<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 19 Jun 2026 00:29:58 +0530</lastBuildDate>
        <atom:link href="https://kannada.asianetnews.com/rss/state" rel="self" type="application/rss+xml"/>
        <item>
            <title><![CDATA[Mekedatu ಯೋಜನೆಯಿಂದ ಒಂದು ಬಕೆಟ್‌ ನೀರೂ ನೀರಾವರಿಗೆ ಬಳಸಲ್ಲ: ಸಿಎಂ ಡಿಕೆಶಿ ಸ್ಪಷ್ಟನೆ]]></title>
            <link>https://kannada.asianetnews.com/politics/dk-shivakumar-says-mekedatu-project-not-for-irrigation-only-drinking-water-gvd/articleshow-nvs6cb0</link>
            <guid isPermaLink="true">https://kannada.asianetnews.com/politics/dk-shivakumar-says-mekedatu-project-not-for-irrigation-only-drinking-water-gvd/articleshow-nvs6cb0</guid>
            <pubDate>Fri, 19 Jun 2026 00:29:53 +0530</pubDate>
            <description><![CDATA[&lt;p&gt;Mekedatu ಯೋಜನೆಯಿಂದ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಈ ಯೋಜನೆ ಅನಿವಾರ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdxznvvkrber3ewje6r04aw,imgname-cj-1781805340539.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.19):&lt;/strong&gt; &lsquo;ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯ ಇದ್ದಂತೆ. ಈ ಯೋಜನೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ. ನಾವು ಯೋಜನೆಯಿಂದ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸಲ್ಲ. ಈ ಬಗ್ಗೆ ತಮಿಳುನಾಡು ಸರ್ಕಾರದ ಜತೆಗೆ ಚರ್ಚೆಗೂ ಸಿದ್ಧ&rsquo; ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡು ಪಾಲಿನ 177 ಟಿಎಂಸಿ ನೀರು ಬಿಡಲು ನಾವು ಸಿದ್ಧವಾಗಿದ್ದೇವೆ. ಮೇಕೆದಾಟು ಯೋಜನೆ ತೀರ್ಮಾನವನ್ನು ಕೇಂದ್ರ ಜಲ ಆಯೋಗ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.&lt;/p&gt;&lt;p&gt;ನಾವು ಅದರಲ್ಲಿನ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರಿಗೆ ಕುಡಿಯುವ ನೀರು ನೀಡಲು ಇದೊಂದೇ ಆಯ್ಕೆ. ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ಅನಿವಾರ್ಯ ಎಂದು ಹೇಳಿದರು. ನಾವು ತಮಿಳುನಾಡಿನ ರೈತರ ಹಿತವನ್ನೂ ಕಾಪಾಡಬೇಕು. ಇದು ಸಮತೋಲಿತ ಜಲಾನಯನ. ಇಲ್ಲಿ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರಿಗೆ ನಾವು ಕೃಷ್ಣಾದಿಂದ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನಮ್ಮ ಮುಂದಿರುವ ಏಕೈಕ ಆಯ್ಕೆ ಎಂದರು.&lt;/p&gt;&lt;p&gt;&lt;strong&gt;40 ವರ್ಷಗಳಿಂದ ರಾಜಕೀಯ ಅಜೆಂಡಾ:&lt;/strong&gt; ತಮಿಳುನಾಡಿನವರು 40 ವರ್ಷಗಳಿಂದ ರಾಜಕೀಯ ಅಜೆಂಡಾ ಇಟ್ಟುಕೊಂಡಿದ್ದಾರೆ. ಅವರ ರಾಜಕೀಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ಹೆಚ್ಚುವರಿ ನೀರು ಸಮುದ್ರ ಸೇರಿದೆ. ಅವರು ಕೆಳಹಂತದಲ್ಲಿ ಸಾಕಷ್ಟು ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದು, ನಾವು ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರ ನೆಲದಲ್ಲಿ ಅವರು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದೇ ವಿಚಾರ ಸುಪ್ರೀಂ ಕೋರ್ಟ್ ನಲ್ಲೂ ಚರ್ಚೆಯಾಗಿದೆ. ಈ ಯೋಜನೆಗೆ ನಾವು ಯಾವುದೇ ಆರ್ಥಿಕ ನೆರವಾಗಲಿ ಇತರೆ ವಿಚಾರವನ್ನು ಕೇಳುತ್ತಿಲ್ಲ. ಈ ಯೋಜನೆಯಿಂದ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಇಂಧನ ಕ್ಷೇತ್ರದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದೆ ಎಂದು ಡಿ.ಕೆ. ಶಿವಕುಮಾರ್&zwnj; ಹೇಳಿದರು.&lt;/p&gt;&lt;p&gt;&lt;strong&gt;ಯಾವಾಗ ಕರೆದರೂ ಚರ್ಚೆಗೆ ಸಿದ್ಧ: &lt;/strong&gt;ತಮಿಳುನಾಡು ಜೊತೆ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಯಾವಾಗ ಬೇಕಾದರೂ ಅವರ ಜೊತೆ ಮಾತನಾಡಲು ಸಿದ್ಧನಿದ್ದೇನೆ. ತಮಿಳುನಾಡು, ಕರ್ನಾಟಕದವರು ಭಾರತೀಯರು. ನಾವು ಕಾವೇರಿ ನೀರು ಕುಡಿಯಬೇಕು. ತಮಿಳುನಾಡಿನಿಂದ ಇಲ್ಲಿಗೆ ಬಂದು ವೃತ್ತಿ ಮಾಡುತ್ತಿರುವ ಅನೇಕ ಜನರಿದ್ದಾರೆ. ಇಲ್ಲಿಂದ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವವರೂ ಇದ್ದಾರೆ. ನಾವು ಅವರನ್ನು ಪ್ರತ್ಯೇಕಿಸುವುದಿಲ್ಲ. ಸಮತೋಲಿತ ಜಲಾನಯನ ನಿರ್ಮಾಣದಿಂದ ಕಷ್ಟ ಕಾಲದಲ್ಲಿ ತಮಿಳುನಾಡಿನ ಪಾಲಿನ ನೀರು ಹರಿಸಲು ನೆರವಾಗುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ಯೋಜನೆ ಆಗುವ ವಿಶ್ವಾಸವಿದೆ ಎಂದು ಶಿವಕುಮಾರ್&zwnj; ತಿಳಿಸಿದರು.&lt;/p&gt;&lt;h2&gt;&lt;strong&gt;ಸಂಸದರು ಒಗ್ಗಟ್ಟಾಗಿ ಹೋರಾಡುವ ವಿಶ್ವಾಸವಿದೆ&lt;/strong&gt;&lt;/h2&gt;&lt;p&gt;ತಮಿಳುನಾಡಿನವರು ಅವರು ರಾಜಕೀಯ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಬಂದ ಬಳಿಕ ಮತ್ತೇನಿದೆ? ಕರ್ನಾಟಕ 177 ಟಿಎಂಸಿ ನೀರು ಬಿಡಬೇಕು ಎಂದು ನೀಡಿದ ನಿರ್ದೇಶನವನ್ನು ನಾವು ಒಪ್ಪಿಕೊಳ್ಳಲಿಲ್ಲವೇ? ಅವರು ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್, ಬಿಜೆಪಿ, ದಳ ಎಲ್ಲಾ ಸಂಸದರು ಒಗ್ಗಟ್ಟಾಗಿ ನಮ್ಮ ರಾಜ್ಯದ ಹಿತ ಕಾಪಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಶಿವಕುಮಾರ್&zwnj; ತಿಳಿಸಿದರು. ತಮಿಳುನಾಡಿನಲ್ಲಿ ನಿಮ್ಮ ಮೈತ್ರಿ ಇದೆ ಎಂಬ ಪ್ರಶ್ನೆಗೆ, ನಾವು ಅವರಿಗೆ ಏನು ಮನವಿ ಮಾಡಬೇಕೋ ಮನವಿ ಮಾಡುತ್ತೇವೆ. ಇಲ್ಲಿ ರಾಜಕಾರಣ ಏನಿಲ್ಲ. ಎರಡು ರಾಜ್ಯಗಳ ಜನರ ಹಿತ ಕಾಪಾಡಿಕೊಂಡು ಹೋಗೋಣ ಎಂದರು.&lt;/p&gt;]]></content:encoded>
            <category>state</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/dk-shivakumar-says-mekedatu-project-not-for-irrigation-only-drinking-water-gvd/articleshow-nvs6cb0"/>
        </item>
        <item>
            <title><![CDATA[ಬೆಂಗಳೂರು-ಮಂಗಳೂರು ವಂದೇ ಭಾರತ್: ಜೂನ್ ಅಂತ್ಯಕ್ಕೆ ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಪ್ರಾಯೋಗಿಕ ಸಂಚಾರ!]]></title>
            <link>https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4</link>
            <guid isPermaLink="true">https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4</guid>
            <pubDate>Thu, 18 Jun 2026 22:08:53 +0530</pubDate>
            <description><![CDATA[&lt;p&gt;ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯಲ್ಲಿ ನಡೆಯಲಿದೆ. ರೈಲಿಗೆ ವಿಶೇಷ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvds6hpt0kd5zg32mxapfkrc,imgname-sakaleshpura-subrahmanya-road-vande-bharat-1781800322778.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯಲ್ಲಿ ನಡೆಯಲಿದೆ. ರೈಲಿಗೆ ವಿಶೇಷ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ.&lt;/p&gt;&lt;img&gt;&lt;p&gt;ಕರ್ನಾಟಕದ ಕರಾವಳಿ ನಗರಗಳು ಮತ್ತು ರಾಜಧಾನಿ ಬೆಂಗಳೂರು ನಡುವೆ ವೇಗದ ರೈಲು ಸಂಚಾರದ ಕನಸು ನನಸಾಗುವತ್ತ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಲಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಉದ್ದದ ಕಠಿಣ ಘಾಟಿ ವಿಭಾಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ (Vande Bharat Express) ರೈಲಿನ ಪ್ರಾಯೋಗಿಕ ಸಂಚಾರ ಜೂನ್ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ಘಾಟಿ ವಿಭಾಗಕ್ಕೆ ವಿಶೇಷ ಸುರಕ್ಷತಾ ವ್ಯವಸ್ಥೆ:&lt;/strong&gt;&lt;/p&gt;&lt;p&gt;ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) ಈ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಿದೆ. ಹಾಸನ-ಮಂಗಳೂರು ರೈಲ್ವೆ ಮಾರ್ಗದ ಈ ಘಾಟಿ ವಿಭಾಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ನಿರ್ದೇಶನದಂತೆ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 30 ಕಿ.ಮೀ ಗೆ ಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ವಂದೇ ಭಾರತ್ ರೈಲಿಗೆ ವಿಶೇಷವಾದ 'ಸ್ವಯಂಚಾಲಿತ ತುರ್ತು ಬ್ರೇಕಿಂಗ್' (AEB - Automatic Emergency Braking) ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯವಾಗಿದೆ.&lt;/p&gt;&lt;img&gt;&lt;p&gt;ರೈಲು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿದರೆ, ಈ AEB ವ್ಯವಸ್ಥೆಯು ತಾನಾಗಿಯೇ ವೇಗವನ್ನು ಕಡಿಮೆ ಮಾಡುತ್ತದೆ. ಈ ತಂತ್ರಜ್ಞಾನವನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ರೈಲಿನ ಬೋಗಿಗಳಿಗೆ ಅಳವಡಿಸಲಾಗುತ್ತಿದ್ದು, ಮುಂದಿನ ವಾರ ರೈಲು ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಾಯೋಗಿಕ ಪರೀಕ್ಷೆಗಳ ವಿವರ:&lt;/strong&gt;&lt;/p&gt;&lt;p&gt;ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕ (DRM) ಮುದಿತ್ ಮಿತ್ತಲ್ ಅವರು ಮಾಹಿತಿ ನೀಡಿ, 'ಘಾಟಿ ವಿಭಾಗದಲ್ಲಿ ಈಗಾಗಲೇ ಐಸಿಎಫ್ (ICF) ಮತ್ತು ಎಲ್ಎಚ್&zwnj;ಬಿ (LHB) ಬೋಗಿಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ಈಗ ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆ ಬಾಕಿ ಇದೆ. ಇದಕ್ಕಾಗಿ ಎಇಬಿ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಸಿದ್ಧವಾಗುತ್ತಿದೆ' ಎಂದು ತಿಳಿಸಿದ್ದಾರೆ. ಜೂನ್ ಎರಡನೇ ವಾರದಿಂದ ಆರಂಭವಾದ ಈ ಪರೀಕ್ಷೆಗಳಲ್ಲಿ 5 ದಿನಗಳ ಕಾಲ 5 ಟ್ರಿಪ್&zwnj;ಗಳನ್ನು ನಡೆಸಲಾಗಿದ್ದು, ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು-ಮಂಗಳೂರು ರೈಲು ಸಂಚಾರಕ್ಕೆ ಮುಕ್ತಿ:&lt;/p&gt;&lt;p&gt;ಈ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ, ಆರ್&zwnj;ಡಿಎಸ್&zwnj;ಒ (RDSO) ರೈಲ್ವೆ ಸಚಿವಾಲಯಕ್ಕೆ ಹಸಿರು ನಿಶಾನೆ ತೋರಿಸಿದರೆ, ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಓಡಾಟಕ್ಕೆ ಇದ್ದ ಅತಿದೊಡ್ಡ ತಾಂತ್ರಿಕ ಅಡಚಣೆ ದೂರವಾಗಲಿದೆ. ಇದು ಕರಾವಳಿ ಕರ್ನಾಟಕದ ಜನರಿಗೆ ರಾಜಧಾನಿಗೆ ಹೋಗಲು ಅತ್ಯಂತ ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.&lt;/p&gt;&lt;img&gt;&lt;p&gt;ಈ ಮಾರ್ಗದ ವಿದ್ಯುದೀಕರಣ ಕಾರ್ಯವು ಡಿಸೆಂಬರ್ 2025 ರಲ್ಲಿ ಪೂರ್ಣಗೊಂಡಿತ್ತು. ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆಯವರೆಗಿನ 400 ಕಿ.ಮೀ ರೈಲ್ವೆ ಮಾರ್ಗದ ವಿದ್ಯುದೀಕರಣವನ್ನು ರೈಟ್ಸ್ (RITES) ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದೆ. ಪ್ರಾಯೋಗಿಕ ಸಂಚಾರದ ನಂತರ ಕರಾವಳಿ ಭಾಗಕ್ಕೆ ಶೀಘ್ರದಲ್ಲೇ ವಂದೇ ಭಾರತ್ ಭಾಗ್ಯ ಸಿಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railway-update-bengaluru-mangaluru-vande-bharat-express-trail-run-june-subramanya-to-sakleshpur-2bkg4d4"/>
        </item>
        <item>
            <title><![CDATA[Karnataka mlc election : 5 ಕಾಂಗ್ರೆಸ್ - 2 ಬಿಜೆಪಿ ಗೆಲುವು, ಸಿಎಂ ಆದ ಮೊದಲ ಟಾಸ್ಕ್‌ನಲ್ಲೇ ಡಿಕೆಶಿ ಸಕ್ಸಸ್!]]></title>
            <link>https://kannada.asianetnews.com/state/karnataka-mlc-election-2026-results-congress-wins-5-seats-bjp-jds-cross-voting-shocker/articleshow-igndz5b</link>
            <guid isPermaLink="true">https://kannada.asianetnews.com/state/karnataka-mlc-election-2026-results-congress-wins-5-seats-bjp-jds-cross-voting-shocker/articleshow-igndz5b</guid>
            <pubDate>Thu, 18 Jun 2026 19:23:42 +0530</pubDate>
            <description><![CDATA[&lt;p&gt;ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ 5 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್&zwnj;ನಿಂದ ಒಟ್ಟು 11 ಶಾಸಕರು ಅಡ್ಡ ಮತದಾನ ಮಾಡಿದ್ದು, ಸಿಎಂ ಡಿ.ಕೆ. ಶಿವಕುಮಾರ್ ರಾಜಕೀಯ ತಂತ್ರಗಾರಿಕೆಯ ಯಶಸ್ಸು ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdfx60wqg38q0df7ktj9rkm,imgname-karnataka-mlc-election-result-1781790578716.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್&zwnj;ನ ಐವರು ಹಾಗೂ ಬಿಜೆಪಿಯ ಇಬ್ಬರು ಗೆಲುವು ಸಾಧಿಸಿದ್ದಾರೆ. ಇನ್ನು ಜೆಡಿಎಸ್&zwnj;ನಿಂದ ನಿಲ್ಲಿಸಲಾಗಿದ್ದ ಅಭ್ಯರ್ಥಿ ಗೋವಿಂದರಾಜು ಅವರಿಗೆ ಸೋಲುಂಟಾಗಿದೆ. ಇದರ ಜೊತೆಗೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್&zwnj;ನಿಂದ ಒಟ್ಟು 11 ಸದಸ್ಯರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;&lt;strong&gt;ಕಾಂಗ್ರೆಸ್&zwnj;ನ ಅಭ್ಯರ್ಥಿಗಳ ಪಾರುಪತ್ಯ:&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾರಥ್ಯದಲ್ಲಿ ಕಾಂಗ್ರೆಸ್ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತು.&lt;/p&gt;&lt;p&gt;&lt;strong&gt;ಫಲಿತಾಂಶದ ಅಂಕಿ-ಅಂಶಗಳು ಹೀಗಿವೆ:&lt;/strong&gt;&lt;/p&gt;&lt;ul&gt; &lt;li&gt;ಬಿ.ಕೆ. ಹರಿಪ್ರಸಾದ್: 30 ಮತಗಳು&lt;/li&gt; &lt;li&gt;ತಿಪ್ಪಣ್ಣ ಕಮಕನೂರು: 30 ಮತಗಳು&lt;/li&gt; &lt;li&gt;ಶಿವಣ್ಣ ಬಿ.ಎಸ್.: 30 ಮತಗಳು&lt;/li&gt; &lt;li&gt;ಪಿ.ವಿ. ಮೋಹನ್: 29 ಮತಗಳು&lt;/li&gt; &lt;li&gt;ವಿನಯ್ ಕಾರ್ತಿಕ್: 32 ಮತಗಳು&lt;/li&gt;&lt;/ul&gt;&lt;p&gt;ಉಳಿದಂತೆ ಬಿಜೆಪಿಯಿಂದ ರಘು ಕೌಟಿಲ್ಯ 29 ಹಾಗೂ ಲಿಂಗರಾಜ ಪಾಟೀಲ 27 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಉಳಿದಂತೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಗೋವಿಂದರಾಜು ಅವರು ಕೇವಲ 14 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಇನ್ನು ಜೆಡಿಎಸ್&zwnj;ನಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲುವುದಕ್ಕೆ ಬೇಕಿದ್ದ ಶಾಸಕರ ಬಲವೂ ಇರಲಿಲ್ಲ. ಆದರೂ ಪಕ್ಷದ ಶಾಸಕರನ್ನು ಒಗ್ಗಟ್ಟಿನಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಅಭ್ಯರ್ಥಿಯನ್ನು ಹಾಕಲಾಗುತ್ತಿದೆ ಎಂದು ಸ್ವತಃ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದರು.&lt;/p&gt;&lt;h2&gt;&lt;strong&gt;ಮೈತ್ರಿ ಪಕ್ಷದಿಂದ 11 ಅಡ್ಡ ಮತದಾನ&lt;/strong&gt;&lt;/h2&gt;&lt;p&gt;ಇನ್ನು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇದೀಗ ಲಭ್ಯವಾಗಿರುವ ಮಾಹಿತಿಯಂತೆ ಒಟ್ಟು 11 ಮತಗಳು ಅಡ್ಡಮತದಾನವಾಗಿವೆ ಎಂದು ತಿಳಿದುಬಂದಿದೆ. ಈ ಎಲ್ಲ ಅಡ್ಡಮತಗಳು ಕೂಡ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳದ್ದಾಗಿವೆ. ಅಂದರೆ ಬಿಜೆಪಿಯ 7 ಹಾಗೂ ಜೆಡಿಎಸ್&zwnj;ನ 4 ಶಾಸಕರು ತಮ್ಮ ಪಕ್ಷ ತೋರಿಸಿದ ಅಭ್ಯರ್ಥಿಯನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತವನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಒಬ್ಬ ಶಾಸಕರ ಮತ ಅಸಿಂಧುವಾಗಿದೆ. ಇನ್ನೂ ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.&lt;/p&gt;&lt;h2&gt;&lt;strong&gt;ಟಾಸ್ಕ್&zwnj;ನಲ್ಲಿ ವಿನ್ ಆದ ಡಿಕೆಶಿ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಮೊದಲ ಬಾರಿಗೆ ಹೈಕಮಾಂಡ್ ಕೊಟ್ಟ ಟಾಸ್ಕ್&zwnj;ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದ್ದಾರೆ. ಕಾಂಗ್ರೆಸ್ ಮತಗಳಷ್ಟೇ ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್&zwnj;ನಿಂದ 11 ಮತಗಳನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮಗೆ ಸಿಎಂ ಆದ ಬಳಿಕ ಬಂದ ಮೊದಲ ಟಾಸ್ಕ್&zwnj; ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಟ್ರಬಲ್ ಶೂಟರ್ ಮತ್ತು ರಾಜಕೀಯ ಚಾಣಾಕ್ಷತನದ ಸಾಮರ್ಥ್ಯವನ್ನು ಹೈಕಮಾಂಡ್ ಮುಂದೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-mlc-election-2026-results-congress-wins-5-seats-bjp-jds-cross-voting-shocker/articleshow-igndz5b"/>
        </item>
        <item>
            <title><![CDATA[ಎಐ ಸಾಮ್ರಾಜ್ಯದಲ್ಲಿ ಕರ್ನಾಟಕದ ಅಚ್ಚರಿಯ ಜಿಗಿತ! ಆವಿಷ್ಕಾರಗಳಲ್ಲಿ ಏಷ್ಯಾದಲ್ಲೇ 2ನೇ ಸ್ಥಾನ ಪಡೆದ ಬೆಂಗಳೂರು!]]></title>
            <link>https://kannada.asianetnews.com/gallery/whats-new-technology/bengaluru-solidifies-global-deep-tech-and-ai-powerhouse-ranking-15th-globally-and-2nd-in-asia-for-ai-innovation-gdp-p1knnxq</link>
            <guid isPermaLink="true">https://kannada.asianetnews.com/gallery/whats-new-technology/bengaluru-solidifies-global-deep-tech-and-ai-powerhouse-ranking-15th-globally-and-2nd-in-asia-for-ai-innovation-gdp-p1knnxq</guid>
            <pubDate>Thu, 18 Jun 2026 16:02:56 +0530</pubDate>
            <description><![CDATA[&lt;p&gt;&amp;nbsp;GSER 2026 ರ ಪ್ರಕಾರ, &amp;nbsp;AI ಆವಿಷ್ಕಾರದಲ್ಲಿ ಬೆಂಗಳೂರು ಏಷ್ಯಾ ಖಂಡದಲ್ಲೇ ಎರಡನೇ ಸ್ಥಾನ ಪಡೆದಿದೆ. ಈ ವರದಿಯು ಬೆಂಗಳೂರಿನ $152.8 ಬಿಲಿಯನ್ ಮೌಲ್ಯದ ಪರಿಸರ ವ್ಯವಸ್ಥೆಯನ್ನು ಮತ್ತು ಡೀಪ್&zwnj;ಟೆಕ್ ಹಾಗೂ ಎಐ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಅದರ ಜಾಗತಿಕ ಬೆಳವಣಿಗೆಯನ್ನು ದೃಢಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktbhv7dnf26m2q1j95g3ewec,imgname-tamil-news---2026-06-05t125929.616-1780651761077.png" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;GSER 2026 ರ ಪ್ರಕಾರ, &amp;nbsp;AI ಆವಿಷ್ಕಾರದಲ್ಲಿ ಬೆಂಗಳೂರು ಏಷ್ಯಾ ಖಂಡದಲ್ಲೇ ಎರಡನೇ ಸ್ಥಾನ ಪಡೆದಿದೆ. ಈ ವರದಿಯು ಬೆಂಗಳೂರಿನ $152.8 ಬಿಲಿಯನ್ ಮೌಲ್ಯದ ಪರಿಸರ ವ್ಯವಸ್ಥೆಯನ್ನು ಮತ್ತು ಡೀಪ್&zwnj;ಟೆಕ್ ಹಾಗೂ ಎಐ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಅದರ ಜಾಗತಿಕ ಬೆಳವಣಿಗೆಯನ್ನು ದೃಢಪಡಿಸಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಜಾಗತಿಕ ನವೋದ್ಯಮ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರು ನಗರವು ಮಹತ್ತರವಾದ ಮೈಲಿಗಲ್ಲನ್ನು ಸಾಧಿಸಿದೆ. ಜಾಗತಿಕ ಸ್ಟಾರ್ಟ್&zwnj;ಅಪ್ ಪರಿಸರ ವ್ಯವಸ್ಥೆ ವರದಿ (GSER) 2026 ರ ಪ್ರಕಾರ, ಬೆಂಗಳೂರು ನಗರವು ಕೃತಕ ಬುದ್ಧಿಮತ್ತೆ ಆವಿಷ್ಕಾರಗಳಲ್ಲಿ ಏಷ್ಯಾ ಖಂಡದಲ್ಲೇ ಎರಡನೇ ಅತ್ಯುನ್ನತ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಜಂಟಿಯಾಗಿ ಸ್ಟಾರ್ಟ್&zwnj;ಅಪ್ ಜೀನೋಮ್ ಸಂಸ್ಥೆಯ ಸಹಭಾಗಿತ್ವದಲ್ಲಿ ಪ್ಯಾರಿಸ್&zwnj;ನ ಪ್ರತಿಷ್ಠಿತ ವಿವಾಟೆಕ್ ಸಮ್ಮೇಳನದಲ್ಲಿ ಈ ವರದಿಯ ಪ್ರಮುಖ ಅಂಶಗಳನ್ನು ಅಧಿಕೃತವಾಗಿ ಪ್ರಕಟಿಸಿವೆ. ಸದ್ಯ 152.8 ಬಿಲಿಯನ್ ಯುಎಸ್ ಡಾಲರ್ ಪರಿಸರ ವ್ಯವಸ್ಥೆಯ ಮೌಲ್ಯವನ್ನು ಹೊಂದಿರುವ ಬೆಂಗಳೂರು, ಕೇವಲ ಭಾರತದ ಸ್ಟಾರ್ಟ್&zwnj;ಅಪ್ ರಾಜಧಾನಿಯಾಗಿ ಮಾತ್ರವಲ್ಲದೆ ಇಡೀ ವಿಶ್ವದ ಗಮನ ಸೆಳೆಯುವ ಡೀಪ್&zwnj;ಟೆಕ್ ಮತ್ತು ಎಐ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.&lt;/p&gt;&lt;img&gt;&lt;p&gt;ವಿಶ್ವದ ಒಟ್ಟಾರೆ ಸ್ಟಾರ್ಟ್&zwnj;ಅಪ್ ಪರಿಸರ ವ್ಯವಸ್ಥೆ ಸೂಚ್ಯಂಕದಲ್ಲಿ ಬೆಂಗಳೂರು ಜಾಗತಿಕವಾಗಿ 15 ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಎಐ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಅತ್ಯಂತ ಬಲವಾದ ಪ್ರಗತಿಯನ್ನು ದಾಖಲಿಸಿದೆ. ಆರಂಭಿಕ ಹಂತದ ಎಐ ಉದ್ಯಮಗಳಿಗೆ ದೊರೆಯುತ್ತಿರುವ ಹೂಡಿಕೆಯಲ್ಲಿ ಬೆಂಗಳೂರು ಜಾಗತಿಕ ಸರಾಸರಿಗಿಂತ ಹೆಚ್ಚಿನ ವೇಗದ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಕರ್ನಾಟಕದ ಐಟಿ ಮತ್ತು ಬಿಟಿ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಈ ವರದಿಯು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಬೆಂಗಳೂರು ಸೇರಿದಂತೆ ಭಾರತದ 6 ಪ್ರಮುಖ ಪರಿಸರ ವ್ಯವಸ್ಥೆಗಳ ಪ್ರಭಾವಶಾಲಿ ಹೆಜ್ಜೆಗುರುತನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಈ ಸಾಧನೆಯು ದೇಶದ ಎಐ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ಮುನ್ನಡೆಸುವಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ.&lt;/p&gt;&lt;img&gt;&lt;p&gt;ಜಾಗತಿಕ ನವೋದ್ಯಮ ರಂಗದಲ್ಲಿ ಅತ್ಯಂತ ವಿಶ್ವಾಸಾರ್ಹ ಮಾನದಂಡವೆಂದು ಪರಿಗಣಿಸಲ್ಪಟ್ಟಿರುವ ಈ ಜಿಎಸ್&zwnj;ಇಆರ್ ವರದಿಯು ವಿಶ್ವಾದ್ಯಂತ 350 ಕ್ಕೂ ಹೆಚ್ಚು ಆವಿಷ್ಕಾರ ಪರಿಸರ ವ್ಯವಸ್ಥೆಗಳಲ್ಲಿರುವ ಸುಮಾರು 5.5 ದಶಲಕ್ಷಕ್ಕೂ ಹೆಚ್ಚಿನ ಕಂಪನಿಗಳ ಬೃಹತ್ ದತ್ತಾಂಶವನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಈ ಶ್ರೇಯಾಂಕಗಳನ್ನು ಕೇವಲ ಒಂದು ಅಂಶದ ಆಧಾರದ ಮೇಲೆ ನಿರ್ಧರಿಸದೆ ಆರು ಪ್ರಮುಖ ಯಶಸ್ಸಿನ ಮಾನದಂಡಗಳ ತೂಕದ ಸಂಯೋಜಿತ ಸೂಚ್ಯಂಕದ ಮೇಲೆ 1 ರಿಂದ 10 ರ ಪ್ರಮಾಣದಲ್ಲಿ ಮೌಲ್ಯೀಕರಿಸಲಾಗುತ್ತದೆ. ಇದರಲ್ಲಿ ಕಾರ್ಯಕ್ಷಮತೆಗೆ ಶೇಕಡಾ 27.5, ಹೂಡಿಕೆ ನಿಧಿಗೆ ಶೇಕಡಾ 20, ಮಾರುಕಟ್ಟೆ ವ್ಯಾಪ್ತಿಗೆ ಶೇಕಡಾ 20, ಪ್ರತಿಭೆ ಮತ್ತು ಅನುಭವಕ್ಕೆ ಶೇಕಡಾ 17.5, ಎಐ-ಸ್ಥಳೀಯ ಕ್ಲಸ್ಟರ್&zwnj;ಗೆ ಶೇಕಡಾ 10 ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಎಂಜಿನ್&zwnj;ಗೆ ಶೇಕಡಾ 5 ರಷ್ಟು ತೂಕವನ್ನು ನೀಡಿ ಅತ್ಯಂತ ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಬೆಂಗಳೂರು ಇನ್ನು ಮುಂದೆ ಕೇವಲ ಪ್ರಾದೇಶಿಕ ನವೋದ್ಯಮ ಕೇಂದ್ರವಾಗಿ ಉಳಿದಿಲ್ಲ, ಬದಲಿಗೆ ಅದು ಜಾಗತಿಕ ಮಟ್ಟದ ಡೀಪ್&zwnj;ಟೆಕ್ ಆವಿಷ್ಕಾರದ ಪ್ರಮುಖ ಇಂಜಿನ್ ಆಗಿ ರೂಪಾಂತರಗೊಂಡಿದೆ ಎಂದು ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಅಂತರರಾಷ್ಟ್ರೀಯ ಮಾನ್ಯತೆಯು ಪ್ರತಿಭೆ, ಸಂಶೋಧನೆ, ಉದ್ಯಮಶೀಲತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ರಾಜ್ಯ ಸರ್ಕಾರವು ದೀರ್ಘಕಾಲದವರೆಗೆ ಹೂಡಿಕೆ ಮಾಡಿದ ದೂರದೃಷ್ಟಿಯ ಯೋಜನೆಗಳಿಗೆ ಸಂದ ಜಯವಾಗಿದೆ. ಪ್ರಸ್ತುತ ಸರ್ಕಾರವು 'ಕರ್ನಾಟಕದ ನವೋದ್ಯಮ ದಶಕ'ವನ್ನು ನಿರ್ಮಿಸುವತ್ತ ಗಮನ ನೆಟ್ಟಿದ್ದು, ಮುಂಬರುವ ದಿನಗಳಲ್ಲಿ ಕರ್ನಾಟಕದ ಮಣ್ಣಿನಿಂದ ಜಾಗತಿಕವಾಗಿ ಪ್ರಭಾವ ಬೀರಬಲ್ಲ ಮುಂದಿನ ಪೀಳಿಗೆಯ ಬೃಹತ್ ಕಂಪನಿಗಳನ್ನು ಜಗತ್ತಿಗೆ ಪರಿಚಯಿಸುವ ಸ್ಪಷ್ಟ ಗುರಿಯನ್ನು ಹೊಂದಿದೆ.&lt;/p&gt;&lt;img&gt;&lt;p&gt;ಬೆಂಗಳೂರು-ಕರ್ನಾಟಕ ವಲಯವು ಪರಿಸರ ವ್ಯವಸ್ಥೆಯ ಉತ್ಪಾದನೆ, ಆವಿಷ್ಕಾರದ ಸಾಮರ್ಥ್ಯ ಮತ್ತು ಹೊಸ ಮೌಲ್ಯಗಳ ಸೃಷ್ಟಿ ವೇಗದಲ್ಲಿ ಅತ್ಯಂತ ಸ್ಥಿರವಾದ ಪ್ರಗತಿಯನ್ನು ತೋರುತ್ತಿದೆ. ಈ ನಗರದ ಪ್ರಮುಖ ವೈಶಿಷ್ಟ್ಯವೆಂದರೆ ಅತ್ಯಂತ ಕಡಿಮೆ ಪ್ರತಿಭೆಗಳ ಇನ್&zwnj;ಪುಟ್ ವೆಚ್ಚದಲ್ಲಿ ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಆವಿಷ್ಕಾರದ ಫಲಿತಾಂಶಗಳನ್ನು ಸಾಧಿಸಬಹುದಾದ ಬಂಡವಾಳ-ಸಮರ್ಥ ವಾತಾವರಣ ಇಲ್ಲಿದೆ. ಈ ಹೆಚ್ಚಿನ ವೆಚ್ಚ-ಉತ್ಪಾದನಾ ಅನುಪಾತದ ಕಾರಣದಿಂದಾಗಿ ಬೆಂಗಳೂರು ನಿರ್ಗಮನದ ಮೌಲ್ಯದಲ್ಲಿ ಏಷ್ಯಾದಲ್ಲಿ 4 ನೇ ಸ್ಥಾನದಲ್ಲಿದ್ದರೆ, ಜಾಗತಿಕವಾಗಿ ಅಗ್ರ 10 ರ ಪಟ್ಟಿಯಲ್ಲಿದೆ. ಇನ್ನು ಬಂಡವಾಳ ರಚನೆಯ ವಿಷಯಕ್ಕೆ ಬಂದರೆ, 2021 ರಿಂದ 2025 ರ ಅವಧಿಯಲ್ಲಿ ಬೆಂಗಳೂರು ಬರೋಬ್ಬರಿ 39 ಶತಕೋಟಿ ಯುಎಸ್ ಡಾಲರ್ ಸಾಹಸೋದ್ಯಮ ನಿಧಿಯನ್ನು ಆಕರ್ಷಿಸುವ ಮೂಲಕ ಜಾಗತಿಕವಾಗಿ ಅಗ್ರ 15 ರೊಳಗೆ ಸ್ಥಾನ ಪಡೆದಿದೆ. ಇದರೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ (R&amp;amp;D) ವಿಭಾಗದಲ್ಲಿ ಹಿಂದಿನ ವರ್ಷ ಜಾಗತಿಕವಾಗಿ ಟಾಪ್ 30 ರಲ್ಲಿದ್ದ ನಗರವು, ಈ ಬಾರಿ ದಾಖಲೆಯ ಪೇಟೆಂಟ್ ಉತ್ಪಾದನೆ ಮತ್ತು ಸಂಶೋಧನಾ ವಾಣಿಜ್ಯೀಕರಣದ ಮೂಲಕ ನೇರವಾಗಿ ವಿಶ್ವದ ಟಾಪ್ 10 ರೊಳಗೆ ಜಿಗಿದಿದೆ.&lt;/p&gt;&lt;img&gt;&lt;p&gt;ಭಾರತದ ಒಟ್ಟಾರೆ ಎಐ ನವೋದ್ಯಮ ನಿಧಿಯ ಹರಿವಿನಲ್ಲಿ ಕರ್ನಾಟಕವು ಸಿಂಹಪಾಲನ್ನು ಹೊಂದಿದ್ದು, ರಾಷ್ಟ್ರೀಯ ಎಐ ಸಾಹಸೋದ್ಯಮ ನಿಧಿಯ ಸರಿಸುಮಾರು ಶೇಕಡಾ 58 ರಷ್ಟು ಬಂಡವಾಳವು ಕೇವಲ ನಮ್ಮ ರಾಜ್ಯಕ್ಕೆ ಹರಿದುಬರುತ್ತಿದೆ. ಈ ಮೂಲಕ ಎಐ-ಸ್ಥಳೀಯ ಕ್ಲಸ್ಟರ್ ವಿಭಾಗದಲ್ಲಿ ಏಷ್ಯಾದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಜಿಎಸ್&zwnj;ಇಆರ್ 2026 ವರದಿಯ ಸಮಗ್ರ ಮುಖ್ಯಾಂಶಗಳನ್ನು ಗಮನಿಸಿದರೆ, ಬೆಂಗಳೂರು ಸತತ ಎರಡನೇ ವರ್ಷವೂ ವಿಶ್ವದ ಅಗ್ರ 40 ಅತ್ಯುತ್ತಮ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ತನ್ನ ಗಟ್ಟಿಯಾದ ಸ್ಥಾನವನ್ನು ಕಾಯ್ದುಕೊಂಡಿದೆ. ಕಾರ್ಯಕ್ಷಮತೆಯಲ್ಲಿ ಜಾಗತಿಕವಾಗಿ ಟಾಪ್ 10 ಮತ್ತು ಏಷ್ಯಾದಲ್ಲಿ 4 ನೇ ಸ್ಥಾನ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕವಾಗಿ ಟಾಪ್ 10 ಮತ್ತು ಏಷ್ಯಾದಲ್ಲಿ 5 ನೇ ಸ್ಥಾನ, ನಿಧಿಸಂಗ್ರಹಣೆಯಲ್ಲಿ ಜಾಗತಿಕವಾಗಿ ಟಾಪ್ 15 ಹಾಗೂ ಎಐ-ಸ್ಥಳೀಯ ಕ್ಲಸ್ಟರ್&zwnj;ನಲ್ಲಿ ಜಾಗತಿಕವಾಗಿ ಟಾಪ್ 15 ರೊಳಗೆ ರಾರಾಜಿಸುತ್ತಿದೆ. ಇದರ ಜೊತೆಗೆ ಜಾಗತಿಕ ಪ್ರತಿಭಾ ಬಲದಲ್ಲಿ ಅಗ್ರ 30 ರಲ್ಲಿರುವ ಬೆಂಗಳೂರು, ಕೈಗೆಟುಕುವ ವೆಚ್ಚದ ಗುಣಮಟ್ಟದ ಪ್ರತಿಭೆಗಳು ಮತ್ತು ಹಣಕಾಸು ಒದಗಿಸುವಿಕೆಯಲ್ಲಿ ಇಡೀ ಏಷ್ಯಾ ಖಂಡದಲ್ಲೇ ಅತ್ಯಂತ ಪ್ರಮುಖ ಮುಂಚೂಣಿ ತಂತ್ರಜ್ಞಾನ ಹಬ್ ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/whats-new-technology/bengaluru-solidifies-global-deep-tech-and-ai-powerhouse-ranking-15th-globally-and-2nd-in-asia-for-ai-innovation-gdp-p1knnxq"/>
        </item>
        <item>
            <title><![CDATA[Karnataka Heavy Rail Alert: ಕರಾವಳಿ ಮತ್ತು ಮಲೆನಾಡಿಗೆ ಹಳದಿ ಅಲರ್ಟ್, ಬೆಂಗಳೂರಿನಲ್ಲೂ ಮಳೆ ಆರ್ಭಟ!]]></title>
            <link>https://kannada.asianetnews.com/gallery/state/karnataka-weather-update-june-heavy-rain-forecast-bengaluru-and-alert-for-coastal-include-malnad-fb61tmi</link>
            <guid isPermaLink="true">https://kannada.asianetnews.com/gallery/state/karnataka-weather-update-june-heavy-rain-forecast-bengaluru-and-alert-for-coastal-include-malnad-fb61tmi</guid>
            <pubDate>Thu, 18 Jun 2026 14:44:55 +0530</pubDate>
            <description><![CDATA[ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಒಂದು ವಾರ ವ್ಯಾಪಕ ಮಳೆಯಾಗಲಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ, ಜೂನ್ 21 ರಿಂದ 24ರವರೆಗೆ ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kth1e12n3a62jdn2qes84t2v,imgname-rain-alert-1780835877973.jpg" type="image/jpeg" height="390" width="690"/>
            <content:encoded><![CDATA[ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಒಂದು ವಾರ ವ್ಯಾಪಕ ಮಳೆಯಾಗಲಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ, ಜೂನ್ 21 ರಿಂದ 24ರವರೆಗೆ ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.&lt;img&gt;&lt;p&gt;&lt;strong&gt;ಬೆಂಗಳೂರು (ಜೂ.18): ರಾ&lt;/strong&gt;ಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಒಂದು ವಾರ ಕಾಲ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಜೂನ್ 21 ರಿಂದ ಜೂನ್ 24 ರವರೆಗೆ ಕರಾವಳಿ ಜಿಲ್ಲೆಗಳು ಮತ್ತು ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿ ಡಾ. ಎನ್. ಪುವಿಯರಸನ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮುಂಗಾರು ಮಾರುತಗಳ ಚಲನೆ ಹೇಗಿದೆ?&lt;/strong&gt;&lt;/p&gt;&lt;p&gt;ನೈಋತ್ಯ ಮುಂಗಾರು ಮಾರುತಗಳು ಪ್ರಸ್ತುತ ಹರ್ನಾಯ್, ಸೋಲಾಪುರ, ಹೈದರಾಬಾದ್ ಮತ್ತು ಭದ್ರಾಚಲಂ ಮೂಲಕ ಹಾದು ಹೋಗುತ್ತಿವೆ. ಮುಂದಿನ 4-5 ದಿನಗಳಲ್ಲಿ ತೆಲಂಗಾಣ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಉಳಿದ ಭಾಗಗಳಿಗೆ ಮುಂಗಾರು ಮತ್ತಷ್ಟು ವಿಸ್ತರಿಸಲು ಪೂರಕ ವಾತಾವರಣವಿದೆ. ಇದರ ಜೊತೆಗೆ, ಅರಬ್ಬೀ ಸಮುದ್ರ ಮತ್ತು ಕೇರಳ ಕರಾವಳಿಯಲ್ಲಿ ವಾಯುಭಾರ ಕುಸಿತ ಹಾಗೂ ಸುಳಿಗಾಳಿ ಉಂಟಾಗಿರುವುದರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಮುಂದಿನ 24 ಗಂಟೆಗಳ ಹವಾಮಾನ:&lt;/strong&gt;&lt;/p&gt;&lt;p&gt;ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಗದಗ, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಲಘುವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಜೂನ್ 21 ರಿಂದ ಭಾರೀ ಮಳೆ ಎಚ್ಚರಿಕೆ:&lt;/strong&gt;&lt;/p&gt;&lt;p&gt;ಜೂನ್ 21 ರಿಂದ ಜೂನ್ 24 ರವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ, ಜೂನ್ 21 ಮತ್ತು 22 ರಂದು ಮಲೆನಾಡು ಮತ್ತು ಒಳನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಭಾರೀ ಮಳೆಯಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಜಿಲ್ಲಾವಾರು ಮಳೆ ವಿವರ:&lt;/strong&gt;&lt;/p&gt;&lt;p&gt;&lt;strong&gt;ಕರಾವಳಿ ಕರ್ನಾಟಕ: &lt;/strong&gt;ಮುಂದಿನ 7 ದಿನಗಳ ಕಾಲ ನಿರಂತರ ಮಳೆಯಾಗಲಿದ್ದು, 21ನೇ ತಾರೀಖಿನ ನಂತರ ಮಳೆ ತೀವ್ರಗೊಳ್ಳಲಿದೆ.&lt;/p&gt;&lt;p&gt;&lt;strong&gt;ಉತ್ತರ ಒಳನಾಡು: &lt;/strong&gt;ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜೂನ್ 21 ಮತ್ತು 22 ರಂದು ಗುಡುಗು ಸಹಿತ ಮಳೆಯಾಗಲಿದೆ.&lt;/p&gt;&lt;p&gt;&lt;strong&gt;ದಕ್ಷಿಣ ಒಳನಾಡು: &lt;/strong&gt;ಬೆಂಗಳೂರು ಗ್ರಾಮಾಂತರ, ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರದಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.&lt;/p&gt;&lt;p&gt;&lt;strong&gt;ಬೆಂಗಳೂರು ಹವಾಮಾನ:&lt;/strong&gt;&lt;/p&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಗರದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-update-june-heavy-rain-forecast-bengaluru-and-alert-for-coastal-include-malnad-fb61tmi"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಪರ ಈ ಕೋರ್ಟ್‌ನಲ್ಲಿ ವಾದ ಮಂಡಿಸಲ್ಲ ಎಂದ ವಕೀಲ ಸುನೀಲ್‌!]]></title>
            <link>https://kannada.asianetnews.com/state/renukaswamy-case-actor-darshan-lawyer-steps-down-in-high-court-trial-court-accepts-cctv-pendrive-evidence-gdp/articleshow-5y096vd</link>
            <guid isPermaLink="true">https://kannada.asianetnews.com/state/renukaswamy-case-actor-darshan-lawyer-steps-down-in-high-court-trial-court-accepts-cctv-pendrive-evidence-gdp/articleshow-5y096vd</guid>
            <pubDate>Thu, 18 Jun 2026 14:00:09 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಹೈಕೋರ್ಟ್ ವಿಚಾರಣೆಯಿಂದ ನಟ ದರ್ಶನ್ ಪರ ವಕೀಲರು ನಿವೃತ್ತಿ ಬಯಸಿದ್ದಾರೆ. ಇದೇ ವೇಳೆ, ವಿಚಾರಣಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಪೆನ್&zwnj;ಡ್ರೈವ್ ಅನ್ನು ಸಾಕ್ಷ್ಯವಾಗಿ ಪರಿಗಣಿಸಲು ಒಪ್ಪಿಗೆ ಸೂಚಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k94ym09kwxsxpbzp99171e5w,imgname-darshan-thoogudeepa-1762176663859.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಚಿತ್ರದುರ್ಗದ ರೇಣುಕಾಸ್ವಾಮಿ&zwnj;&zwnj;&zwnj;&zwnj;&zwnj; ಕೊಲೆ&zwnj;&zwnj; ಪ್ರಕರಣಕ್ಕೆ ಸಂಬಂಧಿಸಿ ಟ್ರಯಲ್ ಕೋರ್ಟ್&zwnj; ನಲ್ಲಿ ವಿಚಾರಣೆ ಆರಂಭವಾಗಿದೆ. ಈ ನಡುವೆ ಇದೀಗ ಹೈಕೋರ್ಟ್&zwnj;ನಲ್ಲಿ ನಡೆಯುತ್ತಿರುವ ಪ್ರಮುಖ ವಿಚಾರಣೆಯೊಂದರಲ್ಲಿ ನಟ ದರ್ಶನ್ ಪರ ವಕೀಲರು ದಿಢೀರ್&zwnj; ನಿವೃತ್ತಿ ಬಯಸಿ ಕಾಲಾವಕಾಶ ಕೋರಿರುವ ಘಟನೆ ನಡೆದಿದ್ದು, ಕಾನೂನು ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.&lt;/p&gt;&lt;p&gt;ಕೊಲೆಯಾದ ರೇಣುಕಾಸ್ವಾಮಿ ಅವರ ತಾಯಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಪಾಟೀಸವಾಲಿಗೆ (Cross-Examination) ಒಳಪಡಿಸಲು ಅವಕಾಶ ನೀಡಬೇಕು ಎಂದು ಕೋರಿ ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್&zwnj;ನ ಏಕಸದಸ್ಯ ಪೀಠವು ಕೈಗೆತ್ತಿಕೊಂಡಿದೆ.&lt;/p&gt;&lt;p&gt;ಪ್ರಾಸಿಕ್ಯೂಷನ್ ಸಲ್ಲಿಸಿರುವ ಈ ಅರ್ಜಿ ಹೈಕೋರ್ಟ್&zwnj;ನಲ್ಲಿ ವಿಚಾರಣೆಗೆ ಬಂದಾಗ, ನಟ ದರ್ಶನ್ ಪರವಾಗಿ ಈವರೆಗೆ ವಕಾಲತ್ತು ವಹಿಸಿದ್ದ ವಕೀಲ ಸುನೀಲ್ ಅವರು ನ್ಯಾಯಪೀಠದ ಮುಂದೆ ಅತ್ಯಂತ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.&lt;/p&gt;&lt;h2&gt;ಹೈಕೋರ್ಟ್ ನಲ್ಲಿರುವ ಈ ಕೇಸ್ ನಿಂದ ನಿವೃತ್ತಿ ಬಯಸಿದ್ದೇನೆ&lt;/h2&gt;&lt;p&gt;ನಾನು ಕೆಳಹಂತದ ವಿಚಾರಣಾ ನ್ಯಾಯಾಲಯದಲ್ಲಿ (Trial Court) ನಟ ದರ್ಶನ್ ಪರವಾಗಿ ಹಾಜರಾಗುತ್ತಿರುವುದು ನಿಜ. ಆದರೆ, ಹೈಕೋರ್ಟ್&zwnj;ನಲ್ಲಿ ಸಲ್ಲಿಕೆಯಾಗಿರುವ ಈ ನಿರ್ದಿಷ್ಟ ಪ್ರಕರಣದ ವಾದ ಮಂಡನೆಯಿಂದ ನಾನು ನಿವೃತ್ತಿ ಬಯಸುತ್ತಿದ್ದೇನೆ. ಈ ಕೇಸ್&zwnj;ನಲ್ಲಿ ಹೈಕೋರ್ಟ್ ಮುಂಭಾಗ ವಾದ ಮಂಡಿಸಲು ನನಗೆ ದರ್ಶನ್ ಅವರಿಂದ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ದರ್ಶನ್ ಕಡೆಯಿಂದ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ, ಹೊಸದಾಗಿ ವಕೀಲರನ್ನು ನೇಮಿಸಿಕೊಳ್ಳಲು ಅಥವಾ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕಾಲಾವಕಾಶ ನೀಡಬೇಕೆಂದು ವಕೀಲ ಸುನೀಲ್ ಹೈಕೋರ್ಟ್&zwnj;ಗೆ ಮನವಿ ಮಾಡಿಕೊಂಡರು.&lt;/p&gt;&lt;p&gt;ದರ್ಶನ್ ಪರ ವಕೀಲರ ಈ ದಿಢೀರ್ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್&zwnj;ನ ಏಕಸದಸ್ಯ ಪೀಠವು, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಜೂನ್ 23ರಂದು ದರ್ಶನ್ ಪರವಾಗಿ ಹೊಸ ವಕೀಲರು ಹಾಜರಾಗಲಿದ್ದಾರೆಯೇ ಅಥವಾ ಹಾಲಿ ವಕೀಲರೇ ಸೂಚನೆ ಪಡೆದು ವಾದ ಮುಂದುವರಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.&lt;/p&gt;&lt;h2&gt;ಪೆನ್&zwnj;ಡ್ರೈವ್&zwnj; ಸಾಕ್ಷ್ಯಕ್ಕೆ ಸಿವಿಲ್&zwnj; ಕೋರ್ಟ್&zwnj; ಒಪ್ಪಿಗೆ&lt;/h2&gt;&lt;p&gt;ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ (ತನಿಖಾಧಿಕಾರಿಗಳು) ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈ ಅನ್ನು ಸಾಕ್ಷ್ಯವಾಗಿ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್&zwnj; ನ್ಯಾಯಾಲಯ ಬುಧವಾರ ಪರಿಗಣಿಸಿದೆ. ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ&zwnj;&zwnj; ಪಿ.ಪ್ರಸನ್ನ ಕುಮಾರ್ ಅವರು, ಪೆನ್&zwnj;ಡ್ರೈವ್&zwnj;ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅದನ್ನು ನೀಡಿದ ಸುಮನಹಳ್ಳಿಯ ಬಳಿಯ ಅಪಾರ್ಟ್&zwnj;ಮೆಂಟ್&zwnj;ವೊಂದರ ಮಹಿಳಾ ನಿವಾಸಿ ದೃಢೀಕರಿಸಿದ ಪ್ರಮಾಣ ಪತ್ರ ಸಲ್ಲಿಸಿದರು. ಇದರಿಂದ&zwnj; ಪೆನ್&zwnj;ಡ್ರೈವ್&zwnj; ಅನ್ನು ಸಾಕ್ಷ್ಯಾಧಾರವಾಗಿ ನ್ಯಾಯಾಲಯ ಪರಿಗಣಿಸಿ, ಪ್ರಕರಣದ ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿತು.&lt;/p&gt;&lt;h2&gt;ದರ್ಶನ್ ಹಾಗೂ ಇತರೆ ಆರೋಪಿಗಳು&zwnj; ಆಕ್ಷೇಪ&lt;/h2&gt;&lt;p&gt;ಮಂಗಳವಾರ ನಡೆದಿದ್ದ ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಲ್ಲಿಸಿರುವ&zwnj; ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್ (ಡಿಜಿಟಲ್&zwnj;&zwnj; ಸಾಕ್ಷ್ಯ) ಅನ್ನು ಮುಚ್ಚಿದ ಲಕೋಟೆಯಿಂದ ಹೊರಗೆ ತೆಗೆದಿದ್ದ ನ್ಯಾಯಾಲಯವು ಪೆನ್ ಡ್ರೈವ್ ಅನ್ನು ಪ್ಲೇ ಮಾಡಲು ( ವೀಕ್ಷಿಸಲು) ಬಯಸಿತ್ತು. ಆಗ ದರ್ಶನ್ ಹಾಗೂ ಇತರೆ ಆರೋಪಿಗಳು&zwnj; ಆಕ್ಷೇಪಿಸಿ, ಪೆನ್ ಡ್ರೈವ್ ಡಿಜಿಟಲ್ ಸಾಕ್ಷ್ಯವಾಗಿದೆ. ಅದನ್ನು&zwnj; ಪರಿಗಣಿಸಬೇಕಾದರೆ ಸಾಕ್ಷ್ಯ ಕಾಯ್ದೆ ಸೆಕ್ಷನ್ 65 ಬಿ ಅನುಸಾರ ಡಿಜಿಟಲ್ ಸಾಕ್ಷ್ಯ ನೀಡಿದವರಿಂದ ದೃಢೀಕೃತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ. ಆದರೆ, ತನಿಖಾಧಿಕಾರಿಗಳು ಆ &zwnj;ಪ್ರಮಾಣ ಪತ್ರವನ್ನು ಸಲ್ಲಿಸದ&zwnj; ಕಾರಣ ಪೆನ್ ಡ್ರೈವ್ ಅನ್ನು ಸಾಕ್ಷ್ಯಧಾರವಾಗಿ ಗುರುತಿಸುವಂತಿಲ್ಲ ಎಂದು ಕೋರಿದ್ದರು. ಇದರಿಂದ&zwnj; ಪೆನ್ ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಗುರತಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಬುಧವಾರ ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಬುಧವಾರ ಪರಿಗಣಿಸಿ ವಿಚಾರಣೆ ನಡೆಸಿತು.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/renukaswamy-case-actor-darshan-lawyer-steps-down-in-high-court-trial-court-accepts-cctv-pendrive-evidence-gdp/articleshow-5y096vd"/>
        </item>
        <item>
            <title><![CDATA[ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್: ಪ್ರಯಾಣಕ್ಕೆ ಲಕ್ಷುರಿ ಕೋಚ್‌ ರೆಡಿ, ಒಳಾಂಗಣ ವಿನ್ಯಾಸದ ವಿಡಿಯೋ ವೈರಲ್]]></title>
            <link>https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs</link>
            <guid isPermaLink="true">https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs</guid>
            <pubDate>Thu, 18 Jun 2026 12:23:36 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯು ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ 'ವಂದೇ ಭಾರತ್ ಸ್ಲೀಪರ್' ರೈಲನ್ನು ಆರಂಭಿಸಲಿದೆ. ಈ ಪ್ರೀಮಿಯಂ ರೈಲು, ಪ್ರಸ್ತುತ ರೈಲುಗಳಿಗಿಂತ ವೇಗವಾಗಿರಲಿದ್ದು, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಆಧುನಿಕ ಸೌಕರ್ಯಗಳಾದ ಖಾಸಗಿ ಕ್ಯಾಬಿನ್&zwnj;ಗಳು ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcq8pmmdze2dnzk112k8558,imgname-vande-bharat-bengaluru-mumbai--5--1781764741780.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆಯು ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ 'ವಂದೇ ಭಾರತ್ ಸ್ಲೀಪರ್' ರೈಲನ್ನು ಆರಂಭಿಸಲಿದೆ. ಈ ಪ್ರೀಮಿಯಂ ರೈಲು, ಪ್ರಸ್ತುತ ರೈಲುಗಳಿಗಿಂತ ವೇಗವಾಗಿರಲಿದ್ದು, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಆಧುನಿಕ ಸೌಕರ್ಯಗಳಾದ ಖಾಸಗಿ ಕ್ಯಾಬಿನ್&zwnj;ಗಳು ಇದೆ.&lt;/p&gt;&lt;img&gt;&lt;p&gt;ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷಿ 'ವಂದೇ ಭಾರತ್' ಕ್ರಾಂತಿ ಈಗ ಹೊಸ ಹಂತಕ್ಕೆ ಕಾಲಿಡುತ್ತಿದೆ. ದೇಶದ ಎರಡು ಪ್ರಮುಖ ಆರ್ಥಿಕ ರಾಜಧಾನಿಗಳಾದ ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ ಮುಂಬರುವ 'ವಂದೇ ಭಾರತ್ ಸ್ಲೀಪರ್' ರೈಲು ಸಂಚಾರ ಆರಂಭಿಸಲಿದೆ. ಸಾಂಪ್ರದಾಯಿಕ ರಾತ್ರಿ ಪ್ರಯಾಣದ ರೈಲುಗಳಿಗೆ ಹೋಲಿಸಿದರೆ, ಇದು ಅತ್ಯಂತ ವೇಗದ ಮತ್ತು ಹೆಚ್ಚು ಆರಾಮದಾಯಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಿದೆ. ಮುಂದಿನ ಪೀಳಿಗೆಯ ಸುದೀರ್ಘ ಪ್ರಯಾಣದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಈ ಪ್ರೀಮಿಯಂ ರೈಲು ಸೇವೆಗೆ ಹಸಿರು ನಿಶಾನೆ ನೀಡಿದೆ.ರಾತ್ರಿ ಪ್ರಯಾಣಕ್ಕೆ ಹೊಸ ಮೆರುಗು&lt;/p&gt;&lt;img&gt;&lt;p&gt;ಪ್ರಸ್ತುತ ಚಾಲ್ತಿಯಲ್ಲಿರುವ ವಂದೇ ಭಾರತ್ ಚೇರ್ ಕಾರ್ (ಕುಳಿತುಕೊಳ್ಳುವ ವ್ಯವಸ್ಥೆ) ರೈಲುಗಳಿಗಿಂತ ಈ ಸ್ಲೀಪರ್ ಆವೃತ್ತಿಯು ಸಂಪೂರ್ಣ ಭಿನ್ನವಾಗಿದೆ. ಇದನ್ನು ವಿಶೇಷವಾಗಿ ರಾತ್ರಿ ವೇಳೆ ಪ್ರಯಾಣಿಸುವ ಜನರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ವೇಗ ಮತ್ತು ಪ್ರಯಾಣಿಕರ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಆಧುನಿಕ ಫಸ್ಟ್ ಎಸಿ ಕೋಚ್: &lt;/strong&gt;ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ರೈಲಿನ ಮೊದಲ ಎಸಿ ಕೋಚ್&zwnj;ನ ದೃಶ್ಯಗಳು ಎಲ್ಲರ ಗಮನ ಸೆಳೆಯುತ್ತಿವೆ.&lt;/p&gt;&lt;p&gt;&lt;strong&gt;ಸುರಕ್ಷಿತ ಮೆಟ್ಟಿಲುಗಳ ವಿನ್ಯಾಸ: &lt;/strong&gt;ಹಳೆಯ ರೈಲುಗಳಲ್ಲಿ ಮೇಲಿನ ಬರ್ತ್&zwnj;ಗಳನ್ನು ಹತ್ತಲು ಕಡಿದಾದ ಕಷ್ಟಕರ ಏಣಿಗಳಿರುತ್ತಿದ್ದವು. ಆದರೆ, ವಂದೇ ಭಾರತ್ ಸ್ಲೀಪರ್&zwnj;ನಲ್ಲಿ ಮೇಲಿನ ಬರ್ತ್&zwnj;ಗಳನ್ನು ಸುಲಭವಾಗಿ ಹತ್ತಲು ಪ್ರತ್ಯೇಕ ಮತ್ತು ಸುರಕ್ಷಿತ ಮೆಟ್ಟಿಲುಗಳನ್ನು ಒದಗಿಸಲಾಗಿದೆ. ಈ ರೈಲಿನ ಫಸ್ಟ್ ಎಸಿ ಕೋಚ್ ಸಂಪೂರ್ಣ ಖಾಸಗಿ ಕ್ಯಾಬಿನ್&zwnj;ಗಳು (Private Cabins), ಮೇಲಿನ ಬರ್ತ್&zwnj;ಗಳಿಗೆ ಸುಲಭವಾಗಿ ಹತ್ತಲು ಆಧುನಿಕ ಮೆಟ್ಟಿಲುಗಳು, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಅತ್ಯಾಧುನಿಕ ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಒಳಗೊಂಡಿರಲಿದೆ.&lt;/p&gt;&lt;p&gt;&lt;strong&gt;ಪ್ರೀಮಿಯಂ ಒಳಾಂಗಣ&lt;/strong&gt;: ಈ ಬೋಗಿಗಳಲ್ಲಿ ಸ್ಲೈಡಿಂಗ್ ಕಂಪಾರ್ಟ್&zwnj;ಮೆಂಟ್ ಬಾಗಿಲುಗಳು, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ (Modern Lighting) ಮತ್ತು ಕಣ್ಣಿಗೆ ತಂಪು ನೀಡುವ ಸುಂದರ ಒಳಾಂಗಣ ವಿನ್ಯಾಸವಿದೆ.&lt;/p&gt;&lt;p&gt;&lt;strong&gt;ಸೌಕರ್ಯಗಳು:&lt;/strong&gt; ಆರಾಮದಾಯಕವಾದ ಮಲಗುವ ಸೀಟುಗಳು, ನವೀಕರಿಸಿದ ಫಿಟ್ಟಿಂಗ್&zwnj;ಗಳು ಮತ್ತು ಪ್ರಯಾಣಿಕ ಸ್ನೇಹಿ ವಿನ್ಯಾಸಗಳು ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಪ್ರಯಾಣದ ಅನುಭವ ನೀಡಲಿವೆ.&lt;/p&gt;&lt;img&gt;&lt;p&gt;ಪ್ರಸ್ತುತ ಈ ಮಾರ್ಗದಲ್ಲಿ ಚಲಿಸುವ ಸಾಮಾನ್ಯ ರೈಲುಗಳು ಮುಂಬೈನಿಂದ ಬೆಂಗಳೂರನ್ನು ತಲುಪಲು ಸುಮಾರು 20 ಗಂಟೆಗಳಿಗಿಂತಲೂ ಅಧಿಕ ಸಮಯ ತೆಗೆದುಕೊಳ್ಳುತ್ತವೆ. ಆದರೆ, ಹೊಸ ವಂದೇ ಭಾರತ್ ಸ್ಲೀಪರ್ ರೈಲು ಈ ಪ್ರಯಾಣದ ಸಮಯವನ್ನು ಕೇವಲ 14 ರಿಂದ 16 ಗಂಟೆಗಳಿಗೆ ಕಡಿತಗೊಳಿಸುವ ಸಾಧ್ಯತೆಯಿದೆ. ಅಂದರೆ ಪ್ರಯಾಣಿಕರಿಗೆ ಸರಿಸುಮಾರು 4 ರಿಂದ 5 ಗಂಟೆಗಳ ಸಮಯ ಉಳಿತಾಯವಾಗಲಿದೆ. ರೈಲಿನ ಸರಾಸರಿ ವೇಗವನ್ನು ಕಾಯ್ದುಕೊಳ್ಳುವ ಸಲುವಾಗಿ, ಇದಕ್ಕೆ ಅತ್ಯಂತ ಸೀಮಿತ ನಿಲುಗಡೆಗಳನ್ನು (Stoppages) ಮಾತ್ರ ನೀಡಲಾಗುವುದು ಎನ್ನಲಾಗಿದೆ. ಆದರೆ, ಭಾರತೀಯ ರೈಲ್ವೆ ಇಲಾಖೆಯು ಅಂತಿಮ ವೇಳಾಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.&lt;/p&gt;&lt;img&gt;&lt;p&gt;&lt;strong&gt;ಪ್ರಯಾಣಿಕರ ಸಾಮರ್ಥ್ಯ: &lt;/strong&gt;ಈ ಸ್ಲೀಪರ್ ರೈಲು ಒಟ್ಟು 16 ಸಂಪೂರ್ಣ ಹವಾನಿಯಂತ್ರಿತ (AC) ಬೋಗಿಗಳನ್ನು ಹೊಂದಿರಲಿದ್ದು, ಒಂದೇ ಬಾರಿಗೆ 823 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.&lt;/p&gt;&lt;p&gt;&lt;strong&gt;ಸುಧಾರಿತ ತಂತ್ರಜ್ಞಾನ: &lt;/strong&gt;ರಾತ್ರಿ ವೇಳೆಯ ಪ್ರಯಾಣದಲ್ಲಿ ಯಾವುದೇ ಗದ್ದಲವಿಲ್ಲದೆ ಸುಗಮ ಸವಾರಿಯನ್ನು ಖಚಿತಪಡಿಸಿಕೊಳ್ಳಲು ಇದರಲ್ಲಿ ಸುಧಾರಿತ 'ಸಸ್ಪೆನ್ಷನ್ ತಂತ್ರಜ್ಞಾನ'ವನ್ನು ಬಳಸಲಾಗಿದೆ.&lt;/p&gt;&lt;p&gt;&lt;strong&gt;ಸ್ವಯಂಚಾಲಿತ ಬಾಗಿಲುಗಳು ಮತ್ತು ನೈರ್ಮಲ್ಯ: &lt;/strong&gt;ರೈಲಿನಲ್ಲಿ ಆಟೋಮ್ಯಾಟಿಕ್ ಬಾಗಿಲುಗಳು, ಬಯೋ-ವ್ಯಾಕ್ಯೂಮ್ ಶೌಚಾಲಯಗಳು ಮತ್ತು ಅತ್ಯಾಧುನಿಕ ಸುರಕ್ಷತಾ ಫೀಚರ್&zwnj;ಗಳು ಲಭ್ಯವಿರಲಿವೆ.&lt;/p&gt;&lt;p&gt;&lt;strong&gt;ರೈಲಿನ ಮಾರ್ಗ ಯಾವುದು?&lt;/strong&gt;&lt;/p&gt;&lt;p&gt;ವಿವಿಧ ಮಾರ್ಗಗಳ ಜೋಡಣೆಯ ಬಗ್ಗೆ ಸದ್ಯ ಚರ್ಚೆಗಳು ನಡೆಯುತ್ತಿವೆಯಾದರೂ, ರೈಲ್ವೆ ಮಂಡಳಿಯು ಅಧಿಕೃತ ಮಾರ್ಗಸೂಚಿಯನ್ನು ಇನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಪ್ರಾಥಮಿಕ ವರದಿಗಳ ಪ್ರಕಾರ ಈ ರೈಲು ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ಕೈಗಾರಿಕಾ ಹಾಗೂ ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸಲಿದೆ. ಲೋಕಾರ್ಪಣೆ ದಿನಾಂಕ ಹತ್ತಿರ ಬಂದಾಗ ನಿಖರವಾದ ನಿಲುಗಡೆಗಳ ಮಾಹಿತಿ ಸಿಗಲಿದೆ. ಈ ರೈಲು ಕರ್ನಾಟಕದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳ ಪ್ರಮುಖ ಮಾರ್ಗದ ಮೂಲಕ ಮುಂಬೈ ತಲುಪುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದರೂ, ರೈಲ್ವೆ ಇಲಾಖೆಯು ಇದರ ಉದ್ಘಾಟನಾ ದಿನಾಂಕ, ದರ ಪಟ್ಟಿ ಅಥವಾ ಟಿಕೆಟ್ ಕಾಯ್ದಿರಿಸುವಿಕೆಯ ವೇಳಾಪಟ್ಟಿಯನ್ನು ಇನ್ನು ಪ್ರಕಟಿಸಿಲ್ಲ. ಆದ್ದರಿಂದ, ಪ್ರಸ್ತುತ ಐಆರ್&zwnj;ಸಿಟಿಸಿ (IRCTC) ಆಪ್ ಅಥವಾ ಕೌಂಟರ್&zwnj;ಗಳಲ್ಲಿ ಬುಕಿಂಗ್ ಲಭ್ಯವಿರುವುದಿಲ್ಲ. ರೇಕ್ (Rake) ಹಂಚಿಕೆ ಮತ್ತು ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ನಂತರ ಅಧಿಕೃತ ಪ್ರಕಟಣೆ ಹೊರಬೀಳಲಿದೆ.&lt;/p&gt;&lt;img&gt;&lt;p&gt;ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು, ಭಾರತದ ಪ್ರಮುಖ ನಗರಗಳ ನಡುವೆ ವಿಶ್ವದರ್ಜೆಯ ಪ್ರೀಮಿಯಂ ರಾತ್ರಿ ಸಂಪರ್ಕವನ್ನು ಕಲ್ಪಿಸುವ ಭಾರತೀಯ ರೈಲ್ವೆಯ ಬೃಹತ್ ದೃಷ್ಟಿಕೋನದ ಒಂದು ಭಾಗವಾಗಿದೆ. ಈಗಾಗಲೇ ಚೇರ್ ಕಾರ್ ಮೂಲಕ ದೇಶಾದ್ಯಂತ ಕ್ರಾಂತಿ ಸೃಷ್ಟಿಸಿರುವ ವಂದೇ ಭಾರತ್, ಇದೀಗ ಸ್ಲೀಪರ್ ಕೋಚ್&zwnj;ಗಳ ಮೂಲಕ ರಾತ್ರಿ ಪ್ರಯಾಣದ ವ್ಯಾಖ್ಯಾನವನ್ನೇ ಬದಲಾಯಿಸಲು ಸಜ್ಜಾಗಿದೆ. ಈ ಮಾರ್ಗವು ದೇಶದಲ್ಲೇ ಸ್ಲೀಪರ್ ರೈಲು ಪಡೆಯಲಿರುವ ಎರಡನೇ ಅತ್ಯಂತ ನಿರೀಕ್ಷಿತ ಮಾರ್ಗವಾಗಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/bengaluru-mumbai-vande-bharat-express-sleeper-first-ac-coach-inside-photos-gdp-nh56vbs"/>
        </item>
        <item>
            <title><![CDATA[RSS Registration row: ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯ ಅಲ್ಲ; ಕುಟುಂಬ ರಾಜಕಾರಣದ ವ್ಯಕ್ತಿಯಿಂದ ಸಂಘಕ್ಕೆ ಪ್ರಮಾಣ ಪತ್ರ ಬೇಕಿಲ್ಲ]]></title>
            <link>https://kannada.asianetnews.com/state/senior-supreme-court-lawyer-mahesh-jethmalani-column-on-the-rss-registration-controversy-rav/articleshow-4k6zfbz</link>
            <guid isPermaLink="true">https://kannada.asianetnews.com/state/senior-supreme-court-lawyer-mahesh-jethmalani-column-on-the-rss-registration-controversy-rav/articleshow-4k6zfbz</guid>
            <pubDate>Thu, 18 Jun 2026 10:13:17 +0530</pubDate>
            <description><![CDATA[&lt;p&gt;ಪ್ರಿಯಾಂಕ್&zwnj; ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ, ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆಗೆ ಸೂಚಿಸುವ ಅಧಿಕಾರವನ್ನಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcg5hntznqy5ef4kypyj6x0,imgname-----------------------2026-06-18t100407.302-1781757298361.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಹೇಶ್&zwnj; ಜೇಠ್ಮಲಾನಿ&lt;/strong&gt;&lt;/p&gt;&lt;p&gt;- ಸುಪ್ರೀಂಕೋರ್ಟ್&zwnj;ನ ಹಿರಿಯ ವಕೀಲ&lt;/p&gt;&lt;p&gt;ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ(Karnataka Home Minister Priyank kharge) ಅವರು ಆರೆಸ್ಸೆಸ್&zwnj; ಮುಖ್ಯಸ್ಥ ಮೋಹನ್&zwnj; ಭಾಗವತ್&zwnj;(RSS Chief Mohan bhagwat) ಅ&zwj;ವರಿಗೆ ಬರೆದ ಪತ್ರ, ಕೇವಲ ಒಂದು ಸಾಂವಿಧಾನಿಕ ವಿಚಾರಣೆ ಅಷ್ಟೇ ಆಗಿಲ್ಲ, ಬದಲಾಗಿ ಅದರ ಹಿಂದೆ ಲೆಕ್ಕಾಚಾರದ ರಾಜಕೀಯ ಪ್ರಚೋದನೆಯ ಉದ್ದೇಶವೂ ಅಡಗಿದೆ. ಆರೆಸ್ಸೆಸ್&zwnj;(RSS) ಬಗ್ಗೆ ಅವರು ಪತ್ರದಲ್ಲಿ ಮಾಡಿರುವ ಆರೋಪಗಳಿಗೆ ಕಾನೂನಿನ ಮಾನ್ಯತೆಯಾಗಲಿ, ಪ್ರಮಾಣವಾಗಲಿ ಇಲ್ಲ. ಕೇವಲ ಊಹೆಗಳ ಮೇಲೆ ಬರೆಯಲಾದ ಈ ಪತ್ರ ಕುಟುಂಬ ರಾಜಕಾರಣದ ಅಹಂಕಾರ ಪ್ರದರ್ಶನವಾಗಿದೆ.&lt;/p&gt;&lt;p&gt;ಸುಮಾರು ನೂರು ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮುಕ್ತವಾಗಿ, ಸಾರ್ವಜನಿಕರ ಕಣ್ಣೆದುರೇ ದೇಶ ಸೇವೆ ಮಾಡಿದೆ. ಸರ್ಕಾರದ ಬೆಂಬಲವಿಲ್ಲದೆ ಚಾರಿತ್ರ್ಯ ನಿರ್ಮಾಣ, ಶಿಸ್ತು ಬೆಳೆಸುವುದು, ಸಾಮಾಜಿಕ ಸಾಮರಸ್ಯ ಬಲಪಡಿಸುವಂಥ ಕಾರ್ಯ ಮಾಡಿಕೊಂಡು ಬಂದಿದೆ. ಆದರೆ ಕೆಲ ಕಾಂಗ್ರೆಸ್&zwnj; ನಾಯಕರು ಮಾತ್ರ ಇದಕ್ಕೆ ವ್ಯತಿರಿಕ್ತವಾದ ಸಂದೇಹಾಸ್ಪದ ರಾಜತಾಂತ್ರಿಕತೆ ಕಾಯ್ದುಕೊಂಡು ಬಂದಿದ್ದಾರೆ. ಅವರು ಚೀನಾದ ಕಮ್ಯುನಿಸ್ಟ್&zwnj; ಪಕ್ಷದ ಜತೆಗೆ ತಿಳಿವಳಿಕೆಯ ಜ್ಞಾಪನಾ ಪತ್ರಕ್ಕೆ ಸಹಿಹಾಕಲು ಚೀನಾಗೆ ತೆರಳುತ್ತಾರೆ. ರಾಜಕೀಯ ಟೀಕೆಗಳಿಗೆ ಹೆದರಿ ಈ ವಿಚಾರದಲ್ಲಿ ರಹಸ್ಯ ಕಾಯ್ದುಕೊಳ್ಳುತ್ತಾರೆ. ಆರೆಸ್ಸೆಸ್&zwnj; ಮತ್ತು ಕಾಂಗ್ರೆಸ್&zwnj; ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಒಬ್ಬರು ಭಾರತದ ಸೂರ್ಯನ ಪ್ರಕಾಶಮಾನವಾದ ಬೆಳಕಿನಲ್ಲಿ 100 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರೆ, ಮತ್ತೊಬ್ಬರು ವಿದೇಶಿ ನೆರಳಿನಲ್ಲಿ ಕೂತಿದ್ದಾರೆ.&lt;/p&gt;&lt;h2&gt;ಸಂಘ ರಚಿಸುವ ಅಧಿಕಾರ ಸರ್ಕಾರ ನೀಡಿದ್ದಲ್ಲ:&lt;/h2&gt;&lt;p&gt;ಸಂವಿಧಾನದ 19(1)(ಸಿ)ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಸಂಘ, ಒಕ್ಕೂಟ ಅಥವಾ ಸಹಕಾರಿ ಸಂಸ್ಥೆಗಳನ್ನು ರಚಿಸುವ ಮೂಲಭೂತ ಹಕ್ಕು ಖಾತರಿಪಡಿಸುತ್ತದೆ. ಇದು ಸಂವಿಧಾನದತ್ತ ಸ್ವಾತಂತ್ರ್ಯವೇ ಹೊರತು ಸರ್ಕಾರ ನೀಡಿದ ಅಧಿಕಾರವಲ್ಲ. ಇನ್ನು 19(4)ನೇ ವಿಧಿಯು ಈ ಸ್ವಾತಂತ್ರ್ಯಗಳಿಗೆ ನಿರ್ದಿಷ್ಟ ಸಾಂವಿಧಾನಿಕ ಹಾಗೂ ಕಾನೂನು ಆಧಾರದ ಮೇಲೆ ಮಾತ್ರ ನ್ಯಾಯಯುತ ನಿರ್ಬಂಧಗಳನ್ನು ಹೇರಲು ಅವಕಾಶ ನೀಡುತ್ತದೆ. ಪ್ರತಿಯೊಂದು ಸ್ವಯಂಸೇವಾ ಸಂಘಟನೆಗಳು ಅಸ್ತಿತ್ವಕ್ಕೆ ಬರುವ ಅಥವಾ ಕಾರ್ಯಾಚರಣೆ ಆರಂಭಿಸುವ ಮೊದಲು ನೋಂದಣಿ ಆಗುವುದು ಕಡ್ಡಾಯ ಎಂದು ಸಂವಿಧಾನದಲ್ಲೆಲ್ಲೂ ಹೇಳಿಲ್ಲ.&lt;/p&gt;&lt;p&gt;ಆರೆಸ್ಸೆಸ್&zwnj; ಒಂದು ಸಮಾನ ಸೈದ್ಧಾಂತಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಆಲೋಚನೆಯ ನಾಗರಿಕರ ಸ್ವಯಂಸೇವಾ ಸಂಘಟನೆಯಾಗಿದೆ. ಈ ಸಂಘಟನೆಗೆ ಯಾವುದೇ ಸಚಿವನ ಅಸ್ವಿತ್ವದ ಪ್ರಮಾಣ ಪತ್ರವಾಗಲಿ, ಕುಟುಂಬ ರಾಜಕಾರಣದ ನಾಯಕನ ರಾಜಕೀಯ ಅನುಮತಿ ಪತ್ರವಾಗಲಿ ಬೇಕಿಲ್ಲ. ಕಾಂಗ್ರೆಸ್ ನಾಯಕನೊಬ್ಬ ವಿವಾದ ಸೃಷ್ಟಿಗೆ ಹೊರಟಿದ್ದಾನೆಂಬ ಮಾತ್ರಕ್ಕೆ ಈ ಸಂಘಟನೆಗೆ ಯಾವುದೇ ನೋಂದಣಿಯ ಅಗತ್ಯವೂ ಇಲ್ಲ.&lt;/p&gt;&lt;p&gt;ಆರೆಸ್ಸೆಸ್&zwnj; ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಅಥವಾ ಅದರ ಅಸ್ತಿತ್ವ ಸಾಬೀತುಪಡಿಸಬೇಕೆಂಬ ಪ್ರಿಯಾಂಕ್&zwnj; ಖರ್ಗೆ ಅವರ ಬೇಡಿಕೆಗೆ ಸಾಂವಿಧಾನಿಕ ಪಠ್ಯದಲ್ಲಾಗಲಿ, ಕಾನೂನು ಬಾಧ್ಯತೆ ಅಥವಾ ಒಪ್ಪಿತ ತತ್ವಗಳಲ್ಲಾಗಲಿ ಮಾನ್ಯತೆ ಇಲ್ಲ. ಪ್ರಿಯಾಂಕ್&zwnj; ಖರ್ಗೆ ಅವರದ್ದು ಕಾನೂನು ಮಾನ್ಯತೆಯಿಲ್ಲದ ತರ್ಕಕ್ಕೆ ನಿಲುಕದ ಬೇಡಿಕೆ.&lt;/p&gt;&lt;h3&gt;ಸಂವಿಧಾನಕ್ಕಿಂತ ಪ್ರಿಯಾಂಕ್&zwnj; ಖರ್ಗೆ ದೊಡ್ಡವರಲ್ಲ:&lt;/h3&gt;&lt;p&gt;ಕಾನೂನು ಮೂಲಕ ನಡೆಸಲ್ಪಡುವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ, ಆತ ಎಷ್ಟೇ ಉನ್ನತ ಸ್ಥಾನಮಾನದಲ್ಲಿದ್ದರೂ ಸರಿ, ಕೇವಲ ತಾನು ಸಾರ್ವಜನಿಕ ಹುದ್ದೆಯಲ್ಲಿದ್ದೇನೆ ಎಂಬ ಕಾರಣಕ್ಕೆ ಯಾವುದೇ ಆದೇಶಗಳನ್ನು ನೀಡುವುದಾಗಲಿ ಮತ್ತು ಅದನ್ನು ಪಾಲನೆ ಮಾಡಬೇಕೆಂದು ಬಯಸುವುದಾಗಲಿ ಮಾಡುವಂತಿಲ್ಲ. ಪ್ರಿಯಾಂಕ್&zwnj; ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ ಅಥವಾ ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸುವ ಅಧಿಕಾರವನ್ನಲ್ಲ.&lt;/p&gt;&lt;p&gt;ಪ್ರಿಯಾಂಕ್&zwnj; ಖರ್ಗೆ ಅವರ ಕಾನೂನುಬದ್ಧವಲ್ಲದ ಇಂಥ ಯಾವುದೇ ಬೇಡಿಕೆಗಳಿಗೆ ಕಾನೂನಿನ ದೃಷ್ಟಿಯಲ್ಲಿ ಯಾವುದೇ ಮಾನ್ಯತೆ ಇಲ್ಲ. ಕುಟುಂಬ ರಾಜಕಾರಣದ ಮೂಲಕ ಅಧಿಕಾರ ಪಡೆದಿರುವ ವ್ಯಕ್ತಿಯು ಸಚಿವ ಸ್ಥಾನದಲ್ಲಿದ್ದಾನೆ ಎಂಬ ಮಾತ್ರಕ್ಕೆ ಆತ ಸಂವಿಧಾನಕ್ಕಿಂತ ದೊಡ್ಡವನಾಗುವುದೂ ಇಲ್ಲ.&lt;/p&gt;&lt;p&gt;ಅಧಿಕಾರವೆಂಬುದು ಶಾಶ್ವತವಲ್ಲ. ಇದನ್ನು ಮನಗಾಣಿಯೇ ಥೋಮಸ್&zwnj; ಫುಲ್ಲರ್&zwnj; ಅ&zwj;ವರು, &lsquo;ನೀವು ಎಷ್ಟೇ ಎತ್ತರದಲ್ಲಿದ್ದರೂ ಕಾನೂನು ನಿಮಗಿಂತ ಮೇಲೆಯೇ ಇರುತ್ತದೆ&rsquo; ಎಂದಿದ್ದಾರೆ. ಈ ಮಾತುಗಳನ್ನು ನಂತರ ಲಾರ್ಡ್&zwnj; ಡೆನ್ನಿಂಗ್&zwnj; ಅವರು &lsquo;ದಿ ಡ್ಯು ಪ್ರೊಸೆಸ್&zwnj; ಆಫ್&zwnj; ಲಾ&rsquo;ದಲ್ಲಿ ಶಾಶ್ವತಗೊಳಿಸಿದ್ದಾರೆ. ಈ ಮಾತು ಪ್ರಿಯಾಂಕ್&zwnj; ಖರ್ಗೆ ಅವರ ಬೇಡಿಕೆ ವಿಚಾರದಲ್ಲೂ ಅನ್ವಯ ಆಗುತ್ತದೆ.&lt;/p&gt;&lt;p&gt;&lt;strong&gt;ಕೋರ್ಟ್&zwnj; ತೀರ್ಪುಗಳ ಉದ್ದೇಶಪೂರ್ವಕ ನಿರ್ಲಕ್ಷ್ಯ:&lt;/strong&gt;&lt;/p&gt;&lt;p&gt;ಆರೆಸ್ಸೆಸ್&zwnj; ತನ್ನ ದೇಣಿಗೆಯ ಮೂಲ, ಖರ್ಚು-ವೆಚ್ಚ, ಆಸ್ತಿಗಳು ಮತ್ತು ತೆರಿಗೆಯ ಮಾಹಿತಿ ಬಹಿರಂಗಪಡಿಸಬೇಕೆನ್ನುವ ಪ್ರಿಯಾಂಕ್&zwnj; ಖರ್ಗೆ ಅವರ ಒತ್ತಾಯವು ಈಗಾಗಲೇ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತದೆ. ಇನ್ನು ಗುರುದಕ್ಷಿಣೆ ಮೇಲಿನ ತೆರಿಗೆಯ ವಿಚಾರಕ್ಕೆ ಬಂದರೆ, ಆರೆಸ್ಸೆಸ್&zwnj; ತನ್ನ ಸದಸ್ಯರಿಂದ ಸ್ವಯಂಪ್ರೇರಿತವಾಗಿ ಪಡೆಯುವ ದೇಣಿಗೆಯು ಸಾಂವಿಧಾನಿಕ ನ್ಯಾಯಾಲಯದಿಂದ ಈಗಾಗಲೇ ಪರಿಶೀಲನೆಗೂ ಒಳಪಟ್ಟಿದೆ. ಆದಾಯ ತೆರಿಗೆ ಕಮಿಷನರ್&zwnj; ಮತ್ತು ಆರೆಸ್ಸೆಸ್&zwnj; ನಡುವಿನ ಪ್ರಕರಣದಲ್ಲಿ ಪಟ್ನಾ ಹೈಕೋರ್ಟ್&zwnj; &lsquo;ಪರಸ್ಪರ ಸಹಕಾರ&rsquo;ದ ತತ್ವವನ್ನು ಎತ್ತಿಹಿಡಿದಿದ್ದು, ಗುರುದಕ್ಷಿಣೆಯು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದೆ.&lt;/p&gt;&lt;p&gt;ಆರೆಸ್ಸೆಸ್&zwnj; ಯಾವತ್ತೂ ಕಾನೂನಿನ ವಿನಾಯ್ತಿಯನ್ನು ಕೇಳಿಯೇ ಇಲ್ಲ ಆದರೆ, ಕಾನೂನು ಹೇರದ ಬಾಧ್ಯತೆಗಳ ಒತ್ತಾಯಪೂರ್ವಕ ಹೇರಿಕೆಯನ್ನು ವಿರೋಧಿಸಿದೆ ಅಷ್ಟೆ.&lt;/p&gt;&lt;p&gt;ನೂರು ವರ್ಷಗಳ ಕಾಲ ಸಂಘವು ಮುಕ್ತವಾಗಿ ಕಾರ್ಯನಿರ್ವಹಿಸಿದೆ, ತನ್ನ ಕಾರ್ಯ ಚಟುವಟಿಕೆಗಳನ್ನು ಪ್ರಕಟಿಸುತ್ತಾ ಬಂದಿದೆ. ನಿರ್ಬಂಧಗಳು, ರಾಜಕೀಯ ವಿರೋಧ ಮತ್ತು ಮಾನ್ಯತೆ ರದ್ದು ಮಾಡುವ ಸಂಬಂಧ ಕಾಂಗ್ರೆಸ್&zwnj; ಸರ್ಕಾರಗಳು ಮಾಡಿದ ಹಲವು ಪ್ರಯತ್ನಗಳನ್ನು ಎದುರಿಸಿ ನಿಂತಿದೆ. ಇದನ್ನೆಲ್ಲ ತೆರಿಗೆದಾರರ ಹಣದಿಂದಾಗಲಿ ಹಾಗೂ ವಿದೇಶಿ ದೇಣಿಗೆಯ ನೆರವಿಲ್ಲದೆ ಸಾಧಿಸಿದೆ.&lt;/p&gt;&lt;p&gt;ಜೂನಿಯರ್&zwnj; ಖರ್ಗೆ ಅವರು ಭಾಗವತ್&zwnj; ಅವರನ್ನುದ್ದೇಶಿಸಿ ಉತ್ತರದಾಯಿತ್ವದ ಹೆಸರಿನಲ್ಲಿ ಬರೆದ ಪತ್ರವು ಕಾನೂನಿನ ತಪ್ಪುಗ್ರಹಿಕೆ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದೆ. ಈ ರೀತಿಯ ಬೇಡಿಕೆ ಪತ್ರವು ಅವರು ಹೊಂದಿರುವ ಸಾಂವಿಧಾನಿಕ ಹುದ್ದೆಗೂ ಮತ್ತು ತಾವು ರಕ್ಷಿಸುತ್ತಿದ್ದೇನೆಂದು ಹೇಳಿಕೊಳ್ಳುತ್ತಿರುವ ಪ್ರಜಾತಾಂತ್ರದ ಸಂಪ್ರದಾಯ ಎರಡಕ್ಕೂ ಸರಿಹೊಂದುವುದಿಲ್ಲ.&lt;/p&gt;&lt;p&gt;ಕುಟುಂಬ ರಾಜಕಾರಣಕ್ಕೆ ಸೇರಿದ ವ್ಯಕ್ತಿ ಎಷ್ಟೇ ಉನ್ನತ ಹುದ್ದೆಯಲ್ಲಿಯೇ ಇರಲಿ, ಅಂಥ ವ್ಯಕ್ತಿಯಿಂದ ಆರೆಸ್ಸೆಸ್&zwnj;ಗೆ ಉತ್ತಮ ನಡತೆಯ ಪ್ರಮಾಣ ಪತ್ರ ಬೇಕಿಲ್ಲ. ಕಾನೂನು ಎಲ್ಲರಿಗಿಂತಲೂ ದೊಡ್ಡದು. ಅದೇ ರೀತಿ ಜೂನಿಯರ್&zwnj; ಖರ್ಗೆ ಅವರ ಅಹಂಕಾರದ ಹಾಗೂ ಅನಗತ್ಯ ಬೇಡಿಕೆಗಳು ಕಾನೂನಿನ ಮುಂದೆ ಯಾವುದೇ ಮೌಲ್ಯ ಇಲ್ಲ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/senior-supreme-court-lawyer-mahesh-jethmalani-column-on-the-rss-registration-controversy-rav/articleshow-4k6zfbz"/>
        </item>
        <item>
            <title><![CDATA[RSS Registration issue: ಖಾಸಗಿ ಸಂಘ-ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ! | ಡಾ।। ಅರುಣ ಶ್ಯಾಮ್ ಲೇಖನ]]></title>
            <link>https://kannada.asianetnews.com/state/rss-registration-of-private-organizations-is-not-mandatory-rav/articleshow-b0amzmz</link>
            <guid isPermaLink="true">https://kannada.asianetnews.com/state/rss-registration-of-private-organizations-is-not-mandatory-rav/articleshow-b0amzmz</guid>
            <pubDate>Thu, 18 Jun 2026 08:35:40 +0530</pubDate>
            <description><![CDATA[ಭಾರತೀಯ ಸಂವಿಧಾನವು ಸಂಘ-ಸಂಸ್ಥೆಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ನೀಡಿದೆ. ಈ ಸಂಸ್ಥೆಗಳ ನೋಂದಣಿಯು ಕಡ್ಡಾಯವಲ್ಲ, ಬದಲಾಗಿ ಐಚ್ಛಿಕವಾಗಿದ್ದು, ಸರ್ಕಾರಿ ಸವಲತ್ತುಗಳು ಮತ್ತು ಕಾನೂನಾತ್ಮಕ ವ್ಯಕ್ತಿತ್ವ ಪಡೆಯಲು ಮಾತ್ರ ನೋಂದಣಿ ಅವಶ್ಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvcasv3j3ccknddrz63ek5zq,imgname-----------------------2026-06-18t083049.843-1781751671921.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡಾ।। ಅರುಣ ಶ್ಯಾಮ್.ಎಂ&lt;/strong&gt;&lt;/p&gt;&lt;p&gt;ಹಿರಿಯ ವಕೀಲರು ಮತ್ತು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್&lt;/p&gt;&lt;p&gt;ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ಭಾರತ. ಇಲ್ಲಿ ಪ್ರಜೆಗಳೇ ಪ್ರಭುಗಳು, ಜನರಿಂದ, ಜನರಿಗೋಸ್ಕರ, ಜನರೇ ನಡೆಸುವ ಸರ್ಕಾರದ ವ್ಯವಸ್ಥೆ ರೂಪಿಸಲಾಗಿದೆ. ಇಡೀ ದೇಶದ ವ್ಯವಸ್ಥೆ ಡಾ.ಬಿ.ಆರ್&zwnj;.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂಬ ಚೌಕಟ್ಟಿನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಂವಿಧಾನದ ಆಶೋತ್ತರಕ್ಕೆ ವಿರುದ್ಧವಾಗಿ ಯಾವುದೇ ಸಂಗತಿಗಳು ನಡೆಯುವಂತಿಲ್ಲ. ದೇಶದಲ್ಲಿ ಕಾನೂನು ಕೂಡ ಈ ವ್ಯಾಪ್ತಿಯಲ್ಲಿಯೇ ಇರಬೇಕಾಗುತ್ತದೆ. ವ್ಯಾಪ್ತಿ ಮೀರಿದ ಕಾನೂನು ಕೂಡ ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದಲ್ಲಿ ಅಸಿಂಧು ಅಥವಾ ಸಂವಿಧಾನ ವಿರೋಧಿ ಎಂದೇ ಘೋಷಿಸಲ್ಪಡುವುದು.&lt;/p&gt;&lt;p&gt;ಈ ದೇಶದ ಪ್ರಜೆಗಳಿಗೆ ಸಂವಿಧಾನದತ್ತವಾಗಿ ಬಂದಂತಹ ಮೂಲಭೂತ ಹಕ್ಕುಗಳಲ್ಲಿ ಸಂಘ, ಒಕ್ಕೂಟ ಮತ್ತು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ಸಂವಿಧಾನದ ಪರಿಚ್ಛೇದ ೧೯ (೧) (ಅ) ಅಡಿಯಲ್ಲಿ ಕಲ್ಪಿಸಲಾಗಿದೆ. ಹಾಗೆಯೇ ಸಂಘ, ಒಕ್ಕೂಟ ಮತ್ತು ಸಹಕಾರಿ ಸಂಘಗಳನ್ನು ಸ್ಥಾಪಿಸುವ, ನಡೆಸುವ ಅಥವಾ ಅಂತಹ ಸ್ಥಾಪಿತವಾದ ಸಂಘ-ಸಂಸ್ಥೆ, ಒಕ್ಕೂಟಗಳ ವ್ಯವಹಾರಗಳನ್ನು ಮುಕ್ತಾಯಗೊಳಿಸುವ ಹಕ್ಕುಗಳು ತನ್ನಿಂದ ತಾನೇ ಅಸ್ತಿತ್ವದಲ್ಲಿವೆ. ಸಂವಿಧಾನ ಕೇವಲ ಈ ಹಕ್ಕನ್ನು ನೀಡಿ ಒಕ್ಕೂಟಗಳನ್ನು ಸ್ಥಾಪಿಸುವ ಅಥವಾ ನಡೆಸುವ ಹಕ್ಕನ್ನು ನೀಡಿದೆಯೇ ಹೊರತು, ಎಲ್ಲಿಯೂ ಇಂತಹ ಸಂಘ, ಸಂಸ್ಥೆ ಮತ್ತು ಒಕ್ಕೂಟಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಹಾಗಾಗಿ ನೋಂದಣಿ ಎನ್ನುವುದು ಐಚ್ಛಿಕ ವಿಷಯವಾಗಿಯೇ ಉಳಿದುಕೊಂಡಿದೆ. ನ್ಯಾಯಾಲಯಗಳು ಕೂಡ ಹಲವಾರು ಪ್ರಕರಣಗಳಲ್ಲಿ ನೋಂದಣಿ ಕಡ್ಡಾಯವಲ್ಲ ಎಂದೇ ಹೇಳಿವೆ.&lt;/p&gt;&lt;h2&gt;ಅಪೇಕ್ಷೆ ಪಟ್ಟರಷ್ಟೇ ನೋಂದಣಿ&lt;/h2&gt;&lt;p&gt;ಸಂವಿಧಾನದ ಪರಿಚ್ಛೇದ ೧೯(4)ರ ಪ್ರಕಾರ ಸಂಘ, ಒಕ್ಕೂಟ, ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಲು ಕೊಟ್ಟ ಸ್ವಾತಂತ್ರ್ಯದಲ್ಲಿ ಕೆಲವೊಂದು ಮಿತಿಗಳನ್ನು ಕಾನೂನು ಮುಖಾಂತರ ಹೇರಲು ಸರ್ಕಾರಕ್ಕೆ ಅವಕಾಶ ಕೊಟ್ಟಿದೆ. ಅವುಗಳಲ್ಲಿ ದೇಶದ ಅಖಂಡತೆ, ಸಾರ್ವಭೌಮತ್ವ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಯ ಆಧಾರದಲ್ಲಿ ಕಾನೂನು ಮುಖಾಂತರ ನಿಯಂತ್ರಿಸಲು ಅವಕಾಶವಿದೆ. ಈ ವಿಷಯಕ್ಕೆ ಬರುವ ಕಾನೂನುಗಳೆಲ್ಲಾ ಸಂವಿಧಾನದ ಚೌಕಟ್ಟು ವ್ಯಾಪ್ತಿಯನ್ನು ಮೀರುವಂತಿಲ್ಲ ಮತ್ತು ಕಾನೂನಿನ ಹೊರತಾಗಿ ಈ ಮೂಲಭೂತ ಹಕ್ಕನ್ನು ನಿಯಂತ್ರಿಸುವ ಅವಕಾಶ ಇಲ್ಲ. ಸಂವಿಧಾನದ ಅನುಚ್ಛೇದ-೭ರಲ್ಲಿ ಪಟ್ಟಿ-೧ರ ಸಂಖ್ಯೆ-೪೪ ರಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಸಂಘ-ಸಂಸ್ಥೆಗಳ ವಿಚಾರಗಳ ಕಾನೂನನ್ನು ಮಾಡುವ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಅನುಚ್ಛೇದ ೭ರ ೨ನೇ ಪಟ್ಟಿಯ ಸಂಖ್ಯೆ ೩೨ರ ಪ್ರಕಾರ ರಾಜ್ಯ ಸರ್ಕಾರಗಳು ಕೂಡ ಆ ರಾಜ್ಯಕ್ಕೆ ಸೀಮಿತವಾದ ಸಂಘ-ಸಂಸ್ಥೆಗಳ ಕಾನೂನು ಹೊಂದಲು ಅವಕಾಶವಿದೆ. ಈ ರೀತಿ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಗೆ ಬರುವ ಸಂಘ-ಸಂಸ್ಥೆಗಳ ವಿಚಾರವಾಗಿ ಈಗಾಗಲೇ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿವೆ. ಈ ಎಲ್ಲಾ ಕಾನೂನುಗಳಲ್ಲಿ ಕೂಡ ಪ್ರಜೆಗಳಿಗೆ ತಮ್ಮದೇ ಆದ ಸಂಘ-ಸಂಸ್ಥೆಗಳನ್ನು ತಾವು ಅಪೇಕ್ಷೆ ಪಟ್ಟರೆ ನೋಂದಣಿ ಮಾಡಿಸಿಕೊಂಡು ಅನ್ವಯವಾಗುವ ಕಾನೂನಿನ ಅಡಿಯಲ್ಲಿ ತಮ್ಮ ಎಲ್ಲಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬಹುದು. ಆದರೆ, ನೋಂದಣಿ ಕೇವಲ ಐಚ್ಛಿಕ ವಿಷಯ ಎನ್ನುವಂಥದ್ದು ಬಹಳ ಮುಖ್ಯವಾದ ಸಂಗತಿ.&lt;/p&gt;&lt;p&gt;ಆದರೆ, ಕಾನೂನಿನ ಅಡಿಯಲ್ಲಿ ಬರುವಂತಹ ಅಥವಾ ಸರ್ಕಾರದ ಕೆಲವೊಂದು ಅನುಕೂಲತೆ ಅಥವಾ ಸವಲತ್ತುಗಳನ್ನು ಪಡೆಯಬೇಕಾದಾಗ ನೋಂದಣಿಯ ಅವಶ್ಯಕತೆ ಬರಬಹುದು. ಹಾಗಾಗಿಯೇ ಅನೇಕ ಖಾಸಗಿ ಸಂಘ-ಸಂಸ್ಥೆಗಳು ನಮ್ಮ ದೇಶದಲ್ಲಿ ಇಂದಿಗೂ ಕೂಡ ನೋಂದಣಿ ಮಾಡಿಸಿಕೊಳ್ಳದೇ ಅಸ್ತಿತ್ವದಲ್ಲಿವೆ. ನೋಂದಣಿಯಾಗದ ಖಾಸಗಿ ಸಂಘ-ಸಂಸ್ಥೆಗಳಿಗೂ ಕೂಡ ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಖಾಯಂ ಖಾತೆ ಸಂಖ್ಯೆ (PAN Number) ಹೊಂದಲು ಕೂಡಾ ಅವಕಾಶ ಇದೆ. ಮಾತ್ರವಲ್ಲ, ತಮ್ಮ ವರ್ಷಾವಧಿ ಲೆಕ್ಕ-ಪತ್ರ ಸಲ್ಲಿಸಲೂ ಅವಕಾಶವಿದೆ. ಆದರೆ, ಕಲಂ ೮೦ಉ, ೧೨ಂ ಅಂತಹ ಅಡಿಯಲ್ಲಿ ಬರುವಂತಹ ಮಾನ್ಯತೆ ಅಥವಾ ವಿನಾಯಿತಿ ಪಡೆಯಲು ಬೇಕಾದಲ್ಲಿ ನೋಂದಣಿ ಅವಶ್ಯಕತೆ ಬರುತ್ತದೆ. ವ್ಯಕ್ತಿಗಳ ಸಮೂಹ (Body of Individuals) ಆಗಿ ಕಾರ್ಯ ನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ ಎಂದು ದೇಶದ ನ್ಯಾಯಾಲಯಗಳು ಬೇರೆ ಬೇರೆ ಪ್ರಕರಣಗಲ್ಲಿ ಹೇಳಿವೆ.&lt;/p&gt;&lt;h3&gt;ಲೆಕ್ಕ-ಪತ್ರ, ವ್ಯವಹಾರ ಮಾಡಲು ಅವಕಾಶ&lt;/h3&gt;&lt;p&gt;ಇನ್ನೊಂದು ವಿಶೇಷ ಸಂಗತಿ ಏನೆಂದರೆ, ಆರ್&zwnj;ಎಸ್ಎಸ್ ಸಂಗ್ರಹಿಸುವ ಗುರುದಕ್ಷಿಣೆ ತೆರಿಗೆ ಮೌಲ್ಯಮಾಪನದಿಂದ ವಿನಾಯಿತಿ ಹೊಂದಿದೆ ಎಂದು ಪಟನಾ ಉಚ್ಚ ನ್ಯಾಯಾಲಯವು &lsquo;February 22, 1994 Commissioner of Income Tax, Bihar Vs. Rashtriya Swayam Sevak Sangh\B&rsquo; ಪ್ರಕರಣದಲ್ಲಿ ತೀರ್ಪು ನೀಡಿರುವುದರಿಂದ ಖಾಸಗಿ ಸಂಘ-ಸಂಸ್ಥೆಗಳಿಗೆ ಸ್ವಯಂ ಪ್ರೇರಿತವಾಗಿ ನೀಡುವಂತಹ ದಕ್ಷಿಣೆ ತೆರಿಗೆಯಿಂದ ವಿನಾಯಿತಿ ಹೊಂದಿದೆ ಎನ್ನುವುದು ಉಲ್ಲೇಖನೀಯ ಸಂಗತಿ. ಸಂಘಟನಾತ್ಮಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸಂಪರ್ಕ, ಸಂವಾದ, ಅಭ್ಯಾಸ, ವರ್ಗ, ಕಾರ್ಯಾಗಾರ, ವಿಕಾಸ ವರ್ಗ ಇತ್ಯಾದಿಗಳನ್ನು ಖಾಸಗಿ ಸಂಘ, ಸಂಸ್ಥೆ, ಒಕ್ಕೂಟ ನಡೆಸಲು ಸ್ವಾತಂತ್ರ್ಯವನ್ನು ಹೊಂದಿದೆ. ಆದರೆ, ಆಸ್ತಿ-ಪಾಸ್ತಿ ಅಥವಾ ಕೆಲವೊಂದು ಕಾನೂನಿನಡಿಯಲ್ಲಿ ವ್ಯವಹಾರ ನಡೆಸಲು ನ್ಯಾಸ ಕಾಯ್ದೆ-೧೮೮೨, ಸಂಘಗಳ ನೋಂದಣಿ ಕಾಯ್ದೆ-೧೮೬೦, ಸಹಕಾರಿ ಸಂಘಗಳ ಕಾಯ್ದೆ, ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆ ಇತ್ಯಾದಿ ಕಾನೂನಿನ ಅಡಿಯಲ್ಲಿ ನೋಂದಾಯಿಸಿದ ಸಂಸ್ಥೆಗಳ ಮುಖಾಂತರವೇ ಹೊಂದಬೇಕಾಗುತ್ತದೆ. ಈ ರೀತಿ ಆಸ್ತಿ-ಪಾಸ್ತಿ ಹೊಂದಿದ ಸಂಘ-ಸಂಸ್ಥೆಗಳು ತಮ್ಮ ಸೈದ್ಧಾಂತಿಕ ಅಥವಾ ವೈಚಾರಿಕ ವಿಷಯಗಳ ಪ್ರಚಾರ, ಪ್ರಸಾರ ಇತ್ಯಾದಿಗಳನ್ನು ನೋಂದಣಿ ಇಲ್ಲದಂತಹ ಖಾಸಗಿ ಸಂಘ, ಒಕ್ಕೂಟ, ಸಂಸ್ಥೆಯಾಗಿ ನೋಂದಾವಣಿ ರಹಿತವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಅಥವಾ ಶಾಖಾ ಮಟ್ಟದಲ್ಲಿ ಶಾಶ್ವತ ಖಾತೆ ಸಂಖ್ಯೆ (PAN Number) ಹೊಂದಿ ವಾರ್ಷಿಕ ಲೆಕ್ಕ-ಪತ್ರ, ವ್ಯವಹಾರ ಮಾಡಲು ಕೂಡ ಅವಕಾಶವಿದೆ.&lt;/p&gt;&lt;h3&gt;ಸರ್ಕಾರಿ ಸವಲತ್ತು ಬೇಕಿದ್ದಾಗ ನೋಂದಣಿ ಕಡ್ಡಾಯ&lt;/h3&gt;&lt;p&gt;ನೋಂದಾಯಿತ ಅಥವಾ ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳ ಬಗ್ಗೆ ಹೇಳುವುದಾದರೆ, ಒಂದು ಸಂಘ ಅಥವಾ ಸಂಸ್ಥೆ ನೋಂದಣಿ ಆದಾಗ ಅಂತಹ ಸಂಘ ಅಥವಾ ಸಂಸ್ಥೆ ಕಾನೂನಿನ ದೃಷ್ಟಿಯಲ್ಲಿ ಒಂದು ಕಾನೂನಿನ ವ್ಯಕ್ತಿತ್ವವನ್ನು (Legal Entity)) ಪಡೆಯುತ್ತದೆ. ಮಾತ್ರವಲ್ಲ, ಅದರ ಸದಸ್ಯರ ಜವಾಬ್ದಾರಿಗಳು, ನೋಂದಾವಣಿಯಾಗದ ಸಂಘ-ಸಂಸ್ಥೆಗಳ ಸದಸ್ಯರಿಗಿಂತ ಭಿನ್ನವಾಗಿರುತ್ತದೆ. ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜವಾಬ್ದಾರಿ ಕಾನೂನಿನ ಅಡಿಯಲ್ಲಿ ಹೆಚ್ಚಾಗಿರುತ್ತದೆ. ನೋಂದಣಿ ಆಗದ ಖಾಸಗಿ ಸಂಘ-ಸಂಸ್ಥೆಗಳು ಕೂಡ ಬ್ಯಾಂಕ್ ಖಾತೆ ಹೊಂದಲು, ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಮತ್ತು ದೇಣಿಗೆ ಸೇರಿದಂತೆ ಆದಾಯ, ಖರ್ಚು-ವೆಚ್ಚ ಇತ್ಯಾದಿಗಳನ್ನು ನಡೆಸಲು ಕೂಡ ಅಧಿಕಾರವನ್ನು ಹೊಂದಿವೆ. ಆದರೆ, ವಿದೇಶಿ ಮೂಲಕ ಹಣಕಾಸು ಲೇವಾದೇವಿ, ಭಾರತೀಯ ಹಣಕಾಸು ಇತ್ಯಾದಿ ಹಣಕಾಸು ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ &lsquo;F.C.R.A&rsquo; ಅನುಮತಿ ಪಡೆಯಲು ನೋಂದಣಿ ಅವಶ್ಯಕತೆ ಇದೆ. ನೋಂದಣಿಯಾಗದ ಸಂಘ-ಸಂಸ್ಥೆ, ಒಕ್ಕೂಟ, ವ್ಯಕ್ತಿಗಳ ಸಮೂಹ ಸಂವಿಧಾನದತ್ತವಾದ ಇತರೆ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಹಕ್ಕು ಹೊಂದಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಆಯುಧ ರಹಿತವಾಗಿ ಒಂದೆಡೆ ಒಗ್ಗೂಡುವ ಸ್ವಾತಂತ್ರ್ಯ, ದೇಶದಾದ್ಯಂತ ಓಡಾಡುವ ಸ್ವಾತಂತ್ರ್ಯ,ದೇಶದ ಯಾವುದೇ ಭಾಗದಲ್ಲಿ ನೆಲೆಸುವ ಮತ್ತು ವೃತ್ತಿ, ವ್ಯಾಪಾರ, ವಹಿವಾಟು ಇತ್ಯಾದಿಗಳನ್ನು ನಡೆಸುವಾಗ ಕೂಡ ಜೊತೆಯಾಗಿ ನಡೆಸಲು ಅಡ್ಡಿಯಿಲ್ಲ. ಕೇವಲ ಸರ್ಕಾರಿ ಸವಲತ್ತು, ಮಾನ್ಯತೆಗಳು ಬೇಕಾದಾಗ ನೋಂದಣಿ ಕಡ್ಡಾಯ.&lt;/p&gt;&lt;p&gt;ಸಾರ್ವಜನಿಕ ಸ್ಥಳಗಳಾದ ಆಟದ ಮೈದಾನ, ಪಾರ್ಕ್ ಇತ್ಯಾದಿಗಳು ಸಾರ್ವಜನಿಕ ಉಪಯೋಗಕ್ಕಾಗಿಯೇ ತೆರೆದಿಟ್ಟಂತಹ ಜಾಗಗಳಲ್ಲಿ ಇಂತಹ ಖಾಸಗಿ ಸಂಘ-ಸಂಸ್ಥೆಗಳು ತಮ್ಮ ಚಟುವಟಿಕೆ ನಡೆಸಲು ಕೂಡ ಅವಕಾಶ ಇದೆ. ಆದರೆ, ನಿರ್ಬಂಧಿತ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಚಟುವಟಿಕೆ ನಡೆಸಬೇಕಾಗುತ್ತದೆ. ನೋಂದಣಿ ಕಡ್ಡಾಯ ಮಾಡುವಂತಹ ಕಾನೂನು ತರಲು ಸಾಧ್ಯವಿಲ್ಲ ಮತ್ತು ತಂದರೂ ನ್ಯಾಯಾಲಯಗಳಲ್ಲಿ ಅದರ ಸಿಂಧುತ್ವವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rss-registration-of-private-organizations-is-not-mandatory-rav/articleshow-b0amzmz"/>
        </item>
        <item>
            <title><![CDATA['ತಾತನಿಂದ ಬಂದ ಆಸ್ತಿ ತಂದೆಯ ವೈಯಕ್ತಿಕ ಆಸ್ತಿ, ಮೊಮ್ಮಕ್ಕಳಿಗೆ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!]]></title>
            <link>https://kannada.asianetnews.com/state/grandfather-s-self-inherited-property-is-not-the-right-of-grandchildren-says-karnataka-hc-rav/articleshow-6ilwqct</link>
            <guid isPermaLink="true">https://kannada.asianetnews.com/state/grandfather-s-self-inherited-property-is-not-the-right-of-grandchildren-says-karnataka-hc-rav/articleshow-6ilwqct</guid>
            <pubDate>Thu, 18 Jun 2026 06:38:28 +0530</pubDate>
            <description><![CDATA[&lt;p&gt;ತಾತನ ಸ್ವಯಾರ್ಜಿತ ಆಸ್ತಿಯು ವಿಭಜನೆಯ ನಂತರ ತಂದೆಗೆ ಬಂದಾಗ ಅದು ಅವರ ವೈಯಕ್ತಿಕ ಆಸ್ತಿಯಾಗುತ್ತದೆ, ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ. ಆದ್ದರಿಂದ, ಈ ಆಸ್ತಿಯಲ್ಲಿ ಮೊಮ್ಮಗಳಿಗೆ ಪಾಲು ಕೇಳಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್&zwnj; ಮಹತ್ವದ ತೀರ್ಪು ನೀಡಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5xvrhbtf3jycpmrdj3gwwck,imgname-karnataka-high-court-1758717560186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜೂ.18): &lt;/strong&gt;ತಾತ ತನ್ನ ಜೀವಿತಾವಧಿಯಲ್ಲಿ ಸ್ವಂತವಾಗಿ ಸಂಪಾದಿಸಿದ ಆಸ್ತಿಯು, ವಿಭಜನೆ ನಂತರ ತಂದೆಯ ಕೈಸೇರಿದರೂ ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ಹೊರತು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ, ಈ ರೀತಿ ವಿಭಜನೆಯಾದ ಆಸ್ತಿ&zwnj;ಯಲ್ಲಿ ಪಾಲು ಕೇಳಲು ಮೊಮ್ಮಗಳಿಗೆ ಅವಕಾಶವಿಲ್ಲ ಎಂದು ಹೈಕೋರ್ಟ್&zwnj; ಅಭಿಪ್ರಾಯಪಟ್ಟಿದೆ.&lt;/p&gt;&lt;p&gt;ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್&zwnj;.ಸ್ವಾಮಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.&lt;/p&gt;&lt;p&gt;ಉಷಾ ಅವರು ಉಲ್ಲೇಖಿಸಿರುವ ಆಸ್ತಿಗಳನ್ನು ಆಕೆಯ ತಾತ, ಅಂದರೆ ತಂದೆಯ ತಂದೆ ಸ್ವಂತವಾಗಿ ಸಂಪಾದಿಸಿದ್ದರು ಎಂಬುದು ದಾಖಲೆಗಳಿಂದ ಗೊತ್ತಾಗಲಿದೆ. ಈ ಆಸ್ತಿಯನ್ನು ಅವರ ತಾತ, ಅವರ ಮಕ್ಕಳಿಗೆ ಕೌಟುಂಬಿಕ ಒಪ್ಪಂದದ ಮೂಲಕ ಆಸ್ತಿ ಹಂಚಿಕೆ ಮಾಡಿದ್ದಾರೆ. ತಾತನ ಸ್ವಯಾರ್ಜಿತ ಆಸ್ತಿ ಭಾಗವಾಗಿ ತಂದೆಗೆ ಬಂದಾಗ, ಅದು ಆ ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ. ಆದರೆ, ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಪೀಠ ಹೇಳಿದೆ.&lt;/p&gt;&lt;p&gt;ತಂದೆಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕಿರುತ್ತದೆ. ಈ ಆಸ್ತಿಗಳು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಾಗಿದ್ದವು ಎಂಬುದನ್ನು ಸಾಬೀತುಪಡಿಸಲು ಮೇಲ್ಮನವಿದಾರೆ ಉಷಾ ಅವರು ಅಗತ್ಯ ಸಾಕ್ಷ್ಯಗಳನ್ನು ಒದಗಿಸಿಲ್ಲ. ತಾತನ ಸ್ವಯಂ ಸಂಪಾದಿತ ಆಸ್ತಿಗಳನ್ನು ಜಂಟಿ ಕುಟುಂಬದ ಆಸ್ತಿಗಳೆಂದು ಹೇಳಿ, ತಾನು ಭಾಗ ಪಡೆಯಬಹುದು ಎಂದು ವಾದಿಸಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಈ ಆಸ್ತಿಗಳಲ್ಲಿ ಯಾವುದೇ ಕಾನೂನಾತ್ಮಕ ಹಕ್ಕು ಇರುವುದಿಲ್ಲ ಎಂದು ಎಂದು ನ್ಯಾಯಪೀಠ ತಿಳಿಸಿದೆ.&lt;/p&gt;&lt;h2&gt;ಪ್ರಕರಣದ ವಿವರ:&lt;/h2&gt;&lt;p&gt;ಉಷಾ ಎನ್&zwnj;. ಸ್ವಾಮಿ ಅವರು 1979ರಲ್ಲಿ ವೈದ್ಯರಾಗಿರುವ ಜವರಯ್ಯ ಎನ್&zwnj; .ಸ್ವಾಮಿ ಎಂಬುವರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ತನ್ನ ಪತಿಯೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಈ ನಡುವೆ ಅವರ ಗಮನಕ್ಕೆ ಬಾರದೆ ಕುಟುಂಬಕ್ಕೆ ಸೇರಿದ 10 ಎಕರೆ ಜಮೀನನ್ನು ಪೋಷಕರು ಮಾರಾಟ ಮಾಡಿದ್ದಾರೆ. ತಂದೆಗೆ ಸೇರಿದ ಪಿತ್ರಾರ್ಜಿತ ಆಸ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಿ ಲಾಭ ಗಳಿಸಿದ್ದಾರೆ. ಈ ಲಾಭಾಂಶದ ಹಣದಲ್ಲಿ ಇತರೆ ಆಸ್ತಿಗಳನ್ನು ಗಳಿಸಿದ್ದಾರೆ. ಈ ಮೂಲ ಆಸ್ತಿಗಳು ಪೂರ್ವಜರಿಂದ ಬಂದ ಜಂಟಿ ಕುಟುಂಬದ ಆಸ್ತಿಗಳಾಗಿದ್ದು, ತಮಗೆ ಪಾಲು ಸಿಗಬೇಕು. ಈ ಎಲ್ಲ ಆಸ್ತಿಗಳು ಮತ್ತು ಬ್ಯಾಂಕ್&zwnj; ಠೇವಣಿಯಲ್ಲಿಯೂ ತಾನೂ ಭಾಗ ಪಡೆಯುವುದಕ್ಕೆ ಅಧಿಕಾರವಿದೆ. ಆದ್ದರಿಂದ ಆಸ್ತಿಯಲ್ಲಿ ತನಗೆ ಭಾಗ ನೀಡಲು ನಿರ್ದೇಶನ ನೀಡಬೇಕು ಎಂದು ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;ಅರ್ಜಿಯ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಉಷಾ ಅವರು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಗೆ ಅಕ್ಷೇಪಿಸಿದ್ದ ಪೋಷಕರು, ಅರ್ಜಿದಾರರು ತಿಳಿಸಿರುವ ಆಸ್ತಿಗಳು ಪೂರ್ವಜರಿಂದ ಬಂದಿಲ್ಲ. ಅಲ್ಲದೆ, ಹಿಂದೂ ಅವಿಭಜಿತ ಕುಟುಂಬಕ್ಕೆ ಸೇರಿದ ಆಸ್ತಿಯಲ್ಲ. ಆದ್ದರಿಂದ ಮೇಲ್ಮನವಿ ವಜಾಗೊಳಿಸಬೇಕು ಎಂದು ಕೋರಿದ್ದರು&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/grandfather-s-self-inherited-property-is-not-the-right-of-grandchildren-says-karnataka-hc-rav/articleshow-6ilwqct"/>
        </item>
        <item>
            <title><![CDATA[Kartavya App: ಕರ್ತವ್ಯ ಆ್ಯಪ್‌ನಲ್ಲಿ ನೋಂದಣಿ ಮಾಡದ 2.13 ಲಕ್ಷ ನೌಕರರು!  ಸಿಎಂ ಸೂಚನೆಗೂ ಬೆಲೆ ಇಲ್ಲವೇ?]]></title>
            <link>https://kannada.asianetnews.com/state/2-13-lakh-government-employees-not-registered-on-kaams-app-rav/articleshow-ly03f7l</link>
            <guid isPermaLink="true">https://kannada.asianetnews.com/state/2-13-lakh-government-employees-not-registered-on-kaams-app-rav/articleshow-ly03f7l</guid>
            <pubDate>Thu, 18 Jun 2026 04:53:21 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿಗಳ ಸೂಚನೆ ಹೊರತಾಗಿಯೂ, 2.13 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು 'ಕರ್ತವ್ಯ' ಮೊಬೈಲ್ ಆ್ಯಪ್&zwnj;ನಲ್ಲಿ ನೋಂದಾಯಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೂಡಲೇ ನೋಂದಣಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvbxn2swzx3zs8zrj13g373k,imgname-----------------------2026-06-18t043935.682-1781737884476.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.18): &lt;/strong&gt;ಮುಖ್ಯಮಂತ್ರಿ(Chief Minister of karnataka) ಅವರ ಸೂಚನೆ ಬಳಿಕವೂ ರಾಜ್ಯದಲ್ಲಿ 2,13,925 ಸರ್ಕಾರಿ ಅಧಿಕಾರಿ/ನೌಕರರು &lsquo;ಕರ್ತವ್ಯ&rsquo; ಮೊಬೈಲ್&zwnj; ಆ್ಯಪ್&zwnj;(Kartavya mobile app)ನಲ್ಲಿ ನೋಂದಣಿ(Register) ಮಾಡಿಕೊಂಡಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಿ ನೋಂದಣಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್(Shalini Rajneesh, Chief Secretary to the State Government) ಸೂಚಿಸಿದ್ದಾರೆ.&lt;/p&gt;&lt;h2&gt;KAAMS ಕಡ್ಡಾಯಗೊಳಿಸಿದ್ದ ಸರ್ಕಾರ&lt;/h2&gt;&lt;p&gt;ಕಳೆದ ಜೂ.4ರಂದು ನಡೆದ ಎಲ್ಲ ಕಾರ್ಯದರ್ಶಿಗಳ ಸಭೆಯಲ್ಲಿ ಮುಖ್ಯಮಂತ್ರಿ ಅವರು ಎಲ್ಲ ಸರ್ಕಾರಿ ಅಧಿಕಾರಿಗಳು/ನೌಕರರು ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಎಲ್ಲ ನೌಕರರು ಕರ್ತವ್ಯ(KAAMS) ಮೊಬೈಲ್&zwnj; ಆ್ಯಪ್&zwnj;ನಲ್ಲಿ ನೋಂದಣಿ ಮಾಡಿಕೊಂಡು ಪ್ರತಿ ದಿನ ತಮ್ಮ ಹಾಜರಾತಿ ಕಡ್ಡಾಯವಾಗಿ ದಾಖಲಿಸಬೇಕಿದೆ.&lt;/p&gt;&lt;h3&gt;ಅಂಕಿ-ಅಂಶಗಳೇನು ಹೇಳತ್ತೆ?&lt;/h3&gt;&lt;p&gt;ಜೂ.16ರ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೂ 2,13,925 ಅಧಿಕಾರಿ/ನೌಕರರು ಕರ್ತವ್ಯ ಮೊಬೈಲ್&zwnj; ಆ್ಯಪ್&zwnj;ನಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ವೈಯಕ್ತಿಕ ಗಮನಹರಿಸಿ, ತಮ್ಮ ಜಿಲ್ಲೆಯಲ್ಲಿ ಈವರೆಗೂ ಕರ್ತವ್ಯ ಮೊಬೈಲ್&zwnj; ಆ್ಯಪ್&zwnj;ನಲ್ಲಿ ನೋಂದಣಿಯಾಗದ ಅಧಿಕಾರಿ/ನೌಕರರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಈ ಬಗ್ಗೆ ಕೈಗೊಂಡ ಕ್ರಮದ ವರದಿಯನ್ನು ಏಳು ದಿನಗಳೊಳಗೆ ತಮಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/2-13-lakh-government-employees-not-registered-on-kaams-app-rav/articleshow-ly03f7l"/>
        </item>
        <item>
            <title><![CDATA[Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!]]></title>
            <link>https://kannada.asianetnews.com/state/priyank-kharge-letter-to-rss-chief-7-questions-bjp-protest-karnataka-san-videoshow-8b7tdpo</link>
            <guid isPermaLink="true">https://kannada.asianetnews.com/state/priyank-kharge-letter-to-rss-chief-7-questions-bjp-protest-karnataka-san-videoshow-8b7tdpo</guid>
            <pubDate>Wed, 17 Jun 2026 17:20:28 +0530</pubDate>
            <description><![CDATA[&lt;p&gt;ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಮುಖ್ಯಸ್ಥರಿಗೆ ಪತ್ರ ಬರೆದು ಏಳು ಕಠಿಣ ಪ್ರಶ್ನೆಗಳನ್ನು ಕೇಳುವ ಮೂಲಕ ರಾಜ್ಯ ಸರ್ಕಾರ ಮತ್ತು ಸಂಘದ ನಡುವೆ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ.&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xagclpa" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.17): &lt;/strong&gt;ನೂರು ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಯುದ್ಧ ಶುರುವಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಮುಖ್ಯಸ್ಥರಿಗೆ ಪತ್ರ ಬರೆದು ಏಳು ಕಠಿಣ ಪ್ರಶ್ನೆಗಳನ್ನಿಟ್ಟು ಲೆಕ್ಕ ಕೇಳಿರುವುದು ಸಂಚಲನ ಮೂಡಿಸಿದೆ.&lt;strong&gt;RSS ಗೆ ಪ್ರಶ್ನೆ ಕೇಳಿದ್ದು ನಾನಲ್ಲ, ಸರ್ಕಾರ, ನನ್ನ ಪ್ರಶ್ನೆಗೆ ಉತ್ತರ ಕೊಡೋದಾದ್ರೆ ನಾನು ಆರೆಸ್ಸೆಸ್ ಕಚೇರಿಗೆ ಹೋಗಲು ಸಿದ್ಧ: ಪ್ರಿಯಾಂಕ್ ಖರ್ಗೆ&lt;/strong&gt;ಗೃಹಸಚಿವರಾದ ಪ್ರಿಯಾಂಕ್ ಖರ್ಗೆ ಆರ್​ಎಸ್ಎಸ್ ವಿರುದ್ಧ ಮತ್ತೊಂದು ಸುತ್ತಿನ ಸಮರ ಸಾರಿದ್ದಾರೆ. ಸಂಘದ ಮುಂದೆ ಏಳು ಪ್ರಶ್ನೆಗಳನ್ನಿಟ್ಟು ಇದು ನಾನ್ ಕೇಳ್ತಿರೋ ಪ್ರಶ್ನೆಯಲ್ಲ. ಸರ್ಕಾರ ಕೇಳ್ತಿರೋ ಪ್ರಶ್ನೆಯಂತ ಪಟ್ಟು ಹಾಕಿದ್ದಾರೆ.&lt;/p&gt;&lt;p&gt;ಪ್ರಿಯಾಂಕ್ ಖರ್ಗೆ ಆರ್​ಎಸ್​ಎಸ್​ ಮುಖ್ಯಸ್ಥರಿಗೆ ಪತ್ರ ಬರೆಯುತ್ತಾ ಇದ್ದ ಹಾಗೆ ಬಿಜೆಪಿ ಖರ್ಗೆ ವಿರುದ್ಧ ಮುಗಿಬಿದ್ದಿದೆ. ಸಂಘದಲ್ಲಿ ಏನೂ ಮುಚ್ಚಿಡುವಂತಿಲ್ಲ, ಎಲ್ಲವೂ ಪಾರದರ್ಶಕವಾಗಿರಲಿ ಎಂದು ಖರ್ಗೆ ಬಿಗಿಪಟ್ಟು ಹಿಡಿದಿದ್ದಾರೆ. ತಾವು ಕೇಳಿರುವ ಪ್ರಶ್ನೆಗಳಿಗೆ ಆರ್​ಎಸ್ಎಸ್​ ಉತ್ತರಿಸಬೇಕು ಅಂತ ಗೃಹಸಚಿವ ಪ್ರಿಯಾಂಕ್ ಖರ್ಗೆ ಬಿಗಿಪಟ್ಟು ಹಾಕಿದ್ದಾರೆ.&amp;nbsp;&lt;/p&gt;]]></content:encoded>
            <category>state</category>
            <dc:creator>Santosh Naik</dc:creator>
            <atom:link href="https://kannada.asianetnews.com/state/priyank-kharge-letter-to-rss-chief-7-questions-bjp-protest-karnataka-san-videoshow-8b7tdpo"/>
        </item>
        <item>
            <title><![CDATA[ಬೆಂಗಳೂರಿನ ಗೇಮ್ಸ್‌ಕ್ರಾಫ್ಟ್ ಸಂಸ್ಥಾಪಕರ ಇಡಿ ಬಂಧನ ಕಾನೂನುಬಾಹಿರ: ತಕ್ಷಣ ಬಿಡುಗಡೆಗೆ ಹೈಕೋರ್ಟ್ ಆದೇಶ]]></title>
            <link>https://kannada.asianetnews.com/state/major-relief-for-gameskraft-karnataka-high-court-declares-ed-arrest-of-founders-llegal-orders-immediate-release-gdp/articleshow-48q24k6</link>
            <guid isPermaLink="true">https://kannada.asianetnews.com/state/major-relief-for-gameskraft-karnataka-high-court-declares-ed-arrest-of-founders-llegal-orders-immediate-release-gdp/articleshow-48q24k6</guid>
            <pubDate>Wed, 17 Jun 2026 17:12:34 +0530</pubDate>
            <description><![CDATA[ಗೇಮ್ಸ್&zwnj;ಕ್ರಾಫ್ಟ್ ಟೆಕ್ನಾಲಜೀಸ್ ಸಂಸ್ಥಾಪಕರನ್ನು ಇಡಿ ಕಾನೂನುಬಾಹಿರವಾಗಿ ಬಂಧಿಸಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯವು ಈ ಬಂಧನವನ್ನು ರದ್ದುಗೊಳಿಸಿ, ಮೂವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಮುಚ್ಚಲ್ಪಟ್ಟಿದ್ದ ಎಫ್&zwnj;ಐಆರ್ ಆಧಾರದ ಮೇಲೆ ಇಸಿಐಆರ್ ತನಿಖೆ ಮುಂದುವರಿಸಿದ್ದು ಕಾನೂನುಬಾಹಿರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k5xvrhbtf3jycpmrdj3gwwck,imgname-karnataka-high-court-1758717560186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇಶದ ಪ್ರಮುಖ ಆನ್&zwnj;ಲೈನ್ ಗೇಮಿಂಗ್ ಕಂಪನಿಯಾದ ಗೇಮ್ಸ್&zwnj;ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್&zwnj;ನ (GTPL) ಸಂಸ್ಥಾಪಕರಾದ ವಿಕಾಸ್ ತನೇಜಾ, ದೀಪಕ್ ಸಿಂಗ್ ಮತ್ತು ಪೃಥ್ವಿರಾಜ್ ಸಿಂಗ್ ಅವರ ಇಡಿ (ಜಾರಿ ನಿರ್ದೇಶನಾಲಯ) ಬಂಧನವನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಲಾಖೆಯು ನಿಯಮಗಳನ್ನು ಉಲ್ಲಂಘಿಸಿ ಮಾಡಿದ್ದ ಈ ಬಂಧನ ಸಂಪೂರ್ಣವಾಗಿ &quot;ಕಾನೂನುಬಾಹಿರ&quot; ಎಂದು ಘೋಷಿಸಿರುವ ಹೈಕೋರ್ಟ್, ಜೈಲಿನಲ್ಲಿರುವ ಮೂವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಜೂನ್ 16ರಂದು ಮಹತ್ವದ ಆದೇಶ ನೀಡಿದೆ.&lt;/p&gt;&lt;h2&gt;ಹೈಕೋರ್ಟ್ ಮೆಟ್ಟಿಲೇರಿದ್ದ ಗೇಮಿಂಗ್ ಸಂಸ್ಥಾಪಕರು&lt;/h2&gt;&lt;p&gt;ಹಣ ಅಕ್ರಮ ವರ್ಗಾವಣೆ (PMLA) ಆರೋಪದ ಮೇಲೆ ಈ ವರ್ಷದ ಮೇ 7 ರಂದು ಗುರುಗ್ರಾಮ್&zwnj;ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಮೂವರು ಸಂಸ್ಥಾಪಕರು, ಇಡಿಯ ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್&zwnj;ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಮೇ 19 ರಂದು ಸೆಷನ್ಸ್ ನ್ಯಾಯಾಲಯವು ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.&lt;/p&gt;&lt;p&gt;ಹೈಕೋರ್ಟ್&zwnj;ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿ, ಇಡಿ ಕ್ರಮ ಕಾನೂನುಬಾಹಿರ ಎಂದು ತೀರ್ಪು ನೀಡಿತು. ಈ ಹಿಂದೆ ಬೆಂಗಳೂರಿನಲ್ಲಿ ದಾಖಲಾಗಿದ್ದ ಮೂಲ ಅಪರಾಧ ಪ್ರಕರಣದ ಎಫ್&zwnj;ಐಆರ್&zwnj;ನಲ್ಲಿ ಪೊಲೀಸರು 'ಬಿ ರಿಪೋರ್ಟ್' (ಮುಕ್ತಾಯ ವರದಿ) ಸಲ್ಲಿಸಿದ್ದರು. ಆ ಎಫ್&zwnj;ಐಆರ್ ಮುಚ್ಚಲ್ಪಟ್ಟ ತಕ್ಷಣವೇ, ನವೆಂಬರ್ 2025 ರಿಂದ ಜಾರಿಯಲ್ಲಿದ್ದ ಇಸಿಐಆರ್ (ECIR) ತನಿಖೆಗೆ ಇದ್ದ ಕಾನೂನಾತ್ಮಕ ಆಧಾರಗಳೇ ಕಣ್ಮರೆಯಾಗಿವೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಹೀಗಿದ್ದರೂ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಮೀರಿ ಇಡಿ ಸಂಸ್ಥಾಪಕರನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ ಮತ್ತು ಇಡಿ ಹೊರಿಸಿದ್ದ ಗಂಭೀರ ಆರೋಪಗಳು&lt;/h2&gt;&lt;p&gt;ಜೂನ್ 2017 ರಲ್ಲಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದುವ ಮೂಲಕ ಆರಂಭವಾದ ಗೇಮ್ಸ್&zwnj;ಕ್ರಾಫ್ಟ್ ಟೆಕ್ನಾಲಜೀಸ್, ಭಾರತದಾದ್ಯಂತ 10 ಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಬೃಹತ್ ಆನ್&zwnj;ಲೈನ್ ಗೇಮಿಂಗ್ ವೇದಿಕೆಯಾಗಿದೆ. ಇದು ರಮ್ಮಿಕಲ್ಚರ್&zwnj;ನಂತಹ ನೈಜ ಹಣದ (Real Money) ಕೌಶಲ್ಯ ಆಧಾರಿತ ಆಟಗಳನ್ನು ಆಡಲು ತಂತ್ರಜ್ಞಾನ ಒದಗಿಸುತ್ತದೆ.&lt;/p&gt;&lt;p&gt;ಈ ವರ್ಷದ ಆರಂಭದಲ್ಲಿ ತೆಲಂಗಾಣದಲ್ಲಿ ದಾಖಲಾಗಿದ್ದ ಮೂರು ಎಫ್&zwnj;ಐಆರ್&zwnj;ಗಳ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡಿತ್ತು. ತನಿಖೆ ವೇಳೆ ಇಡಿ ಹೊರಿಸಿದ್ದ ಪ್ರಮುಖ ಆರೋಪಗಳು ಹೀಗಿವೆ.&lt;/p&gt;&lt;p&gt;ಗ್ರಾಹಕರಿಗೆ ವಂಚನೆ: ಕಂಪನಿಯು ಬೋನಸ್&zwnj;ಗಳು, ಉಲ್ಲೇಖಿತ ಬಹುಮಾನಗಳು ಮತ್ತು ನಗದು ಕೊಡುಗೆಗಳ ಆಮಿಷ ಒಡ್ಡಿ ಗ್ರಾಹಕರಿಂದ ದೊಡ್ಡ ಮೊತ್ತದ ಠೇವಣಿ ಇಡಿಸಿಕೊಳ್ಳುತ್ತಿತ್ತು.&lt;/p&gt;&lt;p&gt;ಹಾಳಾದ ಆಟದ ಫಲಿತಾಂಶ: ಆಟದಲ್ಲಿ ಕೃತಕ ಬುದ್ಧಿಮತ್ತೆಯ ಬಾಟ್&zwnj;ಗಳು (Bots) ಹಾಗೂ ದುರುದ್ದೇಶಪೂರಿತ ಅಲ್ಗಾರಿದಮ್&zwnj;ಗಳನ್ನು ಬಳಸಿ ಫಲಿತಾಂಶಗಳನ್ನು ತಿರುಚಲಾಗುತ್ತಿತ್ತು. ಏಕಪಕ್ಷೀಯ ಆಟ, ಪುನರಾವರ್ತಿತ ಸ್ಕೋರ್ ಮಾದರಿ ಹಾಗೂ ಗ್ರಾಹಕರ ಖಾತೆಗಳನ್ನು ಬಲವಂತವಾಗಿ ಬ್ಲಾಕ್ ಮಾಡುವ ದೂರುಗಳು ಬಂದಿದ್ದವು.&lt;/p&gt;&lt;p&gt;250 ಕೋಟಿ ರೂ. ದುರುಪಯೋಗ: ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (CFO) ರಮೇಶ್ ಪ್ರಭು ಅವರೊಂದಿಗೆ ಸೇರಿ ಸಂಸ್ಥಾಪಕರು ಸುಮಾರು 250 ಕೋಟಿ ರೂಪಾಯಿಗಳ ಅಪರಾಧದ ಆದಾಯವನ್ನು (Proceeds of Crime) ಮ್ಯೂಚುವಲ್ ಫಂಡ್&zwnj;ಗಳು ಹಾಗೂ ಫ್ಯೂಚರ್ಸ್ ಮತ್ತು ಆಪ್ಷನ್ಸ್&zwnj;ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿದ್ದಾರೆ ಎಂದು ಇಡಿ ಆರೋಪಿಸಿತ್ತು.&lt;/p&gt;&lt;h2&gt;ಇಡಿ ತಂತ್ರಕ್ಕೆ ಹೈಕೋರ್ಟ್ ಬ್ರೇಕ್&lt;/h2&gt;&lt;p&gt;ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಈಗಾಗಲೇ ಹೈಕೋರ್ಟ್ ಇಸಿಐಆರ್ ತನಿಖೆಗೆ ತಡೆ ನೀಡಿದ್ದರೂ, ಇಡಿ ಅಧಿಕಾರಿಗಳು ತಡೆಯಾಜ್ಞೆಯನ್ನು ತಪ್ಪಿಸುವ ಪೂರ್ವನಿರ್ಧರಿತ ಸಂಚಿನ ಭಾಗವಾಗಿ ಯಾವುದೇ ಹೊಸ ಪುರಾವೆಗಳಿಲ್ಲದೆ ಸಂಸ್ಥಾಪಕರನ್ನು ಬಂಧಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ಕನಿಷ್ಠ ಸಮನ್ಸ್ ಕೂಡ ನೀಡದೆ ನೇರ ಬಂಧನಕ್ಕೆ ಇಳಿದಿರುವುದು ಕಾನೂನುಬಾಹಿರ ಎಂದು ವಾದಿಸಿದ್ದರು.&lt;/p&gt;&lt;p&gt;ಇದಕ್ಕೆ ಪ್ರತಿಯಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಅವರು, ಕಂಪನಿಯ ವಿರುದ್ಧ ಇನ್ನೂ 6 ಕ್ಕೂ ಹೆಚ್ಚು ಇದೇ ರೀತಿಯ ಎಫ್&zwnj;ಐಆರ್&zwnj;ಗಳು ದಾಖಲಾಗಿವೆ ಮತ್ತು ಹೊಸ ತನಿಖೆಗಳ ಆಧಾರದ ಮೇಲೆ ಇಸಿಐಆರ್ ಅನ್ನು ನವೀಕರಿಸುವ ಹಕ್ಕು ಇಲಾಖೆಗೆ ಇದೆ ಎಂದು ವಾದಿಸಿದರಾದರೂ, ನ್ಯಾಯಾಲಯವು ಬಂಧನದ ಕ್ರಮವನ್ನು ಒಪ್ಪಲಿಲ್ಲ.&lt;/p&gt;&lt;h2&gt;ಆನ್&zwnj;ಲೈನ್ ಗೇಮಿಂಗ್ ವಲಯದ ಮೇಲಿನ ಪ್ರಭಾವ&lt;/h2&gt;&lt;p&gt;ದೇಶದಲ್ಲಿ ಆನ್&zwnj;ಲೈನ್ ಗೇಮಿಂಗ್ ಕಂಪನಿಗಳು ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಕಾನೂನು ನಿಗಾ ಎದುರಿಸುತ್ತಿರುವ ಸೂಕ್ಷ್ಮ ಸಮಯದಲ್ಲಿ ಹೈಕೋರ್ಟ್&zwnj;ನ ಈ ತೀರ್ಪು ಹೊರಬಿದ್ದಿದೆ. ಇದೇ ವರ್ಷದ ಆರಂಭದಲ್ಲಿ, ನೈಜ ಹಣದ ಆನ್&zwnj;ಲೈನ್ ಗೇಮಿಂಗ್ ವಹಿವಾಟಿನ ಮೇಲೆ 28% ಜಿಎಸ್&zwnj;ಟಿ (GST) ವಿಧಿಸುವ ಸರ್ಕಾರದ ತೀರ್ಪಿನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಇದು ತೆರಿಗೆ ಅಧಿಕಾರಿಗಳು ಗೇಮಿಂಗ್ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದಾರಿ ಮಾಡಿಕೊಟ್ಟಿತ್ತು.&lt;/p&gt;&lt;p&gt;ಪ್ರಸ್ತುತ ಹೈಕೋರ್ಟ್ ತೀರ್ಪಿನಿಂದಾಗಿ ಗೇಮ್ಸ್&zwnj;ಕ್ರಾಫ್ಟ್ ಸಂಸ್ಥಾಪಕರಿಗೆ ತಾತ್ಕಾಲಿಕವಾಗಿ ದೊಡ್ಡ ರಿಲೀಫ್ ಸಿಕ್ಕಂತಾಗಿದ್ದು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಆದಾಗ್ಯೂ, ಕಂಪನಿಯ ಮೇಲಿನ ಇಡಿಯ ಹಣ ವರ್ಗಾವಣೆ ತನಿಖೆ ಮುಂದುವರಿಯುವ ಸಾಧ್ಯತೆಯಿದೆ ಮತ್ತು ಹೈಕೋರ್ಟ್ ನೀಡಿದ ಈ ಆದೇಶವನ್ನು ಜಾರಿ ನಿರ್ದೇಶನಾಲಯವು ಶೀಘ್ರದಲ್ಲೇ ಸುಪ್ರೀಂ ಕೋರ್ಟ್&zwnj;ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/major-relief-for-gameskraft-karnataka-high-court-declares-ed-arrest-of-founders-llegal-orders-immediate-release-gdp/articleshow-48q24k6"/>
        </item>
        <item>
            <title><![CDATA[Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ]]></title>
            <link>https://kannada.asianetnews.com/state/karnataka-gruhalakshmi-gruhajyoti-guarantee-schemes-revision-bjp-vs-congress-san-videoshow-q35fte2</link>
            <guid isPermaLink="true">https://kannada.asianetnews.com/state/karnataka-gruhalakshmi-gruhajyoti-guarantee-schemes-revision-bjp-vs-congress-san-videoshow-q35fte2</guid>
            <pubDate>Wed, 17 Jun 2026 16:50:31 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು 'ಗೃಹಲಕ್ಷ್ಮಿ' ಮತ್ತು 'ಗೃಹಜ್ಯೋತಿ' ಯೋಜನೆಗಳನ್ನು ಪರಿಷ್ಕರಿಸಲು ಮುಂದಾಗಿದ್ದು, ಅನರ್ಹರನ್ನು ತೆಗೆದುಹಾಕುವ ಗುರಿ ಹೊಂದಿದೆ. ಈ ಕ್ರಮವು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಟೀಕಿಸುತ್ತಿವೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xag5bpa" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.17):&lt;/strong&gt; ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ &lsquo;ಗೃಹಲಕ್ಷ್ಮಿ&rsquo; ಮತ್ತು &lsquo;ಗೃಹಜ್ಯೋತಿ&rsquo; ಯೋಜನೆಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಅನರ್ಹರಾಗಿದ್ದರೂ ಉಚಿತ ಕರೆಂಟ್ ಹಾಗೂ ಎರಡು ಸಾವಿರ ರೂಪಾಯಿ ಹಣ ಪಡೆಯುತ್ತಿದ್ದವರಿಗೆ ಬ್ರೇಕ್ ಹಾಕಲು ಸರ್ಕಾರ ಅಖಾಡಕ್ಕಿಳಿದಿದೆ.&lt;/p&gt;&lt;p&gt;ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್&lt;/p&gt;&lt;p&gt;ಇದರಿಂದಾಗಿ ರಾಜ್ಯದಲ್ಲಿ ವೋಟ್ ಇದ್ದವರಿಗೆ ಮಾತ್ರವೇ ಗ್ಯಾರಂಟಿ ಸೌಲಭ್ಯ ಸಿಗಲಿದೆಯೇ ಹಾಗೂ ಫಲಾನುಭವಿಗಳು ಮತ್ತೆ ಅರ್ಜಿ ಸಲ್ಲಿಸಬೇಕೇ ಎಂಬ ಆತಂಕ ಶುರುವಾಗಿದೆ. ಈ ಪರಿಷ್ಕರಣೆಯನ್ನು &quot;ತುಘಲಕ್ ದರ್ಬಾರ್&quot; ಎಂದು ಕರೆದಿರುವ ವಿರೋಧ ಪಕ್ಷ ಬಿಜೆಪಿ, ಸರ್ಕಾರ ಯೋಜನೆಗಳನ್ನೇ ನಿಲ್ಲಿಸಲು ಸಂಚು ರೂಪಿಸಿದೆ ಎಂದು ಮುಗಿಬಿದ್ದಿದೆ.&lt;/p&gt;&lt;p&gt;ಆದರೆ, ಈ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, &quot;ಇದು ಹೃದಯದ ಪ್ರೀತಿಯ ಯೋಜನೆ, ಯಾವುದೇ ಕಾರಣಕ್ಕೂ ನಿಲ್ಲಲ್ಲ&quot; ಎಂದು ಸ್ಪಷ್ಟಪಡಿಸಿದ್ದಾರೆ. ಕೇವಲ ತಾಂತ್ರಿಕ ಪರಿಷ್ಕರಣೆ ಮಾತ್ರ ನಡೆಯುತ್ತಿದ್ದು, ಅರ್ಹರಿಗೆ ಯೋಜನೆ ಮುಂದುವರೆಯಲಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.&lt;/p&gt;]]></content:encoded>
            <category>state</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-gruhalakshmi-gruhajyoti-guarantee-schemes-revision-bjp-vs-congress-san-videoshow-q35fte2"/>
        </item>
        <item>
            <title><![CDATA[ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ! ಕೊಂಕಣ ಮಾರ್ಗದಲ್ಲಿ 4 ತಿಂಗಳು ರೈಲ್ವೆ ವೇಳಾಪಟ್ಟಿ ಪರಿಷ್ಕರಣೆ]]></title>
            <link>https://kannada.asianetnews.com/karnataka-districts/indian-railways-konkan-route-alert-palakkad-division-activates-monsoon-timetable-timings-revised-mangaluru-surat-gdp/articleshow-7hz6nu7</link>
            <guid isPermaLink="true">https://kannada.asianetnews.com/karnataka-districts/indian-railways-konkan-route-alert-palakkad-division-activates-monsoon-timetable-timings-revised-mangaluru-surat-gdp/articleshow-7hz6nu7</guid>
            <pubDate>Wed, 17 Jun 2026 16:29:18 +0530</pubDate>
            <description><![CDATA[ಮಳೆಗಾಲದ ಸುರಕ್ಷತಾ ಕ್ರಮವಾಗಿ ಪಾಲಕ್ಕಾಡ್ ರೈಲ್ವೆ ವಿಭಾಗವು ಪಶ್ಚಿಮ ಕರಾವಳಿ ಮತ್ತು ಕೊಂಕಣ ಮಾರ್ಗದ ಆಯ್ದ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಜೂನ್ 15 ರಿಂದ ಅಕ್ಟೋಬರ್ 20 ರವರೆಗೆ ಜಾರಿಯಲ್ಲಿರುವ ಈ ಬದಲಾವಣೆಯು, ಪ್ರಮುಖ ರೈಲುಗಳಾದ ಕೊಯಮತ್ತೂರು-ಹಿಸಾರ್ ಎಕ್ಸ್&zwnj;ಪ್ರೆಸ್ ಮತ್ತು ಸೂರತ್-ಮಂಗಳೂರು ಎಕ್ಸ್&zwnj;ಪ್ರೆಸ್ ಮೇಲೆ ಪರಿಣಾಮ ಬೀರಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j2dpeh7h5zc3y5tkpx4agj9v,imgname-Konkan-Railway--1720594154737.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮಳೆಗಾಲದ ಅವಧಿಯಲ್ಲಿ ಪಶ್ಚಿಮ ಕರಾವಳಿ ಹಾಗೂ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲುಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಕ್ಕಾಡ್ ರೈಲ್ವೆ ವಿಭಾಗವು ಮಹತ್ವದ ನಿರ್ಧಾರ ಕೈಗೊಂಡಿದೆ. ಮಳೆಗಾಲದ ವಿಶೇಷ ವೇಳಾಪಟ್ಟಿಯ ವ್ಯವಸ್ಥೆಯಡಿ (Monsoon Timetable) ಆಯ್ದ ಪ್ರಮುಖ ರೈಲುಗಳ ಸಂಚಾರದ ಸಮಯವನ್ನು ಪರಿಷ್ಕರಿಸಲಾಗಿದೆ. ಈ ಪರಿಷ್ಕೃತ ನೂತನ ವೇಳಾಪಟ್ಟಿಯು ಜೂನ್ 15 ರಿಂದ ಜಾರಿಗೆ ಬಂದಿದ್ದು, ಮುಂಬರುವ ಅಕ್ಟೋಬರ್ 20 ರವರೆಗೆ ಚಾಲ್ತಿಯಲ್ಲಿರಲಿದೆ ಎಂದು ದಕ್ಷಿಣ ರೈಲ್ವೆಯ ಪ್ರಕಟಣೆ ತಿಳಿಸಿದೆ.&lt;/p&gt;&lt;p&gt;ಭಾರೀ ಮಳೆಯ ಸಂದರ್ಭದಲ್ಲಿ ಕರಾವಳಿ ವಲಯ ಮತ್ತು ಕೊಂಕಣ ಮಾರ್ಗಗಳಲ್ಲಿ ಭೂಕುಸಿತ ಹಾಗೂ ಹಳಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ರೈಲುಗಳ ವೇಗಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಈ ಕಾರಣದಿಂದಾಗಿ ಪ್ರಯಾಣಿಕರಿಗೆ ಯಾವುದೇ ಗೊಂದಲವಾಗದಂತೆ ತಡೆಯಲು ರೈಲುಗಳ ಹೊರಡುವಿಕೆ ಮತ್ತು ತಲುಪುವ ಸಮಯದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿದೆ.&lt;/p&gt;&lt;h2&gt;ಪ್ರಮುಖ ರೈಲುಗಳ ಪರಿಷ್ಕೃತ ವೇಳಾಪಟ್ಟಿ ವಿವರ:&lt;/h2&gt;&lt;h3&gt;1. ಕೊಯಮತ್ತೂರು ಜಂಕ್ಷನ್ - ಹಿಸಾರ್ ವೀಕ್ಲಿ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22476)&lt;/h3&gt;&lt;p&gt;ಈ ವಾರಕ್ಕೊಮ್ಮೆ ಸಂಚರಿಸುವ ಸೂಪರ್&zwnj;ಫಾಸ್ಟ್ ರೈಲು ಬಿಕಾನೇರ್ ಜಂಕ್ಷನ್&zwnj;ನಿಂದ ಈ ಹಿಂದೆ ಹೊರಡುತ್ತಿದ್ದ ನಿಗದಿತ ಸಮಯ ಬೆಳಿಗ್ಗೆ 10.30 ರ ಬದಲಾಗಿ, ಇನ್ನುಮುಂದೆ ಬೆಳಿಗ್ಗೆ 10.50 ಕ್ಕೆ (20 ನಿಮಿಷ ತಡವಾಗಿ) ಹೊರಡಲಿದೆ.&lt;/p&gt;&lt;h3&gt;2. ಸೂರತ್ - ಮಂಗಳೂರು ಜಂಕ್ಷನ್ ದ್ವಿ-ವಾರದ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 19057)&lt;/h3&gt;&lt;p&gt;ಮಳೆಗಾಲದ ಹಿನ್ನೆಲೆಯಲ್ಲಿ ಈ ರೈಲಿನ ವಿವಿಧ ನಿಲ್ದಾಣಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಈ ಕೆಳಗಿನಂತೆ ಮುಂಚಿತಗೊಳಿಸಲಾಗಿದೆ:&lt;/p&gt;&lt;p&gt;ಉದ್ನಾ ಜಂಕ್ಷನ್: ಸಂಜೆ 7.55 ರ ಬದಲು ಸಂಜೆ 7.38 ಕ್ಕೆ ಆಗಮನ, ರಾತ್ರಿ 8.00 ರ ಬದಲು ರಾತ್ರಿ 7.40 ಕ್ಕೆ ನಿರ್ಗಮನ.&lt;/p&gt;&lt;p&gt;ವಲ್ಸಾದ್: ರಾತ್ರಿ 8.50 ರ ಬದಲು ರಾತ್ರಿ 8.35 ಕ್ಕೆ ಆಗಮನ,ರಾತ್ರಿ 8.52 ರ ಬದಲು ರಾತ್ರಿ 8.37 ಕ್ಕೆ ನಿರ್ಗಮನ.&lt;/p&gt;&lt;p&gt;ವಾಪಿ: ರಾತ್ರಿ 9.12 ರ ಬದಲು ರಾತ್ರಿ 8.53 ಕ್ಕೆ ಆಗಮನ, ರಾತ್ರಿ 9.14 ರ ಬದಲು ರಾತ್ರಿ 8.55 ಕ್ಕೆ ನಿರ್ಗಮನ.&lt;/p&gt;&lt;p&gt;ಪಾಲ್ಘರ್: ರಾತ್ರಿ 10.19 ರ ಬದಲು ರಾತ್ರಿ 10.02 ಕ್ಕೆ ಆಗಮನ, ರಾತ್ರಿ 10.21 ರ ಬದಲು ರಾತ್ರಿ 10.04 ಕ್ಕೆ ನಿರ್ಗಮನ.&lt;/p&gt;&lt;p&gt;ವಸಾಯಿ ರಸ್ತೆ: ರಾತ್ರಿ 11.10 ರ ಬದಲು ರಾತ್ರಿ 11.00 ಕ್ಕೆ ಆಗಮನ, ರಾತ್ರಿ 11.15 ರ ಬದಲು ರಾತ್ರಿ 11.05 ಕ್ಕೆ ನಿರ್ಗಮನ.&lt;/p&gt;&lt;p&gt;ರೋಹಾ: ಬೆಳಿಗ್ಗೆ 2.20 ರ ಬದಲು ಬೆಳಿಗ್ಗೆ 1.55 ಕ್ಕೆ ಆಗಮನ, ಬೆಳಿಗ್ಗೆ 2.25 ರ ಬದಲು ಬೆಳಿಗ್ಗೆ 2.00 ಕ್ಕೆ ನಿರ್ಗಮನ.&lt;/p&gt;&lt;p&gt;ಮಡಗಾಂವ್: ಬೆಳಿಗ್ಗೆ 2.46 ರ ಬದಲು ಬೆಳಿಗ್ಗೆ 2.30 ಕ್ಕೆ ಆಗಮನ, ಬೆಳಿಗ್ಗೆ 2.48 ರ ಬದಲು ಬೆಳಿಗ್ಗೆ 2.32 ಕ್ಕೆ ನಿರ್ಗಮನ.&lt;/p&gt;&lt;h3&gt;3. ಮಂಗಳೂರು ಜಂಕ್ಷನ್ - ಸೂರತ್ ದ್ವಿ-ವಾರದ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 19058)&lt;/h3&gt;&lt;p&gt;ಅದೇ ರೀತಿ, ಮಂಗಳೂರಿನಿಂದ ಹೊರಡುವ ಮರಳಿ ಬರುವ ಪ್ರಯಾಣದ ರೈಲಿನ ವೇಳಾಪಟ್ಟಿಯಲ್ಲೂ ಮಹತ್ವದ ಬದಲಾವಣೆಗಳಾಗಿದ್ದು, ಪ್ರಮುಖ ನಿಲ್ದಾಣಗಳ ಪರಿಷ್ಕೃತ ಸಮಯ ಹೀಗಿದೆ.&lt;/p&gt;&lt;p&gt;ರೋಹಾ: ಮಧ್ಯಾಹ್ನ 3.35 ರ ಬದಲು ಮಧ್ಯಾಹ್ನ 3.40 ಕ್ಕೆ ಆಗಮನ; ಮಧ್ಯಾಹ್ನ 3.40 ರ ಬದಲು ಮಧ್ಯಾಹ್ನ 3.45 ಕ್ಕೆ ನಿರ್ಗಮನ.&lt;/p&gt;&lt;p&gt;ವಸಾಯಿ ರಸ್ತೆ: ಸಂಜೆ 7.10 ರ ಬದಲು ಸಂಜೆ 7.00 ಕ್ಕೆ ಆಗಮನ; ಸಂಜೆ 7.15 ರ ಬದಲು ಸಂಜೆ 7.05 ಕ್ಕೆ ನಿರ್ಗಮನ.&lt;/p&gt;&lt;p&gt;ಪಾಲ್ಘರ್: ಸಂಜೆ 7.42 ರ ಬದಲು ರಾತ್ರಿ 8.03 ಕ್ಕೆ ಆಗಮನ; ಸಂಜೆ 7.44 ರ ಬದಲು ರಾತ್ರಿ 8.05 ಕ್ಕೆ ನಿರ್ಗಮನ.&lt;/p&gt;&lt;p&gt;ವಾಪಿ: ರಾತ್ರಿ 8.55 ರ ಬದಲು ರಾತ್ರಿ 10.00 ಕ್ಕೆ ಆಗಮನ; ರಾತ್ರಿ 8.57 ರ ಬದಲು ರಾತ್ರಿ 10.02 ಕ್ಕೆ ನಿರ್ಗಮನ.&lt;/p&gt;&lt;p&gt;ವಲ್ಸಾದ್: ರಾತ್ರಿ 9.18 ರ ಬದಲು ರಾತ್ರಿ 10.25 ಕ್ಕೆ ಆಗಮನ; ರಾತ್ರಿ 9.20 ರ ಬದಲು ರಾತ್ರಿ 10.27 ಕ್ಕೆ ನಿರ್ಗಮನ.&lt;/p&gt;&lt;p&gt;ಉದ್ನಾ ಜಂಕ್ಷನ್: ರಾತ್ರಿ 11.20 ರ ಬದಲು ರಾತ್ರಿ 11.13 ಕ್ಕೆ ಆಗಮನ; ರಾತ್ರಿ 11.25 ರ ಬದಲು ರಾತ್ರಿ 11.15 ಕ್ಕೆ ನಿರ್ಗಮನ.&lt;/p&gt;&lt;h2&gt;ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಪ್ರಮುಖ ಸೂಚನೆ&lt;/h2&gt;&lt;p&gt;ಮಳೆಗಾಲದ ಸುರಕ್ಷತೆಯ ದೃಷ್ಟಿಯಿಂದ ಈ ಹಠಾತ್ ಬದಲಾವಣೆಗಳು ಅನಿವಾರ್ಯವಾಗಿದ್ದು, ಕೊಂಕಣ ಹಾಗೂ ಕರಾವಳಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಸಾರ್ವಜನಿಕರು ತಮ್ಮ ಪ್ರಯಾಣವನ್ನು ಆರಂಭಿಸುವ ಮುನ್ನ ಅಧಿಕೃತ ರೈಲ್ವೆ ವಿಚಾರಣಾ ಸರಣಿ (NTES ಆಪ್) ಅಥವಾ ಹತ್ತಿರದ ನಿಲ್ದಾಣಗಳನ್ನು ಸಂಪರ್ಕಿಸಿ, ರೈಲುಗಳ ನಿಖರವಾದ ಆಗಮನ ಮತ್ತು ನಿರ್ಗಮನದ ಸಮಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪಾಲಕ್ಕಾಡ್ ರೈಲ್ವೆ ವಿಭಾಗವು ತನ್ನ ಪ್ರಕಟಣೆಯಲ್ಲಿ ವಿಶೇಷವಾಗಿ ವಿನಂತಿಸಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/indian-railways-konkan-route-alert-palakkad-division-activates-monsoon-timetable-timings-revised-mangaluru-surat-gdp/articleshow-7hz6nu7"/>
        </item>
        <item>
            <title><![CDATA[Karnataka weather: ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ; ಮುಂಗಾರು ಕೊರತೆ ಸರಿದೂಗಿಸುತ್ತಾ 7 ದಿನದ ಮಳೆ!]]></title>
            <link>https://kannada.asianetnews.com/gallery/state/karnataka-weather-forecast-bay-of-bengal-another-depression-7-day-rains-monsoon-deficit-paxslno</link>
            <guid isPermaLink="true">https://kannada.asianetnews.com/gallery/state/karnataka-weather-forecast-bay-of-bengal-another-depression-7-day-rains-monsoon-deficit-paxslno</guid>
            <pubDate>Wed, 17 Jun 2026 16:24:11 +0530</pubDate>
            <description><![CDATA[ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದರೂ ಮಳೆ ಕೊರತೆ ಇದ್ದು, ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಕರಾವಳಿ ಮತ್ತು ಒಳನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದ್ದರೆ, ಉತ್ತರ ಒಳನಾಡಿನಲ್ಲಿ ಬಿಸಿಲಿನ ತಾಪ ಮುಂದುವರಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktgqqedqgydnprvbnmr8vpkv,imgname-karnataka-rain-red-alert--3--1780825700791.jpg" type="image/jpeg" height="390" width="690"/>
            <content:encoded><![CDATA[ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದರೂ ಮಳೆ ಕೊರತೆ ಇದ್ದು, ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಕರಾವಳಿ ಮತ್ತು ಒಳನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದ್ದರೆ, ಉತ್ತರ ಒಳನಾಡಿನಲ್ಲಿ ಬಿಸಿಲಿನ ತಾಪ ಮುಂದುವರಿದಿದೆ.&lt;img&gt;&lt;p&gt;&lt;strong&gt;ಬೆಂಗಳೂರು (ಜೂ.17): ರಾ&lt;/strong&gt;ಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳ ಚಲನೆ ಚುರುಕುಗೊಂಡಿದ್ದರೂ, ವಾಡಿಕೆಯ ಮಳೆಗಿಂತ ಕೊರತೆಯನ್ನು ಅನುಭವಿಸಲಾಗಿದೆ. ಇದೀಗ ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯಿಂದ ಕೇರಳದವರೆಗೆ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮವಾಗಿ ಮುಂದಿನ ಕೆಲವು ದಿನಗಳಲ್ಲಿ ರಾಜ್ಯದಾದ್ಯಂತ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆಯಿದೆ. ಜೂನ್ 17ರ ಹವಾಮಾನ ವರದಿಯ ಪ್ರಕಾರ, ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಮುಂಗಾರು ಮಾರುತಗಳ ಸ್ಥಿತಿ:&lt;/strong&gt;&lt;/p&gt;&lt;p&gt;ನೈಋತ್ಯ ಮುಂಗಾರು ಮಾರುತಗಳು ಸದ್ಯ ಹರ್ನೈ, ಸೋಲಾಪುರ, ಹೈದರಾಬಾದ್ ಮತ್ತು ಭದ್ರಾಚಲಂ ಮೂಲಕ ಹಾದು ಹೋಗುತ್ತಿವೆ. ಮುಂದಿನ 4-5 ದಿನಗಳಲ್ಲಿ ತೆಲಂಗಾಣ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಕೆಲವು ಭಾಗಗಳಿಗೆ ಮುಂಗಾರು ಮತ್ತಷ್ಟು ವ್ಯಾಪಿಸಲು ಪೂರಕ ವಾತಾವರಣವಿದೆ. ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಿಂದ ಕೇರಳದವರೆಗೆ ವಾಯುಭಾರ ಕುಸಿತ ಕಂಡುಬಂದಿದ್ದು, ಇದು ಮಳೆಗೆ ಪೂರಕವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಒಳನಾಡಿನಲ್ಲಿ ಸುಡುವ ಬಿಸಿಲು:&lt;/strong&gt;&lt;/p&gt;&lt;p&gt;ಒಂದೆಡೆ ಮಳೆಯ ಮುನ್ಸೂಚನೆ ಇದ್ದರೆ, ಮತ್ತೊಂದೆಡೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲ ಧಗೆ ಏರಿಕೆಯಾಗಿದೆ. ವಾಸ್ತವಿಕ ತಾಪಮಾನವು ಸಾಮಾನ್ಯಕ್ಕಿಂತ 5.1 ಡಿಗ್ರಿ ಸೆಲ್ಸಿಯಸ್&zwnj;ಗಿಂತಲೂ ಅಧಿಕ ದಾಖಲಾಗಿದ್ದು, ಜನರು ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲೂ ತಾಪಮಾನದಲ್ಲಿ 3.1 ರಿಂದ 5 ಡಿಗ್ರಿಯಷ್ಟು ಏರಿಕೆ ಕಂಡುಬಂದಿದೆ.&lt;/p&gt;&lt;img&gt;&lt;p&gt;&lt;strong&gt;7 ದಿನಗಳ ಮಳೆ ಮುನ್ಸೂಚನೆ:&lt;/strong&gt;&lt;/p&gt;&lt;p&gt;&lt;strong&gt;ಕರಾವಳಿ ಕರ್ನಾಟಕ: &lt;/strong&gt;ಮುಂದಿನ ಏಳು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೂನ್ 20 ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.&lt;/p&gt;&lt;p&gt;&lt;strong&gt;ಉತ್ತರ ಒಳನಾಡು:&lt;/strong&gt; ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಜೂನ್ 17 ರಿಂದಲೇ ಮಳೆ ಆರಂಭವಾಗಲಿದೆ. ವಿಶೇಷವಾಗಿ ಜೂನ್ 20 ಮತ್ತು 21 ರಂದು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಯಚೂರು, ವಿಜಯಪುರ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ಇದೆ.&lt;/p&gt;&lt;p&gt;&lt;strong&gt;ದಕ್ಷಿಣ ಒಳನಾಡು: &lt;/strong&gt;ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಹಾಸನ, ಶಿವಮೊಗ್ಗ, ತುಮಕೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಇಲ್ಲಿ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ಇರಲಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರಿಗರಿಗೆ ಗುಡ್ ನ್ಯೂಸ್:&lt;/strong&gt;&lt;/p&gt;&lt;p&gt;ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ನಗರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 32 ಡಿಗ್ರಿ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ. ಸಂಜೆ ಅಥವಾ ರಾತ್ರಿಯ ವೇಳೆ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;img&gt;&lt;p&gt;ಸಾರ್ವಜನಿಕರಿಗೆ ಎಚ್ಚರಿಕೆ:&lt;/p&gt;&lt;p&gt;ಗುಡುಗು ಮಿಂಚು ಕಾಣಿಸಿಕೊಂಡಾಗ ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಒಳನಾಡಿನ ರೈತರು ಬಲವಾದ ಗಾಳಿ ಬೀಸುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅತೀ ಭಾರಿ ಮಳೆಯ ಮುನ್ಸೂಚನೆ ಸದ್ಯಕ್ಕಿಲ್ಲದಿದ್ದರೂ, ಗಾಳಿಯ ವೇಗವು ಜನಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಡಾ. ಎನ್. ಪುವಿಯರಸನ್ (ವಿಜ್ಞಾನಿ 'ಎಫ್' ಮತ್ತು ಮುಖ್ಯಸ್ಥರು, ಹವಾಮಾನ ಕೇಂದ್ರ) ತಿಳಿಸಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-forecast-bay-of-bengal-another-depression-7-day-rains-monsoon-deficit-paxslno"/>
        </item>
        <item>
            <title><![CDATA[Dharmasthala Case: ಪ್ರಕಾಶ್ ರಾಜ್‌ಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ - ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹ]]></title>
            <link>https://kannada.asianetnews.com/state/actor-prakash-raj-notice-demand-dharmasthala-conspiracy-case-vasant-giliyar/articleshow-w2vs3l8</link>
            <guid isPermaLink="true">https://kannada.asianetnews.com/state/actor-prakash-raj-notice-demand-dharmasthala-conspiracy-case-vasant-giliyar/articleshow-w2vs3l8</guid>
            <pubDate>Wed, 17 Jun 2026 15:55:38 +0530</pubDate>
            <description><![CDATA[&lt;p&gt;ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್&zwnj;ಐಟಿ ಮುಖ್ಯಸ್ಥರೊಂದಿಗೆ ಮಾತನಾಡಿದ್ದನ್ನು ನಟ ಪ್ರಕಾಶ್ ರಾಜ್ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯು ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvahnhr9r2c55q2c0etg7q88,imgname-vasanth-giliyar-vs-prakash-raj-1781691762439.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.17): ಧ&lt;/strong&gt;ರ್ಮಸ್ಥಳದ ವಿರುದ್ಧ ನಡೆದಿದೆ ಎನ್ನಲಾದ ವ್ಯವಸ್ಥಿತ ಷಡ್ಯಂತ್ರದ ಪ್ರಕರಣದ ತನಿಖೆಯ ವೇಳೆ ನಟ ಪ್ರಕಾಶ್ ರಾಜ್ ಅವರು ಈ ಪ್ರಕರಣದ ಸಂಬಂಧ ಎಸ್&zwnj;ಐಟಿ (SIT) ಮುಖ್ಯಸ್ಥರೊಂದಿಗೆ ಮಾತನಾಡಿದ್ದನ್ನು ಒಪ್ಪಿಕೊಂಡ ಬೆನ್ನಲ್ಲೇ, ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಮುಖಂಡ ವಸಂತ ಗಿಳಿಯಾರ್ ಆಗ್ರಹ ಮಾಡಿದ್ದಾರೆ.&lt;/p&gt;&lt;p&gt;ಬೆಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ 'ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ'ಯ ಮುಖಂಡ ವಸಂತ್ ಗಿಳಿಯಾರ್ ಮಾತನಾಡಿ, 'ಧರ್ಮಸ್ಥಳದ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು, ಅದು ಇಂದು ನಿಜವಾಗಿದೆ. ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಎಲ್ಲವೂ ಬಯಲಾಗಿದೆ. ಪ್ರಕಾಶ್ ರಾಜ್ ಅವರ ಹೆಸರೂ ಅಲ್ಲಿ ಉಲ್ಲೇಖವಾಗಿತ್ತು. ಇಂದು ಖುದ್ದು ಪ್ರಕಾಶ್ ರಾಜ್ ಅವರೇ ಎಸ್&zwnj;ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಜೊತೆ ಚರ್ಚಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು' ಎಂದು ಒತ್ತಾಯಿಸಿದರು.&lt;/p&gt;&lt;h2&gt;'ಮಾಸ್ಕ್ ಮ್ಯಾನ್' ಚಿನ್ನಯ್ಯನ ನಿಗೂಢ ನಡವಳಿಕೆ:&lt;/h2&gt;&lt;p&gt;ಈ ಪ್ರಕರಣದ ಪ್ರಮುಖ ವ್ಯಕ್ತಿ ಚಿನ್ನಯ್ಯನ ಬಗ್ಗೆ ಗಂಭೀರ ಆರೋಪ ಮಾಡಿದ ಸಮಿತಿ ಮುಖಂಡರು, 'ಚಿನ್ನಯ್ಯ ಧರ್ಮಸ್ಥಳದಲ್ಲಿ ಮಹಿಳೆಯರನ್ನು ಹೂತು ಹಾಕಿದ್ದೇನೆ ಎಂದು ತೋರಿಸಿದ ಸ್ಥಳದಲ್ಲಿ ಗುಂಡಿ ಅಗಿಯುವಾಗಲೂ ಹೆಡ್&zwnj;ಫೋನ್ ಹಾಕಿಕೊಂಡಿದ್ದನು. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದೇ ಹೆಡ್&zwnj;ಫೋನ್ ಮುಚ್ಚಿಡಲು. ಅವನಿಗೆ ಬೇರೆ ಯಾರೋ ವ್ಯಕ್ತಿಗಳು ಹೊರಗಿನಿಂದ ಡೈರೆಕ್ಷನ್ ನೀಡುತ್ತಿದ್ದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಪ್ರಕರಣದಲ್ಲಿ ಚಿನ್ನಯ್ಯನಿಗೆ 50 ಲಕ್ಷ ರೂಪಾಯಿ ನೀಡುವ ಡೀಲ್ ಕುದುರಿತ್ತು ಎಂಬ ಮಾಹಿತಿಯಿದೆ. ಆದ್ದರಿಂದ ಚಿನ್ನಯ್ಯನಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಬೇಕು' ಎಂದು ಆಗ್ರಹಿಸಿದರು.&lt;/p&gt;&lt;p&gt;ಸರ್ಕಾರದ ಮೇಲೆ ಒತ್ತಡ:&lt;/p&gt;&lt;p&gt;ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ಹೀಗಾಗಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ವೀರೇಂದ್ರ ಹೆಗ್ಗಡೆ ಅವರಂತಹ ಗೌರವಾನ್ವಿತ ವ್ಯಕ್ತಿಗಳ ವಿರುದ್ಧ ಷಡ್ಯಂತ್ರ ನಡೆಸಿದವರ ಮುಖವಾಡ ಕಳಚಬೇಕು. ಸರ್ಕಾರವು ಈ ತನಿಖೆಯ ಮಧ್ಯಂತರ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಸಂತ್ ಗಿಳಿಯಾರ್ ಆಗ್ರಹಿಸಿದ್ದಾರೆ.&lt;/p&gt;&lt;p&gt;ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಎಸ್&zwnj;ಐಟಿ ತನಿಖೆಯಿಂದ ಹೊರಬರಬೇಕಿದೆ. ಪ್ರಕಾಶ್ ರಾಜ್ ಅವರ ಹೇಳಿಕೆಗಳು ಈ ತನಿಖೆಗೆ ಹೊಸ ಆಯಾಮ ನೀಡಿದ್ದು, ಮುಂದಿನ ದಿನಗಳಲ್ಲಿ ತನಿಖಾ ಸಂಸ್ಥೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/actor-prakash-raj-notice-demand-dharmasthala-conspiracy-case-vasant-giliyar/articleshow-w2vs3l8"/>
        </item>
        <item>
            <title><![CDATA[Prakash Raj: ಸತ್ಯ ಹೇಳಿದ್ರೆ ಚಿನ್ನಯ್ಯನಿಗೆ ತಬ್ಬಿಕೊಳ್ತೆನೆ ಅಂತಾ ಹೇಳಿದ್ದು ನಿಜ, ಆದರೆ..]]></title>
            <link>https://kannada.asianetnews.com/karnataka-districts/prakash-raj-press-meet-dharmasthala-conspiracy-case-chinnaiah-audio-viral-san/articleshow-bgi60q2</link>
            <guid isPermaLink="true">https://kannada.asianetnews.com/karnataka-districts/prakash-raj-press-meet-dharmasthala-conspiracy-case-chinnaiah-audio-viral-san/articleshow-bgi60q2</guid>
            <pubDate>Wed, 17 Jun 2026 12:52:56 +0530</pubDate>
            <description><![CDATA[&lt;p&gt;ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರದಲ್ಲಿ ತಮ್ಮ ಹೆಸರು ತಳುಕು ಹಾಕಿದ್ದಕ್ಕೆ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಬಂದ ಫೋನ್ ಕರೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾಗಿ ಸ್ಪಷ್ಟಪಡಿಸಿದ ಅವರು, ತಮ್ಮ ಹೋರಾಟ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಮಾತ್ರ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva75ek722wrw6hr06vgva4c,imgname-prakash-raj-dharmasthala-controversy-and-chinnaiah-1781680749158.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.17): &lt;/strong&gt;'ನಾನು ಸದಾ ದೇಶದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಪ್ರಶ್ನೆ ಮಾಡುತ್ತೇನೆ. ಆದರೆ ಬಿಜೆಪಿ ವಿರುದ್ಧ ಮಾತನಾಡುತ್ತೇನೆ ಎಂಬ ಒಂದೇ ಕಾರಣಕ್ಕೆ, ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರದ ಕೇಸಿನಲ್ಲಿ ನನ್ನ ಹೆಸರನ್ನು ಯಾಕೆ ತಳುಕು ಹಾಕಲಾಗುತ್ತಿದೆ?' ಎಂದು ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಚಿನ್ನಯ್ಯನಿಗೆ ನಾನು, 'ನೀನು ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್&zwnj;ಐಟಿ ಮುಂದೆ ಹೋಗಿ ಹೇಳು. ಸತ್ಯ ಹೇಳಿದರೆ ಊರೇ ಕೊಂಡಾಡುತ್ತೆ. ನಾನು ನಿನ್ನ ತಬ್ಬಿಕೊಳ್ತಿನೀ ಅಂತ ಹೇಳಿದ್ದೆ' ಎಂದೂ ತಿಳಿಸಿದ್ದಾರೆ/&lt;/p&gt;&lt;p&gt;ಪ್ರೆಸ್ ಕ್ಲಬ್&zwnj;ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಅವರು ತಮಗೆ ಹಾಗೂ ಈ ಪ್ರಕರಣದ ಪ್ರಮುಖ ವ್ಯಕ್ತಿ ಎನ್ನಲಾದ ಚಿನ್ನಯ್ಯನಿಗೆ ಇರುವ ಲಿಂಕ್ ಏನು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;&lt;/p&gt;&lt;h2&gt;&lt;strong&gt;&lsquo;ಮಾರಿಕೊಂಡ ಮಾಧ್ಯಮಗಳು&rsquo; ಪದದ ಬಳಕೆಗೆ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ಸುದ್ದಿಗೋಷ್ಠಿಯ ಆರಂಭದಲ್ಲೇ ಮಾಧ್ಯಮಗಳ ಆಹ್ವಾನ ಪತ್ರಿಕೆಯ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸಾಮಾಜಿಕ ಜಾಲತಾಣಗಳಲ್ಲಿ ಪ್ರೆಸ್ ಮೀಟ್ ಬಗ್ಗೆ ಪೋಸ್ಟ್ ಹಾಕಿದಾಗ 'ಮಾರಿಕೊಂಡ ಮಾಧ್ಯಮಗಳು' ಎಂಬ ಪದ ಬಳಕೆಯಾಗಿದ್ದು ನಿಜ. ಆದರೆ, ಪ್ರೆಸ್ ಕ್ಲಬ್&zwnj;ಗೆ ಅಧಿಕೃತವಾಗಿ ಕಳುಹಿಸಿದ ಇನ್ವಿಟೇಶನ್&zwnj;ನಲ್ಲಿ ನಾನು ಆ ಪದ ಬಳಸಿಲ್ಲ. ಅಲ್ಲಿ ನಾನು ಮಾಧ್ಯಮದವರನ್ನು ನಮ್ಮ ಬಂಧುಗಳು, ಆತ್ಮೀಯರು ಎಂದೇ ಕರೆದಿದ್ದೇನೆ. ನನಗೆ ಕೆಲವು ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿದ್ದ ಕಾರಣ ಈ ಸುದ್ದಿಗೋಷ್ಠಿ ಕರೆದಿದ್ದೇನೆ ಎಂದರು.&lt;/p&gt;&lt;h2&gt;&lt;strong&gt;ಚಿನ್ನಯ್ಯ ಮತ್ತು ಗಿರೀಶ್ ಮಟ್ಟಣ್ಣನವರ್ ಲಿಂಕ್ ಬಿಚ್ಚಿಟ್ಟ ನಟ!&lt;/strong&gt;&lt;/h2&gt;&lt;p&gt;&quot;ಮಾಧ್ಯಮಗಳಲ್ಲಿ ಚಿನ್ನಯ್ಯ ಎಂಬಾತ ನನ್ನ ಹೆಸರು ಹೇಳಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆತ ನನ್ನ ಹೆಸರು ಹೇಳಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಕೇಳಿ ಚಿನ್ನಯ್ಯ ಮಾತನಾಡಿದ್ದಾನೆ. ಈ ಪ್ರಕರಣದಲ್ಲಿ 200 ಕೋಟಿ ರೂಪಾಯಿ ಹಗರಣ, ಪೇಮೆಂಟ್ ವ್ಯವಹಾರ ನಡೆದಿದೆ ಎಂದು ಚಿನ್ನಯ್ಯ ಹೇಳಿದ್ದಾನಂತೆ. ಕೆಲವು ಮಾಧ್ಯಮಗಳಂತೂ ಈ ಷಡ್ಯಂತ್ರದಲ್ಲಿ ಪ್ರಕಾಶ್ ರಾಜ್ ಕೈವಾಡ ಇದೆ ಎಂದು ಅವರೇ ಸ್ವತಃ ಡಿಕ್ಲೇರ್ ಮಾಡಿಬಿಟ್ಟಿದ್ದಾರೆ. ಆದರೆ ನಾನು ಇದುವರೆಗೂ ಚಿನ್ನಯ್ಯ ಅಥವಾ ಮಟ್ಟಣ್ಣನವರ್ ಸೇರಿ ಯಾರನ್ನೂ ಖುದ್ದಾಗಿ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;&lsquo;ಮಾಸ್ಕ್ ಮ್ಯಾನ್&rsquo; ಕಾಲ್ ಮತ್ತು ತಮಿಳು ಆಡಿಯೋ ರಹಸ್ಯ!&lt;/strong&gt;&lt;/h2&gt;&lt;p&gt;ಪ್ರಕರಣದ ಹಿನ್ನೆಲೆಯನ್ನು ಸಂಪೂರ್ಣವಾಗಿ ವಿವರಿಸಿದ ಪ್ರಕಾಶ್ ರಾಜ್, ಆಗ ಹಿರಿಯ ಪೊಲೀಸ್ ಅಧಿಕಾರಿ ಮೊಹಾಂತಿ ಅವರು ಇನ್ನೂ ಚಾರ್ಜ್ ತಗೊಂಡಿರಲಿಲ್ಲ. ಆ ಸಮಯದಲ್ಲಿ ನನಗೆ ಗಿರೀಶ್ ಮಟ್ಟಣ್ಣನವರ್ ಕಡೆಯಿಂದ ಒಂದು ಫೋನ್ ಬಂತು. 'ಮಾಸ್ಕ್ ಮ್ಯಾನ್' (ಚಿನ್ನಯ್ಯ) ನಿಮ್ಮ ಹತ್ತಿರ ಮಾತನಾಡಬೇಕಂತೆ ಎಂದರು. ನಾನು ಫೋನ್ ಕೊಡು ಎಂದಾಗ ಆತ ತಮಿಳಿನಲ್ಲಿ ಮಾತನಾಡಲು ಶುರು ಮಾಡಿದ. ಫೋನ್&zwnj;ನಲ್ಲಿ ಆತ, 'ಅಣ್ಣ ನನಗೆ ಬಹಳ ವಿಷಯ ಗೊತ್ತು! ನಾನು ನಿಮ್ಮನ್ನು ಭೇಟಿ ಆಗಬೇಕು ಮತ್ತು ಸಾಕಷ್ಟು ವಿಚಾರಗಳನ್ನು ಹೇಳಿಕೊಳ್ಳಬೇಕು. ನನಗೆ ಭಯ ಆಗ್ತಾ ಇದೆ, ನಿಮ್ಮ ಸಪೋರ್ಟ್ ಬೇಕು' ಎಂದು ಅಳಲು ತೋಡಿಕೊಂಡಿದ್ದ.&lt;/p&gt;&lt;p&gt;ಆಗ ನಾನು ಅವನಿಗೆ ಫೋನ್&zwnj;ನಲ್ಲಿ ಮಾತನಾಡಬೇಡ, ನಿನ್ನ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸು ಅಂದೆ. ಅವನು ವಾಯ್ಸ್ ರೆಕಾರ್ಡ್ ಮಾಡಿ ಕಳಿಸಿದ ತಕ್ಷಣ, ನಾನು ಪೊಲೀಸ್ ಅಧಿಕಾರಿ ಮೊಹಾಂತಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಮತ್ತು ಆ ವಾಯ್ಸ್ ಮೆಸೇಜ್ ಅನ್ನು ಪೊಲೀಸರಿಗೆ ಕಳಿಸಿಕೊಟ್ಟೆ. ನಾನೊಬ್ಬ ಜವಾಬ್ದಾರಿಯುತ ನಾಗರಿಕನಾಗಿ ನನಗೆ ಬಂದ ಮಾಹಿತಿಯನ್ನು ನೇರವಾಗಿ ಪೊಲೀಸರಿಗೆ ತಲುಪಿಸುವ ಕೆಲಸ ಮಾಡಿದ್ದೇನೆಯೇ ಹೊರತು ಬೇರೇನೂ ಮಾಡಿಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ&rsquo; ಎಂದು ಪೊಲೀಸರೇ ಹೇಳಿದ್ದರು!&lt;/strong&gt;&lt;/h2&gt;&lt;p&gt;ಇದಾದ ನಂತರ ಕೆಲ ದಿನಗಳ ಬಳಿಕ ನಾನು ಮೊಹಾಂತಿ ಅವರಲ್ಲಿ ಅಪ್&zwnj;ಡೇಟ್ ಕೇಳಿದಾಗ, ಅವರು ಚಿನ್ನಯ್ಯನಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಿದರು. ಚಿನ್ನಯ್ಯ ನನ್ನ ಬಳಿ ಬಂದು 'ನನಗೆ ಭಯವಾಗುತ್ತಿದೆ, ಆದರೆ ಎಸ್&zwnj;ಐಟಿ (SIT) ರಚನೆ ಆಗಿದೆ' ಎಂದಿದ್ದ. ಆಗ ನಾನು ಅವನಿಗೆ ಧೈರ್ಯ ತುಂಬಿ, 'ನೀನು ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್&zwnj;ಐಟಿ ಮುಂದೆಯೇ ಹೋಗಿ ಹೇಳು. ಸತ್ಯ ಹೇಳಿದರೆ ಇಡೀ ಊರೇ ನಿನ್ನನ್ನು ಕೊಂಡಾಡುತ್ತೆ, ನಾನೇ ನಿನ್ನನ್ನು ಬಂದು ತಬ್ಬಿಕೊಳ್ಳುತ್ತೇನೆ' ಎಂದು ಹೇಳಿದ್ದೆ. ಆದರೆ, ಸ್ವಲ್ಪ ದಿನಗಳ ಬಳಿಕ ಮೊಹಾಂತಿ ಅವರೇ ನನಗೆ ಕರೆ ಮಾಡಿ, 'ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ, ಆತ ಸುಳ್ಳು ಮಾಹಿತಿ ನೀಡುತ್ತಿದ್ದಾನೆ, ಅವನಿಂದ ದೂರ ಇರಿ' ಎಂದು ಎಚ್ಚರಿಸಿದ್ದರು. ಹಾಗಾಗಿ ನಾನು ಅವನಿಂದ ತಕ್ಷಣ ದೂರ ಆದೆ' ಎಂದಿದ್ದಾರೆ.&lt;/p&gt;&lt;h2&gt;&lt;strong&gt;200 ಕೋಟಿ ತರಲು ನಾನೇನು ಧರ್ಮಸ್ಥಳದ ವಿರೋಧಿಯೇ?&lt;/strong&gt;&lt;/h2&gt;&lt;p&gt;ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಪ್ರಕಾಶ್ ರಾಜ್ 200 ಕೋಟಿ ಡೀಲ್ ಮಾಡಿದ್ದಾರೆ ಅಂತ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ 200 ಕೋಟಿ ರೂಪಾಯಿ ಹಣವನ್ನು ನಾನೆಲ್ಲಿಂದ ತರಲಿ? ಪರಮ ಪವಿತ್ರ ಧರ್ಮಸ್ಥಳದ ಮೇಲೆ ನಾನು ಯಾಕೆ ಅಪಪ್ರಚಾರ ಮಾಡಲಿ? ವಿಷಯವನ್ನು ತಿರುಚಿ ನನಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ನಾನು ಧರ್ಮ ವಿರೋಧಿ ಅಂತೆಲ್ಲಾ ಯಾಕೆ ಬಣ್ಣ ಬಳಿಯುತ್ತಿದ್ದೀರಾ? ನನ್ನ ಹೆಂಡತಿ ಪ್ರತಿದಿನ ದೇವರ ಪೂಜೆ ಮಾಡುತ್ತಾಳೆ, ನಾನು ಅವಳ ಭಾವನೆಗಳನ್ನು ಗೌರವಿಸುತ್ತೇನೆ. ದೇಶದಲ್ಲಿ ಪ್ರಧಾನಿಯನ್ನೇ ಪ್ರಶ್ನಿಸಿದರೂ ಈ ರೀತಿ ವಿಷಯ ತಿರುಚಬಾರದು ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ವೀರೇಂದ್ರ ಹೆಗ್ಗಡೆ ಅದ್ಭುತ ಮನುಷ್ಯ; ನನ್ನ ಹೋರಾಟ ಸೌಜನ್ಯ ಸಾವಿನ ವಿರುದ್ಧ!&lt;/strong&gt;&lt;/h2&gt;&lt;p&gt;ನಾನು ನನ್ನ ಜೀವನದಲ್ಲಿ ಒಂದೇ ಒಂದು ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದೆ. ಅವರು ಅತ್ಯಂತ ಅದ್ಭುತವಾದ ಮತ್ತು ಶ್ರೇಷ್ಠ ಮನುಷ್ಯ. ಈ ಪ್ರಕರಣದಲ್ಲಿ 200 ಕೋಟಿ ರೂಪಾಯಿ ವ್ಯವಹಾರ, ಧರ್ಮ, ಷಡ್ಯಂತ್ರ ಎಂಬ ಕಟ್ಟುಕಥೆಗಳನ್ನು ಎಳೆದು ತರುವುದು ಸರಿಯಲ್ಲ. ನಾನು ಯಾವುದೇ ಎಂಎಲ್&zwnj;ಎ ಅಥವಾ ಎಂಪಿ ಆಗಬೇಕಿಲ್ಲ. ಧರ್ಮಸ್ಥಳದಲ್ಲಿ ಸತ್ತಿರುವ ಹೆಣ್ಣು ಮಕ್ಕಳ ಮೇಲೆ ನಿಮಗೇಕೆ ಕನಿಕರ ಇಲ್ಲ? ಅಲ್ಲಿ ಮೃತಪಟ್ಟ ಹೆಣ್ಣು ಮಕ್ಕಳು ನಮ್ಮವರಲ್ವಾ? ಸೌಜನ್ಯ ಹೇಗೆ ಸತ್ತಳು ಮತ್ತು ಅಲ್ಲಿ ಉಳಿದ ಹೆಣ್ಣು ಮಕ್ಕಳ ಸಾವುಗಳು ಹೇಗೆ ಸಂಭವಿಸಿದವು ಎಂದು ಪ್ರಶ್ನಿಸುವುದು ತಪ್ಪಾ? ನಾನು ಆ ಸಾವುಗಳ ನ್ಯಾಯಕ್ಕಾಗಿ ಪ್ರಶ್ನೆ ಮಾಡಿದ್ದೇನೆಯೇ ಹೊರತು ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿಲ್ಲ&quot; ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>state</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/prakash-raj-press-meet-dharmasthala-conspiracy-case-chinnaiah-audio-viral-san/articleshow-bgi60q2"/>
        </item>
        <item>
            <title><![CDATA[ಗ್ಯಾರಂಟಿ ಪರಿಷ್ಕರಣೆ ಮಧ್ಯೆ ರಾಜ್ಯದ 16 ಲಕ್ಷ ಜನರ ಪಿಂಚಣಿ ಸ್ಥಗಿತ! ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ವೃದ್ಧರು!]]></title>
            <link>https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</link>
            <guid isPermaLink="true">https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr</guid>
            <pubDate>Wed, 17 Jun 2026 12:41:12 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಪರಿಶೀಲನೆಯ ನೆಪದಲ್ಲಿ ಸುಮಾರು 16 ಲಕ್ಷ ಫಲಾನುಭವಿಗಳ ಮಾಸಿಕ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರಂತಹ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಕಳೆದ ಮೂರು ತಿಂಗಳಿಂದ ನಿಂತುಹೋಗಿದ್ದು, ಬಡವರು ಮತ್ತು ಅಸಹಾಯಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k38860vgzn4ast8mffce4zr2,imgname-welfare-pension-1755844903792.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ನೀಡುತ್ತಿದ್ದ ಮಾಸಿಕ ಪಿಂಚಣಿಯನ್ನು (ಮಾಸಾಶನ) ದಿಢೀರನೆ ಸ್ಥಗಿತಗೊಳಿಸಿರುವುದು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ನಡುವೆಯೇ, ಬಡವರು ಹಾಗೂ ಅಸಹಾಯಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಕಳೆದ ಮೂರು ತಿಂಗಳಿಂದ ರಾಜ್ಯದ ಸುಮಾರು 16 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಹಣ ತಲುಪುತ್ತಿಲ್ಲ. ರಾಜ್ಯದಲ್ಲಿನ ಈ ಪಿಂಚಣಿ ಸ್ಥಗಿತದ ಸಂಪೂರ್ಣ ವಿವರ, ಕಾರಣಗಳು ಮತ್ತು ಇದರಿಂದ ಜನಸಾಮಾನ್ಯರ ಮೇಲಾಗಿರುವ ಪರಿಣಾಮಗಳ ಕುರಿತಾದ ಸಮಗ್ರ ವರದಿ ಇಲ್ಲಿದೆ.&lt;/p&gt;&lt;h2&gt;16 ಲಕ್ಷ ಜನರಿಗೆ ಬಿಗ್ ಶಾಕ್: ಯಾರೆಲ್ಲ ಸಂಕಷ್ಟದಲ್ಲಿದ್ದಾರೆ?&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 82.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದಾರೆ. ಇವರಲ್ಲಿ ಅರ್ಹರಲ್ಲದವರನ್ನು ಪತ್ತೆಹಚ್ಚುವ ನೆಪದಲ್ಲಿ ಸರ್ಕಾರವು ಬರೋಬ್ಬರಿ 16 ಲಕ್ಷ ಜನರನ್ನು ಪಿಂಚಣಿ ಪಟ್ಟಿಯಿಂದ ಕೈಬಿಟ್ಟಿದೆ. ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಕೆಳಗಿನ ಯೋಜನೆಗಳ ಆಶ್ರಯ ಪಡೆದಿದ್ದವರು ಬೀದಿಗೆ ಬೀಳುವಂತಾಗಿದೆ.&lt;/p&gt;&lt;ul&gt; &lt;li&gt;ವೃದ್ಧಾಪ್ಯ ವೇತನ (ಹಿರಿಯ ನಾಗರಿಕರು)&lt;/li&gt; &lt;li&gt;ವಿಧವಾ ಪಿಂಚಣಿ (ಪತಿಯನ್ನು ಕಳೆದುಕೊಂಡ ಮಹಿಳೆಯರು)&lt;/li&gt; &lt;li&gt;ಸಂಧ್ಯಾ ಸುರಕ್ಷಾ ಯೋಜನೆ&lt;/li&gt; &lt;li&gt;ವಿಕಲಾಂಗರ ಪಿಂಚಣಿ&lt;/li&gt;&lt;/ul&gt;&lt;p&gt;ಪ್ರತಿ ತಿಂಗಳು ಈ 82 ಲಕ್ಷ ಫಲಾನುಭವಿಗಳ ಪಿಂಚಣಿಗಾಗಿ ಸರ್ಕಾರ ಸುಮಾರು 400 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿತ್ತು. ಆದರೆ, ಈಗ 16 ಲಕ್ಷ ಜನರಿಗೆ ಕೊಕ್ ನೀಡಿರುವುದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 150 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಉಳಿತಾಯವಾಗುತ್ತಿದೆ.&lt;/p&gt;&lt;h2&gt;ಪಿಂಚಣಿ ಸ್ಥಗಿತಗೊಳ್ಳಲು ಮುಖ್ಯ ಕಾರಣಗಳೇನು?&lt;/h2&gt;&lt;p&gt;ಸರ್ಕಾರದ ವತಿಯಿಂದ ನಡೆಸಲಾದ ಇಲಾಖಾ ಪರಿಶೀಲನೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಈ ಪಿಂಚಣಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಮುಖ್ಯ ಕಾರಣಗಳು ಕೂಡ ನೀಡಲಾಗಿದೆ.&lt;/p&gt;&lt;p&gt;&lt;strong&gt;ವಿಳಾಸ ಬದಲಾವಣೆ: &lt;/strong&gt;ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ನೀಡಿದ್ದ ವಿಳಾಸದಲ್ಲಿ ಸದ್ಯಕ್ಕೆ ವಾಸವಿಲ್ಲದ ಕಾರಣಕ್ಕಾಗಿ 2.21 ಲಕ್ಷ ಜನರ ಪಿಂಚಣಿ ರದ್ದಾಗಿದೆ.&lt;/p&gt;&lt;p&gt;&lt;strong&gt;ಆದಾಯ ಪ್ರಮಾಣ ಪತ್ರದ ಕೊರತೆ: &lt;/strong&gt;ಕಾಲಮಿತಿಯೊಳಗೆ ಹೊಸ ಆದಾಯ ಪ್ರಮಾಣ ಪತ್ರವನ್ನು (Income Certificate) ಸಲ್ಲಿಸದ ಕಾರಣಕ್ಕೆ 45,853 ಜನರಿಗೆ ಪಿಂಚಣಿ ನಿಲ್ಲಿಸಲಾಗಿದೆ.&lt;/p&gt;&lt;p&gt;&lt;strong&gt;ದಾಖಲೆಗಳ ಕೊರತೆ: &lt;/strong&gt;ಭೌತಿಕ ಪರಿಶೀಲನೆ (Physical Verification) ನಡೆಸುವಾಗ ಸೂಕ್ತ ಮತ್ತು ನಿಖರವಾದ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಅಂದರೆ 13,23,932 ಜನರ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ.&lt;/p&gt;&lt;h2&gt;ಜಿಲ್ಲಾವಾರು ಸ್ಥಗಿತಗೊಂಡ ಪಿಂಚಣಿದಾರರ ವಿವರ&lt;/h2&gt;&lt;p&gt;ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಪಿಂಚಣಿ ಕಳೆದುಕೊಂಡವರ ಸಂಖ್ಯೆ ಅತ್ಯಂತ ಹೆಚ್ಚಾಗಿದ್ದು, ಆ ವಿವರಗಳು ಹೀಗಿವೆ:&lt;/p&gt;&lt;p&gt;ಜಿಲ್ಲೆ ಪಿಂಚಣಿ ಕಳೆದುಕೊಂಡವರ ಸಂಖ್ಯೆ&lt;/p&gt;&lt;ul&gt; &lt;li&gt;ಬೆಳಗಾವಿ 1,38,215 ಜನರು&lt;/li&gt; &lt;li&gt;ಮೈಸೂರು 1,06,305 ಜನರು&lt;/li&gt; &lt;li&gt;ದಾವಣಗೆರೆ 95,297 ಜನರು&lt;/li&gt; &lt;li&gt;ರಾಯಚೂರು 90,995 ಜನರು&lt;/li&gt;&lt;/ul&gt;&lt;h2&gt;ಪ್ರಸ್ತುತ ಪಿಂಚಣಿ ದರಗಳು (ಯಾರಿಗೆ ಎಷ್ಟು ಸಿಗುತ್ತಿತ್ತು?)&lt;/h2&gt;&lt;p&gt;ಸರ್ಕಾರವು ವಿವಿಧ ವರ್ಗದ ಜನರಿಗೆ ನೀಡುತ್ತಿದ್ದ ಮಾಸಿಕ ಆರ್ಥಿಕ ನೆರವಿನ ವಿವರ ಹೀಗಿದೆ.&lt;/p&gt;&lt;p&gt;&lt;strong&gt;ವಿಧವಾ ವೇತನ:&lt;/strong&gt; ಪ್ರತಿ ತಿಂಗಳು 800 ರೂಪಾಯಿಗಳು.&lt;/p&gt;&lt;p&gt;&lt;strong&gt;ವೃದ್ಧಾಪ್ಯ ಪಿಂಚಣಿ:&lt;/strong&gt; 60 ರಿಂದ 65 ವರ್ಷದೊಳಗಿನವರಿಗೆ 800 ರೂಪಾಯಿ ಹಾಗೂ 65 ವರ್ಷ ಮೇಲ್ಪಟ್ಟವರಿಗೆ 1,200 ರೂಪಾಯಿಗಳು.&lt;/p&gt;&lt;p&gt;&lt;strong&gt;ವಿಕಲಾಂಗರ ಪಿಂಚಣಿ:&lt;/strong&gt;&lt;/p&gt;&lt;p&gt;25% ವಿಕಲಾಂಗ ಹೊಂದಿರುವವರಿಗೆ: 800 ರೂಪಾಯಿಗಳು.&lt;/p&gt;&lt;p&gt;50% ವಿಕಲಾಂಗ ಹೊಂದಿರುವವರಿಗೆ: 1,200 ರೂಪಾಯಿಗಳು.&lt;/p&gt;&lt;p&gt;75% ಕಿಂತ ಹೆಚ್ಚು ವಿಕಲಾಂಗ ಹೊಂದಿರುವವರಿಗೆ: 2,000 ರೂಪಾಯಿಗಳು.&lt;/p&gt;&lt;h2&gt;ಕಚೇರಿಗಳಿಗೆ ಅಲೆಯುತ್ತಿರುವ ವೃದ್ಧರು!&lt;/h2&gt;&lt;p&gt;ಮೂರು ತಿಂಗಳಾಯಿತು ಸರ್, ಕೈಗೆ ಒಂದು ರೂಪಾಯಿ ಪಿಂಚಣಿ ಹಣ ಬಂದಿಲ್ಲ. ನೆಮ್ಮದಿ ಕೇಂದ್ರ, ತಹಶೀಲ್ದಾರ್ ಕಚೇರಿ ಅಂತ ಕೇಳಿದ್ರೆ 'ಆ ಆಫೀಸ್&zwnj;ಗೆ ಹೋಗಿ, ಈ ಆಫೀಸ್&zwnj;ಗೆ ಹೋಗಿ' ಅಂತ ಅಲೆದಾಡಿಸುತ್ತಿದ್ದಾರೆ. ವಯಸ್ಸಾದ ಕಾಲದಲ್ಲಿ ನಮಗೆ ನಡೆದಾಡಲು ಶಕ್ತಿಯಿಲ್ಲ. ಬದುಕು ಸಾಗಿಸುವುದು ತುಂಬಾ ಕಷ್ಟವಾಗಿದೆ. ಎಂದು ಪಿಂಚಣಿ ಕಳೆದುಕೊಂಡ ಹಿರಿಯ ನಾಗರಿಕರ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ದೈನಂದಿನ ಮನೆ ಖರ್ಚಿಗೆ, ಕೈಗೊಂದು ಮಾತ್ರೆ-ಔಷಧಿ ಖರೀದಿಸಲು ಈ ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಅಸಹಾಯಕ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಸರ್ಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗ್ಯಾರಂಟಿ ಯೋಜನೆಗಳ ಹೊಂದಾಣಿಕೆಗಾಗಿ ಬಡವರ ಪಿಂಚಣಿಗೆ ಕತ್ತರಿ ಹಾಕಲಾಗಿದೆಯೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ತಕ್ಷಣವೇ ಪಿಂಚಣಿ ಬಿಡುಗಡೆ ಮಾಡಬೇಕೆಂಬುದು ಸಂತ್ರಸ್ತರ ತೀವ್ರ ಒತ್ತಾಯವಾಗಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-pension-shock-why-16-lakh-beneficiaries-are-not-getting-monthly-pensions-gdp/articleshow-3oeaonr"/>
        </item>
        <item>
            <title><![CDATA[Mysuru: ವೈದ್ಯರಿಲ್ಲದೆ ಒಂದೇ ದಿನ ಜಯದೇವ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು, ಸಾರ್ವಜನಿಕರ ಆರೋಪ]]></title>
            <link>https://kannada.asianetnews.com/gallery/karnataka-districts/mysuru-jayadeva-hospital-11-patients-death-dr-sadananda-clarification-san-6duhp3z</link>
            <guid isPermaLink="true">https://kannada.asianetnews.com/gallery/karnataka-districts/mysuru-jayadeva-hospital-11-patients-death-dr-sadananda-clarification-san-6duhp3z</guid>
            <pubDate>Wed, 17 Jun 2026 12:25:02 +0530</pubDate>
            <description><![CDATA[&lt;p&gt;ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿ ಗಲಾಟೆ ಮಾಡಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva4t9mh1fchpx8thm23aaq3,imgname-mysuru-jayadeva-hospital--4--1781678286481.jpeg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿ ಗಲಾಟೆ ಮಾಡಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದಾರೆ.&lt;/p&gt;&lt;img&gt;&lt;p&gt;ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಿನೇ ದಿನೆ ರೋಗಿಗಳ ಸಾವು ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನ ಬರೋಬ್ಬರಿ 11 ರೋಗಿಗಳು ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ರೋಗಿಗಳ ಸಂಬಂಧಿಕರು ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಸಂಬಂಧಿಕರು ವೈದ್ಯರನ್ನು ತಕ್ಷಣ ಕರೆಸುವಂತೆ ಗಲಾಟೆ ಮಾಡಿದ್ದಲ್ಲದೆ, &quot;ಇಷ್ಟೊಂದು ದೊಡ್ಡ ಆಸ್ಪತ್ರೆಯಲ್ಲಿ ಒಬ್ಬರೂ ಡಾಕ್ಟರ್ ಇಲ್ವಾ?&quot; ಎಂದು ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.&lt;/p&gt;&lt;img&gt;&lt;p&gt;ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂಬ ಸಾರ್ವಜನಿಕರ ಆರೋಪದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಜಯದೇವ ಆಸ್ಪತ್ರೆಯ ಅಧೀಕ್ಷಕರಾದ ಡಾ. ಸದಾನಂದ ಅವರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. &quot;ವೈದ್ಯರ ನಿರ್ಲಕ್ಷ್ಯದಿಂದ ಸಾವುಗಳಾಗಿವೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ನಿಜ, ಆದರೆ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಿಲ್ಲ&quot; ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಆಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ವಿವರಿಸಿದ ಡಾ. ಸದಾನಂದ, &quot;ನಮ್ಮ ಆಸ್ಪತ್ರೆಗೆ ಕೇವಲ ಮೈಸೂರಷ್ಟೇ ಅಲ್ಲದೆ ಸುತ್ತಮುತ್ತಲಿನ ಐದು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಸಾಮಾನ್ಯ ಹೃದ್ರೋಗ ಪ್ರಕರಣಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತದೆ. ಆದರೆ, ಪರಿಸ್ಥಿತಿ ಅತ್ಯಂತ ಗಂಭೀರವಾದಾಗ ಮಾತ್ರ ರೋಗಿಗಳನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗುತ್ತದೆ. ನಿನ್ನೆ ಮೃತಪಟ್ಟ 11 ರೋಗಿಗಳು ಕೂಡ ಆಸ್ಪತ್ರೆಗೆ ದಾಖಲಾಗುವ ವೇಳೆಯಲ್ಲೇ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದರು&quot; ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಬುಧವಾರ ಬೆಳಿಗ್ಗೆ 8 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ 11 ಮಂದಿ ಮೃತಪಟ್ಟಿರುವುದು ನಿಜ ಎಂದು ಒಪ್ಪಿಕೊಂಡಿರುವ ಅಧೀಕ್ಷಕರು, ಸಾವಿಗೆ ನಿಖರ ಕಾರಣ ಬಿಚ್ಚಿಟ್ಟಿದ್ದಾರೆ. &quot;ಮೃತಪಟ್ಟವರೆಲ್ಲರೂ ತೀವ್ರ ಹೃದಯಾಘಾತ (Severe Heart Attack), ಹೃದಯ ವೈಫಲ್ಯ (Heart Failure) ಹಾಗೂ ವಯೋಸಹಜ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದಾರೆ&quot; ಎಂದು ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಅಧೀಕ್ಷಕರು, &quot;ನಿನ್ನೆ ಇಡೀ 24 ಗಂಟೆಯೂ ವೈದ್ಯರು ನಿರಂತರವಾಗಿ ಕೆಲಸ ಮಾಡಿದ್ದಾರೆ. ಇಬ್ಬರು ಡಿಎಎಂ (DM) ವೈದ್ಯರು ಕರ್ತವ್ಯದಲ್ಲಿದ್ದು, ರೋಗಿಗಳ ಸಂಬಂಧಿಕರ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದರು. ವೈದ್ಯರು ಸತತ ಕೆಲಸದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದಾಗ ಸಂಬಂಧಿಕರು ಅದನ್ನು ಚಿತ್ರೀಕರಿಸಿ ವಿಡಿಯೋ ಹರಿಬಿಟ್ಟಿದ್ದಾರೆ. ಸತ್ಯ ತಿಳಿಯಲು ಬೇಕಿದ್ದರೆ ಆಸ್ಪತ್ರೆಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಬಹುದು&quot; ಎಂದು ಸವಾಲು ಹಾಕಿದ್ದಾರೆ.&lt;/p&gt;&lt;img&gt;&lt;p&gt;ನಿನ್ನೆ ಒಂದೇ ದಿನ 11 ಮಂದಿ ರೋಗಿಗಳ ಸಾವಿನೊಂದಿಗೆ ಜಯದೇವ ಆಸ್ಪತ್ರೆಯಲ್ಲಿ ಕಳೆದ 17 ದಿನದಲ್ಲಿ ನಿಧನರಾದ ಹೃದ್ರೋಗಿಗಳ ಸಂಖ್ಯೆ 64ಕ್ಕೆ ಏರಿದೆ. ಜೂನ್&zwnj; ತಿಂಗಳ ಅಂಕಿ ಅಂಶವನ್ನು ಸ್ವತಃ ಆಸ್ಪತ್ರೆ ಬಿಡುಗಡೆ ಮಾಡಿದೆ. ಮಂಗಳವಾರ ಆಸ್ಪತ್ರೆಗೆ ಒಟ್ಟು 77 ಒಳರೋಗಿಗಳು ದಾಖಲಾಗಿದ್ದರು. ಇದೇ ತಿಂಗಳು 9ರಂದು 65 ಒಳ ರೋಗಿಗಳ ಪೈಕಿ 8 ರೋಗಿಗಳ ಸಾವು. ಆಸ್ಪತ್ರೆಯ ನಿತ್ಯದ ಮಾರ್ಟಾಲಿಟಿ ರೇಟ್ 6ರಿಂದ7. ನಿನ್ನೆ ಹೆಚ್ಚು ಪ್ರಮಾಣ ರೋಗಿಗಳ ಸಾವು ದಾಖಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದು ವರ್ಷದಲ್ಲಿ 1245 ರೋಗಿಗಳು ಸಾವು ಕಂಡಿದ್ದಾರೆ. 2025ರಲ್ಲಿ ಆಸ್ಪತ್ರೆಗೆ 21,577 ರೋಗಿಗಳು ದಾಖಲಾಗಿದ್ದು, ಇದರಲ್ಲಿ 1,245 ಮಂದಿ ಸಾವು ಕಂಡಿದ್ದಾರೆ. ಒಂದು ವರ್ಷದಲ್ಲಿ ಸಾವಿಗೀಡಾದ ರೋಗಿಗಳ ಶೇಕಡಾವಾರು ಸಂಖ್ಯೆ 5.77 ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/mysuru-jayadeva-hospital-11-patients-death-dr-sadananda-clarification-san-6duhp3z"/>
        </item>
        <item>
            <title><![CDATA[ಬೆಂಗಳೂರಿಗೆ ಬರೋ ರೈಲು ಪ್ರಯಾಣಿಕರ ಗಮನಕ್ಕೆ; ಮೆಜೆಸ್ಟಿಕ್‌ ಬರುತ್ತಿಲ್ಲ ನಿಮ್ಮ ಟ್ರೈನ್]]></title>
            <link>https://kannada.asianetnews.com/gallery/karnataka-districts/bengaluru-rail-travel-alert-ksr-station-yard-works-disrupt-kerala-trains-route-diversions-and-cancellations-continue-kvn-wu6tvam</link>
            <guid isPermaLink="true">https://kannada.asianetnews.com/gallery/karnataka-districts/bengaluru-rail-travel-alert-ksr-station-yard-works-disrupt-kerala-trains-route-diversions-and-cancellations-continue-kvn-wu6tvam</guid>
            <pubDate>Wed, 17 Jun 2026 11:14:08 +0530</pubDate>
            <description><![CDATA[&lt;p&gt;ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್&zwnj;ಆರ್)ರೈಲ್ವೆ ನಿಲ್ದಾಣದ ಯಾರ್ಡ್ ಕಾಮಕಾರಿ ಕೇರಳ ರೈಲುಗಳ ಮೇಲೆ ಪರಿಣಾಮ ಬೀರಿರುವುದರಿಂದ ಬೆಂಗಳೂರಿನಲ್ಲಿ ರೈಲು ಸಂಚಾರದಲ್ಲಿ ಅಡಚಣೆ ಮುಂದುವರೆದಿದೆ. ಈ ಕುರಿತಾದ ಮಹತ್ವದ ಅಪ್&zwnj;ಡೇಟ್ಸ್ ಇಲ್ಲಿದೆ ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksm5pczz0fkedpgrkbd5p1ht,imgname-central-railway-stations-snacks-price-hike-vada-pav-samosa-dosa-idli-june-1-20261-1779867268095.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್&zwnj;ಆರ್)ರೈಲ್ವೆ ನಿಲ್ದಾಣದ ಯಾರ್ಡ್ ಕಾಮಕಾರಿ ಕೇರಳ ರೈಲುಗಳ ಮೇಲೆ ಪರಿಣಾಮ ಬೀರಿರುವುದರಿಂದ ಬೆಂಗಳೂರಿನಲ್ಲಿ ರೈಲು ಸಂಚಾರದಲ್ಲಿ ಅಡಚಣೆ ಮುಂದುವರೆದಿದೆ. ಈ ಕುರಿತಾದ ಮಹತ್ವದ ಅಪ್&zwnj;ಡೇಟ್ಸ್ ಇಲ್ಲಿದೆ ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೆಂಗಳೂರಿನ ಕೆಎಸ್&zwnj;ಆರ್ ನಿಲ್ದಾಣದಲ್ಲಿ ನವೀಕರಣ ಕಾರ್ಯವು ಎರಡನೇ ಹಂತಕ್ಕೆ ತಲುಪಿದ್ದರಿಂದ ಜೂನ್ 17ರಂದು ಬೆಂಗಳೂರು ಹಾಗೂ ಕೇರಳ ನಡುವಿನ ರೈಲಯ ಸೇವೆಯಲ್ಲಿ ಅಡಚಣೆ ಮುಂದುವರೆದಿವೆ. ಬೆಂಗಳೂರು ಹಾಗೂ ತಿರುವನಂತಪುರಂ ನಡುವೆ ಜುಲೈ ತಿಂಗಳ ಕೊನೆಯವರೆಗೆ ವಿಶೇಷ ರೈಲು ಸಂಚಾರದ ಹೊರತಾಗಿಯೂ ಕೆಲವು ರೈಲು ಸಂಚಾರ ರದ್ದಾಗಿದ್ದರೇ, ಇನ್ನು ಕೆಲವು ಮಾರ್ಗ ಬದಲಾವಣೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಜೂನ್ 17ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್&zwnj;ನಲ್ಲಿ ಪ್ರಮುಖ ಯಾರ್ಡ್ ನವೀಕರಣ ಕಾರ್ಯ ಮುಂದುವರೆದಿದ್ದರಿಂದ ಕೇರಳದಿಂದ ಬೆಂಗಳೂರಿಗೆ ಸಂಚರಿಸುವ ರೈಲ್ವೇ ಪ್ರಯಾಣಿಕರಿಗೆ ಮತ್ತೊಮ್ಮೆ ಅನಾನುಕೂಲತೆ ಎದುರಾಗಿದೆ.&lt;/p&gt;&lt;img&gt;&lt;p&gt;ಹಳಿಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಭವಿಷ್ಯದ ಜನದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಇಟ್ಟುಕೊಂಡು ನೈಋತ್ಯ ರೈಲ್ವೇ ವಿಭಾಗವು ಕೆಎಸ್&zwnj;ಆರ್ ರೈಲ್ವೇ ನಿಲ್ದಾಣದಲ್ಲಿ ಮೂಲಸೌಕರ್ಯಗಳ ನವೀಕರಣ ಯೋಜನೆ ಹಮ್ಮಿಕೊಂಡಿದೆ. ಇದು ಪ್ರಮುಖ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಈ ತಾತ್ಕಾಲಿಕ ಅಡಚಣೆಯು ಬೆಂಗಳೂರಿನ ರೈಲ್ವೇ ನೆಟ್&zwnj;ವರ್ಕ್&zwnj;ನಲ್ಲಿ ದೀರ್ಘಕಾಲಿಕ ಮೂಲಭೂತ ಸೌಕರ್ಯ ಒದಗಿಸಲು ಅನುಕೂಲವಾಗಲಿದೆ ಎಂದು ರೈಲ್ವೇ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಕೆಎಸ್&zwnj;ಆರ್&zwnj; ರೈಲ್ವೇ ಸ್ಟೇಷನ್&zwnj;ನಲ್ಲಿ ಈ ಕೆಲಸಗಳು ನಡೆಯುತ್ತಿರುವುದರಿಂದ ಕೆಎಸ್&zwnj;ಆರ್ ರೈಲ್ವೇ ಸ್ಟೇಷನ್ ಬೆಂಗಳೂರಿಗೆ ಬರುತ್ತಿದ್ದ ರೈಲುಗಳ ಮಾರ್ಗಗಳನ್ನು ಬದಲಿಸಿ ಸರ್ ಎಂ ವಿಶ್ವೇಶ್ವರಯ್ಯ(SMVT) ಹಾಗೂ ಯಶವಂತಪುರ(YPR) ಟರ್ಮಿನಲ್&zwnj;ಗೆ ಶಿಫ್ಟ್ ಮಾಡಲಾಗಿದೆ. ಈ ತಾತ್ಕಾಲಿಕ ಅಡಚಣೆಯಿಂದಾಗಿ ರೈಲ್ವೇ ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿಸುವ ಮುನ್ನ ತಮ್ಮ ನಿರ್ಗಮನ ನಿಲ್ದಾಣಗಳನ್ನು ಪರಿಶೀಲಿಸುವಂತೆ ಪ್ರಯಾಣಿಕರಲ್ಲಿ ರೈಲ್ವೇ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಎರ್ನಾಕುಲಂ ಇಂಟರ್&zwnj;ಸಿಟಿ ಸರ್ವೀಸ್ ರೈಲು ಸರ್ ಎಂ ವಿಶ್ವೇಶ್ವರಯ್ಯ(SMVT) ಗೆ ಕೊನೆಯಾಗಲಿದೆ.&lt;/p&gt;&lt;p&gt;ಕುಚುವೆಲಿ ಎಕ್ಸ್&zwnj;ಪ್ರೆಸ್ ಸರ್ವೀಸ್ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಯಶವಂತಪುರಂ ರೈಲ್ವೇ ಸ್ಟೇಷನ್ ಬಂದು ತಲುಪಲಿದೆ.&lt;/p&gt;&lt;img&gt;&lt;p&gt;ಇನ್ನು ಕೆಲವು ರೈಲು ಸೇವೆಗಳನ್ನು ಸಂಪೂರ್ಣ ರದ್ದು ಮಾಡಲಾಗಿದ್ದು, ಇನ್ನು ಕೆಲವು ರೈಲು ಸೇವೆಗಳನ್ನು ಬೆಂಗಳೂರಿನ ಹೊರವಲಯದಲ್ಲಿಯೇ ರೈಲು ನಿಲ್ಲಿಸಲು ಅನುಮತಿ ಮಾಡಿ ಕೊಡಲಾಗಿದೆ. ಇನ್ನು ರೈಲು ಸೇವೆ ರದ್ದಾದ ಪ್ರಯಾಣಿಕರಿಗೆ ಹಣ ರೀಫಂಡ್ ಮಾಡುವುದಾಗಿಯೂ ರೈಲ್ವೇ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>state</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/karnataka-districts/bengaluru-rail-travel-alert-ksr-station-yard-works-disrupt-kerala-trains-route-diversions-and-cancellations-continue-kvn-wu6tvam"/>
        </item>
        <item>
            <title><![CDATA[Exclusive: ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಗಂಭೀರ ಲೋಪ: HCGಗೆ ಬಿತ್ತು 2 ವರ್ಷ ನಿಷೇಧ]]></title>
            <link>https://kannada.asianetnews.com/state/bengaluru-s-hcg-cancer-hospital-clinical-trail-has-been-banned-for-two-years-for-lapses-in-clinical-trials-mrq/articleshow-7kkx1q4</link>
            <guid isPermaLink="true">https://kannada.asianetnews.com/state/bengaluru-s-hcg-cancer-hospital-clinical-trail-has-been-banned-for-two-years-for-lapses-in-clinical-trials-mrq/articleshow-7kkx1q4</guid>
            <pubDate>Wed, 17 Jun 2026 08:59:35 +0530</pubDate>
            <description><![CDATA[ಬೆಂಗಳೂರಿನ ಎಚ್&zwnj;ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್&zwnj;ಗಳಲ್ಲಿ ನಡೆದ ಗಂಭೀರ ಲೋಪಗಳಿಗಾಗಿ ಕೇಂದ್ರ ಸರ್ಕಾರವು ಆಸ್ಪತ್ರೆಯ ನೈತಿಕ ಸಮಿತಿಗೆ ಎರಡು ವರ್ಷಗಳ ನಿಷೇಧ ಹೇರಿದೆ. ತನಿಖೆಯಲ್ಲಿ ರೋಗಿಗಳ ಸಾವುಗಳನ್ನು ವರದಿ ಮಾಡದಿರುವುದು, ನಿಯಮ ಉಲ್ಲಂಘನೆ ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿದ್ದು, ಹೊಸ ಟ್ರಯಲ್&zwnj;ಗಳನ್ನು ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jz4dfd6dh5wrgyc7c120t796,imgname-dbf-1751421269197.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್&zwnj; ಆಸ್ಪತ್ರೆಯಾಗಿರುವ ಎಚ್&zwnj;ಸಿಜಿ (ಹೆಲ್ತ್&zwnj;ಕೇರ್&zwnj; ಗ್ಲೋಬಲ್&zwnj; ಎಂಟರ್&zwnj;ಪ್ರೈಸಸ್&zwnj; ಲಿಮಿಟೆಡ್&zwnj;) ವಿರುದ್ಧ ಭಾರೀ ಅಕ್ರಮದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ಆಸ್ಪತ್ರೆಯ &lsquo;ಕೇಂದ್ರ ನೈತಿಕ ಸಮಿತಿ&rsquo;ಗೆ ಕೇಂದ್ರ ಸರ್ಕಾರ 2 ವರ್ಷಗಳ ನಿಷೇಧ ಹೇರಿದೆ. ಈ ಮೂಲಕ ಆಸ್ಪತ್ರೆಯು 24 ತಿಂಗಳ ಕಾಲ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್&zwnj;ಗಳನ್ನು ನಡೆಸದಂತೆ ಕಠಿಣ ನಿರ್ಬಂಧ ವಿಧಿಸಿದೆ.ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್&zwnj; ಚಟುವಟಿಕೆಗಳಲ್ಲಿ ಭಾರಿ ಹಗರಣ ನಡೆಯುತ್ತಿದೆ. ಇದನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಪ್ರಕರಣವನ್ನು ಮುಚ್ಚಿಹಾಕುವ ಯತ್ನಗಳು ನಡೆದಿವೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.&amp;nbsp;&lt;/p&gt;&lt;p&gt;&lsquo;ಕನ್ನಡಪ್ರಭ&rsquo; ಮೊದಲ ಬಾರಿ ಕಳೆದ ವರ್ಷ ಜುಲೈನಲ್ಲೇ ಈ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿ, ಸರ್ಕಾರವನ್ನು ಎಚ್ಚರಿಸಿತ್ತು. ಅದರ ಫಲಶ್ರುತಿಯಾಗಿ ಕರ್ನಾಟಕದ ಅಂದಿನ ಆರೋಗ್ಯ ಸಚಿವ ದಿನೇಶ್&zwnj; ಗುಂಡೂರಾವ್&zwnj; ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು. ಇದೀಗ ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆಯು (ಸಿಡಿಎಸ್&zwnj;ಸಿಒ) ಹೆಚ್&zwnj;ಸಿಜಿ ಕೇಂದ್ರ ನೈತಿಕ ಸಮಿತಿಗೆ 2 ವರ್ಷ ಪೂರ್ತಿ ನಿಷೇಧ ಹೇರಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್&zwnj;ಗಳನ್ನು ಅನುಮತಿಸದಂತೆ ಅಥವಾ ಮೇಲ್ವಿಚಾರಣೆ ನಡೆಸದಂತೆ ಕಠಿಣ ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/h2&gt;&lt;p&gt;ಆಸ್ಪತ್ರೆಯು ಕ್ಲಿನಿಕಲ್ ಟ್ರಯಲ್&zwnj; ಚಟುವಟಿಕೆಗಳಲ್ಲಿ ನೀತಿಬಾಹಿರ ಕೃತ್ಯಗಳಲ್ಲಿ ತೊಡಗಿದೆ ಎಂದು ಅದರ ನೈತಿಕ ಸಮಿತಿ ಮುಖ್ಯಸ್ಥ, ನಿವೃತ್ತ ನ್ಯಾ. ಪಿ. ಕೃಷ್ಣ ಭಟ್&zwnj; ಅವರೇ ಕಳೆದ ವರ್ಷ ಸ್ಫೋಟಕ ಆರೋಪ ಮಾಡಿದ್ದರು. ಈ ವಿಷಯವಾಗಿ ಪತ್ರಮುಖೇನ ಹಾಗೂ ಖುದ್ದು ಹಲವು ಬಾರಿ ಆಸ್ಪತ್ರೆಯ ಆಡಳಿತ ಮಂಡಳಿ ಗಮನಕ್ಕೆ ತಂದರೂ, ಆಸ್ಪತ್ರೆಯಲ್ಲಿ ಆ ವಿಚಾರವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎನ್ನಲಾಗಿತ್ತು. ಇದರಿಂದ ಬೇಸತ್ತು ನ್ಯಾ. ಕೃಷ್ಣ ಭಟ್&zwnj; ಅವರು ನೈತಿಕ ಸಮಿತಿಯ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ್ದರು.&lt;/p&gt;&lt;p&gt;ಗಂಭೀರ ಆರೋಪಗಳ ಬೆನ್ನಲ್ಲೇ ಆಸ್ಪತ್ರೆಯ ಸಿಇಒ, ನಿರ್ದೇಶಕರು ಪದತ್ಯಾಗ ಮಾಡಿದ್ದರು. ಸಾಲುಸಾಲಾಗಿ ವೈದ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದರು. ಈ ಮಧ್ಯೆ ಪರಿಸ್ಥಿತಿಯ ಗಂಭೀರತೆ ಅರಿತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಸಿಡಿಎಸ್&zwnj;ಸಿಒಗೆ ಪತ್ರ ಬರೆದಿತ್ತು. ಆಸ್ಪತ್ರೆಯಲ್ಲಿನ ನ್ಯಾಯೋಚಿತವಲ್ಲದ ಕ್ಲಿನಿಕಲ್ ಟ್ರಯಲ್ ಚಟುವಟಿಕೆಗಳ ಕುರಿತು ಕೂಡಲೇ ತನಿಖೆ ನಡೆಸುವಂತೆ ಮನವಿ ಮಾಡಿತ್ತು.&lt;/p&gt;&lt;h3&gt;&lt;strong&gt;ಆಘಾತಕಾರಿ ಅಂಶ ಪತ್ತೆ:&lt;/strong&gt;&lt;/h3&gt;&lt;p&gt;ಈ ಪ್ರಕರಣವನ್ನು ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ (ಸಿಡಿಎಸ್&zwnj;ಸಿಒ) ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತನಿಖೆ ನಡೆಸಿದವು. ಅಧಿಕಾರಿಗಳು ಮತ್ತು ತಜ್ಞರ ತಂಡ ಹೆಚ್&zwnj;ಸಿಜಿ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ, ತನಿಖೆ ನಡೆಸಿತು. ತನಿಖೆಯಲ್ಲಿ ಆಸ್ಪತ್ರೆಯಲ್ಲಿ ಗಂಭೀರ ನಿಯಮ ಉಲ್ಲಂಘನೆಗಳು ನಡೆದಿವೆ ಎಂದು ಪತ್ತೆಯಾಗಿದೆ. ಅವುಗಳು ಇಂತಿವೆ.&lt;/p&gt;&lt;p&gt;1. 2021ರಿಂದ 2025ರವರೆಗೆ ಕನಿಷ್ಠ 9 ಪ್ರಕರಣಗಳಲ್ಲಿ ರೋಗಿಗಳು ತೀವ್ರವಾಗಿ ನರಳಿ ಸಾವನ್ನಪ್ಪಿದ್ದರೂ, ಆಸ್ಪತ್ರೆಯು ಇದನ್ನು ಸರ್ಕಾರಕ್ಕೆ ಸರಿಯಾದ ಸಮಯದಲ್ಲಿ ವರದಿ ಮಾಡಲಿಲ್ಲ. ಕ್ಲಿನಿಕಲ್&zwnj; ಟ್ರಯಲ್&zwnj;ಗೆ ಒಳಗಾಗಿದ್ದ ರೋಗಿಯೊಬ್ಬರು ಅನಾರೋಗ್ಯದಿಂದ ತೊಂದರೆಗೆ ಸಿಲುಕಿದಾಗ ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡದೆ ಹೊರರೋಗಿಗಳ ವಿಭಾಗಕ್ಕೆ ಕಳುಹಿಸಿದರು. ಮರುದಿನವೇ ರೋಗಿ ಸಾವನ್ನಪ್ಪಿದ್ದಾಳೆ. ರೋಗಿ ಆರೈಕೆ ಬಗ್ಗೆ ಎಚ್&zwnj;ಸಿಜಿ ಕ್ರಮ ಕೈಗೊಳ್ಳಲು ವಿಫಲವಾಗಿದ್ದಲ್ಲದೆ ಈ ಘಟನೆ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲು 10 ತಿಂಗಳು ತಡ ಮಾಡಿದ್ದಾರೆ.&lt;/p&gt;&lt;p&gt;2. ಮತ್ತೋರ್ವ ರೋಗಿ ಲಿವರ್ ಮತ್ತು ಶ್ವಾಸಕೋಶ ಕ್ಯಾನ್ಸರ್&zwnj;ನಿಂದ ನರಳುತ್ತಿದ್ದರೂ, &lsquo;ಗುಣಮುಖರಾಗಿ ಮನೆಗೆ ಹೋದರು&rsquo; ಎಂದು ಸುಳ್ಳು ವರದಿ ಬರೆದಿದ್ದಾರೆ. ನಿಜವಾಗಿ, ಆ ರೋಗಿಗೆ ಅಗತ್ಯ ಲಿವರ್&zwnj; ಪರೀಕ್ಷೆಗಳನ್ನೇ ಮಾಡಿರಲಿಲ್ಲ.&lt;/p&gt;&lt;p&gt;3. 2024ರ ಸೆ.25ರಂದು ನಡೆದ ಒಂದು ಕ್ಲಿನಿಕಲ್ ಟ್ರಯಲ್ ಸಭೆಯಲ್ಲಿ ಡಾ. ಗೋವಿಂದ ಬಾಬು ಅವರು &lsquo;ನನಗೆ ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲ&rsquo; ಎಂದು ಔಪಚಾರಿಕ ಘೋಷಣೆಗೆ ಸಹಿ ಹಾಕಿದ್ದರು. ಆದರೆ ವಾಸ್ತವದಲ್ಲಿ ಅವರೇ ಆ ಟ್ರಯಲ್&zwnj;ನ ಪ್ರಧಾನ ತನಿಖಾಧಿಕಾರಿ ಆಗಿದ್ದರು. ಅಂದರೆ ಟ್ರಯಲ್ ನಡೆಸುವ ಮುಖ್ಯ ವೈದ್ಯರೇ ಆಗಿದ್ದರು. ನೈತಿಕ ಸಮಿತಿ ಸದಸ್ಯರಾಗಿ ತಾವೇ ತಮ್ಮದೇ ಟ್ರಯಲ್ ಅನ್ನು ಅನುಮೋದಿಸುವ ಅಥವಾ ಪರಿಶೀಲಿಸುವ ಸ್ಥಾನದಲ್ಲಿದ್ದರು. ಇದು ಸಂಪೂರ್ಣವಾಗಿ ವೈದ್ಯಕೀಯ ನೈತಿಕತೆಯ ಉಲ್ಲಂಘನೆ.&lt;/p&gt;&lt;p&gt;4. ಎಚ್&zwnj;ಸಿಜಿ ಆಡಳಿತಾಧಿಕಾರಿಗಳು ತೀರ್ವತರವಾದ ರೋಗಿಗಳ ಗಾಯಗಳು ಮತ್ತು ಸಾವಿನ ಬಗ್ಗೆ ಪರಿಶೀಲನೆ ನಡೆಸಲು ಆಂತರಿಕ ಸಮಿತಿ ರಚಿಸಿರುವುದಾಗಿ ತಿಳಿಸಿದ್ದರು. ಆದರೆ ಇದರ ಕಾನೂನುಬದ್ಧ ರಚನೆ, ನಿರ್ವಹಣೆ ನಿಯಮಗಳು ಅಥವಾ ಸಮಿತಿಯ ಜವಾಬ್ದಾರಿ ಬಗ್ಗೆ ಯಾವುದೇ ಮಾಹಿತಿ ನೀಡಲು ವಿಫಲವಾಗಿದ್ದಾರೆ.&lt;/p&gt;&lt;p&gt;5. 2022ರಲ್ಲಿ ಆಸ್ಪತ್ರೆಯು ಕೆಲವು ಅತ್ಯಂತ ಮಹತ್ವದ ನಿರ್ಧಾರ ಕೈಗೊಳ್ಳುವ ಸಭೆಗಳನ್ನ ನಡೆಸಿದೆ. ಈ ರೀತಿಯ ಸಭೆಗಳನ್ನು ಕಾನೂನುಬದ್ಧವಾಗಿ ಇರಬೇಕಾದ ಕೋರಂ ಇಲ್ಲದೆಯೇ ನಡೆಸಲಾಗಿದೆ. ಇದಕ್ಕೆ ಕೋವಿಡ್&zwnj; ಕಾರಣಗಳನ್ನು ಆಸ್ಪತ್ರೆ ನೀಡಿದೆ. ಆದರೆ ವರ್ಚುವಲ್&zwnj; ಸಭೆಯಂತ ಪರ್ಯಾಯ ಮಾರ್ಗಗಳ ಬಗ್ಗೆ ಉದ್ದೇಶಪೂರ್ವಕವಾಗಿ ಮಾಹಿತಿಯನ್ನ ನೀಡಿಲ್ಲ.&lt;/p&gt;&lt;p&gt;6. ಪ್ರತಿ ಸಭೆಯ ನಂತರ ಸಭೆಯ ಕ್ಷಣ ಕ್ಷಣದ ವರದಿ (ಮಿನಿಟ್ಸ್&zwnj; ಆಫ್&zwnj; ಮೀಟಿಂಗ್&zwnj;) ತಯಾರಿಸಿ, ಅಧ್ಯಕ್ಷರ ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕು. ಆದರೆ 2022ರ ಎಲ್ಲಾ ಸಭೆಗಳ ವರದಿಗಳನ್ನು ಸರಿಯಾಗಿ ತಯಾರಿಸಿ ಸಲ್ಲಿಸಿಲ್ಲ. ಇದು ಸಂಪೂರ್ಣವಾಗಿ ಇಂಡಿಯನ್ ಗುಡ್ ಕ್ಲಿನಿಕಲ್ ಪ್ರಾಕ್ಟೀಸ್ (ಜಿಸಿಪಿ) ನಿಯಮಗಳ ಉಲ್ಲಂಘನೆಯಾಗಿದೆ.&lt;/p&gt;&lt;p&gt;7. 2023ರಲ್ಲಿ ಕ್ಲಿನಿಕಲ್ ಟ್ರಯಲ್&zwnj;ಗಳಲ್ಲಿ ಹಲವು ನಿಯಮಗಳ ಉಲ್ಲಂಘನೆಗಳು ನಡೆದಿದ್ದವು. ಇವುಗಳನ್ನು ತಕ್ಷಣ ಸರ್ಕಾರಕ್ಕೆ ವರದಿ ಮಾಡಬೇಕಿತ್ತು. ಆದರೆ ಆಸ್ಪತ್ರೆ ಅವುಗಳನ್ನು ಮರೆಮಾಚಿತು. ರೋಗಿಗಳ ಸಾವು ಮತ್ತು ತೀವ್ರ ಸಮಸ್ಯೆಗಳನ್ನು ಪರಿಶೀಲಿಸಲು ಒಂದು ಉಪ ಸಮಿತಿ ರಚಿಸಲಾಗಿದೆ ಎಂದು ಹೆಚ್&zwnj;ಸಿಜಿ ಅಧಿಕಾರಿಗಳು ಹೇಳಿದ್ದರು. ಆದರೆ ಈ ಉಪ ಸಮಿತಿಯನ್ನು ಯಾವಾಗ ರಚಿಸಲಾಯಿತು, ಯಾರು ಸದಸ್ಯರು, ಅದರ ನಿಯಮಗಳು ಏನು, ಅದು ಎಷ್ಟು ಸಭೆಗಳನ್ನು ನಡೆಸಿತು ಎಂಬ ಯಾವುದೇ ದಾಖಲೆ ಅಥವಾ ವಿವರಗಳನ್ನು ನೀಡಲಿಲ್ಲ.&lt;/p&gt;&lt;p&gt;8. ಎಚ್&zwnj;ಸಿಜಿ ಆಸ್ಪತ್ರೆಯು ಕ್ಲಿನಿಕಲ್&zwnj; ಟ್ರಯಲ್&zwnj;ನಲ್ಲಿ ಭಾಗವಹಿಸುವ ಮಾನವರ ರಕ್ಷಣೆ ಬಗ್ಗೆ ಕಾನೂನುಬದ್ದವಾಗಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ವಿಫಲವಾಗಿದೆ. ಇದು &lsquo;ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗ ನಿಯಮಗಳು-2019&rsquo; ರ ಉಲ್ಲಂಘನೆಯಾಗಿದೆ&lt;/p&gt;&lt;h3&gt;&lt;strong&gt;ಸರ್ಕಾರದಿಂದ ಕಠಿಣ ಕ್ರಮ:&lt;/strong&gt;&lt;/h3&gt;&lt;p&gt;ತನಿಖೆ ವೇಳೆ ಹಲವು ನಿಯಮಗಳ ಉಲ್ಲಂಘನೆ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹೆಚ್&zwnj;ಸಿಜಿ ಆಸ್ಪತ್ರೆಯ ನೈತಿಕ ಸಮಿತಿಯ ವಿರುದ್ಧ ಬಹಳ ಕಠಿಣ ಮತ್ತು ದೊಡ್ಡ ಕ್ರಮ ಕೈಗೊಂಡು ಸಮಿತಿಗೆ 2 ವರ್ಷ ಪೂರ್ತಿ ನಿಷೇಧ ಹೇರಿದೆ. ಈ ಅವಧಿಯಲ್ಲಿ ಸಮಿತಿ ಯಾವುದೇ ಹೊಸ ಕ್ಲಿನಿಕಲ್ ಟ್ರಯಲ್&zwnj;ಗಳನ್ನು ಅನುಮತಿಸಲು ಅಥವಾ ನೋಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಮರೆಮಾಡಿದ ರೋಗಿಗಳ ಸಾವು ಮತ್ತು ತೀವ್ರ ಅನಾರೋಗ್ಯ ವರದಿಗಳನ್ನು ಸರಿಯಾಗಿ ಮತ್ತು ತಕ್ಷಣ ಸಲ್ಲಿಸಬೇಕು. ತಪ್ಪುಗಳನ್ನು ಸರಿಪಡಿಸಲು ಮತ್ತು ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ತಿದ್ದುಪಡಿ ಮತ್ತು ತಡೆಗಟ್ಟುವ ಯೋಜನೆ (ಸಿಎಪಿಎ) ಸಲ್ಲಿಸಬೇಕು ಎಂದು ಆದೇಶಿಸಿದೆ.&lt;/p&gt;&lt;p&gt;ಆಸ್ಪತ್ರೆಯು ರೋಗಿಗಳ ಕುಟುಂಬಗಳಿಗೆ ನಷ್ಟ ಪರಿಹಾರ ನೀಡಬೇಕು. ಈಗಾಗಲೇ ನಡೆಯುತ್ತಿರುವ ಟ್ರಯಲ್&zwnj;ಗಳಲ್ಲಿರುವ ರೋಗಿಗಳನ್ನು ತೀವ್ರವಾಗಿ ಮೇಲ್ವಿಚಾರಣೆ ಮಾಡಬೇಕು. ಪ್ರತಿ ತಿಂಗಳೂ ರೋಗಿಗಳ ಸುರಕ್ಷತಾ ವರದಿಯನ್ನು ಬೆಂಗಳೂರಿನ ಸಿಡಿಸ್&zwnj;ಸಿಒ ಝೋನಲ್ ಕಚೇರಿಗೆ ಸಲ್ಲಿಸಬೇಕು ಎಂದು ಮಹತ್ವದ ಆದೇಶ ನೀಡಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಡಾ. ರಾಜೀವ್ ಸಿಂಗ್ ರಘುವಂಶಿ ಅವರು ಈ ಆದೇಶಕ್ಕೆ ಸಹಿ ಹಾಕಿ ಹೊರಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h3&gt;&lt;p&gt;- ಎಚ್&zwnj;ಸಿಜಿ ಕ್ಯಾನ್ಸರ್&zwnj; ಆಸ್ಪತ್ರೆಯಲ್ಲಿ ಕ್ಲಿನಿಕಲ್&zwnj; ಟ್ರಯಲ್&zwnj; ಎಂಬುದು ಹಗರಣವಾಗಿದೆ ಎಂದು ಆ ಸಂಸ್ಥೆಯ ನೈತಿಕ ಸಮಿತಿ ಮುಖ್ಯಸ್ಥ ನ್ಯಾ. ಪಿ. ಕೃಷ್ಣ ಭಟ್&zwnj; ಗಂಭೀರ ಆರೋಪ ಮಾಡಿದ್ದರು&lt;/p&gt;&lt;p&gt;- ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸಂಸ್ಥೆಯ ಉನ್ನತ ಆಡಳಿತ ವರ್ಗಕ್ಕೆ ಖುದ್ದು ಮನವಿ ಮಾಡಿದ್ದರು. ಆದರೆ ಆಡಳಿತ ಮಂಡಳಿ ಅಕ್ರಮವನ್ನೇ ಮುಚ್ಚಿ ಹಾಕಲು ಪ್ರಯತ್ನಿಸಿತ್ತು&lt;/p&gt;&lt;p&gt;- ತಮ್ಮ ಪ್ರಯತ್ನ ವಿಫಲ ಬೆನ್ನಲ್ಲೇ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ನ್ಯಾ. ಪಿ. ಕೃಷ್ಣ ಭಟ್&zwnj; ರಾಜೀನಾಮೆ ನೀಡಿದ್ದರು. ಆ ಬೆನ್ನಲ್ಲೇ ಸಂಸ್ಥೆಯ ಸಿಇಒ, ನಿರ್ದೇಶಕರು, ವೈದ್ಯರು ಕೂಡಾ ಪದತ್ಯಾಗ ಮಾಡಿದ್ದರು.&lt;/p&gt;&lt;p&gt;- ವಿಚಾರ ಗಂಭೀರ ಸ್ವರೂಪದ್ದಾದ ಕಾರಣ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿತ್ತು.&lt;/p&gt;&lt;p&gt;- ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಬಗ್ಗೆ ಕೇಂದ್ರ ಸರ್ಕಾರದಿಂದ ತನಿಖೆ. ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ವರದಿ ಸಲ್ಲಿಕೆ, ಸಭೆ ನಿರ್ವಹಣೆ, ಅಧಿಕಾರಿಗಳಿಂದ ನಿಯಮ ಉಲ್ಲಂಘನೆ ಸೇರಿ ಹಲವು ಅಕ್ರಮ ಬೆಳಕಿಗೆ&lt;/p&gt;&lt;p&gt;- ಹೀಗಾಗಿ ಆಸ್ಪತ್ರೆಯ ನೈತಿಕ ಸಮಿತಿಯ ವಿರುದ್ಧ 2 ವರ್ಷ ಸರ್ಕಾರ ನಿಷೇಧ ಹೇರಿದೆ. ಈ ಅವಧಿಯಲ್ಲಿ ಆಸ್ಪತ್ರೆ ಯಾವುದೇ ಕ್ಲಿನಿಕಲ್ ಟ್ರಯಲ್ ನಡೆಸುವಂತಿಲ್ಲ&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-s-hcg-cancer-hospital-clinical-trail-has-been-banned-for-two-years-for-lapses-in-clinical-trials-mrq/articleshow-7kkx1q4"/>
        </item>
        <item>
            <title><![CDATA[Karnataka Lokayukta Raid: 8 ಅಧಿಕಾರಿಗಳ ಬಳಿ ಪತ್ತೆಯಾಯ್ತಯ ₹31.11 ಕೋಟಿ ಆಸ್ತಿ]]></title>
            <link>https://kannada.asianetnews.com/state/karnataka-lokayukta-raid-update-assets-worth-rs-31-point-11-crore-found-with-8-government-officials-mrq/articleshow-rltm0wt</link>
            <guid isPermaLink="true">https://kannada.asianetnews.com/state/karnataka-lokayukta-raid-update-assets-worth-rs-31-point-11-crore-found-with-8-government-officials-mrq/articleshow-rltm0wt</guid>
            <pubDate>Wed, 17 Jun 2026 08:44:32 +0530</pubDate>
            <description><![CDATA[ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ರಾಜ್ಯದ 8 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು, ದಾವಣಗೆರೆ, ಕಲಬುರಗಿ ಸೇರಿದಂತೆ ಹಲವೆಡೆ ನಡೆದ ಈ ದಾಳಿಯಲ್ಲಿ ಒಟ್ಟು ₹31.11 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv7cbrhrsfbx1ftrmee75ne5,imgname-davanagere-lokayukta-raid--2--1781585535544.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ ವಿವಿಧೆಡೆ ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.&lt;/p&gt;&lt;p&gt;ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿ 35 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿ ಒಟ್ಟು ₹31.11 ಕೋಟಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್&zwnj; ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?&lt;/strong&gt;&lt;/h2&gt;&lt;p&gt;&lt;strong&gt;1.ಎಸ್&zwnj;.ಎಲ್&zwnj;.ರಾಜಣ್ಣ (ಕೆಎಚ್&zwnj;ಬಿ, ನಗರ ಯೋಜನೆ ಹೆಚ್ಚುವರಿ ನಿರ್ದೇಶಕ, ಕಾವೇರಿ ಭವನ ಬೆಂಗಳೂರು):&lt;/strong&gt;&lt;/p&gt;&lt;p&gt;5 ಕಡೆ ದಾಳಿ, 3 ನಿವೇಶನ, 2 ವಾಸದ ಮನೆ, 3 ಎಕರೆ ಕೃಷಿ ಜಮೀನು, ₹40 ಸಾವಿರ, ₹70 ಲಕ್ಷ ಮೌಲ್ಯದ ಚಿನ್ನಾಭರಣ, ₹17 ಲಕ್ಷ ಮೌಲ್ಯದ ವಾಹನ, ₹20 ಲಕ್ಷ ಬ್ಯಾಂಕ್&zwnj; ಉಳಿತಾಯ ಸೇರಿ ಒಟ್ಟು ₹4.97 ಕೋಟಿ ಮೌಲ್ಯದ ಆಸ್ತಿ.&lt;/p&gt;&lt;p&gt;&lt;strong&gt;2. ಎಂ.ಬಿ.ಉದಯ ಕುಮಾರ್&zwnj; (ಸಹಾಯಕ ಕಾರ್ಯಪಾಲಕ ಅಭಿಯಂತರ, ಬೆಸ್ಕಾಂ, ಸಿ-07 ಉಪ ವಿಭಾಗ, ಯಲಹಂಕ ಬೆಂಗಳೂರು):&lt;/strong&gt;&lt;/p&gt;&lt;p&gt;4 ಕಡೆ ದಾಳಿ, 10 ನಿವೇಶನ, 1 ವಾಸದ ಮನೆ, 1 ಎಕರೆ ಕೃಷಿ ಜಮೀನು, ₹1.83 ಲಕ್ಷ, ₹30.29 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹33 ಲಕ್ಷ ಮೌಲ್ಯದ ವಾಹನ, ₹21 ಲಕ್ಷ ಬ್ಯಾಂಕ್&zwnj; ಠೇವಣಿ, ₹1.80 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತು ಸೇರಿ ಒಟ್ಟು ₹3.54 ಕೋಟಿ ಮೌಲ್ಯದ ಆಸ್ತಿ.&lt;/p&gt;&lt;p&gt;&lt;strong&gt;3.ಪಿ.ಎನ್&zwnj;.ಹರ್ಷವರ್ಧನ (ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ):&lt;/strong&gt;&lt;/p&gt;&lt;p&gt;4 ಕಡೆ ದಾಳಿ, 4 ನಿವೇಶನ, 2 ವಾಸದ ಮನೆ, ₹3 ಸಾವಿರ, ₹30 ಲಕ್ಷ ಮೌಲ್ಯದ ಚಿನ್ನ, ₹25 ಲಕ್ಷ ಮೌಲ್ಯದ ವಾಹನ, ₹25 ಲಕ್ಷ ಮೌಲ್ಯದ ಬೆಲೆಬಾಳುವ ಇತರೆ ವಸ್ತು ಸೇರಿ ಒಟ್ಟು ₹4.85 ಕೋಟಿ ಮೌಲ್ಯದ ಆಸ್ತಿ.&lt;/p&gt;&lt;p&gt;&lt;strong&gt;4.ಸಿದ್ದೇಶ್ವರ ಎನ್&zwnj;.ಹೆಬ್ಬಾಳ (ಮುಖ್ಯ ತಾಂತ್ರಿಕ ಅಭಿಯಂತರ, ಎನ್&zwnj;ಡಬ್ಲ್ಯೂಕೆಆರ್&zwnj;ಟಿಸಿ, ಹುಬ್ಬಳ್ಳಿ)&lt;/strong&gt;&lt;/p&gt;&lt;p&gt;3 ಕಡೆ ದಾಳಿ, 1 ನಿವೇಶನ, 2 ವಾಸದ ಮನೆ, ₹37 ಲಕ್ಷ ನಗದು, ₹1.23 ಕೋಟಿ ಮೌಲ್ಯದ ಚಿನ್ನಾಭರಣಗಳು, ₹30.16 ಲಕ್ಷ ಮೌಲ್ಯದ ವಾಹನಗಳು, ₹20.14 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತು ಸೇರಿ ಒಟ್ಟು ₹3.76 ಕೋಟಿ ಮೌಲ್ಯದ ಆಸ್ತಿ.&lt;/p&gt;&lt;p&gt;&lt;strong&gt;5.ಸಣ್ಣ ಕೆಂಚಪ್ಪ (ಅಧೀಕ್ಷಕ ಅಭಿಯಂತರ, ಕೆಆರ್&zwnj;ಡಿಎಲ್&zwnj;, ಬೆಳಗಾವಿ):&lt;/strong&gt;&lt;/p&gt;&lt;p&gt;5 ಕಡೆ ದಾಳಿ, 3 ವಾಸದ ಮನೆ, 31 ಎಕರೆ ಕೃಷಿ ಜಮೀನು, ₹1.67 ಲಕ್ಷ ನಗದು, ₹54.29 ಲಕ್ಷ ಮೌಲ್ಯದ ಚಿನ್ನ, ₹20.60 ಲಕ್ಷ ಮೌಲ್ಯದ ವಾಹನ, ₹20.60 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತು ಸೇರಿ ಒಟ್ಟು ₹2.97 ಕೋಟಿ ಮೌಲ್ಯದ ಆಸ್ತಿ.&lt;/p&gt;&lt;p&gt;&lt;strong&gt;6.ಎಲ್&zwnj;.ಎ.ಕೃಷ್ಣ ನಾಯಕ್&zwnj; (ಕಾರ್ಯದರ್ಶಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ):&lt;/strong&gt;&lt;/p&gt;&lt;p&gt;4 ಕಡೆ ದಾಳಿ, 7 ನಿವೇಶನ, 3 ವಾಸದ ಮನೆ, 2 ಎಕರೆ ಕೃಷಿ ಜಮೀನು, ₹6.96 ಲಕ್ಷ ನಗದು, ₹43.23 ಲಕ್ಷ ಮೌಲ್ಯದ ಚಿನ್ನ, ₹33.75 ಲಕ್ಷ ಮೌಲ್ಯದ ವಾಹನ ಸೇರಿ ಒಟ್ಟು ₹2.70 ಕೋಟಿ ಮೌಲ್ಯದ ಆಸ್ತಿ.&lt;/p&gt;&lt;p&gt;&lt;strong&gt;7. ಮಾಣಿಕ್&zwnj; ಎಸ್&zwnj;.ಕನಕಟ್ಟೆ (ಅಧೀಕ್ಷಕ ಅಭಿಯಂತರ, ಲೋಕೋಪಯೋಗಿ ಇಲಾಖೆ, ಕಲಬುರಗಿ):&lt;/strong&gt;&lt;/p&gt;&lt;p&gt;5 ಕಡೆ ದಾಳಿ, 5 ನಿವೇಶನಗಳು, 3 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ, ₹70 ಲಕ್ಷ ಮೌಲ್ಯದ ಕೃಷಿ ಜಮೀನು, ₹1.26 ಲಕ್ಷ ನಗದು, ₹37.92 ಲಕ್ಷ ಮೌಲ್ಯದ ಚಿನ್ನ, ₹49.15 ಲಕ್ಷ ಮೌಲ್ಯದ ವಾಹನ, ₹50 ಲಕ್ಷ ಬ್ಯಾಂಕ್&zwnj; ಉಳಿತಾಯ, ₹16 ಲಕ್ಷ ಮೌಲ್ಯದ ಇತರೆ ಬೆಲೆಬಾಳುವ ವಸ್ತು ಸೇರಿ ಒಟ್ಟು ₹4.68 ಕೋಟಿ ಮೌಲ್ಯದ ಆಸ್ತಿ.&lt;/p&gt;&lt;p&gt;&lt;strong&gt;8.ಕೆ.ಎಸ್&zwnj;.ಮೋಹನ್&zwnj; (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು ಉಪ ವಿಭಾಗ, ಜಿಂಕೆವನ, ಚಿಕ್ಕಮಗಳೂರು ಜಿಲ್ಲೆ):&lt;/strong&gt;&lt;/p&gt;&lt;p&gt;5 ಕಡೆ ದಾಳಿ, 3 ನಿವೇಶನ, 2 ವಾಸದ ಮನೆ, 7 ಎಕರೆ ಕೃಷಿ ಜಮೀನು, ₹1.19 ಲಕ್ಷ ನಗದು, ₹5.16 ಲಕ್ಷ ಮೌಲ್ಯದ ಚಿನ್ನ, ₹5 ಲಕ್ಷ ಮೌಲ್ಯದ ವಾಹನ, ₹5 ಲಕ್ಷ ಮೌಲ್ಯದ ಇತರೆ ವಸ್ತು ಸೇರಿ ಒಟ್ಟು ₹3.62 ಕೋಟಿ ಮೌಲ್ಯದ ಆಸ್ತಿ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-lokayukta-raid-update-assets-worth-rs-31-point-11-crore-found-with-8-government-officials-mrq/articleshow-rltm0wt"/>
        </item>
        <item>
            <title><![CDATA[Karnataka MSP payment dela: ಬೆಂಬಲ ಬೆಲೆಯ ಬಲೆಗೆ ಸಿಲುಕಿ ರಾಜ್ಯದ 1.40 ಲಕ್ಷ ರೈತರು ಪರದಾಟ!]]></title>
            <link>https://kannada.asianetnews.com/state/rs1-714-cr-msp-dues-delay-leaves-karnataka-farmers-stranded-rav/articleshow-t02u932</link>
            <guid isPermaLink="true">https://kannada.asianetnews.com/state/rs1-714-cr-msp-dues-delay-leaves-karnataka-farmers-stranded-rav/articleshow-t02u932</guid>
            <pubDate>Wed, 17 Jun 2026 08:21:12 +0530</pubDate>
            <description><![CDATA[&lt;p&gt;ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಭತ್ತ ಮಾರಾಟ ಮಾಡಿದ ಲಕ್ಷಾಂತರ ರೈತರಿಗೆ ರಾಜ್ಯ ಸರ್ಕಾರ ಇನ್ನೂ 1,714 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಮುಂಗಾರು ಬಿತ್ತನೆಗೆ ಹಣವಿಲ್ಲದೆ ರೈತರು ಪರದಾಡುತ್ತಿದ್ದು, ಬಾಕಿ ಹಣ ಪಾವತಿಗೆ ಒತ್ತಡ ಹೆಚ್ಚಾದ ನಂತರ ಸರ್ಕಾರ 650 ಕೋಟಿ ರೂ. ಬಿಡುಗಡೆ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv9qsh2n01axvq055tgpe3te,imgname-----------------------2026-06-17t082000.384-1781664629845.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;&lt;strong&gt;ಸಿದ್ದು ಚಿಕ್ಕಬಳ್ಳೇಕೆರೆ&lt;/strong&gt;&lt;/li&gt;&lt;/ul&gt;&lt;p&gt;&amp;nbsp;&lt;strong&gt;ಬೆಂಗಳೂರು (ಜೂ.17):&lt;/strong&gt; ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂಎಸ್&zwnj;ಪಿ)ಅಡಿ ರಾಜ್ಯದಲ್ಲಿ ಜೋಳ, ರಾಗಿ, ಭತ್ತ ಮಾರಾಟ ಮಾಡಿದ್ದ ಒಂದು ಲಕ್ಷಕ್ಕೂ ಅಧಿಕ ರೈತರಿಗೆ ರಾಜ್ಯ ಸರ್ಕಾರ ಇನ್ನೂ ಬರೊಬ್ಬರಿ 1,714 ಕೋಟಿ ರು. ಪಾವತಿ ಬಾಕಿ ಉಳಿಸಿಕೊಂಡಿದೆ.&lt;/p&gt;&lt;p&gt;ಎಂಎಸ್&zwnj;ಪಿ ಅಡಿ ರಾಗಿ ಮಾರಾಟ ಮಾಡಿದ್ದ 1.02 ಲಕ್ಷ ರೈತರಿಗೆ 1,611 ಕೋಟಿ ರು. ಬಾಕಿ ಉಳಿಸಿಕೊಂಡಿದ್ದು ವರದಿಯಾದ ಬೆನ್ನಲ್ಲೇ ಜೋಳ ಮಾರಾಟ ಮಾಡಿದ್ದ 28 ಸಾವಿರಕ್ಕೂ ಅಧಿಕ ರೈತರಿಗೆ ರಾಜ್ಯ ಸರ್ಕಾರ 767 ಕೋಟಿ ರು. ಪಾವತಿಸದಿರುವುದು ಬೆಳಕಿಗೆ ಬಂದಿದೆ. ಭತ್ತ, ಜೋಳ ಬೆಳೆಗಾರರು ಸೇರಿ ಒಟ್ಟಾರೆ 1.40 ಲಕ್ಷಕ್ಕೂ ಅಧಿಕ ರೈತರಿಗೆ ಒಟ್ಟು 2,364 ಕೋಟಿ ರು. ಪಾವತಿಯಾಗಬೇಕಿತ್ತು. ಬಾಕಿ ಹಣ ಪಾವತಿಗೆ ಪ್ರತಿಪಕ್ಷಗಳು, ರೈತರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಮಂಗಳವಾರ ಸರ್ಕಾರ 650 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ.&lt;/p&gt;&lt;p&gt;ಮುಂಗಾರು ಪ್ರಾರಂಭವಾಗಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಎಂಎಸ್&zwnj;ಪಿ ಹಣ ಪಾವತಿ ಆಗದಿರುವುದರಿಂದ ಭೂಮಿ ಹಸನು ಮಾಡಲು, ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ ಖರೀದಿ ಮಾಡಲು, ಕಾರ್ಮಿಕರಿಗೆ ಕೂಲಿ ನೀಡಲೂ ಹಣವಿಲ್ಲದೆ ರೈತರು ಪರದಾಡುವಂತಾಗಿದೆ. ಶೀಘ್ರ ಬಾಕಿ ಹಣ ಬಿಡುಗಡೆಗೊಳಿಸಬೇಕು ಎಂಬ ಆಗ್ರಹ ಅನ್ನದಾತರಿಂದ ಕೇಳಿಬಂದಿದೆ.&lt;/p&gt;&lt;h2&gt;ಜೋಳದ ಹಣ ಶೇ.94 ರಷ್ಟು ಬಾಕಿ:&lt;/h2&gt;&lt;p&gt;ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್&zwnj; ಜೋಳಕ್ಕೆ 3699 ರು. ಬೆಂಬಲ ಬೆಲೆ ನಿಗದಿ ಮಾಡಿದ್ದು, ಹಿಂಗಾರಿನಲ್ಲಿ 27,622 ರೈತರು ಹಾಗೂ ಮುಂಗಾರಿನಲ್ಲಿ 18,522 ರೈತರು ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು ಒಟ್ಟಾರೆ 802 ಕೋಟಿ ರು. ಮೌಲ್ಯದ 2.16 ಲಕ್ಷ ಮೆಟ್ರಿಕ್&zwnj; ಟನ್&zwnj; ಜೋಳ ಮಾರಾಟ ಮಾಡಿದ್ದಾರೆ. ಆದರೆ ಇದರಲ್ಲಿ ಕೇವಲ 34 ಕೋಟಿ ರು.(ಶೇ.6) ಮಾತ್ರ ರೈತರಿಗೆ ಸಂದಾಯವಾಗಿತ್ತು.&lt;/p&gt;&lt;p&gt;ಬಳ್ಳಾರಿ ಜಿಲ್ಲೆಯಲ್ಲಿ ಹಿಂಗಾರು ಜೋಳ ಮಾರಾಟ ಮಾಡಿದ 8,550 ರೈತರ 160 ಕೋಟಿ ರು. ಬಾಕಿ ಇದೆ. ರಾಯಚೂರಿನ 14,370 ರೈತರಿಗೆ 278 ಕೋಟಿ ರು, ವಿಜಯನಗರದ 1,093 ರೈತರ 29 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ. ಮುಂಗಾರು ಜೋಳದ ವಿಷಯಕ್ಕೆ ಬರುವುದಾದರೆ, ಪ್ರಮುಖವಾಗಿ ಬಳ್ಳಾರಿಯ 5125, ರಾಯಚೂರಿನ 3763, ಹಾವೇರಿಯ 1154 ರೈತರು ಸೇರಿ 10,259 ರೈತರು ಜೋಳ ಮಾರಾಟ ಮಾಡಿದ್ದಾರೆ. ಇದರಲ್ಲಿ ಶೇ.51.64 ರಷ್ಟು ಮಾತ್ರ ಹಣ ಸಂದಾಯವಾಗಿದೆ.&lt;/p&gt;&lt;h3&gt;1 ವಾರದಲ್ಲಿ ಹಣ ಬಿಡುಗಡೆ ಆಗದಿದ್ರೆ ರಸ್ತೆ ತಡೆ: ಎಚ್ಚರಿಕೆ&lt;/h3&gt;&lt;p&gt;ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಮಾರಾಟ ಮಾಡಿ ಮೂರು ತಿಂಗಳಾಗುತ್ತಿದ್ದರೂ ಹಣ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಮಂಗಳವಾರ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ವಾರದಲ್ಲಿ ಇನ್ನುಳಿದ ಬಾಕಿ ಹಣ ಬಿಡುಗಡೆ ಆಗದಿದ್ದರೆ ರಸ್ತೆ ತಡೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್&zwnj; ಸ್ಪಷ್ಟಪಡಿಸಿದರು.&lt;/p&gt;&lt;p&gt;&lsquo;ಕನ್ನಡ ಪ್ರಭ&rsquo;ದೊಂದಿಗೆ ಮಾತನಾಡಿದ ಅವರು, ಮುಂಗಾರು ಪ್ರಾರಂಭವಾಗಿದ್ದು ಬಿತ್ತನೆ ಕಾರ್ಯಗಳಿಗೆ ಹಣವಿಲ್ಲದೆ ರೈತರು ಪರದಾಡುವಂತಾಗಿದೆ. ವಾರದೊಳಗೆ ಎಂಎಸ್&zwnj;ಪಿ ಬಾಕಿ ಹಣವನ್ನು ಸರ್ಕಾರ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ರಸ್ತೆ ನಡೆಸಿ ಬೃಹತ್&zwnj; ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.&lt;/p&gt;&lt;p&gt;&lt;strong&gt;ಕನ್ನಡಪ್ರಭ ವರದಿ ಬೆನ್ನಲ್ಲೇ&lt;/strong&gt;&lt;/p&gt;&lt;p&gt;650 ಕೋಟಿ ರು. ಬಿಡುಗಡೆ1 ಲಕ್ಷ ರಾಗಿ ರೈತರಿಗೆ 1611 ಕೋಟಿ ರುಪಾಯಿ ಬಾಕಿ&rsquo; ಎಂದು ಜೂ.3 ರಂದೇ &lsquo;ಕನ್ನಡ ಪ್ರಭ&rsquo; ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಅದರ ಬೆನ್ನಲ್ಲೇ ಸರ್ಕಾರ ಇದಿಗ 650 ಕೋಟಿ ರು. ಹಣ ರೈತರ ಖಾತೆಗೆ ಜಮೆ ಮಾಡಿದೆ. ಈ ಹಣವನ್ನು ಹಿರಿತನದ ಆಧಾರದಲ್ಲಿ ಎರಡು ದಿನದೊಳಗೆ ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ವರದಿ ಪ್ರಸ್ತಾಪಿಸಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್&zwnj; ಸೇರಿ ರೈತರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rs1-714-cr-msp-dues-delay-leaves-karnataka-farmers-stranded-rav/articleshow-t02u932"/>
        </item>
        <item>
            <title><![CDATA[Karnataka Congress: ಎಸ್‌ಐಆರ್ ಜನಜಾಗೃತಿಗಾಗಿ ರಾಜ್ಯದ 5 ಕಡೆ ಕಾಂಗ್ರೆಸ್ ಬೃಹತ್ ಸಮಾವೇಶ! ಯಾವಾಗ, ಎಲ್ಲೆಲ್ಲಿ ಕಾರ್ಯಕ್ರಮ?]]></title>
            <link>https://kannada.asianetnews.com/politics/karnataka-congress-conventions-in-5-parts-of-state-raise-awareness-about-sir-rav/articleshow-d177k7o</link>
            <guid isPermaLink="true">https://kannada.asianetnews.com/politics/karnataka-congress-conventions-in-5-parts-of-state-raise-awareness-about-sir-rav/articleshow-d177k7o</guid>
            <pubDate>Wed, 17 Jun 2026 07:53:27 +0530</pubDate>
            <description><![CDATA[&lt;p&gt;ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯಿಂದ (SIR) ತಮ್ಮ ಮತಬ್ಯಾಂಕ್&zwnj;ಗೆ ಸೇರಿದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರ ಹೆಸರುಗಳು ಕೈಬಿಡುವ ಆತಂಕ. ಕಾಂಗ್ರೆಸ್(Congress) ಇದೆ. ಇದನ್ನು ತಡೆಯಲು, ರಾಜ್ಯಾದ್ಯಂತ ಜೂ.23 ರಿಂದ ಜೂ.30 ರವರೆಗೆ ಐದು ಬೃಹತ್ ಜಾಗೃತಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzhdmkgbd5a6zgrtse7mevx,imgname-----------------------2026-04-12t055752.365-1775953695344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.17): &lt;/strong&gt;ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಬಗ್ಗೆ ಕಾಂಗ್ರೆಸ್&zwnj; ಶಾಸಕಾಂಗ ಪಕ್ಷ(Congress Legislature Party)ದಲ್ಲಿ ತೀವ್ರ ಆತಂಕ ವ್ಯಕ್ತವಾಗಿದ್ದು, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಸೇರಿ ಕಾಂಗ್ರೆಸ್&zwnj;ನ ಮತ ಬ್ಯಾಂಕ್&zwnj; ಮತಹಕ್ಕಿನಿಂದ ದೂರವಾಗದಂತೆ ಎಚ್ಚರವಹಿಸಲು ತೀರ್ಮಾನಿಸಲಾಗಿದೆ.&lt;/p&gt;&lt;p&gt;ಇದಕ್ಕಾಗಿ ರಾಜ್ಯಾದ್ಯಂತ ಮತದಾರರಿಗೆ ಜಾಗೃತಿ ಮೂಡಿಸಲು ಜೂ.23 ರಿಂದ ಜೂ.30 ರವರೆಗೆ ಐದು ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಬಿಎಲ್&zwnj;ಎಗಳ ಮೂಲಕ ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಿಂದ ಅರ್ಹರು ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಬಿಡದಿಯ ವಂಡರ್&zwnj; ಲಾ ರೆಸಾರ್ಟ್&zwnj;ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್&zwnj; ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್&zwnj; ಉಸ್ತುವಾರಿ ರಣದೀಪ್&zwnj; ಸಿಂಗ್&zwnj; ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಎಸ್&zwnj;ಐಆರ್&zwnj; ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದರು.&lt;/p&gt;&lt;p&gt;ಕಾಂಗ್ರೆಸ್&zwnj; ಮೈಮರೆತರೆ ಎಸ್&zwnj;ಐಆರ್&zwnj;ನಿಂದ ತುಂಬಾ ಅಪಾಯವಿದೆ. ಕಾಂಗ್ರೆಸ್&zwnj;ಗೆ ಮತ ಬ್ಯಾಂಕ್&zwnj; ಆಗಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಹೀಗಾಗಿ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬಿಎಲ್&zwnj;ಎಗಳ ಮೂಲಕ ಎಸ್&zwnj;ಐಆರ್&zwnj; ಬಗ್ಗೆ ಎಚ್ಚರವಹಿಸಬೇಕು. ಬ್ಲಾಕ್&zwnj; ಮಟ್ಟಕ್ಕೆ ಹೋಗಿ ಕೆಲಸ ಮಾಡಬೇಕು. ಯಾವ ಮತದಾರರ ಹೆಸರನ್ನೂ ಪಟ್ಟಿಯಿಂದ ತೆಗೆಯುತ್ತಿದ್ದರೂ ಅದನ್ನು ಉಳಿಸಲು ಅಗತ್ಯವಿರುವ ದಾಖಲೆ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.&lt;/p&gt;&lt;h2&gt;ರಾಜ್ಯದ 5 ಕಡೆ ಜನಜಾಗೃತಿ ಸಮಾವೇಶ:&lt;/h2&gt;&lt;p&gt;ಮತದಾರರ ಕಡೆಗೆ ನಡೆಯಲು ಕಾಂಗ್ರೆಸ್&zwnj; ತೀರ್ಮಾನಿಸಿದ್ದು, ಬೃಹತ್ ಜಾಗೃತಿ ಅಭಿಯಾನ ನಡೆಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಿದೆ. ನಾಲ್ಕೂ ಕಂದಾಯ ವಿಭಾಗ ಸೇರಿ ಐದು ಕಡೆ ಬೃಹತ್&zwnj; ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಜೂ.23 ರಂದು ಮಂಗಳೂರು ನಗರ, ಜೂ.25 ಹುಬ್ಬಳ್ಳಿ ನಗರ, ಜೂ.27 ರಂದು ಮೈಸೂರು, ಜೂ.29 ರಂದು ಕಲಬುರಗಿ ಹಾಗೂ ಜೂ.30 ರಂದು ಬೆಂಗಳೂರು ನಗರದಲ್ಲಿ ಬೃಹತ್&zwnj; ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;ಚುನಾವಣೆಗೆ ಸಜ್ಜಾಗಿ-ಶಾಸಕರಿಗೆ ಸಿಎಂ ಸೂಚನೆ:&lt;/h3&gt;&lt;p&gt;ಶಾಸಕರು ಜಿಪಂ, ತಾಪಂ, ಗ್ರಾಪಂ, ಜಿಬಿಎ ಚುನಾವಣೆ ಸಜ್ಜಾಗುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಸೂಚನೆ ನೀಡಿದ್ದಾರೆ. ಮುಂದಿನ ದಿನಗಳು ಸವಾಲಿನ ದಿನಗಳಾಗಿದ್ದು, ಪಂಚಾಯಿತಿ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ವಿಧಾನಸಭೆ ಚುನಾವಣೆವರೆಗೆ ಎಚ್ಚರವಹಿಸಿ ಕೆಲಸ ಮಾಡಬೇಕು ಎಂದು ತಿಳಿಸಿರುವುದಾಗಿ ಹೇಳಲಾಗಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-congress-conventions-in-5-parts-of-state-raise-awareness-about-sir-rav/articleshow-d177k7o"/>
        </item>
        <item>
            <title><![CDATA[Renukaswamy murder case: ಪೆನ್ ಡ್ರೈವ್ ಸಾಕ್ಷ್ಯ ಬೇಕೇ,ಬೇಡವೇ?: ಇಂದು ಆದೇಶ! ಏನಾಗಲಿದೆ ದರ್ಶನ್ ಭವಿಷ್ಯ?]]></title>
            <link>https://kannada.asianetnews.com/state/renukaswamy-murder-case-pen-drive-evidence-needed-not-needed-court-order-today-rav/articleshow-p5cl4hz</link>
            <guid isPermaLink="true">https://kannada.asianetnews.com/state/renukaswamy-murder-case-pen-drive-evidence-needed-not-needed-court-order-today-rav/articleshow-p5cl4hz</guid>
            <pubDate>Wed, 17 Jun 2026 07:18:31 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣ(Renukaswamy murder case)ದ ವಿಚಾರಣೆ ವೇಳೆ, ತನಿಖಾಧಿಕಾರಿಗಳು ಸಲ್ಲಿಸಿದ ಪೆನ್&zwnj;ಡ್ರೈವ್ ಸಾಕ್ಷ್ಯ(Pendrive Digital evidence)ದ ಕುರಿತು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆದಿದೆ. ನ್ಯಾಯಾಲಯವು ಈ ಬಗ್ಗೆ ತನ್ನ ಆದೇಶವನ್ನು ಕಾಯ್ದಿರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt73wn73sry45tzwjbgh4hph,imgname-darshan-1780502910179.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಸಿಟಿ ಸಿವಿಲ್&zwnj; ಕೋರ್ಟಲ್ಲಿ ನಡೆಯುತ್ತಿರುವ ವಿಚಾರಣೆ&lt;/li&gt; &lt;li&gt;ಪೆನ್&zwnj;ಡ್ರೈವ್&zwnj; ಬಗ್ಗೆ ನಟ ದರ್ಶನ್&zwnj; ಪರ ವಕೀಲರ ಆಕ್ಷೇಪ&lt;/li&gt;&lt;/ul&gt;&lt;p&gt;&amp;nbsp;&lt;strong&gt;ಬೆಂಗಳೂರು (ಜೂ.17):&lt;/strong&gt; ಚಿತ್ರದುರ್ಗದ ರೇಣುಕಾಸ್ವಾಮಿ&zwnj;&zwnj;&zwnj;&zwnj;&zwnj; ಕೊಲೆ&zwnj;&zwnj; ಪ್ರಕರಣ(Renukaswamy murder case)ಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ (ತನಿಖಾಧಿಕಾರಿಗಳು) ಸಲ್ಲಿಸಿರುವ ಸಾಕ್ಷ್ಯಾಧಾರವನ್ನು ಒಳಗೊಂಡ ಪೆನ್ ಡ್ರೈವ್(Pendrive) ಅನ್ನು ದಾಖಲೆಯಾಗಿ ಗುರತಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್&zwnj; ನ್ಯಾಯಾಲಯ ಬುಧವಾರ ಪ್ರಕಟಿಸಲಿದೆ.&lt;/p&gt;&lt;p&gt;ರೇಣುಕಾಸ್ವಾಮಿ&zwnj;&zwnj;&zwnj;&zwnj;&zwnj; ಕೊಲೆ&zwnj;&zwnj; ಪ್ರಕರಣವನ್ನು 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್&zwnj; ನ್ಯಾಯಾಲಯ ಮಂಗಳವಾರ ಮುಂದುವರಿಸಿತು.&zwnj;&lt;/p&gt;&lt;p&gt;ಈ ವೇಳೆ ನ್ಯಾಯಾಲಯವು ತನಿಖಾಧಿಕಾರಿಗಳು ಸಲ್ಲಿಸಿರುವ ಸಾಕ್ಷ್ಯಾಧಾರಗಳನ್ನು ಒಳಗೊಂಡ ಪೆನ್ ಡ್ರೈವ್ (ಡಿಜಿಟಲ್&zwnj;&zwnj; ಸಾಕ್ಷ್ಯ) ಅನ್ನು ಸರ್ಕಾರಿ ವಿಶೇಷ ಅಭಿಯೋಜಕರ ಹಾಗೂ ಆರೋಪಿಗಳ ಪರ ವಕೀಲರ ಸಮ್ಮುಖದಲ್ಲಿ ಮುಚ್ಚಿದ ಲಕೋಟೆಯಿಂದ ಹೊರಗೆ ತೆರೆಯಿತು.&lt;/p&gt;&lt;p&gt;ನಂತರ ಪೆನ್ ಡ್ರೈವ್ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿದೆಯೇ? ಎಂಬುದನ್ನು ಪರೀಕ್ಷಿಸಲು&zwnj;&zwnj; ಪೆನ್ ಡ್ರೈವ್ ನ್ಯಾಯಾಲಯದಲ್ಲಿ ಪ್ಲೇ ಮಾಡಲು (ವೀಕ್ಷಿಸಲು) ಬಯಸಿತು.&lt;/p&gt;&lt;p&gt;ಅದಕ್ಕೆ ದರ್ಶನ್(Darshan thoogudeepa) ಹಾಗೂ ಇತರೆ ಆರೋಪಿಗಳು&zwnj; ಆಕ್ಷೇಪಿಸಿ, ಪೆನ್ ಡ್ರೈವ್ ಡಿಜಿಟಲ್ ಸಾಕ್ಷ್ಯ.(Pen drive digital evidence) ಅದನ್ನು&zwnj; ಪರಿಗಣಿಸಬೇಕಾದರೆ ಸಾಕ್ಷ್ಯ ಕಾಯ್ದೆ ಸೆಕ್ಷನ್ 65 ಬಿ ಅನುಸಾರ ದೃಢೀಕೃತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಆದರೆ, ತನಿಖಾಧಿಕಾರಿಗಳು &zwnj;ಪ್ರಮಾಣ ಪತ್ರವನ್ನು ಸಲ್ಲಿಸಿಲ್ಲ. ಅದರಂತೆ ಪೆನ್ ಡ್ರೈವ್ ಅನ್ನು ಸಾಕ್ಷ್ಯಧಾರವಾಗಿ ಗುರುತಿಸುವಂತಿಲ್ಲ ಎಂದು ಕೋರಿದರು.&lt;/p&gt;&lt;p&gt;ಅದಕ್ಕೆ &zwnj;ಉತ್ತರಿಸಿದ&zwnj; ವಿಶೇಷ ಸರ್ಕಾರಿ ಅಭಿಯೋಜಕ&zwnj;&zwnj; ಪಿ.ಪ್ರಸನ್ನ ಕುಮಾರ್ ಅವರು, ವಿಚಾರಣೆ ಸಂದರ್ಭದಲ್ಲಿ&zwnj; ಸಾಕ್ಷ್ಯ ಕಾಯ್ದೆ ಸೆಕ್ಷನ್ 65 ಬಿ ಅನುಸಾರ ದೃಢೀಕೃತ ಪ್ರಮಾಣ ಪತ್ರವನ್ನು ಸಲ್ಲಿಸಲಾಗುವುದು. ಪೆನ್ ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಗುರುತಿಸಬೇಕು ಎಂದು ಕೋರಿದರು.&lt;/p&gt;&lt;p&gt;ಈ ಕುರಿತಂತೆ ವಿಶೇಷ ಸರ್ಕಾರಿ ವಕೀಲರು ಹಾಗೂ ಆರೋಪಿಗಳ&zwnj; ಪರ ವಕೀಲರು ಸುಮಾರು ಸಮಯ ವಾದ- ಪ್ರತಿವಾದ ಆಲಿಸಿದರು.&lt;/p&gt;&lt;p&gt;ಅಂತಿಮವಾಗಿ ನ್ಯಾಯಾಧೀಶರು, ಪೆನ್ ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಗುರತಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಬುಧವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.&lt;/p&gt;&lt;p&gt;ಇದೇ ವೇಳೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಮ್ಮ ಖುದ್ದು ಹಾಜರಾತಿಗೆ ಆದೇಶಿಸಬೇಕು ಎಂದು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದರು&zwnj;.&lt;/p&gt;&lt;p&gt;ಸಾಕ್ಷಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ನಾನು ನನ್ನ ಪರ ವಕೀಲರ ಜೊತೆ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳಬೇಕಿದೆ. ಹಾಗಾಗಿ, ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ತಮಗೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ದರ್ಶನ್ ಕೋರಿದರು.&lt;/p&gt;&lt;h2&gt;ವಿಚಾರಣೆಗೆ ಕರೆದಾಗ ಕೇಸ್&zwnj;ನ ಎಲ್ಲಾ ವಕೀಲರು ಹಾಜರಾಗಲು ನಿರ್ದೇಶನ&lt;/h2&gt;&lt;p&gt;ಪ್ರಕರಣದ ಕೆಲ ಆರೋಪಿಗಳ ಪರ ವಕೀಲರು, ದಿನ&zwnj;ನಿತ್ಯದ ಆಧಾರದಲ್ಲಿ ವಿಚಾರಣೆ ನಡೆದರೆ, ಹಾಜರಾಗಲು ತಮಗೆ ಕಷ್ಟವಾಗುತ್ತದೆ. ಸಾಕ್ಷಿಗಳ&zwnj; ಹೇಳಿಕೆ ಪಟ್ಟಿಯನ್ನು ಪರೀಕ್ಷೆಗೆ ಒಳಪಡಿಸಲು ತಮಗೆ ಸಲ್ಲಿಸಲು ಪ್ರಾಸಿಕ್ಯೂಷನ್ ಗೆ&zwnj; ಸೂಚಿಸಲು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸುಪ್ರೀಂಕೋರ್ಟ್ ನಿರ್ದೇಶನದಂತೆ ತ್ವರಿತಗತಿಯಲ್ಲಿ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು. ಪ್ರತಿ ನಿತ್ಯದ ವಿಚಾರಣೆ ನಡೆಸಲು ಸೋಮವಾರವಷ್ಟೇ ನ್ಯಾಯಾಲಯ ನಿರ್ಧರಿಸಿದೆ. ಸುಪ್ರೀಂ&zwnj; ಕೋರ್ಟ್ ನಿರ್ದೇಶನ ಪಾಲಿಸುವ ನಿಟ್ಟಿನಲ್ಲಿ ಪ್ರಕರಣವನ್ನು ವಿಚಾರಣೆಗೆ ಕರೆದಾಗ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಕೀಲರು ತಪ್ಪದೇ ಹಾಜರಾಗಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/renukaswamy-murder-case-pen-drive-evidence-needed-not-needed-court-order-today-rav/articleshow-p5cl4hz"/>
        </item>
    </channel>
</rss>
