<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 20 May 2026 14:35:06 +0530</lastBuildDate>
        <atom:link href="https://kannada.asianetnews.com/rss/travel" rel="self" type="application/rss+xml"/>
        <item>
            <title><![CDATA[ಮನೆ ಮುಂದೆಯೇ ಟ್ರೈನ್ ಪಾರ್ಕಿಂಗ್! ದೇಶದಲ್ಲೇ ಸ್ವಂತ ರೈಲ್ವೆ ಸ್ಟೇಷನ್ ಹೊಂದಿದ್ದ ಏಕೈಕ ವ್ಯಕ್ತಿ ಈತ!]]></title>
            <link>https://kannada.asianetnews.com/gallery/life/the-indian-nawab-who-owned-a-private-railway-station-and-luxury-train-kvn-2tq7y7z</link>
            <guid isPermaLink="true">https://kannada.asianetnews.com/gallery/life/the-indian-nawab-who-owned-a-private-railway-station-and-luxury-train-kvn-2tq7y7z</guid>
            <pubDate>Wed, 20 May 2026 12:17:04 +0530</pubDate>
            <description><![CDATA[ಐಷಾರಾಮಿ ಪ್ರಯಾಣಕ್ಕಾಗಿ ಕಾರು, ಬಸ್ಸು ಖರೀದಿಸುವುದನ್ನು ನೋಡಿದ್ದೇವೆ. ಇನ್ನೂ ಶ್ರೀಮಂತರಾದರೆ ಪ್ರೈವೇಟ್ ಜೆಟ್ ಖರೀದಿಸುತ್ತಾರೆ. ಆದರೆ, ಸ್ವಂತ ರೈಲು, ಅದನ್ನು ಪಾರ್ಕ್ ಮಾಡಲು ಮನೆಯಲ್ಲೇ ರೈಲ್ವೆ ನಿಲ್ದಾಣ ಹೊಂದಿದ್ದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ?]]></description>
            <media:content url="https://static.asianetnews.com/images/w-1280,h-720,format-jpg,imgid-01ks1zdvb5mqxs5ezyqcsqxwwb,imgname-d7d900ea-b348-4fff-bfd1-c9d7a4db4647-1779256716645.jpg" type="image/jpeg" height="390" width="690"/>
            <content:encoded><![CDATA[ಐಷಾರಾಮಿ ಪ್ರಯಾಣಕ್ಕಾಗಿ ಕಾರು, ಬಸ್ಸು ಖರೀದಿಸುವುದನ್ನು ನೋಡಿದ್ದೇವೆ. ಇನ್ನೂ ಶ್ರೀಮಂತರಾದರೆ ಪ್ರೈವೇಟ್ ಜೆಟ್ ಖರೀದಿಸುತ್ತಾರೆ. ಆದರೆ, ಸ್ವಂತ ರೈಲು, ಅದನ್ನು ಪಾರ್ಕ್ ಮಾಡಲು ಮನೆಯಲ್ಲೇ ರೈಲ್ವೆ ನಿಲ್ದಾಣ ಹೊಂದಿದ್ದ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ?&lt;img&gt;&lt;p&gt;ಶ್ರೀಮಂತರು ತಮ್ಮ ಅರಮನೆಯಂತಹ ಮನೆಯ ಮುಂದೆ ರೋಲ್ಸ್ ರಾಯ್ಸ್, ಟೆಸ್ಲಾ, ಬಿಎಂಡಬ್ಲ್ಯು ಮುಂತಾದ ದುಬಾರಿ ಕಾರುಗಳನ್ನು ನಿಲ್ಲಿಸಲು ಇಷ್ಟಪಡುತ್ತಾರೆ. ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವುದು ಮಾತ್ರವಲ್ಲ, ಅದನ್ನು ಮನೆಯ ಮುಂದೆ ನಿಲ್ಲಿಸುವುದನ್ನೂ ಅವರು ಪ್ರತಿಷ್ಠೆಯ ಸಂಕೇತವೆಂದು ಭಾವಿಸುತ್ತಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಇಂತಹ ಹತ್ತಾರು ಕಾರುಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಅನೇಕರಿದ್ದಾರೆ. ಅಷ್ಟೇ ಏಕೆ, ಐಷಾರಾಮಿ ಬಸ್ಸುಗಳು (ಕ್ಯಾರವಾನ್&zwnj;ಗಳು) ಮತ್ತು ಖಾಸಗಿ ಜೆಟ್&zwnj;ಗಳನ್ನು ಹೊಂದಿರುವ ಶ್ರೀಮಂತರೂ ಇದ್ದಾರೆ.&lt;/p&gt;&lt;img&gt;&lt;p&gt;ಆದರೆ, ಆ ಕಾಲದಲ್ಲೇ ಒಬ್ಬ ಭಾರತೀಯ ನವಾಬ, ತನಗಾಗಿ ಒಂದು ಐಷಾರಾಮಿ ರೈಲನ್ನು ನಿರ್ವಹಿಸುತ್ತಿದ್ದ. ಅಷ್ಟೇ ಅಲ್ಲ, ಆ ರೈಲು ನೇರವಾಗಿ ತನ್ನ ಅರಮನೆಯ ಬಳಿ ನಿಲ್ಲುವಂತೆ ಮಾಡಲು ಸ್ವಂತ ರೈಲ್ವೆ ನಿಲ್ದಾಣವನ್ನೇ ನಿರ್ಮಿಸಿದ್ದ. ಹೀಗೆ ಭಾರತದಲ್ಲಿ ಸ್ವಂತ ರೈಲು ಮತ್ತು ಅದನ್ನು ನಿಲ್ಲಿಸಲು ಮನೆಯ ಬಳಿಯೇ ರೈಲ್ವೆ ನಿಲ್ದಾಣವನ್ನು ನಿರ್ಮಿಸಿಕೊಂಡಿದ್ದ ಆ ಏಕೈಕ ವ್ಯಕ್ತಿಯ ಬಗ್ಗೆ ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ನವಾಬ್ ಫೈಜ್ ಉಲ್ಲಾ ಖಾನ್ ಅವರು 1774ರಲ್ಲಿ ಉತ್ತರ ಪ್ರದೇಶದ ರಾಂಪುರ ಸಂಸ್ಥಾನವನ್ನು ಸ್ಥಾಪಿಸಿದರು. ಬ್ರಿಟಿಷರ ಆಳ್ವಿಕೆಯಲ್ಲೂ ಈ ಸಂಸ್ಥಾನವು ಸ್ವತಂತ್ರವಾಗಿತ್ತು ಮತ್ತು ತನ್ನ ಶ್ರೀಮಂತ ಸಂಸ್ಕೃತಿ ಹಾಗೂ ಸಾಹಿತ್ಯಿಕ ವೈಭವಕ್ಕೆ ಹೆಸರುವಾಸಿಯಾಗಿತ್ತು. ಹೈದರಾಬಾದ್ ನಿಜಾಮರಂತೆಯೇ, ಈ ಸಂಸ್ಥಾನವನ್ನು ಆಳಿದ ನವಾಬರು ಕೂಡ ಅಪಾರ ಸಿರಿ ಸಂಪತ್ತನ್ನು ಹೊಂದಿದ್ದರು. ಅವರು ಅತ್ಯಂತ ವಿಲಾಸಿ ಜೀವನವನ್ನು ನಡೆಸುತ್ತಿದ್ದರು.&amp;nbsp;&lt;/p&gt;&lt;img&gt;&lt;p&gt;ಈ ರಾಂಪುರ ಸಂಸ್ಥಾನವನ್ನು ಆಳಿದ ಒಂಬತ್ತನೇ ನವಾಬ ಹಮೀದ್ ಅಲಿ ಖಾನ್ ಅವರ ಜೀವನವು ಐಷಾರಾಮಕ್ಕೆ ಮತ್ತೊಂದು ಹೆಸರಾಗಿತ್ತು. ಅವರು ಬ್ರಿಟಿಷರ ಸಹಾಯದಿಂದ ತಮ್ಮದೇ ಆದ ರೈಲ್ವೆ ನಿಲ್ದಾಣವನ್ನು ನಿರ್ಮಿಸಿಕೊಂಡರು. ಇದನ್ನು ಮುಖ್ಯ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸಲು, ತಮ್ಮ ಸ್ವಂತ ಹಣದಿಂದ 40 ಕಿಲೋಮೀಟರ್ ಉದ್ದದ ರೈಲ್ವೆ ಮಾರ್ಗವನ್ನು ಹಾಕಿಸಿದರು. ಅವರ ಅರಮನೆಯ ಬಳಿಯ ರೈಲ್ವೆ ನಿಲ್ದಾಣದಲ್ಲಿ ಯಾವಾಗಲೂ ಒಂದು ಐಷಾರಾಮಿ ರೈಲು ಸಿದ್ಧವಾಗಿರುತ್ತಿತ್ತು. ಈ ರೈಲ್ವೆ ನಿಲ್ದಾಣದ ನಿರ್ಮಾಣಕ್ಕಾಗಿಯೇ ನವಾಬ ಹಮೀದ್ ಅಲಿ ಖಾನ್ ಅಂದಿನ ಕಾಲದಲ್ಲಿ ಬರೋಬ್ಬರಿ 113 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರಂತೆ. ಅಂದರೆ, ಇಂದಿನ ಮೌಲ್ಯದಲ್ಲಿ ಇದು ಸಾವಿರಾರು ಕೋಟಿ ರೂಪಾಯಿ ಆಗುತ್ತದೆ. ಹೀಗೆ, ದೇಶದಲ್ಲಿ ಸ್ವಂತ ರೈಲ್ವೆ ನಿಲ್ದಾಣವನ್ನು ಹೊಂದಿದ್ದ ಏಕೈಕ ವ್ಯಕ್ತಿ ಈ ಹಮೀದ್ ಅಲಿ ಖಾನ್.&lt;/p&gt;&lt;img&gt;ರಾಂಪುರದ ನವಾಬ ಹಮೀದ್ ಅಲಿ ಖಾನ್, ಅರಮನೆಯನ್ನೇ ಮೀರಿಸುವಂತಹ ರೈಲೊಂದನ್ನು ತಯಾರಿಸಿದ್ದರು. 1925ರಲ್ಲಿ 'ಬರೋಡಾ ಸ್ಟೇಟ್ ರೈಲ್ ಬಿಲ್ಡರ್ಸ್' ಈ ಐಷಾರಾಮಿ ರೈಲನ್ನು ನಿರ್ಮಿಸಿತು. ಈ ರೈಲಿನಲ್ಲಿ ನಾಲ್ಕು ಬೋಗಿಗಳಿದ್ದವು. ಇದರಲ್ಲಿ ನವಾಬ ಮತ್ತು ಅವರ ಕುಟುಂಬ ಸದಸ್ಯರು ಪ್ರಯಾಣಿಸಲು ಬೇಕಾದ ಎಲ್ಲಾ ಸೌಕರ್ಯಗಳಿದ್ದವು. ಪರ್ಷಿಯನ್ ಕಾರ್ಪೆಟ್&zwnj;ಗಳು, ಸುಂದರವಾದ ಫರ್ನಿಚರ್&zwnj;ಗಳು, ಕಿಟಕಿಗಳಿಗೆ ದುಬಾರಿ ಕರ್ಟನ್&zwnj;ಗಳು ಮತ್ತು ಬೃಹತ್ ಗೊಂಚಲುಗಳು ಈ ರೈಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದವು. ರಾಜಮನೆತನಕ್ಕಾಗಿ ವಿಶೇಷ ಮಲಗುವ ಕೋಣೆ ಮತ್ತು ಅಡುಗೆಮನೆಯೂ ಇತ್ತು. ನವಾಬರ ಕುಟುಂಬ ಮಾತ್ರವಲ್ಲದೆ, ಅವರ ಸೇವೆಗಾಗಿ ಪ್ರತ್ಯೇಕ ಕೋಚ್&zwnj;ಗಳೂ ಇದ್ದವು. ಇದಕ್ಕಾಗಿಯೇ ರಾಂಪುರದ ನವಾಬರು 'ದಿ ಸಲೂನ್' ಟ್ರೈನ್ ಅನ್ನು 'ಚಲಿಸುವ ಅರಮನೆ' ಎಂದು ಕರೆಯುತ್ತಿದ್ದರು. ಹೀಗೆ, ಕೇವಲ ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಒಂದು ರೈಲ್ವೆ ನಿಲ್ದಾಣ ಮತ್ತು ಐಷಾರಾಮಿ ರೈಲನ್ನು ವ್ಯವಸ್ಥೆ ಮಾಡಿಕೊಂಡಿದ್ದ ವ್ಯಕ್ತಿ ನವಾಬ್ ಹಮೀದ್ ಅಲಿ ಖಾನ್.]]></content:encoded>
            <category>travel</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/life/the-indian-nawab-who-owned-a-private-railway-station-and-luxury-train-kvn-2tq7y7z"/>
        </item>
        <item>
            <title><![CDATA[ನೇರಳೆ ಮಾರ್ಗದ ಮೆಟ್ರೊ ನಾಳೆ 2 ಗಂಟೆ ಸಂಚರಿಸಲ್ಲ: ಯಾವೆಲ್ಲಾ ಮಾರ್ಗ? ಫುಲ್​ ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/gallery/travel/purple-line-namma-metro-not-working-on-17th-may-due-to-works-suc-46e7cee</link>
            <guid isPermaLink="true">https://kannada.asianetnews.com/gallery/travel/purple-line-namma-metro-not-working-on-17th-may-due-to-works-suc-46e7cee</guid>
            <pubDate>Sat, 16 May 2026 15:43:13 +0530</pubDate>
            <description><![CDATA[&lt;p&gt;ಮೇ 17ರ ಭಾನುವಾರದಂದು, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿಯಿಂದಾಗಿ ಮೆಟ್ರೋ ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ. ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸೇವೆ ಸ್ಥಗಿತಗೊಳ್ಳಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krr4by1w1aj693nnc9w6kb6v,imgname-purple-line-namma-metro-1778926352444.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೇ 17ರ ಭಾನುವಾರದಂದು, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿಯಿಂದಾಗಿ ಮೆಟ್ರೋ ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ. ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸೇವೆ ಸ್ಥಗಿತಗೊಳ್ಳಲಿದೆ.&lt;/p&gt;&lt;img&gt;&lt;p&gt;ನಮ್ಮ ಮೆಟ್ರೊದಲ್ಲಿ ದಿನನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದಕ್ಕಾಗಿ ಮೆಟ್ರೊ ವಿಸ್ತರಣೆ ನಡೆಯುತ್ತಿದೆ. ಇದರ ಕಾಮಗಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ನಾಳೆ ಅರ್ಥಾತ್​ ಮೇ 17ರ ಭಾನುವಾರ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಹೊಸಹಳ್ಳಿ-ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಒಟ್ಟು ಎರಡು ಗಂಟೆಗಳ ಅವಧಿಗೆ ರೈಲು ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;img&gt;&lt;p&gt;ತುರ್ತು ನಿರ್ವಹಣಾ ಕಾಮಗಾರಿಗಾಗಿ ನೇರಳೆ ಮಾರ್ಗದಲ್ಲಿನ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ-ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಾಲ್ಕು ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ 2 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಸಂಚಾರ ಇರುವುದಿಲ್ಲ. ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರಿಗೆ ಸಂಚಾರ ಅಡಚರಣೆ ಎದುರಾಗಲಿದೆ. ಬದಲಾವಣೆ ನೋಡಿಕೊಂಡು ಪ್ರಯಾಣಿಕರು ಪ್ರಯಾಣ ಯೋಜಿಸುವಂತೆ ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಹೊಸಹಳ್ಳಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಕಾಮಗಾರಿ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಹಸಿರು, ಹಳದಿ ಮಾರ್ಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬೆಳಗ್ಗೆ 9:00 ಗಂಟೆಯ ನಂತರ ಈ ಮಾರ್ಗದಲ್ಲಿ ಎಂದಿನಂತೆ ರೈಲುಗಳು ಸಂಚರಿಸಲಿವೆ. ಪರ್ಯಾಯ ಮಾರ್ಗಗಳಲ್ಲಿ ಎಂದಿನಂತೆ ಸಂಚಾರ ಲಭ್ಯವಿರುತ್ತದೆ.&lt;/p&gt;&lt;img&gt;&lt;p&gt;ಇನ್ನುಳಿದ ಮಾರ್ಗಗಳಲ್ಲಿ ಬೆಳಗ್ಗೆ 7 ರಿಂದ ರೈಲು ಸೇವೆಗಳು ಲಭ್ಯವಿರಲಿವೆ. ಚಲ್ಲಘಟ್ಟದಿಂದ ವಿಜಯನಗರದವರೆಗೆ ಮತ್ತು ಎಂ.ಜಿ. ರಸ್ತೆಯಿಂದ ವೈಟ್&zwnj;ಫೀಲ್ಡ್&zwnj; (ಕಾಡುಗೋಡಿ) ನಿಲ್ದಾಣಗಳ ನಡುವೆ ರೈಲುಗಳು ಎಂದಿನ ವೇಳಾಪಟ್ಟಿಯಂತೆ ಚಲಿಸಲಿವೆ. ಮಾದಾವರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ (ಹಸಿರು ಮಾರ್ಗ) ನಡುವಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ (ಹಳದಿ ಮಾರ್ಗ) ನಡುವಿನ ಮೆಟ್ರೋ ರೈಲುಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ.&lt;/p&gt;&lt;img&gt;&lt;p&gt;* ಚಲ್ಲಘಟ್ಟ - ವಿಜಯನಗರವರೆಗೆ ಸಂಚಾರ ಎಂದಿನಂತೆ ಇರಲಿದೆ.&lt;/p&gt;&lt;p&gt;* ಎಂ.ಜಿ. ರಸ್ತೆ -ವೈಟ್&zwnj;ಫೀಲ್ಡ್ (ಕಾಡುಗೋಡಿ) ವರೆಗೆ ಸೇವೆ ಲಭ್ಯವಿದೆ.&lt;/p&gt;&lt;p&gt;* ಆ&zwnj;ರ್.ವಿ. ರಸ್ತೆ - ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಸೇವೆ ಇರಲಿದೆ.&lt;/p&gt;&lt;p&gt;* ಹಸಿರು ಮಾರ್ಗದಲ್ಲಿ ಸಂಚಾರ ಇರಲಿದೆ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/travel/purple-line-namma-metro-not-working-on-17th-may-due-to-works-suc-46e7cee"/>
        </item>
        <item>
            <title><![CDATA[ಈ ಜಾಗಗಳಲ್ಲಿ ರಾತ್ರಿ ಆತ್ಮಗಳು ಸಂಚರಿಸುತ್ತಂತೆ, ಬಾಲಿವುಡ್ ಸಿಟಿಯಲ್ಲೇ ಇದೆ ಭಯಾನಕ ಲೋಕ]]></title>
            <link>https://kannada.asianetnews.com/gallery/life/list-of-the-most-haunted-places-in-mumbai-where-people-are-afraid-to-go-people-get-scared-just-by-hearing-the-names-suh-7b18vmg</link>
            <guid isPermaLink="true">https://kannada.asianetnews.com/gallery/life/list-of-the-most-haunted-places-in-mumbai-where-people-are-afraid-to-go-people-get-scared-just-by-hearing-the-names-suh-7b18vmg</guid>
            <pubDate>Tue, 19 May 2026 12:40:47 +0530</pubDate>
            <description><![CDATA[&lt;p&gt;ಮಾಯಾನಗರಿ ಮುಂಬೈ ಅಂದ್ರೆ ಬಾಲಿವುಡ್&zwnj;, ಸೀ ಲಿಂಕ್&zwnj;, ತಾಜ್ ಹೋಟೆಲ್&zwnj;, ಫುಲ್ ನೈಟ್&zwnj;ಲೈಫ್ ಅಂತಲೇ ಜನರಿಗೆ ಗೊತ್ತು. ಆದರೆ ಇದೇ ಮುಂಬೈನಲ್ಲಿ ರಾತ್ರಿ ಹೊತ್ತಿಗೆ ಜನರನ್ನು ಬೆಚ್ಚಿಬೀಳಿಸುವ ಕೆಲ ಭಯಾನಕ ಜಾಗಗಳೂ ಇವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzggzabbshb745qe5dq9zvy,imgname-mosthauntedplacesinmumbai-1779173981514.jpeg" type="image/jpeg" height="390" width="690"/>
            <content:encoded><![CDATA[&lt;p&gt;ಮಾಯಾನಗರಿ ಮುಂಬೈ ಅಂದ್ರೆ ಬಾಲಿವುಡ್&zwnj;, ಸೀ ಲಿಂಕ್&zwnj;, ತಾಜ್ ಹೋಟೆಲ್&zwnj;, ಫುಲ್ ನೈಟ್&zwnj;ಲೈಫ್ ಅಂತಲೇ ಜನರಿಗೆ ಗೊತ್ತು. ಆದರೆ ಇದೇ ಮುಂಬೈನಲ್ಲಿ ರಾತ್ರಿ ಹೊತ್ತಿಗೆ ಜನರನ್ನು ಬೆಚ್ಚಿಬೀಳಿಸುವ ಕೆಲ ಭಯಾನಕ ಜಾಗಗಳೂ ಇವೆ.&lt;/p&gt;&lt;img&gt;&lt;p&gt;ಕೊಲಾಬಾದ ಸಮುದ್ರ ತೀರದ ಬಳಿ ಇರುವ ಮುಕೆಶ್ ಮಿಲ್ಸ್&zwnj; ಅನ್ನು ಮುಂಬೈನ ಅತ್ಯಂತ ಹಾಂಟೆಡ್ ಜಾಗಗಳಲ್ಲಿ ಒಂದೆಂದು ಕರೆಯಲಾಗುತ್ತದೆ. ಅನೇಕ ಬಾಲಿವುಡ್ ಸಿನಿಮಾಗಳ ಶೂಟಿಂಗ್ ಇಲ್ಲಿ ನಡೆದಿದ್ರೂ, ರಾತ್ರಿ ಹೊತ್ತಿಗೆ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬ ಮಾತುಗಳು ವರ್ಷಗಳಿಂದ ಕೇಳಿಬರುತ್ತಿವೆ. ಕೆಲವರು ಶೂಟಿಂಗ್ ವೇಳೆ ಕಾಣದ ಶಕ್ತಿ ಅನುಭವಿಸಿದ್ದೇವೆ ಎಂದೂ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಮಾಹಿಮ್&zwnj;ನಲ್ಲಿರುವ ಡಿ&rsquo;ಸೋಜಾ ಚಾಲ್ ಬಗ್ಗೆ ಹಲವು ಭಯಾನಕ ಕಥೆಗಳು ಹರಿದಾಡುತ್ತವೆ. ಈ ಜಾಗದಲ್ಲಿ ಮೃತಪಟ್ಟ ಮಹಿಳೆಯ ಆತ್ಮ ರಾತ್ರಿ ಸುಳಿದಾಡುತ್ತೆ ಎಂದು ಸ್ಥಳೀಯರು ಹೇಳುತ್ತಾರೆ. ರಾತ್ರಿ ಹೊತ್ತಿಗೆ ಹೆಜ್ಜೆ ಸದ್ದು, ಪಿಸುಮಾತು ಕೇಳಿಸುತ್ತದೆ ಎಂಬ ವದಂತಿಯಿಂದ ಈ ಚಾಲ್ ಭಯಾನಕ ಸ್ಥಳಗಳ ಪಟ್ಟಿಗೆ ಸೇರಿದೆ.&lt;/p&gt;&lt;img&gt;&lt;p&gt;ಹಗಲು ಪ್ರವಾಸಿಗರಿಂದ ಕಿಕ್ಕಿರಿದಿರುವ ಈ ರಾಷ್ಟ್ರೀಯ ಉದ್ಯಾನ, ರಾತ್ರಿ ಹೊತ್ತಿಗೆ ಸಂಪೂರ್ಣ ವಿಭಿನ್ನ ವಾತಾವರಣ ಪಡೆಯುತ್ತದೆ. ಕಾಡಿನೊಳಗೆ ವಿಚಿತ್ರ ಶಬ್ದಗಳು, ನೆರಳುಗಳು ಕಾಣುತ್ತವೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಯೇ ಕೆಲ ಭಾಗಗಳಿಗೆ ರಾತ್ರಿ ಹೋಗೋದನ್ನ ತಪ್ಪಿಸುತ್ತಾರೆ ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;ಪಾರ್ಸಿ ಸಮುದಾಯದ ಅಂತ್ಯಕ್ರಿಯೆಗಾಗಿ ಬಳಸಲಾಗುತ್ತಿದ್ದ ಈ ಸ್ಥಳದ ಸುತ್ತ ಹಲವು ಅಲೌಕಿಕ ಕಥೆಗಳು ಕೇಳಿಬರುತ್ತವೆ. ರಾತ್ರಿ ಹೊತ್ತಿಗೆ ಅಲ್ಲಿ ವಿಚಿತ್ರ ಅನುಭವವಾಗುತ್ತದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಇದರಿಂದಲೇ ಈ ಜಾಗವನ್ನು ಮುಂಬೈನ ಭಯಾನಕ ಸ್ಥಳಗಳಲ್ಲಿ ಒಂದೆಂದು ಕರೆಯಲಾಗುತ್ತದೆ.&lt;/p&gt;&lt;img&gt;&lt;p&gt;ಮುಂಬೈನ ಐಕಾನಿಕ್ ತಾಜ್ ಪ್ಯಾಲೆಸ್ ಹೋಟೆಲ್ ಕೂಡ ದೆವ್ವದ ಕಥೆಗಳಿಂದ ಸುದ್ದಿಯಾಗಿತ್ತು. ಹೋಟೆಲ್ ವಿನ್ಯಾಸ ಮಾಡಿದ ವಾಸ್ತುಶಿಲ್ಪಿ ಕಟ್ಟಡ ತನ್ನ ಪ್ಲಾನ್ ಪ್ರಕಾರ ನಿರ್ಮಾಣವಾಗಿಲ್ಲ ಅನ್ನೋ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂಬ ದಂತಕಥೆ ಇಂದಿಗೂ ವೈರಲ್ ಆಗುತ್ತಲೇ ಇದೆ. ಕೆಲವರು ಹೋಟೆಲ್&zwnj;ನಲ್ಲಿ ವಿಚಿತ್ರ ಅನುಭವಗಳ ಬಗ್ಗೆ ಮಾತನಾಡುತ್ತಾರೆ.&lt;/p&gt;]]></content:encoded>
            <category>travel</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/list-of-the-most-haunted-places-in-mumbai-where-people-are-afraid-to-go-people-get-scared-just-by-hearing-the-names-suh-7b18vmg"/>
        </item>
        <item>
            <title><![CDATA[ಬೆಳಗಾವಿ ವಿಮಾನ ನಿಲ್ದಾಣ ಜುಲೈಗೆ ಪೂರ್ಣ, ನೂತನ ಟರ್ಮಿನಲ್ ಪಿಎಂ ಮೋದಿಯಿಂದ ಉದ್ಘಾಟನೆ]]></title>
            <link>https://kannada.asianetnews.com/gallery/karnataka-districts/belagavi-sambra-airport-new-terminal-to-be-completed-by-july-likely-inauguration-by-pm-narendra-modi-gdp-836nu24</link>
            <guid isPermaLink="true">https://kannada.asianetnews.com/gallery/karnataka-districts/belagavi-sambra-airport-new-terminal-to-be-completed-by-july-likely-inauguration-by-pm-narendra-modi-gdp-836nu24</guid>
            <pubDate>Sun, 17 May 2026 18:23:56 +0530</pubDate>
            <description><![CDATA[&lt;p&gt;ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಟರ್ಮಿನಲ್ ಕಾಮಗಾರಿಯು ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಕಮಲ ಬಸದಿ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಟರ್ಮಿನಲ್ ಅನ್ನು ಆಗಸ್ಟ್-ಸೆಪ್ಟೆಂಬರ್&zwnj;ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟಿಸಲು ಯೋಜಿಸಲಾಗಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krtzf82mn9pwatyyn9m67a54,imgname-belagavi-airport---4--1779021881428.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಟರ್ಮಿನಲ್ ಕಾಮಗಾರಿಯು ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಕಮಲ ಬಸದಿ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಟರ್ಮಿನಲ್ ಅನ್ನು ಆಗಸ್ಟ್-ಸೆಪ್ಟೆಂಬರ್&zwnj;ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟಿಸಲು ಯೋಜಿಸಲಾಗಿದೆ. &amp;nbsp;&lt;/p&gt;&lt;img&gt;&lt;p&gt;ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಟರ್ಮಿನಲ್ ಕಾಮಗಾರಿ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಆಗಸ್ಟ್&zwnj;-ಸೆಪ್ಟೆಂಬರ್ ಮಧ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕರ ವಿಮಾನಯಾನ ಸಚಿವರಿಂದ ವರ್ಚ್ಯುವಲ್ ಮೂಲಕ ಉದ್ಘಾಟನೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.&lt;/p&gt;&lt;img&gt;&lt;p&gt;ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ನೂತನ ಟರ್ಮಿನಲ್ ಕಾಮಗಾರಿ ಪರಿಶೀಲಿಸಿದ ಬಳಿಕ ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರೊಂದಿಗೆ ಶನಿವಾರ ಸಭೆ ನಡೆಸಿ ಮತನಾಡಿದ ಅವರು, ನೂತನ ಟರ್ಮಿನಲ್ ಕಮಲ ಬಸದಿ ಮಾದರಿಯಲ್ಲಿ ಆಗುತ್ತಿದೆ. ಮುಖ್ಯ ರಸ್ತೆ ಚತುಷ್ಪಥ ಆಗಲಿದ್ದು ಜತೆಗೆ ಅಲ್ಲಿಂದ ತಿರುವು ಪಡೆಯುವಾಗಿನ ಪ್ರಮುಖ ರಸ್ತೆಯ ಪ್ರವೇಶ ದ್ವಾರವನ್ನೂ ಆಕರ್ಷವಾಗಿ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.&lt;/p&gt;&lt;img&gt;&lt;p&gt;ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಎಸಿ ಬಸ್ ಸೌಲಭ್ಯವಿದೆ. ಅದನ್ನು ಇಲ್ಲೂ ಕೊಡಿ ಎಂದು ವಿಮಾನ ನಿಲ್ದಾಣದ ನಿರ್ದೇಶಕಗೆ ಕೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವಿಕೆ, ಪ್ರತ್ಯೇಕ ಕಾರ್ಗೋ ಸೌಲಭ್ಯ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವೂ ಪತ್ರ ಬರೆದು ಕೇಳಿದೆ. ಈ ವಿಚಾರ ಸೇರಿದಂತೆ ಉಡಾನ್ ಯೋಜನೆ ಮರಳಿ ಆರಂಭಿಸುವಂತೆಯೂ ಪ್ರಧಾನಿಗಳ ಗಮನಕ್ಕೆ ತಂದಿದ್ದೇನೆ. ಈಗಾಗಲೇ ನನ್ನ ಮನವಿ ಮೇರೆಗೆ ಇಂಡಿಗೋದವರು ಬೆಳಗಾವಿ-ನವೀ ಮುಂಬೈಗೆ ವಿಮಾನ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;ಮುಂಬೈಗೆ ಸ್ಟಾರ್ ಏರ್ ವಿಮಾನ ಮತ್ತೆ ಆರಂಭವಾಗಿದೆ. ಆದರೆ, ಅರ್ಧದಷ್ಟು ಮಾತ್ರ ಪ್ರಯಾಣಿಕರು ಭರ್ತಿಯಾಗುತ್ತಿದ್ದಾರೆ. ಆದರೆ, ದೆಹಲಿ, ಬೆಂಗಳೂರು ವಿಮಾನಗಳು ಶೇ.90ರಷ್ಟು ಭರ್ತಿಯಾಗುತ್ತಿವೆ. ಮುಂದೆ ಅಹಮದಾಬಾದ್, ಜೋಧಪುರ್, ಚೆನ್ನೈ ಹಾಗೂ ಪುಣೆಗೆ ಸಂಪರ್ಕಕ್ಕೆ ಬೇಡಿಕೆ ಇದ್ದು, ಇಂಡಿಗೋ ಸಂಸ್ಥೆ ಸಮೀಕ್ಷೆ ನಡೆಸುತ್ತಿದೆ. ಹುಬ್ಬಳ್ಳಿಯಲ್ಲಿ ಸೇವೆ ನೀಡುತ್ತಿರುವ ಫ್ಲೈ 91 ಸಂಸ್ಥೆಯವರಿಗೂ ಇಲ್ಲೂ ಆರಂಭಿಸಿ ಎಂದು ಪತ್ರ ಬರೆದು ಕೇಳಿಕೊಂಡಿದ್ದಾಗಿ ತಿಳಿಸಿದರು.&lt;/p&gt;&lt;img&gt;&lt;p&gt;ನಿಲ್ದಾಣದ ರನ್&zwnj;ವೇ ವಿಸ್ತರಣೆ, ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್, ಸುರಕ್ಷತಾ ವ್ಯವಸ್ಥೆಗಳ ಅಭಿವೃದ್ಧಿಗೆ ಸುಮಾರು 15 ಎಕೆರೆ ಜಮೀನು ಅಗತ್ಯವಿದೆ. ಅದು ಭಾರತೀಯ ವಾಯು ಸೇನೆ ಅಧೀನದಲ್ಲಿದ್ದು, ನಮಗೆ ಹಸ್ತಾಂತರ ವಿಳಂಬವಾಗುತ್ತಿದೆ. ಹೀಗಾಗಿ, ಕಾಮಗಾರಿ ಆರಂಭಗೊಂಡಿಲ್ಲ. ವಾಯುಸೇನೆ ಅಧಿಕಾರಿಗಳು ಪ್ರತ್ಯೇಕ ಸಭೆ ಮಾಡಿ ತಿಳಿಸುವುದಾಗಿ ಸಭೆಗೆ ಹೇಳಿದ್ದಾರೆ. ಉಳಿದಂತೆ, ನಿಲ್ದಾಣ ವಿಸ್ತರಣೆಗೆ 72 ಎಕರೆ ಜಾಗದ ಪ್ರಸ್ತಾವನೆ ಜಿಲ್ಲಾಡಳಿತದಿಂದ ಕರ್ನಾಟಕ ಸರ್ಕಾರಕ್ಕೆ ರವಾನಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದರು. ಸಲಹಾ ಸಮಿತಿ ಸದಸ್ಯರಾ ರಾಜು ದೇಸಾಯಿ, ಸ್ನೇಹಲ್ ಕೋಲೆಕಾರ, ಜಯಸಿಂಗ್&zwnj; ರಜಪೂತ, ವಿಜಯ ಭದ್ರಾ, ರಾಹುಲ ಮುಚ್ಚಂಡಿ, ಹನುಮಂತ ಕಾಗಲಕರ, ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್ ಸಭೆಯಲ್ಲಿ ಇದ್ದರು.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/belagavi-sambra-airport-new-terminal-to-be-completed-by-july-likely-inauguration-by-pm-narendra-modi-gdp-836nu24"/>
        </item>
        <item>
            <title><![CDATA[ಯುರೋಪ್‌ ಈಗ ಮತ್ತಷ್ಟು ಹತ್ತಿರ: ಬೆಂಗಳೂರು - ಜ್ಯೂರಿಕ್‌ ನೇರ ವಿಮಾನ ಆರಂಭ, ಸ್ವಿಸ್ ಏರ್‌ಲೈನ್ಸ್‌ ಸಿಹಿ ಸುದ್ದಿ]]></title>
            <link>https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap</link>
            <guid isPermaLink="true">https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap</guid>
            <pubDate>Tue, 19 May 2026 16:48:15 +0530</pubDate>
            <description><![CDATA[ಸ್ವಿಸ್ ಇಂಟರ್&zwnj;ನ್ಯಾಷನಲ್ ಏರ್&zwnj;ಲೈನ್ಸ್, 2026ರ ಅಕ್ಟೋಬರ್&zwnj;ನಿಂದ ಬೆಂಗಳೂರು ಮತ್ತು ಜ್ಯೂರಿಕ್ ನಡುವೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ವಾರದಲ್ಲಿ ಐದು ದಿನ ಲಭ್ಯವಿರುವ ಈ ಸೇವೆಯು, ದಕ್ಷಿಣ ಭಾರತದ ಪ್ರಯಾಣಿಕರಿಗೆ ಯುರೋಪ್ ಮತ್ತು ಉತ್ತರ ಅಮೆರಿಕಾಗೆ ಸುಲಭ ಸಂಪರ್ಕ ಕಲ್ಪಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzz4qf07z9434f01b6wnmpx,imgname-swiss-air-1779189308895.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ ನಗರಿ ಬೆಂಗಳೂರಿಗರಿಗೆ ಸ್ವಿಸ್ ಇಂಟರ್&zwnj;ನ್ಯಾಷನಲ್ ಏರ್&zwnj;ಲೈನ್ಸ್ (ಸ್ವಿಸ್&zwnj;) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಭಾರತ ಮತ್ತು ಸ್ವಿಟ್ಜರ್&zwnj;ಲ್ಯಾಂಡ್ ನಡುವಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಹಾಗೂ ಸ್ವಿಸ್&zwnj;ನ ಪ್ರಮುಖ ನಗರ ಜ್ಯೂರಿಕ್ ನಡುವೆ ಹೊಸದಾಗಿ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಸಂಸ್ಥೆ ಘೋಷಿಸಿದೆ.&lt;/p&gt;&lt;p&gt;2026ರ ಅಕ್ಟೋಬರ್&zwnj;ನಿಂದ ಈ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ಶುರುವಾಗಲಿದ್ದು, ವಾರದಲ್ಲಿ ಐದು ದಿನ ಈ ಸೇವೆ ಲಭ್ಯವಿರಲಿದೆ. ಇದರಿಂದಾಗಿ ದಕ್ಷಿಣ ಭಾರತದ ಪ್ರಯಾಣಿಕರು ಜ್ಯೂರಿಕ್ ತಲುಪುವುದು ಮಾತ್ರವಲ್ಲದೆ, ಲುಫ್ತಾನ್ಸಾ ಸಮೂಹದ ಬೃಹತ್ ವಿಮಾನಜಾಲದ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕಾದ ಹಲವು ನಗರಗಳಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ.&lt;/p&gt;&lt;h2&gt;ಬೆಂಗಳೂರನ್ನೇ ಆಯ್ದುಕೊಂಡಿದ್ದೇಕೆ ಸ್ವಿಸ್&zwnj;?&lt;/h2&gt;&lt;p&gt;ಭಾರತದಲ್ಲಿ ಸ್ವಿಸ್ ಏರ್&zwnj;ಲೈನ್ಸ್&zwnj;ನ ಹೊಸ ತಾಣವಾಗಿ ಈಗ ಬೆಂಗಳೂರು ಸೇರ್ಪಡೆಯಾಗಿದೆ. ಕಾರ್ಪೊರೇಟ್ ಪ್ರಯಾಣಿಕರು, ಐಟಿ ತಂತ್ರಜ್ಞರು, ಪ್ರೀಮಿಯಂ ಪ್ರವಾಸಿಗರು ಮತ್ತು ಯುರೋಪ್-ಅಮೆರಿಕಾಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರಿಂದ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ಹೊಸ ಮಾರ್ಗವನ್ನು ಪರಿಚಯಿಸಲಾಗಿದೆ.&lt;/p&gt;&lt;p&gt;ಈ ಬಗ್ಗೆ ಮಾತನಾಡಿರುವ ಸ್ವಿಸ್&zwnj;ನ ಮಾಲೀಕ ಸಂಸ್ಥೆ ಲುಫ್ತಾನ್ಸಾ ಗ್ರೂಪ್&zwnj;ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಕೆವಿನ್ ಮಾರ್ಕೆಟ್ಟೆ, ಲುಫ್ತಾನ್ಸಾ ಗ್ರೂಪ್&zwnj;ಗೆ ಭಾರತವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಜಾಗತಿಕ ಟೆಕ್ ಹಬ್ ಆಗಿರುವ ಬೆಂಗಳೂರಿನಿಂದ ಸ್ವಿಸ್ ಏರ್ ಲೈನ್ಸ್ ಸೇವೆಯನ್ನು ಆರಂಭಿಸುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ಜರ್ಮನಿಯ ಫ್ರಾಂಕ್&zwnj;ಫರ್ಟ್ ಮತ್ತು ಮ್ಯೂನಿಕ್ ನಗರಗಳ ಬಳಿಕ, ಬೆಂಗಳೂರಿನಿಂದ ಲುಫ್ತಾನ್ಸಾ ಗ್ರೂಪ್&zwnj;ನ ಮೂರನೇ ಪ್ರಮುಖ ಮಾರ್ಗ ಇದಾಗಲಿದೆ. ಪ್ರಯಾಣಿಕರು ಫಸ್ಟ್ ಕ್ಲಾಸ್ ಸೇರಿದಂತೆ ಅತ್ಯುತ್ತಮ ಸ್ವಿಸ್ ಆತಿಥ್ಯದ ಅನುಭವ ಪಡೆಯಲಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್&zwnj;) ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ಪ್ರತಿಕ್ರಿಯಿಸಿ, ಭಾರತದ ಸಿಲಿಕಾನ್ ಸಿಟಿಯನ್ನು ಜಾಗತಿಕ ಆರ್ಥಿಕ ಕೇಂದ್ರವಾದ ಜ್ಯೂರಿಕ್ ಜೊತೆ ಬೆಸೆಯುವ ಈ ಸೇವೆ, ನಮ್ಮ ಮಾರುಕಟ್ಟೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78 ನಗರಗಳಿಗೆ ಕನೆಕ್ಷನ್ ಇರುವುದರಿಂದ, ಟಯರ್-2 ಹಾಗೂ ಟಯರ್-3 ನಗರಗಳಿಂದ ಬರುವವರಿಗೂ ಒಂದೇ ಟಿಕೆಟ್&zwnj;ನಲ್ಲಿ ಯುರೋಪ್&zwnj;ಗೆ ಸುಲಭ ಸಂಪರ್ಕ ಸಿಗಲಿದೆ ಎಂದರು.&lt;/p&gt;&lt;h2&gt;ಅತ್ಯುತ್ತಮ ಸೌಲಭ್ಯ&lt;/h2&gt;&lt;p&gt;ಬೆಂಗಳೂರು-ಜ್ಯೂರಿಕ್ ನಡುವಿನ ಈ ವಿಮಾನದಲ್ಲಿ ಪ್ರಯಾಣಿಕರು ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅತ್ಯುತ್ತಮ ಊಟ, ಪ್ರೀಮಿಯಂ ಲೌಂಜ್ ಸೇರಿದಂತೆ ಉತ್ತಮ ಆತಿಥ್ಯವನ್ನು ಸಂಸ್ಥೆ ನೀಡಲಿದೆ. ಹೊಸ ಮಾರ್ಗದ ಟಿಕೆಟ್ ಬುಕ್ಕಿಂಗ್ ಇಂದಿನಿಂದಲೇ ಸ್ವಿಸ್ ಸಂಸ್ಥೆಯ ಅಧಿಕೃತ ವೆಬ್&zwnj;ಸೈಟ್ ಹಾಗೂ ಟ್ರಾವೆಲ್ ಏಜೆನ್ಸಿಗಳ ಮೂಲಕ ಲಭ್ಯವಿದೆ.&lt;/p&gt;&lt;p&gt;ಇನ್ನು ಈ ವಿಮಾನಯಾನ ಸೇವೆಯನ್ನು ನೀಡುತ್ತಿರುವ ಲುಫ್ತಾನ್ಸಾ ಜಗತ್ತಿನ ಮುಂಚೂಣಿ ವಿಮಾನಯಾನ ಸಮೂಹವಾಗಿದ್ದು, 164 ದೇಶಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಸಂಸ್ಥೆ ಕೇವಲ 2025ರಲ್ಲಿ 13.5 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ್ದು 39.6 ಬಿಲಿಯನ್ ಯುರೋ (ಸರಿಸುಮಾರು 3.6 ಲಕ್ಷ ಕೋಟಿ ರೂ.) ಆದಾಯ ಗಳಿಸಿದೆ. ಪ್ರಯಾಣಿಕರ ಸೇವೆ ಮಾತ್ರವಲ್ಲದೆ ಲಾಜಿಸ್ಟಿಕ್ಸ್, ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ (ಎಂಆರ್&zwnj;ಒ) ಕ್ಷೇತ್ರಗಳಲ್ಲೂ ಈ ಸಂಸ್ಥೆ ಬಲಿಷ್ಠವಾಗಿದೆ. ಸ್ವಿಸ್ ಏರ್&zwnj;ಲೈನ್ಸ್ ಕೂಡ ಲುಫ್ತಾನ್ಸಾ ಗ್ರೂಪ್&zwnj;ನ ಪ್ರಮುಖ ಅಂಗಸಂಸ್ಥೆಯಾಗಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap"/>
        </item>
        <item>
            <title><![CDATA[ವಡೋದರಾ-ದಿಲ್ಲಿ ಇಂಡಿಗೋದಲ್ಲಿ ಏಕಾಏಕಿ ವಿದ್ಯುತ್‌ ವ್ಯತ್ಯಯ, 25 ನಿಮಿಷ ಪರದಾಡಿದ ಪ್ರಯಾಣಿಕರು]]></title>
            <link>https://kannada.asianetnews.com/india-news/indigo-flight-power-outage-passengers-stranded-in-dark-without-ac-at-vadodara-gdp/articleshow-cz4olqw</link>
            <guid isPermaLink="true">https://kannada.asianetnews.com/india-news/indigo-flight-power-outage-passengers-stranded-in-dark-without-ac-at-vadodara-gdp/articleshow-cz4olqw</guid>
            <pubDate>Wed, 20 May 2026 12:08:27 +0530</pubDate>
            <description><![CDATA[ವಡೋದರಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷದಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು. ಇದರಿಂದಾಗಿ ಸುಮಾರು ಅರ್ಧ ಗಂಟೆಗಳ ಕಾಲ ಎಸಿ ಮತ್ತು ಲೈಟ್&zwnj;ಗಳಿಲ್ಲದೆ ಪ್ರಯಾಣಿಕರು ಕತ್ತಲೆ ಹಾಗೂ ಸೆಕೆಯಲ್ಲಿ ಪರದಾಡಿದರು. ಈ ಘಟನೆಯಿಂದ ವಿಮಾನ ಹಾರಾಟವು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01khdb8gz2r7sv5ez1g3ztm4ha,imgname-image-3fc11551-7ed4-4a16-999a-6e31ec7e4d62-1771048289250.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ:&lt;/strong&gt; ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಏಕಾಏಕಿ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ, ಪ್ರಯಾಣಿಕರು ವಿಮಾನದೊಳಗೆ ಸುಮಾರು ಅರ್ಧ ಗಂಟೆಯ ಕಾಲ ತೀವ್ರ ಸೆಕೆ ಹಾಗೂ ಕತ್ತಲಲ್ಲಿ ಪರದಾಡಿದ ಘಟನೆ ನಡೆದಿದೆ. ಇಂಡಿಗೋ ಸಂಸ್ಥೆಯ 6E657 ವಿಮಾನದಲ್ಲಿ ಈ ಆತಂಕಕಾರಿ ವಿದ್ಯುತ್ ವ್ಯತ್ಯಯ ಸಂಭವಿಸಿದ್ದು, ಸೀಲ್ ಮಾಡಲಾದ ಕ್ಯಾಬಿನ್ ಒಳಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಇದು ಪ್ರಯಾಣಿಕರಲ್ಲಿ ಭೀತಿ ಮತ್ತು ಆಕ್ರೋಶಕ್ಕೆ ಕಾರಣವಾಯಿತು.&lt;/p&gt;&lt;h2&gt;ಘಟನೆಗೆ ಅಸಲಿ ಕಾರಣವೇನು?&lt;/h2&gt;&lt;p&gt;ವಿಮಾನ ನಿಲ್ದಾಣದ ಅಧಿಕೃತ ಮೂಲಗಳ ಪ್ರಕಾರ, ವಿಮಾನವು ಟರ್ಮಿನಲ್&zwnj;ನಲ್ಲಿ ನಿಂತಿದ್ದಾಗ ಅದರ ಮುಖ್ಯ ಇಂಜಿನ್&zwnj;ಗಳನ್ನು ಆಫ್ ಮಾಡಲಾಗಿತ್ತು. ಈ ಸಮಯದಲ್ಲಿ ವಿಮಾನದ ಒಳಾಂಗಣ ದೀಪಗಳು, ಹವಾನಿಯಂತ್ರಣ (AC) ಮತ್ತು ಕಾಕ್&zwnj;ಪಿಟ್ ಉಪಕರಣಗಳಿಗೆ ವಿದ್ಯುತ್ ಪೂರೈಸುವ ಪ್ರಮುಖ ಮೂಲವಾದ ಗ್ರೌಂಡ್ ಪವರ್ ಯೂನಿಟ್ (GPU - ನೆಲದ ವಿದ್ಯುತ್ ಘಟಕ) ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಪರಿಣಾಮವಾಗಿ, ಇಡೀ ವಿಮಾನವು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿತು ಮತ್ತು ಎಸಿ ವ್ಯವಸ್ಥೆಯು ಸಂಪೂರ್ಣವಾಗಿ ಬಂದ್ ಆಯಿತು.&lt;/p&gt;&lt;h2&gt;ವಿಮಾನದೊಳಗೆ ಸೃಷ್ಟಿಯಾದ ನರಕಸದೃಶ ವಾತಾವರಣ:&lt;/h2&gt;&lt;p&gt;ರಾತ್ರಿ 8:50 ರಿಂದ 9:15 ರವರೆಗೆ ಅಂದರೆ ಸುಮಾರು 25 ನಿಮಿಷಗಳ ಕಾಲ ಈ ಬಿಕ್ಕಟ್ಟು ಮುಂದುವರಿದಿತ್ತು. ಬೇಸಿಗೆಯ ಬಿಸಿಲಿನ ಝಳದ ನಡುವೆ, ಎಸಿ ಕೂಡ ಇಲ್ಲದೆ ಸೀಲ್ ಮಾಡಿದ ಕ್ಯಾಬಿನ್ ಒಳಗೆ ಸಿಲುಕಿಕೊಂಡ ಪ್ರಯಾಣಿಕರು ಬೆವತು ಹೋದರು. ಗಾಳಿಯಿಲ್ಲದೆ ಹತಾಶರಾದ ಪ್ರಯಾಣಿಕರು ತಮಗೆ ಸಿಕ್ಕ ಫೈಲ್&zwnj;ಗಳು, ಪತ್ರಿಕೆಗಳು ಮತ್ತು ಕೈಯಲ್ಲಿದ್ದ ವಸ್ತುಗಳನ್ನೇ ಬೀಸಣಿಗೆಯನ್ನಾಗಿ ಮಾಡಿಕೊಂಡು ಬೀಸಿಕೊಳ್ಳಲು ಮುಂದಾದರು. ವಿಮಾನದೊಳಗಿನ ಈ ಭೀಕರ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್&zwnj;ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ ಹಾಗೂ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ತಂತ್ರಜ್ಞರ ತ್ವರಿತ ಕಾರ್ಯಾಚರಣೆ - ನಿಟ್ಟುಸಿರು ಬಿಟ್ಟ ಪ್ರಯಾಣಿಕರು:&lt;/h2&gt;&lt;p&gt;ವಿದ್ಯುತ್ ಕೈಕೊಟ್ಟ ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನಯಾನ ಸಂಸ್ಥೆಯ ತಂತ್ರಜ್ಞರ ತಂಡವು ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯವನ್ನು ಕೈಗೊಂಡಿತು. ಜಿಪಿಯು ದೋಷವನ್ನು ಯಶಸ್ವಿಯಾಗಿ ಪರಿಹರಿಸಿ, ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲಾಯಿತು. ವಿಮಾನದಲ್ಲಿ ದೀಪಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ ಮತ್ತೆ ಆನ್ ಆಗುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.&lt;/p&gt;&lt;h2&gt;ವಿಮಾನ ಹಾರಾಟ 1 ಗಂಟೆಗೂ ಹೆಚ್ಚು ಕಾಲ ವಿಳಂಬ:&lt;/h2&gt;&lt;p&gt;ಈ ತಾಂತ್ರಿಕ ದೋಷದಿಂದಾಗಿ ವಿಮಾನದ ನಿರ್ಗಮನದ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯ ಉಂಟಾಯಿತು. ನಿಗದಿತ ವೇಳಾಪಟ್ಟಿಯ ಪ್ರಕಾರ ಈ ವಿಮಾನವು ರಾತ್ರಿ 8:40 ಕ್ಕೆ ವಡೋದರಾದಿಂದ ಹೊರಡಬೇಕಿತ್ತು. ಆದರೆ ಈ ಹಠಾತ್ ಜಿಪಿಯು ವೈಫಲ್ಯ ಮತ್ತು ದುರಸ್ತಿ ಕಾರ್ಯದಿಂದಾಗಿ, ವಿಮಾನವು ಸುಮಾರು 1 ಗಂಟೆ 20 ನಿಮಿಷ ತಡವಾಗಿ, ಅಂದರೆ ರಾತ್ರಿ 10:00 ಗಂಟೆಗೆ ದೆಹಲಿಯತ್ತ ಪ್ರಯಾಣ ಬೆಳೆಸಿತು.&lt;/p&gt;&lt;h2&gt;ಇಂಡಿಗೋ ಸಂಸ್ಥೆಯ ಸ್ಪಷ್ಟನೆ:&lt;/h2&gt;&lt;p&gt;ಘಟನೆಯ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಇಂಡಿಗೋ ಏರ್&zwnj;ಲೈನ್ಸ್, &quot;ತಾಂತ್ರಿಕ ದೋಷದ ಕಾರಣದಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ. ತೊಂದರೆ ಕಂಡುಬಂದ ತಕ್ಷಣವೇ ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ&quot; ಎಂದು ತಿಳಿಸುವ ಮೂಲಕ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/indigo-flight-power-outage-passengers-stranded-in-dark-without-ac-at-vadodara-gdp/articleshow-cz4olqw"/>
        </item>
        <item>
            <title><![CDATA[ಮಂಗಳೂರು: ಬಂಟ್ವಾಳ, ವಿಟ್ಲ ಆಗಸದಲ್ಲಿ ಭೂಮಿಗೆ ಅತ್ಯಂತ ಸಮೀಪ 8 ಸುತ್ತು ಗಿರಕಿ ಹೊಡೆದ ಏರ್‌ಇಂಡಿಯಾ, ಗಾಬರಿಬಿದ್ದ ಜನ!]]></title>
            <link>https://kannada.asianetnews.com/karnataka-districts/air-india-express-flight-circles-over-mangaluru-skies-causes-panic-lands-safely-gdp/articleshow-fhakv28</link>
            <guid isPermaLink="true">https://kannada.asianetnews.com/karnataka-districts/air-india-express-flight-circles-over-mangaluru-skies-causes-panic-lands-safely-gdp/articleshow-fhakv28</guid>
            <pubDate>Fri, 15 May 2026 22:11:28 +0530</pubDate>
            <description><![CDATA[ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ವಿಮಾನವು ಬಂಟ್ವಾಳದ ವಿಟ್ಲ, ಕಲ್ಲಡ್ಕ ಭಾಗದಲ್ಲಿ ಹಲವು ಸುತ್ತು ಹೊಡೆದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಇದು ತಾಂತ್ರಿಕ ದೋಷವಲ್ಲ, ಬದಲಿಗೆ ಹವಾಮಾನ ವೈಪರೀತ್ಯದಿಂದಾಗಿ ಪೈಲಟ್&zwnj;ಗಳು ಅನುಸರಿಸಿದ 'ಹೋಲ್ಡಿಂಗ್ ಪ್ಯಾಟರ್ನ್' ಎಂಬ ಸುರಕ್ಷತಾ ಕ್ರಮವಾಗಿತ್ತು. ಅಂತಿಮವಾಗಿ ವಿಮಾನವು ಸುರಕ್ಷಿತವಾಗಿ ಇಳಿಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01krp821nqy9mpd091gc6zh765,imgname-air-india-express-flight-mangaluru-1778863113911.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಂಟ್ವಾಳ: &lt;/strong&gt;ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ವಿಮಾನವೊಂದು ವಿಟ್ಲ, ಕಲ್ಲಡ್ಕ ಪರಿಸರದ ಆಕಾಶದಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಸುತ್ತುಗಳನ್ನು ಹೊಡೆದ ಘಟನೆ ಗುರುವಾರ ಸಂಜೆ ನಡೆದಿದ್ದು, ಸ್ಥಳೀಯ ಜನರಲ್ಲಿ ಕೆಲ ಕಾಲ ಭೀತಿ ಮತ್ತು ಆತಂಕ ಮೂಡಿಸಿತು.&lt;/p&gt;&lt;h2&gt;ತಾಂತ್ರಿಕ ದೋಷವೆಂದು ಗಾಬರಿಗೊಂಡ ಜನ&lt;/h2&gt;&lt;p&gt;ಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ಎಕ್ಸ್&zwnj;ಪ್ರೆಸ್ ಸಂಸ್ಥೆಯ IX2924 (ಬೋಯಿಂಗ್ 737 MAX 8) ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ವಿಟ್ಲ ಆಕಾಶ ಭಾಗಕ್ಕೆ ಬರುತ್ತಿದ್ದಂತೆ ವಿಮಾನವು ಅತ್ಯಂತ ಕೆಳ ಮಟ್ಟದಲ್ಲಿ (ಸುಮಾರು 2,650 ಅಡಿ ಎತ್ತರದಲ್ಲಿ) ವೃತ್ತಾಕಾರದಲ್ಲಿ ನಿರಂತರ ಸುತ್ತು ಹೊಡೆಯಲಾರಂಭಿಸಿತು. ಇದನ್ನು ಗಮನಿಸಿದ ಸಾರ್ವಜನಿಕರು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರಬಹುದು ಎಂದು ಭಾವಿಸಿ ತೀವ್ರ ಆತಂಕ ವ್ಯಕ್ತಪಡಿಸಿದರು. ಫ್ಲೈಟ್&zwnj; ರಾಡಾರ್ ಅಪ್ಲಿಕೇಶನ್&zwnj;ನಲ್ಲೂ ವಿಮಾನವು ಒಂದೇ ಕಡೆ ಸುತ್ತುತ್ತಿರುವುದು ದಾಖಲಾಗಿದೆ.&lt;/p&gt;&lt;h2&gt;ಇದು ಸಾಮಾನ್ಯ ವಾಯುಯಾನ ಪ್ರಕ್ರಿಯೆ:&lt;/h2&gt;&lt;p&gt;ಸಾಮಾನ್ಯವಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಹಠಾತ್ ಗಾಳಿ, ಭಾರಿ ಮಳೆ ಅಥವಾ ದಟ್ಟವಾದ ಮೋಡಗಳಿದ್ದಾಗ ರನ್&zwnj;ವೇ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಮಂಗಳೂರು ಕರಾವಳಿ ಭಾಗದಲ್ಲಿ ಸದ್ಯ ಹವಾಮಾನ ವೈಪರೀತ್ಯ ಹಾಗೂ ಮಳೆಯ ವಾತಾವರಣ ಇರುವುದರಿಂದ ಸುರಕ್ಷತೆ ದೃಷ್ಟಿಯಿಂದ ಪೈಲಟ್&zwnj;ಗಳು ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳ ಸೂಚನೆಯಂತೆ ಹವಾಮಾನ ತಿಳಿಯಾಗುವವರೆಗೆ ಆಕಾಶದಲ್ಲೇ ಕಾಯುತ್ತಾರೆ. ಇದನ್ನು ವಾಯುಯಾನದ ಭಾಷೆಯಲ್ಲಿ &lsquo;ಹೋಲ್ಡಿಂಗ್ ಪ್ಯಾಟರ್ನ್&rsquo; (Holding Pattern) ಎನ್ನಲಾಗುತ್ತದೆ. ಎರಡು ವಿಮಾನಗಳು &lsquo;ಹೋಲ್ಡಿಂಗ್ ಪ್ಯಾಟರ್ನ್&rsquo; ಮುಗಿಸಿ ಸುರಕ್ಷಿತವಾಗಿ ಇಳಿದಿವೆ.&lt;/p&gt;&lt;p&gt;ಯಾವುದೇ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿ ಇರಲಿಲ್ಲ. ವಿಟ್ಲ ಪರಿಸರದಲ್ಲಿ ಸುತ್ತುಗಳನ್ನು ಮುಗಿಸಿದ ವಿಮಾನವು ಬಳಿಕ ಮೂಡಬಿದಿರೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣದತ್ತ ಸಾಗಿದ್ದು, ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಆತಂಕ ಪಡಬಾರದು ಎಂದು ವಾಯುಯಾನದ ತಜ್ಞರು ತಿಳಿಸಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/air-india-express-flight-circles-over-mangaluru-skies-causes-panic-lands-safely-gdp/articleshow-fhakv28"/>
        </item>
        <item>
            <title><![CDATA[ಈ ನಗರದಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲ.. ಶೇ. 99 ರಷ್ಟು ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ]]></title>
            <link>https://kannada.asianetnews.com/gallery/life/the-city-with-no-traffic-signals-discover-the-secrets-of-signal-free-cities-geo2pcm</link>
            <guid isPermaLink="true">https://kannada.asianetnews.com/gallery/life/the-city-with-no-traffic-signals-discover-the-secrets-of-signal-free-cities-geo2pcm</guid>
            <pubDate>Fri, 15 May 2026 14:50:33 +0530</pubDate>
            <description><![CDATA[&lt;p&gt;First Electric Traffic Signal: ಒಂದೂ ಟ್ರಾಫಿಕ್ ಸಿಗ್ನಲ್ ಇಲ್ಲದೆಯೇ ವಾಹನ ಸಂಚಾರವನ್ನು ಅತ್ಯಂತ ಸರಾಗವಾಗಿ ನಿರ್ವಹಿಸುತ್ತಿರುವ ನಗರಗಳೂ ಇವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಈ ನಿಟ್ಟಿನಲ್ಲಿ ಆ ನಗರಗಳು ಹೇಗೆ ಮಾದರಿಯಾಗಿ ನಿಂತಿವೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krnezdferr90qgw2bfre8527,imgname-thumbnail---2026-05-15t144928.020-1778836813294.jpg" type="image/jpeg" height="390" width="690"/>
            <content:encoded><![CDATA[&lt;p&gt;First Electric Traffic Signal: ಒಂದೂ ಟ್ರಾಫಿಕ್ ಸಿಗ್ನಲ್ ಇಲ್ಲದೆಯೇ ವಾಹನ ಸಂಚಾರವನ್ನು ಅತ್ಯಂತ ಸರಾಗವಾಗಿ ನಿರ್ವಹಿಸುತ್ತಿರುವ ನಗರಗಳೂ ಇವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಈ ನಿಟ್ಟಿನಲ್ಲಿ ಆ ನಗರಗಳು ಹೇಗೆ ಮಾದರಿಯಾಗಿ ನಿಂತಿವೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಕೆಂಪು, ಹಸಿರು, ಹಳದಿ.. ಈ ಮೂರು ಬಣ್ಣಗಳ ಸಿಗ್ನಲ್&zwnj;ಗಳಿಲ್ಲದ ಯಾವುದೇ ನಗರವಿರಲು ಸಾಧ್ಯವೇ? ಹೌದು, ಸಾಧ್ಯವಿದೆ ಎಂದು ನಮ್ಮ ದೇಶದಲ್ಲಿರುವ ಈ ನಗರ ಸಾಬೀತುಪಡಿಸಿದೆ. ಅಷ್ಟೊಂದು ಜನದಟ್ಟಣೆಯನ್ನು ಒಂದೂ ಟ್ರಾಫಿಕ್ ಸಿಗ್ನಲ್ ಇಲ್ಲದೆ ಅಲ್ಲಿ ಹೇಗೆ ನಿಯಂತ್ರಿಸಲಾಗುತ್ತಿದೆ? ಅಸಲು ಈ ಮೂರು ಬಣ್ಣಗಳ ಸಿಗ್ನಲ್ ಯಾವಾಗ ಪ್ರಾರಂಭವಾಯಿತು? ಇಂತಹ ಆಶ್ಚರ್ಯಕರ ಸಂಗತಿಗಳನ್ನು ಈ ಲೇಖನದಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ವಿಶ್ವದಾದ್ಯಂತ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ವಿಪರೀತವಾಗಿ ಹೆಚ್ಚುತ್ತಿದೆ. ಯಾವುದೇ ಸಣ್ಣ ನಗರಕ್ಕೆ ಹೋದರೂ ಟ್ರಾಫಿಕ್ ಸಿಗ್ನಲ್&zwnj;ಗಳಲ್ಲಿ ನಿಮಿಷಗಟ್ಟಲೆ ಕಾಯುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಆದರೆ ಪ್ರಪಂಚದ ಕೆಲವು ನಗರಗಳು ಟ್ರಾಫಿಕ್ ಸಿಗ್ನಲ್&zwnj;ಗಳೇ ಇಲ್ಲದೆ ಟ್ರಾಫಿಕ್ ಅನ್ನು ಅದ್ಭುತವಾಗಿ ನಿಯಂತ್ರಿಸುತ್ತಿವೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಕೋಟಾ: &lt;/strong&gt;ನಮ್ಮ ದೇಶದ ರಾಜಸ್ಥಾನಕ್ಕೆ ಸೇರಿದ ಕೋಟಾ ನಗರವು ಈಗ 'ಸಿಗ್ನಲ್ ಫ್ರೀ ಸಿಟಿ'ಯಾಗಿ ದಾಖಲೆ ನಿರ್ಮಿಸಿದೆ. ಒಂದು ಕಾಲದಲ್ಲಿ ವಿಪರೀತ ಟ್ರಾಫಿಕ್ ಜಾಮ್&zwnj;ಗಳಿಂದ ತತ್ತರಿಸಿದ್ದ ಈ ನಗರ, ಇಂದು ಒಂದೂ ಸಿಗ್ನಲ್ ಇಲ್ಲದೆ ವಾಹನಗಳು ಸರಾಗವಾಗಿ ಸಂಚರಿಸುವಂತೆ ರೂಪಾಂತರಗೊಂಡಿದೆ.&lt;strong&gt;ಥಿಂಪು (ಭೂತಾನ್): &lt;/strong&gt;ವಿಶ್ವದ ಟ್ರಾಫಿಕ್ ಲೈಟ್&zwnj;ಗಳಿಲ್ಲದ ಮೊಟ್ಟಮೊದಲ ರಾಜಧಾನಿ ಭೂತಾನ್&zwnj;ನ ಥಿಂಪು. ಇಲ್ಲಿ ಸಿಗ್ನಲ್&zwnj;ಗಳ ಬದಲಾಗಿ ಪೊಲೀಸರು ಕೈ ಸಜ್ಞೆಯ ಮೂಲಕ ಟ್ರಾಫಿಕ್ ಅನ್ನು ನಿಯಂತ್ರಿಸುತ್ತಾರೆ. ಇದು ಒಂದು ಕಲಾತ್ಮಕ ನೃತ್ಯದಂತೆ ಕಾಣುವುದು ವಿಶೇಷ.&lt;/p&gt;&lt;img&gt;&lt;p&gt;ಕೋಟಾ ಅರ್ಬನ್ ಇಂಪ್ರೂವ್&zwnj;ಮೆಂಟ್ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ವ್ಯವಸ್ಥಿತವಾಗಿ ಮಾಡಿದ ಬದಲಾವಣೆಗಳೇ ಇದಕ್ಕೆ ಕಾರಣ. ಹಿಂದೆ ಟ್ರಾಫಿಕ್ ಹೆಚ್ಚಿದ್ದ ಏರ್&zwnj;ಪೋರ್ಟ್ ಜಂಕ್ಷನ್, ಅನಂತಪುರ ಜಂಕ್ಷನ್&zwnj;ನಂತಹ ಪ್ರಮುಖ ಪ್ರದೇಶಗಳಲ್ಲಿ ಸಿಗ್ನಲ್&zwnj;ಗಳನ್ನು ತೆಗೆದುಹಾಕಿ, ಅವುಗಳ ಬದಲಿಗೆ 'ರೌಂಡ್ ಅಬೌಟ್' (ವೃತ್ತಗಳು) ಮತ್ತು ಅಂಡರ್&zwnj;ಪಾಸ್&zwnj;ಗಳನ್ನು ನಿರ್ಮಿಸಲಾಯಿತು. ವಾಹನಗಳ ವೇಗ ಕಡಿಮೆಯಾಗದಂತೆ ರಸ್ತೆಗಳನ್ನು ವಿಸ್ತರಿಸಲಾಯಿತು. ಫ್ಲೈಓವರ್&zwnj;ಗಳು ಮತ್ತು ಸರ್ವಿಸ್ ರಸ್ತೆಗಳ ಮೂಲಕ ವಾಹನಗಳು ಎಲ್ಲೂ ನಿಲ್ಲುವ ಅಗತ್ಯವಿಲ್ಲದಂತೆ ನಿರಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು.&amp;nbsp;&lt;/p&gt;&lt;img&gt;&lt;p&gt;ಆರಂಭದಲ್ಲಿ ಕೇವಲ ಕೆಂಪು ಮತ್ತು ಹಸಿರು ಎಂಬ ಎರಡು ಬಣ್ಣಗಳು ಮಾತ್ರ ಇದ್ದವು.1921 ರಲ್ಲಿ ವಿಲಿಯಂ ಪಾಟ್ಸ್ ಎಂಬ ವ್ಯಕ್ತಿ ಮೂರು ಬಣ್ಣಗಳ ಸಿಗ್ನಲ್ ವ್ಯವಸ್ಥೆಯನ್ನು ಪರಿಚಯಿಸಿದರು.ವಾಹನ ಸವಾರರು ಜಾಗರೂಕರಾಗಿರಲು ಅವರು 'ಹಳದಿ' ಬಣ್ಣವನ್ನು ಸೇರಿಸಿದರು. ಅಂದಿನಿಂದ ಈ ಮೂರು ಬಣ್ಣಗಳ ವಿಧಾನ ಪ್ರಪಂಚದಾದ್ಯಂತ ಜಾರಿಗೆ ಬಂದಿತು.&lt;/p&gt;&lt;img&gt;&lt;p&gt;&lt;strong&gt;ಮೊದಲ ಎಲೆಕ್ಟ್ರಿಕ್ ಟ್ರಾಫಿಕ್ ಸಿಗ್ನಲ್: &lt;/strong&gt;1914 ರಲ್ಲಿ ಅಮೆರಿಕದ ಕ್ಲೀವ್&zwnj;ಲ್ಯಾಂಡ್&zwnj;ನಲ್ಲಿ ಅಳವಡಿಸಲಾಯಿತು.&lt;strong&gt;ಭಾರತದಲ್ಲಿ ಮೊದಲ ಸಿಗ್ನಲ್: &lt;/strong&gt;1953 ರಲ್ಲಿ ಚೆನ್ನೈನಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಯಿತು.ಜ್ಞಾನಕ್ಕೆ ಅಂತ್ಯವಿಲ್ಲ. ನಾವು ನಿತ್ಯವೂ ನೋಡುವ ಸಣ್ಣ ವಿಷಯಗಳ ಹಿಂದೆ ದೊಡ್ಡ ಇತಿಹಾಸವಿರುತ್ತದೆ. ಕೋಟಾ ಮತ್ತು ಥಿಂಪು ನಗರಗಳು ತೋರಿಸುತ್ತಿರುವ ಈ ಹಾದಿ ಭವಿಷ್ಯದಲ್ಲಿ ಇತರ ನಗರಗಳಿಗೂ ಮಾದರಿಯಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/the-city-with-no-traffic-signals-discover-the-secrets-of-signal-free-cities-geo2pcm"/>
        </item>
        <item>
            <title><![CDATA[ಈ ಗ್ರಾಮದಲ್ಲಿ ಕೇಳಿಸುವುದು ಬರೀ ಕಿರುಚಾಟ, ಹೋಗಿ ನೋಡಿದರೆ ಕಾಣಿಸೋದು ಮನುಷ್ಯರಲ್ಲ, ದೆವ್ವಗಳೇ!]]></title>
            <link>https://kannada.asianetnews.com/gallery/life/worlds-most-haunted-village-pluckley-name-is-recorded-in-guinness-book-of-records-suh-mpalqlm</link>
            <guid isPermaLink="true">https://kannada.asianetnews.com/gallery/life/worlds-most-haunted-village-pluckley-name-is-recorded-in-guinness-book-of-records-suh-mpalqlm</guid>
            <pubDate>Fri, 15 May 2026 12:05:10 +0530</pubDate>
            <description><![CDATA[&lt;p&gt;Worlds Most Haunted Village Pluckley ಯುಕೆಯ ಪ್ಲಕ್ಲಿ ಗ್ರಾಮ ದೆವ್ವ ಹಿಡಿದ ಹಳ್ಳಿಯೆಂದು ಕರೆಯಲಾಗುತ್ತಿದ್ದು, ಇಲ್ಲಿ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳ ಆತ್ಮಗಳೂ ರಾತ್ರಿ ವೇಳೆ ಅಲೆದಾಡುತ್ತವೆ ಎಂಬ ಭಯಾನಕ ನಂಬಿಕೆ ಇದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krn5cch4qm7s5mbe0s0gwarz,imgname-most-haunted-village-pluckley-1778826752548.jpeg" type="image/jpeg" height="390" width="690"/>
            <content:encoded><![CDATA[&lt;p&gt;Worlds Most Haunted Village Pluckley ಯುಕೆಯ ಪ್ಲಕ್ಲಿ ಗ್ರಾಮ ದೆವ್ವ ಹಿಡಿದ ಹಳ್ಳಿಯೆಂದು ಕರೆಯಲಾಗುತ್ತಿದ್ದು, ಇಲ್ಲಿ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳ ಆತ್ಮಗಳೂ ರಾತ್ರಿ ವೇಳೆ ಅಲೆದಾಡುತ್ತವೆ ಎಂಬ ಭಯಾನಕ ನಂಬಿಕೆ ಇದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಲಂಡನ್&zwnj;ನಿಂದ ಕೇವಲ ಒಂದು ಗಂಟೆ ದೂರದಲ್ಲಿರುವ ಪ್ಲಕ್ಲಿ ಗ್ರಾಮವನ್ನು ವಿಶ್ವದ ಅತ್ಯಂತ ದೆವ್ವ ಹಿಡಿದ ಹಳ್ಳಿ ಎಂದು ಕರೆಯಲಾಗುತ್ತದೆ. ಹೊರಗೆ ನೋಡಲು ಸಾಮಾನ್ಯ ಹಳ್ಳಿಯಂತೆ ಕಾಣುವ ಈ ಸ್ಥಳ ರಾತ್ರಿ ಬಿದ್ದರೆ ಭಯಾನಕ ರೂಪ ತಾಳುತ್ತದೆ ಎನ್ನಲಾಗುತ್ತದೆ. ರಾತ್ರಿಯ ವೇಳೆ ಇಲ್ಲಿ ಮಾನವರಷ್ಟೇ ಅಲ್ಲ, ಪ್ರಾಣಿಗಳ ಆತ್ಮಗಳೂ ಅಲೆದಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. 1989ರಲ್ಲಿ ಈ ಗ್ರಾಮ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್&zwnj;ನಲ್ಲೂ &ldquo;Most Haunted Village&rdquo; ಎಂದು ದಾಖಲಾಗಿತ್ತು ಎಂಬ ವರದಿಗಳಿವೆ.&lt;/p&gt;&lt;img&gt;&lt;p&gt;ಈ ಹಳ್ಳಿಯಲ್ಲಿ ದೆವ್ವಗಳು ಕಾಣಿಸಿಕೊಳ್ಳುತ್ತವೆ ಎನ್ನಲಾದ ಒಟ್ಟು 12 ಭಯಾನಕ ಸ್ಥಳಗಳಿವೆ. ಹಳ್ಳಿಯ ರಸ್ತೆಗಳಲ್ಲಿ ನಡೆಯುವಾಗ ಯಾರೋ ಹಿಂದಿನಿಂದ ಕರೆಯುವ ಅನುಭವ ಆಗುತ್ತದೆ ಎಂದು ಪ್ರವಾಸಿಗರು ಹೇಳಿಕೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಅದು ಮನುಷ್ಯರ ಧ್ವನಿಯೇ ಆಗಿರಬೇಕೆಂದಿಲ್ಲ, ಆತ್ಮಗಳ ಕರೆಯೂ ಆಗಿರಬಹುದು.&lt;/p&gt;&lt;img&gt;&lt;p&gt;ಪ್ಲಕ್ಲಿಯ ಪ್ರತಿಯೊಂದು ದೆವ್ವಕ್ಕೂ ವಿಭಿನ್ನ ಕಥೆಗಳಿವೆ. &ldquo;ಸ್ಕ್ರೀಮಿಂಗ್ ಮ್ಯಾನ್&rdquo; ಎಂಬ ಆತ್ಮ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಬಿದ್ದು ಮೃತಪಟ್ಟವನದು ಎಂದು ನಂಬಲಾಗಿದೆ. &ldquo;ಹೈವೇಮ್ಯಾನ್&rdquo; ಎಂಬ ದೆವ್ವವನ್ನು ಕತ್ತಿಯಿಂದ ಕೊಂದು ಮರಕ್ಕೆ ನೇಣು ಹಾಕಲಾಗಿತ್ತು ಎನ್ನಲಾಗುತ್ತದೆ. ಇನ್ನೊಬ್ಬ ವೃದ್ಧೆಯ ಆತ್ಮ ತನ್ನ ಮನೆಯಲ್ಲಿ ಬೆಂಕಿಗೆ ಆಹುತಿಯಾದ ಬಳಿಕ ಇಲ್ಲೇ ತಿರುಗಾಡುತ್ತಿದೆ ಎಂಬ ಕಥೆಯೂ ಪ್ರಸಿದ್ಧ.&lt;/p&gt;&lt;img&gt;&lt;p&gt;ಭಯಾನಕ ಕಥೆಗಳಿದ್ದರೂ ಪ್ಲಕ್ಲಿ ಇಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಚರ್ಚ್, ಶಾಲೆ, ಅಂಗಡಿಗಳು ಮತ್ತು ರೆಸ್ಟೋರೆಂಟ್&zwnj;ಗಳಿರುವ ಈ ಹಳ್ಳಿಗೆ ಸಾಹಸ ಪ್ರಿಯರು ಹಾಗೂ ಪ್ಯಾರಾನಾರ್ಮಲ್ ಅನುಭವ ಹುಡುಕುವವರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.&lt;/p&gt;]]></content:encoded>
            <category>travel</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/worlds-most-haunted-village-pluckley-name-is-recorded-in-guinness-book-of-records-suh-mpalqlm"/>
        </item>
        <item>
            <title><![CDATA[ಬೀದರ್-ಬೆಂಗಳೂರು ವಿಮಾನ ಸೇವೆ ಶೀಘ್ರವೇ ಪುನರಾರಂಭ, ಮತ್ತೆ ಜಿಲ್ಲೆಯ ಜನತೆಗೆ ಸಂತಸದ ಸುದ್ದಿ]]></title>
            <link>https://kannada.asianetnews.com/karnataka-districts/bidar-bengaluru-flight-services-to-resume-from-june-1announces-minister-eshwar-khandre-gdp/articleshow-o2gb9s7</link>
            <guid isPermaLink="true">https://kannada.asianetnews.com/karnataka-districts/bidar-bengaluru-flight-services-to-resume-from-june-1announces-minister-eshwar-khandre-gdp/articleshow-o2gb9s7</guid>
            <pubDate>Sat, 16 May 2026 17:54:49 +0530</pubDate>
            <description><![CDATA[ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆ ಜೂನ್ 1 ರಿಂದ ಪುನರಾರಂಭಗೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟವನ್ನು ಸರ್ಕಾರವೇ ಭರಿಸಲಿದ್ದು, ಈ ನಿರ್ಧಾರದಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krrbvjk4t29js5f256yxprrq,imgname-bidar-airport-1778934205028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ : &lt;/strong&gt;ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ಬೀದರ್ ಮತ್ತು ಬೆಂಗಳೂರು ನಡುವಿನ ನಾಗರಿಕ ವಿಮಾನಯಾನ ಸೇವೆ ಬರುವ ಜೂನ್ 1ರಿಂದ ಪುನರಾರಂಭಗೊಳ್ಳಲಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಜಿಲ್ಲಾ ಉಸ್ತುವಾರಿ ಮಂತ್ರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.&lt;/p&gt;&lt;p&gt;ಈ ಕುರಿತಂತೆ ಮಾತನಾಡಿ, ಕಳೆದ ಒಂದು ವರ್ಷದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅನುದಾನದ ಸಹಯೋಗದೊಂದಿಗೆ ಸ್ಟಾರ್ ಏರ್ ವಿಮಾನ ಸಂಸ್ಥೆಯು ಬೀದರ್-ಬೆಂಗಳೂರು ನಡುವೆ ಯಶಸ್ವಿಯಾಗಿ ಸೇವೆ ನೀಡುತ್ತಿತ್ತು. ಆದರೆ, ಮೇ 14ಕ್ಕೆ ಒಪ್ಪಂದದ ಅವಧಿ ಮುಕ್ತಾಯಗೊಂಡಿದ್ದರಿಂದ ವಿಮಾನಯಾನ ಸಂಸ್ಥೆಯು ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.&lt;/p&gt;&lt;h2&gt;ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟ ಸರ್ಕಾರದ ವತಿಯಿಂದಲೇ ಭರಿಸುವ ನಿರ್ಧಾರ&lt;/h2&gt;&lt;p&gt;ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಮನವೊಲಿಸಲಾಗಿದೆ. ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟದ ಪಾಲನ್ನು (Viability Gap Funding) ಸರ್ಕಾರದ ವತಿಯಿಂದಲೇ ಭರಿಸುವ ಮೂಲಕ ಸೇವೆಯನ್ನು ಮತ್ತೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.&lt;/p&gt;&lt;p&gt;ಜೂನ್ 1ರಿಂದ ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಬೀದರ್ ಮಧ್ಯೆ ಪ್ರತಿದಿನ ವಿಮಾನಯಾನ ಸೇವೆ ಲಭ್ಯವಿರಲಿದ್ದು, ಇದರಿಂದ ಜಿಲ್ಲೆಯ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ನಾಗರಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಪ್ರವಾಸೋದ್ಯಮ ಮತ್ತು ವ್ಯಾಪಾರೋದ್ಯಮದ ವೃದ್ಧಿಗೂ ಇದು ಮತ್ತಷ್ಟು ವೇಗ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಬೀದರ್ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿ, ವಿಮಾನಯಾನ ಪುನರಾರಂಭಕ್ಕೆ ಸಂಪೂರ್ಣ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.&lt;/p&gt;&lt;h2&gt;KKRDB ಅಧ್ಯಕ್ಷ ಅಜಯ್ ಸಿಂಗ್ ಕೂಡ ಸ್ಪಷ್ಟನೆ&lt;/h2&gt;&lt;p&gt;ಇನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷ ಅಜಯ್ ಸಿಂಗ್ ಅವರು ಕೂಡ ಬೀದರ್&ndash;ಬೆಂಗಳೂರು ನಾಗರಿಕ ವಿಮಾನ ಸೇವೆ ಒಂದು ತಿಂಗಳೊಳಗೆ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bidar-bengaluru-flight-services-to-resume-from-june-1announces-minister-eshwar-khandre-gdp/articleshow-o2gb9s7"/>
        </item>
        <item>
            <title><![CDATA[Bengaluru: ವಿಜಯಪುರದಿಂದ ಮೆಜೆಸ್ಟಿಕ್‌ಗೆ ಬಿಎಂಟಿಸಿ ವೇಗದೂತ ವಾಯುವಜ್ರ ಬಸ್ ಸಂಚಾರ ಆರಂಭ]]></title>
            <link>https://kannada.asianetnews.com/bengaluru-urban/bengaluru-bmtc-vegadjootha-bus-service-from-vijayapura-to-majestic-station-begins-mrq/articleshow-onamfq9</link>
            <guid isPermaLink="true">https://kannada.asianetnews.com/bengaluru-urban/bengaluru-bmtc-vegadjootha-bus-service-from-vijayapura-to-majestic-station-begins-mrq/articleshow-onamfq9</guid>
            <pubDate>Wed, 20 May 2026 08:59:00 +0530</pubDate>
            <description><![CDATA[ವಿಜಯಪುರದಿಂದ ಬೆಂಗಳೂರಿನ ಮೆಜೆಸ್ಟಿಕ್&zwnj;ಗೆ ಬಿಎಂಟಿಸಿ ವೇಗದೂತ ಬಸ್ ಸಂಚಾರ ಆರಂಭವಾಗಿದ್ದು, ಇದು ವಿದ್ಯಾರ್ಥಿಗಳು ಮತ್ತು ನೌಕರರು ಎದುರಿಸುತ್ತಿದ್ದ ದಟ್ಟಣೆಯ ಸಮಸ್ಯೆಗೆ ಪರಿಹಾರ ನೀಡಿದೆ. ಇದರೊಂದಿಗೆ, ನಾಗರಿಕರು ಈಗ ವಾಯುವಜ್ರ ಬಸ್ ಸೇವೆಗೂ ಒತ್ತಾಯಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks1phncw9hpx80hvck92c856,imgname-bmtc--bus-1779247404444.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ&lt;/strong&gt;: ಪಟ್ಟಣ ನಾಗರಿಕರ ಬೇಡಿಕೆ ಬಹುದಿನಗಳ ಬಳಿಕ ಪಟ್ಟಣದಿಂದ ದೇವನಹಳ್ಳಿ, ಯಲಹಂಕ ಮಾರ್ಗವಾಗಿ ಬೆಂಗಳೂರಿನ ಮೆಜೆಸ್ಟಿಕ್&zwnj;ಗೆ ಬಿಎಂಟಿಸಿ ವೇಗದೂತ ಬಸ್&zwnj;ಗಳ ಸಂಚಾರ ಪ್ರಾರಂಭಿಸಿದೆ.&lt;/p&gt;&lt;p&gt;ಪಟ್ಟಣದಿಂದ ಪ್ರತಿದಿನ ಬೆಳಗ್ಗೆ ೭ರಿಂದ ೧೦ರೊಳಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧೆಡೆಗೆ ಪ್ರಯಾಣಿಸುವ ಖಾಸಗಿ, ಸರ್ಕಾರಿ ನೌಕರರಿಂದ ಬಸ್ಸುಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಇದರಿಂದಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಬಸ್ ಹತ್ತಲು ಸಾಧ್ಯವಾಗದೆ ತೀವ್ರ ಪರದಾಡುವಂತಾಗಿತ್ತು. ಈ ಸಾರ್ವಜನಿಕ ಸಮಸ್ಯೆ ಕುರಿತು ಪ್ರಮುಖ ಪತ್ರಿಕೆಗಳಲ್ಲಿ ಸರಣಿ ವರದಿಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.&lt;/p&gt;&lt;h2&gt;&lt;strong&gt;ವಾಯುವಜ್ರ ಬಸ್&zwnj;ಗಳಿಗೂ ಹೆಚ್ಚಿದ ಬೇಡಿಕೆ&lt;/strong&gt;&lt;/h2&gt;&lt;p&gt;ಪ್ರಸ್ತುತ ಆರಂಭಿಸಿರುವ ಎಕ್ಸ್&zwnj;ಪ್ರೆಸ್ ಬಸ್ಸುಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಇದರೊಂದಿಗೆ, ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕಾರ್ಯಾಚರಣೆ ನಡೆಸುತ್ತಿರುವ ಮಾದರಿಯಲ್ಲೇ ಇಲ್ಲೂ ಸಹ ವಾಯುವಜ್ರ ಬಸ್ಸುಗಳನ್ನು ಬಿಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.&lt;/p&gt;&lt;p&gt;ಸದ್ಯ ಬೆಂಗಳೂರು ಮೆಜೆಸ್ಟಿಕ್&zwnj;ನಿಂದ ನಂದಿ ಕ್ರಾಸ್&zwnj;ವರೆಗೆ ಸಂಚರಿಸುವ ಬಿಎಂಟಿಸಿ ಬಸ್ಸುಗಳನ್ನು ಚಿಕ್ಕಬಳ್ಳಾಪುರ ರಸ್ತೆ ಮೂಲಕ ವಿಜಯಪುರಕ್ಕೆ ವಿಸ್ತರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹೀಗೆ ಮಾಡಿದರೆ ದೇವನಹಳ್ಳಿ ಮತ್ತು ವಿಜಯಪುರದಿಂದ ನಾಗಾರ್ಜುನ ಕಾಲೇಜು ಹಾಗೂ ಬಿಜಿಎಸ್ ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿಜಯಪುರದಿಂದ ಮುದ್ದೇನಹಳ್ಳಿ, ನಾರಾಯಣಪುರ, ಬಿಜ್ಜವಾರ, ಹೊಲೆರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಉತ್ತಮ ಸಾರಿಗೆ ಸಂಪರ್ಕ ಸಿಗುತ್ತದೆ.&lt;/p&gt;&lt;p&gt;ಹೊಸ ಬಸ್ಸುಗಳ ಚಾಲನೆ ಸಂದರ್ಭದಲ್ಲಿ ಬಿಎಂಟಿಸಿ ಸಂಚಾರ ನಿಯಂತ್ರಕರಾದ ರಂಗಪ್ಪ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>travel</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-bmtc-vegadjootha-bus-service-from-vijayapura-to-majestic-station-begins-mrq/articleshow-onamfq9"/>
        </item>
        <item>
            <title><![CDATA[ಬೆಂಗಳೂರಿನಿಂದ ಊಟಿಗೆ ಹೋಗ್ತಿದ್ದೀರಾ? ಇಲ್ಲಿದೆ ನೋಡಿ ನಮ್ಮ ಸಾರಿಗೆ ಬಸ್‌ಗಳ ಮಾಹಿತಿ]]></title>
            <link>https://kannada.asianetnews.com/travel/trip-from-bengaluru-to-ooty-9-government-ksrtc-bus-timings-ticket-prices-and-boarding-points-mrq/articleshow-q53il9o</link>
            <guid isPermaLink="true">https://kannada.asianetnews.com/travel/trip-from-bengaluru-to-ooty-9-government-ksrtc-bus-timings-ticket-prices-and-boarding-points-mrq/articleshow-q53il9o</guid>
            <pubDate>Sat, 16 May 2026 11:09:47 +0530</pubDate>
            <description><![CDATA[ಬೆಂಗಳೂರಿನಿಂದ ಊಟಿಗೆ ಪ್ರವಾಸ ಯೋಜಿಸುತ್ತಿದ್ದರೆ, ರಾಜ್ಯ ಸಾರಿಗೆ ಸಂಸ್ಥೆಯ ಬಸ್&zwnj;ಗಳು ಉತ್ತಮ ಆಯ್ಕೆಯಾಗಿವೆ. ಈ ಲೇಖನದಲ್ಲಿ, ಪ್ರತಿನಿತ್ಯ ಸಂಚರಿಸುವ 9 ಸರ್ಕಾರಿ ಬಸ್&zwnj;ಗಳ ಸಮಯ, ಟಿಕೆಟ್ ದರ, ಮತ್ತು ಬೋರ್ಡಿಂಗ್ ಪಾಯಿಂಟ್&zwnj;ಗಳ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krqmfy06myckh7310rwn05zk,imgname-bengaluru-ooty-1778909706246.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಾಲೆ ಆರಂಭಕ್ಕೂ ಮುನ್ನ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಬಯಸುತ್ತಿದ್ರೆ ಬೆಂಗಳೂರಿಗರಿಗೆ ಊಟಿ ಒಳ್ಳೆಯ ತಾಣವಾಗಲಿದೆ. ತೈಲ ಬೆಲೆ ಏರಿಕೆಯಿಂದಾಗಿ ಖಾಸಗಿ ಬಸ್&zwnj;ಗಳು ಟಿಕೆಟ್ ದರ ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್&zwnj;ಗಳನ್ನು ಆಯ್ಕೆ ಮಾಡಿಕೊಳ್ಳಿ. ಬೆಂಗಳೂರು ನಗರದಿಂದ ಊಟಿಗೆ ಪ್ರತಿನಿತ್ಯ 9 ಬಸ್&zwnj;ಗಳು ಸಂಚರಿಸುತ್ತವೆ. ಒಂಬತ್ತು ಬಸ್&zwnj;ಗಳಲ್ಲಿ ಒಂದು Summer Special ಬಸ್ ಆಗಿದೆ. 9ರಲ್ಲಿ 8 ಐರಾವತ ಕ್ಲಬ್, ಮತ್ತೊಂದು ನಾನ್ ಎಸಿ ಸ್ಲೀಪರ್ ಬಸ್ ಆಗಿದೆ. ಈ 9 ಬಸ್&zwnj;ಗಳು ದರಗಳು ಬೇರೆ ಬೇರೆಯಾಗಿದೆ. ದರ, ಸಮಯದ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಬಸ್&zwnj; ಸಂಖ್ಯೆ 1: 0616BNGOTY&lt;/strong&gt;&lt;/h2&gt;&lt;p&gt;ಹೊರಡುವ ಸಮಯ: ಬೆಳಗ್ಗೆ 6.16 ನಿಮಿಷ (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್&zwnj;ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)&lt;/p&gt;&lt;p&gt;ತಲುಪುವ ಸಮಯ: ಮಧ್ಯಾಹ್ನ 02.01 ನಿಮಿಷ&lt;/p&gt;&lt;p&gt;ಮಾರ್ಗ:ಮೈಸೂರು (VOLVO MULTI-AXLE AC SEATER)&lt;/p&gt;&lt;p&gt;ಟಿಕೆಟ್ ದರ: 1012 ರೂಪಾಯಿ&lt;/p&gt;&lt;h3&gt;&lt;strong&gt;ಬಸ್ ಸಂಖ್ಯೆ 2: 0917BNGOTY&lt;/strong&gt;&lt;/h3&gt;&lt;p&gt;ಹೊರಡುವ ಸಮಯ: ಬೆಳಗ್ಗೆ 9.17 ನಿಮಿಷ (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್&zwnj;ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)&lt;/p&gt;&lt;p&gt;ತಲುಪುವ ಸಮಯ: ಸಂಜೆ 5.20&lt;/p&gt;&lt;p&gt;ಮಾರ್ಗ: ಮೈಸೂರು (VOLVO MULTI-AXLE AC SEATER)&lt;/p&gt;&lt;p&gt;ಟಿಕೆಟ್ ದರ: 1012 ರೂಪಾಯಿ&lt;/p&gt;&lt;p&gt;&lt;strong&gt;ಬಸ್ ಸಂಖ್ಯೆ 3: 1030BNGOTY&lt;/strong&gt;&lt;/p&gt;&lt;p&gt;ಹೊರಡುವ ಸಮಯ: ಬೆಳಗ್ಗೆ 10.30&lt;/p&gt;&lt;p&gt;ತಲುಪುವ ಸಮಯ: ಸಂಜೆ 6.17 ನಿಮಿಷ (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್&zwnj;ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)&lt;/p&gt;&lt;p&gt;ಮಾರ್ಗ: ಮೈಸೂರು (VOLVO MULTI-AXLE AC SEATER)&lt;/p&gt;&lt;p&gt;ಟಿಕೆಟ್ ದರ: 1012 ರೂಪಾಯಿ&lt;/p&gt;&lt;p&gt;&lt;strong&gt;ಬಸ್ ಸಂಖ್ಯೆ 4: 1245BNGOTY&lt;/strong&gt;&lt;/p&gt;&lt;p&gt;ಹೊರಡುವ ಸಮಯ: ಮಧ್ಯಾಹ್ನ 12.45 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್&zwnj;ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)&lt;/p&gt;&lt;p&gt;ತಲುಪುವ ಸಮಯ: ರಾತ್ರಿ 9 ಗಂಟೆ 16 ನಿಮಿಷ&lt;/p&gt;&lt;p&gt;ಮಾರ್ಗ: ಮೈಸೂರು (VOLVO MULTI-AXLE AC SEATER)&lt;/p&gt;&lt;p&gt;ಟಿಕೆಟ್ ದರ: 1012 ರೂಪಾಯಿ&lt;/p&gt;&lt;p&gt;&lt;strong&gt;ಬಸ್ ಸಂಖ್ಯೆ 5: 2217BNGOTY&lt;/strong&gt;&lt;/p&gt;&lt;p&gt;ಹೊರಡುವ ಸಮಯ: ರಾತ್ರಿ 10.17 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್&zwnj;ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)&lt;/p&gt;&lt;p&gt;ತಲುಪುವ ಸಮಯ: ಬೆಳಗ್ಗೆ 5 ಗಂಟೆ 15 ನಿಮಿಷ&lt;/p&gt;&lt;p&gt;ಮಾರ್ಗ: ಮೈಸೂರು (VOLVO MULTI-AXLE AC SEATER)&lt;/p&gt;&lt;p&gt;ಟಿಕೆಟ್ ದರ: 1113 ರೂಪಾಯಿ&lt;/p&gt;&lt;p&gt;&lt;strong&gt;ಬಸ್ ಸಂಖ್ಯೆ 6: 2232BNGOTY&lt;/strong&gt;&lt;/p&gt;&lt;p&gt;ಹೊರಡುವ ಸಮಯ: ರಾತ್ರಿ 10.32 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್&zwnj;ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ, ನೈಸ್ ರೋಡ್ ಎಂಟ್ರಿ ವಿಶ್ವ ಒಕ್ಕಲಿಗರ ಮಠ)&lt;/p&gt;&lt;p&gt;ತಲುಪುವ ಸಮಯ: ಬೆಳಗ್ಗೆ 5 ಗಂಟೆ 30 ನಿಮಿಷ&lt;/p&gt;&lt;p&gt;ಮಾರ್ಗ: ಮೈಸೂರು (VOLVO MULTI-AXLE AC SEATER) (BNG-4)&lt;/p&gt;&lt;p&gt;ಟಿಕೆಟ್ ದರ: 1113 ರೂಪಾಯಿ&lt;/p&gt;&lt;p&gt;&lt;strong&gt;ಬಸ್ ಸಂಖ್ಯೆ 7: 2305BNGOTY&lt;/strong&gt;&lt;/p&gt;&lt;p&gt;ಹೊರಡುವ ಸಮಯ: ರಾತ್ರಿ 11.05 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್&zwnj;ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ)&lt;/p&gt;&lt;p&gt;ತಲುಪುವ ಸಮಯ: ಬೆಳಗ್ಗೆ 9 ಗಂಟೆ&lt;/p&gt;&lt;p&gt;ಮಾರ್ಗ: ಮೈಸೂರು (VOLVO MULTI-AXLE AC SEATER) (BNG-4)&lt;/p&gt;&lt;p&gt;ಟಿಕೆಟ್ ದರ: 1113 ರೂಪಾಯಿ&lt;/p&gt;&lt;p&gt;&lt;strong&gt;ಬಸ್ ಸಂಖ್ಯೆ 8: 2315BNGOTY&lt;/strong&gt;&lt;/p&gt;&lt;p&gt;ಹೊರಡುವ ಸಮಯ: ರಾತ್ರಿ 11.15 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ಕೆಂಗೇರಿ ಟಿಟಿಎಂಸಿ)&lt;/p&gt;&lt;p&gt;ತಲುಪುವ ಸಮಯ: ಬೆಳಗ್ಗೆ 9 ಗಂಟೆ&lt;/p&gt;&lt;p&gt;ಮಾರ್ಗ: ಮೈಸೂರು (VOLVO MULTI-AXLE AC SEATER) (BNG-4)&lt;/p&gt;&lt;p&gt;ಟಿಕೆಟ್ ದರ: 1113 ರೂಪಾಯಿ&lt;/p&gt;&lt;p&gt;&lt;strong&gt;ಬಸ್ ಸಂಖ್ಯೆ 9: 2145BNGCON&lt;/strong&gt;&lt;/p&gt;&lt;p&gt;ಹೊರಡುವ ಸಮಯ: ರಾತ್ರಿ 9.45 (ಬೋರ್ಡಿಂಗ್ ಪಾಯಿಂಟ್: ಶಾಂತಿನಗರ ಬಸ್&zwnj; ನಿಲ್ದಾಣ, ಮೈಸೂರು ರೋಡ್ ಸ್ಯಾಟ್&zwnj;ಲೈಟ್, ನಾಯಂಡಹಳ್ಳಿ ಮೆಟ್ರೋ ನಿಲ್ದಾಣ, ಆರ್&zwnj;ಆರ್ ನಗರ ಆರ್ಚ್, ಕೆಂಗೇರಿ ಟಿಟಿಎಂಸಿ)&lt;/p&gt;&lt;p&gt;ತಲುಪುವ ಸಮಯ: ಬೆಳಗ್ಗೆ 8.45&lt;/p&gt;&lt;p&gt;ಮಾರ್ಗ: ಮೈಸೂರು (VOLVO MULTI-AXLE AC SEATER) (BNG-4)&lt;/p&gt;&lt;p&gt;ಟಿಕೆಟ್ ದರ: 830 ರೂಪಾಯಿ&lt;/p&gt;&lt;p&gt;ಟಿಕೆಟ್ ಬುಕ್ಕಿಂಗ್ ಸೇರಿದಂರೆ ಹೆಚ್ಚಿನ ಮಾಹಿತಿಗಾಗಿ &lt;strong&gt;https://ksrtc.in/&lt;/strong&gt;&lt;strong&gt; &lt;/strong&gt;ವೆಬ್ ಸೈಟ್&zwnj; ನೋಡಿ&lt;/p&gt;]]></content:encoded>
            <category>travel</category>
            <dc:creator>Mahmad Rafik</dc:creator>
            <atom:link href="https://kannada.asianetnews.com/travel/trip-from-bengaluru-to-ooty-9-government-ksrtc-bus-timings-ticket-prices-and-boarding-points-mrq/articleshow-q53il9o"/>
        </item>
        <item>
            <title><![CDATA[ಆತ್ಮಗಳು ಸುತ್ತಾಡುವ ಕೇರಳದ ಭಯಾನಕ ಬಂಗಲೆ, ಇನ್ನೂ ಕೇಳಿಸುತ್ತಂತೆ ಮಗುವಿನ ಕಿರುಚಾಟ]]></title>
            <link>https://kannada.asianetnews.com/gallery/relationship/story-of-keralam-bonacauds-bungalow-where-travelers-go-to-find-ghosts-suh-sfhi2sd</link>
            <guid isPermaLink="true">https://kannada.asianetnews.com/gallery/relationship/story-of-keralam-bonacauds-bungalow-where-travelers-go-to-find-ghosts-suh-sfhi2sd</guid>
            <pubDate>Thu, 14 May 2026 12:14:39 +0530</pubDate>
            <description><![CDATA[&lt;p&gt;Story of keralam bonacauds bungalow ರಾತ್ರಿ ಆದ್ಮೇಲೆ ಈ ಬಂಗಲೆಯಲ್ಲಿ ಮಗುವಿನ ಕಿರುಚಾಟ ಕೇಳಿಸುತ್ತಂತೆ&hellip; ಕಿಟಕಿಯ ಬಳಿ ರಹಸ್ಯ ಹುಡುಗಿ ಕಾಣಿಸಿಕೊಂಡು ಕ್ಷಣದಲ್ಲೇ ಮಾಯವಾಗ್ತಾಳಂತೆ!&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krjkhsnshfjm9k5xs5qddzp8,imgname-haunted-place-in-kerala-1778740946617.jpeg" type="image/jpeg" height="390" width="690"/>
            <content:encoded><![CDATA[&lt;p&gt;Story of keralam bonacauds bungalow ರಾತ್ರಿ ಆದ್ಮೇಲೆ ಈ ಬಂಗಲೆಯಲ್ಲಿ ಮಗುವಿನ ಕಿರುಚಾಟ ಕೇಳಿಸುತ್ತಂತೆ&hellip; ಕಿಟಕಿಯ ಬಳಿ ರಹಸ್ಯ ಹುಡುಗಿ ಕಾಣಿಸಿಕೊಂಡು ಕ್ಷಣದಲ್ಲೇ ಮಾಯವಾಗ್ತಾಳಂತೆ!&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕೇರಳದ ತಿರುವನಂತಪುರಂ ಸಮೀಪದ ಹಸಿರು ಪರ್ವತಗಳ ಮಧ್ಯೆ ಇರುವ ಬೊನಕಾಡ್ ಬಂಗಲೆ ಇಂದು ಭಾರತದ ಅತ್ಯಂತ ಭಯಾನಕ ಪ್ರೇತ ತಾಣಗಳಲ್ಲಿ ಒಂದಾಗಿ ಪ್ರಸಿದ್ಧಿಯಾಗಿದೆ. 1951ರಲ್ಲಿ ಬ್ರಿಟಿಷರು ನಿರ್ಮಿಸಿದ್ದ ಈ ಬಂಗಲೆ, ಒಮ್ಮೆ ಚಹಾ ತೋಟದ ವ್ಯವಸ್ಥಾಪಕರ ನಿವಾಸವಾಗಿತ್ತು. ಆದರೆ ಕುಟುಂಬದ ಪುಟ್ಟ ಮಗು ನಿಗೂಢವಾಗಿ ಸಾವನ್ನಪ್ಪಿದ ಬಳಿಕ, ಅವರು ಲಂಡನ್&zwnj;ಗೆ ಮರಳಿದರು. ಅಲ್ಲಿಂದಲೇ ಈ ಬಂಗಲೆಯ ಭಯಾನಕ ಕಥೆಗಳು ಆರಂಭವಾದವು ಎಂದು ಸ್ಥಳೀಯರು ನಂಬುತ್ತಾರೆ.&lt;/p&gt;&lt;img&gt;&lt;p&gt;ಆ ಬಳಿಕ ಇಲ್ಲಿ ವಿಚಿತ್ರ ಘಟನೆಗಳು ನಡೆಯತೊಡಗಿದವು. ರಾತ್ರಿ ವೇಳೆ ಮಗುವಿನ ಕಿರುಚಾಟ, ಗಾಜು ಒಡೆಯುವ ಶಬ್ದ, ಕಿಟಕಿಯ ಬಳಿ ಕಾಣಿಸಿಕೊಳ್ಳುವ ರಹಸ್ಯ ಯುವತಿ&mdash;ಇವೆಲ್ಲವೂ ಈ ಬಂಗಲೆಯನ್ನು ಇನ್ನಷ್ಟು ಭೀತಿದಾಯಕವಾಗಿಸಿವೆ. ಸ್ಥಳೀಯ ಕಥೆಗಳ ಪ್ರಕಾರ, ಉರುವಲು ತರಲು ಹೋದ ಯುವತಿಯೊಬ್ಬಳು ಹಿಂತಿರುಗಿದ ನಂತರ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಳು. ಇಂಗ್ಲಿಷ್ ಮಾತನಾಡಲಾರದ ಆಕೆ, ಆ ಬಳಿಕ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಆರಂಭಿಸಿದ್ದಳು ಎನ್ನಲಾಗುತ್ತದೆ. ಇದನ್ನು ನೋಡಿ ಹಲವರು ಆಕೆಗೆ ಆತ್ಮ ಆವರಿಸಿದೆ ಎಂದು ನಂಬಿದರು.&lt;/p&gt;&lt;img&gt;&lt;p&gt;ಇಂದು ಬೊನಕಾಡ್ ಬಂಗಲೆ ಸಂಪೂರ್ಣ ನಿರ್ಜನವಾಗಿದೆ. ಮುರಿದ ಬಾಗಿಲುಗಳು, ಒಡೆದ ಕಿಟಕಿಗಳು ಮತ್ತು ಮರದ ಫಲಕಗಳಿಂದ ಮುಚ್ಚಿದ ಪ್ರವೇಶ ದ್ವಾರಗಳು ಈ ಜಾಗದ ಭಯಾನಕತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ರಾತ್ರಿಯಾದ್ಮೇಲೆ ಇಲ್ಲಿ ಒಂದು ರಹಸ್ಯ ಹುಡುಗಿ ಕಾಣಿಸುತ್ತಾಳೆ ಎಂಬ ಮಾತುಗಳೂ ಇವೆ. ಸಾಹಸಪ್ರಿಯರು ಮತ್ತು ಪ್ಯಾರಾನಾರ್ಮಲ್ ಕಥೆಗಳಿಗೆ ಆಸಕ್ತಿ ಇರುವವರು ಇಂದು ಕೂಡ ಈ ಬಂಗಲೆಯ ರಹಸ್ಯ ಹುಡುಕಲು ಭೇಟಿ ನೀಡುತ್ತಾರೆ.&lt;/p&gt;]]></content:encoded>
            <category>travel</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/story-of-keralam-bonacauds-bungalow-where-travelers-go-to-find-ghosts-suh-sfhi2sd"/>
        </item>
        <item>
            <title><![CDATA[ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?]]></title>
            <link>https://kannada.asianetnews.com/gallery/karnataka-districts/opposition-to-yeshwantpur-gadag-bypass-vijayapura-train-indian-railways-who-will-pay-500-rupees-sir-mrq-tsgz0sd</link>
            <guid isPermaLink="true">https://kannada.asianetnews.com/gallery/karnataka-districts/opposition-to-yeshwantpur-gadag-bypass-vijayapura-train-indian-railways-who-will-pay-500-rupees-sir-mrq-tsgz0sd</guid>
            <pubDate>Sat, 16 May 2026 14:16:26 +0530</pubDate>
            <description><![CDATA[&lt;p&gt;ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqz254sqjza3j6qkjn1em82,imgname-yeshwanthpur--1--1778920789145.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.&amp;nbsp;&lt;/p&gt;&lt;img&gt;&lt;p&gt;ಗುಮ್ಮಟ ನಗರಿ ವಿಜಯಪುರ ಜನತೆಯ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದೆ. ಇದೀಗ ಈ ರೈಲಿಗೆ ಗದಗ ಜನತೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಿಂದಲೂ ಬೈಪಾಸ್ ಮೂಲಕ ರೈಲು ಸಂಚಾರಕ್ಕೆ ಗದಗ ಜನತೆ ಬೇಸರ ವ್ಯಕ್ತಪಡಿಸಿಕೊಂಡು ಬರುತ್ತಿದ್ದಾರೆ. ಈ ಬೇಸರಕ್ಕೆ ಗದಗ ಜನತೆ ತಮ್ಮದೇ ಆದ ಕೆಲವು ಕಾರಣಗಳನ್ನು ನೀಡುತ್ತಾರೆ.&lt;/p&gt;&lt;img&gt;&lt;p&gt;ನಮ್ಮ ಗದಗ ಜನತೆ ಗದಗ ಬೈಪಾಸ್ ರೈಲು ನಿಲ್ದಾಣ ತಲುಪಲು 300 ರೂಪಾಯಿ ಅಟೋ ಚಾರ್ಜ್ ಭರಿಸಬೆಕು , ಗದಗ ಜನೆತೆಗೆ ಅವಕಾಶ ವಂಚನೆ ಮಾಡಿದ ನೈಋತ್ಯ ರೈಲ್ವೆಯ ಅಧಿಕಾರಿಗಳು , ಇದರ ಬಗ್ಗೆ ಶಾಸಕರು ಹಾಗೂ ಸಂಸದರು ಈಗಲಾದರೂ ಗದಗ್ ಜನತೆಯ ಬಗ್ಗೆ ಧ್ವನಿ ಎತ್ತಿ ಗದಗ ಜನತೆಯ ಋಣ ತೀರಿಸಿ ಎಂದು ಆಗ್ರಹಿಸಿದ್ದಾರೆ. ಈ ಟ್ವೀಟ್&zwnj;ನನ್ನು ಸಂಸದರಾ ಬಸವರಾಜ್ ಬೊಮ್ಮಾಯಿ ಮತ್ತು ಸಚಿವ ಹೆಚ್&zwnj;.ಕೆ.ಪಾಟೀಲ್&zwnj; ಅವರಿಗೆ ಟ್ಯಾಗ್ ಮಾಡಲಾಗಿದೆ.&lt;/p&gt;&lt;img&gt;&lt;p&gt;ವೈರಲ್ ಆಗಿರುವ ಪೋಸ್ಟ್&zwnj;ಗೆ ಪ್ರತಿಕ್ರಿಯಿಸಿರುವ ಅಶೋಕ್ ಹಳ್ಳೂರು ಎಂಬವರು, ಸಾಹುಕಾರ್, ಈ ಟ್ರೈನ್ ಗೆ ಬರಬೇಕು ಅಂತ ನಿಮಗ್ಯಾಕೆ ಹಠ? ಬೇರೆ ಟ್ರೈನ್ ಹತ್ತಿ ಬರ್ರೀ, ಹತ್ತು ಹನ್ನೆರಡು ಟ್ರೈನ್ ಇದ್ರೂ ವಿಜಾಪುರ ಗಾಡಿನೇ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಗದಗ ಕಣಗಿನಹಾಳು ನಡುವೆ ಒಂದು ಬೈಪಾಸ್ ರೈಲು ಹಳಿ ಹೊಂಬಾಳ ರೈಲು ನಿಲ್ದಾಣಕ್ಕೆ ಹೊಸದಾಗಿ ನಿರ್ಮಾಣ ಮಾಡಿದ್ರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಆದರೆ ಇವರುಗಳು ಅದನ್ನು ಕೇಳುವುದನ್ನು ಬಿಟ್ಟು ಪ್ರತಿ ಸಾರಿ ಏಕೆ ಗದಗ್ ಬೈಪಾಸ್ ಮೂಲಕ ಟ್ರೈನ್ ಗಳು ಹೋಗುತ್ತದೆ ಎಂದು ಬಡಿದಾಡುತ್ತಾರೆ ಎಂದು ಮತ್ತೋರ್ವ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು ಅಥವಾ ಯಶವಂತಪುರ ನಿಲ್ದಾಣದಿಂದ ವಿಜಯಪುರಕ್ಕೆ ಹೊರಡುವ ರೈಲುಗಳು ಗದಗ ಬೈಪಾಸ್ ಮೂಲಕ ಚಲಿಸಿದ್ರೆ ಐದು ಗಂಟೆ ಸಮಯ ಉಳಿತಾಯವಾಗುತ್ತದೆ. ಈ ಮಾರ್ಗದಿಂದ ಚಲಿಸಿದ್ರೆ ಹುಬ್ಬಳ್ಳಿ ಮತ್ತು ಗದಗ ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಿಸುವ ಸಮಯ ಉಳಿತಾಯವಾಗುತ್ತದೆ. ಅನತ್ಯವಾಗಿ ಹುಬ್ಬಳ್ಳಿಗೆ ಹೋಗುವುದು ಸಹ ತಪ್ಪಲಿದೆ.&lt;/p&gt;&lt;img&gt;&lt;p&gt;ಯಶವಂತಪುರ ಜಂಕ್ಷನ್, ತುಮಕೂರು, ಅರಸಿಕೆರೆ ಜಂಕ್ಷನ್, ದಾವಣಗೆರೆ, ಎಸ್&zwnj;ಎಂಎಂ ಹಾವೇರಿ, ಗದಗ ಬೈಪಾಸ್, ಬದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್ ಮೂಲಕ ವಿಜಯಪುರ ತಲುಪಲಿದೆ.&lt;/p&gt;&lt;p&gt;ನೂತನ ಬೈಪಾಸ್ ರೈಲಿಗೆ ಸಚಿವ ಎಂ.ಬಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದು, ಇದನ್ನು ಮುಂದಿನ ದಿನಗಳಲ್ಲಿ ಕಾಯಂಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಗುಳೇದಗುಡ್ಡ ರೋಡ್ ನಿಲ್ದಾಣದಲ್ಲಿಯೂ ನಿಲುಗಡೆ ಕಲ್ಪಿಸಬೇಕು ಎಂಬ ಒತ್ತಾಯವೂ ಸಹ ಕೇಳಿ ಬಂದಿದೆ.&lt;/p&gt;&lt;p&gt;ನಮ್ಮ ಗದಗ ಜನತೆ ಗದಗ ಬೈಪಾಸ್ ರೈಲು ನಿಲ್ದಾಣ ತಲುಪಲು 300 ರೂಪಾಯಿ ಅಟೋ ಚಾರ್ಜ್ ಭರಿಸಬೆಕು , ಗದಗ ಜನೆತೆಗೆ ಅವಕಾಶ ವಂಚನೆ ಮಾಡಿದ @SWRRLY ಅಧಿಕಾರಿಗಳು , ಇದರ ಬಗ್ಗೆ ಶಾಸಕರು ಹಾಗೂ ಸಂಸದರು ಈಗಲಾದರೂ ಗದಗ್ ಜನತೆಯ ಬಗ್ಗೆ ಧ್ವನಿ ಎತ್ತಿ ಗದಗ ಜನತೆಯ ಋಣ ತಿರಿಸಿ @HKPatilINC @BSBommai pic.twitter.com/vDesnjuKcg&lt;/p&gt;&lt;p&gt;&mdash; ಗದಗ ರೈಲು ಬಳಕೆದಾರರು Gadag Railway Users (@GadagRailUsers) May 16, 2026&lt;/p&gt;]]></content:encoded>
            <category>travel</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/opposition-to-yeshwantpur-gadag-bypass-vijayapura-train-indian-railways-who-will-pay-500-rupees-sir-mrq-tsgz0sd"/>
        </item>
        <item>
            <title><![CDATA[GOA SECRET: ಸಿಟಿ ಜಂಜಾಟಕ್ಕೆ ಬೇಸತ್ತು ಗೋವಾ ಕಡೆ ಮುಖ ಮಾಡಿದ ಯುವಕರು! ಏನಿದು 'ಸುಸೆಗಾಡ್' ಲೈಫ್‌ಸ್ಟೈಲ್?]]></title>
            <link>https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m</link>
            <guid isPermaLink="true">https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m</guid>
            <pubDate>Mon, 18 May 2026 17:27:25 +0530</pubDate>
            <description><![CDATA[&lt;p&gt;ದೊಡ್ಡ ನಗರಗಳ ಒತ್ತಡದ ಬದುಕಿನಿಂದ ಬೇಸತ್ತಿರುವ ಯುವ ವೃತ್ತಿಪರರು ಈಗ ಗೋವಾದತ್ತ ಮುಖ ಮಾಡುತ್ತಿದ್ದಾರೆ. ವರ್ಕ್ ಫ್ರಮ್ ಹೋಮ್ ಅವಕಾಶದಿಂದಾಗಿ, ಅವರು ಗೋವಾದ ಪ್ರಸಿದ್ಧ 'ಸುಸೆಗಾಡ್' ಅಂದರೆ ನಿಧಾನ, ನಿರಾಳ ಜೀವನಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxdq410w38fqtaew79gds2w,imgname-goa-lifestyle-1779103928352.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗಿನ ಯುವಕರಿಗೆ ಗೋವಾ ಅಂದ್ರೆ ಬರೀ ಹಾಲಿಡೇ ಡೆಸ್ಟಿನೇಶನ್ ಅಲ್ಲ, ಅದೊಂದು ಲೈಫ್&zwnj;ಸ್ಟೈಲ್ ಆಯ್ಕೆಯಾಗಿದೆ. ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳಿಂದ ಹಿಡಿದು ಸ್ಟಾರ್ಟ್&zwnj;ಅಪ್ ಸಂಸ್ಥಾಪಕರು, ಕಲಾವಿದರು, ಕ್ರಿಯೇಟರ್ಸ್&zwnj;ವರೆಗೆ ಅನೇಕರು ಈಗ ದೊಡ್ಡ ನಗರಗಳ ಗದ್ದಲವನ್ನು ಬಿಟ್ಟು ಗೋವಾದ ಪ್ರಸಿದ್ಧ 'ಸುಸೆಗಾಡ್' ಜೀವನಶೈಲಿಯನ್ನು ಅರಸಿ ಹೊರಟಿದ್ದಾರೆ. ಅಂದರೆ, ನಿಧಾನ, ನಿರಾಳ ಮತ್ತು ಸಮತೋಲನದ ಬದುಕು.&lt;/p&gt;&lt;p&gt;ಗೋವಾದಲ್ಲಿ 'ಸುಸೆಗಾಡ್' ಅನ್ನೋ ಪದ ತುಂಬಾನೇ ಫೇಮಸ್. ಇದರರ್ಥ ನಿರಾಳ, ಆರಾಮದಾಯಕ, ಒತ್ತಡವಿಲ್ಲದ ಜೀವನಶೈಲಿ. ಆದರೆ ಸ್ಥಳೀಯರ ಪ್ರಕಾರ, ಜನರು ಇದನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. &quot;ಸುಸೆಗಾಡ್ ಅಂದ್ರೆ ಏನೂ ಕೆಲಸ ಮಾಡದೆ ಇರುವುದಲ್ಲ, ಬದಲಿಗೆ ಯಾವುದೇ ಅವಸರವಿಲ್ಲದೆ, ಒತ್ತಡವಿಲ್ಲದೆ ಆರಾಮವಾಗಿ ಬದುಕುವುದು,&quot; ಅಂತ ಗೋವಾದ ಕಲಾವಿದರೊಬ್ಬರು 'ಓ ಹೆರಾಲ್ಡೋ' ಪತ್ರಿಕೆಗೆ ತಿಳಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳ ಟ್ರಾಫಿಕ್, ದುಬಾರಿ ಬಾಡಿಗೆ, ಒತ್ತಡದ ಕೆಲಸದಿಂದ ಬೇಸತ್ತ ಯುವಕರಿಗೆ ಈ 'ಸುಸೆಗಾಡ್' ಐಡಿಯಾ ಹೆಚ್ಚು ಇಷ್ಟವಾಗುತ್ತಿದೆ. ಇಂಟರ್&zwnj;ನೆಟ್ ಸಂಪರ್ಕ ಸುಧಾರಿಸಿರುವುದು ಮತ್ತು ರಿಮೋಟ್ ವರ್ಕ್ ಅವಕಾಶಗಳು ಹೆಚ್ಚಿರುವುದರಿಂದ, ಯುವ ವೃತ್ತಿಪರರು ಬೀಚ್ ಪಕ್ಕ ಕುಳಿತು ತಮ್ಮ ವೃತ್ತಿಜೀವನವನ್ನು ಆನ್&zwnj;ಲೈನ್&zwnj;ನಲ್ಲಿ ಮುಂದುವರಿಸಲು ಸಾಧ್ಯವಾಗಿದೆ.&lt;/p&gt;&lt;p&gt;ರೆಡ್ಡಿಟ್&zwnj;ನಲ್ಲಿ ಗೋವಾಗೆ ಶಿಫ್ಟ್ ಆದ ಅನುಭವ ಹಂಚಿಕೊಂಡ ಯುವಕರು ಇದನ್ನೊಂದು 'ಲೈಫ್&zwnj;ಸ್ಟೈಲ್ ರೀಸೆಟ್' ಅಂತ ಕರೆದಿದ್ದಾರೆ. &quot;ದೊಡ್ಡ ನಗರಗಳಂತೆ ಇಲ್ಲಿ ಸದಾ ಅವಸರದ ಭಾವನೆ ಇರುವುದಿಲ್ಲ,&quot; ಎಂದು ಒಬ್ಬ ರಿಮೋಟ್ ವರ್ಕರ್ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, &quot;ಓದುವುದು, ಕೆಫೆಗಳಿಗೆ ಹೋಗುವುದು, ಈಜುವುದು ಮತ್ತು ಶಾಂತ ಸಂಜೆಗಳನ್ನು ಕಳೆಯುತ್ತಾ, ಒಂದು ರೀತಿ ನಿವೃತ್ತಿ ಜೀವನದಂತಹ ನಿರಾಳ ಬದುಕು ಬೇಕು,&quot; ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಇದನ್ನೂ ಓದಿ: ತುಂಬಿ ತುಳುಕುತ್ತಿರುವ ಬೀಚ್&zwnj;ಗಳು, ಟ್ರಾಫಿಕ್ ಜಾಮ್, ದುಬಾರಿ ಬೆಲೆ: ಗೋವಾ ಪ್ರವಾಸೋದ್ಯಮ ಸಂಕಷ್ಟದಲ್ಲಿದೆಯೇ?&lt;/p&gt;&lt;p&gt;ಅಸ್ಸಾಗಾಂವ್, ಸಿಯೋಲಿಮ್, ಅಲ್ಡೋನಾ ಮತ್ತು ದಕ್ಷಿಣ ಗೋವಾದ ಕೆಲವು ಭಾಗಗಳು ಈಗ ನೈಟ್&zwnj;ಲೈಫ್&zwnj;ಗಿಂತ ಹೆಚ್ಚಾಗಿ ಹಸಿರು, ಸೃಜನಶೀಲ ಸಮುದಾಯಗಳು ಮತ್ತು ನಿಧಾನಗತಿಯ ಜೀವನವನ್ನು ಬಯಸುವ ದೀರ್ಘಕಾಲಿಕ ನಿವಾಸಿಗಳನ್ನು ಆಕರ್ಷಿಸುತ್ತಿವೆ. ಹೊಸ ಕೆಫೆಗಳು, ಕೋ-ವರ್ಕಿಂಗ್ ಸ್ಪೇಸ್&zwnj;ಗಳು ಮತ್ತು ವೆಲ್&zwnj;ನೆಸ್ ಕೇಂದ್ರಗಳು ಕೂಡ ಯುವ ನಗರವಾಸಿಗಳನ್ನು ಸೆಳೆಯುತ್ತಿವೆ.&lt;/p&gt;&lt;p&gt;ಆದರೆ, ಗೋವಾದ ಈ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಜೀವನ ವೆಚ್ಚ ಏರಿಕೆ, ಅತಿಯಾದ ಕಟ್ಟಡ ನಿರ್ಮಾಣ ಮತ್ತು ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಇತ್ತೀಚೆಗೆ, ಒಬ್ಬ ಸಾಫ್ಟ್&zwnj;ವೇರ್ ಎಂಜಿನಿಯರ್ ಗೋವಾದಲ್ಲಿ ಒಬ್ಬರೇ ವಾಸಿಸಲು ತಿಂಗಳಿಗೆ ಸುಮಾರು ₹82,000 ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದು, ಇದು ವೈರಲ್ ಆಗಿತ್ತು.&lt;/p&gt;&lt;p&gt;ಹೆಚ್ಚುತ್ತಿರುವ ವಲಸೆ ಮತ್ತು ರಿಯಲ್ ಎಸ್ಟೇಟ್ ಹಾವಳಿಯಿಂದ ಗೋವಾದ ಅಸ್ಮಿತೆಯನ್ನು ಕಾಪಾಡುವ ಬಗ್ಗೆ ಸ್ಥಳೀಯರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಬರುವವರು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಬೇಕು, ಕೊಂಕಣಿ ಕಲಿಯಬೇಕು ಮತ್ತು ಗೋವಾವನ್ನು ಕೇವಲ 'ಪಾರ್ಟಿ ರಾಜ್ಯ' ಎಂದು ಪರಿಗಣಿಸಬಾರದು ಎಂದು ಕೆಲವು ನಿವಾಸಿಗಳು ಆನ್&zwnj;ಲೈನ್&zwnj;ನಲ್ಲಿ ಸಲಹೆ ನೀಡಿದ್ದಾರೆ.&lt;/p&gt;&lt;p&gt;ಈ ಎಲ್ಲಾ ಸವಾಲುಗಳ ನಡುವೆಯೂ, ಗೋವಾದ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ನಿರಂತರ ಒತ್ತಡ ಮತ್ತು ಉತ್ಪಾದಕತೆಯೇ ಮುಖ್ಯವಾಗಿರುವ ಈ ಜಗತ್ತಿನಲ್ಲಿ, ಗೋವಾದ ನಿಧಾನಗತಿಯ ಜೀವನವು ಶಾಂತಿ, ನೆಮ್ಮದಿ ಮತ್ತು ಉತ್ತಮ ವರ್ಕ್-ಲೈಫ್ ಬ್ಯಾಲೆನ್ಸ್ ಹುಡುಕುತ್ತಿರುವ ಯುವ ಪೀಳಿಗೆಗೆ ಒಂದು ದೊಡ್ಡ ಆಕರ್ಷಣೆಯಾಗಿದೆ.&lt;/p&gt;&lt;p&gt;ಇದನ್ನೂ ಓದಿ: ನಿಮ್ಮ ಗೋವಾ ಪ್ರವಾಸವನ್ನು ಮತ್ತಷ್ಟು ದಿನ ವಿಸ್ತರಿಸುವಂತೆ ಮಾಡುವ 5 ಅನುಭವಗಳಿವು&lt;/p&gt;]]></content:encoded>
            <category>travel</category>
            <dc:creator>Shriram Bhat</dc:creator>
            <atom:link href="https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m"/>
        </item>
        <item>
            <title><![CDATA[ಶಕ್ತಿ ಯೋಜನೆ ಇಂಪ್ಯಾಕ್ಟ್​: ಖಾಸಗಿ ಬಸ್​ ದರ ಶೇಕಡಾ 20-30ರಷ್ಟು ದಿಢೀರ್​ ಏರಿಕೆ; ಇಂದಿನಿಂದಲೇ ಜಾರಿ]]></title>
            <link>https://kannada.asianetnews.com/travel/private-bus-operators-in-karnataka-to-hike-fares-by-20-to-30-pc-after-fuel-price-rise-suc/articleshow-x01ukfr</link>
            <guid isPermaLink="true">https://kannada.asianetnews.com/travel/private-bus-operators-in-karnataka-to-hike-fares-by-20-to-30-pc-after-fuel-price-rise-suc/articleshow-x01ukfr</guid>
            <pubDate>Fri, 15 May 2026 22:02:49 +0530</pubDate>
            <description><![CDATA[ಇಂಧನ ಬೆಲೆ ಏರಿಕೆ ಮತ್ತು ಶಕ್ತಿ ಯೋಜನೆಯ ಪರಿಣಾಮದಿಂದಾಗಿ, ಕರ್ನಾಟಕದ ಖಾಸಗಿ ಬಸ್ ಮಾಲೀಕರು ಮೇ 15 ರಿಂದ ಬಸ್ ದರವನ್ನು ಶೇ. 20-30 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಈ ನಿರ್ಧಾರದಿಂದಾಗಿ ಬೆಂಗಳೂರಿನಿಂದ ಬೆಳಗಾವಿ, ಮಂಗಳೂರಿನಂತಹ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣ ದರ ಗಣನೀಯವಾಗಿ ಏರಿಕೆಯಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krp7prpcj9ed41e0x0xhf4k6,imgname-private-buses-1778862744268.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ, ಖಾಸಗಿ ಬಸ್ ನಿರ್ವಾಹಕರು ಇಂದಿನಿಂದ ಅರ್ಥಾತ್​ ಮೇ 15ರ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಮಾರ್ಗವನ್ನು ಅವಲಂಬಿಸಿ ದರವನ್ನು ಶೇಕಡಾ 20-30 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಬಸ್ ಮಾಲೀಕರ ಪರಿಸ್ಥಿತಿ ಈಗಾಗಲೇ ಹೆಚ್ಚಿನ ರಸ್ತೆ ತೆರಿಗೆ ಮತ್ತು ಸರ್ಕಾರಿ ಬಸ್&zwnj;ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಸಂಕಷ್ಟದಲ್ಲಿದೆ. ಇದರ ಜೊತೆಗೆ, ಇಂಧನ ಬೆಲೆಗಳು ಹೆಚ್ಚಿವೆ. ಶಕ್ತಿ ಯೋಜನೆಯಿಂದ ನಮಗೆ ತುಂಬಾ ಕೆಟ್ಟ ಪ್ರಭಾವ ಬೀರಿದೆ. ಈ ಹಿನ್ನೆಲೆಯಲ್ಲಿ ಬಸ್​ ದರ ಏರಿಸುವುದು ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ್ ಶರ್ಮಾ ಹೇಳಿದರು.&lt;/p&gt;&lt;h2&gt;&lt;strong&gt;15 ಸಾವಿರ ಹೊರೆ&lt;/strong&gt;&lt;/h2&gt;&lt;p&gt;ಇದು ಬಸ್ ಮಾಲೀಕರ ಮೇಲೆ ತಿಂಗಳಿಗೆ ಪ್ರತಿ ವಾಹನಕ್ಕೆ 15,000 ರೂ.ಗಳ ಹೊರೆ ಆಗುತ್ತಿದೆ. ಒಬ್ಬ ಮಾಲೀಕರು ಮೂರು ಬಸ್&zwnj;ಗಳನ್ನು ಹೊಂದಿದ್ದರೆ, ಆ ಹೊರೆ ತಿಂಗಳಿಗೆ 45,000 ರಿಂದ 50,000 ರೂ.ಗಳವರೆಗೆ ಇರುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಾರ್ಗವನ್ನು ಅವಲಂಬಿಸಿ ಮಾಲೀಕರು ಶೇಕಡಾ 20-30 ರಷ್ಟು ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅವರು ಮಾತಿಹಿ ನೀಡಿದರು. ಈ ಹೆಚ್ಚಳವು ಪ್ರತಿ ಸೀಟಿಗೆ ಸರಿಸುಮಾರು 200 ರೂ.ಗಳಾಗಬಹುದು ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಎಲ್ಲೆಲ್ಲಿ ಎಷ್ಟೆಷ್ಟು?&lt;/strong&gt;&lt;/h3&gt;&lt;p&gt;&ldquo;ಉದಾಹರಣೆಗೆ, ಬೆಂಗಳೂರಿನಿಂದ ಬೆಳಗಾವಿಗೆ ಪ್ರಸ್ತುತ ಬಸ್ ದರ ಸುಮಾರು 1,000&ndash;1,200 ರೂ.ಗಳಾಗಿದ್ದು, ಇದು 1,350&ndash;1,400 ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಅದೇ ರೀತಿ, ಬೆಂಗಳೂರಿನಿಂದ ಮಂಗಳೂರು ಅಥವಾ ಉಡುಪಿಗೆ ಪ್ರಸ್ತುತ 900&ndash;1,000 ರೂ.ಗಳ ನಡುವೆ ಇದ್ದು, 1,100&ndash;1,200 ರೂ.ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ&rdquo; ಎಂಬ ಮಾಹಿತಿ ನೀಡಿದರು.&lt;/p&gt;&lt;h3&gt;&lt;strong&gt;ಪಶ್ಚಿಮ ಏಷ್ಯಾ ಸಂಘರ್ಷ&lt;/strong&gt;&lt;/h3&gt;&lt;p&gt;ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಇಂಧನ ಚಿಲ್ಲರೆ ವ್ಯಾಪಾರಿಗಳಿಗೆ ಹೆಚ್ಚುತ್ತಿರುವ ನಷ್ಟದ ನಡುವೆಯೂ, ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದ ನಂತರ ಮೊದಲ ಬಾರಿಗೆ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್&zwnj;ಗೆ 3 ರೂ.ಗಳಷ್ಟು ಹೆಚ್ಚಿಸಲಾಗಿದೆ.ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ಮುಗಿದ ಎರಡು ವಾರಗಳ ನಂತರ ಈ ಹೆಚ್ಚಳವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/travel/private-bus-operators-in-karnataka-to-hike-fares-by-20-to-30-pc-after-fuel-price-rise-suc/articleshow-x01ukfr"/>
        </item>
        <item>
            <title><![CDATA[ಬೀದರ್-ಬೆಂಗಳೂರು ನೇರ ವಿಮಾನಯಾನ ಜೂನ್ 1 ರಿಂದ ಆರಂಭ, ವೇಳಾಪಟ್ಟಿ ಬಿಡುಗಡೆ, ಚೆಕ್ ಮಾಡಿಕೊಳ್ಳಿ]]></title>
            <link>https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k</link>
            <guid isPermaLink="true">https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k</guid>
            <pubDate>Tue, 19 May 2026 18:20:57 +0530</pubDate>
            <description><![CDATA[ಜೂನ್ 1 ರಿಂದ ಬೀದರ್-ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಸ್ಟಾರ್ ಏರ್ ಮೂಲಕ ಪುನರಾರಂಭಗೊಳ್ಳಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಮತ್ತು ಬೀದರ್&zwnj;ನಿಂದ 8:15ಕ್ಕೆ ವಿಮಾನಗಳು ಹೊರಡಲಿದ್ದು, ಈ ಸೇವೆಯು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jj8hkaw4djebaykbmsng1vq7,imgname-star-air.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ನಿರೀಕ್ಷೆಯಾಗಿದ್ದ ಬೀದರ್&ndash;ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಜೂನ್ 1ರಿಂದ ಪುನರಾರಂಭಗೊಳ್ಳಲಿದ್ದು, ನೂತನ ವೇಳಾಪಟ್ಟಿ ಯನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಹೊರಡಲಿರುವ ವಿಮಾನ 7:45ಕ್ಕೆ ಬೀದರ್ ತಲುಪಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದ್ದಾರೆ.&lt;/p&gt;&lt;h2&gt;ವಿಮಾನ ವೇಳಾಪಟ್ಟಿ ಇಲ್ಲಿದೆ&lt;/h2&gt;&lt;p&gt;ಈ ಕುರಿತು ಪ್ರಕಟಣೆ ನೀಡಿರುವ ಸಚಿವರು, ಸ್ಟಾರ್ ಏರ್ ವತಿಯಿಂದ ಆರಂಭವಾಗುತ್ತಿರುವ ಈ ವಿಮಾನ ಸೇವೆಯ ವೇಳಾಪಟ್ಟಿಯಂತೆ ಬೀದರ್&zwnj;ನಿಂದ ಬೆಳಿಗ್ಗೆ 8:15ಕ್ಕೆ ಹೊರಡುವ ವಿಮಾನ 9:30ಕ್ಕೆ ಬೆಂಗಳೂರು ತಲುಪಲಿದ್ದು, ಕೇವಲ 1 ಗಂಟೆ 15 ನಿಮಿಷಗಳಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಸಬಹುದಾಗಿದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಈ ವಿಮಾನ ಸೇವೆ ಪುನರಾರಂಭಗೊಳ್ಳಲು ನಿರಂತರ ಪ್ರಯತ್ನ ಮಾಡಲಾಗಿದ್ದು, ಇದರ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮತ್ತೆ ವಾಯು ಸಂಪರ್ಕ ಸೌಲಭ್ಯ ಲಭ್ಯವಾಗುತ್ತಿದೆ. ಇದರಿಂದ ಜಿಲ್ಲೆಯ ವ್ಯಾಪಾರ, ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಪ್ರಗತಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಈ ಮಹತ್ವದ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳು, ಕೆಕೆಆರ್&zwnj;ಡಿಬಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ನೀಡಿದ ಸಹಕಾರಕ್ಕೆ ಸಚಿವ ಈಶ್ವರ ಖಂಡ್ರೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸಾಗರ್ ಖಂಡ್ರೆ, ಸಚಿವರಾದ ರಹೀಂ ಖಾನ್ ಹಾಗೂ ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರವೂ ಶ್ಲಾಘನೀಯ ವಾಗಿದೆ ಎಂದು ಅವರು ತಿಳಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮತ್ತು ಜನರ ಸೌಲಭ್ಯಕ್ಕಾಗಿ ಸರ್ಕಾರ ಇನ್ನಷ್ಟು ಪ್ರಗತಿಪರ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k"/>
        </item>
        <item>
            <title><![CDATA[Train Number 16553/554: ಬೆಂಗಳೂರು-ಹುಬ್ಬಳ್ಳಿ-ಮುಂಬೈ ರೈಲ್ವೆಗೆ ಸಿಕ್ತು ಚಾಲನೆ]]></title>
            <link>https://kannada.asianetnews.com/gallery/travel/train-number-16553-and-16554-bengaluru-ssb-hubballi-junction-mumbai-railway-has-started-its-journey-mrq-y443y3l</link>
            <guid isPermaLink="true">https://kannada.asianetnews.com/gallery/travel/train-number-16553-and-16554-bengaluru-ssb-hubballi-junction-mumbai-railway-has-started-its-journey-mrq-y443y3l</guid>
            <pubDate>Sun, 17 May 2026 11:07:50 +0530</pubDate>
            <description><![CDATA[&lt;p&gt;ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಾರ್ಗವಾಗಿ ಮುಂಬೈಗೆ ತೆರಳುವ ಹೊಸ ರೈಲಿಗೆ ಚಾಲನೆ ನೀಡಿದರು. ಈ ರೈಲು (16553/16554) ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್&zwnj;ನಿಂದ ಲೋಕಮಾನ್ಯ ಟರ್ಮಿನಲ್&zwnj;ವರೆಗೆ ಸಂಚರಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krt6q9z1paftbw4x9en9ge21,imgname-bengaluru-to-mumbai-1778995931104.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಾರ್ಗವಾಗಿ ಮುಂಬೈಗೆ ತೆರಳುವ ಹೊಸ ರೈಲಿಗೆ ಚಾಲನೆ ನೀಡಿದರು. ಈ ರೈಲು (16553/16554) ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್&zwnj;ನಿಂದ ಲೋಕಮಾನ್ಯ ಟರ್ಮಿನಲ್&zwnj;ವರೆಗೆ ಸಂಚರಿಸಲಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನಿಂದ ಹುಬ್ಬಳ್ಳಿ -ಧಾರವಾಡ-ಬೆಳಗಾವಿ ಮಾರ್ಗವಾಗಿ ಮುಂಬೈ ತಲುಪುವ ರೈಲಿಗೆ ಇಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಚಾಲನೆ ನೀಡಿದರು. ಈ ವೇಳೆ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.&lt;/p&gt;&lt;img&gt;&lt;p&gt;ಹೊಸ ರೈಲು ಸಂಖ್ಯೆ 16553 ಬೆಂಗಳೂರಿನ ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್&zwnj;ನಿಂದ ತನ್ನ ಪ್ರಯಾಣ ಆರಂಭಿಸಿ ಮುಂಬೈನ ಲೋಕಮಾನ್ಯ ಟರ್ಮಿನಲ್&zwnj; ತಲುಪುವ ಮೂಲಕ ತನ್ನ ಪ್ರಯಾಣ ಕೊನೆಗೊಳಿಸುತ್ತದೆ. ರೈಲು ಸಂಖ್ಯೆ 16554 ಮುಂಬೈನ ಲೋಕಮಾನ್ಯ ಟರ್ಮಿನಲ್&zwnj;ನಿಂದ ಪ್ರಯಾಣ ಆರಂಭಗೊಂಡು ಬೆಂಗಳೂರಿನಲ್ಲಿ ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್&zwnj; ಪ್ರಯಾಣ ಕೊನೆಯಾಗುತ್ತದೆ.&lt;/p&gt;&lt;img&gt;&lt;p&gt;ರೈಲು ಮಾರ್ಗ ಈ ರೀತಿಯಾಗಿದೆ.&lt;/p&gt;&lt;p&gt;ಎಸ್&zwnj;ಎಂವಿಟಿ ಬೆಂಗಳೂರು, ದಾವಣಗೆರೆ, ಎಸ್&zwnj;ಎಸ್ಎಸ್ ಹುಬ್ಬಳ್ಳಿ ಜಂಕ್ಷನ್, ಧಾರವಾಡ, ಬೆಳಗಾವಿ, ಮೀರಜ್ ಜಂಕ್ಷನ್, ಸಾಂಗ್ಲಿ, ಕರ್ಡ, ಸತಾರಾ, ಲೊನದಾ ಜಂಕ್ಷನ್, ಪುಣೆ ಜಂಕ್ಷನ್, ಲೋನಾವಾಲಾ, ಕರ್ಜತ್, ಕಲ್ಯಾಣ್, ಥಾಣೆ, ಮುಂಬೈ ಎಲ್&zwnj;ಟಟಿ&lt;/p&gt;&lt;img&gt;&lt;p&gt;ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿ, ಪ್ರಮುಖ ಅಂತರ್&zwnj;ನಗರ ರೈಲು ಸಂಪರ್ಕಕ್ಕೆ ಹೊಸ ಚೈತನ್ಯ ನೀಡುತ್ತದೆ&lt;/p&gt;&lt;p&gt;ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ವ್ಯಾಪಾರ, ಉದ್ಯಮ ಚಟುವಟಿಕೆಗಳು ಹಾಗೂ ಪ್ರವಾಸೋದ್ಯಮ ವೃದ್ಧಿಗೆ ಉತ್ತೇಜನ ನೀಡಿ, ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತದೆ&lt;/p&gt;&lt;img&gt;&lt;p&gt;ವಿಶ್ವಾಸಾರ್ಹ ಮತ್ತು ಕೈಗೆಟುಕುವ ರೈಲು ಸಂಪರ್ಕಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಪ್ರಯಾಣಿಕರು, ಉದ್ಯೋಗಸ್ಥರು ಮತ್ತು ಕುಟುಂಬಗಳಿಗೆ ಅನುಕೂಲ ಒದಗಿಸುತ್ತದೆ. ವಿಮಾನ ಹಾಗೂ ರಸ್ತೆ ಪ್ರಯಾಣಕ್ಕೆ ಹೋಲಿಸಿದರೆ, ರೈಲು ಪ್ರಯಾಣವು ಹೆಚ್ಚು ಆರಾಮದಾಯಕ, ಮಿತ ವ್ಯಯದ ಹಾಗೂ ಪರಿಸರ ಸ್ನೇಹಿ ಪ್ರಯಾಣದ ಆಯ್ಕೆಯಾಗಿದೆ&lt;/p&gt;]]></content:encoded>
            <category>travel</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/travel/train-number-16553-and-16554-bengaluru-ssb-hubballi-junction-mumbai-railway-has-started-its-journey-mrq-y443y3l"/>
        </item>
        <item>
            <title><![CDATA[ಬೆಂಗಳೂರು-ವಿಜಯಪುರ ನಡುವೆ ಬೈಪಾಸ್ ರೈಲು ಸಂಚಾರ ಆರಂಭ: 5 ಗಂಟೆ ಸಮಯ ಉಳಿತಾಯಕ್ಕೆ ಸಚಿವ ಎಂ.ಬಿ. ಪಾಟೀಲ ಸಂತಸ!]]></title>
            <link>https://kannada.asianetnews.com/gallery/state/indian-railway-bengaluru-vijayapura-special-train-via-hubli-gadag-bypass-mb-patil-happy-sat-zh12z5q</link>
            <guid isPermaLink="true">https://kannada.asianetnews.com/gallery/state/indian-railway-bengaluru-vijayapura-special-train-via-hubli-gadag-bypass-mb-patil-happy-sat-zh12z5q</guid>
            <pubDate>Fri, 15 May 2026 19:41:15 +0530</pubDate>
            <description><![CDATA[ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ಪ್ರಯಾಣದ ಸಮಯವನ್ನು ಸುಮಾರು 5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಸಚಿವ ಎಂ.ಬಿ. ಪಾಟೀಲರ ಮನವಿಯ ಮೇರೆಗೆ ಆರಂಭವಾದ ಈ ಸೇವೆಯನ್ನು ಕಾಯಂಗೊಳಿಸಲು ಮತ್ತು ವೇಳಾಪಟ್ಟಿ ಬದಲಾವಣೆಗೆ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7vqdjdvnc1cy078ydnn1kj,imgname-idnian-railways--3--1778380420685.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ಪ್ರಯಾಣದ ಸಮಯವನ್ನು ಸುಮಾರು 5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಸಚಿವ ಎಂ.ಬಿ. ಪಾಟೀಲರ ಮನವಿಯ ಮೇರೆಗೆ ಆರಂಭವಾದ ಈ ಸೇವೆಯನ್ನು ಕಾಯಂಗೊಳಿಸಲು ಮತ್ತು ವೇಳಾಪಟ್ಟಿ ಬದಲಾವಣೆಗೆ ಆಗ್ರಹಿಸಲಾಗಿದೆ.&lt;img&gt;&lt;p&gt;ವಿಜಯಪುರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು-ವಿಜಯಪುರ ನಡುವಿನ ತ್ವರಿತ ರೈಲು ಸೇವೆಗೆ ಈಗ ಚಾಲನೆ ಸಿಕ್ಕಿದೆ. ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ವಿಶೇಷ ರೈಲು ಓಡಿಸುವ ಸಚಿವ ಎಂ.ಬಿ. ಪಾಟೀಲರ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬೆಳವಣಿಗೆಯ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಮನವಿಗೆ ಸ್ಪಂದಿಸಿ ವಿಶೇಷ ರೈಲು ಆರಂಭಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಎಂ.ಬಿ. ಪಾಟೀಲರು ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಅವರು ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದು, ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸುವುದರಿಂದ ಸಮಯ ಉಳಿತಾಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.&lt;/p&gt;&lt;img&gt;&lt;p&gt;ಸದ್ಯ ವಿಜಯಪುರ ಮತ್ತು ಬೆಂಗಳೂರು ನಡುವೆ ರೈಲು ಪ್ರಯಾಣಕ್ಕೆ ಸುಮಾರು 15 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ರೈಲುಗಳು ಹುಬ್ಬಳ್ಳಿ ನಗರದೊಳಗೆ ಹೋಗುವ ಬದಲು ಹುಬ್ಬಳ್ಳಿ ಬೈಪಾಸ್ ಮೂಲಕ ಸಂಚರಿಸಿದರೆ ಈ ಸಮಯವನ್ನು ಕೇವಲ 10 ಗಂಟೆಗಳಿಗೆ ಇಳಿಸಬಹುದು.&amp;nbsp;&lt;/p&gt;&lt;p&gt;ಇದರಿಂದ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ರಾಜಧಾನಿಗೆ ಬರಲು ಮತ್ತು ಹೋಗಲು ಲಭ್ಯವಿರುವ ಅತ್ಯಂತ ವೇಗದ ಸಾರಿಗೆ ಇದಾಗಲಿದೆ ಎಂದು ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ನೈರುತ್ಯ ರೈಲ್ವೆಯು ಈ ವಿಶೇಷ ರೈಲನ್ನು ಜೂನ್ 28ರವರೆಗೆ ಓಡಿಸಲು ನಿರ್ಧರಿಸಿದೆ.&lt;/p&gt;&lt;p&gt;&lt;strong&gt;ಯಶವಂತಪುರದಿಂದ: &lt;/strong&gt;ಪ್ರತೀ ಶನಿವಾರ ಬೆಂಗಳೂರಿನಿಂದ ಹೊರಡಲಿದೆ.&lt;/p&gt;&lt;p&gt;&lt;strong&gt;ವಿಜಯಪುರದಿಂದ:&lt;/strong&gt; ಪ್ರತೀ ಭಾನುವಾರ ಹಿಂತಿರುಗಲಿದೆ.&lt;/p&gt;&lt;p&gt;&lt;strong&gt;ಬೋಗಿಗಳು:&lt;/strong&gt; ಒಟ್ಟು 19 ಬೋಗಿಗಳನ್ನು ಈ ರೈಲು ಹೊಂದಿರಲಿದೆ.&lt;/p&gt;&lt;p&gt;&lt;strong&gt;ನಿಲುಗಡೆಗಳು:&lt;/strong&gt; ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ.&lt;/p&gt;&lt;img&gt;&lt;p&gt;ಈ ವಿಶೇಷ ರೈಲನ್ನು ಕೇವಲ ಒಂದು ತಿಂಗಳಿಗೆ ಸೀಮಿತಗೊಳಿಸದೆ, ತ್ವರಿತವಾಗಿ ಕಾಯಂ ರೈಲನ್ನಾಗಿ ಪರಿವರ್ತಿಸಬೇಕು ಎಂದು ಸಚಿವರು ಮತ್ತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಸೂಕ್ತ ಸಮಯ: &lt;/strong&gt;ಬೆಂಗಳೂರಿನಿಂದ ರಾತ್ರಿ 8 ಗಂಟೆಗೆ ಹೊರಟು ಬೆಳಿಗ್ಗೆ 6ಕ್ಕೆ ವಿಜಯಪುರ ತಲುಪುವಂತಿರಬೇಕು. ಅದೇ ರೀತಿ ವಿಜಯಪುರದಿಂದ ರಾತ್ರಿ 8ಕ್ಕೆ ಹೊರಟು ಬೆಳಿಗ್ಗೆ 6ಕ್ಕೆ ಬೆಂಗಳೂರಿಗೆ ತಲುಪುವಂತಿರಬೇಕು.&lt;/p&gt;&lt;p&gt;&lt;strong&gt;ಯಶವಂತಪುರ ತಲುಪುವ ಸಮಯ: &lt;/strong&gt;ಈಗಿನ ವಿಶೇಷ ರೈಲು ಮುಂಜಾನೆ 4 ಗಂಟೆಗೆ ಯಶವಂತಪುರ ತಲುಪಲಿದೆ. ಇದು ಪ್ರಯಾಣಿಕರಿಗೆ ಮನೆಗಳಿಗೆ ಹೋಗಲು ಕಷ್ಟಕರವಾಗುವುದರಿಂದ, ಮುಂಜಾನೆ 5:30 ರಿಂದ 6 ಗಂಟೆಯ ಸುಮಾರಿಗೆ ತಲುಪುವಂತೆ ಮಾಡಬೇಕು ಎಂದು ಅವರು ಕೋರಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-bengaluru-vijayapura-special-train-via-hubli-gadag-bypass-mb-patil-happy-sat-zh12z5q"/>
        </item>
        <item>
            <title><![CDATA[ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು]]></title>
            <link>https://kannada.asianetnews.com/gallery/travel/railway-routes-changed-and-some-stopped-due-to-many-reasons-details-here-suc-zx6gymu</link>
            <guid isPermaLink="true">https://kannada.asianetnews.com/gallery/travel/railway-routes-changed-and-some-stopped-due-to-many-reasons-details-here-suc-zx6gymu</guid>
            <pubDate>Thu, 14 May 2026 18:55:04 +0530</pubDate>
            <description><![CDATA[&lt;p&gt;ರೈಲು ಮಾರ್ಗದ ಕಾಮಗಾರಿಯಿಂದಾಗಿ, ವಿಜಯಪುರ-ಹುಬ್ಬಳ್ಳಿ ವಿಶೇಷ ರೈಲು, ಪಂಚಗಂಗಾ ಎಕ್ಸ್&zwnj;ಪ್ರೆಸ್ ಮತ್ತು ಮುರುಡೇಶ್ವರ-ಬೆಂಗಳೂರು ಎಕ್ಸ್&zwnj;ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿಟೇಲ್ಸ್​ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krkad4e98g4hhfdmfzahyw74,imgname-railway-1778764911049.jpg" type="image/jpeg" height="390" width="690"/>
            <content:encoded><![CDATA[&lt;p&gt;ರೈಲು ಮಾರ್ಗದ ಕಾಮಗಾರಿಯಿಂದಾಗಿ, ವಿಜಯಪುರ-ಹುಬ್ಬಳ್ಳಿ ವಿಶೇಷ ರೈಲು, ಪಂಚಗಂಗಾ ಎಕ್ಸ್&zwnj;ಪ್ರೆಸ್ ಮತ್ತು ಮುರುಡೇಶ್ವರ-ಬೆಂಗಳೂರು ಎಕ್ಸ್&zwnj;ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿಟೇಲ್ಸ್​ ಇಲ್ಲಿದೆ.&lt;/p&gt;&lt;img&gt;&lt;p&gt;ರೈಲು ಮಾರ್ಗದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ. ಅದರ ಡಿಟೇಲ್ಸ್​ ಇಲ್ಲಿ ನೀಡಲಾಗಿದೆ. ರೈಲು ಸಂಖ್ಯೆ 66502 ವಿಜಯಪುರ&ndash;SSS ಹುಬ್ಬಳ್ಳಿ ವಿಶೇಷ ರೈಲು ನಾಳೆ ಅಂದರೆ 15 ಮೇ 2026ರಂದು ವಿಜಯಪುರ (BJP)&ndash;ಕುಡಗಿ (KDGI )ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ ಹಾಗೂ ಇದು ವಿಜಯಪುರ ಬದಲಿಗೆ ಕುಡಗಿ ನಿಂದ (KDGI) ನಿಗದಿತ ವೇಳೆಗೆ ಪ್ರಾರಂಭವಾಗುತ್ತದೆ.&lt;/p&gt;&lt;img&gt;&lt;p&gt;ಜುಲೈ 31 ರಿಂದ ಆಗಸ್ಟ್ 2 ರವರೆಗೆ ಬೆಂಗಳುರಿನ ಕೆಎಸ್&zwnj;ಆರ್ ರೈಲು ನಿಲ್ದಾಣಗಳಿಗೆ ಬರುವ ರೈಲುಗಳು ರದ್ದಾಗಿವೆ. ಕಾರವಾರ-ಕೆಎಸ್&zwnj;ಆರ್ ಬೆಂಗಳೂರು ಪಂಚಗಂಗಾ ಎಕ್ಸ್&zwnj;ಪ್ರೆಸ್ ರೈಲು (16596) ಜುಲೈ 31 ರಿಂದ ಆಗಸ್ಟ್ 2 ರವರೆಗೆ ( ಯಶವಂತಪುರದಲ್ಲಿಯೇ ತನ್ನ ಸಂಚಾರ ಕೊನೆಗೊಳಿಸುತ್ತದೆ. ಜೊತೆಗೆ ಇದೇ ಅವಧಿಯಲ್ಲಿ, ಯಶವಂತಪುರ ಮತ್ತು ಕೆಎಸ್&zwnj;ಆರ್ ಬೆಂಗಳೂರು ನಡುವಿನ ಇದರ ಸೇವೆ ಸಂಪೂರ್ಣವಾಗಿ ರದ್ದಾಗಲಿದೆ.&lt;/p&gt;&lt;img&gt;&lt;p&gt;ಕೆಎಸ್&zwnj;ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್&zwnj;ಪ್ರೆಸ್ ರೈಲು (16595) ಆಗಸ್ಟ್ 1 ರಿಂದ ಆಗಸ್ಟ್ 3 ರವರೆಗೆ ಯಶವಂತಪುರದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಈ ರೈಲು ಕೆಎಸ್&zwnj;ಆರ್ ಬೆಂಗಳೂರು ಮತ್ತು ಯಶವಂತಪುರ ನಡುವಿನ ತನ್ನ ಸಂಚಾರ ರದ್ದಾಗಿದೆ.&lt;/p&gt;&lt;img&gt;&lt;p&gt;ಮುರಡೇಶ್ವರ -ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್&zwnj;ಎಂವಿಟಿಬಿ)-ಮುರ್ಡೇಶ್ವರ ಎಕ್ಸ್&zwnj;ಪ್ರೆಸ್&zwnj;ಗಳ ರೈಲುಗಳ ಸಂಚಾರ ಮಾರ್ಗದಲ್ಲಿಯೂ ಬದಲಾವಣೆ ಆಗಿದೆ. ಮುರಡೇಶ್ವರ-ಎಸ್&zwnj;ಎಂವಿಟಿಬಿ ಬೆಂಗಳೂರು ಎಕ್ಸ್&zwnj;ಪ್ರೆಸ್ ರೈಲು (16586) ಜುಲೈ 16 ಮತ್ತು 17 ರಂದು ಹಾಗೂ ಎಸ್&zwnj;ಎಂವಿಟಿಬಿ ಬೆಂಗಳೂರು-ಮುರಡೇಶ್ವರ ಎಕ್ಸ್&zwnj;ಪ್ರೆಸ್ ಜುಲೈ 17 ರಿಂದ ಜುಲೈ 19 ರವರೆಗೆ ಯಶವಂತಪುರ-ಹೆಬ್ಬಾಳ-ಬಾಣಸವಾಡಿ ಮೂಲಕ ಚಲಿಸುತ್ತದೆ. ಈ ರೈಲುಗಳು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಪಡಿಸಲಾಗಿದೆ.&lt;/p&gt;&lt;img&gt;&lt;p&gt;ಇನ್ನೂ ಆಗಸ್ಟ್ 3 ರಂದು ಮುರಡೇಶ್ವರದಿಂದ ಹೊರಡುವ ಮುರಡೇಶ್ವರ-ಎಸ್&zwnj;ಎಂವಿಟಿಬಿ ಬೆಂಗಳೂರು ಎಕ್ಸ್&zwnj;ಪ್ರೆಸ್&zwnj;ನ ರೈಲು (16586) ಪ್ರಯಾಣದ ಸಮಯವನ್ನು ಒಂದು ಗಂಟೆ ನಿಯಂತ್ರಿಸಲಾಗುತ್ತದೆ. ಅಂದರೆ ಈ ರೈಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ನಿಲ್ದಾಣದಿಂದ ಹೊರಡುತ್ತದೆ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/travel/railway-routes-changed-and-some-stopped-due-to-many-reasons-details-here-suc-zx6gymu"/>
        </item>
    </channel>
</rss>
