<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 18 May 2026 17:27:35 +0530</lastBuildDate>
        <atom:link href="https://kannada.asianetnews.com/rss/special" rel="self" type="application/rss+xml"/>
        <item>
            <title><![CDATA[GOA SECRET: ಸಿಟಿ ಜಂಜಾಟಕ್ಕೆ ಬೇಸತ್ತು ಗೋವಾ ಕಡೆ ಮುಖ ಮಾಡಿದ ಯುವಕರು! ಏನಿದು 'ಸುಸೆಗಾಡ್' ಲೈಫ್‌ಸ್ಟೈಲ್?]]></title>
            <link>https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m</link>
            <guid isPermaLink="true">https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m</guid>
            <pubDate>Mon, 18 May 2026 17:27:25 +0530</pubDate>
            <description><![CDATA[&lt;p&gt;ದೊಡ್ಡ ನಗರಗಳ ಒತ್ತಡದ ಬದುಕಿನಿಂದ ಬೇಸತ್ತಿರುವ ಯುವ ವೃತ್ತಿಪರರು ಈಗ ಗೋವಾದತ್ತ ಮುಖ ಮಾಡುತ್ತಿದ್ದಾರೆ. ವರ್ಕ್ ಫ್ರಮ್ ಹೋಮ್ ಅವಕಾಶದಿಂದಾಗಿ, ಅವರು ಗೋವಾದ ಪ್ರಸಿದ್ಧ 'ಸುಸೆಗಾಡ್' ಅಂದರೆ ನಿಧಾನ, ನಿರಾಳ ಜೀವನಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxdq410w38fqtaew79gds2w,imgname-goa-lifestyle-1779103928352.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗಿನ ಯುವಕರಿಗೆ ಗೋವಾ ಅಂದ್ರೆ ಬರೀ ಹಾಲಿಡೇ ಡೆಸ್ಟಿನೇಶನ್ ಅಲ್ಲ, ಅದೊಂದು ಲೈಫ್&zwnj;ಸ್ಟೈಲ್ ಆಯ್ಕೆಯಾಗಿದೆ. ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳಿಂದ ಹಿಡಿದು ಸ್ಟಾರ್ಟ್&zwnj;ಅಪ್ ಸಂಸ್ಥಾಪಕರು, ಕಲಾವಿದರು, ಕ್ರಿಯೇಟರ್ಸ್&zwnj;ವರೆಗೆ ಅನೇಕರು ಈಗ ದೊಡ್ಡ ನಗರಗಳ ಗದ್ದಲವನ್ನು ಬಿಟ್ಟು ಗೋವಾದ ಪ್ರಸಿದ್ಧ 'ಸುಸೆಗಾಡ್' ಜೀವನಶೈಲಿಯನ್ನು ಅರಸಿ ಹೊರಟಿದ್ದಾರೆ. ಅಂದರೆ, ನಿಧಾನ, ನಿರಾಳ ಮತ್ತು ಸಮತೋಲನದ ಬದುಕು.&lt;/p&gt;&lt;p&gt;ಗೋವಾದಲ್ಲಿ 'ಸುಸೆಗಾಡ್' ಅನ್ನೋ ಪದ ತುಂಬಾನೇ ಫೇಮಸ್. ಇದರರ್ಥ ನಿರಾಳ, ಆರಾಮದಾಯಕ, ಒತ್ತಡವಿಲ್ಲದ ಜೀವನಶೈಲಿ. ಆದರೆ ಸ್ಥಳೀಯರ ಪ್ರಕಾರ, ಜನರು ಇದನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. &quot;ಸುಸೆಗಾಡ್ ಅಂದ್ರೆ ಏನೂ ಕೆಲಸ ಮಾಡದೆ ಇರುವುದಲ್ಲ, ಬದಲಿಗೆ ಯಾವುದೇ ಅವಸರವಿಲ್ಲದೆ, ಒತ್ತಡವಿಲ್ಲದೆ ಆರಾಮವಾಗಿ ಬದುಕುವುದು,&quot; ಅಂತ ಗೋವಾದ ಕಲಾವಿದರೊಬ್ಬರು 'ಓ ಹೆರಾಲ್ಡೋ' ಪತ್ರಿಕೆಗೆ ತಿಳಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳ ಟ್ರಾಫಿಕ್, ದುಬಾರಿ ಬಾಡಿಗೆ, ಒತ್ತಡದ ಕೆಲಸದಿಂದ ಬೇಸತ್ತ ಯುವಕರಿಗೆ ಈ 'ಸುಸೆಗಾಡ್' ಐಡಿಯಾ ಹೆಚ್ಚು ಇಷ್ಟವಾಗುತ್ತಿದೆ. ಇಂಟರ್&zwnj;ನೆಟ್ ಸಂಪರ್ಕ ಸುಧಾರಿಸಿರುವುದು ಮತ್ತು ರಿಮೋಟ್ ವರ್ಕ್ ಅವಕಾಶಗಳು ಹೆಚ್ಚಿರುವುದರಿಂದ, ಯುವ ವೃತ್ತಿಪರರು ಬೀಚ್ ಪಕ್ಕ ಕುಳಿತು ತಮ್ಮ ವೃತ್ತಿಜೀವನವನ್ನು ಆನ್&zwnj;ಲೈನ್&zwnj;ನಲ್ಲಿ ಮುಂದುವರಿಸಲು ಸಾಧ್ಯವಾಗಿದೆ.&lt;/p&gt;&lt;p&gt;ರೆಡ್ಡಿಟ್&zwnj;ನಲ್ಲಿ ಗೋವಾಗೆ ಶಿಫ್ಟ್ ಆದ ಅನುಭವ ಹಂಚಿಕೊಂಡ ಯುವಕರು ಇದನ್ನೊಂದು 'ಲೈಫ್&zwnj;ಸ್ಟೈಲ್ ರೀಸೆಟ್' ಅಂತ ಕರೆದಿದ್ದಾರೆ. &quot;ದೊಡ್ಡ ನಗರಗಳಂತೆ ಇಲ್ಲಿ ಸದಾ ಅವಸರದ ಭಾವನೆ ಇರುವುದಿಲ್ಲ,&quot; ಎಂದು ಒಬ್ಬ ರಿಮೋಟ್ ವರ್ಕರ್ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, &quot;ಓದುವುದು, ಕೆಫೆಗಳಿಗೆ ಹೋಗುವುದು, ಈಜುವುದು ಮತ್ತು ಶಾಂತ ಸಂಜೆಗಳನ್ನು ಕಳೆಯುತ್ತಾ, ಒಂದು ರೀತಿ ನಿವೃತ್ತಿ ಜೀವನದಂತಹ ನಿರಾಳ ಬದುಕು ಬೇಕು,&quot; ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಇದನ್ನೂ ಓದಿ: ತುಂಬಿ ತುಳುಕುತ್ತಿರುವ ಬೀಚ್&zwnj;ಗಳು, ಟ್ರಾಫಿಕ್ ಜಾಮ್, ದುಬಾರಿ ಬೆಲೆ: ಗೋವಾ ಪ್ರವಾಸೋದ್ಯಮ ಸಂಕಷ್ಟದಲ್ಲಿದೆಯೇ?&lt;/p&gt;&lt;p&gt;ಅಸ್ಸಾಗಾಂವ್, ಸಿಯೋಲಿಮ್, ಅಲ್ಡೋನಾ ಮತ್ತು ದಕ್ಷಿಣ ಗೋವಾದ ಕೆಲವು ಭಾಗಗಳು ಈಗ ನೈಟ್&zwnj;ಲೈಫ್&zwnj;ಗಿಂತ ಹೆಚ್ಚಾಗಿ ಹಸಿರು, ಸೃಜನಶೀಲ ಸಮುದಾಯಗಳು ಮತ್ತು ನಿಧಾನಗತಿಯ ಜೀವನವನ್ನು ಬಯಸುವ ದೀರ್ಘಕಾಲಿಕ ನಿವಾಸಿಗಳನ್ನು ಆಕರ್ಷಿಸುತ್ತಿವೆ. ಹೊಸ ಕೆಫೆಗಳು, ಕೋ-ವರ್ಕಿಂಗ್ ಸ್ಪೇಸ್&zwnj;ಗಳು ಮತ್ತು ವೆಲ್&zwnj;ನೆಸ್ ಕೇಂದ್ರಗಳು ಕೂಡ ಯುವ ನಗರವಾಸಿಗಳನ್ನು ಸೆಳೆಯುತ್ತಿವೆ.&lt;/p&gt;&lt;p&gt;ಆದರೆ, ಗೋವಾದ ಈ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಜೀವನ ವೆಚ್ಚ ಏರಿಕೆ, ಅತಿಯಾದ ಕಟ್ಟಡ ನಿರ್ಮಾಣ ಮತ್ತು ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಇತ್ತೀಚೆಗೆ, ಒಬ್ಬ ಸಾಫ್ಟ್&zwnj;ವೇರ್ ಎಂಜಿನಿಯರ್ ಗೋವಾದಲ್ಲಿ ಒಬ್ಬರೇ ವಾಸಿಸಲು ತಿಂಗಳಿಗೆ ಸುಮಾರು ₹82,000 ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದು, ಇದು ವೈರಲ್ ಆಗಿತ್ತು.&lt;/p&gt;&lt;p&gt;ಹೆಚ್ಚುತ್ತಿರುವ ವಲಸೆ ಮತ್ತು ರಿಯಲ್ ಎಸ್ಟೇಟ್ ಹಾವಳಿಯಿಂದ ಗೋವಾದ ಅಸ್ಮಿತೆಯನ್ನು ಕಾಪಾಡುವ ಬಗ್ಗೆ ಸ್ಥಳೀಯರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಬರುವವರು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಬೇಕು, ಕೊಂಕಣಿ ಕಲಿಯಬೇಕು ಮತ್ತು ಗೋವಾವನ್ನು ಕೇವಲ 'ಪಾರ್ಟಿ ರಾಜ್ಯ' ಎಂದು ಪರಿಗಣಿಸಬಾರದು ಎಂದು ಕೆಲವು ನಿವಾಸಿಗಳು ಆನ್&zwnj;ಲೈನ್&zwnj;ನಲ್ಲಿ ಸಲಹೆ ನೀಡಿದ್ದಾರೆ.&lt;/p&gt;&lt;p&gt;ಈ ಎಲ್ಲಾ ಸವಾಲುಗಳ ನಡುವೆಯೂ, ಗೋವಾದ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ನಿರಂತರ ಒತ್ತಡ ಮತ್ತು ಉತ್ಪಾದಕತೆಯೇ ಮುಖ್ಯವಾಗಿರುವ ಈ ಜಗತ್ತಿನಲ್ಲಿ, ಗೋವಾದ ನಿಧಾನಗತಿಯ ಜೀವನವು ಶಾಂತಿ, ನೆಮ್ಮದಿ ಮತ್ತು ಉತ್ತಮ ವರ್ಕ್-ಲೈಫ್ ಬ್ಯಾಲೆನ್ಸ್ ಹುಡುಕುತ್ತಿರುವ ಯುವ ಪೀಳಿಗೆಗೆ ಒಂದು ದೊಡ್ಡ ಆಕರ್ಷಣೆಯಾಗಿದೆ.&lt;/p&gt;&lt;p&gt;ಇದನ್ನೂ ಓದಿ: ನಿಮ್ಮ ಗೋವಾ ಪ್ರವಾಸವನ್ನು ಮತ್ತಷ್ಟು ದಿನ ವಿಸ್ತರಿಸುವಂತೆ ಮಾಡುವ 5 ಅನುಭವಗಳಿವು&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m"/>
        </item>
        <item>
            <title><![CDATA[ಛಲ, ಪರಿಶ್ರಮಕ್ಕೆ ಮತ್ತೊಂದು ಹೆಸರೇ ದೇವೇಗೌಡ್ರು; ಕೆಂಪುಕೋಟೆಯ ಮೇಲೂ ಹಳೇಕೋಟೆ ಮರೆಯದ ಮಾಜಿ ಪ್ರಧಾನಿ]]></title>
            <link>https://kannada.asianetnews.com/special/former-pm-jds-founder-hd-deve-gowda-is-another-name-for-perseverance-and-perseverance-mrq/articleshow-qe2zmgm</link>
            <guid isPermaLink="true">https://kannada.asianetnews.com/special/former-pm-jds-founder-hd-deve-gowda-is-another-name-for-perseverance-and-perseverance-mrq/articleshow-qe2zmgm</guid>
            <pubDate>Mon, 18 May 2026 07:17:50 +0530</pubDate>
            <description><![CDATA[ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹರದನಹಳ್ಳಿಯ ಸ್ಥಳೀಯ ರಾಜಕಾರಣದಿಂದ ರಾಷ್ಟ್ರದ ಪ್ರಧಾನಿ ಹುದ್ದೆಗೇರಿದ ಅವರ ಆರು ದಶಕಗಳ ರಾಜಕೀಯ ಪಯಣವನ್ನು ಈ ಲೇಖನ ವಿವರಿಸುತ್ತದೆ. ರೈತಪರ ಕಾಳಜಿ, ಬೆಂಗಳೂರಿನ ಐಟಿ ಬೆಳವಣಿಗೆ, ದೆಹಲಿ ಮೆಟ್ರೋದಂತಹ ಅವರ ಪ್ರಮುಖ ಕೊಡುಗೆಗಳು ಮತ್ತು ಅವರ ರಾಜಕೀಯ ತತ್ವಗಳನ್ನು ಇದು ಪರಿಚಯಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krcp9zctw63jc5hzwkp8y3dm,imgname-----------------------2026-05-12t050436.576-1778542509465.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೆ. ಎನ್. ಚಕ್ರಪಾಣಿ, ಬಿಜೆಪಿ ಹಿರಿಯ ಮುಖಂಡರು&lt;/strong&gt;&lt;/p&gt;&lt;p&gt;(ಹರದನಹಳ್ಳಿಯ ಹಳ್ಳಿಕಟ್ಟೆ ರಾಜಕಾರಣದಿಂದ ಹಿಡಿದು ಗೌಡರು ತಮ್ಮ ಛಾಪನ್ನು ರಾಷ್ಟ್ರ ರಾಜಕಾರಣ, ವಿದೇಶದಲ್ಲೂ ಮೂಡಿಸಿದ್ದವರು. ಕೃಷಿ ಕುಟುಂಬದಲ್ಲಿ ಬೆಳೆದು ಬಂದಿದ್ದರೂ ಎಲ್ಲಾ ಕ್ಷೇತ್ರಗಳ ಬಗ್ಗೆಯೂ ಜ್ಞಾನ ಹೊಂದಿದ್ದರು. ಕಾಯಕ ನಂಬಿ ಬದುಕಿದ್ದ ದೇವೇಗೌಡರ ಅಭಿವೃದ್ಧಿಗೂ ಇಂದಿಗೂ ಅಚ್ಚಳಿಯದೇ ಉಳಿದು ಬಿಟ್ಟಿದೆ)&lt;/p&gt;&lt;p&gt;ರಾಜಕಾರಣದಲ್ಲಿ ಎರಡು ರೀತಿಯಲ್ಲಿ ನಾಯಕರಾಗಿ ಬೆಳೆದವರನ್ನು ಕಾಣಬಹುದು. ಕೆಲವರು ಸಂಪರ್ಕ, ಸಂಬಂಧಗಳ ಬಲದಿಂದ ಅಗ್ರಸ್ಥಾನಕ್ಕೇರಿದವರು. ಇನ್ನು ಕೆಲವರು ಛಲ, ಸರಳತೆ, ಪರಿಶ್ರಮ ಹಾಗೂ ಜನರ ಬಗೆಗಿನ ತುಡಿತದಿಂದಾಗಿ ಉನ್ನತ ಸ್ಥಾನಕ್ಕೇರಿದವರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದರಲ್ಲಿ ಎರಡನೇ ವರ್ಗಕ್ಕೆ ಸೇರಿದವರು.&lt;/p&gt;&lt;p&gt;ಭಾರತದ 11ನೇ ಪ್ರಧಾನಿಯಾಗಿದ್ದ ದೇವೇಗೌಡರ ಆರು ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ರಾಜಕಾರಣದಲ್ಲಿದ್ದಾರೆ. ಅವರ ಸಾರ್ವಜನಿಕ ಬದುಕು ರಾಜಕಾರಣವನ್ನೂ ಮೀರಿದ ಕ್ಷಮತೆ, ದೂರದರ್ಶಿತ್ವ, ವಿನಮ್ರತೆ, ರೈತ ಪರ ಚಿಂತನೆಯ ಪಯಣವಾಗಿದೆ.&lt;/p&gt;&lt;h2&gt;&lt;strong&gt;1962ರಲ್ಲಿ ರಾಜಕೀಯ ಪ್ರವೇಶ&lt;/strong&gt;&lt;/h2&gt;&lt;p&gt;ಹೊಳೆನರಸೀಪುರ ಕ್ಷೇತ್ರದಿಂದ 1962ರಲ್ಲಿ ಸ್ವತಂತ್ರವಾಗಿ ಆಯ್ಕೆಯಾಗುವ ಮೂಲಕ ಚೊಚ್ಚಲ ಬಾರಿಗೆ ದೇವೇಗೌಡರು ಶಾಸಕರಾದರು. ಸಂಘಟನಾ ಸಾಮರ್ಥ್ಯ, ಸ್ಥಳೀಯ ಸಮಸ್ಯೆಗಳ ಕುರಿತಾದ ಕಾಳಜಿಯಿಂದ ಜನರ ವಿಶ್ವಾಸ ಗಳಿಸಿದರು. ಕ್ರಮೇಣ, ನೀರಾವರಿ ಯೋಜನೆಗಳು ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ ಅತ್ಯಂತ ಪ್ರಬಲ ಧ್ವನಿಯಾಗಿ ಹೊರಹೊಮ್ಮಿದರು.&lt;/p&gt;&lt;p&gt;ದೇವೇಗೌಡರು 1975ರ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ವೇಳೆ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದರು. ಆದರೆ, ಜೈಲಿನಲ್ಲಿ ಸಂಸತ್ತಿನ ನಡಾವಳಿಗಳು, ಅರ್ಥಶಾಸ್ತ್ರ, ಆಡಳಿತ ಹಾಗೂ ಭಾರತದ ರಾಜಕಾರಣದ ಚರಿತ್ರೆ ಕುರಿತು ಅಧ್ಯಯನ ನಡೆಸಿ ಜ್ಞಾನವನ್ನು ಹೆಚ್ಚಿಸಿಕೊಂಡರು.&lt;/p&gt;&lt;p&gt;ಅಧಿಕಾರವಿರಲಿ, ಇಲ್ಲದಿರಲಿ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಅವರ ಆಸಕ್ತಿಯ ವಿಷಯಗಳು. 1994ರಿಂದ 96ರ ಅವಧಿಯಲ್ಲಿ ಸಿಎಂ ಆಗಿದ್ದಾಗ ಹಲವಾರು ನೀರಾವರಿ ಮತ್ತು ಮೂಲಸೌಕರ್ಯ ಯೋಜನೆಗಳ ರೂವಾರಿ. ನಾಲಾ ಸಂಪರ್ಕಗಳು, ಅಣೆಕಟ್ಟುಗಳ ಜಲಸಂಗ್ರಹ ಸಾಮರ್ಥ್ಯ, ವಿವಿಧ ಭಾಗಗಳ ಕೃಷಿ ಪದ್ಧತಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಬಲ್ಲವರು. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಮೂಲಕ ಅಧಿಕಾರದಿಂದ ವಂಚಿತರಾಗಿದ್ದ ಲಕ್ಷಾಂತರ ಜನರಿಗೆ ರಾಜಕೀಯ ಶಕ್ತಿ ತುಂಬಿದರು.&lt;/p&gt;&lt;p&gt;ರೈತನ ಮಗನಾಗಿರುವ ಅವರಿಗೆ ಸಹಜವಾಗಿಯೇ ಕೃಷಿ ಆಸಕ್ತಿಯ ಕ್ಷೇತ್ರ. ಆದರೆ, ಅದರಾಚೆಗೂ ವಿವಿಧ ವಲಯಗಳ ಬೆಳವಣಿಗೆಯ ಸಾಮರ್ಥ್ಯವನ್ನೂ ಅರಿತಿದ್ದರು. ಬೆಂಗಳೂರು ಇಂದು ಭಾರತದ ತಂತ್ರಜ್ಞಾನ ರಾಜಧಾನಿ ಎಂದು ಹೆಸರಾಗಿರುವುದರ ಹಿಂದೆ ದೇವೇಗೌಡರು ಪಾತ್ರ ಮಹತ್ವದ್ದು.&lt;/p&gt;&lt;h3&gt;&lt;strong&gt;ವಿದೇಶದಲ್ಲೂ ಮಿಂಚು&lt;/strong&gt;&lt;/h3&gt;&lt;p&gt;ಸ್ವಿಟ್ಜರ್&zwnj;ಲೆಂಡ್ ನ ದಾವೋಸ್&zwnj;ನಲ್ಲಿ ಪ್ರತಿ ವರ್ಷ ನಡೆಯುವ ವಿಶ್ವ ಆರ್ಥಿಕ ಶೃಂಗದಲ್ಲಿ ಪಾಲ್ಗೊಂಡ ಕರ್ನಾಟಕದ ಮೊದಲ ಮುಖ್ಯಮಂತ್ರಿ. ಪ್ರಧಾನಿಯಾಗಿಯೂ ಅವರು ಆ ಸಮಾವೇಶದಲ್ಲಿ ಭಾಗವಹಿಸಿದ್ದರು. ಆಗ ಬಿಲ್ ಗೇಟ್ಸ್ ಸೇರಿದಂತೆ ಜಾಗತಿಕ ಉದ್ಯಮಿಗಳನ್ನು ಭೇಟಿಯಾಗಿ ಸಮಾಲೋಚಿಸಿದ್ದರು.&lt;/p&gt;&lt;p&gt;ದೇಶವಿನ್ನೂ ನಿಧಾನಕ್ಕೆ ಮುಕ್ತ ಆರ್ಥಿಕತೆಗೆ ತೆರೆದುಕೊಳ್ಳುತ್ತಿದ್ದ ದಿನಗಳಲ್ಲೇ ಕರ್ನಾಟಕವನ್ನು ತಂತ್ರಜ್ಞಾನ ಉದ್ದಿಮೆಗಳ ಹೂಡಿಕೆಗೆ ಪ್ರಶಸ್ತ ತಾಣ ಎಂಬುದನ್ನು ಪ್ರತಿಪಾದಿಸಿದರು. ಅವರ ದೀರ್ಘಾವಧಿ ತೆರಿಗೆ ಪ್ರೋತ್ಸಾಹಕ ಕ್ರಮಗಳು ಬೆಂಗಳೂರು ದೇಶದ ಸಿಲಿಕಾನ್ ಸಿಟಿಯಾಗಿ ವೇಗವಾಗಿ ಬೆಳೆಯಲು ಕಾರಣವಾಯಿತು ಎಂಬುದು ಉಲ್ಲೇಖಾರ್ಹ.&lt;/p&gt;&lt;p&gt;1996ರಲ್ಲಿ ಹಠಾತ್ ರಾಜಕೀಯ ಬೆಳವಣಿಗೆಯಿಂದ ಪ್ರಧಾನಿಯಾಗಿ ನೇಮಕಗೊಂಡಾಗ ಅವರ ಸಾಮರ್ಥ್ಯದ ಬಗ್ಗೆ ಅನುಮಾನಗೊಂಡವರೇ ಹೆಚ್ಚು. ಸರಳ ಉಡುಪು, ರೈತನಂತೆ ಕಾಣುತ್ತಿದ್ದ ಅವರ ಧಿರಿಸನ್ನು ನೋಡಿ ಅವರ ಸಾಮರ್ಥ್ಯವನ್ನು ತಪ್ಪಾಗಿ ಅಂದಾಜಿಸಿದ್ದರು. ಆದರೆ ಪ್ರಧಾನಿಯಾಗಿದ್ದು ಕೇವಲ 11 ತಿಂಗಳಷ್ಟೇ ಆದರೂ ಅಚ್ಚಳಿಯದ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇಂದಿಗೂ ಅದು ಸ್ಮರಣೀಯ.&lt;/p&gt;&lt;h3&gt;&lt;strong&gt;ದಿಲ್ಲಿ ಮೆಟ್ರೋ ರೂವಾರಿ&lt;/strong&gt;&lt;/h3&gt;&lt;p&gt;ದೇವೇಗೌಡರು ಪ್ರಧಾನಿಯಾಗಿ ಮಾಡಿದ ಕೆಲಸಗಳ ಬಗ್ಗೆ ಉಲ್ಲೇಖಿಸುವಾಗ ದೆಹಲಿ ಮೆಟ್ರೋ ಕಾರ್ಯಯೋಜನೆಗೆ ಅನುಮೋದನೆ ದೊರೆತದ್ದು ಅವರ ಅವಧಿಯಲ್ಲಿ ಎಂಬುದನ್ನು ನೆನೆಯಬೇಕಾಗುತ್ತದೆ. ರಾಜಕೀಯಕ್ಕೆ ಆಸ್ಪದವಾಗದಂತೆ ಇ.ಶ್ರೀಧರನ್ ಅವರಿಗೆ ಅದರ ಅನುಷ್ಠಾನದ ಜವಾಬ್ದಾರಿ ವಹಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ.&lt;/p&gt;&lt;p&gt;ದೇಶದ ಈಶಾನ್ಯ ರಾಜ್ಯಗಳಿಗೆ ಪ್ರಾಮುಖ್ಯ ನೀಡಬೇಕೆಂದು ಲೋಹಿತ್ ನದಿಗೆ ದೋಲಾ-ಸದಿಯಾ ಸೇತುವೆಯ ನಿರ್ಮಾಣ ಯೋಜನೆ ಅನುಮೋದಿಸಿದರು. ದಶಕಗಳಿಂದ ಕಡೆಗಣಿಸಲ್ಪಟ್ಟಿದ್ದ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ, ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಪ್ರಸ್ತಾಪ ಮಾಡಿದ ಮೊದಲ ಪ್ರಧಾನಿ ಎನ್ನುವ ಹಿರಿಮೆ ಇವರದ್ದು. ದೇಶದ ಭದ್ರತೆ ವಿಷಯದಲ್ಲೂ ಖಡಕ್ ಧೋರಣೆ ಹೊಂದಿದ್ದರು. ಕಣಿವೆ ರಾಜ್ಯಕ್ಕೆ ಪದೇಪದೇ ಭೇಟಿ ನೀಡಿ ಸ್ಥಳೀಯರೊಂದಿಗೆ ನೇರವಾಗಿ ಚರ್ಚಿಸುತ್ತಿದ್ದರು.&lt;/p&gt;&lt;p&gt;ಸಾಂಸ್ಥಿಕ ಸ್ವಾಯತ್ತತೆಯನ್ನು ಗೌರವಿಸುತ್ತಿದ್ದ ಅವರು, ಮಧ್ಯಪ್ರವೇಶಿಸಲು ಇಷ್ಟಪಡುತ್ತಿರಲಿಲ್ಲ. ಇಂತಹ ವಿಷಯಗಳಲ್ಲಿ ಕೊಂಚ ರಾಜಿ ಮಾಡಿಕೊಂಡಿದ್ದರೆ ಪ್ರಧಾನಿಯಾಗಿ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಬಹುದಿತ್ತು ಎಂಬ ಅಭಿಪ್ರಾಯಗಳೂ ಇವೆ. ಆದರೆ, ದೇವೇಗೌಡರು ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ, ಸ್ವಾಭಿಮಾನ ಮರೆತವರಲ್ಲ.&lt;/p&gt;&lt;h3&gt;&lt;strong&gt;ದಳ ಸ್ಥಾಪಿಸಿದ್ದೇ ರೋಚಕ&lt;/strong&gt;&lt;/h3&gt;&lt;p&gt;ಪ್ರಧಾನಿಯಾಗಿ ಕೆಳಗಿಳಿದ ನಂತರ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದರು. ದೆಹಲಿಯಿಂದ ಮರಳಿದ ನಂತರ 1999ರಲ್ಲಿ ಜೆಡಿಎಸ್ ಕಟ್ಟಿ, ರಾಜ್ಯ ರಾಜಕಾರಣದ ದಿಕ್ಸೂಚಿಯಾಗಿ ಉಳಿದರು.&lt;/p&gt;&lt;p&gt;ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ಧ್ವಜ ಹಾರಿಸುವಾಗಲೂ ಹರದನಹಳ್ಳಿಯ ಹಳೇಕೋಟೆಯನ್ನು ಮರೆತವರಲ್ಲ. ದೊಡ್ಡ ಪರಿವಾರದ ಹಿರಿಯರಾಗಿ ದೇವೇಗೌಡರು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ತತ್ತ್ವ ಹಾಗೂ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡವರಲ್ಲ. ಅವರ ದೂರದೃಷ್ಟಿ ಕೆಲವೊಮ್ಮೆ ಆಪ್ತರಿಗೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ, ಅವರ ನಿರ್ಧಾರ-ನಿಲುವುಗಳು ತಪ್ಪಾಗಿ ವ್ಯಾಖ್ಯಾನವಾಗಿದ್ದೂ ಇದೆ. ಆದರೆ ಎದೆಗುಂದಿದವರಲ್ಲ.&lt;/p&gt;&lt;p&gt;ದೇಶದ ಗ್ರಾಮೀಣ ಭಾಗ ಮತ್ತು ಕೃಷಿ ವಲಯಕ್ಕೆ ಬಜೆಟ್&zwnj;ನಲ್ಲಿ ಸಿಂಹಪಾಲು ನೀಡಿ ಆರ್ಥಿಕತೆ ಗಟ್ಟಿಗೊಳಿಸಿದರು. ಅವರ ಕೃಷಿ ಪರ ನಿಲುವುಗಳನ್ನು ಗೌರವಿಸಿ ಪಂಜಾಬಿನಲ್ಲಿ ಅಧಿಕ ಇಳುವರಿಯ ಭತ್ತದ ತಳಿಯೊಂದಕ್ಕೆ ದೇವೇಗೌಡರ ಹೆಸರನ್ನು ಇಡಲಾಗಿದೆ. ಇದು ದಕ್ಷಿಣದ ನಾಯಕರೊಬ್ಬರಿಗೆ ರಾಷ್ಟ್ರಮಟ್ಟದಲ್ಲಿ ಸಂದ ದೊಡ್ಡ ಗೌರವ.&lt;/p&gt;&lt;p&gt;ದೇವೇಗೌಡರು ಎಂದೂ ಅಧಿಕಾರದ ಹಿಂದೆ ಹೋದವರಲ್ಲ. &lsquo;ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ&rsquo; ಎನ್ನುತ್ತಾ ಕೆಲಸ ಮಾಡಿದ್ದವರು. ಎಂದಿಗೂ ಕರ್ಮವನ್ನು (ಕಾರ್ಯವನ್ನು) ಬಿಟ್ಟವರಲ್ಲ. ದೈವವನ್ನು ಮರೆತವರೂ ಅಲ್ಲ. ಶ್ರೀಕೃಷ್ಣ ಬೋಧಿಸಿದ ರೀತಿಯಲ್ಲಿ, &lsquo;ನಿನ್ನ ಕಾರ್ಯವನ್ನು ನೀನು ಮಾಡು, ಫಲಾಫಲಗಳನ್ನು ದೇವನಿಗೆ ಬಿಡು&rsquo; ಎಂಬುದನ್ನು ಅಳವಡಿಸಿಕೊಂಡವರು.&lt;/p&gt;&lt;h3&gt;&lt;strong&gt;ಅರಸು, ಅಟಲ್&zwnj; ಮೆಚ್ಚಿದ ಎಚ್&zwnj;ಡಿಡಿ&lt;/strong&gt;&lt;/h3&gt;&lt;p&gt;ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ, ಸ್ವತಃ ದೇವರಾಜು ಅರಸುರವರೇ, &lsquo;ದೇವೇಗೌಡರು ಸದನದಲ್ಲಿ ಇಲ್ಲದಿದ್ದರೆ ಸ್ವಾರಸ್ಯವೇ ಇರುವುದಿಲ್ಲ&rsquo; ಎನ್ನುತ್ತಿದ್ದರಂತೆ. ಹಾಗೆಯೇ, ದೇವೇಗೌಡರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಅಟಲ್&zwnj; ಬಿಹಾರಿ ವಾಜಪೇಯಿ ಅವರೂ ಗೌಡರನ್ನು ಮನಸಾರೆ ಮೆಚ್ಚಿದ್ದರಂತೆ. ದೇವೇಗೌಡರು ಪ್ರಧಾನಿಯಾಗಿ ಪದಚ್ಯುತಗೊಳ್ಳುವುದು ಸನ್ನಿಹಿತವೆಂಬ ಕ್ಷಣಗಳಲ್ಲಿ &lsquo;ಇಂತಹ ಪ್ರಧಾನಿಯೊಬ್ಬರು ಇನ್ನಷ್ಟು ವರ್ಷಕಾಲ ದೇಶವನ್ನು ಮುನ್ನಡೆಸುವ ಅವಕಾಶ ತಪ್ಪಿಹೋಗುತ್ತಿದೆಯಲ್ಲಾ&rsquo; ಎಂದು ಸ್ವತಃ ವಾಜಪೇಯಿ ಅವರು ವೇದನೆ ಪಟ್ಟಿದ್ದರಂತೆ!&lt;/p&gt;&lt;p&gt;&lsquo;ಆಕಸ್ಮಿಕ ಪ್ರಧಾನಿ&rsquo; (ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್) ಎಂದು ಬಿಂಬಿತರಾದ ದೇವೇಗೌಡರು ತಾವು ನಂಬಿದ ತತ್ತ್ವಗಳು ಹಾಗೂ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಮೇ 18ರಂದು 94ನೇ ವಯಸ್ಸಿಗೆ ಪದಾರ್ಪಣೆ ಮಾಡುತ್ತಿರುವ ಮುತ್ಸದ್ಧಿ ಸಾರ್ವಜನಿಕ ಬದುಕಿನಲ್ಲಿ ನಿಷ್ಠೆ, ತಾಳ್ಮೆ ಹಾಗೂ ಆಡಳಿತಾತ್ಮಕ ಸ್ಪಂದನಶೀಲತೆಗೆ ಅವರು ಕಣ್ಣೆದುರಿಗಿನ ಉದಾಹರಣೆಯಾಗಿದ್ದಾರೆ.&lt;/p&gt;&lt;p&gt;ಕೃಷಿ, ನೀರಾವರಿ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಅವರು ಮಾತನಾಡುತ್ತಾರೆಂದರೆ ಇಡೀ ದೇಶವೇ ಅದನ್ನು ಕಿವಿಗೊಟ್ಟು ಆಲಿಸುತ್ತದೆ. ಇಂತಹ ಮುತ್ಸದ್ಧಿಯಾದ ಗೌಡರು ಶತಾಯುಷಿಗಳಾಗಿ, ಜಗತ್ತಿನ ಅತ್ಯಂತ ಪರಮೋಚ್ಚ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲವಾದ ರಾಜ್ಯಸಭೆಯಲ್ಲಿ ತಮ್ಮ ಧ್ವನಿ ಮೊಳಗಿಸುತ್ತಿರಲಿ ಎಂಬುದು ಪ್ರತಿಯೊಬ್ಬರ ಆಸೆ.&lt;/p&gt;&lt;p&gt;ಹಳ್ಳಿಕಟ್ಟೆಗಳ ಪಂಚಾಯ್ತಿ ರಾಜಕೀಯದಿಂದ ಹಿಡಿದು ದೆಹಲಿಯ ಸಮ್ಮಿಶ್ರ ರಾಜಕಾರಣದವರೆಗೆ, ಹರದನಹಳ್ಳಿಯಿಂದ ಹಿಡಿದು ಜಾಗತಿಕ ಹೂಡಿಕೆ ಶೃಂಗಗಳವರೆಗೆ ಚಾಚಿಕೊಂಡಿರುವ ಅವರ ಬದುಕು ಪ್ರಜಾಪ್ರಭುತ್ವದ ಅನಂತ ಸಾಧ್ಯತೆಗಳನ್ನು ಪ್ರತಿಬಿಂಬಿಸುವ ಯಶೋಗಾಥೆ. ಗೌಡರ ಅನನ್ಯ ಕೊಡುಗೆಗಳನ್ನು ಗೌರವಿಸಿ ಅವರನ್ನು &lsquo;ಭಾರತ ರತ್ನ&rsquo; ಪುರಸ್ಕಾರಕ್ಕೆ ಪರಿಗಣಿಸುವ ಸಮಯ ಆದಷ್ಟು ಬೇಗನೇ ಬರಲಿ ಎಂಬುದೇ ಅವರ ಅಭಿಮಾನಿಗಳು, ಹಿತೈಷಿಗಳ, ಅಭಿಮಾನಿಗಳ ಹಾಗೂ ಸದೃಢ ದೇಶ ನಿರ್ಮಾಣ ಬಯಸುವವರ ಆಶಯವಾಗಿದೆ.&lt;/p&gt;]]></content:encoded>
            <category>special</category>
            <dc:creator>Kannadaprabha News</dc:creator>
            <atom:link href="https://kannada.asianetnews.com/special/former-pm-jds-founder-hd-deve-gowda-is-another-name-for-perseverance-and-perseverance-mrq/articleshow-qe2zmgm"/>
        </item>
        <item>
            <title><![CDATA[ಇದೊಂದು ವೈರಲ್ ಫೋಟೋ ಜಗತ್ತಿನ ನಿದ್ದೆ ಕೆಡಿಸಿದೆ; ನೀವಿನ್ನೂ ನೋಡಿಲ್ವಾ? ಏನೋ ಬರೆದಿದೆ ಅದ್ರಲ್ಲಿ ನೋಡಿ!]]></title>
            <link>https://kannada.asianetnews.com/viral/one-viral-photo-in-social-media-attracts-more-and-teaches-many-things-to-society/articleshow-8aa1iro</link>
            <guid isPermaLink="true">https://kannada.asianetnews.com/viral/one-viral-photo-in-social-media-attracts-more-and-teaches-many-things-to-society/articleshow-8aa1iro</guid>
            <pubDate>Fri, 15 May 2026 17:48:30 +0530</pubDate>
            <description><![CDATA[&lt;p&gt;ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಅಗುತ್ತಿರುವ ಈ ಫೋಟೋ ಇಡೀ ಜಗತ್ತಿನ ನಿದ್ದೆ ಕೆಡಿಸಿದೆ. ಕಾರಣ, ಇದರಲ್ಲಿ ಫೋಟೋ &amp;amp; ಬರಹದ ಮೂಲಕ ಹೇಳಿರೋ ವಿಷಯ ಎಂಥವರನ್ನೂ ಒಮ್ಮೆ ದಂಗುಬಡಿಸುತ್ತದೆ. ನೀವು ಒಮ್ಮೆ ಈ ವೈರಲ್ ಫೋಟೋ ನೋಡಿದರೆ, ತುಂಬಾ ದಿನ ನಿದ್ದೆ ಮಾಡಲಾರಿರಿ.. ಸ್ಟೋರಿ ಒಳಗೆ ಫೋಟೋ ಇದೆ ನೋಡಿ.. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krnqv7kq3bb4rvrj5bq5w140,imgname-viral-post--3--1778846113399.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಈ ವೈರಲ್ ಫೋಟೋ ನೋಡಿ ಒಮ್ಮೆ. ಎಂಥಾ ಮೆಸೇಜ್ ಅಲ್ವಾ?&lt;/strong&gt;&lt;/p&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ (Social Media) ಅದೊಂದು ಇಮೇಜ್ ರೀಲ್ಸ್ (Viral Post) ಸಾಕಷ್ಟು ವೈರಲ್ ಆಗುತ್ತಿದೆ. ಈ ವೈರಲ್ ಪೋಸ್ಟ್&zwnj;ನಲ್ಲಿ ಮಾನವ ನಿರ್ಮಿತ ಸಮಾಜದಲ್ಲಿ, ಅಂದರೆ ನಮ್ಮ ಮನುಷ್ಯ ಜಗತ್ತಿನಲ್ಲಿ ಸಮಾನತೆ, ಸಹಬಾಳ್ವೆ, ಸಹಾನುಭೂತಿ ಸೇರಿದಂತೆ ಸಮಾನತೆ-ಅಸಮಾನತೆ, ಸಹಬಾಳ್ವೆ-ದ್ವೇಷತನ, ನ್ಯಾಯ-ಅನ್ಯಾಯ ಹೀಗೆ ಸಾಕಷ್ಟು ಪದಗಳು ಬಳಕೆಯಲ್ಲಿವೆ. ಆದರೆ ಇಂತಹ ಪದಗಳು ಬಳಕೆಯಲ್ಲಿವೆ ಹೊರತೂ ಆಚರಣೆಯಲ್ಲಿ ಇಲ್ಲ ಅನ್ನೋದು ಹಲವರ ಅನಿಸಿಕೆ, ಕೆಲವರ ಅನುಭವ. ದಿನನಿತ್ಯ ನಾವು ನೋಡುವ, ಕೇಳುವ ಹಾಗೂ ಕೆಲವೊಮ್ಮೆ ಅನುಭವಿಸುವ ಇಂತಹ ಪದಗಳನ್ನು ಬಳಸಿ ಒಂದು ಫ್ಯಾಮಿಲಿ ಇಮೇಜ್ ಸೃಷ್ಟಿಸಿ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ.&lt;/p&gt;&lt;h2&gt;ಗಂಡ, ಹೆಂಡತಿ ಹಾಗೂ ಮಗ ಒಂದು ಸ್ಪೋರ್ಟ್ಸ್&zwnj; ಮ್ಯಾಚ್ ನೋಡುತ್ತಿದ್ದಾರೆ&lt;/h2&gt;&lt;p&gt;ಒಂದು ಕುಟುಂಬ, ಅದರಲ್ಲಿ ಗಂಡ, ಹೆಂಡತಿ ಹಾಗೂ ಮಗ ಒಂದು ಸ್ಪೋರ್ಟ್ಸ್&zwnj; ಮ್ಯಾಚ್ ನೋಡುತ್ತಿದ್ದಾರೆ. ಅಲ್ಲಿ ಪುರುಷ ಹೈಟ್ ಇದ್ದಾರೆ, ಆ ಮಹಿಳೆ ಪುರುಷನಿಗಿಂತ ಸ್ವಲ್ಪ ಕಡಿಮೆ ಎತ್ತರ ಇದ್ದಾರೆ, ಚಿಕ್ಕ ಮಗ ಸಹಜವಾಗಿ ಅಲ್ಲಿ ಎಲ್ಲರಿಗಿಂತ ಚಿಕ್ಕವನು. ಅವರೆಲ್ಲರಲ್ಲಿ, ಅಲ್ಲಿ ಹಾಕಿರುವ ವುಡನ್ ಬೇಲಿ ಮೇಲಿಂದ ಆ ಪುರುಷನಿಗೆ ಮ್ಯಾಚ್ ಕಾಣಿಸುತ್ತದೆ. ಆದರೆ ಎಲ್ಲರಿಗೂ ನಿಂತಿರುವ ನೆಲದ ಮೇಲೆ ಕಾಳಿನ ಕೆಳಗೆ ಮರದ ಮಣೆಯ (wooden support) ಸಪೋರ್ಟ್ ಇದೆ. ಪುರುಷನ ಹೈಟ್&zwnj;ಗೆ ಮರದ ಮಣೆ ಇಲ್ಲದೆಯೂ ಕಾಣಿಸುವಂತಿದೆ, ಅದರೆ ಮಹಿಳೆಗೆ ಕೆಳಗೊಂದು ಮರದ ಮಣೆ ಹಾಕಿದಾಗ ಕಾಣಿಸುತ್ತಿದೆ. ಆದರೆ, ಆ ಪುಟ್ಟ ಹುಡುಗನಿಗೆ ಮರದ ಸಪೋರ್ಟ್ ಇದ್ದರೂ ಏನೂ ಕಾಣಿಸುವುದಿಲ್ಲ.&lt;/p&gt;&lt;p&gt;ಈಗ ಅವರೇನು ಮಾಡಬೇಕೋ ಅದನ್ನು ಮಾಡಿದ್ದಾರೆ. ಪರುಷ ಅಂದರೆ ತಂದೆ ಆ ಮಗು ಎಂದರೆ ತನ್ನ ಮಗನಿಗೆ ತನ್ನ ಕಾಲಿನ ಕೆಳಗೆ ಇದ್ದ ಆ ಮರದ ಮಣೆಯನ್ನು ಕೊಟ್ಟು ತಾನು ಬರಿಯ ನೆಲದ ಮೇಲೆ ನಿಂತು ನೋಡುತ್ತಿದ್ದಾರೆ. ಅಲ್ಲಿಗೆ ಮಗನಿಗೆ ಎರರಡು ಮಣೆ, ತಾಯಿಗೆ ಒಂದು ಮಣೆ ಹಾಕಿದಾಗ ಮ್ಯಾಚ್ ಕಾಣಿಸುತ್ತಿದ್ದರೆ ಅಪ್ಪನಿಗೆ ಮಣೆ ಇಲ್ಲದೆಯೂ ಅಲ್ಲಿನ ದೃಶ್ಯ ಕಾಣಿಸುತ್ತಿದೆ. ಈ ಫೋಟೋ ಮೇಲೆ ಟೆಕ್ಸ್ ಕೂಡ ಹಾಕಲಾಗಿದೆ. ಅದೀಗ ಸಹಜವಾಗಿಯೇ ಹಲವರ ಗಮನ ಸೆಳೆಯುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಕ್ಯಾಪ್ಶನ್&zwnj;ಗಳು ಬಹಳಷ್ಟು ಮಾತುಗಳನ್ನು ಹೇಳುತ್ತಿವೆ&lt;/h3&gt;&lt;p&gt;ಕಾರಣ, ಅಲ್ಲಿನ ಫೋಟೋಗಳು ಹಾಗೂ ಅವುಗಳ ಮೇಲಿರುವ ಕ್ಯಾಪ್ಶನ್&zwnj;ಗಳು ಬಹಳಷ್ಟು ಮಾತುಗಳನ್ನು ಹೇಳುತ್ತಿವೆ. ಸಮಾನತೆ, ಅಗತ್ಯತೆ ಹಾಗೂ ಅನಿವಾರ್ಯತೆ ಎಂಬಂತಿರುವ ನ್ಯಾಯ ಈ ಎಲ್ಲ ಅಂಶಗಳ ಮೇಲೆ ಅವು ಬೆಳಕು ಚೆಲ್ಲುತ್ತಿವೆ. ನ್ಯಾಯ ಎಂಬುದು ಎಲ್ಲರಿಗೂ ಅಗತ್ಯವಾಗಿ ಸಿಗಬೇಕು ಎಂಬರ್ಥದಲ್ಲಿ ಈ ಪೋಸ್ಟ್ ವೈರಲ್ ಅಗುತ್ತಿದೆ. ಸಮಾನತೆ, ಅಗತ್ಯತೆ ಹಾಗೂ ನ್ಯಾಯ ಈ ಮೂರರಲ್ಲಿ ಮಾನವ ಸಮಾಜದಲ್ಲಿ ನ್ಯಾಯವೇ ಗೆಲ್ಲಬೇಕು. ಏಕೆಂದರೆ ಸಮಾನತೆಯಿಂದ, ಅಗತ್ಯತೆಯಿಂದ ನ್ಯಾಯಕ್ಕೆ ಪಟ್ಟೆ ಬೀಳಬಹುದು. ಆದರೆ ನ್ಯಾಯ ಅಂತ ಬಂದಾಗ ಅದು ಸಮಾನತೆಯನ್ನು, ಅಗತ್ಯತೆಯನ್ನು ಮೀರಿದ ನ್ಯಾಯವಾಗಿ ನಿಲ್ಲುತ್ತದೆ. ಅದೇ ಮಾನವೀಯತೆ, ಅದೇ ಮಾನವತೆ ಎಂಬುದನ್ನು ಈ ವೈರಲ್ ಫೋಟೋ ಜಗತ್ತಿಗೆ ಹೇಳುತ್ತಿದೆ.&lt;/p&gt;&lt;p&gt;ಓ ವೈರಲ್ ಫೋಟೋ ಬಹಳಷ್ಟು ಜನರನ್ನು, ಅದರಲ್ಲೂ ಮುಖ್ಯವಾಗಿ ಬುದ್ದಿವಂತರನ್ನು ಸೆಳೆಯುತ್ತಿದ್ದು, ಸಾಕಷ್ಟು ಶೇರ್ ಹಾಗೂ ಲೈಕ್ಸ್ ಪಡೆಯುತ್ತಿದೆ. ಇದನ್ನು ನೋಡಿದವರು ಒಂದು ಕ್ಷಣ ಯೋಚಿಸುವಂತೆ ಮಾಡುವುದರ ಜೊತೆಗೆ, ಸಮಾಜದಲ್ಲಿ ಸಮಾನತೆ, ಅಗತ್ಯತೆಗಿಂತ ನ್ಯಾಯದ ಅಗತ್ಯವೇ ಹೆಚ್ಚಿದೆ ಎಂಬುದು ಮನದಟ್ಟಾಗುತ್ತದೆ. ಜೊತೆಗೆ, ಇಂದಿನ ಸಮಾಜದಲ್ಲಿ ಬಹಳಷ್ಟು ಜನರು ಅನ್ಯಾಯಗಳಿಂದ ಬೆಂದು ಬಸವಳಿಯುತ್ತಿರಲು, ಈ ವೈರಲ್ ಪೋಸ್ಟ್ ಆ ಬಗ್ಗೆ ಯೋಚಿಸುವಂತೆ, ಆ ಸಮಸ್ಯೆಗೆ ಒಂದು ಪರಿಹಾರದಂತೆ ಕಂಡು ಮನದಲ್ಲಿ ಬೆಳಕು ಮೂಡಿಸುತ್ತದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಹೌದು, ಮುಂದೊಂದು ದಿನ ಸಮಾಜ ಹಾಗೆಯೇ ಇರಬಹುದು. ಸಮಾನತೆಗಿಂತ, ಅಗತ್ಯತೆಗಿಂತ, ನ್ಯಾಯಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಯಾವುದೇ ಕಟ್ಟುಪಾಡು ಇರಕೂಡದು. ಎಲ್ಲರಿಗೂ ಎಲ್ಲ ಅಗತ್ಯಗಳಲ್ಲಿ ನ್ಯಾಯ ಇರಬೇಕು. ಸಮಾನತೆ, ಸಮಪಾಲು ಹಾಗೂ ಅಗತ್ಯ ಪೂರೈಕೆಗಿಂತ ಹೆಚ್ಚಾಗಿ ಎಲ್ಲರೂ ಸ್ವತಂತ್ರವಾಗಿ ಬದುಕಲು ನೆರವಾಗುವಂತಹ ವಾತಾವರಣ ಇರಬೇಕು. ಈ ಮಾತನ್ನೇ ಈ ವೈರಲ್ ಫೋಟೋ ಹೇಳುತ್ತಿದೆ. ಇದು ಪ್ರಪಂಚದಲ್ಲಿ ಅಸ್ತಿತ್ವಕ್ಕೆ ಬಂದ ದಿನ ಮನುಷ್ಯರು ಹಾಗೂ ಮಾನವಸಮಾಜ ಸುಖ-ಶಾಂತಿ-ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎನ್ನಬಹುದು. ಹಾಗಿದ್ದರೆ ಆ ಕಾಲ ಬರುವುದು ಎಂದು? ಸದ್ಯಕ್ಕೆ ಇದು ಉತ್ತರವಿಲ್ಲದ ಪ್ರಶ್ನೆ ಎನಿಸಬಹುದಲ್ಲವೇ?&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/viral/one-viral-photo-in-social-media-attracts-more-and-teaches-many-things-to-society/articleshow-8aa1iro"/>
        </item>
        <item>
            <title><![CDATA[19 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯ: ಕುಷ್ಟಗಿಯಲ್ಲಿ ತಂದೆ-ಮಗಳ ಭಾವನಾತ್ಮಕ ಮಿಲನ!]]></title>
            <link>https://kannada.asianetnews.com/gallery/special/father-and-daughter-reunion-after-19-years-in-kushtagi-6408tg7</link>
            <guid isPermaLink="true">https://kannada.asianetnews.com/gallery/special/father-and-daughter-reunion-after-19-years-in-kushtagi-6408tg7</guid>
            <pubDate>Thu, 14 May 2026 15:35:39 +0530</pubDate>
            <description><![CDATA[&lt;p&gt;ದೀರ್ಘ 19 ವರ್ಷಗಳ ಬಳಿಕ ತಂದೆ ಮತ್ತು ಮಗಳು ಭೇಟಿಯಾದ ಘಟನೆ ಎಲ್ಲರ ಮನಸ್ಸನ್ನೂ ಭಾವುಕರನ್ನಾಗಿಸಿತು. ಬಾಲ್ಯದಲ್ಲೇ ತಂದೆಯಿಂದ ದೂರವಾಗಿದ್ದ ಮಗಳು, ಅನೇಕ ವರ್ಷಗಳ ನಿರೀಕ್ಷೆಯ ನಂತರ ತಂದೆಯನ್ನು ಭೇಟಿ ಮಾಡಿದ್ದು ಒಂದು ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krjyygns1hz2h01xpmfcx4wa,imgname-new-project---2026-05-14t152744.434-1778752897721.jpg" type="image/jpeg" height="390" width="690"/>
            <content:encoded><![CDATA[&lt;p&gt;ದೀರ್ಘ 19 ವರ್ಷಗಳ ಬಳಿಕ ತಂದೆ ಮತ್ತು ಮಗಳು ಭೇಟಿಯಾದ ಘಟನೆ ಎಲ್ಲರ ಮನಸ್ಸನ್ನೂ ಭಾವುಕರನ್ನಾಗಿಸಿತು. ಬಾಲ್ಯದಲ್ಲೇ ತಂದೆಯಿಂದ ದೂರವಾಗಿದ್ದ ಮಗಳು, ಅನೇಕ ವರ್ಷಗಳ ನಿರೀಕ್ಷೆಯ ನಂತರ ತಂದೆಯನ್ನು ಭೇಟಿ ಮಾಡಿದ್ದು ಒಂದು ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕುಟುಂಬದ ಅನಿವಾರ್ಯ ಪರಿಸ್ಥಿತಿಗಳಿಂದ ತಂದೆ-ಮಗಳು ಹಲವು ವರ್ಷಗಳಿಂದ ದೂರವಾಗಿದ್ದರು ಎಂದು ತಿಳಿದುಬಂದಿದೆ. ಕಾಲ ಕಳೆಯುತ್ತಿದ್ದರೂ, ತಂದೆಯನ್ನು ಮತ್ತೊಮ್ಮೆ ನೋಡಬೇಕೆಂಬ ಆಸೆ ಮಗಳ ಮನದಲ್ಲಿ ಜೀವಂತವಾಗಿಯೇ ಇತ್ತು. ಪ್ರತಿಯೊಂದು ಹಬ್ಬ, ವಿಶೇಷ ಸಂದರ್ಭಗಳಲ್ಲಿ &ldquo;ತವರು ಮನೆಯವರು&rdquo; ಎಂಬ ಕೊರತೆ ಆಕೆಯನ್ನು ಕಾಡುತ್ತಿತ್ತು .&lt;/p&gt;&lt;img&gt;&lt;p&gt;ಇತ್ತೀಚೆಗೆ ನಡೆದ ಈ ಭೇಟಿಯಲ್ಲಿ, ತಂದೆಯನ್ನು ಕಂಡ ಕ್ಷಣ ಮಗಳು ಶ್ರುತಿ ಮಾತು ಬಾರದೆ ಭಾವುಕಳಾದಳು. ವರ್ಷಗಳ ಬಳಿಕ ಮಗಳನ್ನು ಕಂಡ ತಂದೆ ಹನುಮಂತ ರಾವ್ ದೇಸಾಯಿ ಭಾವುಕರಾದರು. 19 ವರ್ಷಗಳ ದೂರವು ಆ ಒಂದು ಬೇಟಿಯಲ್ಲಿ ಕರಗಿದಂತಾಯಿತು.&lt;/p&gt;&lt;img&gt;&lt;p&gt;&ldquo;ಮಗಳೇ&hellip;&rdquo; ಎಂಬ ತಂದೆಯ ಕರೆಯೊಂದಿಗೆ ಇಬ್ಬರ ಭಾವನೆಗಳು ಉಕ್ಕಿಬಂದವು. ಆ ಕ್ಷಣದಲ್ಲಿ ಅಲ್ಲಿದ್ದ ಕುಟುಂಬಸ್ಥರು ಹಾಗೂ ಬಂಧುಮಿತ್ರರೂ ಭಾವುಕರಾದರು. ಮಾತುಗಳಿಗಿಂತ ಕಣ್ಣೀರು ಅವರ ಪ್ರೀತಿ, ನೋವು ಮತ್ತು ನಿರೀಕ್ಷೆಯನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಪಡಿಸಿತು.&lt;/p&gt;&lt;img&gt;&lt;p&gt;ಈ ಘಟನೆ ಕುಟುಂಬ ಸಂಬಂಧಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸುವಂತಿದ್ದು, ಎಷ್ಟೇ ವರ್ಷಗಳ ಅಂತರ ಇದ್ದರೂ ಹೃದಯಗಳ ಬಾಂಧವ್ಯ ಎಂದಿಗೂ ಕಡಿದುಹೋಗುವುದಿಲ್ಲ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಕುಷ್ಟಗಿ ತಾಲೂಕು ಅಡವಿಸಾಗರದಲ್ಲಿ ತಂದೆ ವಾಸವಿದ್ದರು. ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ, ತಂದೆ ಎರಡನೇ ಮದುವೆ ಆಗಿದ್ದರು. ಶ್ರುತಿ ತಾಯಿಗೆ ಮಾನಸಿಕ ಸಮಸ್ಯೆ ಇದ್ದಾಗ, ತಂದೆ ಎರಡನೇ ಮದುವೆ ಆಗಿದ್ದರು. ಹುಡುಗಿಯ ಅಕ್ಕ ಮನೆ ಮುಂದಿರುವ ಬಾವಿಗೆ ಬಿದ್ದಿದ್ದರು. ಹೀಗಾಗಿ ಎರಡನೇ ಮಗಳು ಒಂದೂವರೆ ವರ್ಷವಿದ್ದಾಗ ತಾಯಿ ತಂಗಿ ಚಿಕ್ಕಮ್ಮ ಧಾರವಾಡಕ್ಕೆ ಕರೆತಂದು ಬೆಳೆಸಿದ್ದರು. ಆಮೇಲೆ 8ನೇ ಕ್ಲಾಸಿನಲ್ಲಿದ್ದಾಗ ತಂದೆ-ಮಗಳು ಭೇಟಿಯಾಗಿದ್ದರು. ಆಮೇಲೆ ತಂದೆ ಬೇರೆ ಕಡೆಗೆ ಶಿಫ್ಟ್&zwnj; ಆಗಿದ್ದರೂ ಕೂಡ ಭೇಟಿ ಆಗಿರಲಿಲ್ಲ. ಕೌಟುಂಬಿಕ ಸಮಸ್ಯೆ ಇತ್ತು ಎಂದು ಮಗಳು-ತಂದೆ ಭೇಟಿ ಆಗಿರಲಿಲ್ಲ, ತಂದೆ ಜೊತೆಗೆ ಚಿಕ್ಕಮ್ಮ ಕೂಡ ಕಾಂಟ್ಯಾಕ್ಟ್&zwnj; ಇರದ ಕಾರಣ ಹೀಗೆ ಭೇಟಿ ಆಗೋದು 19 ವರ್ಷ ಆಗಿದೆ.&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/special/father-and-daughter-reunion-after-19-years-in-kushtagi-6408tg7"/>
        </item>
        <item>
            <title><![CDATA[ಭೂಮಿಯ ಮೇಲಿನ ಮೊದಲ ಗಿಡ ಇದು.. ಇಡೀ ಗ್ರಹವನ್ನೇ ಬದಲಿಸಿದ ಆ ಕಥೆ ಗೊತ್ತಾ?]]></title>
            <link>https://kannada.asianetnews.com/science/the-evolutionary-saga-of-earths-first-plants-from-algae-plant-to-global-transformation-to-know/articleshow-k7i9sep</link>
            <guid isPermaLink="true">https://kannada.asianetnews.com/science/the-evolutionary-saga-of-earths-first-plants-from-algae-plant-to-global-transformation-to-know/articleshow-k7i9sep</guid>
            <pubDate>Wed, 13 May 2026 21:31:50 +0530</pubDate>
            <description><![CDATA[&lt;p&gt;ಭೂಮಿಯ ಮೇಲಿನ ಮೊದಲ ಸಸ್ಯ ಯಾವುದು ಅಂತ ಒಂದೇ ಮಾತಲ್ಲಿ ಹೇಳೋಕೆ ಆಗಲ್ಲ. ಇದು ಕೋಟ್ಯಂತರ ವರ್ಷಗಳ ವಿಕಾಸದ ಕಥೆ. ಪ್ರಾಚೀನ ಸಮುದ್ರಗಳಲ್ಲಿ ಶುರುವಾಗಿ, ಇಡೀ ಭೂಮಿಯನ್ನೇ ಬದಲಿಸಿದ ಒಂದು ಪುಟ್ಟ ಸಸ್ಯದ ರೋಚಕ ಜರ್ನಿ ಇದು.. ಯಾವುದು, ಏನ್ ಕತೆ ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krh0mxdd8tsa7kywzmr9npbt,imgname-whatsapp-image-2026-05-13-at-9.21.50-pm-1778687571373.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಏನಿದು ಭೂಮಿಯ ಮೇಲಿನ ಮೊಟ್ಟಮೊದಲ ಸಸ್ಯದ ಕಥೆ?&lt;/strong&gt;&lt;/p&gt;&lt;p&gt;ಭೂಮಿಯ ಮೊದಲ ಗಿಡ ಅಂದ್ರೆ, ನಮ್ಮ ಕಣ್ಣ ಮುಂದೆ ದೊಡ್ಡ ಮರ, ಬಣ್ಣಬಣ್ಣದ ಹೂವುಗಳು ಬರುತ್ತೆ. ಆದ್ರೆ, ನಿಜವಾದ ಕಥೆನೇ ಬೇರೆ. ಇದು ಒಂದೇ ಒಂದು ಗಿಡದ ಕಥೆಯಲ್ಲ, ಬದಲಾಗಿ ಪ್ರಾಚೀನ ಸಮುದ್ರಗಳಲ್ಲಿ ಶುರುವಾಗಿ ಇಡೀ ಭೂಮಿಯನ್ನೇ ಬದಲಿಸಿದ ಒಂದು ದೊಡ್ಡ ವಿಕಾಸದ ಕಥೆ. ವಿಜ್ಞಾನಿಗಳ ಪ್ರಕಾರ, ಸಸ್ಯಗಳ ಪೂರ್ವಜರು ಮರಗಳಲ್ಲ, ಬದಲಾಗಿ ಶತಕೋಟಿ ವರ್ಷಗಳ ಹಿಂದೆ ಸಮುದ್ರದ ಪರಿಸರದಲ್ಲಿ ಬದುಕಿದ್ದ ಸೂಕ್ಷ್ಮ ಜೀವಿಗಳು.&lt;/p&gt;&lt;p&gt;ಈ ಹಾದಿಯಲ್ಲಿ ಮೊದಲಿಗರು ಅಂದ್ರೆ, ದ್ಯುತಿಸಂಶ್ಲೇಷಣೆ ನಡೆಸಬಲ್ಲ ಸೈನೋಬ್ಯಾಕ್ಟೀರಿಯಾಗಳು. ಸುಮಾರು 2.7 ರಿಂದ 3.0 ಶತಕೋಟಿ ವರ್ಷಗಳ ಹಿಂದೆ ಇವು ಕಾಣಿಸಿಕೊಂಡವು. ಈ ಸಣ್ಣ ಜೀವಿಗಳು ವಾತಾವರಣಕ್ಕೆ ನಿಧಾನವಾಗಿ ಆಮ್ಲಜನಕವನ್ನು ಬಿಡುಗಡೆ ಮಾಡಲು ಶುರುಮಾಡಿದವು. ಇದರ ಪರಿಣಾಮವೇ, ಸುಮಾರು 2.4 ಶತಕೋಟಿ ವರ್ಷಗಳ ಹಿಂದೆ ನಡೆದ 'ಗ್ರೇಟ್ ಆಕ್ಸಿಡೇಶನ್ ಇವೆಂಟ್'. ಇದು ಭೂಮಿಯ ವಾತಾವರಣವನ್ನೇ ಬದಲಿಸಿತು.&lt;/p&gt;&lt;h2&gt;ನೆಲದ ಮೇಲಿನ ಜೀವಿಗಳಿಗೆ ಹಸಿರು ಪಾಚಿ ದಾರಿ ಮಾಡಿಕೊಟ್ಟಿದ್ದು ಹೇಗೆ?&lt;/h2&gt;&lt;p&gt;ಮೊದಲ ಸಸ್ಯಗಳೆಂದು ಹೇಳಬಹುದಾದ ಜೀವಿಗಳೆಂದರೆ ದ್ಯುತಿಸಂಶ್ಲೇಷಕ ಪಾಚಿಗಳು, ಅದರಲ್ಲೂ ವಿಶೇಷವಾಗಿ ಹಸಿರು ಪಾಚಿಗಳು. ಇವುಗಳಿಗೂ ಇಂದಿನ ಭೂ ಸಸ್ಯಗಳಿಗೂ ಆಳವಾದ ವಿಕಾಸಾತ್ಮಕ ಸಂಬಂಧವಿದೆ. ಕಾಲಾನಂತರದಲ್ಲಿ, ಈ ಪಾಚಿಗಳು ಸಸ್ಯ ಜೀವನದ ಪ್ರಮುಖ ಲಕ್ಷಣಗಳನ್ನು ಬೆಳೆಸಿಕೊಂಡವು.&lt;/p&gt;&lt;p&gt;ಇಂದಿನ ಭೂ ಸಸ್ಯಗಳು 'ಕ್ಯಾರೋಫೈಟ್ಸ್' (charophytes) ಎಂಬ ಸಿಹಿನೀರಿನ ಹಸಿರು ಪಾಚಿಗಳಿಂದ ವಿಕಸನಗೊಂಡಿವೆ ಎಂದು ವಿಜ್ಞಾನಿಗಳು ಒಪ್ಪುತ್ತಾರೆ. 470-480 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆ ಬೀಜಕಣಗಳು (spores) ಈ ವಾದವನ್ನು ಬೆಂಬಲಿಸುತ್ತವೆ. ಈ ಪಳೆಯುಳಿಕೆಗಳು, ಜಲಚರ ಪಾಚಿಗಳಿಂದ ಭೂ ಸಸ್ಯಗಳಾಗಿ ಬದಲಾದ ನಿರ್ಣಾಯಕ ಹಂತವನ್ನು ತೋರಿಸುತ್ತವೆ.&lt;/p&gt;&lt;p&gt;ಆರಂಭದಲ್ಲಿ, ಈ ಪಾಚಿಗಳು ಸ್ಥಿರವಾದ ನೀರಿನಲ್ಲೇ ಬದುಕುತ್ತಿದ್ದವು. ಆದರೆ ಭೂಮಿಯ ಇತಿಹಾಸದ ಒಂದು ಮಹತ್ವದ ಘಟ್ಟದಲ್ಲಿ, ಕೆಲವು ಪಾಚಿಗಳು ನೀರಿನಾಚೆ ಬದುಕಲು ಹೊಂದಿಕೊಳ್ಳಲು ಪ್ರಾರಂಭಿಸಿದವು. ಇದು ಜೀವ ವಿಕಾಸದ ಇತಿಹಾಸದಲ್ಲೇ ಒಂದು ಕ್ರಾಂತಿಕಾರಿ ತಿರುವು.&lt;/p&gt;&lt;p&gt;ಮೊದಲ ಭೂಸಸ್ಯಗಳು: ಕಠಿಣ ಜಗತ್ತಿನಲ್ಲಿ ಬದುಕುಳಿದ ಸರಳ ಜೀವಿಗಳು&lt;/p&gt;&lt;p&gt;ಸುಮಾರು 470 ದಶಲಕ್ಷ ವರ್ಷಗಳ ಹಿಂದೆ ಆರ್ಡೋವಿಶಿಯನ್ (Ordovician) ಯುಗದಲ್ಲಿ ಮೊದಲ ಭೂ ಸಸ್ಯಗಳು ಕಾಣಿಸಿಕೊಂಡವು. ಈ ಪ್ರಾಚೀನ ಜೀವಿಗಳು ಇಂದಿನ ಸಸ್ಯಗಳಿಗಿಂತ ತುಂಬಾನೇ ಭಿನ್ನವಾಗಿದ್ದವು. ಅವು ಚಿಕ್ಕದಾಗಿದ್ದವು, ಸರಳವಾಗಿದ್ದವು ಮತ್ತು ಬೇರು, ಕಾಂಡ ಅಥವಾ ಎಲೆಗಳನ್ನು ಹೊಂದಿರಲಿಲ್ಲ.&lt;/p&gt;&lt;p&gt;ಅವು ಇಂದಿನ ಪಾಚಿಗಳು ಮತ್ತು ಲಿವರ್&zwnj;ವರ್ಟ್&zwnj;ಗಳಂತಹ (bryophytes) ಜೀವಿಗಳನ್ನು ಹೋಲುತ್ತಿದ್ದವು ಎಂದು ಅನೇಕ ವಿಜ್ಞಾನಿಗಳು ನಂಬುತ್ತಾರೆ. ಅವುಗಳಿಗೆ ನೀರು ಸಾಗಿಸಲು ಇವತ್ತಿನ ಗಿಡಗಳ ಹಾಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ತೇವಾಂಶವಿರುವ ಜಾಗಗಳಿಗೆ ಮಾತ್ರ ಸೀಮಿತವಾಗಿದ್ದವು.&lt;/p&gt;&lt;p&gt;ಒಣಗುವಿಕೆ, ತೀವ್ರವಾದ ಸೂರ್ಯನ ಬೆಳಕು ಮತ್ತು ಕಠಿಣ ಪರಿಸ್ಥಿತಿಗಳಂತಹ ಸವಾಲುಗಳನ್ನು ಎದುರಿಸಿದರೂ, ಈ ಸಸ್ಯಗಳು ಬದುಕುಳಿದವು. ಅವುಗಳ ಈ ಸ್ಥಿತಿಸ್ಥಾಪಕತ್ವದಿಂದಲೇ ಭೂಮಿಯ ಮೇಲೆ ನಿಧಾನವಾಗಿ ಹರಡಲು ಮತ್ತು ಭವಿಷ್ಯದ ಪರಿಸರ ವ್ಯವಸ್ಥೆಗಳಿಗೆ ಅಡಿಪಾಯ ಹಾಕಲು ಸಾಧ್ಯವಾಯಿತು.&lt;/p&gt;&lt;h3&gt;ಆರಂಭಿಕ ಸಸ್ಯಗಳು ಭೂಮಿಯನ್ನು ಶಾಶ್ವತವಾಗಿ ಬದಲಿಸಿದ್ದು ಹೇಗೆ?&lt;/h3&gt;&lt;p&gt;ಭೂಮಿಯ ಮೇಲೆ ಸಸ್ಯಗಳ ಆಗಮನವು ಒಂದು ದೊಡ್ಡ ಬದಲಾವಣೆಗೆ ಕಾರಣವಾಯಿತು. ಸಸ್ಯಗಳು ಬರುವ ಮೊದಲು, ಭೂಮಿಯ ಮೇಲ್ಮೈ ಬಹುತೇಕ ಬಂಜರಾಗಿತ್ತು, ಕೇವಲ ಸೂಕ್ಷ್ಮಜೀವಿಗಳು ಮಾತ್ರ ಇದ್ದವು.&lt;/p&gt;&lt;p&gt;ಈ ಪ್ರವರ್ತಕ ಸಸ್ಯಗಳು ಬಂಡೆಗಳನ್ನು ಒಡೆಯಲು ಪ್ರಾರಂಭಿಸಿದವು, ಮಣ್ಣಿನ ರಚನೆಗೆ ಕಾರಣವಾದವು ಮತ್ತು ಸಂಕೀರ್ಣ ಪರಿಸರ ವ್ಯವಸ್ಥೆಗಳಿಗೆ ದಾರಿ ಮಾಡಿಕೊಟ್ಟವು. ದ್ಯುತಿಸಂಶ್ಲೇಷಣೆಯ ಮೂಲಕ, ಅವು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡಿದವು. ಇದು ಗ್ರಹದ ವಾತಾವರಣವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.&lt;/p&gt;&lt;p&gt;ಅಲ್ಲದೆ, ಅವು ಶಿಲೀಂಧ್ರಗಳೊಂದಿಗೆ ಸಹಜೀವನ ಸಂಬಂಧವನ್ನು ಬೆಳೆಸಿಕೊಂಡವು. ಇದರಿಂದಾಗಿ ಅವುಗಳಿಗೆ ಮಣ್ಣಿನಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಯಿತು. ಇದು ಅವುಗಳ ಬದುಕುಳಿಯುವಿಕೆಗೆ ಅತ್ಯಗತ್ಯವಾಗಿತ್ತು.&lt;/p&gt;&lt;p&gt;ಸಂಕೀರ್ಣ ಸಸ್ಯ ಜೀವನದ ಉದಯ&lt;/p&gt;&lt;p&gt;ವಿಕಾಸ ಮುಂದುವರೆದಂತೆ, ಸಸ್ಯಗಳು ಹೆಚ್ಚು ಅತ್ಯಾಧುನಿಕವಾದವು. ನೀರು ಮತ್ತು ಪೋಷಕಾಂಶಗಳನ್ನು ಆಂತರಿಕವಾಗಿ ಸಾಗಿಸಬಲ್ಲ ನಾಳೀಯ ಸಸ್ಯಗಳು (vascular plants) ಹೊರಹೊಮ್ಮಿದವು. ಇದರಿಂದ ಅವು ಎತ್ತರವಾಗಿ ಬೆಳೆಯಲು ಮತ್ತು ಹೆಚ್ಚು ದೂರ ಹರಡಲು ಸಾಧ್ಯವಾಯಿತು.&lt;/p&gt;&lt;p&gt;ಕುಕ್ಸೋನಿಯಾ (Cooksonia) ದಂತಹ ಆರಂಭಿಕ ನಾಳೀಯ ಸಸ್ಯಗಳ ಪಳೆಯುಳಿಕೆಗಳು, ಆಧುನಿಕ ಸಸ್ಯ ವೈವಿಧ್ಯತೆಯತ್ತ ಒಂದು ಮಹತ್ವದ ಹೆಜ್ಜೆಯನ್ನು ತೋರಿಸುತ್ತವೆ. ಅತ್ತ ಆಣ್ವಿಕ ಅಧ್ಯಯನಗಳು, ಭೂ ಸಸ್ಯಗಳ ವಿಕಾಸದ ಮೂಲವು 600-700 ದಶಲಕ್ಷ ವರ್ಷಗಳ ಹಿಂದೆಯೇ ಇರಬಹುದು ಎಂದು ಸೂಚಿಸುತ್ತವೆ.&lt;/p&gt;&lt;p&gt;ಯಾವುದೇ ಒಂದು 'ಮೊದಲ ಗಿಡ' ಅಂತ ಯಾಕಿಲ್ಲ?&lt;/p&gt;&lt;p&gt;ವಿಕಾಸ ಅನ್ನೋದು ನಿರಂತರ ಪ್ರಕ್ರಿಯೆ. ಹಾಗಾಗಿ 'ಮೊದಲ ಸಸ್ಯ' ಯಾವುದು ಎಂದು ಖಚಿತವಾಗಿ ಹೇಳುವುದು ಅಸಾಧ್ಯ. ಇದು ಒಂದೇ ದಿನದಲ್ಲಿ ಆದ ಬದಲಾವಣೆ ಅಲ್ಲ, ಬದಲಾಗಿ ಸರಳ ದ್ಯುತಿಸಂಶ್ಲೇಷಕ ಜೀವಿಗಳಿಂದ ಪಾಚಿಗಳಿಗೆ, ಮತ್ತು ಅಂತಿಮವಾಗಿ ಭೂ ಸಸ್ಯಗಳಿಗೆ ನಿಧಾನವಾಗಿ ಆದ ಪರಿವರ್ತನೆ.&lt;/p&gt;&lt;p&gt;ವಿಜ್ಞಾನಿಗಳು ಇಂದಿಗೂ ಪಳೆಯುಳಿಕೆಗಳು, ತಳಿಶಾಸ್ತ್ರ ಮತ್ತು ಪ್ರಾಚೀನ ಪರಿಸರವನ್ನು ಅಧ್ಯಯನ ಮಾಡುತ್ತಲೇ ಇದ್ದಾರೆ. ಭೂಮಿಯ ಮೇಲಿನ ಸಸ್ಯ ವಿಕಾಸವು 700 ದಶಲಕ್ಷ ವರ್ಷಗಳಷ್ಟು ಹಳೆಯದಾಗಿರಬಹುದು ಎಂಬುದಕ್ಕೆ ಪುರಾವೆಗಳು ಹೆಚ್ಚುತ್ತಿವೆ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/science/the-evolutionary-saga-of-earths-first-plants-from-algae-plant-to-global-transformation-to-know/articleshow-k7i9sep"/>
        </item>
        <item>
            <title><![CDATA[ಬರೀ ಭಾಷಣಕಾರರಿಲ್ಲ, ಹೈಲಿ ಕ್ವಾಲಿಫೈಡ್ ಶಾಸಕರು; ರೀಲ್ ಹೀರೋ ದಳಪತಿ ಅಧಿಪತ್ಯದಲ್ಲಿ 'ರಿಯಲ್ ಹೀರೋ'ಗಳೇ ಹೆಚ್ಚು!]]></title>
            <link>https://kannada.asianetnews.com/india-news/thalapathy-reign-begins-in-tamil-nadu-this-is-not-just-politics-also-a-blockbuster-entry-of-highly-educated-mlas/articleshow-prae3su</link>
            <guid isPermaLink="true">https://kannada.asianetnews.com/india-news/thalapathy-reign-begins-in-tamil-nadu-this-is-not-just-politics-also-a-blockbuster-entry-of-highly-educated-mlas/articleshow-prae3su</guid>
            <pubDate>Mon, 11 May 2026 14:45:58 +0530</pubDate>
            <description><![CDATA[&lt;p&gt;ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ರಾಜಕಾರಣಿಗಳು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ ಬದಲಿಸಿದ್ದಾರೆ. ಅವರ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಂತಿದೆ. ಯಾರೆಲ್ಲಾ ಇದ್ದಾರೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krb54hbnm1xwe0a1enqh7fjh,imgname-thalapathy-vijay-1778490951029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯ್ ಶಾಕಿಂಗ್ ಕ್ಯಾಬಿನೆಟ್&zwnj;&lt;/strong&gt;&lt;/p&gt;&lt;p&gt;ಸಿನಿಮಾ ತೆರೆಯ ಮೇಲೆ ವಿಜಯ್ (Vijay Joseph) ಅವರ ಎಂಟ್ರಿ ಎಂದರೆ ಅಲ್ಲಿ ಶಿಳ್ಳೆ, ಚಪ್ಪಾಳೆಗಳ ಅಬ್ಬರ ಇರುತ್ತದೆ. ಆದರೆ ಈಗ ದಳಪತಿ ವಿಜಯ್ ರಾಜಕೀಯ ಅಖಾಡಕ್ಕೆ ಕೊಟ್ಟಿರುವ ಎಂಟ್ರಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ. ಹೌದು, ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದೆ. ವಿಶೇಷವೆಂದರೆ, ಈ ಬಾರಿ ಚರ್ಚೆಯಾಗುತ್ತಿರುವುದು ಕೇವಲ ವಿಜಯ್ ಅವರ ಜನಪ್ರಿಯತೆಯ ಬಗ್ಗೆ ಅಲ್ಲ, ಬದಲಾಗಿ ಅವರ ತಂಡದಲ್ಲಿರುವ 'ಹೈಲಿ ಕ್ವಾಲಿಫೈಡ್' ಶಾಸಕರ ಬಗ್ಗೆ!&lt;/p&gt;&lt;p&gt;ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ರಾಜಕಾರಣಿಗಳು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ ಬದಲಿಸಿದ್ದಾರೆ. ಅವರ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಂತಿದೆ. ವಿಜಯ್ ಅವರ ಈ ತಂಡದಲ್ಲಿ ಬರೀ ಭಾಷಣಕಾರರಿಲ್ಲ, ಬದಲಾಗಿ ಅದ್ಭುತ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆ ಇರುವ 'ರಿಯಲ್ ಹೀರೋ'ಗಳಿದ್ದಾರೆ.&lt;/p&gt;&lt;h2&gt;ಅಂಕಿಸಂಖ್ಯೆಗಳಲ್ಲಿದೆ ಅಸಲಿ ಮ್ಯಾಜಿಕ್:&lt;/h2&gt;&lt;p&gt;ವಿಜಯ್ ಅವರ 107 ಶಾಸಕರ ತಂಡದ ಶೈಕ್ಷಣಿಕ ಬಲ ಹೀಗಿದೆ:&lt;/p&gt;&lt;p&gt;22 ಇಂಜಿನಿಯರ್&zwnj;ಗಳು: ತಾಂತ್ರಿಕ ಜ್ಞಾನದೊಂದಿಗೆ ನಾಡು ಕಟ್ಟಲು ಇವರು ರೆಡಿಯಾಗಿದ್ದಾರೆ.&lt;/p&gt;&lt;p&gt;18 ವಕೀಲರು: ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೊಡಿಸಲು ಸನ್ನದ್ಧರಾಗಿದ್ದಾರೆ.&lt;/p&gt;&lt;p&gt;8 ಎಂಬಿಬಿಎಸ್ ವೈದ್ಯರು: ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿ ಬಂದಿದ್ದಾರೆ.&lt;/p&gt;&lt;p&gt;5 ಐಐಟಿಯನ್ಸ್ (IITians): ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಯ ಬ್ರೈನ್&zwnj;ಗಳು ಈಗ ವಿಜಯ್ ಕೈ ಹಿಡಿದಿವೆ.&lt;/p&gt;&lt;p&gt;6 ಪಿಎಚ್&zwnj;ಡಿ (PhD) ಪದವೀಧರರು: ವಿಷಯಾಧಾರಿತ ಜ್ಞಾನ ಹೊಂದಿರುವ ತಜ್ಞರು ಈ ತಂಡದಲ್ಲಿದ್ದಾರೆ.&lt;/p&gt;&lt;p&gt;ಇದಲ್ಲದೆ 12 ಪದವೀಧರರು ಮತ್ತು 13 ಸ್ನಾತಕೋತ್ತರ ಪದವೀಧರರು ಈ ತಂಡದ ಶಕ್ತಿಯಾಗಿದ್ದಾರೆ.&lt;/p&gt;&lt;h3&gt;ಸಿನಿಮಾ ಸ್ಟೈಲ್ ಎಂಟ್ರಿ, ಕಾರ್ಪೊರೇಟ್ ಸ್ಟೈಲ್ ಆಡಳಿತ!&lt;/h3&gt;&lt;p&gt;ಶಾಲಾ ಕೊಠಡಿಗಳು, ಕೋರ್ಟ್ ಹಾಲ್&zwnj;ಗಳು, ಆಸ್ಪತ್ರೆಗಳು ಮತ್ತು ಇಂಜಿನಿಯರಿಂಗ್ ಕ್ಯಾಂಪಸ್&zwnj;ಗಳಿಂದ ಬಂದ ಈ ನವ ಪೀಳಿಗೆಯ ನಾಯಕರು ರಾಜಕೀಯಕ್ಕೆ ಹೊಸ ಕಳೆ ತಂದಿದ್ದಾರೆ. ಅಭಿಮಾನಿಗಳು ಇದನ್ನು &quot;ದಳಪತಿಯ ಮಾಸ್ ಮಾಸ್ಟರ್ ಪ್ಲಾನ್&quot; ಎಂದು ಕರೆಯುತ್ತಿದ್ದಾರೆ. ಕೇವಲ ಅಧಿಕಾರ ಹಿಡಿಯುವುದಷ್ಟೇ ಗುರಿಯಲ್ಲ, ಬದಲಾಗಿ ತಜ್ಞತೆ (Expertise) ಮತ್ತು ಸ್ಪಷ್ಟ ದೃಷ್ಟಿಕೋನದ (Vision) ಮೂಲಕ ಆಡಳಿತ ನಡೆಸುವುದೇ ಈ ಪಕ್ಷದ ಅಸಲಿ ಸೀಕ್ರೆಟ್ ಎಂಬುದು ಸ್ಪಷ್ಟವಾಗುತ್ತಿದೆ.&lt;/p&gt;&lt;p&gt;ರಾಜಕೀಯ ಅಂದರೆ ಕೇವಲ ಅಧಿಕಾರದ ದಾಹವಲ್ಲ, ಅದು ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳನ್ನು ಕಂಡುಕೊಳ್ಳುವ ವೇದಿಕೆ ಎಂದು ವಿಜಯ್ ಸಾಬೀತುಪಡಿಸುತ್ತಿದ್ದಾರೆ. ಸಿನಿಮಾ ತೆರೆಯ ಮೇಲೆ 'ದಳಪತಿ'ಯಾಗಿ ಮಿಂಚಿದ್ದ ವಿಜಯ್, ಈಗ ಈ ಹೈ-ಟೆಕ್ ತಂಡದ ಮೂಲಕ ತಮಿಳುನಾಡು ವಿಧಾನಸಭೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಸಿನಿಮಾ ಪ್ರೇಮಿಗಳು ಮತ್ತು ರಾಜಕೀಯ ವಿಶ್ಲೇಷಕರು ಈಗ ಒಟ್ಟಾಗಿ ಹೇಳುತ್ತಿರುವುದು ಒಂದೇ ಮಾತು - &quot;ಪಿಕ್ಚರ್ ಈಗಷ್ಟೇ ಶುರುವಾಗಿದೆ!&quot;&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/india-news/thalapathy-reign-begins-in-tamil-nadu-this-is-not-just-politics-also-a-blockbuster-entry-of-highly-educated-mlas/articleshow-prae3su"/>
        </item>
        <item>
            <title><![CDATA[ಕುಂಭಕರ್ಣನ 6 ತಿಂಗಳ ನಿದ್ರೆ ಹಿಂದಿದೆ ದೇವತೆಗಳ ಸಂಚು; ಪೌರಾಣಿಕ ರಹಸ್ಯ ಇಲ್ಲಿದೆ]]></title>
            <link>https://kannada.asianetnews.com/webstories/astrology/why-did-kumbhakarna-sleep-for-six-months-ramayana-mystery-facts-sat-of5q4l4</link>
            <guid isPermaLink="true">https://kannada.asianetnews.com/webstories/astrology/why-did-kumbhakarna-sleep-for-six-months-ramayana-mystery-facts-sat-of5q4l4</guid>
            <pubDate>Wed, 06 May 2026 21:01:48 +0530</pubDate>
            <description><![CDATA[&lt;p&gt;ರಾಮಾಯಣದಲ್ಲಿ ಕುಂಭಕರ್ಣ ಆರು ತಿಂಗಳುಗಳ ಕಾಲ ಮಲಗಲು ಕಾರಣವೇನು? ಇಂದ್ರನ ಕುತಂತ್ರ ಮತ್ತು ಸರಸ್ವತಿ ದೇವಿಯ ಪ್ರಭಾವದಿಂದ 'ಇಂದ್ರಾಸನ' ಕೇಳುವ ಬದಲು 'ನಿದ್ರಾಸನ' ಕೇಳಿದ ಕುತೂಹಲಕಾರಿ ಪೌರಾಣಿಕ ಕಥೆ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyxrj5qazwam7j1jaznz5ee,imgname-gemini-generated-image-8jemja8jemja8jem-1778080565431.png" type="image/jpeg" height="390" width="690"/>
            <category>special</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/astrology/why-did-kumbhakarna-sleep-for-six-months-ramayana-mystery-facts-sat-of5q4l4"/>
        </item>
        <item>
            <title><![CDATA[ಜಮೀನಿನಲ್ಲಿ ಇತಿಹಾಸದ 'ನಿಧಿ' ಪತ್ತೆ: ಅಶೋಕನ ಶಿಲಾಶಾಸನದ ಬಳಿಯೇ ಅಡಗಿದ್ದ ಆ 'ಏಳು ಸಾಲು'ಗಳ ರಹಸ್ಯವೇನು?]]></title>
            <link>https://kannada.asianetnews.com/karnataka-districts/karnataka-rare-ancient-rock-inscription-found-nittur-ballari-history-discovery-sat/articleshow-ramx327</link>
            <guid isPermaLink="true">https://kannada.asianetnews.com/karnataka-districts/karnataka-rare-ancient-rock-inscription-found-nittur-ballari-history-discovery-sat/articleshow-ramx327</guid>
            <pubDate>Wed, 06 May 2026 19:58:56 +0530</pubDate>
            <description><![CDATA[&lt;p&gt;ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ ಎನ್ನಲಾದ 7 ಸಾಲುಗಳ ಬಂಡೆಗಲ್ಲು ಶಾಸನ ಪತ್ತೆಯಾಗಿದೆ. ಅಶೋಕ ಶಿಲಾಶಾಸನದ ಬಳಿಯೇ ಸಿಕ್ಕಿರುವ ಈ ಶಾಸನದ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyv0yfy1pqe2td44z1166h1,imgname-screenshot-2026-05-06-194117-1778077694462.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: ಗ&lt;/strong&gt;ಣಿನಾಡು ಬಳ್ಳಾರಿ ಜಿಲ್ಲೆ ಇತಿಹಾಸ ಸಂಶೋಧಕರ ಪಾಲಿನ ಅಕ್ಷಯ ಪಾತ್ರೆಯಾಗುತ್ತಲೇ ಇದೆ. ಮೌರ್ಯ ಸಾಮ್ರಾಜ್ಯದ ಕುರುಹುಗಳನ್ನು ಹೊಂದಿರುವ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಇದೀಗ ಮತ್ತೊಂದು ಅಪರೂಪದ ಬಂಡೆಗಲ್ಲು ಶಾಸನ ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.&lt;/p&gt;&lt;h3&gt;&lt;strong&gt;ಪತ್ತೆಯಾದ ಸ್ಥಳ:&lt;/strong&gt;&lt;/h3&gt;&lt;p&gt;ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಸುಕ್ರದಪ್ಪನ ಬೆಟ್ಟದ ಹೊಲದಲ್ಲಿ ಈ ಹೊಸ ಬಂಡೆಗಲ್ಲು ಶಾಸನ ಪತ್ತೆಯಾಗಿದೆ. ವಿಶೇಷವೆಂದರೆ, ಇದೇ ನಿಟ್ಟೂರು ಗ್ರಾಮವು ಈ ಹಿಂದೆ ಪತ್ತೆಯಾಗಿದ್ದ ಪ್ರಖ್ಯಾತ 'ಅಶೋಕ ಶಿಲಾಶಾಸನ'ದಿಂದಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಈಗ ಪತ್ತೆಯಾಗಿರುವ ಹೊಸ ಶಾಸನವು ಅಶೋಕ ಶಿಲಾಶಾಸನವಿರುವ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ ಎಂಬುದು ಗಮನಾರ್ಹ.&lt;/p&gt;&lt;h2&gt;&lt;strong&gt;ಶಾಸನದ ಲಕ್ಷಣಗಳು:&lt;/strong&gt;&lt;/h2&gt;&lt;p&gt;ಹೊಲದಲ್ಲಿರುವ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಏಳು ಸಾಲುಗಳನ್ನು ಬರೆಯಲಾಗಿದೆ. ಶಾಸನದ ಲಿಪಿ ಮತ್ತು ಸ್ವರೂಪವನ್ನು ಗಮನಿಸಿದರೆ, ಇದು 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಇತಿಹಾಸವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಪ್ರದೇಶವು ಮೌರ್ಯರ ಕಾಲದ ಆಳ್ವಿಕೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ಈ ಶಾಸನವು ಹಲವು ಮಹತ್ವದ ಐತಿಹಾಸಿಕ ಕೊಂಡಿಗಳನ್ನು ಬೆಸೆಯುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ತಜ್ಞರ ತಂಡದಿಂದ ಅಧ್ಯಯನ:&lt;/strong&gt;&lt;/h3&gt;&lt;p&gt;ಧಾರವಾಡದ ಖ್ಯಾತ ಲಿಪಿತಜ್ಞ ಮಾರುತಿ ಭಜಂತ್ರಿ ನೇತೃತ್ವದ ತಂಡವು ಈ ಬಂಡೆಗಲ್ಲು ಶಾಸನವನ್ನು ಪತ್ತೆಹಚ್ಚಿದೆ. ಪ್ರಸ್ತುತ ಗಂಗಾವತಿಯ ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ್ ಅವರ ಮಾರ್ಗದರ್ಶನದಲ್ಲಿ ಈ ಶಾಸನದ ಲಿಪಿಯನ್ನು ಓದುವ ಮತ್ತು ಅದರ ಕಾಲಘಟ್ಟವನ್ನು ನಿಖರವಾಗಿ ಗುರುತಿಸುವ ಅಧ್ಯಯನ ನಡೆಯುತ್ತಿದೆ.&lt;/p&gt;&lt;p&gt;ನಿಟ್ಟೂರು ಪ್ರದೇಶವು ಮೌರ್ಯರು, ಚಾಲುಕ್ಯರು ಮತ್ತು ರಾಷ್ಟ್ರಕೂಟರ ಸಂಸ್ಕೃತಿಗಳ ಸಂಗಮವಾಗಿರುವುದರಿಂದ, ಈ ಹೊಸ ಶಾಸನವು ಅಂದಿನ ಕಾಲದ ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಸ್ಥಿತಿಗತಿಗಳ ಮೇಲೆ ಹೊಸ ಬೆಳಕು ಚೆಲ್ಲುವ ನಿರೀಕ್ಷೆಯಿದೆ. ಈ ಶಾಸನ ಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಬೆಟ್ಟದ ಹೊಲಕ್ಕೆ ಬಂದು ಶಾಸನವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>special</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-rare-ancient-rock-inscription-found-nittur-ballari-history-discovery-sat/articleshow-ramx327"/>
        </item>
        <item>
            <title><![CDATA[ಮೊದಲ ಭೇಟಿಗೆ ಸ್ಮಶಾನಕ್ಕೆ ಕರೆದೊಯ್ಯುವ ಸಾಹಸ; ಇದು 'ಗ್ರೇವ್‌ಯಾರ್ಡ್' ಎಂಬ ಲೇಟೆಸ್ಟ್ ಡೇಟಿಂಗ್ ಟ್ರೆಂಡ್!]]></title>
            <link>https://kannada.asianetnews.com/health-life/sharing-love-sitting-in-tombstones-called-graveyard-dating-isthe-latest-craze-for-modern-day-couples/articleshow-wc4mokg</link>
            <guid isPermaLink="true">https://kannada.asianetnews.com/health-life/sharing-love-sitting-in-tombstones-called-graveyard-dating-isthe-latest-craze-for-modern-day-couples/articleshow-wc4mokg</guid>
            <pubDate>Fri, 01 May 2026 13:27:35 +0530</pubDate>
            <description><![CDATA[&lt;p&gt;ಕೇಳಲು ವಿಚಿತ್ರ ಹಾಗೂ ಸ್ವಲ್ಪ ಮಟ್ಟಿಗೆ ಭಯಾನಕ ಎನಿಸಿದರೂ, 'ಗ್ರೇವ್&zwnj;ಯಾರ್ಡ್ ಡೇಟಿಂಗ್' ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ 'ಸತ್ತವರ ನಡುವಿನ ಸಮಾಲೋಚನೆ' ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ. ನೀವು ನಿಮ್ಮ ಸಂಗಾತಿಯನ್ನು ಮೊದಲ ಭೇಟಿಗೆ ಸ್ಮಶಾನಕ್ಕೆ ಕರೆದೊಯ್ಯುವ ಸಾಹಸ ಮಾಡುತ್ತೀರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqh850b0sqga417tmdrgqbkq,imgname-graveyard-dating-1777621696864.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸತ್ತವರ ನಡುವೆ ಪ್ರೀತಿಯ ಹೂವು! ಈಗಿನ ಲೇಟೆಸ್ಟ್ ಟ್ರೆಂಡ್ 'ಗ್ರೇವ್&zwnj;ಯಾರ್ಡ್ ಡೇಟಿಂಗ್' - ಇದು ರೋಮ್ಯಾಂಟಿಕ್ ಅಥವಾ ಭಯಾನಕ?&lt;/strong&gt;&lt;/p&gt;&lt;p&gt;ಡೇಟಿಂಗ್ ಪ್ರಪಂಚವು ದಿನದಿಂದ ದಿನಕ್ಕೆ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹಿಂದೆಲ್ಲಾ ಪ್ರೇಮಿಗಳು ಮೊದಲ ಭೇಟಿಗೆ (First Date) ಸುಂದರವಾದ ಕಾಫಿ ಶಾಪ್, ಐಷಾರಾಮಿ ರೆಸ್ಟೋರೆಂಟ್ ಅಥವಾ ಹಸಿರು ಉದ್ಯಾನವನಗಳನ್ನು ಆರಿಸಿಕೊಳ್ಳುತ್ತಿದ್ದರು. ಆದರೆ ಈಗಿನ ಕಾಲದ 'ಜೆನ್ ಜಿ' (Gen Z) ಯುವಜನತೆ ಯಾವುದನ್ನೂ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಲು ಇಷ್ಟಪಡುವುದಿಲ್ಲ. ಅವರ ಹೊಸ ಫೇವರಿಟ್ ಡೇಟಿಂಗ್ ಸ್ಪಾಟ್ ಯಾವುದು ಗೊತ್ತೇ? ಕೇಳಿದರೆ ನೀವು ಶಾಕ್ ಆಗಬಹುದು - ಅದು 'ಸ್ಮಶಾನ' (Graveyard)!&lt;/p&gt;&lt;p&gt;ಹೌದು, ಇದನ್ನು 'ಗ್ರೇವ್&zwnj;ಯಾರ್ಡ್ ಡೇಟಿಂಗ್' ಎಂದು ಕರೆಯಲಾಗುತ್ತಿದೆ. ಸತ್ತವರ ಸಮಾಧಿಗಳ ನಡುವೆ ಕುಳಿತು ಪ್ರೀತಿ ಹಂಚಿಕೊಳ್ಳುವುದು ಈಗಿನ ಆಧುನಿಕ ಪ್ರೇಮಿಗಳ ಹೊಸ ಕ್ರೇಜ್ ಆಗಿ ಬದಲಾಗುತ್ತಿದೆ.&lt;/p&gt;&lt;h2&gt;ಏನಿದು ಗ್ರೇವ್&zwnj;ಯಾರ್ಡ್ ಡೇಟಿಂಗ್ ಟ್ರೆಂಡ್?&lt;/h2&gt;&lt;p&gt;ಇದುವರೆಗೆ ನಾವು ಡೇಟಿಂಗ್ ಜಗತ್ತಿನಲ್ಲಿ 'ಬ್ರೆಡ್&zwnj;ಕ್ರಂಬಿಂಗ್', 'ಫ್ಲಡ್&zwnj;ಲೈಟಿಂಗ್' ಅಥವಾ 'ಮಂಕಿ ಬ್ಯಾರಿಂಗ್' ನಂತಹ ವಿಭಿನ್ನ ಟ್ರೆಂಡ್&zwnj;ಗಳ ಬಗ್ಗೆ ಕೇಳಿದ್ದೇವೆ. ಆದರೆ ಇವೆಲ್ಲವನ್ನೂ ಮೀರಿಸುವಂತೆ ಈ ಸ್ಮಶಾನ ಡೇಟಿಂಗ್ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಾದ ಇನ್&zwnj;ಸ್ಟಾಗ್ರಾಮ್ ಮತ್ತು ಟಿಕ್&zwnj;ಟಾಕ್&zwnj;ನಲ್ಲಿ ಸಾವಿರಾರು ಯುವಜೋಡಿಗಳು ಸ್ಮಶಾನದಲ್ಲಿ ಡೇಟಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸ್ಮಶಾನದ ಮೌನದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವುದು ಅಥವಾ ಸಮಾಧಿಗಳ ಪಕ್ಕದಲ್ಲಿ ಕುಳಿತು ಹರಟೆ ಹೊಡೆಯುವುದು ಇವರಿಗೆ ಹೊಸ ರೋಮಾಂಚನ ನೀಡುತ್ತಿದೆ.&lt;/p&gt;&lt;p&gt;ಸ್ಮಶಾನವನ್ನೇ ಆರಿಸಿಕೊಳ್ಳಲು ಕಾರಣವೇನು?&lt;/p&gt;&lt;p&gt;ಯುವಜನತೆ ಇಂತಹ ಭಯಾನಕ ಜಾಗವನ್ನು ಪ್ರೀತಿಸಲು ಪ್ರಮುಖವಾಗಿ ಮೂರು ಕಾರಣಗಳಿವೆ: ಶಾಂತಿ, ಏಕಾಂತ ಮತ್ತು ಆಳವಾದ ಸಂಭಾಷಣೆ.&lt;/p&gt;&lt;p&gt;ಗದ್ದಲದಿಂದ ಮುಕ್ತಿ: ನಗರದ ಕೆಫೆಗಳಲ್ಲಿ ಜೋರಾದ ಮ್ಯೂಸಿಕ್ ಇರುತ್ತದೆ, ಅಲ್ಲಿ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸುವುದೇ ಕಷ್ಟ. ಆದರೆ ಸ್ಮಶಾನದಲ್ಲಿ ಅಖಂಡ ಮೌನವಿರುತ್ತದೆ. ಅಲ್ಲಿ ಯಾರೂ ನಿಮ್ಮನ್ನು ತಡೆಯುವವರಿಲ್ಲ ಅಥವಾ ಕಿರುಚುವವರಿಲ್ಲ. ಈ ಮೌನವು ಪ್ರೇಮಿಗಳಿಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಲು ನೆರವಾಗುತ್ತದೆ.&lt;/p&gt;&lt;p&gt;ಖಾಸಗಿತನ (Privacy): ಜನಜಂಗುಳಿಯಿಂದ ದೂರವಿರಲು ಬಯಸುವವರಿಗೆ ಸ್ಮಶಾನಕ್ಕಿಂತ ಸುರಕ್ಷಿತ ಜಾಗ ಮತ್ತೊಂದಿಲ್ಲ. ಇಲ್ಲಿ ಬೇರೆಯವರ ಕಣ್ಣು ನಿಮ್ಮ ಮೇಲೆ ಬೀಳುವ ಭಯವಿರುವುದಿಲ್ಲ.&lt;/p&gt;&lt;p&gt;ಆಳವಾದ ಬಾಂಧವ್ಯ: 'ವೋಗ್ ಇಂಡಿಯಾ' ವರದಿಯ ಪ್ರಕಾರ, ಹಳೆಯ ಸಮಾಧಿಗಳು ಮತ್ತು ಒಣಗಿದ ಎಲೆಗಳ ನಡುವೆ ಕುಳಿತು ಮಾತನಾಡುವಾಗ ಸಂಭಾಷಣೆಯು ಕೇವಲ ಮೇಲ್ಪದರದ ಹರಟೆಯಾಗಿ ಉಳಿಯುವುದಿಲ್ಲ. ಅಲ್ಲಿ ಸಾವು-ಬದುಕು, ಭಯ, ಕನಸು ಮತ್ತು ಜೀವನದ ಗುರಿಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತವೆ. ಇದು ಜೋಡಿಗಳ ನಡುವೆ ಗಾಢವಾದ ಬಾಂಧವ್ಯ ಬೆಸೆಯಲು ಸಹಕಾರಿ ಎನ್ನಲಾಗುತ್ತಿದೆ.&lt;/p&gt;&lt;h3&gt;ಇದು ಹೊಂದಾಣಿಕೆಯ ಪರೀಕ್ಷೆಯೂ ಹೌದು!&lt;/h3&gt;&lt;p&gt;ಕೆಲವರು ಇದನ್ನು ಒಂದು ರೀತಿಯ 'Compatibility Test' ಎಂದೂ ಕರೆಯುತ್ತಾರೆ. ವಿಲಕ್ಷಣವಾದ ಅಥವಾ ಭಯಾನಕವಾದ ಸನ್ನಿವೇಶದಲ್ಲಿ ನಿಮ್ಮ ಸಂಗಾತಿ ಹೇಗೆ ವರ್ತಿಸುತ್ತಾರೆ ಎಂದು ತಿಳಿಯಲು ಇದು ಒಂದು ದಾರಿ. ಸ್ಮಶಾನದಂತಹ ಜಾಗದಲ್ಲಿ ನಿಮ್ಮೊಂದಿಗೆ ಬರಲು ಒಪ್ಪುವ ಸಂಗಾತಿ, ನಿಮ್ಮ ವಿಚಿತ್ರ ಆಲೋಚನೆಗಳನ್ನೂ ಗೌರವಿಸುತ್ತಾರೆ ಎಂಬುದು ಇಂದಿನ ಯುವಕರ ನಂಬಿಕೆ.&lt;/p&gt;&lt;p&gt;ಒಟ್ಟಿನಲ್ಲಿ, ಕೇಳಲು ವಿಚಿತ್ರ ಹಾಗೂ ಸ್ವಲ್ಪ ಮಟ್ಟಿಗೆ ಭಯಾನಕ ಎನಿಸಿದರೂ, 'ಗ್ರೇವ್&zwnj;ಯಾರ್ಡ್ ಡೇಟಿಂಗ್' ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ 'ಸತ್ತವರ ನಡುವಿನ ಸಮಾಲೋಚನೆ' ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ. ನೀವು ನಿಮ್ಮ ಸಂಗಾತಿಯನ್ನು ಮೊದಲ ಭೇಟಿಗೆ ಸ್ಮಶಾನಕ್ಕೆ ಕರೆದೊಯ್ಯುವ ಸಾಹಸ ಮಾಡುತ್ತೀರಾ? ಯೋಚಿಸಿ ನಿರ್ಧಾರ ಮಾಡಿ, ಇಲ್ಲದಿದ್ದರೆ ಅದು ನಿಮ್ಮ ಕೊನೆಯ ಡೇಟ್ ಆಗುವ ಸಾಧ್ಯತೆಯೂ ಇರುತ್ತದೆ!&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/sharing-love-sitting-in-tombstones-called-graveyard-dating-isthe-latest-craze-for-modern-day-couples/articleshow-wc4mokg"/>
        </item>
        <item>
            <title><![CDATA[ಮನೆಯ ಡ್ರಾಯರ್‌ನಲ್ಲಿದ್ದ ಚಿನ್ನದ ಉಂಗುರ ಕದ್ದು ಮೈಗೆ ಹಾಕಿಕೊಂಡ ಹಾವು; ಬಳಿಕ ನಡೆದಿದ್ದೇ ರಣ ರೋಚಕ ಕಥೆ!]]></title>
            <link>https://kannada.asianetnews.com/viral/a-gold-ring-kept-in-a-table-drawer-at-a-house-in-kasaragod-got-stuck-around-the-body-of-a-rat-snake/articleshow-zwthr71</link>
            <guid isPermaLink="true">https://kannada.asianetnews.com/viral/a-gold-ring-kept-in-a-table-drawer-at-a-house-in-kasaragod-got-stuck-around-the-body-of-a-rat-snake/articleshow-zwthr71</guid>
            <pubDate>Wed, 29 Apr 2026 18:56:55 +0530</pubDate>
            <description><![CDATA[&lt;p&gt;ಕಾಸರಗೋಡಿನ ಮನೆಯೊಂದರ ಟೇಬಲ್ ಡ್ರಾಯರ್&zwnj;ನಲ್ಲಿ ಇಟ್ಟಿದ್ದ ಚಿನ್ನದ ಉಂಗುರ, ಅಲ್ಲಿಗೆ ಬಂದಿದ್ದ ಕೇರೆ ಹಾವಿನ ಮೈಗೆ ಸಿಕ್ಕಿಹಾಕಿಕೊಂಡಿತ್ತು. ಮಕ್ಕಳು ಡ್ರಾಯರ್ ತೆರೆದಾಗ ಹಾವು ಕಂಡರೂ, ಅದೃಷ್ಟವಶಾತ್ ಏನೂ ಅನಾಹುತ ಆಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcpaezeqzbexgdwyq2xndkb,imgname-whatsapp-image-2026-04-29-at-6.44.55-pm-1777468783598.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮನೆಯ ಡ್ರಾಯರ್&zwnj;ನಲ್ಲಿ ಚಿನ್ನದ ಉಂಗುರ ತೊಟ್ಟು ಕುಳಿತಿದ್ದ ಅತಿಥಿ! ಕೇರಳದ ಕಾಸರಗೋಡಿನಲ್ಲಿ ನಡೆದ ಈ ರೋಚಕ ಘಟನೆ ನಿಮಗೇನು ಕಲಿಸುತ್ತದೆ?&lt;/strong&gt;&lt;/p&gt;&lt;p&gt;ನಮ್ಮ ದೈನಂದಿನ ಜೀವನದಲ್ಲಿ ನಾವು ಎಷ್ಟೇ ಜಾಗರೂಕರಾಗಿದ್ದರೂ, ಕೆಲವೊಮ್ಮೆ ಪ್ರಕೃತಿ ನಮಗೆ ಅನಿರೀಕ್ಷಿತ ಅಚ್ಚರಿಗಳನ್ನು ನೀಡುತ್ತದೆ. ಅಂತಹದ್ದೇ ಒಂದು ಮೈನವಿರೇಳಿಸುವ ಮತ್ತು ವಿಚಿತ್ರವಾದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಅಡೂರ್ ಎಂಬಲ್ಲಿ ನಡೆದಿದೆ. ಇದು ಕೇವಲ ಒಂದು ಸುದ್ದಿಯಲ್ಲ, ನಮ್ಮ ಜೀವನಶೈಲಿಯಲ್ಲಿ ನಾವು ಎಂತಹ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬುದಕ್ಕೆ ಒಂದು ಪಾಠವೂ ಹೌದು.&lt;/p&gt;&lt;p&gt;ಅಡೂರ್ ನಿವಾಸಿ ರವಿ ಎಂಬುವವರ ಮನೆಯಲ್ಲಿ ಅಂದು ಎಲ್ಲರಂತೆ ದಿನಚರಿ ಆರಂಭವಾಗಿತ್ತು. ಮಕ್ಕಳು ಮನೆಯೊಳಗೆ ಆಟವಾಡುತ್ತಾ ಆಕಸ್ಮಿಕವಾಗಿ ಟೇಬಲ್ ಒಂದರ ಡ್ರಾಯರ್ ಅನ್ನು ತೆರೆದಿದ್ದಾರೆ. ಅಲ್ಲಿ ಕಂಡ ದೃಶ್ಯ ಕಂಡು ಮಕ್ಕಳು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಆ ಡ್ರಾಯರ್&zwnj;ನೊಳಗೆ ಸುರುಳಿ ಸುತ್ತಿಕೊಂಡು ಒಂದು ಕೇರೆ ಹಾವು ಕುಳಿತಿತ್ತು! ಆದರೆ ಇಲ್ಲಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದ್ದು ಹಾವಿನ ಉಪಸ್ಥಿತಿಯಲ್ಲ, ಬದಲಾಗಿ ಆ ಹಾವಿನ ಮೈಗೆ ಬಿಗಿಯಾಗಿ ಸಿಲುಕಿಕೊಂಡಿದ್ದ ಒಂದು ಚಿನ್ನದ ಉಂಗುರ.&lt;/p&gt;&lt;p&gt;ಹೌದು, ಡ್ರಾಯರ್&zwnj;ನಲ್ಲಿದ್ದ ಚಿನ್ನದ ಉಂಗುರವು ಆ ಕೇರೆ ಹಾವಿನ ದೇಹದ ಮಧ್ಯಭಾಗದಲ್ಲಿ ಹೇಗೋ ಸಿಕ್ಕಿಹಾಕಿಕೊಂಡಿತ್ತು. ಬಹುಶಃ ಹಸಿವಿನಿಂದ ಆಹಾರ ಹುಡುಕುತ್ತಾ ಬಂದ ಹಾವು, ಡ್ರಾಯರ್&zwnj;ನ ಸಣ್ಣ ಕಿಂಡಿಯ ಮೂಲಕ ಒಳಹೋಗುವಾಗ ಈ ಅಚಾತುರ್ಯ ನಡೆದಿದೆ ಎಂದು ಊಹಿಸಲಾಗಿದೆ. ಉಂಗುರವು ಹಾವಿನ ಮೈಗೆ ಎಷ್ಟು ಬಿಗಿಯಾಗಿತ್ತೆಂದರೆ, ಅದು ಹಾವಿನ ಚಲನೆಗೂ ಅಡ್ಡಿಪಡಿಸುತ್ತಿತ್ತು. ಅದೃಷ್ಟವಶಾತ್, ಮಕ್ಕಳು ಹಾವನ್ನು ಮುಟ್ಟಲು ಹೋಗದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.&lt;/p&gt;&lt;p&gt;ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆಯ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅತ್ಯಂತ ಜಾಗರೂಕತೆಯಿಂದ ಹಾವನ್ನು ಡ್ರಾಯರ್&zwnj;ನಿಂದ ಹೊರತೆಗೆದ ಸಿಬ್ಬಂದಿ, ನಂತರ ಹಾವಿಗೆ ಯಾವುದೇ ಗಾಯವಾಗದಂತೆ ಚಿನ್ನದ ಉಂಗುರವನ್ನು ಕತ್ತರಿಸಿ ಅದನ್ನು ಬಿಡುಗಡೆಗೊಳಿಸಿದರು. ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.&lt;/p&gt;&lt;h2&gt;ಈ ಘಟನೆಯಿಂದ ನಾವು ಕಲಿಯಬೇಕಾದ ಲೈಫ್&zwnj;ಸ್ಟೈಲ್ ಪಾಠಗಳೇನು?&lt;/h2&gt;&lt;p&gt;1. ಶೇಖರಣಾ ಜಾಗಗಳ ಬಗ್ಗೆ ಎಚ್ಚರ: ಮನೆಯಲ್ಲಿ ಹಳೆಯ ಟೇಬಲ್&zwnj;ಗಳು ಅಥವಾ ಹೆಚ್ಚು ಬಳಸದ ಡ್ರಾಯರ್&zwnj;ಗಳಿದ್ದರೆ, ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಮತ್ತು ಸರಿಯಾಗಿ ಲಾಕ್ ಮಾಡುವುದು ಅವಶ್ಯಕ.&lt;/p&gt;&lt;p&gt;2. ಮಕ್ಕಳ ಮೇಲೆ ನಿಗಾ: ಮಕ್ಕಳು ಆಟವಾಡುವಾಗ ಯಾವ ವಸ್ತುಗಳನ್ನು ಮುಟ್ಟುತ್ತಿದ್ದಾರೆ ಮತ್ತು ಎಲ್ಲಿ ಹೋಗುತ್ತಿದ್ದಾರೆ ಎಂಬ ಅರಿವು ಪೋಷಕರಿಗೆ ಇರಬೇಕು.&lt;/p&gt;&lt;p&gt;3. ಬೆಲೆಬಾಳುವ ವಸ್ತುಗಳ ಸುರಕ್ಷತೆ: ಚಿನ್ನಾಭರಣಗಳನ್ನು ತೆರೆದ ಡ್ರಾಯರ್&zwnj;ಗಳಲ್ಲಿ ಅಥವಾ ಸುಲಭವಾಗಿ ಪ್ರಾಣಿಗಳು ಪ್ರವೇಶಿಸಬಹುದಾದ ಜಾಗಗಳಲ್ಲಿ ಇಡಬಾರದು.&lt;/p&gt;&lt;p&gt;4. ವನ್ಯಜೀವಿಗಳ ಬಗ್ಗೆ ಜಾಗೃತಿ: ಮನೆಯೊಳಗೆ ಹಾವು ಅಥವಾ ಇತರ ಪ್ರಾಣಿಗಳು ಬಂದಾಗ ಗಾಬರಿಯಾಗಿ ಅವುಗಳನ್ನು ಕೊಲ್ಲುವ ಬದಲು, ತಜ್ಞರನ್ನು ಅಥವಾ ಅರಣ್ಯ ಇಲಾಖೆಯನ್ನು ಸಂಪರ್ಕಿಸುವುದು ಉತ್ತಮ ನಾಗರಿಕನ ಲಕ್ಷಣ.&lt;/p&gt;&lt;h3&gt;ಜೀವನವು ಅನಿರೀಕ್ಷಿತ ತಿರುವುಗಳಿಂದ ಕೂಡಿದೆ ಎಂಬುದಕ್ಕೆ ಈ 'ಉಂಗುರ ತೊಟ್ಟ ಹಾವು' ಒಂದು ಸಾಕ್ಷಿ! ನಿಮ್ಮ ಮನೆಯಲ್ಲಿಯೂ ಡ್ರಾಯರ್&zwnj;ಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ!&lt;/h3&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/viral/a-gold-ring-kept-in-a-table-drawer-at-a-house-in-kasaragod-got-stuck-around-the-body-of-a-rat-snake/articleshow-zwthr71"/>
        </item>
        <item>
            <title><![CDATA[Donald Trump: ವಾಷಿಂಗ್ಟನ್ ಹೋಟೆಲ್ ಶೂಟೌಟ್, ಮೊದಲೇ ಭವಿಷ್ಯ ನುಡಿದಿದ್ರಾ ಟ್ರಂಪ್ ಆಪ್ತೆ ಕ್ಯಾರೋಲಿನ್ ಲೀವಿಟ್?]]></title>
            <link>https://kannada.asianetnews.com/world-news/white-house-press-secretary-karoline-leavitt-said-in-her-video-that-trump-is-going-to-have-a-shootout-tonight/articleshow-x80c898</link>
            <guid isPermaLink="true">https://kannada.asianetnews.com/world-news/white-house-press-secretary-karoline-leavitt-said-in-her-video-that-trump-is-going-to-have-a-shootout-tonight/articleshow-x80c898</guid>
            <pubDate>Mon, 27 Apr 2026 16:34:21 +0530</pubDate>
            <description><![CDATA[&lt;p&gt;ಹಿಂದೆಂದೂ ಕಂಡಿರದ ಈ ಹೈಡ್ರಾಮಾಕ್ಕೆ ಹಿಲ್ಟನ್ ಹೋಟೆಲ್ ಸಾಕ್ಷಿಯಾಗಿದ್ದು, ಅಮೆರಿಕದ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ರಾಜಕೀಯ ಸಮರವಾಗಬೇಕಿದ್ದ ವೇದಿಕೆ ಗುಂಡಿನ ಸಮರವಾಗಿ ಮಾರ್ಪಟ್ಟಿದ್ದು ಮಾತ್ರ ದುರದೃಷ್ಟಕರ. ಆದರೆ, ಈ ಬಗ್ಗೆ ಮೊದಲೇ ಭವಿಷ್ಯ ಹೇಳಿದ್ರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq79rsc9sn3sxcemekzjt4c8,imgname-donald-trump-1777287849353.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೈರಲ್ ಆಯ್ತು ಕ್ಯಾರೋಲಿನ್ ಲೀವಿಟ್ ಅವರ 'ಶೂಟೌಟ್' ಭವಿಷ್ಯ!&lt;/strong&gt;&lt;/p&gt;&lt;p&gt;ವಾಷಿಂಗ್ಟನ್ ಹೋಟೆಲ್&zwnj;ನಲ್ಲಿ ಹೈಡ್ರಾಮಾ: ಡೊನಾಲ್ಡ್ ಟ್ರಂಪ್ ಕಾರ್ಯಕ್ರಮದಲ್ಲಿ ನಿಜವಾಯ್ತಾ 'ಶೂಟೌಟ್' ಭವಿಷ್ಯ? ಬೆಚ್ಚಿಬಿದ್ದ ಗಣ್ಯರು!&lt;/p&gt;&lt;p&gt;ಅದು ವಾಷಿಂಗ್ಟನ್ ಡಿ.ಸಿ.ಯ ಅತ್ಯಂತ ಪ್ರತಿಷ್ಠಿತ ಹಿಲ್ಟನ್ ಹೋಟೆಲ್. ಶ್ವೇತಭವನದ ವರದಿಗಾರರಿಗಾಗಿ ಆಯೋಜಿಸಲಾಗಿದ್ದ ಅದ್ಧೂರಿ ಭೋಜನಕೂಟ (Dinner Party). ಅಲ್ಲಿ ನೆರೆದಿದ್ದವರು ಸಾಮಾನ್ಯರಲ್ಲ; ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಅವರ ಪತ್ನಿ ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಸುಮಾರು 2,600ಕ್ಕೂ ಅಧಿಕ ಗಣ್ಯರು! ಅದ್ದೂರಿ ಅಲಂಕಾರ, ರಾಜಕೀಯ ಚರ್ಚೆಗಳ ನಡುವೆ ಎಲ್ಲವೂ ಸುಗಮವಾಗಿ ಸಾಗುತ್ತಿತ್ತು. ಆದರೆ, ಕ್ಷಣಾರ್ಧದಲ್ಲಿ ಆ ಸಂಭ್ರಮದ ವಾತಾವರಣವು ರಣರಂಗವಾಗಿ ಬದಲಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ!&lt;/p&gt;&lt;h2&gt;ಗಣ್ಯರ ಎದೆಬಡಿತ ಹೆಚ್ಚಿಸಿದ ಗುಂಡಿನ ಸದ್ದು!&lt;/h2&gt;&lt;p&gt;ಕಾರ್ಯಕ್ರಮದ ಮಧ್ಯೆ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಬಂದಾಗ ಇಡೀ ಸಭಾಂಗಣ ಒಂದು ಕ್ಷಣ ಸ್ತಬ್ಧವಾಯಿತು. ಮರುಕ್ಷಣವೇ ಅಲ್ಲಿ ಹಾಹಾಕಾರ ಶುರುವಾಯಿತು. ಅಮೆರಿಕದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು ಪ್ರಾಣ ಉಳಿಸಿಕೊಳ್ಳಲು ಬೆಲೆಬಾಳುವ ಮೇಜುಗಳ ಕೆಳಗೆ ಅಡಗಿಕೊಂಡ ಪ್ರಸಂಗ ನಡೆಯಿತು. ಯುಎಸ್ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತರಾಗಿ ಟ್ರಂಪ್ ಮತ್ತು ಮೆಲಾನಿಯಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಹೋಟೆಲ್ ಒಳಗೆ ನಡೆದ ಈ ಅನಿರೀಕ್ಷಿತ ದಾಳಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು.&lt;/p&gt;&lt;p&gt;ವೈರಲ್ ಆಯ್ತು ಕ್ಯಾರೋಲಿನ್ ಲೀವಿಟ್ ಅವರ 'ಶೂಟೌಟ್' ಭವಿಷ್ಯ!&lt;/p&gt;&lt;p&gt;ಈ ಘಟನೆಯ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಅದು ವೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರ ಸಂದರ್ಶನದ ತುಣುಕು. ಕಾರ್ಯಕ್ರಮ ಆರಂಭವಾಗುವ ಮುನ್ನ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಾ, &quot;ಇಂದು ರಾತ್ರಿ ನೀವೆಲ್ಲರೂ ನೋಡಲೇಬೇಕಾದ ರಾತ್ರಿಯಾಗಿದೆ. ಟ್ರಂಪ್ ಅವರು ಇಂದು ರಾತ್ರಿ 'ಶೂಟೌಟ್' (Shootout) ನಡೆಸಲಿದ್ದಾರೆ, ಹಾಗಾಗಿ ಮಿಸ್ ಮಾಡಬೇಡಿ&quot; ಎಂದು ಹೇಳಿದ್ದರು!&lt;/p&gt;&lt;p&gt;ವಾಸ್ತವವಾಗಿ, ಲೀವಿಟ್ ಅವರು ಟ್ರಂಪ್ ಅವರು ತಮ್ಮ ಭಾಷಣದ ಮೂಲಕ ವಿರೋಧಿಗಳ ಮೇಲೆ ಮಾಡುವ 'ಮಾತಿನ ದಾಳಿ' ಅಥವಾ 'ರಾಜಕೀಯ ವಿಡಂಬನೆ'ಯನ್ನು ಉಲ್ಲೇಖಿಸಲು ಈ ಪದ ಬಳಸಿದ್ದರು. ಆದರೆ, ಕಾಕತಾಳೀಯ ಎಂಬಂತೆ ಅಲ್ಲಿ ನಿಜವಾಗಿಯೂ ಗುಂಡಿನ ದಾಳಿ ನಡೆದಿದ್ದು ಈಗ ಹತ್ತಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. &quot;ಅವರಿಗೆ ಈ ದಾಳಿಯ ಬಗ್ಗೆ ಮೊದಲೇ ಗೊತ್ತಿತ್ತೇ?&quot; ಅಥವಾ &quot;ಇದು ಕೇವಲ ಮಾತಿನ ಭರದಲ್ಲಿ ಬಂದ ಪದವೇ?&quot; ಎಂದು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.&lt;/p&gt;&lt;h3&gt;ಧೈರ್ಯ ಪ್ರದರ್ಶಿಸಿದ ಸೀಕ್ರೆಟ್ ಸರ್ವಿಸ್!&lt;/h3&gt;&lt;p&gt;ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ. &quot;ಸೀಕ್ರೆಟ್ ಸರ್ವಿಸ್ ಮತ್ತು ಕಾನೂನು ಜಾರಿ ಅಧಿಕಾರಿಗಳು ಅತ್ಯಂತ ಧೈರ್ಯದಿಂದ ಕೆಲಸ ಮಾಡಿದ್ದಾರೆ. ದಾಳಿಕೋರನನ್ನು ಈಗಾಗಲೇ ಬಂಧಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ&quot; ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ಹಿಂದೆಂದೂ ಕಂಡಿರದ ಈ ಹೈಡ್ರಾಮಾಕ್ಕೆ ಹಿಲ್ಟನ್ ಹೋಟೆಲ್ ಸಾಕ್ಷಿಯಾಗಿದ್ದು, ಅಮೆರಿಕದ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ರಾಜಕೀಯ ಸಮರವಾಗಬೇಕಿದ್ದ ವೇದಿಕೆ ಗುಂಡಿನ ಸಮರವಾಗಿ ಮಾರ್ಪಟ್ಟಿದ್ದು ಮಾತ್ರ ದುರದೃಷ್ಟಕರ. ಸದ್ಯಕ್ಕೆ ಎಲ್ಲ ಗಣ್ಯರು ಸುರಕ್ಷಿತವಾಗಿದ್ದು, ಪೊಲೀಸರು ಈ ದಾಳಿಯ ಹಿಂದಿನ ಸಂಚಿನ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/world-news/white-house-press-secretary-karoline-leavitt-said-in-her-video-that-trump-is-going-to-have-a-shootout-tonight/articleshow-x80c898"/>
        </item>
        <item>
            <title><![CDATA[ಭಾರತದಲ್ಲಿ ಸರ್ಕಾರಿ ಅಧಿಕಾರಿಗಳ ಕುರ್ಚಿ ಮೇಲೆ ಬಿಳಿ ಟವೆಲ್ ಯಾಕಿರುತ್ತೆ? ಬ್ರಿಟಿಷರ ಪದ್ಧತಿ ಹಿಂದಿದೆ ಬಲವಾದ ಕಾರಣ]]></title>
            <link>https://kannada.asianetnews.com/gallery/india-news/the-real-reason-behind-white-towels-on-government-office-chairs-why-ul2ggof</link>
            <guid isPermaLink="true">https://kannada.asianetnews.com/gallery/india-news/the-real-reason-behind-white-towels-on-government-office-chairs-why-ul2ggof</guid>
            <pubDate>Sat, 25 Apr 2026 16:11:52 +0530</pubDate>
            <description><![CDATA[&lt;p&gt;Government Officials White Towel In Chair: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿಗಳ ಮೇಲೆ ಬಿಳಿ ಟವೆಲ್ ಯಾಕಿರುತ್ತದೆ ಗೊತ್ತಾ? ಬ್ರಿಟಿಷರ ಕಾಲದ ಈ ಸಂಪ್ರದಾಯದ ಹಿಂದಿರುವ ಸ್ವಾರಸ್ಯಕರ ಇತಿಹಾಸ ಮತ್ತು ನಿಜವಾದ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq22r5q8bfedv08prmddnr1t,imgname-white-towel-1777084230113--1--1777112717032.jpg" type="image/jpeg" height="390" width="690"/>
            <content:encoded><![CDATA[&lt;p&gt;Government Officials White Towel In Chair: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿಗಳ ಮೇಲೆ ಬಿಳಿ ಟವೆಲ್ ಯಾಕಿರುತ್ತದೆ ಗೊತ್ತಾ? ಬ್ರಿಟಿಷರ ಕಾಲದ ಈ ಸಂಪ್ರದಾಯದ ಹಿಂದಿರುವ ಸ್ವಾರಸ್ಯಕರ ಇತಿಹಾಸ ಮತ್ತು ನಿಜವಾದ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ದೇಶದ ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ನಮಗೆಲ್ಲರಿಗೂ ಸಾಮಾನ್ಯವಾಗಿ ಒಂದು ದೃಶ್ಯ ಕಾಣಸಿಗುತ್ತದೆ. ಅದುವೇ, ಉನ್ನತ ಅಧಿಕಾರಿಗಳ ಕುರ್ಚಿಗಳ ಮೇಲೆ ಹಾಸಿರುವ ಬಿಳಿ ಟವೆಲ್. ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಹಿಡಿದು ಸ್ಥಳೀಯ ತಹಶೀಲ್ದಾರ್ ಕಚೇರಿಯವರೆಗೆ ಈ ಸಂಪ್ರದಾಯ ಮುಂದುವರಿದಿದೆ.&lt;/p&gt;&lt;p&gt;ಈಗ ದುಬಾರಿ ದಕ್ಷತಾಶಾಸ್ತ್ರದ (ergonomic) ಕುರ್ಚಿಗಳು, ಎಸಿ ಕೊಠಡಿಗಳಿದ್ದರೂ ಈ ಟವೆಲ್ ಬಳಕೆ ಯಾಕೆ ನಿಂತಿಲ್ಲ? ಇದರ ಹಿಂದಿನ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳೇನು ಎಂಬುದನ್ನು ಈಗ ತಿಳಿಯೋಣ.&lt;/p&gt;&lt;img&gt;&lt;p&gt;ಈ ಬಿಳಿ ಟವೆಲ್ ಸಂಪ್ರದಾಯ ಇವತ್ತು ನಿನ್ನೆಯದಲ್ಲ. ಇದರ ಬೇರುಗಳು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿವೆ. ಆಗಿನ ಕಾಲದಲ್ಲಿ ಅಧಿಕಾರಿಗಳು ಹೆಚ್ಚಾಗಿ ಕುದುರೆ ಅಥವಾ ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸಿ ಕಚೇರಿ ತಲುಪುತ್ತಿದ್ದರು. ಭಾರತದ ವಿಪರೀತ ಬಿಸಿಲು ಮತ್ತು ಧೂಳಿನಿಂದಾಗಿ, ಅವರು ಆಫೀಸಿಗೆ ಬರುವಷ್ಟರಲ್ಲಿ ಸಂಪೂರ್ಣವಾಗಿ ಬೆವರುತ್ತಿದ್ದರು.&amp;nbsp;&lt;/p&gt;&lt;p&gt;ಆ ಬೆವರು ಕುರ್ಚಿಗೆ ತಾಗದಂತೆ ಮತ್ತು ಬೆನ್ನಿಗೆ ಆರಾಮದಾಯಕವಾಗಿರಲು ಟವೆಲ್&zwnj;ಗಳನ್ನು ಬಳಸಲು ಪ್ರಾರಂಭಿಸಿದರು. ಕಾಲಕ್ರಮೇಣ ಬ್ರಿಟಿಷರು ಹೋದರೂ, ಅವರು ಬಿಟ್ಟುಹೋದ ಈ ಟವೆಲ್ ಸಂಸ್ಕೃತಿ ಭಾರತೀಯ ಅಧಿಕಾರಶಾಹಿಯ ಭಾಗವಾಗಿ ಉಳಿದುಕೊಂಡಿದೆ.&lt;/p&gt;&lt;img&gt;&lt;p&gt;ಹಿಂದಿನ ಕಾಲದಲ್ಲಿ ಆಫೀಸ್ ಕುರ್ಚಿಗಳು ಹೆಚ್ಚಾಗಿ ಮರ ಅಥವಾ ಚರ್ಮದಿಂದ ಮಾಡಲ್ಪಟ್ಟಿದ್ದವು. ಇವುಗಳನ್ನು ಪ್ರತಿದಿನ ಸ್ವಚ್ಛಗೊಳಿಸುವುದು ಕಷ್ಟವಾಗಿತ್ತು. ವಿಶೇಷವಾಗಿ ತಲೆಗೆ ಎಣ್ಣೆ ಹಚ್ಚಿಕೊಳ್ಳುವ ಅಭ್ಯಾಸವಿದ್ದವರಿಂದ ಕುರ್ಚಿಯ ಹಿಂಭಾಗ ಬೇಗನೆ ಜಿಡ್ಡಾಗುತ್ತಿತ್ತು.&amp;nbsp;&lt;/p&gt;&lt;p&gt;ಅದೇ ಒಂದು ಟವೆಲ್ ಹಾಕಿದರೆ, ಅದು ಕೊಳೆಯನ್ನು ಹೀರಿಕೊಳ್ಳುತ್ತದೆ. ವಾರಕ್ಕೊಮ್ಮೆ ಆ ಟವೆಲ್ ತೊಳೆದರೆ ಸಾಕು. ಇದು ಕುರ್ಚಿಯ ಬಾಳಿಕೆಯನ್ನು ಹೆಚ್ಚಿಸುವುದಲ್ಲದೆ, ಕಚೇರಿಯಲ್ಲಿ ಸ್ವಚ್ಛತೆಯನ್ನೂ ಕಾಪಾಡುತ್ತಿತ್ತು.&lt;/p&gt;&lt;img&gt;&lt;p&gt;ಬಹಳ ಕಾಲದ ನಂತರ, ಈ ಬಿಳಿ ಟವೆಲ್ ಕೇವಲ ಅಗತ್ಯಕ್ಕಾಗಿ ಅಲ್ಲದೆ, ಒಂದು ಸ್ಟೇಟಸ್ ಸಿಂಬಲ್ ಆಗಿ ಬದಲಾಯಿತು. ಒಂದು ಕೋಣೆಗೆ ಪ್ರವೇಶಿಸಿದಾಗ, ಯಾವ ಕುರ್ಚಿಯ ಮೇಲೆ ಬಿಳಿ ಟವೆಲ್ ಇರುತ್ತದೆಯೋ, ಅದು ಅಧಿಕಾರಿಯ ಕುರ್ಚಿ ಎಂದು, ಉಳಿದವು ಸಂದರ್ಶಕರ ಕುರ್ಚಿಗಳೆಂದು ಸುಲಭವಾಗಿ ಅರ್ಥವಾಗುತ್ತಿತ್ತು. ಅಂದರೆ, ಅಧಿಕಾರ ಮತ್ತು ಸ್ಥಾನಮಾನವನ್ನು ಗುರುತಿಸಲು ಇದೊಂದು ಸಂಕೇತವಾಗಿ ಮಾರ್ಪಟ್ಟಿತು.&amp;nbsp;&lt;/p&gt;&lt;p&gt;ಈ ವಿಷಯ ಎಷ್ಟರಮಟ್ಟಿಗೆ ಗಂಭೀರವಾಯಿತೆಂದರೆ, ಕೆಲವು ಬಾರಿ ಜನಪ್ರತಿನಿಧಿಗಳು ತಮ್ಮ ಕುರ್ಚಿಗಳ ಮೇಲೆ ಟವೆಲ್ ಇಲ್ಲದಿರುವುದನ್ನು ಅವಮಾನವೆಂದು ಭಾವಿಸಿ ಗಲಾಟೆ ಮಾಡಿದ ಪ್ರಸಂಗಗಳೂ ಇವೆ. ಇದರಿಂದಾಗಿ ಸರ್ಕಾರಗಳು ವಿಶೇಷವಾಗಿ ಶಿಷ್ಟಾಚಾರವನ್ನು (protocol) ರೂಪಿಸಬೇಕಾಯಿತು.&lt;/p&gt;&lt;img&gt;&lt;p&gt;ಎಲ್ಲಾ ಬಣ್ಣಗಳಲ್ಲಿ ಬಿಳಿ ಬಣ್ಣವು ಶುದ್ಧತೆ ಮತ್ತು ಶಾಂತಿಯ ಸಂಕೇತವಾಗಿದೆ. ಅಲ್ಲದೆ, ಬಿಳಿ ಬಣ್ಣದ ಮೇಲೆ ಕೊಳೆ ಬಿದ್ದರೆ ತಕ್ಷಣವೇ ಕಾಣಿಸುತ್ತದೆ. ಇದರಿಂದಾಗಿ ಆ ಟವೆಲ್ ಅನ್ನು ಕಾಲಕಾಲಕ್ಕೆ ಬದಲಾಯಿಸಬೇಕಾಗುತ್ತದೆ. ಇದು ಕಚೇರಿಯಲ್ಲಿನ ಶಿಸ್ತು ಮತ್ತು ಅಧಿಕಾರಿಯ ಬದ್ಧತೆಯನ್ನು ಸೂಚಿಸುತ್ತದೆ. ಇಂದು ಎಸಿಗಳು, ಆಧುನಿಕ ಸೌಕರ್ಯಗಳಿದ್ದರೂ, ಈ ಸಂಪ್ರದಾಯವು ಒಂದು ಅಭ್ಯಾಸವಾಗಿ ಮಾರ್ಪಟ್ಟಿದೆ.&amp;nbsp;&lt;/p&gt;&lt;p&gt;ಹಳೆಯ ತಲೆಮಾರಿನ ಅಧಿಕಾರಿಗಳಿಂದ ಹೊಸ ತಲೆಮಾರಿನ ಅಧಿಕಾರಿಗಳಿಗೆ ಈ ಸಂಸ್ಕೃತಿ ಬಳುವಳಿಯಾಗಿ ಬಂದಿದೆ. ಅದಕ್ಕಾಗಿಯೇ, ಆ ಬಿಳಿ ಟವೆಲ್ ಇಂದು ಭಾರತೀಯ ಸರ್ಕಾರಿ ವ್ಯವಸ್ಥೆಯಲ್ಲಿ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ.&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/the-real-reason-behind-white-towels-on-government-office-chairs-why-ul2ggof"/>
        </item>
        <item>
            <title><![CDATA[ಪ್ರಪಂಚದ ಪರಿವೆಯಿಲ್ಲದೇ ಹಲವರು ಮಲಗಿರುವಾಗ ನೀವು ಎದ್ದೇಳಿ.. ಇದು ಮ್ಯಾಜಿಕ್ ಸಮಯ, ಇನ್ಯಾಕೆ ತಡ ಮಾಡ್ತೀರಿ?]]></title>
            <link>https://kannada.asianetnews.com/health-life/brahma-muhurat-the-spiritual-and-scientific-secrets-behind-waking-up-early/articleshow-pyf88sm</link>
            <guid isPermaLink="true">https://kannada.asianetnews.com/health-life/brahma-muhurat-the-spiritual-and-scientific-secrets-behind-waking-up-early/articleshow-pyf88sm</guid>
            <pubDate>Mon, 27 Apr 2026 13:06:33 +0530</pubDate>
            <description><![CDATA[&lt;p&gt;ದೇವತೆಗಳು ಮತ್ತು ಸಿದ್ಧ ಪುರುಷರ ಸಂಚಾರ ಭೂಮಿಯಲ್ಲಿ ಹೆಚ್ಚಾಗಿರುತ್ತದೆ. ಅವರು ಸೂಕ್ಷ್ಮ ರೂಪದಲ್ಲಿ ಸಂಚರಿಸುವಾಗ, ನಾವು ಎಚ್ಚರವಾಗಿದ್ದು ಪ್ರಾರ್ಥಿಸಿದರೆ ಅವರ ಆಶೀರ್ವಾದ ಸುಲಭವಾಗಿ ಸಿಗುತ್ತದೆ. ಇಂದು ಪಾಶ್ಚಿಮಾತ್ಯ ದೇಶಗಳ ಹಲವು ದೊಡ್ಡ ಉದ್ಯಮಿಗಳು ಬೆಳಗ್ಗೆ ಬೇಗ ಏಳುವುದನ್ನು ಪಾಲಿಸುತ್ತಿದ್ದಾರೆ. ನಮ್ಮ ಪೂರ್ವಜರು ಏನ್ ಹೇಳಿದ್ದಾರೆ? ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq6xr1z4q0e138g563eczkfn,imgname-brahma-muhurtha-1777275242468.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಈ ಸಮಯ ಆನಂದಮಯ&lt;/strong&gt;&lt;/p&gt;&lt;p&gt;ಬ್ರಹ್ಮ ಮುಹೂರ್ತದಲ್ಲಿ ಎದ್ದು ಪೂಜೆ, ಧ್ಯಾನ, ವ್ಯಾಯಾಮ ಮಾಡುವುದರಿಂದ ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಅನೇಕ ಲಾಭಗಳಿವೆ ಎಂದು ಹಲವರು ಹೇಳುವುದನ್ನು ಕೇಳಿರುತ್ತೇವೆ. ನಿಜವಾಗಿಯೂ ಈ ಸಮಯಕ್ಕೆ ಅಷ್ಟೊಂದು ಶಕ್ತಿ ಇದೆಯೇ? ಇದರ ಹಿಂದಿನ ರಹಸ್ಯವೇನು ಎಂದು ತಿಳಿಯೋಣ. ಬ್ರಹ್ಮ ಮುಹೂರ್ತ (ಬೆಳಗ್ಗೆ 3:30 - 5:30) ಕೇವಲ ಪೂಜೆ ಮಾಡುವ ಸಮಯವಲ್ಲ, ಇದು ಮನುಷ್ಯನ ದೇಹ ಮತ್ತು ಆತ್ಮವನ್ನು 'ರೀ-ಪ್ರೋಗ್ರಾಮಿಂಗ್' ಮಾಡುವ ಒಂದು ಅದ್ಭುತ ಕಾಲಚಕ್ರ. ಇದರ ಬಗ್ಗೆ ಯಾರಿಗೂ ತಿಳಿಯದ ಕೆಲವು ಸೂಕ್ಷ್ಮ ಮಾಹಿತಿ ಇಲ್ಲಿದೆ.&lt;/p&gt;&lt;h2&gt;ಬ್ರಹ್ಮ ಮುಹೂರ್ತದ ಅಚ್ಚರಿಯ ಸತ್ಯಗಳು:&lt;/h2&gt;&lt;p&gt;1. ಮೆದುಳಿನ ಚಟುವಟಿಕೆ:&lt;/p&gt;&lt;p&gt;ವೈಜ್ಞಾನಿಕವಾಗಿ, ಈ ಸಮಯದಲ್ಲಿ ಮನುಷ್ಯನ ಮೆದುಳಿನ ಮಧ್ಯಭಾಗದಲ್ಲಿರುವ 'ಪಿನಿಯಲ್ ಗ್ರಂಥಿ' ಅತ್ಯಂತ ಚುರುಕಾಗಿ ಕೆಲಸ ಮಾಡುತ್ತದೆ. ಇದನ್ನೇ ಆಧ್ಯಾತ್ಮದಲ್ಲಿ 'ಮೂರನೇ ಕಣ್ಣು' ಎನ್ನುತ್ತಾರೆ. ಈ ಸಮಯದಲ್ಲಿ ಸ್ರವಿಸುವ 'ಮೆಲಟೋನಿನ್' ಹಾರ್ಮೋನ್, ಬೇರೆ ಸಮಯಕ್ಕಿಂತ ಹೆಚ್ಚು ಶುದ್ಧವಾಗಿರುತ್ತದೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಈ ಸಮಯದಲ್ಲಿ ಎಚ್ಚರವಾಗಿರುವವರು ಹೆಚ್ಚು ಕಾಲ ಯೌವನದಿಂದ ಕಾಣಲು ಇದೇ ಕಾರಣ.&lt;/p&gt;&lt;p&gt;2. ಪ್ರಾಣಶಕ್ತಿಯ 'ನೀಲಿ ಬಣ್ಣದ' ಕಂಪನಗಳು:&lt;/p&gt;&lt;p&gt;ಬಾಹ್ಯಾಕಾಶ ಸಂಶೋಧನೆಗಳ ಪ್ರಕಾರ, ಮುಂಜಾನೆಯ ಸಮಯದಲ್ಲಿ ವಾತಾವರಣದಲ್ಲಿ ಒಂದು ರೀತಿಯ ನೀಲಿ ಬಣ್ಣದ ವಿದ್ಯುತ್ಕಾಂತೀಯ ಕಂಪನಗಳು ಹೆಚ್ಚಾಗಿರುತ್ತವೆ. ಈ ನೀಲಿ ಬಣ್ಣದ ಕಂಪನಗಳು ಮನುಷ್ಯನ ನರಮಂಡಲವನ್ನು ಶಾಂತಗೊಳಿಸುವ ಗುಣ ಹೊಂದಿವೆ. ನಾವು ಈ ಸಮಯದಲ್ಲಿ ಧ್ಯಾನ ಮಾಡುವಾಗ, ಆ ನೀಲಿ ಶಕ್ತಿಯು ನಮ್ಮ 'ಆಜ್ಞಾ ಚಕ್ರ'ವನ್ನು ಉತ್ತೇಜಿಸಿ, ಒಳಅರಿವನ್ನು ಬಲಪಡಿಸುತ್ತದೆ. ಭವಿಷ್ಯದಲ್ಲಿ ನಡೆಯುವುದನ್ನು ಮುಂಚಿತವಾಗಿ ಗ್ರಹಿಸುವ ಶಕ್ತಿ ಅನೇಕ ಜ್ಞಾನಿಗಳಿಗೆ ಸಿಕ್ಕಿದ್ದೇ ಈ ಕಾರಣದಿಂದ.&lt;/p&gt;&lt;p&gt;3. ಪ್ಲಾಸ್ಮಾ ಶಕ್ತಿ ಮತ್ತು ಗುರುತ್ವಾಕರ್ಷಣೆಯ ಬದಲಾವಣೆ:&lt;/p&gt;&lt;p&gt;ಭೂಮಿಯ ಗುರುತ್ವಾಕರ್ಷಣೆಗೂ ಮತ್ತು ಮನುಷ್ಯನ ಮನಸ್ಸಿಗೂ ಹತ್ತಿರದ ಸಂಬಂಧವಿದೆ. ಬ್ರಹ್ಮ ಮುಹೂರ್ತದ ಸಮಯದಲ್ಲಿ ಭೂಮಿಯ ತಿರುಗುವಿಕೆ ಮತ್ತು ಚಂದ್ರನ ಸ್ಥಾನದಿಂದಾಗಿ, ಗುರುತ್ವಾಕರ್ಷಣೆಯು ಒಂದು ರೀತಿ 'ಮೃದು' ಸ್ಥಿತಿಯನ್ನು ತಲುಪುತ್ತದೆ. ಈ ಸನ್ನಿವೇಶದಲ್ಲಿ ನಮ್ಮ ಬೆನ್ನುಮೂಳೆಯನ್ನು ನೇರವಾಗಿ ಇಟ್ಟುಕೊಂಡು (ಧ್ಯಾನದ ಸ್ಥಿತಿಯಲ್ಲಿ) ಕುಳಿತಾಗ, ಬ್ರಹ್ಮಾಂಡದಲ್ಲಿರುವ 'ಪ್ಲಾಸ್ಮಾ ಶಕ್ತಿ'ಯು ನಮ್ಮ ನೆತ್ತಿಯ ಮೂಲಕ ಸುಲಭವಾಗಿ ದೇಹವನ್ನು ಪ್ರವೇಶಿಸುತ್ತದೆ. ಇದು ನಿಮ್ಮ ರಕ್ತ ಸಂಚಾರವನ್ನು ಶುದ್ಧೀಕರಿಸಿ, ಮೆದುಳಿನ ಕೋಶಗಳನ್ನು ಪುನಶ್ಚೇತನಗೊಳಿಸುತ್ತದೆ.&lt;/p&gt;&lt;p&gt;4. 'ವಾಕ್ಸಿದ್ಧಿ'ಯ ಧ್ವನಿ ರಹಸ್ಯ:&lt;/p&gt;&lt;p&gt;ಆ ಮುಂಜಾನೆಯ ನೀರವತೆಯಲ್ಲಿ, ಗಾಳಿಯಲ್ಲಿನ ತೇವಾಂಶವು ಒಂದು ನಿರ್ದಿಷ್ಟ ಪ್ರಮಾಣದಲ್ಲಿರುತ್ತದೆ. ಅಂತಹ ಪರಿಸರದಲ್ಲಿ ನಾವು ಉಚ್ಚರಿಸುವ ಮಂತ್ರಗಳ 'ಧ್ವನಿ ತರಂಗಗಳು' ಹಾಳಾಗದೆ ಬಹುದೂರ ಸಾಗುತ್ತವೆ. ಬ್ರಹ್ಮಾಂಡದ 'ಆಕಾಶ ತತ್ವ'ದಲ್ಲಿ (Ether) ನಾವು ಇಡುವ ಮನವಿಗಳು ಈ ಸಮಯದಲ್ಲಿ ವೇಗವಾಗಿ ದಾಖಲಾಗುತ್ತವೆ. ಅದಕ್ಕಾಗಿಯೇ, ಈ ಸಮಯದಲ್ಲಿ ಹೊಳೆಯುವ ಒಂದು ಸಕಾರಾತ್ಮಕ ಯೋಚನೆ, ಬೇರೆ ಸಮಯದಲ್ಲಿ ಮಾಡುವ 100 ಪ್ರಾರ್ಥನೆಗಳಿಗೆ ಸಮ ಎಂದು ರಹಸ್ಯ ಯೋಗ ಗ್ರಂಥಗಳು ಹೇಳುತ್ತವೆ.&lt;/p&gt;&lt;p&gt;5. ಬ್ರಹ್ಮಾಂಡದ ಮಹಾದ್ವಾರ:&lt;/p&gt;&lt;p&gt;ಸಿದ್ಧರ ಪ್ರಕಾರ, ಬ್ರಹ್ಮ ಮುಹೂರ್ತದಲ್ಲಿ ದೇವತೆಗಳು ಮತ್ತು ಸಿದ್ಧ ಪುರುಷರ ಸಂಚಾರ ಭೂಮಿಯಲ್ಲಿ ಹೆಚ್ಚಾಗಿರುತ್ತದೆ. ಅವರು ಸೂಕ್ಷ್ಮ ರೂಪದಲ್ಲಿ (Astral form) ಸಂಚರಿಸುವಾಗ, ನಾವು ಎಚ್ಚರವಾಗಿದ್ದು ಪ್ರಾರ್ಥಿಸಿದರೆ ಅವರ ಆಶೀರ್ವಾದ ಸುಲಭವಾಗಿ ಸಿಗುತ್ತದೆ. ಇಂದು ಪಾಶ್ಚಿಮಾತ್ಯ ದೇಶಗಳ ಹಲವು ದೊಡ್ಡ ಉದ್ಯಮಿಗಳು 'The 5 AM Club' ಎಂಬ ಹೆಸರಿನಲ್ಲಿ ಬೆಳಗ್ಗೆ ಬೇಗ ಏಳುವುದನ್ನು ಪಾಲಿಸುತ್ತಿದ್ದಾರೆ. ಆದರೆ, ನಮ್ಮ ಪೂರ್ವಜರು ಇದನ್ನೇ ಸಾವಿರಾರು ವರ್ಷಗಳ ಹಿಂದೆಯೇ &quot;ಬ್ರಹ್ಮ ಮುಹೂರ್ತ&quot; ಎಂಬ ಹೆಸರಿನಲ್ಲಿ ಒಂದು ಜೀವನ ಕಲೆಯಾಗಿ ರೂಪಿಸಿದ್ದರು.&lt;/p&gt;&lt;h3&gt;ಹುಡುಕಿ ಬಂದ ಅದೃಷ್ಟವನ್ನು ನೀವೇ ತಳ್ಳಿದಂತೆ&lt;/h3&gt;&lt;p&gt;ಅಲಾರಂ ಬಾರಿಸಿದಾಗ ಅದನ್ನು ಆಫ್ ಮಾಡಿ ಮತ್ತೆ ಮಲಗುವುದು, ನಿಮ್ಮನ್ನು ಹುಡುಕಿ ಬಂದ ಅದೃಷ್ಟವನ್ನು ನೀವೇ ತಳ್ಳಿಹಾಕಿದಂತೆ. ನಾಳೆಯಿಂದ ಆ ಬ್ರಹ್ಮಾಂಡದ ಶಕ್ತಿಯನ್ನು ನಿಮ್ಮದಾಗಿಸಿಕೊಳ್ಳಿ. ಇನ್ನೂ ಯಾಕೆ ತಡ ಮಾಡ್ತೀರಿ?&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/brahma-muhurat-the-spiritual-and-scientific-secrets-behind-waking-up-early/articleshow-pyf88sm"/>
        </item>
        <item>
            <title><![CDATA[ಮಹಿಳೆಯರೇ ಎಚ್ಚರ.. ಮನೆಯೊಳಗೆ ಹಾವುಗಳು ಬರದಂತೆ ತಡೆಯುವ ಈ ಸೀಕ್ರೆಟ್ ತಿಳಿದಿರಲಿ!]]></title>
            <link>https://kannada.asianetnews.com/gallery/kitchen/effective-ways-to-prevent-snakes-entering-your-home-often-and-women-should-know-this-sncs5mp</link>
            <guid isPermaLink="true">https://kannada.asianetnews.com/gallery/kitchen/effective-ways-to-prevent-snakes-entering-your-home-often-and-women-should-know-this-sncs5mp</guid>
            <pubDate>Sun, 26 Apr 2026 18:29:27 +0530</pubDate>
            <description><![CDATA[&lt;p&gt;ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮನೆಗಳಿಗೆ ಹಾವುಗಳು ನುಗ್ಗಬಹುದು. ಮನೆಯಲ್ಲಿ ಮತ್ತು ಅಂಗಳದಲ್ಲಿ ಹಾವುಗಳಿಗೆ ಅನುಕೂಲಕರವಾದ ವಾತಾವರಣವನ್ನು ತಪ್ಪಿಸುವುದು ಮುಖ್ಯ. ಎಲ್ಲಾದರೂ ಬಿಲಗಳು ಅಥವಾ ಪೊಟರೆಗಳು ಕಂಡುಬಂದರೆ, ಅವುಗಳನ್ನು ತಕ್ಷಣ ಮುಚ್ಚಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq4tpbkt7ta2jwftxa9kmddd,imgname-snake-prevention-1777204932218.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮನೆಗಳಿಗೆ ಹಾವುಗಳು ನುಗ್ಗಬಹುದು. ಮನೆಯಲ್ಲಿ ಮತ್ತು ಅಂಗಳದಲ್ಲಿ ಹಾವುಗಳಿಗೆ ಅನುಕೂಲಕರವಾದ ವಾತಾವರಣವನ್ನು ತಪ್ಪಿಸುವುದು ಮುಖ್ಯ. ಎಲ್ಲಾದರೂ ಬಿಲಗಳು ಅಥವಾ ಪೊಟರೆಗಳು ಕಂಡುಬಂದರೆ, ಅವುಗಳನ್ನು ತಕ್ಷಣ ಮುಚ್ಚಿ.&lt;/p&gt;&lt;img&gt;&lt;p&gt;ಹಾವುಗಳು ಕೆಲವೊಮ್ಮೆ ಮನೆಯೊಳಗೆ ಬರಬಹುದು. ಕೆಲವೊಮ್ಮೆ ಅತಿಯಾಗಿಯೇ ಬರಬಹುದು. ಹೆಚ್ಚಾಗಿ ಮಹಿಳೆಯರು ಮನೆ ಕ್ಲೀನ್ ಮಾಡುವಾಗ, ಮನೆಯೊಳಕ್ಕೆ ಓಡಾಡುವಾಗ, ಅಡುಗೆಮನೆಯೋಕ್ಕೆ ಹಾವುಗಳನ್ನು ನೋಡಬಹುದು. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಗೆ ಹಾವಿನ ಭಯ ಹೆಚ್ಚು ಎನ್ನಲಾಗುತ್ತದೆ. ಹೀಗಾಗಿ, ಮಹಿಳೆಯರು ಹಾವಿನ ಕಾಟದಿಂದ ತಪ್ಪಿಸಿಕೊಳ್ಳುವ ಈ ಸೀಕ್ರೆಟ್ ತಿಳಿದಿರುವುದು ಒಳ್ಳೆಯದು..&amp;nbsp;&lt;/p&gt;&lt;p&gt;ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮನೆಗಳಿಗೆ ಹಾವುಗಳು ನುಗ್ಗಬಹುದು. ಮನೆಯಲ್ಲಿ ಮತ್ತು ಅಂಗಳದಲ್ಲಿ ಹಾವುಗಳಿಗೆ ಅನುಕೂಲಕರವಾದ ವಾತಾವರಣವನ್ನು ತಪ್ಪಿಸುವುದು ಮುಖ್ಯ. ಬಿಲಗಳು ಅಥವಾ ಪೊಟರೆಗಳಿದ್ದರೆ ಅವುಗಳನ್ನು ಮುಚ್ಚಿ.&lt;/p&gt;&lt;img&gt;&lt;p&gt;ಒಣಗಿದ ಎಲೆಗಳು, ಮರದ ತುಂಡುಗಳು, ತೆಂಗಿನ ಗರಿ, ಕಲ್ಲುಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು ರಾಶಿಯಾಗಿರುವ ಜಾಗಗಳು ಹಾವುಗಳಿಗೆ ಅಚ್ಚುಮೆಚ್ಚು. ಮನೆಯ ಸಮೀಪ ಅಥವಾ ಕಿಟಕಿಗಳ ಬಳಿ ಇವುಗಳನ್ನು ರಾಶಿ ಹಾಕಬೇಡಿ.&lt;/p&gt;&lt;img&gt;&lt;p&gt;ಅಡುಗೆಮನೆ, ನೀರಿನ ಟ್ಯಾಂಕ್&zwnj;ಗಳಂತಹ ತಂಪಾದ ಸ್ಥಳಗಳ ಬಗ್ಗೆ ವಿಶೇಷ ಗಮನವಿರಲಿ. ಮನೆಯೊಳಗೆ ಬರುವ ಚರಂಡಿಗಳನ್ನು ಆಗಾಗ ಸ್ವಚ್ಛಗೊಳಿಸಿ ಮತ್ತು ಪರಿಶೀಲಿಸಿ. ಅವುಗಳನ್ನು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ಮನೆಯ ಹೊರಗಿನ ನೀರು ನಿಂತಿರುವ ಜಾಗ, ಕೊಳಗಳು ಹಾವುಗಳನ್ನು ಆಕರ್ಷಿಸುತ್ತವೆ. ಅಲ್ಲಿನ ಜೀವಿಗಳನ್ನು ಬೇಟೆಯಾಡಲು ಬರುತ್ತವೆ. ಹಲ್ಲಿ, ಇಲಿ, ಸಣ್ಣ ಪಕ್ಷಿಗಳ ಇರುವಿಕೆಯನ್ನು ಹಾವುಗಳು ಗುರುತಿಸಬಲ್ಲವು.&lt;/p&gt;&lt;img&gt;&lt;p&gt;ಮನೆಯ ಸಮೀಪ ನಾಯಿ ಗೂಡು, ಕೋಳಿ ಗೂಡುಗಳಿದ್ದರೆ ಜಾಗರೂಕರಾಗಿರಿ. ಸಾಕುಪ್ರಾಣಿಗಳಿಗೆ ನೀಡಿದ ಆಹಾರದ ಉಳಿದ ಭಾಗವನ್ನು ತಿನ್ನಲು ಇಲಿಗಳು ಬರುವ ಸಾಧ್ಯತೆ ಹೆಚ್ಚು. ಇವುಗಳನ್ನು ಹಿಡಿಯಲು ಹಾವುಗಳು ಇಲ್ಲಿಗೆ ಬರಬಹುದು.&amp;nbsp;&lt;/p&gt;&lt;img&gt;&lt;p&gt;ಮನೆ ಮತ್ತು ತೋಟಕ್ಕೆ ರಕ್ಷಣಾ ಬೇಲಿ ಹಾಕುವುದು ಹಾವುಗಳು ಬರದಂತೆ ತಡೆಯುತ್ತದೆ. ಹಾವುಗಳಿಗೆ ಕಿರಿಕಿರಿ ಉಂಟುಮಾಡುವ ಕೆಲವು ವಾಸನೆಗಳಿವೆ. ಹಾವುಗಳ ಕಾಟವಿರುವ ಪ್ರದೇಶಗಳಲ್ಲಿ ಬೆಳ್ಳುಳ್ಳಿ ಜಜ್ಜಿ ಹಾಕುವುದು ಮತ್ತು ಸಾಂಬ್ರಾಣಿ ಹೊಗೆ ಹಾಕುವುದು ಹಾವುಗಳನ್ನು ದೂರವಿಡಬಹುದು.&lt;/p&gt;&lt;img&gt;&lt;p&gt;ಮನೆಯಲ್ಲಿ ಹಾಕುವ ಚಪ್ಪಲಿ ಒರೆಸುವ ಮ್ಯಾಟ್&zwnj; ಅನ್ನೂ ಕಡೆಗಣಿಸಬೇಡಿ. ಇದರ ಕೆಳಗೆ ಹಾವು ಸುರುಳಿ ಸುತ್ತಿಕೊಂಡು ಮಲಗಿರುವ ಘಟನೆಗಳನ್ನು ನೀವು ಕೇಳಿರಬಹುದು. ಆದ್ದರಿಂದ, ಪ್ರತಿದಿನ ಎಚ್ಚರಿಕೆಯಿಂದ ಮ್ಯಾಟ್&zwnj; ಕೊಡವಿ ಹಾಕಿ.&lt;/p&gt;&lt;img&gt;&lt;p&gt;ಮನೆಗೆ ತಾಗಿಕೊಂಡಿರುವ ಮರದ ಕೊಂಬೆಗಳನ್ನು ಕತ್ತರಿಸಿ. ಹೂವಿನ ತೋಟದ ಆರೈಕೆ ಮಾಡುವಾಗ, ಗಿಡದ ಕುಂಡಗಳನ್ನು ಎಚ್ಚರಿಕೆಯಿಂದ ಸರಿಸಿ. ಮನೆಗೆ ಹತ್ತಿರವಾಗಿ ಸೌದೆ ಅಥವಾ ಕಲ್ಲುಗಳನ್ನು ರಾಶಿ ಹಾಕಿ ಇಡುವುದನ್ನು ತಪ್ಪಿಸಿ. ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮನೆಯ ಸಮೀಪ ಹೊರಗಡೆ ಹಾಗೂ ಒಳಗೆ ಬಿಸಾಡಬೇಡಿ&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/kitchen/effective-ways-to-prevent-snakes-entering-your-home-often-and-women-should-know-this-sncs5mp"/>
        </item>
        <item>
            <title><![CDATA[ಪೋಸ್ಟಿಂಗ್ ಜೀರೋ: ಜೆನ್‌ ಝೀಗಳ ಕೋಣೆಯಲ್ಲಿನ ಲೈಟ್ ಆಫ್‌ , ಎಲ್ಲವೂ ಗುಪ್ತ್ ಗುಪ್ತ್]]></title>
            <link>https://kannada.asianetnews.com/special/although-the-gen-z-generation-is-active-on-social-media-they-have-stopped-sharing-their-personal-lives-mrq/articleshow-wzn9ok4</link>
            <guid isPermaLink="true">https://kannada.asianetnews.com/special/although-the-gen-z-generation-is-active-on-social-media-they-have-stopped-sharing-their-personal-lives-mrq/articleshow-wzn9ok4</guid>
            <pubDate>Sun, 26 Apr 2026 10:42:43 +0530</pubDate>
            <description><![CDATA[&lt;p&gt;ಜೆನ್&zwnj; ಝೀ ತಲೆಮಾರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರೂ, ತಮ್ಮ ವೈಯಕ್ತಿಕ ಜೀವನವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ. ಈ 'ಪೋಸ್ಟಿಂಗ್ ಜೀರೋ' ಟ್ರೆಂಡ್ ಮೂಲಕ ಅವರು ಕೃತಕ ಜಗತ್ತಿನಿಂದ ದೂರ ಸರಿದು, ಖಾಸಗಿತನ ಮತ್ತು ನೈಜ ಅನುಭವಗಳಿಗೆ ಹೆಚ್ಚು ಮೌಲ್ಯ ನೀಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg7xt8z53ct9dydr80873v0c,imgname-image--3--1769792676837.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ವೃಶ್ಚಿಕಾ&lt;/strong&gt;&lt;/p&gt;&lt;p&gt;&lsquo;ನನ್ಹತ್ರ ಇನ್&zwnj;ಸ್ಟಾ ಅಕೌಂಟ್&zwnj; ಇದೆ. ಎಫ್&zwnj;ಬಿಯಲ್ಲಿ ಇದೀನಿ. ಪಿಂಟರೆಸ್ಟ್&zwnj; ಮತ್ತು ಸ್ನ್ಯಾಪ್&zwnj;ಚಾಟ್&zwnj;ನಲ್ಲೂ ಇದೀನಿ. ಆದರೆ ಯಾವುದರಲ್ಲೂ ಪೋಸ್ಟ್&zwnj; ಮಾಡಲ್ಲ. ದಿನಕ್ಕೊಮ್ಮೆ ಅಲ್ಲಿಗೆಲ್ಲಾ ವಿಸಿಟ್&zwnj; ಮಾಡ್ತೀನಿ. ಲೋಕದಲ್ಲಿ ಏನಾಗ್ತಾ ಇದೆ, ಎಲ್ಲರೂ ಏನ್ಮಾಡ್ತಾ ಇದಾರೆ ಅನ್ನೋದೆಲ್ಲಾ ಗೊತ್ತಾಗುತ್ತೆ. ನಾನು ಪೋಸ್ಟ್&zwnj; ಮಾಡಿ ವರ್ಷವೇ ಆಯ್ತುʼ ಅಂತಾನೆ ವಿನೀತ್. ಅವನ ವಯಸ್ಸು ಹದಿನೆಂಟು. ಅಂದರೆ ಜೆನ್&zwnj; ಝೀ ಹುಡುಗ.&lt;/p&gt;&lt;p&gt;ಹತ್ತು ವರ್ಷಗಳಿಂದೀಚೆಗೆ ಸೋಶಿಯಲ್&zwnj; ಮೀಡಿಯಾದ ಪರ್ವಕಾಲ. ಎಲ್ಲರೂ ತಮ್ಮ ಮೊದಲ ವಿಮಾನ ಯಾನ, ಮೊದಲ ವಿದೇಶ ಪ್ರವಾಸ, ಮದುವೆ, ಮೊದಲ ಜಾಬ್&zwnj;, ಮಗುವಿನ ಜನನ, ಸಣ್ಣದೊಂದು ಯಶಸ್ಸು- ಹೀಗೆ ಎಲ್ಲವೂ ಲೋಕಕ್ಕೆ ಗೊತ್ತಾಗಲಿ ಎಂದು ಹಪಹಪಿಸಿದ ಜಮಾನ. ಬೆಳಗ್ಗೆ ಎದ್ದು ಹಲ್ಲುಜ್ಜುವಲ್ಲಿಂದ ರಾತ್ರಿ ಲೈಟಾರಿಸಿ ಮಲಗುವವರೆಗಿನ ಚಟುವಟಿಕೆಯೆಲ್ಲ ಖುಲ್ಲಂಖುಲ್ಲ. ಇನ್ನೊಬ್ಬರ ಬಗ್ಗೆ ನಮಗೆ ತಿಳಿಯದ ವಿಷಯವೇ ಇಲ್ಲ ಎಂದುಕೊಳ್ಳುತ್ತಿರುವ ಹೊತ್ತಿಗೇ, ಒಂದು ತಲೆಮಾರು ಸದ್ದಿಲ್ಲದೆ ಲೈಟಾರಿಸಿ ಕೂತುಬಿಟ್ಟಿದೆ. ಅವರ ಜೀವನದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಾಗ್ತಿಲ್ಲ. ಕಾರಣ ಅವರು ಯಾವುದನ್ನೂ ಸೋಶಿಯಲ್&zwnj; ಮೀಡಿಯಾಗೆ ತುರುಕುತ್ತಿಲ್ಲ. ಜೀವನವನ್ನು ಅನುಭವಿಸುತ್ತಾರೆ, ಆದರೆ ಪೋಸ್ಟ್&zwnj; ಮಾಡಲ್ಲ. ಅದು ಜೆನ್&zwnj; ಝೀ. ಅದು ಪೋಸ್ಟಿಂಗ್&zwnj; ಜೀರೋ.&lt;/p&gt;&lt;h2&gt;&lt;strong&gt;ಯುವಕರ ಇನ್ನೊಂದು ತಾತ್ಕಾಲಿಕ ಟ್ರೆಂಡ್&lt;/strong&gt;&lt;/h2&gt;&lt;p&gt;ಪೋಸ್ಟಿಂಗ್&zwnj; ಜೀರೋ ಅಂದ್ರೆ ಈ ತಲೆಮಾರು ಸೋಶಿಯಲ್ ಮೀಡಿಯಾ ಖಾತೆ ಡಿಲೀಟ್ ಮಾಡುವುದಿಲ್ಲ. ಇಂಟರ್ನೆಟ್&zwnj;ನಿಂದ ದೂರ ಸರಿಯುವುದಿಲ್ಲ. ಬದಲಾಗಿ, ಏನನ್ನೂ ಹಂಚಿಕೊಳ್ಳದಿರಲು ನಿರ್ಧರಿಸಿದೆ. ಈ ಜನರೇಶನ್&zwnj; ಸೋಶಿಯಲ್ ಮೀಡಿಯಾ ಅಪ್ಲಿಕೇಶನ್&zwnj;ಗಳನ್ನು ಬಳಸುತ್ತಲೇ ಇರುತ್ತೆ. ಆದರೆ ತಮ್ಮ ಜೀವನದ ವಿಷಯ ಅಥವಾ ಫೋಟೋ ಪೋಸ್ಟ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇದು ಇಂಟರ್&zwnj;ನೆಟ್ ಜಗತ್ತಿನಲ್ಲೇ ಬೆಳೆದ ಯುವಕರ ಇನ್ನೊಂದು ತಾತ್ಕಾಲಿಕ ಟ್ರೆಂಡ್ ಅಂತ ಕಾಣಬಹುದು. ಆದರೆ ಇತ್ತೀಚಿನ ಒಂದು ಅಧ್ಯಯನ ಹೇಳುವುದೇನೆಂದರೆ, 2022ರಿಂದ ಈಚೆಗೆ ಹೊಸಬರು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಸಮಯ ಸುಮಾರು 10% ಕಡಿಮೆಯಾಗಿದೆ.&lt;/p&gt;&lt;p&gt;&lt;strong&gt;ಹಾಗಾದರೆ ಯಾಕೆ ಈ ಆಯ್ಕೆ?&amp;nbsp;&lt;/strong&gt;&lt;/p&gt;&lt;p&gt;ಸೋಶಿಯಲ್ ಮೀಡಿಯಾ ಈಗ ತುಂಬಾ ಜನಸಂದಣಿಯ ತಾಣ. ತುಂಬಾ ಅಲಂಕೃತ, ತೀರಾ ಕೃತಕ ತಾಣ. ಈ ಗದ್ದಲಕ್ಕೆ ಇನ್ನಷ್ಟು ಕೊಡುಗೆ ನೀಡಿರುವುದು ಎಐ ಕಂಟೆಂಟ್&zwnj;. ಯಾವುದೇ ವಿಡಿಯೋ, ರೀಲ್&zwnj; ನೋಡಲಿ, ನೂರರಲ್ಲಿ ಎಂಬತ್ತು ಪಾಲು ಎಐ ಸೃಷ್ಟಿ. ಅದೂ ಕಳಪೆ. ಜೆನ್&zwnj; ಝೀಗಿಂತ ಹಿಂದಿನ ತಲೆಮಾರು ಲೈಕು ಕಮೆಂಟ್&zwnj;ಗಳಿಗಾಗಿ, ಮಾನೆಟೈಸೇಷನ್&zwnj;ಗಾಗಿ ಸಿಕ್ಕಸಿಕ್ಕದ್ದನ್ನು ಅದರಲ್ಲಿ ತುಂಬಿದೆ. ಸಹಜವಾಗಿಯೇ ಜೆನ್&zwnj; ಝೀಯದು ಇದಕ್ಕೆ ಬಂಡಾಯ. ಅದು ಹೆಚ್ಚು ಯೋಚಿಸಿ ನಡೆದುಕೊಳ್ಳುತ್ತಿದೆ ಮತ್ತು ಕಡಿಮೆ ಪೋಸ್ಟ್ ಮಾಡುತ್ತಿದೆ.&lt;/p&gt;&lt;p&gt;ಸೋಶಿಯಲ್&zwnj; ಮೀಡಿಯಾ ಎಂಬುದು ಪರ್ಸನಲ್&zwnj; ಬ್ರಾಂಡಿಂಗ್&zwnj;- ತನ್ನನ್ನು ಸಾಧ್ಯವಾದಷ್ಟು ಘನವಾಗಿ ತೋರಿಸಿಕೊಳ್ಳುವುದು. ಆದರೆ ಇದು ಕಷ್ಟದ ಕೆಲಸವೂ ಹೌದು, ಅನೇಕ ಬಾರಿ ಪ್ರತಿಫಲ ಇಲ್ಲದ್ದೂ ಕೂಡ. ಈ ತಲೆಮಾರಿನಲ್ಲಿ ಭಾವನಾತ್ಮಕ ತಿಳುವಳಿಕೆ ಹೆಚ್ಚಿದೆ. ಅವರು ಲೈಕ್ಸ್&zwnj; ಮತ್ತು ಕಾಮೆಂಟ್&zwnj;ಗಿಂತ ವ್ಯಕ್ತಿ ಖಾಸಗಿತನಕ್ಕೆ, ಸ್ವಾತಂತ್ರ್ಯಕ್ಕೆ ಹೆಚ್ಚು ಮೌಲ್ಯ ಕೊಡುತ್ತಿದ್ದಾರೆ. ಅವರಿಗಿಂತ ಹಿರಿಯರು ಸೂರ್ಯಾಸ್ತದ ಫೋಟೋ ತೆಗೆದುಕೊಳ್ತಾ ಇದ್ರೆ, ಇವರು ಮೌನವಾಗಿ ಅದನ್ನು ನೋಡ್ತಾ ಅನುಭವಿಸ್ತಾ ಇರುವುದನ್ನು ನೀವು ಕಾಣಬಹುದು. ಇವರಿಗೆ ಬದುಕು ಇರೋದು &lsquo;ನೋಡಿ&rsquo; ಅಂತ ಶೋ ಮಾಡೋದಿಕ್ಕಲ್ಲ. ಅನುಭವ, ತಿಳುವಳಿಕೆ, ರೋಮಾಂಚನಕ್ಕೆ. ಅದು ತುಂಬ ಖಾಸಗಿ.&lt;/p&gt;&lt;p&gt;ಎಲ್ಲೋ ಪೋಸ್ಟ್&zwnj; ಮಾಡಲ್ಲ ಅಂತಾದ್ರೆ ಎಲ್ಲಿರ್ತಾರೆ ಇವರು? ಇವರು ಹೊಸ ರೀತಿಯ ಅನುಭವಗಳನ್ನು ಹುಡುಕುತ್ತಿದ್ದಾರೆ. ಬ್ಲಾಸಂ ಬುಕ್&zwnj; ಶಾಪ್&zwnj;ನಲ್ಲಿ ಇಂಟರ್ನ್&zwnj;ಶಿಪ್&zwnj; ಮಾಡ್ತಾರೆ. ಪಾಟರಿ ವರ್ಕ್&zwnj;ಶಾಪ್&zwnj;, ಪೇಂಟಿಂಗ್&zwnj; ಕಾರ್ಯಕ್ರಮ, ಭಜನಾ ಕ್ಲಬ್&zwnj;, ಬೋರ್ಡ್ ಗೇಮ್ ಕೆಫೆ, ಉದ್ಯಾನವನಗಳು, ಗ್ರಂಥಾಲಯಗಳು&hellip; ಇಲ್ಲೆಲ್ಲ ಇವರು ಬ್ಯುಸಿಯಾಗಿರೋದನ್ನು ನೋಡಬಹುದು. ಯಾವುದೂ &lsquo;ಕಂಟೆಂಟ್&zwnj;&rsquo;ಗಾಗಿ ಅಲ್ಲ, &lsquo;ಅನುಭವ&rsquo;ಕ್ಕಾಗಿ.&lt;/p&gt;&lt;p&gt;ಹಾಗಂತ ಆನ್&zwnj;ಲೈನ್&zwnj;ನಲ್ಲಿಯೂ ಅವರು ಸಂಪೂರ್ಣವಾಗಿ ಕಾಣೆಯಾಗಿಲ್ಲ. ಸಾರ್ವಜನಿಕ ಪೋಸ್ಟ್&zwnj;ಗಳ ಬದಲು ಖಾಸಗಿ ಸಂದೇಶಗಳು, ಚಾಟ್&zwnj;ಗಳು, ಇವುಗಳ ಮೂಲಕ ಅವರು ಸಂಪರ್ಕದಲ್ಲಿದ್ದಾರೆ. ಆನ್&zwnj;ಲೈನ್&zwnj;ನಲ್ಲಿ ಕಡಿಮೆ ಇರುವುದರಿಂದ ಜೀವನ ನಿಸ್ಸಾರವಾಗುತ್ತದೆ ಎನ್ನುವುದು ತಪ್ಪು. ಕೇವಲ ಪ್ರದರ್ಶನ ಬೇಡ, ಗಾಢತೆ ಬೇಕು ಎಂಬುದಷ್ಟೇ ಅವರ ನಿಲುವು. ಇದು ನಾವು ನೀವು ಮಾತಾಡುವ &lsquo;ಡಿಜಿಟಲ್&zwnj; ಡಿಟಾಕ್ಸ್&zwnj;ʼ ಕೂಡ ಅಲ್ಲ. ಟಾಕ್ಸಿಕ್&zwnj; ಲೆವೆಲ್ಲಿಗೇ ನಾವು ಹೋಗಲ್ಲ ಎಂಬುದು ಇವರ ಅಭಿಪ್ರಾಯ, ಇನ್ನು ಡಿಟಾಕ್ಸ್&zwnj; ಮಾತೆಲ್ಲಿಯದು.&lt;/p&gt;&lt;p&gt;ಇಂದು 24/7 ಎಲ್ಲರೂ ಲಭ್ಯ. ಇಂಥ ಜಗತ್ತಿನಲ್ಲಿ ಹಾಗೆ ಸುಲಭವಾಗಿ ಸಿಗದವಳೇ ಹೆಚ್ಚು ಮೌಲ್ಯ ಹೊಂದಿದ್ದಾಳೆ ಎಂಬ ಭಾವನೆ ಬೆಳೆಯುತ್ತಿದೆ. &lsquo;ನನ್ನ ಜೀವನವನ್ನು ಸಾಬೀತುಪಡಿಸಲು ನನಗೆ ಪೋಸ್ಟ್ ಮಾಡುವ ಅಗತ್ಯವಿಲ್ಲ&rsquo; ಎಂಬ ಸಂದೇಶವೇ ಈ ಹೊಸ ಟ್ರೆಂಡ್&zwnj;ನ ಹೃದಯ. ಹಿಂದೆಲ್ಲ &lsquo;ನೋಡಿ, ನನ್ನ ಜೀವನ ಹೇಗಿದೆ&rsquo; ಎನ್ನುವುದೇ ಸಾಮಾಜಿಕ ಜಾಲತಾಣದ ಮೂಲ ಉದ್ದೇಶವಾಗಿದ್ದರೆ, ಈಗ ಅದು &lsquo;ನನ್ನ ಜೀವನವನ್ನು ನಾನು ಬದುಕುತ್ತೇನೆ, ನಿಮಗೆ ಹೇಳಬೇಕಿಲ್ಲ&rsquo; ಎಂಬುದಾಗಿ ಬದಲಾಗಿದೆ.&lt;/p&gt;&lt;p&gt;ಸೋಶಿಯಲ್ ಮೀಡಿಯಾದ ಪೋಸ್ಟ್&zwnj;ಗಳು ಈಗ ಸಹಜವಾಗಿ, ನೈಸರ್ಗಿಕವಾಗಿಲ್ಲ ಅನ್ನಿಸೋಕೆ ಒಂದು ಕಾರಣ- ಈ ಪ್ಲಾಟ್&zwnj;ಫಾರ್ಮ್&zwnj;ಗಳು ಕ್ರಿಯೇಟರ್&zwnj;ಗಳ ಪೋಸ್ಟ್&zwnj;ಗಳನ್ನು ಹೆಚ್ಚು ಪ್ರೋತ್ಸಾಹಿಸುತ್ತಿವೆ. ಒಂದು ಮಾಹಿತಿಯ ಪ್ರಕಾರ ಜಗತ್ತಿನಲ್ಲಿ ಸುಮಾರು 500 ಕೋಟಿ ಸೋಶಿಯಲ್ ಮೀಡಿಯಾ ಬಳಕೆದಾರರಿದ್ದಾರೆ. 5 ಕೋಟಿ ಕ್ರಿಯೇಟರ್&zwnj;ಗಳು ಕಂಟೆಂಟ್ ಮಾಡುತ್ತಿದ್ದಾರೆ. ಈ ಪರಿಯಲ್ಲಿ ಕಂಟೆಂಟ್&zwnj; ಸೃಷ್ಟಿಯಾದಾಗ, ಸಹಜತೆ, ಅಧಿಕೃತತೆ, ಸಹಜಸ್ಫೂರ್ತಿ ಕಾಣುವುದು ಕಷ್ಟ. ಎಲ್ಲರೂ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.&lt;/p&gt;&lt;p&gt;ಲೇಖಕ ಕೊರಿ ಡಾಕ್ಟ್ರೋ (Cory Doctorow) ಇದಕ್ಕೆ ಹುಟ್ಟುಹಾಕಿದ ಹೊಸ ಪದ- &lsquo;enshittificationʼ- ಅಂದರೆ ತ್ಯಾಜ್ಯಸೃಷ್ಟಿ. ಇದರ ಮೂಲಕವೇ ಆನ್&zwnj;ಲೈನ್&zwnj; ವೇದಿಕೆಗಳು ನಿಧಾನವಾಗಿ ಕೆಡುತ್ತಿವೆ. ಹಿಂದೆ, ಡಿಜಿಟಲ್ ಯುಗ ಬರುತ್ತಿದೆ ಎಂಬ ಉತ್ಸಾಹ ಜನರಿಗೆ ತುಂಬಾ ಇತ್ತು. ಉತ್ತಮವಾದದ್ದೆಲ್ಲ ತಮಗೆ ಸಿಗಬಹುದು ಅಂದುಕೊಂಡಿದ್ದರು. ಆದರೆ ಈಗ ಏನಾಗುತ್ತಿದೆ ಎಂದರೆ, ಪ್ಲಾಟ್&zwnj;ಫಾರ್ಮ್&zwnj;ಗಳು ನೀವು ಫಾಲೋ ಮಾಡಿರುವ ಜನರ ಪೋಸ್ಟ್&zwnj;ಗಳನ್ನು ಕಡಿಮೆ ತೋರಿಸಿ, ಜಾಹೀರಾತು ಮತ್ತು ಬೂಸ್ಟ್&zwnj; ಮಾಡಿದ ಕಂಟೆಂಟ್&zwnj;&zwnj;ಗಳನ್ನು ಹೆಚ್ಚು ತೋರಿಸುತ್ತಿವೆ. ಜೆನ್&zwnj; ಝೀ ಪ್ರಕಾರ ಅವರ ಫೀಡ್&zwnj;ಗಳ ತುಂಬಾ ಕೃತಕ ಅಲಂಕೃತ ಜೀವನಗಳು, ಜಾಹೀರಾತು ಮತ್ತು ನಮಗೆ ಅಗತ್ಯವಿಲ್ಲದ ಜನರ ಪೋಸ್ಟ್&zwnj;ಗಳು ತುಂಬಿಕೊಂಡಿವೆ. ತಮಗೆ ಬೇಕಿರುವುದು ನಿಜಕ್ಕೂ ಇದಲ್ಲ ಇದಲ್ಲ ಎನಿಸುತ್ತಿದೆ.&lt;/p&gt;&lt;p&gt;&lsquo; ನಾನು ಈಗ ಕಡಿಮೆ ಪೋಸ್ಟ್ ಮಾಡುತ್ತೇನೆ. ಮೊದಲು ಹೆಚ್ಚು ಶೇರ್&zwnj; ಮಾಡುತ್ತಿದ್ದೆ. ಈಗ ನಿಜವಾಗಿಯೂ ಅರ್ಥಪೂರ್ಣವಾದದ್ದು ಇದ್ದರೆ ಮಾತ್ರ ಪೋಸ್ಟ್ ಮಾಡುತ್ತೇನೆ. ಫಲಿತಾಂಶ ನನ್ನ ಗಮನ, ಉತ್ಪಾದಕತೆ ಹೆಚ್ಚಾಯಿತು. ಆನ್&zwnj;ಲೈನ್&zwnj;ನಲ್ಲಿ ಮೌನವಾಗಿ ಇರುವುದು ಖಾಲಿತನ ಅನಿಸ್ತಿಲ್ಲ, ಸ್ಪಷ್ಟತೆ ಅನಿಸ್ತಿದೆ. ಎಲ್ಲ ಕಡೆಯೂ ಇದ್ದೇನೆ, ಆದರೆ ಎಲ್ಲೂ ಇಲ್ಲ&rsquo; ಎನ್ನುತ್ತಾಳೆ ಆಕಾಂಕ್ಷಾ ಎಂಬ ಹುಡುಗಿ&lt;/p&gt;&lt;p&gt;ಇಶಾನ್&zwnj; ಎಂಬ ಹುಡುಗನ ಅಭಿಪ್ರಾಯ ಹೀಗಿದೆ; &lsquo;ಮೊದಲು ಸೋಶಿಯಲ್ ಮೀಡಿಯಾ ನಮ್ಮ ಸ್ವಂತಿಕೆ ವ್ಯಕ್ತಪಡಿಸಲು ಮತ್ತು ಸ್ನೇಹಿತರ ಜೊತೆ ಶೇರ್&zwnj; ಮಾಡಲು ಬಳಸಲಾಗುತ್ತಿತ್ತು. ಆದರೆ ಈಗ ಅದು ಎಲ್ಲರ ಜೊತೆ ಸ್ಪರ್ಧೆ ಮಾಡುವ ವೇದಿಕೆ ಆಗಿಬಿಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯೇಟಿವ್ ಮತ್ತು ಟ್ರೆಂಡಿ ಆಗಿ ಕಾಣಿಸಿಕೊಳ್ಳಬೇಕೆಂಬ ಒತ್ತಡ ತುಂಬಾ ಹೆಚ್ಚಾಗಿದೆ. ಆ ಒತ್ತಡ ಒಂದು ಮಟ್ಟವನ್ನು ಮೀರಿ ಹೋದಾಗ, ಫೇಕ್&zwnj; ಬದುಕು ಪೋಸ್ಟ್ ಮಾಡುವುದಕ್ಕಿಂತ ಪೋಸ್ಟ್ ಮಾಡದೇ ಇರುವುದೇ ಉತ್ತಮʼ.&lt;/p&gt;&lt;p&gt;ಇಶಾನ್&zwnj;ನಂತೆ ಯೋಚಿಸಿದ ಅನೇಕ ಮಂದಿ ಇದ್ದಾರೆ. ಇಂಥವರು ಖಾಸಗಿ ಅಕೌಂಟ್ಸ್&zwnj; ಬಳಸುತ್ತಿದ್ದಾರೆ. ಆಪ್ತ ಸ್ನೇಹಿತರ ಜೊತೆ ಮಾತ್ರ ಶೇರ್&zwnj; ಮಾಡುತ್ತಿದ್ದಾರೆ. ಇದರಿಂದ ಅವರಿಗೊಂದು ನಿರಾಳತೆ ದಕ್ಕಿದೆ.&lt;/p&gt;&lt;p&gt;ಸೋಶಿಯಲ್&zwnj; ಮೀಡಿಯಾದ ಹಿಂದಿನ ಜಮಾನ ನೆನಪಿಸಿಕೊಳ್ತಿದೀರಾ? ಹಾಗಲ್ಲ ಇದು. ಅದು ಏನೂ ಇಲ್ಲದ ಜಮಾನ. ಇದು ಎಲ್ಲ ಜಗಮಗ. ಇದ್ದೂ ಅದರಿಂದ ದೂರವಿರುವ ಸ್ಥಿತಪ್ರಜ್ಞ ಜಮಾನ. ನಮ್ಮ ಕಾಲದ ಹಲವು ಒತ್ತಡಗಳಿಗೆ ಇದರಲ್ಲಿ ಮದ್ದು ಇದ್ದಂತಿದೆ. ಈ ತಲೆಮಾರಿನಿಂದ ನಾವು ಕಲಿಯುವುದು ಇನ್ನೂ ಎಷ್ಟಿದೆಯೋ.&lt;/p&gt;]]></content:encoded>
            <category>special</category>
            <dc:creator>Kannadaprabha News</dc:creator>
            <atom:link href="https://kannada.asianetnews.com/special/although-the-gen-z-generation-is-active-on-social-media-they-have-stopped-sharing-their-personal-lives-mrq/articleshow-wzn9ok4"/>
        </item>
        <item>
            <title><![CDATA[ನಿಮ್ಮ ಬಾಯಿಗೂ ಟ್ರೈನಿಂಗ್ ಬೇಕು! ಇಂಥದ್ದೊಂದು ಹೇಳಿಕೆ ಕೊಟ್ಟಿದ್ಯಾಕೆ ಹಾಲಿವುಡ್ ಸ್ಟಾರ್ ಪ್ರಿಯಾಂಕಾ ಚೋಪ್ರಾ?!]]></title>
            <link>https://kannada.asianetnews.com/cine-world/priyanka-chopra-reveals-the-secret-of-success-with-importance-of-voice-and-talk/articleshow-4fkfnf5</link>
            <guid isPermaLink="true">https://kannada.asianetnews.com/cine-world/priyanka-chopra-reveals-the-secret-of-success-with-importance-of-voice-and-talk/articleshow-4fkfnf5</guid>
            <pubDate>Thu, 23 Apr 2026 13:25:02 +0530</pubDate>
            <description><![CDATA[&lt;p&gt;ಮಾತನಾಡಲು ನಿಮಗೆ ಯಾರ ಅನುಮತಿಯೂ ಬೇಕಿಲ್ಲ. ನೀವು ತಯಾರಿ ನಡೆಸಿದ್ದರೆ, ಇಡೀ ಜಗತ್ತೇ ನಿಮ್ಮ ಮಾತು ಕೇಳಲು ಸಜ್ಜಾಗಿರುತ್ತದೆ. ನಂಬಿಕೆಯಿಲ್ಲದ ಮಾತುಗಳು ಅರ್ಥಹೀನ. ನಿಮ್ಮ ಮಾತುಗಳು ಮೊದಲು ನಿಮ್ಮನ್ನೇ ಒಪ್ಪಿಸುವಂತಿರಲಿ, ಆಗ ಅದು ಇಡೀ ಜಗತ್ತನ್ನೇ ಗೆಲ್ಲುತ್ತದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km2ftm91qk5s9xdthgkd7v57,imgname-priyanka-chopra-1773905203489.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಕ್ಸಸ್ ಸೀಕ್ರೆಟ್ ಹೊರಹಾಕಿದ ಪ್ರಿಯಾಂಕಾ ಚೋಪ್ರಾ!&lt;/strong&gt;&lt;/p&gt;&lt;p&gt;ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಯಾರಿಗೆ ಗೊತ್ತಿಲ್ಲ? ಇಂದು ಅವರು ಕೇವಲ ಬಾಲಿವುಡ್ ಸ್ಟಾರ್ ನಟಿಯಲ್ಲ, ಬದಲಿಗೆ ಹಾಲಿವುಡ್&zwnj; ನಟಿಯೂ ಆಗಿದ್ದು ಜಾಗತಿಕ ಐಕಾನ್ ಆಗಿ ಗುರುತಿಸಿಕೊಳ್ಳುತ್ತಾರೆ. ಸದ್ಯಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಎಸ್&zwnj;ಎಸ್&zwnj; ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಮುಂದೆ ಭಾರತೀಯ ಸಿನಿಮಾಗಳಲ್ಲಿ ನಟಿಸಲು ರೆಡಿಯಾಗಿದ್ದಾರೆ. ಇಂಥ ನಟಿ ಪ್ರಿಯಾಂಕಾ ಚೋಪ್ರಾ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ ಕೆಲವು ಸೀಕ್ರೆಟ್ ಹೇಳಿದ್ದಾರೆ ನೋಡಿ..&lt;/p&gt;&lt;h2&gt;ನಿಮ್ಮ ಧ್ವನಿಯೇ ನಿಮ್ಮ ಸೂಪರ್ ಪವರ್: ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ಲೈಫ್ ಮಂತ್ರ!&lt;/h2&gt;&lt;p&gt;ನಮಸ್ಕಾರ ಸಿನಿಪ್ರಿಯರೇ ಹಾಗೂ ಸಾಧಕ ಹಾದಿಯಲ್ಲಿರುವ ಗೆಳೆಯರೇ! ಇಂದು ನಾವು ಕೇವಲ ಗ್ಲಾಮರ್ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ನಿಮ್ಮ ವ್ಯಕ್ತಿತ್ವವನ್ನು ಒಬ್ಬ 'ಸೂಪರ್ ಸ್ಟಾರ್' ರೀತಿ ಬೆಳಗಿಸುವ ಅದ್ಭುತ ವಿಷಯದ ಬಗ್ಗೆ ಚರ್ಚಿಸಲಿದ್ದೇವೆ. ಅದುವೇ 'ನಿಮ್ಮ ಧ್ವನಿಯ ಶಕ್ತಿ'.&lt;/p&gt;&lt;p&gt;ಒಂದು ಕಟು ಸತ್ಯ ನೆನಪಿಟ್ಟುಕೊಳ್ಳಿ: ನಿಮ್ಮ ಬದುಕು ಕೇವಲ ನಿಮ್ಮಲ್ಲಿರುವ ಪ್ರತಿಭೆಯಿಂದ (Talent) ರೂಪಿತವಾಗುವುದಿಲ್ಲ, ಬದಲಾಗಿ ನಿಮ್ಮ ಧ್ವನಿಯಿಂದ (Voice) ರೂಪಿತವಾಗುತ್ತದೆ. ನಿಮ್ಮೊಳಗೆ ಎಷ್ಟೇ ಅದ್ಭುತ ಐಡಿಯಾಗಳು ಇರಬಹುದು, ಸಾವಿರ ಕನಸುಗಳಿರಬಹುದು, ಆದರೆ ಅದನ್ನು ಹೊರಹಾಕುವ ಧ್ವನಿಗೆ ಸರಿಯಾದ ತರಬೇತಿ ಇಲ್ಲದಿದ್ದರೆ, ಆ ಎಲ್ಲಾ ಅವಕಾಶಗಳು ನಿಮ್ಮ ಕೈಜಾರುತ್ತವೆ. ಆತ್ಮವಿಶ್ವಾಸ ಎನ್ನುವುದು ಯಾರೋ ಬಂದು ಕೊಡುವ ವಸ್ತುವಲ್ಲ; ಅದು ನೀವು ದಿನಕ್ಕೊಂದು ಪದದಂತೆ ಕಟ್ಟುವ ಸಾಮ್ರಾಜ್ಯ!&lt;/p&gt;&lt;p&gt;&lt;strong&gt;1. ಆತ್ಮವಿಶ್ವಾಸ ಅನ್ನೋದು ಹುಟ್ಟುಗುಣವಲ್ಲ, ಅದೊಂದು ಕಲೆ!&lt;/strong&gt;&lt;/p&gt;&lt;p&gt;ನಾಯಕರು ಹುಟ್ಟುವಾಗಲೇ ಶಕ್ತಿಯನ್ನು ತಂದಿರುವುದಿಲ್ಲ, ಅವರು ತೆರೆಯ ಹಿಂದೆ ಪಟ್ಟ ಶ್ರಮ ಅವರನ್ನು ನಾಯಕರನ್ನಾಗಿ ಮಾಡುತ್ತದೆ. ಹಾಗೆಯೇ, ಆತ್ಮವಿಶ್ವಾಸ ಎಂಬುದು ನಿಮ್ಮ ಡಿಎನ್ಎ (DNA) ನಲ್ಲಿ ಬರೆಯಲ್ಪಟ್ಟಿಲ್ಲ. ಇದು ಕೇವಲ ಮಾತುಗಾರರಿಗೆ ಅಥವಾ ವರ್ಚಸ್ವಿ ಜನರಿಗೆ ಮಾತ್ರ ಮೀಸಲಾದದ್ದಲ್ಲ. ಒಬ್ಬ ಬಾಡಿ ಬಿಲ್ಡರ್ ಹೇಗೆ ಜಿಮ್&zwnj;ನಲ್ಲಿ ಸ್ನಾಯುಗಳನ್ನು ಬೆಳೆಸುತ್ತಾನೋ, ಹಾಗೆಯೇ ಪದೇ ಪದೇ ಮಾತನಾಡುವ ಅಭ್ಯಾಸದಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ನೀವು ಇಂದು ಆರಾಧಿಸುವ ದೊಡ್ಡ ದೊಡ್ಡ ಭಾಷಣಕಾರರು ಕೂಡ ಒಂದು ಕಾಲದಲ್ಲಿ ವೇದಿಕೆಯ ಮೇಲೆ ನಡುಗಿದವರೇ!&lt;/p&gt;&lt;p&gt;&lt;strong&gt;2. ಕಂಫರ್ಟ್ ಜೋನ್&zwnj;ನಿಂದ ಹೊರಬನ್ನಿ!&lt;/strong&gt;&lt;/p&gt;&lt;p&gt;ತುಂಬಾ ಜನ ಆತ್ಮವಿಶ್ವಾಸ ಎಂದರೆ ಯಾವಾಗಲೂ ಶಾಂತವಾಗಿ, ಆರಾಮವಾಗಿ ಇರುವುದು ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪು. ಭಯವೇ ಇಲ್ಲದಿರುವುದು ಕಾನ್ಫಿಡೆನ್ಸ್ ಅಲ್ಲ; ಭಯದ ನಡುವೆಯೂ ಧೈರ್ಯವಾಗಿ ಮಾತನಾಡುವುದೇ ನಿಜವಾದ ಚಾಣಾಕ್ಷತನ! ಕ್ರೀಡಾಪಟುಗಳು ಸವಾಲುಗಳಿಲ್ಲದೆ ಬೆಳೆಯಲು ಸಾಧ್ಯವೇ? ಇಲ್ಲ. ಹಾಗೆಯೇ ನಿಮ್ಮ ಧ್ವನಿ ಕೂಡ ಒತ್ತಡದ ನಡುವೆ ಮಾತನಾಡಿದಾಗ ಮಾತ್ರ ಗಟ್ಟಿಯಾಗುತ್ತದೆ. ನಿಮ್ಮ ಹೃದಯ ಬಡಿತ ಜೋರಾದಾಗಲೂ ನೀವು ಎದೆಯುಬ್ಬಿಸಿ ಮಾತನಾಡಿದರೆ, ನಿಮ್ಮ ನರಮಂಡಲಕ್ಕೆ ನೀವು ಧೈರ್ಯವನ್ನು ಕಲಿಸುತ್ತಿದ್ದೀರಿ ಎಂದರ್ಥ.&lt;/p&gt;&lt;p&gt;&lt;strong&gt;3. ತೆರೆಯ ಹಿಂದಿನ ತಯಾರಿ ಬಹಳ ಮುಖ್ಯ!&lt;/strong&gt;&lt;/p&gt;&lt;p&gt;ಯಾರೂ ಜಿಮ್&zwnj;ಗೆ ಹೋದ ಮೊದಲ ದಿನವೇ 100 ಕೆಜಿ ತೂಕ ಎತ್ತಲು ಸಾಧ್ಯವಿಲ್ಲ. ಹಾಗೆಯೇ, ಅಭ್ಯಾಸವಿಲ್ಲದೆ ಅದ್ಭುತವಾಗಿ ಮಾತನಾಡಲು ಸಾಧ್ಯವಿಲ್ಲ. &quot;ನನ್ನ ವ್ಯಕ್ತಿತ್ವವೇ ಇಷ್ಟು&quot; ಎಂದು ಸುಮ್ಮನೆ ಕೂರುವುದು ಸೋಮಾರಿತನ. ಜಿಮ್&zwnj;ನಲ್ಲಿ ತೂಕ ಎತ್ತುವ ಮೊದಲು ಸಣ್ಣ ಸಣ್ಣ ತೂಕದಿಂದ ಶುರು ಮಾಡುವಂತೆ, ನೀವು ಸಣ್ಣ ಸಣ್ಣ ಸಭೆಗಳಲ್ಲಿ ಮಾತನಾಡುವುದನ್ನು ರೂಢಿಸಿಕೊಳ್ಳಿ. ಈ ಪುಟ್ಟ ಹೆಜ್ಜೆಗಳೇ ನಿಮ್ಮನ್ನು ನಾಳೆ ದೊಡ್ಡ ವೇದಿಕೆಯ ಮೇಲೆ ಮಿಂಚುವಂತೆ ಮಾಡುತ್ತವೆ.&lt;/p&gt;&lt;p&gt;&lt;strong&gt;4. ಮೌನ ಮತ್ತು ವೇಗ: ಧ್ವನಿಯ ಡಿಸಿಪ್ಲಿನ್!&lt;/strong&gt;&lt;/p&gt;&lt;p&gt;ಮಾತನಾಡುವಾಗ ತುಂಬಾ ವೇಗವಾಗಿ ಓಡುವುದು ಆತಂಕದ ಲಕ್ಷಣ. ಆದರೆ ನಿಧಾನವಾಗಿ, ಪ್ರತಿಯೊಂದು ಪದಕ್ಕೂ ತೂಕ ನೀಡಿ ಮಾತನಾಡುವುದು ನಿಮ್ಮ 'ಅಧಿಕಾರ'ವನ್ನು ತೋರಿಸುತ್ತದೆ. ಮೌನ ಎನ್ನುವುದು ಆತ್ಮವಿಶ್ವಾಸದ ಶತ್ರುವಲ್ಲ, ಅದು ನಿಮ್ಮ ಮಾತಿನ ತೂಕವನ್ನು ಹೆಚ್ಚಿಸುವ ಅಸ್ತ್ರ. ನೀವು ನಿಧಾನವಾಗಿ ಮಾತನಾಡಿದಾಗ, ಜಗತ್ತು ನಿಮ್ಮ ಮಾತನ್ನು ಕೇಳಿಸಿಕೊಳ್ಳಲು ಹಂಬಲಿಸುತ್ತದೆ. ವೇಗವು ಆತಂಕವನ್ನು ಸೂಚಿಸಿದರೆ, ನಿಯಂತ್ರಿತ ವೇಗವು ನಿಮ್ಮ ನಿರ್ಧಾರದ ಶಕ್ತಿಯನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;5. ಮನಸ್ಸು ಮತ್ತು ಧ್ವನಿಯ ಕೆಮಿಸ್ಟ್ರಿ!&lt;/strong&gt;&lt;/p&gt;&lt;p&gt;ನೀವು ಏಕಾಂತದಲ್ಲಿದ್ದಾಗ ನಿಮ್ಮ ಧ್ವನಿಯನ್ನು ನೀವೇ ಕೇಳಿಸಿಕೊಳ್ಳಿ. ಅಲ್ಲಿ ನಿಮ್ಮ ಧ್ವನಿಯ ತತ್ತರಿಕೆ ನಿಮಗೆ ಅರ್ಥವಾಗುತ್ತದೆ. ಅದನ್ನು ಅಲ್ಲೇ ಸರಿಪಡಿಸಿಕೊಳ್ಳಿ. ನಿಮ್ಮ ಮನಸ್ಸು ಮತ್ತು ಧ್ವನಿ ಒಂದೇ ಲಯದಲ್ಲಿ ಸಾಗಿದಾಗ, ನಿಮ್ಮ ಮಾತುಗಳಲ್ಲಿ ಒಂದು ಅದ್ಭುತ ಕಳೆ ಬರುತ್ತದೆ.&lt;/p&gt;&lt;h3&gt;&lt;strong&gt;ಕೊನೆಯ ಮಾತು:&lt;/strong&gt;&lt;/h3&gt;&lt;p&gt;ಮಾತನಾಡಲು ನಿಮಗೆ ಯಾರ ಅನುಮತಿಯೂ ಬೇಕಿಲ್ಲ. ನೀವು ತಯಾರಿ ನಡೆಸಿದ್ದರೆ, ಇಡೀ ಜಗತ್ತೇ ನಿಮ್ಮ ಮಾತು ಕೇಳಲು ಸಜ್ಜಾಗಿರುತ್ತದೆ. ನಂಬಿಕೆಯಿಲ್ಲದ ಮಾತುಗಳು ಅರ್ಥಹೀನ. ನಿಮ್ಮ ಮಾತುಗಳು ಮೊದಲು ನಿಮ್ಮನ್ನೇ ಒಪ್ಪಿಸುವಂತಿರಲಿ, ಆಗ ಅದು ಇಡೀ ಜಗತ್ತನ್ನೇ ಗೆಲ್ಲುತ್ತದೆ!&lt;/p&gt;&lt;p&gt;ನೆನಪಿಡಿ, ಸೈಲೆನ್ಸ್ ಯಾವಾಗಲೂ ಸೇಫ್ ಅಲ್ಲ, ಅದು ನಿಮ್ಮ ಪ್ರಗತಿಯನ್ನು ತಡೆಯಬಹುದು. ಹಾಗಾಗಿ, ಧ್ವನಿ ಎತ್ತಿ, ಜಗತ್ತನ್ನು ಗೆಲ್ಲಿ!' ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದು, ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/priyanka-chopra-reveals-the-secret-of-success-with-importance-of-voice-and-talk/articleshow-4fkfnf5"/>
        </item>
        <item>
            <title><![CDATA[Personality Test: ನೀವು ಹೀಗೆಲ್ಲ ಕಾಲು ಮೇಲೆ ಕಾಲು ಹಾಕಿ ಕೂರ್ತೀರಾ? ನಿಮ್ಮ ವ್ಯಕ್ತಿತ್ವ ಬಯಲಾಗುತ್ತೆ!]]></title>
            <link>https://kannada.asianetnews.com/gallery/life/a-personality-test-a-person-sitting-crossed-legs-43oqrep</link>
            <guid isPermaLink="true">https://kannada.asianetnews.com/gallery/life/a-personality-test-a-person-sitting-crossed-legs-43oqrep</guid>
            <pubDate>Thu, 16 Apr 2026 17:36:40 +0530</pubDate>
            <description><![CDATA[&lt;p&gt;Personality Test: ನಾವು ಮಾಡುವ ಕೆಲಸಗಳು, ಕೂರುವ ರೀತಿ ನಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಇಲ್ಲಿ ನಾವು ಕಾಲು ಕ್ರಾಸ್ ಮಾಡಿ ಕೂರುವವರ ವ್ಯಕ್ತಿತ್ವ ಹೇಗಿರುತ್ತೆ ಅಂತ ತಿಳಿಯೋಣ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb29aqebytzecajqwa9j3dn,imgname-11-1776334540658--1--1776340478702.jpg" type="image/jpeg" height="390" width="690"/>
            <content:encoded><![CDATA[&lt;p&gt;Personality Test: ನಾವು ಮಾಡುವ ಕೆಲಸಗಳು, ಕೂರುವ ರೀತಿ ನಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಇಲ್ಲಿ ನಾವು ಕಾಲು ಕ್ರಾಸ್ ಮಾಡಿ ಕೂರುವವರ ವ್ಯಕ್ತಿತ್ವ ಹೇಗಿರುತ್ತೆ ಅಂತ ತಿಳಿಯೋಣ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕುರ್ಚಿಯಲ್ಲಿ ಕಾಲು ಮೇಲೆ ಕಾಲು ಹಾಕಿ ಕೂರುವವರ ವ್ಯಕ್ತಿತ್ವ ತುಂಬಾ ಸ್ನೇಹಪರವಾಗಿರುತ್ತದೆ. ನೋಡಲು ಸ್ವಲ್ಪ ಗರ್ವದಿಂದ ಕಂಡರೂ, ಇವರು ಇತರರೊಂದಿಗೆ ಬೆರೆಯಲು ಹೆಚ್ಚು ಇಷ್ಟಪಡುತ್ತಾರೆ. ಯಾರೊಂದಿಗಾದರೂ ಬೇಗನೆ ಸಂಬಂಧ ಬೆಳೆಸುತ್ತಾರೆ. &zwnj;&lt;/p&gt;&lt;img&gt;&lt;p&gt;ಈ ವ್ಯಕ್ತಿಗಳು ಯಾವುದೇ ವಿಷಯವನ್ನು ಹೊಸದಾಗಿ ಯೋಚಿಸುತ್ತಾರೆ. ಹೊಸ ದಾರಿಗಳನ್ನು ಹುಡುಕಲು ಇಷ್ಟಪಡುತ್ತಾರೆ. ಇವರ ಆಲೋಚನೆಗಳು ಕೂಡ ವಿಭಿನ್ನವಾಗಿರುತ್ತವೆ. ಇವರದ್ದು ವಿಶಾಲ ಹೃದಯ ಎನ್ನಬಹುದು.&lt;/p&gt;&lt;img&gt;&lt;p&gt;ಇವರು ಮಾತಿನಲ್ಲಿ ಚುರುಕಾಗಿದ್ದು, ತಮ್ಮ ಮಾತಿನಿಂದಲೇ ಇತರರನ್ನು ಆಕರ್ಷಿಸುತ್ತಾರೆ. ಆದರೆ, ಇತರರನ್ನು ಸುಲಭವಾಗಿ ನಂಬುವುದಿಲ್ಲ. ತಮ್ಮ ಮೇಲೆನೇ ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ಬೇರೆಯವರ ಮೇಲೆ ಅವಲಂಬಿತರಾಗಿ ನಿರ್ಧಾರ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.&lt;/p&gt;&lt;img&gt;&lt;p&gt;ಹೀಗೆ ಕಾಲು ಕ್ರಾಸ್ ಮಾಡಿ ಕೂರುವವರಿಗೆ ಹೊಸ ಸ್ಥಳಗಳಿಗೆ ಪ್ರಯಾಣ ಮಾಡುವುದು ಅಂದ್ರೆ ತುಂಬಾ ಇಷ್ಟ. ಇವರಿಗೆ ಆತ್ಮವಿಶ್ವಾಸ ಕೂಡ ಹೆಚ್ಚು. ತಮ್ಮನ್ನು ತಾವು ನಂಬುತ್ತಾರೆ ಮತ್ತು ಗುಂಪಿನಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ.&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/life/a-personality-test-a-person-sitting-crossed-legs-43oqrep"/>
        </item>
        <item>
            <title><![CDATA[ಕೇಸ್ ದಾಖಲಾದ ಬಳಿಕ ಜರ್ರನೆ ಜ್ವರದಂತೆ ಮೇಲಕ್ಕೇರಿದ 'ಬಿಗ್ ಬಾಸ್' ವಿಷ್ಣುಪ್ರಿಯಾ ಅಕೌಂಟ್ ಬ್ಯಾಲೆನ್ಸ್!]]></title>
            <link>https://kannada.asianetnews.com/cine-world/bigg-boss-fame-actress-vishnu-priya-bhimeneni-controversy-become-boon-for-her-income/articleshow-9rsprst</link>
            <guid isPermaLink="true">https://kannada.asianetnews.com/cine-world/bigg-boss-fame-actress-vishnu-priya-bhimeneni-controversy-become-boon-for-her-income/articleshow-9rsprst</guid>
            <pubDate>Wed, 15 Apr 2026 19:19:04 +0530</pubDate>
            <description><![CDATA[&lt;p&gt;ಕೇವಲ ಕೆಲವೇ ದಿನಗಳಲ್ಲಿ ಸಬ್&zwnj;ಸ್ಕ್ರೈಬರ್&zwnj;ಗಳ ಸಂಖ್ಯೆ 5,600 ದಾಟಿದೆ! ಈಗ ಅವರ ಮಾಸಿಕ ಆದಾಯ ಬರೋಬ್ಬರಿ 21 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ಅಂದರೆ ಒಂದೇ ಒಂದು ವಿವಾದದಿಂದ ಅವರ ತಿಂಗಳ ಆದಾಯದಲ್ಲಿ 14 ಲಕ್ಷ ರೂಪಾಯಿ ಲಾಭವಾಗಿದೆ! ಇದನ್ನು ನೋಡಿ ನೆಟ್ಟಿಗರು ಏನಂತಿದಾರೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8p3phc32f8jfzx5fb37mz7,imgname-vishnu-priya-bhimeneni-1776260602411.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿವಾದವೇ ಈಕೆಗೆ ವರದಾನ: ಪೊಲೀಸ್ ಕೇಸ್ ಆದ್ರೂ ವಿಷ್ಣುಪ್ರಿಯಾ ಅಕೌಂಟ್&zwnj;ಗೆ ಹರಿದು ಬಂತು ಲಕ್ಷ ಲಕ್ಷ ಹಣ!&lt;/strong&gt;&lt;/p&gt;&lt;p&gt;ಸೋಷಿಯಲ್ ಮೀಡಿಯಾ ಅನ್ನೋದು ಒಂದು ವಿಚಿತ್ರ ಲೋಕ. ಇಲ್ಲಿ ಕೆಲವೊಮ್ಮೆ ಕೆಟ್ಟದ್ದೇ (Controversy) ಒಳ್ಳೆಯದಾಗಿ ಬದಲಾಗಿಬಿಡುತ್ತದೆ! ಇದಕ್ಕೆ ತಾಜಾ ಉದಾಹರಣೆ ಅಂದ್ರೆ, ತೆಲುಗಿನ ಖ್ಯಾತ ನಟಿ ಹಾಗೂ ಬಿಗ್&zwnj;ಬಾಸ್ ಬೆಡಗಿ ವಿಷ್ಣುಪ್ರಿಯಾ ಭೀಮಿನೇನಿ. ಸದ್ಯ ವಿಷ್ಣುಪ್ರಿಯಾ (Vishnu Priya Bhimeneni ) ಹೆಸರು ಗಾಂಧಿನಗರದಿಂದ ಹಿಡಿದು ಹೈದರಾಬಾದ್ ಫಿಲ್ಮ್ ನಗರ್&zwnj;ವರೆಗೂ ಸಖತ್ ಸೌಂಡ್ ಮಾಡುತ್ತಿದೆ. ಆದರೆ ಇದು ಸಿನಿಮಾ ಕಾರಣಕ್ಕಲ್ಲ, ಬದಲಾಗಿ ಒಂದು ಪೊಲೀಸ್ ಕೇಸ್&zwnj;ನಿಂದಾಗಿ!&lt;/p&gt;&lt;p&gt;&lt;img&gt;&lt;/p&gt;&lt;p&gt;ಆದರೆ ಅಸಲಿ ಟ್ವಿಸ್ಟ್ ಇಲ್ಲಿದೆ ನೋಡಿ.. ವಿಷ್ಣುಪ್ರಿಯಾ ಮೇಲೆ ಎಫ್&zwnj;ಐಆರ್ ದಾಖಲಾದ ಮೇಲೆ ಅವರ ಹಣೆಬರಹವೇ ಬದಲಾಗಿ ಹೋಗಿದೆ. ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಮೇಲೆ ವಿಷ್ಣುಪ್ರಿಯಾಗೆ ಸಂಕಷ್ಟ ಶುರುವಾಗುತ್ತೆ ಅಂದುಕೊಂಡರೆ, ಅವರ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ರಾಕೆಟ್ ವೇಗದಲ್ಲಿ ಏರುತ್ತಿದೆ!&lt;/p&gt;&lt;p&gt;&lt;img&gt;&lt;/p&gt;&lt;h2&gt;ಏನಿದು 'ಎಕ್ಸ್&zwnj;ಕ್ಲೂಸಿವ್' ವಿವಾದ?&lt;/h2&gt;&lt;p&gt;ವಿಷ್ಣುಪ್ರಿಯಾ ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಹೊಸ ಪ್ಲಾನ್ ಮಾಡಿದ್ದರು. ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ನೋಡಲು ಅಭಿಮಾನಿಗಳು ತಿಂಗಳಿಗೆ 390 ರೂಪಾಯಿ ಚಂದಾದಾರಿಕೆ (Subscription) ಕಟ್ಟಬೇಕು ಎಂಬ ನಿಯಮ ಹಾಕಿದ್ದರು. ಆದರೆ ಈ 'ಎಕ್ಸ್&zwnj;ಕ್ಲೂಸಿವ್ ಕಂಟೆಂಟ್' ಹೆಸರಿನಲ್ಲಿ ವಿಷ್ಣುಪ್ರಿಯಾ ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ, ಅರೆನಗ್ನ ವಿಡಿಯೋಗಳನ್ನು ಹಾಕಿ ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎಐಎಸ್ಎಫ್ (AISF) ಸಂಘಟನೆ ವಿಜಯವಾಡದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿತು.&lt;/p&gt;&lt;p&gt;ಸಬ್&zwnj;ಸ್ಕ್ರೈಬರ್&zwnj;ಗಳ ಸುನಾಮಿ!&lt;/p&gt;&lt;p&gt;ದೂರು ದಾಖಲಾಗುವ ಮೊದಲು ವಿಷ್ಣುಪ್ರಿಯಾ ಅವರ ಈ ಪ್ರೀಮಿಯಂ ಅಕೌಂಟ್&zwnj;ನಲ್ಲಿ ಕೇವಲ 1,892 ಮಂದಿ ಸಬ್&zwnj;ಸ್ಕ್ರೈಬರ್&zwnj;ಗಳಿದ್ದರು. ಅಂದರೆ ಅವರಿಂದ ತಿಂಗಳಿಗೆ ಸುಮಾರು 7.37 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಯಾವಾಗ &quot;ವಿಷ್ಣುಪ್ರಿಯಾ ಮೇಲೆ ಕೇಸ್ ದಾಖಲಾಗಿದೆ&quot; ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತೋ, ನೆಟ್ಟಿಗರಲ್ಲಿ ಕುತೂಹಲ ಉಕ್ಕಿ ಬಂತು. &quot;ಅಂತದ್ದೇನಿದೆ ಅವರ ಅಕೌಂಟ್&zwnj;ನಲ್ಲಿ?&quot; ಎಂದು ನೋಡಲು ಮುಗಿಬಿದ್ದ ಜನ ಸಬ್&zwnj;ಸ್ಕ್ರಿಪ್ಷನ್ ತಗೆದುಕೊಳ್ಳಲು ಶುರು ಮಾಡಿದರು.&lt;/p&gt;&lt;p&gt;&lt;img&gt;&lt;/p&gt;&lt;p&gt;ಕೇವಲ ಕೆಲವೇ ದಿನಗಳಲ್ಲಿ ಸಬ್&zwnj;ಸ್ಕ್ರೈಬರ್&zwnj;ಗಳ ಸಂಖ್ಯೆ 5,600 ದಾಟಿದೆ! ಈಗ ಅವರ ಮಾಸಿಕ ಆದಾಯ ಬರೋಬ್ಬರಿ 21 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ಅಂದರೆ ಒಂದೇ ಒಂದು ವಿವಾದದಿಂದ ಅವರ ತಿಂಗಳ ಆದಾಯದಲ್ಲಿ 14 ಲಕ್ಷ ರೂಪಾಯಿ ಲಾಭವಾಗಿದೆ! ಇದನ್ನು ನೋಡಿ ನೆಟ್ಟಿಗರು &quot;ನೆಗೆಟಿವ್ ಪಬ್ಲಿಸಿಟಿ ಅಂದ್ರೆ ಇದೇ ಅಲ್ವಾ?&quot; ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ದೂರುದಾರರ ವಾದವೇನು?&lt;/h3&gt;&lt;p&gt;&quot;ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಹಣಕ್ಕಾಗಿ ಇಂತಹ ಅಶ್ಲೀಲ ಕೃತ್ಯಗಳಿಗೆ ಕೈಹಾಕಬಾರದು&quot; ಎಂದು ಎಐಎಸ್ಎಫ್ ಮುಖಂಡ ಎಂ. ಸಾಯಿ ಕುಮಾರ್ ಕಿಡಿ ಕಾರಿದ್ದಾರೆ. ಆದರೆ ನೈತಿಕತೆಯ ಮಾತು ಒಂದು ಕಡೆಯಾದರೆ, ವಿಷ್ಣುಪ್ರಿಯಾಗೆ ಮಾತ್ರ ಉಚಿತ ಪ್ರಚಾರ ಸಿಕ್ಕಂತಾಗಿದೆ. ಈ ವಿವಾದದ ಬಗ್ಗೆ ವಿಷ್ಣುಪ್ರಿಯಾ ಇದುವರೆಗೂ ಬಾಯಿ ಬಿಟ್ಟಿಲ್ಲ, ತಮ್ಮ ಪಾಡಿಗೆ ತಾವು ಗ್ಲಾಮರ್ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.&lt;/p&gt;&lt;p&gt;ಯಾರಿದು ವಿಷ್ಣುಪ್ರಿಯಾ?&lt;/p&gt;&lt;p&gt;ತೆಲುಗು ಕಿರುತೆರೆಯಲ್ಲಿ ನಿರೂಪಕಿಯಾಗಿ ಮಿಂಚಿದ್ದ ಈ 36 ವರ್ಷದ ನಟಿ, 'ವಾಂಟೆಡ್ ಪಾಂಡುಗಾಡ್', 'ಚೆಕ್ ಮೇಟ್' ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಹೋಗಿ ಭರ್ಜರಿ 98 ದಿನಗಳ ಕಾಲ ಕಿಚ್ಚು ಹಚ್ಚಿದ್ದ ಇವರು, ಈಗ ಇನ್&zwnj;ಸ್ಟಾಗ್ರಾಮ್ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಕಾನೂನು ಸಮರ ಒಂದು ಕಡೆಯಾದರೆ, ವಿಷ್ಣುಪ್ರಿಯಾ ಅವರ ಆರ್ಥಿಕ ಲಾಭ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ವಿವಾದಗಳೇ ಬಂಡವಾಳವಾಗುತ್ತಿರುವ ಕಾಲದಲ್ಲಿ ವಿಷ್ಣುಪ್ರಿಯಾ ಸದ್ಯಕ್ಕೆ 'ಟ್ರೆಂಡಿಂಗ್ ಕ್ವೀನ್'!&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/bigg-boss-fame-actress-vishnu-priya-bhimeneni-controversy-become-boon-for-her-income/articleshow-9rsprst"/>
        </item>
        <item>
            <title><![CDATA[ಅಮೆರಿಕಾದಲ್ಲಿ ಭಾರತದ 'ರಾಮಾಯಣ'ದ ಸೀಕ್ರೆಟ್ ಬಿಚ್ಚಿಟ್ಟ ನಿರ್ಮಾಪಕ; 'ರಾವಣ' ಯಶ್ ಬಗ್ಗೆ ಏನ್ ಹೇಳಿದ್ರು?]]></title>
            <link>https://kannada.asianetnews.com/cine-world/producer-namit-malhotra-talks-in-us-cinemacon-on-upcoming-ramayana-movie-and-rocking-star-yash/articleshow-umslng8</link>
            <guid isPermaLink="true">https://kannada.asianetnews.com/cine-world/producer-namit-malhotra-talks-in-us-cinemacon-on-upcoming-ramayana-movie-and-rocking-star-yash/articleshow-umslng8</guid>
            <pubDate>Wed, 15 Apr 2026 17:59:55 +0530</pubDate>
            <description><![CDATA[&lt;p&gt;ನಾನು ಸಿನಿಮಾವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್&zwnj;ನಲ್ಲಿ ನೋಡುತ್ತೇನೆ. ಅಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ ವಡಾಪಾವ್ ಮೆಲ್ಲುತ್ತ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇನೆ. ಅದರೆ, ಸಿನಿಮಾಗಳ ಜೊತೆಗೆ, ನಮ್ಮತನದ, ನಮ್ಮ ಸಾಂಸ್ಕೃತಿಕ ಪರಂಪರೆಯ ಜ್ಞಾನವನ್ನು ಕೂಡ ಪಡೆಯುತ್ತೇನೆ. ಮತ್ತೇನು ಹೇಳಿದ್ರು ನೋಡಿ&hellip;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8hczghpcz8zqn93mjtana6,imgname-namit-malhotra-1776255663633.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಗತ್ತಿನ ಮೊಟ್ಟಮೊದಲ ಐತಿಹಾಸಿಕ ಮಹಾನ್ ಕಥೆಯನ್ನು ಜಗತ್ತಿಗೆ ಪ್ರದರ್ಶಿಸಲಿದ್ದೇವೆ: ನಮಿತ್ ಮಲ್ಹೋತ್ರಾ&lt;/strong&gt;&lt;/p&gt;&lt;p&gt;ಧುರಂಧರ್ ಸಿನಿಮಾ ಬಳಿಕ ಭಾರತ ಸೇರಿದಂತೆ ಜಗತ್ತು ನಿರೀಕ್ಷಿಸುತ್ತಿರುವ ಸಿನಿಮಾಳೆಂದರೆ ಅವು ಟಾಕ್ಸಿಕ್ ಹಾಗೂ ರಾಮಾಯಣ. ಕೋ ಇನ್ಸಿಡೆಂಟ್ ಎಂಬಂತೆ, ಈ ಎರಡೂ ಸಿನಿಮಾಗಳಲ್ಲಿ ಯಶ್ ನಟಿಸಿದ್ದಾರೆ. ಕನ್ನಡ, ಹಾಲಿವುಡ್ ಸೇರಿದಂತೆ ಬಹುಭಾಷಾ ಚಿತ್ರವಾದ ಟಾಕ್ಸಿಕ್ ಸಿನಿಮಾದಲ್ಲಿ ನಟ ಯಶ್ ಅವರೇ ನಾಯಕರಾಗಿದ್ದಾರೆ. ಆದರೆ, ಬಾಲಿವುಡ್ ಮೂಲದ ರಾಮಾಯಣ ಸಿನಿಮಾದಲ್ಲಿ ನಟ ರಣಬೀರ್ ಕಪೂರ್ ನಾಯಕ ರಾಮನ ಪತ್ರದಲ್ಲಿ ನಟಿಸಿದ್ದು, ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.&lt;/p&gt;&lt;p&gt;ಮತ್ತೂ ಒಂದು ವಿಶೇಷ ಎಂದರೆ, ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರಕ್ಕೆ ನಟ ಯಶ್ ಅವರು ನಮಿತ್ ಮಲ್ಹೋತ್ರಾ ಅವರ ಜೊತೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಕನ್ನಡದ ಹೆಮ್ಮೆಯ ನಟ ಯಶ್ ಅವರು ನಟನ ಜೊತೆಗೆ ನಿರ್ಮಾಪಕ ಎಂಬ ಪಟ್ಟವನ್ನೂ ಗಿಟ್ಟಿಸಿಕೊಂಡಿಒದ್ದಾರೆ. ಇನ್ನು, ರಾಮಾಯಣದ ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಟ ಯಶ್ ಅವರಿಬ್ಬರೂ ಇತ್ತೀಚೆಗೆ ಅಮೆರಿಕಾದಲ್ಲಿ 'ಸಿನಿಮಾಕಾನ್' ಸಂದರ್ಶನದಲ್ಲಿ ಭಾಗಿಯಾಗಿ ರಾಮಾಯನದ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ದರೆ ಅದೇನು ಹೇಳಿದ್ದಾರೆ ನೋಡಿ..&lt;/p&gt;&lt;h2&gt;ರಾಮಾಯಣ ಅನ್ನೋದು ಐತಿಹಾಸಿಕ ಮಹಾಕಾವ್ಯ ಮಾತ್ರವಲ್ಲ&lt;/h2&gt;&lt;p&gt;ನಮಿತ್ ಮಲ್ಹೋತ್ರಾ ಹೇಳಿರೋ ಮಾತು ಇದು.. 'ರಾಮಾಯಣ ಅನ್ನೋದು ಐತಿಹಾಸಿಕ ಮಹಾಕಾವ್ಯ ಮಾತ್ರವಲ್ಲ, ಇದು ಭಾರತದಲ್ಲಿ ಜನರೇಶನ್&zwnj; ಟು ಜನರೇಶನ್&zwnj; ಹರಿದುಬಂದಿರುವ, ಆರಾಧಿಸಲ್ಪಡುವ ಮಹಾನ್ ಕಥನ. ಇದು ಭಾರತೀಯ ಧಾರ್ಮಿಕ ಪರಂಪರೆಯ ಮಹಾ ಕೊಂಡಿ ಮಾತ್ರವಲ್ಲ, ಇಂದಿಗೂ ಜನರು ಪೂಜಿಸಿ ಆರಾಧಿಸುವ ವ್ಯಕ್ತಿಯೊಬ್ಬನ ಸಾಂಸ್ಕೃತಿಕ ಪರಂಪರೆಯೂ ಹೌದು.&lt;/p&gt;&lt;p&gt;ನಾವು ಜಗತ್ತು ಇನ್ನೂ ಸರಿಯಾಗಿ ಅರ್ಥೈಸಿಕೊಂಡಿರದ ಜಗತ್ತಿನ ಮೊಟ್ಟಮೊದಲ ಮಹಾನ್ ಸ್ಟೋರಿಯನ್ನು ಜಗತ್ತಿನ ಮುಂದೆ ಹೊಸ ಶೈಲಿಯ ಮೂಲಕ ತೆರೆಯ ಮೇಲೆ ತೋರಿಸಲಿದ್ದೇವೆ.&lt;/p&gt;&lt;p&gt;ಜೊತೆಗೆ, ಇಂದಿನ ಜಗತ್ತಿಗೆ ಈಗ ನಾವು ತರಲಿರುವ ರಾಮಯಣದ ಕಥೆ ನಿಜವಾಗಿಯೂ ಕನೆಕ್ಟ್ ಆಗಲಿದೆ. ಕಾರಣ, ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ, ಹೊಡೆದಾಟ, ಯುದ್ಧದ ಮಾನಸಿಕ ಹಾಗೂ ಕಾರ್ಯರೂಪದ ಪರಿಸ್ಥಿತಿಯಲ್ಲಿ, ಇಂತಹ ಒಂದು ಸ್ಟೋರಿ ಜಗತ್ತಿಗೆ ಹೊಸ ದಾರಿಯನ್ನು, ಹೊಸ ಮೌಲ್ಯವನ್ನು ತಿಳಿಸಲು ಸಹಕಾರಿ ಆಗಲಿದೆ.&lt;/p&gt;&lt;p&gt;ನಾನು ಸಿನಿಮಾವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್&zwnj;ನಲ್ಲಿ ನೋಡುತ್ತೇನೆ. ಅಲ್ಲಿ ನಮ್ಮ ಸಾಂಪ್ರದಾಯಿಕ ತಿಂಡಿ ವಡಾಪಾವ್ ಮೆಲ್ಲುತ್ತ ಸಿನಿಮಾಗಳನ್ನು ಎಂಜಾಯ್ ಮಾಡುತ್ತೇನೆ. ಅದರೆ, ಸಿನಿಮಾಗಳ ಜೊತೆಗೆ, ನಮ್ಮತನದ, ನಮ್ಮ ಸಾಂಸ್ಕೃತಿಕ ಪರಂಪರೆಯ ಜ್ಞಾನವನ್ನು ಕೂಡ ಪಡೆಯುತ್ತೇನೆ. ಕಾರಣ, ನಮ್ಮ ಬಹಳಷ್ಟು ಸಿನಿಮಾಗಳು 5000 ವರ್ಷಗಳ ಹಿಂದಿನ ಕಥೆ, ಪರಂಪರೆಯನ್ನು ಸಿನಿಮಾ ಮೂಲಕ ತಿಳಿಸಲು ಶಕ್ತವಾಗಿರುತ್ತವೆ..&lt;/p&gt;&lt;h3&gt;ಮಲ್ಟಿ ಟ್ಯಾಲೆಂಟೆಡ್ ಹಾಗೂ ಎನರ್ಜಿಟಿಕ್ ಹೀರೋ ಅಗತ್ಯವಿತ್ತು&lt;/h3&gt;&lt;p&gt;ಜೊತೆಗೆ, ರಾಮಾಯಣ ಚಿತ್ರಕ್ಕೆ ಯಶ್ ಅವರಂತಹ ಮಲ್ಟಿ ಟ್ಯಾಲೆಂಟೆಡ್ ಹಾಗೂ ಎನರ್ಜಿಟಿಕ್ ಹೀರೋ ಅಗತ್ಯವಿತ್ತು. ರಾಮಾಯಣದ ರಾವಣನ ಪಾತ್ರಕ್ಕೆ ಯಶ್ ಅವರಿಗಿಂತ ಸರಿಯಾದ ಆಯ್ಕೆ ಮತ್ತೊಬ್ಬರಿಲ್ಲ. ಈ ಪಾತ್ರದಲ್ಲಿ ಯಶ್ ಅವರು ಪರಕಾಯ ಪ್ರವೇಶ ಮಾಡಿದ್ದು ಮಾತ್ರವಲ್ಲ, ಈ ಸಿನಿಮಾದ ಪ್ರಚಾರಕಾರ್ಯದಲ್ಲೂ ಮುಖ್ಯ ಪಾತ್ರ ವಹಿಸಲಿದ್ದಾರೆ' ಎಂದಿದ್ದಾರೆ ರಾಮಾಯಣ ಚಿತ್ರದ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/producer-namit-malhotra-talks-in-us-cinemacon-on-upcoming-ramayana-movie-and-rocking-star-yash/articleshow-umslng8"/>
        </item>
        <item>
            <title><![CDATA[ಅಮೆರಿಕಾ ಸಂದರ್ಶನದಲ್ಲಿ ನಟ ಯಶ್ ಭಾಗಿ; 'ರಾಮಾಯಣ'ದ ಸಾಕಷ್ಟು ಸೀಕ್ರೆಟ್ ಬಿಚ್ಚಿಟ್ಟ ರಾಕಿಂಗ್ ಸ್ಟಾರ್!]]></title>
            <link>https://kannada.asianetnews.com/sandalwood/yash-talks-on-his-upcoming-film-ramayana-and-toxic-in-an-interview-at-america/articleshow-g1xq18r</link>
            <guid isPermaLink="true">https://kannada.asianetnews.com/sandalwood/yash-talks-on-his-upcoming-film-ramayana-and-toxic-in-an-interview-at-america/articleshow-g1xq18r</guid>
            <pubDate>Wed, 15 Apr 2026 15:13:23 +0530</pubDate>
            <description><![CDATA[&lt;p&gt;&lsquo;ರಣವೀರ್ ಸಿಂಗ್ ಒಬ್ಬ ಅದ್ಭುತ ನಟ. ರಾಮನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಿರುವ ಕಲಾವಿದ. ನಾವೆಲ್ಲರೂ ಒಂದು ಮಹಾನ್ ಕಾರ್ಯಕ್ಕಾಗಿ ಒಂದಾಗಿದ್ದೇವೆ. ಇಲ್ಲಿ ನಮ್ಮ ಕೆಮೆಸ್ಟ್ರಿಗಿಂತ ಹೆಚ್ಚಾಗಿ ನಾವೆಲ್ಲ ಒಂದು ಅತ್ಯಮೂಲ್ಯ ಕೊಡುಗೆಯನ್ನು ಜಗತ್ತಿಗೆ ನೀಡಲು ಸಜ್ಜಾಗುತ್ತಿದ್ದೇವೆ&rsquo;. ಇನ್ನೂ ಏನಂದ್ರು ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn7g407zxhrxqxn8xks83h7a,imgname-ramayana-ravan-yash-1775147024639.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಮೆರಿಕಾದ ಸಂದರ್ಶನದಲ್ಲಿ ನಟ ಯಶ್ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಕೆಜಿಎಫ್ ಸರಣಿ ಸಿನಿಮಾ ಮೂಲಕ ಜಗತ್ತಿನ ಗಮನ ಸೆಳೆದಿರುವ ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಇತ್ತೀಚೆಗೆ ಅಮೆರಿಕಾದಲ್ಲಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಯಶ್ ನಟನೆಯ ರಾಮಾಯಣ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ನಮಿತ್ ಮಲ್ಹೋತ್ರಾ ಹಾಗೂ ಯಶ್ ಇಬ್ಬರೂ ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾದ ಬಗ್ಗೆ ಮಾತನ್ನಾಡಿದ್ದಾರೆ.&lt;/p&gt;&lt;h2&gt;ರಾಮಾಯಣದ ಬಗ್ಗೆ ಹೇಳಿದ್ದೇನು?&lt;/h2&gt;&lt;p&gt;'ರಾಮಾಯಣ ಅನ್ನೋದು ನಮ್ಮನ್ನು ಜಗತ್ತಿನೊಂದಿಗೆ ಚಿಕ್ಕಂದಿನಿಂದಲೂ ಬೆಸೆದಿರುವ ಸಿನಿಮಾ. ರಾಮಾಯಣದ ಮೂಲಕ ನಾವು ಜೀವನದ ಹಲವು ಮೌಲ್ಯಗಳನ್ನು ಕಂಡುಕೊಂಡಿದ್ದೇವೆ, ಅದರ ಬೆಲೆ ಅರಿತಿದ್ದೇವೆ. ಬಹಳಷ್ಟು ವರ್ಷಗಳ ಹಿಂದೆಯೇ ರಾಮಾಯಣ ಆಗಿಹೋಗಿದ್ದರೂ ಕೂಡ, ಈ ಕಥೆ, ಈ ಮಹಾನ್ ಗ್ರಂಥ, ಈ ಅತ್ಯಮೂಲ್ಯ ಇತಿಹಾಸ ನಮ್ಮ ಜೀವನವನ್ನು ಯೋಗ್ಯವಾಹಿಸಿದೆ, ಶ್ರೀಮಂತವಾಗಿಸಿದೆ. ಜೊತೆಗೆ, ನಾವು ರಾಮಾಯಣದ ಮೌಲ್ಯಗಳು ಈಗಲೂ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ನೋಡುತ್ತಿದ್ದೇವೆ. ಇದೇ ಕಾರಣಕ್ಕೆ ನಮ್ಮ ಸಿನಿಮಾದ ಮೂಲಕ 'ರಾಮಾಯಣ'ವನ್ನು ಜಗತ್ತಿಗೆ ತೆರೆಯ ಮೂಲಕ ತೋರಸಲಿದ್ದೇವೆ.&lt;/p&gt;&lt;h3&gt;ಇಬ್ಬರೂ ತೆರೆಯ ಮೇಲೆ ಒಟ್ಟಿಗೇ ಬರೋದಿಲ್ಲ.&lt;/h3&gt;&lt;p&gt;ಸಿನಿಮಾದಲ್ಲಿ ನಾನು ಅಂದರೆ ರಾಮ ಹಾಗೂ ರಣಬೀರ್ ಕಪೂರ್ ಅಂದರೆ ರಾವಣ ಇಬ್ಬರೂ ತೆರೆಯ ಮೇಲೆ ಒಟ್ಟಿಗೇ ಬರೋದಿಲ್ಲ. ಕಾರಣ, ರಾಮಾಯಣ 2 ಭಾಗಗಳಲ್ಲಿ ಬರುತ್ತಿದೆ ಎಂಬುದು ನಿಮಗೆ ಗೊತ್ತಿದೆ. ಈಗ ಬರುತ್ತಿರುವ ರಾಮಾಯಣ ಪಾರ್ಟ್-1ರಲ್ಲಿ ನಾನು (ರಾವಣ) ನನ್ನದೇ ಆದ ರಾಜ್ಯವನ್ನು ಆಳುತ್ತಿರುತ್ತೇನೆ. ಹಾಗೇ, ರಣಬೀರ್ ಕಪೂರ್ (ರಾಮ) ಅವರದೇ ರಾಜ್ಯ ಆಳುತ್ತಿರುತ್ತಾರೆ. ನಾವಿಬ್ಬರೂ ಈ ಸಿನಿಮಾದಲ್ಲಿ (ಪಾರ್ಟ್ 1) ತೆರೆಯ ಮೇಲೆ ಒಟ್ಟಿಗೇ ಬರೋದಿಲ್ಲ, ಒಂದೇ ಸ್ಕ್ರೀನ್&zwnj;ನಲ್ಲಿ ಮುಖಾಮುಖಿ ಆಗೋದಿಲ್ಲ. ಅದೇನಿದ್ದರೂ 'ಪಾರ್ಟ್ 2'ನಲ್ಲಿ ಸಂಭವಿಸಲಿದೆ. ಆದರೆ, ನಾವಿಬ್ಬರೂ ಕೆಲವೊಮ್ಮೆ ಶೂಟಿಂಗ್&zwnj; ಜಾಗದಲ್ಲಿ ಭೇಟಿ ಆಗಿದ್ದೇವೆ.&lt;/p&gt;&lt;p&gt;ರಣವೀರ್ ಸಿಂಗ್ ಜೊತೆ ಯಶ್ ಕೆಮೆಸ್ಟ್ರಿ ಬಗ್ಗೆ ಕೇಳಲಾದ ಪ್ರಶ್ನೆಗೆ ಯಶ್ 'ರಣವೀರ್ ಸಿಂಗ್ ಒಬ್ಬ ಅದ್ಭುತ ನಟ. ರಾಮನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಿರುವ ಕಲಾವಿದ. ನಾವೆಲ್ಲರೂ ಒಂದು ಮಹಾನ್ ಕಾರ್ಯಕ್ಕಾಗಿ ಒಂದಾಗಿದ್ದೇವೆ. ಇಲ್ಲಿ ನಮ್ಮ ಕೆಮೆಸ್ಟ್ರಿಗಿಂತ ಹೆಚ್ಚಾಗಿ ನಾವೆಲ್ಲ ಒಂದು ಅತ್ಯಮೂಲ್ಯ ಕೊಡುಗೆಯನ್ನು ಜಗತ್ತಿಗೆ ನೀಡಲು ಸಜ್ಜಾಗುತ್ತಿದ್ದೇವೆ. ಈ ಕಾರಣಕ್ಕೆ ನಮ್ಮ ಇಡೀ ತಾರಾಗಣ ಹಾಗೂ ಚಿತ್ರತಂಡ ಇಂದೇ ಗುರಿಗಾಗಿ ಕೆಲಸ ಮಾಡುತ್ತಿದೆ. ಈ ಕಾರಣಕ್ಕೆ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದ್ದು ಅದನ್ನು ಇಡೀ ಜಗತ್ತು ತೆರೆಯ ಮೇಲೆ ನೋಡಬಹುದು' ಎಂದಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/yash-talks-on-his-upcoming-film-ramayana-and-toxic-in-an-interview-at-america/articleshow-g1xq18r"/>
        </item>
        <item>
            <title><![CDATA[ಕೆಜಿಎಫ್, ಬಾಹುಬಲಿ ಚಿತ್ರಗಳನ್ನು ಮೂಲೆಗೆ ತಳ್ಳಿ ಭಾರತದ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಗೆ ಸೇರಿದ ಧುರಂಧರ್!]]></title>
            <link>https://kannada.asianetnews.com/cine-world/aditya-dhar-and-ranveer-singh-movie-dhurandhar-collects-highest-in-box-office-in-india-and-set-record/articleshow-kb75wgc</link>
            <guid isPermaLink="true">https://kannada.asianetnews.com/cine-world/aditya-dhar-and-ranveer-singh-movie-dhurandhar-collects-highest-in-box-office-in-india-and-set-record/articleshow-kb75wgc</guid>
            <pubDate>Wed, 15 Apr 2026 12:30:24 +0530</pubDate>
            <description><![CDATA[&lt;p&gt;ಮಾರ್ಚ್ 19 ರಂದು ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ಚಿತ್ರವು ಹೊಸ ದಾಖಲೆ ನಿರ್ಮಿಸಿದೆ. ಸೌತ್ ಇಂಡಿಯನ್ ಭಾಷೆಗಳಲ್ಲಿಯೂ ಅದ್ದೂರಿಯಾಗಿ ಬಿಡುಗಡೆಯಾದ ಈ ಚಿತ್ರ ಎರಡನೇ ಭಾಗದಲ್ಲೇ 1712 ಕೋಟಿ ಲೂಟಿ ಮಾಡಿದೆ. ವಿಶೇಷವೆಂದರೆ, ಭಾರತದ ನೆಲದಲ್ಲೇ 1000 ಕೋಟಿ ದಾಟಿದ ಮೊದಲ ಹಿಂದಿ ಚಿತ್ರ ಎಂಬ ಇತಿಹಾಸವನ್ನೂ ಇದು ನಿರ್ಮಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkya016x3p5bmsyc4d8jax2,imgname-dhurandhar-2-box-office-collection-day-20-1775564554278.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಕ್ಸ್ ಆಫೀಸ್ ಸುನಾಮಿ: 3000 ಕೋಟಿ ಲೂಟಿ ಮಾಡಿದ 'ಧುರಂಧರ್'; ಬಾಹುಬಲಿ, ಕೆಜಿಎಫ್ ದಾಖಲೆಗಳೆಲ್ಲ ಧೂಳೀಪಟ!&lt;/strong&gt;&lt;/p&gt;&lt;p&gt;ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣ. ಬಾಕ್ಸ್ ಆಫೀಸ್&zwnj;ನಲ್ಲಿ ಹೊಸ ಸುನಾಮಿ ಎದ್ದಿದೆ, ಆ ಸುನಾಮಿಯ ಹೆಸರು 'ಧುರಂಧರ್'. ನಿರ್ದೇಶಕ ಆದಿತ್ಯ ಧರ್ ಅವರ ಕಲ್ಪನೆಯಲ್ಲಿ ಮೂಡಿಬಂದ ಈ ಸಿನಿಮಾ ಫ್ರಾಂಚೈಸಿ ಈಗ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಕೇವಲ ಒಂದು ಸಿನಿಮಾ ಅಲ್ಲ, ಒಂದು ಇಡೀ ಫ್ರಾಂಚೈಸಿಯಾಗಿ 'ಧುರಂಧರ್' ಭಾರತೀಯ ಚಿತ್ರರಂಗದ ಎಲ್ಲಾ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿ, ಬರೋಬ್ಬರಿ 3000 ಕೋಟಿ ರೂಪಾಯಿಗಳ ಕ್ಲಬ್&zwnj;ಗೆ ಲಗ್ಗೆ ಇಟ್ಟಿದೆ!&lt;/p&gt;&lt;p&gt;ದಾಖಲೆಗಳ ರಾಜ 'ಧುರಂಧರ್':&lt;/p&gt;&lt;p&gt;ರಣವೀರ್ ಸಿಂಗ್ ಅವರ ಅಬ್ಬರದ ನಟನೆ ಮತ್ತು ಆದಿತ್ಯ ಧರ್ ಅವರ ಅದ್ಭುತ ಮೇಕಿಂಗ್&zwnj;ನಿಂದಾಗಿ 'ಧುರಂಧರ್' ಮತ್ತು 'ಧುರಂಧರ್: ದಿ ರಿವೆಂಜ್' ಚಿತ್ರಗಳು ಒಟ್ಟಾಗಿ ದೇಶದ ಅತಿ ಹೆಚ್ಚು ಗಳಿಕೆಯ ಫ್ರಾಂಚೈಸಿಯಾಗಿ ಹೊರಹೊಮ್ಮಿವೆ. ಮೊದಲು ಭಾಗ ಬಿಡುಗಡೆಯಾದಾಗ ಇದು ಯಶಸ್ವಿಯಾಗುತ್ತದೆಯೇ ಎಂದು ಹಲವರು ಮೂಗು ಮುರಿದಿದ್ದರು. ಆದರೆ, ಜಗತ್ತಿನಾದ್ಯಂತ 1307 ಕೋಟಿ ಕಲೆಕ್ಷನ್ ಮಾಡುವ ಮೂಲಕ ರಣವೀರ್ ಸಿಂಗ್ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದರೂ ಈ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ.&lt;/p&gt;&lt;h2&gt;ದಕ್ಷಿಣದ ದೈತ್ಯ ಸಿನಿಮಾಗಳಿಗೇ ಶಾಕ್!&lt;/h2&gt;&lt;p&gt;ಇಲ್ಲಿಯವರೆಗೆ ಭಾರತೀಯ ಸಿನಿಮಾದ ಗತ್ತು ಎಂದರೆ ಅದು 'ಬಾಹುಬಲಿ', 'ಕೆಜಿಎಫ್' ಅಥವಾ 'ಪುಷ್ಪ' ಎನ್ನಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ 2438 ಕೋಟಿ ಗಳಿಸಿತ್ತು, ಅಲ್ಲು ಅರ್ಜುನ್ ಅವರ 'ಪುಷ್ಪ' ಸರಣಿ 2221 ಕೋಟಿ ಬಾಚಿತ್ತು. ನಮ್ಮ ಹೆಮ್ಮೆಯ ಯಶ್ ಅಭಿನಯದ 'ಕೆಜಿಎಫ್' ಸರಣಿ 1453 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಆದರೆ ಈ ಎಲ್ಲಾ ದೈತ್ಯ ದಾಖಲೆಗಳನ್ನು 'ಧುರಂಧರ್' ಈಗ ಹಗುರವಾಗಿ ದಾಟಿದೆ. 3019 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಭಾರತದ ನಂಬರ್ 1 ಫ್ರಾಂಚೈಸಿ ಎಂಬ ಪಟ್ಟವನ್ನು ಅಲಂಕರಿಸಿದೆ.&lt;/p&gt;&lt;h3&gt;ಮಾರ್ಚ್ ತಿಂಗಳ ಏಕಚಕ್ರಾಧಿಪತಿ:&lt;/h3&gt;&lt;p&gt;ಮಾರ್ಚ್ 19 ರಂದು ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ಚಿತ್ರಕ್ಕೆ ಎದುರಾಳಿಗಳೇ ಇರಲಿಲ್ಲ. ರಾಕಿ ಭಾಯ್ ಯಶ್ ಅವರ 'ಟಾಕ್ಸಿಕ್' ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳು ಪೋಸ್ಟ್&zwnj;ಪೋನ್ ಆಗಿದ್ದು ಈ ಚಿತ್ರಕ್ಕೆ ವರದಾನವಾಯಿತು. ಸೌತ್ ಇಂಡಿಯನ್ ಭಾಷೆಗಳಲ್ಲಿಯೂ ಅದ್ದೂರಿಯಾಗಿ ಬಿಡುಗಡೆಯಾದ ಈ ಚಿತ್ರ ಎರಡನೇ ಭಾಗದಲ್ಲೇ 1712 ಕೋಟಿ ಲೂಟಿ ಮಾಡಿದೆ. ವಿಶೇಷವೆಂದರೆ, ಭಾರತದ ನೆಲದಲ್ಲೇ 1000 ಕೋಟಿ ದಾಟಿದ ಮೊದಲ ಹಿಂದಿ ಚಿತ್ರ ಎಂಬ ಇತಿಹಾಸವನ್ನೂ ಇದು ನಿರ್ಮಿಸಿದೆ.&lt;/p&gt;&lt;p&gt;ತಾರಾಗಣದ ಬಲ:&lt;/p&gt;&lt;p&gt;ಬರೀ ರಣವೀರ್ ಸಿಂಗ್ ಮಾತ್ರವಲ್ಲದೆ, ಈ ಚಿತ್ರದಲ್ಲಿ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್ ಮಾಧವನ್ ಅವರಂತಹ ದಿಗ್ಗಜ ನಟರ ದಂಡೇ ಇದೆ. ಬಾಲನಟಿ ಸಾರಾ ಅರ್ಜುನ್ ಅವರ ಅಭಿನಯವೂ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ, ಆದಿತ್ಯ ಧರ್ ಸೃಷ್ಟಿಸಿದ ಈ ಮಾಯಾಲೋಕಕ್ಕೆ ಈಗ ಇಡೀ ವಿಶ್ವವೇ ಮಾರುಹೋಗಿದೆ. 3000 ಕೋಟಿಯ ಈ ಹೊಸ ಮೈಲಿಗಲ್ಲು ಭಾರತೀಯ ಚಿತ್ರರಂಗದ ಗತ್ತನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/aditya-dhar-and-ranveer-singh-movie-dhurandhar-collects-highest-in-box-office-in-india-and-set-record/articleshow-kb75wgc"/>
        </item>
        <item>
            <title><![CDATA[ನಿಮ್ಮ ಅಪ್ಪ ಅಮ್ಮಂದ?.. ಬೀಪ್ ಕಾಮೆಂಟ್ ಮಾಡಿದ ನೆಟ್ಟಿಗನನ್ನು 'ಈ ಮಟ್ಟಿಗೆ' ತರಾಟೆಗೆ ತೆಗೆದುಕೊಂಡ ವರ್ಷ ಕಾವೇರಿ!]]></title>
            <link>https://kannada.asianetnews.com/gallery/tv-talk/varsha-kaveri-comment-on-social-media-becomes-viral-and-creates-more-sensation-qksnd25</link>
            <guid isPermaLink="true">https://kannada.asianetnews.com/gallery/tv-talk/varsha-kaveri-comment-on-social-media-becomes-viral-and-creates-more-sensation-qksnd25</guid>
            <pubDate>Wed, 15 Apr 2026 11:40:17 +0530</pubDate>
            <description><![CDATA[&lt;p&gt;ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗೇನು ಹೇಳಿದ್ದಾರೆ ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7twptk9gwzp1xjcmjv48ke,imgname-varsha-kaveri-1776232061779.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗೇನು ಹೇಳಿದ್ದಾರೆ ನೋಡಿ..&amp;nbsp;&lt;/p&gt;&lt;img&gt;&lt;p&gt;ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ (Varsha Kaveri) ಗೊತ್ತಿಲ್ಲದವರು ತುಂಬಾ ಕಡಿಮೆ ಎನ್ನಬಹುದು. ರೀಲ್ಸ್&zwnj; ಜತೆಗೆ ಆಗಾಗ ವಿವಾದಗಳಿಗೂ ಸುದ್ದಿಯಾಗುತ್ತಲೇ ಇರುತ್ತಾರೆ.&lt;/p&gt;&lt;img&gt;&lt;p&gt;ನಟನೊಬ್ಬನ ಜತೆ ಆದ ವಿವಾದವೂ ಸೇರಿದಂತೆ ಈ ನಟಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಮೊದಲು ಅದೂ ಇದೂ ಅಂತ ಸಾಕಷ್ಟು ಸೌಂಡ್ ಮಾಡಿದ್ದ ವರ್ಷಾ ಕಾವೇರಿ, ಇದೀಗ ಹೊಸ ರೂಪದಲ್ಲಿ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಈ ಮೊದಲು ಬಿಗ್&zwnj; ಬಾಸ್&zwnj;ಗೆ (Bigg Boss Kannada) ಬರುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆಗ ಅವರು ಅಭಿಮಾನಿಗಳು ಸಾಕಷ್ಟು ಥ್ರಿಲ್ ಆಗಿದ್ದರು. ಆದರೆ, ಆ ಬಗ್ಗೆ ಸ್ವತಃ ವರ್ಷಾ ಕಾವೇರಿ ಗರಂ ಆಗಿಯೇ ಪೋಸ್ಟ್&zwnj; ಮುಖಾಂತರ ಸ್ಪಷ್ಟನೆ ಕೊಟ್ಟಿದ್ದರು.&lt;/p&gt;&lt;img&gt;&lt;p&gt;'ಟಿಆರ್&zwnj;ಪಿ'ಗೋಸ್ಕರ ಕಥೆ ಕಟ್ಟುತ್ತಿದ್ದಾರೆ. ಸಾಧನೆ ಮಾಡಿರುವ ಅದೆಷ್ಟೋ ಜನರ ಮುಂದೆ ನಾನು ಏನೂ ಅಲ್ಲ. ನನ್ನನ್ನು ಬಿಗ್ ಬಾಸ್ ಕನ್ನಡ ಶೋಗೆ ಕರೆಯುವ ಸಾಧ್ಯತೆ ತೀರಾ ಕಡಿಮೆ' ಎಂದು ವರ್ಷಾ ಕಾವೇರಿ ಹೇಳಿದ್ದರು.&lt;/p&gt;&lt;img&gt;&lt;p&gt;ಹೀಗೆ ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಣ, ಅತ ಹಾಕಿರುವ ಬೀಪ್&zwnj; ಕಾಮೆಂಟ್. ಬೀಪ್ ಕಾಮೆಂಟ್ ಎಂದರೆ ಏನು ಅಂತ ಮತ್ತೆ ಬಿಡಿಸಿ ಹೇಳಬೇಕಿಲ್ಲ.&lt;/p&gt;&lt;img&gt;&lt;p&gt;ಹೀಗೆ ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಣ, ಅತ ಹಾಕಿರುವ ಬೀಪ್&zwnj; ಕಾಮೆಂಟ್. ಬೀಪ್ ಕಾಮೆಂಟ್ ಎಂದರೆ ಏನು ಅಂತ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಸಮಾಜದಲ್ಲಿ, ಸೋಷಿಯಲ್ ನಾರ್ಮ್ ಕಾಪಾಡಲು ಹೇಳಬಾರದ, ಹೇಳಲಾಗದ ಮಾತೇನಾದ್ರೂ ಇದ್ರೆ ಅದನ್ನು 'ಬೀಪ್' ಎಂಬ ಹೆಸರಿನಿಂದ ಕರೆಯುವುದು ರೂಢಿ. ಇದೀಗ ಅಂತಹ ಕಾಮೆಂಟ್ ಒಂದು ವರ್ಷಾ ಕಾವೇರಿಗೆ ಬಂದಿದ್ದು ಅದಕ್ಕವರು ತಿರುಗೇಟು ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅದೇನು ವಿಷಯ ಅಂತ ಸಾಕಷ್ಟು ಕುತೂಹಲ ಮೂಡೊದು ಸಹಜ. ಆದರೆ, ಅದಕ್ಕೆ ಬಹಳಷ್ಟು ಸ್ಪಷ್ಟನೆ ಏನೂ ಇಲ್ಲ. ಆದರೆ, ನೆಟ್ಟಿಗರೊಬ್ಬರ ಕಾಮೆಂಟ್&zwnj;ಗೆ ನಟಿ ವರ್ಷಾ ಕಾವೇರಿ ಕೊಟ್ಟಿರುವ ತಿರುಗೇಟು ಈಗ ಸಖತ್ ಸದ್ದು ಮಾಡುತ್ತಿದೆ. ಅದೇನು ಅಂತ ಅಟ್ಯಾಚ್&zwnj;ಮೆಂಟ್ ನೋಡಿ..&amp;nbsp;&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ವರ್ಷಾ ಕಾವೇರಿ ಸಮ್ಮನೇ ಇರೋ ಜಾಯಮಾನದವರಲ್ಲ, ತಮ್ಮ ವಿರುದ್ಧ ಯಾರಾದರೂ ಆಕ್ಷನ್ ಮಾಡಿದರೆ ಕೌಂಟರ್&zwnj; ಕೊಡೋಕೆ ಹಿಂದೆಮುಂದೆ ನೋಡೋದಿಲ್ಲ. ಯಾರಿಗೂ ಕೇರ್ ಮಾಡದೇ ತಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುತ್ತಾರೆ. ಅದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗುತ್ತದೆ ಎಂಬುದು ಗೊತ್ತಿದ್ದರೂ ಕೂಡ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/varsha-kaveri-comment-on-social-media-becomes-viral-and-creates-more-sensation-qksnd25"/>
        </item>
        <item>
            <title><![CDATA[50 ವರ್ಷಕ್ಕಿಂತ ಮುಂಚೆ ಗಂಡ-ಹೆಂಡ್ತಿ ನಡುವೆ ದೈಹಿಕ ಸಂಬಂಧ ಕಡಿಮೆಯಾದ್ರೆ ಆಗೋ ಸಮಸ್ಯೆ ಒಂದಾ ಎರಡಾ?]]></title>
            <link>https://kannada.asianetnews.com/relationship/if-couple-physical-relationship-decreases-what-will-happen-problems/articleshow-gu06n68</link>
            <guid isPermaLink="true">https://kannada.asianetnews.com/relationship/if-couple-physical-relationship-decreases-what-will-happen-problems/articleshow-gu06n68</guid>
            <pubDate>Mon, 13 Apr 2026 22:04:40 +0530</pubDate>
            <description><![CDATA[&lt;p&gt;Husband wife Relationship: ಗಂಡ-ಹೆಂಡತಿ ನಡುವೆ ಪ್ರೀತಿ ಕಡಿಮೆಯಾದರೆ, ಅದು ಒಟ್ಟಾರೆಯಾಗಿ ಅವರ ದಾಂಪತ್ಯದ ಮೇಲೂ ಪರಿಣಾಮ ಬೀರುತ್ತದೆ. ಒಂದು ವೇಳೆ ಅವರಿಬ್ಬರು ದೈಹಿಕವಾಗಿ ದೂರವಾದರೆ, ಅದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟೆಲ್ಲಾ ಸಮಸ್ಯೆಗಳು ಬರಬಹುದು ಎಂಬುದು ನಿಮಗೆ ತಿಳಿದಿದೆಯೇ?&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp3tx4n105d1vqs8k272bf1w,imgname-new-project--78--1776097858209.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಂಡ-ಹೆಂಡತಿ ಮಧ್ಯೆ (ಕನಿಷ್ಠ 50 ವರ್ಷ ವಯಸ್ಸಿನವರೆಗೆ) ದೈಹಿಕ ಸಂಬಂಧ ತೀರಾ ಕಡಿಮೆಯಾದರೆ ಏನಾಗುತ್ತೆ ಗೊತ್ತಾ?&lt;/p&gt;&lt;h2&gt;ಹಾಗಾದರೆ ಏನೇನು ಸಮಸ್ಯೆ ಆಗಲಿವೆ?&lt;/h2&gt;&lt;p&gt;1. ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಹೆಚ್ಚು ತಿನ್ನುವ ಅಭ್ಯಾಸ ಶುರುವಾಗಬಹುದು. ಇದಕ್ಕೂ ಅದಕ್ಕೂ ಏನು ಸಂಬಂಧ ಅಂತ ಹಲವರು ಕೇಳಬಹುದು. ಆದರೆ, ಇದರಿಂದ ಬಿಪಿ, ಫ್ಯಾಟಿ ಲಿವರ್, ಶುಗರ್, ಮತ್ತು ಹೃದಯದ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗುತ್ತದೆ.&lt;/p&gt;&lt;p&gt;2. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕೂಡ ದೊಡ್ಡದಾಗಿ, ಕೊನೆಗೆ ಡೈವೋರ್ಸ್&zwnj;ವರೆಗೆ ಹೋಗಬಹುದು. ಹೆಚ್ಚಿನ ವಿಚ್ಛೇದನ ಪ್ರಕರಣಗಳಿಗೆ ದಾಂಪತ್ಯದಲ್ಲಿ ಸಖ್ಯತೆ ಇಲ್ಲದಿರುವುದೇ ಮುಖ್ಯ ಕಾರಣ. ದೈಹಿಕ ಅನ್ಯೋನ್ಯತೆ ಚೆನ್ನಾಗಿದ್ದರೆ, ಸಣ್ಣಪುಟ್ಟ ಜಗಳಗಳು ಗಾಳಿಯಲ್ಲಿ ತೂರಿಹೋಗುತ್ತವೆ. ಅದು ಇಲ್ಲದಿದ್ದರೆ, ಚಿಕ್ಕ ಸಮಸ್ಯೆಗಳೂ ಬೆಟ್ಟದಂತೆ ಕಾಣಿಸುತ್ತವೆ.&lt;/p&gt;&lt;p&gt;3. ಮಾನಸಿಕ ಒತ್ತಡ (Stress) ಹೆಚ್ಚಾಗುತ್ತದೆ.&lt;/p&gt;&lt;p&gt;4. ದೇಹದ ರೋಗನಿರೋಧಕ ಶಕ್ತಿ (Immunity) ದುರ್ಬಲವಾಗುತ್ತದೆ.&lt;/p&gt;&lt;p&gt;5. ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ.&lt;/p&gt;&lt;p&gt;6. ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.&lt;/p&gt;&lt;p&gt;ಮದುವೆಯೇ ಬೇಡ ಎನ್ನುವವರನ್ನು ದೇವರು ಕೂಡ ಕಾಪಾಡಲು ಸಾಧ್ಯವಿಲ್ಲ. ಇದು ಪ್ರಕೃತಿಯ ನಿಯಮ, ಮನುಷ್ಯ ಅದನ್ನು ಪಾಲಿಸಲೇಬೇಕು. (ಲಕ್ಷಕ್ಕೆ ಒಬ್ಬಿಬ್ಬರಿಗೆ ಇದು ಅನ್ವಯಿಸದೇ ಇರಬಹುದು).&lt;/p&gt;&lt;p&gt;ಇಲ್ಲವಾದರೆ, ಜೀವನದಲ್ಲಿ ಎಲ್ಲವೂ ಏರುಪೇರಾಗುವುದು ಗ್ಯಾರಂಟಿ!&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/relationship/if-couple-physical-relationship-decreases-what-will-happen-problems/articleshow-gu06n68"/>
        </item>
        <item>
            <title><![CDATA[ತೆರೆಯ ಮೇಲಿನ ಆ ಸ್ಟಾರ್‌ ನಟರಿಗೆ ತೆರೆಯ ಹಿಂದೆ ಧ್ವನಿ ನೀಡಿದ್ದು ಇವರು? ಈ ಸೀಕ್ರೆಟ್ ಬಹುತೇಕರಿಗೆ ಗೊತ್ತಿಲ್ಲ!]]></title>
            <link>https://kannada.asianetnews.com/sandalwood/these-are-the-dubbing-artists-who-gave-their-voice-to-particular-actors-in-kannada-movies/articleshow-2ifuibw</link>
            <guid isPermaLink="true">https://kannada.asianetnews.com/sandalwood/these-are-the-dubbing-artists-who-gave-their-voice-to-particular-actors-in-kannada-movies/articleshow-2ifuibw</guid>
            <pubDate>Mon, 13 Apr 2026 17:07:21 +0530</pubDate>
            <description><![CDATA[&lt;p&gt;ಹಲವಾರು ಚಿತ್ರಗಳಲ್ಲಿ ನಟಿಸಿದ ಕಲಾವಿದರು ಬೇರೆ ಹಾಗೂ ಮಾತಿನ ಧ್ವನಿ ಬೇರೆಯೇ ಆಗಿರುತ್ತದೆ. ಇದು ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲ, ಬಹುತೇಕ ಎಲ್ಲಾ ಭಾಷೆಗಳ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿರುವ ವಿಷಯ. ಆದರೆ, ಯಾವ ನಟನಟಿಯರಿಗೆ ಧ್ವನಿ ಕೊಟ್ಟಿದ್ದು ಯಾರು ಎಂಬ ಸಂಗತಿ ಹಲವು ಪ್ರೇಕ್ಷಕರಿಗೆ ತಿಳಿದಿರುವುದಿಲ್ಲ. ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp39k4x02j6nqc8mzd12p4ax,imgname-rajesh-krishnan-dileep-raj-srinivas-prabhu-1776079704992.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡದ ಈ ಸಿನಿಮಾ ನಟರಿಗೆ, ಯಾರಿಗೆ ಯಾರು?&lt;/strong&gt;&lt;/p&gt;&lt;p&gt;ಸಿನಿಮಾಗಳಲ್ಲಿ ನಟನಟಿಯರು ತಮ್ಮ ಧ್ವನಿಯನ್ನೇ ಡಬ್ಬಿಂಗ್&zwnj; ಮಾಡುವಾಗ ಬಳಸುತ್ತಾರೆ ಎಂದೇನಿಲ್ಲ ಎಂಬ ಸಂಗತಿ ಹಲವರಿಗೆ ಗೊತ್ತಿರಬಹುದು. ಬಹಳಷ್ಟು ನಟರು ಶೂಟಿಂಗ್ ಬಳಿಕ ಸ್ವತಃ ತಾವೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಾರೆ. ಆದರೆ, ಹಲವು ಪರಭಾಷೆಗಳ ನಟರು ಹಾಗೂ ಕೆಲವೊಮ್ಮೆ ಸ್ವಭಾಷಾ ನಟರೂ ಕೂಡ ಬೇರೆಬೇರೆ ಅನಿವಾರ್ಯ ಕಾರಣಗಳಿಂದ ತಮ್ಮ ಪಾತ್ರಕ್ಕೆ ಬೇರೆಯವರಿಂದ ಧ್ವನಿ ಕೊಡಿಸುತ್ತಾರೆ.&lt;/p&gt;&lt;p&gt;ಸಿನಿಮಾಗಳಲ್ಲಿ ನಟ ಅಥವಾ ನಟಿಯರ ಪಾತ್ರಕ್ಕೆ ಅವರದೇ ಧ್ವನಿ ಮ್ಯಾಚ್ ಆಗುತ್ತಾ ಅಥವಾ ಬೇರೆಯವರಿಂದ ಮಾಡಿಸೋದು ಒಳ್ಳೆಯದಾ ಅಂತ ಸಾಕಷ್ಟು ಬಾರಿ ಆಯಾ ಚಿತ್ರದ ನಿರ್ದೇಶಕರು ನಿರ್ಧಾರ ಮಾಡುತ್ತಾರೆ. ಕೆಲವೊಂದು ಪಾತ್ರಕ್ಕೆ ನಿರ್ಧಿಷ್ಟ ಕ್ವಾಲಿಟಿಯ ಧ್ವನಿ, ರಫ್ ಅಥವಾ ಸಾಫ್ಟ್, ಅಥವಾ ಕೆಲವೊಮ್ಮೆ ವಿಭಿನ್ನ ರೀತಿಯ ಅಗತ್ಯತೆ ಇರುವ ಕಾರಣಕ್ಕೆ ಸಾಕಷ್ಟು ಸಿನಿಮಾಗಳಲ್ಲಿ ನಟನಟಿಯರ ಪಾತ್ರದ ಸಂಭಾಷಣೆಗೆ ಡಬ್ಬಿಂಗ್ ಕಲಾವಿದರು ತಮ್ಮ ಧ್ವನಿ ನೀಡುವ ಮೂಲಕ ಆಯಾ ಪಾತ್ರಕ್ಕೆ ಜೀವ ತುಂಬಿರುತ್ತಾರೆ.&lt;/p&gt;&lt;h2&gt;ಕಲಾವಿದರು ಬೇರೆ, ಧ್ವನಿ ಬೇರೆ&lt;/h2&gt;&lt;p&gt;ಹಲವಾರು ಚಿತ್ರಗಳಲ್ಲಿ ನಟಿಸಿದ ಕಲಾವಿದರು ಬೇರೆ ಹಾಗೂ ಮಾತಿನ ಧ್ವನಿ ಬೇರೆಯೇ ಆಗಿರುತ್ತದೆ. ಇದು ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲ, ಬಹುತೇಕ ಎಲ್ಲಾ ಭಾಷೆಗಳ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿರುವ ವಿಷಯ. ಆದರೆ, ಯಾವ ನಟನಟಿಯರಿಗೆ ಧ್ವನಿ ಕೊಟ್ಟಿದ್ದು ಯಾರು ಎಂಬ ಸಂಗತಿ ಹಲವು ಪ್ರೇಕ್ಷಕರಿಗೆ ತಿಳಿದಿರುವುದಿಲ್ಲ. ಅದನ್ನು ತಿಳಿಸುವ ಪ್ರಯತ್ನದಲ್ಲಿ ಈ ಸ್ಟೋರಿಯಲ್ಲಿ ಕೆಲವು ನಟರು ಹಾಗೂ ಕಂಠದಾನ ಮಾಡಿರುವವರ ಹೆಸರುಗಳನ್ನು ಬರೆಯಲಾಗಿದೆ ನೋಡಿ..&lt;/p&gt;&lt;p&gt;ಹಾಗಿದ್ದರೆ ಕನ್ನಡದ ಈ ಕೆಲವು ನಟರು ಹಾಗೂ ಪರಭಾಷೆಯ ಕೆಲವು ನಟರಿಗೆ ಕಂಠದಾನ ಮಾಡಿರುವವರು ಯಾರು ಎಂಬ ಲಿಸ್ಟ್ ಇಲ್ಲಿದೆ ನೋಡಿ..&lt;/p&gt;&lt;p&gt;ರಾಜೇಶ್ ಕೃಷ್ಣನ್- ನಟ ಧ್ಯಾನ್ ಅವರಿಗೆ 'ನನ್ನ ಪ್ರೀತಿಯ ಹುಡುಗಿ, ಮೊನಾಲಿಸಾ ಹಾಗೂ ಅಮೃತಧಾರೆ ಸಿನಿಮಾಗಳಿಗೆ ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಧ್ವನಿ ನೀಡಿದ್ದಾರೆ.&lt;/p&gt;&lt;p&gt;ಶ್ರೀನಿವಾಸ್ ಪ್ರಭು-ರವಿಚಂದ್ರನ್ ನಟನೆಯ 20ಕ್ಕೂ ಹೆಚ್ಚು ಸಿನಿಮಾಗಳಿಗೆ ನಟ, ಕಲಾವಿದ ಶ್ರೀನಿವಾಸ್ ಪ್ರಭು ಅವರು ಧ್ವನಿ ನೀಡಿದ್ದಾರೆ.&lt;/p&gt;&lt;p&gt;ರಾಜೇಶ್ ರಾಮಚಂದ್ರ- ನಟ ರಘುವೀರ್ ಅವರ ಬಹುತೇಕ ಎಲ್ಲಾ ಸಿನಿಮಾಗಳಿಗೆ ಧ್ವನಿ ನೀಡಿದವರು ರಾಜೇಶ್ ರಾಮಚಂದ್ರ.&lt;/p&gt;&lt;p&gt;ತರುಣ್- ನಟ ತರುಣ್ ನಟನೆಯ ಬಹುತೇಕ ಸಿನಿಮಾಗಳಿಗೆ ಧ್ವನಿ ನೀಡಿದವರು ನಟ ದಿಲೀಪ್ ರಾಜ್.&lt;/p&gt;&lt;p&gt;ಚೇತನ್ (ಅಹಿಂಸಾ)- 'ಆ ದಿನಗಳು' ಖ್ಯಾತಿಯ ನಟ ಚೇತನ್ ಅವರ ಬಹಳಷ್ಟು ಸಿನಿಮಾಗಳಿಗೆ ಧ್ವನಿ ನೀಡಿದವರು ದಿಲೀಪ್ ರಾಜ್.&lt;/p&gt;&lt;h3&gt;'ಶ್' ಚಿತ್ರದ ನಟ ಕುಮಾರ್ ಗೋವಿಂದ್&lt;/h3&gt;&lt;p&gt;ಕುಮಾರ್ ಗೋವಿಂದ್- 'ಶ್' ಚಿತ್ರದ ನಟ ಕುಮಾರ್ ಗೋವಿಂದ್ ಅವರ ಸಿನಿಮಾಗಳಿಗೆ ಧ್ವನಿ ನೀಡಿದವರು ಖ್ಯಾತ ಕಂಠದಾನ ಕಲಾವಿದ ಸುದರ್ಶನ್. ಈ ಸುದರ್ಶನ್ ಅವರು ಅನಂತ್&zwnj; ನಾಗ್ ಹಾಗೂ ಸಾಯಿಕುಮಾರ್ ಅವರ ಹಲವು ಸಿನಿಮಾಗಳಿಗೆ ಕೂಡ ಧ್ವನಿ ನೀಡಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ತೆರೆಯ ಮೇಲೆ ಪ್ರೇಕ್ಷಕರು ನೋಡುವ ಸಿನಿಮಾದಲ್ಲಿ ಅವರಿಗೆ ಗೊತ್ತಿಲ್ಲದ ಹಲವಾರು ಸಂಗತಿಗಳು ಇರುತ್ತವೆ. ಇನ್ನೂ ಹೆಚ್ಚಿನ ಸಂಗತಿಗಳನ್ನು ನಮ್ಮ ರೀಡರ್ಸ್&zwnj;ಗೆ ಕೊಡುವ ಪ್ರಯತ್ನ ನಮ್ಮಿಂದ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ದಿವಂಗತ ಮಹಾನ್ ಗಾಯಕ ಎಸ್&zwnj;ಪಿ ಬಾಲಸುಬ್ರಹ್ಮಣ್ಯಂ ಅವರೂ ಕೂಡ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಹಲವಾರೂ ಸೂಪರ್ ಸ್ಟಾರ್ ನಟರಿಗೆ ಧ್ವನಿ ನೀಡಿದ್ದಾರೆ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/these-are-the-dubbing-artists-who-gave-their-voice-to-particular-actors-in-kannada-movies/articleshow-2ifuibw"/>
        </item>
        <item>
            <title><![CDATA[Forbidden Places: ಭಾರತದಲ್ಲಿವೆ 5 ನಿಗೂಢ ಸ್ಥಳಗಳು.. ಕೋಟಿ ಕೊಟ್ಟರೂ ಇಲ್ಲಿಗೆ ಹೋಗೋಕೆ ಆಗಲ್ಲ.. ಯಾಕೆ?]]></title>
            <link>https://kannada.asianetnews.com/gallery/travel/five-restricted-places-in-india-why-you-cannot-visit-them-here-is-a-list-3kg1gxh</link>
            <guid isPermaLink="true">https://kannada.asianetnews.com/gallery/travel/five-restricted-places-in-india-why-you-cannot-visit-them-here-is-a-list-3kg1gxh</guid>
            <pubDate>Thu, 09 Apr 2026 22:55:29 +0530</pubDate>
            <description><![CDATA[&lt;p&gt;Forbidden Places in India: ದುಡ್ಡಿದ್ದರೆ ಏನು ಬೇಕಿದ್ರೂ ಮಾಡಬಹುದು ಅಂತಾರೆ. ಭಾರತದಲ್ಲಿ ಎಷ್ಟೇ ಕೋಟಿ ರೂಪಾಯಿ ಕೊಟ್ಟರೂ ಜನರಿಗೆ ಪ್ರವೇಶಿಸಲಾಗದ 5 ನಿಷೇಧಿತ ಸ್ಥಳಗಳಿವೆ. ಈ ನಿಗೂಢ ತಾಣಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ವಿವರವಾಗಿ ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kns1zynpbcpa8wn6eagx1301,imgname-india-restrict-1775736191670.jpg" type="image/jpeg" height="390" width="690"/>
            <content:encoded><![CDATA[&lt;p&gt;Forbidden Places in India: ದುಡ್ಡಿದ್ದರೆ ಏನು ಬೇಕಿದ್ರೂ ಮಾಡಬಹುದು ಅಂತಾರೆ. ಭಾರತದಲ್ಲಿ ಎಷ್ಟೇ ಕೋಟಿ ರೂಪಾಯಿ ಕೊಟ್ಟರೂ ಜನರಿಗೆ ಪ್ರವೇಶಿಸಲಾಗದ 5 ನಿಷೇಧಿತ ಸ್ಥಳಗಳಿವೆ. ಈ ನಿಗೂಢ ತಾಣಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ವಿವರವಾಗಿ ನೋಡೋಣ.&lt;/p&gt;&lt;img&gt;&lt;p&gt;ನಮ್ಮ ಭಾರತ ಹಲವು ಭಾಷೆ, ಧರ್ಮ, ಸಂಸ್ಕೃತಿಗಳ ಸಂಗಮ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಂದರ ಪ್ರವಾಸಿ ತಾಣಗಳಿವೆ. ಆದರೆ, ಕೋಟಿಗಟ್ಟಲೆ ಹಣ ಕೊಟ್ಟರೂ ಪ್ರವೇಶಿಸಲಾಗದ 5 ನಿಷೇಧಿತ ಸ್ಥಳಗಳೂ ಇಲ್ಲಿವೆ.&amp;nbsp;&lt;/p&gt;&lt;img&gt;&lt;p&gt;ಅಂಡಮಾನ್ ಮತ್ತು ನಿಕೋಬಾರ್&zwnj;ನ ಉತ್ತರ ಸೆಂಟಿನೆಲ್ ದ್ವೀಪ ಇದು. ಇಲ್ಲಿ ಸೆಂಟಿನೆಲೀಸ್ ಎಂಬ ಬುಡಕಟ್ಟು ಜನಾಂಗ ವಾಸಿಸುತ್ತಿದೆ. ಸುಮಾರು 60 ಚದರ ಕಿ.ಮೀ ವಿಸ್ತೀರ್ಣದ ಈ ದ್ವೀಪಕ್ಕೆ ಇವರೇ ರಾಜರು. ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ ಇವರು ಬದುಕುತ್ತಾರೆ.&amp;nbsp;&lt;/p&gt;&lt;p&gt;ಈ ಜನರನ್ನು ರಕ್ಷಿಸಲು ಮತ್ತು ಅವರಿಗೆ ಸೋಂಕು ತಗುಲದಂತೆ ತಡೆಯಲು ಭಾರತ ಸರ್ಕಾರ ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ. 2018ರಲ್ಲಿ ಇಲ್ಲಿಗೆ ಹೋದ ಅಮೆರಿಕದ 26 ವರ್ಷದ ಜಾನ್ ಚೌ ಎಂಬುವವರನ್ನು ಈ ಬುಡಕಟ್ಟು ಜನಾಂಗದವರು ಕೊಂದಿದ್ದರು.&lt;/p&gt;&lt;img&gt;&lt;p&gt;ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಪ್ಯಾಂಗೊಂಗ್ ತ್ಸೋ ಸರೋವರವಿದೆ. ಲೇಹ್&zwnj;ನಿಂದ ಚೀನಾ ಗಡಿಯವರೆಗೆ ಇದು ಹರಡಿಕೊಂಡಿದೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಸುಂದರ ಸರೋವರವನ್ನು ನೋಡಲು ಎಲ್ಲರಿಗೂ ಅನುಮತಿ ಇಲ್ಲ.&amp;nbsp;&lt;/p&gt;&lt;p&gt;ಇದರ ಕೆಲವು ಭಾಗಗಳು ಚೀನಾ ಗಡಿಗೆ ತೀರಾ ಹತ್ತಿರದಲ್ಲಿರುವುದರಿಂದ, ಭದ್ರತಾ ಕಾರಣಗಳಿಗಾಗಿ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.&lt;/p&gt;&lt;img&gt;&lt;p&gt;ಮುಂಬೈನಲ್ಲಿರುವ ಬಾಬಾ ಅಣು ಸಂಶೋಧನಾ ಕೇಂದ್ರ (BARC) ಭಾರತದ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರವಾಗಿದೆ. ಇದು ಪರಮಾಣು ಶಕ್ತಿ ಇಲಾಖೆ (DAE) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.&amp;nbsp;&lt;/p&gt;&lt;p&gt;ಇಲ್ಲಿ ನಡೆಯುವ ಸಂಶೋಧನೆಗಳು ಅತ್ಯಂತ ರಹಸ್ಯವಾಗಿರುತ್ತವೆ. ಹೀಗಾಗಿ, ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕರಿಗೆ ಇಲ್ಲಿ ಪ್ರವೇಶವಿಲ್ಲ. ಪೂರ್ವಾನುಮತಿ ಪಡೆದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.&lt;/p&gt;&lt;img&gt;&lt;p&gt;ರಾಜಸ್ಥಾನದಲ್ಲಿರುವ ಭಾನ್&zwnj;ಗಢ ಕೋಟೆಗೆ ಹಗಲಿನಲ್ಲಿ ಪ್ರವಾಸಿಗರು ಹೋಗಬಹುದು. ಆದರೆ, ರಾತ್ರಿ ವೇಳೆ ಇಲ್ಲಿಗೆ ಹೋಗುವುದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕೃತವಾಗಿ ನಿಷೇಧಿಸಿದೆ. ಇಲ್ಲಿ ದೆವ್ವಗಳ ಕಾಟವಿದೆ, ರಾತ್ರಿ ಹೋದವರು ವಾಪಸ್ ಬಂದಿಲ್ಲ ಎಂಬ ಕಥೆಗಳು ಇಲ್ಲಿ ಪ್ರಚಲಿತದಲ್ಲಿವೆ.&amp;nbsp;&lt;/p&gt;&lt;p&gt;ಇದಲ್ಲದೆ, ಲಡಾಖ್ ಗಡಿಯಲ್ಲಿರುವ ಅಕ್ಸಾಯ್ ಚಿನ್ ಕೂಡ ನಿಷೇಧಿತ ಪ್ರದೇಶ. ಇದು ಭಾರತ ಮತ್ತು ಚೀನಾ ನಡುವಿನ ವಿವಾದಿತ ಗಡಿ ಪ್ರದೇಶವಾಗಿದ್ದು, ಸೇನಾ ವಲಯವಾಗಿರುವುದರಿಂದ ಸಾರ್ವಜನಿಕರಿಗೆ ಪ್ರವೇಶವಿಲ್ಲ.&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/travel/five-restricted-places-in-india-why-you-cannot-visit-them-here-is-a-list-3kg1gxh"/>
        </item>
        <item>
            <title><![CDATA[ಸುಳ್ಳಿನ ವಿರುದ್ಧ ಸಾಕ್ಷಿ ನುಡಿಯುತ್ತಿದೆ ಈ ವೈರಲ್ ದೃಶ್ಯ; ಬಾಲಿವುಡ್ ಸ್ಟಾರ್‌ ನಟಿ ಬಂಡವಾಳ ಬಯಲು; 'ಓಂ ಶಾಂತಿ ಓಂ']]></title>
            <link>https://kannada.asianetnews.com/cine-world/deepika-padukone-debut-kannada-movie-aishwarya-one-scene-becomes-viral-in-social-media/articleshow-5kg4kgy</link>
            <guid isPermaLink="true">https://kannada.asianetnews.com/cine-world/deepika-padukone-debut-kannada-movie-aishwarya-one-scene-becomes-viral-in-social-media/articleshow-5kg4kgy</guid>
            <pubDate>Thu, 09 Apr 2026 12:06:31 +0530</pubDate>
            <description><![CDATA[&lt;p&gt;ಅಚ್ಚರಿ ಎಂಬಂತೆ ನಟಿ ದೀಪಿಕಾ ಪಡುಕೋಣೆಯವರು ಯಾವುದೇ ಸಂದರ್ಶನದಲ್ಲಿ ಮಾತನ್ನಾಡುವಾಗ ತಮ್ಮ ಮೊದಲ ಸಿನಿಮಾ ಕನ್ನಡ ಎಂದು ಹೇಳುವ ಬದಲು ಹಿಂದಿಯ 'ಓಂ ಶಾಂತಿ ಓಂ' ಎಂದೇ ಹೇಳುತ್ತಾರೆ. ಕನ್ನಡಿಗರಿಗೆ ದೀಪಿಕಾ ಮೇಲೆ ಅಭಿಮಾನ ಇದ್ದರೂ ಈ ನಟಿಗೆ ಮಾತ್ರ ಅದೇನೋ ಹೇಳುವಂತೆ ಕನ್ನಡದ ಮೇಲೆ ಅಲರ್ಜಿ ಎನ್ನಬಹುದು. ಅದೇನೇ ಇದ್ದರೂ ನಿಜವಾದ ಇತಿಹಾಸ ಎಂದಿಗೂ ಬದಲಾಗೋದಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf7tcjg0cjhptpfsttr8cjma,imgname-the-raja-saab-prabhas-richest-actresses-2-1768715340288.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸ್ಯಾಂಡಲ್&zwnj;ವುಡ್&zwnj;ನಿಂದ ಶುರುವಾದ &lsquo;ಐಶ್ವರ್ಯ&rsquo; ಪಯಣ!&lt;/strong&gt;&lt;/p&gt;&lt;p&gt;ಇಂದು ದೀಪಿಕಾ ಪಡುಕೋಣೆ (Deepika Padukone) ಎಂದರೆ ಕೇವಲ ಬಾಲಿವುಡ್ ನಟಿ ಮಾತ್ರವಲ್ಲ, ಇಡೀ ವಿಶ್ವವೇ ಮೆಚ್ಚುವ ಗ್ಲೋಬಲ್ ಐಕಾನ್! ಹಾಲಿವುಡ್&zwnj;ನಿಂದ ಹಿಡಿದು ಕಾನ್ ಫಿಲ್ಮ್ ಫೆಸ್ಟಿವಲ್&zwnj;ವರೆಗೆ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಈ 'ಡಿಂಪಿ' ಸುಂದರಿಯ ಸಿನಿ ಪಯಣದ ಬೇರುಗಳು ಇರುವುದು ನಮ್ಮ ಹೆಮ್ಮೆಯ ಕನ್ನಡ ನೆಲದಲ್ಲಿ ಎಂಬುದು ವಿಶೇಷ. ಹೌದು, ದೀಪಿಕಾ ಪಡುಕೋಣೆ ಎಂಬ ಪ್ರತಿಭೆಯನ್ನು ಬೆಳ್ಳಿತೆರೆಗೆ ಮೊದಲು ಪರಿಚಯಿಸಿದ್ದು ನಮ್ಮ ಸ್ಯಾಂಡಲ್&zwnj;ವುಡ್!&lt;/p&gt;&lt;p&gt;ರಿಯಲ್ ಸ್ಟಾರ್ ಜೊತೆಗಿನ ಆ &lsquo;ಕ್ರೇಜಿ&rsquo; ಆರಂಭ!&lt;/p&gt;&lt;p&gt;ವರ್ಷ 2006; ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದ್ದ ಸಮಯ. ಆಗ ತಾನೇ ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಿದ್ದ ಬೆಂಗಳೂರಿನ ಈ ಹುಡುಗಿ, 'ರಿಯಲ್ ಸ್ಟಾರ್' ಉಪೇಂದ್ರ ಅವರಿಗೆ ಜೋಡಿಯಾಗಿ 'ಐಶ್ವರ್ಯಾ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ದೀಪಿಕಾ ಅವರಲ್ಲಿದ್ದ ಗ್ಲಾಮರ್ ಮತ್ತು ನಟನಾ ಸಾಮರ್ಥ್ಯವನ್ನು ಗುರುತಿಸಿ ಈ ಚಿತ್ರದ ಮೂಲಕ ಲಾಂಚ್ ಮಾಡಿದ್ದರು. ಉಪ್ಪಿ ಅವರ ವಿಭಿನ್ನ ಮ್ಯಾನರಿಸಂ ಮತ್ತು ದೀಪಿಕಾ ಅವರ ಕಣ್ಣುಸೆಳೆಯುವ ಸೌಂದರ್ಯಕ್ಕೆ ಕನ್ನಡಿಗರು ಅಕ್ಷರಶಃ ಫಿದಾ ಆಗಿದ್ದರು. ಇಂದಿಗೂ 'ಐಶ್ವರ್ಯಾ' ಸಿನಿಮಾದ ಹಾಡುಗಳು ಕನ್ನಡಿಗರ ಫೇವರಿಟ್ ಲಿಸ್ಟ್&zwnj;ನಲ್ಲಿವೆ.&lt;/p&gt;&lt;h2&gt;ಬೆಂಗಳೂರಿನಿಂದ ಬಾಲಿವುಡ್&zwnj;ಗೆ ಹಾರಿದ ಪಾರಿಜಾತ!&lt;/h2&gt;&lt;p&gt;ಕನ್ನಡದಲ್ಲಿ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡ ದೀಪಿಕಾ ಅವರಿಗೆ ಬಾಲಿವುಡ್&zwnj;ನ ಮಾಯಾನಗರಿ ಕೆಂಪು ಹಾಸಿನ ಸ್ವಾಗತ ಕೋರಿತು. ಅದು ಅಂತಿಂಥಾ ಆಫರ್ ಅಲ್ಲ, ಬಾಲಿವುಡ್ ಬಾದ್&zwnj;ಶಾ ಶಾರುಖ್ ಖಾನ್ ಅವರ 'ಓಂ ಶಾಂತಿ ಓಂ' ಚಿತ್ರದಲ್ಲಿ ನಟಿಸುವ ಬೃಹತ್ ಅವಕಾಶ! ಫರಾ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಶಾಂತಿಪ್ರಿಯಾ ಎಂಬ ಪಾತ್ರದಲ್ಲಿ ದೀಪಿಕಾ ನೀಡಿದ ಎಂಟ್ರಿ ಇಂದಿಗೂ ಭಾರತೀಯ ಚಿತ್ರರಂಗದ ಬೆಸ್ಟ್ ಡೆಬ್ಯೂಗಳಲ್ಲಿ ಒಂದು. ಶಾರುಖ್ ಪಕ್ಕದಲ್ಲಿ ನಟಿಸುತ್ತಿದ್ದರೂ ದೀಪಿಕಾ ಎಲ್ಲೂ ನರ್ವಸ್ ಆಗದೆ, ಅದ್ಭುತ ನಟನೆಯ ಮೂಲಕ ಓವರ್ ನೈಟ್ ಸ್ಟಾರ್ ಆಗಿಬಿಟ್ಟರು.&lt;/p&gt;&lt;h3&gt;ಸಕ್ಸಸ್ ಮೆಟ್ಟಿಲೇರಿದ ನಗುಮುಖದ ಸುಂದರಿ&lt;/h3&gt;&lt;p&gt;'ಓಂ ಶಾಂತಿ ಓಂ' ಸೂಪರ್ ಹಿಟ್ ಆಗುತ್ತಿದ್ದಂತೆ ದೀಪಿಕಾ ಅವರ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದ ಶುರುವಾದ ಅವರ ಗೆಲುವಿನ ಓಟ ಇಂದಿಗೂ ನಿಂತಿಲ್ಲ. ರಣಬೀರ್ ಕಪೂರ್, ರಣವೀರ್ ಸಿಂಗ್, ಅಮಿತಾಬ್ ಬಚ್ಚನ್ ಅಂತಹ ದೈತ್ಯ ನಟರ ಜೊತೆ ನಟಿಸಿ ನಂಬರ್ ಒನ್ ಸ್ಥಾನಕ್ಕೆ ಏರಿದರು. 'ಪದ್ಮಾವತ್', 'ಬಾಜಿರಾವ್ ಮಸ್ತಾನಿ'ಯಂತಹ ಸಿನಿಮಾಗಳ ಮೂಲಕ ರಾಣಿಯಂತೆ ಮೆರೆದರು.&lt;/p&gt;&lt;p&gt;ಆದರೆ, ಕನ್ನಡಿಗರಿಗೆ ಮಾತ್ರ ದೀಪಿಕಾ ಎಂದಿಗೂ ನಮ್ಮೂರಿನ ಹುಡುಗಿ. ಆಕೆ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ, ಆಕೆಯ ಮೊದಲ ಸಿನಿಮಾ &lsquo;ಕನ್ನಡ&rsquo; ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಸ್ಯಾಂಡಲ್&zwnj;ವುಡ್ ಎಂಬ ಲಕ್ಕಿ ಫ್ಲಾಟ್&zwnj;ಫಾರ್ಮ್&zwnj;ನಿಂದ ಶುರುವಾದ ದೀಪಿಕಾ ಅವರ ಈ 'ಐಶ್ವರ್ಯ'ದ ಹಾದಿ, ಇಂದಿಗೂ ಯುವ ನಟಿಯರಿಗೆ ದೊಡ್ಡ ಸ್ಫೂರ್ತಿ!&lt;/p&gt;&lt;p&gt;ಆದರೆ, ಅಚ್ಚರಿ ಎಂಬಂತೆ ನಟಿ ದೀಪಿಕಾ ಪಡುಕೋಣೆಯವರು ಯಾವುದೇ ಸಂದರ್ಶನದಲ್ಲಿ ಮಾತನ್ನಾಡುವಾಗ ತಮ್ಮ ಮೊದಲ ಸಿನಿಮಾ ಕನ್ನಡ ಎಂದು ಹೇಳುವ ಬದಲು ಹಿಂದಿಯ 'ಓಂ ಶಾಂತಿ ಓಂ' ಎಂದೇ ಹೇಳುತ್ತಾರೆ. ಕನ್ನಡಿಗರಿಗೆ ದೀಪಿಕಾ ಮೇಲೆ ಅಭಿಮಾನ ಇದ್ದರೂ ಈ ನಟಿಗೆ ಮಾತ್ರ ಅದೇನೋ ಹೇಳುವಂತೆ ಕನ್ನಡದ ಮೇಲೆ ಅಲರ್ಜಿ ಎನ್ನಬಹುದು. ಅದೇನೇ ಇದ್ದರೂ ನಿಜವಾದ ಇತಿಹಾಸ ಎಂದಿಗೂ ಬದಲಾಗೋದಿಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾಗಲಲ್ಲಿ ದೀಪಿಕಾ ನಟನೆಯ 'ಐಶ್ವರ್ಯಾ' ಚಿತ್ರದ ಒಂದು ದೃಶ್ಯ ಆಕೆ ಕನ್ನಡದಲ್ಲಿ ನಟಿಸಿರುವ ಬಗ್ಗೆ ಸಾಕ್ಷಿ ನುಡಿಯುವಂತೆ ಓಡಾಡುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Candid Kannada (@candidkannada)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/deepika-padukone-debut-kannada-movie-aishwarya-one-scene-becomes-viral-in-social-media/articleshow-5kg4kgy"/>
        </item>
        <item>
            <title><![CDATA[ಜೀ ಕನ್ನಡಕ್ಕೆ ರಕ್ಷಿತಾ ಪ್ರೇಮ್ ಬೈ ಬೈ ಹೇಳಿದ್ದೇಕೆ? ಕಡ್ಡಿ ಮುರಿದಂತೆ 'ಒಳಗಿನ ಗುಟ್ಟು' ಬಿಚ್ಚಿಟ್ಟ ಸ್ಟಾರ್ ನಟಿ!]]></title>
            <link>https://kannada.asianetnews.com/sandalwood/actress-rakshitha-prem-has-opened-up-about-the-true-reasons-for-her-exit-from-zee-kannada-after-a-long-association/articleshow-9faqx0g</link>
            <guid isPermaLink="true">https://kannada.asianetnews.com/sandalwood/actress-rakshitha-prem-has-opened-up-about-the-true-reasons-for-her-exit-from-zee-kannada-after-a-long-association/articleshow-9faqx0g</guid>
            <pubDate>Mon, 13 Apr 2026 15:33:19 +0530</pubDate>
            <description><![CDATA[&lt;p&gt;ಕಳೆದ ವರ್ಷ ಅವರು ಇದ್ದಕ್ಕಿದ್ದಂತೆ ವಾಹಿನಿಯಿಂದ ಹೊರಬಂದಾಗ ಅಭಿಮಾನಿಗಳಿಗೆ ಅಕ್ಷರಶಃ ಶಾಕ್ ಆಗಿತ್ತು. &quot;ನಮ್ಮ ನೆಚ್ಚಿನ ಜಡ್ಜ್ ರಕ್ಷಿತಾ ಮ್ಯಾಮ್ ಎಲ್ಲಿ ಹೋದ್ರು?&quot; ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಈಗ ಆ ಎಲ್ಲಾ ಕುತೂಹಲಗಳಿಗೆ ಸ್ವತಃ ರಕ್ಷಿತಾ ಅವರೇ ನೇರ ಹಾಗೂ ದಿಟ್ಟ ಉತ್ತರ ನೀಡಿದ್ದಾರೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp3420nykp3mxw0zrk7zbq3m,imgname-rakshitha-prem-1776073900734.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜೀ ಕನ್ನಡಕ್ಕೆ ರಕ್ಷಿತಾ ಪ್ರೇಮ್ ಬೈ ಬೈ ಹೇಳಿದ್ದೇಕೆ? ಮೌನ ಮುರಿದ 'ಕ್ರೇಜಿ ಕ್ವೀನ್': ಒಳಗಿನ ಗುಟ್ಟು ಬಿಚ್ಚಿಟ್ಟ ರಕ್ಷಿತಾ!&lt;/strong&gt;&lt;/p&gt;&lt;p&gt;ಕನ್ನಡ ಕಿರುತೆರೆಯ ಇತಿಹಾಸದಲ್ಲಿ 'ಜೀ ಕನ್ನಡ' ವಾಹಿನಿ ಮತ್ತು ನಟಿ ರಕ್ಷಿತಾ ಪ್ರೇಮ್ (Rakshitha Prem) ನಡುವಿನ ನಂಟು ಬಹಳ ದೊಡ್ಡದು. ಕಳೆದ ಒಂಬತ್ತು ವರ್ಷಗಳಿಂದ 'ಕಾಮಿಡಿ ಕಿಲಾಡಿಗಳು' ಮತ್ತು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಅಂತಹ ಸೂಪರ್ ಹಿಟ್ ರಿಯಾಲಿಟಿ ಶೋಗಳ ಜಡ್ಜ್ ಸೀಟಿನಲ್ಲಿ ಕುಳಿತು, ತಮ್ಮದೇ ಆದ ಮ್ಯಾನರಿಸಂ ಮೂಲಕ ಮನೆಮಾತಾಗಿದ್ದವರು ರಕ್ಷಿತಾ.&lt;/p&gt;&lt;p&gt;ಆದರೆ, ಕಳೆದ ವರ್ಷ ಅವರು ಇದ್ದಕ್ಕಿದ್ದಂತೆ ವಾಹಿನಿಯಿಂದ ಹೊರಬಂದಾಗ ಅಭಿಮಾನಿಗಳಿಗೆ ಅಕ್ಷರಶಃ ಶಾಕ್ ಆಗಿತ್ತು. &quot;ನಮ್ಮ ನೆಚ್ಚಿನ ಜಡ್ಜ್ ರಕ್ಷಿತಾ ಮ್ಯಾಮ್ ಎಲ್ಲಿ ಹೋದ್ರು?&quot; ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಈಗ ಆ ಎಲ್ಲಾ ಕುತೂಹಲಗಳಿಗೆ ಸ್ವತಃ ರಕ್ಷಿತಾ ಅವರೇ ನೇರ ಹಾಗೂ ದಿಟ್ಟ ಉತ್ತರ ನೀಡಿದ್ದಾರೆ!&lt;/p&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ 'ಬಾಂಬ್' ಸಿಡಿಸಿದ ರಕ್ಷಿತಾ!&lt;/p&gt;&lt;p&gt;ಸದಾ ಸಕ್ರಿಯವಾಗಿರುವ ರಕ್ಷಿತಾ ಇತ್ತೀಚೆಗೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅಭಿಮಾನಿಗಳೊಂದಿಗೆ 'ಪ್ರಶ್ನೋತ್ತರ' (Ask Me Anything) ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರು ತಡೆಯಲಾರದೆ, &quot;ನೀವು ಜೀ ಕನ್ನಡ ಯಾಕೆ ಬಿಟ್ಟಿರಿ? ನಿಮ್ಮನ್ನು ಅಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ&quot; ಎಂದು ಕೇಳಿಯೇ ಬಿಟ್ಟರು. ಸದಾ ನೇರ ನುಡಿಗೆ ಹೆಸರಾದ ರಕ್ಷಿತಾ, ಈ ಬಾರಿ ಯಾವುದೇ ಮುಚ್ಚುಮರೆಯಿಲ್ಲದೆ ಅಸಲಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;h2&gt;&quot;ಕೆಲವೊಮ್ಮೆ ವ್ಯಕ್ತಿಗಳು ಎಲ್ಲವನ್ನೂ ಕೆಡಿಸುತ್ತಾರೆ&quot;&lt;/h2&gt;&lt;p&gt;ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ, &quot;ನನ್ನ ಉತ್ತರ ಯಾವಾಗಲೂ ಸತ್ಯವೇ ಆಗಿರುತ್ತದೆ. ಜೀ ಕನ್ನಡ ವಾಹಿನಿಯ ಆಂತರಿಕ ತಂಡದಲ್ಲಿ (Internal Team) ಕೆಲವು ಬದಲಾವಣೆಗಳಾದವು. ದುರದೃಷ್ಟವಶಾತ್ ಆ ಹೊಸ ತಂಡದ ಜೊತೆ ಕೆಲಸ ಮಾಡಲು ನನಗೆ ಅಷ್ಟಾಗಿ ಹೊಂದಾಣಿಕೆಯಾಗಲಿಲ್ಲ. ಹೊಸಬರ ಕಾರ್ಯವೈಖರಿ ನನಗೆ ಸಮಸ್ಯೆಯಾಗಿ ಪರಿಣಮಿಸಿತು, ಹಾಗಾಗಿ ನಾನು ಅಲ್ಲಿಂದ ಹೊರಬರಲು ನಿರ್ಧರಿಸಿದೆ&quot; ಎಂದಿದ್ದಾರೆ.&lt;/p&gt;&lt;p&gt;ಇಷ್ಟಕ್ಕೇ ನಿಲ್ಲಿಸದ ರಕ್ಷಿತಾ, &quot;ಇಂದಿಗೂ ಅಲ್ಲಿರುವ ಹಲವರು ನನಗೆ ಆತ್ಮೀಯರು. ಒಂಬತ್ತು ವರ್ಷಗಳ ಸುಂದರ ನೆನಪುಗಳು ಸದಾ ನನ್ನ ಹೃದಯದಲ್ಲಿರುತ್ತವೆ. ಆದರೆ, ಕೆಲವು ವ್ಯಕ್ತಿಗಳು ಎಲ್ಲವನ್ನೂ ಹಾಳು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ. ಸದ್ಯ ನಾನು ಆ ನೆನಪುಗಳಿಂದ ಹೊರಬಂದು (Move on) ಮುಂದೆ ಸಾಗಿದ್ದೇನೆ&quot; ಎಂದು ಹೇಳುವ ಮೂಲಕ ವಾಹಿನಿಯ ಒಳಗಿನ ಕಿರಿಕ್ ಬಗ್ಗೆ ಸುಳಿವು ನೀಡಿದ್ದಾರೆ.&lt;/p&gt;&lt;h3&gt;ಕಂಫರ್ಟ್ ಝೋನ್ ಮತ್ತು ಹೊಸ ಹಾದಿ:&lt;/h3&gt;&lt;p&gt;ಇದಕ್ಕೂ ಮೊದಲು ರಕ್ಷಿತಾ ಮಾತನಾಡುತ್ತಾ, ಜೀವನದಲ್ಲಿ ಬದಲಾವಣೆ ಅನಿವಾರ್ಯ ಎಂದು ಹೇಳಿದ್ದರು. &quot;ಒಂದೇ ಕಡೆ ಒಂಬತ್ತು ವರ್ಷ ಕೆಲಸ ಮಾಡಿದ್ದೆ. ಈಗ ಆ 'ಕಮ್ಫರ್ಟ್ ಝೋನ್'ನಿಂದ ಹೊರಬಂದು ಹೊಸತನ್ನು ಪ್ರಯತ್ನಿಸುವುದು ಅಗತ್ಯವಾಗಿದೆ&quot; ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.&lt;/p&gt;&lt;p&gt;ಒಟ್ಟಾರೆಯಾಗಿ, ರಕ್ಷಿತಾ ಪ್ರೇಮ್ ಅವರ ಈ ಸ್ಫೋಟಕ ಹೇಳಿಕೆ ಈಗ ಸ್ಯಾಂಡಲ್&zwnj;ವುಡ್ ಮತ್ತು ಕಿರುತೆರೆ ಅಂಗಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಾಹಿನಿಯ ಆ ಹೊಸ ತಂಡದಲ್ಲಿ ಇದ್ದ ಆ 'ಕೆಲವು ವ್ಯಕ್ತಿಗಳು' ಯಾರು? ರಕ್ಷಿತಾ ಅವರಂತಹ ಸ್ಟಾರ್ ನಟಿಯನ್ನೇ ಹೊರಹೋಗುವಂತೆ ಮಾಡಿದ ಆ ಸಮಸ್ಯೆಗಳೇನು? ಎಂಬುದು ಈಗ ಗಾಂಧಿನಗರದ ಹಾಟ್ ಟಾಪಿಕ್. ಏನೇ ಆಗಲಿ, ರಕ್ಷಿತಾ ಅವರ 'ಅಯ್ಯೋ..' ಎನ್ನುವ ಆ ನಗು ಮತ್ತು ತೀರ್ಪನ್ನು ಜೀ ಕನ್ನಡದ ವೇದಿಕೆಯಲ್ಲಿ ಮಿಸ್ ಮಾಡಿಕೊಳ್ಳುತ್ತಿರುವುದು ಮಾತ್ರ ಸುಳ್ಳಲ್ಲ!&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/actress-rakshitha-prem-has-opened-up-about-the-true-reasons-for-her-exit-from-zee-kannada-after-a-long-association/articleshow-9faqx0g"/>
        </item>
        <item>
            <title><![CDATA[ದಶಕಗಳ ಆ ಧ್ವನಿ ಈಗ ಮೌನಕ್ಕೆ ಜಾರಿದೆ; 5 ವರ್ಷಗಳಿಂದ ಹಾಡುವುದನ್ನೇ ನಿಲ್ಲಿಸಿದ ಗಾಯಕಿ ಸುಜಾತಾ ಮೋಹನ್]]></title>
            <link>https://kannada.asianetnews.com/gallery/cine-world/sujatha-mohan-health-issue-singer-reveals-throat-problem-stopped-her-from-singing-for-five-years-agrz8yl</link>
            <guid isPermaLink="true">https://kannada.asianetnews.com/gallery/cine-world/sujatha-mohan-health-issue-singer-reveals-throat-problem-stopped-her-from-singing-for-five-years-agrz8yl</guid>
            <pubDate>Mon, 06 Apr 2026 13:08:34 +0530</pubDate>
            <description><![CDATA[&lt;p&gt;ವೈದ್ಯರಲ್ಲಿ ರೈಹಾನಾ ಒಂದು ವಿಶೇಷ ಮನವಿ ಮಾಡಿದ್ದಾರೆ. &quot;ಯಾವುದಾದರೂ ವೈದ್ಯರಿಗೆ ಸುಜಾತಾ ಅವರ ಧ್ವನಿಯನ್ನು ಮತ್ತೆ ಮೊದಲಿನಂತೆ ಸರಿಪಡಿಸಲು ಸಾಧ್ಯವಾದರೆ, ದಯವಿಟ್ಟು ಅವರಿಗೆ ಸಹಾಯ ಮಾಡಿ. ಅವರು ಮತ್ತೆ ಹಾಡುವಂತಾಗಲಿ&quot; ಎಂದು ಕೇಳಿಕೊಂಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngtbgkc9n1bw504mtj58brx,imgname-sujatha-mohan-1775459746412.jpg" type="image/jpeg" height="390" width="690"/>
            <content:encoded><![CDATA[&lt;p&gt;ವೈದ್ಯರಲ್ಲಿ ರೈಹಾನಾ ಒಂದು ವಿಶೇಷ ಮನವಿ ಮಾಡಿದ್ದಾರೆ. &quot;ಯಾವುದಾದರೂ ವೈದ್ಯರಿಗೆ ಸುಜಾತಾ ಅವರ ಧ್ವನಿಯನ್ನು ಮತ್ತೆ ಮೊದಲಿನಂತೆ ಸರಿಪಡಿಸಲು ಸಾಧ್ಯವಾದರೆ, ದಯವಿಟ್ಟು ಅವರಿಗೆ ಸಹಾಯ ಮಾಡಿ. ಅವರು ಮತ್ತೆ ಹಾಡುವಂತಾಗಲಿ&quot; ಎಂದು ಕೇಳಿಕೊಂಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಗಾಯಕಿ ಸುಜಾತಾ ಮೋಹನ್ ಕಂಠಕ್ಕೆ ಏನಾಯ್ತು? 5 ವರ್ಷಗಳಿಂದ ಹಾಡುವುದನ್ನೇ ನಿಲ್ಲಿಸಿದ್ದೇಕೆ 'ಮೆಲೋಡಿ ಕ್ವೀನ್'? ಅಭಿಮಾನಿಗಳಿಗೆ ಆಘಾತ!&lt;/p&gt;&lt;p&gt;ದಕ್ಷಿಣ ಭಾರತದ ಸಂಗೀತ ಲೋಕದಲ್ಲಿ ಸುಜಾತಾ ಮೋಹನ್ ಅವರ ಹೆಸರು ಕೇಳದವರೇ ಇಲ್ಲ. ಕಳೆದ ಐದು ದಶಕಗಳಿಂದ ತಮ್ಮ ಮಧುರ ಧ್ವನಿಯ ಮೂಲಕ ಲಕ್ಷಾಂತರ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸಿರುವ ಸುಜಾತಾ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬರೋಬ್ಬರಿ 20,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆದರೆ, ಇತ್ತೀಚೆಗೆ ಈ ಹಿರಿಯ ಗಾಯಕಿ ಹಂಚಿಕೊಂಡಿರುವ ಒಂದು ಕಹಿ ಸುದ್ದಿ ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.&lt;/p&gt;&lt;img&gt;&lt;p&gt;ಐದು ವರ್ಷಗಳಿಂದ ಹಾಡಲು ಸಾಧ್ಯವಾಗುತ್ತಿಲ್ಲ!&lt;/p&gt;&lt;p&gt;ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ ಸುಜಾತಾ ಮೋಹನ್, ತಮ್ಮ ಆರೋಗ್ಯದ ಬಗ್ಗೆ ಅಚ್ಚರಿಯ ಸಂಗತಿಯೊಂದನ್ನು ಬಯಲು ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ತಾವು ಯಾವುದೇ ಹಾಡುಗಳನ್ನು ಹಾಡುತ್ತಿಲ್ಲ ಎಂಬ ನೋವಿನ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಗಂಟಲಿನ ಸಮಸ್ಯೆ.&lt;/p&gt;&lt;img&gt;&lt;p&gt;&quot;ನನ್ನ ಗಂಟಲಿನಲ್ಲಿ ಸಮಸ್ಯೆಯಿದ್ದು, ಈ ಮೊದಲು ಹಾಡುತ್ತಿದ್ದಂತೆ ಈಗ ಹಾಡಲು ನನಗೆ ಸಾಧ್ಯವಾಗುತ್ತಿಲ್ಲ&quot; ಎಂದು ಅವರು ಭಾವುಕರಾಗಿ ನುಡಿದಿದ್ದಾರೆ. ಯಾವ ಧ್ವನಿಯು ದಶಕಗಳ ಕಾಲ ಭಾರತೀಯ ಚಿತ್ರರಂಗದ ಹಿಟ್ ಹಾಡುಗಳಿಗೆ ಜೀವ ತುಂಬಿತ್ತೋ, ಆ ಧ್ವನಿಯೇ ಈಗ ಮೌನವಾಗಿರುವುದು ಸಂಗೀತ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.&lt;/p&gt;&lt;img&gt;&lt;p&gt;ವೈದ್ಯರಿಗೆ ಮನವಿ ಮಾಡಿದ ಎ.ಆರ್. ರೆಹಮಾನ್ ಸಹೋದರಿ ರೈಹಾನಾ!&lt;/p&gt;&lt;p&gt;ಸುಜಾತಾ ಮೋಹನ್ ಅವರ ಈ ಹೇಳಿಕೆಯ ಬೆನ್ನಲ್ಲೇ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಸಹೋದರಿ ಮತ್ತು ಗಾಯಕಿ ಎ.ಆರ್. ರೈಹಾನಾ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುಜಾತಾ ಅವರ ಕಂಠದ ಬಗ್ಗೆ ಅಪಾರ ಗೌರವ ಹೊಂದಿರುವ ರೈಹಾನಾ, ಈ ವಿಡಿಯೋದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. &quot;ಸುಜಾತಾ ನಮ್ಮ ಕುಟುಂಬಕ್ಕೆ ಅತ್ಯಂತ ಆಪ್ತರು. ಇಂದು ನನ್ನ ತಾಯಿ ಬದುಕಿದ್ದರೆ, ಸುಜಾತಾ ಚೇತರಿಸಿಕೊಳ್ಳಲಿ ಎಂದು ಖಂಡಿತವಾಗಿಯೂ ಪ್ರಾರ್ಥಿಸುತ್ತಿದ್ದರು&quot; ಎಂದು ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟೇ ಅಲ್ಲದೆ, ಈ ವಿಡಿಯೋ ನೋಡುತ್ತಿರುವ ವೈದ್ಯರಲ್ಲಿ ರೈಹಾನಾ ಒಂದು ವಿಶೇಷ ಮನವಿ ಮಾಡಿದ್ದಾರೆ. &quot;ಯಾವುದಾದರೂ ವೈದ್ಯರಿಗೆ ಸುಜಾತಾ ಅವರ ಧ್ವನಿಯನ್ನು ಮತ್ತೆ ಮೊದಲಿನಂತೆ ಸರಿಪಡಿಸಲು ಸಾಧ್ಯವಾದರೆ, ದಯವಿಟ್ಟು ಅವರಿಗೆ ಸಹಾಯ ಮಾಡಿ. ಅವರು ಮತ್ತೆ ಹಾಡುವಂತಾಗಲಿ&quot; ಎಂದು ಕೇಳಿಕೊಂಡಿದ್ದಾರೆ. ಸುಜಾತಾ ಅವರ ಶ್ರದ್ಧೆ ಮತ್ತು ಸೃಜನಶೀಲತೆಯಿಂದ ತಾವು ಸಾಕಷ್ಟು ಕಲಿತಿದ್ದೇವೆ ಎಂದು ರೈಹಾನಾ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.&lt;/p&gt;&lt;img&gt;&lt;p&gt;ಅಳಿಸಲಾಗದ ಮಧುರ ನೆನಪುಗಳು:&lt;/p&gt;&lt;p&gt;ಸುಜಾತಾ ಮೋಹನ್ ಅವರ ಗಾಯನಕ್ಕೆ ಭಾರತೀಯ ಚಿತ್ರರಂಗ ಸದಾ ಋಣಿಯಾಗಿದೆ. 'ರೋಜಾ' ಚಿತ್ರದ 'ಪುತ್ತು ವೆಳ್ಳೈ ಮಳೈ' (Pudhu Vellai Mazhai), 'ವಾರಣಂ ಆಯಿರಂ' ಚಿತ್ರದ 'ನೆಂಜುಕ್ಕುಳ್ ಪೈದಿದುಂ' ಮತ್ತು 'ಜೀನ್ಸ್' ಚಿತ್ರದ 'ಮಲರ್ಗಳೇ ಮಲರ್ಗಳೇ' ಅಂತಹ ನೂರಾರು ಅಜರಾಮರ ಹಾಡುಗಳು ಇಂದಿಗೂ ಪ್ರತಿಯೊಬ್ಬರ ಪ್ಲೇಲಿಸ್ಟ್&zwnj;ನಲ್ಲಿವೆ.&lt;/p&gt;&lt;p&gt;ಅವರ ಧ್ವನಿಯಲ್ಲಿನ ಆ ಮಾಧುರ್ಯ ಮತ್ತೆ ಕೇಳಿಬರಲಿ, ಅವರು ಶೀಘ್ರದಲ್ಲೇ ಗುಣಮುಖರಾಗಿ ಮರಳಿ ಮೈಕ್ ಹಿಡಿಯಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ಹಾರೈಕೆಯಾಗಿದೆ. ಸುಜಾತಾ ಅವರ ಈ ಮೌನ ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದ್ದು, ಆದಷ್ಟು ಬೇಗ ಅವರ 'ಮೆಲೋಡಿ' ಮತ್ತೆ ಮೊಳಗಲಿ ಎಂದು ಪ್ರಾರ್ಥಿಸೋಣ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/sujatha-mohan-health-issue-singer-reveals-throat-problem-stopped-her-from-singing-for-five-years-agrz8yl"/>
        </item>
        <item>
            <title><![CDATA[ತ್ರಿಷಾ ಲೈಫ್ ಹಾಳು ಮಾಡಲು ಸ್ಕೆಚ್? ರಾಂಗ್ ಆಗಿರೋ ನಟಿ ಆಡಿರೋ ಮಾತು ಈಗ ಎಲ್ಲೆಡೆ ವೈರಲ್!]]></title>
            <link>https://kannada.asianetnews.com/entertainment/trisha-slams-viral-rumours-with-witty-instagram-post-questions-apparently-i-have-quit-films-and-raising-quadruplets/articleshow-bqaozmf</link>
            <guid isPermaLink="true">https://kannada.asianetnews.com/entertainment/trisha-slams-viral-rumours-with-witty-instagram-post-questions-apparently-i-have-quit-films-and-raising-quadruplets/articleshow-bqaozmf</guid>
            <pubDate>Wed, 08 Apr 2026 11:12:59 +0530</pubDate>
            <description><![CDATA[&lt;p&gt;ತಮ್ಮ ಬಗ್ಗೆ ಹಬ್ಬಿರುವ ಈ ಅಸಂಬದ್ಧ ಸುದ್ದಿಗಳ ಬಗ್ಗೆ ಅಂತಿಮವಾಗಿ ಮೌನ ಮುರಿದಿರುವ ತ್ರಿಶಾ, ಇನ್ಸ್ಟಾಗ್ರಾಮ್&zwnj;ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಮತ್ತು ಹಾಸ್ಯದ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಬರೆದುಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ. ಏನ್ ಹೇಳಿದ್ದಾರೆ ತ್ರಿಷಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngqscxppv5855da3msh2gq0,imgname-trisha-krishnan--2--1775457055670.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತ್ರಿಶಾ ಬಗ್ಗೆ ಹಬ್ಬಿದ್ದ ವದಂತಿಗಳೇನು?&lt;/strong&gt;&lt;/p&gt;&lt;p&gt;ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ತ್ರಿಶಾ ಕೃಷ್ಣನ್ (Trisha Krishnan) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಸುದ್ದಿಗಳು ಕೇಳಿಬರುತ್ತಿದ್ದವು. ತ್ರಿಶಾ ಚಿತ್ರರಂಗಕ್ಕೆ ಗುಡ್&zwnj;ಬೈ ಹೇಳಲಿದ್ದಾರೆ, ಅವರು ಶೀಘ್ರದಲ್ಲೇ ಒಬ್ಬ ದೊಡ್ಡ ಉದ್ಯಮಿಯನ್ನು ವಿವಾಹವಾಗಿ ಸೆಟ್ಲ್ ಆಗಲಿದ್ದಾರೆ ಎಂಬ ವದಂತಿಗಳು ಕಾಳ್ಗಿಚ್ಚಿನಂತೆ ಹಬ್ಬಿದ್ದವು. ತ್ರಿಶಾ ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ ಎಂಬ ಸುದ್ದಿ ಈ ವದಂತಿಗಳಿಗೆ ತುಪ್ಪ ಸುರಿದಂತಾಗಿತ್ತು. ಇದರಿಂದ ಅವರ ಕೋಟ್ಯಂತರ ಅಭಿಮಾನಿಗಳು ಆತಂಕಕ್ಕೀಡಾಗಿದ್ದರು.&lt;/p&gt;&lt;h2&gt;ಹಾಸ್ಯದ ಮೂಲಕವೇ ತಿರುಗೇಟು ನೀಡಿದ 'ಲಿಯೋ' ನಟಿ&lt;/h2&gt;&lt;p&gt;ತಮ್ಮ ಬಗ್ಗೆ ಹಬ್ಬಿರುವ ಈ ಅಸಂಬದ್ಧ ಸುದ್ದಿಗಳ ಬಗ್ಗೆ ಅಂತಿಮವಾಗಿ ಮೌನ ಮುರಿದಿರುವ ತ್ರಿಶಾ, ಇನ್ಸ್ಟಾಗ್ರಾಮ್&zwnj;ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಮತ್ತು ಹಾಸ್ಯದ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಬರೆದುಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ.&lt;/p&gt;&lt;p&gt;ತ್ರಿಶಾ ತಮ್ಮ ಪೋಸ್ಟ್&zwnj;ನಲ್ಲಿ ಹೀಗೆ ಬರೆದಿದ್ದಾರೆ: &quot;ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ, ನಾನು ಚಿತ್ರರಂಗವನ್ನು ಬಿಟ್ಟಿದ್ದೇನಂತೆ! ಒಬ್ಬ ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನಂತೆ! ಅಷ್ಟೇ ಅಲ್ಲ, ನನಗೆ ನಾಲ್ಕು ಜನ ಮಕ್ಕಳಿದ್ದು (Quadruplets), ಅವರಿಗೆ ನಿನ್ನೆಯಷ್ಟೇ ಎರಡು ವರ್ಷ ತುಂಬಿದೆಯಂತೆ! ಇನ್ನು ಏನಾದರೂ ಸೇರಿಸುವುದಿದೆಯೇ? ಅಥವಾ ಇಂದಿನ ಕಾಲ್ಪನಿಕ ಕಥೆಗಳು ಇಷ್ಟಕ್ಕೆ ಸಾಕಾ?&quot; ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ತಮ್ಮ ಮದುವೆ ಮತ್ತು ನಿವೃತ್ತಿಯ ಬಗ್ಗೆ ಹಬ್ಬಿದ ಸುದ್ದಿಗಳು ಕೇವಲ ಕಟ್ಟುಕಥೆ ಎಂಬುದನ್ನು ತ್ರಿಶಾ ಅತ್ಯಂತ ಲವಲವಿಕೆಯಿಂದ ಸ್ಪಷ್ಟಪಡಿಸಿದ್ದಾರೆ. ಅವರ ಈ ಹಾಸ್ಯ ಪ್ರಜ್ಞೆಗೆ ಅಭಿಮಾನಿಗಳು ಫಿದಾ ಆಗಿದ್ದು, &quot;ಇದು ತ್ರಿಶಾ ಅವರ ರಿಯಲ್ ಥಗ್ ಲೈಫ್&quot; ಎಂದು ಕಾಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;h3&gt;ವೃತ್ತಿಜೀವನದಲ್ಲಿ ತ್ರಿಶಾ ಇನ್ನೂ ಬ್ಯುಸಿ!&lt;/h3&gt;&lt;p&gt;ತ್ರಿಶಾ ಅವರು ಚಿತ್ರರಂಗಕ್ಕೆ ಬಂದು 20 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಇಂದಿಗೂ ಅವರು ಬೇಡಿಕೆಯ ನಟಿಯಾಗಿ ಮುಂದುವರಿಯುತ್ತಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್ ಜೊತೆ 'ಲಿಯೋ' ಸಿನಿಮಾದಲ್ಲಿ ಮಿಂಚಿದ್ದ ಅವರು, ಮುಂದಿನ ದಿನಗಳಲ್ಲಿ ಸಾಲು ಸಾಲು ದೊಡ್ಡ ಸಿನಿಮಾಗಳನ್ನು ಹೊಂದಿದ್ದಾರೆ.&lt;/p&gt;&lt;p&gt;ಥಗ್ ಲೈಫ್: ಮಣಿರತ್ನಂ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ತ್ರಿಶಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;p&gt;ವಿಶ್ವಂಭರ: ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗಿನ ಫ್ಯಾಂಟಸಿ ಸಿನಿಮಾದಲ್ಲಿ ತ್ರಿಶಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಸೂರ್ಯ 44: ನಟ ಸೂರ್ಯ ಅವರ 44ನೇ ಚಿತ್ರದಲ್ಲಿ ತ್ರಿಶಾ ನಟಿಸುತ್ತಿದ್ದು, ಇದರ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ.&lt;/p&gt;&lt;p&gt;ಒಟ್ಟಿನಲ್ಲಿ, ತ್ರಿಶಾ ಚಿತ್ರರಂಗ ಬಿಡುತ್ತಾರೆ ಎಂಬುದೆಲ್ಲಾ ಕೇವಲ ಗಾಳಿಸುದ್ದಿ ಎಂಬುದು ಈಗ ಖಚಿತವಾಗಿದೆ. ಅವರು ಇನ್ನೂ ಹಲವು ವರ್ಷಗಳ ಕಾಲ ಬೆಳ್ಳಿತೆರೆಯ ಮೇಲೆ ತಮ್ಮ ಅಧಿಪತ್ಯವನ್ನು ಮುಂದುವರಿಸಲಿದ್ದಾರೆ ಎಂಬುದು ಈ ಮೂಲಕ ಸಾಬೀತಾಗಿದೆ. ಗಾಸಿಪ್ ಹಬ್ಬಿಸುವವರಿಗೆ ತ್ರಿಶಾ ನೀಡಿರುವ ಈ 'ಖಡಕ್' ಉತ್ತರ ಈಗ ಇಂಟರ್ನೆಟ್&zwnj;ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/trisha-slams-viral-rumours-with-witty-instagram-post-questions-apparently-i-have-quit-films-and-raising-quadruplets/articleshow-bqaozmf"/>
        </item>
        <item>
            <title><![CDATA[ಪ್ರಾಣವೇ ಹೋಗುವಂತಿದ್ದ ಆ ದಿನಗಳಲ್ಲಿ ಅನುಭವಿಸಿದ ನರಕಯಾತನೆ ಬಗ್ಗೆ ನಟಿ ಐಶ್ವರ್ಯಾ ಭಾಸ್ಕರನ್ ಬಿಚ್ಚಿಟ್ಟ ಸತ್ಯಗಳು!]]></title>
            <link>https://kannada.asianetnews.com/cine-world/aishwariyaa-bhaskaran-opens-up-about-menopause-trauma-recalls-unbearable-heat-and-mood-swings/articleshow-cyo99a7</link>
            <guid isPermaLink="true">https://kannada.asianetnews.com/cine-world/aishwariyaa-bhaskaran-opens-up-about-menopause-trauma-recalls-unbearable-heat-and-mood-swings/articleshow-cyo99a7</guid>
            <pubDate>Sun, 12 Apr 2026 12:18:34 +0530</pubDate>
            <description><![CDATA[&lt;p&gt;&quot;ಯೋಗ ಆರಂಭಿಸಿದ ಮೇಲೆ ಹಂತ ಹಂತವಾಗಿ ನನ್ನ ದೇಹದ ಎಲ್ಲಾ ಸಮಸ್ಯೆಗಳು ಮಾಯವಾದವು. ವಿಪರೀತ ಬೆವರುವಿಕೆ, ದೇಹದ ಉಷ್ಣತೆ ಮತ್ತು ಮಾನಸಿಕ ಕಿರಿಕಿರಿ ಎಲ್ಲವೂ ನಿಂತುಹೋಯಿತು. ಈಗ ನನ್ನ ಮನಸ್ಸು ಮತ್ತು ದೇಹ ಎರಡೂ ನನ್ನ ನಿಯಂತ್ರಣದಲ್ಲಿದೆ. ಇದಕ್ಕೆ &lsquo;ಸದ್ಗುರು&rsquo; ಅವರ ಯೋಗ ತರಗತಿಗಳಿಗೆ ನಾನು ಚಿರಋಣಿ' ಎಂದ ನಟಿ ಐಶ್ವರ್ಯಾ ಭಾಸ್ಕರನ್..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knzsvmm9v0ky322wx840b18t,imgname-befunky-collage--7--1775962542729.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಟಿ ಐಶ್ವರ್ಯಾ ಭಾಸ್ಕರನ್ ಅನುಭವಿಸಿದ &lsquo;ನರಕಯಾತನೆ&rsquo;&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಖ್ಯಾತ ನಟಿ, ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ನರಸಿಂಹಂ' ಚಿತ್ರದಲ್ಲಿ ಮೋಹನ್ ಲಾಲ್ ಜೋಡಿಯಾಗಿ ಮಿಂಚಿದ್ದ ಐಶ್ವರ್ಯಾ ಭಾಸ್ಕರನ್ (Aishwariyaa Bhaskaran) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಈ ಹಿರಿಯ ನಟಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಅತ್ಯಂತ ಕಠಿಣ ದೈಹಿಕ ಮತ್ತು ಮಾನಸಿಕ ನೋವಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಹಿಳೆಯರ ಜೀವನದಲ್ಲಿ ಎದುರಾಗುವ 'ಮೆನೋಪಾಸ್' (ಋತುಬಂಧ) ಹಂತ ತಮಗೆ ಎಷ್ಟು ದೊಡ್ಡ ಆಘಾತ ನೀಡಿತ್ತು ಎಂಬ ಕಣ್ಣೀರಿನ ಕಥೆಯನ್ನು ಅವರು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ಮೆನೋಪಾಸ್ ಹಂತವೊಂದು ದೊಡ್ಡ ಟ್ರಾಮಾ!&lt;/h2&gt;&lt;p&gt;ಐಶ್ವರ್ಯಾ ಅವರಿಗೆ ಮೆನೋಪಾಸ್ ಆರಂಭವಾದದ್ದು ಸುಮಾರು 46 ಅಥವಾ 47ನೇ ವಯಸ್ಸಿನಲ್ಲಿ. ಆ ದಿನಗಳನ್ನು ನೆನಪಿಸಿಕೊಂಡ ಅವರು, &quot;ಆ ಹಂತ ಈಗ ಮುಗಿದಿರಬಹುದು, ಆದರೆ ಅದು ನನಗೆ ನೀಡಿದ ನೋವು ಅಷ್ಟಿಷ್ಟಲ್ಲ. ಆ ಸಮಯದಲ್ಲಿ ನನ್ನ ದೇಹದಲ್ಲಿ ವಿಪರೀತ ಶಾಖ ಕಾಣಿಸಿಕೊಳ್ಳುತ್ತಿತ್ತು. ಎಷ್ಟು ಶಾಖ ಅಂದರೆ, ನಾನು ಎಸಿ ರೂಮಿನಲ್ಲಿ ಕುಳಿತಿದ್ದರೂ ಬೆವರುತ್ತಿದ್ದೆ. ಅದರಲ್ಲೂ ಬೆನ್ನಿನ ಭಾಗವಂತೂ ಬೆವರಿನಿಂದ ಪೂರ್ತಿ ಒದ್ದೆಯಾಗುತ್ತಿತ್ತು&quot; ಎಂದಿದ್ದಾರೆ. ಅಷ್ಟೇ ಅಲ್ಲದೆ, ಅನಿಯಮಿತ ಪಿರಿಯಡ್ಸ್ ಮತ್ತು ಹಠಾತ್ 'ಮೂಡ್ ಸ್ವಿಂಗ್ಸ್'ನಿಂದಾಗಿ ಕಾರಣವಿಲ್ಲದೆ ಅಳುತ್ತಿದ್ದೆ ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.&lt;/p&gt;&lt;p&gt;&ldquo;ಗರ್ಭಾಶಯವನ್ನೇ ಕಿತ್ತು ಎಸೆಯೋಣ ಅನಿಸುತ್ತಿತ್ತು!&rdquo;&lt;/p&gt;&lt;p&gt;ಸಂದರ್ಶನದಲ್ಲಿ ಐಶ್ವರ್ಯಾ ಅವರು ಹಂಚಿಕೊಂಡ ಮತ್ತೊಂದು ವಿಷಯ ಕೇಳಿದರೆ ಎದೆ ನಡುಗುತ್ತದೆ. ಕೇರಳದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ನಡೆದ ಘಟನೆಯನ್ನು ಅವರು ಸ್ಮರಿಸಿದ್ದಾರೆ. &quot;ಆ ಸಮಯದಲ್ಲಿ ಅತಿಯಾದ ರಕ್ತಸ್ರಾವವಾಗುತ್ತಿತ್ತು. ನೋವು ಎಷ್ಟು ಹೆಚ್ಚಿತ್ತೆಂದರೆ ನನ್ನ ಪ್ರಾಣವೇ ದೇಹದಿಂದ ಹೊರಹೋಗುತ್ತಿದೆ ಎನಿಸುತ್ತಿತ್ತು. ನೋವಿನ ಅತಿರೇಕಕ್ಕೆ ನನ್ನ ಗರ್ಭಾಶಯವನ್ನೇ ನನ್ನ ಕೈಯಿಂದ ಕಿತ್ತು ಎಸೆಯೋಣ ಎಂಬಷ್ಟು ಆಕ್ರೋಶ ಮತ್ತು ಹಿಂಸೆ ಅನುಭವಿಸಿದೆ&quot; ಎಂದು ಹೇಳಿ ಭಾವುಕರಾಗಿದ್ದಾರೆ. ಆಗ ಅವರ ತಾಯಿ ನೀಡಿದ ಒಂದು ಸಲಹೆ ಅವರ ಜೀವನವನ್ನೇ ಬದಲಿಸಿತು.&lt;/p&gt;&lt;h3&gt;ಯೋಗದ ಮೂಲಕ ಮರುಜನ್ಮ ಪಡೆದ ನಟಿ&lt;/h3&gt;&lt;p&gt;ತಮ್ಮ ಅಮ್ಮನ ಸಲಹೆಯಂತೆ ಐಶ್ವರ್ಯಾ ಅವರು ಯೋಗಾಭ್ಯಾಸಕ್ಕೆ ಮೊರೆ ಹೋಗಿದ್ದಾರೆ. ಸತತ 40 ದಿನಗಳ ಕಾಲ ನಿಯಮಿತವಾಗಿ ಯೋಗ ಮಾಡಿದ ನಂತರ ಅವರ ದೇಹದಲ್ಲಿ ಅದ್ಭುತ ಬದಲಾವಣೆ ಕಾಣಿಸಿಕೊಂಡಿದೆ. &quot;ಯೋಗ ಆರಂಭಿಸಿದ ಮೇಲೆ ಮೊದಮೊದಲು ಅತಿಯಾದ ರಕ್ತಸ್ರಾವವಾಯಿತು. ಆದರೆ ನಾನು ಛಲ ಬಿಡದೆ ಅಭ್ಯಾಸ ಮುಂದುವರಿಸಿದೆ. ಹಂತ ಹಂತವಾಗಿ ನನ್ನ ದೇಹದ ಎಲ್ಲಾ ಸಮಸ್ಯೆಗಳು ಮಾಯವಾದವು. ವಿಪರೀತ ಬೆವರುವಿಕೆ, ದೇಹದ ಉಷ್ಣತೆ ಮತ್ತು ಮಾನಸಿಕ ಕಿರಿಕಿರಿ ಎಲ್ಲವೂ ನಿಂತುಹೋಯಿತು. ಈಗ ನನ್ನ ಮನಸ್ಸು ಮತ್ತು ದೇಹ ಎರಡೂ ನನ್ನ ನಿಯಂತ್ರಣದಲ್ಲಿದೆ. ಇದಕ್ಕೆ ಸದ್ಗುರು ಅವರ ಯೋಗ ತರಗತಿಗಳಿಗೆ ನಾನು ಚಿರಋಣಿ&quot; ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ವೃತ್ತಿಜೀವನದ ಹಾದಿ&lt;/p&gt;&lt;p&gt;1991ರಲ್ಲಿ 'ಒಲಿಯಂಪುಕಲ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐಶ್ವರ್ಯಾ ಭಾಸ್ಕರನ್, ಮಲಯಾಳಂನ ದಿಗ್ಗಜ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ, ಸುರೇಶ್ ಗೋಪಿ ಅವರೊಂದಿಗೆ ನಟಿಸಿ ಜನಪ್ರಿಯತೆ ಗಳಿಸಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಗುರುತಿಸಿಕೊಂಡಿರುವ ಇವರು, ಈಗ ಮಹಿಳೆಯರಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ತಮ್ಮ ಆರೋಗ್ಯದ ಕಠಿಣ ಹಾದಿಯನ್ನು ಬಹಿರಂಗಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಡುವ ಬದಲು, ಧೈರ್ಯವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳಬೇಕು ಎಂಬ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/aishwariyaa-bhaskaran-opens-up-about-menopause-trauma-recalls-unbearable-heat-and-mood-swings/articleshow-cyo99a7"/>
        </item>
        <item>
            <title><![CDATA['ಪುಟ್ನಂಜ'ನ ಸುಂದರಿ ಮೀನಾ ಮಾಡಿದ್ರು ರಿಯಲ್ ಎಸ್ಟೇಟ್‌ನಲ್ಲಿ ಸುನಾಮಿ; ನಟಿಯ ಬಂಗಲೆಗೆ ಭಾರೀ ರೇಟ್‌!]]></title>
            <link>https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k</link>
            <guid isPermaLink="true">https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k</guid>
            <pubDate>Thu, 09 Apr 2026 17:19:23 +0530</pubDate>
            <description><![CDATA[&lt;p&gt;ಬಂದ ಹಣವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಜಾಣ್ಮೆಗೆ &lsquo;ಜೈ&rsquo; ಅಂತಿದಾರೆ ಫ್ಯಾನ್ಸ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knryw8fyq2ncjsr1phpkemer,imgname-meena-1775732924926.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಂದ ಹಣವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಜಾಣ್ಮೆಗೆ &lsquo;ಜೈ&rsquo; ಅಂತಿದಾರೆ ಫ್ಯಾನ್ಸ್.&lt;/p&gt;&lt;img&gt;&lt;p&gt;ರಿಯಲ್ ಎಸ್ಟೇಟ್&zwnj;ನಲ್ಲಿ &lsquo;ಸಿಂಹಾದ್ರಿಯ ಸಿಂಹ&rsquo; ನಟಿ ಮೀನಾ ಮಾಸ್ಟರ್ ಸ್ಟ್ರೋಕ್!&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದ &lsquo;ಎವರ್&zwnj;ಗ್ರೀನ್&rsquo; ಸುಂದರಿ ಮೀನಾ (Meena) ಈಗ ಸಿನಿಮಾಗಿಂತ ಹೆಚ್ಚಾಗಿ ತಮ್ಮ ಒಂದು ಬೃಹತ್ ಆಸ್ತಿ ವ್ಯವಹಾರದ ಮೂಲಕ ಸುದ್ದಿಯಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ದಶಕಗಳ ಕಾಲ ಸ್ಟಾರ್ ನಟಿಯಾಗಿ ಮಿಂಚಿದ ಮೀನಾ, ಈಗ ರಿಯಲ್ ಎಸ್ಟೇಟ್ ಲೋಕದಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದ್ದಾರೆ.&lt;/p&gt;&lt;img&gt;&lt;p&gt;ಏನಿದು 100 ಕೋಟಿಯ ಡೀಲ್?&lt;/p&gt;&lt;p&gt;ವರದಿಗಳ ಪ್ರಕಾರ, ನಟಿ ಮೀನಾ ಅವರು ಚೆನ್ನೈನ ಪ್ರಮುಖ ಪ್ರದೇಶವೊಂದರಲ್ಲಿ ಭವ್ಯವಾದ ಬಂಗಲೆಯನ್ನು ಹೊಂದಿದ್ದರು. ಈ ಆಸ್ತಿಯನ್ನು ಅವರು ಬಹಳ ವರ್ಷಗಳ ಹಿಂದೆಯೇ ಖರೀದಿಸಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಆ ಪ್ರದೇಶದಲ್ಲಿ ಭೂಮಿಯ ಬೆಲೆ ಗಗನಕ್ಕೇರಿರುವ ಕಾರಣ, ಮೀನಾ ಅವರು ಈ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.&lt;/p&gt;&lt;img&gt;&lt;p&gt;ಒಬ್ಬ ದೊಡ್ಡ ಉದ್ಯಮಿಯೊಬ್ಬರು ಈ ಬಂಗಲೆಯನ್ನು ಬರೋಬ್ಬರಿ 100 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿಯಾಗಿ ಸಕ್ಸಸ್ ಕಂಡ ಮೀನಾ, ಈಗ ಆರ್ಥಿಕ ವ್ಯವಹಾರದಲ್ಲೂ &lsquo;ಮಾಸ್ಟರ್ ಸ್ಟ್ರೋಕ್&rsquo; ನೀಡಿದ್ದಾರೆ ಎಂದು ಸಿನಿರಂಗದಲ್ಲಿ ಚರ್ಚೆಯಾಗುತ್ತಿದೆ.&lt;/p&gt;&lt;img&gt;&lt;p&gt;ಕನ್ನಡಿಗರ ಪ್ರೀತಿಯ &lsquo;ಪುಟ್ನಂಜ&rsquo;ನ ಸುಂದರಿ!&lt;/p&gt;&lt;p&gt;ಕನ್ನಡ ಚಿತ್ರರಂಗದೊಂದಿಗೆ ಮೀನಾ ಅವರಿಗೆ ಅವಿನಾಭಾವ ಸಂಬಂಧವಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ &lsquo;ಪುಟ್ನಂಜ&rsquo;, ಸಾಹಸಸಿಂಹ ವಿಷ್ಣುವರ್ಧನ್ ಅವರ &lsquo;ಸಿಂಹಾದ್ರಿಯ ಸಿಂಹ&rsquo; ಮತ್ತು ಶಿವರಾಜ್&zwnj;ಕುಮಾರ್ ಅವರೊಂದಿಗೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನೆಮಾತಾಗಿದ್ದಾರೆ.&lt;/p&gt;&lt;img&gt;&lt;p&gt;ಪತಿ ವಿದ್ಯಾಸಾಗರ್ ಅವರ ನಿಧನದ ನಂತರ ಮೀನಾ ಅವರು ಸಣ್ಣ ಬ್ರೇಕ್ ತೆಗೆದುಕೊಂಡಿದ್ದರೂ, ಈಗ ಮತ್ತೆ ಸಿನಿಮಾಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದಾರೆ.&lt;/p&gt;&lt;img&gt;&lt;p&gt;ಮಗಳ ಭವಿಷ್ಯಕ್ಕಾಗಿ ದೊಡ್ಡ ಹೂಡಿಕೆ?&lt;/p&gt;&lt;p&gt;ಈ ಬೃಹತ್ ಮೊತ್ತವನ್ನು ಮೀನಾ ಅವರು ತಮ್ಮ ಮಗಳು ನೈನಿಕಾ ಅವರ ಭವಿಷ್ಯಕ್ಕಾಗಿ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಳಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರರಂಗದಲ್ಲಿ ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಇಂದು ಕೋಟಿ ಕೋಟಿ ಲಾಭ ಗಳಿಸಿರುವ ಮೀನಾ ಅವರ ಈ ಜಾಣ್ಮೆಯ ನಿರ್ಧಾರಕ್ಕೆ ಅಭಿಮಾನಿಗಳು &lsquo;ಫುಲ್ ಮಾರ್ಕ್ಸ್&rsquo; ನೀಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಬೆಳ್ಳಿತೆರೆಯ ಮೇಲೆ ರಾಣಿಯಂತೆ ಮಿಂಚಿದ ಮೀನಾ, ಈಗ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ &lsquo;ಧನಲಕ್ಷ್ಮಿ&rsquo;ಯನ್ನು ವರಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;100 ಕೋಟಿ ರೂಪಾಯಿಗಳ ಈ ಭಾರಿ ಡೀಲ್ ಸದ್ಯಕ್ಕೆ ಇಡೀ ಸೌತ್ ಸಿನಿ ಇಂಡಸ್ಟ್ರಿಯ ಹಾಟ್ ಟಾಪಿಕ್ ಆಗಿದೆ!&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/kannada-movie-putnanja-actress-meena-sells-her-bunglow-for-rs-100-crores-ddish0k"/>
        </item>
        <item>
            <title><![CDATA[ಬೇಸಿಗೆಯಲ್ಲಿ ಗಿಡಗಳು ಬಾಡದೆ, ರಾಶಿ ರಾಶಿ ಹೂವು ಬಿಡಲು ಈ ಪದಾರ್ಥ ಹಾಕ್ಬೇಕು!]]></title>
            <link>https://kannada.asianetnews.com/webstories/special/flower-garden-ideas-for-front-of-house-liquid-fertilizer-esb599r</link>
            <guid isPermaLink="true">https://kannada.asianetnews.com/webstories/special/flower-garden-ideas-for-front-of-house-liquid-fertilizer-esb599r</guid>
            <pubDate>Tue, 07 Apr 2026 14:31:44 +0530</pubDate>
            <description><![CDATA[&lt;p&gt;ಬೇಸಿಗೆಯಲ್ಲಿ ಗಿಡಗಳು ಬಾಡದೆ ಇರಲು ಟಿಪ್ಸ್&zwnj; ಇಲ್ಲಿದೆ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkjstytpm7nhbamdjt8b28h,imgname-flower--7--1775552490457.jpg" type="image/jpeg" height="390" width="690"/>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/special/flower-garden-ideas-for-front-of-house-liquid-fertilizer-esb599r"/>
        </item>
        <item>
            <title><![CDATA[Temporary Marriage: ಈ ದೇಶದಲ್ಲಿ ಯಾರೇ ಮದುವೆಯಾದ್ರೂ 15 ದಿನಕ್ಕೆ ಡಿವೋರ್ಸ್;‌ ಜೀವನಾಂಶ ಕೂಡ ಕೊಡ್ಬೇಡಕಿಲ್ಲ!]]></title>
            <link>https://kannada.asianetnews.com/special/no-alimony-no-divorce-women-can-only-marry-for-15-days-which-country-why/articleshow-fwfgelp</link>
            <guid isPermaLink="true">https://kannada.asianetnews.com/special/no-alimony-no-divorce-women-can-only-marry-for-15-days-which-country-why/articleshow-fwfgelp</guid>
            <pubDate>Tue, 14 Apr 2026 08:00:17 +0530</pubDate>
            <description><![CDATA[&lt;p&gt;Temporary Marriage: ಇಲ್ಲಿ ಮದುವೆಯಾದ 15 ದಿನಕ್ಕೇ ಡಿವೋರ್ಸ್, ಆಮೇಲೆ ಇನ್ನೊಂದು ಮದುವೆ! ಹೌದು, ಈ ದೇಶದಲ್ಲಿ ಈ ರೀತಿ ಪದ್ಧತಿ ಇದೆ, ಹಾಗಾದರೆ ಆ ದೇಶ ಯಾವುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp3zw80a77bqj3vy52bnq9xd,imgname-new-project--81--1776103071754.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀವನದಲ್ಲಿ ಮದುವೆ ಅನ್ನೋದು ಒಮ್ಮೆ ಮಾತ್ರ ಬರುವ ಸುಂದರ ಕ್ಷಣ. ಆದರೆ ಇಲ್ಲೊಂದು ದೇಶದಲ್ಲಿ ಮದುವೆಯಾದ 15 ದಿನಗಳಲ್ಲೇ ದಂಪತಿ ಬೇರೆಯಾಗುತ್ತಾರೆ. ಏನಿದು ವಿಚಿತ್ರ ಸಂಪ್ರದಾಯ? ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;h2&gt;ಹದಿನೈದು ದಿನದ ಕಾಂಟ್ರ್ಯಾಕ್ಟ್!&zwnj;&lt;/h2&gt;&lt;p&gt;ಒಂದು ದೇಶದಲ್ಲಿ ಇದಕ್ಕೆ ತದ್ವಿರುದ್ಧವಾದ ಪದ್ಧತಿ ಇದೆ. ಇಲ್ಲಿ ಜನ ತಮಗೆ ಇಷ್ಟವಾದಷ್ಟು ಬಾರಿ ಮದುವೆಯಾಗಬಹುದು. ವಿಚ್ಛೇದನಕ್ಕೆ ಯಾವುದೇ ವಿಶೇಷ ಕಾನೂನು ಇಲ್ಲ. ಬೇರೆಯಾದ ನಂತರ ಹೆಂಡತಿಗೆ ಗಂಡ ಜೀವನಾಂಶ ನೀಡುವ ಅಗತ್ಯವೂ ಇಲ್ಲ. ಕಾಂಟ್ರಾಕ್ಟ್ ಮುಗಿದ ತಕ್ಷಣ ಸಂಬಂಧವೂ ಮುಗಿಯುತ್ತದೆ. ಅಷ್ಟಕ್ಕೂ ಈ ವಿಚಿತ್ರ ಪದ್ಧತಿ ಇರುವುದು ಎಲ್ಲಿ? ಇಲ್ಲಿದೆ ವಿವರ.&lt;/p&gt;&lt;h2&gt;ತಾತ್ಕಾಲಿತ ವಿವಾಹ ಒಪ್ಪಂದ&lt;/h2&gt;&lt;p&gt;ಪ್ರವಾಸಿ ಕೇಂದ್ರವಾಗಿ ವಿಶ್ವಪ್ರಸಿದ್ಧಿ ಪಡೆದ ಇಂಡೋನೇಷ್ಯಾದ ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಪುಂಚಾಕ್&zwnj;ನಂತಹ ಪರ್ವತ ಪ್ರದೇಶಗಳಲ್ಲಿ ಈ ಕಾಂಟ್ರಾಕ್ಟ್ ಮದುವೆಗಳು ಹೆಚ್ಚು. ಇದಕ್ಕೆ ಹಲವು ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿವೆ. ಅರೇಬಿಕ್ ಭಾಷೆಯಲ್ಲಿ 'ಮುತ್ತಾ' ಎಂದರೆ ಸಂತೋಷ ಅಥವಾ ಸುಖ. ಇದು ತಾತ್ಕಾಲಿಕ ವಿವಾಹ ಒಪ್ಪಂದ. ಅಂದರೆ, ಮದುವೆಗೂ ಮುನ್ನವೇ ಎಷ್ಟು ದಿನ ಒಟ್ಟಿಗೆ ಇರಬೇಕು ಎಂದು ಇಬ್ಬರೂ ಒಪ್ಪಂದ ಮಾಡಿಕೊಳ್ಳುತ್ತಾರೆ. ಆ ಅವಧಿ ಮುಗಿದ ತಕ್ಷಣ ಬೇರೆಯಾಗುತ್ತಾರೆ.&lt;/p&gt;&lt;h2&gt;ಪ್ರವಾಸಕ್ಕೆ ಬಂದೋರು ಮದುವೆ ಆಗಬಹುದು!&lt;/h2&gt;&lt;p&gt;ಈ ಪ್ರದೇಶಕ್ಕೆ, ವಿಶೇಷವಾಗಿ ಮಧ್ಯಪ್ರಾಚ್ಯದಿಂದ ಪ್ರವಾಸಿಗರು ಬರುತ್ತಾರೆ. ಅವರು ಇಲ್ಲಿಗೆ ಪ್ರವಾಸಕ್ಕೆ ಬಂದಾಗ ಸ್ಥಳೀಯ ಮಹಿಳೆಯರನ್ನು ಮದುವೆಯಾಗುತ್ತಾರೆ. ಇಲ್ಲಿರುವಷ್ಟು ದಿನ ಆಕೆಗೆ ಗಂಡನಾಗಿರುತ್ತಾರೆ. ಹೊರಡುವಾಗ, ತಮಗೆ ಪತ್ನಿಯಾಗಿದ್ದಕ್ಕೆ ಹಣ ಕೊಟ್ಟು ಹೋಗುತ್ತಾರೆ.&lt;/p&gt;&lt;h2&gt;ಇಲ್ಲಿಯ ಕಾನೂನು ಹೇಗಿದೆ?&lt;/h2&gt;&lt;p&gt;ಇಂಡೋನೇಷ್ಯಾದ ಅಧಿಕೃತ ಕಾನೂನಿನ ಪ್ರಕಾರ ಈ ಕಾಂಟ್ರಾಕ್ಟ್ ಮದುವೆಗಳಿಗೆ ಯಾವುದೇ ಕಾನೂನುಬದ್ಧತೆ ಇಲ್ಲ. ಬಡತನವೇ ಇದಕ್ಕೆಲ್ಲಾ ಪ್ರಮುಖ ಕಾರಣ. ಒಂದು ಮದುವೆಗೆ ಮಹಿಳೆಯರು ಸುಮಾರು $300 ರಿಂದ $500 ಡಾಲರ್ ಪಡೆಯುತ್ತಾರೆ. ಭಾರತದಲ್ಲಿ ಮದುವೆಯನ್ನು ಏಳು ಜನ್ಮದ ಬಂಧ ಎಂದರೆ, ಇಲ್ಲಿ ಅದು ಕೆಲವೇ ದಿನಗಳ ಒಪ್ಪಂದವಷ್ಟೇ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/special/no-alimony-no-divorce-women-can-only-marry-for-15-days-which-country-why/articleshow-fwfgelp"/>
        </item>
        <item>
            <title><![CDATA[ಜ್ಯೋತಿಷ್ಯದ ಪ್ರಕಾರ ಈ ರೀತಿ ಕನಸು ಬಿದ್ರೆ ಯಾರಿಗೂ ಹೇಳಬಾರದು! ಹೇಳಿದ್ರೆ ಆಗಬೇಕಾಗಿರೋದು ಆಗಲ್ಲ!]]></title>
            <link>https://kannada.asianetnews.com/gallery/astrology/these-are-the-four-types-of-dreams-you-should-never-share-with-anyone-gi6v9z1</link>
            <guid isPermaLink="true">https://kannada.asianetnews.com/gallery/astrology/these-are-the-four-types-of-dreams-you-should-never-share-with-anyone-gi6v9z1</guid>
            <pubDate>Fri, 10 Apr 2026 19:16:52 +0530</pubDate>
            <description><![CDATA[&lt;p&gt;Dreams You Should Never Share With Anyone: ಕೆಲವೊಮ್ಮೆ ಮುಂದೆ ಆಗುವ ಸೂಚನೆ ಸಿಗುವುದು. ಈಗ ಪ್ರತಿಯೊಂದು ಕನಸಿಗೂ ಒಂದೊಂದು ಆಳವಾದ ಅರ್ಥವಿರುತ್ತೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ನಮ್ಮ ಭವಿಷ್ಯ, ಮಾನಸಿಕ ಸ್ಥಿತಿ, ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಸೂಚನೆಗಳಾಗಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg443pv7x2sbhb0vyxngeq8m,imgname-main-sleeping-with-lights-on-1769665059687.jpg" type="image/jpeg" height="390" width="690"/>
            <content:encoded><![CDATA[&lt;p&gt;Dreams You Should Never Share With Anyone: ಕೆಲವೊಮ್ಮೆ ಮುಂದೆ ಆಗುವ ಸೂಚನೆ ಸಿಗುವುದು. ಈಗ ಪ್ರತಿಯೊಂದು ಕನಸಿಗೂ ಒಂದೊಂದು ಆಳವಾದ ಅರ್ಥವಿರುತ್ತೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ನಮ್ಮ ಭವಿಷ್ಯ, ಮಾನಸಿಕ ಸ್ಥಿತಿ, ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಸೂಚನೆಗಳಾಗಿವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಾತ್ರಿ ನಿದ್ದೆಯಲ್ಲಿ ಕನಸು ಬೀಳುವುದು ತುಂಬಾ ಸಹಜ. ಕೆಲವು ಕನಸುಗಳು ನಮಗೆ ಖುಷಿ, ನೆಮ್ಮದಿ ಕೊಟ್ಟರೆ, ಇನ್ನು ಕೆಲವು ಭಯ ಅಥವಾ ಆತಂಕವನ್ನು ಉಂಟುಮಾಡುತ್ತವೆ. ಹೆಚ್ಚಿನವರು ತಮಗೆ ಬಿದ್ದ ಕನಸುಗಳ ಬಗ್ಗೆ ತಕ್ಷಣವೇ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. &amp;nbsp;&lt;/p&gt;&lt;p&gt;ಸ್ವಪ್ನಶಾಸ್ತ್ರದ ಪ್ರಕಾರ ಕೆಲವು ಕನಸುಗಳನ್ನು ರಹಸ್ಯವಾಗಿ ಇಟ್ಟುಕೊಳ್ಳುವುದೇ ಒಳ್ಳೆಯದು. ಇಲ್ಲದಿದ್ದರೆ ನೀವೇ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳಬಹುದು. ಹಾಗಾದ್ರೆ, ಯಾವ ರೀತಿಯ ಕನಸುಗಳನ್ನು ಹಂಚಿಕೊಳ್ಳಬಾರದು.&lt;/p&gt;&lt;img&gt;&lt;p&gt;ಕನಸಿನಲ್ಲಿ ದೇವಸ್ಥಾನಕ್ಕೆ ಹೋದಂತೆ ಅಥವಾ ದೇವರು-ದೇವತೆಗಳನ್ನು ನೋಡಿದಂತೆ ಕಂಡರೆ, ಅಂತಹ ಕನಸನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂಥ ಕನಸುಗಳು ಆಧ್ಯಾತ್ಮಿಕ ಪ್ರಗತಿ ಮತ್ತು ಮುಂಬರುವ ಸಂಪತ್ತನ್ನು ಸೂಚಿಸುತ್ತವೆ. ಈ ರೀತಿಯ ಕನಸುಗಳನ್ನು ನೀವು ಯಾರಿಗಾದರೂ ಹೇಳಿಕೊಂಡರೆ, ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ. ಅದಕ್ಕಾಗಿಯೇ ಈ ಕನಸುಗಳನ್ನು ಹಂಚಿಕೊಳ್ಳಬಾರದು.&lt;/p&gt;&lt;img&gt;&lt;p&gt;ಕನಸಿನಲ್ಲಿ ಹಚ್ಚ ಹಸಿರಿನ ಕಾಡುಗಳು, ಪರ್ವತಗಳು, ಹರಿಯುವ ನದಿಗಳು, ಜಲಪಾತಗಳು ಮತ್ತು ಸುಂದರವಾದ ತೋಟಗಳನ್ನು ನೋಡುವುದು ಭವಿಷ್ಯದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ನೀವು ಶೀಘ್ರದಲ್ಲೇ ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇದೆ ಎಂದು ಇದರ ಅರ್ಥ.&amp;nbsp;&lt;/p&gt;&lt;p&gt;ಇವು ಕೂಡ ಬಹಳ ಒಳ್ಳೆಯ ಕನಸುಗಳು. ಇವುಗಳನ್ನು ಸಹ ಇತರರಿಗೆ ಹೇಳಬಾರದು. ಇದರಿಂದ ನೀವು ಕೇಳಬೇಕಾದ ಶುಭ ಸುದ್ದಿ ನಿಂತುಹೋಗುವ ಸಾಧ್ಯತೆ ಇದೆ. ಆದ್ದರಿಂದ, ಇವುಗಳನ್ನು ಬಹಳ ರಹಸ್ಯವಾಗಿಡಬೇಕು.&lt;/p&gt;&lt;img&gt;&lt;p&gt;ಕನಸಿನಲ್ಲಿ ಯಾರಾದರೂ ಸತ್ತಂತೆ ಕಂಡರೆ ಎಲ್ಲರೂ ಹೆದರುತ್ತಾರೆ. ಆದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಇದೂ ಕೂಡ ಒಂದು ಒಳ್ಳೆಯ ಕನಸು. ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಈ ಕನಸು ಹೇಳುತ್ತದೆ. ಈ ಕನಸನ್ನು ನೀವು ಯಾರಿಗಾದರೂ ಹೇಳಿಕೊಂಡರೆ, ನಿಮ್ಮ ಸಮಸ್ಯೆಗಳು ಕಡಿಮೆಯಾಗುವ ಬದಲು ಮತ್ತೆ ಹೆಚ್ಚಾಗುವ ಅಪಾಯವಿದೆ. ಕುಟುಂಬದಲ್ಲಿಯೂ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಕನಸಿನಲ್ಲಿ ನೀವು ಹಣ ಪಡೆದಂತೆ, ನಿಧಿ ಕಂಡಂತೆ ಅಥವಾ ಹೊಸ ವಸ್ತುವನ್ನು ಖರೀದಿಸಿದಂತೆ ಕಂಡರೆ, ಅದು ಆರ್ಥಿಕ ಪ್ರಗತಿಯ ಸಂಕೇತ. ಇಂತಹ ಕನಸುಗಳು ಭವಿಷ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಎಂದು ಸೂಚಿಸುತ್ತವೆ. ಆದರೆ, ಈ ಕನಸುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ನಿಮ್ಮ ಆರ್ಥಿಕ ಲಾಭದ ಅವಕಾಶಗಳು ದುರ್ಬಲಗೊಂಡು, ಪ್ರಗತಿಗೆ ಅಡ್ಡಿಯಾಗಬಹುದು. ಆದ್ದರಿಂದ, ಈ ಕನಸುಗಳನ್ನು ಕೂಡ ಹಂಚಿಕೊಳ್ಳಬೇಡಿ.&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/astrology/these-are-the-four-types-of-dreams-you-should-never-share-with-anyone-gi6v9z1"/>
        </item>
        <item>
            <title><![CDATA[Dangerous Plants: ನೋಡೋಕೆ ಸುಂದರ, ಆದ್ರೆ ವಿಷಕಾರಿ! ಈ 7 ಗಿಡಗಳನ್ನು ಮನೆಯಲ್ಲಿ ಅಪ್ಪಿ ತಪ್ಪಿ ನೆಡಬೇಡಿ!]]></title>
            <link>https://kannada.asianetnews.com/gallery/special/7-beautiful-but-most-deadly-plants-to-avoid-in-your-house-garden-gtifdq7</link>
            <guid isPermaLink="true">https://kannada.asianetnews.com/gallery/special/7-beautiful-but-most-deadly-plants-to-avoid-in-your-house-garden-gtifdq7</guid>
            <pubDate>Thu, 09 Apr 2026 22:45:37 +0530</pubDate>
            <description><![CDATA[&lt;p&gt;Deadly Plants To Avoid In Your House In India: ಕೆಲವು ಗಿಡಗಳು ನೋಡಲು ತುಂಬಾ ಸುಂದರವಾಗಿ ಕಾಣುತ್ತವೆ, ಆದರೆ ಅವುಗಳಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ವಿಷಕಾರಿ ಅಂಶಗಳಿರುತ್ತವೆ. ಮಕ್ಕಳು ಮತ್ತು ಸಾಕುಪ್ರಾಣಿಗಳ ಸುರಕ್ಷತೆಗಾಗಿ, ಇಂತಹ ಗಿಡಗಳನ್ನು ಮನೆಯಲ್ಲಿ ಇಡುವುದನ್ನು ತಪ್ಪಿಸಬೇಕು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knsknb12d8pc6qcaat6mddqg,imgname-new-project--63--1775754718242.jpg" type="image/jpeg" height="390" width="690"/>
            <content:encoded><![CDATA[&lt;p&gt;Deadly Plants To Avoid In Your House In India: ಕೆಲವು ಗಿಡಗಳು ನೋಡಲು ತುಂಬಾ ಸುಂದರವಾಗಿ ಕಾಣುತ್ತವೆ, ಆದರೆ ಅವುಗಳಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ವಿಷಕಾರಿ ಅಂಶಗಳಿರುತ್ತವೆ. ಮಕ್ಕಳು ಮತ್ತು ಸಾಕುಪ್ರಾಣಿಗಳ ಸುರಕ್ಷತೆಗಾಗಿ, ಇಂತಹ ಗಿಡಗಳನ್ನು ಮನೆಯಲ್ಲಿ ಇಡುವುದನ್ನು ತಪ್ಪಿಸಬೇಕು.&lt;/p&gt;&lt;img&gt;ಜನರು ತಮ್ಮ ಮನೆಗಳನ್ನು ಹಸಿರಾಗಿಸಲು ಮತ್ತು ಸುಂದರಗೊಳಿಸಲು ಹಲವು ಬಗೆಯ ಅಲಂಕಾರಿಕ ಗಿಡಗಳನ್ನು ನೆಡುತ್ತಾರೆ. ಆದರೆ, ನೋಡಲು ಸುಂದರವಾಗಿ ಕಾಣುವ ಪ್ರತಿಯೊಂದು ಗಿಡವೂ ಸುರಕ್ಷಿತವಾಗಿರುವುದಿಲ್ಲ. ಅನೇಕ ಗಿಡಗಳಲ್ಲಿ ವಿಷಕಾರಿ ಅಂಶಗಳಿದ್ದು, ಅವು ಮಕ್ಕಳು, ಸಾಕುಪ್ರಾಣಿಗಳು ಮತ್ತು ದೊಡ್ಡವರಿಗೂ ಅಪಾಯಕಾರಿಯಾಗಬಹುದು. ಹಾಗಾಗಿ, ಗಿಡಗಳನ್ನು ಆಯ್ಕೆ ಮಾಡುವಾಗ ಸೌಂದರ್ಯದ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡುವುದು ಮುಖ್ಯ.&lt;img&gt;ಈ ಗಿಡವು ತನ್ನ ದೊಡ್ಡ, ಕೆಳಮುಖವಾಗಿ ಬಾಗಿದ ಹೂವುಗಳಿಂದಾಗಿ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆದರೆ ಇದರಲ್ಲಿ ಅಪಾಯಕಾರಿ ವಿಷ ಅಡಗಿದೆ. ಈ ಗಿಡದ ಯಾವುದೇ ಭಾಗವನ್ನು ತಿಂದರೆ, ಹೃದಯ ಬಡಿತ ಹೆಚ್ಚಾಗುವುದು ಮತ್ತು ಪಾರ್ಶ್ವವಾಯು ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದು ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ವಿಶೇಷವಾಗಿ ಹೆಚ್ಚು ಅಪಾಯಕಾರಿ. ಆದ್ದರಿಂದ ಇದನ್ನು ಮನೆಯೊಳಗೆ ಬೆಳೆಸಬಾರದು.&lt;img&gt;ಬೆಲ್ಲಡೋನಾವನ್ನು ವಿಶ್ವದ ಅತ್ಯಂತ ವಿಷಕಾರಿ ಸಸ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದರ ಹೊಳೆಯುವ ಕಪ್ಪು ಹಣ್ಣುಗಳು (berries) ನೋಡಲು ಆಕರ್ಷಕವಾಗಿ ಕಂಡರೂ, ಅವು ಅತ್ಯಂತ ಅಪಾಯಕಾರಿ. ಇದನ್ನು ತಿಂದರೆ ದೃಷ್ಟಿ ಮಂದವಾಗಬಹುದು, ಹೃದಯ ಬಡಿತದಲ್ಲಿ ಏರುಪೇರಾಗಬಹುದು ಮತ್ತು ಗಂಭೀರ ಸಂದರ್ಭಗಳಲ್ಲಿ ಇದು ಮಾರಣಾಂತಿಕವೂ ಆಗಬಹುದು.&lt;img&gt;ಕ್ಯಾಸ್ಟರ್ ಬೀನ್ ಗಿಡದಲ್ಲಿ 'ರಿಸೈನ್' (ricin) ಎಂಬ ಅತ್ಯಂತ ವಿಷಕಾರಿ ಅಂಶ ಕಂಡುಬರುತ್ತದೆ. ಇದರ ಬೀಜಗಳು ವಿಶೇಷವಾಗಿ ಅಪಾಯಕಾರಿ. ಒಂದು ವೇಳೆ ತಪ್ಪಿ ತಿಂದರೆ, ವಾಂತಿ, ಹೊಟ್ಟೆನೋವು ಮತ್ತು ದೇಹದ ಅಂಗಾಂಗಗಳಿಗೆ ಹಾನಿಯಾಗಬಹುದು. ಈ ಗಿಡ ನೋಡಲು ಸುಂದರವಾಗಿದ್ದರೂ, ಮನೆಯ ವಾತಾವರಣಕ್ಕೆ ಇದನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ.&lt;img&gt;ಫಾಕ್ಸ್&zwnj;ಗ್ಲೋವ್ ಗಿಡದ ಸುಂದರ, ಗಂಟೆಯಾಕಾರದ ಹೂವುಗಳು ಯಾರನ್ನಾದರೂ ಮೋಡಿ ಮಾಡಬಹುದು. ಆದರೆ ಅವುಗಳಲ್ಲಿರುವ ವಿಷವು ನೇರವಾಗಿ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಈ ಗಿಡವನ್ನು ತಿಂದರೆ ಹೃದಯ ಸಂಬಂಧಿ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ, ಮಕ್ಕಳಿರುವ ಮನೆಗಳಲ್ಲಿ ಇದನ್ನು ಬೆಳೆಸುವುದು ಅಪಾಯಕಾರಿ.&lt;img&gt;ಈ ಗಿಡವು ತನ್ನ ಸುವಾಸನೆ ಮತ್ತು ಚಿಕ್ಕ ಬಿಳಿ ಹೂವುಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದರಲ್ಲಿ 'ಕಾರ್ಡಿಯಾಕ್ ಗ್ಲೈಕೋಸೈಡ್ಸ್' (cardiac glycosides) ಎಂಬ ವಿಷಕಾರಿ ಅಂಶಗಳಿವೆ. ಇದನ್ನು ತಿಂದರೆ ವಾಂತಿ, ತಲೆಸುತ್ತು ಮತ್ತು ಹೃದಯ ಬಡಿತದಲ್ಲಿ ವ್ಯತ್ಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದು ಸಾಕುಪ್ರಾಣಿಗಳಿಗೂ ಅತ್ಯಂತ ಅಪಾಯಕಾರಿ.&lt;img&gt;ಒಲಿಯಾಂಡರ್ ಗಿಡವು ತನ್ನ ವರ್ಣರಂಜಿತ ಹೂವುಗಳಿಂದಾಗಿ ಬಹಳ ಜನಪ್ರಿಯವಾಗಿದೆ. ಆದರೆ ಇದರ ಪ್ರತಿಯೊಂದು ಭಾಗವೂ ವಿಷಕಾರಿಯಾಗಿದೆ. ಇದರ ಎಲೆ, ಹೂವು ಮತ್ತು ಕಾಂಡ ಎಲ್ಲವೂ ಹಾನಿಕಾರಕ. ಇದನ್ನು ತಿಂದರೆ ಅಥವಾ ಇದರ ಸಂಪರ್ಕಕ್ಕೆ ಬಂದರೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಇದನ್ನು ಮನೆಯೊಳಗೆ ಬೆಳೆಸಬಾರದು.&lt;img&gt;ವಾಟರ್ ಹೆಮ್ಲಾಕ್ ಅನ್ನು ವಿಶ್ವದ ಅತ್ಯಂತ ವಿಷಕಾರಿ ಸಸ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದನ್ನು ತಿಂದರೆ ದೇಹದಲ್ಲಿ ತೀವ್ರ ಸೆಳೆತ, ಮೂರ್ಛೆ ಮತ್ತು ನರವ್ಯೂಹದ ಮೇಲೆ ಗಂಭೀರ ಅಡ್ಡಪರಿಣಾಮಗಳು ಉಂಟಾಗಬಹುದು. ಈ ಗಿಡವು ಅತ್ಯಂತ ಅಪಾಯಕಾರಿ ಮತ್ತು ತಪ್ಪಿ ಮುಟ್ಟಿದರೂ ಅಪಾಯವನ್ನು ಉಂಟುಮಾಡಬಹುದು. ಆದ್ದರಿಂದ, ಇದನ್ನು ಮನೆಯಿಂದ ದೂರವಿಡುವುದೇ ಉತ್ತಮ.]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/special/7-beautiful-but-most-deadly-plants-to-avoid-in-your-house-garden-gtifdq7"/>
        </item>
        <item>
            <title><![CDATA[Washing Machine ಆನ್‌ ಇದ್ದಾಗ, ಬೇರೆ ಬೇರೆ ಕೆಲಸ ಮಾಡ್ತಿರ್ತೀರಾ? ಸ್ನಾನಕ್ಕೆ ಹೋದ್ರೆ ಮಾತ್ರ ಅಷ್ಟೇ ಕಥೆ!]]></title>
            <link>https://kannada.asianetnews.com/gallery/special/never-shower-while-the-washing-machine-is-running-why-here-is-the-reason-lavfr78</link>
            <guid isPermaLink="true">https://kannada.asianetnews.com/gallery/special/never-shower-while-the-washing-machine-is-running-why-here-is-the-reason-lavfr78</guid>
            <pubDate>Sat, 11 Apr 2026 15:02:35 +0530</pubDate>
            <description><![CDATA[&lt;p&gt;Washing Machine: ವಾಶಿಂಗ್ ಮಶಿನ್ ಬಳಸುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮುಂದೆ ದೊಡ್ಡ ಅನಾಹುತವೇ ಸಂಭವಿಸಬಹುದು. ಅನೇಕ ಮಹಿಳೆಯರು ಮಲ್ಟಿ ಟ್ಯಾಲೆಂಟೆಡ್ ಆಗಿರುತ್ತಾರೆ. ಅವರು ಒಂದೇ ಬಾರಿಗೆ ಹಲವು ಕೆಲಸಗಳನ್ನು ಮಾಡುತ್ತಾರೆ. ಇದು ತಪ್ಪು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knxxjbd03k3rmhbxtdezrd94,imgname-new-project--69--1775899323808.jpg" type="image/jpeg" height="390" width="690"/>
            <content:encoded><![CDATA[&lt;p&gt;Washing Machine: ವಾಶಿಂಗ್ ಮಶಿನ್ ಬಳಸುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮುಂದೆ ದೊಡ್ಡ ಅನಾಹುತವೇ ಸಂಭವಿಸಬಹುದು. ಅನೇಕ ಮಹಿಳೆಯರು ಮಲ್ಟಿ ಟ್ಯಾಲೆಂಟೆಡ್ ಆಗಿರುತ್ತಾರೆ. ಅವರು ಒಂದೇ ಬಾರಿಗೆ ಹಲವು ಕೆಲಸಗಳನ್ನು ಮಾಡುತ್ತಾರೆ. ಇದು ತಪ್ಪು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ವಾಶಿಂಗ್&zwnj; ಮಶಿನ್ ಆನ್ ಮಾಡಿ, ಅದು ತನ್ನ ಕೆಲಸ ಮಾಡಿಕೊಳ್ಳಲಿ ಎಂದು ಬೇರೆ ಕೆಲಸಕ್ಕೆ ಹೋಗುತ್ತಾರೆ. ಆದರೆ, ಮೆಷಿನ್ ಚಾಲನೆಯಲ್ಲಿರುವಾಗ ಕೆಲವು ಕೆಲಸಗಳನ್ನು ಮಾಡಬಾರದು ಎಂದು ತಜ್ಞರು ಹೇಳುತ್ತಾರೆ. ಅವು ಯಾವುವು ಎಂದು ನೋಡೋಣ.&lt;/p&gt;&lt;img&gt;&lt;p&gt;ವಾಶಿಂಗ್ ಮಶಿನ್ ಆನ್ ಇರುವಾಗ ತಪ್ಪಿಯೂ ಸ್ನಾನಕ್ಕೆ ಹೋಗಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಇದು ಅನೇಕರಿಗೆ ಸಾಮಾನ್ಯ ವಿಷಯ ಎನಿಸಬಹುದು. ಆದರೆ, ಇದರಿಂದ ದೊಡ್ಡ ಅಪಾಯವೇ ಸಂಭವಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?&lt;/p&gt;&lt;img&gt;&lt;p&gt;ವಾಶಿಂಗ್&zwnj; ಮಶಿನ್ ಹೆಚ್ಚು ಕಂಪನವನ್ನು ಉಂಟುಮಾಡುವ ಎಲೆಕ್ಟ್ರಿಕ್ ಯಂತ್ರ. ಹೆಚ್ಚು ಕಾಲ ಬಳಸುವುದರಿಂದ, ಮಶಿನ್ ಒಳಗಿನ ವೈರ್&zwnj;ಗಳು ಸವೆದು ಹೋಗಬಹುದು ಅಥವಾ ಸಡಿಲವಾಗಬಹುದು. ಈ ಲೈವ್ ವೈರ್ ಮಶಿನ್&zwnj;ನ ಬಾಡಿಗೆ ಅಥವಾ ನೀರನ್ನು ಹೊರಹಾಕುವ ಪಂಪ್&zwnj;ಗೆ ತಾಗಿದರೆ, ವಿದ್ಯುತ್ ನೀರಿನ ಮೂಲಕ ಹರಿಯುತ್ತದೆ.&amp;nbsp;&lt;/p&gt;&lt;p&gt;ಅನೇಕ ಮನೆಗಳಲ್ಲಿ, ವಾಶಿಂಗ್ ಮಶಿನ್&zwnj;, ಶವರ್ ಒಂದೇ ಪ್ಲಂಬಿಂಗ್ ಅಥವಾ ಡ್ರೈನೇಜ್ ವ್ಯವಸ್ಥೆಗೆ ಸಂಪರ್ಕ ಹೊಂದಿರುತ್ತವೆ. ಹೀಗಾದಾಗ, ಮಶಿನ್&zwnj;ನಿಂದ ಬರುವ ವಿದ್ಯುತ್, ಪೈಪ್&zwnj;ಗಳ ಮೂಲಕ ನೀವು ಸ್ನಾನ ಮಾಡುವ ನೀರನ್ನು ತಲುಪಿ, ದೇಹಕ್ಕೆ ತಾಗಬಹುದು. ಇದರಿಂದ ಕರೆಂಟ್ ಶಾಕ್ ಹೊಡೆಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ನಿಮ್ಮ ಮನೆಯಲ್ಲೂ ವಾಶಿಂಗ್&zwnj; ಮಶಿನ್, ಶವರ್ ಒಂದೇ ಪೈಪ್&zwnj;ನಿಂದ ನೀರು ಪಡೆಯುತ್ತಿದ್ದರೆ, ಮಶಿನ್ ಆನ್ ಇರುವಾಗ ಸ್ನಾನಕ್ಕೆ ಹೋದರೆ, ನಿಮಗೆ ನೀರಿನ ವೇಗ ಕಡಿಮೆಯಾಗಬಹುದು.&amp;nbsp;&lt;/p&gt;&lt;img&gt;&lt;p&gt;ಹಳೆಯ ವೈರಿಂಗ್ ಇರುವ ಮನೆಗಳಲ್ಲಿ, ವಾಶಿಂಗ್ ಮಶಿನ್, ಎಲೆಕ್ಟ್ರಿಕ್ ವಾಟರ್ ಹೀಟರ್ (ಗೀಸರ್) ಎರಡನ್ನೂ ಒಂದೇ ಬಾರಿಗೆ ಚಲಾಯಿಸಿದರೆ, ಸರ್ಕ್ಯೂಟ್ ಓವರ್&zwnj;ಲೋಡ್ ಆಗಿ, ಶಾರ್ಟ್ ಸರ್ಕ್ಯೂಟ್&zwnj;ನಿಂದ ಬೆಂಕಿ ಅವಘಡ ಸಂಭವಿಸಬಹುದು.&lt;/p&gt;&lt;img&gt;&lt;p&gt;ವಾಶಿಂಗ್&zwnj; ಮಶಿನ್ ಬಳಸಿ ಮುಗಿದ ನಂತರ ಕನಿಷ್ಠ 30-40 ನಿಮಿಷಗಳ ನಂತರವೇ ಸ್ನಾನ ಮಾಡಿ. ನಿಮ್ಮ ಮನೆಯಲ್ಲಿ ಎಲೆಕ್ಟ್ರಿಕಲ್ ಗ್ರೌಂಡಿಂಗ್ ಯಾವಾಗಲೂ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ವಾಶಿಂಗ್&zwnj; ಮಶಿನ್ ಬಾತ್&zwnj;ರೂಮ್&zwnj;ನಲ್ಲಿದ್ದರೆ, ಒದ್ದೆ ಕೈಗಳಿಂದ ಸ್ವಿಚ್ ಅನ್ನು ಎಂದಿಗೂ ಮುಟ್ಟಬೇಡಿ.&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/special/never-shower-while-the-washing-machine-is-running-why-here-is-the-reason-lavfr78"/>
        </item>
        <item>
            <title><![CDATA[ವಿದೇಶಕ್ಕೆ ಹೋಗಿ ನೆಲೆಸಿರುವ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ನಟಿಯರಿವರು; ಯಾರು ಎಲ್ಲಿದ್ದಾರೆ ನೋಡಿ!]]></title>
            <link>https://kannada.asianetnews.com/sandalwood/some-sandalwood-movies-actress-are-staying-abroad-now-and-here-is-the-information-for-few-of-them/articleshow-md08659</link>
            <guid isPermaLink="true">https://kannada.asianetnews.com/sandalwood/some-sandalwood-movies-actress-are-staying-abroad-now-and-here-is-the-information-for-few-of-them/articleshow-md08659</guid>
            <pubDate>Mon, 13 Apr 2026 18:34:40 +0530</pubDate>
            <description><![CDATA[&lt;p&gt;ಈ ನಟಿಯರಲ್ಲಿ ಅನೇಕರು ಈಗ ಸಿನಿಮಾಗಳಲ್ಲಿ ನಟನೆ ಮಾಡುತ್ತಿಲ್ಲ. ಈ ಮೊದಲು ಕನ್ನಡದ ಹಲವು ಸಿನಿಮಾಗಳಲ್ಲಿ ಈ ನಟಿಯರು ನಟಿಸಿದ್ದರು. ಆದರೆ, ತಮ್ಮತಮ್ಮ ಮದುವೆ ಬಳಿಕ ಈ ಎಲ್ಲಾ ನಟಿಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಕೆಲವರು ಮತ್ತೆ ಭಾರತಕ್ಕೆ ವಾಪಸ್ ಕೂಡ ಆಗಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp3e7mv7y1dk27xjeme7rk8g,imgname-manya-naidu-sindhu-menon-rambha-1776084570983.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಈ ನಟಿಯರು ಈಗೆಲ್ಲಿದ್ದಾರೆ ನೋಡಿ&lt;/strong&gt;&lt;/p&gt;&lt;p&gt;ಕನ್ನಡ ಸಿನಿಮಾರಂಗದಲ್ಲಿ (Sandalwood) ನಡೆದ, ನಡೆಯುತ್ತಿರುವ ಹಲವಾರು ಸಂಗತಿಗಳು ಪ್ರೇಕ್ಷಕರಿಗೆ ಗೊತ್ತಿಲ್ಲ. ಅದರಲ್ಲೂ ಹಲವರು ಸೋಷಿಯಲ್ ಮೀಡಿಯಾಗಳನ್ನು ನೋಡೋದಿಲ್ಲ. ಟಿವಿ, ನ್ಯೂಸ್ ಪೇಪರ್&zwnj;, ಮನರಂಜನೆಗಳು ಹೀಗೆ ಇಷ್ಟಕ್ಕೇ ಸೀಮಿತವಾಗಿ ಮಾಹಿತಿ ಪಡೆದುಕೊಳ್ಳುವವರು ಹಲವರು. ಆದರೆ, ಅಂಥವರಿಗೆ ಹಲವು ಮಾಹಿತಿಗಳು ಮಿಸ್ ಆಗಿರುತ್ತವೆ. ಅಂತಹ ಒಂದು ಮಾಹಿತಿ ಇಲ್ಲಿದೆ ನೋಡಿ..&lt;/p&gt;&lt;h2&gt;ಭಾರತ ದೇಶದಲ್ಲಿಯೇ ಇಲ್ಲ&lt;/h2&gt;&lt;p&gt;ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಹಲವು ನಟಿಯರು ಈಗ ಇಲ್ಲಿ ಅಥವಾ ಭಾರತ ದೇಶದಲ್ಲಿಯೇ ಇಲ್ಲ. ಹಲವು ವಿದೇಶಗಳಲ್ಲಿ ಅವರೆಲ್ಲರೂ ಜೀವಿಸುತ್ತಿದ್ದಾರೆ. ಹಾಗಿದ್ದರೆ ಯಾರು ಎಲ್ಲಿ ಇದ್ದಾರೆ? ಏನು ಮಾಡ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ ಮಾಹಿತಿ ಪ್ರಕಾರ ಬರೆದ ಸ್ಟೋರಿ ಇಲ್ಲಿದೆ. ಈ ಮಾಹಿತಿ ಪಕ್ಕಾ ಅಂತೇನಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆ, ಸದ್ಯಕ್ಕೆ ಈ ನಟಿಯರು ಈ ದೇಶಗಳಲ್ಲಿ ಇದ್ದಾರೆ ನೋಡಿ..&lt;/p&gt;&lt;p&gt;ರಂಭಾ- ಕೆನಡಾ&lt;/p&gt;&lt;p&gt;ಮಾಧವಿ-ಅಮೆರಿಕಾ&lt;/p&gt;&lt;p&gt;ದೀಪಿಕಾ ಕಾಮಯ್ಯ- ಆಸ್ಟ್ರೇಲಿಯಾ&lt;/p&gt;&lt;p&gt;ಮಾನ್ಯ ನಾಯ್ಡು- ಅಮೆರಿಕಾ&lt;/p&gt;&lt;p&gt;ಸಿಂಧೂ ಮೆನನ್- ಇಂಗ್ಲೆಂಡ್&lt;/p&gt;&lt;p&gt;ನಯನಾ ಪುಟ್ಟಸ್ವಾಮಿ- ಅಮೆರಿಕಾ&lt;/p&gt;&lt;p&gt;ಪ್ರಿಯಾ ಎಸ್ ಛಾಬ್ರಿಯಾ- ಅಮೆರಿಕಾ&lt;/p&gt;&lt;h3&gt;ನಟನೆ ಮಾಡುತ್ತಿಲ್ಲ&lt;/h3&gt;&lt;p&gt;ಈ ನಟಿಯರಲ್ಲಿ ಅನೇಕರು ಈಗ ಸಿನಿಮಾಗಳಲ್ಲಿ ನಟನೆ ಮಾಡುತ್ತಿಲ್ಲ. ಈ ಮೊದಲು ಕನ್ನಡದ ಹಲವು ಸಿನಿಮಾಗಳಲ್ಲಿ ಈ ನಟಿಯರು ನಟಿಸಿದ್ದರು. ಆದರೆ, ತಮ್ಮತಮ್ಮ ಮದುವೆ ಬಳಿಕ ಈ ಎಲ್ಲಾ ನಟಿಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಕೆಲವರು ಮತ್ತೆ ಭಾರತಕ್ಕೆ ವಾಪಸ್ ಕೂಡ ಆಗಿದ್ದಾರೆ. ಈ ಬಗ್ಗೆ ಹಲವು ಪ್ರೇಕ್ಷಕರಿಗೆ, ಸಿನಿಪ್ರೇಮಿಗಳಿಗೆ ಹಾಗೂ ಫ್ಯಾನ್ಸ್&zwnj;ಗಳಿಗೆ ಭಾರೀ ಕುತೂಹಲ ಇರುತ್ತದೆ. ಅಂಥವರಿಗೆ ಇಲ್ಲಿದೆ ಅವರಿಷ್ಟದ ಮಾಹಿತಿ.&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/some-sandalwood-movies-actress-are-staying-abroad-now-and-here-is-the-information-for-few-of-them/articleshow-md08659"/>
        </item>
        <item>
            <title><![CDATA[ಎಣ್ಣೆ ಹೊಡೆದು ಡ್ಯಾಮೇಜ್‌ ಆಗಿರುವ ಲಿವರ್‌ಗೆ ಮರು ಜೀವ ಕೊಡುವ ಈ ಹಣ್ಣು; ಯಾವುದು?]]></title>
            <link>https://kannada.asianetnews.com/gallery/special/repairing-damaged-liver-here-is-a-fruits-nz5yrbm</link>
            <guid isPermaLink="true">https://kannada.asianetnews.com/gallery/special/repairing-damaged-liver-here-is-a-fruits-nz5yrbm</guid>
            <pubDate>Fri, 10 Apr 2026 16:29:29 +0530</pubDate>
            <description><![CDATA[&lt;p&gt;Alcoholic Liver Damage: ಕೆಲವರಂತೂ ಅತಿಯಾದ ಮದ್ಯಪಾನ ಮಾಡುತ್ತಾರೆ. ಖುಷಿಗೂ, ದುಃಖಕ್ಕೂ ಇವರಿಗೆ ಮದ್ಯ ಬೇಕು. ಆದರೆ ಇದರಿಂದ ಲಿವರ್&zwnj;ನಲ್ಲಿ ಕಿಣ್ವಗಳ (enzymes) ವ್ಯತ್ಯಯ ಉಂಟಾಗುವುದು. ಅಂಜೂರ ಈ ಕಿಣ್ವಗಳನ್ನು ಸಮತೋಲನಕ್ಕೆ ತರಲು ಸಹಾಯ ಮಾಡುವುದು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knvfn4r7ry7wgmf6r4209prh,imgname-new-project--64--1775817626375.jpg" type="image/jpeg" height="390" width="690"/>
            <content:encoded><![CDATA[&lt;p&gt;Alcoholic Liver Damage: ಕೆಲವರಂತೂ ಅತಿಯಾದ ಮದ್ಯಪಾನ ಮಾಡುತ್ತಾರೆ. ಖುಷಿಗೂ, ದುಃಖಕ್ಕೂ ಇವರಿಗೆ ಮದ್ಯ ಬೇಕು. ಆದರೆ ಇದರಿಂದ ಲಿವರ್&zwnj;ನಲ್ಲಿ ಕಿಣ್ವಗಳ (enzymes) ವ್ಯತ್ಯಯ ಉಂಟಾಗುವುದು. ಅಂಜೂರ ಈ ಕಿಣ್ವಗಳನ್ನು ಸಮತೋಲನಕ್ಕೆ ತರಲು ಸಹಾಯ ಮಾಡುವುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಂಜೂರದಲ್ಲಿರುವ ಸಮೃದ್ಧ ಆಂಟಿ-ಆಕ್ಸಿಡೆಂಟ್&zwnj;ಗಳಿಂದಾಗಿ ಲಿವರ್ ಕೋಶಗಳನ್ನು ಹಾನಿಯಿಂದ ರಕ್ಷಣೆ ಮಾಡುತ್ತದೆ, ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಲಿವರ್&zwnj;ನಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು, 'ಫ್ಯಾಟಿ ಲಿವರ್' ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುವುದು&lt;/p&gt;&lt;img&gt;&lt;p&gt;2-3 ಒಣ ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ತಾಜಾ ಅಂಜೂರದ ಹಣ್ಣನ್ನು ನೇರವಾಗಿ ತಿನ್ನಲೂಬಹುದು.&lt;/p&gt;&lt;img&gt;&lt;p&gt;ಅಂಜೂರ ಹಣ್ಣು ಲಿವರ್ ರಿಪೇರಿ ಮಾಡಲು ಸಹಾಯ ಮಾಡುವುದು, ಆದರೆ ನೀವು ಮದ್ಯಪಾನವನ್ನು ಮುಂದುವರಿಸುತ್ತ, ಹಣ್ಣು ತಿಂದರೆ ಅದರಿಂದ ಪ್ರಯೋಜನ ಸಿಗುವುದಿಲ್ಲ. ಲಿವರ್ ಸರಿಯಾಗಲು ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.&lt;/p&gt;&lt;p&gt;&lt;strong&gt;ಗಮನಿಸಿ: ಈ ಮಾಹಿತಿಯು ಕೇವಲ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ಅಥವಾ ಸಮಸ್ಯೆಗಳಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.&lt;/strong&gt;&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/special/repairing-damaged-liver-here-is-a-fruits-nz5yrbm"/>
        </item>
        <item>
            <title><![CDATA[ಒಣಗಿದ ತುಳಸಿಯೂ ಚಿಗುರೊಡೆಯುತ್ತೆ; ಈ ಟಿಪ್ಸ್‌ನಿಂದ ಗಿಡ ವರ್ಷವಿಡೀ ಹಸಿರಾಗಿರುತ್ತೆ]]></title>
            <link>https://kannada.asianetnews.com/webstories/special/gardening-tips-how-to-grow-tulsi-plants-from-seeds-r2eaguv</link>
            <guid isPermaLink="true">https://kannada.asianetnews.com/webstories/special/gardening-tips-how-to-grow-tulsi-plants-from-seeds-r2eaguv</guid>
            <pubDate>Thu, 09 Apr 2026 13:43:41 +0530</pubDate>
            <description><![CDATA[&lt;p&gt;Which day to plant Tulsi at home: ತುಳಸಿ ಗಿಡವನ್ನು ಬೆಳೆಸುವ ವಿಧಾನಗಳು&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrmpw245x988jn0m9hznh62,imgname-flower--34--1775722262596.jpg" type="image/jpeg" height="390" width="690"/>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/webstories/special/gardening-tips-how-to-grow-tulsi-plants-from-seeds-r2eaguv"/>
        </item>
        <item>
            <title><![CDATA[ಕನ್ನಡದ ಈ ಮೇರನಟರು 'ಸ್ತ್ರೀ' ಪಾತ್ರದಲ್ಲಿ ನಟಿಸಿದ್ದಾರೆ; ಯಾವ ಚಿತ್ರದಲ್ಲಿ ಯಾರು ನೋಡಿ!]]></title>
            <link>https://kannada.asianetnews.com/sandalwood/these-kannada-star-actors-acted-in-women-role-in-respected-movies-including-dr-rajkumar/articleshow-tcybp4i</link>
            <guid isPermaLink="true">https://kannada.asianetnews.com/sandalwood/these-kannada-star-actors-acted-in-women-role-in-respected-movies-including-dr-rajkumar/articleshow-tcybp4i</guid>
            <pubDate>Mon, 13 Apr 2026 19:49:14 +0530</pubDate>
            <description><![CDATA[&lt;p&gt;ಯಾವುದೇ ಭಾಷೆಯ ಚಿತ್ರರಂಗದಲ್ಲಿ ನಟರು ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ, ಕಥೆಗೆ ಪೂರಕವಾಗಿ ನಟಿಯರ ಬದಲು ನಟರೇ ನಟಿಸಬೇಕಾದ ಅನಿವಾರ್ಯತೆ ಎದುರಾದಾಗ, ನಿರ್ದೇಶಕರೇ ಅಂತಹ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಆಗ ಆ ಚಿತ್ರದ ನಟರು ಸ್ಟಾರ್ ನಟರು, ಮೇರು ನಟರೇ ಆಗಿದ್ದರೂ ಸ್ತ್ರೀ ಪಾತ್ರ ಮಾಡಬೇಕಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp3jbwa988ppxzzmp1gqk1ec,imgname-dr-rajkumar-puneeth-vishnuvardhan-1776088904009.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಿಳೆ ಪಾತ್ರದಲ್ಲಿ ಪುರುಷರು!&lt;/p&gt;&lt;p&gt;ಮೊದಲಿನ ಕಾಲದಲ್ಲಿ, ಮುಖ್ಯವಾಗಿ ನಾಟಕ ಹಾಗೂ ಯಕ್ಷಗಾನಗಳಲ್ಲಿ ಮಹಿಳೆಯ ಪಾತ್ರದಲ್ಲಿ ಪುರುಷರೇ ನಟಿಸುತ್ತಿದ್ದರು. ಆದರೆ ಸಿನಿಮಾಗಳಲ್ಲಿ ಹೆಣ್ಣಿನ ಪಾತ್ರಗಳನ್ನು ನಟಿಯರೇ ನಿರ್ವಹಿಸುವ ಅಭ್ಯಾಸ ಇದೆ. ಆದರೆ, ಕೆಲವೊಮ್ಮೆ ಕಥೆಗೆ ತಕ್ಕಂತೆ, ನಟರು, ಅದರಲ್ಲೂ ಸ್ಟಾರ್ ನಟರುಗಳು ಕೂಡ ಹೆಣ್ಣಿನ ಪಾತ್ರದಲ್ಲಿ ನಟಿಸಿದ್ದು ಇದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರೂ ಸೇರಿದಂತೆ ಹಲವರು ಸ್ತ್ರೀ ಪಾತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಹಾಗಿದ್ದರೆ ಅವರು ಯಾರು? ಈ ಸ್ಟೋರಿ ನೋಡಿ..&lt;/p&gt;&lt;p&gt;ಡಾ ರಾಜ್&zwnj;ಕುಮಾರ್-ಚಂದ್ರಹಾಸ&lt;/p&gt;&lt;p&gt;ಡಾ ವಿಷ್ಣುವರ್ಧನ್-ಹಬ್ಬ&lt;/p&gt;&lt;p&gt;ಅಂಬರೀಷ್-ಹಬ್ಬ&lt;/p&gt;&lt;p&gt;ಶಿವರಾಜ್&zwnj;ಕುಮಾರ್- ಮಿಡಿದ ಶ್ರುತಿ, ಅಣ್ಣಾವ್ರ ಮಕ್ಕಳು, 45&lt;/p&gt;&lt;p&gt;ಶರಣ್- ವಿಕ್ಟರಿ, ಜಯಲಲಿತಾ&lt;/p&gt;&lt;p&gt;ಜಗ್ಗೇಶ್- ಮೇಕಪ್&lt;/p&gt;&lt;p&gt;ಸಾಯಿಕುಮಾರ್-ಕಲ್ಪನಾ&lt;/p&gt;&lt;p&gt;ಪುನೀತ್ ರಾಜ್&zwnj;ಕುಮಾರ್- ವಸಂತಗೀತ (ಚಿಕ್ಕ ಹುಡುಗಿ ಪಾತ್ರ)&lt;/p&gt;&lt;p&gt;ಉಪೇಂದ್ರ- ಕಲ್ಪನಾ&lt;/p&gt;&lt;h2&gt;ಕತೆಗೆ ತಕ್ಕಂತೆ ವಿಶೇಷ ಪಾತ್ರ&lt;/h2&gt;&lt;p&gt;ಈ ನಟರೆಲ್ಲರೂ ಸಿನಿಮಾ ಕತೆಗೆ ತಕ್ಕಂತೆ ವಿಶೇಷ ಪಾತ್ರ ನಿರ್ವಹಿಸಿದ್ದು, ಹೆಸರಿಸಿದ ಚಿತ್ರಗಳಲ್ಲಿ ಹೆಣ್ಣಿನ ಪಾತ್ರದಲ್ಲಿ ನಟಿಸಿ ಸಿನಿರಸಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈ ಎಲ್ಲಾ ನಟರ ಮಧ್ಯೆ ದಿವಂಗತ ಪುನೀತ್ ರಾಜ್&zwnj;ಕುಮಾರ್ ಅವರು, ಡಾ ರಾಜ್&zwnj;ಕುಮಾರ್ ನಟನೆಯ 'ವಸಂತಗೀತ' ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.&lt;/p&gt;&lt;h3&gt;ಸ್ತ್ರೀ ಪಾತ್ರದಲ್ಲಿ ನಟಿಸಿ ಜನಮನ್ನಣೆ&lt;/h3&gt;&lt;p&gt;ಸಾಮಾನ್ಯವಾಗಿ, ಯಾವುದೇ ಭಾಷೆಯ ಚಿತ್ರರಂಗದಲ್ಲಿ ನಟರು ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ, ಕಥೆಗೆ ಪೂರಕವಾಗಿ ನಟಿಯರ ಬದಲು ನಟರೇ ನಟಿಸಬೇಕಾದ ಅನಿವಾರ್ಯತೆ ಎದುರಾದಾಗ, ನಿರ್ದೇಶಕರೇ ಅಂತಹ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಆಗ ಆ ಚಿತ್ರದ ನಟರು ಸ್ಟಾರ್ ನಟರು, ಮೇರು ನಟರೇ ಆಗಿದ್ದರೂ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಳ್ಳಲೇಬೇಕಾಗುತ್ತದೆ. ಈ ರೀತಿಯಾಗಿ, ಮೇಲೆ ಹೆಸರಿಸಿದ ಈ ಎಲ್ಲಾ ನಟರು ಸ್ತ್ರೀ ಪಾತ್ರದಲ್ಲಿ ನಟಿಸಿ ಜನಮನ್ನಣೆ ಪಡೆದಿದ್ದಾರೆ. ಅವರ ನಟನೆಯ ಅಂತಹ ಪಾತ್ರಗಳು ಎಂದಿಗೂ ಜೀವಂತವಾಗಿ ಇರುತ್ತವೆ.&lt;/p&gt;&lt;p&gt;ಒಟ್ಟಿನಲ್ಲಿ, ಕ್ರಿಯೇಟಿವಿಟಿಗೆ ತೆರೆದುಕೊಳ್ಳುವ ನಾಟಕ, ಯಕ್ಷಗಾನ ಹಾಗೂ ಸಿನಿಮಾಗಳಂತಹ ಮನರಂಜನಾ ಉದ್ಯಮಗಳಲ್ಲಿ ಇಂತಹ ಪ್ರಯೋಗಗಳು ಸಾಮಾನ್ಯ ಎನ್ನಬಹುದು. ಜೊತೆಗೆ, ಕೆಲವು ನಿರ್ಧಿಷ್ಟ ಕಾರಣಗಳಿಗೆ ಇಂತಹ ಪ್ರಯೋಗಗಳು ಕೆಲವು ಕಥೆಗಳಿಗೆ ಅತ್ಯಗತ್ಯ&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/these-kannada-star-actors-acted-in-women-role-in-respected-movies-including-dr-rajkumar/articleshow-tcybp4i"/>
        </item>
        <item>
            <title><![CDATA[Expired Lotion Re Uses: ಎಕ್ಸ್‌ಪೈರ್‌ ಆದ ಲೋಶನ್‌ ಬಿಸಾಕಬೇಡಿ; ಎಂಥೆಂಥ ಪ್ರಯೋಜನ ಇದೆ ಅನ್ನೋದೇ ಗೊತ್ತಿಲ್ಲ]]></title>
            <link>https://kannada.asianetnews.com/gallery/special/how-to-use-expired-lotion-reuses-for-home-furniture-leather-x3z3n7e</link>
            <guid isPermaLink="true">https://kannada.asianetnews.com/gallery/special/how-to-use-expired-lotion-reuses-for-home-furniture-leather-x3z3n7e</guid>
            <pubDate>Sat, 11 Apr 2026 14:24:26 +0530</pubDate>
            <description><![CDATA[&lt;p&gt;Body Lotion: ಎಕ್ಸ್&zwnj;ಪೈರ್ ಆದ ಲೋಷನ್ ಅನ್ನು ಕಸಕ್ಕೆ ಹಾಕುವ ಬದಲು, ಅದರಿಂದ ಹಲವು ಸ್ಮಾರ್ಟ್ ಕೆಲಸಗಳನ್ನು ಮಾಡಬಹುದು. ಫರ್ನಿಚರ್ ಪಾಲಿಶ್, ಲೆದರ್ ವಸ್ತುಗಳ ಕ್ಲೀನಿಂಗ್, ಜಿಪ್ ಸರಿಪಡಿಸುವುದು ಮತ್ತು ಬಾಗಿಲಿನ ಸದ್ದು ನಿಲ್ಲಿಸಲು ಇದು ಸೂಪರ್ ಐಡಿಯಾ. ಇದರಿಂದ ವಸ್ತುಗಳು ವೇಸ್ಟ್ ಆಗುವುದೂ ತಪ್ಪುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knxve1pc3n8v8j6vf4sz8h56,imgname-new-project--68--1775897085644.jpg" type="image/jpeg" height="390" width="690"/>
            <content:encoded><![CDATA[&lt;p&gt;Body Lotion: ಎಕ್ಸ್&zwnj;ಪೈರ್ ಆದ ಲೋಷನ್ ಅನ್ನು ಕಸಕ್ಕೆ ಹಾಕುವ ಬದಲು, ಅದರಿಂದ ಹಲವು ಸ್ಮಾರ್ಟ್ ಕೆಲಸಗಳನ್ನು ಮಾಡಬಹುದು. ಫರ್ನಿಚರ್ ಪಾಲಿಶ್, ಲೆದರ್ ವಸ್ತುಗಳ ಕ್ಲೀನಿಂಗ್, ಜಿಪ್ ಸರಿಪಡಿಸುವುದು ಮತ್ತು ಬಾಗಿಲಿನ ಸದ್ದು ನಿಲ್ಲಿಸಲು ಇದು ಸೂಪರ್ ಐಡಿಯಾ. ಇದರಿಂದ ವಸ್ತುಗಳು ವೇಸ್ಟ್ ಆಗುವುದೂ ತಪ್ಪುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ನಾವೆಲ್ಲರೂ ಲೋಷನ್&zwnj;ನ ದೊಡ್ಡ ಬಾಟಲಿಗಳನ್ನೇ ಖರೀದಿಸುತ್ತೇವೆ. ಯಾಕೆಂದರೆ ಚಳಿ ಇರಲಿ, ಬೇಸಿಗೆ ಇರಲಿ, ಕೈ-ಕಾಲುಗಳಿಗೆ ಲೋಷನ್ ಬೇಕೇಬೇಕು. 'ಒಂದು ಖರೀದಿಸಿದರೆ ಇನ್ನೊಂದು ಫ್ರೀ' (Buy One, Get One Free) ಅಂತ ಆಫರ್ ಕಂಡಾಗಂತೂ, ಆನ್&zwnj;ಲೈನ್ ಅಥವಾ ಮಾಲ್&zwnj;ನಲ್ಲಿ ಖುಷಿಯಿಂದ ಎರಡು ಬಾಟಲಿಗಳನ್ನು ತಂದುಬಿಡುತ್ತೇವೆ. ಆದರೆ, ಎಕ್ಸ್&zwnj;ಪೈರಿ ಡೇಟ್ ನೋಡೋದನ್ನೇ ಮರೆತುಬಿಡುತ್ತೇವೆ. ಹೀಗೆ ಹಣ ಉಳಿಸುವ ಸಣ್ಣ ಪ್ರಯತ್ನದಿಂದ ಕೊನೆಗೆ ನಷ್ಟವೇ ಹೆಚ್ಚು.&amp;nbsp;&lt;/p&gt;&lt;p&gt;ಎಕ್ಸ್&zwnj;ಪೈರ್ ಆದ ಲೋಷನ್ ಬಳಸಿದರೆ ಅಲರ್ಜಿ, ತುರಿಕೆ, ದದ್ದುಗಳು ಅಥವಾ ಮೊಡವೆಗಳಂತಹ ಚರ್ಮದ ಸಮಸ್ಯೆಗಳು ಬರಬಹುದು. ಆದರೆ, ಇಡೀ ಲೋಷನ್ ಬಾಟಲಿಯನ್ನು ಹಾಗೆಯೇ ಎಸೆಯುವ ಬದಲು, ಅದನ್ನು ಬೇರೆ ರೀತಿಯಲ್ಲಿ ಬಳಸಬಹುದು.&lt;/p&gt;&lt;img&gt;&lt;p&gt;ನಿಮ್ಮ ಮರದ ಫರ್ನಿಚರ್&zwnj;ಗಳನ್ನು ಕ್ಲೀನ್ ಮಾಡಲು ನೀವು ಲೋಷನ್ ಬಳಸಬಹುದು. ಲೋಷನ್&zwnj;ನ ಕ್ರೀಮಿ ಗುಣವು ಮರದ ಮೇಲೆ ಒಂದು ರಕ್ಷಣಾತ್ಮಕ ಪದರವನ್ನು ಸೃಷ್ಟಿಸುತ್ತದೆ. ಇದರಿಂದ ಫರ್ನಿಚರ್&zwnj;ಗೆ ನ್ಯಾಚುರಲ್ ಹೊಳಪು ಬರುತ್ತದೆ ಮತ್ತು ಚೆನ್ನಾಗಿ ಕ್ಲೀನ್ ಕೂಡ ಆಗುತ್ತದೆ. ಆದರೆ, ನೆನಪಿಡಿ, ಲೋಷನ್ ಅನ್ನು ಹೆಚ್ಚು ಹಚ್ಚಬೇಡಿ, ಯಾಕೆಂದರೆ ಅದು ಜಿಡ್ಡು ಜಿಡ್ಡಾಗಬಹುದು.&lt;/p&gt;&lt;img&gt;&lt;p&gt;ಎಕ್ಸ್&zwnj;ಪೈರ್ ಆದ ಲೋಷನ್ ಬಳಸಿ ಲೆದರ್ ವಸ್ತುಗಳನ್ನು ಸ್ವಚ್ಛಗೊಳಿಸಬಹುದು ಮತ್ತು ಮೃದುವಾಗಿಸಬಹುದು. ಲೋಷನ್&zwnj;ನಲ್ಲಿರುವ ತೇವಾಂಶವು ಲೆದರ್&zwnj;ಗೆ ಹೊಳಪು ನೀಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಲೆದರ್ ಶೂ, ಸ್ಯಾಂಡಲ್, ಹೀಲ್ಸ್ ಮತ್ತು ಬ್ಯಾಗ್&zwnj;ಗಳನ್ನು ಪಾಲಿಶ್ ಮಾಡಲು ಕೂಡ ಇದನ್ನು ಬಳಸಬಹುದು. ಇದರಿಂದ ಹೆಚ್ಚು ಶ್ರಮವಿಲ್ಲದೆ ಲೆದರ್ ವಸ್ತುಗಳು ಕ್ಲೀನ್ ಮತ್ತು ಶೈನಿಂಗ್ ಆಗಿ ಕಾಣುತ್ತವೆ.&lt;/p&gt;&lt;img&gt;&lt;p&gt;ನಿಮ್ಮ ಬ್ಯಾಗ್ ಅಥವಾ ಬಟ್ಟೆಗಳ ಜಿಪ್ ಸ್ಟಕ್ ಆಗಿದ್ದರೆ, ಅದನ್ನು ಸರಿಪಡಿಸಲು ಲೋಷನ್ ಸಹಾಯ ಮಾಡುತ್ತದೆ. ಸಿಕ್ಕಿಹಾಕಿಕೊಂಡ ಜಿಪ್ ಮೇಲೆ ಸ್ವಲ್ಪ ಲೋಷನ್ ಹಚ್ಚಿ. ಆದರೆ, ಲೋಷನ್ ಬಟ್ಟೆಯ ಮೇಲೆ ಬೀಳದಂತೆ ಎಚ್ಚರ ವಹಿಸಿ.&lt;/p&gt;&lt;img&gt;&lt;p&gt;ಬಾಗಿಲುಗಳ ಕೀಲುಗಳು ಅಥವಾ ಚಿಲಕಗಳು ಸ್ಟಕ್ ಆದಾಗ ಅಥವಾ ಕೀಚ್ ಕೀಚ್ ಅಂತ ಸದ್ದು ಮಾಡುತ್ತಿದ್ದರೆ, ಅಲ್ಲೂ ಕೂಡ ನೀವು ಲೋಷನ್ ಬಳಸಬಹುದು. ಇದು ಗ್ರೀಸ್&zwnj;ನಂತೆ ಕೆಲಸ ಮಾಡಿ ಸದ್ದು ನಿಲ್ಲಿಸುತ್ತದೆ.&lt;/p&gt;]]></content:encoded>
            <category>special</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/special/how-to-use-expired-lotion-reuses-for-home-furniture-leather-x3z3n7e"/>
        </item>
        <item>
            <title><![CDATA[ನಟ ಧನಂಜಯ್ ಹೊಸ ಸಾಹಸ: ZEE5 ಬೆನ್ನೇರಿ ಬರ್ತಿದೆ 'ಜೆರಾಕ್ಸ್'.. ಡಾಲಿಯ ಮೊದಲ ಒಟಿಟಿ ಧಮಾಕಾ ಶುರು!]]></title>
            <link>https://kannada.asianetnews.com/sandalwood/sandalwood-actor-daali-dhananjay-new-comedy-thriller-web-series-starts-in-ott-soon/articleshow-x5uoezy</link>
            <guid isPermaLink="true">https://kannada.asianetnews.com/sandalwood/sandalwood-actor-daali-dhananjay-new-comedy-thriller-web-series-starts-in-ott-soon/articleshow-x5uoezy</guid>
            <pubDate>Wed, 08 Apr 2026 15:56:30 +0530</pubDate>
            <description><![CDATA[&lt;p&gt;ಕನ್ನಡದ ಮಣ್ಣಿನ ಸೊಗಡಿನ ಕಥೆಗಳಿಗೆ ಮತ್ತು ಹೊಸ ಪ್ರತಿಭೆಗಳಿಗೆ ಸದಾ ಕೆಂಪು ಹಾಸು ಹಾಸುವ ZEE5 ಒಟಿಟಿ ವೇದಿಕೆ, ಈ ಸರಣಿಗಾಗಿ ಡಾಲಿ ಪಿಕ್ಚರ್ಸ್ ಜೊತೆ ಕೈಜೋಡಿಸಿದೆ. ಈ ಬಗ್ಗೆ ಮಾತನಾಡಿರುವ ಡಾಲಿ ಧನಂಜಯ, &quot;ಓಟಿಟಿ ಕ್ಷೇತ್ರದಲ್ಲಿ ನಿರ್ಮಾಣ ಮಾಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಆದರೆ ಅದಕ್ಕೆ ಸರಿಯಾದ ಕಥೆ ಮತ್ತು ವೇದಿಕೆಗಾಗಿ ಕಾಯುತ್ತಿದ್ದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knpa1svbyf29b0wg1zz9kaes,imgname-dalli-dhananjay-1775643977579.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡಿಜಿಟಲ್ ಲೋಕದಲ್ಲೂ ಅಧಿಪತ್ಯ ಸ್ಥಾಪಿಸಲು ಸಜ್ಜು&lt;/strong&gt;&lt;/p&gt;&lt;p&gt;ಕನ್ನಡ ಚಿತ್ರರಂಗದ &lsquo;ನಟ ಭಯಂಕರ&rsquo;, &lsquo;ಟಗರು&rsquo; ಖ್ಯಾತಿಯ ಡಾಲಿ ಧನಂಜಯ (Daali Dhananjay) ಅವರು ಈಗ ಕೇವಲ ಬೆಳ್ಳಿತೆರೆಯ ಮೇಲೆ ಮಾತ್ರವಲ್ಲ, ಡಿಜಿಟಲ್ ಲೋಕದಲ್ಲೂ ತಮ್ಮ ಅಧಿಪತ್ಯ ಸ್ಥಾಪಿಸಲು ಸಜ್ಜಾಗಿದ್ದಾರೆ. ಅಭಿನಯದ ಜೊತೆಗೆ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಧನಂಜಯ, ಇದೀಗ ತಮ್ಮ &lsquo;ಡಾಲಿ ಪಿಕ್ಚರ್ಸ್&rsquo; ಲಾಂಛನದಲ್ಲಿ ಚೊಚ್ಚಲ ಬಾರಿಗೆ ಓಟಿಟಿ (OTT) ಲೋಕಕ್ಕೆ ಕಾಲಿಟ್ಟಿದ್ದಾರೆ. ಅಪ್ಪಟ ಮನೋರಂಜನೆಯ ಭರವಸೆಯೊಂದಿಗೆ &ldquo;ಜೆರಾಕ್ಸ್&rdquo; (Xerox) ಎಂಬ ವಿಭಿನ್ನ ಶೀರ್ಷಿಕೆಯ ವೆಬ್ ಸರಣಿಯನ್ನು ಅವರು ಅಧಿಕೃತವಾಗಿ ಘೋಷಿಸಿದ್ದಾರೆ.&lt;/p&gt;&lt;h2&gt;ಯಾರು ಈ &lsquo;ಜೆರಾಕ್ಸ್&rsquo; ಸಾರಥಿ?&lt;/h2&gt;&lt;p&gt;ಈ ಸರಣಿಯ ಹಿಂದಿರುವ ನಿರ್ದೇಶಕರು ಸಾಮಾನ್ಯರಲ್ಲ! ಇತ್ತೀಚೆಗಷ್ಟೇ &lsquo;ಬ್ಲಿಂಕ್&rsquo; (Blink) ಎಂಬ ಸೈಂಟಿಫಿಕ್ ಥ್ರಿಲ್ಲರ್ ಚಿತ್ರದ ಮೂಲಕ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಸಂಚಲನ ಮೂಡಿಸಿ, ಫಿಲಂಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಪ್ರತಿಭಾವಂತ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರು &ldquo;ಜೆರಾಕ್ಸ್&rdquo; ಸರಣಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ಇದು ಶ್ರೀನಿಧಿ ಅವರಿಗೂ ಕೂಡ ಮೊದಲ ಓಟಿಟಿ ವೆಬ್ ಸರಣಿಯಾಗಿದೆ. &lsquo;ಬ್ಲಿಂಕ್&rsquo; ಚಿತ್ರದಲ್ಲಿ ಕಾಲದ ಜೊತೆ ಆಟವಾಡಿದ್ದ ಶ್ರೀನಿಧಿ, ಈ ಬಾರಿ ಫ್ಯಾಂಟಸಿ ಮತ್ತು ಡಾರ್ಕ್ ಕಾಮಿಡಿ ಥ್ರಿಲ್ಲರ್ ಕಥೆಯ ಮೂಲಕ ಪ್ರೇಕ್ಷಕರ ಮೆದುಳಿಗೆ ಕೆಲಸ ನೀಡಲು ರೆಡಿಯಾಗಿದ್ದಾರೆ.&lt;/p&gt;&lt;p&gt;ಡಾಲಿ-ZEE5 ಜುಗಲ್&zwnj;ಬಂಧಿ:&lt;/p&gt;&lt;p&gt;ಕನ್ನಡದ ಮಣ್ಣಿನ ಸೊಗಡಿನ ಕಥೆಗಳಿಗೆ ಮತ್ತು ಹೊಸ ಪ್ರತಿಭೆಗಳಿಗೆ ಸದಾ ಕೆಂಪು ಹಾಸು ಹಾಸುವ ZEE5 ಒಟಿಟಿ ವೇದಿಕೆ, ಈ ಸರಣಿಗಾಗಿ ಡಾಲಿ ಪಿಕ್ಚರ್ಸ್ ಜೊತೆ ಕೈಜೋಡಿಸಿದೆ. ಈ ಬಗ್ಗೆ ಮಾತನಾಡಿರುವ ಡಾಲಿ ಧನಂಜಯ, &quot;ಓಟಿಟಿ ಕ್ಷೇತ್ರದಲ್ಲಿ ನಿರ್ಮಾಣ ಮಾಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಆದರೆ ಅದಕ್ಕೆ ಸರಿಯಾದ ಕಥೆ ಮತ್ತು ವೇದಿಕೆಗಾಗಿ ಕಾಯುತ್ತಿದ್ದೆ. &lsquo;ಜೆರಾಕ್ಸ್&rsquo; ಕಥೆ ಕೇಳಿದಾಗ ನನಗೆ ತುಂಬಾ ವಿಭಿನ್ನವೆನಿಸಿತು. ಹೊಸತನದ ಕಥೆಗಳಿಗೆ ಜೀ5 ಯಾವಾಗಲೂ ಬೆಂಬಲ ನೀಡುತ್ತದೆ, ಹೀಗಾಗಿ ಈ ಯೋಜನೆಗೆ ಇದು ಸೂಕ್ತ ವೇದಿಕೆ&quot; ಎಂದು ಸಂತಸ ಹಂಚಿಕೊಂಡಿದ್ದಾರೆ.&lt;/p&gt;&lt;h3&gt;ಏನಿದು &lsquo;ಜೆರಾಕ್ಸ್&rsquo; ಸ್ಪೆಷಾಲಿಟಿ?&lt;/h3&gt;&lt;p&gt;ಸಿನಿಮಾ ಪಂಡಿತರ ಪ್ರಕಾರ, ಈ ಸರಣಿಯು 'ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್' ಜಾನರ್&zwnj;ನಲ್ಲಿ ಮೂಡಿಬರಲಿದೆ. ಇಲ್ಲಿ ಕೇವಲ ನಗಿಸುವುದು ಮಾತ್ರವಲ್ಲದೆ, ಕಥೆಯ ತಿರುವುಗಳು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಲಿವೆ. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಡಾಲಿ ಅವರ ಮುಖ್ಯ ಉದ್ದೇಶವಾಗಿದ್ದು, ಈ ಸರಣಿಯ ಮೂಲಕ ಮತ್ತಷ್ಟು ನವ ಪ್ರತಿಭೆಗಳು ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಡಾಲಿ ಪಿಕ್ಚರ್ಸ್&zwnj;ನ ನಿರ್ಮಾಣ ಮೌಲ್ಯ, ಶ್ರೀನಿಧಿ ಬೆಂಗಳೂರು ಅವರ ಬುದ್ಧಿವಂತಿಕೆಯ ನಿರ್ದೇಶನ ಮತ್ತು ZEE5 ವೇದಿಕೆಯ ಅದ್ದೂರಿ ಪ್ರಚಾರದೊಂದಿಗೆ &ldquo;ಜೆರಾಕ್ಸ್&rdquo; ಸದ್ಯದಲ್ಲೇ ಕನ್ನಡಿಗರ ಮನೆಮನ ತಲುಪಲಿದೆ. ಸದ್ಯಕ್ಕೆ ಟೈಟಲ್ ಮೂಲಕವೇ ಕುತೂಹಲ ಮೂಡಿಸಿರುವ ಈ ತಂಡ, ಸರಣಿಯ ತಾರಾಗಣ ಮತ್ತು ಬಿಡುಗಡೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಿದೆ. ಡಾಲಿ ಅಭಿಮಾನಿಗಳಿಗಂತೂ ಇದು ಈ ವರ್ಷದ ಬಹುದೊಡ್ಡ ಡಿಜಿಟಲ್ ಉಡುಗೊರೆ ಎನ್ನಬಹುದು!&lt;/p&gt;]]></content:encoded>
            <category>special</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-daali-dhananjay-new-comedy-thriller-web-series-starts-in-ott-soon/articleshow-x5uoezy"/>
        </item>
    </channel>
</rss>
