<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 10 Aug 2026 08:52:19 +0530</lastBuildDate>
        <atom:link href="https://kannada.asianetnews.com/rss/travel" rel="self" type="application/rss+xml"/>
        <item>
            <title><![CDATA[Wow.. ಕರ್ನಾಟಕದಲ್ಲೇ ಇಂತಹ ಜಲಪಾತಗಳಿವೆಯಾ? ಈ 6 ತಾಣಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ!]]></title>
            <link>https://kannada.asianetnews.com/travel/6-hidden-waterfalls-in-karnataka-you-must-visit-this-monsoon-gvd/articleshow-2o9hs7f</link>
            <guid isPermaLink="true">https://kannada.asianetnews.com/travel/6-hidden-waterfalls-in-karnataka-you-must-visit-this-monsoon-gvd/articleshow-2o9hs7f</guid>
            <pubDate>Fri, 07 Aug 2026 23:29:15 +0530</pubDate>
            <description><![CDATA[&lt;p&gt;ಕರ್ನಾಟಕ ಎಂದರೆ ಕೇವಲ ಪ್ರಸಿದ್ಧ ಪ್ರವಾಸಿ ತಾಣಗಳು ಮಾತ್ರವಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ಕಾಡು, ಬೆಟ್ಟ ಹಾಗೂ ಕಣಿವೆಗಳ ನಡುವೆ ಹಲವು ಅಪರೂಪದ ಜಲಪಾತಗಳು ಜೀವ ಪಡೆದುಕೊಳ್ಳುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzekjmxqjqvzyy7znm1xv0pn,imgname-5-1786122949559.png" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಎಂದರೆ ಕೇವಲ ಪ್ರಸಿದ್ಧ ಪ್ರವಾಸಿ ತಾಣಗಳು ಮಾತ್ರವಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ಕಾಡು, ಬೆಟ್ಟ ಹಾಗೂ ಕಣಿವೆಗಳ ನಡುವೆ ಹಲವು ಅಪರೂಪದ ಜಲಪಾತಗಳು ಜೀವ ಪಡೆದುಕೊಳ್ಳುತ್ತವೆ. ಪ್ರವಾಸಿಗರ ದಟ್ಟಣೆಯಿಂದ ದೂರವಿದ್ದು, ಪ್ರಕೃತಿಯ ಸೌಂದರ್ಯವನ್ನು ಶಾಂತವಾಗಿ ಸವಿಯಲು ಬಯಸುವವರಿಗೆ ಇಂತಹ ಜಲಪಾತಗಳು ಬೆಸ್ಟ್ ಡೆಸ್ಟಿನೇಷನ್. ದಟ್ಟ ಕಾಡಿನ ನಡುವೆ ಧುಮ್ಮಿಕ್ಕುವ ನೀರು, ಮಂಜಿನಿಂದ ಆವೃತವಾದ ಬೆಟ್ಟಗಳು ಹಾಗೂ ಹಸಿರಿನಿಂದ ಕಂಗೊಳಿಸುವ ಸುತ್ತಮುತ್ತಲಿನ ಪರಿಸರ ಮಳೆಗಾಲದ ಪ್ರವಾಸಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಅಂತಹ ಕರ್ನಾಟಕದ ಹೆಚ್ಚು ಜನರಿಗೆ ತಿಳಿದಿರದ, ಆದರೆ ಅದ್ಭುತ ಅನುಭವ ನೀಡುವ 6 ಜಲಪಾತಗಳಿವು.&lt;/p&gt;&lt;p&gt;&lt;strong&gt;ಹನುಮಾನ್ ಗುಂಡಿ ಜಲಪಾತ&lt;/strong&gt;&lt;/p&gt;&lt;p&gt;ಕುಡ್ರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಹನುಮಾನ್ ಗುಂಡಿ ಜಲಪಾತ ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ದಟ್ಟ ಕಾಡಿನ ನಡುವೆ ಇರುವ ಈ ಜಲಪಾತಕ್ಕೆ ಕಲ್ಲಿನ ಮೆಟ್ಟಿಲುಗಳ ಮೂಲಕ ಸ್ವಲ್ಪ ದೂರ ನಡೆದು ತಲುಪಬೇಕು. ಮಳೆಗಾಲದಲ್ಲಿ ಸುತ್ತಮುತ್ತಲಿನ ಹಸಿರು ಮತ್ತಷ್ಟು ಕಂಗೊಳಿಸುವುದರಿಂದ ಹನುಮಾನ್ ಗುಂಡಿ ಪ್ರಕೃತಿ ಪ್ರಿಯರಿಗೆ ಅದ್ಭುತ ಅನುಭವ ನೀಡುತ್ತದೆ. ಪ್ರವಾಸಿಗರ ಗದ್ದಲದಿಂದ ದೂರವಾಗಿ ಪ್ರಕೃತಿಯ ನಡುವೆ ಸಮಯ ಕಳೆಯಲು ಬಯಸುವವರಿಗೆ ಇದು ಉತ್ತಮ ಆಯ್ಕೆ.&lt;img&gt;&lt;/p&gt;&lt;p&gt;&lt;strong&gt;ಬರ್ಕಣ ಜಲಪಾತ&lt;/strong&gt;&lt;/p&gt;&lt;p&gt;ಅಗುಂಬೆಯ ದಟ್ಟ ಕಾಡುಗಳ ನಡುವೆ ಅಡಗಿರುವ ಬರ್ಕಣ ಜಲಪಾತ ಕರ್ನಾಟಕದ ಅದ್ಭುತ ನೈಸರ್ಗಿಕ ತಾಣಗಳಲ್ಲಿ ಒಂದು. ಭಾರತದ ಎತ್ತರದ ಜಲಪಾತಗಳ ಪೈಕಿ ಒಂದಾಗಿರುವ ಬರ್ಕಣ, ತನ್ನ ಭರ್ಜರಿ ಜಲಧಾರೆ, ಮಂಜಿನಿಂದ ಕೂಡಿದ ವಾತಾವರಣ ಹಾಗೂ ವಿಶಾಲ ನೋಟದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ವಿಶೇಷವಾಗಿ ಫೋಟೋಗ್ರಫಿ ಮತ್ತು ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವವರಿಗೆ ಬರ್ಕಣ ಜಲಪಾತದ ಅನುಭವ ಮತ್ತಷ್ಟು ವಿಶೇಷ. ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ.&lt;img&gt;&lt;/p&gt;&lt;p&gt;&lt;strong&gt;ಹಿಡ್ಲುಮನೆ ಜಲಪಾತ&lt;/strong&gt;&lt;/p&gt;&lt;p&gt;ಕೊಡಚಾದ್ರಿ ಟ್ರೆಕ್ಕಿಂಗ್ ಮಾರ್ಗದಲ್ಲಿರುವ ಹಿಡ್ಲುಮನೆ ಜಲಪಾತ ಹಲವು ಕಲ್ಲಿನ ಹಂತಗಳ ಮೂಲಕ ಹರಿದು ಬರುವ ವಿಶಿಷ್ಟ ಜಲಪಾತ. ಸುತ್ತಲೂ ಹರಡಿರುವ ನಿತ್ಯಹರಿದ್ವರ್ಣ ಕಾಡು ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಹಿಡ್ಲುಮನೆ ಜಲಪಾತದ ನೋಟ ಮತ್ತಷ್ಟು ರುದ್ರರಮಣೀಯವಾಗುತ್ತದೆ. ಟ್ರೆಕ್ಕಿಂಗ್ ಮತ್ತು ಪ್ರಕೃತಿ ಸಾಹಸವನ್ನು ಇಷ್ಟಪಡುವವರಿಗೆ ಇದು ಖಂಡಿತವಾಗಿಯೂ ಆಕರ್ಷಕ ತಾಣ.&lt;img&gt;&lt;/p&gt;&lt;p&gt;&lt;strong&gt;ಎರ್ಮಾಯಿ ಜಲಪಾತ&lt;/strong&gt;&lt;/p&gt;&lt;p&gt;ಕೊಡಗು ಭಾಗದ ಹಸಿರು ಪರಿಸರದ ನಡುವೆ ಇರುವ ಎರ್ಮಾಯಿ ಜಲಪಾತ ಹೆಚ್ಚು ಪ್ರಚಾರ ಪಡೆಯದ ಪ್ರಕೃತಿ ತಾಣಗಳಲ್ಲಿ ಒಂದು. ಕಾಫಿ ತೋಟಗಳು ಮತ್ತು ದಟ್ಟ ಹಸಿರಿನ ನಡುವೆ ಇರುವ ಈ ಜಲಪಾತದ ಸುತ್ತಮುತ್ತಲಿನ ವಾತಾವರಣವೇ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. ಪ್ರವಾಸಿಗರ ದಟ್ಟಣೆಯಿಂದ ದೂರವಾಗಿ, ನೆಮ್ಮದಿಯ ವಾತಾವರಣದಲ್ಲಿ ಪ್ರಕೃತಿಯನ್ನು ಆನಂದಿಸಲು ಬಯಸುವವರಿಗೆ ಎರ್ಮಾಯಿ ಜಲಪಾತ ಉತ್ತಮ ಆಯ್ಕೆ. ಮಳೆಗಾಲದಲ್ಲಿ ಇಲ್ಲಿನ ಹಸಿರು ಸೌಂದರ್ಯ ಮತ್ತಷ್ಟು ಮನಮೋಹಕವಾಗಿರುತ್ತದೆ.&lt;img&gt;&lt;/p&gt;&lt;p&gt;&lt;strong&gt;ಅರ್ಬಿ ಜಲಪಾತ&lt;/strong&gt;&lt;/p&gt;&lt;p&gt;ಕೊಡಗಿನ ಹೆಚ್ಚು ಜನರಿಗೆ ತಿಳಿದಿರದ ನೈಸರ್ಗಿಕ ತಾಣಗಳಲ್ಲಿ ಅರ್ಬಿ ಜಲಪಾತವೂ ಒಂದು. ದಟ್ಟ ಕಾಡಿನ ನಡುವೆ ಇರುವ ಈ ಋತುಮಾನ ಜಲಪಾತ, ಮಳೆಗಾಲದಲ್ಲಿ ತನ್ನ ಸಂಪೂರ್ಣ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ತಂಪಾದ ವಾತಾವರಣ, ಸುತ್ತಲಿನ ಹಸಿರು ಹಾಗೂ ಶಾಂತ ಪರಿಸರ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಸಾಮಾನ್ಯ ಪ್ರವಾಸಿ ತಾಣಗಳಿಗಿಂತ ಆಫ್&zwnj;ಬೀಟ್ ಸ್ಥಳಗಳನ್ನು ಅನ್ವೇಷಿಸಲು ಬಯಸುವವರಿಗೆ ಅರ್ಬಿ ಜಲಪಾತ ಸೂಕ್ತ.&lt;img&gt;&lt;/p&gt;&lt;p&gt;&lt;strong&gt;ಒನಕೆ ಅಬ್ಬಿ ಜಲಪಾತ&lt;/strong&gt;&lt;/p&gt;&lt;p&gt;ಅಗುಂಬೆ ಸಮೀಪದ ಸುಂದರ ಟ್ರೆಕ್ಕಿಂಗ್ ಮಾರ್ಗದ ಮೂಲಕ ತಲುಪಬಹುದಾದ ಒನಕೆ ಅಬ್ಬಿ ಜಲಪಾತ ಸಾಹಸ ಪ್ರಿಯರ ಗಮನ ಸೆಳೆಯುವ ತಾಣ. ಕಲ್ಲಿನ ಬಂಡೆಗಳ ಮೇಲಿನಿಂದ ಕೆಳಗಿನ ನೈಸರ್ಗಿಕ ಕೊಳಕ್ಕೆ ಧುಮ್ಮಿಕ್ಕುವ ಜಲಧಾರೆ ಇಲ್ಲಿನ ಪ್ರಮುಖ ಆಕರ್ಷಣೆ. ಜಲಪಾತವನ್ನು ತಲುಪುವ ಟ್ರೆಕ್ಕಿಂಗ್ ಹಾದಿ ಹಾಗೂ ಸುತ್ತಲಿನ ಬಹುತೇಕ ಅಸ್ಪರ್ಶಿತ ಪ್ರಕೃತಿ ಈ ಪ್ರವಾಸವನ್ನು ಮತ್ತಷ್ಟು ರೋಚಕವಾಗಿಸುತ್ತದೆ. ಮಳೆಗಾಲದಲ್ಲಿ ಒನಕೆ ಅಬ್ಬಿಯ ನೋಟ ಅದ್ಭುತವಾಗಿದ್ದು, ಸಾಹಸ ಮತ್ತು ಪ್ರಕೃತಿ ಎರಡನ್ನೂ ಇಷ್ಟಪಡುವವರಿಗೆ ಇದು ಉತ್ತಮ ಅನುಭವ ನೀಡುತ್ತದೆ.&lt;/p&gt;&lt;h2&gt;&lt;strong&gt;ಮಳೆಗಾಲದ ಪ್ರವಾಸಕ್ಕೆ ಇವು ಯಾಕೆ ಬೆಸ್ಟ್?&lt;/strong&gt;&lt;/h2&gt;&lt;p&gt;ಕರ್ನಾಟಕದ ಈ ಜಲಪಾತಗಳು ಸಾಮಾನ್ಯ ಪ್ರವಾಸಿ ತಾಣಗಳಿಗಿಂತ ವಿಭಿನ್ನ ಅನುಭವ ನೀಡುತ್ತವೆ. ದಟ್ಟ ಕಾಡು, ಹಸಿರು ಬೆಟ್ಟಗಳು, ಮಂಜಿನ ವಾತಾವರಣ ಮತ್ತು ಧುಮ್ಮಿಕ್ಕುವ ಜಲಧಾರೆಗಳು ಮಳೆಗಾಲದ ಪ್ರವಾಸಕ್ಕೆ ವಿಶೇಷ ಮೆರುಗು ನೀಡುತ್ತವೆ. ಆದರೆ ಕೆಲವು ಜಲಪಾತಗಳು ಕಾಡು ಪ್ರದೇಶ ಹಾಗೂ ಟ್ರೆಕ್ಕಿಂಗ್ ಮಾರ್ಗದಲ್ಲಿರುವುದರಿಂದ ಪ್ರಯಾಣಿಸುವ ಮುನ್ನ ಸ್ಥಳೀಯ ಮಾರ್ಗಸೂಚಿಗಳು, ಪ್ರವೇಶ ನಿಯಮಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲಿಸುವುದು ಮುಖ್ಯ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸ ಮಾಡಿದರೆ, ಈ ಅಪರೂಪದ ಜಲಪಾತಗಳು ಮಳೆಗಾಲದ ನಿಮ್ಮ ಟ್ರಿಪ್&zwnj;ಗೆ ಮರೆಯಲಾಗದ ಅನುಭವ ನೀಡಬಹುದು.&lt;/p&gt;]]></content:encoded>
            <category>travel</category>
            <dc:creator>Govindaraj S</dc:creator>
            <atom:link href="https://kannada.asianetnews.com/travel/6-hidden-waterfalls-in-karnataka-you-must-visit-this-monsoon-gvd/articleshow-2o9hs7f"/>
        </item>
        <item>
            <title><![CDATA[ರೈಲಿಗೆ ಕಾದೂ ಕಾದೂ ಸುಸ್ತಾದ: ನಿಲ್ದಾಣದಲ್ಲಿ ಕುಳಿತು 240 ಕೋಟಿ ರೂ. ಗಳಿಸಿ ಇತಿಹಾಸವನ್ನೇ ಸೃಷ್ಟಿಸಿಬಿಟ್ಟ]]></title>
            <link>https://kannada.asianetnews.com/technology/the-idea-behind-the-app-ahmed-nizam-created-where-is-my-train-story-suc/articleshow-2uik1uo</link>
            <guid isPermaLink="true">https://kannada.asianetnews.com/technology/the-idea-behind-the-app-ahmed-nizam-created-where-is-my-train-story-suc/articleshow-2uik1uo</guid>
            <pubDate>Sat, 01 Aug 2026 21:44:53 +0530</pubDate>
            <description><![CDATA[ಒಂದು ದಿನ ರೈಲು ನಿಲ್ದಾಣದಲ್ಲಿ ರೈಲು ವಿಳಂಬವಾದಾಗ ಅಹ್ಮದ್ ನಿಜಾಮ್ ಮೊಹೈದ್ದೀನ್ ಅವರಿಗೆ ಬಂದ ಒಂದು ಐಡಿಯಾ 'Where is my train' ಆ್ಯಪ್&zwnj;ಗೆ ಜನ್ಮ ನೀಡಿತು. ಇಂಟರ್ನೆಟ್ ಇಲ್ಲದೆಯೂ ಸೆಲ್ ಟವರ್ ಡೇಟಾ ಬಳಸಿ ರೈಲಿನ ಲೈವ್ ಸ್ಟೇಟಸ್ ತಿಳಿಸುವ ಈ ಆ್ಯಪ್ ಅನ್ನು ಗೂಗಲ್ ಸುಮಾರು 240 ಕೋಟಿ ರೂಪಾಯಿಗೆ ಖರೀದಿಸಿತು, ಇದು ಅವರನ್ನು ಕೋಟ್ಯಧಿಪತಿಯನ್ನಾಗಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kyz1nkq7azv7wd469tfxkpn6,imgname-train-app-1785600855783.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರತಿನಿತ್ಯ ಕೋಟ್ಯಂತರ ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಎಷ್ಟೋ ಸಂದರ್ಭದಲ್ಲಿ ಯಾವ್ಯಾವುದೋ ಕಾರಣಕ್ಕೆ, ರೈಲು ವಿಳಂಬ ಆಗುವುದು ಇದೆ. ಆದರೆ ಆಗ ಜನರು ಸಾಮಾನ್ಯವಾಗಿ ಶಪಿಸುತ್ತಾ ಕುಳಿತುಕೊಳ್ತಾರೆ. ಇಲ್ಲವೇ ಮೊಬೈಲ್​ ಹಿಡಿದು ಸ್ಕ್ರೋಲ್​​ ಮಾಡುತ್ತಾ ಇರುತ್ತಾರೆ. ಆದರೆ ಇಲ್ಲೊಬ್ಬ ಯುವಕ ಹಾಗೆ ಮಾಡದೇ ಒಂದು ಐಡಿಯಾ ಸೃಷ್ಟಿಸಿರುವ ಕಾರಣ, ಕುಳಿತಲ್ಲಿಯೇ 240 ಕೋಟಿ ರೂಪಾಯಿ ಒಡೆಯನಾದ. ಇದು where is my train ಆ್ಯಪ್​ ಕಂಡುಹಿಡಿದಿರುವ ಅಹ್ಮದ್ ನಿಜಾಮ್ ಮೊಹೈದ್ದೀನ್ ಸ್ಟೋರಿ.&lt;/p&gt;&lt;p&gt;ರೈಲು ಎಲ್ಲಿದೆ ಎಂದು ನೋಡಲು ಸಾಮಾನ್ಯವಾಗಿ ಎಲ್ಲರೂ ಈ ಆ್ಯಪ್​ ಬಳಸುವುದು ಇದೆ. ಇದರಿಂದ ರೈಲು ಎಲ್ಲಿ ಇದೆ, ಎಲ್ಲಿಗೆ ಬಂದಿದೆ. ನಮ್ಮ ಸ್ಟೇಷನ್​ಗೆ ಬರಲು ಎಷ್ಟು ನಿಮಿಷ ಇದೆ. ಎಷ್ಟು ವಿಳಂಬ ಆಗತ್ತೆ... ಹೀಗೆ ಪ್ರತಿಯೊಂದನ್ನೂ ಇದರಲ್ಲಿ ನೋಡಬಹುದಾಗಿದೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ಅದರಲ್ಲಿಯೂ ನೈಟ್​ ಟ್ರೈನ್​ ಆಗಿದ್ದರೆ, ಯಾವ ಸ್ಟೇಷನ್​ಗೆ ಬಂದ್ವಿ ಎನ್ನೋದು ಗೊತ್ತಾಗದೇ ಕಕ್ಕಾಬಿಕ್ಕಿಯಾಗೋದು ಸಹಜ. ನಮ್ಮ ಸ್ಟೇಷನ್​ ಹೊರಟು ಹೋಯ್ತಾ? ಇನ್ನು ಎಷ್ಟು ಹೊತ್ತಿದೆ ಯಾವುದೂ ತಿಳಿಯದೇ ಅವರಿವರನ್ನು ಕೇಳಬೇಕಾಗುತ್ತದೆ. ಆದರೆ ಈ ಆ್ಯಪ್​ನಲ್ಲಿ ನಾವು ಯಾವ ಸ್ಟೇಷನ್​ನಲ್ಲಿ ಇದ್ದೇವೆ. ನಮ್ಮ ಸ್ಟೇಷನ್​ ಬರಲು ಎಷ್ಟು ಟೈಮ್​ ಇದೆ ಎಲ್ಲವೂ ತಿಳಿಯುತ್ತದೆ. ಇದರ ಕ್ರೆಡಿಟ್​ ಅಹ್ಮದ್ ನಿಜಾಮ್ ಮೊಹೈದ್ದೀನ್ ಅವರಿಗೆ ಸಲ್ಲುತ್ತದೆ.&lt;/p&gt;&lt;h2&gt;&lt;strong&gt;ಬಂತೊಂದು ಐಡಿಯಾ&lt;/strong&gt;&lt;/h2&gt;&lt;p&gt;2015ರಲ್ಲಿ ಒಂದು ದಿನ ಅವರು ರೈಲು ನಿಲ್ದಾಣದಲ್ಲಿ ತಮ್ಮ ರೈಲಿಗಾಗಿ ಕಾಯುತ್ತಿದ್ದರು. ರೈಲು ತುಂಬಾ ತಡವಾಗಿತ್ತು..ಆದರೆ ರೈಲು ಎಲ್ಲಿದೆ ಅನ್ನೋ ಸರಿಯಾದ ಮಾಹಿತಿ ಯಾರ ಬಳಿಯೂ ಇರಲಿಲ್ಲ. ಆಗ ಅವರ ಮನಸ್ಸಿಗೆ ಒಂದು ಐಡಿಯಾ ಬಂತು. ಮೊಬೈಲ್&zwnj;ನಲ್ಲೇ ರೈಲು ಎಲ್ಲಿದೆ ಅಂತ ಲೈವ್ ಆಗಿ ಗೊತ್ತಾದ್ರೆ ಎಷ್ಟು ಚೆನ್ನಾಗಿರುತ್ತೆ ಎಂದುಕೊಂಡು ಸ್ಟಾರ್ಟ್&zwnj;ಅಪ್ ಆರಂಭಿಸಿದರು. ಅದೇ Where Is My Train ಎಂಬ ಆ್ಯಪ್​. ಹಾಗೆಂದು ಅದೇನೂ ಅವರಿಗೆ ಸುಲಭವಾಗಿರಲಿಲ್ಲ. ಏಕೆಂದ್ರೆ ಈಗಿನ ಹಾಗೆ ಆಗ ಎಲ್ಲೆಡೆ ಇಂಟರ್​ನೆಟ್​ ಇರಲಿಲ್ಲ. ಆದ್ದರಿಂದ ಅವರು GPS ಅಥವಾ ಇಂಟರ್&zwnj;ನೆಟ್ ಮೇಲೆ ಅವಲಂಬಿಸದೆ, ಸೆಲ್ ಟವರ್ ಡೇಟಾ ಬಳಸಿಕೊಂಡು ರೈಲು ಎಲ್ಲಿದೆ ಎಂದು ಪತ್ತೆಹಚ್ಚುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದರು.&lt;/p&gt;&lt;h3&gt;&lt;strong&gt;ಗೂಗಲ್​ ಕಂಪೆಯಿಂದ ಖರೀದಿ&lt;/strong&gt;&lt;/h3&gt;&lt;p&gt;ಇದರ ಫಲವಾಗಿ, ಇಂಟರ್&zwnj;ನೆಟ್ ಇಲ್ಲದಿದ್ದರೂ ಜನರು ತಮ್ಮ ರೈಲು ಎಲ್ಲಿದೆ ಎಂಬ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಲು ಆರಂಭಿಸಿದರು. ಇದು ಎಷ್ಟು ಫೇಮಸ್​ ಆಯಿತು ಎಂದರೆ, ಗೂಗಲ್​ ಕಂಪೆನಿ 250 ಕೋಟಿ ರೂಪಾಯಿ ಕೊಟ್ಟು ಇವರಿಂದ ಆ ಆ್ಯಪ್​ ಖರೀದಿ ಮಾಡಿ, ಅದಕ್ಕೆ ಇನ್ನೊಂದಿಷ್ಟು ಫೀಚರ್​ಗಳನ್ನು ತುಂಬಿಸಿದೆ. ಹೀಗೆ ರೈಲು ವಿಳಂಬವಾದದ್ದೇ ಈ ಯುವಕನಿಗೆ ಕೋಟ್ಯಧಿಪತಿ ಮಾಡಿತು. ಮಾತ್ರವಲ್ಲದೇ ಭಾರತದಾಚೆಯೂ ಇವರ ಕೀರ್ತಿ ಹರಡಿತು.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/technology/the-idea-behind-the-app-ahmed-nizam-created-where-is-my-train-story-suc/articleshow-2uik1uo"/>
        </item>
        <item>
            <title><![CDATA[ಹೋಟೆಲ್ ಕೋಣೆಯಲ್ಲಿ ಬೆಡ್ ಮುಂದೆ ಕನ್ನಡಿ ಯಾಕಿರುತ್ತೆ ಗೊತ್ತಾ? ಅಸಲಿ ವಿಷಯ ತಿಳಿದರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/gallery/life/the-secret-reason-why-hotels-place-mirrors-facing-the-bed-5ecgshr</link>
            <guid isPermaLink="true">https://kannada.asianetnews.com/gallery/life/the-secret-reason-why-hotels-place-mirrors-facing-the-bed-5ecgshr</guid>
            <pubDate>Tue, 04 Aug 2026 22:23:21 +0530</pubDate>
            <description><![CDATA[&lt;p&gt;Why mirrors in hotel rooms: ಪ್ರವಾಸಕ್ಕೆ ಹೋದಾಗ ನಾವು ತಂಗುವ ಹೋಟೆಲ್ ರೂಂಗಳಲ್ಲಿ ಮಂಚದ ಎದುರು ದೊಡ್ಡ ಕನ್ನಡಿ ಇರುವುದನ್ನು ಗಮನಿಸಿರುತ್ತೇವೆ. ಇದು ಕೇವಲ ಕೋಣೆಯ ಅಂದ ಹೆಚ್ಚಿಸಲು ಮಾತ್ರವಲ್ಲ, ಇದರ ಹಿಂದಿರುವ ಆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz6thvm8r48ejbf2mbxm9ara,imgname-thumbnail---2026-08-04t221322.389-1785861828232.jpg" type="image/jpeg" height="390" width="690"/>
            <content:encoded><![CDATA[&lt;p&gt;Why mirrors in hotel rooms: ಪ್ರವಾಸಕ್ಕೆ ಹೋದಾಗ ನಾವು ತಂಗುವ ಹೋಟೆಲ್ ರೂಂಗಳಲ್ಲಿ ಮಂಚದ ಎದುರು ದೊಡ್ಡ ಕನ್ನಡಿ ಇರುವುದನ್ನು ಗಮನಿಸಿರುತ್ತೇವೆ. ಇದು ಕೇವಲ ಕೋಣೆಯ ಅಂದ ಹೆಚ್ಚಿಸಲು ಮಾತ್ರವಲ್ಲ, ಇದರ ಹಿಂದಿರುವ ಆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ವಿನ್ಯಾಸದ ರಹಸ್ಯಗಳು&lt;/strong&gt;ನಾವು ಪ್ರವಾಸಕ್ಕೆ ಹೋದಾಗ ಹೋಟೆಲ್ ರೂಂನಲ್ಲಿ ಉಳಿದುಕೊಳ್ಳುವುದು ಸಾಮಾನ್ಯ. ರೂಂಗೆ ಕಾಲಿಟ್ಟ ತಕ್ಷಣ ಮಂಚದ ಎದುರು ದೊಡ್ಡದಾದ ಕನ್ನಡಿ ಇರುವುದನ್ನು ನೀವು ಗಮನಿಸಿರಬಹುದು. ಇದು ಕೇವಲ ಸೌಂದರ್ಯಕ್ಕಾಗಿ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಇದರ ಹಿಂದೆ ಹೋಟೆಲ್ ಉದ್ಯಮದ ದೊಡ್ಡ ತಂತ್ರಗಳು ಮತ್ತು ವಿನ್ಯಾಸದ ರಹಸ್ಯಗಳು ಅಡಗಿವೆ. ಅದರ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಬೆಳಕನ್ನು ಹೆಚ್ಚಿಸುವ ತಂತ್ರ&lt;/strong&gt;ಹೋಟೆಲ್ ಪ್ರತಿ ಸಣ್ಣ ವಿಷಯದಲ್ಲೂ ಒಂದು ವಿಶೇಷ ಯೋಜನೆಯನ್ನು ಹೊಂದಿರುತ್ತದೆ. ಮಂಚದ ಮುಂದೆ ಕನ್ನಡಿ ಇರಿಸಲು ಪ್ರಮುಖ ಕಾರಣವೆಂದರೆ ಬೆಳಕನ್ನು ಹೆಚ್ಚಿಸುವುದು. ಕಿಟಕಿಗಳ ಮೂಲಕ ಬರುವ ನೈಸರ್ಗಿಕ ಬೆಳಕು ಕನ್ನಡಿಯ ಮೇಲೆ ಬಿದ್ದು ಇಡೀ ಕೋಣೆಯು ಹೆಚ್ಚು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ. ಇದರಿಂದ ಅತಿ ಹೆಚ್ಚು ಲೈಟ್&zwnj;ಗಳ ಅವಶ್ಯಕತೆ ಇಲ್ಲದೆ ಕೋಣೆ ಆಕರ್ಷಕವಾಗಿ ಕಾಣುತ್ತದೆ.&lt;/p&gt;&lt;img&gt;&lt;p&gt;&lt;strong&gt;ಚಿಕ್ಕ ರೂಂ ದೊಡ್ಡದಾಗಿ ಕಾಣಲು&lt;/strong&gt;ಚಿಕ್ಕ ಗಾತ್ರದ ಹೋಟೆಲ್ ರೂಂಗಳನ್ನು ಕೂಡ ವಿಶಾಲವಾಗಿ ತೋರಿಸಲು ಇಂಟೀರಿಯರ್ ಡಿಸೈನರ್&zwnj;ಗಳು ಈ ಟ್ರಿಕ್ ಬಳಸುತ್ತಾರೆ. ಕನ್ನಡಿಯು ಕೋಣೆಯ ಆಳವನ್ನು ಪ್ರತಿಬಿಂಬಿಸುವುದರಿಂದ ಚಿಕ್ಕ ರೂಂ ಕೂಡ ನೋಡುಗರಿಗೆ ತುಂಬಾ ದೊಡ್ಡದಾಗಿ ಮತ್ತು ವಿಶಾಲವಾಗಿ ಕಾಣಿಸುತ್ತದೆ. ಇದು ಪ್ರವಾಸಿಗರಿಗೆ ಮಾನಸಿಕವಾಗಿ ಒಂದು ಉತ್ತಮ ಅನುಭವ ನೀಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸೀಕ್ರೆಟ್ ಕ್ಯಾಮೆರಾ ಮತ್ತು ಭದ್ರತೆ&lt;/strong&gt;ಸೌಂದರ್ಯದ ಜೊತೆಗೆ ಹೋಟೆಲ್ ರೂಂಗಳಲ್ಲಿ ಸುರಕ್ಷತೆಯೂ ಅಷ್ಟೇ ಮುಖ್ಯ. ಅಲ್ಲಿರುವುದು ಸಾಮಾನ್ಯ ಕನ್ನಡಿಯೇ ಅಥವಾ ದೃಶ್ಯಗಳನ್ನು ಸೆರೆಹಿಡಿಯುವ 'ಟೂ-ವೇ ಮಿರರ್' (Two-way mirror) ಎಂಬುದನ್ನು ಪರೀಕ್ಷಿಸುವುದು ಅವಶ್ಯಕ.&lt;/p&gt;&lt;img&gt;&lt;p&gt;&lt;strong&gt;ಪತ್ತೆ ಹಚ್ಚುವುದು ಹೇಗೆ?&lt;/strong&gt;ಕನ್ನಡಿಯ ಮೇಲೆ ನಿಮ್ಮ ಬೆರಳನ್ನು ಇರಿಸಿ ಪರೀಕ್ಷಿಸಿ. ನಿಮ್ಮ ಬೆರಳಿನ ತುದಿಗೆ ಮತ್ತು ಕನ್ನಡಿಯ ಒಳಗಿನ ಪ್ರತಿಬಿಂಬಕ್ಕೆ ನಡುವೆ ಸ್ವಲ್ಪ 'ಗ್ಯಾಪ್' ಅಥವಾ ಅಂತರವಿದ್ದರೆ ಅದು ಸಾಮಾನ್ಯ ಮತ್ತು ಸುರಕ್ಷಿತ ಕನ್ನಡಿ ಎಂದರ್ಥ. ಒಂದು ವೇಳೆ ಯಾವುದೇ ಅಂತರವಿಲ್ಲದೆ ಬೆರಳು ಮತ್ತು ಬಿಂಬ ಒಂದಕ್ಕೊಂದು ತಾಗುತ್ತಿದ್ದರೆ, ಅದು ಟೂ-ವೇ ಮಿರರ್ ಅಥವಾ ಅಪಾಯಕಾರಿ ಕನ್ನಡಿ ಎಂದು ಅರ್ಥಮಾಡಿಕೊಳ್ಳಿ. ಅಂತಹ ಸಂದರ್ಭದಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳುವುದು ಒಳಿತು.&lt;/p&gt;&lt;img&gt;&lt;p&gt;&lt;strong&gt;ಫೆಂಗ್ ಶೂಯಿ ಏನು ಹೇಳುತ್ತದೆ?&lt;/strong&gt;ಚೈನೀಸ್ ವಾಸ್ತುಶಾಸ್ತ್ರವಾದ ಫೆಂಗ್ ಶೂಯಿ ಪ್ರಕಾರ ಮಲಗುವ ಮಂಚಕ್ಕೆ ಎದುರಾಗಿ ಕನ್ನಡಿ ಇರಿಸುವುದು ಒಳ್ಳೆಯದಲ್ಲ. ಇದು ಕೋಣೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಪ್ರಶಾಂತವಾದ ನಿದ್ರೆಗೆ ಭಂಗ ತರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಮಧ್ಯರಾತ್ರಿ ಎಚ್ಚರವಾದಾಗ ಕನ್ನಡಿಯೊಳಗೆ ನಮ್ಮದೇ ಪ್ರತಿಬಿಂಬ ಕಂಡು ಒಂದು ಕ್ಷಣ ಭಯವಾಗುವ ಸಾಧ್ಯತೆಯೂ ಇರುತ್ತದೆ.&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/the-secret-reason-why-hotels-place-mirrors-facing-the-bed-5ecgshr"/>
        </item>
        <item>
            <title><![CDATA[ಪ್ರವಾಸಕ್ಕೆಂದು ಹೋದ ಭಾರತೀಯ ಯೂಟ್ಯೂಬರ್‌ಗೆ ಜರ್ಮನಿ ಹುಡುಗಿ ಮೇಲಾಯ್ತು ಲವ್, ಆಮೇಲಾಗಿದ್ದು ಊಹಿಸಲು ಅಸಾಧ್ಯ!]]></title>
            <link>https://kannada.asianetnews.com/life/from-bali-to-a-german-village-a-youtubers-unforgettable-love-story/articleshow-7ntw38x</link>
            <guid isPermaLink="true">https://kannada.asianetnews.com/life/from-bali-to-a-german-village-a-youtubers-unforgettable-love-story/articleshow-7ntw38x</guid>
            <pubDate>Sun, 02 Aug 2026 22:28:29 +0530</pubDate>
            <description><![CDATA[&lt;p&gt;Abhinav Reddy Love Story: ಭಾರತೀಯ ಯೂಟ್ಯೂಬರ್ ಅಭಿನವ್ ಮತ್ತು ಜರ್ಮನ್ ಸುಂದರಿ ಸಫಿರಾ ಅವರ ಈ ಅಪರೂಪದ ಪ್ರೇಮಕಥೆಯು, ಪ್ರವಾಸವು ಹೇಗೆ ಜೀವನದ ದಿಕ್ಕನ್ನೇ ಬದಲಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1pk1tq3wv24nt0aps8zfj2,imgname-thumbnail---2026-08-02t221423.911-1785689900887.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರ&lt;/strong&gt;ವಾಸದ ಅದ್ಭುತವೆಂದರೆ ಅದು ಅಪರಿಚಿತರನ್ನು ಆತ್ಮೀಯರನ್ನಾಗಿ ಮಾಡುತ್ತದೆ. ಇಂಡೋನೇಷ್ಯಾದ ಬಾಲಿಯಲ್ಲಿ ಎರಡು ತಿಂಗಳ ಹಿಂದೆ ಕಾಕತಾಳೀಯವಾಗಿ ಭೇಟಿಯಾದ ಭಾರತೀಯ ಯೂಟ್ಯೂಬರ್ ಅಭಿನವ್ ರೆಡ್ಡಿ ಮತ್ತು ಜರ್ಮನ್ ಸುಂದರಿ ಸಫಿರಾರ ಸ್ನೇಹ ಈಗ ಜರ್ಮನಿಯ ಸುಂದರ ಹಳ್ಳಿಯಲ್ಲಿ ಮದುವೆಯ ಹಂತಕ್ಕೆ ಬಂದು ತಲುಪಿದೆ. ಈ ಜೋಡಿಯ ಅಪರೂಪದ ಪ್ರವಾಸದ ಕಥೆ ಈಗ ಇಂಟರ್ನೆಟ್&zwnj;ನಲ್ಲಿ ಭಾರಿ ವೈರಲ್ ಆಗುತ್ತಿದೆ.&lt;/p&gt;&lt;p&gt;ಭಾರತೀಯ ಯೂಟ್ಯೂಬರ್ ಅಭಿನವ್ ರೆಡ್ಡಿ ಪ್ರವಾಸಕ್ಕಾಗಿ ಬಾಲಿಗೆ ಹೋದಾಗ ಅಲ್ಲಿ ಸಫಿರಾ ಎಂಬ ಜರ್ಮನ್ ಹುಡುಗಿಯನ್ನು ಭೇಟಿಯಾದರು. ಅವರಿಬ್ಬರ ನಡುವಿನ ವಿಚಾರಗಳು ಮತ್ತು ಆಸಕ್ತಿಗಳು ಎಷ್ಟು ಹೊಂದಿಕೆಯಾದವು ಎಂದರೆ, ಸಫಿರಾ ತಕ್ಷಣವೇ ಅಭಿನವ್&zwnj;ರನ್ನು ತನ್ನ ಜರ್ಮನಿಯ ಹಳ್ಳಿಗೆ ಬರುವಂತೆ ಆಹ್ವಾನಿಸಿದರು. ಅಭಿನವ್ ಕೂಡ ಈ ಅವಕಾಶವನ್ನು ಕೈಬಿಡದೆ ನೇರವಾಗಿ ಜರ್ಮನಿಗೆ ಹಾರಿದರು. ಬಾಲಿಯ ಸಮುದ್ರ ತೀರದಲ್ಲಿ ಶುರುವಾದ ಇವರ ಸ್ನೇಹ ಈಗ ಜರ್ಮನಿಯ ಪರ್ವತಗಳ ನಡುವಿನ ಶಾಂತಿಯುತ ಹಳ್ಳಿಯವರೆಗೆ ಬಂದು ತಲುಪಿದೆ.&lt;/p&gt;&lt;h2&gt;&lt;strong&gt;ಜರ್ಮನಿಯ ದೇಸಿ ಜೀವನಶೈಲಿ&lt;/strong&gt;&lt;/h2&gt;&lt;p&gt;ಸಫಿರಾಳ ಹಳ್ಳಿಗೆ ತಲುಪಿದ ಅಭಿನವ್ ಅಲ್ಲಿನ ಜೀವನಶೈಲಿ ನೋಡಿ ದಂಗಾಗಿ ಹೋದರು. ಅಲ್ಲಿನ ಮನೆಗಳು ಯಾವುದೋ ಹಳೆಯ ಹಾಲಿವುಡ್ ಸಿನಿಮಾದ ದೃಶ್ಯಗಳಂತೆ ಸುಂದರವಾಗಿದ್ದವು. ಸಫಿರಾಳ ತಂದೆಯೇ ಸ್ವತಃ ಮರದಿಂದ ಆ ಬೃಹತ್ ಮನೆಯನ್ನು ನಿರ್ಮಿಸಿದ್ದರು. ಮನೆಯೊಳಗೆ ಸಾಂಪ್ರದಾಯಿಕ ಒಲೆ, ಪುರಾತನ ಕಾಲದ ಗಡಿಯಾರಗಳು ಮತ್ತು ಫ್ರಿಡ್ಜ್ ಇಲ್ಲದೆಯೇ ವಸ್ತುಗಳನ್ನು ತಂಪಾಗಿಡುವ ವಿಶೇಷವಾದ ನೆಲದಡಿಯ (Basement) ವ್ಯವಸ್ಥೆ ಇತ್ತು. ಈ ನೈಸರ್ಗಿಕ ಮತ್ತು ಸರಳ ಜೀವನಶೈಲಿಯನ್ನು ಕಂಡು ಅಭಿನವ್ ಅದರ ಅಭಿಮಾನಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಸಾಹಸ ಮತ್ತು ಬಾಲ್ಯದ ನೆನಪುಗಳು&lt;/strong&gt;&lt;/h2&gt;&lt;p&gt;ಅಭಿನವ್ ಮತ್ತು ಸಫಿರಾ ಅಲ್ಲಿನ ಕೆರೆಗಳಲ್ಲಿ ಈಜಾಡುತ್ತಾ ಮತ್ತು ಕಾಡುಗಳಲ್ಲಿ ಸುತ್ತಾಡುತ್ತಾ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಫಿರಾ ತನ್ನ ಬಾಲ್ಯದ ಕಥೆಯೊಂದನ್ನು ಹಂಚಿಕೊಳ್ಳುತ್ತಾ, ಒಮ್ಮೆ ತಾನು ಮರದಿಂದ ಬಿದ್ದಾಗ ತನ್ನನ್ನು ರಕ್ಷಿಸಲು ಏರ್ ಆಂಬ್ಯುಲೆನ್ಸ್ (ಹೆಲಿಕಾಪ್ಟರ್) ಬಂದಿದ್ದ ಘಟನೆಯನ್ನು ನೆನಪಿಸಿಕೊಂಡರು. ಇವರಿಬ್ಬರ ನಡುವಿನ ಆತ್ಮೀಯ ಸಂಭಾಷಣೆ ಮತ್ತು ವಿಭಿನ್ನ ಸಂಸ್ಕೃತಿಗಳ ಮಿಲನವು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. ಪ್ರಸ್ತುತ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದೆ. ಪ್ರವಾಸವು ಕೇವಲ ಸ್ಥಳಗಳನ್ನಲ್ಲ, ಹೃದಯಗಳನ್ನು ಹೇಗೆ ಬೆಸೆಯುತ್ತದೆ ಎಂಬುದಕ್ಕೆ ಇವರ ಕಥೆಯೇ ಸಾಕ್ಷಿ.&lt;/p&gt;&lt;h2&gt;&lt;strong&gt;ಭಾಷೆ ಎಂದಿಗೂ ಅಡ್ಡಿಯಾಗಲಾರದು&lt;/strong&gt;&lt;/h2&gt;&lt;p&gt;ಜೀವನ ಎಂಬುದು ಲೆಕ್ಕಾಚಾರಗಳಿಗೆ ಸಿಗದ ಅದ್ಭುತ ಆಕಸ್ಮಿಕಗಳ ಸಂತೆ ಎಂಬುದಕ್ಕೆ ಅಭಿನವ್ ಮತ್ತು ಸಫಿರಾ ಅವರ ಕಥೆಯೇ ಸಾಕ್ಷಿ. ನಾವು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ, ನಮ್ಮ ಆಲೋಚನೆಗಳು ಮತ್ತು ಮೌಲ್ಯಗಳು ಒಂದಾಗಿದ್ದರೆ ಭಾಷೆ ಅಥವಾ ದೂರ ಎಂದಿಗೂ ಅಡ್ಡಿಯಾಗಲಾರದು ಎಂಬ ಸತ್ಯ ಇಲ್ಲಿ ಅನಾವರಣಗೊಂಡಿದೆ. ಜರ್ಮನಿಯ ಆ ಪುಟ್ಟ ಹಳ್ಳಿಯ ಸರಳತೆ ಮತ್ತು ಅಲ್ಲಿನ ಜನರ ಸಾಂಪ್ರದಾಯಿಕ ಬದುಕು ನಮಗೆ ಆಧುನಿಕತೆಯ ಅಬ್ಬರವಿಲ್ಲದೆಯೂ ಸುಂದರವಾಗಿ ಬದುಕಬಹುದು ಎಂಬ ಪಾಠವನ್ನು ಕಲಿಸುತ್ತದೆ. ಮದುವೆಯ ಮೂಲಕ ಹೊಸ ಜೀವನಕ್ಕೆ ಕಾಲಿಡುತ್ತಿರುವ ಈ ಜೋಡಿ, ಕೇವಲ ಎರಡು ಹೃದಯಗಳನ್ನಲ್ಲ, ಬದಲಿಗೆ ಭಾರತ ಮತ್ತು ಜರ್ಮನಿಯ ನಡುವೆ ಪ್ರೀತಿಯ ಹೊಸ ಸೇತುವೆಯನ್ನು ನಿರ್ಮಿಸಿದೆ. ಇವರ ಈ ಯಾನವು ಪ್ರತಿ ಕನಸುಗಾರನಿಗೂ ತನ್ನ ಹೃದಯದ ದಾರಿಯನ್ನು ಹಿಂಬಾಲಿಸಲು ಧೈರ್ಯ ನೀಡುತ್ತದೆ.&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/life/from-bali-to-a-german-village-a-youtubers-unforgettable-love-story/articleshow-7ntw38x"/>
        </item>
        <item>
            <title><![CDATA[ಶ್ರಾವಣದ 5 ದಿನ ಈ ಗ್ರಾಮದ ಮಹಿಳೆಯರು ಬಟ್ಟೆ ಧರಿಸಲ್ಲ, ಪುರುಷರಿಂದ ಇರುತ್ತಾರೆ ದೂರ… ಕಾರಣ ಏನು ಗೊತ್ತಾ?]]></title>
            <link>https://kannada.asianetnews.com/travel/why-women-in-himachals-pini-village-stay-isolated-for-five-days-during-sawan/articleshow-ce5odrw</link>
            <guid isPermaLink="true">https://kannada.asianetnews.com/travel/why-women-in-himachals-pini-village-stay-isolated-for-five-days-during-sawan/articleshow-ce5odrw</guid>
            <pubDate>Thu, 06 Aug 2026 16:39:00 +0530</pubDate>
            <description><![CDATA[&lt;p&gt;Pini Village: ದೇಶದಲ್ಲಿ ಅನೇಕ ಸಂಪ್ರದಾಯಗಳು ಪ್ರಚಲಿತದಲ್ಲಿವೆ, ಆದರೆ ಹಿಮಾಚಲ ಪ್ರದೇಶದ ಒಂದು ಹಳ್ಳಿಯಲ್ಲಿ, ಮಹಿಳೆಯರು ಪ್ರತಿ ವರ್ಷ ಲೋಕವನ್ನೇ ಅಚ್ಚರಿಗೊಳಿಸುವ ಸಂಪ್ರದಾಯವನ್ನು ಆಚರಿಸುತ್ತಾರೆ. ಮಹಿಳೆಯರು ಮಾತ್ರ ಈ ಸಂಪ್ರದಾಯವನ್ನು ಆಚರಿಸುವುದಿಲ್ಲ, ಆದರೆ ಪುರುಷರು ಸಹ ಈ ಸಂಪ್ರದಾಯದ ಭಾಗವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbc5brqsrb48rt5na7f4nd2,imgname-pini-village-1786014510835.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಹಿಮಾಚಲ ಪ್ರದೇಶದ ಪುಟ್ಟ ಗ್ರಾಮದ ವಿಚಿತ್ರ ಸಂಪ್ರದಾಯ&lt;/strong&gt;&lt;/h2&gt;&lt;p&gt;ಭಾರತೀಯ ಸಂಸ್ಕೃತಿ, ಆಚರಣೆಗಳು ಮತ್ತು ಸಂಪ್ರದಾಯಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿವೆ. ಭಾರತದಲ್ಲಿ ಎಷ್ಟೇ ವೈವಿಧ್ಯತೆಗಳಿದ್ದರೂ, ಅಷ್ಟೇ ವಿಶಿಷ್ಟ ಸಂಪ್ರದಾಯಗಳೂ ಕಂಡುಬರುತ್ತವೆ. ದೇಶದಾದ್ಯಂತ ಅನೇಕ ಹಬ್ಬಗಳನ್ನು ಒಂದೇ ರೀತಿಯಲ್ಲಿ ಆಚರಿಸಿದರೂ, ವಿವಿಧ ರಾಜ್ಯಗಳು, ಧರ್ಮಗಳು, ಸಮುದಾಯಗಳು ಮತ್ತು ಜನಾಂಗಗಳಿಗೆ ತಮ್ಮದೇ ಆದ ಸಂಪ್ರದಾಯಗಳಿವೆ. ಕೆಲವು ಆಚರಣೆಗಳು ಪುರುಷರಿಗೆ ಸಂಬಂಧಿಸಿದರೆ, ಇನ್ನೂ ಕೆಲವು ವಿಶೇಷ ಸಂಪ್ರದಾಯಗಳನ್ನು ಮಹಿಳೆಯರು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅಂತಹ ಅಪರೂಪದ ಸಂಪ್ರದಾಯವೊಂದು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಿನಿ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿದೆ.&lt;/p&gt;&lt;h3&gt;&lt;strong&gt;ಮಹಿಳೆಯರ ಜೊತೆಗೆ ಪುರುಷರೂ ಪಾಲಿಸಬೇಕಾದ ನಿಯಮಗಳು&lt;/strong&gt;&lt;/h3&gt;&lt;p&gt;ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಿನಿ ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ ತಿಂಗಳಲ್ಲಿ ಐದು ದಿನಗಳ ಕಾಲ ಮಹಿಳೆಯರು ಬಟ್ಟೆ ಧರಿಸದೆ ಮನೆಯಿಂದ ಹೊರಬರದೇ ಏಕಾಂತ ಜೀವನ ನಡೆಸುತ್ತಾರೆ. ಅದನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರಂತೆ ಅಲ್ಲಿನ ಜನ. ಈ ಅವಧಿಯಲ್ಲಿ ಮಹಿಳೆಯರು ಪುರುಷರಿಂದ ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಅಂತರ ಕಾಯ್ದುಕೊಳ್ಳುತ್ತಾರೆ. ಅಷ್ಟೇ ಯಾಕೆ ಈ ಐದು ದಿನಗಳ ಕಾಲ ನಗುವುದು, ಸಂಭ್ರಮಿಸುವುದು ಕೂಡಾ ನಿರ್ಬಂಧಿತವಾಗಿದೆ ಎಂದು ಹೇಳಲಾಗುತ್ತದೆ. ಈ ಐದು ದಿನಗಳಲ್ಲಿ ಗ್ರಾಮದೊಳಗೆ ಹೊರಗಿನವರಿಗೆ ಪ್ರವೇಶವಿರುವುದಿಲ್ಲ. ಪುರುಷರು ಸಹ ಬೇರೆಯೇ ಇರುತ್ತಾರೆ. ಅದೇ ಸಮಯದಲ್ಲಿ ಪುರುಷರು ಮದ್ಯಪಾನ ಹಾಗೂ ಮಾಂಸಾಹಾರ ಸೇವಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂಬ ನಿಯಮವೂ ಇದೆ. ಇಂದಿಗೂ ಜನ ಸಂಪೂರ್ಣ ಶ್ರದ್ಧಾ ಭಕ್ತಿಯಿಂದ ಈ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.&lt;/p&gt;&lt;p&gt;&lt;strong&gt;ಈ ಸಂಪ್ರದಾಯದ ಹಿಂದಿರುವ ನಂಬಿಕೆ ಏನು?&lt;/strong&gt;&lt;/p&gt;&lt;p&gt;ಸ್ಥಳೀಯ ಜನರ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ಮಹಿಳೆಯರಿಗೆ ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿದ್ದ ದುಷ್ಟ ರಾಕ್ಷಸನೊಬ್ಬ ಇದ್ದನೆಂದು ಹೇಳಲಾಗುತ್ತದೆ. ವಿಶೇಷವಾಗಿ ಅಲಂಕಾರಿಕ ಉಡುಪು ಧರಿಸಿದ್ದ ಮಹಿಳೆಯರನ್ನು ಅಪಹರಿಸುತ್ತಿದ್ದನೆಂಬ ಕಥೆ ಪ್ರಸಿದ್ಧವಾಗಿದೆ. ಆ ದುಷ್ಟಶಕ್ತಿಯಿಂದ ತಪ್ಪಿಸಿಕೊಳ್ಳಲು ಮತ್ತು ಮನೆಯ ಆಧ್ಯಾತ್ಮಿಕ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಮಹಿಳೆಯರು ಈ ಸಂಪ್ರದಾಯವನ್ನು ಪಾಲಿಸಲು ಆರಂಭಿಸಿದರು ಎನ್ನಲಾಗಿದೆ. ಈ ಸಂಪ್ರದಾಯವನ್ನು ಉಲ್ಲಂಘಿಸಿದರೆ ಗ್ರಾಮಕ್ಕೆ ದುರಾದೃಷ್ಟ, ಅನಾಹುತ ಅಥವಾ ಗ್ರಾಮದೇವರ ಕೋಪ ಎದುರಾಗಬಹುದು ಎಂಬ ನಂಬಿಕೆ ಇಂದಿಗೂ ಸ್ಥಳೀಯರಲ್ಲಿ ಇದೆ. ಒಂದ್ವೇಳೆ ಮಹಿಳೆ ತನ್ನ ದೇಹವನ್ನು ಮುಚ್ಚಲು ಬಯಸಿದರೆ, ಅವಳು ಉಣ್ಣೆಯಿಂದ ಮಾಡಿದ ಪಾಟ್ಕಾವನ್ನು ಸರಳವಾಗಿ ಬಳಸಬಹುದು. ಇದನ್ನು ಬಿಟ್ಟು ಬೇರೆ ಯಾವುದೇ ಬಟ್ಟೆಯನ್ನು ಧರಿಸುವಂತಿಲ್ಲ. ಹಾಗಾಗಿ ಇಂದಿಗೂ ತಪ್ಪದೇ ಜನ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Pavna Das</dc:creator>
            <atom:link href="https://kannada.asianetnews.com/travel/why-women-in-himachals-pini-village-stay-isolated-for-five-days-during-sawan/articleshow-ce5odrw"/>
        </item>
        <item>
            <title><![CDATA[ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ, KSRTC ಟೂರ್ ಪ್ಯಾಕೇಜ್‌ನಲ್ಲಿ ಒಮ್ಮೆ ನೋಡಿ 'ಜೋಗ'ದ ಗುಂಡಿ!]]></title>
            <link>https://kannada.asianetnews.com/travel/ksrtc-bengaluru-to-shivamogga-jog-falls-low-budget-tour-package-ticket-fare-itinerary/articleshow-czzxue9</link>
            <guid isPermaLink="true">https://kannada.asianetnews.com/travel/ksrtc-bengaluru-to-shivamogga-jog-falls-low-budget-tour-package-ticket-fare-itinerary/articleshow-czzxue9</guid>
            <pubDate>Thu, 06 Aug 2026 23:21:36 +0530</pubDate>
            <description><![CDATA[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರಿನಿಂದ ಜೋಗ್&zwnj; ಫಾಲ್ಸ್&zwnj;ಗೆ ಹೊಸ ವಾರಾಂತ್ಯದ ಪ್ಯಾಕೇಜ್ ಪ್ರವಾಸವನ್ನು ಆರಂಭಿಸಿದೆ. ಈ ಪ್ರವಾಸವು ಜೋಗ್&zwnj; ಫಾಲ್ಸ್ ಜೊತೆಗೆ ವರದಹಳ್ಳಿ, ಇಕ್ಕೇರಿ, ಮತ್ತು ಕೆಳದಿಯಂತಹ ಐತಿಹಾಸಿಕ ಸ್ಥಳಗಳ ವೀಕ್ಷಣೆಯನ್ನು ಒಳಗೊಂಡಿದೆ. ಈ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಶುಕ್ರವಾರ ಮತ್ತು ಶನಿವಾರಗಳಂದು ಲಭ್ಯವಿರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzc362bm428qe6rpvnj6bm76,imgname-bengaluru-jog-falls-ksrtc-tour-package-1786038651252.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.06): ಪ್ರ&lt;/strong&gt;ಕೃತಿ ಪ್ರಿಯರಿಗೆ ಹಾಗೂ ವಾರಾಂತ್ಯದ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಿಹಿ ಸುದ್ದಿ ನೀಡಿದೆ. ಕೆಎಸ್&zwnj;ಆರ್&zwnj;ಟಿಸಿಯ ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ &quot;ಬೆಂಗಳೂರು - ಜೋಗ್&zwnj; ಫಾಲ್ಸ್&quot; ಮಾರ್ಗದ ನೂತನ ವಾರಾಂತ್ಯದ ಪ್ಯಾಕೇಜ್ ಟೂರ್ ಅನ್ನು ದಿನಾಂಕ 08-08-2026 ರಿಂದ ಆರಂಭಿಸಲಾಗುತ್ತಿದೆ.&lt;/p&gt;&lt;p&gt;ಈ ಪ್ಯಾಕೇಜ್ ಪ್ರವಾಸವು ಶಿವಮೊಗ್ಗ ಮತ್ತು ಸಾಗರ ಮಾರ್ಗವಾಗಿ ಸಂಚರಿಸಲಿದ್ದು, ನಾನ್ ಎಸಿ ಸ್ಲೀಪರ್ (Non-A/C Sleeper) ವಾಹನದ ಮೂಲಕ ಕಾರ್ಯಾಚರಣೆಗೊಳ್ಳಲಿದೆ. ವಾರಾಂತ್ಯದ ದಿನಗಳಾದ ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಈ ಬಸ್ಸುಗಳು ಹೊರಡಲಿವೆ.&lt;/p&gt;&lt;h2&gt;&lt;strong&gt;ಪ್ಯಾಕೇಜ್ ಟೂರ್&zwnj;ನಲ್ಲಿ ಏನೆಲ್ಲಾ ವೀಕ್ಷಿಸಬಹುದು? (840 ಕಿ.ಮೀ ಪ್ರಯಾಣ)&lt;/strong&gt;&lt;/h2&gt;&lt;p&gt;ಈ ಪ್ರವಾಸವು ಕೇವಲ ಜೋಗ್&zwnj; ಫಾಲ್ಸ್ ವೀಕ್ಷಣೆಗೆ ಮಾತ್ರ ಸೀಮಿತವಾಗಿರದೆ, ಮಲೆನಾಡಿನ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳನ್ನೂ ಒಳಗೊಂಡಿದೆ:&lt;/p&gt;&lt;ul&gt; &lt;li&gt;ಸಾಗರ&lt;/li&gt; &lt;li&gt;ವರದಹಳ್ಳಿ&lt;/li&gt; &lt;li&gt;ವರದಮೂಲ&lt;/li&gt; &lt;li&gt;ಇಕ್ಕೇರಿ&lt;/li&gt; &lt;li&gt;ಕೆಳದಿ&lt;/li&gt; &lt;li&gt;ವಿಶ್ವಪ್ರಸಿದ್ಧ ಜೋಗ್&zwnj; ಫಾಲ್ಸ್ (Jog Falls)&lt;/li&gt; &lt;li&gt;ಸಾಗರದಲ್ಲಿ ಶಾಪಿಂಗ್ ಸಮಯ&lt;/li&gt;&lt;/ul&gt;&lt;h2&gt;&lt;strong&gt;ಪ್ರಯಾಣದ ಸಮಯ ಮತ್ತು ವೇಳಾಪಟ್ಟಿ:&lt;/strong&gt;&lt;/h2&gt;&lt;p&gt;ರಾತ್ರಿ 10:30 (22:30): ಬೆಂಗಳೂರಿನಿಂದ ಸಾಗರಕ್ಕೆ ನಿರ್ಗಮನ.&lt;/p&gt;&lt;p&gt;ಬೆಳಿಗ್ಗೆ 05:30 - 07:00: ಸಾಗರದ ಹೋಟೆಲ್&zwnj;ನಲ್ಲಿ ಫ್ರೆಶ್ ಅಪ್ ಮತ್ತು ವಿಶ್ರಾಂತಿ.&lt;/p&gt;&lt;p&gt;ಬೆಳಿಗ್ಗೆ 07:00 - 07:15: ಬೆಳಗಿನ ಉಪಹಾರ.&lt;/p&gt;&lt;p&gt;ಬೆಳಿಗ್ಗೆ 07:15 - ಮಧ್ಯಾಹ್ನ 12:30: ವರದಹಳ್ಳಿ, ವರದಮೂಲ, ಇಕ್ಕೇರಿ ಹಾಗೂ ಕೆಳದಿ ತಾಣಗಳ ಭೇಟಿ.&lt;/p&gt;&lt;p&gt;ಮಧ್ಯಾಹ್ನ 12:45 - 01:15: ಮಧ್ಯಾಹ್ನದ ಊಟ (ಸಾಗರದಲ್ಲಿ).&lt;/p&gt;&lt;p&gt;ಮಧ್ಯಾಹ್ನ 01:30 - ಸಂಜೆ 06:15: ಸಾಗರದಿಂದ ನಿರ್ಗಮಿಸಿ, ವಿಶ್ವಪ್ರಸಿದ್ಧ ಜೋಗ್&zwnj; ಫಾಲ್ಸ್ ವೀಕ್ಷಣೆ.&lt;/p&gt;&lt;p&gt;ಸಂಜೆ 07:00 - ರಾತ್ರಿ 08:45: ಸಾಗರದಲ್ಲಿ ಶೋಪಿಂಗ್ ಹಾಗೂ ರಾತ್ರಿ ಊಟ.&lt;/p&gt;&lt;p&gt;ರಾತ್ರಿ 10:00 (22:00): ಸಾಗರದಿಂದ ನಿರ್ಗಮನ.&lt;/p&gt;&lt;p&gt;ಬೆಳಿಗ್ಗೆ 05:00: ಮರುದಿನ ಬೆಳಿಗ್ಗೆ ಬೆಂಗಳೂರು ತಲುಪುವುದು.&lt;/p&gt;&lt;h2&gt;&lt;strong&gt;ಟಿಕೆಟ್ ದರ ಮತ್ತು ಸೌಲಭ್ಯಗಳು:&lt;/strong&gt;&lt;/h2&gt;&lt;p&gt;ವಯಸ್ಕರಿಗೆ (Adults): ₹3,300/-&lt;/p&gt;&lt;p&gt;ಮಕ್ಕಳಿಗೆ (6 ರಿಂದ 12 ವರ್ಷ): ₹3,000/-&lt;/p&gt;&lt;h3&gt;&lt;strong&gt;ಟಿಕೆಟ್ ದರದಲ್ಲಿ ಏನೆಲ್ಲಾ ಸೇರಿದೆ?&lt;/strong&gt;&lt;/h3&gt;&lt;p&gt;ಈ ಟಿಕೆಟ್ ದರದಲ್ಲಿ ಬಸ್ ಪ್ರಯಾಣದ ದರ (ಬಿ.ಇ.ಎಸ್ ಶುಲ್ಕ ಹಾಗೂ ಜಿಎಸ್&zwnj;ಟಿ ಸೇರಿ), ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ, ಗೈಡ್ ಶುಲ್ಕ (ದಿನಕ್ಕೆ ₹500), ಜೋಗ್&zwnj; ಫಾಲ್ಸ್ ಪ್ರವೇಶ ಶುಲ್ಕ (₹10), ಟೋಲ್ ಫೀ (₹63) ಮತ್ತು ಮುಂಗಡ ಶುಲ್ಕ (₹20) ಸಂಪೂರ್ಣವಾಗಿ ಸೇರಿದೆ. ಪ್ರಯಾಣಿಕರು ಊಟ ಅಥವಾ ಪ್ರವೇಶ ದರಕ್ಕೆ ಹೆಚ್ಚುವರಿಯಾಗಿ ಹಣ ನೀಡುವ ಅಗತ್ಯವಿರುವುದಿಲ್ಲ.&lt;/p&gt;&lt;h2&gt;&lt;strong&gt;ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:&lt;/strong&gt;&lt;/h2&gt;&lt;p&gt;ಸಾರ್ವಜನಿಕರು ಈ ಪ್ರವಾಸದ ಸೌಲಭ್ಯ ಪಡೆಯಲು ಕೆಎಸ್&zwnj;ಆರ್&zwnj;ಟಿಸಿಯ ಅಧಿಕೃತ ವೆಬ್&zwnj;ಸೈಟ್&zwnj;ಗಳಾದ www.ksrtc.in ಅಥವಾ www.ksrtc.karnataka.gov.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು: 080-26252625, 7760990100, 7760990560, 7760990287.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/ksrtc-bengaluru-to-shivamogga-jog-falls-low-budget-tour-package-ticket-fare-itinerary/articleshow-czzxue9"/>
        </item>
        <item>
            <title><![CDATA[Airplane water bottle secret: ವಿಮಾನಗಳಲ್ಲಿ ನೀರಿನ ಬಾಟಲಿಗಳ ಮೇಲೆ ಈ ರೀತಿ ಏಕೆ ಗಂಟು ಕಟ್ಟುತ್ತಾರೆ ಗೊತ್ತಾ?]]></title>
            <link>https://kannada.asianetnews.com/travel/the-hidden-secret-behind-airplane-water-bottle-straps/articleshow-g9ezsgg</link>
            <guid isPermaLink="true">https://kannada.asianetnews.com/travel/the-hidden-secret-behind-airplane-water-bottle-straps/articleshow-g9ezsgg</guid>
            <pubDate>Thu, 30 Jul 2026 20:50:25 +0530</pubDate>
            <description><![CDATA[&lt;p&gt;&lt;strong&gt;Airplane water bottle secret: &lt;/strong&gt;ವಿಮಾನ ಪ್ರಯಾಣದ ಸಮಯದಲ್ಲಿ ಕ್ಯಾಬಿನ್ ಸಿಬ್ಬಂದಿ ನೀಡುವ ನೀರಿನ ಬಾಟಲಿಗಳಿಗೆ ಸಣ್ಣ ಗಂಟು ಅಥವಾ ಪ್ಲಾಸ್ಟಿಕ್ ಸ್ಟ್ರ್ಯಾಪ್&zwnj;ಗಳನ್ನು (Strap) ಬಳಸುವುದನ್ನು ನೀವು ಗಮನಿಸಿರಬಹುದು. ಇದು ಕೇವಲ ವಿನ್ಯಾಸ ಅಥವಾ ಫ್ಯಾಷನ್ ಅಲ್ಲ. ಇದರ ಹಿಂದೆ ಒಂದು ಅದ್ಭುತ ತಂತ್ರ ಅಡಗಿದೆ. ಪ್ರಯಾಣಿಕರಿಗೆ ತಿಳಿಯದ ಈ ಸೈಲೆಂಟ್ ಕೋಡ್ ಹಿಂದಿನ ಅಸಲಿ ರಹಸ್ಯವೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyssp10d5zvazsy3p03rd15p,imgname-thumbnail---2026-07-30t204408.944-1785424708621.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿ&lt;/strong&gt;ಮಾನ ಪ್ರಯಾಣದಲ್ಲಿ ಕ್ಯಾಬಿನ್ ಸಿಬ್ಬಂದಿ (Air Hostess) ನೀಡುವ ಸಣ್ಣ ಸೇವೆಗಳ ಹಿಂದೆ ಅನೇಕ ಆಸಕ್ತಿದಾಯಕ ರಹಸ್ಯಗಳು ಮತ್ತು ವೈಜ್ಞಾನಿಕ ಕಾರಣಗಳು ಅಡಗಿರುತ್ತವೆ. ಅದರಲ್ಲೂ ವಿಶೇಷವಾಗಿ ಅವರು ನೀರಿನ ಬಾಟಲಿಗಳಿಗೆ ಅದೇ ಬಾಟಲಿಯಲ್ಲಿರುವ ಸ್ಟ್ರ್ಯಾಪ್&zwnj;ಗಳಿಂದ ಒಂದು ಸಣ್ಣ ಗಂಟು ಹಾಕುವುದನ್ನು ನೀವು ಗಮನಿಸಿರಬಹುದು. ಇದರ ಹಿಂದಿನ ಪ್ರಮುಖ ಕಾರಣಗಳು ಇಲ್ಲಿವೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರ ಸುರಕ್ಷತೆ ಮತ್ತು ಗಟ್ಟಿ ಹಿಡಿತ&lt;/strong&gt;&lt;/h2&gt;&lt;p&gt;ವಿಮಾನದ ಒಳಗಿನ ತಂಪಾದ ವಾತಾವರಣದಲ್ಲಿ, ಟ್ರಾಲಿಯ ಫ್ರಿಡ್ಜ್&zwnj;ನಿಂದ ತೆಗೆದ ನೀರಿನ ಬಾಟಲಿಗಳ ಹೊರಭಾಗದಲ್ಲಿ ತೇವಾಂಶ ಅಥವಾ ನೀರಿನ ಬಿಂದುಗಳು (Condensation) ಸಂಗ್ರಹವಾಗುತ್ತವೆ. ಇದರಿಂದ ಬಾಟಲಿಗಳು ಕೈಯಿಂದ ಜಾರುವ ಸಾಧ್ಯತೆ ಇರುತ್ತದೆ. ಅಲ್ಲದೆ, ನೀರನ್ನು ಗ್ಲಾಸಿಗೆ ಸುರಿಯುವಾಗ ಆ ತಣ್ಣನೆಯ ಹನಿಗಳು ಪ್ರಯಾಣಿಕರ ಬಟ್ಟೆಯ ಮೇಲೆ ಬಿದ್ದು ಕಿರಿಕಿರಿ ಉಂಟುಮಾಡಬಹುದು. ಬಾಟಲಿಗೆ ಸ್ಟ್ರ್ಯಾಪ್&zwnj; ಸುತ್ತಿ ಗಂಟು ಹಾಕುವುದರಿಂದ ಅದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಸಿಬ್ಬಂದಿಗೆ ಬಾಟಲಿಯನ್ನು ಹಿಡಿಯಲು ಉತ್ತಮ ಹಿಡಿತವನ್ನು ನೀಡುತ್ತದೆ.&lt;/p&gt;&lt;h2&gt;&lt;strong&gt;ಬಳಸಿದ ಬಾಟಲಿಯನ್ನು ಗುರುತಿಸಲು&lt;/strong&gt;&lt;/h2&gt;&lt;p&gt;ವಿಮಾನದಲ್ಲಿ ಏಕಕಾಲಕ್ಕೆ ನೂರಾರು ಜನರಿಗೆ ವೇಗವಾಗಿ ಸೇವೆ ನೀಡುವಾಗ ಸಿಬ್ಬಂದಿ ಹೆಚ್ಚಿನ ಒತ್ತಡದಲ್ಲಿರುತ್ತಾರೆ. ಮಂದ ಬೆಳಕಿನಲ್ಲಿ ಯಾವ ಬಾಟಲಿಯನ್ನು ಈಗಾಗಲೇ ತೆರೆಯಲಾಗಿದೆ ಮತ್ತು ಯಾವುದು ಹೊಸದು ಎಂದು ಕಣ್ಣಿನಿಂದ ನೋಡಿ ಗುರುತಿಸುವುದು ಕಷ್ಟವಾಗಬಹುದು. ಆದ್ದರಿಂದ ಈಗಾಗಲೇ ತೆರೆದ ಬಾಟಲಿಗಳಿಗೆ ವಿಶೇಷವಾದ ಗಂಟು ಹಾಕುವ ಮೂಲಕ ಸಿಬ್ಬಂದಿ ಕೇವಲ ಸ್ಪರ್ಶದಿಂದಲೇ (Touch) ಅದನ್ನು ಗುರುತಿಸುತ್ತಾರೆ. ಇದು ಹೊಸ ಬಾಟಲಿಗಳು ಅನಗತ್ಯವಾಗಿ ವ್ಯರ್ಥವಾಗುವುದನ್ನು ತಡೆಯುತ್ತದೆ.&lt;/p&gt;&lt;h2&gt;&lt;strong&gt;ಸಮಯದ ಉಳಿತಾಯ ಮತ್ತು ನಿಖರತೆ&lt;/strong&gt;&lt;/h2&gt;&lt;p&gt;ಅಂತರಾಷ್ಟ್ರೀಯ ವಿಮಾನಗಳಲ್ಲಿ ಸೋಡಾ ವಾಟರ್, ನಾರ್ಮಲ್ ವಾಟರ್ ಹೀಗೆ ವಿವಿಧ ರೀತಿಯ ಪಾನೀಯಗಳಿರುತ್ತವೆ. ಇವೆಲ್ಲವೂ ನೋಡಲು ಒಂದೇ ರೀತಿ ಪಾರದರ್ಶಕವಾಗಿರುವುದರಿಂದ, ಯಾವುದಕ್ಕೆ ಗಂಟು ಹಾಕಲಾಗಿದೆ ಎಂಬುದನ್ನು ನೋಡಿ ಸಿಬ್ಬಂದಿ ಕೂಡಲೇ ವ್ಯತ್ಯಾಸ ತಿಳಿದುಕೊಳ್ಳುತ್ತಾರೆ. ಈ ಸಣ್ಣ ಟ್ರಿಕ್&zwnj;ನಿಂದಾಗಿ ಯಾವುದೇ ತಪ್ಪುಗಳಾಗದಂತೆ ಪ್ರವಾಸಿಗರಿಗೆ ಅತ್ಯಂತ ವೇಗವಾಗಿ ಸೇವೆ ನೀಡಲು ಸಾಧ್ಯವಾಗುತ್ತದೆ.&lt;/p&gt;&lt;h2&gt;&lt;strong&gt;ರಕ್ಷಣೆ ಮತ್ತು ನೈರ್ಮಲ್ಯ&lt;/strong&gt;&lt;/h2&gt;&lt;p&gt;ವಿಮಾನವು ಆಕಾಶದಲ್ಲಿ ಹಾರುವಾಗ ಅಲುಗಾಡುವುದರಿಂದ (Turbulence) ಬಾಟಲಿಗಳು ಪರಸ್ಪರ ಡಿಕ್ಕಿ ಹೊಡೆದು ಒಡೆಯುವ ಅಥವಾ ನೀರು ಚೆಲ್ಲುವ ಸಾಧ್ಯತೆ ಇರುತ್ತದೆ. ಈ ಸ್ಟ್ರ್ಯಾಪ್&zwnj; ಗಂಟುಗಳು ಒಂದು ಮೆತ್ತನೆಯ ಪದರದಂತೆ ಕೆಲಸ ಮಾಡಿ ಬಾಟಲಿಗಳಿಗೆ ರಕ್ಷಣೆ ನೀಡುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ನಮಗೆ ಸಣ್ಣದಾಗಿ ಕಾಣುವ ಈ ಕೆಲಸದ ಹಿಂದೆ ವಿಮಾನಯಾನ ಸಂಸ್ಥೆಗಳ ದಶಕಗಳ ಅನುಭವ ಮತ್ತು ಪ್ರಯಾಣಿಕರ ಸೌಕರ್ಯದ ಕಾಳಜಿ ಅಡಗಿದೆ. ಮುಂದಿನ ಬಾರಿ ವಿಮಾನದಲ್ಲಿ ಬಾಟಲಿಗೆ ಗಂಟು ಹಾಕಿದ್ದನ್ನು ನೋಡಿದಾಗ ಅವರ ಈ ಚತುರತೆಯನ್ನು ನೆನಪಿಸಿಕೊಳ್ಳಿ.&lt;/p&gt;&lt;h2&gt;&lt;strong&gt;ಜಾಗರೂಕರು ಮತ್ತು ವೃತ್ತಿಪರರು&lt;/strong&gt;&lt;/h2&gt;&lt;p&gt;ಎಲ್ಲಾ ಏರ್-ಹೋಸ್ಟೆಸ್&zwnj;ಗಳಿಗೆ ಇಂತಹ ಸಣ್ಣ ಸಣ್ಣ ಕೆಲಸಗಳನ್ನು ಮಾಡುವಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ಈ ಗಂಟು ಎಷ್ಟು ಅಚ್ಚುಕಟ್ಟಾಗಿರುತ್ತದೆಯೋ, ಆ ಸಿಬ್ಬಂದಿ ಅಷ್ಟು ಜಾಗರೂಕರು ಮತ್ತು ವೃತ್ತಿಪರರು ಎಂಬುದು ಅವರ ತರಬೇತಿಯ ಒಂದು ಭಾಗವಾಗಿರುತ್ತದೆ. ಇದು ಕೇವಲ ಕೆಲಸವಲ್ಲ, ಅದೊಂದು 'ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್' (SOP).&lt;/p&gt;&lt;h2&gt;&lt;strong&gt;ಸೈಲೆಂಟ್ ಲಾಂಗ್ವೇಜ್&lt;/strong&gt;&lt;/h2&gt;&lt;p&gt;ದೂರದ ಪ್ರಯಾಣದ ವಿಮಾನಗಳಲ್ಲಿ (Long-haul flights) ಸಿಬ್ಬಂದಿಗಳು ಶಿಫ್ಟ್ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಒಬ್ಬರು ಹೋಗಿ ಇನ್ನೊಬ್ಬರು ಬಂದಾಗ, ಯಾವ ಟ್ರಾಲಿಯಲ್ಲಿ ಯಾವ ಬಾಟಲಿಗಳು ಬಳಕೆಗೆ ಸಿದ್ಧವಾಗಿವೆ ಎಂದು ಬಾಯಿ ಮಾತಿನಲ್ಲಿ ಹೇಳುವ ಬದಲು, ಈ 'ಗಂಟು'ಗಳನ್ನು ನೋಡಿ ಹೊಸಬರು ಕೆಲಸ ಮುಂದುವರಿಸುತ್ತಾರೆ. ಇದು ವಿಮಾನ ಸಿಬ್ಬಂದಿಗಳ ನಡುವಿನ ಒಂದು 'ಸೈಲೆಂಟ್ ಲಾಂಗ್ವೇಜ್'.&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/travel/the-hidden-secret-behind-airplane-water-bottle-straps/articleshow-g9ezsgg"/>
        </item>
        <item>
            <title><![CDATA[ಹೋಟೆಲ್‌ಗಳಲ್ಲಿ ಸಾಂಪ್ರದಾಯಿಕ ಕೀಗಳ ಬದಲಿಗೆ ಕೀ ಕಾರ್ಡ್‌ಗಳನ್ನೇ ಏಕೆ ಬಳಸುತ್ತಾರೆ?]]></title>
            <link>https://kannada.asianetnews.com/gallery/life/why-do-hotels-use-key-cards-instead-of-traditional-keys-suh-p70hqfn</link>
            <guid isPermaLink="true">https://kannada.asianetnews.com/gallery/life/why-do-hotels-use-key-cards-instead-of-traditional-keys-suh-p70hqfn</guid>
            <pubDate>Thu, 06 Aug 2026 17:23:28 +0530</pubDate>
            <description><![CDATA[&lt;p&gt;ಇನ್ ಮಾಡಿದ ತಕ್ಷಣ ನಮಗೆ ಸಿಗುವುದು ಸಣ್ಣ ಪ್ಲಾಸ್ಟಿಕ್ ಕೀ ಕಾರ್ಡ್. ಹಿಂದೆ ಇದ್ದಂತೆ ಲೋಹದ ಚಾವಿಗಳನ್ನು ಈಗ ಬಹುತೇಕ ಹೋಟೆಲ್&zwnj;ಗಳು ಬಳಸುವುದಿಲ್ಲ. ಹಾಗಾದರೆ ಹೋಟೆಲ್&zwnj;ಗಳು ಸಾಂಪ್ರದಾಯಿಕ ಚಾವಿಗಳನ್ನು ಬಿಟ್ಟು ಕೀ ಕಾರ್ಡ್&zwnj;ಗಳನ್ನು ಬಳಸುವುದಕ್ಕೆ ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbeg9s9trwghnpgc5bc9dzn,imgname-why-do-hotels-use-key-cards-instead-of-traditional-keys--5--1786016966441.jpg" type="image/jpeg" height="390" width="690"/>
            <content:encoded><![CDATA[&lt;p&gt;ಇನ್ ಮಾಡಿದ ತಕ್ಷಣ ನಮಗೆ ಸಿಗುವುದು ಸಣ್ಣ ಪ್ಲಾಸ್ಟಿಕ್ ಕೀ ಕಾರ್ಡ್. ಹಿಂದೆ ಇದ್ದಂತೆ ಲೋಹದ ಚಾವಿಗಳನ್ನು ಈಗ ಬಹುತೇಕ ಹೋಟೆಲ್&zwnj;ಗಳು ಬಳಸುವುದಿಲ್ಲ. ಹಾಗಾದರೆ ಹೋಟೆಲ್&zwnj;ಗಳು ಸಾಂಪ್ರದಾಯಿಕ ಚಾವಿಗಳನ್ನು ಬಿಟ್ಟು ಕೀ ಕಾರ್ಡ್&zwnj;ಗಳನ್ನು ಬಳಸುವುದಕ್ಕೆ ಕಾರಣವೇನು?&lt;/p&gt;&lt;img&gt;&lt;p&gt;ಸಾಮಾನ್ಯ ಚಾವಿ ಕಳೆದುಹೋದರೆ ಹೊಸ ಚಾವಿ ಮಾಡಿಸಬೇಕಾಗುತ್ತದೆ ಅಥವಾ ಲಾಕ್ ಬದಲಾಯಿಸಬೇಕಾಗಬಹುದು. ಆದರೆ ಕೀ ಕಾರ್ಡ್ ಕಳೆದುಹೋದರೆ ಅದನ್ನು ಕೆಲವೇ ಕ್ಷಣಗಳಲ್ಲಿ ಡೀಆಕ್ಟಿವೇಟ್ ಮಾಡಿ ಹೊಸ ಕಾರ್ಡ್ ನೀಡಬಹುದು. ಇದರಿಂದ ಅನಧಿಕೃತ ವ್ಯಕ್ತಿಗಳು ಕೊಠಡಿಗೆ ಪ್ರವೇಶಿಸುವ ಅಪಾಯ ಕಡಿಮೆಯಾಗುತ್ತದೆ.&lt;/p&gt;&lt;p&gt;&lt;strong&gt;ಚೆಕ್&zwnj;ಔಟ್ ಆದ ತಕ್ಷಣ ಕಾರ್ಡ್ ಕೆಲಸ ಮಾಡುವುದಿಲ್ಲ&lt;/strong&gt;&lt;/p&gt;&lt;p&gt;ಕೀ ಕಾರ್ಡ್ ನಿಮ್ಮ ಬುಕ್ಕಿಂಗ್ ಅವಧಿಗೆ ಮಾತ್ರ ಕೆಲಸ ಮಾಡುತ್ತದೆ. ನೀವು ಚೆಕ್&zwnj;ಔಟ್ ಮಾಡಿದ ತಕ್ಷಣ ಅದರ ಪ್ರವೇಶ ಹಕ್ಕು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಹೀಗಾಗಿ ಹಿಂದಿನ ಅತಿಥಿಗಳು ಮತ್ತೆ ಕೊಠಡಿಗೆ ಪ್ರವೇಶಿಸಲು ಸಾಧ್ಯವಿಲ್ಲ.&lt;/p&gt;&lt;img&gt;&lt;p&gt;ಇಂದಿನ ಅನೇಕ ಹೋಟೆಲ್&zwnj;ಗಳಲ್ಲಿ ಒಂದೇ ಕೀ ಕಾರ್ಡ್ ಬಳಸಿ ಕೊಠಡಿ, ಜಿಮ್, ಸ್ವಿಮ್ಮಿಂಗ್ ಪೂಲ್, ಪಾರ್ಕಿಂಗ್ ಅಥವಾ ಲಿಫ್ಟ್ ಮುಂತಾದ ಪ್ರದೇಶಗಳಿಗೆ ಪ್ರವೇಶ ಪಡೆಯಬಹುದು. ಇದರಿಂದ ಅತಿಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.&lt;/p&gt;&lt;img&gt;&lt;p&gt;ಬಹುತೇಕ ಹೋಟೆಲ್&zwnj;ಗಳಲ್ಲಿ ಕೊಠಡಿಯೊಳಗಿನ ವಿದ್ಯುತ್ ವ್ಯವಸ್ಥೆ ಕೀ ಕಾರ್ಡ್&zwnj;ಗೆ ಸಂಪರ್ಕ ಹೊಂದಿರುತ್ತದೆ. ಅತಿಥಿ ಹೊರಹೋಗುವಾಗ ಕಾರ್ಡ್ ತೆಗೆದರೆ ದೀಪ, ಎಸಿ ಸೇರಿದಂತೆ ಅನಗತ್ಯ ವಿದ್ಯುತ್ ಬಳಕೆ ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ.&lt;/p&gt;&lt;img&gt;&lt;p&gt;ಯಾವ ಸಮಯದಲ್ಲಿ ಯಾರು ಕೊಠಡಿಯನ್ನು ತೆರೆದರು ಎಂಬ ಡಿಜಿಟಲ್ ದಾಖಲೆ ಹೋಟೆಲ್ ವ್ಯವಸ್ಥೆಯಲ್ಲಿ ಉಳಿಯುತ್ತದೆ. ಯಾವುದೇ ಭದ್ರತಾ ಸಮಸ್ಯೆ ಎದುರಾದರೆ ಈ ಮಾಹಿತಿ ತನಿಖೆಗೆ ಸಹಾಯಕವಾಗುತ್ತದೆ.&lt;/p&gt;&lt;img&gt;&lt;p&gt;ಸಾವಿರಾರು ಕೊಠಡಿಗಳನ್ನು ಹೊಂದಿರುವ ಹೋಟೆಲ್&zwnj;ಗಳಲ್ಲಿ ಲೋಹದ ಚಾವಿಗಳ ನಿರ್ವಹಣೆ ಕಷ್ಟಕರ. ಕೀ ಕಾರ್ಡ್&zwnj;ಗಳ ಮೂಲಕ ಹೊಸ ಕಾರ್ಡ್ ನೀಡುವುದು, ಪ್ರವೇಶವನ್ನು ರದ್ದುಗೊಳಿಸುವುದು ಹಾಗೂ ಕೊಠಡಿಗಳನ್ನು ನಿರ್ವಹಿಸುವುದು ಬಹಳ ಸುಲಭವಾಗುತ್ತದೆ.&lt;/p&gt;]]></content:encoded>
            <category>travel</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/why-do-hotels-use-key-cards-instead-of-traditional-keys-suh-p70hqfn"/>
        </item>
        <item>
            <title><![CDATA[ಬೆಂಗಳೂರು ಜನಕ್ಕೆ ಹೇಳಿ ಮಾಡಿಸಿದ ನೈಸರ್ಗಿಕ ರಸದೌತಣ ತಾಣಗಳು; ಟ್ರೆಕ್ಕಿಂಗ್, ಬೋಟಿಂಗ್, ಹನಿಮೂನ್‌ಗೂ ಬೆಸ್ಟ್!]]></title>
            <link>https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s</link>
            <guid isPermaLink="true">https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s</guid>
            <pubDate>Sat, 08 Aug 2026 22:39:10 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ಕೇವಲ 4-5 ಗಂಟೆಗಳ ಪ್ರಯಾಣದಲ್ಲಿ ತಲುಪಬಹುದಾದ ಕೇರಳದ ಐದು ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಸ್ಥಳಗಳು ಚಾರಣ, ಜಂಗಲ್ ಸಫಾರಿ, ಪ್ಯಾರಾಗ್ಲೈಡಿಂಗ್ ಮತ್ತು ಹೌಸ್&zwnj;ಬೋಟ್ ವಿಹಾರದಂತಹ ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಪ್ರಕೃತಿ ಪ್ರೇಮಿಗಳಿಗೆ ಮರೆಯಲಾಗದ ಅನುಭವ ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kd03f5es6atk2t1g4w86jekg,imgname-munnar-1766308943321.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಿಂದ ಕೇವಲ 4 ರಿಂದ 5 ಗಂಟೆಗಳ ದೂರದಲ್ಲಿರುವ ನೈಸರ್ಗಿಕ ರಮಣೀಯ ತಾಣಗಳಿಗೆ ಪ್ರಕೃತಿ ಪ್ರೇಮಿಗಳೊಮ್ಮೆ ಭೇಟಿ ಕೊಡಲೇಬೇಕು. ಸ್ವಂತ ಕಾರಿದ್ದವರಿಗೆ ಇದು ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಅದರಲ್ಲಿಯೂ ಕಡಿಮೆ ಬಜೆಟ್&zwnj;ನಲ್ಲಿ ಹನಿಮೂನ್ ಮಾಡಿಕೊಳ್ಳೋರಿಗೆ ಹಾಗೂ ಜಡಿ ಮಳೆ, ಮುಗಿಲೇ ಕವಚಿ ಭೂಮಿಗೆ ಬಿದ್ದಂತೆ ಕಾಣುವ ಮಂಜಿನ ತೋಟದ ಅನುಭವ ನೀಡುವ ಈ ಪ್ರವಾಸಿ ತಾಣಗಳನ್ನು ನೀವು ಮಿಸ್ ಮಾಡಿಕೊಳ್ಳಲೇಬೇಡಿ. ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ 5 ಪ್ರವಾಸಿ ತಾಣಗಳು ಇಲ್ಲಿವೆ.&lt;/p&gt;&lt;p&gt;ಪಶ್ಚಿಮ ಘಟ್ಟ ಪ್ರದೇಶದಲ್ಲಿ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಮಾಡಲಾಗದ ಸ್ಥಿತಿಂದಾಗಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುವ ಕೇರಳಿಗರ ಸ್ವಂತ ನಾಡು ಹೇಗಿದೆ ಗೊತ್ತಾ? ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ 5 ಪ್ರವಾಸಿ ತಾಣಗಳು ಇಲ್ಲಿವೆ.&lt;/p&gt;&lt;h2&gt;&lt;strong&gt;1. ಮುನ್ನಾರ್&lt;/strong&gt;&lt;/h2&gt;&lt;p&gt;ಪಶ್ಚಿಮ ಘಟ್ಟಗಳಲ್ಲಿರುವ ಮುನ್ನಾರ್, ಚಾರಣ ಪ್ರಿಯರಿಗೆ ಸ್ವರ್ಗವಾಗಿದೆ. ಮಂಜಿನಿಂದ ಆವೃತವಾಗಿರುವ ಇಲ್ಲಿನ ವಿಶಾಲವಾದ ಚಹಾ ತೋಟಗಳು, ಬೆಟ್ಟಗಳು, ಪರ್ವತಗಳು ಟ್ರಕ್ಕಿಂಗ್ ಅನುಭವವನ್ನು ಮೆಮೊರೆಬಲ್ ಆಗಿಸುತ್ತದೆ. ಮುನ್ನಾರ್&zwnj;ನಲ್ಲಿರುವ ಕೆಲವು ಜನಪ್ರಿಯ ಟ್ರೆಕ್ಕಿಂಗ್ ಟ್ರೇಲ್&zwnj;ಗಳೆಂದರೆ ಅನಮುಡಿ ಶಿಖರ, ಮೀಸಪುಲಿಮಲ ಮತ್ತು ಚೋಕ್ರಮುಡಿ. ಪಶ್ಚಿಮ ಘಟ್ಟಗಳ ಸುಂದರವಾದ (Beautiful) ಸೊಬಗು, ಹಚ್ಚ ಹಸಿರಾದ ಪರ್ವತ ಆಹ್ಲಾದಕರ ಅನುಭವವನ್ನು ನೀಡುತ್ತದೆ.&lt;/p&gt;&lt;h2&gt;&lt;strong&gt;2. ವಯನಾಡ್&lt;/strong&gt;&lt;/h2&gt;&lt;p&gt;ವಯನಾಡ್ ತನ್ನ ದಟ್ಟವಾದ ಕಾಡುಗಳು (Forest) ಮತ್ತು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ, ಇದು ಸಾಹಸ ಪ್ರಿಯರಿಗೆ ಸ್ವರ್ಗವಾಗಿದೆ. ಪ್ರವಾಸಿಗರು ಇಲ್ಲಿ ರೋಮಾಂಚಕ ಜಂಗಲ್ ಸಫಾರಿಗಳನ್ನು ಮಾಡಬಹುದು, ಗುಪ್ತ ಗುಹೆಗಳನ್ನು ಅನ್ವೇಷಿಸಬಹುದು ಮತ್ತು ದಟ್ಟವಾದ ಕಾಡುಗಳ ಮೂಲಕ ಚಾರಣ (Trekking) ಮಾಡಬಹುದು. ಚೆಂಬ್ರಾ ಶಿಖರವು ಅಡ್ವೆಂಚರ್ ಇಷ್ಟಪಡುವವರಿಗೆ ಉತ್ತಮ ತಾಣವಾಗಿದೆ.&lt;/p&gt;&lt;h2&gt;&lt;strong&gt;3. ವಾಗಮೋನ್&lt;/strong&gt;&lt;/h2&gt;&lt;p&gt;ಕೇರಳದಲ್ಲಿ ಹೆಚ್ಚು ಪ್ರಸಿದ್ಧವಾಗಿಲ್ಲದ ಸ್ಥಳ ವಾಗಮೋನ್. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಈ ಸ್ಥಳದ ಬಗ್ಗೆ ತಿಳಿದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಾಹಸ ಉತ್ಸಾಹಿಗಳಲ್ಲಿ, ವಿಶೇಷವಾಗಿ ಪ್ಯಾರಾಗ್ಲೈಡಿಂಗ್ ಅಭಿಮಾನಿಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸುತ್ತಿದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳು, ರೋಲಿಂಗ್ ಬೆಟ್ಟಗಳು ಮತ್ತು ಅನುಕೂಲಕರವಾದ ಗಾಳಿಯ ಪರಿಸ್ಥಿತಿಗಳು ವಾಗಮೋನ್&zwnj;ನ್ನು ಪ್ಯಾರಾಗ್ಲೈಡಿಂಗ್&zwnj;ಗೆ ಸೂಕ್ತವಾದ ತಾಣವನ್ನಾಗಿ ಮಾಡುತ್ತದೆ.&lt;/p&gt;&lt;h2&gt;&lt;strong&gt;4. ತೇಕ್ಕಡಿ&lt;/strong&gt;&lt;/h2&gt;&lt;p&gt;ತೇಕ್ಕಡಿ, ವನ್ಯಜೀವಿಗಳನ್ನು ಇಷ್ಟಪಡುವವರು ಭೇಟಿ ನೀಡಲೇಬೇಕಾದ ತಾಣವಾಗಿದೆ. ಪೆರಿಯಾರ್ ವನ್ಯಜೀವಿ ಅಭಯಾರಣ್ಯವು ದಟ್ಟವಾದ ಕಾಡುಗಳು ಮತ್ತು ಸುಂದರವಾದ ಸರೋವರಗಳ ನಡುವೆ ನೆಲೆಸಿದೆ. ಜಂಗಲ್ ಸಫಾರಿಗಳು, ಬಿದಿರಿನ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್&zwnj;ನಂತಹ ಅತ್ಯಾಕರ್ಷಕ ಚಟುವಟಿಕೆಗಳಿಗೆ ಅವಕಾಶ ಒದಗಿಸುತ್ತದೆ. ಆನೆಗಳು, ಹುಲಿಗಳು ಮತ್ತು ಹಲವಾರು ಇತರ ಪ್ರಾಣಿಗಳನ್ನು ಇಲ್ಲಿ ನೋಡಬಹುದು.&lt;/p&gt;&lt;h2&gt;&lt;strong&gt;5. ಅಲೆಪ್ಪಿ&lt;/strong&gt;&lt;/h2&gt;&lt;p&gt;ಕೇರಳದ ಹಿನ್ನೀರಿನ ಈ ಪ್ರದೇಶವು ಪ್ರಶಾಂತವಾದ ಹೌಸ್&zwnj;ಬೋಟ್ ವಿಹಾರಕ್ಕೆ ಪ್ರಸಿದ್ಧವಾಗಿದೆ, ಅಲೆಪ್ಪಿ ರೋಮಾಂಚಕ ಕಯಾಕಿಂಗ್ ಸಾಹಸಗಳನ್ನು ಮಾಡಲು ಸಹ ಅವಕಾಶ ಒದಗಿಸುತ್ತದೆ. ಶಾಂತವಾದ ಹಿನ್ನೀರು, ಅಂಕುಡೊಂಕಾದ ಕಾಲುವೆಗಳು ಮತ್ತು ಸೊಂಪಾದ ಗದ್ದೆಗಳ ಮೂಲಕ ಪ್ರಯಾಣಿಸಬಹುದು.&lt;/p&gt;&lt;p&gt;ಹಚ್ಚ ಹಸಿರಿನ ಭೂದೃಶ್ಯಗಳು, ಹಿನ್ನೀರು ಮತ್ತು ರೋಮಾಂಚಕ ಸಾಹಸಕ್ರೀಡೆಗಳಿಗೆ ಪ್ರಸಿದ್ಧಿಯಾಗಿದೆ. ಕೇರಳಕ್ಕೆ ಪ್ರವಾಸ ಎಂದ ತಕ್ಷಣ ಬರೀ ಮುನ್ನಾರ್&zwnj;, ಅತಿರಪಳ್ಳಿ ಫಾಲ್ಸ್ ಎಂದೇ ಅಂದುಕೊಳ್ಳಬೇಕಾಗಿಲ್ಲ. ಇದಲ್ಲದೆ, ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ ಐದು ಪ್ರವಾಸಿ ತಾಣಗಳು ಇಲ್ಲಿವೆ. ನೀವು ದಿನನಿತ್ಯದ ರೊಟೀನ್ ಜೀವನದಿಂದ ವಿಶ್ರಾಂತಿ ಬಯಸುತ್ತಿದ್ದಲ್ಲಿ ಕೇರಳದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಗಮ್ಯಸ್ಥಾನಗಳು ಸಾಹಸಕ್ರೀಡೆಗಳಿಗೆ ಅವಕಾಶ ನೀಡುವುದರ ಜೊತೆಗೆ ಆಹ್ಲಾದಕರ ಅನುಭವ ನೀಡುತ್ತದೆ. ಸುಂದರ ಪರಿಸದರಲ್ಲಿ ಮನಸ್ಸು ಸಹ ಉಲ್ಲಸಿತಗೊಳ್ಳುತ್ತದೆ. ಆದರೆ ಈ ಎಲ್ಲಾ ಸ್ಥಳಗಳಿಗೆ ಪ್ರಯಾಣಿಸುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/top-5-kerala-tourist-places-near-bengaluru-road-trip-nature-getaway-budget-friendly-trips/articleshow-rxzau3s"/>
        </item>
        <item>
            <title><![CDATA[300 ಅಡಿ ಕುಸಿದ ಏರ್‌ ಇಂಡಿಯಾ, ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಗಾಯ, ಪೈಲಟ್‌ ಡ್ರಗ್‌ ಸೇವಿಸಿದ್ದು ಪತ್ತೆ!]]></title>
            <link>https://kannada.asianetnews.com/india-news/air-india-flight-drops-300-feet-due-to-turbulence-pilot-fails-drug-test-dgca-suspends-crew-gdp/articleshow-tom6ti2</link>
            <guid isPermaLink="true">https://kannada.asianetnews.com/india-news/air-india-flight-drops-300-feet-due-to-turbulence-pilot-fails-drug-test-dgca-suspends-crew-gdp/articleshow-tom6ti2</guid>
            <pubDate>Mon, 10 Aug 2026 08:52:12 +0530</pubDate>
            <description><![CDATA[ಫುಕೆಟ್&zwnj;ನಿಂದ ದೆಹಲಿಗೆ ಬರುತ್ತಿದ್ದ ಏರ್&zwnj; ಇಂಡಿಯಾ ವಿಮಾನವು ತೀವ್ರ ಹೊಯ್ದಾಟಕ್ಕೆ ಸಿಲುಕಿ 300 ಅಡಿ ಕೆಳಗೆ ಕುಸಿದಿದೆ. ಈ ಘಟನೆಯ ನಂತರ ನಡೆಸಿದ ಡೋಪ್ ಪರೀಕ್ಷೆಯಲ್ಲಿ, ವಿಮಾನದ ಪೈಲಟ್&zwnj; ಒಬ್ಬರು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದ್ದು, ಡಿಜಿಸಿಎ ಇಬ್ಬರೂ ಪೈಲಟ್&zwnj;ಗಳನ್ನು ಅಮಾನತುಗೊಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz85na094zfmw76bxpf8xdkm,imgname-air-india-air-turbulance-1785907030024.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಫುಕೆಟ್&zwnj;ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್&zwnj; ಇಂಡಿಯಾ ವಿಮಾನವೊಂದು ಹಾರಾಟದ ವೇಳೆ ತೀವ್ರ ಹೊಯ್ದಾಟಕ್ಕೆ (ಟರ್ಬುಲೆನ್ಸ್) ತುತ್ತಾಗಿ ದಿಢೀರ್ 300 ಅಡಿ ಕೆಳಗೆ ಕುಸಿದಿದ್ದು, ಘಟನೆಯ ಬಳಿಕ ನಡೆಸಿದ ಪರೀಕ್ಷೆಯಲ್ಲಿ ವಿಮಾನದ ಪೈಲಟ್&zwnj; ಒಬ್ಬರು ಮಾದಕ ವಸ್ತು (ಡ್ರಗ್ಸ್) ಸೇವಿಸಿರುವುದು ದೃಢಪಟ್ಟಿದೆ.ಇಬ್ಬರು ಪೈಲಟ್&zwnj;ಗಳ ಪೈಕಿ ಒಬ್ಬರು ನಿಷೇಧಿತ ಪದಾರ್ಥ ಸೇವಿಸಿದ್ದುದು ಡೋಪ್&zwnj; ಪರೀಕ್ಷೆಯಿಂದ ಪತ್ತೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಇದೇ ವೇಳೆ, ಟರ್ಬುಲನ್ಸ್&zwnj;ಗೆ ಸಂಬಂಧಿಸಿದಂತೆ ಡ್ರಗ್ಸ್&zwnj; ಸೇವಿಸಿದ ಪೈಲಟ್&zwnj; ಸೇರಿ ವಿಮಾನದ ಇಬ್ಬರೂ ಪೈಲಟ್&zwnj;ಗಳನ್ನು ಡಿಜಿಸಿಎ ಅಮಾನತು ಮಾಡಿದೆ.&lt;/p&gt;&lt;p&gt;ಆಗಸ್ಟ್ 5 ರಂದು ಥಾಯ್ಲೆಂಡ್&zwnj;ನ ಫುಕೆಟ್&zwnj;ನಿಂದ ದೆಹಲಿಗೆ ಹೊರಟಿದ್ದ ಏರ್&zwnj; ಇಂಡಿಯಾ ವಿಮಾನ (AI-2379) ದೆಹಲಿ ತಲುಪುವ ವೇಳೆಗೆ, ಬೆಳಗಿನ ಜಾವ 10:00 ಗಂಟೆಯ ಸುಮಾರಿಗೆ ದಿಢೀರ್ ಎಂದು ತೀವ್ರ ಕುಲುಕಾಟಕ್ಕೆ ಒಳಗಾಯಿತು. ಈ ವೇಳೆ ವಿಮಾನವು ಸುಮಾರು 5 ನಿಮಿಷಗಳ ಕಾಲ ನಿಯಂತ್ರಣ ತಪ್ಪಿ ಏಕಾಏಕಿ 300 ಅಡಿಗಳಷ್ಟು ಕೆಳಕ್ಕೆ ಕುಸಿಯಿತು. ವಿಮಾನದಲ್ಲಿದ್ದ 134ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಸೇರಿ ಒಟ್ಟು 142 ಜನರ ಪೈಕಿ, 4 ಕ್ರೂ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದರು.&lt;/p&gt;&lt;h2&gt;ಪ್ರಯಾಣಿಕರ ಭೀಕರ ಅನುಭವ&lt;/h2&gt;&lt;p&gt;ವಿಮಾನದಲ್ಲಿದ್ದ ಪ್ರಯಾಣಿಕರ ಪ್ರಕಾರ, ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ವಿಮಾನವು ಕೆಳಕ್ಕೆ ಕುಸಿದಿದ್ದರಿಂದ ಸೀಟ್ ಬೆಲ್ಟ್ ಧರಿಸದಿರುತ್ತಿದ್ದ ಹಲವು ಪ್ರಯಾಣಿಕರು ಆಸನಗಳಿಂದ ಕೆಳಗೆ ಬಿದ್ದರು. ಕೆಲವರ ತಲೆ ವಿಮಾನದ ಮೇಲ್ಭಾಗದ ಸೀಲಿಂಗ್&zwnj;ಗೆ ಗಟ್ಟಿಯಾಗಿ ಡಿಕ್ಕಿ ಹೊಡೆದರೆ, ಇನ್ನು ಕೆಲವರು ವಿಮಾನದ ನೆಲದ ಮೇಲೆ ಉರುಳಿಬಿದ್ದರು. ಈ ಘಟನೆಯು ಪ್ರಯಾಣಿಕರಲ್ಲಿ ತೀವ್ರ ಆತಂಕ ಹಾಗೂ ಭೀತಿಯ ವಾತಾವರಣವನ್ನು ಸೃಷ್ಟಿಸಿತ್ತು. ಈ ಎಲ್ಲಾ ಆತಂಕಗಳ ನಡುವೆಯೂ ವಿಮಾನವು ಬೆಳಿಗ್ಗೆ 11:30 ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸಲಾಯಿತು.&lt;/p&gt;&lt;h2&gt;ಡೋಪ್&zwnj; ಪರೀಕ್ಷೆಯಲ್ಲಿ ಪೈಲಟ್&zwnj; ಫೇಲ್: ಇಬ್ಬರ ಅಮಾನತು&lt;/h2&gt;&lt;p&gt;ವಿಮಾನ ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿದ ನಂತರ, ನಿಗದಿತ ನಿಯಮಾವಳಿಗಳಂತೆ (ಪ್ರೋಟೋಕಾಲ್) ವಿಮಾನದಲ್ಲಿದ್ದ ಇಬ್ಬರೂ ಪೈಲಟ್&zwnj;ಗಳನ್ನು 'ಡೋಪ್ ಪರೀಕ್ಷೆಗೆ' (ಮಾದಕದ್ರವ್ಯ ಸೇವನೆ ಪರೀಕ್ಷೆ) ಒಳಪಡಿಸಲಾಯಿತು. ಈ ವರದಿಯಲ್ಲಿ ಇಬ್ಬರು ಪೈಲಟ್&zwnj;ಗಳ ಪೈಕಿ ಮುಖ್ಯ ಪೈಲಟ್/ಕಾಕ್&zwnj;ಪಿಟ್ ಸಿಬ್ಬಂದಿಯೊಬ್ಬರು ನಿಷೇಧಿತ ಮಾದಕ ವಸ್ತುವನ್ನು ಸೇವಿಸಿರುವುದು ದೃಢಪಟ್ಟಿದೆ. ವಿಮಾನಯಾನ ಭದ್ರತಾ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಕ್ಷಣವೇ ಕ್ರಮ ಕೈಗೊಂಡು ಘಟನೆಯಲ್ಲಿದ್ದ ಇಬ್ಬರೂ ಪೈಲಟ್&zwnj;ಗಳನ್ನು ಅಮಾನತುಗೊಳಿಸಿದೆ.&lt;/p&gt;&lt;h2&gt;ಡಿಜಿಸಿಎ ತನಿಖೆ ಹಾಗೂ ಏರ್&zwnj; ಇಂಡಿಯಾ ಸ್ಪಷ್ಟನೆ&lt;/h2&gt;&lt;p&gt;ಇದೇ ವೇಳೆ, ಇದ್ದಕ್ಕಿದ್ದಂತೆ ವಿಮಾನದ ಎತ್ತರ ಕುಸಿತವಾದ ಕಾರಣ ಪತ್ತೆಗೆ ತನಿಖೆಯನ್ನು ದೇಶದ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆಯಾಗಿರುವ ಡಿಜಿಸಿಎ ಕೈಗೆತ್ತಿಕೊಂಡಿದೆ. ಇದರ ತನಿಖೆಯ ವರದಿ ಬಂದ ನಂತರ ಈ ಪ್ರಕರಣವನ್ನು ವಿಮಾನ ಅಪಘಾತ ತನಿಖಾ ಸಂಸ್ಥೆಗೆ (AAIB) ವಹಿಸಬೇಕೇ ಬೇಡವೇ ಎಂಬ ನಿರ್ಧಾರವನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಪೈಲಟ್&zwnj;ಗಳು ಅಮಾನತಿನಲ್ಲಿರಲಿದ್ದಾರೆಂದು ತಿಳಿಸಿದೆ.&lt;/p&gt;&lt;p&gt;ಏರ್&zwnj; ಇಂಡಿಯಾ ಪ್ರತಿಕ್ರಿಯೆ: ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಏರ್&zwnj; ಇಂಡಿಯಾ, &quot;ನಿಯಮಾವಳಿಗಳ ಪ್ರಕಾರ ಪ್ರತಿಯೊಂದು ಹಾರಾಟಕ್ಕೂ ಮುನ್ನ ಸಿಬ್ಬಂದಿಯ ವೈದ್ಯಕೀಯ ಮತ್ತು ಡ್ರಗ್ಸ್&zwnj; ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ, ಈ ನಿರ್ದಿಷ್ಟ ಪ್ರಕರಣದ ಅಧಿಕೃತ ಡೋಪ್ ಪರೀಕ್ಷೆಯ ವರದಿ ನಮಗೆ ಇನ್ನೂ ಪೂರ್ಣವಾಗಿ ಲಭ್ಯವಾಗಿಲ್ಲ. ತನಿಖಾಧಿಕಾರಿಗಳ ಜತೆ ಸಂಪೂರ್ಣ ಸಹಕಾರ ನೀಡಲಾಗುವುದು&quot; ಎಂದು ತಿಳಿಸಿದೆ.&lt;/p&gt;&lt;h2&gt;ಟರ್ಬುಲೆನ್ಸ್&zwnj;ಗೆ ಕಾರಣವೇನು?&lt;/h2&gt;&lt;p&gt;ಸಾಮಾನ್ಯವಾಗಿ ಹಾರಾಟದ ಸಮಯದಲ್ಲಿ ಗಾಳಿಯ ಒತ್ತಡದಲ್ಲಾಗುವ ದಿಢೀರ್ ವ್ಯತ್ಯಾಸ, ಉಷ್ಣಾಂಶದ ಏರಿಳಿತ ಅಥವಾ ಗಾಳಿಯ ಚಲನೆಯ ದಿಕ್ಕು ಬದಲಾಗುವುದರಿಂದ ವಿಮಾನಗಳಲ್ಲಿ ಇಂತಹ ತೀವ್ರ ಕುಲುಕಾಟ (Turbulence) ಮತ್ತು ಎತ್ತರ ಕುಸಿತದ ಘಟನೆಗಳು ಸಂಭವಿಸುತ್ತವೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/air-india-flight-drops-300-feet-due-to-turbulence-pilot-fails-drug-test-dgca-suspends-crew-gdp/articleshow-tom6ti2"/>
        </item>
        <item>
            <title><![CDATA[ದಂತಕಥೆಯನ್ನೇ ಬಲಿಪಡೆದ ಸಾವಿನ ಶಿಖರ, ಖ್ಯಾತ ಪರ್ವತಾರೋಹಿ ನಿರ್ಮಲ್ ಸೇರಿ ನಾಲ್ವರು ಸಾವು; 6 ಮಂದಿ ನಾಪತ್ತೆ!]]></title>
            <link>https://kannada.asianetnews.com/world-news/who-is-nirmal-purja-mountaineering-legend-among-four-dead-in-tragic-broad-peak-avalanche-gdp/articleshow-ue1s7bv</link>
            <guid isPermaLink="true">https://kannada.asianetnews.com/world-news/who-is-nirmal-purja-mountaineering-legend-among-four-dead-in-tragic-broad-peak-avalanche-gdp/articleshow-ue1s7bv</guid>
            <pubDate>Sat, 01 Aug 2026 19:08:41 +0530</pubDate>
            <description><![CDATA[ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬ್ರಾಡ್ ಪೀಕ್ ಪರ್ವತದಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ, ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಈ ಲೇಖನವು ವಿಶ್ವದ 12ನೇ ಅತಿ ಎತ್ತರದ ಶಿಖರವಾದ ಬ್ರಾಡ್ ಪೀಕ್&zwnj;ನ ಹಿನ್ನೆಲೆ, ಅದರ ಅಪಾಯಗಳು ಮತ್ತು ಈ ದುರಂತದಲ್ಲಿ ಮಡಿದ 'ನಿಮ್ಸ್&zwnj;ದೈ' ಅವರ ಸಾಧನೆಗಳ ಬಗ್ಗೆ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyvd9zvg1926m54581veemyf,imgname-who-is-nirmal-purja-1785478840176.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಸ್ಲಾಮಾಬಾದ್: &lt;/strong&gt;ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಕರಕೋರಂ ಶ್ರೇಣಿಯಲ್ಲಿರುವ ಜಗತ್ಪ್ರಸಿದ್ಧ 'ಬ್ರಾಡ್ ಪೀಕ್' (Broad Peak) ಪರ್ವತದಲ್ಲಿ ಗುರುವಾರ ಸಂಭವಿಸಿದ ಭೀಕರ ಹಿಮಪಾತದಲ್ಲಿ ನೇಪಾಳದ ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ (ನಿಮ್ಸ್&zwnj;ದೈ) ಸೇರಿದಂತೆ ನಾಲ್ವರು ದುರಂತ ಅಂತ್ಯ ಕಂಡಿದ್ದಾರೆ. ಪರ್ವತಾರೋಹಿಗಳ ತಂಡವನ್ನು ಮುನ್ನಡೆಸುತ್ತಿದ್ದ ನಿರ್ಮಲ್ ಪುರ್ಜಾ ಅವರು ಹಿಮಪಾತದಲ್ಲಿ ಮೃತಪಟ್ಟಿರುವುದನ್ನು ಅವರ ಅಧಿಕೃತ ಕಂಪನಿಯು ಇನ್&zwnj;ಸ್ಟಾಗ್ರಾಮ್ ಪ್ರಕಟಣೆಯಲ್ಲಿ ಖಚಿತಪಡಿಸಿದೆ.&lt;/p&gt;&lt;p&gt;ಹಿಮಪಾತದ ವೇಳೆ ಒಟ್ಟು 10 ಪರ್ವತಾರೋಹಿಗಳು ನಾಪತ್ತೆಯಾಗಿದ್ದರು. ತೀವ್ರ ಹವಾಮಾನ ವೈಪರೀತ್ಯದ ನಡುವೆಯೂ ಕಾರ್ಯಾಚರಣೆ ನಡೆಸಿರುವ ರಕ್ಷಣಾ ಸಿಬ್ಬಂದಿ ಇದುವರೆಗೆ ನಾಲ್ಕು ಶವಗಳನ್ನು ಹೊರತೆಗೆದಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸರ್ಕಾರವು ಮೃತಪಟ್ಟವರಲ್ಲಿ ಮೂವರನ್ನು ಗುರುತಿಸಿದ್ದು, ನೇಪಾಳದ ಪರ್ವತಾರೋಹಿ ಪುರ್ ಬಹದ್ದೂರ್ ಗುರುಂಗ್, ಒಮನ್ ದೇಶದ ನಾತಿರಾ ಅಹ್ಮದ್ ಮತ್ತು ಅಮೆರಿಕದ ಮಲ್ಲೊರಿ ಗೀಸ್ ಎಂದು ತಿಳಿಸಿದೆ. ಉಳಿದ ಆರು ಪರ್ವತಾರೋಹಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.&lt;/p&gt;&lt;h2&gt;ಏನಿದು ಬ್ರಾಡ್ ಪೀಕ್? ಜಗತ್ತಿನ 12ನೇ ಅತಿ ಎತ್ತರದ ಶಿಖರದ ಹಿನ್ನೆಲೆ&lt;/h2&gt;&lt;p&gt;ವಿಶ್ವದ ಅತ್ಯಂತ ಕಠಿಣ ಹಾಗೂ ತಾಂತ್ರಿಕವಾಗಿ ತೀವ್ರ ಸವಾಲೊಡ್ಡುವ ಶಿಖರಗಳ ಸಾಲಿನಲ್ಲಿ ಬ್ರಾಡ್ ಪೀಕ್ ಮುಂಚೂಣಿಯಲ್ಲಿದೆ. ಭೂಮಿಯ ಮೇಲಿನ ಈ ವಿಶಿಷ್ಟ ಪರ್ವತದ ಪ್ರಮುಖ ಸಂಗತಿಗಳು ಇಲ್ಲಿವೆ.&lt;/p&gt;&lt;h2&gt;ವಿಶ್ವದ 12ನೇ ಅತಿ ಎತ್ತರದ ಶಿಖರ&lt;/h2&gt;&lt;p&gt;ಸಮುದ್ರ ಮಟ್ಟದಿಂದ ಬರೋಬ್ಬರಿ 8,051 ಮೀಟರ್ (26,414 ಅಡಿ) ಎತ್ತರದಲ್ಲಿರುವ ಬ್ರಾಡ್ ಪೀಕ್, ಜಗತ್ತಿನಲ್ಲಿ 8,000 ಮೀಟರ್&zwnj;ಗಿಂತಲೂ ಎತ್ತರವಿರುವ ಕೇವಲ 14 ಶಿಖರಗಳ (ಎಂಟು ಸಾವಿರದ ಶಿಖರಗಳು) ಪಟ್ಟಿಗೆ ಸೇರುತ್ತದೆ.&lt;/p&gt;&lt;h2&gt;ಸ್ಥಳ ಮತ್ತು ಭೌಗೋಳಿಕತೆ&lt;/h2&gt;&lt;p&gt;ಇದು PoK ಮತ್ತು ಚೀನಾದ ಕ್ಸಿನ್&zwnj;ಜಿಯಾಂಗ್ ಗಡಿಯಲ್ಲಿರುವ ಕರಕೋರಂ ಶ್ರೇಣಿಯಲ್ಲಿದೆ. ಜಗತ್ತಿನ ಎರಡನೇ ಅತಿ ಎತ್ತರದ ಶಿಖರವಾದ 'ಕೆ2' (K2) ನಿಂದ ಇದು ಕೇವಲ 8 ಕಿಲೋಮೀಟರ್ ಆಗ್ನೇಯದಲ್ಲಿದೆ. ಇಂಡೋ-ಆಸ್ಟ್ರೇಲಿಯನ್ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್&zwnj;ಗಳ ನಿರಂತರ ಘರ್ಷಣೆಯಿಂದ ರೂಪುಗೊಂಡ ಈ ಪರ್ವತವು ಬೃಹತ್ ಗ್ರಾನೈಟ್ ಬ್ಲಾಕ್&zwnj;ಗಳು ಹಾಗೂ ಮೆಟಮಾರ್ಫಿಕ್ ಬಂಡೆಗಳ ಪದರಗಳನ್ನು ಹೊಂದಿದೆ. ಇದರ ಹಿಮದ ಮಂಜುಗಡ್ಡೆಗಳು ಗಾಡ್ವಿನ್-ಆಸ್ಟೆನ್ ಮತ್ತು ಬಾಲ್ಟೋರೊ ಹಿಮನದಿಗಳಿಗೆ ನೀರುಣಿಸುತ್ತವೆ.&lt;/p&gt;&lt;p&gt;ಸ್ಥಳೀಯ ಬಾಲ್ಟಿ ಭಾಷೆಯಲ್ಲಿ ಈ ಪರ್ವತವನ್ನು ಐತಿಹಾಸಿಕವಾಗಿ 'ಫಾಲ್ಚನ್ ಕಾಂಗ್ರಿ' ಎಂದು ಕರೆಯಲಾಗುತ್ತದೆ. ಇದರ ಅರ್ಥ &quot;ವಿಶಾಲ ಪರ್ವತ&quot; (Broad Mountain) ಎಂದಾಗಿದೆ. 1892 ರಲ್ಲಿ ಬ್ರಿಟಿಷ್ ಪರಿಶೋಧಕ ಸರ್ ಮಾರ್ಟಿನ್ ಕಾನ್ವೇ ಅವರು ಪರ್ವತದ 1.5 ಕಿಲೋಮೀಟರ್&zwnj;ಗಿಂತಲೂ ಉದ್ದವಿರುವ ಶಿಖರದ ರೇಖೆಯನ್ನು ಸ್ವಿಸ್ ಆಲ್ಪ್ಸ್&zwnj;ನ 'ಬ್ರೈಥಾರ್ನ್' ಪರ್ವತಕ್ಕೆ ಹೋಲಿಸಿ ಇದಕ್ಕೆ 'ಬ್ರಾಡ್ ಪೀಕ್' ಎಂದು ಹೆಸರಿಟ್ಟರು. ಇದು ಒಟ್ಟು ಐದು ಶಿಖರಗಳ ರಚನೆಯನ್ನು ಹೊಂದಿದ್ದು, ಅದರಲ್ಲಿ ಮುಖ್ಯ ಶಿಖರ (8,051 ಮೀ), ಕಲ್ಲಿನ ಶಿಖರ (8,028 ಮೀ) ಮತ್ತು ಮಧ್ಯ ಶಿಖರ (8,011 ಮೀ) ಸೇರಿ ಮೂರು ಶಿಖರಗಳು 8,000 ಮೀಟರ್&zwnj;ಗಿಂತಲೂ ಎತ್ತರವಾಗಿವೆ.&lt;/p&gt;&lt;h2&gt;ಸಾವಿನ ಬಲೆಯಾಗುವ ಅಪಾಯಗಳು&lt;/h2&gt;&lt;p&gt;ಬ್ರಾಡ್ ಪೀಕ್ ಅನ್ನು ಸಾಮಾನ್ಯವಾಗಿ 8,000 ಮೀಟರ್ ಎತ್ತರದ ಇತರ ಪರ್ವತಗಳಿಗೆ ಹೋಲಿಸಿದರೆ ಸುಲಭವಾಗಿ ಏರಬಹುದಾದ ಶಿಖರ ಎಂದು ಪರಿಗಣಿಸಲಾಗುತ್ತದೆ. ನೆರೆಯ 'ಕೆ2' ಪರ್ವತಕ್ಕೆ ಹೋಲಿಸಿದರೆ ಇಲ್ಲಿ ಯಶಸ್ಸಿನ ಪ್ರಮಾಣ ಹೆಚ್ಚಿರುವುದರಿಂದ ಇದು ಪರ್ವತಾರೋಹಿಗಳ ನೆಚ್ಚಿನ ತರಬೇತಿ ಕೇಂದ್ರವೂ ಹೌದು. ಆದರೆ, ಇದರ 1.5 ಕಿಮೀ ಉದ್ದದ ಶಿಖರದ ತುದಿಯು ಆರೋಹಿಗಳನ್ನು ದೀರ್ಘಕಾಲದವರೆಗೆ ಅತ್ಯಂತ ಘಾತಕ ಹವಾಮಾನಕ್ಕೆ ಒಡ್ಡುತ್ತದೆ.&lt;/p&gt;&lt;p&gt;ವಿಶೇಷವಾಗಿ ಕ್ಯಾಂಪ್ 2 ಮತ್ತು ಕ್ಯಾಂಪ್ 3 ರ ನಡುವಿನ ಇಳಿಜಾರುಗಳು ಭೀಕರ ಹಿಮಪಾತಕ್ಕೆ (Slab Avalanche) ತುತ್ತಾಗುತ್ತವೆ. ಈ ಹಿಂದೆ 2003 ರ ಜುಲೈ 21 ರಂದು ಸಂಭವಿಸಿದ ಹಿಮಪಾತವು ದಕ್ಷಿಣ ಕೊರಿಯಾದ ಮೂವರು ಪರ್ವತಾರೋಹಿಗಳನ್ನು ಬಲಿಪಡೆದಿತ್ತು. ಹಾಗೆಯೇ 2015 ರ ಜುಲೈ 20 ರಂದು ಉಷ್ಣಾಂಶ ಏರಿಕೆಯಿಂದ ಸಂಭವಿಸಿದ ಹಿಮಪಾತಕ್ಕೆ ಪಾಕಿಸ್ತಾನದ ಹೈ-ಆಲ್ಟಿಟ್ಯೂಡ್ ಪೋರ್ಟರ್ ಒಬ್ಬರು ಪ್ರಾಣ ಕಳೆದುಕೊಂಡಿದ್ದರು.&lt;/p&gt;&lt;h2&gt;ಮೊದಲ ಆರೋಹಣದ ಇತಿಹಾಸ&lt;/h2&gt;&lt;p&gt;1957 ರ ಜೂನ್ 8 ಮತ್ತು 9 ರ ನಡುವೆ ಫ್ರಿಟ್ಜ್ ವಿಂಟರ್&zwnj;ಸ್ಟೆಲ್ಲರ್, ಮಾರ್ಕಸ್ ಷ್ಮಕ್, ಕರ್ಟ್ ಡೈಂಬರ್ಗರ್ ಮತ್ತು ಹರ್ಮನ್ ಬುಹ್ಲ್ ಅವರನ್ನೊಳಗೊಂಡ ನಾಲ್ಕು ಜನರ ಆಸ್ಟ್ರಿಯನ್ ದಂಡಯಾತ್ರೆಯು ಯಾವುದೇ ಪೂರಕ ಆಮ್ಲಜನಕ (Oxygen Cylinder), ಎತ್ತರದ ಪೋರ್ಟರ್&zwnj;ಗಳು ಅಥವಾ ಸ್ಥಿರ ಶಿಬಿರಗಳ ಸಹಾಯವಿಲ್ಲದೆ ಮೊದಲ ಬಾರಿಗೆ ಬ್ರಾಡ್ ಪೀಕ್ ಅನ್ನು ಯಶಸ್ವಿಯಾಗಿ ಏರಿ ಇತಿಹಾಸ ಸೃಷ್ಟಿಸಿತ್ತು. ಜಗತ್ತಿನ ಎಲ್ಲಾ 14 ಪ್ರಮುಖ ಶಿಖರಗಳನ್ನು ಏರಬಯಸುವ ಪರ್ವತಾರೋಹಿಗಳಿಗೆ ಬ್ರಾಡ್ ಪೀಕ್ ಸಾಧನೆಯ ಅತಿ ಮುಖ್ಯ ಮೈಲಿಗಲ್ಲಾಗಿದೆ.&lt;/p&gt;&lt;h2&gt;ದಾಖಲೆಗಳ ವೀರ 'ನಿಮ್ಸ್&zwnj;ದೈ' ನಿರ್ಮಲ್ ಪುರ್ಜಾ&lt;/h2&gt;&lt;p&gt;ಈ ದುರಂತದಲ್ಲಿ ಕಣ್ಮರೆಯಾದ ನೇಪಾಳದ ನಿರ್ಮಲ್ ಪುರ್ಜಾ ಪರ್ವತಾರೋಹಣ ಲೋಕದ ದಂತಕಥೆಯಾಗಿದ್ದರು. ಅವರು ಈ ಹಿಂದೆ ಎರಡು ಬಾರಿ ಬ್ರಾಡ್ ಪೀಕ್ ಅನ್ನು ಯಶಸ್ವಿಯಾಗಿ ಏರಿದ್ದರು.&lt;/p&gt;&lt;p&gt;&lt;strong&gt;ಪ್ರಾಜೆಕ್ಟ್ ಪಾಸಿಬಲ್ (2019): &lt;/strong&gt;ಪೂರಕ ಆಮ್ಲಜನಕದ ನೆರವಿನೊಂದಿಗೆ ವಿಶ್ವದ ಎಲ್ಲಾ 14 ಎತ್ತರದ ಶಿಖರಗಳನ್ನು ಕೇವಲ 6 ತಿಂಗಳು 6 ದಿನಗಳಲ್ಲಿ ಏರಿ, 8 ವರ್ಷಗಳ ಹಳೆಯ ಜಾಗತಿಕ ದಾಖಲೆಯನ್ನು ಮುರಿದಿದ್ದರು.&lt;/p&gt;&lt;p&gt;&lt;strong&gt;ಆಮ್ಲಜನಕ ರಹಿತ ದಾಖಲೆ (2024):&lt;/strong&gt; ನಂತರ ಪೂರಕ ಆಮ್ಲಜನಕದ ನೆರವಿಲ್ಲದೆಯೇ ಅದೇ 14 ಶಿಖರಗಳನ್ನು ಕೇವಲ 2 ವರ್ಷ 5 ತಿಂಗಳುಗಳಲ್ಲಿ ಅತ್ಯಂತ ವೇಗವಾಗಿ ಏರಿ ಜಗತ್ತಿನ ಏಕೈಕ ಪರ್ವತಾರೋಹಿಯಾಗಿ ಅಪ್ರತಿಮ ಸಾಧನೆ ಮಾಡಿದ್ದರು.&lt;/p&gt;&lt;p&gt;ಅಂತಹ ಸಾಹಸಿ ಪರ್ವತಾರೋಹಿ ಇಂದು ಅದೇ ಬ್ರಾಡ್ ಪೀಕ್&zwnj;ನ ಹಿಮಪಾತಕ್ಕೆ ಬಲಿಯಾಗಿರುವುದು ಜಾಗತಿಕ ಪರ್ವತಾರೋಹಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/world-news/who-is-nirmal-purja-mountaineering-legend-among-four-dead-in-tragic-broad-peak-avalanche-gdp/articleshow-ue1s7bv"/>
        </item>
        <item>
            <title><![CDATA['ಹೋಟೆಲ್ ರೂಮಿನಲ್ಲಿ ಬೆಳ್ಳಗಿರೋದೆಲ್ಲಾ ಹಾಲಲ್ಲ'; ಹೊಳೆಯುವ ವಸ್ತುಗಳ ಹಿಂದಿರುವ ಅಪಾಯಗಳನ್ನು ಪರಿಶೀಲಿಸಿ!]]></title>
            <link>https://kannada.asianetnews.com/gallery/travel/hotel-room-cleanliness-tips-hidden-germs-bed-runner-tv-remote-safety-vfr8qid</link>
            <guid isPermaLink="true">https://kannada.asianetnews.com/gallery/travel/hotel-room-cleanliness-tips-hidden-germs-bed-runner-tv-remote-safety-vfr8qid</guid>
            <pubDate>Sun, 02 Aug 2026 16:44:08 +0530</pubDate>
            <description><![CDATA[&lt;p&gt;ಹೋಟೆಲ್ ರೂಮಿನೊಗಳಗೆ ಹೋಗುತ್ತಿದ್ದಂತೆ ಎಲ್ಲವೂ ಸ್ವಚ್ಛವಾಗಿ, ಹಾಸಿಗೆ ಬೆಳ್ಳಗೆ ಹೊಳೆಯುತ್ತಿರುತ್ತದೆ. ಆದರೆ, ಹೋಟೆಲ್ ರೂಮಿನಲ್ಲಿ ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಈ ವಸ್ತುಗಳ ಬಗ್ಗೆ ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ. ಏನದು ಈ ಲೇಖನದಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz12d78d4x8js8ja6jqkctrf,imgname-hotel-room-must-check-1785668738317.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೋಟೆಲ್ ರೂಮಿನೊಗಳಗೆ ಹೋಗುತ್ತಿದ್ದಂತೆ ಎಲ್ಲವೂ ಸ್ವಚ್ಛವಾಗಿ, ಹಾಸಿಗೆ ಬೆಳ್ಳಗೆ ಹೊಳೆಯುತ್ತಿರುತ್ತದೆ. ಆದರೆ, ಹೋಟೆಲ್ ರೂಮಿನಲ್ಲಿ ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಈ ವಸ್ತುಗಳ ಬಗ್ಗೆ ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ. ಏನದು ಈ ಲೇಖನದಲ್ಲಿ ತಿಳಿಯಿರಿ.&lt;/p&gt;&lt;img&gt;&lt;p&gt;ಹೋಟೆಲ್&zwnj; (Hotel)ಗೆ ಹೋದಾಗ ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂಬುದನ್ನು ಜ್ಞಾಪಕ ಮಾಡಿಕೊಳ್ಳಲೇಬೇಕು. ಹೋಟೆಲ್&zwnj; (Hotel) ಕೋಣೆಯ (Room) ಒಳಗೆ ಹೆಜ್ಜೆ ಇಡುವ ಮೊದಲೇ ನಿಮಗೆ ಫಳ-ಫಳ ಬೆಳ್ಳಗೆ ಹೊಳೆಯುವ ಬೆಡ್&zwnj; ಕವರ್&zwnj; (Bed Cover) ಹಾಗೂ ಅದಕ್ಕೆ ಜೋಡಿಸಿಟ್ಟ ಬೆಡ್&zwnj; ರನ್ನರ್&zwnj; (Bed Runner)ಗಳು ಆಕರ್ಷಿಸಬಹುದು.&lt;/p&gt;&lt;p&gt;ಆದರೆ ಅದಕ್ಕೂ ಮುನ್ನ ಹೆಜ್ಜೆ ಹೆಜ್ಜೆಗೂ ಇರುವ ಆರೋಗ್ಯದ (Health) ಅಪಾಯಗಳನ್ನು (Risk) ನೀವು ಗಮನಿಸಲೇಬೇಕು. ಇಲ್ಲವಾದಲ್ಲಿ ಸೋಂಕು (Infection) ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಕಾಡುವುದು ಗ್ಯಾರಂಟಿ. ಹಾಗಾದರೆ ಯಾವೆಲ್ಲಾ ಎಚ್ಚರಿಕೆ (Precautions) ವಹಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ನೀವು ಕೆಲ ಹೋಟೆಲ್&zwnj; (Hotel) ಕೋಣೆಗಳಿಗೆ (Room) ಹೋದಾಗ ಅಲ್ಲಿನ ಸ್ನಾನಗೃಹ (Bathroom) ಅಥವಾ ಶೌಚಾಲಯ (Toilet)ವೇ ಅತ್ಯಂತ ಕೊಳಕು ಸ್ಥಳ ಎಂದು ಭಾವಿಸಬಹುದು. ಆದರೆ ಸ್ವಚ್ಛತಾ (Hygiene) ತಜ್ಞರ ಪ್ರಕಾರ, ಹೋಟೆಲ್&zwnj; ಶೌಚಾಲಯದ ಸೀಟಿಗಿಂತಲೂ ಕೋಣೆಯಲ್ಲಿರುವ ಕೆಲವು ವಸ್ತುಗಳಲ್ಲಿ ಹೆಚ್ಚು ಸೂಕ್ಷ್ಮಜೀವಿಗಳು (Germs), ಬ್ಯಾಕ್ಟೀರಿಯಾ (Bacteria) ಹಾಗೂ ವೈರಸ್&zwnj;ಗಳು (Virus) ಇರಬಹುದು.&lt;/p&gt;&lt;img&gt;&lt;p&gt;&lt;strong&gt;ಬಾಗಿಲಿನ ಹಿಡಿಕೆಗಳು (Door Handles):&lt;/strong&gt; ಮುಖ್ಯ ಬಾಗಿಲು (Main Door), ಸ್ನಾನಗೃಹದ (Bathroom) ಬಾಗಿಲು ಅಥವಾ ಕಪಾಟಿನ (Cupboard) ಹಿಡಿಕೆಗಳನ್ನು ಪ್ರತಿದಿನ ಅನೇಕ ಅತಿಥಿಗಳು (Guests) ಮುಟ್ಟುತ್ತಾರೆ. ಹೀಗಾಗಿ ಇವು ಸೂಕ್ಷ್ಮಜೀವಿಗಳ (Germs) ಸಂತಾನೋತ್ಪತ್ತಿಯ ತಾಣವಾಗಿರಬಹುದು. ಆದ್ದರಿಂದ ಕೋಣೆಗೆ (Room) ಪ್ರವೇಶಿಸಿದ ತಕ್ಷಣ ಕೈಗಳನ್ನು ಸ್ಯಾನಿಟೈಸ್&zwnj; (Sanitize) ಮಾಡುವುದು ಉತ್ತಮ.&lt;/p&gt;&lt;img&gt;&lt;p&gt;&lt;strong&gt;ಲೈಟ್&zwnj; (Light) ಮತ್ತು ಫ್ಯಾನ್&zwnj; (Fan) ಸ್ವಿಚ್&zwnj;ಗಳು (Switches): &lt;/strong&gt;ಅತಿಥಿಗಳು (Guests) ಕೋಣೆಗೆ (Room) ಪ್ರವೇಶಿಸಿದ ತಕ್ಷಣ ಮೊದಲು ಮುಟ್ಟುವ ವಸ್ತುಗಳೇ ಲೈಟ್&zwnj; ಸ್ವಿಚ್&zwnj;ಗಳು (Light Switches). ಇವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಬ್ಯಾಕ್ಟೀರಿಯಾ (Bacteria) ಮತ್ತು ವೈರಸ್&zwnj;ಗಳು (Virus) ಸುಲಭವಾಗಿ ಹರಡಬಹುದು. ಹೆಚ್ಚು ಕೊಳಕಾಗಿದ್ದರೆ ಹೋಟೆಲ್&zwnj; ಸಿಬ್ಬಂದಿಗೆ ತಿಳಿಸಿ ಸ್ಯಾನಿಟೈಸ್&zwnj; (Sanitize) ಮಾಡಿಸಿ.&lt;/p&gt;&lt;img&gt;&lt;p&gt;&lt;strong&gt;ಟಿವಿ ರಿಮೋಟ್&zwnj; (TV Remote): &lt;/strong&gt;ಹೋಟೆಲ್&zwnj; (Hotel) ಕೋಣೆಗಳಲ್ಲಿ ಅತ್ಯಂತ ಹೆಚ್ಚು ಸೂಕ್ಷ್ಮಜೀವಿಗಳು (Germs) ಇರುವ ವಸ್ತುಗಳಲ್ಲಿ ಟಿವಿ ರಿಮೋಟ್&zwnj; (TV Remote) ಪ್ರಮುಖವಾಗಿದೆ. ಬಹುತೇಕ ಅತಿಥಿಗಳು ಇದನ್ನು ಬಳಸುತ್ತಾರೆ. ಆದರೆ ಪ್ರತಿಯೊಬ್ಬ ಅತಿಥಿ (Guest) ಚೆಕ್&zwnj;ಔಟ್&zwnj; (Check-out) ಆದ ನಂತರ ಇದನ್ನು ಸ್ಯಾನಿಟೈಸ್&zwnj; (Sanitize) ಮಾಡಲಾಗುತ್ತದೆ ಎಂಬ ಖಾತರಿ ಇರುವುದಿಲ್ಲ.&lt;/p&gt;&lt;img&gt;&lt;p&gt;&lt;strong&gt;ಕಾಫಿ ಮೇಕರ್&zwnj; (Coffee Maker) ಅಥವಾ ಕೆಟಲ್&zwnj; (Kettle): &lt;/strong&gt;ಹೋಟೆಲ್&zwnj; ಕೋಣೆಯಲ್ಲಿರುವ ಕೆಟಲ್&zwnj; (Kettle) ಅಥವಾ ಕಾಫಿ ಮೇಕರ್&zwnj; (Coffee Maker) ಬಳಸುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯುವುದು ಉತ್ತಮ. ಕಪ್&zwnj; (Cup) ಮತ್ತು ಗ್ಲಾಸ್&zwnj; (Glass)&zwnj;ಗಳಂತೆ ಇವುಗಳನ್ನು ಪ್ರತಿಸಾರಿ ಡೀಪ್&zwnj; ಕ್ಲೀನ್&zwnj; (Deep Clean) ಮಾಡದೇ ಇರಬಹುದು. ಸ್ವಚ್ಛಗೊಳಿಸದೇ ಬಳಸಿದರೆ ಆರೋಗ್ಯ (Health) ಸಮಸ್ಯೆಗಳು ಎದುರಾಗಬಹುದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಹೋಟೆಲ್ ರೂಂಗೆ ಹೋದ್ಮೇಲೆ ಬೆಡ್ ಕೆಳಗೆ ವಾಟರ್ ಬಾಟಲ್ ಎಸೆಯಿರಿ! ಶೇ.99 ರಷ್ಟು ಜನ್ರು ಈ ಸುರಕ್ಷತಾ ಟ್ರಿಕ್ ಮರಿತಾರೆ&lt;/p&gt;&lt;img&gt;&lt;p&gt;&lt;strong&gt;ಬೆಡ್&zwnj; ರನ್ನರ್&zwnj;ಗಳು (Bed Runners) ಮತ್ತು ದಿಂಬುಗಳು (Pillows):&lt;/strong&gt; ಹೋಟೆಲ್&zwnj; (Hotel) ರೂಮ್&zwnj; (Room)ಗಳಲ್ಲಿ ಪ್ರತಿ ಅತಿಥಿ (Guest) ಚೆಕ್&zwnj;ಔಟ್&zwnj; (Check-out) ಆದ ನಂತರ ಬಿಳಿ ಬೆಡ್&zwnj;ಶೀಟ್&zwnj; (Bed Sheet) ಮಾತ್ರ ಬದಲಿಸಲಾಗುತ್ತದೆ. ಆದರೆ ಅಲಂಕಾರಿಕ ದಿಂಬುಗಳು (Decorative Pillows) ಮತ್ತು ಬೆಡ್&zwnj; ರನ್ನರ್&zwnj;ಗಳು (Bed Runners) ಪ್ರತಿಬಾರಿಯೂ ತೊಳೆಯಲಾಗುವುದಿಲ್ಲ. ಆದ್ದರಿಂದ ಇವುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಿ ಹಾಗೂ ಸ್ವಚ್ಛತೆಗೆ (Hygiene) ಆದ್ಯತೆ ನೀಡಿ.&lt;/p&gt;&lt;img&gt;&lt;p&gt;&lt;strong&gt;ಸ್ನಾನಗೃಹದ (Bathroom) ಸೋಪು (Soap) ಇಡುವ ಜಾಗಗಳು: &lt;/strong&gt;ಸ್ನಾನಗೃಹ (Bathroom) ಹಾಗೂ ಶೌಚಾಲಯದ (Toilet) ಹೆಚ್ಚಿನ ಭಾಗಗಳನ್ನು ಸ್ಯಾನಿಟೈಸ್&zwnj; (Sanitize) ಮಾಡಲಾಗುತ್ತದೆ. ಆದರೆ ಸೋಪು (Soap), ಶಾಂಪೂ (Shampoo) ಹಾಗೂ ಮೇಕಪ್&zwnj; (Makeup) ಸಾಮಗ್ರಿಗಳನ್ನು ಇಡುವ ಸ್ಥಳಗಳು ಹೆಚ್ಚು ಕೊಳಕಾಗಿರುವ ಸಾಧ್ಯತೆ ಇರುತ್ತದೆ. ಅನೇಕ ಅತಿಥಿಗಳು (Guests) ತಮ್ಮ ವೈಯಕ್ತಿಕ ವಸ್ತುಗಳನ್ನು (Personal Items) ಅಲ್ಲಿಯೇ ಇಡುವುದರಿಂದ ಈ ಭಾಗಗಳಲ್ಲಿ ಸೂಕ್ಷ್ಮಜೀವಿಗಳು (Germs) ಹೆಚ್ಚಿರಬಹುದು.&lt;/p&gt;&lt;img&gt;&lt;p&gt;ನೀವು ಯಾವಾಗಲೂ ಹೋಟೆಲ್&zwnj; (Hotel)ನಲ್ಲಿ ಉಳಿಯುವಾಗ ಆರೋಗ್ಯಕ್ಕೆ (Health) ಮೊದಲ ಆದ್ಯತೆ ನೀಡಿ. ಕೋಣೆಗೆ (Room) ಹೋದ ತಕ್ಷಣ ಹಾಸಿಗೆ (Bed), ಮ್ಯಾಟ್ರೆಸ್&zwnj; (Mattress) ಸೀಮ್&zwnj;ಗಳು (Seams), ಹೆಡ್&zwnj;ಬೋರ್ಡ್&zwnj; (Headboard) ಹಾಗೂ ನೈಟ್&zwnj;ಸ್ಟ್ಯಾಂಡ್&zwnj; (Nightstand) ಸುತ್ತಮುತ್ತ ಬೆಡ್&zwnj; ಬಗ್ಸ್&zwnj; (Bed Bugs) ಅಥವಾ ಹಾಸಿಗೆ ಹುಳುಗಳು ಇದೆಯೇ ಎಂದು ಪರಿಶೀಲಿಸಿ. ಕಪ್ಪು ಚುಕ್ಕೆಗಳು, ಹಳದಿ ಬಣ್ಣದ ಚರ್ಮದ ಅವಶೇಷಗಳು ಅಥವಾ ಸಣ್ಣ ಕೆಂಪು-ಕಂದು ಬಣ್ಣದ ಹುಳುಗಳು ಕಂಡುಬಂದರೆ ತಕ್ಷಣ ಹೋಟೆಲ್&zwnj; ಸಿಬ್ಬಂದಿಗೆ ತಿಳಿಸಿ ಕೋಣೆಯನ್ನು (Room) ಬದಲಾಯಿಸಲು ಅಥವಾ ಸ್ವಚ್ಛಗೊಳಿಸಲು (Cleaning) ಸೂಚಿಸಿ. ಇದರಿಂದ ಚರ್ಮದ ಸೋಂಕು (Skin Infection) ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/hotel-room-cleanliness-tips-hidden-germs-bed-runner-tv-remote-safety-vfr8qid"/>
        </item>
        <item>
            <title><![CDATA[ನೀಲಿ ಮತ್ತು ಕಿತ್ತಳೆ ಲೈನ್​ ಮೆಟ್ರೋ ಬಗ್ಗೆ BMRCL ಬಿಗ್​ ಅಪ್​ಡೇಟ್: ಇವುಗಳ ಕಾರ್ಯಾರಂಭ ಯಾವಾಗ]]></title>
            <link>https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx</link>
            <guid isPermaLink="true">https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx</guid>
            <pubDate>Sat, 08 Aug 2026 12:29:15 +0530</pubDate>
            <description><![CDATA[ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್-ವಿಮಾನ ನಿಲ್ದಾಣ ನೀಲಿ ಮಾರ್ಗದ ಕಾಮಗಾರಿ ಶೇ. 72.75ರಷ್ಟು ಪೂರ್ಣಗೊಂಡಿದ್ದು, 2026-27ರ ನಡುವೆ ಹಂತ ಹಂತವಾಗಿ ತೆರೆಯುವ ನಿರೀಕ್ಷೆಯಿದೆ. ಆದರೆ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆ ಬಾಕಿ ಇರುವುದರಿಂದ 3ನೇ ಹಂತದ ಆರೆಂಜ್ ಮಾರ್ಗವು ಕೇವಲ ಶೇ. 3.6ರಷ್ಟು ಪ್ರಗತಿ ಸಾಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzg2nqqd1adtxhws5p9sy497,imgname-namma-metro-1786172333804.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್ ಅನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ನೀಲಿ ಮಾರ್ಗದ ಕಾಮಗಾರಿ ಸದ್ಯ ಶೇಕಡಾ 72.75 ರಷ್ಟು ಪೂರ್ಣಗೊಂಡಿದ್ದು, ನಿಗದಿತ ವೇಳಾಪಟ್ಟಿಯ ಪ್ರಕಾರ ಮುಂದುವರೆದಿದೆ ಎಂದು BMRCL ಹೇಳಿದೆ. ವಿಮಾನ ನಿಲ್ದಾಣ ಕಾರಿಡಾರ್ 2026 ರ ಅಂತ್ಯದಿಂದ 2027 ರ ಅಂತ್ಯದ ನಡುವೆ ಹಂತಗಳಲ್ಲಿ ತೆರೆಯುವ ನಿರೀಕ್ಷೆಯಿದ್ದರೂ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆಗಳು ಬಾಕಿ ಇರುವುದರಿಂದ 3 ನೇ ಹಂತದ ಆರೆಂಜ್ ಮಾರ್ಗವು ಕೇವಲ 3.6% ಪ್ರಗತಿಯನ್ನು ಸಾಧಿಸಿದೆ ಎಂದಿದೆ.&lt;/p&gt;&lt;p&gt;ಬಿಎಂಆರ್&zwnj;ಸಿಎಲ್ ವೇಳಾಪಟ್ಟಿಯ ಪ್ರಕಾರ, ಸಿಲ್ಕ್ ಬೋರ್ಡ್-ಕೆಆರ್ ಪುರಂ ವಿಭಾಗವು 2026 ರ ಅಂತ್ಯದ ವೇಳೆಗೆ, ಹೆಬ್ಬಾಳ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2027 ರ ಮಧ್ಯಭಾಗದಲ್ಲಿ ಮತ್ತು ಕೆಆರ್ ಪುರಂ-ಹೆಬ್ಬಾಳ ವಿಭಾಗವು 2027 ರ ಅಂತ್ಯದ ವೇಳೆಗೆ ತೆರೆಯುವ ನಿರೀಕ್ಷೆಯಿದೆ. ಬೆಂಗಳೂರು ಮೆಟ್ರೋದ 58.19 ಕಿ.ಮೀ. ಹಂತಗಳನ್ನು ಒಳಗೊಂಡಿರುವ 2ಎ ಮತ್ತು 2ಬಿ ಹಂತಗಳು ಜೂನ್ ವೇಳೆಗೆ ಶೇ. 72.75 ಪೂರ್ಣಗೊಂಡಿದ್ದು, 72.09 ಕಿ.ಮೀ. ಹಂತ 2 ಯೋಜನೆಯು ಶೇ. 95.70 ಪೂರ್ಣಗೊಂಡಿದೆ. 14,788 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2ಎ ಮತ್ತು 2ಬಿ ಹಂತಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 58 ಕಿ.ಮೀ. ಬ್ಲೂ ಲೈನ್ ಕಾರಿಡಾರ್ ನಿರ್ಮಾಣ ಪ್ರಾರಂಭವಾದಾಗಿನಿಂದ ಕಾಮಗಾರಿಯಲ್ಲಿ ವಿಳಂಬ ಆಗುತ್ತಿದೆ. ಸಿಲ್ಕ್ ಬೋರ್ಡ್-ಕೆಆರ್ ಪುರಂ ಎಲಿವೇಟೆಡ್ ವಿಭಾಗದ ಕೆಲಸವು ಆಗಸ್ಟ್ 2021 ರಲ್ಲಿ ಪ್ರಾರಂಭವಾಯಿತು, ಆದರೆ ಕೆಆರ್ ಪುರಂ-ವಿಮಾನ ನಿಲ್ದಾಣದ ನಿರ್ಮಾಣವು 2022 ರ ಆರಂಭದಲ್ಲಿ ಪ್ರಾರಂಭವಾಯಿತು.&lt;/p&gt;&lt;h2&gt;&lt;strong&gt;ಸವಾಲಾಗಿರುವ ಕಾಮಗಾರಿ&lt;/strong&gt;&lt;/h2&gt;&lt;p&gt;ಭೂಸ್ವಾಧೀನ ಸಮಸ್ಯೆಗಳು, ಮರಗಳ ತೆರವು ವಿಳಂಬ, ಹೊರ ವರ್ತುಲ ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಣೆ, ಬಾಕಿ ಇರುವ ಅನುಮೋದನೆಗಳು ಮತ್ತು ಕಾರ್ಮಿಕರ ಕೊರತೆಯಿಂದಾಗಿ ಕೆಆರ್ ಪುರಂ-ಹೆಬ್ಬಾಳ ವಿಭಾಗವು ಅತ್ಯಂತ ಸವಾಲಿನ ವಿಭಾಗವಾಗಿ ಮುಂದುವರೆದಿದೆ. ಜನವರಿ 2023 ರಲ್ಲಿ ಪಿಯರ್ ಕುಸಿದು ಮಹಿಳೆ ಮತ್ತು ಅವರ ಚಿಕ್ಕ ಮಗನ ಪ್ರಾಣ ಕಳೆದುಕೊಂಡ ನಂತರ ನಿರ್ಮಾಣ ಕಾರ್ಯದ ಮೇಲೂ ಪರಿಣಾಮ ಬೀರಿದೆ. ಬಿಎಂಆರ್ ಸಿಎಲ್ ಸಿಲ್ಕ್ ಬೋರ್ಡ್-ಕೆಆರ್ ಪುರಂ ವಿಭಾಗದಲ್ಲಿ ಅಕ್ಟೋಬರ್&zwnj;ನಲ್ಲಿ ಪ್ರಾಯೋಗಿಕ ಸಂಚಾರಗಳನ್ನು ಪ್ರಾರಂಭಿಸಲು ಯೋಜಿಸಿದ್ದರೂ, ಬೈಯಪ್ಪನಹಳ್ಳಿಗೆ ಡಿಪೋ ಸಂಪರ್ಕ ಮತ್ತು ಸಿಲ್ಕ್ ಬೋರ್ಡ್, ಇಬ್ಲೂರು ಮತ್ತು ಮಾರತಹಳ್ಳಿಯಂತಹ ನಿಲ್ದಾಣಗಳಲ್ಲಿ ನಾಗರಿಕ ನಿರ್ಮಾಣ ಸೇರಿದಂತೆ ಪ್ರಮುಖ ಕಾರ್ಯಗಳು ಇನ್ನೂ ಬಾಕಿ ಉಳಿದಿವೆ.&lt;/p&gt;&lt;h3&gt;&lt;strong&gt;ಅಡೆತಡೆ ಮೀರಿ ಆರಂಭ&lt;/strong&gt;&lt;/h3&gt;&lt;p&gt;ಈ ಅಡೆತಡೆಗಳ ಹೊರತಾಗಿಯೂ, ಯೋಜನೆಯ ಸಮಯವು ಬದಲಾಗದೆ ಉಳಿದಿದೆ ಎಂದು ಬಿಎಂಆರ್ ಸಿಎಲ್ ವಕ್ತಾರರು ತಿಳಿಸಿದ್ದಾರೆ. ಏತನ್ಮಧ್ಯೆ, 3ನೇ ಹಂತದ ಅಡಿಯಲ್ಲಿ 45 ಕಿಮೀ ಆರೆಂಜ್ ಲೈನ್ ಕೇವಲ ಶೇ. 3.6ರಷ್ಟು ಭೌತಿಕ ಪ್ರಗತಿಯನ್ನು ಸಾಧಿಸಿದೆ. ಎರಡು ವರ್ಷಗಳ ಹಿಂದೆ ಅಂದಾಜು ರೂ. 15,611 ಕೋಟಿ ವೆಚ್ಚದಲ್ಲಿ ಅನುಮೋದನೆ ಪಡೆದ ಈ ಕಾರಿಡಾರ್, ಕೆಂಪಾಪುರವನ್ನು ಜೆಪಿ ನಗರದಿಂದ ಹೊರ ವರ್ತುಲ ರಸ್ತೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕಿಸುತ್ತದೆ. ಕರ್ನಾಟಕ ಸರ್ಕಾರದ ಪ್ರಸ್ತಾವಿತ ರೂ. 9,700 ಕೋಟಿ ವೆಚ್ಚದ, ಮೆಟ್ರೋ ಜೋಡಣೆಯ ಕೆಲವು ಭಾಗಗಳ ಮೇಲೆ ಯೋಜಿಸಲಾದ 37 ಕಿಮೀ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆ ಬಾಕಿ ಇರುವುದರಿಂದ ಆರೆಂಜ್ ಲೈನ್&zwnj;ನ ಕೆಲಸವು ಪ್ರಾಥಮಿಕವಾಗಿ ವಿಳಂಬವಾಗಿದೆ. ಮೂರು ನಿರ್ಮಾಣ ಪ್ಯಾಕೇಜ್&zwnj;ಗಳಿಗೆ ಈಗಾಗಲೇ ಟೆಂಡರ್&zwnj;ಗಳನ್ನು ಕರೆಯಲಾಗಿದ್ದರೂ, ಪ್ರಸ್ತಾವನೆಗೆ ಅನುಮತಿ ಸಿಗುವವರೆಗೆ ಅನುಷ್ಠಾನವು ಸ್ಥಗಿತಗೊಂಡಿದೆ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx"/>
        </item>
        <item>
            <title><![CDATA[ನಾಗರಹಾವಿನ ಪಕೋಡಾ ! ಕೋಬ್ರಾ ಮೀಟ್ ಮಾರ್ಕೆಟ್ ನಲ್ಲಿ ಏನೆಲ್ಲ ಸಿಗುತ್ತೆ?]]></title>
            <link>https://kannada.asianetnews.com/food/cobra-pakoda-indonesia-cobra-meat-market-viral-video/articleshow-w3zseu4</link>
            <guid isPermaLink="true">https://kannada.asianetnews.com/food/cobra-pakoda-indonesia-cobra-meat-market-viral-video/articleshow-w3zseu4</guid>
            <pubDate>Thu, 06 Aug 2026 15:37:16 +0530</pubDate>
            <description><![CDATA[&lt;p&gt;cobra meat : ಹಾವು ಕಂಡ್ರೆ ಭಯ ಶುರುವಾಗುತ್ತೆ. ಅದ್ರಲ್ಲೂ ನಾಗರಹಾವು ಅಂದ್ರೆ ನಿದ್ರೆಯಲ್ಲೂ ಜನ ಬೆವರ್ತಾರೆ. ಆದ್ರೆ ಈಗ ನಾವು ಹೇಳ್ತಿರೋ ಜಾಗದಲ್ಲಿ ಜನರು ಹಾವನ್ನು ಪಕೋಡಾ ಮಾಡಿ ತಿಂತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzb8m5nf4gcvjmecec1h5y6f,imgname-cobra-pakoda-1786010801839.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕನ್, ಮಟನ್ ನಿಂದ ಪಕೋಡ, ಟಿಕ್ಕಾ, ಚಾಪ್ಸ್ ,ಕಬಾಬ್ ತಯಾರಿಸಿ ಜನ ಅದ್ರ ಸವಿ ಸವಿತಿದ್ದಾರೆ. ಭಾರತದಲ್ಲೂ ಅನೇಕರು ಇಂಥಹ ಹೊಸ ರುಚಿ ಪ್ರಯೋಗಗಳನ್ನು ಮಾಡ್ತಿದ್ದಾರೆ. ಆದ್ರೆ ಹಾವನ್ನು ಕತ್ತರಿಸಿ ತಿನ್ನೋ ಜಾಗ ಇದೆ ಅಂದ್ರೆ ನೀವು ನಂಬ್ತೀರಾ? ಅದೂ ಹಾವಿನ ಪಕೋಡ, ಟಿಕ್ಕಾ, ಸಮೋಸಾ ಅಂತ ವೆರೈಟಿ ಆಹಾರ ಮಾಡಿ ತಿನ್ನುವ ಮಾರ್ಕೆಟ್ ಒಂದರ ಬಗ್ಗೆ ಮಾಹಿತಿ ಇಲ್ಲಿದೆ.&lt;/p&gt;&lt;h2&gt;ಹಾವಿನ ಪಕೋಡಾ !&lt;/h2&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದು ಇಂಡೋನೇಷ್ಯಾದ ವಿಡಿಯೋ. ಅಲ್ಲಿ ಹಾವನ್ನು ಹಿಡಿದು ಜನ ತಿಂತಾರೆ. ನಾವು ಯಾವ್ದು ವಿಷ ಅಂತ ದೂರ ಓಡ್ತೀವೋ, ಯಾವುದು ಅತ್ಯಂತ ಅಪಾಯಕಾರಿ ಅಂತ ಹೆದರ್ತೇವೋ ಅದೇ ಕೋಬ್ರಾ ತಿಂತಾರೆ ಜನ.&lt;/p&gt;&lt;p&gt;ವೀಡಿಯೊದಲ್ಲಿ ಕೋಬ್ರಾ ಮಾಂಸದಿಂದ ಮಾಡಿದ ಪಾಕವಿಧಾನಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ನೀವು ನೋಡ್ಬಹುದು. ಒಂದ್ಕಡೆ ಹಾವು ಹಿಡಿದು ನಿಂತಿರುವ ಹುಡುಗಿ ಆದ್ರೆ ಹತ್ತಾರು ಹಾವುಗಳಿರುವ ಡಬ್ಬ ಇನ್ನೊಂದು ಕಡೆ. ಇನ್ನೊಂದು ವಿಡಿಯೋದಲ್ಲಿ ಹಾವಿನ ಮುಖಕ್ಕೆ ಪಟ್ಟಿ ಸುತ್ತಲಾಗ್ತಿದೆ. ಕೋಬ್ರಾದಿಂದ ಯಾವೆಲ್ಲ ಖಾದ್ಯ ತಯಾರಿಸಲಾಗುತ್ತೆ ಎನ್ನುವ ಪಟ್ಟಿ ಕೂಡ ಅಂಗಡಿ ಮುಂದಿದೆ.&lt;/p&gt;&lt;p&gt;ಭಾರತದಲ್ಲಿ ಬೀದಿ ಬದಿಯಲ್ಲಿ ಪಾನಿಪುರಿ, ಸಮೋಸಾ, ಚಾಟ್ಸ್ ಮಾರಾಟ ಮಾಡಿದಂತೆ ಇಂಡೋನೇಷ್ಯಾ ಬೀದಿಯಲ್ಲಿ ಕೋಬ್ರಾ ಪಕೋಡಾ ಮಾರಾಟ ಮಾಡಲಾಗುತ್ತೆ. ಒಂದೇ ಸಾಲಿನಲ್ಲಿ ಕೋಬ್ರಾ ಮಾಂಸ ಮಾರಾಟ ಮಾಡುವ ಅನೇಕ ಅಂಗಡಿಗಳನ್ನು ನೀವು ನೋಡ್ಬಹುದು.&lt;/p&gt;&lt;p&gt;ಪಾಕಿಸ್ತಾನಿ ವ್ಲಾಗರ್ ಒಬ್ಬರು ತಮ್ಮ ವೀಡಿಯೊದಲ್ಲಿ ಇಂಡೋನೇಷ್ಯಾದಲ್ಲಿ ಕೋಬ್ರಾ ಮಾಂಸದಿಂದ ಮಾಡಿದ ಭಕ್ಷ್ಯಗಳನ್ನು ಮಾರಾಟ ಮಾಡುವ ಕೆಲವು ಅಂಗಡಿಗನ್ನು ತೋರಿಸಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ. ಅಲ್ಲಿ, ನಾಗರಹಾವಿನ ಮಾಂಸವನ್ನು ಜನರು ಇಷ್ಟಪಡ್ತಾರಂತೆ. ಸೂಪ್ಗಳಿಂದ ಹಿಡಿದು ಟಿಕ್ಕಾಗಳು, ಸಾಸೇಜ್ಗಳು, ಪಕೋಡಾಗಳು ಮತ್ತು ಸಮೋಸಾಗಳವರೆಗೆ ವಿವಿಧ ಭಕ್ಷ್ಯಗಳಲ್ಲಿ ನಾಗರಹಾವುಗಳನ್ನು ಬಳಸಲಾಗುತ್ತದೆ. ಕೆಲವರು ಇದರಲ್ಲಿ ಸಾಂಪ್ರದಾಯಿಕ ಔಷಧೀಯ ಗುಣಗಳಿವೆ ಎಂದು ನಂಬುತ್ತಾರೆ. Yogyakarta ಮತ್ತು Jakarta ಪ್ರದೇಶದಲ್ಲಿ ನೀವು ಈ ಅಂಗಡಿಗಳನ್ನು ನೋಡ್ಬಹುದು.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Muhammad Adnan (@adnanmusafirofficial)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Roopa Hegde</dc:creator>
            <atom:link href="https://kannada.asianetnews.com/food/cobra-pakoda-indonesia-cobra-meat-market-viral-video/articleshow-w3zseu4"/>
        </item>
        <item>
            <title><![CDATA[ವಂದೇ ಭಾರತ್​ ಹೊಸ ಇತಿಹಾಸ: ಜೀವಂತ ಹೃದಯ ಸಾಗಾಟ- 2 ಗಂಟೆಯಲ್ಲಿ 250 ಕಿ.ಮೀ ವೇಗ]]></title>
            <link>https://kannada.asianetnews.com/gallery/health-life/250-km-in-2-hours-donor-heart-races-via-vande-bharat-to-save-life-suc-xg10a10</link>
            <guid isPermaLink="true">https://kannada.asianetnews.com/gallery/health-life/250-km-in-2-hours-donor-heart-races-via-vande-bharat-to-save-life-suc-xg10a10</guid>
            <pubDate>Sun, 02 Aug 2026 19:56:32 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆ ಇತಿಹಾಸದಲ್ಲಿ ಮೊದಲ ಬಾರಿಗೆ, ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನಲ್ಲಿ ಜೀವಂತ ಹೃದಯವನ್ನು ಸೂರತ್&zwnj;ನಿಂದ ಅಹಮದಾಬಾದ್&zwnj;ಗೆ ಯಶಸ್ವಿಯಾಗಿ ಸಾಗಿಸಲಾಗಿದೆ. ಈ ಕ್ಷಿಪ್ರ ಸಾರಿಗೆ ಮತ್ತು ಗ್ರೀನ್ ಕಾರಿಡಾರ್ ವ್ಯವಸ್ಥೆಯಿಂದಾಗಿ, ಗಂಭೀರ ಹೃದಯ ರೋಗಿಯೊಬ್ಬರಿಗೆ &amp;nbsp; ಹೊಸ ಜೀವನ ನೀಡಲು ಸಾಧ್ಯವಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyw1nfz2qh7fqvb2451s3mc9,imgname-asianet-bangla-thump---2026-07-31t174207.631-1785500188642.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆ ಇತಿಹಾಸದಲ್ಲಿ ಮೊದಲ ಬಾರಿಗೆ, ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನಲ್ಲಿ ಜೀವಂತ ಹೃದಯವನ್ನು ಸೂರತ್&zwnj;ನಿಂದ ಅಹಮದಾಬಾದ್&zwnj;ಗೆ ಯಶಸ್ವಿಯಾಗಿ ಸಾಗಿಸಲಾಗಿದೆ. ಈ ಕ್ಷಿಪ್ರ ಸಾರಿಗೆ ಮತ್ತು ಗ್ರೀನ್ ಕಾರಿಡಾರ್ ವ್ಯವಸ್ಥೆಯಿಂದಾಗಿ, ಗಂಭೀರ ಹೃದಯ ರೋಗಿಯೊಬ್ಬರಿಗೆ &amp;nbsp; ಹೊಸ ಜೀವನ ನೀಡಲು ಸಾಧ್ಯವಾಯಿತು.&lt;/p&gt;&lt;img&gt;&lt;p&gt;ವಂದೇ ಭಾರತ್​ ರೈಲಿನಲ್ಲಿ ಹೊಸ ಇತಿಹಾಸ ದಾಖಲಾಗಿದೆ. ಇದೇ ಮೊದಲ ಬಾರಿಗೆ ಜೀವಂತ ಹೃದಯವನ್ನು ಈ ರೈಲಿನಲ್ಲಿ ಸಾಗಿಸಲಾಗಿದೆ. ಈ ಮೂಲಕ ಭಾರತೀಯ ರೈಲ್ವೆ ವೈದ್ಯಕೀಯ ತುರ್ತು ಸೇವೆಯಲ್ಲಿ ಹೊಸ ದಾಖಲೆ ಬರೆದಿದೆ. ಗುಜರಾತ್&zwnj;ನ ಸೂರತ್&zwnj;ನಿಂದ ಅಹಮದಾಬಾದ್&zwnj;ಗೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಮೂಲಕ ಸುಮಾರು 250 ಕಿ.ಮೀ. ದೂರ ಅತ್ಯಂತ ವೇಗವಾಗಿ ಸಾಗಿಸಿ, ಗಂಭೀರ ಹೃದಯ ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;img&gt;&lt;p&gt;ಈ ಘಟನೆ ಭಾರತೀಯ ರೈಲ್ವೆ ಕೇವಲ ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಮಾತ್ರ ಸೀಮಿತವಾಗಿಲ್ಲ, ಅಗತ್ಯದ ಸಂದರ್ಭದಲ್ಲಿ ಜೀವ ಉಳಿಸುವ ಆರೋಗ್ಯ ಸೇವೆಗಳಲ್ಲಿಯೂ ಪ್ರಮುಖ ಪಾತ್ರ ವಹಿಸಬಲ್ಲದು ಎಂಬುದನ್ನು ಸಾಬೀತುಪಡಿಸಿದೆ.&lt;/p&gt;&lt;img&gt;&lt;p&gt;ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ರೈಲು ತಲುಪಿದ ನಂತರ RPF ಮತ್ತು ಗುಜರಾತ್ ಪೊಲೀಸ್ ಪ್ಲಾಟ್&zwnj;ಫಾರ್ಮ್ ಸಂಖ್ಯೆ 1 ರಿಂದ ಯು.ಎನ್. ಮೆಹ್ತಾ ಇನ್&zwnj;ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್​ವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಿದರು.&lt;/p&gt;&lt;img&gt;&lt;p&gt;ಈ ಮೀಸಲಾದ ಮಾರ್ಗದ ಸಹಾಯದಿಂದ ಹೃದಯವನ್ನು ವೇಗವಾಗಿ ಆಸ್ಪತ್ರೆಗೆ ತಲುಪಿಸಲಾಯಿತು. ಇದರಿಂದ ನಿಗದಿತ ಸಮಯದಲ್ಲಿ ಕಸಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು. ಈ ಸಮಯದ ಸೂಕ್ಷ್ಮ ಕಾರ್ಯಾಚರಣೆಯಲ್ಲಿ ರೈಲ್ವೆ ರಕ್ಷಣಾ ಪಡೆ, ಗುಜರಾತ್ ಪೊಲೀಸ್, ಭಾರತೀಯ ರೈಲ್ವೆ ಹಾಗೂ ವೈದ್ಯಕೀಯ ತಂಡಗಳು ಒಟ್ಟಾಗಿ ಇದನ್ನು ಯಶಸ್ವಿ ಮಾಡಿದೆ. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗೆ ಹೊಸ ಜೀವನ ದೊರೆತಿದೆ.&lt;/p&gt;&lt;img&gt;&lt;p&gt;ಸೂರತ್&zwnj;ನಿಂದ ಹೊರಟ ಹೃದಯವನ್ನು 20901 ಮುಂಬೈ ಸೆಂಟ್ರಲ್ ಗಾಂಧಿ ನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ಮೂಲಕ ಅಹಮದಾಬಾದ್&zwnj;ಗೆ ತರಲಾಯಿತು. ಕೇವಲ 2 ಗಂಟೆಯಲ್ಲಿ ಹೃದಯ ರವಾನೆಯಾಗಿದೆ. ಇದರಿಂದಾಗಿ ಹೃದಯವನ್ನು ಯಶಸ್ವಿ ಕಸಿ ಮಾಡಲು ಅಗತ್ಯವಿರುವ ನಿಗದಿತ ಸಮಯದೊಳಗೆ ತಲುಪಿಸಲು ಸಾಧ್ಯವಾಯಿತು.&lt;/p&gt;&lt;img&gt;&lt;p&gt;ಯುಎನ್ ಮೆಹತಾ ಇನ್&zwnj;ಸ್ಟಿಟ್ಯೂಟ್&zwnj;ನಲ್ಲಿ ಇದುವರೆಗೆ 77 ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಈ ಸಾಧನೆ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಿದರು. ಅಹಮದಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವೇದ್ ಪ್ರಕಾಶ್ ಅವರ ಪ್ರಕಾರ, ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj;ನ ವೇಗ, ಸಮಯಪಾಲನೆ ಮತ್ತು ವಿಶ್ವಾಸಾರ್ಹತೆಯೇ ಈ ಜೀವ ರಕ್ಷಕ ಕಾರ್ಯಾಚರಣೆಯ ಯಶಸ್ಸಿಗೆ ಪ್ರಮುಖ ಕಾರಣ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/health-life/250-km-in-2-hours-donor-heart-races-via-vande-bharat-to-save-life-suc-xg10a10"/>
        </item>
        <item>
            <title><![CDATA[ಶಿವಗಂಗೆ ಬೆಟ್ಟಕ್ಕೆ ಬಂದಿದ್ದ 31ರ ಹರೆಯದ ಉದ್ಯಮಿ ಪುತ್ರ ನಾಪತ್ತೆ, ಶಾಂತಲಾ ಡ್ರಾಪ್‌ನಲ್ಲಿ ಶೋಧ]]></title>
            <link>https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs</link>
            <guid isPermaLink="true">https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs</guid>
            <pubDate>Sat, 08 Aug 2026 19:49:16 +0530</pubDate>
            <description><![CDATA[&lt;p&gt;ದಕ್ಷಿಣ ಕಾಶಿ ಎಂದೇ ಗುರುತಿಸಿಕೊಂಡಿರುವ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದಿದ್ದ ಉದ್ಯಮಿಯ ಪುತ್ರ ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟದ ಶಾಂತಾಲಾ ಡ್ರಾಪ್ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಇಲ್ಲಿ ಶೋಧ ಕಾರ್ಯ ನಡೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgvvb07haza741cm465qcaa,imgname-entrepreneur-son-missing-at-shivagange-1786198731776.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.08) &lt;/strong&gt;ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ಅತ್ಯಂತ ಸುಂದರ ಪ್ರಕೃತಿ ತಾಣ. ಈ ಬೆಟ್ಟ ಹತ್ತಲು ಪ್ರತಿ ದಿನ ಹಲವು ಸಾಹಸಿಗಳು ಆಗಮಿಸುತ್ತಾರೆ. ಸುರಕ್ಷತಾ ಮಾರ್ಗದರ್ಶನಗಳ ಜೊತೆಗೆ ಬೆಟ್ಟ ಹತ್ತುತ್ತಾರೆ. ಹೀಗೆ ಖ್ಯಾತ ಉದ್ಯಮಿಯ ಪುತ್ರ 31ರ ಹರೆಯದ ಪ್ರತೀಕ್ ಉಪಾದ್ಯಾ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದು ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟ ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಪ್ರತೀಕ್ ಉಪದ್ಯಾಯನ ಸುಳಿವಿಲ್ಲ. ಪೊಲೀಸರು ಡ್ರೋನ್ ಬಳಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.&lt;/p&gt;&lt;h2&gt;ಬುಲೆಟ್ ಬೈಕ್ ಪಾರ್ಕ್ ಮಾಡಿ ಬೆಟ್ಟ ಹತ್ತಿದ್ದ ಪ್ರತೀಕ್&lt;/h2&gt;&lt;p&gt;ಐದು ದಿನಗಳ ಹಿಂದೆ ವೈಟ್ ಫೀಲ್ಡ್&zwnj;&zwj;ನಲ್ಲಿ ಬುಲೆಟ್ ಬೈಕ್ ಬಾಡಿಗೆ ಪಡೆದಿದ್ದ ಪ್ರತೀಕ್ ಉಪಾದ್ಯಾಯ ಒಂದಷ್ಟು ಕಡೆ ಸುತ್ತಾಡಿದ್ದಾನೆ. ನಿನ್ನೆ (ಆ.07) ನೆಲಮಂಗಲ ತಾಲೂಕಿನಲ್ಲಿರುವ ಶಿವಗಂಗೆ ಬೆಟ್ಟ ಹತ್ತಲು ಆಗಮಿಸಿದ್ದಾನೆ. ಶಿವಗಂಗೆಗೆ ಬೈಕ್ ಮೂಲಕ ಬಂದ ಪ್ರತೀಕ್ ಉಪಾದ್ಯಾಯ, ಪಾರ್ಕಿಂಗ್ ಸ್ಥಳದಲ್ಲಿ ಬುಲೆಟ್ ಬೈಕ್ ಪಾರ್ಕ್ ಮಾಡಿದ್ದಾನೆ. ಬಳಿಕ ಬೆಟ್ಟ ಹತ್ತಲು ಆರಂಭಿಸಿದ್ದಾನೆ. ಈತ ಪಾರ್ಕಿಂಗ್ ಮಾಡಿ ಬೆಟ್ಟ ಹತ್ತುವ ಕೆಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.&lt;/p&gt;&lt;h2&gt;ನಾಪತ್ತೆ ಹಿಂದೆ ಸಾಕಷ್ಟು ಅನುಮಾನ&lt;/h2&gt;&lt;p&gt;ಪ್ರತೀಕ್ ಉಪಾದ್ಯಾಯ ವಾಪಸ್ ಮರಳಿರುವ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿಲ್ಲ. ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.ಪ್ರತೀಕ್ ಉಪಾದ್ಯಾಯನ ಫೋನ್ ಬೇರೆ ಕಡೆ ಸ್ವಿಚ್ ಆಗಿದೆ. ಪ್ರತೀಕ್ ಉಪಾದ್ಯಾಯ ನಾಪತ್ತೆಯಾಗಿರುವ ಸ್ಥಳಕ್ಕೂ ಫೋನ್ ಸ್ವೀಚ್ ಆಗಿರುವ ಲೋಕೇಶನ್ ಬೇರೆ ಬೇರೆಯಾಗಿದೆ. ಇತ್ತ ಐದು ದಿನಗಳ ಹಿಂದೆ ಬೈಕ್ ಬಾಡಿಗೆ ಪಡೆದು ಸುತ್ತಾಟ ಆರಂಭಿಸಿದ ಹಿಂದೆಯೂ ಕೆಲ ಅನುಮಾನಗಳು ವ್ಯಕ್ತವಾಗಿದೆ.&lt;/p&gt;&lt;p&gt;ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4800 ಅಡಿ ಎತ್ತರದಲ್ಲಿರುವ ಬೆಟ್ಟ . ಜೊತೆಗೆ ಹಲವು ಕಡೆ ಅತ್ಯಂತ ಅಪಾಯಕಾರಿಯಾಗಿದೆ. ಈ ಪೈಕಿ ಶಾಂತಲಾ ಡ್ರಾಪ್ ಅತೀ ಎಚ್ಚರವಹಿಸಬೇಕಾದ ಸ್ಥಳ. ಮರಗಿಡಗಳು ಕಲ್ಲು ಬಂಡೆಗಳಿಂದ ಕೂಡಿರುವ ಶಾಂತಲಾ ಡ್ರಾಪ್ ಬಳಿ ಹಲವು ಸೂಚನಾ ಫಲಕಗಳು ಇವೆ. ಇದೀಗ ಪೊಲೀಸರು ಡ್ರೋನ್ ಬಳಸಿ ಶಾಂತಲಾ ಡ್ರಾಪ್ ಬಳಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರತೀಕ್ ಉಪಾದ್ಯಾಯ ನಾಪತ್ತೆ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>travel</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs"/>
        </item>
        <item>
            <title><![CDATA[ರೈಲು ಪ್ರಯಾಣಿಕರ ಗಮನಕ್ಕೆ: ಹಳಿ ನಿರ್ವಹಣೆ ನಿಮಿತ್ತ ಬೆಂಗಳೂರಿನ ಹಲವು ರೈಲುಗಳ ಸಂಚಾರ ಭಾಗಶಃ ರದ್ದು!]]></title>
            <link>https://kannada.asianetnews.com/travel/indian-railway-alert-swr-bengaluru-trains-partially-cancelled-regulated-august-2026-chennai-track-work-khs/articleshow-ycaw3a4</link>
            <guid isPermaLink="true">https://kannada.asianetnews.com/travel/indian-railway-alert-swr-bengaluru-trains-partially-cancelled-regulated-august-2026-chennai-track-work-khs/articleshow-ycaw3a4</guid>
            <pubDate>Thu, 06 Aug 2026 19:01:34 +0530</pubDate>
            <description><![CDATA[&lt;p&gt;ರೈಲು ಹಳಿಗಳ ನಿರ್ವಹಣೆ ಕಾಮಗಾರಿಯಿಂದಾಗಿ, ಬೆಂಗಳೂರಿನಿಂದ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಆಗಸ್ಟ್ 2026ರ ನಿಗದಿತ ದಿನಾಂಕಗಳಂದು ಜೋಲಾರ್&zwnj;ಪೇಟೆ ಮೆಮು ರೈಲುಗಳು ಭಾಗಶಃ ರದ್ದಾಗಲಿದ್ದು, ಸಂಘಮಿತ್ರ ಮತ್ತು ಗುವಾಹಾಟಿ ಎಕ್ಸ್&zwnj;ಪ್ರೆಸ್&zwnj;ಗಳು ವಿಳಂಬವಾಗಿ ಸಂಚರಿಸಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbm7g4ap4k43pgd92r76vmt,imgname-ksr-bengaluru-railway-station-1786022969482.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.05): ದ&lt;/strong&gt;ಕ್ಷಿಣ ರೈಲ್ವೆಯ ಚೆನ್ನೈ ವಿಭಾಗದಲ್ಲಿ ತುರ್ತು ಹಳಿ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುವುದರಿಂದ, ಬೆಂಗಳೂರಿನಿಂದ ಸಂಚರಿಸುವ ಹಾಗೂ ಹಾದುಹೋಗುವ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ಭಾಗಶಃ ರದ್ದು ಹಾಗೂ ವೇಳಾಪಟ್ಟಿಯಲ್ಲಿ ನಿಯಂತ್ರಣ (ವಿಳಂಬ) ಇರಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ನೈರುತ್ಯ ರೈಲ್ವೆ (SWR), ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರಕ್ಕಾಗಿ ಈ ಕಾಮಗಾರಿ ಅಗತ್ಯವಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.&lt;/p&gt;&lt;h2&gt;&lt;strong&gt;ಭಾಗಶಃ ರದ್ದಾಗಿರುವ ರೈಲುಗಳ ವಿವರ:&lt;/strong&gt;&lt;/h2&gt;&lt;p&gt;&lt;strong&gt;ರೈಲು ಸಂಖ್ಯೆ 66550 (ಕೆಎಸ್&zwnj;ಆರ್ ಬೆಂಗಳೂರು - ಜೋಲಾರ್&zwnj;ಪೇಟೆ ಮೆಮು):&lt;/strong&gt;&lt;/p&gt;&lt;p&gt;ದಿನಾಂಕ 11.08.2026 ಮತ್ತು 26.08.2026 ರಂದು ಕೆಎಸ್&zwnj;ಆರ್ ಬೆಂಗಳೂರಿನಿಂದ ಹೊರಡುವ ಈ ರೈಲು ಸೋಮನಾಯಕನಪಟ್ಟಿ ಮತ್ತು ಜೋಲಾರ್&zwnj;ಪೇಟೆ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಜೋಲಾರ್&zwnj;ಪೇಟೆ ಬದಲಿಗೆ ಸೋಮನಾಯಕನಪಟ್ಟಿ ಸ್ಟೇಷನ್&zwnj;ನಲ್ಲೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 66549 (ಜೋಲಾರ್&zwnj;ಪೇಟೆ - ಕೆಎಸ್&zwnj;ಆರ್ ಬೆಂಗಳೂರು ಮೆಮು):&lt;/strong&gt;&lt;/p&gt;&lt;p&gt;ದಿನಾಂಕ 11.08.2026 ಮತ್ತು 26.08.2026 ರಂದು ಜೋಲಾರ್&zwnj;ಪೇಟೆಯಿಂದ ಹೊರಡಬೇಕಿದ್ದ ಈ ರೈಲು ಜೋಲಾರ್&zwnj;ಪೇಟೆ - ಸೋಮನಾಯಕನಪಟ್ಟಿ ನಡುವೆ ಭಾಗಶಃ ರದ್ದಾಗಲಿದೆ. ಬದಲಾಗಿ, ಈ ರೈಲು ಸೋಮನಾಯಕನಪಟ್ಟಿ ಸ್ಟೇಷನ್&zwnj;ನಿಂದಲೇ ಕೆಎಸ್&zwnj;ಆರ್ ಬೆಂಗಳೂರಿಗೆ ತನ್ನ ಪ್ರಯಾಣವನ್ನು ಆರಂಭಿಸಲಿದೆ.&lt;/p&gt;&lt;h2&gt;&lt;strong&gt;ಸಂಚಾರ ನಿಯಂತ್ರಣಕ್ಕೊಳಗಾಗುವ (ವಿಳಂಬವಾಗುವ) ರೈಲುಗಳು:&lt;/strong&gt;&lt;/h2&gt;&lt;p&gt;&lt;strong&gt;ರೈಲು ಸಂಖ್ಯೆ 12295 (ಎಸ್&zwnj;ಎಂವಿಟಿ ಬೆಂಗಳೂರು - ದಾನಾಪುರ ಸಂಘಮಿತ್ರ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್):&lt;/strong&gt;&lt;/p&gt;&lt;p&gt;ದಿನಾಂಕ 12.08.2026 ರಂದು ಎಸ್&zwnj;ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡುವ ಈ ರೈಲಿನ ಸಂಚಾರವನ್ನು ಮಾರ್ಗಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ (ವಿಳಂಬವಾಗಲಿದೆ).&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 12510 (ಗುವಾಹಾಟಿ - ಎಸ್&zwnj;ಎಂವಿಟಿ ಬೆಂಗಳೂರು ಟ್ರೈ-ವೀಕ್ಲಿ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್):&lt;/strong&gt;&lt;/p&gt;&lt;p&gt;ದಿನಾಂಕ 25.08.2026 ರಂದು ಗುವಾಹಾಟಿ ನಿಲ್ದಾಣದಿಂದ ಹೊರಡುವ ಈ ರೈಲಿನ ಸಂಚಾರವನ್ನು ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರಿಗೆ ಸಲಹೆ:&lt;/strong&gt;&lt;/h2&gt;&lt;p&gt;ಮೇಲೆ ತಿಳಿಸಲಾದ ದಿನಾಂಕಗಳಂದು ಪ್ರಯಾಣ ಬೆಳೆಸಲು ಯೋಜಿಸಿರುವ ಪ್ರಯಾಣಿಕರು ರೈಲುಗಳ ನಿಖರ ಸಮಯ ಮತ್ತು ಸ್ಥಿತಿಗತಿಯನ್ನು ತಿಳಿಯಲು ಭಾರತೀಯ ರೈಲ್ವೆಯ ಅಧಿಕೃತ ವೆಬ್&zwnj;ಸೈಟ್&zwnj;, 'National Train Enquiry System' (NTES) ಆ್ಯಪ್ ಅಥವಾ 139 ಸಹಾಯವಾಣಿಯನ್ನು ಸಂಪರ್ಕಿಸಿ, ತದನಂತರ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಲು ಕೋರಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/indian-railway-alert-swr-bengaluru-trains-partially-cancelled-regulated-august-2026-chennai-track-work-khs/articleshow-ycaw3a4"/>
        </item>
        <item>
            <title><![CDATA[2028ರಿಂದ ವೆಹಿಕಲ್‌ ಟು ವೆಹಿಕಲ್‌ ಸಂವಹನ ವ್ಯವಸ್ಥೆ ಕಡ್ಡಾಯ ಜಾರಿ, ಏನಿದು ವಾಹನಗಳ ಸಂಭಾಷಣೆ?]]></title>
            <link>https://kannada.asianetnews.com/india-news/india-to-make-v2v-technology-mandatory-for-new-vehicles-from-october-2028-gdp/articleshow-zc7q4sn</link>
            <guid isPermaLink="true">https://kannada.asianetnews.com/india-news/india-to-make-v2v-technology-mandatory-for-new-vehicles-from-october-2028-gdp/articleshow-zc7q4sn</guid>
            <pubDate>Thu, 06 Aug 2026 07:34:08 +0530</pubDate>
            <description><![CDATA[ದೇಶದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು, 2028ರ ಅಕ್ಟೋಬರ್ 1 ರಿಂದ ಎಲ್ಲಾ ಹೊಸ ವಾಹನಗಳಿಗೆ ವಿ2ವಿ (ವೆಹಿಕಲ್&zwnj; ಟು ವೆಹಿಕಲ್&zwnj;) ಸಂವಹನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಈ ತಂತ್ರಜ್ಞಾನವು ವಾಹನಗಳ ನಡುವೆ ಮಾಹಿತಿ ಹಂಚಿಕೊಂಡು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr4xx107e87prhrgzv008pt,imgname-hyderabad--traffic--1783221908512.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಹೆಚ್ಚುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ದೇಶದಲ್ಲಿ 2028, ಅ.1ರಿಂದ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ವಿ2ವಿ (ವೆಹಿಕಲ್&zwnj; ಟು ವೆಹಿಕಲ್&zwnj;) ಸಂವಹನ ವ್ಯವಸ್ಥೆ ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯೊಂದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದೆ.&lt;/p&gt;&lt;p&gt;ಇದರ ಪ್ರಕಾರ ಅ.1, 2028ರ ಮೊದಲು ಅಥವಾ ನಂತರ ಉತ್ಪಾದನೆಯಾಗುವ ಎಲ್&zwnj;, ಎಂ ಮತ್ತು ಎನ್&zwnj; ಕೆಟಗರಿಯ ವಾಹನಗಳಿಗೆ ವಿ2ವಿ ಸಂವಹನ ವ್ಯವಸ್ಥೆ ಕಡ್ಡಾಯ. ದ್ವಿಚಕ್ರ, ತ್ರಿಚಕ್ರವಾಹನಗಳು, ಕಾರುಗಳು, ಎಸ್&zwnj;ಯುವಿಗಳು, ಬಸ್&zwnj;ಗಳು, ಗೂಡ್ಸ್&zwnj; ವಾಹನಗಳು, ಟ್ರಕ್&zwnj;ಗಳು ಮತ್ತು ಹಗುರ ವಾಣಿಜ್ಯ ವಾಹಗಳು ಹೀಗೆ ಬಹುತೇಕ ವಾಹನಗಳು ಇವುಗಳಲ್ಲಿ ಸೇರಿವೆ.&lt;/p&gt;&lt;p&gt;ಹಂತ ಹಂತವಾಗಿ ಈ ತಂತ್ರಜ್ಞಾನ ಕಡ್ಡಾಯಕ್ಕೆ ಸರ್ಕಾರ ಮುಂದಾಗಿದ್ದು, ಈ ಮೂಲಕ ಈ ವ್ಯವಸ್ಥೆಯ ಉತ್ಪಾದಕರು ಹಾಗೂ ಪೂರೈಕೆದಾರರಿಗೆ ಹಾರ್ಡ್&zwnj;ವೇರ್&zwnj;, ಸಾಫ್ಟ್&zwnj;ವೇರ್&zwnj; ಸೌಲಭ್ಯ ಅಭಿವೃದ್ಧಿಪಡಿಸಲು ಸಾಕಷ್ಟು ಕಾಲಾವಕಾಶ ಸಿಗಲಿದೆ. ವಾಹನಗಳು ಪರಸ್ಪರ ಸಂವಹನ ನಡೆಸಲು ಅವಕಾಶ ನೀಡುವ ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆಗೆ ಗಣನೀಯ ಕೊಡುಗೆ ನೀಡಲಿದೆ.&lt;/p&gt;&lt;h2&gt;ಹೇಗೆ ಕೆಲಸ ಮಾಡುತ್ತದೆ?:&lt;/h2&gt;&lt;p&gt;ವಿ2ವಿ ವ್ಯವಸ್ಥೆ ವೇಗ, ಸ್ಥಳ, ದಿಕ್ಕು, ಲೇನ್&zwnj; ಬದಲಾವಣೆ, ವೇಗ ಬದಲಾವಣೆ ಕುರಿತು ವಾಹನಗಳ ನಡುವೆ ಪರಸ್ಪರ ಸಂವಹನಕ್ಕೆ ಅವಕಾಶ ನೀಡುತ್ತದೆ. ವಾಹನ ಚಾಲಕನ ಕಣ್ಣಿಗೆ ಕಾಣದ ಅಥವಾ ವಾಹನಗಳಿಗೆ ಅಳವಡಿಸಲಾಗಿರುವ ಸೆನ್ಸರ್&zwnj;ಗಳ ರೇಂಜ್&zwnj; ಮೀರಿದ ಅಪಾಯಗಳ ಕುರಿತು ಎಚ್ಚರಿಸುತ್ತದೆ. ಮುಂದೆ ಸಾಗುತ್ತಿರುವ ವಾಹನ ದಿಢೀರ್&zwnj; ಬ್ರೇಕ್&zwnj;ಹಾಕುವ ಸಾಧ್ಯತೆ, ಅಸುರಕ್ಷಿತ ಲೇನ್ ಬದಲಾವಣೆಗಳು, ಡಿಕ್ಕಿಯಾಗುವ ಸಾಧ್ಯತೆಗಳ ಕುರಿತು ತಕ್ಷಣ ಎಚ್ಚರಿಕೆ ನೀಡುತ್ತವೆ.&lt;/p&gt;&lt;p&gt;ಚೀನಾ, ಜಪಾನ್&zwnj;, ಅಮೆರಿಕ ಹಾಗೂ ಅನೇಕ ಯುರೋಪಿಯನ್&zwnj; ರಾಷ್ಟ್ರಗಳು ಈಗಾಗಲೇ ವಿಟುವಿ ಅಥವಾ ಬ್ರಾಡರ್&zwnj; ವೆಹಿಕಲ್ಸ್&zwnj; ಟು ಎವ್ರಿಥಿಂಗ್&zwnj; ಸಿಸ್ಟಮ್ಸ್&zwnj; ಅನ್ನು ಪ್ರಾಯೋಗಿಕವಾಗಿ ಮತ್ತು ಆಯ್ದ ಉತ್ಪಾದನೆ ಮೂಲಕ ಪರೀಕ್ಷಿಸಿವೆ.&lt;/p&gt;&lt;h2&gt;ಏನಿದು ವಿಟುವಿ ವ್ಯವಸ್ಥೆ?&lt;/h2&gt;&lt;p&gt;- ಹೊಸ ವಾಹನಗಳಿಗೆ ವಿ ಟು ವಿ ಎಂಬ ಸೆನ್ಸರ್&zwnj; ವ್ಯವಸ್ಥೆ ಅಳವಡಿಸಲಾಗುತ್ತದೆ&lt;/p&gt;&lt;p&gt;- ಇದರಿಂದ ವಾಹನದ ಸ್ಥಳ, ದಿಕ್ಕು, ಅಂತರ ಲೇನ್&zwnj; ಬದಲಾವಣೆ ಬಗ್ಗೆ ಮಾಹಿತಿ&lt;/p&gt;&lt;p&gt;- ಮುಂದೆ ಸಾಗುವ ವಾಹನ ಬ್ರೇಕ್&zwnj; ಹಾಕಿದರೂ ಕೂಡ ಹಿಂದಿನ ವಾಹನಕ್ಕೆ ಮಾಹಿತಿ&lt;/p&gt;&lt;p&gt;- ಅಸುರಕ್ಷಿತ ಲೇನ್ ಬದಲಾವಣೆ, ಡಿಕ್ಕಿ ಸಾಧ್ಯತೆಗಳ ಕುರಿತು ತಕ್ಷಣ ಎಚ್ಚರಿಕೆ ರವಾನೆ&lt;/p&gt;&lt;p&gt;- ಈ ತಂತ್ರಜ್ಞಾನದಿಂದ ಅಪಘಾತ ನಿಯಂತ್ರಣ. ರಸ್ತೆ ಸುರಕ್ಷತೆಗೆ ಗಣನೀಯ ಕೊಡುಗೆ&lt;/p&gt;&lt;p&gt;- ಈಗಾಗಲೇ ಚೀನಾ, ಜಪಾನ್&zwnj;, ಅಮೆರಿಕ, ಅನೇಕ ಯುರೋಪ್&zwnj; ದೇಶಗಳಲ್ಲಿ ಜಾರಿ&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/india-to-make-v2v-technology-mandatory-for-new-vehicles-from-october-2028-gdp/articleshow-zc7q4sn"/>
        </item>
        <item>
            <title><![CDATA[ರೈಲು ಪ್ರಯಾಣಿಕರ ಗಮನಕ್ಕೆ: ತತ್ಕಾಲ್​ ಟಿಕೆಟ್​ ನಿಯಮ ಬದಲು; ಕೂಡಲೇ ಜಾರಿ-  ಏನಿದು ಹೊಸ ರೂಲ್ಸ್​]]></title>
            <link>https://kannada.asianetnews.com/travel/indian-railways-introduces-new-tatkal-booking-rules-key-changes-explained-suc/articleshow-zliz2b3</link>
            <guid isPermaLink="true">https://kannada.asianetnews.com/travel/indian-railways-introduces-new-tatkal-booking-rules-key-changes-explained-suc/articleshow-zliz2b3</guid>
            <pubDate>Tue, 04 Aug 2026 18:58:01 +0530</pubDate>
            <description><![CDATA[ಆಗಸ್ಟ್ 1, 2026 ರಿಂದ, ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್ ಬುಕಿಂಗ್&zwnj;ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕೌಂಟರ್&zwnj;ಗಳಲ್ಲಿ ಟೋಕನ್ ವ್ಯವಸ್ಥೆ ಮತ್ತು ಆನ್&zwnj;ಲೈನ್ ಬುಕಿಂಗ್&zwnj;ಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದು ಪ್ರಮುಖ ಬದಲಾವಣೆಗಳಾಗಿವೆ. ಈ ಬದಲಾವಣೆಗಳು ಪ್ರಯಾಣಿಕರ ಅನುಭವದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz6fawafrqng00m3gp7kzcrh,imgname-tatkal-booking-1785850065231.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ತತ್ಕಾಲ್ ರೈಲು ಟಿಕೆಟ್ ಬುಕ್ ಮಾಡಲು ಯೋಜಿಸುತ್ತಿದ್ದರೆ, ಆಗಸ್ಟ್ 1, 2026 ರಿಂದ ಮೀಸಲಾತಿ ಕೌಂಟರ್ ಮತ್ತು ಆನ್&zwnj;ಲೈನ್ ಎರಡರಲ್ಲೂ ಕೆಲವು ಪ್ರಮುಖ ಬದಲಾವಣೆಗಳು ಜಾರಿಗೆ ಬಂದಿವೆ. ಕೌಂಟರ್&zwnj;ಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ಟೋಕನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ಯಾಸೆಂಜರ್ ರಿಸರ್ವೇಷನ್​ ಸಿಸ್ಟಮ್ ಕೌಂಟರ್&zwnj;ಗಳಲ್ಲಿ ಈ ಮೊದಲು, ಪ್ರಯಾಣಿಕರು ಪ್ರತ್ಯೇಕವಾಗಿ ಟೋಕನ್ ತೆಗೆದುಕೊಂಡು ನಂತರ ಬುಕಿಂಗ್ ಅನ್ನು ಪೂರ್ಣಗೊಳಿಸಲು ಮತ್ತೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಆದರೆ ಅದನ್ನು ಈಗ ಬದಲಾಯಿಸಲಾಗಿದೆ. ತತ್ಕಾಲ್ ಟಿಕೆಟ್&zwnj;ಗಳನ್ನು ಬುಕ್ ಮಾಡುವ ಪ್ರಯಾಣಿಕರಿಗೆ ಈಗ ಆಗಮನದ ಸಮಯದಲ್ಲಿ ಸಂಖ್ಯೆಯ ಟೋಕನ್ ನೀಡಲಾಗುತ್ತದೆ, ಇದು ಸರದಿಯಲ್ಲಿ ಅವರ ಸ್ಥಳವನ್ನು ನಿರ್ಧರಿಸುತ್ತದೆ. ಜೊತೆಗೆ, ಅಲ್ಲಿ ಇನ್ನು ಎಸಿ ಕ್ಲಾಸ್ ಬುಕಿಂಗ್&zwnj;ಗಳಿಗೆ ಟೋಕನ್&zwnj;ಗಳನ್ನು ಬೆಳಿಗ್ಗೆ 8:30 ರಿಂದ 9:30 ರವರೆಗೆ ನೀಡಲಾಗುತ್ತದೆ, ಆದರೆ ಎಸಿ ಅಲ್ಲದ ಕ್ಲಾಸ್ ಬುಕಿಂಗ್&zwnj;ಗಳಿಗೆ ಟೋಕನ್&zwnj;ಗಳನ್ನು ಬೆಳಿಗ್ಗೆ 9 ರಿಂದ 9:30 ರವರೆಗೆ ವಿತರಿಸಲಾಗುತ್ತದೆ.&lt;/p&gt;&lt;p&gt;ಕೌಂಟರ್ ಬುಕಿಂಗ್&zwnj;ಗಳನ್ನು ಈಗ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ವರ್ಗ A ಗೆ ಆದ್ಯತೆ ನೀಡಲಾಗುತ್ತದೆ ಮತ್ತು ಮೊದಲು ಸೇವೆ ನೀಡಲಾಗುತ್ತದೆ, ಆದರೆ ವರ್ಗ B, ಇದರಲ್ಲಿ ಇತರ ಎಲ್ಲಾ ಪ್ರಯಾಣಿಕರು ಸೇರಿದ್ದಾರೆ, ವರ್ಗ A ಬುಕಿಂಗ್ ಪೂರ್ಣಗೊಂಡ ನಂತರವೇ ಸೇವೆ ನೀಡಲಾಗುತ್ತದೆ. ವರ್ಗ B ಯ ಅಡಿಯಲ್ಲಿ ಬರುವ ಪ್ರಯಾಣಿಕರು ಆಧಾರ್ ಕಾರ್ಡ್ ಅಥವಾ ರೈಲ್ವೆ ಸ್ವೀಕರಿಸಿದ ಮತ್ತೊಂದು ಮಾನ್ಯ ಫೋಟೋ ಗುರುತಿನ ಚೀಟಿಯನ್ನು ಹೊಂದಿರಬೇಕು. ಕೌಂಟರ್&zwnj;ಗೆ ಹೋಗುವ ಯಾರಾದರೂ ತಮ್ಮ ಆಧಾರ್ ಅಥವಾ ಮಾನ್ಯ ಫೋಟೋ ಗುರುತಿನ ಚೀಟಿಯನ್ನು ಹೊಂದಿರಬೇಕು ಮತ್ತು ಅವರ ಟೋಕನ್-ಸಂಗ್ರಹಣಾ ವಿಂಡೋವನ್ನು ಟ್ರ್ಯಾಕ್ ಮಾಡಬೇಕು.&lt;/p&gt;&lt;h2&gt;&lt;strong&gt;ಆನ್&zwnj;ಲೈನ್ ಬುಕಿಂಗ್&zwnj;ಗಳಿಗೆ ಆಧಾರ್ ಕಾರ್ಡ್ ಕಡ್ಡಾಯ&lt;/strong&gt;&lt;/h2&gt;&lt;p&gt;ಅಸ್ತಿತ್ವದಲ್ಲಿರುವ ನಿಯಮದಂತೆ, IRCTC ವೆಬ್&zwnj;ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್&zwnj;ನಲ್ಲಿ ತತ್ಕಾಲ್ ಟಿಕೆಟ್&zwnj;ಗಳನ್ನು ಆಧಾರ್-ದೃಢೀಕರಿಸಿದ ಬಳಕೆದಾರರು ಮಾತ್ರ ಬುಕ್ ಮಾಡಬಹುದು, ಬುಕಿಂಗ್ ಅನ್ನು ಪೂರ್ಣಗೊಳಿಸಲು ಅಗತ್ಯವಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಬಾರಿ ಪಾಸ್&zwnj;ವರ್ಡ್ ಕಳುಹಿಸಲಾಗುತ್ತದೆ. ಅಧಿಕೃತ ಏಜೆಂಟರು ತತ್ಕಾಲ್ ವಿಂಡೋದ ಮೊದಲ 30 ನಿಮಿಷಗಳ ಅವಧಿಯಲ್ಲಿ, AC ತರಗತಿಗಳಿಗೆ ಬೆಳಿಗ್ಗೆ 10 ರಿಂದ 10:30 ರವರೆಗೆ ಮತ್ತು AC ಅಲ್ಲದ ತರಗತಿಗಳಿಗೆ ಬೆಳಿಗ್ಗೆ 11 ರಿಂದ 11:30 ರವರೆಗೆ ಬುಕಿಂಗ್ ಮಾಡುವುದನ್ನು ಸಹ ನಿಷೇಧಿಸಲಾಗಿದೆ.&lt;/p&gt;&lt;h3&gt;&lt;strong&gt;IRCTC ವೆಬ್&zwnj;ಸೈಟ್&zwnj;ನಲ್ಲಿ ಆನ್&zwnj;ಲೈನ್ ಬುಕಿಂಗ್&zwnj;ಗಳು ತ್ವರಿತವಾಗಿ ಪಡೆಯಿರಿ&lt;/strong&gt;&lt;/h3&gt;&lt;p&gt;ಪ್ರತ್ಯೇಕವಾಗಿ, ಪರಿಷ್ಕರಿಸಿದ IRCTC ಬೀಟಾ ವೆಬ್&zwnj;ಸೈಟ್ ವ್ಯತ್ಯಾಸವನ್ನುಂಟುಮಾಡುತ್ತಿರುವಂತೆ ತೋರುತ್ತಿದೆ. ಐಆರ್&zwnj;ಸಿಟಿಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಬೀಟಾ ಸೈಟ್ ಬಿಡುಗಡೆಯಾದ ನಂತರ ತತ್ಕಾಲ್ ವಿಂಡೋದ ಮೊದಲ ಮೂರು ನಿಮಿಷಗಳಲ್ಲಿ ಪೂರ್ಣಗೊಂಡ ಬುಕಿಂಗ್&zwnj;ಗಳು ಶೇಕಡಾ 5 ಕ್ಕಿಂತ ಹೆಚ್ಚು ಏರಿಕೆಯಾಗಿವೆ, ಜುಲೈ ಆರಂಭಕ್ಕೆ ಹೋಲಿಸಿದರೆ ಐದು ನಿಮಿಷಗಳಲ್ಲಿ ಬುಕಿಂಗ್&zwnj;ಗಳಲ್ಲಿ ಶೇಕಡಾ 3 ರಷ್ಟು ಹೆಚ್ಚಳ ಮತ್ತು 30 ನಿಮಿಷಗಳಲ್ಲಿ ಶೇಕಡಾ 2 ರಷ್ಟು ಹೆಚ್ಚಳವಾಗಿದೆ. ಜುಲೈ 2026 ರಲ್ಲಿ ಆನ್&zwnj;ಲೈನ್ ಬುಕಿಂಗ್&zwnj;ಗಳು ಎಲ್ಲಾ ರೈಲ್ವೆ ಟಿಕೆಟ್ ಬುಕಿಂಗ್&zwnj;ಗಳಲ್ಲಿ ಒಟ್ಟಾರೆಯಾಗಿ ದಾಖಲೆಯ ಶೇಕಡಾ 89.84 ರಷ್ಟು ಪಾಲನ್ನು ತಲುಪಿವೆ. ಆನ್&zwnj;ಲೈನ್&zwnj;ನಲ್ಲಿ ಬುಕಿಂಗ್ ಮಾಡುವವರಿಗೆ, ಟೇಕ್&zwnj;ಅವೇ ಸರಳವಾಗಿದೆ: ಆಧಾರ್ ದೃಢೀಕರಣವನ್ನು ಮುಂಚಿತವಾಗಿಯೇ ಇರಿಸಿ, ಏಕೆಂದರೆ ವಿಂಡೋ ತೆರೆದ ನಂತರ ವಿಂಗಡಿಸಲು ಕೊನೆಯ ನಿಮಿಷದ ದಾಖಲೆಗಳಿಲ್ಲದಿದ್ದರೆ ಮಾತ್ರ ವೇಗವಾದ ಸೈಟ್ ಸಹಾಯ ಮಾಡುತ್ತದೆ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/travel/indian-railways-introduces-new-tatkal-booking-rules-key-changes-explained-suc/articleshow-zliz2b3"/>
        </item>
        <item>
            <title><![CDATA[ಗೋವಾದ ರಹಸ್ಯ ಸ್ವರ್ಗ: ಒಂದು ರಾತ್ರಿಗೆ ₹21 ಲಕ್ಷ , ಈ ಅಲ್ಟ್ರಾ-ಲಕ್ಸುರಿ ವಿಲ್ಲಾದ ಒಡತಿ ಯಾರು ಗೊತ್ತಾ?]]></title>
            <link>https://kannada.asianetnews.com/business/palacio-aguada-inside-goa-rs-1-lakh-per-night-secret-luxury-villa-owned-by-gvk-group-gdp/articleshow-zog0fsf</link>
            <guid isPermaLink="true">https://kannada.asianetnews.com/business/palacio-aguada-inside-goa-rs-1-lakh-per-night-secret-luxury-villa-owned-by-gvk-group-gdp/articleshow-zog0fsf</guid>
            <pubDate>Fri, 31 Jul 2026 18:32:50 +0530</pubDate>
            <description><![CDATA[ಗೋವಾದಲ್ಲಿರುವ 'ಪಲಾಸಿಯೊ ಅಗುವಾಡಾ' ಎಂಬುದು ₹830 ಕೋಟಿ ಮೌಲ್ಯದ, ಆಹ್ವಾನಿತರಿಗೆ ಮಾತ್ರ ಸೀಮಿತವಾದ ಐಷಾರಾಮಿ ವಿಲ್ಲಾ. ಜಿವಿಕೆ ಗ್ರೂಪ್&zwnj;ನ ಸಂಜಯ್ ರೆಡ್ಡಿ ಮತ್ತು ಪಿಂಕಿ ರೆಡ್ಡಿ ಮಾಲೀಕತ್ವದ ಈ ಎಸ್ಟೇಟ್&zwnj;ನಲ್ಲಿ ಒಂದು ರಾತ್ರಿ ತಂಗಲು ಕನಿಷ್ಠ ₹21 ಲಕ್ಷ ವೆಚ್ಚವಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyw3mh30t14jxvp2tegz9mnp,imgname-palacio-aguada-1785502254175.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೋವಾದ ಒಂದು ಶಾಂತ ಹಾಗೂ ಅತ್ಯಂತ ರಮಣೀಯ ಮೂಲೆಯಲ್ಲಿ ಅಡಗಿರುವ ಅದ್ಭುತ ಐತಿಹಾಸಿಕ ವಿಲ್ಲಾ ಒಂದಿದೆ. ಈ ಜಾಗದ ಬಗ್ಗೆ ಜಗತ್ತಿನಲ್ಲಿ ತಿಳಿದಿರುವುದು ತೀರಾ ಕೆಲವೇ ಜನರಿಗೆ ಮಾತ್ರ. ಇನ್ನು ಇದರ ಒಳಗೆ ಹೆಜ್ಜೆ ಇಡುವ ಭಾಗ್ಯ ಸಿಗುವುದು ಅದಕ್ಕಿಂತಲೂ ಕಡಿಮೆ ಜನರಿಗೆ! ಅದೇ ಗೋವಾದ ಅತ್ಯಂತ ವಿಶಿಷ್ಟ ಮತ್ತು ದುಬಾರಿ ಐಷಾರಾಮಿ ಆಶ್ರಯ ತಾಣಗಳಲ್ಲಿ ಒಂದಾದ 'ಪಲಾಸಿಯೊ ಅಗುವಾಡಾ' (Palacio Aguada). ಕಲ್ಲಿನ ಬೆಟ್ಟದ ಇಳಿಜಾರಿನಲ್ಲಿ ನಿರ್ಮಾಣಗೊಂಡಿರುವ, ಸುಮಾರು $100 ಮಿಲಿಯನ್ (ಅಂದಾಜು 830 ಕೋಟಿಗೂ ಅಧಿಕ ರೂಪಾಯಿ) ಮೌಲ್ಯದ ಈ ಖಾಸಗಿ ಎಸ್ಟೇಟ್, ಅರಬ್ಬೀ ಸಮುದ್ರ ಮತ್ತು ರಮಣೀಯ ಅಗುವಾಡಾ ಕೊಲ್ಲಿಯ ಕಣ್ಣು ಕೋರೈಸುವಂತಹ ಅದ್ಭುತ ನೋಟವನ್ನು ಹೊಂದಿದೆ.&lt;/p&gt;&lt;p&gt;ಐದು ಎಕರೆಗಳ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ತಾಣವು ಕೆಂಪು ಲ್ಯಾಟರೈಟ್ (ಜಂಬಿಟ್ಟಿಗೆ) ಕಲ್ಲುಗಳಿಂದ ಕೆತ್ತಲ್ಪಟ್ಟ ಒಂದು ವಾಸ್ತುಶಿಲ್ಪದ ಅದ್ಭುತವಾಗಿದೆ. ಇದು ಪೋರ್ಚುಗೀಸ್, ಮೊರೊಕನ್ ಮತ್ತು ಮೆಡಿಟರೇನಿಯನ್ ಶೈಲಿಯ ವಾಸ್ತುಶಿಲ್ಪವನ್ನು ಇಂದಿನ ಆಧುನಿಕ ಸೌಕರ್ಯಗಳೊಂದಿಗೆ ಅತ್ಯಂತ ಸುಂದರವಾಗಿ ಸಂಯೋಜಿಸುತ್ತದೆ.&lt;/p&gt;&lt;h2&gt;ವಾಸ್ತುಶಿಲ್ಪದ ವೈಭವ ಮತ್ತು ಸೌಕರ್ಯಗಳು&lt;/h2&gt;&lt;p&gt;ಈ ಭವ್ಯ ವಿಲ್ಲಾದಲ್ಲಿ ಒಟ್ಟು 10 ಐಷಾರಾಮಿ ಸೂಟ್&zwnj;ಗಳು (Suites) ಇದ್ದು, ಅತ್ಯಂತ ಆಪ್ತ ಹಾಗೂ ವೈಯಕ್ತಿಕ ಸಮಾರಂಭಗಳನ್ನು ಆಚರಿಸಲು ಸೂಕ್ತವಾದ ಹಲವು ಸುಂದರ ಜಾಗಗಳನ್ನು ವಿನ್ಯಾಸಗೊಳಿಸಲಾಗಿದೆ. ವಿಲ್ಲಾದ ಒಳಗಿರುವ ಕಲಾತ್ಮಕವಾಗಿ ಬಾಗಿದ ಮೆಟ್ಟಿಲುಗಳು, ಕಮಾನು ಶೈಲಿಯ ಭವ್ಯ ಛಾವಣಿಗಳು, ಸುಂದರವಾದ ಉದ್ಯಾನವನಗಳು ಮತ್ತು ಜಗತ್ತಿನ ವಿವಿಧೆಡೆಗಳಿಂದ ಅತ್ಯಂತ ಕಾಳಜಿಯಿಂದ ಸಂಗ್ರಹಿಸಲಾದ ಅಪರೂಪದ ಕಲಾಕೃತಿಗಳು ಈ ಎಸ್ಟೇಟ್&zwnj;ಗೆ ರಾಜಮನೆತನದ ಭವ್ಯತೆಯನ್ನು ತಂದುಕೊಟ್ಟಿವೆ.&lt;/p&gt;&lt;h2&gt;ಪಲಾಸಿಯೊ ಅಗುವಾಡಾದಲ್ಲಿ ವಾಸ್ತವ್ಯ ಹೂಡುವುದು ಹೇಗೆ?&lt;/h2&gt;&lt;p&gt;ಇಷ್ಟು ಸುಂದರವಾದ ಜಾಗದಲ್ಲಿ ನಾವು ರೂಮ್ ಬುಕ್ ಮಾಡಬಹುದೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಇದು ಸಾಮಾನ್ಯ ಹೋಟೆಲ್&zwnj;ಗಳಂತಲ್ಲ. ಈ ಎಸ್ಟೇಟ್ ಸಂಪೂರ್ಣವಾಗಿ 'ಆಹ್ವಾನಿತರಿಗೆ ಮಾತ್ರ' (Invite-only) ಸೀಮಿತವಾಗಿರುವ ಅತ್ಯಂತ ವಿಶೇಷ ಆಶ್ರಯ ತಾಣವಾಗಿದೆ. ಇದು Airbnb ಆಗಲಿ ಅಥವಾ ಯಾವುದೇ ಇತರ ಸಾಮಾನ್ಯ ಬುಕಿಂಗ್ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಾಗಲಿ ಲಭ್ಯವಿಲ್ಲ.&lt;/p&gt;&lt;p&gt;ಗೋವಾದ ಈ ಅದ್ಭುತ ವಿಲ್ಲಾದಲ್ಲಿ ಉಳಿಯಲು ಇಚ್ಛಿಸುವವರು ಪಲಾಸಿಯೊ ಅಗುವಾಡಾದ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ, ಅಲ್ಲಿರುವ ವಿಶೇಷ ಫಾರ್ಮ್ ಮೂಲಕ ಆಹ್ವಾನಕ್ಕಾಗಿ ವಿನಂತಿ (Request an Invitation) ಸಲ್ಲಿಸಬೇಕಾಗುತ್ತದೆ. ಅವರ ಪರಿಶೀಲನೆಯ ನಂತರವಷ್ಟೇ ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಸಿಗುತ್ತದೆ.&lt;/p&gt;&lt;h2&gt;ಈ ಅಪರೂಪದ ಅರಮನೆಯ ಒಡೆಯರು ಯಾರು?&lt;/h2&gt;&lt;p&gt;ಪ್ರಸ್ತುತ ಈ ಅದ್ಭುತ ವಿಲ್ಲಾದ ಮಾಲೀಕರು ಭಾರತದ ಪ್ರಸಿದ್ಧ ಉದ್ಯಮಿ ದಂಪತಿಗಳಾದ ಸಂಜಯ್ ರೆಡ್ಡಿ ಮತ್ತು ಪಿಂಕಿ ರೆಡ್ಡಿ. ಸಂಜಯ್ ರೆಡ್ಡಿ ಅವರು ಇಂಧನ, ವಿಮಾನ ನಿಲ್ದಾಣಗಳು, ಸಾರಿಗೆ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಪ್ರಖ್ಯಾತ 'ಜಿವಿಕೆ ಗ್ರೂಪ್' (GVK Group) ಸಂಸ್ಥೆಯ ಉಪಾಧ್ಯಕ್ಷರಾಗಿದ್ದಾರೆ. ಇನ್ನು ಅವರ ಪತ್ನಿ ಪಿಂಕಿ ರೆಡ್ಡಿ ಅವರು ಯಶಸ್ವಿ ಉದ್ಯಮಿ ಹಾಗೂ ಭಾರತದ ಉನ್ನತ ಸಾಮಾಜಿಕ ವಲಯದಲ್ಲಿ (Socialite) ಗುರುತಿಸಿಕೊಂಡಿರುವ ಗಣ್ಯ ವ್ಯಕ್ತಿಯಾಗಿದ್ದಾರೆ. ಇವರು ಪ್ರಮುಖ ಕೈಗಾರಿಕೋದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕರಾದ ಟಿ. ಸುಬ್ಬರಾಮಿ ರೆಡ್ಡಿ ಅವರ ಪುತ್ರಿಯಾಗಿದ್ದಾರೆ. ಈ ದಂಪತಿಗಳು ಪ್ರಸ್ತುತ ಹೈದರಾಬಾದ್&zwnj;ನಲ್ಲಿ ನೆಲೆಸಿದ್ದು, ಅಲ್ಲಿನ ಬಂಜಾರ ಹಿಲ್ಸ್&zwnj;ನಲ್ಲಿರುವ ಇವರ ವಿಶಾಲವಾದ ಎಸ್ಟೇಟ್ ಕೂಡ ನಗರದ ಗದ್ದಲದ ನಡುವೆ ಇರುವ ಒಂದು ಐಷಾರಾಮಿ ಓಯಸಿಸ್ ಎಂದೇ ಪ್ರಸಿದ್ಧಿಯಾಗಿದೆ.&lt;/p&gt;&lt;h2&gt;ವಿಲ್ಲಾದ ಇತಿಹಾಸ ಮತ್ತು ಮಾಲೀಕತ್ವದ ಹಿನ್ನೆಲೆ&lt;/h2&gt;&lt;p&gt;ಪ್ರಸಿದ್ಧ ನಿಯತಕಾಲಿಕೆ 'ಕಾಂಡೆ ನಾಸ್ಟ್ ಟ್ರಾವೆಲರ್' (Conde Nast Traveller) 2025ರಲ್ಲಿ ಪ್ರಕಟಿಸಿದ ಲೇಖನದ ಪ್ರಕಾರ, ಈ ಐಷಾರಾಮಿ ವಿಲ್ಲಾವನ್ನು 1980ರ ದಶಕದಲ್ಲಿ ಮುಂಬೈ ಮೂಲದ ಪಾರ್ಸಿ ಸಮುದಾಯದ ಪ್ರಸಿದ್ಧ ಸಾಮಾಜಿಕ ಗಣ್ಯರಾದ (Socialite) ಜಿಮ್ಮಿ ಗಜ್ದಾರ್ ಎಂಬುವವರು ನಿರ್ಮಿಸಿದ್ದರು. ಆ ಕಾಲದಲ್ಲಿ ಈ ಜಾಗವು ಅವರು ಆಯೋಜಿಸುತ್ತಿದ್ದ ಪೌರಾಣಿಕ ಹೊಸ ವರ್ಷದ ಪಾರ್ಟಿಗಳಿಗೆ (New Year Parties) ಸಾಕ್ಷಿಯಾಗಿ ಅತ್ಯಂತ ಪ್ರಸಿದ್ಧಿ ಪಡೆದಿತ್ತು.&lt;/p&gt;&lt;p&gt;ಪಿಂಕಿ ಮತ್ತು ಸಂಜಯ್ ರೆಡ್ಡಿ ದಂಪತಿಗಳು 2000ನೇ ಇಸವಿಯ ಮಿಲೇನಿಯಮ್ ಹೊಸ ವರ್ಷದ ಮಧ್ಯರಾತ್ರಿಯ ನೃತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಾಗ ಮೊದಲ ಬಾರಿಗೆ ಈ ಪಲಾಸಿಯೊ ಅಗುವಾಡಾಗೆ ಕಾಲಿಟ್ಟಿದ್ದರು. ಆ ಜಾಗದ ಸೌಂದರ್ಯಕ್ಕೆ ಮಾರುಹೋಗಿದ್ದ ಅವರು, ವರ್ಷಗಳ ನಂತರ ಜಿಮ್ಮಿ ಗಜ್ದಾರ್ ಅವರ ಉತ್ತರಾಧಿಕಾರಿಗಳಿಂದ ಈ ಇಡೀ ಎಸ್ಟೇಟ್ ಅನ್ನು ಖರೀದಿಸಿದರು. ಈ ಭವ್ಯ ಮನೆಯನ್ನು 2021 ರಲ್ಲಿ ಪಿಂಕಿ ರೆಡ್ಡಿ ಅವರ ಹೆಸರಿನಲ್ಲಿ ಅಧಿಕೃತವಾಗಿ ನೋಂದಾಯಿಸಲಾಗಿದೆ.&lt;/p&gt;&lt;h2&gt;ಇಲ್ಲಿ ಒಂದು ರಾತ್ರಿ ಕಳೆಯಲು ತಗಲುವ ವೆಚ್ಚ ಎಷ್ಟು?&lt;/h2&gt;&lt;p&gt;ಮಾಹಿತಿಯ ಪ್ರಕಾರ, ಪಲಾಸಿಯೊ ಅಗುವಾಡಾದಲ್ಲಿ ಕೇವಲ ಒಂದು ರಾತ್ರಿ ಉಳಿಯಲು ಕನಿಷ್ಠ ₹21 ಲಕ್ಷದಿಂದ ಬಾಡಿಗೆ ಆರಂಭವಾಗುತ್ತದೆ! ಅಷ್ಟೇ ಅಲ್ಲದೆ, ಇಲ್ಲಿ ಉಳಿಯಬೇಕಾದರೆ ಕನಿಷ್ಠ ಎರಡು ರಾತ್ರಿಗಳಿಗಾಗಿ ಇಡೀ ಎಸ್ಟೇಟ್ ಅನ್ನು ಸಂಪೂರ್ಣವಾಗಿ ಬುಕ್ ಮಾಡುವುದು ಕಡ್ಡಾಯವಾಗಿದೆ.&lt;/p&gt;&lt;p&gt;&quot;ಪಲಾಸಿಯೊ ಅಗುವಾಡಾವನ್ನು ಕೇವಲ ಖಾಸಗಿ ಮತ್ತು ಸಂಪೂರ್ಣ ಎಸ್ಟೇಟ್ ಅನುಭವವಾಗಿ ಮಾತ್ರ ನೀಡಲಾಗುತ್ತದೆ,&quot; ಎಂದು ಅವರ ಅಧಿಕೃತ ವೆಬ್&zwnj;ಸೈಟ್ ಸ್ಪಷ್ಟಪಡಿಸುತ್ತದೆ. ಇಲ್ಲಿರುವ 10 ಐಷಾರಾಮಿ ಸೂಟ್&zwnj;ಗಳಲ್ಲಿ ಗರಿಷ್ಠ 20 ಅತಿಥಿಗಳು ಅತ್ಯಂತ ಆರಾಮದಾಯಕವಾಗಿ ತಂಗಬಹುದಾಗಿದ್ದು, ಇದು ಆಪ್ತ ಒಕ್ಕೂಟಗಳು, ರಾಯಲ್ ಆಚರಣೆಗಳು ಅಥವಾ ಅತ್ಯಂತ ಶಾಂತವಾದ ರಜೆ ದಿನಗಳನ್ನು ಕಳೆಯಲು ಜಗತ್ತಿನ ಶ್ರೀಮಂತರ ನೆಚ್ಚಿನ ರಹಸ್ಯ ತಾಣವಾಗಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/business/palacio-aguada-inside-goa-rs-1-lakh-per-night-secret-luxury-villa-owned-by-gvk-group-gdp/articleshow-zog0fsf"/>
        </item>
    </channel>
</rss>
