<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 11:41:14 +0530</lastBuildDate>
        <atom:link href="https://kannada.asianetnews.com/rss/sports" rel="self" type="application/rss+xml"/>
        <item>
            <title><![CDATA[ಸ್ವಂತ ನೆಲದಲ್ಲೇ 'ಅತಿಥಿ'ಯಾದ ಟೀಂ ಇಂಡಿಯಾ! ಇತಿಹಾಸದಲ್ಲೇ ಮೊದಲ ಬಾರಿಗೆ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಪಾಲು!  ಯಾಕೆ ಹೀಗೆ?]]></title>
            <link>https://kannada.asianetnews.com/cricket-sports/india-vs-afghanistan-why-team-india-will-use-the-visitors-dressing-room-in-delhi-kvn/articleshow-2nkyq5w</link>
            <guid isPermaLink="true">https://kannada.asianetnews.com/cricket-sports/india-vs-afghanistan-why-team-india-will-use-the-visitors-dressing-room-in-delhi-kvn/articleshow-2nkyq5w</guid>
            <pubDate>Fri, 11 Sep 2026 18:50:37 +0530</pubDate>
            <description><![CDATA[ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವು ತವರಿನಲ್ಲೇ 'ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್' ಬಳಸಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುವ ಈ ಸರಣಿಯ ಅಧಿಕೃತ ಆತಿಥ್ಯವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ವಹಿಸಿರುವುದೇ ಇದಕ್ಕೆ ಕಾರಣ.]]></description>
            <media:content url="https://static.asianetnews.com/images/w-1280,h-720,format-jpg,imgid-01m189gdbma4vp7gnn0rwfsttf,imgname-india-vs-afghanistan-t20-series-2026-1788058547572.gif" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಒಂದು ಅಪರೂಪದ ಘಟನೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ, ಭಾರತ ತಂಡವು ಇದೇ ಮೊದಲ ಬಾರಿಗೆ ತವರಿನಲ್ಲೇ 'ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್' ಬಳಸಲಿದೆ.&lt;/p&gt;&lt;p&gt;ಈ ಸರಣಿಯ ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆದರೂ, ಇದರ ಅಧಿಕೃತ ಆತಿಥ್ಯ ವಹಿಸಿರುವುದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್. ಕ್ರಿಕೆಟ್ ನಿಯಮಗಳ ಪ್ರಕಾರ, ಆತಿಥೇಯ ತಂಡಕ್ಕೆ 'ಹೋಮ್ ಡ್ರೆಸ್ಸಿಂಗ್ ರೂಮ್' ನೀಡಬೇಕು. ಇದೇ ಕಾರಣಕ್ಕೆ, ಸರಣಿಯ ಅಧಿಕೃತ ಆಯೋಜಕರಾದ ಅಫ್ಘಾನಿಸ್ತಾನಕ್ಕೆ ಹೋಮ್ ಡ್ರೆಸ್ಸಿಂಗ್ ರೂಮ್ ಸಿಕ್ಕಿದೆ. ಭಾರತ ತಂಡವು ಅತಿಥಿಗಳ ಡ್ರೆಸ್ಸಿಂಗ್ ರೂಮ್ ಬಳಸಬೇಕಾಗಿದೆ.&lt;/p&gt;&lt;p&gt;ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ಮಾಜಿ ಭಾರತೀಯ ಆಟಗಾರ ರಮಣ್ ಲಾಂಬಾ ಅವರ ಹೆಸರಿನ ಹೋಮ್ ಡ್ರೆಸ್ಸಿಂಗ್ ರೂಮ್ ಅನ್ನು ಅಫ್ಘಾನ್ ಆಟಗಾರರು ಬಳಸಲಿದ್ದಾರೆ. ಹಾಗೆಯೇ, ಪ್ರಕಾಶ್ ಭಂಡಾರಿ ಅವರ ಹೆಸರಿನಲ್ಲಿರುವ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಅನ್ನು ಭಾರತೀಯ ಆಟಗಾರರು ಬಳಸಲಿದ್ದಾರೆ. ಕೇವಲ ಡ್ರೆಸ್ಸಿಂಗ್ ರೂಮ್ ಮಾತ್ರವಲ್ಲ, ಟಾಸ್ ಸೇರಿದಂತೆ ಇತರ ಅಧಿಕೃತ ಪ್ರಕ್ರಿಯೆಗಳಲ್ಲೂ ಭಾರತವನ್ನು 'ಅತಿಥಿ ತಂಡ' ಎಂದೇ ಪರಿಗಣಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಭಾರತದಲ್ಲಿ ನಡೆಯುವ ದ್ವಿಪಕ್ಷೀಯ ಸರಣಿಗೆ ಆಫ್ಘಾನಿಸ್ತಾನ ಏಕೆ ಆತಿಥ್ಯ?&lt;/strong&gt;&lt;/h2&gt;&lt;p&gt;ತನ್ನ ದೇಶದಲ್ಲಿ ಭದ್ರತೆ ಮತ್ತು ಮೂಲಸೌಕರ್ಯದ ಸವಾಲುಗಳಿರುವುದರಿಂದ, ಅಫ್ಘಾನಿಸ್ತಾನವು ತನ್ನ ತವರಿನ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಡುತ್ತದೆ. ಆದರೆ, ಭಾರತದ ನೆಲದಲ್ಲಿ ನಡೆಯುವ ಸರಣಿಯಲ್ಲಿ ಅಫ್ಘಾನಿಸ್ತಾನ ಅಧಿಕೃತ ಆತಿಥೇಯರಾಗುತ್ತಿರುವುದು ಮತ್ತು ಭಾರತ ತಂಡ ವಿಸಿಟಿಂಗ್ ಡ್ರೆಸ್ಸಿಂಗ್ ರೂಮ್&zwnj;ಗೆ ಸ್ಥಳಾಂತರಗೊಳ್ಳುತ್ತಿರುವುದು ಇದೇ ಮೊದಲು. ಸರಣಿಯ ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದೆ. ಸೆಪ್ಟೆಂಬರ್ 15 ಮತ್ತು 17 ರಂದು ಸರಣಿಯ ಕೊನೆಯ ಎರಡು ಪಂದ್ಯಗಳು ನಡೆಯಲಿವೆ. ಈ ಮೂರೂ ಪಂದ್ಯಗಳಿಗೆ ಅರುಣ್ ಜೇಟ್ಲಿ ಸ್ಟೇಡಿಯಂ ನಡೆಯಲಿದೆ.&lt;/p&gt;&lt;h3&gt;&lt;strong&gt;ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.&lt;/p&gt;&lt;h3&gt;&lt;strong&gt;ಭಾರತ ಎದುರಿನ ಟಿ20 ಆಫ್ಘಾನಿಸ್ತಾನ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್&zwnj;ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್&zwnj;ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್&zwnj;ಝೈ, ನವೀನ್ ಉಲ್ ಹಕ್&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-vs-afghanistan-why-team-india-will-use-the-visitors-dressing-room-in-delhi-kvn/articleshow-2nkyq5w"/>
        </item>
        <item>
            <title><![CDATA[2027ರ ಏಕದಿನ ವಿಶ್ವಕಪ್ ಬಗ್ಗೆ ಉಲ್ಟಾ ಹೊಡೆದ ರೋಹಿತ್ ಶರ್ಮಾ..! ಕೊನೆಯ ಕ್ಷಣದಲ್ಲಿ ಹೀಗ್ಯಾಕೆ ಅಂದ್ರು ಹಿಟ್‌ಮ್ಯಾನ್?]]></title>
            <link>https://kannada.asianetnews.com/gallery/cricket-sports/2027-odi-world-cup-rohit-sharma-finally-speaks-but-his-answer-raises-more-questions-kvn-4qxtssk</link>
            <guid isPermaLink="true">https://kannada.asianetnews.com/gallery/cricket-sports/2027-odi-world-cup-rohit-sharma-finally-speaks-but-his-answer-raises-more-questions-kvn-4qxtssk</guid>
            <pubDate>Fri, 11 Sep 2026 11:01:08 +0530</pubDate>
            <description><![CDATA[&lt;p&gt;ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ, ಲಾರ್ಡ್ಸ್&zwnj;ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಆದರೆ ಇದೀಗ ಹಿಟ್&zwnj;ಮ್ಯಾನ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m27453f80n0851s3hf9pmgys,imgname-rohit-sharma-non-committal-t-shirt-1789093121511.gif" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ, ಲಾರ್ಡ್ಸ್&zwnj;ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಆದರೆ ಇದೀಗ ಹಿಟ್&zwnj;ಮ್ಯಾನ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ಕೆಲ ತಿಂಗಳ ಹಿಂದೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯೇ ಹಿಟ್&zwnj;ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗಲಿದೆ ಎನ್ನುವ ಚರ್ಚೆ ಜೋರಾಗಿತ್ತು. ಅದಕ್ಕೆ ತಕ್ಕಂತೆ ರೋಹಿತ್ ಶರ್ಮಾ ಕೂಡಾ ಮೊದಲೆರಡು ಪಂದ್ಯಗಳಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್&zwnj; ಒಪ್ಪಿಸಿ ವೈಫಲ್ಯ ಅನುಭವಿಸಿದ್ದರು.&lt;/p&gt;&lt;img&gt;&lt;p&gt;ಹೀಗಾಗಿ ಲಾರ್ಡ್ಸ್&zwnj;ನಲ್ಲಿ ನಿಗದಿಯಾಗಿದ್ದ ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆಯಿದೆ ಎನ್ನುವ ಚರ್ಚೆಗಳ ನಡುವೆ ಹಿಟ್&zwnj;ಮ್ಯಾನ್ ಆಕರ್ಷಕ ಶತಕ ಸಿಡಿಸುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಈ ಮೂಲಕ ತಾನು 2027ರ ಏಕದಿನ ವಿಶ್ವಕಪ್ ಆಡಲು ಫಿಟ್ ಇದ್ದೇನೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.&lt;/p&gt;&lt;img&gt;&lt;p&gt;ಇದೀಗ 2027ರ ಏಕದಿನ ವಿಶ್ವಕಪ್&zwnj;ನಲ್ಲಿ ಆಡುವ ಬಗ್ಗೆ ಭಾರತದ ಮಾಜಿ ನಾಯಕ ರೋಹಿತ್&zwnj; ಶರ್ಮಾ ಕೊನೆಗೂ ಮೌನ ಮುರಿದಿದ್ದು, ಅದಕ್ಕಿನ್ನೂ ಸಮಯವಿದೆ, ನೋಡೋಣ ಎಂದು ಉಲ್ಟಾ ಹೊಡೆದಿದ್ದಾರೆ. ನಗರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡ ರೋಹಿತ್&zwnj;ಗೆ ಪತ್ರಕರ್ತರಿಂದ 2027ರ ವಿಶ್ವಕಪ್&zwnj; ಬಗ್ಗೆ ಪ್ರಶ್ನೆ ಎದುರಾಯಿತು.&lt;/p&gt;&lt;img&gt;&lt;p&gt;ಅದಕ್ಕೆ ಉತ್ತರಿಸಿದ ರೋಹಿತ್&zwnj;, &lsquo;2027ರ ಅಕ್ಟೋಬರ್&zwnj;ಗೆ ಇನ್ನೂ ಸಮಯವಿದೆ. ಅದರ ಬಗ್ಗೆ ಆಗಲೇ ನೋಡೋಣ&rsquo; ಎಂದಿದ್ದಾರೆ. ಇನ್ನು, 2024ರ ವಿಶ್ವಕಪ್&zwnj; ಗೆಲುವಿನ ಬಳಿಕ ಮುಂಬೈನಲ್ಲಿ ನಡೆದ ತೆರೆದ ಬಸ್&zwnj;ನ ವಿಜಯಯಾತ್ರೆ ರೀತಿ 2027ರ ವಿಶ್ವಕಪ್&zwnj; ಗೆದ್ದ ಬಳಿಕವೂ ಪರೇಡ್&zwnj; ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್&zwnj;, &lsquo;ಬಸ್ ಪರೇಡ್&zwnj; ಈಗ ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ&rsquo; ಎಂದಿದ್ದಾರೆ.&lt;/p&gt;&lt;img&gt;&lt;p&gt;ರೋಹಿತ್ ಶರ್ಮಾ ಒಮ್ಮೆ ಆಟಗಾರನಾಗಿ ಹಾಗೂ ಒಮ್ಮೆ ನಾಯಕನಾಗಿ ಒಟ್ಟು ಎರಡು ಟಿ20 ವಿಶ್ವಕಪ್ ಜಯಿಸಿದ್ದಾರೆ. ಅದೇ ರೀತಿ ಒಮ್ಮೆ ಆಟಗಾರನಾಗಿ ಹಾಗೂ ಒಮ್ಮೆ ನಾಯಕನಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದ್ದಾರೆ. ಆಟಗಾರನಾಗಿ ಒಮ್ಮೆಯೂ ಏಕದಿನ ವಿಶ್ವಕಪ್ ಗೆಲ್ಲಲು ರೋಹಿತ್ ಶರ್ಮಾಗೆ ಸಾಧ್ಯವಾಗಿಲ್ಲ. ಅದೊಂದು ಕೊರಗು ಈಗಲೂ ರೋಹಿತ್&zwnj;ಗೆ ಇದೆ.&lt;/p&gt;&lt;img&gt;&lt;p&gt;2011ರಲ್ಲಿ ಭಾರತ ತಂಡವು ಏಕದಿನ ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದಾದ ಬಳಿಕ 2015 ಹಾಗೂ 2019 ಏಕದಿನ ವಿಶ್ವಕಪ್&zwnj;ನಲ್ಲಿ ಭಾರತ ಸೆಮೀಸ್&zwnj;ನಲ್ಲೇ ಮುಗ್ಗರಿಸಿತ್ತು. ಇನ್ನು 2023ರ ಏಕದಿನ ವಿಶ್ವಕಪ್&zwnj;ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾಗೆ ಶರಣಾಗಿತ್ತು. ಇದೀಗ ರೋಹಿತ್ ಶರ್ಮಾ ಅವರ ಈ ಹೇಳಿಕೆ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿರುವುದಂತೂ ಸುಳ್ಳಲ್ಲ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/2027-odi-world-cup-rohit-sharma-finally-speaks-but-his-answer-raises-more-questions-kvn-4qxtssk"/>
        </item>
        <item>
            <title><![CDATA[Cricket: ವೈಭವ್ ಸೂರ್ಯವಂಶಿಯನ್ನು ಆಡಿಸಬೇಡಿ’! ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ ದಿಗ್ಗಜರ ಖಡಕ್‌ ಮಾತು!]]></title>
            <link>https://kannada.asianetnews.com/cricket-sports/india-vs-afghanistan-t20-series-vaibhav-suryavanshi-playing-11-sanju-samson-ajinkya-rahane-team-india-selection-bmk/articleshow-6tkox8r</link>
            <guid isPermaLink="true">https://kannada.asianetnews.com/cricket-sports/india-vs-afghanistan-t20-series-vaibhav-suryavanshi-playing-11-sanju-samson-ajinkya-rahane-team-india-selection-bmk/articleshow-6tkox8r</guid>
            <pubDate>Fri, 11 Sep 2026 22:29:43 +0530</pubDate>
            <description><![CDATA[&lt;p&gt;ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಟಿ20 ಸರಣಿಗೆ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು, ಅವರ ಬದಲಿಗೆ ಸಂಜು ಸ್ಯಾಮ್ಸನ್&zwnj;ಗೆ ಅವಕಾಶ ನೀಡಬೇಕೆಂದು ಹಿರಿಯ ಆಟಗಾರ ಆಗ್ರಹಿಸಿದ್ದಾರೆ. ವಿಶ್ವಕಪ್ ಗೆದ್ದ ತಂಡದ ಮೇಲೆ ನಂಬಿಕೆ ಇಡಬೇಕು ಮತ್ತು ಕೆಲವೇ ಪಂದ್ಯಗಳ ವೈಫಲ್ಯಕ್ಕೆ ಸ್ಯಾಮ್ಸನ್ ಅವರನ್ನು ಕೈಬಿಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1fwtkjcrh4pm4h6ppt3wmyh,imgname-vaibhav-sooryavanshi-1788313685580.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬರುವ ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಐ ಸರಣಿಗೆ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆಡುವ ಹನ್ನೊಂದರ (Playing 11) ಬಳಗದಿಂದ ಹೊರಗಿಡಬೇಕು ಎಂದು ಟೀಮ್ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ. ಅವರ ಬದಲಿಗೆ ಸಂಜು ಸ್ಯಾಮ್ಸನ್ ಅವರಿಗೆ ಮತ್ತೊಮ್ಮೆ ಸಾಬೀತುಪಡಿಸಲು ಅವಕಾಶ ನೀಡಬೇಕು ಎಂದು ಅವರು ಭಾರತೀಯ ತಂಡದ ಆಡಳಿತವನ್ನು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ತಂಡದ ಅಗ್ರ ಕ್ರಮಾಂಕದ ಪ್ರಯೋಗಗಳು!&lt;/strong&gt;&lt;/h2&gt;&lt;p&gt;ಭಾರತ ತಂಡವು 2026 ರ ಟಿ20 ವಿಶ್ವಕಪ್ ಗೆದ್ದ ನಂತರ, ಮ್ಯಾನೇಜ್&zwnj;ಮೆಂಟ್ ಅಗ್ರ ಮೂರು ಬ್ಯಾಟಿಂಗ್ ಕ್ರಮಾಂಕದಲ್ಲಿ (Top-3 Order) ಹಲವು ಪ್ರಯೋಗಗಳನ್ನು ಮಾಡುತ್ತಿದೆ. ವಿಶ್ವಕಪ್&zwnj; ಟೂರ್ನಿಯಲ್ಲಿ ಮೂರನೇ ಕ್ರಮಾಂಕದಲ್ಲಿದ್ದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರನ್ನೊಳಗೊಂಡ ಬ್ಯಾಟಿಂಗ್ ಕ್ರಮಾಂಕವು ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಸತತ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದರು ಎಂಬ ಕಾರಣಕ್ಕೆ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು.&lt;/p&gt;&lt;h3&gt;&lt;strong&gt;ವೈಭವ್ ವಿಫಲ!&lt;/strong&gt;&lt;/h3&gt;&lt;p&gt;ಇದರ ಬೆನ್ನಲ್ಲೇ, ಕೇವಲ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತರರಾಷ್ಟ್ರೀಯ ಟಿ20 ಪದಾರ್ಪಣೆ ಮಾಡಿದರು. ಆದರೆ, ತಮಗೆ ಸಿಕ್ಕ ಮೊದಲ ಮೂರು ಪಂದ್ಯಗಳಲ್ಲಿ ಸೂರ್ಯವಂಶಿ ದೊಡ್ಡ ಮಟ್ಟದ ಪ್ರಭಾವ ಬೀರಲು ವಿಫಲರಾದರು. ಈ ಕಾರಣದಿಂದ ಸರಣಿಯ ಅಂತಿಮ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಮತ್ತೆ ತಂಡಕ್ಕೆ ಮರಳಿದರು. ತದನಂತರದ ಜಿಂಬಾಬ್ವೆ ಪ್ರವಾಸದಿಂದ ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.&lt;/p&gt;&lt;h3&gt;&lt;strong&gt;ಅಜಿಂಕ್ಯ ರಹಾನೆ ವಾದವೇನು?&lt;/strong&gt;&lt;/h3&gt;&lt;p&gt;ತಂಡದ ಆಡುವ ಬಳಗದ ಆಯ್ಕೆಯ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ಮಾಜಿ ನಾಯಕ ಅಜಿಂಕ್ಯ ರಹಾನೆ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಈ ವಿಚಾರವಾಗಿ ಮಾತನಾಡಿದ್ದಾರೆ:&lt;/p&gt;&lt;p&gt;&lt;strong&gt;ಸಂಜುಗೆ ನ್ಯಾಯ ಸಿಗಬೇಕು;&lt;/strong&gt; ವಿಶ್ವಕಪ್&zwnj; ಪ್ರಶಸ್ತಿ ಗೆದ್ದು ಕೊಟ್ಟ ಆಟಗಾರರ ಮೇಲೆ ಮ್ಯಾನೇಜ್&zwnj;ಮೆಂಟ್ ಮೊದಲು ನಂಬಿಕೆ ಇಡಬೇಕು. ಕೇವಲ ಎರಡು ಅಥವಾ ಮೂರು ಕೆಟ್ಟ ಇನ್ನಿಂಗ್ಸ್&zwnj;ಗಳ ಆಧಾರದ ಮೇಲೆ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡುವುದು ಸರಿಯಾದ ನಿರ್ಧಾರವಲ್ಲ.&lt;/p&gt;&lt;p&gt;&lt;strong&gt;ವಿಶ್ವಕಪ್ ಯಶಸ್ವಿ ಜೋಡಿಗೆ ಆದ್ಯತೆ ನೀಡಿ;&lt;/strong&gt; ಟಿ20 ವಿಶ್ವಕಪ್&zwnj;ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್&zwnj;ಗೆ ನಿರಂತರ ಅವಕಾಶಗಳನ್ನು ನೀಡಬೇಕು.&lt;/p&gt;&lt;p&gt;&lt;strong&gt;ಸೂರ್ಯವಂಶಿಗೆ ಇನ್ನೂ ಸಮಯವಿದೆ&lt;/strong&gt;; ವೈಭವ್ ಸೂರ್ಯವಂಶಿ ನಿಸ್ಸಂದೇಹವಾಗಿ ಅತ್ಯಂತ ಪ್ರತಿಭಾನ್ವಿತ ಆಟಗಾರ. ಆದರೆ, ಅವರಿಗೆ ಇನ್ನೂ ವಯಸ್ಸಿದೆ ಮತ್ತು ಮುಂದಿನ ದಿನಗಳಲ್ಲಿ ಅವರಿಗೆ ಖಂಡಿತವಾಗಿಯೂ ಸಾಲು ಸಾಲು ಅವಕಾಶಗಳು ಸಿಗಲಿವೆ. ಪ್ರಸ್ತುತ ಸಮಯಕ್ಕೆ ಭಾರತ ತನ್ನ ಪರೀಕ್ಷಿತ ಮತ್ತು ಯಶಸ್ವಿ 'ಟಾಪ್-3' ಆಟಗಾರರನ್ನೇ ಕಣಕ್ಕಿಳಿಸಬೇಕು. ರಹಾನೆ ಅವರ ಪ್ರಕಾರ, ಆಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸಿ, ತಮ್ಮ ಕ್ರಮಾಂಕವನ್ನು ಭದ್ರಪಡಿಸಿಕೊಳ್ಳಲು ಇದು ಸೂಕ್ತ ವೇದಿಕೆಯಾಗಿದೆ.&lt;/p&gt;&lt;h3&gt;&lt;strong&gt;ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳ!&lt;/strong&gt;&lt;/h3&gt;&lt;p&gt;ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಿನ ಬಹುನಿರೀಕ್ಷಿತ ಮೂರು ಪಂದ್ಯಗಳ ಟಿ20 ಸರಣಿಯು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.&lt;/p&gt;&lt;p&gt;&lt;strong&gt;ಮೊದಲ ಪಂದ್ಯ;&lt;/strong&gt; ಸೆಪ್ಟೆಂಬರ್ 13&lt;/p&gt;&lt;p&gt;&lt;strong&gt;ಎರಡನೇ ಪಂದ್ಯ;&lt;/strong&gt; ಸೆಪ್ಟೆಂಬರ್ 15&lt;/p&gt;&lt;p&gt;&lt;strong&gt;ಮೂರನೇ ಪಂದ್ಯ;&lt;/strong&gt; ಸೆಪ್ಟೆಂಬರ್ 17&lt;/p&gt;&lt;p&gt;ಟಿ20 ವಿಶ್ವಕಪ್ ನಂತರ ಹೊಸ ಆಟಗಾರರಿಗೆ ಅವಕಾಶ ನೀಡುವ ಧಾವಂತದಲ್ಲಿ, ಸದ್ಯಕ್ಕೆ ಅನುಭವಿಗಳನ್ನೇ ನೆಚ್ಚಿಕೊಳ್ಳುವುದು ಭಾರತ ತಂಡದ ದೀರ್ಘಕಾಲೀನ ಸ್ಥಿರತೆಗೆ ಒಳ್ಳೆಯದು ಎಂಬುದು ರಹಾನೆ ಅವರ ಬಲವಾದ ವಾದವಾಗಿದೆ.&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/india-vs-afghanistan-t20-series-vaibhav-suryavanshi-playing-11-sanju-samson-ajinkya-rahane-team-india-selection-bmk/articleshow-6tkox8r"/>
        </item>
        <item>
            <title><![CDATA[ಆಸ್ಟ್ರೇಲಿಯಾದಲ್ಲಿ ಸನಾತನ ಧರ್ಮದ ಪವರ್: 12ರ ಬಾಲಕನ ಮುಂದೆ ಮಂಡಿಯೂರಿದ ಫುಟ್​ಬಾಲ್​ ಮಂಡಳಿ]]></title>
            <link>https://kannada.asianetnews.com/football-sports/i-had-rather-follow-my-religion-than-break-it-12-year-old-hindu-boy-chooses-religion-over-football-suc/articleshow-8ppwery</link>
            <guid isPermaLink="true">https://kannada.asianetnews.com/football-sports/i-had-rather-follow-my-religion-than-break-it-12-year-old-hindu-boy-chooses-religion-over-football-suc/articleshow-8ppwery</guid>
            <pubDate>Fri, 11 Sep 2026 14:32:25 +0530</pubDate>
            <description><![CDATA[ಆಸ್ಟ್ರೇಲಿಯಾದಲ್ಲಿ, 12 ವರ್ಷದ ಭಾರತ ಮೂಲದ ಬಾಲಕ ಶುಭ್ ಪಟೇಲ್, ತುಳಸಿಮಾಲೆ ತೆಗೆಯಲು ರೆಫರಿ ಸೂಚಿಸಿದಾಗ, ತನ್ನ ಧರ್ಮವೇ ಮುಖ್ಯವೆಂದು ಫುಟ್ಬಾಲ್ ಪಂದ್ಯದಿಂದ ಹೊರನಡೆದನು. ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾದ ನಂತರ, ಫುಟ್&zwnj;ಬಾಲ್ ಕ್ವೀನ್ಸ್&zwnj;ಲ್ಯಾಂಡ್ ಸಂಸ್ಥೆಯು ಕ್ಷಮೆಯಾಚಿಸಿ, ಬಾಲಕನಿಗೆ ಮಾಲೆ ಧರಿಸಿಯೇ ಆಡಲು ಅನುಮತಿ ನೀಡಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m27v6fwqb18pp7kmzga0dzez,imgname-shub-patel-1789117284247.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಟಕ್ಕಿಂತ ಧರ್ಮವೇ ಮುಖ್ಯ ಎಂದ 12 ವರ್ಷದ ಬಾಲಕ, ತುಳಸಿಮಾಲೆಯನ್ನು ತೆಗೆಯಲು ನಿರಾಕರಿಸಿ ಫುಟ್​ಬಾಲ್​ಪಂದ್ಯದಿಂದ ಹೊರಕ್ಕೆ ಬಂದಿರುವ ಘಟನೆ ಭಾರಿ ಸದ್ದು ಮಾಡುತ್ತಿದೆ. ಆದರೆ ಕೊನೆಗೆ ನಡೆದ ಘಟನೆ ಇನ್ನೂ ರೋಚಕವಾಗಿದೆ. ಇದು ನಡೆದಿರುವುದು, ಆಸ್ಟ್ರೇಲಿಯಾದ ಬ್ರಿಸ್ಬೇನ್&zwnj;ನಲ್ಲಿ. ಆಸ್ಟ್ರೇಲಿಯಾದ ನಿವಾಸಿ ಭಾರತ ಮೂಲದ 12 ವರ್ಷದ ಬಾಲಕ ಶುಭ್ ಪಟೇಲ್ ಫುಟ್​ಬಾಲ್​ ಆಟಗಾರ. ಈತ ಈ ಪಂದ್ಯಕ್ಕೆ ಬರಲು ಸಾಕಷ್ಟು ಶ್ರಮವಹಿಸಿದ್ದ. ಕೊನೆಗೂ ಸೆಲೆಕ್ಟ್​ ಆಗಿದ್ದ. ಆತನ ಆಸೆ ಇನ್ನೇನು ಈಡೇರುವುದರಲ್ಲಿ ಇತ್ತು. ಆದರೆ, ಆ ಸಮಯದಲ್ಲಿ ಆತನ ಕೊರಳಿನಲ್ಲಿ ಇದ್ದ ತುಳಸಿ ಮಾಲೆ ತೆಗೆಯಲು ಹೇಳಲಾಯಿತು. ಇದು ಆಟಕ್ಕೆ ಸೂಕ್ತವಲ್ಲ ಎಂದು ಮಂಡಳಿ ಆದೇಶಿಸಿತು.&lt;/p&gt;&lt;p&gt;ಆದರೆ ಬಾಲಕ ಇದನ್ನು ಸುತರಾಂ ಒಪ್ಪಲಿಲ್ಲ. ಟೂವಾಂಗ್ ಸಾಕರ್ ಕ್ಲಬ್&zwnj;ನ ಶುಭ್ ಪಟೇಲ್, ನಾನು ಐದು ವರ್ಷದಿಂದಲೂ ಇದನ್ನು ಧರಿಸುತ್ತಿದ್ದೇನೆ. ಇದಾಗಲೇ ಇದನ್ನು ಧರಿಸಿ 15 ಪಂದ್ಯಗಳನ್ನು ಆಡಿದ್ದೇನೆ. ಈ ಹಿಂದೆ ಯಾವುದೇ ತರಬೇತುದಾರ ಅಥವಾ ತಂಡದ ಸಹ ಆಟಗಾರ ಅದನ್ನು ತೆಗೆದುಹಾಕಲು ಕೇಳಿರಲಿಲ್ಲ. ಈಗ ತೆಗೆಯಲೇ ಬೇಕು ಎಂದು ಆಟಕ್ಕಿಂತ ನನ್ನ ಧರ್ಮವೇ ಮುಖ್ಯ. ನಾನು ನನ್ನ ಧರ್ಮವನ್ನು ಅನುಸರಿಸಲು ಬಯಸುತ್ತೇನೆ.ಏಕೆಂದರೆ ಇದು ನನಗೆ ಕೇವಲ ಒಂದು ಪರಿಕರವಲ್ಲ. ಸ್ವಾಮಿನಾರಾಯಣ ಸಂಪ್ರದಾಯವನ್ನು ಅನುಸರಿಸುವ ನನಗೆ ಧರ್ಮಕ್ಕಿಂತ ಮುಖ್ಯವಾದದ್ದು ಮತ್ತೊಂದಿಲ್ಲ ಎಂದು ಪಂದ್ಯವನ್ನೇ ರಿಜೆಕ್ಟ್​ ಮಾಡಿ ಬಂದು ಬಿಟ್ಟ!&lt;/p&gt;&lt;h2&gt;&lt;strong&gt;ಕ್ಷಮೆಯಾಚಿಸಿದ ಮಂಡಳಿ&lt;/strong&gt;&lt;/h2&gt;&lt;p&gt;ಶುಭ್ ಆಟವಾಡದೇ ಇರಲು ನಿರ್ಧರಿಸಿ ಪಕ್ಕದಲ್ಲೇ ಬಂದು ಕುಳಿತ. ತಂಡದ ಸದಸ್ಯರು ಪಂದ್ಯವನ್ನು ಮುಂದುವರಿಸಿದರು. ಆದರೆ ಈ ಮಾತು ಬಹಳ ವೇಗದಲ್ಲಿ ಫುಟ್​ಬಾಲ್​ ಮಂಡಳಿಯನ್ನು ತಲುಪಿತು. ಆಮೇಲೆ ಆದದ್ದು ರೋಚಕ. ಫುಟ್&zwnj;ಬಾಲ್ ಮತ್ತು ಫುಟ್ಸಲ್&zwnj;ನ ಆಡಳಿತ ಮಂಡಳಿಯಾದ ಫುಟ್&zwnj;ಬಾಲ್ ಕ್ವೀನ್ಸ್&zwnj;ಲ್ಯಾಂಡ್ ತನಿಖೆಯನ್ನು ಪ್ರಾರಂಭಿಸಿತು. ಬಳಿಕ ತನ್ನಿಂದ ತಪ್ಪಾಗಿದೆ ಎಂದು ಶುಭ್ ಮತ್ತು ಅವರ ಕುಟುಂಬದವರಲ್ಲಿ ಕ್ಷಮೆಯಾಚಿಸಿತು. ಕ್ವೀನ್ಸ್&zwnj;ಲ್ಯಾಂಡ್&zwnj;ನಲ್ಲಿ ಫುಟ್&zwnj;ಬಾಲ್ ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳ ಜನರನ್ನು ಗೌರವಿಸುವ ಒಂದು ಒಳಗೊಳ್ಳುವ ಕ್ರೀಡೆಯಾಗಬೇಕೆಂದು ಹೇಳಿದ ಸಂಸ್ಥೆ, ಶುಭ್&zwnj;ಗೆ ಧಾರ್ಮಿಕ ಹಾರವನ್ನು ಧರಿಸಿ ಆಡಲು ಅವಕಾಶ ನೀಡಿತು.&lt;/p&gt;&lt;h3&gt;&lt;strong&gt;ನಿಜಕ್ಕೂ ಮಾಲೆ ನಿಷೇಧಿಸಲಾಗಿದೆಯೇ?&lt;/strong&gt;&lt;/h3&gt;&lt;p&gt;ಇಲ್ಲಿಯೇ ಕಥೆ ಹೆಚ್ಚು ಜಟಿಲವಾಯಿತು. ಫಿಫಾದ ಆಟದ ನಿಯಮಗಳ 4 ನೇ ನಿಯಮವು ಸುರಕ್ಷತಾ ಕಾರಣಗಳಿಗಾಗಿ ಪಂದ್ಯಗಳ ಸಮಯದಲ್ಲಿ ಹಾರಗಳು, ಉಂಗುರಗಳು ಮತ್ತು ಬಳೆಗಳಂತಹ ಆಭರಣಗಳನ್ನು ಧರಿಸುವುದನ್ನು ನಿಷೇಧಿಸುತ್ತದೆ. ಅಂದರೆ ರೆಫರಿಯ ಸೂಚನೆಯು ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಗುರಿಯಾಗಿರಿಸಿಕೊಂಡು ಮಾಡಿದ ನಿಯಮವಾಗಿರಲಿಲ್ಲ. ಆಭರಣಗಳ ವಿರುದ್ಧದ ವಿಶಾಲವಾದ ಕ್ರೀಡಾ ನಿಯಮವು ಶುಭ್&zwnj;ಗೆ ಮಾಲಾವನ್ನು ತೆಗೆದುಹಾಕಲು ಕೇಳಲು ಆಧಾರವಾಗಿತ್ತು.&lt;/p&gt;&lt;p&gt;ಆದಾಗ್ಯೂ, ಈ ಪ್ರಸಂಗವು ಕ್ರೀಡಾ ಸಂಸ್ಥೆಗಳು ಕ್ರೀಡಾಪಟುಗಳು ತಮ್ಮ ಆಳವಾದ ನಂಬಿಕೆಗಳ ಭಾಗವಾಗಿ ಗೌರವಿಸುವ ಧಾರ್ಮಿಕ ವಸ್ತುಗಳ ವಿಷಯವನ್ನು ಹೇಗೆ ಸಮೀಪಿಸಬೇಕು ಎಂಬುದರ ಸುತ್ತಲಿನ ನಿಜವಾದ ಮತ್ತು ನಿರ್ಣಾಯಕ ಚರ್ಚೆಯನ್ನು ಹುಟ್ಟುಹಾಕಿತು. ಶುಭ್&zwnj;ಗೆ, ಮಾಲೆಯನ್ನು ತೆಗೆದುಹಾಕುವ ಕ್ರಿಯೆಯು ಕೇವಲ ಸರಳ ರಿಯಾಯಿತಿಯಾಗಿರಲಿಲ್ಲ; ಬದಲಾಗಿ, ಅದು ಆತನ ವೈಯಕ್ತಿಕ ನಂಬಿಕೆ ಮತ್ತು ಆಧ್ಯಾತ್ಮಿಕ ಗುರುತಿನ ಆಳವಾದ ರಾಜಿಯಾಗಿತ್ತು. ಮತ್ತೊಂದೆಡೆ, ರೆಫರಿಯ ದೃಷ್ಟಿಕೋನದಿಂದ, ಪರಿಸ್ಥಿತಿಯನ್ನು ವಿಶಾಲವಾದ ಸುರಕ್ಷತಾ ನಿಯಮದಿಂದ ನಿಯಂತ್ರಿಸಲಾಗುತ್ತದೆ, ಇದು ಹಾರಗಳು ಮತ್ತು ಇತರ ಅಲಂಕಾರಗಳು ಸೇರಿದಂತೆ ವಿವಿಧ ರೀತಿಯ ಆಭರಣಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ.&lt;/p&gt;&lt;p&gt;ಆರಂಭದಲ್ಲಿ ಯುವ ಫುಟ್ಬಾಲ್ ಆಟಗಾರನನ್ನು ಒಳಗೊಂಡ ಸಂಕ್ಷಿಪ್ತ ಘಟನೆಯಂತೆ ಕಂಡುಬಂದಿದ್ದು, ಧಾರ್ಮಿಕ ಗುರುತಿನ ಬಹು ಆಯಾಮಗಳು, ಕ್ರೀಡಾ ನಿಯಮಗಳ ಜಾರಿ ಮತ್ತು ವಿವಾದಾತ್ಮಕವೆಂದು ವ್ಯಾಖ್ಯಾನಿಸಬಹುದಾದ ನಿರ್ಧಾರಗಳ ಹಿಂದೆ ಸಮಗ್ರ ಸಂದರ್ಭವನ್ನು ತಲುಪಿಸುವಲ್ಲಿ ಮಾಧ್ಯಮಗಳ ಜವಾಬ್ದಾರಿಯೊಂದಿಗೆ ನಿರ್ಣಾಯಕ ಪಾತ್ರದ ಬಗ್ಗೆ ಹೆಚ್ಚು ವ್ಯಾಪಕವಾದ ಸಂಭಾಷಣೆಯಾಗಿ ತ್ವರಿತವಾಗಿ ರೂಪಾಂತರಗೊಂಡಿತು. ಬಳಿಕ ಈ ಕುರಿತು ಕ್ರೀಡಾ ಮಂಡಳಿ ಇನ್ನಷ್ಟು ಚರ್ಚೆಯನ್ನು ನಡೆಸಿದೆ.&lt;/p&gt;]]></content:encoded>
            <category>sports</category>
            <dc:creator>Suchethana D</dc:creator>
            <atom:link href="https://kannada.asianetnews.com/football-sports/i-had-rather-follow-my-religion-than-break-it-12-year-old-hindu-boy-chooses-religion-over-football-suc/articleshow-8ppwery"/>
        </item>
        <item>
            <title><![CDATA[ಇಂದಿನಿಂದ ಭಾರತ-ಆಫ್ಘಾನಿಸ್ತಾನ ಟಿ20 ಕದನ; ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರ ಪ್ರಸಾರ?]]></title>
            <link>https://kannada.asianetnews.com/cricket-sports/india-vs-afghanistan-t20-abhishek-samson-or-vaibhav-shreyas-iyer-faces-big-selection-puzzle-kvn/articleshow-9c7cpls</link>
            <guid isPermaLink="true">https://kannada.asianetnews.com/cricket-sports/india-vs-afghanistan-t20-abhishek-samson-or-vaibhav-shreyas-iyer-faces-big-selection-puzzle-kvn/articleshow-9c7cpls</guid>
            <pubDate>Sun, 13 Sep 2026 09:13:44 +0530</pubDate>
            <description><![CDATA[&lt;p&gt;ಭಾರತವು ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಶ್ರೇಯಸ್&zwnj; ಅಯ್ಯರ್&zwnj; ನಾಯಕರಾಗಿದ್ದಾರೆ. ಆರಂಭಿಕರ ಆಯ್ಕೆ ಗೊಂದಲದ ನಡುವೆಯೂ, ಜಸ್&zwnj;ಪ್ರೀತ್&zwnj; ಬುಮ್ರಾ ಅವರ ವಾಪಸಾತಿಯು ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಇತ್ತ ಇಬ್ರಾಹಿಂ ಜದ್ರಾನ್&zwnj; ನಾಯಕತ್ವದ ಅಫ್ಘಾನ್ ತಂಡವು ರಶೀದ್&zwnj; ಖಾನ್&zwnj;ರಂತಹ ಅನುಭವಿಗಳೊಂದಿಗೆ ಸವಾಲೊಡ್ಡಲು ಸಜ್ಜಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m22dqc4gj1z2dwyjb0nhbx5t,imgname-untitled-design--48--1788935385232.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಭಾರತ ಕ್ರಿಕೆಟ್&zwnj; ತಂಡ ಭಾನುವಾರದಿಂದ ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿ ಭಾರತದಲ್ಲೇ ನಡೆಯಲಿದೆಯಾದರೂ, ಆತಿಥ್ಯ ವಹಿಸುತ್ತಿರುವುದು ಅಫ್ಘಾನಿಸ್ತಾನ ಎನ್ನುವುದು ವಿಶೇಷ. 3 ಪಂದ್ಯಗಳೂ ರಾಜಧಾನಿಯಲ್ಲೇ ನಡೆಯಲಿದೆ.&lt;/p&gt;&lt;p&gt;ಅಫ್ಘಾನಿಸ್ತಾನ ತಂಡ ಭಾರತ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಮೊದಲ ಜಯಕ್ಕಾಗಿ ಎದುರು ನೋಡುತ್ತಿದ್ದರೆ, ಐರ್ಲೆಂಡ್&zwnj; ಹಾಗೂ ಇಂಗ್ಲೆಂಡ್&zwnj;ನಲ್ಲಿ ಟಿ20 ಸರಣಿಗಳನ್ನು ಸೋತಿದ್ದ ಶ್ರೇಯಸ್&zwnj; ಅಯ್ಯರ್&zwnj; ನಾಯಕತ್ವದ ತಂಡ, ತವರಿನಲ್ಲಿ ಸರಣಿ ಗೆಲ್ಲಲು ಕಾತರಿಸುತ್ತಿದೆ. ಇತ್ತೀಚೆಗೆ ಜಿಂಬಾಬ್ವೆಯಲ್ಲಿ ಭಾರತ ಸರಣಿ ಜಯಿಸಿತ್ತಾದರೂ, ಅದಕ್ಕೆ ಅಷ್ಟೇನೂ ಮಹತ್ವ ಸಿಕ್ಕಿರಲಿಲ್ಲ.&lt;/p&gt;&lt;h2&gt;&lt;strong&gt;ಟೀಂ ಇಂಡಿಯಾಗೆ ಶುರುವಾಗಿದೆ ಆಯ್ಕೆ ತಲೆಬಿಸಿ&lt;/strong&gt;&lt;/h2&gt;&lt;p&gt;ನಾಯಕ ಶ್ರೇಯಸ್&zwnj;ಗೆ ಮೊದಲ ಪಂದ್ಯಕ್ಕೂ ಮೊದಲೇ ಆಯ್ಕೆ ತಲೆಬಿಸಿ ಶುರುವಾಗಿದೆ. ಆರಂಭಿಕರನ್ನಾಗಿ ಅಭಿಷೇಕ್&zwnj; ಶರ್ಮಾ, ಸಂಜು ಸ್ಯಾಮ್ಸನ್&zwnj; ಹಾಗೂ ವೈಭವ್&zwnj; ಸೂರ್ಯವಂಶಿ ನಡುವೆ ಯಾರಿಬ್ಬರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲವಿದೆ. ಇನ್ನು ಆಲ್ರೌಂಡರ್&zwnj;ಗಳ ಆಯ್ಕೆಯೂ ಕಷ್ಟ ಎನಿಸಿದೆ. ಆದರೆ ಜಸ್&zwnj;ಪ್ರೀತ್&zwnj; ಬುಮ್ರಾ ಹಾಗೂ ವರುಣ್&zwnj; ಚಕ್ರವರ್ತಿ ತಂಡಕ್ಕೆ ವಾಪಸಾಗಿರುವ ಕಾರಣ, ಬೌಲಿಂಗ್&zwnj; ವಿಭಾಗ ಬಲಿಷ್ಠವಾಗಿ ತೋರುತ್ತಿದೆ.&lt;/p&gt;&lt;p&gt;ಮತ್ತೊಂದೆಡೆ ಅಫ್ಘಾನಿಸ್ತಾನಕ್ಕೆ ಇಬ್ರಾಹಿಂ ಜದ್ರಾನ್&zwnj; ನಾಯಕನಾಗಿ ನೇಮಕಗೊಂಡಿದ್ದಾರೆ. ರಶೀದ್&zwnj; ಖಾನ್&zwnj;, ಮೊಹಮದ್&zwnj; ನಬಿ, ರಹಮಾನುಲ್ಲಾ ಗುರ್ಬಾಜ್&zwnj;ರಂಥ ಅನುಭವಿಗಳ ಬಲ ತಂಡಕ್ಕಿದೆ. ಒಟ್ಟಾರೆಯಾಗಿ, 3 ಪಂದ್ಯಗಳ ಸರಣಿ ಸಾಕಷ್ಟು ಕುತೂಹಲ ಮೂಡಿಸಿದ್ದು ಸ್ಪರ್ಧಾತ್ಮಕ ಕ್ರಿಕೆಟ್&zwnj;ಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ.&lt;/p&gt;&lt;h3&gt;&lt;strong&gt;ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.&lt;/p&gt;&lt;h3&gt;&lt;strong&gt;ಭಾರತ ಎದುರಿನ ಟಿ20 ಆಫ್ಘಾನಿಸ್ತಾನ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್&zwnj;ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್&zwnj;ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್&zwnj;ಝೈ, ನವೀನ್ ಉಲ್ ಹಕ್&lt;/p&gt;&lt;p&gt;ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್&zwnj; ಟೆನ್&zwnj; 5/ಫ್ಯಾನ್&zwnj;ಕೋಡ್&zwnj;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/india-vs-afghanistan-t20-abhishek-samson-or-vaibhav-shreyas-iyer-faces-big-selection-puzzle-kvn/articleshow-9c7cpls"/>
        </item>
        <item>
            <title><![CDATA[“ಅದು ನನ್ನ ಜೀವನದ ಅತ್ಯಂತ ಕಠಿಣ ರಾತ್ರಿ...!” ಮಾತನಾಡುವಾಗಲೇ ಕಣ್ಣೀರಾದ ಸ್ಮೃತಿ ಮಂದಾನ!]]></title>
            <link>https://kannada.asianetnews.com/cricket-sports/smriti-mandhana-almost-in-tears-hardest-night-of-my-life-question-leaves-her-emotional/articleshow-9wx63sq</link>
            <guid isPermaLink="true">https://kannada.asianetnews.com/cricket-sports/smriti-mandhana-almost-in-tears-hardest-night-of-my-life-question-leaves-her-emotional/articleshow-9wx63sq</guid>
            <pubDate>Sun, 13 Sep 2026 11:41:08 +0530</pubDate>
            <description><![CDATA[&lt;p&gt;&lsquo;ನಿಮ್ಮ ಜೀವನದ ಅತ್ಯಂತ ಕಠಿಣ ರಾತ್ರಿ ಯಾವುದು?&rsquo; ಎಂಬ ರಾಜ್ ಶಮಾನಿ ಪ್ರಶ್ನೆಗೆ ಸ್ಮೃತಿ ಮಂಧಾನಾ ಕೆಲಕ್ಷಣ ಮೌನವಾಗಿದ್ದು ಭಾವುಕರಾದಂತೆ ಕಂಡುಬಂದರು. ಬಳಿಕ &lsquo;ಬಹುಶಃ ಯಾವುದೋ ವಿಶ್ವಕಪ್&rsquo; ಎಂದ ಅವರು, ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡದೆ &lsquo;ನಾನು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುತ್ತೇನೆ&rsquo; ಎಂದು ಸ್ಪಷ್ಟಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2cjk8sr6gvjem03r93s9hmq,imgname-smriti-mandhana-1789276037943.jpg" type="image/jpeg" height="390" width="690"/>
            <content:encoded><![CDATA[&lt;h2&gt;ಸ್ಮೃತಿ ಮಂಧಾನಾ ಕಣ್ಣಲ್ಲಿ ನೀರು ತರಿಸಿದ ಆ ಪ್ರಶ್ನೆ; &lsquo;ನನ್ನ ಜೀವನದ ಕಠಿಣ ರಾತ್ರಿ&rsquo; ಬಗ್ಗೆ ಹೇಳಿದ್ದೇನು?&lt;/h2&gt;&lt;p&gt;&lt;strong&gt;&lsquo;ನನ್ನ ಜೀವನದ ಅತ್ಯಂತ ಕಠಿಣ ರಾತ್ರಿ ಯಾವುದು?&rsquo;&lt;/strong&gt;&lt;/p&gt;&lt;p&gt;ಭಾರತದ ಸ್ಟಾರ್ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಾನ ತಮ್ಮ ಕ್ರಿಕೆಟ್ ಸಾಧನೆಗಳಿಂದ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ಇತ್ತೀಚೆಗೆ ರಾಜ್ ಶಮಾನಿ ಅವರ ಪಾಡ್&zwnj;ಕಾಸ್ಟ್&zwnj;ನಲ್ಲಿ ಕೇಳಲಾದ ಒಂದು ಪ್ರಶ್ನೆಗೆ ಅವರು ಕೆಲ ಕ್ಷಣ ಮೌನವಾಗಿದ್ದು, ಭಾವುಕರಾದಂತೆ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;ಪಾಡ್&zwnj;ಕಾಸ್ಟ್&zwnj;ನಲ್ಲಿ ರಾಜ್ ಶಮಾನಿ, &ldquo;ನಿಮ್ಮ ಜೀವನದ ಅತ್ಯಂತ ಕಠಿಣ ರಾತ್ರಿ ಯಾವುದು?&rdquo; ಎಂದು ಮಂಧಾನಾ ಅವರನ್ನು ಕೇಳಿದರು. ಪ್ರಶ್ನೆ ಕೇಳುತ್ತಿದ್ದಂತೆ ಸ್ಮೃತಿ ಕೆಲವು ಕ್ಷಣ ಯೋಚಿಸಿದರು. ಅವರ ಕಣ್ಣಲ್ಲಿ ಭಾವನೆಗಳು ಮೂಡಿದಂತೆ ಕಂಡುಬಂದಿದ್ದು, ಈ ಕ್ಷಣವೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h3&gt;&lsquo;ಬಹುಶಃ ಯಾವುದೋ ವಿಶ್ವಕಪ್&hellip;&rsquo;&lt;/h3&gt;&lt;p&gt;ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಮಂದಾನ, &ldquo;ಬಹುಶಃ ಯಾವುದೋ ವಿಶ್ವಕಪ್&rdquo; ಎಂದು ಹೇಳಿದ್ದಾರೆ. ಆದರೆ ಅವರು ಯಾವ ವಿಶ್ವಕಪ್ ಅಥವಾ ಯಾವ ಪಂದ್ಯವನ್ನು ಉಲ್ಲೇಖಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ನಂತರ ತಕ್ಷಣವೇ, &ldquo;ನಾನು ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡುತ್ತೇನೆ&rdquo; ಎಂದು ಹೇಳುವ ಮೂಲಕ ತಮ್ಮ ಗಡಿಯನ್ನು ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;strong&gt;ವೈಯಕ್ತಿಕ ವಿಚಾರಗಳ ಬಗ್ಗೆ ಮೌನ&lt;/strong&gt;&lt;/p&gt;&lt;p&gt;ಮಂದಾನ ಅವರ ವೈಯಕ್ತಿಕ ಜೀವನದ ಕುರಿತು ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಪಾಡ್&zwnj;ಕಾಸ್ಟ್&zwnj;ನಲ್ಲಿ ಕೇಳಲಾದ ಪ್ರಶ್ನೆಗೆ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ವಿವರ ನೀಡಲಿಲ್ಲ.&lt;/p&gt;&lt;p&gt;ಬದಲಾಗಿ, ತಮ್ಮ ಉತ್ತರವನ್ನು ಕ್ರಿಕೆಟ್&zwnj;ಗೆ ಮಾತ್ರ ಸೀಮಿತಗೊಳಿಸಿದರು. ಹೀಗಾಗಿ ಅವರು ಉಲ್ಲೇಖಿಸಿದ &lsquo;ಕಠಿಣ ರಾತ್ರಿ&rsquo; ಯಾವ ಪಂದ್ಯ ಅಥವಾ ಘಟನೆಯನ್ನು ಸೂಚಿಸುತ್ತದೆ ಎಂಬುದು ಖಚಿತವಾಗಿಲ್ಲ.&lt;/p&gt;&lt;p&gt;&lt;strong&gt;ಅಭಿಮಾನಿಗಳ ಗಮನ ಸೆಳೆದ ಭಾವುಕ ಕ್ಷಣ&lt;/strong&gt;&lt;/p&gt;&lt;p&gt;ಸ್ಮೃತಿ ಮಂದಾನ ಅವರ ಕೆಲವೇ ಸೆಕೆಂಡ್&zwnj;ಗಳ ಮೌನ ಮತ್ತು ನಂತರದ ಉತ್ತರ ಇದೀಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಕ್ರಿಕೆಟ್ ಮೈದಾನದಲ್ಲಿ ಆತ್ಮವಿಶ್ವಾಸದಿಂದ ಕಾಣಿಸುವ ಸ್ಟಾರ್ ಆಟಗಾರ್ತಿಯ ಮತ್ತೊಂದು ಭಾವನಾತ್ಮಕ ಮುಖ ಈ ಕ್ಷಣದಲ್ಲಿ ಕಾಣಿಸಿಕೊಂಡಿದೆ.&lt;/p&gt;&lt;p&gt;ಈ ಮಾತುಕತೆಯ ವೇಳೆ ಮಂಧಾನಾ ಅವರ ಭಾವನೆಗಳು ಅಭಿಮಾನಿಗಳ ಗಮನ ಸೆಳೆದರೂ, ಅವರು ವೈಯಕ್ತಿಕ ನೋವು ಅಥವಾ ನಿರ್ದಿಷ್ಟ ಘಟನೆಯ ವಿವರಗಳನ್ನು ಹಂಚಿಕೊಳ್ಳಲು ಮುಂದಾಗಲಿಲ್ಲ. ಕ್ರೀಡಾಪಟುವಾಗಿ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಏರಿಳಿತಗಳನ್ನು ಮಾತ್ರ ಸೂಚಿಸಿದ ಅವರು, ಕೆಲವು ನೆನಪುಗಳು ಎಷ್ಟೇ ಕಠಿಣವಾಗಿದ್ದರೂ ಅವುಗಳ ಬಗ್ಗೆ ಮಾತನಾಡುವ ಮಿತಿ ಪ್ರತಿಯೊಬ್ಬರಿಗೂ ಇರುತ್ತದೆ ಎಂಬುದನ್ನು ತಮ್ಮ ಪ್ರತಿಕ್ರಿಯೆಯ ಮೂಲಕ ತೋರಿಸಿದರು.&lt;/p&gt;&lt;p&gt;&quot;The eyes Chico, they never lie ❤️.&quot; pic.twitter.com/3MSDbIVADQ&lt;/p&gt;&lt;p&gt;&mdash; A. (@Ayushperry) September 13, 2026&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/smriti-mandhana-almost-in-tears-hardest-night-of-my-life-question-leaves-her-emotional/articleshow-9wx63sq"/>
        </item>
        <item>
            <title><![CDATA[ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಮುರಿದ ಜೋ ರೂಟ್: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!]]></title>
            <link>https://kannada.asianetnews.com/cricket-sports/joe-root-breaks-sachin-tendulkar-record-most-test-fifties-eng-vs-pak-sat/articleshow-f6d63na</link>
            <guid isPermaLink="true">https://kannada.asianetnews.com/cricket-sports/joe-root-breaks-sachin-tendulkar-record-most-test-fifties-eng-vs-pak-sat/articleshow-f6d63na</guid>
            <pubDate>Sat, 12 Sep 2026 22:23:01 +0530</pubDate>
            <description><![CDATA[ಇಂಗ್ಲೆಂಡ್&zwnj;ನ ಅನುಭವಿ ಬ್ಯಾಟರ್ ಜೋ ರೂಟ್, ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 62 ರನ್ ಗಳಿಸುವ ಮೂಲಕ, ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ್ದ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದೇ ಪಂದ್ಯದಲ್ಲಿ ಅವರು ಎಡ್ಜ್&zwnj;ಬಾಸ್ಟನ್ ಮೈದಾನದಲ್ಲಿ 1000 ಟೆಸ್ಟ್ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m2b8cr19cra8fz0wk6ax59hj,imgname-sachin-tendulkar-joe-root-1789231783975.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬರ್ಮಿಂಗ್&zwnj;ಹ್ಯಾಮ್ (ಸೆ.12): ಇಂ&lt;/strong&gt;ಗ್ಲೆಂಡ್ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಹಾಗೂ ಮಾಜಿ ನಾಯಕ ಜೋ ರೂಟ್, ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಬೃಹತ್ ದಾಖಲೆಯೊಂದನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ ರೂಟ್, ಈ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.&lt;/p&gt;&lt;h2&gt;&lt;strong&gt;ಸಚಿನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ರೂಟ್:&lt;/strong&gt;&lt;/h2&gt;&lt;p&gt;ಪಾಕ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್&zwnj;ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಜೋ ರೂಟ್, ಅಜೇಯ 62 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಅವರ 69ನೇ ಅರ್ಧಶತಕವಾಗಿದೆ. ಈ ಮೂಲಕ ಟೆಸ್ಟ್&zwnj; ಇತಿಹಾಸದಲ್ಲೇ ಅತಿ ಹೆಚ್ಚು ಅರ್ಧಶತಕ (ಹಾಫ್ ಸೆಂಚುರಿ) ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (68 ಅರ್ಧಶತಕ) ಅವರನ್ನು ಹಿಂದಿಕ್ಕಿ ರೂಟ್ ವಿಶ್ವದಾಖಲೆ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ ಬ್ಯಾಟರ್&zwnj;ಗಳು:&lt;/strong&gt;&lt;/h2&gt;&lt;ul&gt; &lt;li&gt;ಜೋ ರೂಟ್ (ಇಂಗ್ಲೆಂಡ್) &ndash; 69&lt;/li&gt; &lt;li&gt;ಸಚಿನ್ ತೆಂಡೂಲ್ಕರ್ (ಭಾರತ) &ndash; 68&lt;/li&gt; &lt;li&gt;ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್) &ndash; 66&lt;/li&gt; &lt;li&gt;ರಾಹುಲ್ ದ್ರಾವಿಡ್ (ಭಾರತ) &ndash; 63&lt;/li&gt; &lt;li&gt;ಅಲನ್ ಬಾರ್ಡರ್ (ಆಸ್ಟ್ರೇಲಿಯಾ) &ndash; 63&lt;/li&gt; &lt;li&gt;ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) &ndash; 62&lt;/li&gt;&lt;/ul&gt;&lt;h2&gt;&lt;strong&gt;ಇಂಗ್ಲೆಂಡ್&zwnj;ಗೆ ಕ್ಲೀನ್ ಸ್ವೀಪ್ ಗೆಲುವು:&lt;/strong&gt;&lt;/h2&gt;&lt;p&gt;ಗೆಲ್ಲಲು 130 ರನ್&zwnj;ಗಳ ಸುಲಭ ಗುರಿ ಪಡೆದ ಇಂಗ್ಲೆಂಡ್, ಕೇವಲ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಜೋ ರೂಟ್ (ಅಜೇಯ 62) ಮತ್ತು ಯುವ ಬ್ಯಾಟರ್ ಜೋರ್ಡಾನ್ ಕಾಕ್ಸ್ (ಅಜೇಯ 59) ಮೂರನೇ ವಿಕೆಟ್&zwnj;ಗೆ ಶತಕದ ಜೊತೆಯಾಟವಾಡಿ ತಂಡಕ್ಕೆ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.&lt;/p&gt;&lt;h2&gt;&lt;strong&gt;ಒಂದೇ ಪಂದ್ಯದಲ್ಲಿ ಮತ್ತೊಂದು ಮೆಗಾ ರೆಕಾರ್ಡ್:&lt;/strong&gt;&lt;/h2&gt;&lt;p&gt;ಇದೇ ಪಂದ್ಯದಲ್ಲಿ ಜೋ ರೂಟ್ ಮತ್ತೊಂದು ವಿಶ್ವ ಮಟ್ಟದ ಸಾಧನೆ ಮಾಡಿದ್ದಾರೆ. ಎಡ್ಜ್&zwnj;ಬಾಸ್ಟನ್ ಕ್ರೀಡಾಂಗಣದಲ್ಲಿ 1000 ಟೆಸ್ಟ್ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾಗಿದ್ದಾರೆ.&lt;/p&gt;&lt;p&gt;ಅಷ್ಟೇ ಅಲ್ಲದೆ, 4 ಪ್ರತ್ಯೇಕ ಮೈದಾನಗಳಲ್ಲಿ 1000ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ವಿಶ್ವದ 3ನೇ ಆಟಗಾರ ಎಂಬ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮಾತ್ರ ಈ ಸಾಧನೆ ಮಾಡಿದ್ದರು.&lt;/p&gt;&lt;h2&gt;&lt;strong&gt;ರೂಟ್ 1000+ ರನ್ ಗಳಿಸಿರುವ ಮೈದಾನಗಳು:&lt;/strong&gt;&lt;/h2&gt;&lt;ul&gt; &lt;li&gt;ಲಾರ್ಡ್ಸ್ &ndash; 2,203 ರನ್&lt;/li&gt; &lt;li&gt;ಮ್ಯಾಂಚೆಸ್ಟರ್ &ndash; 1,128 ರನ್&lt;/li&gt; &lt;li&gt;ದಿ ಓವಲ್ &ndash; 1,050 ರನ್&lt;/li&gt; &lt;li&gt;ಎಡ್ಜ್&zwnj;ಬಾಸ್ಟನ್ &ndash; 1,000+ ರನ್&lt;/li&gt;&lt;/ul&gt;&lt;p&gt;ಪ್ರಸ್ತುತ ಅದ್ಭುತ ಫಾರ್ಮ್&zwnj;ನಲ್ಲಿರುವ ಜೋ ರೂಟ್, ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ಒಟ್ಟಾರೆ ರನ್&zwnj;ಗಳ ದಾಖಲೆಯನ್ನು ಮುರಿಯುವತ್ತಲೂ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/cricket-sports/joe-root-breaks-sachin-tendulkar-record-most-test-fifties-eng-vs-pak-sat/articleshow-f6d63na"/>
        </item>
        <item>
            <title><![CDATA[ದುಲೀಪ್ ಟ್ರೋಫಿ ಗೆಲುವಿನ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಬಗ್ಗೆ ಮೊಹಮ್ಮದ್ ಶಮಿ ಹೀಗಾ ಹೇಳೋದು..?]]></title>
            <link>https://kannada.asianetnews.com/cricket-sports/vaibhav-sooryavanshi-stuns-again-mohammed-shami-makes-a-big-statement-on-15-year-old-star-kvn/articleshow-g99dqd7</link>
            <guid isPermaLink="true">https://kannada.asianetnews.com/cricket-sports/vaibhav-sooryavanshi-stuns-again-mohammed-shami-makes-a-big-statement-on-15-year-old-star-kvn/articleshow-g99dqd7</guid>
            <pubDate>Fri, 11 Sep 2026 13:44:10 +0530</pubDate>
            <description><![CDATA[2026ರ ದುಲೀಪ್ ಟ್ರೋಫಿ ಗೆದ್ದ ಪೂರ್ವ ವಲಯ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, 15 ವರ್ಷದ ಉಪನಾಯಕ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮ್ಮ ವೃತ್ತಿಜೀವನದಷ್ಟೇ ವಯಸ್ಸಿನ ಅನುಭವವನ್ನು ವೈಭವ್ ಹೊಂದಿದ್ದಾರೆ ಎಂದು ಶಮಿ ಹೇಳಿದ್ದು, ಯುವ ಆಟಗಾರರ ಪ್ರಬುದ್ಧತೆಯನ್ನು ಶ್ಲಾಘಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27r8csn6t3jfq6zwa49e779,imgname-untitled-design--52--1789114200884.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಇಶಾನ್ ಕಿಶನ್ ನೇತೃತ್ವದ ಪೂರ್ವ ವಲಯ ತಂಡವು 2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಪೂರ್ವ ವಲಯ ತಂಡದ ಜತೆಗಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ, ಸಹ ಆಟಗಾರರ ಜತೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದಾರೆ. ಇದೆಲ್ಲದರ ನಡುವೆ ಪೂರ್ವ ವಲಯ ತಂಡದ ಉಪನಾಯಕ ಹಾಗೂ 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಶಮಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ 36 ವರ್ಷದ ಮೊಹಮ್ಮದ್ ಶಮಿ, ಮೂರು ಪಂದ್ಯಗಳನ್ನಾಡಿ 7 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಲ್ಲೂ ಫೈನಲ್&zwnj;ನಲ್ಲಿ ಎರಡು ಪ್ರಮುಖ ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪೂರ್ವ ವಲಯ ತಂಡವು ಚಾಂಪಿಯನ್ ಆದ ಬೆನ್ನಲ್ಲೇ ಮಾತನಾಡಿದ ಮೊಹಮ್ಮದ್ ಶಮಿ, ವೈಭವ್ ಸೂರ್ಯವಂಶಿ, ಅಕ್ಷರಶಃ ನನ್ನ ವೃತ್ತಿಜೀವನದಷ್ಟೇ ಅನುಭವವನ್ನು ಹೊಂದಿದ್ದಾರೆ' ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ದುಲೀಪ್ ಟ್ರೋಫಿ ಫೈನಲ್ ಪಂದ್ಯವು ಮೊಹಮ್ಮದ್ ಶಮಿ ಪ್ರಥಮ ದರ್ಜೆ ಕ್ರಿಕೆಟ್&zwnj;ನಲ್ಲಿ ಆಡಿದ 100ನೇ ಪಂದ್ಯ ಎನಿಸಿಕೊಂಡಿತು. 2010, ನವೆಂಬರ್ 17ರಂದು ಮೊಹಮ್ಮದ್ ಶಮಿ, ಬಂಗಾಳ ಪರ ರಣಜಿ ಟ್ರೋಫಿ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಇದಾಗಿ ನಾಲ್ಕು ತಿಂಗಳ ಬಳಿಕ ಅಂದರೆ ಮಾರ್ಚ್ 27, 2011ರಂದು ವೈಭವ್ ಸೂರ್ಯವಂಶಿ ಹುಟ್ಟಿದ್ದರು. ಕೇವಲ 15ನೇ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್&zwnj;ನ ಉಪನಾಯಕನಾಗಿ, ದುಲೀಪ್ ಟ್ರೋಫಿ ಗೆಲ್ಲುವಲ್ಲಿ ಬಿಹಾರ ಮೂಲದ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕೆ:&lt;/strong&gt;&lt;/h2&gt;&lt;p&gt;ದುಲೀಪ್ ಟ್ರೋಫಿ ಗೆಲುವಿನ ಬಳಿಕ ಮಾತನಾಡಿದ ಶಮಿ, ನಾನು ಈ ಟೂರ್ನಿಯನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡಿದೆ. ನಮ್ಮ ತಂಡದಲ್ಲಿರುವ ಈ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಅಕ್ಷರಶಃ ನನ್ನ ವೃತ್ತಿಜೀವನದಷ್ಟೇ ಅನುಭವ ಹೊಂದಿದ್ದಾರೆ. ಇನ್ನೂ ಆತನಲ್ಲಿ ಅದೇ ಮುಗ್ದತೆ, ಅಕ್ಕ ಪಕ್ಕದವರ ಜತೆ ಜೋಕ್ ಮಾಡಿ ನಗಿಸುವುದು ಹಾಗೂ ಕೆಲವು ವಿಚಾರಗಳನ್ನು ತಕ್ಷಣವೇ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುವುದು. ಬಹುತೇಕ ಈಗಿನ ಎಲ್ಲಾ ಯಂಗಸ್ಟರ್ಸ್&zwnj; ಪ್ರಬುದ್ದರಾಗಿರುತ್ತಾರೆ. ಇವರೆಲ್ಲ ಐಪಿಎಲ್ ಸೇರಿದಂತೆ ಹಲವು ಹೈ ಲೆವೆಲ್ ಟೂರ್ನಿಗಳನ್ನು ಆಡುವುದರಿಂದ ಬೇಗನೇ ಪ್ರಬುದ್ದತೆ ಬರುತ್ತದೆ. ಹೀಗಾಗಿ ಅವರಿಗೆ ಹೆಚ್ಚಿನ ಕೋಚಿಂಗ್ ಅಗತ್ಯವಿಲ್ಲ. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಅವರಿಗೆ ತಾಂತ್ರಿಕವಾಗಿ ಸಲಹೆಗಳನ್ನು ನೀಡಬೇಕಾಗುತ್ತದೆ' ಎಂದು ಶಮಿ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;192 ರನ್ ಗಳಿಸಿದ ವೈಭವ್ ಸೂರ್ಯವಂಶಿ:&lt;/strong&gt;&lt;/h3&gt;&lt;p&gt;ಪೂರ್ವ ವಲಯ ತಂಡದ ಉಪನಾಯಕ ಹಾಗೂ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, 2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ 3 ಪಂದ್ಯಗಳ ಐದು ಇನ್ನಿಂಗ್ಸ್&zwnj;ಗಳನ್ನಾಡಿ 192 ರನ್ ಸಿಡಿಸಿ ಮಿಂಚಿದರು. ಈ ಮೂಲಕ ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್&zwnj;ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದರು.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-sooryavanshi-stuns-again-mohammed-shami-makes-a-big-statement-on-15-year-old-star-kvn/articleshow-g99dqd7"/>
        </item>
        <item>
            <title><![CDATA[ಪಾಕ್‌ ಕ್ರಿಕೆಟ್‌ಗೆ ಮತ್ತೆ ಮುಖಭಂಗ: ಸೈಬರ್‌ ಕ್ರೈಮ್‌ನಿಂದ ರಿಜ್ವಾನ್‌, ಇಮಾಮ್‌ 4 ಗಂಟೆ ವಿಚಾರಣೆ!]]></title>
            <link>https://kannada.asianetnews.com/cricket-sports/pakistan-cricket-in-trouble-rizwan-and-imam-ul-haq-questioned-for-4-hours-kvn/articleshow-gdnkr9r</link>
            <guid isPermaLink="true">https://kannada.asianetnews.com/cricket-sports/pakistan-cricket-in-trouble-rizwan-and-imam-ul-haq-questioned-for-4-hours-kvn/articleshow-gdnkr9r</guid>
            <pubDate>Sat, 12 Sep 2026 11:28:54 +0530</pubDate>
            <description><![CDATA[ಇಂಗ್ಲೆಂಡ್&zwnj; ಟೆಸ್ಟ್&zwnj; ಸರಣಿಯ ವೇಳೆ ಡ್ರೆಸ್ಸಿಂಗ್&zwnj; ಕೋಣೆಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಕ್ರಿಕೆಟಿಗರಾದ ಮೊಹಮ್ಮದ್&zwnj; ರಿಜ್ವಾನ್&zwnj; ಮತ್ತು ಇಮಾಮ್&zwnj; ಉಲ್&zwnj; ಹಕ್&zwnj; ಅವರನ್ನು ಸೈಬರ್&zwnj; ಕ್ರೈಮ್ ಏಜೆನ್ಸಿ ವಿಚಾರಣೆಗೊಳಪಡಿಸಿದೆ. ಏಜೆನ್ಸಿಯು ಆಟಗಾರರ ಮೊಬೈಲ್ ಫೋನ್&zwnj;ಗಳ ಫಾರೆನ್ಸಿಕ್ ವಿಶ್ಲೇಷಣೆ ನಡೆಸುತ್ತಿದ್ದು, ಅವರ ಹಣಕಾಸು ವಹಿವಾಟುಗಳ ಮೇಲೂ ತೀವ್ರ ನಿಗಾ ಇರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13m0azetgb0bva2h7kvap7n,imgname-pak-team-1787901783021.jpg" type="image/jpeg" height="390" width="690"/>
            <content:encoded><![CDATA[&lt;h2&gt;England Test Series ವೇಳೆ ಡ್ರೆಸ್ಸಿಂಗ್&zwnj; ರೂಮ್&zwnj; ಮಾಹಿತಿ ಲೀಕ್&zwnj;? ರಿಜ್ವಾನ್&zwnj;, ಇಮಾಮ್&zwnj;ಗೆ ವಿಚಾರಣೆ&lt;/h2&gt;&lt;p&gt;ಲಾಹೋರ್&zwnj;: ಸದಾ ಒಂದಿಲ್ಲೊಂದು ಪ್ರಕರಣದಲ್ಲಿ ಸುದ್ದಿಯಾಗುವ ಪಾಕಿಸ್ತಾನ ಕ್ರಿಕೆಟ್&zwnj;, ಈಗ ತಂಡದ ಕೆಲ ಆಟಗಾರರ ವಿಚಾರದಲ್ಲೇ ಮುಖಭಂಗಕ್ಕೊಳಗಾಗುವ ಸ್ಥಿತಿಯಲ್ಲಿದೆ.&lt;/p&gt;&lt;p&gt;ಇಂಗ್ಲೆಂಡ್&zwnj; ಟೆಸ್ಟ್&zwnj; ಸರಣಿಯ ವೇಳೆ ಡ್ರೆಸ್ಸಿಂಗ್&zwnj; ಕೋಣೆಯ ಮಾಹಿತಿ ಸೋರಿಕೆ ಮಾಡಿದ ಪ್ರಕರಣದಲ್ಲಿ ಪಾಕ್&zwnj; ಕ್ರಿಕೆಟ್&zwnj; ಮಂಡಳಿ ನೀಡಿದ್ದ ದೂರು ಆಧರಿಸಿ ಅಲ್ಲಿನ ರಾಷ್ಟ್ರೀಯ ಸೈಬರ್&zwnj; ಕ್ರೈಮ್ ವಿಚಾರಣಾ ಏಜೆನ್ಸಿ(ಎನ್&zwnj;ಸಿಸಿಐಎ)ಯು ತಾರಾ ಕ್ರಿಕೆಟಿಗರಾದ ಮೊಹಮ್ಮದ್&zwnj; ರಿಜ್ವಾನ್&zwnj; ಹಾಗೂ ಇಮಾಮ್&zwnj; ಉಲ್&zwnj; ಹಕ್&zwnj;ರನ್ನು 4 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದೆ. ಇಂಗ್ಲೆಂಡ್&zwnj;ನಲ್ಲಿ ಅವರ ತರಬೇತಿ, ಸಭೆ, ಪಂದ್ಯ, ಡ್ರೆಸ್ಸಿಂಗ್&zwnj; ರೂಮ್&zwnj; ವಿಚಾರಗಳ ಬಗ್ಗೆ ಪ್ರಶ್ನಿಸಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ವರದಿಗಳ ಪ್ರಕಾರ, ಈಗ ನಡೆಯುತ್ತಿರುವ ತನಿಖೆಗೆ ಹೊಸ ಆಯಾಮ ಲಭಿಸಿದೆ. ಎನ್&zwnj;ಸಿಸಿಐಎ ಈ ಇಬ್ಬರು ಆಟಗಾರರ ಮೊಬೈಲ್ ಫೋನ್&zwnj;ಗಳ ವಿಧಿವಿಜ್ಞಾನ(ಫಾರೆನ್ಸಿಕ್) ಮತ್ತು ತಾಂತ್ರಿಕ ವಿಶ್ಲೇಷಣೆಯನ್ನು ನಡೆಸುತ್ತಿದೆ. ಅಲ್ಲದೆ, ಅವರ ಹಣಕಾಸು ಖಾತೆಗಳು ಮತ್ತು ಅನುಮಾನಾಸ್ಪದ ವಹಿವಾಟುಗಳ ಮೇಲೂ ತೀವ್ರ ನಿಗಾ ಇಟ್ಟಿದೆ. ಇಂಗ್ಲೆಂಡ್&zwnj; ಸರಣಿಗೂ ಮುನ್ನ ಹಾಗೂ ಬಳಿಕದ ವಹಿವಾಟುಗಳ ಬಗ್ಗೆ ಪರಿಶೀಲಿಸಲಿದ್ದು, ಇವರಿಬ್ಬರ ಜೊತೆ ಯಾವುದಾದರೂ ಕಂಪೆನಿ, ಸಂಘಟನೆ ಅಥವಾ ವ್ಯಕ್ತಿ ಹಣಕಾಸಿನ ವ್ಯವಹಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಿದೆ ಎಂದು ಗೊತ್ತಾಗಿದೆ.&lt;/p&gt;&lt;p&gt;ಇತ್ತೀಚೆಗೆ ಇಂಗ್ಲೆಂಡ್&zwnj; ವಿರುದ್ಧ ಮೊದಲೆರಡು ಟೆಸ್ಟ್&zwnj; ಪಂದ್ಯಗಳಲ್ಲಿ ಹೀನಾಯ ಸೋಲಿನ ಬಳಿಕ ಪಾಕ್ ತಂಡದ 15 ಆಟಗಾರರ ಪೈಕಿ 7 ಮಂದಿಯನ್ನು ಕಳಪೆ ಪ್ರದರ್ಶನ ಕಾರಣಕ್ಕೆ ತವರಿಗೆ ಕಳುಹಿಸಲಾಗಿತ್ತು. ಇದರಲ್ಲಿ ರಿಜ್ವಾನ್&zwnj;, ಇಮಾಮ್&zwnj; ಕೂಡಾ ಒಳಗೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಇದೇ ಮೊದಲ ಸಲ ಆಟಗಾರರ ವಿರುದ್ಧ ಮಂಡಳಿಯ ದೂರು!&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಕ್ರಿಕೆಟಿಗರ ವಿಚಾರದಲ್ಲಿ ಫಿಕ್ಸಿಂಗ್&zwnj;, ದೌರ್ಜನ್ಯ ಸೇರಿದಂತೆ ಬೇರೆ ಬೇರೆ ರೀತಿಯ ಹಲವು ಆರೋಪಗಳು ಕಂಡುಬರುತ್ತವೆ. ಆವಾಗೆಲ್ಲಾ ಪೊಲೀಸ್&zwnj; ತನಿಖೆಗಳೂ ನಡೆಯುತ್ತವೆ. ಆದರೆ ತನ್ನದೇ ರಾಷ್ಟ್ರೀಯ ತಂಡದ ಆಟಗಾರರ ವಿರುದ್ಧ ಕ್ರಿಕೆಟ್&zwnj; ಮಂಡಳಿಯೊಂದು ಸೈಬರ್&zwnj; ಏಜೆನ್ಸಿಗೆ ದೂರು ನೀಡಿದ್ದು ಇದೇ ಮೊದಲು.&lt;/p&gt;&lt;h3&gt;&lt;strong&gt;3ನೇ ಟೆಸ್ಟ್&zwnj;ನಲ್ಲಿ ಇಂಗ್ಲೆಂಡ್&zwnj; ವಿರುದ್ಧ ಇನ್ನಿಂಗ್ಸ್&zwnj; ಸೋಲು ತಪ್ಪಿಸಿಕೊಂಡ ಪಾಕಿಸ್ತಾನ&lt;/strong&gt;&lt;/h3&gt;&lt;p&gt;ಬರ್ಮಿಂಗ್&zwnj;ಹ್ಯಾಮ್&zwnj;: ಇಂಗ್ಲೆಂಡ್&zwnj; ವಿರುದ್ಧ 3ನೇ ಹಾಗೂ ಕೊನೆ ಟೆಸ್ಟ್&zwnj; ಪಂದ್ಯದಲ್ಲಿ ಪಾಕಿಸ್ತಾನ ತಂಡ ಇನ್ನಿಂಗ್ಸ್&zwnj; ಸೋಲಿನಿಂದ ಪಾರಾಗಿದೆ. ಮೊದಲ ಇನ್ನಿಂಗ್ಸ್&zwnj;ನಲ್ಲಿ ಪಾಕ್&zwnj; 133 ರನ್&zwnj; ಗಳಿಸಿದ್ದರೆ, ಇಂಗ್ಲೆಂಡ್&zwnj; 453 ರನ್ ಸಿಡಿಸಿ ದೊಡ್ಡ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್&zwnj;ನಲ್ಲೂ ಆರಂಭದಲ್ಲಿ ಆಘಾತ ಅನುಭವಿಸಿದ್ದ ಪಾಕ್&zwnj;, ಇನ್ನಿಂಗ್ಸ್&zwnj; ಅಂತರದಲ್ಲಿ ಸೋಲುವ ಭೀತಿಯಲ್ಲಿತ್ತು. ಆದರೆ ಅಝಾನ್&zwnj; ಅವೈಸ್&zwnj;(59), ಶಾನ್&zwnj; ಮಸೂದ್&zwnj;(95) ಹಾಗೂ ನಾಯಕ ಬಾಬರ್&zwnj; ಆಜಂ(76) ಹೋರಾಟದ ನೆರವಿನಿಂದ ತಂಡ ಹಿನ್ನಡೆಯಿಂದ ಪಾರಾಗಿ, ಇಂಗ್ಲೆಂಡ್&zwnj; ಮತ್ತೆ ಬ್ಯಾಟ್&zwnj; ಮಾಡುವಂತೆ ಮಾಡಿತು. 318 ರನ್&zwnj;ಗೆ 8 ವಿಕೆಟ್&zwnj; ಕಳೆದುಕೊಂಡಿದ್ದ ತಂಡ ಇನ್ನಿಂಗ್ಸ್&zwnj; ಸೋಲು ತಪ್ಪಿಸಲು ಇನ್ನೂ 2 ರನ್ ಬೇಕಿತ್ತು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಝಾವುಲ್ಲಾ, ಇಂಗ್ಲೆಂಡ್&zwnj;ಗೆ 50ಕ್ಕೂ ಹೆಚ್ಚು ರನ್&zwnj; ಗುರಿ ನೀಡಲು ನೆರವಾದರು.&lt;/p&gt;&lt;h3&gt;&lt;strong&gt;ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಗರಿಷ್ಠ ಕ್ಯಾಚ್&zwnj;: ಸ್ಮಿತ್&zwnj; ಹಿಂದಿಕ್ಕಿದ ಜೋ ರೂಟ್&zwnj; ವಿಶ್ವ ನಂ.1&lt;/strong&gt;&lt;/h3&gt;&lt;p&gt;ಬರ್ಮಿಂಗ್&zwnj;ಹ್ಯಾಮ್&zwnj;: ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಗರಿಷ್ಠ ಕ್ಯಾಚ್&zwnj; ಪಡೆದ ಫೀಲ್ಡರ್&zwnj;ಗಳ ಪಟ್ಟಿಯಲ್ಲಿ ಇಂಗ್ಲೆಂಡ್&zwnj; ನಾಯಕ ಜೋ ರೂಟ್&zwnj; ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್&zwnj; ಸ್ಮಿತ್&zwnj;ರನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದ್ದಾರೆ. ರೂಟ್&zwnj; 169 ಪಂದ್ಯಗಳಲ್ಲಿ 220 ಕ್ಯಾಚ್&zwnj; ಪಡೆದಿದ್ದಾರೆ. ಇನ್ನಿಂಗ್ಸ್&zwnj;ನಲ್ಲಿ ಅವರ ಗರಿಷ್ಠ ಕ್ಯಾಚ್&zwnj; ನಾಲ್ಕು. 125 ಪಂದ್ಯಗಳನ್ನಾಡಿರುವ ಸ್ಮಿತ್&zwnj; 219 ಕ್ಯಾಚ್&zwnj;ಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಮಾಜಿ ನಾಯಕ ರಾಹುಲ್&zwnj; ದ್ರಾವಿಡ್&zwnj; 164 ಪಂದ್ಯಗಳಲ್ಲಿ 210, ಶ್ರೀಲಂಕಾದ ಜಯವರ್ಧನೆ 149 ಪಂದ್ಯಗಳಲ್ಲಿ 205, ದ.ಆಫ್ರಿಕಾದ ಜ್ಯಾಕ್&zwnj; ಕ್ಯಾಲಿಸ್&zwnj; 166 ಪಂದ್ಯಗಳಲ್ಲಿ 200 ಕ್ಯಾಚ್&zwnj; ಪಡೆದಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/pakistan-cricket-in-trouble-rizwan-and-imam-ul-haq-questioned-for-4-hours-kvn/articleshow-gdnkr9r"/>
        </item>
        <item>
            <title><![CDATA[ಶ್ರೀಶಾಂತ್‌ ಅವರ ತಂದೆ ನಿಧನ, ತೀವ್ರ ದುಃಖದಲ್ಲಿ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3</link>
            <guid isPermaLink="true">https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3</guid>
            <pubDate>Sat, 12 Sep 2026 13:23:17 +0530</pubDate>
            <description><![CDATA[&lt;p&gt;ಭಾರತ ಕ್ರಿಕೆಟ್&zwnj; ತಂಡದ ಮಾಜಿ ಆಟಗಾರ ಎಸ್&zwnj;.ಶ್ರೀಶಾಂತ್&zwnj; ಅವರ ತಂದೆ ವಿ.ಶಾಂತಕುಮಾರನ್&zwnj; ನಿಧನರಾಗಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2a90hzmxa69nr49arca8a3n,imgname-sreesanth-father-dies-at-89-1789198878708.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಸ್&zwnj;.ಶ್ರೀಶಾಂತ್&zwnj; ಅವರ ತಂದೆ ವಿ.ಶಾಂತಕುಮಾರನ್&zwnj; ನಾಯರ್&zwnj; ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಎರ್ನಾಕುಲಂನ ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ವಾರದಿಯಾಗಿದೆ.&lt;/p&gt;&lt;p&gt;ವಿ.ಶಾಂತಕುಮಾರನ್&zwnj; ನಾಯರ್&zwnj; ಅವರು ಪತ್ನಿ ಟಿ.ಎನ್&zwnj;.ಸಾವಿತ್ರಿ ದೇವಿ, ಮಕ್ಕಳಾದ ದೀಪು, ನಿವೇದಿತಾ, ದಿವ್ಯಾ ಹಾಗೂ ಶ್ರೀಶಾಂತ್&zwnj; ಅವರನ್ನು ಅಗಲಿದ್ದಾರೆ. ತಂದೆಯನ್ನು ಕಳೆದುಕೊಂಡ ಶ್ರೀಶಾಂತ್&zwnj;ಗೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ವಿ.ಶಾಂತಕುಮಾರನ್&zwnj; ಅವರ ಪಾರ್ಥಿವ ಶರೀರವನ್ನು ಕೊಟ್ಟಮಂಗಲಂನಲ್ಲಿರುವ ಅವರ ಪೂರ್ವಜನರ ನಿವಾಸಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಕೆಲವು ವರದಿಗಳ ಪ್ರಕಾರ, ಶ್ರೀಶಾಂತ್&zwnj; ಕುಟುಂಬದ&zwnj; ಕೆಲವು ಸದಸ್ಯರು ವಿದೇಶದಲ್ಲಿದ್ದಾರೆ. ಅವರು ಕೇರಳಕ್ಕೆ ಹಿಂದಿರುಗಿದ ನಂತರ ಕೊಟ್ಟಮಂಗಲಂನಲ್ಲಿರುವ ಪೂರ್ವಜರ ಮನೆಗೆ ಮೃತದೇಹ ಕೊಂಡೊಯ್ಯಲಿದ್ದಾರೆ ಎಂದು ಹೇಳಲಾಗಿದೆ. ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ. ವಿ.ಶಾಂತಕುಮಾರನ್&zwnj; ನಾಯರ್&zwnj; ಅವರು ಭಾರತೀಯ ಜೀವ ವಿಮಾ ನಿಗಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು.&lt;/p&gt;&lt;p&gt;ತಂದೆಯನ್ನು ಕಳೆದುಕೊಂಡ ಶ್ರೀಶಾಂತ್&zwnj; ಅವರಿಗೆ ಕ್ರಿಕೆಟ್&zwnj; ದಿಗ್ಗಜರು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 43 ವರ್ಷದ ಶ್ರೀಶಾಂತ್&zwnj; 2022 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್&zwnj;ನಿಂದ ನಿವೃತ್ತಿ ಹೊಂದಿದ್ದಾರೆ. ಅವರು ಭಾರತ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 87, 75 ಮತ್ತು 7 ವಿಕೆಟ್&zwnj;ಗಳನ್ನು ಕಬಳಿಸಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಎಸ್. ಶ್ರೀಶಾಂತ್ ಐಪಿಎಲ್ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದರು. 2015 ರಲ್ಲಿ ಕೆಳ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದರೂ ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್&zwnj;ಗೆ ಮರಳಲು ಸಾಧ್ಯವಾಗಲಿಲ್ಲ.&lt;/p&gt;&lt;p&gt;STORY | Former Indian cricketer Sreesanth&rsquo;s father dies at 89&lt;/p&gt;&lt;p&gt;V Santhakumaran Nair, father of former Indian cricketer S Sreesanth, died at a private hospital here, family sources said on Saturday. He was 89.&lt;/p&gt;&lt;p&gt;He was undergoing treatment at Lisie Hospital here and died at 9.45 pm on Friday, family sources said.&lt;/p&gt;&lt;p&gt;READ: https://t.co/jfDMoUpnkL&lt;/p&gt;&lt;p&gt;&mdash; Press Trust of India (@PTI_News) September 12, 2026&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3"/>
        </item>
        <item>
            <title><![CDATA[Cricket: ದಿಗ್ಗಜನ ಹೆಸರಿನಲ್ಲಿದ್ದ ಬಹುದೊಡ್ಡ ದಾಖಲೆ ಉಡೀಸ್‌ ಮಾಡಲ ಕೇವಲ 3 ಹೆಜ್ಜೆ ದೂರದಲ್ಲಿ ವೈಭವ್ ಸೂರ್ಯವಂಶಿ!]]></title>
            <link>https://kannada.asianetnews.com/cricket-sports/india-vs-afghanistan-t20-vaibhav-suryavanshi-playing-xi-vs-sanju-samson-3-sixes-to-break-virender-sehwag-record-bmk/articleshow-ksobwkw</link>
            <guid isPermaLink="true">https://kannada.asianetnews.com/cricket-sports/india-vs-afghanistan-t20-vaibhav-suryavanshi-playing-xi-vs-sanju-samson-3-sixes-to-break-virender-sehwag-record-bmk/articleshow-ksobwkw</guid>
            <pubDate>Sat, 12 Sep 2026 17:25:55 +0530</pubDate>
            <description><![CDATA[ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರನ ಆಯ್ಕೆ ಕುತೂಹಲ ಕೆರಳಿಸಿದೆ. 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕಣಕ್ಕಿಳಿದರೆ, ಕೇವಲ 3 ಸಿಕ್ಸರ್ ಬಾರಿಸುವ ಮೂಲಕ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವ ಸುವರ್ಣಾವಕಾಶವನ್ನು ಹೊಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1p46sdqc1gqvgx4bnat37bv,imgname-vaibhav--1788522751414.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಸಂಪೂರ್ಣವಾಗಿ ಸಜ್ಜಾಗಿದೆ. ಕ್ರಿಕೆಟ್ ಅಭಿಮಾನಿಗಳೆಲ್ಲರೂ ಅಂಗಳದಲ್ಲಿ ಯಾರ ಅಬ್ಬರ ನಡೆಯಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಪಂದ್ಯ ಆರಂಭವಾಗುವ ಮುನ್ನವೇ ಒಂದು ದೊಡ್ಡ ಸಸ್ಪೆನ್ಸ್ ಹಾಗೂ ಕುತೂಹಲ ಕ್ರಿಕೆಟ್ ಪ್ರಿಯರನ್ನು ತುದಿಕಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸಲು ನಾಯಕ ಮತ್ತು ಆಡಳಿತ ಮಂಡಳಿ ಯಾರನ್ನು ಕಣಕ್ಕಿಳಿಸಲಿದೆ? ಅನುಭವಿ ಸಂಜು ಸ್ಯಾಮ್ಸನ್ ಅವರೋ ಅಥವಾ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರೋ?&lt;/p&gt;&lt;h2&gt;&lt;strong&gt;ಮೊದಲ ಅಂತಾರಾಷ್ಟ್ರೀಯ ಪಂದ್ಯ!&lt;/strong&gt;&lt;/h2&gt;&lt;p&gt;ಒಂದು ವೇಳೆ 15 ವರ್ಷದ ಈ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಪ್ಲೇಯಿಂಗ್ XI ನಲ್ಲಿದ್ದರೆ, ಭಾರತದ ನೆಲದಲ್ಲಿ ಅವರು ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಲಿದೆ. ಅಷ್ಟೇ ಅಲ್ಲ, ಈ ಪಂದ್ಯದಲ್ಲಿ ವೈಭವ್ ಕ್ರಿಕೆಟ್ ಲೋಕದ ದಂತಕಥೆ, ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನೇ ಒಂದು ವಿಶೇಷ ದಾಖಲೆಯಲ್ಲಿ ಮೀರಿಸುವ ಸುವರ್ಣ ಅವಕಾಶವನ್ನು ಹೊಂದಿದ್ದಾರೆ.&lt;/p&gt;&lt;h3&gt;&lt;strong&gt;ಅಷ್ಟಕ್ಕೂ ವೈಭವ್ ಮಾಡಬೇಕಾಗಿರುವುದು ಇಷ್ಟೇ !&lt;/strong&gt;&lt;/h3&gt;&lt;p&gt;ಈ ಪಂದ್ಯದಲ್ಲಿ ಬ್ಯಾಟ್ ಬೀಸಿ ಕೇವಲ 3 ಸಿಕ್ಸರ್&zwnj;ಗಳನ್ನು ಬಾರಿಸುವುದು! ವೀರೇಂದ್ರ ಸೆಹ್ವಾಗ್ ಭಾರತಕ್ಕಾಗಿ ಆಡಿದ 19 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 16 ಸಿಕ್ಸರ್&zwnj;ಗಳನ್ನು ಬಾರಿಸಿದ್ದಾರೆ. ಇನ್ನೊಂದೆಡೆ, ವೈಭವ್ ಸೂರ್ಯವಂಶಿ ಇದುವರೆಗೆ ಆಡಿರುವ ಕೇವಲ 6 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲೇ 14 ಸಿಕ್ಸರ್&zwnj;ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ದೆಹಲಿಯಲ್ಲಿ ಅವರು ಇನ್ನ ಮೂರು ಸಿಕ್ಸರ್ ಬಾರಿಸಿದರೆ, ಟಿ20 ಸ್ವರೂಪದಲ್ಲಿ ಸೆಹ್ವಾಗ್ ಅವರಿಗಿಂತ ಹೆಚ್ಚು ಸಿಕ್ಸರ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.&lt;/p&gt;&lt;h3&gt;&lt;strong&gt;ನೆಕ್ಸ್ಟ್ ಲೆವೆಲ್&zwnj; ಪರ್ಪಾಮೆನ್ಸ್!&lt;/strong&gt;&lt;/h3&gt;&lt;p&gt;2026ರ ಸಾಲಿನಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅಬ್ಬರ ಬೇರೆ ಹಂತದಲ್ಲಿದೆ. ಐಪಿಎಲ್&zwnj;ನಲ್ಲಿ ಧೂಳೆಬ್ಬಿಸಿದ ನಂತರ, ಅವರು ಈ ವರ್ಷ ಭಾರತಕ್ಕಾಗಿ ಟಿ20 ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಆಡಿದ 22 ಪಂದ್ಯಗಳಲ್ಲಿ ಬರೋಬ್ಬರಿ 86 ಸಿಕ್ಸರ್&zwnj;ಗಳನ್ನು ಸಿಡಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಟಿ20 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವೈಭವ್ 5ನೇ ಸ್ಥಾನದಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಅತ್ಯಂತ ಕಡಿಮೆ ಪಂದ್ಯದಲ್ಲಿ ದೊಡ್ಡ ಸಾಧನೆ!&lt;/strong&gt;&lt;/h3&gt;&lt;p&gt;ವಿಶ್ವದ ದೊಡ್ಡ ದೊಡ್ಡ ಆಟಗಾರರಾದ ಫಿನ್ ಅಲೆನ್ (100 ಸಿಕ್ಸರ್), ನಿಕೋಲಸ್ ಪೂರನ್ (99 ಸಿಕ್ಸರ್), ರಯಾನ್ ರಿಕಲ್ಟನ್ (96 ಸಿಕ್ಸರ್) ಮತ್ತು ಮಿಚೆಲ್ ಮಾರ್ಷ್ (95 ಸಿಕ್ಸರ್) ವೈಭವ್&zwnj;ಗಿಂತ ಮುಂದಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಈ ಎಲ್ಲ ಆಟಗಾರರಿಗಿಂತ ವೈಭವ್ ಅತ್ಯಂತ ಕಡಿಮೆ ಪಂದ್ಯಗಳನ್ನು ಆಡಿ ಈ ಸಾಧನೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಸಚಿನ ದಾಖಲೆ ಉಡೀಸ್!&lt;/strong&gt;&lt;/h3&gt;&lt;p&gt;ವೈಭವ್ ಸೂರ್ಯವಂಶಿ ಅವರಿಗೆ ಇದು ಭಾರತದ ನೆಲದಲ್ಲಿ ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಸರಣಿಯಾಗಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿದ್ದ ಅವರು, ಭಾರತದ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಇತಿಹಾಸ ನಿರ್ಮಿಸಿದ್ದರು. 15 ವರ್ಷ 99 ದಿನಗಳಿದ್ದಾಗ ಚೊಚ್ಚಲ ಪಂದ್ಯವಾಡುವ ಮೂಲಕ ಅವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದರು. ಇಂಗ್ಲೆಂಡ್ ಸರಣಿಯಲ್ಲಿ ಸರಾಸರಿ ಪ್ರದರ್ಶನ ನೀಡಿದ್ದರೂ, ತದನಂತರ ನಡೆದ ಜಿಂಬಾಬ್ವೆ ಪ್ರವಾಸದಲ್ಲಿ ಎರಡು ಅರ್ಧಶತಕ ಸಿಡಿಸಿ ಸರಣಿ ಶ್ರೇಷ್ಠ (ಪ್ಲೇಯರ್ ಆಫ್ ದಿ ಸಿರೀಸ್) ಪ್ರಶಸ್ತಿ ಪಡೆದಿದ್ದರು.&lt;/p&gt;&lt;h3&gt;&lt;strong&gt;ಈಘ ಎದುರಾಗಿರಿವ ಪ್ರಶ್ನೆ ಏನು?&lt;/strong&gt;&lt;/h3&gt;&lt;p&gt;ಈಗ ತವರು ನೆಲದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ ಬ್ಯಾಟಿಂಗ್ ಮುಂದುವರಿಸಿ ಧೂಳೆಬ್ಬಿಸಲು ವೈಭವ್ ಕಾಯುತ್ತಿದ್ದಾರೆ. ಸೆಹ್ವಾಗ್ ದಾಖಲೆ ಪತನಗೊಳ್ಳುತ್ತದೆಯೇ ಮತ್ತು ವೈಭವ್ ಪ್ಲೇಯಿಂಗ್ 11ನಲ್ಲಿ ಜಾಗ ಪಡೆಯುತ್ತಾರೆಯೇ ಎಂಬುದನ್ನು ತಿಳಿಯಲು ಅಭಿಮಾನಿಗಳು ಪಂದ್ಯದ ಟಾಸ್ ವರೆಗೆ ಕಾಯಲೇಬೇಕಿದೆ.&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/india-vs-afghanistan-t20-vaibhav-suryavanshi-playing-xi-vs-sanju-samson-3-sixes-to-break-virender-sehwag-record-bmk/articleshow-ksobwkw"/>
        </item>
        <item>
            <title><![CDATA[Cricket: ಪಾಸ್‌ಪೋರ್ಟ್ ಇಲ್ಲ, ವೀಸಾನೂ ಇಲ್ಲ! ತರಕಾರಿ ಮಾರುತ್ತಿದ್ದ ಹುಡುಗನಿಗೆ ಅವಕಾಶ ಕೊಟ್ಟ ಪಾಕ್‌! ಇಂಗ್ಲೆಂಡ್‌ನಲ್ಲಿ ದಾಖಲೆ ಉಡೀಸ್!]]></title>
            <link>https://kannada.asianetnews.com/cricket-sports/pakistan-cricketer-from-vegetable-market-to-england-six-hitting-struggle-story-viral-pakistan-cricket-news-bmk/articleshow-mnk3d9u</link>
            <guid isPermaLink="true">https://kannada.asianetnews.com/cricket-sports/pakistan-cricketer-from-vegetable-market-to-england-six-hitting-struggle-story-viral-pakistan-cricket-news-bmk/articleshow-mnk3d9u</guid>
            <pubDate>Sat, 12 Sep 2026 20:01:18 +0530</pubDate>
            <description><![CDATA[&lt;p&gt;ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬಾಡಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ರಜೌಲ್ಲಾ ಮಶ್ವಾನಿ, ರಾತ್ರೋರಾತ್ರಿ ಇಂಗ್ಲೆಂಡ್&zwnj;ಗೆ ಹಾರಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್&zwnj;ನಿಂದ 9 ಸಿಕ್ಸರ್&zwnj;ಗಳನ್ನು ಸಿಡಿಸಿ, 4 ವಿಕೆಟ್ ಪಡೆದು ಇಡೀ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2b0ehz4h20zdma64bqypwkw,imgname-pakistan-player-1789223454692.jpg" type="image/jpeg" height="390" width="690"/>
            <content:encoded><![CDATA[&lt;p&gt;ಬರ್ಮಿಂಗ್ಹ್ಯಾಮ್&zwnj;ನ ಎಡ್ಜ್&zwnj;ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್&zwnj;ನಲ್ಲಿ ಇಂಗ್ಲೆಂಡ್ ವೇಗಿ ಓಲ್ಲಿ ರಾಬಿನ್ಸನ್ ಅವರ ಮಾರಕ ಸ್ವಿಂಗ್ ಬೌಲಿಂಗ್&zwnj;ಗೆ ತಲೆಯಾಗಿದ್ದ ಪಾಕಿಸ್ತಾನ, ಕೇವಲ 133 ರನ್&zwnj;ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ, ಸ್ಟಾರ್ ಬ್ಯಾಟರ್ ಜೋ ರೂಟ್ ಅವರ ಮನಮೋಹಕ शतಕದ (124 ರನ್) ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್&zwnj;ನಲ್ಲಿ 453 ರನ್&zwnj;ಗಳ ಬೃಹತ್ ಮೊತ್ತ ಪೇರಿಸಿತ್ತು.&lt;/p&gt;&lt;h2&gt;&lt;strong&gt;21ರ ಯುವಕನಿಗೆ ಅವಕಾಶ!&lt;/strong&gt;&lt;/h2&gt;&lt;p&gt;ಬೃಹತ್ ಹಿನ್ನಡೆಯಿಂದ ಮುಜುಗರಕ್ಕೊಳಗಾಗಿದ್ದ ಪಾಕಿಸ್ತಾನ ತಂಡಕ್ಕೆ 21 ವರ್ಷದ ಯುವ ಆಲ್&zwnj;ರೌಂಡರ್ ರಜೌಲ್ಲಾ ಮಶ್ವಾನಿ ಹೊಸ ಜೀವ ನೀಡಿದ್ದಾರೆ. ಇಂಗ್ಲೆಂಡ್ ಬೌಲರ್&zwnj;ಗಳ ಮೇಲೆ ಸಿಕ್ಸರ್&zwnj;ಗಳ ಸುರಿಮಳೆಗೈದ ಅವರು ಕ್ರೀಡಾಂಗಣದ ಹೊರಗಿದ್ದ ಹೋಟೆಲ್&zwnj;ನ ಗಾಜನ್ನೇ ಒಡೆದು ಜಗತ್ತನ್ನೇ ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ!&lt;/p&gt;&lt;h3&gt;&lt;strong&gt;ಬಾಡಿಗೆ ಅಂಗಡಿಯಿಂದ ಒಂದೇ ರಾತ್ರಿಯಲ್ಲಿ ಇಂಗ್ಲೆಂಡ್&zwnj;ಗೆ ಬಡ್ತಿ!&lt;/strong&gt;&lt;/h3&gt;&lt;p&gt;ರಜೌಲ್ಲಾ ಮಶ್ವಾನಿ ಅವರ ಈ ಪಯಣ ಯಾವುದೇ ಸಿನಿಮಾ ಕಥೆಗೂ ಕಡಿಮೆಯಿಲ್ಲ. ರಜೌಲ್ಲಾ ಈ ಮುನ್ನ ಯಾವುದೇ ಪ್ರಮುಖ ಲೀಗ್&zwnj;ಗಳಲ್ಲಿ ಆಡಿದ ಅನುಭವ ಹೊಂದಿರಲಿಲ್ಲ. ವಿದೇಶಕ್ಕೆ ಪ್ರಯಾಣಿಸಲು ಅವರ ಬಳಿ ಹಣವೂ ಇರಲಿಲ್ಲ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಪರ್ವತ ಪ್ರದೇಶದ ಬಾಡಿಗೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಹುಡುಗನ ಬಳಿ ಪಾಸ್&zwnj;ಪೋರ್ಟ್ ಕೂಡ ಇರಲಿಲ್ಲ.&lt;/p&gt;&lt;h3&gt;&lt;strong&gt;ರಾತ್ರೋರಾತ್ರಿ ವಿಮಾನಯಾಣ!&lt;/strong&gt;&lt;/h3&gt;&lt;p&gt;ತಂಡದ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧಿಕಾರಿಗಳು, ರಜೌಲ್ಲಾನನ್ನು ಹುಡುಕಿ ಲಾಹೋರ್&zwnj;ಗೆ ಕರೆತಂದರು. ಕೇವಲ ಒಂದೇ ದಿನದಲ್ಲಿ ಅವರ ಪಾಸ್&zwnj;ಪೋರ್ಟ್ ಹಾಗೂ ವೀಸಾ ಕ್ಲಿಯರೆನ್ಸ್ ಮುಗಿಸಿ, ರಾತ್ರೋರಾತ್ರಿ ವಿಮಾನವೇರಿಸಿ ನೇರವಾಗಿ ಇಂಗ್ಲೆಂಡ್&zwnj;ಗೆ ಕಳುಹಿಸಿಕೊಟ್ಟಿದ್ದರು!&lt;/p&gt;&lt;h3&gt;&lt;strong&gt;ಇಂಗ್ಲೆಂಡ್ ಗ್ರೌಂಡ್&zwnj;ನಲ್ಲಿ ರಜೌಲ್ಲಾ ಬಿರುಗಾಳಿ ಧಮಾಕಾ!&lt;/strong&gt;&lt;/h3&gt;&lt;p&gt;ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್&zwnj;ನಲ್ಲೇ ರಜೌಲ್ಲಾ ತಮ್ಮ ಆಲ್&zwnj;ರೌಂಡರ್ ಸಾಮರ್ಥ್ಯ ತೋರಿಸಿದರು. ಬೌಲಿಂಗ್&zwnj;ನಲ್ಲಿ ಜೋ ರೂಟ್ ಅವರ ನಿರ್ಣಾಯಕ ವಿಕೆಟ್ ಸೇರಿದಂತೆ ಮೊದಲ ಇನ್ನಿಂಗ್ಸ್&zwnj;ನಲ್ಲಿ 4 ವಿಕೆಟ್ ಕಬಳಿಸಿದರು. ಆದರೆ ನಿಜವಾದ ಜಾದೂ ನಡೆದದ್ದು ಅವರ ಬ್ಯಾಟಿಂಗ್&zwnj;ನಲ್ಲಿ!&lt;/p&gt;&lt;h3&gt;&lt;strong&gt;9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್&zwnj;!&lt;/strong&gt;&lt;/h3&gt;&lt;p&gt;ಎರಡನೇ ಇನ್ನಿಂಗ್ಸ್&zwnj;ನಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್&zwnj;ಗೆ ಇಳಿದ ರಜೌಲ್ಲಾ, ಕೇವಲ 63 ಎಸೆತಗಳಲ್ಲಿ 9 ಸಿಕ್ಸರ್&zwnj;ಗಳ ನೆರವಿನಿಂದ 81 ರನ್&zwnj;ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅಪಾಯಕಾರಿ ಬೌಲರ್ ಜೋಫ್ರಾ ಆರ್ಚರ್ ಎಸೆತಗಳಿಗೇ ಸತತ ಎರಡು ಸಿಕ್ಸರ್ ಬಾರಿಸಿದ ಅವರು, ಮೂರನೇ ದಿನದ ಕೊನೆಯಲ್ಲಿ ಲಾಗ್-ಆನ್ ಕಡೆಗೆ ಬಾರಿಸಿದ ಬೃಹತ್ ಸಿಕ್ಸರ್ ನೇರವಾಗಿ ಸ್ಟೇಡಿಯಂನ ಹೊರಗಿದ್ದ ಹೋಟೆಲ್&zwnj;ಗೆ ಅಪ್ಪಳಿಸಿತು. ಶಾಟ್&zwnj;ನ ರಭಸಕ್ಕೆ ಹೋಟೆಲ್&zwnj;ನ ಗಾಜು ಪುಡಿಪುಡಿಯಾಯಿತು! ಈ ಅದ್ಭುತ ಶಾಟ್ ನೋಡಿ ಗ್ರೌಂಡ್&zwnj;ನಲ್ಲಿದ್ದ ಜೋ ರೂಟ್ ಸೇರಿದಂತೆ ಪ್ರತಿಯೊಬ್ಬ ಆಟಗಾರನೂ ಆಘಾತಕ್ಕೊಳಗಾದರು.&lt;/p&gt;&lt;h3&gt;&lt;strong&gt;ಚೊಚ್ಚಲ ಪಂದ್ಯದಲ್ಲೇ ಸಾರ್ವಕಾಲಿಕ ವಿಶ್ವ ದಾಖಲೆ!&lt;/strong&gt;&lt;/h3&gt;&lt;p&gt;ತಮ್ಮ ಪದಾರ್ಪಣೆಯ ಪಂದ್ಯದಲ್ಲೇ ರಜೌಲ್ಲಾ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಹೆಸರು ಬರೆದಿದ್ದಾರೆ. 9ನೇ ಕ್ರಮಾಂಕದ ಸಿಕ್ಸರ್ ಕಿಂಗ್; ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಒಂದೇ ಇನ್ನಿಂಗ್ಸ್&zwnj;ನಲ್ಲಿ ಅತಿ ಹೆಚ್ಚು (9) ಸಿಕ್ಸರ್ ಬಾರಿಸಿದ ವಿಶ್ವ ದಾಖಲೆ ನಿರ್ಮಿಸಿದರು.&lt;/p&gt;&lt;p&gt;&lt;strong&gt;ಸೌಥಿ ದಾಖಲೆ ಸಮಗಟ್ಟು;&lt;/strong&gt; ಟೆಸ್ಟ್ ಚೊಚ್ಚಲ ಪಂದ್ಯದ ಒಂದೇ ಇನ್ನಿಂಗ್ಸ್&zwnj;ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನ್ಯೂಜಿಲೆಂಡ್&zwnj;ನ ಟಿಮ್ ಸೌಥಿ (9 ಸಿಕ್ಸರ್) ಅವರ ದಾಖಲೆಯನ್ನು ರಜೌಲ್ಲಾ ಸರಿಗಟ್ಟಿದ್ದಾರೆ. ಬಾಡಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಇಂದು ಇಂಗ್ಲೆಂಡ್ ಅಂಗಳದಲ್ಲಿ ಸಿಕ್ಸರ್&zwnj;ಗಳ ಸುರಿಮಳೆಗೈದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/pakistan-cricketer-from-vegetable-market-to-england-six-hitting-struggle-story-viral-pakistan-cricket-news-bmk/articleshow-mnk3d9u"/>
        </item>
        <item>
            <title><![CDATA[ಸ್ಟೀವ್ ಸ್ಮಿತ್ ಕುತಂತ್ರವನ್ನು ವಿರಾಟ್ ಕೊಹ್ಲಿ ಬಯಲು ಮಾಡಿದ್ದು ಹೀಗೆ! ಚೇತೇಶ್ವರ್ ಪೂಜಾರ ಸ್ಫೋಟಕ ಮಾಹಿತಿ ಬಹಿರಂಗ]]></title>
            <link>https://kannada.asianetnews.com/cricket-sports/it-was-pure-cheating-cheteshwar-pujara-makes-explosive-claim-on-steve-smith-2017-drs-controversy-kvn/articleshow-nmp4g11</link>
            <guid isPermaLink="true">https://kannada.asianetnews.com/cricket-sports/it-was-pure-cheating-cheteshwar-pujara-makes-explosive-claim-on-steve-smith-2017-drs-controversy-kvn/articleshow-nmp4g11</guid>
            <pubDate>Sat, 12 Sep 2026 18:45:10 +0530</pubDate>
            <description><![CDATA[2017ರ 'ಬ್ರೇನ್ ಫೇಡ್' ವಿವಾದದ ಬಗ್ಗೆ ಚೇತೇಶ್ವರ್ ಪೂಜಾರ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ಡ್ರೆಸ್ಸಿಂಗ್ ರೂಮ್&zwnj;ನಲ್ಲಿದ್ದ ಲೈವ್ ಟಿವಿ ದೃಶ್ಯಗಳನ್ನು ಬಳಸಿ ಡಿಆರ್&zwnj;ಎಸ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಇದು ಸ್ಟೀವ್ ಸ್ಮಿತ್ ಮಾಡಿದ ಪ್ರಮಾದವಲ್ಲ, ಬದಲಿಗೆ ಆಸೀಸ್ ತಂಡದ ಯೋಜಿತ ಮೋಸದ ತಂತ್ರವಾಗಿತ್ತು ಎಂದು ಪೂಜಾರ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k3g80j6s02w3vzncpvf6xewx,imgname-vk-8-1756113160409.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2017ರಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಕ್ರಿಕೆಟ್ ಜಗತ್ತು ಕಂಡ ಅತ್ಯಂತ ರೋಚಕ ಸರಣಿಗಳಲ್ಲಿ ಒಂದಾಗಿತ್ತು. ಭಾರತ 2-1 ಅಂತರದಲ್ಲಿ ಗೆದ್ದ ಈ ಸರಣಿಯಲ್ಲಿ, ಬೆಂಗಳೂರು ಟೆಸ್ಟ್&zwnj;ನಲ್ಲಿ ಸ್ಟೀವ್ ಸ್ಮಿತ್ ಭಾಗಿಯಾಗಿದ್ದ 'ಬ್ರೇನ್ ಫೇಡ್' ಘಟನೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದೀಗ, ಘಟನೆ ನಡೆದು ವರ್ಷಗಳ ನಂತರ, ಟೀಂ ಇಂಡಿಯಾದ ಮಾಜಿ ಆಟಗಾರ ಚೇತೇಶ್ವರ್ ಪೂಜಾರ ಆ ವಿವಾದದ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;ಆಕಾಶ್ ಚೋಪ್ರಾಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಪೂಜಾರ, ಆಸ್ಟ್ರೇಲಿಯಾ ತಂಡವು ಡ್ರೆಸ್ಸಿಂಗ್ ರೂಮ್&zwnj;ನಲ್ಲಿದ್ದ ಲೈವ್ ಟಿವಿ ದೃಶ್ಯಗಳನ್ನು ದುರ್ಬಳಕೆ ಮಾಡಿಕೊಂಡು ಡಿಆರ್&zwnj;ಎಸ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ನೇರವಾಗಿ ಆರೋಪಿಸಿದ್ದಾರೆ. ಬೆಂಗಳೂರು ಟೆಸ್ಟ್&zwnj;ನ ನಾಲ್ಕನೇ ಇನ್ನಿಂಗ್ಸ್&zwnj;ನಲ್ಲಿ ಭಾರತ ನೀಡಿದ್ದ 188 ರನ್&zwnj;ಗಳ ಗುರಿ ಬೆನ್ನಟ್ಟುತ್ತಿದ್ದಾಗ, ಉಮೇಶ್ ಯಾದವ್ ಬೌಲಿಂಗ್&zwnj;ನಲ್ಲಿ ಸ್ಟೀವ್ ಸ್ಮಿತ್ ಎಲ್&zwnj;ಬಿಡಬ್ಲ್ಯೂ ಬಲೆಗೆ ಬಿದ್ದರು. ಫೀಲ್ಡ್ ಅಂಪೈರ್ ಔಟ್ ಕೊಟ್ಟ ತಕ್ಷಣ, ಸ್ಮಿತ್ ನಾನ್-ಸ್ಟ್ರೈಕರ್&zwnj;ನಲ್ಲಿದ್ದ ಪೀಟರ್ ಹ್ಯಾಂಡ್ಸ್&zwnj;ಕಾಂಬ್ ಜೊತೆ ಮಾತನಾಡುವ ಬದಲು, ಡಿಆರ್&zwnj;ಎಸ್ ತೆಗೆದುಕೊಳ್ಳಬೇಕೇ ಬೇಡವೇ ಎಂದು ಡ್ರೆಸ್ಸಿಂಗ್ ರೂಮ್ ಕಡೆ ನೋಡಿ ಸನ್ನೆ ಮಾಡಿದರು.&lt;/p&gt;&lt;h2&gt;&lt;strong&gt;ಆಸೀಸ್ ಮೋಸ ಬಯಲು ಮಾಡಿದ್ದ ಕೊಹ್ಲಿ:&lt;/strong&gt;&lt;/h2&gt;&lt;p&gt;ಇದನ್ನು ಗಮನಿಸಿದ ಅಂದಿನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ತಂಡ, ತಕ್ಷಣವೇ ಅಂಪೈರ್&zwnj;ಗಳಿಗೆ ದೂರು ನೀಡಿದರು. ಅಂಪೈರ್&zwnj;ಗಳು ಮಧ್ಯಪ್ರವೇಶಿಸಿ ಸ್ಮಿತ್&zwnj;ಗೆ ರಿವ್ಯೂ ತೆಗೆದುಕೊಳ್ಳಲು ಅವಕಾಶ ನಿರಾಕರಿಸಿದರು ಮತ್ತು ಅವರನ್ನು ಪೆವಿಲಿಯನ್&zwnj;ಗೆ ಕಳುಹಿಸಿದರು. ಪಂದ್ಯದ ನಂತರ ಮಾತನಾಡಿದ್ದ ಸ್ಮಿತ್, ಡ್ರೆಸ್ಸಿಂಗ್ ರೂಮ್ ಕಡೆ ನೋಡಿದ್ದು ತನ್ನಿಂದಾದ ಪ್ರಮಾದ, ಅದೊಂದು 'ಬುದ್ಧಿಶೂನ್ಯ ನಡೆ' (brain fade) ಎಂದು ಹೇಳಿಕೊಂಡಿದ್ದರು. ಆದರೆ ಇದು ಕೇವಲ ಪ್ರಮಾದವಾಗಿರಲಿಲ್ಲ, ಬದಲಿಗೆ ಆಸ್ಟ್ರೇಲಿಯಾ ತಂಡದ ಯೋಜಿತ ತಂತ್ರವಾಗಿತ್ತು ಎಂದು ಪೂಜಾರ ಈಗ ಬಯಲು ಮಾಡಿದ್ದಾರೆ.&lt;/p&gt;&lt;p&gt;&quot;ಆಸ್ಟ್ರೇಲಿಯಾದ ಡಿಆರ್&zwnj;ಎಸ್ ನಿರ್ಧಾರಗಳನ್ನು ನೋಡಿದರೆ, ಅವೆಲ್ಲವೂ ಪಕ್ಕಾ ಆಗಿರುತ್ತಿದ್ದವು. ರಿವ್ಯೂ ತೆಗೆದುಕೊಳ್ಳಬೇಕೋ, ಬೇಡವೋ ಎಂಬುದು ಅವರಿಗೆ ಖಚಿತವಾಗಿ ಗೊತ್ತಿರುತ್ತಿತ್ತು. ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್&zwnj;ನಲ್ಲಿ ಲೈವ್ ಫೀಡ್ ಇತ್ತು ಎಂಬುದು ನಮಗೆ ಆಗ ತಿಳಿದಿರಲಿಲ್ಲ. ಸಾಮಾನ್ಯವಾಗಿ ಡ್ರೆಸ್ಸಿಂಗ್ ರೂಮ್&zwnj;ನಲ್ಲಿ ಟಿವಿ ದೃಶ್ಯಗಳು ಕೆಲವು ಸೆಕೆಂಡ್&zwnj;ಗಳಷ್ಟು ತಡವಾಗಿ ಬರುತ್ತವೆ. ಆದರೆ ಬೆಂಗಳೂರು ಟೆಸ್ಟ್&zwnj;ನಲ್ಲಿ ಅವರಿಗೆ ಯಾವುದೇ ಡಿಲೇ ಇಲ್ಲದ ಲೈವ್ ದೃಶ್ಯಗಳು ಸಿಗುತ್ತಿದ್ದವು. ಯಾರಿಗೂ ಗೊತ್ತಾಗದಂತೆ ಡ್ರೆಸ್ಸಿಂಗ್ ರೂಮ್ ಕಡೆ ನೋಡಿ, ಅಲ್ಲಿಂದ ಸಿಗುವ ಸೂಚನೆ ಆಧರಿಸಿ ಅವರು ರಿವ್ಯೂ ತೆಗೆದುಕೊಳ್ಳುತ್ತಿದ್ದರು,&quot; ಎಂದು ಪೂಜಾರ ವಿವರಿಸಿದ್ದಾರೆ.&lt;/p&gt;&lt;h3&gt;&lt;strong&gt;ಆಸೀಸ್ ಮಾಡಿದ್ದು ಶುದ್ದ ಮೋಸ&lt;/strong&gt;&lt;/h3&gt;&lt;p&gt;&quot;ಇದು ಶುದ್ಧ ಮೋಸವಾಗಿತ್ತು. ಇದನ್ನೇ ಬೇರೆ ತಂಡ ಮಾಡಿದ್ದರೆ, ಆಸ್ಟ್ರೇಲಿಯಾ ದೊಡ್ಡ ರಂಪಾಟವನ್ನೇ ಮಾಡುತ್ತಿತ್ತು,&quot; ಎಂದು ಪೂಜಾರ ಹೇಳಿದ್ದಾರೆ. 2012ರಲ್ಲಿ ಇಂಗ್ಲೆಂಡ್ ಸರಣಿ ಗೆದ್ದ ನಂತರ, ಭಾರತವನ್ನು ಭಾರತದಲ್ಲೇ ಸೋಲಿಸುವ ಸಾಮರ್ಥ್ಯವಿದ್ದ ಮೊದಲ ತಂಡವೆಂದರೆ ಅದು ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡವಾಗಿತ್ತು. ಸರಣಿ ಗೆಲ್ಲಲು ಅವರು ಯಾವುದೇ ಹಂತಕ್ಕೆ ಹೋಗಲು ಸಿದ್ಧರಿದ್ದರು. ಆಟದ ತೀವ್ರತೆಯಿಂದಾಗಿ ತಾನೂ ಕೂಡ ಆ ಸರಣಿಯಲ್ಲಿ ಸ್ಲೆಡ್ಜಿಂಗ್ ಮಾಡಿದ್ದೆ ಎಂದು ಪೂಜಾರ ಒಪ್ಪಿಕೊಂಡಿದ್ದಾರೆ. ಪುಣೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಸೋತಿದ್ದ ಭಾರತ, ಬೆಂಗಳೂರಿನಲ್ಲಿ 75 ರನ್&zwnj;ಗಳ ಜಯ ಸಾಧಿಸಿ ಸರಣಿಗೆ ಕಮ್&zwnj;ಬ್ಯಾಕ್ ಮಾಡಿತ್ತು. ಅಂತಿಮವಾಗಿ 2-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/it-was-pure-cheating-cheteshwar-pujara-makes-explosive-claim-on-steve-smith-2017-drs-controversy-kvn/articleshow-nmp4g11"/>
        </item>
        <item>
            <title><![CDATA[BCCI ಹೊಸ ರೂಲ್ಸ್; ರೋಹಿತ್, ಕೊಹ್ಲಿಗೆ ಬಿಗ್ ಶಾಕ್; ರೆಡಿಯಾದ ಮಹಾಸಂಚಿನ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ!]]></title>
            <link>https://kannada.asianetnews.com/cricket-sports/bcci-new-rules-central-contract-match-availability-fitness-rohit-sharma-virat-kohli-big-shock-team-india-bmk/articleshow-oodetx9</link>
            <guid isPermaLink="true">https://kannada.asianetnews.com/cricket-sports/bcci-new-rules-central-contract-match-availability-fitness-rohit-sharma-virat-kohli-big-shock-team-india-bmk/articleshow-oodetx9</guid>
            <pubDate>Sat, 12 Sep 2026 21:48:13 +0530</pubDate>
            <description><![CDATA[&lt;p&gt;BCCI New Rules: ಬಿಸಿಸಿಐ ತನ್ನ ವಾರ್ಷಿಕ ಸೆಂಟ್ರಲ್ ಕಾಂಟ್ರಾಕ್ಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಸಜ್ಜಾಗಿದೆ. ಇದು ಆಯ್ದ ಸರಣಿಗಳಲ್ಲಿ ಮಾತ್ರ ಆಡುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಮೇಲೆ ಹೇಗೆ ಗಂಭೀರ ಪರಿಣಾಮ ಬೀರಬಹುದು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2b6gz9x4hv390a02hq5avcd,imgname-cricket-roko--1789229825341.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಬಹುನಿರೀಕ್ಷಿತ ಮೂರು ಪಂದ್ಯಗಳ T20 ಅಂತರರಾಷ್ಟ್ರೀಯ ಸರಣಿಯ ಕಾವಿನ ನಡುವೆಯೇ ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಮಹಾ ಸಂಚಲನವೊಂದು ಸೃಷ್ಟಿಯಾಗಿದೆ. ಸರಣಿಯ ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐ (BCCI) ಒಂದು ಪ್ರಮುಖ ನಿಯಮವನ್ನು ಬದಲಾಯಿಸಲು ನಿರ್ಧರಿಸಿದ್ದು, ಇದರ ಅತಿದೊಡ್ಡ ಪೆಟ್ಟು ಭಾರತೀಯ ಕ್ರಿಕೆಟ್&zwnj;ನ ಇಬ್ಬರು ದಂತಕಥೆಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬೀಳುವ ಲಕ್ಷಣಗಳು ಎದ್ದು ಕಾಣುತ್ತಿವೆ.&lt;/p&gt;&lt;h2&gt;&lt;strong&gt;ಬಿಸಿಸಿಐ ಹೊಸ ನಿಯಮವೇನು?&lt;/strong&gt;&lt;/h2&gt;&lt;p&gt;ಬಿಸಿಸಿಐ ಆಟಗಾರರಿಗೆ ನೀಡಲಾಗುವ ವಾರ್ಷಿಕ ಸೆಂಟ್ರಲ್ ಕಾಂಟ್ರಾಕ್ಟ್ (ಕೇಂದ್ರ ಒಪ್ಪಂದ) ನಿಯಮಾವಳಿಗಳಲ್ಲಿ ಭಾರಿ ಬದಲಾವಣೆಗೆ ಮುಂದಾಗಿದೆ. ಇಲ್ಲಿಯವರೆಗೆ ಆಟಗಾರರ ಹಿರಿತನ, ಅನುಭವ ಮತ್ತು ಅವರ ಬ್ರಾಂಡ್ ಮೌಲ್ಯದ ಆಧಾರದ ಮೇಲೆ ಕಾಂಟ್ರಾಕ್ಟ್ ಗ್ರೇಡ್&zwnj;ಗಳನ್ನು (ಎ+, ಎ, ಬಿ, ಸಿ) ನೀಡಲಾಗುತ್ತಿತ್ತು. ಆದರೆ ಈಗ ಬಿಸಿಸಿಐ 'ಪಂದ್ಯ ಲಭ್ಯತೆ' (Match Availability) ಹಾಗೂ 'ಆಟಗಾರರ ಫಿಟ್&zwnj;ನೆಸ್' ಅನ್ನು ಪ್ರಮುಖ ಷರತ್ತಾಗಿ ಪರಿಗಣಿಸಲು ಸಜ್ಜಾಗಿದೆ. ಸರಳವಾಗಿ ಹೇಳುವುದಾದರೆ, ಒಬ್ಬ ಆಟಗಾರ ಋತುವೊಂದರಲ್ಲಿ ಎಷ್ಟು ಪಂದ್ಯಗಳಲ್ಲಿ ಫಿಟ್ ಆಗಿದ್ದು ತಂಡಕ್ಕೆ ಲಭ್ಯವಿದ್ದಾನೆ ಎಂಬುದರ ಆಧಾರದ ಮೇಲೆ ಮಾತ್ರವೇ ಅವರಿಗೆ ವಾರ್ಷಿಕ ಒಪ್ಪಂದ ನೀಡಲಾಗುತ್ತದೆ.&lt;/p&gt;&lt;h3&gt;&lt;strong&gt;ಮಂಡಳಿಯ ಈ ಬಿಗಿ ಪ್ಲಾನ್&zwnj;ಗೆ ಕಾರಣವೇನು?&lt;/strong&gt;&lt;/h3&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಸತತವಾಗಿ ಗಾಯದ ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಪ್ರಮುಖ ಅಂತಾರಾಷ್ಟ್ರೀಯ ಸರಣಿ ಹಾಗೂ ಟೂರ್ನಿಗಳಿಂದ ಹೊರಗುಳಿಯುತ್ತಿದ್ದಾರೆ. ಇದನ್ನು ತೀವ್ರವಾಗಿ ಪರಿಗಣಿಸಿರುವ ಮಂಡಳಿ, ಆಟಗಾರರು ರಾಷ್ಟ್ರೀಯ ತಂಡಕ್ಕಾಗಿ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಆಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲು ಬಯಸಿದೆ. ಈ ಹಿನ್ನೆಲೆಯಲ್ಲಿ, ಒಪ್ಪಂದವನ್ನು ಉಳಿಸಿಕೊಳ್ಳಲು ಅಥವಾ ಉನ್ನತ ಶ್ರೇಣಿ ಪಡೆಯಲು ಒಬ್ಬ ಆಟಗಾರ ಋತುವಿನಲ್ಲಿ ಆಡಲೇಬೇಕಾದ 'ಕನಿಷ್ಠ ಪಂದ್ಯಗಳ ಸಂಖ್ಯೆ'ಯ ಮಾನದಂಡವನ್ನು ನಿಗದಿಪಡಿಸಲು ಬಿಸಿಸಿಐ ಚರ್ಚೆ ನಡೆಸುತ್ತಿದೆ.&lt;/p&gt;&lt;h3&gt;&lt;strong&gt;ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಬಿಗ್ ಶಾಕ್ ಯಾಕೆ?&lt;/strong&gt;&lt;/h3&gt;&lt;p&gt;ಈ ಹೊಸ ನಿಯಮ ಜಾರಿಗೆ ಬಂದರೆ, ಅದರ ಅತಿ ಹೆಚ್ಚಿನ ಪರಿಣಾಮ ಎದುರಿಸಬೇಕಿರುವುದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಇಬ್ಬರೂ ದಂತಕಥೆಗಳು ಈಗಾಗಲೇ ಕೆಲವು ಸ್ವರೂಪಗಳಿಂದ ದೂರವುಳಿದಿದ್ದು, ವರ್ಷದಲ್ಲಿ ಆಯ್ಕೆ ಮಾಡಿದ ಕೇವಲ 2-3 ಪ್ರಮುಖ ಸರಣಿಗಳಲ್ಲಿ ಮಾತ್ರವೇ ಕಣಕ್ಕಿಳಿಯುತ್ತಿದ್ದಾರೆ. ಇಡೀ ಋತುವಿನಲ್ಲಿ ಆಡುವ ಪಂದ್ಯಗಳ ಸಂಖ್ಯೆ ಕಡಿಮೆಯಿರುವುದರಿಂದ, ಬಿಸಿಸಿಐ ನಿಗದಿಪಡಿಸಲಿರುವ 'ಕನಿಷ್ಠ ಪಂದ್ಯಗಳ ಆಟದ ಸಂಖ್ಯೆ'ಯನ್ನು ಇಬ್ಬರಿಗೂ ತಲುಪಲು ಸಾಧ್ಯವಾಗದಿರಬಹುದು.&lt;/p&gt;&lt;h3&gt;&lt;strong&gt;ಕಂಗಾಲಾದ ಅಭಿಮಾನಿಗಳು!&lt;/strong&gt;&lt;/h3&gt;&lt;p&gt;ಬಿಸಿಸಿಐ ಪ್ರಸ್ತುತ ಈ ಕಟ್ಟುನಿಟ್ಟಿನ ನಿಯಮದ ಅಂತಿಮ ರೂಪುರೇಷೆಯ ಮೇಲೆ ಕೆಲಸ ಮಾಡುತ್ತಿದೆ. ಒಂದು ವೇಳೆ ಈ ನಿಯಮ ಜಾರಿಯಾದರೆ, ಹಿರಿತನದ ಆಧಾರದಲ್ಲಿ ಉನ್ನತ ಒಪ್ಪಂದ ಪಡೆಯುತ್ತಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸೆಂಟ್ರಲ್ ಕಾಂಟ್ರಾಕ್ಟ್&zwnj;ನ ಕೆಳ ಶ್ರೇಣಿಗೆ ತಳ್ಳಲ್ಪಡುವ ಅಥವಾ ಒಪ್ಪಂದದಿಂದಲೇ ಹೊರಗುಳಿಯುವ ಭೀತಿ ಎದುರಾಗಿದೆ. ದೆಹಲಿ T20 ಪಂದ್ಯದ ಹೊಸ್ತಿಲಲ್ಲೇ ಹೊರಬಿದ್ದಿರುವ ಈ ಸುದ್ದಿ ಅಭಿಮಾನಿಗಳಲ್ಲಿ ತೀವ್ರ ಕಂಗಾಲನ್ನು ಉಂಟುಮಾಡಿದೆ.&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/bcci-new-rules-central-contract-match-availability-fitness-rohit-sharma-virat-kohli-big-shock-team-india-bmk/articleshow-oodetx9"/>
        </item>
        <item>
            <title><![CDATA[IND vs AFG 1st T20I: ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ...!]]></title>
            <link>https://kannada.asianetnews.com/gallery/cricket-sports/india-vs-afghanistan-1st-t20-vaibhav-sooryavanshi-abhishek-sharma-set-to-open-kvn-pkdluak</link>
            <guid isPermaLink="true">https://kannada.asianetnews.com/gallery/cricket-sports/india-vs-afghanistan-1st-t20-vaibhav-sooryavanshi-abhishek-sharma-set-to-open-kvn-pkdluak</guid>
            <pubDate>Sat, 12 Sep 2026 17:00:55 +0530</pubDate>
            <description><![CDATA[&lt;p&gt;ನವದೆಹಲಿ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇದೇ ಸೆಪ್ಟೆಂಬರ್ 13ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1fwtkjcrh4pm4h6ppt3wmyh,imgname-vaibhav-sooryavanshi-1788313685580.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇದೇ ಸೆಪ್ಟೆಂಬರ್ 13ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.&lt;/p&gt;&lt;img&gt;&lt;p&gt;ಭಾರತ-ಆಫ್ಘಾನಿಸ್ತಾನ ನಡುವಿನ ಟಿ20 ಸರಣಿಯ ಮೂರು ಪಂದ್ಯಗಳು ಇಲ್ಲಿನ ಅರುಣ್&zwnj; ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಏಷ್ಯನ್ ಗೇಮ್ಸ್&zwnj; ಮುನ್ನ ನಡೆಯಲಿರುವ ಈ ಟೂರ್ನಿಯು ಹಲವು ವಿಚಾರಗಳಿಗೆ ಮಹತ್ವದ್ದೆನಿಸಿಕೊಂಡಿದೆ. ಇದೀಗ ಆಫ್ಘಾನಿಸ್ತಾನ ಎದುರಿನ ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೇಗಿರಲಿದೆ? ಯಾರಿಗೆಲ್ಲಾ ಸ್ಥಾನ ಸಿಗಬಹುದು ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಆರಂಭಿಕರಾಗಿ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಈ ಇಬ್ಬರು ಸ್ಪೋಟಕ ಆರಂಭಿಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾದಲ್ಲಿ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;img&gt;&lt;p&gt;ಜಿಂಬಾಬ್ವೆ ಎದುರಿನ ಸರಣಿಯಿಂದ ಸಂಜು ಸ್ಯಾಮ್ಸನ್ ಹೊರಗುಳಿದಿದ್ದರು. ಇದೀಗ ಆಫ್ಘಾನಿಸ್ತಾನ ಎದುರಿನ ಸರಣಿಯಲ್ಲಿ ಸಂಜು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸ್ಥಾನ ಪಡೆಯಲಿದ್ದಾರೆ. ಇಶಾನ್ ಕಿಶನ್ ಇತ್ತೀಚೆಗಷ್ಟೇ ದುಲೀಪ್ ಟ್ರೋಫಿ ಫೈನಲ್&zwnj;ನಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದರು.&lt;/p&gt;&lt;img&gt;&lt;p&gt;ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಐದನೇ ಹಾಗೂ ಉಪನಾಯಕ ತಿಲಕ್ ವರ್ಮಾ ಆರನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಶಿವಂ ದುಬೆ ಅವರ ಸೆಲೆಕ್ಷನ್ ವಿಚಾರದಲ್ಲಿ ಟೀಮ್ ಮ್ಯಾನೇಜ್&zwnj;ಮೆಂಟ್ ಕೊಂಚ ತಲೆಕೆಡಿಸಿಕೊಂಡಂತಿದೆ.&lt;/p&gt;&lt;img&gt;&lt;p&gt;ಹೌದು, ಇತ್ತೀಚಿಗಿನ ಕೆಲ ಪಂದ್ಯದಲ್ಲಿ ಶಿವಂ ದುಬೆ ಸ್ಥಿರ ಪ್ರದರ್ಶನ ತೋರಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಹೀಗಾಗಿ ದುಬೆಗೆ ವಿಶ್ರಾಂತಿ ನೀಡಿ ಮತ್ತೋರ್ವ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಹೀಗಾದಲ್ಲಿ ತಂಡ ಮತ್ತಷ್ಟು ಸಮತೋಲಿತವಾಗಿ ಕಂಡು ಬರಲಿದೆ.&lt;/p&gt;&lt;p&gt;ಇನ್ನುಳಿದಂತೆ 8ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್, ಆ ಬಳಿಕ ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಹಾಗೂ ತಜ್ಞ ಸ್ಪಿನ್ನರ್ ರೂಪದಲ್ಲಿ ವರುಣ್ ಚಕ್ರವರ್ತಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಮೇಲ್ನೋಟಕ್ಕೆ ಬೌಲಿಂಗ್ ವಿಭಾಗ ಕೂಡಾ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದೆ.&lt;/p&gt;&lt;img&gt;&lt;p&gt;ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/india-vs-afghanistan-1st-t20-vaibhav-sooryavanshi-abhishek-sharma-set-to-open-kvn-pkdluak"/>
        </item>
        <item>
            <title><![CDATA[ಸಾರ್ವಕಾಲಿಕ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ರಾಹುಲ್ ದ್ರಾವಿಡ್‌..! ಕೊಹ್ಲಿ, ಪಾಂಟಿಂಗ್‌ರನ್ನೇ ಹಿಂದಿಕ್ಕಿದ ಈ ಲೆಜೆಂಡ್..!]]></title>
            <link>https://kannada.asianetnews.com/cricket-sports/rahul-dravid-picks-ms-dhoni-as-the-greatest-captain-in-cricket-history-kohli-misses-out-kvn/articleshow-swsm64y</link>
            <guid isPermaLink="true">https://kannada.asianetnews.com/cricket-sports/rahul-dravid-picks-ms-dhoni-as-the-greatest-captain-in-cricket-history-kohli-misses-out-kvn/articleshow-swsm64y</guid>
            <pubDate>Sat, 12 Sep 2026 13:51:37 +0530</pubDate>
            <description><![CDATA[ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ ಯಾರೆಂದು ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ, ಇಮ್ರಾನ್ ಖಾನ್, ಕ್ಲೈವ್ ಲಾಯ್ಡ್&zwnj;ರಂತಹ ದಿಗ್ಗಜರನ್ನು ಹಿಂದಿಕ್ಕಿ, ಮೂರು ಐಸಿಸಿ ಟ್ರೋಫಿ ಗೆದ್ದ ಎಂ.ಎಸ್. ಧೋನಿಯನ್ನು ಅವರು ತಮ್ಮ ಆಯ್ಕೆಯಾಗಿ ಹೆಸರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcpz1wj0jv1nenq74c6xqgb,imgname-rahul-dravid-1783911909266.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ, ಟೀಂ ಇಂಡಿಯಾದ ಮಾಜಿ ಕೋಚ್ ಹಾಗೂ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್, ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ ಯಾರು ಅನ್ನೋದನ್ನು ತಿಳಿಸಿದ್ದಾರೆ. ಕ್ರಿಕ್&zwnj;ಇನ್ಫೋ ಆಯೋಜಿಸಿದ್ದ 'ವಿನ್ನರ್ ಸ್ಟೇಯ್ಸ್ ಆನ್' ಅನ್ನೋ ಗೇಮ್&zwnj;ನಲ್ಲಿ ದ್ರಾವಿಡ್ ತಮ್ಮ ಆಯ್ಕೆಯನ್ನು ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾಪ್ಟನ್&zwnj;ಗಳು, ವಿರಾಟ್ ಕೊಹ್ಲಿ, ಪಾಕಿಸ್ತಾನದ ಇಮ್ರಾನ್ ಖಾನ್ ಎಲ್ಲರನ್ನೂ ಹಿಂದಿಕ್ಕಿ ಎಂ.ಎಸ್. ಧೋನಿ, ದ್ರಾವಿಡ್ ಪಟ್ಟಿಯಲ್ಲಿ ನಂಬರ್ 1 ಆಗಿ ಹೊರಹೊಮ್ಮಿದ್ದಾರೆ.&lt;/p&gt;&lt;h2&gt;&lt;strong&gt;ದಿಗ್ಗಜರನ್ನು ಹಿಂದಿಕ್ಕಿದ್ದ ವಿರಾಟ್ ಕೊಹ್ಲಿ&lt;/strong&gt;&lt;/h2&gt;&lt;p&gt;ಹಲವು ಹಂತಗಳಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ, ವಿರಾಟ್ ಕೊಹ್ಲಿ ಅವರು ಸ್ಟೀವ್ ಸ್ಮಿತ್, ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾರನ್ನು ಹಿಂದಿಕ್ಕಿ ಮುನ್ನಡೆದಿದ್ದರು. ಆದರೆ, ಮುಂದಿನ ಸುತ್ತಿನಲ್ಲಿ ದ್ರಾವಿಡ್, ಕೊಹ್ಲಿಗಿಂತ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್&zwnj;ರನ್ನು ಆಯ್ಕೆ ಮಾಡಿದರು. ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಭಾರತದ ಕ್ಯಾಪ್ಟನ್ ಕೊಹ್ಲಿ ಆಗಿದ್ದರೂ, 1992ರಲ್ಲಿ ಪಾಕಿಸ್ತಾನಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟ ಇಮ್ರಾನ್ ಖಾನ್ ನಾಯಕತ್ವಕ್ಕೆ ದ್ರಾವಿಡ್ ಮಣೆ ಹಾಕಿದರು. ಕೊಹ್ಲಿ 213 ಪಂದ್ಯಗಳಲ್ಲಿ 135 ಗೆಲುವು ಸಾಧಿಸಿದ್ದರೆ, ಇಮ್ರಾನ್ 187 ಪಂದ್ಯಗಳಲ್ಲಿ 89 ಗೆಲುವು ದಾಖಲಿಸಿದ್ದರು.&lt;/p&gt;&lt;h3&gt;&lt;strong&gt;ಧೋನಿ ಶ್ರೇಷ್ಠ ಕ್ಯಾಪ್ಟನ್ ಎಂದ ದ್ರಾವಿಡ್&lt;/strong&gt;&lt;/h3&gt;&lt;p&gt;ಆದರೆ, ಇಮ್ರಾನ್ ಖಾನ್&zwnj;ರ ಪಾರುಪತ್ಯ ಮುಂದಿನ ಸುತ್ತಿನಲ್ಲಿ ಕೊನೆಗೊಂಡಿತು. ದ್ರಾವಿಡ್, ಇಮ್ರಾನ್ ಖಾನ್&zwnj;ಗಿಂತ ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕ ಎಂ.ಎಸ್. ಧೋನಿಯನ್ನೇ ಆಯ್ಕೆ ಮಾಡಿದರು. ಅಂತಿಮ ಹಣಾಹಣಿ ಧೋನಿ ಮತ್ತು ವೆಸ್ಟ್ ಇಂಡೀಸ್&zwnj;ಗೆ ಮೊದಲ ಎರಡು ವಿಶ್ವಕಪ್&zwnj;ಗಳನ್ನು ಗೆದ್ದುಕೊಟ್ಟ ಕ್ಲೈವ್ ಲಾಯ್ಡ್ ನಡುವೆ ಇತ್ತು. ಆದರೆ ಇಲ್ಲೂ ಕೂಡ ದ್ರಾವಿಡ್, ಕ್ಲೈವ್ ಲಾಯ್ಡ್&zwnj;ಗಿಂತ ಎಂ.ಎಸ್. ಧೋನಿಗೇ ತಮ್ಮ ಮತ ಹಾಕಿದರು.&lt;/p&gt;&lt;p&gt;ಭಾರತಕ್ಕೆ ಮೂರು ಐಸಿಸಿ ವೈಟ್-ಬಾಲ್ ಟ್ರೋಫಿಗಳನ್ನು (2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್, 2013 ಚಾಂಪಿಯನ್ಸ್ ಟ್ರೋಫಿ) ಗೆದ್ದುಕೊಟ್ಟ ಏಕೈಕ ನಾಯಕ ಧೋನಿ. 332 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 178 ಗೆಲುವುಗಳನ್ನು ದಾಖಲಿಸಿರುವ ಧೋನಿ, ಭಾರತವನ್ನು ಮೊದಲ ಬಾರಿಗೆ ಟೆಸ್ಟ್ ರ&zwj;್ಯಾಂಕಿಂಗ್&zwnj;ನಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದರು. ಆರಂಭಿಕ ಸುತ್ತುಗಳಲ್ಲಿ ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಕೇನ್ ವಿಲಿಯಮ್ಸನ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿದ್ದರು. ಆದರೆ ದ್ರಾವಿಡ್, ಸ್ಮಿತ್&zwnj;ಗಿಂತ ರಿಕಿ ಪಾಂಟಿಂಗ್&zwnj;ರನ್ನು, ಹಾಗೂ ಪಾಂಟಿಂಗ್&zwnj;ಗಿಂತ ಸ್ಟೀವ್ ವಾರನ್ನು ಉತ್ತಮ ಕ್ಯಾಪ್ಟನ್&zwnj;ಗಳೆಂದು ಆಯ್ಕೆ ಮಾಡಿದರು.&lt;/p&gt;&lt;p&gt;Rahul Dravid picks &quot;MS Dhoni as the Top International Captain&quot; pic.twitter.com/uXqmymBtW4&lt;/p&gt;&lt;p&gt;&mdash;  (@Shebas_10dulkar) September 12, 2026&lt;/p&gt;&lt;p&gt;&lt;/p&gt;&lt;p&gt;ಇನ್ನು ರಾಹುಲ್ ದ್ರಾವಿಡ್ ಸ್ವತಃ ಟೀಂ ಇಂಡಿಯಾ ನಾಯಕರಾಗಿ ಹಲವು ಸಾಧನೆ ಮಾಡಿದ್ದಾರೆ. ಕ್ರಿಕೆಟ್&zwnj;ಗೆ ವಿದಾಯ ಹೇಳಿದ ಬಳಿಕ ಟೀಂ ಇಂಡಿಯಾ ಹೆಡ್&zwnj; ಕೋಚ್ ಆಗಿ 2024ರಲ್ಲಿ ಭಾರತ ತಂಡವು ದಶಕದ ಬಳಿಕ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/rahul-dravid-picks-ms-dhoni-as-the-greatest-captain-in-cricket-history-kohli-misses-out-kvn/articleshow-swsm64y"/>
        </item>
        <item>
            <title><![CDATA[Cricket: ಭಾರತದಲ್ಲಿ ಪತ್ನಿ ಸಾವು, ಕೊನೆಯ ಮಾತು ನೆನೆದು ಕಣ್ಣೀರು ಸುರಿಸಿದ ವಾಸಿಂ ಅಕ್ರಮ್!]]></title>
            <link>https://kannada.asianetnews.com/cricket-sports/wasim-akram-wife-huma-death-last-words-emotional-story-chennai-hospital-india-humanity-pakistan-cricket-legend-bmk/articleshow-x7z7epp</link>
            <guid isPermaLink="true">https://kannada.asianetnews.com/cricket-sports/wasim-akram-wife-huma-death-last-words-emotional-story-chennai-hospital-india-humanity-pakistan-cricket-legend-bmk/articleshow-x7z7epp</guid>
            <pubDate>Fri, 11 Sep 2026 16:03:33 +0530</pubDate>
            <description><![CDATA[&lt;p&gt;ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಾಸಿಂ ಅಕ್ರಮ್, ತಮ್ಮ ಮೊದಲ ಪತ್ನಿ ಹುಮಾ ಅವರ ಸಾವಿನ ನೋವನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಚಿಕಿತ್ಸೆಗಾಗಿ ಭಾರತದ ಚೆನ್ನೈಗೆ ಬಂದಾಗ ಪತ್ನಿ ಕೊನೆಯುಸಿರೆಳೆದಿದ್ದು, ವೀಸಾ ಇಲ್ಲದಿದ್ದರೂ ಭಾರತೀಯ ಅಧಿಕಾರಿಗಳು ತೋರಿದ ಮಾನವೀಯತೆಯನ್ನು ಅವರು ಸ್ಮರಿಸಿದ್ದಾರೆ. ಪತ್ನಿಯ ಕೊನೆಯ ಮಾತುಗಳನ್ನು ನೆನೆದು ಅವರು ಭಾವುಕರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m280cr6acx8r1wc7t0m45ndr,imgname-wasim-akram--1789122732234.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟ್ ಮೈದಾನದಲ್ಲಿ ಎಂತಹ ಬಲಿಷ್ಠ ಬ್ಯಾಟರ್&zwnj;ಗಳನ್ನೂ ತಮ್ಮ ಭೀಕರ ಸ್ವಿಂಗ್ ಬೌಲಿಂಗ್&zwnj;ನಿಂದ ನಡುಗಿಸುತ್ತಿದ್ದ ಪಾಕಿಸ್ತಾನದ ವೇಗದ ದಂತಕಥೆ ವಾಸಿಂ ಅಕ್ರಮ್, ಜೀವನದ ಅತಿ ದೊಡ್ಡ ಪರೀಕ್ಷೆಯಲ್ಲಿ ತೀವ್ರವಾಗಿ ಸೋತುಹೋಗಿದ್ದರು. ಕ್ರಿಕೆಟ್ ಲೋಕದ ಸುಲ್ತಾನ್ ಎಂದೇ ಪ್ರಸಿದ್ಧರಾಗಿದ್ದ ಅಕ್ರಮ್, ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ದುರಂತ ಮತ್ತು ನೋವು ಯಾರ ಕಣ್ಣಿನಲ್ಲೂ ನೀರು ತರಿಸುವಂತದ್ದು. ಇತ್ತೀಚೆಗೆ ಪಾಕಿಸ್ತಾನದ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ತಮ್ಮ ಮೊದಲ ಪತ್ನಿ ಹುಮಾ ಅವರ ಕೊನೆಯ ಕ್ಷಣಗಳನ್ನು ಹಾಗೂ ಅವರು ಆಡಿದ ಕೊನೆಯ ಮಾತುಗಳನ್ನು ನೆನೆದು ವೇದಿಕೆಯಲ್ಲೇ ಧಸಧಸ ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮಕ್ಕಳ ಭವಿಷ್ಯ ಮತ್ತು ಪತ್ನಿಯ ಕೊನೆಯ ಮಾತುಗಳು!&lt;/strong&gt;&lt;/h2&gt;&lt;p&gt;ಕಾರ್ಯಕ್ರಮದ ನಿರೂಪಕರು ಹುಮಾ ಅವರ ಬಗ್ಗೆ ಪ್ರಶ್ನಿಸಿದಾಗ, ವಾಸಿಂ ಅಕ್ರಮ್ ತಮ್ಮ ಭಾವನೆಗಳನ್ನು ತಡೆದುಕೊಳ್ಳಲಾಗದೆ ಭಾವುಕರಾದರು. &quot;ಹುಮಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ, ನನಗೆ ಏನಾದರೂ ಸಂಭವಿಸಿದರೆ ನನ್ನ ಮುದ್ದು ಮಕ್ಕಳಿಗೆ ಏನಾಗುತ್ತದೆ? ಅವರ ಗತಿ ಏನು? ಎಂದು ನನ್ನಲ್ಲಿ ಕೇಳಿದ್ದಳು. ಪ್ರಪಂಚದ ಯಾವುದೇ ತಾಯಿಯೂ ತನ್ನ ಮಕ್ಕಳ ಬಗ್ಗೆ ಇದನ್ನೇ ಯೋಚಿಸುತ್ತಾಳೆ. ಅವಳ ಆ ಮಾತುಗಳು ನನ್ನ ತಲೆಯಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ&quot; ಎಂದು ಅಕ್ರಮ್ ನೆನಪಿಸಿಕೊಂಡರು.&lt;/p&gt;&lt;p&gt;ಪತ್ನಿಯ ಅಗಲಿಕೆಯ ನಂತರದ ದಿನಗಳನ್ನು ನೆನೆದ ಅವರು, &quot;ನಾನು ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಾಗ, ಅವರಿಗೆ ವಿಷಯ ಏನೆಂದು ಅರ್ಥವಾಗಲೇ ಇಲ್ಲ. ಏಕೆಂದರೆ ಅವರು ತುಂಬಾ ಚಿಕ್ಕವರಾಗಿದ್ದರು. ಹುಮಾ ಅಗಲಿದ ನಂತರ ನಾನು ದೀರ್ಘಕಾಲ ತೀವ್ರ ಖಿನ್ನತೆಗೆ (Depression) ಒಳಗಾಗಿದ್ದೆ. ಆ ಕಷ್ಟದ ಸಮಯದಲ್ಲಿ ನನ್ನ ಇಬ್ಬರು ಆಪ್ತ ಸ್ನೇಹಿತರು ನನಗೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡಿದರು. ಜೀವನ ಮುಂದೆ ಸಾಗಲೇಬೇಕು, ಮಕ್ಕಳಿಗಾಗಿ ನಾನು ಮತ್ತೆ ಶೂನ್ಯದಿಂದ (Zero) ಜೀವನವನ್ನು ಪ್ರಾರಂಭಿಸಬೇಕಾಯಿತು&quot; ಎಂದು ಕಣ್ಣೀರಧಾರೆಯ ನಡುವೆ ತಮ್ಮ ಅಂತರಂಗದ ನೋವನ್ನು ಹಂಚಿಕೊಂಡರು.&lt;/p&gt;&lt;h3&gt;&lt;strong&gt;2009ರ ಆ ಕಪ್ಪು ದಿನ ಮತ್ತು ಚೆನ್ನೈನ ದುರಂತ!&lt;/strong&gt;&lt;/h3&gt;&lt;p&gt;ಅದು ಅಕ್ಟೋಬರ್ 2009. ವಾಸಿಂ ಅಕ್ರಮ್ ಅವರ ಧರ್ಮಪತ್ನಿ ಹುಮಾ ಅವರು ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ತೊಂದರೆಯಿಂದ (Multi-organ failure) ಬಳಲುತ್ತಿದ್ದರು. ಹುಮಾ ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ, ವಾಸಿಂ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಅಂಬುಲೆನ್ಸ್ ಮೂಲಕ ಸಿಂಗಾಪುರಕ್ಕೆ ಕರೆದೊಯ್ಯಲು ನಿರ್ಧರಿಸಿದರು. ಆದರೆ, ವಿಮಾನದಲ್ಲಿ ಪ್ರಯಾಣಿಸುವಾಗ ಇಂಧನ ತುಂಬಿಸಿಕೊಳ್ಳಲು (Refueling) ವಿಮಾನವನ್ನು ಭಾರತದ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಬೇಕಾಯಿತು.&lt;/p&gt;&lt;p&gt;ಅದೇ ಸಮಯದಲ್ಲಿ ಹುಮಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿ, ಅವರು ಪ್ರಜ್ಞೆ ತಪ್ಪಿದರು. ಪತ್ನಿಯ ಸಾವು-ಬದುಕಿನ ನಡುವಿನ ಹೋರಾಟವನ್ನು ಕಂಡ ವಾಸಿಂ ಅಕ್ರಮ್, ಚೆನ್ನೈ ವಿಮಾನ ನಿಲ್ದಾಣದಲ್ಲೇ ತೀವ್ರ ಆತಂಕದಿಂದ ಅಳಲು ಪ್ರಾರಂಭಿಸಿದರು. ವಿದೇಶದಲ್ಲಿದ್ದ ಅವರಿಗೆ ಏನು ಮಾಡಬೇಕೆಂದು ತೋಚದಂತಾಯಿತು.&lt;/p&gt;&lt;h3&gt;&lt;strong&gt;ಮಾನವೀಯತೆ ಮೆರೆದ ಭಾರತೀಯರು!&lt;/strong&gt;&lt;/h3&gt;&lt;p&gt;ಆ ಕ್ಷಣದಲ್ಲಿ ವಾಸಿಂ ಅಕ್ರಮ್ ಮತ್ತು ಹುಮಾ ಅವರ ಬಳಿ ಭಾರತೀಯ ವೀಸಾ (Indian Visa) ಇರಲಿಲ್ಲ. ನಿಯಮಗಳ ಪ್ರಕಾರ, ವೀಸಾ ಇಲ್ಲದೆ ಯಾವುದೇ ವಿದೇಶಿ ಪ್ರಜೆಗೆ ದೇಶದ ಒಳಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಆದರೆ, ಆ ಜಟಿಲ ಪರಿಸ್ಥಿತಿಯಲ್ಲಿ ಭಾರತೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳು ಹಾಗೂ ವಲಸೆ (Immigration) ಅಧಿಕಾರಿಗಳು ಸಂಪೂರ್ಣ ನಿಯಮಗಳನ್ನು ಬದಿಗೊತ್ತಿ ಅತ್ಯುನ್ನತ ಮಾನವೀಯತೆ ಮೆರೆದರು.&lt;/p&gt;&lt;h3&gt;&lt;strong&gt;ವಿಸಾ ಇಲ್ಲದಿದ್ದರೂ ಬೆನ್ನಿಗೆ ನಿಂತ ಭಾರತ!&lt;/strong&gt;&lt;/h3&gt;&lt;p&gt;ಯಾವುದೇ ವೀಸಾ ಇಲ್ಲದಿದ್ದರೂ, ತಕ್ಷಣವೇ ಹುಮಾ ಅವರನ್ನು ಚೆನ್ನೈನ ಪ್ರಸಿದ್ಧ ಅಪೋಲೋ ಆಸ್ಪತ್ರೆಗೆ ದಾಖಲಿಸಲು ಸಂಪೂರ್ಣ ವ್ಯವಸ್ಥೆ ಮಾಡಿಕೊಟ್ಟರು. ಭಾರತ ಮತ್ತು ಪಾಕಿಸ್ತಾನದ ನಡುವೆ ಎಷ್ಟೇ ರಾಜಕೀಯ ಉದ್ವಿಗ್ನತೆಗಳಿದ್ದರೂ, ಜೀವ ಉಳಿಸುವ ವಿಷಯದಲ್ಲಿ ಭಾರತ ತೋರಿಸಿದ ಈ ಮಹಾನ್ ಮಾನವೀಯತೆಯನ್ನು ವಾಸಿಂ ಅಕ್ರಮ್ ಇಂದು ಕೂಡ ಅತ್ಯಂತ ಗೌರವದಿಂದ ನೆನಪಿಸಿಕೊಳ್ಳುತ್ತಾರೆ. &quot;ಭಾರತೀಯರು ಆ ದಿನ ತೋರಿಸಿದ ಪ್ರೀತಿ ಮತ್ತು ಕರುಣೆಯನ್ನು ನಾನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ&quot; ಎಂದು ಅವರು ಆಗಾಗ್ಗೆ ಹೇಳುತ್ತಾರೆ. ಆದರೆ, ದುರದೃಷ್ಟವಶಾತ್ ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಹುಮಾ ಅವರು ಕೇವಲ 42ನೇ ವಯಸ್ಸಿನಲ್ಲಿ ಚೆನ್ನೈನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.&lt;/p&gt;&lt;h3&gt;&lt;strong&gt;ಹೊಸ ಜೀವನದ ಪಯಣ!&lt;/strong&gt;&lt;/h3&gt;&lt;p&gt;ವಾಸಿಂ ಅಕ್ರಮ್ ಮತ್ತು ಹುಮಾ ದಂಪತಿಗೆ ತೈಮೂರ್ ಮತ್ತು ಅಕ್ಬರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪತ್ನಿಯ ಅಗಲಿಕೆಯ ನಂತರ ಮಕ್ಕಳನ್ನೇ ತಮ್ಮ ಪ್ರಪಂಚವಾಗಿಸಿಕೊಂಡು ಬದುಕುತ್ತಿದ್ದ ಅಕ್ರಮ್, 2013 ರಲ್ಲಿ ಆಸ್ಟ್ರೇಲಿಯಾ ಮೂಲದ ಶನಿರಾ ಥಾಂಪ್ಸನ್ ಅವರನ್ನು ದ್ವಿತೀಯ ವಿವಾಹವಾದರು. ಪ್ರಸ್ತುತ ಈ ದಂಪತಿಗೆ ಐಲಾ ಎಂಬ ಮುದ್ದಾದ ಮಗಳಿದ್ದಾಳೆ. ಆದಾಗ್ಯೂ, ತಮ್ಮ ಜೀವನದ ಕಷ್ಟದ ದಿನಗಳಲ್ಲಿ ಜೊತೆಯಾಗಿದ್ದ ಮೊದಲ ಪತ್ನಿ ಹುಮಾ ಅವರ ನೆನಪುಗಳು ವಾಸಿಂ ಅಕ್ರಮ್ ಅವರ ಮನಸ್ಸಿನಲ್ಲಿ ಎಂದೆಂದಿಗೂ ಅಮರ.&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/wasim-akram-wife-huma-death-last-words-emotional-story-chennai-hospital-india-humanity-pakistan-cricket-legend-bmk/articleshow-x7z7epp"/>
        </item>
        <item>
            <title><![CDATA[CSK ತಂಡದಲ್ಲಿ ಧೋನಿಯ ಷೇರುಗಳು ಇದೆಯಾ? ಕೊನೆಗೂ ಅಸಲಿ ಕಥೆ ಬಿಚ್ಚಿಟ್ಟ ಚೆನ್ನೈ ಟೀಮ್‌ ಮ್ಯಾನೇಜ್‌ಮೆಂಟ್!]]></title>
            <link>https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo</link>
            <guid isPermaLink="true">https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo</guid>
            <pubDate>Sat, 12 Sep 2026 12:21:24 +0530</pubDate>
            <description><![CDATA[ಚೆನ್ನೈ ಸೂಪರ್ ಕಿಂಗ್ಸ್&zwnj;ನಲ್ಲಿ (CSK) ಎಂ.ಎಸ್. ಧೋನಿ ಶೇ.15-20ರಷ್ಟು ಷೇರುಗಳನ್ನು ಖರೀದಿಸುತ್ತಿದ್ದಾರೆ ಎಂಬ ವದಂತಿಯನ್ನು ತಂಡದ ಮ್ಯಾನೇಜ್&zwnj;ಮೆಂಟ್ ತಳ್ಳಿಹಾಕಿದೆ. ಆದರೆ, ಧೋನಿ ತಂಡದಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದು, ತಂಡದ ಪ್ರಮುಖ ನಿರ್ಧಾರಗಳಲ್ಲಿ ಅವರ ಪ್ರಭಾವ ಈಗಲೂ ಮಹತ್ವದ್ದಾಗಿದೆ. ಮುಂಬರುವ ಸೀಸನ್&zwnj;ನಲ್ಲಿ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kryn21bz1g3ycse250s80pma,imgname-ms-dhoni-1779145180543.jpeg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್&zwnj;ನ (CSK) ಶೇ.15 ರಿಂದ 20ರಷ್ಟು ಷೇರುಗಳನ್ನು ಮಾಜಿ ನಾಯಕ ಎಂ.ಎಸ್. ಧೋನಿ ಖರೀದಿಸಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳನ್ನು ಸಿಎಸ್&zwnj;ಕೆ ಟೀಮ್ ಮ್ಯಾನೇಜ್&zwnj;ಮೆಂಟ್ ತಳ್ಳಿಹಾಕಿದೆ. ಆದರೆ, ಫ್ರಾಂಚೈಸಿಯಲ್ಲಿ ಧೋನಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಕ್ರಿಕ್&zwnj;ಬಝ್ ವರದಿ ಪ್ರಕಾರ, ಧೋನಿ ಈ ಹಿಂದೆ ಖಾಸಗಿ ವಹಿವಾಟಿನ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದ್ದಾರೆ.&lt;/p&gt;&lt;h2&gt;&lt;strong&gt;ಧೋನಿ ಬಳಿಯಿದೆ ಒಂದು ಲಕ್ಷ ಸಿಎಸ್&zwnj;ಕೆ ಷೇರುಗಳು!&lt;/strong&gt;&lt;/h2&gt;&lt;p&gt;ಧೋನಿ ಬಳಿ ಒಂದು ಲಕ್ಷ ಷೇರುಗಳಿದ್ದರೂ, ಕಂಪನಿಯ ಒಟ್ಟು ಷೇರುಗಳಿಗೆ ಹೋಲಿಸಿದರೆ ಇದು ಕೇವಲ 0.01% ರಿಂದ 0.02% ಮಾತ್ರ. ಐಪಿಎಲ್ ಫ್ರಾಂಚೈಸಿಗಳ ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ, ಧೋನಿ ಹೊಂದಿರುವ ಷೇರುಗಳ ಬೆಲೆ ಸುಮಾರು 2.6 ಕೋಟಿಯಿಂದ 3 ಕೋಟಿ ರೂಪಾಯಿ ಅಷ್ಟೇ. ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರ ಕುಟುಂಬವು ತಂಡದಲ್ಲಿ ಶೇ. 55ಕ್ಕಿಂತ ಹೆಚ್ಚು ಷೇರುಗಳನ್ನು ಮತ್ತು ನಿಯಂತ್ರಣವನ್ನು ಹೊಂದಿದೆ. ಅಲ್ಲದೆ, 30 ಕೋಟಿಗೂ ಹೆಚ್ಚು ಸಾರ್ವಜನಿಕ ಷೇರುದಾರರಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ, ಸಿಎಸ್&zwnj;ಕೆಯ ಶೇ.15-20ರಷ್ಟು ದೊಡ್ಡ ಪಾಲುದಾರಿಕೆಯನ್ನು ಪಡೆಯಲು ಧೋನಿ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ತಂಡದ ಮ್ಯಾನೇಜ್&zwnj;ಮೆಂಟ್ ಸ್ಪಷ್ಟಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಸಾರ್ವಜನಿಕ ಮಾರುಕಟ್ಟೆಯಲ್ಲಿಲ್ಲದ (unlisted) ಕಂಪನಿಯಾಗಿದೆ. ಷೇರು ಪಾಲುದಾರಿಕೆ ಕಡಿಮೆ ಇದ್ದರೂ, ತಂಡದ ಪ್ರಮುಖ ನಿರ್ಧಾರಗಳಲ್ಲಿ ಧೋನಿಯ ಪ್ರಭಾವ ದೊಡ್ಡದಿದೆ. ಮಾಜಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಸ್ಥಾನ ತೊರೆದ ನಂತರ ಹೊಸ ಕೋಚ್ ಆಯ್ಕೆ ಹಾಗೂ ಮೆಗಾ ಹರಾಜಿಗೆ ಮುನ್ನ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ಧೋನಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಗಾಯದ ಕಾರಣ ಕಳೆದ ಸೀಸನ್&zwnj;ನಲ್ಲಿ ಆಡದಿದ್ದ ಧೋನಿ, ಮುಂಬರುವ ಸೀಸನ್&zwnj;ನಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಹೊಸ ಕೋಚ್ ಜೊತೆ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಐದು ಬಾರಿಯ ಚಾಂಪಿಯನ್&zwnj; ತಂಡದಿಂದ ನೀರಸ ಪ್ರದರ್ಶನ:&lt;/strong&gt;&lt;/h3&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ ಐದು ಟ್ರೋಫಿ ಗೆಲ್ಲುವ ಮೂಲಕ ಐಪಿಎಲ್&zwnj;ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಇತ್ತೀಚಿಗಿನ ವರ್ಷಗಳಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. 2023ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಆಗಿದ್ದ ಸಿಎಸ್&zwnj;ಕೆ ತಂಡವು ಆ ಬಳಿಕ ಪ್ಲೇ ಆಫ್&zwnj;ಗೇರಲು ಪದೇ ಪದೇ ವಿಫಲವಾಗುತ್ತಾ ಬಂದಿದೆ. ಮುಂದಿನ ಸೀಸನ್&zwnj;ನಲ್ಲಾದರೂ ಸಿಎಸ್&zwnj;ಕೆ ಕಮ್&zwnj;ಬ್ಯಾಕ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo"/>
        </item>
        <item>
            <title><![CDATA[ವೈಭವ್‌ ಸೂರ್ಯವಂಶಿನಂತಹ ಒಬ್ಬ ಬ್ಯಾಟರ್‌ನನ್ನಾದರೂ PSL ಸೃಷ್ಟಿಸಿದೆಯೇ? ಪಾಕ್ ದಿಗ್ಗಜ ಕಿಡಿ]]></title>
            <link>https://kannada.asianetnews.com/cricket-sports/wasim-akram-takes-brutal-dig-at-psl-says-pakistan-has-failed-to-produce-batting-stars-kvn/articleshow-zrhgrca</link>
            <guid isPermaLink="true">https://kannada.asianetnews.com/cricket-sports/wasim-akram-takes-brutal-dig-at-psl-says-pakistan-has-failed-to-produce-batting-stars-kvn/articleshow-zrhgrca</guid>
            <pubDate>Sat, 12 Sep 2026 17:42:13 +0530</pubDate>
            <description><![CDATA[ಪಾಕಿಸ್ತಾನದ ಬೌಲಿಂಗ್ ದಂತಕಥೆ ವಾಸೀಂ ಅಕ್ರಮ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ್ದಾರೆ. ಐಪಿಎಲ್&zwnj;ನಂತೆ ಯುವ ಬ್ಯಾಟಿಂಗ್ ಪ್ರತಿಭೆಗಳನ್ನು ರೂಪಿಸುವಲ್ಲಿ ಪಿಎಸ್&zwnj;ಎಲ್ ವಿಫಲವಾಗಿದೆ ಎಂದು ಅವರು ಪಾಕ್ ಕ್ರಿಕೆಟ್ ಮಂಡಳಿಯನ್ನು ಟೀಕಿಸಿದ್ದಾರೆ. ತಳಮಟ್ಟದ ಕ್ಲಬ್ ಕ್ರಿಕೆಟ್ ಅನ್ನು ಬಲಪಡಿಸುವುದರಿಂದ ಮಾತ್ರ ಪಾಕಿಸ್ತಾನ ಕ್ರಿಕೆಟ್ ಮುನ್ನಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kybwe5345akp4t5mhb9v4kwa,imgname-vaibhav-suryavanshi-all-rounder-plan-1784957834340.gif" type="image/jpeg" height="390" width="690"/>
            <content:encoded><![CDATA[&lt;p&gt;ಕರಾಚಿ: ಭಾರತೀಯ ಕ್ರಿಕೆಟ್&zwnj;ನ ಹೊಸ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿರುವ ಪಾಕಿಸ್ತಾನದ ಬೌಲಿಂಗ್ ದಂತಕಥೆ ವಾಸೀಂ ಅಕ್ರಮ್, ಪಾಕಿಸ್ತಾನ್ ಸೂಪರ್ ಲೀಗ್ (PSL) ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಪಿಎಸ್&zwnj;ಎಲ್ ಬೆಳವಣಿಗೆಯನ್ನು ಹೋಲಿಕೆ ಮಾಡಿದ ಅಕ್ರಮ್, ಪಾಕ್ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;ಸತತ ಎರಡು ಐಪಿಎಲ್ ಸೀಸನ್&zwnj;ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ವೈಭವ್ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ್ದರು. ಅತಿ ಕಿರಿಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್&zwnj;ಗೆ ಕಾಲಿಟ್ಟ ಆಟಗಾರ ಎಂಬ ದಾಖಲೆಯನ್ನೂ ಅವರು ಬರೆದಿದ್ದರು. ಯೂಟ್ಯೂಬರ್ ಫುರ್ಖಾನ್ ಭಟ್ಟಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅಕ್ರಮ್, ಐಪಿಎಲ್ ಯುವ ಆಟಗಾರರಿಗೆ ನೀಡುವ ಅವಕಾಶ ಮತ್ತು ಬೆಳವಣಿಗೆಯನ್ನು ಪಿಎಸ್&zwnj;ಎಲ್&zwnj;ಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ವೈಭವ್ ಸೂರ್ಯವಂಶಿಯನ್ನು ಕೊಂಡಾಡಿದ ಪಾಕ್ ದಿಗ್ಗಜ&lt;/strong&gt;&lt;/h2&gt;&lt;p&gt;&lsquo;ಪಿಎಸ್&zwnj;ಎಲ್ ಶುರುವಾಗಿ ಸುಮಾರು 10 ವರ್ಷಗಳಾಗಿವೆ. ಈ ಅವಧಿಯಲ್ಲಿ ಪಿಎಸ್&zwnj;ಎಲ್ ಮೂಲಕ ಗಮನ ಸೆಳೆದ ಒಬ್ಬನೇ ಒಬ್ಬ ಬ್ಯಾಟರ್&zwnj;ನನ್ನಾದರೂ ನಾವು ಗುರುತಿಸಿದ್ದೇವೆಯೇ? ಕೆಲ ಬೌಲರ್&zwnj;ಗಳು ಸಿಕ್ಕಿದ್ದು ನಿಜ. ಆದರೆ, ಹೇಳಿಕೊಳ್ಳುವಂತಹ ಒಬ್ಬ ಬ್ಯಾಟಿಂಗ್ ಪ್ರತಿಭೆಯನ್ನಾದರೂ ನಾವು ರೂಪಿಸಿದ್ದೇವೆಯೇ? ಭಾರತದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಯಂತಹ ಬ್ಯಾಟಿಂಗ್ ಪ್ರತಿಭೆಯನ್ನು ಬೆಳೆಸುವಾಗ ಮಾತ್ರ ನಮ್ಮ ವ್ಯವಸ್ಥೆಯಲ್ಲೂ ಬದಲಾವಣೆಗಳು ಆಗಬೇಕಿತ್ತು' ಎಂದು ಅಕ್ರಮ್ ಹೇಳಿದರು.&lt;/p&gt;&lt;p&gt;ವಾಸೀಂ ಅಕ್ರಮ್ ಐಪಿಎಲ್&zwnj;ನಲ್ಲಿ ಕೋಲ್ಕತಾ ನೈಟ್ ರೈಡರ್ಸ್&zwnj;ನ ಬೌಲಿಂಗ್ ಕೋಚ್ ಆಗಿ ಮತ್ತು ಪಿಎಸ್&zwnj;ಎಲ್&zwnj;ನಲ್ಲಿ ಇಸ್ಲಾಮಾಬಾದ್ ಯುನೈಟೆಡ್, ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ತಂಡಗಳ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ತಳಮಟ್ಟದ ಕ್ಲಬ್ ಕ್ರಿಕೆಟ್ ಅನ್ನು ಬಲಪಡಿಸದೆ ಯುವ ಪ್ರತಿಭೆಗಳನ್ನು ಹುಡುಕಲು ಸಾಧ್ಯವಿಲ್ಲ ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ. &lsquo;ಕರಾಚಿ ಮತ್ತು ಲಾಹೋರ್&zwnj;ನಲ್ಲಿ ಕ್ಲಬ್ ಕ್ರಿಕೆಟ್&zwnj;ನ ಬೆಳವಣಿಗೆಗಾಗಿ ಪಿಸಿಬಿ ತಲಾ 100 ಮಿಲಿಯನ್ ರೂಪಾಯಿ ಖರ್ಚು ಮಾಡಬೇಕು. ಆಗ ಮಾತ್ರ ಟೆಸ್ಟ್ ಕ್ರಿಕೆಟ್ ಮತ್ತು ವೈಟ್ ಬಾಲ್ ಮಾದರಿಯಲ್ಲಿ ದೇಶವು ಮುನ್ನಡೆಯಲು ಸಾಧ್ಯ&rsquo; ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ವೈಟ್&zwnj;ವಾಷ್ ಭೀತಿಯಲ್ಲಿ ಪಾಕಿಸ್ತಾನ&lt;/strong&gt;&lt;/h3&gt;&lt;p&gt;ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ತಂಡ, ಕೊನೆಯ ಪಂದ್ಯದಲ್ಲೂ ಸೋಲಿನ ಸುಳಿಯಲ್ಲಿದೆ. ಪಾಕ್ ಬ್ಯಾಟಿಂಗ್ ಪಡೆಯ ಕಳಪೆ ಪ್ರದರ್ಶನದ ಬಗ್ಗೆ ದೊಡ್ಡ ಮಟ್ಟದ ಟೀಕೆಗಳು ಕೇಳಿಬರುತ್ತಿರುವಾಗಲೇ ಅಕ್ರಮ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/wasim-akram-takes-brutal-dig-at-psl-says-pakistan-has-failed-to-produce-batting-stars-kvn/articleshow-zrhgrca"/>
        </item>
        <item>
            <title><![CDATA[US Open Final 2026: ಅರೈನಾ ಸಬಲೆಂಕಾ vs ಎಲೆನಾ ರಬೈಕೆನಾ ಪ್ರಶಸ್ತಿಗಾಗಿ ಹೋರಾಟ]]></title>
            <link>https://kannada.asianetnews.com/sports/us-open-2026-final-sabalenka-vs-rybakina-set-for-blockbuster-showdown-kvn/articleshow-zt06qmq</link>
            <guid isPermaLink="true">https://kannada.asianetnews.com/sports/us-open-2026-final-sabalenka-vs-rybakina-set-for-blockbuster-showdown-kvn/articleshow-zt06qmq</guid>
            <pubDate>Sat, 12 Sep 2026 10:56:33 +0530</pubDate>
            <description><![CDATA[ಯುಎಸ್&zwnj; ಓಪನ್&zwnj; ಟೆನಿಸ್&zwnj; ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್&zwnj;ನಲ್ಲಿ ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಮತ್ತು ಆಸ್ಟ್ರೇಲಿಯನ್&zwnj; ಓಪನ್&zwnj; ಚಾಂಪಿಯನ್&zwnj; ಎಲೆನಾ ರಬೈಕೆನಾ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್&zwnj;ನಲ್ಲಿ ಜೆಸ್ಸಿಕಾ ಪೆಗುಲಾ ಅವರನ್ನು ಸಬಲೆಂಕಾ ಸೋಲಿಸಿದರೆ, ಕೊಕೊ ಗಾಫ್ ವಿರುದ್ಧ ರಬೈಕೆನಾ ಗೆಲುವು ಸಾಧಿಸಿದರು. ಈ ಫೈನಲ್ ಪಂದ್ಯವು ವಿಶ್ವದ ನಂಬರ್ 1 ಸ್ಥಾನವನ್ನು ಸಹ ನಿರ್ಧರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27rwgf7cdtxq0ceq5jktch6,imgname-afp--20260911--c7yb67h--v1--midres--tennisusaopen-1789114860007.jpg" type="image/jpeg" height="390" width="690"/>
            <content:encoded><![CDATA[&lt;p&gt;ನ್ಯೂಯಾರ್ಕ್&zwnj;: ವರ್ಷದ ಕೊನೆ ಗ್ರ್ಯಾನ್&zwnj;ಸ್ಲಾಂ ಟೆನಿಸ್&zwnj; ಟೂರ್ನಿಯಾಗಿರುವ ಯುಎಸ್&zwnj; ಓಪನ್&zwnj;ನಲ್ಲಿ ಈ ಬಾರಿ ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಹಾಗೂ ಹಾಲಿ ಆಸ್ಟ್ರೇಲಿಯನ್&zwnj; ಓಪನ್&zwnj; ಚಾಂಪಿಯನ್&zwnj; ಎಲೆನಾ ರಬೈಕೆನಾ ನಡುವೆ ಫೈನಲ್&zwnj; ಕಾದಾಟ ನಡೆಯಲಿದೆ. ಈ ಪಂದ್ಯ ಭಾನುವಾರ ನಿಗದಿಯಾಗಿದೆ.&lt;/p&gt;&lt;p&gt;ಮಹಿಳಾ ಸಿಂಗಲ್ಸ್&zwnj; ಸೆಮಿಫೈನಲ್&zwnj;ನಲ್ಲಿ ವಿಶ್ವ ನಂ.1 ಆಟಗಾರ್ತಿ, ಕಳೆದೆರಡು ಬಾರಿಯ ಟ್ರೋಫಿ ವಿಜೇತೆ, ಬೆಲಾರಸ್&zwnj;ನ ಸಬಲೆಂಕಾ ಅವರು 3ನೇ ಶ್ರೇಯಾಂಕಿತೆ, ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 7-5, 6-2 ಸೆಟ್&zwnj;ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಈ ಮೂಲಕ ಟೂರ್ನಿಯಲ್ಲಿ ಸತತ 4ನೇ, ಒಟ್ಟಾರೆ ಗ್ರ್ಯಾನ್&zwnj;ಸ್ಲಾಂನಲ್ಲಿ 9ನೇ ಬಾರಿ ಫೈನಲ್&zwnj;ಗೇರಿದರು.&lt;/p&gt;&lt;h2&gt;&lt;strong&gt;ಕೊಕೊ ಗಾಫ್&zwnj; ಎದುರು ಗೆದ್ದ ರಬೈಕೆನಾ&lt;/strong&gt;&lt;/h2&gt;&lt;p&gt;ಮತ್ತೊಂದು ಸೆಮಿಫೈನಲ್&zwnj;ನಲ್ಲಿ 2ನೇ ಶ್ರೇಯಾಂಕಿತೆ, ಕಜಕಸ್ತಾನದ ರಬೈಕೆನಾ ಅವರು ಅಮೆರಿಕದ ಯುವ ತಾರೆ, 2023ರ ಚಾಂಪಿಯನ್&zwnj; ಕೊಕೊ ಗಾಫ್&zwnj; ವಿರುದ್ಧ 3-6, 6-4, 6-4 ಗೇಮ್&zwnj;ಗಳಲ್ಲಿ ಜಯಭೇರಿ ಬಾರಿಸಿದರು. ಈ ಮೂಲಕ ಯುಎಸ್&zwnj; ಓಪನ್&zwnj;ನಲ್ಲಿ ಚೊಚ್ಚಲ, ಒಟ್ಟಾರೆ ಗ್ರ್ಯಾನ್&zwnj;ಸ್ಲಾಂನಲ್ಲಿ 4ನೇ ಬಾರಿ ರಬೈಕೆನಾ ಫೈನಲ್&zwnj; ತಲುಪಿದರು.&lt;/p&gt;&lt;p&gt;ಸದ್ಯ ವಿಶ್ವ ರ್&zwj;ಯಾಂಕಿಂಗ್&zwnj;ನಲ್ಲಿ ಸಬಲೆಂಕಾ ಅಗ್ರಸ್ಥಾನದಲ್ಲಿದ್ದು, ರಬೈಕೆನಾ 2ನೇ ಸ್ಥಾನದಲ್ಲಿದ್ದಾರೆ. ಸಬಲೆಂಕಾ ಅವರು ಈ ಪಂದ್ಯದಲ್ಲಿ ಸೋತರೆ ಅಗ್ರಸ್ಥಾನ ಕಳೆದುಕೊಳ್ಳಲಿದ್ದು, ರಬೈಕೆನಾ ಮೊದಲ ಸ್ಥಾನ ಪಡೆಯಲಿದ್ದಾರೆ.&lt;/p&gt;&lt;h3&gt;&lt;strong&gt;ಆಸ್ಟ್ರೇಲಿಯಾದಲ್ಲಿ ರಬೈಕೆನಾ ವಿರುದ್ಧ ಸೋತಿದ್ದ ಅರೈನಾ&lt;/strong&gt;&lt;/h3&gt;&lt;p&gt;ಇದು ಸಬಲೆಂಕಾ ಹಾಗೂ ರಬೈಕೆನಾ ನಡುವೆ 3ನೇ ಗ್ರ್ಯಾನ್&zwnj;ಸ್ಲಾಂ ಫೈನಲ್&zwnj; ಮುಖಾಮುಖಿ. 2023ರಲ್ಲಿ ಆಸ್ಟ್ರೇಲಿಯನ್&zwnj; ಓಪನ್&zwnj; ಫೈನಲ್&zwnj;ನಲ್ಲಿ ರಬೈಕೆನಾ ವಿರುದ್ಧ ಸಬಲೆಂಕಾ ಗೆದ್ದಿದ್ದರು. ಆದರೆ ಈ ವರ್ಷ ಆಸ್ಟ್ರೇಲಿಯನ್&zwnj; ಓಪನ್&zwnj; ಫೈನಲ್&zwnj;ನಲ್ಲಿ ಸಬಲೆಂಕಾರನ್ನು ಸೋಲಿಸಿ ರಬೈಕೆನಾ ಟ್ರೋಫಿ ಎತ್ತಿಹಿಡಿದಿದ್ದರು. ಈಗ ಮತ್ತೊಮ್ಮೆ ಇವರಿಬ್ಬರು ಮುಖಾಮುಖಿಯಾಗುತ್ತಿದ್ದಾರೆ.&lt;/p&gt;&lt;p&gt;04ನೇ ಫೈನಲ್&zwnj;&lt;/p&gt;&lt;p&gt;ಸಬಲೆಂಕಾ ಯುಎಸ್&zwnj; ಓಪನ್&zwnj;ನಲ್ಲಿ ಸತತ 4ನೇ ಫೈನಲ್&zwnj;ಗೇರಿದರು. 2023ರಲ್ಲಿ ರನ್ನರ್&zwnj;ಅಪ್&zwnj;, 2024, 2025ರಲ್ಲಿ ಟ್ರೋಫಿ ಗೆದ್ದಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/us-open-2026-final-sabalenka-vs-rybakina-set-for-blockbuster-showdown-kvn/articleshow-zt06qmq"/>
        </item>
    </channel>
</rss>
