<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 31 Aug 2026 09:10:06 +0530</lastBuildDate>
        <atom:link href="https://kannada.asianetnews.com/rss/state-government-jobs" rel="self" type="application/rss+xml"/>
        <item>
            <title><![CDATA[ವಿಜಯಪುರದಲ್ಲಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ?; ಲಾಠಿ ಚಾರ್ಜ್ ಖಂಡಿಸಿದ ಬಿಜೆಪಿ ಮುಖಂಡ ವಿಜುಗೌಡ]]></title>
            <link>https://kannada.asianetnews.com/karnataka-districts/vijayapura-tikota-police-constable-exam-chaos-bjp-vijugouda-patil-alleges-congress-govt-failure/articleshow-43im2zl</link>
            <guid isPermaLink="true">https://kannada.asianetnews.com/karnataka-districts/vijayapura-tikota-police-constable-exam-chaos-bjp-vijugouda-patil-alleges-congress-govt-failure/articleshow-43im2zl</guid>
            <pubDate>Sun, 02 Aug 2026 20:21:24 +0530</pubDate>
            <description><![CDATA[&lt;p&gt;ವಿಜಯಪುರದ ತಿಕೋಟಾದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಗೊಂದಲವು ರಾಜಕೀಯ ತಿರುವು ಪಡೆದುಕೊಂಡಿದೆ. ಪರೀಕ್ಷಾ ವ್ಯವಸ್ಥೆಯ ವೈಫಲ್ಯ ಮತ್ತು ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಆರೋಪಿಸಿದ್ದು, ಸರ್ಕಾರದ ರಾಜೀನಾಮೆಗೆ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1a16w9p1ev9xjwr3t73jt4,imgname-vijayapura-police-constable-exam-vijugowda-1785676733321.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಆ.02): ವಿ&lt;/strong&gt;ಜಯಪುರ ಜಿಲ್ಲೆಯ ತಿಕೋಟಾ (Tikota) ಪರೀಕ್ಷಾ ಕೇಂದ್ರದಲ್ಲಿ (Exam Centre) ನಡೆದಿದ್ದ ಎನ್ನಲಾದ ಪರೀಕ್ಷಾ (Exam) ಗೊಂದಲ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಜಿಲ್ಲಾ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ (Press Conference) ನಡೆಸಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ (Vijugouda Patil), ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಪರೀಕ್ಷಾರ್ಥಿಗಳನ್ನು (Candidates) ಪೊಲೀಸರು ಬಲವಂತವಾಗಿ ಕರೆದೊಯ್ಯುತ್ತಿರುವ ವಿಡಿಯೋ (Video) ಪ್ರದರ್ಶಿಸಿದ ಅವರು, ಪರೀಕ್ಷೆ (Exam) ನಡೆಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ದೂರದ ಧಾರವಾಡ (Dharwad) ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳಿಗೆ (Candidates) ಸರಿಯಾದ ವ್ಯವಸ್ಥೆ (Arrangements) ಕಲ್ಪಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.&lt;/p&gt;&lt;h2&gt;&lt;strong&gt;11.15ರವರೆಗೆ ಪ್ರಶ್ನೆಪತ್ರಿಕೆ ಕೊಟ್ಟಿಲ್ಲ:&lt;/strong&gt;&lt;/h2&gt;&lt;p&gt;ವಿಜುಗೌಡ ಪಾಟೀಲ್ ಅವರ ಆರೋಪದ ಪ್ರಕಾರ, ಬೆಳಿಗ್ಗೆ ಸುಮಾರು 11.15 ಗಂಟೆಯವರೆಗೂ ಅನೇಕ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ (Question Paper) ಹಾಗೂ ಒಎಂಆರ್ ಶೀಟ್ (OMR Sheet) ವಿತರಣೆ ಮಾಡಲಾಗಿಲ್ಲ. ಕೆಲವು ಕಡೆ OMR ಶೀಟ್ ಸಂಖ್ಯೆ (OMR Number) ಮತ್ತು ಪ್ರಶ್ನೆಪತ್ರಿಕೆ ಸಂಖ್ಯೆ (Question Paper Number) ಹೊಂದಿಕೆಯಾಗದ ಕಾರಣ ಪರೀಕ್ಷಾರ್ಥಿಗಳು ಗೊಂದಲಕ್ಕೆ ಸಿಲುಕಿದರು ಎಂದು ಹೇಳಿದರು.&lt;/p&gt;&lt;p&gt;ಈ ಸಮಸ್ಯೆಯನ್ನು ಅಧಿಕಾರಿಗಳ (Officials) ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಪರೀಕ್ಷಾ ಕೇಂದ್ರದ (Exam Centre) ಹೊರಗಡೆಯೇ ಉಳಿಯುವಂತಾಯಿತು ಎಂದು ಅವರು ಆರೋಪಿಸಿದರು.&lt;/p&gt;&lt;p&gt;ಪರಿಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸುವ ಬದಲು ಪೊಲೀಸರು (Police) ಲಾಠಿಚಾರ್ಜ್ (Lathi Charge) ನಡೆಸಿ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ವಿಜುಗೌಡ ಪಾಟೀಲ್ ಗಂಭೀರ ಆರೋಪ ಮಾಡಿದರು. ಪರೀಕ್ಷೆಗೆ (Exam) ಬಂದ ಯುವಕರ ಮೇಲೆ ದೌರ್ಜನ್ಯ (Police Excess) ನಡೆದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ಘಟನೆಗೆ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವರು (Education Minister), ಉಸ್ತುವಾರಿ ಸಚಿವರು (District In-charge Minister) ಹಾಗೂ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು. 'ಇತರ ರಾಜ್ಯಗಳಲ್ಲಿ ಇಂತಹ ವೈಫಲ್ಯಗಳಿಗೆ ಸಚಿವರು ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಹಾಗಿದ್ದರೆ ಕರ್ನಾಟಕದಲ್ಲಿ (Karnataka) ಹೊಣೆಗಾರಿಕೆ ಯಾರು ಹೊರುತ್ತಾರೆ?' ಎಂದು ಪ್ರಶ್ನಿಸಿದರು.&lt;/p&gt;&lt;p&gt;ಅಧಿಕಾರಿಗಳ ನಿರ್ಲಕ್ಷ್ಯ (Negligence) ಹಾಗೂ ಪರೀಕ್ಷಾ ವ್ಯವಸ್ಥೆಯ (Examination System) ವೈಫಲ್ಯದಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ (Students Future) ಧಕ್ಕೆಯಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by    (@kirik_nanmaklu_official)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-tikota-police-constable-exam-chaos-bjp-vijugouda-patil-alleges-congress-govt-failure/articleshow-43im2zl"/>
        </item>
        <item>
            <title><![CDATA[KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಸ್ಪೆಂಡ್ ಬೆನ್ನಲ್ಲೇ ಡಾ.ಪ್ರಭುದೇವ್‌ಗೆ ಹಂಗಾಮಿ ಜವಾಬ್ದಾರಿ! ಇವರ ಹಿನ್ನೆಲೆ?]]></title>
            <link>https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9</link>
            <guid isPermaLink="true">https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9</guid>
            <pubDate>Mon, 13 Jul 2026 20:05:47 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್&zwnj;ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಗಂಭೀರ ಆರೋಪಗಳ ಮೇಲೆ ರಾಜ್ಯಪಾಲರು ಅಮಾನತುಗೊಳಿಸಿದ್ದಾರೆ. ತಮ್ಮ ಪುತ್ರಿಯರಿಗೆ ಅಕ್ರಮವಾಗಿ ಹುದ್ದೆ ಕೊಡಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಅವರ ಮೇಲಿದ್ದು, ಡಾ. ಬಿ. ಪ್ರಭುದೇವ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdyebfa80vjz0qk2w6mdp7s,imgname-kpsc-interim-head-dr-prabhudev-1783953305064.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): ಕ&lt;/strong&gt;ರ್ನಾಟಕ ಲೋಕಸೇವಾ ಆಯೋಗ (Karnataka Public Service Commission - KPSC) ದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಆಯೋಗದ ಅಧ್ಯಕ್ಷರಾಗಿದ್ದ (Chairman) ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ರಾಜ್ಯಪಾಲ (Governor) ಥಾವರ್&zwnj;ಚಂದ್ ಗೆಹ್ಲೋಟ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ (Suspended) ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಭ್ರಷ್ಟಾಚಾರ (Corruption) ಮತ್ತು ಸ್ವಜನಪಕ್ಷಪಾತದ (Favoritism) ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ಆಯೋಗದ ಹಿರಿಯ ಸದಸ್ಯರಾದ ಡಾ. ಬಿ. ಪ್ರಭುದೇವ್ ಅವರನ್ನು ಕೆಪಿಎಸ್&zwnj;ಸಿಯ ಹಂಗಾಮಿ ಅಧ್ಯಕ್ಷರನ್ನಾಗಿ (Interim Chairman) ನೇಮಕ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಅಮಾನತಿಗೆ ಕಾರಣವೇನು? (Reasons for Suspension)&lt;/strong&gt;&lt;/h2&gt;&lt;p&gt;ರಾಜ್ಯಪಾಲರು ಹೊರಡಿಸಿರುವ ಸುದೀರ್ಘ ಆದೇಶದ (Order) ಪ್ರತಿಗಳ ಪ್ರಕಾರ, ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ (Abuse of Power) ಮಾಡಿಕೊಂಡು ತಮ್ಮ ಇಬ್ಬರು ಪುತ್ರಿಯರನ್ನು ಕೈಗಾರಿಕಾ ವಿಸ್ತರಣಾಧಿಕಾರಿ (Industrial Extension Officer - IEO) ಹುದ್ದೆಗಳಿಗೆ ಅಕ್ರಮವಾಗಿ ಆಯ್ಕೆ ಮಾಡಲು ನೆರವಾಗಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;p&gt;ಪ್ರಮುಖವಾಗಿ, ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರು ಓಬಿಸಿ 3ಬಿ (OBC 3B) ಮೀಸಲಾತಿಯಡಿ ಆಯ್ಕೆಯಾಗಲು ವಾರ್ಷಿಕ ಆದಾಯ ಕೇವಲ 40,000 ರೂ. ಇದೆ ಎಂಬ ಸುಳ್ಳು ಆದಾಯ ಪ್ರಮಾಣಪತ್ರವನ್ನು (Fraudulent Income Certificate) ಸಲ್ಲಿಸಿದ್ದರು. ಆದರೆ, ಶಿವಶಂಕರಪ್ಪ ಅವರ ವಾರ್ಷಿಕ ಆದಾಯ 12 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದು, ಅವರ ಮಕ್ಕಳು 'ಕ್ರೀಮಿ ಲೇಯರ್' (Creamy Layer) ವ್ಯಾಪ್ತಿಗೆ ಬರುತ್ತಾರೆ. ಹೀಗಿದ್ದರೂ ಸುಳ್ಳು ದಾಖಲೆ ನೀಡಿ ಸರ್ಕಾರಕ್ಕೆ ವಂಚಿಸಿರುವುದು ಮೇಲ್ನೋಟಕ್ಕೆ (Prima Facie) ಸಾಬೀತಾಗಿದೆ. ಅಲ್ಲದೆ, ಆಯ್ಕೆ ಪ್ರಕ್ರಿಯೆಯಲ್ಲಿ (Selection Process) ತಮ್ಮ ಮಕ್ಕಳೇ ಅಭ್ಯರ್ಥಿಗಳಾಗಿದ್ದರೂ ಅಧ್ಯಕ್ಷರು ಆ ಪ್ರಕ್ರಿಯೆಯಿಂದ ದೂರ ಉಳಿಯದೆ (Recusal) ಹಿತಾಸಕ್ತಿ ಸಂಘರ್ಷದ (Conflict of Interest) ನಿಯಮ ಉಲ್ಲಂಘಿಸಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾರು ಈ ಡಾ. ಬಿ. ಪ್ರಭುದೇವ್?&lt;/strong&gt;&lt;/h2&gt;&lt;p&gt;ಶಿವಶಂಕರಪ್ಪ ಅವರ ಅಮಾನತಿನಿಂದ ತೆರವಾದ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಬಿ. ಪ್ರಭುದೇವ್ (Dr. B. Prabhudev) ಅವರು 2021 ರಿಂದ ಕೆಪಿಎಸ್&zwnj;ಸಿ ಸದಸ್ಯರಾಗಿ (Member) ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೆಪಿಎಸ್&zwnj;ಸಿಯಲ್ಲಿ ತರಲಾದ ಹಲವು ಪ್ರಮುಖ ಸುಧಾರಣೆಗಳು (Reforms) ಮತ್ತು ಬದಲಾವಣೆಗಳಲ್ಲಿ ಇವರು ಮಹತ್ತರ ಪಾತ್ರ ವಹಿಸಿದ್ದರು. ಇವರ ದಕ್ಷತೆ ಮತ್ತು ಹಿರಿತನವನ್ನು (Seniority) ಪರಿಗಣಿಸಿ ರಾಜ್ಯಪಾಲರು ಇವರಿಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಸಂವಿಧಾನದ 317(2) ಅಡಿಯಲ್ಲಿ ಕ್ರಮ&lt;/strong&gt;&lt;/h2&gt;&lt;p&gt;ರಾಜ್ಯಪಾಲರು ಭಾರತ ಸಂವಿಧಾನದ ವಿಧಿ 317(2) (Article 317(2) of the Constitution) ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಬಳಸಿ ಈ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಮೂಲಕ ತನಿಖೆ ನಡೆಸಲು ರಾಷ್ಟ್ರಪತಿಗಳಿಗೆ (President of India) ಶಿಫಾರಸು ಮಾಡಲಾಗಿದೆ. ತನಿಖೆ ಮುಗಿಯುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರು ಕಚೇರಿ ಕೆಲಸಗಳಲ್ಲಿ ಭಾಗವಹಿಸುವಂತಿಲ್ಲ.&lt;/p&gt;&lt;p&gt;ಲಕ್ಷಾಂತರ ಅಭ್ಯರ್ಥಿಗಳ (Candidates) ಭವಿಷ್ಯವನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆಯ (Constitutional Body) ಮುಖ್ಯಸ್ಥರೇ ಇಂತಹ ಆರೋಪಕ್ಕೆ ಗುರಿಯಾಗಿರುವುದು ಸಾರ್ವಜನಿಕ ನಂಬಿಕೆಗೆ (Public Confidence) ಧಕ್ಕೆ ತಂದಿದೆ. ನೂತನ ಹಂಗಾಮಿ ಅಧ್ಯಕ್ಷ ಡಾ. ಬಿ. ಪ್ರಭುದೇವ್ ಅವರು ಆಯೋಗದ ಪಾರದರ್ಶಕತೆಯನ್ನು (Transparency) ಮರುಸ್ಥಾಪಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9"/>
        </item>
        <item>
            <title><![CDATA[ಕೆಪಿಎಸ್‌ಸಿ ಹಗರಣ: ಐಎಎಸ್ ಅಧಿಕಾರಿ ಗ್ಯಾನೇಂದ್ರ ಅರೆಸ್ಟ್ ಆಗಿದ್ಯಾಕೆ? ಹಗರಣದಲ್ಲಿ ಪಾತ್ರವೇನು?]]></title>
            <link>https://kannada.asianetnews.com/state-government-jobs/kpsc-scam-ias-officer-gyanendra-arrested-over-veterinary-officer-exam-paper-leak-sat/articleshow-60d0orh</link>
            <guid isPermaLink="true">https://kannada.asianetnews.com/state-government-jobs/kpsc-scam-ias-officer-gyanendra-arrested-over-veterinary-officer-exam-paper-leak-sat/articleshow-60d0orh</guid>
            <pubDate>Mon, 31 Aug 2026 08:02:21 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಹಿರಿಯ ಐಎಎಸ್ ಅಧಿಕಾರಿ ಮತ್ತು ಮಾಜಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಅವರನ್ನು ಬಂಧಿಸಿದ್ದಾರೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಗಂಭೀರ ಆರೋಪ ಅವರ ಮೇಲಿದ್ದು, ಈ ಅಕ್ರಮದಲ್ಲಿ ಅವರ ನೇರ ಪಾತ್ರವಿರುವ ಬಗ್ಗೆ ಸಿಐಡಿಗೆ ಬಲವಾದ ಸಾಕ್ಷಿಗಳು ಲಭ್ಯವಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0q6g86ppcs95x2snz6sn4ds,imgname-ias-gyanendra-kumar--2--1787484971222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.31): ಕ&lt;/strong&gt;ರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಹಗರಣ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಕೆಪಿಎಸ್&zwnj;ಸಿ ಮಾಜಿ ಪರೀಕ್ಷಾ ನಿಯಂತ್ರಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರನ್ನು ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಹಾಗಾದರೆ, ಈ ಅಕ್ರಮದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರ ಪಾತ್ರವೇನು? ಅವರ ಬಂಧನಕ್ಕೆ ಪ್ರಮುಖ ಕಾರಣಗಳೇನು ಎಂಬ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರಾ ಗ್ಯಾನೇಂದ್ರ?&lt;/strong&gt;&lt;/h2&gt;&lt;p&gt;ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿರುವುದು ತನಿಖೆಯಿಂದ ಬಯಲಾಗಿದೆ. ಪರೀಕ್ಷೆಗೂ ಮುನ್ನವೇ ರಹಸ್ಯವಾಗಿಡಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಗ್ಯಾನೇಂದ್ರ ಅವರ ಮೇಲಿದೆ. ಕೆಪಿಎಸ್&zwnj;ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ (Exam Controller) ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಇವರ ನೇತೃತ್ವದಲ್ಲೇ ಈ ಅಕ್ರಮ ನಡೆದಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;CID ಬಳಿ ಇವೆ ಬಲವಾದ ಸಾಕ್ಷಿಗಳು:&lt;/strong&gt;&lt;/h2&gt;&lt;p&gt;ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರ ನೇರ ಪಾತ್ರವಿರುವ ಬಗ್ಗೆ ಸಿಐಡಿ (CID) ತನಿಖಾಧಿಕಾರಿಗಳಿಗೆ ನಿರ್ಣಾಯಕ ಸಾಕ್ಷಿಗಳು ಲಭ್ಯವಾಗಿವೆ ಎನ್ನಲಾಗಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾದ ಕೆಲವೇ ಕೆಲವು ಅಭ್ಯರ್ಥಿಗಳಿಗೆ, ಪರೀಕ್ಷೆ ನಡೆಯುವುದಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳು ಲಭ್ಯವಾಗಿದ್ದವು ಎಂಬ ಸ್ಫೋಟಕ ಅಂಶ ತನಿಖೆಯಿಂದ ಹೊರಬಂದಿದೆ.&lt;/p&gt;&lt;p&gt;ಸಂವಿಧಾನಬದ್ಧ ಹುದ್ದೆಯಲ್ಲಿದ್ದುಕೊಂಡು ಪಾವಿತ್ರ್ಯತೆ ಕಾಪಾಡಬೇಕಿದ್ದ ಅಧಿಕಾರಿಯೇ ಇಂತಹ ದೊಡ್ಡ ಮಟ್ಟದ ಅಕ್ರಮದಲ್ಲಿ ಭಾಗಿಯಾಗಿರುವುದು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಹಗರಣದಲ್ಲಿ ಇನ್ನೂ ಯಾರ್ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/kpsc-scam-ias-officer-gyanendra-arrested-over-veterinary-officer-exam-paper-leak-sat/articleshow-60d0orh"/>
        </item>
        <item>
            <title><![CDATA[ಕರ್ನಾಟಕ ಲೋಕಾಯುಕ್ತ ನೇಮಕಾತಿ 2026: ಕ್ಲರ್ಕ್, ಟೈಪಿಸ್ಟ್ ಹುದ್ದೆ, ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ!]]></title>
            <link>https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i</link>
            <guid isPermaLink="true">https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i</guid>
            <pubDate>Sat, 18 Jul 2026 13:33:53 +0530</pubDate>
            <description><![CDATA[ಕರ್ನಾಟಕ ಲೋಕಾಯುಕ್ತವು 25 ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ 67,600 ರೂ. ವರೆಗೆ ವೇತನ ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwjpwac1efee4yf0v117axvs,imgname----------------------95--1783039404417.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಲೋಕಾಯುಕ್ತವು ಖಾಲಿ ಇರುವ ಕ್ಲರ್ಕ್ (ಗುಮಾಸ್ತ) ಮತ್ತು ಟೈಪಿಸ್ಟ್ (ಬೆರಳಚ್ಚುಗಾರ) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್&zwnj; ಮೂಲಕ ಅರ್ಜಿ ಸಲ್ಲಸಬಹುದು.&lt;/p&gt;&lt;h2&gt;ಹುದ್ದೆಗಳ ವಿವರ:&lt;/h2&gt;&lt;p&gt;ಸಂಸ್ಥೆಯ ಹೆಸರು: ಕರ್ನಾಟಕ ಲೋಕಾಯುಕ್ತ&lt;/p&gt;&lt;p&gt;ಒಟ್ಟು ಹುದ್ದೆಗಳ ಸಂಖ್ಯೆ: 25&lt;/p&gt;&lt;p&gt;ಹುದ್ದೆಯ ಹೆಸರು: ಕ್ಲರ್ಕ್ ಮತ್ತು ಟೈಪಿಸ್ಟ್&lt;/p&gt;&lt;p&gt;ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ:&lt;/h2&gt;&lt;p&gt;ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಯುಸಿ ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;ವೇತನ:&lt;/h2&gt;&lt;p&gt;ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 34,100-67,600 ರು. ವರೆಗೆ ವೇತನವನ್ನು ನೀಡಲಾಗುತ್ತದೆ&lt;/p&gt;&lt;h2&gt;ವಯೋಮಿತಿ:&lt;/h2&gt;&lt;p&gt;ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.&lt;/p&gt;&lt;h3&gt;ವಯೋಮಿತಿ ಸಡಿಲಿಕೆ:&lt;/h3&gt;&lt;p&gt;2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ: 5 ವರ್ಷ&lt;/p&gt;&lt;h2&gt;ಅರ್ಜಿ ಶುಲ್ಕದ ವಿವರ&lt;/h2&gt;&lt;p&gt;ಕ್ಯಾಟ್ 2A, 2B, 3A, 3B, ಮಾಜಿ ಸೇವಾ ಅಭ್ಯರ್ಥಿಗಳಿಗೆ: 250&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇಲ್ಲ&lt;/p&gt;&lt;p&gt;ಪಾವತಿ ವಿಧಾನ: ಆನ್&zwnj;ಲೈನ್&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?&lt;/h2&gt;&lt;p&gt;ಮೆರಿಟ್ ಪಟ್ಟಿ&lt;/p&gt;&lt;p&gt;ಸಂದರ್ಶನ&lt;/p&gt;&lt;h2&gt;ಅರ್ಜಿ ಸಲ್ಲಿಸುವುದು ಹೇಗೆ:&lt;/h2&gt;&lt;p&gt;ಮೊದಲು ಕರ್ನಾಟಕ ಲೋಕಾಯುಕ್ತದ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಅಥವಾ ಕೆಳಗಿನ ಲಿಂಕ್ ಬಳಸಿ.&lt;/p&gt;&lt;p&gt;https://lokayukta.karnataka.gov.in/onlinerecruitment/ctk/home.php&lt;/p&gt;&lt;p&gt;ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್&zwnj;ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.&lt;/p&gt;&lt;p&gt;ನಿಮ್ಮ ಇತ್ತೀಚಿನ ಛಾಯಾಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ.&lt;/p&gt;&lt;p&gt;ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್&zwnj;ಲೈನ್ ಮೂಲಕ ಪಾವತಿಸಿ.&lt;/p&gt;&lt;p&gt;ಕೊನೆಯದಾಗಿ, ಎಲ್ಲವನ್ನೂ ಮರುಪರಿಶೀಲಿಸಿ &lsquo;Submit&rsquo; ಬಟನ್ ಒತ್ತಿ. ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ: ಜುಲೈ 17-2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್&zwnj; 17-2026&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಖಾಕಿ ಖದೀಮರು: ಎಸ್‌ಐ ಯೇಸುದಾಸ್, ಪೇದೆ ಸಂತೋಷ್ ವಿರುದ್ಧ ಕಮಿಷನರ್‌ಗೆ ರಾಬರಿ ದೂರು!]]></title>
            <link>https://kannada.asianetnews.com/gallery/karnataka-districts/bengaluru-varthur-police-robbery-case-psi-yesudas-pc-santosh-naik-cctv-evidence-allegations-65b8b1g</link>
            <guid isPermaLink="true">https://kannada.asianetnews.com/gallery/karnataka-districts/bengaluru-varthur-police-robbery-case-psi-yesudas-pc-santosh-naik-cctv-evidence-allegations-65b8b1g</guid>
            <pubDate>Tue, 28 Jul 2026 12:54:18 +0530</pubDate>
            <description><![CDATA[&lt;p&gt;ಕೌಟುಂಬಿಕ ಕಲಹದ ಕೇಸ್ ಇತ್ಯರ್ಥಪಡಿಸುವ ನೆಪದಲ್ಲಿ ಬೆಂಗಳೂರಿನ ವರ್ತೂರು ಠಾಣೆಯ ಪೊಲೀಸರು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಪಿಎಸ್&zwnj;ಐ ಮತ್ತು ಪೇದೆಯೊಬ್ಬರು 137 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದು ದೋಚಿದ್ದು, ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyks44e426r7eavexj58jk27,imgname-bengaluru-police-robbery-allegation-1785222795716.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೌಟುಂಬಿಕ ಕಲಹದ ಕೇಸ್ ಇತ್ಯರ್ಥಪಡಿಸುವ ನೆಪದಲ್ಲಿ ಬೆಂಗಳೂರಿನ ವರ್ತೂರು ಠಾಣೆಯ ಪೊಲೀಸರು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಪಿಎಸ್&zwnj;ಐ ಮತ್ತು ಪೇದೆಯೊಬ್ಬರು 137 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದು ದೋಚಿದ್ದು, ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: ಜ&lt;/strong&gt;ನರ ಆಸ್ತಿ, ಪಾಸ್ತಿ ಹಾಗೂ ಜೀವರಕ್ಷಣೆ ಮಾಡಬೇಕಾದ ಪೊಲೀಸರೇ ಖದೀಮರಂತೆ (Robbers) ಮನೆಗೆ ನುಗ್ಗಿ ದರೋಡೆ ಮಾಡಿರುವ ಅತಿ ಆಘಾತಕಾರಿ ಘಟನೆ ಸಿಲಿಕ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕೌಟುಂಬಿಕ ಕಲಹದ (Domestic Dispute) ಕೇಸ್ ಇತ್ಯರ್ಥ ಪಡಿಸುವ ನೆಪದಲ್ಲಿ ಮನೆಗೆ ನುಗ್ಗಿದ ಪೊಲೀಸರು, ಬರೋಬ್ಬರಿ 137 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದನ್ನು ದೋಚಿಕೊಂಡು ಹೋಗಿರುವ ಕರಾಳ ಕರ್ಮಕಾಂಡ ಬಯಲಾಗಿದೆ. ಈ ದರೋಡೆಯ ಸಂಪೂರ್ಣ ದೃಶ್ಯಾವಳಿಗಳು 'ಏಷ್ಯಾನೆಟ್ ಸುವರ್ಣ ನ್ಯೂಸ್'ಗೆ (Asianet Suvarna News EXCLUSIVE) ಲಭ್ಯವಾಗಿದ್ದು, ಇಡೀ ರಾಜ್ಯ ಪೊಲೀಸ್ ಇಲಾಖೆಯ ಮಾನ ಹರಾಜಾಗಿದೆ.&lt;/p&gt;&lt;img&gt;&lt;p&gt;&lt;strong&gt;ವರ್ತೂರು ಪೊಲೀಸರ ವಿರುದ್ಧ ಕಮಿಷನರ್&zwnj;ಗೆ ದೂರು:&lt;/strong&gt;&lt;/p&gt;&lt;p&gt;ಈ ಕೃತ್ಯ ಎಸಗಿದ ವರ್ತೂರು ಪೊಲೀಸ್ ಠಾಣೆಯ (Varthur Police Station) ಪಿಎಸ್&zwnj;ಐ ಯೇಸುದಾಸ್ (PSI Yesudas) ಹಾಗೂ ಪೇದೆ ಸಂತೋಷ್ ನಾಯಕ್ (PC Santosh Naik) ವಿರುದ್ಧ ಉಮೇರಾ ಎಂಬ ಸಂತ್ರಸ್ತ ಮಹಿಳೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ (City Police Commissioner) ಬಿ.ದಯಾನಂದ್ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (SHRC) ಸಿಸಿಟಿವಿ (CCTV Footage) ಸಾಕ್ಷ್ಯಾಧಾರಗಳ ಸಮೇತ ದೂರು ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ಹಿನ್ನೆಲೆ ಏನು?&lt;/strong&gt;&lt;/p&gt;&lt;p&gt;ಬೆಂಗಳೂರಿನ ವರ್ತೂರಿನ ಪ್ರಕಾಶ್ ಲೇಔಟ್ ನಿವಾಸಿ ಉಮೇರಾ ಅವರ ಮಗ ಜುನೈದ್ ಎಂಬುವವರ ಜೊತೆಗೆ ಕುಲ್ಸುಮ್ ಎಂಬಾಕೆಯ ಮದುವೆ ಇದೇ ವರ್ಷ ನಡೆದಿತ್ತು. ಮದುವೆಯಾಗಿ 4 ತಿಂಗಳ ನಂತರ ದಂಪತಿ ನಡುವೆ ಮನಸ್ತಾಪ ಉಂಟಾಗಿ, ಕುಲ್ಸುಮ್ ಗಂಡ ಮತ್ತು ಅತ್ತೆಗೆ ತಿಳಿಸದೇ ತವರು ಮನೆಗೆ ಹೋಗಿದ್ದಳು. ಹಲವು ಬಾರಿ ಮಾತುಕತೆ ನಡೆಸಿದರೂ ಆಕೆ ಗಂಡನ ಮನೆಗೆ ಬರಲಿಲ್ಲ. ಇತ್ತೀಚೆಗೆ ಕುಲ್ಸುಮ್ ವರ್ತೂರು ಪೊಲೀಸ್ ಠಾಣೆಯಲ್ಲಿ ಗಂಡ ಜುನೈದ್ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ನೀಡಿದ್ದಳು.&lt;/p&gt;&lt;img&gt;&lt;p&gt;&lt;strong&gt;20-30 ಜನರ ಗುಂಪು ಕರೆತಂದು ಪೊಲೀಸರಿಂದಲೇ ಲೂಟಿ!&lt;/strong&gt;&lt;/p&gt;&lt;p&gt;ಜುಲೈ 17ರಂದು &lsquo;ನಿಮ್ಮ ಮೇಲೆ ಕೇಸ್ ಇದೆ&rsquo; ಎಂದು ಹೇಳಿ ವರ್ತೂರು ಪಿಎಸ್&zwnj;ಐ ಯೇಸುದಾಸ್ ಹಾಗೂ ಪೇದೆ ಸಂತೋಷ್ ನಾಯಕ್, ದೂರುದಾರ ಕುಲ್ಸುಮ್, ಆಕೆಯ ತಂದೆ-ತಾಯಿ ಮತ್ತು ಬರೋಬ್ಬರಿ 20 ರಿಂದ 30 ಜನರ ಅಕ್ರಮ ಗುಂಪನ್ನು (Illegal Mob) ಕರೆದುಕೊಂಡು ಉಮೇರಾ ಅವರ ಮನೆಗೆ ಏಕಾಏಕಿ ನುಗ್ಗಿದ್ದಾರೆ. ನ್ಯಾಯಾಲಯದ ಯಾವುದೇ ಸರ್ಚ್ ವಾರಂಟ್ (Search Warrant) ಇಲ್ಲದೆ ಕಾನೂನುಬಾಹಿರವಾಗಿ ಮನೆಗೆ ನುಗ್ಗಿದ ಪೊಲೀಸರು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.&lt;/p&gt;&lt;img&gt;&lt;p&gt;137 ಗ್ರಾಂ ಚಿನ್ನಾಭರಣ (Gold Jewellery)&lt;/p&gt;&lt;p&gt;₹5 ಲಕ್ಷ ನಗದು ಹಣ (Cash)&lt;/p&gt;&lt;p&gt;ಅಡುಗೆ ಮನೆಯಲ್ಲಿದ್ದ ₹10,000 ನಗದು (Kitchen Cash)&lt;/p&gt;&lt;p&gt;ಬೆಲೆಬಾಳುವ ಸೀರೆಗಳು, ಬ್ರಾಂಡೆಡ್ ವಾಚ್, ಕೂಲಿಂಗ್ ಗ್ಲಾಸ್ ಹಾಗೂ 3 ಮೊಬೈಲ್&zwnj;ಗಳು&lt;/p&gt;&lt;p&gt;ಪೇದೆ ಸಂತೋಷ್ ನಾಯಕ್ ಸ್ವತಃ ನಿಂತು ಮನೆಯಲ್ಲಿದ್ದ ವಸ್ತುಗಳನ್ನು ಜಾಲಾಡಿ, ಅಡುಗೆ ಮನೆಯಲ್ಲಿದ್ದ 10 ಸಾವಿರ ಹಣವನ್ನೂ ಬಿಡದೇ ಕದ್ದುಕೊಂಡು ಹೋಗಿದ್ದಾನೆ ಎಂದು ಉಮೇರಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಖಾಕಿ ಕಳಂಕ: ತೀವ್ರ ಆಕ್ರೋಶ!&lt;/strong&gt;&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಪೊಲೀಸರು (Karnataka Police) ಹೊರ ರಾಜ್ಯಗಳಲ್ಲಿ ಅರೆಸ್ಟ್ ಆಗುವುದು, ಹಫ್ತಾ ವಸೂಲಿ, ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಇಲಾಖೆಗೆ ಕಪ್ಪುಚುಕ್ಕೆ ತರುತ್ತಿದ್ದಾರೆ. ಈಗ ಬೆಂಗಳೂರಿನಲ್ಲೇ ರಕ್ಷಣೆ ನೀಡಬೇಕಾದ ಪೊಲೀಸರು ಸುಪಾರಿ ಗ್ಯಾಂಗ್&zwnj;ನಂತೆ ಮನೆಗೆ ನುಗ್ಗಿ ರಾಬರಿ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಪ್ಪಿತಸ್ಥ ಪಿಎಸ್&zwnj;ಐ ಹಾಗೂ ಪೇದೆಯನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ (Dismissal) ಜೈಲಿಗಟ್ಟಬೇಕು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/bengaluru-varthur-police-robbery-case-psi-yesudas-pc-santosh-naik-cctv-evidence-allegations-65b8b1g"/>
        </item>
        <item>
            <title><![CDATA[ಬೆಂಗಳೂರಿನ BEL ನಲ್ಲಿ ಉದ್ಯೋಗ ಅವಕಾಶ: ಸೆಪ್ಟೆಂಬರ್ 10ರಂದು ನೇರ ಸಂದರ್ಶನ, ಹುದ್ದೆಗೆ ಯಾರು ಅರ್ಹರು?]]></title>
            <link>https://kannada.asianetnews.com/jobs/bel-recruitment-2026-management-industrial-trainee-walk-in-interview-in-bengaluru-gdp/articleshow-95txrcd</link>
            <guid isPermaLink="true">https://kannada.asianetnews.com/jobs/bel-recruitment-2026-management-industrial-trainee-walk-in-interview-in-bengaluru-gdp/articleshow-95txrcd</guid>
            <pubDate>Mon, 31 Aug 2026 09:09:57 +0530</pubDate>
            <description><![CDATA[ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಬೆಂಗಳೂರು ಘಟಕದಲ್ಲಿ 'ಮ್ಯಾನೇಜ್&zwnj;ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ' ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಿದೆ. CA ಇಂಟರ್ ಅಥವಾ CMA ಇಂಟರ್ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 10, 2026 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01ewswfd5056f4jq1c9e6ckk69,imgname-bel-jpeg.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಬೆಂಗಳೂರು ಘಟಕದಲ್ಲಿ ಖಾಲಿ ಇರುವ &lsquo;ಮ್ಯಾನೇಜ್&zwnj;ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ&rsquo; ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 10, 2026 ರಂದು ನಡೆಯುವ ನೇರ ಸಂದರ್ಶನದಲ್ಲಿ (Walk-in Interview) ಭಾಗವಹಿಸಬಹುದು.&lt;/p&gt;&lt;h2&gt;ಉದ್ಯೋಗದ ವಿವರಗಳು&lt;/h2&gt;&lt;p&gt;ಸಂಸ್ಥೆಯ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)&lt;/p&gt;&lt;p&gt;ಹುದ್ದೆಯ ಹೆಸರು: ಮ್ಯಾನೇಜ್&zwnj;ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ&lt;/p&gt;&lt;p&gt;ಖಾಲಿ ಹುದ್ದೆಗಳ ಸಂಖ್ಯೆ: ವಿವಿಧ (ಅಧಿಸೂಚನೆ ಪ್ರಕಾರ)&lt;/p&gt;&lt;p&gt;ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ&lt;/p&gt;&lt;p&gt;ಮಾಸಿಕ ವೇತನ: ₹25,000 - ₹30,000 (ಪ್ರತಿ ತಿಂಗಳು)&lt;/p&gt;&lt;h2&gt;ಅರ್ಹತಾ ಮಾನದಂಡಗಳು&lt;/h2&gt;&lt;p&gt;ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ CA Inter ಅಥವಾ CMA Inter ಪೂರ್ಣಗೊಳಿಸಿರಬೇಕು.&lt;/p&gt;&lt;p&gt;ವಯೋಮಿತಿ: 01 ಸೆಪ್ಟೆಂಬರ್ 2026 ರಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು.&lt;/p&gt;&lt;p&gt;ವಯೋಮಿತಿ ಸಡಿಲಿಕೆ:&lt;/p&gt;&lt;p&gt;OBC ಅಭ್ಯರ್ಥಿಗಳಿಗೆ: 3 ವರ್ಷಗಳು&lt;/p&gt;&lt;p&gt;SC / ST ಅಭ್ಯರ್ಥಿಗಳಿಗೆ: 5 ವರ್ಷಗಳು&lt;/p&gt;&lt;p&gt;PwBD ಅಭ್ಯರ್ಥಿಗಳಿಗೆ: 10 ವರ್ಷಗಳು&lt;/p&gt;&lt;h2&gt;ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;p&gt;ಅರ್ಹ ಅಭ್ಯರ್ಥಿಗಳು ಪ್ರತ್ಯೇಕವಾಗಿ ಆನ್&zwnj;ಲೈನ್ ಅಥವಾ ಆಫ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಅಗತ್ಯ ಮೂಲ ದಾಖಲೆಗಳು ಹಾಗೂ ಸ್ವಯಂ ದೃಢೀಕರಿಸಿದ ನಕಲು ಪ್ರತಿಗಳೊಂದಿಗೆ (Self-attested copies) ಕೆಳಗಿನ ವಿಳಾಸದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು:&lt;/p&gt;&lt;h2&gt;ಸಂದರ್ಶನದ ವಿಳಾಸ:&lt;/h2&gt;&lt;p&gt;ಸೆಂಟರ್ ಫಾರ್ ಲರ್ನಿಂಗ್ ಅಂಡ್ ಡೆವಲಪ್&zwnj;ಮೆಂಟ್,&lt;/p&gt;&lt;p&gt;ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,&lt;/p&gt;&lt;p&gt;ಜಾಲಹಳ್ಳಿ, ಬೆಂಗಳೂರು - 560013.&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅಧಿಸೂಚನೆ ಪ್ರಕಟವಾದ ದಿನಾಂಕ: 28 ಆಗಸ್ಟ್ 2026&lt;/p&gt;&lt;p&gt;ನೇರ ಸಂದರ್ಶನ ನಡೆಯುವ ದಿನಾಂಕ: 10 ಸೆಪ್ಟೆಂಬರ್ 2026&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/bel-recruitment-2026-management-industrial-trainee-walk-in-interview-in-bengaluru-gdp/articleshow-95txrcd"/>
        </item>
        <item>
            <title><![CDATA[ಕೆಇಎ ಮಹತ್ವದ ಘೋಷಣೆ: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಸಮಯ ಬದಲು!]]></title>
            <link>https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d</link>
            <guid isPermaLink="true">https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d</guid>
            <pubDate>Wed, 29 Jul 2026 14:36:16 +0530</pubDate>
            <description><![CDATA[ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್&zwnj;ಟೇಬಲ್ (CPC) ನೇಮಕಾತಿಯ ಲಿಖಿತ ಪರೀಕ್ಷೆಯ ಸಮಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬದಲಾವಣೆ ಮಾಡಿದೆ. ಆಗಸ್ಟ್ 2ರಂದು ಮಧ್ಯಾಹ್ನ 2:30ಕ್ಕೆ ನಡೆಯಬೇಕಿದ್ದ ಪರೀಕ್ಷೆಯು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಂಜೆ 4:00 ಗಂಟೆಗೆ ಆರಂಭವಾಗಲಿದೆ. ಬೆಳಗಿನ ಅವಧಿಯ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kyjc1wzc8ppfjzt8211kc147,imgname-mixcollage-27-jul-2026-11-34-pm-4866-1785175536620.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್&zwnj;ಟೇಬಲ್ (CPC) ಹುದ್ದೆಗಳ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂಬರುವ ಆಗಸ್ಟ್ 2ರಂದು (ಭಾನುವಾರ) ನಡೆಯಲಿರುವ ಲಿಖಿತ ಪರೀಕ್ಷೆಯ ಮಧ್ಯಾಹ್ನದ ಅವಧಿಯ ವೇಳಾಪಟ್ಟಿಯಲ್ಲಿ ಪ್ರಾಧಿಕಾರವು ಮಹತ್ವದ ಬದಲಾವಣೆ ಮಾಡಿದ್ದು, ಪರಿಷ್ಕೃತ ಸಮಯವನ್ನು ಪ್ರಕಟಿಸಿದೆ.&lt;/p&gt;&lt;p&gt;ಪೂರ್ವಾಪರ ನಿಗದಿಯಾಗಿದ್ದ ವೇಳಾಪಟ್ಟಿಯ ಪ್ರಕಾರ ಈ ಪರೀಕ್ಷೆಯು ಮಧ್ಯಾಹ್ನ 2:30ಕ್ಕೆ ಆರಂಭವಾಗಬೇಕಿತ್ತು. ಆದರೆ, ಈಗ ಪರಿಷ್ಕೃತ ನಿಯಮದನ್ವಯ ಪರೀಕ್ಷೆಯು ಮಧ್ಯಾಹ್ನದ ಬದಲಿಗೆ ಸಂಜೆ 4:00 ಗಂಟೆಗೆ ಆರಂಭವಾಗಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಸಮಯ ಬದಲಾವಣೆಗೆ ಕಾರಣವೇನು?&lt;/h2&gt;&lt;p&gt;ಪರೀಕ್ಷಾ ಪ್ರಾಧಿಕಾರದ ಈ ಹಠಾತ್ ನಿರ್ಧಾರದ ಹಿಂದೆ ಅಭ್ಯರ್ಥಿಗಳ ಹಿತರಕ್ಷಣೆ ಅಡಗಿದೆ. ರಾಜ್ಯದಾದ್ಯಂತ ಹಲವು ಅಭ್ಯರ್ಥಿಗಳಿಗೆ ಬೆಳಗಿನ ಅವಧಿಯಲ್ಲಿ ಒಂದು ಪರೀಕ್ಷಾ ಕೇಂದ್ರ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರಗಳು ನಿಯೋಜನೆಯಾಗಿದ್ದವು. ಕೆಲವು ಅಭ್ಯರ್ಥಿಗಳಿಗೆ ಈ ಎರಡು ಕೇಂದ್ರಗಳ ನಡುವಿನ ಅಂತರವು ಅತ್ಯಂತ ಹೆಚ್ಚಾಗಿದ್ದು, ನಿಗದಿತ ಸಮಯದೊಳಗೆ ತಲುಪುವುದು ತೀವ್ರ ಕಷ್ಟಸಾಧ್ಯವಾಗಿತ್ತು.&lt;/p&gt;&lt;p&gt;ಬೆಳಗಿನ ಪರೀಕ್ಷೆ ಮುಗಿದ ತಕ್ಷಣ, ದೂರದ ಊರು ಅಥವಾ ದೂರದ ಪ್ರದೇಶದಲ್ಲಿರುವ ಮಧ್ಯಾಹ್ನದ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಸಮಯದಲ್ಲಿ ಪ್ರಯಾಣ ಬೆಳೆಸುವುದು ಅಭ್ಯರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ ಹಾಗೂ ಸಾರಿಗೆ ಸಮಸ್ಯೆಯನ್ನು ಮನಗಂಡ ಹಲವು ಅಭ್ಯರ್ಥಿಗಳು ಮತ್ತು ಪೋಷಕರು ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅಭ್ಯರ್ಥಿಗಳ ಈ ನ್ಯಾಯಸಮ್ಮತವಾದ ಆತಂಕ ಹಾಗೂ ಹಿತದೃಷ್ಟಿಯನ್ನು ಗಂಭೀರವಾಗಿ ಪರಿಗಣಿಸಿದ ಕೆಇಎ, ಅವರು ನಿರಾಳವಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಅನುಕೂಲವಾಗುವಂತೆ ಪರೀಕ್ಷೆಯನ್ನು ಒಂದೂವರೆ ಗಂಟೆ ತಡವಾಗಿ ಆರಂಭಿಸಲು ನಿರ್ಧರಿಸಿದೆ.&lt;/p&gt;&lt;h2&gt;ಪರಿಷ್ಕೃತ ಪರೀಕ್ಷಾ ಅವಧಿ ಹೀಗಿದೆ:&lt;/h2&gt;&lt;p&gt;ಹೊಸ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 2ರ ಎರಡನೇ ಅವಧಿಯ ಲಿಖಿತ ಪರೀಕ್ಷೆಯು ಸಂಜೆ 4:00 ಗಂಟೆಗೆ ಪ್ರಾರಂಭವಾಗಿ, ಸಂಜೆ 5:30 ರವರೆಗೆ ನಡೆಯಲಿದೆ.&lt;/p&gt;&lt;p&gt;ಪರೀಕ್ಷೆ ನಡೆಯುವ ದಿನಾಂಕ: ಆಗಸ್ಟ್ 2&lt;/p&gt;&lt;p&gt;ಪರಿಷ್ಕೃತ ಆರಂಭಿಕ ಸಮಯ: ಸಂಜೆ 4:00 ಗಂಟೆಗೆ (ಹಳೆಯ ಸಮಯ: ಮಧ್ಯಾಹ್ನ 2:30)&lt;/p&gt;&lt;p&gt;ಪರೀಕ್ಷೆ ಮುಕ್ತಾಯದ ಸಮಯ: ಸಂಜೆ 5:30 ರವರೆಗೆ&lt;/p&gt;&lt;h2&gt;ಬೆಳಗಿನ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ!&lt;/h2&gt;&lt;p&gt;ಇದೇ ವೇಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳಿಗೆ ಮತ್ತೊಂದು ಪ್ರಮುಖ ಸ್ಪಷ್ಟನೆಯನ್ನು ನೀಡಿದೆ. ಮಧ್ಯಾಹ್ನದ ನಂತರದ ಪರೀಕ್ಷಾ ಸಮಯದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದ್ದು, ಅಂದು ಬೆಳಗಿನ ಅವಧಿಯಲ್ಲಿ ನಡೆಯಲಿರುವ ಪರೀಕ್ಷೆಗಳು ಮುಂಚಿತವಾಗಿ ನಿಗದಿಯಾಗಿದ್ದ ವೇಳಾಪಟ್ಟಿಯಂತೆಯೇ ಯಾವುದೇ ಅಡೆತಡೆಯಿಲ್ಲದೆ ನಡೆಯಲಿವೆ. ಬೆಳಗಿನ ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಹೀಗಾಗಿ ಅಭ್ಯರ್ಥಿಗಳು ಗೊಂದಲಕ್ಕೊಳಗಾಗದೆ, ಬೆಳಗಿನ ಪರೀಕ್ಷೆಗೆ ಎಂದಿನಂತೆ ಸಿದ್ಧರಾಗುವಂತೆ ಹಾಗೂ ಮಧ್ಯಾಹ್ನದ ಪರೀಕ್ಷೆಗೆ ಸಿಕ್ಕಿರುವ ಹೆಚ್ಚುವರಿ ಸಮಯವನ್ನು ಸದುಪಯೋಗಪಡಿಸಿಕೊಂಡು ಪ್ರಶಾಂತ ಮನಸ್ಸಿನಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕೋರಲಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d"/>
        </item>
        <item>
            <title><![CDATA[ರಾಜ್ಯದ 18 ಪೊಲೀಸರಿಗೆ ರಾಷ್ಟ್ರಪತಿ ಪದಕದ ಗರಿ; ಜಿಲ್ಲಾವಾರು ಪದಕ ವಿಜೇತರ ಪಟ್ಟಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/state-government-jobs/independence-day-2026-presidents-police-medals-announced-for-17-karnataka-officers/articleshow-fandg5m</link>
            <guid isPermaLink="true">https://kannada.asianetnews.com/state-government-jobs/independence-day-2026-presidents-police-medals-announced-for-17-karnataka-officers/articleshow-fandg5m</guid>
            <pubDate>Fri, 14 Aug 2026 12:52:31 +0530</pubDate>
            <description><![CDATA[2026ರ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ, ಕರ್ನಾಟಕದ 17 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 'ರಾಷ್ಟ್ರಪತಿ ಪೊಲೀಸ್ ಪದಕ' ಘೋಷಿಸಲಾಗಿದೆ. ಸಿಸಿಬಿ ಎಸಿಪಿ ಹೆಚ್.ಎನ್. ಧರ್ಮೇಂದ್ರ ಅವರಿಗೆ 'ವಿಶಿಷ್ಟ ಸೇವಾ ಪದಕ' ಲಭಿಸಿದ್ದು, ಉಳಿದ 16 ಮಂದಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzj71gr4yc4rz8fsytgar8r,imgname-independence-day-president-medal-winner-karnataka-police-1786691946008.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;2026ರ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ದೇಶಸೇವೆಯಲ್ಲಿ ಗಣನೀಯ ಹಾಗೂ ವಿಶಿಷ್ಟ ಸೇವೆ ಸಲ್ಲಿಸಿದ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೇಂದ್ರ ಗೃಹ ಸಚಿವಾಲಯವು &lsquo;ರಾಷ್ಟ್ರಪತಿ ಪೊಲೀಸ್ ಪದಕ&rsquo;ಗಳನ್ನು ಘೋಷಿಸಿದೆ. ಈ ಬಾರಿ ಕರ್ನಾಟಕ ಪೊಲೀಸ್ ಪಡೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.&lt;/p&gt;&lt;p&gt;ಅಪರಾಧ ತಡೆ, ಕಾನೂನು ಸುವ್ಯವಸ್ಥೆ ಪರಿಪಾಲನೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೋರಿದ ನಿಷ್ಠೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.&lt;/p&gt;&lt;h2&gt;&lt;strong&gt;ಹೆಚ್.ಎನ್.ಧರ್ಮೇಂದ್ರ ಅವರಿಗೆ 'ವಿಶಿಷ್ಟ ಸೇವಾ ಪದಕ'&lt;/strong&gt;&lt;/h2&gt;&lt;p&gt;ಸಿಸಿಬಿ (CCB) ವಿಭಾಗದಲ್ಲಿ ಸಹಾಯಕ ಪೊಲೀಸ್ ಕಮಿಷನರ್ (ACP) ಆಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಎನ್. ಧರ್ಮೇಂದ್ರ ಅವರಿಗೆ 2026ರ ಅತ್ಯುನ್ನತ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಘೋಷಣೆಯಾಗಿದೆ. ತಮ್ಮ ದೀರ್ಘಕಾಲದ ಸೇವೆಯಲ್ಲಿ ಹಲವು ಪ್ರಮುಖ ಹಾಗೂ ಸಂಕೀರ್ಣ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಇವರು ವಹಿಸಿದ ಪ್ರಮುಖ ಪಾತ್ರವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಶ್ಲಾಘನೀಯ ಸೇವಾ ಪದಕ ವಿಜೇತರ ಸಂಪೂರ್ಣ ಪಟ್ಟಿ&lt;/strong&gt;&lt;/h2&gt;&lt;p&gt;ರಾಜ್ಯದ ವಿವಿಧ ವಿಭಾಗಗಳು, ಸಿಐಡಿ, ಸಶಸ್ತ್ರ ಪಡೆ ಹಾಗೂ ತರಬೇತಿ ಕೇಂದ್ರಗಳಲ್ಲಿ ಶ್ರಮಿಸಿದ 16 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ (Meritorious Service Medal) ಲಭಿಸಿದೆ. ಅವರ ವಿವರ ಇಲ್ಲಿದೆ:&lt;/p&gt;&lt;ol&gt; &lt;li&gt;ಸಾರಾ ಫಾತೀಮಾ &ndash; ಎಸ್ಪಿ (ರೈಲ್ವೇಸ್, ಬೆಂಗಳೂರು)&lt;/li&gt; &lt;li&gt;ಥಾಮಸ್ ಮ್ಯಾಥ್ಯೂ &ndash; ಕಮಾಂಡೆಂಟ್ (ಕೆ.ಎಸ್.ಆರ್.ಪಿ)&lt;/li&gt; &lt;li&gt;ಮಹಾದೇವ್ &ndash; ಎಸಿಪಿ (ಆಗ್ನೇಯ ಸಂಚಾರ ವಿಭಾಗ, ಬೆಂಗಳೂರು)&lt;/li&gt; &lt;li&gt;ಪ್ರಮಾನಂದ್ &ndash; ಡಿವೈಎಸ್ಪಿ (ಡಿ.ಎ.ಆರ್, ರಾಯಚೂರು)&lt;/li&gt; &lt;li&gt;ಷಣ್ಮುಗವರ್ಮಾ &ndash; ಪೊಲೀಸ್ ಇನ್ಸ್&zwnj;ಪೆಕ್ಟರ್ (ಪೊಲೀಸ್ ತರಬೇತಿ ಶಾಲೆ, ಮೈಸೂರು)&lt;/li&gt; &lt;li&gt;ಭಾವುದ್ದೀನ್ ರುಕ್ಮುದ್ದೀನ್ &ndash; ಪೊಲೀಸ್ ಇನ್ಸ್&zwnj;ಪೆಕ್ಟರ್ (ಮಾಳಮಾರುತಿ ಠಾಣೆ)&lt;/li&gt; &lt;li&gt;ಗುರುಪ್ರಸಾದ್ ಗೋಪಾಲ್ ನಾಯಕ್ &ndash; ಇನ್ಸ್&zwnj;ಪೆಕ್ಟರ್ (ಸಿಐಡಿ)&lt;/li&gt; &lt;li&gt;ನಯೀಂ &ndash; ರಿಸರ್ವ್ ಪೊಲೀಸ್ ಇನ್ಸ್&zwnj;ಪೆಕ್ಟರ್ (ಲೋಕಭವನ)&lt;/li&gt; &lt;li&gt;ಶ್ರೀನಿವಾಸ &ndash; ಪಿ.ಎಸ್.ಐ (ಕೆ.ಪಿ.ಅಗ್ರಹಾರ ಠಾಣೆ, ಬೆಂಗಳೂರು)&lt;/li&gt; &lt;li&gt;ಜ್ಞಾನದೇವ್ ನವಲ ತರಾಸೆ &ndash; ಎ.ಆರ್.ಎಸ್.ಐ (ಕೆ.ಎಸ್.ಆರ್.ಪಿ)&lt;/li&gt; &lt;li&gt;ಮಹದೇವಸ್ವಾಮಿ &ndash; ಹೆಡ್ ಕಾನ್ಸ್&zwnj;ಟೇಬಲ್ (ವಿಧಾನಸೌಧ ಭದ್ರತೆ)&lt;/li&gt; &lt;li&gt;ಮಾರಿಯಾ ಜೋಸೆಫ್ ದಿನೇಶ್ ಕುಮಾರ್ &ndash; ಹೆಡ್ ಕಾನ್ಸ್&zwnj;ಟೇಬಲ್ (ಡಿ.ಸಿ.ಆರ್.ಇ, ಕೆಜಿಎಫ್)&lt;/li&gt; &lt;li&gt;ಚಂದ್ರಶೇಖರ ಚಿಕ್ಕಣ್ಣನವರ್ &ndash; ಹೆಡ್ ಕಾನ್ಸ್&zwnj;ಟೇಬಲ್ (ಕೆ.ಎಸ್.ಆರ್.ಪಿ)&lt;/li&gt; &lt;li&gt;ಅಬ್ದುಲ್ ಕಮಾಲ್ &ndash; ಹೆಡ್ ಕಾನ್ಸ್&zwnj;ಟೇಬಲ್ (ತರೀಕೆರೆ)&lt;/li&gt; &lt;li&gt;ನಾಗೇಶ್ ಮಚ್ಚಯ್ಯ &ndash; ಹೆಡ್ ಕಾನ್ಸ್&zwnj;ಟೇಬಲ್ (ಸಿಐಡಿ)&lt;/li&gt; &lt;li&gt;ಮನೋಹರ್ &ndash; ಕಾನ್ಸ್&zwnj;ಟೇಬಲ್ (ಹುಣಸೂರು ಠಾಣೆ)&lt;/li&gt; &lt;li&gt;ಅಬ್ದುಲ್ ರಬ್ಬಾನಿ &ndash; ಡಿಪಿಒ (ಚಿಕ್ಕಮಗಳೂರು ಜಿಲ್ಲೆ)&lt;/li&gt;&lt;/ol&gt;&lt;h3&gt;&lt;strong&gt;ಹಿರಿಯ ಅಧಿಕಾರಿಗಳಿಂದ ಅಭಿನಂದನೆ&lt;/strong&gt;&lt;/h3&gt;&lt;p&gt;ಕರ್ತವ್ಯ ನಿಷ್ಠೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ರಾಷ್ಟ್ರಮಟ್ಟದಲ್ಲಿ ಗೌರವಕ್ಕೆ ಪಾತ್ರರಾದ ರಾಜ್ಯದ ಎಲ್ಲಾ 17 ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ಹಿರಿಯ ಅಧಿಕಾರಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/independence-day-2026-presidents-police-medals-announced-for-17-karnataka-officers/articleshow-fandg5m"/>
        </item>
        <item>
            <title><![CDATA[KEA: 141 ಓಎಂಆರ್‌ ನಾಪತ್ತೆಗೆ ಹೊಣೆ ಯಾರು? ಕೆಇಎನಾ ಅಥವಾ ವಿದ್ಯಾರ್ಥಿಗಳಾ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್]]></title>
            <link>https://kannada.asianetnews.com/karnataka-districts/141-omr-sheets-missing-kea-or-students-responsible-karnataka-civil-police-constable-exam-vijayapura-full-report-bmk/articleshow-gbsqakm</link>
            <guid isPermaLink="true">https://kannada.asianetnews.com/karnataka-districts/141-omr-sheets-missing-kea-or-students-responsible-karnataka-civil-police-constable-exam-vijayapura-full-report-bmk/articleshow-gbsqakm</guid>
            <pubDate>Thu, 20 Aug 2026 19:00:44 +0530</pubDate>
            <description><![CDATA[ವಿಜಯಪುರದ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ, ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಶೀಟ್ ಸರಣಿ ಸಂಖ್ಯೆ ತಾಳೆಯಾಗದ ಕಾರಣ ಗೊಂದಲ ಸೃಷ್ಟಿಯಾಗಿತ್ತು. ಕೆಇಎಯ ಹೊಸ ನಿಯಮದ ಬಗ್ಗೆ ಮಾಹಿತಿ ಕೊರತೆಯಿಂದ ಆತಂಕಗೊಂಡ 141 ಅಭ್ಯರ್ಥಿಗಳು ತಮ್ಮ ಓಎಂಆರ್ ಶೀಟ್&zwnj;ಗಳೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರನಡೆದಿದ್ದು, ಈ ಘಟನೆಗೆ ಯಾರು ಹೊಣೆ ಎಂಬುದನ್ನು ಈ ವರದಿ ವಿಶ್ಲೇಷಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0fnvqvbe6gsnbezbnyqaff8,imgname-kea-final-1787232640875.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯಪುರ: ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ (ಸಿಪಿಸಿ) ನೇಮಕಾತಿ ಪರೀಕ್ಷೆಯ ವೇಳೆ ಜಿಲ್ಲೆಯ ತಿಕೋಟಾ ಪರೀಕ್ಷಾ ಕೇಂದ್ರದಲ್ಲಿ ನಡೆದ ಹೈಡ್ರಾಮಾ ಮತ್ತು 141 ಓಎಂಆರ್ (OMR) ಶೀಟ್&zwnj;ಗಳು ನಾಪತ್ತೆಯಾದ ಪ್ರಕರಣ ಇಡೀ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪರೀಕ್ಷಾ ಅಕ್ರಮದ ಭೀತಿಯಿಂದ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದರೆ, ನಿಯಮ ಉಲ್ಲಂಘಿಸಿ ಓಎಂಆರ್ ಸೀಟ್ ತೆಗೆದುಕೊಂಡು ಹೋದವರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಚ್ಚರಿಕೆ ನೀಡಿದೆ. ಹಾಗಾದರೆ, ಈ ಇಡೀ ಗೊಂದಲಕ್ಕೆ ಮತ್ತು 141 ಓಎಂಆರ್ ಶೀಟ್ ನಾಪತ್ತೆಯಾಗಲು ನಿಜವಾದ ಹೊಣೆ ಯಾರು? ಅಭ್ಯರ್ಥಿಗಳಾ ಅಥವಾ ಕೆಇಎ ವ್ಯವಸ್ಥೆಯಾ? ಇಲ್ಲಿದೆ ಕಂಪ್ಲೀಟ್&zwnj; ಸ್ಟೋರಿ.&lt;/p&gt;&lt;h2&gt;&lt;strong&gt;ಗೊಂದಲದ ಮೂಲ ಎಲ್ಲಿದೆ?&lt;/strong&gt;&lt;/h2&gt;&lt;p&gt;ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳಿಗೆ ವಿತರಿಸಲಾದ ಪ್ರಶ್ನೆ ಪತ್ರಿಕೆಯ ಸರಣಿ ಸಂಖ್ಯೆ ಹಾಗೂ ಓಎಂಆರ್ ಶೀಟ್&zwnj;ನ ಸರಣಿ ಸಂಖ್ಯೆ ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ನಿಯಮಗಳ ಪ್ರಕಾರ, ಪ್ರಶ್ನೆ ಪತ್ರಿಕೆಯ &lsquo;ವರ್ಷನ್ ಕೋಡ್&rsquo; ಮತ್ತು ನೋಂದಣಿ ಸಂಖ್ಯೆ ಮಾತ್ರ ಓಎಂಆರ್&zwnj;ನಲ್ಲಿ ಮ್ಯಾಚ್ ಆಗಬೇಕಿತ್ತೇ ವಿನಃ ಸರಣಿ ಸಂಖ್ಯೆಯಲ್ಲ. ಆದರೆ, ಈ ತಾಂತ್ರಿಕ ಬದಲಾವಣೆಯ ಬಗ್ಗೆ ಕೆಇಎ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳಿಗೆ ಯಾವುದೇ ಸ್ಪಷ್ಟ ಅಧಿಕೃತ ಮಾಹಿತಿ ಅಥವಾ ಜಾಗೃತಿ ಮೂಡಿಸಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಡೆದ ಸಾಲು ಸಾಲು ನೇಮಕಾತಿ ಹಗರಣಗಳಿಂದ ಈಗಾಗಲೇ ಕಂಗೆಟ್ಟಿದ್ದ ಅಭ್ಯರ್ಥಿಗಳಿಗೆ, ಸಂಖ್ಯೆಗಳು ಮ್ಯಾಚ್ ಆಗದಿದ್ದಾಗ &lsquo;ಇಲ್ಲೂ ಏನೋ ಅಕ್ರಮ ನಡೆಯುತ್ತಿದೆ&rsquo; ಎಂಬ ಸಂಶಯ ಮೂಡಿದ್ದು ಸಹಜವಾಗಿತ್ತು.&lt;/p&gt;&lt;h3&gt;&lt;strong&gt;ಆತಂಕ ನಿವಾರಿಸಬೇಕಾದ ಕೈಗಳು ಯಾರವು?&lt;/strong&gt;&lt;/h3&gt;&lt;p&gt;ಸ್ಥಳದಲ್ಲೇ ಕೈಕೊಟ್ಟ ಆಡಳಿತ ವ್ಯವಸ್ಥೆಅಭ್ಯರ್ಥಿಗಳಲ್ಲಿ ಆತಂಕ ಮೂಡಿದ ತಕ್ಷಣವೇ ಅದನ್ನು ನಿವಾರಿಸಬೇಕಾಗಿದ್ದು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ಮೇಲ್ವಿಚಾರಕರ (Invigilators) ಕರ್ತವ್ಯವಾಗಿತ್ತು. ಆದರೆ ದುರದೃಷ್ಟವಶಾತ್, ಸ್ಥಳೀಯ ಸಿಬ್ಬಂದಿಗೂ ಕೆಇಎನ ಈ ಹೊಸ ನಿಯಮದ ಬಗ್ಗೆ ಸರಿಯಾದ ತರಬೇತಿ ಅಥವಾ ಮಾಹಿತಿ ಇರಲಿಲ್ಲ. ಅಭ್ಯರ್ಥಿಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡದೆ ಸಿಬ್ಬಂದಿ ಮೌನ ವಹಿಸಿದ್ದು ಮತ್ತು ಉನ್ನತ ಅಧಿಕಾರಿಗಳಿಂದ ತಕ್ಷಣದ ಸ್ಪಷ್ಟನೆ ಕೊಡಿಸಲು ವಿಫಲರಾಗಿದ್ದು ಪರಿಸ್ಥಿತಿ ಕೈಮೀರಿ ಹೋಗಲು ಪ್ರಮುಖ ಕಾರಣವಾಯಿತು. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಬಂದು ಧರಣಿ ಆರಂಭಿಸಿದರು.&lt;/p&gt;&lt;h3&gt;&lt;strong&gt;141 ಓಎಂಆರ್ ನಾಪತ್ತೆ! ತಪ್ಪು ಯಾರದ್ದು?&lt;/strong&gt;&lt;/h3&gt;&lt;p&gt;ಗಲಾಟೆಯ ತೀವ್ರತೆಗೆ ಪರೀಕ್ಷಾ ಕೊಠಡಿಯಲ್ಲಿದ್ದ ಸುಮಾರು 141 ಅಭ್ಯರ್ಥಿಗಳು ತಮ್ಮ ಅಧಿಕೃತ ಓಎಂಆರ್ ಶೀಟ್&zwnj;ಗಳ ಸಮೇತ ಪರೀಕ್ಷಾ ಕೇಂದ್ರದಿಂದ ಹೊರನಡೆದಿದ್ದಾರೆ.ವಿದ್ಯಾರ್ಥಿಗಳ ಆಂಗಲ್: ವ್ಯವಸ್ಥೆಯ ಮೇಲಿನ ಅಪನಂಬಿಕೆ ಹಾಗೂ ಭಾವೋದ್ವೇಗದಿಂದಾಗಿ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಹಕ್ಕನ್ನು ರಕ್ಷಿಸಿಕೊಳ್ಳಲು ಒಟ್ಟಾಗಿ ಹೊರಬಂದರು. ತಮ್ಮ ಒಎಂಆರ್ ಶೀಟ್&zwnj;ಗಳು ದುರುಪಯೋಗವಾಗಬಾರದು ಎಂಬ ಆತುರದ ನಿರ್ಧಾರ ಇದಕ್ಕೆ ಕಾರಣವಾಗಿತ್ತು.&lt;/p&gt;&lt;h3&gt;&lt;strong&gt;ಕಾನೂನು ಏನು ಹೇಳುತ್ತದೆ?&lt;/strong&gt;&lt;/h3&gt;&lt;p&gt;ಕಾನೂನಿನ ಪ್ರಕಾರ, ಯಾವುದೇ ಕಾರಣಕ್ಕೂ ಪರೀಕ್ಷಾ ಕೊಠಡಿಯಿಂದ ಅಧಿಕೃತ ಓಎಂಆರ್ ಶೀಟ್ ಅನ್ನು ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ. ಇದು ಗಂಭೀರ ನಿಯಮ ಉಲ್ಲಂಘನೆಯಾಗುವುದರಿಂದ ಕೆಇಎ ಇವರ ವಿರುದ್ಧ ಎಫ್&zwnj;ಐಆರ್ ದಾಖಲಿಸಲು ಮುಂದಾಗಿದೆ.&lt;/p&gt;&lt;h3&gt;&lt;strong&gt;ಹೊಣೆ ಯಾರು?&lt;/strong&gt;&lt;/h3&gt;&lt;p&gt;ಮೇಲ್ನೋಟಕ್ಕೆ ವಿದ್ಯಾರ್ಥಿಗಳು ಓಎಂಆರ್ ಶೀಟ್ ತೆಗೆದುಕೊಂಡು ಹೋಗಿ ಕಾನೂನು ಉಲ್ಲಂಘಿಸಿರುವುದು ತಪ್ಪಾಗಿ ಕಂಡರೂ, ಅಂತಹದೊಂದು ಪರಿಸ್ಥಿತಿಯನ್ನು ಸೃಷ್ಟಿ ಮಾಡಿದ್ದು ಮಾತ್ರ ಕೆಇಎ ಮತ್ತು ಸ್ಥಳೀಯ ಆಡಳಿತ ಮಂಡಳಿ. ಮುಂಚಿತವಾಗಿ ಮಾಹಿತಿ ನೀಡದ ಕೆಇಎ ಮತ್ತು ಸ್ಥಳದಲ್ಲೇ ಗೊಂದಲ ಬಗೆಹರಿಸದ ಪರೀಕ್ಷಾ ಸಿಬ್ಬಂದಿಯ ಬೇಜವಾಬ್ದಾರಿತನವೇ ಈ 141 ಓಎಂಆರ್ ನಾಪತ್ತೆಯಾಗಲು ಮೂಲ ಕಾರಣ. ವ್ಯವಸ್ಥೆಯ ಅಪಕ್ವ ನಿರ್ಧಾರಗಳಿಗೆ ಮತ್ತು ಸಂವಹನದ ಕೊರತೆಗೆ ಕೊನೆಗೆ ಬಡ ಮತ್ತು ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಭವಿಷ್ಯ ಕಳೆದುಕೊಳ್ಳುವಂತಾಗಿರುವುದು ವ್ಯವಸ್ಥೆಯ ದುರಂತವೇ ಸರಿ.&lt;/p&gt;]]></content:encoded>
            <category>state-government-jobs</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/141-omr-sheets-missing-kea-or-students-responsible-karnataka-civil-police-constable-exam-vijayapura-full-report-bmk/articleshow-gbsqakm"/>
        </item>
        <item>
            <title><![CDATA[ಕರ್ನಾಟಕ ಹೈಕೋರ್ಟ್ SDA ನೇಮಕಾತಿ 2026:  ಉದ್ಯೋಗ  ಗಿಟ್ಟಿದ್ರೆ ₹81 ಸಾವಿರ ರೂ ವೇತನ ಪಡೆಯುವ ಅರ್ಹತೆ]]></title>
            <link>https://kannada.asianetnews.com/jobs/karnataka-high-court-recruitment-2026-apply-online-for-20-sda-posts-check-eligibility-and-salary-gdp/articleshow-gr2gopt</link>
            <guid isPermaLink="true">https://kannada.asianetnews.com/jobs/karnataka-high-court-recruitment-2026-apply-online-for-20-sda-posts-check-eligibility-and-salary-gdp/articleshow-gr2gopt</guid>
            <pubDate>Sat, 15 Aug 2026 17:24:13 +0530</pubDate>
            <description><![CDATA[&lt;p&gt;ಕರ್ನಾಟಕ ಹೈಕೋರ್ಟ್&zwnj;ನಲ್ಲಿ ಖಾಲಿ ಇರುವ 20 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಮಾಸಿಕ ₹25,500 ರಿಂದ ₹81,100 ವೇತನ ಶ್ರೇಣಿ ಇರಲಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 11, 2026 ಕೊನೆಯ ದಿನಾಂಕವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ghr3j21pbxc5m9qqpkkpd5he,imgname-karnataka-high-court.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಹೈಕೋರ್ಟ್&zwnj;ನಲ್ಲಿ ಖಾಲಿ ಇರುವ 20 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್&zwnj;ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.&lt;/p&gt;&lt;h2&gt;ನೇಮಕಾತಿಯ ವಿವರಗಳು&lt;/h2&gt;&lt;p&gt;ಸಂಸ್ಥೆಯ ಹೆಸರು: ಕರ್ನಾಟಕ ಹೈಕೋರ್ಟ್&lt;/p&gt;&lt;p&gt;ಹುದ್ದೆಯ ಹೆಸರು: ದ್ವಿತೀಯ ದರ್ಜೆ ಸಹಾಯಕ (SDA)&lt;/p&gt;&lt;p&gt;ಒಟ್ಟು ಹುದ್ದೆಗಳ ಸಂಖ್ಯೆ: 20&lt;/p&gt;&lt;p&gt;ಉದ್ಯೋಗ ಸ್ಥಳ: ಕರ್ನಾಟಕ&lt;/p&gt;&lt;p&gt;ವೇತನ ಶ್ರೇಣಿ: ತಿಂಗಳಿಗೆ ₹25,500 ರಿಂದ ₹81,100/-&lt;/p&gt;&lt;p&gt;ಅರ್ಹತಾ ಮಾನದಂಡಗಳು&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ:&lt;/h2&gt;&lt;p&gt;ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆರ್ಟ್ಸ್, ಸೈನ್ಸ್, ಕಾಮರ್ಸ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ತತ್ಸಮಾನ ಪದವಿಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. (ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳನ್ನು ನಿಗದಿಪಡಿಸಲಾಗಿದೆ).&lt;/p&gt;&lt;h2&gt;ವಯೋಮಿತಿ:&lt;/h2&gt;&lt;p&gt;ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಹಾಗೂ ಗರಿಷ್ಠ ವಯೋಮಿತಿ 40 ವರ್ಷಗಳು.&lt;/p&gt;&lt;h3&gt;ವಯೋಮಿತಿ ಸಡಿಲಿಕೆ:&lt;/h3&gt;&lt;p&gt;ಕ್ಯಾಟ್ 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷಗಳು&lt;/p&gt;&lt;p&gt;SC, ST, ಪ್ರವರ್ಗ-1 ಅಭ್ಯರ್ಥಿಗಳಿಗೆ: 5 ವರ್ಷಗಳು&lt;/p&gt;&lt;h2&gt;ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ&lt;/h2&gt;&lt;p&gt;ಸಾಮಾನ್ಯ, 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ: ₹350/-&lt;/p&gt;&lt;p&gt;SC, ST, ಪ್ರವರ್ಗ-1 ಹಾಗೂ ವಿಕಲಚೇತನ (PWD) ಅಭ್ಯರ್ಥಿಗಳಿಗೆ: ₹200/-&lt;/p&gt;&lt;p&gt;ಶುಲ್ಕ ಪಾವತಿ ವಿಧಾನ: ಆನ್&zwnj;ಲೈನ್ ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಬಹುದು.&lt;/p&gt;&lt;h2&gt;ಅರ್ಜಿ ಸಲ್ಲಿಸುವ ಹಂತಗಳು&lt;/h2&gt;&lt;p&gt;ಅಧಿಸೂಚನೆ ಪರಿಶೀಲನೆ: ಮೊದಲು ಕರ್ನಾಟಕ ಹೈಕೋರ್ಟ್&zwnj;ನ ಅಧಿಕೃತ ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.&lt;/p&gt;&lt;p&gt;ದಾಖಲೆಗಳ ಸಿದ್ಧತೆ: ಅರ್ಜಿ ಭರ್ತಿ ಮಾಡುವ ಮುನ್ನ ಚಾಲ್ತಿಯಲ್ಲಿರುವ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ಅಂಕಪಟ್ಟಿಗಳು ಹಾಗೂ ಇತ್ತೀಚಿನ ಭಾವಚಿತ್ರವನ್ನು ಸಿದ್ಧವಿರಿಸಿಕೊಳ್ಳಿ.&lt;/p&gt;&lt;p&gt;ಆನ್&zwnj;ಲೈನ್ ಅರ್ಜಿ: ಕರ್ನಾಟಕ ಹೈಕೋರ್ಟ್&zwnj;ನ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ 'SDA Online Application' ಲಿಂಕ್ ಕ್ಲಿಕ್ ಮಾಡಿ.&lt;/p&gt;&lt;p&gt;ಮಾಹಿತಿ ನಮೂದು: ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಸೂಚಿಸಿದ ಪ್ರಮಾಣಪತ್ರಗಳ ಸ್ಕ್ಯಾನ್ ಪ್ರತಿಗಳನ್ನು ಅಪ್&zwnj;ಲೋಡ್ ಮಾಡಿ.&lt;/p&gt;&lt;p&gt;ಶುಲ್ಕ ಪಾವತಿ ಹಾಗೂ ಸಲ್ಲಿಕೆ: ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು ಪರಿಶೀಲಿಸಿ ಅಂತಿಮವಾಗಿ ಸಬ್&zwnj;ಮಿಟ್ ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್&zwnj;ಔಟ್ ತೆಗೆದುಕೊಳ್ಳಿ.&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಆನ್&zwnj;ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 13 ಆಗಸ್ಟ್ 2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11 ಸೆಪ್ಟೆಂಬರ್ 2026&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-high-court-recruitment-2026-apply-online-for-20-sda-posts-check-eligibility-and-salary-gdp/articleshow-gr2gopt"/>
        </item>
        <item>
            <title><![CDATA[65 ತೆರಿಗೆ ಸಂಗ್ರಾಹಕರು, ಗುಮಾಸ್ತರು, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ]]></title>
            <link>https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4</link>
            <guid isPermaLink="true">https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4</guid>
            <pubDate>Fri, 28 Aug 2026 06:05:24 +0530</pubDate>
            <description><![CDATA[ರಾಯಚೂರು ಜಿಲ್ಲಾ ಪಂಚಾಯತ್, ತೆರಿಗೆ ಸಂಗ್ರಾಹಕ ಮತ್ತು ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಸೇರಿದಂತೆ ಒಟ್ಟು 65 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kt8gjwdffymv3aszhdtnmqfy,imgname-exam-1780549775791.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಆ.28): &lt;/strong&gt;ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆ ಮೂಲಕ ತೆರಿಗೆ ಸಂಗ್ರಾಹಕ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;&lt;strong&gt;ಹುದ್ದೆಗಳ ಸಂಪೂರ್ಣ ವಿವರ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಸಂಸ್ಥೆಯ ಹೆಸರು :&lt;/strong&gt; ಜಿಲ್ಲಾ ಪಂಚಾಯತ್ ರಾಯಚೂರು&lt;/li&gt; &lt;li&gt;&lt;strong&gt;ಹುದ್ದೆಗಳ ಸಂಖ್ಯೆ: &lt;/strong&gt;65&lt;/li&gt; &lt;li&gt;&lt;strong&gt;ಉದ್ಯೋಗ ಸ್ಥಳ: &lt;/strong&gt;ರಾಯಚೂರು - ಕರ್ನಾಟಕ&lt;/li&gt; &lt;li&gt;&lt;strong&gt;ಪೋಸ್ಟ್ ಹೆಸರು: &lt;/strong&gt;ತೆರಿಗೆ ಸಂಗ್ರಾಹಕ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್&lt;/li&gt;&lt;/ul&gt;&lt;h2&gt;&lt;strong&gt;ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ತೆರಿಗೆ ಸಂಗ್ರಹಕಾರ:&lt;/strong&gt; 31 ಹುದ್ದೆಗಳು&lt;/li&gt; &lt;li&gt;&lt;strong&gt;ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್: &lt;/strong&gt;34 ಹುದ್ದೆಗಳು&lt;/li&gt;&lt;/ul&gt;&lt;h2&gt;&lt;strong&gt;ಶೈಕ್ಷಣಿಕ ಅರ್ಹತೆ&lt;/strong&gt;&lt;/h2&gt;&lt;p&gt;ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ /12 ನೇ ತರಗತಿ (ಮೂರು ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್&zwnj;ನೊಂದಿಗೆ) ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;&lt;strong&gt;ವಯೋಮಿತಿ&lt;/strong&gt;&lt;/h2&gt;&lt;p&gt;ಅಭ್ಯರ್ಥಿಯು 03-09-2026ಕ್ಕೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳನ್ನು ಹೊಂದಿರಬೇಕು.&lt;/p&gt;&lt;h3&gt;&lt;strong&gt;ವಯೋಮಿತಿ ಸಡಿಲಿಕೆ&lt;/strong&gt;&lt;/h3&gt;&lt;ul&gt; &lt;li&gt;&lt;strong&gt;ವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: &lt;/strong&gt;3 ವರ್ಷ&lt;/li&gt; &lt;li&gt;&lt;strong&gt;ಎಸ್&zwnj;ಸಿ/ಎಸ್&zwnj;ಟಿ, ವಿಭಾಗ 1 ಅಭ್ಯರ್ಥಿಗಳು: &lt;/strong&gt;5 ವರ್ಷ&lt;/li&gt;&lt;/ul&gt;&lt;h2&gt;&lt;strong&gt;ಅರ್ಜಿ ಶುಲ್ಕ&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಸಾಮಾನ್ಯ ಅಭ್ಯರ್ಥಿಗಳಿಗೆ: &lt;/strong&gt;500 ರು.&lt;/li&gt; &lt;li&gt;&lt;strong&gt;2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: &lt;/strong&gt;300 ರು.&lt;/li&gt; &lt;li&gt;&lt;strong&gt;ಎಸ್&zwnj;ಸಿ/ಎಸ್&zwnj;ಟಿ, P1, ಮಾಜಿ ಸೈನಿಕರ ಅಭ್ಯರ್ಥಿಗಳಿಗೆ: &lt;/strong&gt;200 ರು.&lt;/li&gt; &lt;li&gt;&lt;strong&gt;ವಿಶೇಷವಾಗಿ ಅಭ್ಯರ್ಥಿಗಳಿಗೆ:&lt;/strong&gt; 100 ರು.&lt;/li&gt; &lt;li&gt;ಪಾವತಿ ವಿಧಾನ: ಆನ್&zwnj;ಲೈನ್&lt;/li&gt;&lt;/ul&gt;&lt;p&gt;&lt;strong&gt;ಆಯ್ಕೆ ಪ್ರಕ್ರಿಯೆ: &lt;/strong&gt;ಮೆರಿಟ್ ಪಟ್ಟಿ (ಸಂಬಂಧಿತ ಅರ್ಹತೆಯಲ್ಲಿ ಅತ್ಯಧಿಕ ಅಂಕಗಳೊಂದಿಗೆ), ಸಂದರ್ಶನ&lt;/p&gt;&lt;h2&gt;&lt;strong&gt;ಅರ್ಜಿ ಸಲ್ಲಿಸುವುದು ಹೇಗೆ?&lt;/strong&gt;&lt;/h2&gt;&lt;ul&gt; &lt;li&gt;-ಮೊದಲನೆಯದಾಗಿ ಜಿಲ್ಲಾ ಪಂಚಾಯತ್ ರಾಯಚೂರು ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ಆನ್&zwnj;ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.&lt;/li&gt; &lt;li&gt;ಜಿಲ್ಲಾ ಪಂಚಾಯತ್ ರಾಯಚೂರು ತೆರಿಗೆ ಸಂಗ್ರಹಕಾರ, ಕ್ಲರ್ಕ್-ಕಮ್-ಡೇಟಾ ಎಂಟ್ರಿ ಆಪರೇಟರ್ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಿ. - ಜಿಲ್ಲಾ ಪಂಚಾಯತ್ ರಾಯಚೂರು ಆನ್&zwnj;ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್&zwnj;ಲೋಡ್ ಮಾಡಿ.&lt;/li&gt; &lt;li&gt;ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.&lt;/li&gt;&lt;/ul&gt;&lt;h2&gt;&lt;strong&gt;ಪ್ರಮುಖ ದಿನಾಂಕಗಳು&lt;/strong&gt;&lt;/h2&gt;&lt;ul&gt; &lt;li&gt;ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಆಗಸ್ಟ್&zwnj; 20-08-2026&lt;/li&gt; &lt;li&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್-03-2026&lt;/li&gt;&lt;/ul&gt;]]></content:encoded>
            <category>state-government-jobs</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state-government-jobs/raichur-zp-recruitment-2026-apply-65-tax-collector-data-entry-operator-posts-san/articleshow-gyga9z4"/>
        </item>
        <item>
            <title><![CDATA[ಕೆಪಿಎಸ್‌ಸಿ ಹಗರಣ: ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!]]></title>
            <link>https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2</link>
            <guid isPermaLink="true">https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2</guid>
            <pubDate>Sun, 23 Aug 2026 17:21:02 +0530</pubDate>
            <description><![CDATA[&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0q6g86q7p181q3694mf2hbp,imgname-ias-gyanendra-kumar--1--1787484971223.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: ರಾ&lt;/strong&gt;ಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕೆಪಿಎಸ್&zwnj;ಸಿ (KPSC) ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರಿನ ಜಯಮಹಲ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಇಡಿ ದಾಳಿ ನಡೆಸಿದ್ದು, ಅಪಾರ್ಟ್&zwnj;ಮೆಂಟ್ ಆವರಣದಲ್ಲಿ ಗಂಟೆಗಳ ಕಾಲ ಭಾರೀ ಹೈಡ್ರಾಮಾ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ತನಿಖೆ ಆರಂಭವಾಗ್ತಿದ್ದಂತೆ ಐಎಎಸ್ ಅಧಿಕಾರಿ ಪರಾರಿ!&lt;/strong&gt;&lt;/p&gt;&lt;p&gt;ಕೆಪಿಎಸ್&zwnj;ಸಿ ಪಶು ವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆಯನ್ನು ಇಡಿ ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಿದ್ದಂತೆಯೇ, ಎಚ್ಚೆತ್ತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಜಯಮಹಲ್&zwnj;ನಲ್ಲಿರುವ ಖಾಸಗಿ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಜ್ಞಾನೇಂದ್ರ ಕುಮಾರ್ ಅವರ ಫ್ಲ್ಯಾಟ್&zwnj;ಗೆ ಶುಕ್ರವಾರ ಮುಂಜಾನೆ 3 ಇನ್ನೋವಾ (Innova) ಕಾರುಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಯೋಧರೊಂದಿಗೆ ಇಡಿ ಅಧಿಕಾರಿಗಳ ತಂಡ ಆಗಮಿಸಿತು.&lt;/p&gt;&lt;img&gt;&lt;p&gt;ಅಧಿಕಾರಿಗಳು ಬರುತ್ತಿದ್ದಂತೆ ಅಪಾರ್ಟ್&zwnj;ಮೆಂಟ್&zwnj;ನ ಸೆಕ್ಯೂರಿಟಿ ಗಾರ್ಡ್ ಮುಖ್ಯ ಗೇಟ್&zwnj;ಗೆ ಬೀಗ ಹಾಕಿದನು. 'ಯಾರನ್ನೂ ಒಳಗೆ ಬಿಡಲು ನನಗೆ ಅನುಮತಿ ಇಲ್ಲ' ಎಂದು ಅಧಿಕಾರಿಗಳನ್ನು ತಡೆದನು. ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಸೆಕ್ಯೂರಿಟಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ, ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಗೇಟ್ ಓಪನ್ ಮಾಡಲಾಯಿತು. ಬಳಿಕ ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್&zwnj;ಮೆಂಟ್ ಮುಂಭಾಗ ಬ್ಯಾರಿಕೇಡ್ ಹಾಕಿ ಸಿಆರ್&zwnj;ಪಿಎಫ್ ಭದ್ರತೆ ಒದಗಿಸಲಾಯಿತು.&lt;/p&gt;&lt;img&gt;&lt;p&gt;&lt;strong&gt;ಸಾಕ್ಷಿಗೆ (Witness) ನಿರಾಕರಿಸಿದ ಎದುರು ಮನೆಯವರು!&lt;/strong&gt;&lt;/p&gt;&lt;ul&gt; &lt;li&gt;ಅಧಿಕಾರಿಯ ಮನೆ ಲಾಕ್ ಆಗಿದ್ದರಿಂದ ಬಾಗಿಲು ಮುರಿಯಲು ಸ್ಥಳೀಯ ಸಾಕ್ಷಿಗಳ (Panchas) ಅಗತ್ಯವಿತ್ತು.&lt;/li&gt; &lt;li&gt;ಇಡಿ ಅಧಿಕಾರಿಗಳು ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretary) ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ಮಾಹಿತಿ ರವಾನಿಸಿದರು.&lt;/li&gt; &lt;li&gt;ಬಳಿಕ ಜ್ಞಾನೇಂದ್ರ ಕುಮಾರ್ ಅವರ ಎದುರು ಮನೆಯ ವ್ಯಕ್ತಿಯ ಬಳಿ ಬಾಗಿಲು ತೆಗೆಯುವಾಗ &lsquo;ಸಾಕ್ಷಿ&rsquo;ಯಾಗುವಂತೆ ಅಧಿಕಾರಿಗಳು ಮನವಿ ಮಾಡಿದರು. ಆದರೆ ಆ ವ್ಯಕ್ತಿ ತಾನು ಸಾಕ್ಷಿಯಾಗಲು ಸಾಧ್ಯವಿಲ್ಲ ಎಂದು ನೇರವಾಗಿ ನಿರಾಕರಿಸಿದರು.&lt;/li&gt; &lt;li&gt;ನಂತರ ಮತ್ತೊಂದು ಮನೆಯವರ ಜೊತೆ ಮಾತನಾಡಿದಾಗ, ಪಕ್ಕದ ಮನೆಯ ಓರ್ವ ವ್ಯಕ್ತಿ ಅಧಿಕೃತ ಸಾಕ್ಷಿಯಾಗಲು ಒಪ್ಪಿಕೊಂಡರು.&lt;/li&gt;&lt;/ul&gt;&lt;img&gt;&lt;p&gt;&lt;strong&gt;ವೈಯಾಲಿಕಾವಲ್&zwnj;ನಿಂದ ಕೀ ಮೇಕರ್ ಕರೆಸಿದ ಇಡಿ: ಬಾಗಿಲು ಓಪನ್&lt;/strong&gt;&lt;/p&gt;&lt;p&gt;ಬೀಗ ಒಡೆಯುವ ಬದಲು ಹೊಸ ಕೀ ತಯಾರಿಸಲು ನಿರ್ಧರಿಸಿದ ಅಧಿಕಾರಿಗಳು, ಸಮೀಪದ ವೈಯಾಲಿಕಾವಲ್&zwnj;ನಿಂದ ನುರಿತ &lsquo;ಕೀ ಮೇಕರ್&rsquo; (Key Maker) ಒಬ್ಬರನ್ನು ಸ್ಥಳಕ್ಕೆ ಕರೆಸಿದರು. ಕೀ ಮೇಕರ್ ಮೂಲಕ ಬಾಗಿಲಿನ ಲಾಕ್ ಓಪನ್ ಮಾಡಿಸಿ, ಸಾಕ್ಷಿಗಳ ಸಮ್ಮುಖದಲ್ಲಿ ಅಧಿಕಾರಿಗಳ ತಂಡ ಫ್ಲ್ಯಾಟ್&zwnj;ನೊಳಗೆ ಪ್ರವೇಶಿಸಿತು.&lt;/p&gt;&lt;img&gt;&lt;p&gt;ಸ್ಕ್ಯಾನರ್, ಪ್ರಿಂಟರ್ ಹಿಡಿದು ಒಳನುಗ್ಗಿದ ಅಧಿಕಾರಿಗಳು!&lt;/p&gt;&lt;p&gt;ಫ್ಲ್ಯಾಟ್ ಒಳಗೆ ಪ್ರವೇಶಿಸಿದ ಬೆನ್ನಲ್ಲೇ ಅಧಿಕಾರಿಗಳು ತಮ್ಮೊಂದಿಗೆ ಪ್ರಿಂಟರ್ ಹಾಗೂ ಸ್ಕ್ಯಾನರ್&zwnj;ಗಳನ್ನು ಒಳಗೆ ಕೊಂಡೊಯ್ದಿದ್ದಾರೆ. ಮನೆಯ ಪ್ರತಿಯೊಂದು ಕೊಠಡಿ, ಕಪಾಟುಗಳನ್ನು ಜಾಲಾಡಲಾಗುತ್ತಿದ್ದು, ಪಶು ವೈದ್ಯಕೀಯ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಕಡತಗಳು, ಅಕ್ರಮ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಭರದಿಂದ ಸಾಗಿದೆ. ನಾಪತ್ತೆಯಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಪತ್ತೆಗೂ ಶೋಧ ತೀವ್ರಗೊಂಡಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/kpsc-veterinary-exam-scam-ed-raid-ias-officer-gyanendra-kumar-home-jayamahal-bengaluru-igfucl2"/>
        </item>
        <item>
            <title><![CDATA[KPSC ಪಶು ವೈದ್ಯಾಧಿಕಾರಿ ಮಾತ್ರವಲ್ಲ, 3 ವರ್ಷಗಳಲ್ಲಿ ನಡೆದ 4 ಪ್ರಮುಖ ಪರೀಕ್ಷೆಗಳ ತನಿಖೆಗೆ ಇಳಿದ ಸಿಐಡಿ ಮತ್ತು ಇಡಿ!]]></title>
            <link>https://kannada.asianetnews.com/state/kpsc-recruitment-scam-cid-ed-probe-four-exams-omr-tampering/articleshow-kc43nhg</link>
            <guid isPermaLink="true">https://kannada.asianetnews.com/state/kpsc-recruitment-scam-cid-ed-probe-four-exams-omr-tampering/articleshow-kc43nhg</guid>
            <pubDate>Sat, 29 Aug 2026 08:41:19 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ನಾಲ್ಕು ಪ್ರಮುಖ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಐಡಿ ಮತ್ತು ಇಡಿ ತನಿಖೆ ತೀವ್ರಗೊಳಿಸಿವೆ. ಓಎಂಆರ್ ಶೀಟ್ ತಿದ್ದುಪಡಿ ಆರೋಪದ ಮೇಲೆ ಮೂಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್&zwnj;ಸಿ ಅಧ್ಯಕ್ಷರ ವಿರುದ್ಧ ಎಫ್&zwnj;ಐಆರ್&zwnj; ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09p3cx5t9cytr3wjbag2zc1,imgname-kpsc-ed-raid-shivashankarappa-sahukar-1787031565221.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.29): ಕ&lt;/strong&gt;ರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಹಾಗೂ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಆಯೋಗ ನಡೆಸಿದ ನಾಲ್ಕು ಪ್ರಮುಖ ನೇಮಕಾತಿ ಪರೀಕ್ಷೆಗಳ ಸಮಗ್ರ ದಾಖಲೆಗಳನ್ನು ಕಲೆಹಾಕಿ ತನಿಖೆ ಆರಂಭಿಸಲಾಗಿದೆ.&lt;/p&gt;&lt;h2&gt;&lt;strong&gt;ತನಿಖೆಯ ವ್ಯಾಪ್ತಿಯಲ್ಲಿರುವ 4 ಪರೀಕ್ಷೆಗಳು:&lt;/strong&gt;&lt;/h2&gt;&lt;ul&gt; &lt;li&gt;ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ&lt;/li&gt; &lt;li&gt;ಪಂಚಾಯತ್ ಅಭಿವೃದ್ಧಿ ಇಲಾಖೆ&lt;/li&gt; &lt;li&gt;ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ&lt;/li&gt; &lt;li&gt;ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ&lt;/li&gt;&lt;/ul&gt;&lt;h2&gt;&lt;strong&gt;ಓಎಂಆರ್ ಶೀಟ್ ತಿದ್ದುಪಡಿ ಆರೋಪ:&lt;/strong&gt;&lt;/h2&gt;&lt;p&gt;ಈ ನಾಲ್ಕೂ ಪರೀಕ್ಷೆಗಳ ಸಂದರ್ಭದಲ್ಲಿ ಓಎಂಆರ್ (OMR) ಶೀಟ್&zwnj;ಗಳನ್ನು ತಿದ್ದುಪಡಿ ಮಾಡಿರುವ ಹಾಗೂ ಪ್ರಶ್ನೆಪತ್ರಿಕೆ ವಿತರಣೆ ವೇಳೆ ವ್ಯವಸ್ಥಿತ ಲೋಪವೆಸಗಿರುವುದು ತನಿಖೆಯಲ್ಲಿ ಶಂಕಿಸಲಾಗಿದೆ. ಈ ಹಿಂದೆ ಈ ಅಕ್ರಮದ ಬಗ್ಗೆ ಆಯೋಗದ ಹಂತದಲ್ಲೇ ಸಣ್ಣಪುಟ್ಟ ಶಿಸ್ತುಕ್ರಮ ಕೈಗೊಂಡು ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.&lt;/p&gt;&lt;p&gt;ಇದೀಗ ಸಿಐಡಿ ಅಧಿಕಾರಿಗಳು ನಾಲ್ಕೂ ಪರೀಕ್ಷೆಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳು, ಪರೀಕ್ಷಾರ್ಥಿಗಳ ವಿವರ ಮತ್ತು ಅಂಕಪಟ್ಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್ಥಿಕ ಅಕ್ರಮದ ಜಾಡು ಹಿಡಿದು ಇ.ಡಿ ಕೂಡ ಮಾಹಿತಿ ಸಂಗ್ರಹಿಸುತ್ತಿದ್ದು, ನೇಮಕಾತಿ ಜಾಲದಲ್ಲಿದ್ದ ಕಿಂಗ್&zwnj;ಪಿನ್&zwnj;ಗಳಿಗೆ ಕಾನೂನಿನ ಸಂಕೋಲೆ ಬಿಗಿಯಾಗುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಪಶು ವೈದ್ಯಕೀಯ ಹಗರಣದ ತನಿಖೆ ಏನಾಯ್ತು?&lt;/strong&gt;&lt;/h2&gt;&lt;p&gt;ಕೆಪಿಎಸ್&zwnj;ಸಿ ನಡೆಸಿದ್ದ ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವಜನಪಕ್ಷಪಾತ ಆರೋಪ ಸಂಬಂಧ ಈಗಾಗಲೇ ಅಮಾನತಾಗಿರುವ ಕೆಪಿಎಸ್&zwnj;ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್&zwnj;, ಕೆಪಿಎಸ್&zwnj;ಸಿ ಸದಸ್ಯರು, ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್&zwnj; ಠಾಣೆಯಲ್ಲಿ ಎಫ್&zwnj;ಐಆರ್&zwnj; ದಾಖಲಾಗಿದೆ. ಕೆಪಿಎಸ್&zwnj;ಸಿಯು 2026ರ ಜುಲೈ 17ರಂದು ಪಶು ವೈದ್ಯಾಧಿಕಾರಿಗಳ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಕೆಪಿಎಸ್&zwnj;ಸಿಯ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಸಂಬಂಧಿ ಅಭ್ಯರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತೀರ್ಣ ಹೊಂದಿದ್ದಾರೆ. ಕೆಪಿಎಸ್&zwnj;ಸಿಯು ಪಶುವೈದ್ಯಾಧಿಕಾರಿಗಳ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ, ಪದವಿಯಲ್ಲಿ ಚಿನ್ನದ ಪದಕ ಪಡೆದ ಅಭ್ಯರ್ಥಿಗಳು, ಯುಪಿಎಸ್&zwnj;ಸಿ ನಡೆಸುವ ಐಎಫ್ಎಸ್ ಪರೀಕ್ಷೆಯಲ್ಲಿ ಉತೀರ್ಣರಾದ ಅಭ್ಯರ್ಥಿಗಳು 350 ಅಂಕಗಳನ್ನೂ ಪಡೆಯಲು ವಿಫಲರಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೆಪಿಎಸ್&zwnj;ಸಿ ಅಧ್ಯಕ್ಷ ಶಿವಶಂಕರಪ್ಪ ಹಾಗೂ ಐಎಎಸ್ ಅಧಿಕಾರಿ ಜ್ನಾನೇಂದ್ರ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kpsc-recruitment-scam-cid-ed-probe-four-exams-omr-tampering/articleshow-kc43nhg"/>
        </item>
        <item>
            <title><![CDATA[KEA ನೇಮಕಾತಿ 2026: ಫಾರ್ಮಸಿ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ]]></title>
            <link>https://kannada.asianetnews.com/jobs/kea-recruitment-2026-apply-online-for-233-pharmacy-and-nursing-officer-posts-gdp/articleshow-nq2tq9k</link>
            <guid isPermaLink="true">https://kannada.asianetnews.com/jobs/kea-recruitment-2026-apply-online-for-233-pharmacy-and-nursing-officer-posts-gdp/articleshow-nq2tq9k</guid>
            <pubDate>Tue, 11 Aug 2026 12:25:40 +0530</pubDate>
            <description><![CDATA[ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ ಒಟ್ಟು 233 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಲೇಖನವು ಹುದ್ದೆಗಳ ವಿವರ, ಅರ್ಹತಾ ಮಾನದಂಡಗಳು, ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kaj48a9ywbb8d8v1wj8vybp1,imgname-----------------------2025-11-21t080448.839-1763692521790.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಆನ್&zwnj;ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.&lt;/p&gt;&lt;h2&gt;ಹುದ್ದೆಗಳ ವಿವರ&lt;/h2&gt;&lt;p&gt;ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ&lt;/p&gt;&lt;p&gt;ಒಟ್ಟು ಹುದ್ದೆಗಳು: 233&lt;/p&gt;&lt;p&gt;ಹುದ್ದೆಗಳ ಹೆಸರು: ಫಾರ್ಮಸಿ ಆಫೀಸರ್, ನರ್ಸಿಂಗ್ ಆಫೀಸರ್&lt;/p&gt;&lt;p&gt;ಉದ್ಯೋಗ ಸ್ಥಳ: ಕರ್ನಾಟಕ&lt;/p&gt;&lt;p&gt;ವೇತನ ಶ್ರೇಣಿ: ತಿಂಗಳಿಗೆ ₹44,425 ರಿಂದ ₹99,400&lt;/p&gt;&lt;h3&gt;ವಿಭಾಗವಾರು ಹುದ್ದೆಗಳ ವಿವರಣೆ&lt;/h3&gt;&lt;p&gt;ಫಾರ್ಮಸಿ ಆಫೀಸರ್ಸ್ ಉಳಿಕೆ ಮೂಲ ವೃಂದ (RPC)98&lt;/p&gt;&lt;p&gt;ನರ್ಸಿಂಗ್ ಆಫೀಸರ್ಸ್ ಉಳಿ ಮೂಲ ವೃಂದ (RPC)90&lt;/p&gt;&lt;p&gt;ಫಾರ್ಮಸಿ ಆಫೀಸರ್ಸ್ ಕಲ್ಯಾಣ ಕರ್ನಾಟಕ (KK)11&lt;/p&gt;&lt;p&gt;ನರ್ಸಿಂಗ್ ಆಫೀಸರ್ಸ್ ಕಲ್ಯಾಣ ಕರ್ನಾಟಕ (KK)34&lt;/p&gt;&lt;h2&gt;ಅರ್ಹತಾ ಮಾನದಂಡಗಳು&lt;/h2&gt;&lt;h3&gt;ಶೈಕ್ಷಣಿಕ ಅರ್ಹತೆ:&lt;/h3&gt;&lt;p&gt;ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಪಿಯುಸಿ (12ನೇ), ಜಿಎನ್&zwnj;ಎಂ (GNM), ಬಿ.ಎಸ್ಸಿ ನರ್ಸಿಂಗ್ (B.Sc Nursing) ಅಥವಾ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;ವಯೋಮಿತಿ:&lt;/h2&gt;&lt;p&gt;ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷಗಳು.&lt;/p&gt;&lt;h3&gt;ವಯೋಮಿತಿ ಸಡಿಲಿಕೆ:&lt;/h3&gt;&lt;p&gt;ಪ್ರವರ್ಗ 2A, 2B, 3A, 3B: 3 ವರ್ಷಗಳು&lt;/p&gt;&lt;p&gt;SC / ST / ಪ್ರವರ್ಗ-1: 5 ವರ್ಷಗಳು&lt;/p&gt;&lt;h3&gt;ಅರ್ಜಿ ಶುಲ್ಕ ವಿವರ&lt;/h3&gt;&lt;p&gt;SC / ST / ಪ್ರವರ್ಗ-1 / ಮಾಜಿ ಸೈನಿಕರು: ₹500&lt;/p&gt;&lt;p&gt;ವಿಕಲಚೇತನ (PH) ಅಭ್ಯರ್ಥಿಗಳು: ₹250&lt;/p&gt;&lt;p&gt;ಇತರ ಎಲ್ಲಾ ವರ್ಗದ ಅಭ್ಯರ್ಥಿಗಳು: ₹750&lt;/p&gt;&lt;p&gt;ಪಾವತಿ ವಿಧಾನ: ಆನ್&zwnj;ಲೈನ್ ಮೂಲಕ ಮಾತ್ರ&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ&lt;/h2&gt;&lt;p&gt;ಸ್ಪರ್ಧಾತ್ಮಕ/ಲಿಖಿತ ಪರೀಕ್ಷೆ&lt;/p&gt;&lt;p&gt;ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನ&lt;/p&gt;&lt;h2&gt;ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸುವ ವಿಧಾನ&lt;/h2&gt;&lt;ul&gt; &lt;li&gt;ಅರ್ಜಿ ಸಲ್ಲಿಸುವ ಮುನ್ನ KEA ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ಸಕ್ರಿಯವಾಗಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ಸಿದ್ಧವಿಟ್ಟುಕೊಳ್ಳಿ.&lt;/li&gt; &lt;li&gt;ಗುರುತಿನ ಚೀಟಿ, ವಯಸ್ಸಿನ ಪುರಾವೆ, ಶೈಕ್ಷಣಿಕ ಅಂಕಪಟ್ಟಿಗಳು, ಅನುಭವ ಪ್ರಮಾಣಪತ್ರ (ಇದ್ದಲ್ಲಿ) ಮತ್ತು ಇತ್ತೀಚಿನ ಭಾವಚಿತ್ರದ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ರೆಡಿ ಇಟ್ಟುಕೊಳ್ಳಿ.&lt;/li&gt; &lt;li&gt;KEA ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ, ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.&lt;/li&gt; &lt;li&gt;ನಿಮ್ಮ ವರ್ಗಕ್ಕೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಆನ್&zwnj;ಲೈನ್ ಮೂಲಕ ಪಾವತಿಸಿ.&lt;/li&gt; &lt;li&gt;ಅರ್ಜಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.&lt;/li&gt;&lt;/ul&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 07 ಆಗಸ್ಟ್ 2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಆಗಸ್ಟ್ 2026&lt;/p&gt;&lt;p&gt;ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/kea-recruitment-2026-apply-online-for-233-pharmacy-and-nursing-officer-posts-gdp/articleshow-nq2tq9k"/>
        </item>
        <item>
            <title><![CDATA[Police: ಕನ್ನಡ ಪರೀಕ್ಷೆ ಬರೆಯದಿದ್ದರೂ ಸಿಗುತ್ತಾ ಸಿವಿಲ್ ಪೊಲೀಸ್ ಕೆಲಸ?  ಯಾರಿಗೆ ಅನ್ವಯಿಸುತ್ತೆ ಈ ರೂಲ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!]]></title>
            <link>https://kannada.asianetnews.com/state-government-jobs/karnataka-civil-police-constable-recruitment-kannada-language-exam-exemption-rules-bmk/articleshow-p3q0acr</link>
            <guid isPermaLink="true">https://kannada.asianetnews.com/state-government-jobs/karnataka-civil-police-constable-recruitment-kannada-language-exam-exemption-rules-bmk/articleshow-p3q0acr</guid>
            <pubDate>Sat, 11 Jul 2026 16:02:26 +0530</pubDate>
            <description><![CDATA[&lt;p&gt;ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದ್ದರೂ, ಈಗಾಗಲೇ ಶಾಲಾ-ಕಾಲೇಜು ಹಂತದಲ್ಲಿ ಕನ್ನಡ ಕಲಿತವರಿಗೆ ಮತ್ತೊಮ್ಮೆ ಪರೀಕ್ಷೆ ಬರೆವ ಹೊರೆಯಿಂದ ಮುಕ್ತಿ ನೀಡಲು ಈ ಮಹತ್ವದ ರೂಲ್ ಜಾರಿಗೆ ತರಲಾಗಿದೆ. ಈ ನಿಯಮ ಯಾರಿಗೆಲ್ಲ ಅನ್ವಯಿಸುತ್ತದೆ ಮತ್ತು ವಿನಾಯಿತಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01fq6eb7qkj65j3y12nbcbx83r,imgname-ksp-recruitment.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದ್ದರೂ, ಈಗಾಗಲೇ ಶಾಲಾ-ಕಾಲೇಜು ಹಂತದಲ್ಲಿ ಕನ್ನಡ ಕಲಿತವರಿಗೆ ಮತ್ತೊಮ್ಮೆ ಪರೀಕ್ಷೆ ಬರೆವ ಹೊರೆಯಿಂದ ಮುಕ್ತಿ ನೀಡಲು ಈ ಮಹತ್ವದ ರೂಲ್ ಜಾರಿಗೆ ತರಲಾಗಿದೆ. ಈ ನಿಯಮ ಯಾರಿಗೆಲ್ಲ ಅನ್ವಯಿಸುತ್ತದೆ ಮತ್ತು ವಿನಾಯಿತಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.&lt;/p&gt;&lt;h2&gt;&lt;strong&gt;ಕನ್ನಡ ಪರೀಕ್ಷೆಯಿಂದ ಯಾರಿಗೆ ಸಿಗಲಿದೆ ವಿನಾಯಿತಿ?&lt;/strong&gt;&lt;/h2&gt;&lt;p&gt;ಕರ್ನಾಟಕ ನಾಗರಿಕ ಸೇವಾ ನಿಯಮಗಳ ತಿದ್ದುಪಡಿ ಅನ್ವಯ, ಈ ಕೆಳಗಿನ ಅರ್ಹತೆ ಹೊಂದಿರುವ ಸಿವಿಲ್ ಪೊಲೀಸ್ ಅಭ್ಯರ್ಥಿಗಳಿಗೆ ಮಾತ್ರ ಕಡ್ಡಾಯ ಕನ್ನಡ ಪರೀಕ್ಷೆಯಿಂದ ಸಂಪೂರ್ಣ ವಿನಾಯಿತಿ ಇರುತ್ತದೆ. ಪ್ರಥಮ/ದ್ವಿತೀಯ ಭಾಷೆ ಕನ್ನಡ: ಎಸ್&zwnj;ಎಸ್&zwnj;ಎಲ್&zwnj;ಸಿ (SSLC) ಅಥವಾ ಅದಕ್ಕಿಂತ ಉನ್ನತ ಮಟ್ಟದ (ಪಿಯುಸಿ, ಪದವಿ) ಪರೀಕ್ಷೆಗಳಲ್ಲಿ ಕನ್ನಡವನ್ನು ಮೊದಲ ಅಥವಾ ಎರಡನೇ ಭಾಷೆಯಾಗಿ (First or Second Language) ಅಭ್ಯಸಿಸಿ ಉತ್ತೀರ್ಣರಾಗಿರಬೇಕು.&lt;/p&gt;&lt;h3&gt;&lt;strong&gt;ಕನ್ನಡ ಮಾಧ್ಯಮ ಅಭ್ಯರ್ಥಿಗಳು!&lt;/strong&gt;&lt;/h3&gt;&lt;p&gt;ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಪರೀಕ್ಷೆ ಪಾಸ್ ಮಾಡಿದವರಿಗೆ ಈ ವಿನಾಯಿತಿ ಅನ್ವಯಿಸುತ್ತದೆ. ಕರ್ನಾಟಕ ಲೋಕಸೇವಾ ಆಯೋಗ ಅಥವಾ ಇಲಾಖೆಯ ಇತರೆ ಯಾವುದೇ ಆಯ್ಕೆ ಪ್ರಾಧಿಕಾರಗಳು ಈ ಹಿಂದೆ ನಡೆಸಿದ್ದ 'ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ'ಯಲ್ಲಿ ಈಗಾಗಲೇ ಪಾಸ್ ಆಗಿ ಪ್ರಮಾಣಪತ್ರ ಹೊಂದಿದ್ದರೆ, ಅವರು ಮತ್ತೊಮ್ಮೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ.&lt;/p&gt;&lt;h3&gt;&lt;strong&gt;ಪರೀಕ್ಷೆ ಯಾರಿಗೆ ಕಡ್ಡಾಯ?&lt;/strong&gt;&lt;/h3&gt;&lt;p&gt;ಯಾರು ತಮ್ಮ ಶಾಲಾ ದಿನಗಳಲ್ಲಿ ಕನ್ನಡವನ್ನು ಕೇವಲ ತೃತೀಯ ಭಾಷೆಯಾಗಿ ಓದಿದ್ದಾರೋ ಅಥವಾ ಇಂಗ್ಲಿಷ್/ಇತರ ಮಾಧ್ಯಮದಲ್ಲಿ ಓದಿ ಕನ್ನಡವನ್ನು ಒಂದು ವಿಷಯವಾಗಿ ತೆಗೆದುಕೊಳ್ಳದ ಹೊರ ರಾಜ್ಯದ ಅಥವಾ ಸಿಬಿಎಸ್&zwnj;ಇ/ಐಸಿಎಸ್&zwnj;ಇ ವಿದ್ಯಾರ್ಥಿಗಳಿದ್ದಾರೋ, ಅಂತವರು ಕಡ್ಡಾಯವಾಗಿ ಈ ಪರೀಕ್ಷೆ ಬರೆಯಬೇಕು.&lt;/p&gt;&lt;h3&gt;&lt;strong&gt;ಹೇಗಿರುತ್ತದೆ ಪರೀಕ್ಷೆ!&lt;/strong&gt;&lt;/h3&gt;&lt;p&gt;ಈ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಒಟ್ಟು 150 ಅಂಕಗಳ ಬಹು ಆಯ್ಕೆ ಮಾದರಿಯ (MCQ) ಪ್ರಶ್ನೆಪತ್ರಿಕೆ ಹೊಂದಿರುತ್ತದೆ. ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಹುದ್ದೆಗೆ ಅರ್ಹತೆ ಪಡೆಯಲು ಕನಿಷ್ಠ 50 ಅಂಕಗಳನ್ನು ಗಳಿಸಲೇಬೇಕು.&lt;/p&gt;&lt;h3&gt;&lt;strong&gt;ಗಮನಿಸಬೇಕಾದ ಅಂಶವೇನು?&lt;/strong&gt;&lt;/h3&gt;&lt;p&gt;ಇದರಲ್ಲಿ ಪಡೆದ ಅಂಕಗಳನ್ನು ಅಂತಿಮ ಮೆರಿಟ್ ಅಥವಾ ಶ್ರೇಯಾಂಕ ಪಟ್ಟಿ ಸಿದ್ಧಪಡಿಸಲು ಪರಿಗಣಿಸುವುದಿಲ್ಲ. ಇದು ಕೇವಲ ಅರ್ಹತಾ ಪರೀಕ್ಷೆಯಷ್ಟೇ ಆಗಿರುತ್ತದೆ. ಆದರೆ ಇದರಲ್ಲಿ ಫೇಲ್ ಆದರೆ ಅಥವಾ ಗೈರಾದರೆ ನೇಮಕಾತಿ ಪ್ರಕ್ರಿಯೆಯಿಂದಲೇ ಹೊರಬೀಳಬೇಕಾಗುತ್ತದೆ.&lt;/p&gt;&lt;p&gt;&lt;strong&gt;ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?&lt;/strong&gt;&lt;/p&gt;&lt;p&gt;ಸಿವಿಲ್ ಪೊಲೀಸ್ ಕಾನ್&zwnj;ಸ್ಟೆಬಲ್ ಹುದ್ದೆಗಳ ಅಂತಿಮ ಆಯ್ಕೆಯು ಸಂಪೂರ್ಣವಾಗಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆಯ ಮೆರಿಟ್ ಆಧಾರದ ಮೇಲೆ ನಡೆಯುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜುಲೈ ತಿಂಗಳಲ್ಲೇ ಕನ್ನಡ ಭಾಷಾ ಪರೀಕ್ಷೆ ನಿಗದಿಯಾಗಿದ್ದು, ಆಗಸ್ಟ್&zwnj;ನಲ್ಲಿ ಮುಖ್ಯ ಲಿಖಿತ ಪರೀಕ್ಷೆ ನಡೆಯಲಿದೆ.&lt;/p&gt;&lt;h3&gt;&lt;strong&gt;ಮಾಹಿತಿಗಾಗಿ ಏನು ನೋಡಬೇಕು?&lt;/strong&gt;&lt;/h3&gt;&lt;p&gt;ಅರ್ಹ ಅಭ್ಯರ್ಥಿಗಳು ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣವಾದ ಕೆಇಎ ಪೋರ್ಟಲ್ ಅಥವಾ ಪೊಲೀಸ್ ನೇಮಕಾತಿ ಪೋರ್ಟಲ್ KSP Recruitmentಗೆ ಭೇಟಿ ನೀಡಬಹುದು. ನಿಮ್ಮ ಎಸ್&zwnj;ಎಸ್&zwnj;ಎಲ್&zwnj;ಸಿ ಅಂಕಪಟ್ಟಿಯಲ್ಲಿ ಕನ್ನಡ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿದ್ದರೆ, ನೀವು ಯಾವುದೇ ಆತಂಕವಿಲ್ಲದೆ ನೇರವಾಗಿ ಮುಖ್ಯ ಲಿಖಿತ ಪರೀಕ್ಷೆಯ ತಯಾರಿಯತ್ತ ಗಮನ ಹರಿಸಬಹುದು.&lt;/p&gt;]]></content:encoded>
            <category>state-government-jobs</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state-government-jobs/karnataka-civil-police-constable-recruitment-kannada-language-exam-exemption-rules-bmk/articleshow-p3q0acr"/>
        </item>
        <item>
            <title><![CDATA[ರಾಜ್ಯ ಸರ್ಕಾರದ 15,000 ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್ ನಕಾರ]]></title>
            <link>https://kannada.asianetnews.com/state-government-jobs/karnataka-high-court-refuses-stay-15000-teachers-recruitment-urdu-schools-petition/articleshow-swmv7xc</link>
            <guid isPermaLink="true">https://kannada.asianetnews.com/state-government-jobs/karnataka-high-court-refuses-stay-15000-teachers-recruitment-urdu-schools-petition/articleshow-swmv7xc</guid>
            <pubDate>Thu, 27 Aug 2026 11:46:24 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್&zwnj; ನಿರಾಕರಿಸಿದೆ. ಉರ್ದು ಮಾಧ್ಯಮ ಶಾಲೆಗಳನ್ನು ನೇಮಕಾತಿಯಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿದ್ದು, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10xnzwd9ypp5ajjqcf1gs85,imgname-karnataka-teachers-recruitment-1787811266445.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.27): ರಾ&lt;/strong&gt;ಜ್ಯ ಸರ್ಕಾರ ಸುಮಾರು 15 ಸಾವಿರ ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್&zwnj; ನಿರಾಕರಿಸಿದೆ.&lt;/p&gt;&lt;p&gt;ಆ.11ರಂದು ಸರ್ಕಾರ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಪ್ರಶ್ನಿಸಿ ಹುಬ್ಬಳ್ಳಿಯ ಉರ್ದು ಭಾಷಾ ಶಿಕ್ಷಕಿ ಅಸ್ಮಾ ಘೋರಿ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠ ಈ ನಿರ್ದೇಶನ ನೀಡಿದೆ.&lt;/p&gt;&lt;p&gt;ಕನ್ನಡ ಅಥವಾ ಇಂಗ್ಲಿಷ್&zwnj; ಬೋಧನಾ ಮಾಧ್ಯಮವಾಗಿರುವ ಶಾಲೆಗಳಲ್ಲಿ ಕೆಲವು ಖಾಲಿ ಹುದ್ದೆಗಳಿವೆ ಎಂದು ತೋರುತ್ತದೆ. ಸರ್ಕಾರ ಆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ಉರ್ದು ಶಾಲೆಗಳಲ್ಲಿ ನೇಮಕಾತಿ ಏಕೆ ನಡೆಯುತ್ತಿಲ್ಲ ಎಂಬುದು ಕಾನೂನು ಬದ್ಧ ಪ್ರಶ್ನೆ ಹಾಗಾಗಿ, ಉರ್ದು ಮಾಧ್ಯಮ ಶಾಲೆಗಳು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಆಯ್ಕೆ ಪ್ರಕ್ರಿಯೆಯನ್ನು ಏಕೆ ಕೈಗೊಂಡಿಲ್ಲ ಎಂಬುದರ ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದ ಪೀಠ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದೆ.&lt;/p&gt;&lt;h2&gt;&lt;strong&gt;ನೇಮಕಾತಿಯಿಂದ ಹೊರಗುಳಿದ ಉರ್ದು ಮಾಧ್ಯಮ ಶಾಲೆಗಳು&lt;/strong&gt;&lt;/h2&gt;&lt;p&gt;ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರದ ನೇಮಕಾತಿ ಅಧಿಸೂಚನೆಯು ಉರ್ದು ಮಾಧ್ಯಮ ಶಾಲೆಗಳನ್ನು ಸಂಪೂರ್ಣವಾಗಿ ಹೊರಗಿಟ್ಟಿದೆ. ಇದು ಕರ್ನಾಟಕ ಶಿಕ್ಷ ಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷ ಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026 ಮತ್ತು 19, 21, 29(1) ಮತ್ತು 350ಅ ವಿಧಿಗಳ ಉಲ್ಲಂಘನೆ ಎಂದು ವಾದಿಸಿದರು. ಅರ್ಜಿದಾರರ ಈ ಮನವಿ ತಳ್ಳಿಹಾಕಿದ ನ್ಯಾಯಾಲಯ, ಈ ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದಿತು.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/karnataka-high-court-refuses-stay-15000-teachers-recruitment-urdu-schools-petition/articleshow-swmv7xc"/>
        </item>
        <item>
            <title><![CDATA[ಕಾನ್‌ಸ್ಟೇಬಲ್‌ ನೇಮಕಾತಿಗೆ ಮರುಪರೀಕ್ಷೆ..? ನಿನ್ನೆ ಪರೀಕ್ಷೆ ಬರೆದವರಿಗೆ ಶುರುವಾಯ್ತು ಗೊಂದಲ]]></title>
            <link>https://kannada.asianetnews.com/vijayapura/will-the-police-constable-re-exam-be-held-again-in-karnataka-protest-in-vijayapura-gkn/articleshow-v6wzdhg</link>
            <guid isPermaLink="true">https://kannada.asianetnews.com/vijayapura/will-the-police-constable-re-exam-be-held-again-in-karnataka-protest-in-vijayapura-gkn/articleshow-v6wzdhg</guid>
            <pubDate>Mon, 03 Aug 2026 12:53:59 +0530</pubDate>
            <description><![CDATA[ಸಿವಿಲ್ ಪೊಲೀಸ್ ಕಾನ್&zwnj;ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಒಎಂಆರ್ ಶೀಟ್ ಗೊಂದಲದ ವದಂತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಳ್ಳಿಹಾಕಿದ್ದು, ಅಭ್ಯರ್ಥಿಗಳಲ್ಲಿ ಮರುಪರೀಕ್ಷೆಯ ಬಗ್ಗೆ ಆತಂಕ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz382kddrfcjvphdfr00yhcd,imgname-vijayapura-abvp-protest-1785741790637.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ/ಬೆಂಗಳೂರು: &lt;/strong&gt;ನಿನ್ನೆಯಷ್ಟೇ ನಡೆದ ಸಿವಿಲ್ ಪೊಲೀಸ್ ಕಾನ್&zwnj;ಸ್ಟೇಬಲ್ (CPC) ನೇಮಕಾತಿ ಪರೀಕ್ಷೆಯ ಸುತ್ತ ಗೊಂದಲದ ಮೋಡಗಳು ಕವಿದಿವೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ವ್ಯಕ್ತವಾಗಿದ್ದರೆ, ಅತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದೆ. ಈ ನಡುವೆ ಅಭ್ಯರ್ಥಿಗಳಲ್ಲಿ ಮರುಪರೀಕ್ಷೆ ನಡೆಯುತ್ತಾ? ಎಂಬ ಆತಂಕ ಮನೆಮಾಡಿದೆ.&lt;/p&gt;&lt;h2&gt;&lt;strong&gt;ವಿಜಯಪುರದಲ್ಲಿ ಎಬಿವಿಪಿ ಕಿಚ್ಚು&lt;/strong&gt;&lt;/h2&gt;&lt;p&gt;ಪರೀಕ್ಷೆ ವೇಳೆ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಎಬಿವಿಪಿ (ABVP) ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ಚೌಕ್&zwnj;ನಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಕೂಡಲೇ ಮರುಪರೀಕ್ಷೆ ನಡೆಸಬೇಕು ಎಂದು ಪಟ್ಟು ಹಿಡಿದರು.&lt;/p&gt;&lt;p&gt;ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರೀ ವಾಗ್ವಾದ ಹಾಗೂ ಜಟಾಪಟಿ ನಡೆಯಿತು. ಸರ್ಕಾರದ ವಿರುದ್ಧ ಪೋಸ್ಟರ್ ಪ್ರದರ್ಶಿಸಲು ಮುಂದಾದ ಯುವಕರ ಕೈಯಲ್ಲಿದ್ದ ಪೋಸ್ಟರ್&zwnj;ಗಳನ್ನು ಪೊಲೀಸರು ಕಸಿದುಕೊಂಡರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು 10ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ವ್ಯಾನ್&zwnj;ಗೆ ಹತ್ತಿಸಲು ಹರಸಾಹಸ ಪಡಬೇಕಾಯಿತು.&lt;/p&gt;&lt;h2&gt;&lt;strong&gt;ಪ್ರಶ್ನೆ ಪತ್ರಿಕೆ ಲೀಕ್ ವದಂತಿಗೆ ಕೆಇಎ ಬ್ರೇಕ್&lt;/strong&gt;&lt;/h2&gt;&lt;p&gt;ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಒಎಂಆರ್ (OMR) ಶೀಟ್ ಗೊಂದಲಕ್ಕೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಯಲ್ಲಿ ಒಎಂಆರ್ ಶೀಟ್ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಇರಬೇಕು ಎಂಬ ನಿಯಮವಿಲ್ಲ. ಸೀರಿಯಲ್ ನಂಬರ್ ಬೇರೆ ಬೇರೆಯಾಗಿರಬಹುದು. ಆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆಯನ್ನು ಒಎಂಆರ್&zwnj;ನಲ್ಲಿ ಪ್ರತ್ಯೇಕವಾಗಿ ನಮೂದಿಸಲು ಅವಕಾಶವಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅಭ್ಯರ್ಥಿಗಳಲ್ಲಿ ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಮರುಪರೀಕ್ಷೆ ನಡೆಯುತ್ತಾ?&lt;/strong&gt;&lt;/h2&gt;&lt;p&gt;ಸದ್ಯದ ಪರಿಸ್ಥಿತಿಯಲ್ಲಿ ಕೆಇಎ ಪರೀಕ್ಷೆಯು ಪಾರದರ್ಶಕವಾಗಿ ನಡೆದಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ವಿಜಯಪುರ ಸೇರಿದಂತೆ ಕೆಲವು ಕೇಂದ್ರಗಳಲ್ಲಿ ನಡೆದಿದೆ ಎನ್ನಲಾದ ತಾಂತ್ರಿಕ ಗೊಂದಲ ಮತ್ತು ಗಲಾಟೆಗಳು ಅಭ್ಯರ್ಥಿಗಳಲ್ಲಿ ಸಂಶಯ ಹುಟ್ಟಿಸಿವೆ. ಪ್ರತಿಭಟನಾಕಾರರು ಮರುಪರೀಕ್ಷೆಗೆ ಪಟ್ಟು ಹಿಡಿದಿದ್ದರೂ, ಸರ್ಕಾರದ ಮಟ್ಟದಲ್ಲಿ ಅಥವಾ ಕೆಇಎ ವತಿಯಿಂದ ಮರುಪರೀಕ್ಷೆಯ ಬಗ್ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ಪರೀಕ್ಷಾ ಪ್ರಾಧಿಕಾರದ ಸ್ಪಷ್ಟನೆಯ ನಂತರವೂ ಅಭ್ಯರ್ಥಿಗಳ ಆಕ್ರೋಶ ತಣ್ಣಗಾಗದಿದ್ದರೆ ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.&lt;/p&gt;]]></content:encoded>
            <category>state-government-jobs</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/vijayapura/will-the-police-constable-re-exam-be-held-again-in-karnataka-protest-in-vijayapura-gkn/articleshow-v6wzdhg"/>
        </item>
        <item>
            <title><![CDATA[ರೋಹಿಣಿ ಸಿಂಧೂರಿ ಕಡತಕ್ಕೆ ಸಿಎಂ ಅಸ್ತು, ವರ್ಷಗಳಿಂದ ಠಿಕಾಣಿ ಹೂಡಿದ್ದ 80% ಗಣಿ ಇಲಾಖೆ ಸಿಬ್ಬಂದಿಗೆ ವರ್ಗಾವಣೆ ಶಾಕ್!]]></title>
            <link>https://kannada.asianetnews.com/state/biggest-administrative-reshuffle-cm-dk-shivakumar-orders-mass-transfer-160-officials-in-karnataka-mining-department-gdp/articleshow-xf5hpwp</link>
            <guid isPermaLink="true">https://kannada.asianetnews.com/state/biggest-administrative-reshuffle-cm-dk-shivakumar-orders-mass-transfer-160-officials-in-karnataka-mining-department-gdp/articleshow-xf5hpwp</guid>
            <pubDate>Mon, 20 Jul 2026 17:11:39 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 'ಮೇಜರ್ ಸರ್ಜರಿ' ಮಾಡಿದ್ದು, ದಶಕಗಳಿಂದ ಒಂದೇ ಸ್ಥಳದಲ್ಲಿದ್ದ ಸುಮಾರು 160 ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಇಲಾಖೆಯ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzn3sx5jnefdn2jyrc5649g,imgname-mining-department-1784547501988.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ದಶಕಗಳಿಂದ ಒಂದೇ ಸ್ಥಳದಲ್ಲಿ ಬೀಡುಬಿಟ್ಟಿದ್ದ ಅಧಿಕಾರಿಗಳ ದರ್ಬಾರ್&zwnj;ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾರಿ ಬ್ರೇಕ್ ಹಾಕಿದ್ದಾರೆ. ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಪುನರ್&zwnj; ವ್ಯವಸ್ಥೆಗೆ ಕೈಹಾಕಿರುವ ಸಿಎಂ, ಒಂದೇ ಸೂಕ್ಷ್ಮ ಹುದ್ದೆಗಳಲ್ಲಿ ಠಿಕಾಣಿ ಹೂಡಿದ್ದ ಸುಮಾರು ಶೇ. 80 ರಷ್ಟು ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವ ಮೂಲಕ ಇಲಾಖೆಗೆ 'ಮೇಜರ್ ಸರ್ಜರಿ' ಮಾಡಿದ್ದಾರೆ.&lt;/p&gt;&lt;p&gt;ಅನಧಿಕೃತ ಗಣಿಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕುವುದು, ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಒಡನಾಟಕ್ಕೆ ಬ್ರೇಕ್ ಹಾಕುವುದು ಮತ್ತು ಇಲಾಖೆಯ ಆದಾಯವನ್ನು ಹೆಚ್ಚಿಸುವ ಜವಾಬ್ದಾರಿಯೊಂದಿಗೆ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ.&lt;/p&gt;&lt;h2&gt;160 ಅಧಿಕಾರಿಗಳ ಬೃಹತ್ ವರ್ಗಾವಣೆ&lt;/h2&gt;&lt;p&gt;ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಆದೇಶದನ್ವಯ ಇಲಾಖೆಯ ವಿವಿಧ ವೃಂದದ ಒಟ್ಟು 160 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೇರೆ ಬೇರೆ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ವರ್ಗಾವಣೆಗೊಂಡವರ ವಿವರ ಈ ಕೆಳಗಿನಂತಿದೆ:&lt;/p&gt;&lt;ul&gt; &lt;li&gt;ಭೂ ವಿಜ್ಞಾನಿಗಳು: 131 ಅಧಿಕಾರಿಗಳು&lt;/li&gt; &lt;li&gt;ಹಿರಿಯ ಭೂ ವಿಜ್ಞಾನಿಗಳು: 23 ಅಧಿಕಾರಿಗಳು&lt;/li&gt; &lt;li&gt;ಉಪನಿರ್ದೇಶಕರು (Deputy Directors): 06 ಅಧಿಕಾರಿಗಳು&lt;/li&gt;&lt;/ul&gt;&lt;p&gt;ದಶಕಗಳ ಕಾಲ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ತಮ್ಮ ಸ್ವಂತ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲೇ ರಾಜಕೀಯ ಪ್ರಭಾವ ಬಳಸಿ ಹುದ್ದೆ ಗಿಟ್ಟಿಸಿಕೊಂಡಿದ್ದ ಅಧಿಕಾರಿಗಳನ್ನು ಈ ಬಾರಿ ಕಡ್ಡಾಯವಾಗಿ ದೂರದ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ.&lt;/p&gt;&lt;h2&gt;ರೋಹಿಣಿ ಸಿಂಧೂರಿ ಸಭೆಯಲ್ಲಿ ಪ್ರಸ್ತಾಪಿಸಿದ್ದ ಕಡತಕ್ಕೆ ಸಿಎಂ ಅಸ್ತು!&lt;/h2&gt;&lt;p&gt;ಜುಲೈ 1 ರಂದು ನಡೆದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸುದೀರ್ಘ ಕಾಲದ ವಾಸ್ತವ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಇಲಾಖೆಯಲ್ಲಿ ಪಾರದರ್ಶಕತೆ ಬರಬೇಕಾದರೆ ತಳಮಟ್ಟದಿಂದ ಬದಲಾವಣೆ ಅಗತ್ಯ ಎಂದು ಅವರು ವಿವರಿಸಿದ್ದರು.&lt;/p&gt;&lt;p&gt;ವಿಷಯದ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸ್ಥಳೀಯ ಪ್ರಭಾವ ಹಾಗೂ ಅಧಿಕಾರಿಗಳ ಶಾಮೀಲಾಗಿರುವಿಕೆಯನ್ನು ಮುರಿಯಲು ತಕ್ಷಣವೇ ವರ್ಗಾವಣೆಯ ಸಮಗ್ರ ಕಡತವನ್ನು ಮಂಡಿಸುವಂತೆ ಸಭೆಯಲ್ಲೇ ರೋಹಿಣಿ ಸಿಂಧೂರಿ ಅವರಿಗೆ ಖಡಕ್ ಸೂಚನೆ ನೀಡಿದ್ದರು. ಸಿಎಂ ಸೂಚನೆ ನೀಡಿದ ಕೆಲವೇ ದಿನಗಳಲ್ಲಿ ಈ ಬೃಹತ್ ಆಡಳಿತಾತ್ಮಕ ಮರುಹಂಚಿಕೆ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದೆ.&lt;/p&gt;&lt;h2&gt;ಸರ್ಕಾರದ ಈ ಕಠಿಣ ಕ್ರಮದ ಹಿಂದಿನ ಪ್ರಮುಖ ಉದ್ದೇಶಗಳು&lt;/h2&gt;&lt;p&gt;ಒಂದೇ ಸ್ಥಳದಲ್ಲಿದ್ದ ಅಧಿಕಾರಿಗಳು ಸ್ಥಳೀಯ ಅಕ್ರಮ ಗಣಿಗಾರಿಕೆ ದಂಧೆಕೋರರೊಂದಿಗೆ ಶಾಮೀಲಾಗುವುದನ್ನು ತಡೆಯುವುದು. ರಾಜಕೀಯ ಮತ್ತು ಪ್ರಾದೇಶಿಕ ಒತ್ತಡಗಳಿಗೆ ಮಣಿಯದೆ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ವಾತಾವರಣ ನಿರ್ಮಿಸುವುದು. ಇಲಾಖೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ವರ್ಗಾವಣೆ ನಡೆದಿರುವುದು ಇದೇ ಮೊದಲು. ಇದರ ನೇರ ಉದ್ದೇಶ ಸರ್ಕಾರದ ಖಜನೆಗೆ ಬರುವ ಗಣಿಗಾರಿಕೆ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವುದಾಗಿದೆ. ಸೂಕ್ಷ್ಮ ಮತ್ತು ಆಯಕಟ್ಟಿನ ಹುದ್ದೆಗಳಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸುವ ಮೂಲಕ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿಯನ್ನು ತರುವುದು ಮುಖ್ಯ ಉದ್ದೇಶವಾಗಿದೆ. ಮುಖ್ಯಮಂತ್ರಿಗಳ ಈ ದಿಟ್ಟ ಕ್ರಮದಿಂದಾಗಿ ಗಣಿ ದಂಧೆಕೋರರಿಗೆ ಹಾಗೂ ಅವರಿಗೆ ಸಾಥ್ ನೀಡುತ್ತಿದ್ದ ಅಧಿಕಾರಿ ವಲಯಕ್ಕೆ ತೀವ್ರ ನಡುಕ ಉಂಟಾಗಿದ್ದು, ಇಲಾಖೆಯಲ್ಲಿ ಹೊಸ ಆಡಳಿತ ಪರ್ವ ಆರಂಭವಾದಂತಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/state/biggest-administrative-reshuffle-cm-dk-shivakumar-orders-mass-transfer-160-officials-in-karnataka-mining-department-gdp/articleshow-xf5hpwp"/>
        </item>
        <item>
            <title><![CDATA[ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: 5 ಹೊಸ ಕಮಿಷನರೇಟ್‌, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ!]]></title>
            <link>https://kannada.asianetnews.com/state/bengaluru-police-commissionerate-split-into-5-zones-proposal-details-khs/articleshow-y9qxtom</link>
            <guid isPermaLink="true">https://kannada.asianetnews.com/state/bengaluru-police-commissionerate-split-into-5-zones-proposal-details-khs/articleshow-y9qxtom</guid>
            <pubDate>Mon, 03 Aug 2026 18:52:22 +0530</pubDate>
            <description><![CDATA[ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅಪರಾಧಗಳನ್ನು ನಿಯಂತ್ರಿಸಲು, ನಗರ ಪೊಲೀಸ್ ಕಮಿಷನರೇಟ್ ಅನ್ನು ಐದು ಪ್ರತ್ಯೇಕ ಕಮಿಷನರೇಟ್&zwnj;ಗಳಾಗಿ ವಿಭಜಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬೃಹತ್ ಯೋಜನೆಗಾಗಿ 6,633 ಹೊಸ ಹುದ್ದೆಗಳನ್ನು ಸೃಷ್ಟಿಸಲು ಶಿಫಾರಸು ಮಾಡಲಾಗಿದ್ದು, ಇಡೀ ನಗರಕ್ಕೆ ಒಬ್ಬರು 'ಮುಖ್ಯ ಪೊಲೀಸ್ ಆಯುಕ್ತರು' ಮೇಲ್ವಿಚಾರಣೆ ನಡೆಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz3wcr3x0q9anckcr065gb93,imgname-bengaluru-police-commissionerate-split-into-5-zones-1785763094652.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.03): ರಾ&lt;/strong&gt;ಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ (Traffic Congestion), ಸೈಬರ್ ಅಪರಾಧಗಳು (Cyber Crimes) ಹಾಗೂ ಭೌಗೋಳಿಕ ವಿಸ್ತರಣೆಗೆ ತಕ್ಕಂತೆ ನಗರದ ಕಾನೂನು ಮತ್ತು ಸುವ್ಯವಸ್ಥೆಯನ್ನು (Law and Order) ಮತ್ತಷ್ಟು ಬಲಪಡಿಸಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬೃಹತ್ ಯೋಜನೆಯೊಂದನ್ನು ರೂಪಿಸಿದೆ.&lt;/p&gt;&lt;p&gt;ಬೆಂಗಳೂರು ಮಹಾನಗರ ಪ್ರಾಧಿಕಾರ (GBA) ವಲಯಗಳ ಮಾದರಿಯಲ್ಲೇ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅನ್ನು ಐದು (5) ಪ್ರತ್ಯೇಕ ಪೊಲೀಸ್ ಕಮಿಷನರೇಟ್&zwnj;ಗಳಾಗಿ (Police Commissionerates) ವಿಂಗಡಿಸಿ, ಇಡೀ ನಗರಕ್ಕೆ ಒಬ್ಬರು 'ಮುಖ್ಯ ಪೊಲೀಸ್ ಆಯುಕ್ತರನ್ನು' (Chief Commissioner of Police) ನೇಮಿಸಲು ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ.&lt;/p&gt;&lt;h2&gt;&lt;strong&gt;ಐದು ಹೊಸ ಕಮಿಷನರೇಟ್&zwnj;ಗಳು ಯಾವುವು?&lt;/strong&gt;&lt;/h2&gt;&lt;p&gt;ಪ್ರಸ್ತುತ ಇರುವ ಬೆಂಗಳೂರು ನಗರ ಪೊಲೀಸ್ ಘಟಕವನ್ನು ಮರುಸಂಘಟಿಸಿ (Re-organisation) ಕೆಳಗಿನಂತೆ 5 ಪ್ರತ್ಯೇಕ ಕಮಿಷನರೇಟ್&zwnj;ಗಳನ್ನಾಗಿ ಮಾಡಲು ಉದ್ದೇಶಿಸಲಾಗಿದೆ:&lt;/p&gt;&lt;ol&gt; &lt;li&gt;ಸೆಂಟ್ರಲ್ ಕಮಿಷನರೇಟ್ (Central COP): CBD ವಲಯ, ವಿಧಾನಸೌಧ, ಉಚ್ಚ ನ್ಯಾಯಾಲಯ ಹಾಗೂ ಪ್ರಮುಖ ವಾಣಿಜ್ಯ ಪ್ರದೇಶಗಳು.&lt;/li&gt; &lt;li&gt;ನಾರ್ತ್ ಕಮಿಷನರೇಟ್ (North COP): ಯಲಹಂಕ, ದೇವನಹಳ್ಳಿ, ವಿಮಾನ ನಿಲ್ದಾಣ (KIAB) ಹಾಗೂ ಸುತ್ತಮುತ್ತಲ ಪ್ರದೇಶಗಳು.&lt;/li&gt; &lt;li&gt;ಸೌತ್ ಕಮಿಷನರೇಟ್ (South COP): ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ಹಾಗೂ ದಕ್ಷಿಣ ಭಾಗಗಳು.&lt;/li&gt; &lt;li&gt;ವೆಸ್ಟ್ ಕಮಿಷನರೇಟ್ (West COP): ವಿಜಯನಗರ, ಪೀಣ್ಯ, ಕೆಂಗೇರಿ ಹಾಗೂ ಪಶ್ಚಿಮ ವಲಯದ ಕೈಗಾರಿಕಾ ಪ್ರದೇಶಗಳು.&lt;/li&gt; &lt;li&gt;ಈಸ್ಟ್ ಕಮಿಷನರೇಟ್ (East COP): ವೈಟ್&zwnj;ಫೀಲ್ಡ್, ಕೆ.ಆರ್. ಪುರಂ, ಮಹದೇವಪುರ ಮತ್ತು ಕೃಷ್ಣರಾಜಪುರ ಭಾಗಗಳು.&lt;/li&gt;&lt;/ol&gt;&lt;p&gt;ಈ ಐದೂ ವಲಯಗಳ ಮೇಲ್ವಿಚಾರಣೆಯನ್ನು ಐಜಿಪಿ/ಡಿಐಜಿಪಿ (IGP/DIGP) ದರ್ಜೆಯ ಅಧಿಕಾರಿಗಳು ವಹಿಸಿಕೊಳ್ಳಲಿದ್ದು, ಇವರೆಲ್ಲರೂ &lsquo;ಚೀಫ್ ಕಮಿಷನರ್ ಆಫ್ ಪೊಲೀಸ್&rsquo; (Chief Commissioner of Police) ಅವರ ಅಧೀನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.&lt;/p&gt;&lt;h2&gt;&lt;strong&gt;6,633 ಹೊಸ ಹುದ್ದೆಗಳ ಸೃಷ್ಟಿಗೆ ಸಿಫಾರಸು!&lt;/strong&gt;&lt;/h2&gt;&lt;p&gt;ಈ ಬೃಹತ್ ಬದಲಾವಣೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಒಟ್ಟು 6,633 ಹೊಸ ಹುದ್ದೆಗಳನ್ನು (New Posts Creation) ಸೃಷ್ಟಿಸಲು ಪ್ರಸ್ತಾವನೆಯಲ್ಲಿ ಕೋರಲಾಗಿದೆ.&lt;/p&gt;&lt;p&gt;&lt;strong&gt;ವಲಯವಾರು ಅಗತ್ಯವಿರುವ ಹೊಸ ಹುದ್ದೆಗಳು:&lt;/strong&gt;&lt;/p&gt;&lt;ul&gt; &lt;li&gt;ಈಸ್ಟ್ ಕಮಿಷನರೇಟ್ (East COP): 2,734 ಹುದ್ದೆಗಳು&lt;/li&gt; &lt;li&gt;ವೆಸ್ಟ್ ಕಮಿಷನರೇಟ್ (West COP): 1,235 ಹುದ್ದೆಗಳು&lt;/li&gt; &lt;li&gt;ಸೌತ್ ಕಮಿಷನರೇಟ್ (South COP): 1,043 ಹುದ್ದೆಗಳು&lt;/li&gt; &lt;li&gt;ನಾರ್ತ್ ಕಮಿಷನರೇಟ್ (North COP): 944 ಹುದ್ದೆಗಳು&lt;/li&gt; &lt;li&gt;ಸೆಂಟ್ರಲ್ ಕಮಿಷನರೇಟ್ (Central COP): 677 ಹುದ್ದೆಗಳು&lt;/li&gt;&lt;/ul&gt;&lt;h2&gt;&lt;strong&gt;ಬದಲಾವಣೆಗೆ ಪ್ರಮುಖ ಕಾರಣಗಳೇನು?&lt;/strong&gt;&lt;/h2&gt;&lt;p&gt;&lt;strong&gt;ಬೃಹತ್ ಜನಸಂಖ್ಯೆ: &lt;/strong&gt;ಬೆಂಗಳೂರಿನ ಹಾಲಿ ಜನಸಂಖ್ಯೆ ಸುಮಾರು 1.56 ಕೋಟಿಗೂ ಮೀರಿದ್ದು, ನಗರದ ವಿಸ್ತೀರ್ಣ 712 ಚದರ ಕಿಲೋಮೀಟರ್&zwnj;ಗೆ ತಲುಪಿದೆ.&lt;/p&gt;&lt;p&gt;&lt;strong&gt;ಐಟಿ-ಬಿಟಿ ವಲಯ ಮತ್ತು ಕೈಗಾರಿಕೆಗಳು:&lt;/strong&gt; ವೈಟ್&zwnj;ಫೀಲ್ಡ್, ಪೀಣ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿಯಂತಹ ವಲಯಗಳಲ್ಲಿ ಭದ್ರತೆ (Security) ಮತ್ತು ಸಂಚಾರ ನಿರ್ವಹಣೆ ಅತ್ಯಂತ ಸವಾಲಿನದ್ದಾಗಿದೆ.&lt;/p&gt;&lt;p&gt;&lt;strong&gt;ತನಿಖೆಯ ವೇಗ (Fast Investigation): &lt;/strong&gt;ಪ್ರತ್ಯೇಕ ಕಮಿಷನರೇಟ್&zwnj;ಗಳಿಂದಾಗಿ ಅಪರಾಧ ಪ್ರಕರಣಗಳ ತನಿಖೆ (Crime Investigation) ಹಾಗೂ ವಿಲೇವಾರಿ ವೇಗವಾಗಿ ನಡೆಯಲಿದೆ.&lt;/p&gt;&lt;p&gt;&lt;strong&gt;ಸಂಚಾರ ನಿಯಂತ್ರಣ (Traffic Management):&lt;/strong&gt; ಪ್ರತಿ ಕಮಿಷನರೇಟ್&zwnj;ನಲ್ಲಿಯೂ ಪ್ರತ್ಯೇಕ ಸಂಚಾರ ವಿಭಾಗ (Traffic Division) ಇರುವುದರಿಂದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನ ಹರಿಸಬಹುದು.&lt;/p&gt;&lt;h2&gt;&lt;strong&gt;ಅಂದಾಜು ವೆಚ್ಚ ಎಷ್ಟು?&lt;/strong&gt;&lt;/h2&gt;&lt;p&gt;ಈ ಯೋಜನೆಗಾಗಿ ಒಟ್ಟು ₹7,648.72 ಕೋಟಿ (₹764.87 Crore / 7648.72 Million) ವೆಚ್ಚವಾಗಲಿದ್ದು, ಇದರಲ್ಲಿ ಸಿಬ್ಬಂದಿ ವೇತನ ಒಳಗೊಂಡಂತೆ ಆವರ್ತಕ ವೆಚ್ಚ (Recurring Cost) ₹3,687.12 ಕೋಟಿ ಹಾಗೂ ಸಿಸಿಟಿವಿ (CCTV), ವಾಹನಗಳು, ತಂತ್ರಜ್ಞಾನ ಮತ್ತು ಮೂಲಸೌಕರ್ಯಕ್ಕಾಗಿ (Non-Recurring Cost) ₹3,961.60 ಕೋಟಿ ಅನುದಾನದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ರಾಜ್ಯ ಸಚಿವ ಸಂಪುಟವು (Karnataka Cabinet) ಈ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ, ರಾಜಧಾನಿ ಬೆಂಗಳೂರಿನ ಭದ್ರತಾ ವ್ಯವಸ್ಥೆಯಲ್ಲಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ನವೀಕರಣ (Upgrade) ಆಗಲಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-police-commissionerate-split-into-5-zones-proposal-details-khs/articleshow-y9qxtom"/>
        </item>
        <item>
            <title><![CDATA[ಕೆಪಿಎಸ್‌ಸಿ ಮತ್ತೊಂದು ಭಾರೀ ಹಗರಣ: ₹80 ಲಕ್ಷಕ್ಕೆ ಪಶುವೈದ್ಯ ಹುದ್ದೆ ಮಾರಾಟ? ವಿಡಿಯೋ ಸಮೇತ ಮದ್ಯವರ್ತಿ ಲಾಕ್!]]></title>
            <link>https://kannada.asianetnews.com/state-government-jobs/kpsc-veterinary-doctors-and-officers-recruitment-scam-80-lakhs-for-one-post-exclusive-sat/articleshow-yed2fin</link>
            <guid isPermaLink="true">https://kannada.asianetnews.com/state-government-jobs/kpsc-veterinary-doctors-and-officers-recruitment-scam-80-lakhs-for-one-post-exclusive-sat/articleshow-yed2fin</guid>
            <pubDate>Thu, 23 Jul 2026 12:43:38 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಬೃಹತ್ ಹಗರಣ ಬೆಳಕಿಗೆ ಬಂದಿದೆ. ಒಂದು ಹುದ್ದೆಗೆ 80 ಲಕ್ಷ ರೂ. ವರೆಗೆ ಮಾರಾಟ ಮಾಡಲಾಗಿದ್ದು, ಈ ಅಕ್ರಮಕ್ಕೆ ಸಂಬಂಧಿಸಿದ ಮಧ್ಯವರ್ತಿಯ ವಿಡಿಯೋವೊಂದು ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಮರುಪರೀಕ್ಷೆಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky6x53gaf3pp5mrdtwf22n3g,imgname-kpsc-scam--1--1784790814218.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.23): ಪ್ರ&lt;/strong&gt;ತಿಭಾವಂತ ನಿರುದ್ಯೋಗಿ ಯುವಕರಿಗೆ ಆಸರೆಯಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ (Massive Scam) ಬಯಲಾಗಿದೆ. ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ (Veterinary Officer Recruitment) ಪ್ರಕ್ರಿಯೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಒಂದು ಸರ್ಕಾರಿ ಹುದ್ದೆಯನ್ನು ಬರೋಬ್ಬರಿ 80 ಲಕ್ಷ ರೂಪಾಯಿಗಳಿಗೆ (80 Lakh Rupees) ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಶೇ. 60ರಷ್ಟು ಹುದ್ದೆಗಳಲ್ಲಿ ಅಕ್ರಮ!:&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ [342 ಸಾಮಾನ್ಯ + 58 ಬ್ಯಾಕ್&zwnj;ಲಾಗ್ (Backlog Posts)] ಕಳೆದ ಜನವರಿ 8 ರಂದು ಲಿಖಿತ ಪರೀಕ್ಷೆ (Written Exam) ನಡೆದಿತ್ತು. ಇತ್ತೀಚೆಗಷ್ಟೇ, ಅಂದರೆ ಜುಲೈ 17 ರಂದು ಇದರ ಫಲಿತಾಂಶ (Exam Results) ಹೊರಬಿದ್ದಿತ್ತು. ಆದರೆ, ಫಲಿತಾಂಶ ನೋಡಿದ ನೈಜ ಆಕಾಂಕ್ಷಿಗಳು ದಿಗ್ಭ್ರಮೆಗೊಳಗಾಗಿದ್ದಾರೆ. ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಶೇ. 60ರಷ್ಟು ಹುದ್ದೆಗಳಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು (Candidates) ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಮಾನತ್ತಾದ ಕೆಪಿಎಸ್&zwnj;ಸಿ ಸದಸ್ಯ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಅವರ ಕೈವಾಡ ಈ ಹಗರಣದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.&lt;/p&gt;&lt;h2&gt;&lt;strong&gt;ವಿಡಿಯೋದಲ್ಲಿ ಸಿಕ್ಕಿಬಿದ್ದ ಮಧ್ಯವರ್ತಿ!:&lt;/strong&gt;&lt;/h2&gt;&lt;p&gt;ಈ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಪುಷ್ಟಿ ನೀಡುವಂತೆ ಮಧ್ಯವರ್ತಿಗಳ (Middlemen) ಡೀಲಿಂಗ್&zwnj;ನ ಎಕ್ಸ್&zwnj;ಕ್ಲೂಸಿವ್ ವಿಡಿಯೋವೊಂದು (Exclusive Video) ಲಭ್ಯವಾಗಿದೆ. ಮೊಹಮ್ಮದ್ ಆರಿಫ್ (Mohammed Arif) ಎಂಬ ಮಧ್ಯವರ್ತಿಯು ಕಾಂತಕುಮಾರ್ ಎಂಬುವವರ ಜೊತೆ ಫೋನ್ ಕರೆಯಲ್ಲಿ (Phone Call) ನೇರವಾಗಿ ಹಣಕ್ಕೆ ಡಿಮ್ಯಾಂಡ್ (Direct Cash Demand) ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಒಂದೊಂದು ಪೋಸ್ಟ್&zwnj;ಗೂ ಲಕ್ಷ ಲಕ್ಷ ಹಣದ ಚೌಕಾಸಿ ನಡೆದಿರುವುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ.&lt;/p&gt;&lt;h2&gt;&lt;strong&gt;ವಿಧಾನಸೌಧ ಠಾಣೆ ಮೆಟ್ಟಿಲೇರಿದ ಅಭ್ಯರ್ಥಿಗಳು:&lt;/strong&gt;&lt;/h2&gt;&lt;p&gt;ಪರೀಕ್ಷೆ ಬರೆದು ಹಗಲಿರುಳು ಕಷ್ಟಪಟ್ಟಿದ್ದ ವೆಟರ್ನರಿ ಡಾಕ್ಟರ್ಸ್ (Veterinary Doctors) ಈಗ ಆಕ್ರೋಶಗೊಂಡಿದ್ದಾರೆ. ಈ ಭಾರೀ ಅಕ್ರಮದ ವಿರುದ್ಧ ಸಿಡಿದೆದ್ದಿರುವ 50ಕ್ಕೂ ಹೆಚ್ಚು ಅಭ್ಯರ್ಥಿಗಳು ನೇರವಾಗಿ ವಿಧಾನಸೌಧ ಪೊಲೀಸ್ ಠಾಣೆಗೆ (Vidhana Soudha Police Station) ಆಗಮಿಸಿ ದೂರು (Complaint) ದಾಖಲಿಸಲು ಮುಂದಾಗಿದ್ದಾರೆ.&lt;/p&gt;&lt;h2&gt;&lt;strong&gt;ಆಕಾಂಕ್ಷಿಗಳ ಪ್ರಮುಖ ಬೇಡಿಕೆಗಳೇನು?:&lt;/strong&gt;&lt;/h2&gt;&lt;p&gt;ಹಣವಿದ್ದವರಿಗೆ ಮಾತ್ರ ಕೆಪಿಎಸ್&zwnj;ಸಿಯಲ್ಲಿ ಕೆಲಸ ಸಿಗುವುದಾದರೆ ನಾವೇಕೆ ಓದಬೇಕು ಎಂದು ಪ್ರಶ್ನಿಸಿರುವ ಅಭ್ಯರ್ಥಿಗಳು, ಈಗ ನಡೆದಿರುವ ಇಡೀ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು (Cancel Recruitment Process) ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಪಾರದರ್ಶಕವಾಗಿ ಮರು ಪ್ರಕ್ರಿಯೆ ಹಾಗೂ ಮರು ಪರೀಕ್ಷೆ (Re-examination) ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/kpsc-veterinary-doctors-and-officers-recruitment-scam-80-lakhs-for-one-post-exclusive-sat/articleshow-yed2fin"/>
        </item>
    </channel>
</rss>
