<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 24 Aug 2026 12:13:48 +0530</lastBuildDate>
        <atom:link href="https://kannada.asianetnews.com/rss/sports" rel="self" type="application/rss+xml"/>
        <item>
            <title><![CDATA[ಗಾಲೆ ಟೆಸ್ಟ್ ಸೋಲಿನ ಬೆನ್ನಲ್ಲೇ ಲಂಕಾದಲ್ಲಿ ಮೇಜರ್ ಚೇಂಜ್; ಕೊಲಂಬೊ ಟೆಸ್ಟ್‌ಗೆ ಎರಡು ಹೊಸ ಆಟಗಾರರಿಗೆ ಬುಲಾವ್!]]></title>
            <link>https://kannada.asianetnews.com/cricket-sports/sri-lanka-make-two-changes-for-2nd-test-against-india-after-165-run-defeat-kvn/articleshow-20lv3fs</link>
            <guid isPermaLink="true">https://kannada.asianetnews.com/cricket-sports/sri-lanka-make-two-changes-for-2nd-test-against-india-after-165-run-defeat-kvn/articleshow-20lv3fs</guid>
            <pubDate>Fri, 21 Aug 2026 18:54:12 +0530</pubDate>
            <description><![CDATA[ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಭಾರತದೆದುರು ಸೋತ ಬಳಿಕ, ಶ್ರೀಲಂಕಾ ತಂಡವು ಕೊಲಂಬೊದಲ್ಲಿನ ಎರಡನೇ ಟೆಸ್ಟ್&zwnj;ಗೆ ಎರಡು ಪ್ರಮುಖ ಬದಲಾವಣೆ ಮಾಡಿದೆ. ಸರಣಿ ಸಮಬಲಗೊಳಿಸುವ ಗುರಿಯೊಂದಿಗೆ, ಬ್ಯಾಟರ್ ಕಾಮಿಲ್ ಮಿಶಾರ ಮತ್ತು ಆಲ್&zwnj;ರೌಂಡರ್ ಸಹನ್ ಅರಾಚಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0j3d0cc7zjxnrjvhwdp4yf6,imgname-arachike-1787313947020.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಲಂಬೊ: ಭಾರತ ವಿರುದ್ಧದ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಹೀನಾಯವಾಗಿ ಸೋತ ನಂತರ, ಶ್ರೀಲಂಕಾ ತಂಡವು ಕೊಲಂಬೊದಲ್ಲಿ ನಡೆಯಲಿರುವ ನಿರ್ಣಾಯಕ ಎರಡನೇ ಟೆಸ್ಟ್&zwnj; ಪಂದ್ಯಕ್ಕೆ ತನ್ನ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಸರಣಿಯನ್ನು ಸಮಬಲ ಮಾಡಿಕೊಳ್ಳುವ ಗುರಿಯೊಂದಿಗೆ, ಹೊಸ ಬ್ಯಾಟರ್ ಕಾಮಿಲ್ ಮಿಶಾರ ಮತ್ತು ಆಲ್&zwnj;ರೌಂಡರ್ ಸಹನ್ ಅರಾಚಿಗೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.&lt;/p&gt;&lt;h2&gt;&lt;strong&gt;ಲಂಕಾ ತಂಡದಲ್ಲಿ ಎರಡು ಹೊಸ ಮುಖಗಳಿಗೆ ಮಣೆ&lt;/strong&gt;&lt;/h2&gt;&lt;p&gt;ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಭಾರತ 165 ರನ್&zwnj;ಗಳ ಭರ್ಜರಿ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಈಗ ರಮೇಶ್ ಮೆಂಡಿಸ್ ಬದಲಿಗೆ ತಂಡಕ್ಕೆ ಬಂದಿರುವ ಅರಾಚಿಗೆ, ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬುವುದರ ಜೊತೆಗೆ ಆಫ್ ಸ್ಪಿನ್ನರ್ ಆಗಿಯೂ ತಂಡಕ್ಕೆ ನೆರವಾಗಲಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ಮತ್ತು ಭಾರತ 'ಎ' ತಂಡದ ವಿರುದ್ಧದ ಸರಣಿಯಲ್ಲಿ ಅರಾಚಿಗೆ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್&zwnj;ನಲ್ಲಿ ಅವರು 4,365 ರನ್ ಮತ್ತು 63 ವಿಕೆಟ್&zwnj;ಗಳನ್ನು ಪಡೆದಿದ್ದಾರೆ.&lt;/p&gt;&lt;p&gt;ಇನ್ನು, ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಎಡಗೈ ಬ್ಯಾಟರ್ ಕಾಮಿಲ್ ಮಿಶಾರ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಿಶಾನ್ ಮದುಶಂಕ ಬದಲಿಗೆ ತಂಡಕ್ಕೆ ಬಂದಿರುವ ಮಿಶಾರ, ಲಹಿರು ಉಡಾರ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಭಾರತದ ಎಡಗೈ ಸ್ಪಿನ್ನರ್&zwnj;ಗಳಾದ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ದಾಳಿಯನ್ನು ಎದುರಿಸಲು ಮಿಶಾರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;p&gt;ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj; ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಮಾನವ್ ಸುತಾರ್ 10 ವಿಕೆಟ್ ಕಬಳಿಸುವ ಮೂಲಕ ಲಂಕಾ ತಂಡದ ಬ್ಯಾಟರ್&zwnj;ಗಳು ಪರದಾಡುವಂತೆ ಮಾಡಿದ್ದರು. ಮಾನವ್&zwnj; ಸುತಾರ್&zwnj;ಗೆ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡಾ ಉತ್ತಮ ಸಾಥ್ ನೀಡಿದ್ದರು. ಇದೀಗ ಈ ಇಬ್ಬರು ಬೌಲರ್&zwnj;ಗಳಿಗೆ ಕೌಂಟರ್ ನೀಡಲು ಲಂಕಾ ಟೀಮ್&zwnj; ಮ್ಯಾನೇಜ್&zwnj;ಮೆಂಟ್ ರಣತಂತ್ರ ಹೆಣೆದಿದೆ.&lt;/p&gt;&lt;p&gt;ಮೊದಲ ಟೆಸ್ಟ್ ವೇಳೆ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದ ದಿನೇಶ್ ಚಾಂಡಿಮಲ್ ಈ ಪಂದ್ಯದಲ್ಲೂ ಆಡುವುದಿಲ್ಲ. ಇದಲ್ಲದೆ, ಕುಸಾಲ್ ಮೆಂಡಿಸ್ (ಸ್ನಾಯು ಸೆಳೆತ) ಮತ್ತು ಪತುಮ್ ನಿಸ್ಸಂಕ (ಬೆರಳಿಗೆ ಶಸ್ತ್ರಚಿಕಿತ್ಸೆ) ಅವರ ಸೇವೆಯೂ ಲಂಕಾ ತಂಡಕ್ಕೆ ಲಭ್ಯವಿರುವುದಿಲ್ಲ. ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಸೋತು ಮುಖಭಂಗ ಅನುಭವಿಸಿರುವ ಧನಂಜಯ ಡಿ'ಸಿಲ್ವಾ ನೇತೃತ್ವದ ಲಂಕಾ ತಂಡವು, ಎರಡನೇ ಪಂದ್ಯದಲ್ಲಿ ಪ್ರವಾಸಿ ಗಿಲ್ ಪಡೆಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ.&lt;/p&gt;&lt;h3&gt;&lt;strong&gt;ಎರಡನೇ ಟೆಸ್ಟ್&zwnj;ಗೆ ಶ್ರೀಲಂಕಾ ತಂಡ:&lt;/strong&gt;&lt;/h3&gt;&lt;p&gt;ಲಹಿರು ಉಡಾರ, ಕಾಮಿಲ್ ಮಿಶಾರ, ಪಸಿಂದು ಸೂರ್ಯಬಂದರ, ಕಾಮಿಂದು ಮೆಂಡಿಸ್ (ಉಪನಾಯಕ), ಧನಂಜಯ ಡಿ ಸಿಲ್ವ (ನಾಯಕ), ಸಹನ್ ಅರಾಚಿಗೆ, ಸೋನಾಲ್ ದಿನುಶ, ನಿರೋಷನ್ ಡಿಕ್ವೆಲ್ಲ, ಕೇಶರ ನುವಾಂತ, ಪ್ರಭಾತ್ ಜಯಸೂರ್ಯ, ಮಿಲನ್ ರತ್ನಾಯಕೆ, ಲಹಿರು ಕುಮಾರ, ಅಸಿತ ಫೆರ್ನಾಂಡೊ, ವಿಶ್ವ ಫೆರ್ನಾಂಡೊ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/sri-lanka-make-two-changes-for-2nd-test-against-india-after-165-run-defeat-kvn/articleshow-20lv3fs"/>
        </item>
        <item>
            <title><![CDATA[WTC Final: ಗಂಭೀರ್ ತಂತ್ರಗಳಿಂದ ಟೀಂ ಇಂಡಿಯಾ ಕಥೆ ಮುಗೀತಾ? ಫೈನಲ್ ತಲುಪೋಕೆ ಇನ್ನೂ ಚಾನ್ಸ್ ಇದೆಯಾ?]]></title>
            <link>https://kannada.asianetnews.com/cricket-sports/wtc-final-race-can-shubman-gill-led-team-india-still-qualify-for-the-final-kvn/articleshow-3bygysu</link>
            <guid isPermaLink="true">https://kannada.asianetnews.com/cricket-sports/wtc-final-race-can-shubman-gill-led-team-india-still-qualify-for-the-final-kvn/articleshow-3bygysu</guid>
            <pubDate>Fri, 21 Aug 2026 18:34:09 +0530</pubDate>
            <description><![CDATA[ಹಲವು ಆಂತರಿಕ ಸವಾಲುಗಳು ಮತ್ತು ಹಿರಿಯ ಆಟಗಾರರ ನಿರ್ಗಮನದಿಂದ ಸಂಕಷ್ಟದಲ್ಲಿರುವ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಉಳಿದಿರುವ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಬೇಕಾದ ಕಠಿಣ ಪರಿಸ್ಥಿತಿಯಲ್ಲಿದ್ದು, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0cyyjfksjavhb2fneq6a5st,imgname-20260819211l-1787141507567.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೌತಮ್ ಗಂಭೀರ್ ಅವರ ನಿರಂತರ ಪ್ರಯೋಗಗಳು ಮತ್ತು ತಂಡದ ನಿಲುವು, ಸರಿಯಾದ ಮೂರನೇ ಕ್ರಮಾಂಕದ ಬ್ಯಾಟರ್ ಇಲ್ಲದಿರುವುದು, ಫಸ್ಟ್ ಕ್ಲಾಸ್ ಕ್ರಿಕೆಟ್&zwnj;ನಲ್ಲಿ ಸಾಕಷ್ಟು ಅನುಭವವಿಲ್ಲದ ಆಟಗಾರರಿಗೆ ತಂಡದಲ್ಲಿ ನೇರ ಪ್ರವೇಶ ಸಿಗುತ್ತಿರುವುದು, ಕೇವಲ ಯುವ ಆಟಗಾರರಿಂದಲೇ ತುಂಬಿರುವ ಪೇಸ್ ಬೌಲಿಂಗ್ ವಿಭಾಗ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೆಲ ಆಟಗಾರರಿಗೆ ಮಾತ್ರ ಹೆಚ್ಚು ಅವಕಾಶಗಳನ್ನು ನೀಡಿ, ಉಳಿದವರನ್ನು ಕಡೆಗಣಿಸುವುದು, ಜಸ್ಪ್ರೀತ್ ಬುಮ್ರಾರಂತಹ ಅದ್ಭುತ ಪ್ರತಿಭೆ ಗಾಯದಿಂದಾಗಿ ತಂಡಕ್ಕೆ ಅಲಭ್ಯರಾಗಿರುವುದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಆಟಗಾರರ ಹಠಾತ್ ನಿರ್ಗಮನ. ಹೀಗೆ ಟೀಂ ಇಂಡಿಯಾ ಒಂದು ರೀತಿ ಬದಲಾವಣೆಯ ಹಾದಿಯಲ್ಲಿದೆ.&lt;/p&gt;&lt;p&gt;ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ (WTC) ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದಂತಹ ತಂಡಗಳಿಗಿಂತಲೂ ಕೆಳಗಿದೆ. ಐದನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಮೇಲೆ ಹೇಳಿದ ಕಾರಣಗಳು ಸಾಕಾಗುವುದಿಲ್ಲ. ಯಾಕಂದ್ರೆ, ಭಾರತ ಆಡಿರುವ 10 ಟೆಸ್ಟ್&zwnj;ಗಳಲ್ಲಿ 5ರಲ್ಲಿ ಗೆದ್ದು, 4ರಲ್ಲಿ ಸೋತು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಟ್ಟು 64 ಪಾಯಿಂಟ್ಸ್ ಗಳಿಸಿ, 53.3% ಪರ್ಸೆಂಟೇಜ್ ಹೊಂದಿದೆ. ಈ ನಾಲ್ಕು ಸೋಲುಗಳಲ್ಲಿ ಎರಡು ಇಂಗ್ಲೆಂಡ್ ಪ್ರವಾಸದಲ್ಲಾದರೆ, ಇನ್ನೆರಡು ತವರಿನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಬಂದಿದ್ದು. ಒಂದು ಕಾಲದಲ್ಲಿ ಯಾವುದೇ ತಂಡವನ್ನು ತವರಿನಲ್ಲಿ ಸೋಲಿಸುವ ತಾಕತ್ತು ಭಾರತಕ್ಕಿತ್ತು.&lt;/p&gt;&lt;p&gt;ಆದರೆ, ಇಂದಿನ ಪರಿಸ್ಥಿತಿ ಹಾಗಿಲ್ಲ. ಹಾಗಾಗಿಯೇ, ಈ ಸಬೂಬುಗಳು ಸಾಕಾಗುವುದಿಲ್ಲ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮುಗಿದರೆ, ಈ WTC ಸೈಕಲ್&zwnj;ನಲ್ಲಿ ಭಾರತಕ್ಕೆ ಇನ್ನು ಕೇವಲ ಎರಡು ಸರಣಿಗಳು ಮಾತ್ರ ಬಾಕಿ ಉಳಿಯುತ್ತವೆ. ಹಾಗಾದರೆ, ಶುಭ್ಮನ್ ಗಿಲ್ ನಾಯಕತ್ವದ ತಂಡಕ್ಕೆ ಫೈನಲ್ ತಲುಪುವ ಅವಕಾಶ ಇದೆಯಾ?&lt;/p&gt;&lt;h2&gt;&lt;strong&gt;ಭಾರತದ ಮುಂದಿದೆ ಅಗ್ನಿ ಪರೀಕ್ಷೆ&lt;/strong&gt;&lt;/h2&gt;&lt;p&gt;ಗಾಲೆ ಟೆಸ್ಟ್&zwnj;ನಲ್ಲಿ ಭಾರತ ತಂಡದ ಗೆಲುವು, ತಂಡದ ಪಾಯಿಂಟ್ಸ್ ಶೇಕಡಾವಾರು ಪ್ರಮಾಣವನ್ನು 48.15% ರಿಂದ 53.33% ಕ್ಕೆ ಏರಿಸಿದೆ. ಇನ್ನು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್, ನಂತರ ನ್ಯೂಜಿಲೆಂಡ್ ವಿರುದ್ಧ ಅವರದೇ ನೆಲದಲ್ಲಿ ಎರಡು ಟೆಸ್ಟ್&zwnj;ಗಳ ಸರಣಿ, ಆ ಬಳಿಕ ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸದಲ್ಲಿ ಐದು ಪಂದ್ಯಗಳ ಸರಣಿ ನಡೆಯಲಿದೆ. ಅಂದರೆ, ಈ ಚಾಂಪಿಯನ್&zwnj;ಶಿಪ್ ಸೈಕಲ್&zwnj;ನಲ್ಲಿ ಭಾರತಕ್ಕೆ ಒಟ್ಟು 8 ಟೆಸ್ಟ್&zwnj;ಗಳು ಬಾಕಿ ಇವೆ.&lt;/p&gt;&lt;p&gt;ಕಳೆದ WTC ಸೈಕಲ್&zwnj;ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಫೈನಲ್ ತಲುಪಿದ್ದವು. ದಕ್ಷಿಣ ಆಫ್ರಿಕಾದ ಪಾಯಿಂಟ್ಸ್ ಶೇಕಡಾವಾರು 69.4% ಮತ್ತು ಆಸ್ಟ್ರೇಲಿಯಾದ್ದು 67.54% ಇತ್ತು. ಸದ್ಯ ಭಾರತದ ಪರ್ಸೆಂಟೇಜ್ 53.3%. ಫೈನಲ್ ತಲುಪಬೇಕಾದರೆ ಕನಿಷ್ಠ 60% ಆದರೂ ಬೇಕು. ಅಂದರೆ, ಭಾರತಕ್ಕೆ 66 ಪಾಯಿಂಟ್ಸ್ ಅವಶ್ಯಕತೆ ಇದೆ.&lt;/p&gt;&lt;h3&gt;&lt;strong&gt;ಟೆಸ್ಟ್ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಪಾಯಿಂಟ್ಸ್ ಹಂಚಿಕೆ ಹೀಗಿದೆ:&amp;nbsp;&lt;/strong&gt;&lt;/h3&gt;&lt;p&gt;ಗೆಲುವಿಗೆ 12, ಟೈ ಆದರೆ 6, ಡ್ರಾ ಆದರೆ 4 ಮತ್ತು ಸೋತರೆ ಶೂನ್ಯ ಪಾಯಿಂಟ್ಸ್. ಒಟ್ಟು ಗಳಿಸಿದ ಪಾಯಿಂಟ್ಸ್ ಅನ್ನು, ಆಡಿದ ಪಂದ್ಯಗಳ ಒಟ್ಟು ಪಾಯಿಂಟ್ಸ್&zwnj;ನಿಂದ ಭಾಗಿಸಿ 100ರಿಂದ ಗುಣಿಸಿದರೆ ಶೇಕಡಾವಾರು ಸಿಗುತ್ತದೆ. ಉದಾಹರಣೆಗೆ, ಭಾರತ 10 ಟೆಸ್ಟ್ ಆಡಿದೆ, ಅಂದರೆ ಒಟ್ಟು 120 ಪಾಯಿಂಟ್&zwnj;ಗಳಿಗೆ ಸ್ಪರ್ಧಿಸಿದೆ. ಇದರಲ್ಲಿ 64 ಪಾಯಿಂಟ್ಸ್ ಗಳಿಸಿದೆ. (64/120)*100 = 53.3%.&lt;/p&gt;&lt;p&gt;ಈ 66 ಪಾಯಿಂಟ್ಸ್ ಗುರಿ ಮುಟ್ಟಲು ಭಾರತ, ಬಾಕಿ ಇರುವ 8 ಪಂದ್ಯಗಳಲ್ಲಿ ಕನಿಷ್ಠ 5ರಲ್ಲಿ ಗೆದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಬೇಕು. ಆಗ 68 ಪಾಯಿಂಟ್ಸ್ ಸಿಗುತ್ತದೆ. 6 ಪಂದ್ಯ ಗೆದ್ದರೆ 72 ಪಾಯಿಂಟ್ಸ್ ಆಗುತ್ತದೆ. 68 ಪಾಯಿಂಟ್ಸ್ ಗಳಿಸಿದರೆ, ಭಾರತದ ಪರ್ಸೆಂಟೇಜ್ 61% ತಲುಪಬಹುದು. ಆದರೆ, ಇದು ಕೂಡ ಸುರಕ್ಷಿತವಲ್ಲ. ಉಳಿದ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದರೆ ಮಾತ್ರ ಭಾರತ 68% ಕ್ಕಿಂತ ಹೆಚ್ಚು ಗಳಿಸಿ ನಿರಾಳವಾಗಬಹುದು.&lt;/p&gt;&lt;p&gt;ಆದರೆ, ಇಲ್ಲಿ ದೊಡ್ಡ ಸವಾಲು ಇರುವುದೇ ಎದುರಾಳಿಗಳಿಂದ. ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ವಿಜೇತ ಆಸ್ಟ್ರೇಲಿಯಾ ಮತ್ತು ಬಲಿಷ್ಠ ನ್ಯೂಜಿಲೆಂಡ್ ತಂಡಗಳು. ಕಿವೀಸ್ ವಿರುದ್ಧ ಅವರದೇ ನೆಲದಲ್ಲಿ ಆಡುವುದು ಭಾರತಕ್ಕೆ ಸುಲಭವಲ್ಲ. ಇತ್ತ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ಪಿಚ್&zwnj;ಗಳು ಹೊಸದೇನಲ್ಲ. ಈ ಹಿಂದೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಭಾರತವನ್ನು ಕ್ಲೀನ್ ಸ್ವೀಪ್ ಮಾಡಿದ್ದವು. ಹಾಗಾಗಿ, ಆಸ್ಟ್ರೇಲಿಯಾವನ್ನು ಸುಲಭವಾಗಿ ಮಣಿಸಬಹುದು ಎಂದು ಹೇಳಲಾಗದು.&lt;/p&gt;&lt;p&gt;ಹೀಗಾಗಿ, ಭಾರತದ ಫೈನಲ್ ಪ್ರವೇಶದ ಸಾಧ್ಯತೆಗಳು ತುಂಬಾ ಕಡಿಮೆ. ಒಂದು ಸಣ್ಣ ತಪ್ಪು ಕೂಡ ದಾರಿ ತಪ್ಪಿಸಬಹುದು. ಇಲ್ಲಿಂದ ಮುಂದಕ್ಕೆ ಪ್ರತಿ ಎಸೆತವೂ ನಿರ್ಣಾಯಕ ಎನ್ನುವುದರಲ್ಲಿ ಅನುಮಾನವಿಲ್ಲ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/wtc-final-race-can-shubman-gill-led-team-india-still-qualify-for-the-final-kvn/articleshow-3bygysu"/>
        </item>
        <item>
            <title><![CDATA[ಸಚಿನ್ ತೆಂಡೂಲ್ಕರ್‌ಗೆ ಮೊದಲ ಬ್ಯಾಟ್ ನೀಡಿದ ಕಂಪನಿಗೆ ಸಂಕಷ್ಟ, ಮುಚ್ಚುವ ಭೀತಿಯಲ್ಲಿ ಕಾಶ್ಮೀರಿ ವಿಲೋ]]></title>
            <link>https://kannada.asianetnews.com/cricket-sports/sachin-tendulkar-first-bat-company-in-trouble-kashmiri-willow-industry-under-threat/articleshow-4yaoiou</link>
            <guid isPermaLink="true">https://kannada.asianetnews.com/cricket-sports/sachin-tendulkar-first-bat-company-in-trouble-kashmiri-willow-industry-under-threat/articleshow-4yaoiou</guid>
            <pubDate>Fri, 21 Aug 2026 18:48:40 +0530</pubDate>
            <description><![CDATA[&lt;p&gt;ಸಚಿನ್ ತೆಂಡೂಲ್ಕರ್ ದಿಗ್ಗಜನಾಗಿ ಮಾಡಿದ ಕಾಶ್ಮೀರ ವಿಲೋ ಕಂಪನಿ ಇದೀಗ ಸಂಕಷ್ಟದಲ್ಲಿದೆ. ಸಚಿನ್ ತೆಂಡೂಲ್ಕರ್&zwnj;ಗೆ ಮೊದಲ ಬ್ಯಾಟ್ ನೀಡಿದ ಕಂಪನಿ ಇದು. ಹಲವು ದಿಗ್ಗಜರು ಬಳಸುತ್ತಿರುವುದು ಇದೇ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ಮುಚ್ಚುವ ಭೀತಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j7hh9zm5ty6nkycs3jh6t7,imgname-kashmiri-willow-bat-under-threat-1787318289724.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.21) &lt;/strong&gt;ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಆಟಕ್ಕೆ ನೆರವಾಗಿದ್ದ ಕಾಶ್ಮೀರ ವಿಲೋ ಬ್ಯಾಟ್. ಸಹೋದರಿ, ಆಪ್ತರು ಸಚಿನ್&zwnj;ಗೆ ಕೊಡಿಸಿದ ಮೊದಲ ಬ್ಯಾಟ್ ಕಾಶ್ಮೀರಿ ವಿಲೋ ಬ್ಯಾಟ್. ಬಳಿಕ ಸಚಿನ್ ತೆಂಡೂಲ್ಕರ್ ಕಾಶ್ಮೀರ ವಿಲೋ ಬ್ಯಾಟ್ ಹಿಡಿದೇ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್&zwnj;ನ ದಿಗ್ಗಜನಾಗಿ ಮಾಡಿದ ಈ ಕಾಶ್ಮೀರ ವಿಲೋ ಕಂಪನಿ ಇದೀಗ ಸಂಕಷ್ಟದಲ್ಲಿದೆ. ಮರ ಸೇರಿದಂತೆ ಕಚ್ಚಾ ವಸ್ತು ಕೊರತೆಯಿಂದ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ತೀವ್ರ ಆತಂಕ ಎದುರಿಸುತ್ತಿದೆ.&lt;/p&gt;&lt;h2&gt;ಮರಗಳೇ ಇಲ್ಲದೆ ಸಮಸ್ಯೆ&lt;/h2&gt;&lt;p&gt;ಕಾಶ್ಮೀರದಲ್ಲಿ ಹಲವು ಬ್ಯಾಟ್ ಕಂಪನಿಗಳು ತಲೆ ಎತ್ತಿದೆ. ಆದರೆ ಕಾಶ್ಮೀರ ವಿಲೋ ಕಂಪನಿ ಅತ್ಯಂತ ಹಳೇಯ ಕಂಪನಿ. ಆಸ್ಟ್ರೇಲಿಯಾ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಇಲ್ಲಿಂದ ಬ್ಯಾಟ್ ಪಡೆದುಕೊಂಡಿದ್ದಾರೆ. ಆದರೆ ಇದೀಗ ಹಲವು ಕಂಪನಿಗಳು ಬ್ಯಾಟ್ ಉತ್ಪಾದನೆಯಲ್ಲಿ ತೊಡಗಿದೆ. ಕಾಶ್ಮೀರದಲ್ಲಿ ಸಿಗುವ ಸಾಲಿಕ್ಸ್ ಆಲ್ಬಾ ಜಾತಿಯ ಮರಗಳನ್ನು ಬ್ಯಾಟ್ ತಯಾರಿಗೆ ಬಳಕೆ ಮಾಡಲಾಗುತ್ತಿದೆ. ಆದರೆ ಹಲವು ಕಂಪನಿಗಳು ಅತಿಯಾಗಿ ಈ ಮರಗಳನ್ನು ಬಳಸುತ್ತಿದ್ದಾರೆ. ಹಲವು ಕಂಪನಿಗಳು ಚಿಕ್ಕ ಮರಗಳನ್ನು ಕಡಿಯುತ್ತಿದ್ದಾರೆ. ಇತ್ತ ಗಿಡಗಳನ್ನು ನೆಡುವ ಪ್ರಕ್ರಿಯೆ ಮಾಡುತ್ತಿಲ್ಲ. ಹೀಗಾಗಿ ಮರಗಳ ಕೊರತೆ ಎದುರಾಗಿದೆ. ಶೇಕಡಾ 40 ರಿಂದ 50ರಷ್ಟು ಕಚ್ಚಾವಸ್ತುಗಳ ಕೊರತೆ ಎದುರಾಗಿದೆ. ಪರಿಣಾಮ ಕಾಶ್ಮೀರ ವಿಲೋ ಬ್ಯಾಟ್ ತೀವ್ರ ಸಮಸ್ಯೆ ಎದುರಿಸುತ್ತಿದೆ.&lt;/p&gt;&lt;h2&gt;ಇಂಗ್ಲೀಷ್ ವಿಲೋಗೆ ಪೈಪೋಟಿ ನೀಡಿದ್ದ ಕಾಶ್ಮೀರ ವಿಲೋ&lt;/h2&gt;&lt;p&gt;ಕ್ರಿಕೆಟ್&zwnj;ನಲ್ಲಿ ಇಂಗ್ಲೀಷ್ ವಿಲೋ ಬ್ಯಾಟ್ ಅತ್ಯಂತ ಜನಪ್ರಿಯ. ಆದರೆ ಇದು ದುಬಾರಿಯಾಗಿತ್ತು. ಹೀಗಾಗಿ ಇಂಗ್ಲೀಷ್ ವಿಲೋಗೆ ಪ್ರತಿಯಾಗಿ ಕಡಿಮೆ ಬೆಲೆಯಲ್ಲಿ ಹಾಗೂ ಅತ್ಯುತ್ತಮ ಗುಣಮಟ್ಟದಲ್ಲಿ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ಆರಂಭಗೊಂಡಿತ್ತು. ಹಲವು ದೇಶಗಳ ಕ್ರಿಕೆಟಿಗರು ಕಾಶ್ಮೀರ ವಿಲೋ ಬ್ಯಾಟ್ ಬಳಸುತ್ತಿದ್ದಾರೆ.&lt;/p&gt;&lt;h2&gt;ಅಕ್ರಮವಾಗಿ ಮರಗಳ ಸಾಗಾಟ&lt;/h2&gt;&lt;p&gt;ಫ್ಲೈವುಡ್ ಸೇರಿದಂತೆ ಇತರ ಬಳಕೆಗೆ ಈ ಮರಗಳನ್ನು ಬಳಸಲಾಗುತ್ತಿದೆ. ಇದರಿಂದ ಮರಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಪರಿಣಾಮ ಕಾಶ್ಮೀರ ವಿಲೋ ಸೇರಿದಂತೆ ಬ್ಯಾಟ್ ಕಂಪನಿಗಳಿಗೆ ಸಮಸ್ಯೆ ಎದುರಾಗಿದೆ. ಸಚಿನ್ ತೆಂಡೂಲ್ಕರ್ ಹಲವು ಬಾರಿ ಕಾಶ್ಮೀರ ವಿಲೋ ಬ್ಯಾಟ್ ಕುರಿತು ಹೇಳಿದ್ದಾರೆ. ತನ್ನ ಆರಂಭಿಕ ದಿನಗಳಲ್ಲಿ ಸಹೋದರಿ ಕೊಡಿಸಿದ ಕಾಶ್ಮೀರ ವಿಲೋ ಬ್ಯಾಟ್ ಮೂಲಕ ಕ್ರಿಕೆಟ್ ಆರಂಭಿಸಿದ ಘಟನೆಯನ್ನು ವಿವರಿಸಿದ್ದಾರೆ.&lt;/p&gt;&lt;p&gt;2024ರಲ್ಲಿ ಸಚಿನ್ ತೆಂಡೂಲ್ಕರ್ ಕಾಶ್ಮೀರ ವಿಲೋ ಕಂಪನಿಗೆ ಭೇಟಿ ನೀಡಿದ್ದರು. ಕಾಶ್ಮೀರ ಪ್ರವಾಸದಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟ್ ಕಂಪನಿಗೆ ಭೇಟಿ ನೀಡಿದ್ದರು. ತನ್ನ ಮೊದಲ ಬ್ಯಾಟ್ ಹಾಗೂ ಕಂಪನಿಯ ಕುರಿತು ಸಚಿನ್ ತೆಂಡೂಲ್ಕರ್ ವಿವರಣೆ ನೀಡಿದ್ದರು.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/sachin-tendulkar-first-bat-company-in-trouble-kashmiri-willow-industry-under-threat/articleshow-4yaoiou"/>
        </item>
        <item>
            <title><![CDATA[Cricket: ಸ್ಟೇಡಿಯಂನಲ್ಲಿ ನೀವು ಹೇಳಿದ ಹಾಗೆ ಆಡ್ಲಿಕ್ಕೆ ಆಗಲ್ಲ! ಅಪ್ಪನಿಗೇ ಎದುರು ಮಾತನಾಡಿದ ದಿಗ್ಗಜ ಕ್ರಿಕೆಟಿಗನ ಪುತ್ರ!]]></title>
            <link>https://kannada.asianetnews.com/cricket-sports/cricketer-sehawag-son-fathers-advice-cricket-stadium-cannot-play-as-you-say-viral-cricket-news-bmk/articleshow-5gm99h5</link>
            <guid isPermaLink="true">https://kannada.asianetnews.com/cricket-sports/cricketer-sehawag-son-fathers-advice-cricket-stadium-cannot-play-as-you-say-viral-cricket-news-bmk/articleshow-5gm99h5</guid>
            <pubDate>Sat, 22 Aug 2026 18:35:39 +0530</pubDate>
            <description><![CDATA[&lt;p&gt;ಭಾರತದ ಮಾಜಿ ಕ್ರಿಕೆಟಿಗರ ಪುತ್ರ ಬ್ಯಾಟಿಂಗ್ ಮಾಡುವಾಗ ತಂದೆ ನೀಡಿದ ಪ್ರಸಿದ್ಧ ಸಲಹೆಯನ್ನು ಆರ್ಯವೀರ್ ನಿರಾಕರಿಸಿದ್ದು, ಈಗ ಸೋಶಿಯಲ್&zwnj; ಮಿಡಿಯಾದಲ್ಲಿ ವೈರಲ್&zwnj; ಆಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ms6f92xzwh2f6ypr2bymct,imgname-sehawag-son--1787403910431.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತಂದೆ-ಮಕ್ಕಳ ಜೋಡಿಗಳ ಕೊಡುಗೆ ಅನನ್ಯವಾಗಿದೆ. ದಂತ್ಯಕಥೆ ಆಟಗಾರ ರಾಹುಲ್ ದ್ರಾವಿಡ್ ಅವರ ಹಾದಿಯಲ್ಲೇ ಅವರ ಪುತ್ರ ದೇಶೀಯ ಕ್ರಿಕೆಟ್&zwnj;ನಲ್ಲಿ ಗಮನ ಸೆಳೆಯುತ್ತಿದ್ದರೆ, ಭಾರತ ತಂಡದ ಮಾಜಿ ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಇಬ್ಬರು ಪುತ್ರರಾದ ಆರ್ಯವೀರ್ ಸೆಹ್ವಾಗ್ ಮತ್ತು ವೇದಾಂತ್ ಸೆಹ್ವಾಗ್ ಕೂಡ ಪ್ರಸ್ತುತ ಕ್ರಿಕೆಟ್ ಅಂಗಳದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಸಜ್ಜಾಗುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಇಬ್ಬರು ಪುತ್ರರು ಭಾಗಿ!&lt;/strong&gt;&lt;/h2&gt;&lt;p&gt;ಪ್ರಸ್ತುತ ದೆಹಲಿ ಪ್ರೀಮಿಯರ್ ಲೀಗ್ (DPL) ಟೂರ್ನಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರ ಇಬ್ಬರೂ ಪುತ್ರರು ಭಾಗವಹಿಸುತ್ತಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ದಂತಕಥೆ ಆಟಗಾರನ ಮಕ್ಕಳಾಗಿರುವುದರಿಂದ ಸಹಜವಾಗಿಯೇ ಇಬ್ಬರಿಗೂ ತಂದೆಯಿಂದ ಮಹತ್ವದ ಕ್ರಿಕೆಟಿಂಗ್ ಸಲಹೆಗಳು ಮತ್ತು ಮಾರ್ಗದರ್ಶನ ದೊರೆಯುತ್ತದೆ. ಆದರೆ, ಇತ್ತೀಚೆಗೆ ಮಗ ಆರ್ಯವೀರ್ ಸೆಹ್ವಾಗ್, ತಂದೆ ನೀಡಿದ ಅತ್ಯಂತ ಪ್ರಸಿದ್ಧ ಸಲಹೆಯೊಂದನ್ನು ಸ್ವೀಕರಿಸಲು ನಿರಾಕರಿಸಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h3&gt;&lt;strong&gt;ಸೆಹ್ವಾಗ್ ನೀಡಿರುವ ಆ ಸಫಲ ತಂತ್ರವೇನು?&lt;/strong&gt;&lt;/h3&gt;&lt;p&gt;ತಮ್ಮ ಸುವರ್ಣ ಯುಗದಲ್ಲಿ ಯಾವುದೇ ಬೌಲರ್ ಬಂದರೂ ಭಯವಿಲ್ಲದೆ ಆಡುತ್ತಿದ್ದ ವೀರೇಂದ್ರ ಸೆಹ್ವಾಗ್, ಕ್ರೀಸ್&zwnj;ನಲ್ಲಿ ನಿಂತು ಬ್ಯಾಟಿಂಗ್ ಮಾಡುವಾಗ ಹಾಡುಗಳನ್ನು ಗುನುಗುತ್ತಿದ್ದರು. ಪಂದ್ಯದ ದ್ವಿತೀಯಾರ್ಧದಲ್ಲೋ ಅಥವಾ ಕಠಿಣ ಸನ್ನಿವೇಶದಲ್ಲೋ ಮನಸ್ಸಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು (Stress Management) ಮತ್ತು ಗಮನವನ್ನು ಕ್ರಿಕೆಟ್ ಮೇಲೆ ಕೇಂದ್ರೀಕರಿಸಲು (Focus) ಈ 'ಹಾಡು ಗುನುಗುವ ತಂತ್ರ' ಅವರಿಗೆ ವರದಾನವಾಗಿತ್ತು. ಇದೇ ತಂತ್ರವನ್ನು ತಮ್ಮ ಮಗ ಆರ್ಯವೀರ್&zwnj;ಗೂ ಬಳಸುವಂತೆ ಸೆಹ್ವಾಗ್ ಸಲಹೆ ನೀಡಿದ್ದರು.&lt;/p&gt;&lt;h3&gt;&lt;strong&gt;ತಂದೆಯ ಸಲಹೆಯನ್ನು ನಿರಾಕರಿಸಿದ ಆರ್ಯವೀರ್!&lt;/strong&gt;&lt;/h3&gt;&lt;p&gt;ತಂದೆ ನೀಡಿದ ಈ ವಿಶಿಷ್ಟ ಬ್ಯಾಟಿಂಗ್ ಟಿಪ್ಸ್ ಅನ್ನು ತಮ್ಮ ಆಟದಲ್ಲಿ ಅಳವಡಿಸಿಕೊಳ್ಳಲು ಆರ್ಯವೀರ್ ನಿರಾಕರಿಸಿದ್ದಾರೆ. ಈ ಕುರಿತು ಮಾತನಾಡಿರುವ ಆರ್ಯವೀರ್, &quot;ತಂದೆಯಂತೆ ಬ್ಯಾಟಿಂಗ್ ಮಾಡುವಾಗ ಹಾಡು ಗುನುಗುವ ತಂತ್ರವನ್ನು ನಾನು ಬಳಸುತ್ತಿಲ್ಲ, ಅದು ನನಗೆ ಹೊಂದಿಕೆಯಾಗುವುದಿಲ್ಲ&quot; ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ವಿಭಿನ್ನ ಆಟದ ಶೈಲಿ ಮತ್ತು ಸ್ವತಂತ್ರ ನಿರ್ಧಾರ!&lt;/strong&gt;&lt;/h3&gt;&lt;p&gt;&lt;strong&gt;ಮನಸ್ಥಿತಿ ಮತ್ತು ಗ್ಯಾಪ್ ಕಂಟ್ರೋಲ್:&lt;/strong&gt; ವೀರೇಂದ್ರ ಸೆಹ್ವಾಗ್ ಅವರ ಆಟದ ವೈಖರಿಯೇ ಬೇರೆ, ಆರ್ಯವೀರ್ ಅವರ ಪ್ರಕೃತಿಯೇ ಬೇರೆ. ಕ್ರೀಸ್&zwnj;ನಲ್ಲಿ ಹಾಡು ಹಾಡುತ್ತಾ ಆಡುವುದು ಪ್ರತಿಯೊಬ್ಬ ಆಟಗಾರನಿಗೂ ಸೂಕ್ತವಾಗುವುದಿಲ್ಲ.&lt;/p&gt;&lt;p&gt;&lt;strong&gt;ಸ್ವಂತ ಶೈಲಿಗೆ ಆದ್ಯತೆ: &lt;/strong&gt;ತಂದೆಯು ವಿಶ್ವ ದರ್ಜೆಯ ಬ್ಯಾಟರ್ ಆಗಿದ್ದರೂ, ಅವರ ಪ್ರತಿಯೊಂದು ತಂತ್ರವನ್ನು ಕು his ಡು ಕುರುಡಾಗಿ ಅನುಕರಿಸುವ ಬದಲು, ಆರ್ಯವೀರ್ ತಮ್ಮ ತಾಂತ್ರಿಕ ಶಕ್ತಿ ಮತ್ತು ಕ್ರಿಕೆಟಿಂಗ್ ಶೈಲಿಯನ್ನು ಕಂಡುಕೊಳ್ಳಲು ಬಯಸಿದ್ದಾರೆ.&lt;/p&gt;&lt;p&gt;&lt;strong&gt;ಒತ್ತಡ ನಿರ್ವಹಣೆ:&lt;/strong&gt; ದಿಗ್ಗಜನ ಮಗ ಎಂಬ ಬ್ರ್ಯಾಂಡ್ ಟ್ಯಾಗ್&zwnj;ನಿಂದ ಬರುವ ಒತ್ತಡವನ್ನು ಮೆಟ್ಟಿ ನಿಲ್ಲಲು ಆರ್ಯವೀರ್ ತಮ್ಮದೇ ಆದ ಮಾನಸಿಕ ತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಹಿಂದಿರುವ ವಿಶ್ವಾಸವೇನು?&lt;/strong&gt;&lt;/h3&gt;&lt;p&gt;ವೀರೇಂದ್ರ ಸೆಹ್ವಾಗ್ ಅವರಂತಹ ಕ್ರಿಕೆಟ್ ದಿಗ್ಗಜನ ಸಲಹೆಯನ್ನು ಮಗ ನಿರಾಕರಿಸಿರುವುದು ಆತನ ಆತ್ಮವಿಶ್ವಾಸ ಮತ್ತು ಸ್ವತಂತ್ರ ಚಿಂತನೆಯನ್ನು ತೋರಿಸುತ್ತದೆ. ಪ್ರಸ್ತುತ ದೆಹಲಿ ಪ್ರೀಮಿಯರ್ ಲೀಗ್&zwnj;ನಲ್ಲಿ ಕಣಕ್ಕಿಳಿಯುತ್ತಿರುವ ಆರ್ಯವೀರ್ ಹಾಗೂ ವೇದಾಂತ್, ತಂದೆಯ ಹೆಸರಿನ ನೆರಳಿನಿಂದ ಹೊರಬಂದು ತಮ್ಮದೇ ಆದ ಸ್ವಂತ ಅಸ್ತಿತ್ವ ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/cricketer-sehawag-son-fathers-advice-cricket-stadium-cannot-play-as-you-say-viral-cricket-news-bmk/articleshow-5gm99h5"/>
        </item>
        <item>
            <title><![CDATA[Cricket: 149 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲೇ ಮಹಾ ದಾಖಲೆ: ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಆರು ವೇಗಿಗಳು ಇವರೇ!]]></title>
            <link>https://kannada.asianetnews.com/cricket-sports/test-cricket-149-year-history-six-bowlers-wickets-first-ball-historic-cricket-record-bmk/articleshow-8pdphe3</link>
            <guid isPermaLink="true">https://kannada.asianetnews.com/cricket-sports/test-cricket-149-year-history-six-bowlers-wickets-first-ball-historic-cricket-record-bmk/articleshow-8pdphe3</guid>
            <pubDate>Sun, 23 Aug 2026 08:30:09 +0530</pubDate>
            <description><![CDATA[&lt;p&gt;ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ನಾಲ್ಕನೇ ಬಾರಿಗೆ ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಆರು ಜನ ಈ ದಾಖಲೆ ಮಾಡಿದ್ದಾರೆ. ಅವರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0n81penymwd356nj5xe69d1,imgname-eng-cricket--1787419482581.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ತಲುಪಲಾಗದ ಅದ್ಭುತ ಮೈಲಿಗಲ್ಲೊಂದನ್ನು ನೆಟ್ಟು ಹೊಸ ಅಧ್ಯಾಯ ಬರೆದಿದ್ದಾರೆ. ಮ್ಯಾಕೆಯ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ದಿನದಂದೇ ಸ್ಟಾರ್ಕ್ ವಿಶ್ವದ ಯಾವುದೇ ಬೌಲರ್ ಸಾಧಿಸದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಪಂದ್ಯದ ಮೊದಲ ಸೆಷನ್&zwnj;ನಲ್ಲಿ ಬೌಲಿಂಗ್ ದಾಳಿ ಆರಂಭಿಸಿದ ಮಿಚೆಲ್ ಸ್ಟಾರ್ಕ್, ಇನ್ನಿಂಗ್ಸ್&zwnj;ನ ತೀರಾ ಮೊದಲ ಎಸೆತದಲ್ಲೇ ಬಾಂಗ್ಲಾದೇಶದ ಆರಂಭಿಕ ಆಟಗಾರ ಶಾದ್ಮನ್ ಇಸ್ಲಾಮ್ ಅವರನ್ನು ಕ್ಯಾಮರೂನ್ ಗ್ರೀನ್&zwnj;ಗೆ ಕ್ಯಾಚ್ ನೀಡುವಂತೆ ಮಾಡಿದರು. ಶಾದ್ಮನ್ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್&zwnj;ಗೆ ಔಟಾದರು. ಈ ವಿಕೆಟ್&zwnj;ನೊಂದಿಗೆ ಸ್ಟಾರ್ಕ್, ಟೆಸ್ಟ್ ಪಂದ್ಯದ ಪ್ರಪ್ರಥಮ ಎಸೆತದಲ್ಲೇ ನಾಲ್ಕು ಬಾರಿ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಸಾರ್ವಕಾಲಿಕ ದಾಖಲೆ ನಿರ್ಮಿಸಿದರು. ಈ ಪಂದ್ಯದಲ್ಲಿ ಅತ್ಯಂತ ಅಪಾಯಕಾರಿ ಸ್ವಿಂಗ್ ಹಾಗೂ ಮಾರಕ ಸ್ಪೆಲ್ ಪ್ರದರ್ಶಿಸಿದ ಸ್ಟಾರ್ಕ್ 10 ಓವರ್&zwnj;ಗಳಲ್ಲಿ ಕೇವಲ 12 ರನ್&zwnj; ನೀಡಿ 6 ವಿಕೆಟ್&zwnj;ಗಳನ್ನು ಕಸಿದುಕೊಂಡರು. ಅವರ ಈ ಧೂಳೆಬ್ಬಿಸುವ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶವನ್ನು ಮೊದಲ ಇನ್ನಿಂಗ್ಸ್&zwnj;ನಲ್ಲಿ ಕೇವಲ 64 ರನ್&zwnj;ಗಳಿಗೆ ಆಲೌಟ್ ಮಾಡಿತು.&lt;/p&gt;&lt;h2&gt;&lt;strong&gt;ಪೆಡ್ರೊ ಕಾಲಿನ್ಸ್ ಸಾರ್ವಕಾಲಿಕ ದಾಖಲೆ ಧೂಳೀಪಟ!&lt;/strong&gt;&lt;/h2&gt;&lt;p&gt;ಈ ಐತಿಹಾಸಿಕ ಸಾಧನೆಯೊಂದಿಗೆ ಸ್ಟಾರ್ಕ್, ವೆಸ್ಟ್ ಇಂಡೀಸ್&zwnj;ನ ಮಾಜಿ ವೇಗಿ ಪೆಡ್ರೊ ಕಾಲಿನ್ಸ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು. ಕಾಲಿನ್ಸ್ ತಮ್ಮ ವೃತ್ತಿಜೀವನದಲ್ಲಿ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ 3 ಬಾರಿ ವಿಕೆಟ್ ಪಡೆದಿದ್ದರು (ಮೂರೂ ಬಾರಿಯೂ ಬಾಂಗ್ಲಾದೇಶದ ಹನ್ನನ್ ಸರ್ಕಾರ್ ಅವರನ್ನೇ ಔಟ್ ಮಾಡಿದ್ದರು). ಈಗ ಸ್ಟಾರ್ಕ್ 4ನೇ ಬಾರಿಗೆ ಈ ಸಾಧನೆ ಮಾಡಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಗಣ್ಯರ ಪಟ್ಟಿಯಲ್ಲಿ ಜೆಫ್ ಅರ್ನಾಲ್ಡ್, ಸರ್ ರಿಚರ್ಡ್ ಹ್ಯಾಡ್ಲೀ, ಕಪಿಲ್ ದೇವ್ ಮತ್ತು ಸುರಂಗ ಲಕ್ಮಲ್ (ತಲಾ 2 ಬಾರಿ) ಇದ್ದಾರೆ.&lt;/p&gt;&lt;h3&gt;&lt;strong&gt;ಸ್ಟಾರ್ಕ್ ಬಲೆಗೆ ಬಿದ್ದ ಆ 4 ಪ್ರಮುಖ ವಿಕೆಟ್&zwnj;ಗಳು!&lt;/strong&gt;&lt;/h3&gt;&lt;p&gt;ಆಗಸ್ಟ್ 2016 (ಗಾಲೆ); ಶ್ರೀಲಂಕಾದ ಆರಂಭಿಕ ಆಟಗಾರ ದಿಮುತ್ ಕರುಣರತ್ನೆ.&lt;/p&gt;&lt;p&gt;ಡಿಸೆಂಬರ್ 2021 (ಆಶಸ್ ಸರಣಿ - ಗಬ್ಬಾ); ಇಂಗ್ಲೆಂಡ್&zwnj;ನ ರೋರಿ ಬರ್ನ್ಸ್ (ಕ್ಲೀನ್ ಬೌಲ್ಡ್).&lt;/p&gt;&lt;p&gt;ಡಿಸೆಂಬರ್ 2024 (ಅಡಿಲೇಡ್ ఓವಲ್); ಭಾರತದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ (LBW).&lt;/p&gt;&lt;p&gt;ಆಗಸ್ಟ್ 2026 (ಮ್ಯಾಕೆ); ಬಾಂಗ್ಲಾದೇಶದ ಶಾದ್ಮನ್ ಇಸ್ಲಾಂ.&lt;/p&gt;&lt;h3&gt;&lt;strong&gt;ಜೇಮ್ಸ್ ಆಂಡರ್ಸನ್ ಹೆಸರಲ್ಲಿದ್ದ ಮತ್ತೊಂದು ವಿಶ್ವ ದಾಖಲೆ ಭಂಗ!&lt;/strong&gt;&lt;/h3&gt;&lt;p&gt;ಇಷ್ಟೇ ಅಲ್ಲದೆ, ಟೆಸ್ಟ್ ಪಂದ್ಯದ ಪ್ರಥಮ ಓವರ್&zwnj;ನಲ್ಲಿ ಅತಿ ಹೆಚ್ಚು ವಿಕೆಟ್ ಕಸಿದ ಬೌಲರ್ ಎಂಬ ವಿಶ್ವ ದಾಖಲೆಯೂ ಈಗ ಸ್ಟಾರ್ಕ್ ಪಾಲಾಗಿದೆ. ಇಂಗ್ಲೆಂಡ್&zwnj;ನ ದಂತಕಥೆ ಜೇಮ್ಸ್ ಆಂಡರ್ಸನ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಪಂದ್ಯದ ಮೊದಲ ಓವರ್&zwnj;ನಲ್ಲಿ 8 ವಿಕೆಟ್&zwnj;ಗಳನ್ನು ಪಡೆದಿದ್ದರು. ಸ್ಟಾರ್ಕ್ ಈಗ ತಮ್ಮ ಸಂಖ್ಯೆಯನ್ನು 9ಕ್ಕೆ ಏರಿಸಿಕೊಳ್ಳುವ ಮೂಲಕ ಆಂಡರ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ರೇ ಲಿಂಡ್&zwnj;ವಾಲ್, ರಿಚರ್ಡ್ ಹ್ಯಾಡ್ಲೀ ಮತ್ತು ಭಾರತದ ಕಪಿಲ್ ದೇವ್ (ತಲಾ 7 ವಿಕೆಟ್) ನಂತರದ ಸ್ಥಾನದಲ್ಲಿದ್ದಾರೆ. ಕೆಂಪು ಚೆಂಡು ಕೈಯಲ್ಲಿದ್ದಾಗ ಹೊಸ ಇನ್ನಿಂಗ್ಸ್ ಆರಂಭಿಸಲು ಮಿಚೆಲ್ ಸ್ಟಾರ್ಕ್&zwnj;ಗಿಂತಲೂ ಅಪಾಯಕಾರಿ ಮತ್ತು ಆಕ್ರಮಣಕಾರಿ ಬೌಲರ್ ಪ್ರಸ್ತುತ ವಿಶ್ವ ಕ್ರಿಕೆಟ್&zwnj;ನಲ್ಲಿ ಬೇರಾರೂ ಇಲ್ಲ ಎಂಬುದನ್ನು ಈ ದಾಖಲೆಗಳು ಸಾಬೀತುಪಡಿಸಿವೆ.&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/test-cricket-149-year-history-six-bowlers-wickets-first-ball-historic-cricket-record-bmk/articleshow-8pdphe3"/>
        </item>
        <item>
            <title><![CDATA[2ನೇ ಟೆಸ್ಟ್‌ನಲ್ಲೂ ಕನ್ನಡಿಗನ ಪರಾಕ್ರಮ.. ಸತತ ಎರಡನೇ ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಪಡಿಕ್ಕಲ್]]></title>
            <link>https://kannada.asianetnews.com/cricket-sports/sri-lanka-vs-india-2nd-test-india-tour-of-sri-lanka-2026-devdutt-padikkal-gkn/articleshow-9tagush</link>
            <guid isPermaLink="true">https://kannada.asianetnews.com/cricket-sports/sri-lanka-vs-india-2nd-test-india-tour-of-sri-lanka-2026-devdutt-padikkal-gkn/articleshow-9tagush</guid>
            <pubDate>Sun, 23 Aug 2026 17:18:52 +0530</pubDate>
            <description><![CDATA[&lt;p&gt;ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್, ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ್ದಾರೆ. ತಂಡಕ್ಕೆ ಪಡಿಕ್ಕಲ್ ಅವರ ಮತ್ತೊಂದು ಶತಕ ಆಸರೆಯಾಗಿದ್ದು, ಈ ಕುರಿತ ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0q75tsez7wwmpzfcwqs9rbz,imgname-devdutt-padikkal--1--1787485678382.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಲಂಬೊ: &lt;/strong&gt;ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ್ದಾರೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಅಬ್ಬರಿಸಿದ್ದ ಪಡಿಕ್ಕಲ್ ಈಗ ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್&zwnj;ನಲ್ಲೂ ಜವಾಬ್ದಾರಿಯುತ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಸತತ ಎರಡನೇ ಶತಕದ ಸಂಭ್ರಮ&lt;/strong&gt;&lt;/h2&gt;&lt;p&gt;ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್&zwnj;ನ ಮೊದಲ ದಿನವೇ ಪಡಿಕ್ಕಲ್ ಆತಿಥೇಯ ಬೌಲರ್&zwnj;ಗಳನ್ನು ದಂಡಿಸಿದರು. 193 ಎಸೆತಗಳನ್ನು ಎದುರಿಸಿದ ಅವರು 12 ಆಕರ್ಷಕ ಬೌಂಡರಿಗಳ ನೆರವಿನಿಂದ 117 ರನ್ ಗಳಿಸಿ ಔಟಾದರು. ಇದಕ್ಕೂ ಮುನ್ನ ಗಾಲೆ ಟೆಸ್ಟ್&zwnj;ನ ಮೊದಲ ಇನ್ನಿಂಗ್ಸ್&zwnj;ನಲ್ಲಿ ಅವರು 167 ರನ್&zwnj;ಗಳ ಬೃಹತ್ ಮೊತ್ತ ಕಲೆಹಾಕಿದ್ದರು. ಈ ಮೂಲಕ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದರು.&lt;/p&gt;&lt;h2&gt;&lt;strong&gt;7 ವರ್ಷಗಳ ದಾಖಲೆ ಸರಿಗಟ್ಟಿದ ಪಡಿಕ್ಕಲ್&lt;/strong&gt;&lt;/h2&gt;&lt;p&gt;ಭಾರತದ ಪರ ಮೂರನೇ ಕ್ರಮಾಂಕದಲ್ಲಿ (No.3) ಬ್ಯಾಟಿಂಗ್&zwnj;ಗೆ ಇಳಿದು ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ದಾಖಲೆಯನ್ನು ಪಡಿಕ್ಕಲ್ ಬರೆದಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಭಾರತದ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. 2017ರಲ್ಲಿ ಚೇತೇಶ್ವರ್ ಪೂಜಾರ ಈ ಸಾಧನೆ ಮಾಡಿದ್ದರು, ಇದೀಗ ಪಡಿಕ್ಕಲ್ ಆ ದಾಖಲೆಯನ್ನು ಸರಿಗಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಪಡಿಕ್ಕಲ್ ಇನ್ನಿಂಗ್ಸ್ ಹೈಲೈಟ್ಸ್&lt;/strong&gt;&lt;/h2&gt;&lt;ul&gt; &lt;li&gt;ರನ್: 117&lt;/li&gt; &lt;li&gt;ಎಸೆತ: 193&lt;/li&gt; &lt;li&gt;ಬೌಂಡರಿ: 12&lt;/li&gt; &lt;li&gt;ಸ್ಟ್ರೈಕ್ ರೇಟ್: 60.62&lt;/li&gt;&lt;/ul&gt;&lt;h2&gt;&lt;strong&gt;ಟೀಂ ಇಂಡಿಯಾ ಸುಸ್ಥಿತಿಯಲ್ಲಿ&lt;/strong&gt;&lt;/h2&gt;&lt;p&gt;ಪಡಿಕ್ಕಲ್ ಅವರ ಶತಕದ ನೆರವಿನಿಂದ ಭಾರತ ತಂಡವು ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿ ಸುಸ್ಥಿತಿಯಲ್ಲಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 45 ರನ್ ಗಳಿಸಿದರೆ, ಶುಭಮನ್ ಗಿಲ್ 50 ರನ್ ಗಳಿಸಿ ಅರ್ಧಶತಕ ಪೂರೈಸಿದರು. ಕೆ.ಎಲ್ ರಾಹುಲ್ 18 ರನ್&zwnj;ಗಳಿಗೆ ಔಟಾದರು. ಸದ್ಯ ಕ್ರೀಸ್&zwnj;ನಲ್ಲಿರುವ ರವೀಂದ್ರ ಜಡೇಜಾ (38*) ಮತ್ತು ಧ್ರುವ್ ಜುರೇಲ್ ತಂಡಕ್ಕೆ ಆಸರೆಯಾಗಿದ್ದಾರೆ. ಪಡಿಕ್ಕಲ್ ಅವರ ಈ ಸ್ಥಿರ ಪ್ರದರ್ಶನವು ಟೀಂ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಹೊಸ ಶಕ್ತಿ ತುಂಬಿದಂತಿದೆ.&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/sri-lanka-vs-india-2nd-test-india-tour-of-sri-lanka-2026-devdutt-padikkal-gkn/articleshow-9tagush"/>
        </item>
        <item>
            <title><![CDATA[ಆಸ್ಟ್ರೇಲಿಯಾ ಪರ 13 ವರ್ಷ ಆಡಿದರು ಆಗಿಲ್ಲ, ಪೋರ್ಚುಗಲ್ ಪರ ಮೊದಲ ಶತಕ ಸಿಡಿಸಿದ RCB ಮಾಜಿ ಆಟಗಾರ]]></title>
            <link>https://kannada.asianetnews.com/sports/moises-henriques-ex-rcb-player-played-for-australia-for-13-years-scored-his-first-century-for-portugal-in-t20-sns/articleshow-e8mgh7w</link>
            <guid isPermaLink="true">https://kannada.asianetnews.com/sports/moises-henriques-ex-rcb-player-played-for-australia-for-13-years-scored-his-first-century-for-portugal-in-t20-sns/articleshow-e8mgh7w</guid>
            <pubDate>Sun, 23 Aug 2026 12:39:00 +0530</pubDate>
            <description><![CDATA[ಆಸ್ಟ್ರೇಲಿಯಾದ ಆಲ್&zwnj;ರೌಂಡರ್ ಮೊಯ್ಸಸ್ ಹೆನ್ರಿಕ್ಸ್, ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಪೋರ್ಚುಗಲ್ ಪರ ಸಿಡಿಸಿದ್ದಾರೆ. ಜೆಕ್ ಗಣರಾಜ್ಯದ ವಿರುದ್ಧ ನಡೆದ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ 111 ರನ್ ಗಳಿಸುವ ಮೂಲಕ, ತಮ್ಮ ಪೋರ್ಚುಗೀಸ್ ಮೂಲದ ತಂಡಕ್ಕೆ ನಾಯಕರಾಗಿ ಐತಿಹಾಸಿಕ ಗೆಲುವು ತಂದುಕೊಟ್ಟರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0pq67qcavkwhzj9tmqamzta,imgname-moises-henriques-1787468914412.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಸ್ಟ್ರೇಲಿಯಾ ಆಲ್&zwnj;ರೌಂಡರ್ ಮೊಯ್ಸಸ್ ಹೆನ್ರಿಕ್ಸ್ ತಮ್ಮ ಮೊದಲ ಅಂತರಾಷ್ಟ್ರೀಯ ಶತಕವನ್ನು ಸಿಡಿಸಿದ್ದಾರೆ. ಆದರೆ ಅವರ ಮೊದಲ ಶತಕ ದಾಖಲಾಗಿದ್ದು ಆಸ್ಟ್ರೇಲಿಯಾ ಪರ ಅಲ್ಲ, ಪೋರ್ಚುಗಲ್ ಪರ ಬಂದಿದೆ ಅನ್ನೋದು ಇಲ್ಲಿ ವಿಶೇಷ ಸಂಗತಿಯಾಗಿದೆ. ಪೋರ್ಚುಗಲ್ ಪ್ರಸ್ತುತ ಐಸಿಸಿ ಪುರುಷರ ಟಿ20 ವಿಶ್ವಕಪ್ ಸಬ್ ರಿಜಿನಲ್ ಯುರೋಪ್&zwnj; ಕ್ವಾಲಿಫೈಯರ್ ಸಿ ಮ್ಯಾಚ್ ಆಡುತ್ತಿದ್ದು, ಗುರುವಾರ ನಡೆದ ಪಂದ್ಯದಲ್ಲಿ ಜೆಕ್ ಗಣರಾಜ್ಯ ತಂಡವನ್ನು ಎದುರಿಸಿತ್ತು.&lt;/p&gt;&lt;h2&gt;ಆಸೀಸ್ ಅಲ್ಲ, ಪೋರ್ಚುಗಲ್&zwnj;ಗೆ ಹೆನ್ರಿಕ್ಸ್ ಶತಕದ ಅಬ್ಬರ!&lt;/h2&gt;&lt;p&gt;ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೋರ್ಚುಗಲ್ ನಿಗದಿತ 20 ಓವರ್&zwnj;ಗಳಲ್ಲಿ 211 ರನ್ ಗಳಿಸಿತು. ಮೊಯ್ಸಸ್ ಹೆನ್ರಿಕ್ಸ್ ಒಬ್ಬರೇ ಪಂದ್ಯದಲ್ಲಿ 111 ರನ್ ಗಳಿಸಿದ್ದರು. ಉಳಿದ ಬ್ಯಾಟರ್ ಗಳು ಒಟ್ಟಾರೆ 100 ರನ್ ಗಳಿಸಿದ್ದರು. ಮೊಯ್ಸಸ್ ಹೆನ್ರಿಕ್ಸ್ 48 ಎಸೆತಗಳಲ್ಲಿ ಶತಕ ಸಿಡಿಸಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದರೊಂದಿಗೆ ಪೋರ್ಚುಗಲ್ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ದಾಖಲಾದ ಎರಡನೇ ವೇಗದ ಶತಕ ಇದಾಗಿದೆ.&lt;/p&gt;&lt;p&gt;ಜೆಕ್ ಗಣರಾಜ್ಯದ ವಿರುದ್ಧ ಪಂದ್ಯದಲ್ಲಿ ಮೊಯ್ಸಸ್ ಹೆನ್ರಿಕ್ಸ್ 51 ಎಸೆತಗಳಲ್ಲಿ 111 ರನ್ ಗಳಿಸಿದ್ದು, ಇದರಲ್ಲಿ 12 ಬೌಂಡರಿ, 7 ಸಿಕ್ಸರ್&zwnj;ಗಳು ದಾಖಲಾಗಿತ್ತು. ಇದರೊಂದಿಗೆ ಬೌಂಡರಿ ಮತ್ತು ಸಿಕ್ಸರ್ ಗಳಿಂದಲೇ 90 ರನ್ ಹರಿದು ಬಂದಿತ್ತು. ಜಸ್ಟ್ 48 ಎಸೆತಗಳಲ್ಲಿ 100 ರನ್ ಗಡಿದಾಟ್ಟಿದ್ದ ಮೊಯ್ಸಸ್ ಹೆನ್ರಿಕ್ಸ್, ಪೋರ್ಚುಗಲ್ ಪರ ದಾಖಲೆ ಬರೆದಿದ್ದಾರೆ. 111 ರನ್&zwnj;ಗಳೊಂದಿಗೆ ಪೋರ್ಚುಗಲ್ ಪರ ಆಟಗಾರರೋರ್ವ ಸಿಡಿಸಿದ ಎರಡನೇ ಅತ್ಯಧಿಕ ಸ್ಕೋರ್ ಕೂಡ ಇದಾಗಿದೆ.&lt;/p&gt;&lt;h2&gt;ಪೋರ್ಚುಗಲ್ ತಂಡ ಮುನ್ನಡೆಸುತ್ತಿರುವ ಹೆನ್ರಿಕ್ಸ್&lt;/h2&gt;&lt;p&gt;ಪೋರ್ಚುಗಲ್ ಪರ ಟಿ20 ಮಾದರಿಯಲ್ಲಿ ವೇಗದ ಶತಕ ಬಾರಿಸದ ದಾಖಲೆ ಕ್ರಿಸ್ಟೋಫರ್ ಡಿ ಫ್ರೀಟಾಸ್ ಅವರ ಹೆಸರಿನಲ್ಲಿದೆ. ನಾರ್ವೆ ವಿರುದ್ಧ 43 ಎಸೆತಗಳಲ್ಲಿ ಫ್ರೀಟಾಸ್ ಅವರು ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ನಾರ್ವೆ ವಿರುದ್ಧದ ಪಂದ್ಯದಲ್ಲಿ ಫೀಟಾಸ್ 125 ರನ್ ಗಳಿಸಿ, ಅತ್ಯಾಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಪೋರ್ಚುಗಲ್ ಪರ ದಾಖಲಿಸಿದ್ದರು.&lt;/p&gt;&lt;p&gt;ಮೊನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪೋರ್ಚುಗಲ್ 211 ರನ್ ಗಳಿಸಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಜೆಕ್ ಗಣರಾಜ್ಯ 8.5 ಓವರ್ ಗಳನ್ನು ಆಡಿದ ಸಂದರ್ಭದಲ್ಲಿ ಪಂದ್ಯದಕ್ಕೆ ಮಳೆ ಅಡ್ಡಿಪಡಿಸಿತ್ತು. ಈ ಹಂತದಲ್ಲಿ ಜೆಕ್ ಗಣರಾಜ್ಯ ಕೇವಲ 24 ರನ್ ಗಳಿಸಿ, 5 ವಿಕೆಟ್ ಕಳೆದುಕೊಂಡಿತ್ತು. ಇದರೊಂದಿಗೆ ಡಕ್ವರ್ಥ್ ಲೂಯಿಸ್ ವಿಧಾನದ ಮೂಲಕ ಪಂದ್ಯದಲ್ಲಿ ಪೋರ್ಚುಗಲ್ 91 ರನ್&zwnj;ಗಳ ಗೆಲುವು ಪಡೆದುಕೊಂಡಿತ್ತು.&lt;/p&gt;&lt;h2&gt;ಪೋರ್ಚುಗಲ್&zwnj; ಮೂಲ, ಆಸೀಸ್ ಪರ ಕ್ರಿಕೆಟ್&zwnj;&lt;/h2&gt;&lt;p&gt;ಮೊಯ್ಸಸ್ ಹೆನ್ರಿಕ್ಸ್ ಪೋರ್ಚುಗಲ್ ಮೂಲದ ಆಸ್ಟ್ರೇಲಿಯನ್ ಕ್ರಿಕೆಟಿಗರಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಆಸೀಸ್ ಪರ ಆಡಿದ್ದರು. ಆದರೆ ಈಗ ಪೋರ್ಚುಗಲ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಆಲ್&zwnj;ರೌಂಡರ್ ಮೊಯ್ಸಸ್ ಹೆನ್ರಿಕ್ಸ್ ಪ್ರಥಮ ದರ್ಜೆ, ಲಿಸ್ಟ್ ಎ, ಲಿಸ್ಟ್ ಬಿ ಮತ್ತು ಟಿ20 ಪಂದ್ಯಗಳು ಸೇರಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.&lt;/p&gt;&lt;p&gt;ಇನ್ನು, ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಆಸ್ಟ್ರೇಲಿಯಾ ಪರ 4 ಟೆಸ್ಟ್, 16 ಏಕದಿನ ಪಂದ್ಯ ಹಾಗೂ 24 ಟಿ20 ಪಂದ್ಯಗಳನ್ನು ಆಡಿದ್ದಾರೆ. 2013ರಲ್ಲಿ ಭಾರತದ ಪರ ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 68, ಎರಡನೇ ಇನ್ನಿಂಗ್ಸ್&zwnj;ನಲ್ಲಿ 81 ರನ್ ಗಳಿಸಿ ಮಿಂಚಿದ್ದರು. ಐಪಿಎಲ್&zwnj;ನಲ್ಲಿ ಆರ್&zwnj;ಸಿಬಿ, ಮುಂಬೈ, ಹೈದರಾಬಾದ್ ತಂಡದಗಳ ಪರ ಆಡಿದ್ದು, 2016ರಲ್ಲಿ ಎಸ್&zwnj;ಆರ್&zwnj;ಎಚ್&zwnj; ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;p&gt;Moises Henriques Century 111(50)PORvsCZE ICC T20 World Cup Sub Regional Europe Qualifier C Match https://t.co/lHWodukdoZ pic.twitter.com/kxLCtpRIGl&lt;/p&gt;&lt;p&gt;&mdash; Hitartha Bairagi (@BairagiHitartha) August 20, 2026&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Sumanth SN</dc:creator>
            <atom:link href="https://kannada.asianetnews.com/sports/moises-henriques-ex-rcb-player-played-for-australia-for-13-years-scored-his-first-century-for-portugal-in-t20-sns/articleshow-e8mgh7w"/>
        </item>
        <item>
            <title><![CDATA[ಮುಂಬೈ ಇಂಡಿಯನ್ಸ್ ತಂಡದಿಂದ ಮಹತ್ವದ ನಡೆ, ವೈಭವ್‌ನ ಸ್ಟಾರ್ ಮಾಡಿದ ಜುಬಿನ್‌ಗೆ ಪ್ರಮುಖ ಹುದ್ದೆ]]></title>
            <link>https://kannada.asianetnews.com/cricket-sports/mumbai-indians-appoint-jubin-bharucha-who-played-a-major-role-in-making-vaibhav-a-star/articleshow-g6dn6i1</link>
            <guid isPermaLink="true">https://kannada.asianetnews.com/cricket-sports/mumbai-indians-appoint-jubin-bharucha-who-played-a-major-role-in-making-vaibhav-a-star/articleshow-g6dn6i1</guid>
            <pubDate>Sat, 22 Aug 2026 18:01:12 +0530</pubDate>
            <description><![CDATA[&lt;p&gt;2027ರಲ್ಲಿ ಟ್ರೋಫಿ ಗೆಲ್ಲಲೇಬೇಕೆಂಬ ಹಠದಲ್ಲಿರುವ ಮುಂಬೈ ಇಂಡಿಯನ್ಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವೈಭವ್ ಸೂರ್ಯವಂಶಿಯನ್ನು ಗುರುತಿಸಿ, ಸ್ಟಾರ್ ಮಾಡಿದ ಜುಬಿನ್ ಭರೋಚಾಗೆ ಮುಂಬೈ ತಂಡದ ಪ್ರಮುಖ ಹುದ್ದೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mq68xjm34kq50se7tfrk6p,imgname-zubin-gets-key-position-at-mumbai-indians-1787401806769.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.22) &lt;/strong&gt;ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲದೆ ಕೆಲ ವರ್ಷ ಉರುಳಿದೆ. ಪ್ಲೇ ಆಫ್ ಪ್ರವೇಶಕ್ಕೂ ಪರದಾಡುತ್ತಿದೆ. ಘಟಾನುಘಟಿ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ತಂಡ ಮಾತ್ರ ಲೀಗ್ ಹಂತದಿಂದಲೇ ಹೊರಬೀಳುತ್ತಿದೆ. ಇದೀಗ 2027ರ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ಮಹತ್ವದ ಬದಲಾವಣೆ ಮಾಡುತ್ತಿದೆ. ಇದಕ್ಕಾಗಿ ಮುಂಬೈ ಇಂಡಿಯನ್ಸ್ ತಂಡದ ಪರ್ಫಾಮೆನ್ಸ್ ಡೈರೆಕ್ಟರ್ ಆಗಿ ಜುಬಿನ್ ಬರೋಚಾ ನೇಮಕ ಮಾಡಲಾಗಿದೆ.&lt;/p&gt;&lt;h2&gt;ವೈಭವ್, ಜಸ್ವಾಲ್, ರಿಯಾನ್ ಸೇರಿ ಹಲವರ ಸ್ಟಾರ್ ಮಾಡಿದ ಜುಬಿನ್&lt;/h2&gt;&lt;p&gt;ರಾಜಸ್ಥಾನ ರಾಯಲ್ಸ್ ತಂಡದ ಪರ್ಫಾಮೆನ್ಸ್ ಮುಖ್ಯಸ್ಥರಾಗಿದ್ದ ಜುಬಿನ್ ಬರೋಚಾ ಹಲವು ಯುವ ಪ್ರತಿಭೆಗಳನ್ನು ಗುರುತಿಸಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಜುಬಿನ್ ಬರೋಚಾ ಗುರುತಿಸಿದ ಪ್ರತಿಭೆಗಳು ಇದೀಗ ಬಹುದೊಡ್ಡ ಸ್ಟಾರ್ ಆಗಿದ್ದಾರೆ. ಈ ಪೈಕಿ ಇತ್ತಿಚೆಗಿನ ಉದಾಹರಣೆ ವೈಭವ್ ಸೂರ್ಯವಂಶಿ. ವಿಶೇಷ ಅಂದರೆ ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಸೇರಿದಂತೆ ಹಲವು ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಒದಗಿಸಿದ ಹೆಗ್ಗಳಿಕೆಗ ಇದೇ ಜುಬಿನ್ ಬರೋಚಾಗೆ ಇದೆ. ಇದೀಗ ಮುಂಬೈ ಇಂಡಿಯನ್ಸ್ ತಂಡದ ಪರ್ಫಾಮೆನ್ಸ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಾರೆ.&lt;/p&gt;&lt;p&gt;ಮುಂಬೈ ಇಂಡಿಯನ್ಸ್ ಜುಬಿನ್ ಬರೋಚಾ ನೇಮಕ ಮಾಡಿ ಅಧಿಕೃತ ಘೋಷಣೆ ಮಾಡಿದೆ. ಸದ್ಯ ಇರುವ ಸ್ಟಾಫ್ ಜೊತೆ ಜುಬಿನ್ ಬರೋಜಾ ಪರ್ಫಾಮೆನ್ಸ್ ನಿರ್ದೇಶಕರಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಹೇಳಿದೆ. 2027ರಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರರಿಗಿಂತ ಯುವ ಪ್ರತಿಭಗಳಿಗೆ ಹೆಚ್ಚು ಮಣೆ ಹಾಕುವ ಸಾಧ್ಯತೆ ಇದೆ. ಈ ಮೂಲಕ ತಂಡಕ್ಕೆ ಹೊರೆಯಾಗದಂತೆ ಬಲಿಷ್ಠ ಯುವ ಪಡೆ ಕಟ್ಟುವ ಸಾಧ್ಯತೆ ಹೆಚ್ಚಿದೆ.&lt;/p&gt;&lt;h2&gt;ವೈಭವ್ ಸೇರಿ ಹಲವು ಪ್ರತಿಭೆಗಳ ಗುರುತಿಸಿದ ಹೆಗ್ಗಳಿಕೆ&lt;/h2&gt;&lt;p&gt;ವೈಭವ್ ಸೂರ್ಯವಂಶಿಯನ್ನು ಅತ್ಯಂತ ಕಿರಿಯ ವಯಸ್ಸಿನಲ್ಲೇ ಗುರುಸಿತಿದ ಹೆಗ್ಗಳಿಗೆ ಜುಬಿನ್ ಬರೋಚಾಗೆ ಇದೆ. ಯುವ ಪ್ರತಿಭೆಯನ್ನು ಗಮನಿಸಿದ ಜುಬಿನ್ ರಾಜಸ್ಥಾನ ರಾಯಲ್ಸ್ ಟ್ರಯಲ್ಸ್&zwnj;ನಲ್ಲಿ ವೇಗಿಗಳ ಮುಂದೆ ಆಡಿಸಿದ್ದರು. ಆಗಲೆ ವೈಭವ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಅಷ್ಟೇ ವೇಗದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡು ಇತಿಹಾಸ ನಿರ್ಮಿಸಿದ್ದಾರೆ.&lt;/p&gt;&lt;p&gt;2026ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಮತ್ತೆ ಬಲಿಷ್ಠ ತಂಡ ಕಟ್ಟಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಹಲವು ಬದಲಾವಣೆ ಮಾಡುತ್ತಿದೆ. ಸ್ಟಾರ್ ಪ್ಲೇಯರ್&zwnj;ಗೆ ಮಣೆ ಹಾಕುವ ಬದಲು ಯುವ ಪ್ರತಿಭೆಗಳಿಗೆ ಇನ್ನು ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/mumbai-indians-appoint-jubin-bharucha-who-played-a-major-role-in-making-vaibhav-a-star/articleshow-g6dn6i1"/>
        </item>
        <item>
            <title><![CDATA[GenZ '6-7' ಸೆಲಬ್ರೇಷನ್‌ ಮೂಲಕ ನೆಟ್ಟಿಗರ ಗಮನ ಸೆಳೆದ ದೆಹಲಿ ಕ್ರಿಕೆಟ್‌ ಬ್ಯೂಟಿ ಮೇಧವಿ ಬಿಧುರಿ!]]></title>
            <link>https://kannada.asianetnews.com/cricket-sports/delhi-cricketer-medhavi-bidhuri-viral-6-7-celebration-dpl-2026-san/articleshow-geuy91n</link>
            <guid isPermaLink="true">https://kannada.asianetnews.com/cricket-sports/delhi-cricketer-medhavi-bidhuri-viral-6-7-celebration-dpl-2026-san/articleshow-geuy91n</guid>
            <pubDate>Fri, 21 Aug 2026 21:47:33 +0530</pubDate>
            <description><![CDATA[ದೆಹಲಿ ಪ್ರೀಮಿಯರ್ ಲೀಗ್&zwnj;ನಲ್ಲಿ '6-7' ಸಂಭ್ರಮಾಚರಣೆಯ ಮೂಲಕ ವೈರಲ್ ಆದ ಯುವ ಕ್ರಿಕೆಟರ್ ಮೇಧವಿ ಬಿಧುರಿ ಅವರ ಹಿನ್ನೆಲೆಯನ್ನು ಈ ಲೇಖನ ವಿವರಿಸುತ್ತದೆ. ಅವರ ಕ್ರಿಕೆಟ್ ಪಯಣ, ಜೆನ್ ಜೀ ಟ್ರೆಂಡ್ ಆಗಿರುವ ಈ ಸಂಭ್ರಮದ ರಹಸ್ಯ ಮತ್ತು ಅವರ ಜೆರ್ಸಿ ಸಂಖ್ಯೆಗೂ ಇದಕ್ಕೂ ಇರುವ ಸಂಬಂಧವನ್ನು ಇಲ್ಲಿ ತಿಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0jhbvemxd2zke4meeyw43qe,imgname-medhavi-bidhuri-1787328589268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಆ.21): &lt;/strong&gt;ಪ್ರಸಕ್ತ ಸಾಲಿನ ದೆಹಲಿ ಪ್ರೀಮಿಯರ್ ಲೀಗ್ (DPL 2026) ಟೂರ್ನಿಯಲ್ಲಿ ದೆಹಲಿಯ ಯುವ ಆಟಗಾರ್ತಿ ಮೇಧವಿ ಬಿಧುರಿ GenZ '6-7' ಸೆಲಬ್ರೇಷನ್&zwnj; ಮೂಲಕ ಸೋಶಿಯಲ್&zwnj; ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಮೈದಾನದಲ್ಲಿ ಅವರು ಮಾಡಿದ ಕೈಸಂಜ್ಞೆಯ ಸಂಭ್ರಮವು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ಇಷ್ಟಕ್ಕೂ ಯಾರೀ ಮೇಧಾವಿ ಬಿಧುರಿ? ಅವರ ಕ್ರಿಕೆಟ್&zwnj; ಹಿನ್ನೆಲೆಯೇನು? ಎಂಬ ಕುತೂಹಲ ಕ್ರಿಕೆಟ್&zwnj; ಅಭಿಮಾನಿಗಳಲ್ಲಿ ಹೆಚ್ಚಾಗಿದೆ.&lt;/p&gt;&lt;p&gt;ಆಗಸ್ಟ್ 20ರಂದು ನಡೆದ ವುಮೆನ್ಸ್&zwnj; ದೆಹಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ'ಸೆಂಟ್ರಲ್ ದೆಹಲಿ ಕ್ವೀನ್ಸ್' ತಂಡವನ್ನು ಪ್ರತಿನಿಧಿಸಿದ್ದ 20 ಹರೆಯದ ಮೇಧವಿ ಬಿಧುರಿ, ಕಳೆದ ಬಾರಿಯ ಚಾಂಪಿಯನ್ಸ್ ವಿರುದ್ಧ ಎರಡು ಪ್ರಮುಖ ವಿಕೆಟ್ ಪಡೆದು ಮಿಂಚಿದರು. ತಮ್ಮ ಅದ್ಭುತ ಲೆಗ್-ಸ್ಪಿನ್ ಬೌಲಿಂಗ್ ಜೊತೆಗೆ ಈ ವಿಶಿಷ್ಟ ವೈರಲ್ ಸೆಲಬ್ರೇಷನ್&zwnj; ಕಾರಣದಿಂದ ಅವರು ಪಂದ್ಯದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದರು.&lt;/p&gt;&lt;h2&gt;&lt;strong&gt;ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್ ಆದ ಆ ಒಂದು ಕ್ಷಣ&lt;/strong&gt;&lt;/h2&gt;&lt;p&gt;ಸೌತ್ ದೆಹಲಿ ಸೂಪರ್&zwnj;ಸ್ಟಾರ್ಜ್ ವಿರುದ್ಧದ ಪಂದ್ಯದ 16ನೇ ಓವರ್&zwnj;ನಲ್ಲಿ ಎದುರಾಳಿ ತಂಡದ ಬ್ಯಾಟರ್ ನಿಶಿಕಾ ಸಿಂಗ್ ಅವರ ವಿಕೆಟ್ ಉರುಳಿಸಿದಾಗ ಮೇಧವಿ ಈ ವಿಭಿನ್ನ ಸಂಭ್ರಮಾಚರಣೆ ಮಾಡಿದರು. ಸಾಂಪ್ರದಾಯಿಕವಾಗಿ ಮುಷ್ಟಿ ಬಿಗಿದು ಅಥವಾ ಜಿಗಿದು ಸಂಭ್ರಮಿಸುವ ಬದಲು, ತಮ್ಮ ಎರಡೂ ಕೈಗಳನ್ನು ಮೇಲಕ್ಕೆ-ಕೆಳಕ್ಕೆ ಆಡಿಸುತ್ತಾ &quot;ಸಿಕ್ಸ್-ಸೆವೆನ್&quot; (6-7) ಎಂದು ಸಂಭ್ರಮಿಸಿದ್ದಾರೆ. ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಈ ದೃಶ್ಯ ಸೋಶಿಯಲ್&zwnj; ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಈ ಪಂದ್ಯದಲ್ಲಿ ಸೆಂಟ್ರಲ್ ದೆಹಲಿ ಕ್ವೀನ್ಸ್ ತಂಡ 29 ರನ್&zwnj;ಗಳಿಂದ ಸೋಲನುಭವಿಸಿದರೂ, ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದು ಮಾತ್ರ ಮೇಧವಿಯ ಈ ಸಂಭ್ರಮಾಚರಣೆ.&lt;/p&gt;&lt;h2&gt;&lt;strong&gt;ಯಾರೀ ಮೇಧವಿ ಬಿಧುರಿ?&lt;/strong&gt;&lt;/h2&gt;&lt;p&gt;ಕೇವಲ ಒಂದೇ ಒಂದು ವೈರಲ್ ವಿಡಿಯೋದಿಂದ ಜನಪ್ರಿಯತೆ ಗಳಿಸಿದವರ ಸಾಲಿಗೆ ಮೇಧವಿ ಸೇರುವುದಿಲ್ಲ. ಅವರು ಸುದೀರ್ಘ ಕಾಲದಿಂದ ದೆಹಲಿ ದೇಶೀಯ ಕ್ರಿಕೆಟ್&zwnj;ನಲ್ಲಿ ಸತತ ಪರಿಶ್ರಮ ವಹಿಸಿ ಬೆಳೆದುಬಂದ ಬೌಲರ್&zwnj;. ಬಲಗೈ ಲೆಗ್&zwnj;ಸ್ಪಿನ್ನರ್&zwnj; ಆಗಿರುವ ಈಕೆ, ದೆಹಲಿ ಮತ್ತು ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (DDCA) ಪಟ್ಟಿಯಲ್ಲಿ ಪ್ರಮುಖ ಲೆಗ್-ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2024 ರ ಹರಾಜು ಪಟ್ಟಿಯಲ್ಲೂ ಇವರ ಹೆಸರು ನೋಂದಾಯಿತವಾಗಿತ್ತು. ಕಳೆದ ಆವೃತ್ತಿಯ ದೆಹಲಿ ಪ್ರೀಮಿಯರ್ ಲೀಗ್ (DPL 2025) ಫೈನಲ್ ಪಂದ್ಯದಲ್ಲಿ ಸೂಪರ್&zwnj;ಸ್ಟಾರ್ಜ್ ತಂಡದ ಪರವಾಗಿ ಕಣಕ್ಕಿಳಿದು, 26 ರನ್&zwnj; ನೀಡಿ 3 ಪ್ರಮುಖ ವಿಕೆಟ್&zwnj;ಗಳನ್ನು ಕಬಳಿಸುವ ಮೂಲಕ ಬೊಂಬಾಟ್ ಪ್ರದರ್ಶನ ನೀಡಿದ್ದರು.&lt;/p&gt;&lt;h2&gt;&lt;strong&gt;ಏನಿದು '6-7' ಸಂಭ್ರಮಾಚರಣೆಯ ರಹಸ್ಯ?&lt;/strong&gt;&lt;/h2&gt;&lt;p&gt;ಪ್ರಸ್ತುತ ಜಾಗತಿಕ ಮಟ್ಟದಲ್ಲಿ '6-7' (ಸಿಕ್ಸ್-ಸೆವೆನ್) ಸಂಭ್ರಮಾಚರಣೆಯು 'ಜೆನ್ ಜೀ' (Gen Z) ಮತ್ತು 'ಜೆನ್ ಆಲ್ಫಾ' ಯುವಜನತೆಯಲ್ಲಿ ಭಾರಿ ಕ್ರೇಜ್ ಸೃಷ್ಟಿಸಿದೆ. ಎರಡೂ ಕೈಗಳನ್ನು ತಕ್ಕಡಿಯಂತೆ ಅಥವಾ seesaw ಮಾದರಿಯಲ್ಲಿ ಮೇಲಕ್ಕೆ-ಕೆಳಕ್ಕೆ ಆಡಿಸುವ ಈ ಸಂಭ್ರಮಕ್ಕೆ ಯಾವುದೇ ನಿರ್ದಿಷ್ಟ ವ್ಯಾಖ್ಯಾನವಿಲ್ಲದಿದ್ದರೂ, ಟಿಕ್&zwnj;ಟಾಕ್&zwnj;ನಿಂದ ಹಿಡಿದು ಜಾಗತಿಕ ಕ್ರೀಡಾಂಗಣಗಳವರೆಗೆ ಇದು ವ್ಯಾಪಿಸಿದೆ. ಕೆವಿನ್ ಪೀಟರ್ಸನ್, ಡೇವಿಡ್ ವಾರ್ನರ್ ಹಾಗೂ ಫುಟ್&zwnj;ಬಾಲ್ ತಾರೆ ಕಾಸೆಮಿರೊ ಅವರಂತಹ ಜಾಗತಿಕ ಜಗತ್ತಿನ ದಿಗ್ಗಜರು ಕೂಡ ಈ ಸಂಭ್ರಮಾಚರಣೆಯನ್ನು ಅನುಕರಿಸಿದ್ದಾರೆ.&lt;/p&gt;&lt;p&gt;ಆದರೆ ಮೇಧವಿ ಬಿಧುರಿ ವಿಷಯದಲ್ಲಿ ಈ ಆಚರಣೆ ಮತ್ತಷ್ಟು ವಿಶೇಷವೆನಿಸಲು ಕಾರಣ ಅವರ ಜೆರ್ಸಿ ಸಂಖ್ಯೆ 67 (Sixty-Seven)! ತಮ್ಮ ಜೆರ್ಸಿ ಸಂಖ್ಯೆಗೆ ಹೊಂದುವ ರೀತಿಯಲ್ಲಿ ಅವರು ಈ ಸಂಭ್ರಮಾಚರಣೆ ಮಾಡಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/delhi-cricketer-medhavi-bidhuri-viral-6-7-celebration-dpl-2026-san/articleshow-geuy91n"/>
        </item>
        <item>
            <title><![CDATA[Cricket: ಥೇಟ್‌ ಕೆಜಿಎಫ್‌ ಸ್ಟೈಲ್‌ ಅಲ್ಲಿ ಪೋಸ್ಟ್; ತಾಯಿಯನ್ನು ಕಳೆದುಕೊಂಡ 16 ದಿನಗಳ ಬಳಿಕ ಮನದ ನೋವು ಬಿಚ್ಚಿಟ್ಟ ಈ ಖ್ಯಾತ ಕ್ರಿಕೆಟಿಗ]]></title>
            <link>https://kannada.asianetnews.com/cricket-sports/nitish-rana-emotional-post-after-mothers-death-16-days-tribute-kgf-dialogue-viral-cricket-news-bmk/articleshow-ghcizh7</link>
            <guid isPermaLink="true">https://kannada.asianetnews.com/cricket-sports/nitish-rana-emotional-post-after-mothers-death-16-days-tribute-kgf-dialogue-viral-cricket-news-bmk/articleshow-ghcizh7</guid>
            <pubDate>Sun, 23 Aug 2026 22:24:03 +0530</pubDate>
            <description><![CDATA[ತಾಯಿಯ ನಿಧನದ ನೋವಿನ ನಡುವೆಯೂ ಕ್ರಿಕೆಟಿಗ ನಿತೀಶ್ ರಾಣಾ ಮೈದಾನಕ್ಕಿಳಿದು ಅರ್ಧಶತಕ ಬಾರಿಸಿದ್ದಾರೆ. ತಮ್ಮ ಈ ಸಾಧನೆಯನ್ನು ಸ್ವರ್ಗಸ್ಥ ತಾಯಿಗೆ ಅರ್ಪಿಸಿ, ಮೈದಾನದಲ್ಲೇ ಕಣ್ಣೀರಿಟ್ಟ ಅವರು, ನಂತರ 'ಕೆಜಿಎಫ್' ಶೈಲಿಯಲ್ಲಿ ತಮ್ಮ ತಾಯಿಯ ತ್ಯಾಗವನ್ನು ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0qrmhk00sx4tz8qnrapcgtc,imgname-nitish-rana--1787503986272.jpg" type="image/jpeg" height="390" width="690"/>
            <content:encoded><![CDATA[&lt;p&gt;ಅದು 2026 ರ ಆಗಸ್ಟ್ 7. ಭಾರತದ ಸ್ಟಾರ್ ಕ್ರಿಕೆಟರ್ ನಿತೀಶ್ ರಾಣಾ ಬಾಳಲ್ಲಿ ಅತಿ ದೊಡ್ಡ ಕರಾಳ ದಿನ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ, ಮಗನನ್ನು ಅನಾಥನನ್ನಾಗಿ ಮಾಡಿ ಕಣ್ಣು ಮುಚ್ಚಿದ್ದರು. ಕೆಜಿಎಫ್&zwnj; ಸಿನಿಮಾದಲ್ಲಿ ರಾಕಿ ಭಾಯ್&zwnj;ಗೆ ಅವರ ತಾಯಿಯೇ ಶಕ್ತಿ, ಅದೇ ರೀತಿ ನಿತೀಶ್ ರಾಣಾ ಬದುಕಿನಲ್ಲೂ ಅವರ ತಾಯಿಯೇ ಅಸಲಿ ಸಾಮ್ರಾಜ್ಯದ ಅಡಿಪಾಯವಾಗಿದ್ದರು. ತಾಯಿ ತೀರಿಕೊಂಡು ಕೇವಲ 16 ದಿನಗಳು ಕಳೆದಿವೆ. ಎದೆಯೊಳಗೆ ಬೆಂಕಿಯಂತಹ ನೋವಿದ್ದರೂ, ಮೈದಾನಕ್ಕಿಳಿದು ರನ್&zwnj;ಗಳ ಸಾಮ್ರಾಜ್ಯ ಕಟ್ಟುತ್ತಿರುವ ನಿತೀಶ್, ಈಗ ತಾಯಿಗಾಗಿ ಬರೆದಿರುವ ಪೋಸ್ಟ್ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುತ್ತಿದೆ.&lt;/p&gt;&lt;h2&gt;&lt;strong&gt;ಮೈದಾನದಲ್ಲಿ ಕಣ್ಣೀರಿನ ಮಳೆ, ತಾಯಿಗೆ ಅರ್ಪಿಸಿದ ಅರ್ಧಶತಕ!&lt;/strong&gt;&lt;/h2&gt;&lt;p&gt;ತಾಯಿ ತೀರಿಕೊಂಡ ಎರಡೇ ವಾರಗಳಲ್ಲಿ, ಅಂದರೆ ಡಿಪಿಎಲ್ 2026 (DPL 2026) ಲೀಗ್&zwnj;ನಲ್ಲಿ ನಿತೀಶ್ ರಾಣಾ ಬ್ಯಾಟ್ ಹಿಡಿದು ಅಖಾಡಕ್ಕಿಳಿದಿದ್ದರು. ಎದೆಯಲ್ಲಿ ಹೆಪ್ಪುಗಟ್ಟಿದ್ದ ದುಃಖವನ್ನು ಬ್ಯಾಟಿಂಗ್&zwnj;ನಲ್ಲಿ ತೋರಿಸಿದ ಅವರು, ಅಬ್ಬರದ ಅರ್ಧಶತಕ ಸಿಡಿಸಿದರು. ಅರ್ಧಶತಕ ಬಾರಿಸಿದ ತಕ್ಷಣ ಬ್ಯಾಟ್ ಎತ್ತಿ ಆಕಾಶದತ್ತ ನೋಡಿ, ತಮ್ಮ ಈ ಸಾಧನೆಯನ್ನು ಸ್ವರ್ಗದಲ್ಲಿರುವ ತಾಯಿಗೆ ಅರ್ಪಿಸಿದರು. ಆ ಕ್ಷಣದಲ್ಲೇ ಅವರ ಕಂಟ್ರೋಲ್ ತಪ್ಪಿ ಮೈದಾನದಲ್ಲೇ ಮಗುವಿನಂತೆ ಕಣ್ಣೀರಿಟ್ಟರು. ಅಂಪೈರ್ ಹಾಗೂ ಸಹ ಆಟಗಾರರು ಓಡಿ ಬಂದು ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಬೇಕಾಯಿತು.&lt;/p&gt;&lt;h3&gt;&lt;strong&gt;ಸಾಮ್ರಾಜ್ಯ ನನ್ನದಾಗಲಿ ಎಂದು ನೀನು ತ್ಯಾಗ ಮಾಡಿದೆ!&lt;/strong&gt;&lt;/h3&gt;&lt;p&gt;ಇದೀಗ, ತಾಯಿ ಅಗಲಿ 16 ದಿನಗಳ ನಂತರ ನಿತೀಶ್ ರಾಣಾ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಥೇಟ್ 'ಕೆಜಿಎಫ್' ಡೈಲಾಗ್&zwnj;ಗಳಂತೆ ಪ್ರತಿಯೊಬ್ಬರ ಎದೆಗೆ ನಾಟುವಂತಿದೆ. &quot;ಅಮ್ಮ... ಈ ಪ್ರಪಂಚದಲ್ಲಿ ತ್ಯಾಗ ಮಾಡುವುದು ಹೇಗೆ ಮತ್ತು ನಿಜವಾದ ಪ್ರೀತಿ ಅಂದರೆ ಏನು ಅಂತ ನನಗೆ ಕಲಿಸಿಕೊಟ್ಟ ಏಕೈಕ ವ್ಯಕ್ತಿ ನೀನು. ನೀನು ಪಟ್ಟ ಕಷ್ಟವನ್ನು, ಬಿದ್ದ ಶ್ರಮವನ್ನು ಯಾರೂ ನೋಡಲಿಲ್ಲ, ನಿನಗೆ ಯಾರೂ ಧೈರ್ಯ ತುಂಬಲಿಲ್ಲ. ಆದರೂ ನೀನು ಪ್ರತಿಯೊಂದು ನೋವನ್ನು ನಗುತ್ತಾ ನುಂಗಿದೆ.&lt;/p&gt;&lt;h3&gt;&lt;strong&gt;ನನ್ನ ಕನಸಿಗಾಗಿ ನಿನ್ನ ಬದುಕನ್ನೇ ತೇಯ್ದೆ!&lt;/strong&gt;&lt;/h3&gt;&lt;p&gt;ಮುಂದುವರಿದು ತಮ್ಮ ಭಾವನಾತ್ಮಕ ಪ್ರಯಾಣವನ್ನು ಬಿಚ್ಚಿಟ್ಟ ನಿತೀಶ್, ನಿನ್ನ ಮಗ ಈಗ ದೊಡ್ಡವನಾಗಿದ್ದಾನೆ ಅಮ್ಮ. ಸಾಧಿಸುವುದು ಇನ್ನೂ ತುಂಬಾ ಇದೆ. ನಾನು ದಿನವೂ ಬಂದು 'ನನಗೆ ಅದು ಬೇಕು, ಇದು ಬೇಕು' ಎಂದು ನನ್ನ ಕನಸುಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ. ಆದರೆ ನೀನು ಮಾತ್ರ 'ಮಗನೇ ಊಟ ಮಾಡಿದ್ಯಾ? ಆರೋಗ್ಯವಾಗಿದ್ದೀಯಾ?' ಎಂದು ನನ್ನ ಯೋಗಕ್ಷೇಮ ಕೇಳುತ್ತಿದ್ದೆ. ನನ್ನ ಕನಸುಗಳನ್ನು ನನಸು ಮಾಡಲು ನೀನು ನಿನಗಾಗಿ ಏನನ್ನೂ ಕೇಳಲಿಲ್ಲ, ಬದಲಿಗೆ ಪ್ರಪಂಚದ ಎಲ್ಲಾ ಸಂತೋಷವನ್ನು ತಂದು ನನ್ನ ಪಾದದ ಬಳಿ ಇಟ್ಟೆ&quot;* ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಈ ದಿನಕ್ಕಿಂತ ಕರಾಳ ದಿನ ಇನ್ನೊಂದಿಲ್ಲ!&quot;&lt;/strong&gt;&lt;/h3&gt;&lt;p&gt;ನಿತೀಶ್ ರಾಣಾ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ ಶೈಲಿ ಪ್ರತಿಯೊಬ್ಬರ ಎದೆಯನ್ನು ಹಿಂಡುವಂತಿದೆ:&amp;nbsp;ಇವತ್ತು ನನ್ನ ಹತ್ತಿರ ಎಲ್ಲವೂ ಇದೆ ಅಮ್ಮ. ಆದರೆ ನನ್ನ ಸಾಮ್ರಾಜ್ಯವನ್ನು ನೋಡಲು ನನ್ನ ಜೊತೆ ನೀನಿಲ್ಲವಲ್ಲ, ಇದಕ್ಕಿಂತ ಕರಾಳ ದಿನ ನನ್ನ ಜೀವನದಲ್ಲಿ ಇನ್ನೊಂದಿರಲು ಸಾಧ್ಯವಿಲ್ಲ. ಆದರೆ ನಿನಗೆ ಒಂದು ಮಾತು ಕೊಡ್ತೀನಿ ಅಮ್ಮ... ನಿನ್ನ ಮಗ ಎಲ್ಲೂ ನಿಲ್ಲುವುದಿಲ್ಲ. ನಿನಗಾಗಿ ನಾನು ಏನು ಸಾಧಿಸಬೇಕಿತ್ತೋ ಅದನ್ನು ಪಡೆದೇ ಸಾಯ್ತೀನಿ. ನಿನ್ನ ಆಶೀರ್ವಾದ ಸದಾ ನನ್ನ ಮೇಲಿದೆ ಎಂದು ಗೊತ್ತು. ನಿನ್ನ ಮಗನಾಗಿ ಹುಟ್ಟಿದ್ದಕ್ಕೆ ನಾನು ಹೆಮ್ಮೆಪಡುತ್ತೇನೆ, ಹಾಗೇ ನಿನ್ನನ್ನು ಹೆಮ್ಮೆಪಡಿಸುವ ಮಗನಾಗಿಯೇ ಬದುಕುತ್ತೇನೆ! ತಾಯಿಯ ಅಗಲಿಕೆಯ ನೋವಿನ ನಡುವೆಯೂ ಮೈದಾನದಲ್ಲಿ ರನ್&zwnj;ಗಳ ಬೇಟೆಯಾಡುತ್ತಿರುವ ಈ ಸಿಂಹದಂತಹ ಮಗನ ಹೋರಾಟಕ್ಕೆ ಇಡೀ ಕ್ರಿಕೆಟ್ ಲೋಕವೇ ಸಲಾಂ ಎನ್ನುತ್ತಿದೆ!&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/nitish-rana-emotional-post-after-mothers-death-16-days-tribute-kgf-dialogue-viral-cricket-news-bmk/articleshow-ghcizh7"/>
        </item>
        <item>
            <title><![CDATA[ಯಶಸ್ವಿ ಜೈಸ್ವಾಲ್ ಬ್ಯಾನ್? ಯುವ ಬ್ಯಾಟರ್‍‌ಗೆ ಡಿಚ್ಚಿ ಕಂಟಕ..!]]></title>
            <link>https://kannada.asianetnews.com/cricket-sports/yashasvi-jaiswal-to-be-banned-icc-rules-come-into-focus-after-fiery-face-off-gkn/articleshow-gxursya</link>
            <guid isPermaLink="true">https://kannada.asianetnews.com/cricket-sports/yashasvi-jaiswal-to-be-banned-icc-rules-come-into-focus-after-fiery-face-off-gkn/articleshow-gxursya</guid>
            <pubDate>Sun, 23 Aug 2026 19:38:26 +0530</pubDate>
            <description><![CDATA[&lt;p&gt;ಶ್ರೀಲಂಕಾ ವೇಗಿ ಅಸಿತ ಫರ್ನಾಂಡೋಗೆ ಡಿಚ್ಚಿ ಕೊಟ್ಟ ಪ್ರಕರಣದಲ್ಲಿ ಯಶಸ್ವಿ ಜೈಸ್ವಾಲ್ ಅಮಾನತು ಭೀತಿಯಲ್ಲಿದ್ದಾರೆ. ಇದು ಐಸಿಸಿ ಲೆವೆಲ್ 4 ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ 5 ಟೆಸ್ಟ್ ಅಥವಾ 10 ಏಕದಿನ ಪಂದ್ಯಗಳಿಂದ ಇವರು ಬ್ಯಾನ್ ಆಗಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qf3x7vr5r4wvenxs1sng2f,imgname-yashasvi-jaiswal--2--1787494003963.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಲಂಬೊ: &lt;/strong&gt;ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲಿ ಅಗ್ರೆಸೀವ್ ಆಗಿ ವರ್ತಿಸಿದ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಂಕಾ ವೇಗಿ ಅಸಿತ ಫರ್ನಾಂಡೋ ಜೊತೆಗಿನ ಕಿತ್ತಾಟ ಮತ್ತು ಅವರ ಮುಖಕ್ಕೆ ಹೆಲ್ಮೆಟ್&zwnj;ನಿಂದ ಡಿಚ್ಚಿ ಕೊಟ್ಟ ಘಟನೆಯು ಜೈಸ್ವಾಲ್ ಅವರ ವೃತ್ತಿಜೀವನಕ್ಕೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಪಂದ್ಯದ ಮೊದಲ ದಿನ 45 ರನ್ ಗಳಿಸಿ ಆಡುತ್ತಿದ್ದ ಜೈಸ್ವಾಲ್, ಅಸಿತ ಫರ್ನಾಂಡೋ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಬೌಲರ್ ನೀಡಿದ 'ಸೆಂಡ್ ಆಫ್&zwnj;'ನಿಂದ ಕೆರಳಿದ ಜೈಸ್ವಾಲ್, ಪೆವಿಲಿಯನ್ ಕಡೆಗೆ ಹೋಗುವುದನ್ನು ಬಿಟ್ಟು ವಾಪಸ್ ಬೌಲರ್ ಬಳಿಗೆ ಬಂದು ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೆ ಫರ್ನಾಂಡೋ ಅವರ ಮುಖಕ್ಕೆ ಮುಖವನ್ನಿಟ್ಟು ಜೋರಾಗಿ ಡಿಚ್ಚಿ (Head-to-head contact) ನೀಡಿದರು.&lt;/p&gt;&lt;p&gt;5 ಟೆಸ್ಟ್ ಅಥವಾ 10 ಏಕದಿನ ಪಂದ್ಯಗಳಿಂದ ಬ್ಯಾನ್?&lt;/p&gt;&lt;p&gt;ಐಸಿಸಿ (ICC) ಮತ್ತು ಎಂಸಿಸಿ (MCC) ನಿಯಮಗಳ ಪ್ರಕಾರ.. ಎದುರಾಳಿ ಆಟಗಾರನ ಮೇಲೆ ಹಲ್ಲೆ ಮಾಡುವುದು ಅಥವಾ ದೈಹಿಕವಾಗಿ ಕೆಣಕುವುದು 'ಲೆವೆಲ್ 4' (Level 4) ಅಡಿಯಲ್ಲಿ ಬರುವ ಗಂಭೀರ ಅಪರಾಧವಾಗಿದೆ. ಒಂದು ವೇಳೆ ಮ್ಯಾಚ್ ರೆಫರಿ ಇದನ್ನು ಗಂಭೀರವಾಗಿ ಪರಿಗಣಿಸಿದರೆ ಜೈಸ್ವಾಲ್ ಅವರಿಗೆ ಈ ಕೆಳಗಿನ ಶಿಕ್ಷೆಗಳಾಗಬಹುದು..&lt;/p&gt;&lt;ul&gt; &lt;li&gt;5 ಟೆಸ್ಟ್ ಪಂದ್ಯಗಳಿಂದ ನಿಷೇಧ&lt;/li&gt; &lt;li&gt;ಅಥವಾ 10 ಏಕದಿನ ಪಂದ್ಯಗಳಿಂದ ನಿಷೇಧ&lt;/li&gt; &lt;li&gt;ಅತ್ಯಂತ ಗಂಭೀರ ಹಿಂಸಾಚಾರ ಎಂದು ಸಾಬೀತಾದರೆ ಜೀವಮಾನದ ನಿಷೇಧ ಹೇರಲು ಕೂಡ ಅವಕಾಶವಿದೆ&lt;/li&gt;&lt;/ul&gt;&lt;h2&gt;&lt;strong&gt;ಜೈಸ್ವಾಲ್&zwnj;ಗೆ ಇದು ಮೊದಲಲ್ಲ&lt;/strong&gt;&lt;/h2&gt;&lt;p&gt;ಯಶಸ್ವಿ ಜೈಸ್ವಾಲ್ ಮೈದಾನದಲ್ಲಿ ಇಂತಹ ವರ್ತನೆ ತೋರುತ್ತಿರುವುದು ಇದೇ ಮೊದಲೇನಲ್ಲ. 2022ರ ದುಲೀಪ್ ಟ್ರೋಫಿ ಪಂದ್ಯದಲ್ಲೂ ಅವರು ರವಿ ತೇಜ ಎಂಬ ಆಟಗಾರನ ಜೊತೆ ಇದೇ ರೀತಿ ಕಿತ್ತಾಟ ನಡೆಸಿದ್ದರು. ಅಂದು ಅಂಪೈರ್ ಎಚ್ಚರಿಕೆ ನೀಡಿದರೂ ಕೇಳದಿದ್ದಾಗ ವೆಸ್ಟ್ ಝೋನ್ ತಂಡದ ನಾಯಕ ಅಜಿಂಕ್ಯ ರಹಾನೆ ಅವರು ಸ್ವತಃ ಜೈಸ್ವಾಲ್ ಅವರನ್ನು ಮೈದಾನದಿಂದ ಹೊರಕ್ಕೆ ಕಳುಹಿಸಿ ಶಿಸ್ತು ಕ್ರಮ ಕೈಗೊಂಡಿದ್ದರು.&lt;/p&gt;&lt;p&gt;ಈಗ ಕೊಲಂಬೊ ಟೆಸ್ಟ್&zwnj;ನಲ್ಲಿ ನಡೆದ ಘಟನೆಯ ವಿಡಿಯೋಗಳನ್ನು ಪರಿಶೀಲಿಸುತ್ತಿರುವ ಮ್ಯಾಚ್ ರೆಫರಿ ಶೀಘ್ರದಲ್ಲೇ ತಮ್ಮ ತೀರ್ಪನ್ನು ಪ್ರಕಟಿಸಲಿದ್ದಾರೆ. ಟೀಂ ಇಂಡಿಯಾದ ಉದಯೋನ್ಮುಖ ತಾರೆಯಾಗಿರುವ ಜೈಸ್ವಾಲ್ ಅವರ ಈ ಆಕ್ರಮಣಕಾರಿ ವರ್ತನೆ ಈಗ ಅವರ ಸ್ಥಾನಕ್ಕೇ ಕಂಟಕ ತಂದೊಡ್ಡಿದೆ.&lt;/p&gt;&lt;p&gt;Conflict between jaiswal and SL players pic.twitter.com/96B5HPsJtJ&lt;/p&gt;&lt;p&gt;&mdash; GOAT&sup1;⁸  (@SaviorKohli) August 23, 2026&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/yashasvi-jaiswal-to-be-banned-icc-rules-come-into-focus-after-fiery-face-off-gkn/articleshow-gxursya"/>
        </item>
        <item>
            <title><![CDATA[ಪಂತ್ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ಸ್ ಕೊಟ್ಟ ಕೋಚ್! ಮತ್ತೆ ಬ್ಯಾಟಿಂಗ್‌ಗೆ ಬರ್ತಾರಾ?]]></title>
            <link>https://kannada.asianetnews.com/cricket-sports/coach-sitanshu-kotak-shares-major-updates-on-rishab-pant-injury-will-he-return-to-bat-gkn/articleshow-ie9f7fp</link>
            <guid isPermaLink="true">https://kannada.asianetnews.com/cricket-sports/coach-sitanshu-kotak-shares-major-updates-on-rishab-pant-injury-will-he-return-to-bat-gkn/articleshow-ie9f7fp</guid>
            <pubDate>Sun, 23 Aug 2026 22:57:47 +0530</pubDate>
            <description><![CDATA[&lt;p&gt;ಕೊಲಂಬೊ ಟೆಸ್ಟ್&zwnj;ನ ಮೊದಲ ದಿನ ಕೈಗೆ ಪೆಟ್ಟು ಬಿದ್ದ ಕಾರಣ ರಿಷಭ್ ಪಂತ್ ಮೈದಾನ ತೊರೆದಿದ್ದರೂ, ಅವರು ಎರಡನೇ ದಿನ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಕೋಚ್ ಖಚಿತಪಡಿಸಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಸಿಡಿಸಿದ ಶತಕದ (117) ನೆರವಿನಿಂದ ಭಾರತ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qtkg0tkj7b17nf5cc4qmmd,imgname-rishabh-pant-1787506049049.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಲಂಬೊ: &lt;/strong&gt;ಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ತಂಡಕ್ಕೆ ಆತಂಕ ಎದುರಾಗಿದೆ. ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದರೂ ಬ್ಯಾಟಿಂಗ್ ಕೋಚ್ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಭಾರತದ ಇನ್ನಿಂಗ್ಸ್&zwnj;ನ 58ನೇ ಓವರ್&zwnj;ನಲ್ಲಿ ಘಟನೆ ನಡೆದಿದೆ. ಲಂಕಾ ವೇಗಿ ಲಹಿರು ಕುಮಾರ ಎಸೆದ ಚೆಂಡು ರಿಷಭ್ ಪಂತ್ ಅವರ ಕೈಗೆ ಬಲವಾಗಿ ಬಡಿಯಿತು. ಚೆಂಡು ತಗುಲಿದ ತಕ್ಷಣ ಪಂತ್ ತೀವ್ರ ನೋವಿನಿಂದ ನರಳಿದರು. ತಕ್ಷಣವೇ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದರೂ ಪಂತ್ ಅವರಿಗೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಕೇವಲ 3 ರನ್ ಗಳಿಸಿದ್ದ ಪಂತ್ 'ರಿಟೈರ್ಡ್ ಹರ್ಟ್' ಆಗಿ ಪೆವಿಲಿಯನ್ ಸೇರಿದರು.&lt;/p&gt;&lt;h2&gt;&lt;strong&gt;ಬ್ಯಾಟಿಂಗ್ ಕೋಚ್ ಅಪ್&zwnj;ಡೇಟ್&lt;/strong&gt;&lt;/h2&gt;&lt;p&gt;ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ರಿಷಭ್ ಪಂತ್ ನಾಳೆ ಬ್ಯಾಟಿಂಗ್ ಮಾಡಲು ಫಿಟ್ ಆಗಿರುತ್ತಾರೆ ಎಂದು ತಿಳಿಸಿದ್ದಾರೆ. ಗಾಯ ಅಷ್ಟೊಂದು ಗಂಭೀರವಾಗಿಲ್ಲ ಎಂಬ ಸುಳಿವು ಸಿಕ್ಕಿದ್ದು, ಎರಡನೇ ದಿನ ಪಂತ್ ಕ್ರೀಸ್&zwnj;ಗೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.&lt;/p&gt;&lt;p&gt;ಕನ್ನಡಿಗ ಪಡಿಕ್ಕಲ್ 193 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 117 ರನ್ ಗಳಿಸಿ ಮಿಂಚಿದರು. ಇದು ಅವರ ಸತತ ಎರಡನೇ ಟೆಸ್ಟ್ ಶತಕವಾಗಿದೆ. ನಾಯಕ ಶುಭಮನ್ ಗಿಲ್ 50 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 45 ಮತ್ತು ರವೀಂದ್ರ ಜಡೇಜಾ 43 ರನ್ ಕಾಣಿಕೆ ನೀಡಿದರು. ಕೆ.ಎಲ್ ರಾಹುಲ್ 18 ರನ್&zwnj;ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಅಸಿತ ಫರ್ನಾಂಡೋ 3 ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಸವಾಲೊಡ್ಡಿದರು. ಸದ್ಯ ಕ್ರೀಸ್&zwnj;ನಲ್ಲಿ ಧ್ರುವ್ ಜುರೇಲ್ (7*) ಮತ್ತು ಪದಾರ್ಪಣೆ ಪಂದ್ಯವಾಡುತ್ತಿರುವ ಸಾರಂಶ್ ಜೈನ್ (4*) ಬ್ಯಾಟಿಂಗ್ ನಡೆಸುತ್ತಿದ್ದಾರೆ. ಎರಡನೇ ದಿನ ಪಂತ್ ಮರಳಿ ಬ್ಯಾಟಿಂಗ್&zwnj;ಗೆ ಬಂದರೆ ಭಾರತ ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದೆ.&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/coach-sitanshu-kotak-shares-major-updates-on-rishab-pant-injury-will-he-return-to-bat-gkn/articleshow-ie9f7fp"/>
        </item>
        <item>
            <title><![CDATA[ಲಂಕಾ ಆಟಗಾರನಿಗೆ ಮೈದಾನದಲ್ಲೇ ಡಿಚ್ಚಿ ಕೊಟ್ಟ ಜೈಸ್ವಾಲ್! ಔಟ್ ಆದ ಬೆನ್ನಲ್ಲೇ ಭಾರೀ ಗಲಾಟೆ!]]></title>
            <link>https://kannada.asianetnews.com/cricket-sports/jaiswal-head-butts-sri-lankan-player-on-field-a-fierce-fight-breaks-out-right-after-his-dismissal-gkn/articleshow-klqibuy</link>
            <guid isPermaLink="true">https://kannada.asianetnews.com/cricket-sports/jaiswal-head-butts-sri-lankan-player-on-field-a-fierce-fight-breaks-out-right-after-his-dismissal-gkn/articleshow-klqibuy</guid>
            <pubDate>Sun, 23 Aug 2026 18:02:28 +0530</pubDate>
            <description><![CDATA[&lt;p&gt;ಕೊಲಂಬೊ ಟೆಸ್ಟ್&zwnj;ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಅಸಿತ ಫರ್ನಾಂಡೋ ನಡುವೆ ಮೈದಾನದಲ್ಲೇ ಕಿತ್ತಾಟ ನಡೆದಿದೆ. ಔಟ್ ಆದ ಬಳಿಕ ಲಂಕಾ ಬೌಲರ್ ನೀಡಿದ ಸೈಂಡ್ ಆಫ್&zwnj;ಗೆ ಕೆರಳಿದ ಜೈಸ್ವಾಲ್, ಆತನಿಗೆ ಡಿಚ್ಚಿ ಕೊಟ್ಟು ಆಕ್ರೋಶ ಹೊರಹಾಕಿದರು. ಬಳಿಕ ಲಂಕಾ ನಾಯಕ ಮಧ್ಯಪ್ರವೇಶಿಸಿ ಗಲಾಟೆ ಸಮಾಧಾನಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0q9nprnnh5raj6w57v04ssm,imgname-yashasvi-jaiswal-1787488295701.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಲಂಬೊ:&lt;/strong&gt; ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಮೈದಾನದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಟೀಂ ಇಂಡಿಯಾದ ಓಪನರ್ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ವೇಗಿ ಅಸಿತ ಫರ್ನಾಂಡೋ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಮೊದಲ ಬ್ಯಾಟಿಂಗ್ ಮಾಡಿದ ಭಾರತಕ್ಕೆ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಉತ್ತಮ ಆರಂಭ ನೀಡಲು ಪ್ರಯತ್ನಿಸಿದರು. ಇನ್ನಿಂಗ್ಸ್&zwnj;ನ 17ನೇ ಓವರ್&zwnj;ನಲ್ಲಿ ಅಸಿತ ಫರ್ನಾಂಡೋ ಎಸೆತಗಳನ್ನು ದಂಡಿಸಿದ ಜೈಸ್ವಾಲ್ ಸತತ ಮೂರು ಬೌಂಡರಿಗಳನ್ನು ಬಾರಿಸಿದ್ದರು. ಇದರಿಂದ ಹತಾಶರಾಗಿದ್ದ ಫರ್ನಾಂಡೋ ಅದೇ ಓವರ್&zwnj;ನ ಕೊನೆಯ ಎಸೆತದಲ್ಲಿ ಜೈಸ್ವಾಲ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.&lt;/p&gt;&lt;h2&gt;&lt;strong&gt;ಜೈಸ್ವಾಲ್ ಆಕ್ರೋಶ&lt;/strong&gt;&lt;/h2&gt;&lt;p&gt;ಜೈಸ್ವಾಲ್ ಕ್ಲೀನ್ ಬೌಲ್ಡ್ ಆಗುತ್ತಿದ್ದಂತೆ ಅಸಿತ ಫರ್ನಾಂಡೋ ಅತಿಯಾದ ಆಕ್ರೋಶದಿಂದ ಭಾರತೀಯ ಬ್ಯಾಟರ್&zwnj;ಗೆ 'ಸೈಂಡ್ ಆಫ್' (Send-off) ನೀಡಿದರು. ಇದರಿಂದ ಕುಪಿತಗೊಂಡ ಜೈಸ್ವಾಲ್ ಪೆವಿಲಿಯನ್ ಕಡೆಗೆ ಹೋಗುವುದನ್ನು ಬಿಟ್ಟು ವಾಪಸ್ ತಿರುಗಿ ಫರ್ನಾಂಡೋ ಬಳಿಗೆ ಬಂದರು. ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಜೈಸ್ವಾಲ್ ತಮ್ಮ ಹೆಲ್ಮೆಟ್&zwnj;ನಿಂದ ಲಂಕಾ ಬೌಲರ್&zwnj;ನ ಮುಖಕ್ಕೆ ತಗುಲುವಂತೆ 'ಡಿಚ್ಚಿ' (Head bump) ಕೊಟ್ಟರು. ಮೈದಾನದಲ್ಲೇ ನಡೆದ ಈ ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.&lt;/p&gt;&lt;p&gt;ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಶ್ರೀಲಂಕಾ ತಂಡದ ನಾಯಕ ಧನಂಜಯ ಡಿ ಸಿಲ್ವಾ ತಕ್ಷಣ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಜೈಸ್ವಾಲ್ ಅವರನ್ನು ಪೆವಿಲಿಯನ್ ಕಡೆಗೆ ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಜೈಸ್ವಾಲ್ ತಮ್ಮ ಇನ್ನಿಂಗ್ಸ್&zwnj;ನಲ್ಲಿ 9 ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿದ್ದರು.&lt;/p&gt;&lt;p&gt;ಐಸಿಸಿ ನಿಯಮಗಳ ಪ್ರಕಾರ ಮೈದಾನದಲ್ಲಿ ಎದುರಾಳಿ ಆಟಗಾರನ ಜೊತೆ ದೈಹಿಕ ಸಂಪರ್ಕ ಹೊಂದುವುದು ಗಂಭೀರ ತಪ್ಪಾಗಿದೆ. ಜೈಸ್ವಾಲ್ ಅವರ ಈ 'ಹೆಡ್ ಬಂಪ್' ವರ್ತನೆಗಾಗಿ ಮ್ಯಾಚ್ ರೆಫರಿ ಅವರಿಗೆ ದಂಡ ಅಥವಾ ಡಿಮೆರಿಟ್ ಪಾಯಿಂಟ್ಸ್ ನೀಡುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಸಾರಂಶ್ ಜೈನ್ ಪದಾರ್ಪಣೆ&lt;/strong&gt;&lt;/h2&gt;&lt;p&gt;ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಬದಲಾವಣೆ ಮಾಡಿಕೊಂಡಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಸೋಂಕಿನಿಂದ (Infection) ಬಳಲುತ್ತಿರುವ ಕಾರಣ ತಂಡದಿಂದ ಹೊರಬಿದ್ದಿದ್ದು, ಅವರ ಸ್ಥಾನದಲ್ಲಿ ಯುವ ಆಟಗಾರ ಸಾರಂಶ್ ಜೈನ್ ಟೆಸ್ಟ್ ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿದ್ದಾರೆ. ಕೆ.ಎಲ್ ರಾಹುಲ್ 18 ರನ್ ಗಳಿಸಿ ನಿರಾಸೆ ಮೂಡಿಸಿದರು.&lt;/p&gt;&lt;p&gt; THINGS GET HEATED! &amp;nbsp;Yashasvi Jaiswal and Asitha Fernando exchange words as tensions rise in the middle. &amp;nbsp;Watch #SLvIND, 2nd Test, LIVE NOW on Sony Sports Network TV channels &amp;amp; Sony LIV.#SonySportsNetwork #SonyLIV #BeautifulGameOfTestCricket pic.twitter.com/7qJrORjx8V&lt;/p&gt;&lt;p&gt;&mdash; Sony Sports Network (@SonySportsNetwk) August 23, 2026&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/jaiswal-head-butts-sri-lankan-player-on-field-a-fierce-fight-breaks-out-right-after-his-dismissal-gkn/articleshow-klqibuy"/>
        </item>
        <item>
            <title><![CDATA[ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಮಾಜಿ ಆರ್‌ಸಿಬಿ ಆಟಗಾರ; ಸತತ ಮೂರು ಐಪಿಎಲ್ ಗೆದ್ದ ಭಾರತದ ಏಕೈಕ ಸ್ಪಿನ್ನರ್!]]></title>
            <link>https://kannada.asianetnews.com/sports/indian-spinner-karn-sharma-announces-retirement-from-all-forms-of-cricket-career-details-ipl-record/articleshow-lis9xd3</link>
            <guid isPermaLink="true">https://kannada.asianetnews.com/sports/indian-spinner-karn-sharma-announces-retirement-from-all-forms-of-cricket-career-details-ipl-record/articleshow-lis9xd3</guid>
            <pubDate>Sun, 23 Aug 2026 16:34:44 +0530</pubDate>
            <description><![CDATA[ಭಾರತದ ಮಾಜಿ ಸ್ಪಿನ್ನರ್ ಕರಣ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಸೀಮಿತ ಅವಕಾಶಗಳನ್ನು ಪಡೆದರೂ, ಐಪಿಎಲ್&zwnj;ನಲ್ಲಿ ಸತತ ಮೂರು ವರ್ಷ ಮೂರು ವಿಭಿನ್ನ ತಂಡಗಳೊಂದಿಗೆ ಟ್ರೋಫಿ ಗೆದ್ದ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0q4ge0xh6dpav6dgytt53qk,imgname-indian-cricketer-karn-sharma-retired-1787482880029.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಮಾಜಿ ಸ್ಪಿನ್ನರ್ ಕರಣ್ ಶರ್ಮಾ ಅವರು ಕ್ರಿಕೆಟ್&zwnj;ನ ಎಲ್ಲಾ ಮಾದರಿಗಳಿಗೂ ವಿದಾಯ ಹೇಳಿದ್ದಾರೆ. ಭಾರತ ತಂಡಕ್ಕಾಗಿ ಒಂದು ಟೆಸ್ಟ್, ಎರಡು ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಆಡಿರುವ ಕರಣ್, ಶನಿವಾರ ರಾತ್ರಿ ಉತ್ತರ ಪ್ರದೇಶ ಟಿ20 ಲೀಗ್ ಪಂದ್ಯದ ನಂತರ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು. 2007-08ರ ದೇಶೀಯ ಸೀಸನ್&zwnj;ನಲ್ಲಿ ಕರಣ್ ತಮ್ಮ ಫಸ್ಟ್-ಕ್ಲಾಸ್, ಲಿಸ್ಟ್-ಎ ಮತ್ತು ಟಿ20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ್ದರು. ಆರಂಭದಲ್ಲಿ ಆಲ್&zwnj;ರೌಂಡರ್ ಆಗಿ ಗುರುತಿಸಿಕೊಂಡಿದ್ದ ಅವರು, ಆಡಿದ ಮೊದಲ ರಣಜಿ ಪಂದ್ಯದಲ್ಲೇ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು.&lt;/p&gt;&lt;h2&gt;&lt;strong&gt;ಅನ್&zwnj;ಕ್ಯಾಪ್ಡ್ ಆಟಗಾರನಿಗೆ ಸಿಕ್ಕ ಅತಿ ದೊಡ್ಡ ಮೊತ್ತ&lt;/strong&gt;&lt;/h2&gt;&lt;p&gt;ಆದರೆ, ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಿದ್ದು 2012-13ರ ಸೀಸನ್&zwnj;ನಲ್ಲಿ. ಆ ಸೀಸನ್&zwnj;ನ ಮೂರು ರಣಜಿ ಪಂದ್ಯಗಳಿಂದ 19.04ರ ಸರಾಸರಿಯಲ್ಲಿ 21 ವಿಕೆಟ್&zwnj;ಗಳನ್ನು ಪಡೆದರು. ಈ ಪ್ರದರ್ಶನಕ್ಕಾಗಿ ಬಿಸಿಸಿಐ ಅವರಿಗೆ 'ಅತ್ಯುತ್ತಮ ಅಂಡರ್-25 ಕ್ರಿಕೆಟಿಗ' ಪ್ರಶಸ್ತಿ ನೀಡಿ ಗೌರವಿಸಿತು. ಈ ಯಶಸ್ಸು ಅವರಿಗೆ ಐಪಿಎಲ್ ಬಾಗಿಲು ತೆರೆಯಿತು. 2014ರ ಐಪಿಎಲ್ ಹರಾಜಿನಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ತಂಡವು ಕರಣ್ ಶರ್ಮಾ ಅವರನ್ನು ಬರೋಬ್ಬರಿ 3.75 ಕೋಟಿ ರೂಪಾಯಿಗೆ ಖರೀದಿಸಿತು. ಆ ಸಮಯದಲ್ಲಿ, ಭಾರತದ ಯಾವುದೇ ಅನ್&zwnj;ಕ್ಯಾಪ್ಡ್ ಆಟಗಾರನಿಗೆ ಸಿಕ್ಕ ಅತಿ ದೊಡ್ಡ ಮೊತ್ತ ಇದಾಗಿತ್ತು.&lt;/p&gt;&lt;h2&gt;&lt;strong&gt;ರೋಹಿತ್ 264 ರನ್ ಗಳಿಸಿದ ಪಂದ್ಯದಲ್ಲೇ ಕರಣ್ ಪದಾರ್ಪಣೆ&lt;/strong&gt;&lt;/h2&gt;&lt;p&gt;ದೇಶೀಯ ಕ್ರಿಕೆಟ್ ಮತ್ತು ಐಪಿಎಲ್&zwnj;ನಲ್ಲಿನ ಸ್ಥಿರ ಪ್ರದರ್ಶನ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯಿತು. ಇದರ ಫಲವಾಗಿ, 2014ರ ಇಂಗ್ಲೆಂಡ್ ಪ್ರವಾಸಕ್ಕೆ ಭಾರತದ ಸೀಮಿತ ಓವರ್&zwnj;ಗಳ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿತು. ಈ ಸರಣಿಯಲ್ಲೇ ಅವರು ಟಿ-20ಗೆ ಪಾದಾರ್ಪಣೆ ಮಾಡಿ, ಜೋ ರೂಟ್ ವಿಕೆಟ್ ಪಡೆದರು. ಇದುವೇ ಟಿ20ಯಲ್ಲಿ ಅವರ ಏಕೈಕ ವಿಕೆಟ್. ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದರು. ರೋಹಿತ್ ಶರ್ಮಾ 264 ರನ್ ಗಳಿಸಿದ ಐತಿಹಾಸಿಕ ಪಂದ್ಯದಲ್ಲೇ ಕರಣ್ ಏಕದಿನಕ್ಕೆ ಪದಾರ್ಪಣೆ ಮಾಡಿದರು. ಆದರೆ ಆಡಿದ ಎರಡು ಪಂದ್ಯಗಳಲ್ಲಿ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ.&lt;/p&gt;&lt;p&gt;ಅದೇ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್&zwnj;ನಲ್ಲಿ ಅವರು ಟೆಸ್ಟ್ ಪಾದಾರ್ಪಣೆ ಮಾಡಿದರು. ಪಂದ್ಯದ ಎರಡೂ ಇನ್ನಿಂಗ್ಸ್&zwnj;ಗಳಲ್ಲಿ ತಲಾ ಎರಡು ವಿಕೆಟ್ ಪಡೆದು ಒಟ್ಟು ನಾಲ್ಕು ವಿಕೆಟ್ ಗಳಿಸಿದರು. ದುರದೃಷ್ಟವಶಾತ್, ಇದೇ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಯಿತು. 2015ರಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ, ಗಾಯದ ಕಾರಣದಿಂದಾಗಿ ಅವರು ತಂಡದಿಂದ ಹೊರಗುಳಿಯಬೇಕಾಯಿತು. ನಂತರ ಅವರಿಗೆ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ.&lt;/p&gt;&lt;h2&gt;&lt;strong&gt;ಮೂರು ಐಪಿಎಲ್ ಟ್ರೋಫಿಗಳು&lt;/strong&gt;&lt;/h2&gt;&lt;p&gt;ಅಂತರರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಹೆಚ್ಚು ಮಿಂಚಲು ಸಾಧ್ಯವಾಗದಿದ್ದರೂ, ಐಪಿಎಲ್&zwnj;ನಲ್ಲಿ ಕರಣ್ ಶರ್ಮಾ ದೊಡ್ಡ ಯಶಸ್ಸು ಕಂಡರು. ಸತತ ಮೂರು ವರ್ಷ, ಮೂರು ವಿಭಿನ್ನ ತಂಡಗಳೊಂದಿಗೆ ಐಪಿಎಲ್ ಟ್ರೋಫಿ ಗೆದ್ದ ಮೊದಲ ಆಟಗಾರ ಎಂಬ ಅಪರೂಪದ ದಾಖಲೆಯನ್ನು ಅವರು ನಿರ್ಮಿಸಿದರು. 2016ರಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್, 2017ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ ಅವರು ಈ ಸಾಧನೆ ಮಾಡಿದರು. ಇತ್ತೀಚಿನ ವರ್ಷಗಳಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/sports/indian-spinner-karn-sharma-announces-retirement-from-all-forms-of-cricket-career-details-ipl-record/articleshow-lis9xd3"/>
        </item>
        <item>
            <title><![CDATA[Cricket: ವೈಭವ್ ಸೂರ್ಯವಂಶಿ ಟೆಸ್ಟ್ ಆಡಲಿ ಅಂತೀರಾ? ‘ದಿ ವಾಲ್’ ರಾಹುಲ್ ದ್ರಾವಿಡ್ ಹೇಳಿದ ಮಾತು ಈಗ ವೈರಲ್!]]></title>
            <link>https://kannada.asianetnews.com/cricket-sports/vaibhav-suryavanshi-test-cricket-future-rahul-dravid-clear-statement-young-cricketer-test-match-bmk/articleshow-q2g2yst</link>
            <guid isPermaLink="true">https://kannada.asianetnews.com/cricket-sports/vaibhav-suryavanshi-test-cricket-future-rahul-dravid-clear-statement-young-cricketer-test-match-bmk/articleshow-q2g2yst</guid>
            <pubDate>Sat, 22 Aug 2026 16:20:53 +0530</pubDate>
            <description><![CDATA[ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಹತ್ವದ ಸಲಹೆ ನೀಡಿದ್ದಾರೆ. ಕೇವಲ 15 ವರ್ಷದ ವೈಭವ್, ಟೆಸ್ಟ್ ಕ್ರಿಕೆಟ್&zwnj;ಗೆ ಆತುರಪಡದೆ ತಾಳ್ಮೆಯಿಂದಿರಬೇಕು ಮತ್ತು ಅನುಭವ ಗಳಿಸಬೇಕು ಎಂದು ದ್ರಾವಿಡ್ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0mhftaq2fs5zb8p19pm2f0j,imgname-vaibhav-sooryavanshi-1787395828055.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್&zwnj;ನ ಉದಯೋನ್ಮುಖ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಪ್ರಸ್ತುತ ಜಾಗತಿಕ ಕ್ರಿಕೆಟ್ ಅಂಗಳದಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ತಮ್ಮ ಆಕ್ರಮಣಕಾರಿ ಶೈಲಿಯ ಆಟದಿಂದ ವಿರೋಧಿ ಬೌಲರ್&zwnj;ಗಳ ವಿರುದ್ಧ ಮೇಲುಗೈ ಸಾಧಿಸಿದ್ದ ವೈಭವ್, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅವರ ಈ ಸ್ಫೋಟಕ ಪ್ರದರ್ಶನವನ್ನು ಕಂಡ ಅಭಿಮಾನಿಗಳು ಅವರನ್ನು ತಕ್ಷಣವೇ ಭಾರತದ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಸೇರ್ಪಡೆಗೊಳಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ದ್ರಾವಿಡ ಸಲಹೆ ಏನು?&amp;nbsp;&lt;/strong&gt;&lt;/h2&gt;&lt;p&gt;ಮುಂದಿನ ಹಂತವಾಗಿ ವೈಭವ್ ಸೂರ್ಯವಂಶಿ ಅವರು ಭಾರತದ ಪ್ರತಿಷ್ಠಿತ ಪ್ರಥಮ ದರ್ಜೆ (First-Class) ಕ್ರಿಕೆಟ್ ಟೂರ್ನಿಯಾದ 'ದುಲೀಪ್ ಟ್ರೋಫಿ'ಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ತರಬೇತುದಾರ 'ದಿ ವಾಲ್' ರಾಹುಲ್ ದ್ರಾವಿಡ್ ಅವರು ಯುವ ಆಟಗಾರನಿಗೆ ಅತ್ಯಂತ ಅಮೂಲ್ಯವಾದ ಹಾಗೂ ತಾಂತ್ರಿಕ ಕ್ರಿಕೆಟಿಂಗ್ ಸಲಹೆಯನ್ನು ನೀಡಿದ್ದಾರೆ.&lt;/p&gt;&lt;h3&gt;&lt;strong&gt;ರಾಹುಲ್ ದ್ರಾವಿಡ್ ನೀಡಿರುವ ತಾಂತ್ರಿಕ ಹಾಗೂ ಮಾನಸಿಕ ಸಲಹೆಗಳು!&lt;/strong&gt;&lt;/h3&gt;&lt;p&gt;&lt;strong&gt;ಆಟದ ಸಮತೋಲನ;&lt;/strong&gt; ಪ್ರತಿಯೊಬ್ಬ ಯುವ ಕ್ರಿಕೆಟಿಗನೂ ತನ್ನ ಆಟದ ಶೈಲಿಯಲ್ಲಿ ಸೂಕ್ತ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ವೈಭವ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಂತಹ ಉನ್ನತ ಮಟ್ಟದ ಟೂರ್ನಿಗಳ ಮೂಲಕ ಬಿಳಿ ಚೆಂಡಿನ (White-Ball/Limited Overs) ಕ್ರಿಕೆಟ್&zwnj;ನಲ್ಲಿ ಆಡುವ ಉತ್ತಮ ಅನುಭವ ಹಾಗೂ ಎಕ್ಸ್&zwnj;ಪೋಸರ್ ಪಡೆಯುತ್ತಿರುವುದು ಅವರ ವೃತ್ತಿಜೀವನಕ್ಕೆ ಒಳ್ಳೆಯ ಬೆಳವಣಿಗೆಯಾಗಿದೆ.&lt;/p&gt;&lt;h3&gt;&lt;strong&gt;ವಯಸ್ಸು ಮತ್ತು ತಾಳ್ಮೆ (Age Factor &amp;amp; Patience);&lt;/strong&gt;&lt;/h3&gt;&lt;p&gt;ವೈಭವ್&zwnj;ಗೆ ಪ್ರಸ್ತುತ ಕೇವಲ 15 ವರ್ಷ ವಯಸ್ಸಾಗಿದೆ. ಈ ಹಂತದಲ್ಲಿ ಮ್ಯಾನೇಜ್&zwnj;ಮೆಂಟ್, ಅಭಿಮಾನಿಗಳು ಮತ್ತು ಆಯ್ಕೆದಾರರು ಅವರ ವಿಷಯದಲ್ಲಿ ಅತ್ಯಂತ ತಾಳ್ಮೆಯಿಂದಿರಬೇಕು. ಪ್ರತಿಯೊಬ್ಬ ಅಂತಾರಾಷ್ಟ್ರೀಯ ಆಟಗಾರನ ವೃತ್ತಿಜೀವನದಲ್ಲೂ ಏರಿಳಿತಗಳು (Peaks and Troughs) ಸಹಜ. ವೈಭವ್ ಕೂಡ ಈ ಪ್ರಕ್ರಿಯೆಯನ್ನು ಅನುಭವಿಸಿ, ಸೋಲು-ಗೆಲುವುಗಳಿಂದ ಕಲಿಯಲು ಅವರಿಗೆ ಸಾಕಷ್ಟು ಸಮಯ ಮತ್ತು ಅವಕಾಶ ನೀಡಬೇಕು.&lt;/p&gt;&lt;p&gt;&lt;strong&gt;ರೆಡ್-ಬಾಲ್ ತಂತ್ರಜ್ಞಾನ ಮತ್ತು ಅನುಭವ;&lt;/strong&gt; ESPN cricinfo ಜೊತೆ ಮಾತನಾಡಿದ ದ್ರಾವಿಡ್, ವೈಭವ್ ರೆಡ್-ಬಾಲ್ ಕ್ರಿಕೆಟ್&zwnj;ಗೆ ಸಂಪೂರ್ಣವಾಗಿ ಒಡ್ಡಿಕೊಳ್ಳಲು ಇನ್ನು ಕಾಲಾವಕಾಶದ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸುದೀರ್ಘ ಮಾದರಿಯ ಕ್ರಿಕೆಟ್&zwnj;ಗೆ ಅಗತ್ಯವಿರುವ ಕ್ರೀಸ್ ಆಕ್ರಮಣ , ತಾಂತ್ರಿಕ ಶಿಸ್ತು, ಶಾಟ್ ಆಯ್ಕೆ ಮತ್ತು ರಣಜಿ ಅಥವಾ ದುಲೀಪ್ ಟ್ರೋಫಿಯಂತಹ ಪ್ರಥಮ ದರ್ಜೆ ಪಂದ್ಯಗಳಲ್ಲಿ ಸುದೀರ್ಘ ಇನ್ನಿಂಗ್ಸ್ ಕಟ್ಟುವ ಅನುಭವ ಅವರಿಗೆ ಇನ್ನಷ್ಟು ಸಿಗಬೇಕಿದೆ.&lt;/p&gt;&lt;h3&gt;&lt;strong&gt;ಮುಂಬರುವ ದಿನದಲ್ಲಿ ಅವಕಾಶ!&lt;/strong&gt;&lt;/h3&gt;&lt;p&gt;ಸುದೀರ್ಘ ಸ್ವರೂಪದ ಕ್ರಿಕೆಟ್&zwnj;ನಲ್ಲಿ ಯಶಸ್ವಿಯಾಗಲು ವೈಭವ್&zwnj;ಗೆ ಮುಂಬರುವ ದಿನಗಳಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಹೀಗಾಗಿ ತಕ್ಷಣಕ್ಕೆ ಟೆಸ್ಟ್ ತಂಡಕ್ಕೆ ಸೇರಿಸುವ ಗಡಿಬಿಡಿ ಮಾಡದೆ, ಕೆಂಪು ಚೆಂಡಿನ ಕ್ರಿಕೆಟ್&zwnj;ನಲ್ಲಿ ಅವರಿಗೆ ಅಗತ್ಯವಿರುವ ಪಕ್ವತೆ (Maturity) ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಅವಕಾಶ ಮಾಡಿಕೊಡುವುದು ಸೂಕ್ತ ಎಂಬುದು ದ್ರಾವಿಡ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.&lt;/p&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/vaibhav-suryavanshi-test-cricket-future-rahul-dravid-clear-statement-young-cricketer-test-match-bmk/articleshow-q2g2yst"/>
        </item>
        <item>
            <title><![CDATA[ಕೊಲೊಂಬೊ ಟೆಸ್ಟ್: ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು, WTC ಫೈನಲ್ ಆಸೆಯೂ ಜೀವಂತ]]></title>
            <link>https://kannada.asianetnews.com/cricket-sports/india-vs-sri-lanka-2nd-test-shubman-gill-team-eyes-first-overseas-series-win-in-3-years-kvn/articleshow-qesloa0</link>
            <guid isPermaLink="true">https://kannada.asianetnews.com/cricket-sports/india-vs-sri-lanka-2nd-test-shubman-gill-team-eyes-first-overseas-series-win-in-3-years-kvn/articleshow-qesloa0</guid>
            <pubDate>Sun, 23 Aug 2026 09:31:16 +0530</pubDate>
            <description><![CDATA[3 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್&zwnj;ಗೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದಿರುವ ಗಿಲ್ ಪಡೆ, ಕೊಲೊಂಬೊದಲ್ಲಿಯೂ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ವಿಶ್ವಾಸದಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0cyyjfksjavhb2fneq6a5st,imgname-20260819211l-1787141507567.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಲೊಂಬೊ: ತವರಿನಾಚೆ 3 ವರ್ಷಗಳಲ್ಲಿ ಮೊದಲ ಟೆಸ್ಟ್&zwnj; ಸರಣಿ ಗೆಲುವಿನ ನಿರೀಕ್ಷೆಯೊಂದಿಗೆ, ಭಾನುವಾರದಿಂದ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್&zwnj;ನಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಮೊದಲ ಟೆಸ್ಟ್&zwnj;ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಶುಭ್&zwnj;ಮನ್&zwnj; ಗಿಲ್&zwnj; ಪಡೆ, 2ನೇ ಟೆಸ್ಟ್&zwnj;ನಲ್ಲಿ ಮತ್ತಷ್ಟು ಸುಧಾರಿತ ಆಟವಾಡುವ ವಿಶ್ವಾಸ ಹೊಂದಿದೆ.&lt;/p&gt;&lt;p&gt;ಭಾರತ ಕೊನೆ ಬಾರಿಗೆ ತವರಿನಾಚೆ ಸರಣಿ ಗೆದ್ದಿದ್ದು, ವಿಂಡೀಸ್&zwnj; ವಿರುದ್ಧ 2023ರ ಜುಲೈನಲ್ಲಿ. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತಿದ್ದ ಭಾರತ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್&zwnj;ನಲ್ಲಿ ಸರಣಿ ಡ್ರಾ ಮಾಡಿಕೊಂಡಿತ್ತು. ಇದಲ್ಲದೇ, ತವರಿನಲ್ಲಿ ನ್ಯೂಜಿಲೆಂಡ್&zwnj; ಹಾಗೂ ದ.ಆಫ್ರಿಕಾ ವಿರುದ್ಧ ಎದುರಾದ ಸರಣಿ ಸೋಲುಗಳು ಭಾರತ ತಂಡವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿತ್ತು. ಹೀಗಾಗಿ, ಈ ಸರಣಿಯಲ್ಲಿ ತಂಡ ಗೆದ್ದರೇ ಆಟಗಾರರು ಸ್ವಲ್ಪ ಮಟ್ಟಿಗೆ ಸಮಾಧಾನಗೊಳ್ಳಲಿದ್ದಾರೆ. ಜೊತೆಗೆ ವಿಶ್ವ ಟೆಸ್ಟ್&zwnj; ಚಾಂಪಿಯನ್&zwnj;ಶಿಪ್&zwnj;ನ ಫೈನಲ್&zwnj;ಗೇರುವ ಭಾರತದ ಆಸೆ ಜೀವಂತವಾಗಿ ಉಳಿಯಲಿದೆ.&lt;/p&gt;&lt;h2&gt;&lt;strong&gt;ಗಾಲೆಯಲ್ಲಿ ಟೀಂ ಇಂಡಿಯಾ ಆಲ್ರೌಂಡ್ ಆಟ&lt;/strong&gt;&lt;/h2&gt;&lt;p&gt;ಮೊದಲ ಟೆಸ್ಟ್&zwnj;ನಲ್ಲಿ ಭಾರತ ಆಲ್ರೌಂಡ್&zwnj; ಪ್ರದರ್ಶನ ತೋರಿತ್ತು. ಆದರೂ, ಯಶಸ್ವಿ ಜೈಸ್ವಾಲ್&zwnj; ಹಾಗೂ ನಾಯಕ ಶುಭ್&zwnj;ಮನ್&zwnj; ಗಿಲ್&zwnj;ರಿಂದ ದೊಡ್ಡ ಇನ್ನಿಂಗ್ಸ್&zwnj; ನಿರೀಕ್ಷೆ ಮಾಡಲಾಗುತ್ತಿದೆ. ದೇವದತ್&zwnj; ಪಡಿಕ್ಕಲ್&zwnj; ತಮ್ಮ ಆಕರ್ಷಕ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಕೆ.ಎಲ್&zwnj;.ರಾಹುಲ್&zwnj; ಗಾಲೆಯಲ್ಲಿ ಕೈತಪ್ಪಿದ್ದ ಶತಕವನ್ನು ಕೊಲೊಂಬೊದಲ್ಲಿ ಪೂರೈಸಲು ಎದುರು ನೋಡುತ್ತಿದ್ದಾರೆ.&lt;/p&gt;&lt;p&gt;ರಿಷಭ್&zwnj; ಪಂತ್&zwnj;, ಧೃವ್&zwnj; ಜುರೆಲ್&zwnj; ಮತ್ತೊಮ್ಮೆ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ, ಬ್ಯಾಟಿಂಗ್&zwnj; ವಿಚಾರದಲ್ಲಿ ಭಾರತಕ್ಕೆ ಹೆಚ್ಚು ತಲೆಬಿಸಿ ಇರುವುದಿಲ್ಲ.&lt;/p&gt;&lt;p&gt;ಈ ಪಂದ್ಯದಲ್ಲಿ ಪಿಚ್&zwnj; ವೇಗಿಗಳಿಗೂ ಸ್ವಲ್ಪ ಹೆಚ್ಚಾಗಿಯೇ ನೆರವು ನೀಡುವ ನಿರೀಕ್ಷೆ ಇದ್ದು, ಪ್ರಸಿದ್ಧ್ ಕೃಷ್ಣ ಹಾಗೂ ಮೊಹಮದ್&zwnj; ಸಿರಾಜ್&zwnj; ಖುಷಿಯಿಂದಲೇ ದಾಳಿಗಿಳಿಯಲಿದ್ದಾರೆ. ಮಾನವ್&zwnj; ಸುಥಾರ್&zwnj; ತಂಡದ ಹೊಸ ಸ್ಪಿನ್&zwnj; ಅಸ್ತ್ರವಾಗಿ ರೂಪುಗೊಳ್ಳುತ್ತಿದ್ದು, ಮತ್ತೊಮ್ಮೆ ವಿಕೆಟ್&zwnj; ಬೇಟೆಗಿಳಿಯಲಿದ್ದಾರೆ. ಜಡೇಜಾ 2ನೇ ಸ್ಪಿನ್ನರ್&zwnj; ಆಗಿ ಆಡುವುದು ಖಚಿತ. ಮೊದಲ ಟೆಸ್ಟ್&zwnj;ನಲ್ಲಿ ಕೇವಲ 1 ವಿಕೆಟ್&zwnj; ಕಿತ್ತ ಕುಲ್ದೀಪ್&zwnj; ಯಾದವ್&zwnj;ಗೆ ಇನ್ನೊಂದು ಅವಕಾಶ ಸಿಗಲಿದೆಯೇ ಎನ್ನುವ ಪ್ರಶ್ನೆಗೆ ಟಾಸ್&zwnj; ಆದ ಬಳಿಕವಷ್ಟೇ ಉತ್ತರ ಸಿಗಲಿದೆ.&lt;/p&gt;&lt;p&gt;ಮಧ್ಯಪ್ರದೇಶದ ಸ್ಪಿನ್&zwnj; ಬೌಲಿಂಗ್&zwnj; ಆಲ್ರೌಂಡರ್&zwnj; ಸಾರಾಂಶ್&zwnj; ಜೈನ್&zwnj; ಅವಕಾಶಕ್ಕಾಗಿ ಕಾಯುತ್ತಿದ್ದು, ಅವರಿಗೆ ಟೆಸ್ಟ್&zwnj; ಕ್ಯಾಪ್&zwnj; ಸಿಕ್ಕರೆ ಅಚ್ಚರಿಯಿಲ್ಲ.&lt;/p&gt;&lt;p&gt;ಮತ್ತೊಂದೆಡೆ ಲಂಕಾ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಚಾಂದಿಮಾಲ್&zwnj; ಈ ಪಂದ್ಯದಲ್ಲಿ ಆಡುವುದು ಅನುಮಾನ. ಆದರೆ ಕಳೆದ ಪಂದ್ಯದಲ್ಲಿ ಸೋನಲ್&zwnj; ದಿನುಶಾ, ನಿರೋಶನ್&zwnj; ಡಿಕ್ವೆಲಾ ಹಾಗೂ ಧನಂಜಯ ಡಿ ಸಿಲ್ವಾ ಬ್ಯಾಟಿಂಗ್&zwnj;ನಲ್ಲಿ ಹೋರಾಟ ನಡೆಸಿದ್ದರು. ಆದರೆ ಲಂಕಾ ಸ್ಪಿನ್ನರ್&zwnj;ಗಳು ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗಿದ್ದರು. ಆತಿಥೇಯ ತಂಡ, ಸರಣಿ ಡ್ರಾ ಮಾಡಿಕೊಳ್ಳಬೇಕಿದ್ದರೆ ಸ್ಪಿನ್ನರ್&zwnj;ಗಳು ಅಸಾಧಾರಣ ಆಟ ತೋರಲೇಬೇಕಿದೆ.&lt;/p&gt;&lt;p&gt;&lt;strong&gt;ಪಿಚ್&zwnj; ರಿಪೋರ್ಟ್&zwnj;&lt;/strong&gt;&lt;/p&gt;&lt;p&gt;ಗಾಲೆಗಿಂತ ಕೊಲೊಂಬೊದಲ್ಲಿ ವಾತಾವರಣ ತಿಳಿ ಆಗಿರುವ ನಿರೀಕ್ಷೆ ಇದೆ. ಅಷ್ಟಾಗಿ ಮಳೆ ಮುನ್ಸೂಚನೆ ಇಲ್ಲ. ಅಲ್ಲದೇ ಪಿಚ್&zwnj; ಮೇಲೆ ಸ್ವಲ್ಪ ಪ್ರಮಾಣದಲ್ಲಿ ಹುಲ್ಲು ಇದ್ದು, ವೇಗಿಗಳಿಗೂ ನೆರವು ದೊರೆಯಬಹುದು.&lt;/p&gt;&lt;p&gt;ಪಂದ್ಯ ಆರಂಭ: ಬೆಳಗ್ಗೆ 10ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್&zwnj;/ಸೋನಿ ಲಿವ್&zwnj;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/india-vs-sri-lanka-2nd-test-shubman-gill-team-eyes-first-overseas-series-win-in-3-years-kvn/articleshow-qesloa0"/>
        </item>
        <item>
            <title><![CDATA[ನೈಟ್‌ಕ್ಲಬ್‌ನಲ್ಲಿ ಗಲಾಟೆ: ಬೆನ್ ಸ್ಟೋಕ್ಸ್‌ ಜತೆಗಿದ್ದ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಅರೆಸ್ಟ್! ಕೈಗೆ ಬೇಡಿಹಾಕಿ ಕರೆದೊಯ್ದ ಪೊಲೀಸರು]]></title>
            <link>https://kannada.asianetnews.com/cricket-sports/braydon-carse-detained-after-derby-nightclub-brawl-ben-stokes-was-also-present-video-goes-viral-kvn/articleshow-uqpry51</link>
            <guid isPermaLink="true">https://kannada.asianetnews.com/cricket-sports/braydon-carse-detained-after-derby-nightclub-brawl-ben-stokes-was-also-present-video-goes-viral-kvn/articleshow-uqpry51</guid>
            <pubDate>Mon, 24 Aug 2026 10:30:33 +0530</pubDate>
            <description><![CDATA[ಡರ್ಬಿಯ ನೈಟ್&zwnj;ಕ್ಲಬ್&zwnj;ನಲ್ಲಿ ನಡೆದ ಗಲಾಟೆಯೊಂದರಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಬ್ರೈಡನ್ ಕಾರ್ಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಾಗ ಬೆನ್ ಸ್ಟೋಕ್ಸ್ ಮತ್ತು ಮ್ಯಾಥ್ಯೂ ಪಾಟ್ಸ್ ಕೂಡ ಅವರ ಜೊತೆಗಿದ್ದರು. ನಂತರ ಕಾರ್ಸ್ ಅವರನ್ನು ಬಿಡುಗಡೆ ಮಾಡಲಾಗಿದ್ದರೂ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0s23a9yt8v5r93v7022reap,imgname-untitled-design--1--1787547461950.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಂಡನ್: &lt;strong&gt;Braydon Carse Detained&lt;/strong&gt; ಡರ್ಬಿಯ ನೈಟ್&zwnj;ಕ್ಲಬ್ ಒಂದರಲ್ಲಿ ನಡೆದ ಗಲಾಟೆ ಸಂಬಂಧ, ಇಂಗ್ಲೆಂಡ್ ವೇಗದ ಬೌಲರ್ ಬ್ರೈಡನ್ ಕಾರ್ಸ್&zwnj;ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಂಟಿ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಡರ್ಬಿಶೈರ್ ವಿರುದ್ಧ ಡರ್ಹಾಮ್ ತಂಡ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ಸಂಭ್ರಮಾಚರಣೆಗಾಗಿ 'ಮೋಲಿ ಮಲೋನ್ಸ್ ಐರಿಷ್ ಟವೆರ್ನ್' ಅನ್ನೋ ನೈಟ್&zwnj;ಕ್ಲಬ್&zwnj;ಗೆ ಹೋದಾಗ ಈ ಗಲಾಟೆ ನಡೆದಿದೆ. ಈ ಘಟನೆ ನಡೆದಾಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಬೆನ್ ಸ್ಟೋಕ್ಸ್ ಮತ್ತು ಆಲ್&zwnj;ರೌಂಡರ್ ಮ್ಯಾಥ್ಯೂ ಪಾಟ್ಸ್ ಕೂಡ ಬ್ರೈಡನ್ ಕಾರ್ಸ್ ಜೊತೆಗಿದ್ದರು.&lt;/p&gt;&lt;h2&gt;&lt;strong&gt;ಕಾರ್ಸ್&zwnj; ಕೈಗೆ ಬೇಡಿ ಹಾಕಿ ಕರೆದೊಯ್ದ ಪೊಲೀಸರು!&lt;/strong&gt;&lt;/h2&gt;&lt;p&gt;ನೈಟ್&zwnj;ಕ್ಲಬ್&zwnj;ನಲ್ಲಿ ನಡೆದ ಜಗಳದ ನಂತರ ಪೊಲೀಸರು ಕಾರ್ಸ್&zwnj;ಗೆ ಬೇಡಿ ಹಾಕಿ ಕರೆದೊಯ್ಯುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವಿಡಿಯೋದಲ್ಲಿ ಬೆನ್ ಸ್ಟೋಕ್ಸ್ ಮತ್ತು ಮ್ಯಾಥ್ಯೂ ಪಾಟ್ಸ್, ಕಾರ್ಸ್ ಪಕ್ಕದಲ್ಲಿ ನಿಂತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ, ಪೊಲೀಸರು ಕಾರ್ಸ್ ವಿರುದ್ಧ ಯಾವುದೇ ಅಧಿಕೃತ ಪ್ರಕರಣ ದಾಖಲಿಸದೆ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ.&lt;/p&gt;&lt;p&gt;&quot;ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಹೆಚ್ಚಿನ ಮಾಹಿತಿ ಸಿಕ್ಕ ನಂತರ ಅಧಿಕೃತವಾಗಿ ಪ್ರತಿಕ್ರಿಯೆ ನೀಡುತ್ತೇವೆ&quot; ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ವಕ್ತಾರರು ತಿಳಿಸಿದ್ದಾರೆ. 31 ವರ್ಷದ ಬ್ರೈಡನ್ ಕಾರ್ಸ್, ಪಾಕಿಸ್ತಾನ ವಿರುದ್ಧದ ಮೊದಲ ಎರಡು ಟೆಸ್ಟ್&zwnj; ಪಂದ್ಯಗಳಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಮೊದಲ ಟೆಸ್ಟ್&zwnj;ನಲ್ಲಿ ಆಡದ ಕಾರಣ, ಅವರು ಡರ್ಹಾಮ್ ಪರ ಕೌಂಟಿ ಪಂದ್ಯದಲ್ಲಿ ಆಡಿ ಎರಡು ವಿಕೆಟ್&zwnj;ಗಳನ್ನು ಪಡೆದಿದ್ದರು.&lt;/p&gt;&lt;p&gt;Durham bowler Brydon Carse, who is in England squad for second Test, was released without charge after a nightclub incident while celebrating victory over Derbyshire@willis_macp has the details ⤵️https://t.co/4YXyQWChe5 pic.twitter.com/zFKA3lgPVi&lt;/p&gt;&lt;p&gt;&mdash; Telegraph Cricket (@TeleCricket) August 23, 2026&lt;/p&gt;&lt;p&gt;&lt;/p&gt;&lt;h3&gt;&lt;strong&gt;ಇಂಗ್ಲೆಂಡ್-ಪಾಕಿಸ್ತಾನ ಎರಡನೇ ಟೆಸ್ಟ್ ಆಗಸ್ಟ್ 27ರಿಂದ ಆರಂಭ&lt;/strong&gt;&lt;/h3&gt;&lt;p&gt;ಆಗಸ್ಟ್ 27 ರಂದು ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ವಿವಾದದ ಹಿನ್ನೆಲೆಯಲ್ಲಿ, ತಂಡದಲ್ಲಿ ಆಟಗಾರರಿಗೆ ಗಾಯಗಳಾದರೂ ಕಾರ್ಸ್&zwnj;ನನ್ನು ಪ್ಲೇಯಿಂಗ್ ಇಲೆವೆನ್&zwnj;ನಲ್ಲಿ ಸೇರಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಹಿಂದೆಯೂ ಇಂಗ್ಲೆಂಡ್ ಆಟಗಾರರು ಇದೇ ರೀತಿ ನೈಟ್&zwnj;ಕ್ಲಬ್ ವಿವಾದಗಳಲ್ಲಿ ಸಿಲುಕಿಕೊಂಡಿದ್ದು ಕ್ರಿಕೆಟ್ ಬೋರ್ಡ್&zwnj;ಗೆ ತಲೆನೋವಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/braydon-carse-detained-after-derby-nightclub-brawl-ben-stokes-was-also-present-video-goes-viral-kvn/articleshow-uqpry51"/>
        </item>
        <item>
            <title><![CDATA[ಪಾಕ್ ಇಮ್ರಾನ್ ಖಾನ್ ಪರ ಬ್ಯಾಟ್ ಬೀಸಿದ ಕಪಿಲ್ ದೇವ್, ಗವಾಸ್ಕರ್..! ಪಾಕ್ ಸರ್ಕಾರಕ್ಕೆ ಖಡಕ್ ಸಂದೇಶ!]]></title>
            <link>https://kannada.asianetnews.com/cricket-sports/kapil-dev-and-sunil-gavaskar-bat-in-favor-of-pak-imran-khan-gkn/articleshow-wrmecmp</link>
            <guid isPermaLink="true">https://kannada.asianetnews.com/cricket-sports/kapil-dev-and-sunil-gavaskar-bat-in-favor-of-pak-imran-khan-gkn/articleshow-wrmecmp</guid>
            <pubDate>Mon, 24 Aug 2026 07:33:25 +0530</pubDate>
            <description><![CDATA[&lt;p&gt;ಜೈಲಿನಲ್ಲಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ನೀಡುವಂತೆ ಭಾರತದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಸೇರಿದಂತೆ 21 ಮಂದಿ ಮಾಜಿ ನಾಯಕರು ಪಾಕ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜಕೀಯ ಮೀರಿ ಕ್ರೀಡಾ ಸ್ಫೂರ್ತಿ ಮೆರೆದಿರುವ ಈ ದಿಗ್ಗಜರು, 1992ರ ವಿಶ್ವಕಪ್ ವಿಜೇತ ನಾಯಕನ ಮಾನವ ಹಕ್ಕುಗಳ ರಕ್ಷಣೆಗೆ ಧ್ವನಿ ಎತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qpwagg9bzrksxm7avm71n5,imgname-kapil-dev-and-sunil-gavaskar-on-imran-khan-1787502144016.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ/ಇಸ್ಲಾಮಾಬಾದ್: &lt;/strong&gt;ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ 1992ರ ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಪ್ರಸ್ತುತ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಶೇಷವೆಂದರೆ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ಭಾರತದ ದಿಗ್ಗಜ ಕ್ರಿಕೆಟಿಗರಾದ ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಕೂಡ ನಿಂತಿದ್ದಾರೆ.&lt;/p&gt;&lt;h2&gt;&lt;strong&gt;21 ಮಂದಿ ನಾಯಕರ ಒಕ್ಕೂಟ&lt;/strong&gt;&lt;/h2&gt;&lt;p&gt;ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ನೇತೃತ್ವದಲ್ಲಿ ವಿಶ್ವದ ಒಟ್ಟು 21 ಮಂದಿ ಮಾಜಿ ಅಂತರಾಷ್ಟ್ರೀಯ ನಾಯಕರು ಪಾಕಿಸ್ತಾನ ಸರ್ಕಾರಕ್ಕೆ ಜಂಟಿ ಮನವಿಯೊಂದನ್ನು ಸಲ್ಲಿಸಿದ್ದಾರೆ. ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ಅಂತರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಅವರ ಪಟ್ಟ ಮಾನವೀಯತೆಯಿಂದ ವರ್ತಿಸಬೇಕು ಎಂದು ಇವರೆಲ್ಲರೂ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಮೈದಾನದಲ್ಲಿ ಎಷ್ಟೇ ಪೈಪೋಟಿ ಇದ್ದರೂ, ಒಬ್ಬ ಶ್ರೇಷ್ಠ ಆಟಗಾರನ ಸಂಕಷ್ಟದ ಸಮಯದಲ್ಲಿ ಕ್ರೀಡಾ ಸ್ಫೂರ್ತಿಯನ್ನು ಮೆರೆದಿರುವ ಭಾರತದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ದಿಲೀಪ್ ವೆಂಗ್&zwnj;ಸರ್ಕರ್ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ತಮ್ಮ ಸಹ ಆಟಗಾರನ ಹಕ್ಕುಗಳಿಗಾಗಿ ಇವರೆಲ್ಲರೂ ಒಗ್ಗೂಡಿರುವುದು ಈಗ ಜಾಗತಿಕವಾಗಿ ಚರ್ಚೆಗೆ ಕಾರಣವಾಗಿದೆ. ಭಾರತದ ಆಟಗಾರರ ಜೊತೆಗೆ ಶ್ರೀಲಂಕಾಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಅರ್ಜುನ ರಣತುಂಗ, ವೆಸ್ಟ್ ಇಂಡೀಸ್&zwnj;ನ ಲೆಜೆಂಡ್ ಕ್ಲೈವ್ ಲಾಯ್ಡ್, ಇಂಗ್ಲೆಂಡ್&zwnj;ನ ಮಾಜಿ ಸಾರಥಿ ನಾಸರ್ ಹುಸೇನ್ ಸೇರಿದಂತೆ ಅನೇಕ ಘಟಾನುಘಟಿಗಳು ಈ ಮನವಿಗೆ ಸಹಿ ಹಾಕಿದ್ದಾರೆ. ರಾಜಕೀಯ ಸಿದ್ಧಾಂತಗಳಿಗಿಂತ ಮಾನವೀಯತೆ ಮತ್ತು ಕ್ರೀಡಾ ಸಂಸ್ಕೃತಿ ದೊಡ್ಡದು ಎಂದು ಈ ದಿಗ್ಗಜರು ಸಾಬೀತುಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಒತ್ತಾಯ?&lt;/strong&gt;&lt;/h2&gt;&lt;p&gt;ಇಮ್ರಾನ್ ಖಾನ್ ರಾಜಕೀಯ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸುತ್ತಿರಬಹುದು, ಆದರೆ ಅವರು ವಿಶ್ವ ಕ್ರಿಕೆಟ್&zwnj;ಗೆ ನೀಡಿದ ಕೊಡುಗೆ ಅಪಾರ. ಅಂತಹ ಒಬ್ಬ ಆಲ್-ರೌಂಡರ್ ಜೈಲಿನಲ್ಲಿ ಮೂಲಭೂತ ಹಕ್ಕುಗಳಿಂದ ವಂಚಿತರಾಗಬಾರದು ಎನ್ನುವುದು ಈ ಮಾಜಿ ನಾಯಕರ ವಾದ. ಪಾಕಿಸ್ತಾನ ಸರ್ಕಾರವು ಈ ಜಾಗತಿಕ ಗಣ್ಯರ ಮನವಿಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ. ಒಟ್ಟಾರೆಯಾಗಿ ಮೈದಾನದ ಬದ್ಧ ವೈರಿಗಳಾಗಿದ್ದರೂ ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬೆಂಬಲ ನೀಡುವ ಮೂಲಕ ಕ್ರಿಕೆಟ್ ಲೋಕದ ಹಿರಿಯ ತಲೆಮಾರು ಹೊಸ ಮಾದರಿಯನ್ನು ಹಾಕಿಕೊಟ್ಟಿದೆ.&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/kapil-dev-and-sunil-gavaskar-bat-in-favor-of-pak-imran-khan-gkn/articleshow-wrmecmp"/>
        </item>
        <item>
            <title><![CDATA['Gen Z' ಮನಸ್ಸಿನಲ್ಲಿ ಯಾರಿಗೆ ಜಾಗ ; ಬಿಜೆಪಿಗೋ, ಕಾಂಗ್ರೆಸ್‌ಗೋ? ಇಲ್ಲಿದೆ ಅಸಲಿ ಲೆಕ್ಕಾಚಾರ!]]></title>
            <link>https://kannada.asianetnews.com/cricket-sports/gen-z-voters-bjp-congress-narendra-modi-rahul-gandhi-youth-vote-political-strategy-indian-politics-bmk/articleshow-wy9c3tx</link>
            <guid isPermaLink="true">https://kannada.asianetnews.com/cricket-sports/gen-z-voters-bjp-congress-narendra-modi-rahul-gandhi-youth-vote-political-strategy-indian-politics-bmk/articleshow-wy9c3tx</guid>
            <pubDate>Sat, 22 Aug 2026 19:58:29 +0530</pubDate>
            <description><![CDATA[&lt;p&gt;ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳು 'Gen Z' ಪೀಳಿಗೆಯ ರಾಜಕೀಯ ಜಾಗೃತಿಯನ್ನು ಅನಾವರಣಗೊಳಿಸಿವೆ. ಈ ಯುವ ಮತದಾರರನ್ನು ಸೆಳೆಯಲು, ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಸಾಂಪ್ರದಾಯಿಕ ಪ್ರಚಾರಗಳನ್ನು ಬದಿಗಿಟ್ಟು, ಡಿಜಿಟಲ್ ಮಾಧ್ಯಮ ಮತ್ತು ಕ್ಯಾಂಪಸ್ ಸಂವಾದಗಳಂತಹ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಆದರೆ ಅವರ ಒಲುವು ಯಾವುದರ ಕಡೆ ಎನ್ನುವುದರ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mxyp4mvc5fdax1w0633k2k,imgname-gen-z-1787408898195.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರಾಜಕೀಯದಲ್ಲಿ ಸಾಂಪ್ರದಾಯಿಕ ಮತಬ್ಯಾಂಕ್&zwnj;ಗಳ ಲೆಕ್ಕಾಚಾರವನ್ನು ಬದಿಗಿಟ್ಟು, ಯುವಜನತೆಯ ಅಲೆ ಹೊಸ ಸಂಚಲನ ಸೃಷ್ಟಿಸುತ್ತಿದೆ. ವಿಶೇಷವಾಗಿ, ಇತ್ತೀಚೆಗೆ 'ನೀಟ್ (NEET) ಪತ್ರಿಕೆ ಸೋರಿಕೆ' ವಿರುದ್ಧ ದೇಶಾದ್ಯಂತ ಭುಗಿಲೆದ್ದ ಭಾರಿ ಪ್ರತಿಭಟನೆಗಳು ಭಾರತದ 'ಜನರೇಷನ್ ಝಡ್' (Gen Z) ಪೀಳಿಗೆಯ ರಾಜಕೀಯ ಜಾಗೃತಿಯನ್ನು ಅನಾವರಣಗೊಳಿಸಿವೆ. ರ್ಯಾಲಿಗಳು ಅಥವಾ ಟಿವಿ ಚರ್ಚೆಗಳಿಂದ ದೂರವಿದ್ದು, ಇನ್&zwnj;ಸ್ಟಾಗ್ರಾಮ್, ಯೂಟ್ಯೂಬ್, ಮೀಮ್ಸ್ ಹಾಗೂ ಕ್ಯಾಂಪಸ್ ನೆಟ್&zwnj;ವರ್ಕ್&zwnj;ಗಳ ಮೂಲಕವೇ ತಮ್ಮ ಧ್ವನಿ ಎತ್ತುತ್ತಿರುವ ಈ ಯುವಜನತೆಯನ್ನು ಆಕರ್ಷಿಸಲು ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಕಾರ್ಯತಂತ್ರಗಳನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿವೆ. 2029ರ ಲೋಕಸಭಾ ಚುನಾವಣೆಯ ವೇಳೆಗೆ ದೇಶದಲ್ಲಿ Gen Z ಜನಸಂಖ್ಯೆ ಸುಮಾರು 380 ಮಿಲಿಯನ್ ತಲುಪುವ ನಿರೀಕ್ಷೆಯಿದ್ದು, ಇದು ದೇಶದ ಅತಿದೊಡ್ಡ ವಯಸ್ಕ ಮತದಾರರ ಗುಂಪಾಗಲಿದೆ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ಹೆಣೆದಿರುವ ತಂತ್ರಗಳು ಇಲ್ಲಿವೆ:&lt;/p&gt;&lt;h2&gt;&lt;strong&gt;ಬಿಜೆಪಿಯ ಕ್ಯಾಂಪಸ್ ಮತ್ತು ಡಿಜಿಟಲ್ ಮಾಸ್ಟರ್&zwnj;ಪ್ಲಾನ್!&lt;/strong&gt;&lt;/h2&gt;&lt;p&gt;'ಒಂದು ದಿನ, ಒಂದು ವಿಶ್ವವಿದ್ಯಾಲಯ' ಅಭಿಯಾನ; ಯುವಕರ ಪ್ರತಿಭಟನೆಯ ನಂತರ ಬಿಜೆಪಿ ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗದೆ, ಭೌತಿಕವಾಗಿ ಯುವಕರನ್ನು ತಲುಪಲು ಈ ನೂತನ ಅಭಿಯಾನ ಪ್ರಾರಂಭಿಸಿದೆ. ಇದರಡಿ ಕೇಂದ್ರ ಸಚಿವರು ನೇರವಾಗಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಪ್ರಧಾನಿ ಮೋದಿಯವರ 'ಸೆಲ್ಫಿ ವೀಡಿಯೊ' ಹಾಗೂ ರೀಲ್ಸ್;&lt;/strong&gt; ಸಾಂಪ್ರದಾಯಿಕ ಭಾಷಣ ಅಥವಾ 'ಮನ್ ಕಿ ಬಾತ್' ಬದಿಗಿಟ್ಟು, ಪ್ರಧಾನಿ ನರೇಂದ್ರ ಮೋದಿ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೆಲ್ಫಿ ಶೈಲಿಯ ವೀಡಿಯೊ ಹಂಚಿಕೊಂಡರು. ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಹಂಚಿಕೊಂಡ &quot;GRWM&quot; (ನನ್ನೊಂದಿಗೆ ಸಿದ್ಧರಾಗಿ) ಶೈಲಿಯ ರೀಲ್&zwnj;ಗಳು 100 ಮಿಲಿಯನ್&zwnj;ಗೂ ಹೆಚ್ಚು ವೀಕ್ಷಣೆ ಗಳಿಸಿ ಯುವಕರ ಗಮನ ಸೆಳೆದಿವೆ.&lt;/p&gt;&lt;p&gt;&lt;strong&gt;ಕ್ಯಾಂಪಸ್ ನೆಟ್&zwnj;ವರ್ಕ್ ಬಲವರ್ಧನೆ: &lt;/strong&gt;ಬಿಜೆವೈಎಂ (BJYM) ಮತ್ತು ಎಬಿವಿಪಿ (ABVP) ನಂತಹ ಸಂಘಟನೆಗಳು ದೆಹಲಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಬಾರಿಗೆ ಮತದಾನ ಮಾಡುವ ಯುವಕರನ್ನು ನೇರವಾಗಿ ಸಂಪರ್ಕಿಸುತ್ತಿವೆ.&lt;/p&gt;&lt;h3&gt;&lt;strong&gt;ಕಾಂಗ್ರೆಸ್&zwnj;ನ 'ವಿದ್ಯಾರ್ಥಿಗಳ ಪ್ರತಿಧ್ವನಿ' ಮತ್ತು ನೇರ ಸಂವಾದ!&lt;/strong&gt;&lt;/h3&gt;&lt;p&gt;'ಶಾಲೆಗಳ/ವಿದ್ಯಾರ್ಥಿಗಳ ಪ್ರತಿಧ್ವನಿ' ಆಂದೋಲನ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಂಪ್ರದಾಯಿಕ ಮೆರವಣಿಗೆಗಳನ್ನು ಹೊರತುಪಡಿಸಿ, &quot;ನನ್ನನ್ನು ಕೇಳಿ ಏನನ್ನಾದರೂ&quot; (Ask Me Anything) ನಂತಹ ತಕ್ಷಣದ ಸಂವಾದ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. 'ನೋವು, ದತ್ತಾಂಶ, ಸಂಪತ್ತು' ಕಾರ್ಯಸೂಚಿ; ಪ್ರಯಾಗ್&zwnj;ರಾಜ್&zwnj;ನಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದತ್ತಾಂಶ, ಉದ್ಯೋಗ ಮತ್ತು ಯುವಕರ ನೋವಿನ ಕುರಿತು ನೇರ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮುಂದೆ ಪುಣೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ (COEP) ಸಂವಾದ ನಡೆಸುವ ಮೂಲಕ ಟೆಕ್-ಸಾವಿ ಯುವಕರನ್ನು ತಲುಪುವ ಯೋಜನೆಯಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಅಸಲಿ ಲೆಕ್ಕಾಚಾರ: ಯಾರು ಮುಂಚೂಣಿಯಲ್ಲಿದ್ದಾರೆ?&lt;/strong&gt;&lt;/h3&gt;&lt;p&gt;ಯುಎನ್ ಪ್ರಕ್ಷೇಪಗಳ ಪ್ರಕಾರ, ಭಾರತದ ಒಟ್ಟು ಮತದಾರರ ಪಾಲಿನಲ್ಲಿ ಯುವ ಮತದಾರರ ಪ್ರಮಾಣ (18-29 ವರ್ಷ) ಇಳಿಮುಖವಾಗುತ್ತಿದ್ದರೂ (2029ರ ವೇಳೆಗೆ ಶೇ. 27.8), ನಿರ್ಣಾಯಕ ಹಂತದಲ್ಲಿ ಗೇಮ್ ಚೇಂಜರ್ ಆಗುವ ಸಾಮರ್ಥ್ಯ 'Gen Z' ಗಿದೆ.&lt;/p&gt;&lt;h3&gt;&lt;strong&gt;ಬಿಜೆಪಿಯ ಅನುಕೂಲ; &lt;/strong&gt;ಸುಸಜ್ಜಿತ ಡಿಜಿಟಲ್ ಪರಿಸರ ವ್ಯವಸ್ಥೆ, ಪ್ರಧಾನಿ ಮೋದಿಯವರ ವೈಯಕ್ತಿಕ ಕ್ರೇಜ್ ಮತ್ತು ತಂತ್ರಜ್ಞಾನ ಆಧಾರಿತ ತಲುಪುವಿಕೆ.&lt;/h3&gt;&lt;h3&gt;&lt;strong&gt;ಕಾಂಗ್ರೆಸ್&zwnj;ನ ಅನುಕೂಲ; &lt;/strong&gt;ಪೇಪರ್ ಲೀಕ್, ಉದ್ಯೋಗದ ಅಭದ್ರತೆ ಮತ್ತು ಕ್ಯಾಂಪಸ್ ಸಮಸ್ಯೆಗಳನ್ನು ನೇರವಾಗಿ ಕೈಗೆತ್ತಿಕೊಂಡು ರೂಪಿಸುತ್ತಿರುವ ಪ್ರತಿಭಟನಾತ್ಮಕ ನಿರೂಪಣೆ. ಒಟ್ಟಾರೆಯಾಗಿ, 'Gen Z' ಯಾವುದೇ ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧವಾಗಿರದೆ, ತಮ್ಮ ಭವಿಷ್ಯ ಮತ್ತು ಶಿಕ್ಷಣದ ಕುರಿತು ಯಾರು ನಿಖರವಾಗಿ ಮಾತನಾಡುತ್ತಾರೆ ಎಂಬುದನ್ನು ಗಮನಿಸುತ್ತಿದೆ. ಪ್ರಸ್ತುತ ಮೋದಿ ಅವರ ಸಾಮಾಜಿಕ ಮಾಧ್ಯಮ ಪ್ರಭಾವ ಹೆಚ್ಚಿದ್ದರೂ, ಯುವಕರ ಉದ್ಯೋಗ ಮತ್ತು ಪರೀಕ್ಷಾ ಅಕ್ರಮಗಳ ಆಕ್ರೋಶವನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದೆ.&lt;/h3&gt;]]></content:encoded>
            <category>sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/gen-z-voters-bjp-congress-narendra-modi-rahul-gandhi-youth-vote-political-strategy-indian-politics-bmk/articleshow-wy9c3tx"/>
        </item>
        <item>
            <title><![CDATA[RCB ಗೇಮ್‌ ಚೇಂಜರ್ ಡಿಕೆ, ಚೆನ್ನೈ ಸೂಪರ್ ಕಿಂಗ್ಸ್ ಹೆಡ್ ಕೋಚ್ ಆಗ್ತಾರಾ? ಹೊಸ ಬಾಂಬ್ ಸಿಡಿಸಿದ ಮ್ಯಾಥ್ಯೂ ಹೇಡನ್..!]]></title>
            <link>https://kannada.asianetnews.com/cricket-sports/dinesh-karthik-to-replace-stephen-fleming-at-csk-matthew-hayden-makes-big-statement-kvn/articleshow-xoghdx9</link>
            <guid isPermaLink="true">https://kannada.asianetnews.com/cricket-sports/dinesh-karthik-to-replace-stephen-fleming-at-csk-matthew-hayden-makes-big-statement-kvn/articleshow-xoghdx9</guid>
            <pubDate>Mon, 24 Aug 2026 12:13:41 +0530</pubDate>
            <description><![CDATA[ರಜತ್ ಪಾಟೀದಾರ್ ನಾಯಕತ್ವದ ಆರ್&zwnj;ಸಿಬಿ ತಂಡವು ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ದಿನೇಶ್ ಕಾರ್ತಿಕ್ ಅವರ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿದೆ. ಇದೀಗ, ಸ್ಟಿಫನ್ ಫ್ಲೆಮಿಂಗ್ ರಾಜೀನಾಮೆಯಿಂದ ತೆರವಾಗಿರುವ ಸಿಎಸ್&zwnj;ಕೆ ಹೆಡ್&zwnj; ಕೋಚ್ ಹುದ್ದೆಗೆ ದಿನೇಶ್ ಕಾರ್ತಿಕ್ ಸೂಕ್ತ ಅಭ್ಯರ್ಥಿ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsq3jnqg9xhcthp2w1f5k2a,imgname-dinesh-karthik-virat-kohli-1782200781495.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಆರ್&zwnj;ಸಿಬಿ ತಂಡವು ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಆರ್&zwnj;ಸಿಬಿ ತಂಡವು ಬರೋಬ್ಬರಿ 17 ವರ್ಷಗಳ ಬಳಿಕ ಸತತ ಎರಡು ಸಲ ಟ್ರೋಫಿ ಗೆದ್ದು ಬೀಗಿದೆ. ಇದು ಸಾಧ್ಯವಾಗಿದ್ದು ಹೆಡ್&zwnj; ಕೋಚ್ ಆಂಡಿ ಫ್ಲವರ್ ಹಾಗೂ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್ ತಂತ್ರಗಾರಿಕೆ. ಇದೀಗ ಆರ್&zwnj;ಸಿಬಿ ಯಶಸ್ಸಿನ ಗೇಮ್&zwnj; ಚೇಂಜರ್&zwnj;, ಮುಂಬರುವ ಐಪಿಎಲ್ ಸೀಸನ್&zwnj;ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತೆಕ್ಕೆಗೆ ಜಾರುತ್ತಾರಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಅಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕ ಮ್ಯಾಥ್ಯೂ ಹೇಡನ್ ಅವರು ಕೊಟ್ಟ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೇ ಹುಟ್ಟುಹಾಕಿದೆ.&lt;/p&gt;&lt;p&gt;ಸದ್ಯ ಸ್ಟಿಫನ್ ಫ್ಲೆಮಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್&zwnj; ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಮೂರು ಸೀಸನ್&zwnj;ಗಳಿಂದ ದಯನೀಯ ವೈಫಲ್ಯ ಅನುಭವಿಸುತ್ತಾ ಬಂದಿದೆ. ಹೀಗಿರುವಾಗಲೇ ದಿನೇಶ್ ಕಾರ್ತಿಕ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್&zwnj;ನಲ್ಲಿ ಸ್ಟಿಫನ್ ಫ್ಲೆಮಿಂಗ್ ಸ್ಥಾನವನ್ನು ತುಂಬಬಹುದು ಎಂದು ಆಸೀಸ್ ದಿಗ್ಗಜ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ದಿನೇಶ್ ಕಾರ್ತಿಕ್ ಸಿಎಸ್&zwnj;ಕೆ ಪಾಲಾಗ್ತಾರಾ?&lt;/strong&gt;&lt;/h2&gt;&lt;p&gt;'ದಿನೇಶ್ ಕಾರ್ತಿಕ್ ಅವರನ್ನು ಚೆನ್ನೈಗೆ ಕರೆತರುವ ವಿಷಯವನ್ನು ಸಿಎಸ್&zwnj;ಕೆ ಫ್ರಾಂಚೈಸಿ ಸರಿಯಾಗಿ ನಿಭಾಯಿಸುತ್ತದೆ ಎಂದು ನಾನು ಬಲವಾಗಿ ಆಶಿಸುತ್ತಿದ್ದೇನೆ. ಫ್ಲೆಮಿಂಗ್ ಅವರ ಜತೆ ಸೇರಿ ಧೋನಿ ಅದ್ಭುವಾಗಿ ತಂಡವನ್ನು ನಿಭಾಯಿಸಿದ್ದರು. ಅದು ಸಿಎಸ್&zwnj;ಕೆ ತಂಡದ ನಿಜವಾದ ಪ್ರಬಲ ಶಕ್ತಿಯ ಕೇಂದ್ರವಾಗಿತ್ತು ಎಂದು ಹೇಡನ್ ಸ್ಪೋರ್ಟ್&zwnj;ಸ್ಟಾರ್&zwnj;ಗೆ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಇದೀಗ ಸಿಎಸ್&zwnj;ಕೆ ಮುಂದಿನ ಕೋಚ್ ಯಾರಾಗಬಹುದು ಎನ್ನುವ ವಿಚಾರವಾಗಿ ಕೆಲವು ಹೆಸರುಗಳು ಪ್ರಸ್ತಾಪವಾಗಿವೆ. ಅವುಗಳಲ್ಲಿ ದಿನೇಶ್ ಕಾರ್ತಿಕ್ ಅವರ ಹೆಸರು ಕೂಡಾ ಒಂದಾಗಿದೆ. ಸಿಎಸ್&zwnj;ಕೆ ಹೆಡ್&zwnj;ಕೋಚ್ ಆಗುವಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವರು ಸಿದ್ದರಾಗಿದ್ದಾರೆ ಎಂದೇ ನನಗೆ ಅನಿಸುತ್ತಿದೆ. ತಂಡಕ್ಕೆ ಸ್ಥಳೀಯ ಕೋಚ್ ಇರುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಸಿಎಸ್&zwnj;ಕೆ ಮಾಜಿ ಆಟಗಾರರೂ ಆಗಿರುವ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.&lt;/p&gt;&lt;p&gt;ನನಗೆ ಗೊತ್ತು ಸಾಕಷ್ಟು ಫ್ರಾಂಚೈಸಿಗಳು, ಅಂತಾರಾಷ್ಟ್ರೀಯ ಕ್ರಿಕೆಟ್ ಕೋಚ್ ಹಿಂದೆ ಓಡುತ್ತಾರೆ ಅಂತ. ಸ್ಥಳೀಯವಾಗಿ ಬೇರು ಮಟ್ಟದಲ್ಲಿ ಪ್ರತಿಭೆಗಳ ಬಗ್ಗೆ ಮಾಹಿತಿಯಿರುವ, ಚೆನ್ನೈನ ಹಿನ್ನೆಲೆಯನ್ನು ಹೊಂದಿರುವ ದಿನೇಶ್ ಕಾರ್ತಿಕ್, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೂಕ್ತವಾದ ಹೆಡ್&zwnj;ಕೋಚ್ ಆಗಬಹುದು ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ದಿನೇಶ್ ಕಾರ್ತಿಕ್ ಮನೆಯಂಗಳದಲ್ಲಿ ಚೆಂಡು:&lt;/strong&gt;&lt;/h3&gt;&lt;p&gt;ಐಪಿಎಲ್&zwnj;ಗೆ ವಿದಾಯ ಹೇಳಿದ ಬಳಿಕ ತಮಿಳುನಾಡು ಮೂಲದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಆರ್&zwnj;ಸಿಬಿ ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಕೆ ಮಾರ್ಗದರ್ಶನದಲ್ಲಿ ಆರ್&zwnj;ಸಿಬಿ ತಂಡವು 2025 ಹಾಗೂ 2026ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಸಮಯ ಸಿಕ್ಕಾಗಲೆಲ್ಲಾ ಡಿಕೆ ತಾವು ಐಪಿಎಲ್&zwnj;ನಲ್ಲಿ ಚೆನ್ನೈ ಪರ ಆಡುವ ಬಗ್ಗೆ ಒಲವು ತೋರಿದ್ದರು. ಆದರೆ ಡಿಕೆಯನ್ನು ಸಿಎಸ್&zwnj;ಕೆ ಖರೀದಿಸಿರಲಿಲ್ಲ. ಇದೀಗ ಮುಂಬರುವ ಸೀಸನ್&zwnj;ನಲ್ಲಿ ಡಿಕೆ ಆರ್&zwnj;ಸಿಬಿ ತಂಡದಲ್ಲೇ ಮುಂದುವರೆಯುತ್ತಾರೋ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ತೆಕ್ಕೆಗೆ ಜಾರುತ್ತಾರೋ ಕಾದು ನೋಡಬೇಕಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/dinesh-karthik-to-replace-stephen-fleming-at-csk-matthew-hayden-makes-big-statement-kvn/articleshow-xoghdx9"/>
        </item>
    </channel>
</rss>
