<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 09 Jul 2026 21:08:04 +0530</lastBuildDate>
        <atom:link href="https://kannada.asianetnews.com/rss/state" rel="self" type="application/rss+xml"/>
        <item>
            <title><![CDATA[ಕಾವೇರಿಗೆ ಕ್ಯಾತೆ ತೆಗೆದ ಸ್ಟಾಲಿನ್; ನಮಗೆ ಕುಡಿಯಲು ನೀರಿಲ್ಲ, ನೀವು ನೀರು ಪೋಲು ಮಾಡದೇ ಸಂರಕ್ಷಿಸಿ-ರಾಮಲಿಂಗಾರೆಡ್ಡಿ]]></title>
            <link>https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn</link>
            <guid isPermaLink="true">https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn</guid>
            <pubDate>Thu, 09 Jul 2026 21:07:57 +0530</pubDate>
            <description><![CDATA[ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ವಿವಾದ ಭುಗಿಲೆದ್ದಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆಯಾಗಿದ್ದು, ಮಳೆಯ ಅಭಾವದಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನವೇ ಅಂತಿಮ ಎಂದು ಅವರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx3qyn5b7r9650f811wb2syh,imgname-ramalinga-reddy-udhayanidhi-stalin-cauvery-water-1783610954923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.09): ಕಾ&lt;/strong&gt;ವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ. ತಮಿಳುನಾಡು ನೀರಿಗಾಗಿ ಆಗ್ರಹಿಸುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕರ್ನಾಟಕದ ಸಚಿವ ರಾಮಲಿಂಗಾರೆಡ್ಡಿ, 'ರಾಜ್ಯದ ಜಲಾಶಯಗಳಲ್ಲಿ ಸದ್ಯಕ್ಕೆ ನೀರಿನ ಸಂಗ್ರಹ ಕಡಿಮೆ ಇದೆ. ಹೀಗಾಗಿ ತಮಿಳುನಾಡು ಲಭ್ಯವಿರುವ ನೀರನ್ನು ಸಂರಕ್ಷಿಸಿಕೊಳ್ಳುವತ್ತ ಗಮನ ಹರಿಸಬೇಕು' ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಇತ್ತೀಚೆಗೆ ನಡೆಸಿದ ಸಭೆಯಲ್ಲಿ, ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ತಮ್ಮ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಬೇಕು ಮತ್ತು ಕುಡಿಯುವ ನೀರು ಹಾಗೂ ಪರಿಸರ ಹರಿವಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿವೆ.&lt;/p&gt;&lt;h2&gt;&lt;strong&gt;ಜಲಾಶಯಗಳಲ್ಲಿನ ನೀರಿನ ಕೊರತೆ:&lt;/strong&gt;&lt;/h2&gt;&lt;p&gt;ಜೂನ್ 30ರ ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಕಾವೇರಿ ಪಾತ್ರದ ನಾಲ್ಕು ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ (KRS), ಕಬಿನಿ, ಹಾರಂಗಿ ಮತ್ತು ಹೇಮಾವತಿಯಲ್ಲಿ ಒಟ್ಟು ಜೀವಂತ ನೀರಿನ ಸಂಗ್ರಹ ಕೇವಲ 15.761 ಟಿಎಂಸಿ ಅಡಿ ಮಾತ್ರ ಇದೆ. ಈ ಪ್ರಮಾಣದ ನೀರು ಮುಂದಿನ ಮೂರು ತಿಂಗಳ ಕಾಲ ಬೆಂಗಳೂರು ಮಹಾನಗರ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಇತರ ಪಟ್ಟಣಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಸಾಲದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ತಮಿಳುನಾಡು ನಾಯಕ ಉದಯನಿಧಿ ಸ್ಟಾಲಿನ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, 'ಕರ್ನಾಟಕವು ಉದ್ದೇಶಪೂರ್ವಕವಾಗಿ ನೀರು ನಿಲ್ಲಿಸುತ್ತಿಲ್ಲ. ಮಳೆಯ ಅಭಾವದಿಂದ ಜಲಾಶಯಗಳಿಗೆ ಒಳಹರಿವು ಇಲ್ಲದಿರುವುದು ನಮ್ಮ ಅಸಹಾಯಕತೆಗೆ ಕಾರಣವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೂಡ ಈ ಬಾರಿ ಮುಂಗಾರು ವಿಳಂಬ ಮತ್ತು ಮಳೆಯ ಕೊರತೆಯ ಬಗ್ಗೆ ವರದಿ ನೀಡಿದೆ. ಕಾವೇರಿ ಕಣಿವೆ ಸದ್ಯಕ್ಕೆ ನೀರಿನ ಕೊರತೆಯನ್ನು ಎದುರಿಸುತ್ತಿದೆ' ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಪ್ರಾಧಿಕಾರದ ತೀರ್ಮಾನವೇ ಅಂತಿಮ:&lt;/strong&gt;&lt;/h2&gt;&lt;p&gt;ಕೆಆರ್ಎಸ್ ಜಲಾಶಯದಿಂದ ನೀರು ಬಿಡುವ ಅಧಿಕಾರ ಕರ್ನಾಟಕ ಸರ್ಕಾರದ ಕೈಲಿಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸಿನ ಮೇರೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕದ ಪಾತ್ರ ಸೀಮಿತವಾಗಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.&lt;/p&gt;&lt;p&gt;ಆದಾಗ್ಯೂ, ಮುಂದಿನ ದಿನಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಳ್ಳುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಜಲಾಶಯಗಳು ಭರ್ತಿಯಾಗಲಿವೆ ಮತ್ತು ನೀರಿನ ಬಿಕ್ಕಟ್ಟು ಬಗೆಹರಿಯಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-ramalinga-reddy-tells-to-tamil-nadu-conserve-cauvery-water-react-to-udhayanidhi-stalin/articleshow-zpvu8qn"/>
        </item>
        <item>
            <title><![CDATA[ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್:  6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!]]></title>
            <link>https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</link>
            <guid isPermaLink="true">https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet</guid>
            <pubDate>Wed, 08 Jul 2026 11:25:56 +0530</pubDate>
            <description><![CDATA[ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್&zwnj;ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx04edrp64anbam01r602epp,imgname-lokayukta-raids-in-across-karnataka-1783489836822.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನೂರಾರು ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ಮೆಗಾ ಆಪರೇಷನ್ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;ಧಾರವಾಡ ಮತ್ತು ಶಿವಮೊಗ್ಗ: ಎಸಿಎಫ್ ಕಿರಣ್ ಅಂಗಡಿಗೆ ಶಾಕ್!&lt;/h2&gt;&lt;p&gt;ಶಿವಮೊಗ್ಗದ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಅಂಗಡಿ ಅವರಿಗೆ ಸೇರಿದ ಧಾರವಾಡ ಮತ್ತು ಶಿವಮೊಗ್ಗದ ಒಟ್ಟು ೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಧಾರವಾಡದ ಲೋಕಾ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಶಿವಮೊಗ್ಗದ ಲೋಕಾಯುಕ್ತ ಇನ್&zwnj;ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಐಷಾರಾಮಿ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪತ್ನಿಯ ಹೆಸರಿನಲ್ಲಿದೆ ಎನ್ನಲಾದ ಉದ್ಯಮ) ಹಾಗೂ ಅವರ ಸೋದರ ಮಾವನ ಮನೆಗಳ ಮೇಲೆ ಶೋಧ ನಡೆಸಲಾಗುತ್ತಿದೆ.&lt;/p&gt;&lt;h2&gt;ಶಿವಮೊಗ್ಗದ ಕಚೇರಿ ಮೇಲೂ ದಾಳಿ&lt;/h2&gt;&lt;p&gt;ಇತ್ತ ಶಿವಮೊಗ್ಗದ ಆಲ್ಕೋಳ ರಸ್ತೆಯಲ್ಲಿರುವ ಕಿರಣ್ ಅಂಗಡಿ ಅವರ ಅರಣ್ಯ ಸಂಶೋಧನಾ ಕಚೇರಿಯ ಮೇಲೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿದೆ. ದಾಳಿಯ ವೇಳೆ ಅಧಿಕಾರಿ ಕಿರಣ್ ಅಂಗಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಐದು ಜನರ ಅಧಿಕಾರಿಗಳ ತಂಡ ಸದ್ಯ ದಾಖಲೆಗಳನ್ನು ಜಾಲಾಡುತ್ತಿದೆ.&lt;/p&gt;&lt;h2&gt;ರಾಯಚೂರು: ಕೆಬಿಜೆಎನ್&zwnj;ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ&lt;/h2&gt;&lt;p&gt;ರಾಯಚೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸನಗೌಡ ಅವರ ವಿರುದ್ಧ ಲೋಕಾಯುಕ್ತರು ತನಿಖೆ ತೀವ್ರಗೊಳಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ 7 ಪ್ರತ್ಯೇಕ ತಂಡಗಳು ಏಕಕಾಲದಲ್ಲಿ 7 ಕಡೆ ಧಾಳಿ ನಡೆಸಿವೆ. ಬಸನಗೌಡ ಅವರ ರಾಯಚೂರು ನಗರದ ಎಚ್.ಆರ್.ಬಿ ಲೇಔಟ್&zwnj;ನಲ್ಲಿರುವ ಮನೆ, ಯಕ್ಲಾಸಪುರದ ಸೆಲೆಬ್ರಿಟಿ ಗಾರ್ಡನ್&zwnj;ನಲ್ಲಿರುವ ಅಣ್ಣನ ಮನೆ ಹಾಗೂ ಯಕ್ಲಾಪುರದ ತೋಟದ ಮನೆಯಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;h2&gt;ಬಾರ್ ಮತ್ತು ಪೆಟ್ರೋಲ್ ಬಂಕ್ ಪತ್ತೆ&lt;/h2&gt;&lt;p&gt;ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲೇ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗೋದಾಮಿನ (Warehouse) ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿ ವ್ಯಾಪ್ತಿಯ ಕೆಬಿಜೆಎನ್&zwnj;ಎಲ್ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.&lt;/p&gt;&lt;h2&gt;ಚಿತ್ರದುರ್ಗ ಆರ್&zwnj;ಎಫ್&zwnj;ಒ ಮತ್ತು ಪ್ರೊಫೆಸರ್ ಮನೆಗೆ ಅಧಿಕಾರಿಗಳ ಎಂಟ್ರಿ&lt;/h2&gt;&lt;p&gt;ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಬ್ಬರು ಪ್ರಮುಖ ಅಧಿಕಾರಿಗಳ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿರುವ ವಲಯ ಅರಣ್ಯಾಧಿಕಾರಿ (RFO) ದುಗ್ಗಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆ ಹಾಗೂ ತೋಟದ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.&lt;/p&gt;&lt;h2&gt;ಕಲಬುರಗಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಫ್ಲ್ಯಾಟ್ ಮೇಲೆ ದಾಳಿ&lt;/h2&gt;&lt;p&gt;ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅಮೃತರಾವ್ ಯಲಾಲ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ಮಾಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಬಸವ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಫ್ಲ್ಯಾಟ್, ಮತ್ತು ಕೊತ್ತಂಬರಿ ಲೇಔಟ್&zwnj;ನಲ್ಲಿರುವ ಜೇಸ್ಕಾಂ ಕಚೇರಿಗಳ ಮೇಲೆ ದಾಳಿಯಾಗಿದೆ. ಇದಲ್ಲದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯ ಮೇಲೂ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಎಇಇ ಅಮೃತರಾವ್ ಅವರು ಜಾಗೃತಿ ಕಾಲೋನಿಯಲ್ಲಿ 'ಪ್ಲಾಟಿನಂ ಸ್ಟುಡಿಯೋ' ಎಂಬ ಹೈಟೆಕ್ ಸ್ಟುಡಿಯೋ ಹೊಂದಿದ್ದು, ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಲ್ಯಾಟ್ ಹಾಗೂ ವಿವಿಧೆಡೆ 20 ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ತುಮಕೂರು ಸಣ್ಣ ನೀರಾವರಿ ಇಲಾಖೆ ಎಇಇ ಮನೆ ಮೇಲೆ ಲೋಕಾ ದಾಳಿ&lt;/h2&gt;&lt;p&gt;ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಆಗಿರುವ ಮಧುಸೂದನ್ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಮಧುಸೂದನ್ ಮನೆ. ಸಣ್ಣ ನೀರಾವರಿ ಇಲಾಖೆ ತಿಪಟೂರು ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಮಧುಸೂದನ್ ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಲೋಕಾ ದಾಳಿ. ಮಧುಸೂದನ್ ಮನೆಯನ್ನ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಮ್. ಸದ್ಯ ಎಲ್ಲಾ ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಚಿನ್ನಾಭರಣ, ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಬೇಕಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/lokayukta-raids-in-across-karnataka-6-govt-officials-under-radar-multiple-government-engineers-acf-raided-gdp/articleshow-1k8vyet"/>
        </item>
        <item>
            <title><![CDATA[UDISE+ 2025-26 Report: ಸರ್ಕಾರಿ ಶಾಲೆ ದಾಖಲಾತಿ 2 ವರ್ಷದಲ್ಲಿ 86 ಲಕ್ಷದಷ್ಟು ಇಳಿಕೆ!]]></title>
            <link>https://kannada.asianetnews.com/education/udise-plus-2025-26-report-why-government-school-enrolment-fell-by-86-lakh-students-rav/articleshow-6z5pe2o</link>
            <guid isPermaLink="true">https://kannada.asianetnews.com/education/udise-plus-2025-26-report-why-government-school-enrolment-fell-by-86-lakh-students-rav/articleshow-6z5pe2o</guid>
            <pubDate>Thu, 09 Jul 2026 09:46:31 +0530</pubDate>
            <description><![CDATA[&lt;p&gt;ಶೈಕ್ಷಣಿಕ ವರ್ಷ 2023-24 ಮತ್ತು 2025-26ರ ನಡುವೆ (2 ವರ್ಷದಲ್ಲಿ) ದೇಶದಲ್ಲಿ ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ 86 ಲಕ್ಷದಷ್ಟು ಇಳಿಕೆಯಾಗಿದೆ. ಅತ್ತ ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಿಗೆ 88 ಮಕ್ಕಳು ಸೇರಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2h8k7zebze3gmhtha5zep8,imgname-----------------------2026-07-09t094247.231-1783570386175.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಖಾಸಗಿ ಶಾಲೆಗೆ 88 ಲಕ್ಷ ವಿದ್ಯಾರ್ಥಿಗಳು&lt;/li&gt; &lt;li&gt;ಶಿಕ್ಷಕ-ವಿದ್ಯಾರ್ಥಿ ಅನುಪಾತ 24: ಚೇತರಿಕೆ&lt;/li&gt; &lt;li&gt;5,663 ಶಾಲೇಲಿ ಶೂನ್ಯ ದಾಖಲಾತಿ&lt;/li&gt; &lt;li&gt;ದೇಶದಲ್ಲಿ 1.01 ಲಕ್ಷ ಏಕಶಿಕ್ಷಕ ಶಾಲೆ&lt;/li&gt;&lt;/ul&gt;&lt;p&gt;&lt;strong&gt;ನವದೆಹಲಿ (ಜು.9) :&lt;/strong&gt; ಶೈಕ್ಷಣಿಕ ವರ್ಷ 2023-24 ಮತ್ತು 2025-26ರ ನಡುವೆ (2 ವರ್ಷದಲ್ಲಿ) ದೇಶದಲ್ಲಿ ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ 86 ಲಕ್ಷದಷ್ಟು ಇಳಿಕೆಯಾಗಿದೆ. ಅತ್ತ ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಿಗೆ 88 ಮಕ್ಕಳು ಸೇರಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.&lt;/p&gt;&lt;p&gt;ಶಾಲಾ ಮೂಲಸೌಕರ್ಯ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಶಿಕ್ಷಕರಿಗೆ ಸಂಬಂಧಿಸಿದ ನೈಜ ಸಮಯದ ಮಾಹಿತಿಯನ್ನು ಒದಗಿಸುವ ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ+ ಡೇಟಾಬೇಸ್&zwnj;(UDISE+ 2025-26 Report)ನಲ್ಲಿ ಈ ಮಾಹಿತಿ ನೀಡಲಾಗಿದೆ. ಅದರ ಪ್ರಕಾರ, ಒಟ್ಟಾರೆಯಾಗಿ ಪೂರ್ವ-ಪ್ರಾಥಮಿಕದಿಂದ ಪ್ರೌಢಶಿಕ್ಷಣದ ಹಂತದ ವರೆಗೆ 2023-24ರಲ್ಲಿ 24.80 ಕೋಟಿ ದಾಖಲಾತಿಗಳಾಗಿದ್ದು, ಇದು 2025-26ರ ಅವಧಿಯಲ್ಲಿ 24.72 ಕೋಟಿಗಿಳಿದಿದೆ. ಇದರಲ್ಲಿ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ 12.75 ಕೋಟಿಯಿಂದ 11.89 ಕೋಟಿಗಿಳಿದಿದೆ. ಆದರೆ ಖಾಸಗಿ ಶಾಲೆಗಳ ದಾಖಲಾತಿ 9 ಕೋಟಿಗಿಂತ 9.89 ಕೋಟಿಗೇರಿದೆ.&lt;/p&gt;&lt;p&gt;14.72 ಲಕ್ಷವಿದ್ದ ಶಾಲೆಗಳ ಸಂಖ್ಯೆ 14.67 ಲಕ್ಷಕ್ಕಿಳಿದಿದೆ. ಶಿಕ್ಷಕರ ಸಂಖ್ಯೆ 98.08 ಲಕ್ಷದಿಂದ 1.03 ಕೋಟಿಗೇರಿದೆ. ಇದರಿಂದ ವಿದ್ಯಾರ್ಥಿ-ಶಿಕ್ಷಕ ಅನುಪಾತ 25ರಿಂದ 24 (ಸುಧಾರಣೆ) ಆಗಿದೆ. ಏಕಶಿಕ್ಷಕ ಶಾಲೆಗಳು 1.11 ಲಕ್ಷದಿಂದ 1.01 ಲಕ್ಷಕ್ಕಿಳಿದಿದೆ. 5,663 ಶಾಲೆಗಳಲ್ಲಿ ಒಂದೂ ದಾಖಲಾತಿಯಾಗಿಲ್ಲ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/udise-plus-2025-26-report-why-government-school-enrolment-fell-by-86-lakh-students-rav/articleshow-6z5pe2o"/>
        </item>
        <item>
            <title><![CDATA[Electoion: ಪಂಚಾಯಿತಿ ಫೈಟ್; ನಡೆದಿದೆಯಾ ವಾರ್ಡ್ ಮೀಸಲಾತಿಯಲ್ಲಿ ತಾರತಮ್ಯ?  ಇಲ್ಲಿದೆ ಆಕ್ಷೇಪಣೆ ಅರ್ಜಿ ಮಾಹಿತಿ!]]></title>
            <link>https://kannada.asianetnews.com/state/panchayat-fight-was-there-discrimination-in-ward-reservation-here-is-the-objection-application-information-bmk/articleshow-7qucgpu</link>
            <guid isPermaLink="true">https://kannada.asianetnews.com/state/panchayat-fight-was-there-discrimination-in-ward-reservation-here-is-the-objection-application-information-bmk/articleshow-7qucgpu</guid>
            <pubDate>Thu, 09 Jul 2026 19:08:14 +0530</pubDate>
            <description><![CDATA[&lt;p&gt;ಗ್ರಾಮ ಪಂಚಾಯತ್ ಚುನಾವಣೆಯ ಕರಡು ಮೀಸಲಾತಿ ಪಟ್ಟಿಯಲ್ಲಿನ ದೋಷಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಈ ಸ್ಟೋರಿ ಮಾರ್ಗದರ್ಶನವಾಗಲಿದೆ. ಅರ್ಜಿಯನ್ನು ಹೇಗೆ ಸಿದ್ಧಪಡಿಸಬೇಕು, ಯಾವ ಕಾರಣಗಳನ್ನು ನೀಡಬೇಕು, ಮತ್ತು ನಿಗದಿತ ಸಮಯದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಇದು ವಿವರಿಸುತ್ತದೆ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3hhcq124h399szj4mcfe07,imgname-gp-fight-1783604228832.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ವಾರ್ಡ್&zwnj;ವಾರು ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ನಿಮ್ಮ ವಾರ್ಡ್&zwnj;ನ ಮೀಸಲಾತಿಯಲ್ಲಿ ಏನಾದರೂ ತಪ್ಪು ಅಥವಾ ಅನ್ಯಾಯ ನಡೆದಿದೆ ಎಂದು ನಿಮಗೆ ಅನಿಸಿದರೆ, ಅದನ್ನು ಸರಿಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಸಾರ್ವಜನಿಕರು ಹಾಗೂ ಚುನಾವಣಾ ಆಕಾಂಕ್ಷಿಗಳು ಜಿಲ್ಲಾಧಿಕಾರಿಗಳಿಗೆ ಅಥವಾ ಸಂಬಂಧ ಪಟ್ಟ ತಾಲೂಕು ದಂಡಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&amp;nbsp;&lt;/p&gt;&lt;h2&gt;&lt;strong&gt;ಆಕ್ಷೇಪಣೆ ಸಲ್ಲಿಸುವ ಸರಳ ಹಂತಗಳು ಇಲ್ಲಿವೆ!&lt;/strong&gt;&lt;/h2&gt;&lt;h3&gt;&lt;strong&gt;1. ಅರ್ಜಿ ಸಿದ್ಧಪಡಿಸುವುದು ಹೇಗೆ?&lt;/strong&gt;&lt;/h3&gt;&lt;p&gt;ಒಂದು ಬಿಳಿ ಹಾಳೆ ತೆಗೆದುಕೊಳ್ಳಿ ಅಥವಾ ಕಂಪ್ಯೂಟರ್ ಟೈಪಿಂಗ್ ಮೂಲಕ ಅರ್ಜಿ ಸಿದ್ಧಪಡಿಸಿ. ಅರ್ಜಿಯ ಆರಂಭದಲ್ಲಿ, &quot;ಮಾನ್ಯ ಜಿಲ್ಲಾಧಿಕಾರಿಗಳು&quot; ಎಂದು ಬರೆದು, ನಿಮ್ಮ ಜಿಲ್ಲೆಯ ಹೆಸರನ್ನು ಹಾಕಿ. ನಂತರ ವಿಷಯ ಎಂದು ನಮೂದಿಸಿ ನಿಮ್ಮ ಗ್ರಾಪಂ ಹೆಸರು ಮತ್ತು ವಾರ್ಡ್ ಸಂಖ್ಯೆ ಬರೆದು, ಮೀಸಲಾತಿ ಬದಲಾವಣೆ ಕೋರಿ ಆಕ್ಷೇಪಣೆ ಎಂದು ಸ್ಪಷ್ಟವಾಗಿ ಬರೆಯಿರಿ. ಅರ್ಜಿಯಲ್ಲಿ ನಿಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಿರಿ.&lt;/p&gt;&lt;h3&gt;&lt;strong&gt;2. ಅರ್ಜಿಯಲ್ಲಿ ಏನು ಬರೆಯಬೇಕು?&lt;/strong&gt;&lt;/h3&gt;&lt;p&gt;ಕೇವಲ ಮೀಸಲಾತಿ ಬದಲಾಯಿಸಿ ಎಂದರೆ ಅಧಿಕಾರಿಗಳು ಒಪ್ಪುವುದಿಲ್ಲ. ಅದಕ್ಕೆ ಸರಿಯಾದ ಕಾರಣ ನೀಡಬೇಕು. ಸರದಿ ಉಲ್ಲಂಘನೆ, ಕಳೆದ ಎರಡು-ಮೂರು ಚುನಾವಣೆಗಳಲ್ಲಿ ನಿಮ್ಮ ವಾರ್ಡ್&zwnj;ಗೆ ಯಾವ ಮೀಸಲಾತಿ ಇತ್ತು? ಈ ಬಾರಿಯೂ ಅದೇ ವರ್ಗಕ್ಕೆ ಮುಂದುವರಿದಿದೆಯೇ? ಹಾಗಿದ್ದರೆ ರೊಟೇಷನ್ ನಿಯಮದಂತೆ ನಮಗೆ ಈ ಬಾರಿ ಬೇರೆ ಮೀಸಲಾತಿ ಬರಬೇಕಿತ್ತು ಎಂದು ಬರೆಯಿರಿ. ನಿಮ್ಮ ವಾರ್ಡ್&zwnj;ನಲ್ಲಿ ಒಂದು ನಿರ್ದಿಷ್ಟ ಸಮುದಾಯದ (ಎಸ್&zwnj;ಸಿ, ಎಸ್&zwnj;ಟಿ ಅಥವಾ ಒಬಿಸಿ) ಜನರ ಸಂಖ್ಯೆ ಹೆಚ್ಚಾಗಿದ್ದರೂ ಅವರಿಗೆ ಮೀಸಲಾತಿ ಸಿಗದಿದ್ದರೆ, ಅಥವಾ ಜನರೇ ಇಲ್ಲದ ವರ್ಗಕ್ಕೆ ಮೀಸಲಾತಿ ನೀಡಿದ್ದರೆ ಅದನ್ನು ಅರ್ಜಿಯಲ್ಲಿ ಎತ್ತಿ ತೋರಿಸಿ.&lt;/p&gt;&lt;h3&gt;&lt;strong&gt;3. ಯಾವ ದಾಖಲೆಗಳನ್ನು ಲಗತ್ತಿಸಬೇಕು?&lt;/strong&gt;&lt;/h3&gt;&lt;p&gt;ನಿಮ್ಮ ದೂರಿಗೆ ಬಲ ಬರಲು ಈ ವಿಷಯಗಳ ಜಿರಾಕ್ಸ್ ಪ್ರತಿ ಅರ್ಜಿಯೊಂದಿಗೆ ಜೋಡಿಸಿ, ಅವುಗಳೆನೆಂದರೆ, ನಿಮ್ಮ ವಾರ್ಡ್&zwnj;ನ ಇತ್ತೀಚಿನ ಮತದಾರರ ಪಟ್ಟಿಯ ನಕಲು. ಕಳೆದ ಚುನಾವಣೆಗಳಲ್ಲಿ ಆ ವಾರ್ಡ್&zwnj;ಗೆ ಯಾವ ಮೀಸಲಾತಿ ಇತ್ತು ಎಂಬುದನ್ನು ತೋರಿಸುವ ಹಳೆಯ ದಾಖಲೆಗಳನ್ನು ಲಗತ್ತಿಸಿ. ಇದಾದರೇ ನಿಮ್ಮ ಅರ್ಜಿಗೆ ಇನ್ನು ಬಲ ಬರುತ್ತದೆ.&lt;/p&gt;&lt;h3&gt;&lt;strong&gt;4. ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು?&lt;/strong&gt;&lt;/h3&gt;&lt;p&gt;ಸಿದ್ಧಪಡಿಸಿದ ಅರ್ಜಿಯನ್ನು ನೇರವಾಗಿ ನಿಮ್ಮ ಜಿಲ್ಲಾಧಿಕಾರಿಗಳ (DC)ಕಚೇರಿಗೆ ಅಥವಾ ಅವರು ಸೂಚಿಸಿರುವ ತಹಶೀಲ್ದಾರ್ ಕಚೇರಿಯ ಚುನಾವಣಾ ವಿಭಾಗಕ್ಕೆ ಹೋಗಿ ನೀಡಬೇಕು. ಅರ್ಜಿಯನ್ನು ಕೊಟ್ಟ ತಕ್ಷಣ, ಅಲ್ಲಿನ ಅಧಿಕಾರಿಯಿಂದ ಮತ್ತೊಂದು ಪ್ರತಿಯ ಮೇಲೆ &quot;ಸ್ವೀಕೃತಿ ಮುದ್ರೆ&quot; (ರಸೀದಿ/Stamp) ಮತ್ತು ದಿನಾಂಕವನ್ನು ಕಡ್ಡಾಯವಾಗಿ ಹಾಕಿಸಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ. ಇದು ನಿಮ್ಮ ಬಳಿ ಇರುವ ದೊಡ್ಡ ಸಾಕ್ಷಿ.&lt;/p&gt;&lt;h3&gt;&lt;strong&gt;5. ಕೊನೆಯ ದಿನಾಂಕದ ಗಮನವಿರಲಿ!&lt;/strong&gt;&lt;/h3&gt;&lt;p&gt;ಕರಡು ಪಟ್ಟಿ ಪ್ರಕಟವಾದ ದಿನದಿಂದ ಕೇವಲ 7ರಿಂದ 15 ದಿನಗಳ ಒಳಗೆ ಮಾತ್ರ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಈ ಸಮಯ ಮೀರಿದರೆ ನಿಮ್ಮ ಅರ್ಜಿ ಸ್ವೀಕರಿಸುವುದಿಲ್ಲ. ಬಂದಿರುವ ಎಲ್ಲ ಅರ್ಜಿ ಪರಿಶೀಲಿಸಿ, ತಪ್ಪುಗಳಿದ್ದರೆ ಸರಿಪಡಿಸಿ ಜಿಲ್ಲಾಧಿಕಾರಿಗಳು ಅಂತಿಮ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುತ್ತಾರೆ.&lt;/p&gt;]]></content:encoded>
            <category>state</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/panchayat-fight-was-there-discrimination-in-ward-reservation-here-is-the-objection-application-information-bmk/articleshow-7qucgpu"/>
        </item>
        <item>
            <title><![CDATA[ಕೊಡಗು ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್: ಮಡಿಕೇರಿಯ ಪ್ರಸಿದ್ಧ 'ರಾಜಾಸೀಟು' 4 ದಿನ ಬಂದ್! ಕಾರಣ ಇಲ್ಲಿದೆ..]]></title>
            <link>https://kannada.asianetnews.com/kodagu/karnataka-tourist-spot-madikeri-raja-seat-closed-for-tourists-4-days-kodagu-dc-order/articleshow-873o9z0</link>
            <guid isPermaLink="true">https://kannada.asianetnews.com/kodagu/karnataka-tourist-spot-madikeri-raja-seat-closed-for-tourists-4-days-kodagu-dc-order/articleshow-873o9z0</guid>
            <pubDate>Wed, 08 Jul 2026 18:56:32 +0530</pubDate>
            <description><![CDATA[&lt;p&gt;ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಮಡಿಕೇರಿಯ 'ರಾಜಾಸೀಟು' ಸ್ಥಳಕ್ಕೆ 4 ದಿನಗಳ ಕಾಲ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮಳೆಗಾಲದಲ್ಲಿ ಮಡಿಕೇರಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಗೆ ಇದರಿಂದ ಭಾರೀ ಬೇಸರವಾಗಿದ್ದರೂ, ಸುರಕ್ಷತೆ ಕಾರಣದಿಂದ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0yetkbcejtv9qfzkgh97ty,imgname-madikeri-raja-seat-4-days-close-1783517112938.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಡಗು (ಜು.08): ಕ&lt;/strong&gt;ರ್ನಾಟಕದ ಸ್ವಿಡ್ಜರ್&zwnj;ಲ್ಯಾಂಡ್ ಎಂದೇ ಖ್ಯಾತವಾಗಿರುವ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಡಿಕೇರಿ ನಗರದ ಕೆಎಸ್&zwnj;ಆರ್&zwnj;ಟಿಸಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ 'ರಾಜಾಸೀಟು' (Raja Seat) ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.&lt;/p&gt;&lt;h2&gt;&lt;strong&gt;ಜುಲೈ 9 ರಿಂದ 12 ರವರೆಗೆ ಬಂದ್&lt;/strong&gt;&lt;/h2&gt;&lt;p&gt;ಮಡಿಕೇರಿ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಜುಲೈ 9 ರಿಂದ ಜುಲೈ 12 ರವರೆಗೆ ರಾಜಾಸೀಟಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜುಲೈ 7 ರಂದು ಕೆಎಸ್&zwnj;ಆರ್&zwnj;ಟಿಸಿ ಬಸ್ ನಿಲ್ದಾಣದ ಬಳಿ ರಸ್ತೆ ಬದಿ ಕುಸಿತ ಉಂಟಾಗಿತ್ತು. ಈ ರಸ್ತೆಯ ದುರಸ್ತಿ ಕಾರ್ಯ ಮತ್ತು ಸುಗಮ ಸಂಚಾರಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ರಾಜಾಸೀಟು ಬಂದ್ ಮಾಡಲು ಕಾರಣವೇನು?&lt;/strong&gt;&lt;/h2&gt;&lt;p&gt;ಬಸ್ ನಿಲ್ದಾಣದ ಬಳಿ ರಸ್ತೆ ಕುಸಿದಿರುವುದರಿಂದ ಕೆಎಸ್&zwnj;ಆರ್&zwnj;ಟಿಸಿ ಮತ್ತು ಖಾಸಗಿ ಬಸ್&zwnj;ಗಳು ಸೇರಿದಂತೆ ಎಲ್ಲಾ ವಾಹನಗಳು ಈಗ ರಾಜಾಸೀಟು ರಸ್ತೆಯ ಮೂಲಕವೇ ಸಂಚರಿಸಬೇಕಾಗಿದೆ. ರಾಜಾಸೀಟು ಪ್ರದೇಶದಲ್ಲಿ ರಸ್ತೆ ಕಿರಿದಾಗಿದ್ದು, ಪ್ರವಾಸಿಗರ ವಾಹನಗಳು ಅಲ್ಲಿ ನಿಲ್ಲುವುದರಿಂದ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗುತ್ತಿದೆ. ಅಲ್ಲದೆ ಈ ಭಾಗದಲ್ಲಿ ಶಾಲೆಗಳಿರುವುದರಿಂದ ಶಾಲಾ ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರವಾಸಿಗರಿಗೆ ಸೂಚನೆ:&lt;/strong&gt;&lt;/h2&gt;&lt;p&gt;ಈಗಾಗಲೇ ಕೊಡಗು ಪ್ರವಾಸ ಹಮ್ಮಿಕೊಂಡಿರುವ ಪ್ರವಾಸಿಗರು ಜುಲೈ 12ರ ವರೆಗೆ ರಾಜಾಸೀಟಿಗೆ ಭೇಟಿ ನೀಡಲು ಸಾಧ್ಯವಿಲ್ಲ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ಈ ನಿರ್ಬಂಧ ಹೇರಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಪ್ರವೇಶದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/kodagu/karnataka-tourist-spot-madikeri-raja-seat-closed-for-tourists-4-days-kodagu-dc-order/articleshow-873o9z0"/>
        </item>
        <item>
            <title><![CDATA[ಹರಿಪ್ರಸಾದ್‌ಗೆ ಸಿಗುತ್ತಾ ಸಚಿವ ಸ್ಥಾನ? ಇತ್ತ ಸತೀಶ ತೀವ್ರ ಅಸಮಾಧಾನ!  ಬಿಕೆ ಮಿನಿಸ್ಟರ್‌ ಕುರಿತು ಮಾಜಿ ಸಿಎಂ ಹೇಳಿದ್ದಿಷ್ಟೇ!]]></title>
            <link>https://kannada.asianetnews.com/state/will-hariprasad-get-a-ministerial-berth-satish-is-extremely-unhappy-bmk/articleshow-9rialup</link>
            <guid isPermaLink="true">https://kannada.asianetnews.com/state/will-hariprasad-get-a-ministerial-berth-satish-is-extremely-unhappy-bmk/articleshow-9rialup</guid>
            <pubDate>Thu, 09 Jul 2026 18:05:06 +0530</pubDate>
            <description><![CDATA[&lt;p&gt;ಮಾಜಿ ಸಿಎಂ ಸಿದ್ದರಾಮಯ್ಯನವರು ಬಿಕೆ ಹರಿಪ್ರಸಾದ್&zwnj;ಗೆ ಸಚಿವ ಸ್ಥಾನ ನೀಡಲು ತೀವ್ರ ಒಲವು ತೋರಿದ್ದಾರೆ. ಈ ಬೆಳವಣಿಗೆಯು ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ಇಬ್ಬರ ನಡುವೆ ಮುನಿಸು ಮೂಡಿದೆ ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3dyk697tyh63bpvcq9rmhq,imgname-satish-jarkiholi-1783600467145.jpg" type="image/jpeg" height="390" width="690"/>
            <content:encoded><![CDATA[&lt;p&gt;ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆ ರಾಜಕೀಯ ಪಡಸಾಲೆಯಲ್ಲಿ ಕೂತುಹಲ ಸೃಷ್ಟಿಸಿದೆ. ಸಿದ್ದರಾಮಯ್ಯನವರ ಹೇಳಿಕೆ ಈಗ ಮತ್ತೊಂದು ಲೆಕ್ಕಾಚಾರವನ್ನು ಸೃಷ್ಟಿಸಿದಂತಿದೆ. ಮಾಜಿ ಸಿಎಂ ಸಿದ್ದು-ಸಚಿವ ಸತೀಶ ರಜಾರಕಿಹೊಳಿ ಮಧ್ಯ ಮುನಿಸು ಸೃಷ್ಟಿಯಾಗಿತ್ತು ಎನ್ನುವುದು ಅದೇ ರಾಜಕೀಯ ಮೊಗಸಾಲೆ ಹಾಗೂ ಸೋಶಿಯಲ್&zwnj; ಮೀಡಿಯಾದಲ್ಲಿ ಹರದಾಡಿತ್ತು ಎನ್ನುವ ಸಂಧರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಹಾಗಾದರೆ, ಸಿದ್ದು ಹೇಳಿದ್ದೇನು? ನಿಜವಾಗಿಯೂ ಬಿಕೆಗೆ ಸಚಿವ ಸ್ಥಾನ ಸಿಗುತ್ತಾ ಎನ್ನುವುದನ್ನು ನೋಡೋಣ ಬನ್ನಿ!&lt;/p&gt;&lt;h2&gt;&lt;strong&gt;ಬಿಕೆ ಹರಿಪ್ರಸಾದ್&zwnj;ಗೆ ಸಚಿವ ಸ್ಥಾನ ಕೊಡಿಸಲು ಸಿದ್ದು ಆಸಕ್ತಿ!&lt;/strong&gt;&lt;/h2&gt;&lt;p&gt;ಬಿಕೆ ಹರಿಪ್ರಸಾದ್&zwnj;ಗೆ ಸಚಿವ ಸ್ಥಾನ ಸಿಗುತ್ತೆ, ಅವರು ಆ ಸ್ಥಾನಕ್ಕೆ ಎಲಿಜಿಬಲ್ ಎನ್ನುವ ಮಾತು ಈಗಾಗಲೇ ವಿಧಾನಸೌಧವನ್ನು ಸುತ್ತುವರೆದಿವೆ. ಅಲ್ಲದೇ ಅವರ ಬೆನ್ನಿಗೆ ಅಹಿಂದ್&zwnj; ನಾಯಕ ಸಿದ್ದರಾಮಯ್ಯ ನಿಂತಿದ್ದಾರೆ ಎನ್ನುವುದನ್ನು ಕನ್ಫರ್ಮ್ ಆದಂತಿದೆ. ಈ ನಿಟ್ಟಿನಲ್ಲೇ ಸಿದ್ದು ಅವರಿಗೆ ಸಚಿವ ಸ್ಥಾನ ಕೊಡಿಸಲು ಆಸಕ್ತಿ ಅಷ್ಟೇ ಅಲ್ಲ, ತೀವ್ರ ಒಲವನ್ನು ತೋರಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲೇ ಈಗ ಬಿಕೆ ಹರಿಪ್ರಸಾದ್&zwnj;ಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ಮಾತು ತೀವ್ರ ಚರ್ಚೆ ಹುಟ್ಟುಹಾಕಿದಂತಿದೆ.&lt;/p&gt;&lt;h3&gt;&lt;strong&gt;ಸತೀಶ ಅಸಮಾಧಾನ!&lt;/strong&gt;&lt;/h3&gt;&lt;p&gt;ಹೌದು ಈ ಹಿಂದೆ ಸಚಿವ ಸ್ಥಾನದ ಜತೆ ಕೆಪಿಸಿಸಿ ಸ್ಥಾನದ ಬೇಡಿಕೆ ಇಟ್ಟಿದ್ದ ಸತೀಶಗೆ ಹೈ ಕಮಾಂಡ್&zwnj; ಕಡ್ಡಿ ತುಂಡರಿಸಿದಂತೆ ಒಬ್ಬ ವ್ಯಕ್ತಿ ಒಂದು ಸ್ಥಾನ ಎಂದು ಅವರ ಬಾಯಿಗೆ ಬೀಗ ಹಾಕಿತ್ತು. ಆದರೀಗ ಬಿ.ಕೆ.ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸ್ಥಾನದ ಜತೆ ಸಚಿವ ಸ್ಥಾನದಲ್ಲಿ ಮುಂದುವರೆಯಲು ಅರ್ಹ ಎಂದು ಹೇಳಿದ ಸಿದ್ದು ದಾಟಿಗೆ, ಸತೀಶ್ ಆಪ್ತರ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಇತ್ತಾ ಸಿದ್ದು-ಸತೀಶ ನಡುವೆ ಮುನಿಸು?&lt;/strong&gt;&lt;/h3&gt;&lt;p&gt;ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ನಡುವೆ ನಡೆದ ಮುನಿಸಾಗಿತ್ತಾ? ಎನ್ನುವ ಪ್ರಶ್ನೆಯ ನಡುವೆ ಈ ತರಹ ಬೆಳಣಿಗೆ ನಡೆದಿರುವುದು ನಿಜಕ್ಕೂ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೇ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರ್ಗಿ ಪ್ರವಾಸ ರದ್ದುಗೊಳಿಸಿ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.&lt;/p&gt;&lt;p&gt;&lt;strong&gt;ಶನಿವಾರ ದಿಲ್ಲಿಗೆ ಪಯಣ!&lt;/strong&gt;&lt;/p&gt;&lt;p&gt;ಇನ್ನೆರಡು ದಿನದಲ್ಲಿ ದಿಲ್ಲಿ ವರಿಷ್ಠರ ಜತೆ ಮಾತುಕತೆ ನಡೆಯಲಿದ್ದು, ಬಿಕೆ, ಡಿಕೆ ಸಿದ್ದು ದಿಲ್ಲಿಗೆ ಹೋಗಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಬಹುತೇಕ ಫೈನಲ್&zwnj; ಆಗುವ ಸಾಧ್ಯತೆ ಇದೆ. ಆದ್ದರಿಂದ ಈಗ ಬಿ.ಕೆ.ಹರಿಪ್ರಸಾದ್&zwnj;ಗೆ ಸಚಿವ ಸ್ಥಾನ ಸಿಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>state</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/will-hariprasad-get-a-ministerial-berth-satish-is-extremely-unhappy-bmk/articleshow-9rialup"/>
        </item>
        <item>
            <title><![CDATA[ಕರ್ನಾಟಕದ ಜಲಾಶಯಗಳಿಗೆ ಹರಿದುಬಂದ ಜಲರಾಶಿ: ಒಂದೇ ದಿನದಲ್ಲಿ ಆಲಮಟ್ಟಿಗೆ 11 ಟಿಎಂಸಿ ನೀರು]]></title>
            <link>https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</link>
            <guid isPermaLink="true">https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</guid>
            <pubDate>Thu, 09 Jul 2026 18:00:43 +0530</pubDate>
            <description><![CDATA[&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳಲ್ಲಿ 20 ಟಿಎಂಸಿ ನೀರು ಹರಿದುಬಂದಿದೆ. ಕೃಷ್ಣಾ ಕೊಳ್ಳದ ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಗಣನೀಯ ಪ್ರಮಾಣದ ನೀರನ್ನು ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3d6vm0cz6ss4d6kpwsxq8q,imgname-almatti-reservoir-storage-1783599689344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜು.9): &lt;/strong&gt;ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮುಂಗಾರಿನ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಕುಡಿಯುವ ನೀರು ಮತ್ತು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುವ ಕರ್ನಾಟಕದ 10 ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 20 ಟಿಎಂಸಿ (TMC) ನೀರು ಹರಿದುಬಂದಿದೆ. ಇದರಲ್ಲಿ ಕೃಷ್ಣಾ ಕೊಳ್ಳದ ಆರು ಜಲಾಶಯಗಳಿಗೇ ದಾಖಲೆಯ 17.4 ಟಿಎಂಸಿ ನೀರು ಸೇರ್ಪಡೆಯಾಗಿದೆ.&lt;/p&gt;&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಆಲಮಟ್ಟಿ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಮತ್ತು ಭದ್ರಾ ಜಲಾಶಯಗಳಿಗೆ ನಿರಂತರ ನೀರಿನ ಆಸರೆಯಾಗುತ್ತಿದೆ. ವಿಶೇಷವೆಂದರೆ, ಜುಲೈ ತಿಂಗಳ ಆರಂಭದಲ್ಲಿ ಭದ್ರಾ ಜಲಾಶಯವನ್ನು ಹೊರತುಪಡಿಸಿ ಈ ಕೊಳ್ಳದ ಉಳಿದೆಲ್ಲಾ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಸಂಪೂರ್ಣ ಶೂನ್ಯವಾಗಿತ್ತು.&lt;/p&gt;&lt;h2&gt;&lt;strong&gt;ಆಲಮಟ್ಟಿಗೆ ಒಂದೇ ದಿನದಲ್ಲಿ 11 ಟಿಎಂಸಿ ನೀರು&lt;/strong&gt;&lt;/h2&gt;&lt;p&gt;ಜುಲೈ 8 ರಂದು ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯವಾದ ಆಲಮಟ್ಟಿಗೆ ಕೇವಲ 24 ಗಂಟೆಗಳಲ್ಲಿ 1.26 ಲಕ್ಷ ಕ್ಯೂಸೆಕ್ (ಅಂದರೆ ಸುಮಾರು 10.92 ಟಿಎಂಸಿ) ನಷ್ಟು ಭಾರಿ ಒಳಹರಿವು ದಾಖಲಾಗಿದೆ. ಜುಲೈ 7 ರಂದು ಆಲಮಟ್ಟಿ ಜಲಾಶಯದಲ್ಲಿ 22.46 ಟಿಎಂಸಿ ನೀರು ಸಂಗ್ರಹವಿತ್ತು ಮತ್ತು ಕೇವಲ 21,625 ಕ್ಯೂಸೆಕ್ ಒಳಹರಿವು ಇತ್ತು. ಆದರೆ, ಬುಧವಾರದ ವೇಳೆಗೆ ಜಲಾಶಯದ ಪ್ರಸ್ತುತ ನೀರಿನ ಸಂಗ್ರಹ 33.34 ಟಿಎಂಸಿಗೆ ಏರಿಕೆಯಾಗಿದ್ದು, ಒಳಹರಿವು ಕೂಡ 1,26,373 ಕ್ಯೂಸೆಕ್&zwnj;ಗೆ ತಲುಪಿದೆ.&lt;/p&gt;&lt;h2&gt;&lt;strong&gt;ಘಟಪ್ರಭಾ ಮತ್ತು ತುಂಗಭದ್ರಾ ಜಲಾಶಯಗಳ ಸ್ಥಿತಿ&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅತಿ ಹೆಚ್ಚು ಪ್ರಯೋಜನ ಪಡೆದ ಮತ್ತೊಂದು ಜಲಾಶಯವೆಂದರೆ ಘಟಪ್ರಭಾ. ಕೇವಲ 24 ಗಂಟೆಗಳ ಅವಧಿಯಲ್ಲಿ ಈ ಅಣೆಕಟ್ಟಿನ ನೀರಿನ ಮಟ್ಟ ಸುಮಾರು 4 ಟಿಎಂಸಿಯಷ್ಟು ಹೆಚ್ಚಾಗಿದೆ. ಇತ್ತ ತುಂಗಭದ್ರಾ ಜಲಾಶಯಕ್ಕೂ 24 ಗಂಟೆಗಳಲ್ಲಿ 17,507 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 2 ಟಿಎಂಸಿಯಷ್ಟು ನೀರು ಸಂಗ್ರಹಕ್ಕೆ ಸೇರ್ಪಡೆಯಾಗಿದೆ.&lt;/p&gt;&lt;h2&gt;&lt;strong&gt;ಮಲಪ್ರಭಾಗೆ ಮೂರು ಪಟ್ಟು ಹೆಚ್ಚಿದ ಒಳಹರಿವು&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಲಪ್ರಭಾ ಅಣೆಕಟ್ಟಿನ ಒಳಹರಿವು ಹಿಂದಿನ ದಿನಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಜಲಾಶಯಕ್ಕೆ 13,700 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇನ್ನು ಆಲಮಟ್ಟಿ ಜಲಾಶಯದ ಸಮತೋಲನ ಅಣೆಕಟ್ಟಾಗಿರುವ ನಾರಾಯಣಪುರ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಶೂನ್ಯವಾಗಿಯೇ ಮುಂದುವರಿದಿದೆ. ಪ್ರಸ್ತುತ ಈ ಅಣೆಕಟ್ಟು ತನ್ನ ಒಟ್ಟು 33 ಟಿಎಂಸಿ ಸಾಮರ್ಥ್ಯದ ಎದುರು 19.89 ಟಿಎಂಸಿ ನೀರನ್ನು ಹೊಂದಿದೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ಜಲಾಶಯ&lt;/td&gt;   &lt;td&gt;ಒಟ್ಟು ಸಾಮರ್ಥ್ಯ&lt;/td&gt;   &lt;td&gt;ಪ್ರಸ್ತುತ ಸಂಗ್ರಹಣೆ (In tmcft)&lt;/td&gt;   &lt;td&gt;ಒಳಹರಿವು (cusec)&lt;/td&gt;   &lt;td&gt;ಹೊರಹರಿವು (cusec)&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕೃಷ್ಣಾ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಆಲಮಟ್ಟಿ&lt;/td&gt;   &lt;td&gt;123.08&lt;/td&gt;   &lt;td&gt;33.34&lt;/td&gt;   &lt;td&gt;1,26,625&lt;/td&gt;   &lt;td&gt;100&lt;/td&gt;  &lt;/tr&gt;  &lt;tr&gt;   &lt;td&gt;ತುಂಗಭದ್ರಾ&lt;/td&gt;   &lt;td&gt;105.79&lt;/td&gt;   &lt;td&gt;11.22&lt;/td&gt;   &lt;td&gt;17,507&lt;/td&gt;   &lt;td&gt;170&lt;/td&gt;  &lt;/tr&gt;  &lt;tr&gt;   &lt;td&gt;ಭದ್ರಾ&lt;/td&gt;   &lt;td&gt;71.54&lt;/td&gt;   &lt;td&gt;28.75&lt;/td&gt;   &lt;td&gt;17,818&lt;/td&gt;   &lt;td&gt;214&lt;/td&gt;  &lt;/tr&gt;  &lt;tr&gt;   &lt;td&gt;ಹಿಡಕಲ್&lt;/td&gt;   &lt;td&gt;51&lt;/td&gt;   &lt;td&gt;13.18&lt;/td&gt;   &lt;td&gt;26,393&lt;/td&gt;   &lt;td&gt;110&lt;/td&gt;  &lt;/tr&gt;  &lt;tr&gt;   &lt;td&gt;ಮಲಪ್ರಭಾ&lt;/td&gt;   &lt;td&gt;37.73&lt;/td&gt;   &lt;td&gt;10.38&lt;/td&gt;   &lt;td&gt;13,700&lt;/td&gt;   &lt;td&gt;194&lt;/td&gt;  &lt;/tr&gt;  &lt;tr&gt;   &lt;td&gt;ನಾರಾಯಣಪುರ&lt;/td&gt;   &lt;td&gt;33.31&lt;/td&gt;   &lt;td&gt;19.82&lt;/td&gt;   &lt;td&gt;0&lt;/td&gt;   &lt;td&gt;767&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕಾವೇರಿ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಹಾರಂಗಿ&lt;/td&gt;   &lt;td&gt;8.5&lt;/td&gt;   &lt;td&gt;4.03&lt;/td&gt;   &lt;td&gt;2,090&lt;/td&gt;   &lt;td&gt;180&lt;/td&gt;  &lt;/tr&gt;  &lt;tr&gt;   &lt;td&gt;ಹೇಮಾವತಿ&lt;/td&gt;   &lt;td&gt;37.10&lt;/td&gt;   &lt;td&gt;18.78&lt;/td&gt;   &lt;td&gt;16,593&lt;/td&gt;   &lt;td&gt;300&lt;/td&gt;  &lt;/tr&gt;  &lt;tr&gt;   &lt;td&gt;ಕೆಆರ್&zwnj; ಸಾಗರ&lt;/td&gt;   &lt;td&gt;49.45&lt;/td&gt;   &lt;td&gt;12.49&lt;/td&gt;   &lt;td&gt;7,531&lt;/td&gt;   &lt;td&gt;790&lt;/td&gt;  &lt;/tr&gt;  &lt;tr&gt;   &lt;td&gt;ಕಬಿನಿ&lt;/td&gt;   &lt;td&gt;19.52&lt;/td&gt;   &lt;td&gt;7.96&lt;/td&gt;   &lt;td&gt;10,757&lt;/td&gt;   &lt;td&gt;500&lt;/td&gt;  &lt;/tr&gt;  &lt;tr&gt;   &lt;td&gt;ವಾಣಿವಿಲಾಸ ಸಾಗರ&lt;/td&gt;   &lt;td&gt;30.42&lt;/td&gt;   &lt;td&gt;23.76&lt;/td&gt;   &lt;td&gt;0&lt;/td&gt;   &lt;td&gt;0&lt;/td&gt;  &lt;/tr&gt; &lt;/tbody&gt;&lt;/table&gt;&lt;h2&gt;&lt;strong&gt;ಕಾವೇರಿ ಕೊಳ್ಳದ ಜಲಾಶಯಗಳಲ್ಲೂ ಸ್ಥಿರ ಪ್ರಗತಿ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ನಿಧಾನ ಹಾಗೂ ಸ್ಥಿರವಾಗಿ ಮುಂದುವರಿದಿದೆ. ಈ ನಾಲ್ಕು ಅಣೆಕಟ್ಟುಗಳ ಒಟ್ಟು ನೀರಿನ ಸಾಮರ್ಥ್ಯ 114.57 ಟಿಎಂಸಿ ಆಗಿದ್ದು, ಪ್ರಸ್ತುತ 43.25 ಟಿಎಂಸಿ (ಶೇ. 38 ರಷ್ಟು) ನೀರು ಸಂಗ್ರಹವಾಗಿದೆ. ಜುಲೈ 7 ರಂದು ಇವುಗಳಲ್ಲಿ 40.23 ಟಿಎಂಸಿ ನೀರಿತ್ತು.&lt;/p&gt;&lt;p&gt;ಕಾವೇರಿ ಕೊಳ್ಳದಲ್ಲಿ ಹಾರಂಗಿ ಜಲಾಶಯವು ಅತ್ಯಂತ ಕಡಿಮೆ ಎಂದರೆ 1,657 ಕ್ಯೂಸೆಕ್ ಒಳಹರಿವನ್ನು ಪಡೆದಿದೆ. ಆದರೆ ಹೇಮಾವತಿ ಜಲಾಶಯದ ಒಳಹರಿವು ಕಳೆದ 24 ಗಂಟೆಗಳಲ್ಲಿ ದುಪ್ಪಟ್ಟಾಗಿದ್ದು, 16,593 ಕ್ಯೂಸೆಕ್&zwnj;ಗೆ ತಲುಪಿದೆ. ಅದೇ ರೀತಿ ಕಬಿನಿ ಜಲಾಶಯದ ಒಳಹರಿವು ಕೂಡ ಒಂದೇ ದಿನದಲ್ಲಿ ದುಪ್ಪಟ್ಟಾಗಿದ್ದು, ಪ್ರಸ್ತುತ 10,757 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಒಟ್ಟಾರೆಯಾಗಿ ರಾಜ್ಯದ ಪ್ರಮುಖ ನದಿ ಕೊಳ್ಳಗಳಲ್ಲಿ ನೀರಿನ ಆಶಾಭಾವನೆ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>state</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx"/>
        </item>
        <item>
            <title><![CDATA[ನಿವೃತ್ತಿ ದಿನ ಮಧ್ಯಾಹ್ನ ನಂತರ ಬಡ್ತಿಪಡೆದ್ರೂ ಪಿಂಚಣಿಗೆ ಅರ್ಹರು: ಹೈಕೋರ್ಟ್]]></title>
            <link>https://kannada.asianetnews.com/state/eligible-for-pension-even-if-promoted-afternoon-of-retirement-day-says-karnataka-high-court-rav/articleshow-e5ksc9z</link>
            <guid isPermaLink="true">https://kannada.asianetnews.com/state/eligible-for-pension-even-if-promoted-afternoon-of-retirement-day-says-karnataka-high-court-rav/articleshow-e5ksc9z</guid>
            <pubDate>Wed, 08 Jul 2026 07:05:04 +0530</pubDate>
            <description><![CDATA[&lt;p&gt;ನಿವೃತ್ತಿ ದಿನಾಂಕದ ಮಧ್ಯಾಹ್ನದ ನಂತರವೂ ಬಡ್ತಿ ಪಡೆದ ಹುದ್ದೆ ಜವಾಬ್ದಾರಿ ವಹಿಸಿಕೊಳ್ಳುವ ಸರ್ಕಾರಿ ನೌಕರನು, ಆ ದಿನಾಂಕದಿಂದ ಬಡ್ತಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಅರ್ಹನಾಗಿರುತ್ತಾನೆ ಎಂದು ಹೈಕೋರ್ಟ್&zwnj; ತೀರ್ಪು ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250701141517,imgname-image-408d05c9-671c-48f0-8364-ade811f01f6b.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.8): &lt;/strong&gt;ನಿವೃತ್ತಿ ದಿನಾಂಕದ ಮಧ್ಯಾಹ್ನದ ನಂತರವೂ ಬಡ್ತಿ ಪಡೆದ ಹುದ್ದೆ ಜವಾಬ್ದಾರಿ ವಹಿಸಿಕೊಳ್ಳುವ ಸರ್ಕಾರಿ ನೌಕರನು, ಆ ದಿನಾಂಕದಿಂದ ಬಡ್ತಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಅರ್ಹನಾಗಿರುತ್ತಾನೆ ಎಂದು ಹೈಕೋರ್ಟ್&zwnj; ತೀರ್ಪು ನೀಡಿದೆ.&lt;/p&gt;&lt;p&gt;ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಪ್ರಾಧ್ಯಾಪಕರ ಪರ ಕರ್ನಾಟ&zwnj;ಕ&zwnj; ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಮೊಹಮ್ಮದ್&zwnj; ನವಾಜ್&zwnj; ಅವರ ನೇತೃತ್ಬದ ವಿಭಾಗೀಯ ಪೀಠ ಈ ಆದೇಶ ನೀಡಿದೆ.&lt;/p&gt;&lt;p&gt;ಶಾಲಾ ಮುಖ್ಯೋಪಾಧ್ಯರಾಗಿದ್ದ ಬೆಂಗಳೂರಿನ ಬ್ಯಾಡರಹಳ್ಳಿಯ ಎ.ಆರ್&zwnj;.ರಂಗಸ್ವಾಮಿ ಅವರು 2023ರ ಮೇ 31ರಂದು ಪ್ರೊಪೆಸರ್&zwnj; ಹುದ್ದೆಗೆ ಪದೋನ್ನತಿ ಪಡೆದಿದ್ದರು. ಅದೇ ದಿನ ಅವರು ಸೇವಾ ಅವಧಿ ಪೂರೈಸಿ ನಿವೃತ್ತಗೊಳ್ಳಬೇಕಿತ್ತು. ಆ ದಿನ ಸಂಜೆ 5.20ಕ್ಕೆ ಸರ್ಕಾರ ಪದೋನ್ನತಿ ನೀಡಲಾಗಿದ್ದ ಹುದ್ದೆಯನ್ನು ರಂಗಸ್ವಾಮಿ ವಹಿಸಿಕೊಂಡಿದ್ದರು. ನಿವೃತ್ತಿಯ ದಿನಾಂಕದಂದು ಉನ್ನತ ವೃಂದಕ್ಕೆ ಬಡ್ತಿ ನೀಡಿದ ಸರ್ಕಾರ, ಆ ಹುದ್ದೆಯ ಬಡ್ತಿ ಸೌಲಭ್ಯಗಳನ್ನು ನಿರಾಕರಿಸಿರುವುದು ಸರಿಯಲ್ಲ&zwnj; ಎಂದು&zwnj;&zwnj; ಪೀಠ ಆದೇಶದಲ್ಲಿ ಹೇಳಿದೆ.&lt;/p&gt;&lt;h2&gt;ಬಡ್ತಿ ಸೌಲಭ್ಯ ನಿರಾಕರಿಸುವಂತಿಲ್ಲ:&lt;/h2&gt;&lt;p&gt;ಅಲ್ಲದೆ, ಸರ್ಕಾರ ತನ್ನ ಉದ್ಯೋಗಿಗೆ ಅವರ ನಿವೃತ್ತಿ ದಿನಾಂಕದಂದು ಬಡ್ತಿ ನೀಡಿದಾಗ ಮತ್ತು ಅವರು ಉನ್ನತ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರೆ. ಆ ನಂತರ ಸರ್ಕಾರ ಬಡ್ತಿ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.&lt;/p&gt;&lt;p&gt;ತನಗೆ ಪದೋನ್ನತಿ ನೀಡಲಾದ ದಿನಾಂಕದಿಂದ ಪಿಂಚಣಿ ಮತ್ತಿತರ ಭತ್ಯೆಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ ರಂಗಸ್ವಾಮಿ ಮನವಿ ಸಲ್ಲಿಸಿದ್ದರು. ಆದರೆ ಇಲಾಖೆ ಅವರ ಮನವಿ ತಿರಸ್ಕರಿಸಿತ್ತು . ಹಾಗಾಗಿ, ಅವರು ಕೆಎಟಿ ಮೊರೆ ಹೋಗಿದ್ದರು. ಅವರ ಅರ್ಜಿ ಪುರಸ್ಕರಿಸಿದ್ದ ಕೆಎಟಿ, ಬಡ್ತಿ ನಂತರದ ಎಲ್ಲಾ ಸವಲತ್ತುಗಳನ್ನು ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿತ್ತು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/eligible-for-pension-even-if-promoted-afternoon-of-retirement-day-says-karnataka-high-court-rav/articleshow-e5ksc9z"/>
        </item>
        <item>
            <title><![CDATA[Lokayukta Raid: ಬೆಂಗಳೂರಿನ 3 ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿ ನೋಡಿ ದಂಗಾಗುತ್ತೀರಿ! ಕೋಟಿ ಕೋಟಿ ಹಣ-ಚಿನ್ನ ಜಪ್ತಿ]]></title>
            <link>https://kannada.asianetnews.com/bengaluru-urban/karnataka-lokayukta-raid-bengaluru-three-officials-crores-of-cash-gold-and-assets-seized/articleshow-e7thh35</link>
            <guid isPermaLink="true">https://kannada.asianetnews.com/bengaluru-urban/karnataka-lokayukta-raid-bengaluru-three-officials-crores-of-cash-gold-and-assets-seized/articleshow-e7thh35</guid>
            <pubDate>Wed, 08 Jul 2026 22:16:27 +0530</pubDate>
            <description><![CDATA[&lt;p&gt;ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ 10 ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಪ್ರಮುಖ ಅಧಿಕಾರಿಗಳಾದ ನರೇಂದ್ರ ಕುಮಾರ್, ಪ್ರವೀಣ್ ಶ್ರೀಹರಿ, ಮತ್ತು ಪುಷ್ಪ ಡಿ.ಆರ್. ಅವರ ಮನೆಗಳಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx19p8nyysgv2yxv68gvxb5s,imgname-bengaluru-lokayukta-raid-1783528891070.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.08): &amp;nbsp;ಭ್ರ&lt;/strong&gt;ಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯಾದ್ಯಂತ ಬೃಹತ್ ಬೇಟೆ ನಡೆಸಿದ್ದಾರೆ. ಒಟ್ಟು 7 ಜಿಲ್ಲೆಗಳ 10 ಅಧಿಕಾರಿಗಳಿಗೆ ಸಂಬಂಧಿಸಿದ 53 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳ ಅಕ್ರಮ ಆಸ್ತಿಯ ಪರ್ವತವೇ ಬಯಲಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಪ್ರಭಾವಿ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿಪಾಸ್ತಿ ಮತ್ತು ನಗದು ನೋಡಿ ಸ್ವತಃ ಲೋಕಾಯುಕ್ತ ಸಿಬ್ಬಂದಿಯೇ ದಂಗಾಗಿದ್ದಾರೆ.&lt;/p&gt;&lt;h3&gt;&lt;strong&gt;ಬೆಂಗಳೂರಿನಲ್ಲಿ ದಾಳಿಗೊಳಗಾದ ಪ್ರಮುಖ ಅಧಿಕಾರಿಗಳು ಮತ್ತು ಅವರ ಬಳಿ ಪತ್ತೆಯಾದ ಅಕ್ರಮ ಆಸ್ತಿಯ ವಿವರ ಇಲ್ಲಿದೆ:&lt;/strong&gt;&lt;/h3&gt;&lt;h2&gt;&lt;strong&gt;1. ನರೇಂದ್ರ ಕುಮಾರ್ ಎಂ. (ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ)&lt;/strong&gt;&lt;/h2&gt;&lt;ul&gt; &lt;li&gt;ಲೋಕೋಪಯೋಗಿ ಇಲಾಖೆಯ ನರೇಂದ್ರ ಕುಮಾರ್ ಅವರಿಗೆ ಸೇರಿದ 4 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.&lt;/li&gt; &lt;li&gt;&lt;strong&gt;ಸ್ಥಿರ ಆಸ್ತಿ: &lt;/strong&gt;3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು ಪತ್ತೆಯಾಗಿದ್ದು, ಇದರ ಮೌಲ್ಯ ಅಂದಾಜು ₹5.95 ಕೋಟಿ ಎಂದು ಅಂದಾಜಿಸಲಾಗಿದೆ.&lt;/li&gt; &lt;li&gt;&lt;strong&gt;ಚರ ಆಸ್ತಿ: &lt;/strong&gt;ದಾಳಿ ವೇಳೆ ₹3.10 ಲಕ್ಷ ನಗದು ಜೊತೆಗೆ ಬರೋಬ್ಬರಿ ₹1.20 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ₹1.2 ಕೋಟಿ ನಗದು ಪತ್ತೆಯಾಗಿದೆ.&amp;nbsp;&lt;/li&gt; &lt;li&gt;ಅಲ್ಲದೆ, ₹89.16 ಲಕ್ಷ ಮೌಲ್ಯದ ಐಷಾರಾಮಿ ವಾಹನಗಳು ಮತ್ತು ₹27.46 ಲಕ್ಷ ಬ್ಯಾಂಕ್ ಠೇವಣಿ ಪತ್ತೆಯಾಗಿದೆ.&amp;nbsp;&lt;/li&gt; &lt;li&gt;ಇವರ ಒಟ್ಟು ಅಸಮತೋಲನ ಆಸ್ತಿ ₹5.75 ಕೋಟಿಗೂ ಅಧಿಕ ಎನ್ನಲಾಗಿದೆ.&lt;/li&gt;&lt;/ul&gt;&lt;h2&gt;&lt;strong&gt;2. ಪ್ರವೀಣ್ ಶ್ರೀಹರಿ ಬಿ. (ಅಧೀಕ್ಷಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು)&lt;/strong&gt;&lt;/h2&gt;&lt;ul&gt; &lt;li&gt;ಕೆ.ಆರ್.ಐ.ಡಿ.ಎಲ್ ಅಧೀಕ್ಷಕ ಅಭಿಯಂತರ ಪ್ರವೀಣ್ ಶ್ರೀಹರಿ ಅವರಿಗೆ ಸೇರಿದ 5 ಕಡೆಗಳಲ್ಲಿ ಶೋಧ ನಡೆಸಲಾಯಿತು.&lt;/li&gt; &lt;li&gt;&lt;strong&gt;ಸ್ಥಿರ ಆಸ್ತಿ: &lt;/strong&gt;₹4.60 ಕೋಟಿ ಮೌಲ್ಯದ 2 ನಿವೇಶನಗಳು, 2 ವಾಸದ ಮನೆಗಳು ಹಾಗೂ 11 ಎಕರೆ ಕೃಷಿ ಜಮೀನನ್ನು ಇವರು ಹೊಂದಿದ್ದಾರೆ.&lt;/li&gt; &lt;li&gt;&lt;strong&gt;ಚರ ಆಸ್ತಿ: &lt;/strong&gt;₹2.35 ಲಕ್ಷ ನಗದು, ₹11.08 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹1.15 ಕೋಟಿ ಮೌಲ್ಯದ ಬೆಲೆಬಾಳುವ ವಾಹನಗಳು ಪತ್ತೆಯಾಗಿವೆ.&amp;nbsp;&lt;/li&gt; &lt;li&gt;ಇವರ ಅಸಮತೋಲನ ಆಸ್ತಿಯ ಒಟ್ಟು ಮೊತ್ತ ಸುಮಾರು ₹4.33 ಕೋಟಿ ಎಂದು ತಿಳಿದುಬಂದಿದೆ.&lt;/li&gt;&lt;/ul&gt;&lt;h2&gt;&lt;strong&gt;3. ಪುಷ್ಪ ಡಿ. ಆರ್ (ಹೆಚ್ಚುವರಿ ನಿರ್ದೇಶಕರು, ಕೃಷಿ ಮಾರಾಟ ಮಹಾ ಮಂಡಳಿ)&lt;/strong&gt;&lt;/h2&gt;&lt;ul&gt; &lt;li&gt;ಕೃಷಿ ಮಾರಾಟ ಮಹಾ ಮಂಡಳಿಯ ಹೆಚ್ಚುವರಿ ನಿರ್ದೇಶಕಿ ಪುಷ್ಪ ಅವರ 5 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ.&lt;/li&gt; &lt;li&gt;&lt;strong&gt;ಸ್ಥಿರ ಆಸ್ತಿ: &lt;/strong&gt;ಇವರ ಬಳಿ ಅಂದಾಜು ₹7.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.&amp;nbsp;&lt;/li&gt; &lt;li&gt;ಇದರಲ್ಲಿ 1 ನಿವೇಶನ, 3 ವಾಸದ ಮನೆಗಳು, 1 ವಾಣಿಜ್ಯ ಸಂಕೀರ್ಣ ಮತ್ತು 20 ಗುಂಟೆ ಕೃಷಿ ಜಮೀನು ಸೇರಿದೆ.&lt;/li&gt; &lt;li&gt;&lt;strong&gt;ಚರ ಆಸ್ತಿ:&lt;/strong&gt; ₹72,000 ನಗದು ಮತ್ತು ₹35 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.&amp;nbsp;&lt;/li&gt; &lt;li&gt;ಇವರ ಒಟ್ಟು ಅಸಮತೋಲನ ಆಸ್ತಿಯ ಮೌಲ್ಯ ಬರೋಬ್ಬರಿ ₹5.93 ಕೋಟಿ ದಾಟಿದೆ.&lt;/li&gt;&lt;/ul&gt;&lt;p&gt;ರಾಜ್ಯಾದ್ಯಂತ ನಡೆದ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಈ ಭ್ರಷ್ಟ ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯ ಮೂಲದ ಬಗ್ಗೆ ಶೋಧ ನಡೆಸಲಾಗುತ್ತಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/karnataka-lokayukta-raid-bengaluru-three-officials-crores-of-cash-gold-and-assets-seized/articleshow-e7thh35"/>
        </item>
        <item>
            <title><![CDATA[ವಿಜಯನಗರ ಕಾಲದ ತ್ರಿಶೂಲ ಭದ್ರಕಾಳಿ ಭಾರತಕ್ಕೆ ವಾಪಸ್; ಪುರಾತನ ವಿಗ್ರಹಗಳನ್ನು ಮೋದಿಗೆ ಗಿಫ್ಟ್ ನೀಡಿದ ಆಸ್ಟ್ರೇಲಿಯಾ!]]></title>
            <link>https://kannada.asianetnews.com/india-news/australia-to-return-ancient-indian-artefacts-including-vijayanagara-empire-bhadrakali-trishul-and-chola-nandi-statue/articleshow-gqmgosx</link>
            <guid isPermaLink="true">https://kannada.asianetnews.com/india-news/australia-to-return-ancient-indian-artefacts-including-vijayanagara-empire-bhadrakali-trishul-and-chola-nandi-statue/articleshow-gqmgosx</guid>
            <pubDate>Thu, 09 Jul 2026 18:30:55 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ನಡುವಿನ ಮಾತುಕತೆಯ ಫಲವಾಗಿ, ವಿಜಯನಗರ ಕಾಲದ ಭದ್ರಕಾಳಿ ತ್ರಿಶೂಲ ಸೇರಿದಂತೆ ಮೂರು ಪ್ರಮುಖ ಪುರಾತನ ವಿಗ್ರಹಗಳನ್ನು ಭಾರತಕ್ಕೆ ಹಸ್ತಾಂತರಿಸಲು ಆಸ್ಟ್ರೇಲಿಯಾ ಒಪ್ಪಿಕೊಂಡಿದೆ. ಇದು ಭಾರತ-ಆಸ್ಟ್ರೇಲಿಯಾ ಸಾಂಸ್ಕೃತಿಕ ಸಂಬಂಧವನ್ನು ಬಲಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3f4bwrvh7ym44z1h3kfer6,imgname-australia-to-return-ancient-indian-artefacts-1783601704856.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.09): ಭಾ&lt;/strong&gt;ರತದ ಇತಿಹಾಸದ ಸುವರ್ಣ ಯುಗವೆಂದೇ ಕರೆಯಲ್ಪಡುವ ವಿಜಯನಗರ ಸಾಮ್ರಾಜ್ಯದ ಕಾಲದ ಅಮೂಲ್ಯ ಕಲಾಕೃತಿಯೊಂದು ದಶಕಗಳ ನಂತರ ಮರಳಿ ಭಾರತದ ಮಣ್ಣನ್ನು ಸೇರಲು ಸಜ್ಜಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ನಡುವೆ ನಡೆದ ಮಾತುಕತೆಯ ಫಲವಾಗಿ, ಮೂರು ಪ್ರಮುಖ ಪುರಾತನ ವಿಗ್ರಹಗಳನ್ನು ಭಾರತಕ್ಕೆ ಹಸ್ತಾಂತರಿಸಲು ಆಸ್ಟ್ರೇಲಿಯಾ ಒಪ್ಪಿಕೊಂಡಿದೆ.&lt;/p&gt;&lt;h2&gt;&lt;strong&gt;ವಿಜಯನಗರ ಕಾಲದ ಭದ್ರಕಾಳಿ ತ್ರಿಶೂಲದ ಹೈಲೈಟ್:&lt;/strong&gt;&lt;/h2&gt;&lt;p&gt;ಈ ಮೂರು ಕಲಾಕೃತಿಗಳಲ್ಲಿ ಅತ್ಯಂತ ಗಮನಸೆಳೆಯುವ ವಸ್ತುವೆಂದರೆ ಭದ್ರಕಾಳಿ ದೇವಿಯ ಲೋಹದ ತ್ರಿಶೂಲ. ಇದು 13 ರಿಂದ 16ನೇ ಶತಮಾನದ ನಡುವಿನ, ಅಂದರೆ ವಿಜಯನಗರ ಮತ್ತು ನಾಯಕ ರಾಜವಂಶದ ಕಾಲದ್ದಾಗಿದೆ. ದಕ್ಷಿಣ ಭಾರತದ ದೇವಾಲಯಗಳ ವಿಶಿಷ್ಟ ಲೋಹದ ಕೆಲಸದ (Metalwork) ಪರಂಪರೆಗೆ ಈ ತ್ರಿಶೂಲವು ಅತ್ಯುತ್ತಮ ಸಾಕ್ಷಿಯಾಗಿದೆ. ದುಷ್ಟ ಸಂಹಾರದ ಸಂಕೇತವಾಗಿರುವ ಈ ಭದ್ರಕಾಳಿ ತ್ರಿಶೂಲವು ಶಕ್ತಿ ದೇವತೆಯ ಆರಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ವಿಜಯನಗರ ಕಾಲದ ಕಲೆ ಮತ್ತು ವಾಸ್ತುಶಿಲ್ಪದ ಶ್ರೀಮಂತಿಕೆಯನ್ನು ಈ ಕಲಾಕೃತಿ ಎತ್ತಿ ತೋರಿಸುತ್ತದೆ.&lt;/p&gt;&lt;h2&gt;&lt;strong&gt;ಚೋಳರ ಕಾಲದ ಇತರ ವಿಗ್ರಹಗಳು:&lt;/strong&gt;&lt;/h2&gt;&lt;p&gt;ತ್ರಿಶೂಲದ ಜೊತೆಗೆ, ತಮಿಳುನಾಡಿನ ಐತಿಹಾಸಿಕ ದೇವಾಲಯಗಳಿಗೆ ಸೇರಿದ ಇತರ ಎರಡು ಪ್ರಮುಖ ವಿಗ್ರಹಗಳೂ ಭಾರತಕ್ಕೆ ಬರಲಿವೆ:&lt;/p&gt;&lt;p&gt;&lt;strong&gt;ಆರು ಮುಖಗಳ ಕಾರ್ತಿಕೇಯ (ಷಣ್ಮುಖ): &lt;/strong&gt;ಇದು 11ನೇ ಶತಮಾನದ ಆರಂಭದ ರಾಜೇಂದ್ರ ಚೋಳ I ಕಾಲದ್ದಾಗಿದ್ದು, ಗ್ರಾನೈಟ್ ಶಿಲೆಯಿಂದ ಕೆತ್ತಲ್ಪಟ್ಟಿದೆ. 12 ಕೈಗಳನ್ನು ಹೊಂದಿರುವ ಈ ವೀರ ದೇವನ ವಿಗ್ರಹವು ಚೋಳರ ಶಿಲ್ಪಕಲೆಯ ಅದ್ಭುತಗಳಲ್ಲಿ ಒಂದಾಗಿದೆ.&lt;/p&gt;&lt;p&gt;&lt;strong&gt;ಪವಿತ್ರ ನಂದಿ ವಿಗ್ರಹ: &lt;/strong&gt;13-16ನೇ ಶತಮಾನದ ತಮಿಳು ಶೈವ ಸಂಪ್ರದಾಯದ ಈ ನಂದಿ ವಿಗ್ರಹವು ಭಕ್ತಿ ಮತ್ತು ಶಕ್ತಿಯ ಸಂಕೇತವಾಗಿದೆ.&lt;/p&gt;&lt;h2&gt;&lt;strong&gt;ಸಾಂಸ್ಕೃತಿಕ ಸಂಬಂಧದ ಹೊಸ ಅಧ್ಯಾಯ:&lt;/strong&gt;&lt;/h2&gt;&lt;p&gt;ಪ್ರಧಾನಿ ಮೋದಿ ಅವರ ಸತತ ಪ್ರಯತ್ನದಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ವಿದೇಶಗಳಿಂದ ನೂರಾರು ವಿಗ್ರಹಗಳು ಭಾರತಕ್ಕೆ ಮರಳಿವೆ. 'ನಮ್ಮ ಪೂರ್ವಜರು ನಿರ್ಮಿಸಿದ ಕಲೆ ಮತ್ತು ಸಂಸ್ಕೃತಿಯನ್ನು ಮರಳಿ ತರುವುದು ಕೇವಲ ಧಾರ್ಮಿಕ ಕೆಲಸವಲ್ಲ, ಅದು ನಮ್ಮ ರಾಷ್ಟ್ರೀಯ ಹೆಮ್ಮೆ' ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ ಸರ್ಕಾರದ ಈ ನಿರ್ಧಾರವು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹ ಸಂಬಂಧವನ್ನು ಕೇವಲ ವ್ಯಾಪಾರಕ್ಕೆ ಸೀಮಿತಗೊಳಿಸದೆ, ಸಾಂಸ್ಕೃತಿಕವಾಗಿಯೂ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಶೀಘ್ರದಲ್ಲೇ ಈ ವಿಗ್ರಹಗಳನ್ನು ಭಾರತೀಯ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗುವುದು.&lt;/p&gt;&lt;p&gt;Australia to repatriate Indian artefacts- metal Trident with image of Goddess Bhadrakali, stone idol of Nandi and stone idol of six-headed Kartikeya pic.twitter.com/NfXc03v85a&lt;/p&gt;&lt;p&gt;&mdash; ANI (@ANI) July 9, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/australia-to-return-ancient-indian-artefacts-including-vijayanagara-empire-bhadrakali-trishul-and-chola-nandi-statue/articleshow-gqmgosx"/>
        </item>
        <item>
            <title><![CDATA[ಮದ್ಯಪ್ರಿಯರ ಶೈಲಿ ಬದಲಿಸಿದ ಹೊಸ AIB ನೀತಿ: ಮೊದಲ ತ್ರೈಮಾಸಿಕದಲ್ಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ದಾಖಲೆಯ ಆದಾಯ!]]></title>
            <link>https://kannada.asianetnews.com/business/karnataka-aib-policy-boosts-excise-revenue-soars-as-new-premium-beer-sales-gdp/articleshow-gtftvql</link>
            <guid isPermaLink="true">https://kannada.asianetnews.com/business/karnataka-aib-policy-boosts-excise-revenue-soars-as-new-premium-beer-sales-gdp/articleshow-gtftvql</guid>
            <pubDate>Thu, 09 Jul 2026 16:36:23 +0530</pubDate>
            <description><![CDATA[ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ 'ಆಲ್ಕೋಹಾಲ್ ಇನ್ ಬೆವರೇಜ್' (AIB) ತೆರಿಗೆ ನೀತಿಯು ಸೌಮ್ಯ ಬಿಯರ್&zwnj;ಗಳ ದರವನ್ನು ಗಣನೀಯವಾಗಿ ಇಳಿಸಿದೆ. ಇದರ ಪರಿಣಾಮವಾಗಿ, ಬಿಯರ್ ಮಾರಾಟದಲ್ಲಿ ದಾಖಲೆಯ ಏರಿಕೆಯಾಗಿದ್ದು, ಸರ್ಕಾರದ ಆದಾಯ ಹೆಚ್ಚಳವಾಗಿದೆ ಮತ್ತು ಗ್ರಾಹಕರು ಸ್ಟ್ರಾಂಗ್ ಮದ್ಯದಿಂದ ಮೈಲ್ಡ್ ಬಿಯರ್&zwnj;ನತ್ತ ಆಕರ್ಷಿತರಾಗುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr37znjs40tfvw08zccr5zbp,imgname-3-1778225501785.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ಮದ್ಯಕ್ಕೆ ದರ ನಿಗದಿ ಮಾಡುವ ಸರ್ಕಾರದ ಹೊಸ ತೆರಿಗೆ ನೀತಿಯು ಅಬಕಾರಿ ಇಲಾಖೆಯ ಖಜಾನೆಯನ್ನು ತುಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಮೇ 11 ರಿಂದ ಜಾರಿಗೆ ಬಂದಿರುವ ನೂತನ 'ಆಲ್ಕೋಹಾಲ್ ಇನ್ ಬೆವರೇಜ್' (AIB) ತೆರಿಗೆ ನೀತಿಯು ಕೇವಲ ಸರ್ಕಾರದ ಆದಾಯವನ್ನು ಹೆಚ್ಚಿಸುತ್ತಿಲ್ಲ, ಬದಲಿಗೆ ರಾಜ್ಯದ ಮದ್ಯಪ್ರಿಯರ ಕುಡಿಯುವ ಶೈಲಿಯನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿದೆ. ಹೊಸ ನೀತಿಯ ಪರಿಣಾಮವಾಗಿ ಗ್ರಾಹಕರು ಹೆಚ್ಚಿನ ಆಲ್ಕೋಹಾಲ್ ಅಂಶವಿರುವ ಮದ್ಯದಿಂದ ಸೌಮ್ಯ (ಮೈಲ್ಡ್) ಮದ್ಯದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.&lt;/p&gt;&lt;h2&gt;ಬಿಯರ್ ದರ ಇಳಿಕೆ: ಮಾರುಕಟ್ಟೆಯಲ್ಲಿ ಹೊಸ ದಾಖಲೆ!&lt;/h2&gt;&lt;p&gt;ರಾಜ್ಯದಲ್ಲಿ ಶೇಕಡಾ 5 ಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್&zwnj;ಗಳ ಬೆಲೆಯಲ್ಲಿ ಭಾರಿ ಕಡಿತವಾಗಿರುವ ಬೆನ್ನಲ್ಲೇ ಬಿಯರ್ ಸೇವನೆ ಮತ್ತು ಮಾರಾಟದ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ.&lt;/p&gt;&lt;p&gt;ಚಿಲ್ಲರೆ ವ್ಯಾಪಾರಿಗಳ (CL-2 ಪರವಾನಗಿದಾರರು) ಪ್ರಕಾರ, ಬೆಲೆ ಇಳಿಕೆಯ ನಂತರ ಲಾಗರ್ ಬಿಯರ್&zwnj;ಗಳಿಗೆ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಉದಾಹರಣೆಗೆ, ಅತ್ಯಂತ ಜನಪ್ರಿಯ ಯುನೈಟೆಡ್ ಬ್ರೂವರೀಸ್ (UB) ಸಂಸ್ಥೆಯ 'ಕಿಂಗ್&zwnj;ಫಿಷರ್ ಪ್ರೀಮಿಯಂ' 330 ಮಿಲಿ ಬಾಟಲಿಯ ಗರಿಷ್ಠ ಚಿಲ್ಲರೆ ಬೆಲೆ (MRP) 125 ರೂ.ಗಳಿಂದ ನೇರವಾಗಿ 60 ರೂ.ಗಳಿಗೆ ಕುಸಿದಿದೆ. ಇದರೊಂದಿಗೆ ಬಡ್&zwnj;ವೈಸರ್, ಕರೋನಾ, ಹೊಗಾರ್ಡನ್ ಹಾಗೂ ಸ್ಥಳೀಯ ಬೆಂಗಳೂರಿನ 'ಟಾಯ್ಟ್' ಬ್ರೂವರೀಸ್&zwnj;ನ ಗೋಧಿ, ಲಾಗರ್ ಮತ್ತು ಸ್ಟೌಟ್ ಬಿಯರ್&zwnj;ಗಳ ಮಾರಾಟವೂ ಗಗನಕ್ಕೇರಿದೆ.&lt;/p&gt;&lt;p&gt;ಹೊಸ ತೆರಿಗೆ ನೀತಿಯು ಅತ್ಯಂತ ಸೂಕ್ತ ಸಮಯದಲ್ಲಿ ಜಾರಿಗೆ ಬಂದಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಯರ್ ಬಳಕೆ ಹೆಚ್ಚಿರುತ್ತದೆ, ಅದರಲ್ಲೂ ಲಾಗರ್ ಬಿಯರ್ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಬೋನಸ್ ಆದಂತಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ನಮ್ಮ ಬಿಯರ್ ದಾಸ್ತಾನು ಶೇ. 25 ರಿಂದ 30 ರಷ್ಟು ಖಾಲಿಯಾಗಿದೆ. ಜನರು ಸ್ಟ್ರಾಂಗ್ ಬಿಯರ್ ಬಿಟ್ಟು ಮೈಲ್ಡ್ ಬಿಯರ್&zwnj;ನತ್ತ ಮುಖ ಮಾಡುತ್ತಿದ್ದಾರೆ ಎಂದು ನಗರದ ಮದ್ಯದ ಚಿಲ್ಲರೆ ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಮೊದಲ ತ್ರೈಮಾಸಿಕದಲ್ಲಿ ಶೇ. 19.52 ರಷ್ಟು ಆದಾಯ ವೃದ್ಧಿ&lt;/h2&gt;&lt;p&gt;ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್&zwnj;ನಿಂದ ಜೂನ್) ಬಿಯರ್ ಮಾರಾಟದಿಂದಲೇ ಸರ್ಕಾರಕ್ಕೆ 312.67 ಕೋಟಿ ರೂ. ಹೆಚ್ಚುವರಿ ಆದಾಯ ಹರಿದುಬಂದಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 19.52 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಬಿಯರ್&zwnj;ನಿಂದ 1,602.14 ಕೋಟಿ ರೂ. ಆದಾಯ ಬಂದಿದ್ದರೆ, ಈ ಬಾರಿ ದಾಖಲೆಯ 1,914.81 ಕೋಟಿ ರೂ. ಆದಾಯ ಸಂಗ್ರಹವಾಗಿದೆ.&lt;/p&gt;&lt;p&gt;ಬಿಯರ್ ಮಾತ್ರವಲ್ಲದೆ, ಕೆಲವು ಪ್ರೀಮಿಯಂ ಇಂಡಿಯನ್ ಮೇಡ್ ಲಿಕ್ಕರ್ (IML) ಬ್ರಾಂಡ್&zwnj;ಗಳ ಎಂಆರ್&zwnj;ಪಿ ಪರಿಷ್ಕರಣೆಯಾಗಿರುವುದರಿಂದ, ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಮಾರಾಟದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಒಟ್ಟಾರೆಯಾಗಿ ಇಲಾಖೆಯು ಮೊದಲ ತ್ರೈಮಾಸಿಕದಲ್ಲಿ ಶೇ. 14.39 ರಷ್ಟು ಒಟ್ಟಾರೆ ಬೆಳವಣಿಗೆಯೊಂದಿಗೆ 10,599.29 ಕೋಟಿ ರೂ. ಸಂಗ್ರಹಿಸಿದೆ.&lt;/p&gt;&lt;h2&gt;45 ಸಾವಿರ ಕೋಟಿ ರೂ. ಆದಾಯದ ಬೃಹತ್ ಗುರಿ&lt;/h2&gt;&lt;p&gt;ರಾಜ್ಯ ಸರ್ಕಾರವು 2026-27ರ ಹಣಕಾಸು ವರ್ಷಕ್ಕೆ ಒಟ್ಟು 45,000 ಕೋಟಿ ರೂಪಾಯಿಗಳ ಅಬಕಾರಿ ಆದಾಯದ ಬೃಹತ್ ಗುರಿಯನ್ನು ಹೊಂದಿದೆ. ಈ ಗುರಿಯನ್ನು ತಲುಪಲು ಇಲಾಖೆಯು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.&lt;/p&gt;&lt;p&gt;ಆಲ್ಕೋಹಾಲ್ ಪ್ರಮಾಣ ಕಡ್ಡಾಯ: ಐಎಂಎಲ್ ತಯಾರಕರು ತಮ್ಮ ಮದ್ಯದ ಬಾಟಲಿಗಳಲ್ಲಿ ಕನಿಷ್ಠ ಶೇ. 40 ರಷ್ಟು ಆಲ್ಕೋಹಾಲ್ ಪ್ರಮಾಣವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸಿದೆ (ಈ ಹಿಂದೆ ಇದು ಶೇ. 37 ರಿಂದ ಶೇ. 42.8 ರಷ್ಟಿರುತ್ತಿತ್ತು). ಆದರೆ, ಸಾಂಪ್ರದಾಯಿಕ ಶೈಲಿಯನ್ನು ಪರಿಗಣಿಸಿ ವೋಡ್ಕಾಗೆ ಮಾತ್ರ ಶೇ. 37.5 ರಷ್ಟು ಆಲ್ಕೋಹಾಲ್ ಹೊಂದಲು ವಿನಾಯಿತಿ ನೀಡಲಾಗಿದೆ.&lt;/p&gt;&lt;p&gt;ಬಳಕೆಯಾಗದ ಪರವಾನಗಿಗಳ ಹರಾಜು: ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಅಥವಾ ಬಳಕೆಯಾಗದ 483 ಸಿಎಲ್-2ಎ (ಚಿಲ್ಲರೆ ಮದ್ಯದ ಅಂಗಡಿ) ಮತ್ತು 96 ಸಿಎಲ್-9ಎ (ಬಾರ್) ಪರವಾನಗಿಗಳನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಆನ್&zwnj;ಲೈನ್ ಹರಾಜು ಹಾಕಲು ಇಲಾಖೆ ನಿರ್ಧರಿಸಿದೆ. ಈ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಲೈಸೆನ್ಸ್&zwnj;ಗಳನ್ನು 2026-27 ರಿಂದ 2030-31 ರವರೆಗಿನ ಐದು ಅಬಕಾರಿ ವರ್ಷಗಳ ಅವಧಿಗೆ ನೀಡಲಾಗುತ್ತಿದ್ದು, ಇದರಿಂದ ಸರ್ಕಾರದ ಖಜಾನೆಗೆ ಮತ್ತಷ್ಟು ಆದಾಯ ಬರಲಿದೆ.&lt;/p&gt;&lt;p&gt;&quot;ಗ್ರಾಹಕರಲ್ಲಿ ಗುಣಮಟ್ಟದ ಮತ್ತು ಕಡಿಮೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳ ಬಳಕೆಯನ್ನು ಉತ್ತೇಜಿಸುವುದೇ ಎಐಬಿ (AIB) ನೀತಿಯ ಪ್ರಮುಖ ಉದ್ದೇಶವಾಗಿದೆ&quot; ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ರಿತೇಶ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಈ ನೂತನ ಪ್ರಯೋಗವು ಗ್ರಾಹಕರ ಆರೋಗ್ಯ ರಕ್ಷಣೆ ಮತ್ತು ಸರ್ಕಾರದ ಆದಾಯ ವೃದ್ಧಿ ಎರಡರಲ್ಲೂ ಸಕಾರಾತ್ಮಕ ಬದಲಾವಣೆ ತರುತ್ತಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/business/karnataka-aib-policy-boosts-excise-revenue-soars-as-new-premium-beer-sales-gdp/articleshow-gtftvql"/>
        </item>
        <item>
            <title><![CDATA[ಹಾರೋಹಳ್ಳಿಯಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ? ಹೊಸ ಸ್ಥಳದತ್ತ ಸರ್ಕಾರದ ಚಿಂತನೆ]]></title>
            <link>https://kannada.asianetnews.com/gallery/state/cm-dk-shivakumar-has-suggested-that-harohalli-be-considered-as-a-potential-location-for-bengaluru-second-airport-mrq-hfmcm1g</link>
            <guid isPermaLink="true">https://kannada.asianetnews.com/gallery/state/cm-dk-shivakumar-has-suggested-that-harohalli-be-considered-as-a-potential-location-for-bengaluru-second-airport-mrq-hfmcm1g</guid>
            <pubDate>Thu, 09 Jul 2026 11:01:15 +0530</pubDate>
            <description><![CDATA[&lt;p&gt;ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳವಾಗಿ ಹಾರೋಹಳ್ಳಿಯನ್ನು ಪರಿಗಣಿಸುವಂತೆ CM ಸೂಚಿಸಿದ್ದಾರೆ. ಈಗಾಗಲೇ ಶಾರ್ಟ್&zwnj;ಲಿಸ್ಟ್ ಮಾಡಲಾಗಿರುವ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಜೊತೆಗೆ, ಕಡಿಮೆ ಭೂಸ್ವಾಧೀನ ವೆಚ್ಚ ಹಾಗೂ ಗ್ರಾಮಗಳ ಸ್ಥಳಾಂತರ ತಪ್ಪಿಸುವ ಸ್ಥಳಕ್ಕೆ ಸರ್ಕಾರ ಆದ್ಯತೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2ndtm7r0y5p4a7zhed72qf,imgname-bengaluru-2nd-airport--4--1783574751879.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸಂಭಾವ್ಯ ಸ್ಥಳವಾಗಿ ಹಾರೋಹಳ್ಳಿಯನ್ನು ಪರಿಗಣಿಸುವಂತೆ CM ಸೂಚಿಸಿದ್ದಾರೆ. ಈಗಾಗಲೇ ಶಾರ್ಟ್&zwnj;ಲಿಸ್ಟ್ ಮಾಡಲಾಗಿರುವ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಜೊತೆಗೆ, ಕಡಿಮೆ ಭೂಸ್ವಾಧೀನ ವೆಚ್ಚ ಹಾಗೂ ಗ್ರಾಮಗಳ ಸ್ಥಳಾಂತರ ತಪ್ಪಿಸುವ ಸ್ಥಳಕ್ಕೆ ಸರ್ಕಾರ ಆದ್ಯತೆ ನೀಡಲಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಸ್ಥಳದ ಆಯ್ಕೆಯ ಪಟ್ಟಿಯಲ್ಲಿ ಹಾರೋಹಳ್ಳಿ ಬಗ್ಗೆ ಪರಿಶೀಲಿಸುವಂತೆ ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಬುಧವಾರ ಈ ಸಂಬಂಧ ನಡೆದ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದು, ಇಡೀ ಗ್ರಾಮಗಳನ್ನು ಸ್ಥಳಾಂತರ ಮಾಡೋದು ಕಷ್ಟಕರ, ಕಡಿಮೆ ಭೂಸ್ವಾಧೀನ ವೆಚ್ಚದ ಯೋಜನೆಗಳನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಬುಧವಾರದ ಸಭೆಯಲ್ಲಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ಹಾರೋಹಳ್ಳಿಯನ್ನು ನಾಲ್ಕನೇ ಸಂಭಾವ್ಯ ಸ್ಥಳವನ್ನಾಗಿ ಪರಿಗಣಿಸುವಂತೆ ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ (IDD) ಸೂಚನೆ ನೀಡಿದ್ದಾರೆ. ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಶಾರ್ಟ್&zwnj; ಲಿಸ್ಟ್ ಮಾಡಲಾಗಿರುವ ಮೂರು ಸ್ಥಳಗಳ ಮೌಲ್ಯಮಾಪನ ಮಾಡಲಿದೆ.&lt;/p&gt;&lt;img&gt;&lt;p&gt;ತಾಂತ್ರಿಕ ಕಾರ್ಯಸಾಧ್ಯತೆ, ಭೂಸ್ವಾಧೀನ ವೆಚ್ಚಗಳನ್ನು ಆಧರಿಸಿ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಆಯ್ಕೆ ಮಾಡಲಾಗುವುದು. ಟೆಕ್ನಿಕಲ್ ವ್ಯಾಲೋಷನ್&zwnj;ಗಾಗಿ ಸಿಂಗಪುರ ಮೂಲದ ಸಲಹಾ ಸಮಿತಿಯನ್ನು ನೇಮಿಸಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಗ್ರಾಮಗಳನ್ನು ಸ್ಥಳಾಂತರ ಮಾಡದಿರಲು ಪ್ರಯತ್ನಿಸಲಾಗುವುದು. ಸ್ಥಳ ಆಯ್ಕೆಯ ನಂತ್ರ ಕೆಲವು ಮನೆಗಳಿದ್ರೆ ಪರಿಹಾರ ನೀಡಿ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ನೆಲಮಂಗಲ, ಸೋಮನಹಳ್ಳಿ ಮತ್ತು ಚೂಡಹಳ್ಳಿ ಮೂರು ಸ್ಥಳಗಳನ್ನು ಶಾರ್ಟ್&zwnj;ಲಿಸ್ಟ್ ಮಾಡಲಾಗಿದೆ. ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ಅಥವಾ ಬನ್ನೇರುಘಟ್ಟ ಕಾರಿಡಾರ್&zwnj;ನ ಉದ್ದಕ್ಕೂ ಇರುವ ಸೋಮನಹಳ್ಳಿ ಮತ್ತು ಚೂಡಹಳ್ಳಿ, ನಗರದ ಉತ್ತರ ಕಾರಿಡಾರ್&zwnj;ನಲ್ಲಿ ಟ್ರಾಫಿಮ್ ಕಡಿಮೆ ಮಾಡಬಹುದಾಗಿದೆ.&lt;/p&gt;&lt;img&gt;&lt;p&gt;ಸದ್ಯ ಚೂಡಹಳ್ಳಿಯಲ್ಲಿ 4655 ಎಕರೆ, ಸೋಮನಹಳ್ಳಿಯಲ್ಲಿ 4376 ಎಕರೆ ಭೂಮಿಯಿದ್ದು, ಎರಡೂ ಪ್ರದೇಶಗಳನ್ನು ಒಟ್ಟು ಗೂಡಿಸಿದರೆ 9 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಸಿಗಲಿದ್ದು, ಅಲ್ಲಿ ವಿಮಾನನಿಲ್ದಾಣ ನಿರ್ಮಾಣ ಸಾಧ್ಯತೆ. ಜತೆಗೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಅಥವಾ ಕಡಿಮೆ ಗ್ರಾಮಗಳನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಸ್ಥಳವನ್ನು ಅಂತಿಮಗೊಳಿಸುವಂತೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅಧಿಕಾರಿಗಳಿಗೆ ನಿರ್ದೇಶಿಸಿದರು.&lt;/p&gt;]]></content:encoded>
            <category>state</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/state/cm-dk-shivakumar-has-suggested-that-harohalli-be-considered-as-a-potential-location-for-bengaluru-second-airport-mrq-hfmcm1g"/>
        </item>
        <item>
            <title><![CDATA[2028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು  ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!]]></title>
            <link>https://kannada.asianetnews.com/politics/22-months-to-karnataka-elections-inside-the-siddaramaiah-and-dk-shivakumar-2028-plan-gdp-videoshow-hgb7ggi</link>
            <guid isPermaLink="true">https://kannada.asianetnews.com/politics/22-months-to-karnataka-elections-inside-the-siddaramaiah-and-dk-shivakumar-2028-plan-gdp-videoshow-hgb7ggi</guid>
            <pubDate>Wed, 08 Jul 2026 15:25:28 +0530</pubDate>
            <description><![CDATA[2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅಧಿಕಾರ ಉಳಿಸಿಕೊಳ್ಳಲು ಹೈಕಮಾಂಡ್, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಿದ್ದು, ಇಬ್ಬರೂ ತಮ್ಮ ರಣತಂತ್ರಗಳೊಂದಿಗೆ ಅಖಾಡಕ್ಕಿಳಿದಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xamr40a" medium="video" height="768" width="1024"/>
            <content:encoded><![CDATA[&lt;p&gt;ಈಗಿನ್ನೂ 2026.. ಮುಂದಿನ ವಿಧಾನಸಭೆ ಚುನಾವಣೆ ಇರೋದು 2028ಕ್ಕೆ.. ಎಕ್ಸ್ಯಾಟ್ ಆಗಿ ಹೇಳ್ಬೇಕು ಅಂದ್ರೆ ಮುಂದಿನ ಮಹಾಯುದ್ಧಕ್ಕೆ ಇನ್ನೂ 22 ತಿಂಗಳು ಬಾಕಿಯಿದೆ. ಆದ್ರೆ ಈ ಕದನ ಗೆಲ್ಲೋಕೆ ಜೋಡೆತ್ತುಗಳ ತಯಾರಿ ಜೋರಾಗಿದೆ. 2023ರ ಚುನಾವಣೆಯಲ್ಲಿ ಚರಿತ್ರೆ ಬರೆದಿದ್ದ ಅದೇ ಜೋಡೆತ್ತು ಸೈಲೆಂಟ್ ಆಗಿ ಅಖಾಡಕ್ಕೆ ನುಗ್ಗಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಡಿ.ಕೆ.ಶಿವಕುಮಾರ್.. ಇಬ್ಬರಿಗೂ ನಿರ್ದಿಷ್ಟ ಗುರಿಯನ್ನ ಫಿಕ್ಸ್ ಮಾಡಿದೆ ಹೈಕಮಾಂಡ್. ಹಾಗಿದ್ರೆ 2028ರ ಕರ್ನಾಟಕ ಕುರುಕ್ಷೇತ್ರಕ್ಕೆ ಹೇಗಿದೆ ಕಾಂಗ್ರೆಸ್ ತಯಾರಿ..? ಅಧಿಕಾರ ಉಳಿಸಿಕೊಳ್ಳೋಕೆ ಕೈ ಪಡೆಯ ಪ್ಲಾನ್ ಏನು..?&lt;/p&gt;&lt;p&gt;ಸಿಎಂ ಸಿಂಹಾಸನವನಕ್ಕೆ ಅಧಿಪತಿಯಾಗಿದ್ದಾರೆ ಕನಕಾಧಿಪತಿ. ಆದ್ರೆ ಇಲ್ಲಿಗೆ ಎಲ್ಲವೂ ಮುಗಿದಿಲ್ಲ. ಅವರ ಗುರಿ ದೊಡ್ಡದಿದೆ. ಅವರ ನೆಕ್ಸ್ಟ್ ಟಾರ್ಗೆಟ್ ಕೂಡ ಫಿಕ್ಸ್ ಆಗಿದೆ. ಮುಂದೆಯೂ ಪಕ್ಷವನ್ನ ಅಧಿಕಾರಕ್ಕೆ ತಂದು ಆಡಳಿತ ನಡೆಸೋ ಶಪಥವನ್ನ ಈಗಾಗಲೇ ಮಾಡಿಯಾಗಿದೆ ಡಿ.ಕೆ.ಶಿವಕುಮಾರ್. ಹಾಗಿದ್ರೆ, ಆ ಶಪಥ ನಿಜಕ್ಕೂ ಈಡೇರುತ್ತಾ..? ಅದನ್ನ ಈಡೇರಿಸಿಕೊಳ್ಳೋಕೆ ಅವರು ಹೆಣೆದಿರುವ ರಣವ್ಯೂಹಗಳೇನು?&lt;/p&gt;&lt;p&gt;ಕರ್ನಾಟಕದಲ್ಲಿ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಹೈಕಮಾಂಡ್​ಗೆ ಬಹಳ ಮುಖ್ಯ. ಇದಕ್ಕೆ ಒಂದಿಷ್ಟು ಕಾರಣಗಳು ಸಹ ಇವೆ. ಶತಾಯಗತಾಯ 2028ರಲ್ಲಿಯೂ ಕರ್ನಾಟಕವನ್ನ ಗೆಲ್ಬೇಕು ಅನ್ನೋದು ಕಾಂಗ್ರೆಸ್ ಹೈಕಮಾಂಡ್​ನ ಉದ್ದೇಶ. ಇಲ್ಲಿ ಗೆಲುವು ಅನ್ನೋದು ಕೇವಲ ಅಧಿಕಾರಕ್ಕಾಗಿಯಲ್ಲ. ಮುಂದಿನ ಅವಧಿಗೂ ಅಧಿಕಾರ ತಮ್ಮ ಬಳಿಯೇ ಇರ್ಬೇಕು ಅಂದ್ರೆ 2023ರ ಇತಿಹಾಸ ಮತ್ತೆ ಮರುಕಳಿಸಬೇಕು.. ಆ ಹಿಸ್ಟರಿ ರಿಪೀಟ್ ಆಗ್ಬೇಕು ಅಂದ್ರೆ, ಅಲ್ಲಿ ಜೋಡೆತ್ತು ಮೋಡಿ ಮಾಡ್ಬೇಕು. ಹೀಗಾಗಿಯೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಈಗಾಗಲೇ ನಿರ್ದಿಷ್ಟ ಜವಾಬ್ದಾರಿಯನ್ನ &amp;nbsp;ಹೈಕಮಾಂಡ್ ವಹಿಸಿದೆ. ಒಬ್ಬರು ಅಹಿಂದ ಕೋಟೆಯನ್ನ ರಕ್ಷಿಸೋಕೆ ಅಖಾಡಕ್ಕಿಳಿದ್ರೆ, ಮತ್ತೊಬ್ಬರು ಶತ್ರಪಾಳಯವನ್ನ ಕಬ್ಜಾ ಮಾಡೋಕೆ ಮುನ್ನುಗ್ಗಲಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/politics/22-months-to-karnataka-elections-inside-the-siddaramaiah-and-dk-shivakumar-2028-plan-gdp-videoshow-hgb7ggi"/>
        </item>
        <item>
            <title><![CDATA[Bengaluru: 2ನೇ ವಿಮಾನ ನಿಲ್ದಾಣ ಎಲ್ಲಿ? ಕನಕಪುರ, ನೆಲಮಂಗಲ ರಸ್ತೆಯ ಈ ಗ್ರಾಮಗಳು ಶಾರ್ಟ್‌ಲಿಸ್ಟ್‌]]></title>
            <link>https://kannada.asianetnews.com/state/bengaluru-2nd-airport-priority-given-to-areas-with-less-land-acquisition-no-displacement-of-villages-dk-shivakumar-mrq/articleshow-ipfa4eh</link>
            <guid isPermaLink="true">https://kannada.asianetnews.com/state/bengaluru-2nd-airport-priority-given-to-areas-with-less-land-acquisition-no-displacement-of-villages-dk-shivakumar-mrq/articleshow-ipfa4eh</guid>
            <pubDate>Thu, 09 Jul 2026 07:48:21 +0530</pubDate>
            <description><![CDATA[ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ನೇತೃತ್ವದಲ್ಲಿ ಸಭೆ ನಡೆದಿದೆ. ಕನಕಪುರ ರಸ್ತೆ ಮತ್ತು ನೆಲಮಂಗಲ ಬಳಿ ಗುರುತಿಸಲಾದ ಸ್ಥಳಗಳ ಪೈಕಿ, ಕಡಿಮೆ ಭೂಸ್ವಾಧೀನ ಮತ್ತು ಗ್ರಾಮಗಳ ಸ್ಥಳಾಂತರವಿರುವ ಜಾಗವನ್ನು ಅಂತಿಮಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ತಾಂತ್ರಿಕ ಕಾರ್ಯಸಾಧ್ಯತಾ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k0k6p3jf0pkzmah83c4a00nn,imgname-plane-1752991206991.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜಧಾನಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಸಂಬಂಧಿಸಿದಂತೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಮತ್ತು ಗ್ರಾಮಗಳನ್ನು ಹೆಚ್ಚಾಗಿ ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಕಡಿಮೆ ಇರುವ ಜಾಗದಲ್ಲಿ ವಿಮಾನನಿಲ್ದಾಣ ನಿರ್ಮಿಸುವ ಕುರಿತು ಸರ್ಕಾರ ಚರ್ಚೆ ನಡೆಸಿದೆ. ವಿಧಾನಸೌಧದಲ್ಲಿ ಬುಧವಾರ ಬೆಂಗಳೂರಿಗೆ 2ನೇ ವಿಮಾನನಿಲ್ದಾಣ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ನೇತೃತ್ವದಲ್ಲಿ ಸಭೆ ನಡೆಸಲಾಯಿತು.&lt;/p&gt;&lt;h2&gt;&lt;strong&gt;ಕನಕಪುರ ರಸ್ತೆ, ನೆಲಮಂಗಲ-ಕುಣಿಗಲ್&zwnj; ರಸ್ತೆ&lt;/strong&gt;&lt;/h2&gt;&lt;p&gt;ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಈಗಾಗಲೇ ಗುರುತಿಸಲಾಗಿರುವ ಕನಕಪುರ ರಸ್ತೆಯ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲ-ಕುಣಿಗಲ್&zwnj; ರಸ್ತೆಯಲ್ಲಿ ಸ್ಥಳ ಗುರುತಿಸುವುದು, ಕೇಂದ್ರದ ತಂಡ ನೀಡಿರುವ ವರದಿ, ಮೂರೂ ಸ್ಥಳಗಳಲ್ಲಿ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ಕಾರ್ಯಸಾಧ್ಯತಾ ವರದಿಗಳ ಕುರಿತಂತೆ ಚರ್ಚಿಸಲಾಯಿತು. 3 ಸ್ಥಳಗಳ ಪೈಕಿ ಚೂಡಹಳ್ಳಿ ಮತ್ತು ಸೋಮನಹಳ್ಳಿಯಲ್ಲಿ ಗುರುತಿಸಲಾಗಿರುವ ಸ್ಥಳಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸಾಧ್ಯತೆ ಬಗ್ಗೆ ಮಾಹಿತಿ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.&lt;/p&gt;&lt;p&gt;ಸದ್ಯ ಚೂಡಹಳ್ಳಿಯಲ್ಲಿ 4655 ಎಕರೆ, ಸೋಮನಹಳ್ಳಿಯಲ್ಲಿ 4376 ಎಕರೆ ಭೂಮಿಯಿದ್ದು, ಎರಡೂ ಪ್ರದೇಶಗಳನ್ನು ಒಟ್ಟು ಗೂಡಿಸಿದರೆ 9 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಸಿಗಲಿದ್ದು, ಅಲ್ಲಿ ವಿಮಾನನಿಲ್ದಾಣ ನಿರ್ಮಾಣ ಸಾಧ್ಯತೆ. ಜತೆಗೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಅಥವಾ ಕಡಿಮೆ ಗ್ರಾಮಗಳನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಸ್ಥಳವನ್ನು ಅಂತಿಮಗೊಳಿಸುವಂತೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅಧಿಕಾರಿಗಳಿಗೆ ನಿರ್ದೇಶಿಸಿದರು.&lt;/p&gt;&lt;p&gt;ಉಳಿದಂತೆ ಸಭೆಯಲ್ಲಿ, ಭೂಸ್ವಾಧೀನ ಪ್ರಕ್ರಿಯೆ ಮತ್ತು ಯೋಜನೆಯಿಂದ ವನ್ಯಜೀವಿಗಳ ಮೇಲಾಗುವ ಪರಿಣಾಮಗಳ ಕುರಿತು ತಾಂತ್ರಿಕ ಅಧ್ಯಯನ ನಡೆಸುವುದು ಹಾಗೂ ಸೋಮನಹಳ್ಳಿ ಪ್ರದೇಶವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸಮೀಪದಲ್ಲಿದ್ದು ಅದರ ಬಗ್ಗೆಯೂ ವರದಿ ಸಿದ್ಧಪಡಿಸಿ, ಅನುಮತಿ ಪಡೆಯಬೇಕಿರುವ ಕುರಿತಂತೆ ಚರ್ಚಿಸಲಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru Airport ರಸ್ತೆ ಶೀಘ್ರದಲ್ಲೇ ಸಂಪೂರ್ಣ ಸಿಗ್ನಲ್ ಮುಕ್ತ!; ಮುಂದಿನ ವಾರದಿಂದ ಸಾದಹಳ್ಳಿ ಅಂಡರ್&zwnj;ಪಾಸ್ ಕಾಮಗಾರಿ&lt;/strong&gt;&lt;/p&gt;&lt;p&gt;ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj;, ಬೆಂಗಳೂರು ಸಮೀಪ ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಈ ಹಿಂದೆ ನಡೆದಿದ್ದ ಪ್ರಕ್ರಿಯೆಗಳ ವಿವರಣೆ ಪಡೆದಿದ್ದೇನೆ. ಸದ್ಯ ಗುರುತಿಸಲಾಗಿರುವ ಜಾಗಗಳ ಪೈಕಿ ಖಾಸಗಿಯವರಿಂದ ಕಡಿಮೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಮತ್ತು ಕಡಿಮೆ ಗ್ರಾಮಗಳನ್ನು ಸ್ಥಳಾಂತರಿಸಬಹುದಾದ ಸ್ಥಳವನ್ನು ನಿಗದಿ ಮಾಡಿ ತಾಂತ್ರಿಕ ಕಾರ್ಯಸಾಧ್ಯತಾ ವರದಿ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ &amp;nbsp;ಓದಿ: &lt;/strong&gt;&lt;strong&gt;ಬೆಂಗಳೂರು ವಿಮಾನ ನಿಲ್ದಾಣ: 40 ಕೋಟಿ ಪ್ರಯಾಣಿಕರ ದಾಖಲೆ! ಕಾರ್ಗೊ ಸಾಗಣೆಯಲ್ಲೂ ಟಾಪ್, ಐತಿಹಾಸಿಕ ಮೈಲಿಗಲ್ಲು!&lt;/strong&gt;&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-2nd-airport-priority-given-to-areas-with-less-land-acquisition-no-displacement-of-villages-dk-shivakumar-mrq/articleshow-ipfa4eh"/>
        </item>
        <item>
            <title><![CDATA[Karnataka News Live: Electoion - ಪಂಚಾಯಿತಿ ಫೈಟ್; ನಡೆದಿದೆಯಾ ವಾರ್ಡ್ ಮೀಸಲಾತಿಯಲ್ಲಿ ತಾರತಮ್ಯ?  ಇಲ್ಲಿದೆ ಆಕ್ಷೇಪಣೆ ಅರ್ಜಿ ಮಾಹಿತಿ!]]></title>
            <link>https://kannada.asianetnews.com/state/karnataka-news-live-9-july-2026-indira-kit-to-be-provided-to-the-people-of-the-state-soon-minister-muniyappa-mrq/liveblog-updates-kopps4u</link>
            <guid isPermaLink="true">https://kannada.asianetnews.com/state/karnataka-news-live-9-july-2026-indira-kit-to-be-provided-to-the-people-of-the-state-soon-minister-muniyappa-mrq/liveblog-updates-kopps4u</guid>
            <pubDate>Thu, 09 Jul 2026 19:08:15 +0530</pubDate>
            <description><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ರಾಜ್ಯದ ಜನರಿಗೆ ಇಂದಿರಾ ಕಿಟ್ ವಿತರಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಆದಷ್ಟು ಬೇಗ ಈ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ದೆಹಲಿಯಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜ್ಯಕ್ಕೆ ಬರಬೇಕಾದ ₹1902 ಕೋಟಿ ಹಣವನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ರಾಜ್ಯದಿಂದ ಅಡಿಟ್ ವರದಿ ನೀಡಲಾಗಿದೆ.&amp;nbsp;&lt;/p&gt;&lt;p&gt;ಬಾಕಿ ಹಣವನ್ನು ಕೇಂದ್ರ ಸರ್ಕಾರ ಬೇಗ ನೀಡಿದರೆ ರೈತರಿಗೆ ತಲುಪಿಸಲು ಸಹಾಯ ಆಗುತ್ತದೆ. ಮೊದಲ ಹಂತದಲ್ಲಿ ₹190 ಕೋಟಿ ಕೇಂದ್ರ ಬಿಡುಗಡೆ &zwnj;ಮಾಡಿದ್ದು, ಉಳಿದಂತೆ ಎಂಎಸ್&zwnj;ಪಿ ಅಡಿ ನೀಡುವ ಅನುದಾನ ಬಿಡುಗಡೆಯಾಗಬೇಕಿದೆ ಎಂದು ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3hhcq124h399szj4mcfe07,imgname-gp-fight-1783604228832.jpg" type="image/jpeg" height="390" width="690"/>
            <category>state</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-9-july-2026-indira-kit-to-be-provided-to-the-people-of-the-state-soon-minister-muniyappa-mrq/liveblog-updates-kopps4u"/>
        </item>
        <item>
            <title><![CDATA[Karnataka News Live: IND vs ENG - ಟೀಂ ಇಂಡಿಯಾ ಹೆಡ್‌ ಕೋಚಿಂದ್ ಬಿಗ್‌ ಮೇಸೇಜ್‌; ವೈಭವ್‌ ಸೇರಿ ಇನ್ನೋರ್ವಗೆ ಶಾಕ್‌? ಇನ್ನಿಬ್ಬರಿಗೆ ಮಾಡು ಇಲ್ಲವೇ, ಮಡಿ!]]></title>
            <link>https://kannada.asianetnews.com/state/karnataka-news-live-8-july-2026-is-siddaramaiah-being-ignored-in-the-state-congress-mrq/liveblog-updates-ndozmbh</link>
            <guid isPermaLink="true">https://kannada.asianetnews.com/state/karnataka-news-live-8-july-2026-is-siddaramaiah-being-ignored-in-the-state-congress-mrq/liveblog-updates-ndozmbh</guid>
            <pubDate>Wed, 08 Jul 2026 22:38:57 +0530</pubDate>
            <description><![CDATA[&lt;p&gt;&lt;strong&gt;ಮೈಸೂರು:&lt;/strong&gt; ಕಾಂಗ್ರೆಸ್&zwnj;ನಲ್ಲಿ ಸಿದ್ದರಾಮಯ್ಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬ್ಯಾನರ್ ಹಾಕಿಲ್ಲ, ಪೋಸ್ಟರ್ ಹಾಕಿಲ್ಲ ಅನ್ನೋ ವಿಚಾರಕ್ಕೆ ನಮ್ಮ ತಂದೆ ತಲೆ ಕೆಡಿಸಿಕೊಳ್ಳೋವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಮಂಗಳವಾರ ಸುದ್ದಿಗಾರರೊಂದಿಗೆ ನಗರಾಭಿವೃದ್ಧಿ ಸಚಿವ ಸ್ಥಾನದಿಂದ ತಮ್ಮನ್ನು ಕೈಬಿಡಬೇಕೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಮುಡಾ ಕೇಸ್ ಸಂಬಂಧ ಲೋಕಾಯುಕ್ತದಿಂದ ಸಂಪೂರ್ಣ ತನಿಖೆ ಆಗಿದೆ. ತನಿಖೆ ರಿಪೋರ್ಟ್ ಕೂಡ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯವೂ ಇದನ್ನು ಒಪ್ಪಿದೆ. ಆದರೂ ಹೈಯರ್ ಅಪೀಲ್ ಹೋಗಿದ್ದಾರೆ. ತನಿಖೆ ಪೂರ್ಣಗೊಂಡಿರುವುದರಿಂದ ನಾವು ಪ್ರಭಾವ ಬೀರಲು ಸಾಧ್ಯವಿಲ್ಲ. ಇವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwr1q91s8bk52w1ermd1r1f6,imgname-team-india--2--1783218545719.jpg" type="image/jpeg" height="390" width="690"/>
            <category>state</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-8-july-2026-is-siddaramaiah-being-ignored-in-the-state-congress-mrq/liveblog-updates-ndozmbh"/>
        </item>
        <item>
            <title><![CDATA[ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಮುಂದಿನ 3 ದಿನಗಳು ನಿರ್ಣಾಯಕ!]]></title>
            <link>https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe</link>
            <guid isPermaLink="true">https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe</guid>
            <pubDate>Wed, 08 Jul 2026 09:16:51 +0530</pubDate>
            <description><![CDATA[ರಾಜ್ಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದೆ. ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಭೂಕುಸಿತದ ಆತಂಕವಿದ್ದು, ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwse2bepv93dvfq097p3dr1g,imgname-rain-alert--5--1783265045974.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವರುಣನ ಆರ್ಭಟಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅತ್ಯಂತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (IMD) ತೀವ್ರ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ತೀವ್ರತೆ ವಿಪರೀತವಾಗಿರಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ 24 ರಿಂದ 48 ಗಂಟೆಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ದಟ್ಟ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.&lt;/p&gt;&lt;h2&gt;ಕರಾವಳಿ-ಮಲೆನಾಡಿಗೆ 60 ಕಿ.ಮೀ ವೇಗದ ಬಿರುಗಾಳಿ ತಲ್ಲಣ!&lt;/h2&gt;&lt;p&gt;ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬೀಸಲಿರುವ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಎಚ್ಚರಿಕೆ ರವಾನಿಸಲಾಗಿದೆ. ಮತ್ತೊಂದೆಡೆ ಮಲೆನಾಡು ಮತ್ತು ಘಟ್ಟ ಪ್ರದೇಶಗಳಾದ ಬೆಳಗಾವಿ ಘಟ್ಟ ಪ್ರದೇಶ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;ul&gt; &lt;li&gt;ಜುಲೈ 8 : ಕರಾವಳಿ ಕರ್ನಾಟಕದಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದ್ದು, ಭಾರೀ ಮಳೆಯಾಗಲಿದೆ. ಇದರೊಂದಿಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಮುಂಜಾನೆಯಿಂದಲೇ ವರುಣನ ಅಬ್ಬರ ಜೋರಾಗಿರಲಿದೆ.&lt;/li&gt; &lt;li&gt;ಜುಲೈ 9: ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.&lt;/li&gt; &lt;li&gt;ಜುಲೈ 10: ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರವರೆಗೂ ಯಾವುದೇ ಬಿಡುಗಿಲ್ಲದೆ ನಿರಂತರವಾಗಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.&lt;/li&gt;&lt;/ul&gt;&lt;h2&gt;ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆ&lt;/h2&gt;&lt;p&gt;ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಮಧ್ಯಮ ಗಾತ್ರದ ಮಳೆಯಾಗಲಿದೆ. ಆದರೆ, ಈ ಭಾಗಗಳಲ್ಲೂ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಹಳೆಯ ಕಟ್ಟಡಗಳು ಹಾಗೂ ಮರಗಳ ಕೆಳಗೆ ವಾಹನ ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.&lt;/p&gt;&lt;h2&gt;ಭೂಕುಸಿತದ (Landslide) ಭೀತಿ, ಘಟ್ಟ ಪ್ರದೇಶಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ&lt;/h2&gt;&lt;p&gt;ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಘಟ್ಟ ರಸ್ತೆಗಳಲ್ಲಿ ಜುಲೈ 11ರವರೆಗೆ ಭೂಕುಸಿತ (Landslide) ಸಂಭವಿಸುವ ತೀವ್ರ ಆತಂಕವಿದೆ. ಹೀಗಾಗಿ, ಸಾರ್ವಜನಿಕರು ತುರ್ತು ಕೆಲಸಗಳಿಲ್ಲದೆ ಘಟ್ಟ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಆರು ದಿನಗಳ ಕಾಲ ಮುಂದೂಡುವುದು ಒಳಿತು. ಸಾರ್ವಜನಿಕರ ಸುರಕ್ಷತೆಗಾಗಿ ಈ ಕೆಳಗಿನ ಪ್ರಮುಖ ಸೂಚನೆಗಳನ್ನು ಅಧಿಕಾರಿಗಳು ಹೊರಡಿಸಿದ್ದಾರೆ.&lt;/p&gt;&lt;p&gt;ನದಿಗಳು ಮತ್ತು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಅಥವಾ ವೀಕ್ಷಿಸಲು ನದಿ ತೀರಕ್ಕೆ ಹೋಗಬಾರದು.&lt;/p&gt;&lt;p&gt;ಮಳೆ ನೀರು ನುಗ್ಗುವ ಸಾಧ್ಯತೆ ಇರುವ ತಗ್ಗು ಪ್ರದೇಶಗಳ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.&lt;/p&gt;&lt;p&gt;ಬಿರುಗಾಳಿ ಹಾಗೂ ಸಿಡಿಲು ಸಹಿತ ಮಳೆಯಾಗುತ್ತಿರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ವಿದ್ಯುತ್ ಕಂಬ ಹಾಗೂ ಮರಗಳ ಕೆಳಗೆ ಕಟ್ಟಬಾರದು.&lt;/p&gt;&lt;p&gt;ರಾಜ್ಯಾದ್ಯಂತ ಎನ್&zwnj;ಡಿಆರ್&zwnj;ಎಫ್ (NDRF) ಹಾಗೂ ಎಸ್&zwnj;ಡಿಆರ್&zwnj;ಎಫ್ (SDRF) ಸಿಬ್ಬಂದಿಗಳು ತರ್ತು ಸಂದರ್ಭಕ್ಕೆ , ಯಾವುದೇ ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತಗಳು ಕಂಟ್ರೋಲ್ ರೂಮ್&zwnj;ಗಳನ್ನು ತೆರೆದಿವೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rain-alert-imd-warns-of-heavy-rainfall-and-landslides-gdp/articleshow-onlh4xe"/>
        </item>
        <item>
            <title><![CDATA[ಮೃತನ ತಮ್ಮನಿಗೂ ಸಿಗಲಿದೆ ಪರಿಹಾರ! ಹೈಕೋರ್ಟ್ ಮಹತ್ವದ ಆದೇಶ, ಏನಿದು ಪ್ರಕರಣ?]]></title>
            <link>https://kannada.asianetnews.com/state/deceased-s-younger-brother-also-entitled-to-compensation-says-high-court-rav/articleshow-p1ri1wl</link>
            <guid isPermaLink="true">https://kannada.asianetnews.com/state/deceased-s-younger-brother-also-entitled-to-compensation-says-high-court-rav/articleshow-p1ri1wl</guid>
            <pubDate>Wed, 08 Jul 2026 05:45:28 +0530</pubDate>
            <description><![CDATA[&lt;p&gt;ರಸ್ತೆ ಅಪಘಾತ(Road Accident)ದಲ್ಲಿ ಮೃತಪಟ್ಟ ವ್ಯಕ್ತಿಯ ಪೋಷಕರಿಗೆ ಸಿಗುವ ಪರಿಹಾರ ಮೊತ್ತದಲ್ಲಿ ಮೃತನ ಕಿರಿಯ ಸಹೋದರ ಸಹ ಪ್ರತ್ಯೇಕ ಪಾಲು ಪಡೆದುಕೊಳ್ಳುವ ಹಕ್ಕು ಹೊಂದಿರುತ್ತಾನೆ ಎಂದು ಹೈಕೋರ್ಟ್(High court) ಆದೇಶಿಸಿದೆ. ಏನಿದು ಪ್ರಕರಣ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktn8g40cfn90np10t5g1zgyr,imgname-----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.8): &lt;/strong&gt;ರಸ್ತೆ ಅಪಘಾತ(Road Accident)ದಲ್ಲಿ ಮೃತಪಟ್ಟ ವ್ಯಕ್ತಿಯ ಪೋಷಕರಿಗೆ ಸಿಗುವ ಪರಿಹಾರ ಮೊತ್ತದಲ್ಲಿ ಮೃತನ ಕಿರಿಯ ಸಹೋದರ ಸಹ ಪ್ರತ್ಯೇಕ ಪಾಲು ಪಡೆದುಕೊಳ್ಳುವ ಹಕ್ಕು ಹೊಂದಿರುತ್ತಾನೆ ಎಂದು ಹೈಕೋರ್ಟ್(High court) ಆದೇಶಿಸಿದೆ.&lt;/p&gt;&lt;p&gt;ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮೂಲದ ಬಿ.ಟೆಕ್ ವಿದ್ಯಾರ್ಥಿ ಚಾಕಲಿ ಗಣೇಶ್ (22) ಎಂಬಾತ 2021ರ ಜುಲೈ 18ರಂದು ಬೆಂಗಳೂರಿನ ಯಲಹಂಕದ ಅಲ್ಲಾಳಸಂದ್ರ ಸೇತುವೆ ಬಳಿ ಬೈಕ್&zwnj;ನಲ್ಲಿ ತೆರಳುತಿದ್ದಾಗ ರಸ್ತೆ ಬದಿ ನಿಂತಿದ್ದ ಕ್ಯಾಂಟರ್&zwnj;ಗೆ ಡಿಕ್ಕಿ ಹೊಡೆದ&zwnj; ಪರಿಣಾಮ ಮೃತಪಟ್ಟಿದ್ದ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದು ಸಹಿಸಲ್ಲ: ಹೈಕೋರ್ಟ್&zwnj; ಎಚ್ಚರಿಕೆ! ಏನಿದು ಪ್ರಕರಣ?&lt;/p&gt;&lt;p&gt;ಪ್ರಕರಣ&zwnj; ಸಂಬಂಧ ಬೆಂಗಳೂರಿನ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (ಎಂಎ&zwnj;ಸಿಟಿ) ಘೋಷಿಸಿದ್ದ &zwnj;23.78 ಲಕ್ಷ ರು. ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ಮೃತನ ಪೋಷಕರಾದ ಚಾಕಲಿ ರಾಮಾಂಜಿನಪ್ಪ, ಸಿ.ಶಿವಮ್ಮ ಹಾಗೂ ಸಹೋದರ ಲೋಕೇಶ್&zwnj; ಹೈಕೋರ್ಟ್&zwnj;ಗೆ ಮೇಲ್ಮನವಿ&zwnj;&zwnj; ಸಲ್ಲಿಸಿದ್ದರು.&lt;/p&gt;&lt;p&gt;ಈ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ನ್ಯಾಯಾಧಿಕರಣ ಘೋಷಿಸಿದ್ದ ಪರಿಹಾರದ ಮೊತ್ತವನ್ನು 23,78 ಲಕ್ಷ ರು. ಇಂದ 39.45 ಲಕ್ಷ ರು.ಗೆ ಹೆಚ್ಚಿಸಿದೆ. ನ್ಯಾಯಾಧಿಕರಣ ಈ ಹಿಂದೆ ಮೃತ ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಉಂಟಾದ ಪ್ರೀತಿ-ವಾತ್ಸಲ್ಯದ ನಷ್ಟಕ್ಕಾಗಿ ತಂದೆ-ತಾಯಿಗೆ ಪರಿಹಾರ ಘೋಷಿಸಿದೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಮನೇಲಿ ನಾಯಿ ಸಾಕಿದ್ದೀರಾ ಎಚ್ಚರ! ಈ ತಪ್ಪು ಮಾಡಿದ್ರೆ ಕಾನೂನು ಸಂಕಷ್ಟ ಗ್ಯಾರಂಟಿ, ಹೈಕೋರ್ಟ್ ಏನು ಹೇಳಿದ ಗೊತ್ತಾ?&lt;/p&gt;&lt;p&gt;ಆದರೆ, ಮೃತನ ಅವಲಂಬಿತನಾಗಿದ್ದ ಕಿರಿಯ ಸಹೋದರಿಗೆ ಪರಿಹಾರ ನಿಗದಿಪಡಿಸಿಲ್ಲ. ತನ್ನ ಅಣ್ಣನ ಪ್ರೀತಿ ಹಾಗೂ ವಾತ್ಸಲ್ಯವನ್ನು ಕಳೆದುಕೊಂಡಿರುವುದರಿಂದ ಆತನೂ ಪರಿಹಾರಕ್ಕೆ ಅರ್ಹನಾಗಿರುತ್ತಾನೆ ಎಂದು ಹೈಕೋರ್ಟ್&zwnj; ಆದೇಶದಲ್ಲಿ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/deceased-s-younger-brother-also-entitled-to-compensation-says-high-court-rav/articleshow-p1ri1wl"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!]]></title>
            <link>https://kannada.asianetnews.com/cine-world/chitradurga-renuka-swamy-case-phone-who-issued-the-threat-holds-a-terrifying-truth-videoshow-r2ghcpv</link>
            <guid isPermaLink="true">https://kannada.asianetnews.com/cine-world/chitradurga-renuka-swamy-case-phone-who-issued-the-threat-holds-a-terrifying-truth-videoshow-r2ghcpv</guid>
            <pubDate>Thu, 09 Jul 2026 15:46:55 +0530</pubDate>
            <description><![CDATA[&lt;p&gt;ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಜೈಲು ಪಾಲಾಗಿದ್ರೂ, ವಿವಾದಗಳು, ಸಂಚುಗಳು ಮಾತ್ರ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಕಾನೂನಿನ ಕಪಿಮುಷ್ಟಿಯಿಂದ ದಾಸನನ್ನ ಹೇಗಾದ್ರೂ ಮಾಡಿ ಪಾರು ಮಾಡಬೇಕು ಅಂತ ಒಳಗೊಂದು ಟೀಮ್, ಹೊರಗೊಂದು ಟೀಮ್ ನಿರಂತರವಾಗಿ ಸ್ಕೆಚ್ ಹಾಕ್ತಾನೇ ಇದೆ. &amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xanbkiq" medium="video" height="768" width="1024"/>
            <content:encoded><![CDATA[&lt;p&gt;&lt;/p&gt;&lt;p&gt;&lt;span&gt;&lt;span&gt;ಈ ಬಾರಿ ಪೊಲೀಸರು ನಡೆಸಿರೋ ಆಪರೇಷನ್&zwnj;ನಲ್ಲಿ ದೊಡ್ಡ ಆಘಾತಕಾರಿ ಸತ್ಯವೊಂದು ಹೊರಬಿದ್ದಿದೆ.&lt;/span&gt;&lt;/span&gt;&lt;/p&gt;&lt;p&gt;&lt;span&gt;&lt;span&gt;&amp;nbsp;&lt;/span&gt;&lt;/span&gt;&lt;/p&gt;&lt;p&gt;&lt;span&gt;&lt;span&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಕೋರ್ಟ್ ಅಂಗಳದಲ್ಲಿದೆ. ಪ್ರಮುಖ ಸಾಕ್ಷಿಗಳ ಹೇಳಿಕೆಗಳು ದರ್ಶನ್ ಭವಿಷ್ಯವನ್ನ ನಿರ್ಧಾರ ಮಾಡಲಿವೆ. ಇದನ್ನೇ ಬಂಡವಾಳ ಮಾಡಿಕೊಂಡ ದರ್ಶನ್ ಆಪ್ತ ವಲಯದ ಕೆಲವರು, ಸಾಕ್ಷಿಗಳನ್ನ ಕೊಂಡುಕೊಳ್ಳಲು ಮುಂದಾಗಿದ್ರು ಅನ್ನೋದು&amp;nbsp; ಬೆಳಕಿಗೆ ಬಂದಿದೆ.&amp;nbsp;&lt;/span&gt;&lt;/span&gt;&lt;/p&gt;&lt;p&gt;&lt;span&gt;&lt;span&gt;&amp;nbsp;&lt;/span&gt;&lt;/span&gt;&lt;/p&gt;&lt;p&gt;&lt;span&gt;&lt;span&gt;ಈಗಾಗ್ಲೇ ಒಬ್ಬ ಸಾಕ್ಷಿದಾರನನ್ನ ಬೆದರಿಸಿದ ಮೂವರು ದರ್ಶನ್ ಅಭಿಮಾನಿಗಳನ್ನ ಅರೆಸ್ಟ್ ಮಾಡಿರೋ ವಿಷ್ಯ ಗೊತ್ತೇ ಇದೆ. ಬಂಧಿತರ ಪೈಕಿ ತೀವ್ರ ವಿಚಾರಣೆಗೆ ಒಳಗಾಗಿರುವ ದಾಸನ ಅಭಿಮಾನಿ ಪುನೀತ್ ನನ್ನ ಪೊಲೀಸರು ಸದ್ಯ 10 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಈ ಪುನೀತ್ ಪೊಲೀಸರ ಮುಂದೆ ನಿರಂತರವಾಗಿ ಹೇಳಿಕೆಗಳನ್ನ ಬದಲಿಸ್ತಾ ಇದ್ದಾನಂತೆ.&amp;nbsp;&lt;/span&gt;&lt;/span&gt;&lt;/p&gt;&lt;p&gt;&lt;span&gt;&lt;span&gt;&amp;nbsp;&lt;/span&gt;&lt;/span&gt;&lt;/p&gt;&lt;p&gt;&lt;span&gt;&lt;span&gt;ಸದ್ಯದ ಮಾಹಿತಿ ಪ್ರಕಾರ, ಈತ ಯಾರೋ ಪ್ರಭಾವಿಗಳ ಸೂಚನೆ ಮೇರೆಗೆ ಈ ಇಡೀ ಕೇಸ್​​ನ ಸಾಕ್ಷಿ ನಾಶದ &lsquo;ಡೀಲ್&rsquo; ಕುದುರಿಸಲು ಮುಂದಾಗಿದ್ದ ಎನ್ನಲಾಗಿದೆ. 10 ದಿನಗಳ ಈ ಸುದೀರ್ಘ ವಿಚಾರಣೆಯಲ್ಲಿ ಪುನೀತ್ ಅಸಲಿ ಸತ್ಯವನ್ನ ಬಾಯಿ ಬಿಟ್ಟರೆ, ಈ ಡೀಲ್ ಕುದುರಿಸಲು ಹಣದ ಆಮಿಷ ಒಡ್ಡಿದ ದೊಡ್ಡ ವ್ಯಕ್ತಿಗಳಿಗೆ ನೇರ ಸಂಕಷ್ಟ ಅಂತೂ ಕಟ್ಟಿಟ್ಟ ಬುತ್ತಿ.&lt;/span&gt;&lt;/span&gt;&lt;/p&gt;&lt;p&gt;&lt;span&gt;&lt;span&gt;&amp;nbsp;&lt;/span&gt;&lt;/span&gt;&lt;/p&gt;&lt;p&gt;&lt;span&gt;&lt;span&gt;ಸಾಕ್ಷಿಗೆ ಬೆದರಿಕೆ ಹಾಕಲು ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್&zwnj;ಗಳನ್ನ ಪೊಲೀಸರು ಈಗಾಗಲೇ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಮೊಬೈಲ್&zwnj;ನಿಂದ ಡಿಲೀಟ್ ಮಾಡಲಾಗಿರುವ ಕರೆಗಳ ವಿವರ, ವಾಟ್ಸಾಪ್ ಚಾಟ್&zwnj;ಗಳು ಮತ್ತು ಪ್ರಮುಖ ಆಡಿಯೋ ರೆಕಾರ್ಡಿಂಗ್&zwnj;ಗಳನ್ನು&amp;nbsp; Retrieve ಮಾಡೋ ಪ್ರಕ್ರಿಯೆ ನಡೀತಾ ಇದ್ದು,&amp;nbsp; ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ಪೊಲೀಸರ ಕೈಸೇರಲಿದೆ.&amp;nbsp;&lt;/span&gt;&lt;/span&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>state</category>
            <dc:creator>Padmashree Bhat</dc:creator>
            <atom:link href="https://kannada.asianetnews.com/cine-world/chitradurga-renuka-swamy-case-phone-who-issued-the-threat-holds-a-terrifying-truth-videoshow-r2ghcpv"/>
        </item>
        <item>
            <title><![CDATA[ರಾಜಸ್ಥಾನ ಸುತ್ತಾಡಲು ಆಸೆ ಇರುವ ಕರ್ನಾಟಕದ ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ಬೆಂಗಳೂರಿನಿಂದ ಉದಯಪುರಕ್ಕೆ ನೇರ ವಿಮಾನ]]></title>
            <link>https://kannada.asianetnews.com/business/akasa-air-launches-direct-flights-to-udaipur-from-bengaluru-gdp/articleshow-w825hn7</link>
            <guid isPermaLink="true">https://kannada.asianetnews.com/business/akasa-air-launches-direct-flights-to-udaipur-from-bengaluru-gdp/articleshow-w825hn7</guid>
            <pubDate>Wed, 08 Jul 2026 10:45:27 +0530</pubDate>
            <description><![CDATA[ಆಕಾಸಾ ಏರ್ ವಿಮಾನಯಾನ ಸಂಸ್ಥೆಯು ಬೆಂಗಳೂರು ಮತ್ತು ಮುಂಬೈನಿಂದ ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣ ಉದಯಪುರಕ್ಕೆ ಹೊಸ ದೈನಂದಿನ ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಅಕ್ಟೋಬರ್ 15, 2026 ರಿಂದ ಈ ಸೇವೆ ಪ್ರಾರಂಭವಾಗಲಿದ್ದು, 'ಲೇಕ್&zwnj; ಸಿಟಿ'ಗೆ ಪ್ರಯಾಣವನ್ನು ಸುಲಭಗೊಳಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv8bt82brfsvydg3x60cjvtb,imgname-untitled-design---2026-06-16t193116.327-1781618516043.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಇಚ್ಛಿಸುವ ಹಾಗೂ 'ಡೆಸ್ಟಿನೇಶನ್ ವೆಡ್ಡಿಂಗ್'ಗೆ ಜನಪ್ರಿಯವಾಗಿರುವ ಐತಿಹಾಸಿಕ ನಗರ ಉದಯಪುರಕ್ಕೆ ಭೇಟಿ ನೀಡಬೇಕು ಅಂದುಕೊಂಡಿರುವವರಿಗೆ ಒಂದು ಶುಭ ಸುದ್ದಿ ಇದೆ. ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ 'ಆಕಾಸಾ ಏರ್' ವಿಮಾನಯಾನ ಸಂಸ್ಥೆ ಇದೇ ಮೊದಲ ಬಾರಿಗೆ ರಾಜಸ್ಥಾನಕ್ಕೆ ಕಾಲಿಟ್ಟಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಮುಂಬೈನಿಂದ ಉದಯಪುರಕ್ಕೆ ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಈ ವಿಮಾನಗಳು ಪ್ರತಿದಿನ ಕಾರ್ಯಾಚರಣೆ ನಡೆಸಲಿವೆ.&lt;/p&gt;&lt;p&gt;ಇದೇ ಅಕ್ಟೋಬರ್ 15, 2026 ರಿಂದ ಈ ಹೊಸ ಮಾರ್ಗದಲ್ಲಿ ವಿಮಾನಗಳ ಹಾರಾಟ ಶುರುವಾಗಲಿದೆ. ಈ ವಿಮಾನಗಳ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಆಸಕ್ತರು ಆಕಾಸಾ ಏರ್&zwnj;ನ ಅಧಿಕೃತ ವೆಬ್&zwnj;ಸೈಟ್, ಮೊಬೈಲ್ ಆ್ಯಪ್ ಅಥವಾ ಪ್ರಮುಖ ಆನ್&zwnj;ಲೈನ್ ಟ್ರಾವೆಲ್ ಏಜೆನ್ಸಿಗಳ ಟಿಕೆಟ್ ಅನ್ನು ಕಾಯ್ದಿರಿಸಬಹುದು.&lt;/p&gt;&lt;h2&gt;ವಿಮಾನದ ವೇಳಾಪಟ್ಟಿ&lt;/h2&gt;&lt;ul&gt; &lt;li&gt;ಕನ್ನಡಿಗರ ಪ್ರಯಾಣದ ಅನುಕೂಲಕ್ಕಾಗಿ ಬೆಂಗಳೂರಿನಿಂದ ಉಯಪುರಕ್ಕೆ ಪ್ರತಿದಿನ ಒಂದು ವಿಮಾನ ಕಾರ್ಯನಿರ್ವಹಿಸಲಿದೆ.&lt;/li&gt; &lt;li&gt;ಬೆಂಗಳೂರಿನಿಂದ ಉದಯಪುರಕ್ಕೆ QP 1527 ಸಂಖ್ಯೆಯ ವಿಮಾನವು ಪ್ರತಿದಿನ ಬೆಳಗ್ಗೆ 8:40ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 10:55ಕ್ಕೆ ಉದಯಪುರ ತಲುಪಲಿದೆ.&lt;/li&gt; &lt;li&gt;ಉದಯಪುರಿಂದ ಬೆಂಗಳೂರಿಗೆ QP 1528 ಸಂಖ್ಯೆಯ ವಿಮಾನವು ಬೆಳಗ್ಗೆ 11:35ಕ್ಕೆ ಉದಯಪುರದಿಂದ ಟೇಕ್-ಆಫ್ ಆಗಿ ಮಧ್ಯಾಹ್ನ 1:55ಕ್ಕೆ ಮರಳಿ ಬೆಂಗಳೂರು ತಲುಪಲಿದೆ.&lt;/li&gt; &lt;li&gt;ಇದೇ ರೀತಿ ಮುಂಬೈ ಮತ್ತು ಉದಯಪುರ ನಡುವೆಯೂ ಪ್ರತಿದಿನ ಅಪರಾಹ್ನ ವಿಮಾನ ಸೇವೆ ಲಭ್ಯವಿರಲಿದೆ.&lt;/li&gt; &lt;li&gt;ಮುಂಬೈನಿಂದ ಉದಯಪುರಕ್ಕೆ QP 1155 ಸಂಖ್ಯೆಯ ವಿಮಾನವು ಪ್ರತಿದಿನ ಬೆಳಗ್ಗೆ 11:25ಕ್ಕೆ ಮುಂಬೈನಿಂದ ಹೊರಟು ಅಪರಾಹ್ನ 13:00ಕ್ಕೆ ಉದಯಪುರ ತಲುಪಲಿದೆ.&lt;/li&gt; &lt;li&gt;ಉದಯಪುರದಿಂದ ಬೆಂಗಳೂರಿಗೆ QP 1156 ಸಂಖ್ಯೆಯ ವಿಮಾನವು ಮಧ್ಯಾಹ್ನ13:40ಕ್ಕೆ ಉದಯಪುರದಿಂದ ಟೇಕ್-ಆಫ್ ಆಗಲಿದ್ದು ಅಪರಾಹ್ನ 15:10ಕೆ ಮರಳಿ ಮುಂಬೈ ತಲುಪಲಿದೆ.&lt;/li&gt;&lt;/ul&gt;&lt;h2&gt;ಉದಯಪುರಕ್ಕೆ ಯಾಕೆ ಆದ್ಯತೆ?&lt;/h2&gt;&lt;p&gt;ರಾಜಸ್ಥಾನದ ಲೇಕ್&zwnj; ಸಿಟಿ ಉದಯಪುರವು ಭಾರತದ ಪ್ರೀಮಿಯಂ ಪ್ರವಾಸೋದ್ಯಮ, ಅದ್ದೂರಿ ವಿವಾಹಗಳು ಮತ್ತು ಸಾಂಸ್ಕೃತಿಕ ಪ್ರಯಾಣದ ಪ್ರಮುಖ ಕೇಂದ್ರವಾಗಿದೆ. ಮಹಾನಗರಗಳಿಂದ ಈ ತಾಣಕ್ಕೆ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಆಕಾಸಾ ಏರ್ ಈ ಹೊಸ ಮಾರ್ಗವನ್ನು ಪರಿಚಯಿಸಿದೆ.&lt;/p&gt;&lt;p&gt;ಈ ಬಗ್ಗೆ ವಿವರ ಹಂಚಿಕೊಂಡಿರುವ ಆಕಾಸಾ ಏರ್&zwnj;ನ ಸಹ-ಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, &quot;ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಉದಯಪುರಕ್ಕೆ ವಿಮಾನ ಸೇವೆ ಆರಂಭಿಸಲು ಅತೀವ ಸಂತೋಷವಾಗುತ್ತಿದೆ. ಬೆಂಗಳೂರು ಮತ್ತು ಮುಂಬೈನ ಗ್ರಾಹಕರು ಈಗ ದೇಶದ ಅತ್ಯಂತ ಸುಂದರ ತಾಣವೊಂದಕ್ಕೆ ಸುಲಭವಾಗಿ ಹಾಗೂ ಅನುಕೂಲಕರವಾಗಿ ಪ್ರಯಾಣಿಸಬಹುದು,&quot; ಎಂದಿರುವ ಅವರು, ಗ್ರಾಹಕ-ಸ್ನೇಹಿ ಜಾಲವನ್ನು ನಿರ್ಮಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.&lt;/p&gt;&lt;h2&gt;ಪ್ರಯಾಣಿಕರಿಗೆ ಭರ್ಜರಿ ಸೌಲಭ್ಯ?&lt;/h2&gt;&lt;p&gt;ವಿನೂತನ ಹಾಗೂ ಪ್ರಯಾಣಿಕ-ಸ್ನೇಹಿ ಸೇವೆಗಳಿಗೆ ಹೆಸರುವಾಸಿಯಾಗಿರುವ ಆಕಾಸಾ ಏರ್&zwnj;ನ ವಿಮಾನಗಳಲ್ಲಿ ವಿಶಾಲವಾದ ಲೆಗ್&zwnj;ರೂಮ್ (ಕಾಲು ಚಾಚಲು ಜಾಗ) ಇದ್ದು, ಪ್ರಯಾಣದ ವೇಳೆ ಮೊಬೈಲ್/ಲ್ಯಾಪ್&zwnj;ಟಾಪ್ ಚಾರ್ಜ್ ಮಾಡಲು ಹೆಚ್ಚಿನ ಸೀಟ್&zwnj;ಗಳಲ್ಲಿ ಯುಎಸ್&zwnj;ಬಿ ಪೋರ್ಟ್&zwnj;ಗಳೂ ಇವೆ.&lt;/p&gt;&lt;p&gt;ತನ್ನ 'ಕೆಫೆ ಆಕಾಸಾ' ಮೂಲಕ ರುಚಿಕರವಾದ ಹಾಗೂ ಆರೋಗ್ಯಕರ ಊಟ, ಹಬ್ಬದ ವಿಶೇಷ ಮೆನುಗಳು ಮತ್ತು 'ಕೊಂಬುಚಾ'ದಂತಹ ವಿಶೇಷ ಪಾನೀಯಗಳನ್ನೂ ಪ್ರಯಾಣಿಕರಿಗೆ ಆಕಾಶದಲ್ಲೇ ಸವಿಯುವ ಅವಕಾಶ ಕಲ್ಪಿಸಿದೆ. ಇದರ ಜೊತೆ ಜೊತೆಗೆ 25ಕ್ಕೂ ಹೆಚ್ಚು ಕಸ್ಟಮೈಸ್ಡ್ ಸೇವೆಗಳನ್ನು ಸಹ ಪ್ರಯಾಣಿಕರು ಪಡೆಯಬಹುದು.&lt;/p&gt;&lt;p&gt;ಆಕಾಸಾ ಏರ್&zwnj; ಬೆಂಗಳೂರು, ದೆಹಲಿ, ಅಯೋಧ್ಯೆ ಸೇರಿದಂತೆ ಭಾರತದ 28 ನಗರಗಳು ಹಾಗೂ ದೋಹಾ, ಅಬುಧಾಬಿ ಮುಂತಾದ 7 ಅಂತಾರಾಷ್ಟ್ರೀಯ ತಾಣಗಳಿಗೆ ವಿಮಾನ ಕಾರ್ಯಾಚರಣೆಯನ್ನು ನಡೆಸುತ್ತಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/business/akasa-air-launches-direct-flights-to-udaipur-from-bengaluru-gdp/articleshow-w825hn7"/>
        </item>
    </channel>
</rss>
