<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 09 May 2026 06:34:05 +0530</lastBuildDate>
        <atom:link href="https://kannada.asianetnews.com/rss/state" rel="self" type="application/rss+xml"/>
        <item>
            <title><![CDATA[ಪ್ರಧಾನಿ ಮೋದಿ ಆಗಮನ: ನಾಳೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲು]]></title>
            <link>https://kannada.asianetnews.com/state/pm-modi-s-arrival-bengaluru-vehicle-traffic-route-changes-in-the-city-tomorrow-rav/articleshow-pkyy26u</link>
            <guid isPermaLink="true">https://kannada.asianetnews.com/state/pm-modi-s-arrival-bengaluru-vehicle-traffic-route-changes-in-the-city-tomorrow-rav/articleshow-pkyy26u</guid>
            <pubDate>Sat, 09 May 2026 06:33:59 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ಹಿನ್ನೆಲೆಯಲ್ಲಿ, ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆಗಳನ್ನು ಮಾಡಲಾಗಿದೆ. ಕನಕಪುರ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, &amp;nbsp;ನೈಸ್ ರಸ್ತೆ ತಾತ್ಕಾಲಿಕ ನಿರ್ಬಂಧ. ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸರು ಪರ್ಯಾಯ ಮಾರ್ಗಗಳು ಸೂಚನೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr53xq8mccw3p9ks6tgfk5df,imgname-----------------------2026-05-09t062853.264-1778288352531.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು ಮೇ.(9): &lt;/strong&gt;ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಅವರ ಆರ್ಟ್&zwnj; ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ನಗರಕ್ಕೆ ಪ್ರಧಾನಿ ಮಂತ್ರಿ ಅವರು ಆಗಮಿಸಲಿದ್ದಾರೆ. ಅದೇ ದಿನ ಎಚ್&zwnj;ಎಎಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಲಿರುವ ಹಿನ್ನೆಲೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.&lt;/p&gt;&lt;p&gt;&lt;strong&gt;ತಾತ್ಕಾಲಿಕ ಸಂಚಾರ-ನಿಲುಗಡೆ ನಿರ್ಬಂಧಿತ ಸ್ಥಳಗಳು&lt;/strong&gt;&lt;/p&gt;&lt;ul&gt; &lt;li&gt;ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿಜಿಸಿಎ ಕಚೇರಿ&lt;/li&gt; &lt;li&gt;ಹೆಚ್&zwnj;ಎಎಲ್ ವಿಮಾನ ನಿಲ್ದಾಣ ಗೇಟ್ ನಂ.30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್&zwnj;ನಿಂದ ಗೇಟ್ ನಂ.30 ರವರೆಗೆ&lt;/li&gt; &lt;li&gt;ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಸ್&zwnj;ಡಿ ರಸ್ತೆ ಜಂಕ್ಷನ್&zwnj;ನಿಂದ ಟ್ರಿನಿಟಿ ಜಂಕ್ಷನ್&zwnj;&lt;/li&gt; &lt;li&gt;ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ನೈಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧ&lt;/li&gt;&lt;/ul&gt;&lt;h3&gt;ಎಲ್ಲೆಲ್ಲಿ ವಾಹನ ನಿಲುಗಡೆ ಸ್ಥಳಗಳು&lt;/h3&gt;&lt;p&gt;ಗಣ್ಯರು ಮತ್ತು ಹಿರಿಯ ಅಧಿಕಾರಿಗಳಿಗೆ- ಹೆಚ್.ಎ.ಎಲ್ ಟ್ರಾನ್ಸ್&zwnj;ಪೋರ್ಟ್ ಡಿಪಾರ್ಟ್&zwnj;ಮೆಂಟ್ ಪಾರ್ಕಿಂಗ್ (ಎಸ್.ಡಿ ರಸ್ತೆ ಜಂಕ್ಷನ್). ಹೆಚ್&zwnj;ಎಎಲ್ ಬಸ್ ಯಾರ್ಡ್ ಪಾರ್ಕಿಂಗ್ (ಸುರಂಜನ್ ದಾಸ್ ರಸ್ತೆ). ಸಾರ್ವಜನಿಕರಿಗೆ- 08:30ರ ಒಳಗಾಗಿ ಏರ್ಪೋರ್ಟ್ ಎಕ್ಸಿಟ್ ರಸ್ತೆ ಗೇಟ್ ನಂ 2 ಮಾರ್ಗವಾಗಿ ವಿಶ್ವೇಶ್ವರಯ್ಯ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.&lt;/p&gt;&lt;h3&gt;ಪರ್ಯಾಯ ಮಾರ್ಗಗಳು&amp;nbsp;&lt;/h3&gt;&lt;p&gt;ತುಮಕೂರು ರಸ್ತೆಯಿಂದ ನೈಸ್ ರಸ್ತೆ ಮೂಲಕ ಕನಕಪುರ ರಸ್ತೆಗೆ ಹೋಗುವವರು: ಸಿ.ಎಂ.ಟಿ.ಐ ಜಂಕ್ಷನ್ ಬಳಿ ಬಲ ತಿರುವು ಪಡೆದು ರಾಜಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಸಾಗಬೇಕು.ನಗರದ ಒಳಗಿನಿಂದ ತುಮಕೂರು ರಸ್ತೆ ಮೂಲಕ ಕನಕಪುರ ರಸ್ತೆಗೆ ಹೋಗುವವರು: ಸಿ.ಎಂ.ಟಿ.ಐ ಜಂಕ್ಷನ್ ಬಳಿ ಎಡ ತಿರುವು ಪಡೆದು ರಾಜಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ತೆರಳಬೇಕು.&lt;/p&gt;&lt;p&gt;ಮಾಗಡಿ ರಸ್ತೆಯಿಂದ ಕನಕಪುರ ರಸ್ತೆಗೆ: ಸುಮನ್ ಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗಬೇಕು, ನಗರದಿಂದ ಮಾಗಡಿ ರಸ್ತೆ ಮೂಲಕ ಕನಕಪುರ ರಸ್ತೆಗೆ: ಸುಮನ್ ಹಳ್ಳಿ ಜಂಕ್ಷನ್ ಬಳಿ ಎಡ ತಿರುವು ಪಡೆದು ಸಾಗಬೇಕು. ಮೈಸೂರು ರಸ್ತೆ (ಕೆಂಗೇರಿ) ಕನಕಪುರ ರಸ್ತೆಗೆ: ನಾಯಂಡಹಳ್ಳಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಸಾಗಬೇಕು. ಮೈಸೂರು ರಸ್ತೆ ಮತ್ತು ಹೊಸಕೆರೆಹಳ್ಳಿ ರಸ್ತೆ ಮೂಲಕ ಕನಕಪುರ ರಸ್ತೆಗೆ: ನಾಯಂಡಹಳ್ಳಿ ಜಂಕ್ಷನ್ ಬಳಿ ಎಡ ಮತ್ತು ಬಲ ತಿರುವು ಪಡೆದು ಔಟರ್&zwnj;ರಿಂಗ್&zwnj; ರಸ್ತೆಯಲ್ಲಿ ಸಾಗಬೇಕು.&lt;/p&gt;&lt;p&gt;ನೈಸ್ ರಸ್ತೆ ಸೋಂಪುರ ಕ್ಲೋವರ್ ಲೀಫ್ ಜಂಕ್ಷನ್&zwnj;ನಿಂದ ಕನಕಪುರ ಮುಖ್ಯರಸ್ತೆಯವರೆಗೆ: ಮೈಸೂರು ರಸ್ತೆ ಕೆಂಗೇರಿ ಮೂಲಕ ಉತ್ತರಹಳ್ಳಿ, ವಸಂತಪುರ ಕ್ರಾಸ್ ಸೇರಿ ಕೋಣನಕುಂಟೆ ಕ್ರಾಸ್&zwnj; ಹಾದು ಬನ್ನೇರುಘಟ್ಟ ರಸ್ತೆ ಸೇರಬೇಕು.&lt;/p&gt;&lt;p&gt;ಕನಕಪುರ ಮುಖ್ಯರಸ್ತೆ ನೈಸ್ ರಸ್ತೆ ಜಂಕ್ಷನ್&zwnj;ನಿಂದ ಸೋಂಪುರ ಕ್ಲೋವರ್ ಲೀಫ್ ಜಂಕ್ಷನ್&zwnj;ವರೆಗೆ: ಎಲೆಕ್ಟ್ರಾನಿಕ್ ಸಿಟಿ/ಬನ್ನೇರುಘಟ್ಟ ಕಡೆಯಿಂದ ಬರುವವರು ಬಿಡಿಎ ಜಂಕ್ಷನ್&zwnj;ನಲ್ಲಿ ಎಡಕ್ಕೆ ತಿರುಗಿ ಅಂಜನಾಪುರ 80 ಅಡಿ ರಸ್ತೆ ಮೂಲಕ ಕೆ.ಎಸ್.ಐ.ಟಿ ಜಂಕ್ಷನ್ ತಲುಪಿ ಕೆಂಗೇರಿ/ಮೈಸೂರು ರಸ್ತೆ ಸೇರಬೇಕು.&lt;/p&gt;&lt;h3&gt;ಕನಕಪುರ ಮುಖ್ಯರಸ್ತೆ ಎ2ಬಿ &amp;nbsp;ಜಂಕ್ಷನ್&zwnj;ನಿಂದ ನೈಸ್ ರಸ್ತೆ ಜಂಕ್ಷನ್&zwnj;ವರೆಗೆ&amp;nbsp;&lt;/h3&gt;&lt;p&gt;ಮಾರ್ಗ-01:ಕೋಣನಕುಂಟೆ ಕ್ರಾಸ್&zwnj;ನಲ್ಲಿ ಬಲ ತಿರುವು ಪಡೆದು ಉತ್ತರಹಳ್ಳಿ ಮೂಲಕ ಕೆಂಗೇರಿ ಮೈಸೂರು ರಸ್ತೆ ತಲುಪಿ, ನಂತರ ಅಗ್ರ, ಬಂಜಾರಪಾಳ್ಯ ರಸ್ತೆ ಮೂಲಕ ಕಗ್ಗಲಿಪುರದಲ್ಲಿ ಬಲಕ್ಕೆ ತಿರುಗಿ ಕನಕಪುರ ರಸ್ತೆ ಸೇರುವುದು. ಮಾರ್ಗ-02: ಕನಕಪುರ ಮುಖ್ಯರಸ್ತೆ ಎ2ಬಿ ಜಂಕ್ಷನ್&zwnj;ನಲ್ಲಿ ಎಡ ತಿರುವು ಪಡೆದು ನಾರಾಯಣ ನಗರ ಜೋಡಿ ರಸ್ತೆ, ಅಂಜನಾಪುರ 80 ಅಡಿ ರಸ್ತೆ ಮೂಲಕ ಬನ್ನೇರುಘಟ್ಟ ಮುಖ್ಯರಸ್ತೆಯ ಮೂಲಕ ಕಗ್ಗಲಿಪುರಕ್ಕೆ ಸಾಗಬಹುದು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/pm-modi-s-arrival-bengaluru-vehicle-traffic-route-changes-in-the-city-tomorrow-rav/articleshow-pkyy26u"/>
        </item>
        <item>
            <title><![CDATA[ಬಂಗಾಳದಲ್ಲಿ SIR ಗೆ ಸೋತ ಮೇಡಂ; ರಾಜ್ಯದಲ್ಲಿ 'ಕೈ' ಅಲರ್ಟ್!]]></title>
            <link>https://kannada.asianetnews.com/state/karnataka-voter-list-revision-alert-cm-dcm-hold-emergency-meeting-rav/articleshow-l7nhr7m</link>
            <guid isPermaLink="true">https://kannada.asianetnews.com/state/karnataka-voter-list-revision-alert-cm-dcm-hold-emergency-meeting-rav/articleshow-l7nhr7m</guid>
            <pubDate>Sat, 09 May 2026 04:46:46 +0530</pubDate>
            <description><![CDATA[&lt;p&gt;ಪಶ್ಚಿಮ ಬಂಗಾಳದಲ್ಲಿ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ (ಎಸ್&zwnj;ಐಆರ್&zwnj;) ಪ್ರಕ್ರಿಯೆ ಬಗ್ಗೆ ಕರ್ನಾಟಕದಲ್ಲಿಯೂ ಆತಂಕ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ. ರಾಜ್ಯದಲ್ಲಿ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸಲು ವಿವಿಧ ಸಂಘಟನೆಗಳು ಒತ್ತಾಯಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr4xzrm0qgzk4a6dspeca4z6,imgname-----------------------2026-05-09t044509.546-1778282127999.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಪಶ್ಚಿಮ ಬಂಗಾಳದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ&lt;/li&gt; &lt;li&gt;ರಾಜ್ಯದಲ್ಲೂ ಪರಿಷ್ಕರಣೆಗೆ ಪೂರ್ವ ಪ್ರಕ್ರಿಯೆಗಳಿಗೆ ಚುನಾವಣಾ ಆಯೋಗದ ಸಿದ್ಧತೆ ಶುರು&lt;/li&gt; &lt;li&gt;ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಜೊತೆಗೆ ವಿವಿಧ ಸಂಘಟನೆಗಳಿಂದ ಸಮಾಲೋಚನೆ&lt;/li&gt; &lt;li&gt;ರಾಜ್ಯದಲ್ಲಿ ಪರಿಷ್ಕರಣೆ ತಡೆ ಇಲ್ಲವೇ ಪ್ರಕ್ರಿಯೆ ಮೇಲೆ ತೀವ್ರ ನಿಗಾಕ್ಕೆ ಸರ್ಕಾರಕ್ಕೆ ಮನವಿ&lt;/li&gt; &lt;li&gt;ಶಾಸಕರ ಜೊತೆಗೆ ಚರ್ಚಿಸಿ ಮತ್ತೊಮ್ಮೆ ನಿಮ್ಮೊಂದಿಗೆ ಸಮಾಲೋಚಿಸುವೆ: ಸಭೆಗೆ ಸಿಎಂ&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಮೇ.9):&lt;/strong&gt; ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ (ಎಸ್&zwj;ಐಆರ್) ಉಂಟಾಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ್ದು, ರಾಜ್ಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಅರ್ಹರ ಮತದಾನದ ಹಕ್ಕು ಸಂರಕ್ಷಿಸಬೇಕು ಎಂದು ಚರ್ಚಿಸಲಾಗಿದೆ.&lt;/p&gt;&lt;p&gt;ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಸೇರಿ ಪ್ರಮುಖ ಸಚಿವರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.&lt;/p&gt;&lt;p&gt;ಎಸ್&zwnj;ಐಆರ್&zwnj; ಜಾರಿಗೆ ಈಗಾಗಲೇ ಮ್ಯಾಪಿಂಗ್&zwnj; ಶುರುವಾಗಿದ್ದು, ಇದರಲ್ಲಿ ಸಾಕಷ್ಟು ಲೋಪದೋಷಗಳಿವೆ. ಆದರೂ ಈ ಬಗ್ಗೆ ಸರ್ಕಾರ ಇನ್ನೂ ವಿರೋಧ ವ್ಯಕ್ತಪಡಿಸಿಲ್ಲ. ಪಶ್ಚಿಮ ಬಂಗಾಳ ಸೇರಿ ಎಸ್ಐಆರ್&zwnj; ನಡೆದಿರುವ 10 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶದಲ್ಲಿ 7 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಎಸ್&zwnj;ಐಆರ್&zwnj;ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸಂಪುಟದಲ್ಲಿ ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರನ್ನು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಒತ್ತಾಯಿಸಿದರು.&lt;/p&gt;&lt;p&gt;ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಎಸ್&zwnj;ಐಆರ್&zwnj; ಬಗ್ಗೆ ಎಲ್ಲಾ ರಾಜ್ಯಗಳಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕಿದ್ದು, 27 ಲಕ್ಷ ಮತದಾರರ ಪರಿಶೀಲನಾ ಅರ್ಜಿ ಬಾಕಿ ಇರುವಾಗಲೇ ಚುನಾವಣೆ ಮುಗಿದು ಹೋಗಿದೆ. ಅಷ್ಟೂ ಮಂದಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ.&lt;/p&gt;&lt;p&gt;ಇದು ಚುನಾವಣಾ ಕಣದಿಂದ ಮತದಾರರನ್ನು ಹೊರನೂಕುವ, ಪ್ರಜಾಸತ್ತಾತ್ಮಕ ವಿರೋಧಿ, ಅವೈಜ್ಞಾನಿಕ ಪ್ರಕ್ರಿಯೆ. ಹೀಗಾಗಿ ರಾಜ್ಯದಲ್ಲಿ ವ್ಯವಸ್ಥಿತವಾಗಿ ಎಸ್&zwnj;ಐಆರ್&zwnj; ಜಾರಿಗೆ ಹಾಗೂ ಎಸ್&zwnj;ಐಆರ್&zwnj; ಬಳಿಕವೂ ಮತದಾರರ ಹಕ್ಕು ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಯಿತು.&lt;/p&gt;&lt;h2&gt;ಸಭೆಯಲ್ಲಿ ವ್ಯಕ್ತವಾದ ಸಲಹೆಗಳೇನು?:&lt;/h2&gt;&lt;p&gt;- ಚುನಾವಣಾ ಆಯೋಗವು 2025ರ ಜೂನ್&zwj;ನಿಂದ ಎಸ್&zwj;ಐಆರ್ ಅನ್ನು ಪರಿಚಯಿಸಿತು. ಬಳಿಕ ಅದನ್ನು ಅನುಷ್ಠಾನಗೊಳಿಸಿದ ರೀತಿಯಿಂದಾಗಿ ಎಸ್ಐಆರ್&zwnj; ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಸಂವಿಧಾನದ 324ನೇ ವಿಧಿ ಪ್ರಕಾರ ತನ್ನ ಕರ್ತವ್ಯ ನಿಭಾಯಿಸಲು ಆಯೋಗ ಸಂಪೂರ್ಣ ವಿಫಲವಾಗಿದೆ. ಜನರ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಹಕ್ಕು ರಕ್ಷಿಸಲು ಸುಪ್ರೀಂ ಕೋರ್ಟ್ ಸಹ ವಿಫಲವಾಗಿದೆ. ಹೀಗಾಗಿ ರಾಜ್ಯದಲ್ಲಿ ಎಸ್ಐಆರ್&zwnj; ಜಾರಿ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.&lt;/p&gt;&lt;p&gt;ಈ ಹಂತದಲ್ಲಿ ಎಸ್&zwnj;ಐಆರ್&zwnj; ಜಾರಿಗೆ ಬರುವುದಾದರೂ 3 ತಿಂಗಳ ಬದಲಿಗೆ ಆರು ತಿಂಗಳಿಗೆ ವಿಸ್ತರಿಸಬೇಕು. ತರಾತುರಿಯಲ್ಲಿ ಜಾರಿಗೆಗೆ ಬರಬಾರದು. ಎಲ್ಲಾ ಗ್ರಾಪಂ, ವಾರ್ಡ್&zwnj;ಗಳಲ್ಲಿ ಮತದಾರರ ನೆರವಿನ ಕೇಂದ್ರ ಸ್ಥಾಪಿಸಬೇಕು. ಸೂಕ್ತ ದಾಖಲೆ ಇಲ್ಲದ ಜನರಿಗೆ ದಾಖಲೆ ನೀಡಲು ಸರ್ಕಾರ ನೆರವಾಗಬೇಕು. ಡಿಲೀಟ್ ಆದ ಮತದಾರರು ಮನವಿ ಸಲ್ಲಿಸಲು ಸೂಕ್ತ ಸಮಯಾವಕಾಶ ನೀಡಬೇಕು. ಕರ್ನಾಟಕ ಸ್ವಾವಲಂಬಿಯಾದ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು.&lt;/p&gt;&lt;p&gt;ಇದನ್ನು ಸಮರ್ಥ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕು. ಸೋಷಿಯಲ್ ಆಡಿಟಿಂಗ್ ಪದ್ಧತಿ ಬಳಸಿ ರಾಜ್ಯದ ಮತದಾರರ ಪಟ್ಟಿ ಪರಿಷ್ಕರಿಸಬೇಕು. ಈ ನಾಲ್ಕು ಅಂಶಗಳನ್ನೂ ಗಮನದಲ್ಲಿಟ್ಟು ರಾಜ್ಯ ಸರ್ಕಾರ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಸಲಹೆ ನೀಡಿದರು.&lt;/p&gt;&lt;h3&gt;ಮತ್ತೊಂದು ಸುತ್ತಿನ ಸಭೆ ಭರವಸೆ:&lt;/h3&gt;&lt;p&gt;ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ಶೀಘ್ರದಲ್ಲೇ ವಿಸ್ತೃತ ಸಭೆ ಕರೆಯುತ್ತೇವೆ. ಎಲ್ಲರ ಜೊತೆಯೂ ಸಮಾಲೋಚನೆ ನಡೆಸಿ, ನಂತರ ನಿಮ್ಮೊಟ್ಟಿಗೆ ಮತ್ತೊಮ್ಮೆ ಮಾತನಾಡುತ್ತೇನೆ ಎಂದು ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.&lt;/p&gt;&lt;p&gt;ಸಭೆಯಲ್ಲಿ ರಾಜಕೀಯ ವಿಶ್ಲೇಷಕ ಹಾಗೂ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್&zwnj; ಪತಿ ಪರಕಾಲ ಪ್ರಭಾಕರ್, ಕರ್ನಾಟಕ ಮುಸ್ಲಿಂ ಮುತ್ತಹಿದ ಮಹಾಜ್&zwnj;ನ ಮೊಹಮ್ಮದ್&zwnj; ಯೂಸುಫ್&zwnj; ಕನ್ನಿ, ಮಾಜಿ ಸಚಿವರೂ ಆದ ಲೇಖಕಿ ಬಿ.ಟಿ. ಲಲಿತಾ ನಾಯ್ಕ್, ಮತದಾನ ಹಕ್ಕು ಚಳವಳಿಯ ಥಾಮಸ್ ಫ್ರಾಂಕೋ, ನನ್ನ ಮತ ನನ್ನ ಹಕ್ಕು ಹೋರಾಟ ವೇದಿಕೆಯ ವಿನಯ್&zwnj; ಶ್ರೀನಿವಾಸ್&zwnj;, ರಾಜ್ಯ ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ, ಕರ್ನಾಟಕ ಕೋಮುಸೌಹಾರ್ದ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-voter-list-revision-alert-cm-dcm-hold-emergency-meeting-rav/articleshow-l7nhr7m"/>
        </item>
        <item>
            <title><![CDATA[Blackmail Utsav: ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅಭಿಮಾನೋತ್ಸವ? ಯತ್ನಾಳ್ ಟೀಕೆ]]></title>
            <link>https://kannada.asianetnews.com/state/blackmail-utsav-what-has-bsy-achieved-for-an-abhimanotsava-yatnal-questions-purpose-rav/articleshow-5ca1zvu</link>
            <guid isPermaLink="true">https://kannada.asianetnews.com/state/blackmail-utsav-what-has-bsy-achieved-for-an-abhimanotsava-yatnal-questions-purpose-rav/articleshow-5ca1zvu</guid>
            <pubDate>Sat, 09 May 2026 05:32:02 +0530</pubDate>
            <description><![CDATA[ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿಮಾನೋತ್ಸವವನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕಾರ್ಯವೈಖರಿಯನ್ನು ಟೀಕಿಸಿದ ಅವರು, ರಾಜ್ಯ ಪ್ರವಾಸದ ನಂತರ ಹೊಸ ಪಕ್ಷ ಕಟ್ಟುವ ಬಗ್ಗೆ ಸುಳಿವು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr50ar3k6m44azsc9bfz63f1,imgname-----------------------2026-05-09t052507.998-1778284585075.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಮೇ.9):&lt;/strong&gt; ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿಮಾನೋತ್ಸವ ಯಾವ ಪುರುಷಾರ್ಥಕ್ಕೆ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವಧಿ ನವೆಂಬರ್ ವೇಳೆಗೆ ಮುಕ್ತಾಯ ಆಗಲಿರುವುದರಿಂದ ಇಂತಹ ಕಾರ್ಯಕ್ರಮ ಮಾಡಿ ರಿನಿವಲ್ ಮಾಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.&lt;/p&gt;&lt;p&gt;ರಾಜ್ಯದಲ್ಲಿ 25 ಸಂಸದರು ಬಿಜೆಪಿಯವರು ಇದ್ದರೂ ವಿಜಯೇಂದ್ರ ಅವಧಿಯಲ್ಲಿ 17ಕ್ಕೆ ಕುಸಿದಿದೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುವುದಕ್ಕಿಂತ ಎಲ್ಲ ಕಡೆಯೂ ಡಿಲೀಂಗ್ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಬಿಜೆಪಿ ಹೈಕಮಾಂಡ್&zwnj;ಗೆ ನಾವು ಲಿಂಗಾಯತ ನಾಯಕರು ಎಂದು ಬಿಂಬಿಸಲು ಹೊರಟಿದ್ದಾರೆ. ಈಗ ಪ್ರದರ್ಶನಕ್ಕೆ ಇಟ್ಟಿರುವ ಕಾರ್ ಸಹ ಬಿಜೆಪಿಯದ್ದೇ ಆಗಿದೆ. ನಿಮಗೆ ಸ್ವಂತ ಕಾರ್ ಸಹ ಇರಲಿಲ್ಲ. ಆದರೂ ಸಾವಿರಾರು ಕೋಟಿ ಆಸ್ತಿ ಮಾಡಿದ್ದು ಹೇಗೆ? ಎಂದು ಪ್ರಶ್ನೆ ಮಾಡಿದರು.&lt;/p&gt;&lt;p&gt;ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿ ಗೆದ್ದಾಗ ಪೇಢೆ ಹಂಚುವ ಅವರು, ಇಲ್ಲಿ ಏನು ಆಗಿದೆ ಎನ್ನುವುದನ್ನು ಹೇಳುವುದಿಲ್ಲ. ಇಲ್ಲಿ ಎಲ್ಲ ಗೊಡ್ಡಿಯೇ ಇರುವುದರಿಂದ ಮಕ್ಕಳು ಆಗು ಎಂದರೆ ಹೇಗೆ ಆಗುತ್ತವೆ ಎಂದು ಲೇವಡಿ ಮಾಡಿದರು.&lt;/p&gt;&lt;p&gt;&lt;strong&gt;ಜನಾಭಿಪ್ರಾಯ ಪಡೆದು ಹೊಸ ಪಕ್ಷ: &lt;/strong&gt;ರಾಜ್ಯಾದ್ಯಂತ ಸುತ್ತಾಟ ನಡೆಸಿ ಅಭಿಪ್ರಾಯ ಪಡೆದ ನಂತರ ಹೊಸ ಪಕ್ಷ ಕಟ್ಟುವ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.&lt;/p&gt;&lt;p&gt;ಪಕ್ಷ ಕಟ್ಟುವ ಕುರಿತು ಈಗಲೇ ಏನು ಹೇಳಲು ಆಗದು, ಅಭಿಪ್ರಾಯ ಪಡೆದ ಬಳಿಕವೇ ತೀರ್ಮಾನ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.&lt;/p&gt;&lt;p&gt;ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಯಾರಾದರೂ ಸಿಎಂ ಆಗಲಿ ನಮಗೇ ಗೊತ್ತಿಲ್ಲ. ಆದರೆ, ಉತ್ತಮ ಆಡಳಿತ ಕೊಡಲಿ ಎಂದರು.&lt;/p&gt;&lt;p&gt;ಪಂಚಮಸಾಲಿ ಎರಡು ಟ್ರಸ್ಟ್&zwnj;ಗಳಲ್ಲಿ ಭ್ರಷ್ಟರೇ ಇದ್ದಾರೆ. ಅವರೆಲ್ಲ ಲಫಂಗರೂ ಇದ್ದಾರೆ. ಟ್ರಸ್ಟ್ ರಾಜಕೀಯೇತರ ಇರಬೇಕು. ರಾಜಕೀಯದಿಂದ ಕೂಡಿದ್ದರೆ ಹೀಗೆಯೇ ಆಗುವುದು ಎಂದು ಕಿಡಿಕಾರಿದರು. ಕೂಡಲಸಂಗಮ ಮತ್ತು ಹರಿಹರದ ಎರಡು ಟ್ರಸ್ಟ್ ರದ್ದಾಗಬೇಕು ಎಂದರು.&lt;/p&gt;&lt;p&gt;ಐಪಿಎಲ್ ಟಿಕೆಟ್ ಕೇಳಿದ್ದರಿಂದ ಬೆಂಗಳೂರಿಂದ ಗುಜರಾತಿಗೆ ಫೈನಲ್ ಪಂದ್ಯ ಕಿತ್ತುಕೊಂಡು ಹೋಯಿತು. ತಮ್ಮ ಭಾಗದ ಸಮಸ್ಯೆ ಕೇಳದವರು ಐಪಿಎಲ್ ಟಿಕೆಟ್ ಕೇಳುತ್ತಾರೆ. ತಮ್ಮ ಕುಟುಂಬದವರಿಗೆ ಎಸಿ ಕುರ್ಚಿ ಕೇಳುತ್ತಾರೆ ಅಂದರೆ ಏನರ್ಥ? ಎಂದು ಕಿಡಿಕಾರಿದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/blackmail-utsav-what-has-bsy-achieved-for-an-abhimanotsava-yatnal-questions-purpose-rav/articleshow-5ca1zvu"/>
        </item>
        <item>
            <title><![CDATA[VB-G RAM G Act: ಕೇಂದ್ರದ್ದು ಸಂವಿಧಾನ ವಿರೋಧಿ ನಿರ್ಧಾರ; ಜಿ ರಾಮ್‌ ಜಿ ವಿರುದ್ಧ ಹೋರಾಟ ಮಾಡುತ್ತೇವೆ: ಸಚಿವ ಪ್ರಿಯಾಂಕ್‌]]></title>
            <link>https://kannada.asianetnews.com/state/centre-s-decision-anti-constitutional-we-will-fight-vb-g-ram-g-act-says-priyank-kharge/articleshow-ih7az3d</link>
            <guid isPermaLink="true">https://kannada.asianetnews.com/state/centre-s-decision-anti-constitutional-we-will-fight-vb-g-ram-g-act-says-priyank-kharge/articleshow-ih7az3d</guid>
            <pubDate>Sat, 09 May 2026 05:02:05 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದು, ಇದು ಸಂವಿಧಾನ ವಿರೋಧಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಅಲ್ಲದೆ, ರಾಜ್ಯಪಾಲರ ಕಚೇರಿಗಳು ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್&zwnj; ಕಚೇರಿಗಳಂತೆ ಬಳಕೆಯಾಗುತ್ತಿವೆ ಎಂದು &amp;nbsp;ಆಕ್ರೋಶ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250719174400,imgname-image-47f58b63-1479-4f2b-9079-cb3d0a039be1.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಕೇಂದ್ರದ್ದು ಸಂವಿಧಾನ ವಿರೋಧಿ ನಿರ್ಧಾರ&lt;/li&gt; &lt;li&gt;ಯೋಜನೆ ಬಗ್ಗೆ ಕೇಂದ್ರ ಮಾಹಿತಿ ನೀಡೇ ಇಲ್ಲ&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಮೇ.9):&lt;/strong&gt; ವಿಬಿ ಜಿ ರಾಮ್&zwnj; ಜಿ ಕಾಯ್ದೆ ತರುವುದಕ್ಕೂ ಮುಂಚೆ ನಮ್ಮೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿಲ್ಲ. ಸಂವಿಧಾನ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆರ್ಥಿಕ ಹೊರೆಯಾಗುವುದಾದರೆ ನಮ್ಮ ಗಮನಕ್ಕೆ ತರಬೇಕು. ಆದರೆ, ಅದನ್ನು ಮಾಡಿಲ್ಲ. ಇದು ಸಂವಿಧಾನ ವಿರೋಧಿ ನಿರ್ಧಾರವಾಗಿದ್ದು, ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್&zwnj; ಖರ್ಗೆ ಹೇಳಿದರು.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆರ್ಥಿಕ ಹೊರೆಯಾಗುವಂಥ ಯೋಜನೆ ತರುವುದಕ್ಕೂ ಮುನ್ನ ಆ ರಾಜ್ಯದ ಗಮನಕ್ಕೆ ತರಬೇಕು. ಆದರೆ, ಸಂವಿಧಾನ ವಿರೋಧಿಯಾಗಿ ವಿಬಿ ಗ್ರಾಮ್&zwnj; ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಜಾರಿಗೊಳಿಸಲು ಮುಂದಾಗಿದೆ. ಕಾಯ್ದೆ ತರುವುದಕ್ಕೂ ಮುನ್ನ ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ. ಈ ಎಲ್ಲದರ ಕುರಿತು ನಾವು ಹೋರಾಟ ಮಾಡುತ್ತೇವೆ ಎಂದರು.&lt;/p&gt;&lt;h2&gt;ರಾಜಭವನ ಬಿಜೆಪಿ ಕಚೇರಿಗಳಾಗುತ್ತಿವೆ:&lt;/h2&gt;&lt;p&gt;ತಮಿಳುನಾಡು ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ನಡೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್&zwnj;, ಕಳೆದೊಂದು ದಶಕದಿಂದ ರಾಜ್ಯಪಾಲರ ಕಚೇರಿಗಳು ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್&zwnj; ಕಚೇರಿಯಾಗಿ ಬಳಕೆಯಾಗುತ್ತಿವೆ. ಸಂವಿಧಾನಿಕ ಹುದ್ದೆಯಲ್ಲಿದ್ದು ರಾಜಕೀಯ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರು ಅಡ್ಡಿಪಡಿಸಿದ್ದರು. ಬೇರೆ ರಾಜ್ಯಗಳಲ್ಲಿ ಈ ರೀತಿ ಸನ್ನಿವೇಶವಿದ್ದಾಗ ಸರ್ಕಾರ ರಚನೆಗೆ ಅನುಮತಿಸಲಾಗಿತ್ತು. ಬಹುಮತವನ್ನು ರಾಜ್ಯಪಾಲರ ಬಳಿ ಸಾಬೀತುಪಡಿಸುವ ಅವಶ್ಯಕತೆಯಿಲ್ಲ. ಸದನದ ಒಳಗೆ ಅದನ್ನು ಸಾಬೀತುಪಡಿಸಬೇಕು. ಅದಕ್ಕೂ ಮುಂಚೆಯೇ ಶಾಸಕರ ಬೆಂಬಲವಿರುವ ಪತ್ರ ನೀಡಿದೆ ಎನ್ನುವುದು ಸರಿಯಲ್ಲ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/centre-s-decision-anti-constitutional-we-will-fight-vb-g-ram-g-act-says-priyank-kharge/articleshow-ih7az3d"/>
        </item>
        <item>
            <title><![CDATA[BSY Abhimanotsav: ನಾನು, ಅನಂತ್‌ ಸೈಕಲ್‌ನಲ್ಲಿ ಸುತ್ತಾಡಿ ಪಕ್ಷ ಕಟ್ಟಿದೆವು -ಬಿಎಸ್‌ವೈ]]></title>
            <link>https://kannada.asianetnews.com/state/chitradurga-bsy-abhimanotsav-grand-event-today-yadiyurappa-reacts-at-davanagere-rav/articleshow-0yhukwa</link>
            <guid isPermaLink="true">https://kannada.asianetnews.com/state/chitradurga-bsy-abhimanotsav-grand-event-today-yadiyurappa-reacts-at-davanagere-rav/articleshow-0yhukwa</guid>
            <pubDate>Sat, 09 May 2026 04:33:04 +0530</pubDate>
            <description><![CDATA[&lt;p&gt;ಚಿತ್ರದುರ್ಗದಲ್ಲಿ ನಡೆಯಲಿರುವ ಅಭಿಮಾನೋತ್ಸವದ ಹಿನ್ನೆಲೆಯಲ್ಲಿ ದಾವಣಗೆರೆಗೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕಾರ್ಯಕ್ರಮದ ನಂತರ ಮಾತನಾಡುವುದಾಗಿ ತಿಳಿಸಿದ್ದಾರೆ. ಪಕ್ಷ ಕಟ್ಟಲು ತಾವು ಮತ್ತು ಅನಂತಕುಮಾರ್ ಪಟ್ಟ ಶ್ರಮವನ್ನು ಸ್ಮರಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr4x7jqf4931g8c5v02tw0xf,imgname-----------------------2026-05-09t042551.278-1778281335534.jpg" type="image/jpeg" height="390" width="690"/>
            <content:encoded><![CDATA[&lt;p&gt;- ನಾವಿಬ್ಬರು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆವು&lt;/p&gt;&lt;p&gt;- ನಮ್ಮ ಪರಿಶ್ರಮದಿಂದ ಬಿಜೆಪಿ ಅಧಿಕಾರಿಕ್ಕೆ ಬಂತು&lt;/p&gt;&lt;p&gt;&lt;strong&gt;ದಾವಣಗೆರೆ (ಮೇ.9): &lt;/strong&gt;ಚಿತ್ರದುರ್ಗದಲ್ಲಿ ಮೇ 9ಕ್ಕೆ ಅಭಿಮಾನೋತ್ಸವಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಆ ಕಾರ್ಯಕ್ರಮದ ನಂತರ ನಾನು ಮಾತನಾಡುತ್ತೇನೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ಅಭಿನಂದನೋತ್ಸವದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ನಗರದ ಹೊರವಲಯದ ರೆಸಾರ್ಟ್&zwnj;ಗೆ ಶುಕ್ರವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಬಹಳ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಸೇರಿ, ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.&lt;/p&gt;&lt;p&gt;ಸೈಕಲ್&zwnj;ನಲ್ಲಿ ನಾನು, ಅನಂತಕುಮಾರ್&zwnj; ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆವು. ಇದೆಲ್ಲದರ ಕಾರಣದಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 2028ರ ಚುನಾವಣೆಗೆ ಅಭಿನಂದನೋತ್ಸವ ರಣಕಹಳೆಯ ಎಂಬುದನ್ನು ಕಾದು ನೋಡೋಣ ಎಂದು ಅವರು ತಿಳಿಸಿದರು.&lt;/p&gt;&lt;p&gt;ರೆಸಾರ್ಟ್&zwnj;ಗೆ ಕಾರ್ಯಕರ್ತರು: ಯಡಿಯೂರಪ್ಪನವರ ಪುತ್ರಿ ಅರುಣಾದೇವಿ ಸೇರಿದಂತೆ ಇಡೀ ಕುಟುಂಬ ಸದಸ್ಯರು ರೆಸಾರ್ಟ್&zwnj;ಗೆ ಬಂದಿದ್ದರು. ಯಡಿಯೂರಪ್ಪ ಅವರನ್ನು ನೋಡಲು, ಭೇಟಿಯಾಗಲು ಅನೇಕ ಕಾರ್ಯಕರ್ತರು, ಅಭಿಮಾನಿಗಳು ರೆಸಾರ್ಟ್&zwnj;ಗೆ ಆಗಮಿಸಿದ್ದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/chitradurga-bsy-abhimanotsav-grand-event-today-yadiyurappa-reacts-at-davanagere-rav/articleshow-0yhukwa"/>
        </item>
        <item>
            <title><![CDATA[BSY Abhimanotsav: ಇಂದು ಅಭಿಮಾನೋತ್ಸವ ಹಿನ್ನೆಲೆ, ನಿನ್ನೆ ಚಿತ್ರದುರ್ಗ ಪುರಪ್ರವೇಶ ಬಿಎಸ್‌ವೈಗೆ ಅದ್ಧೂರಿ ಸ್ವಾಗತ!]]></title>
            <link>https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas</link>
            <guid isPermaLink="true">https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas</guid>
            <pubDate>Sat, 09 May 2026 04:20:42 +0530</pubDate>
            <description><![CDATA[ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ ಚಿತ್ರದುರ್ಗದಲ್ಲಿ 'ಅಭಿಮಾನೋತ್ಸವ' ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಬಿಎಸ್&zwnj;ವೈ ಅವರಿಗೆ ಕೋಟೆನಾಡಿನ ಜನತೆ 'ಮಿನಿ ದಸರಾ' ಮಾದರಿಯಲ್ಲಿ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಅದ್ಧೂರಿ ಸ್ವಾಗತ ಕೋರಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr4w78je3t4c64zjmtmnwdxy,imgname-----------------------2026-05-09t041410.250-1778280276558.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಮೇ.9)&lt;/strong&gt;: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ ಐವತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿರುವ &lsquo;ಬಿಎಸ್&zwnj;ವೈ ಅಭಿಮಾನೋತ್ಸವ&rsquo;ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಅವರು ಶುಕ್ರವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಕೋಟೆ ನಾಡಿನ ಜನ ಅದ್ಧೂರಿಯಾಗಿ ಸ್ವಾಗತ ಕೋರಿದರು. &lsquo;ಮಿನಿ ದಸರಾ&rsquo; ಮಾದರಿಯಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.&lt;/p&gt;&lt;h2&gt;ಬಿಎಸ್&zwnj;ವೈ ಅದ್ಧೂರಿ ಪುರಪ್ರವೇಶ&lt;/h2&gt;&lt;p&gt;ಸಂಜೆ ನಾಲ್ಕು ಗಂಟೆಗೆ ಯಡಿಯೂರಪ್ಪ ಚಿತ್ರದುರ್ಗ ಪುರಪ್ರವೇಶ ಮಾಡಬೇಕಿತ್ತು. ಆದರೆ ಬಿಎಸ್&zwnj;ವೈ ಆಗಮನ ಆದಾಗ ಸೂರ್ಯ ನಿಧಾನವಾಗಿ ಮೋಡದಿಂದ ಮರೆಯಾಗುತ್ತಿದ್ದ. ಇದೇ ಗೋಧೂಳಿ ಸಮಯದಲ್ಲಿ ನೇರವಾಗಿ ಪುಷ್ಪಾಲಂಕೃತ ವಾಹನ ಏರಿದ ಯಡಿಯೂರಪ್ಪ ಅವರು ನೆರೆದಿದ್ದ ಅಭಿಮಾನಿ ಸಮೂಹದತ್ತ ಕೈ ಬೀಸಿದರು. ರಾಜಕೀಯ ನಾಯಕರು ಹಾಗೂ ರೈತರು ಗಾಳಿಯಲ್ಲಿ ಹಸಿರು ಶಾಲು ಬೀಸಿ ಯಡಿಯೂರಪ್ಪ ಅವರ ರೈತ ಪರ ಹೋರಾಟದ ನೆನಪು ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ ಕೈಯಲ್ಲಿ ನೇಗಿಲು ಎತ್ತಿ ಹಿಡಿದು ಮೆರವಣಿಗೆಗೆ ಒಕ್ಕಲುತನದ ಸ್ಪರ್ಶ ನೀಡಿದರು. ಕ್ರೇನ್ ಸಹಾಯದಿಂದ ಬಿಎಸ್&zwnj;ವೈ ಅವರ ಮೇಲೆ ಹೂ ಮಳೆಗರೆಯಲಾಯಿತು.&lt;/p&gt;&lt;p&gt;ಯಡಿಯೂರಪ್ಪ ಅವರು ಪುಷ್ಪಾಲಂಕೃತ ಸಾರೋಟ್&zwnj;ನಲ್ಲಿ ಸಾಗಬೇಕಾಗಿತ್ತು. ಆದರೆ ಅವರ ಜೊತೆಗೆ ಬಹಳಷ್ಟು ನಾಯಕರು ಸಾಗುವುದು ಕಷ್ಟವೆಂಬ ಕಾರಣಕ್ಕೆ ವಾಹನವೊಂದಕ್ಕೆ ಪುಷ್ಪಾಲಂಕಾರ ಮಾಡಿ ಅದರಲ್ಲಿ ಬಿಎಸ್&zwnj;ವೈ ಅವರ ಮೆರಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರೆ ಮತ್ತೊಂದಿಷ್ಟು ಮಂದಿ ಕೈಲಿ ಒನಕೆ ಹಿಡಿದು ಹೆಜ್ಜೆ ಹಾಕಿದರು. ಈ ಮೂಲಕ ಬಿಎಸ್&zwnj;ವೈ ಪುರಪ್ರವೇಶಕ್ಕೆ ಸಂಭ್ರಮದ ಕಳೆ ತಂದರು. ಇದರೊಂದಿಗೆ ತನ್ನ ಐದು ದಶಕಗಳ ರಾಜಕೀಯ ಬದುಕಿನಲ್ಲಿ ಬಡವರ, ರೈತರ, ಮಹಿಳೆಯರ ಪರ ಹೋರಾಡಿದ ಕುರುಹುಗಳು ಸಾಂಕೇತಿಕವಾಗಿ ಪುರಪ್ರವೇಶದ ಸಂದರ್ಭದಲ್ಲಿ ಅನಾವರಣಗೊಂಡವು.&lt;/p&gt;&lt;p&gt;ಬುಡಕಟ್ಟು ಸಾಂಸ್ಕೃತಿಕ ಪರಂಪರೆ ಸಾರುವ ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲ-ಮ್ಯಾಸಬೇಡ ಸಮುದಾಯಗಳ ಸಾಂಸ್ಕೃತಿಕ ಆಚರಣೆಯನ್ನು ಮೇಳೈಸುವ ಕೋಲಾಟ ಸೇರಿದಂತೆ ಹಲವು ಕಲಾ ತಂಡಗಳ ಜತೆಗೆ ಕಂಸಾಳೆ, ಉರಿಮೆ, ತಮಟೆ, ಗೊರವರ ಕುಣಿತ, ನಂದಿಕೋಲು, ವೀರಗಾಸೆ, ವಿವಿಧ ಜಾನಪದ ನೃತ್ಯಗಳು ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ತಂಪನೆಯ ಸಮಯದಲ್ಲಿ ನಗುಮೊಗದೊಂದಿಗೆ ಮದುಮಗನಂತೆ ಕಂಗೊಳಿಸುತ್ತಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ತೆರೆದ ವಾಹನದಲ್ಲಿ ಎಲ್ಲರತ್ತ ಕೈಬೀಸಿ ನಗುಮುಖದಲ್ಲಿ ಸಾಗುತ್ತಿದ್ದರು.&lt;/p&gt;&lt;p&gt;ಪ್ರವಾಸಿ ಮಂದಿರದ ಬಳಿ ಅಭಿಮಾನಿಗಳು ಬೃಹದಾಕಾರದ ಸೇಬು ಹಾರ ಹಾಕಿದರೆ, ಅಂಬೇಡ್ಕರ್ ಪ್ರತಿಮೆ ಬಳಿ ಮಾದಿಗ ಸಮುದಾಯದ ಮುಖಂಡರು ತಮ್ಮ ಸಾಂಸ್ಕೃತಿಕ ಪರಿಕರವಾದ ಹಲಗೆಯನ್ನೇ ಪೋಣಿಸಿ ಹಾರ ಮಾಡಿ ಯಡಿಯೂರಪ್ಪ ಅವರಿಗೆ ಹಾಕಿದ್ದು ವಿಶೇಷವಾಗಿ ಕಂಡಿತು.&lt;/p&gt;&lt;p&gt;ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಸದ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಶ್ರೀರಾಮುಲು, ರೇಣುಕಾಚಾರ್ಯ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಸಿ.ಟಿ.ರವಿ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್ ಸೇರಿ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಆರು ಗಂಟೆಗೆ ಆರಂಭವಾದ ಮೆರವಣಿಗೆ ಮದಕರಿನಾಯಕ ಪ್ರತಿಮೆ ಬಳಿ ಬಂದಾಗ ವೇಳೆ ಎಂಟು ಗಂಟೆಯಾಗಿತ್ತು. ಸರಿ ಸುಮಾರು ಎರಡು ತಾಸು ಮೆರವಣಿಗೆ ನಡೆಯಿತು. ನಂತರ ಯಡಿಯೂರಪ್ಪ ಅವರು ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.&lt;/p&gt;&lt;p&gt;ನಾನು, ಅನಂತ್&zwnj; ರಾಜ್ಯ ಸುತ್ತಿದ್ದಕ್ಕೆ ಅಧಿಕಾರ&lt;/p&gt;&lt;p&gt;ಅಭಿಮಾನೋತ್ಸವಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಬಹಳ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಸೇರಿ, ಕಾರ್ಯಕ್ರಮ ಮಾಡುತ್ತಿದ್ದಾರೆ. ಸೈಕಲ್&zwnj;ನಲ್ಲಿ ನಾನು, ಅನಂತಕುಮಾರ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆವು. ಇದೆಲ್ಲದರ ಕಾರಣದಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 2028ರ ಚುನಾವಣೆಗೆ ಅಭಿನಂದನೋತ್ಸವ ರಣಕಹಳೆಯಾಗುತ್ತದೆಯಾ ಎಂಬುದನ್ನು ಕಾದು ನೋಡೋಣ.&lt;/p&gt;&lt;p&gt;&lt;strong&gt;-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ&lt;/strong&gt;&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಮೇ 9 ರಿಂದ 3 ದಿನಗಳ ಅಂತರರಾಷ್ಟ್ರೀಯ ಅಗರಬತ್ತಿ ಮತ್ತು ಸುಗಂಧ ದ್ರವ್ಯ ಪ್ರದರ್ಶನ ಆರಂಭ]]></title>
            <link>https://kannada.asianetnews.com/state/international-agarbatti-perfume-expo-2026-bengaluru-biec-details-sat/articleshow-kvrdezx</link>
            <guid isPermaLink="true">https://kannada.asianetnews.com/state/international-agarbatti-perfume-expo-2026-bengaluru-biec-details-sat/articleshow-kvrdezx</guid>
            <pubDate>Fri, 08 May 2026 19:22:46 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಮೇ 9 ರಿಂದ 11, 2026 ರವರೆಗೆ ದೇಶದ ಅತಿದೊಡ್ಡ 'ಅಂತರರಾಷ್ಟ್ರೀಯ ಅಗರಬತ್ತಿ ಮತ್ತು ಸುಗಂಧ ದ್ರವ್ಯ ಪ್ರದರ್ಶನ' ನಡೆಯಲಿದೆ. ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯುವ 12ನೇ ಆವೃತ್ತಿಯ B2B ಎಕ್ಸ್&zwnj;ಪೋದಲ್ಲಿ 10 ದೇಶಗಳ 150ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3xnvr1rp73aj203805case,imgname-international-agarbatti-perfume-expo-2026-1778248249087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: ಸು&lt;/strong&gt;ಗಂಧ ದ್ರವ್ಯ ಮತ್ತು ಧೂಪದ್ರವ್ಯ ಉದ್ಯಮದ ಜಾಗತಿಕ ಕೇಂದ್ರವೆಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರವು ಈಗ ಮತ್ತೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ. ಭಾರತದ ಅತಿದೊಡ್ಡ 'ಅಂತರರಾಷ್ಟ್ರೀಯ ಅಗರಬತ್ತಿ ಮತ್ತು ಸುಗಂಧ ದ್ರವ್ಯ ಪ್ರದರ್ಶನ-2026'ರ (12th International Agarbatti &amp;amp; Perfume Expo) 12ನೇ ಆವೃತ್ತಿಯು ಇದೇ ಮೇ 9 ರಿಂದ 11 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ಅದ್ಧೂರಿಯಾಗಿ ನಡೆಯಲಿದೆ.&lt;/p&gt;&lt;h3&gt;&lt;strong&gt;ಸುಗಂಧ ರಾಜಧಾನಿಯಲ್ಲಿ ಉದ್ಯಮದ ಹಬ್ಬ:&lt;/strong&gt;&lt;/h3&gt;&lt;p&gt;ಇನ್ಸೆನ್ಸ್ ಮೀಡಿಯಾ ಆಯೋಜಿಸಿರುವ ಈ ಬೃಹತ್ ಬಿ2ಬಿ (B2B) ಪ್ರದರ್ಶನವು ಸುಗಂಧ ದ್ರವ್ಯ, ಧೂಪದ್ರವ್ಯ ಮತ್ತು ಪೂಜಾ ಉತ್ಪನ್ನಗಳ ವಲಯದಲ್ಲಿ ಭಾರತದ ಅತಿದೊಡ್ಡ ವೇದಿಕೆಯಾಗಿದೆ. ಈ ಹಿಂದೆ ಮುಂಬೈನಲ್ಲಿ ನಡೆದ 11ನೇ ಆವೃತ್ತಿಯ ಅಭೂತಪೂರ್ವ ಯಶಸ್ಸಿನ ನಂತರ, ಈಗ ಈ ಉದ್ಯಮದ ಉತ್ಪಾದನಾ ಹಬ್ ಆಗಿರುವ ಬೆಂಗಳೂರಿನಲ್ಲಿ ಈ ಎಕ್ಸ್&zwnj;ಪೋ ಆಯೋಜನೆಯಾಗಿದೆ. ಈ ಪ್ರದರ್ಶನವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಸಂಗಮವಾಗಿ ಹೊರಹೊಮ್ಮಲಿದೆ.&lt;/p&gt;&lt;h2&gt;&lt;strong&gt;ಜಾಗತಿಕ ಮಟ್ಟದ ಭಾಗವಹಿಸುವಿಕೆ:&lt;/strong&gt;&lt;/h2&gt;&lt;p&gt;ಈ ಮೂರು ದಿನಗಳ ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತ ಮಾತ್ರವಲ್ಲದೆ ಜಮೈಕಾ, ಶ್ರೀಲಂಕಾ ಮತ್ತು ಮಲೇಷ್ಯಾ ಸೇರಿದಂತೆ ವಿಶ್ವದ 10ಕ್ಕೂ ಹೆಚ್ಚು ದೇಶಗಳ ಉದ್ಯಮಿಗಳು, ಜಾಗತಿಕ ಖರೀದಿದಾರರು ಮತ್ತು ವ್ಯಾಪಾರ ಸಂದರ್ಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಗರಬತ್ತಿ, ಧೂಪ, ಸಾಂಬ್ರಾಣಿ, ಪೂಜಾ ಕಿಟ್&zwnj;ಗಳು, ಕರ್ಪೂರ ಮತ್ತು ಸುಗಂಧ ದ್ರವ್ಯ ತಯಾರಕರಿಗೆ ಇದು ಅಂತರರಾಷ್ಟ್ರೀಯ ಮಟ್ಟದ ವೇದಿಕೆ ಒದಗಿಸಲಿದೆ.&lt;/p&gt;&lt;h3&gt;&lt;strong&gt;ಭವಿಷ್ಯದ ಪರಿಮಳ (Future of Fragrance):&lt;/strong&gt;&lt;/h3&gt;&lt;p&gt;ಈ ಬಾರಿಯ ಪ್ರದರ್ಶನವು 'ಭವಿಷ್ಯದ ಪರಿಮಳ' ಎಂಬ ಆಶಯದೊಂದಿಗೆ ನಡೆಯುತ್ತಿದೆ. ಸಾಂಪ್ರದಾಯಿಕ ಸುಗಂಧ ತಯಾರಿಕಾ ಪದ್ಧತಿಗಳನ್ನು ಇಂದಿನ ಆಧುನಿಕ ಉತ್ಪಾದನಾ ತಂತ್ರಜ್ಞಾನದೊಂದಿಗೆ ಜೋಡಿಸುವುದು ಈ ಎಕ್ಸ್&zwnj;ಪೋದ ಪ್ರಮುಖ ಗುರಿಯಾಗಿದೆ. ಇನ್ಸೆನ್ಸ್ ಮೀಡಿಯಾದ ಸಂಸ್ಥಾಪಕ ದೀಪಕ್ ಗೋಯಲ್ ಮಾತನಾಡಿ, 'ಬೆಂಗಳೂರು ಈ ಉದ್ಯಮದ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಕುಶಲಕರ್ಮಿಗಳು ಮತ್ತು ದೊಡ್ಡ ಪ್ರಮಾಣದ ತಯಾರಕರು ಜಾಗತಿಕ ಪಾಲುದಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಈ ಎಕ್ಸ್&zwnj;ಪೋ ಒಂದು ಸೇತುವೆಯಾಗಲಿದೆ' ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರದರ್ಶನದ ಪ್ರಮುಖ ಮುಖ್ಯಾಂಶಗಳು:&lt;/strong&gt;&lt;/h2&gt;&lt;p&gt;&lt;strong&gt;ನೆಟ್&zwnj;ವರ್ಕಿಂಗ್: &lt;/strong&gt;ತಯಾರಕರು, ವಿತರಕರು ಮತ್ತು ಅಂತರರಾಷ್ಟ್ರೀಯ ಖರೀದಿದಾರರೊಂದಿಗೆ ನೇರ ಮಾತುಕತೆಗೆ ಅವಕಾಶ.&lt;/p&gt;&lt;p&gt;&lt;strong&gt;ಉದ್ಯಮದ ಒಳನೋಟ: &lt;/strong&gt;ಸುಗಂಧ ದ್ರವ್ಯದ ಪ್ರವೃತ್ತಿಗಳು ಮತ್ತು ಸುಸ್ಥಿರ ಪ್ಯಾಕೇಜಿಂಗ್ ಕುರಿತು ತಜ್ಞರಿಂದ ವಿಚಾರ ಸಂಕಿರಣಗಳು.&lt;/p&gt;&lt;p&gt;&lt;strong&gt;ತಾಂತ್ರಿಕ ಪ್ರದರ್ಶನ: &lt;/strong&gt;ಅಗರಬತ್ತಿ ತಯಾರಿಕಾ ಯಂತ್ರೋಪಕರಣಗಳು, ಕಚ್ಚಾ ವಸ್ತುಗಳು ಮತ್ತು ಪ್ಯಾಕೇಜಿಂಗ್ ಪರಿಹಾರಗಳ ಪ್ರದರ್ಶನ.&lt;/p&gt;&lt;p&gt;&lt;strong&gt;ಕಲಿಕೆ:&lt;/strong&gt; ಸುವಾಸನೆಯ ಪ್ರೊಫೈಲಿಂಗ್ ಮತ್ತು ಮಿಶ್ರಣ ತಂತ್ರಗಳ ಕುರಿತು ಸಂವಾದಾತ್ಮಕ ಕಾರ್ಯಾಗಾರಗಳು.&lt;/p&gt;&lt;h3&gt;&lt;strong&gt;ಕಾರ್ಯಕ್ರಮದ ವಿವರಗಳು:&lt;/strong&gt;&lt;/h3&gt;&lt;p&gt;&lt;strong&gt;ದಿನಾಂಕ:&lt;/strong&gt; ಮೇ 9&ndash;11, 2026&lt;/p&gt;&lt;p&gt;&lt;strong&gt;ಸ್ಥಳ:&lt;/strong&gt; ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC), ತುಮಕೂರು ರಸ್ತೆ.&lt;/p&gt;&lt;p&gt;&lt;strong&gt;ಸಮಯ:&lt;/strong&gt; ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ.&lt;/p&gt;&lt;p&gt;&lt;strong&gt;ನೋಂದಣಿ:&lt;/strong&gt; ಆನ್&zwnj;ಲೈನ್&zwnj;ನಲ್ಲಿ ಮೇ 8ರವರೆಗೆ ₹100, ಸ್ಥಳದಲ್ಲೇ ನೋಂದಣಿಗೆ ₹200 ಶುಲ್ಕವಿರುತ್ತದೆ.&lt;/p&gt;&lt;p&gt;ಹೆಚ್ಚಿನ ಮಾಹಿತಿಗಾಗಿ ಆಸಕ್ತರು www.incensemedia.in ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು ಅಥವಾ +91 9549404000 ಸಂಖ್ಯೆಯನ್ನು ಸಂಪರ್ಕಿಸಬಹುದು.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/international-agarbatti-perfume-expo-2026-bengaluru-biec-details-sat/articleshow-kvrdezx"/>
        </item>
        <item>
            <title><![CDATA[ಕ್ರೀಡಾಪಟುಗಳಿಗೆ ಮೀಸಲಾತಿ, ಸರ್ಕಾರಿ ಉದ್ಯೋಗದಲ್ಲಿ ಶೇ.2 ರಷ್ಟು ಕೋಟಾ, ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ]]></title>
            <link>https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki</link>
            <guid isPermaLink="true">https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki</guid>
            <pubDate>Fri, 08 May 2026 18:14:42 +0530</pubDate>
            <description><![CDATA[ಕ್ರೀಡಾ ಸಾಧಕರಿಗೆ ರಾಜ್ಯ ಸಿವಿಲ್ ಸೇವಾ ಹುದ್ದೆಗಳಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಹಿಂದೆ ತಡೆಹಿಡಿಯಲಾಗಿದ್ದ ಈ ಆದೇಶವನ್ನು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳಿಗೆ ಒಪ್ಪಿಗೆ ನೀಡುವ ಮೂಲಕ ಪುನಃ ಜಾರಿಗೆ ತರಲು ನಿರ್ಧರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kh7tcyr030t64ap8rvgy88hg,imgname-up-sports-budget-2026-1770862836480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್&zwnj; ಸೇವೆಗಳಲ್ಲಿ ಹುದ್ದೆಗಳ ನೇಮಾತಿಯಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್&zwnj; ತಿಳಿಸಿದ್ದಾರೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಇದಕ್ಕಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2026ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;h2&gt;2024ರ ಡಿಸೆಂಬರ್&zwnj;ನಲ್ಲಿ ತಡೆ ನೀಡಲಾಗಿದ್ದ ಆದೇಶ&lt;/h2&gt;&lt;p&gt;ಮೂಲಗಳ ಪ್ರಕಾರ, ಈ ಹಿಂದೆ ಕರ್ನಾಟಕ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.2 ರಷ್ಟು ಹುದ್ದೆಗಳನ್ನು ಮೀಸಲಿರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಮಾಡಿತ್ತು. ಆದರೆ 2024ರ ಡಿಸೆಂಬರ್&zwnj;ನಲ್ಲಿ ಈ ಆದೇಶಕ್ಕೆ ತಡೆ ನೀಡಲಾಗಿತ್ತು. ವಿಶೇಷ ರಾಜ್ಯಪತ್ರದ ಮೂಲಕ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿತ್ತು.&lt;/p&gt;&lt;h2&gt;ಪುನರ್&zwnj; ಪರಿಶೀಲನೆ:&lt;/h2&gt;&lt;p&gt;ಆದೇಶದಲ್ಲಿ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 19770 ನಿಯಮ 9ಕ್ಕೆ ತಿದ್ದುಪಡಿ ಮಾಡಿರುವುದನ್ನು ಪುನರ್ ಪರಿಶೀಲಿಸಲಿದೆ. ಆದುದರಿಂದ, ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ. 2 ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ ಎಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಆದೇಶದಲ್ಲಿ ಸೂಚನೆ ಕೊಡಲಾಗಿತ್ತು.&lt;/p&gt;&lt;p&gt;ಇದೀಗ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವ ನಿಯಮಗಳ ಅಡಿ ಕ್ರೀಡಾ ಸಾಧಕರಿಗೆ ಮೀಸಲಾತಿ ಒದಗಿಸಬಹುದು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಡಿಸಿದ್ದ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು -2026ಕ್ಕೆ ಒಪ್ಪಿಗೆ ದೊರೆತಿರುವುದಾಗಿ ತಿಳಿದುಬಂದಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/karnataka-cabinet-approves-2-percent-reservation-for-sportspersons-in-civil-services-recruitment-gdp/articleshow-3asx5ki"/>
        </item>
        <item>
            <title><![CDATA[ಬೆಂಗಳೂರು-ಚನ್ನಪಟ್ಟಣ ನಡುವೆ BMTC ಎಸಿ ಬಸ್ ಸಂಚಾರ ಆರಂಭ; ಕೇವಲ 3 ಸ್ಟಾಪ್, ಟಿಕೆಟ್ ದರ ಎಷ್ಟು ಗೊತ್ತಾ?]]></title>
            <link>https://kannada.asianetnews.com/gallery/state/good-news-for-bengaluru-and-channapatna-commuters-bmtc-launches-ac-bus-service-sat-sv9fb1d</link>
            <guid isPermaLink="true">https://kannada.asianetnews.com/gallery/state/good-news-for-bengaluru-and-channapatna-commuters-bmtc-launches-ac-bus-service-sat-sv9fb1d</guid>
            <pubDate>Fri, 08 May 2026 17:53:31 +0530</pubDate>
            <description><![CDATA[&lt;p&gt;ಬೆಂಗಳೂರು ಮತ್ತು ಚನ್ನಪಟ್ಟಣ ನಡುವೆ 8 ಬಿಎಂಟಿಸಿ ಎಸಿ ಬಸ್&zwnj;ಗಳ ಸಂಚಾರ ಆರಂಭವಾಗಿದೆ. ಶಾಸಕ ಸಿ.ಪಿ. ಯೋಗೇಶ್ವರ್, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಚಾಲನೆ ನೀಡಿದರು.ಈ ಬಸ್ ರಾಮನಗರ ಮತ್ತು ಕೆಂಗೇರಿಯಲ್ಲಿ ಸ್ಟಾಪ್ ನೀಡಲಿದೆ. ಆದರೆ, ಟಿಕೆಟ್ ಬೆಲೆ ಎಷ್ಟಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3r39v1bxgtzyb9yh95sx8c,imgname-bengaluru-channapatna-bmtc-bus-1778242398049.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮತ್ತು ಚನ್ನಪಟ್ಟಣ ನಡುವೆ 8 ಬಿಎಂಟಿಸಿ ಎಸಿ ಬಸ್&zwnj;ಗಳ ಸಂಚಾರ ಆರಂಭವಾಗಿದೆ. ಶಾಸಕ ಸಿ.ಪಿ. ಯೋಗೇಶ್ವರ್, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಚಾಲನೆ ನೀಡಿದರು.ಈ ಬಸ್ ರಾಮನಗರ ಮತ್ತು ಕೆಂಗೇರಿಯಲ್ಲಿ ಸ್ಟಾಪ್ ನೀಡಲಿದೆ. ಆದರೆ, ಟಿಕೆಟ್ ಬೆಲೆ ಎಷ್ಟಿದೆ ನೋಡಿ..&lt;/p&gt;&lt;img&gt;&lt;p&gt;ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಬೊಂಬೆಗಳ ನಾಡು ಚನ್ನಪಟ್ಟಣದ ನಡುವೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಬಿಎಂಟಿಸಿ (BMTC) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಎಸಿ ಬಸ್ ಸೇವೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಇನ್ಮುಂದೆ ಜನರು ಬಿರು ಬೇಸಿಗೆಯಲ್ಲೂ ತಂಪಾಗಿ, ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.&lt;/p&gt;&lt;img&gt;&lt;p&gt;&lt;strong&gt;ದಳಪತಿ ಮತ್ತು ಸಾಹುಕಾರನ ಸಮಾಗಮ:&lt;/strong&gt;&lt;/p&gt;&lt;p&gt;ಚನ್ನಪಟ್ಟಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಸಿ.ಪಿ. ಯೋಗೇಶ್ವರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಜಂಟಿಯಾಗಿ ಎಂಟು ಬಿಎಂಟಿಸಿ ಎಸಿ ಬಸ್&zwnj;ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಜನರ ಅನುಕೂಲಕ್ಕಾಗಿ ಇಬ್ಬರು ನಾಯಕರು ಒಟ್ಟಾಗಿ ಈ ಯೋಜನೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.&lt;/p&gt;&lt;img&gt;&lt;p&gt;&lt;strong&gt;ದಿನಕ್ಕೆ 44 ಟ್ರಿಪ್&zwnj;ಗಳ ಸಂಚಾರ:&lt;/strong&gt;&lt;/p&gt;&lt;p&gt;ಬೆಂಗಳೂರು ಮತ್ತು ಚನ್ನಪಟ್ಟಣದ ನಡುವೆ ಕೇವಲ ಎಸಿ ಬಸ್&zwnj;ಗಳ ಸಂಚಾರ ಮಾತ್ರವಲ್ಲದೆ, ದಿನಕ್ಕೆ ಒಟ್ಟು 44 ಟ್ರಿಪ್&zwnj;ಗಳನ್ನು ಈ ಬಸ್&zwnj;ಗಳು ಕೈಗೊಳ್ಳಲಿವೆ. ಒಟ್ಟು 8 ಐಷಾರಾಮಿ ಎಸಿ ಬಸ್&zwnj;ಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿವೆ. ಇದರಿಂದಾಗಿ ಪ್ರತಿ ಅರ್ಧ ಅಥವಾ ಒಂದು ಗಂಟೆಗೊಮ್ಮೆ ಪ್ರಯಾಣಿಕರಿಗೆ ಎಸಿ ಬಸ್ ಸೌಲಭ್ಯ ದೊರೆಯಲಿದೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬರುವ ನೂರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಇದು ವರದಾನವಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಟಿಕೆಟ್ ದರ ಮತ್ತು ನಿಲ್ದಾಣಗಳು:&lt;/strong&gt;&lt;/p&gt;&lt;p&gt;ಮೆಜೆಸ್ಟಿಕ್&zwnj;ನಿಂದ (ಬೆಂಗಳೂರು) ಚನ್ನಪಟ್ಟಣಕ್ಕೆ ಪ್ರಯಾಣಿಸಲು ಬಿಎಂಟಿಸಿ 105 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಿದೆ. ರೈಲು ಪ್ರಯಾಣಕ್ಕೆ ಹೋಲಿಸಿದರೆ ಸ್ವಲ್ಪ ದರ ಹೆಚ್ಚಿದ್ದರೂ, ಆರಾಮದಾಯಕ ಪ್ರಯಾಣ ಮತ್ತು ಸಮಯದ ಉಳಿತಾಯವನ್ನು ಗಮನಿಸಿದರೆ ಇದು ಸೂಕ್ತವಾಗಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಸ್&zwnj;ಗಳು ಚನ್ನಪಟ್ಟಣದಿಂದ ಹೊರಟು ರಾಮನಗರ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಸ್ಟಾಪ್ ನೀಡಲಿವೆ. ಇದರಿಂದ ಈ ಎರಡು ಪ್ರಮುಖ ನಗರಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಬಿರು ಬೇಸಿಗೆಯಲ್ಲಿ ತಂಪು ಪ್ರಯಾಣ:&lt;/strong&gt;&lt;/p&gt;&lt;p&gt;ಪ್ರಸ್ತುತ ರಾಜ್ಯದಲ್ಲಿ ತಾಪಮಾನ ಏರುತ್ತಿದ್ದು, ಜನರು ಬಸ್ಸಿನಲ್ಲಿ ಪ್ರಯಾಣಿಸಲು ಹೈರಾಣಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಎಸಿ ಬಸ್ ಸೌಲಭ್ಯ ಕಲ್ಪಿಸಿರುವುದು ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ. ಬಸ್&zwnj;ಗಳ ಒಳಾಂಗಣ ವಿನ್ಯಾಸ ಮತ್ತು ಆಸನ ವ್ಯವಸ್ಥೆಯು ಅತ್ಯಂತ ಆರಾಮದಾಯಕವಾಗಿದ್ದು, ದೂರದ ಪ್ರಯಾಣದ ದಣಿವು ತಿಳಿಯದಂತೆ ಮಾಡುತ್ತದೆ. ಒಟ್ಟಾರೆಯಾಗಿ, ಚನ್ನಪಟ್ಟಣ ಮತ್ತು ಬೆಂಗಳೂರು ನಡುವಿನ ಸಂಪರ್ಕಕ್ಕೆ ಬಿಎಂಟಿಸಿ ಹೊಸ ವೇಗ ಮತ್ತು ಸೌಕರ್ಯವನ್ನು ನೀಡಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/good-news-for-bengaluru-and-channapatna-commuters-bmtc-launches-ac-bus-service-sat-sv9fb1d"/>
        </item>
        <item>
            <title><![CDATA[ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ಇಲ್ಲಿ ಪೇಡೆ ಹಂಚುತ್ತಾರೆ, ನಮ್ಮ ರಾಜ್ಯದಲ್ಲಿ ಏನು ಮಾಡಿದ್ದೀರಿ? ಯತ್ನಾಳ್!]]></title>
            <link>https://kannada.asianetnews.com/state/basanagouda-patil-yatnal-slams-on-vijayendra-yediyurappa-koppal-bjp-internal-rift-sat/articleshow-n035u1y</link>
            <guid isPermaLink="true">https://kannada.asianetnews.com/state/basanagouda-patil-yatnal-slams-on-vijayendra-yediyurappa-koppal-bjp-internal-rift-sat/articleshow-n035u1y</guid>
            <pubDate>Fri, 08 May 2026 14:54:24 +0530</pubDate>
            <description><![CDATA[&lt;p&gt;'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಎಂದು ಪ್ರಶ್ನಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj4nkrdvr7qnva2vvbe0j7w9,imgname-br-patil-yatnal--2--1771830895035.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ (ಮೇ 08): 'ಬೇ&lt;/strong&gt;ರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ?' ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದರು.&lt;/p&gt;&lt;p&gt;ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಪಕ್ಷದ ನಾಯಕರ ವಿರುದ್ಧವೇ ಮತ್ತೊಮ್ಮೆ ಗುಡುಗಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 'ಈ ತಂದೆ-ಮಕ್ಕಳು ಇರುವವರೆಗೂ ನಾನು ಬಿಜೆಪಿ ಕಚೇರಿ ಮೆಟ್ಟಿಲು ಹತ್ತಲ್ಲ' ಎಂದು ಗುಡುಗಿದ್ದಾರೆ.&lt;/p&gt;&lt;h3&gt;&lt;strong&gt;ಇಲ್ಲಿ ಎಲ್ಲವೂ ಗೊಡ್ಡು, ಎಲ್ಲಿಂದ ಮಕ್ಕಳಾಗುತ್ತವೆ?&lt;/strong&gt;&lt;/h3&gt;&lt;p&gt;ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, 'ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಾಗ ಇಲ್ಲಿನವರು ಪೇಡೆ ಹಂಚುತ್ತಾರೆ. ಆದರೆ ರಾಜ್ಯದಲ್ಲಿ ಏನು ಮಾಡಿದ್ದೀರಿ? ಇಲ್ಲಿ ಎಲ್ಲವೂ ಗೊಡ್ಡಿಯಾಗಿದೆ, ಹೀಗಿರುವಾಗ ಫಲಿತಾಂಶ ಎಲ್ಲಿಂದ ಬರಬೇಕು? ಮಕ್ಕಳಾಗಲು ಸಾಧ್ಯವೇ?' ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಸೋತಿದೆ. 25 ಸಂಸದರಿದ್ದ ಸ್ಥಾನ ಈಗ 17ಕ್ಕೆ ಇಳಿದಿದೆ. ಇದೆಲ್ಲವೂ ಅವರ 'ಡೀಲಿಂಗ್' ರಾಜಕಾರಣದ ಫಲ ಎಂದು ಆರೋಪಿಸಿದರು.&lt;/p&gt;&lt;h3&gt;&lt;strong&gt;ಯಡಿಯೂರಪ್ಪ ಅಭಿಮಾನೋತ್ಸವದ ಹಿಂದಿದೆ 'ರಿನಿವಲ್' ತಂತ್ರ!&lt;/strong&gt;&lt;/h3&gt;&lt;p&gt;ಶೀಘ್ರದಲ್ಲೇ ನಡೆಯಲಿರುವ ಯಡಿಯೂರಪ್ಪ ಅಭಿಮಾನೋತ್ಸವದ ಬಗ್ಗೆ ಕಿಡಿಕಾರಿದ ಅವರು, 'ಯಾವ ಪುರುಷಾರ್ಥಕ್ಕೆ ಈ ಉತ್ಸವ ಮಾಡುತ್ತಿದ್ದಾರೆ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರಿಗಾ ಈ ಸಂಭ್ರಮ? ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ನವೆಂಬರ್&zwnj;ಗೆ ಮುಕ್ತಾಯವಾಗಲಿದೆ. ಆ ಸ್ಥಾನವನ್ನು ಉಳಿಸಿಕೊಳ್ಳಲು (ರಿನಿವಲ್) ಹೈಕಮಾಂಡ್ ಮುಂದೆ ತಾವು ದೊಡ್ಡ ಲಿಂಗಾಯತ ನಾಯಕರು ಎಂದು ಬಿಂಬಿಸಿಕೊಳ್ಳಲು ಈ ನಾಟಕವಾಡುತ್ತಿದ್ದಾರೆ' ಎಂದು ಲೇವಡಿ ಮಾಡಿದರು.&lt;/p&gt;&lt;h3&gt;&lt;strong&gt;ಸಾವಿರಾರು ಕೋಟಿ ಗಳಿಸಿದ್ದೀರಿ, ಸಮಾಜಕ್ಕೆ ನಿಮ್ಮ ಕೊಡುಗೆ ಏನು?&lt;/strong&gt;&lt;/h3&gt;&lt;p&gt;ಯಡಿಯೂರಪ್ಪ ಕುಟುಂಬದ ಆಸ್ತಿಪಾಸ್ತಿ ಬಗ್ಗೆ ವಾಗ್ದಾಳಿ ನಡೆಸಿದ ಅವರು, 'ಒಂದು ಕಾಲದಲ್ಲಿ ನಿಮ್ಮ ಮನೆಯಲ್ಲಿ ಒಂದು ಕಾರ್ ಇರಲಿಲ್ಲ. ಈಗ ಪ್ರದರ್ಶನಕ್ಕಿಟ್ಟಿರುವ ಹಳೆಯ ಅಂಬಾಸಿಡರ್ ಕಾರ್ ಕೂಡ ಬಿಜೆಪಿಯದ್ದು. ಸಾವಿರಾರು ಕೋಟಿ ರೂಪಾಯಿ ಗಳಿಸಿದ್ದೀರಿ, ಆದರೆ ಸಮಾಜಕ್ಕೆ ನಿಮ್ಮ ವೈಯಕ್ತಿಕ ಕೊಡುಗೆ ಏನು?' ಎಂದು ಪ್ರಶ್ನಿಸಿದರು. ಕೇವಲ ಅಧಿಕಾರ ಹಿಡಿದು ಹಣ ಮಾಡುವುದೇ ಇವರ ಗುರಿ ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ!&lt;/strong&gt;&lt;/h2&gt;&lt;p&gt;ಇದೇ ವೇಳೆ ಕಾಂಗ್ರೆಸ್ ನಾಯಕರ ಬಗ್ಗೆಯೂ ಮಾತನಾಡಿದ ಯತ್ನಾಳ್, 'ಡಿ.ಕೆ. ಶಿವಕುಮಾರ್ ಅವರಂತಹ ಅಯೋಗ್ಯ ಮತ್ತು ರಾಕ್ಷಸ ರಾಜಕಾರಣಿ ಯಾರೂ ಇಲ್ಲ. ಅವರಿಗಿಂತ ಸಿದ್ದರಾಮಯ್ಯ ಎಷ್ಟೋ ಉತ್ತಮ' ಎಂದರು. ಅಲ್ಲದೆ, ಹಿಂದುತ್ವದ ವಿಚಾರಧಾರೆ ಇರುವವರು ಪಕ್ಷದ ನೇತೃತ್ವ ವಹಿಸಿಕೊಂಡರೆ ಮಾತ್ರ ನಾನು ಸಕ್ರಿಯವಾಗಿ ಭಾಗವಹಿಸುತ್ತೇನೆ. ಅಲ್ಲಿಯವರೆಗೆ ಈ ಭ್ರಷ್ಟ ತಂದೆ-ಮಕ್ಕಳ ಜೊತೆ ಗುರುತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/basanagouda-patil-yatnal-slams-on-vijayendra-yediyurappa-koppal-bjp-internal-rift-sat/articleshow-n035u1y"/>
        </item>
        <item>
            <title><![CDATA[ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ನೋಡಿ ಬೆಚ್ಚಿ ಬಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಆತಂಕವೇನು?]]></title>
            <link>https://kannada.asianetnews.com/politics/karnataka-congress-on-alert-after-west-bengal-results-holds-talks-on-sir-voter-list-revision-gdp/articleshow-s063vgx</link>
            <guid isPermaLink="true">https://kannada.asianetnews.com/politics/karnataka-congress-on-alert-after-west-bengal-results-holds-talks-on-sir-voter-list-revision-gdp/articleshow-s063vgx</guid>
            <pubDate>Fri, 08 May 2026 14:35:06 +0530</pubDate>
            <description><![CDATA[ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ, ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮತದಾರರ ಪಟ್ಟಿ ಪರಿಷ್ಕರಣೆಯ ಎಸ್&zwnj;ಐಆರ್ ಪ್ರಕ್ರಿಯೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸುತ್ತಿದ್ದು, ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಂಭವನೀಯ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqr2b2ead5jwaeyc7sccnt2g,imgname-----------------------2026-05-04t045055.019-1777850485194.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಅದರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡಿದೆ. ವಿಶೇಷವಾಗಿ ಮತದಾರರ ಪಟ್ಟಿ ಪರಿಷ್ಕರಣೆಯೊಂದಿಗಿನ ಎಸ್&zwnj;ಐಆರ್ (Special Intensive Revision) ಪ್ರಕ್ರಿಯೆ ಕುರಿತು ಆತಂಕ ವ್ಯಕ್ತವಾಗಿದೆ. ಈ ವಿಷಯದ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.&lt;/p&gt;&lt;h2&gt;ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಭೆ&lt;/h2&gt;&lt;p&gt;ರಾಜ್ಯದಲ್ಲಿ ನಡೆಯಲಿರುವ ಎಸ್&zwnj;ಐಆರ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಪ್ರಮುಖ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿ, ಈ ಪ್ರಕ್ರಿಯೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ತಮ್ಮ ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಉಂಟಾಗಬಹುದಾದ ತೊಂದರೆಗಳು, ಕೆಲವು ಸಮುದಾಯಗಳಿಗೆ ಆಗಬಹುದಾದ ಅನ್ಯಾಯ, ಹಾಗೂ ಪ್ರಕ್ರಿಯೆಯ ಪಾರದರ್ಶಕತೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಬೇಕೆಂಬ ವಿಚಾರವನ್ನೂ ಪರಿಗಣಿಸಲಾಗುತ್ತಿದೆ.&lt;/p&gt;&lt;p&gt;ಎಸ್ಐಆರ್ ವಿರೋಧಿಸುತ್ತಿರುವ ಸಂಘಟನೆಗಳೆಂದರೆ ಎದ್ದೇಳು ಕರ್ನಾಟಕ ಸಂಘಟನೆ, ಡಿಎಸ್ಎಸ್, ಎಂಎಂಎಂ, ಕ್ರಿಶ್ಚಿಯನ್ ಸಮುದಾಯದ ನಾಯಕರು, ರಾಜ್ಯ ರೈತ ಸಂಘ, ಆಪ್, ಸಿಪಿಎಂ, ಕರ್ನಾಟಕ ಜನಶಕ್ತಿ, ಸಿಪಿಎಂ, WPI,SDPI ಸೇರಿದಂತೆ ಸಣ್ಣಪುಟ್ಟ ಸಂಘಟನೆಗಳ ನಾಯಕರು.&lt;/p&gt;&lt;h2&gt;ಎಸ್&zwnj;ಐಆರ್ ಪ್ರಕ್ರಿಯೆ ಸೂಕ್ಷ್ಮವಾಗಿ ಗಮನಿಸಲು ನಿರ್ಧಾರ&lt;/h2&gt;&lt;p&gt;ಎಸ್&zwnj;ಐಆರ್ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಲು ಸರ್ಕಾರ ನಿರ್ಧರಿಸಿದ್ದು, ಯಾವುದೇ ಆಕ್ಷೇಪಾರ್ಹ ಅಥವಾ ಅನ್ಯಾಯಕರ ನಡೆ ಕಂಡುಬಂದರೆ ಅದನ್ನು ತೀವ್ರವಾಗಿ ವಿರೋಧಿಸುವ ಬಗ್ಗೆ ನಿರ್ಧಾರ ಮಾಡಿದೆ. ಇದೇ ವೇಳೆ, ಇಂತಹ ಸಂದರ್ಭಗಳನ್ನು ಎದುರಿಸಲು ಕಾನೂನುಬದ್ಧ ಹಾಗೂ ರಾಜಕೀಯ ಮಾರ್ಗಗಳನ್ನು ಅನ್ವೇಷಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.&lt;/p&gt;&lt;p&gt;ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್&zwnj;ಐಆರ್ ಪ್ರಕ್ರಿಯೆಯ ನಂತರದ ಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿದೆ. ಅಲ್ಲಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಅಕ್ರಮ ವಲಸಿಗರನ್ನು ಕೈಬಿಟ್ಟ ನಂತರ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ ಎಂಬ ರಾಜಕೀಯ ವಿಶ್ಲೇಷಣೆ ಹಿನ್ನೆಲೆಯಲ್ಲಿ, ಇದೇ ರೀತಿಯ ಪರಿಸ್ಥಿತಿ ರಾಜ್ಯದಲ್ಲೂ ಉಂಟಾಗಬಹುದೆಂಬ ಭಯ ಕಾಂಗ್ರೆಸ್ ವಲಯದಲ್ಲಿ ಮೂಡಿದೆ.&lt;/p&gt;&lt;p&gt;ಆದ್ದರಿಂದ, ಎಸ್&zwnj;ಐಆರ್ ಪ್ರಕ್ರಿಯೆಯನ್ನು ವಿರೋಧಿಸುವ ಅಥವಾ ಅದರ ವಿರುದ್ಧ ಕಾನೂನುಬದ್ಧವಾಗಿ ಹೋರಾಟ ನಡೆಸುವ ಉದ್ದೇಶದಿಂದ ವಿವಿಧ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿರುವ ಕಾಂಗ್ರೆಸ್ ನಾಯಕರು, ಮುಂದಿನ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರ ರೂಪಿಸುತ್ತಿದೆ&lt;/p&gt;&lt;p&gt;ಒಟ್ಟಿನಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಎಸ್&zwnj;ಐಆರ್ ಪ್ರಕ್ರಿಯೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಮತ್ತು ರಾಜಕೀಯ ಪಕ್ಷಗಳ ನಡುವಿನ ತಂತ್ರಯುದ್ಧಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/politics/karnataka-congress-on-alert-after-west-bengal-results-holds-talks-on-sir-voter-list-revision-gdp/articleshow-s063vgx"/>
        </item>
        <item>
            <title><![CDATA[Koh-i-Noor: ಕೋಹಿನೂರ್ ವಾಪಸ್‌ ಕೊಡಿ: ಬ್ರಿಟನ್‌ ರಾಜನಿಗೆ ನ್ಯೂಯಾರ್ಕ್‌ ಮೇಯರ್‌ ಕೋರಿಕೆ]]></title>
            <link>https://kannada.asianetnews.com/gallery/state/mamdani-says-he-would-ask-king-charles-to-return-kohi-noor-rav-ucetrch</link>
            <guid isPermaLink="true">https://kannada.asianetnews.com/gallery/state/mamdani-says-he-would-ask-king-charles-to-return-kohi-noor-rav-ucetrch</guid>
            <pubDate>Fri, 08 May 2026 11:59:16 +0530</pubDate>
            <description><![CDATA[&lt;p&gt;ವಿಶ್ವಪ್ರಸಿದ್ಧ ಕೋಹಿನೂರ್&zwnj; ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್&zwnj; ಕುರಿತು, ಅಮೆರಿಕದ ನ್ಯೂಯಾರ್ಕ್&zwnj;ನ ಮೇಯರ್&zwnj;, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್&zwnj; ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr33585wq4h6s0gxyzw58ej1,imgname-whatsapp-image-2026-05-08-at-11.01.02-am-1778220441788.jpeg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವಪ್ರಸಿದ್ಧ ಕೋಹಿನೂರ್&zwnj; ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್&zwnj; ಕುರಿತು, ಅಮೆರಿಕದ ನ್ಯೂಯಾರ್ಕ್&zwnj;ನ ಮೇಯರ್&zwnj;, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್&zwnj; ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ&lt;/p&gt;&lt;img&gt;&lt;p&gt;ಯಾದಗಿರಿ : ವಿಶ್ವಪ್ರಸಿದ್ಧ ಕೋಹಿನೂರ್&zwnj; ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್&zwnj; ಕುರಿತು, ಅಮೆರಿಕದ ನ್ಯೂಯಾರ್ಕ್&zwnj;ನ ಮೇಯರ್&zwnj;, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್&zwnj; ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂಬೈ ಮೂಲದ ಮೊಹ್ಮದ್&zwnj; ಮಮ್ದಾನಿ ಹಾಗೂ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ನಿರ್ಮಾಪಕಿ ಮೀರಾ ನಾಯರ್&zwnj; ಪುತ್ರ ಜೋಹ್ರನ್&zwnj; ಮಮ್ದಾನಿ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.&lt;/p&gt;&lt;img&gt;&lt;p&gt;9/11 ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲು ನ್ಯೂಯಾರ್ಕ್&zwnj;ಗೆ ಬುಧವಾರ ಬ್ರಿಟನ್&zwnj; ರಾಜ ಚಾರ್ಲ್ಸ್ ಆಗಮಿಸಿದ್ದರು. ಈ ವೇಳೆ, ಅಲ್ಲಿನ ಮೇಯರ್&zwnj; ಜೋಹ್ರನ್&zwnj; ಮಮ್ದಾನಿ ಭೇಟಿ ನಿಗದಿಯಾಗಿತ್ತು. ಭೇಟಿಗೂ ಮುನ್ನ, ಮಾಧ್ಯಗಳೊಂದಿಗೆ ಮಾತನಾಡಿದ ಮಮ್ದಾನಿ, &quot;ನಾನು ರಾಜನೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಸಿಕ್ಕರೆ, ಕೋಹಿನೂರ್ ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ.&quot; ಎಂದು ಹೇಳಿದ್ದರು&lt;/p&gt;&lt;img&gt;&lt;p&gt;ನಂತರದಲ್ಲಿ ಅವರಿಬ್ಬರು ಈ ವಿಷಯದ ಬಗ್ಗೆ ಚರ್ಚೆ ನಡೆಸಿದರೋ ಅಥವಾ ಇಲ್ಲವೋ ಸ್ಪಷ್ಟವಾಗಿಲ್ಲವಾದರೂ, ಆದರೆ, ವಜ್ರ ಹಿಂತಿರುಗಿಸುವ ಕುರಿತು ಮಮ್ದಾನಿ ಹೇಳಿಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;img&gt;&lt;p&gt;ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದ ಕೃಷ್ಣಾ ನದಿಯಲ್ಲಿ ಕೋಹಿನೂರ್&zwnj; ವಜ್ರ ಸಿಕ್ಕ ಐತಿಹ್ಯದ ದಾಖಲೆಗಳಿವೆ. ಬ್ರಿಟಿಷ್&zwnj; ಪ್ರವಾಸಿಗ, ಲೇಖಕ ರಾಬರ್ಟ್&zwnj; ಸೀವೆಲ್&zwnj; ಬರೆದ &quot;ಎ ಫಾರಗಟನ್&zwnj; ಎಂಪಾಯರ್&zwnj;- ವಿಜಯನಗರ&quot; ಹಾಗೂ ವಿಲಿಯಂ ಡೇಲಿಂಪ್ಲ್&zwnj; ಮತ್ತು ಅನಿತಾ ಆನಂದ್&zwnj; ಅವರ 2017ರಲ್ಲಿ ಪ್ರಕಟವಾದ &quot; ಕೋಹಿನೂರ್&zwnj; : ದ ಹಿಸ್ಟರಿ ಆಫ್&zwnj; ವರ್ಲ್ಡ್&zwnj; ಮೋಸ್ಟ್&zwnj; ಇನ್&zwnj;ಫೇಮಸ್ ಡೈಮಂಡ್&zwnj;&quot; ಪುಸ್ತಕದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಇತಿಹಾಸ ಸಂಶೋಧಕರಾಗಿದ್ದ ಶಹಾಪುರದ ದಿ. ಭಾಸ್ಕರರಾವ್&zwnj; ಮುಡಬೂಳ್&zwnj; ಅವರು ಈ ಬಗ್ಗೆ ದಾಖಲೆಗಳ ಸಂಗ್ರಹಕ್ಕೆ ಪ್ರಯತ್ನಿಸಿದ್ದರು. ರಾಜ್ಯ ಸರ್ಕಾರದ ಹಾಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್&zwnj; ಗೋಯಲ್&zwnj; ಅವರು, ಅಂದಿನ ಎಚ್ಕೆಡಿಬಿ ಕಾರ್ಯದರ್ಶಿಯಾಗಿದ್ದ ವೇಳೆ ಇಲ್ಲಿನ ಸರ್ವೆ ನಂ.337 ಹಾಗೂ 342ರಲ್ಲಿನ ಒಟ್ಟು 8 ಎಕರೆ 19 ಗುಂಟೆ ಪ್ರದೇಶವನ್ನು ಸಂರಕ್ಷಿತ ಸ್ಥಳವೆಂದು ಗುರುತಿಸಿದ್ದರಲ್ಲದೆ, ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿದ್ದರು. ಇಲ್ಲಿನ ಉತ್ಕೃಷ್ಟ ಮರಳಿಗೆ ಕನ್ನ ಹಾಕುತ್ತಿದ್ದವರ ತಡೆದು, ಇಲ್ಲಿ ಮರಳು ಗಣಿಗಾರಿಕೆ ನಿಷೇಧ ಹೇರಿ ಆದೇಶಿಸಲಾಗಿದೆ&lt;/p&gt;&lt;img&gt;&lt;p&gt;ಕೋಹ್&zwnj;-ಎ-ನೂರ್&zwnj;&quot;, ಪರ್ಷಿಯನ್&zwnj; ಭಾಷೆಯಲ್ಲಿನ ಈ ಪದದ ಅರ್ಥ ಬೆಳಕಿನ ಪರ್ವತ (ಕೋಹ್&zwnj; ಅಂದರೆ ಪರ್ವತ, ನೂರ್&zwnj; ಅಂದರೆ ಬೆಳಕು). ವಿಶ್ವದಲ್ಲಿನ ಅತಿ ದೊಡ್ಡ ಕತ್ತರಿಸಿದ ವಜ್ರಗಳಲ್ಲೊಂದು.&lt;/p&gt;&lt;img&gt;&lt;p&gt;105.6 ಕ್ಯಾರೆಟ್ ತೂಕದ, ಒಂದು ಕೋಳಿ ಮೊಟ್ಟೆಯಷ್ಟು ಗಾತ್ರದ ಕೋಹಿನೂರ್&zwnj; ವಜ್ರವನ್ನು 1849ರಲ್ಲಿ ಬ್ರಿಟಿಷರು ಸಿಖ್ ಸಾಮ್ರಾಜ್ಯದ 10 ವರ್ಷದ ಮಹಾರಾಜ ದುಲೀಪ್&zwnj; ಸಿಂಗ್&zwnj; ಅವರಿಂದ ಪಡೆಯಲಾಗಿತ್ತು. ಕಾಕತೀಯರು ಹಾಗೂ ಮೊಗಲರ ನಂತರ ಸಿಖ್&zwnj; ದೊರೆಗಳ ವಶದಲ್ಲಿತ್ತು. ಒಪ್ಪಂದವೊಂದಕ್ಕೆ ಸಹಿ ಹಾಕುವ ವೇಳೆ ದುಲೀಪ್&zwnj; ಸಿಂಗ್&zwnj;ರಿಂದ ಪಡೆದು, ವಿಕ್ಟೋರಿಯಾ ರಾಣಿಗೆ ಒಪ್ಪಿಸಲಾಗಿತ್ತು.&lt;/p&gt;&lt;img&gt;&lt;p&gt;ಸದ್ಯ, ಕೋಹಿನೂರ್&zwnj; ವಜ್ರ ಬ್ರಿಟನ್&zwnj; ರಾಜಮನೆತನದ ಎಲಿಜೆಬೆತ್&zwnj; ರಾಣಿ ಕಿರೀಟದಲ್ಲಿ ಅಳವಡಿಸಲಾಗಿದ್ದು, ಲಂಡನ್ ಟವರ್&zwnj;ನಲ್ಲಿರುವ ಕ್ರೌನ್ ಜುವೆಲ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನದಲ್ಲಿದೆ. 2002ರಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ವಜ್ರ ಕೊನೆಯ ಬಾರಿ ಕಂಡುಬಂದಿತ್ತು.&lt;/p&gt;&lt;img&gt;&lt;p&gt;ಬ್ರಿಟನ್ ಪ್ರಧಾನಿಯಾಗಿದ್ದ ಡೇವಿಡ್&zwnj; ಕೆಮರೂನ್&zwnj; 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ, ಕೋಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ, ಇದಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದ ಡೇವಿಡ್&zwnj;, ಬ್ರಿಟನ್&zwnj;ನಲ್ಲಿ ಗ್ರೀಸ್, ಈಜಿಪ್ಟ್ ಮುಂತಾದವು ಸೇರಿದಂತೆ ವಿವಿಧ ರಾಷ್ಟ್ರಗಳ ಅನೇಕ ವಸ್ತುಗಳನ್ನು ಸಂಗ್ರಹಿಸಲ್ಪಟ್ಟಿವೆ. ಒಂದು ವಸ್ತುವನ್ನು ಹಿಂದಿರುಗಿಸಿದರೆ, ಭಾರತ ಮಾತ್ರವಲ್ಲ ಇತರ ದೇಶಗಳೂ ಅದೇ ಬೇಡಿಕೆಯನ್ನು ಮುಂದಿಡುತ್ತವೆ ಎಂದಿದ್ದರು.&lt;/p&gt;&lt;img&gt;&lt;p&gt;ಇನ್ನು, 2016ರಲ್ಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ವೇಳೆ, ಸ್ನೇಹಪೂರ್ವಕವಾಗಿ ಕೋಹಿನೂರ್&zwnj; ವಜ್ರ ವಾಪಸ್&zwnj; ಪಡೆಯಲಾಗುವುದು ಎಂದು ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ಆದರೆ, ಮ್ಯೂಸಿಯಂ ಕಾಯ್ದೆ ಪ್ರಕಾರ ವಸ್ತುಗಳನ್ನು ಹಿಂತಿರುಗಿಸುವುದು ಕಷ್ಟಕರ ಎಂದು ಬ್ರಿಟನ್&zwnj; ಸ್ಪಷ್ಟಪಡಿಸಿತ್ತು. ಸದ್ಯ, ಮಮ್ದಾನಿ ಅವರ ಹೇಳಿಕೆ ಮತ್ತೇ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಮುಂದಿಟ್ಟಂತಾಗಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/mamdani-says-he-would-ask-king-charles-to-return-kohi-noor-rav-ucetrch"/>
        </item>
        <item>
            <title><![CDATA[ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ,  ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?]]></title>
            <link>https://kannada.asianetnews.com/state/50-years-of-yediyurappa-politics-how-the-rajahuli-became-godfather-to-karnataka-youth-videoshow-xrt5v5g</link>
            <guid isPermaLink="true">https://kannada.asianetnews.com/state/50-years-of-yediyurappa-politics-how-the-rajahuli-became-godfather-to-karnataka-youth-videoshow-xrt5v5g</guid>
            <pubDate>Fri, 08 May 2026 11:46:54 +0530</pubDate>
            <description><![CDATA[&lt;p&gt;ರಾಜಾಹುಲಿ ರಾಜಕಾರಣಕ್ಕೆ 50 ವರ್ಷ.. ಅಭಿಮಾನೋತ್ಸವ ಹರ್ಷ..! ಕೇಸರಿವೀರನ ತ್ರಿವಿಕ್ರಮ ಹೆಜ್ಜೆ.. ಬಿಜೆಪಿಗೆ ಅದೇ ರಹದಾರಿ..! ಯುವ ನಾಯಕರಿಗೆ ಬಿಎಸ್​​​ವೈ ರಾಜಕೀಯ ಬದುಕೇ ಪಾಠ..! ಶಿಕಾರಿಪುರದ ಛಲಗಾರನಿಂದ ಯುವಶಕ್ತಿ ಕಲಿತದ್ದೇನು ?&lt;/p&gt;]]></description>
            <media:content url="https://geo.dailymotion.com/player/x1tbu.html?video=xa8l4a4" medium="video" height="768" width="1024"/>
            <content:encoded><![CDATA[&lt;p&gt;ಇಡೀ ದೇಶವೇ ರಾಜ್ಯದತ್ತ ಒಮ್ಮೆ ತಿರುಗಿ ನೋಡುವಂತಹ ಉತ್ಸವವೊಂದು ಆರಂಭವಾಗ್ತಿದೆ.. ರೈತ ನಾಯಕ ಯಡಿಯೂರಪ್ಪನವ್ರ ಅಭಿಮಾನೋತ್ಸವ. ರಾಜಾಹುಲಿ ಸಾರ್ವಜನಿಕ ಬದುಕಿಗೆ ಧುಮುಕಿ 50 ವರ್ಷಗಳಾಗಿವೆ. ಈ ಹಿನ್ನಲೆಯಲ್ಲಿ ಎಲ್ಲೆಲ್ಲೂ ಬಿಎಸ್​​​ವೈ ನಡೆದು ಬಂದ ಹಾದಿಯ ಬಗ್ಗೆ ಚರ್ಚೆಯಾಗ್ತಿದೆ.. ಇದೇ ಸಂದರ್ಭದಲ್ಲಿ ಯುವ ನಾಯಕರಿಗೆ ಬಿಎಸ್​​ವೈ ಹೇಗೆ ಪ್ರೇರಣೆಯಾಗಿದ್ದಾರೆ..? ಯಡಿಯೂರಪ್ಪನವರ ಬಗ್ಗೆ ಆ ಯುವನಾಯಕರು ಏನ್ ಹೇಳ್ತಾರೆ..? ಬನ್ನಿ, ಶಿಕಾರಿವೀರ ಯಡಿಯೂರಪ್ಪನವರು ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ ಅನ್ನೋದ ನೋಡೋಣ.&amp;nbsp;&amp;nbsp;&lt;/p&gt;]]></content:encoded>
            <category>state</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/50-years-of-yediyurappa-politics-how-the-rajahuli-became-godfather-to-karnataka-youth-videoshow-xrt5v5g"/>
        </item>
        <item>
            <title><![CDATA[ಆರ್‌ಸಿಬಿ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್: ಸರ್ಕಾರದ ಪಾತ್ರ ಇಲ್ಲ, ವಾಣಿಜ್ಯ ಕಾರಣವಿರಬಹುದು: ಗೃಹ ಸಚಿವ ಪರಮೇಶ್ವರ]]></title>
            <link>https://kannada.asianetnews.com/cricket-sports/no-role-of-karnataka-government-in-rcb-match-shift-to-ahmedabad-home-minister-g-parameshwara-gdp/articleshow-wiye310</link>
            <guid isPermaLink="true">https://kannada.asianetnews.com/cricket-sports/no-role-of-karnataka-government-in-rcb-match-shift-to-ahmedabad-home-minister-g-parameshwara-gdp/articleshow-wiye310</guid>
            <pubDate>Fri, 08 May 2026 10:59:14 +0530</pubDate>
            <description><![CDATA[ಆರ್ಸಿಬಿ ಪಂದ್ಯವನ್ನು ಅಹಮದಾಬಾದ್&zwnj;ಗೆ ಸ್ಥಳಾಂತರಿಸಿದ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಇದು ಸಂಪೂರ್ಣವಾಗಿ ಬಿಸಿಸಿಐ ಮತ್ತು ಫ್ರಾಂಚೈಸಿಯ ವಾಣಿಜ್ಯ ನಿರ್ಧಾರವಾಗಿದ್ದು, ಭದ್ರತಾ ಕೊರತೆಯ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kegtrfnhchr9nsc70ryj8cs8,imgname-dr-g-parameshwara-1767943978672.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪಂದ್ಯವನ್ನು ಅಹಮದಾಬಾದ್&zwnj;ಗೆ ಸ್ಥಳಾಂತರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಧಾರದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಸಿಬಿ ಮತ್ತು ಬಿಸಿಸಿಐ ನಡುವಿನ ಒಪ್ಪಂದಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಪಂದ್ಯವನ್ನು ಸ್ಥಳಾಂತರಿಸುವುದು ಸಂಪೂರ್ಣವಾಗಿ ಅವರ ನಿರ್ಧಾರ. ಟಿಕೆಟ್ ಹಾಗೂ ವಾಣಿಜ್ಯ ಉದ್ದೇಶಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಣುತ್ತದೆ ಎಂದು ಹೇಳಿದರು&lt;/p&gt;&lt;h2&gt;ಭದ್ರತಾ ಕೊರತೆ ಇಲ್ಲ&lt;/h2&gt;&lt;p&gt;ಪಂದ್ಯವನ್ನು ಭದ್ರತಾ ಕಾರಣಗಳಿಂದ ಶಿಫ್ಟ್ ಮಾಡಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಸಚಿವ ಡಾ.ಜಿ. ಪರಮೇಶ್ವರ , ಭದ್ರತೆಯ ಯಾವುದೇ ಕೊರತೆ ಇಲ್ಲ. ಕಳೆದ ವರ್ಷ ನಡೆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಕುನ್ಹಾ ವರದಿ ಆಧಾರವಾಗಿ ಹಲವು ಬದಲಾವಣೆಗಳನ್ನು ಮಾಡಿದ್ದೇವೆ. ಕಡಿಮೆ ಸಮಯದಲ್ಲಿಯೇ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ ಎಂದರು&lt;/p&gt;&lt;h2&gt;ವಾಣಿಜ್ಯ ಕಾರಣಗಳೇ ಪ್ರಮುಖ&lt;/h2&gt;&lt;p&gt;ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು ಮತ್ತು ಹೆಚ್ಚಿನ ಆಸನ ವ್ಯವಸ್ಥೆ ದೊರಕುವ ಉದ್ದೇಶದಿಂದ ಪಂದ್ಯವನ್ನು ಅಹಮದಾಬಾದ್&zwnj;ಗೆ ಸ್ಥಳಾಂತರಿಸಿರಬಹುದು ಎಂದ ಅವರು, ಇದು ಸಂಪೂರ್ಣವಾಗಿ ವಾಣಿಜ್ಯ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿರಬಹುದು. ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. 600 ಸೀಟುಗಳನ್ನು ಶಾಸಕರಿಗೆ ನೀಡಲು ಪಂದ್ಯವನ್ನು ಸ್ಥಳಾಂತರಿಸುತ್ತಾರೆಯೇ? ಹಾಗೇನಾದರೂ ಇದ್ದರೆ ವಿವರಗಳನ್ನು ಬಹಿರಂಗಪಡಿಸಲಿ. ಯಾರು ಎಷ್ಟು ಟಿಕೆಟ್ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಖಾರವಾಗಿ ಪ್ರತಿಕ್ರಯಿಸಿದರು.&lt;/p&gt;&lt;h2&gt;ವಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯೆ&lt;/h2&gt;&lt;p&gt;ಆರ್ಸಿಬಿ ಅಭಿಮಾನಿಗಳಿಗೆ ಮೋಸವಾಗಿದೆ ಎಂಬ ವಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಬಿಜೆಪಿ ಮತ್ತು ಜೆಡಿಎಸ್ ಕ್ರೀಡಾ ಕ್ಷೇತ್ರಕ್ಕೆ ಯಾವ ರೀತಿಯ ಸಹಕಾರ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾರು ಏನು ಮಾಡಿದ್ದಾರೆ ಎಂಬುದನ್ನು ಜನರು ಚೆನ್ನಾಗಿ ಅರಿತಿದ್ದಾರೆ ಎಂದು ತಿರುಗೇಟು ನೀಡಿದರು.&lt;/p&gt;&lt;p&gt;ಈ ಮೂಲಕ ಆರ್ಸಿಬಿ ಪಂದ್ಯ ಸ್ಥಳಾಂತರದ ವಿಚಾರದಲ್ಲಿ ಸರ್ಕಾರದ ಪಾತ್ರವಿಲ್ಲ ಎಂಬುದನ್ನು ಗೃಹ ಸಚಿವರು ಸ್ಪಷ್ಟಪಡಿಸಿದ್ದು, ಈ ನಿರ್ಧಾರ ಸಂಪೂರ್ಣವಾಗಿ ಬಿಸಿಸಿಐ ಮತ್ತು ಫ್ರಾಂಚೈಸಿಯ ವಾಣಿಜ್ಯ ಹಾಗೂ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದೆ ಎಂಬುದನ್ನು ಸ್ಪಷ್ಟಪಡಿಸಿದರು.&lt;/p&gt;&lt;h2&gt;ತಮಿಳುನಾಡು ರಾಜಕೀಯ ಬೆಳವಣಿಗೆಗಳ ಬಗ್ಗೆ&lt;/h2&gt;&lt;p&gt;ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಬೆಂಬಲ ಪತ್ರ ಕೇಳಿರುವ ವಿಚಾರಕ್ಕ ಪ್ರತಿಕ್ರಿಯಿಸಿದ ಸಚಿವರು ಸಂವಿಧಾನದಲ್ಲಿ ಈ ಸಂಬಂಧ ಕೆಲವು ವಿಧಿಗಳು ಸ್ಪಷ್ಟವಾಗಿವೆ. ರಾಜ್ಯಪಾಲರು ಕಾನೂನು ಮತ್ತು ಸಂವಿಧಾನದ ಪ್ರಕಾರವೇ ಕ್ರಮ ಕೈಗೊಳ್ಳುತ್ತಾರೆ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಬಹುದು ಎನ್ನುವ ಸಾಧ್ಯತೆ ಇದೆ ಎಂದರು.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/cricket-sports/no-role-of-karnataka-government-in-rcb-match-shift-to-ahmedabad-home-minister-g-parameshwara-gdp/articleshow-wiye310"/>
        </item>
        <item>
            <title><![CDATA[Bannerghatta aquarium project: ಬನ್ನೇರುಘಟ್ಟದಲ್ಲಿ ₹144.4 ಕೋಟಿ ವೆಚ್ಚದ, ವಿಶ್ವದರ್ಜೆಯ ಅಕ್ವೇರಿಯಂಗೆ ಸಚಿವ ಸಂಪುಟದ ಮಹತ್ವದ ನಿರ್ಧಾರ]]></title>
            <link>https://kannada.asianetnews.com/state/karnataka-cabinet-major-decision-for-a-rs-144-crore-world-class-aquarium-in-bannerghatta-bengaluru-rav/articleshow-exs5gui</link>
            <guid isPermaLink="true">https://kannada.asianetnews.com/state/karnataka-cabinet-major-decision-for-a-rs-144-crore-world-class-aquarium-in-bannerghatta-bengaluru-rav/articleshow-exs5gui</guid>
            <pubDate>Fri, 08 May 2026 09:57:20 +0530</pubDate>
            <description><![CDATA[&lt;p&gt;ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 144.4 ಕೋಟಿ ರು. ವೆಚ್ಚದಲ್ಲಿ ಸಾರ್ವಜನಿಕ ಮತ್ಸ್ಯಾಗಾರ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾಗಲಿರುವ ಈ ಅಕ್ವೇರಿಯಂ, ವಾಕ್&zwnj; ಥ್ರೂ ಸುರಂಗಗಳು ಮತ್ತು 5ಡಿ ಥಿಯೇಟರ್&zwnj;ನಂತಹ ಹಲವು ವಿಶೇಷ ಆಕರ್ಷಣೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2wwggdmzqaynw471qpeca6,imgname-----------------------2026-05-08t094724.861-1778213863949.jpg" type="image/jpeg" height="390" width="690"/>
            <content:encoded><![CDATA[&lt;p&gt;- ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ&lt;/p&gt;&lt;p&gt;- ಪಿಪಿಪಿ ಮಾದರಿಯಲ್ಲಿ ಕಾಮಗಾರಿ, ನಿರ್ವಹಣೆ&lt;/p&gt;&lt;p&gt;&lt;strong&gt;ಬೆಂಗಳೂರು (ಮೇ.8): &lt;/strong&gt;ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅತ್ಯಾಕರ್ಷಣೀಯ ಸಾರ್ವಜನಿಕ ಮತ್ಸ್ಯಾಗಾರವನ್ನು (ಅಕ್ವೇರಿಯಂ) 144.4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.&lt;/p&gt;&lt;p&gt;ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ (ಪಿಪಿಪಿ) 30 ವರ್ಷಗಳ ಅವಧಿಗೆ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಆಧಾರದ ಮೇಲೆ ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. ಮುಖ್ಯವಾಗಿ ಅಕ್ವೇರಿಯಂನಲ್ಲಿ ಅಕ್ವೇರಿಯಂ ಮೀನುಗಳು, ಸಿಹಿ ನೀರು, ಸಮುದ್ರ ಹಾಗೂ ಉಪ್ಪು ನೀರಿನ ಜಲಚರಗಳ ಆಕರ್ಷಕ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ.&amp;nbsp;&lt;/p&gt;&lt;p&gt;7.5 ಎಕರೆ ವಿಸ್ತೀರ್ಣದಲ್ಲಿರುವ ಅಕ್ವೇರಿಯಂನಲ್ಲಿ ಏಷ್ಯನ್&zwnj;, ಅಮೇಜಾನ್&zwnj;, ಆಫ್ರಿಕಾ, ಕೋರಲ್&zwnj; ರೀಫ್&zwnj;ಗಳ ಪ್ರದರ್ಶನ ಇರಲಿದೆ. ಜತೆಗೆ ಪಾರದರ್ಶಕ ವಾಕ್&zwnj; ಥ್ರೂ ಸುರಂಗಗಗಳನ್ನು ಮಾಡಲು ತೀರ್ಮಾನಿಸಲಾಗಿದೆ. 3ಡಿ, 4ಡಿ, 5ಡಿ ಇಮ್ಮರ್ಸಿವ್&zwnj; ಥಿಯೇಟರ್&zwnj;, ಗ್ಲಾಸ್&zwnj; ಬಾಟಮ್&zwnj; ಬೋಟ್&zwnj; ರೈಡ್&zwnj;, ಸ್ಕ್ಯೂಬಾ ಡೈವಿಂಗ್&zwnj;, ಅಂಡರ್&zwnj; ವಾಟರ್&zwnj; ಶೋ ಸಹ ಇರಲಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-cabinet-major-decision-for-a-rs-144-crore-world-class-aquarium-in-bannerghatta-bengaluru-rav/articleshow-exs5gui"/>
        </item>
        <item>
            <title><![CDATA[ರಾಜ್ಯದಲ್ಲಿ ಏಪ್ರಿಲ್‌ ತಿಂಗಳು ಎಣ್ಣೆ ಪಾರ್ಟಿ ರೆಕಾರ್ಡ್: 13ವರ್ಷದ ದಾಖಲೆ ಉಡೀಸ್! ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ]]></title>
            <link>https://kannada.asianetnews.com/state/karnataka-liquor-sales-hit-13-year-high-in-april-state-earns-rs-3688-crore-revenue-gdp/articleshow-4mak64v</link>
            <guid isPermaLink="true">https://kannada.asianetnews.com/state/karnataka-liquor-sales-hit-13-year-high-in-april-state-earns-rs-3688-crore-revenue-gdp/articleshow-4mak64v</guid>
            <pubDate>Fri, 08 May 2026 09:39:54 +0530</pubDate>
            <description><![CDATA[ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ ಮದ್ಯ ಮಾರಾಟವು ಕಳೆದ 13 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಐಎಂಎಲ್ ಮತ್ತು ಬಿಯರ್ ಎರಡರ ಮಾರಾಟದಲ್ಲೂ ಭಾರೀ ಏರಿಕೆ ಕಂಡಿದ್ದು, ಇದು ರಾಜ್ಯ ಸರ್ಕಾರದ ಆದಾಯವನ್ನು ಸಾವಿರಾರು ಕೋಟಿಗಳಷ್ಟು ಹೆಚ್ಚಿಸಿದೆ. ಗಡಿ ರಾಜ್ಯಗಳ ಚುನಾವಣೆಯು ಈ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಅಂದಾಜಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfcwezttavbd4p51deb5mch2,imgname-liquor-ban-1768885288794.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಲೆಯೇರಿಕೆಯ ನಡುವೆಯೂ ಕರ್ನಾಟಕದಲ್ಲಿ ಮದ್ಯ ಮಾರಾಟ ಹೊಸ ಗರಿಷ್ಠ ಮಟ್ಟ ತಲುಪಿದ್ದು, ಏಪ್ರಿಲ್ ತಿಂಗಳಲ್ಲಿ ಕಳೆದ 13 ವರ್ಷಗಳಲ್ಲಿಯೇ ಅತಿ ಹೆಚ್ಚು ಮಾರಾಟ ದಾಖಲಾಗಿದೆ. ಈ ಮೂಲಕ ರಾಜ್ಯದ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಹೊಸ ದಾಖಲೆ ಆಗಿದೆ.&lt;/p&gt;&lt;p&gt;ಅಧಿಕೃತ ಅಂಕಿ-ಅಂಶಗಳ ಪ್ರಕಾರ, ವಿಸ್ಕಿ, ಬ್ರಾಂಡಿ, ರಮ್ ಮತ್ತು ಜಿನ್ ಸೇರಿದಂತೆ ಐಎಂಎಲ್ (Indian Made Liquor) ಮದ್ಯವು ಏಪ್ರಿಲ್ ತಿಂಗಳಲ್ಲಿ ಒಟ್ಟು 68.17 ಲಕ್ಷ ಬಾಕ್ಸ್ ಮಾರಾಟವಾಗಿದೆ. ಒಂದು ಬಾಕ್ಸ್&zwnj;ನಲ್ಲಿ ಸರಾಸರಿ 8.64 ಲೀಟರ್ ಮದ್ಯ ಇರುವುದರಿಂದ, ಇದು ಅತ್ಯಂತ ಭಾರೀ ಪ್ರಮಾಣದ ಬಳಕೆಯನ್ನು ಸೂಚಿಸುತ್ತದೆ. ಇದೇ ವೇಳೆ, ಬಿಯರ್ ಮಾರಾಟವೂ ದಾಖಲೆ ಮಟ್ಟಕ್ಕೇರಿದ್ದು, ಏಪ್ರಿಲ್&zwnj;ನಲ್ಲಿ 50.39 ಲಕ್ಷ ಬಾಕ್ಸ್ (ಒಂದು ಬಾಕ್ಸ್&zwnj;ಗೆ 7.80 ಲೀಟರ್) ಬಿಯರ್ ಮಾರಾಟವಾಗಿದೆ.&lt;/p&gt;&lt;h2&gt;13 ವರ್ಷಗಳಲ್ಲೇ ಅತಿ ದೊಡ್ಡ ಸಾಧನೆ&lt;/h2&gt;&lt;p&gt;2013ರಿಂದ ಇಂದಿನವರೆಗೂ ಯಾವುದೇ ತಿಂಗಳಲ್ಲಿ ಈ ಮಟ್ಟದ ಮದ್ಯ ಮಾರಾಟ ದಾಖಲಾಗಿರಲಿಲ್ಲ. ಇದುವರೆಗೆ 2023ರ ಜುಲೈನಲ್ಲಿ 66.22 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದೇ ಗರಿಷ್ಠ ದಾಖಲೆ ಆಗಿತ್ತು. ಆದರೆ, ಈ ವರ್ಷ ಏಪ್ರಿಲ್ ತಿಂಗಳ ಮಾರಾಟ ಆ ದಾಖಲೆಗೂ ಮೀರಿದ್ದು, ಹೊಸ ಇತಿಹಾಸ ನಿರ್ಮಾಣವಾಗಿದೆ. ಹಿಂದಿನ ವರ್ಷದ ಹೋಲಿಕೆಯಲ್ಲಿ ಗಮನಿಸಿದರೆ, 2025ರ ಏಪ್ರಿಲ್&zwnj;ನಲ್ಲಿ 57.44 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಅದು 68.17 ಲಕ್ಷ ಬಾಕ್ಸ್&zwnj;ಗೆ ಏರಿಕೆಯಾಗಿ ಗಮನಾರ್ಹ ಏರಿಕೆಯನ್ನು ಕಂಡಿದೆ.&lt;/p&gt;&lt;h2&gt;ಬಿಯರ್ ಮಾರಾಟದಲ್ಲೂ ಭಾರೀ ಏರಿಕೆ&lt;/h2&gt;&lt;p&gt;ಬಿಯರ್ ವಿಭಾಗದಲ್ಲಿಯೂ ಇದೇ ರೀತಿಯ ಟ್ರೆಂಡ್ ಕಂಡುಬಂದಿದೆ. 2025ರ ಏಪ್ರಿಲ್&zwnj;ನಲ್ಲಿ 41.60 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಈ ಬಾರಿ ಅದು 50.39 ಲಕ್ಷ ಬಾಕ್ಸ್&zwnj;ಗೆ ಏರಿಕೆಯಾಗಿದೆ. ಅಂದರೆ, ಶೇ.21.13ರಷ್ಟು ವೃದ್ಧಿ ದಾಖಲಾಗಿದೆ.&lt;/p&gt;&lt;h2&gt;ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ&lt;/h2&gt;&lt;p&gt;ಈ ಭಾರೀ ಮಾರಾಟದ ಪರಿಣಾಮವಾಗಿ ರಾಜ್ಯ ಸರ್ಕಾರದ ಖಜಾನೆಗೆ ದೊಡ್ಡ ಮಟ್ಟದ ಆದಾಯ ಹರಿದು ಬಂದಿದೆ. ಕಳೆದ ವರ್ಷದ ಏಪ್ರಿಲ್&zwnj;ನಲ್ಲಿ ಮದ್ಯ ಮಾರಾಟದಿಂದ ಸುಮಾರು ₹2,904 ಕೋಟಿ ರಾಜಸ್ವ ಸಂಗ್ರಹವಾಗಿದ್ದರೆ, ಈ ಬಾರಿ ಅದು ಏರಿಕೆಯಾಗಿ ಸುಮಾರು ₹3,688 ಕೋಟಿಗೆ ತಲುಪಿದೆ. ಅಂದರೆ, ಒಂದು ತಿಂಗಳಲ್ಲೇ ಸಾವಿರಾರು ಕೋಟಿ ರೂಪಾಯಿ ಆದಾಯ ಸರ್ಕಾರಕ್ಕೆ ಲಭಿಸಿದೆ.&lt;/p&gt;&lt;h2&gt;ಮಾರಾಟ ಹೆಚ್ಚಳಕ್ಕೆ ಕಾರಣಗಳೇನು?&lt;/h2&gt;&lt;p&gt;ಮದ್ಯ ಮಾರಾಟದಲ್ಲಿ ಏರಿಕೆಗೆ ಹಲವು ಕಾರಣಗಳು ಸೂಚಿಸಲಾಗುತ್ತಿವೆ. ಮುಖ್ಯವಾಗಿ, ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಏಪ್ರಿಲ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆದ ಹಿನ್ನೆಲೆ, ಮತದಾನದ ಮುನ್ನ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇದರ ಪರಿಣಾಮವಾಗಿ, ಆ ರಾಜ್ಯಗಳಿಗೆ ಹೊಂದಿಕೊಂಡ ಗಡಿಭಾಗಗಳಲ್ಲಿ ಕರ್ನಾಟಕದ ಮದ್ಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಬೆಲೆ ಏರಿಕೆ ಇದ್ದರೂ ಮದ್ಯದ ಬೇಡಿಕೆ ಕಡಿಮೆಯಾಗಿಲ್ಲ ಎನ್ನುವುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತಿದೆ. ಅಬಕಾರಿ ಇಲಾಖೆಗೆ ಇದು ದೊಡ್ಡ ಮಟ್ಟದ ಆದಾಯದ ಮೂಲವಾಗಿದ್ದು, ಸರ್ಕಾರದ ಆರ್ಥಿಕ ಸ್ಥಿತಿಗೂ ಸಹಾಯವಾಗುತ್ತಿದೆ. ಏಪ್ರಿಲ್ ತಿಂಗಳ ಈ ದಾಖಲೆ ಮಾರಾಟ ಮುಂದಿನ ತಿಂಗಳಲ್ಲಿ ಮುಂದುವರಿಯುತ್ತದೆಯೇ ಎಂಬುದು ಈಗ ಕುತೂಹಲದ ವಿಷಯವಾಗಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-liquor-sales-hit-13-year-high-in-april-state-earns-rs-3688-crore-revenue-gdp/articleshow-4mak64v"/>
        </item>
        <item>
            <title><![CDATA[ಕಾರ್ಮಿಕರ ಕಲ್ಯಾಣ ಮಂಡಳಿ ಇನ್ನು ಸಾರಿಗೆ ಇಲಾಖೆ ವ್ಯಾಪ್ತಿಗೆ; - ರಾಜ್ಯ ಸಚಿವ ಸಂಪುಟದಿಂದ ಮಹತ್ವದ ನಿರ್ಧಾರ!]]></title>
            <link>https://kannada.asianetnews.com/state/labour-welfare-board-now-under-transport-department-major-decision-by-karnataka-govt-rav/articleshow-i44w696</link>
            <guid isPermaLink="true">https://kannada.asianetnews.com/state/labour-welfare-board-now-under-transport-department-major-decision-by-karnataka-govt-rav/articleshow-i44w696</guid>
            <pubDate>Fri, 08 May 2026 09:33:31 +0530</pubDate>
            <description><![CDATA[&lt;p&gt;ಕಾರ್ಮಿಕ ಇಲಾಖೆಯಡಿಯಲ್ಲಿದ್ದ ಕರ್ನಾಟಕ ಮೋಟಾರು ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸಾರಿಗೆ ಇಲಾಖೆ ವ್ಯಾಪ್ತಿಗೆ ತರಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ತಿದ್ದುಪಡಿಯಿಂದಾಗಿ, ಸಾರಿಗೆಯೇತರ ವಾಹನಗಳಿಂದ ಸಂಗ್ರಹಿಸಿದ ಸೆಸ್ ನಿಧಿಯನ್ನು &amp;nbsp;ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2vwaefdrf278mb6sj690er,imgname-----------------------2026-05-08t092954.550-1778212809167.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಮೇ.8) &lt;/strong&gt;ಸಾರಿಗೆ ವ್ಯಾಪ್ತಿಗೆ ಬರುವ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯಡಿ ರಚಿಸಿರುವ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಮಂಡಳಿಯನ್ನು ಸಾರಿಗೆ ಇಲಾಖೆ ವ್ಯಾಪ್ತಿಗೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.&lt;/p&gt;&lt;p&gt;&lsquo;ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ (ತಿದ್ದುಪಡಿ) ವಿಧೇಯಕ- 2026&rsquo; ಅಡಿ ಸಾರಿಗೆಯೇತರ ವಾಹನಗಳಿಂದ ಸಂಗ್ರಹಿಸುವ ನಿಧಿಯನ್ನು ಸಾರಿಗೆ ಇಲಾಖೆ ಮೂಲಕವೇ ಬಳಸಲು ಸಚಿವ ಸಂಪುಟ ತೀರ್ಮಾನಿಸಿದೆ.&lt;/p&gt;&lt;p&gt;ಪ್ರಸ್ತುತ ವಿಧೇಯಕದಡಿ ಸಾರಿಗೆ ಇಲಾಖೆ ಸಾರಿಗೆಯೇತರ (ವಾಣಿಜ್ಯ) ವಾಹನಗಳಿಂದ ಸೆಸ್&zwnj; ಸಂಗ್ರಹಿಸಿ, ಅದನ್ನು ಕಾರ್ಮಿಕ ಇಲಾಖೆ ಅಡಿ ಬರುವ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಮಂಡಳಿಗೆ ನೀಡುತ್ತಿತ್ತು. ಮಂಡಳಿಯು ಸಾರಿಗೆ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈಗ ಆ ಮಂಡಳಿಯನ್ನು ಸಾರಿಗೆ ಇಲಾಖೆ ಅಧೀನಕ್ಕೆ ತರುವ ಸಂಬಂಧ ಅಗತ್ಯ ತಿದ್ದುಪಡಿ ತರಲಾಗಿದೆ.&lt;/p&gt;&lt;p&gt;ತಿದ್ದುಪಡಿಯಿಂದಾಗಿ ಇನ್ನು ಮುಂದೆ ಸಾರಿಗೆ ಇಲಾಖೆ ಸಂಗ್ರಹಿಸುವ ನಿಧಿಯಿಂದ ಸಾರಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಸಾರಿಗೆ ಇಲಾಖೆಯೇ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್&zwnj;.ಕೆ. ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.&lt;/p&gt;&lt;p&gt;ಪ್ರಸ್ತುತ ವಿಧೇಯಕದಡಿ ಸಾರಿಗೆಯೇತರ ವಾಹನಗಳಾದ ದ್ವಿಚಕ್ರ ಮತ್ತು ಕಾರುಗಳಿಗೆ ಕ್ರಮವಾಗಿ 500 ರು. ಹಾಗೂ ಸಾವಿರ ರು. ಸೆಸ್&zwnj; ವಿಧಿಸಲಾಗುತ್ತಿದೆ. 2025ರ ಏಪ್ರಿಲ್&zwnj;ನಿಂದ ಡಿಸೆಂಬರ್&zwnj;ವರೆಗೆ ವಾಹನಗಳ ಮೇಲೆ ಶೇ.3ರಂತೆ ವಿಧಿಸಿದ ಹೆಚ್ಚುವರಿ ಸೆಸ್&zwnj; ಹಾಗೂ ದ್ವಿಚಕ್ರ ಮತ್ತು ಕಾರುಗಳಿಗೆ ವಿಧಿಸಲಾದ ಸೆಸ್&zwnj;ನಿಂದ ಒಟ್ಟಾರೆ 92.25 ಕೋಟಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/labour-welfare-board-now-under-transport-department-major-decision-by-karnataka-govt-rav/articleshow-i44w696"/>
        </item>
        <item>
            <title><![CDATA[ದುರಂತದ ಬಳಿಕ ಎಚ್ಚೆತ್ತ ಬೆಂಗಳೂರು, 350 ಕಟ್ಟಡ ಧ್ವಂಸಕ್ಕೆ ಜಿಬಿಎ ಆಯುಕ್ತರ ನೋಟಿಸ್]]></title>
            <link>https://kannada.asianetnews.com/state/bengaluru-cracks-down-after-tragedy-gba-commissioner-issues-notices-to-350-buildings/articleshow-ig3xty6</link>
            <guid isPermaLink="true">https://kannada.asianetnews.com/state/bengaluru-cracks-down-after-tragedy-gba-commissioner-issues-notices-to-350-buildings/articleshow-ig3xty6</guid>
            <pubDate>Fri, 08 May 2026 09:20:07 +0530</pubDate>
            <description><![CDATA[&lt;p&gt;ದುರಂತದ ಬಳಿಕ ಎಚ್ಚೆತ್ತ ಬೆಂಗಳೂರು, 350 ಕಟ್ಟಡ ಧ್ವಂಸಕ್ಕೆ ಜಿಬಿಎ ಆಯುಕ್ತರ ನೋಟಿಸ್, ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಹಗೂ ಕಟ್ಟಡಗಳು ಮಳೆಗೆ ಧರೆಗುರುಳಿ ಅನಾಹುತ ಸಂಭವಿಸುವ ಮೊದಲೇ ಧ್ವಂಸಗೊಳಿಸಲು ಸೂಚಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcrth3ekkx3q5mppgq40jhb,imgname-2-1777471407214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.08) &lt;/strong&gt;ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಒಂದು ಮಳೆಗೆ ಭಾರಿ ಅನಾಹುತ ಸಂಭವಿಸಿತ್ತು. ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಬಳಿಯ ಕಾಂಪೌಂಡ್ ಕುಸಿದು 7 ಮಂದಿ ಮೃತಪಟ್ಟಿದ್ದರು. ಇತ್ತ ವಿದ್ಯುತ್ ಸ್ಪರ್ಶಿಸಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ದುರಂತ ಘಚನೆ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಚ್ಚೆತ್ತುಕೊಂಡಿದೆ. ಇದೀಗ ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಹಾಗೂ ಕಟ್ಟಡಗಳನ್ನು ಧ್ವಂಸಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನೋಟಿಸ್ ನೀಡಿದೆ.&lt;/p&gt;&lt;h2&gt;ಬೃಹತ್ ಬೆಂಗಳೂರಿನ 350 ಕಟ್ಟಡ ಧ್ವಂಸ ಮಾಡಲು ಜಿಬಿಎ ನೋಟಿಸ್&lt;/h2&gt;&lt;p&gt;ಬೆಂಗಳೂರಿನಲ್ಲಿರುವ 350 ಕಟ್ಟಡಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಈ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ತಕ್ಷಣವೇ ಈ ಕಟ್ಟಡಗಳನ್ನು ಧ್ವಂಸಗೊಳಿಸಲು ಸೂಚಿಸಲಾಗಿದೆ. ಗುರುತಿಸಿರುವ 350 ಕಟ್ಟಡಗಳ ಪೈಕಿ ಹಲವು ಕಟ್ಟಡಗಳಲ್ಲಿ ಜನರ ವಸತಿ ಇದೆ. ಕೆಲ ಕಟ್ಟಡಗಳಲ್ಲಿ ಅಂಗಡಿ ಮುಂಗಟ್ಟುಗಳಿವೆ. ಈ ಕಟ್ಟಡಗಳು ಅಪಾಯಕಾರಿಯಾಗಿದ್ದು, ಭಾರಿ ಮಳೆಗೆ ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಹೀಗಾಗಿ ಈ 350 ಕಟ್ಟಡಗಳನ್ನು ಧ್ವಂಸಗೊಳಿಸಲು ಸೂಚಿಸಲಾಗಿದೆ.&lt;/p&gt;&lt;h2&gt;ಜಿಬಿಎ ಆಯುಕ್ತರ ನೋಟಿಸ್&lt;/h2&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಉರುಳಿದ ಮೇಲೆ ಶಿಥಿಲಾವಸ್ಥೆ ಕಟ್ಟಡಗಳ ತೆರವು ಕಾರ್ಯಾಚಣೆ ಆರಂಭಿಸಿದೆ. ಈ ಕುರಿತು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಹತ್ವದ ನೋಟಿಸ್ ನೀಡಿದ್ದಾರೆ.ನೋಟಿಸ್ ಕಾಲವಾಧಿ ಒಳಗೆ ಶಿಥಿಲಾವಸ್ಥೆ ಕಟ್ಟಡ ಧ್ವಂಸಗೊಳಿಸಬೇಕು ಇಲ್ಲವೇ ಜಿಬಿಎ ತಂಡವೇ ಆ ಕೆಲಸ ಮಾಡಿ ಶುಲ್ಕ ವಿಧಿಸಲಿದೆ ಎಂದು ಮಹೇಶ್ವರ್ ರಾವ್ ಎಚ್ಚರಿಸಿದ್ದಾರೆ. ಮಳೆಯಲ್ಲಿ ಉರುಳಿಬಿದ್ದು ಜನರ ಸಾವು ನೋವಾಗುವ ಮುನ್ನವೇ ಎಚ್ಚೆತ್ತುಕೊಂಡ ಸಹಕರಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮನವಿ ಮಾಡಿದ್ದಾರೆ.&lt;/p&gt;&lt;h2&gt;15 ಕಾಂಪೌಂಡ್ ತೆರೆವು&lt;/h2&gt;&lt;p&gt;ಬೌರಿಂಗ್ ಆಸ್ಪತ್ರೆ ಬಳಿಯ ಕಾಂಪೌಂಡ್ ಕುಸಿತ ಘಟನೆ ಬಳಿಕ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಈಗಾಗಲೇ 15 ಶಿಥಿಲಾವಸ್ಥೆಯ ಕಾಂಪೌಂಡ್ ತೆರವುಗೊಳಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು ದಕ್ಷಿಣ ಪಾಲಿಕೆಯಲ್ಲೇ ಅತಿ ಹೆಚ್ಚು ಹಳೇ ಕಟ್ಟಡ ಪತ್ತೆಯಾಗಿದೆ. ಹಳೇ ಕಟ್ಟಡಗಳು ಕುಸಿದು ಬೀಳುವ ಆತಂಕದಲ್ಲಿದ್ದರೂ ಕಾರ್ಯನಿರ್ವಹಿಸುತ್ತಿದೆ. ಇದು ಮತ್ತಷ್ಟು ಅಪಾಯಕ್ಕೆ ದಾರಿ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪಾಲಿಕೆವಾರು ಶಿಥಿಲಾವಸ್ಥೆ ಕಟ್ಟಡಗಳ ಮಾಹಿತಿ ಹೀಗಿದೆ&lt;/p&gt;&lt;ol&gt; &lt;li&gt;ಬೆಂಗಳೂರು ದಕ್ಷಿಣ ಪಾಲಿಕೆ - 106&lt;/li&gt; &lt;li&gt;ಬೆಂಗಳೂರು ಉತ್ತರ ಪಾಲಿಕೆ - 84&lt;/li&gt; &lt;li&gt;ಬೆಂಗಳೂರು ಕೇಂದ್ರ ಪಾಲಿಕೆ - 49&lt;/li&gt; &lt;li&gt;ಬೆಂಗಳೂರು ಪೂರ್ವ ಪಾಲಿಕೆ - 51&lt;/li&gt; &lt;li&gt;ಬೆಂಗಳೂರು ಪಶ್ಚಿಮ ಪಾಲಿಕೆ - 60&lt;/li&gt;&lt;/ol&gt;&lt;p&gt;&amp;nbsp;&lt;/p&gt;]]></content:encoded>
            <category>state</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bengaluru-cracks-down-after-tragedy-gba-commissioner-issues-notices-to-350-buildings/articleshow-ig3xty6"/>
        </item>
        <item>
            <title><![CDATA[ಕರ್ನಾಟಕದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರಲ್ಲಿ ಮೇ.11ರ ವರೆಗೆ ಭಾರಿ ಮಳೆ]]></title>
            <link>https://kannada.asianetnews.com/gallery/state/karnataka-weather-update-yellow-alert-in-18-districts-bengaluru-to-receive-heavy-rain-ag24zb1</link>
            <guid isPermaLink="true">https://kannada.asianetnews.com/gallery/state/karnataka-weather-update-yellow-alert-in-18-districts-bengaluru-to-receive-heavy-rain-ag24zb1</guid>
            <pubDate>Fri, 08 May 2026 08:45:31 +0530</pubDate>
            <description><![CDATA[&lt;p&gt;ಕರ್ನಾಟಕದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರಲ್ಲಿ ಮೇ.11ರ ವರೆಗೆ ಭಾರಿ ಮಳೆ, ಇಂದು ಮುಂಜಾನೆಯಿಂದಲೇ ಹಲೆವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಅಲರ್ಟ್ ಮೆಸೇಜ್ ಬಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1qyk96cmm1cafcc3k7nvbe3,imgname-rain-1754224239820.png" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರಲ್ಲಿ ಮೇ.11ರ ವರೆಗೆ ಭಾರಿ ಮಳೆ, ಇಂದು ಮುಂಜಾನೆಯಿಂದಲೇ ಹಲೆವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಅಲರ್ಟ್ ಮೆಸೇಜ್ ಬಂದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರ್ನಾಟಕದ ಬಹುತೇಕ ಜಿಲ್ಲೆಗಳು ಉರಿ ಬಿಸಿಲಿನಿಂದ ತತ್ತರಿಸಿ ಹೋಗಿದೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ಮಳೆಯಾಗಿದ್ದರು ಭೂಮಿ ತಂಪಾಗಿಲ್ಲ. ಇದೀಗ ಹವಾಮಾನ ಇಲಾಖೆ ಭಾರಿ ಮಳೆ ಮುನ್ಸೂಚನೆ ನೀಡಿದೆ. ಇಂದಿನಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸೂಚನೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಇಂದು ರಾಜ್ಯದ 18 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಮೂಲಕ ಭಾರಿ ಮಳೆ ಸೂಚನೆ ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಇಂದಿನಿಂದ ಭಾರಿ ಮಳೆಯಾಗಲಿದೆ ಎಂದಿದೆ.&lt;/p&gt;&lt;img&gt;&lt;p&gt;ಬೆಳಗಾವಿ, ಬಾಗಲಕೋಟೆ, ರಾಯಚೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಧಾರವಾಡ, ಕೊಪ್ಪಳ, ಹಾವೇರಿ, ದಾವಣಗೆರೆ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಇಂದಿನಿಂದ ಮೇ 11ರ ವರಗೆ ಬೆಂಗಳೂರಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಆದರೆ ಇದು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಯಾವುದೇ ಅಲರ್ಟ್ ಸೂಚನೆ ನೀಡಿಲ್ಲ. ಆದರೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಸುರಿದ ಮೊದಲ ಮಳೆಗೆ ಬೆಂಗಳೂರಿನಲ್ಲಿ ಭಾರಿ ಅನಾಹುತ ಸಂಭವಿಸಿತ್ತು. ಬೌರಿಂಗ್ ಆಸ್ಪತ್ರೆ ಬಳಿಕ ಗೋಡೆ ಕುಸಿದು ಹಲವರು ಬಲಿಯಾಗಿದ್ದರು. ಇತ್ತ ವಿದ್ಯುತ್ ಸ್ಪರ್ಶಿಸಿ ಕೆಲವರು ಬಲಿಯಾಗಿದ್ದರು. ಹೀಗಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದ್ದು, ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.&lt;/p&gt;&lt;h2&gt;ಬೆಂಗಳೂರಲ್ಲಿ ಅಧಿಕಾರಿಗಳು ಅಲರ್ಟ್&lt;/h2&gt;]]></content:encoded>
            <category>state</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/karnataka-weather-update-yellow-alert-in-18-districts-bengaluru-to-receive-heavy-rain-ag24zb1"/>
        </item>
        <item>
            <title><![CDATA[ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರ]]></title>
            <link>https://kannada.asianetnews.com/gallery/state/bus-driver-suffers-heart-attack-while-driving-near-madikeri-condition-critical-395msov</link>
            <guid isPermaLink="true">https://kannada.asianetnews.com/gallery/state/bus-driver-suffers-heart-attack-while-driving-near-madikeri-condition-critical-395msov</guid>
            <pubDate>Fri, 08 May 2026 08:22:08 +0530</pubDate>
            <description><![CDATA[&lt;p&gt;ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2qhgw23rqf34v2mmcje0wr,imgname-madikeri-accident-1778208260994.png" type="image/jpeg" height="390" width="690"/>
            <content:encoded><![CDATA[&lt;p&gt;ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.&lt;/p&gt;&lt;img&gt;&lt;p&gt;ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಬಸ್ ಅಪಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಬಸ್ ರಸ್ತೆ ಪಕ್ಕಕ್ಕೆ ಇಳಿದು ವಾಲಿಕೊಂಡು ನಿಂತಿದೆ. ಅದೃಷ್ಠವಶಾತ್ ಅನಾಹುತ ಸಂಭವಿಸಿಲ್ಲ.&lt;/p&gt;&lt;img&gt;&lt;p&gt;ಚಾಲಕನಿಗೆ ತೀವ್ರ ಹೃದಯಘಾತ ಸಂಭವಿಸಿದೆ. ಆದರೆ ಬಸ್ ರಸ್ತೆಯ ಬದಿಗೆ ಇಳಿದ ಚಾಲಕ ಹಲವರ ಪ್ರಾಣ ಕಾಪಾಡಿದ್ದಾನೆ. ಇತ್ತ ಚಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಚಾಲಕನನ್ನು ಮಡಿಕೇರಿ ಬಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ತನಗೆ ಹೃದಯಘಾತವಾಗುತ್ತಿದ್ದಂತೆ ಬಸ್ ಚಾಲಕನ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಅಷ್ಟೊರಳಗೆ ತೀವ್ರವಾಗಿ ಹೃದಯಾಘಾತವಾಗಿದೆ. ಆಧರೂ ಬಸ್ ಚರಂಡಿಯತ್ತ ಇಳಿಸಿದ್ದಾನೆ. ಇದರಿಂದ ಬಸ್ ವಾಲಿಕೊಂಡು ನಿಂತಿದೆ. ಇದರ ಪರಿಣಾಮ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.&lt;/p&gt;&lt;img&gt;&lt;p&gt;ನಿನ್ನೆ (ಮೇ.07) ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಪ್ರಯಾಣಿಕರ ಹೊತ್ತು ಸಾಗಿತ್ತು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪರಿಣಾಮ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಮಡಿಕೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;img&gt;&lt;p&gt;ರಸ್ತೆ ಬದಿಯಲ್ಲಿ ಬಸ್ ವಾಲಿಕೊಂಡು ನಿಂತ ಕಾರಣ ಹೆದ್ದಾರಿಯಲ್ಲಿ ಇತರ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಿಲ್ಲ. ಇತ್ತ ಬಸ್&zwnj;ನಲ್ಲಿದ್ದ ಪ್ರಯಾಣಿಕರು ಕೆಲ ಕಾಲ ಆತಂಕಗೊಂಡಿದ್ದರು. ಪ್ರಯಾಣಿಕರಿಗೆ ಇತರ ವಾಹನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.&lt;/p&gt;]]></content:encoded>
            <category>state</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/bus-driver-suffers-heart-attack-while-driving-near-madikeri-condition-critical-395msov"/>
        </item>
        <item>
            <title><![CDATA[Adidwara app ವಿಶೇಷಚೇತನರಿಗೆ ಗುಡ್‌ನ್ಯೂಸ್: ಉದ್ಯೋಗಕ್ಕಾಗಿ ಸರ್ಕಾರದಿಂದಲೇ ‘ಆದಿದ್ವಾರ’ ಆ್ಯಪ್‌]]></title>
            <link>https://kannada.asianetnews.com/state/government-s-adidvara-app-for-employment-of-persons-with-disabilities-rav/articleshow-9ydar7k</link>
            <guid isPermaLink="true">https://kannada.asianetnews.com/state/government-s-adidvara-app-for-employment-of-persons-with-disabilities-rav/articleshow-9ydar7k</guid>
            <pubDate>Fri, 08 May 2026 08:03:46 +0530</pubDate>
            <description><![CDATA[ವಿಶೇಷ ಚೇತನರಿಗೆ ಉದ್ಯೋಗ ಮತ್ತು ಕೌಶಲ್ಯ ವೇದಿಕೆ ಒದಗಿಸುವ 'ಆದಿದ್ವಾರ' ಆ್ಯಪ್ ಬಿಡುಗಡೆಯಾಗಿದೆ. ಇದರೊಂದಿಗೆ, ಆಗಸ್ಟ್&zwnj;ನಲ್ಲಿ ಬೆಂಗಳೂರಿನಲ್ಲಿ ದಿವ್ಯಾಂಗರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್&zwnj; ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr2ppsjt8vcy50hxtk59f0cn,imgname-----------------------2026-05-08t075514.505-1778207385178.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.8): &lt;/strong&gt;ವಿಶೇಷ ಚೇತನರಿಗೆ ಉದ್ಯೋಗಾವಕಾಶಗಳು ಮತ್ತು ಕೌಶಲ್ಯಾಭಿವೃದ್ಧಿಗೆ ವೇದಿಕೆ ಒದಗಿಸುವ &lsquo;ಆದಿದ್ವಾರ&rsquo; ಅಪ್ಲಿಕೇಶನ್ ಅನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.&amp;nbsp;&lt;/p&gt;&lt;p&gt;ಅಸಿಸ್ಟೆಕ್ ಫೌಂಡೇಶನ್ (ಎಟಿಎಫ್) ಸಹಯೋಗದೊಂದಿಗೆ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್&zwnj; ಈ ಆ್ಯಪ್&zwnj; ಬಿಡುಗಡೆ ಮಾಡಿದರು. ಇದೇ ವೇಳೆ, ಬರುವ ಆಗಸ್ಟ್&zwnj;ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿಶೇಷಚೇತನರಿಗಾಗಿ (ಪಿಡಬ್ಲ್ಯುಡಿಗಳು) ವಿಶೇಷ ಉದ್ಯೋಗ ಮೇಳ ನಡೆಸುವುದಾಗಿ ಘೋಷಿಸಿ, ಉದ್ಯೋಗ ಮೇಳದ ಅಧಿಕೃತ ಲೋಗೋ ಅನಾವರಣಗೊಳಿಸಿದರು.&lt;/p&gt;&lt;h2&gt;ಸಮಾನ ಅವಕಾಶ ನೀಡಬೇಕು:&lt;/h2&gt;&lt;p&gt;ಬಳಿಕ ಮಾತನಾಡಿದ ಅವರು, ಆದಿದ್ವಾರ ವೇದಿಕೆಯು ಉದ್ಯೋಗಾವಕಾಶಗಳು, ಇಂಟರ್ನ್&zwnj;ಶಿಪ್&zwnj;ಗಳು, ಕೌಶಲ್ಯ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುತ್ತದೆ. ಉದ್ಯೋಗದಾತರು ಸಮಗ್ರ ಉದ್ಯೋಗ ಪಾತ್ರಗಳನ್ನು ಪೋಸ್ಟ್ ಮಾಡಲು ನೆರವಾಗಲಿದೆ. ದಿವ್ಯಾಂಗರು ಯಾರಿಗೂ ಕಡಿಮೆ ಇಲ್ಲ. ಅವರಿಗೆ ವಿಶೇಷ ಪ್ರತಿಭೆ ಇರುತ್ತದೆ. ಕಾರ್ಪೊರೇಟ್&zwnj; ಸಂಸ್ಥೆಗಳು ನೇಮಕಾತಿ ಸಮಯದಲ್ಲಿ ಅವರಿಗೆ ಸಮಾನ ಅವಕಾಶ ನೀಡಬೇಕು ಎಂದು ಹೇಳಿದರು.&lt;/p&gt;&lt;p&gt;ಉದ್ಯೋಗ ಮೇಳದಲ್ಲಿ 3,000ಕ್ಕೂ ಹೆಚ್ಚು ಅಂಗವಿಕಲ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ. ತರಬೇತಿ ಪಾಲುದಾರರು ಮತ್ತು ಸಹಾಯಕ ತಂತ್ರಜ್ಞಾನ ಸ್ಟಾರ್ಟ್&zwnj;ಅಪ್&zwnj;ಗಳೊಂದಿಗೆ ಸಂಪರ್ಕಿಸಲು ದೊಡ್ಡ ವೇದಿಕೆ ಸಿಗಲಿದೆ. ವೃತ್ತಿ ಮಾರ್ಗದರ್ಶನ ಅವಧಿಗಳು, ಕೌಶಲ್ಯ ಮಾರ್ಗ ಜಾಗೃತಿ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.&lt;/p&gt;&lt;p&gt;ವಿಧಾನ ಪರಿಷತ್&zwnj; ಸದಸ್ಯ ಸುಧಾಮ್ ದಾಸ್, ಎಟಿಎಫ್ ಸಿಇಒ ಪ್ರತೀಕ್ ಮಾಧವ್ ಸೇರಿ ಇತರೆ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;&lt;p&gt;- ಆಗಸ್ಟ್&zwnj;ನಲ್ಲಿ ದಿವ್ಯಾಂಗರಿಗೆ ವಿಶೇಷ ಉದ್ಯೋಗ ಮೇಳ&lt;/p&gt;&lt;p&gt;- ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜನೆ&lt;/p&gt;&lt;p&gt;- ಲೋಗೋ ಬಿಡುಗಡೆ ಮಾಡಿದ ಸಚಿವ ಡಾ.ಶರಣ ಪ್ರಕಾಶ್&zwnj;&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/government-s-adidvara-app-for-employment-of-persons-with-disabilities-rav/articleshow-9ydar7k"/>
        </item>
        <item>
            <title><![CDATA[ರಾಯಚೂರು ಲೇಡಿ ಕಾನ್ಸ್‌ಸ್ಟೇಬಲ್ ಜೊತೆ ಯಾದಿಗಿರಿ ಪಿಎಸ್ಐ ಲವ್ ಸೆಕ್ಸ್ ದೋಖಾ, ಬಂಧನ ಭೀತಿ]]></title>
            <link>https://kannada.asianetnews.com/gallery/state/karnataka-cop-controversy-yadgir-psi-faces-arrest-fear-in-relationship-case-va7nocg</link>
            <guid isPermaLink="true">https://kannada.asianetnews.com/gallery/state/karnataka-cop-controversy-yadgir-psi-faces-arrest-fear-in-relationship-case-va7nocg</guid>
            <pubDate>Fri, 08 May 2026 07:55:34 +0530</pubDate>
            <description><![CDATA[&lt;p&gt;ರಾಯಚೂರು ಲೇಡಿ ಕಾನ್ಸ್&zwnj;ಸ್ಟೇಬಲ್ ಜೊತೆ ಯಾದಿಗಿರಿ ಪಿಎಸ್ಐ ಲವ್ ಸೆಕ್ಸ್ ದೋಖಾ, ಈ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ಮಹಿಳಾ ಪೇದಿ ದೂರು ನೀಡಿದ್ದು, ಇದೀಗ ಇಡೀ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಪಿಎಸ್ಐ ವಿರುದ್ಧ ಹಲವು ಕೇಸ್ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2p55ceyqwt0y80skhb4ybs,imgname-raichuru-police-case-1778206807437.png" type="image/jpeg" height="390" width="690"/>
            <content:encoded><![CDATA[&lt;p&gt;ರಾಯಚೂರು ಲೇಡಿ ಕಾನ್ಸ್&zwnj;ಸ್ಟೇಬಲ್ ಜೊತೆ ಯಾದಿಗಿರಿ ಪಿಎಸ್ಐ ಲವ್ ಸೆಕ್ಸ್ ದೋಖಾ, ಈ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ಮಹಿಳಾ ಪೇದಿ ದೂರು ನೀಡಿದ್ದು, ಇದೀಗ ಇಡೀ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಪಿಎಸ್ಐ ವಿರುದ್ಧ ಹಲವು ಕೇಸ್ ದಾಖಲಾಗಿದೆ.&lt;/p&gt;&lt;img&gt;&lt;p&gt;ಯಾದಗಿರಿ ಪಿಎಸ್ಐ ಹಾಗೂ ರಾಯಚೂರು ಲೇಡಿ ಕಾನ್ ಸ್ಟೇಬಲ್ ಲವ್, ಸೆಕ್ಸ್ ದೋಖಾ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರೀತಿ ಹೆಸರಲ್ಲಿ ಮೋಸ ಮಾಡಿ ಇದೀಗ ನಾನವನಲ್ಲ ಎಂದ ಪ್ರಕರಣದಲ್ಲಿ ಗಂಭೀರ ಆರೋಪಗಳು ಕೇಳಿಬಂದಿದೆ. ಯಾದಿಗಿರಿ ಪಿಎಸ್ಐ ವಿರೇಶ್ ವಿರುದ್ಧ ರಾಯಚೂರು ಮಹಿಳಾ ಪೇದೆ ಜಯಶ್ರಿ ದೂರು ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ವಿರೇಶ್ ಪ್ರೀತಿ ಹೆಸರಲ್ಲಿ ತನ್ನನ್ನು ಹಲವು ಕಡೆ ಕರೆದುಕೊಂಡು ಹೋಗಿದ್ದ. ಕೊಪ್ಪಳದಲ್ಲಿ ತನ್ನ ಮೇಲೆ ಅತ್ಯಾ**ರ ನಡೆಸಿರುವುದಾಗಿ ಮಹಿಳಾ ಪೇದೆ ಜಯಶ್ರಿ ಆರೋಪಿಸಿದ್ದಾರೆ. ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸ್ತಿರೋ ಜಯಶ್ರೀ ಇದೀಗ ಆರೋಪಗಳ ಸುರಿಮಳೆಗೈದಿದ್ದಾರೆ.&lt;/p&gt;&lt;img&gt;&lt;p&gt;ವಿರೇಶ್ ತನ್ನ ಮೇಲೆ ಅತ್ಯಾ**ರ ಎಸಗಿದ್ದಾನೆ. ಪರಿಣಾಮ ಎರಡು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಜಯಶ್ರಿ ಆರೋಪಿಸಿದ್ದಾರೆ. ಇತ್ತ ವಿರೇಶ್ ಮೇಲೆ ಅಪಹರಣ ಪ್ರಕರಣ ಕೂಡ ದಾಖಲಾಗಿದೆ. ಬಲ*ತ್ಕಾರ, ಅಪಹರಣ ಮತ್ತು ಜಾತಿನಿಂದನೆ SC/ST ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.&lt;/p&gt;&lt;img&gt;&lt;p&gt;ಜಯಶ್ರಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಇವರ ಪ್ರೇಮ ಪ್ರಸಂಗದ ಹಲವು ವಿಡಿಯೋಗಳು, ಫೋಟೋಗಳು ವೈರಲ್ ಆಗಿದೆ. ಇದರ ಬೆನ್ನಲ್ಲೇ ಪಿಎಸ್ಐ ವಿರೇಶ್ ರಜೆ ಮೇಲೆ ತೆರಳಿದ್ದಾರೆ. ಇದೀಗ ವಿರೇಶ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಇದೇ ಕಾರಣದಿಂದ ವಿರೇಶ್ ರಜೆ ಮೇಲೆ ತೆರಳಿದ್ದಾರೆ.&lt;/p&gt;&lt;img&gt;&lt;p&gt;ಮಹಿಳಾ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಶ್ರಿ ಗಂಭೀರ ಆರೋಪಗಳ ಪ್ರಕರಣ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.&lt;/p&gt;]]></content:encoded>
            <category>state</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/karnataka-cop-controversy-yadgir-psi-faces-arrest-fear-in-relationship-case-va7nocg"/>
        </item>
        <item>
            <title><![CDATA[Karnataka vs Centre:  ಜಿ ರಾಮ್‌ ಜಿ ವಿರುದ್ಧ ಕೋರ್ಟ್‌ಗೆ ಮೊರೆ; ಸಂಪುಟ ನಿರ್ಧಾರ ನರೇಗಾದಡಿಯೇ ಕಾಮಗಾರಿಗಾಗಿ ಹೋರಾಟ]]></title>
            <link>https://kannada.asianetnews.com/state/karnataka-govt-move-supreme-court-on-sticking-to-mgnrega-rav/articleshow-ognob9a</link>
            <guid isPermaLink="true">https://kannada.asianetnews.com/state/karnataka-govt-move-supreme-court-on-sticking-to-mgnrega-rav/articleshow-ognob9a</guid>
            <pubDate>Fri, 08 May 2026 07:52:18 +0530</pubDate>
            <description><![CDATA[ಕೇಂದ್ರ ಸರ್ಕಾರವು ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್&zwnj; ಜಿ ಯೋಜನೆ ಜಾರಿಗೊಳಿಸಲು ಮುಂದಾಗಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಿದೆ. ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಹಾಗೂ ಪ್ರಸಕ್ತ ಸಾಲಿನಲ್ಲಿ ಮನರೇಗಾ ಮುಂದುವರಿಸಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr2p51nxzw92gdr4gfcw3pt7,imgname-----------------------2026-05-08t074946.266-1778206803645.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.8): &lt;/strong&gt;ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ರದ್ದುಪಡಿಸಿ ವಿಬಿ ಜಿ ರಾಮ್&zwnj; ಜಿ ಯೋಜನೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.&lt;/p&gt;&lt;p&gt;ವಿಬಿ ಜಿ ರಾಮ್&zwnj; ಜಿ ಬದಲಿಗೆ ಮನರೇಗಾ ಅಡಿಯಲ್ಲೇ ರಾಜ್ಯದಲ್ಲಿ ಪ್ರಸಕ್ತ ಸಾಲಿನ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.&lt;/p&gt;&lt;p&gt;ಜತೆಗೆ, ರಾಜ್ಯಗಳ ಜತೆ ಚರ್ಚಿಸದೆ ಏಕಪಕ್ಷೀಯವಾಗಿ ಮನರೇಗಾ ರದ್ದುಪಡಿಸಿ ವಿಬಿ ಜಿ ರಾಮ್&zwnj; ಜಿ ಯೋಜನೆ ಜಾರಿ ಮಾಡಿರುವ ಕೇಂದ್ರದ ಧೋರಣೆ ವಿರುದ್ಧವೂ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಆ ಮೂಲಕ ವಿಬಿ ಜಿ ರಾಮ್&zwnj; ಜಿ ಯೋಜನೆ ಖಂಡಿಸಿ ವಿಧಾನಮಂಡಲ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಿದ್ದ ಕಾಂಗ್ರೆಸ್&zwnj; ಸರ್ಕಾರ ತನ್ನ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದೆ.&lt;/p&gt;&lt;p&gt;ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್&zwnj;, ಪ್ರಸಕ್ತ ಸಾಲಿನಲ್ಲಿ ಮನರೇಗಾದಲ್ಲಿ ಯಥಾಸ್ಥಿತಿ ಮುಂದುವರಿಸುವ ಸಲುವಾಗಿ ಅಗತ್ಯ ಕ್ರಿಯಾಯೋಜನೆ ರೂಪಿಸಲು ಅವಕಾಶ ಕಲ್ಪಿಸುವಂತೆ ನ್ಯಾಯಾಲಯವನ್ನು ಕೋರಲು ತೀರ್ಮಾನಿಸಲಾಗಿದೆ. ಜತೆಗೆ ಮನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್&zwnj; ಜಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕೈಗೊಂಡ ತೀರ್ಮಾನದ ಮೂಲಕ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ದಮನಗೊಳಿಸಿರುವುದನ್ನು ಸಹ ಪ್ರಶ್ನಿಸಲಾಗುವುದು ಎಂದರು.&lt;/p&gt;&lt;h2&gt;ಪರ್ಯಾಯ ವ್ಯವಸ್ಥೆ ಮಾಡಿಲ್ಲ-ಎಚ್ಕೆಪಿ:&lt;/h2&gt;&lt;p&gt;2005ರಲ್ಲಿ ಜಾರಿಗೆ ತಂದಿದ್ದ ಮನರೇಗಾ ಕಾಯ್ದೆ ರದ್ದುಗೊಳಿಸಿ, ವಿಬಿ ಜಿ ರಾಮ್&zwnj; ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ವಿಬಿ ಜಿ ರಾಮ್&zwnj; ಜಿ ಜಾರಿಗೊಳಿಸಲು ಈವರೆಗೆ ಅಧಿಸೂಚನೆ ಹೊರಡಿಸಿಲ್ಲ ಹಾಗೂ ಪರ್ಯಾಯ ಯಾವುದೇ ವ್ಯವಸ್ಥೆಯನ್ನೂ ಮಾಡಿಲ್ಲ. ಇದರಿಂದ ಗ್ರಾಮೀಣ ಜನರ ಉದ್ಯೋಗ ಹಕ್ಕು ಕಸಿದಂತಾಗಿದೆ ಎಂದು ಎಚ್.ಕೆ. ಪಾಟೀಲ್&zwnj; ಹೇಳಿದರು.&lt;/p&gt;&lt;p&gt;ಕೇಂದ್ರ ಸರ್ಕಾರವು ವಿಬಿ ಜಿ ರಾಮ್&zwnj; ಜಿ ಯೋಜನೆ ಜಾರಿ ಮಾಡಿಲ್ಲ. ಬದಲಿಗೆ ಮನರೇಗಾ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ರಾಜ್ಯಗಳಿಗೆ ಹೇಳಿದೆ. ಈ ವರ್ಷದ ಕಾಮಗಾರಿಗಳಿಗೆ ಅವಕಾಶ ನೀಡಿಲ್ಲ. ಹೀಗಾಗಿ ಮನರೇಗಾ ಮುಂದುವರಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅನಿವಾರ್ಯ. ಈ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸುವಂತೆ ಕೋರ್ಟ್&zwnj; ಮೊರೆಹೋಗಲು ಸರ್ಕಾರ ತೀರ್ಮಾನಿಸಿದ್ದೇವೆ ಎಂದರು.&lt;/p&gt;&lt;h3&gt;ಹಿಂದಿನ ಮನರೇಗಾಗೆ ಮನವಿ:&lt;/h3&gt;&lt;p&gt;ಮನರೇಗಾ ಎಂಬುದು ಕೇಂದ್ರ ಪುರಸ್ಕೃತ ಯೋಜನೆ. ಅದನ್ನು ಯಥಾವತ್ತಾಗಿ ಮುಂದುವರಿಸಲು ಅಗತ್ಯ ಕ್ರಿಯಾಯೋಜನೆ ರೂಪಿಸಲು ಕಾನೂನು ಮೊರೆ ಹೋಗುತ್ತಿದ್ದೇವೆ. ಆದಷ್ಟು ಬೇಗ ಕೋರ್ಟ್&zwnj;ನಲ್ಲಿ ಸರ್ಕಾರ ಪ್ರಶ್ನಿಸಲಿದೆ. ಅನುದಾನ ಹಂಚಿಕೆ ಕೂಡ ಮನರೇಗಾ ಅಡಿ ಜಾರಿಯಲ್ಲಿ ಇದ್ದಂತೆಯೇ ಇದಕ್ಕೂ ಅನ್ವಯ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.&lt;/p&gt;&lt;h3&gt;ರಾಜ್ಯದ ಸರ್ಕಾರದ ಆರೋಪವೇನು?:&lt;/h3&gt;&lt;p&gt;ಕೇಂದ್ರ ಸರ್ಕಾರವು ಮನರೇಗಾ ಅಡಿ 90:10 ರಷ್ಟಿದ್ದ ಕೇಂದ್ರ ಹಾಗೂ ರಾಜ್ಯದ ಅನುದಾನ ಹಂಚಿಕೆಯನ್ನು ವಿಬಿ ಜಿ ರಾಮ್&zwnj; ಜಿ ಅಡಿ 60:40 ಅನುಪಾತಕ್ಕೆ ಬದಲಿಸಿದೆ. ಇದು ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೇರಲಿದೆ. ಮನರೇಗಾ ಅಡಿ ವರ್ಷದ 365 ದಿನಗಳ ಕಾಲ ಕೆಲಸ ಕೇಳಬಹುದಿತ್ತು. ಕಾರ್ಮಿಕರು ಅವರ ಊರಿನಲ್ಲೇ ಸ್ವಂತ ಜಮೀನಿನಲ್ಲೇ ಕೆಲಸ ಮಾಡಬಹುದಿತ್ತು. ಹೊಸ ಕಾಯ್ದೆ ಅಡಿ ಅದು ಸಾಧ್ಯವಿಲ್ಲ ಎಂಬುದು ಸೇರಿ ನೂತನ ಯೋಜನೆ ಬಗ್ಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.&lt;/p&gt;&lt;h3&gt;ಕ್ರೀಡಾ ಸಾಧಕರಿಗೆ ಸಿವಿಲ್&zwnj; ಹುದ್ದೆಗಳಲ್ಲಿ ಶೇ.2 ಮೀಸಲಾತಿ&lt;/h3&gt;&lt;p&gt;ಬೆಂಗಳೂರು: ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್&zwnj; ಸೇವೆಗಳಲ್ಲಿ ಹುದ್ದೆಗಳ ನೇಮಕಾತಿಯಲ್ಲಿ ಶೇ.2 ರಷ್ಟು ಮೀಸಲಾತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್&zwnj; ತಿಳಿಸಿದ್ದಾರೆ.&lt;/p&gt;&lt;p&gt;--&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-govt-move-supreme-court-on-sticking-to-mgnrega-rav/articleshow-ognob9a"/>
        </item>
        <item>
            <title><![CDATA[Abhimanotsav: ಗ್ರಾಮಗಳಿಗೆ ನೀರು ಕೊಟ್ಟ ಭಗೀರಥ ಬಿಎಸ್‌ವೈ:  ತರಳಬಾಳು ಜಗದ್ಗುರು]]></title>
            <link>https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de</link>
            <guid isPermaLink="true">https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de</guid>
            <pubDate>Fri, 08 May 2026 07:05:06 +0530</pubDate>
            <description><![CDATA[&lt;p&gt;ಸಿರಿಗೆರೆಯ ತರಳಬಾಳು ಜಗದ್ಗುರುಗಳು, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಠಕ್ಕೆ ಸಹಾಯ ಮಾಡಲು ಮುಂದಾದಾಗ, ಅದರ ಬದಲು ಸಿರಿಗೆರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಕೇಳಿದರು. ಯಡಿಯೂರಪ್ಪ ತಕ್ಷಣವೇ ಸೂಳೆಕೆರೆಯಿಂದ ನೀರು ಪೂರೈಸುವ ಯೋಜನೆಗೆ ಅನುಮೋದನೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jygastagxbc4xtqssbmztxdg,imgname-----------------------2025-06-24t121237.239-1750747375952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಡಾ। ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,&lt;/strong&gt;&lt;/p&gt;&lt;p&gt;ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ&lt;/p&gt;&lt;p&gt;ಸುಮಾರು ಹನ್ನೆರಡು ವರ್ಷಗಳ ಹಿಂದಿನ ಘಟನೆ. ಆಗ ದೆಹಲಿಯಲ್ಲಿ ಯಾವುದೋ ಒಂದು ಕಾರ್ಯಕ್ರಮವಿತ್ತು. ಅದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ಪ್ರಯಾಣ ಸಾಗಿತ್ತು. ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ನಮ್ಮ ಮೊಬೈಲ್&zwnj; ರಿಂಗಣಿಸಿತು. ಉತ್ತರಿಸಲು ಕೈಗೆತ್ತಿಕೊಂಡಾಗ ಕಾಣಿಸಿದ್ದು ಕರೆ ಮಾಡಿದವರು ರಾಜ್ಯದ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.&zwnj; ಯಡಿಯೂರಪ್ಪ ಅವರು. ತೀರಾ ಅನಿರೀಕ್ಷಿತವಾದ ಕರೆ. ಮುಖ್ಯಮಂತ್ರಿಗಳಾಗಿ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಪ್ಪದೆ ನಮಗೆ ದೂರವಾಣಿ ಕರೆ ಮಾಡಿ ಆಶೀರ್ವಾದ ಬೇಡುತ್ತಾ ಬಂದಿರುವುದು ಅವರು ರೂಢಿಸಿಕೊಂಡು ಬಂದ ಧಾರ್ಮಿಕ ಶ್ರದ್ಧೆ. ಆದರೆ ಅಂದಿನ ಕರೆಯ ಉದ್ದೇಶ ಬೇರೆಯೇ ಆಗಿತ್ತು.&lt;/p&gt;&lt;p&gt;ಉಭಯ ಕುಶಲೋಪರಿಯ ನಂತರ ಅವರು &lsquo;ಬುದ್ದಿ, ನಾಳೆ ನಾನು ರಾಜ್ಯದ ಬಜೆಟ್&zwnj; ಮಂಡಿಸಲಿದ್ದೇನೆ. ತಮ್ಮ ಆಶೀರ್ವಾದ ಬೇಕು. ಮಠಕ್ಕಾಗಿ ಏನಾದರೂ ಮಾಡಬೇಕೆಂದಿದ್ದೇನೆ. ಏನು ಮಾಡಲಿ?&rsquo; ಎಂದು ಕೇಳಿದರು. ಅವರ ಧಾರ್ಮಿಕ ಶ್ರದ್ಧೆ ನಿಷ್ಕಳಂಕವಾಗಿದ್ದರೂ, ಅವರು ನಾಡಿನ ಮುಖ್ಯಮಂತ್ರಿಗಳಾಗಿ ಯಾವುದೇ ತಾರತಮ್ಯ ಮಾಡದೆ ಎಲ್ಲ ಜನಾಂಗದವರ ಧಾರ್ಮಿಕ ಸಂಸ್ಥೆಗಳಿಗೆ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. &lsquo;ನಮ್ಮ ಮಠಕ್ಕೆ ಏನು ಮಾಡಲಿ&rsquo; ಎಂದು ಕೇಳಿದ ಪ್ರಶ್ನೆ ನಮಗೆ ಸರಿ ಕಾಣಲಿಲ್ಲ. &lsquo;ಮಠಕ್ಕೆ ಕಾಣಿಕೆ ಕೊಡಲು ಮಠದ ಶಿಷ್ಯರಿದ್ದಾರೆ, ನೀವು ಸ್ವಜಾತಿಯ ಮಠಕ್ಕೆ ಸಹಾಯ ಮಾಡಿದರೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತೀರಿ&rsquo; ಎಂದು ಕಟುವಾಗಿ ಪ್ರತಿಕ್ರಿಯಿಸಿದಾಗ ಅವರು ನಿರುತ್ತರರಾದರು. &lsquo;ಹಾಗಾದರೆ ನಾನೇನು ಮಾಡಲಿ?&rsquo; ಎಂದು ವಿನಮ್ರತೆಯಿಂದ ಮರು ಸವಾಲು ಹಾಕಿ ನಮ್ಮನ್ನು &lsquo;ಭಕ್ತಿಕಂಪಿತ&rsquo;ರನ್ನಾಗಿ ಮಾಡಿದರು.&lt;/p&gt;&lt;h2&gt;ಗ್ರಾಮೀಣರಿಗೆ ನೀರು ಕೊಟ್ಟ ನಾಯಕ:&lt;/h2&gt;&lt;p&gt;ಆಗ ನಮ್ಮ ಕಣ್ಮುಂದೆ ಸುಳಿದಾಡಿದ್ದು ಬೇಸಿಗೆಯ ಕಾಲದಲ್ಲಿ ಬೆಳಗಿನ ಹೊತ್ತು ವಾಯುವಿಹಾರದಿಂದ ಹಿಂದಿರುಗುವಾಗ ಸಾಲುಸಾಲಾಗಿ ನಿಂತು ಬೀದಿ ನಲ್ಲಿಯಲ್ಲಿ ನೀರು ಹಿಡಿಯಲು ಕೈಯಲ್ಲಿ ಬಿಂದಿಗೆಗಳನ್ನು ಹಿಡಿದು ನಿಂತ ಮಹಿಳೆಯರ ದೃಶ್ಯ! ತಕ್ಷಣವೇ ನಮ್ಮ ಉತ್ತರವನ್ನೇ ನಿರೀಕ್ಷಿಸುತ್ತಿದ್ದ ಮುಖ್ಯಮಂತ್ರಿಗಳಿಗೆ &lsquo;ಸಿರಿಗೆರೆ ಮತ್ತು ಸುತ್ತಮುತ್ತಲಿನ ೫೦ - ೬೦ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ತೊಂದರೆ ಇದೆ. ಸಮೀಪದ ಚನ್ನಗಿರಿ ತಾಲೂಕಿನ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಕೆ ಆಗುವಂತೆ ಒಂದು ಯೋಜನೆಯನ್ನು ಮಂಜೂರು ಮಾಡಿಕೊಟ್ಟರೆ ತುಂಬಾ ಪುಣ್ಯಕಾರ್ಯ ಮಾಡಿದಂತಾಗುತ್ತದೆ&rsquo; ಎಂದಾಗ ಯಡಿಯೂರಪ್ಪ ಅವರು ತಡಮಾಡದೆ &lsquo;ಹಾಗೆಯೇ ಆಗಲಿ, ತಮ್ಮ ಅಪೇಕ್ಷೆಯಂತೆ ಮಾಡುತ್ತೇನೆ&rsquo; ಎಂದು ಭರವಸೆ ಕೊಟ್ಟರು.&lt;/p&gt;&lt;h3&gt;ಮರುದಿನವೇ ಬಜೆಟ್&zwnj;ನಲ್ಲಿ ಘೋಷಣೆ.&lt;/h3&gt;&lt;p&gt;ಸಾಮಾನ್ಯವಾಗಿ ರಾಜಕೀಯ ಧುರೀಣರು ಕೊಡುವ ಪೊಳ್ಳು ಭರವಸೆ ಅದಾಗಿರಲಿಲ್ಲ. ಮಾರನೆಯ ದಿನವೇ ವಿಧಾನಸಭೆಯಲ್ಲಿ ಅವರು ಮಂಡಿಸಿದ ಬಜೆಟ್&zwnj;ನಲ್ಲಿ ಮೇಲ್ಕಂಡ ಕುಡಿಯುವ ನೀರಿನ ಯೋಜನೆಗೆ ಅವರು ₹೨೫ ಕೋಟಿ ಸೇರ್ಪಡೆ ಮಾಡಿದ್ದು ಈ ಭಾಗದ ಹಳ್ಳಿಯ ಜನರನ್ನು ನಿಬ್ಬೆರಗುಗೊಳಿಸಿತು. ಕ್ರಮೇಣ ಸಿರಿಗೆರೆ ಮತ್ತು ಸುತ್ತಮುತ್ತಲಿನ ಅನೇಕ ಹಳ್ಳಿಗಳು ಹೊಸದಾಗಿ ಸೇರ್ಪಡೆಯಾಗಿ ಯೋಜನೆಯ ಗಾತ್ರ ₹೮೦ ಕೋಟಿಗಳಿಗೆ ಹಿಗ್ಗಿತು. ಆರಂಭದಲ್ಲಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದ್ದಾಗ ಅಷ್ಟಾಗಿ ಈ ಯೋಜನೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದ್ದ ಹಳ್ಳಿಗರು ಈಗ ಅಂತರ್ಜಲ ಬತ್ತಿರುವುದರಿಂದ ಈ ಯೋಜನೆಯು ಕಾರ್ಯರೂಪಕ್ಕೆ ಬರದೇ ಹೋಗಿದ್ದರೆ ತಮ್ಮ ಗತಿ ಏನಾಗುತ್ತಿತ್ತು ಎಂದು ಉದ್ಗರಿಸುತ್ತಿದ್ದಾರೆ!&lt;/p&gt;&lt;p&gt;ಯಡಿಯೂರಪ್ಪ ಅವರು ಮತ್ತು ನಮ್ಮ ಸಂಬಂಧ ನಿನ್ನೆ ಮೊನ್ನೆಯದಲ್ಲ. ನಮ್ಮ ಮಠದ ವಾರ್ಷಿಕ ಸಮಾರಂಭವಾದ &lsquo;ಸರ್ವಜನಾಂಗದ ಶಾಂತಿಯ ತೋಟ&rsquo;ವೆಂದೇ ಜನಮಾನಸದಲ್ಲಿ ನೆಲೆಗೊಂಡಿರುವ &lsquo;ತರಳಬಾಳು ಹುಣ್ಣಿಮೆ ಮಹೋತ್ಸವ&rsquo;ವು ೩೭ ವರ್ಷಗಳ ಹಿಂದೆ (೧೯೮೫) ಶಿಕಾರಿಪುರದಲ್ಲಿ ನಡೆದಾಗ ಅವರು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಆಗಿದ್ದರು. ಅಂದಿನಿಂದಲೂ ನಮ್ಮೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿರಲಿ, ಆಡಳಿತ ಪಕ್ಷದಲ್ಲಿರಲಿ, ಮಂತ್ರಿಗಳಾಗಿರಲಿ, ಮಾಜಿ ಮಂತ್ರಿಗಳಾಗಿರಲಿ ನಮ್ಮ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳಲ್ಲಿ ಅನನ್ಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.&lt;/p&gt;&lt;h3&gt;ಸದಾ ಜನಕಲ್ಯಾಣದ ಕನಸು:&lt;/h3&gt;&lt;p&gt;ಯಡಿಯೂರಪ್ಪನವರು ಕನ್ನಡ ನಾಡು ಕಂಡ ಅಪ್ರತಿಮ ರೈತಪರ ಹೋರಾಟಗಾರರು. ಅಪಾರ ಜನಪರ ಕಾಳಜಿ ಉಳ್ಳವರು. ಜನರ ಮಧ್ಯೆ ಬೆಳೆದು ಬಂದ ಅವರು ಕರೋನಾ ಬಿಕ್ಕಟ್ಟಿನಲ್ಲಿ ಬೆಂಗಳೂರಿನ ಗೃಹಕಚೇರಿಯಲ್ಲಿ ಅಣೆಕಟ್ಟೆಯಲ್ಲಿ ಹಿಡಿದಿಟ್ಟ ಅಪಾರ ಶಕ್ತಿಯುಳ್ಳ ಜಲರಾಶಿಯಂತೆ ಬಂಧಿಯಾಗಿದ್ದರೂ ನಾಡಿನ ಜನರ ಕಲ್ಯಾಣದ ಕನಸನ್ನೇ ಸದಾ ಕಾಣುತ್ತಿದ್ದರು. ಅವರು ರಾಜ್ಯದ ಅನೇಕ ತಾಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ನಮ್ಮ ಯೋಜನೆಗಳಿಗೆ ಹಿಂದುಮುಂದು ನೋಡದೆ ಸರ್ಕಾರದ ಒಪ್ಪಿಗೆಯನ್ನು ನೀಡಿ ಉದಾರವಾಗಿ ಅನುದಾನ ನೀಡಿ ಸಹಕರಿಸಿರುವುದನ್ನು ನಾವೆಂದೂ ಮರೆಯಲಾರೆವು.&lt;/p&gt;&lt;p&gt;ಚನ್ನಗಿರಿಯ ಉಬ್ರಾಣಿ-ಅಮೃತಾಪುರ, ಹರಿಹರದ ರಾಜನಹಳ್ಳಿ, ಹೊನ್ನಾಳಿಯ ಸಾಸ್ವೆಹಳ್ಳಿ, ಬ್ಯಾಡಗಿ ತಾಲೂಕಿನ ಅಣೂರು ಮತ್ತು ಬುಡಪನಹಳ್ಳಿ, ಜಗಳೂರು ಮತ್ತು ಭರಮಸಾಗರ ಇತ್ಯಾದಿ ಯಾವುದೇ ಏತ ನೀರಾವರಿ ಯೋಜನೆ ಇರಲಿ, ಯಾವುದೇ ಸರಕಾರವಿದ್ದಾಗ ಕೋಟ್ಯಂತರ ರು.ಗಳ ಹಣ ಬಿಡುಗಡೆ ಮಾಡಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.&lt;/p&gt;&lt;h3&gt;ಕೊನೆಗೂ ನಮ್ಮ ಆಶಯ ಸಾಕಾರ:&lt;/h3&gt;&lt;p&gt;ಈ ಹಿಂದೆ ಇಂತಹ ಯೋಜನೆಗಳಿಗೆ ಧಾರಾಳವಾಗಿ ಹಣ ಮಂಜೂರು ಮಾಡುತ್ತಿದ್ದ ಅವರು ಭರಮಸಾಗರ ಮತ್ತು ಜಗಳೂರು ಏತ ನೀರಾವರಿಗೆ ಒಂದೇ ಕಂತಿನಲ್ಲಿ ಅನುದಾನ ನೀಡಲು ರಾಜ್ಯದ ಆರ್ಥಿಕ ದುರ್ಭರತೆಯ ಕಾರಣದಿಂದ ಹಿಂದೇಟು ಹಾಕಿದರು. ₹೧,೨೨೦ ಕೋಟಿಗಳ ಜಗಳೂರು ಮತ್ತು ಭರಮಸಾಗರ ಬೃಹತ್&zwnj; ಏತನೀರಾವರಿ ಯೋಜನೆಗಳನ್ನು ₹೨೨೫ ಕೋಟಿಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದ್ದು ನಮಗೆ ಅಸಂತುಷ್ಟಿಯನ್ನುಂಟು ಮಾಡಿತು. ನಂತರ ನಮ್ಮ ಒತ್ತಾಸೆಗೆ ಮಣಿದು ಒಂದೇ ವಾರದಲ್ಲಿ ಮೇಲ್ಕಂಡ ಸರಕಾರದ ಆದೇಶವನ್ನು ಹಿಂಪಡೆದು ಪೂರಾ ಹಣವನ್ನು ಒಂದೇ ಕಂತಿನಲ್ಲಿ ಮಂಜೂರು ಮಾಡಿ ಮರು ಆದೇಶ ಹೊರಡಿಸಿದರು. ಈ ಎರಡೂ ಯೋಜನೆಗಳ ಕಾಮಗಾರಿ ಕರೋನಾ ಬಿಕ್ಕಟ್ಟಿನ ನಡುವೆಯೂ ಭರದಿಂದ ಸಾಗಿ ಸುಮಾರು ೧೦೦ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಯಿತು.&lt;/p&gt;&lt;p&gt;ಸುಮಾರು ೧೦೦ ಕೆರೆಗಳಿಗೆ ದುಮ್ಮಿಕ್ಕಿ ಹರಿಯುತ್ತಿರುವ ತುಂಗಭದ್ರೆಯ ಜಲರಾಶಿಯು ಈ ಭಾಗದ ಜನರ ಆರ್ಥಿಕ ಚೈತನ್ಯವನ್ನು ಅಭಿವೃದ್ಧಿಗೊಳಿಸಿ ಅವರ ಭಾವಕೋಶದಲ್ಲಿ ಹೊಸ ಕೃಷಿ ಚಟುವಟಿಕೆಯ ಭಾಷ್ಯ ಬರೆದಿದೆ.&lt;/p&gt;&lt;p&gt;ಶತಮಾನಗಳಿಂದ ಬರಗಾಲದ ಬೇಗೆಯಿಂದ ತತ್ತರಿಸಿದ ಈ ಭಾಗದ ಗ್ರಾಮೀಣ ಜನರು &lsquo;ಇಳಿದು ಬಾ ತಾಯೆ, ಇಳಿದು ಬಾ...&rsquo; ಎಂಬ ಕವಿವಾಣಿಯನ್ನು ಈಗ ಮನೆ ಮನಗಳಲ್ಲಿ ಜಪಿಸುತ್ತಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de"/>
        </item>
        <item>
            <title><![CDATA[BS Yadiyurapa: ‘ಅಭಿಮಾನೋತ್ಸವ: ಬಿಎಸ್‌ವೈ ಕೊಡುಗೆಗಳ ‘ಸ್ತಬ್ಧಚಿತ್ರ’]]></title>
            <link>https://kannada.asianetnews.com/state/abhimanotsava-tableaux-to-showcase-bs-yediyurappa-s-life-long-contributions-rav/articleshow-p360rkm</link>
            <guid isPermaLink="true">https://kannada.asianetnews.com/state/abhimanotsava-tableaux-to-showcase-bs-yediyurappa-s-life-long-contributions-rav/articleshow-p360rkm</guid>
            <pubDate>Fri, 08 May 2026 06:43:43 +0530</pubDate>
            <description><![CDATA[&lt;p&gt;ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ ಚಿತ್ರದುರ್ಗದಲ್ಲಿ 'ಯಡಿಯೂರಪ್ಪ ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅವರ ಜನಪ್ರಿಯ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2javrwxvz819a24h3yqgj5,imgname-----------------------2026-05-08t063653.313-1778202799900.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ: &lt;/strong&gt;ಚಿತ್ರದುರ್ಗದಲ್ಲಿ ಶನಿವಾರ ನಡೆಯಲಿರುವ &lsquo;ಯಡಿಯೂರಪ್ಪ ಅಭಿಮಾನೋತ್ಸವ&rsquo; ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಲಿದ್ದು, ಅದ್ದೂರಿ ಮೆರವಣಿಗೆ ಮೂಲಕ ಅವರನ್ನು ನಗರಕ್ಕೆ ಕರೆತರಲಾಗುವುದು. ಮೆರವಣಿಗೆಯಲ್ಲಿ ಬಿಎಸ್&zwnj;ವೈ ಕೊಡುಗೆಗಳ &lsquo;ಸ್ತಬ್ಧಚಿತ್ರ&rsquo;ಗಳು ಪ್ರಮುಖ ಆಕರ್ಷಣೆಯಾಗಲಿವೆ.&lt;/p&gt;&lt;p&gt;ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲು ಚಿತ್ರದುರ್ಗದಲ್ಲಿ &lsquo;ಯಡಿಯೂರಪ್ಪ ಅಭಿಮಾನೋತ್ಸವ&rsquo; ಆಯೋಜಿಸಲಾಗಿದ್ದು, ರೈತನಾಯಕನ ಸ್ವಾಗತಕ್ಕೆ ಕೋಟೆನಗರಿ, ಚಿತ್ರದುರ್ಗ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.&lt;/p&gt;&lt;p&gt;ಅಭಿಮಾನೋತ್ಸವದ ಮುನ್ನಾದಿನ, ಶುಕ್ರವಾರ ಸಂಜೆ 4 ಗಂಟೆಗೆ ಅವರು ನಗರ ಪ್ರವೇಶಿಸಲಿದ್ದು, ಅವರು ಚಿತ್ರದುರ್ಗ ಪ್ರವೇಶಿಸುವ ಕ್ಷಣಗಳನ್ನು ಸಾರ್ಥಕಗೊಳಿಸುವ ಸಂಬಂಧ ಸಾಂಸ್ಕೃತಿಕ ಲೋಕವನ್ನೇ ಸೃಷ್ಠಿಸಲಾಗುತ್ತಿದೆ. ಯಡಿಯೂರಪ್ಪ ಅವರ ಪುರಪ್ರವೇಶಕ್ಕೆ ಇಡೀ ಚಿತ್ರದುರ್ಗ ನಗರವನ್ನು ಸಿಂಗರಿಸಲಾಗಿದೆ.&lt;/p&gt;&lt;p&gt;ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತಕ್ಕೆ ಆಗಮಿಸುವ ಯಡಿಯೂರಪ್ಪ ಅವರನ್ನು ಒಂದು ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರು ಸಾಂಪ್ರದಾಯಿಕ ರಾಶಿ ಪೂಜೆಯೊಂದಿಗೆ ರೈತ ಗೌರವ ಸಲ್ಲಿಸಲಿದ್ದಾರೆ. ಕನಕದಾಸ ವೃತ್ತದ ಸಮೀಪ ಚಂದ್ರವಳ್ಳಿ ಮೈದಾನದಿಂದ ಸಾಗುವ ಮೆರವಣಿಗೆಯಲ್ಲಿ ಯಡಿಯೂರಪ್ಪನವರನ್ನು ಪುಷ್ಪಾಲಂಕೃತ ಸಾರೋಟ್&zwnj;ನಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆ ತರಲಾಗುವುದು.&lt;/p&gt;&lt;p&gt;2000ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ನೇಗಿಲು ಹಿಡಿದು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ರೈತ ಘೋಷಣೆಯೊಂದಿಗೆ ನಡೆದು ಬರಲಿದ್ದಾರೆ. ಒನಕೆ ಓಬವ್ವನ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ &lsquo;ನಾರಿ ಶಕ್ತಿ ವಂದನ್&zwnj;ʼ ಕಾಯ್ದೆಗೆ ಗೌರವ ಸಲ್ಲಿಸಲು 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನ ಪಾತ್ರಧಾರಿಗಳಾಗಿ ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ನಡೆದು ಬರಲಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಿರುವ ಸುಮಾರು 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜನಪದ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.&lt;/p&gt;&lt;h2&gt;ಅಂಬಾಸಿಡರ್&zwnj; ಕಾರು ಪ್ರಮುಖ ಆಕರ್ಷಣೆ:&lt;/h2&gt;&lt;p&gt;ಯಡಿಯೂರಪ್ಪನವರ ಹೋರಾಟದ ದಿನಗಳ ನೆನಪಾಗಿ ಉಳಿದಿರುವ ಅವರ ವಾಹನ (ಅಂಬಾಸಿಡರ್&zwnj; ಕಾರು ಸಿಕೆಆರ್&zwnj; 45) ಸಹ ಪ್ರಮುಖ ಆಕರ್ಷಣೆಯಾಗಲಿದೆ. ಮೆರವಣಿಗೆಗೆ ವಿಶೇಷ ಮೆರಗು ನೀಡಲು ಹಾಗೂ ಯಡಿಯೂರಪ್ಪನವರು ನಡೆದು ಬಂದ ಹಾದಿ, ಸಾಧನೆ ಹಾಗೂ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಲಾದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್&zwnj; ವಿತರಣೆ, ಕೃಷಿ ಬಜೆಟ್&zwnj; ಮೊದಲಾದವುಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಲಿವೆ.&lt;/p&gt;&lt;p&gt;ಮೆರವಣಿಗೆಯಲ್ಲಿ ಆರು ಎಲ್&zwj;ಇಡಿಗಳು ಇರಲಿದ್ದು, ಒಂದೊಂದರಲ್ಲಿ ಯಡಿಯೂರಪ್ಪನವರ ಬಾಲ್ಯದಿಂದ ಹಿಡಿದು ವಿಧಾನಸೌಧದವರೆಗೂ ಅವರ ಜೀವನ ಚರಿತ್ರೆಯನ್ನು ಪ್ರಸ್ತುತ ಪಡಿಸಲಾಗುವುದು. ಯಡಿಯೂರಪ್ಪ ಅವರ ಸಾಧನೆಯ ಹಾದಿಯನ್ನು ಈ ಸ್ತಬ್ಧಚಿತ್ರಗಳ ಮೂಲಕ ತೆರೆದಿಡಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ.&lt;/p&gt;&lt;p&gt;ಮುಖ್ಯಮಂತ್ರಿಯಾಗಿದ್ದಾಗ ಅವರು ಮಾಡಿದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ, ಕೃಷಿ ಬಜೆಟ್ ಮೊದಲಾದವುಗಳ ಪ್ರದರ್ಶನದ ಸ್ತಬ್ದ ಚಿತ್ರಗಳು ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಜ್ಜಾಗಲಿವೆ.&lt;/p&gt;&lt;p&gt;ರಾಜ್ಯದ ವಿವಿಧೆಡೆಗಳಿಂದ ಪೂಜಾ ಕುಣಿತ, ಪಟ ಕುಣಿತ, ಕೋಲಾಟ, ಗಾರುಡಿ ಗೊಂಬೆ, ಚಿಟ್ಟೆಮೇಳ, ಮಹಿಳಾ ವೀರಗಾಸೆ, ಮಹಿಳಾ ತಮಟೆ, ವೀರಗಾಸೆ, ಗೊರವರ ಕುಣಿತ, ಬೇಡರವೇಷ, ಹಗಲು ವೇಷ, ಡೊಳ್ಳು ಕುಣಿತ, ಕಂಸಾಳೆ, ಕೊಂಬು ಕಹಳೆ, ಲಂಬಾಣಿ ನೃತ್ಯ, ಕೀಲು ಕುದುರೆ, ರಾಜರಾಣಿ, ಉಗ್ರನರಸಿಂಹ, ಮಹಿಷಾಸುರ ಜೋಕರ್, ನಂಧಿ ಧ್ವಜ, ವೀರಭದ್ರ ಕುಣಿತ, ನಗಾರಿ, ಸೋಮನ ಕುಣಿತ, ಚಂಡೆವಾದನ, ರಂಗ ಕುಣಿತ, ಗೋರುಕಾನ ನೃತ್ಯ ಸೇರಿದಂತೆ 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ.&lt;/p&gt;&lt;p&gt;ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/abhimanotsava-tableaux-to-showcase-bs-yediyurappa-s-life-long-contributions-rav/articleshow-p360rkm"/>
        </item>
        <item>
            <title><![CDATA[ಮಿನಿ ದಸರಾ ರೀತಿ ಇಂದು ಬಿಎಸ್‌ವೈ ಪುರಪ್ರವೇಶ! ಚಿತ್ರದುರ್ಗದಲ್ಲಿ ನಾಳೆ ‘ಬಿಎಸ್‌ವೈ ಅಭಿಮಾನೋತ್ಸವ’]]></title>
            <link>https://kannada.asianetnews.com/state/mini-dasar-style-entry-bs-yediyurappa-to-arrive-in-chitradurga-today-for-abhimanotsava-rav/articleshow-rekdnl4</link>
            <guid isPermaLink="true">https://kannada.asianetnews.com/state/mini-dasar-style-entry-bs-yediyurappa-to-arrive-in-chitradurga-today-for-abhimanotsava-rav/articleshow-rekdnl4</guid>
            <pubDate>Fri, 08 May 2026 06:33:19 +0530</pubDate>
            <description><![CDATA[&lt;p&gt;ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಸವಿನೆನಪಿಗಾಗಿ ಚಿತ್ರದುರ್ಗದಲ್ಲಿ 'ಬಿಎಸ್&zwnj;ವೈ ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು, ರೈತರು, ಸಾಂಸ್ಕೃತಿಕ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ &amp;nbsp;ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jygastagxbc4xtqssbmztxdg,imgname-----------------------2025-06-24t121237.239-1750747375952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಚಿತ್ರದುರ್ಗ:&lt;/strong&gt; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲು ಶನಿವಾರ ಮಧ್ಯಾಹ್ನ ಚಿತ್ರದುರ್ಗದಲ್ಲಿ ಆಯೋಜಿಸಿರುವ &lsquo;ಬಿಎಸ್&zwnj;ವೈ ಅಭಿಮಾನೋತ್ಸವ&rsquo;ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರೈತ ನಾಯಕನ ಅದ್ಧೂರಿ ಸ್ವಾಗತಕ್ಕೆ ಕೋಟೆ ನಗರಿ ಸಜ್ಜಾಗಿದೆ.&lt;/p&gt;&lt;p&gt;ಶುಕ್ರವಾರ ಸಂಜೆ 4 ಗಂಟೆಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತಕ್ಕೆ ಆಗಮಿಸುವ ಯಡಿಯೂರಪ್ಪ ಅವರನ್ನು ಒಂದು ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ. ರೈತರು ಸಾಂಪ್ರದಾಯಿಕ ರಾಶಿ ಪೂಜೆಯೊಂದಿಗೆ ರೈತ ಗೌರವ ಸಲ್ಲಿಸಲಿದ್ದಾರೆ. ಬಳಿಕ, ಯಡಿಯೂರಪ್ಪ ಅವರನ್ನು ಪುಷ್ಪಾಲಂಕೃತ ಸಾರೋಟಿನಲ್ಲಿ ಕುಳ್ಳಿರಿಸಿ, ಕನಕದಾಸ ವೃತ್ತದ ಸಮೀಪ ಚಂದ್ರವಳ್ಳಿ ಮೈದಾನದಿಂದ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು.&lt;/p&gt;&lt;p&gt;&lsquo;ಮಿನಿ ದಸರಾ&rsquo; ರೀತಿ ಸಾಗಲಿರುವ ಈ ಮೆರವಣಿಗೆಯಲ್ಲಿ 2,000ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ನೇಗಿಲು ಹಿಡಿದು ಶಿಸ್ತುಬದ್ಧವಾಗಿ ರೈತ ಘೋಷಣೆಯೊಂದಿಗೆ ನಡೆದು ಬರಲಿದ್ದಾರೆ. ಒನಕೆ ಓಬವ್ವನ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ &lsquo;ನಾರಿ ಶಕ್ತಿ ವಂದನ್&zwnj;ʼ ಕಾಯ್ದೆಗೆ ಗೌರವ ಸಲ್ಲಿಸಲು 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನ ಪಾತ್ರಧಾರಿಗಳಾಗಿ ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ನಡೆದು ಬರಲಿದ್ದಾರೆ. 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ಕಲಾತಂಡಗಳು ಯಡಿಯೂರಪ್ಪನವರು ನಡೆದು ಬಂದ ಹಾದಿ, ಸಾಧನೆ ಹಾಗೂ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೀಡಲಾದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್&zwnj; ವಿತರಣೆ, ಕೃಷಿ ಬಜೆಟ್&zwnj; ಮೊದಲಾದವುಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬರಲಿವೆ.&lt;/p&gt;&lt;p&gt;ಯಡಿಯೂರಪ್ಪನವರ ಹೋರಾಟದ ದಿನಗಳ ನೆನಪಾಗಿ ಉಳಿದಿರುವ ಅವರ ವಾಹನ (ಅಂಬಾಸಿಡರ್&zwnj; ಕಾರು ಸಿಕೆಆರ್&zwnj; 45) ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಶ್ರೀರಾಮುಲು ಸೇರಿ ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.&lt;/p&gt;&lt;p&gt;ಯಡಿಯೂರಪ್ಪ ಅವರ ಪುರಪ್ರವೇಶಕ್ಕೆ ಇಡೀ ಚಿತ್ರದುರ್ಗ ನಗರವನ್ನು ಸಿಂಗರಿಸಲಾಗಿದೆ. ಎಲ್ಲೆಡೆ ಕೇಸರಿ ಬಾವುಟಗಳು ಹಾರಾಡುತ್ತಿವೆ. ನಗರದ ತುಂಬೆಲ್ಲಾ ಯಡಿಯೂರಪ್ಪ ಅವರನ್ನು ಸ್ವಾಗತಿಸುವ, ಅಭಿನಂದಿಸುವ ಕಟೌಟ್&zwnj;ಗಳು ರಾರಾಜಿಸುತ್ತಿವೆ.&lt;/p&gt;&lt;p&gt;&lt;strong&gt;10 ಲಕ್ಷ ಜನರ ಸಮ್ಮುಖ ನಾಳೆ ಅಭಿಮಾನೋತ್ಸವ&lt;/strong&gt;&lt;/p&gt;&lt;p&gt;ಶನಿವಾರ ಮಧ್ಯಾಹ್ನ ನಡೆಯಲಿರುವ ಅಭಿಮಾನೋತ್ಸವವನ್ನು ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಉದ್ಘಾಟಿಸಲಿದ್ದಾರೆ. ಸಾವಿರಕ್ಕೂ ಹೆಚ್ಚು ಮಠಾಧೀಶರು, 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ಕಾರ್ಯಕ್ರಮಕ್ಕಾಗಿ ಬೃಹತ್&zwnj; ವೇದಿಕೆ ನಿರ್ಮಿಸಲಾಗಿದೆ. ಈ ವೇಳೆ, &lsquo;ಕೆಂದಾವರೆ-ಕಮಲದಲ್ಲಿ ಅರಳಿದ ಹೂ&rsquo; ಹಾಗೂ &lsquo;ಸದನದಲ್ಲಿ ಶಿಕಾರಿ&rsquo; ಎಂಬ ಎರಡು ಅಭಿನಂದನಾ ಗ್ರಂಥಗಳನ್ನು ಬಿಡುಗಡೆಗೊಳಿಸಲಾಗುವುದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/mini-dasar-style-entry-bs-yediyurappa-to-arrive-in-chitradurga-today-for-abhimanotsava-rav/articleshow-rekdnl4"/>
        </item>
        <item>
            <title><![CDATA[ಅಂಜನಾದ್ರಿ ಹನುಮ ದೇವರಿಗೆ ₹2.5 ಕೋಟಿ ಮೌಲ್ಯದ ಬಂಗಾರದ ಕಿರೀಟ, ಗದೆ: ಎ.ಎಂ.ಆರ್ ಗ್ರೂಪ್ ಮಹೇಶ್ ರೆಡ್ಡಿ ಅರ್ಪಣೆ!]]></title>
            <link>https://kannada.asianetnews.com/gallery/state/hampi-near-anjanadri-hill-hanuman-gold-crown-mace-offering-amr-group-mahesh-reddy-sat-q5a71b3</link>
            <guid isPermaLink="true">https://kannada.asianetnews.com/gallery/state/hampi-near-anjanadri-hill-hanuman-gold-crown-mace-offering-amr-group-mahesh-reddy-sat-q5a71b3</guid>
            <pubDate>Thu, 07 May 2026 21:30:28 +0530</pubDate>
            <description><![CDATA[&lt;p&gt;ಕೊಪ್ಪಳದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ, ಎ.ಎಂ.ಆರ್ ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಅವರು 2.50 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ, ಗದೆ ಹಾಗೂ ಪ್ರಭಾವಳಿಯನ್ನು ಹರಕೆಯಾಗಿ ಸಮರ್ಪಿಸಿದ್ದಾರೆ. ಈ ಅಂಗವಾಗಿ ಮೇ 8 ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1hn3dp6sw6w2adph3pxmne,imgname-anjanadri-temple-janardhana-reddy-gold-gift-1778168532406.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಪ್ಪಳದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ, ಎ.ಎಂ.ಆರ್ ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಅವರು 2.50 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ, ಗದೆ ಹಾಗೂ ಪ್ರಭಾವಳಿಯನ್ನು ಹರಕೆಯಾಗಿ ಸಮರ್ಪಿಸಿದ್ದಾರೆ. ಈ ಅಂಗವಾಗಿ ಮೇ 8 ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.&lt;/p&gt;&lt;img&gt;&lt;p&gt;&lt;strong&gt;ಕೊಪ್ಪಳ (ಮೇ 07): ಶ್ರೀ&lt;/strong&gt;ರಾಮನ ಭಂಟ ಹನುಮಂತನ ಜನ್ಮಸ್ಥಳವಾಗಿ ವಿಶ್ವವಿಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟದಲ್ಲಿ ಭಕ್ತಿಯ ಪರಾಕಾಷ್ಠೆ ಕಂಡುಬಂದಿದೆ. ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಗೆ ಭಕ್ತರೊಬ್ಬರು ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಹರಕೆ ತೀರಿಸಿದ್ದಾರೆ.&lt;/p&gt;&lt;img&gt;&lt;p&gt;ಭಾರತದ ಖ್ಯಾತ ಕನ್ಸ್ಟ್ರಕ್ಷನ್ ಸಂಸ್ಥೆಯಾದ ಎ.ಎಂ.ಆರ್ (AMR) ಗ್ರೂಪ್&zwnj;ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಹಾಗೂ ಅವರ ಕುಟುಂಬದವರು ಈ ಧಾರ್ಮಿಕ ಕಾರ್ಯಕ್ಕೆ ಮುಂದಾಗಿದ್ದಾರೆ. ಶ್ರೀ ಸ್ವಾಮಿಯ ಮೇಲಿನ ಅತೀವ ಭಕ್ತಿಯಿಂದಾಗಿ ಅವರು ಸುಮಾರು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾದ ಸುಂದರ ಬಂಗಾರದ ಕಿರೀಟ, ಗದೆ ಹಾಗೂ ಭವ್ಯವಾದ ಪ್ರಭಾವಳಿಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಈ ಆಭರಣಗಳು ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಮತ್ತಷ್ಟು ಕಳೆಯನ್ನು ನೀಡಲಿವೆ.&lt;/p&gt;&lt;img&gt;&lt;p&gt;ಈ ಕಾಣಿಕೆ ಅರ್ಪಣೆಯ ಅಂಗವಾಗಿ ಮೇ 8 ರಂದು ಬೆಳಿಗ್ಗೆಯಿಂದಲೇ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಶ್ರೀ ದೇವರಿಗೆ ಅರ್ಪಿಸುವ ಮೊದಲು ಹಸಿರು ಬೆಟ್ಟದ ಮಡಿಲಲ್ಲಿ ಹವನ, ಹೋಮ ಹಾಗೂ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಮೂರ್ತಿಗಳ ಸಾರಥ್ಯದಲ್ಲಿ ನಡೆಯುವ ಈ ಪೂಜಾ ಕಾರ್ಯಕ್ರಮಗಳಲ್ಲಿ ಮಹೇಶ್ ರೆಡ್ಡಿ ಅವರ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ.&lt;/p&gt;&lt;img&gt;&lt;p&gt;ಈ ಮಹತ್ವದ ಧಾರ್ಮಿಕ ಸಮಾರಂಭದಲ್ಲಿ ಗಂಗಾವತಿ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ದನರೆಡ್ಡಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಆಸಕ್ತಿ ಹೊಂದಿರುವ ಶಾಸಕರು, ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಅಂಜನಾದ್ರಿ ಬೆಟ್ಟಕ್ಕೆ ದೇಶ-ವಿದೇಶಗಳಿಂದ ಭಕ್ತರ ಆಗಮನ ಹೆಚ್ಚಾಗಿದೆ. ದೇವಸ್ಥಾನಕ್ಕೆ ಬಂಗಾರದ ಆಭರಣಗಳು ಅರ್ಪಣೆಯಾಗುತ್ತಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ. ಹನುಮ ಜನ್ಮಸ್ಥಳದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಇಂತಹ ಕಾರ್ಯಗಳು ಪ್ರವಾಸೋದ್ಯಮ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಮಹತ್ವ ಪಡೆದಿವೆ.&lt;/p&gt;&lt;img&gt;&lt;p&gt;ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿಗೆ ಬಂಗಾರದ ಮೆರುಗು ಬಂದಿರುವುದು ಹನುಮ ಮಾಲೆಧಾರಿಗಳು ಹಾಗೂ ಭಕ್ತ ಸಮೂಹಕ್ಕೆ ಹಬ್ಬದ ಸಡಗರ ತಂದಿದೆ. ಇನ್ನುಮುಂದೆ ದೇವಸ್ಥಾನಕ್ಕೆ ಭದ್ರತೆಯನ್ನೂ ಹೆಚ್ಚಿಸಲಾಗುತ್ತದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/hampi-near-anjanadri-hill-hanuman-gold-crown-mace-offering-amr-group-mahesh-reddy-sat-q5a71b3"/>
        </item>
        <item>
            <title><![CDATA[ಶ್ರೀಗಂಧ ಮರಗಳ ಕಳ್ಳತನ ತಡೆಗೆ ಟೆಕ್ನಾಲಜಿ ಮೊರೆ ಹೋದ ಸರ್ಕಾರ; 'ನೀವು ಐಡಿಯಾ ಕೊಡಿ, ಖರ್ಚು ನಾವು ಕೊಡ್ತೇವೆ'!]]></title>
            <link>https://kannada.asianetnews.com/gallery/state/ksdl-invites-technology-to-prevent-sandalwood-theft-minister-mb-patil-awards-sat-5gervqo</link>
            <guid isPermaLink="true">https://kannada.asianetnews.com/gallery/state/ksdl-invites-technology-to-prevent-sandalwood-theft-minister-mb-patil-awards-sat-5gervqo</guid>
            <pubDate>Thu, 07 May 2026 20:05:03 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಶ್ರೀಗಂಧ ಮರಗಳ ಕಳ್ಳತನವನ್ನು ತಡೆಯಲು ಕರ್ನಾಟಕ ಸರ್ಕಾರವು ತಂತ್ರಜ್ಞಾನದ ಮೊರೆ ಹೋಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಮೂಲಕ, ಪರಿಣಾಮಕಾರಿ ತಾಂತ್ರಿಕ ಪರಿಹಾರಗಳನ್ನು ಹೊಂದಿರುವವರಿಂದ ಆವಿಷ್ಕಾರಗಳನ್ನು ಆಹ್ವಾನಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1d83fbb1khv3gembd14kyx,imgname-karnataka-sandal-tree-safty-mb-patil-1778163912171.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಶ್ರೀಗಂಧ ಮರಗಳ ಕಳ್ಳತನವನ್ನು ತಡೆಯಲು ಕರ್ನಾಟಕ ಸರ್ಕಾರವು ತಂತ್ರಜ್ಞಾನದ ಮೊರೆ ಹೋಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಮೂಲಕ, ಪರಿಣಾಮಕಾರಿ ತಾಂತ್ರಿಕ ಪರಿಹಾರಗಳನ್ನು ಹೊಂದಿರುವವರಿಂದ ಆವಿಷ್ಕಾರಗಳನ್ನು ಆಹ್ವಾನಿಸಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಉತ್ಪನ್ನ ಘಟಕವನ್ನು ವಿಜಯಪುರದಲ್ಲಿ ಆರಂಭಿಸಲು ಸರ್ಕಾರ ಮುಂದಾದ ಬೆನ್ನಲ್ಲಿಯೇ ರಾಜ್ಯದಲ್ಲಿ ಶ್ರೀಗಂಧ ಮರಗಳ ಕಳ್ಳತನವನ್ನು ತಡೆಯುವುದಕ್ಕೆ ಹೆಚ್ಚಿನ ನಿಗಾವಹಿಸಿದೆ.&amp;nbsp;&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಶ್ರೀಗಂಧ ಮರಕಳ್ಳತನ ತಡೆಯುವುದಕ್ಕೆ ರಾಜ್ಯದ ಯಾವುದೇ ರೈತರು ಅಥವಾ ತಂತ್ರಜ್ಞರು ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರೆ ಕೂಡಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಸಂಪರ್ಕಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಈ ಬಗ್ಗೆ ಮಹಿತಿ ಹಂಚಿಕೊಂಡಿರುವ ಅವರು, ರಾಜ್ಯದ ಹೆಮ್ಮೆಯ ಲಾಂಛನವಾಗಿರುವ 'ಮೈಸೂರು ಸ್ಯಾಂಡಲ್ ಸೋಪ್' ತಯಾರಿಕೆಗೆ ಶ್ರೀಗಂಧವೇ ಜೀವಾಳ. ಆದರೆ, ದಶಕಗಳಿಂದ ಶ್ರೀಗಂಧದ ಬೆಳೆಗಾರರನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಮರಗಳ ಕಳ್ಳತನ. ಈ ಸವಾಲನ್ನು ಎದುರಿಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಈಗ ಸಾರ್ವಜನಿಕರ ಮೊರೆ ಹೋಗಿದೆ. ಶ್ರೀಗಂಧದ ಮರಗಳ ಕಳ್ಳತನ ತಡೆಯಲು ಸುಧಾರಿತ ತಂತ್ರಜ್ಞಾನ ಅಥವಾ ಉಪಕರಣಗಳನ್ನು ಅಭಿವೃದ್ಧಿಪಡಿಸಿದವರಿಗೆ ಕೆಎಸ್&zwnj;ಡಿಎಲ್ ವೇದಿಕೆ ಕಲ್ಪಿಸಿಕೊಡಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಶ್ರೀಗಂಧದ ಮರಗಳನ್ನು ಕಳ್ಳರಿಂದ ರಕ್ಷಿಸಲು ಆಧುನಿಕ ತಂತ್ರಜ್ಞಾನದ ಅಗತ್ಯವಿದೆ ಎಂದು ಮನಗಂಡಿರುವ ಸರ್ಕಾರ, ರೈತರು, ವಿಜ್ಞಾನಿಗಳು, ಸ್ಟಾರ್ಟ್&zwnj;ಅಪ್&zwnj;ಗಳು ಅಥವಾ ಸಂಶೋಧನಾ ಸಂಸ್ಥೆಗಳಿಂದ ಹೊಸ ಆಲೋಚನೆಗಳನ್ನು ಆಹ್ವಾನಿಸಿದೆ.&lt;/p&gt;&lt;img&gt;&lt;p&gt;'ಯಾರೇ ಆಗಲಿ ಶ್ರೀಗಂಧದ ಮರಗಳ ಕಳ್ಳತನ ತಡೆಗೆ ಪರಿಣಾಮಕಾರಿ ತಂತ್ರಜ್ಞಾನದ ಮಾಹಿತಿ ಹೊಂದಿದ್ದರೆ ಅವರು ಕೆಎಸ್&zwnj;ಡಿಎಲ್ ಅನ್ನು ಸಂಪರ್ಕಿಸಬಹುದು. ಸಂಸ್ಥೆಯ ಮುಂದೆ ಆ ತಂತ್ರಜ್ಞಾನದ ಪ್ರಾತ್ಯಕ್ಷಿಕೆ (Demo) ನೀಡಲು ಅವಕಾಶ ನೀಡಲಾಗುವುದು. ಒಂದು ವೇಳೆ ಆ ತಂತ್ರಜ್ಞಾನವು ಸೂಕ್ತವೆಂದು ಕಂಡುಬಂದರೆ, ಅದರ ಅನುಷ್ಠಾನಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಕೆಎಸ್&zwnj;ಡಿಎಲ್ ಭರಿಸಲಿದೆ' ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಎಸ್&zwnj;ಡಿಎಲ್ ಹೊಸ ಪುರಸ್ಕಾರಗಳನ್ನು ಘೋಷಿಸಿದೆ.&lt;/p&gt;&lt;p&gt;&lt;strong&gt;ರೈತರಿಗೆ ಗೌರವ: &lt;/strong&gt;ಕೆಎಸ್&zwnj;ಡಿಎಲ್&zwnj;ಗೆ ಅತಿ ಹೆಚ್ಚು ಶ್ರೀಗಂಧ ಪೂರೈಸಿದ ನಾಲ್ವರು ರೈತರನ್ನು ಗುರುತಿಸಿ, ಜೂನ್ 4ರಂದು (ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ) ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.&lt;/p&gt;&lt;p&gt;&lt;strong&gt;ರಕ್ಷಕರಿಗೆ ಪುರಸ್ಕಾರ: &lt;/strong&gt;ಶ್ರೀಗಂಧ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಳ್ಳತನದ ಬಗ್ಗೆ ನಿಖರ ಮಾಹಿತಿ ನೀಡಿದ ಸಾರ್ವಜನಿಕರನ್ನು ಕೂಡ ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಗುವುದು.&lt;/p&gt;&lt;img&gt;&lt;p&gt;'ಶ್ರೀಗಂಧದ ಅಕ್ರಮ ಕಟಾವು ತಡೆಯಲು ಕಠಿಣ ಕಾನೂನುಗಳಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದರಿಂದ ಕಳ್ಳತನ ಮುಂದುವರಿದಿದೆ. ಇದರಿಂದ ರೈತರು ಶ್ರೀಗಂಧ ಬೆಳೆಸಲು ಭಯಪಡುತ್ತಿದ್ದಾರೆ. ರೈತರಿಗೆ ಕೇವಲ ಆರ್ಥಿಕ ಲಾಭವಲ್ಲದೆ, ಅವರಿಗೆ ರಕ್ಷಣೆಯ ಭರವಸೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ' ಎಂದು ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಮೂರು ವರ್ಷಗಳಲ್ಲಿ ಕೆಎಸ್&zwnj;ಡಿಎಲ್ ರಾಜ್ಯದಾದ್ಯಂತ ರೈತರಿಂದ ಒಟ್ಟು 174.5 ಮೆಟ್ರಿಕ್ ಟನ್ ಶ್ರೀಗಂಧವನ್ನು ಖರೀದಿಸಿದೆ. ಇದಕ್ಕಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 6.08 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಮಧ್ಯವರ್ತಿಗಳ ಕಾಟವಿಲ್ಲದೆ ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸಿಕೊಡಲಾಗಿದೆ.&lt;/p&gt;&lt;img&gt;&lt;p&gt;ಶ್ರೀಗಂಧದ ಉಳಿವಿಗೆ ಮತ್ತು ಬೆಳವಣಿಗೆಗೆ ಕೆಎಸ್&zwnj;ಡಿಎಲ್ ಕೈಗೊಂಡಿರುವ ಈ ಕ್ರಾಂತಿಕಾರಿ ನಿರ್ಧಾರವು ಕೇವಲ ಉದ್ದಿಮೆಗೆ ಮಾತ್ರವಲ್ಲದೆ, ಕೃಷಿ ಕ್ಷೇತ್ರಕ್ಕೂ ಹೊಸ ಚೈತನ್ಯ ನೀಡಲಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/ksdl-invites-technology-to-prevent-sandalwood-theft-minister-mb-patil-awards-sat-5gervqo"/>
        </item>
        <item>
            <title><![CDATA[ವಿಟಿಯು ಪರೀಕ್ಷಾ ದಿನಾಂಕ ಪ್ರಕಟ: ಯುಜಿ ಹಾಗೂ  ಪಿಜಿ ಕೋರ್ಸ್‌ಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ]]></title>
            <link>https://kannada.asianetnews.com/education/vtu-exam-time-table-2026-released-ug-and-pg-exams-begin-in-june-second-week-gdp/articleshow-lk9hedh</link>
            <guid isPermaLink="true">https://kannada.asianetnews.com/education/vtu-exam-time-table-2026-released-ug-and-pg-exams-begin-in-june-second-week-gdp/articleshow-lk9hedh</guid>
            <pubDate>Thu, 07 May 2026 17:15:38 +0530</pubDate>
            <description><![CDATA[ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ತನ್ನ ಪದವಿ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ಕೋರ್ಸ್&zwnj;ಗಳ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜೂನ್ ಎರಡನೇ ವಾರದಿಂದ ಆಗಸ್ಟ್ ಮೂರನೇ ವಾರದವರೆಗೆ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01jrhmm88znqyqj4543w5t6f9v,imgname-vvfd.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಪ್ರಕಟಿಸಿದ್ದು, ಪದವಿ (ಯುಜಿ) ಹಾಗೂ ಸ್ನಾತಕೋತ್ತರ (ಪಿಜಿ) ಕೋರ್ಸ್&zwnj;ಗಳ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.&lt;/p&gt;&lt;h2&gt;ಜೂನ್ ಎರಡನೇ ವಾರದಿಂದ ಪರೀಕ್ಷೆ&lt;/h2&gt;&lt;p&gt;ವಿಟಿಯು ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಜೂನ್ ಎರಡನೇ ವಾರದಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಆಗಸ್ಟ್ ಮೂರನೇ ವಾರದ ಅಂತ್ಯದವರೆಗೆ ನಡೆಯಲಿವೆ. ಹೊಸ ಪಠ್ಯಕ್ರಮ ಹಾಗೂ ಹಳೆಯ ಪಠ್ಯಕ್ರಮದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕವಾಗಿ ವೇಳಾಪಟ್ಟಿಗಳನ್ನು ಪ್ರಕಟಿಸಲಾಗಿದೆ.&lt;/p&gt;&lt;p&gt;ವಿಶ್ವವಿದ್ಯಾಲಯವು ಈ ವೇಳಾಪಟ್ಟಿಯನ್ನು ತನ್ನ ಅಧೀನದಲ್ಲಿರುವ ಎಲ್ಲಾ ಸಂಯೋಜಿತ ಕಾಲೇಜುಗಳಿಗೆ ರವಾನಿಸಿದ್ದು, ವಿದ್ಯಾರ್ಥಿಗಳ ಗಮನಕ್ಕೆ ತರಲು ಕಾಲೇಜುಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಸೂಚನೆ ನೀಡಲಾಗಿದೆ. ಜೊತೆಗೆ, ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ತಮ್ಮ ಪರೀಕ್ಷಾ ದಿನಾಂಕಗಳನ್ನು ತಿಳಿದುಕೊಳ್ಳಲು ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿಯೂ ವೇಳಾಪಟ್ಟಿ ಲಭ್ಯವಿದೆ.&lt;/p&gt;&lt;h2&gt;ಅಧಿಕೃತ ವೆಬ್&zwnj;ಸೈಟ್&zwnj; ನಲ್ಲಿ ಮಾಹಿತಿ ಲಭ್ಯ&lt;/h2&gt;&lt;p&gt;ವಿದ್ಯಾರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕೃತ ವೆಬ್&zwnj;ಸೈಟ್&zwnj; vtu.ac.in ನಲ್ಲಿ ಪರಿಶೀಲಿಸಬಹುದಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮಕ್ಕೆ ಅನುಗುಣವಾಗಿ ದಿನಾಂಕಗಳನ್ನು ಪರಿಶೀಲಿಸಿ ಸಿದ್ಧತೆ ನಡೆಸುವಂತೆ ವಿಶ್ವವಿದ್ಯಾಲಯ ಸೂಚಿಸಿದೆ. ಈ ಪ್ರಕಟಣೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯಲ್ಲಿ ಸಹಾಯಕವಾಗಲಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/education/vtu-exam-time-table-2026-released-ug-and-pg-exams-begin-in-june-second-week-gdp/articleshow-lk9hedh"/>
        </item>
        <item>
            <title><![CDATA[ರಾಜ್ಯದಲ್ಲಿ ಮಳೆ ಆರ್ಭಟ: ಮುಂದಿನ 5 ದಿನ ಗುಡುಗು ಸಹಿತ ಭಾರಿ ಮಳೆ ಮುನ್ನೆಚ್ಚರಿಕೆ, ಬೆಂಗಳೂರಿನಲ್ಲೂ ವರುಣನ ಸಿಂಚನ!]]></title>
            <link>https://kannada.asianetnews.com/gallery/state/karnataka-weather-forecast-heavy-rain-thunderstorm-warning-may-2026-bengaluru-imd-sat-ogrmncf</link>
            <guid isPermaLink="true">https://kannada.asianetnews.com/gallery/state/karnataka-weather-forecast-heavy-rain-thunderstorm-warning-may-2026-bengaluru-imd-sat-ogrmncf</guid>
            <pubDate>Thu, 07 May 2026 16:02:51 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಅಂದರೆ ಇಂದಿನಿಂದ ಮೇ 11ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಳೆ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knds8w34zxderfy8e77w0egc,imgname-delhi-ncr-weather-alert-rain-hailstorm-thunderstorm-western-disturbance-imd-warning-wind-speed-storm-india-4-1775357948004.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಅಂದರೆ ಇಂದಿನಿಂದ ಮೇ 11ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಳೆ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ರಾಜ್ಯದ ಹಲವೆಡೆ ಮುಂದಿನ ಒಂದು ವಾರಗಳ ಕಾಲ ಮಳೆಯ ಅಬ್ಬರ ಜೋರಿರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸುಳಿಗಾಳಿ ಹಾಗೂ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಆಗ್ನೇಯ ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದ ಸಮೀಪ ಕೇರಳ ಕರಾವಳಿಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದು ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದವರೆಗೆ ಹರಡಿದೆ. ಇದರ ಪ್ರಭಾವದಿಂದಾಗಿ ಒಳನಾಡು ಕರ್ನಾಟಕದ ಮೂಲಕ ಹಾದುಹೋಗುವ ಮಾರುತಗಳಲ್ಲಿ ಏರುಪೇರಾಗಿದ್ದು, ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.&lt;/p&gt;&lt;img&gt;&lt;p&gt;ಮೇ 7 ಮತ್ತು 8ರಂದು ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುವ ಸಂಭವವಿದೆ.&lt;/p&gt;&lt;p&gt;&lt;strong&gt;ಮೇ 7: &lt;/strong&gt;ಉತ್ತರ ಒಳನಾಡಿನ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲೂ ವರುಣನ ಅಬ್ಬರ ಜೋರಿರಲಿದೆ.&lt;/p&gt;&lt;p&gt;&lt;strong&gt;ಮೇ 8: &lt;/strong&gt;ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಮಳೆಯ ಜೊತೆಗೆ ಬಲವಾದ ಗಾಳಿ ಬೀಸಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;ಉತ್ತರ ಒಳನಾಡು: &lt;/strong&gt;ಮೇ 7 ರಿಂದ 11 ರವರೆಗೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;ದಕ್ಷಿಣ ಒಳನಾಡು:&lt;/strong&gt; ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಹಾವೇರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗಲಿದೆ.&lt;/p&gt;&lt;p&gt;&lt;strong&gt;ಕರಾವಳಿ: &lt;/strong&gt;ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 8 ರವರೆಗೆ ಬಿರುಗಾಳಿ ಸಹಿತ ಮಳೆಯಾಗಲಿದ್ದು, ನಂತರದ ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿ ದಾಖಲಾಗಿದೆ. ಆದರೆ, ಮಳೆಯ ಪ್ರಭಾವದಿಂದಾಗಿ ಮುಂದಿನ 5 ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.&amp;nbsp;&lt;/p&gt;&lt;p&gt;ಮಳೆಯ ಮುನ್ಸೂಚನೆ ಇರುವುದರಿಂದ ರೈತರು ಹಾಗೂ ಸಾರ್ವಜನಿಕರು ಗುಡುಗು ಸಿಂಚನದ ವೇಳೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹಾಗೂ ಬಿರುಗಾಳಿಯಿಂದ ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-forecast-heavy-rain-thunderstorm-warning-may-2026-bengaluru-imd-sat-ogrmncf"/>
        </item>
        <item>
            <title><![CDATA[ರಮ್ಮಿ ಕಲ್ಚರ್ ಆ್ಯಪ್ ಹೆಸರಲ್ಲಿ ಕೋಟ್ಯಂತರ ವಂಚನೆ: ಬೆಂಗಳೂರು ಸೇರಿ 16 ಕಡೆಗಳಲ್ಲಿ ‘ಇಡಿ’ ಮಿಂಚಿನ ದಾಳಿ!]]></title>
            <link>https://kannada.asianetnews.com/state/enforcement-directorate-ed-raids-16-locations-in-bengaluru-and-delhi-over-rummy-culture-app-fraud-sat/articleshow-7b4qwoi</link>
            <guid isPermaLink="true">https://kannada.asianetnews.com/state/enforcement-directorate-ed-raids-16-locations-in-bengaluru-and-delhi-over-rummy-culture-app-fraud-sat/articleshow-7b4qwoi</guid>
            <pubDate>Thu, 07 May 2026 14:31:39 +0530</pubDate>
            <description><![CDATA[&lt;p&gt;ಆನ್&zwnj;ಲೈನ್ ಗೇಮಿಂಗ್ ಆ್ಯಪ್ 'ರಮ್ಮಿ ಕಲ್ಚರ್' ಮೂಲಕ ನಡೆದಿದೆ ಎನ್ನಲಾದ ವಂಚನೆ ಕೇಸಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೆಂಗಳೂರು ಮತ್ತು ದೆಹಲಿಯ 16 ಕಡೆಗಳಲ್ಲಿ ದಾಳಿ ನಡೆಸಿದೆ. ದೆಹಲಿಯಲ್ಲಿ ದಾಖಲಾದ ಎಫ್&zwnj;ಐಆರ್&zwnj; ಆಧರಿಸಿ, ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಈ ತನಿಖೆ ಕೈಗೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01e4dsw3zh144ra82z71r1j47k,imgname-2020-01-29--1---2--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 07): ಆ&lt;/strong&gt;ನ್&zwnj;ಲೈನ್ ಗೇಮಿಂಗ್ ಆ್ಯಪ್&zwnj;ಗಳ ಮೂಲಕ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ಜನ ಸಾಮಾನ್ಯರಿಗೆ ವಂಚಿಸುತ್ತಿದ್ದ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ED) ಸಮರ ಸಾರಿದೆ. ಜನಪ್ರಿಯ ಆನ್&zwnj;ಲೈನ್ ಗೇಮಿಂಗ್ ಆ್ಯಪ್ ಆದ 'ರಮ್ಮಿ ಕಲ್ಚರ್' (Rummy Culture) ಮೂಲಕ ನಡೆದಿದೆ ಎನ್ನಲಾದ ಬೃಹತ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ದೆಹಲಿಯ ಹಲವು ಕಡೆಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.&lt;/p&gt;&lt;h3&gt;&lt;strong&gt;16 ಕಡೆಗಳಲ್ಲಿ ತಪಾಸಣೆ:&lt;/strong&gt;&lt;/h3&gt;&lt;p&gt;ಸೋಮವಾರ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿರುವ ಇಡಿ ಅಧಿಕಾರಿಗಳು, ಬೆಂಗಳೂರಿನ 12 ಕಡೆ ಹಾಗೂ ದೆಹಲಿಯ 4 ಕಡೆ ಸೇರಿದಂತೆ ಒಟ್ಟು 16 ಸ್ಥಳಗಳಲ್ಲಿ ಜಾಲಿಯಾಡುತ್ತಿದ್ದಾರೆ. ರಮ್ಮಿ ಕಲ್ಚರ್ ಆ್ಯಪ್&zwnj;ನ ವ್ಯವಹಾರಗಳಿಗೆ ಸಂಬಂಧಿಸಿದ ಕಚೇರಿಗಳು ಹಾಗೂ ಈ ಆ್ಯಪ್&zwnj;ನ ಪ್ರಮುಖ ನಿರ್ವಾಹಕರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ದೆಹಲಿ ಎಫ್&zwnj;ಐಆರ್ ಆಧರಿಸಿ ಕ್ರಮ:&lt;/strong&gt;&lt;/h2&gt;&lt;p&gt;ಮೂಲಗಳ ಪ್ರಕಾರ, ರಮ್ಮಿ ಕಲ್ಚರ್ ಆ್ಯಪ್ ಮೂಲಕ ಹಣ ಕಳೆದುಕೊಂಡ ಸಂತ್ರಸ್ತರು ದೆಹಲಿಯಲ್ಲಿ ನೀಡಿದ ದೂರುಗಳ ಅನ್ವಯ ಅಲ್ಲಿನ ಪೊಲೀಸರು ನಾಲ್ಕು ಪ್ರತ್ಯೇಕ ಎಫ್&zwnj;ಐಆರ್ (FIR) ದಾಖಲಿಸಿದ್ದರು. ಈ ಎಫ್&zwnj;ಐಆರ್&zwnj;ಗಳಲ್ಲಿನ ಗಂಭೀರ ಆರೋಪಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಪ್ರಕರಣ ದಾಖಲಿಸಿಕೊಂಡು ಈ ಬೃಹತ್ ಕಾರ್ಯಾಚರಣೆ ಕೈಗೊಂಡಿದೆ.&lt;/p&gt;&lt;h3&gt;&lt;strong&gt;ಹೇಗೆ ನಡೆಯುತ್ತಿತ್ತು ವಂಚನೆ?&lt;/strong&gt;&lt;/h3&gt;&lt;p&gt;ರಮ್ಮಿ ಕಲ್ಚರ್ ಆ್ಯಪ್ ಮೂಲಕ ಆರಂಭದಲ್ಲಿ ಬಳಕೆದಾರರಿಗೆ ಲಾಭದ ಆಸೆ ತೋರಿಸಲಾಗುತ್ತಿತ್ತು. ಒಮ್ಮೆ ಬಳಕೆದಾರರು ದೊಡ್ಡ ಮೊತ್ತದ ಹಣವನ್ನು ಆಟಕ್ಕೆ ತೊಡಗಿಸಿದ ನಂತರ, ತಾಂತ್ರಿಕ ಕೈಚಳಕದ ಮೂಲಕ ಅಥವಾ ವಂಚನೆಯ ಮಾರ್ಗಗಳನ್ನು ಬಳಸಿ ಹಣವನ್ನು ಗುಳುಂ ಮಾಡಲಾಗುತ್ತಿತ್ತು ಎಂಬ ದೂರುಗಳಿವೆ. ಈ ಹಣವನ್ನು ವಿದೇಶಗಳಿಗೆ ಅಥವಾ ಬೇರೆ ಬೇರೆ ಬೇನಾಮಿ ಖಾತೆಗಳಿಗೆ ವರ್ಗಾಯಿಸಲಾಗಿದೆಯೇ ಎಂಬ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಬೆಂಗಳೂರಿನಲ್ಲಿ ತೀವ್ರಗೊಂಡ ತಪಾಸಣೆ:&lt;/strong&gt;&lt;/h2&gt;&lt;p&gt;ಈ ವಂಚನೆ ಜಾಲದ ಕಚೇರಿಗಳು ಮತ್ತು ಪ್ರಮುಖ ವ್ಯವಹಾರಗಳು ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಸಿಲಿಕಾನ್ ಸಿಟಿಯ 12ಕ್ಕೂ ಹೆಚ್ಚು ಕಡೆಗಳಲ್ಲಿ ಇಡಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಡಿಜಿಟಲ್ ಪುರಾವೆಗಳು, ಬ್ಯಾಂಕ್ ಖಾತೆಗಳ ಮಾಹಿತಿ ಹಾಗೂ ಹೂಡಿಕೆಯ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/enforcement-directorate-ed-raids-16-locations-in-bengaluru-and-delhi-over-rummy-culture-app-fraud-sat/articleshow-7b4qwoi"/>
        </item>
        <item>
            <title><![CDATA[ಪಶ್ಚಿಮ ಬಂಗಾಳ ಗೆಲುವಿನ ಬೆನ್ನಲ್ಲೇ ಮೇ 10ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ; ಸಂಸದ ಡಾ.ಸಿ.ಎನ್. ಮಂಜುನಾಥ್]]></title>
            <link>https://kannada.asianetnews.com/state/west-bengal-politics-bjp-cm-oath-taking-pm-modi-karnataka-visit-dr-cn-manjunath-sat/articleshow-y69iq6s</link>
            <guid isPermaLink="true">https://kannada.asianetnews.com/state/west-bengal-politics-bjp-cm-oath-taking-pm-modi-karnataka-visit-dr-cn-manjunath-sat/articleshow-y69iq6s</guid>
            <pubDate>Thu, 07 May 2026 13:05:36 +0530</pubDate>
            <description><![CDATA[&lt;p&gt;ದೇಶದ ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿಜಯಶಾಲಿಯಾಗಿದೆ. ಇದರ ಬೆನ್ನಲ್ಲಿಯೇ ಮೋದಿ ರಾಜ್ಯಕ್ಕೆ ಆಗಮಿಸಿ ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದುಂ ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0n6mqzn22rv9bymfg8q9s0,imgname-narendra-modi-visit-karnataka-dr-cn-manjunath-1778138698495.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಮೇ 07): &lt;/strong&gt;&lsquo;ಮೇ 10ರಂದು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನ ಹೆಚ್&zwnj;ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿಗಳನ್ನು ರಾಜ್ಯ ಬಿಜೆಪಿಯಿಂದ ಅಭಿನಂದಿಸಲಾಗುವುದು. ಅಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ&rsquo; ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಮಾಹಿತಿ ನೀಡಿದರು&lt;strong&gt;.&lt;/strong&gt;&lt;/p&gt;&lt;h3&gt;&lt;strong&gt;ಬಂಗಾಳದಲ್ಲಿ ಸಂವಿಧಾನ ವಿರೋಧಿ ಧೋರಣೆ:&lt;/strong&gt;&lt;/h3&gt;&lt;p&gt;ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಮಂಜುನಾಥ್, 'ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಕದನ ಕುತೂಹಲ ಮೂಡಿಸಿದೆ. ಒಂದು ಅಸೆಂಬ್ಲಿಗೆ ನಿರ್ದಿಷ್ಟ ಅವಧಿ ಎಂಬುದು ಇರುತ್ತದೆ. ಇವತ್ತಿಗೆ ಆ ಅವಧಿ ಪೂರ್ಣಗೊಂಡಿದೆ. ನೈತಿಕವಾಗಿ ಮಮತಾ ಬ್ಯಾನರ್ಜಿ ಅವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಬೇಕು. ಒಂದು ವೇಳೆ ಅವರು ಮೊಂಡುಹಠ ಮುಂದುವರಿಸಿದರೆ, ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಆಟೋಮ್ಯಾಟಿಕ್ ಆಗಿ ಕ್ರಮ ಕೈಗೊಳ್ಳಲಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದರೆ ಕೋರ್ಟ್ ಮೆಟ್ಟಿಲೇರಬಹುದೇ ಹೊರತು, ಈ ರೀತಿ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವುದು ಸರಿಯಲ್ಲ' ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಮೇ 9ಕ್ಕೆ ಬಿಜೆಪಿ ಮುಖ್ಯಮಂತ್ರಿ ಪಟ್ಟ?&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದ ರಾಜಕೀಯ ಹೈಡ್ರಾಮಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ ಎಂದ ಸಂಸದರು, 'ಬರುವ ಮೇ 9ರಂದು ಬೆಳಿಗ್ಗೆ 11 ಗಂಟೆಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ನಾಯಕರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ' ಎಂಬ ಆಶ್ಚರ್ಯಕರ ಮಾಹಿತಿ ಹಂಚಿಕೊಂಡರು.&lt;/p&gt;&lt;h3&gt;&lt;strong&gt;ಹಿಂಸಾಚಾರದ ವಿರುದ್ಧ ಆಕ್ರೋಶ:&lt;/strong&gt;&lt;/h3&gt;&lt;p&gt;ಟಿಎಂಸಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಪಿಎ ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. 'ಬಂಗಾಳದಲ್ಲಿ ಇದುವರೆಗೆ ಸುಮಾರು 450ಕ್ಕೂ ಹೆಚ್ಚು ಹಿಂಸಾಚಾರದ ಪ್ರಕರಣಗಳು ದಾಖಲಾಗಿವೆ. ಸೋತ ಮೇಲೂ ಟಿಎಂಸಿ ಕಾರ್ಯಕರ್ತರು ಹಿಂಸಾಚಾರದಲ್ಲಿ ತೊಡಗಿರುವುದು ಸಂವಿಧಾನ ವಿರೋಧಿ ಧೋರಣೆಯಾಗಿದೆ. ಜನರ ರಕ್ಷಣೆಗಾಗಿ ಬಿಜೆಪಿ ಸರ್ಕಾರ ಬಂದ ಮೇಲೂ ಆರು ತಿಂಗಳ ಕಾಲ ಅಲ್ಲಿ ಸಿಆರ್&zwnj;ಪಿಎಫ್ (CRPF) ನಿಯೋಜನೆ ಮುಂದುವರಿಯಲಿದೆ. ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತ ಅಂತ್ಯವಾಗಿ ಹೊಸ ಅಧ್ಯಾಯ ಶುರುವಾಗಲಿದೆ' ಎಂದರು.&lt;/p&gt;&lt;h3&gt;&lt;strong&gt;ಮೇ 10ಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ:&lt;/strong&gt;&lt;/h3&gt;&lt;p&gt;ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿಯ ಬಗ್ಗೆಯೂ ಮಾಹಿತಿ ನೀಡಿದ ಡಾ. ಮಂಜುನಾಥ್, 'ಮೇ 10ರಂದು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನ ಹೆಚ್&zwnj;ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿಗಳನ್ನು ರಾಜ್ಯ ಬಿಜೆಪಿಯಿಂದ ಅಭಿನಂದಿಸಲಾಗುವುದು. ಅಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತದನಂತರ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ (Art of Living) ಆಶ್ರಮಕ್ಕೆ ತೆರಳಿ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ' ಎಂದು ತಿಳಿಸಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಪಶ್ಚಿಮ ಬಂಗಾಳದ ರಾಜಕೀಯ ಬದಲಾವಣೆ ಮತ್ತು ಪ್ರಧಾನಿಗಳ ಭೇಟಿ ಎರಡೂ ವಿಚಾರಗಳಲ್ಲಿ ಸಂಸದರ ಹೇಳಿಕೆಗಳು ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/west-bengal-politics-bjp-cm-oath-taking-pm-modi-karnataka-visit-dr-cn-manjunath-sat/articleshow-y69iq6s"/>
        </item>
        <item>
            <title><![CDATA[Virat Kohli: ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ಮಾಡಿದ ಉತ್ತರ ಕನ್ನಡದ ಸಿದ್ದಾಪುರ ಹುಡುಗ; ವಿಶೇಷ ವಿಷಯ ಬಿಚ್ಚಿಟ್ರು!]]></title>
            <link>https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy</link>
            <guid isPermaLink="true">https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy</guid>
            <pubDate>Thu, 07 May 2026 12:05:13 +0530</pubDate>
            <description><![CDATA[&lt;p&gt;Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್&zwnj; ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0j2spk2xnxvgz6zakxcn6b,imgname-new-project---2026-05-07t115820.601-1778135426771.jpg" type="image/jpeg" height="390" width="690"/>
            <content:encoded><![CDATA[&lt;p&gt;Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್&zwnj; ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮೂಲತಃ ಸಿದ್ದಾಪುರ ತಾಲೂಕಿನ ಮಕ್ಕಿಗದ್ದೆಯವರು. ಸಿದ್ದಾಪುರ ವಿದ್ಯಾಗಿರಿಯಲ್ಲಿ ವಾಸಿಸುತ್ತಿರುವ ಶಿಕ್ಷಕ ಜಿ.ಜಿ ಹೆಗಡೆ ಮತ್ತು ರೂಪಾ ಹೆಬ್ಬಾರ ದಂಪತಿಯ ಮತ್ರ.&lt;/p&gt;&lt;img&gt;&lt;p&gt;ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಾಲ್ಯದಿಂದಲೆ ವಾಲಿಬಾಲ್, ಬ್ಯಾಡ್ಮಿಟನ್, ಕ್ರಿಕೆಟ್&zwnj;ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಾಗರಾಜ ಹೆಗಡೆ ನಾಲ್ಕು ಐದು ವರ್ಷಗಳಿಂದ ಶಿಕ್ಷಣದ ಜತೆ ಜತೆಗೆ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್&zwnj;ನಲ್ಲಿ ಕ್ರಿಕೆಟ್ ತರಬೇತಿ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಇವರು ಆಡುತ್ತಿರುವ ಕ್ಲಬ್&zwnj;ಗೆ ಜಾಹೀರಾತು ಆಫರ್ ಬಂದಿದ್ದು 30 ಜನರಲ್ಲಿ ಇವರು ಆಯ್ಕೆಯಾಗಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಇದು ನಿಜವೋ ಎಂಬಂತೆ ಇಂದಿಗೂ ಅನಿಸುತ್ತಿಲ್ಲ, ಆ ಕ್ಷಣದ ಕೆಲವು ನೆನಪುಗಳು ಇಲ್ಲಿವೆ.&lt;/p&gt;&lt;p&gt;ಅವರನ್ನು ನೋಡುತ್ತಾ ಬೆಳೆದ ನಾನು, ಇಂದು ವಿರಾಟ್ ಕೊಹ್ಲಿ ಅವರ ಜೊತೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ನೋಡಿದರೆ, ಜೀವನವು ನಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಅಚ್ಚರಿಗೊಳಿಸುತ್ತದೆ ಎಂದು ಅನಿಸುತ್ತದೆ.&lt;/p&gt;&lt;img&gt;&lt;p&gt;'Oakley Meta AI' ಗ್ಲಾಸಸ್&zwnj;ಗಳ ಈ ಚಿತ್ರೀಕರಣದ ಭಾಗವಾಗಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಯಾವಾಗಲೂ ಗೌರವದಿಂದ ಕಾಣುವ ವ್ಯಕ್ತಿಯೊಂದಿಗೆ ಮಾತುಕತೆ ಆಡಿದ್ದು, ಈ ಅನುಭವಕ್ಕೆ ನಾನು ಚಿರಋಣಿ.&lt;/p&gt;&lt;p&gt;ಈ ಕ್ಷಣದಲ್ಲಿ ನನಗೆ ವಿಶೇಷವಾಗಿ ಅನ್ನಿಸಿದ್ದು ಅವರ ಸಾಧನೆಯಲ್ಲ, ಬದಲಾಗಿ ಕ್ರಿಕೆಟ್ ಲೋಕದಲ್ಲಿ ಎಲ್ಲವನ್ನೂ ಸಾಧಿಸಿದ್ದರೂ ಅವರು ತೋರುವ ಆ ನಮ್ರತೆ ಮತ್ತು ಅವರ ವ್ಯಕ್ತಿತ್ವ.&lt;/p&gt;&lt;img&gt;&lt;p&gt;ಇದು ನಾನು ಯಾವಾಗಲೂ ಹತ್ತಿರವಾಗಿ ಇಟ್ಟುಕೊಳ್ಳುವ ನೆನಪುಗಳಲ್ಲಿ ಒಂದು. ಕೆಲವೊಮ್ಮೆ ಕೇವಲ ಮೆಚ್ಚುಗೆಯಾಗಿ ಆರಂಭವಾಗಿದ್ದು ಹೇಗೆ ವಾಸ್ತವವಾಗಿ ಬದಲಾಗಬಲ್ಲದು ಎಂಬುದಕ್ಕೆ ಇದೊಂದು ನೆನಪಿನ ಬುತ್ತಿ.&lt;/p&gt;&lt;img&gt;&lt;p&gt;ವಿರಾಟ್&zwnj; ಕೊಹ್ಲಿ ಅವರಿಂದ ಆಟೋಗ್ರಾಫ್&zwnj; ಕೂಡ ಪಡೆದಿದ್ದಾರೆ.&amp;nbsp;&lt;/p&gt;]]></content:encoded>
            <category>state</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy"/>
        </item>
        <item>
            <title><![CDATA[2028ಕ್ಕೆ ರಾಜ್ಯ ಬಿಜೆಪಿಯಿಂದಲೂ ಗ್ಯಾರಂಟಿ? 'ಮುಳ್ಳನ್ನ ಮುಳ್ಳಿನಿಂದ್ಲೇ ತೆಗಿತೀವಿ' ಅಂದಿದ್ಯಾಕೆ ಆರ್ ಅಶೋಕ್?]]></title>
            <link>https://kannada.asianetnews.com/state/bjp-to-counter-congress-with-its-own-guarantees-in-2028-says-lop-r-ashoka-rav/articleshow-uu5yifr</link>
            <guid isPermaLink="true">https://kannada.asianetnews.com/state/bjp-to-counter-congress-with-its-own-guarantees-in-2028-says-lop-r-ashoka-rav/articleshow-uu5yifr</guid>
            <pubDate>Thu, 07 May 2026 11:11:45 +0530</pubDate>
            <description><![CDATA[&lt;p&gt;2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಪ್ರತಿಯಾಗಿ ಬಿಜೆಪಿ ಕೂಡ ಗ್ಯಾರಂಟಿ ಘೋಷಿಸುವ ಸುಳಿವನ್ನು ವಿಪಕ್ಷ ನಾಯಕ ಆರ್. ಅಶೋಕ್ ನೀಡಿದ್ದಾರೆ. 'ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ' ಎನ್ನುವ ಮೂಲಕ ಕಾಂಗ್ರೆಸ್ ದಾರಿಯಲ್ಲೇ ಸಾಗಿ ಅವರಿಗೆ ತಿರುಗೇಟು ನೀಡುವ ರಣತಂತ್ರ ಬಹಿರಂಗ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jxcbe0cqxwdr7snz546vr1tn,imgname-karnataka-lop-r-ashoka-1749540077974.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.7): &lt;/strong&gt;2028ರ ವಿಧಾನಸಭಾ ಚುನಾವಣೆಯಲ್ಲಿ ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ ಎನ್ನುವ ಮುಖಾಂತರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್&zwnj; ಅವರು ಪರೋಕ್ಷವಾಗಿ ಕಾಂಗ್ರೆಸ್&zwnj; ಪಕ್ಷದ ಮಾದರಿಯಲ್ಲಿ ಗ್ಯಾರಂಟಿಗಳನ್ನು ಘೋಷಿಸುವ ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಪಕ್ಷದ ಕೇಂದ್ರದ ನಾಯಕರು ಗ್ಯಾರಂಟಿಗಳ ಘೋಷಣೆಗೆ ಅವಕಾಶ ನೀಡಲಿಲ್ಲ. ಈಗ ಎಲ್ಲ ಕಡೆ ಗ್ಯಾರಂಟಿಗಳ ಘೋಷಣೆ ನಡೆಯುತ್ತಿದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್&zwnj;ನ ಗ್ಯಾರಂಟಿಗಳಿಗೆ ಕೌಂಟರ್&zwnj; ಆಗಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇವೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ. ಅವರು ಸಣ್ಣ ಮುಳ್ಳು ಹಾಕಿದರೆ, ನಾವು ದೊಡ್ಡ ಮುಳ್ಳು ಹಾಕುತ್ತೇವೆ. ಏನಾಗಲಿದೆ ಎಂದು ಕಾದು ನೋಡಿ. ಅವರೇ ದಾರಿ ತೋರಿಸಿಕೊಟ್ಟಿದ್ದಾರೆ ಎಂದರು.&lt;/p&gt;&lt;p&gt;ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್&zwnj; ಪಕ್ಷದವರು ಐದು ಗ್ಯಾರಂಟಿ ಘೋಷಿಸಿದ್ದರು. ನಾವು ಒಂದೂ ಗ್ಯಾರಂಟಿ ಘೋಷಿಸಲಿಲ್ಲ. ಹೀಗಾಗಿ ಕಾಂಗ್ರೆಸ್&zwnj; ಗ್ಯಾರಂಟಿಗಳ ಮೇಲೆ ಚುನಾವಣೆ ಗೆದ್ದಿದೆ. ನಾವು ಗ್ಯಾರಂಟಿಗಳ ವಿರೋಧಿಗಳಲ್ಲ. ಇನ್ನೂ 25 ಗ್ಯಾರಂಟಿ ಕೊಡಿ ಎಂದು ಸಲಹೆ ನೀಡುತ್ತೇನೆ. ನಾನು ಗ್ಯಾರಂಟಿಗಳನ್ನು ಎಂದೂ ವಿರೋಧಿಸಿಲ್ಲ. ಅವೈಜ್ಞಾನಿಕ ಗ್ಯಾರಂಟಿಗಳ ಬಗ್ಗೆ ನನ್ನ ವಿರೋಧವಿದೆ. ಗ್ಯಾರಂಟಿ ಘೋಷಿಸುವ ಮುನ್ನ ಅದರ ಪರಿಣಾಮಗಳು ಏನು ಎನ್ನುವುದರ ಬಗ್ಗೆ ಹೇಳಬೇಕು ಎಂಬುದು ನಮ್ಮ ವಾದವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.&lt;/p&gt;&lt;h2&gt;ಬೈ ಎಲೆಕ್ಷನಲ್ಲಿ ಆಡಳಿತ ಪಕ್ಷದ ಗೆಲುವು ಸಾಮಾನ್ಯ:&lt;/h2&gt;&lt;p&gt;ಉಪಚುನಾವಣೆ ಸೋಲಿನ ಬಗ್ಗೆ ಪರಾಮರ್ಶನಾ ಸಭೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್&zwnj;, ನಮ್ಮದು ರಾಷ್ಟ್ರೀಯ ಪಕ್ಷ. ಸೋಲಿನ ಪರಾಮರ್ಶನಾ ಸಭೆ ಮಾಡಿ ಚರ್ಚಿಸುತ್ತೇವೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್&zwnj; ಶಾಸಕರು ಮೃತಪಟ್ಟ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ಸಹಜವಾಗಿ ಮತದಾರರಲ್ಲಿ ಅನುಕಂಪ ಇರುತ್ತದೆ. ಅದರಂತೆ ಎರಡೂ ಕಡೆ ಮತ್ತೆ ಕಾಂಗ್ರೆಸ್&zwnj; ಗೆದ್ದಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ 16 ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು 15 ಕಡೆ ಗೆದ್ದಿದ್ದೆವು. ಕಾಂಗ್ರೆಸ್&zwnj; ಸರ್ಕಾರದ ಅವಧಿಯಲ್ಲಿ 5 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಉಪಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳ ಗೆಲುವು ಸರ್ವೆ ಸಾಮಾನ್ಯ. ಆದರೂ ನಾವು ಪ್ರಯತ್ನ ಮಾಡಿ ದಾವಣಗೆರೆಯಲ್ಲಿ ಗೆಲುವಿನ ಹತ್ತಿರ ಬಂದಿದ್ದೇವೆ. ನಮ್ಮಲ್ಲಿ ಯಾವುದೇ ವಿವಾದ ಇಲ್ಲದೆ ಚುನಾವಣೆ ಮಾಡಿದ್ದೇವೆ ಎಂದು ಹೇಳಿದರು.&lt;/p&gt;&lt;p&gt;ಉಪಚುನಾವಣೆ ಸೋಲಿನಿಂದ ಹೆದರಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಗೆಲ್ಲಲು ಕಾಂಗ್ರೆಸ್&zwnj; ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ನಾವು ಸೋಲನ್ನು ಸ್ವೀಕರಿಸಿದ್ದೇವೆ. ಪರಾಮರ್ಶೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಗಟ್ಟಿಯಾಗಿ ಕೆಲಸ ಮಾಡುತ್ತೇವೆ. 2028ಕ್ಕೆ ಬಿಜೆಪಿ ನೇತೃತ್ವದ ಎನ್&zwnj;ಡಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ಹೇಳಿದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bjp-to-counter-congress-with-its-own-guarantees-in-2028-says-lop-r-ashoka-rav/articleshow-uu5yifr"/>
        </item>
        <item>
            <title><![CDATA[ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್ 2026: ಬೆಂಗಳೂರಿಗರ ಹಾಟ್‌ 'ಫೇವರಿಟ್' ಹೋಟೆಲ್‌ಗಳ ಪಟ್ಟಿ ಬಿಡುಗಡೆ!]]></title>
            <link>https://kannada.asianetnews.com/food/swiggy-restaurant-awards-2026-winners-bengaluru-favourite-hotels-and-food-spots-announced-gdp/articleshow-40gd6on</link>
            <guid isPermaLink="true">https://kannada.asianetnews.com/food/swiggy-restaurant-awards-2026-winners-bengaluru-favourite-hotels-and-food-spots-announced-gdp/articleshow-40gd6on</guid>
            <pubDate>Thu, 07 May 2026 10:49:53 +0530</pubDate>
            <description><![CDATA[ಸ್ವಿಗ್ಗಿ ತನ್ನ 'ರೆಸ್ಟೋರೆಂಟ್ ಅವಾರ್ಡ್ಸ್ 2026' ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನ ನೆಚ್ಚಿನ ಹೋಟೆಲ್&zwnj;ಗಳನ್ನು ಬಹಿರಂಗಪಡಿಸಿದೆ. ಫುಡ್ ಡೆಲಿವರಿ ವಿಭಾಗದಲ್ಲಿ ಟ್ರಫಲ್ಸ್, ಮೇಘನಾ ಫುಡ್ಸ್ ಮತ್ತು ಡೈನ್-ಔಟ್ ವಿಭಾಗದಲ್ಲಿ ಶರೀಫ್ ಭಾಯ್ ಬಿರಿಯಾನಿ, ಐರನ್ ಹಿಲ್&zwnj;ನಂತಹ ಹೋಟೆಲ್&zwnj;ಗಳು ವಿಜೇತರಾಗಿವೆ. ಈ ಪ್ರಶಸ್ತಿಗಳನ್ನು 1.3 ಕೋಟಿ ಗ್ರಾಹಕರ ಮತಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kd8kbqc02nq3hy3ake9f9bw7,imgname-----------------------2025-12-24t220217.169-1766594043264.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಉದ್ಯಾನ ನಗರಿಯ ಆಹಾರ ಪ್ರಿಯರ ಅಭಿರುಚಿ ಯಾವತ್ತೂ ವಿಭಿನ್ನ. ಇದೀಗ ಭಾರತದ ಪ್ರಮುಖ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್&zwnj;ಫಾರ್ಮ್ 'ಸ್ವಿಗ್ಗಿ' ತನ್ನ ಬಹುನಿರೀಕ್ಷಿತ 'ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್ 2026' ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿಗರ ನೆಚ್ಚಿನ ಹೋಟೆಲ್&zwnj;ಗಳು ಯಾವುವು ಎಂಬುದು ಅಧಿಕೃತವಾಗಿ ಬಹಿರಂಗವಾಗಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಅತಿ ದೊಡ್ಡ ಸಮೀಕ್ಷೆಯಲ್ಲಿ, ಫುಡ್ ಡೆಲಿವರಿ ಹಾಗೂ ಡೈನ್-ಔಟ್ ವಿಭಾಗಗಳಲ್ಲಿ ಬೆಂಗಳೂರಿನ ಲೆಗಸಿ ಬ್ರ್ಯಾಂಡ್&zwnj;ಗಳು ಮತ್ತು ಹೊಸ ತಲೆಮಾರಿನ ನೆಚ್ಚಿನ ಹೋಟೆಲ್&zwnj;ಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ.&lt;/p&gt;&lt;h2&gt;ಬೆಂಗಳೂರಿನ ನೆಚ್ಚಿನ ಹೋಟೆಲ್&zwnj;ಗಳಾವುವು?&amp;nbsp;&lt;/h2&gt;&lt;p&gt;ಬೆಂಗಳೂರಿನ ಗ್ರಾಹಕರು ತಮಗಿರುವ ವಿಭಿನ್ನ ಹಾಗೂ ವೈವಿಧ್ಯಮಯ ರುಚಿಯ ಒಲವನ್ನು ವೋಟಿಂಗ್ ಮೂಲಕ ಸಾಬೀತುಪಡಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅತಿಹೆಚ್ಚು ಮೆಚ್ಚುಗೆ ಪಡೆದ ಹೋಟೆಲ್&zwnj;ಗಳ ವಿವರ ಇಲ್ಲಿದೆ:&lt;/p&gt;&lt;p&gt;&lt;strong&gt;ಫುಡ್ ಡೆಲಿವರಿ ವಿಜೇತರು:&lt;/strong&gt; ಮನೆಗೆ ಅಥವಾ ಕಚೇರಿಗೆ ಆನ್&zwnj;ಲೈನ್ ಮೂಲಕ ಅತಿ ಹೆಚ್ಚು ಆರ್ಡರ್ ಮತ್ತು ಮೆಚ್ಚುಗೆ ಪಡೆದ ಹೋಟೆಲ್&zwnj;ಗಳ ಪಟ್ಟಿಯಲ್ಲಿ ಟ್ರಫಲ್ಸ್, ನಂದನ ಪ್ಯಾಲೇಸ್, ಮೇಘನಾ ಫುಡ್ಸ್, ಮ್ಯಾಗ್ನೋಲಿಯಾ ಬೇಕರಿ ಹಾಗೂ ಆರ್&zwnj;ಎನ್&zwnj;ಆರ್ ಬಿರಿಯಾನಿ - ಟೇಸ್ಟ್ ಆಫ್ 1953 ಅಗ್ರಸ್ಥಾನ ಪಡೆದುಕೊಂಡಿವೆ.&lt;/p&gt;&lt;p&gt;&lt;strong&gt;ಡೈನ್-ಔಟ್ ವಿಜೇತರು: &lt;/strong&gt;ವಾರಾಂತ್ಯ ಅಥವಾ ಬಿಡುವಿನ ವೇಳೆಯಲ್ಲಿ ಕುಟುಂಬ, ಸ್ನೇಹಿತರೊಂದಿಗೆ ಭೇಟಿ ನೀಡಿ ಊಟ ಸವಿಯುವ ಅತ್ಯುತ್ತಮ ತಾಣಗಳಾಗಿ ಲಿಯಾನ್ಸ್-ಬರ್ಗರ್ಸ್ &amp;amp; ವಿಂಗ್ಸ್, ಹಾರ್ಲಿಸ್ ಫೈನ್ ಬೇಕಿಂಗ್, ಶರೀಫ್ ಭಾಯ್ ಬಿರಿಯಾನಿ, ಗ್ಲಾಡಿಯಾ ಬ್ರೂವರಿ &amp;amp; ಕಿಚನ್ ಹಾಗೂ ಐರನ್ ಹಿಲ್ ಬೆಂಗಳೂರು ಆಯ್ಕೆಯಾಗಿವೆ.&lt;/p&gt;&lt;h2&gt;1.3 ಕೋಟಿ ಮತಗಳು; ಇತಿಹಾಸ ನಿರ್ಮಿಸಿದ ಸ್ವಿಗ್ಗಿ ಅವಾರ್ಡ್ಸ್!&lt;/h2&gt;&lt;p&gt;ಈ ಬಾರಿಯ ಪ್ರಶಸ್ತಿ ಸಮಾರಂಭವು ಸ್ವಿಗ್ಗಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆವೃತ್ತಿಯಾಗಿದೆ. ದೇಶಾದ್ಯಂತ ಒಟ್ಟು 6.43 ಲಕ್ಷ ವಿಶಿಷ್ಟ ಗ್ರಾಹಕರು ಬರೋಬ್ಬರಿ 1.3 ಕೋಟಿಗೂ ಅಧಿಕ ಮತಗಳನ್ನು ಚಲಾಯಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 2.2 ಪಟ್ಟು ಹೆಚ್ಚಿನ ಮತದಾನ ದಾಖಲಾಗಿದೆ. ಸುಮಾರು 43.8 ಲಕ್ಷ ಗ್ರಾಹಕರು ಈ ವೋಟಿಂಗ್ ಲಿಂಕ್&zwnj;ಗಳನ್ನು ತಮ್ಮವರೊಂದಿಗೆ ಹಂಚಿಕೊಂಡಿದ್ದು, 25,000 ಹೊಸ ಗ್ರಾಹಕರು ಮೊದಲ ಬಾರಿಗೆ ಪ್ಲಾಟ್&zwnj;ಫಾರ್ಮ್&zwnj;ಗೆ ಸೇರ್ಪಡೆಯಾಗಿ ವೋಟ್ ಮಾಡಿದ್ದಾರೆ.&lt;/p&gt;&lt;p&gt;ದೆಹಲಿಯಂತಹ ಅತಿ ಹೆಚ್ಚು ವಹಿವಾಟು ನಡೆಯುವ ನಗರಗಳ ಮೇಲೆ ವಿಶೇಷ ಗಮನಹರಿಸುವ ಜೊತೆಗೆ 160ಕ್ಕೂ ಹೆಚ್ಚು ನಗರಗಳಲ್ಲಿ 110 ವಿಭಾಗಗಳ ಅಡಿಯಲ್ಲಿ 15,000 ಬ್ರ್ಯಾಂಡ್&zwnj;ಗಳು ಪ್ರಶಸ್ತಿ ಪಡೆದುಕೊಂಡಿವೆ.&lt;/p&gt;&lt;h2&gt;ಆಹಾರದ ಮೇಲಿನ ಬೆಂಗಳೂರಿಗರ ಪ್ರೀತಿ ಅದ್ಭುತ&lt;/h2&gt;&lt;p&gt;ಈ ಅಭೂತಪೂರ್ವ ಪ್ರತಿಕ್ರಿಯೆ ಕುರಿತು ಮಾತನಾಡಿರುವ ಸ್ವಿಗ್ಗಿ ಫುಡ್ ಮಾರ್ಕೆಟ್&zwnj;ಪ್ಲೇಸ್&zwnj;ನ ಮುಖ್ಯ ವ್ಯಾಪಾರ ಅಧಿಕಾರಿ (ಸಿಬಿಒ) ಸಿದ್ಧಾರ್ಥ್ ಭಾಕೂ, &quot;ಭಾರತದ ಅತ್ಯಂತ ಕ್ರಿಯಾಶೀಲ ಆಹಾರ ಮಾರುಕಟ್ಟೆಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಇಲ್ಲಿನ ಗ್ರಾಹಕರು ತಮ್ಮ ಆಯ್ಕೆಗಳ ಮೂಲಕವೇ ಹೊಸ ಟ್ರೆಂಡ್&zwnj;ಗಳನ್ನು ಸೃಷ್ಟಿಸುತ್ತಾರೆ. ಈ ಬಾರಿಯ ಸ್ವಿಗ್ಗಿ ರೆಸ್ಟೋರೆಂಟ್ ಅವಾರ್ಡ್ಸ್&zwnj;ನಲ್ಲಿ ಕಂಡುಬಂದಿರುವ ಬೃಹತ್ ಸ್ಪಂದನೆ, ಬೆಂಗಳೂರಿಗರಿಗೆ ಊಟದ ಮೇಲಿರುವ ಅಪಾರ ಪ್ರೀತಿಯನ್ನು ತೋರಿಸುತ್ತದೆ. ಹಳೆಯ ಐಕಾನಿಕ್ ಬ್ರ್ಯಾಂಡ್&zwnj;ಗಳಿಂದ ಹಿಡಿದು ಹೊಸ ತಲೆಮಾರಿನ ಫೇವರಿಟ್&zwnj;ಗಳವರೆಗೆ, ಬೆಂಗಳೂರಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಹೋಟೆಲ್&zwnj;ಗಳನ್ನು ಸನ್ಮಾನಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ,&quot; ಎಂದಿದ್ದಾರೆ.&lt;/p&gt;&lt;h2&gt;ದೇಶಾದ್ಯಂತ ಮತ್ತೆ 'ಬಿರಿಯಾನಿ'ಗೇ ನಂಬರ್ 1 ಪಟ್ಟ; ಹೊಸ ಟ್ರೆಂಡ್&zwnj;ಗಳ ದರ್ಬಾರ್&zwnj;&lt;/h2&gt;&lt;p&gt;ರಾಷ್ಟ್ರಮಟ್ಟದಲ್ಲಿ ಒಟ್ಟು 7.02 ಲಕ್ಷ ಮತಗಳನ್ನು ಪಡೆಯುವ ಮೂಲಕ 'ಬಿರಿಯಾನಿ' ಮತ್ತೊಮ್ಮೆ ಅತಿ ಜನಪ್ರಿಯ ಖಾದ್ಯವಾಗಿ ಹೊರಹೊಮ್ಮಿದೆ. ಇದರ ನಂತರದ ಸ್ಥಾನಗಳನ್ನು ಪಿಜ್ಜಾ, ನಾರ್ತ್ ಇಂಡಿಯನ್, ಬರ್ಗರ್ ಮತ್ತು ಚೈನೀಸ್ ಖಾದ್ಯಗಳು ಪಡೆದುಕೊಂಡಿವೆ.&lt;/p&gt;&lt;p&gt;2026ರ ಆವೃತ್ತಿಯಲ್ಲಿ ಗ್ರಾಹಕರ ಹೊಸ ಟ್ರೆಂಡ್&zwnj;ಗಳಿಗೆ ತಕ್ಕಂತೆ ಈಟ್&zwnj;ರೈಟ್, ಕಾರ್ಪೊರೇಟ್/ಡೆಸ್ಕ್ ಈಟ್ಸ್ ಜೊತೆಗೆ ಪಾಸ್ತಾ, ಅರೇಬಿಕ್ ಶೈಲಿಯ ಆಹಾರ, ಚೀಸ್&zwnj;ಕೇಕ್, ಮಂಡಿ, ಮತ್ತು ಗ್ರಿಲ್ಸ್ &amp;amp; ಶಾವಯ ವಿಭಾಗಗಳನ್ನು ಹೊಸದಾಗಿ ಸೇರಿಸಲಾಗಿತ್ತು.&lt;/p&gt;&lt;p&gt;ಅಲ್ಲದೆ, ಸ್ಥಳೀಯ ಸಂಸ್ಕೃತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಬಾರಿ ನಾಟಿ ಸ್ಟೈಲ್ ಬಿರಿಯಾನಿ, ರಾಯಲಸೀಮಾ ಖಾದ್ಯಗಳು, ದಕ್ಷಿಣ ಭಾರತೀಯ ಉಪಹಾರಗಳು, ಮತ್ತು ಮರಾಠಿ ಆಹಾರದಂತಹ ಪ್ರಾದೇಶಿಕ ವಿಭಾಗಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದು ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/food/swiggy-restaurant-awards-2026-winners-bengaluru-favourite-hotels-and-food-spots-announced-gdp/articleshow-40gd6on"/>
        </item>
        <item>
            <title><![CDATA[ಬಿಸಿಲಿಗೆ ಬ್ರೇಕ್, ರಾಜ್ಯದಲ್ಲಿ 7 ದಿನಗಳ ಕಾಲ ಮಳೆ ಅಬ್ಬರ! ಕರಾವಳಿ ಜಿಲ್ಲೆಯಲ್ಲಿ ಮೋಡ ವಾತಾವರಣ]]></title>
            <link>https://kannada.asianetnews.com/state/karnataka-weather-alert-rain-thunderstorms-and-strong-winds-likely-across-state-for-next-7-days-gdp/articleshow-kpp4al2</link>
            <guid isPermaLink="true">https://kannada.asianetnews.com/state/karnataka-weather-alert-rain-thunderstorms-and-strong-winds-likely-across-state-for-next-7-days-gdp/articleshow-kpp4al2</guid>
            <pubDate>Thu, 07 May 2026 10:03:19 +0530</pubDate>
            <description><![CDATA[ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದ ನಡುವೆ, ಹವಾಮಾನ ಇಲಾಖೆಯು ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ಭಾರೀ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbqf60t2j5aa2m3cjxr6ca7,imgname-delhi-ncr-heavy-rainstorm-heatwave-relief-imd-yellow-alert-western-disturbance-weather-update-0-1777436432410.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ಉಷ್ಣ ವಾತಾವರಣ ಜನರನ್ನು ಕಂಗೆಡಿಸಿದೆ. ಆದರೆ ಇದರ ನಡುವೆಯೇ ಕರ್ನಾಟಕದ ವಿವಿಧ ಭಾಗಗಳಲ್ಲಿ ಮುಂದಿನ 7 ದಿನಗಳ ಕಾಲ ಅಲ್ಲಲ್ಲಿ ಗುಡುಗು, ಸಿಡಿಲು ಹಾಗೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮೇ 12ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರೀ ಮಳೆಯೂ ಸುರಿಯಬಹುದೆಂದು ಎಚ್ಚರಿಕೆ ನೀಡಲಾಗಿದೆ.&lt;/p&gt;&lt;p&gt;ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಒಣ ಹಾಗೂ ಬಿಸಿಲಿನ ವಾತಾವರಣ ಮುಂದುವರಿದರೂ ಮಧ್ಯಾಹ್ನದ ಬಳಿಕ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಇದರ ಪರಿಣಾಮವಾಗಿ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.&lt;/p&gt;&lt;h2&gt;7 ದಿನಗಳ ಹವಾಮಾನ ಮುನ್ಸೂಚನೆ&lt;/h2&gt;&lt;p&gt;ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಕೂಡ ಮುಂದಿನ &amp;nbsp;7 ದಿನಗಳ ಹವಾಮಾನ ಮುನ್ಸೂಚನೆ ಹಾಗೂ ಎಚ್ಚರಿಕೆಗಳನ್ನು ಪ್ರಕಟಿಸಿದೆ. ಅದರ ಪ್ರಕಾರ, ರಾಜ್ಯದಾದ್ಯಂತ ಹಲವೆಡೆ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ.&lt;/p&gt;&lt;p&gt;ಕರಾವಳಿ ಕರ್ನಾಟಕ ಭಾಗಗಳಲ್ಲಿ ಇಂದಿನಿಂದ ಮೇ 12ರವರೆಗೆ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆಯಿದೆ.&lt;/p&gt;&lt;h2&gt;ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ&lt;/h2&gt;&lt;p&gt;ಉತ್ತರ ಒಳನಾಡು ಕರ್ನಾಟಕದಲ್ಲಿಯೂ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಈ ಭಾಗಗಳಲ್ಲಿಯೂ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ.&lt;/p&gt;&lt;p&gt;ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಇಂದು ಹಾಗೂ ಮೇ 9ರಿಂದ 12ರವರೆಗೆ ಕೆಲವೆಡೆ ಗುಡುಗು, ಸಿಡಿಲು ಮತ್ತು ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮೇ 7 ಮತ್ತು 8ರಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.&lt;/p&gt;&lt;p&gt;ಹವಾಮಾನ ತಜ್ಞರ ಪ್ರಕಾರ, ಬಿಸಿಲಿನ ತಾಪಮಾನ ಹೆಚ್ಚಳದ ನಡುವೆಯೇ ಸ್ಥಳೀಯ ವಾತಾವರಣದ ಬದಲಾವಣೆಯಿಂದ ಗುಡುಗು ಸಹಿತ ಮಳೆಯಾಗುತ್ತಿದೆ. ಇದರಿಂದ ಕೆಲವೆಡೆ ಉಷ್ಣಾಂಶದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗುವ ಸಾಧ್ಯತೆ ಇದ್ದರೂ, ಸಂಪೂರ್ಣವಾಗಿ ಮಳೆಗಾಲದ ವಾತಾವರಣ ಇನ್ನೂ ಆರಂಭವಾಗಿಲ್ಲ ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಗುಡುಗು-ಸಿಡಿಲಿನ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಬಲವಾದ ಗಾಳಿ ಹಾಗೂ ಮಳೆಯ ಸಮಯದಲ್ಲಿ ಮರಗಳ ಕೆಳಗೆ ನಿಲ್ಲದೇ, ವಿದ್ಯುತ್ ಕಂಬಗಳು ಮತ್ತು ನೀರಿನ ಪ್ರದೇಶಗಳಿಂದ ದೂರವಿರಲು ಸಲಹೆ ನೀಡಲಾಗಿದೆ. ರೈತರು ಹಾಗೂ ಮೀನುಗಾರರು ಸಹ ಹವಾಮಾನ ಮುನ್ಸೂಚನೆ ಗಮನಿಸಿ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;&lt;h2&gt;ರಾಜ್ಯದ ವಿವಿಧ ಜಿಲ್ಲೆಗಳ ತಾಪಮಾನ&lt;/h2&gt;&lt;p&gt;ಬೆಂಗಳೂರಿನಲ್ಲಿ ಪ್ರಸ್ತುತ 24&deg;C ಉಷ್ಣಾಂಶ ದಾಖಲಾಗಿದೆ. ಗರಿಷ್ಠ 33&deg; C&amp;nbsp; ಉಷ್ಣಾಂಶ ದಾಖಲು ಸಾಧ್ಯತೆ . ಕನಿಷ್ಠ 23 &deg;Cಉಷ್ಣಾಂಶ ದಾಖಲು ಸಾಧ್ಯತೆ ಇದೆ.&lt;/p&gt;&lt;p&gt;ಬೆಂಗಳೂರು ಗ್ರಾಮಾಂತರ&lt;/p&gt;&lt;p&gt;ಗರಿಷ್ಠ:33&deg;C&lt;/p&gt;&lt;p&gt;ಕನಿಷ್ಠ : 23&deg;C&lt;/p&gt;&lt;p&gt;ಪ್ರಸ್ತುತ:24&deg;C&lt;/p&gt;&lt;p&gt;ಮೈಸೂರು&lt;/p&gt;&lt;p&gt;34&deg;C&lt;/p&gt;&lt;p&gt;24 &deg;C&lt;/p&gt;&lt;p&gt;ಪ್ರಸ್ತುತ:25&deg;C&lt;/p&gt;&lt;p&gt;ಮಂಡ್ಯ&lt;/p&gt;&lt;p&gt;34&deg;C&lt;/p&gt;&lt;p&gt;24&deg;C&lt;/p&gt;&lt;p&gt;ಪ್ರಸ್ತುತ: 25&deg;C&lt;/p&gt;&lt;p&gt;ಚಾಮರಾಜನಗರ&lt;/p&gt;&lt;p&gt;33&deg;C&lt;/p&gt;&lt;p&gt;24&deg;C&lt;/p&gt;&lt;p&gt;ಪ್ರಸ್ತುತ:25&deg;C&lt;/p&gt;&lt;p&gt;ಹಾಸನ&lt;/p&gt;&lt;p&gt;33&deg;C&lt;/p&gt;&lt;p&gt;22 &deg;C&lt;/p&gt;&lt;p&gt;ಪ್ರಸ್ತುತ:24&deg;C&lt;/p&gt;&lt;p&gt;ಕೊಡಗು&lt;/p&gt;&lt;p&gt;30&deg;C&lt;/p&gt;&lt;p&gt;21 &deg;C&lt;/p&gt;&lt;p&gt;ಪ್ರಸ್ತುತ:23&deg;C&lt;/p&gt;&lt;p&gt;ಚಿಕ್ಕಮಗಳೂರು&lt;/p&gt;&lt;p&gt;30&deg;C&lt;/p&gt;&lt;p&gt;21&deg;C&lt;/p&gt;&lt;p&gt;ಪ್ರಸ್ತುತ:23&deg;C&lt;/p&gt;&lt;p&gt;ಶಿವಮೊಗ್ಗ&lt;/p&gt;&lt;p&gt;36&deg;C&lt;/p&gt;&lt;p&gt;24&deg;C&lt;/p&gt;&lt;p&gt;ಪ್ರಸ್ತುತ: 27&deg;C&lt;/p&gt;&lt;p&gt;ದಾವಣಗೆರೆ&lt;/p&gt;&lt;p&gt;36 &deg;C&lt;/p&gt;&lt;p&gt;25&deg;C&lt;/p&gt;&lt;p&gt;ಪ್ರಸ್ತುತ:28&deg;C&lt;/p&gt;&lt;p&gt;ಚಿತ್ರದುರ್ಗ&lt;/p&gt;&lt;p&gt;36&deg;C&lt;/p&gt;&lt;p&gt;25&deg;C&lt;/p&gt;&lt;p&gt;ಪ್ರಸ್ತುತ:27&deg;C&lt;/p&gt;&lt;p&gt;ತುಮಕೂರು&lt;/p&gt;&lt;p&gt;34&deg;C&lt;/p&gt;&lt;p&gt;23&deg;C&lt;/p&gt;&lt;p&gt;ಪ್ರಸ್ತುತ:25&deg;C&lt;/p&gt;&lt;p&gt;ರಾಮನಗರ&lt;/p&gt;&lt;p&gt;34&deg;C&lt;/p&gt;&lt;p&gt;24&deg;C&lt;/p&gt;&lt;p&gt;ಪ್ರಸ್ತುತ:26&deg;C&lt;/p&gt;&lt;p&gt;****&lt;/p&gt;&lt;p&gt;ಕೋಲಾರ&lt;/p&gt;&lt;p&gt;33&deg;C&lt;/p&gt;&lt;p&gt;23&deg;C&lt;/p&gt;&lt;p&gt;ಪ್ರಸ್ತುತ:,24&deg;C&lt;/p&gt;&lt;p&gt;ಚಿಕ್ಕಬಳ್ಳಾಪುರ&lt;/p&gt;&lt;p&gt;33&deg;C&lt;/p&gt;&lt;p&gt;22&deg;C&lt;/p&gt;&lt;p&gt;ಪ್ರಸ್ತುತ:24&deg;C&lt;/p&gt;&lt;p&gt;ಬಳ್ಳಾರಿ&lt;/p&gt;&lt;p&gt;38&deg;C&lt;/p&gt;&lt;p&gt;27&deg;C&lt;/p&gt;&lt;p&gt;ಪ್ರಸ್ತುತ:29&deg;C&lt;/p&gt;&lt;p&gt;ಕೊಪ್ಪಳ&lt;/p&gt;&lt;p&gt;37&deg;C&lt;/p&gt;&lt;p&gt;27&deg;C&lt;/p&gt;&lt;p&gt;ಪ್ರಸ್ತುತ:29&deg;C&lt;/p&gt;&lt;p&gt;ರಾಯಚೂರು&lt;/p&gt;&lt;p&gt;38&deg;C&lt;/p&gt;&lt;p&gt;28&deg;C&lt;/p&gt;&lt;p&gt;ಪ್ರಸ್ತುತ:30&deg;C&lt;/p&gt;&lt;p&gt;ಯಾದಗಿರಿ&lt;/p&gt;&lt;p&gt;38&deg;C&lt;/p&gt;&lt;p&gt;27&deg;C&lt;/p&gt;&lt;p&gt;ಪ್ರಸ್ತುತ 29&deg;C&lt;/p&gt;&lt;p&gt;ಕಲಬುರಗಿ&lt;/p&gt;&lt;p&gt;37&deg;C&lt;/p&gt;&lt;p&gt;27&deg;C&lt;/p&gt;&lt;p&gt;ಪ್ರಸ್ತುತ:30&deg;C&lt;/p&gt;&lt;p&gt;ಬೀದರ್&lt;/p&gt;&lt;p&gt;34&deg;C&lt;/p&gt;&lt;p&gt;25&deg;C&lt;/p&gt;&lt;p&gt;ಪ್ರಸ್ತುತ: 29&deg;C&lt;/p&gt;&lt;p&gt;ವಿಜಯಪುರ&lt;/p&gt;&lt;p&gt;36*C&lt;/p&gt;&lt;p&gt;27&deg;C&lt;/p&gt;&lt;p&gt;ಪ್ರಸ್ತುತ:31&deg;C&lt;/p&gt;&lt;p&gt;ಬಾಗಲಕೋಟೆ&lt;/p&gt;&lt;p&gt;36&deg;C&lt;/p&gt;&lt;p&gt;27&deg;C&lt;/p&gt;&lt;p&gt;ಪ್ರಸ್ತುತ:30&deg;C&lt;/p&gt;&lt;p&gt;ಬೆಳಗಾವಿ&lt;/p&gt;&lt;p&gt;34&deg;C&lt;/p&gt;&lt;p&gt;23&deg;C&lt;/p&gt;&lt;p&gt;ಪ್ರಸ್ತುತ:26&deg;C&lt;/p&gt;&lt;p&gt;ಧಾರವಾಡ&lt;/p&gt;&lt;p&gt;34&deg;C&lt;/p&gt;&lt;p&gt;24&deg;C&lt;/p&gt;&lt;p&gt;ಪ್ರಸ್ತುತ:27&deg;C&lt;/p&gt;&lt;p&gt;ಗದಗ&lt;/p&gt;&lt;p&gt;35&deg;C&lt;/p&gt;&lt;p&gt;25&deg;C&lt;/p&gt;&lt;p&gt;ಪ್ರಸ್ತುತ:28&deg;C&lt;/p&gt;&lt;p&gt;ಹಾವೇರಿ&lt;/p&gt;&lt;p&gt;36 &deg;C&lt;/p&gt;&lt;p&gt;24&deg;C&lt;/p&gt;&lt;p&gt;ಪ್ರಸ್ತುತ:27&deg;C&lt;/p&gt;&lt;p&gt;ಉತ್ತರ ಕನ್ನಡ&lt;/p&gt;&lt;p&gt;33&deg;C&lt;/p&gt;&lt;p&gt;24&deg;C&lt;/p&gt;&lt;p&gt;ಪ್ರಸ್ತುತ:27&lt;/p&gt;&lt;p&gt;ದಕ್ಷಿಣ ಕನ್ನಡ&lt;/p&gt;&lt;p&gt;36&deg;C&lt;/p&gt;&lt;p&gt;26&deg;C&lt;/p&gt;&lt;p&gt;ಪ್ರಸ್ತುತ:28&deg;C&lt;/p&gt;&lt;p&gt;ಉಡುಪಿ&lt;/p&gt;&lt;p&gt;33&deg;C&lt;/p&gt;&lt;p&gt;27&deg;C&lt;/p&gt;&lt;p&gt;ಪ್ರಸ್ತುತ:29&deg;C&lt;/p&gt;&lt;p&gt;ವಿಜಯನಗರ&lt;/p&gt;&lt;p&gt;40&deg;C&lt;/p&gt;&lt;p&gt;27&deg;C&lt;/p&gt;&lt;p&gt;ಪ್ರಸ್ತುತ:29&deg;C&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-weather-alert-rain-thunderstorms-and-strong-winds-likely-across-state-for-next-7-days-gdp/articleshow-kpp4al2"/>
        </item>
        <item>
            <title><![CDATA[GBA towing scheme failure: ಶುರುವಾದ ಒಂದೇ ತಿಂಗಳಲ್ಲಿ ಹಳ್ಳ ಹಿಡಿದ 'ಜಿಬಿಎ' ಟೋಯಿಂಗ್ ಯೋಜನೆ! ಟ್ರಾಫಿಕ್ ಕಿರಿಕಿರಿ ಇನ್ನಷ್ಟು ಹೆಚ್ಚುವ ಭೀತಿ!]]></title>
            <link>https://kannada.asianetnews.com/state/bengaluru-gba-towing-project-failure-within-a-month-of-its-launch-why/articleshow-nro0wmw</link>
            <guid isPermaLink="true">https://kannada.asianetnews.com/state/bengaluru-gba-towing-project-failure-within-a-month-of-its-launch-why/articleshow-nro0wmw</guid>
            <pubDate>Thu, 07 May 2026 09:58:29 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಅಕ್ರಮ ಪಾರ್ಕಿಂಗ್ ತಡೆಯಲು ಜಿಬಿಎ ಮತ್ತು ಸಂಚಾರಿ ಪೊಲೀಸರು ಜಾರಿಗೆ ತಂದಿದ್ದ ಟೋಯಿಂಗ್ ವ್ಯವಸ್ಥೆಯು ಸಮನ್ವಯದ ಕೊರತೆ ಮತ್ತು ಪೂರ್ವಸಿದ್ಧತೆ ಇಲ್ಲದ ಕಾರಣ ಆರಂಭವಾದ ಒಂದು ತಿಂಗಳಲ್ಲೇ ಸ್ಥಗಿತಗೊಂಡಿದೆ. ಏಕಾಏಕಿ ಸ್ಥಗಿತಗೊಳ್ಳಲು ಕಾರಣವೇನು ತಿಳಿಯಿರಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0avywx414vt563czyeprq6,imgname-----------------------2026-05-07t095112.782-1778127862685.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.7):&lt;/strong&gt; ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಪಾರ್ಕಿಂಗ್&zwnj;ಗೆ ಬ್ರೇಕ್ ಹಾಕಲು ಜಿಬಿಎ (Greater Bengaluru Authority) ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಆರಂಭಿಸಿದ್ದ ಟೋಯಿಂಗ್ ವ್ಯವಸ್ಥೆ ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಜಾರಿಗೆ ತಂದಿದ್ದ ಈ ಯೋಜನೆ ಆರಂಭವಾದ ಒಂದೇ ತಿಂಗಳಿಗೆ 'ಟುಸ್' ಆಗಿದೆ.&lt;/p&gt;&lt;h2&gt;ಜಿಬಿಎ ಸಂಚಾರಿ ಪೊಲೀಸರ ನಡುವೆ ಸಮನ್ವಯದ ಕೊರತೆ&lt;/h2&gt;&lt;p&gt;ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದಿದ್ದ ಈ ಯೋಜನೆ ಇದೀಗ ಆರಂಭಗೊಂಡ ಒಂದೇ ತಿಂಗಳಿಗೆ ಗ್ರಹಣ ಹಿಡಿದಿದೆ. ಜಿಬಿಎ ಮತ್ತು ಸಂಚಾರಿ ಪೊಲೀಸರ ನಡುವಿನ ಸಮನ್ವಯದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಟೋಯಿಂಗ್ ಕಾರ್ಯಾಚರಣೆ ಅರ್ಧದಲ್ಲೇ ನಿಂತುಹೋಗಿದೆ.&lt;/p&gt;&lt;h3&gt;ಹಣ ಜಮೆ ಮಾಡಲು ಬ್ಯಾಂಕ್ ಖಾತೆಯೇ ಇಲ್ಲ!&lt;/h3&gt;&lt;p&gt;ಅಚ್ಚರಿಯ ವಿಷಯವೆಂದರೆ, ಟೋಯಿಂಗ್ ವೇಳೆ ವಾಹನ ಸವಾರರಿಂದ ಸಂಗ್ರಹಿಸುವ ದಂಡದ ಹಣವನ್ನು ಜಮೆ ಮಾಡಲು ಜಿಬಿಎ ಈವರೆಗೆ ಅಧಿಕೃತ ಬ್ಯಾಂಕ್ ಖಾತೆಯನ್ನೇ ತೆರೆದಿಲ್ಲ. ಇದರೊಂದಿಗೆ ಕಾರ್ಯಾಚರಣೆಗೆ ಅಗತ್ಯವಾದ ಸಿಬ್ಬಂದಿಗಳ ಕೊರತೆ ಕೂಡ ಯೋಜನೆ ಸ್ಥಗಿತಗೊಳ್ಳಲು ಕಾರಣವಾಗಿದೆ.&lt;/p&gt;&lt;p&gt;&lt;strong&gt;ವಾಹನಗಳನ್ನ ಸುರಕ್ಷಿತವಾಗಿ ನಿಲ್ಲಿಸಲು ಜಾಗವೇ ಇಲ್ಲ!&lt;/strong&gt;&lt;/p&gt;&lt;p&gt;ಜಿಬಿಎ ವ್ಯಾಪ್ತಿಯ ಪ್ರತಿ ನಗರಪಾಲಿಕೆಗೆ ತಲಾ ಎರಡು ಟೋಯಿಂಗ್ ವಾಹನಗಳನ್ನು ನೀಡಲಾಗಿತ್ತು. ಇವುಗಳ ನಿರ್ವಹಣಾ ವೆಚ್ಚವನ್ನು ಜಿಬಿಎ ಭರಿಸುತ್ತಿತ್ತು. ಆದರೆ, ಟೋಯಿಂಗ್ ಮಾಡಿದ ವಾಹನಗಳನ್ನು ಸುರಕ್ಷಿತವಾಗಿ ನಿಲ್ಲಿಸಲು ನಗರದಲ್ಲಿ ಸೂಕ್ತ ಜಾಗದ ವ್ಯವಸ್ಥೆ ಮಾಡದ ಕಾರಣ ಯೋಜನೆಗೆ ಹಿನ್ನಡೆಯಾಗಿದೆ.&lt;/p&gt;&lt;p&gt;&lt;strong&gt;ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಇನ್ನಷ್ಟು ಹೆಚ್ಚು ಭೀತಿ&lt;/strong&gt;&lt;/p&gt;&lt;p&gt;ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೆ 1,000 ರೂ. ಟೋಯಿಂಗ್ ಶುಲ್ಕ ಮತ್ತು 1,000 ರೂ. ದಂಡ ಸೇರಿ ಒಟ್ಟು 2,000 ರೂ. ವರೆಗೆ ದಂಡ ವಿಧಿಸಲಾಗುತ್ತಿತ್ತು. ಈಗ ಯೋಜನೆ ಸ್ಥಗಿತಗೊಂಡಿರುವುದು ನಿಯಮ ಉಲ್ಲಂಘಿಸುವವರಿಗೆ ಖುಷಿ ತಂದಿದ್ದರೂ, ಟ್ರಾಫಿಕ್ ಕಿರಿಕಿರಿ ಹೆಚ್ಚಾಗುವ ಭೀತಿ ಎದುರಾಗಿದೆ.&lt;/p&gt;&lt;p&gt;&lt;strong&gt;ಮರುಜಾರಿಗೆ ಸಾರ್ವಜನಿಕರ ಆಗ್ರಹ&lt;/strong&gt;&lt;/p&gt;&lt;p&gt;ನಗರದ ಸಂಚಾರ ವ್ಯವಸ್ಥೆ ಸುಧಾರಿಸಲು ಮತ್ತು ಪಾದಚಾರಿಗಳ ಸುರಕ್ಷತೆಗಾಗಿ ಟೋಯಿಂಗ್ ಯೋಜನೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ಲೋಪದೋಷಗಳನ್ನು ಸರಿಪಡಿಸಿ ಯೋಜನೆಯನ್ನು ಮರುಜಾರಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/bengaluru-gba-towing-project-failure-within-a-month-of-its-launch-why/articleshow-nro0wmw"/>
        </item>
        <item>
            <title><![CDATA[ಏಡ್ಸ್‌ ಪೀಡಿತನ ವಿಚ್ಛೇದನ ಆದೇಶ ಹೈಕೋರ್ಟಲ್ಲಿ ರದ್ದು ! ಏನಿದು ಪ್ರಕರಣ?]]></title>
            <link>https://kannada.asianetnews.com/state/hiv-allegations-must-be-proved-not-presumed-karnataka-hc-sets-aside-divorce-rav/articleshow-fzvvecg</link>
            <guid isPermaLink="true">https://kannada.asianetnews.com/state/hiv-allegations-must-be-proved-not-presumed-karnataka-hc-sets-aside-divorce-rav/articleshow-fzvvecg</guid>
            <pubDate>Thu, 07 May 2026 09:33:04 +0530</pubDate>
            <description><![CDATA[&lt;p&gt;ತಾನು ಎಚ್&zwnj;ಐವಿ/ಏಡ್ಸ್&zwnj;ನಿಂದ ಬಳಲುತ್ತಿದ್ದೇನೆ ಎಂದು ಪತ್ನಿ ಮತ್ತು ಆಕೆಯ ಕುಟುಂಬದವರು ನಿಂದಿಸಿದ್ದಾರೆ ಎಂಬ ಪತಿಯ ಆರೋಪದ ಮೇಲೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಏನಿದು ಪ್ರಕರಣ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr09mn1f81qe8363nzj76xmk,imgname-----------------------2026-05-07t091841.319-1778126574639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.7): &lt;/strong&gt;ಎಚ್&zwnj;ಐವಿ/ಏಡ್ಸ್&zwnj;ನಿಂದ ನಾನು ಬಳಲುತ್ತಿದ್ದೇನೆ ಎಂದು ಪತ್ನಿ ಮತ್ತು ಆಕೆಯ ಕುಟುಂಬದವರು ನಿಂದಿಸಿದ್ದಾರೆ ಎಂಬ ಆಧಾರದಲ್ಲಿ ಪತಿಗೆ ವಿಚ್ಛೇದನ ಮಂಜೂರು ಮಾಡಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ&zwnj; ಆದೇಶವನ್ನು &zwnj;ಹೈಕೋರ್ಟ್&zwnj; ರದ್ದುಪಡಿಸಿದೆ.&lt;/p&gt;&lt;p&gt;ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಸೂರಜ್&zwnj; ಗೋವಿಂದರಾಜ್&zwnj; ಮತ್ತು ಡಾ. ಚಿಲ್ಲಕೂರ್&zwnj; ಸುಮಲತಾ ಅವರಿದ್ದ ವಿಭಾಗೀಯ ಪೀಠ, ದಾಖಲೆಯಿಲ್ಲದೇ ಪತಿ ಮಾಡಿರುವ ಇಂತಹ ಗಂಭೀರ ಆರೋಪವನ್ನು ಒಪ್ಪಲಾಗದು. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಲಾಗಿದೆ. ಆ ನ್ಯಾಯಾಲಯ ಹೊಸದಾಗಿ ಪ್ರಕರಣವನ್ನು ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು&zwnj; ಆದೇಶಿಸಿದೆ.&lt;/p&gt;&lt;p&gt;ಪತ್ನಿ ಮತ್ತು ಆಕೆಯ ಕುಟುಂಬದವರು ವಿನಾ ಕಾರಣ ತಾನು ಎಚ್&zwnj;ಐವಿ/ ಏಡ್ಸ್&zwnj;ನಿಂದ ಬಳಲುತ್ತಿದ್ದೇನೆ ಎಂದು ಕೆಟ್ಟದಾಗಿ ನಿಂದಿಸಿದ್ದಾರೆ. ಹೀಗಾಗಿ, ಹಿಂದೂ ವಿವಾಹ ಕಾಯ್ದೆ- 1955ರ ಅಡಿ ತಮ್ಮ ವಿವಾಹ ಅಸಿಂಧುಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ ಪತಿ ಬೀದರ್&zwnj;ನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು&zwnj; ವಿಚ್ಛೇದನ ಮಂಜೂರು ಮಾಡಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್&zwnj;ಗೆ ಮೇಲ್ಮನವಿ&zwnj;&zwnj; ಸಲ್ಲಿಸಿದ್ದರು.&lt;/p&gt;&lt;p&gt;ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್,&zwnj; ಪತಿ ಎಚ್&zwnj;ಐವಿ/ ಏಡ್ಸ್&zwnj;ನಿಂದ ಬಳಲುತ್ತಿರುವುದಾಗಿ ಪತ್ನಿ ಹಾಗೂ ಅವರ ಕುಟುಂಬದ ಸದಸ್ಯರು ನಿಂದಿಸಿದ ಆರೋಪ ಸಾಬೀತಾದರೆ ಅದು ನಿಸ್ಸಂಶಯವಾಗಿ ಮಾನಸಿಕ ಕ್ರೌರ್ಯವಾಗುತ್ತದೆ. ಆದರೆ, ಪ್ರಕರಣದಲ್ಲಿನ ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆಗಳು ಇಲ್ಲ. ಕ್ರೌರ್ಯ ಸಾಬೀತುಪಡಿಸಲು ಸೂಕ್ತ ಮತ್ತು ಆಸಕ್ತಿದಾಯಕ ದಾಖಲೆಗಳನ್ನು ಪತಿ ಒದಗಿಸಿಲ್ಲ&zwnj;&zwnj;. ಕೌಟುಂಬಿಕ ನ್ಯಾಯಾಲಯವು ಪತಿಯ ಹೇಳಿಕೆಗಳನ್ನು ಸ್ವೀಕರಿಸುವ ಮೂಲಕ ಪುರಾವೆಯಿಲ್ಲದೇ ಕೇವಲ ಆರೋಪವನ್ನು ಪರಿಣಾಮಕಾರಿಯಾಗಿ ಬದಲಾಯಿಸಿದೆ. ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.&lt;/p&gt;&lt;h2&gt;ಪ್ರಕರಣವೇನು?:&lt;/h2&gt;&lt;p&gt;ದಂಪತಿ 2002ರ ಜೂ. 16ರಂದು ವಿವಾಹವಾಗಿದ್ದರು. ಪತ್ನಿಯು ಖಾಸಗಿ ಶಾಲೆಯಲ್ಲಿ ಪ್ರಿನ್ಸಿಪಾಲ್&zwnj; ಆಗಿದ್ದು, ಪತಿ ಸಾಂಖ್ಯಿಕ ಇನ್&zwnj;ಸ್ಪೆಕ್ಟರ್&zwnj; ಆಗಿದ್ದಾರೆ. ಇಬ್ಬರು ಮಕ್ಕಳು ದಂಪತಿಗೆ ಜನಿಸಿದ್ದರು. ಮದುವೆಯಾದ ಆರಂಭದಲ್ಲಿ ಜೀವನ ಚೆನ್ನಾಗಿ ನಡೆದಿತ್ತು. ನಂತರ ಇಬ್ಬರು ಪುತ್ರರೊಂದಿಗೆ ಪತ್ನಿ ತವರು ಮನೆಗೆ ಸೇರಿದ್ದರು. ಸಾಕಷ್ಟು ಬಾರಿ ಕರೆದರೂ ತನ್ನ ಜೊತೆ ಬಂದಿಲ್ಲ. &zwnj;ಬಳಿಕ ತನ್ನನ್ನು ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಪತಿ ವಿಚ್ಛೇದನ ಕೋರಿದ್ದರು.&zwnj;&lt;/p&gt;&lt;p&gt;ಇದಕ್ಕೆ ಪ್ರತಿಯಾಗಿ ಪತ್ನಿ,&zwnj; ಅನೈತಿಕ ಸಂಬಂಧ ಹೊಂದಿರುವ ಪತಿಗೆ ಆ ಸಂಬಂಧಿಂದಲೂ ಎರಡು ಮಕ್ಕಳಾಗಿದ್ದು, ಈ ಕಾರಣಕ್ಕಾಗಿ ಅವರನ್ನು ತೊರೆದಿರುವುದಾಗಿ ವಾದಿಸಿದ್ದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/hiv-allegations-must-be-proved-not-presumed-karnataka-hc-sets-aside-divorce-rav/articleshow-fzvvecg"/>
        </item>
        <item>
            <title><![CDATA[BS Yadiyurappa: ಜನಪರ ಕಾಯಕ, ದಣಿವರಿಯದ ನಾಯಕ ಬಿಎಸ್‌ವೈ]]></title>
            <link>https://kannada.asianetnews.com/state/a-legacy-of-public-welfare-rajya-sabha-mp-lehar-singh-s-column-on-bs-yediyurappa-s-tenure-rav/articleshow-va9phic</link>
            <guid isPermaLink="true">https://kannada.asianetnews.com/state/a-legacy-of-public-welfare-rajya-sabha-mp-lehar-singh-s-column-on-bs-yediyurappa-s-tenure-rav/articleshow-va9phic</guid>
            <pubDate>Thu, 07 May 2026 08:25:35 +0530</pubDate>
            <description><![CDATA[&lt;p&gt;ನಾಲ್ಕು ಬಾರಿ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಜೀವನ, ಅವರ 'ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು' ತತ್ವ ಮತ್ತು ವಿಶಿಷ್ಟ ಆಡಳಿತ ಶೈಲಿಯನ್ನು ಈ ಲೇಖನ ವಿವರಿಸುತ್ತದೆ. ಅವರ ಹೋರಾಟದ ಹಾದಿ, ಭಾಗ್ಯಲಕ್ಷ್ಮಿ ಬಾಂಡ್&zwnj;ನಂತಹ ಜನಪರ ಯೋಜನೆಗಳು ಮತ್ತು ಆಡಳಿತ ಅವರ ನಾಯಕತ್ವಕ್ಕೆ ಹಿಡಿದ ಕನ್ನಡಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jygastagxbc4xtqssbmztxdg,imgname-----------------------2025-06-24t121237.239-1750747375952.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿ.ಎಸ್.ಯಡಿಯೂರಪ್ಪ 2007ರಿಂದ 2021ರವರೆಗೆ ಒಟ್ಟು ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು. ಹಾಗಂತ ಅವರು ಈ ರಾಜ್ಯದ ಆಡಳಿತ ನಡೆಸಿದ್ದು ಅಬ್ಬಬ್ಬಾ ಅಂದರೆ ಐದು ವರ್ಷ. ಆದರೆ ಮೂಡಿಸಿದ ಛಾಪು ಅಗಾಧ. ಆರೆಸ್ಸೆಸ್ ಸ್ವಯಂಸೇವಕನಾಗಿ, ಧ್ಯೇಯ ಸಾಧನೆಯ ಹಾದಿಯಲ್ಲಿ ಪೂರ್ಣವಾದಿ ಕಾರ್ಯಕರ್ತನಾಗಿ, ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿ, ಕರ್ನಾಟಕ ವಿಧಾನಸಭೆ ಶಾಸಕರಾಗಿ, ವಿಪಕ್ಷ ನಾಯಕರಾಗಿ, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ಅವರು ಮೂಡಿಸಿದ ಹೆಜ್ಜೆ ಗುರುತುಗಳು ಅವರಿಗೆ ಅವರೇ ಸಾಠಿ!&lt;/p&gt;&lt;p&gt;ಯಡಿಯೂರಪ್ಪ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ, ಉನ್ನತ ಶಿಕ್ಷಣಕ್ಕೂ ತಮ್ಮನ್ನು ತಾವು ತೆರೆದುಕೊಂಡವರಲ್ಲ. ಆದರೂ ಅವರ ಆಡಳಿತ ಶೈಲಿ ಬೇರೆ ಎಲ್ಲ ಮಂತ್ರಿ ಮುಖ್ಯಮಂತ್ರಿಗಳಿಗೂ ಮಿಗಿಲು. ಕಾರಣ ಜನರ ಬದುಕು ಹಸನಾಗಿಸಲು ಬಲು ಸುಧೀರ್ಘ ಕಾಲ ಅವರ ಅಹರ್ನಿಶಿ ತುಡಿತ ಮತ್ತು ದುಡಿತದ ಅನುಭವ ಮಾತ್ರ ಕಾರಣ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.&lt;/p&gt;&lt;h2&gt;ಸರ್ವರಿಗೂ ಸಮಪಾಲು/ಸಮಬಾಳು: -ಯಡಿಯೂರಪ್ಪ ನಂಬಿದ ತತ್ವ, ಅನುಸರಿಸಿದ ಸಿದ್ಧಾಂತ&lt;/h2&gt;&lt;p&gt;ಅಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಇಲಾಖೆಗಳ ಮುಖ್ಯಸ್ಥರ ಸಭೆ. ಮುಖ್ಯಮಂತ್ರಿ ಬಿ.ಎಸ್&zwnj;.ಯಡಿಯೂರಪ್ಪನವರು ಸಭೆಯ ಅಧ್ಯಕ್ಷತೆ ವಹಿಸಿ ಅತ್ಯಂತ ಗಂಭೀರ ವಾದನರಾಗಿ ಮಾತು ಆರಂಭಿಸಿದರು.&lt;/p&gt;&lt;p&gt;ಅವರ ಮೊದಲ ಮಾತು, &lsquo;ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು&rsquo; ಎನ್ನುವುದೇ ನಮ್ಮ ಸರಕಾರದ ಆದ್ಯತೆ. ನಾವೆಲ್ಲರೂ ಬದ್ಧತೆ, ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಈ ಗುರಿ ಸಾಧನೆ ಕಷ್ಟವೇನಲ್ಲ ಎಂಬುದಾಗಿತ್ತು.&lt;/p&gt;&lt;p&gt;ಹಾಗೆಯೇ ಖಡಕ್&zwnj; ಐಎಎಸ್&zwnj; ಅಧಿಕಾರಿಯೊಬ್ಬರನ್ನು ಉದ್ದೇಶಿಸಿ, &lsquo;ಏನ್&zwnj; ಸ್ವಾಮೀ, ನಾನು ಹೇಳಿದ್ದಕ್ಕೆ ನೀವು ಸಹಮತ ವ್ಯಕ್ತಪಡಿಸುತ್ತೀರಾ&rsquo; ಎಂದು ಪ್ರಶ್ನಿಸಿದವರೇ &lsquo;ಸರಕಾರ ಮಾನವೀಯ ಅಂತಃಕರಣದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಎಲ್ಲದಕ್ಕೂ ಕಾನೂನು ಕಟ್ಟಳೆ ಎಂದುಕೊಂಡು ವಿಳಂಬಿಸಿದರೆ ಬಡವರ, ಜನ ಸಾಮಾನ್ಯರ ಬದುಕನ್ನು ಹಸನುಗೊಳಿಸಲು ಸಾಧ್ಯವಾಗುವುದಿಲ್ಲ. ಬಡವರ ಅಭಿವೃದ್ಧಿ ವಿಚಾರ ಬಂದಾಗ ನಿಯಮಗಳನ್ನು ಸ್ವಲ್ಪ ಸಡಿಲಿಸಬೇಕು. ನಾವು ಅವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಬೇಕು. ನಮಗೊಂದು ದೇವದುರ್ಲಭ ಅವಕಾಶ ಸಿಕ್ಕಿದೆ. ಅದು ವ್ಯರ್ಥವಾಗಬಾರದು&rsquo; ಎಂದು ಅಷ್ಟೇ ಖಡಕ್ಕಾಗಿ ಹೇಳಿದರು. ಅದಕ್ಕೆ ಆ ಐಎಎಸ್&zwnj; ಅಧಿಕಾರಿ ನಗುತ್ತಲೇ ಸ್ಪಂದಿಸಬೇಕಾಯಿತು.&lt;/p&gt;&lt;p&gt;ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಸ್ಥಾನದಲ್ಲಿದ್ದ ಆ ಅಧಿಕಾರಿ ಸ್ವಲ್ಪ ಜಿಗುಟಿನ ಸ್ವಭಾವದವರಾಗಿದ್ದರು. ಹಾಗಾಗಿ ಉನ್ನತಾಧಿಕಾರಿಗಳು ಸ್ಪಂದನಶೀಲರಾಗಿ ಕೆಲಸ ಮಾಡಿದರೆ ಮಾತ್ರ ಆಡಳಿತ ಯಂತ್ರಕ್ಕೆ ನಿರೀಕ್ಷಿತ ವೇಗ ಸಿಗಲು ಸಾಧ್ಯ. ಹಿರಿಯ ಅಧಿಕಾರಿಗೆ ನಯವಾಗಿ ಚಾಟಿ ಬೀಸುವ ಮೂಲಕ ಈ ಸಂದೇಶವನ್ನು ಯಡಿಯೂರಪ್ಪನವರು ರವಾನಿಸಿದ್ದರು. ತನ್ಮೂಲಕ ತಮ್ಮ ನೇತೃತ್ವದ ಸರಕಾರದ ಆದ್ಯತಾ ಸೂಚಿಯನ್ನು ಪ್ರಾರಂಭದಲ್ಲೆ ಸ್ಪಷ್ಟಗೊಳಿಸಿದ್ದರು.&lt;/p&gt;&lt;p&gt;ಆಡಳಿತದ ಉದ್ದಕ್ಕೂ ಪ್ರತಿಕ್ಷಣವೂ ಯಡಿಯೂರಪ್ಪ ನುಡಿದಂತೆ ನಡೆದರು. ಅವರ ಈ ಜನಪರ ಹಠವಾದಿ ನಿಲುವಿನಿಂದಾಗಿ ಹಲವರ ವಿರೋಧವನ್ನೂ ಎದುರಿಸಬೇಕಾಯಿತು, ರಾಜಕೀಯ ಸವಾಲುಗಳಿಗೂ ಸಿಲುಕಬೇಕಾಗಿ ಬಂತು ಆ ವಿಚಾರ ಬೇರೆ.&lt;/p&gt;&lt;p&gt;&lt;strong&gt;ಯಡಿಯೂರಪ್ಪ ಎಂದರೆ ಹೋರಾಟ:&lt;/strong&gt;&lt;/p&gt;&lt;p&gt;ರಾಜಕೀಯದಲ್ಲಿ ಆರಂಭದಿಂದ ಕೊನೆವರೆಗೆ ಯಡಿಯೂರಪ್ಪ ಸವೆಸಿದ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಅದು ಕಲ್ಲುಮುಳ್ಳಿನ ಹಾದಿಯಾಗಿತ್ತು. ಯಡಿಯೂರಪ್ಪ ಎಂದರೆ ಅಕ್ಷರಶಃ ಕಾದ ಕುಲುಮೆಯಲ್ಲಿ ಸೋಸಿ ಪರಿಪಕ್ವವಾದ ವ್ಯಕ್ತಿತ್ವ. ಶಿಕಾರಿಪುರದಿಂದ ಆರಂಭವಾಗಿ ವಿಧಾನ ಸೌಧದ ಮೂರನೇ ಮಹಡಿವರೆಗೆ ಪ್ರತಿದಿನ ಪ್ರತಿ ಕ್ಷಣ ಹೋರಾಟ ಹೋರಾಟ ಹೋರಾಟ.&lt;/p&gt;&lt;p&gt;ಅಧಿಕಾರದ ಕುರ್ಚಿಯ ಮೇಲೆ ಕುಳಿತಾಗಲೂ ಕಾರಣ ಆಕರಣಗಳಿಗೆ ಹೋರಾಡಿದ ಯಾವುದಾದರೂ ಓರ್ವ ನಾಯಕ ಇದ್ದರೆ ಅದು ಯಡಿಯೂರಪ್ಪ ಮಾತ್ರ ಎಂದರೆ ಅತಿಶಯೋಕ್ತಿ ಆಗಲಾರದು.&lt;/p&gt;&lt;p&gt;ಒಟ್ಟಿನಲ್ಲಿ ಹೋರಾಟದಿಂದಲೇ ರಾಜಕೀಯ ಬದುಕು ರೂಪಿಸಿಕೊಂಡ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರಿಗೊಂದು ಒಂದು ಅನ್ವರ್ಥಕ ಬಿರುದು ಪ್ರಾಪ್ತವಾಯಿತು.&lt;/p&gt;&lt;p&gt;ಪ್ರಖರ ಹೋರಾಟಕ್ಕೆ ಹೆಸರುವಾಸಿಯಾದ &lsquo;ಯಡಿಯೂರಪ್ಪ ಗುಡುಗಿದರೆ ವಿಧಾನಸೌಧವೇ ನಡುಗುವುದು&rsquo; ಎಂಬುದು ಆ ಬಿರುದು. ಈ ಮಾತು ಆಗಲೂ ಈಗಲೂ ಸತ್ಯ ಎಂಬುದು ಸಿಂಹ ಯಾವತ್ತಿದ್ದರೂ ಸಿಂಹವೇ ಎಂಬ ಮಾತನ್ನು ಸಾಕ್ಷೇಕರಿಸುವಂತಿದೆ.&lt;/p&gt;&lt;p&gt;&lt;strong&gt;ಯಡಿಯೂರಪ್ಪ ಎಂದರೆ ವೇಗ!:&lt;/strong&gt;&lt;/p&gt;&lt;p&gt;ಯಡಿಯೂರಪ್ಪ ಇಂದಿನ ಕೆಲಸ ನಾಳೆ ಮಾಡು ಎಂಬ ಜಾಯಮಾನದವರಲ್ಲ. ಇಂದಿನ ಕೆಲಸವನ್ನು ಈ ಕ್ಷಣದಲ್ಲೇ ಮಾಡು ಎನ್ನುವವರು. ಅವರ ಪದಕೋಶದಲ್ಲಿ ಆಯಿತು, ಹೋಯಿತು, ನೋಡೋಣ ಎಂಬ ಪದಗಳೇ ಇರಲಿಲ್ಲ. ಅದರ ಪರಿಣಾಮ ಅಧಿಕಾರದುದ್ದಕ್ಕೂ ಯಡಿಯೂರಪ್ಪ ನಡೆದು ಸಾಗಿದರೆ ಸಹವರ್ತಿ ಮಂತ್ರಿಗಳು ಮತ್ತು ಅಧಿಕಾರಿಗಳು ಇಡುಸಿರುಬಿಡುತ್ತಾ ಓಡಲೇಬೇಕಾಗಿತ್ತು. ಬೆಳಗಿನ ಜಾವ ನಾಲ್ಕೂವರೆಯಿಂದ ರಾತ್ರಿ 12ರ ನಡುರಾತ್ರಿಯವರೆಗೆ ಯಡಿಯೂರಪ್ಪ ಕಾರ್ಯ ತತ್ಪರ, ಬಿಡುವಿಲ್ಲದ ಕೆಲಸವೇ ಅವರ ವಿಶ್ರಾಂತಿ, ವಿರಾಮ.&lt;/p&gt;&lt;p&gt;&lt;strong&gt;ಯಡಿಯೂರಪ್ಪ ಎಂದರೆ ಶುದ್ಧ ಅಂತಃಕರಣ!:&lt;/strong&gt;&lt;/p&gt;&lt;p&gt;ಹೋರಾಟ, ಗುಡುಗು ಸಿಡಿಲು, ಘರ್ಜನೆಗಳಿಂದಲೇ ರೂಪಿತವಾದ ಯಡಿಯೂರಪ್ಪನವರೇ ಸ್ವತಃ ಆಡಳಿತದ ಸೂತ್ರ ಹಿಡಿದಾಗ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿತ್ತು.&lt;/p&gt;&lt;p&gt;ಏಕೆಂದರೆ, ಸಣ್ಣ ವ್ಯತ್ಯಾಸ ಕಂಡರೂ ಸಿಡಿಮಿಡಿಗೊಳ್ಳುವ, ಕೋಪಗೊಳ್ಳುವ ಪ್ರವೃತ್ತಿ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ, ಅವರು ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಕಟ್ಟ ಕಡೆಯ ಜನರಿಗೂ ಸರಕಾರದ ಯೋಜನೆಗಳನ್ನು ತಲುಪಿಸುವ ದೃಷ್ಟಿಯಿಂದ ಆಡಳಿತ ಯಂತ್ರವನ್ನು ವಿಶ್ವಾಸಕ್ಕೆ ತೆಗೆದುಕೊಂಡರು.&lt;/p&gt;&lt;p&gt;ಅದಕ್ಕೆ ಅಪಾರವಾದ ಸಹನೆ, ತಮ್ಮ ಸುದೀರ್ಘ ರಾಜಕೀಯ ಅನುಭವವನ್ನು ಬಂಡವಾಳವಾಗಿ ತೊಡಗಿಸಿದರು. ಅಂದರೆ ಜನರ ಕೆಲಸವಾಗಬೇಕು, ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬೇಕು ಎಂಬ ಕಾಳಜಿಯಿಂದ ಸಿಟ್ಟನ್ನು ನಿಯಂತ್ರಿಸಿಕೊಂಡರು. ಅರ್ಥಾತ್&zwnj; ಅಗತ್ಯ ಬಂದಾಗ ಕುಸುಮದಷ್ಟು ಮೃದುವಾದರು. ಅಧಿಕಾರಿಗಳು ನಿಷ್ಕಾಳಜಿ ತೋರಿದಾಗ, ಬೇಜವಾಬ್ದಾರಿಯಾಗಿ ನಡೆದುಕೊಂಡಾಗ ಬೈದು ಬಿಗಿ ಮಾಡಲು ಹಿಂದೇಟು ಹಾಕಲಿಲ್ಲ. &lsquo;ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ&rsquo; ಎಂದು ಸಂಸ್ಕೃತೋಕ್ತಿಯೊಂದಿದೆ. ಹಾಗೆಯೇ ಯಡಿಯೂರಪ್ಪನವರು ತಮ್ಮ ಆಡಳಿತ ಯಂತ್ರಕ್ಕೆ ತಿಳಿ ಹೇಳುವ ಸಂದರ್ಭ ಬಂದಾಗ ತಿಳಿ ಹೇಳಿದರು. ಕಿವಿ ಹಿಂಡುವ ಅನಿವಾರ್ಯತೆ ಸೃಷ್ಟಿಯಾದಾಗ ಅದನ್ನೂ ಮಾಡಿದರು. ಯಡಿಯೂರಪ್ಪನವರ ಈ ಆಡಳಿತದ ಶೈಲಿಯಿಂದಾಗಿ ಅಧಿಕಾರಿ ವರ್ಗ ಸದಾ ಜಾಗ್ರತಾವಸ್ಥೆಯಲ್ಲಿ ಇರುವಂತಾಯಿತು. ಕೆಳಹಂತದ ನೌಕರರವರೆಗೂ ಇದು ವಿಸ್ತರಣೆಯಾಯಿತು.&lt;/p&gt;&lt;p&gt;&lt;strong&gt;ಆಡಳಿತದ ಛಾಪು:-ಯಡಿಯೂರಪ್ಪಗೆ ಸರಿಸಾಟಿ ಬೇರಿಲ್ಲ;&lt;/strong&gt;&lt;/p&gt;&lt;p&gt;ಯಡಿಯೂರಪ್ಪನವರ ಅಧಿಕಾರ ಪರ್ವ ಆರಂಭವಾದದ್ದು ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗುವ ಮೂಲಕ.&lt;/p&gt;&lt;p&gt;ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿದ್ದ ಅವರು ತಮ್ಮ ಮೊದಲ ಮುಂಗಡ ಪತ್ರದಲ್ಲೇ ಛಾಪು ಮೂಡಿಸಿದ್ದರು. ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ರುಜುವಾಗಿಸಿದರು.&lt;/p&gt;&lt;p&gt;ಪರಿಣಾಮ ಬಡ ರೈತರ ಸಾಲ ಮನ್ನಾದಂತಹ ಅಸಾಧ್ಯ ನಿಲುವು ತಾಳಿದರು. ಕುಟುಂಬದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಬಾಂಡ್&zwnj; ಯೋಜನೆಯನ್ನು ಘೋಷಿಸಿ ಜಾರಿಗೊಳಿಸಿದರು. ಕೃಷಿ ಹೊಂಡ ನಿರ್ಮಾಣ ಸೇರಿದಂತೆ ರೈತ ಪರವಾದ ಹತ್ತು ಹಲವು ಕಾರ್ಯಕ್ರಮ ಘೋಷಿಸಿದರು. ಗ್ರಾಮಗಳ ಹಳ್ಳಿಹಳ್ಳಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು, ತಲೆ ಮೇಲೊಂದು ಸೂರು ಕಲ್ಪಿಸಿದರು. ಶಾಲಾ ಮಕ್ಕಳಿಗೆ ಬೈಸಿಕಲ್ ಯಡಿಯೂರಪ್ಪ ಜನಪ್ರಿಯ ಯೋಜನೆಗಳಲ್ಲಿ ಹೊಸ ಮೈಲಿಗಲ್ಲು.&lt;/p&gt;&lt;p&gt;ಬಹಳ ಮುಖ್ಯವಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆ ಸಂಬಂಧ ಡಾ। ಡಿ.ಎಂ.ನಂಜುಂಡಪ್ಪ ಅವರು ನೀಡಿದ್ದ ವರದಿಯ ಶಿಫಾರಸುಗಳ ಅನುಷ್ಠಾನ ಸಂಬಂಧ ಅನುದಾನ ಹಂಚಿಕೆ ಮಾಡಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ತೊಟ್ಟು ಜಾರಿಗೊಳಿಸಿದರು. ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆಯಂತಹ ವಿನೂತನ ಯೋಜನೆ ರೂಪಿಸಿದರು. ಸಾರಾಯಿ ಮಾರಾಟ ನಿಷೇಧ ಕೂಡ ಯಡಿಯೂರಪ್ಪ ಅವರದ್ದೇ ಇಚ್ಛಾಸಕ್ತಿಯ ಪರಿಣಾಮ. ಎಲ್ಲ ಬಗೆಯ ಲಾಟರಿಗಳನ್ನು ನಿಷೇಧಿಸಿ 2007ರ ಏಪ್ರಿಲ್&zwnj; 1ರಿಂದ ಅನ್ವಯವಾಗುವಂತೆ ಕರ್ನಾಟಕವನ್ನು ಲಾಟರಿ ಮುಕ್ತ ರಾಜ್ಯವೆಂದು ಘೋಷಿಸಿದ್ದು ಐತಿಹಾಸಿಕ ಕ್ರಮ ಎನ್ನಲು ಅಡ್ಡಿಯಿಲ್ಲ.&lt;/p&gt;&lt;p&gt;&lt;strong&gt;ತಮಗೆ ತಾವೇ ಮೇಲ್ಪಂಕ್ತಿ ಹಾಕಿದರು:&lt;/strong&gt;&lt;/p&gt;&lt;p&gt;2008ರಲ್ಲಿ ಬಿಜೆಪಿ ಸರಕಾರ ರಚಿಸಿ ಮುಖ್ಯಮಂತ್ರಿಯಾದ ಬಿ.ಎಸ್&zwnj;.ಯಡಿಯೂರಪ್ಪನವರು ಜಾರಿಗೊಳಿಸಿದ ಸುಧಾರಣಾ ಕ್ರಮಗಳು, ಜನಪರ ಯೋಜನೆಗಳು ಬಗ್ಗೆ ಹೇಳುತ್ತ ಹೋದರೆ ಬೃಹತ್&zwnj; ಸಂಪುಟವನ್ನೇ ಬರೆಯಬಹುದು.&lt;/p&gt;&lt;p&gt;ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತದ ಮುಖ್ಯಸ್ಥರೊಬ್ಬರ ನಡವಳಿಕೆ ಅವರ ಕೆಳಗಿನವರ ಮೇಲೆ ಪ್ರಭಾವ ಬೀರುತ್ತದೆ. ಸರಕಾರಿ ವ್ಯವಸ್ಥೆಯೆಂದರೆ ಜಡ ಭರತನ ಸ್ಥಿತಿಯಲ್ಲಿರುತ್ತದೆ. ಜಿಡ್ಡು ಗಟ್ಟಿದಂತಹ ಇಂತಹ ವ್ಯವಸ್ಥೆಯನ್ನು ಸರಿದಾರಿಗೆ ತರಲು ಸಾಧ್ಯವೇ ಇಲ್ಲ ಎಂಬ ಅಸಹನೆಯ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಹಾಗಾಗಿ ಆಡಳಿತ ಯಂತ್ರವನ್ನು ಸರಿ ದಿಕ್ಕಿನಲ್ಲಿ ಸಾಗಿಸುವ ದೃಷ್ಟಿಯಿಂದ ತಾವೇ ಮುಂದಾಗಿ ಮೇಲ್ಪಂಕ್ತಿ ಹಾಕಿಕೊಟ್ಟವರು ಯಡಿಯೂರಪ್ಪನವರು. ಅವರು ಯಾವುದೇ ಇಲಾಖೆಯ ಸಭೆ ನಡೆಸುವುದಿದ್ದರೂ ಪೂರ್ಣ ಮಾಹಿತಿಯೊಂದಿಗೆ ಬಂದು ಕುಳಿತುಕೊಳ್ಳುತ್ತಿದ್ದರು. ಅಧಿಕಾರಿಗಳು ನೀಡುವ ಫೀಡ್&zwnj;ಬ್ಯಾಕ್&zwnj; ಒಂದನ್ನೇ ನೆಚ್ಚಿಕೊಂಡರೆ ಜನಕಲ್ಯಾಣದ ವಿಷಯದಲ್ಲಿ ಪೂರ್ಣ ನ್ಯಾಯ ಕೊಡಲು ಆಗುವುದಿಲ್ಲ. ರಾಜಕಾರಣಿಯಾದವರಿಗೆ ಸ್ವತಃ ದೂರದೃಷ್ಟಿ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪನವರು ಸ್ಪಷ್ಟತೆ ಹೊಂದಿದ್ದರು. ಹಾಗಾಗಿ ಅವರು ನಡೆಸುವ ಸಭೆಗಳು ಫಲಿತಾಂಶ ಆಧಾರಿತವಾಗಿರುತ್ತಿದ್ದವು.&lt;/p&gt;&lt;p&gt;&lt;strong&gt;ಶಿಸ್ತು ಸಮಯಪಾಲನೆಗೆ ಅಗ್ರ ಸ್ಥಾನ;&lt;/strong&gt;&lt;/p&gt;&lt;p&gt;ವಿವಿಧ ಇಲಾಖಾ ಮುಖ್ಯಸ್ಥರ ಸಭೆಗಳಿರಲಿ, ಜಿಲ್ಲಾಡಳಿತದೊಂದಿಗಿನ ಸಭೆ ಅಥವಾ ಸಚಿವ ಸಂಪುಟ ಸಭೆಯಿರಬಹುದು.&lt;/p&gt;&lt;p&gt;ಈ ಎಲ್ಲ ಸಭೆಗಳಲ್ಲೂ ಯಡಿಯೂರಪ್ಪನವರು ನಿಗದಿತ ಸಮಯಕ್ಕಿಂತ 5 ನಿಮಿಷ ಮುಂಚೆಯೇ ಹಾಜರಿರುತ್ತಿದ್ದರು. ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಿಂದ ಹಿಡಿದು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಡೆಸುವ ಯಾವುದೇ ಸಭೆಗಳಿಗೆ ಅವರು ತಡವಾಗಿ ಹೋದ ನಿದರ್ಶನವೇ ಇಲ್ಲ ಎನ್ನಬಹುದು. ಸಮಯ ಪಾಲನೆಯಲ್ಲಿ ಅವರು ಅಷ್ಟು ಕಟ್ಟುನಿಟ್ಟು. ಸಭೆಗಳನ್ನು ಅನಗತ್ಯವಾಗಿ ವಿಳಂಬಿಸದೆ, ಚರ್ಚೆಯೂ ಹಳಿ ತಪ್ಪದಂತೆ ತ್ವರಿತಗತಿಯಲ್ಲಿ ನಿರ್ಣಯ ಕೈಗೊಳ್ಳುವ ಮಾದರಿಯನ್ನು ಅವರು ಅನುಸರಿಸಿದ್ದರು. ಹಾಗಾಗಿ ಯಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ ಆಡಳಿತ ಯಂತ್ರ ಚುರುಕಾಗಿತ್ತು. ಭಗವಾನ್&zwnj; ಭಾಸ್ಕರ ದೇವ ರಥಾರೂಢನಾಗಿ ಅವಿಶ್ರಾಂತವಾಗಿ ಸಂಚರಿಸುವಂತೆ ಆಡಳಿತ ಯಂತ್ರವೂ ನಿರಂತರತೆ ಕಾಯ್ದುಕೊಳ್ಳುವಂತೆ ಯಡಿಯೂರಪ್ಪನವರು ನೋಡಿಕೊಂಡಿದ್ದರು. ಮಂತ್ರಿಮಂಡಲದ ಸದಸ್ಯರಿಗೂ ಯಡಿಯೂರಪ್ಪನವರು ಸ್ವಾತಂತ್ರ್ಯ ನೀಡಿದ್ದರು.&lt;/p&gt;&lt;p&gt;ನೀರಾವರಿ ಪಂಪ್&zwnj;ಸೆಟ್&zwnj;ಗಳಿಗೆ ಉಚಿತ ವಿದ್ಯುತ್&zwnj; ಪೂರೈಕೆ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ, ಪ್ರತ್ಯೇಕ ಕೃಷಿ ಬಜೆಟ್&zwnj; ಮಂಡನೆ ಪ್ರಯೋಗ, ನಗರ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಸಮತೋಲನದ ಹೆಜ್ಜೆ, ಐಟಿ ಸಿಟಿ ಖ್ಯಾತಿಯ ಬೆಂಗಳೂರಿನ ಮೂಲಸೌಕರ್ಯಕ್ಕೆ ಮೊದಲ ಬಾರಿಗೆ ಹೆಚ್ಚು ನೆರವು ಕಲ್ಪಿಸಿದ್ದು ಸೇರಿದಂತೆ ಅಭಿವೃದ್ಧಿಯ ಹೊಸ ಅಧ್ಯಾಯವನ್ನೇ ಯಡಿಯೂರಪ್ಪನವರು ಪ್ರಾರಂಭಿಸಿದ್ದರು.&lt;/p&gt;&lt;p&gt;ಯಡಿಯೂರಪ್ಪ ಒಂದೊಮ್ಮೆ ಇನ್ನೂ ಸುದೀರ್ಘ ಅವಧಿಗೆ ಅಧಿಕಾರದಲ್ಲಿರುತ್ತಿದ್ದರೆ ಕರ್ನಾಟಕದ ಚಿತ್ರಣ ವಿಶ್ವ ಭೂಪಟದಲ್ಲಿ ಇನ್ನೂ ಮಹೋನ್ನತ ಸ್ಥಾನ ಪಡೆಯುತ್ತಿದ್ದುದರಲ್ಲಿ ಸಂಶಯವಿಲ್ಲ.&lt;/p&gt;&lt;p&gt;&lt;strong&gt;ಮಾತು ಕೃತಿ ಬದ್ಧತೆ:&lt;/strong&gt;&lt;/p&gt;&lt;p&gt;ಇಂದು ಯಡಿಯೂರಪ್ಪ ಅವರ ಬಳಿ ಅಧಿಕಾರವಿಲ್ಲ. ಆದರೆ ಈಗಲೂ ಜನಪ್ರಿಯತೆಯಲ್ಲಿ ಅವರನ್ನು ಮೀರಿಸಿವವರಿಲ್ಲ. ಅದಕ್ಕೆ ಕಾರಣ ಜನಸಾಮಾನ್ಯರು, ಕೆಳಹಂತದ ಕಾರ್ಯಕರ್ತರನ್ನು ಪ್ರೀತಿಯಿಂದ ಅವರು ನೋಡುವ ಪರಿ ಕಾರಣ. ಬಾರಣ್ಣ, ಏನಣ್ಣ ಎಂದು ಯಡಿಯೂರಪ್ಪ ಅವರು ಬಾಚಿ ತಬ್ಬಿದರೆ ಮನಸೋಲದವರೇ ಇಲ್ಲ.&lt;/p&gt;&lt;p&gt;&lt;strong&gt;ಮಾಧ್ಯಮ ಬಂಧು:&lt;/strong&gt;&lt;/p&gt;&lt;p&gt;ಸಾರ್ವಜನಿಕ ಜೀವನದಲ್ಲಿ ಮಾಧ್ಯಮಗಳ ಮಹತ್ವವನ್ನು ಯಡಿಯೂರಪ್ಪ ಅವರಷ್ಟು ಅರಿತವರು ಬೇರೊಬ್ಬರಿಲ್ಲ ಎಂದರೆ ತಪ್ಪಲ್ಲ. ಮಾಧ್ಯಮದವರು ಹಿರಿಯರು ಮತ್ತು ಕಿರಿಯರು ಎಂಬ ಭೇದ ಮಾಡದೆ ಎಲ್ಲರನ್ನೂ ಅಕ್ಕರೆಯಿಂದ ನೋಡುವ ಅವರ ಹೃದಯ ವೈಶಾಲ್ಯ ಇಡೀ ಮಾಧ್ಯಮ ಜಗತ್ತು ಯಡಿಯೂರಪ್ಪ ಅವರನ್ನು ಆದರಿಸುವಂತೆ ಮಾಡಿದ ಮೋಡಿ.&lt;/p&gt;&lt;p&gt;&lt;strong&gt;ಸರ್ವ ಜನಪ್ರಿಯ ನಾಯಕ:&lt;/strong&gt;&lt;/p&gt;&lt;p&gt;ಯಡಿಯೂರಪ್ಪ ಅವರನ್ನು ರೈತ ನಾಯಕ, ವೀರಶೈವ ಲಿಂಗಾಯತ ನಾಯಕ ಎಂದು ಕರೆಯುತ್ತಾರೆ ನಿಜ, ಆದರೆ ವಾಸ್ತವದಲ್ಲಿ ಅವರು ಇಡೀ ರಾಜ್ಯದಲ್ಲಿ ಸರ್ವಜನಪ್ರಿಯ ಅಗ್ರಗಣ್ಯ ನಾಯಕ. ಅದಕ್ಕೆ ಕಾರಣ ಅಧಿಕಾರ ಇಲ್ಲದಾಗ ಜಾತಿ ಮತ ನೋಡದೆ ಎಲ್ಲ ಜನಜಾತಿಗಳ ಪರ ಹೋರಾಟ ರೂಪಿಸಿದ್ದು, ಅಧಿಕಾರ ಬಂದಾಗ ಆಡಳಿತ ಮತ್ತು ಸರಕಾರದ ಯೋಜನೆಗಳನ್ನು ಎಲ್ಲ ಜನರ ಮನೆ ಬಾಗಿಲಿಗೆ ತಲುಪಿಸಿದ್ದು, ಪಕ್ಷದಲ್ಲಿ ಎಲ್ಲ ಭಾಗಗಳ ಎಲ್ಲ ಜಾತಿಗಳ ಎರಡು ಮತ್ತು ಮೂರನೇ ತಲೆಮಾರಿನ ನಾಯಕತ್ವವನ್ನು ಪ್ರೀತಿಸಿದ್ದು ಮತ್ತು ಬೆಳೆಸಿದ್ದು.&lt;/p&gt;&lt;p&gt;ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಸ್ಥಾನದಲ್ಲಿದ್ದ ಆ ಅಧಿಕಾರಿ ಸ್ವಲ್ಪ ಜಿಗುಟಿನ ಸ್ವಭಾವದವರಾಗಿದ್ದರು. ಹಾಗಾಗಿ ಉನ್ನತಾಧಿಕಾರಿಗಳು ಸ್ಪಂದನಶೀಲರಾಗಿ ಕೆಲಸ ಮಾಡಿದರೆ ಮಾತ್ರ ಆಡಳಿತ ಯಂತ್ರಕ್ಕೆ ನಿರೀಕ್ಷಿತ ವೇಗ ಸಿಗಲು ಸಾಧ್ಯ. ಹಿರಿಯ ಅಧಿಕಾರಿಗೆ ನಯವಾಗಿ ಚಾಟಿ ಬೀಸುವ ಮೂಲಕ ಈ ಸಂದೇಶವನ್ನು ಯಡಿಯೂರಪ್ಪನವರು ರವಾನಿಸಿದ್ದರು. ತನ್ಮೂಲಕ ತಮ್ಮ ನೇತೃತ್ವದ ಸರಕಾರದ ಆದ್ಯತಾ ಸೂಚಿಯನ್ನು ಪ್ರಾರಂಭದಲ್ಲೆ ಸ್ಪಷ್ಟಗೊಳಿಸಿದ್ದರು.&lt;/p&gt;&lt;p&gt;-ಲೆಹರ್ ಸಿಂಗ್&zwnj;, ರಾಜ್ಯಸಭಾ ಸದಸ್ಯರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/a-legacy-of-public-welfare-rajya-sabha-mp-lehar-singh-s-column-on-bs-yediyurappa-s-tenure-rav/articleshow-va9phic"/>
        </item>
        <item>
            <title><![CDATA[Interview | ತಾಪಮಾನ ಹೆಚ್ಚಳಕ್ಕೆ ಎಲ್‌ನಿನೋ ಅಷ್ಟೇ ಹೊಣೆ ಅಲ್ಲ; ಪರಿಸರ ವಿಜ್ಞಾನಿ ಟಿ.ವಿ. ರಾಮಚಂದ್ರ ಹೇಳಿದ್ದೇನು?]]></title>
            <link>https://kannada.asianetnews.com/state/el-nino-is-not-solely-responsible-for-rising-temperatures-interview-with-iisc-scientist-dr-tv-ramachandra-rav/articleshow-x4mrmib</link>
            <guid isPermaLink="true">https://kannada.asianetnews.com/state/el-nino-is-not-solely-responsible-for-rising-temperatures-interview-with-iisc-scientist-dr-tv-ramachandra-rav/articleshow-x4mrmib</guid>
            <pubDate>Thu, 07 May 2026 08:03:49 +0530</pubDate>
            <description><![CDATA[&lt;p&gt;ಪರಿಸರ ವಿಜ್ಞಾನಿ ಟಿ.ವಿ. ರಾಮಚಂದ್ರ ಅವರು, ರಾಜ್ಯದಲ್ಲಿನ ತೀವ್ರ ತಾಪಮಾನ ಏರಿಕೆಗೆ ಹವಾಮಾನ ವೈಪರೀತ್ಯ, ಜಲಮೂಲಗಳ ನಾಶ ಹಾಗೂ ಎಲ್&zwnj;ನಿನೋ ದುಷ್ಪರಿಣಾಮವೇ ಕಾರಣ ಎಂದು ವಿಶ್ಲೇಷಿಸಿದ್ದಾರೆ. ಕೆರೆಗಳ ಪುನಶ್ಚೇತನ, ಹಸಿರು ಹೊದಿಕೆ ಹೆಚ್ಚಳದಂತಹ ಕ್ರಮಗಳನ್ನು ಕೈಗೊಳ್ಳುಂತೆ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr045mq65859csw3sexcra9h,imgname-----------------------2026-05-07t075658.445-1778120839910.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟಿ.ವಿ. ರಾಮಚಂದ್ರ, ಹಿರಿಯ ಪರಿಸರ ವಿಜ್ಞಾನಿ, ಐಐಎಸ್ಸಿ&lt;/strong&gt;&lt;/p&gt;&lt;p&gt;&lt;strong&gt;ಶ್ರೀಕಾಂತ್&zwnj; ಎನ್. ಗೌಡಸಂದ್ರ&lt;/strong&gt;&lt;/p&gt;&lt;p&gt;ಅತಿಯಾದ ಬಿಸಿಲು, ಬಿಸಿ ಗಾಳಿಯಿಂದಾಗಿ ರಾಜ್ಯದ ಸ್ಥಿತಿ ಕಾದ ಹೆಂಚಿನಂತಾಗಿದೆ. ಹವಾಮಾನ ವೈಪರೀತ್ಯ, ಜಲಮೂಲ ಹಾಗೂ ಹಸಿರು ಹೊದಿಕೆ ನಾಶದ ಕ್ರಮಕ್ಕೆ ಶಿಕ್ಷೆ ಎಂಬಂತೆ ತಾಪಮಾನ ವಿಪರೀತ ಹೆಚ್ಚಾಗುತ್ತಿದೆ. ಇದಕ್ಕೆ ಈ ವರ್ಷ ಎಲ್&zwnj;ನಿನೋ ದುಷ್ಪರಿಣಾಮವೂ ಜೊತೆಯಾಗಿದೆ. ಪೆಸಿಫಿಸಿಕ್&zwnj; ಮಹಾಸಾಗರದ ತಾಪಮಾನ ಏರಿಕೆಯಿಂದ ಉಂಟಾಗುವ ಎಲ್&zwnj;ನಿನೋ ಪರಿಣಾಮದಿಂದಾಗಿ ಬಿಸಿಲು ಹೆಚ್ಚಾಗಿದೆ. ಭಾರತ ವಿಶೇಷವಾಗಿ ಕರ್ನಾಟಕದಲ್ಲಿ ಮಾನ್ಸೂನ್&zwnj;ನಲ್ಲಿ ಮಳೆ ಕೊರತೆ ಉಂಟು ಮಾಡಲಿದೆ. ಇದೆಲ್ಲವೂ ರಾಜ್ಯದಲ್ಲಿ ಮಳೆ, ತಾಪಮಾನ ಮತ್ತು ನೀರಿನ ಲಭ್ಯತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮಾನ್ಸೂನ್&zwnj; ಮಳೆಯ ಅಸ್ಥಿರತೆ ಕೃಷಿ ಹಾಗೂ ಆಹಾರ ಉತ್ಪಾದನೆಗೆ ಹೇಗೆ ಸವಾಲು ಒಡ್ಡಲಿವೆ? ಇದರ ಪರಿಣಾಮದಿಂದ ರಾಜ್ಯದ ಜನತೆ ಏನೆಲ್ಲಾ ಸಂಕಷ್ಟ ಎದುರಿಸಬೇಕು? ಇಂತಹ ಕ್ಷಾಮ ಮೆಟ್ಟಿ ನಿಲ್ಲಲು ನೀರು ಹಾಗೂ ಪರಿಸರ ಸಂರಕ್ಷಣೆಗೆ ಮಾಡಬೇಕಾದ ಕ್ರಮಗಳೇನು? ಎಲ್&zwnj;ನಿನೋದಿಂದ ಉಂಟಾಗುವ ಬರ, ತಾಪಮಾನ ಹೆಚ್ಚಳ, ಆಹಾರದ ಕ್ಷಾಮದಿಂದ ಪಾರಾಗಲು ಕೈಗೊಳ್ಳಬೇಕಾದ ತಕ್ಷಣದ ಹಾಗೂ ಸುದೀರ್ಘ ಅವಧಿಯ ಕ್ರಮಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಐಐಎಸ್ಸಿಯ ಹಿರಿಯ ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ &lsquo;ಕನ್ನಡಪ್ರಭ&rsquo; ಜತೆ ಮುಖಾಮುಖಿ ಮಾತನಾಡಿದ್ದಾರೆ.&lt;/p&gt;&lt;h2&gt;ರಾಜ್ಯದಲ್ಲಿ ತಾಪಮಾನ ಹಿಂದೆಂದಿಗಿಂತಲೂ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆಯಲ್ಲ, ಈ ಪರಿ ಬಿಸಿಯೇರಲು ಕಾರಣವೇನು?&lt;/h2&gt;&lt;p&gt;ಇದು ಎಚ್ಚರಿಕೆ ಗಂಟೆ. ತಾಪಮಾನ ಏರಿಕೆ ನಮಗೆ ಎರಡು ವಿಷಯಗಳನ್ನು ತೋರಿಸುತ್ತದೆ. ಹವಾಮಾನ ವೈಪರೀತ್ಯ ಹಾಗೂ ಜಲ ನಗರೀಕರಣದ(ವಾಟರ್&zwnj; ಅರ್ಬನೈಸೇಷನ್&zwnj;) ಅನುಪಸ್ಥಿತಿ. ಮುಖ್ಯವಾಗಿ ಅರಣ್ಯನಾಶ, ಕೆರೆಗಳ ನಾಶದಿಂದಾಗಿ ರಾಜ್ಯದಲ್ಲಿ ನಾವು ಆಪತ್ತಿಗೆ ಆಹ್ವಾನ ನೀಡುತ್ತಿದ್ದೇವೆ.&lt;/p&gt;&lt;h3&gt;ವಿಶ್ವದ ಅತಿ ಹೆಚ್ಚಿನ ಬಿಸಿ ನಗರಗಳಲ್ಲಿ ಕರ್ನಾಟಕದ್ದೇ ಮೂರು ಜಿಲ್ಲೆಗಳಿವೆ?&lt;/h3&gt;&lt;p&gt;ರಾಯಚೂರು, ಬಾಗಲಕೋಟೆ, ಯಾದಗಿರಿ ಈ ಮೂರು ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಿರುವುದಾಗಿ ಪಟ್ಟಿ ಹೇಳಿದೆ. ಇದು ಈ ಮೂರು ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ರಾಜ್ಯದೆಲ್ಲೆಡೆ ಬಿಸಿಲು ಹೆಚ್ಚಾಗಿದೆ. ಜಲ ಮೂಲಗಳ ನಾಶ, ಇರುವ ಕೆರೆಗಳ ಪುನಶ್ಚೇತನ ಮಾಡದಿರುವುದು, ಜಲಾನಯನ ಪ್ರದೇಶಗಳ ಸಂರಕ್ಷಣೆ ಮಾಡದಿರುವುದು ಇದಕ್ಕೆ ಕಾರಣ. ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಭವಿಷ್ಯದ ಜನಾಂಗಕ್ಕೆ ಉತ್ತಮ ಗಾಳಿ, ಕುಡಿಯುವ ನೀರು ಹಾಗೂ ಆಹಾರ ನೀಡಲಾಗದ ಅಸಹಾಯಕ ಸ್ಥಿತಿಗೆ ತಲುಪಲಿದ್ದೇವೆ.&lt;/p&gt;&lt;p&gt;&lt;strong&gt;ಹವಾನಿಯಂತ್ರಿತ ನಗರ ಎಂದು ಹೆಸರಾಗಿದ್ದ ಬೆಂಗಳೂರು ಕೂಡ ಕಾದ ಹೆಂಚಿನಂತಾಗಲು ಕಾರಣವೇನು?&lt;/strong&gt;&lt;/p&gt;&lt;p&gt;ಬೆಂಗಳೂರು ಹವಾನಿಯಂತ್ರಿತ ನಗರ ಎಂದೇ ಹಿಂದೆ ಪ್ರಸಿದ್ಧಿ ಪಡೆದಿತ್ತು. ವಾಸಕ್ಕೆ ಅತಿ ಯೋಗ್ಯ ಎಂಬ ಹಣೆಪಟ್ಟಿ ಕೂಡ ಇತ್ತು. ಇಲ್ಲಿ ಏಪ್ರಿಲ್&zwnj;ನಲ್ಲಿ 14 ರಿಂದ 16 ಡಿಗ್ರಿ ಸೆಲ್ಸಿಯಸ್&zwnj;, ಡಿಸೆಂಬರ್&zwnj;ನಲ್ಲಿ 0 ಡಿಗ್ರಿ ಸೆಲ್ಸಿಯಸ್&zwnj; ತಾಪಮಾನ ದಾಖಲಾಗಿ, ಪ್ಯಾಲೇಸ್&zwnj;ನಲ್ಲಿ ಸೇಬು ಬೆಳೆಯುತ್ತಿದ್ದರು.&lt;/p&gt;&lt;p&gt;&lt;strong&gt;ಆ ರೀತಿಯಿದ್ದ ನಗರ ಈಗ ವರ್ಷದಿಂದ ವರ್ಷಕ್ಕೆ ಗರಿಷ್ಠ ತಾಪಮಾನದಲ್ಲೇ ದಾಖಲೆ ಬರೆಯುತ್ತಿದೆಯಲ್ವಾ?&lt;/strong&gt;&lt;/p&gt;&lt;p&gt;ಅರ್ಥಹೀನ ನಗರೀಕರಣದಿಂದ ಆದ ಕೆರೆ, ಹಸಿರು ನಾಶ ಹಾಗೂ ಕಾಂಕ್ರೀಟೀಕರಣವೇ ಕಾರಣ. ಕಾಂಕ್ರೀಟ್&zwnj; ರೇಡಿಯೇಷನ್&zwnj;ನಿಂದ ಬಿಸಿ ಹೆಚ್ಚಾಗುತ್ತಿದೆ. ಈಗ ಬೆಂಗಳೂರು ವಾಸಯೋಗ್ಯವಲ್ಲದ ನಗರವಾಗಿ ಬದಲಾಗುತ್ತಿದೆ. ನಮ್ಮ ಮಕ್ಕಳಿಗೆ ಶುದ್ಧ ನೀರು, ಶುದ್ಧ ಗಾಳಿ ಹಾಗೂ ಉತ್ತಮ ವಾತಾವರಣ ನೀಡಲು ವಿಫಲರಾಗುತ್ತಿದ್ದೇವೆ. 1973ರಲ್ಲಿ ಬೆಂಗಳೂರಿನಲ್ಲಿ ಶೇ.68.2 ರಷ್ಟು ಹಸಿರು ಹಾಗೂ ಶೇ.7.97 ರಷ್ಟು ಮಾತ್ರ ಕಾಂಕ್ರೀಟ್&zwnj; ನಿರ್ಮಾಣ ಇತ್ತು. 1992ರಲ್ಲಿ ಶೇ.46.2 ರಷ್ಟು ಹಸಿರು ಹಾಗೂ ಶೇ.27.3 ರಷ್ಟು ಕಾಂಕ್ರೀಟ್&zwnj; ಕಟ್ಟಡ ಆವರಿಸಿತು. 2025ರ ವೇಳೆಗಂತೂ ಶೇ.87.6 ರಷ್ಟು ಕಾಂಕ್ರೀಟ್&zwnj; ಆವರಿಸಿ ಹಸಿರು ಶೇ.3 ಕ್ಕಿಂತ ಕಡಿಮೆಯಾಗಿ ಕಣ್ಮರೆಯಾಗುವ ಮಟ್ಟ ತಲುಪಿದೆ. 70ರ ದಶಕದಲ್ಲಿ 700ಕ್ಕೂ ಹೆಚ್ಚಿದ್ದ ಕೆರೆಗಳು 216ಕ್ಕೆ ಕುಸಿದಿವೆ. ಇದರ ಪರಿಣಾಮವಾಗಿ ಬೆಂಗಳೂರಿನ ತಾಪಮಾನ ಬದಲಾಗಿದೆ. ಉಷ್ಣ ಪ್ರದೇಶಗಳು ಹೆಚ್ಚಾಗಿವೆ. ಮುಖ್ಯವಾಗಿ ಪೂರ್ವ ಹಾಗೂ ಉತ್ತರ ಭಾಗದಲ್ಲಿ ತೀವ್ರ ಉಷ್ಣತೆಯಿಂದ ಕೂಡಿದ ಪ್ರದೇಶ ಹೆಚ್ಚಾಗಿದ್ದು, ತಾಪಮಾನ ಹತೋಟಿ ತಪ್ಪಿದೆ. ದಾಖಲೆ ಪ್ರಮಾಣದ ತಾಪಮಾನ ಹೆಚ್ಚಳ ಆಗುತ್ತಿದೆ.&lt;/p&gt;&lt;p&gt;&lt;strong&gt;ಇದಕ್ಕೆ ಪರಿಹಾರವೇನು?&lt;/strong&gt;&lt;/p&gt;&lt;p&gt;ನಗರದಲ್ಲಿ ಅಂತರ್ಜಲದ ಮೇಲೆ ಅವಲಂಬನೆ ಹೆಚ್ಚಾಗಿ ಅಂತರ್ಜಲದ ಶೋಷಣೆಯಾಗುತ್ತಿದೆ. ಅತಿಯಾದ ಕಾಂಕ್ರೀಟ್ ನಿರ್ಮಾಣಗಳಿಂದಾಗಿ ನೀರು ಇಂಗುತ್ತಿಲ್ಲ. ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣ, ಮಳೆಕಾಡುಗಳ ನಿರ್ಮಾಣ ಮಾಡಿದರಷ್ಟೇ ಬೆಂಗಳೂರಿಗೆ ಉಳಿಗಾಲ.&lt;/p&gt;&lt;p&gt;&lt;strong&gt;ಈ ರೀತಿ ಮಾಡಿ ಯಶಸ್ವಿಯಾದ ಉದಾಹರಣೆ ಇದೆಯೇ?&lt;/strong&gt;&lt;/p&gt;&lt;p&gt;ಸಾರಕ್ಕಿ ಕೆರೆಯೇ ಉತ್ತಮ ಉದಾಹರಣೆ. ಸಾರಕ್ಕಿ ಕರೆ ಪುನಶ್ಚೇತನ ಮಾಡಿ ಶುದ್ಧೀಕರಿಸಿದ ನೀರು ತುಂಬಿದ ಪರಿಣಾಮ ಅಲ್ಲಿನ ಅಂತರ್ಜಲ 320 ಅಡಿಯಷ್ಟು ವೃದ್ಧಿಸಿತು. 2024ರಲ್ಲಿ ತೀವ್ರ ನೀರಿನ ಹಾಹಾಕಾರ ಸೃಷ್ಟಿಯಾದರೂ ಈ ಭಾಗದಲ್ಲಿ ನೀರಿನ ಕೊರತೆ ಆಗಲಿಲ್ಲ. ಅಂತಹ ಸ್ಥಿತಿಯಲ್ಲೂ ಕೆರೆ ಹಾಗೂ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿತು. ನಗರದ ತಾಪಮಾನಕ್ಕಿಂತ ಇಲ್ಲಿನ ತಾಪಮಾಣ 2 ಡಿಗ್ರಿ ಸೆಲ್ಷಿಯಸ್&zwnj;ನಷ್ಟು ಕಡಿಮೆ ನಮೂದಾಗಿತ್ತು. ಈ ರೀತಿ ಪ್ರತಿ ಕೆರೆಯನ್ನು ಪುನಶ್ಚೇತನ ಮಾಡಬೇಕು. ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸಬೇಕು.&lt;/p&gt;&lt;p&gt;&lt;strong&gt;ಹಸಿರು ಹೊದಿಕೆ ಇರುವ ಕಡೆ ಕಡಿಮೆ ತಾಪಮಾನ ದಾಖಲಾಗಿದೆಯಂತೆ?&lt;/strong&gt;&lt;/p&gt;&lt;p&gt;ಅದಕ್ಕೆ ನಮ್ಮ ಕ್ಯಾಂಪಸ್&zwnj; ಉತ್ತಮ ಉದಾಹರಣೆ. ಐಐಎಸ್ಸಿಯ 2 ಹೆಕ್ಟೇರ್&zwnj;ನಲ್ಲಿ 49 ತಳಿಯ 500 ಸ್ಥಳೀಯ ಸಸಿ ನೆಡಲಾಗಿತ್ತು. ಇದೀಗ ಅದು ಮಳೆ ಕಾಡಾಗಿದೆ. ಇಲ್ಲಿ ನಗರದ ತಾಪಮಾಣಕ್ಕಿಂತ 2-3 ಡಿಗ್ರಿ ಕಡಿಮೆ ತಾಪಮಾನ ಇರುತ್ತದೆ. 150 ಅಡಿಯಲ್ಲಿ ಸಿಗುತ್ತಿದ್ದ ಅಂತರ್ಜಲ 15 ಅಡಿಯಲ್ಲೇ ಸಿಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರತಿ ವಾರ್ಡ್&zwnj;ನಲ್ಲೂ 2 ಹೆಕ್ಟೇರ್ ವ್ಯಾಪ್ತಿಯ ಮಳೆಕಾಡು ಮಾಡಬೇಕು.&lt;/p&gt;&lt;p&gt;&lt;strong&gt;ಪ್ರತಿ ವಾರ್ಡ್&zwnj;ಗಳಲ್ಲೂ ಉದ್ಯಾನವನ ಮಾಡಿದ್ದಾರೆ. ಅದರಿಂದ ಪ್ರಯೋಜನವಿಲ್ಲವೇ?&lt;/strong&gt;&lt;/p&gt;&lt;p&gt;ಎಲ್ಲಾ ಉದ್ಯಾನವನಗಳಲ್ಲೂ ಹಸಿರು ಹೊದಿಕೆಗಿಂತ ಕಾಂಕ್ರೀಟ್&zwnj; ನಿರ್ಮಾಣಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹಾಪ್&zwnj;ಕಾಮ್ಸ್&zwnj;, ಕಾಂಪೋಸ್ಟ್&zwnj; ಘಟಕ, ಕ್ಲಿನಿಕ್&zwnj; ಎಲ್ಲ ಕಟ್ಟಡವೂ ನಿರ್ಮಿಸುತ್ತಾರೆ. ಇದು ಮೂರ್ಖರ ಲಕ್ಷಣ. ಉದ್ಯಾನವನದ ಉದ್ದೇಶ ಸುತ್ತಮುತ್ತಲಿನ ಜನರಿಗೆ ಶುದ್ಧ ಗಾಳಿ ಹಾಗೂ ಪರಿಸರ ನೀಡುವುದಾಗಿರಬೇಕು. ಮುಖ್ಯವಾಗಿ ಮಳೆಕಾಡು ನಿರ್ಮಾಣ ಇದಕ್ಕೆ ಪರಿಹಾರ.&lt;/p&gt;&lt;p&gt;&lt;strong&gt;ಜಿಬಿಎ ವ್ಯಾಪ್ತಿಯಲ್ಲಿ ಕೆರೆಗಳ ಪುನಶ್ಚೇತನ ಕಾಮಗಾರಿಗಳು ನಡೆಯುತ್ತಿವೆಯಲ್ಲಾ?&lt;/strong&gt;&lt;/p&gt;&lt;p&gt;ಕೆರೆಗಳನ್ನು ಕಾಂಕ್ರೀಟ್ ಬೌಲ್&zwnj; ಮಾಡುವುದು ಕೆರೆ ಪುನಶ್ಚೇತನ ಅಲ್ಲ. ಸ್ಯಾಂಕಿ ಕೆರೆಯಲ್ಲಿ ನೀರು ಬಹಳ ಕಡಿಮೆಯಾಗಿದೆ. ಜಾಗಿಂಗ್&zwnj; ಟ್ರಾಕ್&zwnj;, ಜಿಮ್, ಕಟ್ಟಡಗಳನ್ನು ಕಟ್ಟಿಕೊಳ್ಳಲು ಕೆರೆಗಳನ್ನು ಬಳಸುತ್ತಿದ್ದಾರೆ. ಜತೆಗೆ ಕೆರೆಗಳನ್ನು ಕಾಂಕ್ರೀಟ್ ಬೌಲ್&zwnj; ರೀತಿ ಮಾಡಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹಾಗೂ ನೀರು ಇಂಗುವ ಗುಣ ಕಳೆಯುತ್ತಿದ್ದಾರೆ. ಸಿಮೆಂಟ್ ರಸ್ತೆಗಳಿಂದಲೇ ನಗರ ಹಾಳಾಗಿದೆ ಎಂದರೆ ಸಿಮೆಂಟ್&zwnj; ಕೆರೆಗಳನ್ನು ನಿರ್ಮಿಸುತ್ತಿದ್ದಾರೆ. ಜತೆಗೆ ನಗರಾದ್ಯಂತ ಹವಾಮಾನಕ್ಕೆ ಸೂಕ್ತವಲ್ಲದ ವಿನ್ಯಾಸದ ಕಟ್ಟಡ ನಿರ್ಮಾಣ ಹೆಚ್ಚಾಗಿದೆ. ಗಾಜಿನ ಹೊದಿಕೆ ಕಟ್ಟಡಗಳಿಂದ 3 ರಿಂದ 4 ಡಿಗ್ರಿ ಹೆಚ್ಚು ತಾಪಮಾನ ಉಂಟಾಗುತ್ತಿದೆ. ಗಾಜಿನ ಹೊದಿಕೆ ಇರುವ ಕಟ್ಟಡಗಳಲ್ಲಿ 10 ಪಟ್ಟು ಹೆಚ್ಚು ವಿದ್ಯುತ್&zwnj; ವ್ಯರ್ಥವಾಗುತ್ತದೆ.&lt;/p&gt;&lt;p&gt;&lt;strong&gt;ಪರಿಸರ ಹಾಗೂ ನೀರಿನ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರವಿಲ್ಲವೇ?&lt;/strong&gt;&lt;/p&gt;&lt;p&gt;ಖಂಡಿತ ಇದೆ. ತಮ್ಮ ನಿವೇಶನಗಳಲ್ಲಿ ಸೆಟ್&zwnj;ಬ್ಯಾಕ್&zwnj; ನಿಯಮ ಪಾಲಿಸಿ ಶೇ.30 ರಷ್ಟು ನಿವೇಶನವನ್ನು ಖಾಲಿ ಬಿಟ್ಟು ಮನೆ ಕಟ್ಟಿದರೆ ಎ.ಸಿ, ಫ್ಯಾನ್&zwnj; ಅಗತ್ಯವೇ ಬರುವುದಿಲ್ಲ. ಆದರೆ, ಅತಿ ಆಸೆಗೆ ಬಿದ್ದು ಜನರೂ ತಪ್ಪು ಮಾಡುತ್ತಿದ್ದಾರೆ. ಅಂತರ್ಜಲದ ಅತಿಯಾದ ಬಳಕೆ, ಮಳೆ ನೀರು ಕೊಯ್ಲು ಅಳವಡಿಸದಿರುವುದು ನಮ್ಮ ಜನರ ತಪ್ಪು. ಹಿರಿಯರು ಸೂಕ್ತವಾಗಿ ಯೋಜನೆ ರೂಪಿಸಿ ಸೆಟ್&zwnj;ಬ್ಯಾಕ್&zwnj; ನಿಯಮ ಮಾಡಿದರೆ ಈ ಸರ್ಕಾರ ಅದನ್ನೂ ಕಡಿಮೆ ಮಾಡಿರುವುದು ದುರಂತ.&lt;/p&gt;&lt;p&gt;&lt;strong&gt;ರಾಜ್ಯದಲ್ಲಿ ಬಿಸಿ ಹೆಚ್ಚಾಗಲು ಎಲ್&zwnj;ನಿನೋ ಪರಿಣಾಮವೇ ಕಾರಣ ಎನ್ನುತ್ತಾರಲ್ಲ?&lt;/strong&gt;&lt;/p&gt;&lt;p&gt;ಎಲ್&zwnj;ನಿನೋ ಪರಿಣಾಮದಿಂದಾಗಿ ವಾತಾವರಣದಲ್ಲಿ ತೇವಾಂಶ ಕಡಿಮೆ ಆಗುತ್ತದೆ. ಅದರಿಂದ ತಾಪಮಾನ ಹೆಚ್ಚಳದ ಅನುಭವ ಆಗುತ್ತದೆ. ಆದರೆ, ಈ ವರ್ಷದ ತಾಪಮಾನ ಹೆಚ್ಚಳಕ್ಕೆ ಎಲ್&zwnj;ನಿನೋ ಒಂದನ್ನೇ ಹೊಣೆ ಮಾಡಬಾರದು. ಏಕೆಂದರೆ 2024ರಲ್ಲಿ ಬೆಂಗಳೂರಿನಲ್ಲಿ ಇದಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿತ್ತು. ಜತೆಗೆ ಹಸಿರು ಬರ ಉಂಟಾಗಿತ್ತು. ಸಸಿಗಳು ಹಸಿರಿದ್ದರೂ ಅವುಗಳಿಂದ ಆಹಾರ ಉತ್ಪಾದನೆ ಆಗಿರಲಿಲ್ಲ. ಆಗ ಎಲ್&zwnj;ನಿನೋ ಇರಲಿಲ್ಲ. ಹೀಗಾಗಿ ಈಗ ತಾಪಮಾನ ಹೆಚ್ಚಳಕ್ಕೆ ಅಧಿಕಾರಿಗಳು, ರಾಜಕಾರಣಿಗಳು ಹೊಣೆ. ಅವರು ಎಲ್&zwnj;ನಿನೋ ನೆಪ ನೀಡಿ ತಪ್ಪಿಸಿಕೊಳ್ಳಬಾರದು.&lt;/p&gt;&lt;p&gt;&lt;strong&gt;ಏನಿದು ಎಲ್&zwnj;ನಿನೊ? ಅದರ ಪರಿಣಾಮವೇನು?&lt;/strong&gt;&lt;/p&gt;&lt;p&gt;ಪೆಸಿಫಿಕ್&zwnj; ಮಹಾಸಾಗರದಲ್ಲಿ ತಾಪಮಾನ ಏರಿಕೆಯಿಂದ ಉಂಟಾಗುವ ಎಲ್&zwnj;ನಿನೋದಿಂದ ರಾಜ್ಯದಲ್ಲಿ ಮಳೆ ಏರುಪೇರಾಗಲಿದೆ. ಮಳೆ ಅಭಾವದ ಮುನ್ಸೂಚನೆ ದೊರೆತಿದ್ದು, ಇದರಿಂದ ನೀರಿನ ಹಾಹಾಕಾರ ಉಂಟಾಗಬಹುದು. ಮುಖ್ಯವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಿ ಬೆಂಗಳೂರಿನಲ್ಲಿ ನೀರು ಸಿಗದ ಸ್ಥಿತಿ ನಿರ್ಮಾಣವಾಗಲಿದೆ. ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಲಿದೆ. ಹೀಗಾಗಿ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.&lt;/p&gt;&lt;p&gt;&lt;strong&gt;- ರಾಜ್ಯದ ಮೇಲೆ ಎಲ್&zwnj;ನಿನೋ ಪರಿಣಾಮವೇನು?&lt;/strong&gt;&lt;/p&gt;&lt;p&gt;ಐಪಿಸಿಸಿ ಪ್ರಕಾರ ರಾಜ್ಯದ ಮೇಲೆ ಎಲ್&zwnj;ನಿನೋ ಕೆಲ ತಿಂಗಳ ಸುದೀರ್ಘ ಪ್ರಭಾವ ಬೀರಲಿದೆ. ಇದರಿಂದ ಮಳೆ ಅಭಾವ ಉಂಟಾಗಲಿದೆ. ಆದರೂ ಕೆರೆಗಳ ಪುನಶ್ಚೇತನ, ಸ್ಥಳೀಯ ಪ್ರಬೇಧದ ಸಸಿಗಳ ಅರಣ್ಯಗಳು ಇರುವ ಕಡೆ ಇದರ ಪ್ರಭಾವ ತೀವ್ರವಾಗಿರುವುದಿಲ್ಲ. ಉದಾ: ಮೂಡುಬಿದಿರೆಯಲ್ಲಿ 32 ಕೆರೆಗಳ ಹೂಳೆತ್ತಿದ್ದರು. 2024ರಲ್ಲಿ ಬರ ಉಂಟಾದಾಗ ಅಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ.&lt;/p&gt;&lt;p&gt;&lt;strong&gt;- ಮಳೆ ಕೊರತೆಯಿಂದಾಗಿ ಈ ವರ್ಷ ಯಾವ ರೀತಿಯ ಬೆಳೆಗಳನ್ನು ಬೆಳೆಯಬೇಕು?&lt;/strong&gt;&lt;/p&gt;&lt;p&gt;ರೈತರು ಈಗಲೇ ಎಚ್ಚೆತ್ತುಕೊಳ್ಳಬೇಕು. ಹವಾಮಾನಕ್ಕೆ ಪೂರಕ ಬೆಳೆಗಳನ್ನು (ಕ್ಲೈಮೇಟ್ ರೆಸಿಲಿಯೆಂಟ್&zwnj; ಕ್ರಾಪ್&zwnj;) ಬೆಳೆಯಬೇಕು. ಕಬ್ಬು, ಭತ್ತದಂತಹ ಹೆಚ್ಚು ನೀರು ಬಯಸುವ ಬೆಳೆಗಳ ಬದಲು ರಾಗಿಯಂತಹ ಸಿರಿ ಧಾನ್ಯಗಳಿಗೆ ಹೆಚ್ಚು ಒತ್ತು ಕೊಡಬೇಕು. ಇದನ್ನು ಐಪಿಸಿಸಿ ವರದಿಯಲ್ಲೂ ಉಲ್ಲೇಖ ಮಾಡಲಾಗಿದೆ.&lt;/p&gt;&lt;p&gt;&lt;strong&gt;- ರಾಜ್ಯದಲ್ಲಿ ಎಲ್&zwnj;ನಿನೋದಿಂದ ಆಹಾರ ಉತ್ಪಾದನೆ ಕಡಿಮೆಯಾಗಿ ಆಹಾರದ ಕೊರತೆ ಉಂಟಾಗಲಿದೆಯೇ?&lt;/strong&gt;&lt;/p&gt;&lt;p&gt;ಹೌದು, ಮಳೆ ಅಭಾವದಿಂದ ಆಹಾರ ಉತ್ಪಾದನೆ ಕುಸಿಯಲಿದೆ. ಇದರಿಂದ ಆಹಾರದ ಕೊರತೆ ಉಂಟಾಗಬಹುದು. ಸಹಜವಾಗಿಯೇ ಇದು ಆಹಾರ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಬಹುದು.&lt;/p&gt;&lt;p&gt;&lt;strong&gt;- ದೀರ್ಘಾವಧಿಯಲ್ಲಿ ಇಂತಹವುಗಳನ್ನು ಎದುರಿಸುವುದು ಹೇಗೆ?&lt;/strong&gt;&lt;/p&gt;&lt;p&gt;ಯಾವ ಜಲಾನಯನ ಪ್ರದೇಶದಲ್ಲಿ ಸ್ಥಳೀಯ ಸಸ್ಯ ಪ್ರಬೇಧಗಳು ಇವೆಯೋ ಅಲ್ಲಿ 12 ತಿಂಗಳೂ ನೀರು ಇರುತ್ತದೆ. ಹಸಿರು ಶೇ.30ಕ್ಕಿಂತ ಕಡಿಮೆ ಇರುತ್ತದೆಯೋ ಅಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಇರುತ್ತದೆ. 12 ತಿಂಗಳೂ ನೀರು ಸಿಗುವ ಕಡೆ ಕಬ್ಬು, ಭತ್ತ ಬೆಳೆದು 1.50 ಲಕ್ಷ ಪ್ರತಿ ಎಕರೆಗೆ ಆದಾಯ ಸಿಗುತ್ತದೆ. ಮಳೆ ಆಧಾರಿತ ಪ್ರದೇಶಗಳಲ್ಲಿ ವರ್ಷಕ್ಕೆ ಎಕರೆಗೆ 32,000 ರು. ಮಾತ್ರ ದುಡಿಯಬಹುದು. ಜತೆಗೆ ಹಸಿರು ಹೆಚ್ಚಿರುವ ಕಡೆ ಪರಾಗಸ್ಪರ್ಶ ಕ್ರಿಮಿಗಳು ಹೆಚ್ಚಿರುವುದರಿಂದ ಇಳುವರಿ ಹೆಚ್ಚಾಗಿರುತ್ತದೆ. ಹವಾಮಾನ ವೈಪರೀತ್ಯ ಇದ್ದರೂ ಜಲಾನಯನ ಪ್ರದೇಶ ನಿರ್ವಹಣೆ, ಹಸಿರು ಹೊದಿಕೆ ಹೆಚ್ಚಳ, ಜಲಮೂಲಗಳ ಸಂರಕ್ಷಣೆ ಮಾಡಿದರೆ ಸಮಸ್ಯೆಯಿಲ್ಲ.&lt;/p&gt;&lt;p&gt;&lt;strong&gt;- ಜಲಮೂಲಗಳ ಸಂರಕ್ಷಣೆ ಮಾಡಿದರೆ ಬರ ಬಂದರೂ ನಿರ್ವಹಣೆ ಮಾಡಬಹುದೇ?&lt;/strong&gt;&lt;/p&gt;&lt;p&gt;ಹೌದು, ರಾಜ್ಯದಲ್ಲಿ 39,000 ಕೆರೆಗಳಿವೆ. ಎಲ್ಲೆಲ್ಲಿ ಬರ, ನೀರಿನ ಅಭಾವ ಉಂಟಾಗುತ್ತಿತ್ತೋ ಅಲ್ಲಿ ನಮ್ಮ ಪೂರ್ವಿಕರು ಹೆಚ್ಚು ಕೆರೆಗಳನ್ನು ಕಟ್ಟಿದ್ದಾರೆ. ಅವಿಭಜಿತ ಕೋಲಾರ ಒಂದರಲ್ಲೇ 4,800 ಕೆರೆಗಳು ಇವೆ. ಅದು ದೂರದೃಷ್ಟಿ ಇರುವವರ ಕೆಲಸ. ಆದರೆ, ಈಗ ಕೆರೆಗಳನ್ನು ಹಾಳು ಮಾಡಿ, ಪುನರುಜ್ಜೀವನ ಮಾಡದೆ ದೂರದಿಂದ ನೀರು ತರುವ ಹುನ್ನಾರ ಮಾಡುತ್ತಾರೆ. ಇಂತಹ ಅವೈಜ್ಞಾನಿಕ ಯೋಜನೆಗಳಿಗೆ ನಾವು ಬೆಲೆ ತೆರಬೇಕಿದೆ. ನಾಯಕರು, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ. ಅವರ ಹಣದ ದಾಹದಿಂದ ಜನ ಪರದಾಡುವಂತಾಗಿದೆ.&lt;/p&gt;&lt;p&gt;&lt;strong&gt;* ಸರ್ಕಾರ ಈಗ ಏನು ಮಾಡಬೇಕು?&lt;/strong&gt;&lt;/p&gt;&lt;p&gt;ಪರಿಸರ ಹಾಳು ಮಾಡುವುದನ್ನು ನಿಲ್ಲಿಸಬೇಕು. ಬಫರ್&zwnj; ಜೋನ್&zwnj; ಕಡಿಮೆ ಮಾಡುವುದು, ಅರಣ್ಯ ನಾಶ ಮಾಡುವುದು, ಮರ ಕಡಿದು ಟನಲ್&zwnj; ರಸ್ತೆ ಮಾಡುವುದು. ಎಲ್ಲದರಲ್ಲೂ ಹಣ ಮಾಡಲು ಹೊರಡುವುದನ್ನು ನಿಲ್ಲಿಸಬೇಕು. ಜನ ಅಂತಹವರನ್ನು ಮನೆಗೆ ಕಳುಹಿಸಬೇಕು.&lt;/p&gt;&lt;p&gt;&lt;strong&gt;- ಅರಣ್ಯ ನಾಶಕ್ಕೂ ಸರ್ಕಾರಕ್ಕೂ ಏನು ಸಂಬಂಧ?&lt;/strong&gt;&lt;/p&gt;&lt;p&gt;ಕಳೆದ ಕೆಲ ದಶಕದಲ್ಲೇ ಶೇ.35ರಷ್ಟು ಅರಣ್ಯ ನಾಶ ಆಗಿದೆ. ಅರಣ್ಯ ಉತ್ಪಾದನೆ ಹಾಗೂ ರಾಜ್ಯದ ಅರಣ್ಯ ಮೌಲ್ಯ ಕುಸಿದಿದೆ. ನಾವು ಕಳೆದುಕೊಂಡ ಅರಣ್ಯ ಹಾಗೂ ಅರಣ್ಯ ಸಂಪತ್ತಿಗೆ ಸರ್ಕಾರದ ಅಧಿಕಾರಿಗಳು ಹೊಣೆ ಅಲ್ಲವೇ? ಕಾಡು ಲೂಟಿ ಮಾಡಲು ಬಿಟ್ಟವರಿಂದಲೇ ಪರಿಹಾರವನ್ನು ಸಂಗ್ರಹಿಸಬೇಕಲ್ಲವೇ?&lt;/p&gt;&lt;p&gt;&lt;strong&gt;- ಹಾಗಾದರೆ ನಮ್ಮ ರಾಜ್ಯದ ಸ್ಥಿತಿ ಬದಲಾಗುವುದೇ ಇಲ್ಲವೇ?&lt;/strong&gt;&lt;/p&gt;&lt;p&gt;ನ್ಯಾಯಾಂಗ ಒಂದೇ ನಮಗಿರುವ ಭರವಸೆ. ಪ್ರಬುದ್ಧವಾದ, ಪರಿಸರ ಜ್ಞಾನ ಇರುವ ನ್ಯಾಯಾಧೀಶರು ಬೇಕಾಗಿದ್ದಾರೆ. ಬೆಳ್ಳಂದೂರು ಕೆರೆ ಒತ್ತುವರಿ ಆಗಿದೆ. ಅದನ್ನು ತೆರವು ಮಾಡಲು 10 ವರ್ಷ ಆದರೂ ನ್ಯಾಯಾಂಗ ಆದೇಶ ಮಾಡುತ್ತಿಲ್ಲ. ಪ್ರಪ್ರಭುತ್ವದ ಆಧಾರ ಸ್ಥಂಭಗಳೇ ಕೆಲಸ ಮಾಡದಿದ್ದರೆ ದೇಶದ ಭವಿಷ್ಯವೇನು?&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/el-nino-is-not-solely-responsible-for-rising-temperatures-interview-with-iisc-scientist-dr-tv-ramachandra-rav/articleshow-x4mrmib"/>
        </item>
        <item>
            <title><![CDATA[IPL Final match: ಶಾಸಕರ ಟಿಕೆಟ್‌ಗೂ ಐಪಿಎಲ್‌ ಸ್ಥಳಾಂತರಕ್ಕೂ ನಂಟಿಲ್ಲ; ದೊಡ್ಡ ಸ್ಟೇಡಿಯಂ ಇದೆ ಅಂತ ಗುಜರಾತಿಗೆ ಶಿಫ್ಟ್‌: ಡಿಕೆಶಿ]]></title>
            <link>https://kannada.asianetnews.com/state/ipl-final-moved-to-ahmedabad-due-to-larger-stadium-capacity-clarifies-dk-shivakumar-rav/articleshow-517mu55</link>
            <guid isPermaLink="true">https://kannada.asianetnews.com/state/ipl-final-moved-to-ahmedabad-due-to-larger-stadium-capacity-clarifies-dk-shivakumar-rav/articleshow-517mu55</guid>
            <pubDate>Thu, 07 May 2026 07:39:30 +0530</pubDate>
            <description><![CDATA[&lt;p&gt;ಶಾಸಕರಿಗೆ ಐಪಿಎಲ್&zwnj; ಉಚಿತ ಟಿಕೆಟ್&zwnj; ವಿತರಣೆಗೂ, ಐಪಿಎಲ್&zwnj; ಅಂತಿಮ ಪಂದ್ಯ ಬೆಂಗಳೂರಿನಿಂದ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಅಹಮದಾಬಾದ್&zwnj;ನಲ್ಲಿ ದೊಡ್ಡ ಕ್ರೀಡಾಂಗಣವಿದ್ದು, ಹೆಚ್ಚು ಜನ ಸೇರುತ್ತಾರೆಂಬ ಕಾರಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸ್ಪಷ್ಟನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg5d4tc127emvg4wq5y5jsqp,imgname-----------------------2026-01-29t230016.161-1769708087681.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.7):&lt;/strong&gt; &lsquo;ಶಾಸಕರಿಗೆ ಐಪಿಎಲ್&zwnj; ಉಚಿತ ಟಿಕೆಟ್&zwnj; ವಿತರಣೆಗೂ ಐಪಿಎಲ್&zwnj; ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ. ಅಹಮದಾಬಾದ್&zwnj;ನಲ್ಲಿ ದೊಡ್ಡ ಕ್ರೀಡಾಂಗಣವಿದ್ದು, ಹೆಚ್ಚು ಜನ ಸೇರುತ್ತಾರೆಂಬ ಉದ್ದೇಶದಿಂದ ಸ್ಥಳಾಂತರಿಸಲಾಗಿದೆ&rsquo; ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಮದಾಬಾದ್&zwnj;ನಲ್ಲಿ ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಐಪಿಎಲ್ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡಿರಬೇಕು. ಶಾಸಕರಿಗೆ ಟಿಕೆಟ್ ವಿತರಣೆಗೂ ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದರು.&lt;/p&gt;&lt;p&gt;ಶಾಸಕರಿಗೆ ಐಪಿಎಲ್ ಟಿಕೆಟ್ ಬೇಡಿಕೆ ಹಿನ್ನೆಲೆಯಲ್ಲೇ ಸ್ಥಳಾಂತರಿಸಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, &lsquo;ಬೇರೆ ಕಡೆ ಶೇ. 50ರಷ್ಟು ಟಿಕೆಟ್&zwnj; ಮೀಸಲಿರುತ್ತದೆ&rsquo; ಎಂದು ಹೇಳಿದರು.&lt;/p&gt;&lt;p&gt;ಟಿಕೆಟ್ ವಿಚಾರಕ್ಕೆ ಸ್ಥಳಾಂತರ ನಿರ್ಧಾರ ಮಾಡಿದ್ದೇವೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ ಎಂಬ ಬಗ್ಗೆ ಮಾತನಾಡಿ, &lsquo;ಅವರು ಈ ರೀತಿ ಹೇಳಿಕೆ ನೀಡಲಿ, ನಾನು ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ&rsquo; ಎಂದರು.&amp;nbsp;&lt;/p&gt;&lt;p&gt;&lsquo;ಶಾಸಕರಿಗೆ ಐಪಿಎಲ್&zwnj; ಉಚಿತ ಟಿಕೆಟ್&zwnj; ವಿತರಣೆಗೂ ಐಪಿಎಲ್&zwnj; ಅಂತಿಮ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ. ಅಹಮದಾಬಾದ್&zwnj;ನಲ್ಲಿ ದೊಡ್ಡ ಕ್ರೀಡಾಂಗಣವಿದ್ದು, ಹೆಚ್ಚು ಜನ ಸೇರುತ್ತಾರೆಂಬ ಉದ್ದೇಶದಿಂದ ಸ್ಥಳಾಂತರಿಸಲಾಗಿದೆ&rsquo; ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/ipl-final-moved-to-ahmedabad-due-to-larger-stadium-capacity-clarifies-dk-shivakumar-rav/articleshow-517mu55"/>
        </item>
        <item>
            <title><![CDATA[ಪಿಯು ಪರೀಕ್ಷಾ ವೆಚ್ಚ ಪಾವತಿಗೆ ಸರ್ಕಾರ 81.20 ಕೋಟಿ ರು. ಬಿಡುಗಡೆ | ಪ್ರೌಢಶಾಲಾ ಶಿಕ್ಷಕರ ಬಡ್ತಿಗಾಗಿ ಅರ್ಹತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ]]></title>
            <link>https://kannada.asianetnews.com/state/karnataka-govt-releases-rs-81-crore-for-pu-exam-expenses-rav/articleshow-9gyxd13</link>
            <guid isPermaLink="true">https://kannada.asianetnews.com/state/karnataka-govt-releases-rs-81-crore-for-pu-exam-expenses-rav/articleshow-9gyxd13</guid>
            <pubDate>Thu, 07 May 2026 07:23:36 +0530</pubDate>
            <description><![CDATA[&lt;p&gt;Karnataka 2nd PUC exam funds ದ್ವಿತೀಯ ಪಿಯುಸಿ ಪರೀಕ್ಷಾ ವೆಚ್ಚಗಳಿಗಾಗಿ ರಾಜ್ಯ ಸರ್ಕಾರ 81.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅಲ್ಲದೆ, ಪ್ರೌಢಶಾಲಾ ಶಿಕ್ಷಕರನ್ನು ಪಿಯು ಕಾಲೇಜು ಉಪನ್ಯಾಸಕರನ್ನಾಗಿ ಬಡ್ತಿ ನೀಡುವ ಅರ್ಹತಾ ಪರೀಕ್ಷೆಯನ್ನು ಮೇ 26 ರಿಂದ ನಡೆಸಲು ತೀರ್ಮಾನಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr027dg1tjqk9zxv22qbd5rp,imgname-----------------------2026-05-07t072238.458-1778118800897.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.7):&lt;/strong&gt; ಕಳೆದ ಮಾರ್ಚ್&zwnj;ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಸಂಬಂಧಿತ ಎಲ್ಲ ವೆಚ್ಚಗಳ ಪಾವತಿಗಾಗಿ ರಾಜ್ಯ ಸರ್ಕಾರ ಬುಧವಾರ ಒಂದೇ ಕಂತಿನಲ್ಲಿ 81.20 ಕೋಟಿ ರು. ಅನುದಾನ ಬಿಡುಗಡೆಗೊಳಿಸಿದೆ. ಬಜೆಟ್&zwnj;ನಲ್ಲಿ 2026-27ನೇ ಸಾಲಿನ ಪದವಿ ಪೂರ್ವ ಪರೀಕ್ಷಾ ಕಾರ್ಯಗಳ ವೇತನೇತರ ವೆಚ್ಚಗಳಿಗಾಗಿ 101.50 ಕೋಟಿ ರು. ನಿಗದಿ ಮಾಡಲಾಗಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರ ಪ್ರಸ್ತಾವನೆ ಮೇರೆಗೆ ರಾಜ್ಯ ಸರ್ಕಾರ ಈ 101.50 ಕೋಟಿ ರು. ಅನುದಾನದ ಪೈಕಿ ಪೂರಕ ವೆಚ್ಚಕ್ಕೆ 30.40 ಕೋಟಿ ರು. ಪ್ರಯಾಣ ವೆಚ್ಚಕ್ಕೆ 24.80 ಕೋಟಿ ರು. ರಹಸ್ಯ ಸೇವಾ ವೆಚ್ಚಕ್ಕೆ 15.20 ಕೋಟಿ ರು. ಸಾಮಗ್ರಿ ಮತ್ತು ಸರಬರಾಜಿಗೆ 10.80 ಕೋಟಿ ರು. ಸೇರಿ ಒಟ್ಟು 81.20 ಕೋಟಿ ರು. ಬಿಡುಗಡೆಗೊಳಿಸಿದೆ.&lt;/p&gt;&lt;p&gt;ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಕಾರ್ಯಗಳಿಗೆ ಸಂಬಂಧಿಸಿದ ಎಲ್ಲ ಸಿಬ್ಬಂದಿ, ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಭಾವನೆ, ಸಾರಿಗೆ ಭತ್ಯೆ ಹಾಗೂ ದಿನ ಭತ್ಯೆಗಳನ್ನು ನೇರ ನಗದು ವರ್ಗಾವಣೆ(ಡಿಬಿಟಿ) ಮುಖಾತರವೇ ಪಾವತಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಪ್ರೌಢಶಾಲಾ ಶಿಕ್ಷಕರ ಬಡ್ತಿಗೆ 26ರಿಂದ ಅರ್ಹತಾ ಪರೀಕ್ಷೆ&lt;/h2&gt;&lt;p&gt;ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕ ವೃಂದದಿಂದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕ ವೃಂದಕ್ಕೆ ಬಡ್ತಿ ನೀಡುವ ಅರ್ಹತಾ ಪರೀಕ್ಷೆಯನ್ನು ಮೇ 26ರಿಂದ 29ರವರೆಗೆ ನಡೆಸಲು ತೀರ್ಮಾನಿಸಿರುವುದಾಗಿ ಶಾಲಾ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಎರಡು ಹಂತದಲ್ಲಿ ಪರೀಕ್ಷೆಗಳು ನಡೆಯಲಿವೆ.&lt;/p&gt;&lt;p&gt;ಮೇ 26ರಂದು ಬೆಳಗ್ಗೆ ಕನ್ನಡ, ಉರ್ದು, ಜೀವಶಾಸ್ತ್ರ ಮತ್ತು ಗಣಿತ, ಮಧ್ಯಾಹ್ನ ಇಂಗ್ಲೀಷ್ ಮತ್ತು ಸಂಸ್ಕೃತ, ಮೇ 27ರಂದು ಬೆಳಗ್ಗೆ ಇತಿಹಾಸ, ಮಧ್ಯಾಹ್ನ ಹಿಂದಿ, ಮೇ 28ರಂದು ಬೆಳಗ್ಗೆ ಅರ್ಥಶಾಸ್ತ್ರ, ಮಧ್ಯಾಹ್ನ ರಾಜಕೀಯ ಶಾಸ್ತ್ರ, ಮೇ 29 ರಂದು ಬೆಳಗ್ಗೆ ಸಮಾಜಶಾಸ್ತ್ರ, ನಂತರ ಭೂಗೋಳಶಾಸ್ತ್ರ ಪರೀಕ್ಷೆ ನಡೆಯಲಿದೆ. ಅರ್ಹತಾ ಪರೀಕ್ಷೆಯನ್ನು ಈ ಹಿಂದೆಯೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಜನಗಣತಿಯ ಕಾರ್ಯದಲ್ಲಿ ಶಿಕ್ಷಕರು ತೊಡಗಿದ್ದರಿಂದ ಹೊಸ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-govt-releases-rs-81-crore-for-pu-exam-expenses-rav/articleshow-9gyxd13"/>
        </item>
        <item>
            <title><![CDATA[Karnataka News Live: ಪಿಯು ಪರೀಕ್ಷಾ ವೆಚ್ಚ ಪಾವತಿಗೆ ಸರ್ಕಾರ 81.20 ಕೋಟಿ ರು. ಬಿಡುಗಡೆ | ಪ್ರೌಢಶಾಲಾ ಶಿಕ್ಷಕರ ಬಡ್ತಿಗಾಗಿ ಅರ್ಹತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ]]></title>
            <link>https://kannada.asianetnews.com/state/karnataka-news-live-7-may-2026-6th-7th-century-rock-inscription-found-in-bellary-s-tekkalakote-field-mrq/liveblog-updates-mmo8sey</link>
            <guid isPermaLink="true">https://kannada.asianetnews.com/state/karnataka-news-live-7-may-2026-6th-7th-century-rock-inscription-found-in-bellary-s-tekkalakote-field-mrq/liveblog-updates-mmo8sey</guid>
            <pubDate>Thu, 07 May 2026 07:23:37 +0530</pubDate>
            <description><![CDATA[&lt;p&gt;&lt;strong&gt;ತೆಕ್ಕಲಕೋಟೆ (ಬಳ್ಳಾರಿ):&lt;/strong&gt; 6ರಿಂದ 7ನೇ ಶತಮಾನಕ್ಕೆ ಸೇರಿದ ಅಪ್ರಕಟಿತ ಬಂಡೆಗಲ್ಲು ಶಾಸನವೊಂದು ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿಟ್ಟೂರಿನ ಹೊಲದಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ನಿಟ್ಟೂರಿನಲ್ಲಿರುವ ಅಶೋಕನ ಶಿಲಾಶಾಸನ ಪತ್ತೆ ಆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿರುವ ಬಂಡೆಗಲ್ಲು ಶಾಸನವನ್ನು ಸಂಶೋಧನಾರ್ಥಿಗಳಾದ ಅಶೋಕ್ ಅಬಕಾರಿ, ಮನೋಹರ ಗುರುತಿಸಿ, ಕ್ಷೇತ್ರ ಅಧ್ಯಯನಕ್ಕೆ ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ, ಹಿರೇಬೆಣಕಲ್ ಮಂಜುನಾಥ ದೊಡ್ಡಮನಿ ಗಮನಕ್ಕೆ ತಂದರು. ಶಾಸನವು ಬೃಹತ್ ಆಕಾರದ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಶಾಸನವು ಸುಮಾರು ಏಳುಸಾಲುಗಳನ್ನು ಒಳಗೊಂಡಿದೆ. ಮೌರ್ಯರ ಆಳ್ವಿಕೆಯನ್ನು ಒಳಗೊಂಡಿರುವ ಪ್ರದೇಶವೆಂದು ಗುರುತಿಸಲಾಗಿತ್ತು. ಸದ್ಯ ಪತ್ತೆಯಾಗಿರುವ ಶಾಸನದ ಲಿಪಿಯ ಆಧಾರದಲ್ಲಿ ಸುಮಾರು 6ರಿಂದ 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr027dg1tjqk9zxv22qbd5rp,imgname-----------------------2026-05-07t072238.458-1778118800897.jpg" type="image/jpeg" height="390" width="690"/>
            <category>state</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-7-may-2026-6th-7th-century-rock-inscription-found-in-bellary-s-tekkalakote-field-mrq/liveblog-updates-mmo8sey"/>
        </item>
    </channel>
</rss>
