<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 15 Sep 2026 16:46:46 +0530</lastBuildDate>
        <atom:link href="https://kannada.asianetnews.com/rss/shivamogga" rel="self" type="application/rss+xml"/>
        <item>
            <title><![CDATA[Shivamogga: ಅರ್ಧಕ್ಕೆ ನಿಂತ ವಂದೇ ಮಾತರಂ, ಭುಗಿಲೆದ್ದ ವಿವಾದ!]]></title>
            <link>https://kannada.asianetnews.com/karnataka-districts/vande-mataram-song-cut-short-bjp-mla-channabasappa-walks-out-of-the-event-in-shivamogga-sns/articleshow-0umvc9t</link>
            <guid isPermaLink="true">https://kannada.asianetnews.com/karnataka-districts/vande-mataram-song-cut-short-bjp-mla-channabasappa-walks-out-of-the-event-in-shivamogga-sns/articleshow-0umvc9t</guid>
            <pubDate>Tue, 15 Sep 2026 16:46:41 +0530</pubDate>
            <description><![CDATA[ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಅಸಮಾಧಾನಗೊಂಡ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮದಿಂದ ಹೊರನಡೆದಿದ್ದು, ಇದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2jcg1d9kvwew05yjr32bs6s,imgname-shivamogga--1789470967209.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ: &lt;/strong&gt;ಶಿವಮೊಗ್ಗದಲ್ಲಿ ವಂದೇ ಮಾತರಂ ವಿವಾದ ಭುಗಿಲೆದ್ದಿದೆ. ಅಂಬೇಡ್ಕರ್ ಭವನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮದಿಂದಲೇ ಹೊರನಡೆದಿದ್ದಾರೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ.&lt;/p&gt;&lt;h2&gt;ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಾದ&lt;/h2&gt;&lt;p&gt;ಶಿವಮೊಗ್ಗ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವ ಸಂಸತ್ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಜಿಲ್ಲಾ ಪಂಚಾಯತ್ ಸಿ ಇ ಓ ಹೇಮಂತ್ ಕುಮಾರ್, ನ್ಯಾಯಾಂಗ ಅಧಿಕಾರಿಗಳು, ಸಿವಿಲ್ ನ್ಯಾಯಾಧೀಶ ಸಂತೋಷ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಆದರೆ ಈ ವೇಳೆ ವಂದೇ ಮಾತರಂ ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲಾಗಿದೆ ಎಂದು ಆರೋಪಿಸಲಾಗಿದೆ.&lt;/p&gt;&lt;p&gt;ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕೆಂದು ಒತ್ತಾಯಿಸಿ, ನಂತರ ಕಾರ್ಯಕ್ರಮದ ಸ್ಥಳದಿಂದಲೇ ಹೊರನಡೆದಿದ್ದಾರೆ. ಇದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಸಂವಿಧಾನ ಉಳಿಸುವ ದಿನದಂದೇ ಸಂವಿಧಾನಕ್ಕೆ ಅಪಮಾನ&lt;/h2&gt;&lt;p&gt;ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಅಂಬೇಡ್ಕರ್ ಸಂವಿಧಾನ ತಂದುಕೊಟ್ಟರು. ಇದನ್ನು ಗಾಳಿಗೆ ತೂರುವ ಪ್ರಯತ್ನ ನಡೆದಿದೆ. ವಂದೇ ಮಾತರಂಗೆ 150 ವರ್ಷದ ಹಿನ್ನೆಲೆ ಇದೆ, ಸಂಸತ್&zwnj;ನಲ್ಲಿ ನಿರ್ಣಯ ಮಾಡಿ ಪೂರ್ಣ ಗಾಯನ ಮಾಡುವ ಕಾನೂನು ಜಾರಿಗೆ ತರಲಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನ ಉಳಿಸುವ ದಿನದಂದೇ ಸಂವಿಧಾನಕ್ಕೆ ಅಪಮಾನ ಮಾಡಿದೆ. ಎರಡು ಚರಣ ಮಾತ್ರ ಹಾಡಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದು ಕ್ಷಮಿಸಲು ಸಾಧ್ಯವಿಲ್ಲದ ಅಪರಾಧ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಚನ್ನಬಸಪ್ಪ ಮಾತನಾಡಿದ್ದಾರೆ.&lt;/p&gt;&lt;p&gt;ಅಲ್ಲದೇ, &quot;ಜಿಲ್ಲಾಡಳಿತ ರಾಜ್ಯ ಸರ್ಕಾರದ ಆದೇಶವಿದೆ ಎನ್ನುತ್ತಿದೆ. ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರು ಇದ್ದಾಗ ಪೂರ್ಣ ಹಾಡು, ಇಲ್ಲದಿದ್ದಾಗ ಎರಡು ಚರಣ ಮಾತ್ರ ಯಾಕೆ? ಜನಗಣಮನ ಹೇಗೆ ಪೂರ್ಣ ಹಾಡ್ತೀವೋ ಹಾಗೆ ವಂದೇ ಮಾತರಂ ಕೂಡ ಪೂರ್ಣ ಹಾಡಬೇಕು ಎಂಬುದು ಕಾನೂನು. ಇದು ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ಮಾಡಿದ ಅಪಮಾನ. ಸೆಪ್ಟೆಂಬರ್ 21, 22, 23 ರಂದು ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡ್ತೀವಿ&quot; ಎಂದು ಗುಡುಗಿದ್ದಾರೆ. ಜೊತೆಗೆ &quot;ಕಾಂಗ್ರೆಸ್ ಪಕ್ಷವನ್ನು ಒಂದು ಸಮಾಜಕ್ಕೆ ಅಡ ಇಟ್ಟಿದ್ದೀರಿ, ಈಗ ಸರ್ಕಾರವನ್ನೂ ಅಡ ಇಡಬೇಡಿ&quot; ಎಂದು ಸಿಎಂ ಡಿಕೆ ಶಿವಕುಮಾರ್ಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ವಂದೇ ಮಾತರಂ ಹಾಡಿನ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಶಿವಮೊಗ್ಗದಲ್ಲೂ ಈ ಘಟನೆ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. &lt;strong&gt;(ವರದಿ: ರಾಜೇಶ್ ಕಾಮತ್, ಏಷ್ಯಾ ನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ)&amp;nbsp;&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>shivamogga</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/vande-mataram-song-cut-short-bjp-mla-channabasappa-walks-out-of-the-event-in-shivamogga-sns/articleshow-0umvc9t"/>
        </item>
        <item>
            <title><![CDATA[ಪ್ರಜಾಸೇವೆ ಆಂದೋಲನ ಸಿಎಂ ಕನಸಿನ ಕೂಸು: ಸಚಿವ ಮಧು ಬಂಗಾರಪ್ಪ]]></title>
            <link>https://kannada.asianetnews.com/karnataka-districts/prajaseve-andolana-madhu-bangarappa-says-public-grievances-will-reach-cm-login-kvn/articleshow-6zd9ql4</link>
            <guid isPermaLink="true">https://kannada.asianetnews.com/karnataka-districts/prajaseve-andolana-madhu-bangarappa-says-public-grievances-will-reach-cm-login-kvn/articleshow-6zd9ql4</guid>
            <pubDate>Wed, 09 Sep 2026 10:09:14 +0530</pubDate>
            <description><![CDATA[ಶಿಕಾರಿಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ 'ಪ್ರಜಾಸೇವೆ ಆಂದೋಲನ'ಕ್ಕೆ ಚಾಲನೆ ನೀಡಿದರು. ಇದು ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಸರ್ಕಾರದ ಹೊಸ ಯೋಜನೆಯಾಗಿದೆ ಎಂದು ವಿವರಿಸಿದರು. ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೆರೆ ಒತ್ತುವರಿ, ರೈತರ ಸಮಸ್ಯೆಗಳು ಮತ್ತು ಇಲಾಖೆಗಳಲ್ಲಿನ ಭ್ರಷ್ಟಾಚಾರದಂತಹ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳ ಗಮನ ಸೆಳೆದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m2274bzvr0381qdejgjvd24b,imgname-untitled-design--47--1788928471035.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿಕಾರಿಪುರ: ಪ್ರಜಾಸೇವೆ ಆಂದೋಲನ ಮುಖ್ಯಮಂತ್ರಿಗಳ ಕನಸಿನ ಕೂಸು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ್ದ ಜನಸ್ಪಂದನ ಕಾರ್ಯಕ್ರಮ ಇದೀಗ ಜನ ಸಾಮಾನ್ಯರ ಸಮಸ್ಯೆ ಪರಿಹರಿಸಲು ಹೊಸ ಪ್ರಜಾಸೇವೆಯ ರೂಪದಲ್ಲಿ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.&lt;/p&gt;&lt;h2&gt;&lt;strong&gt;ಪ್ರಜಾಸೇವೆ ಆಂದೋಲನಾ ಸಭೆ ಉದ್ಘಾಟನೆ&lt;/strong&gt;&lt;/h2&gt;&lt;p&gt;ಮಂಗಳವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಪ್ರಜಾಸೇವೆ ಆಂದೋಲನಾ ಸಭೆ ಉದ್ಘಾಟಿಸಿ ಮಾತನಾಡಿ, ಜನರು ತಮಗೆ ಆಗಬೇಕಾದ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆದಾಡುತ್ತಾ ಇರುತ್ತಾರೆ, ಆದರೆ ಈ ಕಾರ್ಯಕ್ರಮದಿಂದ ಜನರ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಜನರ ಸಮಸ್ಯೆ ತುರ್ತಾಗಿ ಇತ್ಯರ್ಥಪಡಿಸಲು ಅನುಕೂಲವಾಗುತ್ತದೆ, ಜನರು ಮಂತ್ರಿಗಳನ್ನು ಹುಡುಕಿಕೊಂಡು ಬರುವುದು ಈ ಕಾರ್ಯಕ್ರಮದಿಂದ ತಪ್ಪುತ್ತದೆ. ಜನತೆ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.&lt;/p&gt;&lt;p&gt;ಈಗ ಜನತೆ ನೀಡುವ ಅಹವಾಲು ಅರ್ಜಿಗಳನ್ನು ಸಂಬಂದಿಸಿದ ಇಲಾಖೆಯವರು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು, ಜನರ ಸಮಸ್ಯೆಗಳ ಅರ್ಜಿಗಳ ಮಾಹಿತಿ ಸಿ.ಎಂ ಲಾಗಿನ್&zwnj;ಗೆ ಹೋಗುತ್ತದೆ, ನಾನೂ ಸೇರಿ ಅಧಿಕಾರಿಗಳು ಸಬೂಬು ಹೇಳಲು ಸಾಧ್ಯವಿಲ್ಲ. ಇದೊಂದು ಸೇವಾ ಕಾರ್ಯ, ಮುಖ್ಯವಾಗಿ ಅಧಿಕಾರಿ ವರ್ಗದವರು ಈ ಯೋಜನೆ ಗಂಭೀರವಾಗಿ ಪರಿಗಣಿಸಬೇಕು ಎಂದರು.&lt;/p&gt;&lt;p&gt;ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರತಿ ಸರ್ಕಾರಗಳೂ ಪ್ರಜಾಸೇವೆ ಮಾಡಿಕೊಂಡು ಬರುತ್ತಿವೆ, ಇವುಗಳು ಯಶಸ್ವಿಯಾಗಲು ಅಧಿಕಾರಿಗಳ ಸಮಯ ಪ್ರಜ್ಞೆಯ ಅಗತ್ಯವಿದೆ. ಕಂದಾಯ ಮತ್ತು ಆರ್ ಡಿ ಪಿ ಆರ್ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದಾಖಲೆಯನ್ನು ಸಚಿವ ಖಂಡ್ರೆಯವರು ಬಿಡುಗಡೆ ಮಾಡಿದ್ದಾರೆ. ದೇವರ ದಯೆಯಿಂದ ಶಿವಮೊಗ್ಗ ಜಿಲ್ಲೆ ಹತ್ತನೇ ಸ್ಥಾನದಲ್ಲಿದೆ, ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.&lt;/p&gt;&lt;p&gt;ಹೈವೇ ಬೈಪಾಸ್ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡವರಿಗೆ ನೀಡಲು ಪರಿಹಾರ ಧನ ಬಂದಿದೆ. ಆದರೆ ಪೋಡಿ ಆಗದ ಕಾರಣ ರೈತರಿಗೆ ಹಣ ತಲುಪಿಸಲಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಇದನ್ನು ಕಾನೂನು ವ್ಯಾಪ್ತಿಯಲ್ಲಿ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು. ಈ ಬಗ್ಗೆ ಜಿಲ್ಲಾ ಮಂತ್ರಿಗಳು ಗಮನಹರಿಸಿ ಎಂದು ಮನವಿ ಮಾಡಿದರು.&lt;/p&gt;&lt;p&gt;ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು ಸೊರಬ, ಹೊರತುಪಡಿಸಿದರೆ ಶಿಕಾರಿಪುರ ತಾಲೂಕು ಎರಡನೇ ಸ್ಥಾನದಲ್ಲಿದೆ. ಸಚಿವ ಈಶ್ವರ್&zwnj; ಖಂಡ್ರೆಯವರು ಬಿಡುಗಡೆಮಾಡಿದ ಪಟ್ಟಿಯಲ್ಲಿ ಜಿಲ್ಲೆಯಲ್ಲಿನ 4351 ಕೆರೆಯಲ್ಲಿ 1017 ಕೆರೆಗಳು ಒತ್ತುವರಿಯಾಗಿವೆ. 488 ಒತ್ತುವರಿ ಮುಕ್ತವಾಗಿವೆ. 539 ಕೆರೆಗಳು ಇನ್ನೂ ಮುಕ್ತವಾಗಿಲ್ಲ. ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಉಳಿದ ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಬೇಕು ಎಂದರು.&lt;/p&gt;&lt;p&gt;ರೈತರು ತಮ್ಮ ಹೊಲಗಳಿಗೆ ಟಿಸಿ ಹಾಕಿಸಿಕೊಳ್ಳಲು 20 ರಿಂದ 25 ಸಾವಿರದವರೆಗೆ ಲಂಚ ಕೊಡುವಂತಹ ದುಸ್ಥಿತಿ ಇದೆ, ಇದನ್ನು ಪ್ರೂವ್ ಮಾಡಲು ಆಗುವುದಿಲ್ಲ. ಎಲ್ಲ ಸರ್ಕಾರಗಳು ಇದ್ದಾಗಲೂ ಈ ಲಂಚಾವತಾರ ನಡೆಯುತ್ತಲೇ ಇತ್ತು. ಇನ್ಮುಂದೆ ಆದರೂ ಅಧಿಕಾರಿಗಳು ಬರಗಾಲದಲ್ಲಿ ರೈತರಿಗೆ ಕಣ್ಣೀರು ಹಾಕಿಸುವ ಕೆಲಸ ದಯವಿಟ್ಟು ಮಾಡಬೇಡಿ ಎಂದರು.&lt;/p&gt;&lt;p&gt;ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಸರ್ಕಾರದ ನಡೆ ಜನರ ಕಡೆಗೆ ಎಂಬ ಪ್ರಜಾಸೇವೆ ಕಾರ್ಯಕ್ರಮ ಇಂದು ಶಿಕಾರಿಪುರದಲ್ಲಿ ವಿದ್ಯುಕ್ತವಾಗಿ ಪ್ರಾರಂಭಿಸುತ್ತಿದ್ದೇವೆ. ಪ್ರತಿ ಮೊದಲನೆ ಶನಿವಾರ ಮತ್ತು ಕೊನೆಯ ಶನಿವಾರ ಈ ಕಾರ್ಯಕ್ರಮ ಜರುಗಲಿದ್ದು ,ಜನರ ಅನುಕೂಲಕ್ಕಾಗಿ ಅವರ ಅಹವಾಲುಗಳನ್ನು ಸ್ವೀಕರಿಸಿ, ಅಂಚೆ ಮೂಲಕವೂ ಸ್ವೀಕರಿಸಿ ಜನರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಗೊಳಿಸಲಾಗುವುದು ಎಂದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ತಾ.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ, ಜಿಪಂ ಸಿಇಒ ಹೇಮಂತ್, ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ತಹಸೀಲ್ದಾರ್ ವಾಣಿ, ಇಒ ನಾಗರಾಜ್ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;&lt;p&gt;----&lt;/p&gt;&lt;h3&gt;&lt;strong&gt;ಪಾದಯಾತ್ರೆ ಸರ್ಕಾರವನ್ನು ಭಯಬೀಳಿಸಿದೆ: ಸಂಸದ&lt;/strong&gt;&lt;/h3&gt;&lt;p&gt;ಮಾಧ್ಯಮದವರೊಂದಿಗೆ ಬಿ.ವೈ. ರಾಘವೇಂದ್ರ ಮಾತನಾಡಿ, ಕಸ್ತೂರಿರಂಗನ್ ವರದಿ ಮತ್ತು ಗಾಡ್ಗೀಳ್ ವರದಿ ಇವುಗಳು ಕಾಂಗ್ರೆಸ್&zwnj;ನ ಪಾಪದ ಕೂಸುಗಳು. ನಾವೂ ಕೂಡ ಅದನ್ನು ತಿದ್ದುಪಡಿ ಮಾಡಬೇಕು, ಯಾವುದೇ ರೀತಿಯಲ್ಲಿ ಜನತೆಗೆ ತೊಂದರೆಯಾಗಬಾರದು ಎಂದು ಒತ್ತಾಯ ಮಾಡುತ್ತೇವೆ, ಅನಗತ್ಯವಾಗಿ ತಾಲೂಕಿನಲ್ಲಿ ಜನರಿಗೆ ಭಯ ಬೀಳಿಸುವುದು ಅಗತ್ಯವಿಲ್ಲ ಎಂದು ಹೇಳಿದರು. ಬಳ್ಳಾರಿ ಪಾದಯಾತ್ರೆ ಸಮಾರೋಪಕ್ಕೆ ಸರ್ಕಾರ ಅನುಮತಿ ನೀಡುತ್ತಿಲ್ಲವಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವಾರಗಳ ಕಾಲ &quot;ನ ಭೂತೋ ನ ಭವಿಷ್ಯತಿ '''' ಎಂದು ನಡೆದ ಪಾದಯಾತ್ರೆ ಸರ್ಕಾರವನ್ನು ಭಯ ಬೀಳಿಸಿದೆ, ಇದು ಗೃಹಮಂತ್ರಿಗಳ ದ್ವೇಷದ ರಾಜಕಾರಣ, ರಾಜಕೀಯದಲ್ಲಿ ಯಾರೂ ಕೂಡ ಶಾಶ್ವತವಲ್ಲ, ಹಿಂದೆ ರಾಹುಲ್ ಗಾಂಧಿಯವರು ಅದೇ ಮೈದಾನದಲ್ಲಿ ಕಾರ್ಯಕ್ರಮ ಮಾಡಿದ್ದಾರೆ, ಅವರಿಗೊಂದು ನ್ಯಾಯ. ನಮಗೊಂದು ನ್ಯಾಯಾನಾ? ಎಂದು ಪ್ರಶ್ನಿಸಿದರು.&lt;/p&gt;&lt;p&gt;----&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/prajaseve-andolana-madhu-bangarappa-says-public-grievances-will-reach-cm-login-kvn/articleshow-6zd9ql4"/>
        </item>
        <item>
            <title><![CDATA[ಕಸ್ತೂರಿ ರಂಗನ್ ವರದಿ: ಶಿವಮೊಗ್ಗ ಜಿಲ್ಲೆಯ ನಾಯಕರಿಗೆ ಅರಿವಿಲ್ಲ, ಮಧುಬಂಗಾರಪ್ಪ, ಬಂಗರಪ್ಪ ಅಲ್ಲವೆಂದ ಸಿದ್ದರಾಮಣ್ಣ..!]]></title>
            <link>https://kannada.asianetnews.com/karnataka-districts/kasturirangan-report-bjp-leader-rk-siddaramanna-slams-shivamogga-politicians-over-delay-kvn/articleshow-7bq02bw</link>
            <guid isPermaLink="true">https://kannada.asianetnews.com/karnataka-districts/kasturirangan-report-bjp-leader-rk-siddaramanna-slams-shivamogga-politicians-over-delay-kvn/articleshow-7bq02bw</guid>
            <pubDate>Thu, 03 Sep 2026 11:21:52 +0530</pubDate>
            <description><![CDATA[ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಕಸ್ತೂರಿ ರಂಗನ್ ವರದಿಯ ಗಂಭೀರತೆಯನ್ನು ಅರಿಯುವಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ನಡೆಸಿ, ಜನವಸತಿ ಪ್ರದೇಶಗಳನ್ನು ವರದಿಯಿಂದ ಕೈಬಿಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದು, ಈ ಕುರಿತ ಪಕ್ಷಾತೀತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1jx475mmzpraf7021rq0zes,imgname-untitled-design--31--1788414663859.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಕಸ್ತೂರಿ ರಂಗನ್ ವರದಿಯ ಗಂಭೀರತೆ ಅರಿತುಕೊಳ್ಳವಲ್ಲಿ ಜಿಲ್ಲೆಯ ರಾಜಕಾರಣಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಪ್ರಭಾರಿ ಆರ್.ಕೆ. ಸಿದ್ದರಾಮಣ್ಣ ಹೇಳಿದರು.&lt;/p&gt;&lt;p&gt;ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013 ರಿಂದ ಕಸ್ತೂರಿರಂಗನ್ ವರದಿ ಜಾರಿಯ ವಿಚಾರವಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದೆ. ನಮ್ಮ ಬಿಜೆಪಿ ಸಂಸದರು ಅನೇಕ ಬಾರಿ ಇದರ ಪ್ರಸ್ತಾವನೆಯನ್ನು ಸಂಸತ್&zwnj;ನಲ್ಲಿ ಮಂಡಿಸಿದ್ದಾರೆ. ಸಾಧಕ ಬಾಧಕಗಳನ್ನು ಚರ್ಚಿಸಿದ್ದಾರೆ. ಆದರೂ ಈಗ ಏಳನೇ ಬಾರಿ ಅಧಿಸೂಚನೆ ಹೊರಡಿಸಿದೆ ಎಂದರು.&lt;/p&gt;&lt;p&gt;ನಮಗೂ ಪರಿಸರ ಉಳಿಯಬೇಕೆಂಬ ಆಸೆ ಇದೆ. ಪರಿಸರ ಇಲ್ಲದಿದ್ದರೆ ನಾವ್ಯಾರು ಇಲ್ಲ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವೂ ಬೇಡ. ಈ ವರದಿಯಿಂದ ರಾಜ್ಯದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಿದ್ದಾರೆ. ಕರ್ನಾಟಕದ 1449 ಗ್ರಾಮದಲ್ಲಿ ಮೂರು ಜಿಲ್ಲೆಯಲ್ಲಿ 1138 ಗ್ರಾಮಗಳು ಬರುತ್ತದೆ. ಜನರು ಬದುಕಿನ ಪ್ರಶ್ನೆಯಾಗಿರುವುದರಿಂದ ಪಕ್ಷ ರಾಜಕಾರಣ ಮಾಡದೇ ಜನರ ಒಳಿತಿಗಾಗಿ ಯೋಚಿಸಬೇಕಿದೆ ಎಂದರು.&lt;/p&gt;&lt;p&gt;ಕೇರಳ ರಾಜ್ಯದವರು ಭೌತಿಕ ಸರ್ವೆ ಮಾಡಿಸಿ ಜನವಸತಿ, ಕೃಷಿ ಪ್ರದೇಶವನ್ನು ಅತಿಸೂಕ್ಷ್ಮ ಪ್ರದೇಶದಿಂದ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದೇ ರೀತಿ ರಾಜ್ಯ ಸರ್ಕಾರವೂ ಕೂಡ ಭೌತಿಕ ಸರ್ವೆ ನಡೆಸಿ, ಜನವಸತಿ, ಕೃಷಿ ಪ್ರದೇಶವನ್ನು ಕೈ ಬಿಟ್ಟು ಮಾರ್ಪಾಡು ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿದರು.&lt;/p&gt;&lt;h2&gt;&lt;strong&gt;ಪಕ್ಷಾತೀತ ಹೋರಾಟಕ್ಕೆ ಬೆಂಬಲ:&lt;/strong&gt;&lt;/h2&gt;&lt;p&gt;ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪಕ್ಷಾತೀತ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದರು. ಈಗಾಗಲೇ ಮೂರು ಜಿಲ್ಲೆಯ ಸಂಸದರು, ಮಾಜಿ ಸಂಸದರು ಬಿಜೆಪಿ ಕಚೇರಿಯಲ್ಲಿ ವರದಿ ಕುರಿತು ಚರ್ಚೆ ಮಾಡಿದ್ದೇವೆ. ಇದು ಪಕ್ಷ ರಾಜಕಾರಣಕ್ಕೆ ಒಳಪಡಬಾರದು. ವಿಷಯ ಆಧಾರಿತ ಮೇಲೆ ಬೆಂಬಲ ಕೊಟ್ಟಿದ್ದೇವೆ. ಮಧು ಬಂಗಾರಪ್ಪ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಅವರಿಗೆ ಇದರ ಗಂಭೀರತೆ ಅರ್ಥ ಆಗಿಲ್ಲ ಎಂದು ಕಿಡಿಕಾರಿದರು.&lt;/p&gt;&lt;h3&gt;&lt;strong&gt;ವಿಶೇಷ ಅಧಿವೇಶನ ಸ್ವಾಗತಾರ್ಹ:&lt;/strong&gt;&lt;/h3&gt;&lt;p&gt;ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಸ್ತೂರಿ ರಂಗನ್ ವರದಿ ವಿಚಾರವಾಗಿ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸುವುದಾಗಿ ನೀಡಿರುವ ಹೇಳಿಕೆಯ ಸ್ವಾಗತಿಸಿದ ಅವರು, ಪಕ್ಷ ಬೇಧ ಮರೆದು ಎಲ್ಲಾ ನಾಯಕರು ವಿಶೇಷ ಅಧಿವೇಶನದಲ್ಲಿ ಭಾಗಿಯಾಗಿ ಚರ್ಚೆ ನಡೆಸಿ ಕಸ್ತೂರಿ ರಂಗನ್ ವರದಿಯ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್, ಮೋಹನ್ ರೆಡ್ಡಿ, ಮಾಲತೇಶ್, ಶಿವರಾಜು, ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರ್, ಮಂಜುನಾಥ್ ಇದ್ದರು.&lt;/p&gt;&lt;h3&gt;----&lt;strong&gt;ಮಧು ಬಂಗಾರಪ್ಪ, ಬಂಗಾರಪ್ಪ ಅಲ್ಲ: ಸಿದ್ದರಾಮಣ್ಣ&lt;/strong&gt;&lt;/h3&gt;&lt;p&gt;ನೀವು ಮಧು ಬಂಗಾರಪ್ಪ ಅಷ್ಟೇ, ಬಂಗಾರಪ್ಪ ಅಲ್ಲ. ಬಂಗಾರಪ್ಪ ಆಗಲು ನಿಮ್ಮಲ್ಲಿ ಆ ಸಾಮರ್ಥ್ಯ ಇಲ್ಲ. ನೀವು ಅಷ್ಟು ಸಾಧನೆಯನ್ನು ಮಾಡಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಪ್ರಭಾರಿ ಆರ್.ಕೆ. ಸಿದ್ದರಾಮಣ್ಣ ಟೀಕಿಸಿದರು. ಮಧು ಬಂಗಾರಪ್ಪ ಅವರ ತಂದೆಯ ಹೆಸರಿನಿಂದ ಸಚಿವರಾಗಿದ್ದಾರೆಯೇ ಹೊರತು ತಮ್ಮ ಸ್ವಂತ ಹೋರಾಟ ಅಥವಾ ಸಾಧನೆಯಿಂದ ಅಲ್ಲ. ಬಂಗಾರಪ್ಪನವರು ಈ ಹಿಂದೆ ನನಗೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದರು. ಆ ಋಣ ತೀರಿಸಲು ಮಧು ಬಂಗಾರಪ್ಪರಿಗೆ ನನ್ನ ಅವಧಿಯಲ್ಲಿ ಸಚಿವ ಸ್ಥಾನ ನೀಡಿದ್ದೇನೆ ಎಂದು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಹೇಳಿಕೆಯೇ ಅವರು ಸಚಿವ ಸ್ಥಾನ ಹೇಗೆ ದೊರಕಿತು ಎಂಬುದನ್ನು ತಿಳಿಸುತ್ತದೆ ಎಂದು ಟೀಕಿಸಿದರು.&lt;/p&gt;]]></content:encoded>
            <category>shivamogga</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/kasturirangan-report-bjp-leader-rk-siddaramanna-slams-shivamogga-politicians-over-delay-kvn/articleshow-7bq02bw"/>
        </item>
        <item>
            <title><![CDATA[Shivamogga: ಶಿಕಾರಿಪುರದ ಪ್ರಸಿದ್ಧ ಹುಚ್ಚರಾಯಸ್ವಾಮಿ ಕೆರೆಗೆ ಹಾರಿದ BCA ವಿದ್ಯಾರ್ಥಿನಿ]]></title>
            <link>https://kannada.asianetnews.com/karnataka-districts/shivamogga-student-who-failed-semester-exam-jumps-into-shikaripura-s-famous-huchcharayaswamy-lake-sns/articleshow-a6gnt0h</link>
            <guid isPermaLink="true">https://kannada.asianetnews.com/karnataka-districts/shivamogga-student-who-failed-semester-exam-jumps-into-shikaripura-s-famous-huchcharayaswamy-lake-sns/articleshow-a6gnt0h</guid>
            <pubDate>Thu, 10 Sep 2026 16:06:14 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಬಿಸಿಎ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್&zwnj;ನೋಟ್&zwnj;ನಲ್ಲಿ ಬರೆದಿಟ್ಟಿದ್ದಾಳೆ. ಈ ಸಂಬಂಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m25e0tbmnq5mg0mpbnpwcfkw,imgname-shikaripura-student-1789036358004.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ: &lt;/strong&gt;ಜಿಲ್ಲೆಯ ಶಿಕಾರಿಪುರ ಪಟ್ಟಣದ ಪ್ರಸಿದ್ಧ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಬಿಸಿಎ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಆಕೆ ಸಾವನ್ನಪ್ಪಿದ್ದು ಯಾಕೆ? ಕಾರಣವೇನು? ಸಮವಸ್ತ್ರದಲ್ಲೇ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿತ್ತು ಯಾಕೆ? ಈ ಕುರಿತು ಒಂದು ವರದಿ ಇಲ್ಲಿದೆ.&lt;/p&gt;&lt;h2&gt;ಶಿಕಾರಿಪುರ ಕೆರೆಯಲ್ಲಿ ವಿದ್ಯಾರ್ಥಿನಿ&lt;/h2&gt;&lt;p&gt;ನೂರಾರು ಕನಸುಗಳನ್ನು ಹೊತ್ತು ಇನ್ನು ಬಾಳಿ ಬದುಕಬೇಕಾಗಿದ್ದ ಕುಸುಮಬಾಲೆಯ ಬಳು ತನ್ನದೇ ದುಡುಕಿನ ನಿರ್ಧಾರಕ್ಕೆ ಬಲಿಯಾಗಿದ್ದಾಳೆ. ಪುಸ್ತಕದ ಪರೀಕ್ಷೆ ಎದುರಿಸಲಾಗದೆ ಜೀವನದ ಪರೀಕ್ಷೆಯನ್ನು ಗೆಲ್ಲಲಾಗದೆ ಬಾರದ ಲೋಕ ಸೇರಿದ್ದಾಳೆ.&lt;/p&gt;&lt;p&gt;ಹೌದು, ಸೆಮಿಸ್ಟರ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದು ಶಿಕಾರಿಪುರ ಪಟ್ಟಣದ ಐತಿಹಾಸಿಕ ಹುಚ್ಚರಾಯಸ್ವಾಮಿ ಕೆರೆಗೆ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.&lt;/p&gt;&lt;h2&gt;ಸಾವಿನ ಸುತ್ತ ಅನುಮಾನದ ಹುತ್ತ&lt;/h2&gt;&lt;p&gt;ಶಿಕಾರಿಪುರ ಪಟ್ಟಣದ ನಿವಾಸಿ ನಮಿತಾ ಅಲಿಯಾಸ್ ರಮ್ಯಾ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ಎಂದಿನಂತೆ ಬೆಳಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದಳು. ಬಳಿಕ ಹುಚ್ಚರಾಯಸ್ವಾಮಿ ದೇವಸ್ಥಾನದ ಮುಂಭಾಗ ತನ್ನ ದ್ವಿಚಕ್ರ ವಾಹನ ನಿಲ್ಲಿಸಿ, ಕೆರೆಯ ದಡದ ಬಳಿ ಚಪ್ಪಲಿ ಬಿಟ್ಟು ನೀರಿಗೆ ಹಾರಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯುವತಿಯ ಮೃತದೇಹ ವನ್ನು ಕೆರೆಯಿಂದ ಹೊರತೆಗೆದಿದ್ದಾರೆ.&lt;/p&gt;&lt;p&gt;ಮಂಗಳವಾರ ಪ್ರಕಟವಾದ ಸೆಮಿಸ್ಟರ್ ಪರೀಕ್ಷಾ ಫಲಿತಾಂಶದಲ್ಲಿ ತಾನು ಒಂದು ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿರುವುದಾಗಿ ಹಾಗೂ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಆಕೆ ಬರೆದಿದ್ದ ಡೆತ್&zwnj;ನೋಟ್&zwnj; ಕಾಲೇಜು ಬ್ಯಾಗ್&zwnj;ನಲ್ಲಿ ಪತ್ತೆಯಾಗಿದೆ ಎಂದು ಮೃತಳ ಸಂಬಂಧಿಕರು ಪಟ್ಟಣ ಪೊಲೀಸ್&zwnj; ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿನಿಯ ಆತ್ಮಹತ್ಯೆಯ ಸಂಬಂಧ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಇನ್ನು ಬದುಕಿನಲ್ಲಿ ಸಾಧಿಸಬೇಕಾದದ್ದು ಬಹಳ ಇತ್ತು ಕೇವಲ ಒಂದು ಪರೀಕ್ಷೆಯನ್ನೇ ಮಾನದಂಡವನ್ನಾಗಿಸಿ, ಮನಸ್ಸನ್ನು ದುರ್ಬಲಗೊಳಿಸಿಕೊಂಡ ವಿದ್ಯಾರ್ಥಿನಿಯ ಸಾವು ಪೋಷಕರಿಗೂ ಮತ್ತು ಸಮಾಜಕ್ಕೂ ಪಾಠವಾಗಿದೆ. (ವರದಿ: ರಾಜೇಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ)&lt;/p&gt;]]></content:encoded>
            <category>shivamogga</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/shivamogga-student-who-failed-semester-exam-jumps-into-shikaripura-s-famous-huchcharayaswamy-lake-sns/articleshow-a6gnt0h"/>
        </item>
        <item>
            <title><![CDATA[Dashami Tiger: ಶಿವಮೊಗ್ಗದಲ್ಲಿ ದಶಮಿಯಂದೇ 'ದಶಮಿ' ಹೆಸರಿನ ಹುಲಿ ಸಾವು!]]></title>
            <link>https://kannada.asianetnews.com/karnataka-districts/tiger-named-dashami-dies-in-shivamogga-on-the-day-of-dashami-rav/articleshow-ann6rdp</link>
            <guid isPermaLink="true">https://kannada.asianetnews.com/karnataka-districts/tiger-named-dashami-dies-in-shivamogga-on-the-day-of-dashami-rav/articleshow-ann6rdp</guid>
            <pubDate>Mon, 07 Sep 2026 07:01:59 +0530</pubDate>
            <description><![CDATA[&lt;p&gt;ದಶಮಿ ತಿಥಿಯಂದೇ ಶಿವಮೊಗ್ಗದ ಹೊರವಲಯದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ 17 ವರ್ಷದ ಹೆಣ್ಣು ಹುಲಿ &lsquo;ದಶಮಿ&rsquo; (17) ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದೆ. ದಶಮಿ ಸಾವಿನಿಂದ ಪ್ರವಾಸಿಗರಲ್ಲೂ ನೋವುಂಟು ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1wqbgsaaxwa656bhnrc9sn8,imgname-shivamogga-dashami-tiger-death-1788744155946.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಸೆ.7):&lt;/strong&gt; ದಶಮಿ ತಿಥಿಯಂದೇ ಶಿವಮೊಗ್ಗದ ಹೊರವಲಯದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ 17 ವರ್ಷದ ಹೆಣ್ಣು ಹುಲಿ &lsquo;ದಶಮಿ&rsquo; (17) ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದೆ.&lt;/p&gt;&lt;h2&gt;ಶಿವಮೊಗ್ಗದ ದಶಮಿ ಹುಲಿ ಸಾವು&lt;/h2&gt;&lt;p&gt;ವೃದ್ಧಾಪ್ಯದ ಕಾರಣಕ್ಕೆ ಆರೋಗ್ಯ ಸಮಸ್ಯೆ ಹೊಂದಿದ್ದ ದಶಮಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿತ್ತು. ಇದಕ್ಕೆ ಕಳೆದ 10 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಭಾನುವಾರ ಚಿಕಿತ್ಸೆಗೆ ಸ್ಪಂದಿಸದೇ ದಶಮಿ ಹುಲಿ ಸಾವನ್ನಪ್ಪಿದೆ.&lt;/p&gt;&lt;h3&gt;ಶಿವಮೊಗ್ಗ ಮೃಗಾಲಯದಲ್ಲೇ ಜನಿಸಿದ್ದ ದಶಮಿ ಹುಲಿ&lt;/h3&gt;&lt;p&gt;ಹೆಣ್ಣು ಹುಲಿ ದಶಮಿ ಶಿವಮೊಗ್ಗ ಮೃಗಾಲಯದಲ್ಲೇ ಜನಿಸಿತ್ತು. ಕಳೆದ 17 ವರ್ಷದಿಂದ ಮೃಗಾಲಯದ ಭಾಗವಾಗಿದ್ದ ದಶಮಿ ಸಾವನ್ನಪ್ಪಿರುವುದು ಪ್ರವಾಸಿಗರಲ್ಲೂ ನೋವುಂಟು ಮಾಡಿದೆ. ಸೋಮವಾರ ಪಶುವೈದ್ಯಕೀಯ ಕಾಲೇಜಿನ ವೈದ್ಯರಿಂದ ದಶಮಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tiger-named-dashami-dies-in-shivamogga-on-the-day-of-dashami-rav/articleshow-ann6rdp"/>
        </item>
        <item>
            <title><![CDATA[ಕಸ್ತೂರಿರಂಗನ್ ವರದಿ: ಮನುಷ್ಯನನ್ನು ಸಾಯಿಸಿ ಹೆಬ್ಬಾವು ಬದುಕಿಸುವ ಯೋಚನೆ ಬೇಡ..!]]></title>
            <link>https://kannada.asianetnews.com/karnataka-districts/kasturirangan-report-let-humans-live-first-then-think-about-environment-says-kimmane-ratnakar-kvn/articleshow-c7vr8oo</link>
            <guid isPermaLink="true">https://kannada.asianetnews.com/karnataka-districts/kasturirangan-report-let-humans-live-first-then-think-about-environment-says-kimmane-ratnakar-kvn/articleshow-c7vr8oo</guid>
            <pubDate>Fri, 04 Sep 2026 10:14:22 +0530</pubDate>
            <description><![CDATA[ಕಸ್ತೂರಿರಂಗನ್ ವರದಿ ಅನುಷ್ಠಾನವು ಮನುಷ್ಯರನ್ನು ಒಕ್ಕಲೆಬ್ಬಿಸುವ ಹುನ್ನಾರ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ ವಿರೋಧಿಸಿ ಸೆ.7ರಂದು ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರ ಅಧಿಸೂಚನೆ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1nbkrmcp997fzykgw8p44vg,imgname-untitled-design--34--1788496962186.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ:ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ಕಾಡು ಪ್ರಾಣಿಗಳು ಬದುಕಬೇಕು, ಮನುಷ್ಯರು ಸಾಯಬೇಕು ಎನ್ನುವ ಯೋಜನೆ ಸರಿಯಲ್ಲ. ಮನುಷ್ಯನನ್ನು ಸಾಯಿಸಿ ಹೆಬ್ಬಾವು ಬದುಕಿಸುವ ಯೋಚನೆ ಬೇಡ. ಮೊದಲು ಮನುಷ್ಯನಿಗೆ ಬದುಕಲು ಅವಕಾಶ ನೀಡಿ, ಬಳಿಕ ಪರಿಸರದ ಬಗ್ಗೆ ಯೋಚಿಸಬೇಕು ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್&zwnj; ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಇದ್ದ ಜನ ಸಂಖ್ಯೆಯೂ ಈಗಿನ ಜನ ಸಂಖ್ಯೆಗೂ ಅಗಾದ ಪ್ರಮಾಣದಲ್ಲಿ ವ್ಯತ್ಯಾಸ ಆಗಿದೆ. ಜನಸಂಖ್ಯೆ ಅನುಗುಣವಾಗಿ ಕೆಲವರು ಅರಣ್ಯ ಪ್ರದೇಶದಲ್ಲಿ ವಾಸಕ್ಕೆ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ. ಆಗ ಇದು ಅರಣ್ಯ ಜಾಗ ಇಲ್ಲಿಂದ ಹೊರಹೋಗಿ ಎಂದರೆ ಈ ಜಾಗದಲ್ಲಿ ಇಷ್ಟು ವರ್ಷ ವಾಸವಿದ್ದರು ಈಗ ಎಲ್ಲಿಗೆ ಹೋಗಬೇಕು. ಮನುಷ್ಯರನ್ನು ಒಕ್ಕಲೆಬ್ಬಿಸಿ ಎಲ್ಲಿಗೆ ಕಳುಹಿಸುವ ಯೋಚನೆ ಇದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಇಲ್ಲಿ ಕಸ್ತೂರಿ ರಂಗನ್ ಅವರು ಪರಿಸರ ತಜ್ಞರಲ್ಲ, ಅವರು ಶಿಕ್ಷಣ ತಜ್ಞರಾಗಿದ್ದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಪರಿಸರದ ಜೊತೆಗೆ ಮನುಷ್ಯನ ಅಸ್ತಿತ್ವವೂ ಉಳಿಯಬೇಕು. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಮಾಡಲಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದರು.&lt;/p&gt;&lt;p&gt;ಕಸ್ತೂರಿರಂಗನ್ ವರದಿಯನ್ನು ರದ್ದುಪಡಿಸಬೇಕು, ಈ ಬಗ್ಗೆ ಚರ್ಚಿಸಲು ಅಧಿವೇಶನವನ್ನು ಕರೆಯಲಾಗಿದ್ದು, ಮೂರು ದಿನದ ಅಧಿವೇಶನದಲ್ಲಿ ಒಂದು ದಿನ ಈ ಯೋಜನೆ ಬಗ್ಗೆ ಚರ್ಚೆ ನಡೆಯಲಿದೆ ಎಂದರು.&lt;/p&gt;&lt;h2&gt;&lt;strong&gt;ಸೆ.7ರಂದು ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿಗೆ ಪಾದಯಾತ್ರೆ:&amp;nbsp;&lt;/strong&gt;&lt;/h2&gt;&lt;p&gt;ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಹಾಗೂ ಈಗ ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೆ.7ರಂದು ಕಸ್ತೂರಿರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಗಡೆ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ತೀರ್ಥಹಳ್ಳಿಯ ಪಪಂ ಬಳಿ ಸಾರ್ವಜನಿಕ ಸಭೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.&lt;/p&gt;&lt;p&gt;ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರದ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಪಾದಯಾತ್ರೆಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಬೇಕಿರುವುದರಿಂದ, ಇತರ ಪಕ್ಷಗಳಲ್ಲಿದ್ದು ವರದಿಯನ್ನು ವಿರೋಧಿಸುವವರೂ ಭಾಗವಹಿಸಬಹುದು ಎಂಬ ಉದ್ದೇಶದಿಂದ ಕರಪತ್ರದಲ್ಲಿ ಈ ಕುರಿತು ಸ್ಪಷ್ಟವಾಗಿ ನಮೂದಿಸಲಾಗಿದೆ. ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಇಲ್ಲಿ ಪ್ರತಿಭಟನೆ ನಡೆಸುವ ಬದಲು ಕೇಂದ್ರಕ್ಕೆ ತೆರಳಿ ವರದಿ ಹಿಂಪಡೆಯುವಂತೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಪಾದಯಾತ್ರೆಯ ಹಿಂದೆ ಮತ್ತೊಂದು ಕಾರಣವೂ ಇದೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು 25 ವರ್ಷಗಳಿಂದ ಶಾಸಕರಾಗಿದ್ದು, 40 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಬಿಜೆಪಿಯವರನ್ನು ಹೊರತುಪಡಿಸಿ ಬೇರೆ ಯಾರೂ ಮನುಷ್ಯರಲ್ಲ ಎಂಬ ಭಾವನೆ ಅವರಲ್ಲಿದೆ. ಇದನ್ನು ಅವರಿಗೆ ಮನವರಿಕೆ ಮಾಡುವ ಉದ್ದೇಶದಿಂದಲೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.&lt;/p&gt;&lt;p&gt;ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಬಿ.ಎ.ರಮೇಶ್ ಹೆಗ್ಡೆ, ಎಸ್.ಟಿ.ಹಾಲಪ್ಪ, ಯು.ಶಿವಾನಂದ್, ಅಮರ್&zwnj;ನಾಥ್ ಶೆಟ್ಟಿ, ಗಣೇಶ್ ಗಾಜನೂರು ಇದ್ದರು.&lt;/p&gt;&lt;p&gt;-----ತೀರ್ಥಹಳ್ಳಿ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳುತ್ತಿದ್ದಾರೆ. ಅವರು ನನಗಿಂತ 15 ವರ್ಷ ಮುಂಚಿತವಾಗಿಯೇ ಶಾಸಕರಾಗಿ ಅಧಿಕಾರ ಅನುಭವಿಸಿದವರು. ನಾನು ಬರುವ ಮೊದಲು 15 ವರ್ಷದಲ್ಲಿ ಮತ್ತು ನನ್ನ 10 ವರ್ಷದ ಅವಧಿಯಲ್ಲಿ ಮಾಡಿದ ತೀರ್ಥಹಳ್ಳಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ದ. ಆರಗ ಜ್ಞಾನೇಂದ್ರ ಎಲ್ಲಿಗಾದರೂ ಕರೆಯಲಿ ನಾನು ಬಂದು ಚರ್ಚೆ ಮಾಡುತ್ತೇನೆ.&lt;/p&gt;&lt;p&gt;-ಕಿಮ್ಮನೆ ರತ್ಮಾಕರ್, ಮಾಜಿ ಸಚಿವ.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kasturirangan-report-let-humans-live-first-then-think-about-environment-says-kimmane-ratnakar-kvn/articleshow-c7vr8oo"/>
        </item>
        <item>
            <title><![CDATA[ತಹಸೀಲ್ದಾರ್ ಅವಮಾನಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ನಡೆಗೆ ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ!]]></title>
            <link>https://kannada.asianetnews.com/karnataka-districts/sagar-kdp-meeting-row-h-halappa-condemns-public-humiliation-of-woman-tahsildar-kvn/articleshow-etrwf51</link>
            <guid isPermaLink="true">https://kannada.asianetnews.com/karnataka-districts/sagar-kdp-meeting-row-h-halappa-condemns-public-humiliation-of-woman-tahsildar-kvn/articleshow-etrwf51</guid>
            <pubDate>Sat, 05 Sep 2026 09:04:38 +0530</pubDate>
            <description><![CDATA[ಸಾಗರ ಕೆಡಿಪಿ ಸಭೆಯಲ್ಲಿ ತಹಸೀಲ್ದಾರ್ ಡಾ. ಪ್ರತಿಭಾ ಅವರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವಮಾನಿಸಿದ್ದಾರೆ ಎಂದು ಮಾಜಿ ಸಚಿವ ಎಚ್. ಹಾಲಪ್ಪ ಆರೋಪಿಸಿದ್ದಾರೆ. ಅಕ್ರಮಗಳಿಗೆ ಕಡಿವಾಣ ಹಾಕುತ್ತಿರುವುದೇ ಶಾಸಕರ ಕೋಪಕ್ಕೆ ಕಾರಣವಿರಬಹುದು ಎಂದ ಅವರು, ರೈತ ಸಂಘವೂ ತಹಸೀಲ್ದಾರ್ ಪರ ನಿಂತು ಶಾಸಕರ ವರ್ತನೆಯನ್ನು ಖಂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m01xfehghs6ttwdtwn19f4s4,imgname-haratalu-halappa-1786770864687.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಗರ: ಕೆಡಿಪಿ ಸಭೆಯಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವ ತಹಸೀಲ್ದಾರ್&zwnj; ಡಾ. ಪ್ರತಿಭಾ ಅವರನ್ನು ಶಾಸಕರು ಅವಮಾನಿಸಿದ್ದು ಖಂಡನೀಯ. ತಹಸೀಲ್ದಾರ್&zwnj;ಗೆ ಬುದ್ಧಿ ಹೇಳಲು ಬೇರೆ ವೇದಿಕೆ ಇತ್ತು. ಸಾರ್ವಜನಿಕವಾಗಿ ಕೆಡಿಪಿ ಸಭೆಯಲ್ಲಿ ಮಹಿಳಾ ಅಧಿಕಾರಿಯನ್ನು ಅವಮಾನಿಸಿದ್ದನ್ನು ಖಂಡಿಸುತ್ತೇನೆಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಹೇಳಿದ್ದಾರೆ.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲುಕ್ವಾರೆ ಸೇರಿ ಬೇರೆ ಬೇರೆ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸವನ್ನು ತಹಸೀಲ್ದಾರ್&zwnj; ಮಾಡುತ್ತಿದ್ದಾರೆ. ಬಹುಶಃ ತಮ್ಮ ವ್ಯವಹಾರಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎನ್ನುವ ಉದ್ದೇಶದಿಂದ ಶಾಸಕರು ತಹಸೀಲ್ದಾರ್&zwnj;ಗೆ ಸಭೆಯಲ್ಲಿ ಅವಮಾನಿಸಿರಬೇಕು ಎಂದು ಟೀಕಿಸಿದರು.&lt;/p&gt;&lt;h2&gt;&lt;strong&gt;ಹಲವು ಹುದ್ದೆಗಳು ಖಾಲಿ:&lt;/strong&gt;&lt;/h2&gt;&lt;p&gt;ಪೌರಾಯುಕ್ತರು, ಕಾರ್ಯನಿರ್ವಾಹಣಾಧಿಕಾರಿಗಳು, ಕೆಎಸ್ಆರ್&zwnj;ಟಿಸಿ ಡಿಪೋ ಮ್ಯಾನೇಜರ್ ಹುದ್ದೆಗಳು ಖಾಲಿ ಇದೆ. 12 ಸಬ್ ಇನ್ಸ್ಪೆಕ್ಟರ್&zwnj;ಗಳ ಪೈಕಿ ಕೇವಲ 4 ಜನ ಮಾತ್ರ ಇದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಾಲೂಕಿನಲ್ಲಿ ಕೊಲೆ, ಸುಲಿಗೆ ಪ್ರಕರಣ ಜಾಸ್ತಿಯಾಗಿದ್ದು ಕಾನೂನು ವ್ಯವಸ್ಥೆ ಹಳಿ ತಪ್ಪಿದೆ ಎಂದು ದೂರಿದರು.&lt;/p&gt;&lt;p&gt;ಏಪ್ರಿಲ್, ಮೇ ತಿಂಗಳಿನಲ್ಲಿ ಆಗಬೇಕಿದ್ದ ಮಳೆ ಮಾಪನಾ ಕೇಂದ್ರಗಳ ದುರಸ್ತಿ ಬಗ್ಗೆ ಶಾಸಕರು ಈಗ ಆಸಕ್ತಿ ವಹಿಸುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಮಾಪನಾ ಕೇಂದ್ರ ಸರಿ ಇದೆಯಾ ಎಂದು ಕೇಳುತ್ತಿರುವುದೇ ವಿಚಿತ್ರ. ಮೂರು ಬಾರಿ ಶಾಸಕನಾಗಿದ್ದೇನೆ ಎಂದು ಹೇಳಿಕೊಳ್ಳುವವರಿಗೆ ಕನಿಷ್ಠ ಇಂತಹದ್ದರ ಬಗ್ಗೆ ಜ್ಞಾನ ಇರಬೇಕು. ಉಪವಿಭಾಗೀಯ ಆಸ್ಪತ್ರೆಗೆ ₹70 ಕೋಟಿ ಬಂದಿದೆ ಎನ್ನುತ್ತಾರೆ. ಹಾಗಾದರೆ, ಹಣ ಎಲ್ಲಿದೆ ಎಂದು ಜನರಿಗೆ ಲೆಕ್ಕಕೊಡಿ. ಮಾತೆತ್ತಿದರೆ ಸುಳ್ಳು ಹೇಳಿ ಇಲ್ಲದ್ದನ್ನು ಇದೆ ಎಂದು ಬಿಂಬಿಸುತ್ತಿದ್ದಾರೆ. ಸದ್ಯದಲ್ಲೇ ಅವರ ಸುಳ್ಳಿನ ಸರಮಾಲೆಯ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.&lt;/p&gt;&lt;p&gt;ಪಕ್ಷದ ಪ್ರಮುಖರಾದ ದೇವೇಂದ್ರಪ್ಪ, ಗಣೇಶ್ ಪ್ರಸಾದ್, ಡಾ.ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ಕೊಟ್ರಪ್ಪ ನೇದರವಳ್ಳಿ, ಸುಜಯ ಶೆಣೈ, ಸತೀಶ್ ಕೆ. ರಮೇಶ್ ಎಚ್.ಎಸ್., ಸಂತೋಷ್, ಬಿ.ಟಿ.ರವೀಂದ್ರ ಇದ್ದರು.&lt;/p&gt;&lt;h3&gt;&lt;strong&gt;ರೈತಸಂಘದ ಖಂಡನೆ:&lt;/strong&gt;&lt;/h3&gt;&lt;p&gt;ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ತಹಸೀಲ್ದಾರ್&zwnj; ಅವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವಮಾನಿಸಿದ್ದು ಸರಿಯಲ್ಲ ಎಂದು ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ಹೇಳಿದ್ದಾರೆ.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಅನೇಕ ವರ್ಷಗಳ ನಂತರ ಓರ್ವ ದಕ್ಷ ತಹಸೀಲ್ದಾರ್&zwnj; ಬಂದಿದ್ದಾರೆ. ಅವರ ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕೆ ಹೊರತು ಅವರನ್ನು ಅಧಿಕಾರಿಗಳ ಸಭೆಯಲ್ಲಿ ತಲೆತಗ್ಗಿಸುವಂತೆ ಮಾಡುವುದು ಒಳ್ಳೆಯ ಲಕ್ಷಣವಲ್ಲ ಎಂದರು.&lt;/p&gt;&lt;p&gt;ಯಾರೋ ಹೇಳಿದ್ದಾರೆಂದು ದಾಳಿ ಮಾಡುತ್ತೀರಿ, ಮೀಡಿಯಾ ಇರಿಸಿಕೊಂಡು ಪ್ರಚಾರ ಪಡೆಯುತ್ತೀರಿ ಎಂದು ಶಾಸಕರು ಹೇಳುವುದು ಎಷ್ಟು ಸರಿ. ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ನಾನೇ ಅಕ್ರಮಗಳ ಬಗ್ಗೆ ತಹಸೀಲ್ದಾರ್&zwnj;ಗೆ ಮಾಹಿತಿ ನೀಡಿದ್ದೇನೆ. ಹಾಗಾದರೆ, ನನ್ನನ್ನು ಶಾಸಕರು ಯಾವನೋ ಎಂದು ಸಂಭೋದಿಸಿದ್ದು ಸರಿಯೇ ಎಂದು ಪ್ರಶ್ನಿಸಿದ ಅವರು ತಕ್ಷಣ ಶಾಸಕರು ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಕಸ್ತೂರಿ ರಂಗನ್ ವರದಿ ವಿರುದ್ಧ ತಹಸೀಲ್ದಾರ್&zwnj;, ಉಪವಿಭಾಗಾಧಿಕಾರಿಗಳಿಗೆ ಮನವಿ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಸಂಸತ್&zwnj;ನಲ್ಲಿ ಮಾತನಾಡಲು ಬಿ.ವೈ. ರಾಘವೇಂದ್ರ ಅವರನ್ನು, ವಿಧಾನಸಭೆಯಲ್ಲಿ ಮಾತನಾಡಲು ಗೋಪಾಲಕೃಷ್ಣ ಬೇಳೂರು ಅವರನ್ನು ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಅಲ್ಲಿ ಜನಪ್ರತಿನಿಧಿಗಳು ನಮ್ಮ ಧ್ವನಿಯಾಗಬೇಕು. ಕೇರಳ ಮಾದರಿ ಎಂದು ಹೇಳಿ ಇನ್ನೊಂದಿಷ್ಟು ಆತಂಕ ತಂದುಕೊಳ್ಳುವುದಕ್ಕಿಂತ ವಾಸ್ತವತೆಯನ್ನು ಸಮೀಕ್ಷೆ ನಡೆಸಲು ಒತ್ತಾಯ ಮಾಡಬೇಕು ಎಂದರು. ದೇವು ಆಲಳ್ಳಿ ಇದ್ದರು.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/sagar-kdp-meeting-row-h-halappa-condemns-public-humiliation-of-woman-tahsildar-kvn/articleshow-etrwf51"/>
        </item>
        <item>
            <title><![CDATA[ಬೆಚ್ಚಿಬಿದ್ದ ಶಿವಮೊಗ್ಗ: ರೌಡಿಶೀಟರ್ ಕುಳ್ಳಿ ಕಿರಣ್‌ನ ಮುಗಿಸಿದ ದುಷ್ಟರು]]></title>
            <link>https://kannada.asianetnews.com/karnataka-districts/shivamogga-crime-rowdy-sheeter-kulli-kiran-murdered-near-raminakoppa-over-financial-dispute-gkn/articleshow-fm6dzso</link>
            <guid isPermaLink="true">https://kannada.asianetnews.com/karnataka-districts/shivamogga-crime-rowdy-sheeter-kulli-kiran-murdered-near-raminakoppa-over-financial-dispute-gkn/articleshow-fm6dzso</guid>
            <pubDate>Mon, 07 Sep 2026 15:54:52 +0530</pubDate>
            <description><![CDATA[&lt;p&gt;ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರೌಡಿ ಅಬ್ಬರ ಮತ್ತೆ ಮುನ್ನೆಲೆಗೆ ಬಂದಿದೆ. ನಗರದ ಸೀಗೆಹಟ್ಟಿಯ ನಿವಾಸಿ, ರೌಡಿಶೀಟರ್ ಕುಳ್ಳಿ ಕಿರಣ (32) ಎಂಬಾತನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದೆ. ಅಷ್ಟಕ್ಕೂ ಆಗಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1xpc5cg1gd2w1qfst55q1hx,imgname-shivamogga-kulli-kirant--1--1788776682896.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ: &lt;/strong&gt;ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರೌಡಿ ಅಬ್ಬರ ಮತ್ತೆ ಮುನ್ನೆಲೆಗೆ ಬಂದಿದೆ. ನಗರದ ಸೀಗೆಹಟ್ಟಿಯ ನಿವಾಸಿ, ರೌಡಿಶೀಟರ್ ಕುಳ್ಳಿ ಕಿರಣ (32) ಎಂಬಾತನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದೆ.&lt;/p&gt;&lt;p&gt;ಶಿವಮೊಗ್ಗದ ಹೊರವಲಯದ ರಾಮಿನಕೊಪ್ಪದ ಬಳಿ ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ಜಾಗದಲ್ಲಿ ಈ ಘಟನೆ ಸಂಭವಿಸಿದೆ. ಕಿರಣ್ ಜೂಜಾಟದಲ್ಲಿ ತೊಡಗಿದ್ದ ವೇಳೆ ಅಲ್ಲಿಗೆ ನುಗ್ಗಿದ 2 ರಿಂದ 3 ಜನರ ಗುಂಪು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಕಿರಣನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಮಾರ್ಗಮಧ್ಯದಲ್ಲಿಯೇ ಆತ ಕೊನೆಯುಸಿರೆಳೆದಿದ್ದಾನೆ.&lt;/p&gt;&lt;h2&gt;&lt;strong&gt;ಹಣಕಾಸಿನ ವಿಚಾರವೇ ಕೊಲೆಗೆ ಕಾರಣ?&lt;/strong&gt;&lt;/h2&gt;&lt;p&gt;ಪ್ರಾಥಮಿಕ ತನಿಖೆಯ ಪ್ರಕಾರ..ಖಾಸಗಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯೇ ಈ ಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಇಸ್ಪೀಟ್ ಆಟದ ವೇಳೆ ನಡೆದ ಕ್ಷಣಿಕ ಜಗಳವೋ ಅಥವಾ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹೊಂಚು ಹಾಕಿ ಈ ಕೊಲೆ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.&lt;/p&gt;&lt;p&gt;ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಎಸ್ಪಿ ನಿಖಿಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ನಗರದಲ್ಲಿ ರೌಡಿಶೀಟರ್ ಹತ್ಯೆಯಿಂದಾಗಿ ಸೀಗೆಹಟ್ಟಿ ಭಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></content:encoded>
            <category>shivamogga</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/shivamogga-crime-rowdy-sheeter-kulli-kiran-murdered-near-raminakoppa-over-financial-dispute-gkn/articleshow-fm6dzso"/>
        </item>
        <item>
            <title><![CDATA[5 ಗ್ಯಾರಂಟಿಗಳಿಂದ ಸೊರಬ ಕ್ಷೇತ್ರಕ್ಕೆ ₹400 ಕೋಟಿ: ಸಚಿವ ಮಧು ಬಂಗಾರಪ್ಪ]]></title>
            <link>https://kannada.asianetnews.com/karnataka-districts/soraba-400-crore-rupees-reaches-constituency-through-five-guarantee-schemes-says-madhu-bangarappa-kvn/articleshow-gfgrg46</link>
            <guid isPermaLink="true">https://kannada.asianetnews.com/karnataka-districts/soraba-400-crore-rupees-reaches-constituency-through-five-guarantee-schemes-says-madhu-bangarappa-kvn/articleshow-gfgrg46</guid>
            <pubDate>Wed, 02 Sep 2026 11:38:53 +0530</pubDate>
            <description><![CDATA[ಸೊರಬ ಕ್ಷೇತ್ರಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ 400 ಕೋಟಿ ರು. ಬಂದಿದ್ದು, ಇದೊಂದು ಜನತಾ ಅಭಿವೃದ್ಧಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವರು 11 ಗ್ರಾಮ ಪಂಚಾಯಿತಿಗಳ ಮುಖಂಡರ ಸಭೆ ನಡೆಸಿ, ಮೂಲಸೌಕರ್ಯ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರದ ಭರವಸೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m1gbkkz4fhxf7dht4jbv91j8,imgname-untitled-design--27--1788329185251.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೊರಬ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಸುಮಾರು 400 ಕೋಟಿ ರು. ಹರಿದುಬಂದಿದ್ದು, ಇದು ಒಂದು ರೀತಿಯಲ್ಲಿ ಜನತಾ ಅಭಿವೃದ್ಧಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.&lt;/p&gt;&lt;p&gt;ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ 11 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳ ಮುಖಂಡರೊಂದಿಗೆ ಸಭೆ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಮನೆಗಳಿಗೆ ತಿಂಗಳಿಗೆ 5 ಸಾವಿರದವರೆಗೆ ಆರ್ಥಿಕ ಶಕ್ತಿ ತುಂಬುತ್ತಿವೆ. ಇದರಿಂದ ಜನರ ಜೀವನಮಟ್ಟ ಸುಧಾರಿಸುವುದರ ಜೊತೆಗೆ ಸ್ಥಳೀಯ ಆರ್ಥಿಕತೆಯೂ ಚೇತರಿಕೆ ಕಾಣುತ್ತಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಕ್ಷೇತ್ರದ ಅಭಿವೃದ್ಧಿಯೂ ಮುಖ್ಯ:&lt;/strong&gt;&lt;/h2&gt;&lt;p&gt;ಶಿಕ್ಷಣ ಇಲಾಖೆ ಬಹಳ ದೊಡ್ಡದು. ಹೀಗಾಗಿ ಈ ಹಿಂದೆ ಪ್ರತಿ ಹಳ್ಳಿಗೂ ಖುದ್ದಾಗಿ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸದಿಂದ ನಮ್ಮ ಪಕ್ಷ ನನ್ನನ್ನು ಗುರುತಿಸಿ ಮತ್ತೆ ಸಚಿವ ಸ್ಥಾನ ನೀಡಿದೆ. ನನ್ನ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ. ಜವಾಬ್ದಾರಿ ಬಹಳಷ್ಟಿದೆ. ಹೀಗಾಗಿ ಒಂದೇ ಕಡೆ ಗ್ರಾಮ ಪಂಚಾಯಿತಿವಾರು ಹಳ್ಳಿಗಳ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದೇನೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;11 ಗ್ರಾಪಂ ಸಮಸ್ಯೆ ಆಲಿಕೆ:&lt;/strong&gt;&lt;/h3&gt;&lt;p&gt;ಉದ್ರಿ, ಅಂಡಿಗೆ, ಬಿಳವಾಣಿ, ಮಾವಲಿ, ಚಿಟ್ಟೂರು, ಇಂಡುವಳ್ಳಿ, ಶಿಗ್ಗಾ, ಹೆಗ್ಗೋಡು, ದೂಗೂರು, ನಿಸರಣಿ ಹಾಗೂ ಉಳವಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಮ್ಮ-ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.&lt;/p&gt;&lt;p&gt;ರಸ್ತೆ ಅಭಿವೃದ್ಧಿ, ಚರಂಡಿ ದುರಸ್ತಿ, ಕೆರೆಗಳಿಗೆ ನೀರು, ಬಸ್ ಸೌಲಭ್ಯ, ವಿದ್ಯುತ್ ಸಂಪರ್ಕ, ಇ-ಖಾತಾ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಸಮಸ್ಯೆಗಳ ಕುರಿತು ಮನವಿಗಳನ್ನು ಸಲ್ಲಿಸಲಾಯಿತು. ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗೂ ಈವರೆಗೆ ಸುಮಾರು ೧ ಕೋಟಿ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಅನುದಾನವನ್ನು ಇನ್ನಷ್ಟು ಹೆಚ್ಚಿಸಿ ನೀಡುತ್ತೇನೆ ಎಂದು ಭರವಸೆ ನೀಡಿದರು.&lt;/p&gt;&lt;p&gt;ಮುಂದಿನ ಮೂರು ತಿಂಗಳಲ್ಲಿ ಸೊರಬ ಕ್ಷೇತ್ರದ ಪ್ರತಿ ಹಳ್ಳಿಗೂ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ ಅವರು, ಸಭೆಯಲ್ಲಿ ಪ್ರಸ್ತಾಪಿಸಿರುವ ಜನರ ಸಮಸ್ಯೆಗಳು ಅಷ್ಟರೊಳಗೆ ಬಗೆಹರಿದಿರಬೇಕು ಎಂದು ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಇನ್ನೊಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆ ಕಾಣಲಿದೆ. ಹಳ್ಳಿಗಳ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು ಎಂದರು. ರು.&lt;/p&gt;&lt;p&gt;ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಹೆಚ್. ಗಣಪತಿ, ಬಗರ್&zwnj;ಹುಕುಂ ತಾಲೂಕು ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ, ಕೆ.ಪಿ. ರುದ್ರಗೌಡ, ತಬಲಿ ಬಂಗಾರಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.&lt;/p&gt;&lt;h3&gt;&lt;strong&gt;ಕುಡಿದು ಶಾಲೆಗೆ ಬಂದ ಶಿಕ್ಷಕನ ಅಮಾನತಿಗೆ ಸೂಚನೆ&lt;/strong&gt;&lt;/h3&gt;&lt;p&gt;ತಾಲೂಕಿನ ಮಂಚಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ರಂಗಪ್ಪ ಅವರು ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದಾರೆ ಎಂಬ ದೂರು ಎಸ್&zwnj;ಡಿಎಂಸಿ ಅಧ್ಯಕ್ಷರಿಂದ ಸಚಿವರ ಗಮನಕ್ಕೆ ಬಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕೂಡಲೇ ಶಿಕ್ಷಕನನ್ನು ಅಮಾನತುಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಅವರಿಗೆ ಸೂಚಿಸಿದರು.&lt;/p&gt;]]></content:encoded>
            <category>shivamogga</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/soraba-400-crore-rupees-reaches-constituency-through-five-guarantee-schemes-says-madhu-bangarappa-kvn/articleshow-gfgrg46"/>
        </item>
        <item>
            <title><![CDATA[ಬಿಸಿಯೂಟ ಉಂಡ್ರೂ ಅಸ್ವಸ್ಥ, ಕಡಿಮೆ ಅಂಕ ಪಡೆದ್ರೂ ಅಮಾನವೀಯ ಥಳಿತ, ಸರ್ಕಾರಿ ಶಾಲೆ ಮಕ್ಕಳ ಪಾಡು ಯಾರಿಗೂ ಬೇಡ!]]></title>
            <link>https://kannada.asianetnews.com/education/guest-teacher-in-shivamogga-brutally-beats-three-children-for-scoring-low-marks/articleshow-h5ioh36</link>
            <guid isPermaLink="true">https://kannada.asianetnews.com/education/guest-teacher-in-shivamogga-brutally-beats-three-children-for-scoring-low-marks/articleshow-h5ioh36</guid>
            <pubDate>Fri, 04 Sep 2026 10:25:35 +0530</pubDate>
            <description><![CDATA[&lt;p&gt;ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ, ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆಂಬ ಕಾರಣಕ್ಕೆ ಅತಿಥಿ ಶಿಕ್ಷಕಿಯೊಬ್ಬರು ನಾಲ್ವರು ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ್ದಾರೆ. ಈ ಹಲ್ಲೆಯಿಂದ ಮಕ್ಕಳ ಬೆನ್ನ ಮೇಲೆ ಬಾಸುಂಡೆಗಳು ಮೂಡಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1nbpjshejnjkg4axz2v35et,imgname-shivamogga-teacher-beaten-up-students-1788497054513.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ(ಸೆ.4)&lt;/strong&gt;: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆಂಬ ಕ್ಷುಲ್ಲಕ ಕಾರಣಕ್ಕೆ ಅತಿಥಿ ಶಿಕ್ಷಕಿಯೊಬ್ಬರು ಪ್ರಾಥಮಿಕ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಪಂ ವ್ಯಾಪ್ತಿಯ ಕಿರುವಾಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.&lt;/p&gt;&lt;h2&gt;ಅತಿಥಿ ಶಿಕ್ಷಕಿಯ ಹೊಡೆತಕ್ಕೆ ವಿದ್ಯಾರ್ಥಿಗಳ ಬೆನ್ನಮೇಲೆ ಬಾಸುಂಡೆ!&lt;/h2&gt;&lt;p&gt;ಥಳಿತಕ್ಕೊಳಗಾದ ವಿದ್ಯಾರ್ಥಿಗಳು ಶಿಕ್ಷಕಿಯ ನಿರೀಕ್ಷೆಯಂತೆ ಪರೀಕ್ಷೆಯಲ್ಲಿ ಅಂಕ ಗಳಿಸಿಲ್ಲ ಎನ್ನಲಾಗಿದೆ. ಇದರಿಂದ ಕೋಪಗೊಂಡ ರಕ್ಷಿತಾ ಎಂಬ ಅತಿಥಿ ಶಿಕ್ಷಕಿ ಕೋಲಿನಿಂದ ಮಕ್ಕಳ ಬೆನ್ನಮೇಲೆ ಬಾಸುಂಡೆ ಬರುವಂತೆ ಹೊಡೆದ್ದಿದ್ದಾರೆ ಪೋಷಕರು ಆರೋಪಿಸಿದ್ದಾರೆ. ಎರಡು, ಮೂರು, ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳ ಬೆನ್ನಮೇಲೆ ರಕ್ತ ಬರುತ್ತಿದೆ, ಬೆನ್ನಮೇಲೆಲ್ಲ ಬಾಸುಂಡೆಗಳು ಮೂಡಿವೆ.&lt;/p&gt;&lt;h3&gt;ಶಾಲೆಯಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ&lt;/h3&gt;&lt;p&gt;ಶಾಲೆಯಲ್ಲಿ ಶಿಕ್ಷಕಿಯ ಹೊಡೆತದಿಂದ ನರಳಿರುವ ವಿದ್ಯಾರ್ಥಿಗಳು ಸಂಜೆ ಶಾಲೆ ಮುಗಿಸಿ ಮನೆಗೆ ಬಂದಾಗ ಯುನಿಫಾರ್ಮ್ ಬದಲಿಸುವ ವೇಳೆ ಮಕ್ಕಳ ಬೆನ್ನಮೇಲೆ ಬಾಸುಂಡೆ ಕಂಡು ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆ ಮಕ್ಕಳನ್ನ ವಿಚಾರಿಸಿದಾಗ ಶಾಲೆಯಲ್ಲಿ ನಡೆದ ಘಟನೆ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಗ್ರಾಮಸ್ಥರು ಆಕ್ರೋಶ&lt;/strong&gt;&lt;/p&gt;&lt;p&gt;ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿದ ಘಟನೆ ಗ್ರಾಮಸ್ಥರಿಗೆ ತಿಳಿದ ಬಳಿಕ ಶಾಲೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಶಿಕ್ಷಕಿ ಈ ರೀತಿ ಮಕ್ಕಳ ಮೇಲೆ ಅಮಾನವೀಯವಾಗಿ ಹೊಡೆಯುವುದು ಎಷ್ಟು ಸರಿ? ಮಕ್ಕಳು ಕಡಿಮೆ ಅಂಕ ತೆಗೆದುಕೊಂಡಿದ್ದರೆ ಅದಕ್ಕೆ ಯಾರು ಕಾರಣ? ಹಲ್ಲೆ ಮಾಡಿದ ಶಿಕ್ಷಕಿಯನ್ನ ಅಮಾನತು ಮಾಡಿ ಸೂಕ್ತ ಕ್ರಮ ಜರುಗಿಸುವಂತೆ ಪೋಷಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>shivamogga</category>
            <dc:creator>Ravi Janekal</dc:creator>
            <atom:link href="https://kannada.asianetnews.com/education/guest-teacher-in-shivamogga-brutally-beats-three-children-for-scoring-low-marks/articleshow-h5ioh36"/>
        </item>
        <item>
            <title><![CDATA[ಶಿವಮೊಗ್ಗ: ಅರಣ್ಯಾಧಿಕಾರಿಗಳ ದಾಳಿ, ರಿಪ್ಪನ್‌ಪೇಟೆಯಲ್ಲಿ 21 ಕೆ.ಜಿ. ಜಿಂಕೆ ಮಾಂಸ ಸೀಜ್‌; ಆರೋಪಿಗಳು ಎಸ್ಕೇಪ್]]></title>
            <link>https://kannada.asianetnews.com/karnataka-districts/shivamogga-21-kg-deer-meat-seized-in-forest-department-raid-two-suspects-escape-kvn/articleshow-ifz2xsf</link>
            <guid isPermaLink="true">https://kannada.asianetnews.com/karnataka-districts/shivamogga-21-kg-deer-meat-seized-in-forest-department-raid-two-suspects-escape-kvn/articleshow-ifz2xsf</guid>
            <pubDate>Sat, 05 Sep 2026 11:41:36 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್&zwnj;ಪೇಟೆಯಲ್ಲಿ ಅರಣ್ಯ ಸಂಚಾರಿ ದಳವು ಕಾರ್ಯಾಚರಣೆ ನಡೆಸಿ, ಎರ್ಟಿಗಾ ಕಾರಿನಲ್ಲಿದ್ದ 21 ಕೆ.ಜಿ. ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದೆ. ಈ ದಾಳಿಯ ವೇಳೆ, ಗುರುರಾಜ ಹಾಗೂ ಗಣೇಶ್ ಎಂಬ ಇಬ್ಬರು ಆರೋಪಿಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1r2nksy7za5chkxnwdvbmvy,imgname-untitled-design--41--1788588248894.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್&zwnj;ಪೇಟೆಯಲ್ಲಿ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳವು ದಿಢೀರ್ ದಾಳಿ ನಡೆಸಿ 21 ಕೆ.ಜಿ. ಜಿಂಕೆ ಮಾಂಸ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ವೇಳೆ ಜಿಂಕೆ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.&lt;/p&gt;&lt;h2&gt;&lt;strong&gt;ಖಚಿತ ಮಾಹಿತಿ ಮೇಲೆ ಅರಣ್ಯ ಸಂಚಾರಿ ದಳ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಹೌದು, ಕಾಡುಪ್ರಾಣಿ ಜಿಂಕೆಯನ್ನು ಅಕ್ರಮವಾಗಿ ಬೇಟೆಯಾಡಿ, ಆರೋಪಿಗಳಾದ ಇಲ್ಲಿನ ಬರುವೆ ಗ್ರಾಮದ ಗುರುರಾಜ ಹಾಗೂ ಕರಡಿಗ ಗ್ರಾಮದ ಗಣೇಶ್ ಎರ್ಟಿಗಾ ಕಾರಿನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಾಗರ ಅರಣ್ಯ ಸಂಚಾರಿ ದಳದ ಪಿಎಸ್&zwnj;ಐ ಕೆ. ವಿನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಹೊಸನಗರ ತಾಲೂಕಿನ ರಿಪ್ಪನ್&zwnj;ಪೇಟೆ ಸಮೀಪದ ಬರುವೆ ಮುಖ್ಯರಸ್ತೆಯಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಎರ್ಟಿಗಾ ಕಾರು ಹಾಗೂ 21 ಕೆ.ಜಿ. ಜಿಂಕೆ ಮಾಂಸವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಆರೋಪಿಗಳಿಬ್ಬರು ಎಸ್ಕೇಪ್:&lt;/strong&gt;&lt;/h3&gt;&lt;p&gt;ಸಂಚಾರಿ ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಆರೋಪಿಗಳಾದ ಗುರುರಾಜ್ ಹಾಗೂ ಹೊಸನಗರ ತಾಲೂಕು ಮಾನವ ಹಕ್ಕು ಆಯೋಗದ ಅಧ್ಯಕ್ಷ ಎನ್ನಲಾದ ಕರಡಿಗ ನಿವಾಸಿ ಗಣೇಶ್ ಕೆ.ಜಿ. ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅನ್ವಯ ಆರೋಪಿಗಳ ವಿರುದ್ದ ಪ್ರಕರಣ&zwnj; ದಾಖಲಿಸಲಾಗಿದೆ. ಇದೀಗ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಅರಣ್ಯ ಸಂಚಾರಿ ದಳ ವ್ಯಾಪಕ ಬಲೆ ಬೀಸಿದೆ.&lt;/p&gt;&lt;p&gt;ಈ ಕಾರ್ಯಚರಣೆ ವೇಳೆಯಲ್ಲಿ ಸಾಗರ ಅರಣ್ಯ ಸಂಚಾರಿ ದಳದ ಪಿಎಸ್&zwnj;ಐ ಕೆ. ವಿನಾಯಕ ಜತೆಗೆ ಸಿಬ್ಬಂದಿಗಳಾದ ಅರಣ್ಯ ಸಂಚಾರಿ ದಳದ ಗಣೇಶ್ ಬಿ.ಸಿ. ಚಂದ್ರಕಾಂತ್, ಆಂಜನೇಯ ಪಾಟೀಲ್, ಸುರೇಶ್, ಪ್ರಮೋದಿನಿ ಮತ್ತು ಎಚ್.ಬಿ. ದೊಡ್ಡಮನಿ ಭಾಗವಹಿಸಿದ್ದರು.&lt;/p&gt;]]></content:encoded>
            <category>shivamogga</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/shivamogga-21-kg-deer-meat-seized-in-forest-department-raid-two-suspects-escape-kvn/articleshow-ifz2xsf"/>
        </item>
        <item>
            <title><![CDATA[Shivamogga: ದುರ್ಯೋಧನನ ರೀತಿ ಸರೋವರದಲ್ಲಿ ಅಡಗಿಕೊಳ್ಳಲು ಯತ್ನಿಸಿದ ಕ್ರಿಮಿನಲ್‌ನನ್ನು ಬಂಧಿಸಿದ ಭದ್ರಾವತಿ ಪೊಲೀಸ್‌]]></title>
            <link>https://kannada.asianetnews.com/karnataka-districts/shivamogga-bhadravathi-criminal-dileep-kariya-pond-hideout-police-arrest-san/articleshow-ludb22v</link>
            <guid isPermaLink="true">https://kannada.asianetnews.com/karnataka-districts/shivamogga-bhadravathi-criminal-dileep-kariya-pond-hideout-police-arrest-san/articleshow-ludb22v</guid>
            <pubDate>Sat, 05 Sep 2026 08:31:37 +0530</pubDate>
            <description><![CDATA[16 ಪ್ರಕರಣಗಳಲ್ಲಿ ಬೇಕಾಗಿದ್ದ ಭದ್ರಾವತಿಯ ರೌಡಿಶೀಟರ್ ದಿಲೀಪ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದ. ಮಹಾಭಾರತದ ದುರ್ಯೋಧನನಂತೆ ಕೆರೆಯಲ್ಲಿ ಅಡಗಿಕೊಳ್ಳಲು ಯತ್ನಿಸಿದ ಆತನನ್ನು, ಪೊಲೀಸರು ಸಾಹಸಿಕವಾಗಿ ಕೆರೆಗೆ ಜಿಗಿದು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1qr52m1m67x1pf6ce8ce7vc,imgname-bhadravati-police-pond-arrest-1788577221249.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.5): &lt;/strong&gt;ಮಹಾಭಾರತ ಯುದ್ಧದ ಕೊನೆಯ ಹಾಗೂ 18ನೇ ದಿನದಂದು ತನ್ನ ಸೈನ್ಯವೆಲ್ಲಾ ನಾಶವಾದ ಬಳಿಕ ಭೀಮನಿಂದ ತಪ್ಪಿಸಿಕೊಳ್ಳಲು ದುರ್ಯೋಧನ ದ್ವೈಪಾಯನ ಅಥವಾ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತುಕೊಳ್ಳುವ ಪೌರಾಣಿಕ ವಿಚಾರ ನೆನಪಿರಬೇಕಲ್ಲ. ಈಗ ರಾಜ್ಯದಲ್ಲಿ ಪೊಲೀಸರಿಂದ ತಪ್ಪಿಕೊಳ್ಳುವ ಸಲುವಾಗಿ 16 ಕೇಸ್&zwnj;ಗಳಲ್ಲಿ ಬೇಕಾಗಿದ್ದ ಕ್ರಿಮಿನಲ್&zwnj;ವೊಬ್ಬ ಕೆರೆಯಲ್ಲಿ ಅಡಗಿ ಕುಳಿತುಕೊಳ್ಳಲು ಯತ್ನಿಸಿದ್ದ. ಈಗ ಆತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.&lt;/p&gt;&lt;p&gt;ದೀರ್ಘಕಾಲದಿಂದ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಶೀಟರ್&zwnj; ಒಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿಕೊಳ್ಳಲು ಯತ್ನಿಸಿದ್ದ. ಕೊನೆಗೆ ಆತನನ್ನು ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಹಾಕಲು ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಭದ್ರಾವತಿಯ ನಿವಾಸಿ ದಿಲೀಪ್ ಅಲಿಯಾಸ್ ಕರಿಯಾ (19) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕೋರ್ಟ್ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುತ್ತಿದ್ದರೂ, ಈತ ದೀರ್ಘಕಾಲದಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ಪರಾರಿಯಾಗುತ್ತಿದ್ದ.&lt;/p&gt;&lt;p&gt;ಆರೋಪಿ ದಿಲೀಪ್ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈತನ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ (NBW) ಹೊರಡಿಸಿತ್ತು. ಪ್ರತಿ ಬಾರಿಯೂ ಕೋರ್ಟ್&zwnj;ಗೆ ಗೈರುಹಾಜರಾಗುತ್ತಿದ್ದ ಈತ ಪೊಲೀಸರಿಗೆ ಸಿಗದಂತೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಪ್ರಸ್ತುತ ಈತನ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು 16 ಅಪರಾಧ ಪ್ರಕರಣಗಳು ದಾಖಲಾಗಿವೆ.&lt;/p&gt;&lt;h2&gt;&lt;strong&gt;ಕೆರೆಗೆ ಜಿಗಿದ ಪೊಲೀಸರು&lt;/strong&gt;&lt;/h2&gt;&lt;p&gt;ಆರೋಪಿ ದಿಲೀಪ್ ಇರುವ ಜಾಗದ ಕುರಿತು ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಭದ್ರಾವತಿ ನ್ಯೂ ಟೌನ್ ಪೊಲೀಸರು ಆತನನ್ನು ಬಂಧಿಸಲು ಬಲೆ ಬೀಸಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ತನ್ನನ್ನು ಸುತ್ತವರಿಯುತ್ತಿದ್ದಂತೆ ಆತ ಬಂಧನದಿಂದ ತಪ್ಪಿಸಿಕೊಳ್ಳಲು ಸಮೀಪದ ಕೆರೆಯೊಳಗೆ ಜಿಗಿದು ಅಡಗಿಕೊಳ್ಳಲು ಯತ್ನಿಸಿದ. ಆದರೆ, ಆರೋಪಿಯ ತಂತ್ರಕ್ಕೆ ಬಗ್ಗದ ಪಿಎಸ್&zwnj;ಐ ರಮೇಶ್ ಹಾಗೂ ಪೊಲೀಸ್ ಸಿಬ್ಬಂದಿ ಪ್ರಸನ್ನ ಅವರು ತಕ್ಷಣವೇ ಕೆರೆಯ ನೀರಿಗೆ ಜಿಗಿದು ಸಾಹಸಿಕವಾಗಿ ಆತನನ್ನು ಹಿಡಿದು ಬಂದಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>shivamogga</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/shivamogga-bhadravathi-criminal-dileep-kariya-pond-hideout-police-arrest-san/articleshow-ludb22v"/>
        </item>
        <item>
            <title><![CDATA[King Cobra: ವೈರಲ್ ಆಗಲಿ ಅಂತ ಕಾಳಿಂಗ ಸರ್ಪದ ಜೊತೆ ಫೋಸ್‌; ಈಗ ಅರಣ್ಯ ಇಲಾಖೆಯಿಂದ ಶಾಕ್‌]]></title>
            <link>https://kannada.asianetnews.com/karnataka-districts/man-capturing-king-cobra-posting-images-online-chargesheet-filed-against-him-suh/articleshow-lwn9qwm</link>
            <guid isPermaLink="true">https://kannada.asianetnews.com/karnataka-districts/man-capturing-king-cobra-posting-images-online-chargesheet-filed-against-him-suh/articleshow-lwn9qwm</guid>
            <pubDate>Mon, 14 Sep 2026 13:58:55 +0530</pubDate>
            <description><![CDATA[&lt;p&gt;ಕಾಳಿಂಗ ಸರ್ಪವನ್ನು ವಾಣಿಜ್ಯ ಲಾಭ ಹಾಗೂ ಸಾಮಾಜಿಕ ಜಾಲತಾಣದ ಜನಪ್ರಿಯತೆಗಾಗಿ ಬಳಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್&zwnj;ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2fgearvmhx43ccr0chs4vsb,imgname-man-capturing-king-cobra-posting-images-online-chargesheet-filed-against-him-1789374442267.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಳಿಂಗ ಸರ್ಪವನ್ನು ವಾಣಿಜ್ಯ ಲಾಭ ಹಾಗೂ ಸಾಮಾಜಿಕ ಜಾಲತಾಣದ ಜನಪ್ರಿಯತೆಗಾಗಿ ಬಳಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ತನಿಖೆ ಆರಂಭಿಸಿ ಸುಮಾರು ಒಂದು ವರ್ಷದ ಬಳಿಕ ಕಲಿಂಗ ಸೆಂಟರ್ ಫಾರ್ ರೈನ್&zwnj;ಫಾರೆಸ್ಟ್ ಎಕಾಲಜಿ (KCRE)ಗೆ ಸೇರಿದ ಪಿ. ಗೌರಿಶಂಕರ್ (50) ವಿರುದ್ಧ ಅರಣ್ಯ ಇಲಾಖೆ ಚಾರ್ಜ್&zwnj;ಶೀಟ್ ಸಲ್ಲಿಸಿದೆ. ತೀರ್ಥಹಳ್ಳಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್&zwnj;ಸಿ ನ್ಯಾಯಾಲಯಕ್ಕೆ ಆಗುಂಬೆ ವಲಯ ಅರಣ್ಯಾಧಿಕಾರಿ ಚಾರ್ಜ್&zwnj;ಶೀಟ್ ಸಲ್ಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್&zwnj;ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;h2&gt;ಅನುಮತಿ ಇಲ್ಲದೆ ವನ್ಯಜೀವಿ ಸೆರೆ?&lt;/h2&gt;&lt;p&gt;ತನಿಖೆಯ ವೇಳೆ ಗೌರಿಶಂಕರ್ ಅವರು ಅನುಮತಿ ಇಲ್ಲದೆ ವನ್ಯಜೀವಿಯನ್ನು ಹಿಡಿದಿರುವುದು ಹಾಗೂ ನಂತರ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್&zwnj;ಲೋಡ್ ಮಾಡಿರುವುದು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಚಾರ್ಜ್&zwnj;ಶೀಟ್&zwnj;ನಲ್ಲಿ ತಿಳಿಸಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸೂರು, ಗುಡ್ಡೆಕೇರಿ ಪೋಸ್ಟ್&zwnj;ನ ಕಾಳಿಂಗಮನೆಯಲ್ಲಿರುವ KCRE ಕೇಂದ್ರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. ಹಾವುಗಳನ್ನು ಹಿಡಿಯಲು ಬಳಸಲಾಗುತ್ತದೆ ಎನ್ನಲಾದ ವಿವಿಧ ಉಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಸ್ಥಳದ ಮಹಜರ್ ಕೂಡ ನಡೆಸಲಾಗಿದೆ.&lt;/p&gt;&lt;h2&gt;ಕಾಳಿಂಗ ಸರ್ಪವನ್ನು ಹಿಡಿದು ಫೋಟೋ, ವಿಡಿಯೋ?&lt;/h2&gt;&lt;p&gt;ತನಿಖೆಯಲ್ಲಿ ವನ್ಯಜೀವಿಯನ್ನು ಹಿಡಿಯುವುದು, ಮುಟ್ಟುವುದು ಹಾಗೂ ಅಂತಹ ಸಂದರ್ಭಗಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಬೆಳಕಿಗೆ ಬಂದಿದೆ ಎಂದು ಅರಣ್ಯ ಇಲಾಖೆ ಹೇಳಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 2(1)(16), 9, 50, 51, 55 ಮತ್ತು 57ರ ಉಲ್ಲಂಘನೆಯಾಗಿದ್ದು, ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ ಎಂದು ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;&lsquo;ಕಾಳಿಂಗ ಸರ್ಪ ಸಂರಕ್ಷಣೆ&rsquo; ಹೆಸರಿನಲ್ಲಿ ವಾಣಿಜ್ಯ ಬಳಕೆ ಆರೋಪ&lt;/h2&gt;&lt;p&gt;KCRE ವಿರುದ್ಧದ ಪ್ರಕರಣಕ್ಕೆ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಕೂವೆ ನೀಡಿದ ದೂರು ಪ್ರಮುಖ ಕಾರಣವಾಗಿದೆ. ಕಾಳಿಂಗ ಸರ್ಪ ಸಂರಕ್ಷಣೆಯ ಹೆಸರಿನಲ್ಲಿ ಹಾವುಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದರು. ಹಾವುಗಳನ್ನು ಸಂರಕ್ಷಣೆಗಾಗಿ ಹಿಡಿಯಲಾಗುತ್ತಿಲ್ಲ, ಬದಲಾಗಿ ವಿಡಿಯೋ ಶೂಟ್&zwnj;ಗಳಿಗಾಗಿ ಸೆರೆಹಿಡಿಯಲಾಗುತ್ತಿದೆ ಎಂದು ಆರೋಪಿಸಿ ನಾಗರಾಜ್ ಕೂವೆ ಅವರು ವಿವರವಾದ ದೂರುಗಳೊಂದಿಗೆ ಸಾಕ್ಷ್ಯಗಳನ್ನೂ ಅರಣ್ಯ ಇಲಾಖೆಗೆ ಸಲ್ಲಿಸಿದ್ದರು.&lt;/p&gt;&lt;h2&gt;ಆರೋಪದ ಬಗ್ಗೆ ಗೌರಿಶಂಕರ್ ಹೇಳಿದ್ದೇನು?&lt;/h2&gt;&lt;p&gt;ಚಾರ್ಜ್&zwnj;ಶೀಟ್&zwnj;ನಲ್ಲಿ ಗೌರಿಶಂಕರ್ ಅವರ ಹೇಳಿಕೆಯನ್ನೂ ದಾಖಲಿಸಲಾಗಿದೆ. ತಮ್ಮ ಕೃಷಿ ಜಮೀನು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಆಹಾರ ಮತ್ತು ನೀರಿಗಾಗಿ ಕಾಡುಪ್ರಾಣಿಗಳು ತಮ್ಮ ಜಮೀನಿಗೆ ಬರುತ್ತವೆ ಎಂದು ಅವರು ಹೇಳಿರುವುದಾಗಿ ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಒಂದು ದಿನ ಕಾಳಿಂಗ ಸರ್ಪವೂ ಜಮೀನಿಗೆ ಬಂದಿತ್ತು. ಕೆಲಸಗಾರರು ಮಾಹಿತಿ ನೀಡಿದ ಬಳಿಕ ತಾವು ಹಾವನ್ನು ಹಿಡಿದು ಮತ್ತೆ ಅರಣ್ಯಕ್ಕೆ ಬಿಟ್ಟಿದ್ದಾಗಿ ಗೌರಿಶಂಕರ್ ಹೇಳಿಕೆ ನೀಡಿದ್ದಾರೆ. ಹಾವನ್ನು ಕೆಲಸಗಾರರು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್&zwnj;ಲೋಡ್ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;ಕಾಳಿಂಗ ಸರ್ಪ ಏಕೆ ವಿಶೇಷ?&lt;/h2&gt;&lt;p&gt;ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಕಾಳಿಂಗ ಸರ್ಪವನ್ನು ಶೆಡ್ಯೂಲ್-1 ವನ್ಯಜೀವಿ ಎಂದು ಪರಿಗಣಿಸಲಾಗುತ್ತದೆ. ಪಶ್ಚಿಮ ಘಟ್ಟದ ಜನರಲ್ಲಿ ಈ ಹಾವಿಗೆ ವಿಶೇಷ ಗೌರವವೂ ಇದೆ. ಆದರೆ, ಕಾಳಿಂಗ ಸರ್ಪ ಸಾಮಾನ್ಯವಾಗಿ ಮನುಷ್ಯರೊಂದಿಗೆ ಸಂಘರ್ಷಕ್ಕೆ ಬರುವ ಸಾಧ್ಯತೆ ಕಡಿಮೆ. ಹೀಗಾಗಿ ಇದರ ಸಂರಕ್ಷಣೆಗೆ ಸಂಬಂಧಿಸಿದ ಹಲವು ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ ಎಂದು ಕಾರ್ಯಕರ್ತರು ಹೇಳಿದ್ದಾರೆ. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಹೆಚ್ಚಿನ ಹಾವು ಕಡಿತ ಮತ್ತು ಸಾವುಗಳಿಗೆ ಕಾರಣವಾಗುವ &lsquo;ಬಿಗ್ ಫೋರ್&rsquo; ಹಾವುಗಳಾದ ಭಾರತೀಯ ನಾಗರಹಾವು, ಸಾಮಾನ್ಯ ಕಟ್ಟೆಹಾವು, ರಸೆಲ್ಸ್ ವೈಪರ್ ಮತ್ತು ಸಾ-ಸ್ಕೇಲ್ಡ್ ವೈಪರ್&zwnj;ಗಳಿಗೆ ಹೆಚ್ಚಿನ ಗಮನ ಅಗತ್ಯವಿದೆ ಎಂಬ ಅಭಿಪ್ರಾಯವೂ ಇದೆ.&lt;/p&gt;&lt;h2&gt;ಇನ್ನೊಂದು ಆರೋಪದ ಬಗ್ಗೆ ತನಿಖೆ ಬಾಕಿ&lt;/h2&gt;&lt;p&gt;ಈ ಪ್ರಕರಣದಲ್ಲಿ ಪರಿಸರ ಸೂಕ್ಷ್ಮ ವಲಯ (ESZ) ನಿಯಮಗಳ ಉಲ್ಲಂಘನೆಯ ಬಗ್ಗೆಯೂ ತನಿಖೆ ನಡೆಯಬೇಕು ಎಂದು ನಾಗರಾಜ್ ಕೂವೆ ಒತ್ತಾಯಿಸಿದ್ದಾರೆ. ಈ ಸಂಬಂಧ ESZ ಮೇಲ್ವಿಚಾರಣಾ ಸಮಿತಿಗೂ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ. 2025ರ ಸೆಪ್ಟೆಂಬರ್&zwnj;ನಲ್ಲಿ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ್ದ ವರದಿಯಲ್ಲಿಯೂ KCRE ಸಂಸ್ಥೆ ESZ ನಿಯಮಗಳನ್ನು ಉಲ್ಲಂಘಿಸಿದೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿತ್ತು ಎಂದು ವರದಿಯಾಗಿದೆ. ಈ ವಿಚಾರದ ಬಗ್ಗೆ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಉಸ್ತುವಾರಿ DCF ಆಗಿರುವ ರುಥ್ರೇನ್ ಪಿ. ಅವರು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.ಮೇಲ್ವಿಚಾರಣಾ ಸಮಿತಿಯ ಮುಂದೆ ಸಲ್ಲಿಸಲಾಗಿರುವ ದೂರನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಕಾಳಿಂಗ ಸರ್ಪದ ಸಂರಕ್ಷಣೆ, ಸಾಮಾಜಿಕ ಜಾಲತಾಣದ ಜನಪ್ರಿಯತೆ ಹಾಗೂ ವಾಣಿಜ್ಯ ಬಳಕೆಯ ಆರೋಪಗಳ ನಡುವಿನ ಈ ಪ್ರಕರಣ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>shivamogga</category>
            <dc:creator>Sushma Hegde</dc:creator>
            <atom:link href="https://kannada.asianetnews.com/karnataka-districts/man-capturing-king-cobra-posting-images-online-chargesheet-filed-against-him-suh/articleshow-lwn9qwm"/>
        </item>
        <item>
            <title><![CDATA[ನಿಂತಲ್ಲೇ ನಿಂತ ತಾಳಗುಪ್ಪ ಎಕ್ಸ್‌ಪ್ರೆಸ್‌: ಬೆಂಗಳೂರಿಗೆ ಬರುತ್ತಿರೋ ಪ್ರಯಾಣಿಕರು ಹೈರಾಣು]]></title>
            <link>https://kannada.asianetnews.com/gallery/karnataka-districts/indian-railways-express-train-20652-bound-for-talaguppa-bengaluru-has-been-halted-at-anandapura-station-for-2-hours-mrq-qyhw1md</link>
            <guid isPermaLink="true">https://kannada.asianetnews.com/gallery/karnataka-districts/indian-railways-express-train-20652-bound-for-talaguppa-bengaluru-has-been-halted-at-anandapura-station-for-2-hours-mrq-qyhw1md</guid>
            <pubDate>Tue, 15 Sep 2026 08:13:21 +0530</pubDate>
            <description><![CDATA[ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್&zwnj;ಪ್ರೆಸ್ ರೈಲು (20652) ಆನೆಯೊಂದು ಮರವನ್ನು ಉರುಳಿಸಿದ್ದರಿಂದ ಆನಂದಪುರ ನಿಲ್ದಾಣದಲ್ಲಿ ನಿಂತಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ರೈಲು ಸಂಚಾರದಲ್ಲಿ ಹಲವು ಗಂಟೆಗಳ ವಿಳಂಬ ಉಂಟಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2hesm63s5rmdc2dcav24c68,imgname-bengaluru-talaguppa--1--1789439824066.jpg" type="image/jpeg" height="390" width="690"/>
            <content:encoded><![CDATA[ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್&zwnj;ಪ್ರೆಸ್ ರೈಲು (20652) ಆನೆಯೊಂದು ಮರವನ್ನು ಉರುಳಿಸಿದ್ದರಿಂದ ಆನಂದಪುರ ನಿಲ್ದಾಣದಲ್ಲಿ ನಿಂತಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ರೈಲು ಸಂಚಾರದಲ್ಲಿ ಹಲವು ಗಂಟೆಗಳ ವಿಳಂಬ ಉಂಟಾಗಿದೆ.&lt;img&gt;&lt;p&gt;ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿರುವ ಎಕ್ಸ್&zwnj;ಪ್ರೆಸ್ ರೈಲು (20652) ಕಳೆದ 30 ನಿಮಿಷಗಳಿಂದ ಆನಂದಪುರ ನಿಲ್ದಾಣದಲ್ಲಿಯೇ ನಿಂತುಕೊಂಡಿದೆ. ಮುಂದಿನ ಎರಡರಿಂದ ಮೂರು ಗಂಟೆ ರೈಲು ಆನಂದಪುರ ನಿಲ್ದಾಣದಲ್ಲಿಯೇ ನಿಲ್ಲಲಿದೆ ಎಂದು ತಿಳಿದು ಬಂದಿದೆ. (AI ರಚಿತ ಚಿತ್ರ)&lt;/p&gt;&lt;img&gt;&lt;p&gt;ಆನೆಯೊಂದು ಮರವೊಂದನ್ನು ಬೀಳಿಸಿದ್ದು, ಅದು ರೈಲು ಹಳಿಗಳ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ. ಮರ ತೆರವುಗೊಳಿಸಲು ರೈಲು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಇದಕ್ಕೆ ಎರಡರಿಂದ ಮೂರು ಗಂಟೆ ಸಮಯ ಬೇಕಾಗಬಹುದು ಎಂದು ರೈಲಿನಲ್ಲಿರುವ ಪೊಲೀಸರು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಮರ ತೆರವುಗೊಳಿಸಿದ ಬಳಿಕ ಅಧಿಕಾರಿಗಳು ರೈಲು ಹಳಿಗಳನ್ನು ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ರೈಲು ಹಳಿಗೆ ಡ್ಯಾಮೇಜ್ ಆಗಿದ್ರೆ ಸಂಚಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ರೈಲ್ವೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. (AI ರಚಿತ ಚಿತ್ರ)&lt;/p&gt;&lt;img&gt;&lt;p&gt;ಇಂದು ಬೆಳಗ್ಗೆ ತಾಳಗುಪ್ಪ-ಬೆಂಗಳೂರು ಎಕ್ಸ್&zwnj;ಪ್ರೆಸ್ ರೈಲು ಸಂಖ್ಯೆ 20652 ಎಂದಿನಂತೆ ಬೆಳಗ್ಗೆ 5.20ಕ್ಕೆ ತನ್ನ ಪ್ರಯಾಣ ಆರಂಭಿಸಿತ್ತು. ಯಾವುದೇ ಅಡಚನೆ ಇಲ್ಲದಿದ್ದರೆ ರೈಲು ಇಂದು ಮಧ್ಯಾಹ್ನ 12 ಗಂಟೆಗೆ ತಲುಪಬೇಕಿತ್ತು. ಬೆಳಗ್ಗೆ 8 ಗಂಟೆಯಾದ್ರೂ ರೈಲು ಆನಂದಪುರದಲ್ಲಿಯೇ ನಿಂತಿದೆ. (AI ರಚಿತ ಚಿತ್ರ)&lt;/p&gt;&lt;img&gt;&lt;p&gt;ಮಾರ್ಗದಲ್ಲಿ ಅಡಚನೆಯುಂಟಾಗಿದ್ದರಿಂದ ರೈಲು ವಿಳಂಬವಾಗುವ ಮಾಹಿತಿಯನ್ನು ನಿಲ್ದಾಣಗಳಲ್ಲಿ ನೀಡಲಾಗುತ್ತಿದೆ. ಗೌರಿ ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ ಹಿಂದಿರುಗಿ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರು ಆನಂದಪುರ ರೈಲು ನಿಲ್ದಾಣದಲ್ಲಿಯೇ ಸಿಲುಕಿದ್ದಾರೆ. (AI ರಚಿತ ಚಿತ್ರ)&lt;/p&gt;]]></content:encoded>
            <category>shivamogga</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/indian-railways-express-train-20652-bound-for-talaguppa-bengaluru-has-been-halted-at-anandapura-station-for-2-hours-mrq-qyhw1md"/>
        </item>
        <item>
            <title><![CDATA[ಶಿವಮೊಗ್ಗ: ಕನ್ನಡ ಶಾಲೆಗಳಿಗೆ ಅನುದಾನ ಕೇಳಿ ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ!]]></title>
            <link>https://kannada.asianetnews.com/education/shivamogga-teacher-blood-letter-to-education-minister-madhu-bangarappa-rav/articleshow-rgcgcgy</link>
            <guid isPermaLink="true">https://kannada.asianetnews.com/education/shivamogga-teacher-blood-letter-to-education-minister-madhu-bangarappa-rav/articleshow-rgcgcgy</guid>
            <pubDate>Wed, 09 Sep 2026 08:06:02 +0530</pubDate>
            <description><![CDATA[1995ರ ನಂತರದ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕ ಪ್ರಶಾಂತ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಬೇಡಿಕೆ ಈಡೇರದಿದ್ದರೆ, ನವೆಂಬರ್ 1 ರಂದು ಇತರ ಶಿಕ್ಷಕರೂ ರಕ್ತದಲ್ಲಿ ಪತ್ರ ಬರೆಯುವುದಾಗಿ ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22061snd8tx33e8vr7dwq6q,imgname-shivamogga-teaher-blood-letter-1788921186101.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಸೆ.9):&lt;/strong&gt; 1995ರ ನಂತರದ ಸರ್ಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.&lt;/p&gt;&lt;h2&gt;ಕನ್ನಡ ಶಾಲೆಗಳಿಗೆ ಅನುದಾನ ಇಲ್ಲ, ರಕ್ತದಲ್ಲಿ ಪತ್ರ ಬರೆದು ಶಿಕ್ಷಕ ಮನವಿ!&lt;/h2&gt;&lt;p&gt;ಶಿಕಾರಿಪುರದ ಕನ್ನಡ ಮಾಧ್ಯಮ ಶಾಲೆ ಶಿಕ್ಷಕ ಪ್ರಶಾಂತ್ ಅವರು ಸಿರೆಂಜ್ ಮೂಲಕ ತಮ್ಮ ರಕ್ತವನ್ನು ಹೊರತೆಗೆದು ಪತ್ರ ಬರೆದಿದ್ದಾರೆ. ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರಿಂದ ಬೆಂಗಳೂರಿನಲ್ಲಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆ ಸಂದರ್ಭ ಕನ್ನಡ ಶಾಲೆಗಳಿಗೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h3&gt;ಶಿಕ್ಷಕರು ಎಚ್ಚರಿಕೆ&lt;/h3&gt;&lt;p&gt;ಮೊದಲು ತಾನು ಸ್ವತಃ ತನ್ನ ರಕ್ತದಿಂದ ಪತ್ರ ಬರೆಯುತ್ತಿರುವುದಾಗಿ ತಿಳಿಸಿರುವ ಶಿಕ್ಷಕ ಪ್ರಶಾಂತ್, ಬೇಡಿಕೆ ಈಡೇರದಿದ್ದರೆ ನವೆಂಬರ್ 1ರಂದು ಕನ್ನಡ ಶಾಲೆಗಳ ಉಳಿದ ಶಿಕ್ಷಕರು ಸಹ ತಮ್ಮ ರಕ್ತದಿಂದಲೇ ಪತ್ರ ಬರೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;----&lt;/p&gt;&lt;p&gt;ನನ್ನ ರಕ್ತದಲ್ಲೇ ಕನ್ನಡವಿದೆ ಎಂದು ಸಚಿವ ಮಧು ಬಂಗಾರಪ್ಪ ಈ ಹಿಂದೆ ಹೇಳಿದ್ದರು. ಇದೇ ಕಾರಣಕ್ಕೆ ಅವರಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇನೆ. ಸದ್ಯದ ಸ್ಥಿತಿಯಲ್ಲಿ ಅನುದಾನವಿಲ್ಲದೆ ಕನ್ನಡ ಶಾಲೆಗಳಿಗೆ ರಕ್ತವೆ ಇಲ್ಲದಂತಾಗಿದೆ.&lt;/p&gt;&lt;p&gt;&lt;strong&gt;-ಪ್ರಶಾಂತ್, ಕನ್ನಡ ಮಾಧ್ಯಮ ಶಾಲೆ ಶಿಕ್ಷಕ, ಶಿಕಾರಿಪುರ.&lt;/strong&gt;&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/shivamogga-teacher-blood-letter-to-education-minister-madhu-bangarappa-rav/articleshow-rgcgcgy"/>
        </item>
        <item>
            <title><![CDATA[ನ್ಯಾಯದ ಜೊತೆಗೆ ಸಾಮಾಜಿಕ ಕಳಕಳಿ:  ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಬೆಳಕಾದ ನ್ಯಾಯಾಧೀಶರು]]></title>
            <link>https://kannada.asianetnews.com/gallery/education/hosanagara-jmfc-judge-brings-a-student-who-had-dropped-out-of-school-back-classroom-vfukkul</link>
            <guid isPermaLink="true">https://kannada.asianetnews.com/gallery/education/hosanagara-jmfc-judge-brings-a-student-who-had-dropped-out-of-school-back-classroom-vfukkul</guid>
            <pubDate>Wed, 02 Sep 2026 10:31:04 +0530</pubDate>
            <description><![CDATA[&lt;p&gt;ಆರ್ಥಿಕ, ಕೌಟುಂಬಿಕ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿದಿದ್ದ ವಿದ್ಯಾರ್ಥಿನಿ. ಈ ವಿಚಾರ ತಿಳಿದು ಖುದ್ದು ನ್ಯಾಯಾಧೀಶರೇ ವಿದ್ಯಾರ್ಥಿನಿ ಮನೆಗೆ ತೆರಳಿ ಕುಟುಂಬಸ್ಥರನ್ನ ಭೇಟಿ ಮಾಡಿ ಶಿಕ್ಷಣ ಮಹತ್ವ ತಿಳಿಸಿ ವಿದ್ಯಾರ್ಥಿನಿಯನ್ನ ಮರಳಿ ಶಾಲೆಗೆ ಕರೆತಂದ ನ್ಯಾಯಾಧೀಶರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1g7v1g6ndm80d4aett2dnsr,imgname-hosanagar-jmfc-judge-1788325234182.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರ್ಥಿಕ, ಕೌಟುಂಬಿಕ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿದಿದ್ದ ವಿದ್ಯಾರ್ಥಿನಿ. ಈ ವಿಚಾರ ತಿಳಿದು ಖುದ್ದು ನ್ಯಾಯಾಧೀಶರೇ ವಿದ್ಯಾರ್ಥಿನಿ ಮನೆಗೆ ತೆರಳಿ ಕುಟುಂಬಸ್ಥರನ್ನ ಭೇಟಿ ಮಾಡಿ ಶಿಕ್ಷಣ ಮಹತ್ವ ತಿಳಿಸಿ ವಿದ್ಯಾರ್ಥಿನಿಯನ್ನ ಮರಳಿ ಶಾಲೆಗೆ ಕರೆತಂದ ನ್ಯಾಯಾಧೀಶರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಶಿಕ್ಷಣವೆಂದರೆ ಕೇವಲ ಅಕ್ಷರಾಭ್ಯಾಸವಲ್ಲ, ಅದು ಅಂಧಕಾರವನ್ನು ಹೋಗಲಾಡಿಸಿ ಬದುಕನ್ನು ಬೆಳಗುವ ದಿವ್ಯ ಜ್ಯೋತಿ. ಈ ಜ್ಯೋತಿಯಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಮಹದಾಸೆ ಯೊಂದಿಗೆ, ನ್ಯಾಯದಾನ ಮಾಡುವ ಕೈಗಳೇ ಇದೀಗ ಓರ್ವ ವಿದ್ಯಾರ್ಥಿನಿಯ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸಿದ ಅಪರೂಪದ ಹಾಗೂ ಅತ್ಯಂತ ಪ್ರೇರಣಾದಾಯಕ ಘಟನೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಸಾಕ್ಷಿಯಾಗಿದೆ.​&lt;/p&gt;&lt;img&gt;&lt;p&gt;ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಹೊರಗುಳಿದಿದ್ದಳು. ಹಲವು ಅಧಿಕಾರಿಗಳು ಮಗುವನ್ನು ಮರಳಿ ಶಾಲೆಗೆ ಕರೆತರಲು ಅನೇಕ ಬಾರಿ ಪ್ರಯತ್ನಿಸಿದರೂ ಸಫಲರಾಗಿರಲಿಲ್ಲ. ಮಗುವಿನ ಉಜ್ವಲ ಭವಿಷ್ಯ ಕಮರಿಹೋಗುವ ಆತಂಕ ಎದುರಾಗಿತ್ತು.​ ಆದರೆ, ಮಸಗಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೊಸನಗರ ಜೆ.ಎಂ.ಎಫ್.ಸಿ(JMFC) ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಮಾರುತಿ ಶಿಂಧೆ ಅವರ ಗಮನಕ್ಕೆ ಹೊಸನಗರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಾಯತ್ರಿ ಕೆ. ಜಿ ಈ ವಿಚಾರವನ್ನು ತಂದರು.&lt;/p&gt;&lt;img&gt;&lt;p&gt;ವಿಷಯ ತಿಳಿದ ತಕ್ಷಣವೇ ಸ್ಪಂದಿಸಿದ ನ್ಯಾಯಾಧೀಶರು, ಕೇವಲ ಆದೇಶ ನೀಡಿ ಸುಮ್ಮನಾಗಲಿಲ್ಲ ಬದಲಾಗಿ ಸಮಾಜದ ಮೇಲಿನ ನೈಜ ಕಳಕಳಿಯಿಂದ ಖುದ್ದು ವಿದ್ಯಾರ್ಥಿನಿಯ ಮನೆಗೆ ತೆರಳಿದ ನ್ಯಾಯಾಧೀಶರು, ಅತ್ಯಂತ ಪ್ರೀತಿ ಹಾಗೂ ಕಾಳಜಿಯಿಂದ ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬದವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು.&lt;/p&gt;&lt;p&gt;ಶಿಕ್ಷಣದ ಅನಿವಾರ್ಯತೆ ಮತ್ತು ಮಹತ್ವವನ್ನು ಅವರಿಗೆ ಮನದಟ್ಟು ಮಾಡಿ, ಅವರ ಮನವೊಲಿಸುವಲ್ಲಿ ಸಂಪೂರ್ಣ ಯಶಸ್ವಿಯಾದರು. ಸತತ ಪ್ರಯತ್ನಗಳಿಂದಲೂ ಬಗೆಹರಿಯದಿದ್ದ ಸಮಸ್ಯೆಯೊಂದು, ನ್ಯಾಯಾಧೀಶರ ಒಂದು ಮಾನವೀಯ ಹೆಜ್ಜೆಯಿಂದ ಸುಖಾಂತ್ಯ ಕಂಡಿದೆ.&lt;/p&gt;&lt;img&gt;&lt;p&gt;ಇಂದು ಆ ವಿದ್ಯಾರ್ಥಿನಿ ಮತ್ತೆ ಶಾಲೆಯ ಮೆಟ್ಟಿಲೇರಲು ಅವರ ಈ ನಡೆ ಪ್ರಮುಖ ಕಾರಣವಾಗಿದೆ.​ಈ ಸಂಧರ್ಭದಲ್ಲಿ ನ್ಯಾಯಾಧೀಶರೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕೆ. ಜಿ, ಸರ್ಕಾರಿ ಅಭಿಯೋಜಕ ಅರುಣ್ ಕುಮಾರ್ ಎಸ್. ಎಂ, ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪರಶುರಾಮ , ಪಿಡಿಒ ಪರಮೇಶ್ವರ ಬಿ. ಬಿ. ಹಾಗೂ ಇತರರು ಜೊತೆಯಾಗಿದ್ದರು.&lt;/p&gt;]]></content:encoded>
            <category>shivamogga</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/education/hosanagara-jmfc-judge-brings-a-student-who-had-dropped-out-of-school-back-classroom-vfukkul"/>
        </item>
        <item>
            <title><![CDATA[ಕಸ್ತೂರಿರಂಗನ್ ವರದಿ: ಕೇಂದ್ರದ ನಿಲುವೇನು? ಬಿಜೆಪಿ ವಿರುದ್ಧ ಸಚಿವ ಮಧು ಬಂಗಾರಪ್ಪ ಆಕ್ರೋಶ]]></title>
            <link>https://kannada.asianetnews.com/karnataka-districts/kasturirangan-report-madhu-bangarappa-slams-bjp-announces-massive-protest-in-shivamogga-kvn/articleshow-vttilnw</link>
            <guid isPermaLink="true">https://kannada.asianetnews.com/karnataka-districts/kasturirangan-report-madhu-bangarappa-slams-bjp-announces-massive-protest-in-shivamogga-kvn/articleshow-vttilnw</guid>
            <pubDate>Tue, 08 Sep 2026 13:10:56 +0530</pubDate>
            <description><![CDATA[ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಆಗ್ರಹಿಸಿ ತೀರ್ಥಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತು. ಕೇಂದ್ರ ಸರ್ಕಾರದ ವರದಿಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ನಾಟಕೀಯ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ವರದಿಯ ವಿರುದ್ಧ ತಮ್ಮ ಪಕ್ಷದ ನಿರಂತರ ಹೋರಾಟವನ್ನು ಪುನರುಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1zzat45pcwxz1xm8ftrjnn1,imgname-untitled-design--46--1788853184644.jpg" type="image/jpeg" height="390" width="690"/>
            <content:encoded><![CDATA[&lt;p&gt;ತೀರ್ಥಹಳ್ಳಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಹೇರಿಕೆ ಮಾಡಿರುವ ಕಸ್ತೂರಿ ರಂಗನ್ ವರದಿಯನ್ನು ಕೈಬಿಡುವಂತೆ ಜನ ಹೋರಾಟವನ್ನು ಆಯೋಜಿಸುವುದು ಅನಿವಾರ್ಯವಾಗಿದೆ. ಈ ವರದಿಯ ಮೂಲಕ ಪಶ್ಚಿಮಘಟ್ಟದ ಅನ್ನದಾತರನ್ನು ತುಳಿಯುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದರು.&lt;/p&gt;&lt;p&gt;ಕಾಂಗ್ರೆಸ್ ಪಕ್ಷದ ವತಿಯಿಂದ ಕಸ್ತೂರಿರಂಗನ್ ವರದಿಯನ್ನು ಕೈಬಿಡುವಂತೆ ಆಗ್ರಹಿಸಿ ಭಿಂತಳ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಂತರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆಗೆ ಸಂಬಂಧಿಸಿ ಕಾಂಗ್ರೆಸ್ ಬದ್ದತೆಯನ್ನು ಹೊಂದಿದೆ. ಕೇಂದ್ರ ಸರ್ಕಾರವೇ ಹೇರಿಕೆ ಮಾಡಿರುವ ವರದಿಯ ಬಗ್ಗೆ ಬಿಜೆಪಿ ಸಂಸದರು ಮತ್ತು ಶಾಸಕರು ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.&lt;/p&gt;&lt;h2&gt;&lt;strong&gt;ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿಕೊಂಡೇ ಬಂದಿದೆ:&lt;/strong&gt;&lt;/h2&gt;&lt;p&gt;ಕಸ್ತೂರಿರಂಗನ್ ವರದಿಯನ್ನು ಲಾಗಾಯ್ತಿನಿಂದಲೂ ಕಾಂಗ್ರೆಸ್ ವಿರೋದಿಸಿಕೊಂಡು ಬಂದಿದೆ. 2013ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ಶಿಫಾರಸಿನಂತೆ ಈ ವರದಿಯನ್ನು ಸಾರಸಗಟಾಗಿ ವಿರೋದಿಸಲಾಗಿದೆ. ಈ ವರದಿಯನ್ನು ವಿರೋದಿಸಿ 1555 ಹಳ್ಳಿಗಳನ್ನು ಒಳಗೊಂಡು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿ ಈ ವರದಿ ಜಾರಿಗೆ ನಮ್ಮ ಪೂರ್ಣ ವಿರೋದವಿದ್ದು, ಕಾನೂನು ಹೋರಾಟದ ಬಗ್ಗೆಯೂ ಯೋಚಿಸುವ ಅಗತ್ಯವಿದೆ ಎಂದರು.&lt;/p&gt;&lt;p&gt;ತಾಲೂಕಿನಲ್ಲಿ ಈ ಮೊದಲು 139 ಗ್ರಾಮಗಳಿದ್ದು, 7ನೇ ಅಧಿಸೂಚನೆಯಲ್ಲಿ 157 ಗ್ರಾಮಗಳಿಗೆ ಹೆಚ್ಚಿಸಲಾಗಿದೆ. ಈ ವರದಿಯ ವಿಚಾರವಾಗಿ 2016ರಲ್ಲಿ ಕೇಂದ್ರ ಸರ್ಕಾರ ಕರೆದಿದ್ದ ಮಹತ್ವದ ಸಭೆಯಲ್ಲಿ ಭಾಗವಹಿಸದ ಸಂಸದರಾದ ಬಿ.ವೈ.ರಾಘವೇಂದ್ರ ಮತ್ತು ಶೋಭಾ ಕರಂದ್ಲಾಜೆ ಮತ್ತು ವರದಿಯ ಬಗ್ಗೆ ನಾಟಕವಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮಾತನಾಡಿ, ಮಲೆನಾಡಿಗೆ ಮಾರಕವಾಗಿರುವ ವರದಿಯನ್ನು ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ವಿರೋದದ ನಾಟಕವಾಡುತ್ತಿದ್ದಾರೆ. ಈ ವರದಿಯನ್ನು ವಿರೋದಿಸಿ ಜಿಲ್ಲಾ ವ್ಯಾಪ್ತಿಯ ಪ್ರತಿ ಹೋಬಳಿ ಮಟ್ಟದಲ್ಲಿ ಜನಜಾಗೃತಿ ಮೂಡಿಸುತ್ತೇವೆ. ನಮ್ಮೊಳಗಿನ ಒಡಕು ಬಿಜೆಪಿಗೆ ವರವಾಗಿದೆ. ಮತ ಯಾರಿಗೆ ಕೇಳ್ತೀರಿ ಎಂದು ಮಾರ್ಮಿಕವಾಗಿ ಹೇಳಿದರು.&lt;/p&gt;&lt;p&gt;ನಾನು ಬದುಕಿರುವವರೆಗೂ ಬಿಜೆಪಿ ಸಖ್ಯ ಮಾಡೊಲ್ಲಾ. ನಮ್ಮ ಕಾರ್ಯಕರ್ತರು ಈ ಕ್ಷೇತ್ರದ ಶಾಸಕರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದಾರೆ. ಆದರೆ ಪಕ್ಷ ಸಂಘಟನೆಗೆ ವಿರುದ್ಧವಾಗಿ ಬಿಜೆಪಿ ಜೊತೆ ಹೆಜ್ಜೆ ಹಾಕುವವರಿದ್ದಾರೆ. ಅಂತವರಿಂದ ಎದುರಿಗಿರುವ ಚುನಾವಣೆ ಎದುರಿಸೋದೇ ಕಷ್ಟವಾಗಿದೆ. ಕಾಲು ಹಿಡೀತೀನಿ ಪಕ್ಷದ ದೃಷ್ಟಿಯಿಂದ ಬಿಜೆಪಿ ಸಖ್ಯ ಬಯಸುವವರು ಇಂದೇ ಹೊರ ಹೋಗುವುದು ಸೂಕ್ತ. ಶ್ರೀರಾಮನ ಹುಂಡಿಯನ್ನೇ ಕದ್ದವರಿಂದ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.&lt;/p&gt;&lt;p&gt;ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ಹೋರಾಟದ ಹಿನ್ನೆಲೆಯ ಈ ಜಿಲ್ಲೆಯಲ್ಲಿ ನಡೆದಿರುವ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕಿದೆ. ಬಿಜೆಪಿ ಮುಖಂಡರು ಸಂಸದರು ಮತ್ತು ಶಾಸಕರು ಎಲ್ಲಿ ಅಡಗಿದ್ದಾರೆ. ಬಳ್ಳಾರಿಗೆ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿಯವರು ಕಸ್ತೂರಿರಂಗನ್ ವರದಿಯ ಬಗ್ಗೆ ಚಕಾರ ಎತ್ತಿಲ್ಲ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರಿಂದ ಬಳ್ಳಾರಿ ಪಾದಯಾತ್ರೆಯನ್ನು ಉದ್ಘಾಟಿಸಲಾಗಿದೆ ಎಂದು ಟೀಕಿಸಿದರು.&lt;/p&gt;&lt;p&gt;ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಎಂ.ಎ.ರಮೇಶ್ ಹೆಗ್ಡೆ, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಚೇತನ್ ಗೌಡ, ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಡಾ. ಶ್ರೀನಿವಾಸ್ ಕರಿಯಣ್ಣ ಮುಂತಾದವರು ಇದ್ದರು.&lt;/p&gt;&lt;p&gt;ಭಿಂತಳ ಗ್ರಾಮದಲ್ಲಿ ಆರಂಭಗೊಂಡ ಪಾದಯಾತ್ರೆಯ ಆರಂಭದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಪಾಲ್ಗೊಂಡಿದ್ದರು.&lt;/p&gt;&lt;h3&gt;----&lt;strong&gt;ಕಾಂಗ್ರೆಸ್&zwj;ನ ಟೀಕೆ ಮಾಡಲು ಪಾದಯಾತ್ರೆ: ಮಧು ಕಿಡಿ&lt;/strong&gt;&lt;/h3&gt;&lt;p&gt;ಶಿವಮೊಗ್ಗ: ಬಿಜೆಪಿ ಪಾದಯಾತ್ರೆ ಮಾಡುತ್ತಿರುವುದು ಜನರ ಸಮಸ್ಯೆಯನ್ನು ಬಗೆಹರಿಸಲು ಅಲ್ಲ. ಕಾಂಗ್ರೆಸ್ ನಾಯಕರನ್ನು ವೈಯಕ್ತಿಕವಾಗಿ ಟೀಕೆ ಮಾಡಲು ಎಂದು ಸಚಿವ ಮಧು ಬಂಗಾರಪ್ಪ ಕುಟುಕಿದರು.&lt;/p&gt;&lt;p&gt;ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ.ವಿಜಯೇಂದ್ರ ಮೋದಿ ಅವರ ಶೈಲಿಯಲ್ಲಿ ಮಾತನಾಡುವುದನ್ನು ಕಲಿತಿದ್ದಾರೆ. ಪಾದಯಾತ್ರೆಯಲ್ಲಿ ಜನರ ಸಮಸ್ಯೆಯನ್ನು ಕೇಳುವುದನ್ನು ಬಿಟ್ಟು, ನಮ್ಮ ನಾಯಕರನ್ನು ಟೀಕೆ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಅವರನ್ನುಟೀಕೆ ಮಾಡಿತ್ತು. ಈಗ ಕಾಂಗ್ರೆಸ್&zwj;ನಲ್ಲಿ ಬಣ ರಾಜಕೀಯ ಇದೆಯೆಂದು ಕಲ್ಪಿಸಿಕೊಂಡು ಅವರನ್ನು ಹೊಗಳುತ್ತಿದ್ದಾರೆ. ತಲತಲಾಂತರದಿಂದ ಬಿಜೆಪಿ ಇಂತಹ ಒಡೆದು ಆಳುವ ನೀತಿಯನ್ನೇ ಅನುಸರಿಸಿಕೊಂಡು ಬಂದಿದೆ ಎಂದು ಕಿಡಿಕಾರಿದರು.&lt;/p&gt;&lt;p&gt;ಯಡಿಯೂರಪ್ಪನವರು ಬಿಜೆಪಿಯನ್ನು ತಿರಸ್ಕರಿಸಿ ಕೆಜೆಪಿ ಕಟ್ಟಿದ್ದರು. ಈ ಬಗ್ಗೆ ಬಿಜೆಪಿ ಅವರು ಮಾತನಾಡಲಿ. ದೇವರಾಜ ಅರಸು ಅವರ ಭೂ ಯೋಜನೆಯನ್ನು ಕಿತ್ತಾಕಿದವರು ಇದೇ ಯಡಿಯೂರಪ್ಪ ಸರ್ಕಾರ, ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಹಾಳು ಮಾಡಿದ್ದು ಬಸವರಾಜ ಬೊಮ್ಮಾಯಿ ಸರ್ಕಾರ, ಹಸಿರು ಶಾಲು ಹಾಕಿಕೊಂಡು ರೈತರಿಗೆ ಗುಂಡು ಹೊಡೆದಿದ್ದನ್ನು ಮರಿಯಬೇಕಾ? ಯಡಿಯೂರಪ್ಪನವರಿಗೆ ದೇವೇಗೌಡರು ಎಂತಹ ಮಾತುಗಳನ್ನಾಡಿದ್ದಾರೆ ನೀವೆಲ್ಲಾ ಮರೆತ್ತಿದ್ದಿರಾ ಎಂದು ಪ್ರಶ್ನಿಸಿದರು.&lt;/p&gt;&lt;p&gt;ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಬೇಕು. ಇಲ್ಲದೆ ಹೋದರೆ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ.ಇದನ್ನು ಚುನಾವಣೆಯೊಳಗೆ ಬಗೆ ಹರಿಸುತ್ತೇವೆ ಎಂದರು.&lt;/p&gt;&lt;p&gt;ಕಸ್ತೂರಿರಂಗನ್ ವರದಿಯನ್ನು ರಾಜ್ಯ ಸರ್ಕಾರ ವಿರೋಧ ಮಾಡಿದೆ. ಆದರೆ ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆಯೆಲ್ಲಾ ನೀವೇನು ಮಾಡುತ್ತಿದ್ದಿರಾ. ಈ ಕುರಿತು 2016 ಆ. 11ರಂದು ಸಭೆಗೆ ಕರೆದಿದ್ದರಲ್ಲ ಆಗ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ ಯಾಕೆ ಹಾಜರಾಗಿಲ್ಲ. ಎಲ್ಲಿ ಹೋಗಿದ್ದರು. ಬಿ.ವೈ. ವಿಜಯೇಂದ್ರ ಅವರು ಇಂದು ಪಾದಯಾತ್ರೆ ಮಾಡುವ ಮೂಲಕ ರೈತರ ಹೊಲಕ್ಕೆ ಹೋಗುತ್ತಿದ್ದಾರೆ. ಆದರೆ ಇದುವರೆಗೂ ಶಿಕಾರಿಪುರದಲ್ಲಿ ಬಗರ್ ಹುಕುಂ ಸಂಬಂಧಿಸಿದಂತೆ ಎಷ್ಟು ಸಭೆ ಮಾಡಿದ್ದಾರೆ ಎಂದು ಗುಡುಗಿದರು.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kasturirangan-report-madhu-bangarappa-slams-bjp-announces-massive-protest-in-shivamogga-kvn/articleshow-vttilnw"/>
        </item>
        <item>
            <title><![CDATA[ಶಿವಮೊಗ್ಗದಲ್ಲಿ ಭಾನುವಾರ ಪೊಲೀಸ್ ಕಾನ್‌ಸ್ಟೇಬಲ್ ಎಕ್ಸಾಂ: ಸುಸೂತ್ರವಾಗಿ ಪರೀಕ್ಷೆ ನಡೆಸಲು ಡಿಸಿ ತಾಕೀತು]]></title>
            <link>https://kannada.asianetnews.com/karnataka-districts/shivamogga-police-recruitment-exam-19-centres-strict-rules-and-security-arrangements-kvn/articleshow-wn8du9m</link>
            <guid isPermaLink="true">https://kannada.asianetnews.com/karnataka-districts/shivamogga-police-recruitment-exam-19-centres-strict-rules-and-security-arrangements-kvn/articleshow-wn8du9m</guid>
            <pubDate>Sat, 05 Sep 2026 07:51:46 +0530</pubDate>
            <description><![CDATA[ಶಿವಮೊಗ್ಗದಲ್ಲಿ ಸೆ.6 ರಂದು ನಡೆಯಲಿರುವ ಸಿಎಆರ್/ಡಿಎಆರ್ ಪೊಲೀಸ್ ಕಾನ್&zwnj;ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 7651 ಅಭ್ಯರ್ಥಿಗಳು ಭಾಗವಹಿಸುವ ಈ ಪರೀಕ್ಷೆಗಾಗಿ 19 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್ ಜಾರಿಗೊಳಿಸಿ, ಝೆರಾಕ್ಸ್&zwnj; ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1qnev6gg8ha3ypja9gwmr0z,imgname-untitled-design--38--1788574395598.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಸೆ.6 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ ಸಿಎಆರ್/ಡಿಎಆರ್ ಪೋಲಿಸ್ ಕಾನ್&zwnj;ಸ್ಟೇಬಲ್ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಯು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.&lt;/p&gt;&lt;p&gt;ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಿಎಆರ್/ಡಿಎಆರ್ ಪೋಲಿಸ್ ಕಾನ್&zwnj;ಸ್ಟೇಬಲ್ ನೇಮಕಾತಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ 1 ಇಂಜಿನಿಯರಿಂಗ್ ಕಾಲೇಜು, 3 ಡಿಗ್ರಿ, 2 ಹೈಸ್ಕೂಲ್&zwnj;ಗಳು ಮತ್ತು 13 ಪದವಿ ಪೂರ್ವ ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಈ ಪರೀಕ್ಷೆಗೆ 7651 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಸೆ.6 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 6 ವಿತರಕ ಮಾರ್ಗಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.&lt;/p&gt;&lt;p&gt;ಅದಕ್ಕಾಗಿ ತ್ರಿಸದಸ್ಯ ಸಮಿತಿ ನೇಮಿಸಿ ಆದೇಶಿಸಲಾಗಿದೆ. ಮುಖ್ಯ ಅಧೀಕ್ಷಕ ವೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಮತ್ತು ಜಾಗೃತದಳದ ಸದಸ್ಯರ ನೇಮಕಗೊಳಿಸಿ ಆದೇಶಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡುವ ತ್ರಿಸದಸ್ಯ ಸಮಿತಿ ವಾಹನಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಹಾಗೂ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ನೀಡುವಂತೆಯೂ ಸೂಚಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಅಭಿಯಂತರರಿಗೆ ಸೂಚಿಸಲಾಗಿದೆ ಎಂದರು.&lt;/p&gt;&lt;p&gt;ನಿಯಮಾನುಸಾರ ಪರೀಕ್ಷಾರ್ಥಿಗಳು ನಿಗದಿತ ಸಮಯಕ್ಕೆ ಮುನ್ನವೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಸ್ವತಃ ಸ್ವಯಂ ತಪಾಸಣೆಗೆ ಒಳಪಡಿಸಿಕೊಂಡು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯಿಂದಲೇ ವೆಬ್ ಕ್ಯಾಸ್ಟಿಂಗ್, ಮತ್ತು ಡ್ರೆಸ್ ಕೋಡ್ ಪರಿಶೀಲಿಸಿ ಕೊಠಡಿಯೊಳಗೆ ಬಿಡಲು ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಝೆರಾಕ್ಸ್&zwnj; ಮುಚ್ಚಲು ಆದೇಶ:&lt;/strong&gt;&lt;/h2&gt;&lt;p&gt;ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ.ಪ್ರದೇಶದ ವ್ಯಾಪ್ತಿಯಲ್ಲಿ ಬಿ.ಎನ್.ಎಸ್ ಸೆಕ್ಷನ್ 143 ಜಾರಿಗೊಳಿಸಿ ಆದೇಶಿಸಲಾಗಿದೆ. ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಜನರು ಗುಂಪುಗೂಡುವುದನ್ನು, ಅನಗತ್ಯವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸುವುದನ್ನು ಹಾಗೂ ಸಭೆ, ಸಮಾರಂಭ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೇ ಅಲ್ಲಿನ ಕಂಫ್ಯೂಟರ್, ಝೆರಾಕ್ಸ್&zwnj; ಅಂಗಡಿಗಳನ್ನು ಮುಚ್ಚುವಂತೆಯೂ ಸೂಚಿಸಲಾಗಿದೆ ಎಂದರು.&lt;/p&gt;&lt;p&gt;ಸಭೆಯಲ್ಲಿ ಎಸ್ಪಿ ಬಿ.ನಿಖಿಲ್, ಎಡಿಸಿ ಅಭಿಷೇಕ್&zwnj;ವಿ.,ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಉಪನ್ಯಾಸಕ ಐ.ಎಫ್.ಕುಟ್ರಿ. ಜಿಲ್ಲಾ ಖಜಾನಾಧಿಕಾರಿ ಎಚ್.ಎಸ್. ಸಾವಿತ್ರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ದದ ಅಧಿಕಾರಿಗಳು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.&lt;/p&gt;&lt;p&gt;--------------------&lt;/p&gt;&lt;p&gt;ಮೊಬೈಲ್ ಫೋನ್, ಬ್ಲೂಟೂತ್, ಇಯರ್&zwnj;ಫೋನ್&zwnj;ಗಳು, ಮೈಕ್ರೋಫೋನ್, ಪೇಜರ್, ಮೈಕ್ರೋಚಿಪ್, ಕ್ಯಾಮೆರಾ, ಬ್ಲೂಟೂತ್ ಸಾಧನ, ಪೆನ್ ಡ್ರೈವ್&zwnj;ಗಳು, ಎಲೆಕ್ಟ್ರಾನಿಕ್ ಪೆನ್/ಸ್ಕ್ಯಾನರ್, ಕೈಗಡಿಯಾರ, ಸ್ಮಾರ್ಟ್, ಸ್ಮಾರ್ಟ್ ವಾಚ್, ಆಧುನಿಕ ಸಂವಹನ ಸಾಧನಗಳು, ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತು ಶುದ್ಧ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಲು ಹಾಗೂ ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರ, ಕ್ಯಾಮೆರಾ ಕಣ್ಗಾವಲು ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.&lt;/p&gt;&lt;p&gt;-ಬಿ.ನಿಖಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/shivamogga-police-recruitment-exam-19-centres-strict-rules-and-security-arrangements-kvn/articleshow-wn8du9m"/>
        </item>
        <item>
            <title><![CDATA[ಕೊನೆಗೂ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು; ಗುಡ್ ನ್ಯೂಸ್ ಹಂಚಿಕೊಂಡ ಸಂಸದ...!]]></title>
            <link>https://kannada.asianetnews.com/gallery/karnataka-districts/vande-bharat-for-shivamogga-tirupati-mp-shares-big-update-on-new-train-service-kvn-x5dawcv</link>
            <guid isPermaLink="true">https://kannada.asianetnews.com/gallery/karnataka-districts/vande-bharat-for-shivamogga-tirupati-mp-shares-big-update-on-new-train-service-kvn-x5dawcv</guid>
            <pubDate>Mon, 07 Sep 2026 12:18:55 +0530</pubDate>
            <description><![CDATA[&lt;p&gt;ತಿರುಪತಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಭಾರತೀಯ ರೈಲ್ವೆ ಇಲಾಖೆಯು, ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಆರಂಭಿಸಲು ಕ್ರಿಯಾ ಯೋಜನೆ ರೂಪಿಸಿದೆ. ಈ ಸಂಬಂಧ ತಿರುಪತಿ ಸಂಸದರು ಗುಡ್&zwnj; ನ್ಯೂಸ್ ಕೊಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1x97cd24nwjzyx6djd3e48j,imgname-untitled-design--44--1788762894754.jpg" type="image/jpeg" height="390" width="690"/>
            <content:encoded><![CDATA[&lt;p&gt;ತಿರುಪತಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಭಾರತೀಯ ರೈಲ್ವೆ ಇಲಾಖೆಯು, ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಆರಂಭಿಸಲು ಕ್ರಿಯಾ ಯೋಜನೆ ರೂಪಿಸಿದೆ. ಈ ಸಂಬಂಧ ತಿರುಪತಿ ಸಂಸದರು ಗುಡ್&zwnj; ನ್ಯೂಸ್ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ವಂದೇ ಭಾರತ್ ರೈಲಿನ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಈ ಕುರಿತಂತೆ ತಿರುಪತಿ ಸಂಸದ ಮದ್ದಿಲಾ ಗುರುಮೂರ್ತಿಯವರು ಮಹತ್ವದ ಗುಡ್&zwnj; ನ್ಯೂಸ್ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಶಿವಮೊಗ್ಗದಿಂದ ತಿರುಪತಿ ನಡುವೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲು ಆರಂಭಿಸಲು ಭಾರತೀಯ ರೈಲ್ವೆ ಮಂಡಳಿಯುವ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಗಾಗಲೇ ಈ ರೈಲು ಆರಂಭಿಸಲು ಕ್ರಿಯಾಯೋಜನೆಯನ್ನು ಸಿದ್ದಪಡಿಸಿದೆ ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಕುರಿತಂತೆ ತಮ್ಮ ಎಕ್ಸ್&zwnj; ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶಿವಮೊಗ್ಗ-ತಿರುಪತಿ-ಶಿವಮೊಗ್ಗಕ್ಕೆ ವಂದೇ ಭಾರತ ಎಕ್ಸ್&zwnj;ಪ್ರೆಸ್ ರೈಲು ಓಡಿಸಬೇಕು ಎನ್ನುವ ನನ್ನ ಬೇಡಿಕೆಗೆ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.&lt;/p&gt;&lt;img&gt;&lt;p&gt;ಉಳಿದಿರುವ ಔಪಚಾರಿಕ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ, ಆದಷ್ಟು ಶೀಘ್ರವಾಗಿ ಸೇವೆಯನ್ನು ಪ್ರಾರಂಭಿಸುವಂತೆ ನಾನು ರೈಲ್ವೆ ಮಂಡಳಿಯನ್ನು ಒತ್ತಾಯಿಸುತ್ತೇನೆ. ಇದು ಶಿವಮೊಗ್ಗ, ಬೆಂಗಳೂರು ಮತ್ತು ತಿರುಪತಿ ನಡುವಿನ ಸಂಪರ್ಕವನ್ನು ಬಲಪಡಿಸುವುದಲ್ಲದೆ, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ರೋಗಿಗಳು ಮತ್ತು ಇತರ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ ಎಂದು ತಿರುಪತಿ ಸಂಸದ ಮದ್ದಿಲಾ ಗುರುಮೂರ್ತಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಶಿವಮೊಗ್ಗಕ್ಕೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲು ತರಬೇಕು ಎನ್ನುವುದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಬಹುಕಾಲದ ಬೇಡಿಕೆಯಾಗಿದೆ. ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್, ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವೈ ಸೋಮಣ್ಣ ಅವರನ್ನು ಅವಕಾಶ ಸಿಕ್ಕಾಗಲೆಲ್ಲಾ ಮನವಿ ಮಾಡುತ್ತಾ ಬಂದಿದ್ದಾರೆ. ಇದೆಲ್ಲದರ ನಡುವೆ, ತಿರುಪತಿ ಸಂಸದರು ನೀಡಿದ ಈ ಅಪ್&zwnj;ಡೇಟ್, ಶಿವಮೊಗ್ಗ ಜನತೆಯ ವಂದೇ ಭಾರತ್ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ.&lt;/p&gt;&lt;img&gt;&lt;p&gt;ಇನ್ನು ಈ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲು, ಶಿವಮೊಗ್ಗದಿಂದ ರಾಜ್ಯ ರಾಜಧಾನಿ ಬೆಂಗಳೂರು ಮೂಲಕ ತಿರುಪತಿಗೆ ಸಂಚಾರ ನಡೆಸಲಿದೆ. ಹೀಗಾಗಿ ಬೆಂಗಳೂರು ಮತ್ತು ಶಿವಮೊಗ್ಗ ಹಾಗೆಯೇ ಶಿವಮೊಗ್ಗದಿಂದ ಪವಿತ್ರ ಕ್ಷೇತ್ರ ತಿರುಪತಿಗೆ ಯಾತ್ರಿಕರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ.&lt;/p&gt;]]></content:encoded>
            <category>shivamogga</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/karnataka-districts/vande-bharat-for-shivamogga-tirupati-mp-shares-big-update-on-new-train-service-kvn-x5dawcv"/>
        </item>
        <item>
            <title><![CDATA[ಮಧು ಬಂಗಾರಪ್ಪ, ರಾಘವೇಂದ್ರ ಮುಖಾಮುಖಿ - ನಂತರ ಆಗಿದ್ದೇನು ಗೊತ್ತಾ?]]></title>
            <link>https://kannada.asianetnews.com/karnataka-districts/minister-madhu-bangarappa-and-mp-raghavendra-come-face-to-face-in-shikaripura-gkn/articleshow-y70z6dk</link>
            <guid isPermaLink="true">https://kannada.asianetnews.com/karnataka-districts/minister-madhu-bangarappa-and-mp-raghavendra-come-face-to-face-in-shikaripura-gkn/articleshow-y70z6dk</guid>
            <pubDate>Tue, 08 Sep 2026 22:21:01 +0530</pubDate>
            <description><![CDATA[&lt;p&gt;ಶಿಕಾರಿಪುರದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ಅವರ ಬೆಂಬಲಿಗರ ನಡುವೆ ಘೋಷಣೆಗಳ ಪೈಪೋಟಿ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮಧು ಬಂಗಾರಪ್ಪ ಪರವಾಗಿ 'ಮುಂದಿನ ಸಿಎಂ' ಘೋಷಣೆ ಕೂಗಿದ್ದು, ನಂತರ ಇಬ್ಬರೂ ನಾಯಕರು ಜಂಟಿಯಾಗಿ ಬಂದು ಕಾರ್ಯಕರ್ತರನ್ನು ಶಾಂತಗೊಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20ytt271ajbv1ank04tadp7,imgname-madhu-bangarappa-and-by-raghavendra-1788886214727.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿಕಾರಿಪುರ (ಶಿವಮೊಗ್ಗ):&lt;/strong&gt; ಮಲೆನಾಡಿನ ರಾಜಕೀಯ ಕೇಂದ್ರಬಿಂದು ಶಿಕಾರಿಪುರದಲ್ಲಿ ಇಂದು ಹೈಡ್ರಾಮಾ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಮುಖಾಮುಖಿಯಾದ ವೇದಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘೋಷಣೆಗಳ ಸಮರವೇ ನಡೆದಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮಧು ಬಂಗಾರಪ್ಪ ಅವರನ್ನು 'ಮುಂದಿನ ಮುಖ್ಯಮಂತ್ರಿ' ಎಂದು ಕೂಗಿದ್ದು ವಿಶೇಷವಾಗಿತ್ತು.&lt;/p&gt;&lt;h2&gt;&lt;strong&gt;ಘೋಷಣೆಗಳ ಪೈಪೋಟಿ&lt;/strong&gt;&lt;/h2&gt;&lt;p&gt;ಶಿಕಾರಿಪುರದಲ್ಲಿ ನಡೆದ 'ಪ್ರಜಾಸೇವಾ ಆಂದೋಲನ' ಸಭೆಯಲ್ಲಿ ಈ ಘಟನೆ ನಡೆದಿದೆ. ಸಭೆಗೆ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಆಗಮಿಸುತ್ತಿದ್ದಂತೆಯೇ ಎರಡೂ ಪಕ್ಷದ ಕಾರ್ಯಕರ್ತರು ಅಲರ್ಟ್ ಆದರು. ಮೊದಲು ಬಿಜೆಪಿ ಕಾರ್ಯಕರ್ತರು ಸಂಸದ ರಾಘವೇಂದ್ರ ಅವರ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಸಡ್ಡು ಹೊಡೆದ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಮಧು ಬಂಗಾರಪ್ಪ ಅವರ ಪರವಾಗಿ ಜೈಕಾರ ಹಾಕಿದರು.&lt;/p&gt;&lt;h2&gt;&lt;strong&gt;ಮುಂದಿನ ಸಿಎಂ ಘೋಷಣೆ&lt;/strong&gt;&lt;/h2&gt;&lt;p&gt;ಕೈ ಕಾರ್ಯಕರ್ತರ ಉತ್ಸಾಹ ಇಷ್ಟಕ್ಕೇ ನಿಲ್ಲಲಿಲ್ಲ. ಸಂಸದ ಬಿ.ವೈ. ರಾಘವೇಂದ್ರ ಅವರು ವೇದಿಕೆಯ ಮೇಲಿರುವಾಗಲೇ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಮಧು ಬಂಗಾರಪ್ಪ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದ್ದು ಸ್ಥಳದಲ್ಲಿದ್ದವರ ಗಮನ ಸೆಳೆಯಿತು. ಶಿಕಾರಿಪುರದಲ್ಲಿ ರಾಘವೇಂದ್ರ ಅವರ ಸಮ್ಮುಖದಲ್ಲೇ ಈ ರೀತಿ ಘೋಷಣೆಗಳು ಮೊಳಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಸಂಯಮ ಮೆರೆದ ನಾಯಕರು&lt;/strong&gt;&lt;/h2&gt;&lt;p&gt;ಕಾರ್ಯಕರ್ತರ ಘೋಷಣೆಗಳ ಅಬ್ಬರ ಜೋರಾಗುತ್ತಿದ್ದಂತೆ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ತಕ್ಷಣವೇ ಎಚ್ಚೆತ್ತುಕೊಂಡರು. ಇಬ್ಬರೂ ನಾಯಕರು ಜಂಟಿಯಾಗಿ ಬಂದು ತಮ್ಮ ತಮ್ಮ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಘೋಷಣೆ ಕೂಗದಂತೆ ಸೂಚನೆ ನೀಡಿದರು. ನಾಯಕರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.&lt;/p&gt;&lt;p&gt;ಒಟ್ಟಾರೆಯಾಗಿ, ಅಭಿವೃದ್ಧಿ ಕೆಲಸಗಳ ಚರ್ಚೆಗಾಗಿ ನಡೆದ ಸಭೆಯಲ್ಲಿ ಕಾರ್ಯಕರ್ತರ ಉತ್ಸಾಹವು ಘೋಷಣೆಗಳ ಸಮರವಾಗಿ ಬದಲಾಗಿದ್ದು ಕಂಡುಬಂದಿತು. ಆದರೆ, ನಾಯಕರು ತೋರಿದ ಪರಸ್ಪರ ಗೌರವ ಮತ್ತು ಸಂಯಮವು ಸಭೆ ಸುಗಮವಾಗಿ ನಡೆಯಲು ಸಹಕಾರಿಯಾಯಿತು.&lt;/p&gt;]]></content:encoded>
            <category>shivamogga</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/minister-madhu-bangarappa-and-mp-raghavendra-come-face-to-face-in-shikaripura-gkn/articleshow-y70z6dk"/>
        </item>
    </channel>
</rss>
