<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 31 Jul 2026 10:26:43 +0530</lastBuildDate>
        <atom:link href="https://kannada.asianetnews.com/rss/state" rel="self" type="application/rss+xml"/>
        <item>
            <title><![CDATA[HMT Land Row 450 ಎಕರೆ ಎಚ್ಎಂಟಿ ಭೂಮಿ ರಾಜ್ಯ ಸರ್ಕಾರ ವಶಪಡಿಸಿಕೊಳ್ಳದಂತೆ ಹೈಕೋರ್ಟ್‌ನಿಂದ ತಡೆ]]></title>
            <link>https://kannada.asianetnews.com/state/hmt-land-dispute-high-court-restrains-to-karnataka-govt-from-possession-of-430-acres-in-jalahalli-gdp/articleshow-30013zd</link>
            <guid isPermaLink="true">https://kannada.asianetnews.com/state/hmt-land-dispute-high-court-restrains-to-karnataka-govt-from-possession-of-430-acres-in-jalahalli-gdp/articleshow-30013zd</guid>
            <pubDate>Fri, 31 Jul 2026 10:26:38 +0530</pubDate>
            <description><![CDATA[ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಚ್&zwnj;ಎಂಟಿ ಲಿಮಿಟೆಡ್&zwnj;ಗೆ ಸೇರಿದ 430 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್&zwnj; ನಿರ್ದೇಶಿಸಿದೆ. ಭೂಮಿ ಹಸ್ತಾಂತರಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿರುವ ನ್ಯಾಯಪೀಠ, ಮುಂದಿನ ಆದೇಶದವರೆಗೆ ಎಚ್&zwnj;ಎಂಟಿಯನ್ನು ತೆರವುಗೊಳಿಸಬಾರದು ಎಂದು ಮಧ್ಯಂತರ ಆದೇಶ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwvknp3smdgar36nyqdt70m0,imgname-hmt-1783338031225.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರಿನ ಜಾಲಹಳ್ಳಿಯಲ್ಲಿ ಎಚ್&zwnj;ಎಂಟಿ ಲಿಮಿಟೆಡ್&zwnj; ಕಂಪನಿಗೆ ಸೇರಿದ 430 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್&zwnj;&zwnj; ನಿರ್ದೇಶಿಸಿದೆ. ಭೂಮಿಯನ್ನು 30 ದಿನಗಳಲ್ಲಿ ತನಗೆ ಹಸ್ತಾಂತರ ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜೂ.15ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಎಚ್&zwnj;ಎಂಟಿ ಲಿಮಿಟೆಡ್&zwnj; ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್&zwnj; ಗೋವಿಂದರಾಜ್&zwnj; ಅವರ ಪೀಠ ಈ ಮಧ್ಯಂತರ ಆದೇಶವನ್ನು ಮಾಡಿದೆ.&lt;/p&gt;&lt;p&gt;ವಿಚಾರಣೆ ವೇಳೆ ಎಚ್&zwnj;ಎಂಟಿ ಪರ ಹಾಜರಾದ ಹಿರಿಯ ವಕೀಲರು, ವಿವಾದಿತ ಭೂಮಿ ಹೊರತುಪಡಿಸಿ ಉಳಿದ ಭೂಮಿಯನ್ನು ಸಂಸ್ಥೆ ಪರಭಾರೆ ಮಾಡುವುದಿಲ್ಲವೆಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಲಾಗುವುದು ಎಂದು ತಿಳಿಸಿದರು.&lt;/p&gt;&lt;h2&gt;ಯಾವುದೇ ಮರಗಳನ್ನು ಕತ್ತರಿಸಬಾರದು&lt;/h2&gt;&lt;p&gt;ಆ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಎಚ್&zwnj;ಎಂಟಿ ಉಳಿದ ಭೂಮಿಯ ಮಾರಾಟ, ಗುತ್ತಿಗೆ, ಪರವಾನಗಿ, ಅಡಮಾನ ಅಥವಾ ಇತರೆ ಯಾವುದೇ ರೀತಿಯಲ್ಲಿ ಬದಲಾಯಿಸುವಂತಿಲ್ಲ. ಯಾವುದೇ ಮರಗಳನ್ನು ಕತ್ತರಿಸಬಾರದು ಅಥವಾ ವಿವಾದಿತ ಆಸ್ತಿಯ ಮೇಲೆ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಸೃಷ್ಟಿಸಬಾರದು&zwnj; ಇನ್ನೂ ಮುಂದಿನ ವಿಚಾರಣೆಯವರೆಗೆ ಹಾಲಿ ಸ್ವಾಧೀನದಲ್ಲಿರುವ ಎಚ್&zwnj;ಎಂಟಿಯನ್ನು ತೆರವುಗೊಳಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಆದೇಶ ಮಾಡಿದೆ.&lt;/p&gt;&lt;p&gt;ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ಮುಂದೆ ಪ್ರಶ್ನಿಸಿರುವ ಆದೇಶ ಸುಪ್ರೀಂಕೋರ್ಟ್&zwnj;ನಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ಈ ಹಿಂದೆ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್&zwnj;ನಲ್ಲಿ ಅರ್ಜಿ ಸಲ್ಲಿಸಿದ್ದರೂ, ನಂತರ ಅದನ್ನು ಹಿಂಪಡೆಯಲು ಪ್ರಯತ್ನಿಸಿದೆ. ಈ ಮಧ್ಯೆ, ಭೂಮಿ ಡಿನೋಟಿಫೈ ಮಾಡಲು ರಾಜ್ಯಕ್ಕೆ ನಿರ್ದೇಶನಗಳನ್ನು ಕೋರಿ ಸುಪ್ರೀಂಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿತ್ತು. ಸುಮಾರು 178 ಎಕರೆಗಳನ್ನು ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತಿತರರಿಗೆ ಮಾರಾಟ ಮಾಡಲಾಗಿದೆ. ಆದರೆ, ಇದನ್ನು ದಾಖಲೆ ಸಹಿತ ಸಲ್ಲಿಸಿದ್ದರೂ ಸಹ ಉಪ ಸಂರಕ್ಷಣಾಧಿಕಾರಿ ಸಂಪೂರ್ಣ ವಿಸ್ತೀರ್ಣದ ಭೂಮಿ ಲಭ್ಯವಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.&lt;/p&gt;&lt;p&gt;ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್&zwnj; ಜನರಲ್&zwnj; ಕಿರಣ್&zwnj; ರೋಣ್&zwnj;, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್&zwnj;ನಲ್ಲಿ ತನ್ನ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಮೂಲ ಭೂಮಿಯ ಗಣನೀಯ ಭಾಗವನ್ನು ಈಗಾಗಲೇ ವರ್ಗಾಯಿಸಲಾಗಿದ್ದರೂ, ಸುಮಾರು 290 ಎಕರೆಗಳು ಗಮನಾರ್ಹ ಹಸಿರು ಹೊದಿಕೆಯೊಂದಿಗೆ ಖಾಲಿಯಾಗಿ ಉಳಿದಿದೆ. ಎಚ್&zwnj;ಎಂಟಿಯನ್ನು ಮರಗಳನ್ನು ಕಡಿಯದಂತೆ ನಿರ್ಬಂಧಿಸಬೇಕೆಂದು ಮನವಿ ಮಾಡಿದರು.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/hmt-land-dispute-high-court-restrains-to-karnataka-govt-from-possession-of-430-acres-in-jalahalli-gdp/articleshow-30013zd"/>
        </item>
        <item>
            <title><![CDATA[ಕಾವೇರಿ ನೀರು ಬಿಡುಗಡೆಗೆ ನಿರ್ವಹಣಾ ಪ್ರಾಧಿಕಾರದಿಂದಲೂ ಆದೇಶ ಕಾವೇರಿ ಇಕ್ಕಟ್ಟಿನಲ್ಲಿ ಸರ್ಕಾರ - ಮುಂದೇನು?]]></title>
            <link>https://kannada.asianetnews.com/state/cauvery-water-dispute-cwma-has-now-also-upheld-the-cwrc-s-order-what-next-rav/articleshow-phq9h3x</link>
            <guid isPermaLink="true">https://kannada.asianetnews.com/state/cauvery-water-dispute-cwma-has-now-also-upheld-the-cwrc-s-order-what-next-rav/articleshow-phq9h3x</guid>
            <pubDate>Fri, 31 Jul 2026 08:59:37 +0530</pubDate>
            <description><![CDATA[ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್&zwnj; ನೀರು ಬಿಡಬೇಕೆಂಬ ಸಿಡಬ್ಲ್ಯುಆರ್&zwnj;ಸಿ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ. ಮುಂಗಾರು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ, ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyv392f0563gynkzhp05f7za,imgname-----------------------2026-07-31t085507.920-1785468324320.jpg" type="image/jpeg" height="390" width="690"/>
            <content:encoded><![CDATA[&lt;p&gt;--&lt;/p&gt;&lt;p&gt;&lt;strong&gt;ನಿನ್ನೆ ಏನಾಯ್ತು?&lt;/strong&gt;&lt;/p&gt;&lt;ul&gt; &lt;li&gt;15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್&zwnj; ನೀರು ಬಿಡುಗಡೆ ಮಾಡಲು ಜು.28ರಂದು ಸೂಚಿಸಿದ್ದ ಸಿಡಬ್ಲ್ಯುಆರ್&zwnj;ಸಿ&lt;/li&gt; &lt;li&gt;ಇದರ ವಿರುದ್ಧ ಕರ್ನಾಟಕ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ&lt;/li&gt; &lt;li&gt;ಎಲ್&zwnj;ನಿನೋದಿಂದ ಬರಗಾಲವಿದೆ. ಡ್ಯಾಂಗಳಲ್ಲಿ 30 ವರ್ಷಕ್ಕಿಂತ ಕಡಿಮೆ ನೀರಿದೆ ಎಂದು ಕರ್ನಾಟಕದ ವಾದ&lt;/li&gt; &lt;li&gt;ತ.ನಾಡಿಗೆ ಹಿಂಗಾರು ಮಳೆಯ ಅವಕಾಶವಿದೆ. ಈ ಹಿಂದೆ ಅವರಿಗೆ ಸಾಕಷ್ಟು ನೀರು ಬಿಟ್ಟಿದ್ದೇವೆ ಎಂದ ರಾಜ್ಯ&lt;/li&gt; &lt;li&gt;3500 ಕ್ಯುಸೆಕ್&zwnj; ಬಿಡುಗಡೆಗೆ ಆದೇಶಿಸಿದ್ದರೂ ನೀರು ಬಿಳಿಗುಂಡ್ಲು ತಲುಪಲು 7000 ಕ್ಯುಸೆಕ್&zwnj; ಬಿಡಬೇಕು: ಕರ್ನಾಟಕ&lt;/li&gt; &lt;li&gt;ಸಿಡಬ್ಲ್ಯುಆರ್&zwnj;ಸಿ ಆದೇಶಕ್ಕೆ 15 ದಿನ ತಡೆ ನೀಡಲು ಕರ್ನಾಟಕ ಸರ್ಕಾರ ವಾದ. ಹೆಚ್ಚು ನೀರಿಗೆ ಬೇಡಿಕೆ ಇಟ್ಟ ತ.ನಾಡು&lt;/li&gt; &lt;li&gt;ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್&zwnj;ಸಿ) ಆದೇಶವನ್ನು ಎತ್ತಿ ಹಿಡಿದ ನಿರ್ವಹಣಾ ಪ್ರಾಧಿಕಾರ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ನವದೆಹಲಿ/ಬೆಂಗಳೂರು (ಜು.31):&lt;/strong&gt; 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್&zwnj; ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್&zwnj;ಸಿ)ಯ ಆದೇಶದ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿರುವಾಗಲೇ, ಸಿಡಬ್ಲ್ಯುಆರ್&zwnj;ಸಿ ಆದೇಶವನ್ನು ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕೂಡ ಎತ್ತಿ ಹಿಡಿದಿದೆ.&lt;/p&gt;&lt;p&gt;ಮುಂಗಾರು ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳು ಖಾಲಿ ಇದ್ದರೂ 15 ದಿನಗಳಲ್ಲಿ 4 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿಗೆ ಸಂಬಂಧಿಸಿದ ಎರಡು ಸಂಸ್ಥೆಗಳು ಆದೇಶಿಸಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಭಾನುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷಗಳ ಸಭೆಯನ್ನು ಆಯೋಜಿಸಿದೆ.&lt;/p&gt;&lt;p&gt;ಭಾನುವಾರ ನಡೆಯಲಿರುವ ಸರ್ವ ಪಕ್ಷ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲಿಯವರೆಗೆ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಹಿನ್ನಡೆ:&lt;/h2&gt;&lt;p&gt;ತಮಿಳುನಾಡಿಗೆ 15 ದಿನ ನಿತ್ಯ 3500 ಕ್ಯುಸೆಕ್&zwnj; ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್&zwnj;ಸಿ) ಜು.28ರಂದು ಸೂಚಿಸಿತ್ತು. ಇದರ ವಿರುದ್ಧ ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ಗೆ ಮೇಲ್ಮನವಿ ಸಲ್ಲಿಸಿತ್ತು. ಒಳಹರಿವಿನ ಸಮಸ್ಯೆಯಿಂದಾಗಿ ತೀವ್ರ ಜಲಸಂಕಷ್ಟವಿದೆ. ಹೀಗಾಗಿ ಇನ್ನೂ 15 ದಿನಗಳ ಕಾಲ ನೀರು ಬಿಡುಗಡೆ ಆದೇಶಕ್ಕೆ ತಡೆಯೊಡ್ಡಬೇಕು ಎಂದು ಮನವಿ ಮಾಡಿತ್ತು. ಆದರೆ, ಗುರುವಾರ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಸಿಡಬ್ಲ್ಯುಆರ್&zwnj;ಸಿ ಆದೇಶವನ್ನು ಎತ್ತಿ ಹಿಡಿಯಲಾಗಿದೆ.&lt;/p&gt;&lt;p&gt;ಸೂಪರ್&zwnj; ಎಲ್&zwnj; ನಿನೋ ಪರಿಣಾಮದಿಂದಾಗಿ ಕರ್ನಾಟಕದ ಜಲಾಶಯಗಳಲ್ಲಿ ಶೇ.65.65ರಷ್ಟು ಮಾತ್ರವೇ ನೀರು ಇದೆ. ಇದು 30 ವರ್ಷಗಳ ಸರಾಸರಿಗಿಂತ ಕಡಿಮೆಯಾಗಿದೆ. ತಮಿಳುನಾಡಿಗೆ ಹಿಂಗಾರು ಮಳೆಯಾಗುವ ನಿರೀಕ್ಷೆ ಇದೆ. 3500 ಕ್ಯುಸೆಕ್&zwnj; ಹರಿಸುವಂತೆ ಆದೇಶಿಸಿದ್ದರೂ, ಬಿಳಿಗುಂಡ್ಲುವಿಗೆ ನೀರು ತಲುಪಬೇಕೆಂದರೆ 7000 ಕ್ಯುಸೆಕ್&zwnj; ಬಿಡುಗಡೆ ಮಾಡಬೇಕಾಗುತ್ತದೆ. 2027ರ ಜೂನ್&zwnj;ವರೆಗೂ ಕುಡಿಯುವ ನೀರಿನ ಅವಶ್ಯಕತೆಗೇ 40 ಟಿಎಂಸಿ ಬೇಕಾಗಿದೆ ಎಂದು ಸರ್ಕಾರ ವಾದಿಸಿತು. ಆದರೆ, 3500 ಕ್ಯುಸೆಕ್&zwnj; ಬದಲಿಗೆ ಇನ್ನೂ ಹೆಚ್ಚಿನ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ವಾದ ಮಂಡಿಸಿತು.&lt;/p&gt;&lt;p&gt;ಕರ್ನಾಟಕದ ಪರವಾಗಿ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗೌರವ್&zwnj; ಗುಪ್ತಾ ಹಾಜರಿದ್ದರು. ಅವರು ಸಭೆಯ ಬಳಿಕ ದೆಹಲಿಯಲ್ಲಿಯೇ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರಿಗೆ ಪ್ರಾಧಿಕಾರದ ನಿರ್ದೇಶನವನ್ನು ತಿಳಿಸಿದರು.&lt;/p&gt;&lt;h3&gt;ಕಾವೇರಿ ನೀರು ವಿವಾದ ಸರ್ವ ಪಕ್ಷ ಸಭೆ:&lt;/h3&gt;&lt;p&gt;ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2)ರಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cauvery-water-dispute-cwma-has-now-also-upheld-the-cwrc-s-order-what-next-rav/articleshow-phq9h3x"/>
        </item>
        <item>
            <title><![CDATA[ಯೋಗೇಶ್ ಗೌಡ ಹತ್ಯೆ ಕೇಸ್: ಜಾಮೀನು ಕೋರಿ ವಿನಯ್‌ ಕುಲಕರ್ಣಿ ಅರ್ಜಿ ಇಂದು ಹೈಕೋರ್ಟ್‌ ತೀರ್ಪು]]></title>
            <link>https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud</link>
            <guid isPermaLink="true">https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud</guid>
            <pubDate>Fri, 31 Jul 2026 08:50:59 +0530</pubDate>
            <description><![CDATA[ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ, ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್&zwnj;ಗೆ ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಕುರಿತ ತೀರ್ಪನ್ನು ಹೈಕೋರ್ಟ್ ಶುಕ್ರವಾರ ಪ್ರಕಟಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp7v1w3ssae3zg146z32qbb3,imgname-vinay-kulkarni-and-yogesh-gowda--1--1776232231033.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು&lt;/strong&gt;: ಧಾರವಾಡದ ಬಿಜೆಪಿ&zwnj; ಮುಖಂಡ ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಅಮಾನತ್ತಿನಲ್ಲಿಟ್ಟು, ಜಾಮೀನು ನೀಡಬೇಕೆಂಬ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಧ್ಯಂತರ&zwnj;&zwnj; ಮನವಿ ಕುರಿತ ತೀರ್ಪನ್ನು ಹೈಕೋರ್ಟ್ ಶುಕ್ರವಾರ ಪ್ರಕಟಿಸಲಿದೆ.&lt;/p&gt;&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹೈಕೋರ್ಟ್&zwnj;ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಹಾಗೆಯೇ,&zwnj;&zwnj;&zwnj;&zwnj;&zwnj;&zwnj;&zwnj; ಶಿಕ್ಷೆಯನ್ನು ಅಮಾನತಿನಲ್ಲಿಟ್ಟು&zwnj;&zwnj;&zwnj;&zwnj; ಜಾಮೀನು ಮಂಜೂರು ಮಾಡಬೇಕು&zwnj;&zwnj; ಎಂದು ಮಧ್ಯಂತರ&zwnj;&zwnj; ಮನವಿ ಮಾಡಿದ್ದಾರೆ.&lt;/p&gt;&lt;p&gt;ಈ ಮಧ್ಯಂತರ ಮನವಿ&zwnj; ಕುರಿತು ಕುಲಕರ್ಣಿ ಹಾಗೂ ಸಿಬಿಐ ಪರ ವಕೀಲರ ವಾದ ಆಲಿಸಿ&zwnj; ಜು.9ರಂದು&zwnj; ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ಜಿ.ಬಸವರಾಜ ಅವರ ಪೀಠ ಶುಕ್ರವಾರ ಪ್ರಕಟಿಸಲಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ:&lt;/h2&gt;&lt;p&gt;2016ರಲ್ಲಿ ನಡೆದಿದ್ದ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ವಿನಯ್ ಕುಲಕರ್ಣಿ ಸೇರಿ ಒಟ್ಟು 17 ಮಂದಿ ಆರೋಪಿಗಳನ್ನು 2026ರ ಏ.15ರಂದು ಅಪರಾಧಿಗಳು ಎಂದು ನಿರ್ಧರಿಸಿ, ಏ.17ರಂದು ವಿನಯ್&zwnj; ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.&amp;nbsp;&lt;/p&gt;&lt;h2&gt;ಮುಂದೇನು?&lt;/h2&gt;&lt;p&gt;ಶಿಕ್ಷೆ ರದ್ದಾದರೆ ಶಾಸಕ ಸ್ಥಾನ ಉಳಿಯುವ ಜೊತೆಗೆ. ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಶಿಕ್ಷೆ ರದ್ದಾಗದಿದ್ದರೆ ಮುಂದಿನ ಹಂತದಲ್ಲಿ ವಿನಯ್ ಕುಲಕರ್ಣಿಯವರು ಮೇಲಿನ ಹಂತದ ನ್ಯಾಯಾಲಯಕ್ಕೆ ಅಂದರೆ, ಸುಪ್ರೀಂ ಕೋರ್ಟ್&zwnj; ಮೊರೆ ಹೋಗುವ ಅವಕಾಶವಿದೆ. ಅಲ್ಲಿಯೂ ಇದೇ ತೀರ್ಪು ಬಂದರೆ ಜೀವಾವಧಿ ಶಿಕ್ಷೆ &amp;nbsp;ಅನುಭವಿಸಲೇಬೇಕು. ಇದರ ಜೊತೆಗೆ ಶಾಸಕ ಸ್ಥಾನ ರದ್ದಾಗಿರುವುದರಿಂದ ವಿನಯ್ ಶಾಸಕರಾಗಿ ಆಯ್ಕೆಯಾದ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.&lt;/p&gt;&lt;p&gt;ಇತ್ತ ಉಪ ಚುನಾವಣೆ ನಡೆದರೆ ಕಾಂಗ್ರೆಸ್&zwnj;ನಿಂದ ವಿನಯ್ ಕುಲಕರ್ಣಿ ಪತ್ನಿಗೆ ಟಿಕೆಟ್&zwnj; ನೀಡುವ ಸಾಧ್ಯತೆ &amp;nbsp;ಜಾಸ್ತಿ ಇದೆ. ಪತ್ನಿ ನಿರಾಕರಿಸಿದರೆ ಪುತ್ರಿಯರು ಸ್ಪರ್ಧೆ ಮಾಡುವ ಸಾಧ್ಯತೆಯೂ ಇದೆ. ಇತ್ತೀಚೆಗೆ ಉಪ ಚುನಾವಣೆ ಚರ್ಚೆ ವೇಳೆ ಪತ್ನಿಯ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇಂದಿನ ತೀರ್ಪು &amp;nbsp;ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/yogesh-gowda-murder-case-karnataka-high-court-to-pronounce-verdict-today-on-vinay-kulkarni-bail-sentence-plea-gdp/articleshow-nwpepud"/>
        </item>
        <item>
            <title><![CDATA[Kumaraswamy's HMT Watch: ಕುಮಾರಸ್ವಾಮಿ ಎಚ್‌ಎಂಟಿ ವಾಚ್‌ನಲ್ಲಿ ತಾಯಿ ಪೋಟೋ!]]></title>
            <link>https://kannada.asianetnews.com/gallery/state/hd-kumaraswamy-wear-watch-featuring-late-mother-chennamma-s-portait-rav-g2gtpre</link>
            <guid isPermaLink="true">https://kannada.asianetnews.com/gallery/state/hd-kumaraswamy-wear-watch-featuring-late-mother-chennamma-s-portait-rav-g2gtpre</guid>
            <pubDate>Fri, 31 Jul 2026 06:54:48 +0530</pubDate>
            <description><![CDATA[&lt;p&gt;Kumaraswamy's HMT Watch: ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿಯವರು ಎಚ್&zwnj;ಎಂಟಿ ವಾಚ್&zwnj;ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kytvejjre4339ajv8t7eyqep,imgname-----------------------2026-07-31t063805.551-1785460116056.jpg" type="image/jpeg" height="390" width="690"/>
            <content:encoded><![CDATA[&lt;p&gt;Kumaraswamy's HMT Watch: ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿಯವರು ಎಚ್&zwnj;ಎಂಟಿ ವಾಚ್&zwnj;ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಿಲಿನ ಸಮೀಪ ಇರುವ ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಗುರುವಾರ ಆಯೋಜಿಸಿದ್ದ ೧೧ನೇ ದಿನದ ಉತ್ತರ ಕ್ರಿಯಾದಿ ಕಾರ್ಯಕ್ಕೆ ಗಣ್ಯರು ಸೇರಿದಂತೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿ, ಚನ್ನಮ್ಮನವರ ಸಮಾಧಿಗೆ ನಮನ ಸಲ್ಲಿಸಿದರು.&lt;/p&gt;&lt;img&gt;&lt;p&gt;ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಅತ್ಮೀಯರ ಸಹಕಾರದಲ್ಲಿ ಕಳೆದ ಎಂಟು ದಿನಗಳಿಂದ ಉತ್ತರ ಕ್ರಿಯಾದಿ ಕಾರ್ಯದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಚನ್ನಮ್ಮನವರ ೧೧ನೇ ದಿನದ ಕಾರ್ಯದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದ್ದುದರಿಂದ ಏಕಕಾಲಕ್ಕೆ ಒಂದೂವರೆ ಸಾವಿರ ಜನ ಕುಳಿತು ಭೋಜನ ಸ್ವೀಕರಿಸುವ ವ್ಯವಸ್ಥೆಯ ೧೬ ಜರ್ಮನ್ ಟೆಂಟ್&zwnj;ಗಳು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಜತೆಗೆ ಸುಗಮ ಸಂಚಾರಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿತ್ತು.&lt;/p&gt;&lt;img&gt;&lt;p&gt;ಅಂತ್ಯಕ್ರಿಯೆ ನಡೆದ ದಿನದಿಂದ ಪ್ರತಿನಿತ್ಯ ಬೆಟ್ಟದ ತಪ್ಪಲಿಗೆ ಸಮಾಧಿ ಸ್ಥಳದಲ್ಲಿ ನಡೆಯಲಿರುವ ವಿಷ್ಣು ಸಹಸ್ರನಾಮ ಹಾಗೂ ಪಾರಾಯಣ ಪೂಜಾ ವಿಧಿವಿಧಾನವನ್ನು ನೆರವೇರಿಸುವ ಸಲುವಾಗಿ ಅರ್ಚಕರನ್ನು ನೇಮಿಸಿ, ಪೂಜಾ ಕೈಂಕರ್ಯದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂದಿನಿಂದ ಯಾವುದೇ ಅಡೆಚಣೆಗೆ ಆಸ್ಪದವಾಗದಂತೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು.&lt;/p&gt;&lt;img&gt;&lt;p&gt;ತಾಯಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿಯವರು ಎಚ್&zwnj;ಎಂಟಿ ವಾಚ್&zwnj;ನಲ್ಲಿ ಚನ್ನಮ್ಮ ಅವರ ಫೋಟೋ ಹಾಕಿಸಿಕೊಂಡಿದ್ದಾರೆ. ಕುಮಾರಸ್ವಾಮಿಯವರು ಧರಿಸಿರುವ ವಾಚ್ ನೋಡುಗರ ಗಮನ ಸೆಳೆಯಿತು.&lt;/p&gt;&lt;img&gt;&lt;p&gt;ಈ ಬಗ್ಗೆ ಮಾಧ್ಯಮಗಳಿಗೆ ವಾಚ್&zwnj; ತೋರಿಸಿ ಪ್ರತಿಕ್ರಿಯಿಸಿದ ಅವರು, ನಾನು ವಾಚ್&zwnj;ನಲ್ಲಿ ನಮ್ಮ ತಾಯಿಯ ಫೋಟೊ ಹಾಕಿಸಿಕೊಂಡಿದ್ದು, ಸ್ಯಾಂಪಲ್&zwnj; ಮಾಡಿಸಿದ್ದೇನೆ. ನಮ್ಮ ಕಾರ್ಯಕರ್ತರು ಎಚ್&zwnj;ಎಂಟಿ ವಾಚ್&zwnj; ಬಗ್ಗೆ ಸರಿಯಾಗಿ ಬ್ಯುಸಿನೆಸ್&zwnj; ಮಾಡಿದರೆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ ಎಂದರು.&lt;/p&gt;]]></content:encoded>
            <category>state</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/hd-kumaraswamy-wear-watch-featuring-late-mother-chennamma-s-portait-rav-g2gtpre"/>
        </item>
        <item>
            <title><![CDATA[Just Clean Bengaluru: ಬೆಂಗಳೂರು ಸ್ವಚ್ಚ, ಸುಂದರವಾಗಿಸಲು ನಾಳೆಯಿಂದ ಮತ್ತೊಂದು ಅಭಿಯಾನ! ಕೃಷ್ಣ ಬೈರೇಗೌಡ ಮಹತ್ವದ ಹೇಳಿಕೆ]]></title>
            <link>https://kannada.asianetnews.com/state/freedom-from-waste-campaign-to-begin-on-august-1-says-minister-krishna-byre-gowda-rav/articleshow-d7c4klx</link>
            <guid isPermaLink="true">https://kannada.asianetnews.com/state/freedom-from-waste-campaign-to-begin-on-august-1-says-minister-krishna-byre-gowda-rav/articleshow-d7c4klx</guid>
            <pubDate>Fri, 31 Jul 2026 05:53:35 +0530</pubDate>
            <description><![CDATA[&lt;p&gt;Just Clean Bengaluru&quot; ರಾಜಧಾನಿ ಬೆಂಗಳೂರನ್ನು ಸುಂದರಗೊಳಿಸಲು &lsquo;ತ್ಯಾಜ್ಯದಿಂದ ಸ್ವಾತಂತ್ರ್ಯ&rsquo; ಅಭಿಯಾನ ಆ.1ರಿಂದ ಆರಂಭಿಸಲಿದ್ದು, ಆಗಸ್ಟ್ ಅಂತ್ಯದವರೆಗೂ ನಡೆಯಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01js1evxj2r1nptvdbd5hma9vt,imgname-Krishne-Byre-Gowda-1744879613506.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.31): &lt;/strong&gt;ರಾಜಧಾನಿ ಬೆಂಗಳೂರನ್ನು ಸುಂದರಗೊಳಿಸಲು &lsquo;ತ್ಯಾಜ್ಯದಿಂದ ಸ್ವಾತಂತ್ರ್ಯ&rsquo; ಅಭಿಯಾನ ಆ.1ರಿಂದ ಆರಂಭಿಸಲಿದ್ದು, ಆಗಸ್ಟ್ ಅಂತ್ಯದವರೆಗೂ ನಡೆಯಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.&lt;/p&gt;&lt;p&gt;ಗುರುವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಸ್ಟ್ ಕ್ಲೀನ್ ಬೆಂಗಳೂರು (ಜೆಸಿಬಿ) ಅಭಿಯಾನಕ್ಕೆ ಮುಖ್ಯಮಂತ್ರಿಗಳೇ ಚಾಲನೆ ನೀಡಲಿದ್ದಾರೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಘನತ್ಯಾಜ್ಯ, ಕಟ್ಟಡ ಸಾಮಗ್ರಿಗಳನ್ನು ಸುರಿದಿದ್ದಾರೆ. ಇವು ಅನಾರೋಗ್ಯದ ಮೂಲವಾಗಿವೆ. ಈ ತ್ಯಾಜ್ಯ ನಗರದಾದ್ಯಂತ ಸುಮಾರು 1,616 ಸ್ಥಳಗಳಲ್ಲಿದ್ದು, ಸುಮಾರು 22 ಸಾವಿರ ಟನ್ ತ್ಯಾಜ್ಯ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಭಿಯಾನಕ್ಕಾಗಿ 50 ಗಾಡಿಗಳನ್ನು ನಿಯೋಜಿಸಲಾಗಿದೆ ಎಂದರು.&lt;/p&gt;&lt;p&gt;ಖಾಸಗಿಯವರ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ತೆರವು ಮಾಡಲು ಆ.15ರವರೆಗೆ ಮಾಲಿಕರಿಗೆ ಗಡುವು ನೀಡಲಾಗಿದೆ. ತೆರವು ಮಾಡದಿದ್ದರೆ, ಆ.15ರ ನಂತರ ಸರ್ಕಾರವೇ ತೆರವು ಮಾಡುತ್ತದೆ. ತೆರವು ಮಾಡುವ ವೆಚ್ಚವನ್ನು ಮಾಲಿಕರೆ ತೆರಿಗೆ ಹಣದ ಜೊತೆ ಪಾವತಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ಆ.15ರವರೆಗೆ ಮಾಲಿಕರಿಗೆ ಅನುಕೂಲ ಮಾಡಲು ಆಯಾ ಪಾಲಿಕೆಗಳಿಂದ ಖಾಸಗಿಯಾಗಿ ತ್ಯಾಜ್ಯ ತೆರವುಗೊಳಿಸುವವರ ಪಟ್ಟಿಯನ್ನು ನೀಡಲಾಗುತ್ತದೆ. ಅಂತಹ ತಂಡಗಳನ್ನು ಸಂಪರ್ಕಿಸಿ ಅವರಿಂದ ನೀವೇ ತೆರವು ಮಾಡಿಸಿಕೊಂಡರೆ ಉತ್ತಮ ಎಂದರು.&lt;/p&gt;&lt;h2&gt;ಡಂಪಿಂಗ್ ಲಾರಿಗಳ ನೋಂದಣಿ ಕಡ್ಡಾಯ: ಬೈರೇಗೌಡ&lt;/h2&gt;&lt;p&gt;ಖಾಸಗಿಯಾಗಿ ತ್ಯಾಜ್ಯ ಸುರಿಯುವ ಲಾರಿಗಳ ನೋಂದಣಿ ಕಡ್ಡಾಯಗೊಳಿಸಲಾಗುವುದು. ಅಲ್ಲದೆ, ಆ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗುವುದು ಎಂದರು. ತ್ಯಾಜ್ಯ ತೆರವು ಮಾಡಲು ಮಾರ್ಗಸೂಚಿ ರೂಪಿಸಲಾಗುತ್ತದೆ. ಇದು ಕಸವಲ್ಲ, ಮಣ್ಣು, ಕಲ್ಲು ಮಾತ್ರ, ಕಟ್ಟಡ ನಿರ್ಮಾಣದ ಅಥವಾ ಕೆಡವುವ ಸಂದರ್ಭದಲ್ಲಿ ಬಿದ್ದಿರುವ ತ್ಯಾಜ್ಯ, ಇದು ಅತ್ಯಂತ ಬೃಹತ್ ಪ್ರಮಾಣದ ತೆರವು ಕಾರ್ಯಾಚರಣೆ, 5 ಪಾಲಿಕೆಗೆ ಐದು ಕಡೆ ಜಾಗ ಗುರುತು ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.&lt;/p&gt;&lt;h3&gt;1 ಟನ್&zwnj; ಕಟ್ಟಡ ತ್ಯಾಜ್ಯ ವೀಲೆಗೆ ₹750 ಶುಲ್ಕ&lt;/h3&gt;&lt;p&gt;ಕಟ್ಟಡದ ತ್ಯಾಜ್ಯ ತೆರವಿಗೆ ಕಾರ್ಯಪಡೆ ರಚನೆ ಮಾಡಲಾಗುವುದು. ಇದರಿಂದ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ. ಕಸ ಎಂದರೆ ಗಾರ್ಬೇಜ್ ಅಲ್ಲ, ಮಣ್ಣು, ಕಲ್ಲು, ಇವುಗಳ ವಿಲೇಗಾಗಿ ಕೆಲವು ಕಡೆ ಕ್ವಾರಿ ಗುರುತಿಸಲಾಗಿದೆ. ಇಲ್ಲಿಗೆ ತ್ಯಾಜ್ಯ ಸಾಮಗ್ರಿ ತುಂಬಲಾಗುತ್ತದೆ ಎಂದು ಸಚಿವರು ತಿಳಿಸಿದರು. ಇನ್ನು ಮುಂದೆ ನಗರದಲ್ಲಿ ಕಟ್ಟಡ ತ್ಯಾಜ್ಯ ವಿಲೇ ಮಾಡಲು ನಾಲ್ಕು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಸಿ ಅಂಡ್ ಡಿ ವೇಸ್ಟ್ (ಕನ್ ಸ್ಟ್ರಕ್ಷನ್ ಮತ್ತು ಡೆಮಾಲಿಷನ್ ತ್ಯಾಜ್ಯ) ಮೂರು ಕಂಪನಿಗಳು ಈಗ ಸಿದ್ಧ ಇವೆ. ಅವರ ಮೂಲಕವೇ ವಿಲೇ ಮಾಡಬೇಕು. 1 ಟನ್ ವಿಲೇ ಮಾಡಲು ₹760 ಶುಲ್ಕ ವಿಧಿಸಲಾಗುವುದು.ಮನೆಯ ಸಿಎನ್ ಡಿ ವೇಸ್ಟ್ ಇದ್ದರೆ ಈ ಮೂಲಕವೇ ತ್ಯಾಜ್ಯ ತೆರವು ಮಾಡಬೇಕು. ಶೀಘ್ರದಲ್ಲೇ ಅವರ ಸಂಪರ್ಕದ ಸಂಖ್ಯೆಗಳನ್ನು ನೀಡಲಾಗುವುದು.ಈ ರೀತಿಯಾದರೆ ಬೆಂಗಳೂರು ಸುಧಾರಣೆ ಯಾಗುತ್ತೆ ಎಂದರು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/freedom-from-waste-campaign-to-begin-on-august-1-says-minister-krishna-byre-gowda-rav/articleshow-d7c4klx"/>
        </item>
        <item>
            <title><![CDATA[Minister List: ಮಂತ್ರಿಗಿರಿ 2ನೇ ಹಂತದ ಸಂಭಾವ್ಯ ಪಟ್ಟಿ ಔಟ್! ದಕ್ಷಿಣದಲ್ಲಿ ಬೆಂಗಳೂರು, ಉತ್ತರದಲ್ಲಿ ಬೆಳಗಾವಿಗೆ ಜಾಕ್‌ಪಾಟ್! ಯಾರಿಗುಂಟು, ಯಾರಿಗಿಲ್ಲ!]]></title>
            <link>https://kannada.asianetnews.com/state/karnataka-cabinet-expansion-2nd-phase-list-bengaluru-belagavi-bmk/articleshow-soq3tx2</link>
            <guid isPermaLink="true">https://kannada.asianetnews.com/state/karnataka-cabinet-expansion-2nd-phase-list-bengaluru-belagavi-bmk/articleshow-soq3tx2</guid>
            <pubDate>Thu, 30 Jul 2026 18:31:49 +0530</pubDate>
            <description><![CDATA[&lt;p&gt;ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯ ಸಂಭಾವ್ಯ ಪಟ್ಟಿಯೊಂದು ಲಭ್ಯವಾಗಿದ್ದು, ಇದರಲ್ಲಿ ಪ್ರಾದೇಶಿಕ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ವಿಸ್ತರಣೆಯಲ್ಲಿ ದಕ್ಷಿಣದ ಬೆಂಗಳೂರು ಹಾಗೂ ಉತ್ತರದ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysht91fsfabv6qxwrqdkvym,imgname-dk-and-siddu-1785416459311.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಸಚಿವ ಸಂಪುಟ ವಿಸ್ತರಣೆಯ 2ನೇ ಹಂತದ ಸಂಭಾವ್ಯ ಪಟ್ಟಿಯ ವಿವರಗಳು ಕೆಲ ಪ್ರಮುಖ ಮೂಲಗಳಿಂದ 'ಸುವರ್ಣ ನ್ಯೂಸ್&zwnj;'ಗೆ ಲಭ್ಯವಾಗಿವೆ. ಹಲವು ದಿನಗಳಿಂದ ಕಾಯುತ್ತಿದ್ದ ಶಾಸಕರು ಹಾಗೂ ಬೆಂಬಲಿಗರಲ್ಲಿ ಈ ಪಟ್ಟಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡುವೆ ನಡೆದ ಹಲವು ಸುತ್ತಿನ ಚರ್ಚೆಯ ನಂತರ ಈ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಈ ಬಾರಿಯ ವಿಸ್ತರಣೆಯಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ವಿಶೇಷ ಮುತುವರ್ಜಿ ವಹಿಸಲಾಗಿದ್ದು, ಮುಖ್ಯವಾಗಿ ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾದ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ರಾಜಕೀಯ ಶಕ್ತಿಕೇಂದ್ರವಾದ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು 'ಸಿಂಹಪಾಲು' ಲಭ್ಯವಾಗಲಿದೆ ಎನ್ನುವ ಸುದ್ದಿಗಳು ಬಲವಾಗಿ ಕೇಳಿಬರುತ್ತಿವೆ.&lt;/p&gt;&lt;h2&gt;&lt;strong&gt;ಸಂಭಾವ್ಯ ಸಚಿವರ ರೇಸ್&zwnj;ನಲ್ಲಿರುವ ಪ್ರಮುಖ ನಾಯಕರು!&lt;/strong&gt;&lt;/h2&gt;&lt;p&gt;ಮೂಲಗಳ ಪ್ರಕಾರ ಸಂಪುಟ ವಿಸ್ತರಣೆಯ ರೇಸ್&zwnj;ನಲ್ಲಿರುವ ಪ್ರಮುಖ ನಾಯಕರ ಪಟ್ಟಿ ಹೀಗಿದೆ. ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ನೋಡುವುದಾದರೆ, ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್, ಬಸವರಾಜ ರಾಯರೆಡ್ಡಿ, ಶಿವರಾಜ್&zwnj; ತಂಗಡಗಿ, ಹೆಚ್.ಕೆ. ಪಾಟೀಲ್&zwnj;, ಅಜಯ್&zwnj; ಸಿಂಗ್ ಹಾಗೂ ಶ್ರೀನಿವಾಸ ಮಾನೆ ಇದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗ ನೋಡುವುದಾದರೆ, ಜಮೀರ್&zwnj; ಅಹ್ಮದ್, ದಿನೇಶ್&zwnj; ಗುಂಡೂರಾವ್, ಎಂ. ಕೃಷ್ಣಪ್ಪ, ಶರತ್&zwnj; ಬಚ್ಚೇಗೌಡ ಇದ್ದರೆ, ದಕ್ಷಿಣ ಹಾಗೂ ಹಳೆಯ ಮೈಸೂರು ಭಾಗದಲ್ಲಿ ಪುಟ್ಟರಂಗಶೆಟ್ಟಿ, ತನ್ವೀರ್&zwnj; ಶೇಟ್, ಚೆಲುವರಾಯಸ್ವಾಮಿ, ಟಿ.ಬಿ. ಜಯಚಂದ್ರ ಇದ್ದಾರೆ. ಇದಲ್ಲದೇ ಸಲೀಂ ಅಹ್ಮದ್, ರಘುಮೂರ್ತಿ, ಮಧು ಬಂಗಾರಪ್ಪ, ಬಿ. ನಾಗೇಂದ್ರ ಹಾಗೂ ಸುವರ್ಣಾ ತುಕಾರಂ ಅವರು ಸಚಿವ ಸ್ಥಾನದ ರೇಸ್&zwnj;ನಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಬೆಂಗಳೂರು &amp;amp; ಬೆಳಗಾವಿಗೆ ಜಾಕ್&zwnj;ಪಾಟ್ ಏಕೆ?&lt;/strong&gt;&lt;/h3&gt;&lt;p&gt;ರಾಜಕೀಯ ಲೆಕ್ಕಾಚಾರದ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಮತ್ತು ಮುಂಬರುವ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.&lt;/p&gt;&lt;p&gt;ಇನ್ನೊಂದೆಡೆ, ಉತ್ತರ ಕರ್ನಾಟಕದ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಮತ್ತು ಆ ಭಾಗದ ಲಿಂಗಾಯತ ಹಾಗೂ ಇತರ ಸಮುದಾಯಗಳ ಮತಬ್ಯಾಂಕ್ ಕಾಯ್ದುಕೊಳ್ಳಲು ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಲಾಗುತ್ತಿದೆ. ಲಕ್ಷ್ಮಣ ಸವದಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಂತಹ ಪ್ರಭಾವಿ ನಾಯಕರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.&lt;/p&gt;&lt;h3&gt;&lt;strong&gt;ಯಾರಿಗೆ ಒಲಿಯಲಿದೆ ಅದೃಷ್ಟ?&lt;/strong&gt;&lt;/h3&gt;&lt;p&gt;ಸಂಪುಟ ವಿಸ್ತರಣೆಯ ಈ ಪ್ರಕ್ರಿಯೆಯಲ್ಲಿ ಹಿರಿಯ ಅನುಭವ ಮತ್ತು ಯುವ ಉತ್ಸಾಹ ಎರಡನ್ನೂ ಸರಿದೂಗಿಸುವ ಸವಾಲು ಹೈಕಮಾಂಡ್ ಮುಂದಿದೆ. ಟಿ.ಬಿ. ಜಯಚಂದ್ರ, ಹೆಚ್.ಕೆ. ಪಾಟೀಲ್ ಹಾಗೂ ಬಸವರಾಜ ರಾಯರೆಡ್ಡಿಯವರಂತಹ ಹಿರಿಯ ನಾಯಕರು ತಮ್ಮ ಅನುಭವದ ಆಧಾರದ ಮೇಲೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಅದೇ ಸಮಯದಲ್ಲಿ ಶರತ್ ಬಚ್ಚೇಗೌಡ ಅವರಂತಹ ಯುವ ನಾಯಕರಿಗೂ ಅವಕಾಶ ಒಲಿಯುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಇರಲಿದೆ ಜಾತಿ ಸಮೀಕರಣದ ಆಟ!&lt;/strong&gt;&lt;/h3&gt;&lt;p&gt;ಆದರೆ, ಕೇವಲ ಲೆಕ್ಕಾಚಾರಗಳು ಮಾತ್ರವಲ್ಲದೆ ಜಾತಿ ಸಮೀಕರಣ ಮತ್ತು ಹೈಕಮಾಂಡ್&zwnj;ನ ಅಂತಿಮ ನಿರ್ಧಾರಗಳ ಮೇಲೆಯೇ ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಸಚಿವ ಸ್ಥಾನದ ರೇಸ್&zwnj;ನಲ್ಲಿ ಕೊನೆಗಳಿಗೆಯಲ್ಲಿ ಯಾರಿಗೆ ಮಂತ್ರಿಗಿರಿ ಒಲಿಯಲಿದೆ ಮತ್ತು ಯಾರಿಗೆ ಶಾಕ್ (ಕೋಕ್) ಕಾದಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಹೊರಬೀಳಬೇಕಿದೆ. ದೆಹಲಿ ಅಂಗಳದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಈ ಸಂಭಾವ್ಯ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದ್ದು, ರಾಜ್ಯ ರಾಜಕಾರಣದ ಈ ಬಿಗ್ ಗೇಮ್&zwnj;ನಲ್ಲಿ ಯಾರು ಗೆದ್ದು ಬರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;]]></content:encoded>
            <category>state</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/karnataka-cabinet-expansion-2nd-phase-list-bengaluru-belagavi-bmk/articleshow-soq3tx2"/>
        </item>
        <item>
            <title><![CDATA[ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್! ನಾಳೆಯಿಂದ ಆರಂಭವಾಗುವ 'ಹೊಸ ಲಗೇಜ್ ರೂಲ್ಸ್' ಮಾಹಿತಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/state/railway-online-luggage-booking-service-parcel-indian-rail-extra-luggage-rules-kannada-khs/articleshow-wp1leg7</link>
            <guid isPermaLink="true">https://kannada.asianetnews.com/state/railway-online-luggage-booking-service-parcel-indian-rail-extra-luggage-rules-kannada-khs/articleshow-wp1leg7</guid>
            <pubDate>Thu, 30 Jul 2026 18:19:35 +0530</pubDate>
            <description><![CDATA[ಭಾರತೀಯ ರೈಲ್ವೆಯು ಪ್ರಯಾಣಿಕರಿಗಾಗಿ ಹೊಸ ಆನ್&zwnj;ಲೈನ್ ಲಗೇಜ್ ಬುಕಿಂಗ್ ಸೌಲಭ್ಯವನ್ನು ಪರಿಚಯಿಸಿದೆ. ಇನ್ನು ಮುಂದೆ, ಪ್ರಯಾಣಿಕರು ರೈಲ್ವೆ ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಬದಲು, ತಮ್ಮ ಹೆಚ್ಚುವರಿ ಲಗೇಜ್&zwnj;ಗಳನ್ನು www.parcel.indianrail.gov.in ವೆಬ್&zwnj;ಸೈಟ್ ಮೂಲಕ ಮುಂಚಿತವಾಗಿ ಬುಕ್ ಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kysh1cy897bhv4813smfgt8n,imgname-indian-railway-new-luggage-rules-1785415644104.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ರೈಲಿನಲ್ಲಿ ಪದೇ ಪದೇ ಪ್ರಯಾಣ ಮಾಡ್ತೀರಾ? ಹಾಗಿದ್ರೆ ಈ ಸುದ್ದಿ ನಿಮಗಾಗಿಯೇ. ಇನ್ಮುಂದೆ ರೈಲ್ವೆ ಸ್ಟೇಷನ್&zwnj;ಗಳಲ್ಲಿ ಕ್ಯೂ ನಿಲ್ಲದೇ, ನಿಮ್ಮ ಹೆಚ್ಚುವರಿ ಲಗೇಜ್&zwnj;ಗಳನ್ನು ಆನ್&zwnj;ಲೈನ್&zwnj;ನಲ್ಲೇ ಮುಂಚಿತವಾಗಿ ಬುಕ್ ಮಾಡಬಹುದು. ಭಾರತೀಯ ರೈಲ್ವೆ ಈ ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ.&lt;/p&gt;&lt;p&gt;ನಾಳೆಯಿಂದಲೇ ಈ ಸೇವೆ ಶುರುವಾಗಲಿದ್ದು, ಪ್ರಯಾಣಿಕರು www.parcel.indianrail.gov.in ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಹೆಚ್ಚುವರಿ ಲಗೇಜ್ ಬುಕ್ ಮಾಡಬಹುದು. ನಿಮ್ಮ ಪ್ರಯಾಣದ ವಿವರಗಳನ್ನು (ಹೊರಡುವ ಸ್ಟೇಷನ್, ತಲುಪುವ ಸ್ಥಳ, ಟ್ರೈನ್ ನಂಬರ್ ಇತ್ಯಾದಿ) ಮತ್ತು ಲಗೇಜ್&zwnj;ನ ವಿವರಗಳನ್ನು ನಮೂದಿಸಿದರೆ, ಪೋರ್ಟಲ್&zwnj;ನಲ್ಲೇ ಸರಕು ಸಾಗಣೆ ಶುಲ್ಕ ಎಷ್ಟು ಅಂತ ಗೊತ್ತಾಗುತ್ತೆ.&lt;/p&gt;&lt;h2&gt;&lt;strong&gt;ಬುಕ್ ಮಾಡೋದು ಹೇಗೆ?&lt;/strong&gt;&lt;/h2&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರಿಂಟ್&zwnj;ಔಟ್ ತೆಗೆದುಕೊಳ್ಳಬೇಕು. ನಂತರ, ನೀವು ಪ್ರಯಾಣ ಆರಂಭಿಸುವ ಸ್ಟೇಷನ್&zwnj;ನ ಪಾರ್ಸೆಲ್ ಕಚೇರಿಗೆ ಲಗೇಜ್ ತೆಗೆದುಕೊಂಡು ಹೋಗಿ ತೂಕವನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲಿ ಅಂತಿಮ ಶುಲ್ಕವನ್ನು ಪಾವತಿಸಿದ ನಂತರ ನಿಮಗೆ ರಶೀದಿ ಸಿಗುತ್ತದೆ. ನೀವು ತಲುಪುವ ಸ್ಥಳದಲ್ಲಿ ಲಗೇಜ್ ಪಡೆಯಲು ಈ ರಶೀದಿ ಬೇಕೇಬೇಕು. ಅಷ್ಟೇ ಅಲ್ಲ, 'ಟ್ರ್ಯಾಕ್ &amp;amp; ಟ್ರೇಸ್' (Track &amp;amp; Trace) ಸೇವೆಯ ಮೂಲಕ ನಿಮ್ಮ ಲಗೇಜ್ ಎಲ್ಲಿದೆ ಅಂತ ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಲಗೇಜ್ ನಿಮ್ಮ ಊರು ತಲುಪಿದಾಗ ನಿಮ್ಮ ಮೊಬೈಲ್&zwnj;ಗೆ SMS ಕೂಡಾ ಬರುತ್ತೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt; ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ: CWRC ಆದೇಶ ಎತ್ತಿಹಿಡಿದ CWMA; ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಸೂಚನೆ!&lt;/p&gt;&lt;h2&gt;&lt;strong&gt;ಯಾವ ಕ್ಲಾಸ್&zwnj;ನಲ್ಲಿ ಎಷ್ಟು ಲಗೇಜ್ ಫ್ರೀ?&lt;/strong&gt;&lt;/h2&gt;&lt;p&gt;ಪ್ರಯಾಣಿಕರು ಯಾವ ಕ್ಲಾಸ್&zwnj;ನಲ್ಲಿ ಎಷ್ಟು ಕೆ.ಜಿ. ಲಗೇಜ್ ಅನ್ನು ಉಚಿತವಾಗಿ ಮತ್ತು ಎಷ್ಟು ಕೆ.ಜಿ.ಯನ್ನು ಹೆಚ್ಚುವರಿ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು ಎಂಬುದನ್ನು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;&lt;strong&gt;ಸೆಕೆಂಡ್ ಕ್ಲಾಸ್ (ಜನರಲ್): &lt;/strong&gt;35 ಕೆ.ಜಿ. ವರೆಗೆ ಉಚಿತ. ಹೆಚ್ಚುವರಿಯಾಗಿ 70 ಕೆ.ಜಿ. ವರೆಗೆ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು.&amp;nbsp;&lt;/p&gt;&lt;p&gt;&lt;strong&gt;ಸ್ಲೀಪರ್ ಕ್ಲಾಸ್: &lt;/strong&gt;40 ಕೆ.ಜಿ. ವರೆಗೆ ಉಚಿತ. ಹೆಚ್ಚುವರಿಯಾಗಿ 80 ಕೆ.ಜಿ. ವರೆಗೆ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು.&amp;nbsp;&lt;/p&gt;&lt;p&gt;&lt;strong&gt;ಎಸಿ 3-ಟೈಯರ್ / ಎಸಿ ಚೇರ್ ಕಾರ್:&lt;/strong&gt; 40 ಕೆ.ಜಿ. ವರೆಗೆ ಉಚಿತ. ಹೆಚ್ಚುವರಿಯಾಗಿ 40 ಕೆ.ಜಿ. ವರೆಗೆ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು.&amp;nbsp;&lt;/p&gt;&lt;p&gt;&lt;strong&gt;ಫಸ್ಟ್ ಕ್ಲಾಸ್ ಎಸಿ: &lt;/strong&gt;70 ಕೆ.ಜಿ. ವರೆಗೆ ಉಚಿತ. ಹೆಚ್ಚುವರಿಯಾಗಿ 150 ಕೆ.ಜಿ. ವರೆಗೆ ಶುಲ್ಕ ಪಾವತಿಸಿ ಕೊಂಡೊಯ್ಯಬಹುದು.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/railway-online-luggage-booking-service-parcel-indian-rail-extra-luggage-rules-kannada-khs/articleshow-wp1leg7"/>
        </item>
        <item>
            <title><![CDATA[Cauvery River Water Dispute: ಕಾವೇರಿ ನೀರು ಹಂಚಿಕೆ ವಿವಾದ: 'ಫಿಲಂ ಚೇಂಬರ್‌'ನಲ್ಲಿ ಸಭೆ- ಯಾರೆಲ್ಲಾ ಮಾತನಾಡಿದ್ದಾರೆ? ತೆಗೆದುಕೊಂಡ ನಿರ್ಣಯವೇನು?]]></title>
            <link>https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0</link>
            <guid isPermaLink="true">https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0</guid>
            <pubDate>Thu, 30 Jul 2026 17:29:35 +0530</pubDate>
            <description><![CDATA[&lt;p&gt;'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು. ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysd7wbg3d1h5rf8wgeffw9h,imgname-film-chamber-1785411662192.jpg" type="image/jpeg" height="390" width="690"/>
            <content:encoded><![CDATA[&lt;p&gt;ಸದ್ಯ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮಧ್ಯೆ ಕಾವೇರಿ ನದಿ ನೀರಿನ ಹಂಚಿಕೆ (Cauvery Water Dispute) ವಿಷಯವಾಗಿ 'ಕಾವೇರಿ'ದ ವಾತಾವರಣ ನಿರ್ಮಾಣವಾಗಿರೋದು ಗೊತ್ತೇ ಇದೆ. ಇದು ಕರ್ನಾಟಕದಲ್ಲಿ ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಹಲವು ಕಡೆ ಪ್ರತಿಭಟನೆ ರೂಪ ತಳೆದಿದೆ. ಸದ್ಯ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಮಧ್ಯೆ ಈ ಬಗ್ಗೆ ಮಾತುಕತೆ ನಡೆಯುವ ನಿರ್ಧಾರ ಕೂಡ ಆಗಿದೆ. ಆದರೆ, ಕಾವೇರಿ ನೀರನ್ನೇ ಅವಲಂಬಿಸಿದ ರೈತರ ಪ್ರತಿಭಟನೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದ್ದು ಈ ಕಾವು ಚಲನಚಿತ್ರ ರಂಗ ಸೇರಿದಂತೆ ಇಡೀ ಕರ್ನಾಟಕಕ್ಕೆ ವ್ಯಾಪಿಸಿದೆ.&lt;/p&gt;&lt;p&gt;&lt;strong&gt;KFCC meeting on Cauvery water row: &lt;/strong&gt;ಇಂದು, 30 ಜುಲೈ 2026ರಂದು ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಇದೀಗ ತುರ್ತಾಗಿ ಸುದ್ದಿಗೋಷ್ಟಿ ಕರೆದಿದ್ದಾರೆ. ಅದರಲ್ಲಿ, ಕಾವೇರಿ ನೀರು ಹಂಚಿಕೆ ಬಗ್ಗೆ ಸಭೆ ಮಾಡಿರೋ ಕನ್ನಡ ಚಲನಚಿತ್ರ ರಂಗದ ವಿವಿಧ ಸಂಘಗಳು, ಅಂದರೆ ಕಲಾವಿದರ ಸಂಘ, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ ಹೀಗೆ ಸಿನಿಮಾರಂಗದ ಎಲ್ಲಾ ಸಂಘಸಂಸ್ಥೆಗಳು ಬೆಂಗಳೂರಿನ ಫಿಲಂ ಚೆಂಬರ್&zwnj;ನಲ್ಲಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಭಾಗಿಯಾದವರಲ್ಲಿ ಯಾರ್ಯಾರು ಏನೇನು ಹೇಳಿದ್ದಾರೆ? ಇಲ್ಲಿದೆ ನೋಡಿ..&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ವಿವಾದ: ನಟ ಶೋಭರಾಜ್ ಹೇಳಿಕೆ&lt;/p&gt;&lt;p&gt;;ನಾವೆಲ್ಲಾ ಕಾವೇರಿ ನೀರು ಕುಡಿದು ಬೆಳೆದವರು. ಮಳೆ&zwnj;&zwnj; ಜಾಸ್ತಿ ಇದ್ರೆ&zwnj; ನಾವೇನು ಗೋಡೆ ಕಟ್ಟಿ ನೀರನ್ನು ಅಡ್ಡ ಹಾಕಲ್ಲ. ಈ ಭಾರಿ ಮಳೆ ಇಲ್ಲ ನಮ್ಮ ರೈತರು ಕಷ್ಟದಲ್ಲಿದ್ದಾರೆ ನೀರು ಕೇಳಬೇಡಿ. ನಮ್ಮ ರೈತರು ಕಷ್ಡದಲ್ಲಿದ್ದಾರೆ ನಮಗೆ ರೈತರು ನಮಗೆ ಮುಖ್ಯ. ಫಿಲ್ಮ್ ಚೇಂಬರ್ ಏನು ನಿರ್ಧಾರ ಮಾಡುತ್ತಾರೆ ಅದಕ್ಕೆ ನಾವು ಬದ್ಧರಾಗಿರುತ್ತೇವೆ' ಎಂದಿದ್ದಾರೆ.&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ವಿಚಾರ: ನಟ ಪ್ರಥಮ್ ಹೇಳಿಕೆ&lt;/p&gt;&lt;p&gt;'ಕಾವೇರಿ ವಿಚಾರದಲ್ಲಿ ನಾವೆಲ್ಲಾ ಕನ್ನಡಿಗರು ಒಂದೇ.. ಪ್ರಧಾನಿ ಆಗಿರಲಿ ಯಾರೇ ಆಗಿರಲಿ, ಅವರು ಕೂಡ ರೈತರು ಬೆಳೆದ ಅನ್ನ&zwnj; ತಿನ್ನೋದು.. ಕಾವೇರಿ ವಿಚಾರವಾಗಿ ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಬರುತ್ತಿದ್ದಾರೆ. ವಿಜಯ್ ನಮ್ಮ ಕರ್ನಾಟಕದ ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಸಿಎಂ ಆಗಿದ್ದೀರಾ ಸಂತೋಷ.. ಬಲವಂತವಾಗಿ ನೀರು ಪಡೆಯೋ ಸಾಹಸಕ್ಕೆ ಹೋಗಬೇಡಿ..' ಎಂದಿದ್ದಾರೆ ನಟ ಪ್ರಥಮ್&lt;/p&gt;&lt;p&gt;ಕರ್ನಾಟಕದಲ್ಲಿ ಕಾವೇರಿ ವಿವಾದ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯ ಮುಖ್ಯಾಂಶಗಳು:-&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ಬಗ್ಗೆ ಸಭೆ ಮಾಡಿರೋ ಕನ್ನಡ ಚಲನಚಿತ್ರ ರಂಗದ ವಿವಿಧ ಸಂಘಗಳು- ಫಿಲಂ ಚೇಂಬರ್, ಕಲಾವಿದರ ಸಂಘ, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ ಎಲ್ಲವೂ ಈಗ ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗಿಯಾಗಿವೆ. ಅಲ್ಲಿ ತೆಗೆದುಕೊಂಡ ನಿರ್ಧಾರದ ಮುಖ್ಯಾಂಶಗಳಿ ಇಲ್ಲಿವೆ-&lt;/p&gt;&lt;h2&gt;ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ&lt;/h2&gt;&lt;p&gt;'ಕನ್ನಡ ಚಿತ್ರರಂಗದ ನಾವೆಲ್ಲರೂ ಸಂಪೂರ್ಣವಾಗಿ ನಮ್ಮ ರೈತ ಬಾಂಧವರ ಪರವಾಗಿ ಇದ್ದೇವೆ. ಮಹದಾಯಿ, ಕಳಸಾ-ಬಂಡೂರಿ ಹೋರಾಟದಲ್ಲೂ ಚಿತ್ರರಂಗ ಇತ್ತು. ಭಾಷೆ ಬದುಕಿದ್ರೆ, ನೆಲ ಜಲ ಮನುಷ್ಯ ಇದ್ರೆ, ನಾವೆಲ್ಲಾ ಇರುತ್ತೇವೆ. ಹೀಗಾಗಿ ರೈತರ ಪರ ಯಾವತ್ತೂ ನಾವಿದ್ದೇವೆ. ಈ ವಿಷಯದಲ್ಲಿ ಚಿತ್ರರಂಗದ ಒಗ್ಗಟ್ಟು ಅದ್ಭುತವಾಗಿದೆ. ಭಾಷೆ ನೆಲ&zwnj; ಜನ ಅಂತ ಬಂದಾಗ ಯಾರೂ ಯಾರೂ ತಡೆಯೋಕೆ ಆಗಲ್ಲ, ನಾವೆಲ್ಲಾ ಒಂದಾಗಿದ್ದೇವೆ' ಎಂದಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ.&lt;/p&gt;&lt;p&gt;ಸಾರಾ ಗೋವಿಂದು:-&lt;/p&gt;&lt;p&gt;'ಕಾವೇರಿ ನೀರು ನಿಯಂತ್ರಣಾ ಮಂಡಳಿ ಅವೈಜ್ನಾನಿಕ ತೀರ್ಪನ್ನು ಕೊಟ್ಟಿದೆ. ಅದಕ್ಕೂ ಮೊದಲು ಕರ್ನಾಟಕ್ಕೆ ಬಂದು ಪರಿಸ್ಥಿತಿ ನೋಡಬೇಕು, ಇಲ್ಲಿ ಸಂಬಂಧಪಟ್ಟವರ ಮಾತನ್ನು ಆಲಿಸಬೇಕು. ಮಳೆ ಇಲ್ಲ, ಜನರಿಗೆ ಕುಡಿಯೋ ನೀರಿಗೆ ಹಾಹಾಕಾರ ಆಗಿದೆ. ನೀರು ಬಿಡೋದಕ್ಕೆ&zwnj; ಆಗಲ್ಲ ಅಂತ ಜನ ಹೇಳುತ್ತಿದ್ದಾರೆ. ಆದ್ರೆ&zwnj; ಎಲ್ಲದಕ್ಕೂ ಚಿತ್ರರಂಗ ಸ್ಪಂದಿಸಿಲ್ಲ ಅಂತಾರೆ. ಆದರೆ ರಾಜ್&zwnj;ಕುಮಾರ್ ಕಾಲದಿಂದಲೂ ನಾವು ರೈತರ, ಕರ್ನಾಟಕದ ಕಾವೇರಿ ಸಮಸ್ಯೆ ಜೊತೆ ಒಗ್ಗಟ್ಟಾಗಿ ನಿಂತಿದ್ದೇವೆ.&lt;/p&gt;&lt;p&gt;ಕಾವೇರಿ ನೀರು ಹಂಚಿಕೆ ಬಗ್ಗೆ ಪರಿಶೀಲನೆ ಮಾಡಿ ತೀರ್ಪು ಕೊಡದಿದ್ರೆ ನಾವು ಹೋರಾಟಕ್ಕೆ ಇಳಿಬೇಕಾಗುತ್ತೆ. ನೆಲ, ಜನ, ಭಾಷೆ ಅಂತ ಬಂದಾಗ ನಮ್ಮ ಇಡೀ ಚಿತ್ರರಂಗ ಕರ್ನಾಟಕದ ಜೊತೆಗೆ ಇರುತ್ತೆ. ಇದರಲ್ಲಿ ಕನ್ನಡ ಚಿತ್ರರಂಗದ ಯಾರದ್ದೂ ಅಪಸ್ವರ ಇಲ್ಲ. 1991 ರಲ್ಲಿ ಇದೇ ಪರೀಸ್ಥಿತಿ ನಿರ್ಮಾಣ ಆಗಿತ್ತು. ಬಂಗಾರಪ್ಪ ಅವರು ಸುಗ್ರೀವಾಜ್ಞೆ ಹೊರಡಿಸಿದ್ರು. ಎಲ್ಲರಿಗೂ ಅನುಕೂಲ ಆಯ್ತು. ಮೇಕೆದಾಟು ಯೋಜನೆ ಸಮಸ್ಯೆ ಬಗೆ ಹರಿದಿದೆ. ಅದರ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ' ಎಂದಿದ್ದಾರೆ.&lt;/p&gt;&lt;p&gt;ರಾಕ್ ಲೈನ್ ಹೇಳಿಕೆ:-&lt;/p&gt;&lt;p&gt;'ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಅಂತ ಯಾರು ಹೇಳಿದ್ದು? ನಮ್ಮಲ್ಲಿ ಒಗ್ಗಟ್ಟಿದೆ.. ಕಾವೇರಿ ಹೋರಾಟಕ್ಕೆ ಎಲ್ಲರು ಬರುತ್ತಾರೆ, ಬರಲೇಬೇಕು..&lt;/p&gt;&lt;p&gt;ಕಲಾವಿದರಾಗಿದ್ದ ಅಂಬರೀಶ್ ಅವರು ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿಯೇ ರಾಜೀನಾಮೆ ನೀಡಿದ್ದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ತೀರ್ಮಾನ ತೆಗೆದುಕೊಂಡ್ರೆ ನಾವೆಲ್ಲಾ ಅದನ್ನ ಪಾಲಿಸುತ್ತೇವೆ.&lt;/p&gt;&lt;p&gt;ಆದ್ರೆ ಕಲಾವಿದರು ಬಂದ್ರೆ ತೀರ್ಮಾನ ಆಗುತ್ತೆ ಅಂತ ತಿಳಿದುಕೊಳ್ಳಬೇಡಿ.. ಚಿತ್ರರಂಗದ ಎಲ್ಲರೂ ಇರುತ್ತೇವೆ.. ಕನ್ನಡ ಚಿತ್ರರಂಗ ಸಂಪೂರ್ಣವಾಗಿ ನಾವು ರೈತ ಬಾಂಧವರ ಪರವಾಗಿ ಇದ್ದೇವೆ' ಎಂದಿದ್ದಾರೆ ನಿರ್ಮಾಪಕರಾದ ರಾಕ್&zwnj;ಲೈನ್ ವೆಂಕಟೇಶ್.&lt;/p&gt;&lt;p&gt;ಇನ್ನು ಮೊತ್ತೊಮ್ಮೆ ಮಾತನಾಡಿ ಹೇಳಿಕೆ ನೀಡಿರೋ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ 'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು.&lt;/p&gt;&lt;p&gt;ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಕರ್ನಾಟಕದಲ್ಲಿ ನಡೆಯುತ್ತಿರುವ ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಇಂದು ನಡೆದ ಫಿಲಂ ಚೇಂಬರ್ ಸಭೆಯಲ್ಲಿ ಸಿನಿರಂಗದ ಎಲ್ಲಾ ಸಂಘಗಳು ಭಾಗಿಯಾಗಿ ರೈತರ ಪರ ಹೋರಾಟಕ್ಕೆ ನಿಲ್ಲುವ ಒಮ್ಮತದ ನಿರ್ಧಾರಕ್ಕೆ ಬದ್ಧರಾಗಿರುವ ತೀರ್ಮಾನ ತೆಗೆದುಕೊಂಡಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/who-were-the-speakers-at-the-film-chamber-meeting-for-cauvery-water-sharing-dispute-and-the-resolution-to-know-here/articleshow-fcvbgq0"/>
        </item>
        <item>
            <title><![CDATA[ತಮಿಳುನಾಡಿಗೆ ಸದ್ಯಕ್ಕಿಲ್ಲ ಕಾವೇರಿ ನೀರು! CWMA ಆದೇಶದ ಬೆನ್ನಲ್ಲೇ ಸರ್ವಪಕ್ಷ ಸಭೆಗೆ ರಾಜ್ಯ ಸರ್ಕಾರ ನಿರ್ಧಾರ!]]></title>
            <link>https://kannada.asianetnews.com/state/karnataka-govt-decides-not-to-release-cauvery-water-until-all-party-meeting/articleshow-yvyiw2f</link>
            <guid isPermaLink="true">https://kannada.asianetnews.com/state/karnataka-govt-decides-not-to-release-cauvery-water-until-all-party-meeting/articleshow-yvyiw2f</guid>
            <pubDate>Thu, 30 Jul 2026 17:08:58 +0530</pubDate>
            <description><![CDATA[ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಹೊರತಾಗಿಯೂ, ರಾಜ್ಯದಲ್ಲಿನ ಬರ ಪರಿಸ್ಥಿತಿಯಿಂದಾಗಿ ತಮಿಳುನಾಡಿಗೆ ಸದ್ಯಕ್ಕೆ ನೀರು ಬಿಡುಗಡೆ ಮಾಡದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ನಂತರ ಸರ್ವಪಕ್ಷ ಸಭೆ ನಡೆಸಿ, ಸುಪ್ರೀಂ ಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಮುಂದಿನ ಕಾನೂನು ಹೋರಾಟದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kysd3ym91221qnva19k461jj,imgname-karnataka-kaveri-cauvery-water-1785411533449.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.30): ಕಾ&lt;/strong&gt;ವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದ್ದರೂ, ಕರ್ನಾಟಕ ಸರ್ಕಾರ ಸದ್ಯಕ್ಕೆ ನೀರು ಬಿಡುಗಡೆ ಮಾಡದಿರಲು ಕಠಿಣ ಹಾಗೂ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿಗಳು ದೆಹಲಿಯಿಂದ ಹಿಂತಿರುಗಿದ ನಂತರ ನಡೆಯಲಿರುವ ಸರ್ವಪಕ್ಷ ಸಭೆಯವರೆಗೆ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಮೂಲಗಳು ಸ್ಪಷ್ಟಪಡಿಸಿವೆ.&lt;/p&gt;&lt;h2&gt;&lt;strong&gt;ಭಾನುವಾರದವರೆಗೆ ನೀರು ಬಿಡುಗಡೆ ಇಲ್ಲ:&lt;/strong&gt;&lt;/h2&gt;&lt;p&gt;CWRC ನಿರ್ಧಾರವನ್ನು ಎತ್ತಿಹಿಡಿದಿದ್ದ CWMA, ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್&zwnj;ನಂತೆ ಒಟ್ಟು ಸುಮಾರು 4 ಟಿಎಂಸಿ ನೀರನ್ನು ಹರಿಸುವಂತೆ ಸೂಚಿಸಿತ್ತು. ಆದರೆ, ರಾಜ್ಯದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿ ಮತ್ತು ಜಲಾಶಯಗಳಲ್ಲಿನ ನೀರಿನ ಕೊರತೆಯನ್ನು ಗಣನೆಗೆ ತೆಗೆದುಕೊಂಡು, ಭಾನುವಾರದವರೆಗೆ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಯಿಂದ ಆಗಮಿಸಿದ ಬಳಿಕ ಸರ್ಕಾರದ ಅಧಿಕೃತ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.&lt;/p&gt;&lt;h2&gt;&lt;strong&gt;ಸರ್ವಪಕ್ಷ ಸಭೆ ಹಾಗೂ ಮುಂದಿನ ಕಾನೂನು ಹೋರಾಟ:&lt;/strong&gt;&lt;/h2&gt;&lt;p&gt;ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಅವರ ನೇತೃತ್ವದಲ್ಲಿ ತುರ್ತು ಸರ್ವಪಕ್ಷ ಸಭೆ ಕರೆಯಲಾಗುವುದು. ಈ ಮಹತ್ವದ ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು, ಕಾನೂನು ತಜ್ಞರು ಹಾಗೂ ನೀರಾವರಿ ತಜ್ಞರ ಜೊತೆ ವಿಸ್ತೃತ ಚರ್ಚೆ ನಡೆಯಲಿದೆ. ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ನಮಗಿರುವ ಕಾನೂನಾತ್ಮಕ ಅವಕಾಶಗಳು ಹಾಗೂ ಮುಂದಿನ ತಂತ್ರಗಾರಿಕೆಗಳ ಬಗ್ಗೆ ಸಭೆಯಲ್ಲಿ ನಿರ್ಣಾಯಕ ತೀರ್ಮಾನ ತಳೆಯಲಾಗುತ್ತದೆ.&lt;/p&gt;&lt;p&gt;ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಕೆಆರ್&zwnj;ಎಸ್, ಕಬಿನಿ ಭಾಗದಲ್ಲಿ ಕುಡಿಯುವ ನೀರಿಗೂ ತೀವ್ರ ಅಭಾವ ಸೃಷ್ಟಿಯಾಗಿರುವಾಗ, ತಮಿಳುನಾಡಿಗೆ ನೀರು ಹರಿಸುವುದಕ್ಕೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಮಂಡ್ಯ ಸೇರಿದಂತೆ ಹಲವೆಡೆ ರೈತರು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರ ಹಾಗೂ ನಾಗರಿಕರ ಹಿತರಕ್ಷಣೆಗೆ ಬದ್ಧವಾಗಿರುವ ಸರ್ಕಾರ, ಸರ್ವಪಕ್ಷಗಳ ಅಭಿಪ್ರಾಯ ಪಡೆದೇ ಮುಂದಿನ ಅಂತಿಮ ಹೆಜ್ಜೆ ಇಡಲು ನಿರ್ಧರಿಸಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-decides-not-to-release-cauvery-water-until-all-party-meeting/articleshow-yvyiw2f"/>
        </item>
        <item>
            <title><![CDATA[ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ: CWRC ಆದೇಶ ಎತ್ತಿಹಿಡಿದ CWMA; ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಸೂಚನೆ!]]></title>
            <link>https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0</link>
            <guid isPermaLink="true">https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0</guid>
            <pubDate>Thu, 30 Jul 2026 16:21:23 +0530</pubDate>
            <description><![CDATA[ರಾಜ್ಯದಲ್ಲಿ ತೀವ್ರ ಮಳೆ ಕೊರತೆಯ ನಡುವೆಯೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ತಮಿಳುನಾಡಿಗೆ 15 ದಿನಗಳ ಕಾಲ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ಈ ನಿರ್ಧಾರದಿಂದಾಗಿ ಕಾವೇರಿ ಹೋರಾಟದ ಕೇಂದ್ರವಾದ ಮಂಡ್ಯದಲ್ಲಿ ರೈತರು ಮತ್ತು ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kykva5ewd84mp1rr761yd1a2,imgname-karnataka-cauvery-water-cwrc-order-1785225090524.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಮಂಡ್ಯ (ಜು.30): ರಾ&lt;/strong&gt;ಜ್ಯಾದ್ಯಂತ ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಜನಸಾಮಾನ್ಯರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಕಾವೇರಿ ಆಘಾತ ಎದುರಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್&zwnj;ನಂತೆ ಒಟ್ಟು 4.5 ಟಿಎಂಸಿ ನೀರು ಹರಿಸುವಂತೆ ನಿರ್ದೇಶನ ನೀಡಿದೆ.&lt;/p&gt;&lt;p&gt;ರಾಜ್ಯದಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ CWMA ಮುಂದೆ ಸುದೀರ್ಘ ವಾದ ಮಂಡಿಸಿತ್ತು. ರಾಜ್ಯದ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟು, ಆದೇಶ ಮರುಪರಿಶೀಲಿಸುವಂತೆ ಮನವೊಲಿಸಲು ಯತ್ನಿಸಿತ್ತು. ಆದರೆ, ಕರ್ನಾಟಕದ ಮೇಲ್ಮನವಿಯನ್ನು ತಿರಸ್ಕರಿಸಿರುವ ಪ್ರಾಧಿಕಾರವು, CWRC ಶಿಫಾರಸು ಮಾಡಿದ ಆದೇಶವನ್ನೇ ಖಾಯಂಗೊಳಿಸಿದೆ.&lt;/p&gt;&lt;h2&gt;&lt;strong&gt;ಮಂಡ್ಯದಲ್ಲಿ ಭುಗಿಲೆದ್ದ ರೈತರ ಆಕ್ರೋಶ:&lt;/strong&gt;&lt;/h2&gt;&lt;p&gt;CWMA ನಿರ್ಧಾರ ಹೊರಬೀಳುತ್ತಿದ್ದಂತೆಯೇ ಕಾವೇರಿ ಹೋರಾಟದ ಗಡಿನಾಡು ಮಂಡ್ಯದಲ್ಲಿ ಪ್ರತಿಭಟನೆಯ ಕಿಚ್ಚು ತೀವ್ರಗೊಂಡಿದೆ. ಮಂಡ್ಯದ ಪ್ರಮುಖ ಕೇಂದ್ರವಾದ ಸಂಜಯ್ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತರು ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ CWMA ವಿರುದ್ಧ ಧಿಕ್ಕಾರದ ಕೂಗು ಕೂಗಿದರು.&lt;/p&gt;&lt;p&gt;ಆಕ್ರೋಶಗೊಂಡ ಪ್ರತಿಭಟನಾಕಾರರು ಹಳೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಿದರು. ರಸ್ತೆ ಮಧ್ಯದಲ್ಲೇ ಕುಳಿತು ಧರಣಿ ನಡೆಸಿದ ರೈತರು, ಟಯರ್&zwnj;ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬೆಂಕಿ ಹಚ್ಚಲು ತಂದಿದ್ದ ಟಯರ್ ಹಾಗೂ ಪೆಟ್ರೋಲ್ ಕ್ಯಾನ್&zwnj;ಗಳನ್ನು ವಶಪಡಿಸಿಕೊಂಡರು. ಇದರಿಂದಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕಾದಾಟದ ವಾತಾವರಣ ನಿರ್ಮಾಣವಾಗಿ, ತೀವ್ರ ವಾಗ್ವಾದ ನಡೆಯಿತು.&lt;/p&gt;&lt;h2&gt;&lt;strong&gt;ಮುಂದಿನ ನಡೆ ಏನು?&lt;/strong&gt;&lt;/h2&gt;&lt;p&gt;ಕರ್ನಾಟಕದ ಪಾಲಿಗೆ ಕುಡಿಯುವ ನೀರಿಗೇ ಕಂಠಕ ಎದುರಾಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ ಎಂಬುದು ರೈತರ ಸ್ಪಷ್ಟ ನಿಲುವಾಗಿದೆ. ಸರ್ಕಾರದ ಮುಂದಿನ ಕಾನೂನು ಹೋರಾಟ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/cwma-upholds-cwrc-order-karnataka-to-release-3500-cusec-cauvery-water-to-tamil-nadu-mandya-protest/articleshow-og6ofo0"/>
        </item>
        <item>
            <title><![CDATA[ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ  ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?]]></title>
            <link>https://kannada.asianetnews.com/politics/karnataka-cabinet-expansion-delayed-again-triple-deputy-cm-formula-sparks-buzz-kvn-videoshow-9i87ggx</link>
            <guid isPermaLink="true">https://kannada.asianetnews.com/politics/karnataka-cabinet-expansion-delayed-again-triple-deputy-cm-formula-sparks-buzz-kvn-videoshow-9i87ggx</guid>
            <pubDate>Thu, 30 Jul 2026 14:51:23 +0530</pubDate>
            <description><![CDATA[&lt;p&gt;ಸಂಪುಟ ಸಸ್ಪೆನ್ಸ್ ಮುಂದುವರೆದಿರುವಾಗಲೇ ತ್ರಿವಳಿ ಡಿಸಿಎಂ ಸೃಷ್ಟಿಯ ಹಿಂದಿನ ಲಾಭದ ಸೂತ್ರದ ಬಗ್ಗೆಯೂ ಜೋರು ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಮೂರು ಉಪಮುಖ್ಯಮಂತ್ರಿ ಸ್ಥಾನಗಳಿಂದ ಕಾಂಗ್ರೆಸ್&zwnj;ಗೆ ನಿಜವಾಗಿಯೂ ಲಾಭ ಆಗುತ್ತೆ..? ಏನಿದು ಲೆಕ್ಕಾಚಾರ..?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xatcr3m" medium="video" height="768" width="1024"/>
            <content:encoded><![CDATA[&lt;p&gt;ಸಚಿವ ಸಂಪುಟ ವಿಸ್ತರಣೆಗೆ ಒಂದಾದ ಮೇಲೆ ಒಂದ್ರಂತೆ ವಿಘ್ನಗಳು ಎದುರಾಗ್ತಲೇ ಇವೆ. ಬುಧವಾರ ನೂರಕ್ಕೇ ನೂರು ಕ್ಯಾಬಿನೆಟ್ ಫೈನಲ್ ಆಗ್ಬೋದು ಎನ್ನುವ ನಿರೀಕ್ಷೆಯಲ್ಲಿದ್ರು ಸಚಿವಾಕಾಂಕ್ಷಿಗಳು. ಆದ್ರೀಗ ಅವರ ಆಸೆ, ನಿರೀಕ್ಷೆ ಇನ್ನೂ ಈಡೇರಿಲ್ಲ. ಕಡೆ ಕ್ಷಣದಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಮತ್ತೊಂದು ತಿರುವು ಸಿಕ್ಕಿದೆ. ಈ ಮಧ್ಯೆ ಕನಕಾಧಿಪತಿ ಮಂತ್ರಿಮಂಡಲ ಹೇಗಿರಬಹುದು? ಯಾವ್ಯಾವ ಲೆಕ್ಕಾಚಾರದಲ್ಲಿ ಯಾರ್ಯರಿಗೆ ಮಂತ್ರಿಭಾಗ್ಯ ದೊರಕಬಹುದು? ಆಪ್ತರ ಬೆನ್ನಿಗೆ ಕಟಿಬದ್ಧವಾಗಿ ನಿಂತಿರುವ ಸಿದ್ದರಾಮಯ್ಯ. ಫ್ರೀ ಹ್ಯಾಂಡ್ ಬಯಸ್ತಾಯಿರುವ ಡಿ.ಕೆ.ಶಿವಕುಮಾರ್. &amp;nbsp;ಪಟ್ಟು, ಬಿಗಿಪಟ್ಟುಗಳ ಮಧ್ಯೆ ಫೈನಲ್ ಪಟ್ಟಿಯ ಲೆಕ್ಕಾಚಾರಗಳೇನು.?&lt;/p&gt;&lt;p&gt;ಹೀಗೆ ಸಂಪುಟ ಸಸ್ಪೆನ್ಸ್ ಮುಂದುವರೆದಿರುವಾಗಲೇ ತ್ರಿವಳಿ ಡಿಸಿಎಂ ಸೃಷ್ಟಿಯ ಹಿಂದಿನ ಲಾಭದ ಸೂತ್ರದ ಬಗ್ಗೆಯೂ ಜೋರು ಚರ್ಚೆ ನಡೆಯುತ್ತಿದೆ. ಹಾಗಿದ್ರೆ ಮೂರು ಉಪಮುಖ್ಯಮಂತ್ರಿ ಸ್ಥಾನಗಳಿಂದ ಕಾಂಗ್ರೆಸ್&zwnj;ಗೆ ನಿಜವಾಗಿಯೂ ಲಾಭ ಆಗುತ್ತೆ..? ಏನಿದು ಲೆಕ್ಕಾಚಾರ..?&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>state</category>
            <dc:creator>Naveen Kodase</dc:creator>
            <atom:link href="https://kannada.asianetnews.com/politics/karnataka-cabinet-expansion-delayed-again-triple-deputy-cm-formula-sparks-buzz-kvn-videoshow-9i87ggx"/>
        </item>
        <item>
            <title><![CDATA[ಬೈಕ್ ಸವಾರ, ತಾಯಿ ಹಾಗೂ 70 ವರ್ಷದ ತಾತನ ವಿರುದ್ಧ FIR ಹಾಕಿಸಿದ್ದ ಮಾಲೂರು ಜಡ್ಜ್‌ಗೆ ಹೈಕೋರ್ಟ್ ತರಾಟೆ! ಎಫ್‌ಐಆರ್‌ಗೆ ಮಧ್ಯಂತರ ತಡೆ!]]></title>
            <link>https://kannada.asianetnews.com/state/karnataka-high-court-stays-fir-filed-by-malur-jmfc-judge-against-biker-and-grandfather/articleshow-vv1u6c4</link>
            <guid isPermaLink="true">https://kannada.asianetnews.com/state/karnataka-high-court-stays-fir-filed-by-malur-jmfc-judge-against-biker-and-grandfather/articleshow-vv1u6c4</guid>
            <pubDate>Wed, 29 Jul 2026 19:32:57 +0530</pubDate>
            <description><![CDATA[&lt;p&gt;ಖಾಸಗಿ ಜಗಳಕ್ಕೆ ತಮಗಿರುವ ಹುದ್ದೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬೈಕ್ ಸವಾರ (Biker), ಆತನ ತಾಯಿ ಹಾಗೂ 70 ವರ್ಷದ ವೃದ್ಧ ತಾತನ ವಿರುದ್ಧ ಎಫ್&zwnj;ಐಆರ್ (FIR) ದಾಖಲಿಸಿದ್ದ ಮಾಲೂರು ಜೆಎಂಎಫ್&zwnj;ಸಿ (JMFC) ಜಡ್ಜ್ ಗಾಯತ್ರಿ ಅವರ ವರ್ತನೆಗೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ತರಾಟೆಗೆ ತೆಗೆದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq2y1fcq2pt6038adg3h21a,imgname-maluru-judge-case-high-court-stay-fir-1785333745132.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.29): ಖಾ&lt;/strong&gt;ಸಗಿ ಜಗಳಕ್ಕೆ ತಮಗಿರುವ ಹುದ್ದೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬೈಕ್ ಸವಾರ (Biker), ಆತನ ತಾಯಿ ಹಾಗೂ 70 ವರ್ಷದ ವೃದ್ಧ ತಾತನ ವಿರುದ್ಧ ಎಫ್&zwnj;ಐಆರ್ (FIR) ದಾಖಲಿಸಿದ್ದ ಮಾಲೂರು ಜೆಎಂಎಫ್&zwnj;ಸಿ (JMFC) ಜಡ್ಜ್ ಗಾಯತ್ರಿ ಅವರ ವರ್ತನೆಗೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ (Justice M. Nagaprasanna) ಅವರಿದ್ದ ಪೀಠವು ಜಡ್ಜ್ ದಾಖಲಿಸಿದ್ದ ಎಫ್&zwnj;ಐಆರ್&zwnj;ಗೆ ಮಧ್ಯಂತರ ತಡೆಯಾಜ್ಞೆ (Interim Stay) ನೀಡಿದೆ.&lt;/p&gt;&lt;h2&gt;&lt;strong&gt;ಖಾಸಗಿ ಕಾರಿನಲ್ಲಿ ಹೋಗುವಾಗ ಆರಂಭವಾದ ಜಗಳ:&lt;/strong&gt;&lt;/h2&gt;&lt;p&gt;ಮಾಲೂರು ಜೆಎಂಎಫ್&zwnj;ಸಿ ಜಡ್ಜ್ ಗಾಯತ್ರಿ ಹಾಗೂ ಅವರ ಪತಿ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ (Innova Car) ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಕಾರನ್ನು ನಿಧಾನವಾಗಿ ಚಲಿಸುವಂತೆ ಬೈಕ್ ಸವಾರರೊಬ್ಬರು ಹೇಳಿದ್ದಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ ಜಡ್ಜ್ ಗಾಯತ್ರಿ ಹಾಗೂ ಅವರ ಪತಿ ಬೈಕ್ ಸವಾರನನ್ನು ಆತನ ಮನೆಯವರೆಗೆ ಚೇಸ್ (Chase) ಮಾಡಿಕೊಂಡು ಹೋಗಿದ್ದಾರೆ.&lt;/p&gt;&lt;h2&gt;&lt;strong&gt;ತಾತನನ್ನೂ ಜೈಲಿಗೆ ಕಳುಹಿಸಿದ ಜಡ್ಜ್!&lt;/strong&gt;&lt;/h2&gt;&lt;p&gt;ಬೈಕ್ ಸವಾರನ ಮನೆಯ ಬಳಿಯೂ ಜಗಳ ನಡೆದ ನಂತರ ಜಡ್ಜ್ ಗಾಯತ್ರಿ ಅವರು ತಮ್ಮ ಅಧಿಕಾರ ಬಳಸಿ ಪೊಲೀಸರ ಮೂಲಕ ಬೈಕ್ ಸವಾರ, ಆತನ ತಾಯಿ ಹಾಗೂ 70 ವರ್ಷದ ವೃದ್ಧ ತಾತನ ವಿರುದ್ಧ ಎಫ್&zwnj;ಐಆರ್ (FIR) ದಾಖಲಿಸಿ ಬಂಧಿಸುವಂತೆ ಮಾಡಿದ್ದಾರೆ. ಈ ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು (CCTV Footage) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದವು. ಹೈಕೋರ್ಟ್ ವಿಚಾರಣೆ ವೇಳೆ ರಾಜ್ಯದ ಎಸ್&zwnj;ಪಿಪಿ (SPP) ಬಿ.ಎನ್. ಜಗದೀಶ್ ಅವರು ಈ ವೈರಲ್ ವಿಡಿಯೋ ದೃಶ್ಯಗಳನ್ನು ನ್ಯಾಯಮೂರ್ತಿಗಳಿಗೆ ತೋರಿಸಿದರು.&lt;/p&gt;&lt;h2&gt;&lt;strong&gt;&lsquo;ತಾವೇ ದೂರುದಾರರು, ತಾವೇ ಜಡ್ಜ್ ಆಗಿ ಆದೇಶಿಸಿದ್ದಾರೆ!&rsquo;&lt;/strong&gt;&lt;/h2&gt;&lt;p&gt;ಘಟನೆಯ ಸಂಪೂರ್ಣ ವಿವರ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಜಡ್ಜ್ ಗಾಯತ್ರಿ ಅವರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. &lsquo;ಜಡ್ಜ್ ಆದ ಮಾತ್ರಕ್ಕೆ ಸಾಮಾನ್ಯ ನಾಗರಿಕರೊಂದಿಗೆ ಇಂತಹ ವರ್ತನೆ ಮಾಡುವುದು ಸರಿಯಲ್ಲ. ಜಡ್ಜ್ ಹುದ್ದೆಗೆ ಥರವಲ್ಲದ ರೀತಿಯಲ್ಲಿ ಗಾಯತ್ರಿ ಅವರು ನಡೆದುಕೊಂಡಿದ್ದಾರೆ. ಜಡ್ಜ್ ನಡವಳಿಕೆಯು ನ್ಯಾಯಾಲಯದ ಒಳಗೂ ಹಾಗೂ ಹೊರಗೂ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು. ಇಲ್ಲಿ ತಾವೇ ದೂರುದಾರರಾಗಿ, ತಾವೇ ಜಡ್ಜ್ ಆಗಿ ಆದೇಶಿಸಿದ್ದಾರೆ. ಇದು ತಮ್ಮ ಹುದ್ದೆಯ ಸ್ಪಷ್ಟ ದುರುಪಯೋಗ (Misuse of Power)&rsquo; ಎಂದು ಕೋರ್ಟ್ ಕಟುವಾಗಿ ಹೇಳಿದೆ.&lt;/p&gt;&lt;h2&gt;&lt;strong&gt;ಹಳೆಯ ಘಟನೆ ನೆನೆದ ಹೈಕೋರ್ಟ್:&lt;/strong&gt;&lt;/h2&gt;&lt;p&gt;ವಿಚಾರಣೆ ವೇಳೆ ಎಸ್&zwnj;ಪಿಪಿ ಬಿ.ಎನ್. ಜಗದೀಶ್ ಅವರು ಜಡ್ಜ್ ಗಾಯತ್ರಿ ಅವರ ಹಳೆಯ ಘಟನೆಯೊಂದನ್ನು ಕೋರ್ಟ್ ಗಮನಕ್ಕೆ ತಂದರು. ಈ ಹಿಂದೆ ತಮ್ಮ ಖಾಸಗಿ ಮನೆಯ ರಿಪೇರಿ ಕೆಲಸ ಮಾಡುವಂತೆ ಪಿಡಬ್ಲ್ಯೂಡಿ (PWD Officer) ಅಧಿಕಾರಿಗೆ ಜಡ್ಜ್ ಬುಲಾವ್ ನೀಡಿದ್ದರು. ಅದಕ್ಕೆ ನಿರಾಕರಿಸಿದ ಅಧಿಕಾರಿಯನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ ಆರೋಪವೂ ಈ ಜಡ್ಜ್ ಮೇಲಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ:&lt;/strong&gt;&lt;/h2&gt;&lt;p&gt;ಪ್ರಕರಣದ ತೀವ್ರತೆಯನ್ನು ಪರಿಗಣಿಸಿದ ಹೈಕೋರ್ಟ್, ಜಡ್ಜ್ ಗಾಯತ್ರಿ ಅವರ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವಂತೆ (Disciplinary Action) ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ (Chief Justice) ಮನವಿ ಮಾಡಿದೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಜಗಳದ ದೃಶ್ಯಗಳನ್ನು ತೆರವುಗೊಳಿಸಲು (Remove Viral Video) ಆದೇಶಿಸಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-high-court-stays-fir-filed-by-malur-jmfc-judge-against-biker-and-grandfather/articleshow-vv1u6c4"/>
        </item>
        <item>
            <title><![CDATA[BWSSB water restrictions: ಕುಡಿಯುವ ನೀರಲ್ಲಿ ಬೈಕ್, ಕಾರು ತೊಳೆದರೆ ಬೀಳುತ್ತೆ ₹5000 ದಂಡ! ಜಲಮಂಡಳಿ ಕಠಿಣ ಆದೇಶ!]]></title>
            <link>https://kannada.asianetnews.com/state/water-board-orders-rs-5k-fine-for-washing-vehicles-with-drinking-water-rav/articleshow-5fvzudw</link>
            <guid isPermaLink="true">https://kannada.asianetnews.com/state/water-board-orders-rs-5k-fine-for-washing-vehicles-with-drinking-water-rav/articleshow-5fvzudw</guid>
            <pubDate>Thu, 30 Jul 2026 10:25:30 +0530</pubDate>
            <description><![CDATA[ಮುಂಗಾರು ಕೈಕೊಟ್ಟಿದ್ದರಿಂದ ಬೆಂಗಳೂರಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಜಲಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ವಾಹನ ತೊಳೆಯಲು, ಈಜು ಕೊಳಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ 5,000 ರೂ. ದಂಡ ವಿಧಿಸುವುದಾಗಿ ಎಚ್ಚರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrnvwgwg3mhp081zqfspw1f,imgname-----------------------2026-07-30t102215.731-1785387151900.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಜು.30): ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ವಾಹನ ತೊಳೆಯಲು, ಈಜು ಕೊಳಗಳಲ್ಲಿ ಕುಡಿಯುವ ನೀರು ಬಳಸುವುದನ್ನು ಬೆಂಗಳೂರು ಜಲಮಂಡಳಿ ನಿಷೇಧಿಸಿದ್ದು, ಆದೇಶ ಉಲ್ಲಂಘಿಸಿದವರಿಗೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.&lt;/p&gt;&lt;h2&gt;ವಾಟರ್ ಫ್ಲೋ ರೆಸ್ಟ್ರಿಕ್ಟರ್, ಏರೇಟರ್ ಅಳವಡಿಕೆ ಕಡ್ಡಾಯ&lt;/h2&gt;&lt;p&gt;ಮನೆಗಳು, ಅಪಾರ್ಟ್&zwnj;ಮೆಂಟ್&zwnj;ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್&zwnj;ಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲ ಕಟ್ಟಡಗಳಲ್ಲಿ ವಾಟರ್ ಫ್ಲೋ ರೆಸ್ಟ್ರಿಕ್ಟರ್, ಏರೇಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಏರೇಟರ್ ಅಳವಡಿಕೆಯಿಂದ ನೀರಿನ ಬಳಕೆಯನ್ನು ಶೇ.30 ರಿಂದ 50ರವರೆಗೆ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದೆ.&lt;/p&gt;&lt;p&gt;ಇನ್ನು ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನೇ ಬಳಸಬೇಕು ಎಂದು ಡಾ. ಮಂಜುಳ ತಿಳಿಸಿದ್ದಾರೆ.&lt;/p&gt;&lt;h3&gt;ಈಜುಕೊಳಗಳಿಗೆ ಕುಡಿಯುವ ನೀರು ಬಳುವಂತಿಲ್ಲ&lt;/h3&gt;&lt;p&gt;ನಗರದಲ್ಲಿನ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳಲ್ಲಿ ಕುಡಿಯುವ ನೀರು ಬಳಸುವಂತಿಲ್ಲ. ಸಂಸ್ಕರಿತ ನೀರು ಅಥವಾ ಇತರೆ ಪರ್ಯಾಯ ಮೂಲಗಳಿಂದಲೇ ಬಳಸಬೇಕು. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50 ರವರೆಗೆ ಕಡಿತಗೊಳಿಸಿ 5,000 ರು. ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಮುಂದುವರಿದಲ್ಲಿ ಪ್ರತಿದಿನ 500 ರು.ಹೆಚ್ಚುವರಿ ದಂಡ ವಿಧಿಸುವುದರ ಜೊತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ ಎಚ್ಚರಿಸಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/water-board-orders-rs-5k-fine-for-washing-vehicles-with-drinking-water-rav/articleshow-5fvzudw"/>
        </item>
        <item>
            <title><![CDATA[KPSC Scam: ಕೆಪಿಎಸ್‌ಸಿ ನೇಮಕಾತಿ ಹಗರಣ: ಸಿಬಿಐಗೆ ವಹಿಸಲು ಹೈಕೋರ್ಟ್‌ ಇಂಗಿತ, ಹೇಳಿದ್ದೇನು?]]></title>
            <link>https://kannada.asianetnews.com/state/karnataka-high-court-on-kpsc-case-to-cbi-shivashankarappa-sahukar-rav/articleshow-goe2vaz</link>
            <guid isPermaLink="true">https://kannada.asianetnews.com/state/karnataka-high-court-on-kpsc-case-to-cbi-shivashankarappa-sahukar-rav/articleshow-goe2vaz</guid>
            <pubDate>Thu, 30 Jul 2026 08:57:28 +0530</pubDate>
            <description><![CDATA[&lt;p&gt;ಬೃಹತ್ ಪ್ರಮಾಣದಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ ಮರುದಿನವೇ, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktn8g40cfn90np10t5g1zgyr,imgname-----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.30): &lt;/strong&gt;ಬೃಹತ್ ಪ್ರಮಾಣದಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ ಮರುದಿನವೇ, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.&lt;/p&gt;&lt;h2&gt;ಸಿಬಿಐ ತನಿಖೆಗೆ ಏಕೆ ವಹಿಸಬಾರದು, ಸರ್ಕಾರಕ್ಕೆ ವಿವರಣೆ ಕೇಳಿದ ಕೋರ್ಟ್&lt;/h2&gt;&lt;p&gt;ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ವಹಿಸಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಈವರೆಗೆ ನಡೆಸಿರುವ ಮತ್ತು ಮುಂದೆ ನಡೆಸಲಿರುವ ತನಿಖೆಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ಆ.7ರಂದು ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.&lt;/p&gt;&lt;p&gt;ಇದೇ ವೇಳೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಅರ್ಜಿಯ ಮುಂದಿನ ವಿಚಾರಣೆವರೆಗೆ ಈ ಅರ್ಜಿದಾರ ಅಭ್ಯರ್ಥಿಗಳ ವಿರುದ್ಧದ ಬಲವಂತದ ಕ್ರಮ ಜರುಗಿಸಬಾರದು, ಬಂಧಿಸಬಾರದು ಎಂದು ಸಿಐಡಿ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಆ.7ಕ್ಕೆ ಮುಂದೂಡಿತು.&lt;/p&gt;&lt;h3&gt;ಪಶು ವೈದ್ಯಾಧಿಕಾರಿ (ಗ್ರೂಪ್-ಎ) ನೇಮಕಾತಿ ದೊಡ್ಡ ಪ್ರಮಾಣದ ಹಗರಣ&lt;/h3&gt;&lt;p&gt;ಅರ್ಜಿಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಎ) ನೇಮಕಾತಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಅಕ್ರಮದ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಸಿಬಿಐ ತನಿಖೆಗೆ ವಹಿಸಲು ಅರ್ಜಿದಾರರು ಕೋರಿದ್ದಾರೆ. ಹಾಗಾಗಿ ಅರ್ಜಿಯಲ್ಲಿ ಸಿಬಿಐ ಅನ್ನು ಪ್ರತಿವಾದಿ ಮಾಡಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ವಹಿಸಬಾರದು ಎಂಬ ಬಗ್ಗೆ ಆಕ್ಷೇಪಣೆ ಅಥವಾ ವಾದಾಂಶಗಳನ್ನು ಮುಂದಿನ ಶುಕ್ರವಾರದಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.&lt;/p&gt;&lt;p&gt;ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕವಾಗಲು ಸುಳ್ಳು ಜಾತಿ ಹಾಗೂ ಆದಾಯ ಪತ್ರ ನೀಡಿದ ಕೆಪಿಎಸ್&zwnj;ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ಅವರ ಪುತ್ರಿ ಸುಮಾ ಎಸ್.ಸಾಹುಕಾರ ವಿರುದ್ಧ ಮತ್ತು ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಭ್ಯರ್ಥಿಗಳ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು (ಎಫ್ಐಆರ್) ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಚನ್ನರಾಯಪಟ್ಟಣದ ಪಶುವೈದ್ಯ ಮಂಜುನಾಥ್ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ ವಿಧಾನಸೌಧ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿರುವ ಕೆಲ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.&lt;/p&gt;&lt;p&gt;ಇದಕ್ಕೂ ಮುನ್ನ ವಿಚಾರಣೆ ವೇಳೆ ಯತ್ನಾಳ ಪರ ವಕೀಲ ವೆಂಕಟೇಶ್ ದಳವಾಯಿ ಹಾಜರಾಗಿ, ಕೆಪಿಎಸ್&zwnj;ಸಿ ಅಧ್ಯಕ್ಷರ ಸಂಬಂಧಿಯೊಬ್ಬರಿಗೆ ಓಎಂಆರ್ ಶೀಟ್&zwnj;ಗಳನ್ನು ತಿರುಚಲು ಅವಕಾಶ ಕಲ್ಪಿಸಲಾಗಿತ್ತು. ಕೆಲ ಅಭ್ಯರ್ಥಿಗಳನ್ನು ಹೊರ ರಾಜ್ಯಕ್ಕೆ ಕರೆದೊಯ್ದು, ಪ್ರಶ್ನೆ ಹಾಗೂ ಉತ್ತರಗಳನ್ನು ನೀಡಿ ತರಬೇತಿ ನೀಡಿ ವಾಪಸ್ ಕರೆತಂದಿದ್ದಾರೆ. ಪಶುವೈದ್ಯಾಧಿಕಾರಿ ಹುದ್ದೆ ನೇಮಕಕ್ಕೆ ₹80 ಲಕ್ಷ ನೀಡಬೇಕು. ಅದರಲ್ಲಿ ₹40 ಲಕ್ಷವನ್ನು ರಾಜ್ಯದಿಂದ ಹೊರಗೆ ಕರೆದುಕೊಂಡು ಹೋಗುವಾಗ ಕೊಡಬೇಕು. ನಂತರ ಅಭ್ಯರ್ಥಿಯ ಮೂಲ ಅಂಕಪಟ್ಟಿ ಸಂಗ್ರಹಿಸುತ್ತಾರೆ ಎಂದು ಅಕ್ರಮ ನಡೆದಿರುವ ವಿಧಾನದ ಕುರಿತು ನ್ಯಾಯಪೀಠಕ್ಕೆ ವಿವರಿಸಿದರು.&lt;/p&gt;&lt;p&gt;ಅದಕ್ಕೆ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಓಎಂಆರ್ ಶೀಟ್ ತಿರುಚಲಾಗಿದೆಯೇ? ಅಭ್ಯರ್ಥಿಗಳನ್ನು ಹೊರ ಕರೆದುಕೊಂಡು ತರಬೇತಿ ನೀಡಲಾಗಿದೆಯೇ? ಹೀಗೆಲ್ಲಾ ಅಕ್ರಮ ನಡೆಸಲಾಗಿದೆಯೇ ಎಂದು ಕೇಳಿದರು.&lt;/p&gt;&lt;p&gt;ದಳವಾಯಿ ಉತ್ತರಿಸಿ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ಸಮಗ್ರ ತನಿಖೆ ಮಾಡಲು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.&lt;/p&gt;&lt;h3&gt;ಸಿಐಡಿ ತನಿಖೆ ಮುಂದುವರಿಯಬಾರದು:&lt;/h3&gt;&lt;p&gt;ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅದು ಸಿಐಡಿಯಲ್ಲಿಯೇ ಮುಗಿದುಹೋಗುತ್ತದೆ. ಏನೂ ಆಗುವುದಿಲ್ಲ . ಪ್ರಕರಣವನ್ನು ಸಿಐಡಿ ತನಿಖೆ ನಡೆಸಬೇಕೇ ಅಥವಾ ಸಿಬಿಐ ತನಿಖೆ ನಡೆಸಬೇಕೇ ಎಂಬ ಬಗ್ಗೆ ನ್ಯಾಯಾಲಯ ನಿರ್ಧರಿಸುವವರೆಗೆ ಪ್ರಕರಣದ ಕುರಿತು ಸಿಐಡಿಯಲ್ಲಿ ತನಿಖೆ ಮುಂದುವರಿಯಬಾರದು. ಈ ಕುರಿತು ನಿರ್ದೇಶಿಸಲಾಗುವುದು ಎಂದು ನುಡಿದರು.&lt;/p&gt;&lt;p&gt;ಅದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಸಿಐಡಿ ತನಿಖೆಯನ್ನು ನ್ಯಾಯಾಲಯವು ತಡೆಹಿಡಿಯುವುದು ಸರಿಯಲ್ಲ. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ತನಿಖೆ ಮುಂದುವರಿಯಲಿ ಎಂದು ತಿಳಿಸಿದರು.&lt;/p&gt;&lt;p&gt;ಅದಕ್ಕೆ ನ್ಯಾಯಪೀಠ, ನನ್ನ ಆದೇಶ ಸರಿ ಇಲ್ಲವಾದರೆ, ಮೇಲಿನ ಕೋರ್ಟ್&zwnj;ನಲ್ಲಿ ನನ್ನ ಆದೇಶವನ್ನು ಪರೀಕ್ಷೆಗೆ ಒಳಪಡಿಸಬಹುದು. ಒಂದು ವಾರ ಕಾಲಾವಕಾಶ ನೀಡಲಾಗುವುದು. ನೀವು ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸುತ್ತಿರೋ ಸಲ್ಲಿಸಿ. ನಿಮ್ಮ ವಾದ ಆಲಿಸಲಾಗುವುದು. ಆದರೆ, ಪ್ರಕರಣವನ್ನು ಹಾಗೆ ಸುಮ್ಮನೆ ಬಿಡಲಾಗದು ಎಂದು ನುಡಿದರು.&lt;/p&gt;&lt;p&gt;ಅದಕ್ಕೆ ಎಸ್ ಪಿಪಿ ಜಗದೀಶ್ ಅವರು, ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬದ್ಧ. ನ್ಯಾಯಾಲಯ ತನಿಖೆಯ ಯಾವುದೇ ದಾಖಲೆಗಳನ್ನು ಕೇಳಿದರೂ ಕೊಡಲು ಬದ್ಧರಾಗಿದ್ದೇವೆ. ನ್ಯಾಯಾಲಯವೇ ತನಿಖೆಯನ್ನು ಮೇಲ್ವಿಚಾರಣೆ ನಡೆಸಬಹುದು. ಹಿಂದೆ ಸಿಐಡಿಯು ಉನ್ನತ ಶ್ರೇಣಿಯ ಅಧಿಕಾರಿಗಳು ತನಿಖೆ ನಡೆಸಿದ್ದು, ಯಶಸ್ವಿಯಾಗಿದ್ದಾರೆ. ಸಿಐಡಿ ತನಿಖೆಯ ಮೇಲೆ ಯಾವುದೇ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಬಾರದು ಎಂದು ಬಲವಾಗಿ ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-high-court-on-kpsc-case-to-cbi-shivashankarappa-sahukar-rav/articleshow-goe2vaz"/>
        </item>
        <item>
            <title><![CDATA[KPSC Scam: ಈ ಎರಡು ಜಿಲ್ಲೆಗಳಲ್ಲಿ 120 ಎಕರೆ ಭೂ ಖರೀದಿ! ಕೆಪಿಎಸ್‌ಸಿ ಸಾಹುಕಾರನ ವಿರುದ್ಧ ಮತ್ತೊಂದ ದೂರು!]]></title>
            <link>https://kannada.asianetnews.com/state/kpsc-scam-another-complaint-lodged-with-the-governor-against-shivashankarappa-sahukara-rav/articleshow-ote1kii</link>
            <guid isPermaLink="true">https://kannada.asianetnews.com/state/kpsc-scam-another-complaint-lodged-with-the-governor-against-shivashankarappa-sahukara-rav/articleshow-ote1kii</guid>
            <pubDate>Thu, 30 Jul 2026 08:05:28 +0530</pubDate>
            <description><![CDATA[ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್&zwnj; ವಿರುದ್ಧ ರಾಜ್ಯಪಾಲರಿಗೆ ಹೊಸ ದೂರು ಸಲ್ಲಿಕೆಯಾಗಿದೆ. ಸಾಹುಕಾರ್ ಕುಟುಂಬವು ಆದಾಯ ಮೀರಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 120 ಎಕರೆ ಭೂಮಿ ಖರೀದಿಸಿದೆ ಎಂದು ಆರೋಪಿಸಿ, ತನಿಖೆಗೆ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kydw0vwpzvzyxhaj76vh3rsx,imgname-----------------------2026-07-26t052936.216-1785024507798.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಶಿವಶಂಕರಪ್ಪ ಸಾಹುಕಾರ್&zwnj; ಕುಟುಂಬದಿಂದ ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಭೂಮಿ ಖರೀದಿ&lt;/li&gt; &lt;li&gt;ಪತ್ನಿ, ಕುಟುಂಬ ಸದಸ್ಯರ ಹೆಸರಲ್ಲಿ 120 ಎಕರೆ ಕೃಷಿ ಭೂಮಿ ಖರೀದಿ ಬಗ್ಗೆ ಗೌರ್ನರ್&zwnj;ಗೆ ದೂರು&lt;/li&gt; &lt;li&gt;ಇದು ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಸಾಕ್ಷಿ ಎಂದು ದೂರಿನಲ್ಲಿ ಪ್ರಸ್ತಾಪ&lt;/li&gt;&lt;/ul&gt;&lt;p&gt;&amp;nbsp;ಬೆಂಗಳೂರು (ಜು.30): ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಸಾಹುಕಾರ್&zwnj; ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಆದಾಯಕ್ಕಿಂತ ಹೆಚ್ಚಿನ ಮೊತ್ತದ ಸ್ಥಿರಾಸ್ತಿಯನ್ನು ಶಿವಶಂಕರಪ್ಪ ಸಾಹುಕಾರ್ ಕುಟುಂಬ ಖರೀದಿಸಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲಿಪಾಟೀಲ್ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.&lt;/p&gt;&lt;p&gt;2023-24ರ ಅವಧಿಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ 120 ಎಕರೆ ಕೃಷಿ ಹಾಗೂ ವಾಣಿಜ್ಯ ಭೂಮಿಯ ಖರೀದಿಯು ಸಾಹುಕಾರ್ ಕುಟುಂಬದಿಂದ ನಡೆದಿದೆ. ಶಿವಶಂಕರಪ್ಪ ಅವರ ಪತ್ನಿ ವಿಜಯಲಕ್ಷ್ಮೀ ಅವರ ಹೆಸರಿನಲ್ಲೂ ಜಮೀನು ಖರೀದಿ ಮಾಡಿರುವ ಸೇಲ್ ಡೀಡ್ ಪತ್ರಗಳನ್ನು ದೂರಿನೊಂದಿಗೆ ಲಗತ್ತಿಸಿ ಮರಿಲಿಂಗಗೌಡ ನೀಡಿದ್ದಾರೆ.&lt;/p&gt;&lt;p&gt;ಶಿವಶಂಕರಪ್ಪ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಖರೀದಿ ಮೇಲುನೋಟಕ್ಕೆ ಕಂಡು ಬರುತ್ತಿದೆ. ಜೊತೆಗೆ, ಅವರ ಪತ್ನಿ ವಿಜಯಲಕ್ಷ್ಮೀ ಅವರ ಆದಾಯದ ಮೂಲ ಏನು ಎಂಬುದು ಗೊತ್ತಿಲ್ಲ. ಸಾರ್ವಜನಿಕರ ಹಿತ ಕಾಯುವ ಹುದ್ದೆಯಲ್ಲಿದ್ದ ಶಿವಶಂಕರಪ್ಪ ಸಾಹುಕಾರ್&zwnj; ಅವರ ಆಸ್ತಿ ವಿವರಗಳು ಸಾರ್ವಜನಿಕರಿಗೆ ಗೊತ್ತಾಗಲೇಬೇಕು. ಹೀಗಾಗಿ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚಿಸುವಂತೆ ಮರಿಲಿಂಗಗೌಡ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/kpsc-scam-another-complaint-lodged-with-the-governor-against-shivashankarappa-sahukara-rav/articleshow-ote1kii"/>
        </item>
        <item>
            <title><![CDATA[UT Khader: ಅಮೆರಿಕದ ಸಂಸತ್‌ ಇತಿಹಾಸದಲ್ಲಿ ಸಚಿವ ಯು.ಟಿ. ಖಾದರ್‌ ಹೆಸರು ದಾಖಲು]]></title>
            <link>https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q</link>
            <guid isPermaLink="true">https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q</guid>
            <pubDate>Thu, 30 Jul 2026 07:26:56 +0530</pubDate>
            <description><![CDATA[ಕರ್ನಾಟಕದ ಆರೋಗ್ಯ ಸಚಿವ ಯು. ಟಿ. ಖಾದರ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವವನ್ನು ಗುರುತಿಸಿ ಅಮೆರಿಕದ ಸಂಸತ್ ಗೌರವಿಸಿದೆ. ಈ ಗೌರವ 'ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್' ಆಗಿ ಅಧಿಕೃತವಾಗಿ ದಾಖಲಾಗಿದ್ದು, ಅವರಿಗೆ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ಸಹ ಪ್ರದಾನ ಮಾಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyrbqn69s8s93tq384wkt2cn,imgname-ut-khader-1785376527561.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್&zwj;ಯಾಂಕಿಂಗ್&zwnj; ಸದಸ್ಯ, ನಾಯಕ ಜೊನಾಥನ್ ಜಾಕ್ಸನ್ ಅವರು, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ &lsquo;ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್&rsquo; ದಾಖಲೆಯನ್ನು ಪ್ರದಾನ ಮಾಡಿದರು.&lt;/p&gt;&lt;h2&gt;&lt;strong&gt;ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿ&lt;/strong&gt;&lt;/h2&gt;&lt;p&gt;ಈ ದಾಖಲೆ ಅಮೆರಿಕದ ಸಂಸತ್ತಿನ ಆರ್ಚಿವರ್ಸ್&zwnj;ನಲ್ಲಿ ಅಧಿಕೃತವಾಗಿ ದಾಖಲಾಗಿದ್ದು, ಅಮೆರಿಕದ ಸಂಸತ್ತಿನ ಗ್ರಂಥಾಲಯದಲ್ಲಿ ಶಾಶ್ವತವಾಗಿ ಸಂರಕ್ಷಿಸಲ್ಪಡಲಿದೆ. ಜೊತೆಗೆ ಅಮೆರಿಕದ ಕ್ಯಾಪಿಟಲ್ ಹಿಲ್&zwnj;ನ ಸೆಂಟ್ರಲ್ ರೋಟುಂಡಾದಲ್ಲಿ ಪ್ರದಾನಗೊಳ್ಳುವ ಪ್ರತಿಷ್ಠಿತ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ಮಂಗಳವಾರ ವಾಷಿಂಗ್ಟನ್ ಡಿ.ಸಿ.ಯಲ್ಲಿ ಡಾ. ಯು. ಟಿ. ಖಾದರ್ ಫರೀದ್ ಅವರಿಗೆ ಗೌರವಪೂರ್ವಕವಾಗಿ ಪ್ರದಾನಿಸಲಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್&zwnj;ಗಳಲ್ಲಿ ಜಂಕ್&zwnj; ಫುಡ್&zwnj; ನಿಷೇಧ: ಆರೋಗ್ಯ ಸಚಿವ ಯುಟಿ ಖಾದರ್ ಮತ್ತೊಂದು ಖಡಕ್ ನಿರ್ಧಾರ&lt;/strong&gt;&lt;/p&gt;&lt;p&gt;ಅಮೆರಿಕದ ಸಂಸತ್ತಿನ ಸದಸ್ಯ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರ ಡಾ. ವಿಜಯ್ ಜಿ. ಪ್ರಭಾಕರ್ ಹಾಗೂ ಎಎಂಇಸಿ ಯುಎಸ್&zwnj;ಎ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ನವೀನ್&zwnj;ಚಂದ್ರ ಕರ್ಣ ಸಾಕ್ಷಿಯಾದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bike Ambulance: ಟ್ರಾಫಿಕ್ ನಡುವೆ ಜೀವ ರಕ್ಷಕ; ಬೈಕ್ ಆಂಬುಲೆನ್ಸ್&zwnj;ಗೆ ಮರುಜೀವ ನೀಡಿದ ಸರ್ಕಾರ!&lt;/strong&gt;&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-health-minister-u-t-khader-s-name-recorded-in-the-history-of-the-us-parliament-mrq/articleshow-9ephf9q"/>
        </item>
        <item>
            <title><![CDATA[ಜು.7ಕ್ಕೆ ಅವಧಿ ಮುಗಿದರೂ ಹುದ್ದೆಬಿಡ್ತಿಲ್ಲ ಸಹಕಾರ ಎಂಡಿ! 34 ಹುದ್ದೆಗಳ ಮೇಲೆ ಕಣ್ಣಿಟ್ಟ ಪ್ರಭಾವಿ ಅಧಿಕಾರಿಗಳ ಮಕ್ಕಳು!]]></title>
            <link>https://kannada.asianetnews.com/state/karnataka-state-cooperative-consumer-sales-federation-md-km-asha-rav/articleshow-ufl1agi</link>
            <guid isPermaLink="true">https://kannada.asianetnews.com/state/karnataka-state-cooperative-consumer-sales-federation-md-km-asha-rav/articleshow-ufl1agi</guid>
            <pubDate>Thu, 30 Jul 2026 07:04:17 +0530</pubDate>
            <description><![CDATA[ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಆಶಾ ಅವರ ಅಧಿಕಾರಾವಧಿ ಮುಗಿದರೂ ಹುದ್ದೆ ತೊರೆದಿಲ್ಲ. ಮಹಾಮಂಡಳದಲ್ಲಿ ನಡೆಯುತ್ತಿರುವ 34 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಅಂತಿಮ ಹಂತವೇ ಈ ಜಟಾಪಟಿಗೆ ಕಾರಣವೆಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyra9r5kjv9f1behb42rhy5j,imgname-----------------------2026-07-30t065957.099-1785375023282.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಸಹಕಾರ ಮಂಡಳದ ಎಂಡಿಯಾಗಿರುವ ಕೆ.ಎಂ.ಆಶಾ ಅವರ ಕಾರ್ಯಾವಧಿ ಜು.7ಕ್ಕೆ ಮುಕ್ತಾಯ&lt;/li&gt; &lt;li&gt;ಆದರೂ ಹುದ್ದೆ ಬಿಡಲು ನಕಾರ. ಇದಕ್ಕೆ ಶೀಘ್ರ ಇಲಾಖೆಯಲ್ಲಿ ನಡೆವ ನೇಮಕಾತಿ ಕಾರಣ ಶಂಕೆ&lt;/li&gt; &lt;li&gt;34 ಆಯಕಟ್ಟಿನ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳು&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಜು.30): &lt;/strong&gt;ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದಲ್ಲಿ ಅವಧಿ ಮುಗಿದರೂ ಮಹಾಮಂಡಳದ ದೊಡ್ಡ ಕುರ್ಚಿ ಬಿಡದೆ ಎಳೆದಾಡುತ್ತಿರುವ ಪ್ರಕರಣ ತೆರೆಮರೆಯಲ್ಲೇ ಜಟಾಪಟಿಗೆ ಕಾರಣವಾಗಿದೆ. ಅಂತಿಮ ಹಂತ ತಲುಪಿರುವ 34 ಹುದ್ದೆಗಳ ನೇರ ನೇಮಕಾತಿಯೂ ಈ ಮೌನ ಜಟಾಪಟಿಗೆ ಮೂಲ ಎನ್ನಲಾಗಿದೆ.&lt;/p&gt;&lt;p&gt;ಇನ್ನೂ ವಿಶೇಷ ಎಂದರೆ, ಈ ಹುದ್ದೆಗಳ ನೇಮಕಾತಿ ಬಯಸಿ ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳು ಅಂತಿಮ ಪಟ್ಟಿ ಸೇರಲು ಲಾಬಿ ನಡೆಸಿರುವ ಖಚಿತ ಮಾಹಿತಿ ಇದೆ.&lt;/p&gt;&lt;p&gt;ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾಗಿ ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕರಾದ ಕೆ.ಎಂ. ಆಶಾ ಅವರನ್ನು ನೇಮಿಸಿ 2004ರ ಜುಲೈ 8ರಂದು ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಇದೇ ಜುಲೈ 7ರಂದು ಮಹಾಮಂಡಳದ ಎಂಡಿಯಾಗಿ ಕೆ.ಎಂ. ಆಶಾ ಅವರ ಅವಧಿ ಮುಗಿದಿದೆ.&lt;/p&gt;&lt;p&gt;ಅವಧಿ ಮುಗಿದ ಹಿನ್ನಲೆಯಲ್ಲಿ ಕೆ.ಎಂ. ಆಶಾ ಅವರ ಜಾಗಕ್ಕೆ ಸಹಕಾರ ಸಂಘಗಳ ಜಂಟಿ ನಿಬಂಧಕ ಶಶಿಧರ್ ಅವರನ್ನು ಅಧಿಕ ಪ್ರಭಾರದಲ್ಲಿರಿಸಿ ಸಹಕಾರ ಇಲಾಖೆಯು ಜು.13ರಂದು ಕೂಡಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಸರ್ಕಾರ ಆದೇಶ ಹೊರಡಿಸಿದ್ದರೂ ಕೆ.ಎಂ. ಆಶಾ ಅವರು ಶಶಿಧರ್ ಅವರಿಗೆ ಅಧಿಕಾರ ಬಿಟ್ಟುಕೊಡದೆ ತಾವೇ ಮುಂದುವರೆದಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಎಂಡಿಯಾಗಿ ಮರು ನೇಮಕ ಅಥವಾ ಅವಧಿ ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ಅಕ್ರಮವಾಗಿ ಹುದ್ದೆಯಲ್ಲಿ ಮುಂದುವರೆದಿದ್ದಾರೆ.&lt;/p&gt;&lt;h2&gt;ಏನದು 34 ನೇಮಕಾತಿ?:&lt;/h2&gt;&lt;p&gt;ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಂಡಳಿಯು ಫಾರ್ಮಸಿಸ್ಟ್, ಪ್ರಥಮ ದರ್ಜೆ ಸಹಾಯಕರು, ವಿಕ್ರಯ ಸಹಾಯಕರು ಸೇರಿದಂತೆ 34 ಹುದ್ದೆಗಳಿಗೆ ಕಳೆದ ಆಗಸ್ಟ್&zwnj;ನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ಈ ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳು ಮುಗಿದು ಅಂತಿಮ ಪಟ್ಟಿ ಪ್ರಕಟಿಸುವುದೊಂದೇ ಬಾಕಿ ಉಳಿದಿದೆ. ಕೆ.ಎಂ. ಆಶಾ ಅವರ ಎಂಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡಿಲ್ಲ. ಈ ಅಂತಿಮ ಪಟ್ಟಿ ಸೇರಲು ಪ್ರಭಾವಿ ಅಧಿಕಾರಿಗಳ ಮಕ್ಕಳು, ಬಂಧುಗಳ ಲಾಬಿಯಿಂದಾಗಿ ಪಟ್ಟಿ ಪ್ರಕಟ ತಡವಾಗಿದೆ ಎನ್ನಲಾಗಿದೆ. ಎಂಡಿ ಅವಧಿ ವಿಸ್ತರಿಸಿಕೊಂಡು ಅಂತಿಮ ಪಟ್ಟಿ ಪ್ರಕಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳಿವೆ.&lt;/p&gt;&lt;h3&gt;ಕ್ಷಮಿಸಿ ನನಗೆ ಅಧಿಕಾರವಿಲ್ಲ!&lt;/h3&gt;&lt;p&gt;ಪ್ರಭಾರಿಯಾಗಿ ಅಧಿಕಾರ ಸ್ವೀಕರಿಸಬೇಕಾದ ಶಶಿಧರ್ ಅವರನ್ನು &lsquo;ಕನ್ನಡಪ್ರಭ&rsquo; ಸಂಪರ್ಕಿಸಿದಾಗ, ಪ್ರತಿಕ್ರಿಯಿಸಲು ನನಗೆ ಅಧಿಕಾರವಿಲ್ಲ ಕ್ಷಮಿಸಿ ಎಂದು ಫೋನ್ ಕಟ್ ಮಾಡಿದರು. ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ ಅಕ್ರಮವಾಗಿ ಮುಂದವರೆದಿರುವ ಕೆ.ಎಂ. ಆಶಾ ಅವರನ್ನು &lsquo;ಕನ್ನಡಪ್ರಭ&rsquo;ವು ಸಂಪರ್ಕಿಸಲು ನಡೆಸಿದ ಪ್ರಯತ್ನ ವಿಫಲವಾಯಿತು.&lt;/p&gt;&lt;p&gt;ಈ ಕುರಿತು &lsquo;ಕನ್ನಡಪ್ರಭ&rsquo;ವು ಸಹಕಾರ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್ ಅವರನ್ನು ಸಂಪರ್ಕಿಸಿದಾಗ, ಅವಧಿ ಮುಗಿದಿದೆ ಎಂದು ಪ್ರಭಾರಿ ಅಧಿಕಾರಿಯನ್ನು ನಿಯೋಜಿಸಿದ್ದಾರೆ. ಆದರೆ, ಎಂಡಿ ಅವಧಿ ವಿಸ್ತರಣೆಗೆ ಮುಖ್ಯಮಂತ್ರಿಗಳಿಗೆ ಫೈಲ್ ಕಳುಹಿಸಲಾಗಿದೆ. ಇನ್ನೊಂದೆರಡು ದಿನದಲ್ಲಿ ಬರಬಹುದು ಎಂದರು. ಹಾಗೆ ಮುಂದುವರೆಸುವುದಾದರೆ ಶಶಿಧರ್ ಅವರನ್ನು ನಿಯೋಜಿಸಿ ಆದೇಶಿಸುವ ಅಗತ್ಯ ಇರಲಿಲ್ಲ ಅಲ್ಲವೇ? ಅವಧಿ ಮುಗಿದ ಮೇಲೂ ಅವರು ಫೈಲುಗಳಿಗೆ ಸಹಿ ಹಾಕಬಹುದೇ ಎಂಬ ಪ್ರಶ್ನೆಗಳಿಗೆ, &lsquo;ಆರೋಗ್ಯ ಸರಿ ಇಲ್ಲ, ಮನೆಯಲ್ಲಿದ್ದೇನೆ. ತಿಳಿದುಕೊಂಡು ಹೇಳುವೆ&rsquo; ಎಂದರು ಸಂಜಯ್ ಶೆಟ್ಟಣ್ಣನವರ್.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-state-cooperative-consumer-sales-federation-md-km-asha-rav/articleshow-ufl1agi"/>
        </item>
        <item>
            <title><![CDATA[Karnataka Bandh:  ಕಾವೇರಿ ನೀರು ವಿವಾದ; ನಾಳೆ ಹೈವೋಲ್ಟೇಜ್ ಮೀಟಿಂಗ್, ಕನ್ನಡ ಸಂಘಟನೆಗಳಿಂದ ಬಿಗ್ ಅಪ್ಡೇಟ್!]]></title>
            <link>https://kannada.asianetnews.com/state/cauvery-water-dispute-karnataka-and-tamil-nadu-conflict-again-will-karnataka-bandh-tomorrow-rav/articleshow-mzh17zt</link>
            <guid isPermaLink="true">https://kannada.asianetnews.com/state/cauvery-water-dispute-karnataka-and-tamil-nadu-conflict-again-will-karnataka-bandh-tomorrow-rav/articleshow-mzh17zt</guid>
            <pubDate>Thu, 30 Jul 2026 05:38:03 +0530</pubDate>
            <description><![CDATA[ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿವೆ. ರಾಜ್ಯದಲ್ಲಿ ನೀರಿನ ತೀವ್ರ ಕೊರತೆ ಇದ್ದು, ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್&zwnj; ಮಾಡುವುದಾಗಿ ವಾಟಾಳ್ ನಾಗರಾಜ್ ನೇತೃತ್ವದ ಒಕ್ಕೂಟ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyr4v53j0ryez771np8f2g69,imgname-chatgpt-image-jul-30--2026--05-24-32-am-1785369302130.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಜು.30):&lt;/strong&gt; ಕಾವೇರಿ ನೀರು ವಿವಾ(Cauvery water dispute)ದದ ಕಿಚ್ಚು ಮತ್ತೆ ಮುನ್ನಲೆಗೆ ಬಂದಿದ್ದು. ಕಾವೇರಿ ನೀರು ನಿರ್ವಹಣಾ ಮಂಡಳಿ (CWRC) ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು. ಅಲ್ಲದೆ, ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿವೆ.&lt;/p&gt;&lt;h2&gt;ನಾಳ ವಾಟಾಳ್ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್&lt;/h2&gt;&lt;p&gt;ಪ್ರತಿ ದಿನ 3500 ಕ್ಯುಸೆಕ್&zwnj; ನೀರನ್ನು ತಮಿಳುನಾಡಿಗೆ ಹರಿಸುವ ಕಾವೇರಿ ಜಲಮಂಡಳಿ ಆದೇಶದ ವಿರುದ್ಧ ಕರ್ನಾಟಕ ಬಂದ್&zwnj; ನಡೆಸುವ ಕುರಿತು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್&zwnj; ನಾಗರಾಜ್&zwnj; ಅಧ್ಯಕ್ಷತೆಯಲ್ಲಿ ಜು.31ರಂದು ಬೆಳಗ್ಗೆ 11ಕ್ಕೆ ನಗರದ ವುಡ್&zwnj;ಲ್ಯಾಂಡ್&zwnj; ಹೋಟೆಲ್&zwnj;ನಲ್ಲಿ ಸಭೆ ಕರೆಯಲಾಗಿದೆ. ಈಗಾಗಲೇ ಕನ್ನಡಪರ ಎಲ್ಲ ಸಂಘಟನೆಗಳಿಗೂ ಆಹ್ವಾನ ನೀಡಲಾಗಿದ್ದು, ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯಾದ್ಯಂತ ಬಂದ್&zwnj; ನಡೆಸಿ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ವಾಟಾಳ್&zwnj; ನಾಗರಾಜ್&zwnj; ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;ನಮಗಿಲ್ಲದ ನೀರು ತಮಿಳು ನಾಡಿಗೇಕೆ: ನಾರಯಣಗೌಡ&lt;/h3&gt;&lt;p&gt;ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಕೆಆರ್&zwnj;ಎಸ್&zwnj;, ಕಬಿನಿ, ಹೇಮಾವತಿ, ಹಾರಂಗಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಈ ವೇಳೆ ಕರ್ನಾಟಕದ ಜನರಿಗೆ ಕುಡಿಯಲು ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಸುಮಾರು 4.5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸೂಚಿಸಿರುವುದು ವಾಸ್ತವ ಸ್ಥಿತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಕ್ರಮವಾಗಿದೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಕಿಡಿಕಾರಿದರು.&lt;/p&gt;&lt;p&gt;ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರವೇಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಕ್ಷಣವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿ, ಕರ್ನಾಟಕದ ನೈಜ ಜಲಸ್ಥಿತಿಯನ್ನು ವೈಜ್ಞಾನಿಕ ಅಂಕಿ-ಅಂಶಗಳೊಂದಿಗೆ ಮಂಡಿಸಬೇಕು. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಸೇರಿದಂತೆ ಲಭ್ಯವಿರುವ ಎಲ್ಲ ಕಾನೂನು ವೇದಿಕೆಗಳಲ್ಲಿ ಹೋರಾಟ ನಡೆಸಿ, ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.&lt;/p&gt;&lt;h3&gt;ದೆಹಲಿಯಲ್ಲಿಂದು ಕಾವೇರಿ ನೀರು ಪ್ರಾಧಿಕಾರದ ಸಭೆ&lt;/h3&gt;&lt;p&gt;ಮುಂಗಾರು ಮಳೆ ಕೊರತೆ, ರಾಜ್ಯದಲ್ಲಿನ ತೀವ್ರ ಬರ ಹಾಗೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಬೆನ್ನಲ್ಲೇ ದೆಹಲಿಯಲ್ಲಿ ಗುರುವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಮುಂದಿನ 15 ದಿನ ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್&zwnj; ನಂತೆ 4.5 ಟಿಎಂಸಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಯಲಿದೆ.&lt;/p&gt;&lt;p&gt;ದೆಹಲಿಯ ಕಾವೇರಿ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದ್ದು, ಕರ್ನಾಟಕ ಎಸಿಎಸ್ ಗೌರವಗುಪ್ತಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ತೀವ್ರ ಬರದ ನಡುವೆಯೇ ತಮಿಳುನಾಡಿಗೆ ನೀರು ಹರಿಸಬೇಕೆಂಬ ಸಮಿತಿಯ ಶಿಫಾರಸ್ಸು, ಕಾವೇರಿ ಕೊಳ್ಳದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಗುರುವಾರ ನಡೆಯಲಿರುವ ಪ್ರಾಧಿಕಾರದ ಸಭೆ ಎಲ್ಲರ ಗಮನ ಸೆಳೆದಿದ್ದು, ಸಮಿತಿಯ ಆದೇಶಕ್ಕೆ ಪ್ರಾಧಿಕಾರ ತಡೆ ನೀಡುತ್ತಾ? ಎಂಬುದು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶದ ಜಲ-ಹವಾಮಾನ ಪರಿಸ್ಥಿತಿ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ, 2026-27ರ ಜಲ ವರ್ಷದಲ್ಲಿ ಪುದುಚೇರಿಯ ಯು.ಟಿ.ಯ ಬಿಳಿಗುಂಡ್ಲು ಮತ್ತು ಕಾರೈಕಲ್&zwnj; ಪ್ರದೇಶದಲ್ಲಿ ಕಂಡು ಬಂದ ಸಂಚಿತ ಹರಿವಿನ ಕೊರತೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/cauvery-water-dispute-karnataka-and-tamil-nadu-conflict-again-will-karnataka-bandh-tomorrow-rav/articleshow-mzh17zt"/>
        </item>
        <item>
            <title><![CDATA[Cauvery water: ಕೆಆರ್‌ಎಸ್‌ನಲ್ಲಿ ಈಗ ಉಳಿದಿರುವುದು ಕೇವಲ 8 ಟಿಎಂಸಿ ನೀರು ಮಾತ್ರ! ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ]]></title>
            <link>https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz</link>
            <guid isPermaLink="true">https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz</guid>
            <pubDate>Thu, 30 Jul 2026 05:55:30 +0530</pubDate>
            <description><![CDATA[ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದರೆ ಕೆಆರ್&zwnj;ಎಸ್ ಜಲಾಶಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗುವ ಆತಂಕವಿದೆ. ಪ್ರಸ್ತುತ ಕೇವಲ 8 ಟಿಎಂಸಿ ನೀರು ಲಭ್ಯವಿದ್ದು, ಹಾರಂಗಿ ಜಲಾಶಯ ಭರ್ತಿಯಾಗಿದ್ದರೂ ಕೊಡಗಿನಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kycpdqmcphs5vw7bzz1n2evc,imgname-krs-dam-1784985083532.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.30): &lt;/strong&gt;ಒಂದೆಡೆ ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನಿತ್ಯ 4 ಟಿಎಂಸಿ ನೀರು ಹರಿಸುವಂತೆ ಸೂಚಿಸಿದೆ. ಆದರೆ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ ಇರುವುದು ಕೇವಲ 8 ಟಿಎಂಸಿ ನೀರು ಮಾತ್ರ. ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸ್ಸಿನಂತೆ ತಮಿಳುನಾಡಿಗೆ 15 ದಿನ ನೀರು ಹರಿಸಿದರೆ 4 ಟಿಎಂಸಿಯಷ್ಟು ನೀರು ಖಾಲಿ ಆಗಲಿದೆ. ಆಗ ಉಳಿಯೋದು ಕೇವಲ 4 ಟಿಎಂಸಿ ನೀರು ಮಾತ್ರ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;ಕಾವೇರಿ ನೀರು ವಿವಾದ:ಕರ್ನಾಟಕ ಬಂದ್&zwnj; ಆಗುತ್ತಾ? ನಾಳೆ ಹೈವೋಲ್ಟೇಜ್ ಮೀಟಿಂಗ್, ಕನ್ನಡ ಸಂಘಟನೆಗಳಿಂದ ಬಿಗ್ ಅಪ್ಡೇಟ್!&lt;/p&gt;&lt;p&gt;ಈ ಆದೇಶ ಪಾಲನೆಯಾಗುವ ಸನ್ನಿವೇಶ ಸೃಷ್ಟಿಯಾದರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿ 91.94 ಅಡಿ ನೀರು ದಾಖಲಾಗಿದೆ. ಜಲಾಶಯಕ್ಕೆ ಕೇವಲ 2842 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 1747 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿರುವ ನೀರಿನಲ್ಲಿ ಬಳಕೆಗೆ ಸಿಗುವುದು ಕೇವಲ 8.747 ಟಿಎಂಸಿ ಅಡಿ ನೀರು ಮಾತ್ರ ಎನ್ನಲಾಗಿದೆ.&lt;/p&gt;&lt;h2&gt;ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?&lt;/h2&gt;&lt;p&gt;ಕಬಿನಿ 75% 2284 2275.79&lt;/p&gt;&lt;p&gt;ಹೇಮಾವತಿ 65% 2922 2906.60&lt;/p&gt;&lt;p&gt;ತುಂಗಭದ್ರಾ 33% 1633 1608.70&lt;/p&gt;&lt;p&gt;ಸೂಪಾ(ಮೀ.) 36% 564 536.10&lt;/p&gt;&lt;p&gt;ಕೆಆರ್&zwnj;ಎಸ್ 35% 124.80 91.94&lt;/p&gt;&lt;p&gt;ಘಟಪ್ರಭಾ 62% 2175 2147.67&lt;/p&gt;&lt;p&gt;ಲಿಂಗನಮಕ್ಕಿ 30% 1819.12 1774.15&lt;/p&gt;&lt;p&gt;ಭದ್ರಾ 53% 2158 2126.41&lt;/p&gt;&lt;p&gt;ಹಾರಂಗಿ 96% 2859 2857.88&lt;/p&gt;&lt;p&gt;ಆಲಮಟ್ಟಿ(ಮೀ.) 96% 519.60 519.29&lt;/p&gt;&lt;p&gt;ನಾರಾಯಣಪುರ(ಮೀ.) 94% 492.25 491.81&lt;/p&gt;&lt;p&gt;ಮಲಪ್ರಭಾ 40% 2079.50 2058.30&lt;/p&gt;&lt;h3&gt;1825 ಕ್ಯೂಸೆಕ್&zwnj; ಹಾರಂಗಿ ಅಣೆಕಟ್ಟೆಯಿಂದ ಬಿಡುಗಡೆ&lt;/h3&gt;&lt;p&gt;ಮಡಿಕೇರಿ: ಕೊಡಗಿನ ಹಾರಂಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 8.1 ಟಿಎಂಸಿ ನೀರು ಸಂಗ್ರಹವಾಗಿದೆ. 2859 ಅಡಿ ಗರಿಷ್ಠ ಮಟ್ಟದ ಹಾರಂಗಿ ಜಲಾಶಯದಲ್ಲಿ ಸದ್ಯ 2858 ಅಡಿ ನೀರು ಸಂಗ್ರಹವಾಗಿದ್ದು, 1825 ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯ ಭರ್ತಿಯಾಗಿದ್ದರೂ ಕೊಡಗಿನಲ್ಲೇ ತೀವ್ರ ಮಳೆ ಕೊರತೆ ಕಂಡು ಬಂದಿದೆ. ಕಳೆದ ವರ್ಷ ಈ ಅವಧಿಗೆ ಜಿಲ್ಲೆಯಲ್ಲಿ 2099 ಮಿಲಿ ಮೀಟರ್ ಮಳೆ ಆಗಿತ್ತು. ಆದರೆ ಈ ವರ್ಷ ಕೇವಲ 871 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ 1150ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆ ಕೊರತೆಯಾಗಿದೆ.&lt;/p&gt;]]></content:encoded>
            <category>state</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/what-current-water-levels-in-the-karnataka-reservoirs-including-krs-today-rav/articleshow-vrdnmpz"/>
        </item>
        <item>
            <title><![CDATA[ಬೆಂಗಳೂರಲ್ಲಿ ಸ್ವಿಗ್ಗಿ, ಜೊಮೊಟೋ ನಿಷೇಧ: ಸಭೆ ಬಳಿಕ  ಆ.15ರವರೆಗೆ ಗಡುವು ಕೊಟ್ಟ ಹೋಟೆಲ್ ಮಾಲೀಕರು!]]></title>
            <link>https://kannada.asianetnews.com/gallery/state/swiggy-boycott-in-bengaluru-hotel-owners-threaten-food-delivery-app-ban-gdv9330</link>
            <guid isPermaLink="true">https://kannada.asianetnews.com/gallery/state/swiggy-boycott-in-bengaluru-hotel-owners-threaten-food-delivery-app-ban-gdv9330</guid>
            <pubDate>Wed, 29 Jul 2026 18:26:06 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಸ್ವಿಗ್ಗಿ ಮತ್ತು ಜೊಮೊಟೋ ವಿರುದ್ಧ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಧಿಕೃತ ಆಫರ್&zwnj;ಗಳು, ಹೆಚ್ಚಿನ ಕಮಿಷನ್ ಮತ್ತು ಪಾವತಿ ವಿಳಂಬದಂತಹ ಶೋಷಣೆಯನ್ನು ವಿರೋಧಿಸಿ, ಆಗಸ್ಟ್ 15ರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಸೇವೆಗಳನ್ನು ಬಹಿಷ್ಕರಿಸುವುದಾಗಿಎಚ್ಚರಿಕೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypyr10edkfwe4dtsgmtn43m,imgname-swiggy-zomato-ban-in-bengaluru--2--1785329353742.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ಸ್ವಿಗ್ಗಿ ಮತ್ತು ಜೊಮೊಟೋ ವಿರುದ್ಧ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಧಿಕೃತ ಆಫರ್&zwnj;ಗಳು, ಹೆಚ್ಚಿನ ಕಮಿಷನ್ ಮತ್ತು ಪಾವತಿ ವಿಳಂಬದಂತಹ ಶೋಷಣೆಯನ್ನು ವಿರೋಧಿಸಿ, ಆಗಸ್ಟ್ 15ರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಸೇವೆಗಳನ್ನು ಬಹಿಷ್ಕರಿಸುವುದಾಗಿಎಚ್ಚರಿಕೆ ನೀಡಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಜು.29): ರಾ&lt;/strong&gt;ಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆನ್&zwnj;ಲೈನ್ ಫುಡ್ ಡೆಲಿವರಿ (Online Food Delivery) ದೈತ್ಯ ಸಂಸ್ಥೆಗಳಾದ ಸ್ವಿಗ್ಗಿ (Swiggy) ಮತ್ತು ಜೊಮೊಟೋ (Zomato) ವಿರುದ್ಧ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;&lt;p&gt;ಹೋಟೆಲ್ ಉದ್ಯಮಿಗಳ ಹೊಟ್ಟೆಯ ಮೇಲೆ ಹೊಡೆದು ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ 'ಬೃಹತ್ ಬೆಂಗಳೂರು ಹೋಟೆಲ್&zwnj;ಗಳ ಸಂಘ' (Bruhat Bengaluru Hotels Association - BBHA), ನಗರದಲ್ಲಿ ಸ್ವಿಗ್ಗಿ ಸೇವೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವ (Boycott) ಅಥವಾ ಆ್ಯಪ್ ಬಂದ್ ಮಾಡಿಸುವ ಗಂಭೀರ ಎಚ್ಚರಿಕೆ ನೀಡಿದೆ.&lt;/p&gt;&lt;img&gt;&lt;p&gt;&lt;strong&gt;ಹೋಟೆಲ್ ಮಾಲೀಕರ ತುರ್ತು ಸಭೆ (Emergency Meeting):&lt;/strong&gt;&lt;/p&gt;&lt;p&gt;ಸ್ವಿಗ್ಗಿ ಆ್ಯಪ್&zwnj;ನ ಅಸಮರ್ಪಕ ನೀತಿಗಳಿಂದಾಗಿ (App Policies) ಬೆಂಗಳೂರಿನ ಸಣ್ಣ ಹಾಗೂ ದೊಡ್ಡ ಹೋಟೆಲ್&zwnj;ಗಳಿಗೆ ಪ್ರತಿದಿನ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮತ್ತು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು 'ಬೆಂಗಳೂರು ಹೋಟೆಲ್ ಮಾಲೀಕರ ಸಂಘ'ದ ಗೌರವಾನ್ವಿತ ಅಧ್ಯಕ್ಷ ಪಿ.ಸಿ. ರಾವ್ (P.C. Rao) ಅವರ ನೇತೃತ್ವದಲ್ಲಿ ಮಹತ್ವದ ತುರ್ತು ಸಭೆಯನ್ನು (Emergency Meeting) ನಡೆಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಅನಗತ್ಯ ಆಫರ್&zwnj;ಗಳ (Unauthorized Offers) ಹೊರೆ:&lt;/strong&gt;&lt;/p&gt;&lt;p&gt;ಹೋಟೆಲ್ ಮಾಲೀಕರ ಗಮನಕ್ಕೆ ತರದೆ ಸ್ವಿಗ್ಗಿ ಆ್ಯಪ್&zwnj;ನಲ್ಲಿ ಬೃಹತ್ ಆಫರ್&zwnj;ಗಳನ್ನು ಘೋಷಿಸಲಾಗುತ್ತಿದೆ. ಉದಾಹರಣೆಗೆ ಗ್ರಾಹಕರಿಗೆ 'ಬೈ ಒನ್ ಗೆಟ್ ಒನ್' (Buy 1 Get 1 Free) ಆಫರ್ ನೀಡಲಾಗುತ್ತದೆ. ಆದರೆ, ಸ್ವಿಗ್ಗಿ ಸಂಸ್ಥೆಯು ಹೋಟೆಲ್&zwnj;ಗೆ ಪಾವತಿಸುವುದು ಕೇವಲ ಒಂದು ಪ್ಲೇಟ್&zwnj;ನ ಹಣ ಮಾತ್ರ! ಉಚಿತವಾಗಿ ಹೋಗುವ ಮತ್ತೊಂದು ಪ್ಲೇಟ್&zwnj;ನ ಸಂಪೂರ್ಣ ನಷ್ಟವನ್ನು ಹೋಟೆಲ್ ಮಾಲೀಕರೇ ಭರಿಸಬೇಕಾಗಿದೆ.&lt;/p&gt;&lt;img&gt;&lt;p&gt;&lt;strong&gt;ಕ್ಯಾನ್ಸಲ್ ಆದ ಆರ್ಡರ್&zwnj;ಗಳ (Cancelled Orders) ನಷ್ಟ:&lt;/strong&gt;&lt;/p&gt;&lt;p&gt;ಗ್ರಾಹಕರು ಆನ್&zwnj;ಲೈನ್&zwnj;ನಲ್ಲಿ ಆರ್ಡರ್ ಮಾಡಿದ ನಂತರ, ಆಹಾರ ಸಿದ್ಧವಾಗಿ ಡೆಲಿವರಿ ಬಾಯ್ (Delivery Boy) ಕೈಗೆ ತಲುಪಿದ ಮೇಲೆಯೂ ಕೆಲವು ಗ್ರಾಹಕರು ಆರ್ಡರ್ ಕ್ಯಾನ್ಸಲ್ ಮಾಡುತ್ತಾರೆ. ಹೀಗೆ ಕ್ಯಾನ್ಸಲ್ ಆದ ಆಹಾರ ಮತ್ತೆ ಹೋಟೆಲ್&zwnj;ಗೆ ವಾಪಸ್ ಬರುವುದಿಲ್ಲ. ಬದಲಿಗೆ ಆ ಆಹಾರವನ್ನು ಡೆಲಿವರಿ ಬಾಯ್ಸ್&zwnj;ಗಳೇ ತಿನ್ನುತ್ತಿದ್ದಾರೆ ಹಾಗೂ ಹೋಟೆಲ್&zwnj;ಗೆ ಅದರ ಬಿಲ್ ಮೊತ್ತ ಸಿಗುತ್ತಿಲ್ಲ. ಇದರಿಂದ ಆಹಾರ (Food) ಮತ್ತು ಹಣ ಎರಡನ್ನೂ ಹೋಟೆಲ್ ಮಾಲೀಕರು ಕಳೆದುಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಹೆಚ್ಚಿನ ಕಮಿಷನ್ ಮತ್ತು ಜಾಹೀರಾತು ವೆಚ್ಚ:&lt;/strong&gt;&lt;/p&gt;&lt;p&gt;ಹೋಟೆಲ್&zwnj;ಗಳು ಕಷ್ಟಪಟ್ಟು ಗುಣಮಟ್ಟದ ಆಹಾರ ಸಿದ್ಧಪಡಿಸಿ ಕಳುಹಿಸಿದರೂ ಬಿಲ್ ಮೊತ್ತದಲ್ಲಿ ಶೇ. 25 ರಿಂದ 30 ರಷ್ಟು ಕಮಿಷನ್ (Commission) ಕಡಿತಗೊಳಿಸಲಾಗುತ್ತಿದೆ. ಜೊತೆಗೆ ಆ್ಯಪ್&zwnj;ನಲ್ಲಿ ಹೋಟೆಲ್&zwnj;ಗಳ ಪ್ರಮೋಷನ್ ಹೆಸರಿನಲ್ಲಿ ಅನಗತ್ಯ ಜಾಹೀರಾತು ವೆಚ್ಚಗಳನ್ನು (Advertisement Charges) ಬಲವಂತವಾಗಿ ಹೋಟೆಲ್ ಮಾಲೀಕರ ಮೇಲೆ ಹೇರಲಾಗುತ್ತಿದೆ. ಹೋಟೆಲ್ ಮಾಲೀಕರ ಖಾತೆಗೆ ಹಣವೂ ಸರಿಯಾದ ಸಮಯಕ್ಕೆ ಪಾವತಿಯಾಗುತ್ತಿಲ್ಲ (Payment Delay).&lt;/p&gt;&lt;img&gt;&lt;p&gt;&lt;strong&gt;ಆಗಸ್ಟ್ 15ರ ಗಡುವು (August 15 Deadline):&lt;/strong&gt;&lt;/p&gt;&lt;p&gt;ಆನ್&zwnj;ಲೈನ್ ಫುಡ್ ಆರ್ಡರ್&zwnj;ಗಳು ಗ್ರಾಹಕರ ಜೇಬಿಗೂ ತುಟ್ಟಿಯಾಗುತ್ತಿದ್ದು, ಹೋಟೆಲ್ ಉದ್ಯಮಿಗಳಿಗೂ ಭಾರೀ ನಷ್ಟ ಉಂಟುಮಾಡುತ್ತಿವೆ. ಈ ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಶೋಷಣೆಯನ್ನು ತಡೆಯಬೇಕು. ಒಂದು ವೇಳೆ ಸ್ವಿಗ್ಗಿ ಮತ್ತು ಜೊಮೊಟೋ ಸಂಸ್ಥೆಗಳು ತಮ್ಮ ನಿಯಮಗಳನ್ನು ಸರಿಪಡಿಸಿಕೊಳ್ಳದಿದ್ದರೆ, ಆಗಸ್ಟ್ 15ರ ನಂತರ ಬೆಂಗಳೂರಿನಾದ್ಯಂತ ಸ್ವಿಗ್ಗಿ-ಜೊಮೊಟೋ ಮೂಲಕ ಫುಡ್ ಡೆಲಿವರಿ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ (Delivery Boycott) ಹೋಟೆಲ್ ಸಂಘ ಅಂತಿಮ ಎಚ್ಚರಿಕೆ ನೀಡಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/swiggy-boycott-in-bengaluru-hotel-owners-threaten-food-delivery-app-ban-gdv9330"/>
        </item>
        <item>
            <title><![CDATA[ಸಚಿವ ಸಂಪುಟ ವಿಸ್ತರಣೆ ಸಭೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ನಡೆಗೆ ಬೇಸತ್ತು ಊರಿನತ್ತ ಹೊರಟ ಆಕಾಂಕ್ಷಿಗಳು!]]></title>
            <link>https://kannada.asianetnews.com/politics/karnataka-cabinet-expansion-meeting-postponed-again-frustrated-mlas-return-to-home/articleshow-by08hbi</link>
            <guid isPermaLink="true">https://kannada.asianetnews.com/politics/karnataka-cabinet-expansion-meeting-postponed-again-frustrated-mlas-return-to-home/articleshow-by08hbi</guid>
            <pubDate>Wed, 29 Jul 2026 17:13:01 +0530</pubDate>
            <description><![CDATA[ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಕುರಿತ ದೆಹಲಿ ಸಭೆ ಮತ್ತೆ ಮುಂದೂಡಲ್ಪಟ್ಟಿದೆ. ಹೈಕಮಾಂಡ್ ನಾಯಕರ ವಿಳಂಬ ಧೋರಣೆಯಿಂದಾಗಿ ರಾಜ್ಯ ನಾಯಕರು ಮತ್ತು ಸಚಿವ ಆಕಾಂಕ್ಷಿ ಶಾಸಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ಕೆಲವರು ದೆಹಲಿಯಿಂದ ವಾಪಸಾಗುತ್ತಿದ್ದಾರೆ. ಈ ರಾಜಕೀಯ ಹೈಡ್ರಾಮಾ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyptq9z5tx0rzc53bf2mqscn,imgname-karnataka-congress-rahul-gandhi-1785325135845.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ/ಬೆಂಗಳೂರು (ಜು.29): ಕ&lt;/strong&gt;ರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್&zwnj;ರಚನೆಯ ಕಸರತ್ತು ದೆಹಲಿಯಲ್ಲಿ ತೀವ್ರ ಕುತೂಹಲ ಮತ್ತು ಹೈಡ್ರಾಮಾಗೆ ಕಾರಣವಾಗಿದೆ. ಇಂದು ರಾತ್ರಿ ಹೈಕಮಾಂಡ್ ನಾಯಕರ ಜೊತೆ ನಡೆಯಬೇಕಿದ್ದ ಪ್ರಮುಖ ಸಭೆಯು ಮತ್ತೆ ನಾಳೆಗೆ ಮುಂದೂಡಿಕೆಯಾಗಿದೆ. ಇದರಿಂದಾಗಿ ಕಳೆದೆರಡು-ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿರುವ ರಾಜ್ಯ ನಾಯಕರು ಹಾಗೂ ಸಚಿವ ಆಕಾಂಕ್ಷಿ ಶಾಸಕರಿಗೆ ತೀವ್ರ ನಿರಾಶೆಯಾಗಿದೆ.&lt;/p&gt;&lt;h2&gt;ಸಭೆ ಮುಂದೂಡಿಕೆಗೆ ಕಾರಣವೇನು?&lt;/h2&gt;&lt;p&gt;ಹೈಕಮಾಂಡ್ ನಾಯಕರು ಇತರೆ ಪ್ರಮುಖ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿ ಸೇರಿದಂತೆ ತುರ್ತು ರಾಜಕೀಯ ವಿದ್ಯಮಾನಗಳಿಂದಾಗಿ ನಾಯಕರು ಲಭ್ಯವಾಗಿಲ್ಲ. ಹೀಗಾಗಿ ಸಭೆಯನ್ನು ನಾಳೆಗೆ ಮುಂದೂಡಲಾಗಿದ್ದು, ನಾಳೆ ನಡೆಯಲಿರುವ ಚರ್ಚೆಗೂ ಇನ್ನು ನಿರ್ದಿಷ್ಟ ಸಮಯ ನಿಗದಿಯಾಗಿಲ್ಲದಿರುವುದು ರಾಜ್ಯ ನಾಯಕರ ತಲೆಬಿಸಿಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಹೈಕಮಾಂಡ್ ಕರೆಗೆ ಕಾಯುತ್ತಿರುವ ರಾಜ್ಯ ನಾಯಕರು:&lt;/strong&gt;&lt;/h2&gt;&lt;p&gt;ಸಂಪುಟ ಸಚಿವರ ಅಂತಿಮ ಪಟ್ಟಿಗೆ ಸಮ್ಮತಿ ಪಡೆಯುವ ಸಲುವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಇಂದು ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಟ್ಟಿ ಫೈನಲ್ ಆಗಬೇಕಿತ್ತು. ಆದರೆ 'ಖರ್ಗೆ ಹಾಗೂ ರಾಹುಲ್ ಬ್ಯುಸಿ' ಎಂಬ ನೆಪ ಹೇಳಿ ಸಮಯವನ್ನು ಮುಂದೂಡಲಾಗುತ್ತಿದ್ದು, ಮೂರು ದಿನ ಕಳೆದರೂ ಹೈಕಮಾಂಡ್&zwnj;ನಿಂದ ಯಾವುದೇ ಸ್ಪಷ್ಟ ಕರೆ ಬಂದಿಲ್ಲ. ಹೈಕಮಾಂಡ್&zwnj;ನ ಈ ವಿಳಂಬ ನಡೆಗೆ ರಾಜ್ಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೇಸತ್ತು ಊರಿಗೆ ಹೊರಟ ಶಾಸಕರು:&lt;/strong&gt;&lt;/h2&gt;&lt;p&gt;ಇತ್ತ ಹೈಕಮಾಂಡ್&zwnj;ನ ಕರೆಗಾಗಿ ದೆಹಲಿಯ ಹೋಟೆಲ್ ಹಾಗೂ ಕರ್ನಾಟಕ ಭವನದಲ್ಲಿ ಕಾಯ್ದು ಬೇಸತ್ತಿರುವ ಸಚಿವ ಆಕಾಂಕ್ಷಿ ಶಾಸಕರು, 'ಸಿಗುತ್ತೋ-ಇಲ್ಲವೋ (Yes or No) ಎಂಬುದನ್ನು ಸ್ಪಷ್ಟವಾಗಿ ಹೇಳಿದರೆ ನಾವು ಊರಿಗೆ ಹೋಗುತ್ತೇವೆ' ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸತತ ಮೂರು ದಿನಗಳಿಂದ ಯಾವುದೇ ಸ್ಪಷ್ಟನೆ ಸಿಗದೆ ದೆಹಲಿಯಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೇವೆ ಎಂದು ಭಾವಿಸಿದ ಕೆಲ ಶಾಸಕರು, ಈಗಾಗಲೇ ದೆಹಲಿಯಿಂದ ಸ್ವಗ್ರಾಮಗಳಿಗೆ ಮರಳಲು ಸಿದ್ಧರಾಗಿದ್ದಾರೆ. 'ಅಂತಿಮ ಪಟ್ಟಿಯಲ್ಲಿ ಹೆಸರಿದ್ದರೆ ಆಮೇಲೆ ನೋಡಿಕೊಳ್ಳೋಣ' ಎನ್ನುತ್ತಾ ಕೆಲ ಶಾಸಕರು ದೆಹಲಿಯಿಂದ ಕಾಲು ಕೀಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಸಂತೋಷ್ ಲಾಡ್&lt;/strong&gt;&lt;/h2&gt;&lt;p&gt;ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಮಿಸಿದ ಸಂತೋಷ್ ಲಾಡ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಪೂರ್ವನಿಯೋಜಿತ ಕಾರ್ಯಕ್ರಮ ಹಿನ್ನೆಲೆ ವಾಪಸಾಗಿದ್ದೇನೆ. ಇವತ್ತು ರಾತ್ರಿಯೊಳಗೆ ಸಚಿವ ಸಂಪುಟ ಪಟ್ಟಿ ಅಂತಿಮವಾಗಲಿದೆ. ನನಗೂ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದೇನೆ. ಕಳೆದ ಬಾರಿ ಸಚಿವನಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ದ ಎಂದು ಹೇಳಿದರು.&lt;/p&gt;&lt;p&gt;ಒಟ್ಟಿನಲ್ಲಿ, ಸಂಪುಟ ವಿಸ್ತರಣೆ ಕಸರತ್ತು ದೆಹಲಿ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್&zwnj;ನ ಈ ವಿಳಂಬ ನೀತಿಯು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಶಾಸಕರ ತಾಳ್ಮೆ ಪರೀಕ್ಷಿಸುವಂತಾಗಿದೆ. ನಾಳೆಯಾದರೂ ಈ ಸಭೆ ನಡೆದು ಅಂತಿಮ ಪಟ್ಟಿಗೆ ಸಮ್ಮತಿ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>state</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/karnataka-cabinet-expansion-meeting-postponed-again-frustrated-mlas-return-to-home/articleshow-by08hbi"/>
        </item>
        <item>
            <title><![CDATA[ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?]]></title>
            <link>https://kannada.asianetnews.com/state/dk-shivakumar-cabinet-expansion-8-hour-mystery-over-who-will-become-karnataka-ministers-videoshow-l5nffss</link>
            <guid isPermaLink="true">https://kannada.asianetnews.com/state/dk-shivakumar-cabinet-expansion-8-hour-mystery-over-who-will-become-karnataka-ministers-videoshow-l5nffss</guid>
            <pubDate>Wed, 29 Jul 2026 16:53:16 +0530</pubDate>
            <description><![CDATA[&lt;p&gt;ಜಮೀರ್ ಸಚಿನ ಸ್ಥಾನದ ಓಟಕ್ಕೆ ಆಡಿಯೋ ಬ್ರೇಕ್ ಬಿದ್ದಿದೆ. ಇತ್ತ 2023ರ ಚುನಾವಣೆ ಸಂದರ್ಭದಲ್ಲಿ ಬೇರೆ ಪಕ್ಷದಿಂದ ಕಾಂಗ್ರೆಸ್​ಗೆ ಬಂದವರು ಸಹ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಯಾರಿಗೆಲ್ಲಾ ಮಂತ್ರಿಗಿರಿ?&lt;/p&gt;]]></description>
            <media:content url="https://geo.dailymotion.com/player/x1tbu.html?video=xat6g6a" medium="video" height="768" width="1024"/>
            <content:encoded><![CDATA[&lt;p&gt;ಡಿ.ಕೆ.ಶಿವಕುಮಾರ್ ಅವರ ಮಂತ್ರಿಮಂಡಲದಲ್ಲಿ ಯಾರೆಲ್ಲಾ ಇರ್ತಾರೆ..? ಇರುವ 20 ಸ್ಥಾನಗಳಿಗೆ 40ಕ್ಕೂ ಅಧಿಕ ಶಾಸಕರು ಪಟ್ಟು ಹಾಕ್ತಿದ್ದಾರಲ್ಲಾ ಅವರಲ್ಲಿ ಯಾರಿಗೆಲ್ಲಾ ಮಂತ್ರಿಭಾಗ್ಯ ಸಿಗುತ್ತೆ..? &amp;nbsp;ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕೃತ ಉತ್ತರ ಸಿಗುವ ಸಮಯ ಹತ್ತಿರ ಬಂದಾಗಿದೆ. ರಾಜ್ಯ ನಾಯಕರು ಹಾಗೂ ದೆಹಲಿ ವರಿಷ್ಟರ ನಡುವೆ ನಡೆದ ಹೈವೋಲ್ಟೇಜ್ ಸಭೆಯ ಮೂಲಕ ಸಂಪುಟ ಸಸ್ಪೆನ್ಸ್​​ ಕಡೆಗೂ ಅಂತ್ಯಗೊಳ್ಳೋ ಕಾಲ ಸನ್ನೀಹಿತವಾಗಿದೆ.&lt;/p&gt;]]></content:encoded>
            <category>state</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/dk-shivakumar-cabinet-expansion-8-hour-mystery-over-who-will-become-karnataka-ministers-videoshow-l5nffss"/>
        </item>
        <item>
            <title><![CDATA[ಕೆಇಎ ಮಹತ್ವದ ಘೋಷಣೆ: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಸಮಯ ಬದಲು!]]></title>
            <link>https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d</link>
            <guid isPermaLink="true">https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d</guid>
            <pubDate>Wed, 29 Jul 2026 14:36:16 +0530</pubDate>
            <description><![CDATA[ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್&zwnj;ಟೇಬಲ್ (CPC) ನೇಮಕಾತಿಯ ಲಿಖಿತ ಪರೀಕ್ಷೆಯ ಸಮಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬದಲಾವಣೆ ಮಾಡಿದೆ. ಆಗಸ್ಟ್ 2ರಂದು ಮಧ್ಯಾಹ್ನ 2:30ಕ್ಕೆ ನಡೆಯಬೇಕಿದ್ದ ಪರೀಕ್ಷೆಯು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಂಜೆ 4:00 ಗಂಟೆಗೆ ಆರಂಭವಾಗಲಿದೆ. ಬೆಳಗಿನ ಅವಧಿಯ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kyjc1wzc8ppfjzt8211kc147,imgname-mixcollage-27-jul-2026-11-34-pm-4866-1785175536620.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್&zwnj;ಟೇಬಲ್ (CPC) ಹುದ್ದೆಗಳ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂಬರುವ ಆಗಸ್ಟ್ 2ರಂದು (ಭಾನುವಾರ) ನಡೆಯಲಿರುವ ಲಿಖಿತ ಪರೀಕ್ಷೆಯ ಮಧ್ಯಾಹ್ನದ ಅವಧಿಯ ವೇಳಾಪಟ್ಟಿಯಲ್ಲಿ ಪ್ರಾಧಿಕಾರವು ಮಹತ್ವದ ಬದಲಾವಣೆ ಮಾಡಿದ್ದು, ಪರಿಷ್ಕೃತ ಸಮಯವನ್ನು ಪ್ರಕಟಿಸಿದೆ.&lt;/p&gt;&lt;p&gt;ಪೂರ್ವಾಪರ ನಿಗದಿಯಾಗಿದ್ದ ವೇಳಾಪಟ್ಟಿಯ ಪ್ರಕಾರ ಈ ಪರೀಕ್ಷೆಯು ಮಧ್ಯಾಹ್ನ 2:30ಕ್ಕೆ ಆರಂಭವಾಗಬೇಕಿತ್ತು. ಆದರೆ, ಈಗ ಪರಿಷ್ಕೃತ ನಿಯಮದನ್ವಯ ಪರೀಕ್ಷೆಯು ಮಧ್ಯಾಹ್ನದ ಬದಲಿಗೆ ಸಂಜೆ 4:00 ಗಂಟೆಗೆ ಆರಂಭವಾಗಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಸಮಯ ಬದಲಾವಣೆಗೆ ಕಾರಣವೇನು?&lt;/h2&gt;&lt;p&gt;ಪರೀಕ್ಷಾ ಪ್ರಾಧಿಕಾರದ ಈ ಹಠಾತ್ ನಿರ್ಧಾರದ ಹಿಂದೆ ಅಭ್ಯರ್ಥಿಗಳ ಹಿತರಕ್ಷಣೆ ಅಡಗಿದೆ. ರಾಜ್ಯದಾದ್ಯಂತ ಹಲವು ಅಭ್ಯರ್ಥಿಗಳಿಗೆ ಬೆಳಗಿನ ಅವಧಿಯಲ್ಲಿ ಒಂದು ಪರೀಕ್ಷಾ ಕೇಂದ್ರ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರಗಳು ನಿಯೋಜನೆಯಾಗಿದ್ದವು. ಕೆಲವು ಅಭ್ಯರ್ಥಿಗಳಿಗೆ ಈ ಎರಡು ಕೇಂದ್ರಗಳ ನಡುವಿನ ಅಂತರವು ಅತ್ಯಂತ ಹೆಚ್ಚಾಗಿದ್ದು, ನಿಗದಿತ ಸಮಯದೊಳಗೆ ತಲುಪುವುದು ತೀವ್ರ ಕಷ್ಟಸಾಧ್ಯವಾಗಿತ್ತು.&lt;/p&gt;&lt;p&gt;ಬೆಳಗಿನ ಪರೀಕ್ಷೆ ಮುಗಿದ ತಕ್ಷಣ, ದೂರದ ಊರು ಅಥವಾ ದೂರದ ಪ್ರದೇಶದಲ್ಲಿರುವ ಮಧ್ಯಾಹ್ನದ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಸಮಯದಲ್ಲಿ ಪ್ರಯಾಣ ಬೆಳೆಸುವುದು ಅಭ್ಯರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ ಹಾಗೂ ಸಾರಿಗೆ ಸಮಸ್ಯೆಯನ್ನು ಮನಗಂಡ ಹಲವು ಅಭ್ಯರ್ಥಿಗಳು ಮತ್ತು ಪೋಷಕರು ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅಭ್ಯರ್ಥಿಗಳ ಈ ನ್ಯಾಯಸಮ್ಮತವಾದ ಆತಂಕ ಹಾಗೂ ಹಿತದೃಷ್ಟಿಯನ್ನು ಗಂಭೀರವಾಗಿ ಪರಿಗಣಿಸಿದ ಕೆಇಎ, ಅವರು ನಿರಾಳವಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಅನುಕೂಲವಾಗುವಂತೆ ಪರೀಕ್ಷೆಯನ್ನು ಒಂದೂವರೆ ಗಂಟೆ ತಡವಾಗಿ ಆರಂಭಿಸಲು ನಿರ್ಧರಿಸಿದೆ.&lt;/p&gt;&lt;h2&gt;ಪರಿಷ್ಕೃತ ಪರೀಕ್ಷಾ ಅವಧಿ ಹೀಗಿದೆ:&lt;/h2&gt;&lt;p&gt;ಹೊಸ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 2ರ ಎರಡನೇ ಅವಧಿಯ ಲಿಖಿತ ಪರೀಕ್ಷೆಯು ಸಂಜೆ 4:00 ಗಂಟೆಗೆ ಪ್ರಾರಂಭವಾಗಿ, ಸಂಜೆ 5:30 ರವರೆಗೆ ನಡೆಯಲಿದೆ.&lt;/p&gt;&lt;p&gt;ಪರೀಕ್ಷೆ ನಡೆಯುವ ದಿನಾಂಕ: ಆಗಸ್ಟ್ 2&lt;/p&gt;&lt;p&gt;ಪರಿಷ್ಕೃತ ಆರಂಭಿಕ ಸಮಯ: ಸಂಜೆ 4:00 ಗಂಟೆಗೆ (ಹಳೆಯ ಸಮಯ: ಮಧ್ಯಾಹ್ನ 2:30)&lt;/p&gt;&lt;p&gt;ಪರೀಕ್ಷೆ ಮುಕ್ತಾಯದ ಸಮಯ: ಸಂಜೆ 5:30 ರವರೆಗೆ&lt;/p&gt;&lt;h2&gt;ಬೆಳಗಿನ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ!&lt;/h2&gt;&lt;p&gt;ಇದೇ ವೇಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳಿಗೆ ಮತ್ತೊಂದು ಪ್ರಮುಖ ಸ್ಪಷ್ಟನೆಯನ್ನು ನೀಡಿದೆ. ಮಧ್ಯಾಹ್ನದ ನಂತರದ ಪರೀಕ್ಷಾ ಸಮಯದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದ್ದು, ಅಂದು ಬೆಳಗಿನ ಅವಧಿಯಲ್ಲಿ ನಡೆಯಲಿರುವ ಪರೀಕ್ಷೆಗಳು ಮುಂಚಿತವಾಗಿ ನಿಗದಿಯಾಗಿದ್ದ ವೇಳಾಪಟ್ಟಿಯಂತೆಯೇ ಯಾವುದೇ ಅಡೆತಡೆಯಿಲ್ಲದೆ ನಡೆಯಲಿವೆ. ಬೆಳಗಿನ ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಹೀಗಾಗಿ ಅಭ್ಯರ್ಥಿಗಳು ಗೊಂದಲಕ್ಕೊಳಗಾಗದೆ, ಬೆಳಗಿನ ಪರೀಕ್ಷೆಗೆ ಎಂದಿನಂತೆ ಸಿದ್ಧರಾಗುವಂತೆ ಹಾಗೂ ಮಧ್ಯಾಹ್ನದ ಪರೀಕ್ಷೆಗೆ ಸಿಕ್ಕಿರುವ ಹೆಚ್ಚುವರಿ ಸಮಯವನ್ನು ಸದುಪಯೋಗಪಡಿಸಿಕೊಂಡು ಪ್ರಶಾಂತ ಮನಸ್ಸಿನಿಂದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕೋರಲಾಗಿದೆ.&lt;/p&gt;]]></content:encoded>
            <category>state</category>
            <dc:creator>Gowthami K</dc:creator>
            <atom:link href="https://kannada.asianetnews.com/state/kea-reschedules-kkr-civil-police-constable-exam-timing-on-august-2-for-candidate-convenience-gdp/articleshow-e8bed8d"/>
        </item>
        <item>
            <title><![CDATA[ರಾಜ್ಯದಲ್ಲಿ ಕಾವೇರಿ ಕಿಚ್ಚು: ಕರ್ನಾಟಕ ಬಂದ್‌ ಬಗ್ಗೆ ವಾಟಾಳ್ ನಾಗರಾಜ್ ಮಹತ್ವದ ಹೇಳಿಕೆ?]]></title>
            <link>https://kannada.asianetnews.com/state/cauvery-water-crisis-kannada-pro-activist-vatal-nagaraj-s-important-statement-on-karnataka-bandh-mrq/articleshow-7l1dqek</link>
            <guid isPermaLink="true">https://kannada.asianetnews.com/state/cauvery-water-crisis-kannada-pro-activist-vatal-nagaraj-s-important-statement-on-karnataka-bandh-mrq/articleshow-7l1dqek</guid>
            <pubDate>Wed, 29 Jul 2026 13:24:52 +0530</pubDate>
            <description><![CDATA[ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯುಸೆಕ್ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಬೆಂಗಳೂರು, ಮಂಡ್ಯದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಭೆ ಕರೆದಿದ್ದು, ಚರ್ಚೆಯ ನಂತರ ಕರ್ನಾಟಕ ಬಂದ್ ದಿನಾಂಕ ನಿರ್ಧರಿಸುವುದಾಗಿ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kypdwwvbv4kkqb06rne4a1zv,imgname-vatal-nagaraj-1785311687531.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕೆಆರ್&zwnj;ಎಸ್ ಜಲಾಶಯದಿಂದ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯುಸೆಕ್ ನೀರು ಹರಿಸಲು ಕಾವೇರಿ ನಿರ್ವಹಣಾ ಮಂಡಳಿ ಆದೇಶ ಮಾಡಿರುವ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ವೇಳೆ ಮಾತನಾಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ನಾಡಿದ್ದು ಬೆಳಗ್ಗೆ 11 ಗಂಟೆಗೆ ವುಡ್ ಲ್ಯಾಂಡ್ ಹೋಟೆಲ್&zwnj;ನಲ್ಲಿ ಸಭೆ ನಡೆಸಲಾಗುವುದು. ಸಭೆ ಬಳಿಕ ಬಂದ್ ದಿನಾಂಕ ನಿರ್ಧರಿಸುತ್ತೇವೆ. ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ಹೇಳಿದರು.&lt;/p&gt;&lt;p&gt;ಇಂದು ಬೆಂಗಳೂರಿನ ಹಲವು ಭಾಗಗಳಲ್ಲಿ ಕನ್ನಡ ಪರ ಸಂಘಟನೆಗಳು, ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಮೈಸೂರು ಬ್ಯಾಂಕ್&zwnj; ಸರ್ಕಲ್&zwnj;ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಈ ಆದೇಶವನ್ನು ಸರ್ಕಾರ ಒಪ್ಪಿಕೊಳ್ಳಬಾರದು!&lt;/strong&gt;&lt;/h2&gt;&lt;p&gt;ಕರವೇ ನಾರಾಯಣಗೌಡರು ಮಾತನಾಡಿ, ಸರ್ಕಾರ ಯಾವುದೇ ಕಾರಣಕ್ಕೂ ಈ ಆದೇಶವನ್ನು ಒಪ್ಪಿಕೊಳ್ಳಬಾರದು. ಕಾವೇರಿ ಅನ್ನೋದು ಕನ್ನಡಿಗರ ಭಾವನೆ, ಅದರ ಜೊತೆ ಹುಡುಗಾಟ ಆಡಬಾರದು. ತಮಿಳುನಾಡಿನ ರಾಜಕೀಯ ನಾಯಕರು ಕೇಂದ್ರದ ಜೊತೆ ಲಾಬಿ ಮಾಡಿದ್ದಾರೆ. ಆದರೆ, ಈ ತೀರ್ಪನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಿಕೊಳ್ಳಬಾರದು.&lt;/p&gt;&lt;p&gt;ಇವತ್ತು ನಮ್ಮ ಡ್ಯಾಂಗಳಲ್ಲಿ ಇರೋದು ಒಟ್ಟು 12 ಟಿಎಂಸಿ ನೀರು ಮಾತ್ರ, ಆದರೆ ಬೆಂಗಳೂರಿಗೇ ತಿಂಗಳಿಗೆ 3 ಟಿಎಂಸಿಯಷ್ಟು ನೀರು ಬೇಕಾಗುತ್ತದೆ. ಮಳೆ ಇಲ್ಲದ ಕಾರಣ ನಮ್ಮ ಡ್ಯಾಂಗಳಲ್ಲಿ ನೀರಿಲ್ಲದಿರುವುದರಿಂದ, ಕರ್ನಾಟಕಕ್ಕೆ ತಮಿಳುನಾಡಿಗೆ ಅಷ್ಟು ನೀರು ಬಿಡೋಕೆ ಆಗಲ್ಲ; 4 ಟಿಎಂಸಿ ನೀರು ನಾವು ಯಾವುದೇ ಕಾರಣಕ್ಕೂ ಬಿಡೋದಕ್ಕೆ ಸಾಧ್ಯವಿಲ್ಲ.&lt;/p&gt;&lt;h3&gt;&lt;strong&gt;ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಕೆ ಮಾಡಲಿ&lt;/strong&gt;&lt;/h3&gt;&lt;p&gt;ರಾಜ್ಯ ಸರ್ಕಾರ ತಕ್ಷಣವೇ ಇದಕ್ಕೆ ಮೇಲ್ಮನವಿ ಸಲ್ಲಿಸಬೇಕು ಹಾಗೂ ನಮ್ಮ ಜಲಾಶಯಗಳ ನಿಜವಾದ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಿ ಕರ್ನಾಟಕದ ರೈತರ ಹಿತ ಕಾಪಾಡಬೇಕು. ತಮಿಳುನಾಡು ಸಿಎಂ ನಮ್ಮ ಸಿಎಂ ಜೊತೆ ಚರ್ಚೆ ನಡೆಸಬೇಕು ಅಂತ ಹೇಳುತ್ತಿದ್ದಾರೆ. ತಮಿಳುನಾಡಿನ ಸಿಎಂ ಬೇಕಿದ್ದರೆ ಕರ್ನಾಟಕಕ್ಕೆ ಬರಲಿ, ನಮ್ಮ ಜಲಾಶಯಗಳ ಸ್ಥಿತಿಯನ್ನು ಬಂದು ನೋಡಲಿ. ಏನೇ ಆಗಲಿ, ನಾವು ಕಾವೇರಿ ನೀರು ಕೊಡೋಕೆ ಆಗಲ್ಲ ಅಂತ ಸಿಎಂ ಸ್ಪಷ್ಟವಾಗಿ ಹೇಳಬೇಕು.&lt;/p&gt;&lt;p&gt;&lt;strong&gt;ಕರ್ನಾಟಕ ಬಂದ್ ಬಗ್ಗೆ ನಾರಾಯಣಗೌಡ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಅವತ್ತು ಬಂಗಾರಪ್ಪನವರು ಹೇಗೆ ತೀರ್ಪನ್ನು ತಿರಸ್ಕರಿಸಿದರೋ, ಇವತ್ತು ಬಂಗಾರಪ್ಪನವರ ಶಿಷ್ಯ ಅಂತ ಹೇಳಿಕೊಳ್ಳುವ ಸಿಎಂ ಮತ್ತು ಡಿಕೆ ಶಿವಕುಮಾರ್ ಅವರೂ ಇದನ್ನು ಧಿಕ್ಕರಿಸಬೇಕು ಹಾಗೂ ನೀರು ಬಿಡೋಕೆ ಆಗಲ್ಲ ಎಂದು ಸ್ಪಷ್ಟಪಡಿಸಬೇಕು. ನಾವು ಈ ತೀರ್ಪನ್ನು ಖಂಡಿಸಿ ಹೋರಾಟ ಮಾಡುತ್ತೇವೆ. ಆದರೆ, ನನಗೆ ಪದೇ ಪದೇ ಕರ್ನಾಟಕ ಬಂದ್ ಮಾಡುವುದರಲ್ಲಿ ವಿಶ್ವಾಸವಿಲ್ಲ; ಪದೇ ಪದೇ ಕರ್ನಾಟಕ ಬಂದ್ ಮಾಡಿಕೊಂಡು ಕೂರುವುದು ಸರಿಯಲ್ಲ. ಅದರ ಹೊರತಾಗಿ ಹಲವು ಹೋರಾಟದ ಚಳವಳಿ ಮಾದರಿಗಳಿವೆ, ಆ ಪ್ರಕಾರವೇ ನಾವು ಮುಂದಿನ ಚಳವಳಿಯನ್ನು ರೂಪಿಸುತ್ತೇವೆ.&lt;/p&gt;]]></content:encoded>
            <category>state</category>
            <dc:creator>Mahmad Rafik</dc:creator>
            <atom:link href="https://kannada.asianetnews.com/state/cauvery-water-crisis-kannada-pro-activist-vatal-nagaraj-s-important-statement-on-karnataka-bandh-mrq/articleshow-7l1dqek"/>
        </item>
    </channel>
</rss>
