<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 04 Aug 2026 09:37:04 +0530</lastBuildDate>
        <atom:link href="https://kannada.asianetnews.com/rss/sports" rel="self" type="application/rss+xml"/>
        <item>
            <title><![CDATA[ಗ್ಲಾಸ್ಗೋದಲ್ಲಿ ಮೇಳೈಸಿದ ಭಾರತ ಸಂಸ್ಕೃತಿ, ಪರಂಪರೆ; 2030ರ ಗೇಮ್ಸ್‌ನ ಬ್ಯಾಟನ್‌, ಧ್ವಜ ಭಾರತಕ್ಕೆ ಹಸ್ತಾಂತರ]]></title>
            <link>https://kannada.asianetnews.com/sports/india-takes-over-commonwealth-games-flag-as-glasgow-2026-closes-in-grand-style-kvn/articleshow-lz6ng10</link>
            <guid isPermaLink="true">https://kannada.asianetnews.com/sports/india-takes-over-commonwealth-games-flag-as-glasgow-2026-closes-in-grand-style-kvn/articleshow-lz6ng10</guid>
            <pubDate>Tue, 04 Aug 2026 09:36:58 +0530</pubDate>
            <description><![CDATA[ಗ್ಲಾಸ್ಗೋದಲ್ಲಿ 2026ರ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ಗೆ ವೈಭವದ ತೆರೆ ಬಿದ್ದಿದ್ದು, 2030ರ ಗೇಮ್ಸ್ ಆತಿಥ್ಯವನ್ನು ಭಾರತ ಅಧಿಕೃತವಾಗಿ ಸ್ವೀಕರಿಸಿದೆ. ಸಮಾರೋಪ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಅದ್ಧೂರಿ ಕಾರ್ಯಕ್ರಮಗಳು ನಡೆದವು ಮತ್ತು ಗೇಮ್ಸ್&zwnj;ನ ಧ್ವಜವನ್ನು ಭಾರತೀಯ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kz1th3c2r8tkbkahwq7wtz7g,imgname-20260724036l-1785694031231.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ಲಾಸ್ಗೋ: ವೈಭವದ ಸಮಾರೋಪ ಸಮಾರಂಭದ ಮೂಲಕ 2026ರ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ಗೆ ಅಧಿಕೃತವಾಗಿ ತೆರೆ ಬಿದ್ದಿದೆ. ಭಾನುವಾರ ರಾತ್ರಿ ಸ್ಕಾಟ್ಲೆಂಡ್&zwnj;ನ ಪ್ರಮುಖ ನಗರ ಗ್ಲಾಸ್ಗೋದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. 2030ರ ಗೇಮ್ಸ್&zwnj;ಗೆ ಆತಿಥ್ಯ ಹಕ್ಕು ಭಾರತ ಪಡೆದಿರುವುದರಿಂದಾಗಿ, ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಬಿಂಬಿಸುವ ನೃತ್ಯ, ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಲಾಗಿತ್ತು. ಇದು ಎಲ್ಲರ ಗಮನಸೆಳೆಯಿತು.&lt;/p&gt;&lt;p&gt;3ನೇ ಕಿಂಗ್ ಚಾರ್ಲ್ಸ್&zwnj; ಪ್ರತಿನಿಧಿಯಾಗಿ ಎಡಿನ್&zwnj;ಬರ್ಗ್&zwnj; ರಾಜಮನೆತನದ ಪ್ರಿನ್ಸ್&zwnj; ಎಡ್ವರ್ಡ್&zwnj; ಅವರು ಅಧಿಕೃತವಾಗಿ ಕ್ರೀಡಾಕೂಟ ಮುಕ್ತಾಯಗೊಂಡಿದ್ದಾಗಿ ಘೋಷಿಸಿದರು. &lsquo;ನೀವು ಮತ್ತೊಮ್ಮೆ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ನ ಮೌಲ್ಯ, ಉತ್ಸಾಹವನ್ನು ಎತ್ತಿ ಹಿಡಿದಿದ್ದೀರಿ. ಗ್ಲಾಸ್ಗೋಗೆ ಧನ್ಯವಾದಗಳು. ಎಲ್ಲಾ ದೇಶಗಳ ಕ್ರೀಡಾಪಟುಗಳಿಗೆ ಭಾರತದ ಅಹಮದಾಬಾದ್&zwnj;ಗೆ ಸ್ವಾಗತ&rsquo; ಎಂದು ಹೇಳಿದರು. ಪಥಸಂಚಲನದಲ್ಲಿ ಬಾಕ್ಸರ್&zwnj; ಜಾಸ್ಮೀನ್&zwnj; ಲಂಬೋರಿಯಾ ಅವರು ಭಾರತದ ಧ್ವಜ ಹಿಡಿದು ಸಾಗಿದರು.&lt;/p&gt;&lt;h2&gt;&lt;strong&gt;&lsquo;ವಸುದೈವ ಕುಟುಂಬಕಂ&rsquo; ಸಂದೇಶ:&lt;/strong&gt;&lt;/h2&gt;&lt;p&gt;ಸಮಾರಂಭದಲ್ಲಿ ಭಾರತವು &lsquo;ವಸುಧೈವ ಕುಟುಂಬಕಂ&rsquo;(ವಿಶ್ವವೇ ಒಂದು ಕುಟಂಬ) ಎಂಬ ಸಂದೇಶವನ್ನು ರವಾನಿಸಿತು. 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಂದೇ ಮಾತರಂ ಗೀತೆಗೂ ವಿಶೇಷ ಗೌರವ ಸಲ್ಲಿಸಲಾಯಿತು. ನಟಿ ಮಾನುಷಿ ಚಿಲ್ಲರ್&zwnj; ಅವರು ಈ ವೇಳೆ ನೃತ್ಯ ಪ್ರದರ್ಶಿಸಿದರು.&lt;/p&gt;&lt;p&gt;ಖ್ಯಾತ ಗಾಯಕ ಶಂಕರ್&zwnj; ಮಹದೇವನ್&zwnj;, ಅವರ ಪುತ್ರರಾದ ಸಿದ್ಧಾರ್ಥ್&zwnj;, ಶಿವಮ್&zwnj; ಮಹದೇವನ್&zwnj;ರ ಸಂಗೀತದ ವೇಳೆ, ಭಾರತದ ವಿವಿಧತೆಯಲ್ಲಿ ಏಕತೆ, ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಭಾರತದ ಸಿತಾರ್&zwnj; ವಾದಕ ರಿಷಭ್&zwnj; ಶರ್ಮಾ ಅವರು ಸ್ಕಾಟ್ಲೆಂಡ್&zwnj;ನ ಗಾಯಕ ರೋಸ್ ಐನ್&zwnj;ಸ್ಲಿ ಜೊತೆಗೂಡಿ &lsquo;ಸಾಂಸ್ಕೃತಿಕ ಜುಗಲ್ಬಂದಿ&rsquo; ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಗುಜರಾತ್&zwnj;ನ ಹಿನ್ನೆಲೆ ಗಾಯಕಿ ಭೂಮಿ ತ್ರಿವೇದಿ ಅವರು ಗುಜರಾತ್&zwnj;ನ ಕಲೆ, ಸಂಸ್ಕೃತಿ ಬಿಂಬಿಸುವ ಪ್ರದರ್ಶನ ನೀಡಿದರು.&lt;/p&gt;&lt;h3&gt;&lt;strong&gt;2030ರ ಗೇಮ್ಸ್&zwnj;ನ ಬ್ಯಾಟನ್&zwnj;, ಧ್ವಜ ಭಾರತಕ್ಕೆ ಹಸ್ತಾಂತರ&lt;/strong&gt;&lt;/h3&gt;&lt;p&gt;ಗ್ಲಾಸ್ಗೋ: ಈ ಬಾರಿ ಗೇಮ್ಸ್&zwnj;ನ ಸಮಾರೋಪ ಸಮಾರಂಭದಲ್ಲಿ 2030ರ ಗೇಮ್ಸ್&zwnj;ನ ಆತಿಥ್ಯ ದೇಶ ಭಾರತಕ್ಕೆ ಧ್ವಜ ಹಾಗೂ ಬ್ಯಾಟನ್ ಹಸ್ತಾಂತರಿಸಲಾಯಿತು. ಸ್ಕಾಟ್ಲೆಂಡ್&zwnj; ಅಧಿಕಾರಿಗಳು ಭಾರತೀಯ ಪ್ರತಿನಿಧಿಗಳಿಗೆ ಇದನ್ನು ಹಸ್ತಾಂತರಿಸಿದರು.&lt;/p&gt;&lt;p&gt;ಭಾರತ ಹಾಗೂ ಸ್ಕಾಟ್ಲೆಂಡ್&zwnj;ನ ಧ್ವಜದೊಂದಿಗೆ ಗೇಮ್ಸ್&zwnj;ನ ಧ್ವಜವನ್ನು ವೇದಿಕೆಗೆ ತರಲಾಯಿತು. ಅದನ್ನು ಗ್ಲಾಸ್ಗೋ ಕೌನ್ಸಿಲರ್&zwnj; ಜಾಕ್ವೆಲಿನ್&zwnj; ಮೆಕ್&zwnj;ಲಾರೆನ್ ಅವರು ಗೇಮ್ಸ್&zwnj;ನ ಉಪ ಮುಖ್ಯಸ್ಥ ಸುಸಾನ್&zwnj; ಜಾಕ್ಸನ್&zwnj;ಗೆ ನೀಡಿದರು. ಬಳಿಕ ಕಾಮನ್&zwnj;ವೆಲ್ತ್&zwnj; ಸ್ಪೋರ್ಟ್&zwnj;ನ ಅಧ್ಯಕ್ಷ ಡಾ.ಡೊನಾಲ್ಡ್&zwnj; ರುಕಾರೆ ಅವರು ಧ್ವಜವನ್ನು ನೀರಜ್&zwnj; ಚೋಪ್ರಾಗೆ ನೀಡಿದರು. ಅವರು ಭಾರತೀಯ ಒಲಿಂಪಿಕ್&zwnj; ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾಗೆ ನೀಡಿದರು. ಅದನ್ನು ಅವರು ಗುಜರಾತ್&zwnj;ನ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಅವರು ಪಡೆದುಕೊಂಡರು.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/india-takes-over-commonwealth-games-flag-as-glasgow-2026-closes-in-grand-style-kvn/articleshow-lz6ng10"/>
        </item>
        <item>
            <title><![CDATA[ಕ್ರಿಕೆಟ್‌ನಲ್ಲಿ ಕಪ್ ಗೆದ್ದು, 45ನೇ ವಯಸ್ಸಲ್ಲಿ ಬೈಕ್ ರೇಸ್‌ಗೆ ಹೋದ ಎಂ.ಎಸ್. ಧೋನಿ! 2027ರಲ್ಲೂ CSK ಪರ ಆಡ್ತಾರಾ?]]></title>
            <link>https://kannada.asianetnews.com/cricket-sports/ms-dhoni-rides-superbike-at-madras-race-track-in-chennai-viral-video-sparks-ipl-2027-speculations/articleshow-wn857d9</link>
            <guid isPermaLink="true">https://kannada.asianetnews.com/cricket-sports/ms-dhoni-rides-superbike-at-madras-race-track-in-chennai-viral-video-sparks-ipl-2027-speculations/articleshow-wn857d9</guid>
            <pubDate>Mon, 03 Aug 2026 23:15:44 +0530</pubDate>
            <description><![CDATA[ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಚೆನ್ನೈನ ರೇಸ್ ಟ್ರ್ಯಾಕ್&zwnj;ನಲ್ಲಿ ಸೂಪರ್ ಬೈಕ್ ಓಡಿಸಿ ಸದ್ದು ಮಾಡಿದ್ದಾರೆ. ಈ ಘಟನೆಯು ಅವರ ಐಪಿಎಲ್ 2027ರ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ, ಜೊತೆಗೆ ಸಿಎಸ್&zwnj;ಕೆ ತಂಡದಲ್ಲಿನ ಇತ್ತೀಚಿನ ಬದಲಾವಣೆಗಳ ಕುರಿತು ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz4bp3stkczmd4x92rnbv2h3,imgname-ms-dhoni-in-bike-race--2--1785779130170.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಟೀಮ್ ಇಂಡಿಯಾದ (Team India) ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿಯ 'ತಲ' ಎಂ.ಎಸ್ ಧೋನಿ (MS Dhoni) ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಪ್ರಸಿದ್ಧ ಬೈಕ್ ಮತ್ತು ಕಾರು ಪ್ರೇಮಿಯಾಗಿರುವ ಧೋನಿ, ಈ ಬಾರಿ ಕ್ರಿಕೆಟ್ ಮೈದಾನದಲ್ಲಲ್ಲ, ಬದಲಾಗಿ ಚೆನ್ನೈನ ಪ್ರಸಿದ್ಧ ರೇಸ್ ಟ್ರ್ಯಾಕ್&zwnj;ನಲ್ಲಿ (Race Track) ಸೂಪರ್ ಬೈಕ್ ಓಡಿಸುವ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಚೆನ್ನೈನ ರೇಸ್&zwnj; ಟ್ರ್ಯಾಕ್&zwnj;ನಲ್ಲಿ ಧೋನಿ ರೈಡಿಂಗ್!&lt;/strong&gt;&lt;/h2&gt;&lt;p&gt;ಚೆನ್ನೈನ ಮದ್ರಾಸ್ ಇಂಟರ್&zwnj;ನ್ಯಾಷನಲ್ ಸರ್ಕ್ಯೂಟ್&zwnj;ನಲ್ಲಿ (Madras International Circuit) 'ಟಿವಿಎಸ್ ಯೂರೋಗ್ರಿಪ್' (TVS Eurogrip) ಕಂಪನಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಧೋನಿ ಭಾಗವಹಿಸಿದ್ದರು. ಕಂಪನಿಯ ಹೊಸ ಮೋಟಾರ್&zwnj;ಸೈಕಲ್ ಟೈರ್&zwnj;ಗಳನ್ನು ಪರೀಕ್ಷಿಸಲು 45 ವರ್ಷದ ಧೋನಿ ಹೆಲ್ಮೆಟ್ ಧರಿಸಿ ರೇಸಿಂಗ್ ಸರ್ಕ್ಯೂಟ್&zwnj;ನಲ್ಲಿ ಅತ್ಯಂತ ಫುಲ್ ಸ್ಪೀಡ್&zwnj;ನಲ್ಲಿ (Full Speed Superbike Riding) ಬೈಕ್ ಓಡಿಸಿದರು. ರೈಡ್ ಮುಗಿಸಿ ಪಿಟ್ ಲೇನ್&zwnj;ಗೆ (Pit Lane) ವಾಪಸ್ ಬಂದ ಧೋನಿ, ಹೆಲ್ಮೆಟ್ ತೆಗೆದು ಗ್ಯಾಲರಿಯಲ್ಲಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಿದ್ದಂತೆ ಫ್ಯಾನ್ಸ್ ಆರ್ಭಟ ಮುಗಿಲು ಮುಟ್ಟಿತ್ತು. ಧೋನಿ ಬೈಕ್ ಚಲಾಯಿಸುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾ ಎಕ್ಸ್ (X - Twitter) ಹಾಗೂ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ತೀವ್ರ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ರಾಂಚಿ ಗ್ಯಾರೇಜ್&zwnj;ನಿಂದ ಚೆನ್ನೈಗೆ ಎಂಟ್ರಿ!&lt;/strong&gt;&lt;/h2&gt;&lt;p&gt;ಐಪಿಎಲ್ 2026ರ (IPL 2026) ಸೀಸನ್ ಮುಗಿದ ನಂತರ ಧೋನಿ ಹೆಚ್ಚಾಗಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ರಾಂಚಿಯಲ್ಲಿರುವ ತಮ್ಮ ಬೃಹತ್ ಗ್ಯಾರೇಜ್&zwnj;ನಲ್ಲಿ ಅಪರೂಪದ ಕಾರು ಹಾಗೂ ಬೈಕ್&zwnj;ಗಳ ನಿರ್ವಹಣೆ ಮಾಡುತ್ತಾ, ಬ್ರ್ಯಾಂಡ್ ಕಮಿಟ್&zwnj;ಮೆಂಟ್&zwnj;ಗಳನ್ನು ಪೂರೈಸುತ್ತಿದ್ದರು. ಇದೀಗ ಚೆನ್ನೈನಲ್ಲಿ ಪ್ರತ್ಯಕ್ಷವಾಗಿರುವುದು ಸಿಎಸ್&zwnj;ಕೆ ಫ್ಯಾನ್ಸ್&zwnj;ಗೆ ಭಾರಿ ಖುಷಿ ತಂದಿದೆ.&lt;/p&gt;&lt;h2&gt;&lt;strong&gt;ಐಪಿಎಲ್ 2027ರಲ್ಲಿ ಧೋನಿ ಆಡ್ತಾರಾ?&lt;/strong&gt;&lt;/h2&gt;&lt;p&gt;ತಮಿಳುನಾಡಿನಲ್ಲಿ ಧೋನಿ ಲೈವ್ ಆಗಿ ಪ್ರತ್ಯಕ್ಷವಾಗುತ್ತಿದ್ದಂತೆ, ಅವರ ಕ್ರಿಕೆಟ್ ಭವಿಷ್ಯದ (Cricket Career Future) ಬಗ್ಗೆ ಭಾರಿ ಚರ್ಚೆಗಳು ಆರಂಭವಾಗಿವೆ. ಗಾಯದ ಸಮಸ್ಯೆಯಿಂದಾಗಿ ಧೋನಿ ಐಪಿಎಲ್ 2026ರ ಎಲ್ಲಾ ಪಂದ್ಯಗಳಿಂದ ಹೊರಗುಳಿದಿದ್ದರು. ಬೇರೆ ನಗರಗಳಿಗೆ ತಂಡದ ಜೊತೆ ಪ್ರಯಾಣ ಕೂಡ ಮಾಡಿರಲಿಲ್ಲ. ಇದೀಗ 2027ರ ಐಪಿಎಲ್ ಸೀಸನ್&zwnj;ನಲ್ಲಿ (IPL 2027) ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಹಳದಿ ಜೆರ್ಸಿಯಲ್ಲಿ (Yellow Jersey) ಕಣಕ್ಕಿಳಿಯುತ್ತಾರಾ ಅಥವಾ ಕ್ರಿಕೆಟ್&zwnj;ಗೆ ಅಧಿಕೃತವಾಗಿ ವಿದಾಯ ಹೇಳುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Mahi riding my favorite bike pic.twitter.com/FOwqdqaRS5&lt;/p&gt;&lt;p&gt;&mdash;  (@mostlydhoni78) August 3, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಸಿಎಸ್&zwnj;ಕೆ ಕೋಚ್&zwnj; ಹುದ್ದೆಯಿಂದ ಕೆಳಗಿಳಿದ ಫ್ಲೆಮಿಂಗ್!&lt;/strong&gt;&lt;/h2&gt;&lt;p&gt;ಕಳೆದ ತಿಂಗಳು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಲ್ಲಿ ಭಾರಿ ದೊಡ್ಡ ಬದಲಾವಣೆಯಾಗಿತ್ತು. ಕಳೆದ 18 ವರ್ಷಗಳಿಂದ ಸಿಎಸ್&zwnj;ಕೆ ತಂಡದ ಹೆಡ್ ಕೋಚ್ (Head Coach) ಆಗಿದ್ದ ಸ್ಟೀಫನ್ ಫ್ಲೆಮಿಂಗ್ (Stephen Fleming) ಹುದ್ದೆಯಿಂದ ಕೆಳಗಿಳಿದಿದ್ದರು. ಇದರೊಂದಿಗೆ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ 'ಧೋನಿ - ಫ್ಲೆಮಿಂಗ್ ಜೋಡಿ'ಗೆ ತರಬೇತುದಾರ ಹಂತದಲ್ಲಿ ತೆರೆ ಬಿದ್ದಂತಾಗಿದೆ. ಸಿಎಸ್&zwnj;ಕೆ ಹೊಸ ಸೀಸನ್&zwnj;ಗೆ ನೂತನ ಯೋಜನೆ ರೂಪಿಸುತ್ತಿದ್ದು, ಧೋನಿ ಮಾತ್ರ ಈ ಯಾವ ವಿಚಾರಗಳಿಗೂ ತಲೆಕೆಡಿಸಿಕೊಳ್ಳದೆ ತಮ್ಮಿಷ್ಟದ ಬೈಕ್ ರೈಡಿಂಗ್ ಎಂಜಾಯ್ ಮಾಡುತ್ತಿದ್ದಾರೆ!&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/cricket-sports/ms-dhoni-rides-superbike-at-madras-race-track-in-chennai-viral-video-sparks-ipl-2027-speculations/articleshow-wn857d9"/>
        </item>
        <item>
            <title><![CDATA[ಗಂಭೀರ್ ವಿರುದ್ಧ ತಿರುಗಿಬಿದ್ದ ಹಿರಿಯ ಆಟಗಾರರು? ಬಿಸಿಸಿಐಗೆ ತಲುಪಿದ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಜಗಳ!]]></title>
            <link>https://kannada.asianetnews.com/gallery/cricket-sports/cricket-team-india-coach-gautam-gambhir-coaching-style-senior-players-approach-bcci-report-khs-hyt5u6y</link>
            <guid isPermaLink="true">https://kannada.asianetnews.com/gallery/cricket-sports/cricket-team-india-coach-gautam-gambhir-coaching-style-senior-players-approach-bcci-report-khs-hyt5u6y</guid>
            <pubDate>Mon, 03 Aug 2026 23:00:31 +0530</pubDate>
            <description><![CDATA[&lt;p&gt;ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಬಿಸಿಸಿಐ ಮತ್ತು ಹಿರಿಯ ಆಟಗಾರರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಸೋಲಿನ ಹೊಣೆಯನ್ನು ಇತರರ ಮೇಲೆ ಹೊರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮುಂಬರುವ ಶ್ರೀಲಂಕಾ ಪ್ರವಾಸ ಅವರ ಭವಿಷ್ಯಕ್ಕೆ ನಿರ್ಣಾಯಕವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky6tw5q65mf7dpc55g638c17,imgname-gautam-gambhir-coaching-impact-on-crickters-1-1784788424421.gif" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಬಿಸಿಸಿಐ ಮತ್ತು ಹಿರಿಯ ಆಟಗಾರರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಸೋಲಿನ ಹೊಣೆಯನ್ನು ಇತರರ ಮೇಲೆ ಹೊರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮುಂಬರುವ ಶ್ರೀಲಂಕಾ ಪ್ರವಾಸ ಅವರ ಭವಿಷ್ಯಕ್ಕೆ ನಿರ್ಣಾಯಕವಾಗಿದೆ.&lt;/p&gt;&lt;img&gt;&lt;p&gt;ಭಾರತೀಯ ಪುರುಷರ ಕ್ರಿಕೆಟ್ ತಂಡದ (Indian Cricket Team) ಮುಖ್ಯ ತರಬೇತುದಾರ (Head Coach) ಗೌತಮ್ ಗಂಭೀರ್ (Gautam Gambhir) ಅವರ ಹಾದಿ ಸುಗಮವಾಗಿಲ್ಲ ಎಂಬ ಸುದ್ದಿಯೊಂದು ಕ್ರಿಕೆಟ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಂದು ವರ್ಷದ ಹಿಂದೆ ಬಿಸಿಸಿಐನಲ್ಲಿ (BCCI) ಗಂಭೀರ್ ಹೊಂದಿದ್ದ ಬೆಂಬಲ ಹಾಗೂ ಅಧಿಕಾರ ಈಗ ಕಡಿಮೆಯಾಗುತ್ತಿದ್ದು, ಅವರ ಕೋಚಿಂಗ್ ಶೈಲಿ (Coaching Style) ಬಗ್ಗೆ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ತಂಡದ ಕೆಲ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.&lt;/p&gt;&lt;img&gt;&lt;p&gt;'cricblogger.com' ವರದಿಯ ಪ್ರಕಾರ, ಟೀಮ್ ಇಂಡಿಯಾದ ಸರಣಿ ಸೋಲುಗಳಿಗೆ ಗಂಭೀರ್ ತಮ್ಮ ತರಬೇತುದಾರ ಮ್ಯಾನೇಜ್&zwnj;ಮೆಂಟ್&zwnj;ನ ನಿರ್ಧಾರಗಳ ಜವಾಬ್ದಾರಿ ವಹಿಸಿಕೊಳ್ಳುವ ಬದಲಿಗೆ, ಆಟಗಾರರು (Players), ಸೆಂಟರ್ ಆಫ್ ಎಕ್ಸಲೆನ್ಸ್ (CoE) ಅಥವಾ ಸಪೋರ್ಟ್ ಸ್ಟಾಫ್ (Support Staff) ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂಬ ಭಾವನೆ ಬಿಸಿಸಿಐ ಅಧಿಕಾರಿಗಳಲ್ಲಿ ಮೂಡಿದೆ. ಈ ವಿಷಯವು ಡ್ರೆಸ್ಸಿಂಗ್ ರೂಮ್&zwnj;ನಲ್ಲೂ (Dressing Room) ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ತಂಡದ ಕೆಲ ಹಿರಿಯ ಆಟಗಾರರು (Senior Players) ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ವಿಧಾನದ ಕುರಿತು ಭಾರತದ ಮಾಜಿ ಕ್ರಿಕೆಟಿಗರು ಹಾಗೂ ಬಿಸಿಸಿಐ ಸದಸ್ಯರ ಬಳಿ ಖಾಸಗಿಯಾಗಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ತರಬೇತುದಾರರಾಗಿ ಅಧಿಕಾರ ಸ್ವೀಕರಿಸಿದಾಗ ಗಂಭೀರ್&zwnj;ಗೆ ತಮ್ಮಿಷ್ಟದ ಸಪೋರ್ಟ್ ಸ್ಟಾಫ್ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಪೂರ್ಣ ಸ್ವಾತಂತ್ರ್ಯ ನೀಡಿತ್ತು. ಆದರೆ, ಅವರು ಪಡೆದುಕೊಂಡ ಅಧಿಕಾರಕ್ಕೆ ತಕ್ಕಂತೆ ತಂಡದ ಫಲಿತಾಂಶ ಬಂದಿಲ್ಲ ಎಂಬ ಅಭಿಪ್ರಾಯ ಮಂಡಳಿಯ ಪ್ರಮುಖರಲ್ಲಿದೆ.&lt;/p&gt;&lt;img&gt;&lt;p&gt;ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಸೋಲು ಕಂಡಾಗ ಗಂಭೀರ್ ತೀವ್ರ ವಿಮರ್ಶೆಗೆ ಗುರಿಯಾಗಿದ್ದರು. ಮುಖ್ಯ ತರಬೇತುದಾರರಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ 'ತಂಡದಲ್ಲಿ ಯಾವುದೇ ಬದಲಾವಣೆಯ ಹಂತವಿಲ್ಲ (No Transition)' ಎಂದಿದ್ದ ಗಂಭೀರ್, ಸೋಲುಗಳ ಬಳಿಕ ತಂಡ 'ಟ್ರಾನ್ಸಿಷನ್' ಹಂತದಲ್ಲಿದೆ ಎಂದು ಹೇಳಿಕೆ ನೀಡಿದ್ದು ಸೋಶಿಯಲ್ ಮೀಡಿಯಾದಲ್ಲಿ (Social Media) ತೀವ್ರ ಟ್ರೋಲ್&zwnj;ಗೆ ಕಾರಣವಾಗಿತ್ತು.&lt;/p&gt;&lt;img&gt;&lt;p&gt;ಬಿಸಿಸಿಐ ಹಾಗೂ ಗಂಭೀರ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ನಡೆಯಲಿರುವ ಶ್ರೀಲಂಕಾ ಪ್ರವಾಸ (Sri Lanka Tour) ಗೌತಮ್ ಗಂಭೀರ್ ಅವರ ತರಬೇತುದಾರ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ. ಒಂದು ವೇಳೆ ಈ ಸರಣಿಯಲ್ಲೂ ತಂಡ ಕಳಪೆ ಪ್ರದರ್ಶನ ನೀಡಿದರೆ, ಅವರ ಕೋಚಿಂಗ್ ಅವಧಿಯ ಮೇಲಿನ ಪರಿಶೀಲನೆ ಮತ್ತು ಒತ್ತಡ ಇನ್ನಷ್ಟು ತೀವ್ರಗೊಳ್ಳಲಿದೆ.&lt;/p&gt;&lt;img&gt;&lt;p&gt;ಇಷ್ಟೆಲ್ಲಾ ಗೊಂದಲಗಳಿದ್ದರೂ, ಗಂಭೀರ್ ಹುದ್ದೆಗೆ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲದಿರಲು ಪ್ರಮುಖ ಕಾರಣ ಅವರ ಒಪ್ಪಂದ! ಗೌತಮ್ ಗಂಭೀರ್ ಅವರು 2027ರ ಒಡಿಐ ವಿಶ್ವಕಪ್&zwnj;ವರೆಗೂ (2027 World Cup) ಬಿಸಿಸಿಐ ಜೊತೆ ಒಪ್ಪಂದ ಹೊಂದಿದ್ದಾರೆ. ವಿಶ್ವಕಪ್&zwnj;ಗೆ ಕೇವಲ ಒಂದು ವರ್ಷ ಸಮಯವಿರುವಾಗ ಯಾವುದೇ ಕ್ರಿಕೆಟ್ ಮಂಡಳಿಯೂ ಪ್ರಮುಖ ತರಬೇತುದಾರರನ್ನು ಹಠಾತ್ತನೆ ವಜಾಗೊಳಿಸುವುದಿಲ್ಲ.&amp;nbsp;&lt;/p&gt;&lt;p&gt;ಜೊತೆಗೆ, ಸತತ ಪ್ರಯಾಣ ಹಾಗೂ ನಿರಂತರ ಮಾಧ್ಯಮ ಪರಿಶೀಲನೆ ಇರುವ ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ತಕ್ಷಣವೇ ಬೇರೆ ಸೂಕ್ತ ಅಭ್ಯರ್ಥಿಗಳು ಸಿಗುವುದು ಕಷ್ಟಕರ ಎಂಬುದು ಮಂಡಳಿಗೆ ತಿಳಿದಿದೆ.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/cricket-team-india-coach-gautam-gambhir-coaching-style-senior-players-approach-bcci-report-khs-hyt5u6y"/>
        </item>
        <item>
            <title><![CDATA[ಅಪರೂಪದ ದಾಖಲೆಯ ಹೊಸ್ತಿಲಲ್ಲಿ ರೋಹಿತ್‌ ಶರ್ಮಾ, 24 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಸಚಿನ್‌ಗೂ ಸಾಧ್ಯವಾಗಿಲ್ಲ ಈ ದಾಖಲೆ!]]></title>
            <link>https://kannada.asianetnews.com/cricket-sports/rohit-sharma-rare-milestone-shared-field-with-984-international-players-san/articleshow-t7tqs7g</link>
            <guid isPermaLink="true">https://kannada.asianetnews.com/cricket-sports/rohit-sharma-rare-milestone-shared-field-with-984-international-players-san/articleshow-t7tqs7g</guid>
            <pubDate>Mon, 03 Aug 2026 22:54:15 +0530</pubDate>
            <description><![CDATA[&lt;p&gt;ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಒಂದು ವಿಶಿಷ್ಟ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಇನ್ನು 16 ಆಟಗಾರರೊಂದಿಗೆ ಆಡಿದರೆ 1,000 ಆಟಗಾರರೊಂದಿಗೆ ಆಡಿದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxyz96dk5vjxf724s286p5pq,imgname-asianet-bangla-thump---2026-07-20t104616.225-1784524609971.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.3):&lt;/strong&gt; ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ 'ಹಿಟ್&zwnj;ಮ್ಯಾನ್' ಎಂದೇ ಖ್ಯಾತರಾಗಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಮತ್ತೊಂದು ಅಪರೂಪದ ಹಾಗೂ ಹೈ-ವೋಲ್ಟೇಜ್ ಮೈಲಿಗಲ್ಲಿನ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ತಮ್ಮ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಈವರೆಗೆ ಒಟ್ಟು 984 ವಿಭಿನ್ನ ಅಂತಾರಾಷ್ಟ್ರೀಯ ಆಟಗಾರರೊಂದಿಗೆ (ತಮ್ಮ ಸಹ-ಆಟಗಾರರಾಗಿ ಅಥವಾ ಎದುರಾಳಿ ಆಟಗಾರರಾಗಿ) ಮೈದಾನ ಹಂಚಿಕೊಂಡಿರುವ ರೋಹಿತ್, ಇದೀಗ ಕೇವಲ 16 ಆಟಗಾರರನ್ನು ಎದುರಿಸಿದರೆ ಸಾಕು, 1,000 ವಿಭಿನ್ನ ಕ್ರಿಕೆಟಿಗರ ಜೊತೆ ಮೈದಾನ ಹಂಚಿಕೊಂಡ ಮೊದಲ ಭಾರತೀಯ ಆಟಗಾರ ಎಂಬ ಐತಿಹಾಸಿಕ ದಾಖಲೆಗೆ ಭಾಜನರಾಗಲಿದ್ದಾರೆ.&lt;/p&gt;&lt;h2&gt;&lt;strong&gt;ವಿಶ್ವದ 19 ದೇಶಗಳ ಆಟಗಾರರೊಂದಿಗೆ ಮೈದಾನ ಹಂಚಿಕೊಂಡ ಸಾಧನೆ!&lt;/strong&gt;&lt;/h2&gt;&lt;p&gt;ರೋಹಿತ್ ಶರ್ಮಾ ತಮ್ಮ ಕ್ರೀಡಾಜೀವನದಲ್ಲಿ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಒಟ್ಟು 19 ಪ್ರಮುಖ ಹಾಗೂ ಜೂನಿಯರ್ ಕ್ರಿಕೆಟ್ ರಾಷ್ಟ್ರಗಳ ಆಟಗಾರರ ವಿರುದ್ಧ/ಆಟಗಾರರೊಂದಿಗೆ ಪಂದ್ಯಗಳನ್ನಾಡಿದ್ದಾರೆ. ಅವರ ಈ 984 ಆಟಗಾರರ ವಿವರ ಇಲ್ಲಿದೆ.&lt;/p&gt;&lt;ul&gt; &lt;li&gt;ಭಾರತ: 125 ಆಟಗಾರರು&lt;/li&gt; &lt;li&gt;ಆಸ್ಟ್ರೇಲಿಯಾ: 96 ಆಟಗಾರರು&lt;/li&gt; &lt;li&gt;ಶ್ರೀಲಂಕಾ: 92 ಆಟಗಾರರು&lt;/li&gt; &lt;li&gt;ವೆಸ್ಟ್ ಇಂಡೀಸ್ : 86 ಆಟಗಾರರು&lt;/li&gt; &lt;li&gt;ದಕ್ಷಿಣ ಆಫ್ರಿಕಾ: 84 ಆಟಗಾರರು&lt;/li&gt; &lt;li&gt;ಇಂಗ್ಲೆಂಡ್: 83 ಆಟಗಾರರು&lt;/li&gt; &lt;li&gt;ನ್ಯೂಜಿಲೆಂಡ್: 72 ಆಟಗಾರರು&lt;/li&gt; &lt;li&gt;ಪಾಕಿಸ್ತಾನ: 70 ಆಟಗಾರರು&lt;/li&gt; &lt;li&gt;ಬಾಂಗ್ಲಾದೇಶ: 68 ಆಟಗಾರರು&lt;/li&gt; &lt;li&gt;ಅಫ್ಘಾನಿಸ್ತಾನ: 38 ಆಟಗಾರರು&lt;/li&gt; &lt;li&gt;ಐರ್ಲೆಂಡ್: 34 ಆಟಗಾರರು&lt;/li&gt; &lt;li&gt;ಜಿಂಬಾಬ್ವೆ: 33 ಆಟಗಾರರು&lt;/li&gt; &lt;li&gt;ಹಾಂಗ್ ಕಾಂಗ್: 26 ಆಟಗಾರರು&lt;/li&gt; &lt;li&gt;ಯುಎಇ: 17 ಆಟಗಾರರು&lt;/li&gt; &lt;li&gt;ನೆದರ್ಲ್ಯಾಂಡ್ಸ್: 16 ಆಟಗಾರರು&lt;/li&gt; &lt;li&gt;ನಮೀಬಿಯಾ: 11 ಆಟಗಾರರು&lt;/li&gt; &lt;li&gt;ನೇಪಾಳ: 11 ಆಟಗಾರರು&lt;/li&gt; &lt;li&gt;ಸ್ಕಾಟ್&zwnj;ಲ್ಯಾಂಡ್: 11 ಆಟಗಾರರು&lt;/li&gt; &lt;li&gt;ಯುಎಸ್&zwnj;ಎ: 11 ಆಟಗಾರರು&lt;/li&gt;&lt;/ul&gt;&lt;h2&gt;&lt;strong&gt;ಮತ್ತಷ್ಟು ಹತ್ತಿರದಲ್ಲಿ 'ಸಾವಿರ'ದ ಮೈಲಿಗಲ್ಲು&lt;/strong&gt;&lt;/h2&gt;&lt;p&gt;2007ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ, ಇಂದಿನವರೆಗೂ ದೀರ್ಘಾವಧಿಯ ಯಶಸ್ವಿ ಕ್ರಿಕೆಟ್ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಪ್ರಸ್ತುತ 984 ಆಟಗಾರರೊಂದಿಗೆ ಮೈದಾನ ಹಂಚಿಕೊಂಡಿರುವ ಹಿಟ್&zwnj;ಮ್ಯಾನ್&zwnj;ಗೆ ಇನ್ನು ಕೇವಲ 16 ಹೊಸ ಆಟಗಾರರು ಸಿಕ್ಕರೆ, ಅವರು 1,000 ಆಟಗಾರರ ಜೊತೆ ಜಂಟಿಯಾಗಿ ಮೈದಾನ ಹಂಚಿಕೊಂಡ ಏಕೈಕ ಭಾರತೀಯ ಎಂಬ ಅಪರೂಪದ ದಾಖಲೆ ನಿರ್ಮಿಸಲಿದ್ದಾರೆ. ಇಲ್ಲಿವರೆಗೂ ಭಾರತದ ಯಾವ ಆಟಗಾರರು ಕೂಡ ಈ ದಾಖಲೆ ಮಾಡಿಲ್ಲ.&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/rohit-sharma-rare-milestone-shared-field-with-984-international-players-san/articleshow-t7tqs7g"/>
        </item>
        <item>
            <title><![CDATA[ಟೀಂ ಇಂಡಿಯಾದ ಈ ಅಪರೂಪದ T20I ದಾಖಲೆ ಇನ್ನೂ ಅವರ ಹೆಸರಲ್ಲೇ]]></title>
            <link>https://kannada.asianetnews.com/gallery/cricket-sports/one-t20i-record-by-ajinkya-rahane-that-remains-unbroken-suh-0whovsp</link>
            <guid isPermaLink="true">https://kannada.asianetnews.com/gallery/cricket-sports/one-t20i-record-by-ajinkya-rahane-that-remains-unbroken-suh-0whovsp</guid>
            <pubDate>Sun, 02 Aug 2026 16:52:59 +0530</pubDate>
            <description><![CDATA[&lt;p&gt;ಭಾರತೀಯ ಕ್ರಿಕೆಟ್&zwnj;ನ ಪ್ರಮುಖ ಬ್ಯಾಟರ್&zwnj;ಗಳಲ್ಲಿ ಒಬ್ಬರಾಗಿದ್ದ ಅಜಿಂಕ್ಯ ರಹಾನೆ ತಮ್ಮ ವೃತ್ತಿಪರ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಜುಲೈ 30, 2026ರಂದು ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ರಹಾನೆ ಅಂತ್ಯ ಹಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k8j1t3gcqmwxqjz11effbdh9,imgname-ajinkya-rahane-on-ajit-agarkar-1761542475275.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್&zwnj;ನ ಪ್ರಮುಖ ಬ್ಯಾಟರ್&zwnj;ಗಳಲ್ಲಿ ಒಬ್ಬರಾಗಿದ್ದ ಅಜಿಂಕ್ಯ ರಹಾನೆ ತಮ್ಮ ವೃತ್ತಿಪರ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಜುಲೈ 30, 2026ರಂದು ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ರಹಾನೆ ಅಂತ್ಯ ಹಾಡಿದ್ದಾರೆ.&lt;/p&gt;&lt;img&gt;&lt;p&gt;ಭಾರತೀಯ ಕ್ರಿಕೆಟ್&zwnj;ನ ಪ್ರಮುಖ ಬ್ಯಾಟರ್&zwnj;ಗಳಲ್ಲಿ ಒಬ್ಬರಾಗಿದ್ದ ಅಜಿಂಕ್ಯ ರಹಾನೆ ತಮ್ಮ ವೃತ್ತಿಪರ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಜುಲೈ 30, 2026ರಂದು ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ರಹಾನೆ ಅಂತ್ಯ ಹಾಡಿದ್ದಾರೆ. ಮುಂಬೈನ ಬಲಗೈ ಬ್ಯಾಟರ್ ರಹಾನೆ 2011ರಿಂದ 2023ರವರೆಗೆ ಮೂರು ಮಾದರಿಯ ಕ್ರಿಕೆಟ್&zwnj;ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಹಲವು ಮಹತ್ವದ ಇನ್ನಿಂಗ್ಸ್&zwnj;ಗಳನ್ನು ಆಡಿರುವ ಅವರು, ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಆದರೆ, ಅವರ ಹೆಸರಿನಲ್ಲಿರುವ ವಿಶೇಷ T20I ದಾಖಲೆಯೊಂದು ಮಾತ್ರ ಇನ್ನೂ ಹಾಗೆಯೇ ಉಳಿದಿದೆ.&lt;/p&gt;&lt;p&gt;&lt;strong&gt;ಚೊಚ್ಚಲ T20I ಪಂದ್ಯದಲ್ಲೇ ಅಬ್ಬರಿಸಿದ್ದ ರಹಾನೆ&lt;/strong&gt;&lt;/p&gt;&lt;p&gt;ಅಜಿಂಕ್ಯ ರಹಾನೆ 2011ರ ಆಗಸ್ಟ್ 31ರಂದು ಮ್ಯಾಂಚೆಸ್ಟರ್&zwnj;ನಲ್ಲಿ ಇಂಗ್ಲೆಂಡ್ ವಿರುದ್ಧದ T20I ಪಂದ್ಯದ ಮೂಲಕ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲೇ ರಹಾನೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 39 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ಈ ಮೂಲಕ T20I ಚೊಚ್ಚಲ ಪಂದ್ಯದಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ರಹಾನೆ ತಮ್ಮ ಹೆಸರಿಗೆ ಬರೆದಿದ್ದರು. ಇಂದಿಗೂ ಈ ದಾಖಲೆ ರಹಾನೆ ಅವರ ಹೆಸರಿನಲ್ಲೇ ಉಳಿದಿದೆ.&lt;/p&gt;&lt;img&gt;&lt;p&gt;2021ರ ಮಾರ್ಚ್ 14ರಂದು ಅಹಮದಾಬಾದ್&zwnj;ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ T20I ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲೇ ಕಿಶನ್ 32 ಎಸೆತಗಳಲ್ಲಿ 56 ರನ್ ಗಳಿಸಿದ್ದರು. ಈ ಮೂಲಕ T20I ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ, ಅವರ 56 ರನ್&zwnj;ಗಳು ರಹಾನೆ ಅವರ 61 ರನ್&zwnj;ಗಳ ದಾಖಲೆಯನ್ನು ಮುರಿಯಲು ಸಾಕಾಗಲಿಲ್ಲ. ಹೀಗಾಗಿ, T20I ಚೊಚ್ಚಲ ಪಂದ್ಯದಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಗರಿಷ್ಠ ಸ್ಕೋರ್ ದಾಖಲೆ ಇನ್ನೂ ಅಜಿಂಕ್ಯ ರಹಾನೆ ಹೆಸರಿನಲ್ಲೇ ಇದೆ.&lt;/p&gt;&lt;p&gt;ವಿಶ್ವದಾಖಲೆ ಯಾರ ಹೆಸರಲ್ಲಿದೆ&lt;/p&gt;&lt;p&gt;T20I ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಕೆನಡಾದ ಮ್ಯಾಥ್ಯೂ ಸ್ಪೂರ್ಸ್ ಹೆಸರಿನಲ್ಲಿದೆ.2022ರ ಫೆಬ್ರವರಿ 18ರಂದು ಅಲ್ ಅಮೆರಾಟ್&zwnj;ನಲ್ಲಿ ಫಿಲಿಪೈನ್ಸ್ ವಿರುದ್ಧ T20I ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿದ ಸ್ಪೂರ್ಸ್, ಕೇವಲ 66 ಎಸೆತಗಳಲ್ಲಿ 108 ರನ್ ಗಳಿಸಿದ್ದರು. ಇದು T20I ಚೊಚ್ಚಲ ಪಂದ್ಯದಲ್ಲಿ ಆಟಗಾರನೊಬ್ಬ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಇನ್ನು ಟೆಸ್ಟ್ ಆಡುವ ಪೂರ್ಣ ಸದಸ್ಯ ರಾಷ್ಟ್ರಗಳ ಆಟಗಾರರನ್ನು ಪರಿಗಣಿಸಿದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಹೊಂದಿದ್ದಾರೆ. 2005ರ ಫೆಬ್ರವರಿ 17ರಂದು ಆಕ್ಲೆಂಡ್&zwnj;ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ T20I ಪಂದ್ಯದಲ್ಲಿ ಪಾಂಟಿಂಗ್ 55 ಎಸೆತಗಳಲ್ಲಿ ಅಜೇಯ 98 ರನ್ ಗಳಿಸಿದ್ದರು.&lt;/p&gt;&lt;img&gt;&lt;p&gt;ಅಜಿಂಕ್ಯ ರಹಾನೆ ಭಾರತ ಪರ ಒಟ್ಟು 20 T20I ಪಂದ್ಯಗಳನ್ನು ಆಡಿದ್ದು, 375 ರನ್ ಗಳಿಸಿದ್ದಾರೆ. ಅದೇ ರೀತಿ 90 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ 2,692 ರನ್ ಗಳಿಸಿದ್ದಾರೆ. ರಹಾನೆ ಕ್ರಿಕೆಟ್&zwnj;ನ ಮೂರು ಮಾದರಿಗಳಲ್ಲೂ ಭಾರತ ತಂಡವನ್ನು ಮುನ್ನಡೆಸಿದ ಕೆಲವೇ ಆಟಗಾರರಲ್ಲಿ ಒಬ್ಬರು.&lt;/p&gt;&lt;p&gt;ಟೆಸ್ಟ್ ಕ್ರಿಕೆಟ್&zwnj;ನಲ್ಲಿ ರಹಾನೆ ಸಾಧನೆ&lt;/p&gt;&lt;p&gt;ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಅಜಿಂಕ್ಯ ರಹಾನೆ ಅವರ ಸಾಧನೆ ಇನ್ನಷ್ಟು ಗಮನಾರ್ಹವಾಗಿದೆ.ಒಟ್ಟು 85 ಟೆಸ್ಟ್ ಪಂದ್ಯಗಳಲ್ಲಿ 5,077 ರನ್ ಗಳಿಸಿರುವ ರಹಾನೆ, ಭಾರತದ ಟೆಸ್ಟ್ ತಂಡದ ಪ್ರಮುಖ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಅಧ್ಯಾಯಗಳಲ್ಲಿ 2020-21ರ ಆಸ್ಟ್ರೇಲಿಯಾ ಪ್ರವಾಸವೂ ಒಂದು. ನಿಯಮಿತ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ರಹಾನೆ, ಆಸ್ಟ್ರೇಲಿಯಾ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ತಂದುಕೊಟ್ಟಿದ್ದರು. ಅಡಿಲೇಡ್ ಟೆಸ್ಟ್&zwnj;ನಲ್ಲಿ ಭಾರತ ಸೋತ ಬಳಿಕ, ಮೆಲ್ಬೋರ್ನ್ ಟೆಸ್ಟ್&zwnj;ನಲ್ಲಿ ಶತಕ ಸಿಡಿಸಿ ತಂಡವನ್ನು ಮುನ್ನಡೆಸಿದ ರಹಾನೆ, ನಂತರದ ಪಂದ್ಯಗಳಲ್ಲೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;img&gt;&lt;p&gt;ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ, ಐಪಿಎಲ್&zwnj;ನಲ್ಲೂ ಅಜಿಂಕ್ಯ ರಹಾನೆ ತಮ್ಮದೇ ಛಾಪು ಮೂಡಿಸಿದ್ದಾರೆ.ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ರೈಸಿಂಗ್ ಪುಣೆ ಸೂಪರ್&zwnj;ಜೈಂಟ್ಸ್, ದೆಹಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ಒಟ್ಟು ಆರು ಫ್ರಾಂಚೈಸಿಗಳ ಪರ ಅವರು ಆಡಿದ್ದಾರೆ. ಐಪಿಎಲ್&zwnj;ನಲ್ಲಿ ಒಟ್ಟು 212 ಪಂದ್ಯಗಳನ್ನು ಆಡಿರುವ ರಹಾನೆ 5,367 ರನ್ ಗಳಿಸಿದ್ದಾರೆ. 2023ರಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಮೂಲಕ ತಮ್ಮ ವೃತ್ತಿಜೀವನದ ಏಕೈಕ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡರು.&lt;/p&gt;&lt;img&gt;&lt;p&gt;2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿದ ಅಜಿಂಕ್ಯ ರಹಾನೆ, 2026ರ ಜುಲೈ 30ರಂದು ತಮ್ಮ ವೃತ್ತಿಪರ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಭಾರತೀಯ ಕ್ರಿಕೆಟ್&zwnj;ನಲ್ಲಿ ತಮ್ಮ ಶಾಂತ ಸ್ವಭಾವ, ತಾಳ್ಮೆಯ ಬ್ಯಾಟಿಂಗ್ ಮತ್ತು ಒತ್ತಡದ ಸಂದರ್ಭಗಳಲ್ಲಿ ತಂಡಕ್ಕೆ ನೆರವಾದ ಹಲವು ಪ್ರಮುಖ ಇನ್ನಿಂಗ್ಸ್&zwnj;ಗಳಿಂದ ರಹಾನೆ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.ವಿಶೇಷವಾಗಿ 2020-21ರ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆಲುವಿನ ನಾಯಕತ್ವ, ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.&lt;/p&gt;]]></content:encoded>
            <category>sports</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/cricket-sports/one-t20i-record-by-ajinkya-rahane-that-remains-unbroken-suh-0whovsp"/>
        </item>
        <item>
            <title><![CDATA[​ನಟಿ ಪ್ರೀತಿ ಜಿಂಟಾ ಜೊತೆ ಲವ್ ಆಗಿತ್ತಾ? 18 ವರ್ಷಗಳ ನಂತರ ಡೇಟಿಂಗ್ ಗುಟ್ಟು ರಟ್ಟು ಮಾಡಿದ ಬ್ರೆಟ್ ಲೀ!]]></title>
            <link>https://kannada.asianetnews.com/gallery/cricket-sports/brett-lee-reacts-to-dating-rumours-with-preity-zinta-he-clarify-never-dated-any-bollywood-actress-62l30ri</link>
            <guid isPermaLink="true">https://kannada.asianetnews.com/gallery/cricket-sports/brett-lee-reacts-to-dating-rumours-with-preity-zinta-he-clarify-never-dated-any-bollywood-actress-62l30ri</guid>
            <pubDate>Mon, 03 Aug 2026 22:39:14 +0530</pubDate>
            <description><![CDATA[&lt;p&gt;ಐಪಿಎಲ್ ಆರಂಭದ ದಿನಗಳಲ್ಲಿ ಹಬ್ಬಿದ್ದ ಪ್ರೀತಿ ಜಿಂಟಾ (Preity Zinta) ಜೊತೆಗಿನ ಪ್ರೇಮ ಸಂಬಂಧದ ವದಂತಿಗಳ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ (Brett Lee) ಮೌನ ಮುರಿದಿದ್ದಾರೆ. ತಮ್ಮಿಬ್ಬರ ನಡುವೆ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದು, ಜನರ ಮಾತಿನಿಂದ ಬೇಸರವಾಗಿಲ್ಲ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz48vf83gnyp088jr70jm5sa,imgname-preity-zinta-brett-lee-1785776160003.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಆರಂಭದ ದಿನಗಳಲ್ಲಿ ಹಬ್ಬಿದ್ದ ಪ್ರೀತಿ ಜಿಂಟಾ (Preity Zinta) ಜೊತೆಗಿನ ಪ್ರೇಮ ಸಂಬಂಧದ ವದಂತಿಗಳ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ (Brett Lee) ಮೌನ ಮುರಿದಿದ್ದಾರೆ. ತಮ್ಮಿಬ್ಬರ ನಡುವೆ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದು, ಜನರ ಮಾತಿನಿಂದ ಬೇಸರವಾಗಿಲ್ಲ ಎಂದಿದ್ದಾರೆ.&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾದ ವಿಶ್ವವಿಖ್ಯಾತ ಮಾಜಿ ವೇಗದ ಬೌಲರ್ ಬ್ರೆಟ್ ಲೀ (Brett Lee) ಹಾಗೂ ಬಾಲಿವುಡ್ ನಟಿ, 'ಪಂಜಾಬ್ ಕಿಂಗ್ಸ್' (Punjab Kings) ಫ್ರಾಂಚೈಸಿ ಸಹ-ಮಾಲಕಿ ಪ್ರೀತಿ ಜಿಂಟಾ (Preity Zinta) ನಡುವೆ ಪ್ರೇಮ ಸಂಬಂಧವಿತ್ತು (Romance Rumours) ಎಂಬ ವದಂತಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಿಕ ದಿನಗಳಲ್ಲಿ ಭಾರಿ ಸದ್ದು ಮಾಡಿದ್ದವು. ಇದೀಗ ಹಲವು ವರ್ಷಗಳ ನಂತರ ಬ್ರೆಟ್ ಲೀ ಈ ವದಂತಿಗಳ ಕುರಿತು ಮೌನ ಮುರಿದಿದ್ದು, ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವಾಗ ಎದುರಾಳಿ ಬ್ಯಾಟರ್&zwnj;ಗಳಿಗೆ ಸಿಂಹಸ್ವಪ್ನವಾಗಿದ್ದ ಬ್ರೆಟ್ ಲೀ, ಐಪಿಎಲ್&zwnj;ನಲ್ಲೂ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಆರಂಭದಲ್ಲಿ 'ಕಿಂಗ್ಸ್ ಇಲೆವೆನ್ ಪಂಜಾಬ್' (Kings XI Punjab) ತಂಡದ ಪರ ಆಡಿದ್ದ ಲೀ, ನಂತರ 'ಕೋಲ್ಕತ್ತಾ ನೈಟ್ ರೈಡರ್ಸ್' (KKR) ಪರ ಆಡಿ ನಿವೃತ್ತಿ ಪಡೆದಿದ್ದರು. ಪಂಜಾಬ್ ತಂಡದಲ್ಲಿದ್ದಾಗ ಆ ತಂಡದ ಮಾಲಕಿ ಪ್ರೀತಿ ಜಿಂಟಾ ಅವರೊಂದಿಗೆ ಲೀ ಹೆಸರು ಜೋಡಿಸಿ ಹಲವು ಲವ್ ಸ್ಟೋರಿಗಳು (Love Stories) ಹರಿದಾಡಿದ್ದವು.&lt;/p&gt;&lt;img&gt;&lt;p&gt;ಬಾಂಬೆ ಟೈಮ್ಸ್&zwnj;ಗೆ (Bombay Times) ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ 48 ವರ್ಷದ ಬ್ರೆಟ್ ಲೀ, ತಮ್ಮ ಮತ್ತು ಪ್ರೀತಿ ಜಿಂಟಾ ನಡುವಿನ ಲಿಂಕ್-ಅಪ್ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. 'ನಾನು ನನ್ನ ಜೀವನದಲ್ಲಿ ಯಾವುದೇ ಬಾಲಿವುಡ್ ನಟಿಯನ್ನೂ (Bollywood Actress) ಡೇಟ್ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ ಲೀ, 'ನನ್ನ ಮತ್ತು ಪ್ರೀತಿ ಜಿಂಟಾ ನಡುವಿನ ವದಂತಿಗಳು ನನಗೆ ಎಂದಿಗೂ ತೊಂದರೆ ನೀಡಲಿಲ್ಲ. ಏಕೆಂದರೆ ಸತ್ಯ ಏನು ಎಂಬುದು ನನಗೆ ಗೊತ್ತಿತ್ತು. ಜನರು ಏನು ಬೇಕಾದರೂ ಊಹಾಪೋಹ ಹಬ್ಬಿಸಬಹುದು, ಆದರೆ ನಾನು ಅದನ್ನು ತಲೆಗೆ ಹಾಕಿಕೊಳ್ಳಲಿಲ್ಲ' ಎಂದು ಹೇಳಿದ್ದಾರೆ.&lt;/p&gt;&lt;p&gt;ಇದೇ ವೇಳೆ ಪ್ರೀತಿ ಜಿಂಟಾ ಅವರನ್ನು ಹಾಡಿ ಹೊಗಳಿದ ಲೀ, 'ನಾವು ಇಂದಿಗೂ ಅತ್ಯುತ್ತಮ ಸ್ನೇಹಿತರು (Great Friends). ಅವರು ಅತ್ಯಂತ ಬುದ್ಧಿವಂತ ಮಹಿಳೆ ಹಾಗೂ ಅವರ ಮೇಲೆ ನನಗೆ ಅಪಾರ ಗೌರವವಿದೆ' ಎಂದಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ 2010ರಲ್ಲಿ ತಮ್ಮ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರ ನಡುವಿನ ವದಂತಿಗಳು ಗಡಿ ದಾಟಿದಾಗ ಪ್ರೀತಿ ಜಿಂಟಾ ಸೋಶಿಯಲ್ ಮೀಡಿಯಾ 'ಎಕ್ಸ್' (X - Twitter) ಖಾತೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದರು. 'ನನ್ನ ತಂಡದ ಆಟಗಾರರೊಂದಿಗೆ ನನ್ನ ಹೆಸರು ಜೋಡಿಸುವುದನ್ನು ನೋಡಿ ಸಾಕಾಗಿದೆ. ಸ್ಪಷ್ಟವಾಗಿ ಹೇಳುತ್ತಿದ್ದೇವೆ, ನಾನು ಸಿಂಗಲ್ ಆಗಿದ್ದೇನೆ ಮತ್ತು ನನ್ನ ತಂಡದ ಯಾವುದೇ ಕ್ರಿಕೆಟಿಗನನ್ನೂ ಡೇಟ್ ಮಾಡುತ್ತಿಲ್ಲ. ನಾನು ಯಾರನ್ನಾದರೂ ಪ್ರೀತಿಸಿದರೆ ನಿಮಗೇ ತಿಳಿಸುತ್ತೇನೆ' ಎಂದು ಗರಂ ಆಗಿ ಬರೆದುಕೊಂಡಿದ್ದರು.&lt;/p&gt;&lt;img&gt;&lt;p&gt;&lt;strong&gt;ಪ್ರೀತಿ ಜಿಂಟಾ (Preity Zinta): &lt;/strong&gt;2016ರಲ್ಲಿ ತಮ್ಮ ಆಪ್ತ ಸ್ನೇಹಿತ ಜೀನ್ ಗುಡ್&zwnj;ಇನಫ್ (Gene Goodenough) ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾದರು. 2021ರಲ್ಲಿ ಬಾಡಿಗೆ ತಾಯ್ತನದ (Surrogacy) ಮೂಲಕ ಅವಳಿ ಮಕ್ಕಳಿಗೆ ತಾಯಿಯಾದರು. ಸದ್ಯ ಸನ್ನಿ ಡಿಯೋಲ್ (Sunny Deol) ಅಭಿನಯದ, ಆಮೀರ್ ಖಾನ್ (Aamir Khan) ನಿರ್ಮಾಣದ 'ಬಟ್ವಾರ 1947' (Batwara 1947) ಸಿನಿಮಾ ಮೂಲಕ ಬಾಲಿವುಡ್&zwnj;ಗೆ ದೊಡ್ಡ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.&lt;/p&gt;&lt;img&gt;&lt;p&gt;2015ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸಿದ ಬ್ರೆಟ್ ಲೀ, ಆಸ್ಟ್ರೇಲಿಯಾ ಪರ 76 ಟೆಸ್ಟ್&zwnj;ಗಳಲ್ಲಿ 310 ವಿಕೆಟ್ ಹಾಗೂ 221 ಏಕದಿನ ಪಂದ್ಯಗಳಲ್ಲಿ (ODI Matches) 380 ವಿಕೆಟ್&zwnj;ಗಳನ್ನು ಕಬಳಿಸಿದ ಮಹಾನ್ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಐಪಿಎಲ್ ಆರಂಭದ ದಿನಗಳಲ್ಲಿ ಪಂಜಾಬ್ ತಂಡದ ಆಟಗಾರರಾಗಿ ಪ್ರೀತಿ ಜಿಂಟಾ ಅವರೊಂದಿಗೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದ ಬ್ರೆಟ್ ಲೀ, ತಮ್ಮಿಬ್ಬರ ನಡುವೆ ಇದ್ದದ್ದು ಕೇವಲ ಪವಿತ್ರ ಸ್ನೇಹ (Pure Friendship) ಮಾತ್ರ ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/brett-lee-reacts-to-dating-rumours-with-preity-zinta-he-clarify-never-dated-any-bollywood-actress-62l30ri"/>
        </item>
        <item>
            <title><![CDATA[ಮ್ಯಾಚ್ ಫಿಕ್ಸಿಂಗ್‌ಗೆ ಯತ್ನ: ಭಾರತೀಯ ಮೂಲದ ಈ ಕ್ರಿಕೆಟಿಗನಿಗೆ 8 ವರ್ಷ ನಿಷೇಧ!]]></title>
            <link>https://kannada.asianetnews.com/cricket-sports/icc-bans-usa-cricketer-akhilesh-reddy-for-8-years-over-match-fixing-attempt-kvn/articleshow-77w5rev</link>
            <guid isPermaLink="true">https://kannada.asianetnews.com/cricket-sports/icc-bans-usa-cricketer-akhilesh-reddy-for-8-years-over-match-fixing-attempt-kvn/articleshow-77w5rev</guid>
            <pubDate>Mon, 03 Aug 2026 17:42:50 +0530</pubDate>
            <description><![CDATA[ಭಾರತೀಯ ಮೂಲದ ಅಮೆರಿಕ ಕ್ರಿಕೆಟಿಗ ಬೋಡುಗಂ ಅಖಿಲೇಶ್ ರೆಡ್ಡಿಗೆ ಮ್ಯಾಚ್ ಫಿಕ್ಸಿಂಗ್ ಪ್ರಯತ್ನದ ಆರೋಪದ ಮೇಲೆ ಐಸಿಸಿ ಎಂಟು ವರ್ಷಗಳ ನಿಷೇಧ ಹೇರಿದೆ. ಅಬುಧಾಬಿ ಟಿ10 ಟೂರ್ನಮೆಂಟ್&zwnj;ನಲ್ಲಿ ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದು ಮತ್ತು ತನಿಖೆಗೆ ಅಡ್ಡಿಪಡಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz3kascbgzndkptjnv7pg4ry,imgname-bodugum-akhilesh-reddy-1785753593226.jpg" type="image/jpeg" height="390" width="690"/>
            <content:encoded><![CDATA[&lt;p&gt;ದುಬೈ: ಮ್ಯಾಚ್ ಫಿಕ್ಸಿಂಗ್ ಪ್ರಯತ್ನದ ಆರೋಪದ ಮೇಲೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಭಾರತೀಯ ಮೂಲದ ಅಮೆರಿಕ ಕ್ರಿಕೆಟಿಗ ಬೋಡುಗಂ ಅಖಿಲೇಶ್ ರೆಡ್ಡಿಗೆ ಎಂಟು ವರ್ಷಗಳ ಕಾಲ ನಿಷೇಧ ಹೇರಿದೆ. ಈ ಅವಧಿಯಲ್ಲಿ ಅವರು ಎಲ್ಲಾ ಮಾದರಿಯ ಕ್ರಿಕೆಟ್&zwnj;ನಿಂದ ದೂರ ಉಳಿಯಬೇಕಾಗುತ್ತದೆ. ಐಸಿಸಿ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿ ಅವರನ್ನು ದೋಷಿ ಎಂದು ತೀರ್ಮಾನಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. 26 ವರ್ಷದ ಈ ಆಟಗಾರ ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯ ಮೂರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ಖಚಿತಪಡಿಸಿದೆ.&lt;/p&gt;&lt;h2&gt;&lt;strong&gt;ಅಖಿಲೇಶ್ ರೆಡ್ಡಿ ಮೇಲೆ ಭ್ರಷ್ಟಾಚಾರ ಆರೋಪ&lt;/strong&gt;&lt;/h2&gt;&lt;p&gt;2025ರಲ್ಲಿ ನಡೆದ ಅಬುಧಾಬಿ ಟಿ10 ಟೂರ್ನಮೆಂಟ್&zwnj;ಗೆ ಸಂಬಂಧಿಸಿದಂತೆ ಅಖಿಲೇಶ್ ರೆಡ್ಡಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು. ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಪರವಾಗಿ ಐಸಿಸಿಯೇ ಈ ಟೂರ್ನಿಗೆ ಭ್ರಷ್ಟಾಚಾರ ವಿರೋಧಿ ಅಧಿಕಾರಿಯಾಗಿತ್ತು. 2025ರ ನವೆಂಬರ್ 21ರಿಂದಲೇ ಅವರು ತಾತ್ಕಾಲಿಕ ಅಮಾನತ್ತಿನಲ್ಲಿದ್ದರು. ತನಿಖೆಯ ವೇಳೆ, ಅಬುಧಾಬಿ ಟಿ10 ಪಂದ್ಯಗಳ ಫಲಿತಾಂಶ ಅಥವಾ ಗತಿಯ ಮೇಲೆ ಪ್ರಭಾವ ಬೀರಲು ಅಥವಾ ಫಿಕ್ಸಿಂಗ್ ಮಾಡಲು ಅವರು ಯತ್ನಿಸಿದ್ದು ಸಾಬೀತಾಗಿದೆ. ಅಷ್ಟೇ ಅಲ್ಲದೆ, ಟೂರ್ನಿಯಲ್ಲಿ ನಿಯಮ ಉಲ್ಲಂಘಿಸಲು ಇನ್ನೊಬ್ಬ ಆಟಗಾರನಿಗೆ ಪ್ರಚೋದನೆ ಅಥವಾ ಸಹಾಯ ಮಾಡಿದ್ದಾರೆ. ಜೊತೆಗೆ, ತನಿಖೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಮತ್ತು ಸಂದೇಶಗಳನ್ನು ಮೊಬೈಲ್ ಫೋನ್&zwnj;ನಿಂದ ಡಿಲೀಟ್ ಮಾಡಿ, ಐಸಿಸಿ ತನಿಖೆಯನ್ನು ದಾರಿತಪ್ಪಿಸಲು ಮತ್ತು ಅಡ್ಡಿಪಡಿಸಲು ಯತ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;ಹೈದರಾಬಾದ್ ಮೂಲದ ಆಟಗಾರ&lt;/strong&gt;&lt;/h3&gt;&lt;p&gt;ಹೈದರಾಬಾದ್ ಮೂಲದ ಅಖಿಲೇಶ್ ರೆಡ್ಡಿ, ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶಗಳಿಗಾಗಿ ಅಮೆರಿಕ ಕ್ರಿಕೆಟ್&zwnj;ಗೆ ಸೇರಿದ್ದರು. ಅಮೆರಿಕ ಪರ 4 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು, ಒಂದು ವಿಕೆಟ್ ಕೂಡ ಪಡೆದಿದ್ದಾರೆ. ಭಾರತದಲ್ಲಿ ವಿಜಯ್ ಹಜಾರೆ ಟ್ರೋಫಿ ತಂಡದ ಭಾಗವಾಗಿದ್ದರು. ಐಪಿಎಲ್&zwnj;ನಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ನೆಟ್ ಬೌಲರ್ ಆಗಿಯೂ ಸೇವೆ ಸಲ್ಲಿಸಿದ್ದರು. ಅಖಿಲೇಶ್ ಬಲಗೈ ಬ್ಯಾಟರ್ ಮತ್ತು ಆಫ್ ಸ್ಪಿನ್ನರ್.&lt;/p&gt;&lt;p&gt;ಇತ್ತೀಚೆಗೆ ಐಸಿಸಿ ಕ್ರಮ ಎದುರಿಸುತ್ತಿರುವ ಎರಡನೇ ಅಮೆರಿಕನ್ ಕ್ರಿಕೆಟಿಗ ಅಖಿಲೇಶ್ ರೆಡ್ಡಿ. 2024ರ ಟಿ20 ವಿಶ್ವಕಪ್&zwnj;ನಲ್ಲಿ ಅಮೆರಿಕ ತಂಡದ ಪರ ಮಿಂಚಿದ್ದ ಆರೋನ್ ಜೋನ್ಸ್ ಕೂಡ ಇದೇ ರೀತಿಯ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಈ ವರ್ಷದ ಆರಂಭದಲ್ಲಿ ಅಮಾನತುಗೊಂಡಿದ್ದರು.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/icc-bans-usa-cricketer-akhilesh-reddy-for-8-years-over-match-fixing-attempt-kvn/articleshow-77w5rev"/>
        </item>
        <item>
            <title><![CDATA[ಏಷ್ಯಾಕಪ್ 2026 ಮಹಿಳಾ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ, ಕನ್ನಡಿಗರಿಗೆ ಇದೆಯಾ ಸ್ಥಾನ?]]></title>
            <link>https://kannada.asianetnews.com/cricket-sports/india-women-squad-for-asia-cup-2026-announced-karnataka-shreyanka-patils-misses-out/articleshow-99l3zr8</link>
            <guid isPermaLink="true">https://kannada.asianetnews.com/cricket-sports/india-women-squad-for-asia-cup-2026-announced-karnataka-shreyanka-patils-misses-out/articleshow-99l3zr8</guid>
            <pubDate>Sun, 02 Aug 2026 20:05:21 +0530</pubDate>
            <description><![CDATA[&lt;p&gt;ಏಷ್ಯಾಕಪ್ 2026ರ ಮಹಿಳಾ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಹರ್ಮನ್&zwnj;ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ? ಕನ್ನಡತಿ ಶ್ರೇಯಾಂಕ ಪಾಟೀಲ್&zwnj;ಗೆ ಸ್ಥಾನವಿದೆಯಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktx802s80mbtqwg2e7f6bvhp,imgname-india-women--8--1781245414184.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.02) &lt;/strong&gt;ಬಹುನಿರೀಕ್ಷಿತ ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಹರ್ಮನ್ ಪ್ರೀತ್ ನಾಯಕತ್ವದ ಮಹಿಳಾ ತಂಡದಲ್ಲಿ ಹಲವು ಬದಲಾವಣೆಗಳಾಗಿದೆ. 18 ವರ್ಷದ ಜಿ ಕಮಲಿನಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಯಾಸ್ತಿಕಾ ಭಾಟಿಯಾ ತಂಡದಿಂದ ಹೊರಬಿದ್ದಿದ್ದಾರೆ. ಲಾರ್ಡ್ಸ್ ಟೆಸ್ಟ್&zwnj;ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ ಯಾಸ್ತಿಕಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.&lt;/p&gt;&lt;h2&gt;ಚೇತರಿಸಿಕೊಳ್ಳದ ಶ್ರೇಯಾಂಕಾ ಪಾಟೀಲ್&zwnj;ಗೆ ನಿರಾಸೆ&lt;/h2&gt;&lt;p&gt;ಶ್ರೇಯಾಂಕ ಪಾಟೀಲ್ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗಾಯಗೊಂಡು ಹೊರಬಿದ್ದ ಬಳಿಕ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಏಷ್ಯಾಕಪ್ ಟೂರ್ನಿಯಿಂದ ಶ್ರೇಯಾಂಕಾ ಪಾಟೀಲ್ ಕೈಬಿಡಲಾಗಿದೆ. ಏಷ್ಯನ್ ಗೇಮ್ಸ್&zwnj;ಗೆ ಆಯ್ಕೆ ಮಾಡಿದ ತಂಡದಲ್ಲಿ ಶ್ರೇಯಾಂಕ ಪಾಟೀಲ್ ಆಯ್ಕೆಯಾಗಿದ್ದರು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡದಿಂದ ಹೊರಬಿದ್ದ ಶ್ರೇಯಾಂಕಾ ಪಾಟೀಲ್ ಬದಲು ಲೆಗ್ ಸ್ಪಿನ್ ಆಲ್ರೌಂಡರ್ ಪ್ರೇಮಾ ರಾವತ್ ಸ್ಥಾನ ಪಡೆದಿದ್ದರು.ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೇಯಾಂಕ ಬದಲು ಪ್ರೇಮಾ ರಾವತ್ ಸ್ಥಾನ ಪಡೆದಿದ್ದಾರೆ.&lt;/p&gt;&lt;h2&gt;ಏಷ್ಯಾಕಪ್ ಮಹಿಳಾ ಟೂರ್ನಿಗೆ ಭಾರತ ತಂಡ&lt;/h2&gt;&lt;p&gt;ಹರ್ಮನ್&zwnj;ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ, ಶೆಫಾಲಿ ವರ್ಮಾ, ಜೇಮಿಯ ರೋಡ್ರಿಗಸ್, ಭಾರತಿ ಫುಲ್ಮಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಜಿ ಕಮಲಿನಿ, ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶಅರೀ ಚರ್ನಿ, ರೇನುಕಾ ಛಠಾಕೂರ್, ನಂದಿನಿ ಶರ್ಮಾ, ಕ್ರಾಂತಿ ಗೌಡ್&lt;/p&gt;&lt;h2&gt;ಮೀಸಲು ಪ್ಲೇಯರ್ಸ್&lt;/h2&gt;&lt;p&gt;ಪ್ರತಿಕಾ ರಾವಲ್, ಉಮಾ ಚೆಟ್ರಿ, ವೈಶ್ನವಿ ಶರ್ಮಾ, ಸಯಾಲಿ ಸಾಟ್ಘಾರೆ, ಮಿನ್ನು ಮಣಿ&lt;/p&gt;&lt;h2&gt;ಯಾವಾಗ ಮಹಿಳಾ ಏಷ್ಯಾಕಪ್ ಟೂರ್ನಿ&lt;/h2&gt;&lt;p&gt;ಮಹಿಳಾ ಏಷ್ಯಕಪ್ ಟೂರ್ನಿ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆಗಸ್ಟ್ ತಿಂಗಳ ಅಂತ್ಯದಿಂದ ಸೆಪ್ಟೆಂಬರ್ ಮೊದಲೆರಡು ವಾರಗಳಲ್ಲಿ ನಡೆಯಲಿದೆ. ಏಷ್ಯಾಕಪ್ ಟೂರ್ನಿ ಭಾರತ ತಂಡದಕ್ಕೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ತಯಾರಿಗೆ ಪ್ರಮುಖವಾಗಿದೆ. ಜಪಾನ್&zwnj;ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 17 ರಿಂದ 22ರ ವರೆಗೆ ನಡೆಯಲಿದೆ.&lt;/p&gt;&lt;p&gt;ಸದ್ಯ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯರು ಇಂಗ್ಲೆಂಡ್&zwnj;ನಲ್ಲಿನ ದಿ ಹಂಡ್ರೆಡ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಸ್ಮೃತಿ ಮಂಧನಾ, ಜೇಮಿಯ ರೋಡ್ರಿಗಸ್, ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದಾರೆ. ಏಷ್ಯಾಕಪ್ ಮೂಲಕ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ಮರಳಲಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/india-women-squad-for-asia-cup-2026-announced-karnataka-shreyanka-patils-misses-out/articleshow-99l3zr8"/>
        </item>
        <item>
            <title><![CDATA[25 ಸಿಕ್ಸರ್, 14 ಬೌಂಡರಿ, 233 ರನ್! ಸಿಡಿಲಬ್ಬರದ ದ್ವಿಶತಕ ಸಿಡಿಸಿ ಆಯ್ಕೆಗಾರರಿಗೆ 'ಸಿಗ್ನಲ್' ಕೊಟ್ಟ ಅಭಿಷೇಕ್ ಶರ್ಮಾ]]></title>
            <link>https://kannada.asianetnews.com/cricket-sports/25-sixes-14-fours-233-runs-abhishek-sharma-sends-a-strong-message-to-selectors/articleshow-b22ftx3</link>
            <guid isPermaLink="true">https://kannada.asianetnews.com/cricket-sports/25-sixes-14-fours-233-runs-abhishek-sharma-sends-a-strong-message-to-selectors/articleshow-b22ftx3</guid>
            <pubDate>Mon, 03 Aug 2026 07:55:57 +0530</pubDate>
            <description><![CDATA[&lt;p&gt;ಟಿ20 ಸರಣಿಯಲ್ಲಿ ನಿರಾಸೆ ಮೂಡಿಸಿದ್ದ ಅಭಿಷೇಕ್ ಶರ್ಮಾ ದೇಶೀಯ ಕ್ರಿಕೆಟ್&zwnj;ನಲ್ಲಿ ಭರ್ಜರಿ ಕಮ್&zwnj;ಬ್ಯಾಕ್ ಮಾಡಿದ್ದಾರೆ. ಪಂಜಾಬ್ ಸ್ಟೇಟ್ ಇಂಟರ್ ಡಿಸ್ಟ್ರಿಕ್ಟ್ ಏಕದಿನ ಟೂರ್ನಿಯಲ್ಲಿ ಕೇವಲ 91 ಎಸೆತಗಳಲ್ಲಿ 233 ರನ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. 15 ಬೌಂಡರಿ, 25 ಸಿಕ್ಸರ್&zwnj;ಗಳೊಂದಿಗೆ ಅಮೃತಸರ ತಂಡವನ್ನು 533 ರನ್&zwnj;ಗಳ ಬೃಹತ್ ಮೊತ್ತದತ್ತ ಮುನ್ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz2q0vze3qe4d76j6szmgvez,imgname-abhishek-sharma-1785723908077.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸ್ಥಳೀಯ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಸ್ಫೋಟಕ ಪ್ರದರ್ಶನ!&lt;/strong&gt;&lt;/p&gt;&lt;p&gt;ಇತ್ತೀಚಿನ ಟಿ20 ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಟೀಕೆಗೆ ಗುರಿಯಾಗಿದ್ದ ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ, ಇದೀಗ ದೇಶೀಯ ಕ್ರಿಕೆಟ್&zwnj;ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪಂಜಾಬ್ ಸ್ಟೇಟ್ ಇಂಟರ್ ಡಿಸ್ಟ್ರಿಕ್ಟ್ ಸೀನಿಯರ್ ಏಕದಿನ ಟೂರ್ನಿಯಲ್ಲಿ ಅಮೃತಸರ ತಂಡದ ಪರ ಆಡಿದ ಅವರು ಟಾರ್ನ್ ತರನ್ ವಿರುದ್ಧ ಕೇವಲ 91 ಎಸೆತಗಳಲ್ಲಿ ಭರ್ಜರಿ 233 ರನ್ ಸಿಡಿಸಿ ತಮ್ಮ ಫಾರ್ಮ್&zwnj;ಗೆ ಮರಳಿರುವುದನ್ನು ಸಾಬೀತುಪಡಿಸಿದರು.&lt;/p&gt;&lt;p&gt;&lt;strong&gt;15 ಬೌಂಡರಿ, 25 ಸಿಕ್ಸರ್&zwnj;ಗಳ ಅಬ್ಬರ!&lt;/strong&gt;&lt;/p&gt;&lt;p&gt;25 ವರ್ಷದ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್ ಸಂಪೂರ್ಣ ಸ್ಫೋಟಕವಾಗಿತ್ತು. ಅವರು 15 ಬೌಂಡರಿ ಹಾಗೂ ಬರೋಬ್ಬರಿ 25 ಸಿಕ್ಸರ್&zwnj;ಗಳನ್ನು ಬಾರಿಸಿ 256.04ರ ಸ್ಟ್ರೈಕ್&zwnj;ರೇಟ್&zwnj;ನಲ್ಲಿ ಬ್ಯಾಟಿಂಗ್ ನಡೆಸಿದರು. ಎದುರಾಳಿ ಬೌಲರ್&zwnj;ಗಳಿಗೆ ಯಾವುದೇ ಅವಕಾಶ ನೀಡದೆ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು.&lt;/p&gt;&lt;p&gt;&lt;strong&gt;305 ರನ್&zwnj;ಗಳ ದಾಖಲೆಯ ಜೊತೆಯಾಟ!&lt;/strong&gt;&lt;/p&gt;&lt;p&gt;ಅಭಿಷೇಕ್ ಶರ್ಮಾ ಮತ್ತು ಅಭಯ್ ಚೌಧರಿ ಅಮೃತಸರ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್&zwnj;ಗೆ 305 ರನ್&zwnj;ಗಳ ಭಾರೀ ಜೊತೆಯಾಟ ಕಟ್ಟಿತು. ಅಭಯ್ ಚೌಧರಿ 85 ಎಸೆತಗಳಲ್ಲಿ 93 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಬಳಿಕ ಅಭಿಷೇಕ್ 25ನೇ ಓವರ್&zwnj;ನಲ್ಲಿ ಔಟಾದರೂ ತಂಡಕ್ಕೆ ಬೃಹತ್ ಅಡಿಪಾಯ ಹಾಕಿದ್ದರು.&lt;/p&gt;&lt;p&gt;&lt;strong&gt;533 ರನ್&zwnj;ಗಳ ಬೃಹತ್ ಮೊತ್ತ ಪೇರಿಸಿದ ಅಮೃತಸರ!&lt;/strong&gt;&lt;/p&gt;&lt;p&gt;ಅಭಿಷೇಕ್ ಅವರ ಸ್ಫೋಟಕ ಬ್ಯಾಟಿಂಗ್&zwnj;ನ ನೆರವಿನಿಂದ ಅಮೃತಸರ ತಂಡವು 50 ಓವರ್&zwnj;ಗಳಲ್ಲಿ 8 ವಿಕೆಟ್ ನಷ್ಟಕ್ಕೆ 533 ರನ್&zwnj;ಗಳ ಬೃಹತ್ ಮೊತ್ತ ದಾಖಲಿಸಿತು. ತಂಡದಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ವಿಕೆಟ್ ಕೀಪರ್-ಬ್ಯಾಟರ್ ಸಲೀಲ್ ಅರೋರಾ ಕೂಡ ಆಡಿದ್ದು, ಅವರು 18 ಎಸೆತಗಳಲ್ಲಿ 29 ರನ್ ಸೇರಿಸಿದರು.&lt;/p&gt;&lt;p&gt;&lt;strong&gt;ಟೀಕೆಗೆ ಬ್ಯಾಟ್&zwnj;ನಿಂದಲೇ ಉತ್ತರ!&lt;/strong&gt;&lt;/p&gt;&lt;p&gt;ಜಿಂಬಾಬ್ವೆ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಅಭಿಷೇಕ್ ಕ್ರಮವಾಗಿ 1, 8 ಹಾಗೂ 2 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಅದರ ಪರಿಣಾಮವಾಗಿ ಸಾಕಷ್ಟು ಟೀಕೆ ಎದುರಿಸಬೇಕಾಯಿತು. ಆದರೆ ಈ ದ್ವಿಶತಕದ ಇನ್ನಿಂಗ್ಸ್ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಸಿಕ್ಸರ್&zwnj;ಗಳಲ್ಲಿ ಒಂದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಮುಂದಿನ ತಿಂಗಳು ಜಪಾನ್&zwnj;ನಲ್ಲಿ ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡದಲ್ಲಿ ಅಭಿಷೇಕ್ ಪ್ರಮುಖ ಆಟಗಾರರಾಗುವ ನಿರೀಕ್ಷೆಯಿದ್ದು, ಈ ಸ್ಫೋಟಕ ಪ್ರದರ್ಶನ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವಂತಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ABHISHEK SHARMA MAKES A STATEMENT - He smashed 233 runs from just 91 balls with 15 fours &amp;amp; 25 sixes against Tarn Taran Men Sr in the One Day District match pic.twitter.com/QV4k83Oo5e&lt;/p&gt;&lt;p&gt;&mdash; Johns. (@CricCrazyJohns) August 2, 2026&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/25-sixes-14-fours-233-runs-abhishek-sharma-sends-a-strong-message-to-selectors/articleshow-b22ftx3"/>
        </item>
        <item>
            <title><![CDATA[ಸಾಲು ಸಾಲು ಸೋಲು, ಅವಮಾನ.. ತಿರುಪತಿಗೆ ಬಂದು ಹರಕೆ ತೀರಿಸಿದ ಪಾಂಡ್ಯ]]></title>
            <link>https://kannada.asianetnews.com/cricket-sports/hardik-pandya-came-to-tirupati-with-girlfriend-mahika-sharma-and-fulfilled-his-vow-by-tonsuring-his-head-gkn/articleshow-bw6wybb</link>
            <guid isPermaLink="true">https://kannada.asianetnews.com/cricket-sports/hardik-pandya-came-to-tirupati-with-girlfriend-mahika-sharma-and-fulfilled-his-vow-by-tonsuring-his-head-gkn/articleshow-bw6wybb</guid>
            <pubDate>Sun, 02 Aug 2026 09:42:58 +0530</pubDate>
            <description><![CDATA[ವೃತ್ತಿಬದುಕಿನ ಸಂಕಷ್ಟಗಳಿಂದ ಕಂಗೆಟ್ಟಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಐಪಿಎಲ್&zwnj;ನಲ್ಲಿ ಮುಂಬೈ ಇಂಡಿಯನ್ಸ್ ತೊರೆದು ಕೆಕೆಆರ್ ಸೇರುವ ವದಂತಿಗಳ ನಡುವೆ, ಅವರ ಈ ದೈವಭಕ್ತಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz0anmrva8hdfdpkd9fyc837,imgname-hardik-pandya-in-tirupati-temple--1--1785643848473.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುಪತಿ:&lt;/strong&gt; ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಕ್ರಿಕೆಟ್ ಮೈದಾನಕ್ಕಿಂತ ಹೆಚ್ಚಾಗಿ ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ವೈಫಲ್ಯಗಳು, ಗಾಯದ ಸಮಸ್ಯೆ ಹಾಗೂ ವೃತ್ತಿಬದುಕಿನ ಸಂಕಷ್ಟಗಳಿಂದ ಕಂಗೆಟ್ಟಿರುವ ಪಾಂಡ್ಯ, ಈಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಕಷ್ಟಗಳ ನಿವಾರಣೆಗೆ ಮುಡಿ ಕೊಟ್ಟ ಪಾಂಡ್ಯ&lt;/strong&gt;&lt;/h2&gt;&lt;p&gt;ಕಳೆದ ಕೆಲವು ಸಮಯದಿಂದ ಪಾಂಡ್ಯ ಅವರಿಗೆ ಟೈಂ ಅಷ್ಟೇನೂ ಸರಿ ಇಲ್ಲ. ಮೈದಾನದಲ್ಲಿ ಫಾರ್ಮ್ ಕಳೆದುಕೊಂಡಿರುವುದು ಒಂದೆಡೆಯಾದರೆ, ಫಿಟ್ನೆಸ್ ಸಮಸ್ಯೆ ಮತ್ತೊಂದೆಡೆ ಅವರನ್ನು ಕಾಡುತ್ತಿದೆ. ಇದೀಗ ತಿರುಪತಿಗೆ ಭೇಟಿ ನೀಡಿದ ಹಾರ್ದಿಕ್, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ನನ್ನ ಎಲ್ಲ ಸಂಕಷ್ಟಗಳನ್ನು ನೀನೇ ನಿವಾರಿಸು ತಂದೆ ಎಂದು ತಿಮ್ಮಪ್ಪನಿಗೆ ಮುಡಿ ಕೊಟ್ಟು (ಕೂದಲು ಅರ್ಪಿಸಿ), ಹರಕೆ ತೀರಿಸಿದ್ದಾರೆ. ಈ ವೇಳೆ ಪಾಂಡ್ಯ ಅವರೊಂದಿಗೆ ಗೆಳತಿ ಎನ್ನಲಾದ ಮಹಿಕಾ ಶರ್ಮಾ ಕೂಡ ಸಾಥ್ ನೀಡಿರುವುದು ಕುತೂಹಲ ಮೂಡಿಸಿದೆ.&lt;/p&gt;&lt;h2&gt;&lt;strong&gt;ಕೈಕೊಟ್ಟ ವೃತ್ತಿಬದುಕು&lt;/strong&gt;&lt;/h2&gt;&lt;p&gt;ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಮುಂದಿನ ನಾಯಕ ಎಂದೇ ಬಿಂಬಿತವಾಗಿದ್ದ ಪಾಂಡ್ಯಗೆ ಈಗ ಕಾಲ ಬದಲಾಗಿದೆ. ಟಿ20 ನಾಯಕತ್ವದ ರೇಸ್&zwnj;ನಲ್ಲಿದ್ದ ಅವರಿಗೆ ಇಂದು ಅದು ಗಗನ ಕುಸುಮವಾಗಿದೆ. ಪದೇ ಪದೇ ಕಾಡುತ್ತಿರುವ ಗಾಯದ ಸಮಸ್ಯೆಯಿಂದಾಗಿ ತಂಡದಲ್ಲಿ ಸರಿಯಾಗಿ ಸ್ಥಾನ ಕೂಡ ಸಿಗುತ್ತಿಲ್ಲ. ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಕಳೆದ ಎರಡು ಸೀಸನ್&zwnj;ಗಳಲ್ಲಿ ತಂಡವು ಹೀನಾಯ ಪ್ರದರ್ಶನ ನೀಡಿದೆ. ಅಭಿಮಾನಿಗಳ ಕೆಂಗಣ್ಣಿಗೂ ಅವರು ಗುರಿಯಾಗಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಮುಂಬೈ ಇಂಡಿಯನ್ಸ್ ತಂಡದ ಒಳಗಿನ ಆಂತರಿಕ ಕಲಹ ಹಾಗೂ ಸತತ ಸೋಲುಗಳಿಂದ ಬೇಸತ್ತಿರುವ ಹಾರ್ದಿಕ್ ಪಾಂಡ್ಯ, ಮುಂಬೈ ಫ್ರಾಂಚೈಸಿಯನ್ನು ತೊರೆಯಲು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ, ಅವರು ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ದೊಡ್ಡ ಬದಲಾವಣೆಗೂ ಮುನ್ನ ದೈವದ ಆಶೀರ್ವಾದ ಪಡೆಯಲು ಪಾಂಡ್ಯ ತಿಮ್ಮಪ್ಪನ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;h2&gt;&lt;strong&gt;ಮತ್ತೆ ಹಳೆ ಪಾಂಡ್ಯ ಮರಳಿ ಬರಲಿ&lt;/strong&gt;&lt;/h2&gt;&lt;p&gt;ಹಾರ್ದಿಕ್ ಪಾಂಡ್ಯ ಅವರ ಈ ಭಕ್ತಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಹಲವು ಮಂದಿ ನಿಮ್ಮನ್ನು ಬೆನ್ನಿಗೆ ಚೂರಿ ಹಾಕಿರಬಹುದು ಅಥವಾ ಕೈಕೊಟ್ಟಿರಬಹುದು, ಆದರೆ ನಿಮ್ಮ ಪ್ರತಿಭೆ ನಿಮ್ಮ ಕೈಬಿಡುವುದಿಲ್ಲ. ಸ್ಟ್ರಾಂಗ್ ಕಂಬ್ಯಾಕ್ ಮಾಡಿ ಎಂದು ಹಾರೈಸುತ್ತಿದ್ದಾರೆ. ತಿಮ್ಮಪ್ಪನ ಆಶೀರ್ವಾದದೊಂದಿಗೆ ಈ ಎಂವಿಪಿ (MVP) ಆಟಗಾರ ಮತ್ತೆ ಹಳೆಯ ಲಯಕ್ಕೆ ಮರಳುತ್ತಾರಾ? ಅವರ ಮುಂದಿನ ಹಾದಿ ಸುಗಮವಾಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Tirupati_The_Spiritual_Capital (@tirupati_the_spiritual_capital)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/hardik-pandya-came-to-tirupati-with-girlfriend-mahika-sharma-and-fulfilled-his-vow-by-tonsuring-his-head-gkn/articleshow-bw6wybb"/>
        </item>
        <item>
            <title><![CDATA[ಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ಮತ್ತೋರ್ವ ಕೋಚ್ ತಲೆದಂಡ; ಹೊಸ ಕೋಚ್ ಅಧಿಕೃತವಾಗಿ ನೇಮಕ]]></title>
            <link>https://kannada.asianetnews.com/cricket-sports/bcci-appoints-shubhadeep-ghosh-as-team-india-new-fielding-coach-after-t-dilip-exit-kvn/articleshow-hp2gw16</link>
            <guid isPermaLink="true">https://kannada.asianetnews.com/cricket-sports/bcci-appoints-shubhadeep-ghosh-as-team-india-new-fielding-coach-after-t-dilip-exit-kvn/articleshow-hp2gw16</guid>
            <pubDate>Mon, 03 Aug 2026 12:35:52 +0530</pubDate>
            <description><![CDATA[ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲಿಪ್ ಅವರ ಒಪ್ಪಂದವನ್ನು ಬಿಸಿಸಿಐ ಮುಂದುವರೆಸಿಲ್ಲ. ಅವರ ಸ್ಥಾನಕ್ಕೆ ಭಾರತ ಮಹಿಳಾ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆಗಿದ್ದ ಶುಭದೀಪ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಘೋಷ್ ತಮ್ಮ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxav81651zwk5w61v09jg8fp,imgname-team-india-undergoes-two-changes-1783849288901.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಸೀಮಿತ ಓವರ್&zwnj;ಗಳ ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿಯಾಗಲಿದೆ ಎನ್ನುವ ನಿರೀಕ್ಷೆ ನಿಜವಾಗಿದೆ. ಕೆಲ ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿದ್ದ ರ್&zwj;ಯಾನ್&zwnj; ಟೆನ್&zwnj; ಡೊಶ್ಕ್ಯಾಟೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಟೀಂ ಇಂಡಿಯಾ ಫೀಲ್ಡಿಂಗ್&zwnj; ಕೋಚ್ ಟಿ. ದಿಲಿಪ್&zwnj; ತಲೆದಂಡವಾಗಿದ್ದು, ಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ನೂತನ ಫೀಲ್ಡಿಂಗ್&zwnj; ಕೋಚ್ ಆಗಿ ಶುಭದೀಪ್ ಘೋಷ್ ನೇಮಕವಾಗಿದ್ದಾರೆ.&lt;/p&gt;&lt;p&gt;2025ರ ಇಂಗ್ಲೆಂಡ್&zwnj; ಪ್ರವಾಸಕ್ಕೂ ಮುನ್ನ ಟಿ ದಿಲಿಪ್ ಅವರನ್ನು ಎರಡನೇ ಅವಧಿಗೆ ಒಂದು ವರ್ಷದ ಅವಧಿಗೆ ಭಾರತದ ಫೀಲ್ಡಿಂಗ್ ಕೋಚ್ ಆಗಿ ನೇಮಕವಾಗಿದ್ದರು. ಇದೀಗ ದಿಲಿಪ್ ಅವರ ಕಾಂಟ್ರ್ಯಾಕ್ಟ್ ಕೊನೆಯಾದ ಬೆನ್ನಲ್ಲೇ ಮತ್ತೆ ಅವರ ಜತೆಗಿನ ಒಪ್ಪಂದಾವಧಿ ಮುಂದುವರೆಸದಿರಲು ಬಿಸಿಸಿಐ ತೀರ್ಮಾನಿಸಿದೆ. ಟಿ ದಿಲಿಪ್, 2021ರಲ್ಲಿ ಭಾರತಕ್ಕೆ ಮೊದಲ ಅವಧಿಯಲ್ಲಿ ಫೀಲ್ಡಿಂಗ್ ಕೋಚ್ ಆಗಿ ತೀರ್ಮಾನಿಸಿದ್ದರು. 2021ರಿಂದ ಟಿ ದಿಲಿಪ್ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿವರೆಗೂ ದಿಲಿಪ್ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಒಂದು ವರ್ಷದ ಅವಧಿಗೆ ಅವರ ಕಾಂಟ್ರ್ಯಾಕ್ಟ್ ವಿಸ್ತರಿಸಲಾಗಿತ್ತು.&lt;/p&gt;&lt;p&gt;Subhadeep Ghosh has been confirmed as India's new fielding coach.Ghosh represented both Assam and Railways during his playing career and later served as Assam coach.His first assignment will be India's Test tour of Sri Lanka.#SLvsIND pic.twitter.com/LWwJEggwyI&lt;/p&gt;&lt;p&gt;&mdash; Cricbuzz (@cricbuzz) August 2, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಭಾರತದ ನೂತನ ಫೀಲ್ಡಿಂಗ್ ಕೋಚ್ ಶುಭದೀಪ್ ಘೋಷ್ ಯಾರು? ಹಿನ್ನಲೆಯೇನು?&lt;/strong&gt;&lt;/h2&gt;&lt;p&gt;57 ವರ್ಷದ ಶುಭದೀಪ್ ಘೋಷ್, ಫೀಲ್ಡಿಂಗ್ ಕೋಚ್ ಆಗಿ ಈಗಾಗಲೇ ಅಪಾರ ಅನುಭವ ಹೊಂದಿದ್ದಾರೆ. ಈ ಮೊದಲು ಶುಭದೀಪ್ ಘೋಷ್ ಭಾರತ ಮಹಿಳಾ ಕ್ರಿಕೆಟ್ ತಂಡ ಕೋಚ್ ಆಗಿ ಸೈ ಎನಿಸಿಕೊಂಡಿದ್ದರು. ಶುಭದೀಪ್ ಘೋಷ್, 2022ರ ಮಹಿಳಾ ಏಕದಿನ ವಿಶ್ವಕಪ್&zwnj;ನಿಂದ 2023ರ ಟಿ20 ವಿಶ್ವಕಪ್&zwnj;ವರೆಗೆ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.&lt;/p&gt;&lt;p&gt;ಶುಭದೀಪ್ ಘೋಷ್, ಈ ಮೊದಲು ಭಾರತ 'ಎ' ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದರ ಜತೆಗೆ ಅಸ್ಸಾಂ ಹಿರಿಯರ ಕ್ರಿಕೆಟ್ ತಂಡದ ಹೆಡ್&zwnj; ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಶುಭದೀಪ್ ಸಿಂಗ್, ಕೋಚ್ ಆಗಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಮುನ್ನ, ದೇಶಿ ಕ್ರಿಕೆಟ್&zwnj;ನಲ್ಲಿ ಬಲಗೈ ಬ್ಯಾಟರ್ ಆಗಿ ಅಸ್ಸಾಂ ಹಾಗೂ ರೈಲ್ವೇಸ್ ಪರ ತಲಾ 17 ಪ್ರಥಮ ದರ್ಜೆ ಹಾಗೂ 17 ಲಿಸ್ಟ್&zwnj; 'ಎ' ಪಂದ್ಯಗಳನ್ನಾಡಿದ್ದಾರೆ.&lt;/p&gt;&lt;h3&gt;&lt;strong&gt;ಭಾರತ-ಶ್ರೀಲಂಕಾ ಎರಡು ಪಂದ್ಯಗಳ ಟೆಸ್ಟ್ ಸರಣಿ&lt;/strong&gt;&lt;/h3&gt;&lt;p&gt;ಶುಭ್&zwnj;ಮನ್ ಗಿಲ್ ನೇತೃತ್ವದ ಭಾರತ ತಂಡವು ಇದೇ ಆಗಸ್ಟ್&zwnj; 4ರಂದು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಆಗಸ್ಟ್&zwnj; 7ರಂದು ಕೊಲಂಬೊದಲ್ಲಿ ಮೂರು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಇದಾದ ಬಳಿಕ ಆಗಸ್ಟ್&zwnj; 15ರಂದು ಗಾಲೆಯಲ್ಲಿ ಶ್ರೀಲಂಕಾ ವಿರುದ್ದ ಭಾರತ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಇನ್ನು ಎರಡನೇ ಪಂದ್ಯವು ಆಗಸ್ಟ್ 23ರಿಂದ ಕೊಲಂಬೊದಲ್ಲಿ ಉಭಯ ತಂಡಗಳು ಕಾದಾಡಲಿವೆ. ಈ ಸರಣಿ ಮೂಲಕ ಶುಭದೀಪ್ ಘೋಷ್, ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/bcci-appoints-shubhadeep-ghosh-as-team-india-new-fielding-coach-after-t-dilip-exit-kvn/articleshow-hp2gw16"/>
        </item>
        <item>
            <title><![CDATA['ಧೋನಿ ಅಲ್ಲವೇ ಅಲ್ಲ!': ಟೀಮ್ ಇಂಡಿಯಾದ ಗ್ರೇಟೆಸ್ಟ್ 'ಕ್ರಿಕೆಟಿಂಗ್ ಬ್ರೈನ್' ಹೆಸರಿಸಿದ ಸಿಎಸ್‌ಕೆ ಮಾಜಿ ಆಟಗಾರ]]></title>
            <link>https://kannada.asianetnews.com/cricket-sports/csk-former-player-england-all-rounder-moeen-ali-names-ashish-nehra-as-the-best-cricketing-brain-of-india/articleshow-i66muqt</link>
            <guid isPermaLink="true">https://kannada.asianetnews.com/cricket-sports/csk-former-player-england-all-rounder-moeen-ali-names-ashish-nehra-as-the-best-cricketing-brain-of-india/articleshow-i66muqt</guid>
            <pubDate>Mon, 03 Aug 2026 12:30:14 +0530</pubDate>
            <description><![CDATA[&lt;p&gt;ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರನ್ನು ಇಂಗ್ಲೆಂಡ್&zwnj;ನ ಮಾಜಿ ಕ್ರಿಕೆಟಿಗ ಮೊಯಿನ್ ಅಲಿ 'ತಾವು ಕಂಡ ಅತ್ಯುತ್ತಮ ಕ್ರಿಕೆಟ್ ಮೆದುಳು' ಎಂದು ಕೊಂಡಾಡಿದ್ದಾರೆ. ಆಟದ ಪ್ರತಿಯೊಂದು ಸನ್ನಿವೇಶಕ್ಕೂ ಸ್ಪಷ್ಟ ಯೋಜನೆ, ಅಂಕಿ-ಅಂಶ ಆಧಾರಿತ ನಿರ್ಧಾರಗಳು ಹಾಗೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯವೇ ನೆಹ್ರಾ ಅವರ ದೊಡ್ಡ ಶಕ್ತಿ ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1g6a0h3f0p3ysaazhxks2s,imgname-moeen-ali-s-take-on-cricketing-brain-of-india-ashish-nehra-1785683191824.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಂತ್ರಗಾರನಾಗಿ ನೆಹ್ರಾ ಬಗ್ಗೆ ಮೊಯಿನ್ ಅಲಿಯ ಪ್ರಶಂಸೆ!&lt;/strong&gt;&lt;/p&gt;&lt;p&gt;ಇಂಗ್ಲೆಂಡ್&zwnj;ನ ಮಾಜಿ ಆಲ್&zwnj;ರೌಂಡರ್ ಮೊಯಿನ್ ಅಲಿ, ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರನ್ನು ತಾವು ಕಂಡ ಅತ್ಯುತ್ತಮ ಕ್ರಿಕೆಟ್ ಮೆದುಳು ಎಂದು ಕೊಂಡಾಡಿದ್ದಾರೆ. ವಿಶ್ವದ ಹಲವು ದಿಗ್ಗಜ ನಾಯಕರು ಮತ್ತು ಕೋಚ್&zwnj;ಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ಮೊಯಿನ್, ನೆಹ್ರಾ ಅವರ ಆಟದ ತಿಳುವಳಿಕೆ, ಪರಿಸ್ಥಿತಿಗೆ ತಕ್ಕ ತಂತ್ರ ರೂಪಿಸುವ ಸಾಮರ್ಥ್ಯ ಮತ್ತು ತಂಡವನ್ನು ಮುನ್ನಡೆಸುವ ಶೈಲಿ ಅಪರೂಪದ್ದು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಆರ್&zwnj;ಸಿಬಿಯಿಂದ ಗುಜರಾತ್ ಟೈಟಾನ್ಸ್ ತನಕ ಯಶಸ್ಸಿನ ಪಯಣ!&lt;/strong&gt;&lt;/p&gt;&lt;p&gt;2018-19ರ ಅವಧಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ ವೇಳೆ ನೆಹ್ರಾ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸುವ ಅವಕಾಶ ಮೊಯಿನ್ ಅಲಿಗೆ ಸಿಕ್ಕಿತ್ತು. ಆರಂಭದಲ್ಲಿ ಆರ್&zwnj;ಸಿಬಿಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ, 2022ರಲ್ಲಿ ಗುಜರಾತ್ ಟೈಟಾನ್ಸ್&zwnj;ಗೆ ಮುಖ್ಯ ಕೋಚ್ ಆದ ನಂತರ ನೆಹ್ರಾ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಚೊಚ್ಚಲ ಸೀಸನ್&zwnj;ನಲ್ಲೇ ತಂಡಕ್ಕೆ ಐಪಿಎಲ್ ಪ್ರಶಸ್ತಿ ತಂದುಕೊಟ್ಟು, ಟ್ರೋಫಿ ಗೆದ್ದ ಮೊದಲ ಭಾರತೀಯ ಮುಖ್ಯ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.&lt;/p&gt;&lt;p&gt;&lt;strong&gt;'ಪ್ರತಿ ಸನ್ನಿವೇಶಕ್ಕೂ ನೆಹ್ರಾ ಬಳಿ ಸ್ಪಷ್ಟ ಯೋಜನೆ'&lt;/strong&gt;&lt;/p&gt;&lt;p&gt;ಕ್ರಿಕೆಟ್ ಕುರಿತು ಮಾತನಾಡುವಾಗ ನೆಹ್ರಾ ಕೇವಲ ಅಭಿಪ್ರಾಯ ನೀಡುವುದಿಲ್ಲ; ಪ್ರತಿಯೊಂದು ನಿರ್ಧಾರದ ಹಿಂದೆಯೂ ಅಂಕಿ-ಅಂಶಗಳು, ಹಿಂದಿನ ಉದಾಹರಣೆಗಳು ಮತ್ತು ಸ್ಪಷ್ಟವಾದ ತರ್ಕ ಇರುತ್ತದೆ ಎಂದು ಮೊಯಿನ್ ಹೇಳಿದ್ದಾರೆ. ಯಾವ ಆಟಗಾರನನ್ನು ಯಾವ ಸಂದರ್ಭದಲ್ಲಿ ಬಳಸಬೇಕು, ಎದುರಾಳಿಯ ಬಲ-ದುರ್ಬಲತೆ ಏನು, ಪಂದ್ಯದ ದಿಕ್ಕು ಹೇಗೆ ಬದಲಾಗಬಹುದು ಎಂಬುದರ ಬಗ್ಗೆ ನೆಹ್ರಾ ಸದಾ ಸಿದ್ಧರಾಗಿರುತ್ತಾರೆ ಎಂದು ಅವರು ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ತಂಡ ನಿರ್ವಹಣೆಯಲ್ಲೂ ವಿಶೇಷ ಸಾಮರ್ಥ್ಯ..!&lt;/strong&gt;&lt;/p&gt;&lt;p&gt;ಮೊಯಿನ್ ಅಲಿ ಅವರ ಪ್ರಕಾರ, ನೆಹ್ರಾ ಅವರ ಶಕ್ತಿ ಕೇವಲ ತಾಂತ್ರಿಕ ಜ್ಞಾನವಲ್ಲ. ಆಟಗಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು, ಡ್ರೆಸ್ಸಿಂಗ್ ರೂಮ್&zwnj;ನಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸುವುದು ಮತ್ತು ಪ್ರತಿಯೊಬ್ಬ ಆಟಗಾರನಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವ ಸಾಮರ್ಥ್ಯವೂ ಅವರ ಯಶಸ್ಸಿನ ಪ್ರಮುಖ ಕಾರಣ. ಈ ಗುಣಗಳೇ ಗುಜರಾತ್ ಟೈಟಾನ್ಸ್ ಅನ್ನು ನಿರಂತರವಾಗಿ ಸ್ಪರ್ಧಾತ್ಮಕ ತಂಡವನ್ನಾಗಿ ರೂಪಿಸಿವೆ.&lt;/p&gt;&lt;p&gt;&lt;strong&gt;ಗುಜರಾತ್ ಟೈಟಾನ್ಸ್ ಯಶಸ್ಸಿನ ಹಿಂದಿನ ಚಾಣಾಕ್ಷ ತಂತ್ರ!&lt;/strong&gt;&lt;/p&gt;&lt;p&gt;ಐಪಿಎಲ್&zwnj;ನಲ್ಲಿ ಪ್ರತೀ ಸೀಸನ್ ಬಲಿಷ್ಠ ತಂಡಗಳ ವಿರುದ್ಧ ಸ್ಪರ್ಧಿಸುವುದು ಸುಲಭವಲ್ಲ. ಆದರೂ, ಗುಜರಾತ್ ಟೈಟಾನ್ಸ್ ಅನೇಕ ಬಾರಿ ಕಡಿಮೆ ಅನುಭವದ ಆಟಗಾರರೊಂದಿಗೆ ಕೂಡ ಉತ್ತಮ ಪ್ರದರ್ಶನ ನೀಡಿದೆ. ಇದಕ್ಕೆ ಕಾರಣ, ನೆಹ್ರಾ ಅವರ ಸ್ಪಷ್ಟ ಯೋಜನೆ, ಸರಿಯಾದ ಆಟಗಾರರ ಆಯ್ಕೆ ಹಾಗೂ ಪಂದ್ಯದ ಮಧ್ಯೆಯೇ ತಂತ್ರ ಬದಲಾಯಿಸುವ ಸಾಮರ್ಥ್ಯ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಡುತ್ತಾರೆ. ಮೊಯಿನ್ ಅಲಿ ಅವರ ಮೆಚ್ಚುಗೆಯು ನೆಹ್ರಾ ಅವರ ಕೋಚಿಂಗ್ ಸಾಮರ್ಥ್ಯಕ್ಕೆ ಮತ್ತೊಂದು ದೊಡ್ಡ ಮಾನ್ಯತೆಯಾಗಿದೆ.&lt;/p&gt;]]></content:encoded>
            <category>sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/csk-former-player-england-all-rounder-moeen-ali-names-ashish-nehra-as-the-best-cricketing-brain-of-india/articleshow-i66muqt"/>
        </item>
        <item>
            <title><![CDATA[ಕೊಹ್ಲಿ ಅಗ್ರೆಸಿವ್ ಆಟಕ್ಕೆ ಅಭಿಮಾನಿಗಳಲ್ಲ, ಔಟ್ ಕೊಡುವ ಅಂಪೈರ್‌ಗಳೂ ಫಿದಾ! ವಿರಾಟ್ ರಹಸ್ಯ ಬಿಚ್ಚಿಟ್ಟ ಅಂಪೈರ್!]]></title>
            <link>https://kannada.asianetnews.com/gallery/cricket-sports/cricket-would-be-boring-without-virat-kohli-former-umpire-anil-chaudhary-praises-kohli-s-aggression-khs-nfwer4g</link>
            <guid isPermaLink="true">https://kannada.asianetnews.com/gallery/cricket-sports/cricket-would-be-boring-without-virat-kohli-former-umpire-anil-chaudhary-praises-kohli-s-aggression-khs-nfwer4g</guid>
            <pubDate>Mon, 03 Aug 2026 21:58:57 +0530</pubDate>
            <description><![CDATA[&lt;p&gt;ವಿರಾಟ್ ಕೊಹ್ಲಿಯ (Virat Kohli) ಆಟದ ಮೇಲಿನ ಪ್ಯಾಶನ್ ಮತ್ತು ಅಗ್ರೆಶನ್ ಬಗ್ಗೆ ಮಾಜಿ ಅಂತರಾಷ್ಟ್ರೀಯ ಅಂಪೈರ್ ಮಾತನಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್&zwnj; ಅಭಿಮಾನಿಗಳು ಮಾತ್ರವಲ್ಲ ಅಂಪೈರ್&zwnj;ಗಳಿಗೂ ಇಷ್ಟ. ಇಂತಹ ಟಗಾರರು ಕ್ರಿಕೆಟ್&zwnj;ಗೆ ಅಗತ್ಯ, ಅವರ ಆಕ್ರಮಣಶೀಲತೆ ವೈಯಕ್ತಿಕವಲ್ಲ ಎಂದು ಅಂಪೈರ್ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf925kfyy274f2gcrweqg76x,imgname-4-1768757054974.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿರಾಟ್ ಕೊಹ್ಲಿಯ (Virat Kohli) ಆಟದ ಮೇಲಿನ ಪ್ಯಾಶನ್ ಮತ್ತು ಅಗ್ರೆಶನ್ ಬಗ್ಗೆ ಮಾಜಿ ಅಂತರಾಷ್ಟ್ರೀಯ ಅಂಪೈರ್ ಮಾತನಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್&zwnj; ಅಭಿಮಾನಿಗಳು ಮಾತ್ರವಲ್ಲ ಅಂಪೈರ್&zwnj;ಗಳಿಗೂ ಇಷ್ಟ. ಇಂತಹ ಟಗಾರರು ಕ್ರಿಕೆಟ್&zwnj;ಗೆ ಅಗತ್ಯ, ಅವರ ಆಕ್ರಮಣಶೀಲತೆ ವೈಯಕ್ತಿಕವಲ್ಲ ಎಂದು ಅಂಪೈರ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತೀಯ ಕ್ರಿಕೆಟ್&zwnj;ನ (Indian Cricket) ರನ್ ಮಷೀನ್ ವಿರಾಟ್ ಕೊಹ್ಲಿ (Virat Kohli) ಆಟವನ್ನು ಕೇವಲ ಕ್ರಿಕೆಟ್ ಅಭಿಮಾನಿಗಳು ಮತ್ತು ವೀಕ್ಷಕರು ಮಾತ್ರವಲ್ಲ, ಮೈದಾನದಲ್ಲಿದ್ದು ಪಂದ್ಯ ನಡೆಸಿಕೊಡುವ ಅಂಪೈರ್&zwnj;ಗಳು ಸಹ ಅಪಾರವಾಗಿ ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ಮಾಜಿ ಅಂತರಾಷ್ಟ್ರೀಯ ಅಂಪೈರ್ ಒಬ್ಬರು ವಿರಾಟ್ ಕೊಹ್ಲಿ ಮೈದಾನದಲ್ಲಿ ತೋರಿಸುವ ಜೋಷ್ ಹಾಗೂ ಅಗ್ರೆಸಿವ್ ಆಟದ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕೊಹ್ಲಿಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ!&lt;/strong&gt;&lt;/p&gt;&lt;p&gt;ಕ್ರಿಕೆಟ್ ತನ್ನ ನಿಜವಾದ ರೋಚಕತೆಯನ್ನು (Thrill) ಉಳಿಸಿಕೊಳ್ಳಬೇಕಾದರೆ ವಿರಾಟ್ ಕೊಹ್ಲಿಯಂತಹ ಹುರುಪಿನ ಆಟಗಾರರು ಇರಲೇಬೇಕು ಎಂದು ಅಂತಾರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ (Anil Chaudhary) ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಮೈದಾನದಲ್ಲಿ ತೋರಿಸುವ ಅಗ್ರೆಶನ್ (Aggression), ಆಟದ ಮೇಲಿನ ಅವರ ಹಿಡಿತ ಹಾಗೂ ಅಪಾರವಾದ ಪ್ಯಾಶನ್&zwnj;ನಿಂದ (Passion for Game) ಬರುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;'ನಾನು ವಿರಾಟ್ ಕೊಹ್ಲಿಯನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ, ಅವರ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದೇನೆ. ಹಾಗಾಗಿ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಕೊಹ್ಲಿಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಕೆಲವೊಮ್ಮೆ ಅವರು ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಕಾಣಿಸುತ್ತಾರೆ, ಆದರೆ ನಾವು ಅಂಪೈರ್&zwnj;ಗಳು ಸರಿಯಾದ ನಿರ್ಧಾರ ನೀಡಿದರೆ, ಖಂಡಿತವಾಗಿಯೂ ಹೊಗಳುತ್ತಾರೆ. ಓವರ್&zwnj;ಗಳ ಮಧ್ಯೆ ಬಂದು ಬೆನ್ನು ತಟ್ಟುತ್ತಾರೆ. ಆಟದ ಮೇಲೆ ಅವರಿಗೆ ಸದಾ ವಿಪರೀತ ಪ್ಯಾಶನ್. ಇಂಥಾ ಆಟಗಾರರು ಇರಲೇಬೇಕು, ಇಲ್ಲವಾದರೆ ಕ್ರಿಕೆಟ್&zwnj; ಎಂಬ ಆಟವೇ ಬೋರಿಂಗ್ (Boring) ಆಗಿಬಿಡುತ್ತದೆ' ಎಂದು ಅನಿಲ್ ಚೌಧರಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;'ಮಂಕಡಿಂಗ್' ನಿಯಮಕ್ಕೆ ಬೆಂಬಲ!&lt;/strong&gt;&lt;/p&gt;&lt;p&gt;ಉತ್ತರ ಭಾರತದ ಆಟಗಾರರಲ್ಲಿ ಸಾಮಾನ್ಯವಾಗಿರುವ ರಕ್ತದ ಬಿಸಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್&zwnj;ನಲ್ಲಿ (IPL) ನಡೆಯುವ ವಾಗ್ವಾದಗಳ ಬಗ್ಗೆಯೂ ಅನಿಲ್ ಚೌಧರಿ ಮಾತನಾಡಿದ್ದಾರೆ. 'ಆಟದ ಮೇಲೆ ಹೆಚ್ಚು ನಿರ್ಬಂಧಗಳನ್ನು ಹೇರಿದರೆ ಅದರ ಅಸಲಿ ಸ್ವರೂಪವೇ ಹಾಳಾಗುತ್ತದೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇರಬೇಕು' ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ನಾನ್-ಸ್ಟ್ರೈಕರ್ ಎಂಡ್&zwnj;ನಲ್ಲಿ ಬೌಲರ್&zwnj;ಗಳು ಮಾಡುವ ರನೌಟ್ ಅಥವಾ 'ಮಂಕಡಿಂಗ್' (Mankading / Non-striker Run Out) ನಿಯಮವನ್ನು ಅನಿಲ್ ಚೌಧರಿ ಬಲವಾಗಿ ಬೆಂಬಲಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಭವಿಷ್ಯದಲ್ಲಿ ಬರಲಿವೆ ಬ್ಯಾಟರ್&zwnj;ಗಳಿಗೆ ಕಠಿಣ ನಿಯಮಗಳು!&lt;/strong&gt;&lt;/p&gt;&lt;p&gt;ಬ್ಯಾಟ್ಸ್&zwnj;ಮನ್&zwnj;ಗಳು ಬೌಲರ್&zwnj;ಗಳು ಎಸೆಯುವ ಮುನ್ನವೇ ಅನಗತ್ಯವಾಗಿ ಕ್ರೀಸ್ ಬಿಟ್ಟು ಮುಂದೆ ಹೋಗುವುದನ್ನು ತಡೆಯಲು ಭವಿಷ್ಯದಲ್ಲಿ ಹೊಸ ದಂಡದ ನಿಯಮಗಳು ಬರುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. 'ಕ್ರಿಕೆಟ್&zwnj;ನಲ್ಲಿ ನಾನ್-ಸ್ಟ್ರೈಕರ್ ರನೌಟ್ ಮಾಡುವುದು ಸಂಪೂರ್ಣವಾಗಿ ನ್ಯಾಯಸಮ್ಮತ. ಒಂದೆರಡು ವರ್ಷಗಳಲ್ಲಿ ಮೊದಲು ಬ್ಯಾಟರ್&zwnj;ಗೆ ಎಚ್ಚರಿಕೆ ನೀಡುವುದು, ನಂತರ ರನ್ ಪೆನಾಲ್ಟಿ (Run Penalty) ವಿಧಿಸುವಂತಹ ಕಠಿಣ ನಿಯಮಗಳು ಬರುವ ಸಾಧ್ಯತೆಯಿದೆ.&amp;nbsp;&lt;/p&gt;&lt;p&gt;ಏಕೆಂದರೆ ಈಗಿನ ನಿಯಮಗಳು ಬ್ಯಾಟರ್&zwnj;ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಬೌಲರ್&zwnj;ಗಳಿಗೆ ಅಷ್ಟೇನೂ ಅನುಕೂಲಕರವಾಗಿಲ್ಲ' ಎಂದು ಮಾಜಿ ಅಂಪೈರ್ ಅನಿಲ್ ಚೌಧರಿ ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/cricket-would-be-boring-without-virat-kohli-former-umpire-anil-chaudhary-praises-kohli-s-aggression-khs-nfwer4g"/>
        </item>
        <item>
            <title><![CDATA[ಕಾಮನ್‌ವೆಲ್ತ್ ಗೇಮ್ಸ್‌: ಬಾಕ್ಸಿಂಗ್‌ನಲ್ಲಿ ಭಾರತ ವಿಶ್ವಕ್ಕೆ ಪಂಚ್: 7 ಚಿನ್ನ, 3 ಬೆಳ್ಳಿ!]]></title>
            <link>https://kannada.asianetnews.com/sports/india-wins-19-medals-in-a-day-at-commonwealth-games-2026-climbs-to-4th-in-medal-table-kvn/articleshow-ntk6bl3</link>
            <guid isPermaLink="true">https://kannada.asianetnews.com/sports/india-wins-19-medals-in-a-day-at-commonwealth-games-2026-climbs-to-4th-in-medal-table-kvn/articleshow-ntk6bl3</guid>
            <pubDate>Sun, 02 Aug 2026 11:39:06 +0530</pubDate>
            <description><![CDATA[2026ರ ಗ್ಲಾಸ್ಗೋ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ನಲ್ಲಿ ಭಾರತವು ಬಾಕ್ಸಿಂಗ್&zwnj;ನಲ್ಲಿ 7 ಚಿನ್ನ ಸೇರಿದಂತೆ ಒಂದೇ ದಿನ 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಈ ಭರ್ಜರಿ ಪ್ರದರ್ಶನದಿಂದಾಗಿ, ಭಾರತವು ಪದಕ ಪಟ್ಟಿಯಲ್ಲಿ 9ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿಕೆ ಕಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyfab4z2e4eqgs1hxcapp4e,imgname-preeti-pawar-wins-boxing-gold-for-india-with-dominant-5-0-victory-over-canada-s-scarlett-delgado-1785581612191.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ಲಾಸ್ಗೋ: 2026ರ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ನಲ್ಲಿ ಭಾರತ ಪರಾಕ್ರಮ ಮೆರೆದಿದೆ. ಬಾಕ್ಸಿಂಗ್&zwnj;ನಲ್ಲಿ ವಿಶ್ವಕ್ಕೇ ಪಂಚ್&zwnj; ನೀಡಿದ ಭಾರತೀಯರು ಶನಿವಾರ ಒಂದೇ ದಿನ ಬರೋಬ್ಬರಿ 7 ಚಿನ್ನ ಸೇರಿ 10 ಪದಕ ಗೆದ್ದಿದ್ದಾರೆ. ಪ್ಯಾರಾ ಶಾಟ್&zwnj;ಪುಟ್&zwnj;, ಜಾವೆಲಿನ್&zwnj; ಎಸೆತ, ಟ್ರಿಪಲ್&zwnj; ಜಂಪ್&zwnj;, ಜುಡೋ, ಡೆಕಥ್ಲಾನ್&zwnj;ನಲ್ಲೂ ಭಾರತೀಯರು ಪದಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಶನಿವಾರದ ಭಾರತದ ಪದಕ ಬುಟ್ಟಿಗೆ ಒಟ್ಟು 19 ಪದಕಗಳು ಸೇರ್ಪಡೆಗೊಂಡವು. ಜೊತೆಗೆ, ಪದಕ ಪಟ್ಟಿಯಲ್ಲಿ ದೇಶ ಈಗ 4ನೇ ಸ್ಥಾನಕ್ಕೆ ಜಿಗಿದಿದೆ.&lt;/p&gt;&lt;p&gt;ಈ ಕೂಟದಲ್ಲಿ ಒಟ್ಟು 14 ಬಾಕ್ಸಿಂಗ್&zwnj; ವಿಭಾಗಗಳಿದ್ದವು. ಈ ಪೈಕಿ 10ರಲ್ಲಿ ಭಾರತೀಯರು ಪದಕ ಸಾಧನೆ ಮಾಡಿದ್ದಾರೆ. ಮಹಿಳಾ 54 ಕೆ.ಜಿ. ವಿಭಾಗದಲ್ಲಿ ಪ್ರೀತಿ ಪವಾರ್&zwnj; ಅವರು ಕೆನಡಾದ ಸ್ಕಾರ್ಲೆಟ್&zwnj; ಡೆಲ್ಗಾಡೊ ವಿರುದ್ಧ 5-0 ಅಂತರದಲ್ಲಿ ಗೆದ್ದು ಬಾಕ್ಸಿಂಗ್&zwnj;ನಲ್ಲಿ ಮೊದಲ ಚಿನ್ನ ತಂದುಕೊಟ್ಟರು. ಬಳಿಕ 57 ಕೆ.ಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್&zwnj; ಜಾಸ್ಮೀನ್ ಲಂಬೋರಿಯಾ ಅವರು ಐರ್ಲೆಂಡ್&zwnj;ನ ವಾಲ್ಶ್&zwnj; ವಿರುದ್ಧ ಜಯಭೇರಿ ಬಾರಿಸಿದರು. 51 ಕೆ.ಜಿ. ವಿಭಾಗದ ಫೈನಲ್&zwnj;ನಲ್ಲಿ ಸಾಕ್ಷಿ ಚೌಧರಿ ಇಂಗ್ಲೆಂಡ್&zwnj;ನ ರುಬಿ ವೈಟ್&zwnj; ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು. 4ನೇ ಚಿನ್ನವನ್ನು ತಂದುಕೊಟ್ಟಿದ್ದು ಪ್ರಿಯಾ ಘಂಘಾಸ್&zwnj;. ಅವರು 60 ಕೆ.ಜಿ. ವಿಭಾಗದ ಫೈನಲ್&zwnj;ನಲ್ಲಿ ಕೆನಡಾದ ಮರಿಯಾ ಬಥೋಲ್&zwnj; ಅಲ್&zwnj; ಅಹ್ಮದೀ ವಿರುದ್ಧ ವಿರುದ್ಧ 4-1 ಅಂತರದಲ್ಲಿ ಗೆದ್ದರು. ಪುರುಷರ 60 ಕೆ.ಜಿ. ವಿಭಾಗದಲ್ಲಿ ಸಚಿನ್&zwnj; ಸಿವಾಚ್&zwnj; ಅವರು ನಮೀಬಿಯಾದ ಟ್ರಯಾಗೇನ್&zwnj; ಮಾರ್ನಿಂಗ್&zwnj; ಎನ್&zwnj;ಡೆವೆಲೊ ವಿರುದ್ಧ ಗೆದ್ದು ಚಿನ್ನಕ್ಕೆ ಮುತ್ತಿಟ್ಟರು.&lt;/p&gt;&lt;h2&gt;&lt;strong&gt;ಇಬ್ಬರಿಗೆ ಬೆಳ್ಳಿ:&lt;/strong&gt;&lt;/h2&gt;&lt;p&gt;ಪುರುಷರ 55 ಕೆ.ಜಿ. ವಿಭಾಗದಲ್ಲಿ ಜಾಡುಮನಿ ಸಿಂಗ್&zwnj; ಚಿನ್ನದ ನಿರೀಕ್ಷೆಯಲ್ಲಿದ್ದರೂ ಅವರಿಗೆ ಅದು ಸಾಧ್ಯವಾಗಲಿಲ್ಲ. ಅವರು ಆಸ್ಟ್ರೇಲಿಯಾದ ಜೈ ಡಿಕ್ಷನ್&zwnj; ವಿರುದ್ಧ 0-5 ಅಂತರದಲ್ಲಿ ಪರಾಭವಗೊಂಡರು. ವಿಶ್ವ ಚಾಂಪಿಯನ್&zwnj; ಹಾಗೂ ಒಲಿಂಪಿಕ್ಸ್&zwnj; ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್&zwnj;ಗೂ ಚಿನ್ನ ಕೈ ತಪ್ಪಿತು. ಅವರು ಫೈನಲ್&zwnj;ನಲ್ಲಿ ಆಸ್ಟ್ರೇಲಿಯಾದ ಎಮ್ಮಾ ಸ್ಯೂ ವಿರುದ್ಧ 1-4 ಅಂತರದಲ್ಲಿ ಸೋಲುಂಡರು.&lt;/p&gt;&lt;h3&gt;&lt;strong&gt;ಪದಕ ಪಟ್ಟಿಯಲ್ಲಿ ಭಾರತ ಈಗ 9ರಿಂದ 4ಕ್ಕೆ ಜಿಗಿತ&lt;/strong&gt;&lt;/h3&gt;&lt;p&gt;ಕ್ರೀಡಾಕೂಟ ಆರಂಭದಿಂದಲೂ ಪದಕ ಪಟ್ಟಿಯಲ್ಲಿ 9, 10ನೇ ಸ್ಥಾನಗಳಲ್ಲಿ ಇರುತ್ತಿದ್ದ ಭಾರತ, ಶನಿವಾರ ಒಮ್ಮೆಲೇ 4ನೇ ಸ್ಥಾನಕ್ಕೆ ಜಿಗಿಯಿತು. ಒಟ್ಟು 11 ಪದಕ ಗೆದ್ದಿದ್ದರಿಂದ ಭಾರತ ಪಟ್ಟಿಯಲ್ಲಿ ಸ್ಕಾಟ್ಲೆಂಡ್&zwnj;, ನೈಜೀರಿಯಾ, ವೇಲ್ಸ್&zwnj;, ನ್ಯೂಜಿಲೆಂಡ್&zwnj; ದೇಶಗಳನ್ನು ಹಿಂದಿಕ್ಕಿತು.&lt;/p&gt;&lt;h3&gt;&lt;strong&gt;ಜುಡೋದಲ್ಲಿ ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಉನ್ನತಿ ಶರ್ಮಾ&lt;/strong&gt;&lt;/h3&gt;&lt;p&gt;ಶುಕ್ರವಾರ ಜುಡೋದಲ್ಲಿ 2 ಐತಿಹಾಸಿಕ ಚಿನ್ನ ಸೇರಿ 3 ಪದಕ ಗೆದ್ದಿದ್ದ ಭಾರತ ಮತ್ತೊಮ್ಮೆ ಈ ಕ್ರೀಡೆಯಲ್ಲಿ ಪದಕ ಸಾಧನೆ ಮಾಡಿದೆ. ಶನಿವಾರ ಮಹಿಳೆಯರ -63 ಕೆ.ಜಿ. ವಿಭಾಗದಲ್ಲಿ ಉನ್ನತಿ ಶರ್ಮಾ ಕಂಚಿನ ಪದಕ ಗೆದ್ದರು. ಅವರು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಕೈ ಕ್ನೋಸ್ಟರ್&zwnj; ವಿರುದ್ಧ ಗೆಲುವು ಸಾಧಿಸಿದರು. ಆದರೆ ಪುರುಷರ -81 ಕೆ.ಜಿ. ವಿಭಾಗದಲ್ಲಿ ಹರ್ಷ್&zwnj; ಟೊಕಾಸ್&zwnj; ಅವರು ಕಂಚಿನ ಪದಕದ ಪಂದ್ಯದಲ್ಲಿ ಸೋಲನುಭವಿಸಿ ನಿರಾಸೆ ಮೂಡಿಸಿದರು.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/india-wins-19-medals-in-a-day-at-commonwealth-games-2026-climbs-to-4th-in-medal-table-kvn/articleshow-ntk6bl3"/>
        </item>
        <item>
            <title><![CDATA[ಸಚಿನ್‌, ಗಂಗೂಲಿ, ಧೋನಿ..ಊಹುಂ.. ಕೆಎಲ್‌ ರಾಹುಲ್‌ಗೆ ಇರುವ ಈ ಹವ್ಯಾಸ ಟೀಮ್‌ ಇಂಡಿಯಾದಲ್ಲಿ ಯಾರೊಬ್ಬರಿಗೂ ಇರ್ಲಿಲ್ಲ!]]></title>
            <link>https://kannada.asianetnews.com/cricket-sports/kl-rahul-travels-with-mattress-devdutt-padikkal-reveals-secret-san/articleshow-qddpkk2</link>
            <guid isPermaLink="true">https://kannada.asianetnews.com/cricket-sports/kl-rahul-travels-with-mattress-devdutt-padikkal-reveals-secret-san/articleshow-qddpkk2</guid>
            <pubDate>Mon, 03 Aug 2026 20:52:05 +0530</pubDate>
            <description><![CDATA[&lt;p&gt;ಭಾರತೀಯ ಕ್ರಿಕೆಟಿಗ ದೇವದತ್ ಪಡಿಕ್ಕಲ್, ಕೆ.ಎಲ್. ರಾಹುಲ್ ಸೇರಿದಂತೆ ಪ್ರಮುಖ ಕ್ರೀಡಾಪಟುಗಳು ಪ್ರವಾಸದ ವೇಳೆ ತಮ್ಮದೇ ಹಾಸಿಗೆ ಮತ್ತು ದಿಂಬುಗಳನ್ನು ಏಕೆ ಕೊಂಡೊಯ್ಯುತ್ತಾರೆ ಎಂಬ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz40t4fgkk2ncp84bm0ac5vr,imgname-kl-rahul-devdutt-padikkal-1785767727600.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.3):&lt;/strong&gt; ವೃತ್ತಿಪರ ಕ್ರೀಡಾಪಟುಗಳ ನಿರ್ವಹಣೆ ಮತ್ತು ದೈಹಿಕ ಸಾಮರ್ಥ್ಯ ಮರುಗಳಿಕೆಯಲ್ಲಿ (ರಿಕವರಿ) 'ಉತ್ತಮ ನಿದ್ರೆ' ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಭಾರತೀಯ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಬಹಿರಂಗಪಡಿಸಿದ್ದಾರೆ. ಜೊತೆಗೆ ತಮ್ಮ ಸಹ ಆಟಗಾರ ಕೆ.ಎಲ್. ರಾಹುಲ್ ಸೇರಿದಂತೆ ಪ್ರಮುಖ ಅಥ್ಲೀಟ್&zwnj;ಗಳು ಪ್ರವಾಸದ ವೇಳೆ ತಮ್ಮದೇ ಆದ ಹಾಸಿಗೆ, ತಲೆದಿಂಬು ಏಕೆ ಕೊಂಡೊಯ್ಯುತ್ತಾರೆ ಎನ್ನುವ ಕುತೂಹಲಕಾರಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;'ಹ್ಯೂಮನ್ಸ್ ಆಫ್ ಬಾಂಬೆ'ಗೆ (Humans of Bombay) ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಡಿಕ್ಕಲ್, ಪ್ರಮುಖ ಕ್ರೀಡಾಪಟುಗಳು ತಾವು ಯಾವುದೇ ದೇಶ ಅಥವಾ ನಗರದಲ್ಲಿ ಪಂದ್ಯವನ್ನಾಡಲಿ, ಸಮಾನ ಮತ್ತು ಪೂರ್ಣ ಪ್ರಮಾಣದ ನಿದ್ರೆ ಪಡೆಯಲು ತಮ್ಮದೇ ಸ್ವಂತ ಹಾಸಿಗೆ (Mattress), ದಿಂಬುಗಳು (Pillows) ಮತ್ತು ಇತರ ಪರಿಕರಗಳನ್ನು ಕೊಂಡೊಯ್ಯುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದಿದ್ದಾರೆ. ಆಧುನಿಕ ಕ್ರೀಡಾಪಟುಗಳು ಅನುಸರಿಸುವ ಅತ್ಯಂತ ಶಿಸ್ತಿನ ರಿಕವರಿ ದಿನಚರಿ ಇದು ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಕೆಎಲ್ ರಾಹುಲ್ ಹಾಸಿಗೆಯನ್ನೇ ಕೊಂಡೊಯ್ಯುತ್ತಾರೆ!&lt;/strong&gt;&lt;/h2&gt;&lt;p&gt;ಕ್ರಿಕೆಟ್ ಪ್ರವಾಸಗಳ ಸಮಯದಲ್ಲಿ ಕೆ.ಎಲ್. ರಾಹುಲ್ ಅವರು ತಮ್ಮ ಸ್ವಂತ ಹಾಸಿಗೆಯನ್ನೇ ಜೊತೆಯಲ್ಲಿ ಕೊಂಡೊಯ್ಯುವುದನ್ನು ತಾವು ಖುದ್ದಾಗಿ ನೋಡಿರುವುದಾಗಿ ಪಡಿಕ್ಕಲ್ ಹಂಚಿಕೊಂಡಿದ್ದಾರೆ. ವಿಶ್ವದ ಯಾವುದೇ ಭಾಗದಲ್ಲಿರುವ ಹೋಟೆಲ್&zwnj;ಗಳಲ್ಲಿ ಉಳಿದುಕೊಂಡರೂ ನಿರಂತರ ಕಂಫರ್ಟ್ ಹಾಗೂ ಪರಿಚಿತ ವಾತಾವರಣಕ್ಕಾಗಿ ಹಲವು ಕ್ರೀಡಾಪಟುಗಳು ತಮ್ಮ ಸ್ವಂತ ದಿಂಬುಗಳನ್ನು ಹೊತ್ತೊಯ್ಯುತ್ತಾರೆ ಎಂದು ಅವರು ಸೇರಿಸಿದ್ದಾರೆ. ಕ್ರೀಡಾಪಟುಗಳ ದೀರ್ಘಾವಧಿಯ ಅತ್ಯುತ್ತಮ ನಿರ್ವಹಣೆ ಹಾಗೂ ಸಿದ್ಧತೆಗೆ ನಿದ್ರೆಯ ಗುಣಮಟ್ಟ ಪ್ರಮುಖ ಅಂಶವಾಗಿರುವುದರಿಂದ, ಈ ರೀತಿಯ ಅಭ್ಯಾಸಗಳು ವೃತ್ತಿಪರ ಅಥ್ಲೀಟ್&zwnj;ಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಪಡಿಕ್ಕಲ್ ವಿವರಿಸಿದ್ದಾರೆ.&lt;/p&gt;&lt;p&gt;ಈ ಅಭ್ಯಾಸಗಳ ಹಿಂದಿನ ಮಹತ್ವವನ್ನು ವಿವರಿಸಿದ ಅವರು, ಕ್ರೀಡಾಪಟುಗಳು ತಮ್ಮ ದಿನದ ಬಹುಪಾಲು ಸಮಯವನ್ನು ನಿದ್ರೆಯಲ್ಲೇ ಕಳೆಯುತ್ತಾರೆ. ಹೀಗಾಗಿ ವೃತ್ತಿಪರ ಕ್ರೀಡೆಯಲ್ಲಿ ದೈಹಿಕ ಜಡತ್ವ ಮತ್ತು ಶ್ರಮದಿಂದ ಚೇತರಿಸಿಕೊಳ್ಳುವುದು (Recovery) ಅತ್ಯಂತ ಮುಖ್ಯವಾದ ಭಾಗವಾಗಿದೆ ಎಂದಿದ್ದಾರೆ. ಸೂಕ್ತ ನಿದ್ರೆಯು ಕ್ರೀಡಾಪಟುವಿಗೆ ದೈಹಿಕ ಶ್ರಮದಿಂದ ಹೊರಬರಲು ಹಾಗೂ ಕಠಿಣ ತರಬೇತಿ ಮತ್ತು ಪಂದ್ಯಗಳಿಗೆ ದೇಹವನ್ನು ಸಿದ್ಧಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ, ಫಿಟ್&zwnj;ನೆಸ್ ತರಬೇತಿ ಮತ್ತು ಪೌಷ್ಟಿಕ ಆಹಾರಕ್ಕೆ (Nutrition) ನೀಡುವಷ್ಟೇ ಪ್ರಾಮುಖ್ಯತೆಯನ್ನು ಅನೇಕ ಆಟಗಾರರು ತಮ್ಮ ನಿದ್ರೆಯ ವಾತಾವರಣಕ್ಕೂ ನೀಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt; 25 ಸಿಕ್ಸರ್, 14 ಬೌಂಡರಿ, 233 ರನ್! ಸಿಡಿಲಬ್ಬರದ ದ್ವಿಶತಕ ಸಿಡಿಸಿ ಆಯ್ಕೆಗಾರರಿಗೆ 'ಸಿಗ್ನಲ್' ಕೊಟ್ಟ ಅಭಿಷೇಕ್ ಶರ್ಮಾ&lt;/p&gt;&lt;h2&gt;&lt;strong&gt;ವಿಜ್ಞಾನ ಏನು ಹೇಳುತ್ತದೆ?&lt;/strong&gt;&lt;/h2&gt;&lt;p&gt;ಕ್ರೀಡಾಪಟುಗಳ ನಿರ್ವಹಣೆ ಹೆಚ್ಚಿಸಲು, ರಿಯಾಕ್ಷನ್ ಟೈಮ್ (ತಕ್ಷಣದ ಸ್ಪಂದನೆ), ಸರಿಯಾದ ನಿರ್ಧಾರ ತೆಗೆದುಕೊಳ್ಳುವಿಕೆ ಹಾಗೂ ಗಾಯಗಳನ್ನು ತಡೆಗಟ್ಟಲು ಉತ್ತಮ ನಿದ್ರೆ ಪ್ರಮುಖ ಅಂಶ ಎಂದು ಕ್ರೀಡಾ ವಿಜ್ಞಾನಿಗಳು (Sports Scientists) ಈಗಾಗಲೇ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ನಿರಂತರ ಪ್ರಯಾಣ ಮತ್ತು ವಿಭಿನ್ನ ಟೈಮ್ ಝೋನ್&zwnj;ಗಳಲ್ಲಿ ಪಂದ್ಯಗಳನ್ನಾಡುವ ವೇಳೆ ಎದುರಾಗುವ ಆಯಾಸವನ್ನು ಕಡಿಮೆ ಮಾಡಲು ಹಾಗೂ ಮಾನಸಿಕ ಗಮನ ಹೆಚ್ಚಿಸಲು ನಿರಂತರ ನಿದ್ರೆಯ ದಿನಚರಿ ಸಹಕಾರಿಯಾಗಿದೆ. ಅಪರಿಚಿತ ಹೋಟೆಲ್ ಹಾಸಿಗೆಗಳು ಮತ್ತು ಬದಲಾಗುವ ವಾತಾವರಣದಿಂದ ಉಂಟಾಗುವ ತೊಂದರೆಗಳನ್ನು ತಡೆಯಲು, ಅನೇಕ ಎಲೈಟ್ ಅಥ್ಲೀಟ್&zwnj;ಗಳು ಪ್ರಯಾಣದ ವೇಳೆಯೂ ತಮಗೆ ಅಭ್ಯಾಸವಿರುವ ನಿದ್ರೆಯ ವಾತಾವರಣವನ್ನೇ ಮರುಸೃಷ್ಟಿಸಿಕೊಳ್ಳಲು ಬಯಸುತ್ತಾರೆ.&lt;/p&gt;&lt;h2&gt;&lt;strong&gt;ನಿರಂತರ ಪ್ರಯಾಣ ಮತ್ತು ಬದಲಾದ ಕ್ರಿಕೆಟ್ ಶೈಲಿ&lt;/strong&gt;&lt;/h2&gt;&lt;p&gt;ವಿಶೇಷವಾಗಿ ಅಂತರರಾಷ್ಟ್ರೀಯ ಕ್ರಿಕೆಟಿಗರು ದ್ವಿಪಕ್ಷೀಯ ಸರಣಿಗಳು ಮತ್ತು ಫ್ರಾಂಚೈಸಿ ಟೂರ್ನಿಗಳಿಗಾಗಿ ವರ್ಷದಲ್ಲಿ ಹಲವು ತಿಂಗಳುಗಳನ್ನು ಮನೆಯಿಂದ ದೂರವಿದ್ದು, ಬೇರೆ ಬೇರೆ ದೇಶಗಳಲ್ಲಿ ಕಳೆಯುತ್ತಾರೆ. ಸುದೀರ್ಘ ಪ್ರಯಾಣದ ವೇಳಾಪಟ್ಟಿ, ಬದಲಾಗುವ ಹವಾಮಾನ ಮತ್ತು ಸಾಲು ಸಾಲು ಪಂದ್ಯಗಳ ನಡುವೆ ಇಡೀ ಸೀಸನ್&zwnj;ನಲ್ಲಿ ಅತ್ಯುತ್ತಮ ನಿರ್ವಗಣೆ ಕಾಯ್ದುಕೊಳ್ಳಲು 'ರಿಕವರಿ' ಅತ್ಯಗತ್ಯವಾಗಿದೆ. ಹೀಗಾಗಿಯೇ ತಂಡಗಳು ಆಟಗಾರರ ನಿದ್ರೆ, ವರ್ಕ್&zwnj;ಲೋಡ್ ನಿರ್ವಹಣೆ ಮತ್ತು ಒಟ್ಟಾರೆ ಕ್ಷೇಮವನ್ನು ಮೇಲ್ವಿಚಾರಣೆ ಮಾಡಲು ಕ್ರೀಡಾ ವಿಜ್ಞಾನ ತಜ್ಞರ (Sports Science Experts) ನೇಮಕವನ್ನು ಹೆಚ್ಚಿಸಿವೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by HOB Originals (@humansofbombayoriginals)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/kl-rahul-travels-with-mattress-devdutt-padikkal-reveals-secret-san/articleshow-qddpkk2"/>
        </item>
        <item>
            <title><![CDATA[ಕಾಮನ್‌ವೆಲ್ತ್‌ ಗೇಮ್ಸ್‌ 2026: ಸತತ 7ನೇ ಬಾರಿಯೂ ಭಾರತ ಟಾಪ್‌-5! ಪದಕ ಕಡಿಮೆಯಾದ್ರೂ ಭಾರತದಿಂದ ಶ್ರೇಷ್ಠ ಸಾಧನೆ]]></title>
            <link>https://kannada.asianetnews.com/sports/commonwealth-games-2026-india-finishes-4th-with-39-medals-best-ever-boxing-performance-kvn/articleshow-rvoaiho</link>
            <guid isPermaLink="true">https://kannada.asianetnews.com/sports/commonwealth-games-2026-india-finishes-4th-with-39-medals-best-ever-boxing-performance-kvn/articleshow-rvoaiho</guid>
            <pubDate>Mon, 03 Aug 2026 09:28:06 +0530</pubDate>
            <description><![CDATA[2026ರ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ನಲ್ಲಿ ಭಾರತ 13 ಚಿನ್ನ ಸೇರಿ ಒಟ್ಟು 39 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಕಳೆದ ಆವೃತ್ತಿಗಿಂತ ಕಡಿಮೆ ಪದಕಗಳನ್ನು ಗೆದ್ದರೂ, ಬಾಕ್ಸಿಂಗ್ ಮತ್ತು ಜುಡೋದಲ್ಲಿನ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನದಿಂದಾಗಿ ಇದನ್ನು ಭಾರತದ ಅತ್ಯುತ್ತಮ ಸಾಧನೆ ಎಂದು ಪರಿಗಣಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz0cxnt34qf3yxnda152x0z0,imgname-commonwealth-games-glasgow-1785646208834.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ಲಾಸ್ಗೋ: 2026ರ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ಗೆ ಅದ್ಧೂರಿ ತೆರೆ ಬಿದ್ದಿದೆ. 10 ದಿನಗಳ ಕಾಲ ಕ್ರೀಡಾಪ್ರೇಮಿಗಳಿಗೆ ಮನರಂಜನೆ ಒದಗಿಸಿಕೊಟ್ಟ, ಮಿನಿ ಒಲಿಂಪಿಕ್ಸ್&zwnj; ಖ್ಯಾತಿಯ ಜಾಗತಿಕ ಮಟ್ಟದ ಕ್ರೀಡಾಕೂಟವು ಭಾನುವಾರ ರಾತ್ರಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು.&lt;/p&gt;&lt;p&gt;ಈ ಬಾರಿ ಸೀಮಿತ ಕ್ರೀಡೆಗಳಿದ್ದರೂ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಜುಲೈ 23ರಂದು ಆರಂಭಗೊಂಡಿದ್ದ ಗೇಮ್ಸ್&zwnj;ನಲ್ಲಿ ಭಾರತ 13 ಚಿನ್ನ, 17 ಬೆಳ್ಳಿ, 9 ಕಂಚು ಸೇರಿದಂತೆ ಒಟ್ಟು 39 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿತು.&lt;/p&gt;&lt;p&gt;ಕ್ರೀಡಾಕೂಟದಲ್ಲಿ ಪಾಲ್ಗೊಂಡ ಹಲವು ಭಾರತೀಯರು ಈಗಾಗಲೇ ತವರಿಗೆ ಮರಳಿದ್ದರು. ಹೀಗಾಗಿ ಭಾನುವಾರ ರಾತ್ರಿ ನಡೆದ ಸಮಾರೋಪದಲ್ಲಿ ಕೆಲವೇ ಕ್ರೀಡಾಪಟುಗಳು ಭಾಗಿಯಾದರು. ವಿಶ್ವ ಚಾಂಪಿಯನ್&zwnj;, ಚಿನ್ನ ವಿಜೇತ ಬಾಕ್ಸರ್&zwnj; ಜಾಸ್ಮೀನ್&zwnj; ಲಂಬೋರಿಯಾ ಅವರು ಸಮಾರೋಪದಲ್ಲಿ ಧ್ವಜಧಾರಿಯಾಗಿ ಭಾರತೀಯ ಕ್ರೀಡಾಪಟುಗಳ ನೇತೃತ್ವ ವಹಿಸಿದರು.&lt;/p&gt;&lt;h2&gt;&lt;strong&gt;ಕಳೆದ ಬಾರಿಗಿಂತ 22 ಪದಕ ಕಡಿಮೆಯಾದರೂ ಭಾರತ ಶ್ರೇಷ್ಠ ಸಾಧನೆ&lt;/strong&gt;&lt;/h2&gt;&lt;p&gt;2022ರ ಗೇಮ್ಸ್&zwnj;ನಲ್ಲಿ ಭಾರತ 22 ಚಿನ್ನ ಸೇರಿದಂತೆ 61 ಪದಕ ಗೆದ್ದಿತ್ತು. ಈ ಬಾರಿ 13 ಚಿನ್ನ ಸೇರಿ 39 ಪದಕ ಗೆದ್ದಿದೆ. ಕಳೆದ ಬಾರಿಗಿಂತ ಈ ಬಾರಿ 22 ಪದಕಗಳು ಕಡಿಮೆಯಾದರೂ, ಒಟ್ಟಾರೆ ಪ್ರದರ್ಶನಕ್ಕೆ ಹೋಲಿಸಿದರೆ ಭಾರತ ಶ್ರೇಷ್ಠ ಸಾಧನೆ ಮಾಡಿದೆ. ಕಳೆದ ಬಾರಿ ಬ್ಯಾಡ್ಮಿಂಟನ್&zwnj;, ಟೇಬಲ್&zwnj; ಟೆನಿಸ್&zwnj;, ಹಾಕಿ, ಕ್ರಿಕೆಟ್&zwnj;, ಸ್ಕ್ವಾಶ್&zwnj; ಸೇರಿ ಭಾರತ 30 ಪದಕ ಗೆದ್ದಿದ್ದ ಕ್ರೀಡೆಗಳು ಈ ಬಾರಿ ಇರಲಿಲ್ಲ. ಈ ಸಲ ಭಾರತ 10 ಕ್ರೀಡೆಗಳಲ್ಲಿ 39 ಪದಕ ಗೆದ್ದಿದೆ. ಇದೇ 10 ಕ್ರೀಡೆಗಳಲ್ಲಿ ಭಾರತ 2022ರಲ್ಲಿ 31 ಪದಕ ಬಾಚಿತ್ತು. ಹೀಗಾಗಿಯೇ 2026ರ ಪ್ರದರ್ಶನ ಭಾರತದ ಪಾಲಿಗೆ ಅತ್ಯುತ್ತಮ.&lt;/p&gt;&lt;h3&gt;&lt;strong&gt;10 ಕ್ರೀಡೆಗಳಲ್ಲಿ ಸ್ಪರ್ಧೆ: ಪದಕ ಬಂದಿದ್ದು 5ರಲ್ಲಿ&lt;/strong&gt;&lt;/h3&gt;&lt;p&gt;ಭಾರತದ 124 ಕ್ರೀಡಾಪಟುಗಳು ಈ ಬಾರಿ ಒಟ್ಟು 10 ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಬಾಕ್ಸಿಂಗ್&zwnj;, ವೇಟ್&zwnj;ಲಿಫ್ಟಿಂಗ್&zwnj;, ಅಥ್ಲೆಟಿಕ್ಸ್&zwnj;, ಪ್ಯಾರಾ ಪವರ್&zwnj;ಲಿಫ್ಟಿಂಗ್&zwnj; ಹಾಗೂ ಜುಡೋದಲ್ಲಿ ಮಾತ್ರ ಭಾರತಕ್ಕೆ ಪದಕ ಲಭಿಸಿವೆ. ಉಳಿದಂತೆ ಈಜಿನಲ್ಲಿ ಭಾರತೀಯರು ನೀರಸ ಪ್ರದರ್ಶನ ನೀಡಿದ್ದು, ಒಂದೂ ಪದಕ ಗೆದ್ದಿಲ್ಲ. 3*3 ಬಾಸ್ಕೆಟ್&zwnj;ಬಾಲ್&zwnj;, ಸೈಕ್ಲಿಂಗ್&zwnj;, ಲಾನ್&zwnj; ಬೌಲ್ಸ್&zwnj;, ಜಿಮ್ನಾಸ್ಟಿಕ್&zwnj;ನಲ್ಲೂ ಭಾರತಕ್ಕೆ ಪದಕ ಬಂದಿಲ್ಲ.&lt;/p&gt;&lt;h3&gt;&lt;strong&gt;ಭಾರದತ ಪದಕ ಗಳಿಕೆ&amp;nbsp;&lt;/strong&gt;&lt;/h3&gt;&lt;p&gt;ಸ್ಪರ್ಧೆ ಚಿನ್ನ ಬೆಳ್ಳಿ ಕಂಚು ಒಟ್ಟು&lt;/p&gt;&lt;p&gt;ಬಾಕ್ಸಿಂಗ್&zwnj; 7 3 0 10&lt;/p&gt;&lt;p&gt;ಅಥ್ಲೆಟಿಕ್ಸ್&zwnj; 3 7 6 16&lt;/p&gt;&lt;p&gt;ಜುಡೊ 2 1 1 4&lt;/p&gt;&lt;p&gt;ವೇಟ್&zwnj;ಲಿಫ್ಟಿಂಗ್ 1 6 1 8&lt;/p&gt;&lt;p&gt;ಪ್ಯಾರಾ ಲಿಫ್ಟಿಂಗ್&zwnj; 0 0 1 1&lt;/p&gt;&lt;h3&gt;&lt;strong&gt;ಭಾರತ ಪುರುಷರಿಗಿಂತ ವನಿತೆಯರಿಗೆ ಹೆಚ್ಚು ಚಿನ್ನ&lt;/strong&gt;&lt;/h3&gt;&lt;p&gt;ಭಾರತೀಯರಲ್ಲಿ ಪದಕ ಗಳಿಕೆಯಲ್ಲಿ ಪುರುಷರು ಮೇಲುಗೈ ಸಾಧಿಸಿದರು. ಆದರೆ ಚಿನ್ನದ ಸಾಧನೆಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು 8 ಚಿನ್ನ, 4 ಬೆಳ್ಳಿ, 4 ಕಂಚು ಸೇರಿ 16 ಪದಕ ಗೆದ್ದರು. ಪುರುಷರ 5 ಚಿನ್ನ, 13 ಬೆಳ್ಳಿ, 5 ಕಂಚು ಸೇರಿ 22 ಪದಕ ತಮ್ಮದಾಗಿಸಿಕೊಂಡರು.&lt;/p&gt;&lt;p&gt;--&lt;/p&gt;&lt;h3&gt;&lt;strong&gt;ಬಾಕ್ಸಿಂಗ್&zwnj;, ಜುಡೋ, ಪ್ಯಾರಾದಲ್ಲಿ ಜಗತ್ತಿಗೇ ಸವಾಲೊಡ್ಡಿದ ಭಾರತ!&lt;/strong&gt;&lt;/h3&gt;&lt;p&gt;ಈ ಬಾರಿ ಕ್ರೀಡಾಕೂಟದಲ್ಲಿ ಭಾರತ ಬಹುತೇಕ ವಿಭಾಗಗಳಲ್ಲಿ ಪದಕ ಸಾಧನೆ ಮಾಡಿದ್ದರೂ, ಬಾಕ್ಸಿಂಗ್&zwnj;, ಜುಡೋ ಹಾಗೂ ಪ್ಯಾರಾ ಗೇಮ್ಸ್&zwnj;ಗಳಲ್ಲಿ ವಿಶ್ವಕ್ಕೇ ಸವಾಲೊಡ್ಡುವ ರೀತಿ ಪ್ರದರ್ಶನ ನೀಡಿತು. ಬಾಕ್ಸಿಂಗ್&zwnj;ನ 14 ವಿಭಾಗಗಳ ಪೈಕಿ ಭಾರತ 10ರಲ್ಲಿ ಪದಕ ಗೆದ್ದಿತು. 7 ಚಿನ್ನ, 3 ಬೆಳ್ಳಿ ಭಾರತೀಯರ ಕೊರಳಿಗೇರಿದವು. ಇದು ಬಾಕ್ಸಿಂಗ್&zwnj;ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ. ಕಳೆದ ಬಾರಿ ಗೇಮ್ಸ್&zwnj;ನಲ್ಲಿ ದೇಶಕ್ಕೆ 7 ಪದಕ ಲಭಿಸಿದ್ದವು. ಇನ್ನು, ಜುಡೋ ಸ್ಪರ್ಧೆಯಲ್ಲಿ 2 ಐತಿಹಾಸಿಕ ಚಿನ್ನ ಸೇರಿ ಒಟ್ಟು 4 ಪದಕಗಳು ಬಂದವು. ಇದು ಗೇಮ್ಸ್&zwnj;ನ ಇತಿಹಾಸದಲ್ಲೇ ಜುಡೋದಲ್ಲಿ ಭಾರತದ ಸಾರ್ವಕಾಲಿಕ ಗರಿಷ್ಠ ಪದಕ ಸಾಧನೆ. ಕಾಮನ್&zwnj;ವೆಲ್ತ್&zwnj;ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಜುಡೋ ಪಟು ಎಂಬ ಖ್ಯಾತಿಯನ್ನು ಅಸ್ಮಿತಾ ಡೇ ತಮ್ಮದಾಗಿಸಿಕೊಂಡರು.&lt;/p&gt;&lt;p&gt;ಇನ್ನು, ಅಥ್ಲೆಟಿಕ್ಸ್&zwnj; ಹಾಗೂ ಪ್ಯಾರಾ ಅಥ್ಲೆಟಿಕ್ಸ್&zwnj;ನಲ್ಲಿ ಒಟ್ಟಾಗಿ 16 ಪದಕಗಳು ಭಾರತಕ್ಕೆ ಲಭಿಸಿದವು. ಇದು 2022ಕ್ಕೆ ಹೋಲಿಸಿದರೆ ಡಬಲ್&zwnj; ಸಾಧನೆ. ಪ್ಯಾರಾ ಅಥ್ಲೆಟಿಕ್ಸ್&zwnj;ನಲ್ಲೇ ಈ ಬಾರಿ 3 ಚಿನ್ನ ಸೇರಿ 7 ಪದಕ ಬಂದವು. ಇದು ಗೇಮ್ಸ್&zwnj;ನ ಆವೃತ್ತಿಯೊಂದರಲ್ಲಿ ಗರಿಷ್ಠ ಸಾಧನೆ.&lt;/p&gt;&lt;h3&gt;&lt;strong&gt;2002ರಿಂದ ಭಾರತಕ್ಕೆ ಅಗ್ರ-5ರೊಳಗೆ ಸ್ಥಾನ&lt;/strong&gt;&lt;/h3&gt;&lt;p&gt;ಭಾರತ ಕಾಮನ್&zwnj;ವೆಲ್ತ್&zwnj; ಗೇಮ್ಸ್&zwnj;ನ ಪದಕ ಪಟ್ಟಿಯಲ್ಲಿ 2002ರಿಂದಲೂ ಅಗ್ರ-5ರೊಳಗೆ ಸ್ಥಾನ ಪಡೆದುಕೊಳ್ಳುತ್ತಿವೆ. ಈ ಬಾರಿ ಆರಂಭಿಕ 9 ದಿನಗಳಲ್ಲಿ 9,10ನೇ ಸ್ಥಾನಗಳಲ್ಲಿದ್ದ ಭಾರತ, ಶನಿವಾರ ಭರ್ಜರಿ ಪದಕ ಬೇಟೆಯೊಂದಿಗೆ 4ನೇ ಸ್ಥಾನಕ್ಕೇರಿತು. 2002, 2006ರಲ್ಲಿ ಭಾರತ 4ನೇ ಸ್ಥಾನಿಯಾಗಿದ್ದರೆ, 2010ರ ನವದೆಹಲಿ ಗೇಮ್ಸ್&zwnj;ನಲ್ಲಿ 2ನೇ ಸ್ಥಾನಕ್ಕೆ ಜಿಗಿದಿತ್ತು. 2014ರಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದರೆ, 2018ರಲ್ಲಿ 3ನೇ ಸ್ಥಾನಕ್ಕೇರಿತ್ತು. 2022ರಲ್ಲಿ 4ನೇ ಸ್ಥಾನಿಯಾಗಿದ್ದ ಭಾರತ ಈ ಬಾರಿಯೂ ಅದೇ ಸ್ಥಾನ ಪಡೆದುಕೊಂಡಿದೆ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/commonwealth-games-2026-india-finishes-4th-with-39-medals-best-ever-boxing-performance-kvn/articleshow-rvoaiho"/>
        </item>
        <item>
            <title><![CDATA['ನೀವೇ ನಿಜವಾದ ಹೀರೋ…'ದೋಸ್ತ್‌ಗಾಗಿ ಭಾವುಕ ಪೋಸ್ಟ್‌ ಹಂಚಿಕೊಂಡ ರೋಹಿತ್ ಶರ್ಮಾ!]]></title>
            <link>https://kannada.asianetnews.com/cricket-sports/rohit-sharma-emotional-post-for-outgoing-fielding-coach-t-dilip-san/articleshow-uaghmbw</link>
            <guid isPermaLink="true">https://kannada.asianetnews.com/cricket-sports/rohit-sharma-emotional-post-for-outgoing-fielding-coach-t-dilip-san/articleshow-uaghmbw</guid>
            <pubDate>Mon, 03 Aug 2026 21:19:48 +0530</pubDate>
            <description><![CDATA[&lt;p&gt;ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ನಿರ್ಗಮಿತ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಕೊಡುಗೆಯನ್ನು ಶ್ಲಾಘಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz7hpz2aj36zjmgwv6y7ywr,imgname-rohit-sharma-1784533277666.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.3): &lt;/strong&gt;ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಿರ್ಗಮಿತ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಶ್ರಮ ಮತ್ತು ತಂಡಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ರೋಹಿತ್ ಮುಕ್ತಕಂಠದಿಂದ ಶ್ಲಾಘಿಸಿ, ಧನ್ಯವಾದ ಅರ್ಪಿಸಿದ್ದಾರೆ. ಭಾರತ ತಂಡವು ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಮುನ್ನವೇ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಸೇವಾ ಅವಧಿ ಮುಕ್ತಾಯಗೊಂಡಿದೆ. ಬಿಸಿಸಿಐ ಜತೆಗಿನ ಅವರ ಒಪ್ಪಂದ ಅಂತ್ಯಗೊಂಡಿದೆ. ಟಿ. ದಿಲೀಪ್ ಅವರು ನವೆಂಬರ್ 2021ರಲ್ಲಿ ಮೊದಲ ಬಾರಿಗೆ ಭಾರತ ತಂಡದ ಫೀಲ್ಡಿಂಗ್ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. 2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿತ್ತು.&lt;/p&gt;&lt;p&gt;ಮುಖ್ಯ ಕೋಚ್&zwnj; ಗೌತಮ್ ಗಂಭೀರ್ ಅವರ ಅವಧಿಯಲ್ಲೂ ಬಿಸಿಸಿಐ ಅವರ ಸೇವೆಯನ್ನು ತಾತ್ಕಾಲಿಕವಾಗಿ ಮುಂದುವರಿಸಿತ್ತು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸದ ನಂತರ ಅವರ ಒಪ್ಪಂದದ ಅವಧಿ ಮುಗಿದಿದ್ದು, ಅದನ್ನು ಮತ್ತೆ ವಿಸ್ತರಿಸದಿರಲು ಬಿಸಿಸಿಐ ತೀರ್ಮಾನಿಸಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಸಾಧಾರಣ ಮಟ್ಟದಲ್ಲಿತ್ತು. ಸರಣಿ ಸೋಲಿನ ಬೆನ್ನಲ್ಲೇ ಕೋಚಿಂಗ್ ಸೆಟಪ್ ಬದಲಾವಣೆಯ ಕುರಿತು ಚರ್ಚೆಗಳು ಆರಂಭವಾಗಿದ್ದವು. ಈ ಹಿನ್ನೆಲೆಯಲ್ಲಿ ಬಿಸಿಸಿಐ, ಟಿ.ದಿಲೀಪ್ ಅವರ ಅವಧಿಯನ್ನು ವಿಸ್ತರಿಸಲಿಲ್ಲ.&lt;/p&gt;&lt;h2&gt;&lt;strong&gt;ರೋಹಿತ್ ಶರ್ಮಾ ಭಾವುಕ ಪೋಸ್ಟ್&lt;/strong&gt;&lt;/h2&gt;&lt;p&gt;ಟಿ. ದಿಲೀಪ್ ಅವರ ಅಧಿಕಾರಾವಧಿಯಲ್ಲಿ ಭಾರತ ತಂಡ ಮಹತ್ತರ ಸಾಧನೆಗಳನ್ನು ಮಾಡಿದೆ ಎಂಬುದನ್ನು ಮರೆಯುವಂತಿಲ್ಲ. ಟೀಮ್&zwnj; ಇಂಡಿಯಾ 2024 ಮತ್ತು 2026ರ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಜತೆಗೆ 2023 ಮತ್ತು 2025ರ ಏಷ್ಯಾ ಕಪ್ ಕೂಡ ಗೆದ್ದುಕೊಂಡಿದೆ. ಟಿ. ದಿಲೀಪ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದಂತೆ ರೋಹಿತ್ ಶರ್ಮಾ ಭಾವುಕ ಪೋಸ್ಟ್ ಬರೆದಿದ್ದು, ಅದರಲ್ಲಿ ದಿಲೀಪ್ ಅವರನ್ನು ತಂಡದ ನಿಜವಾದ 'ವರ್ಕ್&zwnj;ಹಾರ್ಸ್' (ಕಠಿಣ ಪರಿಶ್ರಮಿ) ಎಂದು ಬಣ್ಣಿಸಿದ್ದಾರೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಂನಲ್ಲಿ ದಿಲೀಪ್ ಅವರ ಫೋಟೋ ಹಂಚಿಕೊಂಡು ಶ್ಲಾಘಿಸಿರುವ ರೋಹಿತ್ ಶರ್ಮಾ, 'ನೀವು ಒಬ್ಬ ಮಹಾನ್ ವ್ಯಕ್ತಿತ್ವದ ಮನುಷ್ಯ ದಿಲೀಪ್ ಸರ್. ನೀವು ತಂಡದಲ್ಲಿ ಅದ್ಭುತ ವಾತಾವರಣ ಸೃಷ್ಟಿಸಿದ್ದೀರಿ ಮತ್ತು ತೆರೆಮರೆಯಲ್ಲಿ ಕಠಿಣ ಪರಿಶ್ರಮ ಪಟ್ಟ ನಿಜವಾದ 'ವರ್ಕ್&zwnj;ಹಾರ್ಸ್' ನೀವು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಗಳು&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಹೊಸ ಫೀಲ್ಡಿಂಗ್ ಕೋಚ್ ಆಗಿ ಶುಭದೀಪ್ ಘೋಷ್ ನೇಮಕ&lt;/strong&gt;&lt;/h2&gt;&lt;p&gt;ಟಿ. ದಿಲೀಪ್ ಅವರ ಒಪ್ಪಂದ ಅಂತ್ಯಗೊಂಡ ಬೆನ್ನಲ್ಲೇ ಬಿಸಿಸಿಐ ಈ ಜವಾಬ್ದಾರಿಯನ್ನು ಶುಭದೀಪ್ ಘೋಷ್ ಅವರ ಹೆಗಲಿಗೆ ನೀಡಿದೆ. ಶುಭದೀಪ್ ಘೋಷ್ ಭಾರತೀಯ ಕ್ರಿಕೆಟ್ ತಂಡದ ನೂತನ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಈ ಹಿಂದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತು ಇಂಡಿಯಾ 'ಎ' ತಂಡದ ಜೊತೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಶುಭದೀಪ್ ಘೋಷ್ ಅವರ ಅಧಿಕಾರಾವಧಿ ಆರಂಭವಾಗಲಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by T Dilip (@dilip.tk19)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/rohit-sharma-emotional-post-for-outgoing-fielding-coach-t-dilip-san/articleshow-uaghmbw"/>
        </item>
        <item>
            <title><![CDATA[ಲಂಕಾ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ತಳಮಳ, ಸ್ಟಾರ್ ಕ್ರಿಕೆಟಿಗ ಔಟ್]]></title>
            <link>https://kannada.asianetnews.com/gallery/cricket-sports/jasprit-bumrah-ruled-out-ahead-of-india-vs-sri-lanka-test-series-says-report-up5f6ov</link>
            <guid isPermaLink="true">https://kannada.asianetnews.com/gallery/cricket-sports/jasprit-bumrah-ruled-out-ahead-of-india-vs-sri-lanka-test-series-says-report-up5f6ov</guid>
            <pubDate>Sun, 02 Aug 2026 15:12:45 +0530</pubDate>
            <description><![CDATA[&lt;p&gt;ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕೆಲ ದಿನ ಮಾತ್ರ. ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಟೀಂ ಇಂಡಿಯಾದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಪ್ರಮುಖ ಆಟಗಾರ ತಂಡದಿಂದ ಔಟ್ ಆಗಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250624213857,imgname-image-59334c7e-0f73-4071-876a-38870bf76072.jpg" type="image/jpeg" height="390" width="690"/>
            <content:encoded><![CDATA[&lt;p&gt;ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕೆಲ ದಿನ ಮಾತ್ರ. ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಟೀಂ ಇಂಡಿಯಾದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಪ್ರಮುಖ ಆಟಗಾರ ತಂಡದಿಂದ ಔಟ್ ಆಗಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಭಾರತ ಹಾಗೂ ಶ್ರೀಲಂಕಾ ನಡುವಿನ 2 ಟೆಸ್ಟ್ ಪಂದ್ಯಗಳ ಸರಣಿ ಆಗಸ್ಟ್ 15 ರಿಂದ ಆರಂಭಗೊಳ್ಳುತ್ತಿದೆ. ಟೀಂ ಇಂಡಿಯಾ ತಯಾರಿ ನಡುವೆ ಅತೀ ದೊಡ್ಡ ಹಿನ್ನಡೆಯಾಗಿದೆ. ಟೀಂ ಇಂಡಿಯಾ ಕೀ ಪ್ಲೇಯರ್, ಬೌಲಿಂಗ್ ವಿಭಾಗದ ಶಕ್ತಿಯಾಗಿ ಗುರುತಿಸಿಕೊಂಡಿರುವ ವೇಗಿ ಜಸ್&zwnj;ಪ್ರೀತ್ ಬುಮ್ರಾ ಗಾಯಗೊಂಡಿದ್ದಾರೆ. ಪರಿಣಾಮ ಬುಮ್ರಾ ಬಹುತೇಕ ಟೂರ್ನಿಯಿಂದ ಔಟ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಮೊಣಕಾಲು ನೋವಿನಿಂದ ಬಳಲುತ್ತಿರುವ ಬುಮ್ರಾ ಈಗಾಗಲೇ ಪುನವರ್ತಸಿ ಕೇಂದ್ರದಿಂದ ನೇರವಾಗಿ ಟೀಂ ಇಂಡಿಯಾ ಜೊತೆ ಪ್ರವಾಸ ಕುರಿತು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬುಮ್ರಾ ಮೊಣಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಟೀಂ ಇಂಡಿಯಾ ಜೊತೆ ಬುಮ್ರಾ ಶ್ರೀಲಂಕಾ ಪ್ರವಾಸ ಅಸಾಧ್ಯ ಎಂದು ಟೀಂ ಇಂಡಿಯಾ ಮೂಲಗಳು ಹೇಳಿವೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಆಯ್ಕೆ ಸಮಿತಿ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಬುಮ್ರಾ ಲಭ್ಯತೆ ಕುರಿತು ಹಲವು ಅನುಮಾನಗಳು ಮೂಡಿತ್ತು. ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಆಯ್ಕೆ ಸಮಿತಿ ಬುಮ್ರಾ ಆಯ್ಕೆ ಮಾಡಿ ಅಚ್ಚರಿ ನೀಡಿತ್ತು. ಸದ್ಯಕ್ಕೆ ಬುಮ್ರಾ ಟೀಂ ಇಂಡಿಯಾ ಸೇರಿಕೊಳ್ಳುತ್ತಿಲ್ಲ ಅನ್ನೋದು ಬಹುತೇಕ ಖಚಿತಗೊಂಡಿದೆ.&lt;/p&gt;&lt;img&gt;&lt;p&gt;ಗಾಯ ಸಂಪೂರ್ಣವಾಗಿ ಚೇತರಿಸಿಕೊಳ್ಳದೆ ತಂಡಕ್ಕೆ ಕಮ್&zwnj;ಬ್ಯಾಕ್ ಮಾಡುವ ಪರಿಪಾಠವಿಲ್ಲ. ಈ ಹಿಂದೆ ಹಲವು ಕ್ರಿಕೆಟಿಗರು ಈ ರೀತಿ ಮಾಡಿ ಪ್ರಮುಖ ಘಟ್ಟದಲ್ಲಿ ಅಲಭ್ಯರಾಗಿದ್ದಾರೆ. ಜೊತೆಗೆ ಇಂಜುರಿ ಸಮಸ್ಯೆಗಳಿಂದ ಬಹುತೇಕ ಕರಿಯರ್&zwnj;ನಲ್ಲಿ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಸಂಪೂರ್ಣ ಫಿಟ್ ಆದ ಬಳಿಕವಷ್ಟೇ ಆಟಗಾರರ ತಂಡಕ್ಕೆ ಮರಳಲು ಸಾಧ್ಯ ಎಂದು ಬಿಸಿಸಿಐ ಮೂಲಗಳು ಹೇಳಿವೆ.&lt;/p&gt;&lt;img&gt;&lt;p&gt;ಶ್ರೀಲಂಕಾದ 2 ಟೆಸ್ಟ್ ಪಂದ್ಯದ ಸರಣಿಗೆ ಬುಮ್ರಾ ಆಯ್ಕೆ ಮಾಡಿ ಮುಂಬರುವ ಪ್ರಮುಖ ಟೂರ್ನಿಗಳಲ್ಲಿ ಅಲಭ್ಯರಾದರೆ ಸಮಸ್ಯೆಗಳು ತೀವ್ರಗೊಳ್ಳಲಿದೆ. ಹೀಗಾಗಿ ಬುಮ್ರಾಗೆ ಸಂಪೂರ್ಣ ವಿಶ್ರಾಂತಿ ನೀಡಿ ಸಂಪೂರ್ಣ ಫಿಟ್ ಆಗಲು ಅವಕಾಶ ನೀಡಲಾಗುತ್ತದೆ. ಇದರಿಂದ ಸುದೀರ್ಘ ಕರಿಯರ್ ಹಾಗೂ ಟೀಂ ಇಂಡಿಯಾಗೂ ನೆರವಾಗಲಿದೆ ಎಂದು ಬಿಸಿಸಿಐ ಹೇಳಿದೆ.&lt;/p&gt;&lt;img&gt;&lt;p&gt;ಬುಮ್ರಾ ಅಲಭ್ಯತೆ ಕುರಿತು ಬಿಸಿಸಿಐ ಅಥವಾ ಜಸ್ಪ್ರೀತ್ ಬುಮ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬುಮ್ರಾ ಅಲಭ್ಯತೆ ಬಹುತೇಕ ಖಚಿತ ಅನ್ನೋ ಸುಳಿವು ನೀಡಿದೆ. ಇದೀಗ ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಬುಮ್ರಾ ಅಲಭ್ಯತೆಯಲ್ಲಿ ಬೌಲಿಂಗ್ ಮಾಡಬೇಕಿದೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/jasprit-bumrah-ruled-out-ahead-of-india-vs-sri-lanka-test-series-says-report-up5f6ov"/>
        </item>
        <item>
            <title><![CDATA[ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ಬಿಸಿಸಿಐನಿಂದ ಪ್ರತಿ ತಿಂಗಳು ಸಿಗುವ ಪೆನ್ಷನ್ ಎಷ್ಟು?]]></title>
            <link>https://kannada.asianetnews.com/cricket-sports/ajinkya-rahane-pension-revealed-how-much-will-bcci-pay-the-former-india-captain-monthly-kvn/articleshow-vf2qmli</link>
            <guid isPermaLink="true">https://kannada.asianetnews.com/cricket-sports/ajinkya-rahane-pension-revealed-how-much-will-bcci-pay-the-former-india-captain-monthly-kvn/articleshow-vf2qmli</guid>
            <pubDate>Sun, 02 Aug 2026 12:04:25 +0530</pubDate>
            <description><![CDATA[ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, 85 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು ಬಿಸಿಸಿಐನ ಪರಿಷ್ಕೃತ ಪಿಂಚಣಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ₹70,000 ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01h2mv3byrfyskfpnmpz55916b,imgname-Ajinkya-Rahane-1686474174424.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ವಿದೇಶಿ ನೆಲಗಳಲ್ಲಿ ದಿಟ್ಟ ಹೋರಾಟ ತೋರುತ್ತಿದ್ದ ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಇತ್ತೀಚೆಗಷ್ಟೇ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದರು. ಕಳೆದ ಜುಲೈ 30ರಂದು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕುವ ಮೂಲಕ ತಮ್ಮ ವರ್ಣರಂಜಿತ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ರಹಾನೆ ಗುಡ್ ಬೈ ಹೇಳಿದ್ದರು.&lt;/p&gt;&lt;p&gt;2020-21ನೇ ಸಾಲಿನ ಆಸೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕನಾಗಿ ಅಜಿಂಕ್ಯ ರಹಾನೆ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದ್ದು, ಅಪ್ಪಟ ಕ್ರಿಕೆಟ್ ಅಭಿಮಾನಿಗಳಿ ಮರೆಯಲು ಸಾಧ್ಯವೇ ಇಲ್ಲ. ರಾಹುಲ್ ದ್ರಾವಿಡ್, ವಿವಿಎಸ್&zwnj; ಲಕ್ಷ್ಮಣ್ ಬಳಿಕ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಭಾರತದ ಅತ್ಯಂತ ನಂಬಿಗಸ್ಥ ಮಧ್ಯಮ ಕ್ರಮಾಂಕದ ಬ್ಯಾಟರ್&zwnj;ಗಳು ಎನಿಸಿಕೊಂಡಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಅಜಿಂಕ್ಯ ರಹಾನೆ ಬಿಸಿಸಿಐನಿಂದ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ.&lt;/p&gt;&lt;h2&gt;&lt;strong&gt;ನಾಲ್ಕು ವರ್ಷಗಳ ಹಿಂದೆ ಪಿಂಚಣಿ ಮೊತ್ತ ಹೆಚ್ಚಿಸಿರುವ ಬಿಸಿಸಿಐ!&lt;/strong&gt;&lt;/h2&gt;&lt;p&gt;2022ರಲ್ಲಿ ಬಿಸಿಸಿಐ ತಮ್ಮ ಮಾಜಿ ಆಟಗಾರರಿಗೆ ನೀಡಲಾಗುತ್ತಿದ್ದ ಪಿಂಚಣಿ ಮೊತ್ತವನ್ನು ಪರಿಷ್ಕರಿಸಲಾಗಿದ್ದು, ಪಿಂಚಣಿ ಮೊತ್ತವನ್ನು ಹೆಚ್ಚಿಸಿದೆ. ಭಾರತ ಪರ 85 ಟೆಸ್ಟ್ ಪಂದ್ಯಗಳನ್ನಾಡಿರುವ ಅಜಿಂಕ್ಯ ರಹಾನೆ ಬಿಸಿಸಿಐನಿಂದ ಟಾಪ್ ಸ್ಲಾಟ್&zwnj;ನ ಪಿಂಚಣಿ ಪಡೆಯುವ ಆಟಗಾರರ ಶ್ರೇಣಿಯಲ್ಲಿದ್ದಾರೆ. ಈ ಮೊದಲು ಟಾಪ್ ಸ್ಲಾಟ್&zwnj;ನಲ್ಲಿರುವ ಆಟಗಾರರು ಪ್ರತಿ ತಿಂಗಳು 50 ಸಾವಿರ ರುಪಾಯಿ ಬಿಸಿಸಿಐನಿಂದ ಪಿಂಚಣಿ ಪಡೆಯುತ್ತಿದ್ದರು. 2022ರಿಂದೀಚೆಗೆ ಆ ಆಟಗಾರರು ಪ್ರತಿ ತಿಂಗಳು ₹70,000 ಪಿಂಚಣಿ ಪಡೆಯಲಿದ್ದಾರೆ.&lt;/p&gt;&lt;h3&gt;&lt;strong&gt;ಅಜಿಂಕ್ಯ ರಹಾನೆಗೆ ಬಿಸಿಸಿಐನಿಂದ ಪ್ರತಿ ತಿಂಗಳು ಸಿಗುವ ಪೆನ್ಷನ್ ಎಷ್ಟು?&lt;/strong&gt;&lt;/h3&gt;&lt;p&gt;ಜಗತ್ತಿನ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದು ಕರೆಸಿಕೊಳ್ಳುವ ಬಿಸಿಸಿಐ, ಇದೀಗ ಮಾಜಿ ಆಟಗಾರರ ಕ್ಷೇಮಾಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಕೈತುಂಬಾ ಪಿಂಚಣಿ ನೀಡುತ್ತಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಮಾಜಿ ಆಟಗಾರರ ಪಿಂಚಣಿ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದ್ದರು. ಇದೀಗ ಭಾರತ ಪರ 80ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ರಹಾನೆ ಪ್ರತಿ ತಿಂಗಳು 70,000 ರುಪಾಯಿ ಪೆನ್ಷನ್ ಜೇಬಿಗಿಳಿಸಿಕೊಳ್ಳಲಿದ್ದಾರೆ.&lt;/p&gt;&lt;h3&gt;&lt;strong&gt;ಬಿಸಿಸಿಐ ಹೊಸ ಪೆನ್ಷನ್&zwnj; ವಿಭಾಗ ಹೇಗಿದೆ?&lt;/strong&gt;&lt;/h3&gt;&lt;p&gt;ಭಾರತ ಪರ 25ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರರಿಗೆ ಗರಿಷ್ಠ ತಿಂಗಳಿಗೆ 70,000 ರುಪಾಯಿ ಪಿಂಚಣಿ ಪಡೆಯುತ್ತಾರೆ. ಇನ್ನು 25ರಿಂದ 49 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕ್ರಿಕೆಟಿಗರು ತಿಂಗಳಿಗೆ 30,000 ರುಪಾಯಿ ಹಾಗೂ 75+ ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಕ್ರಿಕೆಟಿಗರು ತಿಂಗಳಿಗೆ 45,000 ರುಪಾಯಿ ಪಿಂಚಣಿ ಪಡೆಯುತ್ತಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ajinkya-rahane-pension-revealed-how-much-will-bcci-pay-the-former-india-captain-monthly-kvn/articleshow-vf2qmli"/>
        </item>
        <item>
            <title><![CDATA["ಮೊದಲು ಆಸ್ಟ್ರೇಲಿಯಾ ಸರಣಿ ಗೆಲ್ಲಿ, ಫೈನಲ್ ಆಮೇಲೆ ನೋಡೋಣ": ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಸವಾಲು!]]></title>
            <link>https://kannada.asianetnews.com/cricket-sports/former-cricketer-deep-dasgupta-urges-team-india-to-prioritise-progress-over-wtc-qualification/articleshow-wnabvhz</link>
            <guid isPermaLink="true">https://kannada.asianetnews.com/cricket-sports/former-cricketer-deep-dasgupta-urges-team-india-to-prioritise-progress-over-wtc-qualification/articleshow-wnabvhz</guid>
            <pubDate>Mon, 03 Aug 2026 20:50:15 +0530</pubDate>
            <description><![CDATA[&lt;p&gt;ಭಾರತೀಯ ಟೆಸ್ಟ್ ತಂಡವು WTC ಫೈನಲ್ ಅರ್ಹತೆಯ ಬಗ್ಗೆ ಅತಿಯಾಗಿ ಯೋಚಿಸುವ ಬದಲು ಬಲಿಷ್ಠ ಮತ್ತು ಸ್ಥಿರ ತಂಡ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಮಾಜಿ ಕ್ರಿಕೆಟಿಗ ದೀಪ್ ದಾಸ್&zwnj;ಗುಪ್ತಾ ಸಲಹೆ ನೀಡಿದ್ದಾರೆ. ಇತ್ತೀಚಿನ ಸೋಲುಗಳ ನಡುವೆಯೂ ದೀರ್ಘಾವಧಿಯ ಸುಧಾರಣೆ, ವಿದೇಶಿ ಸರಣಿಗಳಲ್ಲಿ ಯಶಸ್ಸು ಹಾಗೂ ಯುವ ಆಟಗಾರರ ಬೆಳವಣಿಗೆಯೇ ಭಾರತದ ಪ್ರಮುಖ ಗುರಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyyz5ng4attncvfphmq5g87m,imgname-icc-world-test-championship-1785598236164.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಟೆಸ್ಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ (WTC) ಫೈನಲ್ ತಲುಪುವ ಲೆಕ್ಕಾಚಾರದಲ್ಲಿ ಸಿಲುಕದೇ, ದೀರ್ಘಕಾಲಿಕವಾಗಿ ಬಲಿಷ್ಠ ತಂಡ ನಿರ್ಮಿಸುವತ್ತ ಗಮನ ಹರಿಸಬೇಕು ಎಂದು ಮಾಜಿ ವಿಕೆಟ್ ಕೀಪರ್ ಹಾಗೂ ಕ್ರಿಕೆಟಿಗ ದೀಪ್ ದಾಸ್&zwnj;ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ಸೋಲುಗಳ ಬಳಿಕ ತಂಡ ಪರಿವರ್ತನೆಯ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ತಾಳ್ಮೆ ಮತ್ತು ನಿರಂತರ ಸುಧಾರಣೆ ಅಗತ್ಯ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಫೈನಲ್ ಕನಸಿಗಿಂತ ತಂಡದ ಬೆಳವಣಿಗೆ ಮುಖ್ಯ!&lt;/strong&gt;&lt;/p&gt;&lt;p&gt;ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಮಾತನಾಡಿದ ದಾಸ್&zwnj;ಗುಪ್ತಾ, ಸದ್ಯದ ಪರಿಸ್ಥಿತಿಯಲ್ಲಿ WTC ಫೈನಲ್ ಕುರಿತು ಅತಿಯಾದ ಚರ್ಚೆ ಅಗತ್ಯವಿಲ್ಲ ಎಂದರು. ಪ್ರತಿಯೊಂದು ಸರಣಿಯನ್ನು ಗೆಲ್ಲುವ ಒತ್ತಡಕ್ಕಿಂತ, ವಿದೇಶದಲ್ಲೂ ಹಾಗೂ ತವರಲ್ಲೂ ನಿರಂತರವಾಗಿ ಗೆಲ್ಲಬಲ್ಲ ತಂಡವನ್ನು ರೂಪಿಸುವುದೇ ಮುಖ್ಯ ಗುರಿಯಾಗಬೇಕು ಎಂದು ಅವರು ಸಲಹೆ ನೀಡಿದರು.&lt;/p&gt;&lt;p&gt;ಅವರ ಪ್ರಕಾರ, 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ಸಾಧಿಸಿದ್ದ ಐತಿಹಾಸಿಕ ಸರಣಿ ಜಯದಂತಹ ಪ್ರದರ್ಶನವೇ ಮತ್ತೆ ಕಾಣಿಸಬೇಕು. ಅದಕ್ಕಾಗಿ ತಂಡದ ಆಟಗಾರರಿಗೆ ಸಮಯ, ಆತ್ಮವಿಶ್ವಾಸ ಮತ್ತು ಸ್ಥಿರ ಯೋಜನೆ ಬೇಕು ಎಂದು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt; 25 ಸಿಕ್ಸರ್, 14 ಬೌಂಡರಿ, 233 ರನ್! ಸಿಡಿಲಬ್ಬರದ ದ್ವಿಶತಕ ಸಿಡಿಸಿ ಆಯ್ಕೆಗಾರರಿಗೆ 'ಸಿಗ್ನಲ್' ಕೊಟ್ಟ ಅಭಿಷೇಕ್ ಶರ್ಮಾ&lt;/p&gt;&lt;p&gt;&lt;strong&gt;WTC ಅಂಕಪಟ್ಟಿಯಲ್ಲಿ ಭಾರತಕ್ಕೆ ಕಠಿಣ ಸವಾಲು..!&lt;/strong&gt;&lt;/p&gt;&lt;p&gt;2025ರ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಎದುರಿಸಿದ ಸರಣಿ ಸೋಲಿನ ಬಳಿಕ ಭಾರತ WTC ಅಂಕಪಟ್ಟಿಯಲ್ಲಿ 48.15 ಪಾಯಿಂಟ್ ಶೇಕಡಾವಾರು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂದಿನ ತಿಂಗಳುಗಳಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರವಾಸಗಳು, ಬಳಿಕ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿವೆ.&lt;/p&gt;&lt;p&gt;ಈ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಫೈನಲ್ ಅವಕಾಶ ಜೀವಂತವಾಗಿರಲಿದೆ. ಆದರೆ ದಾಸ್&zwnj;ಗುಪ್ತಾ ಅವರ ಅಭಿಪ್ರಾಯದಲ್ಲಿ, ಅಂಕಪಟ್ಟಿಗಿಂತ ತಂಡದ ಸಾಮರ್ಥ್ಯ ಹೆಚ್ಚಿಸುವುದೇ ಹೆಚ್ಚು ಮೌಲ್ಯಯುತ.&lt;/p&gt;&lt;p&gt;&lt;strong&gt;ಬಲಿಷ್ಠ ತಂಡ ನಿರ್ಮಾಣವೇ ಅಂತಿಮ ಗುರಿ!&lt;/strong&gt;&lt;/p&gt;&lt;p&gt;WTC ಅರ್ಹತೆಯ ಗುರಿ ಕೆಲವೊಮ್ಮೆ ತಂಡವನ್ನು ತಾತ್ಕಾಲಿಕ ತಂತ್ರಗಳತ್ತ ಕೊಂಡೊಯ್ಯಬಹುದು ಎಂದು ದಾಸ್&zwnj;ಗುಪ್ತಾ ಎಚ್ಚರಿಸಿದರು. ಬದಲಾಗಿ, ಯುವ ಆಟಗಾರರನ್ನು ಬೆಳೆಸುವುದು, ಸ್ಥಿರ ಬ್ಯಾಟಿಂಗ್ ಮತ್ತು ಬೌಲಿಂಗ್ ಘಟಕ ರೂಪಿಸುವುದು ಹಾಗೂ ವಿದೇಶಿ ಪಿಚ್&zwnj;ಗಳಲ್ಲಿ ನಿರಂತರ ಯಶಸ್ಸು ಸಾಧಿಸುವ ಸಾಮರ್ಥ್ಯ ಬೆಳೆಸುವುದು ಭಾರತೀಯ ಟೆಸ್ಟ್ ತಂಡದ ಆದ್ಯತೆಯಾಗಬೇಕು ಎಂದರು. ಅವರ ಈ ಸಲಹೆ, ಭವಿಷ್ಯದ ಬಲಿಷ್ಠ ಭಾರತ ತಂಡ ನಿರ್ಮಾಣದ ದಿಕ್ಕಿನಲ್ಲಿ ಮಹತ್ವದ ಮಾರ್ಗದರ್ಶನವೆಂದು ಪರಿಗಣಿಸಲಾಗುತ್ತಿದೆ.&lt;/p&gt;]]></content:encoded>
            <category>sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/former-cricketer-deep-dasgupta-urges-team-india-to-prioritise-progress-over-wtc-qualification/articleshow-wnabvhz"/>
        </item>
        <item>
            <title><![CDATA[ಬುಮ್ರಾ ಬಿಟ್ಟು ಭಾರತದ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಬೌಲರ್‌ಗಳನ್ನು ಆಯ್ಕೆ ಮಾಡಿದ ಅರ್ಶದೀಪ್ ಸಿಂಗ್..! ಈ ದಿಗ್ಗಜ ಬೌಲರ್‌ ಬಳಿ ಕ್ಷಮೆ ಕೇಳಿದ ವೇಗಿ]]></title>
            <link>https://kannada.asianetnews.com/cricket-sports/arshdeep-singh-picks-bhuvneshwar-kumar-as-india-greatest-bowler-leaves-jasprit-bumrah-behind-kvn/articleshow-xizqpl7</link>
            <guid isPermaLink="true">https://kannada.asianetnews.com/cricket-sports/arshdeep-singh-picks-bhuvneshwar-kumar-as-india-greatest-bowler-leaves-jasprit-bumrah-behind-kvn/articleshow-xizqpl7</guid>
            <pubDate>Mon, 03 Aug 2026 11:00:46 +0530</pubDate>
            <description><![CDATA[ಭಾರತದ ವೇಗಿ ಅರ್ಶದೀಪ್ ಸಿಂಗ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್&zwnj;ಗಳನ್ನು ಆಯ್ಕೆ ಮಾಡಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಭುವನೇಶ್ವರ್ ಕುಮಾರ್&zwnj;ಗೆ ಅಗ್ರಸ್ಥಾನ ನೀಡಿರುವ ಅವರು, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್&zwnj;ರನ್ನು ಪಟ್ಟಿಯಲ್ಲಿ ಹೆಸರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkbv9dhp401a4zprxayq16vx,imgname-fotojet-1773145470517.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತದ ಪ್ರತಿಭಾನ್ವಿತ ವೇಗದ ಬೌಲರ್ ಅರ್ಶದೀಪ್ ಸಿಂಗ್, ಯೂಟ್ಯೂಬ್&zwnj; ಚಾನೆಲ್&zwnj;ವೊಂದರಲ್ಲಿ ತಮ್ಮ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್&zwnj;ಗಳನ್ನು ಆಯ್ಕೆ ಮಾಡಿದ್ದಾರೆ. ಈ ಲಿಸ್ಟ್&zwnj;ನಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಅರ್ಶದೀಪ್ ಆಯ್ಕೆ ಮಾಡಿದ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್&zwnj;ಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಭುವಿ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ ಅವರಂತಹ ತಾರಾ ಬೌಲರ್&zwnj;ಗಳನ್ನು ಹಿಂದಿಕ್ಕಿದ್ದಾರೆ.&lt;/p&gt;&lt;p&gt;ಅರ್ಶದೀಪ್ ಸಿಂಗ್, ಕ್ರಿಷ್ನಾಕ್&zwnj; ಅಥ್ರೆ ಯೂಟ್ಯೂಬ್ ಚಾನೆಲ್&zwnj;ನಲ್ಲಿ ತಮ್ಮ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಭಾರತೀಯ ಬೌಲರ್&zwnj;ಗಳನ್ನು ಆಯ್ಕೆ ಮಾಡಿದ್ದಾರೆ. ಈ ಚಾನೆಲ್&zwnj;ನಲ್ಲಿ ಮಾತನಾಡಿರುವ ಅರ್ಶದೀಪ್, 'ಭುವಿ ನನ್ನ ಪಾಲಿನ ಫೇವರೇಟ್ ಆಟಗಾರನಾಗಿರುವುದರಿಂದ ಅವರಿಗೆ ನಾನು ಅಗ್ರಸ್ಥಾನ ಕೊಡುತ್ತೇನೆ. ಈ ವಿಚಾರದಲ್ಲಿ ನಾನೊಂಥರ ಪಕ್ಷಪಾತಿ. ಮೊದಲಿಗೆ ನಾನು ವೇಗದ ಬೌಲರ್&zwnj;ಗಳನ್ನು ಆಯ್ಕೆ ಮಾಡುತ್ತೇನೆ. ಇನ್ನು ಎರಡನೇ ಸ್ಥಾನವನ್ನು ಮೊಹಮ್ಮದ್ ಶಮಿ ಅವರಿಗೆ ನೀಡುತ್ತೇನೆ. ನಿಮಗೆ ಗೊತ್ತು, ಶಮಿ ಅವರು ಯಾವುದೇ ವಿಕೆಟ್&zwnj;ನಲ್ಲೂ ವೇಗದ ದಾಳಿ ನಡೆಸುತ್ತಾರೆ. ಅವರ ಬೌಲಿಂಗ್ ಅದ್ಭುತವಾಗಿದೆ. ಅವರು ಅದ್ಭುತವಾಗಿ ವೇಗದ ಬೌಲಿಂಗ್ ಸಂಘಟಿಸುತ್ತಾರೆ ಎಂದು ಅರ್ಶದೀಪ್ ಸಿಂಗ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಕುಲ್ಚಾ ಜೋಡಿಗೆ ಮೂರು-ನಾಲ್ಕನೇ ಸ್ಥಾನ:&lt;/strong&gt;&lt;/h2&gt;&lt;p&gt;ಇನ್ನು ಭಾರತದ ಕುಲ್ಚಾ ಜೋಡಿಯೆಂದೇ ಪ್ರಸಿದ್ದಿ ಪಡೆದಿರುವ ಕುಲ್ದೀಪ್ ಯಾವದ್ ಹಾಗೂ ಯುಜುವೇಂದ್ರ ಚಹಲ್&zwnj;ಗೆ ಕ್ರಮವಾಗಿ ಅರ್ಶದೀಪ್ ಸಿಂಗ್ ಮೂರು ಹಾಗೂ ನಾಲ್ಕನೇ ಸ್ಥಾನ ನೀಡಿದ್ದಾರೆ. 'ಚೈನಾಮನ್ ಸ್ಪಿನ್ನರ್ ಖ್ಯಾತಿಯ ಎಡಗೈ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಬಳಿ ವಿಶೇಷವಾದ ಕೌಶಲ್ಯವಿದೆ. ಇನ್ನು ಪಂಜಾಬ್&zwnj; ಕಿಂಗ್ಸ್&zwnj;ನ ಸಹ ಆಟಗಾರ ಯುಜುವೇಂದ್ರ ಚಹಲ್ ಅದ್ಭುತ ಬೌಲಿಂಗ್ ದಾಖಲೆ ಹೊಂದಿದ್ದಾರೆ. ಅವರು ಸಾಕಷ್ಟು ವಿಕೆಟ್ ಪಡೆದುಕೊಂಡಿದ್ದಾರೆ ಎಂದು ಅರ್ಶದೀಪ್ ಸಿಂಗ್ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಅಶ್ವಿನ್ ಕ್ಷಮೆ ಕೇಳಿ ಐದನೇ ಸ್ಥಾನ ನೀಡಿದ ಅರ್ಶದೀಪ್ ಸಿಂಗ್:&lt;/strong&gt;&lt;/h3&gt;&lt;p&gt;ಇನ್ನು ಅರ್ಶದೀಪ್ ಸಿಂಗ್ ಭಾರತದ ಎರಡನೇ ಗರಿಷ್ಠ ಟೆಸ್ಟ್ ವಿಕೆಟ್ ಸರದಾರ ರವಿಚಂದ್ರನ್ ಅಶ್ವಿನ್&zwnj;ಗೆ ಐದನೇ ಸ್ಥಾನ ನೀಡಿ ಕ್ಷಮೆಯಾಚಿಸಿದ್ದಾರೆ. 'ನಾನು ಅಶ್ವಿನ್&zwnj;ಗೆ ಈ ಪಟ್ಟಿಯಲ್ಲಿ ಕೊನೆಯ ಸ್ಥಾನ ನೀಡಬೇಕು ಅಂದುಕೊಂಡಿರಲಿಲ್ಲ. ಆದರೆ ಬೇರೆ ಸ್ಥಾನ ಇಲ್ಲದಿರುವ ಹಿನ್ನೆಲೆಯಲ್ಲಿ ಅವರಿಗೆ ಐದನೇ ಸ್ಥಾನ ನೀಡಿದ್ದೇನೆ. ಅವರೊಬ್ಬ ದಿಗ್ಗಜ ಆಟಗಾರ. ಆದರೆ ಅಶ್ವಿನ್ ಅಣ್ಣ ಪಂಜಾಬ್ ಕಿಂಗ್ಸ್&zwnj;ನಲ್ಲಿ ನನ್ನ ಪಾಲಿನ ಐಪಿಎಲ್&zwnj;ನ ಮೊದಲ ಕ್ಯಾಪ್ಟನ್ ಆಗಿದ್ದರು. ಕ್ಷಮಿಸಿ ಅಶ್ವಿನ್ ಅಣ್ಣ. ನಾನು ಪರ್ಸನಲ್&zwnj; ಆಗಿ ನಿಮಗೆ ಮೆಸೇಜ್ ಮಾಡ್ತೇನೆ' ಎಂದು ಪಂಜಾಬ್ ಕಿಂಗ್ಸ್ ತಂಡದ ಎಡಗೈ ವೇಗಿ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಎಲ್ಲಾ ಮಾದರಿಯನ್ನು ಒಳಗೊಂಡ ಸಾರ್ವಕಾಲಿಕ ಶ್ರೇಷ್ಠ ಭಾರತ ತಂಡ ಆಯ್ಕೆ ಮಾಡಿದ ಅರ್ಶದೀಪ್ ಸಿಂಗ್:&lt;/strong&gt;&lt;/h3&gt;&lt;p&gt;ಇನ್ನು ಇದೇ ವೇಳೆ ಅರ್ಶದೀಪ್ ಸಿಂಗ್, ಎಲ್ಲಾ ಮಾದರಿಯನ್ನು ಒಳಗೊಂಡ ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ XI ಆಯ್ಕೆ ಮಾಡಿದ್ದಾರೆ. ಅದರಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಜತೆ ಭಾರತ ತಂಡದ ಹಾಲಿ ಹೆಡ್&zwnj; ಕೋಚ್ ಗೌತಮ್ ಗಂಭೀರ್ ಅವರನ್ನು ಆರಂಭಿಕರನ್ನಾಗಿ ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಗೆ ಮಣೆ ಹಾಕಿದ್ದಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಆಲ್ರೌಂಡರ್ ಯುವರಾಜ್ ಸಿಂಗ್&zwnj; ಹಾಗೂ ಆರನೇ ಕ್ರಮಾಂಕದಲ್ಲಿ ಹಿಟ್&zwnj;ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾಗೆ ಸ್ಥಾನ ನೀಡಿದ್ದಾರೆ.&lt;/p&gt;&lt;p&gt;ವಿಕೆಟ್ ಕೀಪರ್ ಬ್ಯಾಟರ್ ಆಗಿ ಏಳನೇ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಿರುವ ಅರ್ಶದೀಪ್ ಸಿಂಗ್, ಎಂಟನೇ ಕ್ರಮಾಂಕಕ್ಕೆ ಹರ್ಭಜನ್ ಸಿಂಗ್ ಅವರನ್ನು ಅರ್ಶದೀಪ್ ಸಿಂಗ್ ಅವರನ್ನು ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ತ್ರಿವಳಿ ವೇಗಿಗಳಾಗಿ ಜಹೀರ್ ಖಾನ್, ಜಸ್ಪ್ರೀತ್ ಬುಮ್ರಾ ಜತೆಗೆ ಸ್ವತಃ ತಮ್ಮನ್ನೇ ಅರ್ಶದೀಪ್ ಸಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/arshdeep-singh-picks-bhuvneshwar-kumar-as-india-greatest-bowler-leaves-jasprit-bumrah-behind-kvn/articleshow-xizqpl7"/>
        </item>
    </channel>
</rss>
