<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 10 Jun 2026 17:08:19 +0530</lastBuildDate>
        <atom:link href="https://kannada.asianetnews.com/rss/state-government-jobs" rel="self" type="application/rss+xml"/>
        <item>
            <title><![CDATA[ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ; SC-C ಕೆಟಗರಿಯಲ್ಲಿದೆ ಟ್ವಿಸ್ಟ್!]]></title>
            <link>https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4</link>
            <guid isPermaLink="true">https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4</guid>
            <pubDate>Tue, 28 Apr 2026 20:39:02 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ಹೈಕೋರ್ಟ್&zwnj;ನ ಮಧ್ಯಂತರ ಆದೇಶದ ಮೇರೆಗೆ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ನಿಯಮದ ಅಡಿಯಲ್ಲಿ, 56,432 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ. ಈ ಮೀಸಲಾತಿಯನ್ನು ಪ್ರವರ್ಗ-ಎ, ಬಿ, ಮತ್ತು ಸಿ ಎಂದು ವರ್ಗೀಕರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01cmhbvs9q5f2p3b9b489b69dd,imgname-banner.00_02_04_18.Still176.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಕ&lt;/strong&gt;ರ್ನಾಟಕದ ಪರಿಶಿಷ್ಟ ಜಾತಿ (SC) ಸಮುದಾಯಗಳಲ್ಲಿ ದಶಕಗಳಿಂದ ನಡೆಯುತ್ತಿದ್ದ ಒಳಮೀಸಲಾತಿ ಹೋರಾಟಕ್ಕೆ ಈಗ ದೊಡ್ಡ ತಾರ್ಕಿಕ ಅಂತ್ಯ ಸಿಕ್ಕಿದೆ. ಮಾನ್ಯ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಒಳಮೀಸಲಾತಿಯನ್ನು ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಬಹಳ ದಿನಗಳಿಂದ ಬಾಕಿ ಉಳಿದಿದ್ದ 56,432 ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ:&lt;/strong&gt;&lt;/h2&gt;&lt;p&gt;ಸರ್ಕಾರದ ಹೊಸ ಆದೇಶದ ಪ್ರಕಾರ, ಈ ಹಿಂದೆ ಶೇಕಡಾ 17ರಷ್ಟಿದ್ದ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಹೈಕೋರ್ಟ್&zwnj;ನ ಮಧ್ಯಂತರ ಆದೇಶದ ಅನ್ವಯ ತಾತ್ಕಾಲಿಕವಾಗಿ ಶೇಕಡಾ 15ಕ್ಕೆ ಮಿತಗೊಳಿಸಲಾಗಿದೆ. ಈ ಬದಲಾವಣೆಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಒಳಮೀಸಲಾತಿ ವರ್ಗೀಕರಣ ಹೇಗೆ?&lt;/strong&gt;&lt;/h2&gt;&lt;p&gt;ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಉಪಜಾತಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮೀಸಲಾತಿಯನ್ನು ಮೂರು ಪ್ರಮುಖ ಪ್ರವರ್ಗಗಳಾಗಿ ವಿಂಗಡಿಸಲಾಗಿದೆ:&lt;/p&gt;&lt;ul&gt; &lt;li&gt;&lt;strong&gt;ಪ್ರವರ್ಗ-ಎ (SC-A):&lt;/strong&gt; ಶೇಕಡಾ 5.25 ರಷ್ಟು ಮೀಸಲಾತಿ.&lt;/li&gt; &lt;li&gt;&lt;strong&gt;ಪ್ರವರ್ಗ-ಬಿ (SC-B):&lt;/strong&gt; ಶೇಕಡಾ 5.25 ರಷ್ಟು ಮೀಸಲಾತಿ.&lt;/li&gt; &lt;li&gt;&lt;strong&gt;ಪ್ರವರ್ಗ-ಸಿ (SC-C):&lt;/strong&gt; ಶೇಕಡಾ 4.5 ರಷ್ಟು ಮೀಸಲಾತಿ.&lt;/li&gt;&lt;/ul&gt;&lt;p&gt;ವಿಶೇಷವೆಂದರೆ, ಪ್ರವರ್ಗ-ಸಿ ಅಡಿಯಲ್ಲಿ ಬರುವ ಒಟ್ಟು ಹುದ್ದೆಗಳಲ್ಲಿ ಶೇಕಡಾ 20ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿಯಲ್ಲಿರುವ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿಡಲಾಗಿದೆ. ಒಂದು ವೇಳೆ ಈ ಗುಂಪಿನ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಆ ಹುದ್ದೆಗಳನ್ನು ಪ್ರವರ್ಗ-ಸಿ ಅಡಿಯಲ್ಲಿರುವ ಇತರ ಜಾತಿಗಳ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅವಕಾಶ ನೀಡಲಾಗಿದೆ.&lt;/p&gt;&lt;h2&gt;&lt;strong&gt;56,432 ಹುದ್ದೆಗಳ ಭರ್ತಿಗೆ ಆದೇಶ:&lt;/strong&gt;&lt;/h2&gt;&lt;p&gt;ಉದ್ಯೋಗಾಕಾಂಕ್ಷಿಗಳಿಗೆ ಇದು ಅತ್ಯಂತ ಸಿಹಿ ಸುದ್ದಿಯಾಗಿದೆ. ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದಿರುವ ವಿವಿಧ ಇಲಾಖೆಗಳ ಒಟ್ಟು 56,432 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲು ಸರ್ಕಾರ ಸೂಚಿಸಿದೆ. ಈ ನೇಮಕಾತಿಗಳಲ್ಲಿ 400 ಬಿಂದುಗಳ ರೋಸ್ಟರ್ ಪದ್ಧತಿಯನ್ನು ಅನುಸರಿಸಲು ನಿರ್ದೇಶನ ನೀಡಲಾಗಿದೆ. ಒಳಮೀಸಲಾತಿ ಅಳವಡಿಸದೆ ಹೊರಡಿಸಲಾಗಿದ್ದ ಹಳೆಯ ಅಧಿಸೂಚನೆಗಳನ್ನು ಹಿಂಪಡೆದು, ಹೊಸ ಒಳಮೀಸಲಾತಿ ನಿಯಮದಡಿ ತಕ್ಷಣವೇ ಮರು-ಅಧಿಸೂಚನೆ ಹೊರಡಿಸಲು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;&lt;strong&gt;ಸಮರ್ಪಕ ಜಾರಿಗಾಗಿ ಸೂಚನೆ:&lt;/strong&gt;&lt;/h3&gt;&lt;p&gt;ಈ ಹೊಸ ಮೀಸಲಾತಿ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರವು 400 ಬಿಂದುಗಳ ರೋಸ್ಟರ್ ವರ್ತುಲಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದೆ. ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳಿದ್ದಲ್ಲಿ, ಅಂತಹ ಹುದ್ದೆಗಳನ್ನು 'ಪರಿಶಿಷ್ಟ ಜಾತಿ ಸಾಮಾನ್ಯ' ಎಂದು ಪರಿಗಣಿಸಿ ನೇಮಕಾತಿ ಮಾಡಲು ಸೂಚಿಸಲಾಗಿದೆ.&lt;/p&gt;&lt;p&gt;ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಪರಿಶಿಷ್ಟ ಜಾತಿಯೊಳಗಿನ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುವ ನಿರೀಕ್ಷೆಯಿದೆ. ಈ ಐತಿಹಾಸಿಕ ಬದಲಾವಣೆಯು ರಾಜ್ಯದ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಮೂಡಿಸಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4"/>
        </item>
        <item>
            <title><![CDATA[ಕರ್ನಾಟಕ ಪೊಲೀಸ್ ನೇಮಕಾತಿ: 3,395 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ, 35 ವರ್ಷದವರೆಗೆ ವಯೋಮಿತಿ ಸಡಿಲಿಕೆ!]]></title>
            <link>https://kannada.asianetnews.com/gallery/state-government-jobs/karnataka-police-recruitment-2026-apply-online-3395-civil-constable-posts-age-relaxation-sat-37hv0ga</link>
            <guid isPermaLink="true">https://kannada.asianetnews.com/gallery/state-government-jobs/karnataka-police-recruitment-2026-apply-online-3395-civil-constable-posts-age-relaxation-sat-37hv0ga</guid>
            <pubDate>Sat, 06 Jun 2026 08:00:22 +0530</pubDate>
            <description><![CDATA[&lt;p&gt;ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (Karnataka State Polce Department) 3395 ಸಿವಿಲ್ ಕಾನ್ಸ್ಟೇಬಲ್ (Civil Police Constable recruitment) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. PUC ಪಾಸಾದ ಅಭ್ಯರ್ಥಿಗಳು ಜುಲೈ 3ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktcn4yrnje14r8megzx0262p,imgname-karnataka-police-recruitment-2026-1780688780053.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (Karnataka State Polce Department) 3395 ಸಿವಿಲ್ ಕಾನ್ಸ್ಟೇಬಲ್ (Civil Police Constable recruitment) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. PUC ಪಾಸಾದ ಅಭ್ಯರ್ಥಿಗಳು ಜುಲೈ 3ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಿರಿ.&lt;/p&gt;&lt;img&gt;&lt;p&gt;ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬಯಸುವ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು (KSP) ಖಾಲಿ ಇರುವ 3395 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.&lt;/p&gt;&lt;img&gt;&lt;p&gt;&lt;strong&gt;ಹುದ್ದೆಗಳ ವಿವರ:&lt;/strong&gt;&lt;/p&gt;&lt;p&gt;ಹುದ್ದೆಯ ಹೆಸರು: ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) - ಮಿಕ್ಕುಳಿದ ವೃಂದ&lt;/p&gt;&lt;p&gt;ಒಟ್ಟು ಹುದ್ದೆಗಳು: 3395&lt;/p&gt;&lt;p&gt;ವೇತನ ಶ್ರೇಣಿ: ತಿಂಗಳಿಗೆ ರೂ. 37,500 ರಿಂದ ರೂ. 76,100/-&lt;/p&gt;&lt;img&gt;&lt;p&gt;&lt;strong&gt;ವಿದ್ಯಾರ್ಹತೆ (Educational Qualification):&lt;/strong&gt;&lt;/p&gt;&lt;p&gt;ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆ ಹೊಂದಿರಬೇಕು:&lt;/p&gt;&lt;p&gt;ಸಿಬಿಎಸ್&zwnj;ಇ/ ಐಸಿಎಸ್&zwnj;ಇ/ ಎನ್&zwnj;ಐಒಎಸ್/ ರಾಜ್ಯ ಮಂಡಳಿಯಿಂದ ಪಿಯುಸಿ (PUC) ಅಥವಾ 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.&lt;/p&gt;&lt;p&gt;ಐಟಿಐ (2 ವರ್ಷ) ಅಥವಾ ಡಿಪ್ಲೊಮಾ ಅಭ್ಯರ್ಥಿಗಳು ಸಹ ಅಧಿಸೂಚನೆಯಲ್ಲಿನ ನಿಬಂಧನೆಗಳಂತೆ ಅರ್ಹರಿರುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ವಯೋಮಿತಿ (Age Limit):&lt;/strong&gt;&lt;/p&gt;&lt;p&gt;ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:&lt;/p&gt;&lt;p&gt;ಸಾಮಾನ್ಯ ವರ್ಗ (GM): 33 ವರ್ಷಗಳು&lt;/p&gt;&lt;p&gt;SC/ ST/ ಹಿಂದುಳಿದ ವರ್ಗಗಳು (2A, 2B, 3A, 3B): 35 ವರ್ಷಗಳು&lt;/p&gt;&lt;p&gt;ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳು: 38 ವರ್ಷಗಳು&lt;/p&gt;&lt;img&gt;&lt;p&gt;&lt;strong&gt;ಅರ್ಜಿ ಶುಲ್ಕ:&lt;/strong&gt;&lt;/p&gt;&lt;p&gt;ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ (2A, 2B, 3A, 3B): ರೂ. 750/-&lt;/p&gt;&lt;p&gt;ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ: ರೂ. 500/-&lt;/p&gt;&lt;img&gt;&lt;p&gt;&lt;strong&gt;ನೇಮಕಾತಿ ಹಂತಗಳು:&lt;/strong&gt;&lt;/p&gt;&lt;p&gt;ಲಿಖಿತ ಪರೀಕ್ಷೆ (Written Exam): 100 ಅಂಕಗಳ ವಸ್ತುನಿಷ್ಠ ಮಾದರಿಯ ಪರೀಕ್ಷೆ.&lt;/p&gt;&lt;p&gt;ದೈಹಿಕ ಸಹಿಷ್ಣುತೆ ಮತ್ತು ಪ್ರಮಾಣಿತ ಪರೀಕ್ಷೆ (ET &amp;amp; PST): ಓಟ, ಉದ್ದ ಜಿಗಿತ/ಎತ್ತರ ಜಿಗಿತ, ಮತ್ತು ಗುಂಡು ಎಸೆತ.&lt;/p&gt;&lt;p&gt;ವೈದ್ಯಕೀಯ ಪರೀಕ್ಷೆ: ಅಂತಿಮ ಆಯ್ಕೆ ಪಟ್ಟಿಯಲ್ಲಿರುವವರಿಗೆ ವೈದ್ಯಕೀಯ ತಪಾಸಣೆ ನಡೆಯಲಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಮುಖ ದಿನಾಂಕಗಳು:&lt;/strong&gt;&lt;/p&gt;&lt;p&gt;ಆನ್&zwnj;ಲೈನ್ ಅರ್ಜಿ ಸಲ್ಲಿಕೆ ಆರಂಭ: ಜೂನ್ 08, 2026&lt;/p&gt;&lt;p&gt;ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 03, 2026&lt;/p&gt;&lt;p&gt;ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜುಲೈ 04, 2026&lt;/p&gt;&lt;p&gt;ಲಿಖಿತ ಪರೀಕ್ಷೆಯ ದಿನಾಂಕ: ಆಗಸ್ಟ್ 02, 2026 (ಬೆಳಿಗ್ಗೆ 10:30 ರಿಂದ 12:00 ರವರೆಗೆ)&lt;/p&gt;&lt;img&gt;&lt;p&gt;&lt;strong&gt;ಅರ್ಜಿ ಸಲ್ಲಿಸುವುದು ಹೇಗೆ?&lt;/strong&gt;&lt;/p&gt;&lt;p&gt;ಆಸಕ್ತರು ಈ ಕೆಳಗಿನ ಅಧಿಕೃತ ವೆಬ್&zwnj;ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು:&lt;/p&gt;&lt;p&gt;https://cetonline.karnataka.gov.in/kea/&lt;/p&gt;&lt;p&gt;ಅಥವಾ https://ksp-recruitment.in/&lt;/p&gt;&lt;p&gt;ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಗದಿತ ದಿನಾಂಕದೊಳಗೆ ಆನ್&zwnj;ಲೈನ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state-government-jobs/karnataka-police-recruitment-2026-apply-online-3395-civil-constable-posts-age-relaxation-sat-37hv0ga"/>
        </item>
        <item>
            <title><![CDATA[ಕ್ರೀಡಾಪಟುಗಳಿಗೆ ಮೀಸಲಾತಿ, ಸರ್ಕಾರಿ ಉದ್ಯೋಗದಲ್ಲಿ ಶೇ.2 ರಷ್ಟು ಕೋಟಾ, ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ]]></title>
            <link>https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki</link>
            <guid isPermaLink="true">https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki</guid>
            <pubDate>Fri, 08 May 2026 18:14:42 +0530</pubDate>
            <description><![CDATA[ಕ್ರೀಡಾ ಸಾಧಕರಿಗೆ ರಾಜ್ಯ ಸಿವಿಲ್ ಸೇವಾ ಹುದ್ದೆಗಳಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಹಿಂದೆ ತಡೆಹಿಡಿಯಲಾಗಿದ್ದ ಈ ಆದೇಶವನ್ನು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳಿಗೆ ಒಪ್ಪಿಗೆ ನೀಡುವ ಮೂಲಕ ಪುನಃ ಜಾರಿಗೆ ತರಲು ನಿರ್ಧರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kh7tcyr030t64ap8rvgy88hg,imgname-up-sports-budget-2026-1770862836480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್&zwnj; ಸೇವೆಗಳಲ್ಲಿ ಹುದ್ದೆಗಳ ನೇಮಾತಿಯಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್&zwnj; ತಿಳಿಸಿದ್ದಾರೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಇದಕ್ಕಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2026ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;h2&gt;2024ರ ಡಿಸೆಂಬರ್&zwnj;ನಲ್ಲಿ ತಡೆ ನೀಡಲಾಗಿದ್ದ ಆದೇಶ&lt;/h2&gt;&lt;p&gt;ಮೂಲಗಳ ಪ್ರಕಾರ, ಈ ಹಿಂದೆ ಕರ್ನಾಟಕ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.2 ರಷ್ಟು ಹುದ್ದೆಗಳನ್ನು ಮೀಸಲಿರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಮಾಡಿತ್ತು. ಆದರೆ 2024ರ ಡಿಸೆಂಬರ್&zwnj;ನಲ್ಲಿ ಈ ಆದೇಶಕ್ಕೆ ತಡೆ ನೀಡಲಾಗಿತ್ತು. ವಿಶೇಷ ರಾಜ್ಯಪತ್ರದ ಮೂಲಕ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿತ್ತು.&lt;/p&gt;&lt;h2&gt;ಪುನರ್&zwnj; ಪರಿಶೀಲನೆ:&lt;/h2&gt;&lt;p&gt;ಆದೇಶದಲ್ಲಿ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 19770 ನಿಯಮ 9ಕ್ಕೆ ತಿದ್ದುಪಡಿ ಮಾಡಿರುವುದನ್ನು ಪುನರ್ ಪರಿಶೀಲಿಸಲಿದೆ. ಆದುದರಿಂದ, ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ. 2 ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ ಎಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಆದೇಶದಲ್ಲಿ ಸೂಚನೆ ಕೊಡಲಾಗಿತ್ತು.&lt;/p&gt;&lt;p&gt;ಇದೀಗ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವ ನಿಯಮಗಳ ಅಡಿ ಕ್ರೀಡಾ ಸಾಧಕರಿಗೆ ಮೀಸಲಾತಿ ಒದಗಿಸಬಹುದು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಡಿಸಿದ್ದ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2026ಕ್ಕೆ ಒಪ್ಪಿಗೆ ದೊರೆತಿರುವುದಾಗಿ ತಿಳಿದುಬಂದಿದೆ.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki"/>
        </item>
        <item>
            <title><![CDATA[ಸರ್ಕಾರಿ ಶಾಲೆಗಳಿಗೆ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಅನುಮತಿ; ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ!]]></title>
            <link>https://kannada.asianetnews.com/state/karnataka-govt-recruitment-51000-guest-teachers-for-2026-27-academic-year-official-order-out-sat/articleshow-3qegd47</link>
            <guid isPermaLink="true">https://kannada.asianetnews.com/state/karnataka-govt-recruitment-51000-guest-teachers-for-2026-27-academic-year-official-order-out-sat/articleshow-3qegd47</guid>
            <pubDate>Sat, 23 May 2026 16:33:57 +0530</pubDate>
            <description><![CDATA[&lt;p&gt;2026-27ನೇ ಶೈಕ್ಷಣಿಕ ಸಾಲಿಗೆ ಶಿಕ್ಷಕರ ಕೊರತೆ ನೀಗಿಸಲು, ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ 51,000 ಅತಿಥಿ ಶಿಕ್ಷಕರನ್ನು ನೇಮಿಸಲು ಮಂಜೂರಾತಿ ನೀಡಿದೆ. ಈ ನೇಮಕಾತಿಯು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡುವ ಗುರಿ ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk0aw4652cznfg6mvkv4b98z,imgname----------------------74--1772759158980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 23): &lt;/strong&gt;2026-27ನೇ ಶೈಕ್ಷಣಿಕ ಸಾಲು ಆರಂಭವಾಗುತ್ತಿರುವ ಬೆನ್ನಲ್ಲೇ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಒಟ್ಟು 51,000 ಅತಿಥಿ ಶಿಕ್ಷಕರನ್ನು (Guest Teachers) ನೇಮಿಸಿಕೊಳ್ಳಲು ಅಧಿಕೃತವಾಗಿ ಮಂಜೂರಾತಿ ನೀಡಿದೆ.&lt;/p&gt;&lt;p&gt;ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮೇ 22, 2026 ರಂದು ಆದೇಶ ಹೊರಡಿಸಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ತಾತ್ಕಾಲಿಕವಾಗಿ ಶಿಕ್ಷಕರನ್ನು ಭರ್ತಿ ಮಾಡಲು ಅನುಮತಿ ನೀಡಿದೆ.&lt;/p&gt;&lt;h3&gt;&lt;strong&gt;ನೇಮಕಾತಿಯ ವಿವರಗಳು ಹೀಗಿವೆ:&lt;/strong&gt;&lt;/h3&gt;&lt;ul&gt; &lt;li&gt;ಸರ್ಕಾರದ ಆದೇಶದಂತೆ ಪ್ರಸಕ್ತ ಸಾಲಿನಲ್ಲಿ ಒಟ್ಟು 51,000 ಹುದ್ದೆಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:&lt;/li&gt; &lt;li&gt;ಸರ್ಕಾರಿ ಪ್ರಾಥಮಿಕ ಶಾಲೆಗಳು: 40,000 ಅತಿಥಿ ಶಿಕ್ಷಕರು.&lt;/li&gt; &lt;li&gt;ಸರ್ಕಾರಿ ಪ್ರೌಢ ಶಾಲೆಗಳು: 11,000 ಅತಿಥಿ ಶಿಕ್ಷಕರು.&lt;/li&gt;&lt;/ul&gt;&lt;h2&gt;&lt;strong&gt;ನೇಮಕಾತಿಯ ಉದ್ದೇಶ ಮತ್ತು ಷರತ್ತುಗಳು:&lt;/strong&gt;&lt;/h2&gt;&lt;p&gt;ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬೋಧಕರ ಕೊರತೆಯಿಂದಾಗಿ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ನೇಮಕಾತಿಯು ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ:&lt;/p&gt;&lt;p&gt;&lt;strong&gt;ತಾತ್ಕಾಲಿಕ ನೇಮಕಾತಿ: &lt;/strong&gt;ಈ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ನೇರ ನೇಮಕಾತಿ ಮೂಲಕ ಖಾಯಂ ಶಿಕ್ಷಕರನ್ನು ಭರ್ತಿ ಮಾಡುವವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.&lt;/p&gt;&lt;p&gt;&lt;strong&gt;ಅವಧಿ: &lt;/strong&gt;ಖಾಯಂ ಶಿಕ್ಷಕರು ಬರುವವರೆಗೆ ಅಥವಾ 2026-27ನೇ ಶೈಕ್ಷಣಿಕ ವರ್ಷದ ಅಂತ್ಯದವರೆಗೆ (ಯಾವುದು ಮೊದಲೋ ಅಲ್ಲಿಯವರೆಗೆ) ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸಬಹುದಾಗಿದೆ.&lt;/p&gt;&lt;p&gt;&lt;strong&gt;ನೇರ ನೇಮಕಾತಿ: &lt;/strong&gt;ಸ್ಥಳೀಯವಾಗಿ ಅರ್ಹ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;ಶಾಲಾ ಆರಂಭದ ದಿನವೇ ಶಿಕ್ಷಕರ ಲಭ್ಯತೆ:&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಆರಂಭವಾದ ನಂತರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈ ಬಾರಿ ಹವಾಮಾನ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ಶಾಲಾ ಆರಂಭದ ದಿನವೇ ಶಿಕ್ಷಕರು ಲಭ್ಯವಿರಬೇಕು ಎಂಬ ಉದ್ದೇಶದಿಂದ ಮುಂಚಿತವಾಗಿಯೇ ಆದೇಶ ಹೊರಡಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಶಾಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.&lt;/p&gt;&lt;h3&gt;&lt;strong&gt;ಮುಂದಿನ ಪ್ರಕ್ರಿಯೆ:&lt;/strong&gt;&lt;/h3&gt;&lt;p&gt;ಆಯಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಆಧರಿಸಿ, ಅಗತ್ಯವಿರುವ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಅತಿಥಿ ಶಿಕ್ಷಕರ ಗೌರವಧನ ಪಾವತಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಈಗಾಗಲೇ ಸಹಮತಿ ನೀಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಖಚಿತವಾದಂತಾಗಿದೆ. ಅಲ್ಲದೆ, ಡಿ.ಇಡಿ ಮತ್ತು ಬಿ.ಇಡಿ ಪದವಿ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಇದು ದೊಡ್ಡ ಮಟ್ಟದ ಉದ್ಯೋಗಾವಕಾಶವನ್ನು ಕಲ್ಪಿಸಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-recruitment-51000-guest-teachers-for-2026-27-academic-year-official-order-out-sat/articleshow-3qegd47"/>
        </item>
        <item>
            <title><![CDATA[ಆರೋಗ್ಯ ಇಲಾಖೆಗೆ ಸಚಿವ ಯು.ಟಿ. ಖಾದರ್ 'ಮೇಜರ್ ಸರ್ಜರಿ': 1280 ವೈದ್ಯರ ನೇಮಕ, ಗುತ್ತಿಗೆ ನೌಕರರು ಖಾಯಂ!]]></title>
            <link>https://kannada.asianetnews.com/state-government-jobs/ut-khader-health-department-review-doctor-recruitment-salary-hike-sat/articleshow-4isl44e</link>
            <guid isPermaLink="true">https://kannada.asianetnews.com/state-government-jobs/ut-khader-health-department-review-doctor-recruitment-salary-hike-sat/articleshow-4isl44e</guid>
            <pubDate>Wed, 10 Jun 2026 17:08:13 +0530</pubDate>
            <description><![CDATA[ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ವೈದ್ಯರು ಮತ್ತು ನರ್ಸ್&zwnj;ಗಳ ಕೊರತೆ ನೀಗಿಸಲು ಬೃಹತ್ ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಗುತ್ತಿಗೆ ನೌಕರರ ಖಾಯಂ ಮತ್ತು ಮಳೆಗಾಲದ ಸಾಂಕ್ರಾಮಿಕ ರೋಗಗಳ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktrn4y5sgq9pfq5dkmzvbad0,imgname-health-minister-ut-khader-1781091432633.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.10): ರಾ&lt;/strong&gt;ಜ್ಯದ ಆರೋಗ್ಯ ಕ್ಷೇತ್ರದಲ್ಲಿ ದಶಕಗಳಿಂದ ಕಾಡುತ್ತಿರುವ ವೈದ್ಯರ ಕೊರತೆಯನ್ನು ನೀಗಿಸಲು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲೇ ಭರ್ಜರಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಇಲಾಖೆಯಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ಭರ್ತಿ ಹಾಗೂ ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಬೃಹತ್ ನೇಮಕಾತಿ ಅಭಿಯಾನ:&lt;/strong&gt;&lt;/h3&gt;&lt;p&gt;ರಾಜ್ಯದಲ್ಲಿ ಸದ್ಯ 1280 ಎಂಬಿಬಿಎಸ್ ವೈದ್ಯರು, 924 ತಜ್ಞ ವೈದ್ಯರು ಹಾಗೂ 892 ನರ್ಸ್&zwnj;ಗಳ ಕೊರತೆ ಇದೆ. ಈ ಸಮಸ್ಯೆಯನ್ನು ಹೋಗಲಾಡಿಸಲು 'ವಾಕ್-ಇನ್ ಇಂಟರ್ವ್ಯೂ' (Walk-in Interview) ಮೂಲಕ ತಕ್ಷಣದ ನೇಮಕಾತಿಗೆ ಸಚಿವರು ಚಾಲನೆ ನೀಡಿದ್ದಾರೆ. ಅರ್ಹ ಅಭ್ಯರ್ಥಿಗಳು ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ (DHO) ಅರ್ಜಿ ಸಲ್ಲಿಸಬಹುದು. ವಿಶೇಷವೆಂದರೆ, ಎಂಬಿಬಿಎಸ್ ವೈದ್ಯರಿಗೆ ಮಾಸಿಕ 1,10,000 ರೂ. ಭಾರಿ ವೇತನ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಇನ್ನು ಕೋರ್ಸ್ ಪೂರ್ಣಗೊಳ್ಳದ ಫೈನಲ್ ಇಯರ್ ಪಿಜಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಿ, ಅವರಿಗೆ 10 ಸಾವಿರ ರೂ. ಸ್ಟೈಫಂಡ್ ನೀಡಲಾಗುವುದು.&lt;/p&gt;&lt;h2&gt;&lt;strong&gt;ಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ:&lt;/strong&gt;&lt;/h2&gt;&lt;p&gt;ಹಲವು ವರ್ಷಗಳಿಂದ ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸಚಿವರು ಬಂಪರ್ ಕೊಡುಗೆ ನೀಡಿದ್ದಾರೆ. 5 ವರ್ಷ ಸೇವೆ ಪೂರ್ಣಗೊಳಿಸಿರುವ ಮತ್ತು ಉತ್ತಮ ಕೆಲಸ ಮಾಡಿರುವ ಗುತ್ತಿಗೆ ನೌಕರರನ್ನು ಹಂತಹಂತವಾಗಿ ಖಾಯಂಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರ ಭಾಗವಾಗಿ 200 ವೈದ್ಯರನ್ನು ಕೆಇಎ (KEA) ಮೂಲಕ ನೇರ ನೇಮಕಾತಿ ಮಾಡಿ ವಾರದೊಳಗೆ ಆದೇಶ ಪತ್ರ ನೀಡಲು ನಿರ್ಧರಿಸಲಾಗಿದ್ದು, ಇದಕ್ಕೆ ಆರ್ಥಿಕ ಇಲಾಖೆಯ ಒಪ್ಪಿಗೆಯೂ ಸಿಕ್ಕಿದೆ.&lt;/p&gt;&lt;h2&gt;&lt;strong&gt;ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ:&lt;/strong&gt;&lt;/h2&gt;&lt;p&gt;'ನಗರ ಪ್ರದೇಶಗಳಲ್ಲಿ ವೈದ್ಯರ ಲಭ್ಯತೆ ಹೆಚ್ಚಿದೆ, ಆದರೆ ಗ್ರಾಮೀಣ ಮತ್ತು ಗುಡ್ಡಗ್ರಾಮಗಳಲ್ಲಿ ವೈದ್ಯರಿಲ್ಲದೆ ಜನರು ಪರದಾಡುತ್ತಿದ್ದಾರೆ. ಈ ತಾರತಮ್ಯ ಹೋಗಲಾಡಿಸಲು ಹೊಸದಾಗಿ ನೇಮಕಗೊಳ್ಳುವವರು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು' ಎಂದು ಖಾದರ್ ಎಚ್ಚರಿಸಿದ್ದಾರೆ. ವೈದ್ಯರ ಕೊರತೆ ನೀಗಿಸಲು 60 ವರ್ಷಕ್ಕೆ ನಿವೃತ್ತರಾದ ವೈದ್ಯರನ್ನು 70 ವರ್ಷದವರೆಗೆ ಕಾಂಟ್ರಾಕ್ಟ್ ಆಧಾರದ ಮೇಲೆ ಬಳಸಿಕೊಳ್ಳುವ ಹೊಸ ಚಿಂತನೆಯನ್ನೂ ಸಚಿವರು ಮುಂದಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮಳೆಗಾಲದ ಸಿದ್ಧತೆ ಮತ್ತು ಮಂಗನ ಕಾಯಿಲೆ:&lt;/strong&gt;&lt;/h2&gt;&lt;p&gt;ಮಳೆಗಾಲ ಆರಂಭವಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಫಾಗಿಂಗ್ ಮಾಡುವಂತೆ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಂಗನ ಕಾಯಿಲೆಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಜೆಕ್ಷನ್ ಬ್ಯಾನ್ ಆಗಿರುವುದರಿಂದ ಬದಲಿ ತೈಲ (Oil) ವಿತರಿಸಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿ ವರ್ಷಕ್ಕೆ 16 ಸಾವಿರ ಹಾವು ಕಡಿತದ ಪ್ರಕರಣಗಳು ವರದಿಯಾಗುತ್ತಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಸಂಗ್ರಹಿಸಿಡುವಂತೆ ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.&lt;/p&gt;&lt;p&gt;ಈ ಮೂಲಕ ಆರೋಗ್ಯ ಸಚಿವರು ಇಲಾಖೆಯ ಒಟ್ಟಾರೆ ಚಿತ್ರಣವನ್ನೇ ಬದಲಿಸಲು ಮುಂದಾಗಿದ್ದು, ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/ut-khader-health-department-review-doctor-recruitment-salary-hike-sat/articleshow-4isl44e"/>
        </item>
        <item>
            <title><![CDATA[ಕೃಷಿ ಇಲಾಖೆಯಲ್ಲಿ ನಿಮಗಿದೋ ಸುವರ್ಣಾವಕಾಶ, ಕೆಇಎಯಿಂದ ಅರ್ಜಿ ಆಹ್ವಾನ!]]></title>
            <link>https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4</link>
            <guid isPermaLink="true">https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4</guid>
            <pubDate>Wed, 22 Apr 2026 18:44:05 +0530</pubDate>
            <description><![CDATA[ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೃಷಿ ಇಲಾಖೆಯಲ್ಲಿ ಖಾಲಿ ಇರುವ 890 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆಗಳು ನಡೆಯಲಿವೆ. ಈ ನೇಮಕಾತಿಯು ಕೃಷಿ ಪದವೀಧರರಿಗೆ ಸರ್ಕಾರಿ ವಲಯದಲ್ಲಿ ಸೇವೆ ಸಲ್ಲಿಸಲು ಉತ್ತಮ ಅವಕಾಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kktgd6bd5fgq0amyfwsjav01,imgname-agriculture-officer-salary-1773637376365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಕೃಷಿ ಕ್ಷೇತ್ರದ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಹತ್ವದ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 890 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್&zwnj;ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.&lt;/p&gt;&lt;h2&gt;ಹುದ್ದೆಗಳ ವಿವರ ಮತ್ತು ವರ್ಗೀಕರಣ&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆ ಮುಖ್ಯವಾಗಿ ಎರಡು ವೃಂದಗಳಲ್ಲಿ ನಡೆಯಲಿದೆ. ಒಟ್ಟು 890 ಹುದ್ದೆಗಳ ಪೈಕಿ &lsquo;ಗ್ರೂಪ್-ಬಿ&rsquo; ವೃಂದದ ಅಡಿಯಲ್ಲಿ 632 ಹುದ್ದೆಗಳು ಸೇರಿವೆ. ಇದರಲ್ಲಿ 81 ಕೃಷಿ ಅಧಿಕಾರಿ ಮತ್ತು 551 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿವೆ. ಉಳಿದಂತೆ, ಕಲ್ಯಾಣ ಕರ್ನಾಟಕ (371ಜೆ) ವೃಂದಕ್ಕೆ ಮೀಸಲಾದ 258 ಹುದ್ದೆಗಳಿಗೂ ಪ್ರತ್ಯೇಕ ನೇಮಕಾತಿ ನಡೆಯಲಿದೆ. ಕೃಷಿ ಪದವೀಧರರಿಗೆ ಸರ್ಕಾರದ ವಲಯದಲ್ಲಿ ಸೇವೆ ಸಲ್ಲಿಸಲು ಇದು ಮಹತ್ವದ ಅವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.&lt;/p&gt;&lt;h2&gt;ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು&lt;/h2&gt;&lt;p&gt;ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ದಿನಾಂಕವು ಕಲ್ಯಾಣ ಕರ್ನಾಟಕ ಹಾಗೂ ಇತರ ಎಲ್ಲಾ ವೃಂದದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ನಿಗದಿತ ಶುಲ್ಕವನ್ನು ಪಾವತಿಸಲು ಮೇ 12ರವರೆಗೆ ಅವಕಾಶ ನೀಡಲಾಗಿದೆ. ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಕೆಇಎ ಸಲಹೆ ನೀಡಿದೆ.&lt;/p&gt;&lt;h2&gt;ಪರೀಕ್ಷಾ ವೇಳಾಪಟ್ಟಿ&lt;/h2&gt;&lt;p&gt;ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ಲಿಖಿತ ಪರೀಕ್ಷೆಗಳು ಜೂನ್ ತಿಂಗಳಲ್ಲಿ ನಡೆಯಲಿವೆ.&lt;/p&gt;&lt;p&gt;ಕನ್ನಡ ಭಾಷಾ ಪರೀಕ್ಷೆ: ಮೂಲ ಹಾಗೂ ಕಲ್ಯಾಣ ಕರ್ನಾಟಕ ಎರಡೂ ವೃಂದದ ಅಭ್ಯರ್ಥಿಗಳಿಗೆ ಜೂನ್ 6ರಂದು ಕಡ್ಡಾಯವಾಗಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಗ್ರೂಪ್-ಬಿ ಪರೀಕ್ಷೆ: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಜೂನ್ 7ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ವೃಂದ: 371ಜೆ ವೃಂದಕ್ಕೆ ಸೇರಿದ 258 ಹುದ್ದೆಗಳಿಗಾಗಿ ಜೂನ್ 14ರಂದು ಪರೀಕ್ಷೆ ನಿಗದಿಯಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ&lt;/p&gt;&lt;p&gt;ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿದ್ದ ಹುದ್ದೆಗಳ ಭರ್ತಿಯಿಂದ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಾಗುವ ನಿರೀಕ್ಷೆಯಿದೆ. ರೈತರಿಗೆ ತಾಂತ್ರಿಕ ಸಲಹೆ ನೀಡುವುದು, ಸರ್ಕಾರದ ಯೋಜನೆಗಳನ್ನು ತಲುಪಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ.&lt;/p&gt;&lt;p&gt;ಅರ್ಹತೆ, ಅರ್ಜಿ ವಿಧಾನ ಮತ್ತು ಇತರ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು. ಜೂನ್ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿರುವುದರಿಂದ ಅಭ್ಯರ್ಥಿಗಳಿಗೆ ಸಿದ್ಧತೆಗಾಗಿ ಸೀಮಿತ ಸಮಯ ಮಾತ್ರ ಇರುವುದರಿಂದ, ಕೃಷಿ ಪದವೀಧರರು ಈಗಿನಿಂದಲೇ ಯೋಜಿತವಾಗಿ ಅಭ್ಯಾಸ ಆರಂಭಿಸುವುದು ಅಗತ್ಯವಾಗಿದೆ.&lt;/p&gt;&lt;p&gt;ಒಟ್ಟಾರೆ, ಈ ನೇಮಕಾತಿ ಪ್ರಕ್ರಿಯೆ ಕೃಷಿ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ಜೊತೆಗೆ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಿದೆ.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-kea-recruitment-890-agriculture-officer-posts-announced-apply-online-before-may-10-gdp/articleshow-4varya4"/>
        </item>
        <item>
            <title><![CDATA[ರಾಜ್ಯ ಪೊಲೀಸ್ ಇಲಾಖೆ 293 ಇನ್ಸ್‌ಪೆಕ್ಟರ್ ಹಾಗೂ 74 ಡಿವೈಎಸ್‌ಪಿಗಳ ವರ್ಗಾವಣೆ! ನಿಮ್ಮ ಠಾಣೆಗೆ ಬಂದವರಾರು ಪಟ್ಟಿನೋಡಿ!]]></title>
            <link>https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m</link>
            <guid isPermaLink="true">https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m</guid>
            <pubDate>Sun, 10 May 2026 19:28:49 +0530</pubDate>
            <description><![CDATA[&lt;p&gt;ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ! 293 ಇನ್ಸ್&zwnj;ಪೆಕ್ಟರ್&zwnj;ಗಳು ಹಾಗೂ 74 ಡಿವೈಎಸ್&zwnj;ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಯಾವ ಅಧಿಕಾರಿಗಳು ಬಂದಿದ್ದಾರೆ ಸಂಪೂರ್ಣ ಪಟ್ಟಿ ಮತ್ತು ವಿವರಗಳಿಗಾಗಿ ಇಲ್ಲಿ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1a4265x54yexyhfasv0e6yc,imgname-----------------------2025-07-29t090628.790-1753760209085.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 10): ರಾ&lt;/strong&gt;ಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಭಾರಿ ಮಟ್ಟದ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಪೊಲೀಸ್ ಇನ್ಸ್&zwnj;ಪೆಕ್ಟರ್ ಹಾಗೂ ಡಿವೈಎಸ್&zwnj;ಪಿ ದರ್ಜೆಯ ಅಧಿಕಾರಿಗಳ ವರ್ಗಾವಣೆಗೆ ಕೊನೆಗೂ ಚಾಲನೆ ನೀಡಲಾಗಿದ್ದು, ಒಟ್ಟು 293 ಪೊಲೀಸ್ ಇನ್ಸ್&zwnj;ಪೆಕ್ಟರ್ (ಸಿವಿಲ್) ಹಾಗೂ 74 ಡಿವೈಎಸ್&zwnj;ಪಿ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ಸಿಬ್ಬಂದಿ ಮಂಡಳಿ ನಿರ್ಧಾರ&lt;/strong&gt;&lt;/h3&gt;&lt;p&gt;ಮೇ 10, 2026ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಡಿಜಿ ಮತ್ತು ಐಜಿಪಿ ಕಚೇರಿಯ ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;293 ಇನ್ಸ್&zwnj;ಪೆಕ್ಟರ್&zwnj;ಗಳ ಅದಲು-ಬದಲು&lt;/strong&gt;&lt;/h2&gt;&lt;p&gt;ವರ್ಗಾವಣೆಗೊಂಡ 293 ಇನ್ಸ್&zwnj;ಪೆಕ್ಟರ್&zwnj;ಗಳಲ್ಲಿ ಹೆಚ್ಚಿನವರು ಬೆಂಗಳೂರು ನಗರ, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಂತಹ ಪ್ರಮುಖ ನಗರ ಪ್ರದೇಶಗಳ ವಿವಿಧ ಠಾಣೆಗಳಿಗೆ ನಿಯುಕ್ತಿಗೊಂಡಿದ್ದಾರೆ. ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಶೇಷ ತನಿಖಾ ತಂಡಗಳಿಂದ (SIT) ಹಲವು ಅಧಿಕಾರಿಗಳನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ತರಲಾಗಿದ್ದರೆ, ಕೆಲವು ಅನುಭವಿ ಅಧಿಕಾರಿಗಳನ್ನು ಕ್ರೈಂ ಬ್ರಾಂಚ್ ಮತ್ತು ಗುಪ್ತಚರ ವಿಭಾಗಗಳಿಗೆ ನಿಯೋಜಿಸಲಾಗಿದೆ. ಪ್ರಮುಖವಾಗಿ ಸೂರ್ಯನಗರ, ಮಡಿವಾಳ, ಚಂದ್ರಾ ಲೇಔಟ್&zwnj;ನಂತಹ ಪ್ರಮುಖ ಠಾಣೆಗಳ ಇನ್ಸ್&zwnj;ಪೆಕ್ಟರ್&zwnj;ಗಳನ್ನು ಬದಲಾಯಿಸಲಾಗಿದೆ.&lt;/p&gt;&lt;p&gt;&lt;/p&gt;&lt;h3&gt;&lt;strong&gt;74 ಡಿವೈಎಸ್&zwnj;ಪಿಗಳ ವರ್ಗಾವಣೆ&lt;/strong&gt;&lt;/h3&gt;&lt;p&gt;ಇನ್ಸ್&zwnj;ಪೆಕ್ಟರ್&zwnj;ಗಳ ಜೊತೆಗೆ 74 ಡಿವೈಎಸ್&zwnj;ಪಿ (DySP) ದರ್ಜೆಯ ಅಧಿಕಾರಿಗಳಿಗೂ ಹೊಸ ಸ್ಥಳಗಳನ್ನು ನಿಯುಕ್ತಿಗೊಳಿಸಲಾಗಿದೆ. ಉಪವಿಭಾಗಗಳ ಎಸಿಪಿ (ACP) ಮತ್ತು ಡಿವೈಎಸ್&zwnj;ಪಿ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಬೆಂಗಳೂರು ನಗರದ ಸಂಚಾರ ವಿಭಾಗ, ವಿಶೇಷ ಜಾರಿ ಕೋಶ (EEC) ಮತ್ತು ಜಿಲ್ಲಾ ಪೊಲೀಸ್ ಉಪವಿಭಾಗಗಳಲ್ಲಿ ಹೊಸ ಅಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.&lt;/p&gt;&lt;p&gt;&lt;/p&gt;&lt;h3&gt;&lt;strong&gt;ತಕ್ಷಣದಿಂದ ಜಾರಿಗೆ ಆದೇಶ&lt;/strong&gt;&lt;/h3&gt;&lt;p&gt;ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ (Wait) ಅನೇಕ ಅಧಿಕಾರಿಗಳಿಗೆ ಈ ಆದೇಶದ ಮೂಲಕ ಸಕ್ರಿಯ ಹುದ್ದೆಗಳನ್ನು ನೀಡಲಾಗಿದೆ. ಪ್ರಧಾನಿ ಮೋದಿ ಅವರ ಭೇಟಿ ಹಾಗೂ ರಾಜ್ಯದ ಹವಾಮಾನ ವೈಪರೀತ್ಯದಂತಹ ಸವಾಲುಗಳ ನಡುವೆಯೇ ಈ ವರ್ಗಾವಣೆ ನಡೆದಿರುವುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-government-massive-police-transfer-293-inspectors-and-74-dysp-list-2026-sat/articleshow-6beo47m"/>
        </item>
        <item>
            <title><![CDATA[ದಕ್ಷಿಣ ಕನ್ನಡದ ಮಹಿಳೆಯರಿಗೆ ಸಿಹಿಸುದ್ದಿ, ವಿವಿಧ ತಾಲೂಕುಗಳ ಅಂಗನವಾಡಿಯಲ್ಲಿ ಖಾಲಿ ಇರೋ ಹುದ್ದೆಗಳಿಗೆ ಅರ್ಜಿ ಅಹ್ವಾನ]]></title>
            <link>https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26</link>
            <guid isPermaLink="true">https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26</guid>
            <pubDate>Fri, 01 May 2026 19:39:11 +0530</pubDate>
            <description><![CDATA[ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ ಈ ಉದ್ಯೋಗಾವಕಾಶಕ್ಕೆ ಅರ್ಜಿ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jw0avyxjcwjxyjpm973xmqyk,imgname-untitled-design---2025-05-24t103312.389-1748063091634.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ.&lt;/p&gt;&lt;h2&gt;ಮೇ 16ರೊಳಗೆ ಅರ್ಜಿ ಸಲ್ಲಿಸಿ&lt;/h2&gt;&lt;p&gt;ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆಯಾಗುವವರಿಗೆ ಮಾಸಿಕವಾಗಿ ₹5,500 ಗೌರವಧನ ನೀಡಲಾಗುತ್ತದೆ. ಅದೇ ರೀತಿ ಸಹಾಯಕಿ ಹುದ್ದೆಗೆ ಆಯ್ಕೆಯಾಗುವವರಿಗೆ ತಿಂಗಳಿಗೆ ₹3,000 ಗೌರವಧನ ನಿಗದಿಪಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ಮೇ 16ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.&lt;/p&gt;&lt;p&gt;ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿತ ಅಂಗನವಾಡಿ ಕೇಂದ್ರದ ಸರ್ವೆ ವ್ಯಾಪ್ತಿಯವರಾಗಿರಬೇಕು ಹಾಗೂ ವಯೋಮಿತಿ 18ರಿಂದ 35 ವರ್ಷಗಳೊಳಗಿರಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.&lt;/p&gt;&lt;p&gt;ಶೈಕ್ಷಣಿಕ ಅರ್ಹತೆ ಕುರಿತು ಮಾತನಾಡುವುದಾದರೆ, ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ (PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ಸಹಾಯಕಿ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ಈ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, 7ನೇ ತರಗತಿ ತೇರ್ಗಡೆಯಾದವರನ್ನೂ ಪರಿಗಣಿಸಲಾಗುತ್ತದೆ. ಆದರೆ ಹೆಚ್ಚಿನ ವಿದ್ಯಾರ್ಹತೆಯನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ ಎಂಬುದು ಗಮನಾರ್ಹ.&lt;/p&gt;&lt;h2&gt;ಆಸಕ್ತರು ಈ ನಂಬರ್ &amp;nbsp;ಸಂಪರ್ಕಿಸಿ&lt;/h2&gt;&lt;p&gt;ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳನ್ನು ಸಂಪರ್ಕಿಸಬಹುದು. ಮಂಗಳೂರು ನಗರ (0824-2959809), ಮಂಗಳೂರು ಗ್ರಾಮಾಂತರ (9620636888 / 7760729919), ವಿಟ್ಲ (08255-238080), ಬೆಳ್ತಂಗಡಿ (08256-295134), ಸುಳ್ಯ (08257-298139) ಕಚೇರಿಗಳಲ್ಲಿ ಕಚೇರಿ ಅವಧಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಇದು ಉತ್ತಮ ಉದ್ಯೋಗಾವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಇಲಾಖೆಯು ಮನವಿ ಮಾಡಿದೆ.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/anganwadi-worker-and-helper-recruitment-2026-in-dakshina-kannada-apply-before-may-16th-gdp/articleshow-9fzal26"/>
        </item>
        <item>
            <title><![CDATA[ಬೆಂಗಳೂರು: ಇನ್ಸ್‌ಪೆಕ್ಟರ್ ಶಿವಪ್ಪ ನಾಯಕರ್ ಹೃದಯಾಘಾತದಿಂದ ನಿಧನ; ಪೊಲೀಸ್ ಇಲಾಖೆಯಲ್ಲಿ ಶೋಕ]]></title>
            <link>https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp</link>
            <guid isPermaLink="true">https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp</guid>
            <pubDate>Fri, 15 May 2026 11:08:12 +0530</pubDate>
            <description><![CDATA[ಬೆಂಗಳೂರು ಸಿಟಿ ಸ್ಪೆಷಲ್ ಬ್ರಾಂಚ್ (CSB) ಇನ್ಸ್&zwnj;ಪೆಕ್ಟರ್ ಶಿವಪ್ಪ ನಾಯಕರ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2010ರ ಬ್ಯಾಚ್&zwnj;ನ ಅಧಿಕಾರಿಯಾಗಿದ್ದ ಅವರ ಅಕಾಲಿಕ ಮರಣವು ಪೊಲೀಸ್ ಇಲಾಖೆಯಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krn1tfj3v2tqkgesknn60cke,imgname-police-sub-inspector-shivappa-mn-death-1778823020098.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 15): ರಾ&lt;/strong&gt;ಜ್ಯ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಯೊಬ್ಬರನ್ನು ಬೆಂಗಳೂರು ಕಳೆದುಕೊಂಡಿದೆ. ಸಿಟಿ ಸ್ಪೆಷಲ್ ಬ್ರಾಂಚ್&zwnj;ನಲ್ಲಿ (CSB) ಇನ್ಸ್&zwnj;ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ಪ ನಾಯಕರ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 2010ರ ಬ್ಯಾಚ್&zwnj;ನ ಅಧಿಕಾರಿಯಾಗಿದ್ದ ಅವರು, ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಶಿವಪ್ಪ ನಾಯಕರ್ ಅವರಿಗೆ ನಿನ್ನೆ ರಾತ್ರಿ ದಿಢೀರ್ ಎಂದು ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 56 ವರ್ಷ ವಯಸ್ಸಿನ ಅಧಿಕಾರಿಯೊಬ್ಬರು ಅಕಾಲಿಕವಾಗಿ ನಿಧನರಾಗಿರುವುದು ಪೊಲೀಸ್ ಇಲಾಖೆಯಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.&lt;/p&gt;&lt;h2&gt;&lt;strong&gt;ವೃತ್ತಿಜೀವನ ಮತ್ತು ಹಿನ್ನೆಲೆ:&lt;/strong&gt;&lt;/h2&gt;&lt;p&gt;ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮಹಟ್ಟಿ ಗ್ರಾಮದವರಾದ ಶಿವಪ್ಪ ನಾಯಕರ್ ಅವರು, 2010ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಸದ್ಯ ಬೆಂಗಳೂರು ನಗರದ ಸಿಟಿ ಸ್ಪೆಷಲ್ ಬ್ರಾಂಚ್&zwnj;ನಲ್ಲಿ ಇನ್ಸ್&zwnj;ಪೆಕ್ಟರ್ ಆಗಿ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಕಿರಿಯ ಅಧಿಕಾರಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಮಾರ್ಗದರ್ಶಕರಾಗಿದ್ದ ಅವರು, ತಮ್ಮ ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದರು.&lt;/p&gt;&lt;h3&gt;&lt;strong&gt;ಕಂಬನಿ ಮಿಡಿದ ಸಹೋದ್ಯೋಗಿಗಳು:&lt;/strong&gt;&lt;/h3&gt;&lt;p&gt;ಶಿವಪ್ಪ ನಾಯಕರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮವಾದ ಸೋಮಹಟ್ಟಿಗೆ ಕೊಂಡೊಯ್ಯುವ ಸಾಧ್ಯತೆಯಿದೆ. ಶಿವಪ್ಪ ನಾಯಕರ್ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪೊಲೀಸ್ ವಲಯದ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ಕೆಲಸದ ಒತ್ತಡ ಮತ್ತು ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-police-inspector-shivappa-nayakar-passes-away-heart-attack-jayadeva-hospital-sat/articleshow-by98osp"/>
        </item>
        <item>
            <title><![CDATA[ಸರ್ಕಾರಿ ಕೆಲ್ಸ ಅಂತ ನಂಬಿದ್ರೆ ಚೊಂಬೇ ಗತಿ ! 18 ವರ್ಷಗಳ ನಂತ್ರ ಬಂದ ನೇಮಕಾತಿ ಪತ್ರ ನೋಡಿ ಅಭ್ಯರ್ಥಿ ಶಾಕ್ !]]></title>
            <link>https://kannada.asianetnews.com/state-government-jobs/kerala-man-who-applied-for-job-in-2005-receives-appointment-just-before-retirement-after-20-year-wait/articleshow-emfmc3v</link>
            <guid isPermaLink="true">https://kannada.asianetnews.com/state-government-jobs/kerala-man-who-applied-for-job-in-2005-receives-appointment-just-before-retirement-after-20-year-wait/articleshow-emfmc3v</guid>
            <pubDate>Mon, 01 Jun 2026 11:21:04 +0530</pubDate>
            <description><![CDATA[&lt;p&gt;ಸರ್ಕಾರಿ ಕೆಲ್ಸಕ್ಕೆ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದು, ಪಾಸ್ ಆದ್ಮೇಲೂ ನೇಮಕಾತಿ ಪತ್ರ ಕೈ ಸೇರೋದು ಅನುಮಾನ. ಅದೇ ಕೆಲ್ಸಕ್ಕೆ ನೀವು ಕಾಯ್ತಾ ಕುಳಿತ್ರೆ ವಯಸ್ಸಾಗುತ್ತೆ. ಪಾಪ, ಕೇರಳದ ವ್ಯಕ್ತಿಗೂ ಆಗಿದ್ದೇನು ಗೊತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0vgvnc1rg1793cnwx0k32z,imgname-government-job-1780292808364.jpg" type="image/jpeg" height="390" width="690"/>
            <content:encoded><![CDATA[&lt;p&gt;ಸರ್ಕಾರಿ ಕೆಲ್ಸ ಸಿಗ್ಲಿ ಅಂತ ಪ್ರತಿಯೊಬ್ಬರೂ ಬಯಸ್ತಾರೆ. ಸರ್ಕಾರಿ ಕೆಲ್ಸಕ್ಕೆ ಅರ್ಜಿ ಸಲ್ಲಿಸಿ ವರ್ಷಪೂರ್ತಿ ಕಾಯ್ತಾರೆ. ಸರ್ಕಾರಿ ಕೆಲ್ಸ ಸಿಕ್ಕಿದ್ರೆ ಅದರ ಖುಷಿಯೇ ಬೇರೆ. ಆದ್ರೆ ಗವರ್ನಮೆಂಟ್ ಕೆಲ್ಸ ಸಿಗೋದು ಸುಲಭ ಅಲ್ಲ. ಬರೀ ಒಂದೋ ಎರಡೋ ವರ್ಷ ಕಾಯೋದು ಸಾಮಾನ್ಯ ಬಿಡಿ. ಆದ್ರೆ 2008ರಲ್ಲಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಕೆಲಸದ ಕರೆ ಬಂದ ವರ್ಷ ಕೇಳಿದ್ರೆ ನೀವು ದಂಗಾಗ್ತೀರಿ.&lt;/p&gt;&lt;h2&gt;18 ವರ್ಷದ ನಂತ್ರ ಬಂತು ನೇಮಕಾತಿ ಪತ್ರ&lt;/h2&gt;&lt;p&gt;ಘಟನೆ ನಡೆದಿರುವುದು ಕೇರಳ (Kerala)ದಲ್ಲಿ. ಮಲಪ್ಪುರಂ ಜಿಲ್ಲೆಯ ಕಾಳಿಕಾವು ನಿವಾಸಿ ಅಬ್ದುಲ್ ಮಜೀದ್ ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಮಜೀದ್ 2005 ರಲ್ಲಿ ಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಅವರು ಆಯ್ಕೆಯಾದ ರ್ಯಾಂಕಿಂಗ್ ಪಟ್ಟಿ 2008 ರಲ್ಲಿ ಮುಕ್ತಾಯಗೊಂಡಿತ್ತು. ಆದ್ರೆ ಅವರಿಗೆ ಯಾವುದೇ ನೇಮಕಾತಿ ಪತ್ರ ಬಂದಿರಲಿಲ್ಲ. 18 ವರ್ಷಗಳ ನಂತ್ರ ಕಳೆದ ತಿಂಗಳು ಕೇರಳ ಸಾರ್ವಜನಿಕ ಸೇವಾ ಆಯೋಗದಿಂದ (ಪಿಎಸ್ಸಿ) ನೇಮಕಾತಿ ಪತ್ರ ಬಂದಿದೆ. ಇದನ್ನು ನೋಡಿದ ಅಬ್ದುಲ್ ಮಜೀದ್ ದಂಗಾಗಿದ್ದಾರೆ.&lt;/p&gt;&lt;p&gt;ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರ ನೇಮಕಾತಿಗೆ&lt;/p&gt;&lt;p&gt;ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಆಸೆಯನ್ನು ಮಜೀದ್ ಹೊಂದಿದ್ದರು. ರ್ಯಾಂಕಿಂಗ್ ಪಟ್ಟಿಯಲ್ಲಿ ಹೆಸರು ಬಂದಾಗಿನಿಂದ್ಲೂ ಅವರು ನೇಮಕಾತಿಗಾಗಿ ಕಾಯ್ತಿದ್ದರು. ಆದ್ರೆ ವರ್ಷಗಳಾದ್ರೂ ಯಾವುದೇ ನೇಮಕಾತಿ ಪತ್ರ ಕೈ ಸೇರಿರಲಿಲ್ಲ. ಇದ್ರಿಂದ ಮಜೀದ್ ನಿರಾಸೆಗೊಂಡಿದ್ದರು. ಕೆಲಸ ಸಿಗುವ ಆಸೆಯನ್ನು ಬಿಟ್ಟಿದ್ದರು.&lt;/p&gt;&lt;p&gt;ಇಷ್ಟು ವರ್ಷದ ನಂತ್ರ ನೇಮಕಾತಿ ಪತ್ರ ಕೈಸೇರಿದ್ರೂ ಮಜೀದ್ ಅವರಿಗೆ ಕೆಲ್ಸ ಮಾಡಲು ಸಾಧ್ಯವಿಲ್ಲ. ಅವರ ಬಹುದಿನದ ಕನಸು ಕನಸಾಗೇ ಉಳಿಯಲಿದೆ. ಕೆಲ್ಸ ಮಾಡುವ ಎಲ್ಲ ಅರ್ಹತೆಯನ್ನು ಅವರು ಕಳೆದುಕೊಂಡಿದ್ದಾರೆ. ನಿಯಮದ ಪ್ರಕಾರ, ನೇಮಕಾತಿ ಪತ್ರ ಕೈಸೇರಿದ ಮೇಲೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಹಾಗೂ ಮೂರು ತಿಂಗಳೊಳಗೆ ಸೇವೆಗೆ ಸೇರಬೇಕು. ಆದ್ರೆ ಮಜೀದ್ ದಾಖಲೆ ಪ್ರಕಾರ ಅವರು ಕ ಮೇ 27, 1966 ರಂದು ಜನಿಸಿದ್ದಾರೆ. ಅಂದ್ರೆ ಅವರ ವಯಸ್ಸು 60 ವರ್ಷ ದಾಟಿದೆ. ಹಾಗಾಗಿ ಅವರು ನೇಮಕಾತಿಗೆ ಅನರ್ಹರಾಗಿದ್ದಾರೆ. ಈ ಬಗ್ಗೆ ಮಜೀದ್ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;Job: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ&lt;/p&gt;&lt;p&gt;ಈ ವಿವಾದ ಇಲಾಖೆಗಳು ಮತ್ತು PSC ನಡುವಿನ ನೇಮಕಾತಿ ಸಮನ್ವಯದಲ್ಲಿನ ವ್ಯವಸ್ಥಿತ ಅಸಮರ್ಥತೆಯನ್ನು ಬಹಿರಂಗಪಡಿಸಿದೆ. ಖಾಲಿ ಹುದ್ದೆಗಳನ್ನು ವರದಿ ಮಾಡುವಲ್ಲಿನ ವಿಳಂಬ, ಅಪೂರ್ಣ ಸಂವಹನ ಮತ್ತು ಆಡಳಿತಾತ್ಮಕ ಕಾರ್ಯಗಳ ಕೊರತೆಯು ನೇಮಕಾತಿ ಪ್ರಕ್ರಿಯೆಯು ವರ್ಷಗಳವರೆಗೆ ಬಗೆಹರಿಯದೆ ಉಳಿಯಲು ಕಾರಣವಾದ ಅಂಶಗಳಾಗಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Roopa Hegde</dc:creator>
            <atom:link href="https://kannada.asianetnews.com/state-government-jobs/kerala-man-who-applied-for-job-in-2005-receives-appointment-just-before-retirement-after-20-year-wait/articleshow-emfmc3v"/>
        </item>
        <item>
            <title><![CDATA[ರಾಜ್ಯ ಸರ್ಕಾರದಿಂದ ಎಸ್‌ಸಿ ಒಳಮೀಸಲಾತಿಗೆ ಅಧಿಕೃತ ಮುದ್ರೆ; 400 ಬಿಂದುಗಳ ರೋಸ್ಟರ್, ಮರು ಅಧಿಸೂಚನೆಗೆ ಆದೇಶ!]]></title>
            <link>https://kannada.asianetnews.com/state/karnataka-government-order-sc-internal-reservation-400-point-roster-implementation-sat/articleshow-k156yn0</link>
            <guid isPermaLink="true">https://kannada.asianetnews.com/state/karnataka-government-order-sc-internal-reservation-400-point-roster-implementation-sat/articleshow-k156yn0</guid>
            <pubDate>Wed, 13 May 2026 17:40:01 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಅಧಿಕೃತ ಆದೇಶ ಹೊರಡಿಸಿದೆ. ಈ ಆದೇಶದನ್ವಯ, ಶೇ. 15ರ ಮೀಸಲಾತಿಯನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದ್ದು, ನೇಮಕಾತಿಗಾಗಿ 400 ಬಿಂದುಗಳ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 56,432 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k31kwedj9ktnhh91f1ajy4nb,imgname-karnataka-internal-reservation-1755622291890.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 13): ಕ&lt;/strong&gt;ರ್ನಾಟಕ ರಾಜ್ಯದಲ್ಲಿ ಬಹುದಿನಗಳಿಂದ ಚರ್ಚೆಯಲ್ಲಿದ್ದ ಪರಿಶಿಷ್ಟ ಜಾತಿಗಳ (SC) ಒಳಮೀಸಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮಾನ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ತಾತ್ಕಾಲಿಕವಾಗಿ ಶೇ. 17 ರಿಂದ ಶೇ. 15ಕ್ಕೆ ಸೀಮಿತಗೊಳಿಸಿ, ಅದರೊಳಗೆ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಹೊಸ ವರ್ಗೀಕರಣ ಮತ್ತು ಮೀಸಲಾತಿ ಪ್ರಮಾಣ:&lt;/strong&gt;&lt;/h3&gt;&lt;p&gt;ದಿನಾಂಕ 13.05.2026 ರಂದು ಹೊರಡಿಸಲಾದ ಈ ಆದೇಶದನ್ವಯ, ಪರಿಶಿಷ್ಟ ಜಾತಿಯ ಒಟ್ಟು ಶೇ. 15 ರಷ್ಟು ಮೀಸಲಾತಿಯನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:&lt;/p&gt;&lt;ul&gt; &lt;li&gt;ಪೃವರ್ಗ-ಎ (SC-A): ಶೇಕಡಾ 5.25&lt;/li&gt; &lt;li&gt;ಪೃವರ್ಗ-ಬಿ (SC-B): ಶೇಕಡಾ 5.25&lt;/li&gt; &lt;li&gt;ಪೃವರ್ಗ-ಸಿ (SC-C): ಶೇಕಡಾ 4.5&lt;/li&gt;&lt;/ul&gt;&lt;p&gt;ವಿಶೇಷವಾಗಿ, 'ಪೃವರ್ಗ-ಸಿ' ಅಡಿಯಲ್ಲಿ ಲಭ್ಯವಾಗುವ ಹುದ್ದೆಗಳಲ್ಲಿ ಶೇಕಡಾ 20 ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿಗಳಲ್ಲಿನ ಅತ್ಯಂತ ಹಿಂದುಳಿದ 59 ಜಾತಿಗಳಿಗೆ ಮೀಸಲಿರಿಸಲಾಗಿದೆ. ಒಂದು ವೇಳೆ ಈ 59 ಜಾತಿಗಳಿಗೆ ಸೇರಿದ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಆ ಹುದ್ದೆಗಳನ್ನು 'ಪೃವರ್ಗ-ಸಿ'ಯ ಇತರ ಜಾತಿಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h2&gt;&lt;strong&gt;400 ಬಿಂದುಗಳ ರೋಸ್ಟರ್ ಜಾರಿ:&lt;/strong&gt;&lt;/h2&gt;&lt;p&gt;ಈ ಒಳಮೀಸಲಾತಿ ತೀರ್ಮಾನಗಳನ್ನು ಅನುಷ್ಠಾನಗೊಳಿಸಲು ಸರ್ಕಾರವು '400 ಬಿಂದುಗಳ ರೋಸ್ಟರ್' (400-Point Roster) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇನ್ನು ಮುಂದೆ ನಡೆಯುವ ಎಲ್ಲಾ ನೇರ ನೇಮಕಾತಿಗಳಲ್ಲಿ ಈ ರೋಸ್ಟರ್ ಬಿಂದುಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಹಿಂದಿನ ನೇಮಕಾತಿಯಲ್ಲಿ ಯಾವ ಬಿಂದುವಿನವರೆಗೆ ಪ್ರಕ್ರಿಯೆ ಮುಗಿದಿದೆಯೋ, ಅದರ ಮುಂದಿನ ಬಿಂದುವಿನಿಂದ ಹೊಸ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.&lt;/p&gt;&lt;h3&gt;&lt;strong&gt;56,432 ಹುದ್ದೆಗಳ ನೇಮಕಾತಿಗೆ ಒಪ್ಪಿಗೆ: ಹಿಂದಿನ ಅಧಿಸೂಚನೆ ವಾಪಸ್&lt;/strong&gt;&lt;/h3&gt;&lt;p&gt;ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ ಆರ್ಥಿಕ ಇಲಾಖೆಯು ಈಗಾಗಲೇ ಅನುಮೋದನೆ ನೀಡಿದೆ. ಈ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳಲು ಸಚಿವ ಸಂಪುಟವು ನಿರ್ಧರಿಸಿದ್ದು, ಹೊಸ ಒಳಮೀಸಲಾತಿ ನೀತಿಯ ಅನ್ವಯವೇ ಈ ನೇಮಕಾತಿಗಳು ನಡೆಯಲಿವೆ. ಈ ಹಿಂದೆ ಹೊರಡಿಸಲಾಗಿದ್ದ ಕೆಲವು ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಹೊಸ ಮಾರ್ಗಸೂಚಿಯಂತೆ ಮರು ಅಧಿಸೂಚನೆ ಹೊರಡಿಸಲು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಪ್ರಮುಖ ಮಾರ್ಗಸೂಚಿಗಳು:&lt;/strong&gt;&lt;/h2&gt;&lt;p&gt;ಯಾವುದೇ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಯ ಬಿಂದುಗಳು 3ಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಹುದ್ದೆಗಳಿಗೆ ಎಲ್ಲಾ 101 ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶ ನೀಡಲಾಗಿದೆ.&lt;/p&gt;&lt;p&gt;ಬ್ಯಾಕ್&zwnj;ಲಾಗ್ ಹುದ್ದೆಗಳ ವಿಚಾರದಲ್ಲಿ, ಮಾನ್ಯ ನ್ಯಾಯಾಲಯವು ಶೇ. 24 ರಷ್ಟು ಮೀಸಲಾತಿ ಪ್ರಮಾಣವನ್ನು ಒಪ್ಪಿದಲ್ಲಿ, ಹೆಚ್ಚುವರಿ ಶೇ. 6 ರಷ್ಟು ಹುದ್ದೆಗಳನ್ನು ಬ್ಯಾಕ್&zwnj;ಲಾಗ್ ಎಂದು ಪರಿಗಣಿಸಿ ನೇಮಕಾತಿ ಮಾಡಲಾಗುವುದು. ಸಮತಳ ಮೀಸಲಾತಿ (Horizontal Reservation) ಅನ್ವಯಿಸುವಾಗಲೂ ಸರ್ಕಾರವು ನಿಗದಿಪಡಿಸಿದ ಹೊಸ ರೋಸ್ಟರ್ ನಿಯಮಗಳನ್ನೇ ಪಾಲಿಸಬೇಕಾಗುತ್ತದೆ.&lt;/p&gt;&lt;h3&gt;&lt;strong&gt;ತಕ್ಷಣದಿಂದಲೇ ಜಾರಿ&lt;/strong&gt;&lt;/h3&gt;&lt;p&gt;ಈ ಆದೇಶವು ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಉಪಜಾತಿಗಳ ನಡುವೆ ಸಮಾನ ಅವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ವಿಶೇಷವಾಗಿ ಅತ್ಯಂತ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಮಾಲೋಚನೆಯೊಂದಿಗೆ ಸಿದ್ಧಪಡಿಸಲಾದ ಈ 400 ಬಿಂದುಗಳ ರೋಸ್ಟರ್ ಇನ್ನು ಮುಂದೆ ರಾಜ್ಯದ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ದಾರಿದೀಪವಾಗಲಿದೆ.&lt;/p&gt;&lt;p&gt;ಈ ಹೊಸ ನಿಯಮಾವಳಿಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಇದರಿಂದಾಗಿ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಸ್ಪಷ್ಟವಾದ ಮೀಸಲಾತಿ ಚೌಕಟ್ಟು ಲಭ್ಯವಾದಂತಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-government-order-sc-internal-reservation-400-point-roster-implementation-sat/articleshow-k156yn0"/>
        </item>
        <item>
            <title><![CDATA[ಕರ್ನಾಟಕದಲ್ಲಿ 56,834 ಹುದ್ದೆಗಳ ನೇಮಕಾತಿಗೆ ಶೀಘ್ರವೇ ಗ್ರೀನ್ ಸಿಗ್ನಲ್: ಗೃಹ ಸಚಿವ ಪರಮೇಶ್ವರ]]></title>
            <link>https://kannada.asianetnews.com/jobs/karnataka-govt-recruitment-notification-soon-for-56834-vacancies-says-home-minister-dr-g-parameshwara-at-kalaburagi-gdp/articleshow-k695hxd</link>
            <guid isPermaLink="true">https://kannada.asianetnews.com/jobs/karnataka-govt-recruitment-notification-soon-for-56834-vacancies-says-home-minister-dr-g-parameshwara-at-kalaburagi-gdp/articleshow-k695hxd</guid>
            <pubDate>Wed, 29 Apr 2026 17:53:28 +0530</pubDate>
            <description><![CDATA[ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,834 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಕಲಬುರಗಿಯಲ್ಲಿ ಘೋಷಿಸಿದ್ದಾರೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ 8 ಸಾವಿರ ಪೊಲೀಸ್ ಕಾನ್ಸ್ಟೇಬಲ್ ಮತ್ತು 600 ಪಿಎಸ್&zwnj;ಐ ಹುದ್ದೆಗಳು ಸೇರಿದ್ದು, ಒಳಮೀಸಲಾತಿ ಸಮಸ್ಯೆ ಬಗೆಹರಿದ ನಂತರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcj0ae0386pfjc2yt5zm1fj,imgname-dr.-g-parameshwara-1777464256960.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಬುರಗಿ: ರಾಜ್ಯದಲ್ಲಿನ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮಹತ್ವದ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿನ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಕೆಕೆಆರ್&zwnj;ಡಿಬಿ (Kalyana Karnataka Region Development Board) ಅನುದಾನದಡಿ ಖರೀದಿಸಲಾದ ನೂತನ ವಾಹನಗಳ ಹಸ್ತಾಂತರ ಕಾರ್ಯಕ್ರಮ ಹಾಗೂ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಉದ್ಘಾಟನೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.&lt;/p&gt;&lt;h2&gt;ರಾಜ್ಯದಲ್ಲಿ ಒಟ್ಟು 56,834 ಖಾಲಿ ಹುದ್ದೆ&amp;nbsp;&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 56,834 ಖಾಲಿ ಹುದ್ದೆಗಳಿದ್ದು, ಅವುಗಳ ಭರ್ತಿಗೆ ಈಗಾಗಲೇ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಪ್ರಕ್ರಿಯೆ ವಿಳಂಬವಾಗಲು ಒಳಮೀಸಲಾತಿ ಸಂಬಂಧಿತ ಸಮಸ್ಯೆಗಳು ಕಾರಣವಾಗಿದ್ದರೂ, ಇದೀಗ ಅವುಗಳನ್ನು ಸರ್ಕಾರ ಬಗೆಹರಿಸಿದೆ. ಸಚಿವ ಸಂಪುಟವು ಈಗಾಗಲೇ ಸಾವಿರಾರು ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.&lt;/p&gt;&lt;h2&gt;ಒಟ್ಟು 947 ಪಿಎಸ್&zwnj;ಐಗಳ ನೇಮಕಾತಿ ಪೂರ್ಣ&lt;/h2&gt;&lt;p&gt;ಈ ಹುದ್ದೆಗಳಲ್ಲೇ 8 ಸಾವಿರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು ಹಾಗೂ ಸುಮಾರು 600 ಹೊಸ ಪೊಲೀಸ್ ಸಬ್ ಇನ್ಸ್&zwnj;ಪೆಕ್ಟರ್ (PSI) ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ 545 ಪಿಎಸ್&zwnj;ಐ ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾದ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಿ, ಮರು ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಇದಲ್ಲದೆ, 402 ಪಿಎಸ್&zwnj;ಐಗಳನ್ನು ಈಗಾಗಲೇ ನೇಮಕ ಮಾಡಿ ತರಬೇತಿಗೆ ಕಳುಹಿಸಲಾಗಿದೆ. ಈ ಮೂಲಕ ಒಟ್ಟು 947 ಪಿಎಸ್&zwnj;ಐಗಳ ನೇಮಕಾತಿ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು.&lt;/p&gt;&lt;p&gt;ಕೆಕೆಆರ್&zwnj;ಡಿಬಿ ಅನುದಾನದಡಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್&zwnj;ಗಳನ್ನು ಜಾರಿಗೊಳಿಸುವ ಜೊತೆಗೆ ವಿವಿಧ ಪೊಲೀಸ್ ವಾಹನಗಳನ್ನು ಖರೀದಿಸಲಾಗಿದೆ. ಕಳೆದ ಬಾರಿ ಮಂಡಳಿಯಿಂದ 50 ಕೋಟಿ ರೂಪಾಯಿ ಅನುದಾನ ದೊರೆತಿದ್ದು, ಇದೀಗ 100 ಕೋಟಿ ರೂಪಾಯಿ ಅನುದಾನವನ್ನು ಕೇಳಲಾಗಿದೆ ಎಂದು ಹೇಳಿದರು. ಜೊತೆಗೆ, 20 ಕೋಟಿ ರೂಪಾಯಿ ವೆಚ್ಚದಲ್ಲಿ 72 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು, 2030ರೊಳಗೆ ರಾಜ್ಯದ ಶೇ.80ರಷ್ಟು ಪೊಲೀಸರಿಗೆ ವಸತಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಬೀದರ್&zwnj;ನ ಎಟಿಎಂ ದರೋಡೆ ಪ್ರಕರಣ ಕುರಿತು ಮಾತನಾಡಿದ ಅವರು, ಆರೋಪಿಗಳು ವಿದೇಶದಲ್ಲಿ ನೆಲೆಸಿರುವ ಸಾಧ್ಯತೆ ಇರುವ ಮಾಹಿತಿ ದೊರೆತಿದ್ದು, ತನಿಖಾ ತಂಡ ಅವರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಇನ್ನೂ, ಈ ವರ್ಷದ ಬಜೆಟ್&zwnj;ನಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇಲಾಖೆಗೆ ಮಂಜೂರಾದ ಅನುದಾನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಸೈಬರ್ ಅಪರಾಧ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಡಿಜಿಪಿ ಹುದ್ದೆಯನ್ನು ಸೃಷ್ಟಿಸಲಾಗಿದೆ. 2024ರಲ್ಲಿ ಸುಮಾರು 24 ಸಾವಿರ ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಅವುಗಳ ಸಂಖ್ಯೆ 14 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಬಿ.ಆರ್. ಪಾಟೀಲ್, ಶಾಸಕಿ ಖನೀಜಾ ಫಾತಿಮಾ, ಅಫಜಲಪುರ ಶಾಸಕ ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಜಗದೇವ್ ಗುತ್ತೇದಾರ್ ಹಾಗೂ ತಿಪ್ಪಣ್ಣಪ್ಪ ಕಮಕನೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜೊತೆಗೆ, ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯದ್ ಮೊಹಮ್ಮದ್ ಚಿಸ್ತಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಮಹಾನಗರ ಪಾಲಿಕೆಯ ಮೇಯರ್ ವರ್ಷಾ ರಾಜೀವ್ ಜಾನೆ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಿಕಾ ಪರಮೇಶ್ವರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-govt-recruitment-notification-soon-for-56834-vacancies-says-home-minister-dr-g-parameshwara-at-kalaburagi-gdp/articleshow-k695hxd"/>
        </item>
        <item>
            <title><![CDATA[ಹಾಸನ: ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ಫೈಟ್! ಹೆಚ್‌ಆರ್‌ಪಿ ಕಚೇರಿಯಲ್ಲಿ ಹೈಡ್ರಾಮಾ!]]></title>
            <link>https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0</link>
            <guid isPermaLink="true">https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0</guid>
            <pubDate>Fri, 01 May 2026 13:29:55 +0530</pubDate>
            <description><![CDATA[&lt;p&gt;ಹಾಸನದ ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ವರ್ಗಾವಣೆಗೊಂಡ ಅಧಿಕಾರಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮರಳಿದ್ದಾರೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಮತ್ತು ಹಿಂದಿನ ಅಧಿಕಾರಿಯ ನಡುವೆ ಒಂದೇ ಕುರ್ಚಿಗಾಗಿ ಜಿದ್ದಾಜಿದ್ದಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqh8mg8gax28d8zxrky28cpr,imgname-hassan-govt-officials-1777622204688.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮೇ 01): &lt;/strong&gt;ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಹೇಮಾವತಿ ಜಲಾಶಯ ಯೋಜನೆಯ (HRP) ವಿಶೇಷ ಭೂಸ್ವಾಧೀನಾಧಿಕಾರಿ (SLAO) ಕಚೇರಿ ಈಗ ಹೈಡ್ರಾಮಾದ ಕೇಂದ್ರಬಿಂದುವಾಗಿದೆ. ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಸಾರ್ವಜನಿಕರು ಮತ್ತು ಸಿಬ್ಬಂದಿ ಕಣ್ಣರಳಿಸಿ ನೋಡುವಂತಾಗಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಕಳೆದ ಒಂದು ವಾರದ ಹಿಂದೆಯಷ್ಟೇ ಹೇಮಾವತಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಜಾಗಕ್ಕೆ ಮಹೇಶ್ ಎಂಬ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ನೂತನ ಅಧಿಕಾರಿ ಮಹೇಶ್ ಅವರು ಈಗಾಗಲೇ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿ, ಅಧಿಕಾರಿಯ ಕುರ್ಚಿಯ ಮೇಲೆ ಕುಳಿತಿದ್ದಾರೆ.&lt;/p&gt;&lt;h2&gt;&lt;strong&gt;ಕೆಎಟಿ ಮೊರೆ ಹೋದ ಮಂಜುನಾಥ್:&lt;/strong&gt;&lt;/h2&gt;&lt;p&gt;ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಹಿಂದಿನ ಅಧಿಕಾರಿ ಮಂಜುನಾಥ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದರು. ಮಂಜುನಾಥ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮಂಡಳಿಯು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ (Stay) ನೀಡಿದೆ. ನ್ಯಾಯಾಲಯದಿಂದ ಸ್ಟೇ ತಂದ ಬೆನ್ನಲ್ಲೇ ಮಂಜುನಾಥ್ ಅವರು ಕಚೇರಿಗೆ ಹಾಜರಾಗಿದ್ದಾರೆ.&lt;/p&gt;&lt;h3&gt;&lt;strong&gt;ಚೇರ್ ಮೇಲೆ ಹೊಸಬರು, ಪಕ್ಕದಲ್ಲೇ ನಿಂತ ಹಳಬರು!&lt;/strong&gt;&lt;/h3&gt;&lt;p&gt;ಸದ್ಯ ಕಚೇರಿಯಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಮಹೇಶ್ ಅವರು ಅಧಿಕೃತವಾಗಿ ಕುರ್ಚಿಯ ಮೇಲೆ ಕುಳಿತಿದ್ದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮಂಜುನಾಥ್ ಅವರು ಪಕ್ಕದಲ್ಲೇ ನಿಂತು ತಮಗೆ ಕುರ್ಚಿ ಬಿಟ್ಟುಕೊಡುವಂತೆ ಆಗ್ರಹಿಸುತ್ತಿದ್ದಾರೆ. &quot;ನನ್ನ ವರ್ಗಾವಣೆಗೆ ಕೋರ್ಟ್ ತಡೆ ನೀಡಿದೆ, ಹಾಗಾಗಿ ಈ ಸ್ಥಾನ ನನಗೆ ಸೇರಬೇಕು&quot; ಎಂಬುದು ಮಂಜುನಾಥ್ ವಾದ. ಆದರೆ, &quot;ನಾನು ಸರ್ಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿದ್ದೇನೆ&quot; ಎನ್ನುವುದು ಮಹೇಶ್ ಅವರ ನಿಲುವು.&lt;/p&gt;&lt;h3&gt;&lt;strong&gt;ಗೊಂದಲದಲ್ಲಿ ಕಚೇರಿ ಸಿಬ್ಬಂದಿ:&lt;/strong&gt;&lt;/h3&gt;&lt;p&gt;ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಪಟ್ಟು ಹಿಡಿದಿರುವುದರಿಂದ ಕಚೇರಿಯ ಕಡತಗಳ ವಿಲೇವಾರಿ ಮತ್ತು ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗಿದೆ. ಯಾವ ಅಧಿಕಾರಿಯ ಆದೇಶ ಪಾಲಿಸಬೇಕು ಎಂಬ ಗೊಂದಲದಲ್ಲಿ ಸಿಬ್ಬಂದಿ ವರ್ಗದವರಿದ್ದಾರೆ. ಹೇಮಾವತಿ ಜಲಾಶಯ ಯೋಜನೆಯಂತಹ ಪ್ರಮುಖ ವಿಭಾಗದಲ್ಲಿ ಈ ರೀತಿ ಅಧಿಕಾರಿಗಳ ನಡುವಿನ ಕಿತ್ತಾಟ ಸಾರ್ವಜನಿಕರ ಟೀಕೆಗೂ ಗುರಿಯಾಗಿದೆ.&lt;/p&gt;&lt;p&gt;ಸದ್ಯ ಈ ಕುರ್ಚಿ ಸಮರ ಜಿಲ್ಲಾಡಳಿತದ ಅಂಗಳ ತಲುಪಿದ್ದು, ಈ ಹಗ್ಗಜಗ್ಗಾಟಕ್ಕೆ ಯಾರು ಬ್ರೇಕ್ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/hassan-high-drama-at-hrp-office-as-two-government-officers-fight-over-single-chair-sat/articleshow-kcfpdk0"/>
        </item>
        <item>
            <title><![CDATA[ರಾಜ್ಯದ ಸರ್ಕಾರಿ ಶಾಲೆಗಳಲ್ಲಿ  ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರ ನೇಮಕಾತಿಗೆ ಶಾಲಾ ಶಿಕ್ಷಣ ಇಲಾಖೆ ಆದೇಶ!]]></title>
            <link>https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1</link>
            <guid isPermaLink="true">https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1</guid>
            <pubDate>Sat, 30 May 2026 14:43:27 +0530</pubDate>
            <description><![CDATA[ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು, ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ಸಾಲಿಗೆ ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರನ್ನು ನೇಮಿಸಲು ಅಧಿಕೃತ ಆದೇಶ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk0aw4652cznfg6mvkv4b98z,imgname----------------------74--1772759158980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ನಲುಗುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ರಾಜ್ಯ ಸರ್ಕಾರವು ದೊಡ್ಡ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ತಡೆಯಲು, ಮೊದಲ ಹಂತದಲ್ಲಿ ಒಟ್ಟು 40,067 ಅತಿಥಿ ಶಿಕ್ಷಕರನ್ನು (Guest Teachers) ತಕ್ಷಣದಿಂದಲೇ ನೇಮಕ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;h2&gt;51 ಸಾವಿರ ಹುದ್ದೆಗಳಿಗೆ ಅನುಮೋದನೆ:&lt;/h2&gt;&lt;p&gt;ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ 60,000ಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿಯಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ, 2026-27ನೇ ಶೈಕ್ಷಣಿಕ ಸಾಲಿಗೆ ಒಟ್ಟು 51,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರವು ಈ ಹಿಂದೆ ಹಸಿರು ನಿಶಾನೆ ನೀಡಿತ್ತು. ಇದರಲ್ಲಿ 40,000 ಪ್ರಾಥಮಿಕ ಹಾಗೂ 11,000 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಸೇರಿವೆ.&lt;/p&gt;&lt;p&gt;ಸರ್ಕಾರದ ಈ ಅನುಮೋದನೆಯನ್ವಯ, ಶಾಲಾ ಶಿಕ್ಷಣ ಇಲಾಖೆಯು ಇದೀಗ ಮೊದಲ ಹಂತದಲ್ಲಿ 40,067 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ತೋರಿಸಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳು 30,337 ಅತಿಥಿ ಶಿಕ್ಷಕರ ನೇಮಕಾತಿ ಮತ್ತು ಸರ್ಕಾರಿ ಪ್ರೌಢ ಶಾಲೆಗಳು: 9,730 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದೆ. ಉಳಿದ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಹಂತ-ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.&lt;/p&gt;&lt;h2&gt;ಗೌರವ ಸಂಭಾವನೆ ಮತ್ತು ಆಯ್ಕೆಯ ಮಾನದಂಡಗಳು&lt;/h2&gt;&lt;p&gt;ನೇಮಕಗೊಳ್ಳುವ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆಯ ಜೊತೆಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ. ಆಯ್ಕೆಯಾಗುವ ಪ್ರತಿ ಅತಿಥಿ ಶಿಕ್ಷಕರಿಗೆ ಮಾಸಿಕ ₹12,000 ಗೌರವ ಸಂಭಾವನೆಯನ್ನು ನಿಗದಿಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಿಗೆ (Headmasters) ವಹಿಸಲಾಗಿದೆ.&lt;/p&gt;&lt;p&gt;ಆದ್ಯತೆಯ ನಿಯಮಗಳು: ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ಮತ್ತು ಮೆರಿಟ್ (ಅಂಕಗಳ ಆಧಾರ) ಅನ್ನು ಪರಿಗಣಿಸಬೇಕು. ಇದರೊಂದಿಗೆ ಈ ಹಿಂದೆ ಬೋಧನಾ ವೃತ್ತಿಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.&lt;/p&gt;&lt;p&gt;ನಡತೆ ಪ್ರಮುಖ ಅರ್ಹತೆ: ಶಾಲೆಗಳಲ್ಲಿ ಮಕ್ಕಳ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಕೇವಲ ಉತ್ತಮ ಗುಣ ಹಾಗೂ ಸತ್ಪ್ರಜೆ ಎನಿಸಿಕೊಳ್ಳುವಂತಹ ನಡತೆ ಇರುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.&lt;/p&gt;&lt;h2&gt;ಬಿಇಒಗಳಿಗೆ ಕಠಿಣ ಎಚ್ಚರಿಕೆ ನೀಡಿದ ಶಿಕ್ಷಣ ಇಲಾಖೆ&lt;/h2&gt;&lt;p&gt;ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ಮತ್ತು ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ ನಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಠಿಣ ನಿಲುವು ತಳೆದಿದೆ.&lt;/p&gt;&lt;h2&gt;ಇಲಾಖೆಯ ಕಟ್ಟುನಿಟ್ಟಿನ ಎಚ್ಚರಿಕೆ:&lt;/h2&gt;&lt;p&gt;ಈ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು, ಭ್ರಷ್ಟಾಚಾರ ಅಥವಾ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ತಾಲೂಕು ಅಥವಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನೇ (BEO) ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಂತಹ ಅಧಿಕಾರಿಗಳ ವಿರುದ್ಧ ಇಲಾಖೆಯ ನಿಯಮಾವಳಿಗಳ ಪ್ರಕಾರ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಪ್ರಕಟಣೆ ಎಚ್ಚರಿಸಿದೆ. ರಾಜ್ಯ ಸರ್ಕಾರದ ಈ ಸಕಾಲಿಕ ನಿರ್ಧಾರದಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಬಹುಮಟ್ಟಿಗೆ ನೀಗಲಿದ್ದು, ಹೊಸ ಶೈಕ್ಷಣಿಕ ವರ್ಷದಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿದೆ.&lt;/p&gt;]]></content:encoded>
            <category>state-government-jobs</category>
            <dc:creator>Gowthami K</dc:creator>
            <atom:link href="https://kannada.asianetnews.com/education/karnataka-education-alert-government-orders-recruitment-of-40067-guest-teachers-in-first-phase-gdp/articleshow-kty0iv1"/>
        </item>
        <item>
            <title><![CDATA[ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ₹450 ಕೋಟಿ ಬಿಡುಗಡೆ ಮಾಡಿದ ಸರ್ಕಾರ!]]></title>
            <link>https://kannada.asianetnews.com/state/karnataka-government-releases-rupees-450-crore-salary-arrears-for-ksrtc-bmtc-employees-sat/articleshow-n1kwx9g</link>
            <guid isPermaLink="true">https://kannada.asianetnews.com/state/karnataka-government-releases-rupees-450-crore-salary-arrears-for-ksrtc-bmtc-employees-sat/articleshow-n1kwx9g</guid>
            <pubDate>Wed, 29 Apr 2026 13:11:03 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಸಾರಿಗೆ ನಿಗಮಗಳ ನೌಕರರ 26 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಪಾವತಿಗಾಗಿ ಮೊದಲ ಹಂತವಾಗಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಕೆಎಸ್&zwnj;ಆರ್&zwnj;ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಲಕ್ಷಾಂತರ ನೌಕರರಿಗೆ ಈ ನಿರ್ಧಾರದಿಂದ ಆರ್ಥಿಕ ನೆರವು ದೊರೆತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqc2xwfhvgmqq0yxx3e0sx1m,imgname-ksrtc-employees--1--1777448448497.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.29): ರಾ&lt;/strong&gt;ಜ್ಯದ ಸಾರಿಗೆ ಸಂಸ್ಥೆಗಳ ನೌಕರರಿಗೆ ಕರ್ನಾಟಕ ಸರ್ಕಾರವು ಬಂಪರ್ ಕೊಡುಗೆ ನೀಡಿದೆ. ದೀರ್ಘಕಾಲದ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಯ ಹಿಂಬಾಕಿ (Arrears) ಪಾವತಿಸಲು ಸರ್ಕಾರವು ಭಾರಿ ಮೊತ್ತದ ಅನುದಾನವನ್ನು ಬಿಡುಗಡೆಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದಾಗಿ ಕೆಎಸ್&zwnj;ಆರ್&zwnj;ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಲಕ್ಷಾಂತರ ನೌಕರರಿಗೆ ಆರ್ಥಿಕ ನೆರವು ಸಿಕ್ಕಂತಾಗಿದೆ.&lt;/p&gt;&lt;h3&gt;&lt;strong&gt;26 ತಿಂಗಳ ವೇತನ ಬಾಕಿ ಪಾವತಿಗೆ ಕ್ರಮ:&lt;/strong&gt;&lt;/h3&gt;&lt;p&gt;ದಿನಾಂಕ 01.01.2021 ರಿಂದ 28.02.2023 ರವರೆಗಿನ ಒಟ್ಟು 26 ತಿಂಗಳ ಅವಧಿಯ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಪಾವತಿಸಲು ನೌಕರರು ಸತತವಾಗಿ ಒತ್ತಾಯಿಸುತ್ತಿದ್ದರು. ಈ ಬಾಕಿ ಮೊತ್ತದ ಒಟ್ಟು ಬೇಡಿಕೆ 1271.92 ಕೋಟಿ ರೂಪಾಯಿಗಳಷ್ಟಿತ್ತು. ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಮೊದಲ ಹಂತವಾಗಿ 450 ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನದಡಿ ಬಿಡುಗಡೆಗೊಳಿಸಿದೆ.&lt;/p&gt;&lt;h2&gt;&lt;strong&gt;ಯಾವ ನಿಗಮಕ್ಕೆ ಎಷ್ಟು ಅನುದಾನ? (ಕೋಟಿ ರೂ.ಗಳಲ್ಲಿ):&lt;/strong&gt;&lt;/h2&gt;&lt;ul&gt; &lt;li&gt;ಸರ್ಕಾರದ ಆದೇಶದಂತೆ ಬಿಡುಗಡೆಯಾದ 450 ಕೋಟಿ ರೂ.ಗಳನ್ನು ನಾಲ್ಕು ನಿಗಮಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:&lt;/li&gt; &lt;li&gt;ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC): 143.85 ಕೋಟಿ ರೂ.&lt;/li&gt; &lt;li&gt;ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): 137.24 ಕೋಟಿ ರೂ.&lt;/li&gt; &lt;li&gt;ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): 87.00 ಕೋಟಿ ರೂ.&lt;/li&gt; &lt;li&gt;ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC): 81.91 ಕೋಟಿ ರೂ.&lt;/li&gt; &lt;li&gt;ಒಟ್ಟು ಮೊತ್ತ: 450.00 ಕೋಟಿ ರೂ.&lt;/li&gt;&lt;/ul&gt;&lt;h3&gt;&lt;strong&gt;ಕಟ್ಟುನಿಟ್ಟಿನ ಷರತ್ತುಗಳು:&lt;/strong&gt;&lt;/h3&gt;&lt;ul&gt; &lt;li&gt;ಅನುದಾನ ಬಿಡುಗಡೆ ಮಾಡುವ ವೇಳೆ ಸರ್ಕಾರವು ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ:&lt;/li&gt; &lt;li&gt;ಬಿಡುಗಡೆ ಮಾಡಲಾದ ಈ ಮೊತ್ತವನ್ನು ಕೇವಲ ನೌಕರರ ವೇತನ ಬಾಕಿ ಪಾವತಿಸಲು ಮಾತ್ರ ಬಳಸತಕ್ಕದ್ದು.&lt;/li&gt; &lt;li&gt;ಯಾವುದೇ ವಿಳಂಬವಿಲ್ಲದೆ ತಕ್ಷಣವೇ ನೌಕರರ ಖಾತೆಗೆ ಈ ಹಣವನ್ನು ತಲುಪಿಸಬೇಕು.&lt;/li&gt; &lt;li&gt;ಅನುದಾನ ಬಳಕೆಯ ನಂತರ ಸಾರಿಗೆ ಸಂಸ್ಥೆಗಳು ಕಡ್ಡಾಯವಾಗಿ ಬಳಕೆಯ ಪ್ರಮಾಣ ಪತ್ರವನ್ನು (Utilization Certificate) ಸರ್ಕಾರಕ್ಕೆ ಸಲ್ಲಿಸಬೇಕು.&lt;/li&gt;&lt;/ul&gt;&lt;h3&gt;&lt;strong&gt;ನೌಕರರ ಸಂಘಟನೆಗಳ ಹರ್ಷ:&lt;/strong&gt;&lt;/h3&gt;&lt;p&gt;ಕಳೆದ ಹಲವು ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಾರಿಗೆ ನೌಕರರಿಗೆ ಈ ನಿರ್ಧಾರವು ದೊಡ್ಡ ಸಮಾಧಾನ ತಂದಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಕ್ಷೀಣಿಸಿರುವ ಹಿನ್ನೆಲೆಯಲ್ಲಿ, ಸರ್ಕಾರವು ಮಧ್ಯಪ್ರವೇಶಿಸಿ ಈ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ ಎಂದು ನೌಕರರ ಸಂಘಟನೆಗಳು ಅಭಿಪ್ರಾಯಪಟ್ಟಿವೆ. 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಹಂತ ಹಂತವಾಗಿ ಬಾಕಿ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.&lt;/p&gt;&lt;p&gt;ಈ ಆದೇಶಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಪುಷ್ಪ ವಿ.ಎಸ್. ಅವರು ಸಹಿ ಮಾಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿಸಿದ್ದಾರೆ. ಈ ನಿರ್ಧಾರದಿಂದಾಗಿ ಸಾರಿಗೆ ನೌಕರರ ಕುಟುಂಬಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-government-releases-rupees-450-crore-salary-arrears-for-ksrtc-bmtc-employees-sat/articleshow-n1kwx9g"/>
        </item>
        <item>
            <title><![CDATA[ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ: ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ರಜೆ ಘೋಷಣೆ!]]></title>
            <link>https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss</link>
            <guid isPermaLink="true">https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss</guid>
            <pubDate>Tue, 02 Jun 2026 14:38:37 +0530</pubDate>
            <description><![CDATA[&lt;p&gt;ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ಜೂ.3 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಭಾಗದ ಸರ್ಕಾರಿ ನೌಕರರಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿದೆ. ಇದೇ ವೇಳೆ, ವಿಧಾನಸಭೆ ಸಚಿವಾಲಯದ ನೌಕರರಿಗಾಗಿ ಸಭಾಧ್ಯಕ್ಷರು ವಿಶೇಷ ಭೋಜನ &amp;nbsp;ಆಯೋಜಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswhvsm3y8f5v573cav0exp3,imgname-untitled-design---2026-05-30t191030.751-1780148463234.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.02): ಕ&lt;/strong&gt;ರ್ನಾಟಕದ ರಾಜಕೀಯ ಅಂಗಳದಲ್ಲಿ ನೂತನ ಮುಖ್ಯಮಂತ್ರಿಯವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಜೂನ್ 03, 2026) ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಅದ್ಧೂರಿಯಾಗಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಸಿಬ್ಬಂದಿಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ಅತ್ತ ವಿಧಾನಸಭೆ ಸಚಿವಾಲಯದ ನೌಕರರಿಗೆ ಸಭಾಧ್ಯಕ್ಷರು ಇಂದು ವಿಶೇಷ ಭೋಜನ ಕೂಟವನ್ನು ಆಯೋಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಜೂನ್ 3 ರಂದು ಮಧ್ಯಾಹ್ನ ರಜೆ ಘೋಷಣೆ:&lt;/strong&gt;&lt;/h2&gt;&lt;p&gt;ಕರ್ನಾಟಕ ಸರ್ಕಾರದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಜೂನ್ 3, 2026 ರಂದು ಅಪರಾಹ್ನ 4:05 ಗಂಟೆಗೆ ಬೆಂಗಳೂರಿನ 'ಲೋಕಭವನ'ದಲ್ಲಿ ನಡೆಯಲಿದೆ. ಸಮಾರಂಭಕ್ಕೆ ಗಣ್ಯಾತಿಗಣ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ನಿರೀಕ್ಷೆಯಿರುವುದರಿಂದ, ಭದ್ರತೆ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.&lt;/p&gt;&lt;p&gt;ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜೂನ್ 3 ರಂದು ಅಪರಾಹ್ನ (ಮಧ್ಯಾಹ್ನದ ನಂತರ) ರಜೆ ಘೋಷಿಸಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಯದು ಕುಮಾರ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಇಂದು ವಿಧಾನಸಭೆ ನೌಕರರಿಗೆ ಭೋಜನ:&lt;/strong&gt;&lt;/h2&gt;&lt;p&gt;ಮತ್ತೊಂದೆಡೆ, ನೂತನ ಸರ್ಕಾರದ ಸ್ವಾಗತದ ಸಡಗರದ ನಡುವೆಯೇ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧಿಕಾರಿ ಮತ್ತು ನೌಕರರಿಗೆ ಇಂದು (ಜೂನ್ 02) ಸಂಜೆ 6:00 ಗಂಟೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್&zwnj;ನಲ್ಲಿ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿದೆ.&lt;/p&gt;&lt;p&gt;ಸನ್ಮಾನ್ಯ ಸಭಾಧ್ಯಕ್ಷರ ಆದೇಶದಂತೆ ಆಯೋಜಿಸಲಾಗಿರುವ ಈ ಕೂಟದಲ್ಲಿ ಸಚಿವಾಲಯದ ಎಲ್ಲಾ ನೌಕರರು ಭಾಗವಹಿಸುವಂತೆ ಸೂಚಿಸಿ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ. ಲಲಿತಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರದ ಆಡಳಿತ ಆರಂಭವಾಗುವ ಮುನ್ನವೇ ವಿಧಾನಸೌಧದ ಆವರಣದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ನಾಳಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-new-cm-dk-shivakumar-swearing-in-ceremony-holiday-for-staff-and-dinner-party-details-sat/articleshow-odzwnss"/>
        </item>
        <item>
            <title><![CDATA[ರಾಸಲೀಲೆ ಪ್ರಕರಣದ ಆರೋಪಿ ಡಿಜಿಪಿ ರಾಮಚಂದ್ರ ರಾವ್ ಅಮಾನತು ರದ್ದು; ಮತ್ತೆ ಉನ್ನತ ಹುದ್ದೆ ನಿಯೋಜಿಸಿದ ಸರ್ಕಾರ!]]></title>
            <link>https://kannada.asianetnews.com/state/karnataka-govt-revokes-suspension-of-dgp-ramachandra-rao-ips-rasaleele-case-sat/articleshow-ozz4v1e</link>
            <guid isPermaLink="true">https://kannada.asianetnews.com/state/karnataka-govt-revokes-suspension-of-dgp-ramachandra-rao-ips-rasaleele-case-sat/articleshow-ozz4v1e</guid>
            <pubDate>Wed, 06 May 2026 19:14:47 +0530</pubDate>
            <description><![CDATA[&lt;p&gt;'ರಾಸಲೀಲೆ' ವಿಡಿಯೋ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 'ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್)' ಹುದ್ದೆಗೆ ಮರುನೇಮಕ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyrdwhmbn4s4r7kyc4hbxgz,imgname-ips-ramachandra-rao-1778074972724.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 06): ರಾ&lt;/strong&gt;ಜ್ಯ ಪೊಲೀಸ್ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ 'ರಾಸಲೀಲೆ' ಪ್ರಕರಣದ ಆರೋಪಿ, ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ (IPS: 1993) ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಮೂಲಕ ವಿವಾದಿತ ಅಧಿಕಾರಿಯನ್ನು ಮತ್ತೆ ಸೇವೆಗೆ ನಿಯೋಜನೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h3&gt;&lt;p&gt;ಕೆಲವು ತಿಂಗಳ ಹಿಂದೆ ಡಿಜಿಪಿ ದರ್ಜೆಯ ಅಧಿಕಾರಿಯಾಗಿದ್ದ ಕೆ. ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಮತ್ತು 'ರಾಸಲೀಲೆ' ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಕಚೇರಿಯಂತಹ ಪವಿತ್ರ ಜಾಗದಲ್ಲಿ ಉನ್ನತ ದರ್ಜೆಯ ಅಧಿಕಾರಿಯೊಬ್ಬರು ಇಂತಹ ಕೃತ್ಯವೆಸಗಿರುವುದು ಇಡೀ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ ತಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಜನವರಿ 19, 2026 ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿತ್ತು.&lt;/p&gt;&lt;h2&gt;&lt;strong&gt;ಅಮಾನತು ರದ್ದತಿ ಮತ್ತು ಮರು ನಿಯೋಜನೆ:&lt;/strong&gt;&lt;/h2&gt;&lt;p&gt;ಸರ್ಕಾರದ ಇತ್ತೀಚಿನ ಆದೇಶದಂತೆ (DPAR 26 SPS 2026, ದಿನಾಂಕ: 06.05.2026), ರಾಮಚಂದ್ರ ರಾವ್ ಅವರ ಅಮಾನತನ್ನು ರದ್ದುಪಡಿಸಲಾಗಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಗೆ ಮರುಸೇರ್ಪಡೆಗೊಳಿಸಲಾಗಿದ್ದು, 'ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್)' ಹುದ್ದೆಗೆ ನೇಮಿಸಲಾಗಿದೆ. ವಿಶೇಷವೆಂದರೆ, ಈ ಹುದ್ದೆಯನ್ನು ಸಿಐಡಿ (CID) ಡಿಜಿಪಿ ಹುದ್ದೆಗೆ ಸಮಾನವೆಂದು ಪರಿಗಣಿಸಿ ಸರ್ಕಾರ ಅವರಿಗೆ ಮತ್ತೆ ಪವರ್&zwnj;ಫುಲ್ ಸ್ಥಾನವನ್ನೇ ನೀಡಿದೆ.&lt;/p&gt;&lt;h3&gt;&lt;strong&gt;ಸರ್ಕಾರದ ಆದೇಶದ ಸಾರಾಂಶ:&lt;/strong&gt;&lt;/h3&gt;&lt;p&gt;ಮಾರ್ಚ್ 18, 2026 ರಂದು ರಾಮಚಂದ್ರ ರಾವ್ ಅವರ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಈಗ ಹಠಾತ್ ಆಗಿ ಆಲ್ ಇಂಡಿಯಾ ಸರ್ವಿಸ್ (AIS) ನಿಯಮಗಳ ಅಡಿಯಲ್ಲಿ ಅವರ ಅಮಾನತು ಆದೇಶವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ರಾಜಭವನದ ಆದೇಶದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ. ಎಸ್. ಅವರು ಈ ಆದೇಶಕ್ಕೆ ಸಹಿ ಹಾಕಿದ್ದಾರೆ.&lt;/p&gt;&lt;h3&gt;&lt;strong&gt;ಸಾರ್ವಜನಿಕ ವಲಯದಲ್ಲಿ ಆಕ್ರೋಶ:&lt;/strong&gt;&lt;/h3&gt;&lt;p&gt;ಗಂಭೀರವಾದ ನೈತಿಕ ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಯನ್ನು ತನಿಖೆ ಪೂರ್ಣಗೊಳ್ಳುವ ಮೊದಲೇ ಅಥವಾ ವಿವಾದದ ಕಾವು ಆರುವ ಮೊದಲೇ ಮತ್ತೆ ಇಂತಹ ಉನ್ನತ ಹುದ್ದೆಗೆ ನಿಯೋಜಿಸಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕಚೇರಿಯಲ್ಲೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ವಿಡಿಯೋ ಸಾಕ್ಷ್ಯಗಳಿದ್ದರೂ ಸರ್ಕಾರ ಇಂತಹ ಮೃದು ಧೋರಣೆ ತೋರುತ್ತಿರುವುದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.&lt;/p&gt;&lt;p&gt;ಒಟ್ಟಾರೆಯಾಗಿ, ಜನವರಿ ತಿಂಗಳಲ್ಲಿ ಸಸ್ಪೆಂಡ್ ಆಗಿದ್ದ ರಾಮಚಂದ್ರ ರಾವ್, ಮೇ ತಿಂಗಳಿನಲ್ಲಿ ಮತ್ತೆ 'ಡಿಜಿಪಿ' ಎಂಬ ಗತ್ತು-ಗೈರತ್ತಿನೊಂದಿಗೆ ಪೊಲೀಸ್ ಇಲಾಖೆಯ ಮುಖ್ಯವಾಹಿನಿಗೆ ಮರಳಿದ್ದಾರೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-revokes-suspension-of-dgp-ramachandra-rao-ips-rasaleele-case-sat/articleshow-ozz4v1e"/>
        </item>
        <item>
            <title><![CDATA[ಸಾರಿಗೆ ನೌಕರರಿಗೆ 12.5% ವೇತನ ಹೆಚ್ಚಳ; ಸರ್ಕಾರದ ಆಫರ್‌ ತಿರಸ್ಕರಿಸಿ ಮೇ 20ರಿಂದ ಪ್ರತಿಭಟನೆಗೆ ಸಜ್ಜಾದ ನೌಕರರು!]]></title>
            <link>https://kannada.asianetnews.com/state/karnataka-transport-ksrtc-employees-salary-hike-12-5-percent-union-strike-call-may-2026/articleshow-v22866y</link>
            <guid isPermaLink="true">https://kannada.asianetnews.com/state/karnataka-transport-ksrtc-employees-salary-hike-12-5-percent-union-strike-call-may-2026/articleshow-v22866y</guid>
            <pubDate>Tue, 12 May 2026 19:20:35 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಸಾರಿಗೆ ನಿಗಮಗಳ ನೌಕರರಿಗೆ ಶೇ. 12.5ರಷ್ಟು ವೇತನ ಹೆಚ್ಚಳವನ್ನು ಘೋಷಿಸಿದೆ. ಆದರೆ, ಶೇ. 25ರಷ್ಟು ಹೆಚ್ಚಳಕ್ಕೆ ಆಗ್ರಹಿಸಿದ್ದ ನೌಕರರ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ತಿರಸ್ಕರಿಸಿದ್ದು, ಮೇ 20 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kre73g8a6yrhzxtw8rnhe65w,imgname-ksrtc-employees-salary-hike-1778593677576.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 12): ದೀ&lt;/strong&gt;ರ್ಘಕಾಲದ ಹೋರಾಟದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ನೌಕರರಿಗೆ ರಾಜ್ಯ ಸರ್ಕಾರವು ವೇತನ ಪರಿಷ್ಕರಣೆಯ ಸಿಹಿ ಸುದ್ದಿ ನೀಡಿದೆ. ಆದರೆ, ಸರ್ಕಾರ ಪ್ರಕಟಿಸಿರುವ ವೇತನ ಹೆಚ್ಚಳದ ಪ್ರಮಾಣವು ನೌಕರರ ನಿರೀಕ್ಷೆಯನ್ನು ತಲುಪದ ಕಾರಣ, ರಾಜ್ಯದಲ್ಲಿ ಮತ್ತೆ ಸಾರಿಗೆ ಮುಷ್ಕರದ ಕಾರ್ಮೋಡ ಕವಿದಿದೆ.&lt;/p&gt;&lt;h3&gt;&lt;strong&gt;ಸರ್ಕಾರದ ಆದೇಶದಲ್ಲೇನಿದೆ?&lt;/strong&gt;&lt;/h3&gt;&lt;p&gt;ಸಾರಿಗೆ ಇಲಾಖೆಯು ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ನಾಲ್ಕೂ ಸಾರಿಗೆ ನಿಗಮಗಳ ನೌಕರರ ಮೂಲ ವೇತನವನ್ನು ಶೇಕಡಾ 12.50 ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಈ ವೇತನ ಪರಿಷ್ಕರಣೆಯು 2025ರ ಮಾರ್ಚ್ 31 ರಂದು ನೌಕರರು ಪಡೆಯುತ್ತಿದ್ದ ಮೂಲ ವೇತನದ ಮೇಲೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ವೇತನ ಹೆಚ್ಚಳದ ಪ್ರಮುಖ ಅಂಶಗಳು:&lt;/strong&gt;&lt;/h2&gt;&lt;p&gt;&lt;strong&gt;ಅನುಷ್ಠಾನ: &lt;/strong&gt;ಹೊಸ ವೇತನ ಪರಿಷ್ಕರಣೆಯು 2026ರ ಜುಲೈ 1 ರಿಂದ ಜಾರಿಗೆ ಬರಲಿದ್ದು, ಜುಲೈ ಮಾಹೆಯ ವೇತನದಲ್ಲಿ ನೌಕರರಿಗೆ ಇದು ಲಭ್ಯವಾಗಲಿದೆ.&lt;/p&gt;&lt;p&gt;&lt;strong&gt;ಹಿಂಬಾಕಿ (Arrears): &lt;/strong&gt;2025ರ ಏಪ್ರಿಲ್ 1 ರಿಂದ 2026ರ ಜೂನ್ 30 ರವರೆಗಿನ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ನಿಗಮಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಲು ಸರ್ಕಾರ ಸೂಚಿಸಿದೆ.&lt;/p&gt;&lt;p&gt;&lt;strong&gt;ಅವಧಿ: &lt;/strong&gt;ಈ ವೇತನ ಪರಿಷ್ಕರಣೆಯು ನಾಲ್ಕು ವರ್ಷಗಳ ಅವಧಿಗೆ ಅಂದರೆ 2025ರ ಏಪ್ರಿಲ್ 1 ರಿಂದ 2029ರ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತದೆ.&lt;/p&gt;&lt;h3&gt;&lt;strong&gt;ನೌಕರರ ಸಂಘಟನೆಗಳ ಅಸಮಾಧಾನ ಏಕೆ?&lt;/strong&gt;&lt;/h3&gt;&lt;p&gt;ಸರ್ಕಾರವು 12.5% ವೇತನ ಹೆಚ್ಚಳ ಘೋಷಿಸಿದ ಬೆನ್ನಲ್ಲೇ ಸಾರಿಗೆ ನೌಕರರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕಳೆದ ಹಲವು ವರ್ಷಗಳಿಂದ ವೇತನ ಪರಿಷ್ಕರಣೆಯಾಗದ ಕಾರಣ, ನೌಕರರು ಕನಿಷ್ಠ ಶೇ. 25 ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಸರ್ಕಾರ ಘೋಷಿಸಿರುವ ಅರ್ಧದಷ್ಟು (12.5%) ಹೆಚ್ಚಳವು ನೌಕರರಿಗೆ ಮಾಡಿದ ಅನ್ಯಾಯ ಎಂದು ಸಂಘಟನೆಗಳು ಆಪಾದಿಸಿವೆ.&lt;/p&gt;&lt;h2&gt;&lt;strong&gt;ಮೇ 20ರಿಂದ ರಾಜ್ಯಾದ್ಯಂತ ಬಸ್ ಮುಷ್ಕರ?&lt;/strong&gt;&lt;/h2&gt;&lt;p&gt;ಸರ್ಕಾರದ ಈ ಅರೆಬರೆ ವೇತನ ಹೆಚ್ಚಳದ ಆದೇಶವನ್ನು ತಿರಸ್ಕರಿಸಿರುವ ಸಾರಿಗೆ ನೌಕರರ ಒಕ್ಕೂಟಗಳು, ತಮ್ಮ ಬೇಡಿಕೆ ಈಡೇರಿಕೆಗಾಗಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿವೆ. 'ನಾವು ಶೇ. 25 ರಷ್ಟು ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದೆವು, ಆದರೆ ಸರ್ಕಾರ ಕೇವಲ ಶೇ. 12.5 ರಷ್ಟು ಮಾತ್ರ ಘೋಷಿಸಿದೆ. ಇದು ನೌಕರರ ಕಣ್ಣೊರೆಸುವ ತಂತ್ರ' ಎಂದು ಸಂಘಟನೆಯ ನಾಯಕರು ತಿಳಿಸಿದ್ದಾರೆ. ನಾಲ್ಕೂ ನಿಗಮಗಳ ನೌಕರರು ಈ ಮುಷ್ಕರಕ್ಕೆ ಬೆಂಬಲ ನೀಡುತ್ತಿರುವುದರಿಂದ, ಮೇ 20ರಿಂದ ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ತೊಂದರೆ ಸಾಧ್ಯತೆ:&lt;/strong&gt;&lt;/h3&gt;&lt;p&gt;ಒಂದೆಡೆ ಸರ್ಕಾರವು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಕಾರಣ ನೀಡಿ ಕಡಿಮೆ ವೇತನ ಹೆಚ್ಚಳ ಮಾಡಿದೆ. ಇನ್ನೊಂದೆಡೆ ನೌಕರರು ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಇಬ್ಬರ ನಡುವಿನ ಸಂಘರ್ಷದಲ್ಲಿ ಸಾಮಾನ್ಯ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಸರ್ಕಾರವು ಮೇ 20ರ ಒಳಗಾಗಿ ನೌಕರರ ಮನವೊಲಿಸಿ ಮುಷ್ಕರ ತಡೆಯುತ್ತದೆಯೇ ಅಥವಾ ಬಸ್ ಸಂಚಾರ ಸ್ತಬ್ಧವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-transport-ksrtc-employees-salary-hike-12-5-percent-union-strike-call-may-2026/articleshow-v22866y"/>
        </item>
        <item>
            <title><![CDATA[ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ (DA) ಶೇ. 1.50 ರಷ್ಟು ಹೆಚ್ಚಳ - ಸರ್ಕಾರದ ಆದೇಶ ಪ್ರಕಟ]]></title>
            <link>https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0</link>
            <guid isPermaLink="true">https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0</guid>
            <pubDate>Mon, 11 May 2026 13:23:49 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಈ ಶೇ. 1.50 ರಷ್ಟು ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯ ಆಗಲಿದೆ. ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd0mqnn1gqaxd5veqr661nk,imgname-capturek-1776405864116.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿದೆ. ಈ ಶೇ. 1.50 ರಷ್ಟು ಹೆಚ್ಚಳವು 2026ರ ಜನವರಿ 1 ರಿಂದ ಪೂರ್ವಾನ್ವಯ ಆಗಲಿದೆ. ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತ ವೇತನದಾರರಿಗೆ ಕರ್ನಾಟಕ ಸರ್ಕಾರವು ಒಂದು ಪ್ರಮುಖ ಸಿಹಿ ಸುದ್ದಿಯನ್ನು ನೀಡಿದೆ. ನೌಕರರ ತುಟ್ಟಿಭತ್ಯೆಯನ್ನು (Dearness Allowance) ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿ ಆರ್ಥಿಕ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;img&gt;&lt;p&gt;2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಹೆಚ್ಚಳ ಅನ್ವಯವಾಗಲಿದೆ. ಪ್ರಸ್ತುತ ಮೂಲ ವೇತನದ ಶೇಕಡಾ 14.25 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇಕಡಾ 15.75 ಕ್ಕೆ ಪರಿಷ್ಕರಿಸಲಾಗಿದೆ. ಅಂದರೆ ಒಟ್ಟು ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದಂತಾಗಿದೆ.&lt;/p&gt;&lt;img&gt;&lt;p&gt;ಈ ಆದೇಶವು ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ, ಇನ್ನುಳಿದ ಹಲವು ವರ್ಗದವರಿಗೂ ಅನ್ವಯವಾಗಲಿದೆ:&lt;/p&gt;&lt;p&gt;ರಾಜ್ಯ ಸರ್ಕಾರದ ನಿವೃತ್ತ ವೇತನದಾರರು ಮತ್ತು ಕುಟುಂಬ ನಿವೃತ್ತ ವೇತನದಾರರು.&lt;/p&gt;&lt;p&gt;ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು.&lt;/p&gt;&lt;p&gt;ಯುಜಿಸಿ (UGC), ಎಐಸಿಟಿಇ (AICTE), ಐಸಿಎಆರ್ (ICAR) ವೇತನ ಶ್ರೇಣಿಯ ನಿವೃತ್ತ ನೌಕರರು.&lt;/p&gt;&lt;p&gt;ಜಿಲ್ಲಾ ಪಂಚಾಯತ್&zwnj;ಗಳ ಪೂರ್ಣಾವಧಿ ನೌಕರರು.&lt;/p&gt;&lt;p&gt;ಪೂರ್ಣಾವಧಿ ಕೆಲಸ ಮಾಡುವ ವರ್ಕ್&zwnj;ಚಾರ್ಜ್ ನೌಕರರು.&lt;/p&gt;&lt;p&gt;ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಪೂರ್ಣಾವಧಿ ನೌಕರರು.&lt;/p&gt;&lt;img&gt;&lt;p&gt;ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜನವರಿ 1 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಸರ್ಕಾರಿ ಆದೇಶದ ಪ್ರಕಾರ, ಜನವರಿ 1 ರಿಂದ ಏಪ್ರಿಲ್ ತಿಂಗಳವರೆಗಿನ ಬಾಕಿ ಮೊತ್ತವನ್ನು (Arrears) ಮೇ 2026 ರ ವೇತನದೊಂದಿಗೆ ನಗದಾಗಿ ಪಾವತಿಸಲಾಗುವುದು.&lt;/p&gt;&lt;img&gt;&lt;p&gt;ತುಟ್ಟಿಭತ್ಯೆಯ ಲೆಕ್ಕಾಚಾರಕ್ಕಾಗಿ 'ಮೂಲ ವೇತನ' ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ. ಇದರಲ್ಲಿ ಸ್ಥಗಿತ ವೇತನ ಬಡ್ತಿ ಮತ್ತು ವೈಯಕ್ತಿಕ ವೇತನಗಳನ್ನು ಸೇರಿಸಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.&lt;/p&gt;&lt;img&gt;&lt;p&gt;ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸಬೇಕು, ಇದನ್ನು ಯಾವುದೇ ಉದ್ದೇಶಕ್ಕಾಗಿ ವೇತನ ಎಂದು ಪರಿಗಣಿಸಲಾಗುವುದಿಲ್ಲ.&lt;/p&gt;&lt;p&gt;ಹಣ ಪಾವತಿಯಲ್ಲಿ 50 ಪೈಸೆಗಿಂತ ಹೆಚ್ಚಿನ ಭಿನ್ನಾಂಕವಿದ್ದರೆ ಅದನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸಬೇಕು ಮತ್ತು 50 ಪೈಸೆಗಿಂತ ಕಡಿಮೆ ಇದ್ದರೆ ಅದನ್ನು ನಿರ್ಲಕ್ಷಿಸಬೇಕು.&lt;/p&gt;&lt;p&gt;ಈ ನಿರ್ಧಾರದಿಂದಾಗಿ ಲಕ್ಷಾಂತರ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ಅನುಕೂಲವಾಗಲಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಇದು ಸಹಕಾರಿಯಾಗಲಿದೆ.&lt;/p&gt;]]></content:encoded>
            <category>state-government-jobs</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-government-employees-and-pensioners-da-hike-january-2026-order-details-sat-wgk0vf0"/>
        </item>
        <item>
            <title><![CDATA[56432 ಸರ್ಕಾರಿ ಹುದ್ದೆ ಭರ್ತಿಗೆ ಸಂಪುಟ ಅಸ್ತು, 100ರ ಬದಲು 400 ರೋಸ್ಟರ್‌ ಬಿಂದು ಪಾಲನೆ]]></title>
            <link>https://kannada.asianetnews.com/state-government-jobs/karnataka-cabinet-nod-for-56432-jobs-400-point-roster-sc-internal-reservation-san/articleshow-z4zgutm</link>
            <guid isPermaLink="true">https://kannada.asianetnews.com/state-government-jobs/karnataka-cabinet-nod-for-56432-jobs-400-point-roster-sc-internal-reservation-san/articleshow-z4zgutm</guid>
            <pubDate>Fri, 01 May 2026 06:00:14 +0530</pubDate>
            <description><![CDATA[ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ, 100ರ ಬದಲು 400 ರೋಸ್ಟರ್ ಬಿಂದುಗಳನ್ನು ಅಳವಡಿಸಲು ಸಚಿವ ಸಂಪುಟ ನಿರ್ಧರಿಸಿದೆ. ಈ ಬದಲಾವಣೆಯು ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಗುರಿ ಹೊಂದಿದ್ದು, ಹಳೆಯ ಅಧಿಸೂಚನೆಗಳನ್ನು ಹಿಂಪಡೆಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp567j0kqj5fna94zd6s62sk,imgname-cm-cabinet-meeting-1776143288338.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಮೇ.1):&lt;/strong&gt; ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ 100 ರೋಸ್ಟರ್&zwnj; ಬಿಂದುಗಳ ಬದಲಾಗಿ 400 ರೋಸ್ಟರ್&zwnj; ಬಿಂದುಗಳನ್ನು ಪಾಲಿಸಲು ಹಾಗೂ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ 400 ಬಿಂದುಗಳ ರೋಸ್ಟರ್ ಅನ್ವಯ ತುರ್ತಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಮಾಡಲಾಗಿದೆ.&lt;/p&gt;&lt;p&gt;ಏ.24ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯವನ್ನು ಬದಲಿಸಿ ಗುರುವಾರ ಪರಿಷ್ಕೃತ ನಿರ್ಧಾರ ಕೈಗೊಳ್ಳಲಾಗಿದೆ. 100 ರೋಸ್ಟರ್&zwnj; ಬಿಂದುಗಳ ಆಧಾರದ ಮೇಲೆ ಮೀಸಲಾತಿ ಹಾಗೂ ಒಳ ಮೀಸಲಾತಿ ಅನುಷ್ಠಾನ ಕಠಿಣವಾಗಲಿದೆ. ಹೀಗಾಗಿ ರೋಸ್ಟರ್&zwnj; ಬಿಂದುಗಳನ್ನು 400 ಬಿಂದುಗಳ ವರ್ತುಲಗಳಾಗಿ ವಿಭಜಿಸಿ ಅದರ ಆಧಾರದ ಮೇಲೆ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಹಾಗೂ ಅದರ ಒಳ ಮೀಸಲಾತಿ ನಿಗದಿ ಮಾಡಲು ತೀರ್ಮಾನಿಸಲಾಗಿದೆ.&lt;/p&gt;&lt;h2&gt;&lt;strong&gt;ಅಧಿಸೂಚನೆ ಹಿಂದಕ್ಕೆ&lt;/strong&gt;&lt;/h2&gt;&lt;p&gt;ಇದೇ ವೇಳೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವ ಪ್ರಕರಣಗಳನ್ನು ಹೊರತುಪಡಿಸಿ 2025ರ ಸೆ.3ರ ಬಳಿಕ ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನ್ವಯ ಆಗುವಂತೆ ಹೊರಡಿಸಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ.&lt;/p&gt;&lt;p&gt;ಹೊಸದಾಗಿ ಹೊರಡಿಸುವ ನೇಮಕಾತಿ ಅಧಿಸೂಚನೆಗಳಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಶೇ.50ರ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಶೇ.15ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಪ್ರವರ್ಗ ಎ ಮತ್ತು ಬಿ ಗೆ ತಲಾ ಶೇ. 5.25 ಮತ್ತು ಪ್ರವರ್ಗ ಸಿಗೆ ಶೇ.4.50ರಷ್ಟು ಒಳಮೀಸಲು ಕಲ್ಪಿಸಿ ಹೊಸದಾಗಿ ಅಧಿಸೂಚನೆ ಪ್ರಕಟಿಸಬೇಕು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ತಕ್ಷಣವೇ ಆದೇಶ ಹೊರಡಿಸಬೇಕು. ಅದರ ಅನ್ವಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮಾರ್ಪಡಿಸುವ 400 ಬಿಂದುಗಳ ಅಡಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ.&lt;/p&gt;&lt;h2&gt;&lt;strong&gt;ನೇಮಕಾತಿಯಲ್ಲಿ ಒಳ ಮೀಸಲಾತಿ ಹೇಗೆ?&lt;/strong&gt;&lt;/h2&gt;&lt;p&gt;ಏ.24ರ ಸಂಪುಟ ಸಭೆ ತೀರ್ಮಾನದಂತೆ ಶೇ.50 ರಷ್ಟು ಮೀಸಲಾತಿಯಲ್ಲಿ ಶೇ.15 ರಷ್ಟು ಮೀಸಲಾತಿಯನ್ನು ಎಸ್ಸಿಗೆ ಮೀಸಲಿಡಬೇಕು. ಆ ಶೇ.15 ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ ಎ, ಬಿ ಪ್ರವರ್ಗಕ್ಕೆ ತಲಾ ಶೇ.5.25 ಹಾಗೂ ಸಿ ಪ್ರವರ್ಗಕ್ಕೆ ಶೇ.4.5 ರಷ್ಟು ಒಳ ಮೀಸಲು ಹಂಚಿಕೆ ಮಾಡಬೇಕು. ಪ್ರವರ್ಗ ಸಿ ಗೆ ಲಭ್ಯವಾಗುವ ಹುದ್ದೆಗಳಲ್ಲಿ ಮತ್ತು ಶೈಕ್ಷಣಿಕ ಪ್ರವೇಶಾತಿ ಸೀಟುಗಳಲ್ಲಿ ಶೇ.20ರಷ್ಟು 56 ಅಲೆಮಾರಿ ಜಾತಿಗಳಿಗೆ ಮೀಸಲಿಸಲಾಗುವುದು. ಒಂದು ವೇಳೆ ಅಲೆಮಾರಿಗಳು ಲಭ್ಯವಾಗದಿದ್ದಲ್ಲಿ ಸಿ ವರ್ಗದ ಇತರೆ ಜಾತಿಗಳಿಗೆ ಲಭ್ಯವಾಗಲಿವೆ.&lt;/p&gt;&lt;h2&gt;&lt;strong&gt;ಎಸ್ಸಿಗೆ 3ಕ್ಕಿಂತ ಕಡಿಮೆ ಹುದ್ದೆಯಿದ್ದರೆ ಒಳ ಮೀಸಲು ಇಲ್ಲ&lt;/strong&gt;&lt;/h2&gt;&lt;p&gt;ನೇಮಕಾತಿಗೆ 400 ಬಿಂದುಗಳ ವರ್ತುಲಗಳನ್ನು ಅಳವಡಿಸಲಾಗುತ್ತದೆ. ಈ ವೇಳೆ ಯಾವುದೇ ನೇಮಕಾತಿಯಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಿದ್ದಲ್ಲಿ ಆಗ ಎಲ್ಲ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು 101 ಜಾತಿಗಳಿಗೆ ಮುಕ್ತ ಅವಕಾಶ ನೀಡುವುದು. ಅಂದರೆ 3ಕ್ಕಿಂತ ಕಡಿಮೆ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಿರುವಂತಹ ಸೀಮಿತ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಅನ್ವಯ ಆಗುವುದಿಲ್ಲ. ಆಗ 101 ಜಾತಿಗಳೂ ಸ್ಪರ್ಧೆ ಮಾಡಿ ಅರ್ಹರು ಆ ಹುದ್ದೆ ಪಡೆಯಬಹುದು ಎಂದು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.&lt;/p&gt;&lt;h2&gt;&lt;strong&gt;ಶೇ.6 ರಷ್ಟು ಹುದ್ದೆ ಬ್ಯಾಕ್&zwnj;ಲಾಗ್&lt;/strong&gt;&lt;/h2&gt;&lt;p&gt;ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.17 ರಿಂದ ಶೇ.24ಕ್ಕೆ ಹೆಚ್ಚಳ ಮಾಡಿರುವುದು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಎಲ್ಲಾ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಯ ಶೇ.2 ಹಾಗೂ ಪರಿಶಿಷ್ಟ ಪಂಗಡದ ಶೇ.4 ರಷ್ಟು ಹುದ್ದೆ ಸೇರಿ ಶೇ.6 ರಷ್ಟು ಹುದ್ದೆಗಳನ್ನು ಬ್ಯಾಕ್&zwnj;ಲಾಗ್&zwnj; ಹುದ್ದೆ ಎಂದು ಪರಿಗಣಿಸಲಾಗುವುದು. ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳದ ಪರ ನ್ಯಾಯಾಲಯ ಆದೇಶ ಮಾಡಿದರೆ ಆ ಹುದ್ದೆಗಳನ್ನು ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಂದ ಭರ್ತಿ ಮಾಡಲು ತೀರ್ಮಾನಿಸಲಾಗಿದೆ.&lt;/p&gt;&lt;h2&gt;&lt;strong&gt;ತುರ್ತು ನೇಮಕಾತಿಗೆ ನಿರ್ಧಾರ:&lt;/strong&gt;&lt;/h2&gt;&lt;p&gt;ಈ ಎಲ್ಲ ನಿಯಮ ಮತ್ತು ಷರತ್ತು ಅನ್ವಯ 56,432 ಹುದ್ದೆಗಳ ನೇರ ನೇಮಕಾತಿಗೆ ತುರ್ತು ಕ್ರಮಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ. ಸಂಪುಟ ತೀರ್ಮಾನದಂತೆ ನೇಮಕಾತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಮಾರ್ಪಾಟಿತ 400 ಬಿಂದುಗಳ ರೋಸ್ಟರ್ ಹೊರಡಿಸಲಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>state-government-jobs</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state-government-jobs/karnataka-cabinet-nod-for-56432-jobs-400-point-roster-sc-internal-reservation-san/articleshow-z4zgutm"/>
        </item>
    </channel>
</rss>
