<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 03 Jun 2026 11:40:09 +0530</lastBuildDate>
        <atom:link href="https://kannada.asianetnews.com/rss/shivamogga" rel="self" type="application/rss+xml"/>
        <item>
            <title><![CDATA[Padma Awards 2026: ಶತಾವಧಾನಿ ಡಾ. ಆರ್ ಗಣೇಶರು ಇನ್ನು 'ಪದ್ಮಭೂಷಣ'ರು]]></title>
            <link>https://kannada.asianetnews.com/state/padma-awards-2026-shatavadhani-dr-r-ganesh-honored-with-padma-bhushan-award/articleshow-1z4nua5</link>
            <guid isPermaLink="true">https://kannada.asianetnews.com/state/padma-awards-2026-shatavadhani-dr-r-ganesh-honored-with-padma-bhushan-award/articleshow-1z4nua5</guid>
            <pubDate>Sun, 25 Jan 2026 19:06:13 +0530</pubDate>
            <description><![CDATA[&lt;p&gt;ಲೇಖಕರು ಶತಾವಧಾನಿ ಗಣೇಶರನ್ನು ಜ್ಞಾನದ ಬೆಳಕಿಗೆ ಹೋಲಿಸುತ್ತಾರೆ, ಅವರ ಮಾರ್ಗದರ್ಶನದಿಂದ ಭಾರತೀಯ ಪರಂಪರೆ ಮತ್ತು ಕಲೆಗಳ ಬಗ್ಗೆ ತಮ್ಮ ಅರಿವು ಸಮೃದ್ಧವಾಗಿದೆ ಎಂದು ಹೇಳುತ್ತಾರೆ. ಗಣೇಶರ ಪಾಂಡಿತ್ಯವ ಕಲ್ಪವೃಕ್ಷಕ್ಕೆ ಹೋಲಿಸುತ್ತಾ, ಅವರಿಗೆ ಸಂದ 'ಪದ್ಮಭೂಷಣ' ಪ್ರಶಸ್ತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kftndagktm3rkz5qm2tw3zkf,imgname----------------------61--1769347656211.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;&lt;strong&gt;ವಿನಯ್ ಶಿವಮೊಗ್ಗ&lt;/strong&gt;&lt;/li&gt;&lt;/ul&gt;&lt;p&gt;ಶತಾವಧಾನಿ ಗಣೇಶರನ್ನು ನಾನು ಯಾವತ್ತೂ ವ್ಯಕ್ತಿಯಾಗಿ ನೋಡಿಯೇ ಇಲ್ಲ, ಅವರೊಂದು ಬೆಳಕು. ಆ ಬೆಳಕಿನ ಆಸರೆಯಲ್ಲಿ ಈ ಬದುಕಿಗೆ ಬೇಕಾಗಿರುವ ಸತ್ಯ-ಸುಂದರ ಸಂಗತಿಗಳನ್ನು ಕಂಡುಕೊಂಡಿದ್ದೇನೆ . ನನ್ನ ಅವಜ್ಞೆಯ ಕಾರಣ ನಾನು ಗಮನಿಸದ ಸತ್ವಯುತ ಭಾರತೀಯ ಪರಂಪರೆಯ ಅಗಾಧ ಅರಿವಿನ ಸಣ್ಣ ತುಣುಕುಗಳನ್ನು ಶತಾವಧಾನಿ ಗಣೇಶರನ್ನು ಕಾರಣದಿಂದಾಗಿ ಪಡೆದಿದ್ದೇನೆ . ಈ ನೆಲದ ಸಂಗೀತ, ಸಾಹಿತ್ಯ, ನೃತ್ಯ , ಕಾವ್ಯ, ಇತಿಹಾಸ ಮತ್ತಿತರ ಕಲೆಗಳು ಗಣೇಶರ ಕಾರಣದಿಂದಾಗಿ ನನ್ನ ಬದುಕನ್ನು ಸಂಮೃದ್ಧವಾಗಿಸಿದೆ. ಅವರು ನಮ್ಮ ಕಾಲದ ಕ್ಷಾತ್ರತೇಜದ ಬ್ರಹ್ಮ ತಪಸ್ವಿ.&lt;/p&gt;&lt;p&gt;ಬರೀಯ ಜ್ಞಾನ ಶುಷ್ಕವಾಗಬಹುದು ಆದರೆ ರಸಪ್ರಜ್ಞೆಯ ಜ್ಞಾನ ಜೀವನೋತ್ಕರ್ಷದ ಅನುಭವ ನೀಡಬಲ್ಲದು. ಇದು ಶತಾವಧಾನಿಗಳ ಮಾತುಗಳು! ಡಾ. ಆರ್ ಗಣೇಶರು 'ರಸೋ ವೈ ಸಃ' ಎಂಬಂತೆ ರಸಾರಾಧನೆಯಲ್ಲಿ ದೇವರನ್ನು ಕಂಡವರು. ಈ ನಿಟ್ಟಿನಲ್ಲಿ ಗಣೇಶರು ಭಾರತೀಯ ಸಾರಸ್ವತ ಲೋಕದ ದೊಡ್ಡ ಆಸ್ತಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;Republic Day 2026: ಜನವರಿ 26 ರ ಬಗ್ಗೆ ನಿಮಗೆ ಬಹುಶಃ ತಿಳಿದಿರದ 8 ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ!&lt;/p&gt;&lt;p&gt;ಭಗವದ್ಗೀತೆ, ರಾಮಾಯಣ , ಭಾಗವತ , ಮಹಾ ಭಾರತ ಮುಂತಾದ ಮಹಾನ್ ಸಾಹಿತ್ಯಗಳನ್ನು ಪುಣ್ಯ ಸಂಪಾದನೆಗಾಗಿ ಪಾರಾಯಣ ಮಾಡುವುದಕ್ಕಿಂತ ರಸಗ್ರಾಹಿಯಾಗಿ ಅವುಗಳನ್ನು ಓದಿಕೊಂಡರೆ ಹೆಚ್ಚು ಸಾರ್ಥಕವೆಂದು ಗಣೇಶರು ಬಲವಾಗಿ ಪ್ರತಿಪಾದಿಸುತ್ತಾರೆ .&lt;/p&gt;&lt;p&gt;ಶತಾವಧಾನಿಗಳ ಜ್ಞಾನ ವಿಸ್ತಾರ ನಮ್ಮ ಊಹೆಗೆ ಮೀರಿದ್ದು ಎಂದು ಎಷ್ಟೋ ಬಾರಿ ನನಗನಿಸಿದೆ . ವಿಜ್ಞಾನ , ಅಧ್ಯಾತ್ಮ,ವ್ಯಾಕರಣ, ತರ್ಕ, ಸಂಗೀತ, ಸಾಹಿತ್ಯ, ನೃತ್ಯ, ಅವಧಾನ, ಕವಿತ್ವ, ಸಿನಿಮಾ,ಅಡುಗೆ ಹೀಗೆ ಒಮ್ಮೆಲೆ ಪಟ್ಟಿ ಮಾಡಲಾಗದಷ್ಟು ಆಳವಿದೆ .&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;ಅಂಕೇಗೌಡ ಸೇರಿ ಮೂವರು ಕನ್ನಡಿಗರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ, ಇಲ್ಲಿದೆ 45 ಸಾಧಕರ ಪಟ್ಟಿ&lt;/p&gt;&lt;p&gt;ಪ್ರಸಕ್ತ, ವಿದ್ವತ್ ವಲಯದಲ್ಲಿ ಶತಾವಧಾನಿ ಗಣೇಶರು ಫಲ ಬಿಟ್ಟ ಘನವಾದ ಕಲ್ಪವೃಕ್ಷ ಇದ್ದಂತೆ! ಅನೇಕ ಕಲಾವಿದರು, ಸಾಹಿತಿಗಳು ,ನರ್ತಕರು, ಸಂಗೀತಗಾರರು ಗಣೇಶರ ಪಾಂಡಿತ್ಯವನ್ನು ಆಶ್ರಯಿಸಿರುವುದನ್ನು ನಾನು ನೋಡಿ ಬಲ್ಲೆ .&lt;/p&gt;&lt;p&gt;ಇಂತಹ ಸರಸ್ವತಿಯ ವರಪುತ್ರನಿಗೆ ಭಾರತ ಸರ್ಕಾರದ ಅತ್ಯುನ್ನತ ನಾಗರೀಕ ಸನ್ಮಾನ 'ಪದ್ಮಭೂಷಣ' ಸಂದಿರುವುದು ವರ್ಣಿಸಲಾಗದಷ್ಚು ಸಂತೋಷವಾಗಿದೆ .&lt;/p&gt;&lt;p&gt;'ಪದ್ಮ' ಜ್ಞಾನದ ಸಂಕೇಂತವಂತೆ! ಗಣೇಶರಲ್ಲವೆ ನೂರಕ್ಕೆ ನೂರು ಆ ಜ್ಞಾನಕ್ಕೆ ಭೂಷಣ?!&lt;/p&gt;&lt;p&gt;ಪುರುಷ ಸರಸ್ವತಿಗೆ ಹೃದಯಪೂರ್ವಕ ಶುಭಾಶಯಗಳು&lt;/p&gt;]]></content:encoded>
            <category>shivamogga</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/padma-awards-2026-shatavadhani-dr-r-ganesh-honored-with-padma-bhushan-award/articleshow-1z4nua5"/>
        </item>
        <item>
            <title><![CDATA['Obbru obbru 100 kg edare thuu..' ಲಿಫ್ಟ್‌ ನಲ್ಲಿ ಸಿಲುಕಿದ ಮುಸ್ಲಿಂ ಮಹಿಳೆಗೆ ಅವಮಾನಕಾರಿ ಕಾಮೆಂಟ್‌: KPTCL ನೌಕರಳ ವಿರುದ್ಧ ಕ್ರಮಕ್ಕೆ ಆಗ್ರಹ]]></title>
            <link>https://kannada.asianetnews.com/gallery/karnataka-districts/offensive-comment-on-lift-incident-vishal-mart-shivamogga-action-sought-against-kptcl-employee-rav-1ut34nn</link>
            <guid isPermaLink="true">https://kannada.asianetnews.com/gallery/karnataka-districts/offensive-comment-on-lift-incident-vishal-mart-shivamogga-action-sought-against-kptcl-employee-rav-1ut34nn</guid>
            <pubDate>Wed, 20 May 2026 10:53:28 +0530</pubDate>
            <description><![CDATA[&lt;p&gt;ಶಿವಮೊಗ್ಗದ ವಿಶಾಲ್&zwnj; ಮಾರ್ಟ್&zwnj; ಲಿಫ್ಟ್&zwnj; ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯ ಹಾಗೂ ಮಹಿಳೆಯರ ವಿರುದ್ಧ ಕೆಪಿಟಿಸಿಎಲ್&zwnj; ನೌಕರ ಅವಮಾನಕಾರಿ ಕಾಮೆಂಟ್, ಸೈಬರ್&zwnj; ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks1wmv2tfm0zaaa6rxye701p,imgname-----------------------2026-05-20t103854.866-1779253800026.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗದ ವಿಶಾಲ್&zwnj; ಮಾರ್ಟ್&zwnj; ಲಿಫ್ಟ್&zwnj; ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯ ಹಾಗೂ ಮಹಿಳೆಯರ ವಿರುದ್ಧ ಕೆಪಿಟಿಸಿಎಲ್&zwnj; ನೌಕರ ಅವಮಾನಕಾರಿ ಕಾಮೆಂಟ್, ಸೈಬರ್&zwnj; ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಶಿವಮೊಗ್ಗ ನಗರದ ಆಲ್ಕೊಳ ಸರ್ಕಲ್&zwnj; ಸಮೀಪದ ವಿಶಾಲ್&zwnj; ಮಾರ್ಟ್&zwnj; ಕಟ್ಟಡದ ಲಿಫ್ಟ್&zwnj;ನಲ್ಲಿ 9 ಜನರು ಸಿಲುಕಿಕೊಂಡಿದ್ದ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಸುರಕ್ಷಿತವಾಗಿ ಹೊರತೆಗೆದಿದ್ದರು.&lt;/p&gt;&lt;img&gt;&lt;p&gt;ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯ ಹಾಗೂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹಾಗೂ ಧಾರ್ಮಿಕ ದ್ವೇಷ ಪ್ರಚೋದಿಸುವ ರೀತಿಯ ಕಾಮೆಂಟ್&zwnj; ಪೋಸ್ಟ್&zwnj; ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;img&gt;&lt;p&gt;'E saabri ge E Muslim ge common sence ella&hellip; Obbru obbru 100 kg edare thuu Over load' ಎಂಬ ರೀತಿಯ ಕಾಮೆಂಟ್&zwnj; ಪೋಸ್ಟ್&zwnj; ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಕಾಮೆಂಟ್&zwnj;ನಲ್ಲಿ ಧಾರ್ಮಿಕ ಆಧಾರದ ಮೇಲೆ ದ್ವೇಷ ಹಾಗೂ ಅವಮಾನಕಾರಿ ಭಾಷೆ ಬಳಸಲಾಗಿದೆ. ಜೊತೆಗೆ, ಮಹಿಳೆಯರ ದೇಹದಾಕಾರವನ್ನು ಹೀನಾಯವಾಗಿ ಟೀಕಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.&lt;/p&gt;&lt;img&gt;&lt;p&gt;ಈ ಪೋಸ್ಟ್&zwnj; ಮಾಡಿದವರು ಕೆಪಿಟಿಸಿಎಲ್&zwnj;ನ ಸರ್ಕಾರಿ ನೌಕರ ಸರ್ವಮಂಗಳ ಎಂದು ಹೇಳಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಸರ್ಕಾರಿ ನೌಕರರಾಗಿಯೇ ಸಮಾಜದಲ್ಲಿ ದ್ವೇಷ ಹರಡುವ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;img&gt;&lt;p&gt;ಜಿಲ್ಲಾ ಕಾಂಗ್ರೆಸ್&zwnj; ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಸೈಯದ್&zwnj; ವಾಹಿದ್&zwnj; ಅಡ್ಡು ಅವರು ಶಿವಮೊಗ್ಗ ಸೈಬರ್&zwnj; ಕ್ರೈಂ ಠಾಣೆ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ಪ್ರಕರಣದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ&lt;/p&gt;&lt;img&gt;&lt;p&gt;ಸಾಮಾಜಿಕ ಜಾಲತಾಣದಲ್ಲಿ ವೈರಲ್&zwnj; ಆಗಿರುವ ಈ ಕಾಮೆಂಟ್&zwnj; ಇದೀಗ ಶಿವಮೊಗ್ಗದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಪ್ರಕರಣದ ಕುರಿತು ಸೈಬರ್&zwnj; ಕ್ರೈಂ ಪೊಲೀಸರು ತನಿಖೆ ಆರಂಭಿಸುವ ಸಾಧ್ಯತೆ ಇದೆ.&lt;/p&gt;]]></content:encoded>
            <category>shivamogga</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/offensive-comment-on-lift-incident-vishal-mart-shivamogga-action-sought-against-kptcl-employee-rav-1ut34nn"/>
        </item>
        <item>
            <title><![CDATA[ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ನಿರ್ಣಯ: ಸಚಿವ ಮಧು ಬಂಗಾರಪ್ಪ]]></title>
            <link>https://kannada.asianetnews.com/karnataka-districts/shivamogga-opposes-besur-nuclear-plant-proposal-madhu-bangarappa-gvd/articleshow-2penv15</link>
            <guid isPermaLink="true">https://kannada.asianetnews.com/karnataka-districts/shivamogga-opposes-besur-nuclear-plant-proposal-madhu-bangarappa-gvd/articleshow-2penv15</guid>
            <pubDate>Fri, 22 May 2026 22:28:20 +0530</pubDate>
            <description><![CDATA[&lt;p&gt;ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಲು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcntehsj5znq0d6h9xw7swp8,imgname-----------------------2025-12-17t145802.366-1765963941682.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಮೇ.22):&lt;/strong&gt; ಜಿಲ್ಲೆಯ ಸಾಗರ ತಾಲೂಕಿನ&zwnj; ಬೇಸೂರು ಗ್ರಾಮದಲ್ಲಿ ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಲು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸಭೆಯಲ್ಲಿ ಎರಡು ಮುಖ್ಯ ನಿರ್ಣಯ ಕೈಗೊಳ್ಳಲಾಗುತ್ತಿದ್ದು, ಬೇಸೂರು ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಎಂದು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ. ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆಗಬೇಕೆಂದು ವಕೀಲರ ಸಂಘ ಸೇರಿದಂತೆ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹೋರಾಟ ಮಾಡುತ್ತಿದ್ದು, ಪಕ್ಷಾತೀತವಾಗಿ&lt;/p&gt;&lt;p&gt;ಈ&zwnj; ನಿರ್ಣಯ ಕುರಿತಾದ ಸಹಿ ಹೊಂದಿದ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಸಹ ಸಲ್ಲಿಸಿ ಒತ್ತಡ ತರೋಣ ಎಂದರು. ನಾನೇ ವೈಯಕ್ತಿಕ ಕೆಲವು ಪಿಎಚ್&zwnj;ಸಿ ಗಳಿಗೆ ಭೇಟಿ ನೀಡಿದ್ದೇನೆ. ವೈದ್ಯರ ಕೊರತೆ, ಹುದ್ದೆ ಭರ್ತಿ ಬಗ್ಗೆ ಚರ್ಚಿಸಿ ಕ್ರಮ&zwnj; ವಹಿಸಲಾಗುವುದು. 10 ರಿಂದ 15 ಒಳಗೆ ಸಮಿತಿ ರಚಿಸಬೇಕಿದೆ. ಮೆಗ್ಗಾನ್ ಬೋಧನಾ ಆಸ್ಪತ್ರೆ ಒತ್ತಡ ಹೆಚ್ಚುತ್ತಿರುವ ಕಾರಣ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಮಂಜೂರಾತಿ ಬಗ್ಗೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ವೈದ್ಯರ ಕೊರತೆ, ಮೆಗ್ಗಾನ್ ಆಸ್ಪತ್ರೆ ಸಮಸ್ಯೆಗಳು ಕುರಿತು ಚರ್ಚಿಸಲು 10 ರಿಂದ 15 ದಿನಗಳ ಒಳಗೆ ಉಸ್ತುವಾರಿ ಸಮಿತಿ ರಚಿಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.&lt;/p&gt;&lt;p&gt;ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡು ಡ್ಯಾಂ ಸೂಕ್ಷ್ಮ ಪ್ರದೇಶದಲ್ಲಿ ಮುಳುಗಡೆಯಾಗಿ ಎರಡು ಬಾರಿ ಜನರು ನಿರಾಶ್ರಿತರಾಗಿ ಈಗಾಗಲೇ ಬೇಸತ್ತಿದ್ದು ಇದೀಗ ಬೇಸೂರು ಅಣುಸ್ಥಾವರ ಪ್ರಸ್ತಾಪದ ಬಗ್ಗೆ ರೈತರು ಬಹಳ ಭಯದಲ್ಲಿದ್ದಾರೆ. ಬೇಸೂರು ಅಣು ಸ್ಥಾವರ ಮಾಡಲು ಸಚಿವರು, ಶಾಸಕರು ಬಿಡುವುದಿಲ್ಲ ಎಂದರು. ಇಲ್ಲಿ 90 ಲಕ್ಷ ರು. ಪ್ರಕರಣ ಬಾಕಿ ಇದ್ದು, ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಯಿಂದ ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದೆ, ಸರ್ವಾನುಮತದಿಂದ ಪೀಠ ಸ್ಥಾಪನೆಗೆ ಒತ್ತಾಯಿಸುತ್ತೇವೆ ಎಂದರು.&lt;/p&gt;&lt;p&gt;ಮುಳುಗಡೆ ಸಂತ್ರಸ್ತರು ಈಗಾಗಲೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಫಾರೆಸ್ಟರ್ ಗಳು ಜನರು ಗಾಬರಿಯಾಗುವ ರೀತಿಯಲ್ಲಿ ಈ ಭಾಗದಲ್ಲಿ ನಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಗಾಬರಿಯಲ್ಲಿದ್ದಾರೆ. ಗಮನಕ್ಕೆ ಬಾರದೆ ಡೀಮ್ಡ್ ಅರಣ್ಯ ಸಭೆ ನಡೆಸಿ ಕ್ರಮ&zwnj; ಕೈಗೊಳ್ಳುತ್ತಿದ್ದೀರಿ. ರೈತರ ಗಿಡಗಳನ್ನು ಏಕೆ ಕೀಳುತ್ತೀರಿ. ನಮ್ಮ ಗಮನಕ್ಕೆ ಏಕೆ ತರುತ್ತಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನ ತಿರುಗಿಬೀಳುತ್ತಾರೆ. ಅರಣ್ಯ ಕಾಯ್ದೆಯಂತೆ ನಡೆದುಕೊಳ್ಳಿರಿ.ಸಮಸ್ಯೆಯನ್ನು ಎಲ್ಲರೂ ಕೂತು ಬಗೆಹರಿಸಬೇಕು. ಇಂತಹ ಕ್ರಮ ವಹಿಸುವ ಮುನ್ನ ಅರಣ್ಯ ಇಲಾಖೆಯವರು ಸಭೆ ಕರೆಯಬೇಕು ಎಂದರು.&lt;/p&gt;&lt;h2&gt;&lt;strong&gt;ಕಡ್ಡಾಯವಾಗಿ ಪಡೆಯಬೇಕು&lt;/strong&gt;&lt;/h2&gt;&lt;p&gt;ಡಿಎಚ್&zwnj;ಒ ಡಾ. ನಟರಾಜ್ ಮಾತನಾಡಿ, 18 ಪಿಎಚ್&zwnj;ಸಿಗಳಲ್ಲಿ 18 ಹುದ್ದೆ ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ ಎಂದರು. ಡಾ.ಧನಂಜಯ ಸರ್ಜಿ ಮಾತನಾಡಿ, ಪಿಜಿ ಔಟ್ ಪುಟ್ ಸಾಕಷ್ಟಿದ್ದು, ಪಿಜಿ ವಿದ್ಯಾರ್ಥಿಗಳ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಪಡೆಯಬೇಕು. ಆಗ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಾಧ್ಯವಾಗುತ್ತದೆ. ಅವರು ಸೇವೆ ಸಲ್ಲಿಸದಿದ್ದರೆ 15 ರು. ರಿಂದ 50 ಲಕ್ಷದವರೆಗೆ ದಂಡ ಪಾವತಿಸಬೇಕಾಗುತ್ತದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 2 ರು. ಕೋಟಿ ವೆಚ್ಚದಲ್ಲಿ ಮಂಜೂರಾದ ಸಾರ್ವಜನಿಕರಿಗೆ ಶೌಚಾಶಯ, ವಿಶ್ರಾಂತಿ ಭವನ ನಿರ್ಮಾಣ ಕಾರ್ಯ ಇನ್ನೂ ಆಗಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.&lt;/p&gt;&lt;p&gt;ವಿಧಾನ ಪರಿಷತ್&zwnj; ಸದಸ್ಯೆ ಮಾತನಾಡಿ, ಬಲ್ಕೀಶ್ ಬಾನು&zwnj; ಮೆಡಿಕಲ್ ಕಾಲೇಜುಗಳ ನೋಟಿಸ್ ಬೋರ್ಡ್ ಗಳಲ್ಲಿ ಖಾಲಿ ಹುದ್ದೆಗಳ ಬಗ್ಗೆ ತಿಳಿಸಿರಿ ಎಂದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತೀರ್ಥಹಳ್ಳಿ ಹಾಗೂ ಮಲೆನಾಡು ಭಾಗದಲ್ಲಿ ವೈದ್ಯರ ಕೊರತೆ ತುಂಬಾ ಇದೆ. ವೈದ್ಯರ ನೇಮಕ ಆಗಿದ್ದರೂ ರೋಗಿಗಳು ಬಂದಾಗ ವೈದ್ಯರು ಲಭ್ಯ ಇರುವುದಿಲ್ಲ. ಹಾಗೂ ಈ ಭಾಗದಲ್ಲಿ ಆಂಬುಲೆನ್ಸ್ ಇಲ್ಲವೆಂದು ತಿಳಿಸಿದರು. ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ರಾತ್ರಿ ವೇಳೆ ಹಿರಿಯ ವೈದ್ಯರೇ ಇರುವುದಿಲ್ಲ. ಇಲ್ಲಿ ಆಡಳಿತ ವೈಫಲ್ಯ ಆಗಿದೆ ಎಂದು ದೂರಿದರು.&lt;/p&gt;]]></content:encoded>
            <category>shivamogga</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/shivamogga-opposes-besur-nuclear-plant-proposal-madhu-bangarappa-gvd/articleshow-2penv15"/>
        </item>
        <item>
            <title><![CDATA[ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ: ಈ 5 ಜಿಲ್ಲೆಗಳಿಗೆ ಗುಡ್‌ ನ್ಯೂಸ್! ನೂತನ ಮಾರ್ಗ ಎಲ್ಲಿಂದ ಎಲ್ಲಿಗೆ?]]></title>
            <link>https://kannada.asianetnews.com/gallery/karnataka-districts/shivamogga-mangaluru-railway-line-new-route-cost-districts-and-latest-project-update-kvn-3bgilxq</link>
            <guid isPermaLink="true">https://kannada.asianetnews.com/gallery/karnataka-districts/shivamogga-mangaluru-railway-line-new-route-cost-districts-and-latest-project-update-kvn-3bgilxq</guid>
            <pubDate>Thu, 28 May 2026 12:23:03 +0530</pubDate>
            <description><![CDATA[&lt;p&gt;ಶಿವಮೊಗ್ಗ: ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿ ಎನಿಸಿಕೊಂಡಿರುವ ನೂತನ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ವೇಗ ಸಿಕ್ಕಿದ್ದು, ಈ ಯೋಜನೆ ಸಾಕಾರಗೊಂಡರೆ ಐದು ಜಿಲ್ಲೆಗಳಿಗೆ ರೈಲ್ವೇ ನೇರ ಸಂಪರ್ಕ ಸಿಗಲಿದೆ. ನೂತನ ರೈಲ್ವೇ ಮಾರ್ಗದ ಬಗ್ಗೆ ಕುತೂಹಲ ಮನೆ ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksphq7ck9atjhr7p4x09t11k,imgname-shivamogga-railway-station-1779946986898.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿ ಎನಿಸಿಕೊಂಡಿರುವ ನೂತನ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ವೇಗ ಸಿಕ್ಕಿದ್ದು, ಈ ಯೋಜನೆ ಸಾಕಾರಗೊಂಡರೆ ಐದು ಜಿಲ್ಲೆಗಳಿಗೆ ರೈಲ್ವೇ ನೇರ ಸಂಪರ್ಕ ಸಿಗಲಿದೆ. ನೂತನ ರೈಲ್ವೇ ಮಾರ್ಗದ ಬಗ್ಗೆ ಕುತೂಹಲ ಮನೆ ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಹುದಿನಗಳ ಕನಸಾಗಿರುವ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ಬರೋಬ್ಬರಿ 332 ಕಿಲೋಮೀಟರ್ ಉದ್ದವಿರಲಿದ್ದು, ಈ ನೂತನ ರೈಲ್ವೇ ಟ್ರ್ಯಾಕ್&zwnj;ಗೆ ಸುಮಾರು 3,300 ಕೋಟಿ ರುಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಯೋಜನೆ ಸಾಕಾರಗೊಂಡರೇ ಮಲೆನಾಡು, ಅರೆ ಮಲೆನಾಡು ಹಾಗೂ ಕರಾವಳಿಯನ್ನು ಬೆಸೆಯುವ ಕೊಂಡಿಯಾಗಲಿದೆ.&lt;/p&gt;&lt;img&gt;&lt;p&gt;ಈ ರೈಲ್ವೇ ಮಾರ್ಗದ ಕುರಿತಂತೆ ಭಾರತೀಯ ರೈಲ್ವೇ ಇಲಾಖೆಯೂ ಈಗಾಗಲೇ ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ನೀಡಿದೆ. ಇದೀಗ ಈ ಬೃಹತ್ ಯೋಜನೆಯ ಕುರಿತಂತೆ ಡಿಪಿಆರ್&zwnj; ತಯಾರಿಕೆಗೆ ಟೆಂಡರ್&zwnj; ಕರೆಯಲು ರೈಲ್ವೇ ಇಲಾಖೆ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಈ ಮೊದಲು 2018ರ ರೈಲ್ವೇ ಬಜೆಟ್&zwnj;ನಲ್ಲಿ ಆಗಿನ ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರು ಮೊದಲ ಬಾರಿಗೆ ಶಿವಮೊಗ್ಗ-ಮಂಗಳೂರು ಮಾರ್ಗದ ಕುರಿತಂತೆ ಪ್ರಸ್ತಾಪ ಮಾಡಿದ್ದರು. ಇದು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಸೇರಿದಂತೆ ಐದು ಜಿಲ್ಲೆಯ ಜನರಿಗೆ ನೇರ ರೈಲು ಸಂಪರ್ಕ ಸಿಗುವಂತೆ ಮಾಡಲಿದೆ.&lt;/p&gt;&lt;img&gt;&lt;p&gt;ಇದೀಗ ಈ ನೂತನ ರೈಲು ಮಾರ್ಗವು ಎಲ್ಲಿಂದ ಎಲ್ಲಿಗೆ ತಲುಪಲಿದೆ ಎನ್ನುವ ಕುತೂಹಲ ಮನೆ ಮಾಡಿದೆ. ಈ ಮೊದಲು ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ, ಶೃಂಗೇರಿ ಮಾರ್ಗವಾಗಿ ಮಂಗಳೂರು ತಲುಪುವ ಬಗ್ಗೆ ಚಿಂತನೆ ನಡೆದಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.&lt;/p&gt;&lt;img&gt;&lt;p&gt;ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಅರಸಾಳು(ಮಾಲ್ಗುಡಿ ಮ್ಯೂಸಿಯಂ)ವಿನಿಂದ ರಿಪ್ಪನ್&zwnj;ಪೇಟೆ, ಹುಂಚ, ಕೋಣಂದೂರು, ತೀರ್ಥಹಳ್ಳಿ, ಶೃಂಗೇರಿ ಮಾರ್ಗವಾಗಿ ಮಂಗಳೂರು ತಲುಪುವಂತೆ ನೂತನ ಟ್ರ್ಯಾಕ್ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.&lt;/p&gt;&lt;img&gt;&lt;p&gt;ಈ ರೈಲ್ವೇ ಮಾರ್ಗವು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಬರುವುದರಿಂದ ಈ ಮಾರ್ಗ ಅನುಷ್ಟಾನಕ್ಕೆ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆ ಒಪ್ಪಿಗೆ ಪಡೆಯುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಈಗಾಗಲೇ ಈಗಾಗಲೇ ತಾಳಗುಪ್ಪದಿಂದ ಹೊನ್ನಾವರ ರೈಲ್ವೇ ಮಾರ್ಗ ಯೋಜನೆ ಕುಂಟುತ್ತಲೇ ಸಾಗುತ್ತಿದೆ.&lt;/p&gt;]]></content:encoded>
            <category>shivamogga</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/karnataka-districts/shivamogga-mangaluru-railway-line-new-route-cost-districts-and-latest-project-update-kvn-3bgilxq"/>
        </item>
        <item>
            <title><![CDATA[ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ, 3,300 ಕೋಟಿ ರು. ಯೋಜನಾ ವೆಚ್ಚ, ವಂದೇ ಭಾರತ್ ಶೀಘ್ರ!]]></title>
            <link>https://kannada.asianetnews.com/gallery/karnataka-districts/karnataka-railway-updates-shivamogga-mangaluru-rs-3300-cr-line-and-big-railway-upgrades-gdp-3tdvnud</link>
            <guid isPermaLink="true">https://kannada.asianetnews.com/gallery/karnataka-districts/karnataka-railway-updates-shivamogga-mangaluru-rs-3300-cr-line-and-big-railway-upgrades-gdp-3tdvnud</guid>
            <pubDate>Sun, 24 May 2026 12:05:34 +0530</pubDate>
            <description><![CDATA[&lt;p&gt;ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಇದರೊಂದಿಗೆ, ಮಂಗಳೂರು-ಬೆಂಗಳೂರು ನಡುವೆ ಜೂನ್&zwnj;ನಿಂದ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj; ಸಂಚಾರ ಆರಂಭವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk9bp62qv9cthntcjy9jaten,imgname-chittur-railway-station-1773062002775.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಇದರೊಂದಿಗೆ, ಮಂಗಳೂರು-ಬೆಂಗಳೂರು ನಡುವೆ ಜೂನ್&zwnj;ನಿಂದ ವಂದೇ ಭಾರತ್ ಎಕ್ಸ್&zwnj;ಪ್ರೆಸ್&zwnj; ಸಂಚಾರ ಆರಂಭವಾಗಲಿದೆ.&lt;/p&gt;&lt;img&gt;&lt;p&gt;ಮಂಗಳೂರು: ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ರಚನೆ ಬಗ್ಗೆ ಸಮೀಕ್ಷೆ ಪೂರ್ಣಗೊಂಡಿದ್ದು, ಟೆಂಡರ್&zwnj; ಬಾಕಿ ಇದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಹೇಳಿದ್ದಾರೆ. ಮಂಗಳೂರು ಜಂಕ್ಷನ್&zwnj; ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಅವರು ಅಮೃತ ಭಾರತ್&zwnj; ಯೋಜನೆಯಡಿ ಇಲ್ಲಿನ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು. ಪ್ರಸ್ತಾವಿಕ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ 332 ಕಿ.ಮೀ. ಇರಲಿದ್ದು, 3,300 ಕೋಟಿ ರು. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಈ ಮಾರ್ಗದ ಎಫ್&zwnj;ಎಲ್&zwnj;ಸಿ(ಫೈನಲ್&zwnj; ಲೊಕೇಷನ್&zwnj; ಸರ್ವೆ) ನಡೆದು ಅನುಮೋದನೆಗೊಂಡಿದ್ದು, ಶೀಘ್ರವೇ ಟೆಂಡರ್&zwnj; ಕರೆಯಲಾಗುವುದು ಎಂದರು. ಹಾಸನ-ಮಂಗಳೂರು ನಡುವೆ 247 ಕಿ.ಮೀ. ರೈಲು ಹಳಿಯನ್ನು 8,300 ಕೋಟಿ ರು.ಗಳಲ್ಲಿ ದ್ವಿಗುಣಗೊಳಿಸುವ ಕಾರ್ಯದ ಎಫ್&zwnj;ಎಲ್&zwnj;ಸಿ ಪರಿಶೀಲನಾ ಹಂತದಲ್ಲಿದೆ ಎಂದರು.&lt;/p&gt;&lt;img&gt;&lt;p&gt;ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ ಸೃಜಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೂ ಮುನ್ನ ಮಂಗಳೂರು ಒಳಗೊಂಡಿರುವ ಕೊಂಕಣ, ನೈರುತ್ಯ ಹಾಗೂ ದಕ್ಷಿಣ ರೈಲ್ವೆ ಈ ಮೂರು ವಿಭಾಗಗಳಲ್ಲಿ ಮಂಗಳೂರಿನ ಒಂದೇ ವಿಭಾಗದಡಿ ತರುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿವೆ. ಆದಷ್ಟು ಶೀಘ್ರದಲ್ಲಿ ಈ ಬೇಡಿಕೆ ನೆರವೇರಲಿದೆ ಎಂದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಅನುಕೂಲವಾಗಲು ಸಮೀಪದಲ್ಲೇ ರೈಲು ನಿಲ್ದಾಣ ರಚನೆ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದರು.&lt;/p&gt;&lt;img&gt;&lt;p&gt;ಭೂಸ್ವಾಧೀನ ನಡೆಸಿ ಕೈಗೊಳ್ಳುವ ರೈಲ್ವೆ ಇಲಾಖೆಯ ಕಾಮಗಾರಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತ ನೀಡದೆ ವೃಥಾ ವಿಳಂಬಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಭೂಸ್ವಾಧೀನದ ಕಾಮಗಾರಿಗಳಿಗೆ ರೈಲ್ವೆಯೇ ಪರಿಹಾರ ಮೊತ್ತ ಪಾವತಿಸಿ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದರು.&lt;/p&gt;&lt;p&gt;ಮಂಗಳೂರಿನ ಗೂಡ್ಸ್&zwnj;ಶೆಡ್&zwnj; ಬಳಿ ಖಾಲಿ ಕೋಚ್&zwnj; ರೈಲುಗಳ ಸಂಚಾರದಿಂದಾಗಿ ಆಗಾಗ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇದನ್ನು ನಿವಾರಿಸಲು ಸಂಸದರು, ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯವಿದ್ದರೆ ಭೂಸ್ವಾಧೀನ ನಡೆಸಿ ಕೆಳಸೇತುವೆ ರಚಿಸುವ ಬಗ್ಗೆ ಪರಿಶೀಲಿಸುವಂತೆ ಸಚಿವ ಸೋಮಣ್ಣ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರು. ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಹಣ ನೀಡದಿದ್ದರೆ ಕಾಮಗಾರಿ ವಿಳಂಬವಾಗುತ್ತದೆ ಎಂಬ ಸಂಸದ ಮಾತಿಗೆ ಉತ್ತರಿಸಿದ ಸಚಿವ ಸೋಮಣ್ಣ, ಇನ್ನು ಮುಂದೆ ತುರ್ತು ಕೆಲಸಗಳಿಗೆ ರೈಲ್ವೆಯಿಂದಲೇ ಭೂಸ್ವಾಧೀನಕ್ಕೆ ಪರಿಹಾರ ಮೊತ್ತ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.&lt;/p&gt;&lt;img&gt;&lt;p&gt;ಮಂಗಳೂರು ಜಂಕ್ಷನ್&zwnj; ಮತ್ತು ಮಂಗಳೂರು ಸೆಂಟ್ರಲ್&zwnj; ರೈಲು ನಿಲ್ದಾಣಗಳ ತ್ವರಿತ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಮಂಗಳೂರು ಜಂಕ್ಷನ್&zwnj;ನಲ್ಲಿ 38 ಕೋಟಿ ರು.ಗಳಲ್ಲಿ ಅಭಿವೃದ್ಧಿ ಕಾಮಗಾರಿ ಅಕ್ಟೋಬರ್&zwnj;ನಲ್ಲಿ ಮುಕ್ತಾಯಗೊಳ್ಳಬೇಕು. ಇಲ್ಲಿ ಜಂಕ್ಷನ್&zwnj; ಯಾರ್ಡ್&zwnj; ಅಭಿವೃದ್ಧಿಗೊಳ್ಳಲಿದ್ದು, ಹೆಚ್ಚುವರಿ ಗೂಡ್ಸ್&zwnj; ರೈಲು ಹಳಿ ರಚನೆಯಾಗಲಿದೆ ಎಂದರು. ಮಂಗಳೂರು ಸೆಂಟ್ರಲ್&zwnj; ಅಭಿವೃದ್ಧಿಗೆ ಮಾಸ್ಟರ್&zwnj; ಪ್ಲ್ಯಾನ್&zwnj; ರೂಪಿಸಬೇಕು. ಅಲ್ಲದೆ ಇಡೀ ಮಂಗಳೂರು ಪ್ರದೇಶದಲ್ಲಿ ರೈಲ್ವೆ ಅಭಿವೃದ್ಧಿಗೆ ಪ್ರತ್ಯೇಕ ಮಾಸ್ಟರ್&zwnj; ಪ್ಲ್ಯಾನ್&zwnj; ರೂಪಿಸುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು. ಆರು ತಿಂಗಳಲ್ಲಿ ಇನ್ನಷ್ಟು ಪಾರದರ್ಶಕ ಬದಲಾವಣೆ ನಿರೀಕ್ಷಿಸಬಹುದು ಎಂದರು.&lt;/p&gt;&lt;img&gt;&lt;p&gt;ಮಂಗಳೂರು ಸೆಂಟ್ರಲ್&zwnj; ಹಾಗೂ ಜಂಕ್ಷನ್&zwnj; ರೈಲು ನಿಲ್ದಾಣದಲ್ಲಿ ಕನ್ನಡ ಬಲ್ಲ ಸಿಬ್ಬಂದಿ ನೇಮಿಸುವಂತೆ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಹೇಳಿದರು. ಭಾಷಾ ಸಮಸ್ಯೆ ಉಂಟಾಗಬಾರದು. ಬೇರೆ ರಾಜ್ಯದವರಾಗಿದ್ದರೂ ಕರ್ನಾಟಕದಲ್ಲಿ ಕನಿಷ್ಠ ಸಂವಹನ ನಡೆಸಲು ಕನ್ನಡ ಭಾಷೆ ಕಲಿಯಬೇಕು ಎಂದು ತಾಕೀತು ಮಾಡಿದರು. ಸಂಸದ ಕ್ಯಾ.ಬ್ರಿಜೇಶ್&zwnj; ಚೌಟ, ಫಾಲ್ಘಾಟ್&zwnj; ರೈಲ್ವೆ ಅಧಿಕಾರಿ ಮಧುಕರ ರಾವತ್&zwnj; ಮತ್ತಿತರರಿದ್ದರು.&lt;/p&gt;&lt;img&gt;&lt;p&gt;ಮಂಗಳೂರು-ಬೆಂಗಳೂರು ನಡುವೆ ಬಹು ನಿರೀಕ್ಷಿತ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲು ಜೂನ್&zwnj; ತಿಂಗಳಲ್ಲಿ ಸಂಚಾರ ಆರಂಭಿಸಲಿದೆ. ಪ್ರಧಾನಿಯರು ಮಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಹೊಸ ರೈಲು ಸಂಚಾರಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದರು. ಬೆಂಗಳೂರು-ಕಾರವಾರ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲು ಬೇಡಿಕೆ ಬಗ್ಗೆ ಮಾತನಾಡಿದ ಸಚಿವ ಸೋಮಣ್ಣ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಸಂಸದರು ಇದ್ದಾರೆ. ಅವರ ಬೇಡಿಕೆಯನ್ನು ಪರಿಶೀಲಿಸಬೇಕಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ವರೆಗೆ 55 ಕಿ.ಮೀ. ದೂರ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡಿದೆ. ಹೀಗಾಗಿ ಬೆಂಗಳೂರು-ಮಂಗಳೂರು ನಡುವೆ ಪೂರ್ತಿಯಾಗಿ ವಿದ್ಯುದೀಕರಣವಾಗಿದ್ದು, ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶಗಳು ತೆರೆದುಕೊಂಡಿವೆ ಎಂದರು.&lt;/p&gt;&lt;img&gt;&lt;p&gt;ಮಂಗಳೂರು-ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ನಡುವೆ ಮೆಮು ರೈಲು ಓಡಾಟಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಫಾಲ್ಘಾಟ್&zwnj; ರೈಲ್ವೆ ಅಧಿಕಾರಿಗೆ ಸಚಿವ ಸೋಮಣ್ಣ ಸೂಚಿಸಿದರು. ಈ ಮಾರ್ಗದಲ್ಲಿ ಹಾಲಿ ಸಂಚರಿಸುವ ಪ್ಯಾಸೆಂಜರ್&zwnj; ಓಡಾಟವನ್ನು ಇನ್ನಷ್ಟು ಹೆಚ್ಚಳಗೊಳಿಸುವ ಉದ್ದೇಶ ಇದೆ ಎಂದರು.&lt;/p&gt;&lt;h2&gt;ವೇಳಾಪಟ್ಟಿ ಬದಲಾವಣೆ ಇಲ್ಲ:&lt;/h2&gt;&lt;p&gt;ಪಂಚಗಂಗಾ ಎಕ್ಸ್&zwnj;ಪ್ರೆಸ್&zwnj; ಸೇರಿದಂತೆ ಬೆಂಗಳೂರು-ಮಂಗಳೂರು-ಕಾರವಾರ ನಡುವಿನ ಯಾವುದೇ ರೈಲುಗಳ ವೇಳಾಪಟ್ಟಿ ಪರಿಷ್ಕರಿಸಿ ವಿಳಂಬಿಸುವ ಯೋಚನೆ ಇಲ್ಲ. ಮುಂಬೈ ಸಿಎಸ್&zwnj;ಟಿ, ಗೋಮಟೇಶ್ವರ ಎಕ್ಸ್&zwnj;ಪ್ರೆಸ್&zwnj; ಹಾಗೂ ಯಶವಂತಪುರ ಎಕ್ಸ್&zwnj;ಪ್ರೆಸ್&zwnj; ರೈಲನ್ನು ಮಂಗಳೂರು ಸೆಂಟ್ರಲ್&zwnj;ಗೆ ವಿಸ್ತರಿಸಲು ಪರಿಶೀಲಿಸಲಾಗುವುದು. ಮಂಗಳೂರು ಸೆಂಟ್ರಲ್&zwnj; ನಿಲ್ದಾಣದಲ್ಲಿ ಮತ್ತೆ ಹೆಚ್ಚುವರಿ ಫ್ಲ್ಯಾಟ್&zwnj; ಫಾರಂ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.&lt;/p&gt;]]></content:encoded>
            <category>shivamogga</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/karnataka-railway-updates-shivamogga-mangaluru-rs-3300-cr-line-and-big-railway-upgrades-gdp-3tdvnud"/>
        </item>
        <item>
            <title><![CDATA[ರಾಜ್ಯದಲ್ಲಿ ಹೊಸ ಸಿಎಂ ಬಂದರೂ ಸರ್ಕಾರ ಉಳಿಯಲ್ಲ: ಬಿ.ವೈ.ವಿಜಯೇಂದ್ರ ಸ್ಫೋಟಕ ಹೇಳಿಕೆ]]></title>
            <link>https://kannada.asianetnews.com/karnataka-districts/bjp-president-by-vijayendra-predicts-early-election-karnataka-gvd/articleshow-4pulygh</link>
            <guid isPermaLink="true">https://kannada.asianetnews.com/karnataka-districts/bjp-president-by-vijayendra-predicts-early-election-karnataka-gvd/articleshow-4pulygh</guid>
            <pubDate>Thu, 28 May 2026 17:23:37 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಅದು ಕೇವಲ ತಾತ್ಕಾಲಿಕವಾಗಿದ್ದು, ಅವಧಿ ಪೂರ್ವ ಚುನಾವಣೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksm2cbhfjvdxvq9veb346rg7,imgname-----------------------2026-05-27t120603.979-1779863793199.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಮೇ.28): &lt;/strong&gt;ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಅದು ಕೇವಲ ತಾತ್ಕಾಲಿಕವಾಗಿದ್ದು, ಅವಧಿ ಪೂರ್ವ ಚುನಾವಣೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷದಲ್ಲಿ ಉತ್ತಮ ಆಡಳಿತ ಕೊಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲವಾಗಿದ್ದಾರೆ. ನಿನ್ನೆ ದೆಹಲಿಯಲ್ಲಿ 5 ಗಂಟೆಗಳ ಕಾಲ ಮ್ಯಾರಥಾನ್ ಸಭೆ ನಡೆಸಿ, ಸಿಎಂ ರಾಜೀನಾಮೆ ತೆಗೆದುಕೊಳ್ಳುವ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ ಎಂದರು.&lt;/p&gt;&lt;p&gt;ಸಿದ್ದರಾಮಯ್ಯ ಇವತ್ತು ಅಥವಾ ನಾಳೆ ರಾಜೀನಾಮೆ ಕೊಟ್ಟು ಯಾರು ಸಿಎಂ ಆಗ್ತಾರೆ ಅನ್ನೋದು ಮುಖ್ಯ ಅಲ್ಲ. ಸಿಎಂ ಸಿದ್ದರಾಮಯ್ಯ ಬಗ್ಗೆ ನನಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ಮುಂದೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಮುಖ್ಯವಲ್ಲ. ಸಿದ್ದರಾಮಯ್ಯ 10 ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅದನ್ನು ಮತ್ತೆ ಹಳಿಗೆ ತರುವ ಬಹುದೊಡ್ಡ ಸವಾಲು ಮುಂದೆ ಬರುವವರಿಗೆ ಎದುರಾಗಲಿದೆ ಎಂದು ಹೇಳಿದರು.&lt;/p&gt;&lt;p&gt;ಈ ಸರ್ಕಾರ ವಿಪರೀತ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿಯೇ ಉಪ ಚುನಾವಣೆಯಲ್ಲಿ ಗೆದ್ದರೂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವ್ಯಂಗ್ಯವಾಡಿದರು. ಆಂತರಿಕ ಕಚ್ಚಾಟದಿಂದ ಆಡಳಿತ ಸಂಪೂರ್ಣ ಕುಸಿದಿತ್ತು. ಒಟ್ಟಾರೆ ಪರಿಣಾಮ ದೇಶದಲ್ಲಿ ಕಾಂಗ್ರೆಸ್ ಕೊನೆದಿನಗಳನ್ನು ನೋಡುತ್ತಿದೆ. ರಾಜ್ಯದಲ್ಲೂ ಕಾಂಗ್ರೆಸ್ ಅವನತಿಯತ್ತ ಹೋಗುತ್ತಿರುವ ಮುನ್ಸೂಚನೆ ಎಂದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣ ನಡೆದಿದೆ. ರಾಜ್ಯದ ಇತಿಹಾಸದಲ್ಲಿ ಅಧಿಕಾರಿಗಳು ಆತ್ಮ*ಹ*ತ್ಯೆ ಮಾಡಿಕೊಂಡಿದ್ದು ಇದ್ರೇ ಅದು ಸಿದ್ದರಾಮಯ್ಯ ಸರ್ಕಾರದಲ್ಲಿ. ಇದು ಜನ ವಿರೋಧಿ ಸರ್ಕಾರ ಎಂದು ಟೀಕಿಸಿದರು.&lt;/p&gt;&lt;h2&gt;&lt;strong&gt;ಮೋದಿ ಸಾರ್ವಕಾಲಿಕ ದಾಖಲೆ&lt;/strong&gt;&lt;/h2&gt;&lt;p&gt;ಸತತ 12 ವರ್ಷ ಆಡಳಿತ ನಡೆಸಿದ ಏಕೈಕ ಚುನಾಯಿತ ಪ್ರಧಾನಿ ಎಂಬ ಶ್ರೇಯ ಈಗ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಅವರು ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಪ್ರಧಾನಿ ಆಗಿ ಆರಂಭದಲ್ಲಿ ಸವಾಲುಗಳ ಎದುರಿಸಿದ ನರೇಂದ್ರ ಮೋದಿ, ನಂತರ ಯಾವುದೇ ಹಗರಣಗಳು ಇಲ್ಲದೇ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದಾರೆ. ಇದು ಶ್ಲಾಘನೀಯ ಎಂದರು.&lt;/p&gt;]]></content:encoded>
            <category>shivamogga</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bjp-president-by-vijayendra-predicts-early-election-karnataka-gvd/articleshow-4pulygh"/>
        </item>
        <item>
            <title><![CDATA[ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಸಮೀಕ್ಷೆ ಸರಿಯಲ್ಲ: ಗುಡುಗಿದ ಕೆ.ಎಸ್.ಈಶ್ವರಪ್ಪ]]></title>
            <link>https://kannada.asianetnews.com/karnataka-districts/sharavathi-pumped-storage-project-cec-visit-row-ks-eshwarappa-gvd/articleshow-5e3ulbg</link>
            <guid isPermaLink="true">https://kannada.asianetnews.com/karnataka-districts/sharavathi-pumped-storage-project-cec-visit-row-ks-eshwarappa-gvd/articleshow-5e3ulbg</guid>
            <pubDate>Tue, 02 Jun 2026 17:22:36 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯು (ಸಿಇಸಿ) ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g975x17kzyppr01r9h4rdkry,imgname-ks-eshwarappa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಜೂ.02):&lt;/strong&gt; ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಡೆಹಿಡಿಯುವಂತೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯು (ಸಿಇಸಿ) ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಗುಡುಗಿದರು.&lt;/p&gt;&lt;p&gt;ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಸರ ಮಾರಕ ಯೋಜನೆಯ ವಿರುದ್ಧ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಅಲ್ಲದೆ ಕೇಂದ್ರ ಸರ್ಕಾರದ ಪರಿಸರ ಮತ್ತು ಹವಾಮಾನ ಇಲಾಖೆಯ ಸಂಶೋಧನಾ ಮುಖ್ಯಸ್ಥರಾದ ಪ್ರಣೀತಾ ಕೌರ್ ಹಾಗೂ ಇತರ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಮುಖ್ಯಸ್ಥರೇ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಶರಾವತಿ ಕಣಿವೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಎಂಬ ಸ್ಪಷ್ಟ ಅಭಿಪ್ರಾಯ ನೀಡಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;ಅಲ್ಲದೆ, ರಾಜ್ಯ ಉಚ್ಛ ನ್ಯಾಯಾಲಯವು ಕೂಡ ಈ ಯೋಜನೆಗೆ ತಡೆಯಾಜ್ಞೆ ನೀಡಿದೆ. ಆದಾಗ್ಯೂ ಸಿಇಸಿ ಕಮಿಟಿಯವರು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಪಿಸಿಎಲ್ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸುವುದು ಎಂದು ಮೇ 18ರಂದು ಹೊರಡಿಸಿದ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಪತ್ರವೊಂದರಲ್ಲಿ ತಿಳಿಸಲಾಗಿದೆ. ಇದು ಉಚ್ಚ ನ್ಯಾಯಾಲಯದ ಸ್ಪಷ್ಟ ನಿಂದನೆಯಾಗಿದೆ ಎಂದು ಕಿಡಿಕಾರಿದರು.&lt;/p&gt;&lt;h2&gt;&lt;strong&gt;ಅನುಮಾನ ಗಾಢ&lt;/strong&gt;&lt;/h2&gt;&lt;p&gt;ಒಂದು ಸಾಂವಿಧಾನಿಕ, ಸ್ವಾಯತ್ತ ಸಂಸ್ಥೆ ಸ್ಥಳೀಯ ಯೋಜನಾ ಪ್ರದೇಶಕ್ಕೆ ಬರುವ ಸಂದರ್ಭದಲ್ಲಿ ಯೋಜನೆಯ ವಿರುದ್ಧ ಜನಾಭಿಪ್ರಾಯ, ಉಗ್ರ ಹೋರಾಟ ಮಾಡುತ್ತಿರುವ ಸಂಘಟನೆಗಳನ್ನೇ ನಿರ್ಲಕ್ಷಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಈ ಸಮಿತಿಯ ಇಲ್ಲಿಗೆ ಬರುವಾಗ ಸಾರ್ವಜನಿಕರಿಗೆ ಮಾಹಿತಿ ಕೊಡದಿರಲು ಕಾರಣವೇನು, ಇದರ ಹಿಂದೆ ಯಾವುದೋ ಕಾಣದ ಕೈಗಳು ಷಡ್ಯಂತ್ರ ನಡೆಸುತ್ತಿವೆ ಎಂಬ ಅನುಮಾನ ಗಾಢವಾಗಿದೆ. ಅಲ್ಲದೆ ಮೂಕಾಂಬಿಕ ಸಂರಕ್ಷಿತ ಅರಣ್ಯ ಪ್ರದೇಶದ 4000 ಮೆಗಾ ವ್ಯಾಟ್ ಸಾಮರ್ಥ್ಯದ ವರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗೂ ತಾಂತ್ರಿಕ ಅನುಮೋದನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ 75 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇಂತಹದ್ದರಲ್ಲಿ ಸಿಇಸಿ ಸೌಜನ್ಯಕ್ಕಾದರೂ ಇಲ್ಲಿಯ ಭೇಟಿಯ ಮಾಹಿತಿಯನ್ನು ನಮಗೆ ನೀಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಜೂನ್ 2 ರಂದು ಸಂಜೆ 4 ಗಂಟೆಗೆ ಸಿಇಸಿ ಇಲ್ಲಿಯ ಶ್ರೀಗಂಧದ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಲಿದೆ. ನಮ್ಮ ಸಮಿತಿಯ ಪದಾಧಿಕಾರಿಗಳು ಸಿಇಸಿ ಮುಖ್ಯಸ್ಥರನ್ನು, ಸದಸ್ಯರನ್ನು ಭೇಟಿ ಮಾಡಿ ಯೋಜನೆಯ ವಿರುದ್ಧ ತಾವು ಹಮ್ಮಿಕೊಂಡ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಜತೆಗೆ ನ್ಯಾಯಾಲಯದ ಅನುಮತಿ ಇಲ್ಲದೆ ಪರಿಶೀಲನೆಗೆ ಬಂದಿರುವುದು ನ್ಯಾಯಾಲಯದ ನಿಂದನೆಯಾಗುತ್ತಿದ್ದು, ಈ ಬಗ್ಗೆ ಅವರಿಗೆ ರಾಷ್ಟ್ರಭಕ್ತರ ಬಳಗ ಪ್ರಶ್ನಿಸಲಿದೆ ಎಂದು ತಿಳಿಸಿದರು.&lt;/p&gt;]]></content:encoded>
            <category>shivamogga</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sharavathi-pumped-storage-project-cec-visit-row-ks-eshwarappa-gvd/articleshow-5e3ulbg"/>
        </item>
        <item>
            <title><![CDATA[ಉಡುಪಿ: ಕೊಲ್ಲೂರಿನಲ್ಲಿ ಆಕ್ಸಿಡೆಂಟ್ ಆಗಿ ಸತ್ತವರ ಹೆಣದ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ ಸಿಕ್ತು ಟ್ವಿಸ್ಟ್!]]></title>
            <link>https://kannada.asianetnews.com/karnataka-districts/udupi-kollur-accident-dead-womans-gold-stolen-by-govt-hospital-d-group-employee-arrested-sat/articleshow-7tn89fp</link>
            <guid isPermaLink="true">https://kannada.asianetnews.com/karnataka-districts/udupi-kollur-accident-dead-womans-gold-stolen-by-govt-hospital-d-group-employee-arrested-sat/articleshow-7tn89fp</guid>
            <pubDate>Mon, 25 May 2026 13:40:17 +0530</pubDate>
            <description><![CDATA[&lt;p&gt;ಕೊಲ್ಲೂರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಅಪಘಾತ ಸ್ಥಳದಲ್ಲಿ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದ್ದರೂ, ಪೊಲೀಸರು ತನಿಖೆ ಮಾಡಿದಾಗ ರೋಚಕ ತಿರುವು ಕಂಡು ದಂಗಾಗಿದ್ದಾರೆ. ಏನಿದು, ಇಲ್ಲಿದೆ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf2pc977bja3de0v37cr298,imgname-udupi-kollur-accident-dead-womans-gold-stolen-1779696349479.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಮೇ 25): ಕೊ&lt;/strong&gt;ಲ್ಲೂರಿನ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೇರಳ ಮೂಲದ ಮಹಿಳೆಯ ಚಿನ್ನಾಭರಣಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಅತ್ಯಂತ ಆಘಾತಕಾರಿ ಹಾಗೂ ಅನಿರೀಕ್ಷಿತ ತಿರುವು (Twist) ಸಿಕ್ಕಿದೆ! ಅಪಘಾತ ನಡೆದ ಜಾಗದಲ್ಲಿ ಸಾರ್ವಜನಿಕರು ಅಥವಾ ದಾರಿಹೋಕರು ಈ ಚಿನ್ನವನ್ನು ದೋಚಿದ್ದಾರೆ ಎಂದು ಇಷ್ಟು ದಿನ ಶಂಕಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯಲ್ಲಿ ಕಳ್ಳತನ ನಡೆದಿರುವುದು ಅಪಘಾತದ ಸ್ಥಳದಲ್ಲಲ್ಲ, ಬದಲಿಗೆ ರೋಗಿಗಳನ್ನು ಕಾಯಬೇಕಾದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ (Mortuary) ಎಂಬ ಆಘಾತಕಾರಿ ಸತ್ಯ ಬಯಲಾಗಿದೆ!&lt;/p&gt;&lt;p&gt;ಮೃತದೇಹದ ಮೇಲಿದ್ದ ಚಿನ್ನಾಭರಣಗಳನ್ನು ಕದ್ದ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಡಿ-ಗ್ರೂಪ್ ನೌಕರನನ್ನು ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಬಂಧಿತ ಆರೋಪಿ ಮತ್ತು ವಶಪಡಿಸಿಕೊಂಡ ಮಾಲು&lt;/strong&gt;&lt;/h3&gt;&lt;p&gt;ಬಂಧಿತ ಆರೋಪಿಯನ್ನು ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ಹೇಮಂತ (40) ಎಂದು ಗುರುತಿಸಲಾಗಿದೆ. ಈತ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಡಿ-ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ. ಬಂಧಿತ ಆರೋಪಿ ಹೇಮಂತನಿಂದ ಪೊಲೀಸರು ಕಳವು ಮಾಡಲಾಗಿದ್ದ ಬಳೆ, ಉಂಗುರ ಹಾಗೂ ಚಿನ್ನದ ಸರ ಸೇರಿದಂತೆ ಒಟ್ಟು 2 ಲಕ್ಷದ 7 ಸಾವಿರ ರೂಪಾಯಿ ಮೌಲ್ಯದ 14.52 ಗ್ರಾಂ ಚಿನ್ನಾಭರಣಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ತನಿಖೆಯಲ್ಲಿ ಕಳ್ಳಾಟ ಬಯಲಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಕಳೆದ ಮೇ 17 ರಂದು ಕೊಲ್ಲೂರಿನ ದಳಿ ಎಂಬಲ್ಲಿ ಜೀಪ್ ಹಾಗೂ ಮೀನು ಸಾಗಾಟದ ಇನ್ಸುಲೇಟರ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಕೇರಳದ ಜ್ಯೋತಿ ಹಾಗೂ ಆಫಿಯಾ ಅನೂಫ್ ದಾರುಣವಾಗಿ ಸಾವನ್ನಪ್ಪಿದ್ದರು. ಜ್ಯೋತಿ ಅವರ ಮೈಮೇಲಿದ್ದ ಒಡವೆಗಳು ಕಾಣೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು.&lt;/p&gt;&lt;p&gt;ಪ್ರಕರಣದ ಬೆನ್ನುಹತ್ತಿದ ಕೊಲ್ಲೂರು ಪೊಲೀಸರು ತನಿಖೆ ಆರಂಭಿಸಿದಾಗ, ಅಪಘಾತದ ಸ್ಥಳದಲ್ಲಿ ಜ್ಯೋತಿ ಅವರ ಮೃತದೇಹವನ್ನು ಆಂಬ್ಯುಲೆನ್ಸ್&zwnj;ಗೆ ಹತ್ತಿಸುವವರೆಗೂ ಅವರ ಮೈಮೇಲೆ ಚಿನ್ನಾಭರಣಗಳು ಹಾಗೇ ಇದ್ದವು ಎಂಬ ಬಲವಾದ ಸಾಕ್ಷ್ಯಗಳು ಸಿಕ್ಕವು. ತದನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿತ್ತು. ಪೊಲೀಸರು ತಮ್ಮ ತನಿಖೆಯ ದಿಕ್ಕನ್ನು ಆಸ್ಪತ್ರೆಯ ಶವಾಗಾರದ ಕಡೆಗೆ ತಿರುಗಿಸಿದಾಗ, ಅಲ್ಲಿ ಕರ್ತವ್ಯದಲ್ಲಿದ್ದ ಡಿ-ಗ್ರೂಪ್ ನೌಕರ ಹೇಮಂತನ ನಡವಳಿಕೆ ಮೇಲೆ ಶಂಕೆ ಮೂಡಿದೆ. ಆತನನ್ನು ವಶಕ್ಕೆ ಪಡೆದು ಕಠಿಣ ವಿಚಾರಣೆಗೆ ಒಳಪಡಿಸಿದಾಗ, ಶವದ ಮೇಲಿದ್ದ ಒಡವೆಗಳನ್ನು ತಾನೇ ಕದ್ದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.&lt;/p&gt;&lt;h2&gt;&lt;strong&gt;ಶವಾಗಾರದಲ್ಲಿ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಿದ್ದಾಗ, ಅಲ್ಲಿ ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡ ಹೇಮಂತ, ಜ್ಯೋತಿ ಅವರ ಮೃತದೇಹದಲ್ಲಿದ್ದ ಬಂಗಾರದ ಸರ, ಬಳೆ ಮತ್ತು ಉಂಗುರವನ್ನು ಅತ್ಯಂತ ಕಿತ್ತುಕೊಂಡಿದ್ದ. ಮೃತರ ಕುಟುಂಬಸ್ಥರು ಶವದ ಅಂತ್ಯಸಂಸ್ಕಾರದ ಆಘಾತದಲ್ಲಿದ್ದಾಗ, ಆಸ್ಪತ್ರೆಯ ನೌಕರನೇ ಈ ರೀತಿ ಕಳ್ಳತನ ಮಾಡಿ ವಿಕೃತಿ ಮೆರೆದಿದ್ದಾನೆ.&lt;/p&gt;&lt;p&gt;ಪ್ರಾಣ ಉಳಿಸಬೇಕಾದ ಹಾಗೂ ಮೃತದೇಹಗಳಿಗೆ ಗೌರವ ನೀಡಬೇಕಾದ ಸರ್ಕಾರಿ ಆಸ್ಪತ್ರೆಯ ನೌಕರನೇ ಶವಾಗಾರದಲ್ಲಿ ಹೆಣದ ಒಡವೆ ಕದ್ದಿರುವುದು ಉಡುಪಿ ಜಿಲ್ಲಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಆರೋಪಿ ಹೇಮಂತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿದೆ. ಆಸ್ಪತ್ರೆಯ ಸಿಬ್ಬಂದಿಯ ಈ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>shivamogga</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/udupi-kollur-accident-dead-womans-gold-stolen-by-govt-hospital-d-group-employee-arrested-sat/articleshow-7tn89fp"/>
        </item>
        <item>
            <title><![CDATA[ಶಿವಮೊಗ್ಗ-ತಾಳಗುಪ್ಪ ಮಲೆನಾಡು ರೈಲ್ವೇ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ!]]></title>
            <link>https://kannada.asianetnews.com/gallery/karnataka-districts/good-news-for-malnad-passengers-speed-increased-on-talaguppa-bengaluru-railway-route-kvn-8kxcmmb</link>
            <guid isPermaLink="true">https://kannada.asianetnews.com/gallery/karnataka-districts/good-news-for-malnad-passengers-speed-increased-on-talaguppa-bengaluru-railway-route-kvn-8kxcmmb</guid>
            <pubDate>Sat, 23 May 2026 13:48:26 +0530</pubDate>
            <description><![CDATA[&lt;p&gt;ಬೆಂಗಳೂರು: ತಾಳಗುಪ್ಪ-ಬೆಂಗಳೂರು ನಡುವಿನ ರೈಲುಗಳು ಕೆಲವೊಮ್ಮೆ ತಾಳಗುಪ್ಪ ತಲುಪುವುದು ತುಂಬಾ ತಡವಾಗುತ್ತಿದೆ ಎನ್ನುವ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದಿದ್ದವು. ಇದೀಗ ಮಲೆನಾಡಿನ ರೈಲ್ವೇ ಪ್ರಯಾಣಿಕರಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಗುಡ್ ನ್ಯೂಸ್ ಕೊಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks9y4qzr5m73v776nxt5k4yk,imgname-by-raghavendra-indian-railway-1779523805176.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ತಾಳಗುಪ್ಪ-ಬೆಂಗಳೂರು ನಡುವಿನ ರೈಲುಗಳು ಕೆಲವೊಮ್ಮೆ ತಾಳಗುಪ್ಪ ತಲುಪುವುದು ತುಂಬಾ ತಡವಾಗುತ್ತಿದೆ ಎನ್ನುವ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದಿದ್ದವು. ಇದೀಗ ಮಲೆನಾಡಿನ ರೈಲ್ವೇ ಪ್ರಯಾಣಿಕರಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಗುಡ್ ನ್ಯೂಸ್ ಕೊಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಲೆನಾಡು ಭಾಗದ ಪ್ರಮುಖ ರೈಲ್ವೇ ಸಂಪರ್ಕ ಕೊಂಡಿಯಾಗಿರುವ ಬೀರೂರು-ತಾಳಗುಪ್ಪ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಗರಿಷ್ಠ ಸಂಚಾರ ವೇಗವನ್ನು ಹೆಚ್ಚಿಸಲಾಗಿದೆ. ಇದು ಪ್ರಯಾಣಿಕರ ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿತಾಯ ಮಾಡುವುದರ ಜತೆಗೆ ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಬೀರೂರು (RRB) ಇಂದ ಕುಂಸಿ (KMSI): ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ 110 ಕಿ.ಮೀ ಗೆ ಹೆಚ್ಚಿಸಲಾಗಿದೆ.&lt;/p&gt;&lt;img&gt;&lt;p&gt;ಆನಂದಪುರಂ (ANF) ಇಂದ ಸಾಗರ ಜಂಬಗಾರು (SRF): ಗರಿಷ್ಠ ವೇಗವನ್ನು ಗಂಟೆಗೆ 70 ಕಿ.ಮೀ ನಿಂದ 75 ಕಿ.ಮೀ ಗೆ ಹೆಚ್ಚಿಸಲಾಗಿದೆ.&lt;/p&gt;&lt;img&gt;&lt;p&gt;ಸಾಗರ ಜಂಬಗಾರು (SRF) ಇಂದ ತಾಳಗುಪ್ಪ (TLGP): ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ 110 ಕಿ.ಮೀ ಗೆ ಹೆಚ್ಚಿಸಲಾಗಿದೆ.&lt;/p&gt;&lt;img&gt;&lt;p&gt;ರೈಲುಗಳು ಹೆಚ್ಚಿನ ವೇಗದಲ್ಲಿ ಚಲಿಸುವುದರಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ಪ್ರಯಾಣಿಸುವ ನಮ್ಮ ಭಾಗದ ಸಾರ್ವಜನಿಕರಿಗೆ ಅಮೂಲ್ಯವಾದ ಸಮಯ ಉಳಿಯಲಿದೆ.&lt;/p&gt;&lt;img&gt;&lt;p&gt;ರೈಲುಗಳ ಸುಗಮ ಮತ್ತು ವೇಗದ ಕಾರ್ಯಾಚರಣೆಯಿಂದ ಮಲೆನಾಡಿನ ಸಂಪರ್ಕ ಕ್ರಾಂತಿಗೆ ಹೊಸ ವೇಗ ಸಿಕ್ಕಂತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>shivamogga</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/karnataka-districts/good-news-for-malnad-passengers-speed-increased-on-talaguppa-bengaluru-railway-route-kvn-8kxcmmb"/>
        </item>
        <item>
            <title><![CDATA[ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಸಿಗುತ್ತಾ? ಸಂಸದ ಬಿ.ವೈ.ರಾಘವೇಂದ್ರ ಕೊಟ್ಟ ಭರವಸೆ ಏನು?]]></title>
            <link>https://kannada.asianetnews.com/karnataka-districts/shivamogga-high-court-bench-demand-mp-by-raghavendra-gvd/articleshow-8r49suv</link>
            <guid isPermaLink="true">https://kannada.asianetnews.com/karnataka-districts/shivamogga-high-court-bench-demand-mp-by-raghavendra-gvd/articleshow-8r49suv</guid>
            <pubDate>Wed, 27 May 2026 22:57:16 +0530</pubDate>
            <description><![CDATA[&lt;p&gt;ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠದ ಸ್ಥಾಪನೆ ರಾಜಕೀಯ ಬೇಡಿಕೆಯಲ್ಲ, ಅದು ನಮ್ಮ ಹಕ್ಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಕಳೆದ ಹಲವು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h9x1fr9w5j2yjajyyhb0f741,imgname-dvdv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಮೇ.27): &lt;/strong&gt;ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠದ ಸ್ಥಾಪನೆ ರಾಜಕೀಯ ಬೇಡಿಕೆಯಲ್ಲ, ಅದು ನಮ್ಮ ಹಕ್ಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ಶಿವಮೊಗ್ಗ ವಕೀಲರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.&lt;/p&gt;&lt;p&gt;ಮಲೆನಾಡು ಮತ್ತು ಮಧ್ಯ ಕರ್ನಾಟಕದ ಲಕ್ಷಾಂತರ ಜನರ ನ್ಯಾಯ ಪ್ರಾಪ್ತಿಯ ಹಕ್ಕಿಗಾಗಿ ಪಕ್ಷಾತೀತವಾಗಿ ಒಗ್ಗೂಡಲು ಕರೆ ನೀಡಿದ ಅವರು, ಭೌಗೋಳಿಕ ಸವಾಲುಗಳನ್ನು ಕಡೆಗಣಿಸಿ ಮಂಗಳೂರು ಪೀಠಕ್ಕೆ ಶಿವಮೊಗ್ಗ ಸೇರಿಸುವ ಪ್ರಸ್ತಾವನೆಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು.&lt;/p&gt;&lt;p&gt;ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎನ್ನುವ ನಮ್ಮ ಆಗ್ರಹ ಕೇವಲ ಒಂದು ಕಚೇರಿಯ ಸ್ಥಾಪನೆಗಾಗಿ ಅಲ್ಲ. ಇದು ನಮ್ಮ ಮಲೆನಾಡು ಮತ್ತು ಸುತ್ತ-ಮುತ್ತಲಿನ ಜಿಲ್ಲೆಗಳ ಜನರ ಸ್ವಾಭಿಮಾನದ ಹಾಗೂ ನ್ಯಾಯದ ಹಕ್ಕಿನ ಹೋರಾಟ. &lsquo;ನ್ಯಾಯ ಎಲ್ಲರಿಗೂ ಸುಲಭವಾಗಿ ಸಿಗಬೇಕು&rsquo; ಎನ್ನುವ ಸಂವಿಧಾನದ ಆಶಯವನ್ನು ಸಾಕಾರಗೊಳಿಸಲು ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಯಾಗುವುದು ಅತ್ಯಗತ್ಯವಾಗಿದೆ ಎಂದರು.&lt;/p&gt;&lt;p&gt;&lt;strong&gt;ಮಂಗಳೂರು ಪ್ರಸ್ತಾವನೆಗೆ ತಾರ್ಕಿಕ ವಿರೋಧ: &lt;/strong&gt;ಮಂಗಳೂರು ಹೈಕೋರ್ಟ್ ಪೀಠದ ಪ್ರಸ್ತಾವನೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳನ್ನು ಸೇರಿಸುವ ಆಲೋಚನೆಯನ್ನು ತಾರ್ಕಿಕವಾಗಿ ತಿರಸ್ಕರಿಸಿದ ಸಂಸದ ರಾಘವೇಂದ್ರ, ನಮಗೆ ಕರಾವಳಿಯ ಸಹೋದರರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಆದರೆ ಭೌಗೋಳಿಕ ವಾಸ್ತವವನ್ನು ಅರಿಯದವರು ಮಾತ್ರ ಇಂತಹ ಪ್ರಸ್ತಾವನೆ ಮಂಡಿಸಲು ಸಾಧ್ಯ. ಧಾರವಾಡ ಮತ್ತು ಕಲಬುರಗಿಯ ಜನರಿಗೆ ನ್ಯಾಯ ಸಿಕ್ಕಿರುವಾಗ, ಮಲೆನಾಡಿನ ಜನತೆ ಕೇಳಿದರೆ ಸಿಗದೇ ಇರಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಬೇಡಿಕೆ ಭಾವನಾತ್ಮಕವಲ್ಲ, ಇದು ಸಂಪೂರ್ಣ ನ್ಯಾಯಸಮ್ಮತ ಎಂದರು.&lt;/p&gt;&lt;h2&gt;&lt;strong&gt;ಗಮನಕ್ಕೆ ತರಲು ಬದ್ಧ&lt;/strong&gt;&lt;/h2&gt;&lt;p&gt;ಜಿಲ್ಲೆಯ ಸಂಸದನಾಗಿ ಕೇಂದ್ರ ಕಾನೂನು ಸಚಿವರೊಂದಿಗೆ ಹಾಗೂ ಭಾರತ ಸರ್ಕಾರದ &lsquo;ಡಿಪಾರ್ಟ್&zwnj;ಮೆಂಟ್ ಆಫ್ ಜಸ್ಟಿಸ್&rsquo;ಮಟ್ಟದಲ್ಲಿ ಈ ಪ್ರಸ್ತಾವನೆಗೆ ಬಲವಾದ ಧ್ವನಿಯಾಗುವ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ, ಶಿವಮೊಗ್ಗದಿಂದ ವಕೀಲರ ಮತ್ತು ಪ್ರಮುಖರ ನಿಯೋಗ ದೆಹಲಿಗೆ ಬಂದರೆ ಸಂಬಂಧಪಟ್ಟ ಸಚಿವರ ಭೇಟಿ ಮಾಡಿಸಲು ಮತ್ತು ಮನವಿ ನೀಡಿ ಕೇಂದ್ರದ ಗಮನಕ್ಕೆ ತರಲು ಬದ್ಧನಾಗಿದ್ದೇನೆ ಎಂದರು. ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಸಂಸದರ ನೇತೃತ್ವದಲ್ಲಿ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗೋಣ ಎಂದರು.&lt;/p&gt;]]></content:encoded>
            <category>shivamogga</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/shivamogga-high-court-bench-demand-mp-by-raghavendra-gvd/articleshow-8r49suv"/>
        </item>
        <item>
            <title><![CDATA[10 ಗಂಟೆ ಹಿಂದೆ ಫೇಸ್‌ಬುಕ್‌ ಪೋಸ್ಟ್, 4 ಗಂಟೆ ಹಿಂದೆ ಆಕ್ಟಿವ್‌ ಇದ್ದ ತೀರ್ಥಹಳ್ಳಿ ಟಿಜಿ ನಂದೀಶ್‌ ಇನ್ನಿಲ್ಲ!]]></title>
            <link>https://kannada.asianetnews.com/tv-talk/kannada-writer-tg-nandish-passed-away-due-to-heart-attack/articleshow-akk4b0z</link>
            <guid isPermaLink="true">https://kannada.asianetnews.com/tv-talk/kannada-writer-tg-nandish-passed-away-due-to-heart-attack/articleshow-akk4b0z</guid>
            <pubDate>Wed, 20 May 2026 21:21:38 +0530</pubDate>
            <description><![CDATA[&lt;p&gt;T G Nandish Death: 47ನೇ ವಯಸ್ಸಿಗೆ ದಿಲೀಪ್&zwnj; ರಾಜ್&zwnj; ಅವರು ನಿಧನರಾದರು. ಈ ಸಾವನ್ನು ಅರಗಿಸಿಕೊಳ್ಳುವ ಮುನ್ನವೇ 37ನೇ ವಯಸ್ಸಿಗೆ ಸಂಭಾಷಣೆಕಾರ ಟಿಜಿ ನಂದೀಶ್&zwnj; ಅವರು ನಿಧನರಾಗಿದ್ದಾರೆ. ಮೊನ್ನೆ ಮೊನ್ನೆ ದಿಲೀಪ್&zwnj; ಸಾವಿಗೆ ಸಂತಾಪ ಸೂಚಿಸಿದ್ದ ನಂದೀಶ್&zwnj; ಈಗ ನೆನಪಾಗಿ ಉಳಿದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks3111eqnfag8fgv4btngwcs,imgname-new-project---2026-05-20t211147.334-1779291948503.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ದಿಲೀಪ್&zwnj; ರಾಜ್&zwnj; ನಿಧನಕ್ಕೆ ಸಂತಾಪ ಸೂಚಿಸಿದ್ದ ಸಂಭಾಷಣೆಕಾರ ಟಿಜಿ ನಂದೀಶ್&zwnj; ಅವರೇ ಈಗ ಹೇಳದೆ ಕೇಳದೆ ಹೋಗಿದ್ದಾರೆ. ಹೌದು, ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸಿದ ದಿಲೀಪ್&zwnj; ರಾಜ್&zwnj; ಅವರು, ಹೀಗೆ ಏಕಾಏಕಿ ಮರೆಯಾದದ್ದು ಎಂದೆಂದಿಗೂ ಕಾಡಲಿದೆ&zwnj; ಎಂದು ಹೇಳಿದ್ದ ಟಿಜಿ ನಂದೀಶ್&zwnj; ಈಗ ಅವರೇ ಮರೆಯಾಗಿದ್ದಾರೆ.&lt;/p&gt;&lt;h2&gt;ಚಿಕ್ಕ ವಯಸ್ಸಿನಲ್ಲೇ ಮರೆಯಾದ ನಂದಿ!&lt;/h2&gt;&lt;p&gt;ಅಪ್ಪ ಅಮ್ಮನೇ ನನ್ನ ಶಕ್ತಿ, ಹರ್ಷಿತಾ ನನಗೆ ಸ್ಪೂರ್ತಿ, ಜೇನು ಮತ್ತು ಗಂಧ ಎನ್ನ, ಜೀವ ಮತ್ತು ಜೀವನಪ್ರೀತಿ ಎಂದು ಸೋಶಿಯಲ್&zwnj; ಮೀಡಿಯಾದಲ್ಲಿ ಬರಹ (ಬಯೋ ) ಬರೆದುಕೊಂಡಿದ್ದ ಪತ್ರಕರ್ತ, ಸಂಭಾಷಣೆಕಾರ ಟಿಜಿ ನಂದೀಶ್&zwnj; ಅವರು 37ನೇ ವಯಸ್ಸಿಗೆ ಇಂದು ( ಮೇ 20 ) ತೀರ್ಥಹಳ್ಳಿಯಲ್ಲಿ &amp;nbsp;ನಿಧನರಾಗಿದ್ದಾರೆ.&lt;/p&gt;&lt;p&gt;ಸಾಯುವ 10 ಗಂಟೆಗೂ ಮುನ್ನ ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಾಕಿ, 4 ಗಂಟೆಗಳ ಹಿಂದೆ ಆಕ್ಟಿವ್&zwnj; ಆಗಿದ್ದ ಟಿಜಿ ನಂದೀಶ್&zwnj; ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿನಿಮಾ, ಧಾರಾವಾಹಿ&zwnj; ಬರವಣಿಗೆಯಲ್ಲಿ ಸಿಕ್ಕಾಪಟ್ಟೆ ಆಕ್ಟಿವ್&zwnj; ಆಗಿದ್ದ ಟಿಜಿ ನಂದೀಶ್&zwnj; ಅವರು ನಿಧನರಾಗಿರೋದು ಎಲ್ಲರಿಗೂ ಶಾಕ್&zwnj; ಕೊಟ್ಟಿದೆ.&lt;/p&gt;&lt;p&gt;ದಿಲೀಪ್&zwnj; ರಾಜ್&zwnj; ಅವರಿಗೆ ಹೃದಯಾಘಾತ ಆಗಿರೋದು, ತೀರಿಕೊಂಡಿರೋದು ಇನ್ನೂ ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿ ಒಬ್ಬರಾದ ಮೇಲೆ ಒಬ್ಬರು ನಿಧನರಾಗುತ್ತಿದ್ದಾರೆ. ಒಟ್ಟಿನಲ್ಲಿ ಇಂದು ಕನ್ನಡ ಚಿತ್ರರಂಗ, ಸಾಮಾನ್ಯ ಜನರು ಶಾಕ್&zwnj; ಆಗಿದ್ದಾರೆ.&lt;/p&gt;&lt;p&gt;ಟಿಜಿ ನಂದೀಶ್&zwnj; ಅವರು ತೀರ್ಥಹಳ್ಳಿಯ ಮಾಲೂರಿನವರು. ಹರ್ಷಿತಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮಗಳು ಜೇನು, ಮಗ ಗಂಧ. ಮಗ ಹುಟ್ಟಿ ಮೂರು ತಿಂಗಳಾಗಿತ್ತು. ಬೆಂಗಳೂರು ಬೇಡ ಎಂದು ತೀರ್ಥಹಳ್ಳಿಯಲ್ಲಿ ಚೆಂದದ ಸುಂದರ ಮನೆ ಕಟ್ಟಿಸಿಕೊಂಡು ತಾಯಿ, ಪತ್ನಿ, ಮಕ್ಕಳ ಜೊತೆ ಜೀವನ ಮಾಡುತ್ತಿದ್ದರು. ಈಗ ಚಿರನಿದ್ದೆಗೆ ಜಾರಿದ್ದಾರೆ.&lt;/p&gt;&lt;p&gt;&lt;strong&gt;ದಿಲೀಪ್&zwnj; ರಾಜ್&zwnj; ಸಾವಿನ ಬಗ್ಗೆ ಟಿಜಿ ನಂದೀಶ್&zwnj; ಬರಹ ಹೀಗಿತ್ತು&hellip;&lt;/strong&gt;&lt;/p&gt;&lt;p&gt;ಇಂದಿನ ಬೆಳಗು ಇಂಥದ್ದೊಂದು ಕಹಿಸುದ್ದಿಯೊಂದಿಗೆ&zwnj; ಶುರುವಾಗುತ್ತೆ ಎಂಬ ಯಾವುದೇ&zwnj; ಸುಳಿವಿರಲಿಲ್ಲ.&lt;/p&gt;&lt;p&gt;ಪ್ರತಿಭೆ, ಪ್ರಯತ್ನ, ಪರಿಶ್ರಮದ ಮೂಲಕ ಯಶಸ್ಸು ಕಂಡ ದಿಲೀಪ್ ರಾಜ್ ಅವರು ಇನ್ನಿಲ್ಲ ಅನ್ನೋ ಸುದ್ದಿ ಈ ಕ್ಷಣಕ್ಕೂ ಅರಗಿಸಿಕೊಳ್ಳಲಾಗದ ಸತ್ಯ. ಸದಾ ಕಲೆಗೆ&zwnj;&zwnj; ಮಿಡಿಯುತ್ತಿದ್ದ ಆ ಕಲಾವಿದನಿಗೆ ಹೃದಯಾಘಾತವಾಯಿತು ಅನ್ನೋ ಸುದ್ದಿ ಸುಳ್ಳಾಗಬಾರದ ಅನ್ನಿಸುತ್ತಿದೆ.&lt;/p&gt;&lt;p&gt;ನಾನು ಮೊದಲು ದಿಲೀಪ್ ರಾಜ್ ಅವರನ್ನು ಇಷ್ಟಪಟ್ಟಿದ್ದು 'ಪ್ರೀತಿಗಾಗಿ' ಧಾರಾವಾಹಿಯಲ್ಲಿ... ಹಂಸಲೇಖ ನಿರ್ಮಾಣದ ಆ ಧಾರವಾಹಿಯಲ್ಲಿ ಇವರ ನಟನೆಗೆ ಮನಸೋಲದವರಿಲ್ಲ. ಆ ಬಳಿಕ 'ಮಳೆಬಿಲ್ಲು' ಸೇರಿದಂತೆ ಬಹಳಷ್ಟು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಇವರ ನಟನೆಯನ್ನು ಅಭಿಮಾನಿಯಾಗಿ ಮೆಚ್ಚಿದ್ದೆ. ಆದರೆ ಇವರೊಂದಿಗೆ ಅದ್ಯಾವ ನಂಟು ಬೆಸೆದಿತ್ತೋ ಗೊತ್ತಿಲ್ಲ.&lt;/p&gt;&lt;p&gt;ಧೃತಿ ಕ್ರಿಯೇಷನ್ಸ್ ಮೂಲಕ ನನಗೆ ಮೊದಲ ಬಾರಿಗೆ ಕಿರುತೆರೆಯ ಧಾರಾವಾಹಿಗೆ ಸಂಭಾಷಣೆಕಾರನಾಗುವ ಅವಕಾಶ ಕೊಟ್ಟ ನಿರ್ದೇಶಕರು, ನಿರ್ಮಾಪಕರು ದಿಲೀಪ್ ರಾಜ್. 'ಪಾರು' ಧಾರಾವಾಹಿಗೆ ಸಂಭಾಷಣೆ ಬರೆಸುವ ಮೂಲಕ ನನಗೊಂದು ಚೆಂದದ ಅವಕಾಶ ಕೊಟ್ಟರು. ಆ ಬಳಿಕ 'ರಾಧಾ ಕಲ್ಯಾಣ' ಧಾರಾವಾಹಿಗೂ ಕೆಲವು ಕಾಲ ಚಿತ್ರಕಥೆ ಬರೆಯುವ ಅವಕಾಶ ಕೊಟ್ಟವರು.&lt;/p&gt;&lt;p&gt;'ಪಾರು' ಧಾರಾವಾಹಿಗೆ ಸಂಭಾಷಣೆ ಮತ್ತು ಚಿತ್ರಕಥೆ ಬರೆಯುವ ಸಂದರ್ಭದಲ್ಲಿ ಅವರೊಂದಿಗೆ ಸ್ಕ್ರೀನ್ ಪ್ಲೇ ಡಿಸ್ಕಷನ್ನಿಗೆ ಕೂತ ನೆನಪುಗಳು ಇನ್ನು ಹಸಿರಾಗಿದೆ. ಕ್ರಿಯೇಟಿವಿಟಿ ಮತ್ತು ಎಕ್ಸಪರಿಮೆಂಟಲ್ ಮನೋಭಾವ ದಿಲೀಪ್ ರಾಜ್ ಅವರ ಪ್ಲಸ್ ಪಾಯಿಂಟ್. ಸದಾ ದಿ ಬೆಸ್ಟ್ ಕೊಡಬೇಕೆನ್ನುವ ಛಲಗಾರ. ಅದಕ್ಕಾಗಿ ಅವಿರತ ಶ್ರಮ ಹಾಕಿದ್ದರು. ಅವರ ಪರಿಶ್ರಮಕ್ಕೆ ತಕ್ಕ ಗೆಲುವು, ಖ್ಯಾತಿ ಎರಡು ಸಿಕ್ಕಿತ್ತು.&lt;/p&gt;&lt;p&gt;ಜೀ ವಾಹಿನಿಯ 'ಪಾರು' ಧಾರವಾಹಿ ಅವರೊಡನೆ ಕೆಲಸ ಮಾಡುವ ಅವಕಾಶ ಸೃಷ್ಟಿಸಿತ್ತು. ನೆನ್ನೆ ಸಂಜೆ ಅದೇ ಜೀ 5 ವಾಹಿನಿಯಲ್ಲಿ 'ಲವ್ ಮಾಕ್ ಟೇಲ್ - 3' ಸಿನಿಮಾದಲ್ಲಿ ಅವರ ನಟನೆ ನೋಡಿ ಮನೆಮಂದಿಯೆಲ್ಲಾ ಖುಷಿ ಪಟ್ಟಿದ್ದೆವು. ಇದೀಗ ಅದೇ ವಾಹಿನಿ ಹಾಕಿದ ಶ್ರದ್ಧಾಂಜಲಿ ಚಿತ್ರ ನೋಡಿ ಕಣ್ತುಂಬಿದೆ. ಮನಸು ಭಾರವಾಗಿದೆ.&zwnj; ಅವರ ಬದುಕಿನ ಹಾದಿ ಅರ್ಧದಲ್ಲೇ ಕೊನೆಯಾದಂತಿದೆ.&lt;/p&gt;&lt;p&gt;ದಿಲೀಪ್ ಸರ್ ಅವರ ನೆರಳಂತೆ ಇದ್ದವರು ಅವರ ಮಡದಿ ವಿದ್ಯಾ ಮೇಡಂ. ಜೋಡೆತ್ತಿನಂತೆ ಬದುಕಿನ ಪಥವನ್ನು ಒಟ್ಟೊಟ್ಟಿಗೆ ಕಟ್ಟಿಕೊಂಡವರು. ಅವರಿಬ್ಬರೊಡನೆ ಕುಳಿತು ಹರಟಿದ್ದೇವೆ, ಜೊತೆಗೆ ಊಟ ಮಾಡಿದ್ದೇವೆ. ಈಗ ದಿಲೀಪ್ ರಾಜ್ ಅವರಿಲ್ಲ ಅನ್ನೋ ಸಂಕಟ. ಭಗವಂತ ವಿದ್ಯಾ ಮೇಡಂ ಅವರಿಗೆ, ಅವರ ಮಕ್ಕಳಿಗೆ ಈ ಸಂಕಟ ದಾಟುವ ಧೈರ್ಯ ನೀಡಲಿ ಎಂಬುದಷ್ಟೇ ಪ್ರಾರ್ಥನೆ.&lt;/p&gt;&lt;p&gt;ದಿಲೀಪ್ ಸರ್ ನಿಮ್ಮ ಎನರ್ಜಿ, ಜೀವನೋತ್ಸಾಹ ಅದಮ್ಯ. ನಟನೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸಿದವರು, ಹೀಗೆ ಏಕಾಏಕಿ ಮರೆಯಾದದ್ದು ಎಂದೆಂದಿಗೂ ಕಾಡಲಿದೆ&zwnj;.&lt;/p&gt;]]></content:encoded>
            <category>shivamogga</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/kannada-writer-tg-nandish-passed-away-due-to-heart-attack/articleshow-akk4b0z"/>
        </item>
        <item>
            <title><![CDATA[Shivamogga: ಮಾಲ್ಗುಡಿ ಡೇಸ್ ಖ್ಯಾತಿಯ ಅರಸಾಳು ರೈಲ್ವೆ ನಿಲ್ದಾಣದ ಕತ್ತಲೆಯ ಕಥೆ]]></title>
            <link>https://kannada.asianetnews.com/karnataka-districts/shivamogga-s-arasalu-railway-station-famous-for-malgudi-days-is-deprived-of-basic-facilities-mrq/articleshow-akvgca5</link>
            <guid isPermaLink="true">https://kannada.asianetnews.com/karnataka-districts/shivamogga-s-arasalu-railway-station-famous-for-malgudi-days-is-deprived-of-basic-facilities-mrq/articleshow-akvgca5</guid>
            <pubDate>Mon, 25 May 2026 06:21:43 +0530</pubDate>
            <description><![CDATA['ಮಾಲ್ಗುಡಿ ಡೇಸ್' ಖ್ಯಾತಿಯ ಅರಸಾಳು ರೈಲ್ವೆ ನಿಲ್ದಾಣವು ಸಂಗ್ರಹಾಲಯವನ್ನು ಹೊಂದಿದ್ದರೂ, ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಶೌಚಾಲಯ, ನೀರು ಮತ್ತು ರಾತ್ರಿ ದೀಪಗಳ ಕೊರತೆಯಿಂದಾಗಿ ನೂರಾರು ಪ್ರಯಾಣಿಕರು ಮತ್ತು ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಲ್ದಾಣದ ನಿರ್ವಹಣೆ ವಿಫಲವಾಗಿದ್ದು, ಅಧಿಕಾರಿಗಳು ಗಮನಹರಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kse9mtvc9hdrvb5rc20vambz,imgname-arasalu-1779670084460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಿಪ್ಪನ್&zwj;ಪೇಟೆ: &lt;/strong&gt;&lsquo;ಮಾಲ್ಗುಡಿ ಡೇಸ್&rsquo; ಧಾರಾವಾಹಿ ಚಿತ್ರೀಕರಣಗೊಂಡ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಈಗ ಮೂಲಸೌಲಭ್ಯ ಎಂಬುದು ಮರೀಚಿಕೆಯಾಗಿದೆ. ಮಾಲ್ಗುಡಿ ಚಿತ್ರೀಕರಣದ ಸವಿನೆನಪಿಗೆ ಇಲ್ಲಿ ಸಂಗ್ರಹಾಲಯ ನಿರ್ಮಿಸಿ ರೈಲು ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಧಾರಾವಾಹಿಯ ಸ್ಮರಣಿಕೆಗಾಗಿ ಇಲ್ಲಿ ಸದಾ ಜನಜಂಗುಳಿ ಇರುತ್ತದೆ. ಆದರೆ ಇಲ್ಲಿ ಬರುವ ಪ್ರಯಾಣಿಕರಿಗೆ ಸೂಕ್ತ ಸೌಕರ್ಯ ಇಲ್ಲದೆ ಪರಾಡುವಂತಾಗಿದೆ.&lt;/p&gt;&lt;p&gt;ಅರಸಾಳು ರೈಲ್ವೆ ನಿಲ್ದಾಣದಲ್ಲಿ ಸಮರ್ಪಕವಾಗಿ ನಿರ್ವಹಣೆ ಇಲ್ಲವಾಗಿದೆ ಎಂದು ರೈಲ್ವೆ ಪ್ರಯಾಣಿಕರಾದ ಗಾಯಿತ್ರಿ ವಿನಾಯಕ, ಸುಶೀಲ ಮೂಡಾಗ್ರ ಕೆ.. ಗೀತಾ ಅಣ್ಣಪ್ಪ, ಸೀತಾರಾಜಪ್ಪ, ಗೀತಾ ಕರಿಬಸಪ್ಪ, ವೇದಾವತಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಶೌಚಾಲಯವಿಲ್ಲ, ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ&lt;/strong&gt;&lt;/h2&gt;&lt;p&gt;ತಾಳುಗುಪ್ಪ-ಶಿವಮೊಗ್ಗ-ಬೆಂಗಳೂರು-ಮೈಸೂರು ಇಂಟರ್ ಸಿಟಿ ಸೇರಿದಂತೆ ಹಲವು ಪ್ಯಾಸಂಜರ್ ರೈಲು ಗಾಡಿಗಳು ನಿತ್ಯ ಈ ಮಾರ್ಗದಲ್ಲಿ ಹೋಗಿ ಬರುತ್ತಿದ್ದು ಇಲ್ಲಿನ ಆರಸಾಳು ರೈಲ್ವೆ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರು, ಮೈಸೂರು, ತಾಳುಗುಪ್ಪ, ಜೋಗ, ಭಟ್ಕಳ, ಶಿರಸಿ, ಸಿದ್ದಾಪುರ, ಕುಂದಾಪುರ, ಉಡುಪಿ, ಕೊಡಚಾದ್ರಿ, ಕೊಲ್ಲೂರು, ಹೊಂಬುಜ, ಸಿಗಂದೂರು ಹೀಗೆ ಸುತ್ತಮುತ್ತಲಿನ ಪ್ರಕ್ಷಣೀಯ ಧಾರ್ಮಿಕ ಸ್ಥಳಗಳಿಗೆ ಹಾಗೂ ನಿರುದ್ಯೋಗಿಗಳು ಉದ್ಯೋಗಿಗಳು ಮತ್ತು ಸಂಬಂಧಿಕರ ಊರುಗಳಿಗೆ ಹೋಗಿ ಬರುವವರಿಗೆ ತುಂಬಾ ಅನುಕೂಲಕರವಾಗಿರುವ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸರಿಯಾದ ಶೌಚಾಲಯವಿಲ್ಲ. ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲವಾಗಿದೆ. ರಾತ್ರಿ ವೇಳೆಯಲ್ಲಿ ನಿಲ್ದಾಣದ ಬಳಿ ಸರಿಯಾದ ಬೀದಿ ದೀಪಗಳಿಲ್ಲದೆ ಕತ್ತಲು ಅವರಿಸಿಕೊಂಡಿದ್ದು ಮಹಿಳೆಯರಿಗೆ ಮಕ್ಕಳಿಗೆ ಭದ್ರತೆ ಇಲ್ಲದಂತಾಗಿ ಪ್ರಯಾಣಿಕರು ಪರದಾಡುವಂತಾಗಿದೆ.&lt;/p&gt;&lt;p&gt;ನಿಲ್ದಾಣದ ಅವರಣದಲ್ಲಿ ಸ್ವಚ್ಛತೆಯಿಲ್ಲದೆ ಕಸ ತುಂಬಿಕೊಂಡಿದ್ದು ಶೌಚಾಲಯಗಳಿಗೆ ಹೋದರೆ ನೀರು ಸಹ ಇಲ್ಲ. ಇನ್ನು ಕುಡಿಯುವ ನೀರಯಂತೂ ಇಲ್ಲವೆ ಇಲ್ಲವಾಗಿ ಮಹಿಳೆಯರು ಮಕ್ಕಳು ವೃದ್ದರು ಅನಾರೋಗ್ಯ ಪೀಡಿತರು ದೂರದ ಬೆಂಗಳೂರು ಮೈಸೂರು ತೆರಳುವ ಪ್ರಯಾಣಿಕರು ಶೌಚಾಲಯವಿಲ್ಲದೆ ಬಯಲು ಪ್ರದೇಶವನ್ನು ಆವಲಂಬಿಸುವುದು ಆನಿರ್ವಾಯವಾಗಿದೆ.&lt;/p&gt;&lt;p&gt;ಮಹಿಳೆಯವರು, ಹೆಣ್ಣುಮಕ್ಕಳು ರೈಲ್ವೆ ನಿಲ್ದಾಣದಲ್ಲಿ ಗಿಡದ ಪೊದೆಯ ಮರೆಯಲ್ಲಿ ಕುಳಿತು ಮೂತ್ರ ವಿಸರ್ಜನೆ ಮಾಡಬೇಕಾಗಿದೆ. ಇದರೊಂದಿಗೆ ಆನಾರೋಗ್ಯ ಪೀಡಿತರ ಸ್ಥಿತಿಯಂತೂ ಕೇಳೋರಿಲ್ಲದಂತಾಗಿದೆ. ಕಡಿಮೆ ಖರ್ಚಿನಲ್ಲಿ ರಾಜದಾನಿಗೆ ತೆರಳುವ ಪ್ರಯಾಣಿಕರಿಗೆ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಸುಲಭ ಶೌಚಾಲಯಗಳಿಲ್ಲದೆ ಪರದಾಡುವ ಪರಿಸ್ಥಿತಿಯಿದ್ದು ರೈಲ್ವೆ ಇಲಾಖೆಯ ಅಧಿಕಾರಿ ವರ್ಗ ಇತ್ತ ಗಮನಹರಿಸಿ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಂತೆ ರೈಲ್ವೆ ಪ್ರಯಾಣಿಕರಾದ ಗಾಯಿತ್ರಿ ವಿನಾಯಕ, ಸುಶೀಲ ಮೂಡಾಗ್ರ ಕೆ. ಗೀತಾಅಣ್ಣಪ್ಪ, ಸೀತಾರಾಜಪ್ಪ, ಗೀತಾ ಕರಿಬಸಪ್ಪ, ವೇದಾವತಿ ಆಗ್ರಹಿಸಿದ್ದಾರೆ.&lt;/p&gt;&lt;p&gt;ಮುಂಜಾನೆ ರಾಜದಾನಿಯಿಂದ 5.50ಕ್ಕೆ ಬರುವ ಮೈಸೂರು-ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಇಂಟರ್ ಸಿಟಿ ರೈಲು ತಾಳುಗುಪ್ಪದಿಂದ ಹೊರಟು ಸಾಗರ, ಅನಂದಪುರಂ, ಆರಸಾಳು ಕುಂಸಿ ಶಿವಮೊಗ್ಗ ಮಾರ್ಗ ರಾಜದಾನಿ ಬೆಂಗಳೂರಿಗೆ 6.20 ಹೋಗುವ ಇಂಟರ್ ಸಿಟಿ ರೈಲು ನಂತರ 7.45 ರಿಂದ 8 ಗಂಟೆಗೆ ಶಿವಮೊಗ್ಗ ಪ್ಯಾಸಂಜರ್ ರೈಲು ಹೀಗೆ ಹೋಗಿ ಬರುವ ಹಲವಾರು ರೈಲು ಗಾಡಿಗಳು ಆರಸಾಳು ಮಾಲ್ಗುಡಿ ನಿಲ್ದಾಣದಲ್ಲಿ ನಿಲ್ಲಿಸಿ ಹೋಗುವುದರಿಂದಾಗಿ ಸಾಕಷ್ಟು ಪ್ರಯಾಣಿಕರು ಓಡಾಡುವಂತಾಗಿದೆ.&lt;/p&gt;&lt;h3&gt;&lt;strong&gt;ಮಾಲ್ಗುಡಿ ಮೂಸಿಯಂ ವೀಕ್ಷಣೆ&lt;/strong&gt;&lt;/h3&gt;&lt;p&gt;ಇನ್ನೂ ಮಾಲ್ಗುಡಿ ಮೂಸಿಯಂ ವೀಕ್ಷಣೆಗೆ ರಾಜ್ಯದ ಹಲವಾರು ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದು ಸರಿಯಾದ ವ್ಯವಸ್ಥೆಗಳಿಲ್ಲದೆ ಹೋಟಲ್&zwj;ಗಳಿಲ್ಲ ಮತ್ತು ಶೌಚಾಲಯಗಳಂತೂ ಇಲ್ಲದಿರುವುದು, ಕುಡಿಯುವ ಶುದ್ದ ನೀರಿನ ಘಟಕ ಸಹ ಇಲ್ಲದಿರುವುದು ಸ್ಟೆಷನ್ ಪಕ್ಕದಲ್ಲಿನ ಶೌಚಾಲಯಗಳು ನೀರಿನ ಸೌಲಭ್ಯಗಳಿಲ್ಲದೆ ಬಾಗಿಲುಗಳೆಲ್ಲಾ ಮುರಿದು ಹೋಗಿ ತೆರೆದುಕೊಂಡಿರುವುದು ನಿರ್ವಹಣೆಯಲ್ಲದೆ ಇರುವುದನ್ನು ಸಾಕ್ಷೀಕರಿಸುತ್ತಿವೆ.&lt;/p&gt;&lt;p&gt;ಇನ್ನಾದರೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಇತ್ತ ಗಮನಹರಿಸುವ ಮೂಲಕ ಅರಸಾಳು ಮಾಲ್ಗುಡಿ ಮೂಸಿಯಂ ಮತ್ತು ರೈಲ್ವೆ ನಿಲ್ದಾಣದಲ್ಲಿ ಸಮಸ್ಯಗಳಿಗೆ ಪರಿಹಾರ ಕಲ್ಪಿಸುವತ್ತ ಗಮನಹರಿಸಬೇಕಿದೆ.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/shivamogga-s-arasalu-railway-station-famous-for-malgudi-days-is-deprived-of-basic-facilities-mrq/articleshow-akvgca5"/>
        </item>
        <item>
            <title><![CDATA[ಶಿವಮೊಗ್ಗ, ಮಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಅಬ್ಬರಿಸಿದ ಮಳೆರಾಯ: ವಿಮಾನ ಲ್ಯಾಂಡಿಂಗ್ ಸಮಸ್ಯೆ, ಮನೆಗಳು ವಿನಾಶ!]]></title>
            <link>https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn</link>
            <guid isPermaLink="true">https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn</guid>
            <pubDate>Thu, 14 May 2026 21:03:29 +0530</pubDate>
            <description><![CDATA[&lt;p&gt;ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krkhh7vdmgmzcqbvbwd34hj9,imgname-karnataka-rain-update-1778772385645.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು/ಮಂಗಳೂರು: &lt;/strong&gt;ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನಿಂದ ಬೆಂದು ಹೋಗಿದ್ದ ಕರ್ನಾಟಕದ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಆದರೆ, ರಾಜ್ಯದ ಹಲವೆಡೆ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಂದೆಡೆ ಮಳೆ ಖುಷಿ ನೀಡಿದರೆ, ಮತ್ತೊಂದೆಡೆ ಅಪಾರ ಹಾನಿ ಉಂಟುಮಾಡಿದೆ. ವಿಶೇಷವಾಗಿ ಮಂಗಳೂರು, ಯಾದಗಿರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ರೌದ್ರಾವತಾರ ಕಂಡುಬಂದಿದೆ.&lt;/p&gt;&lt;img&gt;&lt;p&gt;ಕರಾವಳಿ ನಗರಿ ಮಂಗಳೂರಿನಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ರನ್ ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಎರಡು ವಿಮಾನಗಳು ಇಳಿಯಲಾಗದೆ ವಿಟ್ಲ ಸಮೀಪದ ಆಕಾಶದಲ್ಲಿ ಸುದೀರ್ಘ ಕಾಲ ಸುತ್ತಾಡುತ್ತಿವೆ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆಯಾದ್ಯಂತ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ. ಯಾದಗಿರಿ ನಗರ, ಶಹಾಪುರ ಮತ್ತು ಸುರಪುರ ತಾಲೂಕುಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿಯ ತಗಡುಗಳು ನೂರಾರು ಅಡಿ ದೂರಕ್ಕೆ ಹಾರಿ ಹೋಗಿವೆ.&amp;nbsp;&lt;/p&gt;&lt;img&gt;&lt;p&gt;ಯಾದಗಿರಿ ಜಿಲ್ಲೆಯಾದ್ಯಂತ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ಮಳೆ ತಂಪು ನೀಡಿದೆಯಾದರೂ, ಬಡ ಕುಟುಂಬಗಳ ಆಸ್ತಿಪಾಸ್ತಿಗೆ ಹಾನಿಯಾಗಿರುವುದು ನೋವು ತಂದಿದೆ.&lt;/p&gt;&lt;img&gt;&lt;p&gt;ಶಿವಮೊಗ್ಗದಲ್ಲಿ ಹಲವು ದಿನಗಳ ಸುದೀರ್ಘ ಕಾಯುವಿಕೆಯ ನಂತರ ಮಳೆರಾಯ ಧರೆಗಿಳಿದಿದ್ದಾನೆ. ಸಂಜೆ 6 ಗಂಟೆಯ ಸುಮಾರಿಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದೆ. ಆದರೆ, ದಿಢೀರ್ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಯಿತು.&lt;/p&gt;&lt;img&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಭಾರಿ ಮಳೆಯಾಗುತ್ತಿದೆ. ಸಂಜೆ 7 ಗಂಟೆಯಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿಯ ಜನರಿಗೆ ಸೆಕೆಯಿಂದ ಮುಕ್ತಿ ಸಿಕ್ಕಿದೆ. ಜಿಲ್ಲೆಯ ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲೂ ಮೋಡಕವಿದ ವಾತಾವರಣವಿದ್ದು, ರಾತ್ರಿಯ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಗುಡುಗು ಸಿಡಿಲಿನ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;]]></content:encoded>
            <category>shivamogga</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-rain-updates-flights-circle-in-mangaluru-sky-due-to-rain-heavy-destruction-in-yadgir-b493qdn"/>
        </item>
        <item>
            <title><![CDATA[ಶಿವಮೊಗ್ಗ ಜನತೆಯ ಬೇಡಿಕೆ ಈಡೇರಿಕೆ: ಯಶವಂತಪುರ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಹ್ಯಾಪಿ ನ್ಯೂಸ್]]></title>
            <link>https://kannada.asianetnews.com/gallery/travel/indian-railways-yeshwanthpur-to-talaguppa-express-train-service-to-be-made-permanent-mrq-d57n0it</link>
            <guid isPermaLink="true">https://kannada.asianetnews.com/gallery/travel/indian-railways-yeshwanthpur-to-talaguppa-express-train-service-to-be-made-permanent-mrq-d57n0it</guid>
            <pubDate>Wed, 13 May 2026 10:13:18 +0530</pubDate>
            <description><![CDATA[ಇದುವರೆಗೆ ವಿಶೇಷ ರೈಲಾಗಿದ್ದ ಯಶವಂತಪುರ-ತಾಳಗುಪ್ಪ ರೈಲು (16555/16556) ಈಗ ಕಾಯಂ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲಾಗಿ ಸಂಚರಿಸಲಿದೆ. ಈ ಹೊಸ ಸೇವೆಯು ಮೇ 15 ರಿಂದ ಆರಂಭವಾಗಲಿದ್ದು, ಶಿವಮೊಗ್ಗ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k0gcd4mnppqdhpwk91k7cc6x,imgname-talaguppa--3--1752896541333.jpg" type="image/jpeg" height="390" width="690"/>
            <content:encoded><![CDATA[ಇದುವರೆಗೆ ವಿಶೇಷ ರೈಲಾಗಿದ್ದ ಯಶವಂತಪುರ-ತಾಳಗುಪ್ಪ ರೈಲು (16555/16556) ಈಗ ಕಾಯಂ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲಾಗಿ ಸಂಚರಿಸಲಿದೆ. ಈ ಹೊಸ ಸೇವೆಯು ಮೇ 15 ರಿಂದ ಆರಂಭವಾಗಲಿದ್ದು, ಶಿವಮೊಗ್ಗ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.&lt;img&gt;&lt;p&gt;ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನತೆಗೆ ಮತ್ತೊಂದು ಸಂತಸದ ಸುದ್ದಿ ದೊರೆತಿದೆ. ದಕ್ಷಿಣ ಪಶ್ಚಿಮ ರೈಲ್ವೆಯು ಈವರೆಗೆ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ಯಶವಂತಪುರ - ತಾಳಗುಪ್ಪ - ಯಶವಂತಪುರ ರೈಲನ್ನು ಇದೀಗ ಕಾಯಂ ರೈಲಾಗಿ ನಿಯಮಿತ ಸೇವೆಗೆ ನಿಗದಿಪಡಿಸಿದೆ.&lt;/p&gt;&lt;img&gt;&lt;p&gt;ರೈಲ್ವೆ ಸಂಖ್ಯೆ 06587/06588 ರೈಲು ಇದುವರೆಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಯಶವಂತಪುರ-ತಾಳಗುಪ್ಪ-ಯಶವಂತಪುರ ಸಂಚರಿಸುತ್ತಿತ್ತು. ಈಗ ಇದನ್ನು ರೈಲು ಗಾಡಿ ಸಂಖ್ಯೆ 16555/16556 ಎಂದು ಮಾರ್ಪಡಿಸಿ, ಯಶವಂತಪುರ - ತಾಳಗುಪ್ಪ - ಯಶವಂತಪುರ ವಾರಕ್ಕೆ ಒಂದು ಸಲ, ಪ್ರತಿ ಶುಕ್ರವಾರದಂದು ಯಶವಂತಪುರದಿಂದ ಹಾಗೂ ತಾಳಗುಪ್ಪದಿಂದ ಪ್ರತಿ ಶನಿವಾರ ಈ ಎಕ್ಸ್ ಪ್ರೆಸ್ ರೈಲು ಖಾಯಂ ಆಗಿ ನಿಯಮಿತ ಸೇವೆ ನೀಡಲಿದೆ.&amp;nbsp;&lt;/p&gt;&lt;p&gt;ಈ ಸೇವೆಯು ಇದೇ ಮೇ 15ರಿಂದ ಪ್ರಾರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಇದರಿಂದ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಹಾಗೂ ಮಲೆನಾಡು ಭಾಗದ ಪ್ರಯಾಣಿಕರಿಗೆ ಬಹಳ ಅನುಕೂಲಕರವಾಗಲಿದೆ ಎಂದಿದ್ದಾರೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವೈದ್ಯಕೀಯ ಕಾರಣಗಳಿಗೆ ತೆರಳುವ ಜನರಿಗೆ ಈ ಸೇವೆ ಹೆಚ್ಚಿನ ನೆರವಾಗಲಿದೆ, ಜೊತೆಗೆ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.&lt;/p&gt;&lt;p&gt;ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲ್ವೆ ಅಭಿವೃದ್ಧಿಗೆ ಇನ್ನಷ್ಟು ಹೊಸ ಯೋಜನೆಗಳು ಹಾಗೂ ರೈಲು ಸೌಲಭ್ಯಗಳನ್ನು ತರಲು ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.&lt;/p&gt;]]></content:encoded>
            <category>shivamogga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/travel/indian-railways-yeshwanthpur-to-talaguppa-express-train-service-to-be-made-permanent-mrq-d57n0it"/>
        </item>
        <item>
            <title><![CDATA[ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಘೇರಾವ್ ಹಾಕಲು ಬಂದ 30ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರ ಬಂಧನ]]></title>
            <link>https://kannada.asianetnews.com/gallery/politics/shivamogga-over-30-bajrang-dal-activists-arrested-after-attempted-gherao-madhu-bangarappa-de35lz7</link>
            <guid isPermaLink="true">https://kannada.asianetnews.com/gallery/politics/shivamogga-over-30-bajrang-dal-activists-arrested-after-attempted-gherao-madhu-bangarappa-de35lz7</guid>
            <pubDate>Fri, 22 May 2026 12:56:29 +0530</pubDate>
            <description><![CDATA[&lt;p&gt;ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮನ ವೇಳೆ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಚಿವರಿಗೆ ಘೇರಾವ್ ಹಾಕಲು ಮುಂದಾದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks78t1067hvvp67h52kqba7g,imgname-----------------------2026-05-22t124801.877-1779434324998.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮನ ವೇಳೆ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಚಿವರಿಗೆ ಘೇರಾವ್ ಹಾಕಲು ಮುಂದಾದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮನ ವೇಳೆ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಚಿವರಿಗೆ ಘೇರಾವ್ ಹಾಕಲು ಮುಂದಾದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದರು.&lt;/p&gt;&lt;img&gt;&lt;p&gt;ಕೆಡಿಪಿ ಸಭೆಗೆ ಸಚಿವ ಮಧು ಬಂಗಾರಪ್ಪ ಆಗಮಿಸುತ್ತಿದ್ದಂತೆಯೇ ಬಜರಂಗದಳ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟನೆ ಆರಂಭಿಸಿದರು. ಸಚಿವರ ವಿರುದ್ಧ ಘೇರಾವ್ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.&lt;/p&gt;&lt;img&gt;&lt;p&gt;ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ಪ್ರಮುಖರಾದ ಅಂಕುಶ್, ಯೋಗೇಶ್ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.&lt;/p&gt;&lt;img&gt;&lt;p&gt;ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಎರಡು ಪೊಲೀಸ್ ವ್ಯಾನ್&zwnj;ಗಳನ್ನು ತರಿಸಲಾಯಿತು. ಬಳಿಕ ಕಾರ್ಯಕರ್ತರನ್ನು ಬಂಧಿಸಿ ಪೊಲೀಸರು ಸ್ಥಳದಿಂದ ಕರೆದೊಯ್ದರು.&lt;/p&gt;&lt;img&gt;&lt;p&gt;ಬಂಧನದ ವೇಳೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕೆಲಕಾಲ ಸಭಾ ಸ್ಥಳದ ಸುತ್ತಮುತ್ತ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;img&gt;&lt;p&gt;ಇದರ ನಡುವೆ ಸಚಿವ ಮಧು ಬಂಗಾರಪ್ಪ ಕೇವಲ ರೈತರ ಮನವಿಯನ್ನು ಸ್ವೀಕರಿಸಿ ನೇರವಾಗಿ ಕೆಡಿಪಿ ಸಭೆಗೆ ತೆರಳಿದರು. ಕಾರ್ಯಕರ್ತರ ಮನವಿ ಸ್ವೀಕರಿಸದ ಹಿನ್ನೆಲೆ ಬಜರಂಗದಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಘೇರಾವ್ ಹಾಕಲು ಕಾರಣವಾಯಿತು.&lt;/p&gt;]]></content:encoded>
            <category>shivamogga</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/shivamogga-over-30-bajrang-dal-activists-arrested-after-attempted-gherao-madhu-bangarappa-de35lz7"/>
        </item>
        <item>
            <title><![CDATA[ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದು ದಾಖಲೆ ಅಲ್ಲ: ಬಿ.ವೈ.ವಿಜಯೇಂದ್ರ ವಾಗ್ದಾಳಿ]]></title>
            <link>https://kannada.asianetnews.com/karnataka-districts/by-vijayendra-on-farmers-congress-government-karnataka-gvd/articleshow-kebvfrs</link>
            <guid isPermaLink="true">https://kannada.asianetnews.com/karnataka-districts/by-vijayendra-on-farmers-congress-government-karnataka-gvd/articleshow-kebvfrs</guid>
            <pubDate>Wed, 27 May 2026 21:45:02 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿಯಾಗಿ ನಾಡಿನ ಜನತೆಯ ಸೇವೆ ಸಲ್ಲಿಸುವ ಅವಕಾಶ ದೊರೆತಾಗ ರೈತರು ಜನಸಾಮಾನ್ಯರ ಕಷ್ಟಕ್ಕೆ, ಸಮಸ್ಯೆಗೆ ಸ್ಪಂದಿಸಿದಲ್ಲಿ, ಕಣ್ಣೀರು ಒರೆಸಿದಲ್ಲಿ ಮಾತ್ರ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4wp2b5v03z6v8krfh3yrqaf,imgname-gnghmn-1757604293819.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿಕಾರಿಪುರ (ಮೇ.27): &lt;/strong&gt;ಅತಿ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿದ್ದು, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದು ದಾಖಲೆ ಅಲ್ಲ, ಮುಖ್ಯಮಂತ್ರಿಯಾಗಿ ನಾಡಿನ ಜನತೆಯ ಸೇವೆ ಸಲ್ಲಿಸುವ ಅವಕಾಶ ದೊರೆತಾಗ ರೈತರು ಜನಸಾಮಾನ್ಯರ ಕಷ್ಟಕ್ಕೆ, ಸಮಸ್ಯೆಗೆ ಸ್ಪಂದಿಸಿದಲ್ಲಿ, ಕಣ್ಣೀರು ಒರೆಸಿದಲ್ಲಿ ಮಾತ್ರ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.&lt;/p&gt;&lt;p&gt;ರಾಜ್ಯದ ಕಾಂಗ್ರೆಸ್ ಸರ್ಕಾರ ಬದುಕಿದ್ದು ರೈತರ ಪಾಲಿಗೆ ಸತ್ತಂತಾಗಿದೆ ಎಂದು ಟೀಕಿಸಿದ ಅವರು, ಗಾಳಿ ಮಳೆಗೆ ಲಕ್ಷಾಂತರ ಅಡಿಕೆ ಮರ ಧರೆಗುರುಳಿದ್ದು ಸೂಕ್ತ ಪರಿಹಾರ, ವಿಮೆ ನೀಡಿ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಮುಖ್ಯಮಂತ್ರಿಗಳು, ಸಚಿವರನ್ನು ಕಳುಹಿಸಿ ರೈತರಿಗೆ ಸಾಂತ್ವನ ದೈರ್ಯ ತುಂಬಿ ಕಣ್ಣೀರು ಒರೆಸುವ ಬದಲು ಕುರ್ಚಿ ಉಳಿಸಿಕೊಳ್ಳಲು ಸಚಿವರ ಜತೆ ದೆಹಲಿಗೆ ತೆರಳಿ ಬೀಡು ಬಿಟ್ಟಿದ್ದಾರೆ. ಕುರ್ಚಿಗಾಗಿ ಹೋರಾಡುತ್ತಿರುವ ಮುಖ್ಯಮಂತ್ರಿಗಳು ರೈತರ ಕಣ್ಣೀರು ಒರೆಸಲು ಸಾದ್ಯವಾಯಿತಾ? ಎಂಬುದನ್ನು ಅರಿತುಕೊಳ್ಳಲಿ ತಪ್ಪಿದಲ್ಲಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.&lt;/p&gt;&lt;p&gt;ಜನತೆ ಬೇಡ ಎಂದರೂ ಗ್ಯಾರೆಂಟಿಗಾಗಿ ರೈತರಿಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಾರಿಗೊಳಿಸಿದ್ದ ಕಿಸಾನ್ ಸಮ್ಮಾನ್ ಯೋಜನೆ ರು.4 ಸಾವಿರ, ಹೈನುಗಾರಿಕೆಗೆ ಪ್ರೋತ್ಸಾಹ ಧನ ಕಳೆದ 3 ವರ್ಷದಿಂದ ನೀಡದೆ ಅಂದಾಜು 800 ಕೋಟಿ ರು. ಖಜಾನೆಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ವಿತರಿಸದೆ, ಹದಗೆಟ್ಟ ಮಳೆ ಮಾಪನ ಕೇಂದ್ರದ ದುರಸ್ತಿ ಬಗ್ಗೆ ಬರೆದ ಪತ್ರಕ್ಕೆ ಯಾವುದೇ ಸ್ಪಂದನೆ ಇಲ್ಲ. ಮುಂಗಾರು ಆರಂಭವಾಗುತ್ತಿದ್ದು, ರಸಗೊಬ್ಬರ ಸಾಗುವಳಿದಾರರಿಗೆ ನೀಡಲು ಸಾದ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ರೈತರ ಪರ ಕಿಂಚಿತ್ತು ಕಾಳಜಿಯಿಲ್ಲದ ಸರ್ಕಾರ ತೀವ್ರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.&lt;/p&gt;&lt;p&gt;ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕೂಡಲೇ ಅತಿವೃಷ್ಠಿಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗೆ ಎನ್.ಡಿ.ಆರ್.ಎಫ್ ವತಿಯಿಂದ ರು.1.25 ಲಕ್ಷ ಪರಿಹಾರದ ಜತೆಗೆ ರು.4 ಲಕ್ಷ ರಾಜ್ಯ ಸರ್ಕಾರದಿಂದ ಕೂಡಲೇ ಬಿಡುಗಡೆಗೊಳಿಸಿದ್ದು, ಇದೀಗ ಮುಖ್ಯಮಂತ್ರಿಗಳ ಇಚ್ಚಾಶಕ್ತಿ ಕೊರತೆಯಿಂದ ರೈತರ ಜತೆಗೆ ಜನತೆ ಕಣ್ಣೀರು ಹಾಕುವಂತಾಗಿದೆ, ಕೇವಲ 20-30 ಸಾವಿರದಲ್ಲಿ ದುರಸ್ತಿಯಾಗುತ್ತಿದ್ದ ಟ್ರಾನ್ಸ್&zwnj;ಫಾರ್ಮರ್ ಇದೀಗ 2-3 ಲಕ್ಷ ಖರ್ಚು ಮಾಡಿದರೂ ಆಗುತ್ತಿಲ್ಲ, ಹಿಂದೆ ಗಂಗಾಕಲ್ಯಾಣ ಯೋಜನೆಯಲ್ಲಿ ವರ್ಷಕ್ಕೆ 200-300 ಬೋರ್ ವೆಲ್ ಕೊರೆಸಲಾಗುತ್ತಿದ್ದು, ಇದೀಗ 2-3 ನೀಡುತ್ತಿಲ್ಲ ಎಂದರು.&lt;/p&gt;&lt;p&gt;ತಾ.ರೈತ ಮೋರ್ಚಾ ಅಧ್ಯಕ್ಷ ಎಚ್.ಆರ್ ಯೋಗೀಶಪ್ಪ ಮಾತನಾಡಿ, ತಾಲೂಕಿನಲ್ಲಿ ಅಕಾಲಿಕ ಮಳೆಗೆ ಹಾನಿಯಾದ ಅಡಿಕೆ ಮರದ ಬಗ್ಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಈ ಪ್ರತಿಭಟನೆ ಕೇವಲ ಸಾಂಕೇತಿಕವಾಗಿದ್ದು, ಸರ್ಕಾರ ಸ್ಪಂದಿಸದಿದ್ದಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.&lt;/p&gt;&lt;h2&gt;&lt;strong&gt;ರೈತರ ಕಣ್ಣೀರು ಒರೆಸುವ ಕೆಲಸ ಮಾಡಲಿ&lt;/strong&gt;&lt;/h2&gt;&lt;p&gt;ಸಂಸದ ರಾಘವೇಂದ್ರ ಮಾತನಾಡಿ, ವಿರೋಧ ಪಕ್ಷದಲ್ಲಿದ್ದಾಗ ರೈತರ ಪರ ಹೋರಾಟ, ಮುಖ್ಯಮಂತ್ರಿಯಾಗಿ ರೈತರ ಕಣ್ಣೀರು ಒರೆಸಿದ ಯಡಿಯೂರಪ್ಪನವರು ರೈತರನ್ನು ದೇಶದ ಬೆನ್ನೆಲುಬು ಎಂದು ಬಾಷಣಕ್ಕೆ ಮಾತ್ರ ಸೀಮಿತವಾಗಿಸದೆ ಶಕ್ತಿ ನೀಡಿ ಗೌರವದ ಬದುಕು ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ತಾಲೂಕಿನಾದ್ಯಂತ ಶಾಶ್ವತ ನೀರಾವರಿ ಕಲ್ಪಿಸಲಾಗಿದ್ದು, ಇದೀಗ ಧರಿದ್ರ ಸರ್ಕಾರಕ್ಕೆ ವಿದ್ಯುತ್ ಬಿಲ್ ಪಾವತಿಸಲಾಗುತ್ತಿಲ್ಲ ಎಂದು ಆರೋಪಿಸಿದ ಅವರು, ರೈತರು ಮೆಕ್ಕೆಜೋಳ ಮಾರಿಕೊಂಡ ನಂತರದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಅಧಿಕಾರ ದೊರೆತಾಗ ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ಶಾಶ್ವತವಾಗಿ ಅಧಿಕಾರದಲ್ಲಿ ಗೂಟ ಹೊಡೆದುಕೊಂಡು ಇರಲು ಸಾದ್ಯವಿಲ್ಲ ಎಂಬ ಸತ್ಯ ಜ್ಞಾಪಕವಿರಲಿ ಎಂದು ಎಚ್ಚರಿಸಿದರು.&lt;/p&gt;]]></content:encoded>
            <category>shivamogga</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/by-vijayendra-on-farmers-congress-government-karnataka-gvd/articleshow-kebvfrs"/>
        </item>
        <item>
            <title><![CDATA[ತೀರ್ಥಹಳ್ಳಿಯಲ್ಲಿ ಹೊಯ್ಸಳರ ಕಾಲದ ಜೋಡಿ ವೀರಗಲ್ಲು ಶಾಸನ ಪತ್ತೆ, ಯುದ್ಧದ ಅತ್ಯಂತ ಸುಂದರ ವರ್ಣನೆಯೊಂದಿಗೆ ಅಮೋಘ ರಚನೆ]]></title>
            <link>https://kannada.asianetnews.com/karnataka-districts/rare-two-13th-century-hoysala-era-hero-stones-inscription-discovered-near-thirthahalli-in-karnataka-shivamogga-gdp/articleshow-tlg9az7</link>
            <guid isPermaLink="true">https://kannada.asianetnews.com/karnataka-districts/rare-two-13th-century-hoysala-era-hero-stones-inscription-discovered-near-thirthahalli-in-karnataka-shivamogga-gdp/articleshow-tlg9az7</guid>
            <pubDate>Fri, 15 May 2026 20:25:52 +0530</pubDate>
            <description><![CDATA[ತೀರ್ಥಹಳ್ಳಿ ತಾಲೂಕಿನ ಹಲ್ಲುಸಾಲೆ ಗ್ರಾಮದಲ್ಲಿ ಕ್ರಿ.ಶ 1250 ಮತ್ತು 1251ಕ್ಕೆ ಸೇರಿದ ಎರಡು ಹೊಯ್ಸಳರ ಕಾಲದ ವೀರಗಲ್ಲುಗಳು ಪತ್ತೆಯಾಗಿವೆ. ಈ ಶಾಸನಗಳು ಸಿರಿಯಮ್ಮ ಹೆಗ್ಗಡೆ ಮತ್ತು ಅಣ್ಣಮ್ಮ ಹೆಗ್ಗಡೆಯ ನಡುವೆ ನಡೆದ ಕುದುರೆ ಕಾಳಗ, ವೀರರ ಮರಣ ಹಾಗೂ ಭೂದಾನದ ವಿವರಗಳನ್ನು ಒಳಗೊಂಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krp20p3xqdj8j29av0vd3bhh,imgname-hoysala-era-hero-stones-inscription-1778856777853.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತೀರ್ಥಹಳ್ಳಿ:&lt;/strong&gt; ತಾಲೂಕು ಕೋಣಂದೂರು ಸಮೀಪದ ಹಲ್ಲುಸಾಲೆ ಗ್ರಾಮದಲ್ಲಿ ಪತ್ತೆಯಾದ ಎರಡು ವೀರಗಲ್ಲುಗಳಲ್ಲಿ ಮೊದಲನೇ ವೀರಗಲ್ಲು ಶಕ ವರ್ಷ ಸಾವಿರ 1172 ಎಂದಿದ್ದು ಕ್ರಿ.ಶ 1250ರ ಇಸವಿಗೆ ಸರಿಹೊಂದುತ್ತದೆ. 2ನೇ ವೀರಗಲ್ಲು ಕ್ರಿ.ಶ 1251ರ ಇಸವಿಗೆ ಸರಿಹೊಂದುವುದು. ಹೊಯ್ಸಳರ ಕಾಲದ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಮೊದಲನೇ ವೀರಗಲ್ಲು ಶಾಸನ 6 ಅಡಿ, 5 ಅಂತಸ್ತು 23 ಸಾಲುಗಳನ್ನು ಹೊಂದಿದೆ. 2ನೇ ವೀರಗಲ್ಲು 6 ಅಡಿ ಎತ್ತರ, 5 ಅಂತಸ್ತು, 24 ಸಾಲುಗಳಲ್ಲಿ ಬರೆಯಲ್ಪಟ್ಟಿದೆ.&lt;/p&gt;&lt;h2&gt;ಕುದುರೆ ಕಾಳಗದ ವರ್ಣನೆ ಅತ್ಯಂತ ಅಮೋಘ&lt;/h2&gt;&lt;p&gt;ಈ ವೀರಗಲ್ಲುಗಳು ಅತ್ಯಂತ ಸುಂದರವಾಗಿ ಕೆತ್ತಲ್ಪಟ್ಟಿದ್ದು ಯುದ್ಧದ ವರ್ಣನೆಯೂ ಅತ್ಯಂತ ಅಮೋಘವಾಗಿದೆ. ಒಂದನೇ ವೀರಗಲ್ಲಿನಲ್ಲಿ ಸಿರಿಯಮ್ಮ ಹೆಗ್ಗಡೆ ಮತ್ತು ಆತನ ಮಾವ ಹೊಯ್ಸಯ್ಯನು ಯುದ್ಧ ರಂಗದಲ್ಲಿ ಹೋರಾಟ ಮಾಡಿದ ವಿವರಣೆ ಇದೆ. ಸಗಡವಳ್ಳಿಯ ನಾಡಾಧಿಪತಿಯಾದ ಮಾಂಡಳಿಕ ಸಿರಿಯಮ್ಮ ಹೆಗ್ಗಡೆ ಹಾಗೂ ಹೆದ್ದೂರು ನಾಡಾಧಿಪತಿ ಅಣ್ಣಮ್ಮ ಹೆಗ್ಗಡೆಯ ನಡುವೆ ನಡೆದ ಕುದುರೆ ಕಾಳಗದಲ್ಲಿ ಸಿರಿಯಮ್ಮ ಹೆಗ್ಗಡೆ ಮತ್ತು ಆತನ ಮಾವ ಹೊಯ್ಸಯ್ಯ ವೀರಾವೇಶದಿಂದ ಹೋರಾಡುತ್ತಿರುವಾಗ ಮರಣ ಹೊಂದಿದವರ ಬಗ್ಗೆ ವಿವರಣೆ ಇದೆ. ಕೊನೆಗೆ ಈ ಶಾಸನದಲ್ಲಿ ಹೊಯ್ಸಯ್ಯನ ಕಿರಿಯ ಸಹೋದರ ಜಕ್ಕಯ್ಯನಿಗೆ ಒಂದು ಸಲಿಗೆ ಭೂಮಿ ದಾನ ಮಾಡಿದುದರ ಬಗ್ಗೆ ಉಲ್ಲೇಖವಿದೆ.&lt;/p&gt;&lt;h2&gt;5 ಹಂತಗಳಲ್ಲೂ ಯುದ್ಧದ ವರ್ಣನೆ ಹಾಗೂ ದೃಶ್ಯ&lt;/h2&gt;&lt;p&gt;ಈ ಶಾಸನ ಮೊದಲಿಗೆ &ldquo;ನಮಃಸ್ತುಂಗ ಶಿರಶ್ಚುಂಬಿ.....&rdquo; ಎಂಬ ಶೈವ ಶ್ಲೋಕದಿಂದ ಆರಂಭವಾಗುವುದು. ನಂತರದ ಸಾಲಿನಲ್ಲಿ ಸಿರಿಯಮ್ಮ ಹೆಗ್ಗಡೆ ಬಿರುದಾವಳಿ ಹಾಗೂ ದಿನಾಂಕದ ಉಲ್ಲೇಖವಿದೆ. 5 ಹಂತಗಳಲ್ಲೂ ಯುದ್ಧದ ವರ್ಣನೆ ಹಾಗೂ ದೃಶ್ಯಗಳಿವೆ. ಶತ್ರು ಸೈನ್ಯದ ಬಾಣಗಳಿಂದ ತಿವಿದಿದ್ದ ಹಾಗೂ ಕುದುರೆಗಳ ಉದ್ಧಟತನದಿಂದ ಸಿರಿಯಮ್ಮ ಹೆಗ್ಗಡೆ ರಣರಂಗದಲ್ಲಿ ಹತ್ಯೆಯಾಗಿ ಆತನ ಮಾವ ಹೊಯ್ಸಯ್ಯನು ಆತನ ಹೆಣ ಹೊತ್ತೊಯ್ಯುವಾಗ ಶತ್ರುಗಳ ಸೈನಿಕರು ಹೊಯ್ಸಯ್ಯನನ್ನು ಹತ್ಯೆ ಮಾಡುವರು. ಇಡೀ ಯುದ್ದರಂಗವೇ ಹೆಣಮಯದಿಂದ ಕೂಡಿರುವುದು. ಯುದ್ದರಂಗದಲ್ಲಿ ಪ್ರಾಣಬಿಟ್ಟ ಸಿರಿಯಮ್ಮ ಹೆಗ್ಗಡೆಯನ್ನು ದೇವ ಲೋಕದ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುವರು. ಈ ವೀರಗಲ್ಲನ್ನು ನಾಶ ಮಾಡದಂತೆ ಕೊನೆಯಲ್ಲಿ ನೀಡಲಾಗಿದೆ.&lt;/p&gt;&lt;p&gt;ಎರಡನೇ ವೀರಗಲ್ಲಿನಲ್ಲಿ ಮಾಂಡಳಿಕನಾದ ಸಿರಿಯಮ್ಮ ಹೆಗ್ಗಡೆ ಬಿರುದಾವಳಿಗಳು ಶಾಸನವನ್ನು ಅಚ್ಚು ಹಾಕಿಸಿದ ದಿನಾಂಕ ನಂತರದ ಸಾಲುಗಳಲ್ಲಿ ಯುದ್ಧದ ವರ್ಣನೆ ಅತ್ಯಂತ ಸೊಗಸಾಗಿದೆ. ಅಂತ್ಯದಲ್ಲಿ ಶಾಪಾಶಯವನ್ನು ಉಲ್ಲೇಖಿಸಲಾಗಿದೆ. ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕೆಂದು ಶೃಂಗೇರಿ ಸಂಸ್ಕೃತ ವಿಶ್ವವಿದ್ಯಾನಿಲಯದ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಡಾ. ಎಂ. ಎ. ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>shivamogga</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-two-13th-century-hoysala-era-hero-stones-inscription-discovered-near-thirthahalli-in-karnataka-shivamogga-gdp/articleshow-tlg9az7"/>
        </item>
        <item>
            <title><![CDATA[ಹಾವರಾಣಿ ಕಚ್ಚುತ್ತಾ? ಮನುಷ್ಯರು ಸಾಯುತ್ತಾರಾ? ಅದರ ಮೈಯಲ್ಲಿ ವಿಷ ಇದೆಯಾ? ಇಲ್ಲಿದೆ ರಾಣಿಯ ಉತ್ತರ!]]></title>
            <link>https://kannada.asianetnews.com/gallery/life/farmer-friendly-importance-of-common-indian-skink-havrani-in-gardens-myths-vs-facts-sat-wipyuao</link>
            <guid isPermaLink="true">https://kannada.asianetnews.com/gallery/life/farmer-friendly-importance-of-common-indian-skink-havrani-in-gardens-myths-vs-facts-sat-wipyuao</guid>
            <pubDate>Tue, 19 May 2026 12:00:09 +0530</pubDate>
            <description><![CDATA[ಹಾವರಾಣಿ ವಿಷಕಾರಿ ಎಂಬುದು ಕೇವಲ ಮೌಢ್ಯವಾಗಿದ್ದು, ವಾಸ್ತವದಲ್ಲಿ ಇದು ಹಾನಿಕಾರಕವಲ್ಲದ ಹಲ್ಲಿಯ ಪ್ರಭೇದವಾಗಿದೆ. ಇದು ಜಿರಳೆ, ಮಿಡತೆಗಳಂತಹ ಕೀಟಗಳನ್ನು ತಿಂದು ನಮ್ಮ ತೋಟ ಮತ್ತು ಮನೆಯನ್ನು ನೈಸರ್ಗಿಕವಾಗಿ ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ, ಹೀಗಾಗಿ ಇದೊಂದು ರೈತಮಿತ್ರ.]]></description>
            <media:content url="https://static.asianetnews.com/images/w-1280,h-720,format-jpg,imgid-01krze918f0czyss280zeywz6q,imgname-indian-skink-haavurani--4--1779171624206.jpg" type="image/jpeg" height="390" width="690"/>
            <content:encoded><![CDATA[ಹಾವರಾಣಿ ವಿಷಕಾರಿ ಎಂಬುದು ಕೇವಲ ಮೌಢ್ಯವಾಗಿದ್ದು, ವಾಸ್ತವದಲ್ಲಿ ಇದು ಹಾನಿಕಾರಕವಲ್ಲದ ಹಲ್ಲಿಯ ಪ್ರಭೇದವಾಗಿದೆ. ಇದು ಜಿರಳೆ, ಮಿಡತೆಗಳಂತಹ ಕೀಟಗಳನ್ನು ತಿಂದು ನಮ್ಮ ತೋಟ ಮತ್ತು ಮನೆಯನ್ನು ನೈಸರ್ಗಿಕವಾಗಿ ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ, ಹೀಗಾಗಿ ಇದೊಂದು ರೈತಮಿತ್ರ.&lt;img&gt;&lt;p&gt;ನಮ್ಮ ಮನೆ ಅಥವಾ ತೋಟದ ಸುತ್ತಮುತ್ತ ಹಸಿರು ಗಿಡಗಂಟೆಗಳ ನಡುವೆ, ಕಲ್ಲುಗಳ ಮೇಲೆ ಸರಸರನೆ ಓಡುವ ಹೊಳೆಯುವ ಮೈಬಣ್ಣದ ಒಂದು ಜೀವಿಯನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಹೆಸರೇ 'ಹಾವರಾಣಿ'. ಇಂಗ್ಲಿಷ್&zwnj;ನಲ್ಲಿ ಇದನ್ನು 'ಕಾಮನ್ ಇಂಡಿಯನ್ ಸ್ಕಿಂಕ್' (Common Indian Skink - Eutropis carinata) ಎಂದು ಕರೆಯುತ್ತಾರೆ. ನೋಡುವುದಕ್ಕೆ ಹಾವಿನ ಮರಿಯಂತೆ ಕಂಡರೂ, ವಾಸ್ತವದಲ್ಲಿ ಇದು ಹಲ್ಲಿಯ ವರ್ಗಕ್ಕೆ ಸೇರಿದ ಅತ್ಯಂತ ಉಪಕಾರಿ ಜೀವಿ.&lt;/p&gt;&lt;img&gt;&lt;p&gt;ಗ್ರಾಮೀಣ ಭಾಗಗಳಲ್ಲಿ ಹಾವರಾಣಿಯ ಬಗ್ಗೆ ಒಂದು ದೊಡ್ಡ ಮೌಢ್ಯವಿದೆ. ಇದರ ಹೆಸರಿನಲ್ಲಿ 'ಹಾವು' ಇರುವುದರಿಂದ ಅನೇಕರು ಇದು ಹಾವಿನ ಜಾತಿ ಅಥವಾ ಇದಕ್ಕೆ ತೀವ್ರವಾದ ವಿಷವಿದೆ ಎಂದು ಹೆದರುತ್ತಾರೆ. ಆದರೆ ಇದು ಸಂಪೂರ್ಣ ಸುಳ್ಳು. ಹಾವರಾಣಿಗೆ ಯಾವುದೇ ರೀತಿಯ ವಿಷವಿಲ್ಲ. ಇದು ಮನುಷ್ಯರಿಗೆ ಕಚ್ಚುವುದೂ ಇಲ್ಲ. ಈ ಸರೀಸೃಪ ಸಂಪೂರ್ಣವಾಗಿ ಅಹಿಂಸಾಕಾರಿ ಜೀವಿಯಾಗಿದೆ. ಇದನ್ನು ಕೆಣಕದ ಹೊರತು ಇದು ಯಾರಿಗೂ ತೊಂದರೆ ನೀಡುವುದಿಲ್ಲ ಎಂದು &lt;strong&gt;ಉರಗ ತಜ್ಞ ಗೌರಿ ಕಾಳಿಂಗ &lt;/strong&gt;ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹಾವರಾಣಿ ಕೇವಲ ಸುಂದರ ಜೀವಿಯಲ್ಲ, ಇದು ನಮ್ಮ ತೋಟದ 'ನೈಸರ್ಗಿಕ ಕೀಟನಾಶಕ' ಕೂಡ ಹೌದು. ಇವು ಜಿರಳೆಗಳು, ಮಿಡತೆಗಳು, ಗೆದ್ದಲುಗಳು ಮತ್ತು ಗಿಡಗಳಿಗೆ ಹಾನಿ ಮಾಡುವ ಇತರೆ ಸಣ್ಣ ಕೀಟಗಳನ್ನು ತಿಂದು ಬದುಕುತ್ತವೆ. ಯಾವುದೇ ಕೆಮಿಕಲ್ ಬಳಸದೆ ನಮ್ಮ ಮನೆಯ ಅಂಗಳ ಮತ್ತು ಅಡುಗೆಮನೆಯನ್ನು ಜಿರಳೆ ಮುಕ್ತವಾಗಿಡಲು ಇವು ನಮಗೆ ಅರಿವಿಲ್ಲದೆಯೇ ಸಹಾಯ ಮಾಡುತ್ತವೆ. ಹೀಗಾಗಿ ಇವುಗಳನ್ನು ರೈತಮಿತ್ರ ಎಂದು ಕರೆದರೂ ತಪ್ಪಾಗಲಾರದು.&lt;/p&gt;&lt;p&gt;&lt;strong&gt;ವಿಶಿಷ್ಟ ಜೀವನಶೈಲಿ ಮತ್ತು ರಕ್ಷಣಾ ತಂತ್ರ:&lt;/strong&gt;&lt;/p&gt;&lt;p&gt;ಹಾವರಾಣಿಗಳು ಬಿಸಿಲನ್ನು ತುಂಬಾ ಇಷ್ಟಪಡುತ್ತವೆ. ಬೆಳಗಿನ ಸಮಯದಲ್ಲಿ ಕಲ್ಲುಗಳ ಮೇಲೆ ಅಥವಾ ಒಣಗಿದ ಎಲೆಗಳ ಮೇಲೆ ಬಿಸಿಲು ಕಾಯಿಸಿಕೊಳ್ಳುತ್ತಾ (Basking) ಇರುವುದನ್ನು ನೀವು ಗಮನಿಸಬಹುದು. ಇವು ಹೆಚ್ಚಾಗಿ ಒಣ ಎಲೆಗಳ ರಾಶಿ ಅಥವಾ ಮರದ ದಿಮ್ಮಿಗಳ ಕೆಳಗೆ ವಾಸಿಸುತ್ತವೆ.&lt;/p&gt;&lt;img&gt;&lt;p&gt;ಇವುಗಳ ರಕ್ಷಣಾ ತಂತ್ರ ಬಹಳ ಆಕರ್ಷಕವಾಗಿದೆ. ಯಾವುದಾದರೂ ಪ್ರಾಣಿ ಅಥವಾ ಮನುಷ್ಯ ಇವುಗಳನ್ನು ಹಿಡಿಯಲು ಬಂದಾಗ, ಇವು ತಕ್ಷಣವೇ ತಮ್ಮ ಬಾಲವನ್ನು ತಾವೇ ಕತ್ತರಿಸಿಕೊಂಡು ತಪ್ಪಿಸಿಕೊಳ್ಳುತ್ತವೆ! ಶತ್ರುವು ಕತ್ತರಿಸಿದ ಬಾಲವನ್ನು ನೋಡುತ್ತಿರುವಾಗ ಹಾವರಾಣಿ ಅಲ್ಲಿಂದ ಓಡಿಹೋಗಿರುತ್ತದೆ. ಅಚ್ಚರಿಯ ವಿಷಯವೆಂದರೆ, ಕತ್ತರಿಸಿದ ಬಾಲವು ಕೆಲವು ದಿನಗಳ ನಂತರ ಮತ್ತೆ ಬೆಳೆಯುತ್ತದೆ.&lt;/p&gt;&lt;img&gt;&lt;p&gt;ಇವು ಮೊಟ್ಟೆ ಇಡುವ ಜೀವಿಗಳು. ಸುರಕ್ಷಿತ ಜಾಗದಲ್ಲಿ ಸುಮಾರು 2 ರಿಂದ 20 ಮೊಟ್ಟೆಗಳನ್ನು ಇಟ್ಟು ವಂಶಾಭಿವೃದ್ಧಿ ಮಾಡುತ್ತವೆ. ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಮತ್ತು ಬಯಲು ಸೀಮೆಯ ತೋಟಗಳಲ್ಲಿ ಇವು ಯಥೇಚ್ಛವಾಗಿ ಕಂಡುಬರುತ್ತವೆ.&lt;/p&gt;&lt;p&gt;&lt;strong&gt;ನಮ್ಮದೊಂದು ಮನವಿ:&lt;/strong&gt;&lt;/p&gt;&lt;p&gt;ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಇಂತಹ ಪುಟ್ಟ ಜೀವಿಗಳ ಪಾತ್ರ ಬಹಳ ದೊಡ್ಡದಿದೆ. ನಿಮ್ಮ ಮನೆಯ ಹತ್ತಿರ ಇವುಗಳನ್ನು ಕಂಡರೆ ದಯವಿಟ್ಟು ಹೆದರಬೇಡಿ ಅಥವಾ ಮೌಢ್ಯಕ್ಕೆ ಒಳಗಾಗಿ ಇವುಗಳನ್ನು ಸಾಯಿಸಬೇಡಿ. ಇವು ವಿಷಕಾರಿಯಲ್ಲದ ಮತ್ತು ನಮಗೆ ಉಪಕಾರ ಮಾಡುವ ಜೀವಿಗಳು. ಹಸಿರು ಪ್ರಪಂಚದ ಈ ಅಚ್ಚರಿಯ ಅತಿಥಿಗಳನ್ನು ಗೌರವಿಸೋಣ ಮತ್ತು ಅವುಗಳ ಇರುವಿಕೆಯನ್ನು ಆನಂದಿಸೋಣ.&lt;/p&gt;&lt;p&gt;ವಿಡಿಯೋ ನೋಡಲು &lt;strong&gt;ಇಲ್ಲಿ ಕ್ಲಿಕ್ ಮಾಡಿ&lt;/strong&gt;&lt;/p&gt;]]></content:encoded>
            <category>shivamogga</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/farmer-friendly-importance-of-common-indian-skink-havrani-in-gardens-myths-vs-facts-sat-wipyuao"/>
        </item>
        <item>
            <title><![CDATA[ತಂದೆಯನ್ನೇ ಕೊಂದ ಉಗ್ರರ ಪರ ನಿಲ್ಲುವ ಟಿವಿಕೆ ಜೊತೆ ಮೈತ್ರಿ? ರಾಹುಲ್ ಗಾಂಧಿಗೆ ಏನೂ ಅನ್ನಿಸಲ್ಲವೇ? ಬಿಜೆಪಿ ಶಾಸಕ ಚನ್ನಬಸಪ್ಪ ಕಿಡಿ]]></title>
            <link>https://kannada.asianetnews.com/state/bjp-mla-channabasappa-sparks-row-with-explosive-remarks-on-terrorism-congress-and-ltte/articleshow-wstymg0</link>
            <guid isPermaLink="true">https://kannada.asianetnews.com/state/bjp-mla-channabasappa-sparks-row-with-explosive-remarks-on-terrorism-congress-and-ltte/articleshow-wstymg0</guid>
            <pubDate>Fri, 22 May 2026 11:56:45 +0530</pubDate>
            <description><![CDATA[&lt;p&gt;ಬಿಜೆಪಿ ಶಾಸಕ ಚನ್ನಬಸಪ್ಪ ಅವರು, ರಾಜೀವ್ ಗಾಂಧಿ ಹತ್ಯೆ ಮಾಡಿದ ಎಲ್&zwnj;ಟಿಟಿಇಯನ್ನು ಗೌರವಿಸುವ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಕಾಂಗ್ರೆಸ್ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks75nve2yyp2gw5y23vpqt4q,imgname-----------------------2026-05-22t115325.148-1779431042498.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಮೇ.22): &lt;/strong&gt;ಭಯೋತ್ಪಾದನೆ, ಕಾಂಗ್ರೆಸ್ ಹಾಗೂ ಎಲ್&zwnj;ಟಿಟಿಇ ಕುರಿತಾಗಿ ಬಿಜೆಪಿ ಶಾಸಕ ಚನ್ನಬಸಪ್ಪ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ದೇಶದ ಅಖಂಡತೆಗೆ ಧಕ್ಕೆ ತರುವ ಶಕ್ತಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಅವರು ಆರೋಪಿಸಿದರು.&lt;/p&gt;&lt;h2&gt;ಭಯೋತ್ಪಾದನೆ ದೇಶದ ಅಖಂಡತೆಗೆ ದೊಡ್ಡ ಅಪಾಯ&lt;/h2&gt;&lt;p&gt;ದೇಶದ ಗಡಿಭಾಗಗಳಿಂದ ಈಶಾನ್ಯ ಭಾಗದವರೆಗೆ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ಮಟ್ಟ ಹಾಕಲು ಎಲ್ಲ ಸರ್ಕಾರಗಳು ಪ್ರಯತ್ನ ಮಾಡಿವೆ. 1970ರಿಂದ ಇಲ್ಲಿವರೆಗೆ 12 ಸಾವಿರಕ್ಕೂ ಹೆಚ್ಚು ಭಯೋತ್ಪಾದಕ ಕೃತ್ಯಗಳು ನಡೆದಿವೆ. 30 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದರು.&lt;/p&gt;&lt;h3&gt;ರಾಜೀವ್ ಗಾಂಧಿ ಹತ್ಯೆ ಉಲ್ಲೇಖಿಸಿದ ಶಾಸಕ&lt;/h3&gt;&lt;p&gt;1991ರ ಮೇ 21ರಂದು ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಹಾಗೂ ಅದಕ್ಕೂ ಮೊದಲು ನಡೆದ ಇಂದಿರಾಗಾಂಧಿ ಹತ್ಯೆಯನ್ನು ಉಲ್ಲೇಖಿಸಿದ ಚನ್ನಬಸಪ್ಪ, 'ಭಯೋತ್ಪಾದನೆಯಿಂದಲೇ ದೇಶದ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದ್ದೇವೆ. ವಿಪಿ ಸಿಂಗ್ ಸರ್ಕಾರ ಮೇ 21 ಭಯೋತ್ಪಾದಕತೆ ವಿರೋಧಿ ದಿನ ಆಚರಣೆ ಆದೇಶವಾಯ್ತು. ದೇಶವನ್ನು ಆಳಿದ ಕಾಂಗ್ರೆಸ್&zwnj; ಗೆ ರಾಜೀವ್ ಗಾಂಧಿ ಹತ್ಯೆ ಮಾಡಿದ ಎಲ್ ಟಿ ಟಿ ಉಗ್ರರು ಬಗ್ಗೆ ಏನು ಅನಿಸಲಿಲ್ಲವೇ? ಎಲ್&zwnj;ಟಿಟಿ ಪ್ರಭಾಕರನ್ ನಾಯಕತ್ವದಲ್ಲಿ ಪೆರಂಬೂದರಿನಲ್ಲಿ ರಾಜೀವ್ ಗಾಂಧಿ ಹತ್ಯೆ ನಡೆದಿತ್ತು. ಆದರಿಂದು ಟಿವಿಕೆ ಪಕ್ಷದ ಮುಖ್ಯಮಂತ್ರಿ ವಿಜಯ್ ಪ್ರಭಾಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುತ್ತಾರೆ. ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತೆ ಅಂದರೆ ಕಾಂಗ್ರೆಸ್ ನಿಂದಲೇ ಭಯೋತ್ಪಾದಕತೆಗೆ ಕುಮ್ಮಕ್ಕು ಕಾಂಗ್ರೆಸ್ ಕೊಡುತ್ತಿದೆ.&lt;/p&gt;&lt;p&gt;&lt;strong&gt;TVK ವಿಜಯ್ ವಿರುದ್ಧ ಗಂಭೀರ ಟೀಕೆ&lt;/strong&gt;&lt;/p&gt;&lt;p&gt;ಟಿವಿಕೆ ಪಕ್ಷದ ನಾಯಕ ವಿಜಯ್ ಅವರು ಎಲ್&zwnj;ಟಿಟಿಇ ಮುಖ್ಯಸ್ಥ ಪ್ರಭಾಕರನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿರುವ ವಿಚಾರವನ್ನು ಉಲ್ಲೇಖಿಸಿದ ಅವರು, 'ಇಂತಹ ಮಾನಸಿಕತೆ ಇರುವ ವ್ಯಕ್ತಿ ವಿಜಯ್ ಎಂದು ನನಗೆ ಗೊತ್ತಿರಲಿಲ್ಲ. ಒಳ್ಳೆಯ ಕಲಾವಿದ ಎಂದುಕೊಂಡಿದ್ದೆ. ಪ್ರಭಾಕರನ್&zwnj;ಗೆ ಗೌರವ ಕೊಡುವವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಇದು ದೇಶದ ಜನತೆಗೆ ಮಾಡಿದ ದ್ರೋಹ ಎಂದು ಅವರು ಆರೋಪಿಸಿದರು.&lt;/p&gt;&lt;p&gt;&lt;strong&gt;ರಾಹುಲ್ ಗಾಂಧಿ ದೇಶದ ಕ್ಷಮೆ ಕೇಳಬೇಕು&lt;/strong&gt;&lt;/p&gt;&lt;p&gt;ಸ್ವತಃ ತಂದೆಯನ್ನು ಕೊಂದವರನ್ನು ಬೆಂಬಲಿಸುವವರ ಜೊತೆ ನೀವು ನಿಲ್ಲುತ್ತೀರಾ? ಎಂದು ಪ್ರಶ್ನಿಸಿದ ಚನ್ನಬಸಪ್ಪ, ಇದು ಅಕ್ಷಮ್ಯ ಅಪರಾಧ. ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;&lt;strong&gt;ಕಾಂಗ್ರೆಸ್ ಪ್ರಶ್ನೆ ಕೇಳಿದ್ದು ಭಯೋತ್ಪಾದಕರ ಪರವೇ?&lt;/strong&gt;&lt;/p&gt;&lt;p&gt;ಪುಲ್ವಾಮಾ ದಾಳಿ ಸೇರಿದಂತೆ ಹಲವು ಉಗ್ರ ಕೃತ್ಯಗಳಿಗೆ ಪ್ರತಿಯಾಗಿ ನಡೆದ ಆಪರೇಷನ್&zwnj;ಗಳ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಕೇಳಿರುವುದನ್ನು ಉಲ್ಲೇಖಿಸಿ, 'ದೇಶ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವಾಗ ನೀವು ಏಕೆ ಪ್ರಶ್ನೆ ಕೇಳುತ್ತಿದ್ದೀರಿ?' ಎಂದು ಚನ್ನಬಸಪ್ಪ ಪ್ರಶ್ನಿಸಿದರು. ಇನ್ನು ಆಳಂದ ದರ್ಗಾ ಪ್ರಕರಣವೂ ಪ್ರಸ್ತಾಪಿಸಿ ಅವರು, ಆಳಂದ ದರ್ಗಾದ ದುಂಬಿ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರಕ್ಕೂ ಆಕ್ರೋಶ ವ್ಯಕ್ತಪಡಿಸಿದ ಅವರು, 'ಕಾಂಗ್ರೆಸ್ ಬದುಕಿರುವುದೇ ಮುಸ್ಲಿಮರಿಗೋಸ್ಕರ. ಇದು ಅವರ ನೀತಿ' ಎಂದು ಟೀಕಿಸಿದರು. ಇಂತಹ ವಿಚಾರಗಳನ್ನು ಪದೇ ಪದೇ ಚರ್ಚೆ ಮಾಡುವುದು ಕಾನೂನಿಗೆ ಅಪಮಾನ ಎಂದೂ ಹೇಳಿದರು.&lt;/p&gt;]]></content:encoded>
            <category>shivamogga</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/bjp-mla-channabasappa-sparks-row-with-explosive-remarks-on-terrorism-congress-and-ltte/articleshow-wstymg0"/>
        </item>
        <item>
            <title><![CDATA[ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆ ಸ್ಥಗಿತ; ಕರೂರು, ಭಾರಂಗಿ ಸಂಪರ್ಕಿಸುವ ಜಲಮಾರ್ಗ]]></title>
            <link>https://kannada.asianetnews.com/gallery/karnataka-districts/launch-service-on-halke-muppane-route-suspended-waterway-connecting-karur-and-bharangi-mrq-xhrfynf</link>
            <guid isPermaLink="true">https://kannada.asianetnews.com/gallery/karnataka-districts/launch-service-on-halke-muppane-route-suspended-waterway-connecting-karur-and-bharangi-mrq-xhrfynf</guid>
            <pubDate>Wed, 03 Jun 2026 10:06:06 +0530</pubDate>
            <description><![CDATA[ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕುಸಿದ ಕಾರಣ, ಹಲ್ಕೆ&ndash;ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಏರುವವರೆಗೂ ಸಾಗರ ತಾಲೂಕಿನ ಈ ಪ್ರಮುಖ ಜಲಮಾರ್ಗ ಬಂದ್ ಆಗಿರಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt5w0drr0hqgf8p1mgcask4a,imgname-shivamogga-launch--1--1780461090584.jpg" type="image/jpeg" height="390" width="690"/>
            <content:encoded><![CDATA[ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕುಸಿದ ಕಾರಣ, ಹಲ್ಕೆ&ndash;ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಏರುವವರೆಗೂ ಸಾಗರ ತಾಲೂಕಿನ ಈ ಪ್ರಮುಖ ಜಲಮಾರ್ಗ ಬಂದ್ ಆಗಿರಲಿದೆ.&lt;img&gt;&lt;p&gt;ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದ ಹಿನ್ನೆಲೆ ಹಲ್ಕೆ&ndash;ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹಾಗೂ ಭಾರಂಗಿ ಹೋಬಳಿಗಳನ್ನು ಸಂಪರ್ಕಿಸುವ ಪ್ರಮುಖ ಜಲಮಾರ್ಗ ಇದಾಗಿದೆ.&lt;/p&gt;&lt;img&gt;&lt;p&gt;ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಜೂನ್ 2 ರಿಂದ ಸೇವೆ ಸ್ಥಗಿತಗೊಳಿಸಿ ರುವುದಾಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತಿಳಿಸಿದೆ. ಶರಾವತಿ ಹಿನ್ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನೊಳಗಿನ ಮರದ ಕಾಂಡಗಳು ಲಾಂಚ್&zwnj;ಗೆ ತಾಗುವ ಅಪಾಯ ಎದುರಾಗಿದೆ.&lt;/p&gt;&lt;img&gt;&lt;p&gt;ಜೊತೆಗೆ ವಾಹನ ಇಳಿಸುವ ಪ್ಲಾಟ್&zwnj;ಫಾರ್ಮ್ ಪ್ರದೇಶದಲ್ಲಿ ಲಾಂಚ್&zwnj;ನ ಅಡಿಭಾಗ ನೆಲಕ್ಕೆ ತಾಗುತ್ತಿರುವ ಕಾರಣ ಸೇವೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಯಾಗಿ ನೀರಿನ ಪ್ರಮಾಣ ಹೆಚ್ಚಳವಾಗೋವರೆಗೂ ಲಾಂಚ್ ಸೇವೆ ಸ್ಥಗಿತಗೊಳ್ಳಲಿದೆ.&lt;/p&gt;&lt;p&gt;ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದ ಹಿನ್ನೆಲೆ ಹಲ್ಕೆ&ndash;ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹಾಗೂ ಭಾರಂಗಿ ಹೋಬಳಿಗಳನ್ನು ಸಂಪರ್ಕಿಸುವ ಪ್ರಮುಖ ಜಲಮಾರ್ಗ ಇದಾಗಿದೆ.&lt;/p&gt;]]></content:encoded>
            <category>shivamogga</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/launch-service-on-halke-muppane-route-suspended-waterway-connecting-karur-and-bharangi-mrq-xhrfynf"/>
        </item>
        <item>
            <title><![CDATA[ಅಯ್ಯೋ ದುರ್ವಿಧಿಯೇ.. 18 ದಿನಗಳ ಹಿಂದೆಯಷ್ಟೇ ಮದುವೆಯಾದ ಕೆಎಸ್ಆರ್‌ಪಿ ಪೇದೆ ಹೃದಯಾಘಾತದಿಂದ ನಿಧನ]]></title>
            <link>https://kannada.asianetnews.com/karnataka-districts/ksrp-police-constable-heart-attack-death-shivamogga-gvd/articleshow-zp1cqo3</link>
            <guid isPermaLink="true">https://kannada.asianetnews.com/karnataka-districts/ksrp-police-constable-heart-attack-death-shivamogga-gvd/articleshow-zp1cqo3</guid>
            <pubDate>Wed, 27 May 2026 17:09:54 +0530</pubDate>
            <description><![CDATA[&lt;p&gt;ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ಪೊಲೀಸ್ ಕಾನ್ಸ್&zwnj;ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಣ್ಣ ಗುಡಾದಾರ್ (26) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.&zwnj; ಮೂಲತಃ ಬೆಳಗಾವಿ ಜಿಲ್ಲೆಯ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmkqfnha17yxh8pzd0r2tf1,imgname-vj-1779881983665.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಮೇ.27): &lt;/strong&gt;ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ಪೊಲೀಸ್ ಕಾನ್ಸ್&zwnj;ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಣ್ಣ ಗುಡಾದಾರ್ (26) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.&zwnj; ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾಗಿದ್ದು, ಕಳೆದ 7 ವರ್ಷಗಳಿಂದ ಶಿವಮೊಗ್ಗದ ಕೆಎಸ್ಆರ್&zwnj;ಪಿ 8ನೇ ಪಡೆಯಲ್ಲಿ ಪೊಲೀಸ್ ಕಾನ್ಸ್&zwnj;ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.&lt;/p&gt;&lt;p&gt;ನಿನ್ನೆ ತೀವ್ರ ಹೃದಯಾಘಾತ ಸಂಭವಿಸಿದಾಗ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ಈರಣ್ಣರಿಗೆ ಕೇವಲ 18 ದಿನಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎನ್ನಲಾಗಿದ್ದು, ಮೃತರು ಪತ್ನಿ, ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಯುವ ಪೊಲೀಸ್ ಸಿಬ್ಬಂದಿಯ ಅಕಾಲಿಕ ನಿಧನಕ್ಕೆ ಕೆಎಸ್ಆರ್&zwnj;ಪಿ 8ನೇ ಪಡೆಯ ಕಮಾಂಡೆಂಟ್ ಆದ ಎಸ್. ಯುವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಚಲಿಸುತ್ತಿರುವಾಗಲೇ ಹೃದಯಾಘಾತ: ಬಸ್&zwnj; ಚಾಲಕ ಮೃತ್ಯು&lt;/strong&gt;&lt;/h2&gt;&lt;p&gt;ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಬಸ್ ಅಪಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ಮುಂಜಾನೆ 5 ಗಂಟೆ ಸುಮಾರಿಗೆ ನಡೆದಿದೆ. ಬೆಂಗಳೂರು ಮೂಲದ ಶಿವಕುಮಾರ್ (50) ಮೃತರು. ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ.&lt;/p&gt;&lt;p&gt;ಪರಿಣಾಮ ಬಸ್ ರಸ್ತೆ ಪಕ್ಕದ ಇಳಿಜಾರಿಗೆ ವಾಲಿಕೊಂಡಿದೆ. ತನಗೆ ಹೃದಯಘಾತವಾಗುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಹೃದಯಾಘಾತ ತೀವ್ರವಾಗುತ್ತಿದ್ದಂತೆ ಚಾಲಕ ಚರಂಡಿಯ ಬಳಿ ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಬಸ್ ಕೊಂಚ ವಾಲಿಕೊಂಡಿದೆ. ಆದರೆ ಪ್ರಯಾಣಿಕರ ಜೀವಕ್ಕೇನು ಅಪಾಯವಾಗಿಲ್ಲ. ತಕ್ಷಣವೇ ಚಾಲಕನನ್ನು ಮಡಿಕೇರಿ ಬಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಾಲಕ ಈ ಸಂದರ್ಭ ಮೃತಪಟ್ಟಿದ್ದಾರೆ.&lt;/p&gt;&lt;p&gt;ಸ್ಥಳಕ್ಕೆ ಮಡಿಕೇರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಬದಿಯಲ್ಲಿ ಬಸ್ ವಾಲಿಕೊಂಡು ನಿಂತ ಕಾರಣ ಹೆದ್ದಾರಿಯಲ್ಲಿ ಇತರ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಿಲ್ಲ. ಇತ್ತ ಘಟನೆಯಿಂದ ಆತಂಕಗೊಂಡ ಪ್ರಯಾಣಿಕರಿಗೆ ಬೇರೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ.&lt;/p&gt;]]></content:encoded>
            <category>shivamogga</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ksrp-police-constable-heart-attack-death-shivamogga-gvd/articleshow-zp1cqo3"/>
        </item>
    </channel>
</rss>
