಸಿಯನ್ನು ಮದ್ಮಹೇಶ್ವರ ಟ್ರೆಕ್&zwnj;ನ ಪ್ರಮುಖ ಬೇಸ್ ಪಾಯಿಂಟ್ ಎಂದು ಪರಿಗಣಿಸಲಾಗುತ್ತದೆ. ರಾಂಸಿಯ ನಂತರ ವಾಹನ ಸಂಚಾರದ ಮಾರ್ಗ ಮುಗಿಯುತ್ತದೆ. ಅಲ್ಲಿಂದ ಸುಮಾರು 16ರಿಂದ 17 ಕಿಲೋಮೀಟರ್&zwnj;ಗಳಷ್ಟು ಕಾಲ್ನಡಿಗೆ ಟ್ರೆಕ್ ಮಾಡಬೇಕಾಗುತ್ತದೆ.&lt;/p&gt;&lt;img&gt;&lt;p&gt;ಟ್ರೆಕ್ ಆರಂಭಿಸಿದ ಬಳಿಕ ಗೊಂಡಾರ್ ಮತ್ತು ಬಂತೋಲಿ ಸೇರಿದಂತೆ ಹಲವು ಸುಂದರ ಬೆಟ್ಟದ ಹಳ್ಳಿಗಳು ಎದುರಾಗುತ್ತವೆ. ಕಾಡು, ನದಿ, ಜಲಪಾತ ಮತ್ತು ಎತ್ತರದ ಪರ್ವತಗಳ ನಡುವೆ ಸಾಗುವ ಈ ಟ್ರೆಕ್ ಸ್ವತಃ ಒಂದು ಮರೆಯಲಾಗದ ಅನುಭವ. ಮಾರ್ಗಮಧ್ಯೆ ಪ್ರವಾಸಿಗರಿಗೆ ತಂಗಲು ಮತ್ತು ಊಟ ಮಾಡಲು ಮೂಲಭೂತ ಸೌಲಭ್ಯಗಳಿರುವ ಹೋಂಸ್ಟೇಗಳು ಹಾಗೂ ಸಣ್ಣ ವಸತಿ ಸ್ಥಳಗಳು ಕೂಡ ಸಿಗುತ್ತವೆ.&lt;/p&gt;&lt;img&gt;&lt;p&gt;ಮದ್ಮಹೇಶ್ವರ ದೇವಾಲಯದಿಂದ ಸುಮಾರು 2 ಕಿಲೋಮೀಟರ್ ಮುಂದೆ ಬುದ್ಧ ಮದ್ಮಹೇಶ್ವರ ಇದೆ. ಇಲ್ಲಿಂದ ಚೌಖಂಭಾ, ನೀಲಕಂಠ ಸೇರಿದಂತೆ ಹಿಮದಿಂದ ಆವೃತವಾಗಿರುವ ಹಲವು ಪರ್ವತ ಶಿಖರಗಳ ಅದ್ಭುತ ನೋಟ ಕಾಣಿಸುತ್ತದೆ. ಇದರ ಜೊತೆಗೆ ಕಾಂಚನಿ ತಾಲ್ ಎಂಬ ಎತ್ತರ ಪ್ರದೇಶದಲ್ಲಿರುವ ಹಿಮನದಿ ಸರೋವರವೂ ಇದೆ. ಆದರೆ ಅಲ್ಲಿಗೆ ತಲುಪಲು ಪ್ರತ್ಯೇಕ ಟ್ರೆಕ್ ಮಾಡಬೇಕಾಗುತ್ತದೆ.&lt;/p&gt;&lt;img&gt;&lt;p&gt;ಮದ್ಮಹೇಶ್ವರ ಟ್ರೆಕ್ ಸುಲಭವಾದ ಪ್ರಯಾಣ ಅಲ್ಲ. ಎತ್ತರ ಮತ್ತು ಬದಲಾಗುವ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ದೈಹಿಕ ಸಾಮರ್ಥ್ಯ, ಬೆಚ್ಚಗಿನ ಬಟ್ಟೆ, ಸಾಕಷ್ಟು ನೀರು ಮತ್ತು ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕು. ವಿಶೇಷವಾಗಿ ಮಳೆಗಾಲದಲ್ಲಿ ರಸ್ತೆಗಳು ಮತ್ತು ಟ್ರೆಕ್ ಮಾರ್ಗಗಳ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಆಡಳಿತ ಅಥವಾ ಅನುಭವಿ ಗೈಡ್&zwnj;ಗಳಿಂದ ಹವಾಮಾನ ಹಾಗೂ ಮಾರ್ಗದ ಮಾಹಿತಿ ಪಡೆದುಕೊಂಡ ನಂತರವೇ ಪ್ರಯಾಣ ಆರಂಭಿಸುವುದು ಉತ್ತಮ. ಮದ್ಮಹೇಶ್ವರವು ಕೇವಲ ಧಾರ್ಮಿಕ ತಾಣವಲ್ಲ; ಹಿಮಾಲಯದ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಲು ಬಯಸುವವರಿಗೆ ಇದು ನೆನಪಿನಲ್ಲಿ ಉಳಿಯುವ ಪ್ರವಾಸದ ಅನುಭವವಾಗಬಹುದು.&lt;/p&gt;]]></content:encoded>
            <category>travel</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/travel/heaven-on-the-earth-must-visit-place-in-himalaya-madhyamaheshwar-hill-8dub6ys"/>
        </item>
        <item>
            <title><![CDATA[ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್‌: ಬೇಡಿಕೆ ಮೇರೆಗೆ ಎರಡು ಹೊಸ ರೈಲುಗಳ ಘೋಷಣೆ...! ಇಲ್ಲಿದೆ ನೋಡಿ ಸಂಪೂರ್ಣ ರೈಲ್ವೆ ವೇಳಾಪಟ್ಟಿ]]></title>
            <link>https://kannada.asianetnews.com/karnataka-districts/shivamogga-to-machilipatnam-shivamogga-to-guntakal-special-trains-announced-kvn/articleshow-aku7tlx</link>
            <guid isPermaLink="true">https://kannada.asianetnews.com/karnataka-districts/shivamogga-to-machilipatnam-shivamogga-to-guntakal-special-trains-announced-kvn/articleshow-aku7tlx</guid>
            <pubDate>Sat, 29 Aug 2026 11:43:22 +0530</pubDate>
            <description><![CDATA[ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಕಟಣೆಯಂತೆ, ಶಿವಮೊಗ್ಗ ಮತ್ತು ಆಂಧ್ರಪ್ರದೇಶದ ಮಚಿಲಿಪಟ್ಟಣಂ ಹಾಗೂ ಗುಂತಕಲ್ ನಡುವೆ ವಿಶೇಷ ರೈಲು ಸೇವೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ. ಈ 'ಬೇಡಿಕೆಯ ಮೇರೆಗೆ ರೈಲು' (TOD) ಸೇವೆಯು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಆಂಧ್ರದೊಂದಿಗೆ ಸಂಪರ್ಕವನ್ನು ಸುಲಭಗೊಳಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksphq7ck9atjhr7p4x09t11k,imgname-shivamogga-railway-station-1779946986898.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಶಿವಮೊಗ್ಗ ಜನತೆಗೆ ಮತ್ತೊಂದು ವಿಶೇಷ ಸಿಹಿಸುದ್ದಿ ದೊರೆತಿದ್ದು, ಆಂಧ್ರ ಪ್ರದೇಶದ ಮಚಿಲಿಪಟ್ಟಣಂ ಮತ್ತು ಶಿವಮೊಗ್ಗ ನಡುವೆ ಹಾಗೂ ಆಂಧ್ರ ಪ್ರದೇಶದ ಗುಂತಕಲ್ ಮತ್ತು ಶಿವಮೊಗ್ಗ ಮಾರ್ಗಗಳಲ್ಲಿ ವಿಶೇಷ ರೈಲು ಸೇವೆಗಳನ್ನು ರೈಲ್ವೆ ಇಲಾಖೆ ಘೋಷಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.&lt;/p&gt;&lt;p&gt;ದಕ್ಷಿಣ ಮಧ್ಯ ರೈಲ್ವೆ ಹಾಗೂ ನೈಋತ್ಯ ರೈಲ್ವೆಯ ಸಮನ್ವಯದಲ್ಲಿ ಬೇಡಿಕೆಯ ಮೇಲೆ ರೈಲು [Train on Demand - TOD] ಅನ್ವಯ ಎರಡು ವಿಶೇಷ ರೈಲ್ವೆ ಸೇವೆಗಳನ್ನು ಘೋಷಿಸಿದೆ. ಶಿವಮೊಗ್ಗ ಹಾಗೂ ಆಂಧ್ರ ಪ್ರದೇಶದ ಪ್ರಮುಖ ನಗರಗಳ ನಡುವಿನ ಪ್ರಯಾಣಿಕರಿಗೆ ಇದು ಅನುಕೂಲ ಕಲ್ಪಿಸಲಿದೆ. ಒಟ್ಟು 20 ಬೋಗಿಗಳ ರೈಲು ಇದಾಗಿದ್ದು. ಇದರಲ್ಲಿ 1 ಫಸ್ಟ್ ಎಸಿ/ಸೆಕೆಂಡ್ ಎಸಿ ಸಂಯೋಜಿತ ಬೋಗಿ, 1 ಸೆಕೆಂಡ್ ಎಸಿ, 2 ಥರ್ಡ್ ಎಸಿ, 9 ಸ್ಲೀಪರ್, 5 ಜನರಲ್ ಹಾಗೂ 2 SLR (Seating-cum-Luggage Rake) ಬೋಗಿಗಳು ಇರಲಿವೆ.&lt;/p&gt;&lt;h2&gt;&lt;strong&gt;ರೈಲುಗಳ ವೇಳಾಪಟ್ಟಿ:&lt;/strong&gt;&lt;/h2&gt;&lt;p&gt;1. ಮಚಿಲಿಪಟ್ಟಣಂ&ndash;ಶಿವಮೊಗ್ಗ&ndash;ಮಚಿಲಿಪಟ್ಟಣಂ ವಿಶೇಷ ರೈಲು (07217/07218):&lt;/p&gt;&lt;p&gt;ರೈಲು ಸಂಖ್ಯೆ 07217 (ಮಚಿಲಿಪಟ್ಟಣಂ ಇಂದ ಶಿವಮೊಗ್ಗ ವರೆಗೆ): ಆ.30 ರಂದು ಮಚಿಲಿಪಟ್ಟಣಂನಿಂದ ಮಧ್ಯಾಹ್ನ 3.55ಕ್ಕೆ ಹೊರಟು, ಆ. 31 ಮಧ್ಯಾಹ್ನ 3ಕ್ಕೆ ಶಿವಮೊಗ್ಗ ತಲುಪಲಿದೆ.&lt;/p&gt;&lt;p&gt;ರೈಲು ಸಂಖ್ಯೆ 07218 (ಶಿವಮೊಗ್ಗದಿಂದ ಮಚಿಲಿಪಟ್ಟಣಂ ವರೆಗೆ): ಸೆ. 2 ರಂದು ಶಿವಮೊಗ್ಗದಿಂದ ಸಂಜೆ 5.40ಕ್ಕೆ ಹೊರಟು, ಸೆ.3 ಮಧ್ಯಾಹ್ನ 3.55ಕ್ಕೆ ಮಚಿಲಿಪಟ್ಟಣಂ ತಲುಪಲಿದೆ.&lt;/p&gt;&lt;h3&gt;&lt;strong&gt;2. ಶಿವಮೊಗ್ಗ&ndash;ಗುಂತಕಲ್&ndash;ಶಿವಮೊಗ್ಗ ವಿಶೇಷ ರೈಲು (07219/07220):&lt;/strong&gt;&lt;/h3&gt;&lt;p&gt;ರೈಲು ಸಂಖ್ಯೆ 07219 (ಶಿವಮೊಗ್ಗದಿಂದ ಗುಂತಕಲ್ ವರೆಗೆ): ಆ.31ರಂದು ಶಿವಮೊಗ್ಗದಿಂದ ಸಂಜೆ 5.40ಕ್ಕೆ ಹೊರಟು, ಸೆ.1ರ ಬೆಳಗ್ಗೆ 7ಕ್ಕೆ ಗುಂತಕಲ್ ತಲುಪಲಿದೆ.&lt;/p&gt;&lt;p&gt;ರೈಲು ಸಂಖ್ಯೆ 07220 (ಗುಂತಕಲ್ ಇಂದ ಶಿವಮೊಗ್ಗವರೆಗೆ): ಸೆ. 2ರಂದು ಗುಂತಕಲ್&zwnj;ನಿಂದ ರಾತ್ರಿ 1.45ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 3ಕ್ಕೆ ಶಿವಮೊಗ್ಗ ತಲುಪಲಿದೆ.&lt;/p&gt;&lt;p&gt;ಈ ವಿಶೇಷ ರೈಲುಗಳು ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ ಹಾಗೂ ಅನಂತಪುರ ಸೇರಿದಂತೆ ಪ್ರಮುಖ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು, ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಯಾಣಿಕರಿಗೆ ಆಂಧ್ರ ಪ್ರದೇಶದೊಂದಿಗೆ ರೈಲು ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಲಿವೆ.&lt;/p&gt;&lt;p&gt;ಈ ವಿಶೇಷ ರೈಲುಗಳ ವೇಳಾಪಟ್ಟಿ ಹಾಗೂ ಕಾಯ್ದಿರಿಸುವಿಕೆಯ ಸೌಲಭ್ಯ ICMS ಮತ್ತು NTES ವ್ಯವಸ್ಥೆಗಳಲ್ಲಿ ಲಭ್ಯವಿದ್ದು, ಪ್ರಯಾಣಿಕರು ಮುಂಗಡ ಕಾಯ್ದಿರಿಸಿಕೊಳ್ಳಬಹುದಾಗಿದೆ.&lt;/p&gt;&lt;p&gt;ಹಬ್ಬದ ವೇಳೆ ಶಿವಮೊಗ್ಗ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳ ನಡುವೆ ಪ್ರಯಾಣಿಸುವ ಸಾರ್ವಜನಿಕರಿಗೆ ಈ ವಿಶೇಷ ರೈಲು ಸೇವೆಗಳು ಹೆಚ್ಚಿನ ಅನುಕೂಲವನ್ನು ಒದಗಿಸಲಿವೆ. ವಿಶೇಷವಾಗಿ ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಿಗಳು ಹಾಗೂ ಯಾತ್ರಾರ್ಥಿಗಳಿಗೆ ಇದು ಉಪಯುಕ್ತವಾಗಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ವಿನಂತಿಸುತ್ತೇನೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.&lt;/p&gt;&lt;p&gt;ಶಿವಮೊಗ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮನವಿಗೆ ಸ್ಪಂದಿಸಿ ಈ ವಿಶೇಷ ರೈಲು ಸೇವೆಗಳನ್ನು ಒದಗಿಸಿರುವುದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಜಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಜಿ ಮತ್ತು ಶ್ರೀ ರವನೀತ್ ಸಿಂಗ್ ಬಿಟ್ಟು ಜಿ ಅವರಿಗೆ ಲೋಕಸಭಾ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಂಸದರು ತಿಳಿಸಿದ್ದಾರೆ.&lt;/p&gt;&lt;p&gt;ಶಿವಮೊಗ್ಗದ ಜನತೆಗೆ ಇನ್ನಷ್ಟು ಉತ್ತಮ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಿರಂತರವಾಗಿರಲಿವೆ. ಪ್ರಯಾಣಿಕರು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ. ಈ ಮಾರ್ಗಗಳಿಗೆ ಉತ್ತಮ ಸ್ಪಂದನೆ ದೊರೆತಲ್ಲಿ ಮುಂದೆ ನಿಯತವಾಗಿ ಈ ಮಾರ್ಗಗಳಲ್ಲಿ ರೈಲು ಸೇವೆ ಒದಗಿಸಲು ಅಗತ್ಯ ಕ್ರಮಕ್ಕಾಗಿ ಒತ್ತಾಯಿಸಲಾಗುವುದು ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/shivamogga-to-machilipatnam-shivamogga-to-guntakal-special-trains-announced-kvn/articleshow-aku7tlx"/>
        </item>
        <item>
            <title><![CDATA[₹85 ಲಕ್ಷದ ಕೆಲಸಕ್ಕೆ ಗಂಡ ಟಾಟಾ.. ₹1.5 ಲಕ್ಷ ಸಂಬಳದ ಹೆಂಡತಿಯಿಂದ ಬಿಗ್ ಸಪೋರ್ಟ್! ಕಾರಣವೇನು ಗೊತ್ತಾ?]]></title>
            <link>https://kannada.asianetnews.com/viral/techie-quits-high-paying-job-to-chase-travel-dreams-his-wife-supports-with-1-5-lakh-salary/articleshow-arding6</link>
            <guid isPermaLink="true">https://kannada.asianetnews.com/viral/techie-quits-high-paying-job-to-chase-travel-dreams-his-wife-supports-with-1-5-lakh-salary/articleshow-arding6</guid>
            <pubDate>Sun, 23 Aug 2026 16:54:43 +0530</pubDate>
            <description><![CDATA[&lt;p&gt;₹85 ಲಕ್ಷ ವಾರ್ಷಿಕ ವೇತನದ ಸಾಫ್ಟ್&zwnj;ವೇರ್ ಉದ್ಯೋಗ ತೊರೆದ ಬೆಂಗಳೂರಿನ ಟೆಕ್ಕಿ ಸಕ್ಷಮ್ ರಾಜ್ ಸೇಠ್, ಇದೀಗ ಪೂರ್ಣಕಾಲಿಕ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಸಮಯದ ಸ್ವಾತಂತ್ರ್ಯಕ್ಕಾಗಿ ಅವರು ಈ ನಿರ್ಧಾರ ಕೈಗೊಂಡಿದ್ದು, ಸಂಗಾತಿ ಸ್ಮೃತಿ ಸಿದಾನಾ ₹1.5 ಲಕ್ಷ ಮಾಸಿಕ ಸಂಬಳದ ಸಾಫ್ಟ್&zwnj;ವೇರ್ ಉದ್ಯೋಗ ಮುಂದುವರಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0pf9vpb77pqpw1b657bsxnw,imgname-from--85-lakh-software-job-to-full-time-travel-creator---couple-s-bold-career-bet--1--1787460644554.jpg" type="image/jpeg" height="390" width="690"/>
            <content:encoded><![CDATA[&lt;h2&gt;₹85 ಲಕ್ಷದ ಉದ್ಯೋಗ ತೊರೆದು ಟ್ರಾವೆಲ್ ಕಂಟೆಂಟ್&zwnj;: ಬೆಂಗಳೂರಿನ ಟೆಕ್ಕಿಯ ಹೊಸ ಬದುಕಿನ ಪ್ರಯೋಗ&lt;/h2&gt;&lt;p&gt;ಬೆಂಗಳೂರಿನ ಸಾಫ್ಟ್&zwnj;ವೇರ್ ಎಂಜಿನಿಯರ್ ಸಕ್ಷಮ್ ರಾಜ್ ಸೇಠ್ ವರ್ಷಕ್ಕೆ ₹85 ಲಕ್ಷ ವೇತನ ನೀಡುತ್ತಿದ್ದ ಉದ್ಯೋಗಕ್ಕೆ ವಿದಾಯ ಹೇಳಿ, ಇದೀಗ ಪೂರ್ಣಕಾಲಿಕ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಗಿ ಹೊಸ ವೃತ್ತಿಜೀವನ ಆರಂಭಿಸಿದ್ದಾರೆ. ಉತ್ತಮ ಸಂಬಳ, ಕಾರ್ಪೊರೇಟ್ ಭದ್ರತೆ ಇದ್ದರೂ, ಏಕತಾನತೆಯ ದಿನಚರಿ ಮತ್ತು ಸಮಯದ ಮೇಲಿನ ಕಡಿಮೆ ನಿಯಂತ್ರಣ ಅವರನ್ನು ವೃತ್ತಿ ಬದಲಾವಣೆಯತ್ತ ಕೊಂಡೊಯ್ದಿದೆ.&lt;/p&gt;&lt;h3&gt;₹85 ಲಕ್ಷದ ಪ್ಯಾಕೇಜ್&zwnj;ಗಿಂತ ಸ್ವಾತಂತ್ರ್ಯ ಮುಖ್ಯವಾಯಿತೇ?&lt;/h3&gt;&lt;p&gt;ಸೇಠ್ ಪ್ರಕಾರ, ಉದ್ಯೋಗ ತೊರೆಯುವ ನಿರ್ಧಾರವು ಕೆಲಸದ ಮೇಲಿನ ಅಸಮಾಧಾನದಿಂದ ಬಂದದ್ದಲ್ಲ. ಬದಲಾಗಿ, ಕೆಲಸವೇ ತಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ ಮತ್ತು ಗಳಿಕೆಯಿದ್ದರೂ ಜೀವನವನ್ನು ತಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ಮೂಡಿತ್ತು.&lt;/p&gt;&lt;p&gt;ಈ ನಡುವೆ, ಅವರು ತಮ್ಮ ಸಂಗಾತಿ ಸ್ಮೃತಿ ಸಿದಾನಾ ಅವರೊಂದಿಗೆ ಈಗಾಗಲೇ ಟ್ರಾವೆಲ್ ಕಂಟೆಂಟ್ ಮಾಡುತ್ತಿದ್ದರು. ಹೀಗಾಗಿ ಅದನ್ನೇ ಪೂರ್ಣಕಾಲಿಕ ವೃತ್ತಿಯನ್ನಾಗಿ ಪ್ರಯತ್ನಿಸಲು ನಿರ್ಧರಿಸಿದರು.&lt;/p&gt;&lt;h3&gt;ಕಂಟೆಂಟ್ ಕ್ರಿಯೇಷನ್&zwnj;ಗೂ ಇದೆ &lsquo;ಬಿಗ್ ರಿಸ್ಕ್&rsquo;&lt;/h3&gt;&lt;p&gt;ಸ್ಥಿರ ಸಂಬಳವನ್ನು ತೊರೆದು ಕಂಟೆಂಟ್ ಕ್ಷೇತ್ರಕ್ಕೆ ಕಾಲಿಡುವುದು ಸುಲಭದ ನಿರ್ಧಾರವಲ್ಲ. ಪ್ರತಿ ತಿಂಗಳು ಖಚಿತ ಆದಾಯವಿಲ್ಲ, ವೃತ್ತಿ ಬೆಳವಣಿಗೆಗೆ ನಿಶ್ಚಿತ ಮಾರ್ಗವಿಲ್ಲ. ಪ್ರಯಾಣಿಸುವುದರ ಜೊತೆಗೆ ಕಥೆ ಹುಡುಕುವುದು, ಶೂಟಿಂಗ್, ಎಡಿಟಿಂಗ್, ಬ್ರ್ಯಾಂಡ್&zwnj;ಗಳಿಗೆ ಪಿಚ್ ಮಾಡುವುದು ಮತ್ತು ನಿರಂತರವಾಗಿ ಹೊಸ ಕಂಟೆಂಟ್ ನೀಡುವುದು ಸವಾಲಿನ ಕೆಲಸವಾಗಿದೆ.&lt;/p&gt;&lt;p&gt;ಸೇಠ್ ಅವರ ಹೊಸ ಆದಾಯವು ಸಾಫ್ಟ್&zwnj;ವೇರ್ ಉದ್ಯೋಗದ ವೇತನಕ್ಕೆ ಹತ್ತಿರವೂ ಇಲ್ಲ. ಆದರೂ, ಸಮಯದ ಮೇಲಿನ ಹೆಚ್ಚಿನ ನಿಯಂತ್ರಣ ಮತ್ತು ಇಷ್ಟದ ಕೆಲಸ ಮಾಡುವ ಅವಕಾಶ ಅವರಿಗೆ ಪ್ರಮುಖವಾಗಿದೆ.&lt;/p&gt;&lt;h3&gt;ಒಬ್ಬರ ಉದ್ಯೋಗ, ಮತ್ತೊಬ್ಬರ ಸ್ಥಿರ ಆದಾಯ!&lt;/h3&gt;&lt;p&gt;ಈ ದಂಪತಿಯ ವೃತ್ತಿ ತಂತ್ರದಲ್ಲಿ ವಿಶೇಷತೆ ಇದೆ. ಸೇಠ್ ಸ್ಥಿರ ಉದ್ಯೋಗ ತೊರೆದರೆ, ಸಿದಾನಾ ತಮ್ಮ ಸಾಫ್ಟ್&zwnj;ವೇರ್ ಎಂಜಿನಿಯರಿಂಗ್ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಅವರು ತಿಂಗಳಿಗೆ ಸುಮಾರು ₹1.5 ಲಕ್ಷ ಗಳಿಸುತ್ತಿದ್ದು, ಜೊತೆಗೆ ಅರೆಕಾಲಿಕವಾಗಿ ಟ್ರಾವೆಲ್ ಕಂಟೆಂಟ್ ಕೂಡ ಮಾಡುತ್ತಿದ್ದಾರೆ.&lt;/p&gt;&lt;p&gt;ಇದರಿಂದ ಕುಟುಂಬಕ್ಕೆ ಒಂದು ಕಡೆ ಸ್ಥಿರ ಆದಾಯ ಮುಂದುವರಿದರೆ, ಮತ್ತೊಂದೆಡೆ ಸೇಠ್ ತಮ್ಮ ಹೊಸ ವೃತ್ತಿಯನ್ನು ಯಾವುದೇ ತಕ್ಷಣದ ಆರ್ಥಿಕ ಒತ್ತಡವಿಲ್ಲದೆ ಕಟ್ಟಿಕೊಳ್ಳಲು ಅವಕಾಶ ಸಿಕ್ಕಿದೆ.&lt;/p&gt;&lt;h3&gt;&lsquo;ಟ್ರಾವೆಲ್ ಲೈಫ್&rsquo; ಅಷ್ಟು ಸುಲಭವಲ್ಲ&lt;/h3&gt;&lt;p&gt;ಪ್ರಯಾಣದ ವಿಡಿಯೋಗಳಲ್ಲಿ ಕಾಣುವ ಸ್ವಾತಂತ್ರ್ಯದ ಹಿಂದೆ ಸಾಕಷ್ಟು ಪರಿಶ್ರಮವಿದೆ. ದಂಪತಿ ಕೂಡ ಪೂರ್ಣಕಾಲಿಕ ಕಂಟೆಂಟ್ ಕ್ರಿಯೇಷನ್ ಅನ್ನು ರೊಮ್ಯಾಂಟಿಸೈಸ್ ಮಾಡಬಾರದು ಎನ್ನುತ್ತಾರೆ.&lt;/p&gt;&lt;p&gt;ಸಣ್ಣ ರಜೆಯ ಬದಲು ದೀರ್ಘಾವಧಿಯ ವಾಸ್ತವ್ಯ ಆಯ್ಕೆ ಮಾಡಿಕೊಂಡು, ಪ್ರಯಾಣ, ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಈ ಹೊಸ ಜೀವನಶೈಲಿ ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ.&lt;/p&gt;]]></content:encoded>
            <category>travel</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/techie-quits-high-paying-job-to-chase-travel-dreams-his-wife-supports-with-1-5-lakh-salary/articleshow-arding6"/>
        </item>
        <item>
            <title><![CDATA[ವಂದೇ ಭಾರತ್ Vs ಅಮೃತ್ ಭಾರತ್ ಎಕ್ಸ್‌ಪ್ರೆಸ್.. ಎರಡರ ನಡುವಿನ ವ್ಯತ್ಯಾಸಗಳೇನು? ಇವೆರೆಡರಲ್ಲಿ ಯಾವುದು ಬೆಸ್ಟ್?]]></title>
            <link>https://kannada.asianetnews.com/travel/vande-bharat-vs-amrut-bharat-which-is-best-for-you/articleshow-c3dpor2</link>
            <guid isPermaLink="true">https://kannada.asianetnews.com/travel/vande-bharat-vs-amrut-bharat-which-is-best-for-you/articleshow-c3dpor2</guid>
            <pubDate>Sat, 22 Aug 2026 14:15:14 +0530</pubDate>
            <description><![CDATA[&lt;p&gt;&lt;strong&gt;Vande Bharat vs Amrut Bharat: &lt;/strong&gt;ವಂದೇ ಭಾರತ್ ಅಥವಾ ಅಮೃತ್ ಭಾರತ್? ನಿಮ್ಮ ಮುಂದಿನ ಪ್ರಯಾಣಕ್ಕೆ ಯಾವ ರೈಲು ಬೆಸ್ಟ್? ಇವೆರಡರ ನಡುವಿನ ತಂತ್ರಜ್ಞಾನ, ಸೌಲಭ್ಯ ಮತ್ತು ಬಜೆಟ್ ವ್ಯತ್ಯಾಸಗಳ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ma9tcqs68r88m47028ed3x,imgname-thumbnail---2026-08-22t141040.116-1787388291479.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;2047&lt;/strong&gt;ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಕೇಂದ್ರ ಸರ್ಕಾರ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಇದರ ಭಾಗವಾಗಿಯೇ ದೇಶದಲ್ಲಿ ಮೂಲಸೌಕರ್ಯಗಳನ್ನು ಹೈ-ಸ್ಪೀಡ್&zwnj;ನಲ್ಲಿ ಅಪ್&zwnj;ಗ್ರೇಡ್ ಮಾಡುತ್ತಿದೆ. ವಿಶೇಷವಾಗಿ ದೇಶದ ವಿವಿಧ ರಾಜ್ಯಗಳ ನಡುವೆ ರೈಲ್ವೆ ಸಂಪರ್ಕವನ್ನು ಸುಧಾರಿಸಲು ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆಗಳನ್ನು ತಂದಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರಿಗೆ ಹೈ-ಸ್ಪೀಡ್ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ 'ವಂದೇ ಭಾರತ್' ಮತ್ತು 'ಅಮೃತ್ ಭಾರತ್' ಎಂಬ ಎರಡು ವಿಶೇಷ ರೈಲುಗಳನ್ನು ತರಲಾಗಿದೆ. ಇವೆರಡೂ ಇತ್ತೀಚೆಗೆ ಬಂದ ರೈಲುಗಳೇ ಆಗಿದ್ದರೂ, ಇವುಗಳ ನಡುವಿನ ವ್ಯತ್ಯಾಸವೇನು? ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮ್ಮ ಪ್ರಯಾಣಕ್ಕೆ ಯಾವ ರೈಲು ಉತ್ತಮ ಎಂಬುದನ್ನು ಇಲ್ಲಿ ತಿಳಿಯೋಣ.&lt;/p&gt;&lt;h2&gt;&lt;strong&gt;ವಂದೇ ಭಾರತ್&lt;/strong&gt;&lt;/h2&gt;&lt;p&gt;ಹೈ-ಸ್ಪೀಡ್, ಐಷಾರಾಮಿ ಪ್ರಯಾಣ ಬಯಸುವ ಪ್ರಯಾಣಿಕರಿಗಾಗಿ ತಂದ ರೈಲು ಇದು. 'ಮೇಕ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿ ಭಾರತದಲ್ಲೇ ತಯಾರಾದ ಈ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ಪ್ರತ್ಯೇಕ ಇಂಜಿನ್ ಬದಲಿಗೆ 'ಇಂಟಿಗ್ರೇಟೆಡ್ ಸೆಮಿ ಹೈ-ಸ್ಪೀಡ್ ಟ್ರೈನ್&zwnj;ಸೆಟ್' ಎಂಬ ತಂತ್ರಜ್ಞಾನದೊಂದಿಗೆ ಚಲಿಸುತ್ತದೆ. ಅಂದರೆ 'ಡಿಸ್ಟ್ರಿಬ್ಯೂಟೆಡ್ ಪವರ್ ಸಿಸ್ಟಮ್' ಈ ರೈಲು ವೇಗವಾಗಿ ಚಲಿಸಲು ಪಿಕಪ್ ನೀಡುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ದೂರ ಪ್ರಯಾಣಿಸಲು ಇಚ್ಛಿಸುವವರಿಗೆ ಈ ರೈಲು ತುಂಬಾ ಅನುಕೂಲಕರವಾಗಿದೆ.&lt;/p&gt;&lt;p&gt;ಈ ವಂದೇ ಭಾರತ್ ರೈಲು ಹೈಟೆಕ್ ಪ್ರಯಾಣ ಸೌಲಭ್ಯಗಳನ್ನು ಹೊಂದಿದೆ. ಈ ರೈಲು ಸಂಪೂರ್ಣವಾಗಿ ಎಸಿ (AC) ಕೋಚ್&zwnj;ಗಳನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಪೂರ್ತಿ ಆಟೋಮ್ಯಾಟಿಕ್ ಪ್ಲಗ್ ಡೋರ್&zwnj;ಗಳು, ಆರಾಮದಾಯಕವಾದ ರೊಟೇಟಿಂಗ್ ಸೀಟುಗಳು ಇರುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಯೋ-ವ್ಯಾಕ್ಯೂಮ್ ಟಾಯ್ಲೆಟ್&zwnj;ಗಳು ಮತ್ತು ಭದ್ರತೆಗಾಗಿ 'ಕವಚ್' ಸೇಫ್ಟಿ ಸಿಸ್ಟಮ್ ಕೂಡ ಇರುತ್ತದೆ. ಈ ರೈಲು ಪ್ರಯಾಣಿಕರಿಗೆ ಪ್ರೀಮಿಯಂ ಅನುಭವದ ಜೊತೆಗೆ ವೇಗದ ಪ್ರಯಾಣವನ್ನು ಒದಗಿಸುತ್ತದೆ. ವೇಗ ಮತ್ತು ಸೌಕರ್ಯವನ್ನು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.&lt;/p&gt;&lt;h2&gt;&lt;strong&gt;ಅಮೃತ್ ಭಾರತ್&lt;/strong&gt;&lt;/h2&gt;&lt;p&gt;ಸಾಮಾನ್ಯ ಜನರಿಗೂ ಆರಾಮದಾಯಕ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ತಂದ ರೈಲೇ ಈ 'ಅಮೃತ್ ಭಾರತ್ ಎಕ್ಸ್&zwnj;ಪ್ರೆಸ್'. ಸಾಮಾನ್ಯವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಏಕೆಂದರೆ ದೂರದ ಪ್ರದೇಶಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ರೈಲು ಮಾತ್ರ ಸೂಕ್ತ. ಆದರೆ ಸಾಮಾನ್ಯ ಜನರಿಗೂ ಸೂಪರ್ ಫಾಸ್ಟ್ ಪ್ರಯಾಣದ ಅನುಭವ ನೀಡಲು ಅಮೃತ್ ಭಾರತ್ ಎಕ್ಸ್&zwnj;ಪ್ರೆಸ್ ರೂಪಿಸಲಾಗಿದೆ. ಮುಂದೆ ಮತ್ತು ಹಿಂದೆ ಎರಡು ಇಂಜಿನ್&zwnj;ಗಳನ್ನು ಹೊಂದಿರುವ 'ಪುಶ್-ಪುಲ್' (Push-Pull) ತಂತ್ರಜ್ಞಾನದೊಂದಿಗೆ ಚಲಿಸುವ ಈ ರೈಲು ಗಂಟೆಗೆ 110-130 ಕಿ.ಮೀ ವೇಗದಲ್ಲಿ ಚಲಿಸುತ್ತದೆ.&lt;/p&gt;&lt;p&gt;ನಮಗೆ ಎಸಿ ಬೇಡ, ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಪ್ರಯಾಣ ಬೇಕು ಎನ್ನುವ ಪ್ರಯಾಣಿಕರಿಗೆ ಈ ರೈಲು ಪರ್ಫೆಕ್ಟ್ ಆಗಿರುತ್ತದೆ. ಈ ಅಮೃತ್ ಭಾರತ್ ರೈಲಿನಲ್ಲಿ ಎರಡು ರೀತಿಯ ಕೋಚ್&zwnj;ಗಳು ಲಭ್ಯವಿರುತ್ತವೆ. ಒಂದು ಸ್ಲೀಪರ್ ಮತ್ತು ಇನ್ನೊಂದು ಜನರಲ್ ನಾನ್-ಎಸಿ. ಆದಾಗ್ಯೂ ಈ ಕೋಚ್&zwnj;ಗಳಲ್ಲಿ ಆಧುನಿಕ ಕುಶನ್ ಸೀಟುಗಳು, ಮೊಬೈಲ್ ಚಾರ್ಜಿಂಗ್ ಪೋರ್ಟ್&zwnj;ಗಳು, ಸೀಲ್ಡ್ ಗ್ಯಾಂಗ್&zwnj;ವೇಗಳು ಇರುತ್ತವೆ. ಅಷ್ಟೇ ಅಲ್ಲದೆ, ಜರ್ಕ್ (ಧಕ್ಕೆ) ಇಲ್ಲದೆ ಆರಾಮವಾಗಿ ಪ್ರಯಾಣಿಸಲು ಸೆಮಿ-ಆಟೋಮ್ಯಾಟಿಕ್ ಕಪ್ಲರ್&zwnj;ಗಳು, ಕ್ರಾಶ್ ಟ್ಯೂಬ್&zwnj;ಗಳು ಮತ್ತು ಸಿಸಿಟಿವಿ ಸುರಕ್ಷತೆಯೂ ಈ ರೈಲಿನಲ್ಲಿರುತ್ತದೆ.&lt;/p&gt;&lt;h2&gt;&lt;strong&gt;ನಿಮ್ಮ ಪ್ರಯಾಣಕ್ಕೆ ಯಾವ ರೈಲು ಬೆಸ್ಟ್?&amp;nbsp;&lt;/strong&gt;&lt;/h2&gt;&lt;p&gt;ಈ ಎರಡು ರೈಲುಗಳಲ್ಲಿ ಅತ್ಯಾಧುನಿಕ ಫೀಚರ್ಸ್&zwnj; ಮತ್ತು ಸುರಕ್ಷತೆಯ ವಿಷಯದಲ್ಲಿ ದೊಡ್ಡ ವ್ಯತ್ಯಾಸಗಳಿಲ್ಲದಿದ್ದರೂ ಬಜೆಟ್ ಮತ್ತು ವೇಗದಲ್ಲಿ ಮಾತ್ರ ಬದಲಾವಣೆಗಳಿರುತ್ತವೆ. ಒಂದು ವೇಳೆ ನೀವು ಕಡಿಮೆ ಬಜೆಟ್&zwnj;ನಲ್ಲಿ ದೂರದ ಪ್ರಯಾಣ ಮಾಡಬೇಕೆಂದಿದ್ದರೆ ಅಮೃತ್ ಭಾರತ್ ಬೆಸ್ಟ್ ಚಾಯ್ಸ್ ಆಗಿರುತ್ತದೆ. ಅದೇ ಸಮಯದಲ್ಲಿ ಪ್ರೀಮಿಯಂ ದರದೊಂದಿಗೆ ಕಡಿಮೆ ಸಮಯದಲ್ಲಿ ವಿಲಾಸಯುತವಾದ ಇಂಟರ್-ಸಿಟಿ ಪ್ರಯಾಣ ಮಾಡಬೇಕೆಂದಿದ್ದರೆ ನಿಮಗೆ ವಂದೇ ಭಾರತ್ ಬೆಸ್ಟ್ ಚಾಯ್ಸ್ ಆಗಿರುತ್ತದೆ.&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/travel/vande-bharat-vs-amrut-bharat-which-is-best-for-you/articleshow-c3dpor2"/>
        </item>
        <item>
            <title><![CDATA[ಭಾರತೀಯ ರೈಲ್ವೆಯಿಂದ ಆಕರ್ಷಕ 'ಬಾಲಿ ಪ್ರವಾಸ ಪ್ಯಾಕೇಜ್': ಹೈದರಾಬಾದ್‌ನಿಂದ ಕೈಗೆಟುಕುವ ದರದಲ್ಲಿ ಇಂಡೋನೇಷ್ಯಾ ಸುತ್ತಿ!]]></title>
            <link>https://kannada.asianetnews.com/travel/book-irctc-bali-tour-package-from-hyderabad-includes-flights-3-star-stay-meals-sightseeing-starting-at-rs-95500-gdp/articleshow-cdnobfg</link>
            <guid isPermaLink="true">https://kannada.asianetnews.com/travel/book-irctc-bali-tour-package-from-hyderabad-includes-flights-3-star-stay-meals-sightseeing-starting-at-rs-95500-gdp/articleshow-cdnobfg</guid>
            <pubDate>Thu, 20 Aug 2026 10:58:58 +0530</pubDate>
            <description><![CDATA[ಐಆರ್&zwnj;ಸಿಟಿಸಿ ಹೈದರಾಬಾದ್&zwnj;ನಿಂದ 'ಬಾಲಿ ಪ್ಯಾರಡೈಸ್' ಎಂಬ 4-ರಾತ್ರಿ ಮತ್ತು 5-ದಿನಗಳ ವಿಶೇಷ ಪ್ರವಾಸವನ್ನು ಆಯೋಜಿಸಿದೆ. ಸೆಪ್ಟೆಂಬರ್ 24, 2026 ರಿಂದ ಪ್ರಾರಂಭವಾಗುವ ಈ ಪ್ಯಾಕೇಜ್, ವಿಮಾನಯಾನ, ವಸತಿ, ಆಹಾರ ಮತ್ತು ಕಿಂತಮಣಿ, ಉಬುದ್, ಉಲುವಾಟು ದೇವಾಲಯದಂತಹ ಪ್ರಮುಖ ಸ್ಥಳಗಳ ವೀಕ್ಷಣೆಯನ್ನು ಒಳಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hyx1mfchamhax61tge40rqgp,imgname-asianet-news---2024-05-27t181701.208.png" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿಯಲ್ಲಿ ಸಾಹಸಮಯ ಹಾಗೂ ಪ್ರಶಾಂತ ರಜಾದಿನವನ್ನು ಕಳೆಯಲು ಯೋಜಿಸುತ್ತಿದ್ದೀರಾ? ಪ್ರತಿಯೊಂದು ಸಣ್ಣಪುಟ್ಟ ವಿಷಯಗಳನ್ನೂ ನೀವೇ ಖುದ್ದಾಗಿ ಯೋಜಿಸುವ ಚಿಂತೆ ಇಲ್ಲದೆ ದ್ವೀಪ ರಾಷ್ಟ್ರವನ್ನು ಆನಂದಿಸಲು IRCTC ಅತ್ಯುತ್ತಮ ಅವಕಾಶವನ್ನು ತಂದಿದೆ. ಹೈದರಾಬಾದ್&zwnj;ನಿಂದ ಹೊರಡುವ 'ಬಾಲಿ ಪ್ಯಾರಡೈಸ್ ಎಕ್ಸ್-ಹೈದರಾಬಾದ್' (Bali Paradise Ex-Hyderabad) ಎಂಬ ಹೆಸರಿನಲ್ಲಿ 4-ರಾತ್ರಿ ಮತ್ತು 5-ದಿನಗಳ ಈ ವಿಶೇಷ ಪ್ರವಾಸವು ಸೆಪ್ಟೆಂಬರ್ 24, 2026 ರಿಂದ ಪ್ರಾರಂಭವಾಗಲಿದೆ. ಈ ಪ್ರಯಾಣವು ವಿಮಾನಯಾನ, ಹೋಟೆಲ್ ವಸತಿ, ಆಹಾರ, ಪ್ರಸಿದ್ಧ ಸ್ಥಳಗಳು ಹಾಗೂ ಸ್ಥಳೀಯ ಸಾರಿಗೆ ಸೇವೆಗಳನ್ನು ಒಳಗೊಂಡಿದೆ.&lt;/p&gt;&lt;h2&gt;ಪ್ರಯಾಣ ವೆಚ್ಚದ ವಿವರಗಳು&lt;/h2&gt;&lt;p&gt;ಈ ಪ್ರವಾಸದ ದರಗಳು ಆಯ್ಕೆ ಮಾಡಿಕೊಳ್ಳುವ ವಸತಿ ವ್ಯವಸ್ಥೆಯ ಆಧಾರದ ಮೇಲೆ ನಿಗದಿಯಾಗಿವೆ:&lt;/p&gt;&lt;p&gt;ಟ್ರಿಪಲ್ ಶೇರಿಂಗ್ (Triple Sharing): ಪ್ರತಿ ವ್ಯಕ್ತಿಗೆ ₹95,500&lt;/p&gt;&lt;p&gt;ಡಬಲ್ ಶೇರಿಂಗ್ (Double Sharing): ಪ್ರತಿ ವ್ಯಕ್ತಿಗೆ ₹95,900&lt;/p&gt;&lt;p&gt;ಸಿಂಗಲ್ ಶೇರಿಂಗ್ (Single Sharing): ಒಬ್ಬರಿಗೆ ₹1,01,600&lt;/p&gt;&lt;p&gt;ಮಕ್ಕಳಿಗೆ (2 ರಿಂದ 11 ವರ್ಷ): ಪ್ರತ್ಯೇಕ ಹಾಸಿಗೆಯೊಂದಿಗೆ ₹89,050 ಹಾಗೂ ಹಾಸಿಗೆಯಿಲ್ಲದೆ ₹85,500.&lt;/p&gt;&lt;h2&gt;ಪ್ರವಾಸದ ಸಂಪೂರ್ಣ ವೇಳಾಪಟ್ಟಿ&lt;/h2&gt;&lt;p&gt;ಸೆಪ್ಟೆಂಬರ್ 24 ರಂದು ರಾತ್ರಿ 8:00 ಗಂಟೆಗೆ ಹೈದರಾಬಾದ್&zwnj;ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವರದಿ ಮಾಡಿಕೊಳ್ಳಬೇಕು. ವಿಮಾನವು ರಾತ್ರಿ 11:35 ಕ್ಕೆ ಹೊರಡಲಿದ್ದು, ಹೋ ಚಿ ಮಿನ್ಹ್ ಸಿಟಿ (Ho Chi Minh City) ಮಾರ್ಗವಾಗಿ ಬಾಲಿಗೆ ಸಾಗಲಿದೆ.&lt;/p&gt;&lt;p&gt;ದಿನ 1: ಬಾಲಿಯ ಡೆನ್&zwnj;ಪಸರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ. ಹೋಟೆಲ್ ಪರಿಶೀಲನೆ ಮತ್ತು ಮಧ್ಯಾಹ್ನದ ಊಟದ ನಂತರ 'ಜಿಂಬರನ್ ಬೀಚ್' (Jimbaran Beach) ಭೇಟಿ. ರಾತ್ರಿ ಭಾರತೀಯ ಶೈಲಿಯ ಊಟ ಇರಲಿದೆ.&lt;/p&gt;&lt;p&gt;ದಿನ 2: ಕಿಂತಮಣಿ ಮತ್ತು ಉಬುದ್ ನಗರ ಪ್ರವಾಸ. ಇಲ್ಲಿ ಸಾಂಪ್ರದಾಯಿಕ ಬಾರಾಂಗ್ ಮತ್ತು ಕೆರಿಸ್ ನೃತ್ಯ ಪ್ರದರ್ಶನ, ಸೆಲುಕ್ ಗ್ರಾಮದ ಬೆಳ್ಳಿ ಆಭರಣಗಳ ಶೋರೂಮ್ ಹಾಗೂ ಮಾಸ್ ಗ್ರಾಮದ ಮರದ ಕೆತ್ತನೆಗಳ ವೀಕ್ಷಣೆ. ನಂತರ ಪವಿತ್ರ ಮಂಕಿ ಫಾರೆಸ್ಟ್, ತಿರ್ತಾ ಎಂಪುಲ್ ದೇವಾಲಯ, ಮೌಂಟ್ ಬತೂರ್ ಮತ್ತು ಬತೂರ್ ಸರೋವರದ ರಮಣೀಯ ನೋಟಗಳ ವೀಕ್ಷಣೆ ಮಾಡಬಹುದು.&lt;/p&gt;&lt;p&gt;ದಿನ 3: ತಂಜುಂಗ್ ಬೆನೊವಾ ಬೀಚ್&zwnj;ನಲ್ಲಿ ಜಲಸಾಹಸ ಕ್ರೀಡೆಗಳ ಅನುಭವ ( ಬನಾನ ದೋಣಿ ಸವಾರಿ, ಗ್ಲಾಸ್ ಬಾಟಮ್ ಬೋಟ್ ರೈಡ್) ಹಾಗೂ 'ಟರ್ಟಲ್ ಐಲ್ಯಾಂಡ್' (ಆಮೆ ದ್ವೀಪ) ಭೇಟಿ. ಸಂಜೆ ಉಲುವಾಟು ದೇವಾಲಯದ ಆವರಣದಲ್ಲಿ ಪ್ರಸಿದ್ಧ 'ಕೆಚಕ್ ನೃತ್ಯ' (Kecak Dance) ಪ್ರದರ್ಶನ.&lt;/p&gt;&lt;p&gt;ದಿನ 4: ಪ್ರಸಿದ್ಧ ತಮನ್ ಆಯುನ್ ದೇವಾಲಯ, ಉಲುನ್ ದಾನು ಬ್ರಾಟನ್ ದೇವಾಲಯ ಮತ್ತು ತನಾಹ್ ಲಾಟ್ ದೇವಾಲಯಗಳ ಭೇಟಿ. ಇವುಗಳ ಜೊತೆಗೆ ಸುಂದರ ಸೂರ್ಯಾಸ್ತದ ದೃಶ್ಯಾವಳಿಗಳ ವೀಕ್ಷಣೆ.&lt;/p&gt;&lt;h2&gt;ಪ್ಯಾಕೇಜ್&zwnj;ನಲ್ಲಿ ಏನೆಲ್ಲಾ ಸೇರಿದೆ?&lt;/h2&gt;&lt;p&gt;4 ಉಪಾಹಾರಗಳು (Breakfast), 5 ಮಧ್ಯಾಹ್ನದ ಊಟಗಳು ಮತ್ತು 4 ರಾತ್ರಿ ಊಟಗಳು .&lt;/p&gt;&lt;p&gt;ಒಬ್ಬ ವ್ಯಕ್ತಿಗೆ ದಿನಕ್ಕೆ ಎರಡು 500 ಮಿಲಿ ನೀರಿನ ಬಾಟಲಿಗಳು.&lt;/p&gt;&lt;p&gt;ಹವಾನಿಯಂತ್ರಿತ ಡಿಲಕ್ಸ್ ಕೋಚ್ (A/C Deluxe Coach) ಮೂಲಕ ಸ್ಥಳೀಯ ಪ್ರವಾಸ ಹಾಗೂ ಮಾರ್ಗದರ್ಶನಕ್ಕೆ ಇಂಗ್ಲಿಷ್ ಮಾತನಾಡುವ ಗೈಡ್.&lt;/p&gt;&lt;p&gt;80 ವರ್ಷದೊಳಗಿನ ಭಾರತೀಯ ಪಾಸ್&zwnj;ಪೋರ್ಟ್ ಹೊಂದಿರುವ ಪ್ರಯಾಣಿಕರಿಗೆ ನಿಯಮಾವಳಿಗಳಿಗೆ ಒಳಪಟ್ಟಂತೆ ಪ್ರಯಾಣ ವಿಮೆ (Travel Insurance).&lt;/p&gt;&lt;p&gt;ಪ್ರವಾಸದ ಸಮಯದಲ್ಲಿ ನೀಡುವ ಟಿಪ್ಸ್, ವೈಯಕ್ತಿಕ ವೆಚ್ಚಗಳು, ಹೆಚ್ಚುವರಿ ಆಹಾರ, ವಿಮಾನ ನಿಲ್ದಾಣ ತೆರಿಗೆ ಅಥವಾ ಇಂಧನ ದರ ಏರಿಕೆಯಿಂದ ಆಗುವ ಹೆಚ್ಚುವರಿ ವೆಚ್ಚಗಳು ಈ ಪ್ಯಾಕೇಜ್&zwnj;ನಲ್ಲಿ ಸೇರಿರುವುದಿಲ್ಲ ಎಂಬುದು ಗಮನದಲ್ಲಿರಲಿ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/travel/book-irctc-bali-tour-package-from-hyderabad-includes-flights-3-star-stay-meals-sightseeing-starting-at-rs-95500-gdp/articleshow-cdnobfg"/>
        </item>
        <item>
            <title><![CDATA[ಭೂಮಿಗೆ ಬೀಳಲ್ಲ, ಗಾಳಿಯಲ್ಲೇ ತೇಲುತ್ತೆ ನೀರು! ದೇಶದ ಉಲ್ಟಾ ಜಲಪಾತ ಎಲ್ಲಿದೆ? ಇದಕ್ಕಿದೆ ಶಾತವಾಹನರ ಕಾಲದ ಇತಿಹಾಸ!]]></title>
            <link>https://kannada.asianetnews.com/travel/naneghat-history-satavahana-reverse-waterfall-gravity-defying-wonder-in-maharashtra-gdp/articleshow-cy0gur4</link>
            <guid isPermaLink="true">https://kannada.asianetnews.com/travel/naneghat-history-satavahana-reverse-waterfall-gravity-defying-wonder-in-maharashtra-gdp/articleshow-cy0gur4</guid>
            <pubDate>Wed, 19 Aug 2026 19:57:15 +0530</pubDate>
            <description><![CDATA[ಮಹಾರಾಷ್ಟ್ರದ ನಾನೇಘಾಟ್&zwnj;ನಲ್ಲಿ ಮಳೆಗಾಲದಲ್ಲಿ ಒಂದು ಅಪರೂಪದ ದೃಶ್ಯ ಕಂಡುಬರುತ್ತದೆ, ಇಲ್ಲಿ ಜಲಪಾತದ ನೀರು ಕೆಳಗೆ ಬೀಳುವ ಬದಲು ಮೇಲಕ್ಕೆ ಚಿಮ್ಮುತ್ತದೆ. ಇದು ಯಾವುದೇ ಮ್ಯಾಜಿಕ್ ಅಲ್ಲ, ಬದಲಿಗೆ ತೀವ್ರವಾದ ಗಾಳಿಯ ಒತ್ತಡದಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನವಾಗಿದೆ. ಈ ತಾಣವು ಕೇವಲ ಪ್ರಕೃತಿ ಸೌಂದರ್ಯಕ್ಕಷ್ಟೇ ಅಲ್ಲ, 2000 ವರ್ಷಗಳಷ್ಟು ಹಳೆಯ ಐತಿಹಾಸಿಕ ವ್ಯಾಪಾರ ಮಾರ್ಗವಾಗಿಯೂ ಪ್ರಸಿದ್ಧವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0d5adr7psyctjmsy66ve4ey,imgname-naneghat-reverse-falls--1--1787148187398.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಮಾನ್ಸೂನ್ ಎಂದರೆ ಸಾಕು ಮಂಜಿನಿಂದ ಆವೃತವಾದ ಪರ್ವತ ಸಾಲುಗಳು ಮತ್ತು ಭೋರ್ಗರೆದು ಧುಮುಕುವ ಜಲಪಾತಗಳ ರಮಣೀಯ ದೃಶ್ಯಗಳು ಕಣ್ಣಮುಂದೆ ಬರುತ್ತವೆ. ಆದರೆ ಮಹಾರಾಷ್ಟ್ರದ ಒಂದು ವಿಶೇಷ ತಾಣದಲ್ಲಿ, ಪ್ರವಾಸಿಗರು ಮೊದಲ ನೋಟಕ್ಕೆ ಆಶ್ಚರ್ಯವೊಂದನ್ನು ಕಾಣಬಹುದು! ಇಲ್ಲಿ ಜಲಪಾತದ ನೀರು ಬಂಡೆಯ ಮೇಲಿಂದ ಕೆಳಕ್ಕೆ ಧುಮುಕುವ ಬದಲು, ಗಾಳಿಯಲ್ಲಿ ಮೇಲಕ್ಕೆ ಹಾರುತ್ತದೆ. ಮೇಲ್ನೋಟಕ್ಕೆ ಇದು ಯಾವುದೋ ಮ್ಯಾಜಿಕ್&zwnj;ನಂತೆ ಕಂಡರೂ, ಇದರ ಹಿಂದೆ ಪ್ರಕೃತಿಯ ಅದ್ಭುತ ವೈಜ್ಞಾನಿಕ ಸತ್ಯ ಅಡಗಿದೆ.&lt;/p&gt;&lt;h2&gt;ಮೇಲಕ್ಕೆ ಹರಿಯುವ ಜಲಪಾತದ ತಾಣ ಯಾವುದು?&lt;/h2&gt;&lt;p&gt;ಈ ಅಪರೂಪದ ನೈಸರ್ಗಿಕ ವಿದ್ಯಮಾನವನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ಬಳಿ ಇರುವ 'ನಾನೇಘಾಟ್' ಎಂಬ ಪ್ರಾಚೀನ ಪರ್ವತ ಮಾರ್ಗದಲ್ಲಿ ಕಾಣಬಹುದು. ಮಳೆಗಾಲದ ಗರಿಷ್ಠ ಸಮಯದಲ್ಲಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ 'ರಿವರ್ಸ್ ಜಲಪಾತ' (Reverse Waterfall) ಎಂದು ಕರೆಯಲ್ಪಡುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು. ಭಾರೀ ಮಳೆಯ ಜೊತೆಗೆ ತೀವ್ರವಾದ ಗಾಳಿ ಬೀಸಿದಾಗ ಮಾತ್ರ ಈ ದೃಶ್ಯಾವಳಿ ಸೃಷ್ಟಿಯಾಗುತ್ತದೆ. ಇದು ಪಶ್ಚಿಮ ಘಟ್ಟಗಳ ಅತ್ಯಂತ ಕುತೂಹಲಕಾರಿ ಮಾನ್ಸೂನ್ ಅನುಭವಗಳಲ್ಲಿ ಒಂದಾಗಿದೆ.&lt;/p&gt;&lt;h2&gt;ನೀರು ಮೇಲಕ್ಕೆ ಚಿಮ್ಮಲು ಕಾರಣವೇನು?&lt;/h2&gt;&lt;p&gt;ಈ ಜಲಪಾತದ ನೋಟ ಅಸಹಜವೆನಿಸಿದರೂ, ಇದರ ಹಿಂದೆ ಅತ್ಯಂತ ಸರಳವಾದ ವೈಜ್ಞಾನಿಕ ವಿವರಣೆಯಿದೆ.&lt;/p&gt;&lt;h3&gt;ತೀವ್ರ ಗಾಳಿಯ ಒತ್ತಡ&lt;/h3&gt;&lt;p&gt;ಮಳೆಗಾಲದಲ್ಲಿ ಕಣಿವೆಯ ಕಿರಿದಾದ ಪ್ರದೇಶದ ಮೂಲಕ ಬಲವಾದ ಗಾಳಿಯು ವೇಗವಾಗಿ ಮೇಲಕ್ಕೆ ಬೀಸುತ್ತದೆ.&lt;/p&gt;&lt;h3&gt;ನೀರಿನ ಚದುರುವಿಕೆ&lt;/h3&gt;&lt;p&gt;ಬೆಟ್ಟದ ಮೇಲಿಂದ ಬೀಳುವ ನೀರನ್ನು ಈ ಶಕ್ತಿಯುತ ಗಾಳಿಯು ನೆಲಕ್ಕೆ ಮುಟ್ಟುವ ಮುನ್ನವೇ ತಡೆದು, ಬಲವಾಗಿ ಮೇಲಕ್ಕೆ ತಳ್ಳುತ್ತದೆ.&lt;/p&gt;&lt;h3&gt;ಭ್ರಮೆಯ ಸೃಷ್ಟಿ&lt;/h3&gt;&lt;p&gt;ಹೀಗೆ ಗಾಳಿಯ ಒತ್ತಡಕ್ಕೆ ಸಿಲುಕಿದ ನೀರು ಸಣ್ಣ ಹನಿಗಳಾಗಿ ಮಂಜಿನ ರೀತಿಯಲ್ಲಿ ಆಕಾಶಕ್ಕೆ ಚಿಮ್ಮುತ್ತದೆ. ದೂರದಿಂದ ನೋಡಿದಾಗ ಜಲಪಾತವೇ ಉಲ್ಟಾ ಹರಿಯುತ್ತಿದೆಯೇನೋ ಎಂಬಂತೆ ಸುಂದರ ಸನ್ನಿವೇಶ ಸೃಷ್ಟಿಯಾಗುತ್ತದೆ.&lt;/p&gt;&lt;p&gt;ವಾಸ್ತವದಲ್ಲಿ, ಗುರುತ್ವಾಕರ್ಷಣೆಯು ನೀರನ್ನು ಕೆಳಕ್ಕೆ ಎಳೆಯುತ್ತಲೇ ಇರುತ್ತದೆ. ಆದರೆ ಕೆಳಗಿನಿಂದ ಬೀಸುವ ಬಲವಾದ ಗಾಳಿಯು ನೀರಿನ ಧಾರೆ ನೆಲವನ್ನು ತಲುಪುವ ಮುನ್ನವೇ ಅದನ್ನು ಮೇಲಕ್ಕೆ ಕಳುಹಿಸುತ್ತದೆ.&lt;/p&gt;&lt;h2&gt;ಮಾನ್ಸೂನ್&zwnj;ನಲ್ಲಿ ನಾನೇಘಾಟ್&zwnj;ನ ನೈಸರ್ಗಿಕ ಸೌಂದರ್ಯ&lt;/h2&gt;&lt;p&gt;ರಿವರ್ಸ್ ಜಲಪಾತವೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದರೂ, ಮಳೆಗಾಲದಲ್ಲಿ ನಾನೇಘಾಟ್&zwnj;ನ ಒಟ್ಟಾರೆ ಸೌಂದರ್ಯವೇ ಬೇರೆ ರೀತಿಯಲ್ಲಿ ಇರುತ್ತದೆ. ಇಡೀ ಪಶ್ಚಿಮ ಘಟ್ಟಗಳು ಹಚ್ಚ ಹಸಿರಿನ ಹೊದಿಕೆ ಹೊದ್ದು ಕಂಗೊಳಿಸುತ್ತವೆ. ಬೆಟ್ಟಗಳ ನಡುವೆ ತೇಲಿಬರುವ ಮೋಡಗಳು ಮತ್ತು ಹಸಿರು ಇಳಿಜಾರುಗಳಲ್ಲಿ ಸಾಲು ಸಾಲಾಗಿ ಹರಿಯುವ ತಾತ್ಕಾಲಿಕ ಜಲಪಾತಗಳು ಪ್ರಕೃತಿ ಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತವೆ. ಚಾರಣಿಗರು ಮತ್ತು ಛಾಯಾಗ್ರಾಹಕರಿಗೆ ಇದೊಂದು ಸ್ವರ್ಗ ತಾಣ.&lt;/p&gt;&lt;h2&gt;2000 ಸಾವಿರ ವರ್ಷಗಳ ಸುದೀರ್ಘ ಇತಿಹಾಸ&lt;/h2&gt;&lt;p&gt;ನಾನೇಘಾಟ್ ಕೇವಲ ಪ್ರಕೃತಿ ಸೌಂದರ್ಯದ ತಾಣ ಮಾತ್ರವಲ್ಲ, ಇದಕ್ಕೊಂದು ಭವ್ಯ ಇತಿಹಾಸವಿದೆ. ಚಾರಣಿಗರ ನೆಚ್ಚಿನ ತಾಣವಾಗುವ ಸಾವಿರಾರು ವರ್ಷಗಳ ಮುಂಚೆಯೇ, ಇದು ಕೊಂಕಣ ಕರಾವಳಿ ಪ್ರದೇಶವನ್ನು ಡೆಕ್ಕನ್ ಪ್ರಸ್ಥಭೂಮಿಯೊಂದಿಗೆ (ದಖನ್ ಪ್ರಸ್ಥಭೂಮಿ) ಸಂಪರ್ಕಿಸುವ ಪ್ರಮುಖ ವ್ಯಾಪಾರ ಮಾರ್ಗವಾಗಿತ್ತು. ಈ ಪರ್ವತ ಮಾರ್ಗವು ಸುಮಾರು 2000 ವರ್ಷಗಳಿಗಿಂತಲೂ ಹಳೆಯದು ಮತ್ತು ಶಾತವಾಹನ ರಾಜವಂಶದ ಕಾಲಕ್ಕೆ ಸೇರಿದ್ದಾಗಿದೆ. ಇಲ್ಲಿರುವ ಪ್ರಾಚೀನ ಕಲ್ಲಿನ ಗುಹೆಗಳು ಹಾಗೂ ಬ್ರಾಹ್ಮಿ ಲಿಪಿಯಲ್ಲಿರುವ ಶಾಸನಗಳು, ಅಂದಿನ ಕಾಲದ ವ್ಯಾಪಾರ-ವಹಿವಾಟು ಮತ್ತು ಈ ಪ್ರದೇಶದ ಐತಿಹಾಸಿಕ ಮಹತ್ವಕ್ಕೆ ಸಾಕ್ಷಿಯಾಗಿವೆ.&lt;/p&gt;&lt;h2&gt;ಭೇಟಿ ನೀಡುವ ಮುನ್ನ ನೆನಪಿರಲಿ&lt;/h2&gt;&lt;p&gt;ಇದು ಹವಾಮಾನದ ಮೇಲಿನ ಅವಲಂಬನೆ, ರಿವರ್ಸ್ ಜಲಪಾತದ ದೃಶ್ಯವು ಸಂಪೂರ್ಣವಾಗಿ ಗಾಳಿ ಮತ್ತು ಮಳೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಮಳೆಗಾಲದಲ್ಲಿ ಚಾರಣದ ಹಾದಿಗಳು ಕಠಿಣ ಮತ್ತು ಜಾರುವಂತಿರುತ್ತವೆ. ಆದ್ದರಿಂದ ಗ್ರಿಪ್ ಇರುವ ಟ್ರೆಕ್ಕಿಂಗ್ ಶೂಗಳನ್ನು ಬಳಸುವುದು ಕಡ್ಡಾಯ. ಜಲಪಾತ ಮತ್ತು ಪ್ರಪಾತದ ಅಂಚಿನಲ್ಲಿ ನಿಂತು ಫೋಟೋ ಅಥವಾ ಸೆಲ್ಫಿ ತೆಗೆಯುವುದನ್ನು ಸಂಪೂರ್ಣವಾಗಿ ತಪ್ಪಿಸಿ ಮತ್ತು ಸ್ಥಳೀಯ ಗಾರ್ಡ್&zwnj;ಗಳ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿ.&lt;/p&gt;&lt;p&gt;ಮಳೆಗಾಲದಲ್ಲಿ ಮಾಮೂಲಿ ಪ್ರವಾಸಕ್ಕಿಂತ ವಿಭಿನ್ನ ಹಾಗೂ ರೋಮಾಂಚಕ ಅನುಭವ ಪಡೆಯಲು ಬಯಸುವ ಸಾಹಸಪ್ರಿಯರಿಗೆ, ನಾನೇಘಾಟ್&zwnj;ನ ಈ 'ರಿವರ್ಸ್ ಜಲಪಾತ' ಖಂಡಿತವಾಗಿಯೂ ಅತ್ಯುತ್ತಮ ಆಯ್ಕೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/travel/naneghat-history-satavahana-reverse-waterfall-gravity-defying-wonder-in-maharashtra-gdp/articleshow-cy0gur4"/>
        </item>
        <item>
            <title><![CDATA[ಭಾರತದಲ್ಲೇ ಮೊದಲು ಸೂರ್ಯೋದಯವಾಗುವ ತಾಣ, ಬೆರಗುಗೊಳಿಸುತ್ತೆ ಈ ಕಣಿವೆಯ ರೋಮಾಂಚಕ ಪಯಣ!]]></title>
            <link>https://kannada.asianetnews.com/travel/dong-valley-experience-india-s-first-sunrise-in-arunachal-pradesh-gdp/articleshow-fth2b9i</link>
            <guid isPermaLink="true">https://kannada.asianetnews.com/travel/dong-valley-experience-india-s-first-sunrise-in-arunachal-pradesh-gdp/articleshow-fth2b9i</guid>
            <pubDate>Wed, 19 Aug 2026 17:48:54 +0530</pubDate>
            <description><![CDATA[ಅರುಣಾಚಲ ಪ್ರದೇಶದ ಡಾಂಗ್ ಕಣಿವೆಯು ಭಾರತದಲ್ಲಿ ಮೊದಲು ಸೂರ್ಯೋದಯವಾಗುವ ಸ್ಥಳವಾಗಿದೆ. ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮುಂಜಾನೆ ಚಾರಣ ಮಾಡಬೇಕಿದ್ದು, ಈ ಲೇಖನವು ಡಾಂಗ್&zwnj;ನ ಪ್ರವಾಸಿ ಆಕರ್ಷಣೆಗಳು, ಸ್ಥಳೀಯ ಸಂಸ್ಕೃತಿ ಮತ್ತು ಪ್ರಯಾಣದ ವಿವರಗಳನ್ನು ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0a10b1qpqfn4j24whbnady8,imgname-valley-of-flowers-1787042999351.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೆಚ್ಚಿನ ಜನರು ಸೂರ್ಯೋದಯ ಎಂದರೆ ಕಡಲತೀರಗಳು ಅಥವಾ ಪರ್ವತದ ಶಿಖರಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಅರುಣಾಚಲ ಪ್ರದೇಶದ ದೂರದ ಮೂಲೆಯೊಂದರಲ್ಲಿ, ಪ್ರವಾಸಿಗರು ಅರ್ಧರಾತ್ರಿಯಲ್ಲೇ ಎಚ್ಚರಗೊಂಡು ಬೆಟ್ಟ ಹತ್ತಲು ತೊಡಗುತ್ತಾರೆ; ಅದಕ್ಕೆ ಕಾರಣವೇ ಬೇರೆ. ದಟ್ಟ ಕಾಡುಗಳು, ಎತ್ತರದ ಪರ್ವತಗಳು ಮತ್ತು ಕಣಿವೆಗಳ ಹಿನ್ನೆಲೆಯಲ್ಲಿ ಭಾರತದ ಅತ್ಯಂತ ಮೊದಲ ಸೂರ್ಯೋದಯವನ್ನು ಕಣ್ಣುಂಬಿಕೊಳ್ಳುವುದೇ ಆ ಸಾಹಸಕ್ಕೆ ಸಿಗುವ ಅದ್ಭುತ ಕೊಡುಗೆ. ಭಾರತದಲ್ಲಿ ಎಲ್ಲರಿಗಿಂತ ಮುಂಚಿತವಾಗಿ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದಾದ ಆ ವಿಶೇಷ ಸ್ಥಳ ಯಾವುದು ಎಂಬುದನ್ನು ತಿಳಿಯೋಣ.&lt;/p&gt;&lt;h2&gt;ಭಾರತದ ಪ್ರಥಮ ಸೂರ್ಯೋದಯದ ತಾಣ: ಡಾಂಗ್&lt;/h2&gt;&lt;p&gt;ಭಾರತದಲ್ಲಿ ಅತ್ಯಂತ ಮುಂಚಿತವಾಗಿ ಸೂರ್ಯೋದಯವಾಗುವ ಸ್ಥಳವೆಂದರೆ ಅದು ಡಾಂಗ್. ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿರುವ ಡಾಂಗ್ ಗ್ರಾಮದ 'ಡಾಂಗ್ ಕಣಿವೆ'ಯೇ ಈ ಭೌಗೋಳಿಕ ವಿಸ್ಮಯ. ವಾಲೋಂಗ್&zwnj;ಗೆ ಸಮೀಪದಲ್ಲಿರುವ ಹಾಗೂ ಲೋಹಿತ್ ನದಿಯ ದಂಡೆಯಲ್ಲಿರುವ ಈ ತಾಣ, ಪ್ರತಿದಿನ ದೇಶದಲ್ಲೇ ಮೊದಲು ಸೂರ್ಯರಶ್ಮಿಯನ್ನು ಸ್ವೀಕರಿಸುತ್ತದೆ.&lt;/p&gt;&lt;p&gt;1999ರಲ್ಲಿ ಡಾಂಗ್ ಗ್ರಾಮವು ಪ್ರಥಮ ಸೂರ್ಯೋದಯದ ತಾಣವಾಗಿ ಜಾಗತಿಕ ಗಮನ ಸೆಳೆಯಿತು. ತದನಂತರ, ಹೊಸ ಸಹಸ್ರಮಾನದ ಮೊದಲ ದಿನ ಅಂದರೆ ಜನವರಿ 1, 2000 ರಂದು ಭಾರತದ ಪ್ರಥಮ ಸೂರ್ಯೋದಯವನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಇಲ್ಲಿಗೆ ಹರಿದುಬಂದಾಗ ಈ ಸ್ಥಳದ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.&lt;/p&gt;&lt;h2&gt;ಸಾಹಸಮಯ ಚಾರಣದೊಂದಿಗೆ ಆರಂಭವಾಗುವ ಪ್ರಭಾತ&lt;/h2&gt;&lt;p&gt;ಇಲ್ಲಿ ಸೂರ್ಯೋದಯವನ್ನು ವೀಕ್ಷಿಸುವುದು ಅಷ್ಟು ಸುಲಭವಲ್ಲ; ಅದಕ್ಕೆ ಸ್ವಲ್ಪ ಶ್ರಮ ಅಗತ್ಯ. ಪ್ರವಾಸಿಗರು ಸಾಮಾನ್ಯವಾಗಿ ಮುಂಜಾನೆ ಬೆಳಕು ಹರಿಯುವ ಮುನ್ನವೇ ಹೊರಟು, ಕಣಿವೆಯ ಮೇಲಿರುವ 'ವ್ಯೂ ಪಾಯಿಂಟ್'ಗೆ ಚಾರಣ (ಟ್ರಕಿಂಗ್) ಮಾಡಬೇಕಾಗುತ್ತದೆ. ವರ್ಷದ ವಿವಿಧ ಅವಧಿಯಲ್ಲಿ ಸೂರ್ಯೋದಯದ ಸಮಯ ಬದಲಾಗುವುದರಿಂದ, ಪ್ರಯಾಣಕ್ಕೂ ಮುನ್ನ ಸ್ಥಳೀಯವಾಗಿ ಸಮಯವನ್ನು ತಿಳಿದುಕೊಳ್ಳುವುದು ಸೂಕ್ತ. ದಿಗಂತದಲ್ಲಿ ಸೂರ್ಯನ ಮೊದಲ ಕಿರಣಗಳು ಮೂಡುವ ಮುನ್ನವೇ ದಟ್ಟ ಕಾಡು ಹಾಗೂ ಪರ್ವತ ಶ್ರೇಣಿಗಳ ನಡುವೆ ಸಾಗುವ ಈ ನಡಿಗೆಯೇ ಒಂದು ಅವಿಸ್ಮರಣೀಯ ಅನುಭವ.&lt;/p&gt;&lt;h2&gt;ಡಾಂಗ್ ಪ್ರವಾಸದ ಮುಖ್ಯ ಆಕರ್ಷಣೆಗಳು&lt;/h2&gt;&lt;p&gt;ಸೂರ್ಯೋದಯವೇ ಪ್ರಮುಖ ಆಕರ್ಷಣೆಯಾಗಿದ್ದರೂ, ಈ ಪ್ರದೇಶವು ಪ್ರಕೃತಿ ಪ್ರಿಯರಿಗೆ ಇನ್ನೂ ಅನೇಕ ಅದ್ಭುತಗಳನ್ನು ನೀಡುತ್ತದೆ:&lt;/p&gt;&lt;p&gt;ವಾಲೋಂಗ್: ಡಾಂಗ್&zwnj;ನಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಅತ್ಯಂತ ಸುಂದರವಾದ ಬೆಟ್ಟದ ಸಾಲಿನ ಜನವಸತಿ ಪ್ರದೇಶ.&lt;/p&gt;&lt;p&gt;ಕಿಬಿತು: ಅಂತರರಾಷ್ಟ್ರೀಯ ಗಡಿಯ ಬಳಿ ಇರುವ ಭಾರತದ ತೀರಾ ಪೂರ್ವದ ಕೊನೆಯ ಗ್ರಾಮ.&lt;/p&gt;&lt;p&gt;ಲೋಹಿತ್ ನದಿ: ಕಣಿವೆಯ ನಡುವೆ ಕಲಾತ್ಮಕವಾಗಿ ಹರಿಯುವ ರಮಣೀಯ ನದಿ.&lt;/p&gt;&lt;p&gt;ಫೈನ್ ಅರಣ್ಯ: ಶೀತಲ ಋತುವಿನಲ್ಲಿ ಕಣ್ಣಿಗೆ ತಂಪು ನೀಡುವ ಪೈನ್ ಮರಗಳಿಂದ ಆವೃತವಾದ ಪರ್ವತ ಸಾಲುಗಳು.&lt;/p&gt;&lt;p&gt;ಮೆಯೋರ್ ಸಂಸ್ಕೃತಿ: ಸ್ಥಳೀಯ 'ಮೆಯೋರ್' ಸಮುದಾಯದ ವಿಶಿಷ್ಟ ಸಂಸ್ಕೃತಿ ಮತ್ತು ಆಚರಣೆಗಳನ್ನು ಹತ್ತಿರದಿಂದ ತಿಳಿಯುವ ಅವಕಾಶ.&lt;/p&gt;&lt;p&gt;ಡಾಂಗ್ ಗ್ರಾಮವು ಭಾರತ-ಚೀನಾ-ಮ್ಯಾನ್ಮಾರ್ ಗಡಿ ಸಂಧಿಸುವ 'ಟ್ರೈ-ಜಂಕ್ಷನ್' ಬಳಿ ಇರುವುದರಿಂದ ಭೌಗೋಳಿಕವಾಗಿ ಬಹಳ ಪ್ರಮುಖವಾಗಿದೆ. ಸೂಕ್ಷ್ಮ ಗಡಿ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಸ್ಥಳೀಯ ಭದ್ರತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.&lt;/p&gt;&lt;h2&gt;ಹೊಸ ಉದಯದ ಸಂಭ್ರಮ: 'ಸೂರ್ಯೋದಯ ಉತ್ಸವ'&lt;/h2&gt;&lt;p&gt;ಡಾಂಗ್&zwnj;ನ ಸೂರ್ಯೋದಯವನ್ನು ಉತ್ತೇಜಿಸಲು ಅರುಣಾಚಲ ಪ್ರದೇಶ ಸರ್ಕಾರವು ವಿಶೇಷ ಪ್ರವಾಸೋದ್ಯಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಡಿಸೆಂಬರ್ 29, 2025 ರಿಂದ ಜನವರಿ 2, 2026 ರವರೆಗೆ 'ಉದ್ಘಾಟನಾ ಸೂರ್ಯೋದಯ ಉತ್ಸವ'ವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು. ಈ ಉತ್ಸವದಲ್ಲಿ ಮಾರ್ಗದರ್ಶಿತ ಸೂರ್ಯೋದಯ ಚಾರಣ, ಸಾಂಪ್ರದಾಯಿಕ ಸಾಂಸ್ಕೃತಿಕ ಪ್ರದರ್ಶನಗಳು, ಸ್ಥಳೀಯ ಆಹಾರ ಮೇಳ, ಕರಕುಶಲ ಪ್ರದರ್ಶನ ಹಾಗೂ ಹೊರಾಂಗಣ ಸಾಹಸ ಕ್ರೀಡೆಗಳನ್ನು ಆಯೋಜಿಸಿ, ಸ್ಥಳೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲಾಯಿತು.&lt;/p&gt;&lt;h2&gt;ಡಾಂಗ್ ತಲುಪುವುದು ಹೇಗೆ?&lt;/h2&gt;&lt;p&gt;ದೇಶದ ತೀರಾ ದೂರದ ಗಡಿಯಲ್ಲಿರುವುದರಿಂದ ಇಲ್ಲಿಗೆ ಪ್ರಯಾಣಿಸಲು ಸೂಕ್ತ ಯೋಜನೆ ಅಗತ್ಯ.&lt;/p&gt;&lt;p&gt;ವಿಮಾನ ಮಾರ್ಗ: ಅಸ್ಸಾಂನ ದಿಬ್ರುಗಢ ವಿಮಾನ ನಿಲ್ದಾಣವು ಹತ್ತಿರದ ಪ್ರಮುಖ ವಿಮಾನ ನಿಲ್ದಾಣವಾಗಿದೆ.&lt;/p&gt;&lt;p&gt;ರೈಲು ಮಾರ್ಗ: 'ನ್ಯೂ ಟಿನ್ಸುಕಿಯಾ ಜಂಕ್ಷನ್' ಹತ್ತಿರದ ಪ್ರಮುಖ ರೈಲ್ವೆ ನಿಲ್ದಾಣ.&lt;/p&gt;&lt;p&gt;ರಸ್ತೆ ಮಾರ್ಗ: ಟಿನ್ಸುಕಿಯಾ, ತೇಜು, ಹಯುಲಿಯಾಂಗ್ ಮತ್ತು ವಾಲೋಂಗ್ ಮಾರ್ಗವಾಗಿ ರಸ್ತೆ ಮೂಲಕ ಡಾಂಗ್ ತಲುಪಬಹುದು.&lt;/p&gt;&lt;p&gt;ನೆನಪಿರಲಿ , ಈ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಇನ್ನರ್ ಲೈನ್ ಪರ್ಮಿಟ್ (ILP) ಪಡೆಯುವುದು ಕಡ್ಡಾಯ. ದೇಶದ ಮಿಕ್ಕ ಭಾಗಗಳಲ್ಲಿ ಬೆಳಗಾಗುವ ಮುನ್ನವೇ, ಭಾರತದ ತುದಿಯಲ್ಲಿ ನಿಂತು ಹೊಸ ದಿನವನ್ನು ಮೊದಲಿಗನಾಗಿ ಸ್ವಾಗತಿಸುವ ಅನುಭವ ಪಡೆಯಲು ಬಯಸುವವರಿಗೆ ಡಾಂಗ್ ಪ್ರವಾಸ ನಿಜಕ್ಕೂ ಒಂದು ಶ್ರೇಷ್ಠ ಬಹುಮಾನ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/travel/dong-valley-experience-india-s-first-sunrise-in-arunachal-pradesh-gdp/articleshow-fth2b9i"/>
        </item>
        <item>
            <title><![CDATA[ಫ್ಲೈಟ್ ಟೇಕಾಫ್ ಆದ ತಕ್ಷಣ ಕಿವಿ ಯಾಕೆ ಬಂದ್ ಆಗುತ್ತೆ? ENT ವೈದ್ಯರು ಬಿಚ್ಚಿಟ್ರು ಅಸಲಿ ಕಾರಣ]]></title>
            <link>https://kannada.asianetnews.com/travel/why-do-ears-hurt-during-flight-landing-ent-doctor-explains/articleshow-gy4xip3</link>
            <guid isPermaLink="true">https://kannada.asianetnews.com/travel/why-do-ears-hurt-during-flight-landing-ent-doctor-explains/articleshow-gy4xip3</guid>
            <pubDate>Fri, 21 Aug 2026 16:21:18 +0530</pubDate>
            <description><![CDATA[&lt;p&gt;Why Ears Hurt During Flight: ನೀವು ವಿಮಾನವನ್ನು ಹತ್ತಿದ ತಕ್ಷಣ ಅಥವಾ ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ ಕಿವಿಗಳು ಬಂದ್ ಆಗುವುದು, ಕಿವಿಯಲ್ಲಿ ಭಾರ ಅಥವಾ ನೋವಿನ ಅನುಭವ ಆಗುವುದು ತುಂಬಾ ಸಾಮಾನ್ಯವಾಗಿದೆ. ಈ ರೀತಿಯಾಗಿ ನಿಮಗೂ ಆಗಿದ್ಯಾ? ವಿಮಾನ ಟೇಕ್ ಆಫ್ ಆಗುವಾಗ ಅಥವಾ ಲ್ಯಾಂಡಿಂಗ್ ವೇಳೆ ಈ ರೀತಿಯಾಗಿ ಕಿವಿ ನೋವು ಆಗೋದು, ಬಂದ್ ಆಗುವುದು ಯಾಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hz3yvrd6nkedzmmsqdzvff,imgname-why-ears-hurt-during-flight-1787309456245.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಫ್ಲೈಟ್ ಟೇಕಾಫ್ ಆದ ತಕ್ಷಣ ಕಿವಿ ಯಾಕೆ ಬಂದ್ ಆಗುತ್ತೆ?&lt;/strong&gt;&lt;/h2&gt;&lt;p&gt;ನಮ್ಮಲ್ಲಿ ಹೆಚ್ಚಿನ ಜನರಿಗೆ, ವಿಮಾನದಲ್ಲಿ ಪ್ರಯಾಣಿಸುವಾಗ ಕಿವಿ ಬಂದ್ ಆಗುವುದು, ಭಾರವಾದಂತೆ ಅಥವಾ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ನಮ್ಮ ದೇಹದ ರಚನೆ ಮತ್ತು ಗಾಳಿಯ ಒತ್ತಡದ ಬದಲಾವಣೆಯಿಂದ ಉಂಟಾಗುತ್ತದೆ. ತಜ್ಞ ವೈದ್ಯರ ಪ್ರಕಾರ ನಮ್ಮ ಕಿವಿಯಲ್ಲಿ ಮೂರು ಪ್ರಮುಖ ಭಾಗಗಳಿವೆ. ಮೊದಲನೆಯದು ಹೊರ ಕಿವಿ, ಎರಡನೆಯದು ಮಧ್ಯ ಕಿವಿ ಮತ್ತು ಮೂರನೆಯದು ಒಳ ಕಿವಿ. ಮಧ್ಯ ಕಿವಿ ಗಾಳಿ ತುಂಬಿರುವ ಒಂದು ಖಾಲಿ ಜಾಗ. ಈ ಗಾಳಿಯ ಒತ್ತಡವು ಹೊರಗಿನ ಗಾಳಿಯ ಒತ್ತಡಕ್ಕೆ ಸಮನಾಗಿರುವುದು ಬಹಳ ಮುಖ್ಯ. ಸಮತೋಲನ ಇಲ್ಲದಿದ್ದರೆ ಕಿವಿಯ ಪರದೆ ಸರಿಯಾಗಿ ಚಲಿಸಲ್ಲ ಮತ್ತು ಕೇಳುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು. ಮಧ್ಯ ಕಿವಿಯನ್ನು ಮೂಗು ಮತ್ತು ಗಂಟಲಿನ ಹಿಂಭಾಗಕ್ಕೆ ಸಂಪರ್ಕಿಸುವ ಒಂದು ತೆಳುವಾದ ನಾಳಿಯಿದೆ. ಇದನ್ನು ಯೂಸ್ಟೇಶಿಯನ್ ಟ್ಯೂಬ್ (Eustachian Tube) ಎಂದು ಕರೆಯಲಾಗುತ್ತದೆ. ಈ ನಾಳಿ ಹೆಚ್ಚಿನ ಸಮಯ ಮುಚ್ಚಿರುತ್ತದೆ. ಆದರೆ ನುಂಗುವಾಗ, ಆಕಳಿಸುವಾಗ ಅಥವಾ ಅಗಿಯುವಾಗ ಅದು ತೆರೆದುಕೊಳ್ಳುತ್ತದೆ. ಆಗ ಕಿವಿಯ ಒಳಗಿನ ಮತ್ತು ಹೊರಗಿನ ಗಾಳಿಯ ಒತ್ತಡ ಸಮವಾಗುತ್ತದೆ.&lt;/p&gt;&lt;h3&gt;&lt;strong&gt;ಹಾಗಾದರೆ ಫ್ಲೈಟ್&zwnj;ನಲ್ಲಿ ಕಿವಿ ಯಾಕೆ ಬಂದ್ ಆಗುತ್ತದೆ?&lt;/strong&gt;&lt;/h3&gt;&lt;p&gt;ವಿಮಾನ ಟೇಕಾಫ್ ಆದಾಗ ವೇಗವಾಗಿ ಹೆಚ್ಚಿನ ಎತ್ತರಕ್ಕೆ ಸಾಗುತ್ತದೆ. ಎತ್ತರ ಹೆಚ್ಚಾದಂತೆ ಹೊರಗಿನ ಗಾಳಿ ತೆಳುವಾಗುತ್ತದೆ ಮತ್ತು ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಆದರೆ ಮಧ್ಯ ಕಿವಿಯೊಳಗಿನ ಗಾಳಿಯ ಒತ್ತಡ ತಕ್ಷಣ ಬದಲಾಗುವುದಿಲ್ಲ. ಯೂಸ್ಟೇಶಿಯನ್ ಟ್ಯೂಬ್ ಅಷ್ಟು ವೇಗವಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ, ಮಧ್ಯ ಕಿವಿಯೊಳಗಿನ ಒತ್ತಡವು ಹೊರಗಿನ ಒತ್ತಡಕ್ಕಿಂತ ಹೆಚ್ಚಾಗುತ್ತದೆ. ಈ ಹೆಚ್ಚಾದ ಒತ್ತಡದಿಂದ ಗಾಳಿಯು ಹೊರಗೆ ಹೋಗಲು ಪ್ರಯತ್ನಿಸುತ್ತದೆ. ಇದರಿಂದ ಕಿವಿಯ ಪರದೆ ಸ್ವಲ್ಪ ಹೊರಭಾಗಕ್ಕೆ ಉಬ್ಬಬಹುದು. ಪರಿಣಾಮವಾಗಿ ಕಿವಿ ಭಾರವಾದಂತೆ, ಬಂದ್ ಆದಂತೆ ಅನಿಸುತ್ತದೆ.&lt;/p&gt;&lt;p&gt;&lt;strong&gt;ಹಲವರಿಗೆ ಇಳಿಯುವಾಗಲೇ ಸಮಸ್ಯೆ ಹೆಚ್ಚಾಗುವುದು ಯಾಕೆ?&lt;/strong&gt;&lt;/p&gt;&lt;p&gt;ಬಹುತೇಕ ಜನರಲ್ಲಿ ಗಾಳಿ ಸುಲಭವಾಗಿ ಹೊರಗೆ ಹೋಗುವುದರಿಂದ ವಿಮಾನ ಟೇಕಾಫ್ ಸಮಯದಲ್ಲಿ ಕಡಿಮೆ, ಆದರೆ ವಿಮಾನ ಇಳಿಯುವಾಗ ಸಮಸ್ಯೆ ಎದುರಾಗುತ್ತದೆ. ವಿಮಾನ ಕೆಳಕ್ಕೆ ಇಳಿಯಲು ಆರಂಭಿಸಿದಾಗ ಹೊರಗಿನ ಗಾಳಿಯ ಒತ್ತಡ ವೇಗವಾಗಿ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಮಧ್ಯ ಕಿವಿಯೊಳಗಿನ ಒತ್ತಡವು ಹೊರಗಿನ ಒತ್ತಡಕ್ಕಿಂತ ಕಡಿಮೆಯಾಗುತ್ತದೆ. ಹೊರಗಿನ ಹೆಚ್ಚಿನ ಒತ್ತಡದ ಗಾಳಿ ಮಧ್ಯ ಕಿವಿಯೊಳಗೆ ಪ್ರವೇಶಿಸಿ ಒತ್ತಡವನ್ನು ಸಮತೋಲನಗೊಳಿಸಬೇಕಾಗುತ್ತದೆ. ಆದರೆ ಯೂಸ್ಟೇಶಿಯನ್ ಟ್ಯೂಬ್&zwnj;ನ ರಚನೆಯಿಂದ ಗಾಳಿಯನ್ನು ಒಳಗೆ ಕಳುಹಿಸುವುದು, ಹೊರಗೆ ಕಳುಹಿಸುವುದಕ್ಕಿಂತ ಸ್ವಲ್ಪ ಕಷ್ಟವಾಗುತ್ತದೆ. ಹೀಗಾಗಿ ಈ ನಾಳಿಯನ್ನು ತೆರೆಯಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಇದರಿಂದ ವಿಮಾನ ಇಳಿಯುವಾಗ ಕಿವಿ ಬಂದ್ ಆಗುವುದು, ನೋವು ಮತ್ತು ಚುಚ್ಚಿದಂತಹ ಅನುಭವ ಉಂಟಾಗುವುದು ಸಾಮಾನ್ಯ.&lt;/p&gt;&lt;p&gt;&lt;strong&gt;ಯಾರಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ?&lt;/strong&gt;&lt;/p&gt;&lt;p&gt;ಪ್ರತಿಯೊಬ್ಬರ ಯೂಸ್ಟೇಶಿಯನ್ ಟ್ಯೂಬ್ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಸೀನು, ಜ್ವರ, ಸೈನಸ್ ಸಮಸ್ಯೆ ಅಥವಾ ಅಲರ್ಜಿಯ ಕಾರಣದಿಂದ ಮೂಗು ಕಟ್ಟಿಕೊಂಡಿರುವವರಿಗೆ ವಿಮಾನ ಪ್ರಯಾಣದ ವೇಳೆ ಕಿವಿಯಲ್ಲಿ ತೀವ್ರ ನೋವು ಉಂಟಾಗಬಹುದು. ಕೆಲವೊಮ್ಮೆ ಕಿವಿಯ ಪರದೆಯ ಮೇಲೆ ಹೆಚ್ಚಿನ ಒತ್ತಡ ಉಂಟಾದರೆ ಸ್ವಲ್ಪ ರಕ್ತಸ್ರಾವವೂ ಆಗಬಹುದು. ವೈದ್ಯರ ಪ್ರಕಾರ, ಈ ಸಮಸ್ಯೆ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಮಕ್ಕಳ ಯೂಸ್ಟೇಶಿಯನ್ ಟ್ಯೂಬ್ ವಯಸ್ಕರಿಗಿಂತ ಹೆಚ್ಚು ನೇರವಾಗಿಯೂ ಮತ್ತು ತೆಳುವಾಗಿಯೂ ಇರುವುದರಿಂದ ಮಕ್ಕಳಿಗೆ ಕಿವಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ.&lt;/p&gt;&lt;p&gt;&lt;strong&gt;ಫ್ಲೈಟ್&zwnj;ನಲ್ಲಿ ಕಿವಿ ಬಂದ್ ಆಗುವುದನ್ನು ತಪ್ಪಿಸಿಕೊಳ್ಳಲು ಕೆಲವು ಸರಳ ವಿಧಾನ&lt;/strong&gt;&lt;/p&gt;&lt;p&gt;ಆಕಳಿಸುವಾಗ ಮತ್ತು ನುಂಗುವಾಗ ಯೂಸ್ಟೇಶಿಯನ್ ಟ್ಯೂಬ್ ತೆರೆಯಲು ಸಹಾಯ ಮಾಡುವ ಸ್ನಾಯುಗಳು ಕೆಲಸ ಮಾಡುತ್ತವೆ. ಆದ್ದರಿಂದ ವಿಮಾನ ಪ್ರಯಾಣದ ವೇಳೆ ಚ್ಯೂಯಿಂಗ್ ಗಮ್ ಅಗಿಯುವುದು ಉತ್ತಮ.&lt;/p&gt;&lt;p&gt;ಪ್ರಯಾಣದ ವೇಳೆ ನೀರು ಅಥವಾ ಜ್ಯೂಸ್ ಕುಡಿಯುತ್ತಾ ಇರುವುದರಿಂದ ಪದೇಪದೇ ನುಂಗಲು ಸಾಧ್ಯವಾಗುತ್ತದೆ. ಇದರಿಂದ ಯೂಸ್ಟೇಶಿಯನ್ ಟ್ಯೂಬ್ ತೆರೆಯಲು ಸಹಾಯವಾಗಬಹುದು.&lt;/p&gt;&lt;p&gt;ಇನ್ನೊಂದು ವಿಧಾನ ವಲ್ಸಾಲ್ವಾ (Valsalva Maneuver). ಇದರಲ್ಲಿ ಎರಡೂ ಬೆರಳುಗಳಿಂದ ಮೂಗನ್ನು ಮುಚ್ಚಿಕೊಂಡು, ಬಾಯಿಯನ್ನೂ ಮುಚ್ಚಬೇಕು. ನಂತರ ನಿಧಾನವಾಗಿ ಮೂಗಿನ ಮೂಲಕ ಗಾಳಿಯನ್ನು ಹೊರಗೆ ಬಿಡಲು ಪ್ರಯತ್ನಿಸಬೇಕು. ಇದರಿಂದ ಮೂಗು ಮತ್ತು ಗಂಟಲಿನ ಹಿಂಭಾಗದಲ್ಲಿ ಒತ್ತಡ ಉಂಟಾಗಿ ಯೂಸ್ಟೇಶಿಯನ್ ಟ್ಯೂಬ್ ತೆರೆಯಲು ಮತ್ತು ಗಾಳಿ ಮಧ್ಯ ಕಿವಿಯೊಳಗೆ ಪ್ರವೇಶಿಸಲು ಸಹಾಯವಾಗುತ್ತದೆ. ಇದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು.&lt;/p&gt;]]></content:encoded>
            <category>travel</category>
            <dc:creator>Pavna Das</dc:creator>
            <atom:link href="https://kannada.asianetnews.com/travel/why-do-ears-hurt-during-flight-landing-ent-doctor-explains/articleshow-gy4xip3"/>
        </item>
        <item>
            <title><![CDATA[ರೈಲಲ್ಲಿ ಬ್ಯಾಗ್ ಕಳೆದು ಹೋಯ್ತಾ? ಕಳ್ಳತನ ಆಯ್ತಾ? ತಕ್ಷಣ ಹೀಗೆ ಮಾಡಿ!]]></title>
            <link>https://kannada.asianetnews.com/gallery/travel/what-to-do-if-you-lose-your-luggage-on-an-indian-railways-train-h5pdgt6</link>
            <guid isPermaLink="true">https://kannada.asianetnews.com/gallery/travel/what-to-do-if-you-lose-your-luggage-on-an-indian-railways-train-h5pdgt6</guid>
            <pubDate>Wed, 26 Aug 2026 14:53:40 +0530</pubDate>
            <description><![CDATA[ರೈಲಿನಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ಬ್ಯಾಗ್&zwnj;ಗಳನ್ನು ಮರೆತುಬಿಡುವುದು ಅಥವಾ ಕಳ್ಳತನಕ್ಕೆ ಒಳಗಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ತಕ್ಷಣ ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ನಿಮ್ಮ ಬ್ಯಾಗ್ ಮರಳಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಆ ಕ್ರಮಗಳು ಯಾವುವು ಎಂದು ಇಲ್ಲಿ ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ynvvx95exe740zxg6t01s9,imgname-bag-missing-in-train-1787735961513.jpg" type="image/jpeg" height="390" width="690"/>
            <content:encoded><![CDATA[ರೈಲಿನಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ಬ್ಯಾಗ್&zwnj;ಗಳನ್ನು ಮರೆತುಬಿಡುವುದು ಅಥವಾ ಕಳ್ಳತನಕ್ಕೆ ಒಳಗಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ತಕ್ಷಣ ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ನಿಮ್ಮ ಬ್ಯಾಗ್ ಮರಳಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಆ ಕ್ರಮಗಳು ಯಾವುವು ಎಂದು ಇಲ್ಲಿ ತಿಳಿಯಿರಿ.&lt;img&gt;&lt;p&gt;ರೈಲು ಪ್ರಯಾಣದಲ್ಲಿ ಆತುರವಾಗಿ ಇಳಿಯುವಾಗ ಸೀಟಿನ ಬಳಿ ಬ್ಯಾಗ್ ಮರೆಯುವುದು ಅಥವಾ ಲಗೇಜ್ ಕಣ್ಮರೆಯಾಗುವುದು ಅನೇಕರಿಗೆ ಅನುಭವಕ್ಕೆ ಬಂದಿರುತ್ತದೆ. ಕೆಲವೊಮ್ಮೆ ಬ್ಯಾಗ್ ಕಳ್ಳತನವೂ ಆಗಬಹುದು. ಬ್ಯಾಗ್ ಕಳೆದುಹೋಗಿದೆ ಎಂದು ತಿಳಿದ ತಕ್ಷಣ, ಗಾಬರಿಯಾಗದೆ ಮೊದಲು ರೈಲಿನಲ್ಲಿರುವ ಟಿಟಿಇ, ಗಾರ್ಡ್ ಅಥವಾ ಇತರ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿ. ಯಾವ ಕೋಚ್, ಯಾವ ಸೀಟಿನ ಬಳಿ ಬ್ಯಾಗ್ ಇಟ್ಟಿದ್ದೀರಿ, ರೈಲು ಸಂಖ್ಯೆ, ಪ್ರಯಾಣದ ದಿನಾಂಕ, ಎಲ್ಲಿ ಹತ್ತಿದ್ದೀರಿ, ಎಲ್ಲಿ ಇಳಿದಿದ್ದೀರಿ ಎಂಬ ವಿವರಗಳನ್ನು ತಿಳಿಸಿ.&lt;/p&gt;&lt;p&gt;ಈ ಮಾಹಿತಿ, ನಿಮ್ಮ ಬ್ಯಾಗ್ ರೈಲಲ್ಲೇ ಉಳಿದಿದೆಯೇ ಅಥವಾ ಕಳ್ಳತನವಾಗಿದೆಯೇ ಎಂದು ತಿಳಿಯಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ. ದೂರುಗಳಿಗಾಗಿ ರೈಲ್ವೆಯ 'ರೈಲ್ ಮದದ್ ಸೇವೆ' ಲಭ್ಯವಿದೆ. ಪ್ರಯಾಣದ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಸಹಾಯಕ್ಕಾಗಿ 139 ಕ್ಕೆ ಕರೆ ಮಾಡಬಹುದು.&lt;/p&gt;&lt;img&gt;&lt;p&gt;ಬ್ಯಾಗ್ ಕಳ್ಳತನವಾಗಿದೆ ಎಂಬ ಅನುಮಾನವಿದ್ದರೆ, ತಕ್ಷಣ ರೈಲ್ವೆ ಪೊಲೀಸ್ ಅಥವಾ ಆರ್&zwnj;ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿ. ರೈಲ್ವೆ ಅಧಿಕಾರಿಗಳ ಪ್ರಕಾರ, ಕಳೆದುಹೋದ ವಸ್ತುಗಳ ಬಗ್ಗೆ 'ರೈಲ್ ಮದದ್' ನಲ್ಲಿ ದೂರು ನೀಡಬಹುದು. 139 ಕ್ಕೆ ಕರೆ ಮಾಡುವ ಮೂಲಕವೂ ಸಹಾಯ ಪಡೆಯಬಹುದು. ದೂರು ನೀಡುವಾಗ ನಿಮ್ಮ ಮೊಬೈಲ್ ಸಂಖ್ಯೆ, ರೈಲು ಸಂಖ್ಯೆ, ಪಿಎನ್&zwnj;ಆರ್ ಸಂಖ್ಯೆ, ಕೋಚ್ ಸಂಖ್ಯೆ, ಸೀಟು ಸಂಖ್ಯೆ, ಪ್ರಯಾಣದ ವಿವರಗಳು, ಬ್ಯಾಗಿನ ಬಣ್ಣ, ಗಾತ್ರ, ವಿಶೇಷ ಗುರುತುಗಳು ಮತ್ತು ಅದರಲ್ಲಿರುವ ವಸ್ತುಗಳಂತಹ ವಿವರಗಳನ್ನು ಸ್ಪಷ್ಟವಾಗಿ ತಿಳಿಸಬೇಕು.&lt;/p&gt;&lt;p&gt;'ರೈಲ್ ಮದದ್' ನಲ್ಲಿ ದೂರು ದಾಖಲಿಸುವಾಗ ಕೋಚ್, ಸೀಟು, ಪ್ರಯಾಣದ ದಿನಾಂಕ ಮತ್ತು ದೂರಿನ ವಿವರಗಳನ್ನು ನೀಡಬೇಕಾಗುತ್ತದೆ. ಅಗತ್ಯವಿದ್ದರೆ ಫೋಟೋ ಅಥವಾ ಇತರ ಪುರಾವೆಗಳನ್ನು ಅಪ್&zwnj;ಲೋಡ್ ಮಾಡುವ ಅವಕಾಶವೂ ಇದೆ.&lt;/p&gt;&lt;img&gt;&lt;p&gt;ಬ್ಯಾಗ್ ಕಳೆದುಹೋದ ವಿಷಯ ತಿಳಿದ ತಕ್ಷಣ ದೂರು ನೀಡುವುದು ಬಹಳ ಮುಖ್ಯ. ತಡ ಮಾಡಿದರೆ ಬ್ಯಾಗ್ ಎಲ್ಲಿದೆ ಎಂದು ಪತ್ತೆ ಹಚ್ಚುವುದು ಕಷ್ಟವಾಗಬಹುದು. ನೀವು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ ನಂತರ, ಅವರು ಅಗತ್ಯಕ್ಕೆ ಅನುಗುಣವಾಗಿ ಸಂಬಂಧಪಟ್ಟ ನಿಲ್ದಾಣ, ಆರ್&zwnj;ಪಿಎಫ್ ಅಥವಾ ಇತರ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಾರೆ. ಕಳ್ಳತನ ನಡೆದಿದೆ ಎಂದು ಖಚಿತವಾದರೆ, ಪೊಲೀಸ್ ದೂರು ಮತ್ತು ಎಫ್&zwnj;ಐಆರ್ ದಾಖಲಿಸುವ ವಿಷಯದಲ್ಲಿ ಆರ್&zwnj;ಪಿಎಫ್ ಸಿಬ್ಬಂದಿ ಸಹಾಯ ಮಾಡುತ್ತಾರೆ.&lt;/p&gt;&lt;img&gt;&lt;p&gt;ರೈಲ್ವೆಯಲ್ಲಿ 'ಲಾಸ್ಟ್ ಅಂಡ್ ಫೌಂಡ್' ಸೇವೆಯೂ ಇದೆ. ಆದ್ದರಿಂದ, ಬ್ಯಾಗ್ ಕಳೆದುಹೋದ ತಕ್ಷಣ 'ಇನ್ನು ಸಿಗುವುದಿಲ್ಲ' ಎಂದುಕೊಳ್ಳದೆ ಅಧಿಕಾರಿಗಳಿಗೆ ಮಾಹಿತಿ ನೀಡಿ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಬರದಂತೆ ತಡೆಯಲು, ನಿಮ್ಮ ಬ್ಯಾಗ್ ಮೇಲೆ ಹೆಸರು, ಮೊಬೈಲ್ ಸಂಖ್ಯೆ ಇರುವ ಟ್ಯಾಗ್ ಹಾಕುವುದು ಉತ್ತಮ. ಬೆಲೆಬಾಳುವ ವಸ್ತುಗಳು, ನಗದು ಮತ್ತು ಪ್ರಮುಖ ದಾಖಲೆಗಳನ್ನು ಯಾವಾಗಲೂ ನಿಮ್ಮ ಬಳಿಯೇ ಇಟ್ಟುಕೊಳ್ಳುವುದು ಸುರಕ್ಷಿತ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/what-to-do-if-you-lose-your-luggage-on-an-indian-railways-train-h5pdgt6"/>
        </item>
        <item>
            <title><![CDATA[‘ದೇಶವನ್ನೇ ಮಾರಿಬಿಡ್ತೀರಾ! ₹5,000 UPI ನೋಡಿ ಕ್ಯಾಬ್ ಚಾಲಕನಿಗೆ ಪ್ರವಾಸಿಗನ ಸಖತ್ ಕ್ಲಾಸ್! ವಿಡಿಯೋ ವೈರಲ್]]></title>
            <link>https://kannada.asianetnews.com/viral/foreign-tourist-shocked-after-seeing-rs-5000-upi-payment-to-cab-driver-video-goes-viral-bmk/articleshow-knce6sy</link>
            <guid isPermaLink="true">https://kannada.asianetnews.com/viral/foreign-tourist-shocked-after-seeing-rs-5000-upi-payment-to-cab-driver-video-goes-viral-bmk/articleshow-knce6sy</guid>
            <pubDate>Wed, 19 Aug 2026 21:51:42 +0530</pubDate>
            <description><![CDATA[&lt;p&gt;ವಿದೇಶಿ ಪ್ರವಾಸಿಯೊಬ್ಬರಿಗೆ 2 ಕಿ.ಮೀ.ಗೆ ₹500 ಕೇಳಿ ಕ್ಯಾಬ್ ಚಾಲಕನೊಬ್ಬ ಮೋಸ ಮಾಡಲು ಯತ್ನಿಸುತ್ತಾನೆ. ಆದರೆ, ಆ ಪ್ರವಾಸಿಗ ಚಾಲಕನ ದುರಾಸೆಯನ್ನು ಬಯಲು ಮಾಡಲು UPI ನಲ್ಲಿ ₹5,000 ನಮೂದಿಸಿ, ನಂತರ ನಿರರ್ಗಳ ಹಿಂದಿಯಲ್ಲಿ ಮಾತನಾಡಿ ಚಾಲಕನಿಗೆ ತಕ್ಕ ಪಾಠ ಕಲಿಸುತ್ತಾನೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dd5k3948jm75m8t9t660qm,imgname-driver-scam-1787156417598.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಜನಪ್ರಿಯ ಆತಿಥ್ಯ ಸದಾ ಮರೆಯಲಾಗದ ಅನುಭವ ನೀಡುತ್ತದೆ. ಆದರೆ, ಕೆಲವೊಮ್ಮೆ ವಿದೇಶಿಯರನ್ನು ಕಂಡರೆ ಸಾಕು &quot;ಇವರಿಂದ ಹೆಚ್ಚು ಹಣ ಕಸಿಯಬಹುದು&quot; ಎಂದು ಭಾವಿಸುವ ಕೆಲವು ವ್ಯಕ್ತಿಗಳಿಂದ ದೇಶಕ್ಕೆ ಕೆಟ್ಟ ಹೆಸರು ಬರುವುದೂ ಉಂಟು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಒಂದರಲ್ಲಿ, ವಿದೇಶಿ ಪ್ರವಾಸಿಯೊಬ್ಬನಿಗೆ ಕ್ಯಾಬ್ ಚಾಲಕ ಚಾಕಚಕ್ಯತೆಯಿಂದ ಮೋಸ ಮಾಡಲು ಹೋಗಿ, ಉಲ್ಟಾ ಆತನಿಂದಲೇ ಸಖತ್ ದೇಶಿ ಶೈಲಿಯಲ್ಲಿ ಕ್ಲಾಸ್ ತಗೆದುಕೊಂಡ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;2 ಕಿಲೋಮೀಟರ್&zwnj;ಗೆ ₹500 ಬಾಡಿಗೆ ಕೇಳಿದ ಚಾಲಕ!&lt;/strong&gt;&lt;/h2&gt;&lt;p&gt;ವೈರಲ್ ಆಗಿರುವ ಈ ವೀಡಿಯೊದಲ್ಲಿ ವಿದೇಶಿ ಪ್ರವಾಸಿಯೊಬ್ಬ ಕ್ಯಾಬ್&zwnj;ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಕೇವಲ 2 ಕಿಲೋಮೀಟರ್ ಪ್ರಯಾಣದ ನಂತರ ತನ್ನ ಗಮ್ಯಸ್ಥಾನ ತಲುಪಿದ ಪ್ರವಾಸಿ, ಗಾಡಿ ನಿಲ್ಲಿಸಲು ಹೇಳಿ ಇಂಗ್ಲಿಷ್&zwnj;ನಲ್ಲಿ ಪ್ರಯಾಣದ ದರ (Fare) ಎಷ್ಟು ಎಂದು ಕೇಳುತ್ತಾನೆ. ವಿದೇಶಿ ಪ್ರವಾಸಿಯನ್ನು ಕಂಡ ಚಾಲಕ, ಕೇವಲ 2 ಕಿ.ಮೀ.ಗೆ ಬರೋಬ್ಬರಿ ₹500 ನೀಡುವಂತೆ ಬೇಡಿಕೆ ಇಡುತ್ತಾನೆ.&lt;/p&gt;&lt;h3&gt;&lt;strong&gt;UPI ನಲ್ಲಿ ₹5,000 ನಮೂದಿಸಿ ಟ್ರ್ಯಾಪ್ ಮಾಡಿದ ಪ್ರವಾಸಿ!&lt;/strong&gt;&lt;/h3&gt;&lt;p&gt;ಕ್ಯಾಬ್ ಚಾಲಕ ಹೆಚ್ಚುವರಿ ಹಣ ಕೇಳುತ್ತಿದ್ದಾನೆ ಎಂಬುದನ್ನು ತಕ್ಷಣ ಗ್ರಹಿಸಿದ ವಿದೇಶಿ ಪ್ರವಾಸಿ, ಆತನಿಗೆ ಪಾಠ ಕಲಿಸಲು ನಿರ್ಧರಿಸುತ್ತಾನೆ. ತನ್ನ ಫೋನ್&zwnj;ನಲ್ಲಿ UPI ಅಪ್ಲಿಕೇಶನ್ ತೆರೆದು ₹500 ಬದಲಿಗೆ ಜಾಣತನದಿಂದ ₹5,000 ಎಂದು ನಮೂದಿಸುತ್ತಾನೆ. ನಂತರ ಫೋನ್ ಅನ್ನು ಚಾಲಕನಿಗೆ ತೋರಿಸಿ, &quot;ಇಷ್ಟು ಸರಿ ಇದೆಯಾ?&quot; ಎಂದು ಕೇಳುತ್ತಾನೆ. ₹5,000 ಕಂಡ ತಕ್ಷಣ ದುರಾಸೆಗೆ ಬಿದ್ದ ಚಾಲಕ, ತಡಮಾಡದೇ &quot;ಹೌದು, ಸರಿ ಇದೆ... ಪೇಮೆಂಟ್ ಕಂಪ್ಲೀಟ್ ಮಾಡಿ&quot; ಎಂದು ಹೇಳುತ್ತಾನೆ!&lt;/p&gt;&lt;h3&gt;&lt;strong&gt;ಸಖತ್ ಹಿಂದಿಯಲ್ಲಿ ಕ್ಲಾಸ್ ತೆಗೆದುಕೊಂಡ ಪ್ರವಾಸಿ!&lt;/strong&gt;&lt;/h3&gt;&lt;p&gt;ಚಾಲಕನ ದುರಾಸೆಯನ್ನು ಪರೀಕ್ಷಿಸಿದ ಪ್ರವಾಸಿ, ಕೊಂಚ ರಿಯಾಯಿತಿ ಕೊಡುವಂತೆ ಕೇಳುತ್ತಾನೆ. ಆದರೆ ಚಾಲಕ ₹500 ಕ್ಕಿಂತ ಕಡಿಮೆ ಮಾಡಲು ಒಪ್ಪುವುದಿಲ್ಲ. ಆ ಕ್ಷಣದಲ್ಲಿ ಪ್ರವಾಸಿ ತನ್ನ ನೈಜ 'ದೇಶಿ' ಶೈಲಿಯನ್ನು ಹೊರತಗಿಯುತ್ತಾನೆ! ನಿರರ್ಗಳವಾಗಿ ಹಿಂದಿಯಲ್ಲಿ ಮಾತನಾಡಲು ಶುರುಮಾಡುವ ಆತ, &quot;ನೀನು ಪ್ರಾಮಾಣಿಕ ಅಂದುಕೊಂಡಿದ್ದೆ... ನೀನು ದೇಶವನ್ನೇ ಮಾರಿಬಿಡ್ತೀಯಾ ಮಗನೇ! ಏನು ಮಾಡ್ತಿದ್ದೀಯಾ ನೀನು?&quot; ಎಂದು ಹಾಸ್ಯಸ್ಪದವಾಗಿ ಗದರಿಸುತ್ತಾನೆ. ಅಷ್ಟೇ ಅಲ್ಲದೆ, ಚಾಲಕನ ಹೆಗಲಿಗೆ ತಮಾಷೆಯಾಗಿ ಹೊಡೆಯುತ್ತಾ, &quot;ಕೇವಲ 2 ಕಿಲೋಮೀಟರ್&zwnj;ಗೆ ₹5,000 ಪಡೆದು ಆ ಹಣವನ್ನೆಲ್ಲಾ ಎಲ್ಲಿ ಇಟ್ಟುಕೊಳ್ತೀಯ ಸಹೋದರ?&quot; ಎಂದು ಪ್ರವಾಸಿ ಪ್ರಶ್ನಿಸಿದಾಗ ಚಾಲಕನಿಗೆ ತಾನು ಸಿಕ್ಕಿಬಿದ್ದಿರುವುದು ಅರ್ಥವಾಗಿ ಮುಜುಗರಕ್ಕೊಳಗಾಗುತ್ತಾನೆ.&lt;/p&gt;&lt;h3&gt;&lt;strong&gt;ಅಂತಿಮವಾಗಿ ನೀಡಿದ್ದು ಕೇವಲ ₹100!&lt;/strong&gt;&lt;/h3&gt;&lt;p&gt;ವೀಡಿಯೊದ ಕೊನೆಯಲ್ಲಿ, ಪ್ರವಾಸಿ ಮತ್ತೊಮ್ಮೆ ನ್ಯಾಯಯುತ ದರ ಎಷ್ಟು ಎಂದು ಕೇಳುತ್ತಾನೆ. ಚಾಲಕ ಮೂಲ ಬಾಡಿಗೆ ₹500 ಕ್ಕೆ ಅಂಟಿಕೊಂಡರೂ, ಚಾಣಾಕ್ಷ ಪ್ರವಾಸಿಗ ಕೊನೆಗೆ ನ್ಯಾಯಯುತವಾದ ₹100 ಹಣವನ್ನು ಮಾತ್ರ ನೀಡಿ ಅಲ್ಲಿಂದ ಹೊರಡುತ್ತಾನೆ.&lt;/p&gt;&lt;h3&gt;&lt;strong&gt;ನೆಟ್ಟಿಗರ ಪ್ರತಿಕ್ರಿಯೆ!&lt;/strong&gt;&lt;/h3&gt;&lt;p&gt;ಪ್ರವಾಸಿಗ ಭಾರತದಲ್ಲಿದ್ದುಕೊಂಡು ಹಿಂದಿ ಭಾಷೆಯನ್ನು ಇಷ್ಟು ಸ್ಪಷ್ಟವಾಗಿ ಮಾತನಾಡಿ, ಕ್ಯಾಬ್ ಚಾಲಕನ ದುರಾಸೆಯನ್ನು ಹಸಿಬಿಸಿಯಾಗಿ ಬಯಲಿಗೆಳೆದ ಶೈಲಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿದೇಶಿಯರನ್ನು ಕಂಡ ತಕ್ಷಣ ಮೋಸ ಮಾಡಲು ಯತ್ನಿಸುವ ಜನರಿಗೆ ಈ ವೀಡಿಯೊ ಒಂದು ಉತ್ತಮ ಪಾಠ ಎಂದು ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/foreign-tourist-shocked-after-seeing-rs-5000-upi-payment-to-cab-driver-video-goes-viral-bmk/articleshow-knce6sy"/>
        </item>
        <item>
            <title><![CDATA[ವಿಶ್ವದ ಈ 6 ದೇಶಗಳಲ್ಲಿ ರಾಷ್ಟ್ರಪತಿ, ಪ್ರಧಾನಿಗಳೇ ಇಲ್ಲ! ಆದರೆ, ಇಲ್ಲಿನ ಅತ್ಯಂತ ಸಂತೋಷದಿಂದ ಜೀವನ ಮಾಡ್ತಿದ್ದಾರೆ!]]></title>
            <link>https://kannada.asianetnews.com/gallery/travel/six-nations-that-thrive-without-president-or-prime-minister-but-people-living-very-happy-oxkuea3</link>
            <guid isPermaLink="true">https://kannada.asianetnews.com/gallery/travel/six-nations-that-thrive-without-president-or-prime-minister-but-people-living-very-happy-oxkuea3</guid>
            <pubDate>Wed, 19 Aug 2026 11:59:01 +0530</pubDate>
            <description><![CDATA[&lt;p&gt;ಯಾವುದೇ ಒಂದು ದೇಶದ ಆಡಳಿತ ಸುಗಮವಾಗಿ ನಡೆಯಬೇಕು ಎಂದರೆ ಆ ದೇಶಗಳಲ್ಲಿ ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಗಳು ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಆದರೆ, ಈ ಕೆಲವು ದೇಶಗಳಲ್ಲಿ ರಾಷ್ಟ್ರಪತಿ, ಅಧ್ಯಕ್ಷ ಅಥವಾ ಪ್ರಧಾನಮಂತ್ರಿಗಳೇ ಇಲ್ಲ. ಆದರೂ ಈ ದೇಶಗಳ ಜನ ಅತ್ಯಂತ ಸಂತೋಷವಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kybwtn6e49jxmw9f9mve1dzj,imgname-yemen-missile-attack-saudi-arabia-aramco-oil-facility-jizan-red-sea-houthi-1-1784958244046.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವುದೇ ಒಂದು ದೇಶದ ಆಡಳಿತ ಸುಗಮವಾಗಿ ನಡೆಯಬೇಕು ಎಂದರೆ ಆ ದೇಶಗಳಲ್ಲಿ ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಗಳು ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಆದರೆ, ಈ ಕೆಲವು ದೇಶಗಳಲ್ಲಿ ರಾಷ್ಟ್ರಪತಿ, ಅಧ್ಯಕ್ಷ ಅಥವಾ ಪ್ರಧಾನಮಂತ್ರಿಗಳೇ ಇಲ್ಲ. ಆದರೂ ಈ ದೇಶಗಳ ಜನ ಅತ್ಯಂತ ಸಂತೋಷವಾಗಿದ್ದಾರೆ.&lt;/p&gt;&lt;img&gt;&lt;p&gt;ಸೌದಿ ಅರೇಬಿಯಾ ಸಂಪೂರ್ಣ ರಾಜಪ್ರಭುತ್ವದ ದೇಶ. ಇಲ್ಲಿ ರಾಜನೇ ಸರ್ವೋಚ್ಚ ಅಧಿಕಾರವನ್ನು ಹೊಂದಿರುತ್ತಾರೆ. ದೇಶದ ಆಡಳಿತ, ಪ್ರಮುಖ ನೀತಿ ನಿರ್ಧಾರಗಳು ಮತ್ತು ರಾಷ್ಟ್ರೀಯ ಆಡಳಿತವನ್ನು ರಾಜರೇ ನೋಡಿಕೊಳ್ಳುತ್ತಾರೆ. ಹೀಗಾಗಿ, ಇಲ್ಲಿ ರಾಷ್ಟ್ರಪತಿ ಹುದ್ದೆಯ ಅಗತ್ಯವಿಲ್ಲ. ಸದ್ಯ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರು ಈ ಸಾಮ್ರಾಜ್ಯದ ರಾಜರಾಗಿದ್ದಾರೆ.&lt;/p&gt;&lt;img&gt;&lt;p&gt;ಒಮನ್ ದೇಶವನ್ನು ಸುಲ್ತಾನ್ ಹೈತಮ್ ಬಿನ್ ತಾರಿಕ್ ಆಳುತ್ತಿದ್ದಾರೆ. ದೇಶದ ಮೇಲೆ ಸಂಪೂರ್ಣ ಕಾರ್ಯಾಂಗ ಅಧಿಕಾರವನ್ನು ಇವರೇ ಚಲಾಯಿಸುತ್ತಾರೆ. ಸರ್ಕಾರದ ನೀತಿಗಳು, ವಿದೇಶಾಂಗ ಸಂಬಂಧಗಳು ಮತ್ತು ರಾಷ್ಟ್ರೀಯ ಆಡಳಿತವನ್ನು ಸುಲ್ತಾನರೇ ನಿರ್ದೇಶಿಸುತ್ತಾರೆ. ಹೀಗಾಗಿ, ಇಲ್ಲಿ ಪ್ರತ್ಯೇಕ ರಾಷ್ಟ್ರಪತಿ ಹುದ್ದೆಯ ಅಗತ್ಯವಿಲ್ಲ.&lt;/p&gt;&lt;img&gt;&lt;p&gt;ಬ್ರೂನೈ ದೇಶದಲ್ಲಿ ಸುಲ್ತಾನ್ ಹಸ್ಸನಲ್ ಬೋಲ್ಕಿಯಾ ನೇತೃತ್ವದ ಸಂಪೂರ್ಣ ರಾಜಪ್ರಭುತ್ವವಿದೆ. ಇತರ ರಾಜಪ್ರಭುತ್ವಗಳಿಗಿಂತ ಭಿನ್ನವಾಗಿ, ಇವರು ದೇಶದ ಆಡಳಿತಗಾರರಷ್ಟೇ ಅಲ್ಲ, ಪ್ರಧಾನ ಮಂತ್ರಿಯ ಕರ್ತವ್ಯಗಳನ್ನೂ ನಿರ್ವಹಿಸುತ್ತಾರೆ. ಇದರಿಂದಾಗಿ, ಕಾರ್ಯಾಂಗದ ಅಧಿಕಾರವು ಒಬ್ಬ ವ್ಯಕ್ತಿಯಲ್ಲೇ ಕೇಂದ್ರೀಕೃತವಾಗಿದೆ.&lt;/p&gt;&lt;img&gt;&lt;p&gt;ಕತಾರ್&zwnj;ನ ರಾಜಕೀಯ ವ್ಯವಸ್ಥೆಯು ಅನುವಂಶಿಕ ರಾಜಪ್ರಭುತ್ವವನ್ನು ಆಧರಿಸಿದೆ. ಇಲ್ಲಿ ಎಮಿರ್ ದೇಶದ ಅತ್ಯುನ್ನತ ಅಧಿಕಾರಿಯಾಗಿರುತ್ತಾರೆ. ರಾಜಕೀಯ, ಆಡಳಿತಾತ್ಮಕ ಮತ್ತು ವ್ಯೂಹಾತ್ಮಕ ನಿರ್ಧಾರಗಳನ್ನು ಇವರೇ ಮೇಲ್ವಿಚಾರಣೆ ಮಾಡುತ್ತಾರೆ. ಸದ್ಯ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು ರಾಷ್ಟ್ರಪತಿಯ ಅನುಪಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಹಿಂದೆ ಸ್ವಾಜಿಲ್ಯಾಂಡ್ ಎಂದು ಕರೆಯಲ್ಪಡುತ್ತಿದ್ದ ಎಸ್ವಾಟಿನಿ, ಆಫ್ರಿಕಾದ ಕೆಲವೇ ಕೆಲವು ಸಂಪೂರ್ಣ ರಾಜಪ್ರಭುತ್ವಗಳಲ್ಲಿ ಒಂದಾಗಿದೆ. ಇಲ್ಲಿನ ರಾಜ ಮೂರನೇ ಮ್ಸ್ವಾಟಿ (King Mswati III) ಆಡಳಿತ ಮತ್ತು ಸಾರ್ವಜನಿಕ ಆಡಳಿತದ ಮೇಲೆ ವ್ಯಾಪಕ ಅಧಿಕಾರವನ್ನು ಹೊಂದಿದ್ದಾರೆ. ಚುನಾಯಿತ ನಾಯಕನ ಬದಲು, ರಾಜಪ್ರಭುತ್ವವೇ ದೇಶದ ರಾಜಕೀಯ ರಚನೆಯ ಕೇಂದ್ರವಾಗಿದೆ.&lt;/p&gt;&lt;img&gt;&lt;p&gt;ವಿಶ್ವದ ಅತಿ ಚಿಕ್ಕ ಸ್ವತಂತ್ರ ರಾಷ್ಟ್ರವಾದ ವ್ಯಾಟಿಕನ್ ಸಿಟಿಯನ್ನು ಪೋಪ್ ಆಳುತ್ತಾರೆ. ರೋಮನ್ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸುವುದರ ಜೊತೆಗೆ, ಪೋಪ್ ಅವರು ಈ ನಗರ-ರಾಜ್ಯದ ಸಾರ್ವಭೌಮರಾಗಿ ಸೇವೆ ಸಲ್ಲಿಸುತ್ತಾರೆ. ಇಲ್ಲಿನ ಆಡಳಿತದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಅಧಿಕಾರವನ್ನು ಅವರೇ ಚಲಾಯಿಸುತ್ತಾರೆ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/six-nations-that-thrive-without-president-or-prime-minister-but-people-living-very-happy-oxkuea3"/>
        </item>
        <item>
            <title><![CDATA[ವೀಕೆಂಡ್ ಪ್ಲ್ಯಾನ್ ಮಾಡ್ತಿದ್ದೀರಾ? ಬೆಂಗಳೂರಿನ ಈ 5 ಪರ್ಫೆಕ್ಟ್ ಜಾಗ ಮಿಸ್ ಮಾಡ್ಬೇಡಿ!]]></title>
            <link>https://kannada.asianetnews.com/travel/bengaluru-weekend-plans-from-cubbon-park-to-church-street-5-weekend-ideas-perfect-getaway-gvd/articleshow-tc26g4b</link>
            <guid isPermaLink="true">https://kannada.asianetnews.com/travel/bengaluru-weekend-plans-from-cubbon-park-to-church-street-5-weekend-ideas-perfect-getaway-gvd/articleshow-tc26g4b</guid>
            <pubDate>Sat, 29 Aug 2026 19:49:18 +0530</pubDate>
            <description><![CDATA[&lt;p&gt;ಈ ವೀಕೆಂಡ್ ಬೆಂಗಳೂರಲ್ಲಿ ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೀರಾ? ಕಬ್ಬನ್ ಪಾರ್ಕ್ ಸೈಕ್ಲಿಂಗ್&zwnj;ನಿಂದ ಹಿಡಿದು ಚರ್ಚ್ ಸ್ಟ್ರೀಟ್ ಸುತ್ತಾಟದವರೆಗೆ, ಇಲ್ಲಿದೆ 5 ಮಸ್ತ್ ಐಡಿಯಾಗಳು. ಲಾಲ್&zwnj;ಬಾಗ್, ಮೈಕ್ರೋಬ್ರೂವರಿ, ಕೆ.ಆರ್. ಮಾರ್ಕೆಟ್ ಕೂಡ ಲಿಸ್ಟ್&zwnj;ನಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16y2d6sy3qqc59smpq1zehd,imgname-kjb-1788012999897.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮಂದಿ, ವೀಕೆಂಡ್​ಗೆ ರೆಡಿಯಾ? ನಮ್ಮ ಡೈನಾಮಿಕ್ ಸಿಟಿ ವೀಕೆಂಡ್ ಬಂತು ಅಂದ್ರೆ ಸಾಕು, ಚಟುವಟಿಕೆಗಳಿಂದ ತುಂಬಿ ತುಳುಕುತ್ತೆ. ಬೋರಿಂಗ್ ಆಫೀಸ್ ಕೆಲಸವನ್ನೆಲ್ಲಾ ಮರೆತುಬಿಡಿ. ರಿಲ್ಯಾಕ್ಸ್, ಮಜಾ, ಅಡ್ವೆಂಚರ್... ಎಲ್ಲದಕ್ಕೂ ಇಲ್ಲಿ ಜಾಗವಿದೆ. ನಿಮಗಾಗಿ ಒಂದು ಸೂಪರ್ ಗೈಡ್ ಇಲ್ಲಿದೆ.&lt;/p&gt;&lt;p&gt;ಬೆಂಗಳೂರು ಅಂದ್ರೆ ಬರೀ ಭಾರತದ 'ಸಿಲಿಕಾನ್ ವ್ಯಾಲಿ' ಅಷ್ಟೇ ಅಲ್ಲ. ಇಲ್ಲಿ ಹಸಿರು ಪರಿಸರ ಮತ್ತು ನಗರದ ವೈಬ್ ಎರಡೂ ಮಿಕ್ಸ್ ಆಗಿದೆ. ಅದಕ್ಕೇ ಇದು ಪರ್ಫೆಕ್ಟ್ ವೀಕೆಂಡ್ ಎಸ್ಕೇಪ್. ಪ್ರತಿಯೊಬ್ಬರಿಗೂ, ಪ್ರತಿಯೊಂದು ಮೂಡ್&zwnj;ಗೂ ಇಲ್ಲಿ ಏನಾದರೊಂದು ಇದ್ದೇ ಇರುತ್ತೆ. ಅದಕ್ಕೆ, ಈ ವೀಕೆಂಡ್​ನಲ್ಲಿ ಮಾಡಲು 5 ಮಜವಾದ ಜಾಗಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪ್ರತಿಯೊಬ್ಬರ ಆಸಕ್ತಿಗೂ, ಪ್ರತಿಯೊಂದು ಮೂಡ್&zwnj;ಗೂ ಇಲ್ಲಿ ಏನಾದರೊಂದು ಸಿಗುತ್ತೆ. ಹಸಿರ ಮಡಿಲಲ್ಲಿ ಸುತ್ತಾಟ, ಸೈಕಲ್ ಸವಾರಿ&lt;/p&gt;&lt;p&gt;&lt;strong&gt;1. ಕಬ್ಬನ್ ಪಾರ್ಕ್ ಸೈಕ್ಲಿಂಗ್&lt;/strong&gt;&lt;/p&gt;&lt;p&gt;ವೀಕೆಂಡ್ ಶುರು ಮಾಡೋಕೆ ಇದಕ್ಕಿಂತ ಒಳ್ಳೆ ದಾರಿ ಇನ್ನೊಂದಿಲ್ಲ. ಬೆಂಗಳೂರಿನ 'ಶ್ವಾಸಕೋಶ' ಅಂತಾನೇ ಫೇಮಸ್ ಆಗಿರೋ ಈ ಜಾಗ, ದಿನವನ್ನು ಫ್ರೆಶ್ ಆಗಿ ಶುರು ಮಾಡಲು ಬೆಸ್ಟ್. ನಿಮಗೆ ಶಾಂತವಾದ ವಾತಾವರಣ ಬೇಕಾ? ಹಾಗಿದ್ರೆ ಕಬ್ಬನ್ ಪಾರ್ಕ್&zwnj;ನಲ್ಲಿ ಸೈಕಲ್ ತುಳಿಯಿರಿ. ಶನಿವಾರ ಮತ್ತು ಭಾನುವಾರ ಇಲ್ಲಿಗೆ ಬರುವವರಿಗೆ ಸುಲಭವಾಗಿ ಬಾಡಿಗೆಗೆ ಸೈಕಲ್ ಸಿಗುತ್ತೆ. ಮರಗಳ ನೆರಳಿನಲ್ಲಿ, ಸ್ಮಾರಕಗಳನ್ನು ನೋಡುತ್ತಾ, ತಣ್ಣನೆಯ ಗಾಳಿ ಸೇವಿಸುತ್ತಾ ಸೈಕಲ್ ಓಡಿಸಬಹುದು. ನಗರದ ಹೃದಯ ಭಾಗದಲ್ಲೇ ಇರುವ ಈ ಹಸಿರು ತಾಣ, ನಿಮ್ಮ ಮನಸ್ಸು ಮತ್ತು ದೇಹ ಎರಡಕ್ಕೂ ಚೈತನ್ಯ ನೀಡುತ್ತೆ.&lt;/p&gt;&lt;p&gt;&lt;strong&gt;2. ಲಾಲ್&zwnj;ಬಾಗ್ ಬೊಟಾನಿಕಲ್ ಗಾರ್ಡನ್ಸ್&lt;/strong&gt;&lt;/p&gt;&lt;p&gt;ನಗರದ ಗದ್ದಲದಿಂದ ದೂರ ಹೋಗಿ ಸ್ವಲ್ಪ ಹೊತ್ತು ನೆಮ್ಮದಿಯಾಗಿರಬೇಕು ಅನಿಸಿದರೆ ಲಾಲ್&zwnj;ಬಾಗ್&zwnj;ಗೆ ಹೋಗಿ. 18ನೇ ಶತಮಾನದ ಈ ಐತಿಹಾಸಿಕ ತಾಣದಲ್ಲಿ ಸಾವಿರಾರು ಬಗೆಯ ಸಸ್ಯಗಳಿವೆ. ಇಲ್ಲಿನ ಭವ್ಯವಾದ ಗಾಜಿನ ಮನೆ (Glass House) ಮತ್ತು ಸುಂದರ ಪರಿಸರ ಕಣ್ಣಿಗೆ ಹಬ್ಬ. ಅಂದವಾಗಿ ನಿರ್ವಹಣೆ ಮಾಡಿರುವ ದಾರಿಗಳಲ್ಲಿ ಆರಾಮವಾಗಿ ವಾಕ್ ಮಾಡಬಹುದು. ಸಸ್ಯಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೆ ಅಥವಾ ಸುಮ್ಮನೆ ವಾಕ್ ಮಾಡುವವರಿಗೆ ಇದು ಹೇಳಿ ಮಾಡಿಸಿದ ಜಾಗ.&lt;/p&gt;&lt;p&gt;&lt;strong&gt;3. ಚರ್ಚ್ ಸ್ಟ್ರೀಟ್ ಹಾಪಿಂಗ್&lt;/strong&gt;&lt;/p&gt;&lt;p&gt;ಎಂ.ಜಿ. ರೋಡ್ ಮೆಟ್ರೋದಿಂದ ಇಳಿದರೆ ಸಾಕು, ಈ ಐಕಾನಿಕ್ ರಸ್ತೆ ನಿಮ್ಮನ್ನು ಸ್ವಾಗತಿಸುತ್ತೆ. ಇದು ಅರ್ಬನ್ ಅಡ್ವೆಂಚರ್ ಇಷ್ಟಪಡೋರ ಹಾಟ್​ಸ್ಪಾಟ್. ಇಲ್ಲಿ ವೆರೈಟಿ ಕೆಫೆಗಳು, ವರ್ಲ್ಡ್ ಕ್ಲಾಸ್ ರೆಸ್ಟೋರೆಂಟ್&zwnj;ಗಳು, ವೈಬ್ರೆಂಟ್ ಪಬ್&zwnj;ಗಳು ಮತ್ತು ಪುಸ್ತಕದಂಗಡಿಗಳು ತುಂಬಿವೆ. ಜನರನ್ನು ನೋಡುತ್ತಾ, ಕಾಸ್ಮೋಪಾಲಿಟನ್ ವೈಬ್ ಎಂಜಾಯ್ ಮಾಡುತ್ತಾ ಸುತ್ತಾಡಿ. ಒಳ್ಳೆ ಊಟ, ಒಂದು ಕಪ್ ಕಾಫಿ ಅಥವಾ ಹೊಸ ಪುಸ್ತಕ... ಹೀಗೆ ಚರ್ಚ್ ಸ್ಟ್ರೀಟ್ ನಿಮಗೆ ಪಕ್ಕಾ ಬೆಂಗಳೂರು ಅನುಭವ ನೀಡುತ್ತೆ.&lt;/p&gt;&lt;p&gt;&lt;strong&gt;4. ಮೈಕ್ರೋಬ್ರೂವರಿಗಳಲ್ಲಿ ಬಿಯರ್ ಹಾಪಿಂಗ್!&lt;/strong&gt;&lt;/p&gt;&lt;p&gt;ಬೆಂಗಳೂರನ್ನು ಭಾರತದ 'ಪಬ್ ಕ್ಯಾಪಿಟಲ್' ಅಂತ ಸುಮ್ನೆ ಕರೆಯಲ್ಲ. ಇತ್ತೀಚೆಗೆ ಈ ಟ್ರೆಂಡ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ನಗರದಲ್ಲಿ ಅಸಂಖ್ಯಾತ ಮೈಕ್ರೋಬ್ರೂವರಿಗಳಿವೆ, ಪ್ರತಿಯೊಂದೂ ತನ್ನದೇ ಆದ ವಿಶೇಷ ಆಂಬಿಯನ್ಸ್ ಹೊಂದಿದೆ. ಹಾಪಿ IPAಗಳಿಂದ ಹಿಡಿದು ರಿಚ್ ಸ್ಟೌಟ್&zwnj;ಗಳವರೆಗೆ, ಪ್ರತಿಯೊಬ್ಬರ ಟೇಸ್ಟ್&zwnj;ಗೂ ಇಲ್ಲಿ ಬಿಯರ್ ಸಿಗುತ್ತೆ. ಸ್ನೇಹಿತರ ಜೊತೆ ಹ್ಯಾಂಗೌಟ್ ಮಾಡಲು, ರಿಲ್ಯಾಕ್ಸ್ ಆಗಲು ಮತ್ತು ಬೆಂಗಳೂರಿನ ಮಾಡರ್ನ್ ಕಲ್ಚರ್ ಅನುಭವಿಸಲು ಇದು ಸೂಪರ್ ದಾರಿ.&lt;/p&gt;&lt;h2&gt;&lt;strong&gt;5. ಕೆ.ಆರ್. ಮಾರ್ಕೆಟ್ (ಕೃಷ್ಣ ರಾಜೇಂದ್ರ ಮಾರುಕಟ್ಟೆ)&lt;/strong&gt;&lt;/h2&gt;&lt;p&gt;ಈ ಜಾಗ ಯಾವಾಗ್ಲೂ ಜನರಿಂದ ತುಂಬಿರುತ್ತೆ. ಇಲ್ಲಿ ತಾಜಾ ಹೂವು, ಹಣ್ಣು, ತರಕಾರಿಗಳು ಸೇರಿದಂತೆ ನೂರಾರು ಬಗೆಯ ವಸ್ತುಗಳ ವ್ಯಾಪಾರ ಜೋರಾಗಿ ನಡೆಯುತ್ತೆ. ಕೆ.ಆರ್. ಮಾರ್ಕೆಟ್ ಕೇವಲ ಒಂದು ಮಾರುಕಟ್ಟೆಯಲ್ಲ, ಇದು ಬೆಂಗಳೂರಿನ ಪರಂಪರೆ ಮತ್ತು ದೈನಂದಿನ ಬದುಕಿನ ಜೀವಂತ ಸಾಕ್ಷಿ. ನಗರದ ನಾಡಿಮಿಡಿತವನ್ನು ನೇರವಾಗಿ ಅನುಭವಿಸಲು ಇದೊಂದು ಸರಳ ಮತ್ತು ಅತ್ಯುತ್ತಮ ವೀಕೆಂಡ್ ಪ್ಲ್ಯಾನ್.&lt;/p&gt;]]></content:encoded>
            <category>travel</category>
            <dc:creator>Govindaraj S</dc:creator>
            <atom:link href="https://kannada.asianetnews.com/travel/bengaluru-weekend-plans-from-cubbon-park-to-church-street-5-weekend-ideas-perfect-getaway-gvd/articleshow-tc26g4b"/>
        </item>
        <item>
            <title><![CDATA[ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ನಡುವೆ ಪ್ರತಿದಿನ ಇಂಡಿಗೋ ವಿಮಾನ ಸಂಚಾರ; ವೇಳಾಪಟ್ಟಿ ಇಲ್ಲಿದೆ!]]></title>
            <link>https://kannada.asianetnews.com/travel/delhi-hubballi-delhi-belagavi-indigo-daily-direct-flights-schedule-october-1/articleshow-xdqwd4x</link>
            <guid isPermaLink="true">https://kannada.asianetnews.com/travel/delhi-hubballi-delhi-belagavi-indigo-daily-direct-flights-schedule-october-1/articleshow-xdqwd4x</guid>
            <pubDate>Thu, 20 Aug 2026 12:22:17 +0530</pubDate>
            <description><![CDATA[&lt;p&gt;ಇಂಡಿಗೋ ಏರ್&zwnj;ಲೈನ್ಸ್&zwnj;ನಿಂದ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ನಡುವೆ ದೈನಂದಿನ ನೇರ ವಿಮಾನ ಸೇವೆ ಆರಂಭಿಸಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಯತ್ನದ ಫಲವಾಗಿ ಈ ಸೇವೆ ಪ್ರಾರಂಭವಾಗುತ್ತಿದ್ದು, ಇದು ಉತ್ತರ ಕರ್ನಾಟಕದ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಲೇಖನದಲ್ಲಿ ವಿಮಾನಗಳ ಸಂಪೂರ್ಣ ವೇಳಾಪಟ್ಟಿಯನ್ನು ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0eywz91cegwvxhjqy9c8j4g,imgname-delhi-hubballi-and-delhi-belagavi-daily-flight-1787208563999.jpg" type="image/jpeg" height="390" width="690"/>
            <content:encoded><![CDATA[&lt;p&gt;ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಸಮಗ್ರ ಉತ್ತರ ಕರ್ನಾಟಕದ ಜನತೆಗೆ ವಿಮಾನಯಾನ ಸಂಸ್ಥೆ ಇಂಡಿಗೋ (IndiGo Airlines) ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜಧಾನಿ ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ಮಾರ್ಗಗಳ ನಡುವೆ ಅಕ್ಟೋಬರ್&zwnj; 1ರಿಂದಲೇ ಪ್ರತಿದಿನ (ದೈನಂದಿನ) ನೇರ ವಿಮಾನ ಸಂಚಾರ ಆರಂಭಿಸುವುದಾಗಿ ಇಂಡಿಗೋ ಅಧಿಕೃತವಾಗಿ ಪ್ರಕಟಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ತಕ್ಷಣ ಸ್ಪಂದಿಸಿರುವ ಇಂಡಿಗೋ ಸಂಸ್ಥೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.&lt;/p&gt;&lt;h2&gt;&lt;strong&gt;ವಿಮಾನಗಳ ಹಾರಾಟದ ಸಂಪೂರ್ಣ ವೇಳಾಪಟ್ಟಿ (Flight Timings):&lt;/strong&gt;&lt;/h2&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಿನ ಜಾವ ಹಾಗೂ ಸಂಜೆಯ ಸಮಯದಲ್ಲಿ ವಿಮಾನಗಳು ಹಾರಾಟ ನಡೆಸಲಿವೆ.&lt;/p&gt;&lt;p&gt;&lt;strong&gt;1. ದೆಹಲಿ ⇄ ಹುಬ್ಬಳ್ಳಿ ಮಾರ್ಗ:&lt;/strong&gt;&lt;/p&gt;&lt;p&gt;ದೆಹಲಿ ➔ ಹುಬ್ಬಳ್ಳಿ (Flight No: 6E 758): ಪ್ರತಿದಿನ ಸಂಜೆ 04:30ಕ್ಕೆ ದೆಹಲಿಯಿಂದ ಹೊರಟು, ಸಂಜೆ 06:55ಕ್ಕೆ ಹುಬ್ಬಳ್ಳಿ ತಲುಪಲಿದೆ.&lt;/p&gt;&lt;p&gt;ಹುಬ್ಬಳ್ಳಿ ➔ ದೆಹಲಿ (Flight No: 6E 2115): ಪ್ರತಿದಿನ ಸಂಜೆ 07:30ಕ್ಕೆ ಹುಬ್ಬಳ್ಳಿಯಿಂದ ಹೊರಟು, ರಾತ್ರಿ 10:05ಕ್ಕೆ ದೆಹಲಿಗೆ ತಲುಪಲಿದೆ.&lt;/p&gt;&lt;p&gt;&lt;strong&gt;2. ದೆಹಲಿ ⇄ ಬೆಳಗಾವಿ ಮಾರ್ಗ:&lt;/strong&gt;&lt;/p&gt;&lt;p&gt;ದೆಹಲಿ ➔ ಬೆಳಗಾವಿ (Flight No: 6E 2511): ಪ್ರತಿದಿನ ಬೆಳಗ್ಗೆ 06:15ಕ್ಕೆ ದೆಹಲಿಯಿಂದ ಹೊರಟು, ಬೆಳಗ್ಗೆ 08:40ಕ್ಕೆ ಬೆಳಗಾವಿಗೆ ತಲುಪಲಿದೆ.&lt;/p&gt;&lt;p&gt;ಬೆಳಗಾವಿ ➔ ದೆಹಲಿ (Flight No: 6E 2512): ಪ್ರತಿದಿನ ಬೆಳಗ್ಗೆ 09:10ಕ್ಕೆ ಬೆಳಗಾವಿಯಿಂದ ಹೊರಟು, ಬೆಳಗ್ಗೆ 11:40ಕ್ಕೆ ದೆಹಲಿ ತಲುಪಲಿದೆ.&lt;/p&gt;&lt;p&gt;(ಗಮನಿಸಿ: ಈ ಎರಡೂ ವಿಮಾನಗಳು ಅಕ್ಟೋಬರ್ 1ರಿಂದ ಪ್ರತಿದಿನ ಕಾರ್ಯಾರಂಭ ಮಾಡಲಿವೆ).&lt;/p&gt;&lt;h2&gt;&lt;strong&gt;ಸಚಿವ ಪ್ರಲ್ಹಾದ ಜೋಶಿ ಪ್ರಯತ್ನಕ್ಕೆ ಸಂದ ಜಯ&lt;/strong&gt;&lt;/h2&gt;&lt;p&gt;ಉತ್ತರ ಕರ್ನಾಟಕ ಭಾಗದಿಂದ ದೇಶದ ರಾಜಧಾನಿ ನವದೆಹಲಿಗೆ ವ್ಯಾಪಾರ, ಉದ್ಯೋಗ, ರಾಜಕೀಯ ಮತ್ತು ಶೈಕ್ಷಣಿಕ ಕಾರಣಗಳಿಗಾಗಿ ನಿತ್ಯ ನೂರಾರು ಜನರು ಪ್ರಯಾಣಿಸುತ್ತಾರೆ. ಈ ಮಾರ್ಗದಲ್ಲಿ ನಿತ್ಯ ವಿಮಾನಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಜನರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಪ್ರಲ್ಹಾದ ಜೋಶಿ ಅವರು ಇಂಡಿಗೋ ಏರ್&zwnj;ಲೈನ್ಸ್&zwnj;ನ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ದೈನಂದಿನ ವಿಮಾನ ಸೇವೆ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಸಚಿವರ ಮನವಿಗೆ ಸ್ಪಂದಿಸಿ ಇಂಡಿಗೋ ಈ ಸೇವೆ ಆರಂಭಿಸುತ್ತಿದೆ.&lt;/p&gt;&lt;h3&gt;&lt;strong&gt;ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಿಗ್ ಬೂಸ್ಟ್&zwnj;:&lt;/strong&gt;&lt;/h3&gt;&lt;p&gt;ಈ ಕುರಿತು ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, 'ಪ್ರತಿದಿನ ವಿಮಾನ ಸಂಚಾರ ಆರಂಭವಾಗುವುದರಿಂದ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಭಾಗದಲ್ಲಿ ಉದ್ಯಮ, ಹೂಡಿಕೆ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಬೆಳವಣಿಗೆಗೆ ಭಾರೀ ವೇಗ ಸಿಗಲಿದೆ. ಉತ್ತರ ಕರ್ನಾಟಕದ ಸಂಪರ್ಕ ಕ್ರಾಂತಿ ಹಾಗೂ ಸಮಗ್ರ ಅಭಿವೃದ್ಧಿಗೆ ನಮ್ಮ ಬದ್ಧತೆ ನಿರಂತರವಾಗಿರುತ್ತದೆ' ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/delhi-hubballi-delhi-belagavi-indigo-daily-direct-flights-schedule-october-1/articleshow-xdqwd4x"/>
        </item>
        <item>
            <title><![CDATA[ಉದಯಪುರದ ಐಷಾರಾಮಿ ಒಬೆರಾಯ್ ಉದಯವಿಲಾಸ್ ಹೋಟೆಲ್‌ನಲ್ಲಿ  ತಂಗಿ ₹5.74 ಲಕ್ಷ ಬಿಲ್ ಕಟ್ಟದೆ  ಹೋದ ಕುಟುಂಬ! ಕಾರಣವೇನು?]]></title>
            <link>https://kannada.asianetnews.com/travel/delhi-man-flees-udaipur-5-star-hotel-the-oberoi-udaivilas-without-paying-rs-5-74-lakh-bill-gdp/articleshow-yxn7cut</link>
            <guid isPermaLink="true">https://kannada.asianetnews.com/travel/delhi-man-flees-udaipur-5-star-hotel-the-oberoi-udaivilas-without-paying-rs-5-74-lakh-bill-gdp/articleshow-yxn7cut</guid>
            <pubDate>Thu, 27 Aug 2026 18:03:18 +0530</pubDate>
            <description><![CDATA[ಉದಯಪುರದ 'ದಿ ಒಬೆರಾಯ್ ಉದಯವಿಲಾಸ್' ಪಂಚತಾರಾ ಹೋಟೆಲ್&zwnj;ನಲ್ಲಿ 10 ದಿನ ತಂಗಿದ್ದ ಕುಟುಂಬವೊಂದು, ₹5.74 ಲಕ್ಷ ಬಿಲ್ ಪಾವತಿಸದೆ ವಂಚಿಸಿದೆ. ಟ್ರಾವೆಲ್ ಏಜೆನ್ಸಿ ಬಿಲ್ ಪಾವತಿಸುತ್ತದೆ ಎಂದು ಹೇಳಿ ಪರಾರಿಯಾದ ದೆಹಲಿ ಮೂಲದ ಅನುರಾಗ್ ಯಾದವ್ ವಿರುದ್ಧ ಹೋಟೆಲ್ ಆಡಳಿತ ಮಂಡಳಿ ಪೊಲೀಸ್ ದೂರು ದಾಖಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m11esabcjxg7137xdhnrr61w,imgname-oberoi-udaivilas-hotel-1787829201260.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉದಯಪುರ:&lt;/strong&gt; ರಾಜಸ್ಥಾನದ ಐಷಾರಾಮಿ ಪ್ರವಾಸಿ ನಗರಿ ಉದಯಪುರದ ಖ್ಯಾತ ಪಂಚತಾರಾ ಹೋಟೆಲ್&zwnj;ನಲ್ಲಿ 10 ದಿನಗಳ ಕಾಲ ತಂಗಿ, ಬರೋಬ್ಬರಿ ₹5.74 ಲಕ್ಷ ಬಿಲ್ ಪಾವತಿಸದೆ ಕುಟುಂಬ ಸಮೇತ ಕಾಲ್ನಡಿಗೆ ಬೆಳೆಸಿರುವ ವಿಚಿತ್ರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿ ಮೂಲದ ಖಾಸಗಿ ಕಂಪನಿಯೊಂದರ ಉದ್ಯೋಗಿ ಅನುರಾಗ್ ಯಾದವ್ ಎಂಬುವವರೇ ಈ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದು, ಹೋಟೆಲ್ ಆಡಳಿತ ಮಂಡಳಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;p&gt;ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಕಾಯ್ದಿರಿಸಲಾಗಿದ್ದ ಬುಕಿಂಗ್ ಆಧರಿಸಿ, ಅನುರಾಗ್ ಯಾದವ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆಗಸ್ಟ್ 14 ರಿಂದ 23 ರವರೆಗೆ ಉದಯಪುರದ &lsquo;ದಿ ಒಬೆರಾಯ್ ಉದಯವಿಲಾಸ್&rsquo; ಹೋಟೆಲ್&zwnj;ನಲ್ಲಿ ತಂಗಿದ್ದರು. ಈ ಅವಧಿಯಲ್ಲಿ ಊಟ-ಉಪಹಾರ ಸೇರಿದಂತೆ ಹೋಟೆಲ್&zwnj;ನ ಹಲವು ಐಷಾರಾಮಿ ಸೇವೆಗಳನ್ನು ಪಡೆದುಕೊಂಡಿದ್ದರು.&lt;/p&gt;&lt;p&gt;ಆಗಸ್ಟ್ 24 ರಂದು ಚೆಕ್-ಔಟ್ ಮಾಡುವ ಸಮಯದಲ್ಲಿ ಹೋಟೆಲ್ ಸಿಬ್ಬಂದಿ ₹5.74 ಲಕ್ಷ ಬಿಲ್ ನೀಡಿದಾಗ, ಯಾದವ್ ಹಣ ಪಾವತಿಸಲು ನಿರಾಕರಿಸಿದ್ದಾರೆ. ತಮ್ಮ ಬುಕಿಂಗ್ ಮಾಡಿದ್ದ ಟ್ರಾವೆಲ್ ಏಜೆನ್ಸಿಯೇ ಸಂಪೂರ್ಣ ಬಿಲ್ ಪಾವತಿಸಲಿದೆ ಎಂದು ಹೇಳಿ ಹೋಟೆಲ್&zwnj;ನಿಂದ ತೆರಳಿದ್ದಾರೆ.&lt;/p&gt;&lt;h2&gt;ಪೋಲಿಸ್ ದೂರು ಮತ್ತು ತನಿಖೆ:&lt;/h2&gt;&lt;p&gt;ಹೋಟೆಲ್&zwnj;ನ ಕಮ್ಯುನಿಕೇಶನ್ ಮ್ಯಾನೇಜರ್ ರವೀಂದ್ರ ಸಿಂಗ್, ಮೇಕರ್ ಬಹಾ ಟ್ರಾವೆಲ್ ಏಜೆನ್ಸಿಯನ್ನು ಸಂಪರ್ಕಿಸಿದಾಗ, ಯಾದವ್ ಅವರೊಂದಿಗೆ ಅಂತಹ ಯಾವುದೇ ಒಪ್ಪಂದವಿಲ್ಲ ಎಂದು ಏಜೆನ್ಸಿ ಸ್ಪಷ್ಟಪಡಿಸಿದೆ. ಇದರಿಂದ ವಂಚನೆಗೊಳಗಾದದ್ದು ಮನವರಿಕೆಯಾಗುತ್ತಿದ್ದಂತೆ ಹೋಟೆಲ್ ಆಡಳಿತ ಮಂಡಳಿಯು ಅಂಬಾಮಾತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಪ್ರವಾಸಿ ಸಂಸ್ಥೆಯೊಂದಿಗೆ ಶಾಮೀಲಾಗಿ ಅಥವಾ ಯೋಜಿತವಾಗಿ ಈ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.&lt;/p&gt;&lt;h2&gt;ದಿ ಒಬೆರಾಯ್ ಉದಯವಿಲಾಸ್: ವಾಸ್ತವ್ಯದ ವೆಚ್ಚ ಎಷ್ಟು?&lt;/h2&gt;&lt;p&gt;ಪಿಚೋಲಾ ಸರೋವರದ ದಡದಲ್ಲಿರುವ 50 ಎಕರೆ ವಿಸ್ತೀರ್ಣದ 'ದಿ ಒಬೆರಾಯ್ ಉದಯವಿಲಾಸ್' ದೇಶದ ಅತ್ಯಂತ ಐಷಾರಾಮಿ ಮತ್ತು ದುಬಾರಿ ಹೋಟೆಲ್&zwnj;ಗಳಲ್ಲಿ ಒಂದಾಗಿದೆ. ಬ್ಲಾಕ್&zwnj;ಬಸ್ಟರ್ 'ಯೇ ಜವಾನಿ ಹೈ ದಿವಾನಿ' ಹಿಂದಿ ಸಿನಿಮಾದ ಚಿತ್ರೀಕರಣದ ಮೂಲಕ ಈ ಹೋಟೆಲ್ ಮತ್ತಷ್ಟು ಪ್ರಸಿದ್ಧಿ ಪಡೆದಿತ್ತು.&lt;/p&gt;&lt;ul&gt; &lt;li&gt;ಸಾಮಾನ್ಯ ಕೊಠಡಿ (Premier Room): ಒಂದು ರಾತ್ರಿಗೆ ಸುಮಾರು ₹46,500&lt;/li&gt; &lt;li&gt;ಪೂಲ್ ಕೊಠಡಿ (Semi-Private Pool): ಒಂದು ರಾತ್ರಿಗೆ ₹67,000 ವರೆಗೆ&lt;/li&gt; &lt;li&gt;ಲಕ್ಷುರಿ ಸೂಟ್ (Luxury Suite): ವಿದೇಶಿ ಪ್ರವಾಸಿಗರು ಖಾಸಗಿ ಬಟ್ಲರ್ ಸೇವೆ ಸೇರಿ ಒಂದು ರಾತ್ರಿಗೆ ಸುಮಾರು ₹4.12 ಲಕ್ಷ (3,234 ಪೌಂಡ್) ಪಾವತಿಸಿದ ಉದಾಹರಣೆಗಳಿವೆ.&lt;/li&gt;&lt;/ul&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/travel/delhi-man-flees-udaipur-5-star-hotel-the-oberoi-udaivilas-without-paying-rs-5-74-lakh-bill-gdp/articleshow-yxn7cut"/>
        </item>
    </channel>
</rss>
