<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 26 Aug 2026 11:00:30 +0530</lastBuildDate>
        <atom:link href="https://kannada.asianetnews.com/rss/shivamogga" rel="self" type="application/rss+xml"/>
        <item>
            <title><![CDATA[2000-2002ನೇ ಸಾಲಿನ ಕನ್ನಡ ಎಂ.ಎ. ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ: ಕುವೆಂಪು ವಿಶ್ವವಿದ್ಯಾಲಯ]]></title>
            <link>https://kannada.asianetnews.com/karnataka-districts/shivamogga-kuvempu-university-kannada-ma-students-get-together-friends-meet-after-25-years-mrq/articleshow-17h598h</link>
            <guid isPermaLink="true">https://kannada.asianetnews.com/karnataka-districts/shivamogga-kuvempu-university-kannada-ma-students-get-together-friends-meet-after-25-years-mrq/articleshow-17h598h</guid>
            <pubDate>Mon, 24 Aug 2026 07:11:22 +0530</pubDate>
            <description><![CDATA[ಕುವೆಂಪು ವಿಶ್ವವಿದ್ಯಾಲಯದ 2000-2002ನೇ ಸಾಲಿನ ಕನ್ನಡ ಎಂ.ಎ ವಿದ್ಯಾರ್ಥಿಗಳು 25 ವರ್ಷಗಳ ನಂತರ ಮತ್ತೆ ಒಂದಾದರು. 'ಗುರು ನಮನ ಮತ್ತು ಸ್ನೇಹ ಸಂಭ್ರಮ' ಕಾರ್ಯಕ್ರಮವನ್ನು ಆಯೋಜಿಸಿ, ತಮ್ಮ ಗುರುಗಳಿಗೆ ಗೌರವ ಸಲ್ಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0rpv53bffnkqb80ecg2v3mb,imgname-shivamogga-1787535660139.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ:&lt;/strong&gt; 25 ವರ್ಷಗಳ ಹಿಂದೆ ಕುವೆಂಪು ವಿವಿಯ ಕನ್ನಡ ಭಾರತಿಯ ತರಗತಿಯಲ್ಲಿ ಒಟ್ಟಿಗೆ ಕುಳಿತು ಅಕ್ಷರ ಕಲಿತ ಸಹಪಾಠಿಗಳೆಲ್ಲ ಮತ್ತೆ ಕುವೆಂಪು ವಿವಿಯ ಹಿರೇಮಠ್ ಸಭಾಂಗಣದಲ್ಲಿ ಭಾನುವಾರ ಒಂದಾದರು.&lt;/p&gt;&lt;p&gt;2000-2002ನೇ ಸಾಲಿನ ಕನ್ನಡ ಎಂ.ಎ ವಿದ್ಯಾರ್ಥಿಗಳ ಮುಖದಲ್ಲಿ ವಯಸ್ಸು ಏರಿದ್ದರೂ, ಮನಸ್ಸಿನಲ್ಲಿ ಮಾತ್ರ ಅದೇ ಹಳೆಯ ಕಾಲೇಜು ದಿನಗಳ ಮುಗ್ಧತೆ, ಸ್ನೇಹದ ಬೆಚ್ಚನೆ ನೆನಪು. ಪರಸ್ಪರ ಅಪ್ಪಿಕೊಂಡು, ಹಳೆಯ ಹೆಸರುಗಳಿಂದ ಕರೆದು ಸಂಭ್ರಮಿಸಿದ ಆ ಕ್ಷಣ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿತು.&lt;/p&gt;&lt;h2&gt;&lt;strong&gt;&lsquo;ಗುರು ನಮನ ಮತ್ತು ಸ್ನೇಹ ಸಂಭ್ರಮ-2026&rsquo;&lt;/strong&gt;&lt;/h2&gt;&lt;p&gt;ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ಅವರ ಬದುಕಿನ ಭಾಗವಾದ ಪತ್ನಿ, ಮಕ್ಕಳನ್ನೂ ಕರೆತಂದು ಗುರುಗಳ ಪಾದಕ್ಕೆ ನಮಸ್ಕರಿಸಿದ್ದು, ಈ ಕಾರ್ಯಕ್ರಮದ ದೊಡ್ಡ ವಿಶೇಷವಾಗಿತ್ತು. &lsquo;ಸ್ನೇಹ ಸಂಕ್ರಾಂತಿ ಬಳಗ&rsquo;ದ ಹೆಸರಲ್ಲಿ ಆಯೋಜಿಸಿದ್ದ &lsquo;ಗುರು ನಮನ ಮತ್ತು ಸ್ನೇಹ ಸಂಭ್ರಮ-2026&rsquo; ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತ ಭಾಗವಹಿಸಿ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಮತ್ತೆ ಜಗತ್ತಿಗೆ ಸಾರಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ತಮಗೆ ವಿದ್ಯೆ ಕಲಿಸಿದ ನಿವೃತ್ತ ಹಾಗೂ ಹಾಲಿ ಪ್ರಾಧ್ಯಾಪಕರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಅತ್ಯಂತ ಭಕ್ತಿ-ಗೌರವದಿಂದ ಸನ್ಮಾನಿಸಲಾಯಿತು.&lt;/p&gt;&lt;p&gt;ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಕುವೆಂಪು ವಿವಿ ಪ್ರಭಾರ ಕುಲಪತಿ ಡಾ.ಚಂದ್ರಶೇಖರ್, ಗುರುವಂದನೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಕೇವಲ ಕಾರ್ಯಕ್ರಮ ಅಲ್ಲ, ಇದೊಂದು ತಲೆಮಾರಿನ ಸಂಸ್ಕೃತಿ. ಈ ಬ್ಯಾಚಿನಲ್ಲಿ ಓದಿದ ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಗಳಾಗಿದ್ದಾರೆ, ಪ್ರಾಧ್ಯಾಪಕರಾಗಿದ್ದಾರೆ, ದೊಡ್ಡ ಹುದ್ದೆಗಳಲ್ಲಿದ್ದರೂ ಸರಳವಾಗಿ ವಿನಯವಾಗಿ ಗುರುನಮನ ಸಲ್ಲಿಸುತ್ತಿದ್ದಾರೆ. ಇದೊಂದು ಅಪರೂಪದ ಭಾವುಕ ಕ್ಷಣ. ವಿದ್ಯಾರ್ಥಿಗಳು ಎಂದರೆ ಹೀಗಿರಬೇಕು ಎಂದರು.&lt;/p&gt;&lt;h3&gt;&lt;strong&gt;ಅರ್ಥಪೂರ್ಣ ಕಾರ್ಯಕ್ರಮ&lt;/strong&gt;&lt;/h3&gt;&lt;p&gt;ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಕಂಠ ಕೂಡಿಗೆ ಅವರು, ವಿಶ್ವವಿದ್ಯಾನಿಲಯಗಳೇ ದಾರಿ ತಪ್ಪುತ್ತಿರುವ ಈ ಹೊತ್ತಲ್ಲಿ, ಹಿರಿಯ ವಿದ್ಯಾರ್ಥಿಗಳು ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತಾರ್ಹ. ಇಂದು ಕನ್ನಡ ಭಾರತಿ ಸೊರಗುತ್ತಿದೆ, ಅದು ಮತ್ತಷ್ಟು ಗಟ್ಟಿಗೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಅಧ್ಯಕ್ಷತೆ ವಹಿಸಿದ್ದ ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಕನ್ನಡ ಭಾರತಿ ಸೊರಗಿಲ್ಲ, ಅಲ್ಲಿಂದ ಅರಿವಿನ ವಿಸ್ತಾರದ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.&lt;/p&gt;&lt;p&gt;ಪ್ರೊ. ಪ್ರಶಾಂತ್ ನಾಯಕ್ ಮಾತನಾಡಿ, ಆಸ್ತಿಗಾಗಿ ಹೆತ್ತವರನ್ನೇ ಕೊಲ್ಲುವ ಕಾಲವಿದು, ಪ್ರೀತಿಯೇ ಮಾಯವಾಗುತ್ತಿರುವಾಗ, ಹಿರಿಯ ವಿದ್ಯಾರ್ಥಿಗಳು ನಮ್ಮನ್ನು ಗೌರವಿಸಿದ್ದು, ನಮ್ಮ ಕೆಲಸವನ್ನೇ ಗೌರವಿಸಿದಷ್ಟು ಖುಷಿಯಾಗಿದೆ ಎಂದರು.&lt;/p&gt;&lt;p&gt;ಇದೇ ವೇಳೆ ವಿಶ್ರಾಂತ ಪ್ರಾಧ್ಯಾಪಕರಾದ ಕುಮಾರ್ ಚಲ್ಯ, ಡಾ. ಬಸವರಾಜ ನೆಲ್ಲಿಸರ, ಡಾ. ಕೇಶವ ಮೂರ್ತಿ, ಡಾ.ಸಣ್ಣರಾಮ ಸೇರಿದಂತೆ ಹಲವು ಗುರುಗಳು ಮಾತನಾಡಿದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಸ್ನೇಹ ಬಳಗದ ಪ್ರೀತಿ, ನಿರಂಜನ, ಲತೀಫ್, ಪ್ರಕಾಶ್ ಮರ್ಗನಳ್ಳಿ,ನಾದ, ತಿಪ್ಪೇಸ್ವಾಮಿ, ನಾಗೇಶ್, ಸೇರಿದಂತೆ ಹಲವು ಹಿರಿಯ ವಿದ್ಯಾರ್ಥಿಗಳು ಹೊತ್ತಿದ್ದರು.&lt;/p&gt;&lt;p&gt;ಪ್ರಕಾಶ್ ಮರ್ಗನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುನೀತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು, ಎಚ್. ಆರ್. ತಿಪ್ಪೇಸ್ವಾಮಿ ವಂದಿಸಿದರು.&lt;/p&gt;&lt;p&gt;------&lt;/p&gt;&lt;p&gt;ಶಂಕರಘಟ್ಟದ ಕುವೆಂಪು ವಿವಿಯ ಹಿರೇಮಠ್ ಸಭಾಂಗಣದಲ್ಲಿ ಭಾನುವಾರ ಸ್ನೇಹ ಸಂಕ್ರಾಂತಿ ಬಳಗದ ವತಿಯಿಂದ ಆಯೋಜಿಸಿದ್ದ &lsquo;ಗುರು ನಮನ ಮತ್ತು ಸ್ನೇಹ ಸಂಭ್ರಮ-2026&rsquo; ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಹಾಲಿ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/shivamogga-kuvempu-university-kannada-ma-students-get-together-friends-meet-after-25-years-mrq/articleshow-17h598h"/>
        </item>
        <item>
            <title><![CDATA[ಬೈಕ್ ರೈಡ್ ಆಸೆ ತೋರಿಸಿದ ಯುವಕನ ಕೈ ಕಚ್ಚಿದ ಮುಸಿಯ, ಸೋಶಿಯಲ್ ಮೀಡಿಯಾ ರೀಲ್ಸ್ ಕ್ರೇಜ್ ತಂದಿಟ್ಟ ದುರಂತ!]]></title>
            <link>https://kannada.asianetnews.com/karnataka-districts/shivamogga-youth-attacked-by-monkey-while-filming-instagram-reel-gdp/articleshow-17zqpdn</link>
            <guid isPermaLink="true">https://kannada.asianetnews.com/karnataka-districts/shivamogga-youth-attacked-by-monkey-while-filming-instagram-reel-gdp/articleshow-17zqpdn</guid>
            <pubDate>Sat, 22 Aug 2026 11:59:37 +0530</pubDate>
            <description><![CDATA[ಶಿವಮೊಗ್ಗದಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡುವ ಹುಚ್ಚಿನಿಂದ ಯುವಕನೊಬ್ಬ ಮಂಗನೊಂದಿಗೆ ವೀಡಿಯೋ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹೆದರಿದ ಮಂಗವು ಆತನ ಕೈಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿದ್ದು, ವನ್ಯಜೀವಿಗಳೊಂದಿಗೆ ಸಾಹಸ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಎಚ್ಚರಿಕೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m2h1rzn1n70rw3ht7znss9,imgname-shivamogga-1787380139804.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿನಿಂದ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಶಿವಮೊಗ್ಗ ನಗರದ ಕಾಶಿಪುರ ಬಡಾವಣೆಯಲ್ಲಿ ನಡೆದಿದೆ.&lt;/p&gt;&lt;h2&gt;ಬೈಕ್ ಮೇಲೆ ಕುಳಿತಿದ್ದ ಮುಸಿಯ!&lt;/h2&gt;&lt;p&gt;ಕಾಶಿಪುರ ಬಡಾವಣೆಯ ಹುಚ್ಚರಾಯ ಕಾಲೋನಿಯ ನಿವಾಸಿ ಕುಮಾರ ನಾಯ್ಕ್ ಎಂಬ ಯುವಕನೇ ಈ ಅಚಾತುರ್ಯಕ್ಕೆ ಒಳಗಾದವನು. ಕುಮಾರ ನಾಯ್ಕ್ ತನ್ನ ಬೈಕ್ ಬಳಿ ಹೋದಾಗ, ಅಲ್ಲಿ ಮುಸಿಯ (ಒಂದು ಜಾತಿಯ ಕೋತಿ) ಆರಾಮವಾಗಿ ಬೈಕ್ ಮೇಲೆ ಬಂದು ಕುಳಿತಿತ್ತು. ಇದನ್ನು ಕಂಡ ಯುವಕನಿಗೆ ತಕ್ಷಣವೇ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡುವ ಹುಚ್ಚು ತಲೆಗೇರಿದೆ. ಮಂಗನೊಂದಿಗೆ ಬೈಕ್&zwnj;ನಲ್ಲಿ ರೌಂಡ್ಸ್ ಹೊಡೆಯುತ್ತಾ ವೀಡಿಯೋ ಚಿತ್ರೀಕರಿಸಲು ಪ್ಲಾನ್ ಮಾಡಿದ್ದಾನೆ.&lt;/p&gt;&lt;h2&gt;ಕ್ಷಣಾರ್ಧದಲ್ಲಿ ಬದಲಾಯ್ತು ದೃಶ್ಯ: ಯುವಕನ ಕೈಗೆ ಮಂಗನ ಭೀಕರ ದಾಳಿ!&lt;/h2&gt;&lt;p&gt;ಮಂಗನನ್ನು ಜೊತೆಯಲ್ಲಿಟ್ಟುಕೊಂಡು ಬೈಕ್ ಸ್ಟಾರ್ಟ್ ಮಾಡಲು ಯುವಕ ಹತ್ತಿರ ಹೋಗಿ ಬೈಕ್ ಕೀ (Key) ಆನ್ ಮಾಡಲು ಮುಂದಾಗಿದ್ದಾನೆ. ಆದರೆ, ಆ ಕ್ಷಣದಲ್ಲೇ ಅನಿರೀಕ್ಷಿತವಾಗಿ ಘಟನೆಯೊಂದು ನಡೆದುಹೋಗಿದೆ. ಯುವಕ ಹತ್ತಿರ ಬಂದು ಕುಳಿತಿದ್ದಕ್ಕೆ ಹೆದರಿದ ಮುಸಿಯ, ಹಠಾತ್ತಾಗಿ ಯುವಕನ ಕೈಗೆ ಬಾಯಿ ಹಾಕಿ ಕಡಿದು ಭೀಕರವಾಗಿ ದಾಳಿ ನಡೆಸಿದೆ.&lt;/p&gt;&lt;h2&gt;ಕೈ ಮಾಂಸವೇ ಕಟ್!&lt;/h2&gt;&lt;p&gt;ಯುವಕ ತಕ್ಷಣವೇ ತನ್ನ ಕೈಯನ್ನು ಮಂಗನ ಬಾಯಿಂದ ಬಿಡಿಸಿಕೊಳ್ಳಲು ಸಕಲ ಪ್ರಯತ್ನ ನಡೆಸಿದ್ದಾನೆ. ಆದರೆ, ಆತ ಕೈ ಬಿಡಿಸಿಕೊಳ್ಳುವಷ್ಟರಲ್ಲೇ ಮಂಗ ಕಡಿದ ರಭಸಕ್ಕೆ ಯುವಕನ ಕೈ ಮಾಂಸವೇ ತುಂಡಾಗಿ ಹೊರಬಂದಿತ್ತು! ಕೈಯಿಂದ ರಕ್ತ ಹರಿಯಲು ಪ್ರಾರಂಭಿಸಿದಾಗಷ್ಟೇ ಯುವಕನಿಗೆ ತಾನು ಮಾಡಿದ ಯಡವಟ್ಟಿನ ಗಂಭೀರತೆ ಮತ್ತು ಮಂಗನ ದಾಳಿಯ ಭಯಾನಕತೆ ಅರಿವಿಗೆ ಬಂದಿದೆ.&lt;/p&gt;&lt;p&gt;ದಾಳಿ ನಡೆಸಿದ ತಕ್ಷಣವೇ ಆ ಮಂಗ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದೆ. ತೀವ್ರ ರಕ್ತಸ್ರಾವ ಹಾಗೂ ತೀವ್ರ ಗಾಯದಿಂದ ಬಳಲುತ್ತಿದ್ದ ಕುಮಾರ ನಾಯ್ಕ್&zwnj;ನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ.&lt;/p&gt;&lt;p&gt;ಸೋಶಿಯಲ್ ಮೀಡಿಯಾ ಲೈಕ್ಸ್ ಮತ್ತು ವೀವ್ಸ್&zwnj;ಗಾಗಿ ವನ್ಯಜೀವಿಗಳು ಹಾಗೂ ಪ್ರಾಣಿಗಳ ಹತ್ತಿರ ಹೋಗಿ ಸಾಹಸ ಮಾಡಲು ಹೊರಟರೆ ಜೀವಕ್ಕೇ ಕಂಟಕ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>shivamogga</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/shivamogga-youth-attacked-by-monkey-while-filming-instagram-reel-gdp/articleshow-17zqpdn"/>
        </item>
        <item>
            <title><![CDATA["ನಾನು ಕರೆದಾಗ ಬರಬೇಕು": ಸಾಗರದಲ್ಲಿ ಬ್ಲ್ಯಾಕ್‌ಮೇಲ್‌ಗೆ 17 ವರ್ಷದ ವಿದ್ಯಾರ್ಥಿನಿ ಬಲಿ]]></title>
            <link>https://kannada.asianetnews.com/karnataka-districts/17-year-old-student-falls-victim-to-a-miscreants-blackmail-in-sagara-gkn/articleshow-52zt4ib</link>
            <guid isPermaLink="true">https://kannada.asianetnews.com/karnataka-districts/17-year-old-student-falls-victim-to-a-miscreants-blackmail-in-sagara-gkn/articleshow-52zt4ib</guid>
            <pubDate>Tue, 25 Aug 2026 19:20:18 +0530</pubDate>
            <description><![CDATA[&lt;p&gt;ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ವಿದ್ಯಾರ್ಥಿನಿ ಕಿಡಿಗೇಡಿಯೊಬ್ಬನ ಬ್ಲ್ಯಾಕ್&zwnj;ಮೇಲ್&zwnj; ಹಾಗೂ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು 'ನಾನು ಕರೆದಾಗ ಬರಬೇಕು' ಎಂದು ಬೆದರಿಸುತ್ತಿದ್ದ ಆರೋಪಿ ವಿರುದ್ಧ ಕ್ರಮ ಜರೂಗಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07w4bbbcp92etrj7h37jrkn,imgname-women-sad-1786970778987.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ:&lt;/strong&gt; ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ನೋವಿನ ಘಟನೆಯೊಂದು ನಡೆದಿದೆ. 19 ವರ್ಷದ ಹುಡುಗನೊಬ್ಬನ ನಿರಂತರ ಬ್ಲ್ಯಾಕ್&zwnj;ಮೇಲ್ ಹಾಗೂ ಮಾನಸಿಕ ಕಿರುಕುಳಕ್ಕೆ ಮನನೊಂದ 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿಷಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ. &quot;ನಾನು ಕರೆದಾಗಲೆಲ್ಲಾ ನೀನು ಬರಬೇಕು&quot; ಎಂದು ಕಿಡಿಗೇಡಿಯು ನೀಡುತ್ತಿದ್ದ ಬೆದರಿಕೆಯೇ ಈ ಮುಗ್ಧ ಜೀವ ಬಲಿಯಾಗಲು ಕಾರಣ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಈ ವಿದ್ಯಾರ್ಥಿನಿ ಸ್ಥಳೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಿಡಿಗೇಡಿ ಯುವಕನೊಬ್ಬ ಕಳೆದ ಒಂದೂವರೆ ವರ್ಷಗಳಿಂದ ಈಕೆಯ ಬೆನ್ನು ಬಿದ್ದಿದ್ದ ಎಂಬ ಆರೋಪ ಇದೆ. ಈ ಹಿಂದೆ ಆಕೆಗೆ ಮೊಬೈಲ್ ಫೋನ್ ನೀಡಿ ಸಂಪರ್ಕ ಬೆಳೆಸಲು ಪ್ರಯತ್ನಿಸಿದ್ದ. ಈ ವಿಷಯ ತಿಳಿದ ಪೋಷಕರು ಆತನಿಗೆ ಎಚ್ಚರಿಕೆ ನೀಡಿದ್ದರೂ, ಆತ ತನ್ನ ಚಾಳಿಯನ್ನು ಮುಂದುವರಿಸಿದ್ದ ಎಂಬ ಆರೋಪ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಬ್ಲ್ಯಾಕ್&zwnj;ಮೇಲ್ ಹಾಗೂ ಕಿರುಕುಳ&lt;/strong&gt;&lt;/h2&gt;&lt;p&gt;ವಿದ್ಯಾರ್ಥಿನಿ ಕಾಲೇಜಿಗೆ ಹೋಗುವ ದಾರಿಯಲ್ಲಿ ಬೈಕ್&zwnj;ನಲ್ಲಿ ಹಿಂಬಾಲಿಸಿ ಚುಡಾಯಿಸುತ್ತಿದ್ದ ಆರೋಪಿ, ಇತ್ತೀಚೆಗೆ ಮಿತಿ ಮೀರಿದ್ದ. ಯುವತಿಯ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಇಟ್ಟುಕೊಂಡು &quot;ನಾನು ಕರೆದಾಗಲೆಲ್ಲಾ ನೀನು ನನ್ನ ಬಳಿ ಬರಬೇಕು&quot; ಎಂದು ಬ್ಲ್ಯಾಕ್&zwnj;ಮೇಲ್ ಮಾಡಲು ಆರಂಭಿಸಿದ್ದ. ಈ ಮಾನಸಿಕ ಹಿಂಸೆಯನ್ನು ಪೋಷಕರಿಗೆ ಹೇಳಲಾಗದೆ ಮತ್ತು ಸಮಾಜದ ಮರ್ಯಾದೆಗೆ ಅಂಜಿ ವಿದ್ಯಾರ್ಥಿನಿ ತೀವ್ರ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.&lt;/p&gt;&lt;p&gt;ಆಗಸ್ಟ್ 18ರಂದು ಸಂಜೆ ಕಾಲೇಜಿನಿಂದ ಮರಳಿದ ಬಳಿಕ ವಿದ್ಯಾರ್ಥಿನಿ ಮನೆಯಲ್ಲಿದ್ದ ಕಳೆನಾಶಕವನ್ನು ಸೇವಿಸಿದ್ದಳು. ಆರಂಭದಲ್ಲಿ ಈ ವಿಷಯವನ್ನು ಮರೆಮಾಚಿದ್ದರೂ, ಆಗಸ್ಟ್ 20ರ ರಾತ್ರಿ ಆರೋಗ್ಯ ಬಿಗಡಾಯಿಸಿದಾಗ ಪೋಷಕರು ಆಸ್ಪತ್ರೆಗೆ ದಾಖಲಿಸಿದರು. ಶಿವಮೊಗ್ಗ ಹಾಗೂ ಮಣಿಪಾಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಇಂದು ಮುಂಜಾನೆ 5:15ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಬಾಲಕಿಯು ಆರೋಪಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ.&lt;/p&gt;&lt;h2&gt;&lt;strong&gt;ಪೊಲೀಸ್ ಕ್ರಮ&lt;/strong&gt;&lt;/h2&gt;&lt;p&gt;ಮೃತ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಮೇರೆಗೆ ಸಾಗರ ಗ್ರಾಮಾಂತರ ಪೊಲೀಸರು ಆರೋಪಿ ವಿರುದ್ಧ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಯಾವುದೇ ಕಾರಣಕ್ಕೂ ಯುವಜನತೆ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಜೀವ ಮತ್ತು ಜೀವನ ಅತ್ಯಂತ ಅಮೂಲ್ಯ ಎಂದು ಮನವಿ ಮಾಡಿಕೊಂಡರು.&lt;/p&gt;]]></content:encoded>
            <category>shivamogga</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/17-year-old-student-falls-victim-to-a-miscreants-blackmail-in-sagara-gkn/articleshow-52zt4ib"/>
        </item>
        <item>
            <title><![CDATA[ತೀರ್ಥಹಳ್ಳಿ ದುರಂತ: ಇಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಶ್ರೀಹುಚ್ಚೇಶ್ವರ ಶಾಲೆ]]></title>
            <link>https://kannada.asianetnews.com/karnataka-districts/thirthahalli-tragedy-srihucheshwara-school-takes-responsibility-for-the-education-of-two-children-mrq/articleshow-7w4eh98</link>
            <guid isPermaLink="true">https://kannada.asianetnews.com/karnataka-districts/thirthahalli-tragedy-srihucheshwara-school-takes-responsibility-for-the-education-of-two-children-mrq/articleshow-7w4eh98</guid>
            <pubDate>Tue, 18 Aug 2026 07:51:00 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಕಕ್ಕರಗೋಳ ಗ್ರಾಮದ ಇಬ್ಬರು ಮಕ್ಕಳಿಗೆ ಬೂದಗುಂಪಾ ಗ್ರಾಮದ ಶ್ರೀಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆಸರೆಯಾಗಿದೆ. ಶಾಲೆಯು ಮಕ್ಕಳ 8ನೇ ತರಗತಿಯವರೆಗಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡು ಮಾನವೀಯತೆ ಮೆರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09ahj8bnktv0p1ht3rtn5rp,imgname-thirthahalli-tragedy-1787019446539.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪಳ: &lt;/strong&gt;ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆ.2ರಂದು ನಡೆದ ಗುಡ್ಡ ಕುಸಿತ ದುರಂತದಲ್ಲಿ ಅಕಾಲಿಕ ಮೃತಪಟ್ಟ ತಾಲೂಕಿನ ಕಕ್ಕರಗೋಳ ಗ್ರಾಮದ ಕಾರ್ಮಿಕ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಮೀಪದ ಬೂದಗುಂಪಾ ಗ್ರಾಮದ ಶ್ರೀಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಂದಾಗಿದೆ.&lt;/p&gt;&lt;p&gt;ದುರಂತದಲ್ಲಿ ಕಕ್ಕರಗೋಳದ ಮಲ್ಲಿಕಾರ್ಜುನ ಕಟಗಿ (35), ಪತ್ನಿ ನಾಗವೇಣಿ ಕಟಗಿ (28) ಹಾಗೂ 3 ವರ್ಷದ ಮಗು ಸಂತೋಷ್ ಮೃತಪಟ್ಟಿದ್ದರು. ಬದುಕಿನ ಬಂಡಿ ಸಾಗಿಸಲು ಕೂಲಿ ಕೆಲಸಕ್ಕೆ ತೆರಳಿದ್ದ ಕುಟುಂಬ ತೀರ್ಥಹಳ್ಳಿಯಲ್ಲಿ ತಾತ್ಕಾಲಿಕ ಶೆಡ್&zwnj;ನಲ್ಲಿ ವಾಸವಾಗಿತ್ತು. ತಡರಾತ್ರಿ 2.30ಕ್ಕೆ ಗುಡ್ಡ ಕುಸಿದು ಈ ದುರ್ಘಟನೆ ಸಂಭವಿಸಿತು.&lt;/p&gt;&lt;h2&gt;&lt;strong&gt;ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ&lt;/strong&gt;&lt;/h2&gt;&lt;p&gt;ಮೃತ ಕಾರ್ಮಿಕ ಮಲ್ಲಿಕಾರ್ಜುನ ಕಟಗಿಯವರ ಮನೆಗೆ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಬೂದಗುಂಪಾದ ಕಾರ್ಯದರ್ಶಿ ಸಂತೋಷ್ ಕುಮಾರ್ ಜಿ. ಎರಕಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.&lt;/p&gt;&lt;p&gt;ಈ ವೇಳೆ ಮಾತನಾಡಿದ ಅವರು, ಬಡ ಕುಟುಂಬವೊಂದು ದುಡಿಮೆ ಅರಸಿ ಹೊರಟು ದುರಂತ ಅಂತ್ಯ ಕಂಡಿರುವುದು ದುರ್ದೈವ. ಹೀಗಾಗಿ ಅಕಾಲಿಕ ಮೃತ್ಯುವಿಗೆ ಬಲಿಯಾದ ಕಾರ್ಮಿಕನ ಮಕ್ಕಳಾದ ಮಹಾಲಕ್ಷ್ಮೀ ಹಾಗೂ ದಿವ್ಯಗೆ ತಮ್ಮ ಶಾಲೆಯಲ್ಲಿ 8ನೇ ತರಗತಿಯವರೆಗೂ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;30 ವರ್ಷದಿಂದ ಮದ್ಯ, ಗುಟ್ಕಾ ನಿಷೇಧಿಸಿ ರಾಜ್ಯದ ಮಾದರಿಯಾದ ಕೊಪ್ಪಳ ಜಿಲ್ಲೆಯ ಗ್ರಾಮ&lt;/strong&gt;&lt;/p&gt;&lt;p&gt;ಶಾಲೆಯ ಶಿಕ್ಷಕರು, ಕಕ್ಕರಗೋಳ ಗ್ರಾಮದ ನಿವಾಸಿಗಳಾದ ನರಸಿಂಹ, ಈರಪ್ಪ ರೌಡಕುಂದಿ, ಜಡಿಯಪ್ಪ ಕಾರಟಗಿ, ಬಸವರಾಜ ಛಲವಾದಿ, ಪಂಪಾಪತಿ ಜಲ್ಲಿ, ಭೀಮಣ್ಣ ಕಟಿಗೇರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಾವಿರಾರು ವಿದ್ಯಾರ್ಥಿಗಳು ಒಂದೇ ಕಡೆ ಸೇರಿದ್ದೇಕೆ? ಗಂಗಾವತಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾಡಿದ್ದೇನು?&lt;/strong&gt;&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/thirthahalli-tragedy-srihucheshwara-school-takes-responsibility-for-the-education-of-two-children-mrq/articleshow-7w4eh98"/>
        </item>
        <item>
            <title><![CDATA[Shivamogga ಉಪ್ಪಿನಕಾಯಿ ಬ್ಯುಸಿನೆಸ್; ದಿನಕ್ಕೆ 500-600 kg ಸೇಲ್, 3-4 ಕೋಟಿ ಆದಾಯ]]></title>
            <link>https://kannada.asianetnews.com/gallery/karnataka-districts/shivamogga-s-hebbar-pickle-s-success-business-500-to-600-kg-sales-per-day-3-to-4-crore-revenue-mrq-azn6fuu</link>
            <guid isPermaLink="true">https://kannada.asianetnews.com/gallery/karnataka-districts/shivamogga-s-hebbar-pickle-s-success-business-500-to-600-kg-sales-per-day-3-to-4-crore-revenue-mrq-azn6fuu</guid>
            <pubDate>Tue, 25 Aug 2026 14:15:38 +0530</pubDate>
            <description><![CDATA[&lt;p&gt;ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಬಳಿಯ 'ಬರುವೆ' ಗ್ರಾಮದ ಪಿಕಲ್ಸ್, ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದೆ. ಸುಧೀಂದ್ರ ಹೆಬ್ಬಾರ್ ಅವರು ತಮ್ಮ ತಾಯಿಯ ಪಾಕವಿಧಾನದಿಂದ ಆರಂಭಿಸಿದ ಈ ಉದ್ಯಮವು ಇಂದು ದಿನಕ್ಕೆ 500-600 ಕೆಜಿ ಉಪ್ಪಿನಕಾಯಿ ಮಾರಾಟ ಮಾಡಿ, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0w0shspgfx4fx2zxyv4xswa,imgname-whatsapp-image-2026-08-25-at-1.37.27-pm-1787646756662.jpeg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಬಳಿಯ 'ಬರುವೆ' ಗ್ರಾಮದ ಪಿಕಲ್ಸ್, ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದೆ. ಸುಧೀಂದ್ರ ಹೆಬ್ಬಾರ್ ಅವರು ತಮ್ಮ ತಾಯಿಯ ಪಾಕವಿಧಾನದಿಂದ ಆರಂಭಿಸಿದ ಈ ಉದ್ಯಮವು ಇಂದು ದಿನಕ್ಕೆ 500-600 ಕೆಜಿ ಉಪ್ಪಿನಕಾಯಿ ಮಾರಾಟ ಮಾಡಿ, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ.&lt;/p&gt;&lt;img&gt;&lt;p&gt;ಊಟ ಮಾಡುವಾಗ ತಟ್ಟೆಯಲ್ಲಿ ಉಪ್ಪಿನಕಾಯಿಯ ಒಂದು ತುಂಡಿದ್ರೆ ರುಚಿ ಹೆಚ್ಚಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಬಗೆ ಬಗೆಯ ಉಪ್ಪಿನಕಾಯಿಗಳು ಸಿಗುತ್ತವೆ. ದೊಡ್ಡ ದೊಡ್ಡ ಕಂಪನಿಗಳಿಗೆ ನಮ್ಮ ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಭಾಗದಲ್ಲಿ ಸಿಗುವ ಉಪ್ಪಿನಕಾಯಿ ಟಕ್ಕರ್ ಕೊಡುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿಯೂ ಸಿಗುತ್ತದೆ. ಆ ಉಪ್ಪಿನಕಾಯಿ ಯಾವುದು ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಹೆಬ್ಬಾರ್ ಪಿಕಲ್ಸ್ ಅಂದ್ರೆ ಬಹುತೇಕರಿಗೆ ಗೊತ್ತಿರುತ್ತದೆ. ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಭಾಗದ 'ಬರುವೆ' ಹೆಸರಿನ ಗ್ರಾಮದಲ್ಲಿ ಹೆಬ್ಬಾರ್ ಕಂಪನಿಯ ರುಚಿಕರ ಮತ್ತು ಶುದ್ದವಾದ ಬಗೆ ಬಗೆಯ ಉಪ್ಪಿನಕಾಯಿಗಳು ಸಿದ್ದವಾಗುತ್ತವೆ. Hebbar Pickles ಮಾಲೀಕರಾಗಿರುವ ಸುಧೀಂದ್ರ ಹೆಬ್ಬಾರ್ ಅವರು ಉದ್ಯಮ ಆರಂಭವಾದದ್ದು ಹೇಗೆ? ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪಿನಕಾಯಿ ಮಾರಾಟವಾಗುತ್ತೆ ಎಂಬುದನ್ನು ಯುಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಪಿಯುಸಿವರೆಗೂ ಓದಿರುವ ಸುಧೀಂದ್ರ ಅವರು ತಂದೆ ಸತ್ಯನಾರಾಯಣ ಅವರ ನಿಧನದ ಬಳಿಕ ಕುಟುಂಬದ ಹೋಟೆಲ್ ನಡೆಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಈ ವೇಳೆ ತಾಯಿ ರೇವತಿ ಅವರು ತಯಾರಿಸುತ್ತಿದ್ದ ಉಪ್ಪಿನಕಾಯಿ ವ್ಯಾಪಾರ ವಿಸ್ತರಿಸುವ ನಿರ್ಧಾರಕ್ಕೆ ಬರುತ್ತಾರೆ. ತಾಯಿ ಬಳಿಕ ಸುಧೀಂದ್ರ ಅವರಿಗೆ ಪತ್ನಿ ಸಾಥ್ ನೀಡುತ್ತಿದ್ದಾರೆ. ಪತಿ-ಪತ್ನಿ ಜೊತೆಯಾಗಿ ಹೋಟೆಲ್ ಜೊತೆ ಉಪ್ಪಿನಕಾಯಿ ವ್ಯವಹಾರ ನಡೆಸಿಕೊಂಡು ಹೋಗುತ್ತಿದ್ದಾರೆ.&lt;/p&gt;&lt;img&gt;&lt;p&gt;ಸುಧೀಂದ್ರ ಹೆಬ್ಬಾರ್ ಅವರ ಪ್ರಕಾರ, ದಿನಕ್ಕೆ 500 ರಿಂದ 600 ಕೆಜಿಯಷ್ಟು ಉಪ್ಪಿನಕಾಯಿ ಮಾರಾಟವಾಗುತ್ತದೆ. ವರ್ಷಕ್ಕೆ ಒಂದೂವರೆ ಕೋಟಿಯಷ್ಟು ಬಂಡವಾಳವನ್ನು ಹಾಕಲಾಗುತ್ತದೆ. ಮಾವಿನಕಾಯಿ ಸೀಸನ್&zwnj;ನಲ್ಲಿ ಮಾವು ಖರೀದಿಗಾಗಿ ಕೋಟಿಯಷ್ಟು ಬಂಡವಾಳ ಬೇಕಾಗುತ್ತದೆ. ನಮಗೆ ವರ್ಷದಲ್ಲಿ ಮೂರು ತಿಂಗಳು ಮಾತ್ರ ಮಾವು ಸಿಗುತ್ತದೆ. ಹಾಗಾಗಿ ಈ ಸಮಯದಲ್ಲಿ ಅತ್ಯಧಿಕ ಮಾವು ಖರೀದಿಸುತ್ತೇವೆ ಅಂತಾರೆ. ಉಪ್ಪಿನಕಾಯಿ ವ್ಯವಹಾರದಿಂದಲೇ ವರ್ಷಕ್ಕೆ 3 ರಿಂದ 4 ಕೋಟಿಯಷ್ಟು ಟರ್ನ್ ಓವರ್ ಇದೆ ಅಂತಾರೆ ಸುಧೀಂದ್ರ ಹೆಬ್ಬಾರ್.&lt;/p&gt;&lt;img&gt;&lt;p&gt;ಸದ್ಯ ಹೆಬ್ಬಾರ್ ಪಿಕಲ್ಸ್ ತಯಾರಿಕಾ ಘಟಕದಲ್ಲಿ 12 ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಾರೆ. ಎಲ್ಲಾ ಕಾರ್ಮಿಕರಿಗೆ ಊಟ, ತಿಂಡಿಯನ್ನು ಉಚಿತವಾಗಿ ನೀಡಲಾಗುತ್ತದೆ. 12 ಕಾರ್ಮಿಕರು ವರ್ಷದ 365 ದಿನವೂ ಕೆಲಸ ಕೊಡುತ್ತೇವೆ. ಕೆಲ ಸಂದರ್ಭಗಳಲ್ಲಿ ಬೇಕಾದ್ರೆ ಹೆಚ್ಚು ಕಾರ್ಮಿಕರನ್ನು ಬಳಸಿಕೊಳ್ಳುತ್ತೇವೆ. ಅತ್ಯಧಿಕವಾಗಿ ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು ಭಾಗದಲ್ಲಿ ಉಪ್ಪಿನಕಾಯಿಗಳು ಪೂರೈಕೆ ಆಗುತ್ತವೆ. ನಾವು ಪ್ರೊಡಕ್ಟ್ ಮಾರಾಟ ಮಾಡಲು ಯಾವುದೇ ಪ್ರಚಾರ ಸಹ ಮಾಡಿಲ್ಲ ಎಂದು ಸುಧೀಂದ್ರ ಹೆಬ್ಬಾರ್ ಹೇಳುತ್ತಾರೆ.&lt;/p&gt;&lt;img&gt;&lt;p&gt;ಇನ್ನು ಉಪ್ಪಿನಕಾಯಿ ತಯಾರಿಸಲು ಬೇಕಾದಂತಹ ನಿಂಬೆಹಣ್ಣು, ಮಾವು, ಗಾಂಧಾರಿ ಮೆಣಸು, ನೆಲ್ಲಿಕಾಯಿ, ಮೆಣಸು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ವಿಜಯಪುರ, ಆಂಧ್ರ ಪ್ರದೇಶ, ಬ್ಯಾಡಗಿ, ಕೊಡಗು ಸೇರಿದಂತೆ ವಿವಿಧ ಭಾಗಗಳಿಂದ ತರಿಸಿಕೊಳ್ಳಲಾಗುತ್ತದೆ. ಒಟ್ಟು 16 ಬಗೆಯ ಉಪ್ಪಿನಕಾಯಿ , ಮೂರು ರೀತಿಯ ಚಟ್ನಿ (ನೆಲ್ಲಿಕಾಯಿ, ಮಾವಿನಕಾಯಿ, ಹುಣಸೆ) ಹಾಗೆಯೇ ಚಟ್ನಿಪುಡಿಗಳನ್ನು ತಯಾರಿಸಲಾಗುತ್ತದೆ. ಉಪ್ಪಿನಕಾಯಿ ಎಷ್ಟು ಮತ್ತು ಹೇಗೆ ಹಾಕಬೇಕು ಅನ್ನೋದು ನನಗೆ ಮತ್ತು ಪತ್ನಿಗೆ ಮಾತ್ರ ಗೊತ್ತು. ಯಾರಿಗೂ ನಮ್ಮ ಸೀಕ್ರೆಟ್ ಹೇಳಿಕೊಟ್ಟಿಲ್ಲ ಎಂದು ಹೇಳಿ ಸುಧೀಂದ್ರ ಹೆಬ್ಬಾರ್ ನಗುತ್ತಾರೆ.&lt;/p&gt;]]></content:encoded>
            <category>shivamogga</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/shivamogga-s-hebbar-pickle-s-success-business-500-to-600-kg-sales-per-day-3-to-4-crore-revenue-mrq-azn6fuu"/>
        </item>
        <item>
            <title><![CDATA[ಸರ್ಕಾರಿ ಕೆಪಿಎಸ್‌ ಶಾಲೆಗಳಿಗೆ ಸ್ವಂತ ಬಸ್‌ ಸೌಲಭ್ಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ]]></title>
            <link>https://kannada.asianetnews.com/karnataka-districts/government-kps-schools-to-get-their-own-bus-facility-education-minister-madhu-bangarappa-announces-mrq/articleshow-b2sylu5</link>
            <guid isPermaLink="true">https://kannada.asianetnews.com/karnataka-districts/government-kps-schools-to-get-their-own-bus-facility-education-minister-madhu-bangarappa-announces-mrq/articleshow-b2sylu5</guid>
            <pubDate>Mon, 24 Aug 2026 08:37:37 +0530</pubDate>
            <description><![CDATA[ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಕೆಪಿಎಸ್&zwnj; ಶಾಲೆಗಳಿಗೆ ಸ್ವಂತ ಬಸ್&zwnj; ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿದ್ದಾರೆ. ಆನವಟ್ಟಿಯಲ್ಲಿ 50 ಲಕ್ಷ ರೂ. ವೆಚ್ಚದ ರಂಗಮಂದಿರಕ್ಕೆ ಭೂಮಿಪೂಜೆ ನೆರವೇರಿಸಿದ ಅವರು, ಭಾರತ್&zwnj; ಜೋಡೊ ಯುವ ಸಂಘವನ್ನು ಉದ್ಘಾಟಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0rvrbbqhej50fy71ae12t6p,imgname-madhu-bangarappa-1787540811127.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ&lt;/strong&gt;: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಕೆಪಿಎಸ್&zwnj; ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆತಂದು, ಶಾಲೆ ಮುಗಿದ ಬಳಿಕ ಮನೆಗೆ ಬಿಟ್ಟುಬರಲು ಸರ್ಕಾರದಿಂದಲೇ ಸ್ವಂತ ಬಸ್&zwnj; ಸೌಲಭ್ಯ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.&lt;/p&gt;&lt;p&gt;ಭಾನುವಾರ ಆನವಟ್ಟಿ ಕೆಪಿಎಸ್&zwnj; ಶಾಲೆಯಲ್ಲಿ 50 ಲಕ್ಷ ರು. ಅನುದಾನದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಭಾರತ್&zwnj; ಜೋಡೊ ಯುವ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಶಾಲೆ-ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸದ್ಯಕ್ಕೆ ಕೆಎಸ್&zwnj;ಆರ್&zwnj;ಟಿಸಿ ಬಸ್&zwnj; ಸೌಲಭ್ಯ ಕಲ್ಪಿಸಲಾಗುವುದು ಎಂದರು.&lt;/p&gt;&lt;h2&gt;&lt;strong&gt;ಜಿಲ್ಲೆಗೆ ಹೊಸದಾಗಿ 24 ಕೆಪಿಎಸ್&zwnj; ಶಾಲೆ&lt;/strong&gt;&lt;/h2&gt;&lt;p&gt;ಸುಮಾರು ನಾಲ್ಕು ಸಾವಿರ ಕೋಟಿ ವೆಚ್ಚದಲ್ಲಿ ಹೊಸದಾಗಿ ಒಂದು ಸಾವಿರ ಕೆಪಿಎಸ್&zwnj; ಶಾಲೆಗಳನ್ನು ರಾಜ್ಯದಲ್ಲಿ ತೆರೆಯಲು ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಹೊಸದಾಗಿ 24 ಕೆಪಿಎಸ್&zwnj; ಶಾಲೆಗಳನ್ನು ಮಂಜೂರು ಮಾಡಲಾಗುವುದು ಎಂದರು.&lt;/p&gt;&lt;p&gt;ಹಿಂದೆ ಇದ್ದ ರಂಗಮಂದಿರವನ್ನು ಅನುದಾನ ನೀಡದೆ ನೆಲಸಮ ಮಾಡಲಾಗಿತ್ತು. ಯಾವ ಕಾರಣಕ್ಕಾಗಿ ಅದನ್ನು ನೆಲಸಮಗೊಳಿಸಲಾಯಿತು ಎಂಬುದರ ಕುರಿತು ನಾನು ಚರ್ಚಿಸುವುದಿಲ್ಲ. ಆದರೆ, ಆ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು 50 ಲಕ್ಷ ರು. ಅನುದಾನ ನೀಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.&lt;/p&gt;&lt;h3&gt;&lt;strong&gt;ಭಾರತ್&zwnj; ಜೋಡೊ ಯುವ ಸಂಘ&lt;/strong&gt;&lt;/h3&gt;&lt;p&gt;ಕ್ರೀಡೆ, ನಾಟಕ, ಸಾಂಸ್ಕೃತಿಕ ಚಟುವಟಿಕೆ, ಸಾಮಾಜಿಕ ಸೇವೆ ಹಾಗೂ ಯುವಜನರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಭಾರತ್&zwnj; ಜೋಡೊ ಯುವ ಸಂಘವನ್ನು ರಚಿಸಲಾಗಿದೆ. 16 ರಿಂದ 35 ವರ್ಷ ಒಳಗಿನ ಯುವಕ-ಯುವತಿಯರು ಸಂಘದ ಸದಸ್ಯರಾಲು ಅರ್ಹರು. ಸಂಘದ ಉದ್ದೇಶಗಳನ್ನು ಯುವಕ-ಯುವತಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಎನ್&zwnj;ಸಿಸಿ ಘಟಕಕ್ಕೆ ಅನುದಾನಕ್ಕೆ ಮನವಿ: ಎನ್&zwnj;ಸಿಸಿ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಅನುದಾನ ಸಕಾಲದಲ್ಲಿ ಬಿಡುಗಡೆಯಾಗಿಲ್ಲ. ಅನುದಾನವನ್ನು ಆದಷ್ಟು ಬೇಗ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಬೇಕು ಎಂದು ಎನ್&zwnj;ಸಿಸಿ ವಿದ್ಯಾರ್ಥಿಗಳು ಸಚಿವರಲ್ಲಿ ಮನವಿ ಮಾಡಿದರು.&lt;/p&gt;&lt;p&gt;ಸಮಾರಂಭದಲ್ಲಿ ಉಪಪ್ರಾಂಶುಪಾಲ ಎಂ. ಮಹಾದೇವಪ್ಪ, ಸಿಡಿಸಿ ಉಪಾಧ್ಯಕ್ಷ ನಾಗರಾಜ ಶುಂಠಿ, ಸದಸ್ಯ ಎಂ. ಸುರೇಶ್&zwnj; ಕುಬಟೂರು, ಕಾಂಗ್ರೆಸ್&zwnj; ಆನವಟ್ಟಿ ಬ್ಲಾಕ್&zwnj; ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಡಿಸಿಸಿ ಬ್ಯಾಂಕ್&zwnj; ನಿರ್ದೇಶಕ ಕೆ.ಪಿ. ರುದ್ರಗೌಡ, ಶಿವಲಿಂಗೇಗೌಡ, ಮುಖಂಡರಾದ ಮಧುಕೇಶ್ವರ ಪಾಟೀಲ್&zwnj;, ಸಿದ್ದಲಿಂಗೇಶ್&zwnj;, ಸುರೇಶ್&zwnj; ಹಾವಣ್ಣನವರ್&zwnj;, ಸಂಜಿವ ನೇರಲಗಿ, ಚಾಂದ್&zwnj; ಸಾಬ್&zwnj;, ಹಬಿಬುಲ್ಲಾ ಹವಾಲ್ದಾರ್&zwnj;, ಪರಮೇಶ್&zwnj; ನೆಗವಾಡಿ, ಅರುಣ ಸಮನವಳ್ಳಿ ಉಪಸ್ಥಿತರಿದ್ದರು.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/government-kps-schools-to-get-their-own-bus-facility-education-minister-madhu-bangarappa-announces-mrq/articleshow-b2sylu5"/>
        </item>
        <item>
            <title><![CDATA[ಸಮಯಕ್ಕೆ ಸರಿಯಾಗಿ ಕಾರು ನೀಡದ ಶೋರೂಂಗೆ ಬಿತ್ತು ದಂಡ; ಗ್ರಾಹಕನಿಗೆ ಬಡ್ಡಿ ಸಹಿತ ಪರಿಹಾರ]]></title>
            <link>https://kannada.asianetnews.com/karnataka-districts/shivamogga-district-consumer-disputes-redressal-commission-fines-showroom-for-not-delivering-car-on-time-mrq/articleshow-g3qi49z</link>
            <guid isPermaLink="true">https://kannada.asianetnews.com/karnataka-districts/shivamogga-district-consumer-disputes-redressal-commission-fines-showroom-for-not-delivering-car-on-time-mrq/articleshow-g3qi49z</guid>
            <pubDate>Thu, 20 Aug 2026 10:17:04 +0530</pubDate>
            <description><![CDATA[&lt;p&gt;ಸಮಯಕ್ಕೆ ಸರಿಯಾಗಿ ಕಾರು ವಿತರಿಸದ ಮಹೀಂದ್ರ ಶೋರೂಂ ಒಂದಕ್ಕೆ ಜಿಲ್ಲಾ ಗ್ರಾಹಕ ನ್ಯಾಯಾಲಯವು ದಂಡ ವಿಧಿಸಿದೆ. ಸೇವಾ ಲೋಪ ಮತ್ತು ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ, ಶೋರೂಂ ಗ್ರಾಹಕನಿಗೆ ಬಡ್ಡಿ, ಪರಿಹಾರ ಹಾಗೂ ಕೋರ್ಟ್ ವೆಚ್ಚವನ್ನು ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0eqtxe3agd80xfr2vcmycca,imgname-car-showroom-1787201156547.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ:&lt;/strong&gt; ಸಮಯಕ್ಕೆ ಸರಿಯಾಗಿ ಕಾರು ನೀಡದೆ ಗ್ರಾಹಕರಿಗೆ ಸತಾಯಿಸಿದ ಮಹೀಂದ್ರ ಶೋರೂಂ ಒಂದಕ್ಕೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಸೂಕ್ತ ದಂಡ ಹಾಗೂ ಬಡ್ಡಿ ಸಹಿತ ಹಣ ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.&lt;/p&gt;&lt;p&gt;ಭದ್ರಾವತಿ ಮೂಲದ ಮನೋಜ್&zwnj;ಕುಮಾರ್ ಎ.ಸಿ. ಎಂಬುವವರು 2026ರ ಫೆಬ್ರವರಿಯಲ್ಲಿ ಶಿವಮೊಗ್ಗದ ಶೋ ರೂಮ್ ಒಂದರಲ್ಲಿ ಮಹೀಂದ್ರ ಎಕ್ಸ್&zwnj;ಯುವಿ 3ಎಕ್ಸ್&zwnj;ಒ ಕಾರು ಬುಕ್ ಮಾಡಿದ್ದರು. ಮುಂಗಡವಾಗಿ 21000 ಹಣ ಪಾವತಿಸಿ, ತಮ್ಮ ಹಳೆಯ ವಾಹನವನ್ನು 1,70,000 ಮೌಲ್ಯದ ಎಕ್ಸ್&zwnj;ಚೇಂಜ್ ಆಫರ್&zwnj;ಗೆ ನೀಡಿದ್ದರು. ಸುಮಾರು 30 ರಿಂದ 35 ದಿನಗಳ ಒಳಗಾಗಿ ಹೊಸ ವಾಹನ ನೀಡುವುದಾಗಿ ಶೋರೂಂ ಸಿಬ್ಬಂದಿ ಭರವಸೆ ನೀಡಿದ್ದರು. ಆದರೆ, ನೀಡಿದ ಸಮಯಕ್ಕೆ ವಾಹನ ನೀಡದೆ ಗ್ರಾಹಕರನ್ನು ಸತಾಯಿಸಲಾಗಿತ್ತು.&lt;/p&gt;&lt;h2&gt;&lt;strong&gt;ಗ್ರಾಹಕ ನ್ಯಾಯಾಲಯದ ಮೊರೆ ಹೋದ ಮನೋಜ್&zwnj;ಕುಮಾರ್&lt;/strong&gt;&lt;/h2&gt;&lt;p&gt;ಸಮಯಕ್ಕೆ ಸರಿಯಾಗಿ ಕಾರು ಸಿಗದ ಕಾರಣ, ಏಪ್ರಿಲ್ 27 ರಂದು ಬುಕಿಂಗ್ ರದ್ದುಗೊಳಿಸಿದ ಮನೋಜ್&zwnj;ಕುಮಾರ್, ತಮ್ಮ ಮುಂಗಡ ಮೊತ್ತ ಹಾಗೂ ಹಳೆಯ ವಾಹನದ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸುವಂತೆ ಕೋರಿದ್ದರು. ಮೇ 4 ರಂದು ಶೋರೂಂನವರು ಹಣವನ್ನು ವಾಪಸ್ ನೀಡಿದರಾದರೂ, ವಾಹನ ಸಿಗದೆ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾದ ಹಿನ್ನೆಲೆಯಲ್ಲಿ, ಸೇವೆಯಲ್ಲಿ ಲೋಪ ಎಸಗಿದ್ದಾರೆಂದು ಆರೋಪಿಸಿ ಗ್ರಾಹಕ ನ್ಯಾಯಾಲಯದ ಬಾಗಿಲು ತಟ್ಟಿದ್ದರು.&lt;/p&gt;&lt;h3&gt;&lt;strong&gt;ನ್ಯಾಯಾಲಯದ ತೀರ್ಪು ಏನು?&lt;/strong&gt;&lt;/h3&gt;&lt;p&gt;ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು, ಶೋರೂಂ ಕಡೆಯಿಂದ ಸೇವಾ ಲೋಪವಾಗಿರುವುದನ್ನು ಎತ್ತಿಹಿಡಿದಿದೆ. ದೂರುದಾರರಿಗೆ ಪಾವತಿಸಬೇಕಿದ್ದ 21,000 ಮುಂಗಡ ಹಣಕ್ಕೆ ಶೇ. 8 ರಷ್ಟು ಬಡ್ಡಿ, ಮಾನಸಿಕ ಕಿರುಕುಳಕ್ಕೆ 25,000 ಪರಿಹಾರ ಹಾಗೂ ಕೋರ್ಟ್ ವೆಚ್ಚವಾಗಿ 10,000 ಹಣವನ್ನು 45 ದಿನಗಳ ಒಳಗಾಗಿ ನೀಡಬೇಕೆಂದು ಆ.13 ರಂದು ತೀರ್ಪು ನೀಡಿದೆ. ತಪ್ಪಿದಲ್ಲಿ ಒಟ್ಟು ಮೊತ್ತಕ್ಕೆ ಶೇ. 10ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Shivamogga: ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ! ರೈತರಲ್ಲಿ ಆತಂಕ ಮೂಡಿಸಿದ ಹನುಮಂತ ದೇವರ ಕಾರ್ಣಿಕ ನುಡಿ&lt;/strong&gt;&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/shivamogga-district-consumer-disputes-redressal-commission-fines-showroom-for-not-delivering-car-on-time-mrq/articleshow-g3qi49z"/>
        </item>
        <item>
            <title><![CDATA[ಕಸ್ತೂರಿ ರಂಗನ್ ವರದಿ: ಪಕ್ಷಾತೀತ ಹೋರಾಟವಿರಲಿ! ಕಾನಿಗೆ ಬಂದಾಗ ಮೀನಿನ ಸುದ್ದಿ ಬೇಡ ಎಂದಿದ್ದೇಕೆ ಹರತಾಳು ಹಾಲಪ್ಪ]]></title>
            <link>https://kannada.asianetnews.com/karnataka-districts/kasturirangan-report-haratalu-halappa-urges-karnataka-government-to-oppose-draft-notification-kvn/articleshow-hedqdqk</link>
            <guid isPermaLink="true">https://kannada.asianetnews.com/karnataka-districts/kasturirangan-report-haratalu-halappa-urges-karnataka-government-to-oppose-draft-notification-kvn/articleshow-hedqdqk</guid>
            <pubDate>Fri, 21 Aug 2026 11:14:42 +0530</pubDate>
            <description><![CDATA[ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಅವೈಜ್ಞಾನಿಕ ವರದಿಯು ಜಾರಿಯಾದರೆ ಶಿವಮೊಗ್ಗ ಜಿಲ್ಲೆಯ 447 ಗ್ರಾಮಗಳು ಸೇರಿದಂತೆ ಸಾವಿರಾರು ಹಳ್ಳಿಗಳಿಗೆ ದೊಡ್ಡ ಅನಾಹುತವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಹೋರಾಡಬೇಕೆಂದು ಅವರು ಕರೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0hd25es0vpbcn4jen4x7ycx,imgname-untitled-design-1787290523096.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಒತ್ತಾಯಿಸಿದರು.&lt;/p&gt;&lt;p&gt;ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ 7ನೇ ಬಾರಿಗೆ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಆಕ್ಷೇಪಣೆಯನ್ನೂ ಆಹ್ವಾನಿಸಿದೆ. ಇದೊಂದು ಅವೈಜ್ಞಾನಿಕ ಹಾಗೂ ಅಪ್ರಸ್ತುತ ವರದಿ ಆಗಿರುವ ಹಿನ್ನೆಲೆಯಲ್ಲಿ ವಿರೋಧ ಮಾಡಬೇಕಾಗಿದೆ ಎಂದರು.&lt;/p&gt;&lt;h2&gt;&lt;strong&gt;ಕಸ್ತೂರಿ ರಂಗನ್ ವರದಿ ಪಕ್ಷಾತೀತವಾಗಿ ಹೋರಾಡಬೇಕು&lt;/strong&gt;&lt;/h2&gt;&lt;p&gt;ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವಧಿಯಿಂದ ಹಿಡಿದು ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕೂಡ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿತ್ತು. 2022ರಲ್ಲಿಯೂ ಒಮ್ಮೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈ ಹಿಂದೆ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಕೇಂದ್ರ ಸಚಿವರಾಗಿದ್ದ ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಷಿ ಅವರ ಜೊತೆಗೂಡಿ ಅಂದಿನ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿ ಚರ್ಚೆ ನಡೆಸಲಾಗಿತ್ತು. ಕರ್ನಾಟಕಕ್ಕೆ ಉಂಟಾಗಬಹುದಾದ ಗಂಭೀರ ಸಮಸ್ಯೆಗಳನ್ನು ಮನವರಿಕೆ ಮಾಡಲಾಗಿತ್ತು.&lt;/p&gt;&lt;p&gt;ವರದಿಯ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ, ಅದರ ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಕನಿಷ್ಠ ಒಂದು ವರ್ಷದ ಅವಧಿಗೆ ಪ್ರಕ್ರಿಯೆಯನ್ನು ಮುಂದೂಡಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದರು. ಅಧಿಕಾರಿಗಳ ಸಮಿತಿ ರಚನೆಯಾಗಿತ್ತೇ ವಿನಃ ಅದರ ವರದಿ ಏನಾಯಿತು ಎಂಬುದು ನಂತರ ಸ್ಪಷ್ಟವಾಗಲಿಲ್ಲ. ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಅಭಿಪ್ರಾಯಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದ್ದರೂ, ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಸುಮಾರು ನಾಲ್ಕು ವರ್ಷಗಳಾಗಿವೆ. ಆದರೆ ಮತ್ತೆ ಏಳನೇ ಕರಡು ಅಧಿಸೂಚನೆ ಹೊರಡಿಸುವ ಮೂಲಕ ಸಮಸ್ಯೆಯನ್ನು ಮುನ್ನೆಲೆಗೆ ತರಲಾಗಿದೆ ಎಂದರು.&lt;/p&gt;&lt;p&gt;ರಾಜ್ಯ ಸರ್ಕಾರ ಇದನ್ನು ಆಕ್ಷೇಪಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಬೇಕು. ಕೇರಳ ಸರ್ಕಾರದ ಮಾದರಿಯನ್ನು ಇಲ್ಲಿ ಅನುಸರಿಸಬೇಕು. ಆಡಳಿತ ಪಕ್ಷ, ವಿರೋಧ ಪಕ್ಷ ಅಂತಲ್ಲ. ಎಲ್ಲರೂ ಇದನ್ನು ವಿರೋಧ ಮಾಡಬೇಕಾಗಿದೆ ಎಂದರು.&lt;/p&gt;&lt;p&gt;ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳು 20,668 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿವೆ. ಕರ್ನಾಟಕದ 1449 ಹಳ್ಳಿಗಳು ಇದರ ಅಡಿಯಲ್ಲಿ ಬರುತ್ತವೆ. ಶಿವಮೊಗ್ಗ ಜಿಲ್ಲೆಯಲ್ಲಿಯೇ 447 ಗ್ರಾಮಗಳನ್ನು ವರದಿ ಅಡಿಯಲ್ಲಿ ಗುರುತಿಸಲಾಗಿದೆ. ಇದು ಜಾರಿಗೆ ಬಂದರೆ ದೊಡ್ಡ ಅನಾಹುತವೇ ಆಗುತ್ತದೆ. ರೈತರಿಗೆ ತೊಂದರೆ ಆಗುತ್ತದೆ. ಕೃಷಿ ಚಟುವಟಿಕೆ ಮಾಡಲು ಆಗುವುದಿಲ್ಲ. ಇದು ಇನ್ನೊಂದು ಮುಳುಗಡೆ ಆಗಲಿದೆ ಎಂದರು.&lt;/p&gt;&lt;p&gt;ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಲು ಹೊರಟಿರುವುದರಿಂದ ಅಡಿಕೆ ದರ ತೀವ್ರ ಕುಸಿತ ಕಂಡಿದೆ. ರಾಜ್ಯ ಸರ್ಕಾರ ಸಿಗರೇಟ್&zwnj; ಲಾಭಿಗೆ ಮಣಿದು ಈ ಆದೇಶ ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿದರು.&lt;/p&gt;&lt;p&gt;ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಮಾಲತೇಶ್, ಎಸ್.ಚಂದ್ರಶೇಖರ್, ಎನ್.ಮಂಜುನಾಥ್, ದಿನೇಶ್ ಆಚಾರ್ಯ, ಶರತ್ ಕಲ್ಯಾಣಿ ಇದ್ದರು.&lt;/p&gt;&lt;p&gt;----&lt;/p&gt;&lt;p&gt;ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧದ ಹೋರಾಟವನ್ನು ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಮಾಡುತ್ತಿದ್ದಾರೆ. ಇದು ರಾಜಕೀಯ ಹೋರಾಟವಾಗಬಾರದು. ಆಡಳಿತ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ರೈತರು, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಒಂದಾಗಿ ಹೋರಾಡಬೇಕು. ಹೋರಾಟ ನಡೆಸುವುದರ ಜೊತೆಗೆ ಸರ್ಕಾರದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಕೇಂದ್ರದೊಂದಿಗೆ ಚರ್ಚಿಸಿ, ವರದಿಯನ್ನು ಹಿಂಪಡೆಯುವಂತೆ ಮಾಡುವುದು ಮುಖ್ಯ.&lt;/p&gt;&lt;p&gt;-ಹರತಾಳು ಹಾಲಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ.&lt;/p&gt;&lt;h3&gt;----&lt;strong&gt;ಕಾನಿಗೆ ಬಂದಾಗ ಮೀನಿನ ಸುದ್ದಿ ಬೇಡ&lt;/strong&gt;&lt;/h3&gt;&lt;p&gt;ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ವಿರುದ್ದ ಅಡ್ಜೆಸ್ಟ್&zwnj;ಮೆಂಟ್ ರಾಜಕಾರಣದ ಆರೋಪ ಮಾಡಿರುವ ಮಾಜಿ ಸಚಿವ, ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಹೇಳಿಕೆಗೆ ಹರತಾಳು ಹಾಲಪ್ಪ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಸೊರಬದಲ್ಲಿ ಕುಮಾರ್ ಬಂಗಾರಪ್ಪ ಅವರು ಇತ್ತೀಚೆಗೆ ಬಿಜೆಪಿ ಹಾಗೂ ಪಕ್ಷದ ಪ್ರಮುಖ ನಾಯಕರ ವಿರುದ್ಧ ಮಾಡಿರುವ ಹೇಳಿಕೆಗಳ ಕುರಿತು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಾಲಪ್ಪ, &lsquo;ಅದನ್ನ ಮತ್ತೆ ಮಾತಾಡೋಣ. ನಮ್ಮ ಪಾರ್ಟಿ ಮೀಟಿಂಗ್ ನಡೆಯುತ್ತಿದೆ. ರಾಜ್ಯ ಕಾರ್ಯಕಾರಿಣಿ ಇದೆ&rsquo; ಎಂದು ಹೇಳಿ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಈ ವಿಚಾರ ತಮ್ಮ ಗಮನಕ್ಕೆ ಬಂದಿದೆಯೇ, ಇಲ್ಲವೇ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ,&lsquo;ಸೋಮವಾರ, ಮಂಗಳವಾರ ಈ ಬಗ್ಗೆ ಮಾತಾಡೋಣ&rsquo; ಎಂದು ಉತ್ತರಿಸಿದರು.&lt;/p&gt;&lt;p&gt;ಈ ವೇಳೆ ಪ್ರಶ್ನೆಯನ್ನೇ ಹಾಸ್ಯವಾಗಿ ತಿರುಗಿಸಿದ ಹಾಲಪ್ಪ, &lsquo;ನಾವು ಕಾನಿಗೆ ಬಂದಾಗ ಮೀನಿನ ಸುದ್ದಿ ಬೇಡ. ನಾವು ಕಾನಿಗೆ ಹೋದ್ರೆ ಮೀನು ಸಿಗುತ್ತಾ? ಅಲ್ಲಿ ಜೇನು ಹುಡುಕಬೇಕು&rsquo; ಎಂದು ಮಾರ್ಮಿಕವಾಗಿ ಹೇಳಿದರು. ಕಾಂಗ್ರೆಸ್&zwnj;ಗೆ ಹೋಗೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಉತ್ತರ ಅದೇ... ನಾವ್ಯಾಕೆ ಹೋಗ್ತೀವಿ ಅಲ್ಲಿಗೆ ಎಂದು ಉತ್ತರಿಸಿದರು.&lt;/p&gt;&lt;p&gt;------&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿದರು.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kasturirangan-report-haratalu-halappa-urges-karnataka-government-to-oppose-draft-notification-kvn/articleshow-hedqdqk"/>
        </item>
        <item>
            <title><![CDATA[ಶಿವಮೊಗ್ಗ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅಮಾನತು: ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರದ ಕ್ರಮ]]></title>
            <link>https://kannada.asianetnews.com/karnataka-districts/shivamogga-sims-director-dr-virupakshappa-suspended-following-high-court-order/articleshow-hzsr58e</link>
            <guid isPermaLink="true">https://kannada.asianetnews.com/karnataka-districts/shivamogga-sims-director-dr-virupakshappa-suspended-following-high-court-order/articleshow-hzsr58e</guid>
            <pubDate>Wed, 19 Aug 2026 10:27:37 +0530</pubDate>
            <description><![CDATA[ಲೈಂಗಿಕ ಕಿರುಕುಳ ಆರೋಪಿ ವೈದ್ಯನನ್ನು ರಕ್ಷಿಸಲು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಹೈಕೋರ್ಟ್&zwnj;ನ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಈ ಶಿಸ್ತುಕ್ರಮ ಕೈಗೊಂಡಿದೆ. ಈ ಪ್ರಕರಣವನ್ನು ಸುವರ್ಣ ನ್ಯೂಸ್ ತನ್ನ ತನಿಖಾ ವರದಿಯ ಮೂಲಕ ಬಯಲಿಗೆಳೆದಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0c5yywz16nhpnb90betrrfj,imgname-shivamogga-sims-1787115305886.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಆ.19): ವೈ&lt;/strong&gt;ದ್ಯಕೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣದಲ್ಲಿ ಆರೋಪಿ ವೈದ್ಯನನ್ನು ರಕ್ಷಿಸಲು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಆರೋಪದಡಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಹೈಕೋರ್ಟ್ ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಇಲಾಖೆ ಈ ಮಹತ್ವದ ಶಿಸ್ತುಕ್ರಮ ಕೈಗೊಂಡಿದೆ.&lt;/p&gt;&lt;p&gt;ಸಿಮ್ಸ್&zwnj;ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಡಾ. ಅಶ್ವಿನ್ ಹೆಬ್ಬಾರ್ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರುವಾಗಲೇ, ಅವರನ್ನು ರಕ್ಷಿಸುವ ಹುನ್ನಾರ ನಡೆದಿತ್ತು. ಸಂಸ್ಥೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಲು ಮೂವರು ವೈದ್ಯರಿದ್ದರೂ, ಆಡಳಿತಾತ್ಮಕವಾಗಿ ತಪ್ಪು ವರದಿ ಸೃಷ್ಟಿಸಲಾಗಿತ್ತು. ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿಯ (ಸಿಎಒ) ಯಾವುದೇ ಸಲಹೆ ಪಡೆಯದೆ ಮತ್ತು ಕಡತಗಳನ್ನು ಸಮರ್ಪಕವಾಗಿ ಮಂಡಿಸದೆ, ಆರೋಪಿ ವೈದ್ಯನಿಗೆ ಅನುಕೂಲವಾಗುವಂತೆ ಡಾ. ವಿರೂಪಾಕ್ಷಪ್ಪ ಸರ್ಕಾರಕ್ಕೆ ಸುಳ್ಳು ಮಾಹಿತಿ ರವಾನಿಸಿದ್ದರು. ಈ ಮೂಲಕ ಡಾ. ಅಶ್ವಿನ್ ಹೆಬ್ಬಾರ್&zwnj;ನನ್ನು ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಜರಿ ವಿಭಾಗಕ್ಕೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಿಸಲು ನೆರವಾಗಿದ್ದರು.&lt;/p&gt;&lt;h2&gt;&lt;strong&gt;ಆರೋಪಿಗೆ ಸಾಥ್ ನೀಡಿದವರಿಗೂ ಶಿಕ್ಷೆ&lt;/strong&gt;&lt;/h2&gt;&lt;p&gt;ಈ ವಿವಾದಾತ್ಮಕ ವರ್ಗಾವಣೆಯನ್ನು ಪ್ರಶ್ನಿಸಿ ಹೈಕೋರ್ಟ್&zwnj;ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಫೆಬ್ರವರಿ 4ರಂದು ವರ್ಗಾವಣೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಬಳಿಕ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಆಗಸ್ಟ್ 4ರಂದು ಅಂತಿಮ ತೀರ್ಪು ಪ್ರಕಟಿಸಿದ್ದ ಹೈಕೋರ್ಟ್, ಆರೋಪಿಗೆ ಸಾಥ್ ನೀಡಿ ಸರ್ಕಾರಕ್ಕೆ ತಪ್ಪು ಮಾಹಿತಿ ರವಾನಿಸಿದ್ದ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪಾಲಿಸಿರುವ ಸರ್ಕಾರ ಇದೀಗ ನಿರ್ದೇಶಕರನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ.&lt;/p&gt;&lt;h2&gt;&lt;strong&gt;ಸುವರ್ಣ ನ್ಯೂಸ್ ವರದಿ ಬಿಗ್ ಇಂಪ್ಯಾಕ್ಟ್:&lt;/strong&gt;&lt;/h2&gt;&lt;p&gt;ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಡಾ. ಅಶ್ವಿನ್ ಹೆಬ್ಬಾರ್ ನೀಡುತ್ತಿದ್ದ ಲೈಂಗಿಕ ಕಿರುಕುಳದ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಮೊದಲಿಗೆ ಸರಣಿ ತನಿಖಾ ವರದಿಗಳನ್ನು ಬಿತ್ತರಿಸಿ ಭ್ರಷ್ಟ ಜಾಲವನ್ನು ಬಯಲಿಗೆಳೆದಿತ್ತು. ವರದಿಯ ಬೆನ್ನಲ್ಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿತ್ತು. ಎಫ್&zwnj;ಐಆರ್ ಆದರೂ ಆರೋಪಿಯನ್ನು ರಕ್ಷಿಸಲಾಗುತ್ತಿದೆ ಎಂಬ ವರದಿ ಬೆನ್ನಲ್ಲೇ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದರು. ಬಳಿಕ ಅಶ್ವಿನ್ ಹೆಬ್ಬಾರ್ ಅಮಾನತುಗೊಂಡಿದ್ದನು. ಇದೀಗ ಆರೋಪಿಗೆ ಬೆನ್ನೆಲುಬಾಗಿ ನಿಂತು ತಪ್ಪು ಮಾಹಿತಿ ನೀಡಿದ್ದ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಅವರೂ ಅಮಾನತಾಗುವ ಮೂಲಕ ಸುವರ್ಣ ನ್ಯೂಸ್ ವರದಿಗೆ ಮತ್ತೊಂದು ಬೃಹತ್ ಜಯ ಸಿಕ್ಕಂತಾಗಿದೆ.&lt;/p&gt;]]></content:encoded>
            <category>shivamogga</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/shivamogga-sims-director-dr-virupakshappa-suspended-following-high-court-order/articleshow-hzsr58e"/>
        </item>
        <item>
            <title><![CDATA[ಕಸ್ತೂರಿರಂಗನ್: ಇಡೀ ಪಶ್ಚಿಮ ಘಟ್ಟವನ್ನೇ ತೆರವುಗೊಳಿಸುವ ಹುನ್ನಾರ: ನೆಂಪೆ ದೇವರಾಜ್ ಕಳವಳ]]></title>
            <link>https://kannada.asianetnews.com/karnataka-districts/kasturirangan-report-protest-malnad-activists-warn-of-threat-to-western-ghats-kvn/articleshow-kge2ga6</link>
            <guid isPermaLink="true">https://kannada.asianetnews.com/karnataka-districts/kasturirangan-report-protest-malnad-activists-warn-of-threat-to-western-ghats-kvn/articleshow-kge2ga6</guid>
            <pubDate>Tue, 25 Aug 2026 12:55:56 +0530</pubDate>
            <description><![CDATA[ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಮಲೆನಾಡು ಹೋರಾಟ ಕ್ರಿಯಾಸಮಿತಿ ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವರದಿಯು ಪಶ್ಚಿಮ ಘಟ್ಟದಿಂದ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದ್ದು, ಮಲೆನಾಡಿನ ರೈತರಿಗೆ ಮಾರಕವಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ವರದಿಯನ್ನು ಕೈಬಿಡಲು ಆಗ್ರಹಿಸಿ, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0vwxkfrgnqmn4pegc80phtw,imgname-untitled-design--5--1787642695159.jpg" type="image/jpeg" height="390" width="690"/>
            <content:encoded><![CDATA[&lt;p&gt;ತೀರ್ಥಹಳ್ಳಿ: ಕಸ್ತೂರಿರಂಗನ್ ವರದಿಯ ಹಿಂದೆ ಪಶ್ಚಿಮ ಘಟ್ಟವನ್ನೇ ತೆರವುಗೊಳಿಸುವ ಹುನ್ನಾರವಿದೆ. ರಾಜಕೀಯ ಧುರೀಣರು ವರದಿಯನ್ನು ತಮ್ಮ ಬೆಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಸೂಕ್ಷ್ಮತೆಗಳ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಇಡೀ ಮಲೆನಾಡು ನಿರ್ಜನ ಪ್ರದೇಶವಾದೀತು ಎಂದು ಮಲೆನಾಡು ಹೋರಾಟ ಕ್ರಿಯಾಸಮಿತಿ ಸಂಚಾಲಕ ನೆಂಪೆ ದೇವರಾಜ್ ಎಚ್ಚರಿಸಿದರು.&lt;/p&gt;&lt;h2&gt;&lt;strong&gt;ಇಡೀ ಮಲೆನಾಡು ನಿರ್ಜನ ಪ್ರದೇಶವಾಗುವ ಆತಂಕ&lt;/strong&gt;&lt;/h2&gt;&lt;p&gt;ಕಸ್ತೂರಿರಂಗನ್ ವರದಿಯನ್ನು ಕೈ ಬಿಡುವಂತೆ ಆಗ್ರಹಿಸಿ ಮಲೆನಾಡು ಹೋರಾಟ ಕ್ರಿಯಾಸಮಿತಿ ವತಿಯಿಂದ ಸೋಮವಾರ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ, ಕಸ್ತೂರಿರಂಗನ್ ವರದಿ ಮಲೆನಾಡಿನ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ರಾಜಕೀಯ ಧುರೀಣರಿಗೆ ಕಸ್ತೂರಿರಂಗನ್ ವರದಿಯ ಬಗ್ಗೆ ಕಾಳಜಿಗಿಂತ ಮುಖ್ಯವಾಗಿ ತಮ್ಮ ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ. ಈ ಎಲ್ಲ ಸೂಕ್ಷ್ಮತೆಗಳ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಇಡೀ ಮಲೆನಾಡು ನಿರ್ಜನ ಪ್ರದೇಶವಾದೀತು. ಈ ವರದಿಯನ್ನು ವಿರೋದಿಸಿ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅವಿರತ ಹೋರಾಟ ನಡೆಸಲು ತಿರ್ಮಾನಿಸಿದ್ದು, ಈ ಹೋರಾಟಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದು ಹೇಳಿದರು.&lt;/p&gt;&lt;p&gt;ಈ ಪ್ರದೇಶದ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದೇ, ವೈಜ್ಞಾನಿಕವಾಗಿ ದೆಹಲಿಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಮಾಡಿದ ವರದಿಯಾಗಿದೆ. ಈ ವರದಿಯ ಹಿಂದೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಇದೆ. ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಈ ಭಾಗವನ್ನು ನಿರ್ಜನ ಪ್ರದೇಶ ಮಾಡುವ ಮೂಲಕ ಪಶ್ಚಿಮ ಘಟ್ಟವನ್ನು ಉದ್ಯಮಿಗಳಿಗೆ ಮೋಜಿನ ತಾಣವಾಗಿ ಟೂರಿಸಂ ತಾಣವಾಗಿ ರೂಪಿಸುವ ತಂತ್ರಗಾರಿಯೂ ಇದೆ. ಪರಿಸರ ಸೂಕ್ಷ್ಮ ವಲಯದ ನೆಪದಲ್ಲಿ ಅಡಕೆಗೆ ಔಷಧ ಸಿಂಪರಣೆಗೆ ತಡೆ ಮತ್ತು ರಸಗೊಬ್ಬರ ಹಾಕದಂತೆ ನಿರ್ಭಂಧ ಹೇರುವ ಪ್ರಯತ್ನ ನಡೆದಿದೆ. ರಸಗೊಬ್ಬರ ಹಾಕದೇ ಈ ಮಣ್ಣಿನಲ್ಲಿ ಬೆಳೆ ಬೆಳೆಯುವುದು ಅಸಾಧ್ಯ ಎಂದರು.&lt;/p&gt;&lt;p&gt;ಶಿವಾನಂದ ಕರ್ಕಿ ಮಾತನಾಡಿ, ಕಸ್ತೂರಿರಂಗನ್ ವರದಿಯಂತಹ ಕರಾಳ ಮಸೂದೆಯನ್ನು ಪ್ರಶ್ನಿಸಲಾಗದೇ ದಾಸ್ಯದಿಂದ ಬದುಕುವಂತಾಗಿದೆ. ಶಾಸನ ಮಾಡುವ ಶಾಸಕರುಗಳಿಗೆ ಜನರ ಸಮಸ್ಯೆಯೇ ಮರೆತು ಹೋಗಿದೆ. ಸದನದಲ್ಲಿ ಈ ಬಗ್ಗೆ ಚಕಾರ ಎತ್ತದೇ ಧಾರ್ಮಿಕ ವಿಚಾರಗಳ ಮೂಲಕ ಜನರು ಪ್ರಶ್ನೆ ಮಾಡದಂತೆ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ. ಈಗ ಮೈ ಮರೆತರೆ ನಮ್ಮ ಭವಿಷ್ಯ ಕರಾಳವಾದೀತು ಎಂದರು.&lt;/p&gt;&lt;p&gt;ಪ್ರೊ.ಜೆ.ಎಲ್. ಪದ್ಮನಾಭ್ ಮಾತನಾಡಿ, ಕಸ್ತೂರಿರಂಗನ್ ವರದಿ ಮಲೆನಾಡಿಗೆ ಮರಣ ಶಾಸನವಾಗಿದೆ. ಮಲೆನಾಡಿನ ಜನರ ಬೆನ್ನಿಗೆ ಇರಿಯುವ ಈ ವರದಿ ವಿರೋದಿ ಹೋರಾಟದ ಮುಂಚೂಣಿಯ ನೇತೃತ್ವವನ್ನು ಯುವ ಜನತೆ ವಹಿಸಬೇಕಿದೆ ಎಂದು ಹೇಳಿದರು.&lt;/p&gt;&lt;p&gt;ಮಲೆನಾಡು ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಹೊಸಕೊಪ್ಪ ಸುಂದರೇಶ್, ಹುಲ್ಲತ್ತಿ ದಿನೇಶ್, ಕೋಣಂದೂರು ಅಶೋಕ್, ಜೋಡಿಗೆರೆ ದಿವಾಕರ್, ಹೊಸಕೊಪ್ಪ ಈಶ್ವರ್, ಸುಧಾಕರ್ ಕುಪ್ಪಳಿ, ಹೊನ್ನಾನಿ ದೇವರಾಜ್, ಕಿರಣ್ ಬೀಸು ಇದ್ದರು.&lt;/p&gt;&lt;h3&gt;&lt;strong&gt;ಕಸ್ತೂರಿರಂಗನ್ ವರದಿ ಜಾರಿ ಖಂಡಿಸಿ: 27ಕ್ಕೆ ಪ್ರತಿಭಟನೆ&lt;/strong&gt;&lt;/h3&gt;&lt;p&gt;ಸಾಗರ: ಕಸ್ತೂರಿರಂಗನ್ ವರದಿ ಜಾರಿ ಖಂಡಿಸಿ ಆ. 27ರಂದು ಜಿಲ್ಲಾ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10ಕ್ಕೆ ಶ್ರೀಮಹಾಗಣಪತಿ ದೇವಸ್ಥಾನದಿಂದ ಪ್ರತಿಭಟನಾ ರ್&zwj;ಯಾಲಿ ನಡೆಯಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದರು.&lt;/p&gt;&lt;p&gt;ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ರೈತರ ಬಗ್ಗೆ ಕಾಳಜಿ ಇದ್ದರೆ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಕಸ್ತೂರಿ ರಂಗನ್ ವರದಿ ಕುರಿತು ಪದೇಪದೇ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಇದು ಮಲೆನಾಡು ರೈತರ ನೆತ್ತಿಯ ಮೇಲಿನ ತೂಗುಕತ್ತಿಯಾಗಿದೆ. ಇದರಿಂದ ರೈತರು ಶಾಶ್ವತವಾಗಿ ಹೊರಗೆ ಬರಬೇಕು. ರಾಜ್ಯ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದ ನಂತರ ತಿರಸ್ಕರಿಸುವುದು ಮಾಮೂಲಿ. ಆದರೆ ಮತ್ತೆ ಯಾವಾಗ ಅಧಿಸೂಚನೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ದೈಹಿಕ ಸರ್ವೆ ನಡೆಸಲು ಮನವಿ ಮಾಡಬೇಕು. ಸೆಟಲೈಟ್ ಸರ್ವೆ ಮೂಲಕ ಕಸ್ತೂರಿ ರಂಗನ್ ಅವರು ತಯಾರಿಸಿದ ವರದಿಯಲ್ಲಿ ಜನವಸತಿ ಪ್ರದೇಶ ಹೆಚ್ಚಿದೆ. ಇದು ಜಾರಿಗೆ ಬಂದರೆ ದೊಡ್ಡಪ್ರಮಾಣದಲ್ಲಿ ರೈತರು ಗುಳೆ ಹೋಗ ಬೇಕಾಗುತ್ತದೆ. ಆದರೆ ರಾಜ್ಯ ಸರ್ಕಾರ ಸರ್ವಪಕ್ಷ ನಿಯೋಗದ ಮೂಲಕ ಕೇಂದ್ರಕ್ಕೆ ಪುನರ್ ಸರ್ವೆಗೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಕಸ್ತೂರಿ ರಂಗನ್ ವರದಿಯಡಿ ರಾಜ್ಯದಲ್ಲಿ 1449 ಗ್ರಾಮಗಳು ಪರಿಸರ ಸೂಕ್ಷ್ಮ ಪಟ್ಟಿಯಲ್ಲಿ ಸೇರಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 446 ಗ್ರಾಮಗಳಿದ್ದು, ಸಾಗರ ತಾಲೂಕಿನಲ್ಲಿ 115 ಗ್ರಾಮಗಳಿವೆ. ಇದರ ಜೊತೆಗೆ ಮಜಿರೆ ಗ್ರಾಮಗಳು ಸೇರಿದರೆ 200ಕ್ಕೂ ಹೆಚ್ಚು ಗ್ರಾಮಗಳು ಪರಿಸರಸೂಕ್ಷ್ಮ ಪಟ್ಟಿಗೆ ಸೇರಬಹುದು. ಸಾಗರ ಸಮೀಪದ ಸಂಗಳ, ಚಿಪ್ಪಳಿ, ಮತ್ತಿಕೊಪ್ಪದಂತಹ ಗ್ರಾಮಗಳು ಪರಿಸರಸೂಕ್ಷ್ಮ ಪಟ್ಟಿಯಲ್ಲಿದೆ. ಆದ್ದರಿಂದ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ತಿರಸ್ಕರಿಸಿದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಗುವುದಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ನಿಲುವು ತೆಗೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ರೈತ ಸಂಘ ಹಮ್ಮಿಕೊಂಡ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಗೋಷ್ಠಿಯಲ್ಲಿ ರಮೇಶ್ ಕೆಳದಿ, ಡಾ.ರಾಮಚಂದ್ರಪ್ಪ ಮನೆಘಟ್ಟ, ಚಂದ್ರಪ್ಪ ಆಲಳ್ಳಿ, ಹರೀಶ್ ಪಡವಗೋಡು, ರಮೇಶ್ ಪಡವಗೋಡು ಹಾಜರಿದ್ದರು.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kasturirangan-report-protest-malnad-activists-warn-of-threat-to-western-ghats-kvn/articleshow-kge2ga6"/>
        </item>
        <item>
            <title><![CDATA[ಶಿವಮೊಗ್ಗ ಜಿಲ್ಲೆಯಲ್ಲಿ 48,668 ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗೆ । ಆಕ್ಷೇಪಣೆಗೆ ಸೆಪ್ಟೆಂಬರ್ 23 ಕೊನೆ ದಿನ]]></title>
            <link>https://kannada.asianetnews.com/karnataka-districts/sir-voter-list-48668-names-excluded-objections-allowed-till-september-23-kvn/articleshow-lzyhqg3</link>
            <guid isPermaLink="true">https://kannada.asianetnews.com/karnataka-districts/sir-voter-list-48668-names-excluded-objections-allowed-till-september-23-kvn/articleshow-lzyhqg3</guid>
            <pubDate>Tue, 25 Aug 2026 12:29:43 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ನಂತರ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ದೋಷಪೂರಿತ ಮಾಹಿತಿ ಸೇರಿದಂತೆ ವಿವಿಧ ಕಾರಣಗಳಿಂದ ಸುಮಾರು 48,668 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0vv1jj6vcpvfjx961mfewd3,imgname-untitled-design--4--1787640728133.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಜಿಲ್ಲೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್&zwnj;ಐಆರ್&zwnj;) ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಸ್ಥಳೀಯ ಬಿಎಲ್&zwnj;ಒ ಕಚೇರಿಗಳಲ್ಲಿ ಅಥವಾ ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.&lt;/p&gt;&lt;p&gt;ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 48,668 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಈವರೆಗೆ ಮ್ಯಾಪಿಂಗ್&zwnj; ಆಗದಿರುವ 15,164 ಮತದಾರರಿಗೆ ಹಾಗೂ ತಂದೆ-ಮಗನ ವಯಸ್ಸಿನ ಗಣನೀಯ ಅಂತರ ಸೇರಿದಂತೆ ದೋಷಪೂರಿತ ಮಾಹಿತಿ ಇರುವ (ಅನೋಮಲಿಸ್&zwnj;) 33,504 ಮತದಾರರು ಸೇರಿದಂತೆ ಒಟ್ಟು 48,668 ಮತದಾರರಿಗೆ ನೋಟಿಸ್&zwnj; ನೀಡಲಾಗುತ್ತದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಪಟ್ಟಿಯಲ್ಲಿ ಹೆಸರು ಇಲ್ಲದವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ&lt;/strong&gt;&lt;/h2&gt;&lt;p&gt;ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶವಿದ್ದು, ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಲಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಕಳೆದ ಜೂನ್&zwnj; 16ರ ಮತಪಟ್ಟಿಯಲ್ಲಿದ್ದಂತೆ ಜಿಲ್ಲೆಯಲ್ಲಿ 15,19,459 ಮತದಾರರಿದ್ದು, ಅವರಲ್ಲಿ 13,30,905ಮತದಾರರ ಹೆಸರನ್ನು ಅಧಿಕೃತಗೊಳಿಸಿ, ಗಣಕೀಕರಣ ಕಾರ್ಯ ಪೂರ್ಣಗೊಳಿಸಲಾಗಿದೆ. ಅಂದರೆ, ಶೇ.87.59ರಷ್ಟು ಪರಿಷ್ಕರಣೆ ಕಾರ್ಯ ಪೂರ್ಣಗೊಂಡಂತಾಗಿದೆ. ಎಸ್&zwnj;ಐಆರ್&zwnj; ಪ್ರಕ್ರಿಯೆ ವೇಳೆ 1,88,554 ಮತದಾರರನ್ನು &lsquo;ಎಎಸ್&zwnj;ಡಿಡಿಒ&rsquo; ವರ್ಗಕ್ಕೆ ಸೇರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ಈ ಪೈಕಿ 46683 ಮತದಾರರ ಮೃತರಾಗಿರುವುದನ್ನು, 23165 ಮತದಾರರ ಗೈರಾಗಿರುವುದನ್ನು ಹಾಗೂ 99225 ಮತದಾರರು ಸ್ಥಳಾಂತರಗೊಂಡಿರುವುದನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರರ (ಎಎಸ್&zwnj;ಡಿಡಿಒ) ಪೈಕಿ ಗೈರು, ಸ್ಥಳಾಂತರಗೊಂಡಿರುವ, ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ತಿದ್ದುಪಡಿ ಇದ್ದರೆ, ಹೊಸ ಸೇರ್ಪಡೆಗೆ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್&zwnj; 6 ಸಲ್ಲಿಕೆ ಮಾಡಬೇಕು. ಇದರ ಜತೆಗೆ ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್&zwnj; 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಹೆಸರು, ವಿಳಾಸ ಬದಲಾವಣೆಗೆ ನಮೂನೆ-8 ಬಳಸಿ ಅರ್ಜಿ ಹಾಕಬಹುದು. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಆ ಮತದಾರರ ಪಟ್ಟಿಯ ಪೌರತ್ವ ದೃಢಪಟ್ಟರಷ್ಟೇ, ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ವಿವರಿಸಿದರು. ಪ್ರಜಾಸೇವೆ: ಸರ್ಕಾರದ ಮಾರ್ಗಸೂಚಿಯಂತೆ ಸೆಪ್ಟಂಬರ್&zwnj; ಮಾಹೆಯಿಂದ ಪ್ರಜಾಸೇವಾ ಚಟುವಟಿಕೆಗಳು ಆರಂಭಗೊಳ್ಳಲಿವೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ವಾರಗಳಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರಗಳಂದು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಗರ, ಪಟ್ಟಣ, ಹೋಬಳಿ ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುವುದು ಎಂದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್&zwnj; , ಚುನಾವಣಾ ತಹಸೀಲ್ದಾರ್&zwnj; ಮಂಜುಳಾ ಹೆಗಡಾಳ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.&lt;/p&gt;&lt;h3&gt;----&lt;strong&gt;ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ&lt;/strong&gt;&lt;/h3&gt;&lt;p&gt;ಯುವಕರ ಸಬಲೀಕರಣಕ್ಕೆ ರಾಜ್ಯ ಸರ್ಕಾರವು ಆರಂಭಿಸಿರುವ ವಿಶೇಷ ಯೋಜನೆ ಇದಾಗಿದ್ದು, ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 35600ಸದಸ್ಯರನ್ನು ಒಳಗೊಂಡ ಸುಮಾರು 356 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈವರೆಗೆ, 28137ಜನ ಸದಸ್ಯರಾಗಿದ್ದು, ರಾಜ್ಯದಲ್ಲಿ ಸಂಘಗಳ ರಚನೆಯಲ್ಲಿ ಶಿವಮೊಗ್ಗ ಜಿಲ್ಲೆ 6ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.&lt;/p&gt;&lt;p&gt;--&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/sir-voter-list-48668-names-excluded-objections-allowed-till-september-23-kvn/articleshow-lzyhqg3"/>
        </item>
        <item>
            <title><![CDATA[Shivamogga: ಸರ್ಕಾರಿ ಶಾಲೆಯನ್ನು ‘ಮಕ್ಕಳ ಮನೆ’ಯಾಗಿಸಿದ ಶಿಕ್ಷಕಿಗೆ  ರಾಷ್ಟ್ರಪ್ರಶಸ್ತಿ..! ಈ ಶಾಲೆಯ ವಿಶೇಷತೆ ಏನು?]]></title>
            <link>https://kannada.asianetnews.com/karnataka-districts/national-teachers-award-for-s-ratnakumari-shivamogga-teacher-turns-rural-school-into-a-childrens-home-kvn/articleshow-n7kgyp1</link>
            <guid isPermaLink="true">https://kannada.asianetnews.com/karnataka-districts/national-teachers-award-for-s-ratnakumari-shivamogga-teacher-turns-rural-school-into-a-childrens-home-kvn/articleshow-n7kgyp1</guid>
            <pubDate>Mon, 24 Aug 2026 13:03:01 +0530</pubDate>
            <description><![CDATA[ಶಿವಮೊಗ್ಗದ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಶಾಲೆಯ ಶಿಕ್ಷಕಿ ಎಸ್. ರತ್ನಕುಮಾರಿ ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 22 ವರ್ಷಗಳಿಂದ ತಮ್ಮ ನವೀನ ಬೋಧನಾ ವಿಧಾನಗಳು ಮತ್ತು ಸಮುದಾಯದ ಸಹಭಾಗಿತ್ವದಿಂದ ಶಾಲೆಯನ್ನು 'ಮಕ್ಕಳ ಮನೆ'ಯಾಗಿ ಪರಿವರ್ತಿಸಿ, ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0saskvfw71d7j96bxbpphae,imgname-untitled-design--2--1787556581230.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಹೊಸನಗರ ತಾಲೂಕಿನ ಹುಂಚ ಹೋಬಳಿಯ ಸಮಟಗಾರು ಎಂಬ ಕುಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್&zwnj;.ರತ್ನಕುಮಾರಿ ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.&lt;/p&gt;&lt;p&gt;ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯುತ ಕಾಯಕವೆಂಬಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿರುವ ರತ್ನಕುಮಾರಿ, ಕಳೆದ 22 ವರ್ಷದಿಂದ ತೀರ್ಥಹಳ್ಳಿ ಪಟ್ಟಣದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿತ್ಯ ಸಂಚಾರ ಮಾಡಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.&lt;/p&gt;&lt;p&gt;ರತ್ನಕುಮಾರಿ ಮೂಲತಃ ತೀರ್ಥಹಳ್ಳಿ ಬಳಿಯ ಬೊಮ್ಮರಸಯ್ಯನ ಅಗ್ರಹಾರದವರು. ರಾಮಕೃಷ್ಣ ಐತಾಳ, ಕಮಲಮ್ಮ ದಂಪತಿಯ ಐವರು ಮಕ್ಕಳ ಪೈಕಿ ಕೊನೆಯವರು. ಬಿಕಾಂ, ಟಿಸಿಎಚ್&zwnj; ಓದಿರುವ ಇವರು ಮೊದಲು ತೀರ್ಥಹಳ್ಳಿ ತಾಲೂಕಿನ ಹಾರೋಗುಳಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರ ಕುಟುಂಬ ತೀರ್ಥಹಳ್ಳಿಯಲ್ಲಿ ನೆಲಿಸಿದೆ. ಇವರ ಪತಿ ತೀರ್ಥಹಳ್ಳಿ ತಾಲೂಕಿನ ಆರಗ ಸರ್ಕಾರಿ ಜೂನಿಯರ್&zwnj; ಕಾಲೇಜು ಪ್ರಾಚಾರ್ಯರಾಗಿದ್ದಾರೆ.&lt;/p&gt;&lt;h2&gt;&lt;strong&gt;1996ರಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದ ರತ್ನಕುಮಾರಿ&lt;/strong&gt;&lt;/h2&gt;&lt;p&gt;1996ರಲ್ಲಿ ತೀರ್ಥಹಳ್ಳಿ ತಾಲೂಕಿನ ಹಾರೋಗುಳಿಗೆ ಶಾಲೆಯ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ರತ್ನಕುಮಾರಿ, ಸಮಟಗಾರು ಶಾಲೆಯಲ್ಲಿ ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ 60 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸಮಟಗಾರು ಗ್ರಾಮದ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಈ ಶಾಲೆಗೆ ಆಗಮಿಸುತ್ತಿದ್ದಾರೆ. ಶಿಕ್ಷಕಿ ರತ್ನಕುಮಾರಿ ಸಮಟಗಾರು ಶಾಲೆಗೆ ವರ್ಗಾವಣೆಗೊಂಡು ಬಂದಾಗ ಆರಂಭದಲ್ಲಿ ಎದುರಾದ ಸವಾಲುಗಳೇ ಆ ಶಾಲೆಯನ್ನು ಸಮುದಾಯ ಮುಖಿಯಾಗಿಸುವ ಕಾರ್ಯಕ್ಕೆ ಪ್ರೇರಣೆಯಾಯಿತು.&lt;/p&gt;&lt;p&gt;ಈ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ-ಗಣಿತ ವಿಷಯಗಳನ್ನು ಸುಲಭವಾಗಿಸಲು &lsquo;ಗಣಿತ-ವಿಜ್ಞಾನ ಪಾರ್ಕ್&zwnj;&rsquo; ನಿರ್ಮಿಸಿದ್ದಾರೆ. ಆಟಿಕೆ ಆಧಾರಿತ ಬೋಧನೆಗೆ ಪ್ರಾಶಸ್ತ್ಯ ನೀಡಿದ್ದು, ಇದಕ್ಕಾಗಿ ಕಡಿಮೆ ವೆಚ್ಚದ ಕಲಿಕೋಪಕರಣ ಅಬಾಕಸ್&zwnj;, ಭಾಷಾ ಪ್ರಯೋಗಾಲಯ ಸ್ಥಾಪಿಸಿದ್ದಾರೆ. ಡಿಜಿಟಲ್ ಹಾಗೂ ಸ್ಮಾರ್ಟ್&zwnj; ಕ್ಲಾಸ್&zwnj; ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.&lt;/p&gt;&lt;p&gt;ನಿರುಪಯುಕ್ತ ವಸ್ತುಗಳ ಬಳಕೆ, ಚಿನ್ನರ ಲೋಕ, ಮಕ್ಕಳ ಹಸ್ತಪ್ರತಿ, ಕಲಿಕಾ ಸಾಮರ್ಥ್ಯ ಬಿಂಬಿಸುವ ನಲಿ-ಕಲಿ ಕೊಠಡಿ ಮತ್ತು ಕಲಿಕಾ ಚಟುವಟಿಕೆ ಗೋಡೆ, ಮಕ್ಕಳ ಅಂಗಾಂಗಗಳಿಗೆ ಆಯುರ್ವೇದ ಔಷದ ಉಪಯೋಗದ ಮಾಹಿತಿ ನೀಡುವುದು, ಕಾಲಿಡಬ್ಬಗಳಿಂದ ಕಲಿಕೋಪಕರಣ, ನವರಾತ್ರಿ ಗೊಂಬೆ, ಇಂಗ್ಲೀಷ್ ಕುರ್ಚಿ, ಅಂತರ್ಜಾಲ ಬಳಕೆ, ಹೊರಾಂಗಣ ಕಲಿಕೆ, ಕೌಶಲ್ಯಾಭಿವೃದ್ಧಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಮಕ್ಕಳ ಚುನಾವಣಾ ಪ್ರಕ್ರಿಯೆ ಮತ್ತು ಮಕ್ಕಳ ಸಂತೆ ಮೂಲಕ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ.&lt;/p&gt;&lt;p&gt;ತಾಯಂದಿರ ಕಮಿಟಿ, ಮನೆ, ಮನೆ ಭೇಟಿ ಕಾರ್ಯಕ್ರಮಗಳ ಮೂಲಕ ಪಾಲಕರಿಂದ ಅಗತ್ಯ ಮಾಹಿತಿ ಸಂಗ್ರಹಿಸಿ, ಬೋಧನಾವೃತ್ತಿಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಬೇರೆ, ಬೇರೆ ಸಂಘ-ಸಂಸ್ಥೆಗಳಿಂದ ಸುಮಾರು 40 ಲಕ್ಷ ರೂ.ಅನುದಾನ ಸಂಗ್ರಹಿಸಿ, ಶಾಲೆಗೆ ಅಗತ್ಯ ಉಪಕರಣಗಳನ್ನು ಒದಗಿಸಿ, ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ, ಶಾಲೆಯನ್ನು &lsquo;ಮಕ್ಕಳ ಮನೆ&rsquo;ಯಾಗಿಸಿದ್ದಾರೆ.&lt;/p&gt;&lt;p&gt;ಅಲ್ಲದೆ ಮಕ್ಕಳಿಗೆ ಯಕ್ಷಗಾನ, ನಾಟಕ, ಕ್ರೀಡೆ, ಯೋಗ, ಪೋಷಣ್&zwnj; ಅಭಿಯಾನ ಹಾಗೂ ರಂಗಮಂಟಪದ ಮೂಲಕ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ವಿಶೇಷ ಪೋತ್ಸಾಹ ನೀಡಿ ಊರಿನ ಶಾಲೆಯನ್ನು ಬೇರೆಡೆಗಿಂತ ಭಿನ್ನವಾಗಿ ರೂಪಿಸಿದ ಶ್ರೇಯ ಶಿಕ್ಷಕಿ ರತ್ನಕುಮಾರಿಗೆ ಸಲ್ಲುತ್ತದೆ.&lt;/p&gt;&lt;h3&gt;&lt;strong&gt;ರಾಜ್ಯ ಪ್ರಶಸ್ತಿಗೆ ಪಾತ್ರರಾಗಿರುವ ರತ್ನಕುಮಾರಿ&lt;/strong&gt;&lt;/h3&gt;&lt;p&gt;ರತ್ನಕುಮಾರಿಗೆ 2019 -20ನೇ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಇದಲ್ಲದೆ ತಾಲೂಕು ಮತ್ತು ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಜೊತೆಗೆ 2018- 19ನೇ ಸಾಲಿನ ಇನ್ನೋವೇಟಿವ್ ಟೀಚರ್ ಅವಾರ್ಡ್ ಕೂಡ ಸಿಕ್ಕಿದೆ. ಶಾಲೆಯಲ್ಲಿ ಉತ್ತಮ ಔಷಧ ಹೊಂದಿರುವ ಕಾರಣ 2011-12ರಲ್ಲಿ ಧನ್ವಂತರಿ ಶಾಲೆ ಪ್ರಶಸ್ತಿ ಕೂಡ ಲಭಿಸಿದೆ.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/national-teachers-award-for-s-ratnakumari-shivamogga-teacher-turns-rural-school-into-a-childrens-home-kvn/articleshow-n7kgyp1"/>
        </item>
        <item>
            <title><![CDATA[ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ]]></title>
            <link>https://kannada.asianetnews.com/festivals/vadana-bailu-padmavathi-devi-why-do-devotees-offer-bangles-as-a-vow-gvd-videoshow-nc39da6</link>
            <guid isPermaLink="true">https://kannada.asianetnews.com/festivals/vadana-bailu-padmavathi-devi-why-do-devotees-offer-bangles-as-a-vow-gvd-videoshow-nc39da6</guid>
            <pubDate>Mon, 24 Aug 2026 15:59:36 +0530</pubDate>
            <description><![CDATA[&lt;p&gt;ಲಿಂಗನಮಕ್ಕಿ ಜಲಾಶಯದ ಸಮಾನಾಂತರ ಅಣೆಕಟ್ಟಾಗಿರುವ ತಲಕಳಲೆ ಹಿನ್ನೀರಿನ ಪ್ರದೇಶದಲ್ಲಿ ನೆಲೆಸಿರುವ ಶ್ರೀ ಪದ್ಮಾವತಿ ದೇವಿ, ಭಕ್ತರ ನಂಬಿಕೆ ಮತ್ತು ಭಕ್ತಿಯ ಕಾರಣದಿಂದಲೇ &lsquo;ಬಳೆ ಪದ್ಮಾವತಿ ದೇವಿ&rsquo; ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾಳೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xb08lai" medium="video" height="768" width="1024"/>
            <content:encoded><![CDATA[&lt;p&gt;ದೇವರಿಗೆ ಹರಕೆ ಹೊತ್ತಾಗ ಸೀರೆ, ಬಂಗಾರ, ಬೆಳ್ಳಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸಮರ್ಪಿಸುವುದು ಸಾಮಾನ್ಯ. ಆದರೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಸಮೀಪದ ವಡನಬೈಲು ಗ್ರಾಮದಲ್ಲಿರುವ ಶ್ರೀ ಪದ್ಮಾವತಿ ದೇವಿಗೆ ಭಕ್ತರು ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸುತ್ತಾರೆ. ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆಯ ಕಾಣಿಕೆ! ಲಿಂಗನಮಕ್ಕಿ ಜಲಾಶಯದ ಸಮಾನಾಂತರ ಅಣೆಕಟ್ಟಾಗಿರುವ ತಲಕಳಲೆ ಹಿನ್ನೀರಿನ ಪ್ರದೇಶದಲ್ಲಿ ನೆಲೆಸಿರುವ ಶ್ರೀ ಪದ್ಮಾವತಿ ದೇವಿ, ಭಕ್ತರ ನಂಬಿಕೆ ಮತ್ತು ಭಕ್ತಿಯ ಕಾರಣದಿಂದಲೇ &lsquo;ಬಳೆ ಪದ್ಮಾವತಿ ದೇವಿ&rsquo; ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾಳೆ.&lt;/p&gt;&lt;p&gt;ತಮ್ಮ ಇಷ್ಟಾರ್ಥಗಳು ನೆರವೇರಲಿ, ಸಂಕಷ್ಟಗಳು ದೂರವಾಗಲಿ ಎಂಬ ನಂಬಿಕೆಯಿಂದ ಭಕ್ತರು ದೇವಿಗೆ ಬಳೆಗಳನ್ನು ಅರ್ಪಿಸುತ್ತಾರೆ. ಹರಕೆ ಈಡೇರಿದ ಬಳಿಕ ಮತ್ತೆ ದೇವಿಯ ಸನ್ನಿಧಿಗೆ ಬಂದು ಬಳೆಗಳನ್ನು ಸಮರ್ಪಿಸುವ ಸಂಪ್ರದಾಯವೂ ಇಲ್ಲಿ ನಡೆದುಕೊಂಡು ಬಂದಿದೆ. ಹೀಗಾಗಿ, ಭಕ್ತಿಯ ಸಂಕೇತವಾಗಿ ಬಳೆಗಳನ್ನೇ ಸ್ವೀಕರಿಸುವ ಈ ವಿಶಿಷ್ಟ ಶಕ್ತಿದೇವಿಯ ಕ್ಷೇತ್ರವು ಜೋಗ-ಸಾಗರ ಭಾಗದ ಧಾರ್ಮಿಕ ಪರಂಪರೆಯಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.&lt;/p&gt;]]></content:encoded>
            <category>shivamogga</category>
            <dc:creator>Govindaraj S</dc:creator>
            <atom:link href="https://kannada.asianetnews.com/festivals/vadana-bailu-padmavathi-devi-why-do-devotees-offer-bangles-as-a-vow-gvd-videoshow-nc39da6"/>
        </item>
        <item>
            <title><![CDATA[ಶರಣ್ ಪಂಪ್‌ವೆಲ್ ಶಿವಮೊಗ್ಗ ಪ್ರವೇಶಕ್ಕೆ 10 ದಿನ ಬ್ಯಾನ್; ಶಿಕಾರಿಪುರ ಬಂದ್ ಭಾಷಣಕ್ಕೆ ಮುನ್ನವೇ ಗಡಿಪಾರು!]]></title>
            <link>https://kannada.asianetnews.com/karnataka-districts/hindu-activist-sharan-pumpwell-entry-banned-shivamogga-district-dc-order-shikaripura-protest/articleshow-sifhacb</link>
            <guid isPermaLink="true">https://kannada.asianetnews.com/karnataka-districts/hindu-activist-sharan-pumpwell-entry-banned-shivamogga-district-dc-order-shikaripura-protest/articleshow-sifhacb</guid>
            <pubDate>Thu, 20 Aug 2026 09:35:34 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಅವರಿಗೆ 10 ದಿನಗಳ ಕಾಲ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶಿಕಾರಿಪುರದಲ್ಲಿ ಗೋ ಕಳ್ಳತನ ವಿರೋಧಿ ಪ್ರತಿಭಟನೆಗೆ ಆಗಮಿಸುತ್ತಿದ್ದ ಅವರನ್ನು ಪೊಲೀಸರು ತಡೆದು, ಜಿಲ್ಲಾ ಗಡಿಯಿಂದ ವಾಪಸ್ ಕಳುಹಿಸಿದ್ದಾರೆ. ಈ ಕ್ರಮವನ್ನು ಖಂಡಿಸಿರುವ ಪಂಪ್&zwnj;ವೆಲ್, ಇದು ಸರ್ಕಾರದ ಹಿಂದೂ ವಿರೋಧಿ ನೀತಿ ಎಂದು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0endpmka811x9ys42s63zd3,imgname-hindu-activist-sharan-pumpwell-1787198626449.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಆ.20): ಶಿ&lt;/strong&gt;ಕಾರಿಪುರದಲ್ಲಿ ನಡೆಯುತ್ತಿದ್ದ&lt;strong&gt; &lt;/strong&gt;ಗೋ ಕಳ್ಳತನ ವಿರೋಧಿ ಪ್ರತಿಭಟನೆಗೆ ಆಗಮಿಸುತ್ತಿದ್ದ&lt;strong&gt; &lt;/strong&gt;ಬಜರಂಗದಳ ಮುಖಂಡರಾದ ಶರಣ್ ಪಂಪ್ ವೆಲ್ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ, ಶಿವಮೊಗ್ಗ ಜಿಲ್ಲಾಡಳಿತ ಆದೇಶಿಸಿದೆ.&lt;/p&gt;&lt;p&gt;ಜಿಲ್ಲೆಯಲ್ಲಿ ಶಾಂತಿ- ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಶರಣ್ ಪಂಪ್ ವೆಲ್ ಅವರಿಗೆ ಆ.19ರಿಂದ 10 ದಿನಗಳ ಕಾಲ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಭಾಷಣ ಮಾಡುವ ಮುನ್ನವೇ ನೋಟಿಸ್ ನೀಡಿ, ಕರೆದೊಯ್ದ ಪೊಲೀಸರು: ಇನ್ನು ಗೋ ಕಳ್ಳತನದ ವಿರುದ್ಧ ವಿಶ್ವ ಹಿಂದೂ ಪರಿಷತ್&zwnj; ಹಾಗೂ ಬಜರಂಗದಳ ಇಂದು ಕರೆ ನೀಡಿದ್ದ ಶಿಕಾರಿಪುರ ಬಂದ್&zwnj; ವೇಳೆ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ಆಗಮಿಸುತ್ತಿದ್ದ ಮುಖ್ಯ ಭಾಷಣಕಾರ ಹಿಂದೂ ಮುಖಂಡ ಶರಣ್ ಪಂಪ್ ವೆಲ್&zwnj; ರನ್ನು ತಡೆದ ಪೊಲೀಸರು ಇಂದೇ ನೋಟಿಸ್ ನೀಡಿದ್ದಾರೆ.&lt;/p&gt;&lt;p&gt;ಶಿಕಾರಿಪುರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭಾಷಣಕ್ಕೆ ಅವಕಾಶ ನೀಡದೇ, ಪೊಲೀಸರು ನಿರ್ಬಂಧಿಸಿದ್ದಾರೆ. ಕಾರ್ಯಕ್ರಮಕ್ಕಾಗಿ ಆಗಮಿಸಿ, ಶಿಕಾರಿಪುರ ಪಟ್ಟಣದ ಆರ್&zwnj;ಎಸ್&zwnj;ಎಸ್&zwnj; ಪಾಂಚಜನ್ಯ ಸಂಘದ ಕಚೇರಿಯಲ್ಲಿದ್ದ ವೇಳೆಯೇ ಶರಣ್ ಪಂಪ್ ವೆಲ್&zwnj;ಗೆ ಪೊಲೀಸರು ನಿರ್ಬಂಧದ ನೋಟಿಸ್ ನೀಡಿದರು. ಅಲ್ಲಿಂದ ಪ್ರತಿಭಟನಾ ಸ್ಥಳಕ್ಕೆ ತೆರಳಲು ಅವಕಾಶ ನೀಡದೇ, ಭದ್ರತೆಯಲ್ಲಿಯೇ ಕರೆದೊಯ್ದ ಪೊಲೀಸರು, ಜಿಲ್ಲೆಯ ಗಡಿವರೆಗೆ ಬಿಟ್ಟು ವಾಪಸ್ ಕಳುಹಿಸಿದ್ದಾರೆ.&lt;/p&gt;&lt;h2&gt;----&lt;strong&gt;ನೋಟಿಸ್&zwnj; ಒಂದು ದಿನ ಮುನ್ನವೇ ಕೊಡಬೇಕಿತ್ತು: ಪಂಪ್&zwnj;ವೆಲ್&zwnj;&lt;/strong&gt;&lt;/h2&gt;&lt;p&gt;ಶಿಕಾರಿಪುರದ ಬಳಿ ಗೋ ರಕ್ಷಕರ ಮೇಲೆ ತಲ್ವಾರ್&zwnj;ನಿಂದ ಹತ್ಯೆ ಮಾಡಲು ಪ್ರಯತ್ನಿಸಲಾಗಿದೆ. ಇದನ್ನು ಖಂಡಿಸಿ ಶಿಕಾರಿಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಬೇಕಿತ್ತು. ಆದರೆ, ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಬರದಂತೆ ನನಗೆ ನೋಟಿಸ್ ನೀಡಿದ್ದಾರೆ. ಇದನ್ನು ಒಂದು ದಿನ ಮುನ್ನವೇ ಕೊಡಬೇಕಿತ್ತು. ಇವರು ಪ್ರತಿಭಟನೆಗೆ ಭಾಗಿಯಾಗಲು ಐದು ನಿಮಿಷ ಇರುವಾಗ ಕೊಟ್ಟಿದ್ದಾರೆ ಎಂದು ಹಿಂದೂ ಮುಖಂಡ ಶರಣ್ ಪಂಪ್&zwnj;ವೆಲ್ ದೂರಿದರು.&lt;/p&gt;&lt;p&gt;ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ನನಗೆ ನೋಟಿಸ್ ನೀಡಿರೋದನ್ನು ಖಂಡಿಸುತ್ತೇನೆ. ರಾಜ್ಯ ಸರ್ಕಾರ ಮತ್ತೊಮ್ಮೆ ಹಿಂದೂ ವಿರೋಧಿ ನೀತಿಯನ್ನು ತೋರಿಸಿದೆ. ನಾವ್ಯಾರು ಭಯೋತ್ಪಾದಕರಲ್ಲ, ಗೋವಿನ ರಕ್ಷಣೆ ಮಾಡುವವರು. ನಾವು ರಾಷ್ಟ್ರದ ಜಾಗೃತಿಗಾಗಿ ಕೆಲಸ ಮಾಡುವವರು. ಬಜರಂಗದಳದ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ, ಇದನ್ನು ಖಂಡಿಸುವುದು ನನ್ನ ಹಕ್ಕು. ಪ್ರತಿಭಟನೆ ಮೂಲಕ ಖಂಡಿಸಲು ಬಂದ್ರೆ ನನಗೆ ತಡೆಯುವ ಕೆಲಸ ಆಗಿದೆ. ಜಿಲ್ಲಾಡಳಿತ ನೀಡಿರುವ ನೋಟಿಸ್ ವಿರುದ್ದ ನಾನು ಕೋರ್ಟ್&zwnj;ಗೆ ಹೋಗುತ್ತೇನೆ. ಮತ್ತೆ ಶಿಕಾರಿಪುರಕ್ಕೆ ಬಂದು ಭಾಷಣ ಮಾಡುತ್ತೇನೆ ಎಂದು ಹರಿಹಾಯ್ದರು.&lt;/p&gt;&lt;p&gt;ಗೋ ಮಾಫಿಯಾದ ಸಾಮ್ರಾಜ್ಯವನ್ನು ಮಲೆನಾಡು ಭಾಗದಲ್ಲಿ ವಿಸ್ತಾರ ಮಾಡಲು ಯತ್ನಿಸುತ್ತಿದ್ದಾರೆ. ಮಲೆನಾಡಿನ ಜನ ಜಿಹಾದಿಗಳಿಂದ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಗೃಹ ಸಚಿವರು ಆರ್&zwnj;ಎಸ್&zwnj;ಎಸ್&zwnj; ಬಗ್ಗೆ ಮಾತಾಡೋದು ಬಿಟ್ಟು. ಗೋ ಹತ್ಯೆ ಮಾಡುವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category>shivamogga</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hindu-activist-sharan-pumpwell-entry-banned-shivamogga-district-dc-order-shikaripura-protest/articleshow-sifhacb"/>
        </item>
        <item>
            <title><![CDATA[Shivamogga: ಮೂವರು ಮಕ್ಕಳೊಂದಿಗೆ ಹೊಳೆಗೆ ಹಾರಿದ ತಾಯಿ, ಇಬ್ಬರು ಹಸುಗೂಸುಗಳು ನಾಪತ್ತೆ!]]></title>
            <link>https://kannada.asianetnews.com/karnataka-districts/shivamogga-tragedy-mother-jumps-river-with-three-children-two-girls-missing-bmk/articleshow-too6h7i</link>
            <guid isPermaLink="true">https://kannada.asianetnews.com/karnataka-districts/shivamogga-tragedy-mother-jumps-river-with-three-children-two-girls-missing-bmk/articleshow-too6h7i</guid>
            <pubDate>Mon, 24 Aug 2026 22:12:42 +0530</pubDate>
            <description><![CDATA[ಕೌಟುಂಬಿಕ ಕಲಹದಿಂದ ಮನನೊಂದು, ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಶಿವಮೊಗ್ಗದ ತುಂಗಾ ನದಿಗೆ ಹಾರಿದ್ದಾಳೆ. ಸ್ಥಳೀಯರು ತಾಯಿ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಿದರೂ, ಇಬ್ಬರು ಹೆಣ್ಣುಮಕ್ಕಳು ನದಿಯ ರಭಸಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0taa01c9erf9d8aht02at8q,imgname-shivamogga-crime-1787589623852.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ; ಕೌಟುಂಬಿಕ ಕಷ್ಟಗಳು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮನುಷ್ಯನನ್ನು ಯಾವ ಹಂತಕ್ಕಾದರೂ ಕರೆದೊಯ್ಯಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ ನಗರದಲ್ಲಿ ಅತ್ಯಂತ ಮನಕಲಕುವ ಮತ್ತು ಕರುಣಾಜನಕ ಘಟನೆಯೊಂದು ಸಂಭವಿಸಿದೆ. ಹೂವಿನಂತೆ ಬೆಳೆಸಬೇಕಾಗಿದ್ದ ಮೂವರು ಹೆತ್ತ ಕಂದಮ್ಮಗಳನ್ನು ಕಟ್ಟಿಕೊಂಡು ತಾಯಿಯೊಬ್ಬಳು ಧುಮುಕಿದ ರಭಸಕ್ಕೆ, ತುಂಗಾ ನದಿಯ ಅಲೆಗಳ ನಡುವೆ ಆ ಪುಟ್ಟ ಜೀವಗಳು ಕೊಚ್ಚಿಹೋಗಿವೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಸೇತುವೆಯ ಮೇಲಿಂದ ಕತ್ತಲಿಗೆ ಧುಮುಕಿದ ಕುಟುಂಬ!&lt;/strong&gt;&lt;/h2&gt;&lt;p&gt;ಚಿತ್ರದುರ್ಗ ಮೂಲದ ಭವಾನಿ ಎಂಬ ಮಹಿಳೆ, ತೀವ್ರ ಕೌಟುಂಬಿಕ ಕಲಹದಿಂದ ಮನನೊಂದು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಬದುಕಿನ ಮೇಲಿನ ಭರವಸೆ ಕಳೆದುಕೊಂಡ ಆಕೆ, ತನ್ನ ಮೂವರು ಪುಟ್ಟ ಮಕ್ಕಳನ್ನು ಕರೆದುಕೊಂಡು ಶಿವಮೊಗ್ಗ ನಗರದ ತುಂಗಾ ನದಿಯ ರೈಲ್ವೆ ಸೇತುವೆಯ ಬಳಿ ಬಂದಿದ್ದಾರೆ. ಕ್ಷಣಮಾತ್ರದಲ್ಲಿ ಏನು ನಡೆಯುತ್ತಿದೆ ಎಂದು ಯಾರೂ ಊಹಿಸುವಷ್ಟರಲ್ಲಿ, ಆಕೆ ತನ್ನ ಮೂವರೂ ಮಕ್ಕಳೊಂದಿಗೆ ಆರ್ಭಟಿಸುತ್ತಿದ್ದ ನದಿಗೆ ಜಿಗಿದಿದ್ದಾರೆ.&lt;/p&gt;&lt;h3&gt;&lt;strong&gt;ತಾಯಿ ಹಾಗೂ 11 ತಿಂಗಳ ಮಗುವಿನ ರಕ್ಷಣೆ!&lt;/strong&gt;&lt;/h3&gt;&lt;p&gt;ಮಹಿಳೆ ಮಕ್ಕಳೊಂದಿಗೆ ನೀರಿಗೆ ಹಾರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ನದಿಯ ಸೆಳೆತದ ನಡುವೆಯೂ ಧೈರ್ಯ ತೋರಿದ ಸ್ಥಳೀಯರು, ತಾಯಿ ಭವಾನಿ ಹಾಗೂ ಆಕೆಯ 11 ತಿಂಗಳ ಕಂದಮ್ಮನನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಪುಟ್ಟ ಕಂದನ ಉಸಿರು ಉಳಿದಿದೆಯಾದರೂ, ಇಡೀ ಘಟನೆಯಿಂದ ಆ ಕುಟುಂಬ ಆಘಾತಕ್ಕೆ ಒಳಗಾಗಿದೆ.&lt;/p&gt;&lt;h3&gt;&lt;strong&gt;ನೀರ ಪಾಲಾದ ಇಬ್ಬರು ಹೆಣ್ಣುಮಕ್ಕಳು!&lt;/strong&gt;&lt;/h3&gt;&lt;p&gt;ಆದರೆ ವಿಧಿಯ ಆಟ ಬೇರೆಯೇ ಇತ್ತು. ಘಟನೆಯಲ್ಲಿ ಭವಾನಿ ಅವರ 6 ವರ್ಷ ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳು ನದಿಯ ಬಲವಾದ ಹರಿವಿನಲ್ಲಿ ಕೊಚ್ಚಿಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿತಾದರೂ, ವೇಳೆಗೆ ಕತ್ತಲು ಆವರಿಸಿದ್ದರಿಂದ ಶೋಧ ಕಾರ್ಯಾಚರಣೆಗೆ ತೀವ್ರ ಅಡೆತಡೆ ಉಂಟಾಯಿತು. ಆ ನಡುರಾತ್ರಿಯ ಕತ್ತಲಿನಲ್ಲಿ ಆ ಪುಟ್ಟ ಕಂದಮ್ಮಗಳಿಗಾಗಿ ಹುಡುಕಾಟ ನಡೆಸುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮರುದಿನ ಬೆಳಿಗ್ಗೆಯಿಂದ ಮತ್ತೆ ಶೋಧ ಮುಂದುವರಿಸಲು ನಿರ್ಧರಿಸಲಾಗಿದೆ.&lt;/p&gt;&lt;h3&gt;&lt;strong&gt;ಹೆತ್ತ ಕರುಳಿನ ಆಕ್ರಂದನ, ಸ್ತಬ್ಧವಾದ ಶಿವಮೊಗ್ಗ!&lt;/strong&gt;&lt;/h3&gt;&lt;p&gt;ಕ್ಷಣಿಕ ಕೋಪ ಅಥವಾ ಸಂಸಾರದ ಜಗಳಕ್ಕೆ ಈ ರೀತಿ ಮುಗ್ಧ ಮಕ್ಕಳು ಬಲಿಯಾಗುತ್ತಿರುವುದು ಪ್ರತಿಯೊಬ್ಬರ ಎದೆಯನ್ನು ಹಿಂಡುವಂತಿದೆ. ತಾನು ಬದುಕಿ, 11 ತಿಂಗಳ ಮಗುವೂ ಉಳಿದರೂ, ಕಣ್ಣೆದುರೇ ಕೊಚ್ಚಿಹೋದ ಇಬ್ಬರು ಹೆಣ್ಣುಮಕ್ಕಳನ್ನು ನೆನೆದು ತಾಯಿ ಭವಾನಿ ಕಣ್ಣೀರಿಡುತ್ತಿರುವುದು ಸ್ಥಳೀಯರ ಕಣ್ಣಲ್ಲೂ ನೀರು ತರಿಸಿದೆ. ಈ ಕುರಿತು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>shivamogga</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/shivamogga-tragedy-mother-jumps-river-with-three-children-two-girls-missing-bmk/articleshow-too6h7i"/>
        </item>
        <item>
            <title><![CDATA[2 ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್ ಲೋಕಾರ್ಪಣೆ: ಸಚಿವ ಮಧು ಬಂಗಾರಪ್ಪ]]></title>
            <link>https://kannada.asianetnews.com/karnataka-districts/500-karnataka-public-schools-to-be-inaugurated-in-two-years-says-minister-madhu-bangarappa-sns/articleshow-txcl1l0</link>
            <guid isPermaLink="true">https://kannada.asianetnews.com/karnataka-districts/500-karnataka-public-schools-to-be-inaugurated-in-two-years-says-minister-madhu-bangarappa-sns/articleshow-txcl1l0</guid>
            <pubDate>Sat, 22 Aug 2026 14:47:34 +0530</pubDate>
            <description><![CDATA[ರಾಜ್ಯದಲ್ಲಿ ಎಲ್&zwnj;.ಕೆ.ಜಿ ಯಿಂದ 12ನೇ ತರಗತಿಯವರೆಗೆ ಒಂದೇ ಪ್ರಾಂಗಣದಲ್ಲಿ ದ್ವಿಭಾಷಾ ಶಿಕ್ಷಣ ನೀಡುವ 1000 ಕರ್ನಾಟಕ ಪಬ್ಲಿಕ್ ಸ್ಕೂಲ್&zwnj;ಗಳನ್ನು ಆರಂಭಿಸಲು ಸರ್ಕಾರ ಯೋಜಿಸಿದೆ. ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, ಈ ಅತ್ಯಾಧುನಿಕ ಶಾಲೆಗಳನ್ನು ಹಂತಹಂತವಾಗಿ ನಿರ್ಮಿಸಲಾಗುವುದು ಮತ್ತು 15,000 ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jd6vbwbj497jtf9z0rqx0z0g,imgname-madhu-bangarappa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ: &lt;/strong&gt;ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದೇ ಪ್ರಾಂಗಣದಲ್ಲಿ ಎಲ್&zwnj;.ಕೆ.ಜಿ ಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಗುಣಾತ್ಮಕ ಶಿಕ್ಷಣ ನೀಡುವ, ಸ್ಮಾರ್ಟ್ ತರಗತಿ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 1000 ಸುಸಜ್ಜಿತ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ (Karnataka Public School) ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಹಂತಹಂತವಾಗಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಹೇಳಿದರು.&lt;/p&gt;&lt;h2&gt;ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್&lt;/h2&gt;&lt;p&gt;ಸಿ.ಎಸ್.ಆರ್. ನಿಧಿಯಡಿಯಲ್ಲಿ ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆಯ ಸೈನ್ಸ್&zwnj;ಮೈದಾನದಲ್ಲಿ ಎಜಾಕ್ಸ್&zwnj; ಕರ್ನಾಟಕ ಪಬ್ಲಿಕ್&zwnj; ಸ್ಕೂಲ್&zwnj; ನಿರ್ಮಿಸಲು ಉದ್ದೇಶಿಸಿರುವ ನೂತನ ಶಾಲಾ ಕಟ್ಟಡದ ಶಂಕುಸ್ತಾಪನೆ ನೆರವೇರಿಸಿ ಮಾತನಾಡಿದರು. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 500 ಕೆ.ಪಿ.ಎಸ್. ಶಾಲೆಗಳನ್ನು ನಿರ್ಮಿಸಿ ಲೋಕಾರ್ಪಣೆ ಗೊಳಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ 1000 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಧಿಯಿಂದ ಉರ್ದು ಸೇರಿದಂತೆ ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ 750 ಕೋಟಿ ರಾಜ್ಯ ಸರ್ಕಾರದ ಪೂರಕ ನಿಧಿ ಮತ್ತು ಏಷಿಯನ್&zwnj; ಡೆವಲೆಪ್&zwnj;ಮೆಂಟ್&zwnj; ಬ್ಯಾಂಕಿನ ಆರ್ಥಿಕ ನೆರವು ಸೇರಿದಂತೆ 1,750 ಕೋಟಿ ವೆಚ್ಚದಲ್ಲಿ ಮುಂದಿನ 4 ವರ್ಷಗಳ ಅವಧಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ತಾವು ಓದಿದ ಶಾಲೆಗೆ 10 ಲಕ್ಷ ರೂಪಾಯಿ ನೆರವು&lt;/h2&gt;&lt;p&gt;ಸೇವೆಯೇ ಮುಖ್ಯ &ldquo;ನಮ್ಮ ಶಾಲೆ, ನಮ್ಮ ಜವಾಬ್ದಾರಿ&rdquo; ಎಂಬ ಯೋಜನೆಯಡಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪೂಜ್ಯ ತಂದೆಯವರಾಗಿದ್ದ ದಿ.ಎಸ್.ಬಂಗಾರಪ್ಪನವರ ಹೆಸರಿನಲ್ಲಿ 10 ಲಕ್ಷ ರೂಪಾಯಿಗಳನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಓದಿದ ಶಾಲೆಗೆ 10 ಲಕ್ಷ ರೂಪಾಯಿಗಳನ್ನು ಶಾಲಾಭಿವೃದ್ಧಿಗೆ ದೇಣಿಗೆಯಾಗಿ ನೀಡಿದರು.&lt;/p&gt;&lt;h2&gt;ಒಂದು ವರ್ಷದ ಒಳಗೆ ಕಟ್ಟಡ ನಿರ್ಮಾಣ&lt;/h2&gt;&lt;p&gt;ರಾಜ್ಯದಾದ್ಯಂತ ಲಕ್ಷಾಂತರ ಜನರು ತಮ್ಮ ಕೊಡುಗೈ ದಾನ ನೀಡಿ ಶಾಲಾಭಿವೃದ್ಧಿಗೆ ಸಹಕರಿಸಿದ್ದಾರೆ. ಪ್ರಸ್ತುತ ಸೈನ್ಸ್&zwnj; ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಎಜಾಕ್ಸ್&zwnj; ಕರ್ನಾಟಕ ಪಬ್ಲಿಕ್ ಸ್ಕೂಲ್&zwnj; ಕಟ್ಟಡ ನಿರ್ಮಾಣಕ್ಕೆ ಎಜಾಕ್ಸ್&zwnj; ಸಂಸ್ಥೆಯ ಮುಖ್ಯಸ್ಥ ಕೆ.ವಿಜಯ್&zwnj; ಮತ್ತು ಶ್ರೀಮತಿ ಕಲ್ಯಾಣಿ ವಿಜಯ್&zwnj; ತಮ್ಮ ಟ್ರಸ್ಟ್&zwnj; ವತಿಯಿಂದ 13.05 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ಒಂದು ವರ್ಷದ ಅವಧಿಯೊಳಗಾಗಿ ನಿರ್ಮಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.&lt;/p&gt;&lt;h2&gt;15 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ&lt;/h2&gt;&lt;p&gt;ಕೆ.ಪಿ.ಎಸ್. ಶಾಲೆಗಳಲ್ಲಿ ಮಕ್ಕಳಿಗೆ ದ್ವಿಭಾಷಾ ಕಲಿಕೆ, ಎಲ್ಲಾ ಪಠ್ಯ ವಿಷಯಗಳ ಶಿಕ್ಷಕರು, ದೈಹಿಕ ಶಿಕ್ಷಣ, ಸಂಗೀತ, ಗಣಕಯಂತ್ರ ಸೇರಿದಂತೆ ಎಲ್ಲಾ ಶಿಕ್ಷಕರ ಸೇವೆ ದೊರೆಯಲಿದೆ. ಶಿಕ್ಷಣ ಇಲಾಖೆಯಲ್ಲಿ ಇನ್ನೂ 75,000 ಶಿಕ್ಷಕರ ಅಗತ್ಯವಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದರು ಸಚಿವ ಮಧು ಬಂಗಾರಪ್ಪ ವಿವರಿಸಿದ್ದಾರೆ.&lt;/p&gt;]]></content:encoded>
            <category>shivamogga</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/500-karnataka-public-schools-to-be-inaugurated-in-two-years-says-minister-madhu-bangarappa-sns/articleshow-txcl1l0"/>
        </item>
        <item>
            <title><![CDATA[ಶಿವಮೊಗ್ಗ ಜಿಲ್ಲೆಗೆ ಒಲಿದ ರಾಷ್ಟ್ರೀಯ ಹೆಮ್ಮೆ: ಹೊಸನಗರದ ಸರ್ಕಾರಿ ಶಾಲಾ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ]]></title>
            <link>https://kannada.asianetnews.com/karnataka-districts/national-teachers-award-2026-ratnakumari-shivamogga-selected-san/articleshow-u7xdrvt</link>
            <guid isPermaLink="true">https://kannada.asianetnews.com/karnataka-districts/national-teachers-award-2026-ratnakumari-shivamogga-selected-san/articleshow-u7xdrvt</guid>
            <pubDate>Sat, 22 Aug 2026 10:07:07 +0530</pubDate>
            <description><![CDATA[&lt;p&gt;ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರು 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026'ಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0kvqn5ks49zv60e9te8dnrz,imgname-teacher-ratnakumari-1787373016243.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ / ನವದೆಹಲಿ (ಆ.22): &lt;/strong&gt;ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026' (National Teachers Award-2026) ಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ ದೇಶದ ಒಟ್ಟು 48 ಅತ್ಯುತ್ತಮ ಶಿಕ್ಷಕರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರೂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.&lt;/p&gt;&lt;p&gt;ಗ್ರಾಮೀಣ ಭಾಗದ ಶಾಲೆಯಲ್ಲಿ ಮೂಲಸೌಕರ್ಯ ವೃದ್ಧಿ ಹಾಗೂ ಮಕ್ಕಳಲ್ಲಿ ಅಕ್ಷರ ದೀವಿಗೆ ಬೆಳಗುವ ಮೂಲಕ ಮಾದರಿ ಶೈಕ್ಷಣಿಕ ಸೇವೆ ನೀಡಿದ ರತ್ನಕುಮಾರಿ ಅವರ ಈ ಸಾಧನೆ ಇಡೀ ರಾಜ್ಯ ಹಾಗೂ ಶಿಕ್ಷಕ ಸಮುದಾಯವೇ ಹೆಮ್ಮೆ ಪಡುವಂತೆ ಮಾಡಿದೆ.&lt;/p&gt;&lt;h2&gt;&lt;strong&gt;ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ&lt;/strong&gt;&lt;/h2&gt;&lt;p&gt;ಸೆಪ್ಟೆಂಬರ್ 5ರ 'ಶಿಕ್ಷಕರ ದಿನಾಚರಣೆ'ಯಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗುವ ಅದ್ಧೂರಿ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ'ಯನ್ನು ರತ್ನಕುಮಾರಿ ಅವರಿಗೆ ಪ್ರದಾನ ಮಾಡಿ ಗೌರವಿಸಲಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿನಂದನೆ&lt;/strong&gt;&lt;/h2&gt;&lt;p&gt;ಶಿವಮೊಗ್ಗ ಜಿಲ್ಲೆಯ ಹೊಸನಗರದ ಈ ಗ್ರಾಮೀಣ ಶಿಕ್ಷಕಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. &quot;ನಮ್ಮ ಇಲಾಖೆ, ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದ ಶ್ರೀಮತಿ ರತ್ನಕುಮಾರಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನೀವು ಸಲ್ಲಿಸುತ್ತಿರುವ ಸೇವೆ ಇಡೀ ರಾಜ್ಯದ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ. ನಿಮ್ಮ ಈ ಪವಿತ್ರವಾದ ಶೈಕ್ಷಣಿಕ ಕಾಯಕ ಹೀಗೆಯೇ ಮುಂದುವರಿಯಲಿ,&quot; ಎಂದು ಸಚಿವರು ಶುಭ ಹಾರೈಸಿದ್ದಾರೆ.&lt;/p&gt;]]></content:encoded>
            <category>shivamogga</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/national-teachers-award-2026-ratnakumari-shivamogga-selected-san/articleshow-u7xdrvt"/>
        </item>
        <item>
            <title><![CDATA[ಸೊರಬ ಮತದಾರರ ಪಟ್ಟಿ: 16,209 ಹೆಸರುಗಳು ಕಣ್ಮರೆ! 4081 ಮತದಾರರಿಗೆ ನೋಟಿಸ್]]></title>
            <link>https://kannada.asianetnews.com/karnataka-districts/sorab-sir-draft-voter-list-released-16209-names-excluded-objections-open-till-september-23-kvn/articleshow-ugh5oi9</link>
            <guid isPermaLink="true">https://kannada.asianetnews.com/karnataka-districts/sorab-sir-draft-voter-list-released-16209-names-excluded-objections-open-till-september-23-kvn/articleshow-ugh5oi9</guid>
            <pubDate>Wed, 26 Aug 2026 11:00:25 +0530</pubDate>
            <description><![CDATA[ಸೊರಬ ತಾಲೂಕಿನಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸುಮಾರು 16,209 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಟ್ಟಿಯಲ್ಲಿ ಹೆಸರು ಇಲ್ಲದವರು, ತಿದ್ದುಪಡಿ ಬಯಸುವವರು ಹಾಗೂ ಹೊಸ ಮತದಾರರು ನಿಗದಿತ ನಮೂನೆಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0y861v92dqe4yegxv4mb914,imgname-untitled-design--9--1787721615208.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೊರಬ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿ ಕೆ.ಆರ್. ಸುಜಾತಾ ಅಧ್ಯಕ್ಷತೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಾಯಿತು.&lt;/p&gt;&lt;p&gt;ತಹಸೀಲ್ದಾರ್ ಹಾಗೂ ಮತದಾರರ ಉಪ ನೋಂದಾಣಾಧಿಕಾರಿ ಕೆ. ಪುರಂದರ ಮಾತನಾಡಿ, ತಾಲೂಕಿನಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್&zwnj;ಐಆರ್) ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಸ್ಥಳೀಯ ಬಿಎಲ್&zwnj;ಒ ಅಥವಾ ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದರು.&lt;/p&gt;&lt;h2&gt;&lt;strong&gt;ಕರಡು ಮತದಾರರ ಪಟ್ಟಿಯಲ್ಲಿ 16,209 ಮತದಾರರ ಹೆಸರು ನಾಪತ್ತೆ&lt;/strong&gt;&lt;/h2&gt;&lt;p&gt;ಪ್ರಸ್ತುತ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 16,209 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಈವರೆಗೆ ಮ್ಯಾಪಿಂಗ್ ಆಗದಿರುವ 1183 ಮತದಾರರಿಗೆ ಹಾಗೂ ತಂದೆ-ಮಗನ ವಯಸ್ಸಿನ ಗಣನೀಯ ಅಂತರ ಸೇರಿದಂತೆ ದೋಷಪೂರಿತ ಮಾಹಿತಿ ಇರುವ (ಅನೋಮಲಿಸ್) 2894 ಮತದಾರರು ಸೇರಿದಂತೆ ಒಟ್ಟು 4081 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ ಎಂದು ತಿಳಿಸಿದರು.&lt;/p&gt;&lt;p&gt;ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶವಿದ್ದು, ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಲಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಕಳೆದ ಜೂನ್ 16ರ ಮತಪಟ್ಟಿಯಲ್ಲಿದ್ದಂತೆ ತಾಲೂಕಿನಲ್ಲಿ 1,98, 955 ಮತದಾರರಿದ್ದು, ಅವರಲ್ಲಿ 1,82,746 ಮತದಾರರ ಹೆಸರನ್ನು ಅಧಿಕೃತಗೊಳಿಸಿ, ಗಣಕೀಕರಣ ಕಾರ್ಯ ಪೂರ್ಣಗೊಳಿಸಲಾಗಿದೆ. ಅಂದರೆ, ಶೇ.91.85 ರಷ್ಟು ಪರಿಷ್ಕರಣೆ ಕಾರ್ಯಪೂರ್ಣಗೊಂಡಂತಾಗಿದೆ. ಎಸ್&zwnj;ಐಆರ್ ಪ್ರಕ್ರಿಯೆ ವೇಳೆ 16,209 ಮತದಾರರನ್ನು ''''ಎಎಸ್&zwnj;ಡಿಡಿಒ'''' ವರ್ಗಕ್ಕೆ ಸೇರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ಈ ಪೈಕಿ 5,759 ಮತದಾರರು ಮೃತರಾಗಿರುವುದನ್ನು, 1,093 ಮತದಾರರು ಗೈರಾಗಿರುವುದನ್ನು ಹಾಗೂ 7822 ಮತದಾರರು ಸ್ಥಳಾಂತರಗೊಂಡಿರುವುದನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರಲು ಅವಕಾಶ&lt;/strong&gt;&lt;/h3&gt;&lt;p&gt;ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರರ (ಎಎಸ್&zwnj;ಡಿಡಿಒ) ಪೈಕಿ ಗೈರು ಸ್ಥಳಾಂತರಗೊಂಡಿರುವ, ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ತಿದ್ದುಪಡಿ ಇದ್ದರೆ, ಹೊಸ ಸೇರ್ಪಡೆಗೆ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಕೆ ಮಾಡಬೇಕು. ಇದರ ಜತೆಗೆ ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಹೆಸರು, ವಿಳಾಸ ಬದಲಾವಣೆಗೆ ನಮೂನೆ-8 ಬಳಸಿ ಅರ್ಜಿ ಹಾಕಬಹುದು. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಆ ಮತದಾರರ ಪಟ್ಟಿಯ ಪೌರತ್ವ ದೃಢಪಟ್ಟರಷ್ಟೇ, ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದರು.&lt;/p&gt;&lt;p&gt;ಸಭೆಯಲ್ಲಿ ಮತದಾರರ ನೋಂದಣಾಧಿಕಾರಿ ಕೆ.ಆರ್. ಸುಜಾತಾ, ಚುನಾವಣಾ ಶಿರಸ್ತೇದಾರ್ ವೈ.ಎಸ್. ದೀಪಕ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.&lt;/p&gt;&lt;p&gt;----&lt;/p&gt;&lt;p&gt;ಸೊರಬ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಎಸ್&zwnj;ಐಆರ್&zwnj;ಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿ ಕೆ.ಆರ್. ಸುಜಾತಾ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಯಿತು.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/sorab-sir-draft-voter-list-released-16209-names-excluded-objections-open-till-september-23-kvn/articleshow-ugh5oi9"/>
        </item>
        <item>
            <title><![CDATA[Shivamogga: ಕೊಡಚಾದ್ರಿ ಬೆಟ್ಟದಲ್ಲಿ 60 ಅಡಿ ಕಂದಕಕ್ಕೆ ಬಿದ್ದ ಪ್ರವಾಸಿಗನ ರಕ್ಷಣೆ]]></title>
            <link>https://kannada.asianetnews.com/karnataka-districts/rescue-of-tourist-who-fell-into-a-60-foot-chasm-at-kodachadri-hill-in-shivamogga-sns/articleshow-v94qc86</link>
            <guid isPermaLink="true">https://kannada.asianetnews.com/karnataka-districts/rescue-of-tourist-who-fell-into-a-60-foot-chasm-at-kodachadri-hill-in-shivamogga-sns/articleshow-v94qc86</guid>
            <pubDate>Mon, 17 Aug 2026 10:58:14 +0530</pubDate>
            <description><![CDATA[&lt;p&gt;ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟದಲ್ಲಿ, ಚಾರಣಕ್ಕೆ ಬಂದಿದ್ದ ಕುಮಟಾ ಮೂಲದ ಪ್ರದೀಪ್ ಎಂಬ ಪ್ರವಾಸಿಗರು ತಲೆಸುತ್ತು ಬಂದು ಸುಮಾರು 60 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ. ಸ್ಥಳೀಯ ಜೀಪ್ ಚಾಲಕರು ಸಮಯಪ್ರಜ್ಞೆಯಿಂದ ಹಗ್ಗ ಬಳಸಿ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m072kyxtc3nm0mf7ygvjad1f,imgname-kodachadri-hill-1786944027578.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ: &lt;/strong&gt;ಹೊಸನಗರ ತಾಲೂಕಿನ ವಿಶ್ವಪ್ರಸಿದ್ಧ ಕೊಡಚಾದ್ರಿ ಬೆಟ್ಟದಲ್ಲಿ ಚಾರಣಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಆಯತಪ್ಪಿ ಸುಮಾರು 60 ಅಡಿ ಆಳದ ಕಂದಕಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಸ್ಥಳೀಯ ಜೀಪ್ ಚಾಲಕರ ಸಮಯ ಪ್ರಜ್ಞೆಯಿಂದ ಪ್ರವಾಸಿಗ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಪ್ರದೀಪ್ ಗಾಯಗೊಂಡ ಪ್ರವಾಸಿಯಾಗಿದ್ದು, ಇವರು ಕುಟುಂಬ ಸಮೇತರಾಗಿ ಕೊಡಚಾದ್ರಿ ಪ್ರವಾಸಕ್ಕೆ ಆಗಮಿಸಿದ್ದರು. ಶಂಕರಾಚಾರ್ಯರ ಸರ್ವಜ್ಞ ಪೀಠಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ದಿಢೀರನೆ ತಲೆಸುತ್ತು ಬಂದಿದ್ದರಿಂದ ನಿಯಂತ್ರಣ ತಪ್ಪಿ ಕಂದಕಕ್ಕೆ ಜಾರಿದ್ದಾರೆ.&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಜೀಪ್ ಚಾಲಕರು, ಕಂದಕಕ್ಕೆ ಹಗ್ಗ ಇಳಿಸಿ ಪ್ರದೀಪ್ ರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಳಿಕ ತಮ್ಮ ಜೀಪಿನಲ್ಲಿ ಗಾಯಾಳುವನ್ನು ಬೆಟ್ಟದ ಕೆಳಭಾಗಕ್ಕೆ ಕರೆತಂದಿದ್ದಾರೆ. ಗಾಯಾಳು ಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಲಭ್ಯವಿಲ್ಲದೆ ಕುಟುಂಬಸ್ಥರು ಪರದಾಡಿದರು.&lt;/p&gt;&lt;p&gt;ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರೂ ಕನಿಷ್ಠ ಸೌಕರ್ಯ ಒದಗಿಸದ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಹಿಡಿಶಾಪ ಹಾಕಿದರು. ​ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿದನೂರು ನಗರ ಪೊಲೀಸ್ ಠಾಣೆಯ ಪೊಲೀಸರು ಗಾಯಾಳು ವನ್ನು ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.&lt;/p&gt;&lt;h2&gt;&lt;strong&gt;ವ್ಯಕ್ತಿಯ ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದ ಭೂಪ!&lt;/strong&gt;&lt;/h2&gt;&lt;p&gt;ವ್ಯಕ್ತಿಯೊಬ್ಬನ ಮೇಲೆ ಕಬ್ಬಿಣದ ರಾಡ್&zwnj;ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಳಿಕ ಆತನ ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದಿರುವ ಘಟನೆ ಹೊಸನಗರ ಗರ್ತಿಕೆರೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಗರ್ತಿಕೆರೆ ಗ್ರಾಮದ ರಾಘವೇಂದ್ರ ಅಲಿಯಾಸ್ ಆಪಲ್ ರಾಘು ಎಂಬಾತ ಹಲ್ಲೆ ನಡೆಸಿದ್ದಾನೆ ಹಲ್ಲೆಗೊಳಗಾದ ಮಂಜುನಾಥ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;p&gt;ಲಭ್ಯ ಮಾಹಿತಿಯ ಪ್ರಕಾರ, ಆರೋಪಿ ರಾಘು ಮನೆಯಲ್ಲಿ ಮದ್ಯ ಸೇವಿಸಿ ಬಳಿಕ ಗರ್ತಿಕೆರೆಯ ಅವುಕ ಸರ್ಕಲ್&zwnj;ಗೆ ಬಂದಿದ್ದ ಅಲ್ಲಿ ತನ್ನೊಂದಿಗೆ ಮದ್ಯ ಸೇವಿಸಿದ್ದ ಮಂಜುನಾಥ್&zwnj; ನೊಂದಿಗೆ ಏಕಾಏಕಿ ಗಲಾಟೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮಾತಿನ ಚಕಮಕಿ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕಬ್ಬಿಣದ ರಾಡ್&zwnj;ನಿಂದ ಮಂಜುನಾಥ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಬಳಿಕ ಗಾಯಗೊಂಡು ನೆಲಕ್ಕೆ ಬಿದ್ದಿದ್ದ ಮಂಜುನಾಥ್&zwnj;ನ ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದಿದ್ದಾನೆ.ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ರಿಪ್ಪನ್ ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>shivamogga</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/rescue-of-tourist-who-fell-into-a-60-foot-chasm-at-kodachadri-hill-in-shivamogga-sns/articleshow-v94qc86"/>
        </item>
        <item>
            <title><![CDATA[Shivamogga: ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ! ರೈತರಲ್ಲಿ ಆತಂಕ ಮೂಡಿಸಿದ ಹನುಮಂತ ದೇವರ ಕಾರ್ಣಿಕ ನುಡಿ]]></title>
            <link>https://kannada.asianetnews.com/karnataka-districts/what-is-the-meaning-of-karnikotsava-delivered-by-lord-hanuman-at-maidolalu-village-in-bhadravathi-shivamogga-2026-sns/articleshow-wvv03i5</link>
            <guid isPermaLink="true">https://kannada.asianetnews.com/karnataka-districts/what-is-the-meaning-of-karnikotsava-delivered-by-lord-hanuman-at-maidolalu-village-in-bhadravathi-shivamogga-2026-sns/articleshow-wvv03i5</guid>
            <pubDate>Tue, 18 Aug 2026 11:21:51 +0530</pubDate>
            <description><![CDATA[&lt;p&gt;ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ನಾಗರ ಪಂಚಮಿಯಂದು ನಡೆದ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ 'ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ' ಎಂಬ ಭವಿಷ್ಯವಾಣಿ ನುಡಿಯಲಾಗಿದೆ. ಈ ಕಾರ್ಣಿಕವು ಗ್ರಾಮೀಣ ಭಾಗದಲ್ಲಿ ಪ್ರಸಿದ್ಧಿಯನ್ನು ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09pg1q349e7t2962kd978ng,imgname-maidolalu-karnikotsava-1787031979747.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ: &lt;/strong&gt;ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ! ಇದು ಮೈದೊಳಲಿನಲ್ಲಿ ಜರುಗಿದ ಹನುಮಂತ ದೇವರ ಕಾರ್ಣಿಕದ ನುಡಿ. ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ಪ್ರತಿ ವರ್ಷ ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕೋತ್ಸವ ಜರುಗುತ್ತದೆ.&lt;/p&gt;&lt;h2&gt;ಶಿಖರವೇರಿದ ಘಟಸರ್ಪ: ಮೈದೊಳಲು ಕಾರ್ಣಿಕದ ಎಚ್ಚರಿಕೆ&lt;/h2&gt;&lt;p&gt;ಸೋಮವಾರ ಸಂಜೆ ಗೋದೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನು ಮಂತ ದೇವರನ್ನು ಅವಾಹನೆ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರದ ಕಂಬವೇರಿ ಕಾರ್ಣಿಕ ನುಡಿಯುತ್ತಾನೆ. ಈ ಬಾರಿ ಶಿಖರದ ತುದ್ದಿಗೆ ಘಟ ಸರ್ಪ ಏರಿತಲ್ಲೇ ಎಚ್ಚರ ಎಂದು ಕಾರ್ಣಿಕ ನುಡಿದರು.&lt;/p&gt;&lt;p&gt;ಕಾರ್ಣಿಕದ ವಾಕ್ಯಗಳನ್ನು ಆಧರಿಸಿ ಗ್ರಾಮೀಣ ಭಾಗದ ಜನ ಜೀವನ, ಭವಿಷ್ಯವನ್ನು ಹೇಳುತ್ತಾರೆ. ಕೊನೆಯಲ್ಲಿ ಎಚ್ಚರ ಎಂದಿರುವುದರಿಂದ ಈ ಬಾರಿ ರೈತರಿಗೆ ಸ್ವಲ್ಪ ಹಿನ್ನಡೆಯಾಗುತ್ತದೆ. ನಾಡಿನಲ್ಲಿ ಮಳೆ ಕಡಿಮೆಯಾಗಿ ಕೃಷಿ ಚಟುವಟಿಕೆಗಳಿಗೆ ಅಡಚಣೆಗಳು ಉಂಟಾಗಬಹುದು. ಪ್ರಕೃತಿ ವಿಕೋಪಗಳಿಂದ ಸಂಭವಿಸಬಹುದಾದ ಹಾನಿಯನ್ನು ತಿಳಿಸುತ್ತದೆ ಎಂದು ಹಿರಿಯರು ಕಾರ್ಣಿಕದ ವಾಕ್ಯವನ್ನು ವಿಶ್ಲೇಷಿಸಿದರು.&lt;/p&gt;&lt;p&gt;&lt;strong&gt;ಭದ್ರಾವತಿ ಮೈದೊಳಲು ವಿಶೇಷತೆ&lt;/strong&gt;&lt;/p&gt;&lt;p&gt;ಮಹಿಳೆಯರು, ಮಕ್ಕಳು ಹನುಮಂತ ದೇವರ ಪಲ್ಲಕಿ ಹಾಗೂ ಉತ್ಸವ ಮೂರ್ತಿಗಳಿಗೆ ಆರತಿ ಮಾಡಿ, ಹಣ್ಣು ಕಾಯಿ ನೈವೇದ್ಯ ಮಾಡಿದರು. ಪಿಳ್ಳೆಮಟ್ಟಿ ಹನುಮಂತಪ್ಪ, ಪರುಶುರಾಮ ದೇವರು, ಲಕ್ಷ್ಮೀದೇವಿ, ಶ್ರೀರಾಮ ದೇವರುಗಳ ಉತ್ಸವ ಮೂರ್ತಿಗಳು ಕಾರ್ಣಿಕದಲ್ಲಿ ಭಾಗಿಯಾಗಿದ್ದವು. ಆಂಜನೇಯ ಸೇವಾ ಸಮಿತಿ, ಮೈದೊಳಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.&lt;/p&gt;&lt;p&gt;ಮೈದೊಳಲು, ಶಿವಮೊಗ್ಗದ ಭದ್ರಾವತಿ ತಾಲೂಕಿನ ಒಂದು ಸಣ್ಣ ಹಳ್ಳಿಯಾಗಿದ್ದು, ಸುಮಾರು ಮೂರು ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ನಾಗರ ಪಂಚಮಿಯಂದು ಶ್ರೀ ಹನುಮಂತ ದೇವರ ಕಾರ್ಣಿಕೋತ್ಸವ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ಗ್ರಾಮದದಲ್ಲಿ ನುಡಿಯುವ ಭವಿಷ್ಯವಾಣಿಯನ್ನು ಗ್ರಾಮೀಣ ಭಾಗದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು, ಹತ್ತಾರು ಹಳ್ಳಿಗಳ ಭಕ್ತರು ಸೇರಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ.&lt;/p&gt;]]></content:encoded>
            <category>shivamogga</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/what-is-the-meaning-of-karnikotsava-delivered-by-lord-hanuman-at-maidolalu-village-in-bhadravathi-shivamogga-2026-sns/articleshow-wvv03i5"/>
        </item>
    </channel>
</rss>
