<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 12 May 2026 16:10:42 +0530</lastBuildDate>
        <atom:link href="https://kannada.asianetnews.com/rss/sports" rel="self" type="application/rss+xml"/>
        <item>
            <title><![CDATA[ಕ್ರುನಾಲ್ ಪಾಂಡ್ಯ ಅಲ್ಲೇ ಸಾಯಲಿ, RCB ವಿರುದ್ದ ಕಮೆಂಟ್ರಿ ಹೇಳಿದ ಬದ್ರಿನಾಥ್ ವಜಾಗೆ ಹೆಚ್ಚಿದ ಆಕ್ರೋಶ]]></title>
            <link>https://kannada.asianetnews.com/gallery/cricket-sports/outrage-grows-over-calls-to-remove-badrinath-after-rcb-commentary-controversy-218zlpl</link>
            <guid isPermaLink="true">https://kannada.asianetnews.com/gallery/cricket-sports/outrage-grows-over-calls-to-remove-badrinath-after-rcb-commentary-controversy-218zlpl</guid>
            <pubDate>Mon, 11 May 2026 15:28:16 +0530</pubDate>
            <description><![CDATA[&lt;p&gt;ಆರ್&zwnj;ಸಿಬಿ ಗೆಲುವು ಕಾಣುತ್ತಿದ್ದಂತೆ ತಮಿಳು ಕಮೆಂಟೇಟರ್ ಎಸ್ ಬದ್ರಿನಾತ್ ವಿಷ ಕಕ್ಕಿದ್ದಾರೆ. ಕ್ರುನಾಲ್ ಪಾಂಡ್ಯ ಇಂಜುರಿಯಿದ್ದ ಪಿಚ್ ಮೇಲೆ ಬಿದ್ದಾಗ, ಆತ ಅಲ್ಲೆ ಸಾಯಲಿ, ಆರ್&zwnj;ಸಿಬಿ ಸೋಲಲಿ ಎಂದು ಕಮೆಂಟ್ರಿ ಹೇಳಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krb6t4r9bzpq9g6v6w2rgkw8,imgname-subramaniam-badrinath-vs-rcb-krunal-pandya-1778492707593.png" type="image/jpeg" height="390" width="690"/>
            <content:encoded><![CDATA[&lt;p&gt;ಆರ್&zwnj;ಸಿಬಿ ಗೆಲುವು ಕಾಣುತ್ತಿದ್ದಂತೆ ತಮಿಳು ಕಮೆಂಟೇಟರ್ ಎಸ್ ಬದ್ರಿನಾತ್ ವಿಷ ಕಕ್ಕಿದ್ದಾರೆ. ಕ್ರುನಾಲ್ ಪಾಂಡ್ಯ ಇಂಜುರಿಯಿದ್ದ ಪಿಚ್ ಮೇಲೆ ಬಿದ್ದಾಗ, ಆತ ಅಲ್ಲೆ ಸಾಯಲಿ, ಆರ್&zwnj;ಸಿಬಿ ಸೋಲಲಿ ಎಂದು ಕಮೆಂಟ್ರಿ ಹೇಳಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ವಿರುದ್ದ ಕ್ರುನಾಲ್ ಪಾಂಡ್ಯ ದಿಟ್ಟ ಹೋರಾಟ ಆರ್&zwnj;ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿತ್ತು. ಇದರ ನಡುವೆ ಇಂಜುರಿಗೆ ತುತ್ತಾದ ಕ್ರುನಾಲ್ ಪಿಚ್&zwnj;ನಲ್ಲಿ ಬಿದ್ದಿದ್ದರು. ಈ ವೇಳೆ ತಮಿಳು ಕಮೆಂಟೇಟರ್, ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಕಮೆಂಟ್ರಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಾತಿ ಮಾತಿಗೂ ವಿಷ ಕಾರಿದ ಬದ್ರಿನಾತ್ ಕ್ರುನಾಲ್ ಪಾಂಡ್ಯ ಅಲ್ಲೆ ಸಾಯಲಿ ಎಂದು ಕಮೆಂಟ್ರಿ ಹೇಳಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಈ ರೋಚಕ ಪಂದ್ಯದ ಕೊನೆಯ ಎಸೆತದಲ್ಲಿ ಆರ್&zwnj;ಸಿಬಿ ಎರಡು ವಿಕೆಟ್&zwnj;ಗಳ ಜಯ ಸಾಧಿಸಿತು. ತೀವ್ರ ಕಾಲಿನ ನೋವಿನೊಂದಿಗೆ ಹೋರಾಡಿದ ಕೃನಾಲ್ ಪಾಂಡ್ಯ, 46 ಎಸೆತಗಳಲ್ಲಿ 73 ರನ್ ಗಳಿಸಿ ಆರ್&zwnj;ಸಿಬಿ ಗೆಲುವಿಗೆ ಕಾರಣರಾದರು. ಬ್ಯಾಟಿಂಗ್ ವೇಳೆ ಕೃುನಾಲ್ ಪಾಂಡ್ಯ ನೋವಿನಿಂದ ಕ್ರೀಸ್&zwnj;ನಲ್ಲೇ ಕುಸಿದುಬಿದ್ದರು. ಆಗ ಎದುರಾಳಿ ತಂಡದ ವಿಕೆಟ್&zwnj;ಕೀಪರ್, ಮುಂಬೈ ಇಂಡಿಯನ್ಸ್&zwnj;ನ ರಿಯಾನ್ ರಿಕೆಲ್ಟನ್ ತಕ್ಷಣವೇ ಪಾಂಡ್ಯ ಬಳಿ ಓಡಿಬಂದು ಸಹಾಯ ಮಾಡಲು ಮುಂದಾದರು. ಇದು ಅವರ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗಿತ್ತು.&lt;/p&gt;&lt;img&gt;&lt;p&gt;ತಮಿಳು ಕಾಮೆಂಟರಿ ಮಾಡುತ್ತಿದ್ದ ಬದ್ರಿನಾಥ್, &quot;ರಿಯಾನ್ ರಿಕೆಲ್ಟನ್ ಪಾಂಡ್ಯಗೆ ಸಹಾಯ ಮಾಡಬಾರದು, ಅವನು ಅಲ್ಲೇ ಸಾಯಲಿ,ಆರ್&zwnj;ಸಿಬಿ ತಂಡ ಸೋಲುತ್ತದೆ ಎಂದು ಕಮೆಂಟ್ರಿ ಹೇಳಿದ್ದಾರೆ. ಬದ್ರಿನಾಥ್ ಅವರ ಈ ಮಾತು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್&zwnj;ನ ಮೂಲ ಆಶಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಮೆಂಟೇಟರ್&zwnj;ನಿಂದ ತಕ್ಷಣವೇ ಎಸ್ ಬದ್ರಿನಾಥ್ ವಜಾ ಮಾಡಬೇಕು. ಇಷ್ಟೇ ಅಲ್ಲ ಯಾವುದೇ ಕ್ರಿಕೆಟಿಂಗ್ ಹುದ್ದೆ ನೀಡಬಾರದು. ಕ್ರೀಡಾಸ್ಪೂರ್ತಿಯೇ ಇಲ್ಲದ ಎಸ್ ಬದ್ರಿನಾಥ್ ಕ್ರಿಕೆಟರ್ ಆಗಿರುವ ಅರ್ಹರಲ್ಲ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಭಾರಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಸ್ ಬದ್ರಿನಾಥ್ ಸ್ಪಷ್ಟನೆ ನೀಡಿದ್ದಾರೆ. ತನ್ನ ಹೇಳಿಕೆ ತಿರುಚಿ ಅರ್ಥೈಸಲಾಗಿದೆ. ವೈರಿ ತಂಡಗಳು ಪರಸ್ಪರ ಹೇಗೆ ಸಹಾಯ ಮಾಡುತ್ತಿದೆ ಅನ್ನೋ ಕುರಿತು ಕಮೆಂಟರಿಯಲ್ಲಿ ಹೇಳಿದ್ದೇನೆ. ಇದರಲ್ಲಿ ಸಾಯಲಿ ಅನ್ನೋ ಅರ್ಥವಿಲ್ಲ ಎಂದೆಲ್ಲಾ ಸ್ಪಷ್ಟನೆ ನೀಡಿದ್ದಾರೆ.ಆದರೆ ಬದ್ರಿನಾಥ್ ಕಮೆಂಟರಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.&lt;/p&gt;&lt;img&gt;&lt;p&gt;&quot;ತುಂಬಾ ಅವಮಾನಕಾರಿ ಹೇಳಿಕೆ. ಕ್ರಿಕೆಟ್ ಅಂದರೆ ಗೌರವ, ನೋವನ್ನು ಅಣಕಿಸುವುದಲ್ಲ.&quot;&lt;/p&gt;&lt;p&gt;&quot;ರಿಕೆಲ್ಟನ್ ನಿಜವಾದ ಕ್ರೀಡಾಸ್ಫೂರ್ತಿ ತೋರಿಸಿದರು, ಬದ್ರಿನಾಥ್&zwnj;ನಲ್ಲಿ ಅದು ಇರಲಿಲ್ಲ.&quot;&lt;/p&gt;&lt;p&gt;&quot;ಕಾಮೆಂಟರಿಯಲ್ಲಿ ಇಂತಹ ಅಸಂವೇದನಾಶೀಲ ಜೋಕ್&zwnj;ಗಳಿಗೆ ಜಾಗವಿಲ್ಲ.&quot;&lt;/p&gt;&lt;p&gt;&quot;ಕೃನಾಲ್ ನೋವಿನಲ್ಲೂ ಹೋರಾಡಿದ್ದಾರೆ, ಅವರಿಗೆ ಚಪ್ಪಾಳೆ ಸಿಗಬೇಕು.&quot;&lt;/p&gt;&lt;p&gt;&quot;ಆಟಗಾರರಿಗೆ ನಿಮ್ಮ ಕಮೆಂಟ್ರಿ ಬೇಕಿಲ್ಲ, ವೀಕ್ಷಕರಿಗೆ ನಿಮ್ಮ ವಿಷ ಬೇಕಾಗಿಲ್ಲ&lt;/p&gt;&lt;h2&gt;ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಹಾಪೂರ&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/outrage-grows-over-calls-to-remove-badrinath-after-rcb-commentary-controversy-218zlpl"/>
        </item>
        <item>
            <title><![CDATA[10 ವರ್ಷದ ಬಳಿಕ RCBಗೆ ಸಿಕ್ತು ವಿಶೇಷ ಸಿಕ್ಸರ್ ಗೆಲುವು; ಅಗ್ರಸ್ಥಾನಕ್ಕೇರಿದ ಬೆಂಗಳೂರು]]></title>
            <link>https://kannada.asianetnews.com/cricket-sports/ipl-2026-update-rcb-gets-a-special-six-wicket-win-after-10-years-bengaluru-climbs-to-the-top-mrq/articleshow-63ifmgf</link>
            <guid isPermaLink="true">https://kannada.asianetnews.com/cricket-sports/ipl-2026-update-rcb-gets-a-special-six-wicket-win-after-10-years-bengaluru-climbs-to-the-top-mrq/articleshow-63ifmgf</guid>
            <pubDate>Mon, 11 May 2026 06:51:22 +0530</pubDate>
            <description><![CDATA[ರಾಯ್ಪುರದಲ್ಲಿ ನಡೆದ ರೋಚಕ ಪಂದ್ಯದಲ್ಲಿ, ಆರ್&zwnj;ಸಿಬಿ ತಂಡವು ಮುಂಬೈ ಇಂಡಿಯನ್ಸ್&zwnj; ವಿರುದ್ಧ ಕೊನೆಯ ಎಸೆತದಲ್ಲಿ 2 ವಿಕೆಟ್&zwnj;ಗಳ ಜಯ ಸಾಧಿಸಿತು. ಕೃನಾಲ್&zwnj; ಪಾಂಡ್ಯರ ಸ್ಫೋಟಕ ಬ್ಯಾಟಿಂಗ್ ಮತ್ತು ಭುವನೇಶ್ವರ್&zwnj; ಕುಮಾರ್&zwnj;ರ ಮಾರಕ ಬೌಲಿಂಗ್ ನೆರವಿನಿಂದ ಆರ್&zwnj;ಸಿಬಿ ಅಗ್ರಸ್ಥಾನಕ್ಕೇರಿದರೆ, ಮುಂಬೈ ಪ್ಲೇ-ಆಫ್ ರೇಸ್&zwnj;ನಿಂದ ಅಧಿಕೃತವಾಗಿ ಹೊರಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr9jqsem8tgmnsxdgt9dzka2,imgname-rcb-win-1778438104532.jfif" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯ್ಪುರ: &lt;/strong&gt;ಅಭಿಮಾನಿಗಳ ಎದೆಬಡಿತ ಹೆಚ್ಚಾಗುವಂತೆ ಮಾಡಿ, ಕೊನೆ ಎಸೆತದವರೆಗೂ ಪಂದ್ಯವನ್ನು ಸಾಗಿಸಿ ಗೆಲ್ಲುವ ಚಾಳಿ ಆರ್&zwnj;ಸಿಬಿಗೆ ಕೆಲ ವರ್ಷಗಳ ಹಿಂದೆ ಇತ್ತು. ಕಳೆದೆರಡು ವರ್ಷಗಳಿಂದ ಭರ್ಜರಿಯಾಗಿಯೇ ಗೆದ್ದು ಅಭ್ಯಾಸ ಮಾಡಿಕೊಂಡಿದ್ದ ಆರ್&zwnj;ಸಿಬಿ, ಭಾನುವಾರ ಮತ್ತೆ ಕೊನೆ ಎಸೆತದ ಸೂಪರ್&zwnj; ಥ್ರಿಲ್ಲರ್&zwnj; ಕ್ಷಣವನ್ನು ಅಭಿಮಾನಿಗಳಿಗೆ ಒದಗಿಸಿತು. ತನ್ನ 2ನೇ ತವರು ರಾಯ್ಪುರದಲ್ಲಿ ನಡೆದ ಮುಂಬೈ ಇಂಡಿಯನ್ಸ್&zwnj; ವಿರುದ್ಧ ಪಂದ್ಯದಲ್ಲಿ ಆರ್&zwnj;ಸಿಬಿ 2 ವಿಕೆಟ್&zwnj;ನಿಂದ ರೋಚಕವಾಗಿ ಗೆದ್ದಿದ್ದು, 11 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಮುಂಬೈ 8 ಸೋಲಿನೊಂದಿಗೆ ಅಧಿಕೃತವಾಗಿ ಪ್ಲೇ-ಆಫ್&zwnj;ರೇಸ್&zwnj;ನಿಂದ ಹೊರಬಿದ್ದಿದೆ.&lt;/p&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಮುಂಬೈ ತಂಡ, ನಮನ್&zwnj;ಧೀರ್(47) ಹಾಗೂ ತಿಲಕ್&zwnj; ವರ್ಮಾ(57) ಹೋರಾಟದಿಂದಾಗಿ 7 ವಿಕೆಟ್&zwnj;ಗೆ 166 ರನ್ ಕಲೆಹಾಕಿತು. 3 ಓವರ್&zwnj;ಗಳಲ್ಲಿ 28 ರನ್&zwnj;ಗೆ 3 ವಿಕೆಟ್&zwnj; ಕಳೆದುಕೊಂಡು ತಂಡ ಸಂಕಷ್ಟದಲ್ಲಿತ್ತು. ರಿಕೆಲ್ಟನ್&zwnj; 2, ರೋಹಿತ್&zwnj; 22, ಸೂರ್ಯಕುಮಾರ್&zwnj; ಸೊನ್ನೆಗೆ ಔಟಾದರು. ಈ ಮೂವರನ್ನೂ ಭುವನೇಶ್ವರ್&zwnj; ಪೆವಿಲಿಯನ್&zwnj;ಗೆ ಅಟ್ಟಿದರು. ಆದರೆ 4ನೇ ವಿಕೆಟ್&zwnj;ಗೆ ಜೊತೆಯಾದ ನಮನ್&zwnj;-ತಿಲಕ್&zwnj; 82 ರನ್&zwnj; ಸೇರಿಸಿದರು. ಭುವನೇಶ್ವರ್&zwnj; ಕೇವಲ 23 ರನ್ ನೀಡಿ 4 ವಿಕೆಟ್&zwnj; ಪಡೆದರು.&lt;/p&gt;&lt;h2&gt;&lt;strong&gt;ಕೃನಾಲ್&zwnj; ಕಮಾಲ್&zwnj;:&lt;/strong&gt;&lt;/h2&gt;&lt;p&gt;ಆರ್&zwnj;ಸಿಬಿ ಆರಂಭವೂ ಚೆನ್ನಾಗಿರಲಿಲ್ಲ. ವಿರಾಟ್&zwnj; ಕೊಹ್ಲಿ ಸೊನ್ನೆಗೆ ಔಟಾದರೆ, ರಜತ್&zwnj; ಪಾಟೀದಾರ್&zwnj; 8, ದೇವದತ್&zwnj; 12 ರನ್&zwnj;ಗೆ ವಿಕೆಟ್&zwnj; ಒಪ್ಪಿಸಿದರು. ಬೆಥೆಲ್&zwnj; 27 ಎಸೆತಕ್ಕೆ 27 ರನ್&zwnj; ಗಳಿಸಿದರು. ಈ ವೇಳೆ ತಂಡವನ್ನು ಕಾಪಾಡಿದ್ದು ಕೃನಾಲ್&zwnj; ಪಾಂಡ್ಯ. ಒಂದೆಡೆ ವಿಕೆಟ್&zwnj; ಉರುಳುತ್ತಿದ್ದರೂ ಕೃನಾಲ್&zwnj; ಅಬ್ಬರಿಸಿದರು. 16ನೇ ಓವರ್&zwnj;ನಲ್ಲಿ ಜಿತೇಶ್&zwnj;(18), ಟಿಮ್&zwnj; ಡೇವಿಡ್&zwnj;(0) ಔಟಾದರೂ ಕೃನಾಲ್&zwnj; ಮೇಲೆ ತಂಡಕ್ಕೆ ಭರವಸೆ ಇತ್ತು. ಆದರೆ 46 ಎಸೆತಕ್ಕೆ 73 ರನ್&zwnj; ಸಿಡಿಸಿದ್ದ ಕೃನಾಲ್&zwnj; 18ನೇ ಓವರ್&zwnj;ನ ಕೊನೆ ಎಸೆತದಲ್ಲಿ ಔಟಾದರು. ಕೊನೆ 2 ಓವರ್&zwnj;ಗೆ 18 ರನ್&zwnj; ಬೇಕಿತ್ತು. ಬೂಮ್ರಾ ಕೇವಲ 3 ರನ್&zwnj; ನೀಡಿದರು. ಕೊನೆ ಓವರ್&zwnj;ಗೆ 15 ರನ್&zwnj; ಬೇಕಿದ್ದಾಗ ರಾಜ್&zwnj; ಬಾವಾ ದಾಳಿಗಿಳಿದರು. ಶೆಫರ್ಡ್&zwnj;ರ ವಿಕೆಟ್&zwnj; ಪಡೆದರೂ ಹಲವು ಹೆಚ್ಚುವರಿ ರನ್&zwnj; ನೀಡಿದ್ದರಿಂದ ಮುಂಬೈ ಸೋತಿತು. ಕೊನೆ ಎಸೆತಕ್ಕೆ 2 ರನ್&zwnj; ಬೇಕಿದ್ದಾಗ ರಸಿಕ್&zwnj; ದಾರ್&zwnj; ತಂಡವನ್ನು ಗೆಲ್ಲಿಸಿದರು.&lt;/p&gt;&lt;p&gt;&lt;strong&gt;ಸ್ಕೋರ್&zwnj;:&lt;/strong&gt; ಮುಂಬೈ 20 ಓವರಲ್ಲಿ 166/7 (ತಿಲಕ್&zwnj; 57, ನಮನ್&zwnj; 47, ಭುವನೇಶ್ವರ್&zwnj; 4-23), ಆರ್&zwnj;ಸಿಬಿ 20 ಓವರಲ್ಲಿ 167/8 (ಕೃನಾಲ್&zwnj; 73, ಬೆಥೆಲ್&zwnj; 27, ಕಾರ್ಬಿನ್&zwnj; 4-26)&lt;/p&gt;&lt;p&gt;&lt;strong&gt;ಪಂದ್ಯಶ್ರೇಷ್ಠ:&lt;/strong&gt; ಭುವನೇಶ್ವರ್&zwnj; ಕುಮಾರ್&zwnj;&lt;/p&gt;&lt;p&gt;07ನೇ ಜಯ: ಮುಂಬೈ ಇಂಡಿಯನ್ಸ್&zwnj; ವಿರುದ್ಧ ಕೊನೆ 9 ಪಂದ್ಯಗಳ ಪೈಕಿ 7ರಲ್ಲಿ ಆರ್&zwnj;ಸಿಬಿ ಗೆಲುವು ಸಾಧಿಸಿದೆ. ಮುಂಬೈ 2024ರಲ್ಲಿ ಕೊನೆ ಬಾರಿ ಗೆದ್ದಿತ್ತು.&lt;/p&gt;&lt;h3&gt;&lt;strong&gt;ಒಂದೇ ದಿನ 2 ತಂಡ ಪ್ಲೇ-ಆಫ್&zwnj;ನಿಂದ ಔಟ್&zwnj;&lt;/strong&gt;&lt;/h3&gt;&lt;p&gt;ಭಾನುವಾರ ಒಂದೇ ದಿನ 2 ತಂಡಗಳು ಪ್ಲೇ-ಆಫ್&zwnj;ರೇಸ್&zwnj;ನಿಂದ ಹೊರಬಿದ್ದವು. ಮುಂಬೈ ಹಾಗೂ ಲಖನೌ ತಲಾ 8 ಪಂದ್ಯಗಳಲ್ಲಿ ಸೋತಿದ್ದು, ಲೀಗ್&zwnj; ಹಂತದಲ್ಲೇ ಅಭಿಯಾನ ಕೊನೆಗೊಳಿಸಿದವು. ಡೆಲ್ಲಿ 11ರಲ್ಲಿ 7 ಸೋತಿದ್ದು, ಹೊರಬೀಳುವ ಆತಂಕದಲ್ಲಿದೆ. ಉಳಿದ 7 ತಂಡಗಳು ಪ್ಲೇ-ಆಫ್&zwnj; ರೇಸ್&zwnj;ನಲ್ಲಿ ಉಳಿದುಕೊಂಡಿವೆ.&lt;/p&gt;&lt;h3&gt;&lt;strong&gt;10 ವರ್ಷ ಬಳಿಕ ಭುವಿ ಸಿಡಿಸಿದ ಸಿಕ್ಸರ್&zwnj;ನಿಂದ ಆರ್&zwnj;ಸಿಬಿಗೆ ಸಿಕ್ತು ಜಯ!&lt;/strong&gt;&lt;/h3&gt;&lt;p&gt;3 ಎಸೆತಕ್ಕೆ 9 ರನ್&zwnj; ಬೇಕಿದ್ದಾಗ ಸಿಕ್ಸರ್&zwnj; ಹೊಡೆದು ಆರ್&zwnj;ಸಿಬಿಯನ್ನು ಗೆಲುವಿನ ಸನಿಹ ತಂದಿದ್ದು ಭುವನೇಶ್ವರ್&zwnj;. ಈ ಅತ್ಯಮೂಲ್ಯ ಸಿಕ್ಸರ್&zwnj;ಗೆ ಅವರು 10 ವರ್ಷ ಕಾದಿದ್ದರು ಎಂಬುದು ವಿಶೇಷ. ಭುವನೇಶ್ವರ್&zwnj; ಐಪಿಎಲ್&zwnj;ನಲ್ಲಿ ಕೇವಲ 4 ಸಿಕ್ಸರ್&zwnj; ಬಾರಿಸಿದ್ದಾರೆ. 2013, 2015, 2016ರಲ್ಲಿ ಸಿಕ್ಸರ್&zwnj; ಸಿಡಿಸಿದ್ದರು. ಕಳೆದ 10 ವರ್ಷಗಳಲ್ಲಿ ಮೊದಲ ಬಾರಿ ಸಿಕ್ಸರ್ ಸಿಡಿಸಿದ ಅವರು, ಆರ್&zwnj;ಸಿಬಿ ಗೆಲುವಿಗೆ ಕಾರಣರಾದರು.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/ipl-2026-update-rcb-gets-a-special-six-wicket-win-after-10-years-bengaluru-climbs-to-the-top-mrq/articleshow-63ifmgf"/>
        </item>
        <item>
            <title><![CDATA[ಸತತ 2 ಸೋಲಿನ ಬಳಿಕ ಆರ್‌ಸಿಬಿ, ಸತತ 4 ಗೆಲುವಿನಿಂದ ಕೆಕೆಆರ್ ಪ್ಲೇ ಆಫ್ ಚಾನ್ಸ್ ಬದಲಾಗಿದ್ದು ಹೇಗೆ?]]></title>
            <link>https://kannada.asianetnews.com/gallery/cricket-sports/ipl-points-table-twist-how-rcb-and-kkr-playoff-chances-changed-dramatically-7vvktkr</link>
            <guid isPermaLink="true">https://kannada.asianetnews.com/gallery/cricket-sports/ipl-points-table-twist-how-rcb-and-kkr-playoff-chances-changed-dramatically-7vvktkr</guid>
            <pubDate>Sat, 09 May 2026 14:56:42 +0530</pubDate>
            <description><![CDATA[&lt;p&gt;ಐಪಿಎಲ್ 2026 ಟೂರ್ನಿಯ ಪ್ಲೇ ಆಫ್ ಲೆಕ್ಕಾಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರ್&zwnj;ಸಿಬಿ ಸತತ 2 ಸೋಲಿನ ಬಳಿಕ ಹಾಗೂ ಕೆಕೆಆರ್ ಸತತ 4 ಗೆಲುವಿನ ಬಳಿಕ ಸದ್ಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ, ಯಾರಿಗಿದೆ ಚಾನ್ಸ್?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jvenpjh86k43kqnnwd3qr2ej,imgname-kkr-1747470469672.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ 2026 ಟೂರ್ನಿಯ ಪ್ಲೇ ಆಫ್ ಲೆಕ್ಕಾಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರ್&zwnj;ಸಿಬಿ ಸತತ 2 ಸೋಲಿನ ಬಳಿಕ ಹಾಗೂ ಕೆಕೆಆರ್ ಸತತ 4 ಗೆಲುವಿನ ಬಳಿಕ ಸದ್ಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ, ಯಾರಿಗಿದೆ ಚಾನ್ಸ್?&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ರೋಚಕ ಘಟ್ಟ ತಲುಪಿದೆ. ಪ್ರತಿ ತಂಡಕ್ಕೆ ಗೆಲುವು ಅನಿವಾರ್ಯವಾಗುತ್ತಿದೆ. ಒಂದು ಸಣ್ಣ ಎಡವಟ್ಟು ಕೂಡ ತಂಡವನ್ನು ಲೀಗ್&zwnj;ನಿಂದಲೇ ಹೊರಗೆ ದಬ್ಬುವ ಸಾಧ್ಯತೆ ಹೆಚ್ಚಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್&zwnj;ಸಿಬಿ ಸತತ 2 ಸೋಲು ಕಂಡು 3ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಸೋಲಿನಿಂ ಕಂಗೆಟ್ಟ ಕೆಕೆಆರ್ ಸತತ 4 ಗೆಲುವಿನ ಮೂಲಕ ಪ್ಲೇ ಆಫ್ ರೇಸ್&zwnj;ನಲ್ಲಿ ಕಾಣಿಸಿಕೊಂಡಿದೆ.&lt;/p&gt;&lt;img&gt;&lt;p&gt;ಲಖನೌ ವಿರುದ್ಧದ ಸೋಲಿನಿಂದ ಆರ್&zwnj;ಸಿಬಿ ಸತತ 2 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಆರ್&zwnj;ಸಿಬಿ ನೆಟ್&zwnj; ರನ್&zwnj;ರೇಟ್ +1.234 ಇರುವ ಕಾರಣ 3ನೇ ಸ್ಥಾನದಲ್ಲಿದೆ. ಸದ್ಯ ಪರಿಸ್ಥಿತಿಯಲ್ಲಿ ಆರ್&zwnj;&zwj;ಸಿಬಿಗೆ ಇನ್ನೊಂದು ಗೆಲುವು ಅನಿವಾರ್ಯವಾಗಿದೆ. ಬಳಿಕ ಎಲ್ಲಾ ನೆಟ್ ರನ್&zwnj;ರೇಟ್ ಲೆಕ್ಕಾಚಾರ ನಡೆಯಲಿದೆ. ಆದರೆ 2 ಅಥವ ಅದಕ್ಕಿಂತ ಹೆಚ್ಚಿನ ಗೆಲುವು ಆರ್&zwnj;ಸಿಬಿ ತಂಡವನ್ನು ಯಾವುದೇ ಅಡೆ ತಡೆ ಇಲ್ಲದೆ ಪ್ಲೇ ಆಫ್ ಟಾಪ್ 2 ಸ್ಥಾನಕ್ಕೆ ಕೊಂಡೊಯ್ಯಲಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ತಂಡಕ್ಕೆ ಮುಂಬೈ ಇಂಡಿಯನ್ಸ್, ಕೆಕೆಆರ್, ಪಂಜಾಬ್, ಹಾಗೂ ಎಸ್ಆರ್&zwnj;ಹೆಚ್ ತಂಡಗಳ ವಿರುದ್ದ ಪಂದ್ಯ ಬಾಕಿ ಇದೆ. ನಾಲ್ಕು ಪಂದ್ಯದಲ್ಲಿ 1 ಗೆಲುವು ದಾಖಲಿಸಿದರೆ 14 ಅಂಕದೊಂದಿಗೆ ಆರ್&zwnj;ಸಿಬಿ ಪ್ರಯಾಸದಲ್ಲಿ ಪ್ಲೇ ಆಫ್ ಸಾಧ್ಯತೆ ಪಡೆಯಲಿದೆ. 14 ಅಂಕ ಪಡೆದರೆ ನೆಟ್ ರನ್ ರೇಟ್ ಆಧಾರದಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಕನಿಷ್ಠ 2 ಗೆಲುವು 16 ದೊಂದಿಗೆ ಪ್ಲೇ ಆಫ್ ಹಾದಿ ಸುಗಮಗೊಳಿಸಲಿದೆ.&lt;/p&gt;&lt;img&gt;&lt;p&gt;ಪ್ರತಿ ಐಪಿಎಲ್ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ, ಗೆಲುವಿನ ಆಧಾರದಲ್ಲಿ ಪ್ಲೇ ಆಫ್ ಕಟ್ ಆಫ್ ಪಾಯಿಂಟ್ ನಿರ್ಧಾರವಾಗುತ್ತದೆ. ಈ ಬಾರಿ ಸದ್ಯದ ಪರಿಸ್ಥಿತಿ ನೋಡಿದರೆ ಕನಿಷ್ಠ 14 ಅಂಕ ಬೇಕೇ ಬೇಕು, 18 ಅಂಕ ಸಂಪಾದಿಸಿದರೆ ಹೆಚ್ಚಿನ ಆತಂಕವಿಲ್ಲದೆ ಪ್ಲೇ ಆಫ್ ಹಂತಕ್ಕೆ ಎಂಟ್ರಿಕೊಡಲು ಸಾಧ್ಯವಾಗಲಿದೆ.&lt;/p&gt;&lt;img&gt;&lt;p&gt;ಕೆಕೆಆರ್ ಪ್ಲೇ ಆಫ್ ರೇಸ್&zwnj;ನಿಂದ ಬಹುತೇಕ ದೂರ ಉಳಿದಿತ್ತು. ಆದರೆ ಅಜಿಂಕ್ಯ ರಹಾನೆ ನಾಯಕತ್ವದ ತಂಡ ಸತತ 4 ಗೆಲುವು ದಾಖಲಿಸಿ 9 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನುಳಿದ 4 ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಒಟ್ಟು ಅಂಕ 17 ಆಗಲಿದೆ. ಈ ಮೂಲಕ ಕೆಕೆಆರ್ ಕೊನೆಯ ಅವಕಾಶ ಒಂದನ್ನು ಪಡೆಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;ol&gt; &lt;li&gt;ಬಾಕಿ ಉಳಿದ ಎಲ್ಲಾ ಪಂದ್ಯ ಗೆದ್ದರೆ, 20 ಅಂಕದೊಂದಿಗೆ ಪ್ಲೇಆಫ್ ಟಾಪ್ 2 ಸ್ಥಾನ&lt;/li&gt; &lt;li&gt;ಮೂರು ಪಂದ್ಯ ಗೆದ್ದರೆ, 18 ಅಂಕದೊಂದಿಗೆ ಪ್ಲೇ ಆಫ್ ಹಾದಿ ಸುಗಮ&lt;/li&gt; &lt;li&gt;2 ಪಂದ್ಯ ಗೆದ್ದರೆ, 16 ಅಂಕದೊಂದಿಗೆ ಪ್ಲೇ ಆಪ್ ಸ್ಥಾನ ಖಚಿತಪಡಿಸುವ ಅವಕಾಶ&lt;/li&gt; &lt;li&gt;1 ಪಂದ್ಯ ಗೆದ್ದರೆ, 14 ಅಂಕದ ಜೊತೆಗೆ ನೆಟ್ ರನ್&zwnj;ರೇಟ್ ಮೂಲಕ ಪ್ಲೇ ಆಫ್ ಅವಕಾಶ&lt;/li&gt; &lt;li&gt;ಬಾಕಿ ಉಳಿದ ನಾಲ್ಕು ಪಂದ್ಯ ಸೋತರೆ, 12 ಅಂಕದೊಂದಿಗೆ ಎಲಿಮಿನೇಶನ್&lt;/li&gt;&lt;/ol&gt;&lt;h2&gt;ಪ್ಲೇ ಆಫ್ ಸಿನಾರಿಯೋ&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/ipl-points-table-twist-how-rcb-and-kkr-playoff-chances-changed-dramatically-7vvktkr"/>
        </item>
        <item>
            <title><![CDATA[MI vs RCB ಮ್ಯಾಚ್‌ ವೇಳೆ ಹೊಟ್ಟೆಗೆ ಬಿದ್ದ ಚೆಂಡು; ಗಾಯಗೊಂಡ ಸಿಂಹದ ಆರ್ಭಟ ತೋರಿಸಿದ ಕೃನಾಲ್ ಪಾಂಡ್ಯ!]]></title>
            <link>https://kannada.asianetnews.com/gallery/cricket-sports/ipl-krunal-pandya-collapses-after-being-hit-by-deepak-chahar-s-delivery-rcb-match-won-vs-mi-sat-d5mkxqm</link>
            <guid isPermaLink="true">https://kannada.asianetnews.com/gallery/cricket-sports/ipl-krunal-pandya-collapses-after-being-hit-by-deepak-chahar-s-delivery-rcb-match-won-vs-mi-sat-d5mkxqm</guid>
            <pubDate>Mon, 11 May 2026 16:45:54 +0530</pubDate>
            <description><![CDATA[&lt;p&gt;ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಹೊಟ್ಟೆಯ ಚೆಂಡು ಬಿದ್ದು ತೀವ್ರ ಗಾಯ ಮತ್ತು ಸ್ನಾಯು ಸೆಳೆತದ ನಡುವೆಯೂ ಆಲ್-ರೌಂಡರ್ &amp;nbsp;ಕೃನಾಲ್ ಪಾಂಡ್ಯ 73 ರನ್ ಗಳಿಸಿ ಆರ್&zwnj;ಸಿಬಿಗೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್&zwnj;ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೀಗ ಗಾಯ ತೋರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krb957yfpvarr4q185kwrrww,imgname-krunal-pandya-1778495168462.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಹೊಟ್ಟೆಯ ಚೆಂಡು ಬಿದ್ದು ತೀವ್ರ ಗಾಯ ಮತ್ತು ಸ್ನಾಯು ಸೆಳೆತದ ನಡುವೆಯೂ ಆಲ್-ರೌಂಡರ್ &amp;nbsp;ಕೃನಾಲ್ ಪಾಂಡ್ಯ 73 ರನ್ ಗಳಿಸಿ ಆರ್&zwnj;ಸಿಬಿಗೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್&zwnj;ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೀಗ ಗಾಯ ತೋರಿಸಿದ್ದಾರೆ.&lt;/p&gt;&lt;img&gt;&lt;p&gt;ಇಂಡಿಯನ್ ಪ್ರೀಮಿಯರ್ ಲೀಗ್&zwnj;ನಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ರೋಚಕ ಜಯ ತಂದುಕೊಟ್ಟ ಆಲ್-ರೌಂಡರ್ ಕೃನಾಲ್ ಪಾಂಡ್ಯ, ಪಂದ್ಯದ ನಂತರ ತಮ್ಮ ಗಾಯದ ಗುರುತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಕೆಲವು ಗಾಯದ ಗುರುತುಗಳು ನಾವು ನಡೆಸಿದ ಹೋರಾಟಕ್ಕೆ ಯೋಗ್ಯವಾದ ಪುರಾವೆಗಳಾಗಿವೆ' ಎಂದು ಬರೆಯುವ ಮೂಲಕ ತಮ್ಮ ಹೋರಾಟದ ಹಾದಿಯನ್ನು ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ನೀಡಿದ್ದ 167 ರನ್&zwnj;ಗಳ ಗುರಿಯನ್ನು ಬೆನ್ನಟ್ಟಿದ ಆರ್&zwnj;ಸಿಬಿ ತಂಡ ಒಂದು ಹಂತದಲ್ಲಿ 39 ರನ್&zwnj;ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅನುಭವೀ ಬ್ಯಾಟರ್ ವಿರಾಟ್ ಕೊಹ್ಲಿ ಸತತ ಎರಡನೇ ಬಾರಿಗೆ 'ಗೋಲ್ಡನ್ ಡಕ್' ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.&lt;/p&gt;&lt;p&gt;ಈ ವೇಳೆ ಕ್ರೀಸ್&zwnj;ಗೆ ಬಂದ ಕೃನಾಲ್ ಪಾಂಡ್ಯ ಅಕ್ಷರಶಃ ಮುಂಬೈ ಬೌಲರ್&zwnj;ಗಳ ಮೇಲೆ ಸವಾರಿ ಮಾಡಿದರು. ತೀವ್ರವಾದ ಸ್ನಾಯು ಸೆಳೆತ (Cramps) ಮತ್ತು ನೋವಿನ ನಡುವೆಯೂ ಕೇವಲ 46 ಎಸೆತಗಳಲ್ಲಿ 73 ರನ್ ಚಚ್ಚಿದರು. ಈ ಸ್ಫೋಟಕ ಇನ್ನಿಂಗ್ಸ್&zwnj;ನಲ್ಲಿ 4 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್&zwnj;ಗಳಿದ್ದವು. ಅವರ ಈ ಸಾಹಸಮಯ ಇನ್ನಿಂಗ್ಸ್ ಆರ್&zwnj;ಸಿಬಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.&lt;/p&gt;&lt;img&gt;&lt;p&gt;ದೀಪಕ್ ಚಹರ್ ಎಸೆದ ಚೆಂಡು ಹೊಟ್ಟೆಗೆ ಬಡಿದು ಅವಾಂತರ! ಮುಂಬೈ: ಐಪಿಎಲ್ ಪಂದ್ಯವೊಂದರ ವೇಳೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕೃನಾಲ್ ಪಾಂಡ್ಯ ಮೈದಾನದಲ್ಲೇ ನೋವಿನಿಂದ ಕುಸಿದು ಬಿದ್ದ ಘಟನೆ ನಡೆದಿದೆ. ದೀಪಕ್ ಚಹರ್ ಎಸೆದ ವೇಗದ ಚೆಂಡು ನೇರವಾಗಿ &lt;strong&gt;ಕೃನಾಲ್ ಅವರ ಹೊಟ್ಟೆಯ ಭಾಗಕ್ಕೆ ಬಡಿದಿದ್ದೇ ಈ ಅವಾಂತರ&lt;/strong&gt;ಕ್ಕೆ ಕಾರಣವಾಯಿತು.&lt;/p&gt;&lt;p&gt;ಘಟನೆಯ ವಿವರ: ಪಂದ್ಯದ 17ನೇ ಓವರ್&zwnj;ನಲ್ಲಿ ಈ ಘಟನೆ ಸಂಭವಿಸಿದೆ. ದೀಪಕ್ ಚಹರ್ ಎಸೆದ 16.1ನೇ ಎಸೆತವು ತುಸು ನಿಧಾನಗತಿಯಿಂದ ಕೂಡಿತ್ತು (Slower Ball). ಶಾರ್ಟ್ ಲೆಂತ್&zwnj;ನಲ್ಲಿ ಬಂದ ಈ ಚೆಂಡನ್ನು ಕೃನಾಲ್ ಪಾಂಡ್ಯ ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡಿನ ವೇಗವನ್ನು ಅಂದಾಜಿಸುವಲ್ಲಿ ಕೃನಾಲ್ ವಿಫಲರಾದರು. ಬ್ಯಾಟಿಗೆ ಸಿಗದ ಚೆಂಡು ನೇರವಾಗಿ ಅವರ ಹೊಟ್ಟೆಯ ಭಾಗಕ್ಕೆ (Abdomen) ಬಡಿಯಿತು.&lt;/p&gt;&lt;p&gt;ಚೆಂಡು ಬಡಿದ ತಕ್ಷಣ ಕೃನಾಲ್ ಪಾಂಡ್ಯ ಮೈದಾನದಲ್ಲೇ ಮಲಗಿ ನೋವಿನಿಂದ ವಿಲವಿಲನೆ ಒದ್ದಾಡಿದರು. ಇದನ್ನು ಕಂಡು ತಕ್ಷಣವೇ ಫಿಸಿಯೋ ಮೈದಾನಕ್ಕೆ ಓಡಿ ಬಂದರು. ಕೃನಾಲ್ ಅವರ ಸ್ಥಿತಿ ಕಂಡು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಕ್ಷಣಕಾಲ ಆತಂಕಕ್ಕೊಳಗಾಗಿದ್ದರು.&lt;/p&gt;&lt;img&gt;&lt;p&gt;ಟಾಸ್ ಗೆದ್ದ ಆರ್&zwnj;ಸಿಬಿ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಭುವನೇಶ್ವರ್ ಕುಮಾರ್ (4/23) ಅವರ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ 28 ರನ್&zwnj;ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆದರೆ ನಮನ್ ಧೀರ್ (47) ಮತ್ತು ತಿಲಕ್ ವರ್ಮಾ (57) ಅವರ ಜವಾಬ್ದಾರಿಯುತ ಆಟದಿಂದ ಮುಂಬೈ ತಂಡ 20 ಓವರ್&zwnj;ಗಳಲ್ಲಿ 166 ರನ್ ಗಳಿಸಿತು.&lt;/p&gt;&lt;p&gt;ಆರ್&zwnj;ಸಿಬಿ ಪರ ರನ್ ಬೆನ್ನಟ್ಟುವಾಗ ಅಗ್ರ ಕ್ರಮಾಂಕ ವೈಫಲ್ಯ ಕಂಡರೂ, ಕ್ರುನಾಲ್ ಪಾಂಡ್ಯ ಮತ್ತು ಜಾಕೋಬ್ ಬೆಥೆಲ್ (26) ಜೋಡಿ 55 ರನ್&zwnj;ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿತು. ಕೊನೆಯಲ್ಲಿ ಜಿತೇಶ್ ಶರ್ಮಾ (18) ನೆರವು ನೀಡಿದರು. ಕೊನೆಯ ಓವರ್&zwnj;ನಲ್ಲಿ 12 ರನ್ ಬೇಕಿದ್ದಾಗ, ಭುವನೇಶ್ವರ್ ಕುಮಾರ್ ಬಾರಿಸಿದ ಒಂದು ಸಿಕ್ಸರ್ ಮತ್ತು ರಾಸಿಖ್ ಸಲಾಮ್ ದಾರ್ ಅವರ ಸಮಯೋಚಿತ ಆಟದಿಂದ ಆರ್&zwnj;ಸಿಬಿ ಪಂದ್ಯವನ್ನು ಗೆದ್ದುಕೊಂಡಿತು.&lt;/p&gt;&lt;img&gt;&lt;p&gt;ಈ ಅದ್ಭುತ ಗೆಲುವಿನೊಂದಿಗೆ ಆರ್&zwnj;ಸಿಬಿ ತಂಡ ಒಟ್ಟು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಆಡಿದ 11 ಪಂದ್ಯಗಳಲ್ಲಿ 7 ಗೆಲುವು ಮತ್ತು 4 ಸೋಲುಗಳೊಂದಿಗೆ ಪ್ಲೇ ಆಫ್ ಹಂತಕ್ಕೆ ತನ್ನ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದೆ. ಇತ್ತ ಸೋಲು ಕಂಡ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಅಧಿಕೃತವಾಗಿ ಪ್ಲೇ ಆಫ್ ರೇಸ್&zwnj;ನಿಂದ ಹೊರಬಿದ್ದಿವೆ.&lt;/p&gt;&lt;img&gt;&lt;p&gt;ಕೃನಾಲ್ ಪಾಂಡ್ಯ ಈ ಋತುವಿನಲ್ಲಿ ಅದ್ಭುತ ಫಾರ್ಮ್&zwnj;ನಲ್ಲಿದ್ದು, 6 ಇನ್ನಿಂಗ್ಸ್&zwnj;ಗಳಲ್ಲಿ 141 ರನ್ ಗಳಿಸಿದ್ದಾರೆ. 150ರ ಸ್ಟ್ರೈಕ್ ರೇಟ್ ಮತ್ತು 35.50ರ ಸರಾಸರಿಯಲ್ಲಿ ಬ್ಯಾಟ್ ಮಾಡುತ್ತಿರುವ ಅವರು, ಆರ್&zwnj;ಸಿಬಿ ತಂಡದ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿದ್ದಾರೆ. ಅವರ ಹೋರಾಟದ ಗುಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು 'ಯಾರೀ ಈ ಕಲಿ' ಎಂದು ಶ್ಲಾಘಿಸುತ್ತಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/ipl-krunal-pandya-collapses-after-being-hit-by-deepak-chahar-s-delivery-rcb-match-won-vs-mi-sat-d5mkxqm"/>
        </item>
        <item>
            <title><![CDATA[ರಾಯಚೂರಿನಲ್ಲೂ ಘರ್ಜಿಸಿದ ಆರ್‌ಸಿಬಿ, ಎಡವಟ್ಟು ಮಾಡಿ ತಕ್ಷಣವೇ ತಿದ್ದಿ ಮನಗೆದ್ದ ವಿಜಯ್ ಮಲ್ಯ]]></title>
            <link>https://kannada.asianetnews.com/gallery/cricket-sports/vijay-mallya-corrects-raichur-mistake-with-fresh-rcb-post-creates-buzz-again-dsmb7bq</link>
            <guid isPermaLink="true">https://kannada.asianetnews.com/gallery/cricket-sports/vijay-mallya-corrects-raichur-mistake-with-fresh-rcb-post-creates-buzz-again-dsmb7bq</guid>
            <pubDate>Mon, 11 May 2026 09:38:57 +0530</pubDate>
            <description><![CDATA[&lt;p&gt;ಆರ್&zwnj;ಸಿಬಿ ಸಿಂಹಗಳು, ಇದೀಗ ರಾಯಚೂರಿನಲ್ಲೂ ಘರ್ಜಿಸಿದೆ ಎಂದ ಮಾಜಿ ಮಾಲೀಕ ವಿಜಯ್ ಮಲ್ಯ ತಕ್ಷಣವೇ ತಪ್ಪು ಸರಿಪಡಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಈ ವೇಳೆ ನನ್ನೊಳಗಿನ ಕನ್ನಡಿಗ ಬಿಟ್ಟುಕೊಡುವುದೇ ಎಂದು ತಪ್ಪು ಸರಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krak1pjgcn0v64qreckf4wy5,imgname-vijay-mallya-congratulate-rcb-with-mistake-1778471983694.png" type="image/jpeg" height="390" width="690"/>
            <content:encoded><![CDATA[&lt;p&gt;ಆರ್&zwnj;ಸಿಬಿ ಸಿಂಹಗಳು, ಇದೀಗ ರಾಯಚೂರಿನಲ್ಲೂ ಘರ್ಜಿಸಿದೆ ಎಂದ ಮಾಜಿ ಮಾಲೀಕ ವಿಜಯ್ ಮಲ್ಯ ತಕ್ಷಣವೇ ತಪ್ಪು ಸರಿಪಡಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಈ ವೇಳೆ ನನ್ನೊಳಗಿನ ಕನ್ನಡಿಗ ಬಿಟ್ಟುಕೊಡುವುದೇ ಎಂದು ತಪ್ಪು ಸರಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು ಕಂಡ ಆರ್&zwnj;ಸಿಬಿ ತಂಡಕ್ಕೆ ಮಾಜಿ ಮಾಲೀಕ ವಿಜಯ್ ಮಲ್ಯ ಅಭಿನಂದಿಸಿದ್ದಾರೆ. ಆದರೆ ಮಲ್ಯ ಎಕ್ಸ್ ಪೋಸ್ಟ್ ಮಾಡುವಾಗ ಎಡವಟ್ಟು ಮಾಡಿದ್ದಾರೆ. ಬೆಂಗಳೂರು ತಂಡ ಇದೀಗ ರಾಯಚೂರಿನಲ್ಲಿ ಘರ್ಜಿಸಿದೆ ಎಂದಿದ್ದಾರೆ. ಮಲ್ಯ ಈ ಟ್ವೀಟ್&zwnj;ಗೆ ಹಲವು ಗೊಂದಲಕ್ಕೀಡಾಗಿದ್ದಾರೆ. ಕೊನೆಗೆ ವಿಜಯ್ ಮಲ್ಯ ತಪ್ಪು ಸರಿ ಪಡಿಸಿ ಮಾಡಿದ ಪೋಸ್ಟ್ ಹಲವರ ಮನಗೆದ್ದಿದೆ.&lt;/p&gt;&lt;img&gt;&lt;p&gt;ಮುಂಬೈ ವಿರುದ್ದ ಅದ್ಭುತ ಗೆಲುವಿಗೆ ವಿಜಯ್ ಮಲ್ಯ ಆರ್&zwnj;ಸಿಬಿ ತಂಡವನ್ನು ಅಭಿನಂದಿಸಿದ್ದಾರೆ. ಆರ್&zwnj;ಸಿಬಿ ನಮ್ಮ ಸಿಂಹಗಳಿಗೆ ಅಭಿನಂದನೆಗಳು. ಬೆಂಗಳೂರಿನ ಸಿಂಹಗಳು ಇದೀಗ ರಾಯಚೂರಿನ ಸಿಂಹಗಳು. ಸಂಕಷ್ಟಗಳ ನಡುವೆ ಉತ್ತಮ ಪ್ರದರ್ಶನ ನೀಡಿ ಅದ್ಭುತ ಗೆಲುವು ಸಾಧಿಸಿದೆ. ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಡದೆ ಹೋರಾಟ ಮಾಡುವ ಆರ್&zwnj;ಸಿಬಿಯ ಪ್ರಯತ್ನ ಮುಂದುವರಿದಿದೆ ಎಂದು ಮಲ್ಯ ಎಕ್ಸ್&zwnj;ನಲ್ಲಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿಯ ರಾಯ್&zwnj;ಪುರ್ ಹೋಮ್ ಗೇಮ್ ಆರಂಭಗೊಂಡಿದೆ. ಆರ್&zwnj;ಸಿಬಿಯ ಎರಡನೇ ತವರು ರಾಯ್&zwnj;ಪುರ್. ಆದರೆ ಮಲ್ಯ ಅಭಿನಂದನೆ ವೇಳೆ ರಾಯ್&zwnj;ಪುರ್ ಬದಲು ರಾಯಚೂರು ಎಂದು ಪೋಸ್ಟ್ ಮಾಡಿದ್ದಾರೆ. ಸ್ಪಷ್ಟವಾಗಿ ರಾಯಚೂರಿನ ಸಿಂಹಗಳು ಎಂದು ಎಕ್ಸ್&zwnj;ನಲ್ಲಿ ಉಲ್ಲೇಖಿಸಿದ್ದರು.&lt;/p&gt;&lt;img&gt;&lt;p&gt;ತಕ್ಷಣವೇ ಮತ್ತೊಂದು ಪೋಸ್ಟ್ ಮಾಡಿದ ವಿಜಯ್ ಮಲ್ಯ, ರಾಯಚೂರು ಅಲ್ಲ ಅದು ರಾಯ್&zwnj;ಪುರ್. ನನ್ನೊಳಗಿನ ಕನ್ನಡಿಗ ನನ್ನ ಬಿಟ್ಟುಕೊಡುವುದೇ ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್&zwnj;ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವಿರೋಧಗಳು ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ವಿಜಯ್ ಮಲ್ಯ ಉದ್ದೇಶಪೂರ್ವಕವಾಗಿ ಮಿಸ್ಟೇಕ್ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಮಲ್ಯ ಒಳಗೆ ಕನ್ನಡಿಗ ಇದ್ದರೆ, ಕರ್ನಾಟಕ ಬಿಟ್ಟಿದ್ದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೀಗ ಮಲ್ಯ ಟ್ವೀಟ್ ಪರ ವಿರೋಧಗಳು ಹೆಚ್ಚಾಗುತ್ತಿದೆ. ಆದರೆ ವಿಜಯ್ ಮಲ್ಯ ಒಂದು ಪೋಸ್ಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.&lt;/p&gt;&lt;h2&gt;ಉದ್ದೇಶಪೂರ್ವಕವಾಗಿ ಮಾಡಿದ್ರಾ ಮಿಸ್ಟೇಕ್&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/vijay-mallya-corrects-raichur-mistake-with-fresh-rcb-post-creates-buzz-again-dsmb7bq"/>
        </item>
        <item>
            <title><![CDATA[ಇವರೇ ಕ್ರಿಕೆಟ್ ಇತಿಹಾಸದ ಅಪಾಯಕಾರಿ ಬ್ಯಾಟರ್ಸ್! ಕ್ರೀಸ್‌ಗೆ ಬಂದ್ರೆ ಬೌಲರ್‌ಗಳಿಗೆ ನಡುಕ!]]></title>
            <link>https://kannada.asianetnews.com/gallery/cricket-sports/most-feared-batsmen-chris-gayle-virender-sehwag-ab-de-villiers-sanath-jayasuriya-adam-gilchrist-in-cricket-history-mrq-ge2xwvx</link>
            <guid isPermaLink="true">https://kannada.asianetnews.com/gallery/cricket-sports/most-feared-batsmen-chris-gayle-virender-sehwag-ab-de-villiers-sanath-jayasuriya-adam-gilchrist-in-cricket-history-mrq-ge2xwvx</guid>
            <pubDate>Mon, 11 May 2026 10:17:24 +0530</pubDate>
            <description><![CDATA[ಕ್ರಿಕೆಟ್ ಜಗತ್ತನ್ನು ತಮ್ಮ ಸ್ಫೋಟಕ ಬ್ಯಾಟಿಂಗ್&zwnj;ನಿಂದ ಆಳಿದ ಆಟಗಾರರು ಹಲವರಿದ್ದಾರೆ. ಆದರೆ ಈ ಐವರು ಅತ್ಯಂತ ಅಪಾಯಕಾರಿ ಬ್ಯಾಟರ್&zwnj;ಗಳೆಂದು ಹೆಸರುವಾಸಿಯಾಗಿದ್ದಾರೆ. ಇವರು ಕ್ರೀಸ್&zwnj;ಗೆ ಬಂದರೆ ಬೌಲರ್&zwnj;ಗಳಿಗೆ ನಡುಕ ಹುಟ್ಟಿಸುತ್ತಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01ejas6bfh8hpeyqc5wjpepfk7,imgname-sehwag-jpg.jpg" type="image/jpeg" height="390" width="690"/>
            <content:encoded><![CDATA[ಕ್ರಿಕೆಟ್ ಜಗತ್ತನ್ನು ತಮ್ಮ ಸ್ಫೋಟಕ ಬ್ಯಾಟಿಂಗ್&zwnj;ನಿಂದ ಆಳಿದ ಆಟಗಾರರು ಹಲವರಿದ್ದಾರೆ. ಆದರೆ ಈ ಐವರು ಅತ್ಯಂತ ಅಪಾಯಕಾರಿ ಬ್ಯಾಟರ್&zwnj;ಗಳೆಂದು ಹೆಸರುವಾಸಿಯಾಗಿದ್ದಾರೆ. ಇವರು ಕ್ರೀಸ್&zwnj;ಗೆ ಬಂದರೆ ಬೌಲರ್&zwnj;ಗಳಿಗೆ ನಡುಕ ಹುಟ್ಟಿಸುತ್ತಿದ್ದರು.&lt;img&gt;ಕ್ರಿಕೆಟ್ ಅಂದರೆ ಬ್ಯಾಟ್ ಮತ್ತು ಬಾಲ್ ನಡುವಿನ ಯುದ್ಧ. ಆದರೆ ಕೆಲ ಬ್ಯಾಟರ್&zwnj;ಗಳು ಮೈದಾನಕ್ಕೆ ಇಳಿದರೆ ಅದು ಯುದ್ಧದಂತೆ ಕಾಣುವುದಿಲ್ಲ, ಬದಲಾಗಿ ಏಕಪಕ್ಷೀಯ ಸಮರದಂತೆ ಇರುತ್ತದೆ. ಈ ಐವರು 'ಅತ್ಯಂತ ಅಪಾಯಕಾರಿ ಬ್ಯಾಟರ್ಸ್' ಎಂದು ಗುರುತಿಸಿಕೊಂಡಿದ್ದಾರೆ.&lt;img&gt;ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಹೆಸರು ಕೇಳಿದ್ರೆ ಸಾಕು, ಬೌಲರ್&zwnj;ಗಳಿಗೆ ನಡುಕ ಶುರುವಾಗುತ್ತಿತ್ತು. ಗೇಲ್ ಒಮ್ಮೆ ಕ್ರೀಸ್&zwnj;ನಲ್ಲಿ ಸೆಟ್ ಆದರೆ, ಅವರನ್ನು ಔಟ್ ಮಾಡುವುದು ಕಷ್ಟಸಾಧ್ಯವಾಗಿತ್ತು. ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ 19,593 ರನ್ ಮತ್ತು 553 ಸಿಕ್ಸರ್&zwnj;ಗಳನ್ನು ಸಿಡಿಸಿದ್ದಾರೆ.&lt;img&gt;ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಎರಡು ತ್ರಿಶತಕ (300+) ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಸೆಹ್ವಾಗ್. ಏಕದಿನ ಪಂದ್ಯದಲ್ಲೂ ದ್ವಿಶತಕ ಬಾರಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ 17,253 ರನ್ ಗಳಿಸಿದ್ದು, ಇದರಲ್ಲಿ 38 ಶತಕ ಮತ್ತು 72 ಅರ್ಧಶತಕಗಳಿವೆ.&lt;img&gt;ಮೈದಾನದ ಯಾವುದೇ ಮೂಲೆಗೆ ಚೆಂಡನ್ನು ಬಾರಿಸುವ ಸಾಮರ್ಥ್ಯ ಎಬಿಡಿಗಿದೆ. 2015ರಲ್ಲಿ ಕೇವಲ 31 ಎಸೆತಗಳಲ್ಲಿ ಏಕದಿನ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 20,014 ರನ್, 47 ಶತಕ, 109 ಅರ್ಧಶತಕ ಹಾಗೂ 328 ಸಿಕ್ಸರ್&zwnj;ಗಳನ್ನು ಬಾರಿಸಿದ್ದಾರೆ.&lt;img&gt;ಶ್ರೀಲಂಕಾದ ದಿಗ್ಗಜ ಸನತ್ ಜಯಸೂರ್ಯ ಆರಂಭಿಕ ಬ್ಯಾಟಿಂಗ್&zwnj;ಗೆ ಹೊಸ ಭಾಷ್ಯ ಬರೆದವರು. ಪವರ್&zwnj;ಪ್ಲೇನಲ್ಲಿ ಬೌಲರ್&zwnj;ಗಳನ್ನು ದಂಡಿಸುವುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ 21,032 ರನ್ ಗಳಿಸಿದ್ದು, 352 ಸಿಕ್ಸರ್&zwnj;ಗಳನ್ನು ಬಾರಿಸಿದ್ದಾರೆ.&lt;img&gt;ಆಸ್ಟ್ರೇಲಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ ಆಡಮ್ ಗಿಲ್&zwnj;ಕ್ರಿಸ್ಟ್. ಇವರು ಕ್ರೀಸ್&zwnj;ಗೆ ಬಂದರೆ ಸ್ಕೋರ್ ಬೋರ್ಡ್ ರಾಕೆಟ್ ವೇಗದಲ್ಲಿ ಸಾಗುತ್ತಿತ್ತು. ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ 15,461 ರನ್, 33 ಶತಕ, 81 ಅರ್ಧಶತಕ ಹಾಗೂ 262 ಸಿಕ್ಸರ್&zwnj;ಗಳನ್ನು ಬಾರಿಸಿದ್ದಾರೆ.]]></content:encoded>
            <category>sports</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/cricket-sports/most-feared-batsmen-chris-gayle-virender-sehwag-ab-de-villiers-sanath-jayasuriya-adam-gilchrist-in-cricket-history-mrq-ge2xwvx"/>
        </item>
        <item>
            <title><![CDATA[BCCI Warns: ಐಪಿಎಲ್ ವೇಳೆ ಹನಿಟ್ರ್ಯಾಪ್ ಬಗ್ಗೆ ಆಟಗಾರರಿಗೆ ಬಿಸಿಸಿಐ ನೀಡಿದ ಗುಪ್ತ ಎಚ್ಚರಿಕೆ ಏನು?]]></title>
            <link>https://kannada.asianetnews.com/cricket-sports/bcci-warns-players-about-honey-trapping-risks-during-ipl-rav/articleshow-gvfiszt</link>
            <guid isPermaLink="true">https://kannada.asianetnews.com/cricket-sports/bcci-warns-players-about-honey-trapping-risks-during-ipl-rav/articleshow-gvfiszt</guid>
            <pubDate>Sat, 09 May 2026 09:05:32 +0530</pubDate>
            <description><![CDATA[&lt;p&gt;ಐಪಿಎಲ್&zwnj; ವೇಳೆ ಸಂಭವನೀಯ ಹನಿಟ್ರ್ಯಾಪ್&zwnj; ಮತ್ತು ಭದ್ರತಾ ಅಪಾಯಗಳ ಬಗ್ಗೆ ಬಿಸಿಸಿಐ ಆಟಗಾರರಿಗೆ ಎಚ್ಚರಿಕೆ ನೀಡಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಎಲ್ಲಾ 10 ಫ್ರಾಂಚೈಸಿಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ತಂಡದ ಮಾಲೀಕರಿಗೂ ಪಂದ್ಯದ ವೇಳೆ ಆಟಗಾರರೊಂದಿಗೆ ಸಂವಹನ ನಡೆಸದಂತೆ ಸೂಚನೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5cdmy585fg4yr18zr0pqvg,imgname-----------------------2026-05-09t085657.299-1778297263045.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಐಪಿಎಲ್&zwnj; ವೇಳೆ ಸಂಭಾವ್ಯ ಹನಿಟ್ರ್ಯಾಪ್&zwnj;, ಭದ್ರತಾ ಅಪಾಯ ಹಾಗೂ ಕಾನೂನು ಸಂಕಷ್ಟದ ಬಗ್ಗೆ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಈ ಕುರಿತು ಎಲ್ಲಾ 10 ಫ್ರಾಂಚೈಸಿಗಳಿಗೆ ಮಾರ್ಗಸೂಚಿಯನ್ನು ನೀಡಲಾಗಿದ್ದು, ಅನಧಿಕೃತ ವ್ಯಕ್ತಿಗಳ ಪ್ರವೇಶ ಕುರಿತು ಎಚ್ಚರಿಕೆ ಪಾಲಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.&lt;/p&gt;&lt;p&gt;ಪಂದ್ಯಗಳ ವೇಳೆ ಡಗೌಟ್&zwnj;, ಹೋಟೆಲ್&zwnj; ರೂಮ್&zwnj;, ತಂಡದ ಬಸ್&zwnj; ಸೇರಿ ಹಲವೆಡೆ ಆಟಗಾರರ ಜೊತೆ ಕೆಲ ಅನಧಿಕೃತ ವ್ಯಕ್ತಿಗಳು ಕಾಣಿಸಿಕೊಂಡಿದ್ದನ್ನು ಬಿಸಿಸಿಐ ಗಂಭೀರವಾಗಿ ತೆಗೆದುಕೊಂಡಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ತಂಡಗಳಿಗೆ ಪತ್ರ ಬರೆದಿದ್ದಾರೆ. &lsquo;ಈ ಬಾರಿ ಐಪಿಎಲ್&zwnj; ವೇಳೆ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ತಂಡದ ಅಧಿಕೃತರಿಂದ ನಿಯಮ ಉಲ್ಲಂಘನೆ, ಸ್ವೀಕಾರಾರ್ಹವಲ್ಲದ ಘಟನೆಗಳು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಹಾಗೇ ಬಿಟ್ಟರೆ ಐಪಿಎಲ್&zwnj; ಹಾಗೂ ಬಿಸಿಸಿಐ ಖ್ಯಾತಿಗೆ ದಕ್ಕೆ ಉಂಟುಮಾಡಬಹುದು. ಭವಿಷ್ಯದಲ್ಲಿ ಗಂಭೀರ ಸ್ವರೂಪದ ಕಾನೂನು ಸಮಸ್ಯೆ ಹಾಗೂ ಭದ್ರತಾ ಅಪಾಯ ತಂದೊಡ್ಡಬಹುದು&rsquo; ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&lsquo;ಕೆಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯು ತಂಡದ ಮ್ಯಾನೇಜರ್&zwnj;ಗೆ ತಿಳಿಸದೆ ಅಥವಾ ಅನುಮೋದನೆ ಪಡೆಯದೆ ಅನಧಿಕೃತ ವ್ಯಕ್ತಿಗಳನ್ನು ತಮ್ಮ ಹೋಟೆಲ್&zwnj; ಕೋಣೆಗೆ ಕರೆಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇಂತಹ ನಡವಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು. ಮ್ಯಾನೇಜರ್&zwnj;ರಿಂದ ಅನುಮತಿ ಇಲ್ಲದೆ ಅನಧಿಕೃತ ವ್ಯಕ್ತಿಗಳು, ಅತಿಥಿಗಳನ್ನು ತಮ್ಮ ಹೋಟೆಲ್&zwnj; ಕೋಣೆಗಳಿಗೆ ಆಹ್ವಾನಿಸಬಾರದು. ಉನ್ನತ ಮಟ್ಟದ ಕ್ರೀಡಾ ವಾತಾವರಣದಲ್ಲಿ ಹನಿಟ್ರ್ಯಾಪ್&zwnj; ಅಪಾಯಗಳ ಬಗ್ಗೆ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಗಮನ ಸೆಳೆಯುತ್ತದೆ. ಇಂತಹ ಘಟನೆಗಳು ಗಂಭೀರ ಕಾನೂನು ಉಲ್ಲಂಘನೆಗೆ ಕಾರಣವಾಗುತ್ತದೆ. ಹೀಗಾಗಿ ಫ್ರಾಂಚೈಸಿಗಳು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು&rsquo; ಎಂದು ಸೈಕಿಯಾ ಅವರು ಸೂಚನೆ ನೀಡಿದ್ದಾರೆ.&lt;/p&gt;&lt;h2&gt;ಮಾಲೀಕರಿಗೂ ನಿರ್ಬಂಧ:&lt;/h2&gt;&lt;p&gt;ಇನ್ನು, ಪಂದ್ಯದ ವೇಳೆ ಡಗೌಟ್&zwnj;, ರೂಮ್&zwnj; ಅಥವಾ ಮೈದಾನದ ಬಳಿಕ ಆಟಗಾರರ ಜೊತೆ ತಂಡಗಳ ಮಾಲಿಕರ ಸಂಭಾಷನೆ, ಆಲಿಂಘನ ಕೂಡಾ ನಿಷೇಧಿಸಲಾಗಿದೆ. &lsquo; ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಪಂದ್ಯದ ಸಂದರ್ಭಗಳಲ್ಲಿ ಆಟಗಾರರೊಂದಿಗೆ ಸಂವಹನ ನಡೆಸಲು, ಸಮೀಪಿಸಲು, ತಬ್ಬಿಕೊಳ್ಳಲು ಪ್ರಯತ್ನಿಸುವ ನಿದರ್ಶನ ಗಮನಿಸಲಾಗಿದೆ. ಅಂತಹ ನಡವಳಿಕೆಯು ಸದುದ್ದೇಶದಿಂದ ಕೂಡಿದ್ದರೂ, ಅದು ಬಿಸಿಸಿಐ ಶಿಷ್ಟಾಚಾರದ ಉಲ್ಲಂಘನೆಯಾಗಿರುತ್ತದೆ&rsquo; ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;ಯಾವುದಕ್ಕೆಲ್ಲಾ ನಿರ್ಬಂಧ?&lt;/h3&gt;&lt;p&gt;1. ಹೋಟೆಲ್&zwnj; ರೂಮ್&zwnj;ಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ.&lt;/p&gt;&lt;p&gt;2. ಪಂದ್ಯದ ವೇಳೆ ಆಟಗಾರರ ಜೊತೆ ಮಾಲಿಕರ ಭೇಟಿ.&lt;/p&gt;&lt;p&gt;3. ಪಂದ್ಯ ನಡೆಯುವ ಸ್ಥಳದಲ್ಲಿ ವೇಪಿಂಗ್&zwnj;.&lt;/p&gt;&lt;p&gt;4. ಅನುಮತಿ ಇಲ್ಲದೆ ಹೋಟೆಲ್&zwnj;ನಿಂದ ಹೊರಬರುವುದು.&lt;/p&gt;]]></content:encoded>
            <category>sports</category>
            <dc:creator>Ravi Janekal</dc:creator>
            <atom:link href="https://kannada.asianetnews.com/cricket-sports/bcci-warns-players-about-honey-trapping-risks-during-ipl-rav/articleshow-gvfiszt"/>
        </item>
        <item>
            <title><![CDATA[Rahul Dravid: ಕ್ರಿಕೆಟ್‌ ತಂಡವನ್ನೇ ಖರೀದಿಸಿದ ಬೆಂಗಳೂರಿನ ಹಿರಿಮೆ, ರಾಹುಲ್‌ ದ್ರಾವಿಡ್!‌]]></title>
            <link>https://kannada.asianetnews.com/cricket-sports/cricketer-rahul-dravid-ventures-into-european-cricket-as-dublin-guardians-owner/articleshow-i7wooiw</link>
            <guid isPermaLink="true">https://kannada.asianetnews.com/cricket-sports/cricketer-rahul-dravid-ventures-into-european-cricket-as-dublin-guardians-owner/articleshow-i7wooiw</guid>
            <pubDate>Tue, 12 May 2026 16:05:49 +0530</pubDate>
            <description><![CDATA[&lt;p&gt;Rahul Dravid: ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್, ಯುರೋಪಿಯನ್ T20 ಪ್ರೀಮಿಯರ್ ಲೀಗ್&zwnj;ನಲ್ಲಿ (ETPL) ಡಬ್ಲಿನ್ ಗಾರ್ಡಿಯನ್ಸ್ ಫ್ರಾಂಚೈಸಿಯ ಮಾಲೀಕರಾಗಿದ್ದಾರೆ. 2026ರಲ್ಲಿ ಆರಂಭವಾಗಲಿರುವ ಈ ಲೀಗ್, ಯುರೋಪ್&zwnj;ನಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸುವ ಗುರಿ ಹೊಂದಿದೆ. ಜೊಂಟಿ ರೋಡ್ಸ್ ಅವರಂತಹ ಇತರ ದಿಗ್ಗಜರೂ ಈ ಲೀಗ್&zwnj;ನ ಭಾಗವಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3xbthkj6wvg042g6d9qa8q7,imgname-untitled-design---2025-08-30t165845.205-1756553365106.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟ್ ಜಗತ್ತನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಇಡಲಾಗಿದೆ. ಯುರೋಪಿಯನ್ T20 ಪ್ರೀಮಿಯರ್ ಲೀಗ್ (ETPL) ಸೋಮವಾರ, ಭಾರತದ ಕ್ರಿಕೆಟ್ ಐಕಾನ್ ರಾಹುಲ್ ದ್ರಾವಿಡ್ ಅವರನ್ನು ಡಬ್ಲಿನ್ ಗಾರ್ಡಿಯನ್ಸ್ ಫ್ರಾಂಚೈಸಿಯ ಮಾಲೀಕರೆಂದು ಘೋಷಿಸಿದೆ. ಈ ಮೂಲಕ 2026ರಲ್ಲಿ ಆರಂಭವಾಗಲಿರುವ ಲೀಗ್&zwnj;ನ ಎಲ್ಲಾ ಆರು ತಂಡಗಳ ಫ್ರಾಂಚೈಸಿ ರಚನೆ ಪೂರ್ಣಗೊಂಡಿದೆ.&lt;/p&gt;&lt;p&gt;ಡಬ್ಲಿನ್&zwnj;ನಲ್ಲಿ ನಡೆದ ಒಂದು ಪ್ರಮುಖ ಕಾರ್ಯಕ್ರಮದಲ್ಲಿ ETPL ತನ್ನ ಆರು ತಂಡಗಳ ಫ್ರಾಂಚೈಸಿಗಳ ಪಟ್ಟಿಯನ್ನು ಅಂತಿಮಗೊಳಿಸಿತು. ಇದೇ ವೇಳೆ, ರಾಹುಲ್ ದ್ರಾವಿಡ್ ಅವರನ್ನು ಡಬ್ಲಿನ್ ಫ್ರಾಂಚೈಸಿಯ ಮಾಲೀಕರೆಂದು ಅಧಿಕೃತವಾಗಿ ಪರಿಚಯಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ಲಾಸ್ಗೋ ಫ್ರಾಂಚೈಸಿಯ ವಿಪುಲ್ ಅಗರ್ವಾಲ್, ರೊಟರ್&zwnj;ಡ್ಯಾಮ್ ಫ್ರಾಂಚೈಸಿಯ ಜೊಂಟಿ ರೋಡ್ಸ್ ಮತ್ತು ಮಧುಕರ್ ಶ್ರೀ ಅವರಂತಹ ಇತರ ಮಾಲೀಕರು ಭಾಗವಹಿಸಿದ್ದರು. ಜೊತೆಗೆ, ETPL ಸಹ-ಸಂಸ್ಥಾಪಕರಾದ ಅಭಿಷೇಕ್ ಬಚ್ಚನ್, ಸೌರವ್ ಬ್ಯಾನರ್ಜಿ, ಪ್ರಿಯಾಂಕಾ ಕೌಲ್ ಮತ್ತು ಧೀರಜ್ ಮಲ್ಹೋತ್ರಾ ಕೂಡ ಉಪಸ್ಥಿತರಿದ್ದರು.&lt;/p&gt;&lt;p&gt;ಕ್ರಿಕೆಟ್ ಐರ್ಲೆಂಡ್&zwnj;ನ ಅಧ್ಯಕ್ಷ ಬ್ರಿಯಾನ್ ಮ್ಯಾಕ್&zwnj;ನೀಸ್, ಸಿಇಒ ಸಾರಾ ಕೀನ್, ಕ್ರಿಕೆಟ್ ನೆದರ್&zwnj;ಲ್ಯಾಂಡ್ಸ್&zwnj;ನ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ರೋಲ್ಯಾಂಡ್ ಲೆಫೆಬ್ರೆ ಮತ್ತು ಕ್ರಿಕೆಟ್ ಸ್ಕಾಟ್&zwnj;ಲ್ಯಾಂಡ್&zwnj;ನ ಸಿಇಒ ಟ್ರೂಡಿ ಲಿಂಡ್&zwnj;ಬ್ಲೇಡ್ ಅವರಂತಹ ಯುರೋಪಿಯನ್ ಕ್ರಿಕೆಟ್&zwnj;ನ ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಯುರೋಪ್&zwnj;ನ ಮೊದಲ ಐಸಿಸಿ ಮಾನ್ಯತೆ ಪಡೆದ ಬಹು-ರಾಷ್ಟ್ರೀಯ ಫ್ರಾಂಚೈಸಿ T20 ಲೀಗ್&zwnj;ಗೆ ಸಿಗುತ್ತಿರುವ ಬಲವಾದ ಸಾಂಸ್ಥಿಕ ಬೆಂಬಲವನ್ನು ತೋರಿಸುತ್ತದೆ.&lt;/p&gt;&lt;p&gt;ಕ್ರಿಕೆಟ್ ಐರ್ಲೆಂಡ್, ಕ್ರಿಕೆಟ್ ಸ್ಕಾಟ್&zwnj;ಲ್ಯಾಂಡ್ ಮತ್ತು ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಈ ಲೀಗ್ ಆರಂಭವಾಗಿದೆ. ಡಬ್ಲಿನ್, ಬೆಲ್&zwnj;ಫಾಸ್ಟ್, ಎಡಿನ್&zwnj;ಬರ್ಗ್, ಗ್ಲಾಸ್ಗೋ, ರೊಟರ್&zwnj;ಡ್ಯಾಮ್ ಮತ್ತು ಆಮ್ಸ್ಟರ್&zwnj;ಡ್ಯಾಮ್&zwnj;ನ ತಂಡಗಳನ್ನು ಒಳಗೊಂಡಿರುವ ಇದು ಯುರೋಪ್&zwnj;ನಲ್ಲೇ ಮೊದಲ ಗಡಿಯಾಚೆಗಿನ ಫ್ರಾಂಚೈಸಿ ಮಾದರಿಯಾಗಿದೆ. ಯುರೋಪನ್ನು ಕ್ರಿಕೆಟ್&zwnj;ನ ಮುಂದಿನ ಪ್ರಮುಖ ಬೆಳವಣಿಗೆಯ ಕೇಂದ್ರವನ್ನಾಗಿ ಮಾಡುವುದು ಇದರ ಗುರಿಯಾಗಿದೆ.&lt;/p&gt;&lt;h2&gt;ಸ್ಟಾರ್ ಆಟಗಾರರು ಮತ್ತು ಅವಕಾಶಗಳು&lt;/h2&gt;&lt;p&gt;ಈ ಲೀಗ್&zwnj;ನಲ್ಲಿ ಮಿಚೆಲ್ ಮಾರ್ಷ್, ಟಿಮ್ ಡೇವಿಡ್, ಮಿಚೆಲ್ ಸ್ಯಾಂಟ್ನರ್, ಲಿಯಾಮ್ ಲಿವಿಂಗ್&zwnj;ಸ್ಟೋನ್, ಗ್ಲೆನ್ ಮ್ಯಾಕ್ಸ್&zwnj;ವೆಲ್, ಫಾಫ್ ಡು ಪ್ಲೆಸಿಸ್, ಹೆನ್ರಿಚ್ ಕ್ಲಾಸೆನ್ ಅವರಂತಹ ಅಂತರರಾಷ್ಟ್ರೀಯ ಸ್ಟಾರ್ ಆಟಗಾರರು ಆಡುವ ನಿರೀಕ್ಷೆಯಿದೆ. ಇದು ಯುರೋಪ್ ಮತ್ತು ಇತರ ಸಹವರ್ತಿ ರಾಷ್ಟ್ರಗಳ ಉದಯೋನ್ಮುಖ ಆಟಗಾರರಿಗೆ ವಿಶ್ವದ ಕೆಲವು ದೊಡ್ಡ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಮತ್ತು ಸ್ಪರ್ಧಿಸಲು ಒಂದು ಅದ್ಭುತ ಅವಕಾಶವನ್ನು ಸೃಷ್ಟಿಸಲಿದೆ.&lt;/p&gt;&lt;h2&gt;ಯುರೋಪಿಯನ್ ಕ್ರಿಕೆಟ್&zwnj;ಗೆ ETPL ದೃಷ್ಟಿಕೋನ&lt;/h2&gt;&lt;p&gt;ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಭಿಷೇಕ್ ಬಚ್ಚನ್, &quot;ETPL ಕೇವಲ ಒಂದು ಕ್ರಿಕೆಟ್ ಲೀಗ್ ನಿರ್ಮಿಸುವುದಕ್ಕಿಂತ ಹೆಚ್ಚಿನ ಗುರಿ ಹೊಂದಿದೆ. ಇದು ಐರ್ಲೆಂಡ್ ಮತ್ತು ಯುರೋಪ್&zwnj;ನಾದ್ಯಂತ ಯುವ ಕ್ರಿಕೆಟ್ ಪ್ರತಿಭೆಗಳಿಗೆ ಸ್ಫೂರ್ತಿ ನೀಡಿ, ಅವರನ್ನು ಅಭಿವೃದ್ಧಿಪಡಿಸಲು ಬಯಸುತ್ತದೆ,&quot; ಎಂದರು. ರಾಹುಲ್ ದ್ರಾವಿಡ್, ಸ್ಟೀವ್ ವಾ, ಗ್ಲೆನ್ ಮ್ಯಾಕ್ಸ್&zwnj;ವೆಲ್, ಜೊಂಟಿ ರೋಡ್ಸ್, ಕ್ರಿಸ್ ಗೇಲ್, ಫಾಫ್ ಡು ಪ್ಲೆಸಿಸ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಈ ಲೀಗ್&zwnj;ಗೆ ಕೈಜೋಡಿಸಿರುವುದು ಜಾಗತಿಕ ಕ್ರಿಕೆಟ್ ಸಮುದಾಯದಿಂದ ಸಿಕ್ಕಿರುವ ಪ್ರೋತ್ಸಾಹವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.&lt;/p&gt;&lt;p&gt;ರಾಹುಲ್ ದ್ರಾವಿಡ್ ಮಾತನಾಡಿ, &quot;ನಾನು ETPL ಸೇರಲು ಮುಖ್ಯ ಕಾರಣವೆಂದರೆ ಇದರ ಹಿಂದಿರುವ ದೊಡ್ಡ ದೃಷ್ಟಿ. ತಳಮಟ್ಟದಿಂದ ಕ್ರಿಕೆಟ್ ಅಭಿವೃದ್ಧಿಪಡಿಸಿ, ಐರ್ಲೆಂಡ್ ಮತ್ತು ಯುರೋಪ್&zwnj;ನ ಯುವ ಆಟಗಾರರಿಗೆ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಯುರೋಪ್&zwnj;ನಲ್ಲಿ ಕ್ರಿಕೆಟ್ ಬೆಳೆಸಲು ಸಹಾಯ ಮಾಡುವ ಅವಕಾಶ ಇಲ್ಲಿದೆ. ಡಬ್ಲಿನ್&zwnj;ನಲ್ಲಿ ಈಗಾಗಲೇ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇದೆ. ಮುಂದಿನ ಪೀಳಿಗೆಯನ್ನು ಪೋಷಿಸುವುದು ನನಗೆ ಯಾವಾಗಲೂ ಮುಖ್ಯವಾಗಿದೆ, ಮತ್ತು ETPL ಆ ಗುರಿಗೆ ಮಹತ್ವದ ಕೊಡುಗೆ ನೀಡಬಲ್ಲದು,&quot; ಎಂದು ಹೇಳಿದರು.&lt;/p&gt;&lt;p&gt;ಯುರೋಪಿಯನ್ ಕ್ರಿಕೆಟ್&zwnj;ಗೆ ಐತಿಹಾಸಿಕ ಕ್ಷಣ&lt;/p&gt;&lt;p&gt;ಕ್ರಿಕೆಟ್ ಐರ್ಲೆಂಡ್&zwnj;ನ ಅಧ್ಯಕ್ಷ ಬ್ರಿಯಾನ್ ಮ್ಯಾಕ್&zwnj;ನೀಸ್, &quot;ಇದು ಐರ್ಲೆಂಡ್ ಮತ್ತು ಯುರೋಪಿಯನ್ ಕ್ರಿಕೆಟ್&zwnj;ಗೆ ಒಂದು ಐತಿಹಾಸಿಕ ಕ್ಷಣ. ETPL ಈ ಭಾಗದಲ್ಲಿ ಕ್ರಿಕೆಟ್&zwnj;ನ ಜನಪ್ರಿಯತೆ, ಭಾಗವಹಿಸುವಿಕೆ ಮತ್ತು ಆಟದ ಗುಣಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ,&quot; ಎಂದರು.&lt;/p&gt;&lt;p&gt;ಕ್ರಿಕೆಟ್ ಸ್ಕಾಟ್&zwnj;ಲ್ಯಾಂಡ್&zwnj;ನ ಸಿಇಒ ಟ್ರೂಡಿ ಲಿಂಡ್&zwnj;ಬ್ಲೇಡ್, &quot;ETPL ಸ್ಕಾಟ್&zwnj;ಲ್ಯಾಂಡ್ ಮತ್ತು ಯುರೋಪ್ ಕ್ರಿಕೆಟ್&zwnj;ಗೆ ಒಂದು ಮಹತ್ವದ ತಿರುವು ನೀಡಬಲ್ಲದು. ಇಂತಹ ಅವಕಾಶಗಳು ಕ್ರೀಡೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಿ, ಆಟಗಾರರಿಗೆ ಹೆಚ್ಚಿನ ಮನ್ನಣೆ ನೀಡಿ, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ,&quot; ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ETPL ಫ್ರಾಂಚೈಸಿ ಮಾಲೀಕತ್ವದ ರಚನೆ&lt;/p&gt;&lt;p&gt;ETPL ಫ್ರಾಂಚೈಸಿ ಮಾಲೀಕತ್ವವು ಕ್ರಿಕೆಟ್ ದಿಗ್ಗಜರು, ಉದ್ಯಮಿಗಳು ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರ ಒಂದು ಅದ್ಭುತ ಮಿಶ್ರಣವನ್ನು ಹೊಂದಿದೆ: - ಡಬ್ಲಿನ್ ಫ್ರಾಂಚೈಸಿ - ರಾಹುಲ್ ದ್ರಾವಿಡ್ - ಬೆಲ್&zwnj;ಫಾಸ್ಟ್ ಫ್ರಾಂಚೈಸಿ - ಗ್ಲೆನ್ ಮ್ಯಾಕ್ಸ್&zwnj;ವೆಲ್ ಮತ್ತು ರೋಹನ್ ಲಂಡ್ - ಎಡಿನ್&zwnj;ಬರ್ಗ್ ಫ್ರಾಂಚೈಸಿ - ಕೈಲ್ ಮಿಲ್ಸ್, ನಾಥನ್ ಮೆಕಲಮ್ ಮತ್ತು ರಾಚೆಲ್ ವೈಸ್&zwnj;ಮನ್ - ಗ್ಲಾಸ್ಗೋ ಫ್ರಾಂಚೈಸಿ - ವಿಪುಲ್ ಅಗರ್ವಾಲ್ ಮತ್ತು ಕ್ರಿಸ್ ಗೇಲ್ - ಆಮ್ಸ್ಟರ್&zwnj;ಡ್ಯಾಮ್ ಫ್ರಾಂಚೈಸಿ - ಸ್ಟೀವ್ ವಾ, ಜೇಮೀ ಡೈಯರ್ ಮತ್ತು ಟಿಮ್ ಥಾಮಸ್ - ರೊಟರ್&zwnj;ಡ್ಯಾಮ್ ಫ್ರಾಂಚೈಸಿ - ಜೊಂಟಿ ರೋಡ್ಸ್, ಫಾಫ್ ಡು ಪ್ಲೆಸಿಸ್, ಗ್ಲಾಶಿನ್ ಮತ್ತು ಸಮೀರ್ ಶಾ, ಮಧುಕರ್ ಶ್ರೀ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/cricket-sports/cricketer-rahul-dravid-ventures-into-european-cricket-as-dublin-guardians-owner/articleshow-i7wooiw"/>
        </item>
        <item>
            <title><![CDATA[ರೋಹಿತ್ ಶರ್ಮಾ ಕಟ್ಟಿದ್ದ 3.25 ಕೋಟಿ ರೂ ವಾಚ್ ಕದಿಯಲು ಯತ್ನಿಸಿದ್ರಾ ಫ್ಯಾನ್ಸ್, ದೃಶ್ಯ ಸೆರೆ]]></title>
            <link>https://kannada.asianetnews.com/cricket-sports/fans-try-to-snatch-rohit-sharma-expensive-rs-3-25-crore-watch-caught-on-camera/articleshow-ihh8wwg</link>
            <guid isPermaLink="true">https://kannada.asianetnews.com/cricket-sports/fans-try-to-snatch-rohit-sharma-expensive-rs-3-25-crore-watch-caught-on-camera/articleshow-ihh8wwg</guid>
            <pubDate>Sat, 09 May 2026 16:14:36 +0530</pubDate>
            <description><![CDATA[&lt;p&gt;ಮುಂಬೈ ಇಂಡಿಯನ್ಸ್ ಆಟಗಾರ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಕೈಕುಲುತ್ತಾ ಸಾಗುವ ವೇಳೆ ಕಟ್ಟಿದ್ದ 3.25 ಕೋಟಿ ಮೌಲ್ಯದ ವಾಚ್ ಕದಿಯಲು ಯತ್ನಿಸಿದ ಘಟನೆಯೊಂದು ನಡೆದಿದೆ. ಈ ದೃಶ್ಯ ಸೆರೆಯಾಗಿದ್ದು, ಭಾರಿ ಚರ್ಚೆಯಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr65cc17683dx41amvtygjm3,imgname-rohit-sharma-watch-1778323435559.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮೇ.09)&lt;/strong&gt; ಐಪಿಎಲ್ ಟೂರ್ನಿ ನಡುವೆ ಕ್ರಿಕೆಟಿಗರು ಫ್ಯಾನ್ಸ್ ಜೊತೆ ಮಾತುಕತೆ, ಸಂವಾದ ಸಹಜ. ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾರೆ. ಜೊತೆಗೆ ಬ್ರ್ಯಾಂಡ್ ಪ್ರಮೋಶನ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗೆ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ರೋಹಿತ್ ಶರ್ಮಾ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಆಗಮಿಸಿದ ರೋಹಿತ್ ಶರ್ಮಾ, ಹೊರಗಿದ್ದ ಪುಟಾಣಿ ಅಭಿಮಾನಿಳಿಗೆ ಕೈಕುಲುಕಿ ಸಂಬ್ರಮಪಡಿಸಲು ಮುಂದಾಗಿದ್ದಾರೆ. ಆದರೆ ಈ ಪುಟಾಣಿ ಅಭಿಮಾನಿಗಳು ರೋಹಿತ್ ಶರ್ಮಾ ಕೈ ಹಿಡಿದು ಎಳೆದು ವಾಚ್ ಕಳವು ಮಾಡುವ ಪ್ರಯತ್ನ ನಡೆದಿದೆ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋಗಳು ಸೆರೆಯಾಗಿದೆ.&lt;/p&gt;&lt;h2&gt;ದೃಶ್ಯದಲ್ಲಿ ಸೆರೆಯಾದ ಪ್ರಯತ್ನ&lt;/h2&gt;&lt;p&gt;ದೃಶ್ಯದಲ್ಲಿ ರೋಹಿತ್ ಶರ್ಮಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾರೆ. ಅಭಿಮಾನಿಗಳು ಫೋಟೋ ತೆಗೆಯಲು, ಶುಭಕೋರಲು ಕಾದು ಕುಳಿತಿದ್ದರು. ಕಾರು ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ರೋಹಿತ್ ಶರ್ಮಾ ಕಾರಿನ ಹಿಂಬದಿಯ ವಿಂಡೋ ತೆರೆದು ಕೈ ಹೊರಗೆ ಹಾಕಿದ್ದಾರೆ. ಬಳಿಕ ಕಾರಿನ ಪಕ್ಕಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಕೈಕುಲುಕಲು ಮುಂದಾಗಿದ್ದಾರೆ. ಆರಂಭದಲ್ಲಿ ಎಲ್ಲವೂ ಒಕೆ ಆಗಿತ್ತು. ಕೆಲ ಅಭಿಮಾನಿಗಳು, ಪುಟಾಣಿಗಳು ರೋಹಿತ್ ಶರ್ಮಾ ಕೈ ಕುಲುಕಿ ಸಂಭ್ರಮಿಸಿದರು.&lt;/p&gt;&lt;h2&gt;3.25 ಕೋಟಿ ರೂಪಾಯಿ ಮೌಲ್ಯದ ವಾಚ್&lt;/h2&gt;&lt;p&gt;ಆದರೆ ಓರ್ವ ಪುಟಾಣಿ ಅಭಿಮಾನಿ ನೇರವಾಗಿ ರೋಹಿತ್ ಶರ್ಮಾ ಕೈಗೆ ಕಟ್ಟಿದ ವಾಚ್ ಬಳಿ ಹಿಡಿದು ಎಳೆಯುವ ಪ್ರಯತ್ನ ಮಾಡಿದ್ದಾನೆ. ರೋಹಿತ್ ಶರ್ಮಾ ಕೈಗಳನ್ನು ತಳ್ಳಿದರೂ ಅಭಿಮಾನಿ ಮಾತ್ರ ತನ್ನ ಎರಡು ಕೈಗಳಿಂದ ರೋಹಿತ್ ಶರ್ಮಾ ಕೈಯಲ್ಲಿದ್ದ ಬರೋಬ್ಬರಿ 3.25 ಕೋಟಿ ರೂಪಾಯಿ ಮೌಲ್ಯದ ವಾಚ್ ಎಳೆಯುವ ಪ್ರಯತ್ನ ಮಾಡಿದ್ದಾನೆ.&lt;/p&gt;&lt;p&gt;ಪರಿಸ್ಥಿತಿ ಅರಿತ ರೋಹಿತ್ ಶರ್ಮಾ ತಕ್ಷಣವೇ ತಮ್ಮ ಕೈಗಳನ್ನು ಎಳೆದುಕೊಂಡಿದ್ದಾರೆ. ಬಳಿಕ ಕಾರಿನ ಒಳಗಿನಿಂದಲೇ ಅಭಿಮಾನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇಷ್ಟೇ ಅಲ್ಲ ಅಷ್ಟೇ ವೇಗದಲ್ಲಿ ಕಾರಿನ ವಿಂಡೋ ಕ್ಲೋಸ್ ಮಾಡಿ ಸ್ಥಳದಿಂದ ತೆರಳಿದ್ದಾರೆ. ಈ ಸಂಪೂರ್ಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Rohit Sharma Fans tried to snatch his 3.25 Cr &quot;Giraffe&quot; watch from his wrist. And suddenly he close the mirror. pic.twitter.com/vMIQFxcdxt&lt;/p&gt;&lt;p&gt;&mdash; Aman (@Proteinkohli) May 8, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;ಐಪಿಎಲ್&zwnj;ನಲ್ಲಿ ರೋಹಿತ್ ಅಬ್ಬರ&lt;/h2&gt;&lt;p&gt;ಐಪಿಎಲ್ 2026 ಟೂರ್ನಿಯಲ್ಲಿ ರೋಹಿತ್ ಶರ್ಮಾ ಅಬ್ಬರಿಸುತ್ತಿದ್ದಾರೆ. ಲಖನೌ ಸೂಪರ್&zwnj;ಜೈಂಟ್ಸ್ ವಿರುದ್ಧ ರೋಹಿತ್ ಶರ್ಮಾ 44 ಎಸೆತದಲ್ಲಿ 84 ರನ್ ಸಿಡಿಸಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ 229 ರನ್ ಟಾರ್ಗೆಟ್ ಚೇಸ್ ಮಾಡಿ ಗೆಲುವಿನ ಸಂಭ್ರಮ ಆಚರಿಸಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. 10 ಪಂದ್ಯದಲ್ಲಿ 7 ಪಂದ್ಯಗಳನ್ನು ಸೋತರೆ, ಕೇವಲ 3 ಗೆಲುವು ಕಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/fans-try-to-snatch-rohit-sharma-expensive-rs-3-25-crore-watch-caught-on-camera/articleshow-ihh8wwg"/>
        </item>
        <item>
            <title><![CDATA[ಯುವರಾಜ್ ಸಿಂಗ್ ರೆಕಾರ್ಡ್ ಜಸ್ಟ್ ಮಿಸ್, ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಉರ್ವಿಲ್ ಪಟೇಲ್ ಯಾರು?]]></title>
            <link>https://kannada.asianetnews.com/gallery/cricket-sports/who-is-urvil-patel-ipl-star-creates-history-narrowly-misses-yuvraj-singh-record-kdng52e</link>
            <guid isPermaLink="true">https://kannada.asianetnews.com/gallery/cricket-sports/who-is-urvil-patel-ipl-star-creates-history-narrowly-misses-yuvraj-singh-record-kdng52e</guid>
            <pubDate>Sun, 10 May 2026 19:41:46 +0530</pubDate>
            <description><![CDATA[&lt;p&gt;ಸಿಎಸ್&zwnj;ಕೆ ಪರ ಅಬ್ಬರಿಸಿದ ಉರ್ವಿಲ್ ಪಟೇಲ್ ಕೇವಲ 13 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಯುವಿ ದಾಖಲೆ ಜಸ್ಟ್ ಮಿಸ್ ಆಗಿದೆ. ತಂದೆಗೆ ವಿಶೇಷ ಸಂದೇಶ ನೀಡಿ ಸಂಭ್ರಮಿಸಿದ ಈ ಉರ್ವಿಲ್ ಪಟೇಲ್ ಯಾರು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr915mgqx5fvgn5ynbvz8xt6,imgname-urvil-patel-1778419683862.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿಎಸ್&zwnj;ಕೆ ಪರ ಅಬ್ಬರಿಸಿದ ಉರ್ವಿಲ್ ಪಟೇಲ್ ಕೇವಲ 13 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಯುವಿ ದಾಖಲೆ ಜಸ್ಟ್ ಮಿಸ್ ಆಗಿದೆ. ತಂದೆಗೆ ವಿಶೇಷ ಸಂದೇಶ ನೀಡಿ ಸಂಭ್ರಮಿಸಿದ ಈ ಉರ್ವಿಲ್ ಪಟೇಲ್ ಯಾರು?&lt;/p&gt;&lt;img&gt;&lt;p&gt;ಐಪಿಎಲ್ 2026ರ ಭಾನುವಾರದ ಮೊದಲ ಪಂದ್ಯದಲ್ಲಿ ಎಲ್ಲೆಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್&zwnj;ಮನ್ ಉರ್ವಿಲ್ ಪಟೇಲ್ ಅಬ್ಬರಿಸಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್&zwnj;ನಿಂದ ಉರ್ವಿಲ್ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ 13 ಎಸೆತಗಳಲ್ಲಿ 50 ರನ್ ಸಿಡಿಸಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಯುವರಾಜ್ ಸಿಂಗ್ ಅವರ 12 ಎಸೆತಗಳ ಫಿಫ್ಟಿ ದಾಖಲೆ ಹಾಗೇ ಉಳಿದುಕೊಂಡಿದೆ.&lt;/p&gt;&lt;img&gt;&lt;p&gt;ಉರ್ವಿಲ್ ಪಟೇಲ್ ಲಕ್ನೋ ತಂಡದ ಪ್ರತಿಯೊಬ್ಬ ಬೌಲರ್&zwnj;ಗೂ ಬೆವರಿಳಿಸಿದರು. ಮೊದಲು ಆವೇಶ್ ಖಾನ್ ಓವರ್&zwnj;ನಲ್ಲಿ ಸಿಕ್ಸರ್&zwnj;ಗಳ ಮಳೆ ಸುರಿಸಿದರು. ನಂತರ ಸ್ಪಿನ್ನರ್ ದಿಗೇಶ್ ರಾಠಿ ಅವರನ್ನೂ ಬಿಡದೆ ಮನಬಂದಂತೆ ದಂಡಿಸಿದರು. ಲಕ್ನೋದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಕೂಡ ಇವರ ಹೊಡೆತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಉರ್ವಿಲ್ ಪಟೇಲ್ ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್&zwnj;ಗಳೊಂದಿಗೆ 65 ರನ್ ಗಳಿಸಿದರು.&lt;/p&gt;&lt;img&gt;&lt;p&gt;27 ವರ್ಷದ ಉರ್ವಿಲ್ ಪಟೇಲ್, ಅರ್ಧಶತಕ ಗಳಿಸಿದ ನಂತರ ತಮ್ಮ ಜೇಬಿನಿಂದ ಒಂದು ಚೀಟಿ ತೆಗೆದು ವಿಶಿಷ್ಟವಾಗಿ ಸಂಭ್ರಮಿಸಿದರು. ಆ ಚೀಟಿಯಲ್ಲಿ ತಮ್ಮ ತಂದೆಗಾಗಿ ಒಂದು ಸಂದೇಶ ಬರೆದು ತಂದಿದ್ದರು. &quot;ಅಪ್ಪ, ಇದು ನಿಮಗಾಗಿ. ನೀವು ಏನಾಗಬೇಕೆಂದು ಬಯಸಿದ್ದಿರೋ, ಅದನ್ನು ನಾನು ಮಾಡಿ ತೋರಿಸಿದ್ದೇನೆ&quot; ಎಂದು ಅದರಲ್ಲಿ ಬರೆಯಲಾಗಿತ್ತು.&lt;/p&gt;&lt;img&gt;&lt;p&gt;ಉರ್ವಿಲ್ ಪಟೇಲ್ ಐಪಿಎಲ್&zwnj;ನಲ್ಲಿ 13 ಎಸೆತಗಳಲ್ಲಿ 50 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ದಾಖಲೆಯನ್ನು ಸರಿಗಟ್ಟಿದರು. ಇದರೊಂದಿಗೆ, ಐಪಿಎಲ್&zwnj;ನ ಅತಿ ವೇಗದ ಅರ್ಧಶತಕವನ್ನು ಜಂಟಿಯಾಗಿ ತಮ್ಮದಾಗಿಸಿಕೊಂಡರು. ಕ್ರೀಸ್&zwnj;ಗೆ ಬಂದ ಕೂಡಲೇ ಉರ್ವಿಲ್, ಆವೇಶ್ ಖಾನ್ ಅವರ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್&zwnj;ಗಳನ್ನು ಬಾರಿಸಿದರು. ನಂತರವೂ ತಮ್ಮ ಅಬ್ಬರ ನಿಲ್ಲಿಸದೆ, ಸಿಕ್ಸರ್-ಬೌಂಡರಿಗಳ ಸುರಿಮಳೆಗೈದರು. ತಮ್ಮ ಅರ್ಧಶತಕದ ಇನ್ನಿಂಗ್ಸ್&zwnj;ನಲ್ಲಿ ಅವರು 7 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು.&lt;/p&gt;&lt;img&gt;&lt;p&gt;ಉರ್ವಿಲ್ ಪಟೇಲ್ ಗುಜರಾತ್&zwnj;ನಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಅವರಿಗೆ ಕ್ರಿಕೆಟ್&zwnj;ನಲ್ಲಿ ಬಹಳ ಆಸಕ್ತಿ ಇತ್ತು. ಹೀಗಾಗಿ, ಚಿಕ್ಕ ವಯಸ್ಸಿನಲ್ಲೇ ವೃತ್ತಿಪರ ಕ್ರಿಕೆಟ್ ತರಬೇತಿ ಆರಂಭಿಸಿದರು. ವಿಕೆಟ್&zwnj;ಕೀಪಿಂಗ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಅವರ ದೊಡ್ಡ ಶಕ್ತಿಯಾಗಿದೆ. ದೇಶೀಯ ಕ್ರಿಕೆಟ್&zwnj;ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅವರು ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ದೇಶೀಯ ಟಿ20 ಪಂದ್ಯಗಳಲ್ಲಿ ಹಲವು ವೇಗದ ಇನ್ನಿಂಗ್ಸ್&zwnj;ಗಳನ್ನು ಆಡಿ ಉರ್ವಿಲ್ ಪಟೇಲ್ ಎಲ್ಲರ ಗಮನ ಸೆಳೆದಿದ್ದರು. ಪವರ್&zwnj;ಪ್ಲೇನಲ್ಲಿ ವೇಗವಾಗಿ ರನ್ ಗಳಿಸುವುದರಲ್ಲಿ ಅವರು ಹೆಸರುವಾಸಿ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಇತರ ದೇಶೀಯ ಟೂರ್ನಿಗಳಲ್ಲಿನ ಅವರ ಬ್ಯಾಟಿಂಗ್, ಆಯ್ಕೆಗಾರರು ಮತ್ತು ಐಪಿಎಲ್ ಫ್ರಾಂಚೈಸಿಗಳನ್ನು ಆಕರ್ಷಿಸಿತು. ಅವರ ಸ್ಪೋಟಕ ಸ್ಟ್ರೈಕ್ ರೇಟ್ ಅವರನ್ನು ಇತರ ಯುವ ಆಟಗಾರರಿಗಿಂತ ಭಿನ್ನವಾಗಿಸಿದೆ.&lt;/p&gt;&lt;h2&gt;ಉರ್ವಿಲ್ ಪಟೇಲ್ ಕ್ರಿಕೆಟ್ ಕರಿಯರ್&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/who-is-urvil-patel-ipl-star-creates-history-narrowly-misses-yuvraj-singh-record-kdng52e"/>
        </item>
        <item>
            <title><![CDATA[ಬಿಸಿಸಿಐ ವಾರ್ನಿಂಗ್ ಬಳಿಕ ಪಂದ್ಯದ ನಡುವೆ ಲಖನೌ ಸ್ಟಾಫ್ ಫೋನ್ ಬಳಕೆ, ಫಿಕ್ಸಿಂಗ್ ಅನುಮಾನ]]></title>
            <link>https://kannada.asianetnews.com/gallery/cricket-sports/lucknow-staff-seen-using-phone-during-match-after-bcci-warning-concern-raised-lg9xfsg</link>
            <guid isPermaLink="true">https://kannada.asianetnews.com/gallery/cricket-sports/lucknow-staff-seen-using-phone-during-match-after-bcci-warning-concern-raised-lg9xfsg</guid>
            <pubDate>Sun, 10 May 2026 18:55:46 +0530</pubDate>
            <description><![CDATA[&lt;p&gt;ಬಿಸಿಸಿಐ ಸತತ ವಾರ್ನಿಂಗ್ ನೀಡುತ್ತಿದ್ದರೂ ಯಾವ ತಂಡಗಳು ಕ್ಯಾರೇ ಅನ್ನುತ್ತಿಲ್ಲ. ಇದೀಗ ಸಿಎಸ್&zwnj;ಕೆ ವಿರುದ್ಧದ ಪಂದ್ಯದ ನಡುವೆ ಲಖನೌ ಸೂಪರ್&zwnj;ಜೈಂಟ್ಸ್ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವ ದೃಶ್ಯ ಭಾರಿ ವಿವಾದ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr90cw9ms9f4pr5qjyj26m4s,imgname-lsg-staff-using-mobile-phone-1778418872627.png" type="image/jpeg" height="390" width="690"/>
            <content:encoded><![CDATA[&lt;p&gt;ಬಿಸಿಸಿಐ ಸತತ ವಾರ್ನಿಂಗ್ ನೀಡುತ್ತಿದ್ದರೂ ಯಾವ ತಂಡಗಳು ಕ್ಯಾರೇ ಅನ್ನುತ್ತಿಲ್ಲ. ಇದೀಗ ಸಿಎಸ್&zwnj;ಕೆ ವಿರುದ್ಧದ ಪಂದ್ಯದ ನಡುವೆ ಲಖನೌ ಸೂಪರ್&zwnj;ಜೈಂಟ್ಸ್ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವ ದೃಶ್ಯ ಭಾರಿ ವಿವಾದ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಹಲವು ನಿಯಮಗಳು ಉಲ್ಲಂಘನೆಯಾಗುತ್ತಿದೆ. ಪ್ರಮುಖವಾಗಿ ಪಂದ್ಯದ ನಡುವೆ ಫೋನ್ ಬಳಕೆ, ಕ್ರಿಕೆಟಿಗರಹೊಟೆಲ್ ರೂಂಗಳಿಗೆ ಅಪರಿಚಿತರ ಭೇಟಿ, ಹನಿ ಟ್ರಾಪ್ ಸೇರಿದಂತೆ ಹಲವು ರೀತಿಯ ನಿಯಮ ಉಲ್ಲಂಘನೆ ಕುರಿತು ಬಿಸಿಸಿಐ ಗರಂ ಆಗಿದೆ. ಈಗಾಗಲೇ ಖಡಕ್ ವಾರ್ನಿಂಗ್ ನೀಡಿದೆ. ಆದರೆ ಇದೀಗ ಲಖನೌ ಸೂಪರ್&zwnj;ಜೈಂಟ್ಸ್ ತಂಡದ ಸಿಬ್ಬಂದಿ ಫೋನ್ ಬಳಕೆ ಮಾಡಿರುವುದು ಬಹಿರಂಗವಾಗಿದೆ.&lt;/p&gt;&lt;img&gt;&lt;p&gt;ಚೆನ್ನೈ ವಿರುದ್ಧದ ಪಂದ್ಯದ ನಡುವೆ ಲಖನೌ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಜೋಶ್ ಇಂಗ್ಲಿಸ್ ಬ್ಯಾಟಿಂಗ್ ಮಾಡುತ್ತಿದ್ದಂತೆ ಕ್ಯಾಮೆರಾ ಲಖನೌ ತಂಡದ ಡಗೌಟ್ ಬಳಿ ತಿರುಗಿತ್ತು. ಈ ವೇಳೆ ಸ್ಟಾಫ್ ಫೋನ್&zwnj;ನಲ್ಲಿ ಮಾತನಾಡುತ್ತಿರುವುದು ಪತ್ತೆಯಾಗಿದೆ.&lt;/p&gt;&lt;img&gt;&lt;p&gt;ಐಪಿಎಲ್ 2026ರಲ್ಲಿ ಕೆಲ ತಂಡಗಳು ಪಂದ್ಯದ ನಡುವೆ ಫೋನ್ ಬಳಕೆ ಮಾಡಿದೆ. ರಾಜಸ್ಥಾನ ರಾಯಲ್ಸ್ ಸ್ಟಾಫ್ ಫೋನ್ ಬಳಕೆ ಮಾಡಿದ ಪ್ರಕರಣದಲ್ಲಿ ಈಗಾಗಲೇ ದಂಡ ವಿಧಿಸಲಾಗಿದೆ. ಇಷ್ಟೇ ಅಲ್ಲ ಖಡಕ್ ವಾರ್ನಿಂಗ್ ನೀಡಿದೆ. ಇಷ್ಟಾದರೂ ಲಖನೌ ತಂಡದ ಸ್ಟಾಫ್ ಮತ್ತೆ ಫೋನ್ ಬಳಕೆ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಲಖನೌ ತಂಡ ಸ್ಪಷ್ಟ ನಿಯಮ ಉಲ್ಲಂಘನೆ ಮಾಡಿದೆ. ಸತತ ವಾರ್ನಿಂಗ್ ಬಳಿಕವೂ ಲಖನೌ ತಂಡದ ಫೋನ್ ಬಳಕೆ ಮಾಡಿರುವುದೇ ವಿವಾದಕ್ಕೆ ಕಾರಣಾಗಿದೆ. ಹೀಗಾಗಿ ಲಖನೌ ತಂಡಕ್ಕೆ ಬಿಸಿಸಿಐ ನೋಟಿಸ್ ನೀಡುವ ಸಾಧ್ಯತೆ ಇದೆ. ಈ ಬಾರಿ ದಂಡದ ಜೊತೆ ಕಠಿಣ ಕ್ರಮದ ಸಾಧ್ಯತೆ ಹೆಚ್ಚಿದೆ.&lt;/p&gt;&lt;img&gt;&lt;p&gt;ಬಿಸಿಸಿಐ ಈಗಾಗಲೇ ಐಪಿಎಲ್ ಸ್ಟಾರ್ ಪ್ಲೇಯರ್&zwnj;ಗೆ ಎಚ್ಚರಿಕೆ ನೀಡಿದೆ. ಹೊಟೆಲ್ ರೂಂಗಳಲ್ಲಿ ಅಪರಿಚಿತರು, ಸೋಶಿಯಲ್ ಮೀಡಿಯಾ ಮೂಲಕ ಪರಿಚಯಸ್ಥರನ್ನು ಆಹ್ವಾನಿಸುತ್ತಿರುವುದು, ತಡ ರಾತ್ರಿವರೆಗೆ ಅಪರಿಚಿತರ ಜೊತೆಗೆ ತಂಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಈಗಾಗಲೇ ಬಿಸಿಸಿಐ ವಾರ್ನಿಂಗ್ ನೀಡಿದೆ.&lt;/p&gt;&lt;h2&gt;ಹನಿಟ್ರಾಪ್ ಆತಂಕ&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/lucknow-staff-seen-using-phone-during-match-after-bcci-warning-concern-raised-lg9xfsg"/>
        </item>
        <item>
            <title><![CDATA[ನಟ ವಿಜಯ್ ಸಿಎಂ ಆದ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಎಸ್‌ಕೆ ತಂಡದಿಂದ ವಿಶೇಷ ಮನವಿ, ಪರ ವಿರೋಧ]]></title>
            <link>https://kannada.asianetnews.com/gallery/cricket-sports/csk-appeals-to-fans-over-political-hoardings-following-tvk-vijay-rise-as-chief-minister-lv0un70</link>
            <guid isPermaLink="true">https://kannada.asianetnews.com/gallery/cricket-sports/csk-appeals-to-fans-over-political-hoardings-following-tvk-vijay-rise-as-chief-minister-lv0un70</guid>
            <pubDate>Sun, 10 May 2026 14:38:45 +0530</pubDate>
            <description><![CDATA[&lt;p&gt;ನಟ ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಲಖನೌ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸಿಎಸ್&zwnj;ಕೆ ವಿಶೇಷ ಮನವಿಯೊಂದನ್ನು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr8j0afnbjhmdg8qw2qx0wqj,imgname-csk-request-to-fans-1778403781108.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಲಖನೌ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸಿಎಸ್&zwnj;ಕೆ ವಿಶೇಷ ಮನವಿಯೊಂದನ್ನು ಮಾಡಿದೆ.&lt;/p&gt;&lt;img&gt;&lt;p&gt;ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ಜೊಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಳಿಕ ಸಿನಿಮೀಯ ಶೈಲಿಯ ಡೈಲಾಗ್ ಮೂಲಕ ಅಭಿಮಾನಿಗಳ ರಂಜಿಸಿದ್ದಾರೆ. ಹೊಸ ಸರ್ಕಾರ, ಹೊಸ ಅಧ್ಯಾಯ ಆರಂಭಗೊಳ್ಳುತ್ತಿದೆ ಎಂದಿದ್ದಾರೆ. ಚೆನ್ನೈನಲ್ಲಿ ನಟ ವಿಜಯ್ ಪ್ರಮಾಣವಚನ ಸಮಾರಂಭದ ದಿನವೇ ಸಿಎಸ್&zwnj;ಕೆ ಹಾಗೂ ಲಖನೌ ಹೋರಾಟ ನಡೆಸುತ್ತಿದೆ. ಇದೀಗ ಸಿಎಸ್&zwnj;ಕೆ ವಿಶೇಷ ಮನವಿಯೊಂದನ್ನು ಮಾಡಿದೆ.&lt;/p&gt;&lt;img&gt;&lt;p&gt;ಚೆನ್ನೈನಲ್ಲೇ ಇಂದು ಸಿಎಸ್&zwnj;ಕೆ ಹಾಗೂ ಲಖನೌ ತಂಡ ಮುಖಾಮುಖಿಯಾಗುತ್ತಿದೆ. ವಿಜಯ್ ಸಿಎಂ ಆಗಿ ಸಂಭ್ರಮಾಚರಣೆ ಜೋರಾಗುತ್ತಿದ್ದಂತೆ ಸಿಎಸ್&zwnj;ಕೆ ತಂಡ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದೆ. ಇಂದು ಚೆನ್ನೈನಲ್ಲಿ ಪಂದ್ಯ ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳು ಕ್ರೀಡಾಸ್ಪೂರ್ತಿಯಿಂದ ಬನ್ನಿ, ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಹಿಡಿದು ಬರಬೇಡಿ ಎಂದು ಮನವಿ ಮಾಡಿದೆ.&lt;/p&gt;&lt;img&gt;&lt;p&gt;ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳಲ್ಲಿ ವಿಶೇಷ ಮನವಿ. ಪ್ರೀತಿಯಿಂದ ಬಂದು ಕ್ರಿಕೆಟ್ ಅಸ್ವಾಸಿದಿಸಿ, ಕ್ರೀಡಾ ಸ್ಪೂರ್ತಿಯೊಂದಿಗೆ ನಮ್ಮ ಜೊತೆ ಕ್ರಿಕೆಟ್ ವೀಕ್ಷಿಸಿ. ಇದೇ ವೇಳೆ ನಮ್ಮ ಕಳಕಳಿಯ ವಿನಂತಿ ಎನಂದರೆ ಅಭಿಮಾನಿಗಳು ಯಾವುದೇ ಕಾರಣಕ್ಕೆ ಯಾವುದೇ ಪಕ್ಷದ ಅಥವಾ ರಾಜಕೀಯ ನಾಯಕರ ಬೋರ್ಡಿಂಗ್, ಬಂಟಿಂಗ್, ಬ್ಯಾನರ್, ಫ್ಲ್ಯಾಗ್&zwnj;ಗಳನ್ನು ಕ್ರೀಡಾಂಗಣಕ್ಕೆ ತರಬೇಡಿ. ಕ್ರೀಡಾಂಗಣದಲ್ಲಿ ಸಿಎಸ್&zwnj;ಕೆಯ ಹಳದಿ ಪ್ರೀತಿ ತುಂಬಿರಲಿ ಎಂದು ಮನವಿ ಮಾಡಿದೆ.&lt;/p&gt;&lt;img&gt;&lt;p&gt;ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಚೆನ್ನೈನಲ್ಲಿ ಪಂದ್ಯ ಆರಂಭಗೊಳ್ಳುತ್ತಿದೆ. ಹೀಗಾಗಿ ಚೆನ್ನೈ ಫ್ರಾಂಚೈಸಿ ಅಭಿಮಾನಿಗಳಿಗೆ ಈ ಮನವಿ ಮಾಡಿದೆ. ಕ್ರಿಕೆಟ್ ಪಂದ್ಯದಲ್ಲಿ ರಾಜಕೀಯ ಮೇಲಾಟಗಳು ಬೇಡ, ಕ್ರೀಡಾ ಸ್ಪೂರ್ತಿಯಿಂದ ಪಂದ್ಯ ಆನಂದಿಸೋಣ ಎಂಬ ಮನವಿ ಇದೀಗ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಸಿಎಸ್&zwnj;ಕೆ ತಂಡದ ಈ ಮನವಿಗೆ ಪರ ವಿರೋಧಗಳು ವ್ಯಕ್ತವಾಗಿದೆ. ಹಲವರು ಸರಿ ಎಂದರೆ, ಮತ್ತೆ ಕೆಲವರು ಅಭಿಮಾನಿಗಳು ಹೇಗೆ ಇರಬೇಕು ಎಂದು ತಂಡ ಸೂಚಿಸುವುದು ಬೇಡ. ಪಂದ್ಯದ ನಡುವೆ ಅಭಿಮಾನಿಗಳು ಘೋಷಣೆ ಕೂಗಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.&lt;/p&gt;&lt;h2&gt;ಘೋಷಣೆ ಕೂಗಿದರೆ ಏನು ಮಾಡುತ್ತೀರಿ?&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/csk-appeals-to-fans-over-political-hoardings-following-tvk-vijay-rise-as-chief-minister-lv0un70"/>
        </item>
        <item>
            <title><![CDATA[ಬಿಸಿಸಿಐ ACU ದಾಳಿಯಲ್ಲಿ ಸಿಕ್ಕಿಬಿದ್ದ ಐಪಿಎಲ್ ಸ್ಟಾರ್ ಪ್ಲೇಯರ್, ಹೊಟೆಲ್ ರೂಂನ ತಡರಾತ್ರಿ ಸೀಕ್ರೆಟ್]]></title>
            <link>https://kannada.asianetnews.com/gallery/cricket-sports/ipl-cricketer-under-scanner-after-bcci-acu-action-on-late-night-hotel-room-secret-nmg7i1u</link>
            <guid isPermaLink="true">https://kannada.asianetnews.com/gallery/cricket-sports/ipl-cricketer-under-scanner-after-bcci-acu-action-on-late-night-hotel-room-secret-nmg7i1u</guid>
            <pubDate>Sat, 09 May 2026 20:47:15 +0530</pubDate>
            <description><![CDATA[&lt;p&gt;ಆಟಾಗಾರರು ಅಪರಿಚಿತರು, ಸೋಶಿಯಲ್ ಮೀಡಿಯಾದಲ್ಲಿ ಪರಿಚಯಸ್ಥರು ಐಪಿಎಲ್ ಸ್ಟಾರ್ ಆಟಗಾರರನ್ನು ಹೊಟೆಲ್ ರೂಂಗಳಲ್ಲಿ ಭೇಟಿಯಾಗುತ್ತಿದ್ದಾರೆ. ಭ್ರಷ್ಟಾಚಾರ ವಿರೋಧಿ ದಳ ಅಧಿಕಾರಿಗಳ ಈ ಕುರಿತ ತಂಡದ ಮ್ಯಾನೇಜರ್ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5cdmy585fg4yr18zr0pqvg,imgname-----------------------2026-05-09t085657.299-1778297263045.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಟಾಗಾರರು ಅಪರಿಚಿತರು, ಸೋಶಿಯಲ್ ಮೀಡಿಯಾದಲ್ಲಿ ಪರಿಚಯಸ್ಥರು ಐಪಿಎಲ್ ಸ್ಟಾರ್ ಆಟಗಾರರನ್ನು ಹೊಟೆಲ್ ರೂಂಗಳಲ್ಲಿ ಭೇಟಿಯಾಗುತ್ತಿದ್ದಾರೆ. ಭ್ರಷ್ಟಾಚಾರ ವಿರೋಧಿ ದಳ ಅಧಿಕಾರಿಗಳ ಈ ಕುರಿತ ತಂಡದ ಮ್ಯಾನೇಜರ್ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ನಿಯಮಗಳು ಕಠಿಣಗೊಳ್ಳುತ್ತಿದೆ. ಈಗಾಗಲೇ ಬಿಸಿಸಿಐ 10 ಫ್ರಾಂಚೈಸಿಗಳಿಗೆ ಎಚ್ಚರಿಕೆ ನೋಟಿಸ್ ನೀಡಿದೆ. 7 ಪುಟಗಳ ಭದ್ರತಾ ಮಾರ್ಗಸೂಚಿಯನ್ನು ನೀಡಿದೆ. ಬಿಸಿಸಿಐ ಆ್ಯಂಟಿ ಕರಪ್ಶನ್ ಯುನಿಟ್( ಎಸಿಯು) ಅಧಿಕಾರಿಗಳು ಕೆಲ ಸ್ಫೋಟಕ ಮಾಹಿತಿ ಕಲೆ ಹಾಕಿದ್ದಾರೆ. ಐಪಿಎಲ್&zwnj;ನ ಸ್ಟಾರ್ ಆಟಗಾರರ ಹೊಟೆಲ್ ರೂಂನಲ್ಲಿ ತಡ ರಾತ್ರಿವರೆಗೆ ಕೆಲವರು ತಂಗಿದ್ದರು ಅನ್ನೋ ಮಾಹಿತಿ ಬಯಲಾಗಿದೆ.&lt;/p&gt;&lt;img&gt;&lt;p&gt;ಸ್ಟಾರ್ ಹಾಗೂ ಪ್ರಮುಖ ಆಟಗಾರನ ನಡೆ ಮೇಲೆ ಬಿಸಿಸಿಐ ಎಸಿಯು ಘಟಕ ನಿಗಾವಹಿಸಿದೆ. ಪದೇ ಪದೇ ತನ್ನ ಕೋಣೆಗೆ ತಡ ರಾತ್ರಿ ವೇಳೆ ಕೆಲವರು ಆಗಮಿಸುತ್ತಿರುವ ಬಗ್ಗೆ ಎಸಿಯು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಯುವತಿಯರು, ಸೋಶಿಯಲ್ ಮೀಡಿಯಾ ಮೂಲಕ ಪರಿಚಯಸ್ಥರು ಆಟಗಾರನ ಹೊಟೆಲ್ ರೂಂಗೆ ಭೇಟಿ ನೀಡುತ್ತಿರುವುದು ಎಸಿಯು ಗಮನಕ್ಕೆ ಬಂದಿದೆ. ಹೀಗಾಗಿ ತಂಡದ ಮ್ಯಾನೇಜರ್ ಕರೆಯಿಸಿ ವಾರ್ನಿಂಗ್ ನೀಡಲಾಗಿದೆ.&lt;/p&gt;&lt;img&gt;&lt;p&gt;ಸ್ಟಾರ್ ಆಟಗಾರನ ವರ್ತನೆ ಬಿಸಿಸಿಐ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯ ಆಟಗಾರನ ಹೆಸರು ಗೌಪ್ಯವಾಗಿ ಇಡಲಾಗಿದೆ. ಟೂರ್ನಿ ಹಾಗೂ ಆಟಗಾರನ ಘನತೆಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಈ ಪ್ರಕರಣವನ್ನು ರಹಸ್ಯವಾಗಿ ನಿರ್ವಹಿಸಲು ಬಿಸಿಸಿಐ ಮುಂದಾಗಿದೆ.&lt;/p&gt;&lt;img&gt;&lt;p&gt;ಬಿಸಿಸಿಐನ ಎಸಿಯು ಘಟಕ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹೊಟೆಲ್&zwnj;ನಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಟಗಾರರು, ಸ್ಟಾಫ್, ಕೋಣೆಗೆ ಯಾರನ್ನೇ ಕರೆಯಿಸಿಕೊಳ್ಳಲು ಭದ್ರತಾ ಅಧಿಕಾರಿಗಳು, ಬಿಸಿಸಿಐ ಅಧಿಕಾರಿಗಳ ಅನುಮತಿ ಪಡೆಯಬೇಕು. ಈ ಕುರಿತು 7 ಪುಟಗಳ ಮಾರ್ಗಸೂಚಿಯಲ್ಲಿ ಖಡಕ್ ಎಚ್ಚರಿಕೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಸದ್ಯ ಬಿಸಿಸಿಐ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ಆ ಸ್ಟಾರ್ ಕ್ರಿಕೆಟಿಗ ಯಾರು ಅನ್ನೋ ಚರ್ಚೆ ಶುರುವಾಗಿದೆ. ಸದ್ಯ ಪ್ರಕರಣದ ಆಂತರಿಕ ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಆಟಗಾರನಿಗೆ ಅಮಾನತು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.&lt;/p&gt;&lt;h2&gt;ಯಾರು ಆ ಕ್ರಿಕೆಟಿಗ?&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/ipl-cricketer-under-scanner-after-bcci-acu-action-on-late-night-hotel-room-secret-nmg7i1u"/>
        </item>
        <item>
            <title><![CDATA[ಐಪಿಎಲ್ 2026ರಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಔಟ್, ಪ್ಲೇ ಆಫ್ ರೇಸ್‌ನಲ್ಲಿ 7+1 ತಂಡ]]></title>
            <link>https://kannada.asianetnews.com/gallery/cricket-sports/ipl-2026-playoff-race-down-to-7-plus-1-teams-after-two-teams-knocked-out-ody1zg3</link>
            <guid isPermaLink="true">https://kannada.asianetnews.com/gallery/cricket-sports/ipl-2026-playoff-race-down-to-7-plus-1-teams-after-two-teams-knocked-out-ody1zg3</guid>
            <pubDate>Mon, 11 May 2026 09:03:26 +0530</pubDate>
            <description><![CDATA[&lt;p&gt;ಐಪಿಎಲ್ ಟೂರ್ನಿಯಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ 8 ತಂಡಗಳ ಪೈಕಿ 7 ತಂಡಕ್ಕೆ ಪ್ಲೇ ಆಫ್ ಅವಕಾಶವಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದೃಷ್ಠವೇ ಕೈಹಿಡಿಯಬೇಕು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jtzrxan6g99sb5e50gc0bt21,imgname-iplll-1746970520230.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಟೂರ್ನಿಯಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ 8 ತಂಡಗಳ ಪೈಕಿ 7 ತಂಡಕ್ಕೆ ಪ್ಲೇ ಆಫ್ ಅವಕಾಶವಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದೃಷ್ಠವೇ ಕೈಹಿಡಿಯಬೇಕು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯ ಹೋರಾಟ ತೀವ್ರಗೊಳ್ಳುತ್ತಿದೆ. ಲೀಗ್ ಅಂತಿಮ ಹಂತ ತಲುಪುತ್ತಿದೆ. ವಿಶೇಷ ಅಂದರೆ ಮೇ.10 ರಂದು ಪಂದ್ಯ ಆಡಿ ಸೋತ 2 ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಪ್ಲೇ ಆಫ್ ರೇಸ್&zwnj;ನಲ್ಲಿ ಕೇವಲ 8 ತಂಡದಗಳು ಮಾತ್ರ ಉಳಿದುಕೊಂಡಿದೆ. ಈ ಪೈಕಿ ಅಂಕಪಟ್ಟಿಯಲ್ಲಿರುವ ಒಂದು ತಂಡಕ್ಕೆ ಅವಕಾಶದ ಜೊತೆಗೆ ಅತಿಯಾದ ಅದೃಷ್ಠವೂ ಕೈಹಿಜಿಯಬೇಕು.&lt;/p&gt;&lt;img&gt;&lt;p&gt;ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಲಖನೌ ಸೂಪರ್&zwnj; ಜೈಂಟ್ಸ್. ಸಿಎಸ್&zwnj;ಕೆ ವಿರುದ್ಧ ಸೋಲು ಕಂಡ ಎಲ್&zwnj;ಎಸ್&zwnj;ಜಿ ಟೂರ್ನಿಯಿಂದ ಹೊರಬಿದ್ದಿದೆ. ಇದಾದ ಬಳಿಕ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡ ಮುಂಬೈ ಇಂಡಿಯನ್ಸ್ ಕೂಡ ಟೂರ್ನಿಯಿಂದ ಹೊರಬಿದ್ದಿದೆ.&lt;/p&gt;&lt;img&gt;&lt;p&gt;ಪ್ಲೇ ಆಫ್ ರೇಸ್&zwnj;ನಲ್ಲಿ 8 ತಂಡಗಳಿವೆ. ಈ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ 8ನೇ ಸ್ಥಾನದಲ್ಲಿದೆ. 11 ಪಂದ್ಯದಿಂದ 4 ಗೆಲುವಿನ ಮೂಲಕ 8 ಅಂಕ ಸಂಪಾದಿಸಿದೆ. ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೂ ಒಟ್ಟು 14 ಅಂಕಗಳಿಸಲಿದೆ. ಆದರೆ ಇದು ಪ್ಲೇ ಆಫ್ ಖಚಿತಪಡಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ.&lt;/p&gt;&lt;img&gt;&lt;p&gt;ಕಳೆದ ಬಾರಿ ಟ್ರೋಫಿ ಗೆದ್ದು ದಾಖಲೆ ಬರೆದ ಆರ್&zwnj;ಸಿಬಿ ತಂಡಕ್ಕೆ ಈ ಬಾರಿ ಟೇಬಲ್ ಟಾಪರ್ ಆಗಿ ಪ್ಲೇ ಆಫ್ ಪ್ರವೇಶಕ್ಕೆ ಅವಕಾಶವಿದೆ. ಸದ್ಯ ಅಂಕಪಟ್ಟಿಯಲ್ಲಿ ಆರ್&zwnj;ಸಿಬಿ 11 ಪಂದ್ಯದಿಂದ 14 ಅಂಕಗಳಿಸಿ ಮೊದಲ ಸ್ಥಾನದಲ್ಲಿದೆ. ಇನ್ನು 2 ಮತ್ತು ಮೂರನೇ ಸ್ಥಾನದಲ್ಲಿರುವ ಎಸ್&zwnj;ಆರ್&zwnj;ಎಚ್ ಹಾಗೂ ಗುಜರಾತ್ ಟೈಟಾನ್ಸ್ ಕೂಡ 14 ಅಂಕಗಳಿಸಿದೆ. ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್ 10 ಪಂದ್ಯದಿಂದ 13 ಅಂಕಗಳಿಸಿದೆ.&lt;/p&gt;&lt;img&gt;&lt;p&gt;ಸಿಎಸ್&zwnj;ಕೆ, ರಾಜಸ್ಥಾನ ಹಾಗೂ ಕೆಕೆಆರ್ ಅಂಕಪಟ್ಟಿಯಲ್ಲಿ 5, 6 ಹಾಗೂ 7ನೇ ಸ್ಥಾನದಲ್ಲಿದೆ. ಈ ಮೂರು ತಂಡಕ್ಕೂ ಪ್ಲೇ ಆಫ್ ಖಚಿತಪಡಿಸಲು ಅವಕಾಶವಿದೆ. ಹೀಗಾಗಿ ಲೀಗ್ ಕೊನೆಯ ಪಂದ್ಯದ ವರೆಗೆ ಪ್ಲೇ ಆಫ್ ಕುತೂಹಲ ಉಳಿಯುವ ಸಾಧ್ಯತೆ ಇದೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/ipl-2026-playoff-race-down-to-7-plus-1-teams-after-two-teams-knocked-out-ody1zg3"/>
        </item>
        <item>
            <title><![CDATA[ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಯಾರಿದ್ದಾರೆ? ಮುಂಬೈನಲ್ಲಿ ಪಾಂಡ್ಯ, ಸೂರ್ಯಕುಮಾರ್ ಅನುಮಾನ]]></title>
            <link>https://kannada.asianetnews.com/gallery/cricket-sports/rcb-playing-11-prediction-mumbai-indians-face-uncertainty-over-pandya-and-suryakumar-ohfyct0</link>
            <guid isPermaLink="true">https://kannada.asianetnews.com/gallery/cricket-sports/rcb-playing-11-prediction-mumbai-indians-face-uncertainty-over-pandya-and-suryakumar-ohfyct0</guid>
            <pubDate>Sun, 10 May 2026 18:20:42 +0530</pubDate>
            <description><![CDATA[&lt;p&gt;ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆರ್&zwnj;ಸಿಬಿ ತಂಡ ಜೇಕಬ್ ಬೆತೆಲ್ ಬದಲಾವಣೆ ಮಾಡುತ್ತಾ? ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಮುಂಬೈ ತಂಡದಲ್ಲಿ ಇಂಜರು ಸಮಸ್ಯೆಯಿಂದ ಆತಂಕ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmtsemeq0ma2fxdb5wx7yz5f,imgname-rcb-virat-kohli--3--1774720602583.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆರ್&zwnj;ಸಿಬಿ ತಂಡ ಜೇಕಬ್ ಬೆತೆಲ್ ಬದಲಾವಣೆ ಮಾಡುತ್ತಾ? ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಮುಂಬೈ ತಂಡದಲ್ಲಿ ಇಂಜರು ಸಮಸ್ಯೆಯಿಂದ ಆತಂಕ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸತತ 2 ಪಂದ್ಯ ಸೋತ ಆರ್&zwnj;ಸಿಬಿ ಇದೀಗ ಮುಂಬೈ ಇಂಡಿಯನ್ಸ್ ವಿರುದ್ದ ಹೋರಾಟಕ್ಕೆ ಸಜ್ಜಾಗಿದೆ. ಇಂದು ರಾಯಪುರದಲ್ಲಿ ನಡೆಯಲಿರುವ ಪಂದ್ಯ ಆರ್&zwnj;ಸಿಬಿ ಪ್ಲೇ ಆಫ್ ಪ್ರವೇಶಕ್ಕೆ ಪ್ರಮುಖ ಪಂದ್ಯವಾಗಿದೆ. ಇತ್ತ ಸೋತು ಸೋತು ಸುಣ್ಣವಾಗಿರುವ ಮುಂಬೈಗೆ ಗೆಲುವ ಅನಿವಾರ್ಯವಾಗಿದೆ.&lt;/p&gt;&lt;img&gt;&lt;p&gt;2 ಸೋಲಿನ ಬಳಿಕ ಆರ್&zwnj;ಸಿಬಿ ತಂಡದಲ್ಲಿ ಕೆಲ ಬದಲಾವಣೆ ಮಾತುಗಳು ಕೇಳಿಬರುತ್ತಿದೆ. ಜೇಕಬ್ ಬೆತೆಲ್ ಹಾಗೂ ಜಿತೇಶ್ ಶರ್ಮಾ ಪ್ಲೇಯಿಂಗ್ 11ನಿಂದ ಕೈಬಿಡುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ವೆಂಕಟೇಶ್ ಅಯ್ಯರ್ ತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳಿವೆ.&lt;/p&gt;&lt;img&gt;&lt;p&gt;ಜೇಕಬ್ ಬೆತೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕ್ರುನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಸೂಯಾಶ್ ಶರ್ಮಾ, ಜೋಶ್ ಹೇಜಲ್&zwnj;ವುಡ್,&lt;/p&gt;&lt;img&gt;&lt;p&gt;ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಇಂದಿನ ಪಂದ್ಯಕ್ಕೆ ಲಭ್ಯತೆ ಕುರಿತು ಸ್ಪಷ್ಟತೆ ಇಲ್ಲ. 10 ಪಂದ್ಯದಲ್ಲಿ ಕೇವಲ 3 ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್ ಇನ್ನುಳಿದ ಎಲ್ಲಾ ಪಂದ್ಯ ಗೆದ್ದು ಅದೃಷ್ಠ ಪರೀಕ್ಷೆ ನಡೆಸಲು ಸಜ್ಜಾಗಿದೆ.&lt;/p&gt;&lt;img&gt;&lt;p&gt;ರಿಯಾನ್ ರಿಕೆಲ್ಟನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧಿರ್, ಹಾರ್ದಿಕ್ ಪಾಂಡ್ಯ (ಶೆರ್ಫಾನೆ), ವಿಲ್ ಜ್ಯಾಕ್ಸ್, ಕಾರ್ಬಿನ್ ಬಾಶ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಎಎಂ ಘಜನಫರ್,&lt;/p&gt;&lt;h2&gt;ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/rcb-playing-11-prediction-mumbai-indians-face-uncertainty-over-pandya-and-suryakumar-ohfyct0"/>
        </item>
        <item>
            <title><![CDATA[Team India Captain: ಸೂರ್ಯಕುಮಾರ್‌ಗೆ ಶಾಕ್;‌ ಅಂದು ಸಿಕ್ಸ್‌ ಮಳೆ ಸುರಿಸಿದ್ದವರೇ ಟಿ20 ಕ್ಯಾಪ್ಟನ್?]]></title>
            <link>https://kannada.asianetnews.com/gallery/cricket-sports/sanju-samson-tipped-to-replace-suryakumar-yadav-as-t20i-india-captain-qpmm2i9</link>
            <guid isPermaLink="true">https://kannada.asianetnews.com/gallery/cricket-sports/sanju-samson-tipped-to-replace-suryakumar-yadav-as-t20i-india-captain-qpmm2i9</guid>
            <pubDate>Mon, 11 May 2026 16:38:31 +0530</pubDate>
            <description><![CDATA[&lt;p&gt;Team India Captain: ಟೀಂ ಇಂಡಿಯಾ ಟಿ20 ನಾಯಕತ್ವದ ರೇಸ್&zwnj;ನಲ್ಲಿ ಸಂಜು ಸ್ಯಾಮ್ಸನ್ ಹೆಸರು ಮುಂಚೂಣಿಗೆ ಬಂದಿದೆ. ಕಳಪೆ ಫಾರ್ಮ್&zwnj;ನಿಂದ ಬಳಲುತ್ತಿರುವ ಸೂರ್ಯಕುಮಾರ್ ಯಾದವ್ ಬದಲು ಸಂಜುಗೆ ನಾಯಕತ್ವದ ಪಟ್ಟ ಸಿಗುವ ಸಾಧ್ಯತೆ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp33z954tgqre3qt6v3a0fn2,imgname-shreyas-iyer-sanju-samson-1776073811108.jpg" type="image/jpeg" height="390" width="690"/>
            <content:encoded><![CDATA[&lt;p&gt;Team India Captain: ಟೀಂ ಇಂಡಿಯಾ ಟಿ20 ನಾಯಕತ್ವದ ರೇಸ್&zwnj;ನಲ್ಲಿ ಸಂಜು ಸ್ಯಾಮ್ಸನ್ ಹೆಸರು ಮುಂಚೂಣಿಗೆ ಬಂದಿದೆ. ಕಳಪೆ ಫಾರ್ಮ್&zwnj;ನಿಂದ ಬಳಲುತ್ತಿರುವ ಸೂರ್ಯಕುಮಾರ್ ಯಾದವ್ ಬದಲು ಸಂಜುಗೆ ನಾಯಕತ್ವದ ಪಟ್ಟ ಸಿಗುವ ಸಾಧ್ಯತೆ ಇದೆ.&lt;/p&gt;&lt;img&gt;ಭಾರತದ ಟಿ20 ಕ್ರಿಕೆಟ್&zwnj;ನಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆಯೇ? ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಬಗ್ಗೆ ಆಯ್ಕೆ ಸಮಿತಿ ಬೇಸರಗೊಂಡಿದೆಯೇ? ಹೌದು ಎನ್ನುತ್ತಿವೆ ವರದಿಗಳು. ಸದ್ಯ ನಡೆಯುತ್ತಿರುವ ಐಪಿಎಲ್ 2026ರಲ್ಲಿ ಭರ್ಜರಿ ಫಾರ್ಮ್&zwnj;ನಲ್ಲಿರುವ ಸಂಜು ಸ್ಯಾಮ್ಸನ್, ಶೀಘ್ರದಲ್ಲೇ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸಂಜು ನಾಯಕತ್ವದ ಗುಣಗಳನ್ನು ಮೆಚ್ಚಿಕೊಂಡಿದೆ ಎನ್ನಲಾಗಿದೆ.&lt;img&gt;&lt;p&gt;ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಕಳೆದ ವರ್ಷ ಟಿ20 ವಿಶ್ವಕಪ್&zwnj;ನಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ್ದರೂ, ಅವರ ವೈಯಕ್ತಿಕ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಐಪಿಎಲ್ 2026ರಲ್ಲಿ ಸೂರ್ಯ ಹೀನಾಯವಾಗಿ ವಿಫಲರಾಗಿದ್ದಾರೆ.&amp;nbsp;&lt;/p&gt;&lt;p&gt;10 ಪಂದ್ಯಗಳಲ್ಲಿ ಕೇವಲ 195 ರನ್ ಗಳಿಸಿದ್ದು, ಅವರ ಸರಾಸರಿ 19.52 ಮಾತ್ರ. ವಿಶ್ವಕಪ್&zwnj;ನಲ್ಲೂ ಅಮೆರಿಕ ವಿರುದ್ಧದ ಇನ್ನಿಂಗ್ಸ್ ಹೊರತುಪಡಿಸಿ, ಅವರು ದೊಡ್ಡ ಮಟ್ಟದಲ್ಲಿ ಮಿಂಚಲಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಸಿಐ ನಾಯಕತ್ವದ ಹೊರೆಯನ್ನು ಬೇರೆಯವರಿಗೆ ವಹಿಸಲು ಯೋಚಿಸುತ್ತಿದೆ.&lt;/p&gt;&lt;img&gt;&lt;p&gt;ಸಂಜು ಸ್ಯಾಮ್ಸನ್ ಹೆಸರು ಈಗ ಹಾಟ್ ಟಾಪಿಕ್ ಆಗಿದೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಸಂಜು, ಈ ಸೀಸನ್&zwnj;ನಲ್ಲಿ ಈಗಾಗಲೇ 400ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಶತಕಗಳೂ ಸೇರಿವೆ. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ಸಂಜುಗೆ ಉತ್ತಮ ಅನುಭವವಿದೆ.&amp;nbsp;&lt;/p&gt;&lt;p&gt;ಟಿ20 ವಿಶ್ವಕಪ್&zwnj;ನ ಪ್ರಮುಖ ನಾಕೌಟ್ ಪಂದ್ಯಗಳಲ್ಲಿ (ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ) ಅವರು ಅದ್ಭುತ ಇನ್ನಿಂಗ್ಸ್&zwnj;ಗಳನ್ನು ಆಡಿದ್ದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸ್ಥಿರತೆ ಮತ್ತು ಒತ್ತಡದಲ್ಲಿ ಆಡುವ ರೀತಿ ಆಯ್ಕೆಗಾರರನ್ನು ಬಹಳವಾಗಿ ಆಕರ್ಷಿಸಿದೆ.&lt;/p&gt;&lt;img&gt;&lt;p&gt;ನಾಯಕತ್ವದ ರೇಸ್&zwnj;ನಲ್ಲಿ ಶ್ರೇಯಸ್ ಅಯ್ಯರ್ ಹೆಸರೂ ಕೇಳಿಬಂದಿತ್ತು. ಪಂಜಾಬ್ ಕಿಂಗ್ಸ್ ಪರ ಉತ್ತಮವಾಗಿ ಆಡುತ್ತಿದ್ದರೂ, ಒಂದು ಪ್ರಮುಖ ಕಾರಣ ಅವರನ್ನು ಹಿಂದಕ್ಕೆ ತಳ್ಳಿದೆ. ಅಯ್ಯರ್ ಡಿಸೆಂಬರ್ 2023 ರಿಂದ ಭಾರತ ಟಿ20 ತಂಡದಲ್ಲಿಲ್ಲ.&amp;nbsp;&lt;/p&gt;&lt;p&gt;ದೀರ್ಘಕಾಲ ತಂಡದಿಂದ ದೂರವಿದ್ದು, ನೇರವಾಗಿ ಬಂದು ನಾಯಕತ್ವ ವಹಿಸಿಕೊಳ್ಳುವುದು ಸರಿಯಾದ ನಿರ್ಧಾರವಲ್ಲ ಎಂದು ಆಯ್ಕೆ ಸಮಿತಿ ಭಾವಿಸಿದೆ. ಮತ್ತೊಂದೆಡೆ, ಸಂಜು ಸ್ಯಾಮ್ಸನ್ ಸತತವಾಗಿ ತಂಡದಲ್ಲಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.&lt;/p&gt;&lt;img&gt;&lt;p&gt;ಸಂಜು ಸ್ಯಾಮ್ಸನ್ ಈಗ ಆರಂಭಿಕ ಆಟಗಾರನಾಗಿಯೂ ಮಿಂಚುತ್ತಿದ್ದಾರೆ. ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ ಜೊತೆ ಸಂಜು ನೀಡುವ ಆರಂಭ, ಟೀಂ ಇಂಡಿಯಾವನ್ನು ಬಲಿಷ್ಠ ಶಕ್ತಿಯನ್ನಾಗಿ ಮಾಡಿದೆ.&amp;nbsp;&lt;/p&gt;&lt;p&gt;ತವರಿನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್&zwnj;ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸಂಜು ಗಳಿಸಿದ ಅರ್ಧಶತಕ, ಭಾರತದ ಬೃಹತ್ ಮೊತ್ತಕ್ಕೆ ನೆರವಾಯಿತು. ಮಧ್ಯಮ ಕ್ರಮಾಂಕಕ್ಕಿಂತ ಆರಂಭಿಕನಾಗಿ ಸಂಜು ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್ ಮುಗಿದ ತಕ್ಷಣ ಭಾರತ ತಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಒಂದು ವೇಳೆ ಸೂರ್ಯಕುಮಾರ್ ಯಾದವ್ ಫಾರ್ಮ್&zwnj;ಗೆ ಮರಳದಿದ್ದರೆ, ಈ ಪ್ರವಾಸಗಳಿಂದಲೇ ಸಂಜು ಸ್ಯಾಮ್ಸನ್ ನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ.&amp;nbsp;&lt;/p&gt;&lt;p&gt;ವಿಶ್ವಕಪ್ ಗೆದ್ದ ನಾಯಕನಾಗಿರುವುದರಿಂದ ಸೂರ್ಯಗೆ ಇನ್ನಷ್ಟು ಸಮಯ ನೀಡಬೇಕು ಎಂದು ಕೆಲವು ಆಯ್ಕೆಗಾರರು ಅಭಿಪ್ರಾಯಪಟ್ಟಿದ್ದಾರೆ. ಏನೇ ಆದರೂ, ಮುಂಬರುವ ದಿನಗಳಲ್ಲಿ ಸಂಜು ಸ್ಯಾಮ್ಸನ್ ಟೀಂ ಇಂಡಿಯಾದ ಬಾಸ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/sanju-samson-tipped-to-replace-suryakumar-yadav-as-t20i-india-captain-qpmm2i9"/>
        </item>
        <item>
            <title><![CDATA[ರಾಜಕೀಯ ಪ್ರಭಾವ ಬಳಸಿ ಐಪಿಎಲ್‌ ಫೈನಲ್ ಶಿಫ್ಟ್‌: ಬಿಸಿಸಿಐ ಹೇಳಿಕೆಯೇ ಬೋಗಸ್ ಎಂದ ಡಿಕೆಶಿ!]]></title>
            <link>https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970</link>
            <guid isPermaLink="true">https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970</guid>
            <pubDate>Sat, 09 May 2026 10:14:06 +0530</pubDate>
            <description><![CDATA[&lt;p&gt;ಐಪಿಎಲ್&zwnj; ಫೈನಲ್&zwnj; ಪಂದ್ಯವನ್ನು ರಾಜಕೀಯ ಪ್ರಭಾವ ಬಳಸಿ ಬೆಂಗಳೂರಿನಿಂದ ಅಹಮದಾಬಾದ್&zwnj;ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬಿಸಿಸಿಐ ಸುಳ್ಳು ಹೇಳುತ್ತಿದ್ದು, ಗುಜರಾತ್&zwnj;ಗೆ ಆರ್ಥಿಕ ಲಾಭ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5g2g9d9e3m1b7d20e1pnvx,imgname-----------------------2026-05-09t100052.692-1778301092141.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಮೇ.9): ಐಪಿಎಲ್&zwnj; ಫೈನಲ್&zwnj; ಪಂದ್ಯ ಅಹಮದಾಬಾದ್&zwnj;ಗೆ ಸ್ಥಳಾಂತರಿಸಿರುವ ವಿಚಾರದಲ್ಲಿ ಬಿಸಿಸಿಐ ಸಂಪೂರ್ಣ ಮಾಹಿತಿ ನೀಡದೆ, ಸುಳ್ಳು ಹೇಳುತ್ತಿದೆ. ರಾಜಕೀಯ ಪ್ರಭಾವ ಬಳಸಿ ಐಪಿಎಲ್&zwnj; ಫೈನಲ್&zwnj; ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್&zwnj;ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್&zwnj; ಕಿಡಿಕಾರಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್&zwnj;, ಬಿಸಿಸಿಐ ಕಾರ್ಯದರ್ಶಿ ಬೋಗಸ್&zwnj; ಹೇಳಿಕೆ ನೀಡುತ್ತಿದ್ದು, ಸಂಪೂರ್ಣ ಮಾಹಿತಿ ನೀಡಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್&zwnj; ಪಂದ್ಯಾವಳಿ ವೀಕ್ಷಿಸಲು ಶಾಸಕರಿಗೆ ತಲಾ 2 ಟಿಕೆಟ್&zwnj; ನೀಡುತ್ತಿದ್ದರು. ಅದು ಹೆಚ್ಚಾಗುತ್ತದೆಯೇ? ನಮ್ಮ ಮೇಲೆ ಆರೋಪಿಸುತ್ತಿರುವ ಬಿಜೆಪಿ-ಜೆಡಿಎಸ್&zwnj; ನಾಯಕರು, ತಾವು ಪಡೆದಿದ್ದ ಟಿಕೆಟ್&zwnj; ವಾಪಸ್&zwnj; ಕೊಡಬೇಕಿತ್ತು. ನಮ್ಮ ಶಾಸಕರಿಗೆ ಅವರದ್ದೇ ಸ್ಥಾನ, ಗೌರವವಿದೆ ಎಂದರು.&lt;/p&gt;&lt;p&gt;ಐಪಿಎಲ್&zwnj; ಪಂದ್ಯ ಸ್ಥಳಾಂತರ ಬಿಜೆಪಿ ನಾಯಕತ್ವದಲ್ಲಿ ನಡೆಯುತ್ತಿದೆ. ಗುಜರಾತ್&zwnj;ಗೆ ದೊಡ್ಡ ಆರ್ಥಿಕ ಅನುಕೂಲ ಮಾಡಿಕೊಡಲು ಸ್ಥಳಾಂತರ ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 30 ಸಾವಿರ ಆಸನ ಸಾಮರ್ಥ್ಯವಿದೆ. ಅಹಮದಾಬಾದ್&zwnj;ನಲ್ಲಿ 1 ಲಕ್ಷದವರೆಗೆ ಆಸನವಿದೆ. ಅದರಿಂದ ದೊಡ್ಡ ಲಾಭವಾಗುತ್ತದೆ ಎಂದು ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಅದರ ಜತೆಗೆ ರಾಜಕೀಯ ಪ್ರಭಾವವೂ ಇದಕ್ಕೆ ಕಾರಣ. ಪ್ರತಿವರ್ಷ ಇದೇ ರೀತಿ ಐಪಿಎಲ್&zwnj; ಫೈನಲ್&zwnj; ಪಂದ್ಯ ಸ್ಥಳಾಂತರಿಸಲಾಗುತ್ತಿದೆ ಎಂದರು.&lt;/p&gt;&lt;p&gt;ಅಹಮದಾಬಾದ್&zwnj; ಕ್ರೀಡಾಂಗಣ ಮಾದರಿಯಲ್ಲೇ ರಾಜ್ಯದಲ್ಲೂ ದೊಡ್ಡ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 2 ಕ್ರೀಡಾಂಗಣ ನಿರ್ಮಾಣಕ್ಕೆ ಅನುಮತಿಸಲಾಗಿದೆ. ಅದರ ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು 60 ಸಾವಿರ ಆಸನ ಸಾಮರ್ಥ್ಯಕ್ಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್&zwnj;ಸಿಎ ಜತೆಗೂ ಮಾತನಾಡಲಾಗಿದ್ದು, ಅದಕ್ಕೆ ಸರ್ಕಾರ ನೆರವು ನೀಡಲಿದೆ ಎಂದರು.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970"/>
        </item>
        <item>
            <title><![CDATA[ಆರ್‌ಸಿಬಿ ಪ್ಲೇ ಆಫ್‌ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ]]></title>
            <link>https://kannada.asianetnews.com/gallery/cricket-sports/rcb-playoff-qualification-scenario-how-many-matches-must-rcb-win-to-qualify-vmvot99</link>
            <guid isPermaLink="true">https://kannada.asianetnews.com/gallery/cricket-sports/rcb-playoff-qualification-scenario-how-many-matches-must-rcb-win-to-qualify-vmvot99</guid>
            <pubDate>Mon, 11 May 2026 07:55:22 +0530</pubDate>
            <description><![CDATA[&lt;p&gt;ಮಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಆರ್&zwnj;ಸಿಬಿ ಟೇಬಲ್ ಟಾಪರ್ ಆಗಿದೆ. 14 ಅಂಕಗಳಿಸಿದೆ. ಆದರೆ ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಗೊಂಡಿಲ್ಲ. ಪ್ಲೇ ಆಫ್ ಗೆಲುವಿಗೆ ಇನ್ನು ಎಷ್ಟು ಗೆಲುವು ಬೇಕು, ಟೇಬಲ್ ಟಾಪ್&zwnj;ನಲ್ಲಿ ಉಳಿಯಲು ಲೆಕ್ಕಾಚಾರವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr9j3pasqfbv8eaf4cj5hnpt,imgname-red-and-black-retro-landscape-youtube-thumbnail-background-1778437445977.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಆರ್&zwnj;ಸಿಬಿ ಟೇಬಲ್ ಟಾಪರ್ ಆಗಿದೆ. 14 ಅಂಕಗಳಿಸಿದೆ. ಆದರೆ ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಗೊಂಡಿಲ್ಲ. ಪ್ಲೇ ಆಫ್ ಗೆಲುವಿಗೆ ಇನ್ನು ಎಷ್ಟು ಗೆಲುವು ಬೇಕು, ಟೇಬಲ್ ಟಾಪ್&zwnj;ನಲ್ಲಿ ಉಳಿಯಲು ಲೆಕ್ಕಾಚಾರವೇನು?&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ನೀಡಿದ 167 ರನ್ ಚೇಸ್ ಮಾಡಿದ ಆರ್&zwnj;ಸಿಬಿ ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸಿ ಸಂಭ್ರಮಿಸಿತ್ತು. ಈ ಗೆಲುವಿನೊಂದಿಗೆ ಆರ್&zwnj;ಸಿಬಿ 14 ಅಂಕ ಜೊತೆಗೆ ಉತ್ತಮ ನೆಟ್ ರನ್&zwnj;ರೇಟ್&zwnj;ನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. 14 ಅಂಕ ಪಡೆದರೂ ಪ್ಲೇ ಆಫ್ ಅಧಿಕೃತಗೊಂಡಿಲ್ಲ ಯಾಕೆ, ಈ ಬಾರಿಯ ಪ್ಲೇ ಆಫ್ ಲೆಕ್ಕಾಚಾರ ಇಲ್ಲಿದೆ.&lt;/p&gt;&lt;img&gt;&lt;p&gt;ಅಂಕಪಟ್ಟಿಯಲ್ಲಿ ಟಾಪ್&zwnj;ನಲ್ಲಿರುವ ಆರ್&zwnj;ಸಿಬಿ, ಸನ್&zwnj;ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ಮೂರು ತಂಡಗಳು 11 ಪಂದ್ಯಗಳಿಂದ 14 ಅಂಕಗಳಿಸಿ ಕ್ರಮವಾಗಿ ಆರಂಭಿಕ 3 ಸ್ಥಾನದಲ್ಲಿದೆ. 4ನೇ ಸ್ಥಾನದಲ್ಲಿರುವ ಪಂಜಾಬ್ 10 ಪಂದ್ಯದಿಂದ 13 ಅಂಕಗಳಿಸಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಈ ಬಾರಿ ಪ್ಲೇ ಆಪ್ ಸ್ಥಾನಕ್ಕೇರಲು ಕನಿಷ್ಠ 16 ಅಂಕ ಬೇಕು.&lt;/p&gt;&lt;img&gt;&lt;p&gt;ಬೆಂಗಳೂರು ತಂಡ ಪ್ಲೇ ಆಫ್ ಸ್ಥಾನ ಖಚಿತಪಡಿಸಲು ಇನ್ನೊಂದು ಗೆಲುವು ಬೇಕಿದೆ. 2011 ಹಾಗೂ 2022 ರಿಂದ 2026ರ ವರೆಗಿನ ಐಪಿಎಲ್ ಟೂರ್ನಿ 10 ತಂಡಗಳೊಂದಿಗೆ ಆಡುತ್ತಿದೆ. ಈ ಆವೃತ್ತಿಗಳಲ್ಲಿ 16 ಅಂಕಗಳಿಸಿದ ತಂಡ ಪ್ಲೇ ಆಫ್ ಮಿಸ್ ಮಾಡಿಕೊಂಡಿಲ್ಲ. ಹೀಗಾಗಿ ಆರ್&zwnj;ಸಿಬಿ ಉಳಿದ 3 ಪಂದ್ಯದಲ್ಲಿ ಒಂದು ಗೆಲುವು ಕಂಡರೆ ಪ್ಲೇ ಆಫ್ ಸ್ಥಾನ ಖಚಿತಗೊಳ್ಳಲಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಸದ್ಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಟಾಪ್ ಸ್ಥಾನ ಉಳಿಸಿಕೊಳ್ಳಲು. ಅಥವಾ ಟಾಪ್ 2 ಸ್ಥಾನದ ಮೂಲಕ ಪ್ಲೇ ಆಪ್&zwnj;ನಲ್ಲಿ ಎರಡು ಅವಕಾಶ ಪಡೆಯಲು ಕನಿಷ್ಠ 18 ಅಂಕ ಬೇಕು. ಆದರೆ ಈ ಬಾರಿ ಪಂಜಾಬ್ ಈಗಾಗಲೇ 10 ಪಂದ್ಯದಿಂದ 13 ಅಂಕ ಪಡೆದಿದೆ. ಹೀಗಾಗಿ ಆರ್&zwnj;ಸಿಬಿ ಮೂರರಲ್ಲಿ ಗೆದ್ದರೆ ನಂಬರ್ 1 ಸ್ಥಾನದಲ್ಲಿರಲಿದೆ. ಕನಿಷ್ಠ 2 ಗೆದ್ದರೆ ಟೇಬಲ್ 2 ಸ್ಥಾನ ದಕ್ಕಿಸಿಕೊಳ್ಳಲಿದೆ.&lt;/p&gt;&lt;img&gt;&lt;p&gt;2011ರಲ್ಲಿ ಪ್ಲೇ ಆಫ್ ಪರಿಚಯಿಸಲಾಯಿತು. ಈ ಪೈಕಿ ಕಳೆದ 15 ಆವೃತ್ತಿಗಳಲ್ಲಿ 14ರಲ್ಲಿ ಟೇಬಲ್&zwnj;ನ ಟಾಪ್ 2 ತಂಡ, ಅಂದರೆ ಮೊದಲ ಕ್ವಾಲಿಫೈಯರ್ ಆಡೋ ಎರಡು ತಂಡಗಳ ಪೈಕಿ ಒಂದು ತಂಡ ಟ್ರೋಫಿ ಗೆದ್ದಿದೆ. ಕೇವಲ 2016ರಲ್ಲಿ ಮಾತ್ರ ಈ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿತ್ತು. ಸನ್&zwnj;ರೈಸರ್ಸ್ ಹೈದರಾಬಾದ್ ತಂಡ ಗೆಲುವು ದಾಖಲಿಸಿತ್ತು.&lt;/p&gt;&lt;h2&gt;14 ಸೀಸನ್&zwnj;ಗಳಲ್ಲಿ ಮೊದಲ ಕ್ವಾಲಿಫೈಯರ್ ಆಡೋ ತಂಡಕ್ಕೆ ಟ್ರೋಫಿ&lt;/h2&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/rcb-playoff-qualification-scenario-how-many-matches-must-rcb-win-to-qualify-vmvot99"/>
        </item>
        <item>
            <title><![CDATA[ಐಪಿಎಲ್ 2026 ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಇಳಿಮುಖ: ಟಿವಿ ರೇಟಿಂಗ್ ಮಹಾ ಕುಸಿತ!]]></title>
            <link>https://kannada.asianetnews.com/cricket-sports/ipl-2026-viewership-drop-tv-ratings-vs-digital-streaming-growth-jiostar-data-san/articleshow-xx7aegi</link>
            <guid isPermaLink="true">https://kannada.asianetnews.com/cricket-sports/ipl-2026-viewership-drop-tv-ratings-vs-digital-streaming-growth-jiostar-data-san/articleshow-xx7aegi</guid>
            <pubDate>Sat, 09 May 2026 15:51:31 +0530</pubDate>
            <description><![CDATA[&lt;p&gt;ಪ್ರಸಕ್ತ ಐಪಿಎಲ್ ಸೀಸನ್&zwnj;ನಲ್ಲಿ ಸಾಂಪ್ರದಾಯಿಕ ಟಿವಿ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಡಿಜಿಟಲ್ ವೇದಿಕೆಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ವೀಕ್ಷಕರು ಟಿವಿಯಿಂದ ಸ್ಮಾರ್ಟ್&zwnj;ಫೋನ್&zwnj;ಗಳಿಗೆ ಸ್ಥಳಾಂತರಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq8495m0tezb3j7wmvs6hsv4,imgname-20260427391l-1777315649152.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.9):&lt;/strong&gt; ಭಾರತದ ಕ್ರಿಕೆಟ್ ಹಬ್ಬ ಎಂದೇ ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ತನ್ನ 19ನೇ ಆವೃತ್ತಿಯಲ್ಲಿ ವಿಭಿನ್ನ ತಿರುವು ಪಡೆದುಕೊಂಡಿದೆ. ಐಪಿಎಲ್ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆಯೇ ಅಥವಾ ವೀಕ್ಷಣಾ ಮಾದರಿಯು ಸಂಪೂರ್ಣವಾಗಿ ಬದಲಾಗುತ್ತಿದೆಯೇ ಎಂಬ ಚರ್ಚೆ ಈಗ ಕ್ರೀಡಾಲೋಕದಲ್ಲಿ ಮುನ್ನೆಲೆಗೆ ಬಂದಿದೆ. ಬಾರ್ಕ್ (BARC) ಇಂಡಿಯಾ ಮತ್ತು ಟ್ಯಾಮ್ (TAM) ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ಇತ್ತೀಚಿನ ಡೇಟಾ ಪ್ರಕಾರ, ಪ್ರಸಕ್ತ ಸೀಸನ್&zwnj;ನ ಮೊದಲಾರ್ಧದಲ್ಲಿ ಸಾಂಪ್ರದಾಯಿಕ ಟೆಲಿವಿಷನ್ (TV) ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಟಿವಿ ರೇಟಿಂಗ್&zwnj; ಶೇ. 18.8ರಷ್ಟು ಕುಸಿದಿದ್ದರೆ, ಸರಾಸರಿ ವೀಕ್ಷಣೆ ಶೇ. 26ರಷ್ಟು ಇಳಿಮುಖವಾಗಿದೆ. ಕಳೆದ ವರ್ಷಕ್ಕೆ (2025) ಹೋಲಿಸಿದರೆ ಲೀನಿಯರ್ ಟೆಲಿವಿಷನ್ ತಲುಪುವಿಕೆಯೂ ಕ್ಷೀಣಿಸಿದೆ.&lt;/p&gt;&lt;h2&gt;&lt;strong&gt;ಟಿವಿಯಲ್ಲಿ ಇಳಿಮುಖ, ಡಿಜಿಟಲ್&zwnj;ನಲ್ಲಿ ಭರ್ಜರಿ ಏರಿಕೆ&lt;/strong&gt;&lt;/h2&gt;&lt;p&gt;ಇದು ಕೇವಲ ನಾಣ್ಯದ ಒಂದು ಮುಖ ಮಾತ್ರ. ಟಿವಿ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಡಿಜಿಟಲ್ ವೇದಿಕೆಗಳಲ್ಲಿ ಐಪಿಎಲ್ ಹೊಸ ದಾಖಲೆ ಬರೆಯುತ್ತಿದೆ. ಜಿಯೋಸ್ಟಾರ್ (JioStar) ವರದಿಯ ಪ್ರಕಾರ, ಕೇವಲ ಉದ್ಘಾಟನಾ ವಾರಾಂತ್ಯದಲ್ಲೇ 51.5 ಕೋಟಿಗೂ ಅಧಿಕ ಡಿಜಿಟಲ್ ವೀಕ್ಷಕರು ಲಗ್ಗೆ ಇಟ್ಟಿದ್ದಾರೆ ಮತ್ತು ಒಟ್ಟು 3,200 ಕೋಟಿ ನಿಮಿಷಗಳಷ್ಟು ವೀಕ್ಷಣಾ ಸಮಯ ದಾಖಲಾಗಿದೆ. ಅಂದರೆ, ವೀಕ್ಷಕರು ಮಾಯವಾಗಿಲ್ಲ, ಅವರು ಟಿವಿಯಿಂದ ಸ್ಮಾರ್ಟ್&zwnj;ಫೋನ್&zwnj;ಗಳಿಗೆ ಸ್ಥಳಾಂತರಗೊಂಡಿದ್ದಾರೆ!&lt;/p&gt;&lt;h2&gt;&lt;strong&gt;ವೀಕ್ಷಕರಲ್ಲಿ ಆವರಿಸಿದೆಯೇ 'ಕ್ರಿಕೆಟ್ ಸುಸ್ತು'?&lt;/strong&gt;&lt;/h2&gt;&lt;p&gt;ಐಪಿಎಲ್ ವೀಕ್ಷಣೆಯಲ್ಲಿನ ಕುಸಿತಕ್ಕೆ ವೀಕ್ಷಕರಲ್ಲಿ ಮೂಡಿರುವ ಒಂದು ರೀತಿಯ ಬೇಸರ ಅಥವಾ ಆಯಾಸವೂ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತಿ ಪಂದ್ಯದಲ್ಲೂ 220ಕ್ಕೂ ಅಧಿಕ ರನ್ ಗಳಿಸುವುದು, ಬ್ಯಾಟಿಂಗ್&zwnj;ಗೆ ಪೂರಕವಾದ ಫ್ಲಾಟ್ ಪಿಚ್&zwnj;ಗಳು ಮತ್ತು ಸತತ ಸಿಕ್ಸರ್&zwnj;ಗಳ ಅಬ್ಬರದಿಂದ ಪಂದ್ಯಗಳು ಏಕತಾನತೆಯಿಂದ ಕೂಡಿವೆ ಎಂಬ ದೂರು ಕೇಳಿಬರುತ್ತಿದೆ. ಹತ್ತು ವರ್ಷಗಳ ಹಿಂದೆ 200 ರನ್ ಬೆನ್ನಟ್ಟುವುದು ಅಸಾಧ್ಯದ ಮಾತಾಗಿತ್ತು. ಆದರೆ ಈಗ 225 ರನ್&zwnj;ಗಳನ್ನು ಅನಾಯಾಸವಾಗಿ ಬೆನ್ನಟ್ಟುತ್ತಿರುವುದು ಪಂದ್ಯದ ಭಾವನಾತ್ಮಕ ತೀವ್ರತೆಯನ್ನು ಕಡಿಮೆ ಮಾಡಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.&lt;/p&gt;&lt;p&gt;ಈ ವರದಿಯ ಅತ್ಯಂತ ಗಂಭೀರ ಅಂಶವೆಂದರೆ ಟಿವಿ ಜಾಹೀರಾತುದಾರರ ಪಾಲ್ಗೊಳ್ಳುವಿಕೆಯಲ್ಲಿ ಉಂಟಾಗಿರುವ ಶೇ. 31ರಷ್ಟು ಕುಸಿತ. ಫ್ಯಾಂಟಸಿ ಗೇಮಿಂಗ್ ಮತ್ತು ಬೆಟ್ಟಿಂಗ್ ಆ್ಯಪ್&zwnj;ಗಳ ಮೇಲಿನ ನಿರ್ಬಂಧಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಅಲ್ಲದೆ, ಬ್ರ್ಯಾಂಡ್&zwnj;ಗಳು ಈಗ ಟಿವಿಗಿಂತ ಹೆಚ್ಚಾಗಿ ಡಿಜಿಟಲ್ ಅಭಿಯಾನಗಳು ಮತ್ತು ಇನ್&zwnj;ಫ್ಲುಯೆನ್ಸರ್ ಮಾರ್ಕೆಟಿಂಗ್&zwnj;ಗೆ ಹೆಚ್ಚಿನ ಒತ್ತು ನೀಡುತ್ತಿವೆ.&lt;/p&gt;&lt;h2&gt;&lt;strong&gt;ಬದಲಾದ ವೀಕ್ಷಣಾ ಶೈಲಿ&lt;/strong&gt;&lt;/h2&gt;&lt;p&gt;ಯುವ ವೀಕ್ಷಕರು ಈಗ ಟಿವಿ ಮುಂದೆ ಸತತ ನಾಲ್ಕು ಗಂಟೆಗಳ ಕಾಲ ಕುಳಿತುಕೊಳ್ಳಲು ಇಷ್ಟಪಡುತ್ತಿಲ್ಲ. ಬದಲಾಗಿ, ಮೊಬೈಲ್&zwnj;ನಲ್ಲಿ ಸ್ಕೋರ್ ಚೆಕ್ ಮಾಡುವುದು, ಹೈಲೈಟ್ಸ್ ನೋಡುವುದು ಅಥವಾ ಕನೆಕ್ಟೆಡ್ ಟಿವಿ (Connected TV) ಮೂಲಕ ಸ್ಟ್ರೀಮಿಂಗ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ ಫ್ಯಾಂಟಸಿ ಕ್ರಿಕೆಟ್&zwnj;ನಂತಹ ಅಂಶಗಳು ಜನರನ್ನು ಕ್ರಿಕೆಟ್ ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿಲ್ಲ, ಬದಲಾಗಿ ಪರಿವರ್ತನೆಯ ಹಂತದಲ್ಲಿದೆ. 2026ರ ಸೀಸನ್ ಭಾರತೀಯ ಕ್ರೀಡಾ ಪ್ರಸಾರ ಇತಿಹಾಸದಲ್ಲಿ ಟಿವಿಯನ್ನು ಡಿಜಿಟಲ್ ಸಂಪೂರ್ಣವಾಗಿ ಹಿಂದಿಕ್ಕಿದ ವರ್ಷವಾಗಿ ನೆನಪಿನಲ್ಲಿ ಉಳಿಯಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/ipl-2026-viewership-drop-tv-ratings-vs-digital-streaming-growth-jiostar-data-san/articleshow-xx7aegi"/>
        </item>
        <item>
            <title><![CDATA[BCCI On Reels: IPL ವೇಳೆ ರೀಲ್ಸ್‌: ಕ್ರಿಕೆಟಿಗರು, ಕುಟುಂಬಸ್ಥರಿಗೆ ಬಿಸಿಸಿಐ ಛೀಮಾರಿ!]]></title>
            <link>https://kannada.asianetnews.com/cricket-sports/making-reels-during-ipl-bcci-reprimands-cricketers-and-their-families-rav/articleshow-z9itg97</link>
            <guid isPermaLink="true">https://kannada.asianetnews.com/cricket-sports/making-reels-during-ipl-bcci-reprimands-cricketers-and-their-families-rav/articleshow-z9itg97</guid>
            <pubDate>Sun, 10 May 2026 04:35:22 +0530</pubDate>
            <description><![CDATA[ಐಪಿಎಲ್&zwnj;ನಲ್ಲಿ ಹೆಚ್ಚುತ್ತಿರುವ ರೀಲ್ಸ್ ಸಂಸ್ಕೃತಿಯಿಂದ ಹನಿಟ್ರ್ಯಾಪ್&zwnj; ಮತ್ತು ಭದ್ರತಾ ಅಪಾಯಗಳ ಬಗ್ಗೆ ಬಿಸಿಸಿಐ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಪಂದ್ಯಗಳ ವೇಳೆ ಆಟಗಾರರು ಮತ್ತು ಅವರ ಕುಟುಂಬಸ್ಥರು ರೀಲ್ಸ್ ಅಥವಾ ಯಾವುದೇ ವಿಡಿಯೋ ಮಾಡುವುದನ್ನು ನಿಷೇಧಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7fsgqvtb035q4w700re0e4,imgname-----------------------2026-05-10t042457.585-1778367906554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಸದ್ಯ ನಡೆಯುತ್ತಿರುವ ಐಪಿಎಲ್&zwnj;ನಲ್ಲಿ ಹನಿಟ್ರ್ಯಾಪ್&zwnj;, ಭದ್ರತಾ ಅಪಾಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಬಿಸಿಸಿಐ ಈಗ ಆಟಗಾರರು, ಅವರ ಕುಟುಂಬಸ್ಥರು ಪಂದ್ಯಗಳ ವೇಳೆ ರೀಲ್ಸ್&zwnj; ಮಾಡುವುದು ಮತ್ತು ಅದನ್ನು ಹಂಚಿಕೊಳ್ಳುವ ಸಂಪ್ರದಾಯದ ವಿರುದ್ಧ ಕಿಡಿಕಾರಿದೆ.&lt;/p&gt;&lt;p&gt;ಈ ಐಪಿಎಲ್&zwnj;ನಲ್ಲಿ ವೀಕ್ಷಕ ವಿವರಣೆಗಾರರು, ಆಟಗಾರರು ಪಂದ್ಯಗಳ ವೇಳೆ ರೀಲ್ಸ್&zwnj; ಮಾಡಿ ಹಂಚಿಕೊಳ್ಳುವ ಘಟನೆಗಳು ವರದಿಯಾಗಿವೆ. ಇತ್ತೀಚೆಗೆ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರೊಬ್ಬರು ಡಗೌಟ್&zwnj; ಬಳಿ ನಿಂತು ತನ್ನ ಯೂಟ್ಯೂಬ್&zwnj; ಚಾನೆಲ್&zwnj;ಗಾಗಿ ವಿಡಿಯೋ ಸೆರೆ ಹಿಡಿಯುತ್ತಿದ್ದಾಗ ಅದನ್ನು ಬಿಸಿಸಿಐ ಅಧಿಕಾರಿಗಳು ತಡೆದಿದ್ದ ಘಟನೆಯೂ ನಡೆದಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ತನ್ನ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದೆ ಎಂದು ವರದಿಯಾಗಿದೆ.&lt;/p&gt;&lt;p&gt;ಹೀಗಾಗಿ ವಿಡಿಯೋ ಮಾಡದಂತೆ ಬಿಸಿಸಿಐ ಎಲ್ಲಾ ಆಟಗಾರರಿಗೆ ಸೂಚನೆ ನೀಡಿದೆ. &lsquo;ರೀಲ್ಸ್ ಸಂಸ್ಕೃತಿ ಐಪಿಎಲ್&zwnj;ನಲ್ಲಿ ನಿಯಮಗಳ ಉಲ್ಲಂಘನೆಗೆ ಕಾರಣವಾಗಿದೆ. ಪಂದ್ಯದ ಮೊದಲು, ಪಂದ್ಯದ ವೇಳೆ, ಆ ಬಳಿಕ ತಕ್ಷಣ ವಿಡಿಯೋಗಳನ್ನು ಪೋಸ್ಟ್&zwnj; ಮಾಡುವ ಕೆಲವು ಆಟಗಾರರಿದ್ದಾರೆ. ಹೀಗಾಗಿ ಆಟಗಾರರು, ಕುಟುಂಬ ಸದಸ್ಯರು ಫೋಟೋ, ವೀಡಿಯೊಗಳನ್ನು ಹಂಚಿಕೊಳ್ಳದಂತೆ ಕೇಳಿಕೊಳ್ಳಲಾಗಿದೆ&rsquo; ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಮತ್ತೊಂದೆಡೆ ಟೀಂ ಇಂಡಿಯಾದ ವಸತಿ ಸೌಲಭ್ಯಗಳ ಕುರಿತು ತಮ್ಮ ಪತ್ನಿ ಮಾಡಿದ್ದ ವಿಡಿಯೋ ಹಂಚಿದ್ದ ಭಾರತ ತಂಡದ ಬೌಲರ್&zwnj;ಗೆ ಬಿಸಿಸಿಐ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಗುರುವಾರವಷ್ಟೇ ಆರ್ಶ್&zwnj;ದೀಪ್&zwnj;ಗೆ ಪಂದ್ಯದ ವ್ಲಾಗಿಂಗ್&zwnj; ಮಾಡದಂತೆ ಬಿಸಿಸಿಐ ನಿರ್ದೇಶನ ನೀಡಿತ್ತು.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/making-reels-during-ipl-bcci-reprimands-cricketers-and-their-families-rav/articleshow-z9itg97"/>
        </item>
    </channel>
</rss>
