<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 15:02:48 +0530</lastBuildDate>
        <atom:link href="https://kannada.asianetnews.com/rss/state" rel="self" type="application/rss+xml"/>
        <item>
            <title><![CDATA[ಬೆಂಗಳೂರಿನಲ್ಲಿ ಪ್ರಮುಖ ಸಂಚಾರ ಮಾರ್ಗ ಬದಲಾವಣೆ, ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ ಆರಂಭ]]></title>
            <link>https://kannada.asianetnews.com/bengaluru-urban/major-traffic-route-change-in-bengaluru-as-sadahalli-underpass-work-starts/articleshow-z8vsxsd</link>
            <guid isPermaLink="true">https://kannada.asianetnews.com/bengaluru-urban/major-traffic-route-change-in-bengaluru-as-sadahalli-underpass-work-starts/articleshow-z8vsxsd</guid>
            <pubDate>Sun, 13 Sep 2026 15:02:42 +0530</pubDate>
            <description><![CDATA[&lt;p&gt;ಬೆಂಗಳೂರಿನ ಪ್ರಮುಖ ರಸ್ತೆಯಲ್ಲೇ ಅಂಡರ್ ಪಾಸ್ ಕಾಮಗಾರಿ ಆರಂಭಗೊಂಡಿದೆ. ಪರಿಣಾಮ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸದ್ಯ 2 ದಿನ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲ. ಆದರೆ ಮಂಗಳವಾರದಿಂದ ಬೆಂಗಳೂರು ಜನರು ಹೈರಾಣಾಗಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m08cryw2ws3me3yhnyt5f06m,imgname-bengaluru-traffic-1786988231554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13) &lt;/strong&gt;ಗಣೇಶ ಹಬ್ಬ ಹಿನ್ನೆಲೆಯಲ್ಲಿ ಸದ್ಯ ಬೆಂಗಳೂರಿನಲ್ಲಿರುವ ಬಹುತೇಕರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರು ಖಾಲಿ ಖಾಲಿ ಕಾಣಿಸುತ್ತಿದೆ. ಸದ್ಯ ಟ್ರಾಫಿಕ್ ಸಮಸ್ಯೆ ಇಲ್ಲದೆ ಪ್ರಯಾಣ ಮಾಡಬಹುದು. ಆದರೆ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಅಂಡರ್ ಪಾಸ್ ಕಾಮಾಗಾರಿ ಆರಂಭಿಸಲಾಗಿದೆ. ಹೀಗಾಗಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಸದ್ಯ ರಜಾ ದಿನ ಕಾರಣ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮಂಗಳವಾರದಿಂದ ಈ ಅಂಡರ್ ಪಾಸ್ ಕಾಮಗಾರಿ ಜನರನ್ನು ಹೈರಾಣು ಮಾಡಲಿದೆ. ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಾದಹಳ್ಳಿ ಅಂಡರ್&zwnj;ಪಾಸ್ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿನ ಸಂಚಾರದ ದಿಕ್ಕಿನ ಕೆಲ ಬದಲಾವಣೆ ಮಾಡಲಾಗಿದೆ.&lt;/p&gt;&lt;h2&gt;ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ&lt;/h2&gt;&lt;p&gt;ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬರವು ಟೋಲ್ ಸಮೀಪದಲ್ಲಿ ಸಾದಹಳ್ಳಿ ಅಂಡರ್ ಪಾಸ್ ಕಾಮಗಾರಿ ಆರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ಅಂಡರ್ ಪಾಸ್ ಕಾಮಗಾರಿಗಾಗಿ ದೊಡ್ಡ ಯಂತ್ರೋಪಕರಣಗಳ ಮೂಲಕ ಕಾಮಗಾರಿ ಆರಂಭಿಸಿದೆ. ಹೀಗಾಗಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.&lt;/p&gt;&lt;p&gt;ಕಳೆದ ಕೆಲ ವರ್ಷಗಳಿಂದ ಸಾದಹಳ್ಳಿ ಅಂಡರ್ ಪಾಸ್ ಕಾಮಾಗಾರಿ ಕುರಿತು ಕೆಲಸ ಆರಂಭಗೊಂಡಿತ್ತು. ಆದರೆ ಹಲವು ಕಾರಣಗಳಿಂದ ಕಾಮಾಗಾರಿ ವಿಳಂಬವಾಗಿ ಸಾಗಿತ್ತು. ಹೀಗಾಗಿ ಈ ಭಾಗದಲ್ಲಿ ಸಂಚರಿಸುವ ಸ್ಛಳೀಯರು ಸೇರಿದಂತೆ ಇತರರಿಗೆ ತೀವ್ರ ಸಮಸ್ಯೆಯಾಗಿ ಪರಿಣಿಮಿಸಿತ್ತು. ಇದೀಗ ಕಾಮಾಗಾರಿ ಮತ್ತೆ ಆರಂಭಗೊಂಡಿದ್ದು, ವೇಗ ಪಡೆದುಕೊಂಡಿದೆ. ಹೀಗಾಗಿ ಸ್ಛಳೀಯರ ಕೆಲ ದಿನಗಳಲ್ಲೇ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ ಅನ್ನೋ ವಿಶ್ವಾಸದಲ್ಲಿದ್ದಾರೆ.&lt;/p&gt;&lt;h2&gt;ಸಂಚಾರ ದಿಕ್ಕು ಬದಲಾವಣೆ, ಟ್ರಾಫಿಕ್ ಸಮಸ್ಯೆ&lt;/h2&gt;&lt;p&gt;ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದೇವನಹಳ್ಳಿ ಕಡೆ ಪ್ರಯಾಣಿಸುವ ಜನರು ಈ ಅಂಡರ್ ಪಾಸ್ ಕಾಮಾಗಾರಿಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಅಂಡರ್ ಪಾಸ್ ಕಾಮಾಗಾರಿಗಿಂತ ಕೆಲ ಮೀಟರ್ ಮೊದಲು ತಡೆ ಗೋಡೆಗಳನ್ನು ಹಾಕಲಾಗಿದೆ. ಸೂಚನಾ ಫಲಕಗಳನ್ನು ಹಾಕಲಾಗಿದೆ. ಹೀಗಾಗಿ ಚಾಲಕರು ಈ ಸೂಚನೆ ಪಾಲಿಸಿ ಸಾಗಬೇಕಿದೆ. ಸಂಚಾರ ದಿಕ್ಕು ಬದಲಿಸಿದ ಕಾರಣ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚಿದೆ. ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆ ತಗ್ಗಿಸಲು NHAI ಹಲವು ಕಡೆಗಳಲ್ಲಿ ಮಾರ್ಗ ಬದಲಾವಣೆ ಸೂಚನಾ ಫಲಕ ಅಳವಡಿಸಿದ್ದಾರೆ.&lt;/p&gt;&lt;p&gt;ಸಾದಹಳ್ಳಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಕೂಗಳತೆ ದೂರದಲ್ಲಿ ಹೊಸ ಮಾಲ್ ಆರಂಭಗೊಳ್ಳುತ್ತಿದೆ. ಈಗಾಗಲೇ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಮಾಲ್ ಆರಂಭಗೊಳ್ಳಲಿದೆ. ಇದರಿಂದ ಈ ಭಾಗದಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಹೆಚ್ಚಾಗಲಿದೆ. ಇದೀಗ NHAI ಅಧಿಕಾರಿಗಳು ಕಾಮಗಾರಿ ಕುರಿತು ಸೂಚನೆ ನೀಡಿದ್ದಾರೆ. ಇದೇ ವೇಳೆ ಈ ಭಾಗದಲ್ಲಿ ಸಂಚರಿಸುವ ಮಂದಿ ಹೆಚ್ಚುವರಿ ಸಮಯ ಮೀಸಲಿಡಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/major-traffic-route-change-in-bengaluru-as-sadahalli-underpass-work-starts/articleshow-z8vsxsd"/>
        </item>
        <item>
            <title><![CDATA[ಮುಂಗಾರು ದುರ್ಬಲದ ನಡುವೆ ವಾಯುಭಾರ ಕುಸಿತ; ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ 3 ದಿನ ಮಳೆ!]]></title>
            <link>https://kannada.asianetnews.com/state/low-pressure-area-amidst-weak-monsoon-3-days-rain-expected-ant-bengaluru-and-south-interior-karnataka-sat/articleshow-u82fme0</link>
            <guid isPermaLink="true">https://kannada.asianetnews.com/state/low-pressure-area-amidst-weak-monsoon-3-days-rain-expected-ant-bengaluru-and-south-interior-karnataka-sat/articleshow-u82fme0</guid>
            <pubDate>Sun, 13 Sep 2026 14:19:15 +0530</pubDate>
            <description><![CDATA[ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದ್ದರೂ, ವಾಯುಭಾರ ಕುಸಿತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಗುಡುಗು-ಮಿಂಚು ಸಹಿತ ಮಳೆಯಾಗಲಿದೆ. ಹವಾಮಾನ ಇಲಾಖೆಯು ಕೆಲವು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆಯನ್ನು ನೀಡಿದ್ದು, ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಮಳೆ ಕ್ಷೀಣಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krv6wag915g31p9ppzq2qzgx,imgname-screenshot-2026-05-17-195924-1779029649929.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ರಾ&lt;/strong&gt;ಜ್ಯದಲ್ಲಿ ನೈಋತ್ಯ ಮುಂಗಾರು ಸದ್ಯಕ್ಕೆ ದುರ್ಬಲವಾಗಿದ್ದರೂ, ವಾಯುಮಂಡಲದಲ್ಲಿ ಉಂಟಾಗಿರುವ ಬದಲಾವಣೆಗಳ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ (ಸೆಪ್ಟೆಂಬರ್ 14 ರಿಂದ 16) ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD Bengaluru) ಮುನ್ಸೂಚನೆ ನೀಡಿದೆ.&lt;/p&gt;&lt;h2&gt;&lt;strong&gt;ವಾಯುಭಾರ ಕುಸಿತ ಮತ್ತು ಟ್ರಫ್ ಎಫೆಕ್ಟ್:&lt;/strong&gt;&lt;/h2&gt;&lt;p&gt;ಹವಾಮಾನ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ನೀಡಿರುವ ವರದಿಯ ಪ್ರಕಾರ, ನೈಋತ್ಯ ಮಧ್ಯಪ್ರದೇಶ ಮತ್ತು ಉತ್ತರ ವಿದರ್ಭ ಭಾಗದಲ್ಲಿ ವಾಯುಭಾರ ಕುಸಿತ (Low Pressure Area) ಉಂಟಾಗಿದ್ದು, ಇದರೊಂದಿಗೆ ಚಂಡಮಾರುತದ ಪರಿಚಲನೆ ಸಮುದ್ರ ಮಟ್ಟದಿಂದ 7.6 ಕಿ.ಮೀ ಎತ್ತರದವರೆಗೆ ವ್ಯಾಪಿಸಿದೆ. ಇನ್ನೊಂದೆಡೆ, ಈ ಚಂಡಮಾರುತದ ಪರಿಚಲನೆಯಿಂದ ಹೊರಟ 'ಮಾನ್ಸೂನ್ ಟ್ರಫ್' ಮಹಾರಾಷ್ಟ್ರದ ಮರಾಠವಾಡ, ಕರ್ನಾಟಕದ ಉತ್ತರ ಒಳನಾಡು, ಆಂಧ್ರದ ರಾಯಲಸೀಮೆ ಹಾಗೂ ತಮಿಳುನಾಡಿನ ಮೂಲಕ ಮನ್ನಾರ್ ಕೊಲ್ಲಿಯವರೆಗೂ ವಿಸ್ತರಿಸಿದೆ. ಇದರ ನೇರ ಪರಿಣಾಮವಾಗಿ ರಾಜ್ಯದ ಒಳನಾಡಿನಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿದೆ.&lt;/p&gt;&lt;h2&gt;&lt;strong&gt;ಜಿಲ್ಲಾವಾರು ಹವಾಮಾನ ಮುನ್ಸೂಚನೆ:&lt;/strong&gt;&lt;/h2&gt;&lt;p&gt;&lt;strong&gt;1. ದಕ್ಷಿಣ ಒಳನಾಡು (ಗುಡುಗು ಸಹಿತ ಮಳೆ &amp;amp; ಗಾಳಿ ಎಚ್ಚರಿಕೆ):&lt;/strong&gt;&lt;/p&gt;&lt;p&gt;ಸೆಪ್ಟೆಂಬರ್ 14 (ದಿನ 2): ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೊಡಗು ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.&lt;/p&gt;&lt;p&gt;ಸೆಪ್ಟೆಂಬರ್ 15 ಮತ್ತು 16 (ದಿನ 3 &amp;amp; 4): ಮೇಲಿನ ಜಿಲ್ಲೆಗಳ ಜತೆಗೆ ಚಾಮರಾಜನಗರ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲೂ ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹಳದಿ (Yellow) ಎಚ್ಚರಿಕೆಯ ನಕ್ಷೆಗಳು ಸೂಚಿಸಿವೆ.&lt;/p&gt;&lt;p&gt;ಸೆಪ್ಟೆಂಬರ್ 17 ರಿಂದ 19: ಮಳೆಯ ಅಬ್ಬರ ಕೊಂಚ ತಗ್ಗಿ, ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದೆ.&lt;/p&gt;&lt;h3&gt;&lt;strong&gt;2. ಉತ್ತರ ಒಳನಾಡು:&lt;/strong&gt;&lt;/h3&gt;&lt;p&gt;ಉತ್ತರ ಒಳನಾಡಿನ ಬೀದರ್, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗಬಹುದು.&lt;/p&gt;&lt;p&gt;ಸೆಪ್ಟೆಂಬರ್ 15 ಮತ್ತು 16 ರಂದು ಬಹುತೇಕ ಒಣ ಹವೆ ಇರಲಿದ್ದು, ಸೆಪ್ಟೆಂಬರ್ 19 ರ ವೇಳೆಗೆ ವಿಜಯಪುರ, ಬಾಗಲಕೋಟೆ ಭಾಗಗಳಲ್ಲಿ ಮತ್ತೆ ಹಗುರ ಮಳೆಯಾಗುವ ನಿರೀಕ್ಷೆಯಿದೆ.&lt;/p&gt;&lt;h3&gt;&lt;strong&gt;3. ಕರಾವಳಿ ಕರ್ನಾಟಕ:&lt;/strong&gt;&lt;/h3&gt;&lt;p&gt;ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತೀರಾ ಕ್ಷೀಣಿಸಿದ್ದು, ಬಹುತೇಕ ದಿನಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಕನ್ನಡ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ಮಾತ್ರ ಸೆಪ್ಟೆಂಬರ್ 13 ಮತ್ತು 15 ರಂದು ಹಗುರ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಹವಾಮಾನ:&lt;/strong&gt;&lt;/h2&gt;&lt;p&gt;&lt;strong&gt;ಮುಂದಿನ 24 ಗಂಟೆ: &lt;/strong&gt;ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 31&deg;C ಮತ್ತು ಕನಿಷ್ಠ ತಾಪಮಾನ 21&deg;C ದಾಖಲಾಗುವ ನಿರೀಕ್ಷೆಯಿದೆ.&lt;/p&gt;&lt;p&gt;&lt;strong&gt;ಮುಂದಿನ 48 ಗಂಟೆ: &lt;/strong&gt;ಸಂಜೆ ಅಥವಾ ರಾತ್ರಿಯ ವೇಳೆ ನಗರದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಗರಿಷ್ಠ ತಾಪಮಾನ 32&deg;C ಹಾಗೂ ಕನಿಷ್ಠ ತಾಪಮಾನ 21&deg;C ಇರಲಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/low-pressure-area-amidst-weak-monsoon-3-days-rain-expected-ant-bengaluru-and-south-interior-karnataka-sat/articleshow-u82fme0"/>
        </item>
        <item>
            <title><![CDATA[ಕೇವಲ 5 ವರ್ಷದಲ್ಲಿ ಶೂನ್ಯದಿಂದ ಕೋಟಿ ಕುಬೇರನಾಗಿದ್ದ ಬಸವರಾಜ್ ಕನ್ನಾಳೆ; ಸಿಐಡಿ ಮುಂದೆ ರೋಚಕ ಸತ್ಯ ಬಯಲು!]]></title>
            <link>https://kannada.asianetnews.com/state/kpsc-recruitment-scam-middleman-basavaraj-kannale-cid-investigation-0-to-10000000-revelations-sat/articleshow-fci2anh</link>
            <guid isPermaLink="true">https://kannada.asianetnews.com/state/kpsc-recruitment-scam-middleman-basavaraj-kannale-cid-investigation-0-to-10000000-revelations-sat/articleshow-fci2anh</guid>
            <pubDate>Sun, 13 Sep 2026 11:11:26 +0530</pubDate>
            <description><![CDATA[ಕೆಪಿಎಸ್&zwnj;ಸಿ ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಕರಾಳ ಜಾಲ ಬಯಲಾಗಿದೆ. ಶಾಸಕರ ಆಪ್ತ ಸಹಾಯಕನಾಗಿ ವಿಧಾನಸೌಧದಲ್ಲಿ ತನ್ನ ಪ್ರಭಾವ ಬಳಸಿ, ನೇಮಕಾತಿ, ವರ್ಗಾವಣೆ ದಂಧೆಗಳ ಮೂಲಕ ನೂರಾರು ಕೋಟಿ ಸಂಪಾದಿಸಿದ ಈತನ ಅಕ್ರಮಗಳನ್ನು ಸಿಐಡಿ ತನಿಖೆ ಬಹಿರಂಗಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1ghwnvgd3b0mgay8e4fs8az,imgname-basavaraj-kannale-kpsc-scam-1788335773551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ರಾ&lt;/strong&gt;ಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಕರಾಳ ಜಾಲ ಸಿಐಡಿ (CID) ವಿಚಾರಣೆ ವೇಳೆ ಬಯಲಾಗಿದೆ. ಕೇವಲ ಐದೇ ವರ್ಷಗಳಲ್ಲಿ ಶೂನ್ಯದಿಂದ ನೂರಾರು ಕೋಟಿ ಒಡೆಯನಾಗಿ ಬೆಳೆದ ಈತನ ಹಿನ್ನೆಲೆ ಹಾಗೂ ವಿಧಾನಸೌಧದ ಕಾರಿಡಾರ್&zwnj;ನಲ್ಲಿ ನಡೆಸಿದ ಅಕ್ರಮ ದಂಧೆಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ.&lt;/p&gt;&lt;h2&gt;&lt;strong&gt;ಭಾಲ್ಕಿಯಿಂದ ದೆಹಲಿ ಯುಪಿಎಸ್&zwnj;ಸಿ ಕೋಚಿಂಗ್&zwnj;ವರೆಗೆ!&lt;/strong&gt;&lt;/h2&gt;&lt;p&gt;ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಹುಟ್ಟಿ ಬೆಳೆದ ಬಸವರಾಜ್ ಕನ್ನಾಳೆ, ಮೈಸೂರಿನ ಜೆಎಸ್&zwnj;ಎಸ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ (KSOU) ಸ್ನಾತಕೋತ್ತರ ಪದವಿ ಪೂರೈಸಿದ್ದ. ಬಳಿಕ ನಾಗರಿಕ ಸೇವಾ ಪರೀಕ್ಷೆ (UPSC) ಬರೆಯುವ ಕನಸು ಹೊತ್ತು ದೆಹಲಿಗೆ ತೆರಳಿ, ಅಲ್ಲಿನ ಪ್ರತಿಷ್ಠಿತ ಕೋಚಿಂಗ್ ಸೆಂಟರ್&zwnj;ನಲ್ಲಿ ತರಬೇತಿ ಕೂಡ ಪಡೆದುಕೊಂಡಿದ್ದ. ಆದರೆ, ಈ ಐಎಎಸ್/ಐಪಿಎಸ್ ಕನಸಿನ ಹಾದಿಯಲ್ಲೇ ಆತನಿಗೆ ಭ್ರಷ್ಟಾಚಾರದ ಸುಲಭ ಮಾರ್ಗ ಕಂಡಿತ್ತು.&lt;/p&gt;&lt;h2&gt;&lt;strong&gt;ರಾಜಕೀಯ ನಂಟು &amp;amp; ಶಾಸಕರ ಪಿಎ ಆಗಿ ಎಂಟ್ರಿ:&lt;/strong&gt;&lt;/h2&gt;&lt;p&gt;ದೆಹಲಿ ಮತ್ತು ಮೈಸೂರಿನ ದಿನಗಳಲ್ಲಿ ಮೈಸೂರು ಭಾಗದ ಶಾಸಕರೊಬ್ಬರ ಪುತ್ರನ ಪರಿಚಯದ ಮೂಲಕ ಮೊದಲು ಜೆಡಿಎಸ್ (JDS) ಸೇರಿದ್ದ. ಬಳಿಕ ತನ್ನ ಸಮುದಾಯದ ಮುಖಂಡರ ಒಡನಾಟ ಬೆಳೆಸಿಕೊಂಡು ಬಿಜೆಪಿ (BJP) ಕಡೆಗೆ ವಾಲಿದ. 2018 ರಿಂದ 2023ರ ಅವಧಿಯಲ್ಲಿ ಬೀದರ್ ಭಾಗದ ಬಿಜೆಪಿ ಶಾಸಕರೊಬ್ಬರ ಆಪ್ತ ಸಹಾಯಕನಾಗಿ (PA) ನೇಮಕಗೊಂಡಿದ್ದೇ ಈತನ ಜೀವನದ ಅತಿದೊಡ್ಡ ಟರ್ನಿಂಗ್ ಪಾಯಿಂಟ್ ಆಯಿತು.&lt;/p&gt;&lt;p&gt;ಶಾಸಕರ ಪಿಎ ಆದ ಬಳಿಕ ವಿಧಾನಸೌಧವೇ ಆತನ ಪ್ರಮುಖ ಕಾರ್ಯಸ್ಥಾನವಾಯಿತು. ಕೈಯಲ್ಲಿ ಫೈಲ್ ಹಿಡಿದು ವಿಧಾನಸೌಧದ ಕೊಠಡಿಗಳಿಗೆ ನಿರಂತರ ಓಡಾಟ ನಡೆಸುತ್ತಿದ್ದ ಕನ್ನಾಳೆ, ಎಲ್ಲಾ ಹಂತದ ಸರ್ಕಾರಿ ಅಧಿಕಾರಿಗಳೊಂದಿಗೆ ಬಲವಾದ ಸಂಪರ್ಕ ಜಾಲವನ್ನು ಹೆಣೆದಿದ್ದ.&lt;/p&gt;&lt;h2&gt;&lt;strong&gt;ಐಎಎಸ್ ಜ್ಞಾನೇಂದ್ರ ಜತೆ ನಂಟು: ನೂರಾರು ಕೋಟಿ ಲೂಟಿ!&lt;/strong&gt;&lt;/h2&gt;&lt;p&gt;ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಿ, ನಾಯಕರೊಂದಿಗೆ ಮೋಜು-ಮಸ್ತಿ ಕೂಟಗಳನ್ನು ಆಯೋಜಿಸುತ್ತಾ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಒಂದು ಹಂತದಲ್ಲಿ ಕೆಪಿಎಸ್&zwnj;ಸಿ ಸದಸ್ಯರನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡು ಉದ್ಯೋಗ ಆಕಾಂಕ್ಷಿಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡಲು ಆರಂಭಿಸಿದ್ದ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಸೇರಿದಂತೆ ಹಲವು ಉನ್ನತಾಧಿಕಾರಿಗಳ ಜತೆ ಕೈಜೋಡಿಸಿ ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾನೆ ಎಂಬ ಸ್ಫೋಟಕ ಸತ್ಯ ಸಿಐಡಿ ತನಿಖೆಯಲ್ಲಿ ಬಯಲಾಗಿದೆ.&lt;/p&gt;&lt;h3&gt;&lt;strong&gt;ಕೇವಲ ಕೆಪಿಎಸ್&zwnj;ಸಿ ಅಷ್ಟೇ ಅಲ್ಲ; ವರ್ಗಾವಣೆ, ರಿಯಲ್ ಎಸ್ಟೇಟ್ ದಂಧೆ!&lt;/strong&gt;&lt;/h3&gt;&lt;p&gt;ವಿಚಾರಣೆ ವೇಳೆ ಕನ್ನಾಳೆ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲೂ ಸಂಚಲನ ಸೃಷ್ಟಿಸಿವೆ. ತನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರ ಜತೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ. ಕೇವಲ ನೇಮಕಾತಿ ಅಕ್ರಮ ಮಾತ್ರವಲ್ಲದೆ, ಅಧಿಕಾರಿಗಳ ವರ್ಗಾವಣೆ ದಂಧೆ, ಟ್ರಾವೆಲ್ಸ್ ಬಿಸಿನೆಸ್ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಹೂಡಿಕೆ ಮಾಡಿ ಕಪ್ಪು ಹಣವನ್ನು ಬಿಳಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.&lt;/p&gt;&lt;p&gt;ಸದ್ಯ ಸಿಐಡಿ ಬಲೆಗೆ ಬಿದ್ದು ತೀವ್ರ ವಿಚಾರಣೆ ಎದುರಿಸುತ್ತಿರುವ ಬಸವರಾಜ್ ಕನ್ನಾಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕಂಬಿ ಎಣಿಸುತ್ತಿದ್ದಾನೆ. ಈತನ ಜಾಲದಲ್ಲಿ ಇನ್ನೆಷ್ಟು ಜನ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬುದು ಮುಂದಿನ ತನಿಖೆಯಿಂದ ಹೊರಬರಬೇಕಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/kpsc-recruitment-scam-middleman-basavaraj-kannale-cid-investigation-0-to-10000000-revelations-sat/articleshow-fci2anh"/>
        </item>
        <item>
            <title><![CDATA[1980ರ ದಶಕದ ರೆಟ್ರೋ ಸ್ಟೈಲ್ ಫೋಟೋ ಅಪ್ಲೋಡ್ ಮಾಡಿದ್ರಾ? ಹಾಗಿದ್ರೆ ನಿಮಗಿದೆ ಪೊಲೀಸರ ಎಚ್ಚರಿಕೆ]]></title>
            <link>https://kannada.asianetnews.com/state/1980s-retro-style-ai-photo-trend-cyber-fraud-alert-bengaluru-police-sat/articleshow-32z1xk1</link>
            <guid isPermaLink="true">https://kannada.asianetnews.com/state/1980s-retro-style-ai-photo-trend-cyber-fraud-alert-bengaluru-police-sat/articleshow-32z1xk1</guid>
            <pubDate>Sun, 13 Sep 2026 10:22:47 +0530</pubDate>
            <description><![CDATA[&lt;p&gt;ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ 80ರ ದಶಕದ ಫೋಟೋ ಟ್ರೆಂಡ್&zwnj; ಅಪಾಯಕಾರಿಯಾಗಿದ್ದು, ಅಪರಿಚಿತ ಆ್ಯಪ್&zwnj;ಗಳನ್ನು ಬಳಸದಂತೆ ಪೊಲೀಸರು ಎಚ್ಚರಿಸಿದ್ದಾರೆ. ಈ ಆ್ಯಪ್&zwnj;ಗಳ ಮೂಲಕ ವೈಯಕ್ತಿಕ ಮಾಹಿತಿ ಮತ್ತು ಫೋಟೋಗಳನ್ನು ಕದಿಯುವ ಸೈಬರ್ ವಂಚಕರು, ಆರ್ಥಿಕ ವಂಚನೆ ಅಥವಾ ಡೀಪ್&zwnj;ಫೇಕ್&zwnj; ನಂತಹ ದುಷ್ಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2chg7ht66g8kt2ysf5spmzj,imgname-1980s-retro-style-photo-s-trend-1789274889786.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು&lt;/strong&gt;&lt;/p&gt;&lt;p&gt;ವಿವಿಧ ಆ್ಯಪ್&zwnj;ಗಳನ್ನು ಬಳಸಿಕೊಂಡು ತಮ್ಮ ಇಂದಿನ ಫೋಟೋಗಳನ್ನು 1980ರ ದಶಕದ ಟ್ರೆಂಡ್&zwnj;ಗೆ ಪರಿವರ್ತಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವವರು ಸೈಬರ್ ವಂಚಕರಿಂದ ಎಚ್ಚರಿಕೆಯಿಂದಿರುವಂತೆ ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ಸಮಯದಿಂದ 80ರ ದಶಕದ ಫೋಟೋ ಟ್ರೆಂಡ್&zwnj; ಹೊಸ ತಲೆಮಾರಿನ ಯುವಕರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಜನ ತಮ್ಮ ಫೋಟೋಗಳನ್ನು ಹಳೆಯ ಶೈಲಿಗೆ ಪರಿವರ್ತಿಸಲು ಅಪರಿಚಿತ ಅಪ್ಲಿಕೇಶನ್&zwnj;ಗಳು, ಎಐ ಆಧಾರಿತ ಫೋಟೋ ಎಡಿಟಿಂಗ್&zwnj; ವೇದಿಕೆ ಅಥವಾ ಲಿಂಕ್&zwnj;ಗಳನ್ನು ಬಳಸಿದರೆ ವೈಯಕ್ತಿಕ ಮಾಹಿತಿ ಸೋರಿಕೆ ಆಗಬಹುದು. ಈ ಮಾಹಿತಿ ಬಳಸಿ ಸೈಬರ್ ಖದೀಮರು ಹಣಕಾಸು ವಂಚನೆ ಅಥವಾ ಇತರ ದುಷ್ಕೃತ್ಯಗಳನ್ನು ಎಸಗಬಹುದು ಎಂದು ಪೊಲೀಸರು ಹೇಳಿದ್ದಾರೆ.&lt;/p&gt;&lt;p&gt;ನಿಮ್ಮ ಫೋಟೋ, ಮೊಬೈಲ್&zwnj; ಸಂಖ್ಯೆ, ಇ-ಮೇಲ್&zwnj; ಹೆಸರು, ಪಾಸ್&zwnj;ವರ್ಡ್&zwnj; ಇನ್ನಿತರ ವೈಯಕ್ತಿಕ ದಾಖಲೆ ನೀಡಿದರೆ ಬ್ಯಾಂಕ್&zwnj; ಖಾತೆಯಿಂದ ಹಣ ಮಾಯವಾಗುತ್ತದೆ. ಹೀಗಾಗಿ ಯಾವುದೇ ಅನುಮಾನಾಸ್ಪದ ಲಿಂಕ್&zwnj;ಗಳನ್ನು ಕ್ಲಿಕ್ ಮಾಡದಂತೆ ಅಥವಾ ಅಪರಿಚಿತ ಅಪ್ಲಿಕೇಶನ್&zwnj;ಗಳನ್ನು ಡೌನ್&zwnj;ಲೋಡ್ ಮಾಡಿಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ಕ್ಷಣದ ಟ್ರೆಂಡ್&zwnj;ನಿಂದ ನಿಮ್ಮ ವೈಯಕ್ತಿಕ ಮಾಹಿತಿ ಅಪಾಯಕ್ಕೆ ಸಿಲುಕಬಹುದು. ಸೈಬರ್ ವಂಚನೆಯಿಂದ ಪಾರಾಗಲು ಜಾಗರೂಕರಾಗಿರುವುದು ಮುಖ್ಯ ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ದತ್ತಾಂಶ ವಂಚಕರ ಕೈ ಸೇರುವ ಸಾಧ್ಯತೆ:&lt;/strong&gt;&lt;/h2&gt;&lt;p&gt;ಫೋಟೋಗಳನ್ನು ಅಪ್&zwnj;ಲೋಡ್&zwnj; ಮಾಡುವ ಸಂದರ್ಭದಲ್ಲಿ ಬಳಕೆದಾರರ ವೈಯಕ್ತಿಕ ದತ್ತಾಂಶ ಹಾಗೂ ಮುಖದ ಮಾಹಿತಿ ಸೈಬರ್&zwnj; ವಂಚಕರ ಕೈಸೇರುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಡೀಪ್&zwnj;ಫೇಕ್ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೃಷ್ಟಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಮುಖದ ಡೇಟಾ ಎಲ್ಲಿ ಮತ್ತು ಯಾರಿಗೆ ನೀಡುತ್ತಿದ್ದೇವೆ ಎಂಬುದರ ಬಗ್ಗೆ ಎಚ್ಚರ ವಹಿಸುವಂತೆ ಸೈಬರ್&zwnj; ತಜ್ಞರು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಹೊಸ ಟ್ರೆಂಡ್&zwnj; ಎಂಬ ಕಾರಣಕ್ಕೆ ಕಣ್ಣುಮುಚ್ಚಿ ಯಾವುದೇ ಆ್ಯಪ್&zwnj;ಗೆ ವೈಯಕ್ತಿಕ ಫೋಟೋಗಗಳನ್ನು ಅಪ್&zwnj;ಲೋಡ್&zwnj; ಮಾಡಬೇಡಿ. ಆ್ಯಪ್&zwnj;ನ ವಿಶ್ವಾಸಾರ್ಹತೆ ಮತ್ತು ಗೌಪ್ಯತೆ ನಿಯಮ ಪರಿಶೀಲಿಸಿದ ಬಳಿಕವೇ ಬಳಸಬೇಕು. ಒಂದು ಕ್ಷಣದ ವೈರಲ್&zwnj; ಕ್ರೇಜ್&zwnj;ಗೆ ಮುಂದಿನ ದಿನಗಳಲ್ಲಿ ಸೈಬರ್&zwnj; ವಂಚನೆ ತುತ್ತಾಗಬೇಕಾದೀತು ಎಂದು ಪೊಲೀಸರು ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/1980s-retro-style-ai-photo-trend-cyber-fraud-alert-bengaluru-police-sat/articleshow-32z1xk1"/>
        </item>
        <item>
            <title><![CDATA[Ganesh Chaturthi 2026:  ಗಣಪತಿ ಹಬ್ಬಕ್ಕೆ ಹೂ, ಹಣ್ಣು ತರಕಾರಿ ದುಬಾರಿ!  ಇಂದಿನ ಬೆಲೆಗಳ ಪಟ್ಟಿ ಇಲ್ಲಿದೆ ನೋಡಿ]]></title>
            <link>https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv</link>
            <guid isPermaLink="true">https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv</guid>
            <pubDate>Sun, 13 Sep 2026 09:23:39 +0530</pubDate>
            <description><![CDATA[ಗಣೇಶ ಹಬ್ಬದ ಹೊಸ್ತಿಲಲ್ಲಿ, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಪೂಜೆಗೆ ಅಗತ್ಯವಿರುವ ವಸ್ತುಗಳ ದರ ದುಪ್ಪಟ್ಟಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈ ಲೇಖನದಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿನ ಇಂದಿನ ಸಂಪೂರ್ಣ ದರಪಟ್ಟಿಯನ್ನು ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cdw694f4beq030xy3qa3zp,imgname-ganesh-chaturthi-market-price-hike-1789271087396.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13):&lt;/strong&gt; ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲೆಡೆ ಗಣಪತಿಪೂರ್ತಿಯನ್ನ ಭರ್ಜರಿಯಾಗಿ ಸ್ಥಾಪಿಸುತ್ತಿದ್ದಂತೆ ಇತ್ತ ಮಾರ್ಕೆಟ್&zwnj;ನಲ್ಲಿ ಹೂವು, ಹಣ್ಣು ತರಕಾರಿ ಬೆಲೆಗಳು ಗಗನಕ್ಕೇರಿವೆ. ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣುಗಳು, ಹೂಗಳ ದರದಲ್ಲಂತೂ ಭಾರೀ ಏರಿಕೆಯಾಗಿದೆ. ಬೆಲೆ ಏರಿಕೆಯಾದರೂ ಜನ ಖರೀದಿಸಲು ಮುಗಿಬಿದ್ದಿದ್ದಿದ್ದಾರೆ.&lt;/p&gt;&lt;h2&gt;ಹಬ್ಬಕ್ಕೆ ಶಾಕ್ ಕೊಟ್ಟ ದರ ಏರಿಕೆ&lt;/h2&gt;&lt;p&gt;ಹೂವು ಹಣ್ಣುಗಳಲ್ಲದೆ ದಿನಸಿ ಸಾಮಾನು, ಹಬ್ಬದ ಸಾಮಗ್ರಿ ಕೂಡ ಬೆಲೆ ಏರಿಕೆಯಾಗಿದೆ. ಹಬ್ಬದ ಸಂಭ್ರಮದಲ್ಲಿ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳಲ್ಲಿ ಇದ್ದ ಹೂವಿನ ತೋರಣಗಳಿಗೆ ಇಂದು ಡಬಲ್ ಬೆಲೆ ಏರಿಕೆಯಾಗಿದೆ. ಯಾವ್ಯಾವ ಹೂಗಳು ಬೆಲೆ ಎಷ್ಟಿದೆ ಅಂತಾ ಇಂದಿನ ದರದಂತೆ ಇಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ. ನೀವು ಹೂವು ಖರೀದಿಸುವ ಮುನ್ನ ಈ ಪಟ್ಟಿಯನ್ನು ಒಮ್ಮೆ ನೋಡಿ.&lt;/p&gt;&lt;p&gt;&lt;strong&gt;ಹೂಗಳ ಬೆಲೆ ಎಷ್ಟು&lt;/strong&gt;&lt;/p&gt;&lt;ul&gt; &lt;li&gt;ಸೇವಂತಿಗೆ 1kg : ₹350&lt;/li&gt; &lt;li&gt;ತಾವರೆ ಹೂವು (ಜೋಡಿ) : ₹50&lt;/li&gt; &lt;li&gt;ಗುಲಾಬಿ (ಬಟನ್) : 1kg ಗೆ 350&lt;/li&gt; &lt;li&gt;ಮಿಕ್ಸ್ ಹೂವು : 1kg : ₹300 - ₹400&lt;/li&gt; &lt;li&gt;ಕನಕಾಂಬರ (ಮೊಳ) : ₹50 : ₹2000 (1kg)&lt;/li&gt; &lt;li&gt;ಮಲ್ಲಿಗೆ (ಮೊಳ) : ₹50 : ₹1000 (1kg)&lt;/li&gt; &lt;li&gt;ತುಳಸಿ ತೋರಣ (ಮೊಳ) : ₹60&lt;/li&gt; &lt;li&gt;ಮಾವಿನ ಎಲೆ (ಕಟ್ಟು) : ₹10 - ₹30&lt;/li&gt; &lt;li&gt;ಬಾಳೆ ದಿಂಡು (ಜೋಡಿ) : ₹50 - ₹80&lt;/li&gt;&lt;/ul&gt;&lt;h2&gt;ಇಂದಿನ ಹಣ್ಣುಗಳ ದರ(KG) ಹೇಗಿದೆ?&lt;/h2&gt;&lt;ul&gt; &lt;li&gt;ಸೇಬು: ₹200 ರಿಂದ ₹300(1kg)&lt;/li&gt; &lt;li&gt;ದಾಳಿಂಬೆ: ₹100 ರಿಂದ ₹250(1kg)&lt;/li&gt; &lt;li&gt;ಸಪೋಟ: ₹150 ರಿಂದ ₹200(1kg)&lt;/li&gt; &lt;li&gt;ದ್ರಾಕ್ಷಿ: ₹120 ರಿಂದ ₹150 (1kg)&lt;/li&gt; &lt;li&gt;ಮೂಸಂಬಿ ಹಾಗೂ ಕಿತ್ತಳೆ: ₹80 ರಿಂದ ₹100(1kg)&lt;/li&gt; &lt;li&gt;ಬಾಳೆ ಹಣ್ಣು- 80 ರಿಂದ 150(1kg)&lt;/li&gt;&lt;/ul&gt;&lt;h3&gt;ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಎಷ್ಟು?&lt;/h3&gt;&lt;ul&gt; &lt;li&gt;ಈರುಳ್ಳಿ: ₹60 ರಿಂದ ₹70(1KG)&lt;/li&gt; &lt;li&gt;ಹನಿಮೆಣಸಿನಕಾಯಿ : 40 ರಿಂದ 60(1KG)&lt;/li&gt; &lt;li&gt;ಬೀಟ್&zwnj;ರೂಟ್: ₹50 ರಿಂದ ₹60(1KG)&lt;/li&gt; &lt;li&gt;ಬೆಳ್ಳುಳ್ಳಿ: ₹200 ರಿಂದ ₹250&lt;/li&gt; &lt;li&gt;ನಿಂಬೆಹಣ್ಣು : (ಒಂದಕ್ಕೆ) ₹8 ರಿಂದ ₹15&lt;/li&gt; &lt;li&gt;ನುಗ್ಗೆಕಾಯಿ : (ಒಂದಕ್ಕೆ)₹10 ರಿಂದ ₹15&lt;/li&gt; &lt;li&gt;ಕ್ಯಾಪ್ಸಿಕಂ ₹50-₹70&lt;/li&gt; &lt;li&gt;ಬಟಾಣಿ: ₹ 140 ರಿಂದ 160&lt;/li&gt;&lt;/ul&gt;&lt;h3&gt;ಇಂದಿನ ದಿನಸಿ ಸಾಮಗ್ರಿ ಬೆಲೆ ಎಷ್ಟು?&lt;/h3&gt;&lt;ul&gt; &lt;li&gt;ಬೆಲ್ಲ : ₹50 ರಿಂದ ₹55&lt;/li&gt; &lt;li&gt;ತೊಗರಿಬೇಳೆ : ₹160 ರಿಂದ ₹170&lt;/li&gt; &lt;li&gt;ಹುರಿಗಡಲೆ :₹150 ರಿಂದ ₹180&lt;/li&gt; &lt;li&gt;ಕಡಲೆಬೀಜ : ₹100 ರಿಂದ ₹140&lt;/li&gt; &lt;li&gt;ಸಕ್ಕರೆ : ₹60 ರಿಂದ ₹80&lt;/li&gt; &lt;li&gt;ಚಿರೋಟಿ ರವೆ : ₹90 ರಿಂದ ₹100&lt;/li&gt; &lt;li&gt;ಮೈದಾ ಹಿಟ್ಟು : ₹45 ರಿಂದ ₹50&lt;/li&gt; &lt;li&gt;ಕಡಲೆಕಾಳು : ₹90 ರಿಂದ ₹100&lt;/li&gt; &lt;li&gt;ಅಡುಗೆ ಎಣ್ಣೆ : ₹190 ರಿಂದ ₹210 (ಆಯಾ ಬ್ರ್ಯಾಂಡ್ಗಳು ಮೇಲೆ ದರ ಬದಲಾಗುತ್ತದೆ.&lt;/li&gt;&lt;/ul&gt;]]></content:encoded>
            <category>state</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv"/>
        </item>
        <item>
            <title><![CDATA[ನನ್ನ ಬಗ್ಗೆ ಇ.ಡಿ.ಗೆ ದೂರು ನೀಡಿದ್ದು ಬಿಜೆಪಿಗೆ ಮತ ಹಾಕುವ, ಕಾಂಗ್ರೆಸ್‌ ನಂಟಿರುವ ವ್ಯಕ್ತಿ: ಸತೀಶ್ ಜಾರಕಿಹೊಳಿ!]]></title>
            <link>https://kannada.asianetnews.com/state/satish-jarkiholi-ed-complaint-vijay-mallya-post-africa-gold-mine-reaction-sat/articleshow-2ucalzo</link>
            <guid isPermaLink="true">https://kannada.asianetnews.com/state/satish-jarkiholi-ed-complaint-vijay-mallya-post-africa-gold-mine-reaction-sat/articleshow-2ucalzo</guid>
            <pubDate>Sun, 13 Sep 2026 06:21:44 +0530</pubDate>
            <description><![CDATA[&lt;p&gt;ತಮ್ಮ ವಿರುದ್ಧ ಇ.ಡಿ.ಗೆ ದೂರು ನೀಡಿದ ಕಾಂಗ್ರೆಸ್ ಸಂಬಂಧಿ, ಬಿಜೆಪಿ ಮತದಾರನಾಗಿರುವ ವ್ಯಕ್ತಿಯ ಬಗ್ಗೆ ತಮಗೆ ತಿಳಿದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಆಫ್ರಿಕಾದ ಚಿನ್ನದ ಗಣಿಗಾರಿಕೆಯಲ್ಲಿ ಶೇ.40ರಷ್ಟು ಪಾಲುದಾರಿಕೆ ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c3wydga4c7mzpvsq33chk4,imgname-satish-jarkiholi-1789260626352.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.13): &lt;/strong&gt;ಜಾರಿ ನಿರ್ದೇಶನಾಲಯ (ಇ.ಡಿ)ಗೆ ನನ್ನ ವಿರುದ್ಧ ದೂರು ನೀಡಿದವರು ಯಾರು ಎಂಬುದು ಗೊತ್ತಾಗಿದೆ. ಕಾಂಗ್ರೆಸ್&zwnj; ಸಂಬಂದ ಇರುವ, ಆದರೆ ಬಿಜೆಪಿ ಮತದಾರನಾಗಿರುವ ಈ ವ್ಯಕ್ತಿ ನನ್ನ ಬಗ್ಗೆ ಇ.ಡಿ.ಗೆ ದೂರು ನೀಡಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಮುಂದಿನದ್ದು ಮುಖ್ಯಮಂತ್ರಿಗಳು ಪರಿಶೀಲಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.&lt;/p&gt;&lt;p&gt;ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳೆ, ಇ.ಡಿಗೆ ದೂರು ನೀಡಿದವರು ಯಾವ ಪಕ್ಷದವರು ಎಂಬ ಪ್ರಶ್ನೆಗೆ ಉತ್ತರಿಸಿದರು.ನಾನು ಯಾವ ಪಕ್ಷದವರು ಎಂದು ಹೇಳಿಲ್ಲ. ಅವರು ನಮ್ಮ ಪಕ್ಷದವರೂ ಇರಬಹುದು ಅಥವಾ ಇಲ್ಲದಿರಬಹುದು. ಅವರ ಸಂಬಂಧ ಇರುವುದು ಕಾಂಗ್ರೆಸ್&zwnj;ನಲ್ಲಿ. ಆದರೆ ಅವರ ಮತದಾರರು ಬಿಜೆಪಿಯಲ್ಲಿದ್ದಾರೆ. 50-50 ಇದೆ. ಹೀಗಾಗಿ ಯಾವ ರೀತಿ ನಿರ್ಧಾರ ಮಾಡುವಿರಿ ನೋಡಿ ಎಂದು ಮುಖ್ಯಮಂತ್ರಿ ಅವರಿಗೆ ಹೇಳಿದ್ದೇನೆ. ಇದು ಎಲ್ಲಾ ಪಕ್ಷದಲ್ಲೂ ಇರುವುದೇ. ಅದನ್ನು ಮೀರಿ ಬೆಳೆಯಬೇಕು ಎಂದು ಜಾರಕಿಹೊಳಿ ಹೇಳಿದರು.&lt;/p&gt;&lt;h2&gt;&lt;strong&gt;ಶೇ.40 ರಷ್ಟು ಪಾಲು ಸಾಬೀತು ಮಾಡಲಿ:&lt;/strong&gt;&lt;/h2&gt;&lt;p&gt;ಆಫ್ರಿಕಾ ಚಿನ್ನದ ಗಣಿಗಾರಿಕೆ ಕಂಪೆನಿಯಲ್ಲಿ ನನ್ನದು ಶೇ.40 ರಷ್ಟು ಪಾಲಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ದಾಖಲೆ ಇದ್ದರೆ ಸಾಬೀತು ಮಾಡಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದರು. ಇ.ಡಿ ಅವರ ಹೇಳಿಕೆಯಲ್ಲೂ ಗಣಿಗಾರಿಕೆ ಕಂಪೆನಿಯಲ್ಲಿ ನಮ್ಮ ಪಾಲಿದೆ ಎಂದಿದ್ದಾರೆ. ಅದು ಅನುಮಾನದ ಆರೋಪವೇ ಹೊರತು ಅಂತಿಮವಲ್ಲ. ಲಂಚದ ಬಗ್ಗೆಯೂ ಆರೋಪವಿದೆ ಎಂದಿದ್ದಾರೆ. ಅವರ ಬಳಿ ದಾಖಲೆಯಿದ್ದರೆ ಸಾಬೀತು ಮಾಡಲಿ. ನಮಗೆ ನೋಟಿಸ್&zwnj; ನೀಡಿದರೆ ನಾವು ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಹೇಳಿದರು.&lt;/p&gt;&lt;p&gt;ಇ.ಡಿ ಪತ್ರಿಕಾ ಹೇಳಿಕೆಯಲ್ಲಿ ಹೂಡಿಕೆ, ಲೋಕೋಪಯೋಗಿ ಇಲಾಖೆಯ ಅಂಶಗಳ ಬಗ್ಗೆ ಇದೆ. ನಮಗೆ ನೋಟಿಸ್&zwnj; ನೀಡಿದರೆ ನಮ್ಮ ದಾಖಲೆ ನಾವು ಕೊಡುತ್ತೇವೆ. ಅದಕ್ಕೆ ಇನ್ನೂ ಸಮಯವಿದೆ. ಅದು ದೀರ್ಘ ಪ್ರಕ್ರಿಯೆ ಅವರು ಕರೆದರೆ ಎಲ್ಲದಕ್ಕೂ ನಮ್ಮ ಬಳಿ ಸ್ಪಷ್ಟೀಕರಣವಿದೆ ಎಂದರು.&lt;/p&gt;&lt;p&gt;ಇ.ಡಿ ದಾಳಿ ರಾಜಕೀಯ ಇಮೇಜಿಗೆ ಧಕ್ಕೆ ತರುತ್ತಾ ಎಂಬ ಪ್ರಶ್ನೆಗೆ, ಸಾಧಾರಣವಾಗಿ ಧಕ್ಕೆ ಆಗುತ್ತದೆ. ಶಂಕೆ ಅಂತ ಹೇಳಿದ್ದಾರೆ ನೋಡೋಣ. ನಮಗೆ ಇ.ಡಿಗೂ ಮೊದಲು ಸಾರ್ವಜನಿಕರು ಹಾಗೂ ನ್ಯಾಯಾಲಯ ಮುಖ್ಯ ಎಂದರು.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/satish-jarkiholi-ed-complaint-vijay-mallya-post-africa-gold-mine-reaction-sat/articleshow-2ucalzo"/>
        </item>
        <item>
            <title><![CDATA[ಎಲ್‌ ನಿನೋ ಎಫೆಕ್ಟ್, ಮಳೆಗಾಲದಲ್ಲೇ ದಾಖಲೆಯ ವಿದ್ಯುತ್ ಬಳಕೆ! ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಫಿಕ್ಸ್!]]></title>
            <link>https://kannada.asianetnews.com/state/karnataka-power-crisis-record-electricity-demand-load-shedding-drought-sat/articleshow-8sxrhc4</link>
            <guid isPermaLink="true">https://kannada.asianetnews.com/state/karnataka-power-crisis-record-electricity-demand-load-shedding-drought-sat/articleshow-8sxrhc4</guid>
            <pubDate>Sun, 13 Sep 2026 06:32:57 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಮಳೆಗಾಲದಲ್ಲೇ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ರೈತರ ಪಂಪ್&zwnj;ಸೆಟ್&zwnj; ಬಳಕೆ ಹಾಗೂ ಬಿಸಿಲಿನಿಂದ ಎಸಿ, ಫ್ಯಾನ್&zwnj;ಗಳ ಬಳಕೆ ಹೆಚ್ಚಾಗಿದ್ದು, ಜಲವಿದ್ಯುತ್ ಉತ್ಪಾದನೆ ಕುಸಿದಿದೆ. ಇದರಿಂದಾಗಿ, ರಾಜ್ಯವು ಅನಧಿಕೃತ ಲೋಡ್ ಶೆಡ್ಡಿಂಗ್&zwnj; ಮತ್ತು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdeh03w3sq7h7kqeq1131e7,imgname-thumb-10-1781789130876.jpg" type="image/jpeg" height="390" width="690"/>
            <content:encoded><![CDATA[&lt;p&gt;--&lt;/p&gt;&lt;p&gt;&lt;strong&gt;ವರದಿ- ಶ್ರೀಕಾಂತ್ ಎನ್. ಗೌಡಸಂದ್ರ&lt;/strong&gt;&lt;/p&gt;&lt;p&gt;ಬೆಂಗಳೂರು (ಸೆ.13): ರಾಜ್ಯದಲ್ಲಿ ಮಳೆಗಾಲದಲ್ಲೇ ಗರಿಷ್ಠ ವಿದ್ಯುತ್&zwnj; ಬೇಡಿಕೆ ಸೃಷ್ಟಿಯಾಗಿದೆ. ಸೆ.11ರಂದು ಮೊದಲ ಬಾರಿ ದಿನದ ಗರಿಷ್ಠ ವಿದ್ಯುತ್&zwnj; ಬೇಡಿಕೆ 20 ಸಾವಿರ ಮೆ.ವ್ಯಾಟ್ ಗಡಿ ದಾಟಿದ್ದು, ಬರೋಬ್ಬರಿ 20,094 ಮೆ.ವ್ಯಾಟ್&zwnj; ವಿದ್ಯುತ್ ಬಳಕೆಯಾಗಿದೆ.&lt;/p&gt;&lt;p&gt;ಎಲ್&zwnj;ನಿನೋ ಪರಿಣಾಮ ಹಾಗೂ ತೀವ್ರ ಬರದ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಅಂದಾಜಿಸಿದ ಪ್ರಮಾಣಕ್ಕಿಂತ ಶೇ.27ರಷ್ಟು ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಜತೆಗೆ ಜಲವಿದ್ಯುತ್ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ನಿರೀಕ್ಷೆಗೂ ಮೀರಿ ಸೃಷ್ಟಿಯಾಗಿರುವ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅನಧಿಕೃತವಾಗಿ ಲೋಡ್&zwnj; ಶೆಡ್ಡಿಂಗ್&zwnj; ಮೊರೆ ಹೋಗಲಾಗಿದೆ. ಈ ಬಗ್ಗೆ ಸೆ.3ರಂದು ಕೆಪಿಟಿಸಿಎಲ್&zwnj; ಎಲ್ಲಾ ಎಸ್ಕಾಂಗಳಿಗೆ ಪೀಕ್&zwnj; ಅವಧಿಯಲ್ಲಿ ಹೆಚ್ಚು ವಿದ್ಯುತ್&zwnj; ಬಳಕೆ ಮಾಡದಂತೆ ಮಿತಿ ವಿಧಿಸಿದ್ದ ದಾಖಲೆ &lsquo;ಕನ್ನಡಪ್ರಭ&rsquo;ಕ್ಕೆ ಲಭ್ಯವಾಗಿದೆ.&lt;/p&gt;&lt;p&gt;ಎಸ್ಕಾಂಗಳು ಸೆ.3ರಂದು ಸಂಜೆ 6.15 ಗಂಟೆಯಿಂದ ರಾತ್ರಿ 8.15 ಗಂಟೆವರೆಗೆ 1,200 ಮೆ.ವ್ಯಾಟ್&zwnj; ವಿದ್ಯುತ್&zwnj; ಮಾತ್ರ ಡ್ರಾ ಮಾಡಬೇಕು. ರಾತ್ರಿ 8.15 ರಿಂದ ರಾತ್ರಿ 9 ಗಂಟೆವರೆಗೆ 650 ಮೆ.ವ್ಯಾಟ್&zwnj; ಮಾತ್ರ ಬಳಕೆ ಮಾಡಬೇಕು ಎಂದು ಅಧಿಕೃತವಾಗಿ ತಿಳಿಸಿದೆ. ಇದರಿಂದ ವಿಧಿ ಇಲ್ಲದೆ ಎಸ್ಕಾಂಗಳು ವಿದ್ಯುತ್ ಕಡಿತದ ಮೊರೆ ಹೋಗಿದ್ದು, ಅನಧಿಕೃತ ಲೋಡ್&zwnj; ಶೆಡ್ಡಿಂಗ್&zwnj; ಶುರುವಾಗಿದೆ.&lt;/p&gt;&lt;p&gt;ಅಲ್ಲದೆ ದಿನದಿಂದ ದಿನಕ್ಕೆ ವಿದ್ಯುತ್&zwnj; ಬೇಡಿಕೆ ಹೆಚ್ಚಾಗುತ್ತಿದ್ದು, ಪೂರೈಕೆ ಕಡಿಮೆಯಾಗುತ್ತಿದೆ. ಹೀಗಾಗಿ ನಿತ್ಯವೂ ಅನಧಿಕೃತ ಕರ್ಟೈಲ್&zwnj;ಮೆಂಟ್ ಮುಂದುವರೆದಿದೆ. ಮೌಖಿಕವಾಗಿ ಕರ್ಟೈಲ್&zwnj;ಮೆಂಟ್&zwnj; ಸೂಚನೆ ನೀಡಲಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ನಿರೀಕ್ಷೆಗೂ ಮೀರಿ ವಿದ್ಯುತ್&zwnj; ಬಳಕೆ:&lt;/strong&gt;&lt;/h2&gt;&lt;p&gt;ಇಂಧನ ಇಲಾಖೆ 2026-27ನೇ ಅವಧಿಗೆ ನಿತ್ಯ ಸರಾಸರಿ 277.1 ದಶಲಕ್ಷ ಯುನಿಟ್&zwnj;ನಂತೆ (ಎಂಯು) 1,01,155 ದಶಲಕ್ಷ ಯುನಿಟ್&zwnj; ಬಳಕೆ ಅಂದಾಜಿಸಿತ್ತು. ಆದರೆ, ಏ.1 ರಿಂದ ಸೆ.11 ರವರೆಗೆ ಸರಾಸರಿ 302.8 ದಶಲಕ್ಷ ಯುನಿಟ್&zwnj;ನಂತೆ 49,666 ಎಂ.ಯು ಬಳಕೆಯಾಗಿದೆ. ಮಳೆಗಾಲದಲ್ಲಿ ವಾಡಿಕೆ ಪ್ರಕಾರ ವಿದ್ಯುತ್&zwnj; ಬಳಕೆ ಕಡಿಮೆಯಾಗಲಿದೆ. ಹೀಗಾಗಿ ಸೆಪ್ಟೆಂಬರ್&zwnj; ತಿಂಗಳಲ್ಲಿ ಪ್ರತಿ ದಿನ 253 ಮಿ.ಯು. ವಿದ್ಯುತ್&zwnj; ಬಳಕೆ ನಿರೀಕ್ಷಿಸಲಾಗಿತ್ತು. ಆದರೆ, ಸೆ.11 ರಂದು ಸಾರ್ವಕಾಲಿಕ 345.35 ದಶಲಕ್ಷ ಯುನಿಟ್&zwnj; ವಿದ್ಯುತ್ ಬಳಕೆಯಾಗಿದೆ. ಇದು ಇಂಧನ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.&lt;/p&gt;&lt;h2&gt;&lt;strong&gt;ಮಳೆಗಾಲದಲ್ಲೇ ಹೆಚ್ಚಾಯ್ತು ಬೇಡಿಕೆ:&lt;/strong&gt;&lt;/h2&gt;&lt;p&gt;ರಾಜ್ಯದ ಪ್ರಮುಖ ಮೂರು ಜಲಾಶಯಗಳಲ್ಲಿ ಜಲವಿದ್ಯುತ್ ಉತ್ಪಾದನೆ ಕುಸಿದಿದೆ. ಲಿಂಗನಮಕ್ಕಿ, ಸೂಪಾ, ವಾರಾಹಿ ಯೋಜನೆಗಳಲ್ಲಿ ಕಳೆದ ವರ್ಷ ಏ.1 ರಿಂದ ಸೆ.11ರ ವರೆಗೆ 5,143 ದಶಲಕ್ಷ ಯುನಿಟ್&zwnj; ಉತ್ಪಾದನೆಯಾಗಿತ್ತು. ಈ ಬಾರಿ 3,507 ಮಿಲಿಯನ್&zwnj; ಯುನಿಟ್&zwnj; ಮಾತ್ರ ಆಗಿದ್ದು, 1,635 ಮಿಲಿಯನ್&zwnj; ಯುನಿಟ್&zwnj; ಕೊರತೆ ಸೃಷ್ಟಿಯಾಗಿದೆ. ಸಣ್ಣ ಜಲಾಶಯಗಳಲ್ಲಿ 2,640 ದಶಲಕ್ಷ ಯುನಿಟ್&zwnj; ಬದಲಿಗೆ 1,427 ದಶಲಕ್ಷ ಯುನಿಟ್&zwnj; ಮಾತ್ರ ಉತ್ಪಾದನೆಯಾಗಿದೆ.&lt;/p&gt;&lt;p&gt;ಲಿಂಗನಮಕ್ಕಿಯಲ್ಲಿ ನಿತ್ಯ 12.46 ಮಿಲಿಯನ್&zwnj; ಯುನಿಟ್&zwnj; ಬದಲಿಗೆ ಸೆ.11ಕ್ಕೆ 6.07 ಮಿಲಿಯನ್&zwnj; ಯುನಿಟ್&zwnj; ಮಾತ್ರ ಉತ್ಪಾದನೆಯಾಗಿದ್ದು, ಸೂಪಾ ಜಲಾಶಯದಲ್ಲಿ 6.05 ರಿಂದ 4.22ಕ್ಕೆ, ಮಾಣಿ (ವಾರಾಹಿ) ಜಲಾಶಯದಲ್ಲಿ 1.95 ರಿಂದ 1.25 ಮಿಲಿಯನ್ ಯುನಿಟ್&zwnj;ಗೆ ಕಡಿಮೆಯಾಗಿದೆ.&lt;/p&gt;&lt;p&gt;ಇದರಿಂದ ಶಾಖೋತ್ಪನ್ನ ವಿದ್ಯುತ್ ಮೇಲಿನ ಒತ್ತಡ ಹೆಚ್ಚಾಗಿದೆ. ವಿದ್ಯುತ್&zwnj; ಕೊರತೆ ನೀಗಿಸಲು ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಘಟಕಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸೆ.11 ರಂದು ಆರ್&zwnj;ಟಿಪಿಎಸ್&zwnj;ನಿಂದ 1,007, ಬಿಟಿಪಿಎಸ್&zwnj;ನಿಂದ 1,156, ವೈಟಿಪಿಎಸ್&zwnj;ನಿಂದ 1,120 ಮೆ.ವ್ಯಾಟ್&zwnj; ವಿದ್ಯುತ್&zwnj; ಉತ್ಪಾದನೆ ಮಾಡಲಾಗಿದೆ. ರಾಜ್ಯಗಳು ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸ ಸರಿದೂಗಿಸಲು ಮುಕ್ತ ಮಾರುಕಟ್ಟೆಯಿಂದ ದುಬಾರಿ ವೆಚ್ಚದಲ್ಲಿ ವಿದ್ಯುತ್ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ಮಳೆಯ ಅಭಾವವೇ ಪ್ರಮುಖ ಕಾರಣ&lt;/strong&gt;&lt;/h2&gt;&lt;p&gt;ಪ್ರತಿ ವರ್ಷ ವಾಡಿಕೆ ಪ್ರಕಾರ ಮಳೆಗಾಲದಲ್ಲಿ ವಿದ್ಯುತ್&zwnj; ಬೇಡಿಕೆ ಕಡಿಮೆ ಇರಬೇಕು. ಆದರೆ, ಎಲ್&zwnj;ನಿನೋ ಹಾಗೂ ಶತಮಾನದ ಬರದ ಹಿನ್ನೆಲೆಯಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಶತಾಯಗತಾಯ ಬೆಳೆ ಉಳಿಸಿಕೊಳ್ಳಲು ರೈತರು ಪಂಪ್&zwnj;ಸೆಟ್&zwnj;ಗಳ ಮೂಲಕ ನೀರು ಹಾಯಿಸಲು ವಿದ್ಯುತ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಜತೆಗೆ ಮಳೆಗಾಲ ಆಗಿದ್ದರೂ ರಾಜ್ಯದಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್&zwnj;ವರೆಗೆ ಹೆಚ್ಚಾಗಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಸಿಲ ಬೇಗೆ ಕಾಡುತ್ತಿದೆ. ಹೀಗಾಗಿ ಫ್ಯಾನ್&zwnj;, ಎಸಿಯಂತಹ ವಿದ್ಯುತ್&zwnj; ಉಪಕರಣಗಳ ಬಳಕೆ ಪ್ರತಿ ವರ್ಷದ ಮಳೆಗಾಲಕ್ಕಿಂತ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.&lt;/p&gt;&lt;p&gt;ಜತೆಗೆ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದರಿಂದ ಜಲವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದೆ. ಇದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-power-crisis-record-electricity-demand-load-shedding-drought-sat/articleshow-8sxrhc4"/>
        </item>
        <item>
            <title><![CDATA[ನಮ್ಮ ಫ್ಯಾನ್ಸ್ ಕ್ಲಬ್‌ಗೆ ಸೇರಿದ್ದಾರೆ: ವಿಜಯ್ ಮಲ್ಯ ಬೆಂಬಲಕ್ಕೆ ಜಾರಕಿಹೊಳಿ ಫಸ್ಟ್ ರಿಯಾಕ್ಷನ್]]></title>
            <link>https://kannada.asianetnews.com/gallery/state/he-has-joined-our-fan-club-minister-satish-jarkiholi-s-first-reaction-in-support-of-vijay-mallya-mrq-8vc8s9h</link>
            <guid isPermaLink="true">https://kannada.asianetnews.com/gallery/state/he-has-joined-our-fan-club-minister-satish-jarkiholi-s-first-reaction-in-support-of-vijay-mallya-mrq-8vc8s9h</guid>
            <pubDate>Sat, 12 Sep 2026 12:20:34 +0530</pubDate>
            <description><![CDATA[ತಮ್ಮ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, 40% ಷೇರು ದಾಖಲೆ ತೋರಿಸಲು ಸವಾಲು ಹಾಕಿದ್ದಾರೆ. ಇದೇ ವೇಳೆ, ಇಡಿ ಕಾರ್ಯವೈಖರಿ ಟೀಕಿಸಿದ್ದ ಉದ್ಯಮಿ ವಿಜಯ್ ಮಲ್ಯ ತಮ್ಮ ಫ್ಯಾನ್ಸ್ ಕ್ಲಬ್&zwnj;ಗೆ ಸೇರಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a5v0tbfb5drm7yc0ra74eq,imgname-satish-jarkiholi-vijay-mallya-1789195551563.jpg" type="image/jpeg" height="390" width="690"/>
            <content:encoded><![CDATA[ತಮ್ಮ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, 40% ಷೇರು ದಾಖಲೆ ತೋರಿಸಲು ಸವಾಲು ಹಾಕಿದ್ದಾರೆ. ಇದೇ ವೇಳೆ, ಇಡಿ ಕಾರ್ಯವೈಖರಿ ಟೀಕಿಸಿದ್ದ ಉದ್ಯಮಿ ವಿಜಯ್ ಮಲ್ಯ ತಮ್ಮ ಫ್ಯಾನ್ಸ್ ಕ್ಲಬ್&zwnj;ಗೆ ಸೇರಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಹೇಳಿದ್ದಾರೆ.&lt;img&gt;&lt;p&gt;ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ED ದಾಳಿ ಬಗ್ಗೆ ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದರು. ಇದೀಗ ಈ ಬಗ್ಗೆ ಸತೀಶ್ ಜಾರಕಿಹೊಳಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟನೆ ಬಗ್ಗೆ ಮಾತನಾಡಿದರು.&lt;/p&gt;&lt;img&gt;&lt;p&gt;ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ಕೊಟ್ಟು ಹೇಳಿದ್ರೆ ಉತ್ತರ ಕೋಡುತ್ತೇವೆ. ಮೊದಲು ನಮ್ಮನ್ನು ಕರೆಯಲಿ ಅಲ್ಲಿ ಹೋಗಿ ಹೇಳುತ್ತೇವೆ. ಇದಕ್ಕೆ ಕಾನೂನಿಲ್ಲಿ ಅವಕಾಶವಿದೆ. ನೇರವಾಗಿ ನಾವು ಮಾಡಿದ್ದೇವೆ ಅಂತ ಹೇಳಿಲ್ಲ. ಪ್ರಶ್ನೆ ಉತ್ತರ ಅಲ್ಲೆ ಇದೆ, ಅಷ್ಟಕ್ಕೆ ಚರ್ಚೆ ಸಾಕು. ಮುಂದೆ ತಪ್ಪಿದ್ರೆ ಹೇಳಲಿ. 40% ಷೇರು ದಾಖಲೆ ತೋರಿಸಲಿ. ನಮ್ಮದಾಗಿದ್ರೆ ನಾವು ಒಪ್ಪಿಕೊಳ್ಳುತ್ತೇವೆ. ಹೂಡಿಕೆ ಬಗ್ಗೆ ನನಗೆ ಸ್ಪಷ್ಟತೆವಿದೆ. ಇಲ್ಲಿ ಅದನ್ನು ಸಾಬೀತು ಮಾಡಲು ಆಗಲ್ಲ. ಇಡಿ ಆಫೀಸ್ ಗೆ ಕರೆಯಿಸಲಿ, ಅಲ್ಲಿ ಸಾಬೀತು ಮಾಡುತ್ತೇವೆ ಎಂದು ಸಚಿವ ಜಾರಕಿಹೊಳಿ ಹೇಳಿದರು.&lt;/p&gt;&lt;img&gt;&lt;p&gt;ಇದೇ ವೇಳೆ ವಿಜಯ್ ಮಲ್ಯ ಬೆಂಬಲಕ್ಕೆ ಪ್ರತಿಕ್ರಿಯಿಸಿದ ಸಚಿವರು, ಥ್ಯಾಂಕ್ಸ್ ಅಂತ ಹೇಳಿ ನಕ್ಕರು. ಅವರೂ ನಮ್ಮ ಫ್ಯಾನ್ಸ್ ಕ್ಲಬ್ ಗೆ ಸೇರಿದ್ರು ಹಾಗಿದ್ರೆ ಎಂದರು. ಮುಂದುವರಿದ ಮಾತನಾಡಿದ ಸತೀಶ್ ಜಾರಕಿಹೊಳಿ, ದೂರು ಕೊಟ್ಟವರ ಬಗ್ಗೆ ಗೊತ್ತಿದೆ, ಅದನ್ನು ಸಿಎಂಗೆ ಹೇಳಿದ್ದೇನೆ. ಯಾರು ಕೊಟ್ಟಿದ್ದಾರೆ ಅಂತ ಹೇಳಲ್ಲ. ದೂರು ಕೋಡೋದು ತಪ್ಪು ಅಂತ ಹೇಳಲ್ಲ ಮತ್ತು ಪಕ್ಷದವರು ಅಂತ ಹೇಳಲ್ಲ. ಇರಬಹುದು, ಇಲ್ಲದೆ ಇರಬಹುದು. ಅದನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ದೂರು ನೀಡಿರೋರು ಬಿಜೆಪಿಯ ಮತದಾರರಾಗಿದ್ದು, ಅವರ ಸಂಬಂಧ ಕಾಂಗ್ರೆಸ್&zwnj;ನಲ್ಲಿದೆ. ಈ ವಿಷಯವನ್ನು ಸಿಎಂ ಗಮನಕ್ಕೆ ತೆಗೆದುಕೊಂಡು ಬರಲಾಗಿದೆ. ಈಗ ಬಂದಿರುವುದು ಆರೋಪ, ಅದು ಸಾಬೀತು ಆಗಬೇಕು. ಇಡಿ ತನಿಖೆ ಮಾಡುತ್ತಿದೆ, ಫೈನಲ್ ರಿಪೋರ್ಟ್ ಬರಲಿ ಎಲ್ಲವೂ ಗೊತ್ತಾಗುತ್ತದೆ. ರಾಜಕೀಯ ಉದ್ದೇಶ ಇದ್ದೆ ಇರುತ್ತದೆ. ಅದನ್ನು ಮೀರಿ ಬೆಳೆಯಬೇಕು ಅಷ್ಟೇ ಎಂದರು.&lt;/p&gt;&lt;img&gt;&lt;p&gt;ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್&zwnj;ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇಡಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/state/he-has-joined-our-fan-club-minister-satish-jarkiholi-s-first-reaction-in-support-of-vijay-mallya-mrq-8vc8s9h"/>
        </item>
        <item>
            <title><![CDATA[Karnataka News Live: ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು]]></title>
            <link>https://kannada.asianetnews.com/state/karnataka-news-live-12-sep-2026-8500-cusecs-of-water-to-tamil-nadu-protest-staged-by-stepping-into-cauvery-river-mrq/liveblog-updates-9tvx5vr</link>
            <guid isPermaLink="true">https://kannada.asianetnews.com/state/karnataka-news-live-12-sep-2026-8500-cusecs-of-water-to-tamil-nadu-protest-staged-by-stepping-into-cauvery-river-mrq/liveblog-updates-9tvx5vr</guid>
            <pubDate>Sat, 12 Sep 2026 22:55:33 +0530</pubDate>
            <description><![CDATA[&lt;p&gt;&lt;strong&gt;ಮಂಡ್ಯ:&amp;nbsp;&lt;/strong&gt; ಕೆಆರ್&zwnj;ಎಸ್ ಜಲಾಶಯದಿಂದ ತಮಿಳುನಾಡಿಗೆ ನಿತ್ಯ 8500 ಕ್ಯುಸೆಕ್&zwnj;ಗೂ ಅಧಿಕ ನೀರನ್ನು ಹರಿಸುತ್ತಿದ್ದಾರೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಕಾವೇರಿ ನದಿಗಿಳಿದು ಪ್ರತಿಭಟಿಸಿದರು. ಪಟ್ಟಣದ ಸ್ನಾನ ಘಟ್ಟದ ಬಳಿ ಸಮಿತಿ ರೈತ ಮುಖಂಡ ಕೆ.ಎಸ್.ನಂಜುಡೇಗೌಡ, ಸಮಿತಿ ಅಧ್ಯಕ್ಷ ಬಿಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತರು ನದಿಗಿಳಿದು ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.&lt;/p&gt;&lt;p&gt;ನಂಜುಂಡೇಗೌಡ ಮಾತನಾಡಿ, ಸರ್ಕಾರ ಸ್ಥಳೀಯ ನಾಲೆಗಳಿಗೆ ನೀರು ಹರಿಸಿ ರೈತರ ಬೆಳೆ ಉಳಿಸಲು ಮುಂದಾಗುತ್ತಿಲ್ಲ. ಬದಲಿಗೆ ಕಾವೇರಿ ನೀರು ಪ್ರಾಧಿಕಾರ ಹೇಳಿದಂತೆ ಪ್ರತಿ ಬಾರಿ ತಮಿಳುನಾಡಿಗೆ ನೀರು ಹರಿಸುತ್ತಾ ಬಂದಿದೆ. 2 ತಿಂಗಳ ಹಿಂದೆ ಕಟಾವಿಗೆ ಬಂದ ಬೆಳೆ ಬಾಡುತ್ತಿರುವ ಬಗ್ಗೆ ರೈತರು ಸಿಎಂ ಬಳಿ ನೀರು ಕೇಳಿ ಮನವಿ ಮಾಡಿದರೂ ಮುಖ್ಯಮಂತ್ರಿ ನೀರು ಕೇಳಬೇಡಿ, ಬೆಳೆ ಬೆಳೆಯಬೇಡಿ ಎಂದು ರೈತರಿಗೆ ಉಡಾಫೆ ಉತ್ತರ ನೀಡಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2badzrxeb55jj7qhv06814a,imgname-mandya-mla-ganiga-ravikumar-suffers-injury-1789233921821.png" type="image/jpeg" height="390" width="690"/>
            <category>state</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-12-sep-2026-8500-cusecs-of-water-to-tamil-nadu-protest-staged-by-stepping-into-cauvery-river-mrq/liveblog-updates-9tvx5vr"/>
        </item>
        <item>
            <title><![CDATA[ಪ್ರಜ್ವಲ್ ಸೆಲ್‌ನಲ್ಲಿದ್ದ ಪೆನ್‌ಡ್ರೈವ್‌ನಲ್ಲಿ 100 ಅಶ್ಲೀಲ ವಿಡಿಯೋ ಪತ್ತೆ; ಟಿವಿಯಲ್ಲಿ ವೀಕ್ಷಣೆ]]></title>
            <link>https://kannada.asianetnews.com/state/fsl-report-has-confirmed-that-pen-drive-found-in-prajwal-revanna-s-cell-contains-approximately-100-obscene-videos-mrq/articleshow-aa17lsb</link>
            <guid isPermaLink="true">https://kannada.asianetnews.com/state/fsl-report-has-confirmed-that-pen-drive-found-in-prajwal-revanna-s-cell-contains-approximately-100-obscene-videos-mrq/articleshow-aa17lsb</guid>
            <pubDate>Sat, 12 Sep 2026 07:04:41 +0530</pubDate>
            <description><![CDATA[ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಸೆಲ್&zwnj;ನಲ್ಲಿ ಸಿಕ್ಕ ಪೆನ್&zwnj;ಡ್ರೈವ್&zwnj;ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳಿರುವುದು ಎಫ್&zwnj;ಎಸ್&zwnj;ಎಲ್&zwnj; ವರದಿಯಿಂದ ದೃಢಪಟ್ಟಿದೆ. ಪ್ರಜ್ವಲ್ ಈ ವಿಡಿಯೋಗಳನ್ನು ಜೈಲಿನ ಎಲ್&zwnj;ಇಡಿ ಟಿವಿಯಲ್ಲಿ ವೀಕ್ಷಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಪ್ರಜ್ವಲ್ ಮತ್ತು ಅವರ ಸಹಕೈದಿ ವಿರುದ್ಧ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvhjkddehbc8y968632ar148,imgname-prajwal-revanna-1781927622062.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಹಾಗೂ ಅತ್ಯಾ*ಚಾರ ಪ್ರಕರಣದ ಸಜಾ ಕೈದಿ ಪ್ರಜ್ವಲ್ ರೇವಣ್ಣ ಸೆಲ್&zwnj;ನಲ್ಲಿ ಪತ್ತೆಯಾಗಿದ್ದ ಪೆನ್&zwnj;ಡ್ರೈವ್&zwnj;ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳಿವೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್&zwnj;ಎಸ್&zwnj;ಎಲ್&zwnj;) ವರದಿಯಲ್ಲಿ ಮಹತ್ವದ ಸಂಗತಿ ಉಲ್ಲೇಖವಾಗಿರುವುದಾಗಿ ತಿಳಿದು ಬಂದಿದೆ.&lt;/p&gt;&lt;p&gt;ಕಾರಾಗೃಹದಲ್ಲಿ ಅಳವಡಿಸಲಾಗಿದ್ದ ಎಲ್&zwnj;ಇಡಿ ಟೀವಿಗೆ ಆ ಪೆನ್&zwnj;ಡ್ರೈವ್ ಅಳವಡಿಸಿಕೊಂಡು ಅಶ್ಲೀಲ ವಿಡಿಯೋಗಳನ್ನು ಪ್ರಜ್ವಲ್&zwnj; ವೀಕ್ಷಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಯಾವ ಸಮಯದಲ್ಲಿ ಪೆನ್&zwnj; ಡ್ರೈವ್ ಬಳಸಲಾಗಿದೆ ಎಂಬುದನ್ನು ದೃಢಪಡಿಸುವಂತೆ ಮತ್ತೆ ಎಫ್&zwnj;ಎಸ್&zwnj;ಎಲ್ ತಜ್ಞರನ್ನು ಈಗ ಪೊಲೀಸರು ಕೋರಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಆದರೆ ಪ್ರಜ್ವಲ್ ಇದ್ದ ಸೆಲ್&zwnj;ನಲ್ಲಿ ಸಿಕ್ಕಿದ ಮೊಬೈಲ್&zwnj;ನಲ್ಲಿ ಚಲನಚಿತ್ರಗಳು ಹಾಗೂ ವೆಬ್&zwnj; ಸಿರೀಸ್&zwnj;ಗಳು ಮಾತ್ರ ಸಿಕ್ಕಿವೆ. ಮೊಬೈಲ್&zwnj;ನಲ್ಲಿದ್ದ ಫೈಲ್&zwnj;ಗಳಲ್ಲಿ ಅಶ್ಲೀಲ ವಿಡಿಯೋಗಳು ಕಂಡು ಬಂದಿಲ್ಲ ಎಂದು ಮೂಲಗಳು &lsquo;ಕನ್ನಡಪ್ರಭ&rsquo;ಕ್ಕೆ ತಿಳಿಸಿವೆ.&lt;/p&gt;&lt;h2&gt;&lt;strong&gt;ಮೊಬೈಲ್ ಹಾಗೂ ಪೆನ್&zwnj;ಡ್ರೈವ್ ಬಳಕೆ&lt;/strong&gt;&lt;/h2&gt;&lt;p&gt;ಕಳೆದ ತಿಂಗಳ 11ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಆ ವೇಳೆ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸಜಾ ಕೈದಿ ಪ್ರಜ್ವಲ್ ರೇವಣ್ಣ ಸೆಲ್&zwnj; ಅನ್ನು ತಸಾಪಣೆ ನಡೆಸಿದಾಗ ಸಿಸಿಬಿ ತಂಡಕ್ಕೆ ಮೊಬೈಲ್ ಹಾಗೂ ಪೆನ್&zwnj; ಡ್ರೈವ್&zwnj;ಗಳು ಸಿಕ್ಕಿದ್ದವು. ಜೈಲಿನಲ್ಲಿ ನಿಷೇಧಿತ ವಸ್ತುಗಳಾದ ಮೊಬೈಲ್ ಹಾಗೂ ಪೆನ್&zwnj;ಡ್ರೈವ್ ಬಳಕೆ ಆರೋಪದ ಮೇರೆಗೆ ಪ್ರಜ್ವಲ್ ಹಾಗೂ ಆತನ ಸೆಲ್&zwnj;ನ ಸಹಕೈದಿ ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಜ್ವಲ್ ಸೆಲ್&zwnj;ನಲ್ಲಿ ಜಪ್ತಿಯಾಗಿದ್ದ ಮೊಬೈಲ್ ಹಾಗೂ ಪೆನ್&zwnj; ಡ್ರೈವ್ ಅನ್ನು ಪರೀಕ್ಷೆ ನಡೆಸಿ ವರದಿ ನೀಡುವಂತೆ ಎಫ್ಎಸ್&zwnj;ಎಲ್&zwnj;ಗೆ ಕಳುಹಿಸಿದ್ದರು. ಈಗ ಪೊಲೀಸರ ಕೈಗೆ ಸೇರಿದ ಎಫ್&zwnj;ಎಸ್&zwnj;ಎಲ್&zwnj; ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;h3&gt;&lt;strong&gt;173 ಫೈಲ್&zwnj;ಗಳಲ್ಲಿ 100 ವಿಡಿಯೋ&lt;/strong&gt;&lt;/h3&gt;&lt;p&gt;ಪ್ರಜ್ವಲ್ ರೇವಣ್ಣ ಸೆಲ್&zwnj;ನಲ್ಲಿ ಪತ್ತೆಯಾದ ಪೆನ್&zwnj;ಡ್ರೈವ್ ಹಾಗೂ ಮೊಬೈಲ್&zwnj;ಗಳಲ್ಲಿ 173 ಫೈಲ್&zwnj;ಗಳಲ್ಲಿ ವಿಡಿಯೋಗಳಿದ್ದವು. ಇದರಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳ ಚಲನಚಿತ್ರಗಳು, ವೆಬ್&zwnj; ಸೀರೀಸ್&zwnj;ಗಳು ಹಾಗೂ ಇತರೆ ವಿಡಿಯೋಗಳಿವೆ. ಆದರೆ ಮೊಬೈಲ್&zwnj;ನ ಫೈಲ್&zwnj;ಗಳಲ್ಲಿ ಯಾವುದೇ ಅಶ್ಲೀಲ ವಿಡಿಯೋಗಳ ಸಿಕ್ಕಿಲ್ಲ. ಆದರೆ ಪೆನ್&zwnj;ಡ್ರೈವ್&zwnj; ನಲ್ಲಿ 100 ಅಶ್ಲೀಲ ವಿಡಿಯೋಗಳಿದ್ದವು ಎಂದು ಎಫ್&zwnj;ಎಸ್&zwnj;ಎಲ್ ವರದಿಯಲ್ಲಿ ದೃಢಪಡಿಸಿರುವುದಾಗಿ ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಜೈಲು ಟಿವಿಯಲ್ಲಿ ಸೆ*ಕ್ಸ್ ವಿಡಿಯೋ&lt;/strong&gt;&lt;/h3&gt;&lt;p&gt;ಜೈಲಿನಲ್ಲಿ ಕೈದಿಗಳ ಮನರಂಜನೆ ಸಲುವಾಗಿ ಎಲ್&zwnj;ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಅಂತೆಯೇ ಪ್ರಜ್ವಲ್ ಬ್ಯಾರಕ್&zwnj;ನಲ್ಲಿ ಸಹ ಟಿವಿ ಇತ್ತು. ತನ್ನ ಬ್ಯಾರೆಕ್&zwnj;ನ ಟಿವಿಯಲ್ಲಿ ಪೆನ್&zwnj; ಡ್ರೈವ್&zwnj; ಅನ್ನು ಬಳಸಿ ಅಶ್ಲೀಲ ವಿಡಿಯೋಗಳನ್ನು ಪ್ರಜ್ವಲ್ ವೀಕ್ಷಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/fsl-report-has-confirmed-that-pen-drive-found-in-prajwal-revanna-s-cell-contains-approximately-100-obscene-videos-mrq/articleshow-aa17lsb"/>
        </item>
        <item>
            <title><![CDATA[ಅಕ್ರಮದ ದುಡ್ಡಲ್ಲಿ ಗೆಳತಿಗೆ ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ! ವಿಲ್ಲಾ ಖರೀದಿ?]]></title>
            <link>https://kannada.asianetnews.com/state/kpsc-scam-ias-gyanendra-kumar-bought-gold-jewelry-for-his-female-friend-using-illicit-money-purchase-of-a-villa-mrq/articleshow-g8b99pc</link>
            <guid isPermaLink="true">https://kannada.asianetnews.com/state/kpsc-scam-ias-gyanendra-kumar-bought-gold-jewelry-for-his-female-friend-using-illicit-money-purchase-of-a-villa-mrq/articleshow-g8b99pc</guid>
            <pubDate>Sat, 12 Sep 2026 08:09:10 +0530</pubDate>
            <description><![CDATA[ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ, ಐಎಎಸ್&zwnj; ಅಧಿಕಾರಿ ಜ್ಞಾನೇಂದ್ರ ಕುಮಾರ್, ಅಕ್ರಮ ಹಣದಲ್ಲಿ ತನ್ನ ಗೆಳತಿಗೆ 26 ಲಕ್ಷ ಮೌಲ್ಯದ ಚಿನ್ನಾಭರಣ ಕೊಡಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಸಹೋದರನ ಹೆಸರಲ್ಲಿ ವಿಲಾಸಿ ವಿಲ್ಲಾ ಖರೀದಿಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0q6g86q7p181q3694mf2hbp,imgname-ias-gyanendra-kumar--1--1787484971223.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು&lt;/strong&gt;: ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮ ಪ್ರಕರಣದ ಆರೋಪಿಯಾಗಿರುವ ಐಎಎಸ್&zwnj; ಅಧಿಕಾರಿ ಜ್ಞಾನೇಂದ್ರ ಕುಮಾರ್&zwnj; ಅಕ್ರಮ ಹಣದಲ್ಲಿ ತನ್ನ ಗೆಳತಿಗೆ ಚಿನ್ನಾಭರಣ ಕೊಡಿಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ಜ್ಞಾನೇಂದ್ರ ಕುಮಾರ್&zwnj; ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್&zwnj;ಗೆ ತನ್ನ ಗೆಳತಿ ಕರೆದೊಯ್ದು ಸುಮಾರು 26 ಲಕ್ಷ ರು. ಮೌಲ್ಯದ ಚಿನ್ನಾಭರಣ ಕೊಡಿಸಿದ್ದರು. ಇದಕ್ಕೆ ಬಸವರಾಜ್ ಎಂಬ ಹೆಸರಿನ ಅಕೌಂಟ್&zwnj;ನಿಂದ ಬಿಲ್&zwnj; ಪಾವತಿ ಮಾಡಲಾಗಿತ್ತು. ಬೀದರ್&zwnj;ನ ಲಕ್ಷ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಖಾತೆಯಿಂದ ಹಣ ಪಾವತಿ ಮಾಡಲಾಗಿತ್ತು. ಆಭರಣ ಖರೀದಿಸಿದ ಬಿಲ್ ಅನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳು, ಜ್ಞಾನೇಂದ್ರ ಗೆಳತಿ ಜತೆ ಚಿನ್ನ ಖರೀದಿಸಿರುವ ಪೊಟೋಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.&lt;/p&gt;&lt;h2&gt;&lt;strong&gt;ವಿಲಾಸಿ ವಿಲ್ಲಾ ಖರೀದಿ:&lt;/strong&gt;&lt;/h2&gt;&lt;p&gt;ಅಕ್ರಮ ಹಣದಲ್ಲಿ ಜ್ಞಾನೇಂದ್ರ ತನ್ನ ಸಹೋದರನ ಹೆಸರಲ್ಲಿ ಬೆಂಗಳೂರಿನಲ್ಲಿ ವಿಲ್ಲಾ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಜ್ಞಾನೇಂದ್ರ 2024ರ ಫೆಬ್ರವರಿಯಿಂದ 2026 ಮಾರ್ಚ್&zwnj;ವರೆಗೂ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದರು. ಈ ವೇಳೆ ಅಕ್ರಮ ದುಡ್ಡಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪ ಐಷಾರಾಮಿ ವಿಲ್ಲಾ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಐಡಿ ತನಿಖೆ ಮುಂದುವರಿಸಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/kpsc-scam-ias-gyanendra-kumar-bought-gold-jewelry-for-his-female-friend-using-illicit-money-purchase-of-a-villa-mrq/articleshow-g8b99pc"/>
        </item>
        <item>
            <title><![CDATA[ಕರ್ನಾಟಕ ಪೊಲೀಸರ ದಾಳಿ: ಅಮೆಜಾನ್, ಫ್ಲಿಪ್‌ಕಾರ್ಟ್ ಗೋದಾಮುಗಳಲ್ಲಿ ಸೇರಿ ರಾಜ್ಯಾದ್ಯಂತ 800 ಬಾಲಕಾರ್ಮಿಕರ ರಕ್ಷಣೆ!]]></title>
            <link>https://kannada.asianetnews.com/state/karnataka-police-mega-crackdown-800-child-labourers-rescued-bengaluru-sat/articleshow-gckh0yt</link>
            <guid isPermaLink="true">https://kannada.asianetnews.com/state/karnataka-police-mega-crackdown-800-child-labourers-rescued-bengaluru-sat/articleshow-gckh0yt</guid>
            <pubDate>Sun, 13 Sep 2026 05:48:18 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆಯ ಮೇರೆಗೆ, ಪೊಲೀಸರು ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ 800 ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ. ಬೆಂಗಳೂರಿನಲ್ಲೇ 503 ಮಕ್ಕಳು ಪತ್ತೆಯಾಗಿದ್ದು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ 20 ಪ್ರಕರಣಗಳನ್ನು ದಾಖಲಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c1nysz0jpwx20thfw4510g,imgname-karnataka-child-labour-1789258300222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.13): ಮು&lt;/strong&gt;ಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು, ಲೇಬರ್&zwnj; ಇನ್&zwnj;ಸ್ಪೆಕ್ಟರ್&zwnj;ಗಳು ಶನಿವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ಕೆಲಸದಲ್ಲಿ ತೊಡಗಿದ್ದ 800 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಜತೆಗೆ, ಕೆಲಸಕ್ಕೆ ಮಕ್ಕಳನ್ನು ಇಟ್ಟುಕೊಂಡಿದ್ದ ಮಾಲೀಕರ ವಿರುದ್ಧ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಯಡಿ ಒಟ್ಟು 20 ಪ್ರಕರಣವನ್ನೂ ದಾಖಲಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ ಸೇರಿ 31 ಜಿಲ್ಲೆ ಹಾಗೂ ಮಹಾನಗರಗಳು, ರೈಲ್ವೆ ನಿಲ್ದಾಣಗಳು ಸೇರಿ ಒಟ್ಟು 962 ಪೊಲೀಸ್&zwnj; ಠಾಣಾ ವ್ಯಾಪ್ತಿಯಲ್ಲಿ 16,951 ಸ್ಥಳಗಳಲ್ಲಿ ಶನಿವಾರ ತಪಾಸಣೆ ನಡೆಸಿ ಒಟ್ಟು 800 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.&lt;/p&gt;&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಇತ್ತೀಚೆಗೆ ಯಶವಂತಪುರದ ಎಪಿಎಂಸಿಗೆ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಲಕಾರ್ಮಿಕರನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್&zwnj; ಇಲಾಖೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಅಂದು ಕಾರ್ಯಾಚರಣೆ ನಡೆಸಿದ ಪೊಲೀಸರು 29 ಮಂದಿ ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದರು.&lt;/p&gt;&lt;h2&gt;&lt;strong&gt;ಬೆಂಗಳೂರಿನಲ್ಲಿ 503 ಬಾಲಕರ ರಕ್ಷಣೆ:&lt;/strong&gt;&lt;/h2&gt;&lt;p&gt;ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಮತ್ತು ಲೇಬರ್&zwnj; ಇನ್&zwnj;ಸ್ಪೆಕ್ಟರ್&zwnj;ಗಳ ವಿಶೇಷ ತಂಡ ಶನಿವಾರ 11 ಡಿಸಿಪಿ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವ ಹಾಗೂ ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸುವ ಉದ್ದೇಶದಿಂದ ಗ್ಯಾರೇಜ್&zwnj;ಗಳು, ಮಾರ್ಟ್&zwnj;ಗಳು, ರಿಪೇರಿ ಅಂಗಡಿಗಳು, ಹೋಟೆಲ್&zwnj;ಗಳು, ಮಾರುಕಟ್ಟೆಗಳು, ಬಾರ್ ಮತ್ತು ರೆಸ್ಟೋರೆಂಟ್&zwnj;ಗಳು, ಲಾಡ್ಜ್&zwnj;, ಬೇಕರಿ, ಬಸ್&zwnj; ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆಗಳು, ನಿರ್ಮಾಣ ಹಂತದ ಕಟ್ಟಡಗಳು, ಕಾರು ಗ್ಯಾರೇಜ್&zwnj;, ಅಮೆಜಾನ್&zwnj;, ಪ್ಲಿಫ್&zwnj;ಕಾರ್ಟ್&zwnj; ಗೋದಾಮು ಸೇರಿ ಒಟ್ಟು 5,897 ಸ್ಥಳಗಳಲ್ಲಿ ತಪಾಸಣೆ ನಡೆಸಲಾಯಿತು.&lt;/p&gt;&lt;p&gt;ಕಾರ್ಯಾಚರಣೆ ವೇಳೆ ಕೆಲಸದಲ್ಲಿ ತೊಡಗಿದ್ದ 503 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ. ಈ ಸಂಬಂಧ ವಿಚಾರಣೆ ಮುಂದುವರೆದಿದ್ದು, ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿರುವ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸುವ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೆಂಗಳೂರು ನಗರದಲ್ಲಿ ನಡೆದ ಕಾರ್ಯಾಚರಣೆ ವಿವರ:&lt;/strong&gt;&lt;/h2&gt;&lt;p&gt;ವಿಭಾಗ ಪರಿಶೀಲನೆಯ ಸ್ಥಳಗಳ ಸಂಖ್ಯೆ ರಕ್ಷಣೆ ಮಾಡಲಾದ ಬಾಲಕರು ದಾಖಲಾದ ಪ್ರಕರಣಗಳು&lt;/p&gt;&lt;ul&gt; &lt;li&gt;ಕೇಂದ್ರ 492 63 0&lt;/li&gt; &lt;li&gt;ದಕ್ಷಿಣ 515 54 0&lt;/li&gt; &lt;li&gt;ಪಶ್ಚಿಮ 742 84 1&lt;/li&gt; &lt;li&gt;ಉತ್ತರ 327 62 0&lt;/li&gt; &lt;li&gt;ನೈಋತ್ಯ 150 17 3&lt;/li&gt; &lt;li&gt;ವಾಯುವ್ಯ 337 14 2&lt;/li&gt; &lt;li&gt;ಪೂರ್ವ 927 71 3&lt;/li&gt; &lt;li&gt;ಈಶಾನ್ಯ 412 55 0&lt;/li&gt; &lt;li&gt;ಆಗ್ನೇಯ 375 13 0&lt;/li&gt; &lt;li&gt;ಎಲೆಕ್ಟ್ರಾನಿಕ್&zwnj; ಸಿಟಿ 343 3 0&lt;/li&gt; &lt;li&gt;ವೈಟ್&zwnj;ಫೀಲ್ಡ್&zwnj; 857 22 0&lt;/li&gt; &lt;li&gt;ಸಿಸಿಬಿ 420 45 9&lt;/li&gt; &lt;li&gt;&lt;strong&gt;ಒಟ್ಟು 5897 503 18&lt;/strong&gt;&lt;/li&gt;&lt;/ul&gt;&lt;p&gt;ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 5,897 ಸ್ಥಳಗಳಲ್ಲಿ ಪರಿಶೀಲನೆ ಮಾಡಿ 503 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.&lt;/p&gt;&lt;h3&gt;&lt;strong&gt;-ಸೀಮಂತ್&zwnj; ಕುಮಾರ್&zwnj; ಸಿಂಗ್&zwnj;, ನಗರ ಪೊಲೀಸ್&zwnj; ಆಯುಕ್ತ&lt;/strong&gt;&lt;/h3&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-police-mega-crackdown-800-child-labourers-rescued-bengaluru-sat/articleshow-gckh0yt"/>
        </item>
        <item>
            <title><![CDATA[ಚುನಾವಣಾ ನಿವೃತ್ತಿ ಮಾತು ನಿಲ್ಲಿಸಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಕಿವಿಮಾತು]]></title>
            <link>https://kannada.asianetnews.com/state/stop-talking-about-retirement-from-elections-rahul-gandhi-advises-siddaramaiah-mrq/articleshow-gxk4xav</link>
            <guid isPermaLink="true">https://kannada.asianetnews.com/state/stop-talking-about-retirement-from-elections-rahul-gandhi-advises-siddaramaiah-mrq/articleshow-gxk4xav</guid>
            <pubDate>Sat, 12 Sep 2026 07:11:21 +0530</pubDate>
            <description><![CDATA[ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡದಂತೆ ರಾಹುಲ್ ಕಿವಿಮಾತು ಹೇಳಿದ್ದಾರೆ. ಈ ಭೇಟಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಾತಿಗಳಂತಹ ಪ್ರಮುಖ ರಾಜಕೀಯ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29m7bcc1ghxeb9wfgfs06x4,imgname-rahul-gandhi-siddaramaiah-1789177081227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡದಂತೆ ಕಾಂಗ್ರೆಸ್&zwnj; ವರಿಷ್ಠ ರಾಹುಲ್ ಗಾಂಧಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.&lt;/p&gt;&lt;p&gt;ಸಿದ್ದರಾಮಯ್ಯ ಅವರು ಶುಕ್ರವಾರ ರಾಹುಲ್&zwnj; ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್&zwnj; ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದರು.&lt;/p&gt;&lt;p&gt;ಶುಕ್ರವಾರ ಬೆಳಗ್ಗೆ 11ಕ್ಕೆ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಅವರು 10 ಜನಪಥ್&zwnj; ನಿವಾಸದಲ್ಲಿ ಭೇಟಿ ಆದರು. ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಈ ವೇಳೆ ರಾಹುಲ್&zwnj; ಗಾಂಧಿ ಅವರು, &lsquo;ಸಿದ್ದರಾಮಯ್ಯ ಜೀ, ಪದೇ ಪದೇ ನಿವೃತ್ತಿಯ ಮಾತಾಡಬೇಡಿ. ನಿಮ್ಮ ಸೇವೆ, ನಾಯಕತ್ವ ಪಕ್ಷಕ್ಕೆ ಬೇಕು&rsquo; ಎಂದು ಕಿವಿಮಾತು ಹೇಳಿದರು.&lt;/p&gt;&lt;h2&gt;&lt;strong&gt;ರಾಹುಲ್ ಗಾಂಧಿ ಜೊತೆ ಏನೆಲ್ಲಾ ಚರ್ಚೆ?&amp;nbsp;&lt;/strong&gt;&lt;/h2&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ವಯಸ್ಸಿನ ಹಿನ್ನೆಲೆಯಲ್ಲಿ ನಾನು ಈ ಮಾತು ಹೇಳಿದ್ದೆ ಎಂದು ಸಮಜಾಯಿಷಿ ನೀಡಿದರು ಎಂದು ಮೂಲಗಳು ತಿಳಿಸಿವೆ. ಆದರೆ ಭೇಟಿಯ ವೇಳೆ ನಡೆದ ಮಾತುಕತೆಯನ್ನು ಬಹಿರಂಗಪಡಿಸಲು ಸಿದ್ದರಾಮಯ್ಯ ಅವರು ನಿರಾಕರಿಸಿದ್ದಾರೆ.&lt;/p&gt;&lt;p&gt;ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ಅಧ್ಯಕ್ಷರ ಬದಲಾವಣೆ, ವಿಧಾನ ಪರಿಷತ್&zwnj; ಖಾಲಿ ಸ್ಥಾನಗಳ ಭರ್ತಿ, ಜಾತಿ ಜನಗಣತಿ ಜಾರಿ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಇದಕ್ಕೂ ಮೊದಲು ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್&zwnj; ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಗೆ ಬಂದಿದ್ದಾಗ ಭೇಟಿಗೆ ಸಮಯ ಕೇಳಿದ್ದೆ. ಅದರಂತೆ ಸಮಯ ನೀಡಿದ್ದಾರೆ. ಕೇವಲ ಉಭಯ ಕುಶಲೋಪರಿ ಅಷ್ಟೇ. ಭೇಟಿ ಕುತೂಹಲ ಏನೂ ಇಲ್ಲ ಎಂದು ಹೇಳಿದರು.&lt;/p&gt;&lt;p&gt;ಮಧ್ಯಾಹ್ನ 2 ಗಂಟೆಗೆ ಕೆ.ಸಿ.ವೇಣುಗೋಪಾಲ್&zwnj; ಅವರನ್ನು ಲೋಧಿ ಎಸ್ಟೇಟ್ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿ ಆಗಿ ಮಾತುಕತೆ ನಡೆಸಿದರು. ಸಚಿವ ಸಂಪುಟ ವಿಸ್ತರಣೆ, ನಿಗಮ- ಮಂಡಳಿಗೆ ಹೊಸ ಅಧ್ಯಕ್ಷರ ನೇಮಕ ಕುರಿತು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿ ಭೇಟಿ ಮಾಡಿದ್ದೇನೆ ಅಷ್ಟೇ. ಭೇಟಿಯ ವೇಳೆ ಏನು ಚರ್ಚೆ ನಡೆಯಿತು ಎಂದು ಹೇಳಲು ಸಾಧ್ಯ ಇಲ್ಲ ಎಂದು ಸ್ಪಷ್ಟವಾಗಿ ಮಾಹಿತಿ ನೀಡಲು ನಿರಾಕರಿಸಿದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/stop-talking-about-retirement-from-elections-rahul-gandhi-advises-siddaramaiah-mrq/articleshow-gxk4xav"/>
        </item>
        <item>
            <title><![CDATA[Karnataka News Live: ಬಿಜೆಪಿ ಪಾದಯಾತ್ರೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ಮೆಗಾ ಪ್ಲಾನ್; ಸುಳಿವು ಬಿಟ್ಟುಕೊಟ್ಟ ನಾಗೇಂದ್ರ]]></title>
            <link>https://kannada.asianetnews.com/state/karnataka-news-live-13-september-2026-congress-to-hold-massive-rally-in-ballari-soon-b-nagendra-mrq/liveblog-updates-iegblmh</link>
            <guid isPermaLink="true">https://kannada.asianetnews.com/state/karnataka-news-live-13-september-2026-congress-to-hold-massive-rally-in-ballari-soon-b-nagendra-mrq/liveblog-updates-iegblmh</guid>
            <pubDate>Sun, 13 Sep 2026 07:04:23 +0530</pubDate>
            <description><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಬಳ್ಳಾರಿಯಲ್ಲಿ ಬಿಜೆಪಿ ನಡೆಸಿದ ಬಳ್ಳಾರಿ ಚಲೋ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್&zwnj; ವತಿಯಿಂದ ಸಮಾವೇಶ ಆಯೋಜಿಸುವ ಕುರಿತು ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ. ಶೀಘ್ರದಲ್ಲೇ ಬಳ್ಳಾರಿಯಲ್ಲಿ ಕಾಂಗ್ರೆಸ್&zwnj;ನ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಶಾಸಕ ಬಿ. ನಾಗೇಂದ್ರ ತಿಳಿಸಿದರು.&lt;/p&gt;&lt;p&gt;ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್&zwnj; ಸರ್ಕಾರದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಹಾಗೂ ಸರ್ಕಾರದ ಸಾಧನೆ ಜನರಿಗೆ ತಿಳಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗುತ್ತಿದೆ. ಸಾವಿರಾರು ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು, ಈ ಸಾಧನೆ ಜನರ ಮುಂದಿಡುವುದು ಸಮಾವೇಶದ ಉದ್ದೇಶವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೂಚನೆ ಮೇರೆಗೆ ಬಳ್ಳಾರಿಯಲ್ಲಿ ಕಾಂಗ್ರೆಸ್&zwnj; ಸಮಾವೇಶ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ.&lt;/p&gt;&lt;p&gt;ಸಮಾವೇಶಕ್ಕೆ ಮುಖ್ಯಮಂತ್ರಿ ಶಿವಕುಮಾರ ಅವರಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾಂಗ್ರೆಸ್&zwnj; ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಈ ಕುರಿತು ಎಲ್ಲ ನಾಯಕರೊಂದಿಗೆ ಮತ್ತಷ್ಟು ಚರ್ಚೆ ನಡೆಸಿದ ಬಳಿಕ ಸಮಾವೇಶದ ದಿನಾಂಕ ನಿಗದಿಪಡಿಸಲಾಗುವುದು. ಸಮಾವೇಶದ ಸಿದ್ಧತೆ ಕುರಿತು ಶೀಘ್ರದಲ್ಲೇ ಸಭೆ ನಡೆಸಿ ಅಂತಿಮ ರೂಪ ನೀಡಲಾಗುವುದು ಎಂದು ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c6bqz3sg96spz5660gnzka,imgname-bjp-nagendra-1789263208419.jpg" type="image/jpeg" height="390" width="690"/>
            <category>state</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-13-september-2026-congress-to-hold-massive-rally-in-ballari-soon-b-nagendra-mrq/liveblog-updates-iegblmh"/>
        </item>
        <item>
            <title><![CDATA[ಕೈದಿಗಳಿಗೆ ಮೊಬೈಲ್‌ ಪೂರೈಕೆ: ಮತ್ತಿಬ್ಬರು ಜೈಲಿನ ಸಿಬ್ಬಂದಿ ಸೆರೆ,  12 ಮೊಬೈಲ್ ಖರೀದಿ]]></title>
            <link>https://kannada.asianetnews.com/state/supply-of-mobile-phones-to-prisoners-two-more-parappana-agrahara-jail-staff-members-arrested-mrq/articleshow-imflyw6</link>
            <guid isPermaLink="true">https://kannada.asianetnews.com/state/supply-of-mobile-phones-to-prisoners-two-more-parappana-agrahara-jail-staff-members-arrested-mrq/articleshow-imflyw6</guid>
            <pubDate>Sat, 12 Sep 2026 05:57:58 +0530</pubDate>
            <description><![CDATA[ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಣದಾಸೆಗಾಗಿ ಕೈದಿಗಳಿಗೆ ಕಾನೂನುಬಾಹಿರವಾಗಿ ಮೊಬೈಲ್ ಪೂರೈಸುತ್ತಿದ್ದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ವೀಕ್ಷಕ ವಿಜಯ್ ಕುಮಾರ್ ಮತ್ತು ವೀಕ್ಷಕ ಶ್ರೀನಿವಾಸ್ ನಾಯ್ಕ್, ಬೇನಾಮಿ ಹೆಸರಿನಲ್ಲಿ ಮೊಬೈಲ್ ಖರೀದಿಸಿ ಕೈದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kj4v3zmg23rbaqra33w3ttmn,imgname-parappana-agrahara-jail-1771836669584.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಹಣದಾಸೆಗೆ ಬಿದ್ದು ಕಾನೂನು ಬಾಹಿರವಾಗಿ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ಸಂಬಂಧ ಮತ್ತಿಬ್ಬರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.&lt;/p&gt;&lt;p&gt;ಕಾರಾಗೃಹದ ಮುಖ್ಯ ವೀಕ್ಷಕ ವಿಜಯ್ ಕುಮಾರ್ ಹಾಗೂ ವೀಕ್ಷಕ ಶ್ರೀನಿವಾಸ್ ನಾಯ್ಕ ಬಂಧಿತರು. ಹಣದಾಸೆಗೆ ಕೈದಿಗಳಿಗೆ ಬೇನಾಮಿ ಹೆಸರಿನಲ್ಲಿ ಮೊಬೈಲ್ ಖರೀದಿಸಿ ಆರೋಪಿಗಳು ಮಾರುತ್ತಿದ್ದರು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರತ್ಯೇಕವಾಗಿ 2 ಎಫ್&zwnj;ಐಆರ್&zwnj;ಗಳು ದಾಖಲಾಗಿದ್ದವು. ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಸತೀಶ್ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ.&lt;/p&gt;&lt;h2&gt;&lt;strong&gt;ಬೇನಾಮಿ ಹೆಸರಿನಲ್ಲಿ 12 ಮೊಬೈಲ್ ಖರೀದಿ&amp;nbsp;&lt;/strong&gt;&lt;/h2&gt;&lt;p&gt;ಕಳೆದ ಜನವರಿಯಲ್ಲಿ ಕೇಂದ್ರ ಕಾರಾಗೃಹದಲ್ಲಿ 4 ಮೊಬೈಲ್&zwnj;ಗಳು, 2 ಸಿಮ್ ಕಾರ್ಡ್&zwnj;ಗಳು, 1 ಚಾರ್ಜರ್ ಪತ್ತೆಯಾಗಿದ್ದವು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಆ ಮೊಬೈಲ್ ಸಂಖ್ಯೆಗಳು ಯಾವ ಫೋನ್&zwnj;ಗಳಲ್ಲಿ ಬಳಕೆಯಾಗಿವೆ ಎಂಬುದರ ಬಗ್ಗೆ ಸಿಐಐಆರ್ ಪೋರ್ಟಲ್ ಮೂಲಕ ತಾಂತ್ರಿಕ ಮಾಹಿತಿ ಕಲೆ ಹಾಕಿದರು. ಆಗ ಜೈಲಿನಲ್ಲಿ ಸಿಕ್ಕಿದ ಸಿಮ್&zwnj;ಗಳು ಕಾರಾಗೃಹ ವಾರ್ಡನ್&zwnj; ಶ್ರೀನಿವಾಸ್ ನಾಯ್ಕ್&zwnj;ಗೆ ಸೇರಿದ 2 ಮೊಬೈಲ್&zwnj;ಗಳಲ್ಲಿ ಬಳಕೆಯಾಗಿರುವ ಸಂಗತಿ ಗೊತ್ತಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೇನಾಮಿ ಹೆಸರಿನಲ್ಲಿ ಮೊಬೈಲ್ ಖರೀದಿ ಭಾನಗಡಿ ಬಯಲಾಯಿತು.&lt;/p&gt;&lt;p&gt;&lsquo;ರಾಹುಲ್&rsquo; ಎಂಬ ಅಪರಿಚಿತ ಹೆಸರಿನಲ್ಲಿ ಒಟ್ಟು 12 ಮೊಬೈಲ್&zwnj;ಗಳನ್ನು ಶ್ರೀನಿವಾಸ್ ಖರೀದಿಸಿದ್ದರು. ಬಳಿಕ ಅವುಗಳಲ್ಲಿ 2 ಮೊಬೈಲ್&zwnj;ಗಳನ್ನು ಕೈದಿಗೆ ಪೂರೈಕೆ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಕಾರಾಗೃಹದಲ್ಲಿ ಮತ್ತೆ ಮೇನಲ್ಲಿ ಒಂದು ಮೊಬೈಲ್ ಹಾಗೂ ಸಿಮ್ ಪತ್ತೆಯಾಗಿದ್ದವು. ಆ ಸಿಮ್ ಆಧಾರದ ಮೇರೆಗೆ ತನಿಖೆಗಿಳಿದ ಪೊಲೀಸರು, ಸಿಮ್ ಮಾರಾಟದ ಬಗ್ಗೆ ಮಾಹಿತಿ ಕಲೆ ಹಾಕಿದರು.&lt;/p&gt;&lt;p&gt;ಆಗ ಆಂಧ್ರದ ಎಜೆನ್ಸಿವೊಂದಕ್ಕೆ ಮಾಡಲಾಗಿತ್ತು ಎಂದು ಕಂಪನಿ ತಿಳಿಸಿತು. ಈ ಸುಳಿವು ಆಧರಿಸಿ ಮತ್ತಷ್ಟು ಶೋಧಿಸಿದಾಗ ಮೊಬೈಲ್ ಮಾರಾಟದ ಪೂರ್ಣ ವಿವರ ಲಭಿಸಿತು. ಈ ಮಾಹಿತಿ ಬೆನ್ನತ್ತಿದ್ದಾಗ ಮೊಬೈಲ್ ಖರೀದಿಸಿದ್ದ ಭರತ್ ಅಲಿಯಾಸ್ ಭುವನ್&zwnj; ಸಿಕ್ಕಿಬಿದ್ದ. ಆತನ ಹೇಳಿಕೆ ಮೇರೆಗೆ ಮುಖ್ಯ ವೀಕ್ಷಕ ವಿಜಯ್ ಸೆರೆಯಾಗಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪವಿತ್ರ ಗೌಡ ಸ್ಥಳಾಂತರ, ದರ್ಶನ್&zwnj;ಗೂ ಬಿಗಿ ಹಿಡಿದ ಜೈಲು ಅಧಿಕಾರಿಗಳು' ಇಷ್ಟಕ್ಕೆಲ್ಲ ಕಾರಣ ಪ್ರಜ್ವಲ್&zwnj; ರೇವಣ್ಣ&lt;/strong&gt;&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/supply-of-mobile-phones-to-prisoners-two-more-parappana-agrahara-jail-staff-members-arrested-mrq/articleshow-imflyw6"/>
        </item>
        <item>
            <title><![CDATA[ಆಫ್ರಿಕಾದಲ್ಲಿ ಇನ್ನೂ ವಹಿವಾಟು ಶುರುವಾಗಿಲ್ಲ, ವಿದೇಶಿ ಹೂಡಿಕೆ, ₹2 ಕೋಟಿ ಹಣದ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ]]></title>
            <link>https://kannada.asianetnews.com/state/satish-jarkiholi-ed-raid-minister-denies-illegal-overseas-investments-vows-legal-fight-gdp/articleshow-lgh77fc</link>
            <guid isPermaLink="true">https://kannada.asianetnews.com/state/satish-jarkiholi-ed-raid-minister-denies-illegal-overseas-investments-vows-legal-fight-gdp/articleshow-lgh77fc</guid>
            <pubDate>Fri, 11 Sep 2026 16:25:08 +0530</pubDate>
            <description><![CDATA[ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಮೇಲಿನ ಇಡಿ ದಾಳಿಯನ್ನು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಕರೆದಿದ್ದಾರೆ. ದಾಳಿಯಲ್ಲಿ ಸಿಕ್ಕ ಹಣಕ್ಕೆ ಮತ್ತು ವಿದೇಶಿ ಕಂಪನಿ ನೋಂದಣಿಗೆ ಸ್ಪಷ್ಟನೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಬೆಂಬಲವಿದೆ ಎಂದು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jh24v737ythcv968s6vfgs95,imgname-373728547bdr9-179.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;&quot;ಕೇಂದ್ರದ ಬಿಜೆಪಿ ಸರ್ಕಾರವು ಪ್ರತಿಪಕ್ಷ ನಾಯಕರನ್ನೇ ಗುರಿಯಾಗಿಸಿಕೊಂಡು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡುವುದು ಹೊಸದೇನಲ್ಲ,&quot; ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಇಡಿ (ED) ದಾಳಿ ಹಾಗೂ ವಿದೇಶಿ ಹೂಡಿಕೆ ಆರೋಪಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಹಲವು ವಿಷಯಗಳನ್ನು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಕೇಂದ್ರದಿಂದ ವಿರೋಧ ಪಕ್ಷಗಳ ಟಾರ್ಗೆಟ್&lt;/h2&gt;&lt;p&gt;&quot;ಕೇವಲ ಕಾಂಗ್ರೆಸ್ ನಾಯಕರನ್ನೇ ಏಕೆ ಗುರಿಯಾಗಿಸಲಾಗುತ್ತಿದೆ? ಬಿಜೆಪಿಯ ನಾಯಕರ ಮೇಲೆ ಏಕೆ ದಾಳಿಗಳು ನಡೆಯುತ್ತಿಲ್ಲ? ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಕುಗ್ಗಿಸುವ ಯತ್ನ ನಡೆಯುತ್ತಲೇ ಬಂದಿದೆ. ಈ ಹಿಂದೆ ಮಾಜಿ ಸಚಿವ ನಾಗೇಂದ್ರ ಅವರನ್ನೂ ಟಾರ್ಗೆಟ್ ಮಾಡಲಾಗಿತ್ತು. ನಾವು ವಾಲ್ಮೀಕಿ ನಾಯಕ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿರುವುದೇ ಕೆಲವರಿಗೆ ನುಂಗಲಾರದ ತೂತಾಗಿದೆ. ಆದರೆ, ಇಡಿ ದಾಳಿ ವಿಚಾರದಲ್ಲಿ ನಾನು ಯಾವುದೇ ಜಾತಿ ಕಾರ್ಡ್ ಬಳಸುವುದಿಲ್ಲ. ಸಾರ್ವಜನಿಕ ಜೀವನದಲ್ಲಿದ್ದಾಗ ಇಂತಹ ಆರೋಪಗಳಿಂದ ಮುಕ್ತರಾಗುವುದು ನಮ್ಮ ಕರ್ತವ್ಯ&quot; ಎಂದರು.&lt;/p&gt;&lt;h2&gt;ಎರಡು ಕೋಟಿ ರೂಪಾಯಿ ಮತ್ತು ವ್ಯವಹಾರದ ಸ್ಪಷ್ಟನೆ&lt;/h2&gt;&lt;p&gt;ದಾಳಿಯ ವೇಳೆ ಸಿಕ್ಕ ಹಣದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, &quot;ಸಿಕ್ಕಿರುವ ಎರಡು ಕೋಟಿ ರೂಪಾಯಿ ಹಣದ ಮೂಲ ಸಂಪೂರ್ಣವಾಗಿ ನಮ್ಮದೇ ಆಗಿದೆ. ನಮ್ಮ ಸಮ್ಮಿಶ್ರ ಉದ್ಯಮದಲ್ಲಿ ವರ್ಷಕ್ಕೆ ಸುಮಾರು 2,000 ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಹೀಗಾಗಿ ಈ ಹಣದ ಬಗ್ಗೆ ಯಾವುದೇ ಗೊಂದಲವಿಲ್ಲ. ನನ್ನ ಮಗ ಮತ್ತು ಮಗಳ ಹೆಸರಿನಲ್ಲಿ ಆಫ್ರಿಕಾದಲ್ಲಿ ನೋಂದಾಯಿತ ಕಂಪನಿಯಿರುವುದು ನಿಜ. ಆದರೆ, ಅಲ್ಲಿ ಇನ್ನೂ ಯಾವುದೇ ವಹಿವಾಟು ಆರಂಭವಾಗಿಲ್ಲ. ಐಟಿ ಇಲಾಖೆಗೆ ಈಗಾಗಲೇ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ. ಇಡಿ ತನಿಖಾಧಿಕಾರಿಗಳು ನೋಟಿಸ್ ನೀಡಿದಾಗ ಅವರಿಗೂ ಅಗತ್ಯ ದಾಖಲೆಗಳನ್ನು ಒದಗಿಸಿ ಸೂಕ್ತ ಉತ್ತರ ನೀಡುತ್ತೇನೆ,&quot; ಎಂದು ತಿಳಿಸಿದರು.&lt;/p&gt;&lt;h2&gt;ವಿದೇಶಿ ಮೈನಿಂಗ್ ಮತ್ತು ಹೂಡಿಕೆ ಯೋಜನೆ&lt;/h2&gt;&lt;p&gt;&quot;ನನಗೆ ವಿದೇಶಗಳಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಮಾಡುವ ಆಸಕ್ತಿಯಿದೆ. ಕಳೆದೆಂಟು-ಹತ್ತು ವರ್ಷಗಳಿಂದ ಹೂಡಿಕೆಗಾಗಿ ವಿವಿಧ ದೇಶಗಳನ್ನು ಪರಿಶೀಲಿಸುತ್ತಿದ್ದೇನೆ. ಆದರೆ, ಇಲ್ಲಿಯವರೆಗೆ ಯಾವುದೇ ಒಪ್ಪಂದ ಫೈನಲ್ ಆಗಿಲ್ಲ ಅಥವಾ ಹೂಡಿಕೆ ಮಾಡಿಲ್ಲ. ಮಾತುಕತೆ ಹಂತದಲ್ಲಿದ್ದಾಗಲೇ ಹೂಡಿಕೆ ಮುಗಿದಿದೆ ಎಂದು ಬಿಂಬಿಸಲಾಗುತ್ತಿದೆ,&quot; ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಪಕ್ಷದ ಬೆಂಬಲ ಮತ್ತು ಆಂತರಿಕ ಸಂಚಿನ ಶಂಕೆ&lt;/h2&gt;&lt;p&gt;&quot;ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ನಾಯಕರು ನನ್ನೊಂದಿಗೆ ಮಾತನಾಡಿದ್ದಾರೆ. ಸಿಎಂ ಅವರು ನಿನ್ನೆ ರಾತ್ರಿ ಭೇಟಿಯಾಗಿ ಧೈರ್ಯ ತುಂಬಿದ್ದು, ಈ ಪ್ರಕರಣವನ್ನು ಒಗ್ಗಟ್ಟಿನಿಂದ ಮತ್ತು ಕಾನೂನಾತ್ಮಕವಾಗಿ ಎದುರಿಸೋಣ ಎಂದು ಹೇಳಿದ್ದಾರೆ. ಈ ದೂರು ಸ್ವಪಕ್ಷದವರಿಂದ ಬಂದಿದೆಯೇ ಅಥವಾ ವಿರೋಧಿಗಳಿಂದ ಬಂದಿದೆಯೇ ಎಂಬುದನ್ನು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇನೆ. ಇನ್ನು, ಬಿಜೆಪಿಯಿಂದ ನನಗ ಯಾವುದೇ ಆಫರ್ ಬಂದಿಲ್ಲ,&quot; ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/satish-jarkiholi-ed-raid-minister-denies-illegal-overseas-investments-vows-legal-fight-gdp/articleshow-lgh77fc"/>
        </item>
        <item>
            <title><![CDATA[ಆಫ್ರಿಕಾದ ಚಿನ್ನದ ಗಣಿ ಕಂಪನಿಯಲ್ಲಿ 40% ಪಾಲು; 3.3 ಕೋಟಿ ನಗದು, 15 ಲಕ್ಷ ವಿದೇಶಿ ಕರೆನ್ಸಿ ಪತ್ತೆ]]></title>
            <link>https://kannada.asianetnews.com/state/an-ed-investigation-has-revealed-the-purchase-of-40-percent-stake-in-a-gold-mine-in-african-country-of-congo-mrq/articleshow-lnio85e</link>
            <guid isPermaLink="true">https://kannada.asianetnews.com/state/an-ed-investigation-has-revealed-the-purchase-of-40-percent-stake-in-a-gold-mine-in-african-country-of-congo-mrq/articleshow-lnio85e</guid>
            <pubDate>Sat, 12 Sep 2026 06:55:47 +0530</pubDate>
            <description><![CDATA[ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಲಂಚದ ಹಣದಿಂದ ಆಫ್ರಿಕಾದ ಕಾಂಗೋ ದೇಶದ ಚಿನ್ನದ ಗಣಿಯಲ್ಲಿ ಶೇ.40ರಷ್ಟು ಪಾಲು ಖರೀದಿಸಿರುವುದು ಇ.ಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಜಾರಕಿಹೊಳಿ ಮತ್ತು ಅವರ ಕುಟುಂಬದ ಸದಸ್ಯರ ನಿವಾಸಗಳ ಮೇಲೆ ನಡೆದ ದಾಳಿಯಲ್ಲಿ, ಘೋಷಿಸದ ವಿದೇಶಿ ಹೂಡಿಕೆಗಳು, ನಗದು ಹಾಗೂ ಫೇಮಾ ಉಲ್ಲಂಘನೆಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29kd17a1pzdm43mgcvyr2tw,imgname-satish-jarkiholi-1789176218858.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು &lt;/strong&gt;: ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಆಫ್ರಿಕಾದ ಕಾಂಗೋ ದೇಶದ ಚಿನ್ನದ ಗಣಿ ಕಂಪನಿಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯ ವೇಳೆ ಪತ್ತೆಯಾಗಿದೆ.&lt;/p&gt;&lt;p&gt;ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ ಭಾರತ್&zwnj; ವಾಣಿಜ್ಯ ಈಸ್ಟರ್ನ್&zwnj; ಪ್ರೈ.ಲಿ. ಸೇರಿ ವಿವಿಧ ಗುತ್ತಿಗೆ ಕಂಪನಿಗಳು ಭಾರೀ ಪ್ರಮಾಣದ ಲಂಚ ಪಾವತಿಸಿದ್ದು, ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ.&lt;/p&gt;&lt;p&gt;ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿ ಇ.ಡಿ ಶುಕ್ರವಾರ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಶೋಧ ಕಾರ್ಯಾಚರಣೆ ವೇಳೆ, ಸತೀಶ್&zwnj; ಜಾರಕಿಹೊಳಿ ಕುಟುಂಬದ ಸದಸ್ಯರಾದ ಚಿಕ್ಕೋಡಿ ಸಂಸದೆ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ವೈ.ಡಿ ಮಂಜುನಾಥ್ ಅವರ ಪತ್ನಿ ಮತ್ತು ಸತೀಶ್ ಜಾರಕಿಹೊಳಿ ಅವರ ಸಹೋದರಿ ಮಹಾದೇವಿ ಮಂಜುನಾಥ್ ಅವರು ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರು (ಪಾಲು) ಹೊಂದಿರುವುದು ಪತ್ತೆಯಾಗಿದೆ. ಇವುಗಳಲ್ಲಿ ಕಾಂಗೋದ ಎಲ್&zwnj;ಡೊರಾಡೊ ಮೈನಿಂಗ್&zwnj; ರಿಸೋರ್ಸಸ್&zwnj; ಹಾಗೂ ಜಾಂಬಿಯಾದಲ್ಲಿರುವ ನವ ಔರಂ ಮೈನಿಂಗ್&zwnj; ಲಿಮಿಟೆಡ್&zwnj; ಸೇರಿ ಹಲವು ಸಂಸ್ಥೆಗಳೂ ಸೇರಿವೆ.&lt;/p&gt;&lt;p&gt;ಇದಲ್ಲದೆ, ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ಮೆ.ಮ್ಯಾಗ್ನಿಟ್ಯೂಡ್&zwnj; ಸ್ಟಾರ್&zwnj; ಎಸ್&zwnj;ಎಆರ್&zwnj;ಎಲ್&zwnj; ಸಂಸ್ಥೆಯಲ್ಲಿ ಸತೀಶ್ ಜಾರಕಿಹೊಳಿ ಶೇ.40 ಪಾಲು ಹೊಂದಿರುವುದು ಪತ್ತೆಯಾಗಿದೆ. ಆಫ್ರಿಕಾದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಮತ್ತು ಅಲ್ಲಿ ಆಸ್ತಿಗಳನ್ನು ಹೊಂದಿರುವ ಬಗ್ಗೆ ಹಾಗೂ ಇತರ ಹಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.&lt;/p&gt;&lt;h2&gt;&lt;strong&gt;21 ಸ್ಥಳಗಳ ಮೇಲೆ ದಾಳಿ&lt;/strong&gt;&lt;/h2&gt;&lt;p&gt;ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯದ ಅಧಿಕಾರಿಗಳು, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ್ ಮತ್ತು ಕೋಲ್ಕತ್ತಾ ಸೇರಿ 21 ಸ್ಥಳಗಳ ಮೇಲೆ ಸೆ.9-10ರಂದು ದಾಳಿ ನಡೆಸಿ ಶೋಧ ನಡೆಸಿದ್ದರು.&lt;/p&gt;&lt;p&gt;ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ(ಫೇಮಾ) ಪ್ರಕರಣ ದಾಖಲಿಸಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಜಾರಕಿಹೊಳಿ ಕುಟುಂಬಕ್ಕೆ ಸಂಬಂಧಿಸಿ ಘೋಷಣೆಯಾಗದ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯವಹಾರ, ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಿ ವಾಸ್ತವಾಂಶ ಪತ್ತೆಹಚ್ಚುವುದು ಈ ದಾಳಿ ಉದ್ದೇಶವಾಗಿತ್ತು ಎಂದು ಇ.ಡಿ ಹೇಳಿದೆ.&lt;/p&gt;&lt;p&gt;ಶೋಧ ಕಾರ್ಯಾಚರಣೆ ವೇಳೆ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಹಾಗೂ ಭಾವ ವೈ.ಡಿ ಮಂಜುನಾಥ್, ಅಲ್ಲದೆ, ಸತೀಶ್ ಜಾರಕಿಹೊಳಿ ಅವರ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್&zwnj;ಡಿ) ಹಾಗೂ ಆಪ್ತ ಸಹಾಯಕ ಮಲ್ಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠ್ಠಲ್ ಪರಸನ್ನವರ ಹಾಗೂ ಡಾ.ಗಿರೀಶ್ ಸೋನವಾಲ್ಕರ್ ಅವರಿಗೆ ಸೇರಿದ ಸ್ಥಳಗಳ ಮೇಲೂ ದಾಳಿ ನಡೆಸಿ ಶೋಧ ನಡೆಸಲಾಯಿತು.&lt;/p&gt;&lt;p&gt;ಇದೇ ವೇಳೆ, ಭಾರತ್&zwnj; ವಾಣಿಜ್ಯ ಈಸ್ಟರ್ನ್&zwnj; ಪ್ರೈ.ಲಿ. ಎಂಬ ಖಾಸಗಿ ಕಂಪನಿಯ ಅಧಿಕಾರಿಗಳಿಗೂ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ ಈ ಕಂಪನಿ ಭಾರೀ ಪ್ರಮಾಣದ ಲಂಚ ಪಾವತಿಸಿದೆ ಹಾಗೂ ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ್&zwnj; ವಾಣಿಜ್ಯ ಈಸ್ಟರ್ನ್&zwnj; ಪ್ರೈ.ಲಿ ಸಂಸ್ಥೆಯ ಮಾಲೀಕರ ಕಚೇರಿ ಹಾಗೂ ನಿವಾಸಗಳಲ್ಲಿಯೂ ಶೋಧ ನಡೆಸಲಾಯಿತು.&lt;/p&gt;&lt;p&gt;ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವರ ನಿವಾಸ, ಕ್ರೆಸೆಂಟ್ ರಸ್ತೆಯಲ್ಲಿರುವ ನಿವಾಸ, ಗೋಕಾಕ್ ಮತ್ತು ಬೆಳಗಾವಿಯಲ್ಲಿನ ವಿವಿಧ ಸ್ಥಳಗಳು ಸೇರಿ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆ ಸಂದರ್ಭದಲ್ಲಿ ಫೆಮಾ ಉಲ್ಲಂಘನೆಗಳಿಗೆ ಸಂಬಂಧಿಸಿ ಮಹತ್ವದ ವಸ್ತುಗಳು ಮತ್ತು ದಾಖಲೆಗಳು ಪತ್ತೆಯಾಗಿವೆ ಎಂದು ಇ.ಡಿ ತಿಳಿಸಿದೆ.&lt;/p&gt;&lt;h3&gt;&lt;strong&gt;3.3 ಕೋಟಿ ರು. ನಗದು, 15 ಲಕ್ಷ ವಿದೇಶಿ ಕರೆನ್ಸಿ ಪತ್ತೆ&lt;/strong&gt;&lt;/h3&gt;&lt;p&gt;ದಾಳಿ ವೇಳೆ ಲೆಕ್ಕ ತೋರಿಸದ 3.3 ಕೋಟಿ ರು. ನಗದು ಹಾಗೂ ಅಮೆರಿಕನ್ ಡಾಲರ್, ಯುರೋ ಸೇರಿ ಸುಮಾರು 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;p&gt;ಶೋಧದ ವೇಳೆ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ, ಅನುಮೋದಿತವಲ್ಲದ ಮಾರ್ಗದ ಮೂಲಕ ಕಾಂಗೋದಲ್ಲಿರುವ ಒಂದು ಸಂಸ್ಥೆಯಲ್ಲಿ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.&lt;/p&gt;&lt;p&gt;ಶೋಧ ಕಾರ್ಯಾಚರಣೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಹಾಗೂ ಗುತ್ತಿಗೆದಾರರಿಂದ ಭಾರತ್&zwnj; ವಾಣಿಜ್ಯ ಈಸ್ಟ್ರರ್ನ್ ಸೇರಿ ವಿವಿಧ ಸಂಸ್ಥೆಗಳ ಮೂಲಕ ಲಂಚದ ಹಣ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ಹಲವು ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳು ಪತ್ತೆಯಾಗಿವೆ.&lt;/p&gt;&lt;p&gt;ಸತೀಶ್ ಜಾರಕಿಹೊಳಿ ಅವರ ಭಾವ ವೈ.ಡಿ ಮಂಜುನಾಥ್ ಅವರು, ನಿರ್ವಹಿಸುತ್ತಿರುವ ಸಂಸ್ಥೆಯ ಖಾತೆಗಳಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳೊಂದಿಗೆ ವ್ಯವಹಾರ ನಡೆಸಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಇ.ಡಿ ವಿವರಿಸಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/an-ed-investigation-has-revealed-the-purchase-of-40-percent-stake-in-a-gold-mine-in-african-country-of-congo-mrq/articleshow-lnio85e"/>
        </item>
        <item>
            <title><![CDATA[₹30,000 ಗೃಹಿಣಿಯ ಮಾಸಿಕ ಆದಾಯ; ಮಹಿಳೆ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ಕೊಡಿ - ಹೈಕೋರ್ಟ್]]></title>
            <link>https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk</link>
            <guid isPermaLink="true">https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk</guid>
            <pubDate>Sun, 13 Sep 2026 07:18:12 +0530</pubDate>
            <description><![CDATA[&lt;p&gt;ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ₹30,000 ಎಂದು ಪರಿಗಣಿಸಿರುವ ಹೈಕೋರ್ಟ್, ವಿಮಾ ಕಂಪನಿಗೆ ₹59.69 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ನ್ಯಾಯಾಧಿಕರಣ ನೀಡಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿ, ಗೃಹಿಣಿಯರ ಶ್ರಮ ಮತ್ತು ಕೊಡುಗೆಯನ್ನು ಕನಿಷ್ಠ ಆದಾಯದಲ್ಲಿ ಅಳೆಯಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2c6y2zc6g00saxgcr9sjfeh,imgname-karnataka-high-court--2--1789263809513.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ಮ&lt;/strong&gt;ನೆ ಕೆಲಸ ನಿರ್ವಹಿಸುವ ಗೃಹಿಣಿಯರ ನಿಸ್ವಾರ್ಥ ಶ್ರಮ ಮತ್ತು ಕುಟುಂಬಕ್ಕೆ ಅವರು ನೀಡುವ ಕೊಡುಗೆಯನ್ನು ಕೇವಲ ಕನಿಷ್ಠ ವೇತನದ ಅಡಿಯಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ 37 ವರ್ಷದ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ಬರೋಬ್ಬರಿ ₹30,000 ಎಂದು ಪರಿಗಣಿಸಿರುವ ನ್ಯಾಯಾಲಯ, ಮೃತರ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.&lt;/p&gt;&lt;p&gt;ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ನೀಡಿದ್ದ ₹11.18 ಲಕ್ಷ ಪರಿಹಾರ ಆದೇಶವನ್ನು ರದ್ದುಪಡಿಸುವಂತೆ ಕೋರಿ ವಿಮಾ ಕಂಪನಿ ಮತ್ತು ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಪರಿಹಾರ ಮೊತ್ತ ₹11.18 ಲಕ್ಷದಿಂದ ₹59.69 ಲಕ್ಷಕ್ಕೆ ಏರಿಕೆ:&lt;/strong&gt;&lt;/h2&gt;&lt;p&gt;ನ್ಯಾಯಾಧಿಕರಣ ಈ ಹಿಂದೆ ನಿಗದಿಪಡಿಸಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿದ ಹೈಕೋರ್ಟ್, ಮೃತರ ಮಗನಿಗೆ ಪರಿಷ್ಕೃತ ಮೊತ್ತವಾದ ಒಟ್ಟು ₹59,69,000 (ಶೇ.9ರಷ್ಟು ವಾರ್ಷಿಕ ಬಡ್ಡಿ ಸಹಿತ) ಪಾವತಿಸಲು ನ್ಯಾಷನಲ್ ಇನ್ಶೂರೆನ್ಸ್ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗೃಹಿಣಿಯರ ಶ್ರಮವನ್ನು ಗುರುತಿಸುವ ವೇಳೆ ಸುಪ್ರೀಂ ಕೋರ್ಟ್&zwnj;ನ &lsquo;ಶಿಶು ಪಾಲ್ ವಿರುದ್ಧ ಸುರ್ಜೀತ್&rsquo; ಪ್ರಕರಣದ ಐತಿಹಾಸಿಕ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಗೃಹಿಣಿಯೊಬ್ಬರು ಕುಟುಂಬಕ್ಕೆ ನೀಡುವ ಸೇವೆ ಅಮೂಲ್ಯವಾದುದು. ಹೀಗಾಗಿ ಅವರ ಮಾಸಿಕ ಕಾಲ್ಪನಿಕ ಆದಾಯವನ್ನು ₹30 ಸಾವಿರ ಎಂದು ನಿಗದಿಪಡಿಸಿ, ಅದಕ್ಕೆ ಭವಿಷ್ಯದ ಗಳಿಕೆಯ ಶೇ.40 ಭಾಗವನ್ನು ಸೇರಿಸಿ ನ್ಯಾಯಾಲಯ ಈ ಬೃಹತ್ ಪರಿಹಾರ ಮೊತ್ತವನ್ನು ಅಂತಿಮಗೊಳಿಸಿದೆ.&lt;/p&gt;&lt;h2&gt;&lt;strong&gt;ವಿಮಾ ಕಂಪನಿಯ ವಾದ ತಳ್ಳಿಹಾಕಿದ ಪೀಠ:&lt;/strong&gt;&lt;/h2&gt;&lt;p&gt;'ದ್ವಿಚಕ್ರ ವಾಹನಕ್ಕೆ ಹಸು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ. ಕ್ರಿಮಿನಲ್ ನ್ಯಾಯಾಲಯದಲ್ಲಿ ಬೈಕ್ ಸವಾರ ಖುಲಾಸೆಗೊಂಡಿರುವುದರಿಂದ ಈ ಅಪಘಾತಕ್ಕೆ ವಿಮಾ ಕಂಪನಿ ಹೊಣೆಯಾಗುವುದಿಲ್ಲ' ಎಂದು ವಿಮಾ ಸಂಸ್ಥೆಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್, ವಿಮಾ ಕಂಪನಿಯು ಪರಿಹಾರ ಪಾವತಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.&lt;/p&gt;&lt;p&gt;ಪ್ರಕರಣದ ಹಿನ್ನೆಲೆ:&lt;/p&gt;&lt;p&gt;2011ರ ಅಕ್ಟೋಬರ್&zwnj;ನಲ್ಲಿ ಪುಟ್ಟತಾಯಮ್ಮ (37) ಅವರು ತಮ್ಮ ಪತಿ ಮಾಯಣ್ಣ ಗೌಡ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಾಮನಗರ ಜಿಲ್ಲೆಯ ಬಿಡದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ 45 ದಿನಗಳ ಕಾಲ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.&lt;/p&gt;&lt;p&gt;ಇದರ ವಿರುದ್ಧ ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ಕೋರಿ ಮೃತರ ಸಂಬಂಧಿಕರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು. ನ್ಯಾಯಾಧಿಕರಣವು ₹11.18 ಲಕ್ಷ ಪರಿಹಾರ ನೀಡಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ವಿಮಾ ಕಂಪನಿ ಹಾಗೂ ಮೃತರ ಕುಟುಂಬಸ್ಥರು ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಗೃಹಿಣಿಯ ಗೌರವ ಮತ್ತು ಸ್ಥಾನಮಾನವನ್ನು ಎತ್ತಿಹಿಡಿದು ಪರಿಹಾರವನ್ನು ಬರೋಬ್ಬರಿ ₹59.69 ಲಕ್ಷಕ್ಕೆ ಹೆಚ್ಚಿಸಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk"/>
        </item>
        <item>
            <title><![CDATA[ಬೆಂಗಳೂರು ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ]]></title>
            <link>https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn</link>
            <guid isPermaLink="true">https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn</guid>
            <pubDate>Sat, 12 Sep 2026 16:57:09 +0530</pubDate>
            <description><![CDATA[&lt;p&gt;ಬೆಂಗಳೂರು ಏರ್&zwnj;ಪೋರ್ಟ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಗಣೇಶ ಹಬ್ಬ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಸಂಚಾರ ದಟ್ಟಣೆಯಿಂದ ತುಂಬಿದೆ. ಪರಿಣಾಮ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2anxhha7r76fj89wzgcy20p,imgname-ganesh-festival-traffic-disrupts-bengaluru-1789212411434.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಸೆ.12) ಗಣೇಶ ಹಬ್ಬ ಹಿನ್ನಲೆಯಲ್ಲಿ ನಗರದ ಹಲೆವೆಡೆ ನಿನ್ನೆ ರಾತ್ರಿಯಿಂದಲೇ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಇದೀಗ ಬೆಂಗಳೂರಿನ ಏರ್&zwnj;ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್&zwnj; ಸೃಷ್ಟಿಯಾಗಿದೆ. ಪ್ಯಾಲೇಸ್ ರಸ್ತೆಯಿಂದ ಹಿಡಿದು ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣ, ಆಂಧ್ರ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳ ಲಿಂಕ್ ಆಗಿರುವ ಕಾರಣ ಹಬ್ಬದ ಹಿನ್ನಲೆಯಲ್ಲಿ ಊರಿಗೆ ತೆರಳುವ ಜನ ಹೆಚ್ಚಿದ್ದಾರೆ. ಹೀಗಾಗಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.&lt;/p&gt;&lt;h2&gt;ಕಳೆದ ಕೆಲ ಗಂಟೆಯಿಂದ ಸಿಲುಕಿದ ವಾಹನ ಸವಾರರು&lt;/h2&gt;&lt;p&gt;ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೆ ವಾಹನ ಸಂಚಾರ ಬಂದ್ ಆಗಿದೆ. ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ವಾಹನ ಸವಾರರು ಕಳೆದ ಕೆಲ ಗಂಟೆಯಿಂದ ಏರ್&zwnj;ಪೋರ್ಟ್ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗಿನ ಸರಿಸುಮಾರು 4 ಕಿಲೋಮೀಟರ್ ದೂರ ಕ್ರಮಿಸಲು ಗಂಟೆ ಗಟ್ಟಲೆ ಹಿಡಿಯುತ್ತಿದೆ. ಭಾರಿ ಸಂಖ್ಯೆಯಲ್ಲಿ ವಾಹನಗಳು ಏರ್&zwnj;ಪೋರ್ಟ್ ರಸ್ತೆಯಲ್ಲಿ ಸಾಗುತ್ತಿದೆ. ವಿಮಾನ ನಿಲ್ದಾಣ ತಲುಪುದು ಹರಸಾಹಸವಾಗಿದೆ.&lt;/p&gt;&lt;h2&gt;ಇಂದು ರಾತ್ರಿ ಮೆಜೆಸ್ಟಿಕ್ ಸುತ್ತ ಮುತ್ತ ಟ್ರಾಫಿಕ್&lt;/h2&gt;&lt;p&gt;ಶುಕ್ರವಾರ ಸಂಜೆಯಿಂದ ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಎರಡನೇ ಶನಿವಾರ, ಭಾನುವಾರ, ಸೋಮವಾರ ಗಣೇಶ ಹಬ್ಬದ ಪ್ರಯುಕ್ತ ರಜೆ. ಹೀಗಾಗಿ ಬೆಂಗಳೂರಿನ ಬಹುತೇಕ ಮಂದಿ ಶುಕ್ರವಾರವೇ ಊರಿಗೆ ತೆರಳಿದ್ದಾರೆ. ಹೀಗಾಗಿ ಶುಕ್ರವಾರ ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇಂದು ರಾತ್ರಿಯೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಲಿದೆ.&lt;/p&gt;&lt;p&gt;ಮೂರು ದಿನ ರಜೆ ಹಿನ್ನೆಲೆ ತಮ್ಮ ತಮ್ಮ ಊರುಗಳಿಗೆ ಜನರು ಹೊರಟಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತ ನಾಲ್ಕೈದು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಖಾಸಗಿ ಬಸ್, ಕೆಎಸ್ ಆರ್ ಟಿ ಸಿ ಬಸ್ ಎಲ್ಲವೂ ಪ್ರಯಾಣಿಕರಿಂದ ಭರ್ತಿಯಾಗಿತ್ತು. ಇದರ ನಡುವೆ ಕೆಲ ಆ್ಯಂಬುಲೆನ್ಸ್ ಸಿಲುಕಿ ಪರದಾಡಿದೆ.&lt;/p&gt;]]></content:encoded>
            <category>state</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn"/>
        </item>
        <item>
            <title><![CDATA[Karnataka News Live: Bangladesh - ಚಿನ್ಮಯ ಕೃಷ್ಣ ದಾಸ್ ಬಂಧನ; ಬಾಂಗ್ಲಾದಲ್ಲಿ ನಡೆದ ಮಹಾಪಾಪಕ್ಕೆ ಉತ್ತರ ನೀಡಬೇಕಿದೆ ತಾರಿಕ್ ರಹಮಾನ್!]]></title>
            <link>https://kannada.asianetnews.com/state/karnataka-news-live-sep-11th-dk-shivakumar-tunnel-road-project-to-state-update/liveblog-updates-w9gem92</link>
            <guid isPermaLink="true">https://kannada.asianetnews.com/state/karnataka-news-live-sep-11th-dk-shivakumar-tunnel-road-project-to-state-update/liveblog-updates-w9gem92</guid>
            <pubDate>Fri, 11 Sep 2026 23:19:26 +0530</pubDate>
            <description><![CDATA[&lt;p&gt;ರಾಜಕೀಯ ಪಕ್ಷಗಳು ಎಷ್ಟೇ ವಿರೋಧಿಸಿದರೂ ಟನಲ್ ರಸ್ತೆ ಮಾಡೇ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮದು ನುಡಿದಂತೆ ನಡೆವ ಸರ್ಕಾರ. ಟನಲ್ ರಸ್ತೆ, ಬ್ಯೂಸಿನೆಸ್ ಕಾರಿಡಾರ್, ಡಬಲ್ ಡೆಕ್ಕರ್ ರಸ್ತೆ ಸೇರಿದಂತೆ ಪ್ರಮುಖ ಯೋಜನೆಗಳು ನನ್ನ ಅವಧಿಯಲ್ಲಿ ನಡೆಯಲಿದೆ. ನ್ಯಾಯಾಲಯದಿಂದ ಯಾವುದೇ ಕಾನೂನಾತ್ಮಕ ತೊಡಕು ಬರದಿದ್ದರೆ ಎಲ್ಲಾ ಯೋಜನೆಗಳು ಕಾರ್ಯಾರಂಭಗೊಳ್ಳಲಿದೆ ಎಂದಿದ್ದಾರೆ. ರಾಜ್ಯದ ಕ್ಷಣ ಕ್ಷಣದ ಅಪ್&zwnj;ಡೇಟ್ ಸುದ್ದಿ ಇಲ್ಲಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m28scmwa21qe615es19sbe2j,imgname-chinmay-das-1789148943242.jpg" type="image/jpeg" height="390" width="690"/>
            <category>state</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-sep-11th-dk-shivakumar-tunnel-road-project-to-state-update/liveblog-updates-w9gem92"/>
        </item>
        <item>
            <title><![CDATA[ಸಚಿವ ಜಾರಕಿಹೊಳೆ ಮನೆ ಮೇಲೆ ಇಡಿ ದಾಳಿಗೆ ವಿಜಯ್ ಮಲ್ಯ ಕೆಂಡಾಮಂಡಲ, ತನ್ನಿಷ್ಟದ ದೇಗುಲ ನೆನೆದು ಬೇಸರ!]]></title>
            <link>https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq</link>
            <guid isPermaLink="true">https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq</guid>
            <pubDate>Sat, 12 Sep 2026 10:19:36 +0530</pubDate>
            <description><![CDATA[ಸಚಿವ ಸತೀಶ್ ಜಾರಕಿಹೊಳೆ ಆಪ್ತರ ಮೇಲಿನ ಇಡಿ ದಾಳಿಯನ್ನು ಉದ್ಯಮಿ ವಿಜಯ್ ಮಲ್ಯ 'ಎಕ್ಸ್'ನಲ್ಲಿ ಖಂಡಿಸಿದ್ದಾರೆ. ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಎಂದಿರುವ ಅವರು, ಇದು ಸಾರ್ವಜನಿಕ ಚಾರಿತ್ರ್ಯ ವಧೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29ywc4316j1cpx6kr99k0xm,imgname-satish-jarkiholi-vijay-mallya-1789188255874.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಮನೆಗಳ ಮೇಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್&zwnj;ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇಡಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ತಮ್ಮ ಮೇಲಿನ ಆರೋಪಗಳು ಹಾಗೂ ಸಾರ್ವಜನಿಕ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಮಲ್ಯ, ನನ್ನನ್ನು ಪ್ರೀತಿಸಿ, ದ್ವೇಷಿಸಿ, ನಿಂದಿಸಿ ಅಥವಾ ನಿರ್ಲಕ್ಷಿಸಿ ಆದರೆ ನಾನು ಎಂದಿಗೂ ಬದಲಾಗುವುದಿಲ್ಲ. ದೇವರು ನನಗೆ ಸಾಟಿಯಿಲ್ಲದ ಧೈರ್ಯ ಮತ್ತು ಶಕ್ತಿಯನ್ನು ನೀಡಿದ್ದಾನೆ. ಕೊನೆಯಲ್ಲಿ ಸತ್ಯವೇ ಜಯಗಳಿಸಲಿದೆ ಎಂಬ ನಂಬಿಕೆ ನನಗಿದೆ. ಭಾರತದಲ್ಲಿರುವ ನಾನು ಪೂಜಿಸುವ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಲಾಗದಿರುವುದು ನನಗೆ ಅತ್ಯಂತ ಬೇಸರ ತಂದಿದೆ. ನಾನು ದೇವಾಲಯ ಭೇಟಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದಾಗ್ಯೂ, ನನ್ನ ಧಾರ್ಮಿಕ ಚೌಕಟ್ಟು ಮತ್ತು ನಿಷ್ಠೆಯನ್ನು ನಾನು ಸದಾ ಕಾಪಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಸಾಲ ತೀರಿದರೂ ಮಲ್ಯ ಮೇಲಿನ ಕೇಸ್ ರದ್ದಾಗಲ್ಲ&lt;/h2&gt;&lt;p&gt;ಬ್ಯಾಂಕ್&zwnj;ಗಳಿಗೆ ವಂಚಿಸಿ ದೇಶ ತೊರೆದಿರುವ ಉದ್ಯಮಿ ವಿಜಯ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್&zwnj;ಬಿಐ) ನೇತೃತ್ವದ ಕನ್ಸೋರ್ಟಿಯಂಗೆ ಹಸ್ತಾಂತರಿಸಲಾಗಿದ್ದರೂ, ಅವರ ವಿರುದ್ಧದ ಹಣ ಅಕ್ರಮ ವರ್ಗಾವಣೆ (ಮನಿ ಲ್ಯಾಂಡರಿಂಗ್) ಪ್ರಕರಣಗಳು ರದ್ದಾಗುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸ್ಪಷ್ಟಪಡಿಸಿದೆ.&lt;/p&gt;&lt;p&gt;&quot;ನನ್ನ 14,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಬ್ಯಾಂಕ್&zwnj;ಗಳ ಸಾಲ ತೀರಿಸಲಾಗಿದೆ. ಆದ್ದರಿಂದ ನನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಅಂತ್ಯಗೊಳಿಸಬೇಕು,&quot; ಎಂದು ಕೋರಿ ವಿಜಯ ಮಲ್ಯ ಅವರು ಬಾಂಬೆ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್&zwnj;ಗೆ ಅಫಿಡವಿಟ್ ಸಲ್ಲಿಸಿರುವ ಇ.ಡಿ., &quot;ಮಲ್ಯ ಅವರು ಕಾನೂನು ಪ್ರಕ್ರಿಯೆಯಿಂದ ಹಾಗೂ ತನಿಖೆಯಿಂದ ಸತತವಾಗಿ ನುಣಚಿಕೊಳ್ಳುತ್ತಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ತಕ್ಷಣವೇ ಅವರ ಮೇಲಿನ ಅಪರಾಧ ಹೊಣೆಗಾರಿಕೆ ಇಲ್ಲವಾಗುವುದಿಲ್ಲ. ಹೀಗಾಗಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಸಾಧ್ಯವಿಲ್ಲ,&quot; ಎಂದು ತಿಳಿಸಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq"/>
        </item>
    </channel>
</rss>
