<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 20 Jul 2026 17:11:46 +0530</lastBuildDate>
        <atom:link href="https://kannada.asianetnews.com/rss/state-government-jobs" rel="self" type="application/rss+xml"/>
        <item>
            <title><![CDATA[ಬಡ ಕೂಲಿ ಕಾರ್ಮಿಕನ ಹೆಣ್ಣುಮಕ್ಕಳ ಸರ್ಕಾರಿ ನೌಕರಿ ಸಾಧನೆ; ಅಕ್ಕ ಎಸ್‌ಐ, ತಂಗಿ ಕಾನ್‌ಸ್ಟೆಬಲ್!]]></title>
            <link>https://kannada.asianetnews.com/state-government-jobs/madhya-pradesh-laborer-sanman-daughters-state-government-jobs-elder-sister-si-another-constable/articleshow-2xv74kk</link>
            <guid isPermaLink="true">https://kannada.asianetnews.com/state-government-jobs/madhya-pradesh-laborer-sanman-daughters-state-government-jobs-elder-sister-si-another-constable/articleshow-2xv74kk</guid>
            <pubDate>Fri, 10 Jul 2026 20:04:10 +0530</pubDate>
            <description><![CDATA[&lt;p&gt;ಕೂಲಿ ಕಾರ್ಮಿಕರೊಬ್ಬರ ಇಬ್ಬರು ಹೆಣ್ಣುಮಕ್ಕಳು ಬಡತನವನ್ನು ಮೆಟ್ಟಿ ನಿಂತು ಸರ್ಕಾರಿ ಹುದ್ದೆಗಳನ್ನು ಪಡೆದಿದ್ದಾರೆ. ಹಿರಿಯ ಮಗಳು ಪೂಜಾ ಅಹಿರ್ವಾರ್, ಎಸ್&zwnj;ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಅವರ ತಂಗಿ ಪೊಲೀಸ್ ಕಾನ್&zwnj;ಸ್ಟೆಬಲ್ ಆಗಿ ಆಯ್ಕೆಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx6767q74f284b2cpcj2ktvj,imgname-laborer-daughters-state-government-jobs-1783694040807.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಡತನದ ನಡುವೆಯೂ ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಮಧ್ಯಪ್ರದೇಶದ ಈ ಸಹೋದರಿಯರೇ ಸಾಕ್ಷಿಯಾಗಿದ್ದಾರೆ. ಅಪ್ಪ ಕೂಲಿ ಮಾಡುತ್ತಿದ್ದರೂ ಮಕ್ಕಳು ಮಾತ್ತು ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.&lt;/p&gt;&lt;p&gt;ಕೂಲಿ ಕಾರ್ಮಿಕರೊಬ್ಬರ ಹಿರಿಯ ಮಗಳು ಪೂಜಾ ಅಹಿರ್ವಾರ್, ಮಧ್ಯಪ್ರದೇಶ ಸಬ್&zwnj;-ಇನ್ಸ್&zwnj;ಪೆಕ್ಟರ್ (ಎಸ್&zwnj;ಐ) ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ಹೊತ್ತಿನಲ್ಲಿ, ಅವರ ತಂಗಿಯೂ ಪೊಲೀಸ್ ಕಾನ್&zwnj;ಸ್ಟೆಬಲ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಇಡೀ ಕುಟುಂಬಕ್ಕೆ ಡಬಲ್ ಖುಷಿ ನೀಡಿದ್ದಾರೆ. ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯವರಾದ ಪೂಜಾ, ಎಸ್&zwnj;ಐ ಪರೀಕ್ಷೆಯ ಪರಿಶಿಷ್ಟ ಜಾತಿ (ಎಸ್&zwnj;ಸಿ) ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಕಡು ಬಡತನ ಮತ್ತು ಆರ್ಥಿಕ ಸಂಕಷ್ಟಗಳೇ ಇವರ ದಾರಿಗೆ ಅಡ್ಡಿಯಾಗಿದ್ದವು. ಆದರೆ, ಇವೆಲ್ಲವನ್ನೂ ಮೆಟ್ಟಿ ನಿಂತು ಈ ಸಹೋದರಿಯರು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡಿರುವುದು ನಿಜಕ್ಕೂ ದೊಡ್ಡ ಸಾಧನೆ.&lt;/p&gt;&lt;h2&gt;&lt;strong&gt;ಬಡತನವನ್ನೇ ಮೆಟ್ಟಿ ನಿಂತ ಸಹೋದರಿಯರು&lt;/strong&gt;&lt;/h2&gt;&lt;p&gt;ಪೂಜಾ ಮತ್ತು ಅವರ ತಂಗಿಯ ತಂದೆ ಒಬ್ಬ ದಿನಗೂಲಿ ಕಾರ್ಮಿಕ. ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಹೇಳತೀರದು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಹೆಣ್ಣುಮಕ್ಕಳ ಓದಿಗೆ ಅವರ ತಂದೆ ಎಂದಿಗೂ ಅಡ್ಡಿಪಡಿಸಲಿಲ್ಲ. ತಮ್ಮ ಮಕ್ಕಳ ಕನಸು ನನಸಾಗಿಸಲು ಅವರು ಹಗಲಿರುಳು ಶ್ರಮಿಸಿದ್ದಾರೆ. ತಂದೆಯ ಕಷ್ಟವನ್ನು ಅರಿತಿದ್ದ ಈ ಹೆಣ್ಣುಮಕ್ಕಳು, ತಮ್ಮ ಗುರಿ ತಲುಪಲೇಬೇಕೆಂದು ಹಠಕ್ಕೆ ಬಿದ್ದಿದ್ದರು. ಯಾವುದೇ ಕೋಚಿಂಗ್ ಅಥವಾ ವಿಶೇಷ ತರಬೇತಿಗಳಿಲ್ಲದೆ, ಸ್ವಂತ ಪರಿಶ್ರಮದಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಇವರ ಈ ಯಶಸ್ಸಿನ ಹಿಂದೆ ಅಪಾರವಾದ ಶ್ರಮ ಮತ್ತು ತ್ಯಾಗ ಅಡಗಿದೆ.&lt;/p&gt;&lt;h2&gt;&lt;strong&gt;ಅಕ್ಕ ಎಸ್&zwnj;ಐ, ತಂಗಿ ಕಾನ್&zwnj;ಸ್ಟೆಬಲ್!&lt;/strong&gt;&lt;/h2&gt;&lt;p&gt;ಪೂಜಾ ಅಹಿರ್ವಾರ್ ಅವರ ಸಾಧನೆ ಸಾಮಾನ್ಯವಾದುದಲ್ಲ. ಇಡೀ ರಾಜ್ಯಕ್ಕೆ ಎಸ್&zwnj;ಸಿ ಕೆಟಗರಿಯಲ್ಲಿ ಮೊದಲ ರ&zwj;್ಯಾಂಕ್ ಪಡೆಯುವುದು ಎಂದರೆ ಸುಲಭದ ಮಾತಲ್ಲ. ಅವರ ಈ ಯಶಸ್ಸು ಸಾವಿರಾರು ಯುವಕ-ಯುವತಿಯರಿಗೆ ಸ್ಫೂರ್ತಿ ನೀಡಿದೆ. ಇದೇ ವೇಳೆ, ಪೂಜಾ ಅವರ ತಂಗಿ ಕೂಡ ಪೊಲೀಸ್ ಇಲಾಖೆಯ ಕಾನ್&zwnj;ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಒಂದೇ ಮನೆಯ ಇಬ್ಬರು ಹೆಣ್ಣುಮಕ್ಕಳು ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವುದು ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಜಿಲ್ಲೆಗೇ ಹೆಮ್ಮೆ ತಂದಿದೆ. ಇವರ ಕಥೆ ಕೇಳಿದರೆ ಎಂಥವರಿಗೂ ಸ್ಫೂರ್ತಿ ಬಾರದೇ ಇರದು.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/madhya-pradesh-laborer-sanman-daughters-state-government-jobs-elder-sister-si-another-constable/articleshow-2xv74kk"/>
        </item>
        <item>
            <title><![CDATA[ಕರ್ನಾಟಕ ಪೊಲೀಸ್ ನೇಮಕಾತಿ: 3,395 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ, 35 ವರ್ಷದವರೆಗೆ ವಯೋಮಿತಿ ಸಡಿಲಿಕೆ!]]></title>
            <link>https://kannada.asianetnews.com/gallery/state-government-jobs/karnataka-police-recruitment-2026-apply-online-3395-civil-constable-posts-age-relaxation-sat-37hv0ga</link>
            <guid isPermaLink="true">https://kannada.asianetnews.com/gallery/state-government-jobs/karnataka-police-recruitment-2026-apply-online-3395-civil-constable-posts-age-relaxation-sat-37hv0ga</guid>
            <pubDate>Sat, 06 Jun 2026 08:00:22 +0530</pubDate>
            <description><![CDATA[&lt;p&gt;ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (Karnataka State Polce Department) 3395 ಸಿವಿಲ್ ಕಾನ್ಸ್ಟೇಬಲ್ (Civil Police Constable recruitment) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. PUC ಪಾಸಾದ ಅಭ್ಯರ್ಥಿಗಳು ಜುಲೈ 3ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktcn4yrnje14r8megzx0262p,imgname-karnataka-police-recruitment-2026-1780688780053.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (Karnataka State Polce Department) 3395 ಸಿವಿಲ್ ಕಾನ್ಸ್ಟೇಬಲ್ (Civil Police Constable recruitment) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. PUC ಪಾಸಾದ ಅಭ್ಯರ್ಥಿಗಳು ಜುಲೈ 3ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಿರಿ.&lt;/p&gt;&lt;img&gt;&lt;p&gt;ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬಯಸುವ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (KSP) ಖಾಲಿ ಇರುವ 3395 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.&lt;/p&gt;&lt;img&gt;&lt;p&gt;&lt;strong&gt;ಹುದ್ದೆಗಳ ವಿವರ:&lt;/strong&gt;&lt;/p&gt;&lt;p&gt;ಹುದ್ದೆಯ ಹೆಸರು: ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) - ಮಿಕ್ಕುಳಿದ ವೃಂದ&lt;/p&gt;&lt;p&gt;ಒಟ್ಟು ಹುದ್ದೆಗಳು: 3395&lt;/p&gt;&lt;p&gt;ವೇತನ ಶ್ರೇಣಿ: ತಿಂಗಳಿಗೆ ರೂ. 37,500 ರಿಂದ ರೂ. 76,100/-&lt;/p&gt;&lt;img&gt;&lt;p&gt;&lt;strong&gt;ವಿದ್ಯಾರ್ಹತೆ (Educational Qualification):&lt;/strong&gt;&lt;/p&gt;&lt;p&gt;ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆ ಹೊಂದಿರಬೇಕು:&lt;/p&gt;&lt;p&gt;ಸಿಬಿಎಸ್&zwnj;ಇ/ ಐಸಿಎಸ್&zwnj;ಇ/ ಎನ್&zwnj;ಐಒಎಸ್/ ರಾಜ್ಯ ಮಂಡಳಿಯಿಂದ ಪಿಯುಸಿ (PUC) ಅಥವಾ 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.&lt;/p&gt;&lt;p&gt;ಐಟಿಐ (2 ವರ್ಷ) ಅಥವಾ ಡಿಪ್ಲೊಮಾ ಅಭ್ಯರ್ಥಿಗಳು ಸಹ ಅಧಿಸೂಚನೆಯಲ್ಲಿನ ನಿಬಂಧನೆಗಳಂತೆ ಅರ್ಹರಿರುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ವಯೋಮಿತಿ (Age Limit):&lt;/strong&gt;&lt;/p&gt;&lt;p&gt;ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:&lt;/p&gt;&lt;p&gt;ಸಾಮಾನ್ಯ ವರ್ಗ (GM): 33 ವರ್ಷಗಳು&lt;/p&gt;&lt;p&gt;SC/ ST/ ಹಿಂದುಳಿದ ವರ್ಗಗಳು (2A, 2B, 3A, 3B): 35 ವರ್ಷಗಳು&lt;/p&gt;&lt;p&gt;ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳು: 38 ವರ್ಷಗಳು&lt;/p&gt;&lt;img&gt;&lt;p&gt;&lt;strong&gt;ಅರ್ಜಿ ಶುಲ್ಕ:&lt;/strong&gt;&lt;/p&gt;&lt;p&gt;ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ (2A, 2B, 3A, 3B): ರೂ. 750/-&lt;/p&gt;&lt;p&gt;ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ. 500/-&lt;/p&gt;&lt;img&gt;&lt;p&gt;&lt;strong&gt;ನೇಮಕಾತಿ ಹಂತಗಳು:&lt;/strong&gt;&lt;/p&gt;&lt;p&gt;ಲಿಖಿತ ಪರೀಕ್ಷೆ (Written Exam): 100 ಅಂಕಗಳ ವಸ್ತುನಿಷ್ಠ ಮಾದರಿಯ ಪರೀಕ್ಷೆ.&lt;/p&gt;&lt;p&gt;ದೈಹಿಕ ಸಹಿಷ್ಣುತೆ ಮತ್ತು ಪ್ರಮಾಣಿತ ಪರೀಕ್ಷೆ (ET &amp;amp; PST): ಓಟ, ಉದ್ದ ಜಿಗಿತ/ಎತ್ತರ ಜಿಗಿತ, ಮತ್ತು ಗುಂಡು ಎಸೆತ.&lt;/p&gt;&lt;p&gt;ವೈದ್ಯಕೀಯ ಪರೀಕ್ಷೆ: ಅಂತಿಮ ಆಯ್ಕೆ ಪಟ್ಟಿಯಲ್ಲಿರುವವರಿಗೆ ವೈದ್ಯಕೀಯ ತಪಾಸಣೆ ನಡೆಯಲಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಮುಖ ದಿನಾಂಕಗಳು:&lt;/strong&gt;&lt;/p&gt;&lt;p&gt;ಆನ್&zwnj;ಲೈನ್ ಅರ್ಜಿ ಸಲ್ಲಿಕೆ ಆರಂಭ: ಜೂನ್ 08, 2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 03, 2026&lt;/p&gt;&lt;p&gt;ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜುಲೈ 04, 2026&lt;/p&gt;&lt;p&gt;ಲಿಖಿತ ಪರೀಕ್ಷೆಯ ದಿನಾಂಕ: ಆಗಸ್ಟ್ 02, 2026 (ಬೆಳಿಗ್ಗೆ 10:30 ರಿಂದ 12:00 ರವರೆಗೆ)&lt;/p&gt;&lt;img&gt;&lt;p&gt;&lt;strong&gt;ಅರ್ಜಿ ಸಲ್ಲಿಸುವುದು ಹೇಗೆ?&lt;/strong&gt;&lt;/p&gt;&lt;p&gt;ಆಸಕ್ತರು ಈ ಕೆಳಗಿನ ಅಧಿಕೃತ ವೆಬ್&zwnj;ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು:&lt;/p&gt;&lt;p&gt;https://cetonline.karnataka.gov.in/kea/&lt;/p&gt;&lt;p&gt;ಅಥವಾ https://ksp-recruitment.in/&lt;/p&gt;&lt;p&gt;ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಗದಿತ ದಿನಾಂಕದೊಳಗೆ ಆನ್&zwnj;ಲೈನ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state-government-jobs/karnataka-police-recruitment-2026-apply-online-3395-civil-constable-posts-age-relaxation-sat-37hv0ga"/>
        </item>
        <item>
            <title><![CDATA[ಸರ್ಕಾರಿ ಶಾಲೆಗಳಿಗೆ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಅನುಮತಿ; ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ!]]></title>
            <link>https://kannada.asianetnews.com/state/karnataka-govt-recruitment-51000-guest-teachers-for-2026-27-academic-year-official-order-out-sat/articleshow-3qegd47</link>
            <guid isPermaLink="true">https://kannada.asianetnews.com/state/karnataka-govt-recruitment-51000-guest-teachers-for-2026-27-academic-year-official-order-out-sat/articleshow-3qegd47</guid>
            <pubDate>Sat, 23 May 2026 16:33:57 +0530</pubDate>
            <description><![CDATA[&lt;p&gt;2026-27ನೇ ಶೈಕ್ಷಣಿಕ ಸಾಲಿಗೆ ಶಿಕ್ಷಕರ ಕೊರತೆ ನೀಗಿಸಲು, ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ 51,000 ಅತಿಥಿ ಶಿಕ್ಷಕರನ್ನು ನೇಮಿಸಲು ಮಂಜೂರಾತಿ ನೀಡಿದೆ. ಈ ನೇಮಕಾತಿಯು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡುವ ಗುರಿ ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk0aw4652cznfg6mvkv4b98z,imgname----------------------74--1772759158980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 23): &lt;/strong&gt;2026-27ನೇ ಶೈಕ್ಷಣಿಕ ಸಾಲು ಆರಂಭವಾಗುತ್ತಿರುವ ಬೆನ್ನಲ್ಲೇ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಒಟ್ಟು 51,000 ಅತಿಥಿ ಶಿಕ್ಷಕರನ್ನು (Guest Teachers) ನೇಮಿಸಿಕೊಳ್ಳಲು ಅಧಿಕೃತವಾಗಿ ಮಂಜೂರಾತಿ ನೀಡಿದೆ.&lt;/p&gt;&lt;p&gt;ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮೇ 22, 2026 ರಂದು ಆದೇಶ ಹೊರಡಿಸಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ತಾತ್ಕಾಲಿಕವಾಗಿ ಶಿಕ್ಷಕರನ್ನು ಭರ್ತಿ ಮಾಡಲು ಅನುಮತಿ ನೀಡಿದೆ.&lt;/p&gt;&lt;h3&gt;&lt;strong&gt;ನೇಮಕಾತಿಯ ವಿವರಗಳು ಹೀಗಿವೆ:&lt;/strong&gt;&lt;/h3&gt;&lt;ul&gt; &lt;li&gt;ಸರ್ಕಾರದ ಆದೇಶದಂತೆ ಪ್ರಸಕ್ತ ಸಾಲಿನಲ್ಲಿ ಒಟ್ಟು 51,000 ಹುದ್ದೆಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:&lt;/li&gt; &lt;li&gt;ಸರ್ಕಾರಿ ಪ್ರಾಥಮಿಕ ಶಾಲೆಗಳು: 40,000 ಅತಿಥಿ ಶಿಕ್ಷಕರು.&lt;/li&gt; &lt;li&gt;ಸರ್ಕಾರಿ ಪ್ರೌಢ ಶಾಲೆಗಳು: 11,000 ಅತಿಥಿ ಶಿಕ್ಷಕರು.&lt;/li&gt;&lt;/ul&gt;&lt;h2&gt;&lt;strong&gt;ನೇಮಕಾತಿಯ ಉದ್ದೇಶ ಮತ್ತು ಷರತ್ತುಗಳು:&lt;/strong&gt;&lt;/h2&gt;&lt;p&gt;ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬೋಧಕರ ಕೊರತೆಯಿಂದಾಗಿ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ನೇಮಕಾತಿಯು ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ:&lt;/p&gt;&lt;p&gt;&lt;strong&gt;ತಾತ್ಕಾಲಿಕ ನೇಮಕಾತಿ: &lt;/strong&gt;ಈ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ನೇರ ನೇಮಕಾತಿ ಮೂಲಕ ಖಾಯಂ ಶಿಕ್ಷಕರನ್ನು ಭರ್ತಿ ಮಾಡುವವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.&lt;/p&gt;&lt;p&gt;&lt;strong&gt;ಅವಧಿ: &lt;/strong&gt;ಖಾಯಂ ಶಿಕ್ಷಕರು ಬರುವವರೆಗೆ ಅಥವಾ 2026-27ನೇ ಶೈಕ್ಷಣಿಕ ವರ್ಷದ ಅಂತ್ಯದವರೆಗೆ (ಯಾವುದು ಮೊದಲೋ ಅಲ್ಲಿಯವರೆಗೆ) ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸಬಹುದಾಗಿದೆ.&lt;/p&gt;&lt;p&gt;&lt;strong&gt;ನೇರ ನೇಮಕಾತಿ: &lt;/strong&gt;ಸ್ಥಳೀಯವಾಗಿ ಅರ್ಹ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;ಶಾಲಾ ಆರಂಭದ ದಿನವೇ ಶಿಕ್ಷಕರ ಲಭ್ಯತೆ:&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಆರಂಭವಾದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈ ಬಾರಿ ಹವಾಮಾನ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ಶಾಲಾ ಆರಂಭದ ದಿನವೇ ಶಿಕ್ಷಕರು ಲಭ್ಯವಿರಬೇಕು ಎಂಬ ಉದ್ದೇಶದಿಂದ ಮುಂಚಿತವಾಗಿಯೇ ಆದೇಶ ಹೊರಡಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಶಾಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.&lt;/p&gt;&lt;h3&gt;&lt;strong&gt;ಮುಂದಿನ ಪ್ರಕ್ರಿಯೆ:&lt;/strong&gt;&lt;/h3&gt;&lt;p&gt;ಆಯಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಆಧರಿಸಿ, ಅಗತ್ಯವಿರುವ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಅತಿಥಿ ಶಿಕ್ಷಕರ ಗೌರವಧನ ಪಾವತಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಈಗಾಗಲೇ ಸಹಮತಿ ನೀಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಖಚಿತವಾದಂತಾಗಿದೆ. ಅಲ್ಲದೆ, ಡಿ.ಇಡಿ ಮತ್ತು ಬಿ.ಇಡಿ ಪದವಿ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಇದು ದೊಡ್ಡ ಮಟ್ಟದ ಉದ್ಯೋಗಾವಕಾಶವನ್ನು ಕಲ್ಪಿಸಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-recruitment-51000-guest-teachers-for-2026-27-academic-year-official-order-out-sat/articleshow-3qegd47"/>
        </item>
        <item>
            <title><![CDATA[ಆರೋಗ್ಯ ಇಲಾಖೆಗೆ ಸಚಿವ ಯು.ಟಿ. ಖಾದರ್ 'ಮೇಜರ್ ಸರ್ಜರಿ': 1280 ವೈದ್ಯರ ನೇಮಕ, ಗುತ್ತಿಗೆ ನೌಕರರು ಖಾಯಂ!]]></title>
            <link>https://kannada.asianetnews.com/state-government-jobs/ut-khader-health-department-review-doctor-recruitment-salary-hike-sat/articleshow-4isl44e</link>
            <guid isPermaLink="true">https://kannada.asianetnews.com/state-government-jobs/ut-khader-health-department-review-doctor-recruitment-salary-hike-sat/articleshow-4isl44e</guid>
            <pubDate>Wed, 10 Jun 2026 17:08:13 +0530</pubDate>
            <description><![CDATA[ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ವೈದ್ಯರು ಮತ್ತು ನರ್ಸ್&zwnj;ಗಳ ಕೊರತೆ ನೀಗಿಸಲು ಬೃಹತ್ ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಗುತ್ತಿಗೆ ನೌಕರರ ಖಾಯಂ ಮತ್ತು ಮಳೆಗಾಲದ ಸಾಂಕ್ರಾಮಿಕ ರೋಗಗಳ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktrn4y5sgq9pfq5dkmzvbad0,imgname-health-minister-ut-khader-1781091432633.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.10): ರಾ&lt;/strong&gt;ಜ್ಯದ ಆರೋಗ್ಯ ಕ್ಷೇತ್ರದಲ್ಲಿ ದಶಕಗಳಿಂದ ಕಾಡುತ್ತಿರುವ ವೈದ್ಯರ ಕೊರತೆಯನ್ನು ನೀಗಿಸಲು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲೇ ಭರ್ಜರಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಇಲಾಖೆಯಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ಭರ್ತಿ ಹಾಗೂ ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಬೃಹತ್ ನೇಮಕಾತಿ ಅಭಿಯಾನ:&lt;/strong&gt;&lt;/h3&gt;&lt;p&gt;ರಾಜ್ಯದಲ್ಲಿ ಸದ್ಯ 1280 ಎಂಬಿಬಿಎಸ್ ವೈದ್ಯರು, 924 ತಜ್ಞ ವೈದ್ಯರು ಹಾಗೂ 892 ನರ್ಸ್&zwnj;ಗಳ ಕೊರತೆ ಇದೆ. ಈ ಸಮಸ್ಯೆಯನ್ನು ಹೋಗಲಾಡಿಸಲು 'ವಾಕ್-ಇನ್ ಇಂಟರ್ವ್ಯೂ' (Walk-in Interview) ಮೂಲಕ ತಕ್ಷಣದ ನೇಮಕಾತಿಗೆ ಸಚಿವರು ಚಾಲನೆ ನೀಡಿದ್ದಾರೆ. ಅರ್ಹ ಅಭ್ಯರ್ಥಿಗಳು ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ (DHO) ಅರ್ಜಿ ಸಲ್ಲಿಸಬಹುದು. ವಿಶೇಷವೆಂದರೆ, ಎಂಬಿಬಿಎಸ್ ವೈದ್ಯರಿಗೆ ಮಾಸಿಕ 1,10,000 ರೂ. ಭಾರಿ ವೇತನ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಇನ್ನು ಕೋರ್ಸ್ ಪೂರ್ಣಗೊಳ್ಳದ ಫೈನಲ್ ಇಯರ್ ಪಿಜಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಿ, ಅವರಿಗೆ 10 ಸಾವಿರ ರೂ. ಸ್ಟೈಫಂಡ್ ನೀಡಲಾಗುವುದು.&lt;/p&gt;&lt;h2&gt;&lt;strong&gt;ಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ:&lt;/strong&gt;&lt;/h2&gt;&lt;p&gt;ಹಲವು ವರ್ಷಗಳಿಂದ ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸಚಿವರು ಬಂಪರ್ ಕೊಡುಗೆ ನೀಡಿದ್ದಾರೆ. 5 ವರ್ಷ ಸೇವೆ ಪೂರ್ಣಗೊಳಿಸಿರುವ ಮತ್ತು ಉತ್ತಮ ಕೆಲಸ ಮಾಡಿರುವ ಗುತ್ತಿಗೆ ನೌಕರರನ್ನು ಹಂತಹಂತವಾಗಿ ಖಾಯಂಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರ ಭಾಗವಾಗಿ 200 ವೈದ್ಯರನ್ನು ಕೆಇಎ (KEA) ಮೂಲಕ ನೇರ ನೇಮಕಾತಿ ಮಾಡಿ ವಾರದೊಳಗೆ ಆದೇಶ ಪತ್ರ ನೀಡಲು ನಿರ್ಧರಿಸಲಾಗಿದ್ದು, ಇದಕ್ಕೆ ಆರ್ಥಿಕ ಇಲಾಖೆಯ ಒಪ್ಪಿಗೆಯೂ ಸಿಕ್ಕಿದೆ.&lt;/p&gt;&lt;h2&gt;&lt;strong&gt;ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ:&lt;/strong&gt;&lt;/h2&gt;&lt;p&gt;'ನಗರ ಪ್ರದೇಶಗಳಲ್ಲಿ ವೈದ್ಯರ ಲಭ್ಯತೆ ಹೆಚ್ಚಿದೆ, ಆದರೆ ಗ್ರಾಮೀಣ ಮತ್ತು ಗುಡ್ಡಗ್ರಾಮಗಳಲ್ಲಿ ವೈದ್ಯರಿಲ್ಲದೆ ಜನರು ಪರದಾಡುತ್ತಿದ್ದಾರೆ. ಈ ತಾರತಮ್ಯ ಹೋಗಲಾಡಿಸಲು ಹೊಸದಾಗಿ ನೇಮಕಗೊಳ್ಳುವವರು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು' ಎಂದು ಖಾದರ್ ಎಚ್ಚರಿಸಿದ್ದಾರೆ. ವೈದ್ಯರ ಕೊರತೆ ನೀಗಿಸಲು 60 ವರ್ಷಕ್ಕೆ ನಿವೃತ್ತರಾದ ವೈದ್ಯರನ್ನು 70 ವರ್ಷದವರೆಗೆ ಕಾಂಟ್ರಾಕ್ಟ್ ಆಧಾರದ ಮೇಲೆ ಬಳಸಿಕೊಳ್ಳುವ ಹೊಸ ಚಿಂತನೆಯನ್ನೂ ಸಚಿವರು ಮುಂದಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮಳೆಗಾಲದ ಸಿದ್ಧತೆ ಮತ್ತು ಮಂಗನ ಕಾಯಿಲೆ:&lt;/strong&gt;&lt;/h2&gt;&lt;p&gt;ಮಳೆಗಾಲ ಆರಂಭವಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಫಾಗಿಂಗ್ ಮಾಡುವಂತೆ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಂಗನ ಕಾಯಿಲೆಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಜೆಕ್ಷನ್ ಬ್ಯಾನ್ ಆಗಿರುವುದರಿಂದ ಬದಲಿ ತೈಲ (Oil) ವಿತರಿಸಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿ ವರ್ಷಕ್ಕೆ 16 ಸಾವಿರ ಹಾವು ಕಡಿತದ ಪ್ರಕರಣಗಳು ವರದಿಯಾಗುತ್ತಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಸಂಗ್ರಹಿಸಿಡುವಂತೆ ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.&lt;/p&gt;&lt;p&gt;ಈ ಮೂಲಕ ಆರೋಗ್ಯ ಸಚಿವರು ಇಲಾಖೆಯ ಒಟ್ಟಾರೆ ಚಿತ್ರಣವನ್ನೇ ಬದಲಿಸಲು ಮುಂದಾಗಿದ್ದು, ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/ut-khader-health-department-review-doctor-recruitment-salary-hike-sat/articleshow-4isl44e"/>
        </item>
        <item>
            <title><![CDATA[KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಸ್ಪೆಂಡ್ ಬೆನ್ನಲ್ಲೇ ಡಾ.ಪ್ರಭುದೇವ್‌ಗೆ ಹಂಗಾಮಿ ಜವಾಬ್ದಾರಿ! ಇವರ ಹಿನ್ನೆಲೆ?]]></title>
            <link>https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9</link>
            <guid isPermaLink="true">https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9</guid>
            <pubDate>Mon, 13 Jul 2026 20:05:47 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್&zwnj;ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಗಂಭೀರ ಆರೋಪಗಳ ಮೇಲೆ ರಾಜ್ಯಪಾಲರು ಅಮಾನತುಗೊಳಿಸಿದ್ದಾರೆ. ತಮ್ಮ ಪುತ್ರಿಯರಿಗೆ ಅಕ್ರಮವಾಗಿ ಹುದ್ದೆ ಕೊಡಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಅವರ ಮೇಲಿದ್ದು, ಡಾ. ಬಿ. ಪ್ರಭುದೇವ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxdyebfa80vjz0qk2w6mdp7s,imgname-kpsc-interim-head-dr-prabhudev-1783953305064.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.13): ಕ&lt;/strong&gt;ರ್ನಾಟಕ ಲೋಕಸೇವಾ ಆಯೋಗ (Karnataka Public Service Commission - KPSC) ದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಆಯೋಗದ ಅಧ್ಯಕ್ಷರಾಗಿದ್ದ (Chairman) ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ರಾಜ್ಯಪಾಲ (Governor) ಥಾವರ್&zwnj;ಚಂದ್ ಗೆಹ್ಲೋಟ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ (Suspended) ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಭ್ರಷ್ಟಾಚಾರ (Corruption) ಮತ್ತು ಸ್ವಜನಪಕ್ಷಪಾತದ (Favoritism) ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ಆಯೋಗದ ಹಿರಿಯ ಸದಸ್ಯರಾದ ಡಾ. ಬಿ. ಪ್ರಭುದೇವ್ ಅವರನ್ನು ಕೆಪಿಎಸ್&zwnj;ಸಿಯ ಹಂಗಾಮಿ ಅಧ್ಯಕ್ಷರನ್ನಾಗಿ (Interim Chairman) ನೇಮಕ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಅಮಾನತಿಗೆ ಕಾರಣವೇನು? (Reasons for Suspension)&lt;/strong&gt;&lt;/h2&gt;&lt;p&gt;ರಾಜ್ಯಪಾಲರು ಹೊರಡಿಸಿರುವ ಸುದೀರ್ಘ ಆದೇಶದ (Order) ಪ್ರತಿಗಳ ಪ್ರಕಾರ, ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ (Abuse of Power) ಮಾಡಿಕೊಂಡು ತಮ್ಮ ಇಬ್ಬರು ಪುತ್ರಿಯರನ್ನು ಕೈಗಾರಿಕಾ ವಿಸ್ತರಣಾಧಿಕಾರಿ (Industrial Extension Officer - IEO) ಹುದ್ದೆಗಳಿಗೆ ಅಕ್ರಮವಾಗಿ ಆಯ್ಕೆ ಮಾಡಲು ನೆರವಾಗಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;p&gt;ಪ್ರಮುಖವಾಗಿ, ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರು ಓಬಿಸಿ 3ಬಿ (OBC 3B) ಮೀಸಲಾತಿಯಡಿ ಆಯ್ಕೆಯಾಗಲು ವಾರ್ಷಿಕ ಆದಾಯ ಕೇವಲ 40,000 ರೂ. ಇದೆ ಎಂಬ ಸುಳ್ಳು ಆದಾಯ ಪ್ರಮಾಣಪತ್ರವನ್ನು (Fraudulent Income Certificate) ಸಲ್ಲಿಸಿದ್ದರು. ಆದರೆ, ಶಿವಶಂಕರಪ್ಪ ಅವರ ವಾರ್ಷಿಕ ಆದಾಯ 12 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದು, ಅವರ ಮಕ್ಕಳು 'ಕ್ರೀಮಿ ಲೇಯರ್' (Creamy Layer) ವ್ಯಾಪ್ತಿಗೆ ಬರುತ್ತಾರೆ. ಹೀಗಿದ್ದರೂ ಸುಳ್ಳು ದಾಖಲೆ ನೀಡಿ ಸರ್ಕಾರಕ್ಕೆ ವಂಚಿಸಿರುವುದು ಮೇಲ್ನೋಟಕ್ಕೆ (Prima Facie) ಸಾಬೀತಾಗಿದೆ. ಅಲ್ಲದೆ, ಆಯ್ಕೆ ಪ್ರಕ್ರಿಯೆಯಲ್ಲಿ (Selection Process) ತಮ್ಮ ಮಕ್ಕಳೇ ಅಭ್ಯರ್ಥಿಗಳಾಗಿದ್ದರೂ ಅಧ್ಯಕ್ಷರು ಆ ಪ್ರಕ್ರಿಯೆಯಿಂದ ದೂರ ಉಳಿಯದೆ (Recusal) ಹಿತಾಸಕ್ತಿ ಸಂಘರ್ಷದ (Conflict of Interest) ನಿಯಮ ಉಲ್ಲಂಘಿಸಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾರು ಈ ಡಾ. ಬಿ. ಪ್ರಭುದೇವ್?&lt;/strong&gt;&lt;/h2&gt;&lt;p&gt;ಶಿವಶಂಕರಪ್ಪ ಅವರ ಅಮಾನತಿನಿಂದ ತೆರವಾದ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಬಿ. ಪ್ರಭುದೇವ್ (Dr. B. Prabhudev) ಅವರು 2021 ರಿಂದ ಕೆಪಿಎಸ್&zwnj;ಸಿ ಸದಸ್ಯರಾಗಿ (Member) ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೆಪಿಎಸ್&zwnj;ಸಿಯಲ್ಲಿ ತರಲಾದ ಹಲವು ಪ್ರಮುಖ ಸುಧಾರಣೆಗಳು (Reforms) ಮತ್ತು ಬದಲಾವಣೆಗಳಲ್ಲಿ ಇವರು ಮಹತ್ತರ ಪಾತ್ರ ವಹಿಸಿದ್ದರು. ಇವರ ದಕ್ಷತೆ ಮತ್ತು ಹಿರಿತನವನ್ನು (Seniority) ಪರಿಗಣಿಸಿ ರಾಜ್ಯಪಾಲರು ಇವರಿಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಸಂವಿಧಾನದ 317(2) ಅಡಿಯಲ್ಲಿ ಕ್ರಮ&lt;/strong&gt;&lt;/h2&gt;&lt;p&gt;ರಾಜ್ಯಪಾಲರು ಭಾರತ ಸಂವಿಧಾನದ ವಿಧಿ 317(2) (Article 317(2) of the Constitution) ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಬಳಸಿ ಈ ಅಮಾನತು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಮೂಲಕ ತನಿಖೆ ನಡೆಸಲು ರಾಷ್ಟ್ರಪತಿಗಳಿಗೆ (President of India) ಶಿಫಾರಸು ಮಾಡಲಾಗಿದೆ. ತನಿಖೆ ಮುಗಿಯುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರು ಕಚೇರಿ ಕೆಲಸಗಳಲ್ಲಿ ಭಾಗವಹಿಸುವಂತಿಲ್ಲ.&lt;/p&gt;&lt;p&gt;ಲಕ್ಷಾಂತರ ಅಭ್ಯರ್ಥಿಗಳ (Candidates) ಭವಿಷ್ಯವನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆಯ (Constitutional Body) ಮುಖ್ಯಸ್ಥರೇ ಇಂತಹ ಆರೋಪಕ್ಕೆ ಗುರಿಯಾಗಿರುವುದು ಸಾರ್ವಜನಿಕ ನಂಬಿಕೆಗೆ (Public Confidence) ಧಕ್ಕೆ ತಂದಿದೆ. ನೂತನ ಹಂಗಾಮಿ ಅಧ್ಯಕ್ಷ ಡಾ. ಬಿ. ಪ್ರಭುದೇವ್ ಅವರು ಆಯೋಗದ ಪಾರದರ್ಶಕತೆಯನ್ನು (Transparency) ಮರುಸ್ಥಾಪಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kpsc-chairman-shivashankarappa-sahukar-suspended-interim-head-dr-prabhudev-details/articleshow-571g5i9"/>
        </item>
        <item>
            <title><![CDATA[ಕರ್ನಾಟಕ ಲೋಕಾಯುಕ್ತ ನೇಮಕಾತಿ 2026: ಕ್ಲರ್ಕ್, ಟೈಪಿಸ್ಟ್ ಹುದ್ದೆ, ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ!]]></title>
            <link>https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i</link>
            <guid isPermaLink="true">https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i</guid>
            <pubDate>Sat, 18 Jul 2026 13:33:53 +0530</pubDate>
            <description><![CDATA[ಕರ್ನಾಟಕ ಲೋಕಾಯುಕ್ತವು 25 ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ 67,600 ರೂ. ವರೆಗೆ ವೇತನ ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwjpwac1efee4yf0v117axvs,imgname----------------------95--1783039404417.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಲೋಕಾಯುಕ್ತವು ಖಾಲಿ ಇರುವ ಕ್ಲರ್ಕ್ (ಗುಮಾಸ್ತ) ಮತ್ತು ಟೈಪಿಸ್ಟ್ (ಬೆರಳಚ್ಚುಗಾರ) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್&zwnj;ಲೈನ್&zwnj; ಮೂಲಕ ಅರ್ಜಿ ಸಲ್ಲಸಬಹುದು.&lt;/p&gt;&lt;h2&gt;ಹುದ್ದೆಗಳ ವಿವರ:&lt;/h2&gt;&lt;p&gt;ಸಂಸ್ಥೆಯ ಹೆಸರು: ಕರ್ನಾಟಕ ಲೋಕಾಯುಕ್ತ&lt;/p&gt;&lt;p&gt;ಒಟ್ಟು ಹುದ್ದೆಗಳ ಸಂಖ್ಯೆ: 25&lt;/p&gt;&lt;p&gt;ಹುದ್ದೆಯ ಹೆಸರು: ಕ್ಲರ್ಕ್ ಮತ್ತು ಟೈಪಿಸ್ಟ್&lt;/p&gt;&lt;p&gt;ಉದ್ಯೋಗ ಸ್ಥಳ: ಬೆಂಗಳೂರು (ಕರ್ನಾಟಕ)&lt;/p&gt;&lt;h2&gt;ಶೈಕ್ಷಣಿಕ ಅರ್ಹತೆ:&lt;/h2&gt;&lt;p&gt;ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಿಯುಸಿ ಪೂರ್ಣಗೊಳಿಸಿರಬೇಕು.&lt;/p&gt;&lt;h2&gt;ವೇತನ:&lt;/h2&gt;&lt;p&gt;ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 34,100-67,600 ರು. ವರೆಗೆ ವೇತನವನ್ನು ನೀಡಲಾಗುತ್ತದೆ&lt;/p&gt;&lt;h2&gt;ವಯೋಮಿತಿ:&lt;/h2&gt;&lt;p&gt;ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.&lt;/p&gt;&lt;h3&gt;ವಯೋಮಿತಿ ಸಡಿಲಿಕೆ:&lt;/h3&gt;&lt;p&gt;2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ ಅಭ್ಯರ್ಥಿಗಳಿಗೆ: 5 ವರ್ಷ&lt;/p&gt;&lt;h2&gt;ಅರ್ಜಿ ಶುಲ್ಕದ ವಿವರ&lt;/h2&gt;&lt;p&gt;ಕ್ಯಾಟ್ 2A, 2B, 3A, 3B, ಮಾಜಿ ಸೇವಾ ಅಭ್ಯರ್ಥಿಗಳಿಗೆ: 250&lt;/p&gt;&lt;p&gt;ಎಸ್&zwnj;ಸಿ/ಎಸ್&zwnj;ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇಲ್ಲ&lt;/p&gt;&lt;p&gt;ಪಾವತಿ ವಿಧಾನ: ಆನ್&zwnj;ಲೈನ್&lt;/p&gt;&lt;h2&gt;ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?&lt;/h2&gt;&lt;p&gt;ಮೆರಿಟ್ ಪಟ್ಟಿ&lt;/p&gt;&lt;p&gt;ಸಂದರ್ಶನ&lt;/p&gt;&lt;h2&gt;ಅರ್ಜಿ ಸಲ್ಲಿಸುವುದು ಹೇಗೆ:&lt;/h2&gt;&lt;p&gt;ಮೊದಲು ಕರ್ನಾಟಕ ಲೋಕಾಯುಕ್ತದ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಅಥವಾ ಕೆಳಗಿನ ಲಿಂಕ್ ಬಳಸಿ.&lt;/p&gt;&lt;p&gt;https://lokayukta.karnataka.gov.in/onlinerecruitment/ctk/home.php&lt;/p&gt;&lt;p&gt;ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್&zwnj;ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.&lt;/p&gt;&lt;p&gt;ನಿಮ್ಮ ಇತ್ತೀಚಿನ ಛಾಯಾಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ಅಪ್&zwnj;ಲೋಡ್ ಮಾಡಿ.&lt;/p&gt;&lt;p&gt;ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್&zwnj;ಲೈನ್ ಮೂಲಕ ಪಾವತಿಸಿ.&lt;/p&gt;&lt;p&gt;ಕೊನೆಯದಾಗಿ, ಎಲ್ಲವನ್ನೂ ಮರುಪರಿಶೀಲಿಸಿ &lsquo;Submit&rsquo; ಬಟನ್ ಒತ್ತಿ. ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.&lt;/p&gt;&lt;h2&gt;ಪ್ರಮುಖ ದಿನಾಂಕಗಳು&lt;/h2&gt;&lt;p&gt;ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ: ಜುಲೈ 17-2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್&zwnj; 17-2026&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-lokayukta-recruitment-2026-apply-online-for-clerk-and-typist-posts-salary-up-to-67600-gdp/articleshow-61odw3i"/>
        </item>
        <item>
            <title><![CDATA[ಬೆಂಗಳೂರು: ಇನ್ಸ್‌ಪೆಕ್ಟರ್ ಶಿವಪ್ಪ ನಾಯಕರ್ ಹೃದಯಾಘಾತದಿಂದ ನಿಧನ; ಪೊಲೀಸ್ ಇಲಾಖೆಯಲ್ಲಿ ಶೋಕ]]></title>
            <link>https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp</link>
            <guid isPermaLink="true">https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp</guid>
            <pubDate>Fri, 15 May 2026 11:08:12 +0530</pubDate>
            <description><![CDATA[ಬೆಂಗಳೂರು ಸಿಟಿ ಸ್ಪೆಷಲ್ ಬ್ರಾಂಚ್ (CSB) ಇನ್ಸ್&zwnj;ಪೆಕ್ಟರ್ ಶಿವಪ್ಪ ನಾಯಕರ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2010ರ ಬ್ಯಾಚ್&zwnj;ನ ಅಧಿಕಾರಿಯಾಗಿದ್ದ ಅವರ ಅಕಾಲಿಕ ಮರಣವು ಪೊಲೀಸ್ ಇಲಾಖೆಯಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krn1tfj3v2tqkgesknn60cke,imgname-police-sub-inspector-shivappa-mn-death-1778823020098.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 15): ರಾ&lt;/strong&gt;ಜ್ಯ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಯೊಬ್ಬರನ್ನು ಬೆಂಗಳೂರು ಕಳೆದುಕೊಂಡಿದೆ. ಸಿಟಿ ಸ್ಪೆಷಲ್ ಬ್ರಾಂಚ್&zwnj;ನಲ್ಲಿ (CSB) ಇನ್ಸ್&zwnj;ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ಪ ನಾಯಕರ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2010ರ ಬ್ಯಾಚ್&zwnj;ನ ಅಧಿಕಾರಿಯಾಗಿದ್ದ ಅವರು, ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಶಿವಪ್ಪ ನಾಯಕರ್ ಅವರಿಗೆ ನಿನ್ನೆ ರಾತ್ರಿ ದಿಢೀರ್ ಎಂದು ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 56 ವರ್ಷ ವಯಸ್ಸಿನ ಅಧಿಕಾರಿಯೊಬ್ಬರು ಅಕಾಲಿಕವಾಗಿ ನಿಧನರಾಗಿರುವುದು ಪೊಲೀಸ್ ಇಲಾಖೆಯಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.&lt;/p&gt;&lt;h2&gt;&lt;strong&gt;ವೃತ್ತಿಜೀವನ ಮತ್ತು ಹಿನ್ನೆಲೆ:&lt;/strong&gt;&lt;/h2&gt;&lt;p&gt;ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮಹಟ್ಟಿ ಗ್ರಾಮದವರಾದ ಶಿವಪ್ಪ ನಾಯಕರ್ ಅವರು, 2010ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಸದ್ಯ ಬೆಂಗಳೂರು ನಗರದ ಸಿಟಿ ಸ್ಪೆಷಲ್ ಬ್ರಾಂಚ್&zwnj;ನಲ್ಲಿ ಇನ್ಸ್&zwnj;ಪೆಕ್ಟರ್ ಆಗಿ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಕಿರಿಯ ಅಧಿಕಾರಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಮಾರ್ಗದರ್ಶಕರಾಗಿದ್ದ ಅವರು, ತಮ್ಮ ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದರು.&lt;/p&gt;&lt;h3&gt;&lt;strong&gt;ಕಂಬನಿ ಮಿಡಿದ ಸಹೋದ್ಯೋಗಿಗಳು:&lt;/strong&gt;&lt;/h3&gt;&lt;p&gt;ಶಿವಪ್ಪ ನಾಯಕರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮವಾದ ಸೋಮಹಟ್ಟಿಗೆ ಕೊಂಡೊಯ್ಯುವ ಸಾಧ್ಯತೆಯಿದೆ. ಶಿವಪ್ಪ ನಾಯಕರ್ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪೊಲೀಸ್ ವಲಯದ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ಕೆಲಸದ ಒತ್ತಡ ಮತ್ತು ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp"/>
        </item>
        <item>
            <title><![CDATA[ಸರ್ಕಾರಿ ಕೆಲ್ಸ ಅಂತ ನಂಬಿದ್ರೆ ಚೊಂಬೇ ಗತಿ ! 18 ವರ್ಷಗಳ ನಂತ್ರ ಬಂದ ನೇಮಕಾತಿ ಪತ್ರ ನೋಡಿ ಅಭ್ಯರ್ಥಿ ಶಾಕ್ !]]></title>
            <link>https://kannada.asianetnews.com/state-government-jobs/kerala-man-who-applied-for-job-in-2005-receives-appointment-just-before-retirement-after-20-year-wait/articleshow-emfmc3v</link>
            <guid isPermaLink="true">https://kannada.asianetnews.com/state-government-jobs/kerala-man-who-applied-for-job-in-2005-receives-appointment-just-before-retirement-after-20-year-wait/articleshow-emfmc3v</guid>
            <pubDate>Mon, 01 Jun 2026 11:21:04 +0530</pubDate>
            <description><![CDATA[&lt;p&gt;ಸರ್ಕಾರಿ ಕೆಲ್ಸಕ್ಕೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದು, ಪಾಸ್ ಆದ್ಮೇಲೂ ನೇಮಕಾತಿ ಪತ್ರ ಕೈ ಸೇರೋದು ಅನುಮಾನ. ಅದೇ ಕೆಲ್ಸಕ್ಕೆ ನೀವು ಕಾಯ್ತಾ ಕುಳಿತ್ರೆ ವಯಸ್ಸಾಗುತ್ತೆ. ಪಾಪ, ಕೇರಳದ ವ್ಯಕ್ತಿಗೂ ಆಗಿದ್ದೇನು ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0vgvnc1rg1793cnwx0k32z,imgname-government-job-1780292808364.jpg" type="image/jpeg" height="390" width="690"/>
            <content:encoded><![CDATA[&lt;p&gt;ಸರ್ಕಾರಿ ಕೆಲ್ಸ ಸಿಗ್ಲಿ ಅಂತ ಪ್ರತಿಯೊಬ್ಬರೂ ಬಯಸ್ತಾರೆ. ಸರ್ಕಾರಿ ಕೆಲ್ಸಕ್ಕೆ ಅರ್ಜಿ ಸಲ್ಲಿಸಿ ವರ್ಷಪೂರ್ತಿ ಕಾಯ್ತಾರೆ. ಸರ್ಕಾರಿ ಕೆಲ್ಸ ಸಿಕ್ಕಿದ್ರೆ ಅದರ ಖುಷಿಯೇ ಬೇರೆ. ಆದ್ರೆ ಗವರ್ನಮೆಂಟ್ ಕೆಲ್ಸ ಸಿಗೋದು ಸುಲಭ ಅಲ್ಲ. ಬರೀ ಒಂದೋ ಎರಡೋ ವರ್ಷ ಕಾಯೋದು ಸಾಮಾನ್ಯ ಬಿಡಿ. ಆದ್ರೆ 2008ರಲ್ಲಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಕೆಲಸದ ಕರೆ ಬಂದ ವರ್ಷ ಕೇಳಿದ್ರೆ ನೀವು ದಂಗಾಗ್ತೀರಿ.&lt;/p&gt;&lt;h2&gt;18 ವರ್ಷದ ನಂತ್ರ ಬಂತು ನೇಮಕಾತಿ ಪತ್ರ&lt;/h2&gt;&lt;p&gt;ಘಟನೆ ನಡೆದಿರುವುದು ಕೇರಳ (Kerala)ದಲ್ಲಿ. ಮಲಪ್ಪುರಂ ಜಿಲ್ಲೆಯ ಕಾಳಿಕಾವು ನಿವಾಸಿ ಅಬ್ದುಲ್ ಮಜೀದ್ ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಮಜೀದ್ 2005 ರಲ್ಲಿ ಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಅವರು ಆಯ್ಕೆಯಾದ ರ್ಯಾಂಕಿಂಗ್ ಪಟ್ಟಿ 2008 ರಲ್ಲಿ ಮುಕ್ತಾಯಗೊಂಡಿತ್ತು. ಆದ್ರೆ ಅವರಿಗೆ ಯಾವುದೇ ನೇಮಕಾತಿ ಪತ್ರ ಬಂದಿರಲಿಲ್ಲ. 18 ವರ್ಷಗಳ ನಂತ್ರ ಕಳೆದ ತಿಂಗಳು ಕೇರಳ ಸಾರ್ವಜನಿಕ ಸೇವಾ ಆಯೋಗದಿಂದ (ಪಿಎಸ್ಸಿ) ನೇಮಕಾತಿ ಪತ್ರ ಬಂದಿದೆ. ಇದನ್ನು ನೋಡಿದ ಅಬ್ದುಲ್ ಮಜೀದ್ ದಂಗಾಗಿದ್ದಾರೆ.&lt;/p&gt;&lt;p&gt;ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರ ನೇಮಕಾತಿಗೆ&lt;/p&gt;&lt;p&gt;ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಆಸೆಯನ್ನು ಮಜೀದ್ ಹೊಂದಿದ್ದರು. ರ್ಯಾಂಕಿಂಗ್ ಪಟ್ಟಿಯಲ್ಲಿ ಹೆಸರು ಬಂದಾಗಿನಿಂದ್ಲೂ ಅವರು ನೇಮಕಾತಿಗಾಗಿ ಕಾಯ್ತಿದ್ದರು. ಆದ್ರೆ ವರ್ಷಗಳಾದ್ರೂ ಯಾವುದೇ ನೇಮಕಾತಿ ಪತ್ರ ಕೈ ಸೇರಿರಲಿಲ್ಲ. ಇದ್ರಿಂದ ಮಜೀದ್ ನಿರಾಸೆಗೊಂಡಿದ್ದರು. ಕೆಲಸ ಸಿಗುವ ಆಸೆಯನ್ನು ಬಿಟ್ಟಿದ್ದರು.&lt;/p&gt;&lt;p&gt;ಇಷ್ಟು ವರ್ಷದ ನಂತ್ರ ನೇಮಕಾತಿ ಪತ್ರ ಕೈಸೇರಿದ್ರೂ ಮಜೀದ್ ಅವರಿಗೆ ಕೆಲ್ಸ ಮಾಡಲು ಸಾಧ್ಯವಿಲ್ಲ. ಅವರ ಬಹುದಿನದ ಕನಸು ಕನಸಾಗೇ ಉಳಿಯಲಿದೆ. ಕೆಲ್ಸ ಮಾಡುವ ಎಲ್ಲ ಅರ್ಹತೆಯನ್ನು ಅವರು ಕಳೆದುಕೊಂಡಿದ್ದಾರೆ. ನಿಯಮದ ಪ್ರಕಾರ, ನೇಮಕಾತಿ ಪತ್ರ ಕೈಸೇರಿದ ಮೇಲೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಹಾಗೂ ಮೂರು ತಿಂಗಳೊಳಗೆ ಸೇವೆಗೆ ಸೇರಬೇಕು. ಆದ್ರೆ ಮಜೀದ್ ದಾಖಲೆ ಪ್ರಕಾರ ಅವರು ಕ ಮೇ 27, 1966 ರಂದು ಜನಿಸಿದ್ದಾರೆ. ಅಂದ್ರೆ ಅವರ ವಯಸ್ಸು 60 ವರ್ಷ ದಾಟಿದೆ. ಹಾಗಾಗಿ ಅವರು ನೇಮಕಾತಿಗೆ ಅನರ್ಹರಾಗಿದ್ದಾರೆ. ಈ ಬಗ್ಗೆ ಮಜೀದ್ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;Job: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ&lt;/p&gt;&lt;p&gt;ಈ ವಿವಾದ ಇಲಾಖೆಗಳು ಮತ್ತು PSC ನಡುವಿನ ನೇಮಕಾತಿ ಸಮನ್ವಯದಲ್ಲಿನ ವ್ಯವಸ್ಥಿತ ಅಸಮರ್ಥತೆಯನ್ನು ಬಹಿರಂಗಪಡಿಸಿದೆ. ಖಾಲಿ ಹುದ್ದೆಗಳನ್ನು ವರದಿ ಮಾಡುವಲ್ಲಿನ ವಿಳಂಬ, ಅಪೂರ್ಣ ಸಂವಹನ ಮತ್ತು ಆಡಳಿತಾತ್ಮಕ ಕಾರ್ಯಗಳ ಕೊರತೆಯು ನೇಮಕಾತಿ ಪ್ರಕ್ರಿಯೆಯು ವರ್ಷಗಳವರೆಗೆ ಬಗೆಹರಿಯದೆ ಉಳಿಯಲು ಕಾರಣವಾದ ಅಂಶಗಳಾಗಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/state-government-jobs/kerala-man-who-applied-for-job-in-2005-receives-appointment-just-before-retirement-after-20-year-wait/articleshow-emfmc3v"/>
        </item>
        <item>
            <title><![CDATA[ಚನ್ನಪಟ್ಟಣದ ಪುರುಷ ತಹಸೀಲ್ದಾರರಿಗೆ ಅಸಹಜ ಲೈಂಗಿಕ ದೌರ್ಜನ್ಯ; ಮೈಸೂರಿನ ಮೂವರಿಂದ ನಡೆದೇಹೋಯ್ತು ವಿಕೃತಿ!]]></title>
            <link>https://kannada.asianetnews.com/karnataka-districts/bengaluru-south-district-channapatna-tahsildar-physical-harassment-life-threat-attempt-case-anush-arrest/articleshow-ex76evb</link>
            <guid isPermaLink="true">https://kannada.asianetnews.com/karnataka-districts/bengaluru-south-district-channapatna-tahsildar-physical-harassment-life-threat-attempt-case-anush-arrest/articleshow-ex76evb</guid>
            <pubDate>Tue, 07 Jul 2026 22:58:09 +0530</pubDate>
            <description><![CDATA[ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರ ಮೇಲೆ ಅವರ ಸರ್ಕಾರಿ ನಿವಾಸದಲ್ಲೇ ಲೈಂಗಿಕ ದೌರ್ಜನ್ಯ, ದರೋಡೆ ಮತ್ತು ಕೊಲೆ ಯತ್ನ ನಡೆದಿದೆ. ಫೇಸ್&zwnj;ಬುಕ್ ಮೂಲಕ ಪರಿಚಯವಾದ ವ್ಯಕ್ತಿಗಳು ಜ್ಯೂಸ್&zwnj;ನಲ್ಲಿ ಮಾತ್ರೆ ಬೆರೆಸಿ ಈ ಕೃತ್ಯ ಎಸಗಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwysw65hqw07ytprv13xhkqm,imgname-channapatna-tahsildar-1783445199025.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು ದಕ್ಷಿಣ/ರಾಮನಗರ (ಜು.07): ಜಿ&lt;/strong&gt;ಲ್ಲೆಯ ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ಲೈಂಗಿಕ ಕಿರುಕುಳ, ದರೋಡೆ ಹಾಗೂ ಕೊಲೆ ಯತ್ನಕ್ಕೆ ಒಳಗಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೇಸ್&zwnj;ಬುಕ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ತಹಶೀಲ್ದಾರ್ ಅವರ ಸರ್ಕಾರಿ ನಿವಾಸದಲ್ಲೇ ಈ ವಿಕೃತಿ ಎಸೆಗಿದ್ದಾನೆ. ಈ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;h2&gt;&lt;strong&gt;ಪರಿಚಯವಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಮೈಸೂರು ಮೂಲದ ಅನುಶ್ ಎಂಬಾತನಿಗೆ ತಹಶೀಲ್ದಾರ್ ಗಿರೀಶ್ ಅವರ ಪರಿಚಯ ಫೇಸ್&zwnj;ಬುಕ್ ಮೂಲಕವಾಗಿತ್ತು. ಇದೇ ಸ್ನೇಹವನ್ನು ಬಳಸಿಕೊಂಡ ಅನುಶ್, ಕಳೆದ ಜೂನ್ 28ರಂದು ತನ್ನ ಸ್ನೇಹಿತರಾದ ಶೋಭರಾಜನ್ ಮತ್ತು ನವೀನ್ ಎಂಬುವವರ ಜೊತೆ ಚನ್ನಪಟ್ಟಣದಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ಬಂದಿದ್ದನು.&lt;/p&gt;&lt;h2&gt;&lt;strong&gt;ಜೂಸ್&zwnj;ನಲ್ಲಿ ಮಾತ್ರೆ ಬೆರೆಸಿ ದೌರ್ಜನ್ಯ:&lt;/strong&gt;&lt;/h2&gt;&lt;p&gt;ದೂರಿನ ಪ್ರಕಾರ, ಅಂದು ರಾತ್ರಿ ತಹಶೀಲ್ದಾರ್ ನಿವಾಸದಲ್ಲೇ ಮದ್ಯಪಾನ ಮಾಡಿದ್ದ ಆರೋಪಿಗಳು, ನಂತರ ಗಿರೀಶ್ ಅವರಿಗೆ ನೀಡಿದ್ದ ಜೂಸ್&zwnj;ನಲ್ಲಿ ಮಂಕುಬೂದಿ ಅಥವಾ ಪ್ರಜ್ಞೆ ತಪ್ಪಿಸುವ ಮಾತ್ರೆಗಳನ್ನು ಬೆರೆಸಿದ್ದರು. ಜೂಸ್ ಕುಡಿದು ಗಿರೀಶ್ ಪ್ರಜ್ಞೆ ತಪ್ಪುತ್ತಿದ್ದಂತೆಯೇ, ಆರೋಪಿಗಳು ತಮ್ಮ ಅಸಲಿ ರೂಪ ತೋರಿಸಿದ್ದಾರೆ. ಗಿರೀಶ್ ಮೈಮೇಲಿದ್ದ ಬಟ್ಟೆಗಳನ್ನು ಬಿಚ್ಚಿ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಅಸಹಜ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.&lt;/p&gt;&lt;h2&gt;&lt;strong&gt;ಚಿನ್ನಾಭರಣ ದರೋಡೆ ಮತ್ತು 10 ಲಕ್ಷಕ್ಕೆ ಬೇಡಿಕೆ:&lt;/strong&gt;&lt;/h2&gt;&lt;p&gt;ಕಿಡಿಗೇಡಿಗಳು ತಹಶೀಲ್ದಾರ್ ಮೈಮೇಲಿದ್ದ ಚಿನ್ನದ ಸರ ಮತ್ತು ಉಂಗುರಗಳನ್ನು ಕಸಿದುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದ ಅವರು, 10 ಲಕ್ಷ ರೂಪಾಯಿ ಹಣ ನೀಡುವಂತೆ ತಹಶೀಲ್ದಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಗಿರೀಶ್ ಹಣ ನೀಡಲು ನಿರಾಕರಿಸಿದಾಗ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ ಎನ್ನಲಾಗಿದೆ. ಜೂನ್ 29ರಂದು ನಡೆದ ಈ ಕೃತ್ಯದಿಂದ ತಹಶೀಲ್ದಾರ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ಕ್ರಮ:&lt;/strong&gt;&lt;/h2&gt;&lt;p&gt;ಈ ಭೀಕರ ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಬಿ.ಎನ್.ಗಿರೀಶ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಎ1 ಆರೋಪಿ ಅನುಶ್&zwnj;ನನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಅವರ ನಿವಾಸದಲ್ಲೇ ಇಂತಹ ದೌರ್ಜನ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-south-district-channapatna-tahsildar-physical-harassment-life-threat-attempt-case-anush-arrest/articleshow-ex76evb"/>
        </item>
        <item>
            <title><![CDATA[ಕೋರ್ಟ್ ಮೆಟ್ಟಿಲೇರಿದ್ದ 341 OBC ಶಿಕ್ಷಕಿಯರಿಗೆ ಕೊನೆಗೂ ಸಿಕ್ತು ಮುಕ್ತಿ!; ಷರತ್ತುಬದ್ಧ ಸೇರ್ಪಡೆಗೆ ಶಾಲಾ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್!]]></title>
            <link>https://kannada.asianetnews.com/state-government-jobs/341-obc-married-women-allowed-to-join-as-govt-teachers-karnataka-hc-order-san/articleshow-g6pnaza</link>
            <guid isPermaLink="true">https://kannada.asianetnews.com/state-government-jobs/341-obc-married-women-allowed-to-join-as-govt-teachers-karnataka-hc-order-san/articleshow-g6pnaza</guid>
            <pubDate>Mon, 06 Jul 2026 18:55:42 +0530</pubDate>
            <description><![CDATA[&lt;p&gt;ಪ್ರಮಾಣಪತ್ರಗಳ ತಾಂತ್ರಿಕ ವಿವಾದದಿಂದ ನೇಮಕಾತಿ ವಂಚಿತರಾಗಿದ್ದ 341 ವಿವಾಹಿತ ಮಹಿಳಾ ಶಿಕ್ಷಕಿಯರಿಗೆ ಹೈಕೋರ್ಟ್ ಮಧ್ಯಂತರ ಆದೇಶದಿಂದ ರಿಲೀಫ್ ಸಿಕ್ಕಿದೆ. ಶಾಲಾ ಶಿಕ್ಷಣ ಇಲಾಖೆಯು ಷರತ್ತುಬದ್ಧ ಅನುಮತಿಯೊಂದಿಗೆ ಇವರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvskeas2yschdyd9d17tz48,imgname-karnataka-15000-teacher-recruitment-1783344249177.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.6):&lt;/strong&gt; ಸರ್ಕಾರಿ ಶಾಲೆಗಳ 6 ರಿಂದ 8ನೇ ತರಗತಿಗಳ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿದ್ದರೂ, ಪ್ರಮಾಣಪತ್ರಗಳ ತಾಂತ್ರಿಕ ವಿವಾದದಿಂದಾಗಿ ನೇಮಕಾತಿ ವಂಚಿತರಾಗಿದ್ದ 481 ವಿವಾಹಿತ ಮಹಿಳಾ ಅಭ್ಯರ್ಥಿಗಳ ಪೈಕಿ 341 ಅಭ್ಯರ್ಥಿಗಳಿಗೆ ಕೊನೆಗೂ ದೊಡ್ಡ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ನೀಡಿರುವ ಇತ್ತೀಚಿನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ಈ 341 ಶಿಕ್ಷಕಿಯರು ಶಾಲೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದೆ.&lt;/p&gt;&lt;p&gt;2026 ಜೂನ್ 24ರಂದು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆಯು ಈ ಪ್ರಕಟಣೆ ಹೊರಡಿಸಿದೆ. ನೇಮಕಾತಿ ಆದೇಶ ಪಡೆದು ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದ್ದ 341 ಒಬಿಸಿ (OBC) ಮಹಿಳಾ ಅಭ್ಯರ್ಥಿಗಳಿಗೆ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಇಲಾಖೆ ಸಮ್ಮತಿಸಿದೆ. ಆದರೆ, &quot;ಈ ನೇಮಕಾತಿಯು ಪ್ರಸ್ತುತ ನ್ಯಾಯಾಲಯದ ಮುಂದೆ ಬಾಕಿ ಇರುವ ರಿಟ್ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ&quot; ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ, ಕೌನ್ಸೆಲಿಂಗ್ ತಡೆಹಿಡಿಯಲಾದ ಉಳಿದ 140 ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಹೊಸದಾಗಿ ಯಾವುದೇ ನೇಮಕಾತಿ ಆದೇಶಗಳನ್ನು ಸೃಷ್ಟಿಸಬಾರದು ಅಥವಾ ನೀಡಬಾರದು ಎಂದು ಶಿಕ್ಷಣ ಇಲಾಖೆ ಕಮಿಷನರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ವಿವಾದಕ್ಕೆ ಕಾರಣವಾಗಿದ್ದು ತಂದೆ ಮತ್ತು ಗಂಡನ ಆದಾಯ ಪ್ರಮಾಣಪತ್ರ!&lt;/strong&gt;&lt;/h2&gt;&lt;p&gt;ಈ ಇಡೀ ವಿವಾದದ ಮೂಲ ಇರುವುದು ಅಭ್ಯರ್ಥಿಗಳು ಸಲ್ಲಿಸಿದ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ (Caste and Income Certificate). ನೇಮಕಾತಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಒಬಿಸಿ ಮಹಿಳಾ ಅಭ್ಯರ್ಥಿಗಳು ಅವಿವಾಹಿತರಾಗಿದ್ದರು. ಹಾಗಾಗಿ ಅವರು ತಮ್ಮ ತಂದೆಯ ಹೆಸರಿನಲ್ಲಿರುವ ಪ್ರಮಾಣಪತ್ರಗಳನ್ನು ಲಗತ್ತಿಸಿದ್ದರು. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಮುಗಿದು, ಶಾರ್ಟ್&zwnj;ಲಿಸ್ಟ್ ಪ್ರಕಟವಾಗಿ, ದಾಖಲಾತಿ ಪರಿಶೀಲನೆ (Document Verification) ನಡೆಯುವ ವೇಳೆಗೆ ಇವರಲ್ಲಿ ಹಲವರಿಗೆ ಮದುವೆಯಾಗಿತ್ತು. ಇಲಾಖೆಯು ದಾಖಲಾತಿ ಪರಿಶೀಲನೆ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಿವಾಹಿತ ಒಬಿಸಿ ಮಹಿಳೆಯರು ಕಡ್ಡಾಯವಾಗಿ ತಮ್ಮ &lsquo;ಗಂಡನ&rsquo; ಹೆಸರಿನಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನೇ ಸಲ್ಲಿಸಬೇಕು ಎಂದು ಪಟ್ಟು ಹಿಡಿಯಿತು. ಇದು ಸಾಧ್ಯವಾಗದಿದ್ದಾಗ 481 ಅಭ್ಯರ್ಥಿಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಇಲಾಖೆ ತಡೆಹಿಡಿದು, ಉಳಿದ ಅಭ್ಯರ್ಥಿಗಳ ನೇಮಕಾತಿಯನ್ನು ಪೂರ್ಣಗೊಳಿಸಿತ್ತು.&lt;/p&gt;&lt;h2&gt;&lt;strong&gt;ಸುಪ್ರೀಂ ಕೋರ್ಟ್ ಮತ್ತು ಕೆಎಸ್&zwnj;ಎಟಿ ಮೆಟ್ಟಿಲೇರಿದ್ದ ಅಭ್ಯರ್ಥಿಗಳು&lt;/strong&gt;&lt;/h2&gt;&lt;p&gt;ಇಲಾಖೆಯ ಈ ಹಠಾತ್ ನಿರ್ಧಾರವನ್ನು ಪ್ರಶ್ನಿಸಿ ನೊಂದ ಮಹಿಳಾ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KSAT), ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವರೆಗೂ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ವಿವಾದವನ್ನು ಕೆಎಸ್&zwnj;ಎಟಿ (KSAT) ನಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಅಂತಿಮ ಆದೇಶ ನೀಡಿತ್ತು. ಅದರಂತೆ ಸುದೀರ್ಘ ವಿಚಾರಣೆ ನಡೆಸಿದ ಕೆಎಸ್&zwnj;ಎಟಿ, 2026 ಏಪ್ರಿಲ್ 30 ರಂದು ಶಿಕ್ಷಕಿಯರ ಪರವಾಗಿ ಮಹತ್ವದ ತೀರ್ಪು ನೀಡಿತು ಹಾಗೂ ತಡೆಹಿಡಿಯಲಾದ ಅಭ್ಯರ್ಥಿಗಳ ಕೌನ್ಸೆಲಿಂಗ್ ನಡೆಸುವಂತೆ ಆದೇಶಿಸಿತು.&lt;/p&gt;&lt;p&gt;ಕೆಎಸ್&zwnj;ಎಟಿ ತೀರ್ಪನ್ನು ಅನುಸರಿಸಿ, ಶಾಲಾ ಶಿಕ್ಷಣ ಇಲಾಖೆಯು 2026 ಮೇ 16ರಂದು ಈ 481 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಈ ಅಂತಿಮ ಆಯ್ಕೆ ಪಟ್ಟಿಯನ್ನು ವಿರೋಧಿಸಿ ಮತ್ತೆ ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ಮೇಲೆ &lsquo;ಯಥಾಸ್ಥಿತಿ&rsquo; (Status Quo) ಕಾಯ್ದುಕೊಳ್ಳುವಂತೆ ಆದೇಶ ನೀಡಿತು. ಕೋರ್ಟ್&zwnj;ನ ಈ ಆದೇಶಕ್ಕೆ ಗೌರವ ನೀಡಿ ಇಲಾಖೆಯು ತಾನು ನೀಡಿದ್ದ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿತ್ತು.&lt;/p&gt;&lt;h2&gt;&lt;strong&gt;15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಸುದೀರ್ಘ ಇತಿಹಾಸ&lt;/strong&gt;&lt;/h2&gt;&lt;p&gt;ಈ ಇಡೀ ವಿವಾದದ ಹಿನ್ನೆಲೆ ನೋಡುವುದಾದರೆ, ರಾಜ್ಯ ಸರ್ಕಾರವು 2022-23ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗಾಗಿ ಒಟ್ಟು 15,000 ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ಬೃಹತ್ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಇಲಾಖೆಯು ಒಟ್ಟು 13,352 ಅಭ್ಯರ್ಥಿಗಳನ್ನು ಯಶಸ್ವಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ಈ 481 ಅಭ್ಯರ್ಥಿಗಳ ಪ್ರಮಾಣಪತ್ರದ ಗೊಂದಲದಿಂದಾಗಿ ಇಡೀ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇದೀಗ ಹೈಕೋರ್ಟ್&zwnj;ನ ತಾತ್ಕಾಲಿಕ ಮಧ್ಯಂತರ ಆದೇಶದ ಮೇರೆಗೆ 341 ಶಿಕ್ಷಕಿಯರು ಕೊನೆಗೂ ಶಾಲೆಗೆ ಪ್ರವೇಶಿಸುವಂತಾಗಿದ್ದು, ಇಲಾಖೆಯ ಅಂತಿಮ ತೀರ್ಪಿನ ಮೇಲೆ ಇವರ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>state-government-jobs</category>
            <dc:creator>Santosh Naik</dc:creator>
            <atom:link href="https://kannada.asianetnews.com/state-government-jobs/341-obc-married-women-allowed-to-join-as-govt-teachers-karnataka-hc-order-san/articleshow-g6pnaza"/>
        </item>
        <item>
            <title><![CDATA[Karnataka Police : ಕರ್ನಾಟಕ ಪೊಲೀಸರ ಮಾನವನ್ನ ರಾಜಸ್ಥಾನದಲ್ಲಿ ಹರಾಜು ಹಾಕಿದ ಪಿಎಸ್‌ಐ; ಜೈಪುರದಲ್ಲಿ ಅರೆಸ್ಟ್!]]></title>
            <link>https://kannada.asianetnews.com/state/bengaluru-hal-police-station-psi-and-2-cops-trapped-by-jaipur-acb-in-bribe-case-sat/articleshow-gqvfb9z</link>
            <guid isPermaLink="true">https://kannada.asianetnews.com/state/bengaluru-hal-police-station-psi-and-2-cops-trapped-by-jaipur-acb-in-bribe-case-sat/articleshow-gqvfb9z</guid>
            <pubDate>Sun, 14 Jun 2026 19:11:17 +0530</pubDate>
            <description><![CDATA[&lt;p&gt;ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ರಾಜಸ್ಥಾನಕ್ಕೆ ತೆರಳಿದ್ದ ಬೆಂಗಳೂರಿನ ಎಚ್&zwnj;ಎಎಲ್ ಠಾಣೆಯ ಮೂವರು ಪೊಲೀಸರು, ಆರೋಪಿಯಿಂದಲೇ ಲಂಚ ಪಡೆಯುವಾಗ ಅಲ್ಲಿನ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಿಎಸ್&zwnj;ಐ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv35pxpj48f85403w911wt4z,imgname-karnataka-police-anitha-arrest-1781444343505.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಜೈಪುರ (ಜೂ.14): ವ&lt;/strong&gt;ರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ರಾಜಸ್ಥಾನಕ್ಕೆ ತೆರಳಿದ್ದ ಬೆಂಗಳೂರಿನ ಎಚ್&zwnj;ಎಎಲ್ (HAL) ಪೊಲೀಸ್ ಠಾಣೆಯ ಸಿಬ್ಬಂದಿಗಳು ಈಗ ಅಲ್ಲಿನ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳ ಅತಿಥಿಗಳಾಗಿದ್ದಾರೆ. ಆರೋಪಿಯನ್ನು ಬಿಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮಹಿಳಾ ಪಿಎಸ್&zwnj;ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳು ರೆಡ್&zwnj;ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಬೆಂಗಳೂರಿನ ಎಚ್&zwnj;ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವೊಂದರ ತನಿಖೆಗಾಗಿ ಪಿಎಸ್&zwnj;ಐ ಅನಿತಾ, ಹೆಡ್ ಕಾನ್&zwnj;ಸ್ಟೇಬಲ್ ಉಳುವಪ್ಪ ಮತ್ತು ಕಾನ್&zwnj;ಸ್ಟೇಬಲ್ ಯತೀಶ್ ಕಳೆದ ಶುಕ್ರವಾರ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದರು. ಅಲ್ಲಿ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು, ಆತನನ್ನು ಬಂಧಿಸದಿರಲು ಅಥವಾ ಕೇಸ್&zwnj;ನಿಂದ ರಕ್ಷಿಸಲು ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;2 ಲಕ್ಷಕ್ಕೆ ಬೇಡಿಕೆ, 40 ಸಾವಿರ ಪಡೆಯುವಾಗ ಟ್ರ್ಯಾಪ್:&lt;/strong&gt;&lt;/h2&gt;&lt;p&gt;ಆರೋಪಿಯ ಬಳಿ ಬೆಂಗಳೂರು ಪೊಲೀಸರು ಒಟ್ಟು 2 ಲಕ್ಷ ರೂಪಾಯಿ ಹಣ ನೀಡುವಂತೆ ಪೀಡಿಸಿದ್ದರು. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಜೈಪುರದ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಯೋಜನೆಯಂತೆ, ಮೊದಲ ಕಂತಾಗಿ 40 ಸಾವಿರ ರೂಪಾಯಿ ಹಣವನ್ನು ಪಡೆಯುತ್ತಿದ್ದಾಗ ಜೈಪುರ ಎಸಿಬಿ ಎಎಸ್&zwnj;ಪಿ ಭೂಪೇಂದ್ರ ಚೌದರಿ ನೇತೃತ್ವದ ತಂಡ ದಾಳಿ ನಡೆಸಿದೆ. ಹಣದ ಸಮೇತ ಪಿಎಸ್&zwnj;ಐ ಅನಿತಾ ಮತ್ತು ಇಬ್ಬರು ಕಾನ್&zwnj;ಸ್ಟೇಬಲ್&zwnj;ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;&lt;strong&gt;ಬೆಂಗಳೂರು ಹಿರಿಯ ಅಧಿಕಾರಿಗಳಿಗೆ ಮಾಹಿತಿ:&lt;/strong&gt;&lt;/h2&gt;&lt;p&gt;ತಮ್ಮದೇ ಇಲಾಖೆಯ ಸಿಬ್ಬಂದಿಗಳು ಪರರಾಜ್ಯದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು ಬೆಂಗಳೂರು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ಬಗ್ಗೆ ಜೈಪುರ ಎಸಿಬಿ ಅಧಿಕಾರಿಗಳು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ರವಾನಿಸಿದ್ದಾರೆ. ಸದ್ಯ ಮೂವರನ್ನು ಬಂಧಿಸಿರುವ ರಾಜಸ್ಥಾನ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕರ್ತವ್ಯದ ಹೆಸರಿನಲ್ಲಿ ಪರರಾಜ್ಯಕ್ಕೆ ಹೋಗಿ ಭ್ರಷ್ಟಾಚಾರ ನಡೆಸಿದ ಈ ಪೊಲೀಸರ ವಿರುದ್ಧ ಇಲಾಖಾ ತನಿಖೆಯೂ ನಡೆಯುವ ಸಾಧ್ಯತೆಯಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-hal-police-station-psi-and-2-cops-trapped-by-jaipur-acb-in-bribe-case-sat/articleshow-gqvfb9z"/>
        </item>
        <item>
            <title><![CDATA[KPSC ಅಧ್ಯಕ್ಷರ ಪುತ್ರಿಗೆ ಸರ್ಕಾರಿ ನೌಕರಿ, FIR ದಾಖಲು; ಸುಳ್ಳು ದಾಖಲೆ ಸಲ್ಲಿಸಿ ಸಿಕ್ಕಿಬಿದ್ದರಾ ಸುಮಾ ಸಾಹುಕಾರ್!]]></title>
            <link>https://kannada.asianetnews.com/state-government-jobs/kpsc-chairman-daughter-suma-sahukar-fake-income-certificate-fir-vidhana-soudha/articleshow-kf1l5qr</link>
            <guid isPermaLink="true">https://kannada.asianetnews.com/state-government-jobs/kpsc-chairman-daughter-suma-sahukar-fake-income-certificate-fir-vidhana-soudha/articleshow-kf1l5qr</guid>
            <pubDate>Fri, 10 Jul 2026 22:23:01 +0530</pubDate>
            <description><![CDATA[ಕೆಪಿಎಸ್&zwnj;ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ, ನಕಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ಹುದ್ದೆ ಪಡೆಯಲು ಯತ್ನಿಸಿದ ಆರೋಪದ ಮೇಲೆ ಎಫ್&zwnj;ಐಆರ್ ದಾಖಲಾಗಿದೆ. ಲಕ್ಷಾಂತರ ಸಂಬಳ ಪಡೆಯುವ ತಂದೆಯ ಆದಾಯವನ್ನು ಕೇವಲ 40 ಸಾವಿರ ಎಂದು ತೋರಿಸಿ ಮೀಸಲಾತಿ ದುರುಪಯೋಗಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx6f30f9v04b846swtjxw1vh,imgname-kpsc-chairman-shivashankarappa-sahukar-1783702323689.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.10): ರಾ&lt;/strong&gt;ಜ್ಯದ ಪ್ರತಿಷ್ಠಿತ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರ ಪುತ್ರಿಯೇ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕೆಪಿಎಸ್&zwnj;ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ವಿರುದ್ಧ ಈಗ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ (FIR) ದಾಖಲಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/h2&gt;&lt;p&gt;ಕೆಪಿಎಸ್&zwnj;ಸಿಯ ಕೈಗಾರಿಕಾ ವಿಸ್ತರಣಾಧಿಕಾರಿಯ 50 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಧ್ಯಕ್ಷರ ಪುತ್ರಿ ಸುಮಾ ಅವರು ಪಾಲ್ಗೊಂಡಿದ್ದರು. ಮೇ 12, 2025 ರಂದು ನಡೆದಿದ್ದ ಕನ್ನಡ ಭಾಷಾ ಪರೀಕ್ಷೆ ಹಾಗೂ ಜುಲೈ 13, 2025 ರಂದು ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವರು ಹಾಜರಾಗಿದ್ದರು. ಜನವರಿ 21, 2026 ರಂದು ಪ್ರಕಟವಾದ ಅರ್ಹತಾ ಪಟ್ಟಿಯಲ್ಲಿ ಸುಮಾ ಅವರ ಹೆಸರು ಆಯ್ಕೆಯಾಗಿತ್ತು. ಫೆಬ್ರವರಿ 19, 2026 ರಂದು ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆದಾಗ ವಂಚನೆಯ ಅಸಲಿ ಮುಖವಾಡ ಕಳಚಿದೆ.&lt;/p&gt;&lt;h2&gt;&lt;strong&gt;ನಕಲಿ ಆದಾಯ ಪ್ರಮಾಣ ಪತ್ರದ ಹಗರಣ:&lt;/strong&gt;&lt;/h2&gt;&lt;p&gt;ಸುಮಾ ಸಾಹುಕಾರ್ ಅವರು ಪರೀಕ್ಷೆಯಲ್ಲಿ ಮೀಸಲಾತಿ ಪಡೆಯುವ ಉದ್ದೇಶದಿಂದ ನಕಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಅವರು ಸಲ್ಲಿಸಿದ ದಾಖಲೆಯಲ್ಲಿ ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ 40 ಸಾವಿರ ರೂಪಾಯಿ ಎಂದು ನಮೂದಿಸಲಾಗಿತ್ತು. ಆದರೆ, ಸುಮಾ ಅವರ ತಂದೆ ಶಿವಶಂಕರಪ್ಪ ಸಾಹುಕಾರ್ ಅವರು ಕೆಪಿಎಸ್&zwnj;ಸಿ ಅಧ್ಯಕ್ಷರಾಗಿದ್ದು, ಅವರ ಮಾಸಿಕ ವೇತನವೇ ಸುಮಾರು 2 ಲಕ್ಷದ 25 ಸಾವಿರ ರೂಪಾಯಿಗಳಾಗಿದೆ. ಮಾಸಿಕ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ತಂದೆಯ ಆದಾಯವನ್ನು ವಾರ್ಷಿಕವಾಗಿ ಕೇವಲ 40 ಸಾವಿರ ಎಂದು ತೋರಿಸಿರುವುದು ಸ್ಪಷ್ಟವಾಗಿ ನಿಯಮಗಳ ಉಲ್ಲಂಘನೆ ಮತ್ತು ಕಾನೂನುಬಾಹಿರ ಕೃತ್ಯವಾಗಿದೆ.&lt;/p&gt;&lt;h2&gt;&lt;strong&gt;ವಿಧಾನಸೌಧ ಠಾಣೆಯಲ್ಲಿ ಎಫ್&zwnj;ಐಆರ್:&lt;/strong&gt;&lt;/h2&gt;&lt;p&gt;ಅರ್ಜಿಯ ಘೋಷಣೆ ಕಾಲಂನಲ್ಲಿ ಸುಳ್ಳು ಮಾಹಿತಿ ನೀಡಿ ಸರ್ಕಾರದ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ ಸುಮಾ ವಿರುದ್ಧ ಕೆಪಿಎಸ್&zwnj;ಸಿ ಸಹಾಯಕ ಕಾರ್ಯದರ್ಶಿ ಶೋಭಾ ಬಿ.ಎನ್. ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿ ದೂರಿನ ಪರಿಶೀಲನೆ ನಡೆಸಿದ ಪೊಲೀಸರು, ಈಗ ಅಧಿಕೃತವಾಗಿ ಎಫ್&zwnj;ಐಆರ್ ದಾಖಲಿಸಿಕೊಂಡಿದ್ದಾರೆ. ಸುಳ್ಳು ದಾಖಲೆ ನೀಡಿ ಮೀಸಲಾತಿ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ಸುಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಅಧ್ಯಕ್ಷರ ಕುಟುಂಬವೇ ಇಂತಹ ಹಗರಣದಲ್ಲಿ ಭಾಗಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/kpsc-chairman-daughter-suma-sahukar-fake-income-certificate-fir-vidhana-soudha/articleshow-kf1l5qr"/>
        </item>
        <item>
            <title><![CDATA[ರಾಜ್ಯದ ಸರ್ಕಾರಿ ಶಾಲೆಗಳಲ್ಲಿ  ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರ ನೇಮಕಾತಿಗೆ ಶಾಲಾ ಶಿಕ್ಷಣ ಇಲಾಖೆ ಆದೇಶ!]]></title>
            <link>https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1</link>
            <guid isPermaLink="true">https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1</guid>
            <pubDate>Sat, 30 May 2026 14:43:27 +0530</pubDate>
            <description><![CDATA[ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು, ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ಸಾಲಿಗೆ ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರನ್ನು ನೇಮಿಸಲು ಅಧಿಕೃತ ಆದೇಶ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk0aw4652cznfg6mvkv4b98z,imgname----------------------74--1772759158980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ನಲುಗುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ರಾಜ್ಯ ಸರ್ಕಾರವು ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ತಡೆಯಲು, ಮೊದಲ ಹಂತದಲ್ಲಿ ಒಟ್ಟು 40,067 ಅತಿಥಿ ಶಿಕ್ಷಕರನ್ನು (Guest Teachers) ತಕ್ಷಣದಿಂದಲೇ ನೇಮಕ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;h2&gt;51 ಸಾವಿರ ಹುದ್ದೆಗಳಿಗೆ ಅನುಮೋದನೆ:&lt;/h2&gt;&lt;p&gt;ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ 60,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿಯಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ, 2026-27ನೇ ಶೈಕ್ಷಣಿಕ ಸಾಲಿಗೆ ಒಟ್ಟು 51,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರವು ಈ ಹಿಂದೆ ಹಸಿರು ನಿಶಾನೆ ನೀಡಿತ್ತು. ಇದರಲ್ಲಿ 40,000 ಪ್ರಾಥಮಿಕ ಹಾಗೂ 11,000 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಸೇರಿವೆ.&lt;/p&gt;&lt;p&gt;ಸರ್ಕಾರದ ಈ ಅನುಮೋದನೆಯನ್ವಯ, ಶಾಲಾ ಶಿಕ್ಷಣ ಇಲಾಖೆಯು ಇದೀಗ ಮೊದಲ ಹಂತದಲ್ಲಿ 40,067 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ತೋರಿಸಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳು 30,337 ಅತಿಥಿ ಶಿಕ್ಷಕರ ನೇಮಕಾತಿ ಮತ್ತು ಸರ್ಕಾರಿ ಪ್ರೌಢ ಶಾಲೆಗಳು: 9,730 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದೆ. ಉಳಿದ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಹಂತ-ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.&lt;/p&gt;&lt;h2&gt;ಗೌರವ ಸಂಭಾವನೆ ಮತ್ತು ಆಯ್ಕೆಯ ಮಾನದಂಡಗಳು&lt;/h2&gt;&lt;p&gt;ನೇಮಕಗೊಳ್ಳುವ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆಯ ಜೊತೆಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ. ಆಯ್ಕೆಯಾಗುವ ಪ್ರತಿ ಅತಿಥಿ ಶಿಕ್ಷಕರಿಗೆ ಮಾಸಿಕ ₹12,000 ಗೌರವ ಸಂಭಾವನೆಯನ್ನು ನಿಗದಿಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಿಗೆ (Headmasters) ವಹಿಸಲಾಗಿದೆ.&lt;/p&gt;&lt;p&gt;ಆದ್ಯತೆಯ ನಿಯಮಗಳು: ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ಮತ್ತು ಮೆರಿಟ್ (ಅಂಕಗಳ ಆಧಾರ) ಅನ್ನು ಪರಿಗಣಿಸಬೇಕು. ಇದರೊಂದಿಗೆ ಈ ಹಿಂದೆ ಬೋಧನಾ ವೃತ್ತಿಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.&lt;/p&gt;&lt;p&gt;ನಡತೆ ಪ್ರಮುಖ ಅರ್ಹತೆ: ಶಾಲೆಗಳಲ್ಲಿ ಮಕ್ಕಳ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಕೇವಲ ಉತ್ತಮ ಗುಣ ಹಾಗೂ ಸತ್ಪ್ರಜೆ ಎನಿಸಿಕೊಳ್ಳುವಂತಹ ನಡತೆ ಇರುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.&lt;/p&gt;&lt;h2&gt;ಬಿಇಒಗಳಿಗೆ ಕಠಿಣ ಎಚ್ಚರಿಕೆ ನೀಡಿದ ಶಿಕ್ಷಣ ಇಲಾಖೆ&lt;/h2&gt;&lt;p&gt;ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ಮತ್ತು ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ ನಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಠಿಣ ನಿಲುವು ತಳೆದಿದೆ.&lt;/p&gt;&lt;h2&gt;ಇಲಾಖೆಯ ಕಟ್ಟುನಿಟ್ಟಿನ ಎಚ್ಚರಿಕೆ:&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು, ಭ್ರಷ್ಟಾಚಾರ ಅಥವಾ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ತಾಲೂಕು ಅಥವಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ (BEO) ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಂತಹ ಅಧಿಕಾರಿಗಳ ವಿರುದ್ಧ ಇಲಾಖೆಯ ನಿಯಮಾವಳಿಗಳ ಪ್ರಕಾರ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಪ್ರಕಟಣೆ ಎಚ್ಚರಿಸಿದೆ. ರಾಜ್ಯ ಸರ್ಕಾರದ ಈ ಸಕಾಲಿಕ ನಿರ್ಧಾರದಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಬಹುಮಟ್ಟಿಗೆ ನೀಗಲಿದ್ದು, ಹೊಸ ಶೈಕ್ಷಣಿಕ ವರ್ಷದಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿದೆ.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1"/>
        </item>
        <item>
            <title><![CDATA[Govt Jobs: ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 6 ತಿಂಗಳಲ್ಲಿ 72,186 ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ!]]></title>
            <link>https://kannada.asianetnews.com/gallery/state-government-jobs/karnataka-govt-orders-72000-govt-jobs-direct-recruitment-in-6-months-l79wfmd</link>
            <guid isPermaLink="true">https://kannada.asianetnews.com/gallery/state-government-jobs/karnataka-govt-orders-72000-govt-jobs-direct-recruitment-in-6-months-l79wfmd</guid>
            <pubDate>Thu, 25 Jun 2026 13:42:18 +0530</pubDate>
            <description><![CDATA[ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,186 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆದೇಶಿಸಿದೆ. ಈ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ 6 ತಿಂಗಳೊಳಗೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಕಾಲಮಿತಿ ನಿಗದಿಪಡಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvyxbed5btm6tr230vqghc3z,imgname-dharwad-govt-job-protest-1782375102885.jpg" type="image/jpeg" height="390" width="690"/>
            <content:encoded><![CDATA[ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,186 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆದೇಶಿಸಿದೆ. ಈ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ 6 ತಿಂಗಳೊಳಗೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಕಾಲಮಿತಿ ನಿಗದಿಪಡಿಸಲಾಗಿದೆ.&lt;img&gt;&lt;p&gt;ಬೆಂಗಳೂರು (ಜೂ.25): ಸರ್ಕಾರಿ ಕೆಲಸಕ್ಕಾಗಿ ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72,186 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮುಂದಿನ 6 ತಿಂಗಳೊಳಗೆ ಭರ್ತಿ ಮಾಡುವಂತೆ ಆದೇಶ ಹೊರಡಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲು ಉನ್ನತ ಮಟ್ಟದ ಅಧಿಕಾರಿಗಳಿಗೆ ಮೇಲುಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿದೆ.&lt;/p&gt;&lt;img&gt;&lt;p&gt;ಹುದ್ದೆಗಳ ವಿವರ ಮತ್ತು ಆರ್ಥಿಕ ಇಲಾಖೆ ಒಪ್ಪಿಗೆ:&lt;/p&gt;&lt;p&gt;ಸರ್ಕಾರದ ನಡವಳಿಗಳ ಪ್ರಕಾರ, 2023-24ನೇ ಸಾಲಿನಿಂದ ಇಲ್ಲಿಯವರೆಗೆ ಖಾಲಿ ಇರುವ ಹುದ್ದೆಗಳ ಪೈಕಿ 40,009 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಈಗಾಗಲೇ ಸಹಮತಿ ನೀಡಿದೆ. ಅಲ್ಲದೆ, ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 32,177 ಹುದ್ದೆಗಳ ಪೈಕಿ ಶೇಕಡಾ 80ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಹಸಿರು ನಿಶಾನೆ ಸಿಕ್ಕಿದೆ.&lt;/p&gt;&lt;img&gt;&lt;p&gt;&lt;strong&gt;ಟೈಮ್&zwnj;ಲೈನ್ ಫಿಕ್ಸ್: 6 ತಿಂಗಳಲ್ಲಿ ಕೈಗೆ ಸಿಗುತ್ತೆ ಅಪಾಯಿಂಟ್&zwnj;ಮೆಂಟ್ ಆರ್ಡರ್!&lt;/strong&gt;&lt;/p&gt;&lt;p&gt;ನೇಮಕಾತಿಯಲ್ಲಿ ಯಾವುದೇ ವಿಳಂಬವಾಗದಂತೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಡೆಡ್&zwnj;ಲೈನ್ ನೀಡಿದೆ:&lt;/p&gt;&lt;p&gt;&lt;strong&gt;ಮುಂದಿನ 2 ತಿಂಗಳಲ್ಲಿ: &lt;/strong&gt;ಎಲ್ಲಾ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ (Notification) ಹೊರಡಿಸಬೇಕು.&lt;/p&gt;&lt;p&gt;&lt;strong&gt;ಮುಂದಿನ 4 ತಿಂಗಳಲ್ಲಿ: &lt;/strong&gt;ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಬೇಕು.&lt;/p&gt;&lt;p&gt;&lt;strong&gt;ಮುಂದಿನ 6 ತಿಂಗಳಲ್ಲಿ: &lt;/strong&gt;ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 'ನೇಮಕಾತಿ ಆದೇಶ' (Appointment Order) ನೀಡಬೇಕು.&lt;/p&gt;&lt;img&gt;&lt;p&gt;&lt;strong&gt;ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ:&lt;/strong&gt;&lt;/p&gt;&lt;p&gt;ಒಟ್ಟು 51 ಇಲಾಖೆಗಳಲ್ಲಿ ಈ ನೇಮಕಾತಿ ನಡೆಯಲಿದ್ದು, ಕೃಷಿ, ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ 17 ಇಲಾಖೆಗಳ ಜವಾಬ್ದಾರಿಯನ್ನು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ನೀಡಲಾಗಿದೆ. ಇನ್ನುಳಿದ ಗೃಹ, ಶಿಕ್ಷಣ, ಆರೋಗ್ಯ, ಅರಣ್ಯ ಸೇರಿದಂತೆ 34 ಇಲಾಖೆಗಳ ಜವಾಬ್ದಾರಿಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.&lt;/p&gt;&lt;img&gt;&lt;p&gt;ಚುನಾವಣೆಗಳು ಮುಗಿದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ಸರ್ಕಾರ, ನಿರುದ್ಯೋಗ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿದೆ. ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರುವ ಅಭ್ಯರ್ಥಿಗಳು ಇಂದಿನಿಂದಲೇ ಸಿದ್ಧತೆ ಆರಂಭಿಸುವುದು ಉತ್ತಮ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state-government-jobs/karnataka-govt-orders-72000-govt-jobs-direct-recruitment-in-6-months-l79wfmd"/>
        </item>
        <item>
            <title><![CDATA[2500 Govt Jobs: ಸರ್ಕಾರಿ ನೌಕರಿ ಕನಸು ಕಂಡವರಿಗೆ ಬಂಪರ್ ಸುದ್ದಿ: ಬರೋಬ್ಬರಿ 2500 ಹುದ್ದೆಗಳಿಗೆ ನೇಮಕಾತಿ ಬಿಗ್ ಅಪ್ಡೇಟ್!]]></title>
            <link>https://kannada.asianetnews.com/state/important-update-for-the-recruitment-of-2-500-computer-science-teachers-rav/articleshow-mvzuaif</link>
            <guid isPermaLink="true">https://kannada.asianetnews.com/state/important-update-for-the-recruitment-of-2-500-computer-science-teachers-rav/articleshow-mvzuaif</guid>
            <pubDate>Wed, 01 Jul 2026 08:08:19 +0530</pubDate>
            <description><![CDATA[&lt;p&gt;ಸರ್ಕಾರಿ ನೌಕರಿ ಕನಸು ಕಂಡವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ 2,500 ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿದ್ದ ಸರ್ಕಾರವು, ಈ ಹುದ್ದೆಗಳ ನೇಮಕಾತಿಗೆ ನಿಯಮಾವಳಿಗೆ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಹೊರಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwdracfdfyj5hy0bterktj56,imgname----------------------74--1782873141740.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.1):&lt;/strong&gt; ಇತ್ತೀಚೆಗಷ್ಟೆ ರಾಜ್ಯದ ಸರ್ಕಾರಿ ಶಾಲೆಗಳಿಗೆ 2,500 ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿದ್ದ ಸರ್ಕಾರವು, ಈ ಹುದ್ದೆಗಳ ನೇಮಕಾತಿಗೆ ಅನುಕೂಲವಾಗುವಂತೆ ಶಿಕ್ಷಕರ ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಹೊರಡಿಸಿದೆ.&amp;nbsp;&lt;/p&gt;&lt;h2&gt;ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇರ ನೇಮಕಾತಿ:&lt;/h2&gt;&lt;p&gt;ಕಂಪ್ಯೂಟರ್&zwnj; ಸೈನ್ಸ್&zwnj; ಶಿಕ್ಷಕರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ತಿದ್ದುಪಡಿ ನಿಯಮಗಳಲ್ಲಿ ಅವಕಾಶ ನೀಡಲಾಗಿದ್ದು, ನೇಮಕಗೊಂಡ 5 ವರ್ಷಗಳ ಒಳಗಾಗಿ ಎನ್&zwnj;ಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿಎಡ್ ಪದವಿ ಪಡೆಯಬೇಕು ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂಬ ಷರತ್ತು ವಿಧಿಸಲಾಗಿದೆ.&lt;/p&gt;&lt;h3&gt;1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣಕ್ಕೆ ಆದೇಶ!&lt;/h3&gt;&lt;p&gt;ಕರ್ನಾಟಕ ಪಬ್ಲಿಕ್&zwnj; ಶಾಲೆಗಳಲ್ಲಿ (ಕೆಪಿಎಸ್&zwnj;) 1ನೇ ತರಗತಿಯಿಂದಲೇ ಕಂಪ್ಯೂಟರ್&zwnj; ಶಿಕ್ಷಣ ನೀಡಲು ಆದೇಶಿಸಿರುವ ಸರ್ಕಾರ, ಇದಕ್ಕೆ ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿರುವ ಶಿಕ್ಷಕರು ಇಲಾಖೆಯಲ್ಲಿ ಇಲ್ಲದ ಕಾರಣ ಹೊಸ ನೇಮಕಾತಿಗೆ 2500 ಹುದ್ದೆಗಳನ್ನು ಮಂಜೂರು ಮಾಡಿದೆ. ಈ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್&zwnj;ನಲ್ಲಿ ಬಿ.ಎಸ್ಸಿ, ಬಿಸಿಎ, ಬಿಐಟಿ, ಅಥವಾ ಕಂಪ್ಯೂಟರ್ ಸೈನ್ಸ್&zwnj;ನಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ ಹೊಂದಿರುವ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಬಹುದು. ಎಸ್&zwnj;ಎಸ್&zwnj;ಎಲ್&zwnj;ಸಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಮತ್ತು ಪಿಯುಸಿಯಲ್ಲಿ ಭಾಷೆಯನ್ನಾಗಿ ಕನ್ನಡವನ್ನು ಓದಿರಬೇಕು ಎಂದು ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ಆಕ್ಷೇಪಣೆಗೆ ಅವಕಾಶ:&lt;/strong&gt;&lt;/p&gt;&lt;p&gt;ಈ ಕರಡು ನಿಯಮಗಳ ಕುರಿತು ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ, ಈ ಅಧಿಸೂಚನೆ ರಾಜ್ಯಪತ್ರದಲ್ಲಿ ಪ್ರಕಟವಾದ 7 ದಿನಗಳ ಒಳಗಾಗಿ ಅಪರ ಮುಖ್ಯ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಸಲ್ಲಿಸಬಹುದೆಂದು ತಿಳಿಸಲಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/important-update-for-the-recruitment-of-2-500-computer-science-teachers-rav/articleshow-mvzuaif"/>
        </item>
        <item>
            <title><![CDATA[ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ: ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ರಜೆ ಘೋಷಣೆ!]]></title>
            <link>https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss</link>
            <guid isPermaLink="true">https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss</guid>
            <pubDate>Tue, 02 Jun 2026 14:38:37 +0530</pubDate>
            <description><![CDATA[&lt;p&gt;ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ಜೂ.3 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ. ಇದೇ ವೇಳೆ, ವಿಧಾನಸಭೆ ಸಚಿವಾಲಯದ ನೌಕರರಿಗಾಗಿ ಸಭಾಧ್ಯಕ್ಷರು ವಿಶೇಷ ಭೋಜನ &amp;nbsp;ಆಯೋಜಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswhvsm3y8f5v573cav0exp3,imgname-untitled-design---2026-05-30t191030.751-1780148463234.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.02): ಕ&lt;/strong&gt;ರ್ನಾಟಕದ ರಾಜಕೀಯ ಅಂಗಳದಲ್ಲಿ ನೂತನ ಮುಖ್ಯಮಂತ್ರಿಯವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಜೂನ್ 03, 2026) ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಸಿಬ್ಬಂದಿಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ಅತ್ತ ವಿಧಾನಸಭೆ ಸಚಿವಾಲಯದ ನೌಕರರಿಗೆ ಸಭಾಧ್ಯಕ್ಷರು ಇಂದು ವಿಶೇಷ ಭೋಜನ ಕೂಟವನ್ನು ಆಯೋಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಜೂನ್ 3 ರಂದು ಮಧ್ಯಾಹ್ನ ರಜೆ ಘೋಷಣೆ:&lt;/strong&gt;&lt;/h2&gt;&lt;p&gt;ಕರ್ನಾಟಕ ಸರ್ಕಾರದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಜೂನ್ 3, 2026 ರಂದು ಅಪರಾಹ್ನ 4:05 ಗಂಟೆಗೆ ಬೆಂಗಳೂರಿನ 'ಲೋಕಭವನ'ದಲ್ಲಿ ನಡೆಯಲಿದೆ. ಸಮಾರಂಭಕ್ಕೆ ಗಣ್ಯಾತಿಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ನಿರೀಕ್ಷೆಯಿರುವುದರಿಂದ, ಭದ್ರತೆ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.&lt;/p&gt;&lt;p&gt;ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜೂನ್ 3 ರಂದು ಅಪರಾಹ್ನ (ಮಧ್ಯಾಹ್ನದ ನಂತರ) ರಜೆ ಘೋಷಿಸಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಯದು ಕುಮಾರ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಇಂದು ವಿಧಾನಸಭೆ ನೌಕರರಿಗೆ ಭೋಜನ:&lt;/strong&gt;&lt;/h2&gt;&lt;p&gt;ಮತ್ತೊಂದೆಡೆ, ನೂತನ ಸರ್ಕಾರದ ಸ್ವಾಗತದ ಸಡಗರದ ನಡುವೆಯೇ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧಿಕಾರಿ ಮತ್ತು ನೌಕರರಿಗೆ ಇಂದು (ಜೂನ್ 02) ಸಂಜೆ 6:00 ಗಂಟೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್&zwnj;ನಲ್ಲಿ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿದೆ.&lt;/p&gt;&lt;p&gt;ಸನ್ಮಾನ್ಯ ಸಭಾಧ್ಯಕ್ಷರ ಆದೇಶದಂತೆ ಆಯೋಜಿಸಲಾಗಿರುವ ಈ ಕೂಟದಲ್ಲಿ ಸಚಿವಾಲಯದ ಎಲ್ಲಾ ನೌಕರರು ಭಾಗವಹಿಸುವಂತೆ ಸೂಚಿಸಿ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ. ಲಲಿತಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರದ ಆಡಳಿತ ಆರಂಭವಾಗುವ ಮುನ್ನವೇ ವಿಧಾನಸೌಧದ ಆವರಣದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ನಾಳಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss"/>
        </item>
        <item>
            <title><![CDATA[Police: ಕನ್ನಡ ಪರೀಕ್ಷೆ ಬರೆಯದಿದ್ದರೂ ಸಿಗುತ್ತಾ ಸಿವಿಲ್ ಪೊಲೀಸ್ ಕೆಲಸ?  ಯಾರಿಗೆ ಅನ್ವಯಿಸುತ್ತೆ ಈ ರೂಲ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!]]></title>
            <link>https://kannada.asianetnews.com/state-government-jobs/karnataka-civil-police-constable-recruitment-kannada-language-exam-exemption-rules-bmk/articleshow-p3q0acr</link>
            <guid isPermaLink="true">https://kannada.asianetnews.com/state-government-jobs/karnataka-civil-police-constable-recruitment-kannada-language-exam-exemption-rules-bmk/articleshow-p3q0acr</guid>
            <pubDate>Sat, 11 Jul 2026 16:02:26 +0530</pubDate>
            <description><![CDATA[&lt;p&gt;ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದ್ದರೂ, ಈಗಾಗಲೇ ಶಾಲಾ-ಕಾಲೇಜು ಹಂತದಲ್ಲಿ ಕನ್ನಡ ಕಲಿತವರಿಗೆ ಮತ್ತೊಮ್ಮೆ ಪರೀಕ್ಷೆ ಬರೆವ ಹೊರೆಯಿಂದ ಮುಕ್ತಿ ನೀಡಲು ಈ ಮಹತ್ವದ ರೂಲ್ ಜಾರಿಗೆ ತರಲಾಗಿದೆ. ಈ ನಿಯಮ ಯಾರಿಗೆಲ್ಲ ಅನ್ವಯಿಸುತ್ತದೆ ಮತ್ತು ವಿನಾಯಿತಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01fq6eb7qkj65j3y12nbcbx83r,imgname-ksp-recruitment.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದ್ದರೂ, ಈಗಾಗಲೇ ಶಾಲಾ-ಕಾಲೇಜು ಹಂತದಲ್ಲಿ ಕನ್ನಡ ಕಲಿತವರಿಗೆ ಮತ್ತೊಮ್ಮೆ ಪರೀಕ್ಷೆ ಬರೆವ ಹೊರೆಯಿಂದ ಮುಕ್ತಿ ನೀಡಲು ಈ ಮಹತ್ವದ ರೂಲ್ ಜಾರಿಗೆ ತರಲಾಗಿದೆ. ಈ ನಿಯಮ ಯಾರಿಗೆಲ್ಲ ಅನ್ವಯಿಸುತ್ತದೆ ಮತ್ತು ವಿನಾಯಿತಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.&lt;/p&gt;&lt;h2&gt;&lt;strong&gt;ಕನ್ನಡ ಪರೀಕ್ಷೆಯಿಂದ ಯಾರಿಗೆ ಸಿಗಲಿದೆ ವಿನಾಯಿತಿ?&lt;/strong&gt;&lt;/h2&gt;&lt;p&gt;ಕರ್ನಾಟಕ ನಾಗರಿಕ ಸೇವಾ ನಿಯಮಗಳ ತಿದ್ದುಪಡಿ ಅನ್ವಯ, ಈ ಕೆಳಗಿನ ಅರ್ಹತೆ ಹೊಂದಿರುವ ಸಿವಿಲ್ ಪೊಲೀಸ್ ಅಭ್ಯರ್ಥಿಗಳಿಗೆ ಮಾತ್ರ ಕಡ್ಡಾಯ ಕನ್ನಡ ಪರೀಕ್ಷೆಯಿಂದ ಸಂಪೂರ್ಣ ವಿನಾಯಿತಿ ಇರುತ್ತದೆ. ಪ್ರಥಮ/ದ್ವಿತೀಯ ಭಾಷೆ ಕನ್ನಡ: ಎಸ್&zwnj;ಎಸ್&zwnj;ಎಲ್&zwnj;ಸಿ (SSLC) ಅಥವಾ ಅದಕ್ಕಿಂತ ಉನ್ನತ ಮಟ್ಟದ (ಪಿಯುಸಿ, ಪದವಿ) ಪರೀಕ್ಷೆಗಳಲ್ಲಿ ಕನ್ನಡವನ್ನು ಮೊದಲ ಅಥವಾ ಎರಡನೇ ಭಾಷೆಯಾಗಿ (First or Second Language) ಅಭ್ಯಸಿಸಿ ಉತ್ತೀರ್ಣರಾಗಿರಬೇಕು.&lt;/p&gt;&lt;h3&gt;&lt;strong&gt;ಕನ್ನಡ ಮಾಧ್ಯಮ ಅಭ್ಯರ್ಥಿಗಳು!&lt;/strong&gt;&lt;/h3&gt;&lt;p&gt;ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಪರೀಕ್ಷೆ ಪಾಸ್ ಮಾಡಿದವರಿಗೆ ಈ ವಿನಾಯಿತಿ ಅನ್ವಯಿಸುತ್ತದೆ. ಕರ್ನಾಟಕ ಲೋಕಸೇವಾ ಆಯೋಗ ಅಥವಾ ಇಲಾಖೆಯ ಇತರೆ ಯಾವುದೇ ಆಯ್ಕೆ ಪ್ರಾಧಿಕಾರಗಳು ಈ ಹಿಂದೆ ನಡೆಸಿದ್ದ 'ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ'ಯಲ್ಲಿ ಈಗಾಗಲೇ ಪಾಸ್ ಆಗಿ ಪ್ರಮಾಣಪತ್ರ ಹೊಂದಿದ್ದರೆ, ಅವರು ಮತ್ತೊಮ್ಮೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ.&lt;/p&gt;&lt;h3&gt;&lt;strong&gt;ಪರೀಕ್ಷೆ ಯಾರಿಗೆ ಕಡ್ಡಾಯ?&lt;/strong&gt;&lt;/h3&gt;&lt;p&gt;ಯಾರು ತಮ್ಮ ಶಾಲಾ ದಿನಗಳಲ್ಲಿ ಕನ್ನಡವನ್ನು ಕೇವಲ ತೃತೀಯ ಭಾಷೆಯಾಗಿ ಓದಿದ್ದಾರೋ ಅಥವಾ ಇಂಗ್ಲಿಷ್/ಇತರ ಮಾಧ್ಯಮದಲ್ಲಿ ಓದಿ ಕನ್ನಡವನ್ನು ಒಂದು ವಿಷಯವಾಗಿ ತೆಗೆದುಕೊಳ್ಳದ ಹೊರ ರಾಜ್ಯದ ಅಥವಾ ಸಿಬಿಎಸ್&zwnj;ಇ/ಐಸಿಎಸ್&zwnj;ಇ ವಿದ್ಯಾರ್ಥಿಗಳಿದ್ದಾರೋ, ಅಂತವರು ಕಡ್ಡಾಯವಾಗಿ ಈ ಪರೀಕ್ಷೆ ಬರೆಯಬೇಕು.&lt;/p&gt;&lt;h3&gt;&lt;strong&gt;ಹೇಗಿರುತ್ತದೆ ಪರೀಕ್ಷೆ!&lt;/strong&gt;&lt;/h3&gt;&lt;p&gt;ಈ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಒಟ್ಟು 150 ಅಂಕಗಳ ಬಹು ಆಯ್ಕೆ ಮಾದರಿಯ (MCQ) ಪ್ರಶ್ನೆಪತ್ರಿಕೆ ಹೊಂದಿರುತ್ತದೆ. ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಹುದ್ದೆಗೆ ಅರ್ಹತೆ ಪಡೆಯಲು ಕನಿಷ್ಠ 50 ಅಂಕಗಳನ್ನು ಗಳಿಸಲೇಬೇಕು.&lt;/p&gt;&lt;h3&gt;&lt;strong&gt;ಗಮನಿಸಬೇಕಾದ ಅಂಶವೇನು?&lt;/strong&gt;&lt;/h3&gt;&lt;p&gt;ಇದರಲ್ಲಿ ಪಡೆದ ಅಂಕಗಳನ್ನು ಅಂತಿಮ ಮೆರಿಟ್ ಅಥವಾ ಶ್ರೇಯಾಂಕ ಪಟ್ಟಿ ಸಿದ್ಧಪಡಿಸಲು ಪರಿಗಣಿಸುವುದಿಲ್ಲ. ಇದು ಕೇವಲ ಅರ್ಹತಾ ಪರೀಕ್ಷೆಯಷ್ಟೇ ಆಗಿರುತ್ತದೆ. ಆದರೆ ಇದರಲ್ಲಿ ಫೇಲ್ ಆದರೆ ಅಥವಾ ಗೈರಾದರೆ ನೇಮಕಾತಿ ಪ್ರಕ್ರಿಯೆಯಿಂದಲೇ ಹೊರಬೀಳಬೇಕಾಗುತ್ತದೆ.&lt;/p&gt;&lt;p&gt;&lt;strong&gt;ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?&lt;/strong&gt;&lt;/p&gt;&lt;p&gt;ಸಿವಿಲ್ ಪೊಲೀಸ್ ಕಾನ್&zwnj;ಸ್ಟೆಬಲ್ ಹುದ್ದೆಗಳ ಅಂತಿಮ ಆಯ್ಕೆಯು ಸಂಪೂರ್ಣವಾಗಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆಯ ಮೆರಿಟ್ ಆಧಾರದ ಮೇಲೆ ನಡೆಯುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜುಲೈ ತಿಂಗಳಲ್ಲೇ ಕನ್ನಡ ಭಾಷಾ ಪರೀಕ್ಷೆ ನಿಗದಿಯಾಗಿದ್ದು, ಆಗಸ್ಟ್&zwnj;ನಲ್ಲಿ ಮುಖ್ಯ ಲಿಖಿತ ಪರೀಕ್ಷೆ ನಡೆಯಲಿದೆ.&lt;/p&gt;&lt;h3&gt;&lt;strong&gt;ಮಾಹಿತಿಗಾಗಿ ಏನು ನೋಡಬೇಕು?&lt;/strong&gt;&lt;/h3&gt;&lt;p&gt;ಅರ್ಹ ಅಭ್ಯರ್ಥಿಗಳು ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣವಾದ ಕೆಇಎ ಪೋರ್ಟಲ್ ಅಥವಾ ಪೊಲೀಸ್ ನೇಮಕಾತಿ ಪೋರ್ಟಲ್ KSP Recruitmentಗೆ ಭೇಟಿ ನೀಡಬಹುದು. ನಿಮ್ಮ ಎಸ್&zwnj;ಎಸ್&zwnj;ಎಲ್&zwnj;ಸಿ ಅಂಕಪಟ್ಟಿಯಲ್ಲಿ ಕನ್ನಡ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿದ್ದರೆ, ನೀವು ಯಾವುದೇ ಆತಂಕವಿಲ್ಲದೆ ನೇರವಾಗಿ ಮುಖ್ಯ ಲಿಖಿತ ಪರೀಕ್ಷೆಯ ತಯಾರಿಯತ್ತ ಗಮನ ಹರಿಸಬಹುದು.&lt;/p&gt;]]></content:encoded>
            <category>state-government-jobs</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state-government-jobs/karnataka-civil-police-constable-recruitment-kannada-language-exam-exemption-rules-bmk/articleshow-p3q0acr"/>
        </item>
        <item>
            <title><![CDATA[ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 1600 ಕಾನ್ಸ್‌ಟಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ, ಅರ್ಹತೆ, ವಯೋಮಿತಿ ಎಷ್ಟಿರಬೇಕು?]]></title>
            <link>https://kannada.asianetnews.com/gallery/state/karnataka-police-department-recruitment-for-1600-post-what-last-date-age-rav-qaiad8u</link>
            <guid isPermaLink="true">https://kannada.asianetnews.com/gallery/state/karnataka-police-department-recruitment-for-1600-post-what-last-date-age-rav-qaiad8u</guid>
            <pubDate>Tue, 23 Jun 2026 07:56:25 +0530</pubDate>
            <description><![CDATA[&lt;p&gt;ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್&zwnj;ಪಿ) ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಹಯೋಗದೊಂದಿಗೆ 2026ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್&zwnj;ಟೇಬಲ್ (ಸಿಎಆರ್&zwnj;/ಡಿಎಆರ್&zwnj;) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvs3bpwng3zhqyns36wrznf7,imgname----------------------59--1782180076437.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್&zwnj;ಪಿ) ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಹಯೋಗದೊಂದಿಗೆ 2026ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್&zwnj;ಟೇಬಲ್ (ಸಿಎಆರ್&zwnj;/ಡಿಎಆರ್&zwnj;) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಹಯೋಗದೊಂದಿಗೆ 2026ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್&zwnj;ಟೇಬಲ್ (ಸಿಎಆರ್&zwnj;/ಡಿಎಆರ್&zwnj;) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಆನ್&zwnj;ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.&lt;/p&gt;&lt;img&gt;&lt;p&gt;ಕಾನ್&zwnj;ಸ್ಟೇಬಲ್&zwnj; (ಸಿಎರ್ಆ/ ಡಿಎಆರ್) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಜುಲೈ 22 ಕೊನೆ ದಿನವಾಗಿದೆ.&lt;/p&gt;&lt;img&gt;&lt;p&gt;ಮಿಕ್ಕುಳಿದ ವೃಂದದ 1,421 ಹಾಗೂ ಸ್ಥಳೀಯ ವೃಂದದ 179 ಹುದ್ದೆಗಳಿಗೆ ಪ್ರತ್ಯೇಕವಾದ ಅರ್ಜಿ ಆಹ್ವಾನಿಸಲಾಗಿದೆ. ಸೆ.6ರಂದು ಪ್ರತ್ಯೇಕವಾಗಿಯೇ ಲಿಖಿತಪರೀಕ್ಷೆ ನಡೆಸಲಾಗುವುದು ಎಂದುಎಂದುಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಶೇಡ್ ಮಾಡುವುದು ಕಡ್ಡಾಯ. ಇದಕ್ಕೆ ಹೆಚ್ಚುವರಿಯಾಗಿ ಐದು ನಿಮಿಷ ಸಮಯ ನೀಡಲಾಗುತ್ತದೆ. ಒಂದು ವೇಳೆ ಐದನೇ ವೃತ್ತವನ್ನು ಶೇಡ್&zwnj; ಮಾಡದೇ ಇದ್ದಲ್ಲಿ ಪ್ರತಿ ಪ್ರಶ್ನೆಗೆ 0.25 ಅಂಕ ಕಡಿತಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅರ್ಜಿ ಸಲ್ಲಿಸುವ ವಿಧಾನ&lt;/strong&gt;&lt;/p&gt;&lt;p&gt;ಅಧಿಕೃತ ವೆಬ್&zwnj;ಸೈಟ್ https://cetonline.karnataka.gov.in/kea/ ಭೇಟಿ ನೀಡಿ. ನಿಮ್ಮ ಆದ್ಯತೆಗೆ ಅನುಗುಣವಾಗಿ KK ಅಥವಾ RPC ವಲಯದ ಸಕ್ರಿಯ ಲಿಂಕ್ ಅನ್ನು ಆಯ್ಕೆ ಮಾಡಿ. ಅಧಿಕೃತ ಪಿಡಿಎಫ್ (PDF) ಅಧಿಸೂಚನೆ ಡೌನ್&zwnj;ಲೋಡ್ ಮಾಡಿ, ನಿಮ್ಮ ಅರ್ಹತೆಯನ್ನು ಸಂಪೂರ್ಣವಾಗಿ ಓದಿ ಖಚಿತಪಡಿಸಿಕೊಳ್ಳಿ.&lt;/p&gt;&lt;p&gt;'Apply Online' ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.&lt;/p&gt;&lt;p&gt;ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್&zwnj;ಲೋಡ್ ಮಾಡಿ.&lt;/p&gt;&lt;p&gt;ನಿಮ್ಮ ಪ್ರವರ್ಗಕ್ಕೆ ಅನುಗುಣವಾಗಿ ಆನ್&zwnj;ಲೈನ್ ಪೇಮೆಂಟ್ ಗೇಟ್&zwnj;ವೇ ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಿ.&lt;/p&gt;&lt;p&gt;ಫಾರ್ಮ್ ಅನ್ನು ಸಬ್ಮಿಟ್ ಮಾಡುವ ಮುನ್ನ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ಪ್ರಿಂಟೌಟ್ ಪಡೆದು ಇಟ್ಟುಕೊಳ್ಳಿ.&lt;/p&gt;&lt;p&gt;ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 22-06-2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-07-2026&lt;/p&gt;]]></content:encoded>
            <category>state-government-jobs</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/karnataka-police-department-recruitment-for-1600-post-what-last-date-age-rav-qaiad8u"/>
        </item>
        <item>
            <title><![CDATA[Rohini Vs Roopa: ವೃತ್ತಿ ಜೀವನ ಹೀಗೆ ಮಾಡ್ಕೊಬೇಡಿ? ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್‌ಗೆ ಕಿವಿ ಹಿಂಡಿದ ಸುಪ್ರೀಂ!]]></title>
            <link>https://kannada.asianetnews.com/gallery/state/supreme-court-mediation-rohini-sindhuri-ias-roopa-moudgil-ips-dispute-sat-voekhf4</link>
            <guid isPermaLink="true">https://kannada.asianetnews.com/gallery/state/supreme-court-mediation-rohini-sindhuri-ias-roopa-moudgil-ips-dispute-sat-voekhf4</guid>
            <pubDate>Fri, 12 Jun 2026 18:14:01 +0530</pubDate>
            <description><![CDATA[&lt;p&gt;ಕರ್ನಾಟಕದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್(IPS Officer Roopa D Moudgil) ನಡುವಿನ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ (Supreme Court) ಈಗ ಸಂಧಾನದ ಹಾದಿ ತೋರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktxwzwsdq2zyk19c10bhqq6v,imgname-rohini-sindhuri-vs-roopa-moudgil-1781267428140.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್(IPS Officer Roopa D Moudgil) ನಡುವಿನ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ (Supreme Court) ಈಗ ಸಂಧಾನದ ಹಾದಿ ತೋರಿಸಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್(IPS Officer Roopa D Moudgil) ನಡುವಿನ ದೀರ್ಘಕಾಲದ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ (Supreme Court) ಈಗ ಸಂಧಾನದ ಹಾದಿ ತೋರಿಸಿದೆ. ಇಬ್ಬರು ಅಧಿಕಾರಿಗಳ ನಡುವಿನ ಮಾನಹಾನಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ (Mediation) ವಹಿಸಿದ್ದು, ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ (Retired Justice Kurian Joseph) ಅವರನ್ನು ಸಂಧಾನಕಾರರನ್ನಾಗಿ ನೇಮಕ ಮಾಡಿದೆ.&lt;/p&gt;&lt;img&gt;&lt;p&gt;ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್&zwnj;ದೇವ್ ಅವರ ಪೀಠವು ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. 'ಈ ಇಬ್ಬರು ಅಧಿಕಾರಿಗಳು ತಮ್ಮ ಕಾನೂನು ಹೋರಾಟದ ಮೂಲಕ ಪರಸ್ಪರರ ವೃತ್ತಿಜೀವನವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ' ಎಂದು ನ್ಯಾಯಮೂರ್ತಿ ಶರ್ಮಾ ಮಾರ್ಮಿಕವಾಗಿ ನುಡಿದರು.&amp;nbsp;&lt;/p&gt;&lt;p&gt;ಸುದೀರ್ಘ ಕೋರ್ಟ್ ಕಲಾಪಗಳಿಗಿಂತ ಮಧ್ಯಸ್ಥಿಕೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬಂದಿದೆ.&lt;/p&gt;&lt;img&gt;&lt;p&gt;&lt;strong&gt;ಎಲ್ಲಾ ಪ್ರಕರಣಗಳಿಗೂ ತಡೆ:&lt;/strong&gt;&lt;/p&gt;&lt;p&gt;ಮಧ್ಯಸ್ಥಿಕೆ ಪ್ರಕ್ರಿಯೆ ನಡೆಯುವವರೆಗೆ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿರುವ ಎಲ್ಲಾ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅಧಿಕಾರಿಗಳು ಈಗ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರ ಮುಂದೆ ಹಾಜರಾಗಿ ಮಾತುಕತೆಯ ಮೂಲಕ ವಿವಾದವನ್ನು ಅಂತ್ಯಗೊಳಿಸಲು ಪ್ರಯತ್ನಿಸಬೇಕಿದೆ.&lt;/p&gt;&lt;img&gt;&lt;p&gt;&lt;strong&gt;ವಿವಾದದ ಹಿನ್ನೆಲೆ ಏನು?&lt;/strong&gt;&lt;/p&gt;&lt;p&gt;2023ರಲ್ಲಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಫೇಸ್&zwnj;ಬುಕ್&zwnj;ನಲ್ಲಿ ಸರಣಿ ಪೋಸ್ಟ್&zwnj;ಗಳನ್ನು ಹಾಕುವ ಮೂಲಕ ಈ ವಿವಾದ ಆರಂಭವಾಗಿತ್ತು. ರೋಹಿಣಿ ಸಿಂಧೂರಿ ಅವರು ಜಾಲಹಳ್ಳಿಯಲ್ಲಿ ಬೃಹತ್ ಬಂಗಲೆ ನಿರ್ಮಿಸಿದ್ದಾರೆ ಮತ್ತು ತಮ್ಮ ಆಸ್ತಿ ವಿವರದಲ್ಲಿ ಅದನ್ನು ಘೋಷಿಸಿಲ್ಲ ಎಂದು ರೂಪಾ ಆರೋಪಿಸಿದ್ದರು. ಅಲ್ಲದೆ ಕೆಲವು ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.&lt;/p&gt;&lt;p&gt;ಇದಕ್ಕೆ ಪ್ರತಿಯಾಗಿ ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಿದ್ದರು. ನಂತರ ಡಿ. ರೂಪಾ ಕೂಡ ರೋಹಿಣಿ ಸಿಂಧೂರಿ ವಿರುದ್ಧ ದೂರು ದಾಖಲಿಸಿದ್ದರು. ರೋಹಿಣಿ ಅವರು ತಮ್ಮನ್ನು 'ಮಾನಸಿಕ ಅಸ್ವಸ್ಥತೆ' ಎಂದು ಕರೆದು ಅವಮಾನಿಸಿದ್ದಾರೆ ಎಂದು ರೂಪಾ ಆರೋಪಿಸಿದ್ದರು. ಈ ಸಂಬಂಧ ಕರ್ನಾಟಕ ಹೈಕೋರ್ಟ್&zwnj;ನಲ್ಲಿ ನಡೆದ ವಿಚಾರಣೆಯಲ್ಲಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು, ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.&lt;/p&gt;&lt;img&gt;&lt;p&gt;&lt;strong&gt;ಹೈಕೋರ್ಟ್ ನೀಡಿದ್ದ ತೀರ್ಪು:&lt;/strong&gt;&lt;/p&gt;&lt;p&gt;ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ, 'ಒಬ್ಬ ಅಧಿಕಾರಿಯ ವಿರುದ್ಧದ ಆರೋಪವು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಚಾರಣೆಯ ಹಂತದಲ್ಲಿ ಸಾಕ್ಷ್ಯಾಧಾರಗಳ ಮೂಲಕ ನಿರ್ಧರಿಸಬೇಕು. ಇದನ್ನು ಆರಂಭಿಕ ಹಂತದಲ್ಲೇ ರದ್ದುಗೊಳಿಸಲು ಸಾಧ್ಯವಿಲ್ಲ' ಎಂದು ಹೇಳಿತ್ತು. ಹೈಕೋರ್ಟ್ ಆದೇಶದಿಂದಾಗಿ ರೋಹಿಣಿ ಸಿಂಧೂರಿ ಅವರು ವಿಚಾರಣಾ ನ್ಯಾಯಾಲಯದಲ್ಲಿ ಕ್ರಿಮಿನಲ್ ವಿಚಾರಣೆ ಎದುರಿಸುವಂತಾಗಿತ್ತು.&lt;/p&gt;&lt;img&gt;&lt;p&gt;ಈಗ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ಆದೇಶಿಸಿರುವುದರಿಂದ, ಕಳೆದ ಎರಡು ವರ್ಷಗಳಿಂದ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಈ 'ಐಎಎಸ್ ವರ್ಸಸ್ ಐಪಿಎಸ್' ಸಮರವು ಶಾಂತಿಯುತವಾಗಿ ಅಂತ್ಯಗೊಳ್ಳುವ ನಿರೀಕ್ಷೆಯಿದೆ. ರಾಜ್ಯದ ಉನ್ನತ ಅಧಿಕಾರಿಗಳೇ ಹೀಗೆ ಬೀದಿಯಲ್ಲಿ ಜಗಳವಾಡುವುದು ಆಡಳಿತ ಯಂತ್ರದ ಘನತೆಗೆ ಧಕ್ಕೆ ತರುತ್ತದೆ ಎಂಬ ಸಾರ್ವಜನಿಕರ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್&zwnj;ನ ಈ ನಡೆ ಪೂರಕವಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/supreme-court-mediation-rohini-sindhuri-ias-roopa-moudgil-ips-dispute-sat-voekhf4"/>
        </item>
        <item>
            <title><![CDATA[ರೋಹಿಣಿ ಸಿಂಧೂರಿ ಕಡತಕ್ಕೆ ಸಿಎಂ ಅಸ್ತು, ವರ್ಷಗಳಿಂದ ಠಿಕಾಣಿ ಹೂಡಿದ್ದ 80% ಗಣಿ ಇಲಾಖೆ ಸಿಬ್ಬಂದಿಗೆ ವರ್ಗಾವಣೆ ಶಾಕ್!]]></title>
            <link>https://kannada.asianetnews.com/state/biggest-administrative-reshuffle-cm-dk-shivakumar-orders-mass-transfer-160-officials-in-karnataka-mining-department-gdp/articleshow-xf5hpwp</link>
            <guid isPermaLink="true">https://kannada.asianetnews.com/state/biggest-administrative-reshuffle-cm-dk-shivakumar-orders-mass-transfer-160-officials-in-karnataka-mining-department-gdp/articleshow-xf5hpwp</guid>
            <pubDate>Mon, 20 Jul 2026 17:11:39 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 'ಮೇಜರ್ ಸರ್ಜರಿ' ಮಾಡಿದ್ದು, ದಶಕಗಳಿಂದ ಒಂದೇ ಸ್ಥಳದಲ್ಲಿದ್ದ ಸುಮಾರು 160 ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಇಲಾಖೆಯ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzn3sx5jnefdn2jyrc5649g,imgname-mining-department-1784547501988.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ದಶಕಗಳಿಂದ ಒಂದೇ ಸ್ಥಳದಲ್ಲಿ ಬೀಡುಬಿಟ್ಟಿದ್ದ ಅಧಿಕಾರಿಗಳ ದರ್ಬಾರ್&zwnj;ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾರಿ ಬ್ರೇಕ್ ಹಾಕಿದ್ದಾರೆ. ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಆಡಳಿತಾತ್ಮಕ ಪುನರ್&zwnj; ವ್ಯವಸ್ಥೆಗೆ ಕೈಹಾಕಿರುವ ಸಿಎಂ, ಒಂದೇ ಸೂಕ್ಷ್ಮ ಹುದ್ದೆಗಳಲ್ಲಿ ಠಿಕಾಣಿ ಹೂಡಿದ್ದ ಸುಮಾರು ಶೇ. 80 ರಷ್ಟು ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವ ಮೂಲಕ ಇಲಾಖೆಗೆ 'ಮೇಜರ್ ಸರ್ಜರಿ' ಮಾಡಿದ್ದಾರೆ.&lt;/p&gt;&lt;p&gt;ಅನಧಿಕೃತ ಗಣಿಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕುವುದು, ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಒಡನಾಟಕ್ಕೆ ಬ್ರೇಕ್ ಹಾಕುವುದು ಮತ್ತು ಇಲಾಖೆಯ ಆದಾಯವನ್ನು ಹೆಚ್ಚಿಸುವ ಜವಾಬ್ದಾರಿಯೊಂದಿಗೆ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ.&lt;/p&gt;&lt;h2&gt;160 ಅಧಿಕಾರಿಗಳ ಬೃಹತ್ ವರ್ಗಾವಣೆ&lt;/h2&gt;&lt;p&gt;ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಆದೇಶದನ್ವಯ ಇಲಾಖೆಯ ವಿವಿಧ ವೃಂದದ ಒಟ್ಟು 160 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೇರೆ ಬೇರೆ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ವರ್ಗಾವಣೆಗೊಂಡವರ ವಿವರ ಈ ಕೆಳಗಿನಂತಿದೆ:&lt;/p&gt;&lt;ul&gt; &lt;li&gt;ಭೂ ವಿಜ್ಞಾನಿಗಳು: 131 ಅಧಿಕಾರಿಗಳು&lt;/li&gt; &lt;li&gt;ಹಿರಿಯ ಭೂ ವಿಜ್ಞಾನಿಗಳು: 23 ಅಧಿಕಾರಿಗಳು&lt;/li&gt; &lt;li&gt;ಉಪನಿರ್ದೇಶಕರು (Deputy Directors): 06 ಅಧಿಕಾರಿಗಳು&lt;/li&gt;&lt;/ul&gt;&lt;p&gt;ದಶಕಗಳ ಕಾಲ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ತಮ್ಮ ಸ್ವಂತ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲೇ ರಾಜಕೀಯ ಪ್ರಭಾವ ಬಳಸಿ ಹುದ್ದೆ ಗಿಟ್ಟಿಸಿಕೊಂಡಿದ್ದ ಅಧಿಕಾರಿಗಳನ್ನು ಈ ಬಾರಿ ಕಡ್ಡಾಯವಾಗಿ ದೂರದ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ.&lt;/p&gt;&lt;h2&gt;ರೋಹಿಣಿ ಸಿಂಧೂರಿ ಸಭೆಯಲ್ಲಿ ಪ್ರಸ್ತಾಪಿಸಿದ್ದ ಕಡತಕ್ಕೆ ಸಿಎಂ ಅಸ್ತು!&lt;/h2&gt;&lt;p&gt;ಜುಲೈ 1 ರಂದು ನಡೆದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸುದೀರ್ಘ ಕಾಲದ ವಾಸ್ತವ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಇಲಾಖೆಯಲ್ಲಿ ಪಾರದರ್ಶಕತೆ ಬರಬೇಕಾದರೆ ತಳಮಟ್ಟದಿಂದ ಬದಲಾವಣೆ ಅಗತ್ಯ ಎಂದು ಅವರು ವಿವರಿಸಿದ್ದರು.&lt;/p&gt;&lt;p&gt;ವಿಷಯದ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸ್ಥಳೀಯ ಪ್ರಭಾವ ಹಾಗೂ ಅಧಿಕಾರಿಗಳ ಶಾಮೀಲಾಗಿರುವಿಕೆಯನ್ನು ಮುರಿಯಲು ತಕ್ಷಣವೇ ವರ್ಗಾವಣೆಯ ಸಮಗ್ರ ಕಡತವನ್ನು ಮಂಡಿಸುವಂತೆ ಸಭೆಯಲ್ಲೇ ರೋಹಿಣಿ ಸಿಂಧೂರಿ ಅವರಿಗೆ ಖಡಕ್ ಸೂಚನೆ ನೀಡಿದ್ದರು. ಸಿಎಂ ಸೂಚನೆ ನೀಡಿದ ಕೆಲವೇ ದಿನಗಳಲ್ಲಿ ಈ ಬೃಹತ್ ಆಡಳಿತಾತ್ಮಕ ಮರುಹಂಚಿಕೆ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದೆ.&lt;/p&gt;&lt;h2&gt;ಸರ್ಕಾರದ ಈ ಕಠಿಣ ಕ್ರಮದ ಹಿಂದಿನ ಪ್ರಮುಖ ಉದ್ದೇಶಗಳು&lt;/h2&gt;&lt;p&gt;ಒಂದೇ ಸ್ಥಳದಲ್ಲಿದ್ದ ಅಧಿಕಾರಿಗಳು ಸ್ಥಳೀಯ ಅಕ್ರಮ ಗಣಿಗಾರಿಕೆ ದಂಧೆಕೋರರೊಂದಿಗೆ ಶಾಮೀಲಾಗುವುದನ್ನು ತಡೆಯುವುದು. ರಾಜಕೀಯ ಮತ್ತು ಪ್ರಾದೇಶಿಕ ಒತ್ತಡಗಳಿಗೆ ಮಣಿಯದೆ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ವಾತಾವರಣ ನಿರ್ಮಿಸುವುದು. ಇಲಾಖೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ವರ್ಗಾವಣೆ ನಡೆದಿರುವುದು ಇದೇ ಮೊದಲು. ಇದರ ನೇರ ಉದ್ದೇಶ ಸರ್ಕಾರದ ಖಜನೆಗೆ ಬರುವ ಗಣಿಗಾರಿಕೆ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವುದಾಗಿದೆ. ಸೂಕ್ಷ್ಮ ಮತ್ತು ಆಯಕಟ್ಟಿನ ಹುದ್ದೆಗಳಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸುವ ಮೂಲಕ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿಯನ್ನು ತರುವುದು ಮುಖ್ಯ ಉದ್ದೇಶವಾಗಿದೆ. ಮುಖ್ಯಮಂತ್ರಿಗಳ ಈ ದಿಟ್ಟ ಕ್ರಮದಿಂದಾಗಿ ಗಣಿ ದಂಧೆಕೋರರಿಗೆ ಹಾಗೂ ಅವರಿಗೆ ಸಾಥ್ ನೀಡುತ್ತಿದ್ದ ಅಧಿಕಾರಿ ವಲಯಕ್ಕೆ ತೀವ್ರ ನಡುಕ ಉಂಟಾಗಿದ್ದು, ಇಲಾಖೆಯಲ್ಲಿ ಹೊಸ ಆಡಳಿತ ಪರ್ವ ಆರಂಭವಾದಂತಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/state/biggest-administrative-reshuffle-cm-dk-shivakumar-orders-mass-transfer-160-officials-in-karnataka-mining-department-gdp/articleshow-xf5hpwp"/>
        </item>
    </channel>
</rss>
